<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 08 May 2026 15:20:42 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[Epstein Filesನಲ್ಲಿ ರಾಹುಲ್​ ಗಾಂಧಿ ಹೆಸರು, ವಿಡಿಯೋ: ಹಲ್​ಚಲ್​ ಸೃಷ್ಟಿಸ್ತಿರೋ ಇದರ ಅಸಲಿಯತ್ತೇನು?]]></title>
            <link>https://kannada.asianetnews.com/politics/rahul-gandhis-name-and-fake-video-linked-to-epstein-files-fact-check-reveals-suc/articleshow-nqyzyp6</link>
            <guid isPermaLink="true">https://kannada.asianetnews.com/politics/rahul-gandhis-name-and-fake-video-linked-to-epstein-files-fact-check-reveals-suc/articleshow-nqyzyp6</guid>
            <pubDate>Sat, 07 Feb 2026 16:19:01 +0530</pubDate>
            <description><![CDATA[&lt;p&gt;ಎಪ್​ಸ್ಟೀನ್​ ಫೈಲ್ಸ್​ ಜಗತ್ತಿನ ಶ್ರೀಮಂತರ ಕರಾಳ ಮುಖವನ್ನು ಬಯಲು ಮಾಡಿದೆ. ಇದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರದ್ದು ಎನ್ನಲಾದ ವಿಡಿಯೋಮತ್ತು ಈ ಫೈಲ್​ನಲ್ಲಿ ಅವರ ಹೆಸರು ವೈರಲ್​ ಆಗ್ತಿದೆ. ಏನಿದರ ಅಸಲಿಯತ್ತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgvvchwmpmw94t02hn6erbj8,imgname-epstein-files-and-rahul-gandhi-1770461218708.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗ ಸದ್ಯ ಜಗತ್ತಿನಾದ್ಯಂತ ಬೆಚ್ಚಿಬೀಳಿಸೋ ವಿಷ್ಯ ಎಂದರೆ ಅದು ಎಪ್​ಸ್ಟೀನ್​ ಫೈಲ್ಸ್​ (Epstein Files). ಚಿಕ್ಕ ಮಕ್ಕಳನ್ನು ಲೈಂ*ಗಿಕತೆಗೆ ಬಳಸಿಕೊಳ್ಳುವುದು ಮಾತ್ರವಲ್ಲದೇ ಅವರನ್ನು ಕೊಂದು ಅವರ ದೇಹದ ಭಾಗಗಳನ್ನು ತಿನ್ನುವಂಥ ವಿಕೃತಿಯನ್ನೂ ಕೆಲವರು ಮಾಡಿರುವುದಾಗಿ ಜೆಫ್ರಿ ಎಪ್​ಸ್ಟೀನ್ ಫೈಲ್ಸ್​ನಲ್ಲಿ ಉಲ್ಲೇಖಿಸಲಾಗಿದೆ. ಜೀವನಕ್ಕೆ ಬೇಕಾದ ಎಲ್ಲಾ ಐಷಾರಾಮಿಗಳು ಸಿಕ್ಕ ಬಳಿಕವೂ, ಇರುವ ದುಡ್ಡನ್ನು ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾದಾಗ ಮನುಷ್ಯ ಈ ರೀತಿ ವಿಕೃತನಾಗುತ್ತಾನೆ ಎಂದು ಹೇಳುವ ಮಾತಿಗೆ ಸಾಕ್ಷಿಯಾಗಿ ನಿಂತಿದೆ ಈ ಫೈಲ್ಸ್​. ನಿಜಕ್ಕೂ ನಾವು ನೋಡುತ್ತಿರುವ ಜಗತ್ತೇ ಒಂದು, ಅದರೊಳಗೆ ಅವಿತಿರುವ ವಿಷಯವೇ ಇನ್ನೊಂದು ಎಂದು ಇದಾಗಲೇ ಹಲವು ಜ್ಞಾನಿಗಳು ಹೇಳಿರುವುದು ಉಂಟು. ಅಂಥದ್ದೇ ವಿಚಿತ್ರ, ಭಯಾನಕ, ಕ್ರೂರ ಎನ್ನಿಸುವ, ಮನುಷ್ಯನ ಕರಾಳತನವನ್ನು ತೆಗೆದಿಡುವ ಭಯಾನಕ ಸತ್ಯವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;&lt;strong&gt;ಸುಳ್ಳನ್ನೇ ಸತ್ಯವೆಂದು ನಂಬಿ...&lt;/strong&gt;&lt;/h2&gt;&lt;p&gt;ಪ್ರಪಂಚದಲ್ಲಿ ದುಡ್ಡಿದ್ದರೆ ಏನು ಬೇಕಾದರೂ ಮಾಡಬೋದು ಅಂತಾರೆ.. ಆದರೆ ಆ ದುಡ್ಡು ಮತ್ತು ಅಧಿಕಾರದ ಮದ ನೆತ್ತಿಗೇರಿದರೆ ಮನುಷ್ಯ ಎಷ್ಟರ ಮಟ್ಟಿಗೆ ಕೆಳಜಾರಬಹುದು ಅನ್ನೋದಕ್ಕೆ ಇಲ್ಲೊಂದು ಬೆಚ್ಚಿಬೀಳಿಸೋ ಉದಾಹರಣೆಯಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಇಡೀ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳ ಮುಖವಾಡ ಕಳಚೋ ಸ್ಫೋಟಕ ಪ್ರಕರಣ.. ಇದರಲ್ಲಿ ಭಾರತದ ಖ್ಯಾತನಾಮರ ಹೆಸರೂ ಕೇಳಿಬಂದಿದೆ. ಆದರೆ ಇದರ ನಡುವೆಯೇ ಈ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಮಗೆ ಆಗದವರ ವಿಡಿಯೋ ಮಾಡಿ ಅವರನ್ನೂ ಕೂಡ ಈ ಘಟನೆಗೆ ಲಿಂಕ್​ ಮಾಡುವ ಹೇಯ ಕಾರ್ಯವೂ ಅದೇ ಇನ್ನೊಂದೆಡೆ ನಡೆಯುತ್ತಿದೆ. ಎಐ ಯುಗದಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿಯದ ಜನರು ಅದನ್ನೇ ನಿಜ ಎಂದು ನಂಬಿಕೊಂಡು ಅತ್ಯಂತ ಕೆಟ್ಟರೀತಿಯಲ್ಲಿ ಕಮೆಂಟ್ಸ್​ ಮಾಡುವುದು ನಡೆಯುತ್ತಿದೆ. ಕೆಲವೊಮ್ಮೆ ಇದು ಸುಳ್ಳು ಎಂದು ತಿಳಿದಿದ್ದರೂ, ಅದನ್ನು ಬೇರೆಯವರು ನಂಬಲಿ ಎನ್ನುವ ಕಾರಣಕ್ಕೆ ಅವರ ಘನತೆಗೆ ಕುಂದು ತರುವ ಕೆಲಸವನ್ನೂ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಜನರ ವಿಕೃತಿ&lt;/strong&gt;&lt;/h3&gt;&lt;p&gt;ಅದೇ ಇನ್ನೊಂದೆಡೆ, ಯಾವುದೋ ರಾಜಕಾರಣಿಯನ್ನೋ ಇಲ್ಲವೇ ವಿಐಪಿಯನ್ನೋ ಹೋಲುವ ವ್ಯಕ್ತಿಗಳ ವಿಡಿಯೋ ವೈರಲ್​ ಮಾಡಿಯೂ ವಿಕೃತಿ ಮೆರೆಯಲಾಗುತ್ತಿದೆ. ಇದೀಗ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರದ್ದು ಎನ್ನಲಾದ ವಿಡಿಯೋ ಒಂದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಆ ವ್ಯಕ್ತಿ ಎಪ್​ಸ್ಟೀನ್​ ಜೊತೆಗೆ ಹೆಣ್ಣುಮಕ್ಕಳ ನಡುವೆ ಡಾನ್ಸ್​ ಮಾಡುತ್ತಾ, ಕಿಸ್​ ಮಾಡುವುದನ್ನು ನೋಡಬಹುದಾಗಿದೆ. ಮಾತ್ರವಲ್ಲದೇ ಎಪ್​ಸ್ಟೀನ್​ ಫೈಲ್ಸ್​ನಲ್ಲಿ ರಾಹುಲ್​ ಗಾಂಧಿ ಎಂದು ಹೆಸರು ಕೊಟ್ಟು ಸರ್ಚ್​ ಮಾಡಿದರೆ, ಅದರಲ್ಲಿ ರಾಹುಲ್ ಗಾಂಧಿಯ ಹೆಸರು ತೋರಿಸುವ ಫೈಲ್​ಗಳೂ ಇರುವುದನ್ನು ನೋಡಬಹುದು.&lt;/p&gt;&lt;h3&gt;&lt;strong&gt;ಏನಿದು ಸತ್ಯಾಂಶ?&lt;/strong&gt;&lt;/h3&gt;&lt;p&gt;ಆದರೆ ಸತ್ಯಾಂಶವೇ ಬೇರೆ ಇದೆ. ಇದರ ಫ್ಯಾಕ್ಟ್​ ಚೆಕ್​ ಮಾಡಿದಾಗ, ಇದು ರಾಹುಲ್​ ಗಾಂಧಿ ಅವರ ವಿಡಿಯೋ ಅಲ್ಲ, ಬದಲಿಗೆ ಬೇರೆ ಯಾರದ್ದೋ ಎನ್ನುವುದು ಸಾಬೀತಾಗಿದೆ. ಅದೇ ರೀತಿ ಎಪ್​ಸ್ಟೀನ್​ ಫೈಲ್ಸ್​ನಲ್ಲಿ ನೀವು ಯಾವುದೇ ರಾಜಕಾರಣಿಗಳ ಹೆಸರನ್ನು ಟೈಪ್​ ಮಾಡಿ ಸರ್ಚ್​ ಮಾಡಿದರೂ ಅವರ ಹೆಸರು ಅದರಲ್ಲಿ ತೋರಿಸುತ್ತದೆ. ಅಂದ ಮಾತ್ರಕ್ಕೆ ಅವರಿಗೂ, ಈ ಭಯಾನಕ ಕೃತ್ಯಕ್ಕೂ ಲಿಂಕ್​ ಇದೆ ಎನ್ನುವುದು ಸರಿಯಲ್ಲ ಎನ್ನುವುದು ಫ್ಯಾಕ್ಟ್​ ಚೆಕ್​ನಿಂದ ಸಾಬೀತಾಗಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by cн&iota;ĸĸ&iota;в&upsilon;zz (@chikkibuzz)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;p&gt;Rahul Gandhi was mentioned four times in the Epstein files btw.  https://t.co/GMzKGvoRNg pic.twitter.com/zq5lJzqEXo&lt;/p&gt;&lt;p&gt;&mdash; Mikku  (@effucktivehumor) February 1, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/politics/rahul-gandhis-name-and-fake-video-linked-to-epstein-files-fact-check-reveals-suc/articleshow-nqyzyp6"/>
        </item>
        <item>
            <title><![CDATA[ಪೊಲೀಸ್​ ರೂಪದ ರಕ್ಕಸರು!  ಎಂಜಲು ಕಾಸಿಗೆ ಬಾಲಕನ ಜೀವದ ಜೊತೆ  ಚೆಲ್ಲಾಟವಾಡಿದ ಕ್ರೂರ ಅಧಿಕಾರಿಗಳು]]></title>
            <link>https://kannada.asianetnews.com/india-news/on-camera-mp-cops-kidnap-student-frame-him-in-fake-drugs-case-suc/articleshow-hirg378</link>
            <guid isPermaLink="true">https://kannada.asianetnews.com/india-news/on-camera-mp-cops-kidnap-student-frame-him-in-fake-drugs-case-suc/articleshow-hirg378</guid>
            <pubDate>Sat, 07 Feb 2026 18:30:29 +0530</pubDate>
            <description><![CDATA[&lt;p&gt;ಎಂಜಲು ಕಾಸಿಗೆ ಯಾರ ಜೀವದ ಜೊತೆ ಬೇಕಾದರೂ ಚೆಲ್ಲಾಟವಾಡುವ ಪೊಲೀಸ್​ ಇಲಾಖೆಯ ಅತ್ಯಂತ ಕ್ರೂರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಡ್ರಗ್ಸ್ ಪೆಡ್ಲರ್&zwnj;ಗಳಿಂದ ಲಂಚ ಪಡೆದ ಪೊಲೀಸ್​ ಅಧಿಕಾರಿಗಳು ಮಾಡಿರುವ ಘನಂದಾರಿ ಕೆಲಸ ನೋಡಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgw2trvmaxp453f0w4p64z6j,imgname-police-1770469024628.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನಸಾಮಾನ್ಯರು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ ಇದ್ದಾರೆ ಎಂದರೆ ಅದರ ಬಹುಪಾಲು ಶ್ರೇಯಸ್ಸನ್ನು ಪೊಲೀಸ್​ ಇಲಾಖೆಗೆ ನೀಡಬೇಕು. ಆದರೆ, ಪೊಲೀಸ್​ ಇಲಾಖೆಯ ಕೆಲವು ಉನ್ನತ ಅಧಿಕಾರಿಗಳಿಂದ ಹಿಡಿದು ಕೆಳಹಂತದ ನೌಕರರವರೆಗೆ ಮಾಡುವ ಕೆಲವೊಂದು ಕಾರ್ಯಗಳ ಬಗ್ಗೆ ಇದಾಗಲೇ ಜನಸಾಮಾನ್ಯರು ರೋಸಿ ಹೋಗುತ್ತಿದ್ದಾರೆ. ಅದರಲ್ಲಿಯೂ ಸಾಮಾನ್ಯ ಜನರ ಯಾವುದಾದರೂ ವಸ್ತು, ವಾಹನ ಕಳುವಾದರೆ, ತಮ್ಮದೇ ವ್ಯಾಪ್ತಿಯ ಕಳ್ಳರ ಬಗ್ಗೆ ಅರಿವಿದ್ದರೂ, ಅವರನ್ನು ಹಿಡಿಯದೇ, ದುಡ್ಡು ನುಂಗಿ ನೀರು ಕುಡಿಯುತ್ತಾರೆ, ಸಾಮಾನ್ಯ ಜನರ ವಸ್ತುಗಳು, ವಾಹನಗಳು ಕಳುವಾಯಿತು ಎಂದರೆ, ಅದು ಸಿಗುವುದು ದೂರದ ಮಾತೇ ಎನ್ನುವ ಬಗ್ಗೆ ಇದಾಗಲೇ ಹಲವಾರು ಅಸಮಾಧಾನ ತೋಡಿಕೊಂಡಿರುವುದು ಇದೆ. ಅದರಲ್ಲಿಯೂ ರಸ್ತೆ ಬದಿಯ ಅಂಗಡಿಗಳನ್ನೂ ಬಿಡದೇ, ಕೊನೆಗೆ ಭಿಕ್ಷುಕರನ್ನೂ ಬಿಡದೇ 10-20 ರೂಪಾಯಿಯನ್ನಾದರೂ ವಸೂಲಿ ಮಾಡಿಕೊಂಡು ಹೋಗುವವರು ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ.&lt;/p&gt;&lt;h2&gt;&lt;strong&gt;ಪೊಲೀಸರ ಪೈಶಾಚಿಕ ಕೃತ್ಯ&lt;/strong&gt;&lt;/h2&gt;&lt;p&gt;ಆದರೆ, ಇವೆಲ್ಲವುಗಳಿಗಿಂತಲೂ ಘನಘೋರ ಎನ್ನುವಂಥ, ಪೈಶಾಚಿಕ ಕೃತ್ಯಕ್ಕೆ ಇಳಿದಿರುವ ಘಟನೆ ಮಧ್ಯಪ್ರದೇಶದಲ್ಲಿ ಈಚೆಗೆ ನಡೆದಿದೆ. ಅಮಾಯಕ ಬಾಲಕನ ಜೀವನ ಜೊತೆ ಚೆಲ್ಲಾಟವಾಡಿದ್ದಾರೆ ಈ ಧನದಾಹಿ ಪೊಲೀಸರು. ಡ್ರಗ್ಸ್​ ಪೆಡ್ಲರ್​ಗಳಿಂದ ಲಂಚ ಪಡೆದು, ಅವರು ಕೊಟ್ಟ ಕಾಸನ್ನು ನುಂಗಿ ತೇಗಿ, ಅಮಾಯಕ ಬಾಲಕನನ್ನು ಈ ಕೇಸ್​ನಲ್ಲಿ ಸಿಲುಕಿಸುವ ಪ್ಲ್ಯಾನ್​ ಮಾಡಿರುವ ಹೇಯ ಕೃತ್ಯ ಮಾಡಿದ್ದಾರೆ ಈ ಪೊಲೀಸ್​ ಅಧಿಕಾರಿಗಳು. ಅದೊಂದು ಸಾಕ್ಷಿ ಸಿಗದೇ ಹೋಗಿದ್ದರೆ, ಆ ಬಾಲಕ ಇಂದು ಕೋರ್ಟ್​ನಿಂದ ಘೋರ ಶಿಕ್ಷೆಯನ್ನೋ ಇಲ್ಲವೇ, ಆತ್ಮ*ಹತ್ಯೆಯನ್ನೋ ಮಾಡಿಕೊಳ್ಳುವ ಸ್ಥಿತಿಗೆ ತಂದೊಡ್ಡುತ್ತಿದ್ದರು ಈ ಲಂಚಕೋರ ಪೊಲೀಸ್​ ಅಧಿಕಾರಿಗಳು.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ದೇಶದ ಅತ್ಯುತ್ತಮ ಪೊಲೀಸ್ ಠಾಣೆಯ ಸ್ಟೋರಿ ಇದು&lt;/strong&gt;&lt;/h3&gt;&lt;p&gt;ಈ ಘಟನೆ ನಡೆದಿರುವುದು ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದ ಮಲ್ಹರ್&zwnj;ಗಢ ಪೊಲೀಸ್ ಠಾಣೆಯ ಪೊಲೀಸ್​ ಅಧಿಕಾರಿಗಳಿಂದ. ಐದಾರು ಮಂದಿ ಅಧಿಕಾರಿಗಳು ಅಂದು ಖಾಸಗಿ ಬಸ್​ ಒಂದನ್ನು ನಿಲ್ಲಿಸಿ ಶಾಲೆಯ ವಿದ್ಯಾರ್ಥಿಯೊಬ್ಬನನ್ನು ಪ್ರಯಾಣಿಕರ ಎದುರೇ ದರದರ ಎಳೆದುಕೊಂಡು ಬಂದರು. ಆ ವಿದ್ಯಾರ್ಥಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಈ ಪಾಪಿ ಪೊಲೀಸರು ಆತನನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ, ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಆತನನ್ನು ಸಿಲುಕಿಸಿದರು. ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಬಾಲಕನ ಮೇಲೆ ಎಫ್​ಐಆರ್​ ದಾಖಲು ಮಾಡಿದರು.&lt;/p&gt;&lt;p&gt;ಮಗನ ಬಂಧನದ ಸುದ್ದಿ ತಿಳಿಯುತ್ತಲೇ ಪಾಲಕರು ದಿಕ್ಕೇ ತೋಚದಾರರು.ಪೊಲೀಸರ ಬಳಿ ಬಂದು ಕೇಳಿದಾಗ ನಿಮ್ಮ ಮಗ ಡ್ರಗ್ಸ್​ ವ್ಯವಹಾರ ನಡೆಸುತ್ತಿದ್ದ ಎಂದಿದ್ದಾರೆ. ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಎನ್ನಿಸಿಕೊಂಡಿರುವ ಮಗ, ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದ ಮಗ, ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿರುವುದು ಕೇಳಿ ಅಪ್ಪ-ಅಮ್ಮನಿಗೆ ದಿಕ್ಕೇ ತೋಚದಾಯಿತು. 2.7 ಕೆಜಿ ಅಫೀಮು ಜೊತೆ ಸಿಕ್ಕಿಬಿದ್ದಿದ್ದಾನೆ ಎಂದರು. ಕೊನೆಗೆ ಆ ಬಾಲಕನನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಯಿತು. ಎಲ್ಲವೂ ಆತನ ವಿರುದ್ಧವಾಗಿಯೇ ಇದ್ದವು. ಆದ್ದರಿಂದ ಆತನನ್ನು ಜೈಲಿಗೆ ಕಳುಹಿಸಲಾಯಿತು. ಮೂರು ತಿಂಗಳು ತನ್ನದಲ್ಲದ ತಪ್ಪಿಗೆ ಆತ ಜೈಲಿನಲ್ಲಿಯೇ ಇರಬೇಕಾದ ಸ್ಥಿತಿ ಬಂತು.&lt;/p&gt;&lt;h3&gt;&lt;strong&gt;ಹೈಕೋರ್ಟ್​ನಲ್ಲಿ ಸತ್ಯ ಬಯಲು&lt;/strong&gt;&lt;/h3&gt;&lt;p&gt;ಕೊನೆಗೆ ಈ ಘಟನೆ ಹೈಕೋರ್ಟ್​ ಮೆಟ್ಟಿಲೇರಿತು. ವಕೀಲರು ಬುದ್ಧಿವಂತರಾಗಿದ್ದರಿಂದಲೋ ಏನೋ, ಎಲ್ಲಾ ಘಟನೆಗಳನ್ನು ಒಂದೊಂದಾಗಿ ಪೋಣಿಸಿದಾಗ ಎಲ್ಲೋ ಎಡವಟ್ಟಾಗಿರುವುದನ್ನು ಹೈಕೋರ್ಟ್​ ಗಮನಕ್ಕೆ ತಂದರು. ನ್ಯಾಯಮೂರ್ತಿಗಳು ಮಂಡ್ಸೌರ್ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ಅವರ ವೈಯಕ್ತಿಕ ಹಾಜರಾತಿಗೆ ಆದೇಶಿಸಿದರು. ಬಳಿಕ, ಆ ಬಾಲಕ ಡ್ರಗ್ಸ್​ ತೆಗೆದುಕೊಂಡು ಹೋಗುತ್ತಿದ್ದ. ಅವನನ್ನು 30 ಕಿಲೋ ಮೀಟರ್​ ಚೇಜ್​ ಮಾಡಿ ತಾವು ಮಾಡಿರುವ ಸಾಹಸದ ಬಗ್ಗೆ ವಿವರಿಸಿದರು. ಬಳಿಕ ವಕೀಲರು, ಅಕ್ಕಪಕ್ಕ ಇರುವ ಎಲ್ಲಾ ಸಿಸಿಟಿವಿಗಳ ಫುಟೇಜ್​ ತಂದುಕೊಟ್ಟರು.&lt;/p&gt;&lt;p&gt;ಕೊನೆಗೆ ಬಸ್​ ಒಳಗೆ ಇರುವ ಫುಟೇಜ್​ ನೋಡಿದಾಗ, ಆ ವಿದ್ಯಾರ್ಥಿ ಪೊಲೀಸ್​ ಅಧಿಕಾರಿಗಳು ಹೇಳಿದಂತೆ ಅಲ್ಲೆಲ್ಲೋ ಇರಲಿಲ್ಲ. ಬದಲಿಗೆ ಬಸ್​ ಸ್ಟಾಪ್​ನಿಂದ ಬಸ್​ ಹತ್ತಿ ಕುಳಿತಿರುವುದು ತಿಳಿಯುತ್ತಲೇ ಕೋರ್ಟ್​ ಗರಂ ಆಯಿತು. ವಕೀಲರು ಬಾಯಿ ಬಿಡಿಸಿದಾಗ ತಿಳಿದು ಬಂದಿದ್ದು ಭಯಾನಕ ಸತ್ಯ. ಡ್ರಗ್ಸ್​ ಪೆಡ್ಲರ್​ಗಳು ಆ ಭಾಗದಲ್ಲಿ ಹೆಚ್ಚಾಗಿದ್ದರು. ಅವರನ್ನು ಇದೇ ಪೊಲೀಸರು ಅರೆಸ್ಟ್​ ಮಾಡಿದ್ದರು. ಅವರಿಂದ ಡ್ರಗ್ಸ್​ ವಶಪಡಿಸಿಕೊಂಡಿದ್ದರು. ಬಳಿಕ ಅವರಿಂದ ಒಂದಿಷ್ಟು ಹಣ ಪಡೆದು ಅವರನ್ನು ಬಿಟ್ಟರು. ಯಾರಾದರೂ ಆ ಡ್ರಗ್ಸ್​ ಮಾಲೀಕರು ಎಂದು ತೋರಿಸಲು ಬೇಕಿತ್ತಲ್ಲ, ಅದಕ್ಕಾಗಿಯೇ, ಅಮಾಯಕ ಬಾಲಕನನ್ನು ಬಸ್​ನಿಂದ ಕರೆದುಕೊಂಡು ಹೋಗಿ ಸಿಲುಕಿಸಿದ್ದರು. ಆ ಖಾಸಗಿ ಬಸ್​ನಲ್ಲಿ ಸಿಸಿಟಿವಿ ಇಲ್ಲದೇ ಹೋಗಿದ್ದರೆ ಆ ಬಾಲಕನ ಸ್ಥಿತಿ ಏನಾಗುತ್ತಿತ್ತೋ ಗೊತ್ತಿಲ್ಲ.&lt;/p&gt;&lt;h3&gt;&lt;strong&gt;ಅಮಾನತು ಆದೇಶ ಸಾಕೆ?&lt;/strong&gt;&lt;/h3&gt;&lt;p&gt;ಈ ರಕ್ಕಸ ಪೊಲೀಸರನ್ನು ಅಮಾನತು ಮಾಡಲು ಆದೇಶಿಸಲಾಗಿದೆ. ಬಹುಶಃ ಇಂಥವರಿಗೆ ಇದೊಂದೇ ಶಿಕ್ಷೆ ಸಾಲದು. ಅಮಾನತು ಮಾಡಿದ ಬಳಿಕ ಒಂದಿಷ್ಟು ತಿಂಗಳಾದ ಮೇಲೆ ವಾಪಸ್​ ಕರೆಸಿಕೊಳ್ಳುತ್ತಾರೆ. ಸಂಬಳವೂ ಬರತ್ತೆ. ಆದರೆ, ತನ್ನದಲ್ಲದ ತಪ್ಪಿಗೆ ಆ ಬಾಲಕ ಅನುಭವಿಸಿದ ನೋವು, ಜೈಲಿನಲ್ಲಿ ಅನುಭವಿಸಿದ ಕಿರುಕುಳ, ಹಿಂಸೆ, ವಾಪಸ್​ ಬಂದ ಮೇಲೆ ಆತನನ್ನು ಕಳ್ಳ ಎಂದು ನೋಡುವ ಸಮಾಜ... ಆ ಬಾಲಕ ಸ್ಥಿತಿ ಯಾರಿಗೂ ಬೇಡ. ಇಂಥ ಅದೆಷ್ಟು ಕೇಸ್​ಗಳು ದಿನನಿತ್ಯವೂ ಆಗುತ್ತಿರಬಹುದು ಎಂದು ನೆನೆಸಿಕೊಂಡರೆ ಭಯ ಆಗುತ್ತದೆ ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/on-camera-mp-cops-kidnap-student-frame-him-in-fake-drugs-case-suc/articleshow-hirg378"/>
        </item>
        <item>
            <title><![CDATA[Love Failure: ಪ್ರೀತಿಸಿದ ಯುವತಿ ಕೈಕೊಟ್ಟಳೆಂದು ಬಾಡಿ ಬಿಲ್ಡರ್ ಯುವಕ ನೇಣಿಗೆ ಶರಣು!]]></title>
            <link>https://kannada.asianetnews.com/crime/heartbroken-bodybuilder-dies-in-bengaluru-after-girlfriend-ends-relationship/articleshow-aui781a</link>
            <guid isPermaLink="true">https://kannada.asianetnews.com/crime/heartbroken-bodybuilder-dies-in-bengaluru-after-girlfriend-ends-relationship/articleshow-aui781a</guid>
            <pubDate>Sun, 08 Feb 2026 09:42:40 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಆಗಿದ್ದ 26 ವರ್ಷದ ಕಿರಣ್, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kgxq73jbf5090njxaxa6tywc,imgname-----------------------2026-02-08t093715.719-1770523954763.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಫೆ.8):&lt;/strong&gt; ಪ್ರೀತಿ ಎಂಬ ಎರಡಕ್ಷರದ ನಂಬಿಕೆಯೇ ಅವನ ಪಾಲಿಗೆ ಮೃತ್ಯುಪಾಶವಾಯಿತು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವತಿ ಕೈಕೊಟ್ಟಳು ಎಂಬ ನೋವಿನಲ್ಲೇ ಜಿಮ್ ಟ್ರೈನರ್ ಒಬ್ಬರು ಬದುಕಿಗೆ ವಿದಾಯ ಹೇಳಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.&lt;/p&gt;&lt;h2&gt;ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ&lt;/h2&gt;&lt;p&gt;ಮೃತ ಯುವಕನನ್ನು 26 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಜಿಮ್ ಟ್ರೈನರ್ ಆಗಿದ್ದ ಕಿರಣ್, ಕಳೆದ ಮೂರು ವರ್ಷಗಳಿಂದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಗಾಢವಾದ ಸಂಬಂಧವಿತ್ತು. ಆದರೆ, ಇತ್ತೀಚೆಗೆ ಆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ತಾನು ಪ್ರೀತಿಸಿದ ಹುಡುಗಿ ಇನ್ನೊಬ್ಬನ ಪಾಲಾಗುತ್ತಿದ್ದಾಳೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕಿರಣ್ ತೀವ್ರವಾಗಿ ನೊಂದಿದ್ದ ಎನ್ನಲಾಗಿದೆ.&lt;/p&gt;&lt;h3&gt;ಕೊಠಡಿಯ ಬಾಗಿಲು ತೆರೆದಾಗ ಕಾದಿತ್ತು ಶಾಕ್&lt;/h3&gt;&lt;p&gt;ಯುವತಿಗೆ ಮದುವೆ ನಿಶ್ಚಯವಾದ ವಿಷಯ ತಿಳಿದ ನಂತರ ಕಿರಣ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಯುವತಿ ಕೈಕೊಟ್ಟಳಲ್ಲ ಅಂತಾ ಮನನೊಂದು ಮನೆಗೆ ಬಂದವನೇ ರೂಮ್ ಒಳಗೆ ಹೋಗಿ ಡೂರ್ ಲಾಕ್ ಮಾಡಿಕೊಂಡಿದ್ದಾನೆ. ಇತ್ತ ಎಷ್ಟು ಹೊತ್ತಾದರೂ ಕಿರಣ್ ಬಾಗಿಲು ತೆಗೆಯದಿದ್ದಾಗ ಸಂಶಯಗೊಂಡ ಮನೆಯವರು ಬಾಗಿಲು ಮುರಿದು ಒಳಗೆ ಹೋದಾಗ, ಕಿರಣ್ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡು ಶಾಕ್ ಆಗಿದ್ದಾರೆ. ಕುಟುಂಬಸ್ಥರಿಗೆ ಈ ದೃಶ್ಯ ನೋಡಿ ಆಕಾಶ ಕಳಚಿಬಿದ್ದಂತಾಗಿದೆ, ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;&lt;strong&gt;ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೋಲಿಸರು&lt;/strong&gt;&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದೃಢ ದೇಹ ಹೊಂದಿದ್ದ, ನೂರಾರು ಮಂದಿಗೆ ಜಿಮ್ ತರಬೇತಿ ನೀಡುತ್ತಿದ್ದ ಯುವಕನೊಬ್ಬ ಪ್ರೇಮ ವೈಫಲ್ಯಕ್ಕಾಗಿ ಇಂತಹ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&amp;nbsp;&lt;/p&gt;&lt;p&gt;&lt;strong&gt;ಗಮನಿಸಿ:&lt;/strong&gt;&lt;/p&gt;&lt;p&gt;ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ದುಡುಕಿನಿಂದ ಆ8ಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಸ್ವಯಂಹಾನಿ ಮಾಡಿಕೊಳ್ಳುವ ಯೋಚನೆ/ಮನೋವ್ಯಥೆ ಅನುಭವಿಸುತ್ತಿದ್ದರೆ ಅಥವಾ ಸಂಕಷ್ಟದ ಸ್ಥಿತಿಯಲ್ಲಿದ್ದರೆ, ದಯವಿಟ್ಟು ಯಾರೊಂದಿಗಾದರೂ ಮಾತನಾಡಿ, ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕರ್ನಾಟಕದಲ್ಲಿ ಸಹಾಯ ಮತ್ತು ಸಮಾಲೋಚನೆಗಾಗಿ ಕೆಳಗಿನ ಸೇವೆಗಳು ಲಭ್ಯವಿವೆ: 24&times;7 ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿ-ಮಾನಸ್ (Tele-MANAS): 14416 ಅಥವಾ 1800-89-14416 (ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಸೇವೆ). ಇದೆ ಸಂಪರ್ಕಿಸಿ.&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/heartbroken-bodybuilder-dies-in-bengaluru-after-girlfriend-ends-relationship/articleshow-aui781a"/>
        </item>
        <item>
            <title><![CDATA[Yapaladinni minor girl kidnapping: ಅನ್ಯಕೋಮಿನ ಯುವಕನಿಂದ ಅಪ್ರಾಪ್ತೆ ಅಪಹರಣ, ತಡೆಯಲು ಬಂದವನ ಭೀಕರ ಹ*ತ್ಯೆ!]]></title>
            <link>https://kannada.asianetnews.com/state/yapaladinni-love-and-crime-hindu-man-murdered-for-resisting-minor-kidnapping-by-accused-youths-at-raichur/articleshow-1w5gbgw</link>
            <guid isPermaLink="true">https://kannada.asianetnews.com/state/yapaladinni-love-and-crime-hindu-man-murdered-for-resisting-minor-kidnapping-by-accused-youths-at-raichur/articleshow-1w5gbgw</guid>
            <pubDate>Tue, 05 May 2026 15:46:13 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ, ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಈಶಪ್ಪ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvsyjnjtpw3r1e9t178r0b2,imgname-----------------------2026-05-05t152158.074-1777975904946.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು (ಮೇ.5):&lt;/strong&gt; ಪ್ರೀತಿ-ಪ್ರೇಮದ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ವೇಳೆ ಯುವಕರನ್ನು ಪ್ರಶ್ನಿಸಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಯಾಪಲದಿನ್ನಿ ಗ್ರಾಮದಲ್ಲಿ ನಡೆದಿದ್ದು ಇಡೀ ಜಿಲ್ಲೆಯೇ ಬೆಚ್ಚಿಬಿದ್ದಿದೆ.&lt;/p&gt;&lt;p&gt;ಯಾಪಲದಿನ್ನಿ ಗ್ರಾಮದ ಈಶಪ್ಪ (30) ಕೊಲೆಯಾದ ದುರ್ದೈವಿ. ಘಟನೆ ನಡೆದ ರಾತ್ರಿ ಈಶಪ್ಪ ತಮ್ಮ ಮನೆಯ ಮಾಳಿಗೆಯ ಮೇಲೆ ಮಲಗಿದ್ದರು. ಈ ವೇಳೆ ಅನ್ಯ ಧರ್ಮದ ಯುವಕ ಅಸ್ಲಂ ಮತ್ತು ಆತನ ಸ್ನೇಹಿತರು ಸೇರಿ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿರುವುದನ್ನು ಈಶಪ್ಪ ಗಮನಿಸಿದ್ದಾರೆ.&lt;/p&gt;&lt;p&gt;ಅನ್ಯಕೋಮಿನ ಯುವಕರು ಕರೆದೊಯ್ಯುತ್ತಿರುವ ಅಪ್ರಾಪ್ತೆ ತನ್ನ ಸ್ನೇಹಿತ ಆಂಜನೇಯನ ತಮ್ಮನ ಮಗಳಾಗಿದ್ದರಿಂದ, ಈಶಪ್ಪ ತಕ್ಷಣ ಮಾಳಿಗೆಯಿಂದ ಕೆಳಗಿಳಿದು ಬಂದು ಯುವಕರನ್ನು ತಡೆದು, 'ಬಾಲಕಿಯನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದೀರಿ?' ಎಂದು ಪ್ರಶ್ನಿಸಿದ್ದರು.&lt;/p&gt;&lt;p&gt;ಈ ವೇಳೆ ತಮ್ಮ ಕೃತ್ಯಕ್ಕೆ ಅಡ್ಡಿಯಾದ ಈಶಪ್ಪನ ಮೇಲೆ ಆಕ್ರೋಶಗೊಂಡ ಅಸ್ಲಂ ಮತ್ತು ಆತನ ಗ್ಯಾಂಗ್, ಹಗ್ಗ ಅಥವಾ ವೈರ್&zwnj;ನಿಂದ ಈಶಪ್ಪನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.&lt;/p&gt;&lt;p&gt;ಸದ್ಯ ಅನ್ಯಕೋಮಿನ ಯುವಕರಿಂದ ಕಿಡ್ನಾಪ್ ಆಗಿರೋ ಬಾಲಕಿಯ ಮನೆಯ ಮುಂದೆಯೇ ಈಶಪ್ಪನ ಮೃತದೇಹವನ್ನಿಟ್ಟು ಕುಟುಂಬಸ್ಥರು, ನ್ಯಾಯಕ್ಕಾಗಿ ಪಟ್ಟು ಹಿಡಿದಿದ್ದಾರೆ. ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಘಟನಾ ಸ್ಥಳದಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾಪಲದಿನ್ನಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/yapaladinni-love-and-crime-hindu-man-murdered-for-resisting-minor-kidnapping-by-accused-youths-at-raichur/articleshow-1w5gbgw"/>
        </item>
        <item>
            <title><![CDATA[ಅಮೆರಿಕಾದಿಂದ ಭಾರತಕ್ಕೆ ಬಂದು ಪತ್ನಿ ಜೊತೆ ಜಗಳ; ಕೊನೆಗೆ 8ನೇ ಮಹಡಿಯಿಂದ ಜಿಗಿದ ಗಂಡ]]></title>
            <link>https://kannada.asianetnews.com/gallery/india-news/gurugram-man-jumps-from-8th-floor-after-returning-from-us-amid-marital-dispute-mrq-39zbm2k</link>
            <guid isPermaLink="true">https://kannada.asianetnews.com/gallery/india-news/gurugram-man-jumps-from-8th-floor-after-returning-from-us-amid-marital-dispute-mrq-39zbm2k</guid>
            <pubDate>Sun, 03 May 2026 21:20:47 +0530</pubDate>
            <description><![CDATA[&lt;p&gt;ವಿದೇಶದಿಂದ ಮರಳಿದ್ದ 45 ವರ್ಷದ ನಿಶಾಂತ್, ಕಟ್ಟಡವೊಂದರ 8ನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದ ಉಂಟಾದ ಮಾನಸಿಕ ಖಿನ್ನತೆಯೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqq7hh6sfmnyh197krc96h3w,imgname-man-suicide---3--1777822385369.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿದೇಶದಿಂದ ಮರಳಿದ್ದ 45 ವರ್ಷದ ನಿಶಾಂತ್, ಕಟ್ಟಡವೊಂದರ 8ನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯೊಂದಿಗಿನ ಜಗಳದಿಂದ ಉಂಟಾದ ಮಾನಸಿಕ ಖಿನ್ನತೆಯೇ ಈ ದುರಂತಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.&lt;/p&gt;&lt;img&gt;&lt;p&gt;ಅಮೆರಿಕದಿಂದ ಇತ್ತೀಚೆಗೆ ಹರಿಯಾಣಕ್ಕೆ ಮರಳಿದ್ದ 45 ವರ್ಷದ ನಿಶಾಂತ್ ಎಂಬುವವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಗುರುಗ್ರಾಮ್&zwnj;ನ ಸೆಕ್ಟರ್ 65ರಲ್ಲಿರುವ M3M ಎಮರಾಲ್ಡ್ ಹಿಲ್ಸ್ ಸೊಸೈಟಿಯ 8ನೇ ಮಹಡಿಯಿಂದ ಶನಿವಾರ ಸಂಜೆ 7:30ರ ಸುಮಾರಿಗೆ ಜಿಗಿದು ಪ್ರಾಣ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ನಿಶಾಂತ್ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿಯೊಂದಿಗೆ ಉಂಟಾದ ಜಗಳ ತಾರಕಕ್ಕೇರಿದ ನಂತರ, ಏಪ್ರಿಲ್ 28 ರಂದು ಅವರು ಅಮೆರಿಕದಿಂದ ಗುರುಗ್ರಾಮ್&zwnj;ಗೆ ವಾಪಸ್ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. 12 ವರ್ಷಗಳ ಹಿಂದೆ ಮದುವೆಯಾಗಿದ್ದ ನಿಶಾಂತ್, ಪತ್ನಿಯೊಂದಿಗೆ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಗುರುಗ್ರಾಮ್&zwnj;ನಲ್ಲೇ ವಾಸವಾಗಿದ್ದಾರೆ. ಮದುವೆ ಸಂಬಂಧದಲ್ಲಿನ ಸಮಸ್ಯೆಗಳೇ ಖಿನ್ನತೆಗೆ ಕಾರಣವಾಗಿ, ಅದು ಆತ್ಮ*ಹತ್ಯೆಗೆ ದಾರಿ ಮಾಡಿಕೊಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ. ಮೃತರ ಕುಟುಂಬದವರು ಪತ್ನಿ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;(ಗಮನಿಸಿ: ಆತ್ಮ*ಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಇಂತಹ ಆಲೋಚನೆಗಳು ಬರುತ್ತಿದ್ದರೆ, ಸಹಾಯಕ್ಕಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ: 1056, 0471- 2552056)&lt;/p&gt;]]></content:encoded>
            <category>crime</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/gurugram-man-jumps-from-8th-floor-after-returning-from-us-amid-marital-dispute-mrq-39zbm2k"/>
        </item>
        <item>
            <title><![CDATA[ಸಣ್ಣ ವಿಷಯ ದೊಡ್ಡ ದುರಂತ, ಯೂಟ್ಯೂಬ್‌ ನೋಡಿ ಹೆಂಡತಿಯ ಹತ್ಯೆ]]></title>
            <link>https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e</link>
            <guid isPermaLink="true">https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e</guid>
            <pubDate>Wed, 06 May 2026 13:31:20 +0530</pubDate>
            <description><![CDATA[&lt;p&gt;YouTube ಕಟ್ಟಿಕೊಂಡ ಹೆಂಡತಿ ದಪ್ಪ ಆಗುತ್ತಿದ್ದಾಳೆ ಎಂದು ಯೂಟ್ಯೂಬ್&zwnj;ನಲ್ಲಿ ಸರ್ಚ್ ಮಾಡಿ ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದ ಈ ಘಟನೆಯಲ್ಲಿ ನಿಜವಾಗಿ ನಡೆದಿದ್ದೇನು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqy0v8ec8t5xyb1b4yzgfhtg,imgname-murder-1778050245068.jpg" type="image/jpeg" height="390" width="690"/>
            <content:encoded><![CDATA[&lt;p&gt;YouTube ಕಟ್ಟಿಕೊಂಡ ಹೆಂಡತಿ ದಪ್ಪ ಆಗುತ್ತಿದ್ದಾಳೆ ಎಂದು ಯೂಟ್ಯೂಬ್&zwnj;ನಲ್ಲಿ ಸರ್ಚ್ ಮಾಡಿ ಆಕೆಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದ ಈ ಘಟನೆಯಲ್ಲಿ ನಿಜವಾಗಿ ನಡೆದಿದ್ದೇನು ಗೊತ್ತಾ?&lt;/p&gt;&lt;img&gt;ಈ ಕಾಲದಲ್ಲಿ ಮಾನವ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧ ತೀರಾ ದುರ್ಬಲವಾಗಿದೆ. ಜೀವನಪೂರ್ತಿ ಜೊತೆಗಿರಬೇಕಾದವರು ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆಯುತ್ತಿದ್ದಾರೆ. ಇನ್ನು ಕೆಲವರು ಮತ್ತಷ್ಟು ಕ್ರೂರವಾಗಿ ನಡೆದುಕೊಳ್ಳುತ್ತಾರೆ, ತಮ್ಮ ಜೀವನ ಸಂಗಾತಿಯನ್ನೇ ಕೊಂದುಬಿಡುತ್ತಾರೆ. ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದ ಹೆಂಡತಿ, ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದ ಗಂಡ, ಇಂತಹ ಸುದ್ದಿಗಳನ್ನು ನಾವು ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಿದ್ದೇವೆ. ಆದರೆ ಇಲ್ಲೊಬ್ಬ ದುರುಳ, ಹೆಂಡತಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಪ್ರಾಣ ತೆಗೆದಿದ್ದಾನೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.&lt;img&gt;&lt;p&gt;ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದುಟೂರು ನಿವಾಸಿ ಕಿರಣ್, ಮದ್ದೂರಿನ ಪದ್ಮಜಾಳನ್ನು ಮದುವೆಯಾಗಿದ್ದ. ಮದುವೆ ಸಮಯದಲ್ಲಿ ಪದ್ಮಜಾ ಸ್ವಲ್ಪ ದಪ್ಪಗಿದ್ದಳು. ಆದರೆ ಆಕೆಯ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಕಿರಣ್, ಮನೆ ಅಳಿಯನಾಗಿ ಹೋಗಿದ್ದ. ಈ ದಂಪತಿ ಮದ್ದೂರಿನ ಹೊಸಕೋಟೆಯಲ್ಲಿ ವಾಸವಾಗಿದ್ದರು. ಇವರಿಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಸಾಫ್ಟ್&zwnj;ವೇರ್ ಇಂಜಿನಿಯರ್ ಆಗಿದ್ದ ಕಿರಣ್, ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದ. ಕೆಲವು ಕಾಲ ಇವರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕಿರಣ್, ಹೆಂಡತಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಆಕೆ ದಪ್ಪಗಿದ್ದು, ಸುಂದರವಾಗಿಲ್ಲ ಎಂದು ಭಾವಿಸಿದ್ದ. ಸಣ್ಣಗಾಗುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದ. ಆದರೂ ಪದ್ಮಜಾ ತೂಕ ಇಳಿಸಿಕೊಳ್ಳದಿದ್ದಾಗ, ಆಕೆಯನ್ನು ತೊಡೆದುಹಾಕಲು ನಿರ್ಧರಿಸಿದ.&lt;/p&gt;&lt;img&gt;ಹೆಂಡತಿಯನ್ನು ಸುಲಭವಾಗಿ ಕೊಲ್ಲುವುದು ಹೇಗೆಂದು ಕಿರಣ್ ಯೂಟ್ಯೂಬ್&zwnj;ನಲ್ಲಿ ಹುಡುಕಾಡಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈ ವೇಳೆ ಆತನಿಗೆ ಒಂದು ಫೋನ್ ನಂಬರ್ ಸಿಕ್ಕಿದ್ದು, ಅವರಿಗೆ ಕರೆ ಮಾಡಿ ಕೊರಿಯರ್ ಮೂಲಕ ವಿಷ ತರಿಸಿಕೊಂಡಿದ್ದಾನೆ. ಪದ್ಮಜಾ ಕುಟುಂಬದವರಿಗೆ ಅನುಮಾನ ಬಾರದಿರಲೆಂದು, ತನ್ನ ಸ್ವಂತ ಊರಾದ ಪ್ರೊద్దుಟೂರಿನಲ್ಲಿ ಕೊಲೆಗೆ ಪ್ಲಾನ್ ಮಾಡಿದ್ದಾನೆ. ತಂದೆ-ತಾಯಿಯನ್ನು ನೋಡಿ ಬರೋಣ ಎಂದು ಹೇಳಿ ಪತ್ನಿ ಪದ್ಮಜಾಳನ್ನು ಪ್ರೊద్దుಟೂರಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಗೆ ಅನುಮಾನ ಬಾರದಂತೆ ಪ್ರೀತಿ ತೋರಿಸಿದ್ದಾನೆ. ಈ ನಡುವೆ, ಪಾಲ್&zwnj;ಕೋವಾ ತಂದು ಅದರಲ್ಲಿ ವಿಷ ಬೆರೆಸಿ ಪದ್ಮಜಾಗೆ ತಿನ್ನಿಸಿದ್ದಾನೆ. ಗಂಡ ಪ್ರೀತಿಯಿಂದ ಕೊಡುತ್ತಿದ್ದಾನೆ ಎಂದು ಆ ಅಮಾಯಕಿ ಪಾಲ್&zwnj;ಕೋವಾ ತಿಂದಿದ್ದಾಳೆ. ನಂತರ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಆದರೆ ವಿಷ ತಿಂದರೂ ಪದ್ಮಜಾ ಸಾಯಲಿಲ್ಲ. ಆಗ ಕಿರಣ್, ಆಕೆಯ ಮುಖದ ಮೇಲೆ ದಿಂಬಿಟ್ಟು ಉಸಿರುಗಟ್ಟಿಸಿದ್ದಾನೆ. ಒದ್ದಾಡಿದ ಆಕೆ ಕೊನೆಗೆ ಪ್ರಾಣ ಬಿಟ್ಟಿದ್ದಾಳೆ. ನಂತರ, ತನ್ನ ಹೆಂಡತಿ ಹೃದಯಾಘಾತದಿಂದ ಸತ್ತಿದ್ದಾಳೆಂದು ಎಲ್ಲರನ್ನೂ ನಂಬಿಸಲು ಪ್ರಯತ್ನಿಸಿದ್ದಾನೆ.&lt;img&gt;ಕಿರಣ್ ಹೇಳಿದ ಮಾತನ್ನು ಪದ್ಮಜಾಳ ತವರು ಮನೆಯವರೂ ನಂಬಿದ್ದರು. ಆಕೆ ನಿಜವಾಗಿಯೂ ಹೃದಯಾಘಾತದಿಂದ ಸತ್ತಿದ್ದಾಳೆಂದೇ ಭಾವಿಸಿದ್ದರು. ಆದರೆ ಪೊಲೀಸರ ಎಂಟ್ರಿಯಿಂದ ಆತನ ಪ್ಲಾನ್ ಫೇಲ್ ಆಯಿತು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ಪೋಸ್ಟ್&zwnj;ಮಾರ್ಟಂ ಮಾಡಿಸಿದರು. ಆಗ ನಿಜವಾದ ಸತ್ಯ ಹೊರಬಂತು. ಆಕೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಯಿತು. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ಕಿರಣ್&zwnj;ನನ್ನು ವಿಚಾರಿಸಿದಾಗ, ಆತ ಸತ್ಯ ಬಾಯ್ಬಿಟ್ಟಿದ್ದಾನೆ. ತಾನೇ ಹೆಂಡತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ರಿಮಾಂಡ್&zwnj;ಗೆ ಕಳುಹಿಸಿದ್ದಾರೆ.]]></content:encoded>
            <category>crime</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/andhra-husband-ends-his-wife-life-over-weight-gain-after-youtube-search-suh-3mxsd9e"/>
        </item>
        <item>
            <title><![CDATA[ಗಂಗಾವತಿಯ ಅಶೋಕ ಲಾಡ್ಜ್‌ನಲ್ಲಿ ಜೂಜಾಟ: ಪೊಲೀಸ್ ದಾಳಿಯಲ್ಲಿ 13 ಜನರ ಬಂಧನ]]></title>
            <link>https://kannada.asianetnews.com/crime/gangavathi-ashok-lodge-gambling-raid-13-arrested-gvd/articleshow-6nkgdqn</link>
            <guid isPermaLink="true">https://kannada.asianetnews.com/crime/gangavathi-ashok-lodge-gambling-raid-13-arrested-gvd/articleshow-6nkgdqn</guid>
            <pubDate>Mon, 04 May 2026 22:19:16 +0530</pubDate>
            <description><![CDATA[&lt;p&gt;ನಗರದ ಕೊಪ್ಪಳ ರಸ್ತೆಯ ಮಾರ್ಗದಲ್ಲಿರುವ ಪ್ರತಿಷ್ಠಿತ ವ್ಯಕ್ತಿಯ ಅಶೋಕ ಲಾಡ್ಜ್&zwnj;ನಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಜೂಜಾಟಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j80ags8deh4xxb88y97tf1p2,imgname-arrest-hand-cuff.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಮೇ.04): &lt;/strong&gt;ನಗರದ ಕೊಪ್ಪಳ ರಸ್ತೆಯ ಮಾರ್ಗದಲ್ಲಿರುವ ಪ್ರತಿಷ್ಠಿತ ವ್ಯಕ್ತಿಯ ಅಶೋಕ ಲಾಡ್ಜ್&zwnj;ನಲ್ಲಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಿಸಿಲಿನ ಧಗೆ ಇದೆ ಎಂಬ ಕಾರಣಕ್ಕೆ ಜೂಜುಕೋರರು ಅಶೋಕ್ ಹೊಟೆಲ್ ಸೇರಿದಂತೆ ಪ್ರಮುಖ ಹೊಟೆಲ್ ಗಳನ್ನು ಅಡ್ಡಿಯಾಗಿ ಮಾಡಿಕೊಂಡು ಇಸ್ಪೀಟ್ ಆಟ ನಡೆಸುತ್ತಿರುವದರ ಬಗ್ಗೆ ಮಾಹಿತಿ ಪಡೆದ ಡಿವೈಎಸ್ಪಿ ಜಾಯಪ್ಪ ನ್ಯಾಮಗೊಡರ್ ಅವರು ತಮ್ಮ ತಂಡದೊಂದಿಗೆ ದಾಳಿ ನಡೆಸಿ 13 ಜನರನ್ನು ಬಂಧಿಸಿ ಅವರಲ್ಲಿದ್ದ 54 ಸಾವಿರ ರು ಸೇರಿದಂತೆ ಜೂಜಾಟಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಹಿಂದೆ ಗ್ರಾಮೀಣ ಪ್ರದೇಶ ಮತ್ತು ಗುಡ್ಡ, ಗದ್ದೆಗಳಲ್ಲಿ ಜೂಜಾಟ ದಂಧೆ ನಡೆಸುತ್ತಿದ್ದರು. ಈಗ ಬಿಸಿಲಿನ ಧಗೆ ಹೆಚ್ಚಾಗಿದ್ದರಿಂದ ಗಂಗಾವತಿ ನಗರದ ಪ್ರತಿಷ್ಟರ ಲಾಡ್ಜ್ ಸೇರಿದಂತೆ ಸಣ್ಣ ಪುಟ್ಟ ಲಾಡ್ಜ್ ಗಳಲ್ಲಿ ಇಸ್ಪೀಟ್ ದಂಧೆ ನಡೆದಿರುವದರ ಬಗ್ಗೆ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸುವದಕ್ಕೆ ಕಾರಣವಾಗಿದೆ. ಹೊರ ರಾಜ್ಯಗಳಿಂದ ಬರುವ ಜೂಜುಕೋರರು ಲಕ್ಷಾಂತರ ರುಪಾಯಿಗಳನ್ನು ತಂದು ಇಸ್ಪೀಟ್ ಆಟದಲ್ಲಿ ತೊಡಗುತ್ತಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ನಗರದಲ್ಲಿ ಅಹಿತಕರ ಘಟನೆಯಿಂದಾಗಿ ಜನರು ಬೆಚ್ಚಿ ಬಿದ್ದಿದ್ದು, ಈಗ ಜೂಜುಕೋರರ ಹಾವಳಿಯಿಂದ ಯುವಕರು ಸಹ ತಪ್ಪು ದಾರಿಗೆ ಹೋಗುತ್ತಿದ್ದಾರೆ ಎಂದು ಪೊಲೀಸರು ಈ ಹಿಂದೆ ಜಾಗೃತಿ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ಅಲ್ಲದೇ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿ ಪಾಲಕರಿಗೆ ತಿಳಿ ಹೇಳಿದ್ದರು. ಗಾಂಜಾ ಮಾರಾಟ ಮಾಡುವವರಿಗೆ ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ.&lt;/p&gt;&lt;h2&gt;&lt;strong&gt;ದಾಳಿ ನಡೆಸುತ್ತಿದ್ದಂತೆಯೆ ಕೆಲವರು ಪರಾರಿ&lt;/strong&gt;&lt;/h2&gt;&lt;p&gt;ಅಶೋಕ್ ಲಾಡ್ಜ್&zwnj;ನಲ್ಲಿ ಇಸ್ಪೀಟ್ ಆಟ ನಡೆಯುತ್ತಿರುವುದರ ಬಗ್ಗೆ ಸುಳಿವು ಪಡೆದುಕೊಂಡ ಪೊಲೀಸರು ಲಾಡ್ಜ್ ಲಿಫ್ಟ್ ಏರುತ್ತಿದ್ದಂತಯೆ ಕೆಲವರು ಪರಾರಿಯಾಗಿದ್ದಾರೆ. ಅದರಲ್ಲಿ 13 ಜನರು ಸಿಕ್ಕಿ ಹಾಕಿಕೊಂಡಿದ್ದಾರೆ. ದಾಳಿಯ ನೇತೃತ್ವವನ್ನು ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ವಹಿಸಿದ್ದರು. ಮುತ್ತಣ್ಣ, ಗ್ಯಾನಪ್ಪ ಮತ್ತು ವಿಶ್ವನಾಥ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.&lt;/p&gt;]]></content:encoded>
            <category>crime</category>
            <dc:creator>Asianet News</dc:creator>
            <atom:link href="https://kannada.asianetnews.com/crime/gangavathi-ashok-lodge-gambling-raid-13-arrested-gvd/articleshow-6nkgdqn"/>
        </item>
        <item>
            <title><![CDATA['ಅಮೃತವರ್ಷಿಣಿ' ರಜಿನಿ ವಿರುದ್ಧ ಗಂಭೀರ ಆರೋಪ: ನಿರ್ದೇಶಕರಿಂದ ಫಿಲಂ ಚೇಂಬರ್​​ಗೆ ದೂರು]]></title>
            <link>https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo</link>
            <guid isPermaLink="true">https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo</guid>
            <pubDate>Mon, 04 May 2026 21:32:23 +0530</pubDate>
            <description><![CDATA[&lt;p&gt;'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದ ಪ್ರಚಾರಕ್ಕೆ ಬಾರದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಟಿ ರಜಿನಿ ವಿರುದ್ಧ ನಿರ್ಮಾಪಕರು ಫಿಲಂ ಚೇಂಬರ್&zwnj;ಗೆ ದೂರು ನೀಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆಯಾಗಲಿದ್ದು, ನಟಿ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqsvf0rvq1pyzrxcyg5pc4w8,imgname-rajini-1777910383387.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಸುರನ ಕೈಯಲ್ಲಿ ಪಾರಿಜಾತ' ಚಿತ್ರದ ಪ್ರಚಾರಕ್ಕೆ ಬಾರದೆ, ಹೆಚ್ಚುವರಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ನಟಿ ರಜಿನಿ ವಿರುದ್ಧ ನಿರ್ಮಾಪಕರು ಫಿಲಂ ಚೇಂಬರ್&zwnj;ಗೆ ದೂರು ನೀಡಿದ್ದಾರೆ. ಸಿನಿಮಾ ಇದೇ ತಿಂಗಳು 22 ರಂದು ಬಿಡುಗಡೆಯಾಗಲಿದ್ದು, ನಟಿ ಕರೆ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಒಂದೆಡೆ ಹಣ ಕೊಡದೆ ತೊಂದರೆ ಕೊಡುತ್ತಿರುವುದಾಗಿ ದೂರಿ ನಿರ್ಮಾಪಕನ ವಿರುದ್ಧ &lsquo;ವಸುದೇವ ಕುಟುಂಬ&rsquo; ಧಾರಾವಾಹಿಯ ತಾರೆಯರು ಗಂಭೀರ ಆರೋಪ ಮಾಡಿ ದೂರು ನೀಡಿ ಬಹುದೊಡ್ಡ ಸದ್ದು ಮಾಡಿದ್ದರೆ, ಅದೇ ಇನ್ನೊಂದೆಡೆ, ಹಣ ಪಡೆದು ಪ್ರಚಾರಕ್ಕೆ ಬಾರದೆ ಸತಾಯಿಸುತ್ತಿರುವುದಾಗಿ ದೂರಿ ನಟಿ ರಜಿನಿ ವಿರುದ್ಧ ದೂರು ದಾಖಲಾಗಿದೆ.&lt;/p&gt;&lt;img&gt;&lt;p&gt;ಸದ್ಯ ರಿಯಾಲಿಟಿ ಷೋನಲ್ಲಿ ಬಿಜಿಯಾಗಿರುವ, ಈಚೆಗಷ್ಟೇ ಮದುವೆಯಾಗಿರುವ &lsquo;ಅಮೃತವರ್ಷಿಣಿ&rsquo; ಸೀರಿಯಲ್​ ನಟಿ ರಜಿನಿ ವಿರುದ್ಧ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರುಗಳು ಫಿಲಂ ಚೇಂಬರ್​​ಗೆ ದೂರು ನೀಡಿದ್ದಾರೆ. ಸಿನಿಮಾನಲ್ಲಿ ನಟಿಸಿ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ನಟಿಯ ವಿರುದ್ಧ ಇರುವ ಆರೋಪ.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿ ರಜಿನಿ ನಟಿಸಿರುವುದು, ಕಾರ್ತಿಕ್ ಎಂಬುವರು ಮೀಕ್ಷಾ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿರುವ &lsquo;ಅಸುರನ ಕೈಯಲ್ಲಿ ಪಾರಿಜಾತ&rsquo; ಹೆಸರಿನ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ರಜಿನಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಮಾಡಿದ್ದಾರೆ. ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಲಿದ್ದು, ಸಿನಿಮಾದ ಪ್ರಚಾರಕ್ಕೆ ನಟಿ ಬರುತ್ತಿಲ್ಲ ಎಂದು ದೂರಲಾಗಿದೆ.&lt;/p&gt;&lt;img&gt;&lt;p&gt;ಈ ಚಿತ್ರವನ್ನು ವಿಘ್ನೇಶ್&zwnj; ನಿರ್ದೇಶಿಸಿದ್ದಾರೆ. ಇದೇ 22ರಂದು ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ, ಪ್ರಮೋಷನ್​ ಮಾಡುವುದು ಅಗತ್ಯವಾಗಿದೆ. ಆದರೆ ನಟಿ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಆರೋಪ. ಚಿತ್ರತಂಡದ ಫೋನ್&zwnj; ಕರೆಗಳನ್ನು ರಜಿನಿ ಸ್ವೀಕರಿಸುತ್ತಿಲ್ಲ ಮತ್ತು ನಿರ್ದೇಶಕರ ನಂಬರ್&zwnj; ಅನ್ನ ಬ್ಲಾಕ್&zwnj; ಮಾಡಿದ್ದಾರೆ ಎಂದು ವಿಘ್ನೇಶ್&zwnj; ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಸಿನಿಮಾದ ಪ್ರಚಾರಕ್ಕೆ ಬರುವಂತೆ ನಟಿಯನ್ನು ಕರೆದರೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂದು ನಿರ್ದೇಶಕ ವಿಘ್ನೇಶ್ ಹೇಳಿದ್ದಾರೆ. ಟ್ರೈಲರ್ ರಿಲೀಸ್​​ಗೆ ಕರೆದರೆ ಅಂದು ಬರ್ತ್​ ಡೇ ಇದೆ ಬರಲ್ಲ ಎಂದರು. ಪ್ರಚಾರಕ್ಕೆ ಕರೆದರೆ ಸೀರಿಯಲ್ ಶೂಟಿಂಗ್​​ನಲ್ಲಿ ಬ್ಯುಸಿ ಇದ್ದೀನಿ ಎಂದರು. ನಮ್ಮ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದು, ಫೋನ್ ರಿಸೀವ್ ಮಾಡುತ್ತಿಲ್ಲ ಎಂದಿದ್ದಾರೆ.&lt;/p&gt;&lt;img&gt;&lt;p&gt;ರಜಿನಿ ಅವರು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡ ಸಂಭಾವನೆಯನ್ನ ಪಡೆದಿದ್ದಾರೆ. ಆದರೆ, ಪ್ರಚಾರದ ವಿಚಾರ ಬಂದಾಗ, ಹತ್ತಾರು ಸಬೂಬುಗಳನ್ನ ನೀಡುತ್ತಿದ್ದಾರೆ. ಸಿನಿಮಾದದ ಪ್ರಚಾರಕ್ಕಾಗಿ ಬರಲು ನಟಿ ರಜಿನಿ ಅವರು ಹೆಚ್ಚುವರಿ ಹಣದ ಬೇಡಿಕೆ ಇಟ್ಟಿದ್ದಾರೆ. ಸಿನಿಮಾ ರೀಲ್ಸ್&zwnj;ಗಳನ್ನ ಸೋಷಿಯಲ್&zwnj; ಮೀಡಿಯಾಗಳಲ್ಲಿ ಹಂಚಿಕೊಳ್ಳಲು ಕೇಳಿದಾಗಲೂ, ಅದಕ್ಕೆ ಪ್ರತ್ಯೇಕ ಹಣ ನೀಡುವಂತೆ ಕೇಳುತ್ತಿದ್ದಾರೆ ಎನ್ನಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/complaint-against-amrutavarshini-actress-rajini-to-film-chamber-suc-7t8b5wo"/>
        </item>
        <item>
            <title><![CDATA[ಹಾಸನದಲ್ಲಿ ಘೋರ ಕೃತ್ಯ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಹತ್ಯೆ]]></title>
            <link>https://kannada.asianetnews.com/gallery/karnataka-districts/hassan-illicit-relationship-case-woman-murdered-for-refusing-intimating-mrq-8kbmdr5</link>
            <guid isPermaLink="true">https://kannada.asianetnews.com/gallery/karnataka-districts/hassan-illicit-relationship-case-woman-murdered-for-refusing-intimating-mrq-8kbmdr5</guid>
            <pubDate>Mon, 04 May 2026 10:58:17 +0530</pubDate>
            <description><![CDATA[&lt;p&gt;Hassan: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಮೃತ ರಮ್ಯಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಚಂದ್ರ, ಆಕೆಯ ಖಾಸಗಿ ಭಾಗಕ್ಕೆ ಒದ್ದು ಹಲ್ಲೆ ನಡೆಸಿದ್ದ. ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಮೃತಪಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrpzq2tw8b4gfdcg9t4cyr3,imgname-couple--2--1777872133210.jpg" type="image/jpeg" height="390" width="690"/>
            <content:encoded><![CDATA[&lt;p&gt;Hassan: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಮೃತ ರಮ್ಯಾ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪಿ ಚಂದ್ರ, ಆಕೆಯ ಖಾಸಗಿ ಭಾಗಕ್ಕೆ ಒದ್ದು ಹಲ್ಲೆ ನಡೆಸಿದ್ದ. ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಮೃತಪಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಹಾಸನ: ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಹಿನ್ನೆಲೆ ರೊಚ್ಚಿಗೆದ್ದ ವ್ಯಕ್ತಿ ಮಹಿಳೆಯ ಖಾಸಗಿ ಭಾಗಕ್ಕೆ ಒದ್ದು ಕೊಲೆಗೈದ ಘಟನೆ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮ್ಯಾ.ಎ.ಆರ್. (35) ಮೃತ ಮಹಿಳೆಯಾಗಿದ್ದು, ಚಂದ್ರ (41) ಎಂಬಾತ ಕೊಲೆ ಆರೋಪಿಯಾಗಿದ್ದಾನೆ.&lt;/p&gt;&lt;img&gt;&lt;p&gt;ರಮ್ಯಾ ಅವರ ಪತಿ ಉಮೇಶ್ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ನಂತರ ರಮ್ಯಾ ಅದೇ ಗ್ರಾಮದ ಚಂದ್ರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರೆಂದು ತಿಳಿದುಬಂದಿದೆ. ರಮ್ಯಾ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಮನೆಯೊಂದರಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದರು.&lt;/p&gt;&lt;img&gt;&lt;p&gt;ಏಪ್ರಿಲ್ 28ರಂದು ರಮ್ಯಾ ಅವರ ಅತ್ತೆ ಕಾಳಮ್ಮ ನಿಧನರಾದ ಹಿನ್ನೆಲೆಯಲ್ಲಿ, ಅವರು ಬೆಂಗಳೂರಿನಿಂದ ಅತ್ತಿಹಳ್ಳಿ ಗ್ರಾಮಕ್ಕೆ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ, ಆರೋಪಿಯಾದ ಚಂದ್ರ ಮನೆಗೆ ಬಂದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಇದಕ್ಕೆ ರಮ್ಯಾ ವಿರೋಧ ವ್ಯಕ್ತಪಡಿಸಿದ್ದರಿಂದ ಸಿಟ್ಟಿಗೆದ್ದ ಚಂದ್ರ, ಆಕೆಯ ಮೇಲೆ ಹಲ್ಲೆ ನಡೆಸಿ ಖಾಸಗಿ ಭಾಗಕ್ಕೆ ಕಾಲಿನಿಂದ ಒದ್ದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.&lt;/p&gt;&lt;img&gt;&lt;p&gt;ಘಟನೆಯ ನಂತರ ಏಪ್ರಿಲ್ 30 ರಂದು ರಮ್ಯಾ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಂದ್ರನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/hassan-illicit-relationship-case-woman-murdered-for-refusing-intimating-mrq-8kbmdr5"/>
        </item>
        <item>
            <title><![CDATA[Nirmala Sitharaman deepfake video scam: ವಿತ್ತ ಸಚಿವೆ ನಿರ್ಮಲಾ ಹೆಸರಲ್ಲಿ ವೃದ್ಧನಿಗೆ 7.9 ಲಕ್ಷ ರು. ವಂಚನೆ]]></title>
            <link>https://kannada.asianetnews.com/crime/belagavi-senior-citizen-duped-of-rs-7-9-lakh-in-name-of-fm-nirmala-sitharaman-rav/articleshow-8w8oy4y</link>
            <guid isPermaLink="true">https://kannada.asianetnews.com/crime/belagavi-senior-citizen-duped-of-rs-7-9-lakh-in-name-of-fm-nirmala-sitharaman-rav/articleshow-8w8oy4y</guid>
            <pubDate>Thu, 07 May 2026 08:44:56 +0530</pubDate>
            <description><![CDATA[ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್&zwnj;ಫೇಕ್ ವಿಡಿಯೋ ಬಳಸಿ ಷೇರು ಮಾರುಕಟ್ಟೆ ಹೂಡಿಕೆಯ ಆಮಿಷವೊಡ್ಡಿ, ಬೆಳಗಾವಿಯ ಹಿರಿಯ ನಾಗರಿಕರೊಬ್ಬರಿಗೆ ವಂಚಕರು 7.9 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr06rs6bq461q36q5rfeyrpy,imgname-----------------------2026-05-07t084217.731-1778123564234.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಮೇ.7): &lt;/strong&gt;ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಡೀಪ್&zwnj;ಫೇಕ್ ವಿಡಿಯೋಗಳ ಮೂಲಕ ಷೇರು ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 7.9 ಲಕ್ಷ ರು.ವಂಚಿಸಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.&amp;nbsp;&lt;/p&gt;&lt;p&gt;ನಗರದ ಪ್ರಕಾಶ ಗುಬ್ಬಿ (76) ವಂಚನೆಗೆ ಒಳಗಾದವರು. ಈ ಸಂಬಂಧ ಕೊಲ್ಲಾಪುರ ಮೂಲದ ಆದರ್ಶ ಆನಂದ ಹಾಗೂ ಮಹಾರಾಷ್ಟ್ರದ ಬುಲ್ದಾಣಾ ಮೂಲದ ದಾಮೋದರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಸಚಿವರ ಹೆಸರಿನಲ್ಲಿ ಡೀಪ್&zwnj;ಫೇಕ್ ವಿಡಿಯೋಗಳನ್ನು ಬಳಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಲಾಭ ಗಳಿಸಿ ಎಂಬ ಆಮಿಷ ನೀಡಲಾಗುತ್ತಿತ್ತು.&amp;nbsp;&lt;/p&gt;&lt;p&gt;ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿದ್ದ ಪ್ರಕಾಶ ತಮ್ಮ ವಿವರಗಳನ್ನು ನಮೂದಿಸಿದ್ದರು. ಬಳಿಕ ಆರೋಪಿಗಳು ಕರೆ ಮಾಡಿ, ಹೂಡಿಕೆ ಮಾಡಲು ಪ್ರೇರೇಪಿಸಿ ವಂಚಿಸಿದ್ದರು.&lt;/p&gt;&lt;p&gt;ಫೋನ್&zwnj;ಪೇ ಮೂಲಕ ₹16,500, ಬಳಿಕ ಹೆಚ್ಚಿನ ಲಾಭದ ಭರವಸೆ ನೀಡಿ ಆರ್&zwnj;ಟಿಜಿಎಸ್ ಮೂಲಕ ಒಟ್ಟು ₹7.9 ಲಕ್ಷ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿದ್ದಾರೆ. ಹಣವನ್ನು ಹಿಂದಿರುಗಿಸಲು ಕೇಳಿದಾಗ, ಇನ್ನಷ್ಟು ಹಣ ಹೂಡಿದರೆ ಮಾತ್ರ ಮೊತ್ತ ಮತ್ತು ಲಾಭ ದೊರೆಯುತ್ತದೆ ಎಂದು ಹೇಳಿ ಮೋಸ ಮಾಡಲು ಯತ್ನಿಸಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/belagavi-senior-citizen-duped-of-rs-7-9-lakh-in-name-of-fm-nirmala-sitharaman-rav/articleshow-8w8oy4y"/>
        </item>
        <item>
            <title><![CDATA['ಕರ್ನಾಟಕ ಪೊಲೀಸ್ ಮಾದರ್ ಚೋರ್‌': ರಸ್ತೆ ಮಧ್ಯೆ ಎಣ್ಣೆ ಪಾರ್ಟಿ, ಪ್ರಶ್ನಿಸಿದ್ದಕ್ಕೆ ಪೊಲೀಸರ ಸಮವಸ್ತ್ರ ಹರಿದು ಗೂಂಡಾಗಿರಿ!]]></title>
            <link>https://kannada.asianetnews.com/crime/police-uniform-torn-officers-abused-in-bengaluru-during-crackdown-on-public-drinking-party-rav/articleshow-8x43sav</link>
            <guid isPermaLink="true">https://kannada.asianetnews.com/crime/police-uniform-torn-officers-abused-in-bengaluru-during-crackdown-on-public-drinking-party-rav/articleshow-8x43sav</guid>
            <pubDate>Thu, 07 May 2026 10:14:12 +0530</pubDate>
            <description><![CDATA[ಬೆಂಗಳೂರಿನಲ್ಲಿ ನಸುಕಿನಲ್ಲಿ ರಸ್ತೆ ಮಧ್ಯೆ ಮದ್ಯಪಾನ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಕಾನ್&zwnj;ಸ್ಟೇಬಲ್&zwnj;ಗಳ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr0bnqbejpwtf58mt1d82afx,imgname-----------------------2026-05-07t100809.176-1778128706926.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು : ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ನಸುಕಿನಲ್ಲಿ ಮದ್ಯ ಪಾರ್ಟಿ ನಡೆಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್ ಕಾನ್&zwnj;ಸ್ಟೇಬಲ್&zwnj;ಗಳ ಮೇಲೆ ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮರಿಯಪ್ಪನಪಾಳ್ಯ ದೇವ್ ಹರ್ಷ ಹಾಗೂ ಆರ್ಯನ್&zwnj; ಬಂಧಿತರಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಚಾಂದ್ ಹಾಗೂ ಮೃಣಾಲ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಆಕಾಶವಾಣಿ ಲೇಔಟ್&zwnj;ನಲ್ಲಿ ಗಸ್ತಿನಲ್ಲಿದ್ದ ಕಾನ್&zwnj;ಸ್ಟೇಬಲ್&zwnj;ಗಳಾದ ಹನುಮಂತ ಆಲಗುಂಡಿ ಹಾಗೂ ರುದ್ರಪ್ಪ ಮೇಲೆ ಆರೋಪಿಗಳು ಅನುಚಿತ ವರ್ತನೆ ತೋರಿದ್ದರು. ಈ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಪೊಲೀಸರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;ಸಮವಸ್ತ್ರ ಹರಿದು ಗುಂಡಾಗಿರಿ:&lt;/p&gt;&lt;p&gt;ದಾಸರಹಳ್ಳಿ ಸಮೀಪದ ಆಕಾಶವಾಣಿ ಲೇಔಟ್&zwnj;ನ ಮೇ.1 ರಂದು ನಸುಕಿ 3 ಗಂಟೆ ಸುಮಾರಿಗೆ ರಸ್ತೆ ಮಧ್ಯೆ ಕಾರು ನಿಲ್ಲಿಸಿಕೊಂಡು ಖಾಸಗಿ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿಗಳಾದ ಹರ್ಷ, ಚಾಂದ್&zwnj;, ಮೃಣಾಲ್ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಆರ್ಯನ್&zwnj; ಮದ್ಯಗೋಷ್ಠಿ ನಡೆಸುತ್ತಿದ್ದರು. ಅದೇ ವೇಳೆ ಆ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಅಮೃತಹಳ್ಳಿ ಠಾಣೆ ಕಾನ್&zwnj;ಸ್ಟೇಬಲ್&zwnj;ಗಳಾದ ರುದ್ರಪ್ಪ ಹಾಗೂ ಹಣಮಂತ ಬಂದಿದ್ದಾರೆ.&lt;/p&gt;&lt;p&gt;ಆಗ ರಸ್ತೆ ಮಧ್ಯೆ ಮದ್ಯ ಸೇವಿಸುತ್ತಿದ್ದಕ್ಕೆ ಪೊಲೀಸರು ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ಒಬ್ಬಾತ, &lsquo;ಕರ್ನಾಟಕ ಪೊಲೀಸ್ ಮಾದರ್ ಚೋರ್&zwnj;&rsquo; ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಆಗ ಬೈಕ್&zwnj;ನಿಂದ ಲಾಠಿ ತೆಗೆದುಕೊಳ್ಳಲು ಕಾನ್&zwnj;ಸ್ಟೇಬಲ್ ಮುಂದಾದಾಗ ಅವರನ್ನು ಹಿಂದಿನಿಂದ ನಾಲ್ವರು ಹಿಡಿದುಕೊಂಡಿದ್ದಾರೆ.&lt;/p&gt;&lt;p&gt;ಬಳಿಕ ಕಾನ್&zwnj;ಸ್ಟೇಬಲ್&zwnj; ಸಮವಸ್ತ್ರವನ್ನು ಹರಿದು, ಕೈಗಳಿಂದ ಗುದ್ದು ಹಾಗೂ ಕಾಲಿನಿಂದ ಒದ್ದು ಆರೋಪಿಗಳು ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಅಮೃತಹಳ್ಳಿ ಠಾಣೆಯಲ್ಲಿ ಹಲ್ಲೆಗೊಳಗಾದ ಕಾನ್&zwnj;ಸ್ಟೇಬಲ್ ರುದ್ರಪ್ಪ ದೂರು ಆಧರಿಸಿ ಎಫ್&zwnj;ಐಆರ್ ದಾಖಲಾಯಿತು. ಕೊನೆಗೆ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು, ತಪ್ಪಿಸಿಕೊಂಡಿರುವ ಚಾಂದ್ ಹಾಗೂ ಮೃಣಾಲ್ ಪತ್ತೆಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಶ್ರೀಮಂತರ ಮನೆಯ ಮಕ್ಕಳು&lt;/p&gt;&lt;p&gt;ಈ ಆರೋಪಿಗಳ ಪೈಕಿ ಮೃಣಾಲ್ ಹೊರತುಪಡಿಸಿ ಮೂವರು ಸ್ಥಳೀಯವಾಗಿ ಶ್ರೀಮಂತ ಕುಟುಂಬದ ಹಿನ್ನಲೆಯವರಾಗಿದ್ದಾರೆ. ಹಣದ ಮದದಲ್ಲಿ ಈ ಅಹಂಕಾರ ತೋರಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/police-uniform-torn-officers-abused-in-bengaluru-during-crackdown-on-public-drinking-party-rav/articleshow-8x43sav"/>
        </item>
        <item>
            <title><![CDATA[ಫ್ಯಾನ್ಸಿ ಸ್ಟೋರ್‌ನಲ್ಲಿ ಖರೀದಿಗೆ ಹೋದರೂ ಕ್ಯಾರೇ ಎನ್ನದ ಮಾಲೀಕ; ಕೈ ಬಳೆ ಕದ್ದು ಕೈಚಳಕ ತೋರಿಸಿದ ಅಜ್ಜಿ]]></title>
            <link>https://kannada.asianetnews.com/relationship/video-of-woman-stealing-bangles-from-shop-goes-viral-people-flood-the-comments-section-suh/articleshow-f02y51v</link>
            <guid isPermaLink="true">https://kannada.asianetnews.com/relationship/video-of-woman-stealing-bangles-from-shop-goes-viral-people-flood-the-comments-section-suh/articleshow-f02y51v</guid>
            <pubDate>Mon, 04 May 2026 12:21:29 +0530</pubDate>
            <description><![CDATA[&lt;p&gt;Video viral ಒಂದು ಕ್ಷಣದ ಅವಕಾಶ&hellip; ಒಂದು ಸಣ್ಣ ತಪ್ಪು&hellip;ಅಂಗಡಿಯಲ್ಲಿ ಯಾರೂ ನೋಡ್ತಿಲ್ಲ ಅಂತ ಬಳೆ ಕದ್ದು &amp;nbsp;ಹೊರಟಳು. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ವಿಡಿಯೋ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrvr32r1rj29hhhvzzc22dw,imgname-woman-stealing-bangles-1777877126231.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಕಾಲದಲ್ಲಿ &ldquo;ಕ್ಯಾಮೆರಾ ಕಣ್ಣು&rdquo; ಎಲ್ಲೆಲ್ಲೂ ಇದೆ&hellip;ಅಂಗಡಿ, ಮನೆ, ರಸ್ತೆ ಯಾವ ಜಾಗಕ್ಕೂ ಹೋದರೂ ಸಿಸಿಟಿವಿ ನಮ್ಮನ್ನು ಗಮನಿಸುತ್ತಿದೆ. ಕೆಲವೊಮ್ಮೆ ಈ ಕ್ಯಾಮೆರಾಗಳು ಅಚ್ಚರಿಯ ಕ್ಷಣಗಳನ್ನು ಹಿಡಿದರೆ, ಇನ್ನೊಮ್ಮೆ ಸತ್ಯವನ್ನು ಬಯಲಿಗೆಳೆಯುತ್ತವೆ. ಹೀಗೇ ಈಗ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.&lt;/p&gt;&lt;p&gt;ಒಂದು ಸಾಮಾನ್ಯ ದಿನ&hellip; ಒಂದು ಸಣ್ಣ ಅಂಗಡಿ&hellip;ಕೆಲವು ಮಹಿಳೆಯರು ವಸ್ತುಗಳನ್ನು ನೋಡುತ್ತಾ, ಅಂಗಡಿ ಮಾಲೀಕರ ಜೊತೆ ಮಾತನಾಡುತ್ತಿದ್ದಾರೆ. ಎಲ್ಲವೂ ಸಾಮಾನ್ಯವಾಗೇ ಕಾಣಿಸುತ್ತಿದೆ. ಅಷ್ಟರಲ್ಲಿ ಇನ್ನೊಬ್ಬ ಮಹಿಳೆ, ತನ್ನ ಚಿಕ್ಕ ಮಗುವಿನ ಜೊತೆ ಅಂಗಡಿಗೆ ಬರುತ್ತಾಳೆ. ಮೊದಲಿಗೆ ಅವಳು ಶಾಂತವಾಗಿ ನಿಂತು ಸುತ್ತಲೂ ನೋಡುತ್ತಾಳೆ&hellip; ಯಾರೂ ಗಮನಿಸುತ್ತಿಲ್ಲ ಅನ್ನೋದನ್ನು ಖಚಿತಪಡಿಸಿಕೊಳ್ಳುತ್ತಾಳೆ. ನಂತರ ನಿಧಾನವಾಗಿ ಒಂದು ಬಳೆಯನ್ನು ತೆಗೆದು, ಯಾರಿಗೂ ತಿಳಿಯದಂತೆ ಹೊರಟು ಹೋಗಲು ಪ್ರಯತ್ನಿಸುತ್ತಾಳೆ.&lt;/p&gt;&lt;p&gt;ಆಕೆ ಯೋಚಿಸಿರಬಹುದು&mdash;&ldquo;ಯಾರಿಗೂ ಗೊತ್ತಾಗಲ್ಲ&hellip;ಆದರೆ ಒಂದು ಸಣ್ಣ ವಿಷಯ ಮಿಸ್ ಆಗಿತ್ತು&hellip; ಕ್ಯಾಮೆರಾ. ಈ ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಹಿಡಿದಿದ್ದು, ಈಗ ಅದು ಇಂಟರ್ನೆಟ್&zwnj;ನಲ್ಲಿ ವೈರಲ್ ಆಗಿದೆ. @gharkekalesh ಎಂಬ ಖಾತೆಯಿಂದ X ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಪೋಸ್ಟ್ ಮಾಡಿದ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ.&lt;/p&gt;&lt;p&gt;ಕಾಮೆಂಟ್&zwnj;ಗಳಲ್ಲಿ ಜನರ ಪ್ರತಿಕ್ರಿಯೆಗಳು ಮಿಶ್ರವಾಗಿವೆ&mdash;ಕೆಲವರು ಕೃತ್ಯವನ್ನು ಖಂಡಿಸುತ್ತಿದ್ದಾರೆ, ಇನ್ನು ಕೆಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಆಂಟಿ ಕ್ಯಾಮೆರಾ ಡೆಕೊರೇಷನ್&zwnj; ಎಂದು ಅಂದುಕೊಂಡಿರ್ಬೇಕು&hellip; ಸಿಕ್ಕಿಬಿದ್ದಿದ್ದಾರೆ!&rdquo; ಅಂತ ಒಬ್ಬರು ಬರೆಯುತ್ತಾರೆ. ಇನ್ನೊಬ್ಬರು &mdash; &ldquo;ಸಿಸಿಟಿವಿ ಸತ್ಯವನ್ನು ಬಹಿರಂಗಪಡಿಸಿತು!&rdquo; ಮತ್ತೊಬ್ಬರು &mdash; &ldquo;ಇದಕ್ಕಾಗಿಯೇ ಶಿಕ್ಷಣ ಮುಖ್ಯ!&rdquo; ಅಂತ ಹೇಳಿದ್ದಾರೆ.&lt;/p&gt;&lt;p&gt;ಒಂದು ಚಿಕ್ಕ ಕ್ಷಣ&hellip; ಒಂದು ಸಣ್ಣ ನಿರ್ಧಾರ&hellip; ಆದರೆ ಅದು ಇಡೀ ಜಗತ್ತಿನ ಮುಂದೆ ಬರುವಂತೆ ಮಾಡಿಬಿಟ್ಟಿದೆ! ಈ ಘಟನೆ ಒಂದೇ ಸಂದೇಶ ಕೊಡುತ್ತದೆ ನಾವು ಎಲ್ಲಿ ಇದ್ದರೂ, ಕ್ಯಾಮೆರಾ ನಮ್ಮ ಮೇಲೆ ಕಣ್ಣಿಟ್ಟೇ ಇರುತ್ತದೆ!&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;p&gt;Aunty was Unaware of CCTV pic.twitter.com/JO3KDZch9q&lt;/p&gt;&lt;p&gt;&mdash; Ghar Ke Kalesh (@gharkekalesh) May 3, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Sushma Hegde</dc:creator>
            <atom:link href="https://kannada.asianetnews.com/relationship/video-of-woman-stealing-bangles-from-shop-goes-viral-people-flood-the-comments-section-suh/articleshow-f02y51v"/>
        </item>
        <item>
            <title><![CDATA[ರಾಯಚೂರು: ಅಡುಗೆ ಮಾಡೋಕೆ ಬರಲ್ಲ ಅಂದಿದ್ದೇ ತಪ್ಪಾ? ತವರುಮನೆಯವರನ್ನ ಕರೆಸಿ ಗಂಡನ ಮೇಲೆ ಹಲ್ಲೆ; ಬೀಗರ ದಾಳಿಗೆ ಮಾವ ಗಂಭೀರ ಗಾಯ!]]></title>
            <link>https://kannada.asianetnews.com/gallery/karnataka-districts/raichur-shock-wife-calls-family-to-attack-husband-over-cooking-dispute-ffooz0g</link>
            <guid isPermaLink="true">https://kannada.asianetnews.com/gallery/karnataka-districts/raichur-shock-wife-calls-family-to-attack-husband-over-cooking-dispute-ffooz0g</guid>
            <pubDate>Tue, 05 May 2026 12:08:33 +0530</pubDate>
            <description><![CDATA[&lt;p&gt;ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ..&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvcr3b03s0yshg3dwabrhbg,imgname-----------------------2026-05-05t114006.321-1777962061152.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ..&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಯಾವುದಕ್ಕೂ ಕೊರತೆ ಇಲ್ಲದ ಅದೊಂದು ಸುಂದರ ಸಂಸಾರ. ಗಂಡ ಬ್ಯಾಂಕ್ ಉದ್ಯೋಗಿ, ಹೆಂಡತಿ ಕೃಷಿ ಇಲಾಖೆಯಲ್ಲಿ ಅಧಿಕಾರಿ. ಇಬ್ಬರೂ ಸುಶಿಕ್ಷಿತರೇ.. ಆದರೆ, ಅಡುಗೆ ಮನೆಯಲ್ಲಿ ಶುರುವಾದ ಒಂದು ಸಣ್ಣ 'ಉಪ್ಪು-ಖಾರ'ದ ಜಗಳ, ಇಂದು ಭಯಂಕರ ಹೊಡೆದಾಡಿಕೊಂಡು ರಕ್ತಪಾತಕ್ಕೆ ಬಂದು ನಿಂತಿದೆ.. ರಾಯಚೂರಿನ ಹೊಸೂರು ರಸ್ತೆಯಲ್ಲಿ ನಡೆದ ಈ ಘಟನೆ ಈಗ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.&lt;/p&gt;&lt;img&gt;&lt;p&gt;ಬ್ಯಾಂಕ್ ಉದ್ಯೋಗಿ ಶಿವರಾಜ್ ಹಾಗೂ ಕೃಷಿ ಇಲಾಖೆಯ ಶೋಭಾ ದಂಪತಿಗಳ ನಡುವೆ ಕ್ಷಲ್ಲಕ ಕಾರಣಕ್ಕೆ ಆಗಾಗ ಮನಸ್ತಾಪವಾಗುತ್ತಿತ್ತು. 'ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ' ಎಂದು ಪತಿ ಶಿವರಾಜ್ ಕಿರಿಕ್ ತೆಗೆದಿದ್ದೇ ಈ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ.. ಮಾತಿಗೆ ಮಾತು ಬೆಳೆದು, ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಪತಿಯ ಮಾತಿನಿಂದ ಕೆರಳಿದ ಪತ್ನಿ ಶೋಭಾ, ತಕ್ಷಣವೇ ತನ್ನ ತವರು ಮನೆಯವರಿಗೆ ಫೋನ್ ಮಾಡಿದ್ದಾರೆ. ಮಗಳ ಕರೆಯನ್ನು ಕೇಳಿ ಆವೇಶದಿಂದ ಬಂದ ಶೋಭಾ ಮನೆಯವರು, ಶಿವರಾಜ್ ಅವರ ಮನೆಗೆ ನುಗ್ಗಿ ರೇಗಾಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮಾರಾಮಾರಿಯೇ ನಡೆದುಹೋಗಿದೆ.&lt;/p&gt;&lt;img&gt;&lt;p&gt;ಬ್ಯಾಂಕ್ ಉದ್ಯೋಗಿ ಶಿವರಾಜ್ ಹಾಗೂ ಕೃಷಿ ಇಲಾಖೆಯ ಶೋಭಾ ದಂಪತಿಗಳ ನಡುವೆ ಕ್ಷಲ್ಲಕ ಕಾರಣಕ್ಕೆ ಆಗಾಗ ಮನಸ್ತಾಪವಾಗುತ್ತಿತ್ತು. 'ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲ' ಎಂದು ಪತಿ ಶಿವರಾಜ್ ಕಿರಿಕ್ ತೆಗೆದಿದ್ದೇ ಈ ದೊಡ್ಡ ರಂಪಾಟಕ್ಕೆ ಕಾರಣವಾಗಿದೆ.. ಮಾತಿಗೆ ಮಾತು ಬೆಳೆದು, ಇಡೀ ಮನೆ ರಣರಂಗವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಪತಿಯ ಮಾತಿನಿಂದ ಕೆರಳಿದ ಪತ್ನಿ ಶೋಭಾ, ತಕ್ಷಣವೇ ತನ್ನ ತವರು ಮನೆಯವರಿಗೆ ಫೋನ್ ಮಾಡಿದ್ದಾರೆ. ಮಗಳ ಕರೆಯನ್ನು ಕೇಳಿ ಆವೇಶದಿಂದ ಬಂದ ಶೋಭಾ ಮನೆಯವರು, ಶಿವರಾಜ್ ಅವರ ಮನೆಗೆ ನುಗ್ಗಿ ರೇಗಾಡಿದ್ದಾರೆ. ನೋಡನೋಡುತ್ತಿದ್ದಂತೆಯೇ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಮಾರಾಮಾರಿಯೇ ನಡೆದುಹೋಗಿದೆ.&lt;/p&gt;&lt;img&gt;&lt;p&gt;ಬಂದವರು ಸುಮ್ಮನೆ ಇರಲಿಲ್ಲ. ಪತಿ ಶಿವರಾಜ್ ಮಾತ್ರವಲ್ಲದೆ, ಅವರ ವಯಸ್ಸಾದ ತಂದೆ ದೇವಿಂದ್ರಪ್ಪ, ತಾಯಿ ಲಕ್ಷ್ಮಿ ಮತ್ತು ಸಹೋದರ ವೆಂಕಟೇಶ್&zwnj; ಮೇಲೆಯೂ ಭೀಕರವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೀಗರಿಂದಲೇ ಬೀಗರ ಮೇಲೆ ನಡೆದ ಈ ದಾಳಿಯಿಂದ ಇಡೀ ಕುಟುಂಬ ಕಂಗಾಲಾಗಿದೆ.&lt;/p&gt;&lt;p&gt;ಈ ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಿವರಾಜ್ ತಂದೆ ದೇವಿಂದ್ರಪ್ಪ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ರಾಯಚೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಶೋಭಾ ಸೇರಿದಂತೆ ಐವರ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶೋಭಾ, ರಂಜಿತ್ ಕುಮಾರ್, ತಾಯಣ್ಣಗೌಡ, ಅಕ್ಷಯ್ ಕುಮಾರ್ ಹಾಗೂ ಈರಣ್ಣಗೌಡ ಎಂಬುವವರ ಮೇಲೆ ಎಫ್&zwnj;ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಒಂದು ಹೊತ್ತಿನ ಅಡುಗೆಯ ಜಗಳ, ಇಂದು ನ್ಯಾಯಾಲಯ, ಪೊಲೀಸ್ ಮೆಟ್ಟಿಲೇರುವಂತೆ ಮಾಡಿದೆ ಎಂಥಾ ಕರ್ಮ!&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/raichur-shock-wife-calls-family-to-attack-husband-over-cooking-dispute-ffooz0g"/>
        </item>
        <item>
            <title><![CDATA[West Bengal: ಟಿಎಂಸಿ ರೇ*ಪಿಸ್ಟ್ ಕಪಿಮುಷ್ಟಿಯಿಂದ ಹೆಣ್ಣುಮಕ್ಕಳ ಕಾಪಾಡಿದ ದಿಟ್ಟೆಗೆ ಭರ್ಜರಿ ಗೆಲುವು]]></title>
            <link>https://kannada.asianetnews.com/politics/west-bengal-hingalganj-election-results-2026-rekha-patra-wins-hingalganj-for-bjp-suc/articleshow-g2l3652</link>
            <guid isPermaLink="true">https://kannada.asianetnews.com/politics/west-bengal-hingalganj-election-results-2026-rekha-patra-wins-hingalganj-for-bjp-suc/articleshow-g2l3652</guid>
            <pubDate>Mon, 04 May 2026 22:52:22 +0530</pubDate>
            <description><![CDATA[ಪಶ್ಚಿಮ ಬಂಗಾಳದ ಸಂದೇಶ್ ಖಾಲಿಯಲ್ಲಿ ಟಿಎಂಸಿ ನಾಯಕ ಷಹಜಹಾನ್ ಶೇಖ್ ವಿರುದ್ಧ ನಡೆದ ದೌರ್ಜನ್ಯ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ರೇಖಾ ಪಾತ್ರ, ಮಹಿಳೆಯರ ಧ್ವನಿಯಾಗಿ ನಿಂತರು. ಅವರ ಈ ಧೈರ್ಯದ ಹೋರಾಟವೇ ಅವರನ್ನು ಬಿಜೆಪಿಯಿಂದ ಶಾಸಕಿಯಾಗಿ ಆಯ್ಕೆಗೊಳ್ಳುವಂತೆ ಮಾಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kqt04c1034tktphb4ayanje4,imgname-rekha-patra-1777915277344.jpg" type="image/jpeg" height="390" width="690"/>
            <content:encoded><![CDATA[&lt;p&gt;2024ರಲ್ಲಿ ಪಶ್ಚಿಮ ಬಂಗಾಳದ ಸಂದೇಶ್​ ಖಾಲಿ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿದ್ದ ಅ*ತ್ಯಾಚಾರ ಪ್ರಕರಣದಿಂದಾಗಿ. ಸಂದೇಶ್ ಖಾಲಿ ಪಶ್ಚಿಮ ಬಂಗಾಳದ ಉತ್ತರ 24 ಪರ್ಗಣಾಸ್ ಜಿಲ್ಲೆಯಲ್ಲಿರುವ ಒಂದು ದ್ವೀಪ ಪ್ರದೇಶ. ಇಲ್ಲಿ ಟಿಎಂಸಿ (TMC) ನಾಯಕ ಷಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ನಡೆಸಿದರೆನ್ನಲಾದ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಭೂ ಕಬಳಿಕೆಯ ಆರೋಪಗಳಿಂದಾಗಿ ಇದು ರಾಷ್ಟ್ರಮಟ್ಟದಲ್ಲಿ ಭಾರೀ ವಿವಾದ ಮತ್ತು ದೊಡ್ಡ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಶೇಖ್ ಷಹಜಹಾನ್ ಮತ್ತವನ ತಂಡ ಆ ಊರಿನ ಹೆಣ್ಣುಮಕ್ಕಳನ್ನು ಪಾರ್ಟಿ ಆಫೀಸಿಗೆ ಕರೆದು ಅ*ತ್ಯಾಚಾರ ಮಾಡುತ್ತಿದ್ದರು ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಆದರೆ ಆತನ ವಿರುದ್ಧ ಮಹಿಳೆಯರು ದನಿ ಎತ್ತಲು ಹೆದರುತ್ತಿದ್ದರು.&lt;/p&gt;&lt;h2&gt;&lt;strong&gt;ನ್ಯಾಯಕ್ಕಾಗಿ ಹೆಣ್ಣುಮಗಳ ಹೋರಾಟ&lt;/strong&gt;&lt;/h2&gt;&lt;p&gt;ಊರಿನ ಜನರ ತಾಳ್ಮೆಯ ಕಟ್ಟೆಯೊಡೆದಾಗ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲು ರೌಡಿಗಳನ್ನೇ ಎದುರು ಹಾಕಿಕೊಂಡು ಹೋರಾಟಕ್ಕೆ ಇಳಿದವರೇ ರೇಖಾ ಪಾತ್ರಾ (Rekha Patra). ಈ ಘಟನೆಯು ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿಯ ನಡುವೆ ತೀವ್ರ ರಾಜಕೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಬಿಜೆಪಿ ನಾಯಕರು ಸ್ಥಳೀಯರಿಗೆ ಬೆಂಬಲವಾಗಿ ಪ್ರತಿಭಟನೆಗಳನ್ನು ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೀಗೆ ಮಹಿಳೆಯ ದನಿಯಾಗಿ ನಿಂತ ಇವರು ಇಂದು ಟಿಎಂಸಿಯನ್ನು ಮಣಿಸಿ ಜಯಭೇರಿ ಬಾರಿಸಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿ &amp;nbsp;ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಧೈರ್ಯ ತುಂಬಿದ್ದ ರೇಖಾ&lt;/strong&gt;&lt;/h3&gt;&lt;p&gt;2024ರ ಜನವರಿಯಲ್ಲಿ ಪಡಿತರ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಷಹಜಹಾನ್ ಶೇಖ್ ಮನೆಗೆ ದಾಳಿ ಮಾಡಲು ತೆರಳಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳ ಮೇಲೆ ಆತನ ಬೆಂಬಲಿಗರು ಹಲ್ಲೆ ನಡೆಸಿದರು. ಈ ಘಟನೆಯ ನಂತರ ಶೇಖ್ ನಾಪತ್ತೆಯಾಗಿದ್ದನು. ಶೇಖ್ ನಾಪತ್ತೆಯಾದ ಬಳಿಕ, ಸಂದೇಶ್ ಖಾಲಿಯ ನೂರಾರು ಸ್ಥಳೀಯ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದರು. ಷಹಜಹಾನ್ ಶೇಖ್ ಮತ್ತು ಆತನ ಆಪ್ತರು ವರ್ಷಗಳಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಮತ್ತು ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಂಡು ಮೀನುಗಾರಿಕೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪಗಳನ್ನು ಮಾಡಿದರು. ಇವರೆಲ್ಲ ಇಷ್ಟು ಮುಂದೆ ಬಂದು ಧೈರ್ಯ ತುಂಬಲು ಕಾರಣವಾಗಿದ್ದು ಈ ರೇಖಾ.&lt;/p&gt;&lt;h3&gt;&lt;strong&gt;ಬಿಜೆಪಿ ಟಿಕೆಟ್​ ಸಿಕ್ಕಿತ್ತು&lt;/strong&gt;&lt;/h3&gt;&lt;p&gt;ದೀರ್ಘಕಾಲ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಷಹಜಹಾನ್ ಶೇಖ್&zwnj;ನನ್ನು ಸುಮಾರು 55 ದಿನಗಳ ನಂತರ ಪಶ್ಚಿಮ ಬಂಗಾಳ ಪೊಲೀಸರು 2024ರ ಫೆಬ್ರವರಿಯಲ್ಲಿ ಬಂಧಿಸಿದರು. ಆತನನ್ನು ಪಕ್ಷದಿಂದಲೂ ಅಮಾನತುಗೊಳಿಸಲಾಯಿತು. ಹೀಗೆ ಧೈರ್ಯದಿಂದ ಮುಂದೆ ಬಂದು ಹೋರಾಟ ನಡೆಸಿದ ರೇಖಾ ಅವರನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶಹಬ್ಬಾಸ್​ಗಿರಿ ಕೊಟ್ಟಿದ್ದೂ ಅಲ್ಲದೇ, ಬಿಜೆಪಿಗೆ ಟಿಕೆಟ್​ ಅನ್ನೂ ಕೊಡಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/politics/west-bengal-hingalganj-election-results-2026-rekha-patra-wins-hingalganj-for-bjp-suc/articleshow-g2l3652"/>
        </item>
        <item>
            <title><![CDATA[ತುಮಕೂರಿನ ಜೆರಾಕ್ಸ್​ ಅಂಗಡಿಯಲ್ಲಿ ಲವ್​: ಗರ್ಭಿಣಿ ಪತ್ನಿ ಬಿಟ್ಟು ಮತ್ತೊಂದು ಮದ್ವೆಗೆ ರೆಡಿಯಾದ ಪತಿ]]></title>
            <link>https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk</link>
            <guid isPermaLink="true">https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk</guid>
            <pubDate>Wed, 06 May 2026 13:41:26 +0530</pubDate>
            <description><![CDATA[ತುಮಕೂರಿನಲ್ಲಿ ಏಳು ವರ್ಷಗಳ ಕಾಲ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಮದುವೆಯಾದ ಯುವತಿಯೊಬ್ಬರು ಗರ್ಭಿಣಿಯಾದಾಗ, ಆಕೆಯ ಪತಿ ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಆ ಯುವತಿ, ನ್ಯಾಯಕ್ಕಾಗಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqy5d4738d4zs2k5q2nm1sdy,imgname-tumkur-incident-1778055024867.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೆರಾಕ್ಸ್​ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಲವ್​ ಮಾಡಿ, ಮದುವೆಯಾಗಿ ಈಗ ಆಕೆ ಗರ್ಭಿಣಿಯಾದಾಗ ಇನ್ನೊಬ್ಬರ ಜೊತೆ ಮದುವೆಯಾಗಲು ಹೊರಟ ವ್ಯಕ್ತಿಯೊಬ್ಬನ ಆಘಾತಕಾರಿ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಇದೀಗ ಆ ಯುವತಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಏಳು ವರ್ಷ ಲವ್​ ಮಾಡಿ, ಬಳಿಕ ಮದುವೆಯಾಗಿ ಗರ್ಭಿಣಿಯಾದ ಬಳಿಕ ತನ್ನ ಗಂಡ ತನ್ನನ್ನು ಬಿಟ್ಟು ಬೇರೊಬ್ಬರನ್ನು ಮದುವೆಯಾಗಲು ಹೊರಟಿದ್ದು ತನಗೆ ನ್ಯಾಯ ಕೊಡಿಸುವಂತೆ ಆಕೆ ಕೇಳಿಕೊಂಡಿದ್ದಾರೆ.&lt;/p&gt;&lt;p&gt;ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಯುವತಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಜೆರಾಕ್ಸ್​ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಜೆರಾಕ್ಸ್ ಬಂದಿದ್ದ ಬೊಮ್ಮಾ ನಾಯಕ್ ಈಕೆಯನ್ನು ನೋಡಿದ್ದ. ಕೊನೆಗೆ ಇಬ್ಬರಲ್ಲಿಯೂ ಪ್ರೀತಿ ಅರಳಿತ್ತು. ಪರಸ್ಪರ ಪ್ರೀತಿಯ ವಿಷಯ ಮಾತನಾಡಿದ್ದರು. ಏಳು ವರ್ಷಗಳವರೆಗೆ ಪ್ರೀತಿ ನಡೆದಿತ್ತು. ಬಳಿಕ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಒಂದೂವರೆ ವರ್ಷವಾಗಿದೆ.&lt;/p&gt;&lt;h2&gt;&lt;strong&gt;ಗರ್ಭಿಣಿಯಾದ ಬಳಿಕ ದೂರ&lt;/strong&gt;&lt;/h2&gt;&lt;p&gt;ಇದೀಗ ಯುವತಿ ಗರ್ಭಿಣಿಯಾಗಿದ್ದಾರೆ. ಗರ್ಭಿಣಿಯಾಗುತ್ತಲೇ ಈ ಮದುವೆಗೆ ತನ್ನ ಮನೆಯವರ ವಿರೋಧ ಇರುವ ಕಾರಣ, ಬೇರೊಂದು ಮದುವೆಯಾಗಲು ಹೊರಟಿದ್ದಾರೆ ತನ್ನ ಪತಿ ಎಂದು ಯುವತಿ ಪೊಲೀಸರಲ್ಲಿ ದೂರಿದ್ದಾರೆ. ನಾವಿಬ್ಬರೂ ಏಳು ವರ್ಷಗಳ ಕಾಲ ಜೊತೆಗಿದ್ದೆವು. ತಮ್ಮದು ಬೇರೆ ಜಾತಿ. ಆದ್ದರಿಂದ ಅವರ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಇದರ ಹೊರತಾಗಿಯೂ ನಾವಿಬ್ಬರೂ ಮದುವೆಯಾದೆವು. ಆದರೆ ಇದೀಗ ನಾನು ಪ್ರೆಗ್ನೆಂಟ್​ ಆದ ಬಳಿಕ ಕಿರುಕುಳ ಕೊಡುತ್ತಿದ್ದಾರೆ. ಅವರ ಮನೆಯವರು ಬೇರೊಂದು ಮದುವೆಗೆ ರೆಡಿ ಮಾಡಿದ್ದರೂ, ಪತಿ ಏನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಯುವತಿ.&lt;/p&gt;&lt;h3&gt;&lt;strong&gt;ಎಫ್​ಐಆರ್​ ದಾಖಲು&lt;/strong&gt;&lt;/h3&gt;&lt;p&gt;ಪೊಲೀಸರಲ್ಲಿ ದೂರಿರುವ ಯುವತಿ, ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊ*ಲೆ ಬೆದರಿಕೆ ದೂರು ದಾಖಲಿಸಿದ್ದಾರೆ. ಸದ್ಯ ಯುವತಿ ಆರು ತಿಂಗಳ ಗರ್ಭಿಣಿ. ನನಗೆ ಪತಿ ಬೇಕು. ನ್ಯಾಯ ಬೇಕು. ಹುಟ್ಟುವ ಮಗುವಿಗೆ ಅಪ್ಪ ಬೇಕು. ನ್ಯಾಯ ಕೊಡಿಸಿ ಎಂದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪತಿ, ಆತನ ತಾಯಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/husband-leaves-pregnant-wife-and-prepares-for-another-marriage-in-tumkur-suc/articleshow-l1hhnqk"/>
        </item>
        <item>
            <title><![CDATA[ಮುಸ್ಲಿಂ ಶ್ರೀಮಂತರೇ ಈ ಟೀಚರ್​ ಟಾರ್ಗೆಟ್​: 9ನೇ ಮದ್ವೆಗೆ ರೆಡಿಯಾಗಿ ಸಿಕ್ಕಿಬಿದ್ದ ಸುಂದ್ರಿಯ ರೋಚಕ ಸ್ಟೋರಿ]]></title>
            <link>https://kannada.asianetnews.com/women/robber-bride-looted-eight-husbands-9th-marriage-caused-her-downfall-suc/articleshow-m6zeaa2</link>
            <guid isPermaLink="true">https://kannada.asianetnews.com/women/robber-bride-looted-eight-husbands-9th-marriage-caused-her-downfall-suc/articleshow-m6zeaa2</guid>
            <pubDate>Wed, 06 May 2026 12:31:54 +0530</pubDate>
            <description><![CDATA[ನಾಗ್ಪುರದಲ್ಲಿ ಶಿಕ್ಷಕಿಯೊಬ್ಬಳು 8 ಮಂದಿಯನ್ನು ಮದುವೆಯಾಗಿ, ಲಕ್ಷಾಂತರ ರೂಪಾಯಿ ವಂಚಿಸಿ 9ನೇ ಮದುವೆಗೆ ಸಿದ್ಧಳಾಗಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವೈವಾಹಿಕ ಜಾಲತಾಣಗಳ ಮೂಲಕ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು, ತನ್ನ ಕಣ್ಣೀರಿನ ಕಥೆ ಹೇಳಿ ಬ್ಲ್ಯಾಕ್&zwnj;ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು.]]></description>
            <media:content url="https://static.asianetnews.com/images/w-1280,h-720,format-jpg,imgid-01kqy1dvp96kxn1av79s41a6qt,imgname-robber-bride-1778050854601.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಲವಾರು ಮಂದಿಯನ್ನು ಮೋಸ ಮಾಡಿ ಮದುವೆಯಾದರು ಎಂದಾಕ್ಷಣ ಪುರುಷರಷ್ಟೇ ನೆನಪಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ 8 ಮಂದಿಯನ್ನು ಮದ್ವೆಯಾಗಿ ಇದೀಗ 9ನೇ ಮದ್ವೆಯಾಗುವ ಸಂಭ್ರಮದಲ್ಲಿರುವಾಗಲೇ ಪೊಲೀಸರು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಇದು ನಡೆದಿರುವುದು ಮಹಾರಾಷ್ಟ್ರದ ನಾಗ್ಪುರದಲ್ಲಿ. ದರೋಡೆಕೋರ ವಧು ಎಂದು ಈಕೆಗೆ ಹೆಸರು ಇಡಲಾಗಿದೆ. ಏಕೆಂದರೆ, ಈಕೆ ಎಂಟು ಮಂದಿಯನ್ನು ಮದುವೆಯಾಗಿ ಅವರಿಂದ ಲಕ್ಷ ಲಕ್ಷ ಹಣವನ್ನು ಲೂಟಿ ಮಾಟಿ 9ನೇ ಮದ್ವೆಗೆ ರೆಡಿಯಾಗಿದ್ದಳು!&lt;/p&gt;&lt;h2&gt;&lt;strong&gt;ಒಬ್ಬನಿಗೆ ದೂರು&lt;/strong&gt;&lt;/h2&gt;&lt;p&gt;ಅಂದಹಾಗೆ ಈಕೆಯ ಹೆಸರು ಸಮೀರಾ ಫಾತಿಮಾ. ಎಂಟು ಮಂದಿಯಲ್ಲಿ ಒಬ್ಬಾತ ಧೈರ್ಯ ಮಾಡಿ ಕಂಪ್ಲೇಂಟ್​ ಕೊಟ್ಟಾಗ ಪ್ರಕರಣ ಬಯಲಿಗೆ ಬಂದಿದೆ. ಆ ಸಮಯದಲ್ಲಿ ಇವಳು 9ನೇ ಬಕ್ರಾನನ್ನು ಹುಡುಕುತ್ತಿದ್ದಳು ಎನ್ನುವುದು ತಿಳಿದಿದೆ. ಪ್ರಾಥಮಿಕ ಪೊಲೀಸ್ ತನಿಖೆಯಲ್ಲಿ ಸಮೀರಾ, ತನ್ನ ಗಂಡಂದಿರನ್ನು ಬ್ಲ್ಯಾಕ್&zwnj;ಮೇಲ್ ಮಾಡುವ ಮೂಲಕ ಹಣ ಸುಲಿಗೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ವಿವಿಧ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್&zwnj;ನೊಂದಿಗೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;ವೃತ್ತಿಯಲ್ಲಿ ಶಿಕ್ಷಕಿ&lt;/strong&gt;&lt;/h3&gt;&lt;p&gt;ವಿಚಿತ್ರ ಎಂದರೆ ಈಕೆ ವಿದ್ಯಾವಂತೆ ಮಾತ್ರವಲ್ಲದೇ ವೃತ್ತಿಯಲ್ಲಿ ಶಿಕ್ಷಕಿ ಕೂಡ. ಕಳೆದ 15 ವರ್ಷಗಳಿಂದ ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಆಕೆ ಹಲವಾರು ಪುರುಷರನ್ನು ವಂಚಿಸಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆಕೆಯ ಗಂಡನೊಬ್ಬ ದೂರು ನೀಡಿದಾಗ ವಿಷಯ ಬೆಳಿಕೆಗೆ ಬಂದಿದೆ. ಒಬ್ಬನಿಂದ 50 ಲಕ್ಷ ರೂ ಮತ್ತು ಮತ್ತೊಬ್ಬನಿಂದ 15 ಲಕ್ಷ ನಗು ಮಾತ್ರವಲ್ಲದೇ, ಹಲವು ಲಕ್ಷ ರೂಪಾಯಿಗಳನ್ನು ವಿವಿಧ ಪತಿಯಂದಿರಿಂದ ಬ್ಯಾಂಕ್ ವರ್ಗಾವಣೆ ಮೂಲಕ ಸುಲಿಗೆ ಮಾಡಿದ್ದಾಳೆ ಎನ್ನುವುದು ತಿಳಿದಿದೆ. ಅಷ್ಟೇ ಅಲ್ಲದೇ ರಿಸರ್ವ್ ಬ್ಯಾಂಕ್ ಅಧಿಕಾರಿಯನ್ನೂ ವಂಚಿಸಿದ್ದಾಳೆ ಎಂದು ಆರೋಪಿಸಲಾಗಿದೆ.&lt;/p&gt;&lt;h3&gt;&lt;strong&gt;ನೋವಿನ ಸ್ಟೋರಿ ಹೇಳ್ಕೊಂಡು ಮರುಳು&lt;/strong&gt;&lt;/h3&gt;&lt;p&gt;ಸಮೀರಾ ಬಕ್ರಾಗಳನ್ನು ಗುರುತಿಸಲು ಮತ್ತು ಆಮಿಷವೊಡ್ಡಲು ವೈವಾಹಿಕ ವೆಬ್&zwnj;ಸೈಟ್&zwnj;ಗಳು ಮತ್ತು ಫೇಸ್&zwnj;ಬುಕ್ ಅನ್ನು ಬಳಸುತ್ತಿದ್ದರು ಎಂದು ತನಿಖಾಧಿಕಾರಿಗಳು ಮತ್ತಷ್ಟು ಬಹಿರಂಗಪಡಿಸಿದ್ದಾರೆ. ಅವರು ಫೇಸ್&zwnj;ಬುಕ್ ಅಥವಾ ವಾಟ್ಸಾಪ್ ಕರೆಗಳ ಮೂಲಕ ಅವರನ್ನು ಸಂಪರ್ಕಿಸುತ್ತಿದ್ದರು ಮತ್ತು ಅವರಿಗೆ ತನ್ನ ಕಣ್ಣೀರ ಕಥೆ ಹೇಳಿ ಮರುಳು ಮಾಡುತ್ತಿದ್ದಳು. ಅಸಹಾಯಕ ವಿಚ್ಛೇದಿತ ಮತ್ತು ಮಗುವಿನ ತಾಯಿಯಾಗಿ ನಟಿಸುವ ಮೂಲಕ, ಅವರು ಸಹಾನುಭೂತಿ ಮತ್ತು ವಿಶ್ವಾಸವನ್ನು ಗಳಿಸುತ್ತಿದ್ದಳು. ಹಿಂದಿನ ಪ್ರಕರಣವೊಂದರಲ್ಲಿ, ಗರ್ಭಿಣಿ ಎಂದು ಸುಳ್ಳು ಹೇಳಿಕೊಳ್ಳುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಕೊನೆಗೂ ಈಗ ಸಿಕ್ಕಿಬಿದ್ದಿದ್ದಾಳೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/women/robber-bride-looted-eight-husbands-9th-marriage-caused-her-downfall-suc/articleshow-m6zeaa2"/>
        </item>
        <item>
            <title><![CDATA[140 ಕಿ.ಮೀ ಬೆನ್ನತ್ತಿ ಕುಖ್ಯಾತ ಕಳ್ಳ ಜಂಗ್ಲಿ ಪ್ರಕಾಶ್‌ನನ್ನು ಹಿಡಿದು ಬಂಧಿಸಿದ ಪೊಲೀಸರು]]></title>
            <link>https://kannada.asianetnews.com/bengaluru-urban/bengaluru-police-arrest-notorious-thief-jangli-prakash-after-140-km-chase-mrq/articleshow-n88u6a8</link>
            <guid isPermaLink="true">https://kannada.asianetnews.com/bengaluru-urban/bengaluru-police-arrest-notorious-thief-jangli-prakash-after-140-km-chase-mrq/articleshow-n88u6a8</guid>
            <pubDate>Wed, 06 May 2026 05:16:00 +0530</pubDate>
            <description><![CDATA[ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳ ಜಂಗ್ಲಿ ಪ್ರಕಾಶ್&zwnj;ನನ್ನು ಇಂದಿರಾನಗರ ಪೊಲೀಸರು 140 ಕಿ.ಮೀ. ಬೆನ್ನಟ್ಟಿ ಬಂಧಿಸಿದ್ದಾರೆ. ಆರೋಪಿಯಿಂದ 1.15 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತನ ವಿರುದ್ಧ 66 ಪ್ರಕರಣಗಳು ದಾಖಲಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq75jc5kkg1qwexy5bwmedgb,imgname-fotojet---2026-04-27t152027.943-1777283444915.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು 140 ಕಿ.ಮೀ. ಬೆನ್ನು ಹತ್ತಿ ಇಂದಿರಾ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.&lt;/p&gt;&lt;p&gt;ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾರ್ತ್&zwnj; ಟೌನ್ ಲೇಔಟ್&zwnj; ನಿವಾಸಿ ಬಿ.ಪ್ರಕಾಶ್ ಅಲಿಯಾಸ್&zwnj; ಜಂಗ್ಲಿ ಬಂಧಿತನಾಗಿದ್ದು, ಆರೋಪಿಯಿಂದ 1.15 ಕೋಟಿ ರು ಮೌಲ್ಯದ 855 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಬಿ.ಎಂ.ಕಾವಲ್&zwnj;ನಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕೃತ್ಯದ ಖದೀಮನ ಬೇಟೆಗಿಳಿದ ಪೊಲೀಸರು, ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಜಂಗ್ಲಿ ಪ್ರಕಾಶ್ ಕೈವಾಡವಿರುವುದು ಗೊತ್ತಾಗಿದೆ. ಕೊನೆಗೆ 140 ಕಿ.ಮೀ ಬೆನ್ನತ್ತಿ ಆರೋಪಿಯನ್ನು ಹಲಸೂರು ಉಪ ವಿಭಾಗದ ಎಸಿಪಿ ರಂಗಪ್ಪ ಹಾಗೂ ಇಂದಿರಾನಗರ ಇನ್ಸ್&zwnj;ಪೆಕ್ಟರ್&zwnj; ಸುದರ್ಶನ್ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;66 ಕೃತ್ಯಗಳಲ್ಲಿ ಪ್ರಕಾಶ್ ಪಾತ್ರ&lt;/strong&gt;&lt;/h2&gt;&lt;p&gt;ಕೃಷಿಕ ಎಂದು ಹೇಳಿಕೊಳ್ಳುವ ಪ್ರಕಾಶ್ ವೃತ್ತಿಪರ ಮನೆಗಳ್ಳನಾಗಿದ್ದು, ಆತನ ವಿರುದ್ಧ ಬೆಂಗಳೂರು ನಗರ, ಗ್ರಾಮಾಂತರ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸುಮಾರು 66 ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ಮನೆಗಳ್ಳತನ ಕೃತ್ಯದಲ್ಲಿ ಪ್ರಕಾಶ್ ನಿರಂತನಾಗಿದ್ದಾನೆ. ಹಾಗೆ ಹಲವು ಬಾರಿ ಬಂಧಿತನಾಗಿ ಆತ ಜೈಲೂಟ ಸವಿದಿದ್ದಾನೆ. ಆದರೆ ಪ್ರಕಾಶ್ ಚಾಳಿ ಬಿಟ್ಟಿರಲಿಲ್ಲ.&lt;/p&gt;&lt;p&gt;ಕೆಲ ದಿನಗಳ ಹಿಂದೆ ತಮ್ಮ ಕುಟುಂಬ ಸಮೀತ ಕೇರಳಕ್ಕೆ ತೆರಳಿದ್ದಾಗ ಬಿ.ಎಂ.ಕಾವಲ್ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಗೋವಿಂದನ್ ಮನೆಯಲ್ಲಿ ಆತ ಚಿನ್ನಾಭರಣ ದೋಚಿದ್ದ. ಈ ಕೃತ್ಯ ಸಂಬಂಧ 300ಕ್ಕೂ ಹೆಚ್ಚಿನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತು. ಆದರೆ, ನಗರ ತೊರೆದು ಪೊಲೀಸರಿಗೆ ಸಿಗದೆ ಆತ ತಪ್ಪಿಸಿಕೊಳ್ಳುತ್ತಿದ್ದ. ಬೆಂಬಿಡದೆ ಸುಮಾರು 140 ಕಿ.ಮೀ ಬೆನ್ನಹಟ್ಟಿದಾಗ ಜಂಗ್ಲಿ ಕೊನೆಗೆ ಖಾಕಿ ಬಲೆಗೆ ಬಿದ್ದಿದ್ದಾನೆ.&lt;/p&gt;&lt;h3&gt;&lt;strong&gt;ಕದ್ದ ಚಿನ್ನ ಸ್ವೀಕರಿಸಿದವರ ಬಂಧನ&amp;nbsp;&lt;/strong&gt;&lt;/h3&gt;&lt;p&gt;ಇನ್ನು ಪ್ರಕಾಶ್&zwnj;ನಿಂದ ಕದ್ದ ಚಿನ್ನಾಭರಣ ಸ್ವೀಕರಿಸಿದ ಆರೋಪದ ಮೇರೆಗೆ ಇಬ್ಬರು ಚಿನ್ನಾಭರಣ ವ್ಯಾಪಾರಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪೇಟೆಯ ಸುಶಾಂತ್&zwnj; ದೇಶಮುಖ್&zwnj; ಹಾಗೂ ಭಾಗಿರಥ್ ದೇವಾಸಿ ಬಂಧಿತರಾಗಿದ್ದು, ಕಳ್ಳತನ ಕೃತ್ಯದಲ್ಲಿ ಪ್ರಕಾಶ್ ದೋಚಿದ್ದ ಚಿನ್ನಾಭರಣ ವಿಲೇವಾರಿಗೆ ಇಬ್ಬರು ನೆರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-police-arrest-notorious-thief-jangli-prakash-after-140-km-chase-mrq/articleshow-n88u6a8"/>
        </item>
        <item>
            <title><![CDATA[Belagavi: ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ]]></title>
            <link>https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t</link>
            <guid isPermaLink="true">https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t</guid>
            <pubDate>Tue, 05 May 2026 09:37:02 +0530</pubDate>
            <description><![CDATA[&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqv4mampjkrs8eyzesm4e3e3,imgname-belagavi-crime-news--4--1777953548950.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಅತ್ತೆಗೆ ಅಳಿಯ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಾಕು ಇರಿದ ಅಳಿಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅರವಿಂದ್ ಗವಳಿ(26) ಎಂಬಾತನೇ ಅತ್ತೆಗೆ ಚಾಕು ಇರಿದ ಅಳಿಯ. ಚಾಕು ಇರಿತಕ್ಕೊಳಗಾದ ಅತ್ತೆ ಮಹಾದೇವಿ ಕರಿಗಾರ (45) ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತವರಿನಲ್ಲಿದ್ದ ಪತ್ನಿಗೆ ಅರವಿಂದ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಅರವಿಂದ್ ಎಂಬಾತನೊಂದಿಗೆ ಮಹಾದೇವಿ ಮಗಳ ಮದುವೆ ಮಾಡಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಅರವಿಂದ್ ಪತ್ನಿ ತವರಿನಲ್ಲಿದ್ದರು. ಪತ್ನಿ ತವರಿನಲ್ಲಿದ್ರೂ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ ಮತ್ತು ಮಗುವಿನ ಮುಖ ತೋರಿಸುವಂತೆ ಕಿರುಕುಳ ನೀಡ್ತಿದ್ದನಂತೆ.&lt;/p&gt;&lt;img&gt;&lt;p&gt;ಅಳಿಯನ ಪದೇ ಪದೇ ವಿಡಿಯೋ ಕಾಲ್&zwnj;ಗೆ ಬೇಸತ್ತ ಅತ್ತೆ ಮಹಾದೇವಿ, ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳಲು ಆಗಲ್ಲ. ದಿನಕ್ಕೆ ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದರು. ಈ ವೇಳೆ ಕೋಪಗೊಂಡ ಅರವಿಂದ್, ಅತ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ನಮ್ಮೂರಿಗೆ ಬಂದ್ರೆ ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ಮಹಾದೇವಿ ಗದರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Dharwad: ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ಕೊಲೆ ರಹಸ್ಯ: ಒಂದೇ ಸುಳಿವು ಬಿಚ್ಚಿಟ್ಟ ಸತ್ಯ!&lt;/strong&gt;&lt;/p&gt;&lt;img&gt;&lt;p&gt;ಈ ಜಗಳದಿಂದ ಕೆರಳಿದ ಅರವಿಂದ್ ಗ್ರಾಮಕ್ಕೆ ಬಂದು ಅತ್ತೆಗೆ ಚಾಕು ಇರಿದು ಪರಾರಿಯಾಗಿ, ಇಂದು ಜೈಲು, ನಾಳೆ ಬೆಲ್ ನಿನ್ನ ಬಿಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನು. ಇನ್ನು ಚಾಕು ಇರಿತಕ್ಕೊಳಗಾಗಿದ್ದ ಮಹಾದೇವಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು&lt;/strong&gt;&lt;/p&gt;]]></content:encoded>
            <category>crime</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t"/>
        </item>
        <item>
            <title><![CDATA[Bengaluru shock: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ್ದ ಕಿಡಿಗೇಡಿ ಅರೆಸ್ಟ್, ನಡೆದಿದ್ದೇನು?]]></title>
            <link>https://kannada.asianetnews.com/crime/a-man-arrested-for-filming-woman-while-bathing-what-exactly-happened-rav/articleshow-sfwc8wa</link>
            <guid isPermaLink="true">https://kannada.asianetnews.com/crime/a-man-arrested-for-filming-woman-while-bathing-what-exactly-happened-rav/articleshow-sfwc8wa</guid>
            <pubDate>Thu, 07 May 2026 07:03:32 +0530</pubDate>
            <description><![CDATA[ಬೆಂಗಳೂರಿನಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಎರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ನೆರೆಮನೆಯ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿ ಹಾಗೂ ವಾಕಿಂಗ್ ಮಾಡುತ್ತಿದ್ದ ಯುವತಿಗೆ ಅಸಭ್ಯವಾಗಿ ಸ್ಪರ್ಶಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr00fk8kezmwqv4smzrb09p5,imgname-----------------------2026-05-07t065220.682-1778116971795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಮೇ.7): &lt;/strong&gt;ತನ್ನ ನೆರೆಹೊರೆಯ ಮನೆ ಮಹಿಳೆಯ ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದ ಆರೋಪದ ಮೇರೆಗೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಗುರಡುಚಾರ್ ಪಾಳ್ಯ ಸಮೀಪದ ನಿವಾಸಿ ಕಾರ್ತಿಕ್ ಬಂಧಿತನಾಗಿದ್ದು, ಆರೋಪಿಯಿಂದ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ನೆರೆಮನೆಯ ಮಹಿಳೆ ಸ್ನಾನಗೃಹದಲ್ಲಿದ್ದಾಗ ತನ್ನ ಮನೆಯ ಕಿಟಕಿಯಿಂದ ಕಾರ್ತಿಕ್ ವಿಡಿಯೋ ಮಾಡಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;ಹೆಂಡತಿ ಬಾಣಂತನ ಹೋಗಿದ್ದಾಗ ಕೃತ್ಯ:&amp;nbsp;&lt;/h2&gt;&lt;p&gt;ಆರೋಪಿ ಕಾರ್ತಿಕ್ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ನಗರದಲ್ಲಿ ಖಾಸಗಿ ಕಂಪನಿಯಲ್ಲಿ ಆತ ಉದ್ಯೋಗದಲ್ಲಿದ್ದ. ಬಾಣಂತನಕ್ಕೆ ಆತನ ಪತ್ನಿ ತೆವರಿಗೆ ತೆರಳಿದ್ದರು. ಇನ್ನು ಸಂತ್ರಸ್ತೆ ಸಹ ಸಾಫ್ಟ್&zwnj;ವೇರ್ ಉದ್ಯೋಗಿ ಆಗಿದ್ದು, ಕೆಲ ತಿಂಗಳ ಹಿಂದಷ್ಟೇ ಕಾರ್ತಿಕ್ ಮನೆ ಪಕ್ಕದ ಮನೆಗೆ ಅವರು ಬಾಡಿಗೆ ಪಡೆದಿದ್ದರು. ಸ್ನಾನಗೃಹದ ಕಿಟಕಿ ಬಳಿ ಮನುಷ್ಯ ನೆರಳು ಕಂಡು ಜಕಳ ಮಾಡುತ್ತಿದ್ದ ಸಂತ್ರಸ್ತೆಗೆ ಆತಂಕವಾಗಿದೆ. ಕೂಡಲೇ ಅವರು ಕಿರುಚಿದಾಗ ಕಾರ್ತಿಕ್ ಪರಾರಿಯಾಗಿದ್ದ. ಈ ಬಗ್ಗೆ ಕೂಡಲೇ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಯುವತಿಗೆ ಬ್ಯಾಡ್ ಟಚ್: ಕಾಮುಕ ಯುವಕನ ಸೆರೆ&lt;/h3&gt;&lt;p&gt;&lt;strong&gt;ಬೆಂಗಳೂರು:&lt;/strong&gt; ವಾಕಿಂಗ್&zwnj; ಮಾಡುತ್ತಿದ್ದ ಯುವತಿಯ ದೇಹದ ಹಿಂಭಾಗಕ್ಕೆ ಟಚ್&zwnj; ಮಾಡಿ ಕಿರುಕುಳ ನೀಡಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&amp;nbsp;&lt;/p&gt;&lt;p&gt;ಆಕಾಶ್&zwnj; (20) ಬಂಧಿತ ಆರೋಪಿ. ಮತ್ತಿಕೆರೆಯಲ್ಲಿ ವಾಸವಿರುವ 22 ವರ್ಷದ ಯುವತಿ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಮೇ 2 ರಂದು ರಾತ್ರಿ 10 ಗಂಟೆಯ ಸುಮಾರಿಗೆ ದೂರುದಾರರು ತನ್ನ ಸ್ನೇಹಿತನ ಜತೆ ಎಂ.ಎಸ್&zwnj;.ಆರ್&zwnj;. ನಗರದ 3 ಕ್ರಾಸ್&zwnj; ಬಳಿ ವಾಕಿಂಗ್&zwnj; ಮಾಡುವಾಗ ಕಪ್ಪು ಬಣ್ಣದ ಶರ್ಟ್&zwnj; ಧರಿಸಿದ್ದ ಯುವಕನೊಬ್ಬ ಕಪ್ಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಯುವತಿಯ ಹಿಂಭಾಗಕ್ಕೆ ಟಚ್&zwnj; ಮಾಡಿ ಪರಾರಿಯಾಗಿದ್ದ.&amp;nbsp;&lt;/p&gt;&lt;p&gt;ನೊಂದ ಯುವತಿ ಈ ಸಂಬಂಧ ದೂರು ದಾಖಲಿಸಿದ್ದರು. ದೂರಿನನ್ವಯ ಘಟನಾ ಸ್ಥಳದ ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದಾಶಿವನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/a-man-arrested-for-filming-woman-while-bathing-what-exactly-happened-rav/articleshow-sfwc8wa"/>
        </item>
        <item>
            <title><![CDATA[ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!]]></title>
            <link>https://kannada.asianetnews.com/crime/a-love-story-between-a-mechanic-and-a-minor-girl-ends-in-a-brutal-murder-mrq-videoshow-uu09i17</link>
            <guid isPermaLink="true">https://kannada.asianetnews.com/crime/a-love-story-between-a-mechanic-and-a-minor-girl-ends-in-a-brutal-murder-mrq-videoshow-uu09i17</guid>
            <pubDate>Thu, 07 May 2026 13:02:08 +0530</pubDate>
            <description><![CDATA[&lt;p&gt;ಒಬ್ಬ ಮೆಕ್ಯಾನಿಕ್ ಮತ್ತು ಅಪ್ರಾಪ್ತ ಬಾಲಕಿಯ ಪ್ರೇಮಕಥೆಯೊಂದು ಘೋರ ಕೊಲೆಯಲ್ಲಿ ಅಂತ್ಯಗೊಳ್ಳುತ್ತದೆ. ಊರು ಬಿಟ್ಟು ಓಡಿಹೋಗಲು ಯತ್ನಿಸುತ್ತಿದ್ದಾಗ, ಅದಕ್ಕೆ ಸಾಕ್ಷಿಯಾದ ಎದುರುಮನೆ ನಿವಾಸಿ ಈಶಪ್ಪನನ್ನು ಪ್ರೇಮಿಗಳು ಬರ್ಬರವಾಗಿ ಹತ್ಯೆ ಮಾಡುತ್ತಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xa8dzzw" medium="video" height="768" width="1024"/>
            <content:encoded><![CDATA[&lt;p&gt;ಅದೊಂದು ಬಡಕುಟುಂಬ.. ಗಂಡ ಹೆಂಡತಿ ಇಬ್ಬರು ಮಕ್ಕಳು.. ಗಂಡ ಟೆಂಟ್​ ಹೌಸ್​ನಲ್ಲಿ ಕೆಲಸ ಮಾಡ್ತಿದ್ದ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಇತ್ತಿಚೆಗೆ ಬೇಸಿಗೆ ರಜೆ ಇದೆ ಅಂತ ಹೆಂಡತಿ, ಮಕ್ಕಳನ್ನ ಕರೆದುಕೊಂಡು ತವರುಮನೆಗೆ ಹೋಗಿದ್ಲು.. ಆದ್ರೆ ಆವತ್ತೊಂದು ದಿನ ಕೆಲಸದಿಂದ ಬಂದ ಗಂಡ ಮಹಡಿಯ ಮೇಲೆ ಮಲಗಿದ್ದ.. ಆದ್ರೆ ಬೆಳಗಾಗುವಷ್ಟರಲ್ಲೇ ಹೆಣವಾಗಿದ್ದ.. ಆತನನ್ನ ಯಾರೋ ಕೊಲೆ ಮಾಡಿದ್ರು.. ಪೊಲೀಸರು ತನಿಖೆ ಶುರು ಮಾಡಿದ್ರು.. ಯಾವಾಗ ತನಿಖೆ ತೀವ್ರವಾಯ್ತೋ ಆತನ ಸಾವಿಗೆ ಒಂದು ಲವ್​​ ಸ್ಟೋರಿ ಕಾರಣ ಅನ್ನೋದು ಗೊತ್ತಾಗುತ್ತೆ.&lt;/p&gt;]]></content:encoded>
            <category>crime</category>
            <dc:creator>Mahmad Rafik</dc:creator>
            <atom:link href="https://kannada.asianetnews.com/crime/a-love-story-between-a-mechanic-and-a-minor-girl-ends-in-a-brutal-murder-mrq-videoshow-uu09i17"/>
        </item>
        <item>
            <title><![CDATA[ಬೆಂಗಳೂರು: ಮಗಳ ಬೆನ್ನುಬಿದ್ದಿದ್ದ ಯುವಕನ ಹತ್ಯೆಗೈದು ರಾಜಕಾಲುವೆಗೆ ಎಸೆದ ಅಪ್ಪ; ನಾಲ್ವರು ಅರೆಸ್ಟ್!]]></title>
            <link>https://kannada.asianetnews.com/karnataka-districts/bengaluru-yelahanka-murder-case-father-arrested-for-killing-daughters-harasser-sat/articleshow-uzep8ku</link>
            <guid isPermaLink="true">https://kannada.asianetnews.com/karnataka-districts/bengaluru-yelahanka-murder-case-father-arrested-for-killing-daughters-harasser-sat/articleshow-uzep8ku</guid>
            <pubDate>Mon, 04 May 2026 12:51:07 +0530</pubDate>
            <description><![CDATA[&lt;p&gt;ಪ್ರೀತಿಯ ಹೆಸರಲ್ಲಿ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು, ಆಕೆಯ ತಂದೆ ಮತ್ತು ಸಂಬಂಧಿಕರು ಸೇರಿ ಬೆಂಗಳೂರಿನಲ್ಲಿ ಕೊಲೆ ಮಾಡಿದ್ದಾರೆ. ಮದ್ಯ ಕುಡಿಸಿ, ಹಗ್ಗದಿಂದ ಕತ್ತು ಬಿಗಿದು ಕೊಂದ ನಂತರ ಶವವನ್ನು ರಾಜಕಾಲುವೆಗೆ ಎಸೆದಿದ್ದರು. ಯುವತಿ ತಂದೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrxqdaxrz2mf5taw1dz1p1f,imgname-bengaluru-crime-1777879201115.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 04): ಪ್ರೀ&lt;/strong&gt;ತಿ ಹೆಸರಿನಲ್ಲಿ ಅಪ್ರಾಪ್ತ ಮಗಳ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಗಳ ತಂದೆ ಮತ್ತು ಸಂಬಂಧಿಕರು ಸೇರಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾಗಲಕೋಟೆ ಮೂಲದ ರಮೇಶ್ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಯಲಹಂಕ ಪೊಲೀಸರು ಯುವತಿಯ ತಂದೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ ಏನು?&lt;/strong&gt;&lt;/h3&gt;&lt;p&gt;ಕೊಲೆಯಾದ ರಮೇಶ್ ಮತ್ತು ಆರೋಪಿಗಳು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನವರು. ರಮೇಶ್ ಈ ಹಿಂದೆ ದುಬೈನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಂದ ವಾಪಸ್ ಬಂದಿದ್ದ ರಮೇಶ್, ತನ್ನ ಮನೆಯಲ್ಲೇ ಇದ್ದುಕೊಂಡು ಓದುತ್ತಿದ್ದ ಸಂಬಂಧಿಕರ ಹುಡುಗಿಯ ಮೇಲೆ ಕಣ್ಣು ಹಾಕಿದ್ದನು. ಆಕೆಯನ್ನು ಮದುವೆಯಾಗುವುದಾಗಿ ಹಠ ಹಿಡಿದಿದ್ದನು. ಆದರೆ, ಯುವತಿಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಈ ಕಾರಣದಿಂದ ಯುವತಿಯ ಪೋಷಕರು ಮದುವೆಗೆ ನಿರಾಕರಿಸಿದ್ದರು.&lt;/p&gt;&lt;p&gt;ಆದರೂ ಮಣಿಯದ ರಮೇಶ್, ಅಪ್ರಾಪ್ತ ಯುವತಿಗೆ ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದನು. ಇದರಿಂದ ಬೇಸತ್ತ ಪೋಷಕರು ಬಾಗಲಕೋಟೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ರಮೇಶ್ ವಿರುದ್ಧ ಪೋಕ್ಸೋ (POCSO) ಪ್ರಕರಣ ದಾಖಲಾಗಿ ಆತ ಜೈಲು ಪಾಲಾಗಿದ್ದನು.&lt;/p&gt;&lt;h2&gt;&lt;strong&gt;ಜೈಲಿನಿಂದ ಬಂದರೂ ಬದಲಾಗದ ರಮೇಶ್&lt;/strong&gt;&lt;/h2&gt;&lt;p&gt;ಇತ್ತ ಮಗಳ ಸುರಕ್ಷತೆಯ ದೃಷ್ಟಿಯಿಂದ ತಂದೆ ಈರಯ್ಯ ಆಕೆಯನ್ನು ಓದಿಸಲು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ಆದರೆ, ಜೈಲಿನಿಂದ ಬಿಡುಗಡೆಯಾಗಿ ಬಂದ ರಮೇಶ್ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಿದ್ದನು. ಯುವತಿಯನ್ನು ಹುಡುಕಿಕೊಂಡು ಬೆಂಗಳೂರಿಗೂ ಬಂದಿದ್ದ ಆತ, ಮತ್ತೆ ಮದುವೆಯಾಗುವಂತೆ ಪೀಡಿಸಲು ಶುರು ಮಾಡಿದ್ದನು. ಮಗಳ ಭವಿಷ್ಯ ಹಾಳಾಗುತ್ತಿದೆ ಎಂಬ ಸಿಟ್ಟಿನಿಂದ ಈರಯ್ಯ, ರಮೇಶನ ಕಥೆ ಮುಗಿಸಲು ಸಂಚು ರೂಪಿಸಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಊಟ ಹಾಕಿಸಿ, ಎಣ್ಣೆ ಕುಡಿಸಿ ಹತ್ಯೆ!&lt;/strong&gt;&lt;/h3&gt;&lt;p&gt;ತನ್ನ ಸಂಬಂಧಿಕರಾದ ಚಿನ್ನಯ್ಯ, ಚೇತನ್ ಮತ್ತು ಚರಣ್ ಎಂಬುವವರ ಜೊತೆಗೂಡಿ ಈರಯ್ಯ ಸ್ಕೆಚ್ ಹಾಕಿದ್ದರು. ಮೊದಲು ಬೆಂಗಳೂರಿನಲ್ಲಿದ್ದ ರಮೇಶನನ್ನು ಹುಡುಕಿಕೊಂಡು ಹೋಗಿ ಮಾತನಾಡಿಸಿದ್ದರು. ಹಳೆಯ ದ್ವೇಷ ಮರೆತು ಒಂದಾಗೋಣ ಎಂದು ನಂಬಿಸಿ, ಆತನನ್ನು ಊಟಕ್ಕೆ ಕರೆದೊಯ್ದಿದ್ದರು. ಅಲ್ಲಿ ಎಲ್ಲರೂ ಸೇರಿ ಮದ್ಯಪಾನ ಮಾಡಿದ್ದಾರೆ. ರಮೇಶ್ ಪೂರ್ತಿ ಅಮಲೇರಿದಾಗ, ಆರೋಪಿಗಳು ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ರಾಜಕಾಲುವೆಗೆ ಎಸೆದಿದ್ದರು ಶವ&lt;/strong&gt;&lt;/h3&gt;&lt;p&gt;ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ಸಂಚು ರೂಪಿಸಿದ ಆರೋಪಿಗಳು, ರಮೇಶನ ಮೃತದೇಹವನ್ನು ಯಲಹಂಕದ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಅಲ್ಲಿಂದ ಪರಾರಿಯಾಗಿದ್ದರು. ಕಳೆದ ಕೆಲವು ದಿನಗಳ ಹಿಂದೆ ಅಪರಿಚಿತ ಶವ ಪತ್ತೆಯಾದಾಗ ಯಲಹಂಕ ಪೊಲೀಸರು 'ಅನುಮಾನಾಸ್ಪದ ಸಾವು' ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಪೊಲೀಸರ ಬಲೆಗೆ ಬಿದ್ದ ಆರೋಪಿಗಳು&lt;/strong&gt;&lt;/h2&gt;&lt;p&gt;ತನಿಖೆ ಕೈಗೆತ್ತಿಕೊಂಡ ಯಲಹಂಕ ಪೊಲೀಸರು ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ಸದ್ಯ ಯುವತಿಯ ತಂದೆ ಈರಯ್ಯ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಗಳ ಗೌರವ ಉಳಿಸಲು ಹೋಗಿ ತಂದೆ ಈಗ ಜೈಲು ಪಾಲಾಗಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-yelahanka-murder-case-father-arrested-for-killing-daughters-harasser-sat/articleshow-uzep8ku"/>
        </item>
        <item>
            <title><![CDATA[ವ್ಯಾಯಾಮಕ್ಕೂ ಮುನ್ನ ಪ್ರಜ್ಞೆ ತಪ್ಪಿಸಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸುತ್ತಿದ್ದ ಜಿಮ್ ಟ್ರೈನರ್ಸ್ ಬಂಧನ]]></title>
            <link>https://kannada.asianetnews.com/india-news/bareilly-gym-horror-female-doctor-exploited-and-blackmailed-for-50rs-lakh/articleshow-vidhr0m</link>
            <guid isPermaLink="true">https://kannada.asianetnews.com/india-news/bareilly-gym-horror-female-doctor-exploited-and-blackmailed-for-50rs-lakh/articleshow-vidhr0m</guid>
            <pubDate>Wed, 06 May 2026 13:29:30 +0530</pubDate>
            <description><![CDATA[&lt;p&gt;&lt;strong&gt;Bareilly Gym Scandal: &lt;/strong&gt;ಉತ್ತರ ಪ್ರದೇಶದ ಬರೇಲಿಯಲ್ಲಿ ಫಿಟ್&zwnj;ನೆಸ್ ತರಬೇತಿಯ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಭೀಕರ ಲೈಂಗಿಕ ಶೋಷಣೆ ಮತ್ತು ವಸೂಲಿ ದಂಧೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜಿಮ್ ಸಂಚಾಲಕ ಅಕ್ರಮ್ ಬೇಗ್ ಮತ್ತು ಆತನ ಸಹೋದರ ಆಲಂ ಬೇಗ್ ಎಂಬುವವರು ಮಹಿಳಾ ವೈದ್ಯೆಯೊಬ್ಬರಿಗೆ ವ್ಯಾಯಾಮದ ಮೊದಲು ನಶೆಯುಕ್ತ ಪಾನೀಯ ನೀಡಿ, ಅವರು ಪ್ರಜ್ಞೆ ತಪ್ಪಿದಾಗ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k56m4ccrypdthp9m6r2hv5tw,imgname-gym-equipment-for-weight-loss-1-1757937807768.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉ&lt;/strong&gt;ತ್ತರ ಪ್ರದೇಶದ ಬರೇಲಿಯಿಂದ ಅತ್ಯಂತ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಫಿಟ್&zwnj;ನೆಸ್ ಸೆಂಟರ್ ನಡೆಸುತ್ತಿದ್ದ ಇಬ್ಬರು ಸಹೋದರರು ಮಹಿಳಾ ವೈದ್ಯೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿ, ವಿಡಿಯೋ ಬಳಸಿ ಬ್ಲಾಕ್&zwnj;ಮೇಲ್ ಮಾಡಿದ ಕೃತ್ಯ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಈ ಸಂಬಂಧ ನಗರದ ಕೊತ್ವಾಲಿ ಪೊಲೀಸರು ಜಿಮ್ ಸಂಚಾಲಕ ಅಕ್ರಮ್ ಬೇಗ್ ಮತ್ತು ಆತನ ಸಹೋದರ ಆಲಂ ಬೇಗ್ ಎಂಬುವವರನ್ನು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ನಂಬಿಕೆ ದ್ರೋಹ ಮತ್ತು ವ್ಯವಸ್ಥಿತ ಸಂಚು&lt;/strong&gt;&lt;/h2&gt;&lt;p&gt;ಸಂತ್ರಸ್ತ ಮಹಿಳಾ ವೈದ್ಯೆ ಕಳೆದ ಎರಡು ವರ್ಷಗಳಿಂದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ 'ಅಲ್ಟಿಮೇಟ್ ಫಿಟ್&zwnj;ನೆಸ್' ಜಿಮ್&zwnj;ನಲ್ಲಿ ತರಬೇತಿ ಪಡೆಯುತ್ತಿದ್ದರು. ಜಿಮ್ ಸಂಚಾಲಕ ಅಕ್ರಮ್ ಬೇಗ್ ವೈದ್ಯೆಯ ವಿಶ್ವಾಸ ಗಳಿಸಿ, ಅವರಿಗೆ &quot;ಪ್ರೀ-ವರ್ಕೌಟ್ ಎನರ್ಜಿ ಡ್ರಿಂಕ್&quot; ನೀಡುತ್ತಿದ್ದನು. ಈ ಪಾನೀಯದಲ್ಲಿ ಆಗಾಗ್ಗೆ ಅಮಲು ಪದಾರ್ಥಗಳನ್ನು ಬೆರೆಸಲಾಗುತ್ತಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪಾನೀಯ ಸೇವಿಸಿದ ನಂತರ ವೈದ್ಯೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಾಗ, ಅಕ್ರಮ್ ಅವರನ್ನು ಜಿಮ್&zwnj;ನ ಮೂಲೆಯಲ್ಲಿದ್ದ ಖಾಸಗಿ ಕೋಣೆ ಬೆಡ್ ಮೇಲೆ ಮಲಗಿಸಿ ಲೈಂಗಿಕ ಶೋಷಣೆ ಮಾಡುತ್ತಿದ್ದನು. ಈ ಸಮಯದಲ್ಲಿ ಜಿಮ್ ತರಬೇತುದಾರನಾಗಿದ್ದ ಆತನ ಸಹೋದರ ಆಲಂ ಬೇಗ್ ರಹಸ್ಯವಾಗಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದನು.&lt;/p&gt;&lt;h2&gt;&lt;strong&gt;ಭಾರೀ ಮೊತ್ತಕ್ಕೆ ಬ್ಲಾಕ್&zwnj;ಮೇಲಿಂಗ್ ಮತ್ತು ಬೆದರಿಕೆ&lt;/strong&gt;&lt;/h2&gt;&lt;p&gt;ಆರೋಪಿಗಳು ಈ ವಿಡಿಯೋಗಳನ್ನು ಮುಂದಿಟ್ಟುಕೊಂಡು ಮಹಿಳೆಯನ್ನು ಬ್ಲಾಕ್&zwnj;ಮೇಲ್ ಮಾಡಲು ಆರಂಭಿಸಿದರು. ಮೊದಲು ವೈದ್ಯೆಯ ಕುಟುಂಬಕ್ಕೆ ಮತ್ತು ಮಕ್ಕಳಿಗೆ ತೊಂದರೆ ನೀಡುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಾನಹಾನಿಯ ಭಯದಿಂದ ಸಂತ್ರಸ್ತೆ ಆರಂಭದಲ್ಲಿ 80 ಸಾವಿರ ರೂಪಾಯಿ ನೀಡಿದ್ದರು. ಆದರೆ ಆರೋಪಿಗಳ ದಾಹ ಅಷ್ಟಕ್ಕೆ ನಿಲ್ಲದೆ, ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ವೈರಲ್ ಮಾಡುವುದಾಗಿ ಬೆದರಿಸಿ ಬರೋಬ್ಬರಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಈ ನಿರಂತರ ಬೆದರಿಕೆಯಿಂದ ಹೈರಾಣಾದ ವೈದ್ಯೆ ಅಂತಿಮವಾಗಿ ಎಸ್&zwnj;ಎಸ್&zwnj;ಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್ ದಾಳಿ ಮತ್ತು ಬಹಿರಂಗಗೊಂಡ ಸತ್ಯ&lt;/strong&gt;&lt;/h3&gt;&lt;p&gt;ಪೊಲೀಸರು ಜಿಮ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದಾಗ, ಅವರ ಬಳಿಯಿದ್ದ ಎರಡು ಪೆನ್ ಡ್ರೈವ್&zwnj;ಗಳು, ಎರಡು ಮೊಬೈಲ್ ಫೋನ್&zwnj;ಗಳು, ಶಕ್ತಿವರ್ಧಕ ಔಷಧಿಗಳ ಒಂಬತ್ತು ಸೀಸೆಗಳು, ಮೂರು ಮಾತ್ರೆಗಳು ಮತ್ತು ಆರು ಇಂಜೆಕ್ಷನ್&zwnj;ಗಳನ್ನು ಹಾಗೂ 10,000 ರೂಪಾಯಿ ಹಣವನ್ನು ವಸೂಲಿ ಮಾಡಲಾಗಿದೆ. ಅಕ್ರಮ್&zwnj;ನ ಮೊಬೈಲ್ ಪರಿಶೀಲಿಸಿದಾಗ ಇತರ ಹಲವಾರು ಮಹಿಳೆಯರ ವರ್ಕೌಟ್ ವಿಡಿಯೋಗಳು ಕೂಡ ಪತ್ತೆಯಾಗಿವೆ. ವಿಚಾರಣೆಯ ವೇಳೆ ಆರೋಪಿಗಳು ಮಹಿಳೆಯರನ್ನು ಇಂತಹ ಬಲೆಗೆ ಬೀಳಿಸಿ ಹಣ ವಸೂಲಿ ಮಾಡುವ ಸಂಚನ್ನು ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;ಆರೋಪಿ ಆಲಂ ಮೇಲೆ ಈ ಹಿಂದೆಯೇ ಯುವತಿಯರ ಪೀಡನೆ ಮತ್ತು ಇತರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಜಿಮ್&zwnj;ಗಳಿಗೆ ಹೋಗುವ ಮಹಿಳೆಯರ ಸುರಕ್ಷತೆಯ ಬಗ್ಗೆ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಆತಂಕ ಮತ್ತು ಚರ್ಚೆಯನ್ನು ಮೂಡಿಸಿದ್ದು, ಸಾರ್ವಜನಿಕರು ಅಪರಿಚಿತರು ನೀಡುವ ಆಹಾರ ಅಥವಾ ಪಾನೀಯಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸದ್ಯ ತನಿಖೆ ಮುಂದುವರಿದಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಪೊಲೀಸ್ ಇಲಾಖೆ ತಿಳಿಸಿದೆ. ಇದರೊಂದಿಗೆ ಜಿಮ್&zwnj;ಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ತರಬೇತುದಾರರ ಹಿನ್ನೆಲೆ ಪರಿಶೀಲನೆಯ ಅಗತ್ಯತೆ ಮತ್ತೊಮ್ಮೆ ಎದ್ದುಕಂಡಿದೆ.&lt;/p&gt;&lt;p&gt;अगर आपके घर की बहन,बेटियां या महिलाएं जिम जाती हैं तो हो जाए सावधान....यूपी के बरेली में अल्टीमेट फिटनेस जिम (सिविल लाइंस) के संचालक अकरम बेग और उसके भाई आलम बेग पर एक महिला डॉक्टर से बलात्कार और ब्लैकमेलिंग का आरोप लगा है।आरोप है कि महिला वजन कम करने के लिए जिम जाती थी।&hellip; pic.twitter.com/R9vsZyCHuS&lt;/p&gt;&lt;p&gt;&mdash; NCIB Headquarters (@NCIBHQ) May 6, 2026&lt;/p&gt;]]></content:encoded>
            <category>crime</category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/bareilly-gym-horror-female-doctor-exploited-and-blackmailed-for-50rs-lakh/articleshow-vidhr0m"/>
        </item>
        <item>
            <title><![CDATA[ಬಗಲ್‌ ಮೇ ಹೈ ದುಷ್ಮನ್! ಸಚಿವ ಜಮೀರ್ ಅಹಮದ್ ಮನೆಯಲ್ಲಿ 1.2 ಕೆಜಿ ಚಿನ್ನ ಕಳ್ಳತನ ಮಾಡಿದ ಸಂಬಂಧಿಕರು!]]></title>
            <link>https://kannada.asianetnews.com/state/huge-gold-theft-at-minister-zameer-ahmed-khan-relatives-arrest-by-bengaluru-police-sat/articleshow-zr81okz</link>
            <guid isPermaLink="true">https://kannada.asianetnews.com/state/huge-gold-theft-at-minister-zameer-ahmed-khan-relatives-arrest-by-bengaluru-police-sat/articleshow-zr81okz</guid>
            <pubDate>Tue, 05 May 2026 13:17:26 +0530</pubDate>
            <description><![CDATA[&lt;p&gt;ಸಚಿವ ಜಮೀರ್ ಅಹಮದ್ ಖಾನ್ ಅವರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಅವರ ತಾಯಿಯ ಸಂಬಂಧಿ ಸೈಯದ್ ಅಮೀರ್ ಮತ್ತು ಆತನ ಸಹಚರನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ. ವ್ಯವಹಾರದಲ್ಲಿನ ನಷ್ಟದಿಂದಾಗಿ, ಆರೋಪಿಗಳು 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಕದ್ದಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvhfkrxteyvgw8sw214ca7g,imgname-zameer-ahmed-home-gold-theft-1777967025949.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಮೇ 05): ರಾ&lt;/strong&gt;ಜಕೀಯ ವಲಯದಲ್ಲಿ ಸದಾ ಸಕ್ರಿಯರಾಗಿರುವ ಸಚಿವ ಜಮೀರ್ ಅಹಮದ್ ಖಾನ್ ಅವರ ಕುಟುಂಬದ ಆಪ್ತ ಸಂಬಂಧಿಕರೇ ಕಳ್ಳತನ ಮಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಚಿವರ ತಾಯಿಯ ರಕ್ತಸಂಬಂಧಿಯೇ ಈ ಕೃತ್ಯ ಎಸಗಿರುವುದು ಈಗ ಎಲ್ಲರನ್ನೂ ಬೆರಗಾಗಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಬಂಧಿತರು ಯಾರು?&lt;/strong&gt;&lt;/h3&gt;&lt;p&gt;ಬಂಧಿತ ಆರೋಪಿಗಳನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಸೈಯದ್ ಅಮೀರ್ ಸಚಿವ ಜಮೀರ್ ಅಹಮದ್ ಅವರ ತಾಯಿಯ ಹತ್ತಿರದ ಸಂಬಂಧಿಯಾಗಿದ್ದಾನೆ. ಸೈಯದ್ ಅಮೀರ್ ಜೊತೆಗೆ ಟ್ರಾವೆಲ್ಸ್ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ ಅಮಿರ್ ಅಹ್ಮದ್ ಕೂಡ ಈ ಕಳ್ಳತನದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕಳ್ಳತನಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಆರೋಪಿಗಳು ಟ್ರಾವೆಲ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ಇವರ ವ್ಯವಹಾರ ತೀವ್ರ ನಷ್ಟಕ್ಕೆ ಸಿಲುಕಿತ್ತು. ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಮತ್ತು ಸಾಲ ತೀರಿಸಲು ಇವರು ಹಣದ ಹಪಹಪಿಯಲ್ಲಿದ್ದರು. ಎಲ್ಲಿಯೂ ಫೈನಾನ್ಸ್ ಅಥವಾ ಸಾಲ ಸಿಗದಿದ್ದಾಗ, ಅಂತಿಮವಾಗಿ ತಮ್ಮದೇ ಸಂಬಂಧಿಯಾದ ಸಚಿವರ ಮನೆಯ ಮೇಲೆ ಕಣ್ಣು ಹಾಕಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಅಡವಿಟ್ಟು ಆ ಹಣವನ್ನು ರಿಯಲ್ ಎಸ್ಟೇಟ್&zwnj;ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ದುರಾಲೋಚನೆ ಇವರದ್ದಾಗಿತ್ತು.&lt;/p&gt;&lt;h3&gt;&lt;strong&gt;ನಂಬಿಸಿ ಮೋಸ ಮಾಡಿದ 'ಒಳ್ಳೆಯವ':&lt;/strong&gt;&lt;/h3&gt;&lt;p&gt;ಸೈಯದ್ ಅಮೀರ್ ರಕ್ತಸಂಬಂಧಿಯಾಗಿದ್ದರಿಂದ ಪ್ರತಿದಿನ ಜಮೀರ್ ಅವರ ಮನೆಗೆ ಬಂದು ಹೋಗುತ್ತಿದ್ದ. ಮನೆಯವರೊಂದಿಗೆ ಅತ್ಯಂತ ಆತ್ಮೀಯವಾಗಿ, 'ಒಳ್ಳೆಯವನಂತೆ' ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಳಸಿಕೊಂಡು 2023 ರಿಂದಲೇ ಸಣ್ಣ ಸಣ್ಣದಾಗಿ ಚಿನ್ನಾಭರಣಗಳನ್ನು ಕದಿಯಲು ಶುರು ಮಾಡಿದ್ದ. ಒಟ್ಟು 1 ಕೆಜಿ 200 ಗ್ರಾಂ ಚಿನ್ನಾಭರಣಗಳನ್ನು ಈ ಖದೀಮರು ಎಗರಿಸಿದ್ದರು.&lt;/p&gt;&lt;h2&gt;&lt;strong&gt;ಸಿಕ್ಕಿಬಿದ್ದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಕಳ್ಳತನದ ವಿಷಯ ಮನೆಯವರಿಗೆ ತಿಳಿಯುತ್ತಿದ್ದಂತೆಯೇ ಸೈಯದ್ ಅಮೀರ್ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿದ್ದ. ಪ್ರತಿದಿನ ಮನೆಗೆ ಬರುತ್ತಿದ್ದವನು ದಿಢೀರನೇ ಬರುವುದನ್ನು ನಿಲ್ಲಿಸಿದ್ದ. ಮನೆಯವರು ಫೋನ್ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಯಾವಾಗ ಆತನ ಮೊಬೈಲ್ ಸ್ವಿಚ್ ಆಫ್ ಆಯಿತೋ, ಪೊಲೀಸರಿಗೆ ಆತನ ಮೇಲೆ ಗಟ್ಟಿ ಅನುಮಾನ ಬಂದಿತು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ.&lt;/p&gt;&lt;h3&gt;&lt;strong&gt;ಪೊಲೀಸರ ರಿಕವರಿ:&lt;/strong&gt;&lt;/h3&gt;&lt;p&gt;ಬಂಧಿತರಿಂದ ಪೊಲೀಸರು ಸುಮಾರು 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ದಿನ ಸಚಿವರ ಮನೆಯಲ್ಲೇ ಇದ್ದು ಕನ್ನ ಹಾಕಿದ ಈ 'ನಂಬಿಕೆ ದ್ರೋಹಿ'ಯ ಕೃತ್ಯ ಈಗ ಶಿವಾಜಿನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>crime</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/huge-gold-theft-at-minister-zameer-ahmed-khan-relatives-arrest-by-bengaluru-police-sat/articleshow-zr81okz"/>
        </item>
    </channel>
</rss>
