<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 18:37:10 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[OTPನೂ ಬರಲ್ಲ, ಲಿಂಕೂ ಬರಲ್ಲ; ಜೇಬಲ್ಲಿದ್ದ ಮೊಬೈಲ್​ನಿಂದ್ಲೇ ಹಣ ಮಾಯ! ಕೂಡಲೇ ಈ ಸೆಟ್ಟಿಂಗ್​ ಆಫ್​ ಮಾಡಿ]]></title>
            <link>https://kannada.asianetnews.com/crime/no-otp-no-link-money-disappeared-from-the-mobile-phone-in-my-pocket-new-scam-suc/articleshow-03fkzfe</link>
            <guid isPermaLink="true">https://kannada.asianetnews.com/crime/no-otp-no-link-money-disappeared-from-the-mobile-phone-in-my-pocket-new-scam-suc/articleshow-03fkzfe</guid>
            <pubDate>Wed, 09 Sep 2026 17:46:23 +0530</pubDate>
            <description><![CDATA[ಡಿಜಿಟಲ್ ಯುಗದಲ್ಲಿ ಹೊಸ ಮಾದರಿಯ ಸ್ಕ್ಯಾಮ್&zwnj;ವೊಂದು ಬೆಳಕಿಗೆ ಬಂದಿದೆ. ವಂಚಕರು ಜನನಿಬಿಡ ಪ್ರದೇಶಗಳಲ್ಲಿ ನಿಮ್ಮ ಮೊಬೈಲ್&zwnj;ನ NFC ವೈಶಿಷ್ಟ್ಯವನ್ನು ಬಳಸಿ, ನಿಮಗೆ ತಿಳಿಯದಂತೆ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುತ್ತಿದ್ದಾರೆ. ಈ ವಂಚನೆಯಿಂದ ಪಾರಾಗಲು ನಿಮ್ಮ ಮೊಬೈಲ್&zwnj;ನಲ್ಲಿ NFC ಆಯ್ಕೆಯನ್ನು ಆಫ್ ಮಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m231hehjpscxq0wjf44kddf9,imgname-mobile-scam-1788956162610.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೋಸ ಹೋಗುವವರು ಎಚ್ಚರವಾಗುತ್ತಿದ್ದಂತೆಯೇ, ಮೋಸ ಮಾಡುವವರು ಇನ್ನೊಂದು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಅದರಲ್ಲಿಯೂ ಈ ಡಿಜಿಟಲ್​ ಯುಗದಲ್ಲಿ, ಮೋಸ ಮಾಡುವುದು ಸಿಕ್ಕಾಪಟ್ಟೆ ಸುಲಭವಾಗಿಬಿಟ್ಟಿದೆ. ಜೇಬಲ್ಲಿ ಹಣ ಇಲ್ಲದಿದ್ದರೆ ಏನಂತೆ, ಮೊಬೈಲ್​ ಅಂತೂ ಎಲ್ಲರ ಬಳಿಯೂ ಇದ್ದೇ ಇರತ್ತಲ್ಲ. ಅದೇ ಈಗ ಈ ಹೊಸ ಸ್ಕ್ಯಾಮ್​ ಮಾಡುವವರ ಬಂಡವಾಳ. ನಿಮ್ಮ ಜೇಬಿನಲ್ಲಿ ಮೊಬೈಲ್​ ಇದ್ದರೆ ಸಾಕು, ನಿಮಗೆ ಗೊತ್ತಿಲ್ಲದಂತೆಯೇ ಬ್ಯಾಂಕ್​ನಲ್ಲಿ ಇರುವ ಹಣ ಯಾಮಾರಿ ಹೋಗುತ್ತದೆ.&lt;/p&gt;&lt;p&gt;ಆನ್​ಲೈನ್​ ಫ್ರಾಡ್​, ಸೈಬರ್​ ಕ್ರೈಂ ಎಂದರೆ ಇಲ್ಲಿಯವರೆಗೆ ನೀವು ನಿಮ್ಮ ಮೊಬೈಲ್​ಗೆ ಏನೋ ಲಿಂಕ್​ ಬಂದಿರುತ್ತೆ, ಅದನ್ನು ಕ್ಲಿಕ್​ ಮಾಡಬಾರದು, ಎಪಿಕೆ ಫೈಲ್​ ಕ್ಲಿಕ್​ ಮಾಡಿದ್ರೆ ಹಣ ಹೋಗತ್ತೆ, ಬಂದಿರುವ ಓಟಿಪಿಯನ್ನು ಯಾರ ಜೊತೆಗಾದ್ರೂ ಶೇರ್​ ಮಾಡಿದ್ರೆ ಬ್ಯಾಂಕ್​ ಅಕೌಂಟ್​ ಖಾಲಿಯಾಗತ್ತೆ, ಫೋನ್​ ಹ್ಯಾಕ್​ ಆದ್ರೆ ದುಡ್ಡು ಹೋಗತ್ತೆ... ಇವೆಲ್ಲವೂ ಕೇಳಿರುತ್ತೀರಿ. ಆದರೆ ಈ ಫ್ರಾಡ್​ ಆ ರೀತಿ ಅಲ್ಲ, ಇದ್ಯಾವುದೂ ನಿಮಗೆ ಬರಲ್ಲ. ಆದರೆ ಜೇಬಿನಲ್ಲಿ ಮೊಬೈಲ್​ ಇದ್ದರೆ ಸಾಕು, ಒಂದು ಮಷಿನ್​ ತಂದು, ಜನ ನಿಬಿಡ ಪ್ರದೇಶದಲ್ಲಿ ನಿಮ್ಮ ಜೇಬಿನ ಬಳಿ ಅದನ್ನು ಹಿಡಿದರೆ, ಅಲ್ಲಿರುವ ಮೊಬೈಲ್​ನಿಂದ ನಿಮ್ಮ ಬ್ಯಾಂಕ್​ ಅಕೌಂಟ್​ನಲ್ಲಿರೋ ಹಣ ಖತಂ!&lt;/p&gt;&lt;h2&gt;&lt;strong&gt;ಪೊಲೀಸರ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ ಮೊಬೈಲ್​ ಫೋನ್​ನಲ್ಲಿ ಇರುವ NFC ಆಪ್ಷನ್​. ಇದರ ಸಹಾಯದಿಂದಲೇ ಸ್ಕ್ಯಾಮ್​ ಮಾಡುವವರು ಸುಲಭದಲ್ಲಿ ಹಣವನ್ನು ಯಾಮಾರಿಸುತ್ತಿರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. NFC ಎಂದರೆ ನಿಯರ್ ಫೀಲ್ಡ್ ಕಮ್ಯುನಿಕೇಷನ್. ಇದು ಒಂದು ಅಲ್ಪ-ಶ್ರೇಣಿಯ ವೈರ್&zwnj;ಲೆಸ್ ತಂತ್ರಜ್ಞಾನವಾಗಿದ್ದು, ಇದು ನಿಮ್ಮ ಮೊಬೈಲ್ ಫೋನ್ ಅನ್ನು ಮತ್ತೊಂದು ಸಾಧನ ಅಥವಾ ರೀಡರ್&zwnj;ನೊಂದಿಗೆ ಸಣ್ಣ ಪ್ರಮಾಣದ ಡೇಟಾವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅವುಗಳನ್ನು ಬಹಳ ಹತ್ತಿರದಲ್ಲಿ ಇರಿಸಿದಾಗ - ಸಾಮಾನ್ಯವಾಗಿ 4 ಸೆಂಟಿಮೀಟರ್&zwnj;ಗಳ ಒಳಗೆ (1.5 ಇಂಚುಗಳು). ಆದರೆ ಇದನ್ನೇ ಬಳಸಿಕೊಂಡು ಈಗ ವಂಚನೆ ಮಾಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಇಲ್ಲಿದೆ ಮಾಹಿತಿ&lt;/strong&gt;&lt;/h3&gt;&lt;p&gt;ಹಾಗಿದ್ದರೆ ಇದರಿಂದ ಪಾರಾಗಲು ಏನು ಮಾಡಬೇಕು ಎನ್ನುವ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗಿದೆ.&lt;/p&gt;&lt;p&gt;ಮೊದಲು ಮೊಬೈಲ್​ ಸೆಟ್ಟಿಂಗ್ಸ್​ಗೆ ಹೋಗಿ ಅಲ್ಲಿ Connection ಸಿಕ್ಕರೆ ಅದರ ಮೇಲೆ ಕ್ಲಿಕ್​ ಮಾಡಿ&lt;/p&gt;&lt;p&gt;ಆ ಬಳಿಕ NFC and contactless Payment ಆಪ್ಷನ್​ ಸಿಗುತ್ತದೆ. ಅದು ಆನ್​ ಇದ್ದರೆ ಆಫ್​ ಮಾಡಿ ಸೇಫ್​ ಆಗಿರಿ.&lt;/p&gt;&lt;p&gt;ಒಂದು ವೇಳೆ ನಿಮ್ಮ ಫೋನ್​ನಲ್ಲಿ ಇಲ್ಲಿ ಸಿಗದೇ ಹೋದರೆ, ಸೆಟ್ಟಿಂಗ್ಸ್​ನಲ್ಲಿ More Connectivity Option ಕ್ಲಿಕ್ ಮಾಡಿದರೆ ಸಿಗುತ್ತದೆ.&lt;/p&gt;&lt;p&gt;ರೆಡ್​ಮೀನ ಕೆಲವು ಮಾಡೆಲ್​ ಸೇರಿದಂತೆ ಕೆಲವು ಫೋನ್​ಗಳಲ್ಲಿ ಈ ಆಪ್ಷನ್​ ಇಲ್ಲ. ಆದ್ದರಿಂದ ನೀವು ನೆಮ್ಮದಿಯಿಂದ ಇರಬಹುದು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/no-otp-no-link-money-disappeared-from-the-mobile-phone-in-my-pocket-new-scam-suc/articleshow-03fkzfe"/>
        </item>
        <item>
            <title><![CDATA[ಮಹಿಳೆಯ ನಿಗೂಢ ಕೊಲೆ: ಅಪರಾಧಿಯನ್ನು ಹಿಡಿದುಕೊಟ್ಟ ಆಮ್ಲೆಟ್​ ಪೀಸ್​: ಪ್ರೇಮಿಗಾಗಿ ಬಂದಾಕೆಯ ದುರಂತ ಅಂತ್ಯ]]></title>
            <link>https://kannada.asianetnews.com/crime/how-madhya-pradesh-gwalior-cops-cracked-blind-death-case-using-omelette-clue-suc/articleshow-2ia2k80</link>
            <guid isPermaLink="true">https://kannada.asianetnews.com/crime/how-madhya-pradesh-gwalior-cops-cracked-blind-death-case-using-omelette-clue-suc/articleshow-2ia2k80</guid>
            <pubDate>Wed, 02 Sep 2026 17:14:31 +0530</pubDate>
            <description><![CDATA[ಡಿಸೆಂಬರ್ 29 ರಂದು ಗ್ವಾಲಿಯರ್&zwnj;ನ ಅರಣ್ಯ ಪ್ರದೇಶದಲ್ಲಿ ಗುರುತು ಪತ್ತೆಯಾಗದ ಮಹಿಳೆಯ ಶವ ಪತ್ತೆಯಾಗಿತ್ತು. ದೇಹದ ಮೇಲಿದ್ದ ಸಣ್ಣ ಆಮ್ಲೆಟ್ ತುಂಡಿನ ಸುಳಿವಿನ ಜಾಡು ಹಿಡಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಮತ್ತು ಆನ್&zwnj;ಲೈನ್ ಪಾವತಿ ವಿವರಗಳ ಸಹಾಯದಿಂದ ಆರೋಪಿ ಸಚಿನ್ ಸೇನ್&zwnj;ನನ್ನು ಬಂಧಿಸಿದರು. ಅನೈತಿಕ ಸಂಬಂಧದ ಶಂಕೆಯಿಂದ ಈ ಕೊಲೆ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1gyxjpwm2xeg54yqbebwfnm,imgname-woman-murder-1788349434588.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ವಾಲಿಯರ್ (ಮಧ್ಯಪ್ರದೇಶ): ಕಳೆದ ಡಿಸೆಂಬರ್ 29 ರಂದು ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಗೋಲಾ ಕಾ ಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಹಿಳೆಯೊಬ್ಬಳ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಮುಖಕ್ಕೆ ಭಾರವಾದ ಕಲ್ಲಿನಿಂದ ಹೊಡೆದಿದ್ದು, ಆಕೆಯ ಗುರುತು ಪತ್ತೆ ಕಷ್ಟಕರವಾಗಿತ್ತು. ಮಹಿಳೆಯ ಶವ ಗುರುತಿಸುವುದು ಸವಾಲಿನ ಪ್ರಕರಣವಾಗಿತ್ತು. ಇದು ಬಗೆಹರಿಯದ ಪ್ರಕರಣವಾಗಿದ್ದು, ಮಹಿಳೆಯ ಗುರುತನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಇದನ್ನು ನೋಡಿದರೆ ಯಾರೋ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವುದು ತಿಳಿದುಬಂದಿತ್ತು. ಆದರೆ, ಕೊಲೆ ಯಾರು ಮಾಡಿರಬಹುದು ಎನ್ನುವ ಬಗ್ಗೆ ಅಕ್ಕ-ಪಕ್ಕ ಯಾವುದೂ ಸುಳಿವು ಸಿಕ್ಕಿರಲಿಲ್ಲ. ಇದು ಪೊಲೀಸರಿಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು.&lt;/p&gt;&lt;p&gt;ಕೊನೆಗೆ ಕೃತಕ ಬುದ್ಧಿಮತ್ತೆಯನ್ನು ಬಳಸಿ ಮಹಿಳೆಯ ಮುಖ ಹೀಗೆಯೇ ಇರಬಹುದು ಎಂದು ಪತ್ತೆ ಹಚ್ಚಲಾಯಿತು. ಆಕೆಯ ಇತರ ಅಂಗಾಂಗಗಳ ಮೂಲಕ ಮಹಿಳೆಯ ಗುರುತು ಈ ರೀತಿ ಇದ್ದಿರಬಹುದು ಎಂದು ಊಹಿಸಲಾಯಿತಾದರೂ, ಕೊಲೆ ಮಾಡಿದ್ದು ಯಾರು ಎನ್ನುವ ಬಗ್ಗೆ ಮಾತ್ರ ಕಿಂಚಿತ್​ ತಿಳಿಯಲಿಲ್ಲ. ಪೊಲೀಸರು ಇದರ ತನಿಖೆಯನ್ನು ಇನ್ನಷ್ಟು ಆಳವಾಗಿಸಿದರು. ಅಪರಾಧಿ ಒಂದಿಲ್ಲೊಂದು ಚಿಕ್ಕ ಕುರುಹು ಬಿಟ್ಟು ಹೋಗಿಯೇ ಇರುತ್ತಾರೆ, ಆತ ಎಷ್ಟೇ ದೊಡ್ಡ ಅಪರಾಧಿಯಾಗಿದ್ದರೂ, ಅದೇ ಅವನ ಕೆಲಸವಾಗಿದ್ದರೂ ಬಹುತೇಕ ಪ್ರಕರಣಗಳಲ್ಲಿ ಸಿಗುವ ಚಿಕ್ಕ ಕುರುಹುವಿನಿಂದಲೇ ಪೊಲೀಸರು ನಿಪುಣರಾಗಿದ್ದರೆ, ಕೊಲೆ ಕೇಸನ್ನು ಬೇಧಿಸುವುದು ಇದೆ.&lt;/p&gt;&lt;h2&gt;&lt;strong&gt;ಆಮ್ಲೆಟ್​ ಕುರುಹು&lt;/strong&gt;&lt;/h2&gt;&lt;p&gt;ಅದೇ ರೀತಿ, ಮಹಿಳೆಯ ಶವವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಆ ದೇಹದ ಮೇಲೆ ಚಿಕ್ಕದೊಂದು ಆಮ್ಲೆಟ್​ ತುಂಡು ಕಂಡುಬಂದಿತು. ಇಂಥ ಸಂದರ್ಭಗಳಲ್ಲಿ ಸಿಗುವ ಚಿಕ್ಕಪುಟ್ಟ ಕುರುಹು ಕೂಡ ಪೊಲೀಸರಿಗೆ ತನಿಖೆ ವೇಳೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಡುವುದು ಇದೆ. ಯಾವುದೇ ಕುರುಹವನ್ನೂ ಅವರು ಬಿಡುವಂತಿಲ್ಲ. ಅದೇ ರೀತಿ ಈ ಚಿಕ್ಕ ಆಮ್ಲೇಟ್​ ಪೀಸ್​ ಹಿಡಿದು, ಕೊಲೆಗಾರನ ಜಾಡು ಹಿಡಿದು ಹೊರಟರು ಪೊಲೀಸರು. ಇದರ ಆಧಾರದ ಮೇಲೆ, 200 ಮೀಟರ್ ವ್ಯಾಪ್ತಿಯೊಳಗಿನ ಆಹಾರ ಮಳಿಗೆಗಳಲ್ಲಿ ವಿಚಾರಣೆ ನಡೆಸಲಾಯಿತು. ಆಗ ಅವರಿಗೆ ಅಂಗಡಿಯೊಂದರಲ್ಲಿ ಒಬ್ಬ ಮಹಿಳೆ ಇಬ್ಬರು ಪುರುಷರೊಂದಿಗೆ ಆಮ್ಲೆಟ್ ತಿಂದಿರುವುದು ಪತ್ತೆಯಾಗಿತು.&lt;/p&gt;&lt;p&gt;ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್&zwnj;ಎಸ್&zwnj;ಪಿ) ಧರ್ಮವೀರ್ ಸಿಂಗ್ ನೇತೃತ್ವದಲ್ಲಿ ಇದರ ತನಿಖೆ ಚುರುಕುಗೊಂಡಿತು. ಇದರ ನಂತರ, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಯಿತು, ಇದರಲ್ಲಿ ಇಬ್ಬರು ಪುರುಷರು ಕಾಣಿಸಿಕೊಂಡಿದ್ದಾರೆ. ಅವರು ಆನ್&zwnj;ಲೈನ್&zwnj;ನಲ್ಲಿ ಆಮ್ಲೆಟ್&zwnj;ಗೆ ಹಣ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸಣ್ಣ ಪುರಾವೆಯ ಆಧಾರದ ಮೇಲೆ, ಪೊಲೀಸರು ತನಿಖೆ ನಡೆಸಿ ಗ್ವಾಲಿಯರ್ ನಿವಾಸಿ ಸಚಿನ್ ಸೇನ್ ಎಂಬ ಆರೋಪಿಯನ್ನು ಬಂಧಿಸಲು ಸಹಕಾರಿಯಾಯಿತು!&lt;/p&gt;&lt;h3&gt;&lt;strong&gt;ಕೊನೆಗೂ ಸಿಕ್ಕ ಕೊಲೆಗಾರ&lt;/strong&gt;&lt;/h3&gt;&lt;p&gt;ಮಹಿಳೆ ಟಿಕಮ್&zwnj;ಗಢದವರಾಗಿದ್ದು, ಕೆಲವು ಸಮಯದಿಂದ ತನ್ನ ಪತಿಯೊಂದಿಗೆ ಇಲ್ಲಿ ವಾಸಿಸುತ್ತಿದ್ದರು. ಒಂದು ವಾರದ ಹಿಂದೆ, ಅವಳು ಸಚಿನ್ ಸೇನ್ ಜೊತೆ ಸಂಪರ್ಕಕ್ಕೆ ಬಂದು, ಪತಿ ಇದ್ದರೂ ಅವನ ಜೊತೆ ವಾಸಿಸಲು ಪ್ರಾರಂಭಿಸಿದಳು. ಆದರೆ, ಅಲ್ಲಿಯೂ ಅವಳ ಅದೃಷ್ಟ ಕೈಕೊಟ್ಟಿತು. ಅವಳಿಗೆ ಹಲವಾರು ಪುರುಷರೊಂದಿಗೆ ಸಂಬಂಧವಿದೆ ಎಂದು ಸಚಿನ್ ಸೇನ್ ಅನುಮಾನಿಸಿದ. ಇದರಿಂದ ಆಕೆಯನ್ನು ಕೊಲ್ಲಲು ಸಂಚುರೂಪಿಸಿದ. ಅವಳನ್ನು ಮುಖ್ಯ ರಸ್ತೆಯ ಬಳಿಯ ಕಾಡಿಗೆ ಕರೆದೊಯ್ದು, ನಂತರ ಕಲ್ಲಿನಿಂದ ಅವಳ ತಲೆಯನ್ನು ಪುಡಿಮಾಡಿ ಕೊಂದಿದ್ದ.&lt;/p&gt;&lt;p&gt;ಜಾಕೆಟ್ ಮತ್ತು ಇತರ ವಸ್ತುಗಳು ಸೇರಿದಂತೆ ಹಲವಾರು ಪುರಾವೆಗಳನ್ನು ಸ್ಥಳದಿಂದ ಸಂಗ್ರಹಿಸಲಾಯಿತು. ಮಹಿಳೆಯ ರೇಖಾಚಿತ್ರವನ್ನು ರಚಿಸಲು ಕೃತಕ ಬುದ್ಧಿಮತ್ತೆ (AI) ಅನ್ನು ಸಹ ಬಳಸಲಾಯಿತು ಮತ್ತು ಟಿಕಮ್&zwnj;ಗಢ ಪೊಲೀಸರೊಂದಿಗೆ ಸಮನ್ವಯವನ್ನು ಸ್ಥಾಪಿಸಲಾಯಿತು. ತರುವಾಯ, ಸಿಸಿಟಿವಿ ದೃಶ್ಯಾವಳಿಗಳು, ಸ್ಥಳದಿಂದ ಸಂಗ್ರಹಿಸಿದ ಮಾಹಿತಿ ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳನ್ನು ಬಳಸಿಕೊಂಡು, ಪೊಲೀಸರು ಕೊಲೆಯಾದವಳನ್ನು ಗುರುತಿಸಲು ಮತ್ತು ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/how-madhya-pradesh-gwalior-cops-cracked-blind-death-case-using-omelette-clue-suc/articleshow-2ia2k80"/>
        </item>
        <item>
            <title><![CDATA[ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್​]]></title>
            <link>https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6</link>
            <guid isPermaLink="true">https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6</guid>
            <pubDate>Thu, 03 Sep 2026 21:13:12 +0530</pubDate>
            <description><![CDATA[ಬೆಳಗಾವಿಯಲ್ಲಿ 80 ವರ್ಷದ ವೃದ್ಧೆಯೊಬ್ಬಳು, ಇತರರ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ. ಜಮೀನಿನ ನಿಜವಾದ ಮಾಲೀಕರು ದೂರು ನೀಡಿದ ನಂತರ ಈಕೆಯ ವಂಚನೆಯ ಜಾಲ ಬಯಲಾಗಿದ್ದು, ಪೊಲೀಸರು ಆರೋಪಿ ವೃದ್ಧೆಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1kyzvhkcqgmbjqmrsj5c12a,imgname-mandakini-1788450172467.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ: ವಯಸ್ಸು ಎನ್ನೋದು ದೇಹಕ್ಕೇ ವಿನಾ ಮನಸ್ಸಿಗಲ್ಲ ಎನ್ನುವ ಮಾತಿದೆ. ಇದನ್ನು ಸಾಧನೆ ಮಾಡುವವರಿಗೆ ಹೆಚ್ಚಾಗಿ ಹೇಳುವ ಮಾತು. ಆದರೆ ಬೆಳಗಾವಿಯ 80 ವರ್ಷದ ಅಜ್ಜಿ ಇದೀಗ ಪರರ ಜಮೀನುಗಳನ್ನು ತನ್ನದೇ ಜಮೀನು ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಹಲವಾರು ಮಂದಿಗೆ ವಂಚಿಸಿ ಈಗ ಅಂದರ್​ ಆಗಿರೋ ಘಟನೆ ನಡೆದಿದೆ. ಮೋಸ ಹೋಗುವವರು ಇರುವವರೆಗೂ, ವಯಸ್ಸಿನ ಅಡ್ಡಿಯಿಲ್ಲದೇ ಮೋಸ ಮಾಡುವವರು ಇರುತ್ತಾರೆ ಎನ್ನುವುದಕ್ಕೆ ಈ ಕಿಲಾಡಿ ಅಜ್ಜಿಯೇ ಸಾಕ್ಷಿಯಾಗಿದ್ದಾಳೆ.&lt;/p&gt;&lt;p&gt;ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್​ ಎನ್ನುವ ವೃದ್ಧೆ ತನ್ನ ಗ್ರಾಮದಲ್ಲಿ ಇರುವ ಅಕ್ಕ-ಪಕ್ಕದ ಜಮೀನುಗಳ ಒಡತಿ ತಾನೇ ಎಂದು ಬಿಂಬಿಸಿ, ಅದರ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಮಾರಾಟ ಮಾಡಿದ್ದಾಳೆ. ಈ ಮೂಲಕ ಕೋಟ್ಯಂತರ ರೂಪಾಯಿ ಕಮಾಯಿಯನ್ನೂ ಮಾಡಿದ್ದಾಳೆ. ಮೋಸ ಮಾಡುವವರು ಎಷ್ಟು ಎಂದು ಮಾಡಿಯಾರು? ಕೊನೆಗೆ ಜಮೀನಿನ ಮಾಲೀಕರೊಬ್ಬರು ಸಲ್ಲಿಸಿದ ಕಂಪ್ಲೇಂಟ್​ ಆಧಾರದ ಮೇಲೆ ಪೊಲೀಸರು ಈಕೆಯ ಜಾತಕ ಬಿಚ್ಚಿದಾಗ, ಒಂದೊಂದೇ ಬಯಲಿಗೆ ಬಂದಿದೆ. ಸದ್ಯ ಈಕೆ ಮಾರ್ಕೆಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.&lt;/p&gt;&lt;h2&gt;&lt;strong&gt;ಪ್ರಕರಣ ಬೆಳಕಿಗೆ ಬಂದದ್ದು ಹೇಗೆ&lt;/strong&gt;&lt;/h2&gt;&lt;p&gt;ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗ ರತ್ನಾ ಯಶವಂತ ಮಲ್ಯೂಕರ ಎನ್ನುವವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿವಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಳು. ಕೊನೆಗೆ ಸಾಲದು ಎನ್ನುವುದಕ್ಕೆ 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಆರೋಪಿ ಈಕೆ, ಅವರದ್ದೇ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಳು. ಮಾತ್ರವಲ್ಲದೇ, ಅವರ ಹೆಸರಿನಲ್ಲಿ ಹೆಬ್ಬೆರಳು ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು.&lt;/p&gt;&lt;h3&gt;&lt;strong&gt;ಕಿತಾಪತಿ ಬಯಲಿಗೆ&lt;/strong&gt;&lt;/h3&gt;&lt;p&gt;ಇದು ಕೊನೆಗೆ ಮಾಲೀಕರ ಗಮನಕ್ಕೆ ಬಂದಾಗ, ಈಕೆಯ ಒಂದೊಂದೇ ಕಿತಾಪತಿ ಬಯಲಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಟಲಾಗಿದೆ. ರಾಹುಲ್ ಈಗಾಗಲೇ ದಾಖಲಾಗಿರುವ ಇನ್ನೆರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ರಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6"/>
        </item>
        <item>
            <title><![CDATA[ಕಮಲದ ಬಳಿಕ ಮತ್ತೊಂದು ಕುತೂಹಲದ ಟ್ಯಾಟೂ ಹಾಕಿಸಿಕೊಂಡ ವಿರಾಟ್​ ಕೊಹ್ಲಿ: ಏನಿದರ ಗುಟ್ಟು]]></title>
            <link>https://kannada.asianetnews.com/sports/virat-kohli-is-back-in-the-spotlight-with-a-fresh-new-tattoo-what-is-in-it-no-reveled-suc/articleshow-6n8r8a6</link>
            <guid isPermaLink="true">https://kannada.asianetnews.com/sports/virat-kohli-is-back-in-the-spotlight-with-a-fresh-new-tattoo-what-is-in-it-no-reveled-suc/articleshow-6n8r8a6</guid>
            <pubDate>Sun, 30 Aug 2026 19:33:02 +0530</pubDate>
            <description><![CDATA[ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಹಚ್ಚೆಗಳ ಸಂಗ್ರಹಕ್ಕೆ ಮತ್ತೊಂದು ಹೊಸ ವಿನ್ಯಾಸವನ್ನು ಸೇರಿಸುತ್ತಿದ್ದಾರೆ. ಹಚ್ಚೆ ಕಲಾವಿದರು ಕೊಹ್ಲಿಯ ತೋಳಿನ ಮೇಲೆ ಕೆಲಸ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಹೊಸ ಹಚ್ಚೆಯ ವಿನ್ಯಾಸ ಮತ್ತು ಅದರ ಹಿಂದಿನ ಕಾರಣದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಐದು ಅವಧಿಗಳ ನಂತರವೂ ಈ ಕಲಾಕೃತಿಯ ಕೆಲಸ ಇನ್ನೂ ಪ್ರಗತಿಯಲ್ಲಿದೆ ಎಂದು ಕಲಾವಿದರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m19fn9gbs6yk7132shzmagzv,imgname-virat-kohli-1788098553355.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಭಾರತೀಯ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರ ಹಚ್ಚೆಗಳ ಮೇಲಿನ ಪ್ರೀತಿ ರಹಸ್ಯವಲ್ಲ. ವರ್ಷಗಳಲ್ಲಿ, ಹಲವಾರು ವಿನ್ಯಾಸಗಳು ಅವರ ಶೈಲಿಯ ಭಾಗವಾಗಿವೆ. ಈಗ, ಹಚ್ಚೆ ಕಲಾವಿದರೊಬ್ಬರು ಹೊಸ ಪೋಸ್ಟ್ ಶೇರ್​ ಮಾಡಿದ್ದಾರೆ. ಅದರಲ್ಲಿ, ವಿರಾಟ್​ ಅವರು ತಮ್ಮ ಹಚ್ಚೆ ಸಂಗ್ರಹಕ್ಕೆ ಮತ್ತೊಂದು ವಿನ್ಯಾಸವನ್ನು ಸೇರಿಸಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಅಂದಹಾಗೆ ಇದಾಗಲೇ, ಕೊಹ್ಲಿ ಈ ಹಿಂದೆ ತಮ್ಮ ಜೀವನದ ವಿವಿಧ ಅಧ್ಯಾಯಗಳು, ನಂಬಿಕೆಗಳು ಮತ್ತು ಅನುಭವಗಳನ್ನು ಪ್ರತಿನಿಧಿಸಲು ಹಚ್ಚೆಗಳನ್ನು ಬಳಸಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ತೋಳಿನ ಮೇಲೆ ಕಮಲದ ಹೂವಿನ ಉದ್ದನೆಯ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಅಷ್ಟಕ್ಕೂ ಕೊಹ್ಲಿ ಅವರು, ಏಲಿಯನ್ಸ್ ಟ್ಯಾಟೂ ಸ್ಟುಡಿಯೋದೊಂದಿಗೆ ದೀರ್ಘ ಸಂಬಂಧವನ್ನು ಹೊಂದಿದ್ದಾರೆ, ಅಲ್ಲಿ ಅವರು ತಮ್ಮ ಹಲವಾರು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ.&lt;/p&gt;&lt;p&gt;ಇದೀಗ ಹಚ್ಚೆ ಕಲಾವಿದರೊಬ್ಬರು ಕೊಹ್ಲಿ ಅವರ ತೋಳಿಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಇದಾಗಲೇ ಹಲವಾರು ಟ್ಯಾಟೂ ಇರುವಾಗ, ಕ್ರಿಕೆಟಿಗ ಪ್ರಸ್ತುತ ತೋಳಿನ ಮೇಲೆ ಮತ್ತೊಂದು ಹಚ್ಚೆ ಹಾಕಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂದು ಅಚ್ಚರಿ ಪಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹೊಸ ಹಚ್ಚೆ ಬಗ್ಗೆ&hellip;&lt;/strong&gt;&lt;/h2&gt;&lt;p&gt;ಹೊಸ ಹಚ್ಚೆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ, ಅವರು ಕೆಲವು ಟ್ಯಾಟೂ ಫೋಟೋಗಳನ್ನು ಶೇರ್​ ಮಾಡಿದ್ದರೂ, ಅದರ ಅರ್ಥ ಏನು ಎನ್ನುವ ಬಗ್ಗೆ ಫ್ಯಾನ್ಸ್​ ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಕಲಾವಿದ ಕೊಹ್ಲಿ ಅವರ ತೋಳಿನ ಮೇಲೆ ಮಾಡಿದ ಕೆಲವು ಪೋಸ್ಟ್​ ಶೇರ್​ ಮಾಡಿದ್ದಾರೆ. ಆದರೆ ಗುಟ್ಟು ರಿವೀಲ್​ ಮಾಡಲಿಲ್ಲ. ಈ ಪೋಸ್ಟ್​ನಲ್ಲಿ ಅವರು, &quot;ವಿರಾಟ್ ಕೊಹ್ಲಿಯ ತೋಳಿನ ಮೇಲೆ ಕೆಲಸ ಮಾಡುವುದು ತುಂಬಾ ಖುಷಿ ಕೊಟ್ಟಿತು. ವಿಭಿನ್ನ ಶೈಲಿಗಳು, ವಿಭಿನ್ನ ವಿಧಾನಗಳು, ಒಂದು ಕಲಾಕೃತಿ ನಿಧಾನವಾಗಿ ರೂಪುಗೊಳ್ಳುತ್ತಿದೆ. ಐದು ದೀರ್ಘ ಅವಧಿಗಳ ನಂತರವೂ ಕೆಲಸ ಇನ್ನೂ ನಡೆಯುತ್ತಿದೆ&quot; ಎಂದು ಬರೆದಿದ್ದಾರೆ.&lt;/p&gt;&lt;h3&gt;&lt;strong&gt;ಮುಂದಿನ ತಿಂಗಳು ಮತ್ತೆ ಆಟಕ್ಕೆ ವಾಪಸ್​&lt;/strong&gt;&lt;/h3&gt;&lt;p&gt;ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದರು. ಸರಣಿಯ ಮೂರು ಪಂದ್ಯಗಳಲ್ಲಿ ಅವರು 144 ರನ್ ಗಳಿಸಿದ್ದರು, ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಕೊಹ್ಲಿ ಟೆಸ್ಟ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡ ಸೆಪ್ಟೆಂಬರ್&zwnj;ನಲ್ಲಿ ಭಾರತ ಪ್ರವಾಸ ಮಾಡಲಿದೆ. ಈ ಅವಧಿಯಲ್ಲಿ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಾಗುವುದು. ಕಿಂಗ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಮತ್ತೆ ಆಟದಲ್ಲಿ ಕಾಣಿಸಿಕೊಳ್ಳಬಹುದು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/sports/virat-kohli-is-back-in-the-spotlight-with-a-fresh-new-tattoo-what-is-in-it-no-reveled-suc/articleshow-6n8r8a6"/>
        </item>
        <item>
            <title><![CDATA[ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಾ ಕೇಸ್‌: 47 ಕಿ.ಮೀ ನಾನ್‌ ಸ್ಟಾಪ್‌ ಪ್ರಯಾಣಿಸಿದ ಸ್ಲೀಪರ್‌ ಬಸ್‌ನಲ್ಲಿ 16ರ ಬಾಲಕಿಯ ಗ್ಯಾಂಗ್‌ರೇ*]]></title>
            <link>https://kannada.asianetnews.com/crime/delhi-moving-sleeper-bus-gang-rape-up-minor-girl-arrest-san/articleshow-7oaceha</link>
            <guid isPermaLink="true">https://kannada.asianetnews.com/crime/delhi-moving-sleeper-bus-gang-rape-up-minor-girl-arrest-san/articleshow-7oaceha</guid>
            <pubDate>Mon, 31 Aug 2026 17:12:17 +0530</pubDate>
            <description><![CDATA[&lt;p&gt;ದೆಹಲಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್&zwnj;ನಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅ*ಚಾರ ಎಸಗಿದ್ದಾರೆ. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಈ ಘೋರ ಕೃತ್ಯ ನಡೆದಿದ್ದು, ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bsxcwpv1t9wzesby9b10vh,imgname-delhi-gang-rape-1788176413590.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.31): &lt;/strong&gt;14 ವರ್ಷಗಳ ಹಿಂದೆ ಇಡೀ ದೇಶವೇ ತಲೆತಗ್ಗಿಸುವಂಥ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರದಿಯಾಗಿತ್ತು. ನಿರ್ಭಯಾ ಕೇಸ್&zwnj; ಬಳಿಕ ಮಹಿಳೆಯರ ಸುರಕ್ಷತೆ ದೃಷ್ಟಿಯಲ್ಲಿ ಸಾಕಷ್ಟು ಕಾನೂನು ತರಲಾಗಿದ್ದರೂ, ಅದ್ಯಾವುದೂ ಕಾಮಿಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ನಿರ್ಭಯಾ ರೀತಿಯ ಮತ್ತೊಂದು ಕೇಸ್&zwnj; ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಡೆದಿದ್ದು, ಅತ್ಯಂತ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್&zwnj;ನಲ್ಲಿ ಭೀಕರವಾಗಿ ಸಾಮೂಹಿಕ ಅ*ಚಾರ ಎಸಗಲಾಗಿದೆ. ಸುಮಾರು 47 ಕಿಲೋಮೀಟರ್ ದೂರ ಚಲಿಸಿದ ಬಸ್&zwnj;ನಲ್ಲೇ ಈ ರಾಕ್ಷ ನಡೆದಿದ್ದು, ಕೃತ್ಯ ಎಸಗಿದ ಬಸ್ ಚಾಲಕ ಮತ್ತು ನಿರ್ವಾಹಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಉತ್ತರ ಪ್ರದೇಶದ ಮೈನ್&zwnj;ಪುರಿ ಜಿಲ್ಲೆಯ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಕುಟುಂಬದವರೊಂದಿಗೆ ಉಂಟಾದ ಸಣ್ಣ ಮನಸ್ತಾಪದಿಂದಾಗಿ ಯಾರಿಗೂ ಹೇಳದೆ ಆಗಸ್ಟ್ 4 ರ ರಾತ್ರಿ ಮನೆಯಿಂದ ಹೊರಟಿದ್ದಳು. ನೋಯ್ಡಾದಲ್ಲಿರುವ ತನ್ನ ಸೋದರಸಂಬಂಧಿ ಮನೆಗೆ ತೆರಳಲು ನಿರ್ಧರಿಸಿದ್ದ ಆಕೆ, ಭಾರೀ ಮಳೆ ಮತ್ತು ಕತ್ತಲಿದ್ದ ಕಾರಣ ಗೊಂದಲಕ್ಕೊಳಗಾಗಿ ನೋಯ್ಡಾದ 'ಪರಿ ಚೌಕ್' (Pari Chowk) ಬಳಿ ತಪ್ಪಾಗಿ ಬಸ್&zwnj;ನಿಂದ ಇಳಿದುಕೊಂಡಿದ್ದಳು.&lt;/p&gt;&lt;p&gt;ಸಹಾಯಕ್ಕಾಗಿ ಕಾಯುತ್ತಿದ್ದ ಆಕೆಗೆ ಅದೇ ಮಾರ್ಗವಾಗಿ ಬಂದ ಖಾಲಿ ಸ್ಲೀಪರ್ ಬಸ್ ಕಾಣಿಸಿದೆ. ಮಳೆಯಿಂದ ಬಚಾವಾಗಲು ಆಕೆ ಬಸ್&zwnj;ಗೆ ಕೈ ತೋರಿಸಿ ನಿಲ್ಲಿಸಿದ್ದಾಳೆ. ಈ ವೇಳೆ ಬಸ್ ಚಾಲಕ ಮತ್ತು ನಿರ್ವಾಹಕ, ಈ ಬಸ್ ನೋಯ್ಡಾ ಸೆಕ್ಟರ್-63 ಕಡೆಗೆ ತೆರಳುತ್ತದೆ ಎಂದು ನಂಬಿಸಿ ಆಕೆಯನ್ನು ಬಸ್&zwnj;ಗೆ ಹತ್ತಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;47 ಕಿ.ಮೀ ಪಯಣದಲ್ಲಿ ಸಾಗಿದ ನರಕಯಾತನೆ&lt;/strong&gt;&lt;/h2&gt;&lt;p&gt;ಬಸ್ ಹೊರಡುತ್ತಿದ್ದಂತೆ ಕಾಮುಕ ನಿರ್ವಾಹಕ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಸಂತ್ರಸ್ತೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್, ಬಸ್&zwnj;ನಲ್ಲೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.&lt;/p&gt;&lt;p&gt;ಈ ಸ್ಲೀಪರ್ ಬಸ್&zwnj;ಗೆ ಪರದೆಗಳನ್ನು (Curtains) ಅಳವಡಿಸಲಾಗಿದ್ದರಿಂದ, ಒಳಗಡೆ ನಡೆಯುತ್ತಿದ್ದ ಕೃತ್ಯ ಹೊರಗಿನವರಿಗೆ ಅಥವಾ ದಾರಿಹೋಕರಿಗೆ ಕಾಣಿಸುತ್ತಿರಲಿಲ್ಲ. ಈ ಪರದೆಗಳ ಮರೆಯಲ್ಲಿ ರೇ* ಎಸಗಿದ ಆರೋಪಿಗಳು, ಪರಿ ಚೌಕ್&zwnj;ನಿಂದ ಕಾಶ್ಮೀರಿ ಗೇಟ್&zwnj;ವರೆಗಿನ ಸುಮಾರು 47 ಕಿಲೋಮೀಟರ್ ಪ್ರಯಾಣದಾದ್ಯಂತ ಈ ಕೃತ್ಯವನ್ನು ಮುಂದುವರಿಸಿದ್ದಾರೆ. ಬಳಿಕ ತಡರಾತ್ರಿ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಬಳಿಯ ರಿಂಗ್ ರೋಡ್&zwnj;ನಲ್ಲಿ ಸಂತ್ರಸ್ತೆಯನ್ನು ಬಸ್&zwnj;ನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ಕಾರ್ಯಾಚರಣೆ-ಆರೋಪಿಗಳ ಬಂಧನ&lt;/strong&gt;&lt;/h2&gt;&lt;p&gt;ಘಟನೆಯಿಂದ ತೀವ್ರ ಭಯಭೀತಳಾಗಿದ್ದ ವಿದ್ಯಾರ್ಥಿನಿ ತಕ್ಷಣವೇ ಕಾಶ್ಮೀರಿ ಗೇಟ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ತಿಮಾರ್&zwnj;ಪುರದ ಬಸ್ ಪಾರ್ಕಿಂಗ್ ಲಾಟ್&zwnj;ನಲ್ಲಿ ಅಡಗಿ ಕುಳಿತಿದ್ದ ಆರೋಪಿಗಳಾದ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್&zwnj;ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಲೀಪರ್ ಬಸ್ ಅನ್ನು ಜಪ್ತಿ ಮಾಡಲಾಗಿದ್ದು, ವಿಧಿವಿಜ್ಞಾನ (Forensic) ಪರೀಕ್ಷೆಗೆ ಒಳಪಡಿಸಲಾಗಿದೆ.&lt;/p&gt;&lt;p&gt;ಪೊಲೀಸ್ ತನಿಖೆಯ ಪ್ರಕಾರ, ಬಸ್&zwnj;ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆರೋಪಿಗಳು ಅದನ್ನು ಸುರಾಜ್&zwnj;ಪುರದ ಗ್ಯಾರೇಜ್&zwnj;ಗೆ ರಿಪೇರಿಗೆ ತೆಗೆದುಕೊಂಡು ಹೋಗಿದ್ದರು. ರಿಪೇರಿ ಮುಗಿಸಿಕೊಂಡು ಖಾಲಿ ಬಸ್ ಅನ್ನು ತಿಮಾರ್&zwnj;ಪುರಕ್ಕೆ ಚಲಾಯಿಸಿಕೊಂಡು ಬರುತ್ತಿದ್ದಾಗ, ಪರಿ ಚೌಕ್ ಬಳಿ ಒಂಟಿಯಾಗಿ ನಿಂತಿದ್ದ ವಿದ್ಯಾರ್ಥಿನಿ ಇವರ ಕಣ್ಣಿಗೆ ಬಿದ್ದಿದ್ದಳು. ಆಕೆಯ ಕಷ್ಟದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಈ ಭೀಕರ ಕೃತ್ಯ ಎಸಗಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/crime/delhi-moving-sleeper-bus-gang-rape-up-minor-girl-arrest-san/articleshow-7oaceha"/>
        </item>
        <item>
            <title><![CDATA[ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ]]></title>
            <link>https://kannada.asianetnews.com/technology/do-you-ask-chatgpt-all-these-questions-be-careful-you-can-be-arrested-suc/articleshow-abgqimr</link>
            <guid isPermaLink="true">https://kannada.asianetnews.com/technology/do-you-ask-chatgpt-all-these-questions-be-careful-you-can-be-arrested-suc/articleshow-abgqimr</guid>
            <pubDate>Fri, 28 Aug 2026 22:38:40 +0530</pubDate>
            <description><![CDATA[ಭಾರತದಲ್ಲಿ ಉಚಿತವಾಗಿ ಲಭ್ಯವಿರುವ ಚಾಟ್&zwnj;ಜಿಪಿಟಿಯನ್ನು ಅನೇಕರು ಅವಲಂಬಿಸಿದ್ದಾರೆ. ಆದರೆ, ಅಪರಾಧ ಸಂಬಂಧಿತ ಪ್ರಶ್ನೆಗಳನ್ನು ಕೇಳಿದರೆ, ಆ ಮಾಹಿತಿ ನೇರವಾಗಿ ಕ್ರೈಂ ಬ್ರ್ಯಾಂಚ್&zwnj;ಗೆ ರವಾನೆಯಾಗಿ, ನೀವು ಕಾನೂನಿನ ಸಂಕಷ್ಟಕ್ಕೆ ಸಿಲುಕಬಹುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m14ngcwzpp0nhsyvbaaq5558,imgname-chatgpt-1787936912287.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಡಿಜಿಟಲ್​ನಿಂದಲೇ ಎಲ್ಲವೂ ಆಗಬೇಕಾದ ಪರಿಸ್ಥಿತಿ ಉಂಟಾಗಿದೆ. ಪ್ರತಿಯೊಂದು ಪ್ರಶ್ನೆಗಳಿಗೂ ಚಾಟ್​ಜಿಪಿಟಿಯನ್ನು ಅವಲಂಬಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತಲೆಯಲ್ಲಿ ಏನೂ ಇಟ್ಟುಕೊಳ್ಳದ ಸ್ಥಿತಿ ಇಂದಿನದ್ದು. ತೀರಾ ಸುಲಭ ಎನ್ನುವಂಥ ಪ್ರಶ್ನೆಯಿಂದ ಹಿಡಿದು, ಸಮಸ್ಯೆಗಳು ಬಂದರೆ ಅವುಗಳನ್ನು ಚಾಟ್​ಜಿಪಿಟಿಯಲ್ಲಿ ಹೇಳಿ ಪರಿಹರಿಸಿಕೊಳ್ಳುವಷ್ಟರ ಮಟ್ಟಿಗೆ ಭಾರತೀಯರು ಅದರ ಮೇಲೆ ಅವಲಂಬಿತರಾಗಿದ್ದೇವೆ. ಭಾರತೀಯರ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುವ ಉದ್ದೇಶದಿಂದಲೇ ಅಮೆರಿಕ ತನ್ನ ದೇಶದಲ್ಲಿ ಇದಕ್ಕೆ ಫೀಸ್​ ನಿಗದಿ ಮಾಡಿದ್ದರೆ, ಭಾರತದಲ್ಲಿ ಉಚಿತವಾಗಿ ನೀಡುತ್ತಿದೆ. ಫ್ರೀ ಆಗಿ ಸಿಕ್ಕರೆ ಅಗತ್ಯಕ್ಕಿಂತ ಹೆಚ್ಚು ಬಳಸಿಕೊಳ್ಳುವ ಮನಸ್ಥಿತಿ ಭಾರತೀಯರದ್ದು ಎನ್ನುವುದು ಅವರಿಗೆ ತಿಳಿದಿದೆ.&lt;/p&gt;&lt;h2&gt;&lt;strong&gt;ಪೊಲೀಸರ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಆದರೆ, ಇದೇ ಚಾಟ್​ಜಿಪಿಟಿ ನಿಮ್ಮನ್ನು ಕಂಬಿಯ ಹಿಂದೆಯೂ ಹಾಕಿಸಬಲ್ಲುದು ಎನ್ನುವ ಸತ್ಯ ಗೊತ್ತೆ? ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂದು ಎಲ್ಲಾ ಪ್ರಶ್ನೆಗಳನ್ನೂ ಚಾಟ್​ಜಿಪಿಟಿಗೆ ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದೀರಿ ತಾನೆ? ಕೆಲವರು ಸ್ನೇಹಿತರನ್ನು ಮಾಡಿಕೊಳ್ಳದೇ, ತನ್ನ ಮಾತನ್ನು ಕೇಳುವ ChatGPTಯನ್ನೇ ಫ್ರೆಂಡ್ ಮಾಡಿಕೊಳ್ಳುವುದು ಇದೆ. ಕೆಲವರು ಇದನ್ನೇ ತನ್ನ ಲವರ್​ ಎನ್ನುವಂತೆ ದಿನನಿತ್ಯವೂ ಅದರ ಜೊತೆ ಮಾತನಾಡುವುದು ಇದೆ.&lt;/p&gt;&lt;h3&gt;&lt;strong&gt;ಕಂಬಿ ಹಿಂದೆ ನೀವು&lt;/strong&gt;&lt;/h3&gt;&lt;p&gt;ಇವೆಲ್ಲಾ ಏನೋ ಓಕೆ. ಆದರೆ, ChatGPTನಲ್ಲಿ ನೀವು ಕುತೂಹಲಕ್ಕೋ, ಉದ್ದೇಶಪೂರ್ವಕವಾಗಿಯೋ ಅಥವಾ ಇನ್ನೇನಕ್ಕೋ ಏನಾದರೂ ಅಪರಾಧಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದರೆ, ನಿಮ್ಮ ಕಥೆ ಮುಗಿದಂತೆ. ನೀವು ಅಂದುಕೊಳ್ಳಬಹುದು. ಅವೆಲ್ಲಾ ನನಗೆ ಮತ್ತು ನನ್ನ ಮೊಬೈಲ್​ನಲ್ಲಿ ಇರುವ ChatGPTಗೆ ಸಂಬಂಧಿಸಿದ್ದು ಎಂದು. ಆದರೆ, ChatGPT ಬಹಳ ಹುಷಾರು ಇದೆ.ನೀವು ಯಾವುದೇ ಸಂದೇಹಪೂರ್ವಕವಾಗಿರುವ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ನೀವು ತಮಾಷೆ ಕೇಳ್ತಿದ್ದೀರೋ, ಉತ್ತರ ಏನು ಬರಬಹುದು ಎಂದು ಕೇಳ್ತಿದ್ದೀರೋ ಅಥವಾ ಉದ್ದೇಶಪೂರ್ವಕವಾಗಿಯೇ ಕೇಳ್ತಿದ್ದೀರೋ ಬೇಕಾಗಿಲ್ಲ. ಆದರೆ ನಿಮ್ಮ ಪ್ರಶ್ನೆಗಳನ್ನು ನೇರವಾಗಿ ಕ್ರೈಂ ಬ್ರ್ಯಾಂಚ್​ಗೆ ಕಳುಹಿಸಲಾಗುತ್ತದೆ. ಪದೇಪದೇ ಇಂಥದ್ದೇ ಪ್ರಶ್ನೆಗಳನ್ನು ರಿಪೀಟ್​ ಮಾಡುತ್ತಿದ್ದರೆ, ಪೊಲೀಸರು ನೇರವಾಗಿ ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ ಹುಷಾರ್​!&lt;/p&gt;&lt;p&gt;ಇದಾಗಲೇ ಕೆಲವು ಅಪರಾಧಿಕ ಪ್ರಕರಣಗಳಲ್ಲಿ, ChatGPT ಮೂಲಕವೇ ಅಪರಾಧಿಗಳು ತಮ್ಮ ಸಂದೇಹ ಬಗೆಹರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಇನಷ್ಟು ಸ್ಟ್ರಿಕ್ಟ್​ ಮಾಡಲಾಗಿದೆ. ಒಂದು ವೇಳೆ ನೀವು ಏನಾದರೂ ಡೌಟ್​ ಬರುವ ಪ್ರಶ್ನೆ ಕೇಳಿದರೆ, ಅದು ನಿಮಗೇ ಉರುಳಾಗಬಹುದು, ಹುಷಾರ್ ಎಂದು ಎಚ್ಚರಿಸಿದ್ದಾರೆ ಪೊಲೀಸರು!&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/technology/do-you-ask-chatgpt-all-these-questions-be-careful-you-can-be-arrested-suc/articleshow-abgqimr"/>
        </item>
        <item>
            <title><![CDATA[Ganesh Idol: ರಸ್ತೆಬದಿ ಮಾರಾಟಕ್ಕಿಟ ಗಣಪತಿ ಮೂರ್ತಿ ಮಂಗಮಾಯ! ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?]]></title>
            <link>https://kannada.asianetnews.com/crime/ganesh-idol-theft-by-thieves-at-dasarahalli-bengaluru-cctv-video-goest-viral-rav/articleshow-am2yb79</link>
            <guid isPermaLink="true">https://kannada.asianetnews.com/crime/ganesh-idol-theft-by-thieves-at-dasarahalli-bengaluru-cctv-video-goest-viral-rav/articleshow-am2yb79</guid>
            <pubDate>Tue, 08 Sep 2026 08:25:08 +0530</pubDate>
            <description><![CDATA[&lt;p&gt;ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿ ಬೆಳಗ್ಗೆ ಮಂಗಮಾಯವಾಗಿರುವ ಘಟನೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದಿದ್ದು, ಸಿಸಿಟಿವಿ ಪರಿಶೀಲಿಸಿದಾಗ ಘಟನೆಯ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಬೆಳಗಿನ ಜಾವ ನಾಲ್ಕಕ್ಕೆ ನಡೆದಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zew588e2c1n7fwb68axcqa,imgname-ganesh-idol-theft-1788835927304.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.8):&lt;/strong&gt; ಗಣೇಶ ಚತುರ್ಥಿಗಾಗಿ ಮಾರಾಟಕ್ಕೆ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿಯನ್ನು ಖದೀಮರು ಕದ್ದೊಯ್ದಿರುವ ಘಟನೆ ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ನಡೆದಿದೆ.&lt;/p&gt;&lt;h2&gt;ನಸುಕಿನ ಜಾವ ಗಣಪತಿ ಮೂರ್ತಿ ಕಳವು!&lt;/h2&gt;&lt;p&gt;ಸೋಮವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಬಂದ ನಾಲ್ವರು ಕಳ್ಳರು, ಮಾಗಡಿ ರಸ್ತೆಯ ದಾಸರಹಳ್ಳಿಯಲ್ಲಿ ರಸ್ತೆ ಬದಿ ಇರಿಸಿದ್ದ ಗಣಪತಿ ಮೂರ್ತಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.&lt;/p&gt;&lt;h3&gt;ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ&lt;/h3&gt;&lt;p&gt;ಖದೀಮರು ನಸುಕಿನ ಜಾವ ಟಾಟಾ ಏಸ್&zwnj; ಗೂಡ್ಸ್ ನಲ್ಲಿ ಗಣೇಶ ಮೂರ್ತಿಗಳನ್ನ ಕದ್ದೊಯ್ದ ದೃಶ್ಯ ಪಕ್ಕದ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/ganesh-idol-theft-by-thieves-at-dasarahalli-bengaluru-cctv-video-goest-viral-rav/articleshow-am2yb79"/>
        </item>
        <item>
            <title><![CDATA[ಕಳ್ಳತನ ಮಾಡಿ ಐವರು ಗರ್ಲ್​ಫ್ರೆಂಡ್ಸ್​ ಮ್ಯಾನೇಜ್​ ಮಾಡ್ತಿದ್ದ ಕಿಲಾಡಿ ತಾತ! 63ರ ವೃದ್ಧನ ಸ್ಟೋರಿ ಕೇಳಿ]]></title>
            <link>https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07</link>
            <guid isPermaLink="true">https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07</guid>
            <pubDate>Mon, 07 Sep 2026 14:05:01 +0530</pubDate>
            <description><![CDATA[63 ವರ್ಷದ ಬಂಧು ಸಿಂಗ್ ಎಂಬಾತ ತನ್ನ ಐವರು ಗೆಳತಿಯರ ಐಷಾರಾಮಿ ಜೀವನ ಮತ್ತು ದುಬಾರಿ ಖರ್ಚುಗಳನ್ನು ಪೂರೈಸಲು ಕಳ್ಳತನದ ಹಾದಿ ಹಿಡಿದಿದ್ದ. ಈತನ ಕಥೆ ಕೇಳಿ ಪೊಲೀಸರೇ ಬೆರಗಾಗಿದ್ದು, ಈ ವೃದ್ಧನ ಅಪರಾಧದ ಕಥೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xg2zt2174vvj3v3nn5vdzr,imgname-bandhu-singh-1788770090818.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ, ಅನೇಕ ಜನರು ವೃದ್ಧಾಪ್ಯದಲ್ಲಿ ಶಾಂತಿಯುತ ಜೀವನವನ್ನು ನಡೆಸಲು ಬಯಸುತ್ತಾರೆ. ಆ ಶಾಂತಿ ಸಿಗುವುದು ಒಬ್ಬೊಬ್ಬರಿಗೆ ಒಂದೊಂದು ರೀತಿ. ಕೆಲವರು ತೀರ್ಥಯಾತ್ರೆ ಮಾಡಲು ಹೊರಟರೆ, ಮತ್ತೆ ಕೆಲವರು ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯುತ್ತಾರೆ, ಮತ್ತೆ ಕೆಲವರು, ಸಮಯದ ಅಭಾವದಿಂದ ಇಷ್ಟು ವರ್ಷಗಳಿಂದ ಸಾಧ್ಯವಾಗದ ತಮ್ಮ ಹಾಬಿ ಮೇಲೆ ಗಮನ ಹರಿಸುತ್ತಾರೆ. ಒಟ್ಟಿನಲ್ಲಿ ತಮ್ಮ ಜೀವನಕ್ಕೆ ಏನು ಖುಷಿ ಬೇಕೋ ಅದನ್ನೇ ಮಾಡುತ್ತಾರೆ. ಇಲ್ಲೊಬ್ಬ 63 ಕಿಲಾಡಿ ತಾತ ಮಾಡಿದ್ದೂ ಅದನ್ನೇ. ಆದರೆ ಈತನ ಹಾಬಿ ಸ್ವಲ್ಪ ಭಿನ್ನವಾಗಿತ್ತು. ಅದೇ ಈಗ ಆತನನ್ನು ಪೊಲೀಸರ ಅತಿಥಿಯನ್ನಾಗಿ ಮಾಡಿದೆ. ಈ ಅಜ್ಜನ ಸ್ಟೋರಿ ಮತ್ತೀಗ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ.&lt;/p&gt;&lt;p&gt;ಅಂದಹಾಗೆ 63ರ ಈ ಅಜ್ಜನ ಹೆಸರು ಬಂಧು ಸಿಂಗ್. ಸರಿಯಾದ ಆದಾಯವಿಲ್ಲದಿದ್ದರೂ, ಐಷಾರಾಮಿ ಮತ್ತು ದುಬಾರಿ ಜೀವನವನ್ನು ನಡೆಸಲು ಕಳ್ಳತನದ ಮಾರ್ಗ ಹಿಡಿದಿದ್ದ ಈ ತಾತ. ಇದು ಅವನಿಗೆ ಅನಿವಾರ್ಯವೂ ಆಗಿತ್ತು. ಅದಕ್ಕೆ ಕಾರಣ, ಈ ವಯಸ್ಸಿನಲ್ಲಿ ಅವನು ಐವರು ಸ್ನೇಹಿತೆಯರನ್ನು ಮ್ಯಾನೇಜ್​ ಮಾಡಬೇಕಿತ್ತು! ಅವರ ಪೈಕಿ ಇಬ್ಬರಿಗೆ ಇವನಿಂದ ಮಕ್ಕಳೂ ಆಗಿದ್ದವು. ತನ್ನ ಐದು ಗೆಳತಿಯರ ಮೋಜನ್ನು ಪೂರೈಸಲು ಮತ್ತು ಅವರ ದುಬಾರಿ ಖರ್ಚುಗಳನ್ನು ಪೂರೈಸಲು ಕಳ್ಳತನದತ್ತ ಮುಖ ಮಾಡಿದ್ದ ಅಜ್ಜ, ಈಗ ಕಂಬಿ ಎಣಿಸುತ್ತಿದ್ದಾನೆ.&lt;/p&gt;&lt;h2&gt;&lt;strong&gt;ತಾತನ ಲೈಫ್​ಸ್ಟೈಲ್​ಗೆ ಪೊಲೀಸರೇ ಬೆರಗಾದ್ರು&lt;/strong&gt;&lt;/h2&gt;&lt;p&gt;ಬಂಧು ಸಿಂಗ್ ಸ್ಟೋರಿಯನ್ನು ತನಿಖೆಯ ವೇಳೆ ಕೇಳಿದ ಪೊಲೀಸರೇ ಅವಕ್ಕಾಗಿದ್ದಾರೆ. ತನಿಖೆಯಲ್ಲಿ ಬಂಧು ಸಿಂಗ್ ಐದು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನೆಂದು ತಿಳಿದುಬಂದಿದೆ. ಅವನ ವೃದ್ಧಾಪ್ಯವನ್ನು ಲೆಕ್ಕಿಸದೆ, ಅವನು ತನ್ನ ಪ್ರೇಯಸಿಗಳೊಂದಿಗೆ ಮೋಜು ಮಾಡಲು ಕಳ್ಳತನವನ್ನು ಆಶ್ರಯಿಸಿದನು. ಬಂಧು ಸಿಂಗ್&zwnj;ನ ಗೆಳತಿಯರು ಅತ್ಯಂತ ಐಷಾರಾಮಿ ಮತ್ತು ದುಬಾರಿ ಜೀವನಶೈಲಿಯನ್ನು ಬಯಸಿದ್ದ. ಅವರ ಆಸೆಗಳನ್ನು ಪೂರೈಸಲು ಮತ್ತು ಅವರ ದುಬಾರಿ ವೆಚ್ಚಗಳನ್ನು ಪೂರೈಸಲು ಅವನಿಗೆ ಯಾವಾಗಲೂ ದೊಡ್ಡ ಪ್ರಮಾಣದ ಹಣದ ಅಗತ್ಯವಿತ್ತು. ಆದರೆ ಅವನಿಗೆ ಸರಿಯಾದ ಆದಾಯದ ಮೂಲವಿರಲಿಲ್ಲ. ಇದರಿಂದಾಗಿ, ಸುಲಭವಾಗಿ ಹಣ ಗಳಿಸಲು ಅವನು ಕಳ್ಳತನವನ್ನು ತನ್ನ ವೃತ್ತಿಯಾಗಿ ಆರಿಸಿಕೊಂಡನು.&lt;/p&gt;&lt;p&gt;ಬಂಧು ಸಿಂಗ್ ತನ್ನ ಗೆಳತಿಯರ ಖರ್ಚುಗಳನ್ನು ಭರಿಸಲು ಪ್ರತಿದಿನ ಯಾವುದಾದರೂ ಮನೆ ಅಥವಾ ಅಂಗಡಿಗೆ ನುಗ್ಗುತ್ತಿದ್ದನು. ರಾತ್ರಿಯಲ್ಲಿ ಅವನು ವಿಸ್ತಾರವಾದ ಯೋಜನೆಗಳನ್ನು ರೂಪಿಸುತ್ತಿದ್ದನು ಮತ್ತು ವಿವಿಧ ಪ್ರದೇಶಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದನು ಎಂದು ಪೊಲೀಸರು ಬಹಿರಂಗಪಡಿಸಿದರು. ಈ ಕಥೆಯಲ್ಲಿ ಇನ್ನೂ ಆಘಾತಕಾರಿ ಸಂಗತಿಯೆಂದರೆ ಬಂಧು ಸಿಂಗ್&zwnj;ನ ಐದು ಗೆಳತಿಯರಲ್ಲಿ ಇಬ್ಬರು ಗರ್ಭಿಣಿಯಾದರು ಮತ್ತು ಮಕ್ಕಳಿಗೆ ಜನ್ಮ ನೀಡಿದರು. ಇದರೊಂದಿಗೆ, ಮಕ್ಕಳನ್ನು ಬೆಳೆಸುವ ವೆಚ್ಚದ ಜೊತೆಗೆ, ಅವನ ಗೆಳತಿಯರ ವಿವಿಧ ಐಷಾರಾಮಿ ಆಸೆಗಳನ್ನು ಪೂರೈಸಲು ಅವನಿಗೆ ದೊಡ್ಡ ಪ್ರಮಾಣದ ಹಣದ ಅಗತ್ಯವಿತ್ತು. ಅದಕ್ಕಾಗಿಯೇ ಅವನು ಪ್ರತಿದಿನ ಬಹಳ ಚಾಣಾಕ್ಷತನದಿಂದ ಮತ್ತು ಕುತಂತ್ರದಿಂದ ಕದಿಯುತ್ತಲೇ ಇದ್ದನು.&lt;/p&gt;&lt;h3&gt;&lt;strong&gt;ಬಂಧಿಸುವಲ್ಲಿ ಯಶಸ್ವಿ&lt;/strong&gt;&lt;/h3&gt;&lt;p&gt;ಕೊನೆಗೂ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಬಂಧು ಸಿಂಗ್​ನನ್ನು ಬಂಧಿಸಿ ತನಿಖೆ ನಡೆಸಿದಾಗ, ಅವನ ಐಷಾರಾಮಿ ಜೀವನಶೈಲಿಯ ನಿಜವಾದ ಬಣ್ಣ ಮತ್ತು ಕಳ್ಳತನದ ಹಿಂದಿನ ಐದು ಗೆಳತಿಯರು ಬೆಳಕಿಗೆ ಬಂದರು. ಚಿಕ್ಕ ವಯಸ್ಸಿನಿಂದಲೂ ಕಳ್ಳತನ ಮಾಡುತ್ತಾ ಬಂದಿರುವ ಬಂಧು ಸಿಂಗ್, ವೃದ್ಧಾಪ್ಯ ತಲುಪಿದ ನಂತರವೂ ಅದೇ ಹಾದಿಯಲ್ಲಿ ಮುಂದುವರೆದನು. ಈ ಅಜ್ಜನ ವಿಚಿತ್ರ ಜೀವನಶೈಲಿ ಮತ್ತು ಅವನ ಅಪರಾಧಗಳ ಕಥೆ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಈ ವಿಷಯ ಹಿಂದೆ ಯಾವಾಗಲೋ ಸಂಭವಿಸಿದ್ದರೂ.. ಈಗ, ಸಾಮಾಜಿಕ ಮಾಧ್ಯಮದಿಂದ ಮತ್ತೆ ವೈರಲ್​ ಆಗುತ್ತಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/a-63-year-old-man-who-stole-and-managed-five-girlfriends-hear-the-story-of-a-old-man-suc/articleshow-b3w2n07"/>
        </item>
        <item>
            <title><![CDATA[8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು: ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು]]></title>
            <link>https://kannada.asianetnews.com/karnataka-districts/bangalore-students-tejswini-and-tanishka-found-after-8-months-one-is-pregnant-suc/articleshow-g4mx5dw</link>
            <guid isPermaLink="true">https://kannada.asianetnews.com/karnataka-districts/bangalore-students-tejswini-and-tanishka-found-after-8-months-one-is-pregnant-suc/articleshow-g4mx5dw</guid>
            <pubDate>Wed, 09 Sep 2026 18:37:03 +0530</pubDate>
            <description><![CDATA[ಜನವರಿಯಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ ಸಿಐಡಿ, ಯುವತಿಯೊಬ್ಬಳು ಹೊಸ ಸಿಮ್ ಕಾರ್ಡ್&zwnj;ಗಾಗಿ ನೀಡಿದ ಆಧಾರ್ ಕಾರ್ಡ್ ಮಾಹಿತಿಯನ್ನು ಆಧರಿಸಿ ಅವರನ್ನು ಪತ್ತೆಹಚ್ಚಿದೆ. ಕನಕಪುರದ ಯುವಕನೊಬ್ಬನೊಂದಿಗೆ ವಾಸವಿದ್ದ ಇವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m234e8bvag30ezaqmx8arv7e,imgname-tejaswini-and-tanishka-1788959203706.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಜನವರಿಯಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಇಬ್ಬರು ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ಈ ವಿಷ್ಯ ಭಾರಿ ಸದ್ದು ಮಾಡಿತ್ತು. ಪಿಯುಸಿ ಓದುತ್ತಿದ್ದ ಈ ವಿದ್ಯಾರ್ಥಿನಿಯರನ್ನು ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಇವರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಫೋನ್​ ಕೂಡ ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸರಿಗೆ ಇವರ ಪತ್ತೆ ವಿಚಾರ ಈಗ ದೊಡ್ಡ ಸವಾಲಾಗಿತ್ತು. ಇವರ ಪತ್ತೆಗಾಗಿ ಪೊಲೀಸ್ ಇಲಾಖೆ 10ಜನರ ವಿಶೇಷ ತಂಡವನ್ನು ರಚಿಸಿತ್ತು. ಈ ತಂಡವೂ ಈ ಇಬ್ಬರು ಬಾಲಕಿಯರಿಗಾಗಿ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ. ಇವರನ್ನು ಅರಸಿ ಪೊಲೀಸರು ಹೋಗದಿರೋ ಜಾಗವಿಲ್ಲ, ಹುಡುಕಾಡದ ಸ್ಥಳವಿಲ್ಲ. ಆದರೂ ಈ ಹುಡುಗಿಯರು ಎಲ್ಲಿ ಹೋದರು ಏನಾದರೂ ಎಂಬ ಬಗ್ಗೆ ಯಾವುದೇ ಸುಳಿವು ಸಿಗದೇ ಇರೋದು ಪೊಲೀಸರು ಸೇರಿದಂತೆ ಕುಟುಂಬಸ್ಥರನ್ನು ಕಂಗಾಲಾಗುವಂತೆ ಮಾಡಿತ್ತು.&lt;/p&gt;&lt;p&gt;ಹೀಗೆ ನಾಪತ್ತೆಯಾದ ವಿದ್ಯಾರ್ಥಿನಿಯರಾದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ. ಕೊನೆಗೂ ಈಗ ಎಂಟು ತಿಂಗಳ ಬಳಿಕ ಸಿಐಡಿ (CID) ಅಧಿಕಾರಿಗಳು ಇವರನ್ನು ಪತ್ತೆಹಚ್ಚಿದ್ದಾರೆ! ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾದವರು ಈಗ ಸಿಕ್ಕಿಬಿದ್ದಿದ್ದಾರೆ! ನಾಪತ್ತೆಯಾದ ಈ ಇಬ್ಬರು ವಿದ್ಯಾರ್ಥಿನಿಯರು ಪೋನ್ ಬಳಸ್ತಿಲ್ಲ, ಎಟಿಎಂ ಕಾರ್ಡ್ ಕೂಡ ಬಳಸಿಲ್ಲ, ಸ್ನೇಹಿತರು ಹಾಗೂ ಕುಟುಂಬದ ಸಂಪರ್ಕವನ್ನು ಮಾಡಿಲ್ಲ, ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದರು.&lt;/p&gt;&lt;h2&gt;&lt;strong&gt;ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಪಾಲಕರು&lt;/strong&gt;&lt;/h2&gt;&lt;p&gt;ಪೊಲೀಸರು ಪತ್ತೆ ಹಚ್ಚದ ಹಿನ್ನೆಲೆಯಲ್ಲಿ, ಈ ವಿದ್ಯಾರ್ಥಿನಿಯರ ಪಾಲಕರು ಹೈಕೋರ್ಟ್​ ಮೆಟ್ಟಿಲೇರಿದ್ದರು. ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರೂ ಯುವತಿಯರನ್ನು ಪತ್ತೆಹಚ್ಚಿದ್ದಾರೆ. ​ಸ್ಥಳೀಯ ಪೊಲೀಸರ ಆರಂಭಿಕ ತನಿಖೆಯಲ್ಲಿ ಇಬ್ಬರೂ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿ ಮಗುವೊಂದರ ಜೊತೆ ಇವರು ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದಾದ ನಂತರ ಇವರ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೆಟ್ಟದ ಆವರಣದಲ್ಲೇ ಇವರಿಗೆ ಕನಕಪುರ ಮೂಲದ ಯುವಕನೊಬ್ಬನ ಪರಿಚಯವಾಗಿದೆ.&lt;/p&gt;&lt;h3&gt;&lt;strong&gt;ಸುಳ್ಳು ಹೇಳಿದ್ದ ವಿದ್ಯಾರ್ಥಿನಿಯರು&lt;/strong&gt;&lt;/h3&gt;&lt;p&gt;​ಮನೆಯಲ್ಲಿದ್ದ ಕೌಟುಂಬಿಕ ಒತ್ತಡಕ್ಕೆ ಹೆದರಿದ್ದ ತನಿಷ್ಕಾ, &quot;ನಾವಿಬ್ಬರೂ ಅಕ್ಕ-ತಂಗಿ, ನಮಗೆ ತಂದೆ-ತಾಯಿ ಯಾರೂ ಇಲ್ಲ, ಅನಾಥರು&quot; ಎಂದು ಯುವಕನಿಗೆ ಸುಳ್ಳು ಹೇಳಿದ್ದಾರೆ. ಯುವತಿಯರ ಮಾತು ನಂಬಿದ ಆ ಯುವಕ, ಇಬ್ಬರನ್ನೂ ತನ್ನೊಂದಿಗೆ ಕರೆದೊಯ್ದಿದ್ದನು. ಬಳಿಕ ಆ ಯುವಕ ತನಿಷ್ಕಾಳನ್ನು ಮದುವೆಯಾಗಿದ್ದು, ತೇಜಸ್ವಿನಿಯನ್ನು ತಂಗಿ ಎಂದು ಮನೆಯಲ್ಲೇ ಜೊತೆಯಲ್ಲಿಟ್ಟುಕೊಂಡಿದ್ದನು. ಇತ್ತೀಚೆಗೆ ತನಿಷ್ಕಾ ಹೊಸ ಸಿಮ್ ಕಾರ್ಡ್ ಖರೀದಿಸಲು ತನ್ನ ಮೂಲ ಆಧಾರ್ ಕಾರ್ಡ್ ನೀಡಿದ್ದಳು. ಸಿಐಡಿ ಅಧಿಕಾರಿಗಳು ಈಗಾಗಲೇ ಈ ಆಧಾರ್ ಸಂಖ್ಯೆಯ ಮೇಲೆ ನಿಗಾ ಇರಿಸಿದ್ದರಿಂದ, ಟೆಲಿಕಾಂ ಸರ್ವಿಸ್ ಪ್ರೊವೈಡರ್ ಮೂಲಕ ಅಧಿಕಾರಿಗಳಿಗೆ ತಕ್ಷಣ ಮಾಹಿತಿ ರವಾನೆಯಾಯಿತು. ​ಆಧಾರ್ ಮಾಹಿತಿ ಹಾಗೂ ನೆಟ್&zwnj;ವರ್ಕ್ ಸ್ಥಳವನ್ನು ಬೆನ್ನತ್ತಿದ ಸಿಐಡಿ ತಂಡ, ಇಬ್ಬರೂ ಯುವತಿಯರು ಇರುವ ಜಾಗವನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ತನಿಷ್ಕಾ ಪ್ರಸ್ತುತ ಗರ್ಭಿಣಿಯಾಗಿದ್ದು, ಸಿಐಡಿ ಪೊಲೀಸರು ಇಬ್ಬರನ್ನೂ ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bangalore-students-tejswini-and-tanishka-found-after-8-months-one-is-pregnant-suc/articleshow-g4mx5dw"/>
        </item>
        <item>
            <title><![CDATA[ಮನೆಯ ಬೆಡ್‌ರೂಂನಲ್ಲಿ 50 ಅಡಿ ಗುಂಡಿ: ಒಂದೂವರೆ ತಿಂಗಳ ‘ನಿಧಿ ಶೋಧ’ದ ರಹಸ್ಯ ಬಯಲು!]]></title>
            <link>https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm</link>
            <guid isPermaLink="true">https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm</guid>
            <pubDate>Thu, 03 Sep 2026 19:46:40 +0530</pubDate>
            <description><![CDATA[&lt;p&gt;ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್&zwnj;ನಲ್ಲಿ ನಿಧಿ ಸಿಗುತ್ತದೆ ಎಂಬ ನಂಬಿಕೆಯಿಂದ ಮನೆಯ ಬೆಡ್&zwnj;ರೂಂನಲ್ಲೇ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ಬಿಹಾರ ಮೂಲದ ಆರು&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1egwrne46b5gbv32z5cewq6,imgname-mbj-1788267618990.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.03): &lt;/strong&gt;ನಿಧಿ ಸಿಗುತ್ತದೆ ಎಂಬ ಆಸೆಯಿಂದ ಮನೆಯೊಂದರೊಳಗೆ ಬರೋಬ್ಬರಿ 50 ಅಡಿ ಆಳದ ಗುಂಡಿ ತೋಡಿದ ಪ್ರಕರಣ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್&zwnj;ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಒಂದೂವರೆ ತಿಂಗಳಿನಿಂದ ಮನೆಯ ಬೆಡ್&zwnj;ರೂಂನಲ್ಲೇ ರಹಸ್ಯವಾಗಿ ಗುಂಡಿ ತೋಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರ ದಂಪತಿ ಸೇರಿದಂತೆ ಒಟ್ಟು 8 ಜನರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ನಿಧಿಗಾಗಿ ಬಿಹಾರದಿಂದ ಆರು ಮಂದಿ ಕಾರ್ಮಿಕರನ್ನು ಕರೆಸಿ ಗುಂಡಿ ತೋಡಿಸಿರುವ ಆರೋಪ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಮತ್ತು ಅವರ ಪತ್ನಿ ನಾಗಬಿಂದು ವಿರುದ್ಧ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಮನೆಯ ಬೆಡ್&zwnj;ರೂಂನಲ್ಲೇ 50 ಅಡಿ ಗುಂಡಿ!&lt;/strong&gt;&lt;/p&gt;&lt;p&gt;ಪೊಲೀಸ್ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ತಮ್ಮ ಮನೆಯಲ್ಲಿ ನಿಧಿ ಇದೆ ಎಂದು ಕಾರ್ಮಿಕರಿಗೆ ಹೇಳಿದ್ದರಂತೆ. ಸುಮಾರು 50 ಅಡಿ ಆಳಕ್ಕೆ ಅಗೆದರೆ ನಿಧಿ ಸಿಗುತ್ತದೆ ಎಂದು ನಂಬಿಸಿ, ಬಿಹಾರ ರಾಜ್ಯದ ಆರು ಮಂದಿ ಗೌಂಡಿಗಳನ್ನು ಗುಂಡಿ ತೋಡುವ ಕೆಲಸಕ್ಕೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಮನೆಯ ಮಾಲೀಕರು ಸುಮಾರು ಒಂದೂವರೆ ತಿಂಗಳ ಹಿಂದೆಯೇ ಮನೆ ಖಾಲಿ ಮಾಡಿ ಬೆಂಗಳೂರಿಗೆ ತೆರಳಿದ್ದು, ಮನೆಯ ಬೆಡ್&zwnj;ರೂಂನಲ್ಲಿ ಗುಂಡಿ ತೋಡುವಂತೆ ಕಾರ್ಮಿಕರಿಗೆ ಸೂಚಿಸಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಯಾರಿಗೂ ಗೊತ್ತಾಗದಂತೆ ರಾತ್ರಿಯಲ್ಲಿ &lsquo;ನಿಧಿ ಶೋಧ&rsquo;!&lt;/strong&gt;&lt;/p&gt;&lt;p&gt;ಮನೆಯ ಮಾಲೀಕರ ಮಾತನ್ನು ನಂಬಿದ ಆರು ಮಂದಿ ಕಾರ್ಮಿಕರು ಕಳೆದ ಒಂದೂವರೆ ತಿಂಗಳಿನಿಂದ ರಾತ್ರಿಯ ವೇಳೆ ಗುಂಡಿ ತೋಡುತ್ತಿದ್ದರು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಶಬ್ದ ಮಾಡದೆ ಗುಂಡಿ ಅಗೆಯಲಾಗುತ್ತಿತ್ತು ಎನ್ನಲಾಗಿದೆ. ಅಗೆದ ಮಣ್ಣನ್ನು ಹೊರಗೆ ಹಾಕಿದರೆ ವಿಷಯ ಬಯಲಾಗುವ ಸಾಧ್ಯತೆ ಇದ್ದುದರಿಂದ, ಮಣ್ಣನ್ನು ಮನೆಯೊಳಗೇ ಸುಮಾರು 25ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;&lt;strong&gt;ಗುಂಡಿ ತೋಡುತ್ತಿದ್ದಾಗ ನೀರು ಬಂದರೂ ನಿಲ್ಲಲಿಲ್ಲ!&lt;/strong&gt;&lt;/p&gt;&lt;p&gt;ಗುಂಡಿ ಅಗೆಯುವ ಸಂದರ್ಭದಲ್ಲಿ ನೀರು ಕೂಡ ಬಂದಿತ್ತು ಎನ್ನಲಾಗಿದ್ದು, ಅದನ್ನು ಬಕೆಟ್&zwnj;ಗಳ ಮೂಲಕ ಹೊರಗೆ ತೆಗೆದು ಮತ್ತೆ ಗುಂಡಿ ತೋಡುವ ಕೆಲಸ ಮುಂದುವರಿಸಲಾಗಿತ್ತು ಎಂದು ಕಾರ್ಮಿಕರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಮನೆಯೊಳಗೆ ಇಷ್ಟೊಂದು ಆಳದ ಗುಂಡಿ ತೋಡುತ್ತಿದ್ದರೂ ಹೊರಗಿನವರಿಗೆ ಅನುಮಾನ ಬಾರದಂತೆ ಕೆಲಸ ನಡೆಸಲಾಗಿತ್ತು ಎನ್ನಲಾಗಿದೆ.&lt;/p&gt;&lt;p&gt;&lt;strong&gt;6 ಕಾರ್ಮಿಕರು ಪೊಲೀಸರ ವಶದಲ್ಲಿ&lt;/strong&gt;&lt;/p&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್, ಅವರ ಪತ್ನಿ ನಾಗಬಿಂದು ಹಾಗೂ ಬಿಹಾರ ಮೂಲದ ಸಂತೋಷ ಬಸವನ್, ಮಿಥುನ್ ಕುಮಾರ್, ಅಭಿಷೇಕ್ ಪವನ್, ಮಂಜೇಶ್ ಪಾಸ್ವಾನ್, ಬಿಹಕಾಶ್ ಕುಮಾರ್ ಪವನ್ ಮತ್ತು ಶಂಕರ ಪವನ್ ಸೇರಿದಂತೆ ಒಟ್ಟು 8 ಜನರ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಆರು ಮಂದಿ ಬಿಹಾರ ಮೂಲದ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಮನೆಯ ಮಾಲೀಕರಾದ ಸ್ವರ್ಣ ಪ್ರಕಾಶ್ ಹಾಗೂ ನಾಗಬಿಂದು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.&lt;/p&gt;&lt;h2&gt;&lt;strong&gt;ದೂರು ನೀಡಿದ ಬಳಿಕ ಪ್ರಕರಣ ಬಯಲು&lt;/strong&gt;&lt;/h2&gt;&lt;p&gt;ವಡ್ಡರಹಟ್ಟಿ ಕ್ಯಾಂಪ್&zwnj;ನ ಅರುಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಧಿಯ ಆಸೆಯಿಂದ ಮನೆಯೊಳಗೆ 50 ಅಡಿ ಆಳದ ಗುಂಡಿ ತೋಡಿರುವ ಪ್ರಕರಣ ಇದೀಗ ಸ್ಥಳೀಯವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ನಿಜವಾಗಿಯೂ ಮನೆಯಲ್ಲಿ ನಿಧಿ ಇದೆ ಎಂಬ ನಂಬಿಕೆಯಿಂದಲೇ ಈ ಗುಂಡಿ ತೋಡಲಾಗಿತ್ತೇ? ಅಥವಾ ಇದರ ಹಿಂದೆ ಬೇರೆ ಉದ್ದೇಶವಿದೆಯೇ? ಎಂಬ ಹಲವು ಪ್ರಶ್ನೆಗಳು ಮೂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-treasure-hunt-turns-into-police-case-8-fir-in-gangavathis-vadrahatti-gvd/articleshow-gkxxlnm"/>
        </item>
        <item>
            <title><![CDATA[Love Breakup: ಪ್ರಿಯತಮೆ ದೂರವಾದ ಕೋಪಕ್ಕೆ ಇಂಥಾ ಕೃತ್ಯ? ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿ ಬಂಧನ]]></title>
            <link>https://kannada.asianetnews.com/karnataka-districts/shivamogga-obsessive-lover-sets-two-bikes-ablaze-outside-ex-girlfriend-s-house-gvd/articleshow-igeuhug</link>
            <guid isPermaLink="true">https://kannada.asianetnews.com/karnataka-districts/shivamogga-obsessive-lover-sets-two-bikes-ablaze-outside-ex-girlfriend-s-house-gvd/articleshow-igeuhug</guid>
            <pubDate>Mon, 31 Aug 2026 15:37:21 +0530</pubDate>
            <description><![CDATA[&lt;p&gt;ಬ್ರೇಕ್&zwnj;ಅಪ್ ಬಳಿಕವೂ ಶಿವಮೊಗ್ಗದಲ್ಲಿ ಮಾಜಿ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್&zwnj;ಗಳಿಗೆ ಬೆಂಕಿ ಹಚ್ಚಿದ ಆರೋಪ. ಕೃತ್ಯ ಸಿಸಿಟಿವಿಯಲ್ಲಿ ಸೆರೆ; ಜಯನಗರ ಠಾಣೆ ಪೊಲೀಸರು ಮಣಿಯನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bmj9wes8pqwrs3rebmmky5,imgname-bjb-1788170807182.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ (ಆ.31): &lt;/strong&gt;ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟ ಇದೀಗ ಆತಂಕಕ್ಕೆ ಕಾರಣವಾಗಿದೆ. ತನ್ನಿಂದ ದೂರವಾಗಿದ್ದ ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್&zwnj;ಗಳಿಗೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಈ ಘಟನೆ ಶಿವಮೊಗ್ಗದ ವೆಂಕಟೇಶ ನಗರದ ಐದನೇ ಕ್ರಾಸ್ ಬಳಿ ನಡೆದಿದೆ. ಮಧ್ಯರಾತ್ರಿ ನಡೆದ ಈ ಕೃತ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;&lt;p&gt;ತಮಿಳುನಾಡು ಮೂಲದ ಮಣಿ ಎಂಬಾತನೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಶಿವಮೊಗ್ಗದ ಕಾಶಿಪುರದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ಇನ್&zwnj;ಸ್ಟಾಗ್ರಾಮ್ ಮೂಲಕ ಮಣಿಗೆ ಅನುಷಾ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿತ್ತು. ಆದರೆ ಮಣಿ ಗಾಂಜಾ ಹಾಗೂ ಮದ್ಯದ ವ್ಯಸನ ಹೊಂದಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅನುಷಾ ಆತನಿಂದ ದೂರವಾಗಿದ್ದರು.&lt;/p&gt;&lt;p&gt;ಆದರೆ ಬ್ರೇಕ್&zwnj;ಅಪ್ ಬಳಿಕವೂ ಮಣಿ ಅನುಷಾಳನ್ನು ಬೆಂಬಿಡದೆ ಕಾಡುತ್ತಿದ್ದ ಎನ್ನಲಾಗಿದೆ. ಮಣಿಯ ಕಾಟದಿಂದಾಗಿ ಅನುಷಾ ಕುಟುಂಬ ಶಿವಮೊಗ್ಗದ ಬೊಮ್ಮನಕಟ್ಟೆ, ಕಾಶಿಪುರ ಸೇರಿದಂತೆ ಹಲವು ಕಡೆ ಮನೆ ಬದಲಾಯಿಸಿದ್ದರೂ, ಆತನ ಕಾಟ ಮಾತ್ರ ನಿಂತಿರಲಿಲ್ಲ ಎನ್ನಲಾಗಿದೆ. ಇದರ ನಡುವೆ, ಸುಮಾರು ಒಂದು ವರ್ಷದ ಹಿಂದೆ ಅನುಷಾ ಮತ್ತು ಅಂತೋನಿ ರಾಜ್ ಎಂಬುವವರ ನಿಶ್ಚಿತಾರ್ಥ ನಡೆದಿತ್ತು. ಮುಂದಿನ ತಿಂಗಳು ಮದುವೆ ನಡೆಸುವ ಕುರಿತು ಕುಟುಂಬಸ್ಥರು ಮಾತುಕತೆ ನಡೆಸಿದ್ದರು.&lt;/p&gt;&lt;p&gt;ಇದನ್ನು ತಿಳಿದಿದ್ದ ಮಣಿ, ಅಂತೋನಿ ರಾಜ್ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಅಂತೋನಿ ರಾಜ್ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಮತ್ತೊಮ್ಮೆ ಅನುಷಾ ಮನೆ ಮುಂದೆ ಬಂದ ಮಣಿ, ರಾತ್ರಿ ಸುಮಾರು 11 ಗಂಟೆಗೆ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಬೆಳಗಿನ ಜಾವ ಸುಮಾರು 2 ಗಂಟೆಗೆ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್&zwnj;ಗಳಿಗೆ ಬೆಂಕಿ ಹಚ್ಚಿದ್ದಾನೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಬ್ರೇಕ್&zwnj;ಅಪ್ ಬಳಿಕ ಬ್ಲ್ಯಾಕ್&zwnj;ಮೇಲ್&lt;/strong&gt;&lt;/h2&gt;&lt;p&gt;ಅನುಷಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಂತೋನಿ ರಾಜ್&zwnj;ಗೆ ಸೇರಿದ ಒಂದು ಬೈಕ್ ಹಾಗೂ ಆಕೆಯ ಸಹೋದರ ಧನುಷ್&zwnj;ಗೆ ಸೇರಿದ ಮತ್ತೊಂದು ಬೈಕ್ ಬೆಂಕಿಗಾಹುತಿಯಾಗಿದೆ. ಇಷ್ಟೇ ಅಲ್ಲದೆ, ಬ್ರೇಕ್&zwnj;ಅಪ್ ಬಳಿಕ ಅನುಷಾಳಿಗೆ ಮಣಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಹಾಗೂ ಆಗಾಗ್ಗೆ ಹಣ ಪಡೆಯುತ್ತಿದ್ದ ಎನ್ನುವ ಆರೋಪವೂ ಕೇಳಿಬಂದಿದೆ. ಮಣಿಯ ನಿರಂತರ ಕಾಟದಿಂದ ಬೇಸತ್ತ ಅನುಷಾ ಕುಟುಂಬ ಇದೀಗ ಪೊಲೀಸರ ಮೊರೆ ಹೋಗಿದೆ.&lt;/p&gt;&lt;p&gt;ಈ ಸಂಬಂಧ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್&zwnj;ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಣಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರೇಮದ ಹೆಸರಿನಲ್ಲಿ ಶುರುವಾದ ಪರಿಚಯ.. ಬ್ರೇಕ್&zwnj;ಅಪ್ ಬಳಿಕ ಕಿರುಕುಳಕ್ಕೆ ತಿರುಗಿ, ಕೊನೆಗೆ ಬೈಕ್&zwnj;ಗಳಿಗೆ ಬೆಂಕಿ ಹಚ್ಚುವ ಹಂತಕ್ಕೆ ತಲುಪಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shivamogga-obsessive-lover-sets-two-bikes-ablaze-outside-ex-girlfriend-s-house-gvd/articleshow-igeuhug"/>
        </item>
        <item>
            <title><![CDATA[20 ವರ್ಷ ಚಿಕ್ಕವಳಾದ ನೀನು ವಿಧವೆಯಂತೆ ಬಾಳೋದು ಇಷ್ಟವಿಲ್ಲ- ತಲಾಖ್​ ಕೊಡುವೆ: ಉಗ್ರ ಯಾಸಿನ್​​ ಮಲಿಕ್​  ಪತ್ರ]]></title>
            <link>https://kannada.asianetnews.com/relationship/yasin-maliks-divorce-decision-and-demand-for-death-in-nurse-killing-case-suc/articleshow-kn0nfvt</link>
            <guid isPermaLink="true">https://kannada.asianetnews.com/relationship/yasin-maliks-divorce-decision-and-demand-for-death-in-nurse-killing-case-suc/articleshow-kn0nfvt</guid>
            <pubDate>Thu, 03 Sep 2026 20:16:07 +0530</pubDate>
            <description><![CDATA[ಕಾಶ್ಮೀರಿ ಪಂಡಿತ ನರ್ಸ್ ಸರಳಾ ಭಟ್ ಹತ್ಯೆ ಪ್ರಕರಣದಲ್ಲಿ ಚಾರ್ಜ್&zwnj;ಶೀಟ್ ಸಲ್ಲಿಕೆಯಾಗುತ್ತಿದ್ದಂತೆ, ಭಯೋತ್ಪಾದಕ ಯಾಸಿನ್ ಮಲಿಕ್ ತನ್ನ ಪತ್ನಿಗೆ ತಲಾಖ್ ನೀಡಲು ಮುಂದಾಗಿದ್ದಾನೆ. ಈಗಾಗಲೇ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ, ತನ್ನ ಪತ್ನಿಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1kvpqywqst8jbmf3xj3ct34,imgname-yasin-malik-1788446728156.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀನಗರ: &lt;/strong&gt;ನಿಷೇಧಿತ ಸಂಘಟನೆಯಾದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್&zwnj;ನ ಮುಖ್ಯಸ್ಥ ಯಾಸಿನ್​ ಮಲಿಕ್​ ಈಗ ಭಾರಿ ಸದ್ದು ಮಾಡುತ್ತಿದ್ದಾನೆ. 1989 ಹಾಗೂ 1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸಮಯದಲ್ಲಿ ಈತನೇ ಮುಂದಾಳತ್ವ ವಹಿಸಿದ್ದ. ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಎಚ್ಚರಿಕೆ ನೀಡಿದರೂ ಸರಳಾ ಭಟ್ ಧೈರ್ಯವಾಗಿ ಎದೆಗುಂದದೆ ಸೇವೆಗೆ ಹಾಜರಾಗುತ್ತಿದ್ದರು. ಅವರನ್ನು ಬರ್ಬರವಾಗಿ ಕೊಲೆ ಮಾಡಿರುವ ಯಾಸಿನ್​ ಮತ್ತಿತರ ವಿರುದ್ಧ 36 ವರ್ಷಗಳ ಬಳಿಕ ತನಿಖೆ ನಡೆಸಿದ ಪೊಲೀಸರು ಜೈಲಿನಲ್ಲಿರುವ ಉಗ್ರ, ಹಾಗೂ ಮಾಸ್ಟರ್ ಮೈಂಡ್ ಯಾಸಿನ್ ಮಲಿಕ್ ಸೇರಿದಂತೆ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಆದರೆ ಇದಾಗಲೇ ಈತ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಮಲಿಕ್ 2019 ರಿಂದ ಜೈಲಿನಲ್ಲಿದ್ದಾನೆ ಮತ್ತು 2022 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.&lt;/p&gt;&lt;p&gt;ಇದೀಗ ಸರಳಾ ಕೇಸ್​ನಲ್ಲಿ ಚಾರ್ಜ್​ಷೀಟ್​ ಫೈಲ್​ ಆಗುತ್ತಲೇ, ತನ್ನ ಪತ್ನಿಗೆ ತಲಾಖ್​ ಕೊಡಲು ಮುಂದಾಗಿದ್ದಾನೆ. ಈತ ಕೊಟ್ಟ ಕಾರಣ ಕೇಳಿ ಈತನ ಬೆಂಬಲಿಗರ ಮನಸ್ಸು ಕರಗಬೇಕು, ಹಾಗಿದೆ. 'ಕಳೆದ ಎಂಟು ವರ್ಷಗಳಿಂದ ನನ್ನ ಪತ್ನಿ ಮುಶಾಲ್ ಜೊತೆ ಮಾತನಾಡಿಲ್ಲ. ನನ್ನ ತಾಯಿ, ಪತ್ನಿ ಮುಶಾಲ್ ಮತ್ತು ಅವರ 13 ವರ್ಷದ ಮಗಳ ದನಿ ಕೇಳದೇ ಎಂಟು ವರ್ಷಗಳಾಗಿವೆ. ಈ ಸಮಯದಲ್ಲಿ,ನನಗೆ ಫೋನ್&zwnj;ನಲ್ಲಿ ಮಾತನಾಡಲು ಅಥವಾ ವೀಡಿಯೊ ಕರೆ ಮೂಲಕ ಅವರನ್ನು ಭೇಟಿ ಮಾಡಲು ಅವಕಾಶವಿಲ್ಲ. ಆದ್ದರಿಂದ ಮುಶಾಲ್ ತನ್ನ ಜೀವನದ ಉಳಿದ ಭಾಗವನ್ನು ಈ ಸಂದರ್ಭಗಳಿಂದ ಅಥವಾ ವಿಧವೆಯಾಗಿ ಬದುಕಬೇಕೆಂದು ನಾನು ಬಯಸುವುದಿಲ್ಲ. ಅವಳು ತನ್ನ ಜೀವನದಲ್ಲಿ ಘನತೆ ಮತ್ತು ಭರವಸೆಯೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ ತಲಾಖ್​ ಕೊಡಲು ಇಚ್ಛಿಸುತ್ತೇನೆ' ಎಂದು ಬರೆದಿದ್ದಾನೆ.&lt;/p&gt;&lt;h2&gt;&lt;strong&gt;ಸಹಾನುಭೂತಿಗಾಗಿ ಬರೆದಿಲ್ಲ ಎಂದ ಉಗ್ರ&lt;/strong&gt;&lt;/h2&gt;&lt;p&gt;ಜೊತೆಗೆ, ಈ ಅಫಿಡವಿಟ್ ಅನ್ನು ಕರುಣೆ ಅಥವಾ ಸಹಾನುಭೂತಿ ಪಡೆಯಲು ಬರೆಯಲಾಗಿಲ್ಲ. ಇದನ್ನು ನನ್ನ ಆತ್ಮಸಾಕ್ಷಿಯ ಕೊನೆಯ ಮಾತುಗಳು ಎಂದಿರೋ ಈ ಉಗ್ರ, ನನ್ನ ಹೆಂಡತಿಯನ್ನು ಮದುವೆಯ ಬಂಧಗಳಿಂದ ಮುಕ್ತಗೊಳಿಸುವ ನೋವಿನ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದಿದ್ದಾನೆ. &quot;ನಿಮ್ಮೊಂದಿಗಿನ ನನ್ನ ಸಮಯ ಕಡಿಮೆ ಮತ್ತು ಅನಿಶ್ಚಿತವಾಗಿದೆ ಎಂದು ನನಗೆ ತಿಳಿದಿದೆ. ನೀವು ನನಗಿಂತ ಇಪ್ಪತ್ತು (20) ವರ್ಷ ಚಿಕ್ಕವರು, ಮತ್ತು ನೀವು ನನ್ನ ಸಂದರ್ಭಗಳಿಂದ ಅಥವಾ ವಿಧವೆಯಾಗಿ ನಿಮ್ಮ ಉಳಿದ ಜೀವನವನ್ನು ಹೊರೆಯಾಗಿ ಕಳೆಯಬೇಕೆಂದು ನಾನು ಬಯಸುವುದಿಲ್ಲ. ಆದ್ದರಿಂದ, ನಿಮ್ಮ ಜೀವನದಲ್ಲಿ ಘನತೆ ಮತ್ತು ಭರವಸೆಯೊಂದಿಗೆ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಧೈರ್ಯವನ್ನು ಕಂಡುಕೊಳ್ಳಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನಾನು ಯಾವಾಗಲೂ ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ, ಈ ಜಗತ್ತಿನಲ್ಲಿ ಮತ್ತು ಮುಂದಿನ ದಿನಗಳಲ್ಲಿ. ನಾನು ನಿಮ್ಮನ್ನು ಗೌರವಿಸುತ್ತೇನೆ ಮತ್ತು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ!&lt;/p&gt;&lt;h3&gt;&lt;strong&gt;ಏನಿದು ಸರಳಾ ಕೇಸ್​?&lt;/strong&gt;&lt;/h3&gt;&lt;p&gt;1989 ಹಾಗೂ 1990ರಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಉಗ್ರರು ಟಾರ್ಗೆಟ್ ಮಾಡಿದ್ದರು. ಮಸೀದಿಗಳಲ್ಲಿ ಕಾಶ್ಮೀರಿ ಪಂಡಿತರು ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲಾ ಕಾಶ್ಮೀರದಿಂದಲೇ ಈಗಲೇ ಹೊರಡಬೇಕು ಎಂದು ಕರೆ ನೀಡಲಾಗಿತ್ತು. ಮನೆ ಮನೆಗಳಿಗೆ ನುಗ್ಗಿ ಪುರುಷರ ಮೇಲೆ ಗುಂಡಿನ ದಾಳಿ, ಮಾರಾಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಮಹಿಳೆಯರನ್ನು ಹೊತ್ತೊಯ್ದು ಹಾಳು ಮಾಡಿ ಬಳಿಕ ಹತ್ಯೆ ಮಾಡಲಾಗುತ್ತಿತ್ತು. ಭಯೋತ್ಪಾದನೆ ಅತ್ಯಂತ ಉಚ್ಚಸ್ಥಿತಿಗೆ ತಲುಪಿತ್ತು. ಅಂದು ಎಪ್ರಿಲ್ 18, 1990. ಯಾಸಿನ್ ಮಲಿಕ್ ಮುಂದಾಳತ್ವದ ಜೆಕೆಎಲ್&zwnj;ಎಫ್ ಉಗ್ರರು SKIMS ಆಸ್ಪತ್ರೆಗೆ ನುಗ್ಗಿದ್ದರು. ಇಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತ್ ಸರಳಾ ಭಟ್&zwnj;&zwnj;ನ್ನ ಗನ್ ಪಾಯಿಂಟ್&zwnj;ನಲ್ಲಿ ಅಪಹರಿಸಿದ್ದರು.&lt;/p&gt;&lt;p&gt;ಕಾಶ್ಮೀರಿ ಪಂಡಿತರು ಕಾಶ್ಮೀರ ತೊರೆಯಲು ಎಚ್ಚರಿಕೆ ನೀಡಿದರೂ ಸರಳಾ ಭಟ್ ಧೈರ್ಯವಾಗಿ ಎದೆಗುಂದದೆ ಸೇವೆಗೆ ಹಾಜರಾಗುತ್ತಿದ್ದರು. ಇದನ್ನು ಅರಿತ ಉಗ್ರರು ಪಾಠ ಕಲಿಸಲು ಹಾಗೂ ಎಲ್ಲಾ ಪಂಡಿತರು ಭಯಬೀಳುವಂತೆ ಮಾಡಲು ಸರಳಾ ಭಟ್ ಅಪಹರಿಸಿದ್ದರು. ಬಳಿಕ ಯಾಸಿನ್ ಮಲಿಕ್ ಸೇರಿದಂತೆ ಜೆಕೆಎಲ್&zwnj;ಎಫ್ ಉಗ್ರರ ಒಬ್ಬರ ಮೇಲೊಬ್ಬರಂತೆ ಎರಗಿದ್ದರು. ಎಪ್ರಿಲ್ 19, 1990ರಂದು ಶ್ರೀನಗರದ ಮಲ್ಲಾಬಾಗ್ ಉಮರ್ ಕಾಲೋನಿ ರಸ್ತೆ ಬದಿಯಲ್ಲಿ ಸರಳಾ ಭಟ್ ಶವ ಪತ್ತೆಯಾಗಿತ್ತು. ಈಕೆಯ ಮೃತದೇಹದ ಮೇಲೆ ಪೊಲೀಸ್&zwnj;ಗೆ ಸೂಚನೆ ನೀಡುವಾಕೆ ಎಂದು ಬರೆಯಲಾಗಿತ್ತು. ಸರಳಾ ಭಟ್ ಮನೆ ಮೇಲೆ ಗ್ರೇನೇಡ್ ದಾಳಿ ನಡೆಸಲಾಯಿತು. ಈ ಘಟನೆ ನೋಡಿದ ಬಹುತೇಕ ಕಾಶ್ಮೀರಿ ಪಂಡಿತರು ರಾತ್ರೋರಾತ್ರಿ ಮನೆ ತೊರೆದರು. ಪ್ರಾಣ ಉಳಿಸಿಕೊಳ್ಳಲು ಪಲಾಯನ ಮಾಡಿದರು. ಇತ್ತ ದಾರಿಯಲ್ಲಿ ಸಿಕ್ಕ ಮೃತೇದಹದ ಬಗ್ಗೆ ದೂರು ನೀಡಲು ಯಾರು ಇಲ್ಲದಾದರು. ಉಗ್ರರ ಭಯದಿಂದ ಸಾಕ್ಷಿ ನುಡಿಯಲು ಯಾರು ಮುಂದೆ ಬರಲಿಲ್ಲ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/yasin-maliks-divorce-decision-and-demand-for-death-in-nurse-killing-case-suc/articleshow-kn0nfvt"/>
        </item>
        <item>
            <title><![CDATA[ಕಾಲಿಗೆ ಬಿದ್ದರೂ ದರ್ಶನ್ ಫ್ಯಾನ್ಸ್ ಕ್ಷಮಿಸದ ರಮ್ಯಾ.. 'ಕೇಸ್ ವಾಪಸ್ ಪಡೆಯಲ್ಲ' ಎಂದು ಖಡಕ್ ಸಂದೇಶ ಕೊಟ್ಟ ನಟಿ!]]></title>
            <link>https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l</link>
            <guid isPermaLink="true">https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l</guid>
            <pubDate>Sun, 06 Sep 2026 12:13:14 +0530</pubDate>
            <description><![CDATA[&lt;p&gt;&lsquo;ಕೈಯಲ್ಲಿ ಫೋನಿದೆ, ಅಕೌಂಟ್&zwnj;ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?&quot; ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, &rsquo;ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ' ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbb0dw73vkgrsepncw5r9hx,imgname-actress-ramya-in-court-1773128398727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Ramya revange on Darshan Fans Trollers- ಸ್ಯಾಂಡಲ್ ವುಡ್ ಕ್ವೀನ್ 'ರಿವೇಂಜ್' ಮೋಡ್: ಕಣ್ಣೀರಿಟ್ಟ ಟ್ರೋಲರ್ಸ್, ಕರಗದ ರಮ್ಯಾ!&lt;/strong&gt;&lt;/p&gt;&lt;p&gt;ಸ್ಯಾಂಡಲ್ ವುಡ್ ಅಂಗಳದಲ್ಲಿ ಮಾತ್ರವಲ್ಲ, ರಾಜಕೀಯ ರಣರಂಗದಲ್ಲೂ ಮಿಂಚಿದ್ದ 'ಕ್ವೀನ್' ರಮ್ಯಾ ಈಗ ನ್ಯಾಯಾಲಯದ ಅಖಾಡದಲ್ಲಿ ಅಬ್ಬರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೀಳುಮಟ್ಟದ ಪದಗಳಿಂದ ದಾಳಿ ಮಾಡಿದವರಿಗೆ &quot;ಪಾಠ ಕಲಿಸದೆ ಬಿಡೆನು&quot; ಎಂದು ರಮ್ಯಾ ಈಗ ರಣಕಾಹಳೆ ಮೊಳಗಿಸಿದ್ದಾರೆ. ಈ ಹೈ-ವೋಲ್ಟೇಜ್ ಡ್ರಾಮಾ ನಡೆದಿದ್ದು ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ!&lt;/p&gt;&lt;h2&gt;ಕೋರ್ಟ್ ಅಂಗಳದಲ್ಲಿ ಕಣ್ಣೀರಿನ ಮಳೆ!&lt;/h2&gt;&lt;p&gt;ಕೋರ್ಟ್ ಕಲಾಪ ಅಂದಮೇಲೆ ವಾದ-ಪ್ರತಿವಾದ ಸಾಮಾನ್ಯ. ಆದರೆ ಇಲ್ಲಿ ನಡೆದಿದ್ದೇ ಬೇರೆ. ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಕೆಲವು ಕಿಡಿಗೇಡಿಗಳು ರಮ್ಯಾ ಅವರ ವಿರುದ್ಧ ಅಶ್ಲೀಲವಾಗಿ ಕಾಮೆಂಟ್ ಮಾಡಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಯಾವಾಗ ಕೇಸ್ ಸೀರಿಯಸ್ ಆಯ್ತೋ, ಆಗಲೇ ನೋಡಿ ಅಸಲಿ ಸಿನಿಮಾ ಶುರುವಾಗಿದ್ದು! ಕೋರ್ಟ್ ಆವರಣಕ್ಕೆ ರಮ್ಯಾ ಬರುತ್ತಿದ್ದಂತೆ, ಆರೋಪಿಗಳು ಮತ್ತು ಅವರ ಕುಟುಂಬದವರು ಒಬ್ಬೊಬ್ಬರಾಗಿ ರಮ್ಯಾ ಕಾಲಿಗೆ ಬಿದ್ದು ಅಕ್ಷರಶಃ ಪ್ರಲಾಪಿಸಿದ್ದಾರೆ. &quot;ತಾಯಿ, ನಮ್ಮಿಂದ ತಪ್ಪಾಯ್ತು, ಕ್ಷಮಿಸಿಬಿಡಿ.. ಕೇಸ್ ವಾಪಸ್ ತಗೊಳ್ಳಿ&quot; ಎಂದು ಅಂಗಲಾಚಿದ್ದಾರೆ. ಅಲ್ಲಿ ನೆರೆದಿದ್ದವರು ಒಂದು ಕ್ಷಣ ಮರುಗುವಂತೆ ಆ ಕಣ್ಣೀರಿನ ದೃಶ್ಯಗಳಿದ್ದವು.&lt;/p&gt;&lt;h3&gt;ಕಲ್ಲಿನಂತಾದ 'ಪದ್ಮಾವತಿ': ಕ್ಷಮೆಯ ಮಾತಿಲ್ಲ!&lt;/h3&gt;&lt;p&gt;ಇಷ್ಟೆಲ್ಲಾ ಹೈಡ್ರಾಮಾ ನಡೆದರೂ ರಮ್ಯಾ ಮಾತ್ರ ತಮ್ಮ ನಿರ್ಧಾರದಿಂದ ಇಂಚೂ ಕದಲಲಿಲ್ಲ. &quot;ಕೈಯಲ್ಲಿ ಫೋನಿದೆ, ಅಕೌಂಟ್&zwnj;ನಲ್ಲಿ ಡೇಟಾ ಇದೆ ಅಂದಮಾತ್ರಕ್ಕೆ ಯಾರ ಬಗ್ಗೆ ಬೇಕಾದರೂ ಹಾದರ-ಬೀದರ ಚರ್ಚೆ ಮಾಡ್ತೀರಾ?&quot; ಎಂಬ ರಮ್ಯಾ ಅವರ ಪ್ರಶ್ನೆ ಅಲ್ಲಿ ನೆರೆದಿದ್ದವರಿಗೆ ಚುರುಕ್ ಮುಟ್ಟಿಸುವಂತಿತ್ತು. ಕ್ಷಮೆ ಕೇಳಲು ಬಂದವರತ್ತ ತಿರುಗಿಯೂ ನೋಡದ ರಮ್ಯಾ, &quot;ಇಂಟರ್ನೆಟ್ ಸಿಕ್ಕಾಗ ಬಾಯಿಗೆ ಬಂದ ಹಾಗೆ ಟೈಪ್ ಮಾಡಿದ್ದೀರಾ, ಈಗ ಕಾನೂನು ತನ್ನ ಕೆಲಸ ಮಾಡಲಿ. ನಾನು ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ&quot; ಎಂದು ಖಡಕ್ ಆಗಿ ಹೇಳಿಬಿಟ್ಟರು. ಇದು ಕೇವಲ ರಮ್ಯಾ ಅವರ ವೈಯಕ್ತಿಕ ಹೋರಾಟವಾಗಿರಲಿಲ್ಲ, ಬದಲಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣುಮಕ್ಕಳನ್ನು ಅವಹೇಳನ ಮಾಡುವ ಪ್ರತಿಯೊಬ್ಬರಿಗೂ ಕೊಟ್ಟ 'ವಾರ್ನಿಂಗ್ ಬೆಲ್' ಆಗಿತ್ತು.&lt;/p&gt;&lt;p&gt;ಸೈಬರ್ ಕಿಡಿಗೇಡಿಗಳಿಗೆ ಪಾಠ!&lt;/p&gt;&lt;p&gt;ಸದ್ಯ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ವಿಚಾರಣೆ ಚುರುಕುಗೊಂಡಿದೆ. &quot;ನಾನು ಎಷ್ಟು ಬಾರಿ ಬೇಕಾದರೂ ಕೋರ್ಟ್&zwnj;ಗೆ ಅಲೆದಾಡಲು ಸಿದ್ಧ, ಆದರೆ ಇಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಇನ್ನೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವ ಮುನ್ನ ನೂರು ಬಾರಿ ಯೋಚಿಸುವಂತಾಗಬೇಕು&quot; ಎಂಬ ರಮ್ಯಾ ಅವರ ಕಿಡಿ ಈಗ ಇಡೀ ಸ್ಯಾಂಡಲ್ ವುಡ್&zwnj;ನಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಪರದೆಯ ಮೇಲೆ ಕ್ಯೂಟ್ ಆಗಿ ಕಾಣುತ್ತಿದ್ದ 'ಪದ್ಮಾವತಿ', ಈಗ ಸೈಬರ್ ಕ್ರೈಂ ವಿರುದ್ಧ ಸೈನ್ಯ ಕಟ್ಟಿ ನಿಂತಿದ್ದು, ಟ್ರೋಲರ್ಸ್&zwnj;ಗಳಿಗೆ ನಡುಕ ಶುರುವಾಗಿದೆ. ಮುಂದೆ ಈ ಟ್ರೋಲರ್ಸ್ ಸ್ಥಿತಿ-ಗತಿ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ! ಸದ್ಯಕ್ಕಂತೂ ರಮ್ಯಾ ಕೇಸ್ ಹಿಂಪಡೆಯುವ ಲಕ್ಷಣ ಕಾಣಿಸುತ್ತಿಲ್ಲ.&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/there-is-no-question-of-forgiveness-says-actress-ramya-declaring-a-legal-war-against-those-who-sent-her-lewd-messages/articleshow-mqqbc3l"/>
        </item>
        <item>
            <title><![CDATA[Bengaluru: ತಡರಾತ್ರಿವರೆಗೂ ಮೊಬೈಲ್‌ನಲ್ಲಿ ರೀಲ್ಸ್ ನೋಡ್ತಿದ್ದ ಹೆಂಡತಿ; ಕೋಪದಿಂದ ನೀಚ ಕೆಲಸ ಮಾಡಿದ ಗಂಡ]]></title>
            <link>https://kannada.asianetnews.com/crime/reels-related-tragedy-couple-meets-tragic-end-in-bengaluru-sns/articleshow-na1rifc</link>
            <guid isPermaLink="true">https://kannada.asianetnews.com/crime/reels-related-tragedy-couple-meets-tragic-end-in-bengaluru-sns/articleshow-na1rifc</guid>
            <pubDate>Wed, 09 Sep 2026 12:08:38 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಮೊಬೈಲ್ ರೀಲ್ಸ್ ನೋಡುವ ವಿಚಾರಕ್ಕೆ ನಡೆದ ಜಗಳದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಆತ ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಈ ದುರಂತ ಘಟನೆ ಎಚ್&zwnj;ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾವಣಗೆರೆ ಮೂಲದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m22dtrg9st8kkbcph1y3drf4,imgname-bengaluru-couple--1--1788935496201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆಗೈದಿರುವ ಘಟನೆ ರಾಜಧಾನಿ ಬೆಂಗಳೂರಿನ ಎಚ್&zwnj;ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಂಡತಿಯನ್ನು ಕೊಲೆಗೈದ ಬಳಿಕ ಪತಿಯೂ ಸಾವಿಗೆ ಶರಣಾಗಿದ್ದಾನೆ.&lt;/p&gt;&lt;h2&gt;ರೀಲ್ಸ್ ಗಲಾಟೆ: ಬೆಂಗಳೂರಿನಲ್ಲಿ ದಂಪತಿಯ ದಾರುಣ ಅಂತ್ಯ&lt;/h2&gt;&lt;p&gt;ಮೃತ ದುರ್ವೈವಿಗಳನ್ನು ಶೃತಿ (30), ರಾಘವೇಂದ್ರ (36) ಎಂದು ಗುರುತಿಸಲಾಗಿದೆ. ರೀಲ್ಸ್ ನೋಡುವ ವಿಚಾರಕ್ಕೆ ತಡರಾತ್ರಿ ಪತಿ ಮತ್ತು ಪತ್ನಿ ಮಧ್ಯೆ ಗಲಾಟೆ ಶುರುವಾಗಿದ್ದು, ಈ ಸಂದರ್ಭದಲ್ಲಿ ಕೋಪದ ಕೈಗೆ ಬುದ್ದಿ ಕೊಟ್ಟ ಪತಿ, ಬಿಯರ್ ಬಾಟೆಲ್&zwnj;ನಿಂದ ಹೆಂಡತಿಯ ತಲೆಗೆ ಹೊಡೆದು ಕೊಲೆಗೈದಿರುವ ಆರೋಪ ಕೇಳಿ ಬಂದಿದೆ. ಹೆಂಡತಿಯನ್ನು ಕೊಲೆಗೈದ ಬಳಿಕ ಪತಿಯೂ ಕೂಡ ನೇಣಿಗೆ ಶರಣಾಗಿದ್ದಾನೆ.&lt;/p&gt;&lt;p&gt;ಘಟನೆ ಸಂಬಂಧ ಹೆಚ್&zwnj;ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲಿಸರು ಮೃತದೇಹಗಳ ಮರಣೋತ್ತರ ಪರೀಕ್ಷಗೆ ರವಾನೆ ಮಾಡಿದ್ದಾರೆ. ಮೃತ ದಂಪತಿ ಮೂಲತಃ ದಾವಣಗೆರೆ ಮೂಲದವರು ಎಂದು ತಿಳಿದು ಬಂದಿದ್ದು, ಪತಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಪತ್ನಿ ಸ್ಥಳೀಯ ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಮನೆಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು.&lt;/p&gt;&lt;p&gt;ಇನ್ನು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳನ್ನು ಅಜ್ಜನ ಮನೆಯಲ್ಲಿ ಬಿಟ್ಟಿದ್ದ ದಂಪತಿ ಬೆಂಗಳೂರಿಗೆ ಬಂದು HAL ಪೊಲೀಸ್ ಠಾಣೆ ವ್ಯಾಪ್ತಿಯ ವಿಭೂತಿಪುರದಲ್ಲಿ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಈ ಹಿಂದೆಯೂ ದಂಪತಿ ನಡುವೆ ಮೊಬೈಲ್ ನೋಡುವ ವಿಚಾರಕ್ಕೆ ಗಲಾಟೆ ನಡೆದಿತ್ತು ಎನ್ನಲಾಗಿದ್ದು, ನಿನ್ನೆ ತಡರಾತ್ರಿ ಕೂಡ ಪತ್ನಿ ಮೊಬೈಲ್ ನಲ್ಲಿ ರೀಲ್ಸ್ ನೋಡುತ್ತಿದ್ದನ್ನು ಪ್ರಶ್ನಿಸಿದ್ದ ಪತಿ, ಯಾವಾಗಲೂ ಮೊಬೈಲ್ ನಲ್ಲಿ ರೀಲ್ಸ್ ನೋಡ್ತಿಯಾ ಅಂತ ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/crime/reels-related-tragedy-couple-meets-tragic-end-in-bengaluru-sns/articleshow-na1rifc"/>
        </item>
        <item>
            <title><![CDATA[ಅಂದು ಸಿದ್ದರಾಮಯ್ಯ, ಪರಮೇಶ್ವರ್ ಭೇಟಿ; ವ್ಯವಸ್ಥೆ ವಿರುದ್ಧ ಯುದ್ಧ ಸಾರಿ ಗೆದ್ದಿದ್ದ ರಾಬಿಯಾ, ಮಕ್ಕಳಿಗೆ ವಿಷವಿಟ್ಟು ಸಾವನ್ನಪ್ಪಿದ್ದೇಕೆ?]]></title>
            <link>https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc</link>
            <guid isPermaLink="true">https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc</guid>
            <pubDate>Thu, 27 Aug 2026 17:28:12 +0530</pubDate>
            <description><![CDATA[&lt;p&gt;ನಿವೇಶನಕ್ಕಾಗಿ ಸರ್ಕಾರಿ ವ್ಯವಸ್ಥೆಯ ವಿರುದ್ಧ ಹೋರಾಡಿ ಗೆದ್ದಿದ್ದ ಶಿರಾ ಮೂಲದ ರುಬಿಯಾ, ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಸೂರು ಪಡೆದಿದ್ದರೂ, ಈ ದುರಂತ ಅಂತ್ಯ ಕಂಡಿದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11h2q8gmgryjnqhx4regbwg,imgname-tumakuru-mother-1787831606544.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು: &lt;/strong&gt;ನಿವೇಶನ ಹಾಗೂ ಮನೆಗಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ ಶಿರಾ ಮೂಲದ ಮಹಿಳೆ ರುಬಿಯಾ ತನ್ನ ಇಬ್ಬರು ಮಕ್ಕಳಿಗೆ ವಿಷವಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಶಿರಾನಗರವನ್ನೇ ಬೆಚ್ಚಿ ಬೀಳಿಸಿದೆ. ಇನ್ನು ಈಕೆ ಸಾವಿಗೆ ಕಾರಣ ತಿಳಿದು ಬಂದಿದೆ. ನಿವೇಶನಕ್ಕಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲಿ ಹೋರಾಟ ನಡೆಸಿ ಸುದ್ದಿಯಾಗಿದ್ದ ಈ ಮಹಿಳೆ, ಸರ್ಕಾರ ಮಂಜೂರು ಮಾಡಿದ್ದ ಜಾಗದಲ್ಲೇ ಮನೆ ಕಟ್ಟಿ ವಾಸವಿದ್ದರು. ಆದರೆ, ಸರ್ಕಾರ ಸೂರು ನೀಡಿದ ಮೇಲೂ ರಾಬಿಯಾ ಇಷ್ಟೊಂದು ಕಠೋರ ನಿರ್ಧಾರ ಕೈಗೊಂಡಿದ್ದೇಕೆ? ಎಂಬ ವಿಷಯ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.&lt;/p&gt;&lt;h2&gt;ಹೋರಾಟ ಗೆದ್ದ ಶಿರಾ ಮಹಿಳೆ: ಸಾವಿನ ಹಿಂದಿನ ನಿಗೂಢ ಸತ್ಯ&lt;/h2&gt;&lt;p&gt;ತುಮಕೂರು ಜಿಲ್ಲೆಯ ಶಿರಾ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮನೆ ಪಡೆಯಲು ವ್ಯವಸ್ಥೆ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದ ರಾಬಿಯಾ ಅಸ್ಲಾಂ ಪಾಷ, ಇಂದು ತಮ್ಮ ಇಬ್ಬರು ಮುದ್ದು ಮಕ್ಕಳಿಗೆ ವಿಷ ನೀಡಿ, ಬಳಿಕ ತಾವೂ ಸೇವಿಸಿ ಜೀವ ತೊರೆದಿದ್ದಾರೆ. ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿದ್ದ ತಾಯಿ ರಾಬಿಯಾ ಹಾಗೂ ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;ಸಿದ್ದರಾಮಯ್ಯ ಭೇಟಿ, ನಿವೇಶನಕ್ಕೆ ಬೇಡಿಕೆ&lt;/h2&gt;&lt;p&gt;ಅಷ್ಟಕ್ಕೂ ಈ ರಾಬಿಯಾ ಸಾಮಾನ್ಯ ಮಹಿಳೆಯಾಗಿರಲಿಲ್ಲ. ಸೂರು ಪಡೆದುಕೊಳ್ಳಲು ವ್ಯವಸ್ಥೆಯ ವಿರುದ್ಧವೇ ಸಮರ ಸಾರಿದ್ದ ಮಹಿಳೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ನಿಂತು ತಮ್ಮ ನೋವು ತೋಡಿಕೊಂಡಿದ್ದಾಗ, ತಕ್ಷಣ ನಿವೇಶನ ನೀಡುವಂತೆ ಸಿಎಂ ಆದೇಶಿಸಿದ್ದರು. ಆದರೂ ಅಧಿಕಾರಿಗಳು ಒಂದೂವರೆ ವರ್ಷಗಳ ಕಾಲ ಸೈಟು ನೀಡದೆ ಅಲೆದಾಡಿಸಿ ಸತಾಯಿಸಿದ್ದರು ಎಂದು ಆರೋಪಿಸಲಾಗಿತ್ತು.&lt;/p&gt;&lt;h2&gt;ಪರಮೇಶ್ವರ್&zwnj;ಗೆ ದಯಾಮರಣಕ್ಕಾಗಿ ಮನವಿ&lt;/h2&gt;&lt;p&gt;ಅಧಿಕಾರಿಗಳ ಈ ನಿರ್ಲಕ್ಷ್ಯದ ಧೋರಣೆಯಿಂದ ಬೇಸತ್ತ ರಾಬಿಯಾ, ತುಮಕೂರಿನಲ್ಲಿ ನಡೆದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಜನಸ್ಪಂದನ ಸಭೆಯಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಗೃಹ ಸಚಿವರಿಗೆ ನೇರವಾಗಿ ದಯಾಮರಣ ಕೋರಿ ಮನವಿ ಸಲ್ಲಿಸಿ ಇಡೀ ರಾಜ್ಯದ ಗಮನ ಸೆಳೆದಿದ್ದರು. ಆಗ ಗೃಹ ಸಚಿವರು ಸ್ವತಃ ಕರೆಸಿ ಅವರ ಕಷ್ಟ ಆಲಿಸಿ, ನಿವೇಶನ ನೀಡುವಂತೆ ಸೂಚಿಸಿದ್ದರು.&lt;/p&gt;&lt;h2&gt;ಸರ್ಕಾರಿ ವ್ಯವಸ್ಥೆಯ ವಿರುದ್ಧ ಸುದೀರ್ಘ ಹೋರಾಟ&lt;/h2&gt;&lt;p&gt;ಸುದೀರ್ಘ ಹೋರಾಟದ ಫಲವಾಗಿ ಸರ್ಕಾರ ಕೊನೆಗೂ ಶಿರಾದಲ್ಲಿ ನಿವೇಶನ ಮಂಜೂರು ಮಾಡಿತ್ತು. ರಾಬಿಯಾ ಆ ಜಾಗದಲ್ಲಿ ಸಣ್ಣ ಮನೆ ಕೂಡ ನಿರ್ಮಿಸಿಕೊಂಡು ವಾಸವಾಗಿದ್ದರು. ಆದರೆ, ಸರ್ಕಾರದಿಂದ ಸೂರು ಸಿಕ್ಕ ಮೇಲೂ ರಾಬಿಯಾ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇಬ್ಬರ ಜೀವ ಬಲಿ ಪಡೆದ ಈ ಕಠೋರ ನಿರ್ಧಾರದ ಹಿಂದಿರುವ ನೈಜ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ.&lt;/p&gt;&lt;h2&gt;ರಾಬಿಯಾ ಅಮಾನವೀಯ ನಿರ್ಧಾರಕ್ಕೆ ಕಾರಣವೇನು?&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆ.ವಿ ಹಾಗೂ ಶಿರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳ ಕಾರಣವೇ ಅಥವಾ ಕುಟುಂಬದ ಆಂತರಿಕ ಕಲಹವೇ ಎಂಬ ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. &lt;strong&gt;(ವರದಿ ಮಹಾಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು)&lt;/strong&gt;&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/signal-mother-rabia-meets-siddaramaiah-and-parameshwara-last-year-today-found-dead-in-home-with-her-two-children-sns/articleshow-qfdu3qc"/>
        </item>
        <item>
            <title><![CDATA[My Cute Wife ಚಾಟ್ ನಿಂದ ಬಯಲಾಯ್ತು ರಹಸ್ಯ – ನಾಪತ್ತೆಯಾದ ವಿವಾಹಿತ ಸ್ನೇಹಿತೆಯರು ಮದುವೆಯಾದ್ರಾ !]]></title>
            <link>https://kannada.asianetnews.com/crime/two-best-friends-who-left-home-with-children-and-gold/articleshow-s9pysnk</link>
            <guid isPermaLink="true">https://kannada.asianetnews.com/crime/two-best-friends-who-left-home-with-children-and-gold/articleshow-s9pysnk</guid>
            <pubDate>Tue, 08 Sep 2026 20:54:01 +0530</pubDate>
            <description><![CDATA[&lt;p&gt;Best Friends love : ಆಪ್ತ ಸ್ನೇಹಿತೆಯರಿಬ್ಬರು ಗಂಡನನ್ನ ಬಿಟ್ಟು ಓಡಿ ಹೋಗಿದ್ದಾರೆ. ನಾಲ್ಕು ಮಕ್ಕಳ ಜೊತೆ ಮನೆ ಬಿಟ್ಟಿರುವ ಪತ್ನಿಯರಿಗಾಗಿ ಗಂಡಂದಿರ ಹುಡುಕಾಟ ಶುರುವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20srmb2f91e62tev5sg0574,imgname-best-friends-1788880900450.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಿಯಾಣದಲ್ಲಿ ಇಬ್ಬರು ವಿವಾಹಿತೆಯರು ಗಂಡಂದಿರನ್ನು ಬಿಟ್ಟು ಓಡಿಹೋದ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರೂ ಮಹಿಳೆಯರು ತಮ್ಮ ಮಕ್ಕಳ ಜೊತೆ ಮನೆ ಬಿಟ್ಟಿದ್ದಾರೆ. ಜೊತೆಗೆ ಸುಮಾರು 9 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ತೆಗೆದುಕೊಂಡು ಹೋಗಿದ್ದಾರೆ.&lt;/p&gt;&lt;h2&gt;ಮದುವೆಯಾದ್ರಾ ಆಪ್ತ ಸ್ನೇಹಿತೆಯರು ?&lt;/h2&gt;&lt;p&gt;ಬಲ್ಲಭಗಢದ ಲಕ್ಷ್ಮಣ್ ಕಾಲೋನಿಯ ನಿವಾಸಿ 25 ವರ್ಷದ ಮಂಜು, 2020 ರಲ್ಲಿ ಪಲ್ವಾಲ್ನ ಸನ್ನಿಯನ್ನು ಮದುವೆಯಾಗಿದ್ದರು. ಮಂಜುವಿನ ಬಾಲ್ಯದ ಗೆಳತಿ ರೀನಾ ಕೂಡ 2020 ರಲ್ಲಿ ಗುರುಗ್ರಾಮ್ ನ ಮುಮ್ತಾಜ್ಪುರದ ನಿವಾಸಿ ವೇದ್ಪಾಲ್ ಅವರನ್ನು ಮದುವೆಯಾಗಿದ್ದರು.&lt;/p&gt;&lt;p&gt;ಆಗಸ್ಟ್ 21 ರಂದು, ಮಂಜು ತನ್ನ 4 ವರ್ಷದ ಮಗ ಮತ್ತು 2 ವರ್ಷದ ಮಗಳೊಂದಿಗೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಾಳೆ. ಸುಮಾರು 4 ಲಕ್ಷ ಮೌಲ್ಯದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ. ಮಂಜು ಹುಡುಕಾಟದ ಸಮಯದಲ್ಲಿ ರೀನಾಳ ಮನೆಯನ್ನು ಸಂಪರ್ಕಿಸಿದಾಗ, ರೀನಾ ಕೂಡ ನಾಪತ್ತೆಯಾಗಿರೋದು ಗೊತ್ತಾಗಿದೆ. ರೀನಾ ತನ್ನ 4 ವರ್ಷದ ಮಗಳು ಮತ್ತು 1.5 ವರ್ಷದ ಮಗನ ಜೊತೆ ಸುಮಾರು 5 ಲಕ್ಷ ಮೌಲ್ಯದ ಆಭರಣಗಳು ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಾಳೆ ಎನ್ನಲಾಗಿದೆ.&lt;/p&gt;&lt;p&gt;ಅನುಮಾನಗಳು ಹೆಚ್ಚಾಗುತ್ತಿದ್ದಂತೆ, ಕುಟುಂಬಸ್ಥರು, ಕರೆ ದಾಖಲೆಗಳು ಮತ್ತು ವಾಟ್ಸಾಪ್ ಚಾಟ್ಗಳನ್ನು ಪರಿಶೀಲಿಸಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಗಳು ಎಲ್ಲರಿಗೂ ಆಘಾತಗೊಳಿಸಿವೆ. ಚಾಟ್ಗಳಲ್ಲಿ, ಇಬ್ಬರು ಸ್ನೇಹಿತೆಯರು ಪರಸ್ಪರ ನನ್ನ ಮುದ್ದಾದ ಹೆಂಡತಿ, ನನ್ನ ಪ್ರೀತಿ ಮತ್ತು ಬಾಬು ಎಂದು ಸಂಬೋಧಿಸಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;p&gt;12 ನೇ ತರಗತಿಯವರೆಗೆ ಇಬ್ಬರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಆದ್ದರಿಂದ ಆರಂಭದಲ್ಲಿ ಅವರ ಮಾತುಗಳನ್ನು ಮನೆಯವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಅವರನ್ನು ಸ್ನೇಹಿತೆಯರು ಅಂದ್ಕೊಂಡಿದ್ದರು. ಈಗ ಚಾಟ್ ನೋಡಿ ದಂಗಾಗಿದ್ದಾರೆ. ಇಬ್ಬರೂ ಸ್ನೇಹಿತೆಯರು ಮದುವೆಯಾಗಿದ್ದಾರೆ ಅಂತ ಗಂಡಂದಿರು ಆರೋಪಿಸಿದ್ದಾರೆ. ಅವರು ಮದುವೆಯಾದ್ರೆ ಬೇಸರವಿಲ್ಲ, ನಮಗೆ ಮಕ್ಕಳು ಬೇಕು ಎನ್ನುವುದು ಗಂಡಂದಿರ ಮನವಿ.&lt;/p&gt;&lt;p&gt;ಪಲ್ವಾಲ್ನ ಭವನ್ ಕುಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಇಬ್ಬರೂ ಮಹಿಳೆಯರ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಅವರಿಬ್ಬರೂ ಮದುವೆ ಆಗಿದ್ದಾರಾ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/two-best-friends-who-left-home-with-children-and-gold/articleshow-s9pysnk"/>
        </item>
        <item>
            <title><![CDATA[ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ತಂಗಿ ಬಿದ್ರೂ ಕಾಪಾಡದ ಅಣ್ಣ ! ವಿಚಿತ್ರವಾಗಿದೆ ಕಾರಣ]]></title>
            <link>https://kannada.asianetnews.com/crime/the-psychopath-did-not-jump-into-the-pool-because-of-this-fear-let-the-younger-sister-drown/articleshow-siqtv07</link>
            <guid isPermaLink="true">https://kannada.asianetnews.com/crime/the-psychopath-did-not-jump-into-the-pool-because-of-this-fear-let-the-younger-sister-drown/articleshow-siqtv07</guid>
            <pubDate>Thu, 03 Sep 2026 18:32:45 +0530</pubDate>
            <description><![CDATA[&lt;p&gt;ಬೆಲ್ಜಿಯಂನಲ್ಲಿ ಅಚ್ಚರಿ ಘಟನೆ ನಡೆದಿದೆ. ತಂಗಿ ಸ್ವಿಮ್ಮಿಂಗ್&zwnj; ಪೂಲ್&zwnj; ಗೆ ಬಿದ್ರೂ ಅಣ್ಣ ನೋಡ್ತಾ ನಿಂತಿದ್ದಾನೆಯೇ ವಿನಃ ಆಕೆಯನ್ನು ಕಾಪಾಡಲಿಲ್ಲ. ಅದಕ್ಕೆ ಕಾರಣವನ್ನೂ ಆತ ಹೇಳಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1knt6jeg8a52r273acb6ky4,imgname-mental-health-1788440549966.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾರೇ ಕಣ್ಣೆದುರು ಸ್ವಿಮ್ಮಿಂಗ್&zwnj; ಪೂಲ್&zwnj; ನಲ್ಲಿ ಮುಳುಗ್ತಿದ್ರೆ ಮನಸ್ಸು ತಡೆಯೋದಿಲ್ಲ. ಅವರ ರಕ್ಷಣೆಗೆ ಮುಂದಾಗ್ತೇವೆ. ಅದ್ರಲ್ಲೂ ರಕ್ತ ಸಂಬಂಧಿ ತಂಗಿ ಸ್ವಿಮ್ಮಿಂಗ್&zwnj; ಪೂಲ್&zwnj; ನಲ್ಲಿ ಮುಳುಗುತ್ತಿದ್ರೆ ಸುಮ್ಮನಿರೋಕೆ ಸಾಧ್ಯವೇ ಇಲ್ಲ. ಆದ್ರೆ ಇಲ್ಲೊಬ್ಬ ಅಣ್ಣ ತಂಗಿ ಬಚಾವ್&zwnj; ಮಾಡುವ ಬದಲು ಆಟಿಕೆ ನೀಡಿದ್ದಾನೆ. ಅದಕ್ಕೆ ಆತ ನೀಡಿದ ಕಾರಣ ವಿಚಿತ್ರವಾಗಿದೆ.&lt;/p&gt;&lt;h2&gt;ನೀರಿಗೆ ಬೀಳದಿರಲು ಇದು ಕಾರಣ !&lt;/h2&gt;&lt;p&gt;ಈ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ. 26 ವರ್ಷದ ಲೋಯಿಕ್ ಡಿ ಮೇರಿ ತನ್ನ ತಂಗಿ ಈಜುಕೊಳದಲ್ಲಿ ಮುಳುಗುತ್ತಿದ್ದಾಗ ನೀರಿಗೆ ಹಾರದೆ, ಆಟಿಕೆಯ ಸಹಾಯದಿಂದ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ನೀರಿಗೆ ಹಾರಿ ತಂಗಿಯನ್ನು ರಕ್ಷಿಸಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ನಾನು ನೀರಿಗೆ ಹಾರಿದ್ರೆ ನನ್ನ ಬಟ್ಟೆ ಒದ್ದೆಯಾಗ್ತಿತ್ತು ಎಂದಿದ್ದಾನೆ ಲೋಯಿಕ್&zwnj; ಡಿ ಮೇರಿ. ಇದನ್ನು ಕೇಳಿ ಅವರ ಅಮ್ಮ ಕೂಡ ಶಾಕ್&zwnj; ಆಗಿದ್ದಾರೆ. ಲೋಯಿಕ್ ಮಾನಸಿಕ ರೋಗಿ. ಸುಮಾರು ಮೂರು ವರ್ಷಗಳಿಂದ ಸೈಕೋಪಥಿಯಿಂದ ಬಳಲುತ್ತಿದ್ದಾನೆ.&lt;/p&gt;&lt;h3&gt;ಸೈಕೋಪಥ್ ಎಂದರೇನು?&lt;/h3&gt;&lt;p&gt;ಸೈಕೋಪಥ್&zwnj; ಬಗ್ಗೆ ಲೋಯಿಕ್&zwnj; ಜನರಿಗೆ ಮಾಹಿತಿ ಕೂಡ ನೀಡಿದ್ದಾನೆ. ಸೀರಿಯಲ್ ಕಿಲ್ಲರ್ ಅಥವಾ ಹಿಂಸಾತ್ಮಕ ಅಪರಾಧಿ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಇದು ಸರಿಯಲ್ಲ ಎಂದು ಲೋಯಿಕ್ ಹೇಳುತ್ತಾರೆ. ಸೈಕೋಪಥಿ ಹೊಂದಿರುವ ಪ್ರತಿಯೊಬ್ಬರೂ ಅಪರಾಧಿಗಳಾಗಿರುವುದಿಲ್ಲ ಎನ್ನುವುದು ಅವನ ಮಾತು. ಚಿಕ್ಕಂದಿನಿಂದಲೇ ತಾನು ಇತರ ಮಕ್ಕಳಿಗಿಂತ ಭಿನ್ನವಾಗಿದ್ದೇನೆ ಎಂದು ಲೋಯಿಕ್ಗೆ ಅನಿಸುತ್ತಿತ್ತಂತೆ. ತನ್ನ ಭಾವನೆಗಳನ್ನು ಮತ್ತು ಇತರರ ಭಾವನೆಗಳನ್ನು ಸಾಮಾನ್ಯ ಜನರಂತೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತಂತೆ. ಇದನ್ನು ವಿವರಿಸಲು ಸಂಗೀತದ ಉದಾಹರಣೆ ನೀಡಿದ್ದಾನೆ. ಇತರರು ಸಂಗೀತ ಕೇಳುವಾಗ ಅದರ ಪದಗಳ ಜೊತೆಗೆ ಅದರ ರಾಗ ಮತ್ತು ಭಾವನೆಯನ್ನೂ ಅನುಭವಿಸುತ್ತಾರೆ. ಆದರೆ ತನಗೆ ಸಂಗೀತದ ಪದಗಳು ಮಾತ್ರ ಕೇಳಿಸುತ್ತವೆ, ಅದರ ಭಾವನೆಯನ್ನು ಅದೇ ರೀತಿಯಲ್ಲಿ ಅನುಭವಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾನೆ. ತಂಗಿ ಈಜುಕೊಳದಲ್ಲಿ ಮುಳುಗುತ್ತಿದ್ದ ಘಟನೆ ಕೂಡ ಇದಕ್ಕೆ ಒಂದು ಉದಾಹರಣೆ ಎಂದು ಲೋಯಿಕ್ ಹೇಳಿದ್ದಾರೆ.&lt;/p&gt;&lt;p&gt;ತನ್ನ ಬಾಲ್ಯದಲ್ಲಿ ನಡೆದ ಅನೇಕ ಘಟನೆಗಳನ್ನು ವಿವರಿಸಿದ ಲೋಹಿಕ್&zwnj;, ತನ್ನ ಮಾನಸಿಕ ಸ್ಥಿತಿ ಬಗ್ಗೆ ವಿವರಿಸಿದ್ದಾರೆ. ತಮ್ಮಲ್ಲಿ ಇತರರಂತೆ ಭಾವನಾತ್ಮಕ ಪ್ರತಿಕ್ರಿಯೆಗಳು ಇರುವುದಿಲ್ಲ ಎಂದು ಲೋಯಿಕ್ ಹೇಳುತ್ತಾನೆ. ಕಷ್ಟದ ಸಂದರ್ಭಗಳಲ್ಲಿಯೂ ತಾನು ಹೆಚ್ಚು ಭಾವನೆಗಳಿಗೆ ಒಳಗಾಗದೆ ಶಾಂತವಾಗಿರಲು ಸಾಧ್ಯವಾಗುತ್ತದೆ ಎಂದಿದ್ದಾನೆ. ಇನ್ನು ತಮ್ಮ ಬಾಲ್ಯದ ಕುಟುಂಬದ ವಾತಾವರಣವೂ ತಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರಿದೆ ಎಂದು ಲೋಯಿಕ್ ಹೇಳಿದ್ದಾನೆ.&lt;/p&gt;&lt;p&gt;ತಂದೆ-ತಾಯಿ ವಿಚ್ಛೇದನ ಪಡೆದಿದ್ದರು. ನಂತರ ಅವರ ತಾಯಿ ಮದ್ಯಪಾನಕ್ಕೆ ಒಳಗಾಗಿದ್ದರು. ಲೋಯಿಕ್ ಸುಮಾರು 8 ವರ್ಷದವರಾಗಿದ್ದಾಗ ಅವರ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. 8 ರಿಂದ 16 ವರ್ಷದವರೆಗೆ ತಮ್ಮ ತಾಯಿ ಮದ್ಯಪಾನ ಮಾಡುತ್ತಿದ್ದರು. ಕೆಲವೊಮ್ಮೆ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು ಮತ್ತು ಮನೆಯಿಂದ ಹೊರಗೆ ಹೋಗಿ ಕಾಣೆಯಾಗುತ್ತಿದ್ದರು.ಈ ಎಲ್ಲ ಘಟನೆಗಳು ತಮ್ಮ ಮೇಲೆ ಪರಿಣಾಮ ಬೀರಿದ್ದವು ಎಂದಿದ್ದಾನೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/the-psychopath-did-not-jump-into-the-pool-because-of-this-fear-let-the-younger-sister-drown/articleshow-siqtv07"/>
        </item>
        <item>
            <title><![CDATA[Bengaluru: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನಿಂದ 3.75 ಲಕ್ಷ ದೋಚಿದ ಯುವತಿ]]></title>
            <link>https://kannada.asianetnews.com/bengaluru-urban/bengaluru-young-woman-robbed-of-rs-3-point-75-lakh-from-a-young-man-she-met-on-a-dating-app-mq/articleshow-srz66r0</link>
            <guid isPermaLink="true">https://kannada.asianetnews.com/bengaluru-urban/bengaluru-young-woman-robbed-of-rs-3-point-75-lakh-from-a-young-man-she-met-on-a-dating-app-mq/articleshow-srz66r0</guid>
            <pubDate>Mon, 31 Aug 2026 06:07:49 +0530</pubDate>
            <description><![CDATA[ಡೇಟಿಂಗ್ ಆ್ಯಪ್&zwnj;ನಲ್ಲಿ ಪರಿಚಯವಾದ ಪೂನಂ ಎಂಬ ಯುವತಿಯು, ಶೇಬಿನ್ ಬೇಬಿ ಎಂಬ ಯುವಕನನ್ನು ಪಬ್&zwnj;ಗೆ ಆಹ್ವಾನಿಸಿ ಅಪಹರಿಸಿದ್ದಾಳೆ. ನಂತರ ತನ್ನ ಸಹಚರರೊಂದಿಗೆ ಸೇರಿ ಯುವಕನಿಂದ ಸುಮಾರು ₹3.75 ಲಕ್ಷ ದೋಚಿ ಪರಾರಿಯಾಗಿದ್ದು, ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssy2de2gnfm46vn0sgk6f9b,imgname-dating-app-1780060599746.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಡೇಟಿಂಗ್ ಆ್ಯಪ್&zwnj; ಮೂಲಕ ಪರಿಚಯವಾದ ಯುವಕನನ್ನು ಅಪಹರಿಸಿರುವ ಯುವತಿಯೊಂದಿಗೆ ಇದ್ದ ದುಷ್ಕರ್ಮಿಗಳ ಗುಂಪು ಆತನಿಂದ 3.75 ಲಕ್ಷ ರು. ದೋಚಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಅಪಹರಣಕ್ಕೆ ಒಳಗಾದ ಚಂದಾಪುರ ನಿವಾಸಿ ಶೇಬಿನ್ ಬೇಬಿ ನೀಡಿದ ದೂರಿನ ಮೇರೆಗೆ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಪೂನಂ ಎಂಬ ಮಹಿಳೆ ವಿರುದ್ಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಕೆಲವು ತಿಂಗಳಿಂದ ಡೇಟಿಂಗ್ ಆ್ಯಪ್ ಬಳಸುತ್ತಿದ್ದರು. ಆಗ ಪೂನಂ ಹೆಸರಿನ ಯುವತಿಯ ಪರಿಚಯ ಮಾಡಿಕೊಂಡಿದ್ದರು. ಇಬ್ಬರು ಪರಸ್ಪರ ಮೊಬೈಲ್ ಸಂಖ್ಯೆ ಹಂಚಿಕೊಂಡು ಮಾತುಕತೆ ಪ್ರಾರಂಭಿಸಿದ್ದರು.&lt;/p&gt;&lt;h2&gt;&lt;strong&gt;ಆ.19ರಂದು ದರೋಡೆ&lt;/strong&gt;&lt;/h2&gt;&lt;p&gt;ಆರೋಪಿ ಯುವತಿ, ಆ.19ರಂದು ರಾತ್ರಿ 9.45ರ ವೇಳೆಗೆ ಪಬ್&zwnj;ಗೆ ಯುವಕನಿಗೆ ಬರಲು ಸೂಚಿಸಿದ್ದಳು. ಆಕೆಯ ಸೂಚನೆಯಂತೆ ಪಬ್ ಮುಂಭಾಗ ಯುವಕ ಕಾಯುತ್ತ ನಿಂತಿದ್ದ. ಆಗ ಕಾರಿನಲ್ಲಿ ಬಂದ ಯುವತಿ, ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಬರಲು ಆತನನ್ನು ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿದ್ದಳು.&lt;/p&gt;&lt;p&gt;ಪೆಟ್ರೋಲ್ ಹಾಕಿಸಿಕೊಂಡು ಬರಲು ಹೋದ ವೇಳೆ ಮಾರ್ಗ ಮಧ್ಯ ಮೂತ್ರ ವಿಸರ್ಜನೆ ಮಾಡಬೇಕೆಂದು ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ಆಕೆ ಕಾರಿನಿಂದ ಇಳಿದು ಕೆಳಗೆ ಹೋದಳು, ಕೆಲವೇ ನಿಮಿಷಗಳಲ್ಲಿ ನಾಲ್ವರು ಇದ್ದ ಗ್ಯಾಂಗ್&zwnj;ನವರು, ಶೇಬಿನ್ ಅವರನ್ನು ಬೆದರಿಸಿ, ಅದೇ ಕಾರಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ, ಅಲ್ಲಿಂದ ಬೂದು ಬಣ್ಣದ ಬೇರೊಂದು ಕಾರಿನಲ್ಲಿ ಕೂರಿಸಿಕೊಂಡು ನಗರದ ಸುತ್ತ ಸುತ್ತಾಡಿಸಿ ಒಟ್ಟು 3.75 ಲಕ್ಷ ರು.ಹಣ ದೋಚಿದ್ದಾರೆ.&lt;/p&gt;&lt;p&gt;ಈ ಸಂಬಂಧ ಪೊಲೀಸರು ಅಪಹರಣ ಮತ್ತು ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಯುವತಿಯ ಮೊಬೈಲ್ ಸಂಖ್ಯೆ, ಎಟಿಎಂ ಹಾಗೂ ಪೆಟ್ರೋಲ್ ಬಂಕ್&zwnj;ಗಳ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ವಂಚಕ ಜಾಲದ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;45 ಸಾವಿರ ರು.ಡ್ರಾ ಮಾಡಿದ್ದರು&lt;/strong&gt;&lt;/h3&gt;&lt;p&gt;ದುಷ್ಕರ್ಮಿಗಳು, ದೂರುದಾರ ಶೇಬಿನ್ ಅವರನ್ನು ಅಪಹರಿಸಿ ನಗರದಲ್ಲಿ ಸುತ್ತಾಡುತ್ತಿದ್ದ ವೇಳೆ ಅವರ ಜೇಬಿನಲ್ಲಿದ್ದ 7 ಸಾವಿರ ನಗದು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್&zwnj;ಅನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಬಳಿಕ ಮಾರ್ಗ ಮಧ್ಯೆ ಕಂಡು ಬಂದ ಎಟಿಎಂ ಬಳಿ ಕಾರು ನಿಲ್ಲಿಸಿ ಬಲವಂತವಾಗಿ 45 ಸಾವಿರ ರು.ಗಳನ್ನು ಬಿಡಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಕ್ರೆಡಿಟ್ ಕಾರ್ಡ್ ಬಳಸಿ ಕಾರಿಗೆ ಪೆಟ್ರೊಲ್ ಹಾಕಿಸಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.&lt;/p&gt;&lt;p&gt;&lt;strong&gt;ಲಕ್ಷಾಂತರ ರು. ಹಣ ವರ್ಗಾವಣೆ&lt;/strong&gt;&lt;/p&gt;&lt;p&gt;ರಾತ್ರಿಯಿಡಿ ಹೆದರಿಸಿ ಕಾರಿನಲ್ಲೇ ಸುತ್ತಾಡಿಸಿ, ಕ್ರೆಡಿಟ್ ಕಾರ್ಡ್&zwnj;ನ ಪಾಸ್&zwnj;ವರ್ಡ್ ಬದಲಿಸಿದ ಆರೋಪಿಗಳು, ಬರೊಬ್ಬರಿ 3.21 ಲಕ್ಷ ರು.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು, ಆ.20 ರ ಬೆಳಗ್ಗೆ 10 ಗಂಟೆ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣದ ಸಮೀಪ ಬಿಟ್ಟು ಪರಾರಿಯಾಗಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ChatGPTಗೆ ಇವೆಲ್ಲಾ ಪ್ರಶ್ನೆ ಕೇಳ್ತೀರಾ? ಕಂಬಿ ಎಣಿಸಬೇಕಾಗತ್ತೆ ಹುಷಾರ್​- ಪೊಲೀಸರ ಎಚ್ಚರಿಕೆ&lt;/strong&gt;&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-young-woman-robbed-of-rs-3-point-75-lakh-from-a-young-man-she-met-on-a-dating-app-mq/articleshow-srz66r0"/>
        </item>
        <item>
            <title><![CDATA[ಪ್ರೀತಿಯ ಹುಚ್ಚಾಟ! ಪ್ರಿಯಕರನಿಗೆ ಹೊಸ ಬೈಕ್ ಕೊಡಿಸಲು ತಂದೆಯ ಸ್ನೇಹಿತನ ಚಿನ್ನವನ್ನೇ ಕದ್ದ 19 ರ ಹರೆಯದ ಯುವತಿ!]]></title>
            <link>https://kannada.asianetnews.com/india-news/19-year-old-student-allegedly-steals-nine-sovereigns-of-gold-for-boyfriends-new-two-wheeler/articleshow-y0mh4wz</link>
            <guid isPermaLink="true">https://kannada.asianetnews.com/india-news/19-year-old-student-allegedly-steals-nine-sovereigns-of-gold-for-boyfriends-new-two-wheeler/articleshow-y0mh4wz</guid>
            <pubDate>Sat, 05 Sep 2026 15:21:31 +0530</pubDate>
            <description><![CDATA[&lt;p&gt;ಪೊಲ್ಲಾಚಿಯಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರು ತಂದೆಯ ಸ್ನೇಹಿತನ ಮನೆಯಿಂದ 9 ಪೌನ್ ಚಿನ್ನಾಭರಣ ಕದ್ದು, ಅದನ್ನು ಸುಮಾರು ₹2.5 ಲಕ್ಷಕ್ಕೆ ಮಾರಾಟ ಮಾಡಿ ಗೆಳೆಯನಿಗೆ ಹೊಸ ದ್ವಿಚಕ್ರ ವಾಹನ ಖರೀದಿಸಿಕೊಟ್ಟ ಆರೋಪದ ಮೇಲೆ ಬಂಧಿಸಲಾಗಿದೆ. ಬೈಕ್ ಖರೀದಿ ವೀಡಿಯೊ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಗೆಳೆಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1r8qgm7kr1qfstmmkjhn1zz,imgname-a-college-girl-stealing-gold-to-buy-boyfriend-a-bike-1788594602630.jpg" type="image/jpeg" height="390" width="690"/>
            <content:encoded><![CDATA[&lt;h2&gt;ಗೆಳೆಯನಿಗೆ ಬೈಕ್ ಕೊಡಿಸಲು ಚಿನ್ನಾಭರಣ ಕಳ್ಳತನ?&lt;/h2&gt;&lt;p&gt;ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಗೆಳೆಯನಿಗೆ ಹೊಸ ದ್ವಿಚಕ್ರ ವಾಹನ ಖರೀದಿಸಿಕೊಡಲು ಚಿನ್ನಾಭರಣ ಕದ್ದ ಆರೋಪದ ಮೇಲೆ 19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೈಕ್ ಶೋರೂಮ್&zwnj;ನಲ್ಲಿ ಖರೀದಿ ಸಂಭ್ರಮಿಸುತ್ತಿರುವ ಜೋಡಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಮತ್ತಷ್ಟು ಗಮನ ಸೆಳೆದಿದೆ.&lt;/p&gt;&lt;p&gt;ಬಂಧಿತ ವಿದ್ಯಾರ್ಥಿನಿಯನ್ನು ಪೊಲ್ಲಾಚಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿಕಾಂ ಸಿಎ ಎರಡನೇ ವರ್ಷ ಓದುತ್ತಿರುವ ಆರ್. ಜಾಯ್ ಪ್ರಿನ್ಸಿ ಎಂದು ಗುರುತಿಸಲಾಗಿದೆ. ಆಕೆ ಟಿವಿಕೆ ನಗರದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;ತಂದೆಯ ಸ್ನೇಹಿತನ ಮನೆಯಲ್ಲಿ ಕಳ್ಳತನ&lt;/h3&gt;&lt;p&gt;ಪೊಲ್ಲಾಚಿಯ ಉಂಜಾವೇಲಂಪಟ್ಟಿ ಸಮೀಪದ ನಿವಾಸಿ 59 ವರ್ಷದ ಎಚ್. ತಮಿಳುಸೆಲ್ವನ್ ಅವರು ಜಾಯ್ ಪ್ರಿನ್ಸಿಯ ತಂದೆಯ ಸ್ನೇಹಿತ ಎಂದು ವರದಿಯಾಗಿದೆ. ಆಗಸ್ಟ್ 16ರಂದು ವಿದ್ಯಾರ್ಥಿನಿ ಅವರ ಮನೆಗೆ ಭೇಟಿ ನೀಡಿದ್ದಳು. ಆ ಸಂದರ್ಭದಲ್ಲಿ ವಾರ್ಡ್&zwnj;ರೋಬ್&zwnj;ನಲ್ಲಿದ್ದ ಸುಮಾರು ಒಂಬತ್ತು ಪೌನ್ ಚಿನ್ನಾಭರಣಗಳು ಕಾಣೆಯಾಗಿದ್ದವು.&lt;/p&gt;&lt;p&gt;ಆಭರಣಗಳು ನಾಪತ್ತೆಯಾಗಿರುವುದನ್ನು ಗಮನಿಸಿದ ತಮಿಳುಸೆಲ್ವನ್ ಅವರು ಪೊಲ್ಲಾಚಿ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ತನಿಖೆಯ ವೇಳೆ ವಿದ್ಯಾರ್ಥಿನಿಯ ಮೇಲೆ ಅನುಮಾನ ಮೂಡಿದ್ದು, ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;₹2.5 ಲಕ್ಷಕ್ಕೆ ಆಭರಣ ಮಾರಾಟ&lt;/strong&gt;&lt;/p&gt;&lt;p&gt;ಪೊಲೀಸರ ಪ್ರಕಾರ, ಕದ್ದ ಚಿನ್ನಾಭರಣಗಳನ್ನು ಪೊಲ್ಲಾಚಿಯಲ್ಲಿರುವ ಆಭರಣ ಅಂಗಡಿಯಲ್ಲಿ ಸುಮಾರು ₹2.5 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಆ ಹಣವನ್ನು ತನ್ನ ಗೆಳೆಯ ಜನಗನ್ ಶಿವನಿಗೆ ಹೊಸ ದ್ವಿಚಕ್ರ ವಾಹನ ಖರೀದಿಸಲು ಬಳಸಿದ್ದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಕಳ್ಳತನದ ಆರೋಪದಡಿ ಜಾಯ್ ಪ್ರಿನ್ಸಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.&lt;/p&gt;&lt;p&gt;&lt;strong&gt;ಬೈಕ್ ಖರೀದಿ ವೀಡಿಯೊದಿಂದ ಪ್ರಕರಣಕ್ಕೆ ತಿರುವು&lt;/strong&gt;&lt;/p&gt;&lt;p&gt;ಜಾಯ್ ಪ್ರಿನ್ಸಿ ಮತ್ತು ಜನಗನ್ ಶಿವ ಹೊಸ ಬೈಕ್ ಖರೀದಿಸಿದ ಸಂದರ್ಭದಲ್ಲಿ ಶೋರೂಮ್&zwnj;ನಲ್ಲಿ ಸಂಭ್ರಮಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಬೈಕ್ ಅನಾವರಣ, ಫೋಟೋಗಳಿಗೆ ಪೋಸ್ ನೀಡುವುದು ಮತ್ತು ರೀಲ್ಸ್ ಚಿತ್ರೀಕರಿಸುವ ದೃಶ್ಯಗಳು ವೀಡಿಯೊದಲ್ಲಿವೆ ಎಂದು ವರದಿಯಾಗಿದೆ.&lt;/p&gt;&lt;p&gt;ಈ ವೀಡಿಯೊ ಪ್ರಕರಣದ ತನಿಖೆಗೆ ಪ್ರಮುಖ ಸುಳಿವು ನೀಡಿದೆಯೇ ಎಂಬುದರ ಕುರಿತು ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದೇ ವೇಳೆ, ವಿದ್ಯಾರ್ಥಿನಿಯ ಗೆಳೆಯ ಜನಗನ್ ಶಿವ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.&lt;/p&gt;View this post on Instagram&lt;p&gt;A post shared by Surya Mc ⚡️ (@madras_meme_market_)&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/19-year-old-student-allegedly-steals-nine-sovereigns-of-gold-for-boyfriends-new-two-wheeler/articleshow-y0mh4wz"/>
        </item>
        <item>
            <title><![CDATA[ಆಂಧ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಉದ್ಯಮಿ, 300ಕ್ಕೂ ಹೆಚ್ಚು ವಿಂಟೇಜ್ ಕಾರಿನ ಮಾಲೀಕನ ಬಂಧನ; ಕಾರಣವೇನು?]]></title>
            <link>https://kannada.asianetnews.com/karnataka-districts/andhra-police-arrest-bengaluru-businessman-and-owner-of-over-300-vintage-cars-what-is-the-reason-sns/articleshow-zhwiwbx</link>
            <guid isPermaLink="true">https://kannada.asianetnews.com/karnataka-districts/andhra-police-arrest-bengaluru-businessman-and-owner-of-over-300-vintage-cars-what-is-the-reason-sns/articleshow-zhwiwbx</guid>
            <pubDate>Mon, 31 Aug 2026 15:53:41 +0530</pubDate>
            <description><![CDATA[&lt;p&gt;300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಮಾಲೀಕ, ಬೆಂಗಳೂರಿನ ಉದ್ಯಮಿ ಡಾ. ರವಿಪ್ರಕಾಶ್ ಅವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ. ಆದರೆ, ಇದು ಜಮೀನು ವ್ಯಾಜ್ಯಕ್ಕಾಗಿ ಆಂಧ್ರ ಶಾಸಕರು ಮಾಡಿಸಿದ ಕಿಡ್ನಾಪ್ ಎಂದು ಕುಟುಂಬಸ್ಥರು ಆರೋಪಿಸಿ, ರಾಜರಾಜೇಶ್ವರಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bn7tjeqzv3sx45ryy5gvrx,imgname-bng-kidnap--1--1788171512398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಆಂಧ್ರ ಪೊಲೀಸರು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಡಾ. ರವಿಪ್ರಕಾಶ್ ಎಂಬವರನ್ನು ಬಂಧನ ಮಾಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ವಿಂಟೇಜ್ ಕಾರ್ ಕಲೆಕ್ಷನ್ ಹೊಂದಿರುವ ಡಾ. ರವಿಪ್ರಕಾಶ್ ಅವರನ್ನು ಆಂಧ್ರ ಪ್ರದೇಶದ ಕಡಪ ಜಿಲ್ಲೆ ಮೈದುಕುರ್ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಆದರೆ ರವಿಪ್ರಕಾಶ್ ಕುಟುಂಬಸ್ಥರು ನಮ್ಮ ಮಾತ್ರ, ರವಿಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.&lt;/p&gt;&lt;h2&gt;ವಿಂಟೇಜ್ ಕಾರ್ ಮಾಲೀಕನ ಬಂಧನ: ಅಪಹರಣದ ಹಿಂದಿನ ರಹಸ್ಯವೇನು?&lt;/h2&gt;&lt;p&gt;ಆಂಧ್ರ ಪೊಲೀಸರು ನಿನ್ನೆ ಬೆಳಗ್ಗೆ ಆರ್.ಆರ್.ನಗರ ಡಾ. ರವಿಪ್ರಕಾಶ್ ನಿವಾಸದಿಂದ ಅವರನ್ನು ಕರೆದುಕೊಂಡು ಹೋಗಿದ್ದರು. ಸದ್ಯ ಕುಟುಂಬಸ್ಥರು ಆಂಧ್ರ ಎಂಎಲ್ಎ ಪ್ರಭಾವ ಬಳಸಿ ಕಿಡ್ನಾಪ್ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ. ಆಂಧ್ರ ಪ್ರದೇಶದ ಮೈದುಕುರ್ ವಿಧಾನಸಭಾ ಕ್ಷೇತ್ರದ ಶಾಸಕ ಪುಟ್ಟ ಸುಧಾಕರ್ ಸೇರಿ ಮೂವರ ಮೇಲೆ ಕಿಡ್ನಾಪ್ ಮಾಡಿರುವ ಆರೋಪ ಮೇರೆಗೆ ದೂರು ನೀಡಿದ್ದಾರೆ. ಅಂದಹಾಗೇ, ಶಾಸಕ ಪುಟ್ಟ ಸುಧಾಕರ್ ಟಿಟಿಡಿ ಮಾಜಿ ಅಧ್ಯಕ್ಷರಾಗಿದ್ದಾರೆ.&lt;/p&gt;&lt;h2&gt;ಕಿಡ್ನಾಪ್&zwnj; ಕೇಸ್&zwnj;ಗೆ ಟ್ವಿಸ್ಟ್, ಏನಿದು ವೈಷಮ್ಯ?&lt;/h2&gt;&lt;p&gt;ಇನ್ನು, ಉದ್ಯಮಿ ರವಿಪ್ರಕಾಶ್ ಸೇರಿ ಐವರ ವಿರುದ್ಧ ಮೈದುಕುರ್ ನಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಡಾ.ರವಿಪ್ರಕಾಶ್ ಅವರನ್ನು ಐದನೇ ಆರೋಪಿಯನ್ನಾಗಿ ಆಂಧ್ರ ಪೊಲೀಸರು ದಾಖಲು ಮಾಡಿದ್ದಾರೆ. ಆದರೆ ಈ ಕೇಸ್&zwnj;ಗೂ ನಮಗೂ ಯಾವುದೇ ಸಂಬಂಧ ಇಲ್ಲ. ಬೇಕು ಅಂತಲೇ ನಮ್ಮ ತಂದೆಯ ಹೆಸರು ಕೇಸ್&zwnj;ನಲ್ಲಿ ಸಿಲುಕಿಸಿ ಹಿಂಸೆ ನೀಡುತ್ತಿದ್ದಾರೆ ಎಂದು ರವಿಪ್ರಕಾಶ್ ಪುತ್ರಿ ರೂಪಾಲಿ ಪ್ರಕಾಶ್ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಆರ್&zwnj;ಆರ್ ನಗರ ಪೊಲೀಸರು ವಿರುದ್ಧವೂ ಕುಟುಂಬಸ್ಥರ ಆರೋಪ&lt;/h2&gt;&lt;p&gt;ಡಾ.ರವಿಪ್ರಕಾಶ್ ಪುತ್ರಿ ರೂಪಾಲಿ ನೀಡಿರುವ ಮಾಹಿತಿಯಂತೆ, ನಮ್ಮ ತಂದೆಯವರನ್ನ ಬಲವಂತವಾಗಿ ಆಂಧ್ರ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮ್ಮಗೆ ಸಂಬಂಧವೇ ಇಲ್ಲದ ಕೇಸ್ ನಲ್ಲಿ ಸಿಲುಕಿಸಿದ್ದಾರೆ. ಇದರ ಇಂದೇ ರಿಯಲ್ ಎಸ್ಟೇಟ್ ಮಾಫಿಯಾ ಕೈವಾಡ ಇದೆ. ಶಾಸಕ ಪುಟ್ಟ ಸುಧಾಕರ್ ತಮ್ಮ ಪ್ರಭಾವ ಬಳಿಸಿ ಆಂಧ್ರ ಪೊಲೀಸ್ ಠಾಣೆಯಲ್ಲಿ ಕೇಸ್ ಹಾಕಿಸಿದ್ದಾರೆ. ನಮ್ಮ 14 ಎಕರೆ ಜಾಗ ಕಬಳಿಸಲು ಸುಳ್ಳು ಕೇಸ್ ಹಾಕಿದ್ದಾರೆ. ಆರ್ ಆರ್ ನಗರ ಪೊಲೀಸರಿಗೆ ದೂರು ನೀಡಲು ಬಂದಾಗ ಸಹಕರಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;300ಕ್ಕೂ ಅಧಿಕ ವಿಂಟೇಜ್ ಕಾರುಗಳನ್ನು ಹೊಂದಿರುವ ಉದ್ಯಮಿ&lt;/h2&gt;&lt;p&gt;ಇನ್ನು, ರವಿಪ್ರಕಾಶ್ ಅವರು ಆರ್ ಆರ್ ನಗರದಲ್ಲಿ 14 ಎಕರೆ ಜಮೀನು ಹೋಂದಿದ್ದಾರಂತೆ. ಇದೇ ಜಮೀನು ವ್ಯಾಜ್ಯ ರವಿಪ್ರಕಾಶ್ ಮತ್ತು ಪುಟ್ಟ ಸುಧಾಕರ್ ನಡೆಯುತಿತ್ತಂತೆ. ಜಮೀನು ವ್ಯಾಜ್ಯ ಕೇಸ್ ಕೋರ್ಟ್ ನಲ್ಲಿ ವಿಚಾರಣೆಯ ಹಂತದಲ್ಲಿದ್ದು, ಕಳೆದ ತಿಂಗಳು ಜಮೀನು ಬಳಿ ಬಂದು ಪುಟ್ಟ ಸುಧಾಖರ ಗಲಾಟೆ ಮಾಡಿದ್ದರಂತೆ. ಜಮೀನಿಗೆ ಬಲವಂತವಾಗಿ ಒಳಗೆ ನುಗ್ಗಲು ಯತ್ನ ಮಾಡಿದ್ದರು. ಇದೇ ಕಾರಣಕ್ಕೆ ಸುಳ್ಳು ಕೇಸ್ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕುಟುಂಬಸ್ಥರು ಸಾಲು ಸಾಲು ಆರೋಪ ಮಾಡಿದ್ದಾರೆ. ಇನ್ನು ಡಾ ರವಿಪ್ರಕಾಶ್ ಬಿಜೆಪಿ ಪಕ್ಷದ ಪ್ರಭಾವಿ ಮುಖಂಡರಾಗಿದ್ದು, ಸುಮಾರು 300ಕ್ಕೂ ಅಧಿಕ ವಿಂಟೇಜ್ ಕಾರುಗಳನ್ನು ಸಂಗ್ರಹಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/andhra-police-arrest-bengaluru-businessman-and-owner-of-over-300-vintage-cars-what-is-the-reason-sns/articleshow-zhwiwbx"/>
        </item>
    </channel>
</rss>
