<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 20 Aug 2026 18:13:32 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[Chamarajnagar: ಸರ್ಕಾರಿ ಆಸ್ಪತ್ರೆಯ ಕಮೋಡ್‌ನಲ್ಲಿ ತುರುಕಿದ ಸ್ಥಿತಿಯಲ್ಲಿ ಮಗು ಪತ್ತೆ]]></title>
            <link>https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</link>
            <guid isPermaLink="true">https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</guid>
            <pubDate>Thu, 20 Aug 2026 09:51:51 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಕಮೋಡ್&zwnj;ನಲ್ಲಿ ಮೃತ ಶಿಶುವೊಂದು ಪತ್ತೆಯಾಗಿದೆ. ಸ್ವಚ್ಛತಾ ಸಿಬ್ಬಂದಿ ಇದನ್ನು ಗಮನಿಸಿ ವೈದ್ಯರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0epadaqjkmy1fe3deynkwey,imgname-hospital-toilet-1787199567191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮಕ್ಕಳು ಬೇಕೆಂದು ಜನರು ದೇವರ ಮೊರೆ, ವೈದ್ಯರ ಬಳಿ ಅಲೆಯುವುದನ್ನು ನೋಡಿದ್ದೇವೆ. ಆದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವೊಂದು ಶೌಚಾಲಯದ ಕಮೋಡ್&zwnj; ಒಳಗೆ ತುರುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವನ್ನು ತಾಯಿಯೇ ಹಾಕಿದರೋ ಅಥವಾ ಬೇರೆಯಾರಾದರೂ ತುರುಕಿದ್ದಾರೋ ಎಂಬುದು ತಿಳಿಯಬೇಕಿದೆ.&lt;/p&gt;&lt;h2&gt;&lt;strong&gt;ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆ&lt;/strong&gt;&lt;/h2&gt;&lt;p&gt;ಬುಧವಾರ ಬೆಳಗ್ಗೆ ಶೌಚಾಲಯದ ಸ್ವಚ್ಛತೆಗೆ ತೆರಳಿದ್ದ ಸಿಬ್ಬಂದಿಗೆ ಕಮೋಡ್&zwnj; ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಮಗು ಸಿಕ್ಕಿದೆ. ಕೂಡಲೇ ಅದನ್ನು ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್&zwnj; ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ವೈದ್ಯರು, ಕೂಡಲೇ ಗುಂಡ್ಲುಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್ ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?&lt;/strong&gt;&lt;/p&gt;&lt;p&gt;&lt;strong&gt;ಪೊಲೀಸರಿಂದ ತನಿಖೆ ಆರಂಭ&lt;/strong&gt;&lt;/p&gt;&lt;p&gt;ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಮಗುವನ್ನು ಕೊಂದು ಬಿಸಾಡಿದರೋ ಅಥವಾ ತುರುಕಿದ ಬಳಿಕ ಮೃತಪಟ್ಟಿದೆಯೋ ಎಂಬುದು ಬಯಲಿಗೆ ಬರಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Hanur Encounter Case: ಕಳ್ಳಬೇಟೆ ತಡೆ ಶಿಬಿರಕ್ಕೆ ಜಿಲೆಟಿನ್&zwnj; ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?&lt;/strong&gt;&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g"/>
        </item>
        <item>
            <title><![CDATA[ಸತ್ತವನು ಬದುಕಿ ಬಂದ! 11 ವರ್ಷಗಳ ನಂತರ ಸಿಕ್ಕಿಬಿದ್ದಿದ್ದು ಹೇಗೆ? 'ದೃಶ್ಯಂ' ಮೀರುಸುವಂತಿದೆ ಕೋಲಾರದ ಈ ಕತೆ]]></title>
            <link>https://kannada.asianetnews.com/kolar/dead-man-walking-kolar-police-arrest-man-11-years-after-he-burnt-a-corpse-to-stage-his-own-murder-gkn/articleshow-57uwzcg</link>
            <guid isPermaLink="true">https://kannada.asianetnews.com/kolar/dead-man-walking-kolar-police-arrest-man-11-years-after-he-burnt-a-corpse-to-stage-his-own-murder-gkn/articleshow-57uwzcg</guid>
            <pubDate>Thu, 20 Aug 2026 18:13:25 +0530</pubDate>
            <description><![CDATA[&lt;p&gt;ಸಾಲ ತೀರಿಸಲು ಸ್ಮಶಾನದ ಹೆಣವನ್ನು ಸುಟ್ಟು ತನ್ನದೇ ಸಾವಿನ ನಾಟಕವಾಡಿದ್ದ ಕೋಲಾರದ ಅರುಣ್ ರೆಡ್ಡಿ, 11 ವರ್ಷಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆಧಾರ್ ಕಾರ್ಡ್ ಸುಳಿವು ಮತ್ತು ಪೊಲೀಸರ ಚಾಣಾಕ್ಷತನದಿಂದಾಗಿ 'ದೃಶ್ಯಂ' ಶೈಲಿಯ ನಾಟಕ ಬಯಲಾಗಿದ್ದು, ಆರೋಪಿ ಈಗ ಜೈಲು ಪಾಲಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fk45e6pc7gh53820tyemne,imgname-kolar-arun-reddy-case-1787229771206.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅದು 2015ನೇ ಇಸವಿ. ಕೋಲಾರದ ಕೆ.ಜಿ.ಎಫ್ ವ್ಯಾಪ್ತಿಯಲ್ಲಿ ಸುಟ್ಟು ಕರಕಲಾಗಿದ್ದ ಒಂದು ಹೆಣ ಸಿಗುತ್ತದೆ. ಅದರ ಪಕ್ಕದಲ್ಲೇ ಆಧಾರ್ ಕಾರ್ಡ್, ಮೊಬೈಲ್ ಮತ್ತು ಚಪ್ಪಲಿ ಇರುತ್ತದೆ. ಅದನ್ನು ನೋಡಿ ಅರುಣ್ ಕುಮಾರ್ ರೆಡ್ಡಿ ಎಂಬುವವರ ತಂದೆ ನಾರಾಯಣ ಅವರು, ಇದು ನನ್ನ ಮಗನೇ ಎಂದು ಕಣ್ಣೀರಿಟ್ಟು ಅಂತ್ಯಕ್ರಿಯೆಯನ್ನೂ ಮಾಡುತ್ತಾರೆ. ಅಲ್ಲಿಗೆ ಆ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, 11 ವರ್ಷಗಳ ನಂತರ ಈಗ ಬಯಲಾಗಿರುವ ಸತ್ಯ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ!&lt;/strong&gt;&lt;/p&gt;&lt;h2&gt;&lt;strong&gt;ಸಾಲ ತೀರಿಸಲು ಸಾವಿನ ನಾಟಕ&lt;/strong&gt;&lt;/h2&gt;&lt;p&gt;ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯ ನಿವಾಸಿಯಾಗಿದ್ದ ಅರುಣ್ ಕುಮಾರ್ ರೆಡ್ಡಿಗೆ ಸಾಲದ ಬಾಧೆ ವಿಪರೀತವಾಗಿತ್ತು. ಸ್ನೇಹಿತರಿಂದ ಸಾಕಷ್ಟು ಹಣ ಸಾಲ ಪಡೆದಿದ್ದ ಅರುಣ್, ಅದನ್ನು ತೀರಿಸಲಾಗದೆ ಕಂಗಾಲಾಗಿದ್ದ. ಜೊತೆಗೆ ತನ್ನ ಹೆಸರಿನಲ್ಲಿದ್ದ ಇನ್ಶೂರೆನ್ಸ್ ಹಣವನ್ನು ಪಡೆಯುವ ದುರಾಸೆಯೂ ಇವನಿಗಿತ್ತು. ಈ ಎರಡೂ ಸಮಸ್ಯೆಗಳಿಗೆ ಅವನು ಕಂಡುಕೊಂಡ ದಾರಿ - ತನ್ನದೇ ಸಾವಿನ ನಾಟಕವಾಡುವುದು!&lt;/p&gt;&lt;h2&gt;&lt;strong&gt;'ದೃಶ್ಯಂ' ಸಿನಿಮಾ ಮಾದರಿಯ ಸ್ಕೆಚ್&lt;/strong&gt;&lt;/h2&gt;&lt;p&gt;ಈ ಕಿಲಾಡಿ ಅರುಣ್ ರೆಡ್ಡಿಗೆ ಸಿನಿಮಾ ನೋಡಿ ಸ್ಫೂರ್ತಿ ಸಿಕ್ಕಿತ್ತು. 2015ರ ಫೆಬ್ರವರಿ 9ರಂದು ಈತ ಒಂದು ಭಯಾನಕ ಸ್ಕೆಚ್ ಹಾಕಿದ. ಮೊದಲು ಸ್ಮಶಾನಕ್ಕೆ ಹೋಗಿ ಅಲ್ಲಿ ಹೂಳಲಾಗಿದ್ದ ಅಪರಿಚಿತ ಹೆಣವೊಂದನ್ನು ಅಗೆದು ಹೊರತೆಗೆದ. ಅದನ್ನು ಚೀಲದಲ್ಲಿ ತುಂಬಿಕೊಂಡು ತನ್ನ ಬೈಕ್&zwnj;ನಲ್ಲಿ ತೇಕಲ್-ಕ್ಯಾಸಂಬಳ್ಳಿ ಮುಖ್ಯರಸ್ತೆಯ ನೀಲಗಿರಿ ತೋಪಿಗೆ ತಂದ. ಹೆಣದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ. ಪೊಲೀಸರು ತಪ್ಪು ದಾರಿಗೆ ತುಳಿಯಲಿ ಎಂದು ತನ್ನ ಆಧಾರ್ ಕಾರ್ಡ್, ಮೊಬೈಲ್ ಫೋನ್, ಸಿಮ್ ಕಾರ್ಡ್, ಚಪ್ಪಲಿ ಮತ್ತು ಬೈಕ್ ಅನ್ನು ಆ ಸುಟ್ಟ ಹೆಣದ ಪಕ್ಕದಲ್ಲೇ ಹಾಕಿ ಪರಾರಿಯಾದ.&lt;/p&gt;&lt;p&gt;&lt;img&gt;&lt;/p&gt;&lt;p&gt;ಆರಂಭದಲ್ಲಿ ಪೊಲೀಸರು ಇದೊಂದು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಅರುಣ್ ತಂದೆ ಕೂಡ ಅದು ತನ್ನ ಮಗನೆಂದೇ ನಂಬಿ ಅಂತ್ಯಕ್ರಿಯೆ ಮಾಡಿದ್ದರು. ತನಿಖೆ ಮುಂದುವರಿದಾಗ ಅರುಣ್ ಸ್ನೇಹಿತರಿಂದ ಈತ ಬದುಕಿರುವ ಬಗ್ಗೆ ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕಿತು. ಕೂಡಲೇ ಎಚ್ಚೆತ್ತ ಪೊಲೀಸರು ಆ ಸುಟ್ಟ ದೇಹದ DNA ಪರೀಕ್ಷೆ ನಡೆಸಿದಾಗ ಅದು ಅರುಣ್ ದೇಹವೇ ಅಲ್ಲ ಎನ್ನುವುದು ಸಾಬೀತಾಯಿತು! ಅರುಣ್&zwnj;ನನ್ನು ಪೊಲೀಸರು ಆಗಲೇ ಬಂಧಿಸಿದ್ದರು. ಆದರೆ ಜಾಮಿನಿನ ಮೇಲೆ ಹೊರಬಂದ ಈತ ಮತ್ತೆ ನಾಪತ್ತೆಯಾಗಿಬಿಟ್ಟಿದ್ದ.&lt;/p&gt;&lt;p&gt;ಜಾಮಿನಿನ ಮೇಲೆ ಬಂದ ನಂತರ ಅರುಣ್ ರೆಡ್ಡಿ ತನ್ನ ಹಳೆಯ ಬದುಕನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದ. ತನ್ನ ಕುಟುಂಬದವರನ್ನು ಸಂಪರ್ಕಿಸುವ ಗೋಜಿಗೆ ಹೋಗಲೇ ಇಲ್ಲ. ಚೆನ್ನೈಗೆ ಪರಾರಿಯಾದ ಈತ, ಅಲ್ಲಿ ಬೇರೆಯೇ ಹೆಸರಿನಲ್ಲಿ ಜೀವನ ಆರಂಭಿಸಿದ್ದ. ಅಚ್ಚರಿಯೆಂದರೆ ಅಲ್ಲಿ ಮದುವೆಯಾಗಿ ಮಕ್ಕಳನ್ನೂ ಮಾಡಿಕೊಂಡಿದ್ದ! ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಅರುಣ್&zwnj;ನ ಈ ಕರಾಳ ಹಳೆಯ ಬದುಕಿನ ಬಗ್ಗೆ ಆತನ ಪತ್ನಿಗೆ ಕಿಂಚಿತ್ತೂ ಸುಳಿವಿರಲಿಲ್ಲ.&lt;/p&gt;&lt;p&gt;11 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿದ್ದ ಅರುಣ್ ಸಿಕ್ಕಿಬಿದ್ದಿದ್ದು ತನ್ನದೇ ಒಂದು ಸಣ್ಣ ತಪ್ಪಿನಿಂದ. ಹಳೆಯ ಕೇಸ್&zwnj;ಗಳನ್ನು ಪರಿಶೀಲಿಸುವಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೇಸ್ ಅನ್ನು ಮತ್ತೆ ಕೆದಕಲು ಸೂಚಿಸಿದರು. ಕ್ಯಾಸಂಬಳ್ಳಿ ಪೊಲೀಸರಾದ ಹೆಡ್ ಕಾನ್ಸ್ಟೆಬಲ್ ಚಂದ್ರಶೇಖರ್ ಮತ್ತು ಕಾನ್ಸ್ಟೆಬಲ್ ಧನ್ ಸಿಂಗ್ ಅವರು ಅರುಣ್ ಆಧಾರ್ ವಿವರಗಳನ್ನು ಟ್ರ್ಯಾಕ್ ಮಾಡಲು ಶುರು ಮಾಡಿದರು. ಈ ವೇಳೆ ಅರುಣ್ ತನ್ನ ಆಧಾರ್ ಕಾರ್ಡ್ ಬಳಸಿ ಚೆನ್ನೈನಲ್ಲಿ ಹೊಸ ಸಿಮ್ ಕಾರ್ಡ್ ಖರೀದಿಸಿರುವುದು ಪತ್ತೆಯಾಯಿತು. ಅವನ ಲೊಕೇಶನ್ ಮೇಲೆ ನಿಗಾ ಇಟ್ಟ ಪೊಲೀಸರು ಈ ಬಾರಿ ಯಾವುದೇ ತಪ್ಪು ಮಾಡದೆ ಚೆನ್ನೈಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಕೊನೆಗಾಲ&lt;/strong&gt;&lt;/h3&gt;&lt;p&gt;11 ವರ್ಷಗಳ ಕಾಲ ಸಾವಿನ ನಾಟಕವಾಡಿ ಸುಳ್ಳು ಸಾಕ್ಷ್ಯ ಸೃಷ್ಟಿಸಿ, ಪೊಲೀಸರನ್ನೇ ದಿಕ್ಕು ತಪ್ಪಿಸಿದ್ದ ಅರುಣ್ ರೆಡ್ಡಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮಗ ಸತ್ತೇ ಹೋದ ಎಂದುಕೊಂಡಿದ್ದ ತಂದೆ ಮತ್ತು ಪತಿಯ ಹಳೆಯ ಜೀವನವೇ ಗೊತ್ತಿಲ್ಲದ ಚೆನ್ನೈನ ಪತ್ನಿ ಇಬ್ಬರೂ ಈ ಸತ್ಯ ಕೇಳಿ ಶಾಕ್ ಆಗಿದ್ದಾರೆ. ಸಾಲ ಮತ್ತು ಇನ್ಶೂರೆನ್ಸ್ ಹಣಕ್ಕಾಗಿ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಅರುಣ್ ರೆಡ್ಡಿ ಕಥೆಯೇ ಸಾಕ್ಷಿ. ಸಿನಿಮಾ ನೋಡಿ ಕ್ರೈಮ್ ಮಾಡಬಹುದು, ಆದರೆ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ರೋಚಕ ಕಥೆಯ ನೀತಿ.&lt;/p&gt;]]></content:encoded>
            <category>crime</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/kolar/dead-man-walking-kolar-police-arrest-man-11-years-after-he-burnt-a-corpse-to-stage-his-own-murder-gkn/articleshow-57uwzcg"/>
        </item>
        <item>
            <title><![CDATA[ಅಪ್ರಾಪ್ತ ಪುತ್ರಿಯ ಮೇಲೆ ನಿರಂತರ ಅತ್ಯಾ*ಚಾರ, 2 ಬಾರಿ ಗರ್ಭಿಣಿ…ಡೆಲಿವರಿ ಬಳಿಕ ಮಗುವಿನ ಮಾರಾಟ ಮಾಡಿದ ಪಾಪಿ ತಂದೆ]]></title>
            <link>https://kannada.asianetnews.com/crime/minor-girl-allegedly-abused-by-father-for-3-years-newborn-baby-sold-8-arrested/articleshow-5ew9xu5</link>
            <guid isPermaLink="true">https://kannada.asianetnews.com/crime/minor-girl-allegedly-abused-by-father-for-3-years-newborn-baby-sold-8-arrested/articleshow-5ew9xu5</guid>
            <pubDate>Wed, 19 Aug 2026 18:34:21 +0530</pubDate>
            <description><![CDATA[&lt;p&gt;Crime News: ಅಪ್ರಾಪ್ತ ಪುತ್ರಿಯ ಮೇಲೆ ಸ್ವತಃ ತಂದೆ ಮೂರು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಗರ್ಭಿಣಿಯಾದ ಮಗಳಿಗೆ ಡೆಲಿವರಿ ಮಾಡಿಸಿ, ಮಗುವನ್ನು ಮಾರಾಟ ಕೂಡ ಮಾಡಲಾಗಿದೆ. ಸದ್ಯ ಎಂಟು ಮಂದಿಯನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyxbtdm422a2bfr331mwmfe,imgname-delhi-high-court-ruling-in-pocso-case-2989ade2-e3bc-4e3c-812d-0d752f09ca01-1778080147892.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯ್&zwnj;ಪುರ: &lt;/strong&gt;ಛತ್ತೀಸ್&zwnj;ಗಢದ ರಾಜಧಾನಿ ರಾಯ್&zwnj;ಪುರದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಮಗಳ ಮೇಲೆ ಆಕೆಯ ತಂದೆಯೇ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಮಾರಾಟ ಮಾಡಿರುವ ಪ್ರಕರಣದಲ್ಲಿ ಅಪ್ರಾಪ್ತೆಯ ತಂದೆ, ಅತ್ತೆ, ಇಬ್ಬರು ನರ್ಸ್&zwnj;ಗಳು ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;2023ರಿಂದ ಮಗಳ ಮೇಲೆ ಲೈಂಗಿಕ ದೌರ್ಜನ್ಯ&lt;/strong&gt;&lt;/h2&gt;&lt;p&gt;ಪೊಲೀಸರ ಪ್ರಕಾರ, 2023ರಲ್ಲಿ ಆರೋಪಿಯ ಪತ್ನಿ ಆತನಿಂದ ಬೇರ್ಪಟ್ಟು ತನ್ನ ಮೂವರು ಹೆಣ್ಣುಮಕ್ಕಳನ್ನು ಆತನ ಬಳಿ ಬಿಟ್ಟು ಹೋಗಿದ್ದರು. ಇದೇ ಸಮಯದಲ್ಲಿ ಪಾಪಿ ತಂದೆ ತನ್ನ ಹಿರಿಯ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಂದುಬಿಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ರಾಯ್&zwnj;ಪುರದ ನ್ಯೂ ರಾಜೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h3&gt;&lt;strong&gt;ಗರ್ಭಿಣಿಯಾದ ಬಾಲಕಿ; ಗರ್ಭಪಾತ&lt;/strong&gt;&lt;/h3&gt;&lt;p&gt;ನಿರಂತರ ಅತ್ಯಾ*ಚಾರದಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಈ ವಿಷಯವನ್ನು ಆಕೆ ತನ್ನ ಅತ್ತೆಗೆ ತಿಳಿಸಿದಾಗ, ಅತ್ತೆ ಅದನ್ನು ತಂದೆಗೆ ತಿಳಿಸಿದ್ದಾಳೆ. ನಂತರ ತಂದೆ ಮತ್ತು ಅತ್ತೆ ಸೇರಿ ಬಾಲಕಿಗೆ ಔಷಧಿ ನೀಡಿ, ಗರ್ಭಪಾತ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗರ್ಭಪಾತದ ಬಳಿಕವೂ ದೌರ್ಜನ್ಯ ಮುಂದುವರಿದಿದ್ದು, 2025ರಲ್ಲಿ ಬಾಲಕಿ ಮತ್ತೆ ಗರ್ಭಿಣಿಯಾಗಿದ್ದಾಳೆ. ನಂತರ ಆಕೆಯನ್ನು ವರ್ಷಾ ಮಂಡಲ್ ಎಂಬ ನರ್ಸ್&zwnj; ಮನೆಗೆ ಕರೆದೊಯ್ಯಲಾಗಿದೆ. ಸುರಕ್ಷಿತ ಹೆರಿಗೆಗೆ ವ್ಯವಸ್ಥೆ ಮಾಡುವುದಾಗಿ ನರ್ಸ್ ಭರವಸೆ ನೀಡಿದ್ದಳು ಎನ್ನಲಾಗಿದೆ. ಬಳಿಕ ಬಾಲಕಿಯನ್ನು ಮತ್ತೊಬ್ಬ ನರ್ಸ್ ಗೀತಾ ರೈ ಅವರ ಮನೆಗೆ ಕಳುಹಿಸಲಾಗಿದ್ದು, ಅಲ್ಲಿ ಸುಮಾರು ಎರಡು ತಿಂಗಳು ಉಳಿದಿದ್ದಳು.&lt;/p&gt;&lt;p&gt;&lt;strong&gt;ನಕಲಿ ದಾಖಲೆ ಬಳಸಿ ಆಸ್ಪತ್ರೆಗೆ ದಾಖಲಿಸಿದ ಆರೋಪ-ನವಜಾತ ಶಿಶು ಮಾರಾಟದ ಆರೋಪ&lt;/strong&gt;&lt;/p&gt;&lt;p&gt;ಪೊಲೀಸರ ಪ್ರಕಾರ, ಗೀತಾ ರೈ ಬಾಲಕಿಯ ನಿಜವಾದ ವಯಸ್ಸನ್ನು ಮರೆಮಾಚಿ, ಆಕೆ ಪ್ರಾಪ್ತವಯಸ್ಕಳು ಮತ್ತು ವಿವಾಹಿತಳು ಎಂದು ಹೇಳಿದ್ದಾಳೆ ಎನ್ನಲಾಗಿದೆ. ಆಧಾರ್ ಕಾರ್ಡ್ ಸೇರಿದಂತೆ ನಕಲಿ ದಾಖಲೆಗಳನ್ನು ಬಳಸಿ ರಾಯ್&zwnj;ಪುರದ ಡಂಗನಿಯಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ದಾಖಲಿಸಲಾಗಿತ್ತು. ಬಳಿಕ ಬಾಲಕಿ ಶಸ್ತ್ರಚಿಕಿತ್ಸೆಯ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಬಳಿಕ ವೈದ್ಯರು, ಬಾಲಕಿಯ ತಂದೆ ಹಾಗೂ ಇತರ ಆರೋಪಿಗಳು ಸೇರಿ ನವಜಾತ ಶಿಶುವನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಹೆರಿಗೆಯ ನಂತರ ಬಾಲಕಿಯನ್ನು ಸುಮಾರು 15 ದಿನಗಳ ಕಾಲ ಗೀತಾ ರೈ ಅವರ ಮನೆಯಲ್ಲಿ ಇರಿಸಲಾಗಿತ್ತು. ನಂತರ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬರಲಾಗಿತ್ತು ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಸೋಶಿಯಲ್ ಮೀಡಿಯಾ ಮೂಲಕ ತಾಯಿಗೆ ವಿಷಯ ತಿಳಿಸಿದ ಬಾಲಕಿ&lt;/strong&gt;&lt;/p&gt;&lt;p&gt;ನಂತರ ಸಂತ್ರಸ್ತೆ ಸೋಶಿಯಲ್ ಮೀಡಿಯಾ ಮೂಲಕ ತನ್ನ ತಾಯಿಯನ್ನು ಸಂಪರ್ಕಿಸಿ ತನ್ನ ಮೇಲೆ ನಡೆದ ಘಟನೆಗಳನ್ನು ವಿವರಿಸಿದ್ದಾಳೆ. ಪೊಲೀಸರ ಪ್ರಕಾರ, ಸೋಮವಾರ ಆಕೆಯ ತಾಯಿ ಬಾಲಕಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದು, ಬಳಿಕ ದೂರು ದಾಖಲಿಸಲಾಗಿದೆ. ನಂತರ ನ್ಯೂ ರಾಜೇಂದ್ರ ನಗರ ಪೊಲೀಸ್ ಠಾಣೆಯ ಪೊಲೀಸರು ಹಲವು ಕಾಯ್ದೆಗಳ ಅಡಿಯಲ್ಲಿ ಆರೋಪಿ ಮತ್ತು ಆತನಿಗೆ ಸಹಕರಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆಯ ತಂದೆ ಮತ್ತು ಅತ್ತೆ ಸೇರಿದಂತೆ ರೋಹಿತ್ ಕುಮಾರ್ ರೈ, ಅವರ ಪತ್ನಿ ಯೋಗಿತಾ ರೈ ಅಲಿಯಾಸ್ ಗೀತಾ, ಖಾಸಗಿ ಆಸ್ಪತ್ರೆಯ ಸೂಪರ್&zwnj;ವೈಸರ್ ಸಾಹೇಬ್ ಮಂಡಲ್, ಅವರ ಪತ್ನಿ ವರ್ಷಾ ಮಂಡಲ್, ನವಜಾತ ಮಗುವನ್ನು ಖರೀದಿಸಿದರೆಂದು ಆರೋಪಿಸಲಾದ ವ್ಯಕ್ತಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Pavna Das</dc:creator>
            <atom:link href="https://kannada.asianetnews.com/crime/minor-girl-allegedly-abused-by-father-for-3-years-newborn-baby-sold-8-arrested/articleshow-5ew9xu5"/>
        </item>
        <item>
            <title><![CDATA[ಪವಿತ್ರಾ ಗೌಡ ನನ್ನ ಮಗಳಿದ್ದಂತೆ, ನೋಡಲಾಗ್ತಿಲ್ಲ-  ಜೈಲಿಗೆ ಹೋಗಿ ಬಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಹೇಳಿದ್ದೇನು]]></title>
            <link>https://kannada.asianetnews.com/karnataka-districts/state-womens-commission-chairperson-nagalakshmi-about-pavitra-gowdas-situation-suc/articleshow-5rqrifz</link>
            <guid isPermaLink="true">https://kannada.asianetnews.com/karnataka-districts/state-womens-commission-chairperson-nagalakshmi-about-pavitra-gowdas-situation-suc/articleshow-5rqrifz</guid>
            <pubDate>Wed, 19 Aug 2026 14:34:44 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಪವಿತ್ರಾ ಮಾನಸಿಕವಾಗಿ ಕುಗ್ಗಿದ್ದು, ಅವರ ಸ್ಥಿತಿ ನೋವು ತಂದಿದೆ ಎಂದು ನಾಗಲಕ್ಷ್ಮೀ ಭಾವುಕರಾಗಿ ನುಡಿದರು. ಇದೇ ವೇಳೆ ಅವರು ಜೈಲಿನಲ್ಲಿದ್ದ ಇತರೆ ಮಹಿಳಾ ಕೈದಿಗಳ ಯೋಗಕ್ಷೇಮವನ್ನೂ ವಿಚಾರಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m0cm4y756gdtche183rcemhz,imgname-nagalakshmi-and-pavitra-gowda-1787130181861.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೊತೆ ಜೈಲಿನಲ್ಲಿ ಇರುವವರು ಪವಿತ್ರಾ ಗೌಡ (Pavitra Gowda) ಅವರಿಗೆ ಕೆಲ ದಿನಗಳಿಂದ ಲೋ ಬಿಪಿ ಸಮಸ್ಯೆ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ, ಅವರು ಬಂಧಿಯಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು, ಪವಿತ್ರಾ ಗೌಡ ಸೇರಿದಂತೆ ಮಹಿಳಾ ಕೈದಿಗಳ ಯೋಗಕ್ಷೇಮ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದರು.&lt;/p&gt;&lt;p&gt;ಆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪವಿತ್ರಾಗೌಡ ಸೇರಿದಂತೆ ಎಲ್ಲ ಮಹಿಳಾ ಕೈದಿಗಳ ಜೊತೆ ಮಾತನಾಡಿರುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಜೈಲುಗಳಿಗೆ ಭೇಟಿ ನೀಡುತ್ತೇನೆ. ಇಂದು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. 200 ಮಂದಿ ಮಹಿಳಾ ಖೈದಿಗಳು ಜೈಲಿನಲ್ಲಿದ್ದಾರೆ. ಇಂದು ಆರು ಮಂದಿ ರಿಲೀಸ್ ಆಗಿದ್ದಾರೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಕೈದಿಗಳಿಗೆ ನೀಡುವ ಊಟವನ್ನು ಸ್ವತಃ ಸೇವಿಸಿ ಪರಿಶೀಲನೆ ಮಾಡಿದ್ದೇನೆ. ತರಕಾರಿ ದಿನಸಿ ಸ್ಟೋರ್ ರೂಮ್ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಪವಿತ್ರಾ ಗೌಡ ಮಗಳಿದ್ದಂತೆ&lt;/strong&gt;&lt;/h2&gt;&lt;p&gt;ಇದೇ ವೇಳೆ ಪವಿತ್ರಾ ಗೌಡ ಅವರ ಸ್ಥಿತಿಗೆ ಕಂಬನಿ ಮಿಡಿದ ಸಚಿವೆ, ಜೈಲಿನಲ್ಲಿ ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಆಕೆ ನನಗೆ ಮಗಳ ಸಮಾನ. ಅವರ ಸ್ಥಿತಿ ನೋವಿನಿಂದ ಕೂಡಿದೆ. ತಾಯಿಯಾಗಿ ನಮಗೆ ಪವಿತ್ರಾಗೌಡ ಅಥವಾ ಇತರ ಯಾವುದೇ ಹೆಣ್ಣುಮಗಳು ಇರಲಿ ಎಲ್ಲರೂ ಒಂದೇ ಎಂದು ಭಾವುಕರಾದರು. ಪವಿತ್ರಾ ಗೌಡ ಸೇರಿದಂತೆ ಹಲವು ಕೈದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡೆ. ಅವರ ಸ್ಥಿತಿ ಹೇಳಬಾರದು. ಪವಿತ್ರಾ ನನಗೆ ಮಗಳ ಸಮಾನ. ಕಾನೂನು ಪ್ರಕಾರ ಏನು ಆಗಬೇಕೊ ಅದು ಆಗುತ್ತದೆ. ಮಹಿಳೆಯರು ಭಾವನಾತ್ಮಕ ಜೀವಿಗಳು. ಇತರೆ ಮಹಿಳಾ ಕೈದಿಗಳ ಸಮಸ್ಯೆಯನ್ನೂ ಆಲಿಸಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು. ಒಂದು ತಪ್ಪನ್ನು ಮಾಡಿ ಜೈಲಿಗೆ ಹೋಗಿರುತ್ತಾರೆ. ಮತ್ತೆ ನಾವು ಅವರ ಬಗ್ಗೆ ಹೆಚ್ಚಾಗಿ ಮಾತನಾಡಿದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;200 ಮಂದಿ ಮಹಿಳಾ ಕೈದಿಗಳು&lt;/strong&gt;&lt;/h3&gt;&lt;p&gt;200 ಮಂದಿ ಮಹಿಳಾ ಕೈದಿಗಳು ಜೈಲಿನಲ್ಲಿದ್ದಾರೆ. ಇಂದು ಆರು ಮಂದಿ ರಿಲೀಸ್ ಆಗಿದ್ದಾರೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಕೈದಿಗಳಿಗೆ ನೀಡುವ ಊಟವನ್ನು ಸ್ವತಃ ಸೇವಿಸಿ ಪರಿಶೀಲನೆ ಮಾಡಿದ್ದೇನೆ. ತರಕಾರಿ ದಿನಸಿ ಸ್ಟೋರ್ ರೂಮ್ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು. ಮಹಿಳಾ ಕೈದಿಗಳನ್ನು ಇಟ್ಟಿರುವ ಬ್ಯಾರಕ್&zwnj;ಗಳನ್ನು ಪರಿಶೀಲಿಸಿದ್ದೇನೆ. ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್&zwnj; ಸೇರಿದಂತೆ ಇತರೆ ಸೌಲಭ್ಯಗಳನ್ನೂ ಪರಿಶೀಲಿಸಿದ್ದೇನೆ. ಇದೇ ವೇಳೆ ಸೊಳ್ಳೆಗಳ ಕಾಟ ವಿಪರೀತವಿದೆ ಎಂಬುದಾಗಿ ಹಲವು ಕೈದಿಗಳು ನೋವು ತೋಡಿಕೊಂಡರು ಎಂದು ಹೇಳಿದರು.&lt;/p&gt;&lt;p&gt;ಜೈಲು ಸಿಬ್ಬಂದಿ ಹೊರಗಿಟ್ಟು ಮಹಿಳಾ ಕೈದಿಗಳ ಜೊತೆ ಚರ್ಚೆ ಮಾಡಲಾಯಿತು. ತಪ್ಪು ಮಾಡದವರು ಯಾರೂ ಇಲ್ಲ, ಬಹುತೇಕ ಮಹಿಳಾ ಖೈದಿಗಳು ತಮ್ಮವರ ಅಪ್ಪುಗೆಗಾಗಿ ಕಾಯುತ್ತಿದ್ದಾರೆ. ಈ ವೇಳೆ ಬಹುತೇಕ ಮಹಿಳಾ ಕೈದಿಗಳು ಸೊಳ್ಳೆಕಾಟದ ಬಗ್ಗೆ ತಿಳಿಸಿದರು. ನಿಷೇಧಿತ ವಸ್ತುಗಳು ಪತ್ತೆ ಬಗ್ಗೆ ದೊಡ್ಡ ಸುದ್ದಿ ಇದೆ. ಆದರೆ ಇಂದಿನ ಭೇಟಿ ವೇಳೆ ಯಾವುದೇ ನಿಷೇಧಿತ ವಸ್ತುಗಳು ಕಂಡಿಲ್ಲ ಎಂದರು. ಎಷ್ಟೋ ಮಂದಿಗೆ ಜಾಮೀನು ಸಿಕ್ಕರೂ ಶ್ಯೂರಿಟಿಗೆ ದುಡ್ಡಿಲ್ಲ. ಹಣ ಕಟ್ಟಲಾಗದೆ ಜೈಲಿನಲ್ಲಿದ್ದಾರೆ. ನೈಜೀರಿಯಾ, ಸೌತ್ ಆಫ್ರಿಕಾ ಸೇರಿದಂತೆ ಹತ್ತು ಮಂದಿ ಪುಟ್ಟ ಮಕ್ಕಳಿದ್ದಾರೆ. ಅಂಗನವಾಡಿಯಲ್ಲಿ ನಾಲ್ಕು ಮಂದಿ ಟೀಚರ್ಸ್ ಇದ್ದಾರೆ. ಮಕ್ಕಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುವುದನ್ನು ಕಂಡರೆ ಖುಷಿಯಾಗುತ್ತದೆ. ಜೈಲು ಭೇಟಿ ಒಂದು ಭಾವನಾತ್ಮಕ ಕ್ಷಣ. ಟೈಮ್&zwnj; ಪಾಸ್​ಗಾಗಿ ಮಾಡುವ ಕರಕುಶಲ ವಸ್ತುಗಳು ಅದ್ಭುತ ಎಂದು ಹೇಳಿದರು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/state-womens-commission-chairperson-nagalakshmi-about-pavitra-gowdas-situation-suc/articleshow-5rqrifz"/>
        </item>
        <item>
            <title><![CDATA[ಇಬ್ಬರು ಮಕ್ಕಳ ಮತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ ಅಪ್ಪನಿಗೇ 25 ಲಕ್ಷ ರೂ. ದಂಡ ಹಾಕಿದ ಹೈಕೋರ್ಟ್​]]></title>
            <link>https://kannada.asianetnews.com/relationship/allahabad-high-court-orders-25-lakh-compensation-for-2-sisters-confined-by-father-suc/articleshow-6tpxb7f</link>
            <guid isPermaLink="true">https://kannada.asianetnews.com/relationship/allahabad-high-court-orders-25-lakh-compensation-for-2-sisters-confined-by-father-suc/articleshow-6tpxb7f</guid>
            <pubDate>Fri, 14 Aug 2026 19:34:08 +0530</pubDate>
            <description><![CDATA[ಸ್ವಯಂಪ್ರೇರಣೆಯಿಂದ ಇಸ್ಲಾಂಗೆ ಮತಾಂತರಗೊಂಡ ಇಬ್ಬರು ವಯಸ್ಕ ಸಹೋದರಿಯರನ್ನು ಅವರ ತಂದೆ ಅಕ್ರಮವಾಗಿ ಬಂಧಿಸಿದ್ದರು. ಈ ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್, ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿಹಿಡಿದು, ಅವರ ತಂದೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m009c67kff3wnsyc1g8q97vm,imgname-conversion-1786716231923.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಲಹಾಬಾದ್​: ಹಿಂದೂ ಹೆಣ್ಣುಮಕ್ಕಳ ತಲೆಕೆಡಿಸಿ, ಅವರಿಗೆ ವಿವಿಧ ರೀತಿಯ ಆಮಿಷ ಒಡ್ಡಿ ಲವ್​ ಜಿಹಾದ್​ ಮಾಡುತ್ತಿರುವ ಗಂಭೀರ ಆರೋಪಗಳು ಹಲವು ಕಡೆಗಳಲ್ಲಿ ಕೇಳಿಬರುತ್ತಿರುವ ನಡುವೆಯೇ, ಇಲ್ಲೊಂದು ಪ್ರಕರಣದಲ್ಲಿ, ಹೈಕೋರ್ಟ್​ ಒಂದು, ತಮ್ಮ ಹೆಣ್ಣುಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಲು ಅನುಮತಿ ಕೊಡದ ಅಪ್ಪನಿಗೆ 25 ಲಕ್ಷ ರೂಪಾಯಿ ದಂಡ ವಿಧಿಸಿದೆ! ಹಿಂದೂ ಧರ್ಮದಿಂದ ಇಸ್ಲಾಂಗೆ ಸ್ವಯಂಪ್ರೇರಿತವಾಗಿ ಮತಾಂತರಗೊಂಡ ನಂತರ ಮಹಿಳೆಯರನ್ನು ಅವರ ಪೋಷಕರ ಮನೆಯಲ್ಲಿ ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಆರೋಪ ಇದ್ದ ಹಿನ್ನೆಲೆಯಲ್ಲಿ, ಅಲಹಾಬಾದ್ ಹೈಕೋರ್ಟ್&zwnj; ಈ ಆದೇಶ ಹೊರಡಿಸಿದೆ. ಮಕ್ಕಳಿಗೆ 25 ಲಕ್ಷ ರೂಪಾಯಿಗಳನ್ನು ಪರಿಹಾರ ನೀಡಬೇಕು ಎಂದು ಆದೇಶಿಸಿದೆ. ಅಪ್ಪನ ಜೊತೆ ಉತ್ತರ ಪ್ರದೇಶ ಸರ್ಕಾರವೂ ದಂಡ ನೀಡಬೇಕು ಎಂದಿದೆ!&lt;/p&gt;&lt;p&gt;ಅವರ ಬಂಧನವು ಕಾನೂನುಬದ್ಧ ಅಧಿಕಾರವನ್ನು ಹೊಂದಿಲ್ಲ ಎಂದಿರುವ ಕೋರ್ಟ್​, ಹೆಣ್ಣುಮಕ್ಕಳು, ತಮ್ಮ ಆಯ್ಕೆಯ ಸ್ಥಳದಲ್ಲಿ ಮತ್ತು ವ್ಯಕ್ತಿಗಳೊಂದಿಗೆ ವಾಸಿಸಲು ಅವಕಾಶವಿದೆ ಎಂದಿದೆ. ಇಬ್ಬರು ವಯಸ್ಕ ಸಹೋದರಿಯರು ಸ್ವಯಂಪ್ರೇರಣೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಅವರನ್ನು ಅವರ ತಂದೆ ಕಾನೂನುಬಾಹಿರವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯದ ಹಿಂದಿನ ಆದೇಶದ ಪ್ರಕಾರ, ಇಬ್ಬರೂ ಮಹಿಳೆಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯದೊಂದಿಗಿನ ಅವರ ಸಂವಾದದ ಸಮಯದಲ್ಲಿ, ಅವರು ತಮ್ಮನ್ನು ಯಾವುದೇ ಬಲವಂತ, ವಂಚನೆ, ಬಲವಂತ, ಪ್ರಚೋದನೆ ಅಥವಾ ಅನಗತ್ಯ ಪ್ರಭಾವವಿಲ್ಲದೆ, ಮಾನಸಿಕ ಶಾಂತಿ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಅನುಸರಿಸುವ ಸಲುವಾಗಿ ಸ್ವತಂತ್ರವಾಗಿ ಮತ್ತು ಸ್ವಯಂಪ್ರೇರಣೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಇಚ್ಛೆಗೆ ವಿರುದ್ಧವಾಗಿ ಬಂಧನ&lt;/strong&gt;&lt;/h2&gt;&lt;p&gt;ಮತಾಂತರದ ನಂತರ, ನಮ್ಮ ತಂದೆ ತಮ್ಮ ಇಚ್ಛೆಗೆ ವಿರುದ್ಧವಾಗಿ ಪೋಷಕರ ಮನೆಯಲ್ಲಿ ಬಂಧಿಸಿದ್ದಾರೆ, ದೈಹಿಕ ನಿರ್ಬಂಧ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ, ನಮ್ಮ ಚಲನೆಯನ್ನು ನಿರ್ಬಂಧಿಸಿದ್ದಾರೆ ಮತ್ತು ಪಾಸ್&zwnj;ಪೋರ್ಟ್&zwnj;ಗಳು, ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ದಾಖಲೆಗಳು, ಬ್ಯಾಂಕ್ ದಾಖಲೆಗಳು ಮತ್ತು ಇತರ ವೈಯಕ್ತಿಕ ವಸ್ತುಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮೇಜರ್&zwnj;ಗಳಾಗಿರುವುದರಿಂದ ಅವರು ಸಂವಿಧಾನದ 21 ಮತ್ತು 25 ನೇ ವಿಧಿಗಳ ಅಡಿಯಲ್ಲಿ ತಮ್ಮ ಧರ್ಮ ಮತ್ತು ವಾಸಸ್ಥಳವನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;p&gt;ಬಲವಂತದ ಮತ್ತು ವಂಚನೆಯ ಧಾರ್ಮಿಕ ಮತಾಂತರದ ಆರೋಪದ ಮೇಲೆ ತಂದೆಯ ದೂರಿನ ಮೇಲೆ ಎಫ್&zwnj;ಐಆರ್ ದಾಖಲಿಸಲಾಗಿದೆ ಎಂದು ವಾದಿಸಿ ರಾಜ್ಯವು ಅರ್ಜಿಯನ್ನು ವಿರೋಧಿಸಿತು. ತನಿಖೆಯ ಸಮಯದಲ್ಲಿ, ಭಾರತೀಯ ನ್ಯಾಯ ಸಂಹಿತಾ, 2023 ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ, 2021 ರ ಅಡಿಯಲ್ಲಿ ಅಪರಾಧಗಳನ್ನು ಸೇರಿಸಲಾಗಿದೆ ಎಂದು ಅದು ಸಲ್ಲಿಸಿತು ಮತ್ತು ಆಪಾದಿತ ಮತಾಂತರವು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ದೊಡ್ಡ ಸಂಘಟಿತ ಪಿತೂರಿಯ ಭಾಗವಾಗಿದೆ ಎಂದು ವಾದಿಸಿತು. 2021 ರ ಕಾಯ್ದೆಯಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಕಾರ್ಯವಿಧಾನಕ್ಕೆ ಅನುಗುಣವಾಗಿ ಮತಾಂತರವನ್ನು ನಡೆಸಲಾಗಿಲ್ಲ ಮತ್ತು ಮಹಿಳೆಯರು ತಮ್ಮ ತಂದೆಯ ಕಸ್ಟಡಿಯಿಂದ ಹೊರಹೋಗಲು ಅನುಮತಿಸುವುದರಿಂದ ನಡೆಯುತ್ತಿರುವ ತನಿಖೆಗೆ ಹಾನಿಯಾಗಬಹುದು ಎಂದು ರಾಜ್ಯವು ವಾದಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅರ್ಜಿದಾರರು ಹೇಬಿಯಸ್ ಕಾರ್ಪಸ್ ವಿಚಾರಣೆಗಳು ಬಂಧನದ ಕಾನೂನುಬದ್ಧತೆಗೆ ಸೀಮಿತವಾಗಿವೆ, ಇಬ್ಬರೂ ಮಹಿಳೆಯರು ತಮ್ಮ ನಂಬಿಕೆ ಮತ್ತು ನಿವಾಸದ ಬಗ್ಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಸಂವಿಧಾನದ 21 ಮತ್ತು 25 ನೇ ವಿಧಿಗಳು ಮತ್ತು ವಯಸ್ಕ ವ್ಯಕ್ತಿಗಳ ನಿರ್ಧಾರಕ ಸ್ವಾಯತ್ತತೆಯನ್ನು ಗುರುತಿಸುವ ನ್ಯಾಯಾಂಗ ಪೂರ್ವನಿದರ್ಶನಗಳನ್ನು ಅವಲಂಬಿಸಿದ್ದಾರೆ ಎಂದು ವಾದಿಸಿದರು.&lt;/p&gt;&lt;h3&gt;&lt;strong&gt;ಸ್ವಯಂ ಪ್ರೇರಣೆಯಿಂದ ಮತಾಂತರ&lt;/strong&gt;&lt;/h3&gt;&lt;p&gt;ಇಬ್ಬರು ವಯಸ್ಕ ಮಹಿಳೆಯರ ಸ್ವಾತಂತ್ರ್ಯವನ್ನು ಪರಿಗಣಿಸುವಾಗ ನ್ಯಾಯಾಲಯವು ಈ ತತ್ವಗಳನ್ನು ಅನ್ವಯಿಸುತ್ತದೆ ಎಂದು ಕಂಡುಕೊಂಡಿತು. ಇಬ್ಬರೂ ತಾವು ಸ್ವಯಂಪ್ರೇರಣೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದೇವೆ ಮತ್ತು ಯಾವುದೇ ಬಲವಂತ ಅಥವಾ ಅನಗತ್ಯ ಪ್ರಭಾವಕ್ಕೆ ಒಳಗಾಗಿಲ್ಲ ಎಂದು ನಿರಂತರವಾಗಿ ಹೇಳಿರುವುದನ್ನು ಅದು ಗಮನಿಸಿತು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/allahabad-high-court-orders-25-lakh-compensation-for-2-sisters-confined-by-father-suc/articleshow-6tpxb7f"/>
        </item>
        <item>
            <title><![CDATA[ಅಯ್ಯಯ್ಯೋ.. ಕೊಡಗಿನಲ್ಲಿ ಆಘಾತಕಾರಿ ಘಟನೆ: ತಾಯಿಯ ಅಕ್ರಮ ಸಂಬಂಧಕ್ಕೆ ಮಗು ಬಲಿ]]></title>
            <link>https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</link>
            <guid isPermaLink="true">https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh</guid>
            <pubDate>Fri, 14 Aug 2026 18:21:45 +0530</pubDate>
            <description><![CDATA[&lt;p&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0057f25jdv3zpakrwkwtgy9,imgname-knk-1786711882820.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು&lt;/strong&gt;&lt;/h2&gt;&lt;p&gt;&lt;strong&gt;ಕೊಡಗು (ಆ.14): &lt;/strong&gt;ಪ್ರಪಂಚದ ಜ್ಞಾನವನ್ನೇ ಅರಿಯದ ನಾಲ್ಕು ವರ್ಷದ ಕಂದ ಅದು. ತನ್ನ ತಾಯಿಯೊಂದಿಗೆ ಆಟವಾಡಿಕೊಂಡು ಕಾಲ ಕಳೆದುಕೊಂಡಿತ್ತು. ಆದರೆ ಅದೇ ತಾಯಿಯ ಅನೈತಿಕ ಸಂಬಂಧವೇ ಈ ಮಗುವಿನ ಜೀವಕ್ಕೆ ಎರವಾಗುತ್ತದೆ, ಬಲಿ ಪಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೌದು ಆಕೆಯ ಅನಾಚಾರಕ್ಕೆ ಏನೂ ತಪ್ಪು ಮಾಡದ ಆ ಮಗು ದಾರುಣವಾಗಿ ಅಂತ್ಯಕಂಡಿದೆ.&amp;nbsp;ಅಂಗನವಾಡಿಗೆ ಹೋಗಿ ಬರುತ್ತಾ ತನ್ನ ತಾಯಿಯೊಂದಿಗೆ ಆಟಮಾಡಿಕೊಂಡು ಇದ್ದ ನಾಲ್ಕು ವರ್ಷದ ಕಂದ ಇದು. ಹೆಸರು ಚರಣ್ ಕೊಡಗು ಜಿಲ್ಲೆ ವಿರಾಜಪೇಟೆ ಪಟ್ಟಣದ ವ್ಯಾಪ್ತಿಯಲ್ಲಿ ಲೈನ್ ಮನೆಯೊಂದರಲ್ಲಿ ತಾಯಿ ಮತ್ತವರ ಸಂಬಂಧಿಕರ ಮನೆಯವರೊಂದಿಗೆ ಇತ್ತು.&lt;/p&gt;&lt;p&gt;ಆದರೆ ಅದೇ ತಾಯಿ ಮತ್ತು ದೊಡ್ಡಪ್ಪ ಪ್ರತಾಪನ ಅನೈತಿಕ ಸಂಬಂಧಕ್ಕೆ ಬಲಿಯಾಗಿ ಈ ಮಗು ಹೀಗೆ ಶಾಶ್ವತವಾಗಿ ಕಣ್ಮುಚ್ಚುವಂತೆ ಆಗಿದೆ. ಹೌದು ಮೂಲತಃ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕದನೂರಿನವಳಾದ ಸುಚಿತ್ರಾ ಐದಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವನಾದ ಪಂಪನಗೌಡ ಎಂಬುವರನ್ನು ಪ್ರೀತಿ ಮದುವೆ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಹುಟ್ಟಿದ್ದರು. ಅದರಲ್ಲಿ ಕಿರಿಯವನು ಈಗ ಹೀಗೆ ಮಲಗಿರುವ ಬಾಲಕ ಚರಣ್. ಕೂಲಿ ಮಾಡಿದ್ದರೂ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರ ನಡೆಯುತಿತ್ತು.&lt;/p&gt;&lt;p&gt;ಇದರ ನಡುವೆಯೇ ಈ ಸುಚಿತ್ರಾಗೆ ತನ್ನ ಸೋದರ ಸಂಬಂಧಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧ ಬೆಳಸಿಕೊಂಡಿದ್ದಳು. ಇದು ಆರಂಭದಲ್ಲಿ ಪಂಪನಗೌಡನಿಗೆ ಗೊತ್ತೇ ಆಗಿರಲಿಲ್ಲ. ಆದರೆ ಅದ್ಯಾವಾಘ ಮಿತಿಮೀರಿ ಹೋಯಿತೊ, ಪಂಪನಗೌಡ ಇವರ ಸಹವಾಸವೇ ಬೇಡ ಎಂದು ದೂರವಾಗುವುದಕ್ಕೆ ಶುರುಮಾಡಿದ್ದ. ಆರು ತಿಂಗಳ ಹಿಂದೆ ಅಜ್ಜಿಯ ಮನೆಗೆ ಹೋಗಿ ಬರುತ್ತೇನೆ ಬೆಂಗಳೂರಿನಿಂದ ಕೊಡಗಿಗೆ ಬಂದಿದ್ದ ಸುಚಿತ್ರಾ ವಿರಾಜಪೇಟೆಯಲ್ಲಿರುವ ತನ್ನ ಸಹೋದರ ಸಂಬಂಧಿ ಅಕ್ಕನ ಮನೆಯಲ್ಲಿಯೇ ಪರ್ಮನೆಂಟ್ ಆಗಿ ಉಳಿದಿದ್ದಳು. ಇದು ಬೇಸರವಾದಾಗ ಸುಚಿತ್ರಾ ಗಂಡ ಪಂಪನಗೌಡ ಬೆಂಗಳೂರು ಬಿಟ್ಟು ರಾಯಚೂರಿಗೆ ಹೋಗಿದ್ದ.&lt;/p&gt;&lt;p&gt;ಇತ್ತ ಎಲ್ಲರೂ ಕೂಲಿ ಕಾರ್ಮಿಕರಾಗಿರುವ ಸುಚಿತ್ರಾ, ಆಕೆಯ ಬಾವ ಪ್ರತಾಪ್ ಹಾಗೂ ಆತನ ಪತ್ನಿ ಸೇರಿದಂತೆ ಮೂವರು ವಿರಾಜಪೇಟೆಯ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾ ಲೈನ್ ಮನೆಯೊಂದರಲ್ಲಿ ವಾಸವಾಗಿದ್ದರು. ಮದ್ಯಕ್ಕೆ ದಾಸರಾಗಿದ್ದ ಸುಚಿತ್ರಾ ಹಾಗೂ ಪ್ರತಾಪ್ ನಡುವೆ ಇರುವ ಅಕ್ರಮ ಸಂಬಂಧದ ವಿಷಯಕ್ಕೆ ಆಗಿಂದ್ದಾಗೆ ಗಲಾಟೆಯನ್ನು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪಾಪಿ ಪ್ರತಾಪ್ ತನ್ನ ಪತ್ನಿಗೆ ನೀನು ಬೇಡ ಹೊರಟು ಹೋಗು, ನನಗೆ ಸುಚಿತ್ರನೇ ಸಾಕು ಎಂದು ಗಲಾಟೆ ಮಾಡುತ್ತಿದ್ದನಂತೆ.&lt;/p&gt;&lt;p&gt;ಇದೇ ವಿಚಾರವಾಗಿ ಗುರುವಾರವೂ ಕೂಡ ಗಲಾಟೆಯಾಗಿದೆ ಎನ್ನಾಗಿದೆ. ಮಾತಿಗೆ ಮಾತು ಬೆಳೆದು ಪಾಪಿ ಪ್ರತಾಪ್ ಸುಚಿತ್ರಾಳ ಮೇಲೆ ಹಲ್ಲೆ ಮಾಡಿದ್ದಾನೆ. ಆಕೆಯ ತಲೆಗೆ ಕೊಡಲಿಯಿಂದ ಕೊಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆಕೆ ಸದ್ಯ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಗಲಾಟೆ ವೇಳೆ ಜೊತೆಯಲ್ಲಿಯೇ ಇದ್ದ ನಾಲ್ಕು ವರ್ಷದ ಮಗು ಚರಣ್ಗೆ ಮಗು ಎನ್ನುವುದನ್ನು ನೋಡದೆ ಬಡಿಗೆಯಿಂದ ಯದ್ವಾತದ್ವಾ ಹೊಡೆದಿದ್ದಾನೆ. ತೀವ್ರಪೆಟ್ಟು ತಿಂದ ಬಾಲಕ ನೋವು ತಾಳಲಾರದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋದ ವಿರಾಜಪೇಟೆ ನಗರ ಠಾಣೆ ಪೊಲೀಸರು ಪಾಪಿ ಪ್ರತಾಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಅಕ್ರಮ ಸಂಬಂಧದ ಜಗಳದಲ್ಲಿ ಏನೂ ಅರಿಯದ ನಾಲ್ಕು ವರ್ಷದ ಕಂದ ಚರಣ್ ದಾರುಣವಾಗಿ, ಬರ್ಭರವಾಗಿ ಹ*ತ್ಯೆಯಾಗಿದೆ. ಚಿಕ್ಕಮಗುವೆಂದು ನೋಡದೆ ಬಡಿಗೆಯಿಂದ ಹೊಡೆದು ಬಾಲಕನನ್ನು ಹ*ತ್ಯೆ ಮಾಡಿ ಹೇಯ ಕೃತ್ಯವೆಸಗಿದ ಪಾಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಮಗುವಿನ ತಂದೆ ಪಂಪನಗೌಡ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/kodagu-crime-four-year-old-boy-charan-dies-after-assault-in-virajpet-gvd/articleshow-8si36kh"/>
        </item>
        <item>
            <title><![CDATA[ಕಳ್ಳರು ಸಿಗದೇ ಪೊಲೀಸರು ಕೈಚೆಲ್ಲಿದ್ರು, ಚಿನ್ನಾಭರಣ ಕದ್ದೋರೇ ವಾಪಸ್​ ತಂದಿಟ್ರು- ಸಿನಿಮಾ ಮೀರಿಸೋ ರಿಯಲ್​ ಸ್ಟೋರಿ]]></title>
            <link>https://kannada.asianetnews.com/crime/who-stole-gold-jewellery-returned-it-after-15-days-they-also-wrote-a-letter-of-apology-suc/articleshow-9e1w8kc</link>
            <guid isPermaLink="true">https://kannada.asianetnews.com/crime/who-stole-gold-jewellery-returned-it-after-15-days-they-also-wrote-a-letter-of-apology-suc/articleshow-9e1w8kc</guid>
            <pubDate>Fri, 14 Aug 2026 17:59:57 +0530</pubDate>
            <description><![CDATA[&lt;p&gt;ಆಂಧ್ರಪ್ರದೇಶದ ಕಾಕಿನಾಡದಲ್ಲಿ, ಸುಮಾರು 6.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 50 ಸಾವಿರ ನಗದು ಕದ್ದಿದ್ದ ಕಳ್ಳರು, 15 ದಿನಗಳ ನಂತರ ಪಶ್ಚಾತ್ತಾಪದಿಂದ ಅದನ್ನು ವಾಪಸ್ ತಂದಿಟ್ಟಿದ್ದಾರೆ. ಕದ್ದ ವಸ್ತುಗಳ ಜೊತೆಗೆ, ತಾವು ಮಾಡಿದ್ದು ತಪ್ಪು ಎಂದು ಅರಿವಾಗಿರುವುದಾಗಿ ಮತ್ತು ಖರ್ಚಾದ 22 ಸಾವಿರ ರೂಪಾಯಿ ಹೊರತುಪಡಿಸಿ ಉಳಿದದ್ದನ್ನು ಹಿಂದಿರುಗಿಸುತ್ತಿರುವುದಾಗಿ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m003y98t8n2jv7xb5kgtchx3,imgname-theft-case-1786710533402.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪು ಮಾಡಿದ ಬಳಿಕ, ಅದರ ಬಗ್ಗೆ ಪಶ್ಚಾತ್ತಾಪ ಪಡುವವರು ಹಲವರು ಇದ್ದಾರೆ. ಆದರೆ, ಆ ಅಪರಾಧದಿಂದ ಮುಕ್ತಿಯನ್ನು ಹೇಗೆ ಪಡೆಯಬೇಕು ಎನ್ನುವುದು ತಿಳಿಯುವುದಿಲ್ಲ. ಆದರೆ ಇಲ್ಲೊಂದು ಘಟನೆಯಲ್ಲಿ, ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ಕಳ್ಳರಿಗೆ ಕೊನೆಗೆ ತಾವು ಮಾಡಿದ್ದು ತಪ್ಪು ಎಂದು ತಿಳಿದು ಕ್ಷಮಾಪಣೆಯ ಪತ್ರದ ಜೊತೆಗೆ ಎಲ್ಲವನ್ನೂ ವಾಪಸ್​ ಇಟ್ಟು ಹೋಗಿರುವ ಕುತೂಹಲದ ಘಟನೆಯೊಂದು ನಡೆದಿದೆ. ಮನೆಯ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ದೋಚಿಕೊಂಡು ಪರಾರಿಯಾಗಿದ್ದ ಕಳ್ಳ, 15 ದಿನಗಳ ಬಳಿಕ ಪಶ್ಚಾತ್ತಾಪದಿಂದ ಮನೆ ಬಾಗಿಲಿಗೆ ಅದನ್ನು ವಾಪಸ್ ತಂದಿಟ್ಟಿದ್ದಾರೆ.&lt;/p&gt;&lt;p&gt;ಈ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ಕದ್ದ ವಸ್ತುಗಳ ಜೊತೆಗೆ &lsquo;ನಮ್ಮನ್ನು ಕ್ಷಮಿಸಿ&rsquo; ಎಂದು ಕೈಬರಹದ ಪತ್ರವನ್ನೂ ಇಟ್ಟು ಹೋಗಿದ್ದಾರೆ. ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಲ ಗಣೇಶ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಜುಲೈ 18ರಂದು ಗಣೇಶ್ ಅವರು ಕುಟುಂಬ ಸಮೇತ ತಮ್ಮ ಊರಿಗೆ ಹೋಗಿದ್ದರು. ಅದನ್ನು ಗಮನಿಸಿದ್ದ ಕಳ್ಳರು, ಮನೆಯ ಬೀಗ ಒಡೆದು ಸುಮಾರು 6.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಳವು ಮಾಡಿ ಪರಾರಿಯಾಗಿದ್ದರು. ವಾಪಸ್​ ಬಂದ ಕುಟುಂಬಸ್ಥರು ಕಳುವು ಆಗಿರುವುದನ್ನು ನೋಡಿ ಕರಪ ಪೊಲೀಸ್ ಠಾಣೆಗೆ ದೂರು ನೀಡಿದ್ದರು.&lt;/p&gt;&lt;h2&gt;&lt;strong&gt;ಮನೆಯ ಎದುರು ಬ್ಯಾಗ್​!&lt;/strong&gt;&lt;/h2&gt;&lt;p&gt;ಪೊಲೀಸರು ಕೆಲಸ ಆರಂಭಿಸಿದರು. ಆದರೆ ಅವರಿಗೆ ಆ ಕ್ಷಣದಲ್ಲಿ ಕಳ್ಳರ ಸುಳಿವು ಸಿಗಲಿಲ್ಲ. ತನಿಖೆ ಪ್ರಗತಿಯಲ್ಲಿದೆ ಎನ್ನುವ ಸಾಮಾನ್ಯ ಉತ್ತರ ಅವರಿಂದ ಬಂತು. ತಮ್ಮ ಒಡವೆ, ನಗದು ಎಲ್ಲವೂ ಇನ್ನೂ ತಮಗೆ ಕನಸು ಎಂದುಕೊಂಡಿತು ಗಣೇಶ್​ ಕುಟುಂಬ. ಆದರೆ ಸುಮಾರು 15 ದಿನ ಆದ ಬಳಿಕ, ಬೆಳಿಗ್ಗೆ ಎದ್ದು ನೋಡಿದಾಗ, ಮನೆಯ ಆವರಣದಲ್ಲಿ ಒಂದು ಬ್ಯಾಗ್ ಬಿದ್ದಿತ್ತು. ಅದನ್ನು ತೆರೆದು ನೋಡಿದಾಗ, ಕಳವಾಗಿದ್ದ ಬಹುತೇಕ ಚಿನ್ನಾಭರಣಗಳು ಮತ್ತು ನಗದು ಅದರಲ್ಲೇ ಇತ್ತು. ಬ್ಯಾಗ್&zwnj;ನೊಳಗೆ ಚಿನ್ನಾಭರಣ ಮತ್ತು ಹಣದ ಜೊತೆಗೆ ಒಂದು &lsquo;ಕೈಬರಹದ ಪತ್ರ&rsquo; ಕೂಡ ಇತ್ತು. ಅದರಲ್ಲಿ ಕಳ್ಳರು ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದರು.&lt;/p&gt;&lt;h3&gt;&lt;strong&gt;ಅದರಲ್ಲೊಂದು ಪತ್ರ&lt;/strong&gt;&lt;/h3&gt;&lt;p&gt;&ldquo;ನಮ್ಮನ್ನು ಕ್ಷಮಿಸಿಬಿಡಿ. ನಾವು ಮಾಡಿದ್ದು ದೊಡ್ಡ ತಪ್ಪು. ಅದು ನಮಗೆ ಅರಿವಾಗಿದೆ. ನಿಮ್ಮ ಮನೆಯಿಂದ ಕದ್ದದ್ದನ್ನೆಲ್ಲಾ ವಾಪಸ್​ ಕೊಡುತ್ತಿದ್ದೇವೆ. ಆದರೆ ಕದ್ದ ಹಣದಲ್ಲಿ 22 ಸಾವಿರ ರೂಪಾಯಿ ಖರ್ಚು ಆಗಿದೆ. ಅದನ್ನು ವಾಪಸ್​ ಕೊಡಲು ಆಗುತ್ತಿಲ್ಲ. ಕ್ಷಮಿಸಿ ಎಂದು ಬರೆದಿತ್ತು. ಪೊಲೀಸರ ತನಿಖೆಯಿಂದ ತಮ್ಮ ವಸ್ತು ತಮಗೆ ಸಿಗುವ ಆಸೆಯನ್ನೇ ಬಿಟ್ಟಿದ್ದ ಕುಟುಂಬಸ್ಥರು 22 ಸಾವಿರ ಹೋದರೆ ಹೋಗಲಿ, ಉಳಿದದ್ದು ಸಿಕ್ಕಿತಲ್ಲ ಎಂದು ಖುಷಿಯಿಂದ ಸ್ವೀಕರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/who-stole-gold-jewellery-returned-it-after-15-days-they-also-wrote-a-letter-of-apology-suc/articleshow-9e1w8kc"/>
        </item>
        <item>
            <title><![CDATA[Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!]]></title>
            <link>https://kannada.asianetnews.com/karnataka-districts/son-murders-father-and-dumps-body-in-a-well-in-shivamogga-sns/articleshow-af4z292</link>
            <guid isPermaLink="true">https://kannada.asianetnews.com/karnataka-districts/son-murders-father-and-dumps-body-in-a-well-in-shivamogga-sns/articleshow-af4z292</guid>
            <pubDate>Sat, 15 Aug 2026 14:19:35 +0530</pubDate>
            <description><![CDATA[&lt;p&gt;ಜೀವಾವಧಿ ಶಿಕ್ಷೆ ಮುಗಿಸಿ ಜೈಲಿನಿಂದ ಬಿಡುಗಡೆಯಾಗಿದ್ದ ತಂದೆಯನ್ನು ಮಗನೇ ಕೊಲೆ ಮಾಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು ಮಗ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m029emf9h83vm5acy4825c6v,imgname-shivamogga-father--1786783420904.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿವಮೊಗ್ಗ: &lt;/strong&gt;ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯನ್ನು ಮಗನೇ ಕೊಲೆ ಮಾಡಿ ಮೃತ ದೇಹವನ್ನು ಚಿಕ್ಕಪ್ಪನ ಜಮೀನಿನಲ್ಲಿರುವ ಬಾವಿಗೆ ಎಸೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಸಮೀಪದ ಗೊರಗೋಡಿನಲ್ಲಿ ನಡೆದಿದೆ. ಗ್ರಾಮದ ಸುಬ್ರಾಯ (55) ಮೃತ ವ್ಯಕ್ತಿಯಾಗಿದ್ದಾರೆ.&lt;/p&gt;&lt;h2&gt;ಜೀವಾವಧಿ ಶಿಕ್ಷೆ ಅನುಭವಿಸಿ ಬಂದಿದ್ದ ಮೃತ ವ್ಯಕ್ತಿ&lt;/h2&gt;&lt;p&gt;ಆರೋಪಿ ಮಗ ಜಯಂತ್, ತಂದೆಯ ಜೊತೆ ಜಗಳಕ್ಕಿಳಿದು, ಕತ್ತಿ ಹಾಗೂ ಕೋಲಿನಿಂದ ತಂದೆಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತಂದೆಯನ್ನು ಕೊಲೆಗೈದ ಬಳಿಕ ತಮ್ಮ ಚಿಕ್ಕಪ್ಪನ ಗದ್ದೆಯಲ್ಲಿರುವ ಬಾವಿಗೆ ಶವವನ್ನು ಎಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಕೊಲೆಯಾಗಿರುವ ಸುಬ್ರಾಯ , ಈ ಹಿಂದೆ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ ಸುಮಾರು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನಂತೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ ಇತ್ತೀಚೆಗೆ, ಅಂದರೆ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ವಾಪಸ್ ಬಂದಿದ್ದ ಎನ್ನಲಾಗಿದೆ.&lt;/p&gt;&lt;h2&gt;ಜೈಲಿನಿಂದ ಬಂದ ಬಳಿಕ ಮಗ-ತಾಯಿಯನ್ನು ಕೊಲೆ ಮಾಡುವ ಬೆದರಿಕೆ&lt;/h2&gt;&lt;p&gt;ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಊರಿಗೆ ಬಾರದೇ ಬೇರೆ ಊರಿನಲ್ಲಿ ಸುಬ್ರಾಯ ನೆಲೆಸಿದ್ದನಂತೆ. ಆದರೆ 5 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ ಆತ, ಊರಿಗೆ ಬಂದವನು ತನ್ನ ಪತ್ನಿ ಹಾಗೂ ಮಗನಿಗೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅವರನ್ನು ಕೊಲೆಗೆ ಬೆದರಿಸುತ್ತಿದ್ದನಂತೆ. ಈ ಬಗ್ಗೆ ಪತ್ನಿ ಮತ್ತು ಮಗ ಇಬ್ಬರು ಪೊಲೀಸರಿಗೆ ದೂರು ಕೂಡ ನೀಡಿದ್ದರಂತೆ.&lt;/p&gt;&lt;p&gt;ಆದರೆ ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿ ಕ್ರಮಕೈಗೊಳ್ಳಬೇಕು ಎಂದಿರುವಾಗಲೇ ಮತ್ತೆ ಸುಬ್ರಾಯ, ಮಗ ಹಾಗೂ ಪತ್ನಿಯೊಂದಿಗೆ ಜಗಳ ಮಾಡಿದ್ದಾನಂತೆ. ಇದರಿಂದ ತಪ್ಪಿಸಿಕೊಳ್ಳಲು ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕೃತ್ಯ ಎಸಗಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಪೊಲೀಸರ ನಿರ್ಲಕ್ಷ್ಯವೇ ಆರೋಪಿಯ ದುಡುಕಿನ ನಿರ್ಧಾರಕ್ಕೆ ಕಾರಣವಾಯ್ತಾ?&lt;/h2&gt;&lt;p&gt;ಇನ್ನು, ಘಟನೆ ಕುರಿತಂತೆ ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ ಸ್ಥಳೀಯರಾದ ಸತ್ಯನಾರಾಯಣ ಅವರು, ಸುಬ್ರಾಯ ಅಲಿಯಾಸ್ ಕತ್ತಿ ಸುಬ್ಬಾ ಕೊಲೆಯಾಗಿದೆ, ಅದರಲ್ಲೂ ಆತನ ಮಗನೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಾಗ ನಮಗೆ ಬಹಳ ಬೇಸರ ಆಯ್ತು. ಬೇಸರ ಎರಡು ಕಾರಣಕ್ಕೆ ಆಯ್ತು, ಒಂದು ವ್ಯವಸ್ಥೆಯ ಬಗ್ಗೆ ಬೇಸರ ಆಯ್ತು. ಎರಡನೇ ಅಂಶ ತಂದೆಯನ್ನೇ ಕೊಲೆ ಮಾಡಲು ಮಗ ಮುಂದಾಗಿದ್ದಾನೆ ಅಂದರೆ, ಅದರ ಹಿಂದಿನ ಮನೋವೈಜ್ಞಾನಿಕ ಕಾರಣವೇನು? ಹುಡುಗ ದುಡುಕಿ ಬಿಟ್ಟಿದ್ದಾನೆ ಅನಿಸಿದೆ. ಆದರೆ ಇಲ್ಲಿ ಒಂದು ಅಂಶ ಗಮನಿಸಬೇಕಾದರೆ, ಕೊಲೆಯಾದ ಸುಬ್ರಾಯ 17 ವರ್ಷಗಳ ಹಿಂದೆ ಇಬ್ಬರನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ. ಆದರೆ ಎರಡು ವರ್ಷಗಳ ಹಿಂದೆ ಆತ ಬಿಡುಗಡೆಯಾಗಿ ಬಂದಿದ್ದ, ಆಗ ಮಗ-ಪತ್ನಿಯ ಕೊಲೆಗೆ ಯತ್ನಿಸಿದ್ದ. ಆದರೆ ಸಾಕ್ಷಿ ಆಧಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆತ ಮತ್ತೆ ಜೈಲಿನಿಂದ ವಾಪಸ್ ಬಂದಿದ್ದ. ಆಗ ಮತ್ತೆ ಅಮ್ಮ-ಮಗನ ಕೊಲೆಗೆ ಬೆದರಿಕೆ ಹಾಕಿದ್ದ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು, ಆದರೆ ಈಗ ಕೊಲೆ ಮಾಡಿರುವ ಹುಡುಗ ಎಲ್ಲಿ ಅಪ್ಪನ ಕೈಯಲ್ಲಿ ಕೊಲೆ ಆಗ್ತಿನೋ ಅಥವಾ ಅಮ್ಮನ ಕೊಲೆ ಆಗುತ್ತೆ ಅನ್ನೋ ಆತ್ಮರಕ್ಷಣೆಗೆ ಈ ಕೃತ್ಯ ಮಾಡಿಬಹದು. ಪೊಲೀಸರು ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದನೆ ನೀಡಬಹುದಿತ್ತು. ಆದರೆ ಕೊಲೆಯಾದ ವ್ಯಕ್ತಿಗೂ ಮನೋಚಿಕಿತ್ಸೆ ಕೊಡಿಸುವುದು ಅಥವಾ ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಕ್ರಮವನ್ನು ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/son-murders-father-and-dumps-body-in-a-well-in-shivamogga-sns/articleshow-af4z292"/>
        </item>
        <item>
            <title><![CDATA[ಉಗ್ರ ಕಸಬ್​ನ ಕೊನೆಯ ಆಸೆ ಆ ಎರಡು ಟೊಮ್ಯಾಟೋ! ಅವನ ಜೊತೆಯೇ ಮಣ್ಣಾಯಿತು ಆ ವಿಚಿತ್ರ ರಹಸ್ಯ]]></title>
            <link>https://kannada.asianetnews.com/crime/terrorist-kasabs-last-wish-was-those-two-tomatoes-strange-secret-was-buried-with-him-suc/articleshow-bn3oy2v</link>
            <guid isPermaLink="true">https://kannada.asianetnews.com/crime/terrorist-kasabs-last-wish-was-those-two-tomatoes-strange-secret-was-buried-with-him-suc/articleshow-bn3oy2v</guid>
            <pubDate>Tue, 18 Aug 2026 13:30:50 +0530</pubDate>
            <description><![CDATA[2008ರ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್&zwnj;ನನ್ನು 2012ರಲ್ಲಿ ಗಲ್ಲಿಗೇರಿಸಲಾಯಿತು. ಗಲ್ಲುಶಿಕ್ಷೆಗೂ ಮುನ್ನ ಆತ ತನ್ನ ಕೊನೆಯ ಆಸೆಯಾಗಿ ಟೊಮ್ಯಾಟೋ ತಿನ್ನಲು ಕೇಳಿದ್ದ. ಆದರೆ ಆತ ಟೊಮ್ಯಾಟೋವನ್ನೇ ಏಕೆ ಕೇಳಿದ ಎಂಬ ರಹಸ್ಯ ಮಾತ್ರ ಅವನ ಸಾವಿನೊಂದಿಗೆ ನಿಗೂಢವಾಗಿಯೇ ಉಳಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09y1c9zhzn40s9ymtytv211,imgname-kasab-and-tomato-1787039887679.jpg" type="image/jpeg" height="390" width="690"/>
            <content:encoded><![CDATA[&lt;p&gt;166ಕ್ಕೂ ಅಧಿಕ ಜನರ ಸಾವಿಗೆ, 300ಕ್ಕೂ ಅಧಿಕ ಜನರ ಭೀಕರ ನೋವಿಗೆ ಕಾರಣವಾದ ಭಯಾನಕ ಘಟನೆ 2008ರ ನವೆಂಬರ್​ 26ರಂದು ನಡೆದಿದ್ದ ಮುಂಬೈ ಭಯೋತ್ಪಾದನಾ ದಾಳಿ. 26/11 ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾದ ಈ ದಾಳಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಮುಂಬೈ ದಾಳಿಗೆ ಬಂದಿದ್ದ 10 ಉಗ್ರರ ಪೈಕಿ ಜೀವಂತವಾಗಿ ಸೆರೆ ಸಿಕ್ಕವ ಅಮೀರ್ ಅಜ್ಮಲ್ ಕಸಬ್. 2012ರಲ್ಲಿ ಅವನನ್ನು ಗಲ್ಲಿಗೇರಿಸಲಾಗಿತ್ತು. 2008ರಿಂದ 2012ರವರೆಗೆ ಹಲವು ಕೋರ್ಟ್​ಗಳನ್ನು ಅಲೆದು ಕೊನೆಗೆ ಸುಪ್ರೀಂಕೋರ್ಟ್​ನಲ್ಲಿ ಅವನಿಗೆ ಗಲ್ಲುಶಿಕ್ಷೆ ಕಾಯಂ ಆಗಿತ್ತು. ಆಗಸ್ಟ್ 29, 2012ರಲ್ಲಿ ಸುಪ್ರೀಂಕೋರ್ಟ್​ ಅಂತಿಮವಾಗಿ ಮರಣದಂಡನೆ ವಿಧಿಸಿತ್ತು. ಇನ್ನೊಂದು ವಾರದಲ್ಲಿ, ಈ ಗಲ್ಲುಶಿಕ್ಷೆ ವಿಧಿಸಿ, 14 ವರ್ಷ ಆಗಲಿದೆ.&lt;/p&gt;&lt;p&gt;ನವೆಂಬರ್ 21, 2012 ರಂದು ಪುಣೆಯ ಯೆರವಾಡಾ ಕೇಂದ್ರ ಕಾರಾಗೃಹದಲ್ಲಿ ಬೆಳಿಗ್ಗೆ 7.30ಕ್ಕೆ ಗಲ್ಲಿಗೇರಿಸಲಾಯಿತು. ಅವನನ್ನು ಗಲ್ಲಿಗೇರಿಸುವ ಮೊದಲು, ಅವನು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿದನು. ಗಲ್ಲುಶಿಕ್ಷೆಗೆ ಒಳಗಾದವರು ಎಷ್ಟೇ ಕ್ರೂರರಾಗಿದ್ದರೂ, ಅವರಿಗೆ ಭಾರದ ಕಾನೂನಿನ ಪ್ರಕಾರ ಅಂತಿಮ ಆಸೆಯನ್ನು ಕೇಳಲಾಗುತ್ತದೆ. ಅದರಂತೆಯೇ ಕಸಬ್​ಗೂ ಅಂತಿಮ ಆಸೆ ಕೇಳಿದಾಗ, ಅವನು ಹೇಳಿದ್ದು, ಟೊಮ್ಯಾಟೋ ತಿನ್ನುವ ಆಸೆ! ಬಹುಶಃ ಇತಿಹಾಸದ ಯಾವುದೇ ಕೈದಿಯೂ ಕೇಳದ ಆಸೆಯನ್ನು ಆತ ಕೇಳಿದ್ದ. ಅದರಂತೆಯೇ ಪೊಲೀಸರು ಒಂದು ಬಟ್ಟಲು ಟೊಮ್ಯಾಟೋ ಹಣ್ಣನ್ನು ತಂದು ಅವನ ಕೈಗೆ ಇತ್ತಿದ್ದರು. ಆದರೆ ಕಸಬ್​ ಅದರಲ್ಲಿ ಎರಡೇ ಎರಡು ಟೊಮ್ಯಾಟೋ ಹಣ್ಣನ್ನು ತಿಂದು, ಮಿಕ್ಕಿದ್ದನ್ನು ವಾಪಸ್​ ನೀಡಿದ್ದ.&lt;/p&gt;&lt;h2&gt;&lt;strong&gt;ಮಣ್ಣಾಗಿ ಹೋದ ಆ ರಹಸ್ಯ&lt;/strong&gt;&lt;/h2&gt;&lt;p&gt;ಕಸಬ್​ ಸತ್ತು, 14 ವರ್ಷವಾದರೂ, ಆ ಟೊಮ್ಯಾಟೋ ರಹಸ್ಯ ಮಾತ್ರ ಅವನ ಜೊತೆಗೇ ಮಣ್ಣಾಗಿ ಹೋಗಿದೆ. ಕೈದಿಗಳ ಅಂತಿಮ ಇಚ್ಛೆಯನ್ನು ಕೇಳಲಾಗುತ್ತದೆಯೇ ವಿನಾ ಅದು ಯಾಕೆ, ಏನು ಎಂದು ಕೇಳಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಉಗ್ರ ಕಸಬ್​ ಅಂತಿಮ ಇಚ್ಛೆಯಾಗಿ ಟೊಮ್ಯಾಟೋ ಕೇಳಿದಾಗ, ಅದಕ್ಕೆ ಕಾರಣವನ್ನು ಪೊಲೀಸರು ಪ್ರಶ್ನಿಸಿರಲಿಲ್ಲ. ಆದರೆ ಇಂದಿಗೂ ಆ ಟೊಮ್ಯಾಟೋ ರಹಸ್ಯ ಮಾತ್ರ ರಹಸ್ಯವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಏನಿರಬಹುದು ಎಂದು ಹಲವರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದರೂ, ನಿಜವಾದ ಕಾರಣ ಮಾತ್ರ ಕಸಬ್​ ಜೊತೆ ಮಣ್ಣಾಗಿದೆ.&lt;/p&gt;&lt;h3&gt;&lt;strong&gt;ಗಲ್ಲು ಶಿಕ್ಷೆ ದಿನ ಏನಾಗಿತ್ತು?&lt;/strong&gt;&lt;/h3&gt;&lt;p&gt;ಇನ್ನು ಅವನ ಗಲ್ಲುಶಿಕ್ಷೆಯ ದಿನ ಏನಾಗಿತ್ತು ಎನ್ನುವುದು ಕೂಡ ಆ ವೇಳೆ ಸಾಕಷ್ಟು ಸುದ್ದಿಯಾಗಿತ್ತು. ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಪುಣೆಯ ಯರವಾಡ ಜೈಲಿಗೆ ಕಸಬ್ ನನ್ನು ಸಾಗಿಸಲು 3 ಗಂಟೆ ಬೇಕಾಯಿತು. ಈ ಸ್ಥಳಾಂತರದ ಸಮಯದಲ್ಲಿ, ಕಸಬ್ ತುಂಬಾ ಭಯಭೀತನಾಗಿದ್ದನು, ಅವನ ಬಾಯಿಂದ ಒಂದು ಪದವೂ ಹೊರಡಲಿಲ್ಲ ಎನ್ನಲಾಗಿದೆ. ಪುಣೆ ಜೈಲಿಗೆ ಸ್ಥಳಾಂತರಗೊಂಡ ನಂತರ, ಮರಣದಂಡನೆಗೆ ಒಂದು ದಿನ ಮೊದಲು, ಕಸಬ್ ಬಳಿ ಕೊನೆಯ ಆಸೆಯನ್ನು ಕೇಳಿದಾಗ, ಆಗ ಆತ ಏನನ್ನೂ ಹೇಳಲಿಲ್ಲ. ಕೊನೆಗೆ ಟೊಮ್ಯಾಟೋ ಆಸೆ ವ್ಯಕ್ತಪಡಿಸಿದ್ದ. ಜೊತೆಗೆ, ಗಲ್ಲು ಶಿಕ್ಷೆ ಹೆಸರು ಕೇಳಿ ಇಡೀ ರಾತ್ರಿ ನಿದ್ದೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಕಸಬ್ ಗಲ್ಲಿಗೇರಿದ ದಿನ ಬೆಳಗ್ಗೆ ಸ್ನಾನ ಮಾಡಲಾಗಿತ್ತು. ನೇಣಿಗೆ ಶರಣಾಗುವ ಹಿಂದಿನ ರಾತ್ರಿ ಕಸಬ್&zwnj;ಗೆ ನಿದ್ದೆಯೇ ಬಂದಿರಲಿಲ್ಲ. ಕಣ್ಮಿಚ್ಚಿ ತೆರೆಯುವಷ್ಟರಲ್ಲಿ ರಾತ್ರಿ ಕಳೆದು ಹೋಗಿತ್ತು. ಆತ ನವೆಂಬರ್ 21 ರಂದು ಅಂದರೆ ಗಲ್ಲಿಗೇರಿಸುವ ಬೆಳಿಗ್ಗೆ ನಮಾಜ್ ಮಾಡಿದ್ದ ಎನ್ನಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/terrorist-kasabs-last-wish-was-those-two-tomatoes-strange-secret-was-buried-with-him-suc/articleshow-bn3oy2v"/>
        </item>
        <item>
            <title><![CDATA[Child Missing Case: ಬಾಲಕಿ ಜ್ಞಾನೇಶ್ವರಿ ಮಿಸ್ಸಿಂಗ್ ಕೇಸ್‌; ಮಗಳ ಪತ್ತೆಗಾಗಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ತಂದೆ]]></title>
            <link>https://kannada.asianetnews.com/viral/andhra-pradesh-child-jnaneshwari-missing-case-father-ganesh-starts-youtube-channel-to-find-his-daughter-sns/articleshow-d8bui2y</link>
            <guid isPermaLink="true">https://kannada.asianetnews.com/viral/andhra-pradesh-child-jnaneshwari-missing-case-father-ganesh-starts-youtube-channel-to-find-his-daughter-sns/articleshow-d8bui2y</guid>
            <pubDate>Thu, 20 Aug 2026 13:05:30 +0530</pubDate>
            <description><![CDATA[ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಾಪತ್ತೆಯಾದ ಎರಡು ವರ್ಷದ ಬಾಲಕಿ ಜ್ಞಾನೇಶ್ವರಿ ಪ್ರಕರಣ 70 ದಿನ ಕಳೆದರೂ ಬಗೆಹರಿದಿಲ್ಲ. ಮಗಳ ಪತ್ತೆಗಾಗಿ ತಂದೆ ಗಣೇಶ್ ಯೂಟ್ಯೂಬ್ ಚಾನೆಲ್ ಆರಂಭಿಸಿ ಸುಳಿವಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0f1gpprwt6c73989rcg0ss0,imgname-child-missing-case-1787211307736.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ತುನಿ ಮಂಡಲದ ಸಿಎಚ್&zwnj; ಅಗ್ರಹಾರಕ್ಕೆ ಸೇರಿದ ಬಾಲಕಿ ಜ್ಞಾನೇಶ್ವರಿ ಮಿಸ್&zwnj; ಕೇಸ್ ಮಿಸ್ಟರಿ ಇನ್ನು ಬಗೆಹರಿದಿಲ್ಲ. ಬಾಲಕಿಯ ಸುಳಿವು ಪತ್ತೆ ಮಾಡಲು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಜ್ಞಾನೇಶ್ವರಿ ಪತ್ತೆಗಾಗಿ ಆತನ ತಂದೆ ಗಣೇಶ್&zwnj; ಒಂದು ಯೂಟ್ಯೂಬ್ ಚಾನೆಲ್ ಆರಂಭ ಮಾಡಿದ್ದಾರೆ. ತನ್ನ ಮಗಳ ನೆನಪಿನ ಫೋಟೋಗಳನ್ನು, ವಿಡಿಯೋಗಳನ್ನು ತಂದೆ ಯೂಟ್ಯೂಬ್&zwnj;ನಲ್ಲಿ ಶೇರ್ ಮಾಡುತ್ತಿದ್ದು, ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ಇತರೇ ರಾಜ್ಯಗಳಿಗೂ ಮಾಹಿತಿ ತಿಳಿಯಲಿ, ಆ ಮೂಲಕ ನನ್ನ ಮಗಳ ಬಗ್ಗೆ ಯಾವುದಾದರೂ ಸಣ್ಣ ಸುಳಿವು ಸಿಗುತ್ತಾ ಎಂದು ಹುಡುಕಾಟ ನಡೆಸಿದ್ದಾರೆ.&lt;/p&gt;&lt;h2&gt;ನಾಪತ್ತೆಯಾದ ಮಗಳಿಗಾಗಿ ತಂದೆಯ ಯೂಟ್ಯೂಬ್ ಹೋರಾಟ!&lt;/h2&gt;&lt;p&gt;ಮಗಳು ನಾಪತ್ತೆಯಾದ ದಿನದಿಂದಲೂ ಪೊಲೀಸರೊಂದಿಗೆ ತಂದೆ ಕೂಡ ಆಕೆಯ ಫೋಟೋ ಹಿಡಿದುಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಬಾಲಕಿಯ ಬಗ್ಗೆ ಇದುವರೆಗೂ ಸಣ್ಣ ಸುಳಿವು ಸಿಕ್ಕಿಲ್ಲ. ಇದರ ನಡುವೆ ಕಾಕಿನಾಡ ಜಿಲ್ಲಾ ತುನಿ ಗ್ರಾಮಾಂತರ ಸಿಐ ಪ್ರಮುಖ ಪ್ರಕಟಣೆ ಮಾಡಿದ್ದು, ಆಂಧ್ರ ಪ್ರದೇಶ ಹೈಕೋರ್ಟಿಗೆ ತಿಂಗಳಿಗೆ ಒಮ್ಮೆ ಪ್ರಕರಣ ತನಿಖೆ ಬಗ್ಗೆ ವರದಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಾಲಕಿ ನಾಪತ್ತೆಯಾಗಿ ಈಗಾಗಲೇ 70ಕ್ಕೂ ಹೆಚ್ಚು ದಿನಗಳಾಗಿದೆ. ಮೊದಲ ದಿನದಿಂದಲೂ ನಾವು ಹುಡುಕಾಟ ನಡೆಸುತ್ತಿದ್ದೇವೆ. ಈ ವಿವರಗಳನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಬಾಲಕಿ ಸುಳಿವು ಸಿಗದ ಹಿನ್ನೆಲೆಯಲ್ಲಿ ಶ್ರೀಕಾಂತ್ ಎಂಬ ಲಾಯರ್ ಹೈಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಪೊಲೀಸರು ಬಾಲಕಿಯನ್ನು ಪತ್ತೆ ಮಾಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಲಿಸಾಗಿಲ್ ಮತ್ತು ಗುಣರಂಜನ್ ಅವರ ನ್ಯಾಯಪೀಠ ವಿಚಾರಣೆ ತೆಗೆದುಕೊಂಡಿದೆ.&lt;/p&gt;&lt;h2&gt;ಪೊಲೀಸರ ವಿರುದ್ಧ ಹೈಕೋರ್ಟ್ ಗರಂ!&lt;/h2&gt;&lt;p&gt;ಬಾಲಕಿ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಐದು ಟೀಂಗಳು ಪ್ರಕರಣದಲ್ಲಿ ಕೆಲಸ ಮಾಡುತ್ತಿದೆ ಎಂದು ಪೊಲೀಸರ ಪರ ವಕೀಲ್ ಕೋರ್ಟ್&zwnj;ಗೆ ಮಾಹಿತಿ ನೀಡಿದರು. ಆದರೆ ಕೋರ್ಟ್, ಬಾಲಕಿ ನಾಪತ್ತೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಅಷ್ಟ ಅಲ್ಲದೇ, ವರ್ಷದಲ್ಲಿ ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲು ಸೂಚನೆ ನೀಡಿದೆ.&lt;/p&gt;&lt;p&gt;ಕಾನಿನಾಡ ಜಿಲ್ಲೆಯ ಸಿಎಚ್&zwnj; ಅಗ್ರಹಾರಕ್ಕೆ ಸೇರಿದ ಗಣೇಶ್, ಭವಾನಿ ದಂಪತಿಯ ಎರಡು ವರ್ಷದ ಮಗಳಾದ ಜ್ಞಾನೇಶ್ವರಿ 2026 ಜೂನ್ 06ರದು ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿ ತಿಂಗಳುಗಳು ಕಳೆದರೂ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನು ಬಾಲಕಿ ಜೊತೆಗಿದ್ದ ನಾಯಿ ಕೂಡ ಕೆಲವೇ ದಿನಗಳಲ್ಲಿ ಸಾವನ್ನಪ್ಪಿತ್ತು. ಬಾಲಕಿಯ ಪತ್ತೆಗಾಗಿ ಪೊಲೀಸರು, ಎನ್&zwnj;ಡಿಆರ್&zwnj;ಎಫ್, ಅರಣ್ಯ ಇಲಾಖೆ ಸಿಬ್ಬಂದಿ, ಹನುಮಾನ್ ಬೃಂದಗಳು ಸುತ್ತಮುತ್ತಲಿನ ಬಾವಿ, ನೀರಿನ ಮೂಲಗಳು, ಅರಣ್ಯ ಪ್ರದೇಶ, ಬೆಟ್ಟಗಳಲ್ಲಿ ಹುಡುಕಾಟ ನಡೆಸಿದ್ದವು. ಅಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್&zwnj;ಗಳು, ಸಿಸಿಟಿವಿ ವಿಡಿಯೋ, ಸಾವಿರಾರು ಫೋನ್ ಕಾಲ್ಸ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಜೊತೆ ಪ್ರಕರಣದಲ್ಲಿ ಅನುಮಾನವಾಗಿ ಕಂಡ ಮಂದಿಯನ್ನು ವಿಚಾರಣೆ ನಡೆಸಿದ್ದರು. ಬಾಲಕಿ ಪೋಸ್ಟರ್&zwnj;ಗಳನ್ನು ಹಂಚಿಕೆ ಮಾಡಿ, ಬೇರೆ ಬೇರೆ ಪ್ರದೇಶಗಳಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೂ ಇದುವರೆಗೂ ಯಾವುದೇ ಸಣ್ಣ ಸುಳಿವು ಬಾಲಕಿ ಬಗ್ಗೆ ಸಿಕ್ಕಿಲ್ಲ. ಈಗ ತಂದೆ ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭ ಮಾಡಿ ಹೊಸ ಪ್ರಯತ್ನ ಶುರು ಮಾಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/viral/andhra-pradesh-child-jnaneshwari-missing-case-father-ganesh-starts-youtube-channel-to-find-his-daughter-sns/articleshow-d8bui2y"/>
        </item>
        <item>
            <title><![CDATA[ಜಾಲತಾಣದಲ್ಲಿ ಸ್ಟೇಟಸ್​ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್​- ಪೊಲೀಸರ ಖಡಕ್​ ವಾರ್ನಿಂಗ್​]]></title>
            <link>https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z</link>
            <guid isPermaLink="true">https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z</guid>
            <pubDate>Thu, 13 Aug 2026 20:53:46 +0530</pubDate>
            <description><![CDATA[&lt;p&gt;ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzxvh5m0pgaeaycf3crftyvh,imgname-status-1786634606208.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ವರ್ಷಗಳಲ್ಲಿ ಮಾತುಕತೆಯ ಬದಲು ಮೆಸೇಜ್​ಗಳದ್ದೇ ಕಾರುಬಾರು. ಅದರಲ್ಲಿಯೂ ಯಾರಿಗಾದರೂ ಏನಾದರೂ ಮೆಸೇಜ್​ ಕಳುಹಿಸಬೇಕು ಎಂದರೆ, ವಾಟ್ಸ್​ಆ್ಯಪ್​ನಲ್ಲಿ ಹಾಕಿದ್ರೆ ನೋಡ್ತಾರೋಇಲ್ವೋ, ಆದರೆ ಸ್ಟೇಟಸ್​ನಲ್ಲಿ ಹಾಕಿದ ತಕ್ಷಣ ಗೊತ್ತಾಗಿಬಿಡತ್ತೆ. ಆದ್ದರಿಂದ ಸೋಷಿಯಲ್​ ಮೀಡಿಯಾಗಳಲ್ಲಿ ಸ್ಟೇಟಸ್​ ಅನ್ನೋದು ದೊಡ್ಡ ಹೆಮ್ಮಯ ವಿಷಯವಾಗಿದೆ. ಅದರಲ್ಲಿಯೂ ಪ್ರಯಾಣ ಮಾಡಿದಾಗ, ಯಾವುದೋ ಅಪರೂಪದ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಮನೆಯಲ್ಲಿ ಏನಾದರೂ ಹೊಸತು ತೆಗೆದುಕೊಂಡಾಗ, ಸ್ಟೇಟಸ್​ ಹಾಕಿಕೊಂಡು, ಅದನ್ನು ಒಂದಷ್ಟು ಜನ ನೋಡಿದ್ರೆ ತುಂಬಾ ಖುಷಿ. ಇದು ಸಾಮಾನ್ಯ ಎಲ್ಲರೂ ಮಾಡುವಂಥದ್ದೇ.ಕೆಲವೊಮ್ಮೆ ಬೇರೆಯವರು ಹೊಟ್ಟೆ ಉರಿದುಕೊಳ್ಳಲಿ ಎಂದು ಸ್ಟೇಟಸ್​ ಹಾಕಿಕೊಂಡರೆ, ಮತ್ತೆ ಕೆಲವೊಮ್ಮೆ ತಮ್ಮ ಸಂತೋಷವನ್ನು ಈ ರೀತಿ ವ್ಯಕ್ತಪಡಿಸುವುದು ಇದೆ.&lt;/p&gt;&lt;p&gt;ಅವೆಲ್ಲವೂ ಸರಿ. ಆದರೆ, ಪ್ರವಾಸಕ್ಕೆ ಹೋಗಿದ್ದರೆ ಅಥವಾ ಹೊರಡುವುದಿದ್ದರೆ ಅದರ ಫುಲ್​ ಡಿಟೇಲ್ಸ್​ ಕೊಟ್ಟು ಸ್ಟೇಟಸ್​ ಹಾಕಿಕೊಂಡು ಬಿಡುವುದು ಮಾತ್ರ ಭಾರಿ ಡೇಂಜರ್​. ತಾನು ಎಂಜಾಯ್​ ಮಾಡುತ್ತಿರುವುದು ಬೇರೆಯವರಿಗೆ ತಿಳಿಯಲಿ ಎನ್ನುವುದು ಕೆಲವರ ಉದ್ದೇಶವಾಗಿದ್ದರೆ, ಅದನ್ನು ನೋಡಿ ಅವರಿಗೆ ಆಗದವರು ಯಾರೋ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ಎನ್ನುವ ಕಾರಣವೂ ಅದರಲ್ಲಿ ಅಡಗಿರುತ್ತದೆ. ಒಟ್ಟಿನಲ್ಲಿ ಸ್ಟೇಟಸ್​ ನೋಡಿದ್ರೆ ಆ ದಿನ ಆ ವ್ಯಕ್ತಿ ಯಾವ ಮೂಡ್​ನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತದೆ. ಎಷ್ಟೋ ಬಾರಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಕುವ ಸ್ಟೇಟಸ್​ಗಳೇ ಹೆಚ್ಚಾಗಿರುತ್ತವೆ.&lt;/p&gt;&lt;h2&gt;&lt;strong&gt;ಕಳ್ಳರಿಗೆ ಮನೆ ಕೀಲಿ&lt;/strong&gt;&lt;/h2&gt;&lt;p&gt;ಉದ್ದೇಶ ಏನೇ ಇರಲಿ. ಆದರೆ ಹೀಗೆ ಸೋಷಿಯಲ್​ ಮೀಡಿಯಾದಲ್ಲಿ ಎಷ್ಟೋ ಬಾರಿ ಹಾಕಿಕೊಳ್ಳುವ ಸ್ಟೇಟಸ್​ ನಿಮ್ಮ ಇರೋ ಬರೋ ಎಲ್ಲಾ ಸ್ಟೇಟಸ್​ಗಳನ್ನು ಮಣ್ಣುಪಾಲು ಮಾಡಬಹುದು. ಅರ್ಥಾತ್​, ಈ ಸ್ಟೇಟಸ್​ ಅನ್ನೋದು ಕಳ್ಳರಿಗೆ ನೀವೇ ನಿಮ್ಮ ಮನೆಯ ಬೀಗದ ಕೀಲಿ ಕೊಟ್ಟು ಕಳ್ಳತನ ಮಾಡಲು ಬಾ... ಎಂದು ಆಹ್ವಾನ ನೀಡಿದಂತೆ ಎಂದಿದ್ದಾರೆ. ಪ್ರವಾಸಗಳಿಗೆ ಹೋದ ಸಂದರ್ಭಗಳಲ್ಲಿ I am enjoying ಇಲ್ಲಿ.. ಅಲ್ಲಿ... ಎಂದೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಇವರು ಪ್ರವಾಸಗಳನ್ನು ಎಂಜಾಯ್​ ಮಾಡಲು ಹೋಗಿದ್ದಾರೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್​ಲೋಡ್​ ಮಾಡಿಕೊಳ್ಳಲು ಹೋಗಿದ್ದಾರೋ ಎನ್ನುವುದು ಕನ್​ಫ್ಯೂಸ್​ ಆಗುವ ರೀತಿಯಲ್ಲಿ ಇರುತ್ತದೆ. ನೀವು ಹೀಗೆ ಹಾಕಿಕೊಳ್ಳುವ ಸ್ಟೇಟಸ್ಸು, ಅಪ್​ಲೋಡ್​ ಮಾಡುವ ಫೋಟೋಗಳು, ನೀವು ಎಲ್ಲಿದ್ದೀರಿ ಎಂದು ನೀಡುವ ಮಾಹಿತಿಗಳನ್ನು ನೋಡಿ ನಿಮ್ಮ ಸ್ನೇಹಿತರು ಲೈಕ್​ ಮಾಡಿ ಕಮೆಂಟ್​ ಮಾಡುತ್ತಾರೋ ಬಿಡುತ್ತಾರೋ, ಆದರೆ ಕಳ್ಳರಿಗೆ ಇದು ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದಾರೆ ಡಿವೈಎಸ್​ಪಿ ಎಲ್​.ವೈ ರಾಜೇಶ್​.&lt;/p&gt;&lt;h3&gt;&lt;strong&gt;ವಾಪಸ್​ ಬಂದ್ಮೇಲೆ ಹಾಕಿಕೊಳ್ಳಿ ಎಂದು ಸೂಚನೆ&lt;/strong&gt;&lt;/h3&gt;&lt;p&gt;ಇವರು ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ರಿವೀಲ್​ ಮಾಡಿದ್ದಾರೆ. ನಾವು ಹಾಕುವ ಸ್ಟೇಟಸ್​ನಿಂದ ಹೇಗೆ ಕಳ್ಳರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಉದಾಹರಣೆ ಕೊಟ್ಟ ಡಿವೈಎಸ್​ಪಿ ರಾಜೇಶ್​ ಅವರು, ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಒಬ್ಬಾತ I am Enjoying in Goa ಅಂತ ಸ್ಟೇಟಸ್​ ಹಾಕ್ಕೊಂಡಾ- ವಾಪಸ್​ ಮನೆಗೆ ಬಂದ್​ ನೋಡಿದ್ರೆ ಕಳ್ಳರು ಮನೆಯನ್ನೆಲ್ಲಾ ಕ್ಲೀನ್​ ಮಾಡಿ ಹೋಗಿದ್ರು. ಆಮೇಲೆ ಗೊತ್ತಾಗಿದ್ದು, ಈತನ ಸ್ಟೇಟಸ್​ ನೋಡಿ ಎಷ್ಟು ದಿನ ಆತ ಮನೆಗೆ ಬರುವುದಿಲ್ಲ ಎನ್ನುವುದೆಲ್ಲಾ ಕಳ್ಳರಿಗೆ ತಿಳಿದಿದೆ. ಆದ್ದರಿಂದ ಕರಾಮತ್ತು ತೋರಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಿರೋದನ್ನು ಸೋಷಿಯಲ್​ ಮೀಡಿಯಾದ ಮೂಲಕ ಜಗಜ್ಜಾಹೀರ ಮಾಡಲೇಬೇಕು ಎಂದಾದರೆ ವಾಪಸ್​ ಬಂದ ಮೇಲೆ I enjoyed in Goa ಅಂತ ಹಾಕಿಕೊಳ್ಳಿ, ಆದರೆ ಹೋಗುವಾಗ ನಿಮ್ಮ ಮನೆ ಕೀಲಿಕೈಯನ್ನು ಕಳ್ಳರಿಗೆ ಕೊಟ್ಟು ಹೋಗ್ಬೇಡಿ ಎಂದಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z"/>
        </item>
        <item>
            <title><![CDATA[ವೈರಲ್ ವಿಡಿಯೋ ನೋಡಿ ದಾರಿತಪ್ಪಿದ ಗ್ಯಾಂಗ್: 16 ವರ್ಷದ ಬಾಲಕನ ವೃಷಣ ಕತ್ತರಿಸಿ ಕೆರೆಗೆ ಎಸೆದ ಪಾಪಿಗಳು!]]></title>
            <link>https://kannada.asianetnews.com/india-news/bhopal-boy-killed-for-testicles-viral-reel-police-search-lakes-san/articleshow-hbl76b2</link>
            <guid isPermaLink="true">https://kannada.asianetnews.com/india-news/bhopal-boy-killed-for-testicles-viral-reel-police-search-lakes-san/articleshow-hbl76b2</guid>
            <pubDate>Wed, 19 Aug 2026 16:20:23 +0530</pubDate>
            <description><![CDATA[ಸಾಮಾಜಿಕ ಜಾಲತಾಣದ ವದಂತಿಯನ್ನು ನಂಬಿ, ಭೋಪಾಲ್&zwnj;ನಲ್ಲಿ ಗ್ಯಾಂಗ್ ಒಂದು 16 ವರ್ಷದ ಬಾಲಕನನ್ನು ಕೊಂದು ಆತನ ವೃಷಣವನ್ನು ಕತ್ತರಿಸಿದೆ. ಖರೀದಿದಾರರು ಸಿಗದಿದ್ದಾಗ ಸಾಕ್ಷ್ಯ ನಾಶಪಡಿಸಲು ಕೆರೆಗೆ ಎಸೆದಿದ್ದು, ಪೊಲೀಸರು ಈಗ ಆ ಅಂಗಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ct1bg3wph93j0mqz6jj71v,imgname-bhopal-murder-testicals-1787136355843.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೋಪಾಲ್&zwnj; (ಆ.19): &lt;/strong&gt;ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋವೊಂದನ್ನು ನೋಡಿ ಹಾದಿತಪ್ಪಿದ ಗ್ಯಾಂಗ್&zwnj; ಒಂದು 16 ವರ್ಷದ ಬಾಲಕನನ್ನು ಭೀಕರವಾಗಿ ಕೊಲೆ ಮಾಡಿ, ಆತನ ಎರಡೂ ವೃಷಣ ಕತ್ತರಿಸಿಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್&zwnj;ನಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ಬಾಲಕನ ಖಾಸಗಿ ಅಂಗಗಳನ್ನು ಪತ್ತೆಹಚ್ಚಲು ಪೊಲೀಸರು ಈಗ ಭೋಪಾಲ್&zwnj;ನ ಎರಡು ಬೃಹತ್ ಕೆರೆಗಳಲ್ಲಿ ಡೈವರ್ಸ್&zwnj; ಮೂಲಕ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;ಗಲ್ಫ್ ದೇಶಗಳಲ್ಲಿ ಪುರುಷರ ಖಾಸಗಿ ಅಂಗ ವೃಷಣಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯವಿದೆ ಎಂಬ ಇನ್&zwnj;ಸ್ಟಾಗ್ರಾಮ್ ರೀಲ್ಸ್ ಮತ್ತು ಸಾಮಾಜಿಕ ಜಾಲತಾಣದ ಸುಳ್ಳು ವದಂತಿಯನ್ನು ನಂಬಿದ 20 ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ 5 ಜನರ ಗ್ಯಾಂಗ್ ಕಟ್ಟಿಕೊಂಡು ಈ ಕೃತ್ಯ ಎಸಗಿದ್ದಾನೆ.&lt;/p&gt;&lt;h2&gt;&lt;strong&gt;1.2 ಕೋಟಿ ರೂ.ಗೆ ಮಾರಾಟ ಮಾಡಲು ಹೊಂಚು&lt;/strong&gt;&lt;/h2&gt;&lt;p&gt;ಇಕ್ಬಾಲ್ ಮೈದಾನ ಮತ್ತು ಮೋತಿ ಮಸೀದಿ ಸುತ್ತಮುತ್ತ ಪೆನ್ ಹಾಗೂ ಕೀ ಚೈನ್ ಮಾರಾಟ ಮಾಡುತ್ತಿದ್ದ 16 ವರ್ಷದ ಬಾಲಕನನ್ನು ಗ್ಯಾಂಗ್ ಅಪಹರಿಸಿ ಕೊಲೆ ಮಾಡಿತ್ತು. ಆತನ ವೃಷಣವನ್ನು 1.2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿತ್ತು.&lt;/p&gt;&lt;p&gt;ಕೊಲೆ ಮಾಡಿ ವೃಷಣವನ್ನು ಕತ್ತರಿಸಿದ ನಂತರ, ಗ್ಯಾಂಗ್ ಅದನ್ನು ಮನೆ ಮೇಲ್ಛಾವಣಿಯ ಮೇಲಿದ್ದ ಐಸ್ ಬಾಕ್ಸ್&zwnj;ನಲ್ಲಿ ಇಟ್ಟು ಎರಡು ದಿನಗಳ ಕಾಲ ಖರೀದಿದಾರರಿಗಾಗಿ ಹುಡುಕಾಟ ನಡೆಸಿತ್ತು. ಆದರೆ ಯಾವುದೇ ಖರೀದಿದಾರರು ಸಿಗದಿದ್ದಾಗ, ಪ್ರಮುಖ ಆರೋಪಿ ಜೋಹೆಬ್ (20) ಸೂಚನೆಯಂತೆ ಆ ಅಂಗಗಳನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಗರದ ಬಡಾ ತಾಲಾಬ್ (ಅಪ್ಪರ್ ಲೇಕ್) ಮತ್ತು ಚೋಟಾ ತಾಲಾಬ್ (ಲೋವರ್ ಲೇಕ್) ಕೆರೆಗಳಿಗೆ ಪ್ರತ್ಯೇಕವಾಗಿ ಎಸೆಯಲಾಗಿತ್ತು.&lt;/p&gt;&lt;h2&gt;&lt;strong&gt;ನಕಲಿ ಡಾಕ್ಟರ್ ಅವತಾರ ತಾಳಿದ್ದ ಮಾಸ್ಟರ್ ಮೈಂಡ್&lt;/strong&gt;&lt;/h2&gt;&lt;p&gt;ಪ್ರಮುಖ ಆರೋಪಿ ಜೋಹೆಬ್ ಆನ್&zwnj;ಲೈನ್&zwnj;ನಲ್ಲಿ ಏಪ್ರಾನ್, ಸ್ಟೆತೊಸ್ಕೋಪ್ ಹಾಗೂ ಥರ್ಮಾಮೀಟರ್ ಖರೀದಿಸಿದ್ದ. ತನ್ನ ಜೊತೆಗಿದ್ದ ಇತರ ಆರೋಪಿಗಳಿಗೆ ತಾನು ಡಾಕ್ಟರ್ ಎಂದು ನಂಬಿಸಿ, ಖಾಸಗಿ ಅಂಗವನ್ನು ಹೇಗೆ ಕತ್ತರಿಸಿ ತೆಗೆಯಬೇಕು ಎಂಬುದಕ್ಕೆ ತರಬೇತಿ ನೀಡಲು ಈ ವಸ್ತುಗಳನ್ನು ಬಳಸಿದ್ದ ಎನ್ನಲಾಗಿದೆ. ಪೊಲೀಸರು ಪ್ರಸ್ತುತ ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಸದ್ಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಅವರು ವೃಷಣವನ್ನು ಎಸೆದ ಜಾಗಗಳನ್ನು ಗುರುತಿಸಲಾಗಿದೆ. ಆದರೆ, ಆಳವಾದ ಮತ್ತು ಕೆಸರಿನಿಂದ ಕೂಡಿದ ಕೆರೆಯ ನೀರಿನಲ್ಲಿ ಚಿಕ್ಕ ಅಂಗಾಂಶಗಳನ್ನು ಪತ್ತೆಹಚ್ಚುವುದು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಹಾಗೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸಹಾಯಕ ಪೊಲೀಸ್ ಕಮಿಷನರ್ (ACP) ಸಂತೋಷ್ ಪಟೇಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.&lt;/p&gt;&lt;h2&gt;&lt;strong&gt;ಸಂಘಟಿತ ಜಾಲವಲ್ಲ, ವೈರಲ್ ವಿಡಿಯೋ ಪ್ರಭಾವ:&lt;/strong&gt;&lt;/h2&gt;&lt;p&gt;ತನಿಖಾಧಿಕಾರಿಗಳ ಪ್ರಕಾರ, ಇದು ಯಾವುದೇ ಬೃಹತ್ ಸಂಘಟಿತ ಅಂಗಾಂಗ ದಂಧೆಯ ಜಾಲವಲ್ಲ. ಬದಲಾಗಿ ಇನ್&zwnj;ಸ್ಟಾಗ್ರಾಮ್ ರೀಲ್ಸ್ ನೋಡಿ ಹಣದ ಆಸೆಗೆ ಬಿದ್ದು ಮಾಡಿದ ಕೃತ್ಯವಾಗಿದೆ. ಆರೋಪಿಗಳು ಈ ಅಂಗಗಳನ್ನು ಮಾರಾಟ ಮಾಡಲು ಸ್ಥಳೀಯವಾಗಿ ಯಾರನ್ನೆಲ್ಲಾ ಸಂಪರ್ಕಿಸಿದ್ದರು ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ. ಖಾಸಗಿ ಅಂಗಗಳು ಪತ್ತೆಯಾದರೆ ಕೊಲೆ ಪ್ರಕರಣಕ್ಕೆ ಪ್ರಬಲ ವೈಜ್ಞಾನಿಕ ಸಾಕ್ಷ್ಯ ಸಿಗಲಿದೆ.&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/bhopal-boy-killed-for-testicles-viral-reel-police-search-lakes-san/articleshow-hbl76b2"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್: ಜೈಲಲ್ಲಿ ಹೆಡ್‌ಫೋನ್ ಬಳಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ!]]></title>
            <link>https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f</link>
            <guid isPermaLink="true">https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f</guid>
            <pubDate>Thu, 13 Aug 2026 16:52:55 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ, ನ್ಯಾಯಾಧೀಶರು ಪವಿತ್ರಾ ಗೌಡರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದರ್ಶನ್ ಖುದ್ದು ಹಾಜರಾತಿ ಕುರಿತ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದ್ದು, ಮಾಫಿ ಸಾಕ್ಷಿ ವಿಚಾರವಾಗಿ ದರ್ಶನ್ ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kerstrhhj4kqbe0bnyvbfv00,imgname-actress-pavithra-gowda-1768211440177.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತೀವ್ರ ಕುತೂಹಲಕಾರಿಯಾಗಿ ನಡೆದಿದ್ದು, ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮತ್ತೊಂದು ಕಡೆ ನಟ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್&zwnj;ನಲ್ಲಿ ನಡೆಯುತ್ತಿದೆ.&lt;/p&gt;&lt;h2&gt;ದರ್ಶನ್ ಖುದ್ದು ಹಾಜರಾತಿ: ಸೋಮವಾರಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ&lt;/h2&gt;&lt;p&gt;ಪ್ರಕರಣದ ಪ್ರಮುಖ ಎರಡನೇ ಆರೋಪಿಯಾಗಿರುವ ನಟ ದರ್ಶನ್ ನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು, ಈ ಕುರಿತ ನಿರ್ಧಾರವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ. ಹೀಗಾಗಿ ದರ್ಶನ್ ಕೋರ್ಟ್&zwnj;ಗೆ ಖುದ್ದು ಹಾಜರಾಗಬೇಕೇ ಅಥವಾ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರಾಗಬೇಕೇ ಎಂಬ ಕುರಿತು ಸೋಮವಾರ ಅಂತಿಮ ಆದೇಶ ಹೊರಬೀಳಲಿದೆ.&lt;/p&gt;&lt;h2&gt;'ಎ1' ಪವಿತ್ರಾ ಗೌಡ ವಿಚಾರದಲ್ಲಿ ಗರಂ ಆದ ನ್ಯಾಯಾಧೀಶರು&lt;/h2&gt;&lt;p&gt;ಇನ್ನು ವಿಚಾರಣೆ ವೇಳೆ ಜೈಲಾಧಿಕಾರಿಗಳ ನಡೆ ಹಾಗೂ 'ಎ1' ಆರೋಪಿ ಪವಿತ್ರಾ ಗೌಡ ಅವರ ನಡವಳಿಕೆ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕಾರಾಗೃಹದ ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡರು.&lt;/p&gt;&lt;p&gt;ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ವೀಡಿಯೋ ಕಾನ್ಫರೆನ್ಸ್&zwnj;ಗೆ ಲೇಟಾಗಿ ಹಾಜರಾಗಿದ್ದೇಕೆ? ವಿಚಾರಣೆಗೆ ತಡವಾಗಲು ಕಾರಣವೇನು? ಅವರು ಹೆಡ್&zwnj;ಫೋನ್ ಯಾಕೆ ಬಳಸುತ್ತಿದ್ದಾರೆ? ಕೋರ್ಟ್ ವಿಚಾರಣೆ ವೇಳೆ ಹೆಡ್&zwnj;ಫೋನ್ ಬಳಸಲು ಯಾರು ಪರ್ಮಿಷನ್ ಕೊಟ್ರು? ವುಮೆನ್ಸ್ ಸೆಲ್&zwnj;ನಲ್ಲಿ ಆರೋಪಿಗಳಿಗೆ ಹೆಡ್&zwnj;ಫೋನ್ಸ್ ಕೊಡ್ತಾರಾ? ನಾನು ಇದನ್ನು ಸ್ಪಷ್ಟವಾಗಿ ಗಮನಿಸಿದ್ದೇನೆ ಎಂದು ಜಡ್ಜ್ ಗರಂ ಆದರು.&lt;/p&gt;&lt;p&gt;ಈ ಸಂದರ್ಭದಲ್ಲಿ ವೀಡಿಯೋ ಕಾನ್ಫರೆನ್ಸ್&zwnj;ನಲ್ಲಿಯೇ ಉತ್ತರಿಸಿದ ಪವಿತ್ರಾಗೌಡ, ಇಲ್ಲ ಮೇಡಂ, ನಾನು ಹೆಡ್&zwnj;ಫೋನ್ ಬಳಸಿಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಅದನ್ನು ಒಪ್ಪದ ನ್ಯಾಯಾಧೀಶರು, ನಾನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಲ್ಲದೆ, ಈ ಶಿಸ್ತುಬದ್ಧ ಲೋಪದ ಕುರಿತು ತಕ್ಷಣವೇ ಸೂಕ್ತ ಸ್ಪಷ್ಟನೆ (Clarification) ನೀಡುವಂತೆ ಜೈಲಾಧಿಕಾರಿಗಳಿಗೆ ಆದೇಶಿಸಿದರು. ಕೂಡಲೇ ಈ ಕುರಿತು ಜೈಲಾಧಿಕಾರಿಗಳಿಂದ ಲಿಖಿತ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು ಆದೇಶಿಸಿದರು.&lt;/p&gt;&lt;h2&gt;ಮಾಫಿ ಸಾಕ್ಷಿ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್&zwnj;ಗೆ ದರ್ಶನ್ ಮೇಲ್ಮನವಿ&lt;/h2&gt;&lt;p&gt;59ನೇ ಸಿಸಿಎಚ್ (CCH) ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.&lt;/p&gt;&lt;p&gt;ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ನಟ ದರ್ಶನ್ ಅವರ ಪರ ವಾದ ಮಂಡಿಸಲು ಕೆಳ ನ್ಯಾಯಾಲಯ ಅನುಮತಿ ನೀಡಿಲ್ಲ. ಪ್ರಕ್ರಿಯೆಯಲ್ಲಾಗಿರುವ ಲೋಪದೋಷಗಳ ಕುರಿತು ವಾದಿಸಲು ನಮಗೆ ಅವಕಾಶ ಕೋರಲಾಗಿತ್ತಾದರೂ, ನ್ಯಾಯಾಲಯ ಅದಕ್ಕೆ ಸಮ್ಮತಿಸಲಿಲ್ಲ. ವಾದಕ್ಕೆ ಸೂಕ್ತ ಅವಕಾಶ ನೀಡದಿರುವುದರಿಂದಲೇ ನಾವು ಹೈಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ಅವರು ವಾದಿಸಿದರು. ಅರ್ಜಿದಾರರ ಪರ ವಕೀಲರ ಮನವಿಯನ್ನು ಆಲಿಸಿದ ಹೈಕೋರ್ಟ್, ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕರಿಗೆ (SPP) ತಕ್ಷಣ ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತಲ್ಲದೆ, ವಿಚಾರಣೆಯನ್ನು ಮುಂದೂಡಿತು&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f"/>
        </item>
        <item>
            <title><![CDATA[ಫ್ರಿಜ್‌ ನಲ್ಲಿಟ್ಟ ರಸ್ಮಲೈಯಿಂದ ಶುರುವಾಯ್ತು ಗಲಾಟೆ ! ಆಸ್ಪತ್ರೆ ಸೇರಿದ ದಂಪತಿ]]></title>
            <link>https://kannada.asianetnews.com/crime/rasmalai-dispute-brother-sister-in-law-scissors-attack/articleshow-l88gklh</link>
            <guid isPermaLink="true">https://kannada.asianetnews.com/crime/rasmalai-dispute-brother-sister-in-law-scissors-attack/articleshow-l88gklh</guid>
            <pubDate>Wed, 19 Aug 2026 12:37:41 +0530</pubDate>
            <description><![CDATA[&lt;p&gt;Rasmalai Fight : ಕುಟುಂಬವೊಂದಕ್ಕೆ ರಸ್ಮಲೈ ಶತ್ರುವಾಗಿದೆ. ಫ್ರಿಜ್ ನಲ್ಲಿಟ್ಟ ರಸ್ಮಲೈಗೆ ಕೈ ಹಾಕಿದ್ದೇ ತಪ್ಪಾಗಿದೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cdgr5n1hmayfc5350dc94f,imgname-rasmalai-fight-1787123228853.jpg" type="image/jpeg" height="390" width="690"/>
            <content:encoded><![CDATA[&lt;p&gt;ಫ್ರಿಜ್&zwnj; ನಲ್ಲಿಟ್ಟ ಐಸ್ ಕ್ರೀಮ್&zwnj; ಅಥವಾ ಚಾಕೋಲೇಟ್ ಬೇರೆಯವರು ತಿಂದ್ರೆ ಮಕ್ಕಳು ಅತ್ತು ಗಲಾಟೆ ಮಾಡ್ತಾರೆ. ಆದ್ರೆ ಇಲ್ಲೊಂದು ಕುಟುಂಬ ರಸ್ಮಲೈಗೆ ಗಲಾಟೆ ಮಾಡ್ಕೊಂಡಿದೆ. ಮಕ್ಕಳಲ್ಲ, ದೊಡ್ಡವರು ಕಿತ್ತಾಡಿಕೊಂಡು ಆಸ್ಪತ್ರೆ ಸೇರುವಂತಾಗಿದೆ.&lt;/p&gt;&lt;h2&gt;ಫ್ರಿಜ್&zwnj; ನಲ್ಲಿದ್ದ ರಸ್ಮಲೈ ತಿಂದಿದ್ದೇ ತಪ್ಪಾಯ್ತು&lt;/h2&gt;&lt;p&gt;ಘಟನೆ ಉತ್ತರ ಪ್ರದೇಶದ ಉನ್ನಾವ್ನಲ್ಲಿ ನಡೆದಿದೆ. ಫ್ರಿಜ್ನಲ್ಲಿದ್ದ ರಸ್ಮಲೈ ತಿಂದಿದ್ದಕ್ಕೆ ಎರಡು ಸಹೋದರರ ಕುಟುಂಬದ ನಡುವೆ ಜಗಳ ಶುರುವಾಗಿದೆ. ಇದು ವಿಕೋಪಕ್ಕೆ ತಿರುಗಿ ಆಸ್ಪತ್ರೆ ಸೇರುವಂತಾಗಿದೆ. ಉನ್ನಾವ್ ಜಿಲ್ಲೆಯ ಬಂಗಾರಮೌ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಶಾನು ಅವರ ಪತ್ನಿ ಸಾಬ್ರೀನ್, ಫ್ರಿಜ್ನಲ್ಲಿದ್ದ ರಸ್ಮಲೈಯನ್ನು ಮಕ್ಕಳಿಗೆ ಹಂಚಿ, ತಾವೂ ತಿಂದಿದ್ದಾರೆ. ಸಾಬ್ರೀನ್ ಅವರ ಸಹೋದರಿ ಮಕ್ಕಳಿಗೆ ರಸ್ಮಲೈ ತಿನ್ನಿಸುವಂತೆ ಫೋನ್ನಲ್ಲಿ ಹೇಳಿದ್ದರಿಂದ, ಅವರು ಮಕ್ಕಳಿಗೆ ಸಿಹಿ ಹಂಚಿದ್ದರು ಎನ್ನಲಾಗಿದೆ.&lt;/p&gt;&lt;p&gt;ಆದರೆ ರಸ್ಮಲೈ ತಿಂದ ವಿಚಾರ ತಿಳಿದ ಶಾನು ಅವರ ತಮ್ಮ ನೂರ್ ಮತ್ತು ಅವರ ಪತ್ನಿ ಫಾತ್ಮಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರಕ್ಕೆ ಸಾಬ್ರೀನ್ ಜೊತೆ ಮಾತಿನ ಚಕಮಕಿ ಆರಂಭವಾಗಿದೆ. ಆರಂಭದಲ್ಲಿ ಸಣ್ಣದಾಗಿ ಶುರುವಾದ ವಾಗ್ವಾದ, ಕೆಲವೇ ಕ್ಷಣಗಳಲ್ಲಿ ದೊಡ್ಡ ಜಗಳವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಆರೋಪದ ಪ್ರಕಾರ, ಜಗಳ ತೀವ್ರಗೊಂಡ ಬಳಿಕ ನೂರ್ ಮತ್ತು ಫಾತ್ಮಾ ಕತ್ತರಿಯಿಂದ ಶಾನು ಹಾಗೂ ಸಾಬ್ರೀನ್ ಮೇಲೆ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ದಂಪತಿಗೆ ಗಂಭೀರ ಗಾಯಗಳಾಗಿವೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಗಾಯಗೊಂಡ ಶಾನು ಮತ್ತು ಸಾಬ್ರೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ.&lt;/p&gt;&lt;p&gt;ಇತ್ತ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ದೂರಿನ ಆಧಾರದ ಮೇಲೆ ಪೊಲೀಸರು ನೂರ್ ಮತ್ತು ಫಾತ್ಮಾ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಣ್ಣದೊಂದು ರಸ್ಮಲೈ ವಿಚಾರ ಇಷ್ಟೊಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/rasmalai-dispute-brother-sister-in-law-scissors-attack/articleshow-l88gklh"/>
        </item>
        <item>
            <title><![CDATA[‘ಜಮೀನು ಮಾರಲ್ಲ’ ಎಂದ ಪತ್ನಿ… ಕೋಪಗೊಂಡ ಪತಿ ಮಾಡಿದ ಘೋರ ಕೃತ್ಯ…. ಗುಪ್ತಾಂಗಕ್ಕೆ ಶಾಕ್ ಕೊಟ್ಟು ಹತ್ಯೆ]]></title>
            <link>https://kannada.asianetnews.com/crime/husband-allegedly-kills-wife-over-land-dispute-in-ups-rampur/articleshow-m5q47zm</link>
            <guid isPermaLink="true">https://kannada.asianetnews.com/crime/husband-allegedly-kills-wife-over-land-dispute-in-ups-rampur/articleshow-m5q47zm</guid>
            <pubDate>Tue, 18 Aug 2026 16:48:47 +0530</pubDate>
            <description><![CDATA[&lt;p&gt;Crime News: ಮಕ್ಕಳ ಭವಿಷ್ಯಕ್ಕಾಗಿ ಜಮೀನು ಬೇಕು, ಅದನ್ನು ಮಾರುವುದಿಲ್ಲ ಎಂದ ಪತ್ನಿಯ ಮೇಲೆ ಕೋಪಗೊಂದ ಪತಿ ಆಕೆಯ ಗುಪ್ತಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು, ಹತ್ಯೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಪತಿ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0a9ghynhn46mrr7yfd2xryk,imgname-electric-shock-1787051919315.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜಮೀನು ಮಾರಲ್ಲ ಎಂದ ಪತ್ನಿಗೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಕೊಂದ ಪತಿ&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ರಾಮ್&zwnj;ಪುರದಲ್ಲಿ ಆಸ್ತಿ ವಿಚಾರದ ಜಗಳವೊಂದು ಕೊನೆಗೆ ಕೊಲೆಯೊಂದಿಗೆ ಅಂತ್ಯಗೊಂಡಿದ್ದು, ಒಂದು ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದ ಘಟನೆ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿಯನ್ನು ಅತ್ಯಂತ ಭೀಕರ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ. ಅದು ಅಂತಿಂಥ ರೀತಿಯಲ್ಲಿ ನಡೆದ ಹತ್ಯೆ ಅಲ್ಲ, ಪತ್ನಿಯ ಖಾಸಗಿ ಅಂಗಗಳಿಗೆ ವಿದ್ಯುತ್ ಶಾಕ್ ನೀಡಿ ಕೊಂದಿದ್ದು, ಪೋಸ್ಟ್&zwnj;ಮಾರ್ಟಂ ವರದಿಯಲ್ಲಿ ಸಂತ್ರಸ್ತೆಯ ದೇಹ ಮತ್ತು ಖಾಸಗಿ ಅಂಗಗಳ ಮೇಲೆ ಸುಟ್ಟ ಗಾಯಗಳ ಗುರುತುಗಳು ಪತ್ತೆಯಾಗಿವೆ. ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.&lt;/p&gt;&lt;h3&gt;&lt;strong&gt;ಏನಿದು ಸಂಪೂರ್ಣ ಪ್ರಕರಣ?&lt;/strong&gt;&lt;/h3&gt;&lt;p&gt;ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಇಸ್ರಾರ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ನಸ್ರೀನ್, ಆಕೆಯ ತಂದೆ-ತಾಯಿಯಿಂದ ಬಂದಿದ್ದ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ತಾನು ಆಕೆಯ ಮೇಲೆ ಕೋಪಗೊಂಡಿದ್ದೆ ಎಂದು ಆತ ಹೇಳಿದ್ದಾನೆ. ನಸ್ರೀನ್ ಕುಟುಂಬದ ಪ್ರಕಾರ, ಜಮೀನು ಮಾರಾಟ ಮಾಡಿದರೆ ತನ್ನ ಐವರು ಮಕ್ಕಳ ಭವಿಷ್ಯ ಅಪಾಯಕ್ಕೆ ಸಿಲುಕಬಹುದು ಎಂಬ ಭಯ ಆಕೆಗೆ ಇತ್ತು. ಜಮೀನಿನ ವಿಚಾರವಾಗಿ ಇಸ್ರಾರ್ ಪದೇಪದೇ ನಸ್ರೀನ್ ಮೇಲೆ ಹಲ್ಲೆ ನಡೆಸುತ್ತಿದ್ದ ಮತ್ತು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಆಕೆಯ ಕುಟುಂಬ ಆರೋಪಿಸಿದೆ.&lt;/p&gt;&lt;p&gt;&lt;strong&gt;ಪ್ರಕರಣದ ತನಿಖೆ ಮುಂದುವರಿದಿದೆ&lt;/strong&gt;&lt;/p&gt;&lt;p&gt;ನಸ್ರೀನ್ ಅವರ ಸಹೋದರಿ ಹೇಳುವ ಪ್ರಕಾರ, ಇತ್ತೀಚೆಗೆ ಅವರು ಮನೆಗೆ ಬಂದಾಗ ನಸ್ರೀನ್ ಮುಖದ ಮೇಲೆ ಗಾಯದ ಗುರುತುಗಳಿದ್ದವು. ಆದರೆ ಆಕೆ ತನ್ನ ಮೇಲೆ ನಡೆಯುತ್ತಿದ್ದ ಹಲ್ಲೆಯ ಬಗ್ಗೆ ಯಾರಿಗೂ ಹೇಳಿರಲಿಲ್ಲ. ರಾಮ್&zwnj;ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ASP) ಅನುರಾಗ್ ಸಿಂಗ್ ಅವರು, ಸಂತ್ರಸ್ತೆಯ ಚಿಕ್ಕಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಸ್ರೀನ್ ಹತ್ಯೆಯಲ್ಲಿ ಆಕೆಯ ಅತ್ತೆ-ಮಾವನ ಮನೆಯವರೂ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ASP ಅವರ ಪ್ರಕಾರ, ಪೋಸ್ಟ್&zwnj;ಮಾರ್ಟಂ ವರದಿಯಲ್ಲಿ ನಸ್ರೀನ್ ಅವರ ದೇಹದ ಆರು ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ಅವುಗಳಲ್ಲಿ ವಿದ್ಯುತ್ ಶಾಕ್&zwnj;ನಿಂದ ಉಂಟಾದ ಸುಟ್ಟ ಗಾಯಗಳೂ ಸೇರಿವೆ. ಆಕೆಯ ಖಾಸಗಿ ಅಂಗಗಳ ಮೇಲೂ ವಿದ್ಯುತ್ ಶಾಕ್&zwnj;ನಿಂದ ಉಂಟಾದ ಸುಟ್ಟ ಗಾಯಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Pavna Das</dc:creator>
            <atom:link href="https://kannada.asianetnews.com/crime/husband-allegedly-kills-wife-over-land-dispute-in-ups-rampur/articleshow-m5q47zm"/>
        </item>
        <item>
            <title><![CDATA[ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ]]></title>
            <link>https://kannada.asianetnews.com/india-news/raipur-man-climbs-car-roof-to-stop-girlfriend-her-lover-runs-him-over-gkn/articleshow-mc6ny9y</link>
            <guid isPermaLink="true">https://kannada.asianetnews.com/india-news/raipur-man-climbs-car-roof-to-stop-girlfriend-her-lover-runs-him-over-gkn/articleshow-mc6ny9y</guid>
            <pubDate>Sat, 15 Aug 2026 23:31:19 +0530</pubDate>
            <description><![CDATA[&lt;p&gt;ರಾಯ್&zwnj;ಪುರದಲ್ಲಿ ಪ್ರೇಯಸಿ ಹಾಗೂ ಆಕೆಯ ಸ್ನೇಹಿತನ ಜೊತೆಗಿನ ಪ್ರೇಮ ವಿವಾದದ ಜಗಳದ ನಂತರ, 34 ವರ್ಷದ ಪರಂಪ್ರೀತ್ ಸಿಂಗ್ ಎಂಬ ಯುವಕನ ಮೇಲೆ ಕಾರು ಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇಬ್ಬರನ್ನು ತಡೆಯಲು ಪರಂಪ್ರೀತ್ ಚಲಿಸುತ್ತಿದ್ದ ಕಾರಿನ ಛಾವಣಿ ಮೇಲೇರಿದ್ದರು, ಆದರೆ ಅವರು ಕೆಳಗೆ ಬಿದ್ದಾಗ ಆರೋಪಿಗಳು ಅವರ ಮೇಲೆಯೇ ಕಾರು ಚಲಾಯಿಸಿ ಪರಾರಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0399d55txwnq84262yy3qwq,imgname-man-climbs-car-roof-to-stop-girlfriend-1786816804005.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯ್&zwnj;ಪುರ: &lt;/strong&gt;ಪ್ರೇಮ ವಿವಾದಕ್ಕೆ ಸಂಬಂಧಿಸಿದಂತೆ ಛತ್ತೀಸ್&zwnj;ಗಢದ ರಾಯ್&zwnj;ಪುರದಲ್ಲಿ ಅತ್ಯಂತ ಭೀಕರ ಹತ್ಯೆಯೊಂದು ನಡೆದಿದೆ. ಪ್ರೇಯಸಿಯನ್ನು ಮತ್ತೊಬ್ಬ ಯುವಕನ ಜೊತೆ ನೋಡಿದ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಜಗಳ ತೆಗೆದಿದ್ದು, ಕೊನೆಗೆ ಆತನ ಮೇಲೆ ಕಾರು ಹರಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಯ್&zwnj;ಪುರದ ಏಮ್ಸ್ (AIIMS) ಆಸ್ಪತ್ರೆ ಮುಂಭಾಗ ಸಂಭವಿಸಿದೆ.&lt;/p&gt;&lt;p&gt;ಹತ್ಯೆಗೀಡಾದ ಯುವಕನನ್ನು ತಾತೀಬಂಧ್ ನಿವಾಸಿ, 34 ವರ್ಷದ ಪರಂಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆಮಾನಾಕಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಪರಂಪ್ರೀತ್ ಸಿಂಗ್ ತನ್ನ ಪ್ರೇಯಸಿ ಮತ್ತೊಬ್ಬ ಯುವಕನೊಂದಿಗೆ ಕಾರಿನಲ್ಲಿ ಬಂದಿದ್ದನ್ನು ನೋಡಿದ್ದಾನೆ. ಆ ಯುವಕನನ್ನು ದುರ್ಗ್ ನಿವಾಸಿ ಭರತ್ ಮಂಗನಾನಿ ಎಂದು ಗುರುತಿಸಲಾಗಿದೆ. ಪ್ರೇಯಸಿಯನ್ನು ಮತ್ತೊಬ್ಬನ ಜೊತೆ ನೋಡಿದ ತಕ್ಷಣ ಪರಂಪ್ರೀತ್ ಸಿಂಗ್ ರಸ್ತೆ ಮಧ್ಯದಲ್ಲೇ ಆಕೆಯೊಂದಿಗೆ ಹಾಗೂ ಭರತ್ ಜೊತೆಗೆ ತೀವ್ರ ಗಲಾಟೆ ಆರಂಭಿಸಿದ್ದಾನೆ.&lt;/p&gt;&lt;h2&gt;&lt;strong&gt;ಚಲಿಸುವ ಕಾರಿನ Roof ಮೇಲೇರಿದ ಯುವಕ!&lt;/strong&gt;&lt;/h2&gt;&lt;p&gt;ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಯುವತಿ ಮತ್ತು ಭರತ್ ಮಂಗನಾನಿ ಅಲ್ಲಿಂದ ತಪ್ಪಿಸಿಕೊಳ್ಳಲು ಕಾರನ್ನು ಹತ್ತಿದ್ದಾರೆ. ಅವರನ್ನು ತಡೆಯಲು ಪ್ರಯತ್ನಿಸಿದ ಪರಂಪ್ರೀತ್ ಸಿಂಗ್, ಕಾರನ್ನು ನಿಲ್ಲಿಸಲು ನೇರವಾಗಿ ಕಾರಿನ ಛಾವಣಿಯ (Roof) ಮೇಲೆ ಹತ್ತಿದ್ದಾನೆ. ಆದರೆ ಚಾಲಕ ಕಾರನ್ನು ನಿಲ್ಲಿಸದೇ ಅತಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ಕಾರಿನ ಛಾವಣಿಯ ಮೇಲಿದ್ದ ಪರಂಪ್ರೀತ್ ಸಿಂಗ್ ನಿಯಂತ್ರಣ ತಪ್ಪಿ ಸ್ವಲ್ಪ ದೂರದಲ್ಲೇ ರಸ್ತೆಗೆ ಬಿದ್ದಿದ್ದಾನೆ. ಇಷ್ಟಾದರೂ ಕಾರು ನಿಲ್ಲಿಸದ ಆರೋಪಿಗಳು, ರಸ್ತೆಗೆ ಬಿದ್ದ ಪರಂಪ್ರೀತ್ ಸಿಂಗ್ ಮೇಲೆ ಕಾರನ್ನು ಹರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಪರಂಪ್ರೀತ್ ಸಿಂಗ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಆಮಾನಾಕಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ ಪ್ರಕರಣ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಯುವತಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯ ಆರೋಪಿ ಭರತ್ ಮಂಗನಾನಿ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/raipur-man-climbs-car-roof-to-stop-girlfriend-her-lover-runs-him-over-gkn/articleshow-mc6ny9y"/>
        </item>
        <item>
            <title><![CDATA[ನನ್ನನ್ನು ಶಾಂತಿಯಿಂದ ಸಾಯಲು ಬಿಡಿ.. ಮಾಡೆಲ್‌ ಜೀವನದ ಕೊನೆಯ 90 ನಿಮಿಷ]]></title>
            <link>https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5</link>
            <guid isPermaLink="true">https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5</guid>
            <pubDate>Tue, 18 Aug 2026 13:05:42 +0530</pubDate>
            <description><![CDATA[&lt;p&gt;ಮಾಡೆಲ್&zwnj; ತ್ವಿಶಾ ಶರ್ಮಾ ಸಾವಿನ ಬಗ್ಗೆ ಸಾಕಷ್ಟು ಹೊಸ ವಿಷ್ಯಗಳು ಹೊರಗೆ ಬಿದ್ದಿವೆ. ಈಗಾಗಲೇ ಚಾರ್ಜ್&zwnj; ಶೀಟ್&zwnj; ಸಲ್ಲಿಕೆಯಾಗಿದ್ದು, 90 ನಿಮಿಷದಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ಹೇಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09wr27kzgrxmbb5g3ccv35c,imgname-twisha-sharma--2--1787038533875.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೋಪಾಲ್ನ ಚರ್ಚಿತ ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಘಾತಕಾರಿ ವಿವರಗಳು ಬಹಿರಂಗವಾಗಿವೆ. ಸಿಬಿಐ ಪ್ರಕಾರ, 34 ವರ್ಷದ ಮಾಜಿ ಮಿಸ್ ಪುಣೆ ತ್ವಿಶಾ ಸಾವು ಕೊಲೆಯಲ್ಲ, ಆತ್ಮಹತ್ಯೆ ಎಂಬುದು ಬಹಿರಂಗವಾಗಿದೆ. ನಿರಂತರ ಮಾನಸಿಕ ಕಿರುಕುಳದಿಂದ ಬೇಸತ್ತು ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.&lt;/p&gt;&lt;p&gt;30 ಪುಟಗಳ ಚಾರ್ಜ್ಶೀಟ್ನಲ್ಲಿ ತ್ವಿಶಾ ಸಾವಿಗೂ ಮುನ್ನ ನಡೆದ ಕೊನೆಯ ಸುಮಾರು 90 ನಿಮಿಷಗಳ ಘಟನೆಗಳ ವಿವರ, ಸಿಸಿಟಿವಿ ದೃಶ್ಯಗಳು, ವಾಟ್ಸಾಪ್ ಸಂದೇಶಗಳು, ಕರೆ ದಾಖಲೆಗಳು, ಕೌನ್ಸೆಲಿಂಗ್ ವರದಿಗಳು ಹಾಗೂ ಹಣಕಾಸಿನ ವಿವಾದದ ಮಾಹಿತಿಯನ್ನು ದಾಖಲಿಸಲಾಗಿದೆ.&lt;/p&gt;&lt;h2&gt;ಸಾವಿಗೂ ಮುನ್ನದ ಕೊನೆಯ 90 ನಿಮಿಷ&lt;/h2&gt;&lt;p&gt;ಚಾರ್ಜ್ಶೀಟ್ ಪ್ರಕಾರ, ರಾತ್ರಿ 9.20ಕ್ಕೆ ತ್ವಿಶಾ ತನ್ನ ಅತ್ತಿಗೆ ರಾಶಿಗೆ ಕರೆ ಮಾಡಿದ್ದರು. ಅವರು ಅಳುತ್ತಾ, ಬೆನ್ನು ನೋವಿನ ಕಾರಣ ಪತಿ ಸಮರ್ಥ್ಗೆ ಬೇರೆ ಕೋಣೆಯಲ್ಲಿ ಮಲಗುವಂತೆ ಹೇಳಿದ್ದಕ್ಕೆ ಆತ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಎಂದು ತಿಳಿಸಿದ್ದರು. 9.29ಕ್ಕೆ ಮತ್ತೆ ಕರೆ ಬಂದರೂ, ತ್ವಿಶಾ ಅಳುತ್ತಿದ್ದ ಕಾರಣ ಹೆಚ್ಚಿನ ಮಾತುಕತೆ ಸಾಧ್ಯವಾಗಲಿಲ್ಲ. ರಾತ್ರಿ 9.36ಕ್ಕೆ ಅವರು ತಮ್ಮ ಅತ್ತಿಗೆಗೆ ಕೊನೆಯ ಸಂದೇಶ ಕಳುಹಿಸಿದ್ದರು ಎಂದು ಸಿಬಿಐ ಹೇಳಿದೆ. ಅದರಲ್ಲಿ, ಅವನಿಗೆ ತನ್ನ ಹೆಂಡತಿಯ ಡೆಡ್ ಬಾಡಿಯನ್ನು ತೆಗೆದುಕೊಂಡು ಹೋಗಲು ಹೇಳಿ, ಆದರೆ ನಾಳೆ. ನನಗೆ ಈಗ ಶಾಂತಿಯಿಂದ ಸಾಯಲು ಬಿಡಿ ಎಂದು ಬರೆದಿದ್ದರು ಎನ್ನಲಾಗಿದೆ.&lt;/p&gt;&lt;p&gt;ಸಿಸಿಟಿವಿ ದೃಶ್ಯಗಳ ಪ್ರಕಾರ, 9.40ಕ್ಕೆ ತ್ವಿಶಾ ಒಬ್ಬರೇ ಮೆಟ್ಟಿಲುಗಳ ಮೂಲಕ ಮೇಲ್ಛಾವಣಿಯತ್ತ ತೆರಳಿದ್ದಾರೆ. 9.41ಕ್ಕೆ ತಂದೆಗೆ ಕರೆ ಮಾಡಿ, ಸಮರ್ಥ್ ತುಂಬಾ ಆಕ್ರಮಣಕಾರಿಯಾಗಿದ್ದಾನೆ, ತಕ್ಷಣ ಬರುವಂತೆ ತಿಳಿಸಿದ್ದಾರೆ. ರಾತ್ರಿ 10.5ಕ್ಕೆ ಇದೇ ವಿಚಾರವನ್ನು ತಾಯಿಗೂ ತಿಳಿಸಿದ್ದಾರೆ. ನಂತರ ಕುಟುಂಬಸ್ಥರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.&lt;/p&gt;&lt;p&gt;10.10ಕ್ಕೆ ತಾಯಿ ಗಿರಿಬಾಲಾ ಸಿಂಗ್ ಅವರಿಗೆ ಕರೆ ಮಾಡಿ ತ್ವಿಶಾಳನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. 10.16ಕ್ಕೆ ಗಿರಿಬಾಲಾ ಕೆಳಗಿನ ಕೋಣೆಗೆ ತೆರಳಿದ್ದು, 10.18ಕ್ಕೆ ತ್ವಿಶಾ ಗೆ ಕರೆ ಮಾಡಿದ್ದಾರೆ. 10.21ಕ್ಕೆ ಸಮರ್ಥ್ಗೆ ಕರೆ ಮಾಡಲಾಗಿದೆ. 10.23ಕ್ಕೆ ಗಿರಿಬಾಲಾ ಮತ್ತು ಸಮರ್ಥ್ ಸಿಸಿಟಿವಿಯಲ್ಲಿ ಮೇಲ್ಛಾವಣಿಯತ್ತ ತೆರಳುತ್ತಿರುವುದು ಕಂಡುಬಂದಿದೆ. ನಂತರ ತ್ವಿಶಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ರಾತ್ರಿ 10.55ಕ್ಕೆ ಏಮ್ಸ್ ಭೋಪಾಲ್ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.&lt;/p&gt;&lt;h3&gt;ಪೋಸ್ಟ್ಮಾರ್ಟಂ ವರದಿ ಏನು ಹೇಳಿದೆ?&lt;/h3&gt;&lt;p&gt;ಮೊದಲ ಪೋಸ್ಟ್ಮಾರ್ಟಂ ವರದಿ ಕುರಿತು ಕುಟುಂಬಸ್ಥರು ಪ್ರಶ್ನೆಗಳನ್ನು ಎತ್ತಿದ ನಂತರ, ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ಏಮ್ಸ್ ದೆಹಲಿಯ ವೈದ್ಯಕೀಯ ಮಂಡಳಿ ಮರುಪೋಸ್ಟ್ಮಾರ್ಟಂ ನಡೆಸಿತ್ತು. ಸಿಬಿಐ ಚಾರ್ಜ್ಶೀಟ್ ಪ್ರಕಾರ, ಮರುಪೋಸ್ಟ್ಮಾರ್ಟಂ ವರದಿಯಲ್ಲಿ ನೇಣು ಬಿಗಿದ ಪರಿಣಾಮ ಉಸಿರುಗಟ್ಟುವಿಕೆಯಿಂದ ಸಾವು ಸಂಭವಿಸಿದೆ ಎಂದು ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಆನ್ಲೈನ್ ಪರಿಚಯ, ಮದುವೆ ಮತ್ತು ವೈವಾಹಿಕ ಕಲಹ&lt;/strong&gt;&lt;/p&gt;&lt;p&gt;ಚಾರ್ಜ್ಶೀಟ್ ಪ್ರಕಾರ, 2025ರ ಫೆಬ್ರವರಿಯಲ್ಲಿ ಆನ್ಲೈನ್ ಡೇಟಿಂಗ್ ಆ್ಯಪ್ ಮೂಲಕ ತ್ವಿಶಾ ಮತ್ತು ಸಮರ್ಥ್ ಪರಿಚಯವಾಗಿದ್ದರು. 2025ರ ಡಿಸೆಂಬರ್ 9ರಂದು ಇಬ್ಬರೂ ಮದುವೆಯಾಗಿದ್ದರು. ಮದುವೆಯ ನಂತರ ಸಮರ್ಥ್ ತ್ವಿಶಾಳ ಹಿಂದಿನ ಸಂಬಂಧಗಳ ಕುರಿತು ಅವಮಾನಕರ ಹಾಗೂ ಅನೈತಿಕ ಟೀಕೆಗಳನ್ನು ಮಾಡುತ್ತಿದ್ದ ಎಂದು ಸಿಬಿಐ ಆರೋಪಿಸಿದೆ. ಈ ಬಗ್ಗೆ ತ್ವಿಶಾ ಅತ್ತೆಗೆ ದೂರು ನೀಡಿದಾಗಲೆಲ್ಲಾ ಅವರು ಮಗನ ಪರ ನಿಂತಿದ್ದರು ಎನ್ನಲಾಗಿದೆ.&lt;/p&gt;&lt;p&gt;2026ರ ಮಾರ್ಚ್ನಲ್ಲಿ ತ್ವಿಶಾಳ ತಂದೆಗೆ ಹೃದಯಾಘಾತವಾದಾಗ, ಚಿಕಿತ್ಸೆಗಾಗಿ ಅವರು ತವರು ಮನೆಗೆ ತೆರಳಿದ್ದರು. ಆದರೆ ಭೋಪಾಲ್ಗೆ ಹಿಂದಿರುಗುವಂತೆ ಪತಿ ಮತ್ತು ಅತ್ತೆ ಒತ್ತಡ ಹೇರಿದ್ದರೆಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ನಂತರ ಮಾರ್ಚ್ 24ರಂದು ಅವರು ಭೋಪಾಲ್ಗೆ ಮರಳಿದ್ದರು.&lt;/p&gt;&lt;p&gt;&lt;strong&gt;ಗರ್ಭಧಾರಣೆ, ಗರ್ಭಪಾತದ ಒತ್ತಡ ಮತ್ತು ಕಿರುಕುಳದ ಆರೋಪ&lt;/strong&gt;&lt;/p&gt;&lt;p&gt;ಏಪ್ರಿಲ್ 16ರಂದು ತ್ವಿಶಾಗೆ ತಾನು ಗರ್ಭಿಣಿಯಾಗಿರುವುದು ತಿಳಿದುಬಂದಿತ್ತು. ವೈವಾಹಿಕ ಸಂಬಂಧದಲ್ಲಿನ ಒತ್ತಡದಿಂದಾಗಿ ಮಗುವನ್ನು ಮುಂದುವರಿಸುವ ಬಗ್ಗೆ ಅವರು ಗೊಂದಲದಲ್ಲಿದ್ದರು ಎನ್ನಲಾಗಿದೆ. ಏಪ್ರಿಲ್ 17ರಂದು ಈ ವಿಚಾರವಾಗಿ ಪತಿ-ಪತ್ನಿ ನಡುವೆ ವಿವಾದ ಉಂಟಾಗಿದ್ದು, ನಂತರ ತ್ವಿಶಾ ತವರು ಮನೆಗೆ ತೆರಳಿದ್ದರು.&lt;/p&gt;&lt;p&gt;ಏಪ್ರಿಲ್ 30ರಂದು ಅವರಿಗೆ ಪ್ಯಾನಿಕ್ ಅಟ್ಯಾಕ್ ಬಂದಿದ್ದು, ಮನೋವೈದ್ಯರ ಬಳಿ ಕರೆದೊಯ್ಯಲಾಗಿತ್ತು. ಮೇ 6ರಂದು ಅವರು ತಮ್ಮ ಹಳೆಯ ಉದ್ಯೋಗಕ್ಕೆ ಮರಳುವ ಅವಕಾಶವನ್ನು ಸ್ವೀಕರಿಸಿದ್ದರು. ಅದೇ ದಿನ ಗರ್ಭಪಾತಕ್ಕಾಗಿ ಮೊದಲ ಔಷಧಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಮೇ 7ರಂದು ಸಾಸು ಗಿರಿಬಾಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ದು, ಗರ್ಭಪಾತವನ್ನು ನಿಲ್ಲಿಸಲು ಸಾಧ್ಯವೇ ಎಂದು ವೈದ್ಯರನ್ನು ಕೇಳಿದ್ದರು. ಆದರೆ ವೈದ್ಯರು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಕೌನ್ಸೆಲಿಂಗ್ ವೇಳೆ ತ್ವಿಶಾ ಅಳುತ್ತಾ, ಗರ್ಭಪಾತ ಮಾಡಿಸಿಕೊಳ್ಳುತ್ತಿರುವ ಕಾರಣಕ್ಕೆ ಅತ್ತೆ ತಮ್ಮನ್ನು ದೂರಿದ್ದರು ಎಂದು ಆರೋಪಿಸಿದ್ದಾರೆ. ಮೇ 8ರಂದು ಎರಡನೇ ಔಷಧಿ ತೆಗೆದುಕೊಂಡ ನಂತರ ತೀವ್ರ ನೋವಿನಿಂದ ಬಳಲುತ್ತಿದ್ದಾಗಲೂ ಸಮರ್ಥ್ಮ, ಪತ್ನಿ ಬೆಂಬಲಕ್ಕೆ ಬಂದಿರಲಿಲ್ಲ.&lt;/p&gt;&lt;p&gt;ಮೇ 9ರಂದು ಸಮರ್ಥ್, ಗರ್ಭದಲ್ಲಿರುವ ಮಗು ತನ್ನದೇ ಎಂಬುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾನೆ ಎಂದು ಸಿಬಿಐ ಆರೋಪಿಸಿದೆ. ಇದಾದ ಬಳಿಕ ತ್ವಿಶಾ ತನ್ನ ತಾಯಿಗೆ ನನ್ನ ಉಸಿರೇ ಇಲ್ಲಿ ಕಟ್ಟಿಹೋಗುತ್ತಿದೆ ಎಂಬ ಅರ್ಥದ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.&lt;/p&gt;&lt;p&gt;&lt;strong&gt;20 ಲಕ್ಷದ ಷೇರು ಹಣದ ವಿವಾದ&lt;/strong&gt;&lt;/p&gt;&lt;p&gt;ದಂಪತಿಯ ನಡುವಿನ ವಿವಾದದಲ್ಲಿ ಹಣಕಾಸಿನ ವಿಚಾರವೂ ಪ್ರಮುಖವಾಗಿತ್ತು ಎಂದು ಚಾರ್ಜ್ಶೀಟ್ ಹೇಳುತ್ತದೆ. ತ್ವಿಶಾ ಅವರ ಡಿಮ್ಯಾಟ್ ಖಾತೆಯಲ್ಲಿ ಸುಮಾರು 20 ಲಕ್ಷ ಮೌಲ್ಯದ ಷೇರುಗಳಿದ್ದವು ಎನ್ನಲಾಗಿದೆ. ಈ ಹಣವನ್ನು ಸಮರ್ಥ್ ಮತ್ತು ಅವರ ತಾಯಿ, ಏಪ್ರಿಲ್ 7ರಂದು ತೆರೆಯಲಾಗಿದ್ದ ಜಂಟಿ ಖಾತೆಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದರು ಎಂದು ಸಿಬಿಐ ಆರೋಪಿಸಿದೆ. ಸಮರ್ಥ್ ಈ ಹಣವನ್ನು ಚೀನಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದ ಎನ್ನಲಾಗಿದೆ. ಆದರೆ ತ್ವಿಶಾ ಹಣ ತನ್ನ ತಂದೆಗೆ ಸೇರಿದ್ದು, ಅದನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದರು. ಪ್ರಕರಣದಲ್ಲಿ ತ್ವಿಶಾ ಅವರ ಪತಿ ಸಮರ್ಥ್ ಸಿಂಗ್ ಮತ್ತು ಅತ್ತೆ ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪಗಳನ್ನು ಸಿಬಿಐ ದಾಖಲಿಸಿದೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/bhopal-twisha-sharma-suicide-cbi-chargesheet-reveals-last-90-minutes/articleshow-pkabpy5"/>
        </item>
        <item>
            <title><![CDATA[ಆಷಾಢ  ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್]]></title>
            <link>https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</link>
            <guid isPermaLink="true">https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc</guid>
            <pubDate>Sat, 15 Aug 2026 10:56:01 +0530</pubDate>
            <description><![CDATA[&lt;p&gt;ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಪತ್ನಿ ಮರಳಿ ಬಾರದಿದ್ದಕ್ಕೆ ಮನನೊಂದ ನವ ವಿವಾಹಿತನೊಬ್ಬ ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ತನ್ನ ಪತ್ನಿಯೇ ಕಾರಣ ಎಂದು ವಾಟ್ಸಪ್&zwnj; ಸಂದೇಶ ಕಳುಹಿಸಿ ಪಟ್ಟಣದ ಮಹಾವೀರ ನಗರದ ನಿವಾಸಿ ಅವಿನಾಶ್ (26) ನೇಣಿಗೆ ಶರಣಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01x122bh836g3r5rbyhw8mg,imgname-tumakuru-1786770393163.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ತವರಿಗೆ ಹೋದ ಹೆಂಡತಿ ಮರಳಿ ಬಾರದೆ ಇದ್ದುದರಿಂದ ಮನನೊಂದ ನವ ವಿವಾಹಿತನೊಬ್ಬ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟವನನ್ನು ಪಟ್ಟಣದ ಮಹಾವೀರ ನಗರದ ವಾಸಿ ಅವಿನಾಶ್ (26) ಎಂದು ಗುರುತಿಸಲಾಗಿದೆ. ಮೃತಪಟ್ಟ ಅವಿನಾಶ್&zwnj; ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಎಂಬ ಯುವತಿಯನ್ನು ಮದುವೆಯಾಗಿದ್ದ. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ಹೋಗಿದ್ದ ಧಾಮಿನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ ಬರುವಂತೆ ತಿಳಿಸಿದ್ದ. ಆದರೆ ಹೆಂಡತಿ ಧಾಮಿನಿ ನಾಗರ ಪಂಚಮಿ ಹಬ್ಬ ಮುಗಿಸಿ ಬರುವುದಾಗಿ ತಿಳಿಸಿದ್ದು ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸಾವಿಗೆ ಹೆಂಡ್ತಿಯೇ ಕಾರಣ, ಶಿಕ್ಷೆ ಆಗಬೇಕು!&lt;/strong&gt;&lt;/h2&gt;&lt;p&gt;ತಡರಾತ್ರಿ ಅವಿನಾಶ ತಮ್ಮನಿಗೆ ವಾಟ್ಸಪ್&zwnj; ಮೂಲಕ ಮೆಸೇಜ್ ಮಾಡಿದ್ದು, ಹೆಂಡತಿಗೆ ಶಿಕ್ಷೆಯಾಗಬೇಕು. ನನ್ನ ಸಾವಿಗೆ ಅವಳೇ ಕಾರಣ ಎಂದು ತಿಳಿಸಿದ್ದ. ಬೆಳಿಗ್ಗೆ ಮೆಸೇಜ್ ನೋಡಿದ ಸೋದರ, ಆತನ ರೂಮಿಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಅವಿನಾಶ ನೇಣಿಗೆ ಶರಣಾಗಿದ್ದು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಭೇಟಿ ನೀಡಿದ್ದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h3&gt;&lt;strong&gt;ಅನೈತಿಕ ಸಂಬಂಧ ಶಂಕೆ: ಗಂಡನಿಂದಲೇ ಹೆಂಡತಿಯ ಮೇಲೆ ಹಲ್ಲೆ&lt;/strong&gt;&lt;/h3&gt;&lt;p&gt;ಹೊಸದುರ್ಗ: ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಪತಿಯು ತನ್ನ ಪತ್ನಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ರಾತ್ರಿ ನಡೆದಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ (30) ಹಲ್ಲೆಗೊಳಗಾದ ಮಹಿಳೆ. ಈಕೆಯ ಗಂಡ ತಿಪ್ಪೆಸ್ವಾಮಿ ಹಲ್ಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಹಿರಿಯೂರು ತಾಲೂಕು ಕುಂಟಪ್ಪನಹಳ್ಳಿ ಗ್ರಾಮದ ನೇತ್ರಾವತಿ ತನ್ನ ಗಂಡ ಹಾಗೂ ಇಬ್ಬರು ಮಕ್ಕಳೋಂದಿಗೆ ಕೂಲಿ ಕೆಲಸಕ್ಕಾಗಿ ಶ್ರೀರಾಂಪುರಕ್ಕೆ ಬಂದು ಇಲ್ಲಿಯೇ ಕಳೆದ 20 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಹೊಸದುರ್ಗಕ್ಕೆ ಹೊಗಿದ್ದ ಗಂಡ ತಿಪ್ಪೆಸ್ವಾಮಿ ಮನೆಗೆ ಬಂದಾಗ ಇವರೊಂದಿಗೆ ಕೆಲಸ ಮಾಡುತ್ತಿದ್ದ ಕಂಚೀಪುರ ಗ್ರಾಮದ ವಿಜಯಕುಮಾರ ಎಂಬಾತ ತನ್ನ ಮನೆಯಲ್ಲಿರುವುದನ್ನು ಕಂಡು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಸ್&zwnj;ನಲ್ಲೂ ವಂದೇ ಭಾರತ್ ವೈಭೋಗ: ಶೌಚಾಲಯ, ಪ್ಯಾಂಟ್ರಿ ಹೊಂದಿರುವ ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ KSRTC!&lt;/strong&gt;&lt;/p&gt;&lt;p&gt;ಗಂಡನ ಗಲಾಟೆಯಿಂದ ಬೇಸತ್ತ ನೇತ್ರಾವತಿ ಶ್ರೀರಾಂಪುದ ಪೊಲೀಸ್&zwnj; ಠಾಣೆಗೆ ದೂರು ನೀಡಲು ಮನೆಯಿಂದ ಹೊರ ಬಂದಾಗ ಅವಳನ್ನೆ ಹಿಂಬಾಲಿಸಿಕೊಂಡು ಬಂದು ಶ್ರೀರಾಂಪುರದ ಅಂಬೇಡ್ಕರ್&zwnj; ವೃತ್ತದ ಬಳಿ ಚಾಕುವಿನಿಂದ ಮುಖ ಹಾಗೂ ಮೈ ಕೈಗೆ ಗಾಯಗೊಳಿಸಿದ್ದಾನೆ. ನಂತರ ಇದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೋಲೀಸರು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಳಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸರ್ಕಾರದ ₹100 ಕೋಟಿಯ 1.37 ಎಕರೆ ಕಬಳಿಕೆ, ದಾಖಲೆ ಸಹಿತ ಲೋಕಾಯುಕ್ತ, ಜಿಬಿಎ ದಕ್ಷಿಣ ನಗರ ಪಾಲಿಕೆ ಆಯುಕ್ತರಿಗೆ ದೂರು&lt;/strong&gt;&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/tumakuru-kunigal-after-ashadha-masa-wife-who-did-not-return-avinash-a-newlywed-who-lost-his-life-mrq/articleshow-qnmaikc"/>
        </item>
        <item>
            <title><![CDATA[ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರರಣಕ್ಕೆ ಟ್ವಿಸ್ಟ್, ನನಗೆ ಭಾರತದ ಕಾನೂನು ಅನ್ವಯವಾಗಲ್ಲ ಆಪ್ತ ಗೆಳೆಯನ ವಾದ!]]></title>
            <link>https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h</link>
            <guid isPermaLink="true">https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h</guid>
            <pubDate>Thu, 13 Aug 2026 15:20:01 +0530</pubDate>
            <description><![CDATA[&lt;p&gt;ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರಿಗೆ ಆಪ್ತ ಗೆಳೆಯನೇ ಸಂಕಷ್ಟ ತಂದೊಡ್ಡಿದ್ದಾನೆ. ತಾನೇ ಚಿನ್ನ ನೀಡಿದ್ದಾಗಿ ಒಪ್ಪಿಕೊಂಡಿರುವ ಆತ, ಅದನ್ನು ದುಬೈನಲ್ಲಿ ನೀಡಿರುವುದರಿಂದ ಭಾರತದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂದು ವಾದಿಸಿ, ಪ್ರಕರಣದ ಸಂಪೂರ್ಣ ಹೊಣೆಯನ್ನು ನಟಿಯ ಮೇಲೆ ಹಾಕಲು ಯತ್ನಿಸಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0bj6e2fq0m67gjjyjxjgpqx,imgname-ranya-rao-1752734840911.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿ ಪ್ರಸ್ತುತ ವಿಚಾರಣೆಯಲ್ಲಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಮತ್ತೊಂದು ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನೀಡಿದ ಶೋಕಾಸ್ ನೋಟಿಸ್&zwnj;ಗೆ ಬೆದರಿರುವ ಸ್ಮಗ್ಲರ್&zwnj;ಗಳು, ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ನೀಡುವ ನೆಪದಲ್ಲಿ ಹೊಸ ಅವಾಂತರ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ, ನಟಿ ರನ್ಯಾ ರಾವ್ ಅವರ ಆಪ್ತ ಗೆಳೆಯನೇ ಆಕೆಗೆ ಕೊಳ್ಳಿ ಇಡುವ ಕೆಲಸಕ್ಕೆ ಮುಂದಾಗಿದ್ದು ಬಿಗ್ ಶಾಕ್ ನೀಡಿದ್ದಾನೆ.&lt;/p&gt;&lt;h2&gt;ಕೋರ್ಟ್ ಮೆಟ್ಟಿಲೇರಿದ ಗೆಳೆಯನ ವಿಚಿತ್ರ ವಾದ!&lt;/h2&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಅವರ ಆಪ್ತ ಗೆಳೆಯ ನ್ಯಾಯಾಲಯಕ್ಕೆ ಸುದೀರ್ಘ ಮನವಿಯೊಂದನ್ನು ಸಲ್ಲಿಸಿದ್ದು, ನಟಿಗೆ ಚಿನ್ನದ ಬಿಸ್ಕತ್ತುಗಳನ್ನು ತಾನೇ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಭಾರತದ ಕಾನೂನಿನಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೆಣೆದಿರುವ ಆತ, ಕೋರ್ಟ್ ಮುಂದೆ ವಿಚಿತ್ರ ವಾದ ಮಂಡಿಸಿದ್ದಾನೆ. ನಾನು ರನ್ಯಾ ರಾವ್ ಅವರಿಗೆ ಚಿನ್ನದ ಬಿಸ್ಕತ್ತುಗಳನ್ನು ನೀಡಿದ್ದು ನಿಜ. ಆದರೆ, ನಾನು ಆ ಚಿನ್ನವನ್ನು ನೀಡಿದ್ದು ದುಬೈನಲ್ಲಿ, ಭಾರತದಲ್ಲಲ್ಲ. ನಾನು ದುಬೈನಲ್ಲಿ ಚಿನ್ನ ನೀಡಿರುವುದರಿಂದ ನನಗೆ ಅಲ್ಲಿನ ಕಾನೂನು ಮಾತ್ರ ಅನ್ವಯವಾಗಬೇಕೇ ಹೊರತು, ಭಾರತದ ಕಾನೂನಲ್ಲ. ನಾನು ಭಾರತದ ಗಡಿಯೊಳಗೆ ಯಾವುದೇ ರೀತಿಯ ಅಕ್ರಮ ಅಥವಾ ಹಣಕಾಸಿನ ಅವ್ಯವಹಾರಗಳನ್ನು ಮಾಡಿಲ್ಲ, ಹಾಗೂ ಚಿನ್ನವನ್ನು ಮಾರಾಟ ಮಾಡುವ ಯತ್ನವನ್ನೂ ನಡೆಸಿಲ್ಲ. ನಾನು ದುಬೈನಲ್ಲಿ ಕೊಟ್ಟ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ (Smuggle) ಮಾಡಿದ್ದು ಸ್ವತಃ ರನ್ಯಾ ರಾವ್. ಹೀಗಾಗಿ ಈ ಅಪರಾಧಕ್ಕೆ ಭಾರತದ ಕಾನೂನಿನಡಿ ಆಕೆ ಮಾತ್ರ ಹೊಣೆಯಾಗಬೇಕೇ ಹೊರತು ನಾನು ಅಲ್ಲ ಎಂದಿದ್ದಾನೆ.&lt;/p&gt;&lt;h2&gt;ಪ್ರಕರಣದಿಂದ ಮುಕ್ತಿ ಕೋರಿದ ಆಪ್ತ&lt;/h2&gt;&lt;p&gt;ತಾನು ಕೇವಲ ದುಬೈನಲ್ಲಿ ಚಿನ್ನ ಹಸ್ತಾಂತರಿಸಿದ್ದೇನೆ ಮತ್ತು ಕಳ್ಳಸಾಗಾಣಿಕೆಯಲ್ಲಿ ನೇರ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿರುವ ಈತ, ತನ್ನನ್ನು ಈ ಪ್ರಕರಣದಿಂದ ತಕ್ಷಣವೇ ಮುಕ್ತಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಈ ಮೂಲಕ ತನಿಖೆಯಿಂದ ತಾನು ಪಾರಾಗಲು ಯತ್ನಿಸುತ್ತಲೇ, ತನ್ನ ಆಪ್ತ ಗೆಳತಿ ರನ್ಯಾ ರಾವ್ ಳನ್ನು ಸಂಪೂರ್ಣವಾಗಿ ಸಿಲುಕಿಸುವ ಕೆಲಸ ಮಾಡಿದ್ದಾನೆ.&lt;/p&gt;&lt;p&gt;ವಿದೇಶದಿಂದ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ತಂದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಸ್ತುತ ಜೈಲಿನಲ್ಲಿದ್ದಾಳೆ. ಈಗ ಆಕೆಯ ಸ್ವಂತ ಗೆಳೆಯನೇ ನೀಡಿರುವ ಈ ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳು ನಟಿಗೆ ತೀವ್ರ ಮುಜುಗರ ಹಾಗೂ ಕಾನೂನು ಸಂಕಷ್ಟವನ್ನು ತಂದೊಡ್ಡಿದ್ದು, ಪ್ರಕರಣ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;2025ರ ಮಾ.3ರಂದು ವಿದೇಶದಿಂದ ₹12.56 ಕೋಟಿ ಮೌಲ್ಯದ 14 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡುವಾಗ ನಟಿ ರನ್ಯಾ ರಾವ್&zwnj; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್&zwnj;ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದಾಗ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹2.67 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿತ್ತು. ಬಳಿಕ, ಈಕೆಯ ಸಹಚರರಾದ ಸಾಹಿಲ್&zwnj; ಸಕಾರಿಯಾ ಜೈನ್&zwnj;, ಭರತ್&zwnj; ಕುಮಾರ್&zwnj; ಜೈನ್&zwnj; ಮತ್ತು ತರುಣ್&zwnj; ಕೊಂಡರಾಜು ಅವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಡಿಆರ್&zwnj;ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ.(ಜಾರಿ ನಿರ್ದೇಶನಾಲಯ) ಪ್ರಕರಣದ ತನಿಖೆ ಆರಂಭಿಸಿತ್ತು.&lt;/p&gt;&lt;p&gt;ಆರೋಪಿಗಳು ಒಂದು ವರ್ಷದ ಅವಧಿಯಲ್ಲಿ ಸುಮಾರು ₹102.55 ಕೋಟಿ ಮೌಲ್ಯದ ಬರೋಬ್ಬರಿ 127 ಕೆ.ಜಿ. ಕಳ್ಳಸಾಗಣೆ ಮಾಡಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಪಿಎಂಎಲ್&zwnj;ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯವು ವಿಚಾರಣೆ ಆರಂಭಿಸಿದೆ.&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h"/>
        </item>
        <item>
            <title><![CDATA[Yadagiri: ಮಕ್ಕಳನ್ನು ಕೊಂದು ವಿಚಿತ್ರ ಹೇಳಿಕೆ ಕೊಟ್ಟ ತಂದೆ; 24 ಗಂಟೆಗಳ ಬಳಿಕ ಮಕ್ಕಳ ಮೃತದೇಹ ಪತ್ತೆ]]></title>
            <link>https://kannada.asianetnews.com/karnataka-districts/yadagiri-father-makes-bizarre-statement-after-killing-children-bodies-found-after-24-hours-sns/articleshow-xipydo9</link>
            <guid isPermaLink="true">https://kannada.asianetnews.com/karnataka-districts/yadagiri-father-makes-bizarre-statement-after-killing-children-bodies-found-after-24-hours-sns/articleshow-xipydo9</guid>
            <pubDate>Thu, 20 Aug 2026 11:23:50 +0530</pubDate>
            <description><![CDATA[ಯಾದಗಿರಿಯ ಶಹಾಪುರ ತಾಲೂಕಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಬಸವಸಾಗರ ಜಲಾಶಯದ ಕಾಲುವೆಗೆ ಎಸೆದು ಕೊಲೆ ಮಾಡಿದ್ದಾನೆ. 24 ಗಂಟೆಗಳ ನಿರಂತರ ಶೋಧದ ನಂತರ, ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0evnb66w25m0z8stds7dc15,imgname-yadagiri-father-1787205168326.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾದಗಿರಿ: &lt;/strong&gt;ತಂದೆಯೇ ತನ್ನ ಎರಡು ಮಕ್ಕಳನ್ನ ಕಾಲುವೆಗೆ ಎಸೆದು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ 24 ಗಂಟೆಗಳ ಶೋಧದ ಬಳಿಕ ಎರಡು ಮಕ್ಕಳ ಶವಪತ್ತೆಯಾಗಿವೆ. ಶಹಾಪುರ ತಾಲೂಕಿನ ಗಂಗನಾಳ್ ಗ್ರಾಮದ ಶಾಂತಪ್ಪ ಬಿರಾದಾರ ಎಂಬಾತನೆ ತನ್ನ ಇಬ್ಬರು ಮಕ್ಕಳನ್ನ ಕಾಲುವೆಗೆಸೆದು ಪೈಸಾಚಿಕ ಕೃತ್ಯ ಮೆರೆದಿದ್ದ.&lt;/p&gt;&lt;h2&gt;&lt;strong&gt;ಕಾಲುವೆ ಪಾಲಾದ ಕಂದಮ್ಮಗಳ ಕರಾಳ ಸತ್ಯ&lt;/strong&gt;&lt;/h2&gt;&lt;p&gt;ಆರೋಪಿ ಶಾಂತಪ್ಪ ಗೋಗಿ, ಪತ್ನಿಯೊಂದಿಗೆ ಜಗಳ ಮಾಡಿ ಮೂವರು ಮಕ್ಕಳನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಎಡೆದಂಡೆ ಕಾಲುವೆಗೆ ಇಬ್ಬರು ಮಕ್ಕಳನ್ನ ಬಿಸಾಕಿ, ಓರ್ವ ಮಗಳನ್ನು ಮಾತ್ರ ವಾಪಸ್ ಪತ್ನಿಯ ಬಳಿ ಕರೆದುಕೊಂಡು ಬಂದು ಬಿಟ್ಟಿದ್ದ.&lt;/p&gt;&lt;p&gt;ಆಗಸ್ಟ್ 18ರ ಮಧ್ಯಾಹ್ನ ಪತ್ನಿ ರೇಣುಕಾ ಜೊತೆ ಜಗಳವಾಡಿ ತನ್ನ ಮೂವರು ಮಕ್ಕಳನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಮೂವರು ಮಕ್ಕಳಲ್ಲಿ ಸಾನ್ವಿ ಮತ್ತು ಎರಡು ವರ್ಷದ ಪುಟ್ಟ ಮಗು ಸೃಜನ್ ನನ್ನು ಕಾಲುವೆಗೆ ಎಸೆದು ಬಂದಿದ್ದ. ಆ ಬಳಿಕ ಓರ್ವ ಮಗಳು ಸಂಜನಾಳ ಜೊತೆ ಯಾದಗಿರಿಗೆ ಬಂದು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ.&lt;/p&gt;&lt;p&gt;ಕೂಡಲೇ ಎಚ್ಚೆತ್ತುಕೊಂಡು ಪೊಲೀಸರು ವಿಚಾರಣೆ ನಡೆಸಿದ ವೇಳೆ ಇಬ್ಬರು ಮಕ್ಕಳಿಗೆ ಕಾಲುವೆಗೆ ಎಸೆದ ಬಗ್ಗೆ ತಿಳಿಸಿದ್ದ. ಪೊಲೀಸರು ಗೋಗಿ ವ್ಯಾಪ್ತಿಯ ಕಾಲುವೆಯಲ್ಲಿ ಮಕ್ಕಳ ಶವಕ್ಕಾಗಿ ಕಾರ್ಯಚರಣೆಗೆ ಮುಂದಾಗಿದ್ದರು, ಮಂಗಳವಾರ ಸಂಜೆಯಿಂದ ಪ್ರಾರಂಭವಾದ ಕಾರ್ಯಾಚರಣೆ ಬುಧವಾರ ಸಂಜೆವರೆಗೂ ನಿರಂತರ ಹುಡುಕಾಟದಿಂದ ಇಬ್ಬರು ಮಕ್ಕಳ ಪತ್ತೆಹಚ್ಚಲಾಗಿದೆ.&lt;/p&gt;&lt;p&gt;ಬಾಣತಿಯಾಳ ಗ್ರಾಮದ ಬಳಿಯ ಉಪಕಾಲುವೆಯಲ್ಲಿ ಮುಳ್ಳಿನ ಗಿಡಕ್ಕೆ ಕಂಟಿಗೆ ಸಿಕ್ಕಿಕೊಂಡ ಸ್ಥಿತಿಯಲ್ಲಿ ಸೃಜನ್(02) ಮೃತದೇಹ ಪತ್ತೆಯಾದರೆ, ಇನ್ನೊರ್ವ ಮಗಳು ಸಾನ್ವಿ (07) ಮೃತದೇಹ ಬೊರುಕಾ ಗೇಟ್ ಬಳಿ ಪತ್ತೆಯಾಗಿದೆ.&lt;/p&gt;&lt;h2&gt;ಗಂಡ- ಹೆಂಡತಿ ಜಗಳದಲ್ಲಿ ಮಕ್ಕಳು ಬಲಿ&lt;/h2&gt;&lt;p&gt;ಪತ್ನಿ ರೇಣುಕಾ, ಪತಿ ಶಾಂತಪ್ಪ ನಡುವೆ ನಿರಂತರ ಜಗಳ ನಡೆಯುತಿತ್ತಂತೆ. ಆ.18 ರ ಮಧ್ಯಾಹ್ನ ಕೂಡ ಇದೇ ರೀತಿ ಜಗಳ ನಡೆಸಿದ್ದು, ಆಗ ಆರೋಪಿ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರ ಬಂದಿದ್ದಾನೆ.&lt;/p&gt;&lt;h2&gt;ಪೊಲೀಸರ ವಿಚಾರಣೆ ವೇಳೆ ವಿಚಿತ್ರ ಹೇಳಿಕೆ ಕೊಟ್ಟ ಶಾಂತಪ್ಪ&lt;/h2&gt;&lt;p&gt;ಪೊಲೀಸರ ವಿಚಾರಣೆ ವಿಚಿತ್ರ ಹೇಳಿಕೆ ಕೊಟ್ಟಿರುವ ಶಾಂತಪ್ಪ ಕೊಂದಿರುವ ಇಬ್ಬರು ಮಕ್ಕಳು ತಾಯಿ ಜೊತೆ ಹೆಚ್ಚು ಅನ್ಯೋನ್ಯತೆಯಿಂದ ಇರುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರನ್ನ ಕೊಲೆಗೈದಿರುವುದಾಗಿ ಹೇಳಿದಾನಂತೆ. ಇನ್ನು ಶಾಂತಪ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಎಸ್&zwnj;ಪಿ ಹೇಳಿದ್ದಾರೆ. ಸದ್ಯ ಎರಡು ಮಕ್ಕಳ ಶವವನ್ನ ಮರಣೋತ್ತರ ಪರೀಕ್ಷೆ ಮುಗಿಸಿ ಅಂತ್ಯ ಕ್ರಿಯೆಗಾಗಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದ್ದು, ಮಕ್ಕಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಾಂತಪ್ಪನಿಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. (ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ)&lt;/p&gt;]]></content:encoded>
            <category>crime</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/yadagiri-father-makes-bizarre-statement-after-killing-children-bodies-found-after-24-hours-sns/articleshow-xipydo9"/>
        </item>
    </channel>
</rss>
