<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Jul 2026 20:53:00 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[ನಟಿ ಶ್ವೇತಾ ತಿವಾರಿ ಕೊಟ್ಟ ಸವಾಲಿಗೆ ಜಿರಳೆಗಳು ತಲ್ಲಣ : ಸವಾಲು ಸ್ವೀಕರಿಸ್ತಾರಾ ಅಥ್ವಾ ನಿಜ ಒಪ್ಪಿಕೊಳ್ತಾರಾ]]></title>
            <link>https://kannada.asianetnews.com/india-news/shweta-tiwari-asks-cjp-to-protest-in-punjab-gets-heavily-trolled-online-start-hunger-strike-were-with-you-suc/articleshow-0k8oakx</link>
            <guid isPermaLink="true">https://kannada.asianetnews.com/india-news/shweta-tiwari-asks-cjp-to-protest-in-punjab-gets-heavily-trolled-online-start-hunger-strike-were-with-you-suc/articleshow-0k8oakx</guid>
            <pubDate>Sun, 26 Jul 2026 18:56:59 +0530</pubDate>
            <description><![CDATA[ನೀಟ್​ ಪರೀಕ್ಷೆ ಅವ್ಯವಹಾರದ ಕುರಿತ ಪ್ರತಿಭಟನೆಯ ಬಗ್ಗೆ ನಟಿ ಶ್ವೇತಾ ತಿವಾರಿ ಪ್ರಶ್ನೆ ಎತ್ತಿದ್ದಾರೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಇದ್ದರೆ, ಆಮ್ ಆದ್ಮಿ ಪಕ್ಷದ ಆಡಳಿತವಿರುವ ಪಂಜಾಬ್&zwnj;ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಯಾಕೆ ಪ್ರತಿಭಟಿಸುತ್ತಿಲ್ಲ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyf9mz4j6gbv6254n6gh0xct,imgname-shwetha-tiwari-1785072352401.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್​ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಕಾಕ್ರೋಚ್​ ಜನತಾ ಪಕ್ಷ ನಡೆಸಿದ್ದ ಪ್ರತಿಭಟನೆಯ ವೇಳೆ ಪಾಕಿಸ್ತಾನಿಗಳು, ಖಲಿಸ್ತಾನಿಗಳು ಎಲ್ಲರೂ ಭಾಗಿಯಾಗಿದ್ದು, ಗುಟ್ಟಾಗಿ ಉಳಿದಿಲ್ಲ. ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ ಎನ್ನುವುದನ್ನೇ ನೆಪಮಾಡಿಕೊಂಡು ಪ್ರತಿಭಟನೆಯ ವೇಳೆ ಕಲ್ಲುಗಳನ್ನು ತಂದಿರುವುದು ಬಹುದೊಡ್ಡ ಮಟ್ಟಿನ ಚರ್ಚೆಯಾಗುತ್ತಿದೆ. ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಿದ ಬಳಿಕವೂ ಕಲ್ಲು ತೂರಾಟ ನಡೆದಿದೆ ಎಂದು ಈ ಪ್ರತಿಭಟನೆ ನಡೆದಿರುವುದು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲೋ ಅಥ್ವಾ ಇದರ ಹಿಂದೆ ಅಜೆಂಡಾ ಬೇರೆಯದ್ದೇ ಇದ್ಯೋ ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.&lt;/p&gt;&lt;p&gt;ಅದಕ್ಕೇ ಇದೀಗ ಪ್ರತಿಭಟನಾಕಾರರಿಗೆ ಸವಾಲು ಹಾಕಿದ್ದಾರೆ ಬಾಲಿವುಡ್​ ನಟಿ ಶ್ವೇತಾ ತಿವಾರಿ (Shweta Tiwari). ಕಿರುತೆರೆ ಮೂಲಕ ಎಂಟ್ರಿ ಕೊಟ್ಟು ಕಿರುತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡು, ಇದೀಗ ಬಾಲಿವುಡ್ ನಲ್ಲೂ ಶೈನ್ ಆಗುತ್ತಿರುವ ನಟಿ ಶ್ವೇತಾ ತಿವಾರಿ ತಮ್ಮ ಸೌಂದರ್ಯದಿಂದಲೇ ಗುರುತಿಸಿಕೊಂಡವರು. ವರ್ಷದಿಂದ ವರ್ಷಕ್ಕೆ ಇವರ ವಯಸ್ಸು ಚಿಕ್ಕದಾಗುತ್ತಾ ಹೋಗುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿರುವ ನಡುವೆಯೇ, ಇದೀಗ ವಿದ್ಯಾರ್ಥಿಗಳನ್ನು ಮುಂದು ಮಾಡಿಕೊಂಡು ನಡೆದಿರುವ ಪ್ರತಿಭಟನೆಯ ಸತ್ಯಾಸತ್ಯತೆಯನ್ನು ಪರೀಕ್ಷೆ ಮಾಡುವ ಹೇಳಿಕೆಹೊಂದನ್ನು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಪಂಜಾಬ್​ನಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ&lt;/strong&gt;&lt;/h2&gt;&lt;p&gt;ಇದಕ್ಕೆ ಕಾರಣ, ಪಂಜಾಬ್&zwnj;ನಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ. ಈ ಪ್ರಕರಣದ ಬಗ್ಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷವನ್ನು ಬಿಜೆಪಿ ಇದಾಗಲೇ ಪ್ರಶ್ನಿಸುತ್ತಿದೆ. ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರ ರಾಜೀನಾಮೆಗೆ ಒತ್ತಾಯಿಸಲು ಪ್ರಾರಂಭಿಸಿದೆ. ಆದಾಗ್ಯೂ, ಮುಖ್ಯಮಂತ್ರಿ ಭಗವಂತ್ ಮಾನ್ ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನಿರಾಕರಿಸಿದ್ದಾರೆ. ಇದರ ನಡುವೆಯೇ ನಟಿ ಶ್ವೇತಾ ತಿವಾರಿ ಇದೇ ಸವಾಲನ್ನು ಎಸೆದಿದ್ದಾರೆ. ವಿದ್ಯಾರ್ಥಿಗಳ ಮೇಲೆ ಪ್ರೀತಿ ಇರುವುದೇ ಹೌದಾದರೆ ಪಂಜಾಬ್​ನಲ್ಲಿಯೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಾಗಿದ್ದರೆ ಅಲ್ಲಿಯ ಶಿಕ್ಷಣ ಸಚಿವರ ರಾಜೀನಾಮೆ ಯಾವಾಗ ಕೇಳ್ತೀರಿ, ಪ್ರತಿಭಟನೆ ಮಾಡ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;AAPನ ಅಭಿಜೀತ್​ ಉತ್ತರಿಸ್ತಾರಾ?&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಕಾಕ್ರೋಚ್​ ಪಕ್ಷದ ನಾಯಕ ಅಭಿಜೀತ್​ ದೀಪ್ಕೆ ಆ್ಯಪ್​ ಪಕ್ಷವನ್ನು ಗುರುತಿಸಿಕೊಂಡವರು. ಪಂಜಾಬ್​ನಲ್ಲಿಯೂ ಅದೇ ಪಕ್ಷದ ಆಡಳಿತ ಇರುವ ಕಾರಣ, ಬಿಜೆಪಿ ಬೆಂಬಲಿಗರು ಚಾಲೆಂಜ್​ ಹಾಕಿದ್ದು, ನಟಿ ಕೂಡ ಇದೇ ಸವಾಲು ಎಸೆದಿದ್ದಾರೆ. ಇದಕ್ಕೆ ಪ್ರತಿಭಟನಾಕಾರರು ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಪಿಎಸ್&zwnj;ಇಬಿ 12 ನೇ ತರಗತಿಯ ಇಂಗ್ಲಿಷ್ ಮಂಡಳಿ ಪರೀಕ್ಷೆ, ಪಂಜಾಬ್ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಪಿಎಸ್&zwnj;ಟಿಇಟಿ), ಮತ್ತು ಕೃಷಿ ಅಭಿವೃದ್ಧಿ ಅಧಿಕಾರಿ (ಎಡಿಒ) ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಜೊತೆಗೆ ಪಂಜಾಬ್ ಅಧೀನ ಸೇವೆಗಳ ಆಯ್ಕೆ ಮಂಡಳಿ (ಪಿಎಸ್&zwnj;ಎಸ್&zwnj;ಎಸ್&zwnj;ಬಿ) ಗ್ರೂಪ್-ಬಿ ಮತ್ತು ಸಂಯೋಜಿತ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಇದೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/shweta-tiwari-asks-cjp-to-protest-in-punjab-gets-heavily-trolled-online-start-hunger-strike-were-with-you-suc/articleshow-0k8oakx"/>
        </item>
        <item>
            <title><![CDATA[ಸಿಕ್ಕಾಪಟ್ಟೆ ಹಣ ಕಳೆದುಕೊಂಡ ಸ್ಟಾರ್ ನಟಿ, OTP ಹೇಳಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ.. ಆದ್ರೂ ಹೀಗೆ ಆಗಿದ್ದು ಹೇಗೆ?!]]></title>
            <link>https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</link>
            <guid isPermaLink="true">https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</guid>
            <pubDate>Thu, 30 Jul 2026 20:51:22 +0530</pubDate>
            <description><![CDATA[&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್&zwnj;ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyssdkpc2tdesyx1v004mgxx,imgname-kirti-kulhari-1785424432844.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;OTP ನೀಡಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ; ಆದ್ರೂ ನಟಿಯ ಅಕೌಂಟ್&zwnj;ನಿಂದ ಲಕ್ಷ ಲಕ್ಷ ಮಾಯ! ಸೈಬರ್ ಕಳ್ಳರ ಈ 'ಖತರ್ನಾಕ್' ಪ್ಲಾನ್ ಬೆಚ್ಚಿಬೀಳಿಸುವಂತಿದೆ!&lt;/strong&gt;&lt;/p&gt;&lt;p&gt;ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ನಮ್ಮ ಹಣ ಸೇಫ್ ಆಗಿದೆ ಅಂದುಕೊಳ್ಳುತ್ತೇವೆ. ಆದರೆ, ಹ್ಯಾಕರ್ಸ್&zwnj;ಗಳು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಸೆಲೆಬ್ರಿಟಿಗಳನ್ನೇ ಬೆನ್ನತ್ತಿ ಶಾಕ್ ನೀಡುತ್ತಿದ್ದಾರೆ. 'ಪಿಂಕ್' (Pink) ಮತ್ತು 'ಉರಿ' (Uri) ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದ ಖ್ಯಾತ ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ (Kirti Kulhari) ಅವರ ಬ್ಯಾಂಕ್ ಅಕೌಂಟ್&zwnj;ಗೆ ಕನ್ನ ಹಾಕಿರುವ ಖತರ್ನಾಕ್ ಕಳ್ಳರು, ಯಾವ ಸಿನಿಮಾ ಸೀನ್&zwnj;ಗೂ ಕಮ್ಮಿ ಇಲ್ಲದಂತೆ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಥಿಯೇಟರ್&zwnj;ನಲ್ಲಿ ಸಿನಿಮಾ ನೋಡುತ್ತಿದ್ದ ನಟಿಗೆ ಅಸಲಿ ಸಿನಿಮಾ ಶುರುವಾಗಿದ್ದು ಅಲ್ಲಿ!&lt;/h2&gt;&lt;p&gt;ಕಳೆದ ಜುಲೈ 24ರ ರಾತ್ರಿ, ಮುಂಬೈನ ಅಂಧೇರಿಯಲ್ಲಿರುವ ಮಲ್ಟಿಪ್ಲೆಕ್ಸ್&zwnj;ವೊಂದರಲ್ಲಿ ಕೀರ್ತಿ ಕುಲ್ಹಾರಿ ಅವರು ಆರಾಮವಾಗಿ ಸಿನಿಮಾ ವೀಕ್ಷಿಸುತ್ತಿದ್ದರು. ಆದರೆ, ತೆರೆಯ ಮೇಲೆ ಸಿನಿಮಾ ಓಡುತ್ತಿದ್ದರೆ, ಅವರ ಮೊಬೈಲ್&zwnj;ಗೆ ಬ್ಯಾಂಕ್&zwnj;ನಿಂದ ಲಟಾ ಲಟಾ ಅಂತ ಮೆಸೇಜ್&zwnj;ಗಳು ಬರತೊಡಗಿದವು. ಅವರು ಯಾವುದೇ ಶಾಪಿಂಗ್ ಮಾಡಿರಲಿಲ್ಲ, ಯಾರಿಗೂ ಹಣ ಕಳುಹಿಸಿರಲಿಲ್ಲ. ಆದರೆ, ಮೆಕ್ಸಿಕೋದ 'ಏರೋಮೆಕ್ಸಿಕೊ' ಹೆಸರಿನಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಪಾವತಿಯಾಗುತ್ತಿದೆ ಎಂಬ ನೋಟಿಫಿಕೇಶನ್ ನೋಡಿ ನಟಿ ಕಂಗಾಲಾದರು.&lt;/p&gt;&lt;p&gt;ಅರೆಕ್ಷಣದಲ್ಲಿ ಮಾಯವಾಯಿತು 2.43 ಲಕ್ಷ ರೂಪಾಯಿ!&lt;/p&gt;&lt;p&gt;ಕೇವಲ ಕೆಲವೇ ನಿಮಿಷಗಳಲ್ಲಿ ವಂಚಕರು ನಟಿಯ ಕ್ರೆಡಿಟ್ ಕಾರ್ಡ್&zwnj;ನಿಂದ ಬರೋಬ್ಬರಿ 2.11 ಲಕ್ಷ ರೂಪಾಯಿಯನ್ನು ಎಗರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹ್ಯಾಕರ್ಸ್ ಮತ್ತೆ ನಾಲ್ಕು ಬಾರಿ ಹಣ ಕದಿಯಲು ಯತ್ನಿಸಿದರು. ತಕ್ಷಣವೇ ಬ್ಯಾಂಕ್&zwnj;ನಿಂದ ಕರೆ ಬಂದಾಗ ಎಚ್ಚೆತ್ತ ಕೀರ್ತಿ, ಅಕೌಂಟ್&zwnj;ನಲ್ಲಿ ಏನೋ ದೊಡ್ಡ ವಂಚನೆ ನಡೆಯುತ್ತಿದೆ ಎಂದು ಅರಿತು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದರು. ಅಷ್ಟರಲ್ಲಾಗಲೇ 2.43 ಲಕ್ಷ ರೂಪಾಯಿ ಅವರ ಕೈಬಿಟ್ಟು ಹೋಗಿತ್ತು. ಕೂಡಲೇ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೌಡಾಯಿಸಿ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಇಲ್ಲಿ ಅಸಲಿ ಪ್ರಶ್ನೆ ಇರೋದೇ ಇಲ್ಲಿ; OTP ನೀಡದಿದ್ದರೂ ಹಣ ಹೋಗಿದ್ದು ಹೇಗೆ?&lt;/h3&gt;&lt;p&gt;ಸಾಮಾನ್ಯವಾಗಿ ನಾವು ಯಾರೊಂದಿಗೂ OTP (One Time Password) ಹಂಚಿಕೊಳ್ಳದಿದ್ದರೆ ಹಣ ಸುರಕ್ಷಿತವಾಗಿರುತ್ತದೆ ಎಂದು ನಂಬುತ್ತೇವೆ. ಆದರೆ ಕೀರ್ತಿ ಕುಲ್ಹಾರಿ ಅವರ ಪ್ರಕರಣ ಸೈಬರ್ ತಜ್ಞರನ್ನೂ ಚಿಂತೆಗೀಡು ಮಾಡಿದೆ. ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಅವರು ಯಾರೊಂದಿಗೂ OTP ಹೇಳಿಲ್ಲ, ಕಾರ್ಡ್ ಪಿನ್ ಹಂಚಿಕೊಂಡಿಲ್ಲ ಅಥವಾ ಯಾವುದೇ ಅನುಮಾನಾಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಿಲ್ಲ.&lt;/p&gt;&lt;p&gt;ಸೈಬರ್ ಪೊಲೀಸರ ಪ್ರಕಾರ, ಇದು 'ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್' ಲೂಪ್&zwnj;ಹೋಲ್! ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಪಾವತಿ ಮಾಡುವಾಗ ಭಾರತದಂತೆ OTP ಕೇಳುವುದಿಲ್ಲ. ಕೇವಲ ಕಾರ್ಡ್ ನಂಬರ್ ಮತ್ತು CVV ಇದ್ದರೆ ಸಾಕು, ಜಗತ್ತಿನ ಯಾವುದೇ ಮೂಲೆಯಿಂದ ಹಣ ವರ್ಗಾಯಿಸಬಹುದು. ವಂಚಕರು 'ಡಾರ್ಕ್ ವೆಬ್' ಮೂಲಕ ನಟಿಯ ಕಾರ್ಡ್ ವಿವರಗಳನ್ನು ಖರೀದಿಸಿರಬಹುದು ಅಥವಾ ಅವರ ಮೊಬೈಲ್&zwnj;ಗೆ ಗುಟ್ಟಾಗಿ 'ಸ್ಪೈವೇರ್' ಕಳುಹಿಸಿ ಮಾಹಿತಿ ಕದ್ದಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸೈಬರ್ ತಜ್ಞರ ಎಚ್ಚರಿಕೆ: ನೀವು ಸೇಫ್ ಆಗಿರಬೇಕೆ?&lt;/p&gt;&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ ಅಥವಾ ಕಡಿಮೆ ಮಾಡಿಡಿ. ಕೆವೈಸಿ ಅಪ್&zwnj;ಡೇಟ್ ಅಥವಾ ಉಚಿತ ಉಡುಗೊರೆಯ ಹೆಸರಿನಲ್ಲಿ ಬರುವ ಲಿಂಕ್&zwnj;ಗಳಿಂದ ದೂರವಿರಿ.&lt;/p&gt;&lt;p&gt;ಒಟ್ಟಿನಲ್ಲಿ, ಕೀರ್ತಿ ಕುಲ್ಹಾರಿ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಹಣ ಉಳಿದಿದ್ದರೂ, ಸೈಬರ್ ಕಳ್ಳರ ಈ ಹೊಸ ಅವತಾರ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp"/>
        </item>
        <item>
            <title><![CDATA[ಬೆಂಗಳೂರು: ಮಗಳನ್ನು ಪ್ರೊಫೆಸರ್‌ ಓದಿಸಿ; ಮದುವೆಗೆ ಮುನ್ನ 40 ಲಕ್ಷ ಜತೆ ತಿಂಗಳ ಸ್ಯಾಲರಿ ಕೇಳಿದ ಅಪ್ಪ!  ಒಪ್ಪದ ಪುತ್ರಿಗೆ ಚಾಕು!]]></title>
            <link>https://kannada.asianetnews.com/crime/father-stabs-daughter-40-lakh-dowry-salary-demand-bmk/articleshow-5ghigfa</link>
            <guid isPermaLink="true">https://kannada.asianetnews.com/crime/father-stabs-daughter-40-lakh-dowry-salary-demand-bmk/articleshow-5ghigfa</guid>
            <pubDate>Thu, 30 Jul 2026 20:22:40 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ, ಪ್ರೊಫೆಸರ್ ಆಗಿರುವ ಮಗಳ ಮದುವೆಗೆ 40 ಲಕ್ಷ ಹಾಗೂ ತಿಂಗಳ ಸಂಬಳ ಕೇಳಿದ ತಂದೆ, ಮಗಳು ಒಪ್ಪದಿದ್ದಕ್ಕೆ ಕಾಲೇಜಿನಲ್ಲಿಯೇ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysr6cy6fxnrh26gqg76v8ky,imgname-bengaluru-crime-1785423147974.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಪ್ಪ ಎಂದರೆ ಆಕಾಶ, ಮುಗಿಯದ ಅಧ್ಯಾಯ, ಪ್ರತಿ ಮಗುವಿನ ಬದುಕಿನಲ್ಲೂ ಅವನೇ ಸೂಪರ್&zwnj; ಹೀರೋ. ಆದರೆ, ಮಗಳನ್ನು ಎದೆಎತ್ತರಕ್ಕೆ ಬೆಳೆಸಿ, ವಿದ್ಯೆ ಕೊಡಿಸಿ, ಅವಳನ್ನು ಪ್ರೊಫೆಸರ್&zwnj;ನ್ನಾಗಿ ಮಾಡಿದ ತಂದೆಯೇ ಇಂದು ಆಕೆಗೆ ಚಾಕುವಿನಿಂದ ಇರಿದಿದ್ದಾನೆ ಎಂದರೆ ನಂಬಲು ಸಾಧ್ಯವೇ? ಅಲ್ಲಿ ನಿಜವಾಗಿಯೂ ಆಗಿದ್ದೇನು? ಇಲ್ಲಿದೆ ಕಂಪ್ಲೀಟ್&zwnj; ಡಿಟೇಲ್ಸ್&zwnj;!&lt;/p&gt;&lt;h2&gt;&lt;strong&gt;ಕಾರಣವಾಗಿತ್ತಾ ಕೌಟಂಬಿಕ ಕಲಹ?&lt;/strong&gt;&lt;/h2&gt;&lt;p&gt;ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಿ. ಮಗಳು ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿರುತ್ತಾಳೆ. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ, ಹಲವು ಕೌಟಂಬಿಕ ಕಲಹದಿಂದ ಹುಟ್ಟಿಸಿದ ತಂದೆಯೇ ಅವಳ ಮೇಲೆ ಹಲ್ಲೆ ಮಾಡುತ್ತಾನೆ. ಆ ಆರೋಪಿಯನ್ನು ನಾಗೇಂದ್ರ ಎಂದು ಗುರುತಿಸಲಾಗಿದೆ. ಆಕೆಯ ಮದುವೆಗೆ ಸಂಬಂಧಿಸಿದ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳ ನಂತರ ಆರೋಪಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೊಳಪಟ್ಟವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕಾಲೇಜಿನಲ್ಲಿ ಮಗಳನ್ನು ಭೇಟಿಯಾದ ತಂದೆ!&lt;/strong&gt;&lt;/h3&gt;&lt;p&gt;ಪೊಲೀಸರ ಪ್ರಕಾರ, ಜುಲೈ 25 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಆ ಹುಡುಗಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಗೇಂದ್ರ ಅವರು ತಮ್ಮ ಮಗಳನ್ನು ಭೇಟಿಯಾಗಲು ಕ್ಯಾಂಪಸ್&zwnj;ಗೆ ಹೋಗಿದ್ದಾರೆ. ಆಗ ಆ ಹುಡುಗಿ ಇದ್ದ ವಿಭಾಗದ ಮುಖ್ಯಸ್ಥರ ಕೊಠಡಿಗೆ ಹೋಗಿದ್ದಾರೆ. ಕೊಠಡಿಯನ್ನು ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ, ಅವನು ಚಾಕು ಹೊರತೆಗೆದು ತನ್ನ ಮಗಳ ಹೊಟ್ಟೆ, ಎದೆ ಮತ್ತು ಕುತ್ತಿಗೆಗೆ ಹಲವು ಬಾರಿ ಇರಿದು ಆವರಣದಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಆ ಹುಡುಗಿದೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಮದುವೆ ವಿವಾದವೇ ಕಾರಣವಾಗಿತ್ತಾ ಹಲ್ಲೆಗೆ?&lt;/strong&gt;&lt;/h3&gt;&lt;p&gt;ಆ ಹುಡುಗಿ ಮದುವೆಗೆ ಸಂಬಂಧಿಸಿದ ದೀರ್ಘಕಾಲದ ಕೌಟುಂಬಿಕ ಕಲಹವೇ ಈ ಹಲ್ಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಲ್ಲದೇ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿರುವ ನಾಗೇಂದ್ರ ತನ್ನ ಮಗಳಿಗೆ ಸೂಕ್ತ ವರನನ್ನು ಹುಡುಕುತ್ತಿದ್ದ. ಸಂಭಾವ್ಯ ವರನ ಕುಟುಂಬವು ವಿವಾಹಕ್ಕೆ ಒಪ್ಪಿಕೊಂಡ ನಂತರ, ಅವನು ತನ್ನ ಮಗಳ ಶಿಕ್ಷಣ ಮತ್ತು ವೃತ್ತಿಜೀವನಕ್ಕಾಗಿ ಗಣನೀಯ ಮೊತ್ತ ಖರ್ಚು ಮಾಡಿದ್ದೇನೆ ಎಂದು ಹೇಳಿ ಅವರಿಂದ 40 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದಲ್ಲದೇ ಆ ಹುಡುಗಿಯ ಮಾಸಿಕ ಸಂಬಳವನ್ನು ತನಗೆ ಕೊಡಬೇಕೆಂದು ನಾಗೇಂದ್ರ ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ನಾಗೇಂದ್ರ ನಡೆಗೆ ವಿರೋಧಿಸಿದ ಕುಟುಂಬ!&lt;/strong&gt;&lt;/h3&gt;&lt;p&gt;ಕುಟುಂಬದವರು ನಾಗೇಂದ್ರ ಇಟ್ಟ ಆ ಬೇಡಿಕೆಗಳನ್ನು ವಿರೋಧಿಸಿದ್ದಾರೆ. ಇದು ಆಗಾಗ ವಾದಗಳಿಗೆ ಮತ್ತು ಕುಟುಂಬದೊಳಗೆ ಸಂಘರ್ಷ ಸೃಷ್ಟಿಗೂ ಕಾರಣವಾಗಿದೆ ಎನ್ನಲಾಗಿದೆ. ಆದ್ದರಿಂದ ಸಮಯ ನೋಡಿ ಕಾಲೇಜಿನೊಳಗಿ ನುಗ್ಗಿ ಸ್ವಂತ ಮಗಳ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ. ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗೇಂದ್ರನನ್ನು ಬಂಧಿಸಿದ್ದಾರೆ. ಅಲ್ಲದೇ ದಾಳಿಯ ಸುತ್ತಲಿನ ಎಲ್ಲಾ ಸನ್ನಿವೇಶಗಳನ್ನು ಗಮನಿಸಿ ಹಂತ-ಹಂತವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/crime/father-stabs-daughter-40-lakh-dowry-salary-demand-bmk/articleshow-5ghigfa"/>
        </item>
        <item>
            <title><![CDATA[ಮುನಿಸು ಮರೆತರಾ ಕುಚಿಕೂ? ನಟ ದರ್ಶನ್ ಭೇಟಿಗೆ ಹೋದ ಧನ್ವೀರ್ ಗೌಡ.. ಅಲ್ಲಿ ಆಗಿದ್ದೇನು, ಮಾತಾಡಿದ್ದೇನು?]]></title>
            <link>https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs</link>
            <guid isPermaLink="true">https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs</guid>
            <pubDate>Tue, 28 Jul 2026 17:33:27 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೆಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ ಬದಲಾಗಿಲ್ಲ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kym5d481tkxhg8nrfbztm076,imgname-darshan-thoogudeepa-dhanveer-gowda-1785235673345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದರ್ಶನ್-ಧನ್ವೀರ್ ಭೇಟಿ.. &amp;nbsp;ಕುತೂಹಲ ಕೆರಳಿಸಿದ ಕೂಚಿಕೂ ಭೇಟಿ!&lt;/strong&gt;&lt;/p&gt;&lt;p&gt;Darshan Thoogudeepa-Dhanveer Gowda Meet: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವುದು ಗೊತ್ತೇ ಇದೆ. ಇಂದು, 28 ಜುಲೈ 2026ರಂದು ನಟ ದರ್ಶನ್ ಆಪ್ತ ಸ್ನೇಹಿತ, ಸ್ಯಾಂಡಲ್&zwnj;ವುಡ್ ನಟ ಧನ್ವೀರ್ ಗೌಡ ಅವರು ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಈ ಮೊದಲು ಕೂಡ ಧನ್ವೀರ್ ಅವರು ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದರು.&lt;/p&gt;&lt;h2&gt;ಇಂದಿನ ಭೇಟಿಯಲ್ಲಿ ನಡೆದ ಮಾತುಕತೆ ಏನು?&lt;/h2&gt;&lt;p&gt;ನಟ ಹಾಗೂ ತಮ್ಮ ಆಪ್ತ ದರ್ಶನ್ ಅವರನ್ನು ಭೇಟಿಯಾಗಲು ಇಂದು ನಟ ಧನ್ವೀರ್ ಗೌಡ ಅವರು ಒಂಟಿಯಾಗಿಯೇ ಬಂದಿದ್ದಾರೆ. ಅವರ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಾಗಲೀ ಅಥವಾ ಬೇರೆ ಸ್ನೇಹಿತರಾಗಲೀ ಬಂದಿಲ್ಲ. ಸಿಕ್ಕ ಮಾತುಕತೆ ಪ್ರಕಾರ- ನಟ ದರ್ಶನ್ ನೋಡಿ ಧನ್ವೀರ್ ಹಾಗೂ ಧನ್ವೀರ್ ನೋಡಿ ದರ್ಶನ್ ಪರಸ್ಪರ ಸಹಜವಾಗಿಯೇ ಖುಷಿಯಾಗಿದ್ದಾರೆ, ಕಣ್ಣೀರಾಗಿದ್ದಾರೆ. ಪ್ರೊಟೋಕಾಲ್ ಪಾಲನೆಯಲ್ಲೇ ಮಾತನ್ನಾಡಿದ ಈ ಇಬ್ಬರು ಸ್ನೇಹಿತರು ಹಾಗೂ ಸ್ಯಾಂಡಲ್&zwnj;ವುಡ್ ನಟರು, ತಮ್ಮ ಮಾತುಕತೆ ವೇಳೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ದರ್ಶನ್ ಜೀವನದಲ್ಲಿ ಉಂಟಾಗಿರುವ ಈ ಅನಿರೀಕ್ಷಿತ ಆಘಾತಕ್ಕೆ ಸಹಜವಾಗಿಯೇ ಈ ಇಬ್ಬರಲ್ಲೂ ಆತಂಕ ಇದ್ದೇ ಇದೆ. 'ನಟ ದರ್ಶನ್ ಬಿಡುಗಡೆ ಯಾವಾಗ?' ಎಂಬ ಪ್ರಶ್ನೆ ಸಹಜವಾಗಿಯೇ ಈ ಇಬ್ಬರನ್ನೂ ಕಾಡುತ್ತಿದೆ.&lt;/p&gt;&lt;p&gt;ನಟ ದರ್ಶನ್ ಹಾಗೂ ಧನ್ವೀರ್ ಗೌಡ ಮಾತುಕತೆಯಲ್ಲಿ ನಿಖರವಾಗಿ ಚರ್ಚೆಯಾದ ಸಂಗತಿ ಯಾವುದೆಂದು ಅವರಿಬ್ಬರನ್ನು ಬಿಟ್ಟು ಉಳಿದವರಿಗೆ ಗೊತ್ತಾಗುವಂಥದ್ದು ಏನೂ ಇಲ್ಲ. ಸಹಜವಾಗಿಯೇ ಅದು ಸ್ನೇಹಿತರ ಭೇಟಿ. ಜೈಲಿನಲ್ಲಿ ಆರೋಪಿಯಾಗಿರುವ ನಟ ದರ್ಶನ್ ಬಿಡುಗಡೆ ಬಗ್ಗೆ, ಆ ನಿಟ್ಟಿನಲ್ಲಿ ಹುಡುಕಬಹುದಾದ ದಾರಿಗಳ ಬಗ್ಗೆ ಮಾತುಕತೆ ಆಗಿರಬಹುದು. ಅದರಲ್ಲಿ ಹೊರಜಗತ್ತಿಗೆ ಹೇಳುವಂಥದ್ದು ಏನಿದೆ? ಹೀಗಾಗಿ ಸದ್ಯಕ್ಕೆ ನಟ ಧನ್ವೀರ್ ಗೌಡ ಇಂದು ಪರಪ್ಪನ ಅಗ್ರಹಾರಕ್ಕೆ ಒಂಟಿಯಾಗಿ ಹೋಗಿ ಒಂಟಿಯಾಗಿ ಬಂದಿರುವುದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಆ ಸುದ್ದಿಯೀಗ ವೈರಲ್ ಆಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸ್ಯಾಂಡಲ್&zwnj;ವುಡ್ ಸಿನಿಮಾರಂಗದಲ್ಲಿ ಈ ಮೊದಲು ನಟ ದರ್ಶನ್&zwnj; ಅವರ ಕ್ಲೋಸ್ ಸರ್ಕಲ್&zwnj;ನಲ್ಲಿ ಇದ್ದ ಹಲವರು ಈಗ ಜೈಲಿಗೆ ಹೋಗಿ ಭೇಟಿ ಮಾಡುವುದು ಹಾಗಿರಲಿ, ಸಂದರ್ಶನದಲ್ಲೋ ಅಥವಾ ಇನ್ನೆಲ್ಲೋ ನಟ ದರ್ಶನ್ ಬಗ್ಗೆ ಮಾತನ್ನಾಡಲೂ ಹಿಂದೇಟು ಹಾಕುತ್ತಿರುವಾಗ, ಧನ್ವೀರ್ ಗೌಡ ಮಾತ್ರ &lsquo;ಸ್ನೇಹವೆಂದರೆ ಸ್ನೇಹ, ಪ್ರೀತಿ ಎಂದರೆ ಪ್ರೀತಿ-ನಮ್ಮಿಬ್ಬರ ನಡುವಿನ ಗೌರವಾದರ ಹಾಗೇ ಇದೆ&rsquo; ಎಂಬುದನ್ನು ಈ ಮೂಲಕ ಜಗತ್ತಿಗೆ ಹೇಳಿದ್ದಾರೆ ಎನ್ನಬಹುದು.&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs"/>
        </item>
        <item>
            <title><![CDATA[ಜಿರಳೆಗಳಿಗೆ 35 ದಿನ ಊಟ ಹಾಕಿದೆ, ಈಗ ನಿಜ ಬಣ್ಣ ಗೊತ್ತಾಯ್ತು: ಬಿಕ್ಕಿ ಬಿಕ್ಕಿ ಅತ್ತ ಮೊಹಮ್ಮದ್ ಜುನೈದ್]]></title>
            <link>https://kannada.asianetnews.com/india-news/mohammad-junaid-who-was-seen-during-the-cjp-protest-has-claimed-he-was-ignored-after-the-movement-suc/articleshow-7y2d8ug</link>
            <guid isPermaLink="true">https://kannada.asianetnews.com/india-news/mohammad-junaid-who-was-seen-during-the-cjp-protest-has-claimed-he-was-ignored-after-the-movement-suc/articleshow-7y2d8ug</guid>
            <pubDate>Tue, 28 Jul 2026 19:52:39 +0530</pubDate>
            <description><![CDATA[ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಪಕ್ಷದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಆಹಾರ ನೀಡಿದ್ದ ಮೊಹಮ್ಮದ್ ಜುನೈದ್, ಇದೀಗ ಕಣ್ಣೀರು ಹಾಕಿದ್ದಾರೆ. ಪ್ರತಿಭಟನೆ ಯಶಸ್ವಿಯಾದ ಬಳಿಕ ನಾಯಕರು ಸ್ಟಾರ್ ಹೋಟೆಲ್&zwnj;ನಲ್ಲಿ ಪಾರ್ಟಿ ಮಾಡಿದ್ದು, ತಮಗೆ ಸಹಾಯ ಮಾಡಿದ ಜುನೈದ್&zwnj;ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kymhne9kxx4s4c156atmktgm,imgname-cjp-protest-1785248528691.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕದಿಂದ ಭಾರತವನ್ನು ಉದ್ಧಾರ ಮಾಡಲು ಬಂದ ಅಭಿಜೀತ್​ ದೀಪ್ಕೆ ಮತ್ತು ಅವರ ಸಿಜೆಪಿ ಪಕ್ಷದ ಜಿರಳೆಗಳು ಕೊನೆಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಪಡೆದದ್ದು ಆಯಿತು. ಪ್ರತಿಭಟನೆಯ ವೇಳೆ ಕಲ್ಲು ತೂರಾಟ, ವಿದೇಶಿ ಬಾವುಟಗಳ ಪ್ರದರ್ಶನ, ಖಲೀಸ್ತಾನಿಗಳು, ಪಾಕಿಸ್ತಾನದಿಂದ ಭಾರಿ ಬೆಂಬಲ... ಇವೆಲ್ಲವುಗಳ ನಡುವೆಯೂ ದೆಹಲಿಯ ಜಂತರ್​ಮಂತರ್​ನಲ್ಲಿ ಯಶಸ್ವಿಯಾಗಿ ಪ್ರತಿಭಟನೆ ಮುಗಿಸಿದ ಜಿರಳೆಗಳು, ಬಳಿಕ ಸ್ಟಾರ್​ ಹೋಟೆಲ್​ನಲ್ಲ ಭರ್ಜರಿ ಪಾರ್ಟಿ ಮಾಡಿದ್ದು ಆಯತು. ಪಾರ್ಟಿಯ ಗಮ್ಮತ್ತು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಪಾರ್ಟಿಗೆ ಖರ್ಚಾದ ಲಕ್ಷಾಂತರ ರೂಪಾಯಿ ಕೊಟ್ಟವರುಯಾರು ಎನ್ನುವ ಬಗ್ಗೆ ಜೋರಾಗಿ ಚರ್ಚೆ ಶುರುವಾಗಿದೆ.&lt;/p&gt;&lt;h2&gt;&lt;strong&gt;ಉಚಿತ ನೀರು, ಆಹಾರ&lt;/strong&gt;&lt;/h2&gt;&lt;p&gt;ಅದರ ನಡುವೆಯೇ, ಪ್ರತಿಭಟನೆಯ ಸಮಯದಲ್ಲಿ ಸತತ 35 ದಿನ, ಪ್ರತಿಭಟನಾಕಾರರಿಗೆ ಊಟವನ್ನು ನೀಡಿದವರು ಮೊಹಮ್ಮದ್​ ಜುನೈದ್​.ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರಂತರ 35 ದಿನಗಳ ಕಾಲ ಉಚಿತ ಆಹಾರ ಮತ್ತು ನೀರು ಪೂರೈಸಿ ಸುದ್ದಿಯಲಿದ್ದಾರೆ ಗಾಜಿಯಾಬಾದ್​ನ ಮೊಹಮ್ಮದ್​. ಕೊನೆಗೆ ಇವರ ಮನೆಯ ಮೇಲೆ ದಾಳಿ ನಡೆದಿದೆ ಎನ್ನುವ ಸುಳ್ಳು ಆಪಾದನೆಯನ್ನೂ ಹೊರಿಸಲಾಯಿತು. ಕೊನೆಗೆ ಸತ್ಯಾಂಶ ಹೊರಬಂದು ಅಂಥದ್ದು ಏನೂ ನಡೆದಿಲ್ಲ ಎನ್ನುವುದು ತಿಳಿಯಿತು. ಅಷ್ಟಕ್ಕೂ ಈ ಸುಳ್ಳು ಸುದ್ದಿ ಹರಡಿದ್ದು, ಇದೇ ಜಿರಳೆಗಳ ಪರ ನಿಂತಿರುವ ಪಾಕಿಸ್ತಾನದ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ಗಳು ಎನ್ನುವುದು ತಿಳಿಯಿತು.&lt;/p&gt;&lt;p&gt;ಆದರೆ, ಇದೀಗ ಅತ್ತ ಸ್ಟಾರ್​ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ಮಾಡುತ್ತಿದ್ದರೆ, ಇತ್ತ 35 ದಿನಗಳ ಕಾಲ ಉಚಿತ ಆಹಾರ-ನೀರು ನೀಡಿದ್ದ ಮೊಹಮ್ಮದ್​ ಜುನೈದ್​ ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಮುಂದೆ ಬಂದಿರುವ ಅವರು, ಅಂದು ನಾನು ಅವರಿಗೆ ಆಹಾರ ನೀಡಿದೆ. ಇಂದು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ, ಪ್ರತಿಭಟನೆ ಮುಗಿದ ಬಳಿಕ ನನ್ನತ್ತ ಕಣ್ಣು ಕೂಡ ಹಾಯಿಸಿಲ್ಲ ಎಂದು ಗಳಗಳನೆ ಅತ್ತಿದ್ದಾರೆ.&lt;/p&gt;&lt;h3&gt;&lt;strong&gt;ಅಂದು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಸಮಯದಲ್ಲಿ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಇದೇ ಜುನೈದ್​ ಆರೋಪಿಸಿದ್ದರು. ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ನನಗೆ ನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ಆರ್&zwnj;ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಾವು ಮಾಡಿರುವುದು ತಪ್ಪೆಂದು ಗೊತ್ತಾಗಿದೆ, ಆಹಾರ ವಿತರಿಸಿದವರೇ ಉಲ್ಟಾ ಹೊಡೆದರು ಎಂದು ಕಣ್ಣೀರು ಹಾಕಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/mohammad-junaid-who-was-seen-during-the-cjp-protest-has-claimed-he-was-ignored-after-the-movement-suc/articleshow-7y2d8ug"/>
        </item>
        <item>
            <title><![CDATA['ಪಿಚ್ಚರ್​ ಅಭೀ ಭೀ ಬಾಕಿ ಹೈ' ಎಂದಿದ್ದ CJP ದೀಪ್ಕೆ ಪಿಚ್ಚರ್​ ಬಿಟ್ಟೋಯ್ತು: ಕೇಳಿದ ಈ ಪ್ರಶ್ನೆಗೆ ಉತ್ತರವಿಲ್ಲದೇ ಸುಸ್ತಾದ್ರು]]></title>
            <link>https://kannada.asianetnews.com/india-news/cjp-abhijeet-deepkes-reaction-when-asked-if-he-would-ask-for-resignation-of-punjab-minister-suc/articleshow-869m4k1</link>
            <guid isPermaLink="true">https://kannada.asianetnews.com/india-news/cjp-abhijeet-deepkes-reaction-when-asked-if-he-would-ask-for-resignation-of-punjab-minister-suc/articleshow-869m4k1</guid>
            <pubDate>Mon, 27 Jul 2026 20:18:40 +0530</pubDate>
            <description><![CDATA[ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾಯಿತು. ಆದರೆ, ಪಂಜಾಬ್&zwnj;ನಲ್ಲಿ ಇದೇ ರೀತಿಯ ಪೇಪರ್ ಲೀಕ್ ಆದಾಗ, ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪ್ರತಿಭಟನೆಯ ನಾಯಕ ಅಭಿಜೀತ್ ದೀಪ್ಕೆ, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ತಬ್ಬಿಬ್ಬಾದರು, ಇದು ಅವರ ಹೋರಾಟದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyj0pa8397qb84d7sherzhg6,imgname-abhijeet-deepke-1785163622659.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್​ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಿಂದ ಲಕ್ಷಾಂತರ ಅಮಾನಕ ವಿದ್ಯಾರ್ಥಿಗಳಿಗೆ ನೋವಾಗಿದೆ. ಇದರಿಂದ ಜೀವನವನ್ನೇ ಎದುರಿಸಲಾಗದೇ ವೈದ್ಯರಾಗಲು ಹೊರಟಿದ್ದ ಕೆಲವರು ಜೀವ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕೋಲಾಹಲ ಸೃಷ್ಟಿಯಾಗಿದ್ದ ನಡುವೆಯೇ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವುದಾಗಿ ಕಾಕ್ರೋಚ್​ ಜನತಾ ಪಕ್ಷ ಮಾಡಿದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟ, ವಿದೇಶಿ ಬಾವುಟಗಳ ಹಾರಾಟ, ಖಲೀಸ್ತಾನಿಗಳ ಬೆಂಬಲ... ಎಲ್ಲವೂ ಈ ಪಕ್ಷ ಹಾಗೂ ಪ್ರತಿಭಟನೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭಾರತದ ವಿದ್ಯಾರ್ಥಿಗಳಿಗೆ ಬೆಂಬಲ ಕೊಡುವುದಾಗಿ ಅಮೆರಿಕದಿಂದ ಬಂದಿರುವ ಉದ್ದೇಶದ ಬಗ್ಗೆ ಇದಾಗಲೇ ಹಲವಾರು ಭಯಾನಕ ಸುದ್ದಿಗಳು ಸದ್ದು ಮಾಡುತ್ತಿರುವ ನಡುವೆಯೇ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ರಾಜೀನಾಮೆ ನೀಡಾಯ್ತು.&lt;/p&gt;&lt;h2&gt;&lt;strong&gt;ಪಿಚ್ಚರ್​ ಅಭೀ ಭೀ ಬಾಕಿ ಹೈ ಎಂದವರೇ...&lt;/strong&gt;&lt;/h2&gt;&lt;p&gt;ಆದರೆ, ಈ ರಾಜೀನಾಮೆ ನೀಡಿದ್ರೆ ಸಾಕಾಗಲ್ಲ, ಇದು ಟ್ರೈಲರ್​ ಅಷ್ಟೇ, ಪಿಚ್ಚರ್​ ಅಭೀ ಭೀ ಬಾಕಿ ಹೈ ಎಂದು ಮುಂದೆ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ ಹಾಗೂ ಅವರ ಬೆಂಬಲಿಗರು ಘಂಟಾಘೋಷವಾಗಿ ಹೇಳಿದ್ದಾರೆ. ಆದರೆ ಅದೇ ಅವರಿಗೆ ಈಗ ಮುಳುವಾಗಿಬಿಟ್ಟಿದೆ. ಇದಕ್ಕೆ ಕಾರಣ, ವಿದ್ಯಾರ್ಥಿಗಳ ಹಿತದೃಷ್ಟಿಯೇ ಮುಖ್ಯವಾಗಿದ್ದರೆ, ಅವರೀಗ ಪಂಜಾಬ್​ ಶಿಕ್ಷಣ ಸಚಿವರ ರಾಜೀನಾಮೆ ಕೇಳಬೇಕಿದೆ. ಏಕೆಂದರೆ ಪಂಜಾಬ್​ನಲ್ಲಿಯೂ ಪ್ರಶ್ನೆ ಪತ್ರಿಕೆ ಲೀಕ್​ ಆಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ತಲ್ಲಣಗೊಂಡಿದ್ದಾರೆ. ಆಮ್​ ಆದ್ಮಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ದೀಪ್ಕೆ ಈಗ ತಮ್ಮದೇ ಪಕ್ಷದ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಅವರ ಪಿಚ್ಚರ್​ ಬಿಟ್ಟುಹೋಗುವ ಭಯವಿದೆ.&lt;/p&gt;&lt;h3&gt;&lt;strong&gt;ಪ್ರಶ್ನೆಗೆ ಉತ್ತರಿಸಲಾಗದೇ ತತ್ತರ!&lt;/strong&gt;&lt;/h3&gt;&lt;p&gt;ಇವರು ಕಾರಿನಲ್ಲಿ ಹೋಗುತ್ತಿರುವಾಗ ಎಎನ್​ಐ ಸುದ್ದಿಸಂಸ್ಥೆಯ ಪತ್ರಕರ್ತರೊಬ್ಬರು ಕೇಳಿದ ಇದೇ ಪ್ರಶ್ನೆಗೆ ದೀಪ್ಕೆ ಅವರ ಮುಖ &amp;nbsp;ಸಪ್ಪಗಾಯಿತು. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ವಿದ್ಯಾರ್ಥಿಗಳ ಪರವಾಗಿ ಅಮೆರಿಕದಿಂದ ಪಾಪ ಭಾರತಕ್ಕೆ ಬಂದು ಇಷ್ಟೆಲ್ಲಾ ಪ್ರತಿಭಟನೆ ಮಾಡಿರುವ ನೀವು, ಅದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಪಡೆದಂತೆ, ಪಂಜಾಬ್​ನಲ್ಲಿಯೂ ಮಾಡ್ತೀರಾ ಎಂದು ಪ್ರಶ್ನಿಸಿದರು. ಅನಿರೀಕ್ಷಿತವಾಗಿ ತೂರಿ ಬಂದ ಪ್ರಶ್ನೆ ಕೇಳುತ್ತಿದ್ದಂತೆಯೇ ದೀಪ್ಕೆ ಸುಸ್ತಾಗಿ ಹೋದರು. ಏನು ಹೇಳಬೇಕು ಎಂದು ತಿಳಿಯದೇ ಬಡಬಡಿಸಿ ಹಾಂ ಹೂಂ. ನೋಡೋಣ ಎನ್ನುತ್ತಾ ಹಿಂದೆ ತಿರುಗಿ ಹೋಗೋಣ್ವಾ ಎಂದು ಪ್ರಶ್ನಿಸಿದ್ರು.&lt;/p&gt;&lt;p&gt;ಪತ್ರಕರ್ತರು ಮೈಕ್​ ಹಿಡಿದಾಕ್ಷಣ ದೊಡ್ಡದಾಗಿ ಭಾಷಣ ಬಿಗಿಯಬಹುದು, ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆಯಿಂದ ಹೀರೋ ಆಗಿ ಮೆರೆದ ತಾವು ಇನ್ನಷ್ಟು ಇದರ ಬಗ್ಗೆ ಹೇಳಬಹುದು ಎಂದೆಲ್ಲಾ ಕಲ್ಪನೆಯಿಂದ ಪ್ರಶ್ನೆಗೆ ಕಾತರದಿಂದ ಕಾಯುತ್ತಿದ್ದ ದೀಪ್ಕೆ ಅವರ ಪಿಚ್ಚರ್​ ಬಿಟ್ಟೋಗಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಇನ್ನಿಲ್ಲದಂತೆ ಟ್ರೋಲ್​ ಆಗುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/cjp-abhijeet-deepkes-reaction-when-asked-if-he-would-ask-for-resignation-of-punjab-minister-suc/articleshow-869m4k1"/>
        </item>
        <item>
            <title><![CDATA[ರೋಡ್​ನಲ್ಲಿ ನೋಟು ಸಿಕ್ಕಿತೆಂದು ಬಗ್ಗಿದ್ರೆ ನಿಮ್ಮ ಕಥೆ ಫಿನಿಷ್​: ಶುರುವಾಗಿದೆ ಹೊಸ ಸ್ಕ್ಯಾಮ್​- ಪೊಲೀಸರ ಅಲರ್ಟ್​]]></title>
            <link>https://kannada.asianetnews.com/crime/picking-up-an-unattended-rs-500-note-on-the-road-is-a-dangerous-trap-laced-with-a-chemical-suc/articleshow-av8o3eh</link>
            <guid isPermaLink="true">https://kannada.asianetnews.com/crime/picking-up-an-unattended-rs-500-note-on-the-road-is-a-dangerous-trap-laced-with-a-chemical-suc/articleshow-av8o3eh</guid>
            <pubDate>Sun, 26 Jul 2026 13:03:11 +0530</pubDate>
            <description><![CDATA[ರಸ್ತೆಯಲ್ಲಿ ಬಿದ್ದಿರುವ 500 ರೂಪಾಯಿ ನೋಟನ್ನು ಎತ್ತಿಕೊಳ್ಳುವ ಮೂಲಕ ಜನರು ಹೊಸ ಬಗೆಯ ವಂಚನೆಗೆ ಒಳಗಾಗುತ್ತಿದ್ದಾರೆ. ಖದೀಮರು ನೋಟಿಗೆ ರಾಸಾಯನಿಕ ಸಿಂಪಡಿಸಿ, ಅದನ್ನು ಎತ್ತಿಕೊಂಡವರು ಮೂರ್ಛೆ ಹೋದಾಗ ಅವರ ಬಳಿಯ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಈ ಬಗ್ಗೆ ಪೊಲೀಸರು ಸಾರ್ವಜನಿಕರಿಗೆ, ಅದರಲ್ಲೂ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyeneacwbz4dk463thnkzt8n,imgname-crime-1785051163036.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನರನ್ನು ಮೋಸ ಮಾಡಲು ಹೊಸ ಹೊಸ ಮಾರ್ಗಗಳನ್ನು ಖದೀಮರು ಹುಡುಕುತ್ತಲೇ ಇರುತ್ತಾರೆ. ಸೈಬರ್​ ಕ್ರೈಂಗಳಂತೂ ಲೆಕ್ಕವೇ ಇಲ್ಲ. ಆದರೆ ಈ ಅಪರಾಧಕ್ಕೆ ಸಕತ್​ ತಲೆ ಓಡಿಸಬೇಕಾಗುತ್ತದೆ. ಕಳ್ಳತನದಲ್ಲಿ ಅಷ್ಟೇ ಜಾಣ್ಮೆಯೂ ಇರಬೇಕಾಗುತ್ತದೆ. ಇದರ ಹೊರತಾಗಿಯೂ ಸೈಬರ್​ ಅಪರಾಧ ಎಗ್ಗಿಲ್ಲದೇ ನಡೆಯುತ್ತಿರುವ ನಡುವೆಯೇ, ಏನೂ ಸಾಹಸ ಪಡದೇ ಅತಿ ಸುಲಭದಲ್ಲಿ ಜನರನ್ನು ಮರಳು ಮಾಡುವ ದೊಡ್ಡ ದಂಧೆ ಶುರುವಾಗಿದೆ. ಅದರಲ್ಲಿಯೂ ಹೆಣ್ಣುಮಕ್ಕಳೇ ಇವರ ಟಾರ್ಗೆಟ್​. ಅತಿ ಸುಲಭದಲ್ಲಿ ಹೆಂಗಸರನ್ನು ಬಲೆಗೆ ಕೆಡವುವ ದಂಧೆ ಇದಾಗಿದೆ.&lt;/p&gt;&lt;h2&gt;&lt;strong&gt;ರಸ್ತೆ ಮೇಲೆ ಹಣ ಕಂಡ್ರೆ ಬಾಯಿ ಬಿಡಬೇಡಿ!&lt;/strong&gt;&lt;/h2&gt;&lt;p&gt;ಹಣ ಕಂಡರೆ ಹೆಣವೂ ಬಾಯ್ಬಿಡತ್ತೆ ಎನ್ನುವ ಮಾತಿದೆ. ಅದರಲ್ಲಿಯೂ ರೋಡ್​ನಲ್ಲಿ ಗರಿಗರಿ ನೋಟು ಸಿಕ್ಕರೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಪುಕ್ಕಟೆ ನೂರೋ 500 ರೂಪಾಯಿ ಸಿಕ್ಕಿಬಿಟ್ಟರೆ ಆಹಾ! ಹಿದೆ ಮುಂದೆ ನೋಡದೆ ಕೈ ಅದರತ್ತ ಹೋಗಿಯೇ ಬಿಡುತ್ತದೆ. ರಸ್ತೆಯ ಮೇಲೆ ಸಿಕ್ಕ ದುಡ್ಡನ್ನು ತೆಗೆದುಕೊಳ್ಳಲೇಬಾರದು ಎನ್ನುವ ಶಾಸ್ತ್ರವೂ ಇದೆ. ಸಿಕ್ಕರೂ ದೇವರ ಹುಂಡಿಗೆ ಹಾಕಿಬಿಡಬೇಕು ಎನ್ನಲಾಗುತ್ತದೆ. ಅದು ಎಲ್ಲಿ ಹಾಕೋದು ಎಂದು ಆಮೇಲೆ ಯೋಚ್ನೆ ಮಾಡುವ, ಮೊದಲು ತೆಗೆದುಕೊಳ್ಳುವ ಎಂದು ನೀವೇನಾದ್ರೂ ಆ ದುಡ್ಡನ್ನು ತೆಗೆದುಕೊಂಡ್ರೋ ಅಲ್ಲ್ಇಗೆ ಮುಗಿಯಿತು ಕಥೆ.&lt;/p&gt;&lt;h3&gt;&lt;strong&gt;500 ರೂ. ಕಥೆ&lt;/strong&gt;&lt;/h3&gt;&lt;p&gt;ಅದರಲ್ಲಿಯೂ ಹೆಚ್ಚಾಗಿ 500 ರೂಪಾಯಿ ನೋಟುಗಳನ್ನೇ ರಸ್ತೆಯ ಮೇಲೆ ಎಸೆಯಲಾಗಿರುತ್ತದೆ. ನೀವು ಆ ನೋಟನ್ನು ಎತ್ತಿಕೊಂಡ ತಕ್ಷಣ, ಅದರಲ್ಲಿ ಉದ್ದೇಶಪೂರ್ವಕವಾಗಿ ಸಿಂಪಡಿಸಿ ಇಡಲಾಗಿದ್ದ ಕ್ಲೋರೋಫಿಲ್​ ಅಥವಾ ಇನ್ನಾವುದೇ ರಾಸಾಯನಿಕ ನಿಮ್ಮ ಮೂಗಿಗೆ ನೇರವಾಗಿ ಹೋಗುತ್ತದೆ. ಇದು ನಿಮ್ಮನ್ನು ಮೂರ್ಚೆ ತಪ್ಪಿಸಲು ಮಾಡಿರುವ ಉಪಾಯವೇ ಆಗಿರುತ್ತದೆ. ನೀವು ಮೂರ್ಛೆ ತಪ್ಪುತ್ತಿದ್ದಂತೆಯೇ, ಅಲ್ಲಿಯೇ ಕಾದು ಕುಳಿತಿರುವ ಖದೀಮರು ಬಂದು ನಿಮ್ಮಲ್ಲಿರುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಾರೆ. ಆದ್ದರಿಂದ ಪುರುಷರಿಂತಲೂ ಹೆಚ್ಚಾಗಿ ಮಹಿಳೆಯರೇ ಇವರ ಟಾರ್ಗೆಟ್​ ಆಗಿರುತ್ತಾರೆ. ನಿಮ್ಮ ಮೈಮೇಲೆ ಇರುವ ಆಭರಣ ಸೇರಿದಂತೆ ಎಲ್ಲವೂ ಆ ಕಳ್ಳರ ಪಾಲಾಗುತ್ತದೆ.&lt;/p&gt;&lt;p&gt;ಆದ್ದರಿಂದ ರಸ್ತೆಯ ಮೇಲೆ ಬಿದ್ದಿರುವ ನೋಟು ಅದರಲ್ಲಿಯೂ ಹೆಚ್ಚಾಗಿ 500 ರೂಪಾಯಿ ನೋಟನ್ನು ನೀವು ಒಂಟಿಯಾಗಿ ಹೋಗುವ ಸಮಯದಲ್ಲಂತೂ ತೆಗೆದುಕೊಳ್ಳಲೇಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲಿಯೂ ಸ್ವಲ್ಪ ಕತ್ತಲಾಗಿದ್ದು, ಆ ರಸ್ತೆಯಲ್ಲಿ ಓಡಾಟ ಕಡಿಮೆ ಇದ್ದಾಗಲಂತೂ ಇಂಥ ಕೃತ್ಯಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/picking-up-an-unattended-rs-500-note-on-the-road-is-a-dangerous-trap-laced-with-a-chemical-suc/articleshow-av8o3eh"/>
        </item>
        <item>
            <title><![CDATA[CJP ಪ್ರತಿಭಟನೆಯಲ್ಲಿ ಪಾಕಿಗಳ ಕುತಂತ್ರ: ಆಪರೇಷನ್​ ಸಿಂದೂರಕ್ಕೂ ಲಿಂಕ್​- ಶಾಕಿಂಗ್​ ಮಾಹಿತಿ ಕೊಟ್ಟ ಪೊಲೀಸ್​]]></title>
            <link>https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7</link>
            <guid isPermaLink="true">https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7</guid>
            <pubDate>Fri, 24 Jul 2026 19:52:57 +0530</pubDate>
            <description><![CDATA[ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯ ವೇಳೆ ಪಾಕಿಸ್ತಾನ ಮೂಲದ 480ಕ್ಕೂ ಹೆಚ್ಚು ಸೋಷಿಯಲ್ ಮೀಡಿಯಾ ಖಾತೆಗಳು ತಪ್ಪು ಮಾಹಿತಿ ಹರಡುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 'ಆಪರೇಷನ್ ಸಿಂದೂರ'ದ ಸಮಯದಲ್ಲಿ ಸಕ್ರಿಯವಾಗಿದ್ದ ಇದೇ ಖಾತೆಗಳು, ನಕಲಿ ಪೋಸ್ಟ್&zwnj; ಮತ್ತು ಎಡಿಟೆಡ್ ವಿಡಿಯೋಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಗುರಿ ಹೊಂದಿವೆ ಎಂದು ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kya83maqb6gznbs8jztz3zcw,imgname-cjp-1784902963543.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಜಂತರ್ ಮಂತರ್&zwnj;ನಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ಸಂದರ್ಭದಲ್ಲಿ ಪಾಕಿಸ್ತಾನದ ಸೋಷಿಯಲ್​ ಮೀಡಿಯಾಗಳು ಸಕತ್​ ಆಪರೇಟಿವ್​ ಆಗಿರುವುದು ಬೆಳಕಿಗೆ ಬಂದಿದೆ. ಆಪರೇಷನ್ ಸಿಂದೂರದ ಸಮಯದಲ್ಲಿ ಸಕ್ರಿಯವಾಗಿದ್ದ ಖಾತೆಗಳೇ ಈಗ ಮತ್ತೆ ಆ್ಯಕ್ಟೀವ್​ ಆಗಿರುವ ಶಾಕಿಂಗ್​ ವರದಿಯನ್ನು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಈ ಪಾಕಿಸ್ತಾನದ ಸೋಷಿಯಲ್​ ಮೀಡಿಯಾಗಳು ತಪ್ಪು ಮಾಹಿತಿ ಹರಡುವಲ್ಲಿ ಭಾಗಿಯಾಗಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇದಾಗಲೇ 480 ಕ್ಕೂ ಹೆಚ್ಚು ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆಪರೇಷನ್ ಸಿಂದೂರದ ಸಮಯದಲ್ಲಿ ಅದೇ ಖಾತೆಗಳು ಸಕ್ರಿಯವಾಗಿದ್ದವು ಎಂದು ಹೇಳಿದ್ದಾರೆ.&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್&zwnj;ನಲ್ಲಿ, ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಪಾಕಿಸ್ತಾನ ಮೂಲದ ಸಾಮಾಜಿಕ ಮಾಧ್ಯಮ ಖಾತೆಗಳು ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುವ ಉದ್ದೇಶದಿಂದ ವದಂತಿಗಳು, ನಕಲಿ ಪೋಸ್ಟ್&zwnj;ಗಳು ಮತ್ತು ಸಂಪಾದಿತ ವಿಡಿಯೋಗಳನ್ನು ಪ್ರಸಾರ ಮಾಡಲು ಚಾಲ್ತಿಯಲ್ಲಿರುವ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. &quot;ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತಪ್ಪು ಮಾಹಿತಿ ಹರಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇಲ್ಲಿಯವರೆಗೆ, ವದಂತಿಗಳನ್ನು ಹರಡಲು ಪ್ರಸ್ತುತ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿರುವ 480 ಕ್ಕೂ ಹೆಚ್ಚು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಾವು ಗುರುತಿಸಿದ್ದೇವೆ. ನಾವು ಈ ಖಾತೆಗಳನ್ನು ನಿರ್ಬಂಧಿಸುತ್ತಿದ್ದೇವೆ. ಆಪರೇಷನ್ ಸಿಂದೂರದ ಸಮಯದಲ್ಲಿ ಸಕ್ರಿಯವಾಗಿದ್ದ ಅದೇ ಖಾತೆಗಳು ಇವು&quot; ಎಂದು ಅಧಿಕಾರಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಏನಿವರ ಉದ್ದೇಶ?&lt;/strong&gt;&lt;/h2&gt;&lt;p&gt;ಈ ಖಾತೆಗಳ ಪ್ರಾಥಮಿಕ ಉದ್ದೇಶವು ತಪ್ಪು ಮಾಹಿತಿಯನ್ನು ಹರಡುವುದು ಮತ್ತು ಪರಿಶೀಲಿಸದ ಮತ್ತು ದಾರಿತಪ್ಪಿಸುವ ವಿಷಯವನ್ನು ಆನ್&zwnj;ಲೈನ್&zwnj;ನಲ್ಲಿ ಪ್ರಸಾರ ಮಾಡುವ ಮೂಲಕ ಜನರನ್ನು, ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಇಂತಹ ವಿಷಯಗಳಿಗೆ ಬಲಿಯಾಗದಂತೆ ಮನವಿ ಮಾಡಿದ ಅಧಿಕಾರಿ, ನಕಲಿ ಪೋಸ್ಟ್&zwnj;ಗಳು, ಸಂಪಾದಿತ ವೀಡಿಯೊಗಳು ಮತ್ತು ಅನಾಮಧೇಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್&zwnj;ಗಳ ಮೂಲಕ ಹಂಚಿಕೊಳ್ಳಲಾದ ಮಾಹಿತಿಯನ್ನು ತಪ್ಪು ಮಾಹಿತಿಯನ್ನು ಹರಡಲು ಬಳಸಲಾಗುತ್ತಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಪೊಲೀಸರ ಮನವಿ&lt;/strong&gt;&lt;/h3&gt;&lt;p&gt;&quot;ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಟಿಯಿಂದ, ನಕಲಿ ಪೋಸ್ಟ್&zwnj;ಗಳು, ಸಂಪಾದಿತ ವೀಡಿಯೊಗಳು ಅಥವಾ ಅನಾಮಧೇಯ ಹ್ಯಾಂಡಲ್&zwnj;ಗಳಿಂದ ಬರುವ ಮಾಹಿತಿಯಿಂದ ಪ್ರಚೋದಿಸಲ್ಪಡಬೇಡಿ ಎಂದು ನಾವು ಅವರಿಗೆ ಮನವಿ ಮಾಡುತ್ತೇವೆ&quot; ಎಂದು ಅಧಿಕಾರಿ ಹೇಳಿದರು. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ವಿಷಯವನ್ನು ಫಾರ್ವರ್ಡ್ ಮಾಡುವ ಅಥವಾ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪರಿಶೀಲಿಸಬೇಕು ಮತ್ತು ವದಂತಿಗಳನ್ನು ಹರಡುವುದನ್ನು ತಡೆಯಬೇಕು ಎಂದು ಅಧಿಕಾರಿ ಜನರನ್ನು ಒತ್ತಾಯಿಸಿದ್ದಾರೆ. &quot;ಯಾವುದೇ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೊದಲು, ದಯವಿಟ್ಟು ಸತ್ಯಗಳನ್ನು ಪರಿಶೀಲಿಸಿ. ವದಂತಿಗಳನ್ನು ಹರಡಬೇಡಿ ಮತ್ತು ಸಮಾಜವಿರೋಧಿ ಅಂಶಗಳು ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ಬಿಡಬೇಡಿ.&quot; ದೆಹಲಿ ಪೊಲೀಸರು ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ನಾಗರಿಕರ ಹಕ್ಕನ್ನು ಗೌರವಿಸುತ್ತಾರೆ ಎಂದು ಅಧಿಕಾರಿ ಪ್ರತಿಪಾದಿಸಿದರು. &quot;ಶಾಂತಿಯುತ ಪ್ರತಿಭಟನೆ ನಿಮ್ಮ ಹಕ್ಕು ಮತ್ತು ದೆಹಲಿ ಪೊಲೀಸರು ಈ ಹಕ್ಕನ್ನು ಗೌರವಿಸುತ್ತಾರೆ&quot; ಎಂದು ಅವರು ಹೇಳಿದರು, ಜನರು ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸಲು ಒತ್ತಾಯಿಸಿದರು.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/pak-based-handles-active-during-op-sindoor-spread-rumours-amid-protests-says-cops-suc/articleshow-cao91v7"/>
        </item>
        <item>
            <title><![CDATA[ಮಾಸಿಕ 20 ಸಾವಿರ ಸಂಬಳ: ದಿನಕ್ಕೆ 10 ಲಕ್ಷ ಖರ್ಚು! ಜಿರಳೆಗಳಿಗೆ ಊಟ ಕೊಟ್ಟವನ ಜಾತಕ ತೆರೆದ ಮುಸ್ಲಿಂ ಮುಖಂಡ]]></title>
            <link>https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz</link>
            <guid isPermaLink="true">https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz</guid>
            <pubDate>Thu, 30 Jul 2026 18:33:21 +0530</pubDate>
            <description><![CDATA[ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಊಟ ನೀಡಿದ್ದ ಮೊಹಮ್ಮದ್ ಜುನೈದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರಿಂದ ಕಡೆಗಣನೆಗೆ ಒಳಗಾಗಿ ಕಣ್ಣೀರು ಹಾಕಿರುವ ಅವರ ವಿರುದ್ಧವೇ ಇದೀಗ ದೇಶದ್ರೋಹದ ಆರೋಪ ಕೇಳಿಬಂದಿದ್ದು, ಅವರ ಹಣದ ಮೂಲದ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyshs6zhx960dagg6ybzxyx1,imgname-junaid-1785416424433.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ನೆಪದಲ್ಲಿ ಕಾಕ್ರೋಚ್​ ಜನತಾ ಪಕ್ಷ ನಡೆಸಿರುವ ಪ್ರತಿಭಟನೆಯ ಹಿಂದಿನ ಕೈವಾಡದ ಬಗ್ಗೆ ಹಲವಾರು ಅನುಮಾನಗಳು ಸುಳಿದಾಡುತ್ತಲೇ ಇವೆ. ಪಾಕಿಸ್ತಾನಿಗಳು, ಖಲಿಸ್ತಾನಿಗಳ ಬೆಂಬಲ, ಲಕ್ಷ ಲಕ್ಷ ರೂಪಾಯಿ ಖರ್ಚು, ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್​ ಅವರ ರಾಜೀನಾಮೆ ಬಳಿಕ ಅಷ್ಟೋ ಮಂದಿ ಸ್ಟಾರ್​ ಹೋಟೆಲ್​ನಲ್ಲಿ ಮಾಡಿದ ಪಾರ್ಟಿಗೆ ತಗುಲಿದ ಲಕ್ಷಾಂತರ ರೂಪಾಯಿಗಳ ಖರ್ಚು-ವೆಚ್ಚ... ಹೀಗೆ ಬಗೆಯುತ್ತಾ ಹೋದಂತೆ, ಇದರ ಹಿಂದಿರುವ ವ್ಯವಸ್ಥಿತ ಪಿತೂರಿಯ ಬಗ್ಗೆ ಇದಾಗಲೇ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ನಡುವೆಯೇ, ಪ್ರತಿಭಟನೆಯ ಸಮಯದಲ್ಲಿ ಸತತ 35 ದಿನ, ಪ್ರತಿಭಟನಾಕಾರರಿಗೆ ಊಟವನ್ನು ನೀಡಿದವ ಮೊಹಮ್ಮದ್​ ಜುನೈದ್ ಅವರ ಬಗ್ಗೆ ಇದೀಗ ಕೆಲವು ಮುಸ್ಲಿಂ ಸಮುದಾಯದಿಂದಲೇ ಭಾರಿ ವಿರೋಧ ವ್ಯಕ್ತವಾಗುತ್ತಿದೆ.&lt;/p&gt;&lt;p&gt;​.ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿರಂತರ 35 ದಿನಗಳ ಕಾಲ ಉಚಿತ ಆಹಾರ ಮತ್ತು ನೀರು ಪೂರೈಸಿ ಸುದ್ದಿಯಲಿದ್ದಾರೆ ಗಾಜಿಯಾಬಾದ್​ನ ಮೊಹಮ್ಮದ್​. ಆದರೆ, ಇದೀಗ ಅತ್ತ ಸ್ಟಾರ್​ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ಮಾಡುತ್ತಿದ್ದರೆ, ಇತ್ತ 35 ದಿನಗಳ ಕಾಲ ಉಚಿತ ಆಹಾರ-ನೀರು ನೀಡಿದ್ದ ಮೊಹಮ್ಮದ್​ ಜುನೈದ್​ ಕಣ್ಣೀರು ಹಾಕಿದ್ದರು. ಮಾಧ್ಯಮಗಳ ಮುಂದೆ ಬಂದಿರುವ ಅವರು, ಅಂದು ನಾನು ಅವರಿಗೆ ಆಹಾರ ನೀಡಿದೆ. ಇಂದು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್​ ದೀಪ್ಕೆ, ಪ್ರತಿಭಟನೆ ಮುಗಿದ ಬಳಿಕ ನನ್ನತ್ತ ಕಣ್ಣು ಕೂಡ ಹಾಯಿಸಿಲ್ಲ ಎಂದು ಗಳಗಳನೆ ಅತ್ತಿದ್ದರು.&lt;/p&gt;&lt;h2&gt;&lt;strong&gt;ದೇಶದ್ರೋಹಿ, ತನಿಖೆ ಆಗಲಿ&lt;/strong&gt;&lt;/h2&gt;&lt;p&gt;ಆದರೆ ಇದೇ ಮೊಹಮ್ಮದ್​ ಜುನೈದ್​ ವಿರುದ್ಧ ಮುಸ್ಲಿಂ ಮುಖಂಡರೊಬ್ಬರು ಭಾರೀ ಆರೋಪ ಮಾಡಿದ್ದಾರೆ. geowiredailyಗೆ ನೀಡಿರುವ ಸಂದರ್ಶನದಲ್ಲಿ ಅವರು, ಜುನೈದ್​ ಒಬ್ಬ ಮುಸ್ಲಿಂ ವಿರೋಧಿ, ದೇಶದ್ರೋಹಿ ಎಂದಿದ್ದಾರೆ. ಅವನಿಗೆ ತಿಂಗಳಿಗೆ 20 ಸಾವಿರ ಸಂಬಳ ಬರುತ್ತದೆ. ಆದರೆ ಅಷ್ಟೂ ಜನರಿಗೆ ಉಚಿತ ಊಟ ಕೊಟ್ಟಿದ್ದಾನೆ. ಅದರ ಖರ್ಚು ಏನಿಲ್ಲವೆಂದರೂ ದಿನಕ್ಕೆ ಹತ್ತಿಪ್ಪತ್ತು ಲಕ್ಷ ಆಗುತ್ತದೆ. ಆತನ ಬಳಿ ಅಷ್ಟು ಹಣ ಬಂದಿದ್ದು ಹೇಗೆ ಎನ್ನುವ ತನಿಖೆ ಆಗಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಿದೆ ಎಂದಿದ್ದಾರೆ ಅವರು. ಒಂದು ವೇಳೆ ಆತನ ಬಳಿ ಇಷ್ಟೆಲ್ಲಾ ಹಣ ಇದ್ದಿದ್ದೇ ಹೌದಾದರೆ, ಆತನ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತನಿಖೆ ಮಾಡಬೇಕು, ಇಲ್ಲದೇ ಹೋದರೆ ಇದರ ಹಿಂದಿರುವ ಶಕ್ತಿಗಳ ಬಗ್ಗೆಯೂ ತನಿಖೆ ಆಗಬೇಕು ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಅಂದು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಪ್ರತಿಭಟನಾಕಾರರಿಗೆ ಉಚಿತ ಆಹಾರ ಮತ್ತು ನೀರು ವಿತರಿಸುತ್ತಿದ್ದ ಸಮಯದಲ್ಲಿ, ದೆಹಲಿ ಪೊಲೀಸರು ಎಂದು ಹೇಳಿಕೊಂಡ ಕೆಲವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ರಾತ್ರಿಯಿಡೀ ಅಪಹರಿಸಿ ಕಿರುಕುಳ ನೀಡಿದ್ದಾರೆ ಎಂದು ಇದೇ ಜುನೈದ್​ ಆರೋಪಿಸಿದ್ದರು. ಜುಲೈ 24ರ ರಾತ್ರಿ ಸುಮಾರು 10:50ರ ಸುಮಾರಿಗೆ ನನಗೆ ನಾಯಿ ಕಚ್ಚಿತ್ತು. ಚಿಕಿತ್ಸೆಗಾಗಿ ಆರ್&zwnj;ಎಂಎಲ್ ಆಸ್ಪತ್ರೆಗೆ ತೆರಳಿ, ರಾತ್ರಿ 12:10ರ ವೇಳೆಗೆ ವಾಪಸ್ ಆಟೋದಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ. ನಾನು 50-60 ಮೀಟರ್ ದೂರ ಹೋಗುತ್ತಿದ್ದಂತೆ ಕೆಲವು ವಾಹನಗಳು ನಮ್ಮನ್ನು ತಡೆದವು. ನಮ್ಮನ್ನು ಕೊಲ್ಲಲು ಬಂದಿದ್ದಾರೆ ಎಂದೇ ನಾವು ಭಯಪಟ್ಟಿದ್ದೆವು. ಆದರೆ ಅವರು ತಾವು ದೆಹಲಿ ಪೊಲೀಸರು ಎಂದು ಹೇಳಿಕೊಂಡರು. ನಂತರ ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೋ ಕರೆದುಕೊಂಡು ಹೋದರು. ಇಡೀ ರಾತ್ರಿ ನಮ್ಮನ್ನು ಅಲ್ಲಿಯೇ ಕೂರಿಸಿದ್ದರು ಎಂದು ಜುನೈದ್ ಅಳಲು ತೋಡಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ತಾವು ಮಾಡಿರುವುದು ತಪ್ಪೆಂದು ಗೊತ್ತಾಗಿದೆ, ಆಹಾರ ವಿತರಿಸಿದವರೇ ಉಲ್ಟಾ ಹೊಡೆದರು ಎಂದು ಕಣ್ಣೀರು ಹಾಕಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/a-neighbour-of-mohd-junaid-who-gave-free-food-of-cjp-protesters-has-sparked-debate-suc/articleshow-cexdlgz"/>
        </item>
        <item>
            <title><![CDATA[ಜಿರಳೆಗಳಿಗೆ ಶುರುವಾಯ್ತು ನಡುಕ: ಪ್ರತಿಭಟನೆ ವೇಳೆ ಮುಖ ಗುರುತಿಸೋ ಸಾಧನ ಪ್ರಶ್ನಿಸಿ 'ಸುಪ್ರೀಂ' ಮೊರೆ]]></title>
            <link>https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3</link>
            <guid isPermaLink="true">https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3</guid>
            <pubDate>Thu, 30 Jul 2026 20:17:05 +0530</pubDate>
            <description><![CDATA[NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಪ್ರತಿಭಟನೆಯಲ್ಲಿ, ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿದ್ದನ್ನು ಸಿಪಿಐ(ಎಂ) ಸಂಸದರು ಸುಪ್ರೀಂ ಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದಾರೆ. ಈ ಕಣ್ಗಾವಲು ಅಸಂವಿಧಾನಿಕ ಎಂದು ಘೋಷಿಸಲು ಮತ್ತು ಕಾನೂನು ಜಾರಿಯಾಗುವವರೆಗೆ ಅದನ್ನು ನಿಲ್ಲಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kysqt4j9786v4krqne9cv1zs,imgname-cjp-protest-1785422746185.jpg" type="image/jpeg" height="390" width="690"/>
            <content:encoded><![CDATA[&lt;p&gt;NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಜಂತರ್ ಮಂತರ್&zwnj;ನಲ್ಲಿ ಒಂದು ತಿಂಗಳ ಕಾಲ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ (FRT) ಮತ್ತು ಇತರ ಬಯೋಮೆಟ್ರಿಕ್ ಕಣ್ಗಾವಲು ಸಾಧನಗಳನ್ನು ಬಳಸಿದ್ದನ್ನು ಪ್ರಶ್ನಿಸಿ CPI (M) ಸುಪ್ರೀಂಕೋರ್ಟ್​ ಮೊರೆ ಹೋಗಿದೆ. . ಈ ಮೂಲಕ ಪ್ರತಿಭಟನೆ ನೆಪದಲ್ಲಿ ನಡೆದ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿ, ವಿದೇಶಿಗರ ಕೈವಾಡ, ವಿದೇಶ ಬಾವುಟ ಇಟ್ಟುಕೊಂಡವರ ಮುಖ ಚೆಹರೆ ಎಲ್ಲವೂ ಇದರಿಂದ ತಿಳಿಯಲಿದೆ. ಆದರೆ ಇವೆಲ್ಲಾ ಸರಿಯಲ್ಲ,ಇದು &quot;ಅಸಂವಿಧಾನಿಕ&quot; ಎಂದು ರಾಜ್ಯಸಭಾ ಸಂಸದ ಎಎ ರಹೀಮ್ ಸುಪ್ರೀಂ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ, ಕಣ್ಗಾವಲು ಸಂವಿಧಾನಬಾಹಿರ ಎಂದು ಘೋಷಿಸಲು ಮತ್ತು ಸಂಸತ್ತು ಅಂತಹ ಅಭ್ಯಾಸಗಳಿಗೆ ನಿರ್ದಿಷ್ಟವಾಗಿ ಅಧಿಕಾರ ನೀಡುವ ಕಾನೂನನ್ನು ಜಾರಿಗೆ ತರುವವರೆಗೆ ಶಾಂತಿಯುತ ಸಾರ್ವಜನಿಕ ಸಭೆಗಳಲ್ಲಿ ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಇತರ ಬಯೋಮೆಟ್ರಿಕ್ ಕಣ್ಗಾವಲು ಕ್ರಮಗಳನ್ನು ನಿಯೋಜಿಸದಂತೆ ಕಾನೂನು ಜಾರಿ ಸಂಸ್ಥೆಗಳಿಗೆ ನಿರ್ದೇಶನವನ್ನು ಅವರು ಕೋರಿದ್ದಾರೆ.&lt;/p&gt;&lt;h2&gt;&lt;strong&gt;36 ದಿನಗಳ ಕಾಲ ಪ್ರತಿಭಟನೆ&lt;/strong&gt;&lt;/h2&gt;&lt;p&gt;ನೀಟ್-ಯುಜಿ 2026 ಪ್ರಶ್ನೆ ಪತ್ರಿಕೆ ಸೋರಿಕೆ ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾದ ನಂತರ ಜೂನ್ 20 ರಂದು ಪ್ರಾರಂಭವಾದ ಪ್ರತಿಭಟನೆಗಳ ನಂತರ ಜಿರಳೆ ಪಕ್ಷದ ಪರವಾಗಿ ಈ ಅರ್ಜಿ ಬಂದಿದೆ. ಕೇಂದ್ರ ಸರ್ಕಾರದಿಂದ ಹೊಣೆಗಾರಿಕೆ ಮತ್ತು ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು, ಜನರು ಮತ್ತು ರಾಜಕೀಯ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್&zwnj;ನಲ್ಲಿ ಪ್ರತಿಭಟನೆ ಮಾಡಿದ್ದರು. ಈ ಪ್ರತಿಭಟನೆಗಳು 36 ದಿನಗಳ ಕಾಲ ನಡೆಯಿತು. ಕೇಂದ್ರ ಸರ್ಕಾರವು ಹಲವಾರು ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಮತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರವೇ ಇದು ಕೊನೆಗೊಂಡಿತು.&lt;/p&gt;&lt;p&gt;ಅರ್ಜಿಯ ಪ್ರಕಾರ, ಪ್ರತಿಭಟನಾ ಅವಧಿಯುದ್ದಕ್ಕೂ ದೆಹಲಿ ಪೊಲೀಸರು ಭಾಗವಹಿಸುವವರನ್ನು ವ್ಯಾಪಕವಾದ ಕ್ಯಾಮೆರಾಗಳ ಜಾಲ, ಕೃತಕ ಬುದ್ಧಿಮತ್ತೆ ಆಧರಿತ ಮುಖ ಗುರುತಿಸುವಿಕೆ ವ್ಯವಸ್ಥೆಗಳು ಮತ್ತು ಬೆರಳಚ್ಚು ಗುರುತಿನ ಸಾಧನಗಳ ಮೂಲಕ &quot;ನಿರಂತರ ಮತ್ತು ವ್ಯಾಪಕವಾದ ಬಯೋಮೆಟ್ರಿಕ್ ಕಣ್ಗಾವಲು&quot;ಗೆ ಒಳಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಗಳು, ಡ್ರೋನ್&zwnj;ಗಳು, ದೇಹ-ಧರಿಸುವ ಕ್ಯಾಮೆರಾಗಳು, ಹ್ಯಾಂಡ್&zwnj;ಹೆಲ್ಡ್ ಸಾಧನಗಳು, ಮೊಬೈಲ್ ಕಮಾಂಡ್-ಅಂಡ್-ಕಂಟ್ರೋಲ್ ವಾಹನ ಮತ್ತು ವೈಯಕ್ತಿಕ ಮೊಬೈಲ್ ಫೋನ್&zwnj;ಗಳನ್ನು ಬಳಸಿಕೊಂಡು ಪ್ರತಿಭಟನಾಕಾರರನ್ನು ರೆಕಾರ್ಡ್ ಮಾಡಿದ್ದಾರೆ. ಇದುಸರಿಯಲ್ಲ ಎನ್ನುವುದು ಅವರ ಆರೋಪ.&lt;/p&gt;&lt;h3&gt;&lt;strong&gt;ಅಪರಾಧಗಳ ಜೋಡಿಕೆ&lt;/strong&gt;&lt;/h3&gt;&lt;p&gt;ಮುಖ ಗುರುತಿಸುವಿಕೆ ತಂತ್ರಜ್ಞಾನ ಮತ್ತು ಅಜ್ನಾಲೆನ್ಸ್ AI-ಶಕ್ತಗೊಂಡ ಸ್ಮಾರ್ಟ್ ಗ್ಲಾಸ್&zwnj;ಗಳನ್ನು ಹೊಂದಿರುವ ಕಣ್ಗಾವಲು ವಾಹನವನ್ನು ಬಳಸಿಕೊಂಡು ದೃಶ್ಯಾವಳಿಗಳನ್ನು ರಿಕಾರ್ಡ್​ ಮಾಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಭಿಗ್ಯಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾದ ಬೆರಳಚ್ಚುಗಳನ್ನು ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿನ ವ್ಯವಸ್ಥೆ (NAFIS) ಗೆ ಹೋಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. &quot;ಸವಾಲಿನ ಪ್ರಮುಖ ಅಂಶವೆಂದರೆ ಸಾವಿರಾರು ಶಾಂತಿಯುತ ಪ್ರತಿಭಟನಾಕಾರರ ಬಯೋಮೆಟ್ರಿಕ್ ಗುರುತಿಸುವಿಕೆಗಳ ಸ್ವಯಂಚಾಲಿತ, ಅಲ್ಗಾರಿದಮಿಕ್ ಹೊರತೆಗೆಯುವಿಕೆ ಮತ್ತು ಹೊಂದಾಣಿಕೆ ಮತ್ತು ಅಂತಹ ಡೇಟಾವನ್ನು ಶಾಶ್ವತ ರಾಷ್ಟ್ರೀಯ ಅಪರಾಧ ಡೇಟಾಬೇಸ್&zwnj;ಗಳೊಂದಿಗೆ ಪರಸ್ಪರ ಜೋಡಿಸುವ ಸಾಧ್ಯತೆ ಇದೆ ಎನ್ನುವುದು ತಮ್ಮ ಆತಂಕ ಎಂದಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/cpim-rajya-sabha-mp-rahim-moves-supreme-court-against-delhi-polices-biometric-surveillance-at-protests/articleshow-damktu3"/>
        </item>
        <item>
            <title><![CDATA[ಕಳ್ಳತನವನ್ನೂ ಮಾಡಿದ್ರು, ಟೀ ಮಾಡ್ಕೊಂಡು ಕುಡಿದು ಹೋದ್ರು: ಶಿರಸಿಯಲ್ಲಿ ಕೈಚಳಕ ತೋರಿಸಿದ ಕೂಲ್ ಕಳ್ಳರು]]></title>
            <link>https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng</link>
            <guid isPermaLink="true">https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng</guid>
            <pubDate>Thu, 30 Jul 2026 14:41:27 +0530</pubDate>
            <description><![CDATA[&lt;p&gt;Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys41jx4g2yf8rqzmnyaz5mq,imgname-theft-and-tea-break-cool-thieves-steal-and-drink-tea-in-sirsi-1785402018724.jpg" type="image/jpeg" height="390" width="690"/>
            <content:encoded><![CDATA[&lt;p&gt;Theft and tea break cool thieves steal and drink tea in Sirsi ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕಳ್ಳರು ಮನೆಗೆ ನುಗ್ಗಿ ಚಿನ್ನ, ಹಣ ದೋಚಿಕೊಂಡು ಸದ್ದಿಲ್ಲದೆ ಪರಾರಿಯಾಗುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ನಡೆದಿರುವ ಕಳ್ಳತನ ಪ್ರಕರಣವೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳ್ಳತನಕ್ಕೆ ಬಂದ ಖದೀಮರು ಚಿನ್ನ, ಹಣ ದೋಚಿದ ಬಳಿಕ ಮನೆಯಲ್ಲಿ ಗ್ಯಾಸ್ ಆನ್ ಮಾಡಿ, ಸ್ವತಃ ಟೀ ಮಾಡಿಕೊಂಡು ಕುಡಿದು ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ!&lt;/p&gt;&lt;img&gt;&lt;p&gt;ಮುಂಡಗೋಡ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರು ಮನೆಗಳನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ಪಟ್ಟಣದ ಹಳೂರು ಮಾರಿಕಾಂಬಾ ನಗರದಲ್ಲಿ ರಾತ್ರಿ ವೇಳೆ ಸತತವಾಗಿ ಎರಡು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದ್ದು, ಈ ಪೈಕಿ ಒಂದು ಮನೆಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.&lt;/p&gt;&lt;img&gt;&lt;p&gt;ಮಾರಿಕಾಂಬಾ ನಗರದ ನಿವಾಸಿ ಬಾಷಾ ಮರಗಡಿ ಅವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯಲ್ಲಿದ್ದ ಸುಮಾರು 2.5 ಗ್ರಾಂ ಚಿನ್ನ ಹಾಗೂ ₹3,000 ನಗದನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಾಗದ ಖದೀಮರು, ಮನೆಯಲ್ಲಿದ್ದ ಹುಂಡಿಯನ್ನೂ ಒಡೆದು ಅದರಲ್ಲಿದ್ದ ಹಣವನ್ನೂ ದೋಚಿದ್ದಾರೆ. ಇದೇ ವೇಳೆ ಶಂಕರ ಕುರುಬರ ಎಂಬುವವರ ಅಂಗಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಕೂಡ ವರದಿಯಾಗಿದೆ.&lt;/p&gt;&lt;img&gt;&lt;p&gt;ಈ ಕಳ್ಳತನ ಪ್ರಕರಣದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವೆಂದರೆ ಕಳ್ಳರ ವಿಚಿತ್ರ ವರ್ತನೆ. ಕಳ್ಳತನ ಮಾಡಿದ ಮನೆಯೊಂದರಲ್ಲಿ ಖದೀಮರು ಸ್ವತಃ ಟೀ ಮಾಡಿಕೊಂಡು ಕುಡಿದಿದ್ದಾರೆ ಎನ್ನಲಾಗಿದೆ. ಅಂದರೆ, ಚಿನ್ನ, ಹಣ ದೋಚಿದ ಬಳಿಕ ಅವಸರದಲ್ಲಿ ಓಡಿಹೋಗುವ ಬದಲು ಮನೆಯಲ್ಲೇ ಟೀ ಮಾಡಿಕೊಂಡು ಕುಡಿದು, ಬಳಿಕ ಆರಾಮವಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;&lt;img&gt;&lt;p&gt;ಪಟ್ಟಣದಲ್ಲಿ ಸರಣಿ ಕಳ್ಳತನದ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಪತ್ತೆಹಚ್ಚಲು ಶ್ವಾನದಳದ ಮೂಲಕವೂ ಶೋಧ ಕಾರ್ಯ ನಡೆಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಕಳ್ಳತನದ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಜನರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/crime/theft-and-tea-break-cool-thieves-steal-and-drink-tea-in-sirsi-suh-gfghhng"/>
        </item>
        <item>
            <title><![CDATA[ED chargesheet: ಆನ್‌ಲೈನ್‌ ರಮ್ಮಿ ಕರಾಳ ಮುಖ ಬಯಲು;  ₹19984 ಕೋಟಿ ಅಕ್ರಮ ಆದಾಯ! ಗೇಮ್ಸ್‌ಕ್ರಾಫ್ಟ್‌ ಬಾಟ್‌ ಬಳಸಿ ವಂಚನೆ]]></title>
            <link>https://kannada.asianetnews.com/crime/ed-chargesheet-reveals-multi-crore-online-rummy-scam-involving-gameskraft-bots-rav/articleshow-p9wzd0c</link>
            <guid isPermaLink="true">https://kannada.asianetnews.com/crime/ed-chargesheet-reveals-multi-crore-online-rummy-scam-involving-gameskraft-bots-rav/articleshow-p9wzd0c</guid>
            <pubDate>Sun, 26 Jul 2026 07:20:11 +0530</pubDate>
            <description><![CDATA[&lt;p&gt;ಆನ್&zwnj;ಲೈನ್&zwnj; ರಮ್ಮಿ ಗೇಮಿಂಗ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಗೇಮ್ಸ್&zwnj;ಕ್ರಾಫ್ಟ್&zwnj; ಟೆಕ್ನಾಲಜಿಸ್&zwnj; ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ದೋಷಾರೋಪಪಟ್ಟಿ ಸಲ್ಲಿಸಿದೆ. ಈ ಕಂಪನಿಗಳು ಬಾಟ್&zwnj;ಗಳನ್ನು ಬಳಸಿ ಆಟಗಾರರಿಗೆ ಮೋಸ ಮಾಡಿ ಸುಮಾರು ₹19,984 ಕೋಟಿ ಅಕ್ರಮ ಆದಾಯ ಗಳಿಸಿವೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye1q2qzhsm9tzger6wd0wq9,imgname-----------------------2026-07-26t071738.543-1785030478591.jpg" type="image/jpeg" height="390" width="690"/>
            <content:encoded><![CDATA[&lt;p&gt;- ಗೇಮ್ಸ್&zwnj;ಕ್ರಾಫ್ಟ್&zwnj; ಟೆಕ್ನಾಲಜಿಸ್&zwnj;, ಇತರರ ವಿರುದ್ಧ ಇ.ಡಿಯಿಂದ ಚಾರ್ಜ್&zwnj;ಶೀಟ್&zwnj; ಸಲ್ಲಿಕೆ&lt;/p&gt;&lt;p&gt;&amp;nbsp;&lt;strong&gt;ಬೆಂಗಳೂರು (ಮೇ.26): &lt;/strong&gt;ಆನ್&zwnj;ಲೈನ್&zwnj; ರಮ್ಮಿ ರಿಯಲ್ ಮನಿ ಗೇಮಿಂಗ್&zwnj;(Online Rummy Real Money Gaming) ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(PMLA) ಗೇಮ್ಸ್&zwnj;ಕ್ರಾಫ್ಟ್&zwnj; ಟೆಕ್ನಾಲಜಿಸ್&zwnj;, ರಮ್ಮಿ ಟೈಮ್&zwnj; ಟೆಕ್ನಾಲಜಿಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj; ಕಂಪನಿ ಮತ್ತು ಅದರ ಸಂಸ್ಥಾಪಕರು, ನಿರ್ದೇಶಕರು ಹಾಗೂ ಸಂಬಂಧಿತ ವ್ಯಕ್ತಿಗಳ ವಿರುದ್ಧ ಬೆಂಗಳೂರು ವಲಯದ ಜಾರಿ ನಿರ್ದೇಶನಾಲಯ(ಇ.ಡಿ.) ಶನಿವಾರ ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ.&lt;/p&gt;&lt;h2&gt;ಪಿಎಂಎಲ್&zwnj; ಕಾಯ್ದೆಯಡಿ ಪ್ರಕರಣ:&lt;/h2&gt;&lt;p&gt;ಈ ವಂಚನೆ ಸಂಬಂಧ ತೆಲಂಗಾಣ ರಾಜ್ಯದಲ್ಲಿ ದಾಖಲಾದ ಹಲವು ಎಫ್&zwnj;ಐಆರ್&zwnj; ಆಧಾರದ ಮೇಲೆ ಇ.ಡಿ. ಪಿಎಂಎಲ್&zwnj;ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು. ಈ ಆರೋಪಿತ ಕಂಪನಿಗಳು ರಮ್ಮಿ ಕಲ್ಚರ್&zwnj;, ರಮ್ಮಿ ಪ್ರೈಮ್&zwnj;, ಫ್ಲೇಶಿಪ್&zwnj; ರಮ್ಮಿ ಮತ್ತು ರಮ್ಮಿ ಟೈಮ್&zwnj; ಇತ್ಯಾದಿ ಬ್ರಾಂಡ್&zwnj;ಗಳ ಅಡಿಯಲ್ಲಿ ಆನ್&zwnj;ಲೈನ್&zwnj; ರಮ್ಮಿ ಆಟಗಳನ್ನು ಆಯೋಜಿಸುತ್ತಿದ್ದವು. ಪ್ಲಾಟ್&zwnj;ಫಾರ್ಮ್&zwnj; ಆಪರೇಟರ್&zwnj;ಗಳಾಗಿ ಆಟಗಾರರಿಗೆ ಶೇ.10ರಿಂದ ಶೇ.15ರಷ್ಟು ಪ್ಲಾಟ್&zwnj;ಫಾರ್ಮ್&zwnj; ಶುಲ್ಕ ವಿಧಿಸಿವೆ. ಬಳಿಕ ಮೋಸದಿಂದ ಸ್ವಯಂ ಚಾಲಿತ ಬಾಟ್&zwnj;ಗಳನ್ನು(ಎಐ ಆಟಗಾರರು) ಬಳಸಿಕೊಂಡು ರಮ್ಮಿ ಆಟದಲ್ಲಿ ನೈಜ ಆಟಗಾರರನ್ನು ಸೋಲಿಸಿ ಅಕ್ರಮವಾಗಿ ಹಣ ಗಳಿಸಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ.&lt;/p&gt;&lt;h3&gt;19,984 ಕೋಟಿ ರು. ಅಕ್ರಮ ಆದಾಯ:&lt;/h3&gt;&lt;p&gt;ಈ ಕಂಪನಿಗಳು ಆನ್&zwnj;ಲೈನ್&zwnj; ರಮ್ಮಿ ಆಟಕ್ಕೆ ಆಟಗಾರರನ್ನು ಸೆಳೆಯಲು ಬಹುಮಾನ, ಇನ್&zwnj;ಸ್ಟಂಟ್&zwnj; ಕ್ಯಾಶ್&zwnj; ಇತ್ಯಾದಿ ಆಮಿಷಗಳನ್ನು ಒಡ್ಡಿದ್ದವು. ಮೋಸದ ಪ್ರಚೋದನೆಗಳ ಮೂಲಕ ಆಟಗಾರರನ್ನು ವ್ಯಸನಿಗಳಾಗಿ ರೂಪಿಸಿದ್ದವು. ಈ ಕಂಪನಿಗಳು 2017-18ರಿಂದ 2025-26 ರವರೆಗೆ ಕಮಿಷನ್&zwnj; ರೂಪದಲ್ಲಿ ಸುಮಾರು 19,984 ಕೋಟಿ ರು. ಅಕ್ರಮ ಆದಾಯ ಗಳಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಈ ಅಕ್ರಮ ಆದಾಯವನ್ನು ಮ್ಯೂಚುವಲ್&zwnj; ಫಂಡ್&zwnj;, ಬಾಂಡ್&zwnj;ಗಳು, ಈಕ್ವಿಟಿ ಷೇರುಗಳು, ಕುಟುಂಬದ ಟ್ರಸ್ಟ್&zwnj;ಗಳು, ಸಂಬಂಧಿತ ಘಟಕಗಳಲ್ಲಿ ಚರ ಮತ್ತು ಸ್ಥಿರಾಸ್ತಿಗಳ ರೂಪದಲ್ಲಿ ಹೂಡಿಕೆ ಮಾಡಿವೆ. ಈ ಪ್ರಕರಣದಲ್ಲಿ ಈವರೆಗೆ ಈ ಆರೋಪಿತ ಕಂಪನಿಗಳು ಹಾಗೂ ಸಂಬಂಧಿತರಿಂದ ಸುಮಾರು 2,401 ಕೋಟಿ ರು. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಇ.ಡಿ.ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.&lt;/p&gt;&lt;p&gt;ಗೇಮ್ಸ್&zwnj;ಕ್ರಾಫ್ಟ್&zwnj; ಟೆಕ್ನಾಲಜಿಸ್&zwnj;, ರಮ್ಮಿ ಟೈಮ್&zwnj; ಟೆಕ್ನಾಲಜಿಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj; ಕಂಪನಿಗಳ ಸಂಸ್ಥಾಪಕರು/ನಿರ್ದೇಶಕರಾದ ವಿಕಾಸ್&zwnj; ತನೇಜಾ, ಪೃಥ್ವಿ ರಾಜ್&zwnj;ಸಿಂಗ್&zwnj;, ದೀಪಕ್&zwnj; ಸಿಂಗ್&zwnj; ಅಹ್ಲಾವತ್&zwnj; ಮತ್ತು ಸಂಬಂಧಿತ ವ್ಯಕ್ತಿಗಳ ವಿರುದ್ಧ ಇ.ಡಿ. ದೋಷಾರೋಪಪಟ್ಟಿ ಸಲ್ಲಿಸಿದೆ.&lt;/p&gt;&lt;p&gt;ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/ed-chargesheet-reveals-multi-crore-online-rummy-scam-involving-gameskraft-bots-rav/articleshow-p9wzd0c"/>
        </item>
        <item>
            <title><![CDATA[Johnson & Johnson ಪೌಡರ್​ನಿಂದ ಕ್ಯಾನ್ಸರ್​: 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಕಂಪೆನಿ ಒಪ್ಪಿಗೆ]]></title>
            <link>https://kannada.asianetnews.com/health-life/johnson-and-johnson-seeks-to-end-decade-long-talc-litigation-with-52-thousand-cr-settlement-suc/articleshow-pqphw0t</link>
            <guid isPermaLink="true">https://kannada.asianetnews.com/health-life/johnson-and-johnson-seeks-to-end-decade-long-talc-litigation-with-52-thousand-cr-settlement-suc/articleshow-pqphw0t</guid>
            <pubDate>Thu, 30 Jul 2026 13:57:33 +0530</pubDate>
            <description><![CDATA[ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಕ್ಯಾನ್ಸರ್&zwnj;ಗೆ ಕಾರಣವಾಗುತ್ತಿದೆ ಎಂಬ ಆರೋಪದ ಮೇಲೆ, ಅಮೆರಿಕದಲ್ಲಿ ದಾಖಲಾದ ಪ್ರಕರಣಗಳಿಗೆ ಕಂಪನಿಯು ಸುಮಾರು 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಒಪ್ಪಿಕೊಂಡಿದೆ. ಈ ಉತ್ಪನ್ನಗಳಿಂದ ಸಾವಿರಾರು ಮಕ್ಕಳು ಮತ್ತು ವಯಸ್ಕರು ಕ್ಯಾನ್ಸರ್&zwnj;ಗೆ ತುತ್ತಾಗಿದ್ದು, ಕಂಪನಿಯು ತನ್ನ ಉತ್ಪನ್ನಗಳು ಸುರಕ್ಷಿತವೆಂದು ವಾದಿಸುತ್ತಲೇ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kys256d0acrc33f0r0e5e84j,imgname-johnson-and-johnson-powder-1785400039839.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ಬಳಸುವ ಅದೆಷ್ಟೋ ಉತ್ಪನ್ನಗಳಲ್ಲಿ ಕ್ಯಾನ್ಸರ್​ಕಾರಕ ಅಂಶಗಳು ಇರುವುದು ತಿಳಿಯುವುದೇ ಇಲ್ಲ. ಕೋಟಿ ಕೋಟಿ ಹಣವನ್ನು ಸೆಲೆಬ್ರಿಟಿಗಳಿಗೆ ಕೊಟ್ಟು ಅವರಿಂದ ಜಾಹೀರಾತು ಮಾಡಿಸಿಕೊಳ್ಳುವ ಕಂಪೆನಿಗಳಿಗೆ ಮರುಳಾಗಿ, ಅಂಥ ಸೆಲೆಬ್ರಿಟಿಗಳನ್ನೇ ದೇವರು ಎಂದು ನಂಬಿರುವ ಅಭಿಮಾನಿಗಳು, ಅವರನ್ನೇ ಫಾಲೋ ಮಾಡಿ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುವುದು ಇದೆ. ಅಷ್ಟಕ್ಕೂ ಜಾಹೀರಾತಿನ ಸಮಯದಲ್ಲಿಯೂ ಆ ಸೆಲೆಬ್ರಿಟಿಗಳು ಈ ಉತ್ಪನ್ನ ಬಳಸಿರುವುದಿಲ್ಲ. ಜನರಿಗೆ ಮರುಳು ಮಾಡಲು ವಿಷಕಾರಕ ಪಾನೀಯ ಕುಡಿಯುವುದು, ಕ್ರೀಮ್​ ಹಚ್ಚುವುದು ಮಾಡಿದಂತೆ ಆ್ಯಕ್ಟ್​ ಮಾಡುತ್ತಾರೆ ಅಷ್ಟೇ. ಅದರೆ ಅವರನ್ನು ಅನುಸರಿಸಿ, ಜೀವನ ಪರ್ಯಂತ ಇನ್ನಿಲ್ಲದ ಸಮಸ್ಯೆಗಳಿಗೆ ಜನರು ಬಲಿಯಾಗುತ್ತಿದ್ದಾರೆ. ಅದರಲ್ಲಿ ಒಂದು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಪೌಡರ್​. ಅದರಲ್ಲಿಯೂ ಶಿಶುಗಳಿಗೆ ಹಚ್ಚುವ ಬೇಬಿ ಪೌಡರ್​.&lt;/p&gt;&lt;p&gt;ಟಿವಿಗಳಲ್ಲಿ ಸೆಲೆಬ್ರಿಟಿಗಳು ಬಂದು ತಮ್ಮ ಮಕ್ಕಳಿಗೆ ಇದೇ ಪೌಡರ್​ ಹಚ್ಚುವುದಾಗಿ ಹೇಳುತ್ತಿದ್ದಂತೆಯೇ, ಇದರ ಬೇಡಿಕೆ ಇನ್ನಿಲ್ಲದಂತೆ ಏರಿತು. ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಈ ಕಂಪೆನಿಯ ಬೇಬಿ ಪೌಡರ್​ಗೆ ಡಿಮಾಂಡ್​ ಹೆಚ್ಚುತ್ತಲೇ ಹೋಯಿತು. ಇದರಿಂದ ಕ್ಯಾನ್ಸರ್​ಗೆ ತುತ್ತಾದ ಅದೆಷ್ಟೋ ಕಂದಮ್ಮಗಳು ಜೀವ ಕಳೆದುಕೊಂಡರೆ, ಮತ್ತೆ ಹಲವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮಕ್ಕಳು ಮಾತ್ರವಲ್ಲದೇ ಸಹಸ್ರಾರು ದೊಡ್ಡವರಿಗೂ ಕ್ಯಾನ್ಸರ್​ ಬಂದಿರುವುದು ಪತ್ತೆಯಾಗಿದೆ. ಇದಕ್ಕೆಲ್ಲಾ ಕಾರಣ, ಈ ಕಂಪೆನಿಯ ಪೌಡರ್​ ಎನ್ನುವುದು ತಿಳಿಯುತ್ತಿದ್ದಂತೆಯೇ ವಿಶ್ವದ ಹಲವು ಕೋರ್ಟ್​ಗಳಲ್ಲಿ ಈ ಕಂಪೆನಿ ವಿರುದ್ಧ ಕೇಸ್​ ದಾಖಲಾಯಿತು. ಎಲ್ಲರಿಗೂ ಪರಿಹಾರ ಕೊಡಲು ಕಂಪೆನಿ ಒಪ್ಪಿಕೊಂಡಿದೆ.&lt;/p&gt;&lt;h2&gt;&lt;strong&gt;53 ಸಾವಿರ ಕೋಟಿ ಪರಿಹಾರಕ್ಕೆ ಒಪ್ಪಿಗೆ&lt;/strong&gt;&lt;/h2&gt;&lt;p&gt;ಅದೆಷ್ಟು ಪರಿಹಾರ ಗೊತ್ತಾ? ಒಂದೋ ಎರಡೋ ಕೋಟಿಗಳಲ್ಲಿ, ಬದಲಿಗೆ 5.5 ಬಿಲಿಯನ್ ಡಾಲರ್​. ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ ಸುಮಾರು 53 ಸಾವಿರ ಕೋಟಿ ರೂ. ಇದು ಕೇವಲ ಅಮೆರಿಕದಲ್ಲಿ ದಾಖಲಾಗಿರುವ ಕೇಸ್​ಗೆ ಮಾತ್ರ! ಇದರ ಅರ್ಥ ಎಷ್ಟು ಮಂದಿ ಈ ಪೌಡರ್​ನಿಂದ ಬಳಲಿದ್ದಾರೆ ಎನ್ನುವುದು ತಿಳಿಯುತ್ತದೆ. ತಮ್ಮ ಕಂಪೆನಿ ವಿರುದ್ಧ ಕೇಸ್​​ ದಾಖಲು ಮಾಡಿರುವ ಎಲ್ಲರಿಗೂ ಈ ಬೃಹತ್​ ಮೊತ್ತದ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವ ಯತ್ನ ಮಾಡಿರುವ ಕಂಪೆನಿ ಇದರ ಬಗ್ಗೆ ಕೋರ್ಟ್​ಗೆ ವರದಿ ಸಲ್ಲಿಸಿದೆ.&lt;/p&gt;&lt;h3&gt;&lt;strong&gt;ಮತ್ತೆ ಮಾರ್ಕೆಟಿಂಗ್​ ತಂತ್ರ&lt;/strong&gt;&lt;/h3&gt;&lt;p&gt;ಅಷ್ಟಕ್ಕೂ, ಬೇಬಿ ಪೌಡರ್ ಮತ್ತು ಇತರ ಟಾಲ್ಕ್ ಉತ್ಪನ್ನಗಳು ಅಂಡಾಶಯದ ಕ್ಯಾನ್ಸರ್ ಮತ್ತು ಮೆಸೊಥೆಲಿಯೊಮಾಗೆ ಕಾರಣವಾಗುತ್ತವೆ ಎಂಬ ಆರೋಪವಿತ್ತು. ಅಮೆರಿಕದಲ್ಲಿ ಹಳೆಯ ಸಾವಿರಾರು ಪ್ರಕರಣಗಳನ್ನು ಮುಕ್ತಾಯಗೊಳಿಸಲು $5.5 ಬಿಲಿಯನ್ ನೀಡಲು ಕಂಪನಿ ಒಪ್ಪಿದೆ. ಇದರ ಹೊರತಾಗಿಯೂ ತಮ್ಮ ಉತ್ಪನ್ನಗಳು ಸುರಕ್ಷಿತವಾಗಿವೆ ಮತ್ತು ಕ್ಯಾನ್ಸರ್​ಕಾರಕ ಅಂಶಗಳನ್ನು ಹೊಂದಿಲ್ಲ ಎಂದು ಕಂಪೆನಿ ಸ್ಪಷ್ಟಪಡಿಸುತ್ತಲೇ ಬಂದಿದೆ. ಅಂದಹಾಗೆ ಕಂಪೆನಿ ಈಗಾಗಲೇ 2020ರಲ್ಲಿ ಅಮೆರಿಕ ಮತ್ತು Canad&aacute;ದಲ್ಲಿ ಟಾಲ್ಕ್ ಪೌಡರ್ ಮಾರಾಟ ನಿಲ್ಲಿಸಿದ್ದು, ಸ್ಟಾರ್ಚ್ ಆಧರಿತ ಪೌಡರ್&zwnj;ಗೆ ಬದಲಾವಣೆ ಮಾಡಿಕೊಂಡಿದೆ. ಈಗ ಹೇಗಾದರೂ ಮಾಡಿ ಮತ್ತೆ ಮಾರ್ಕೆಟ್​ ಅನ್ನು ಹೆಚ್ಚು ಮಾಡಿಕೊಳ್ಳುವ ಹಂಬಲದಿಂದ ಸೆಲೆಬ್ರಿಟಿಗಳಿಗೆ ನೀಡುವ ಕೋಟಿ ಕೋಟಿ ರೂಪಾಯಿಗಳ ಹಣವನ್ನೂ ಹೆಚ್ಚಿಸಿ, ಅವರಿಂದ ಜಾಹೀರಾತು ಮಾಡಿಸಿಕೊಳ್ಳುವ ಯೋಚನೆ ಇದ್ದರೂ ಇರಬಹುದು. ಇಷ್ಟು ಹಣ ಯಾರಾದರೂ ಕೊಟ್ಟರೆ, ಬಿಡುವವರು ಯಾರು ಹೇಳಿ? ಇಷ್ಟು ವಿಷಯ ಗೊತ್ತಿದ್ದ ಮೇಲೂ ಅವರನ್ನು ಕಣ್ಣುಮುಚ್ಚಿ ಅನುಸರಿಸುವ ಅಭಿಮಾನಿಗಳು ಇದ್ದೇ ಇರುತ್ತಾರಲ್ಲ!&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/health-life/johnson-and-johnson-seeks-to-end-decade-long-talc-litigation-with-52-thousand-cr-settlement-suc/articleshow-pqphw0t"/>
        </item>
        <item>
            <title><![CDATA[ಸಂಬಳ ಕೇವಲ 12 ಸಾವಿರ, ಬ್ಯಾಂಕ್‌ನಲ್ಲಿ ಲಕ್ಷ ಲಕ್ಷ ಹಣ! ಕ್ಲಾಸ್‌ರೂಮ್‌ನಿಂದಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ 3 ಲೇಡಿ ಟೀಚರ್ಸ್ ಅಂದರ್!]]></title>
            <link>https://kannada.asianetnews.com/india-news/lady-teachers-arrested-drug-racket-classroom-12000-salary-bmk/articleshow-sna1l8w</link>
            <guid isPermaLink="true">https://kannada.asianetnews.com/india-news/lady-teachers-arrested-drug-racket-classroom-12000-salary-bmk/articleshow-sna1l8w</guid>
            <pubDate>Wed, 29 Jul 2026 22:56:33 +0530</pubDate>
            <description><![CDATA[&lt;p&gt;ಕೇರಳದ ಕೋಝಿಕ್ಕೋಡ್&zwnj;ನಲ್ಲಿ, ಕಡಿಮೆ ಸಂಬಳ ಪಡೆಯುತ್ತಿದ್ದ ಮೂವರು ಮಹಿಳಾ ಶಿಕ್ಷಕಿಯರು ಎಂಡಿಎಂಎ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyqejvp9m0j9c4bxjw97fmjd,imgname-kerala-teacher-1785345961667.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕರದಲ್ಲಿ ಬೆಳಕಿಗೆ ಬಂದಿರುವ ಎಂಡಿಎಂಎ (MDMA) ಮಾದಕವಸ್ತು ಕಳ್ಳಸಾಗಣೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಬೇಕಾದ ಮೂವರು ಮಹಿಳಾ ಶಿಕ್ಷಕಿಯರೇ ಡ್ರಗ್ಸ್ ಜಾಲದ ಪ್ರಮುಖ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದುದನ್ನು ಪೊಲೀಸರು ರಟ್ಟು ಮಾಡಿದ್ದಾರೆ. ವಡಕರದ ಪೆರಂಬರದಲ್ಲಿ ಸಮಗ್ರ ಶಿಕ್ಷಾ ಕೇರಳ (SSK) ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಈ ಶಿಕ್ಷಕಿಯರು, ಶಾಲೆಯನ್ನೇ ತಮ್ಮ ಅಕ್ರಮ ದಂಧೆಗೆ ಕವರ್ ಆಗಿ ಬಳಸಿಕೊಳ್ಳುತ್ತಿದ್ದರು.&lt;/p&gt;&lt;h2&gt;&lt;strong&gt;ಐದು ಜನರ ಬಂಧನ!&lt;/strong&gt;&lt;/h2&gt;&lt;p&gt;'ಆಪರೇಷನ್ ತೂಫಾನ್' ಯೋಜನೆಯಡಿ ವಡಕರ ಇನ್ಸ್&zwnj;ಪೆಕ್ಟರ್ ಎ.ವಿ. ದಿನೇಶ್ ನೇತೃತ್ವದ ವಿಶೇಷ ತನಿಖಾ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ಜೂನ್ 26 ರಂದು ಜಪ್ತಿಯಾದ ಎಂಡಿಎಂಎ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ ಪೊಲೀಸರು ಜುಲೈ 11 ರಿಂದ 28 ರ ಅವಧಿಯಲ್ಲಿ ದೈಹಿಕ ಶಿಕ್ಷಣ ಬೋಧಕಿ ಕೆ.ಸಿ. ಕೀರ್ತನಾ, ಆಟಿಸಂ ಪೀಡಿತ ಮಕ್ಕಳಿಗೆ ಕಲಿಸುತ್ತಿದ್ದ ಕೆ. ಕಾವ್ಯಾ ಮತ್ತು ತರಬೇತುದಾರೆ ವಿ.ಪಿ. ನೀಷ್ಮಾ ಎಂಬ ಮೂವರು ಶಿಕ್ಷಕಿಯರನ್ನು ಬಂಧಿಸಿದ್ದಾರೆ. ಇವರೊಂದಿಗೆ ಡ್ರಗ್ಸ್ ಹಾಗೂ ಹಣದ ವಹಿವಾಟು ನೋಡಿಕೊಳ್ಳುತ್ತಿದ್ದ ವಿತರಣಾ ಕೆಲಸಗಾರ ಜಿಜಿಲ್ ಕುರಿಯಾಕೋಸ್ ಎಂಬಾತನನ್ನೂ ಜೈಲಿಗಟ್ಟಲಾಗಿದೆ.&lt;/p&gt;&lt;h3&gt;&lt;strong&gt;ಖಾತೆಯಲ್ಲಿತ್ತು ಲಕ್ಷಾಂತರ ಹಣ!&lt;/strong&gt;&lt;/h3&gt;&lt;p&gt;ಮಾಸಿಕ ಕೇವಲ 12,000 ದಿಂದ 13,000 ರೂಪಾಯಿ ವೇತನ ಪಡೆಯುತ್ತಿದ್ದ ಈ ತಾತ್ಕಾಲಿಕ ಶಿಕ್ಷಕಿಯರ ಖಾತೆಗಳಲ್ಲಿ ಲಕ್ಷಾಂತರ ರೂಪಾಯಿ ಬ್ಯಾಲೆನ್ಸ್ ಇರುವುದನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಆರಂಭದಲ್ಲಿ ಸ್ವತಃ ಡ್ರಗ್ಸ್ ಬಳಸಲು ಪ್ರಾರಂಭಿಸಿದ ಈ ಶಿಕ್ಷಕಿಯರು, ನಂತರ ಹಣದ ಆಸೆಗೆ ಬಿದ್ದು ಏಜೆಂಟ್&zwnj;ಗಳಾಗಿ ಬದಲಾಗಿದ್ದರು. ಸಿಕ್ಕ ಅಪಾರ ಕಮಿಷನ್ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಇವರಲ್ಲಿ ಕೀರ್ತನಾ, ಶಾಲೆಯಲ್ಲಿ ಡ್ರಗ್ಸ್ ವಿರೋಧಿ ಅಭಿಯಾನ ಹಾಗೂ ಜುಂಬಾ ತರಗತಿಗಳನ್ನು ಮುನ್ನಡೆಸುತ್ತಾ ಜಾಣತನದಿಂದ ಸಮಾಜದ ಕಣ್ಣಿಗೆ ಮಣ್ಣೆರಚುತ್ತಿದ್ದಳು.&lt;/p&gt;&lt;h3&gt;&lt;strong&gt;ಪೊಲೀಸರು ಹೇಳಿದ್ದೇನು?&lt;/strong&gt;&lt;/h3&gt;&lt;p&gt;ಅದೃಷ್ಟವಶಾತ್ ಈ ಜಾಲದಲ್ಲಿ ಶಾಲಾ ಮಕ್ಕಳು ಭಾಗಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಪೊಲೀಸರು, ಆರೋಪಿಗಳು ಕಾಲೇಜು ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ತನಿಖೆಯ ಪ್ರಕಾರ, ಬೆಂಗಳೂರಿನಿಂದ ಕೋಝಿಕ್ಕೋಡ್&zwnj;ಗೆ ಎಂಡಿಎಂಎ ತರಲಾಗುತ್ತಿತ್ತು. ಇನ್&zwnj;ಸ್ಟಾಗ್ರಾಮ್, ಗಲ್ಫ್ ದೇಶಗಳ ಫೋನ್ ಸಂಖ್ಯೆಗಳು ಹಾಗೂ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ಪಾವತಿ ಪಡೆದು 'ಡೆಡ್ ಡ್ರಾಪ್' ವಿಧಾನದಲ್ಲಿ ಕವರ್ ಸ್ಥಳಗಳಲ್ಲಿ ಡ್ರಗ್ಸ್ ಇಟ್ಟು ವಿತರಿಸಲಾಗುತ್ತಿತ್ತು. ಈ ಅಕ್ರಮಕ್ಕೆ ಜುಂಬಾ ತರಗತಿ ಹಾಗೂ ಬನ್ ಮಾರಾಟವನ್ನು ನೆಪವಾಗಿ ಬಳಸಿಕೊಳ್ಳಲಾಗಿತ್ತು.&lt;/p&gt;&lt;h3&gt;&lt;strong&gt;ಕಟ್ಟುನಿಟ್ಟಿನ ಕಣ್ಣಿಟ್ಟ ಇಲಾಖೆ!&lt;/strong&gt;&lt;/h3&gt;&lt;p&gt;ಈ ಕಪ್ಪು ದಂಧೆ ಬಹಿರಂಗವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆಯು ಕೀರ್ತನಾ ಮತ್ತು ಕಾವ್ಯಾ ಅವರನ್ನು ಕೆಲಸದಿಂದ ವಜಾಗೊಳಿಸಿದ್ದು, ನೀಷ್ಮಾ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಮಗ್ರ ಶಿಕ್ಷಾ ಕೇರಳ ಸಂಸ್ಥೆಯು ರಾಜ್ಯಾದ್ಯಂತ ತುರ್ತು ಸುತ್ತೋಲೆ ಹೊರಡಿಸಿದ್ದು, ವಿಶೇಷ ಶಿಕ್ಷಕರ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ಕಣ್ಣಿಡಲು ಎಲ್ಲಾ ಬಿಆರ್&zwnj;ಸಿ ಸಂಯೋಜಕರಿಗೆ ನಿರ್ದೇಶನ ನೀಡಿದೆ.&lt;/p&gt;]]></content:encoded>
            <category>crime</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/lady-teachers-arrested-drug-racket-classroom-12000-salary-bmk/articleshow-sna1l8w"/>
        </item>
        <item>
            <title><![CDATA[ಬುಕ್​ ಮಾಡಿದ್ದೇ ಒಂದು ಆಟೊ, ಬಂದಿದ್ದೇ ಇನ್ನೊಂದು: ನಂಬರ್​ ಚೇಂಜ್​ ಇದ್ರೆ ಹತ್ತಲೇಬೇಡಿ- ಕಮಿಷನರ್‌ ಖಡಕ್‌ ಎಚ್ಚರಿಕೆ]]></title>
            <link>https://kannada.asianetnews.com/crime/if-number-plate-of-booked-auto-and-auto-which-comes-to-you-is-dangerous-says-commissioner-suc/articleshow-srha3vz</link>
            <guid isPermaLink="true">https://kannada.asianetnews.com/crime/if-number-plate-of-booked-auto-and-auto-which-comes-to-you-is-dangerous-says-commissioner-suc/articleshow-srha3vz</guid>
            <pubDate>Mon, 27 Jul 2026 19:47:28 +0530</pubDate>
            <description><![CDATA[ಆ್ಯಪ್&zwnj;ನಲ್ಲಿ ಬುಕ್&zwnj; ಮಾಡಿದ ಆಟೋ ಅಥವಾ ಕ್ಯಾಬ್&zwnj;ನ ನೋಂದಣಿ ಸಂಖ್ಯೆಗೂ, ನಿಮ್ಮನ್ನು ಕರೆದೊಯ್ಯಲು ಬರುವ ವಾಹನದ ಸಂಖ್ಯೆಗೂ ವ್ಯತ್ಯಾಸವಿದ್ದರೆ ಅಂತಹ ವಾಹನವನ್ನು ಹತ್ತಲೇಬಾರದು. ಇಂತಹ ಸಂದರ್ಭದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ, ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ ಮತ್ತು ನಿಮ್ಮ ಸುರಕ್ಷತೆಗೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಬೆಂಗಳೂರು ಪೊಲೀಸರು ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyhyzgq2meq43ty3q9d2h5fk,imgname-auto-number-plate-1785161827042.jpg" type="image/jpeg" height="390" width="690"/>
            <content:encoded><![CDATA[&lt;p&gt;ಇದೀಗ ಮನೆಯಿಂದಲೇ ಕುಳಿತು ಆಟೋ, ಕ್ಯಾಬ್&zwnj;, ಕ್ಯಾಬ್&zwnj; ಬುಕ್&zwnj; ಮಾಡುವ ಪರಿಪಾಠ ಹೆಚ್ಚಾಗಿದೆ. ಎಲ್ಲೆಲ್ಲೋ ಇವುಗಳನ್ನು ಹುಡುಕಿ ಹೋಗುವ ಬದಲು, ಆಟೋ, ಕ್ಯಾಬ್&zwnj; ಡ್ರೈವರ್&zwnj;ಗಳು ಕೇಳುವ ಡಬಲ್&zwnj; ಚಾರ್ಜ್&zwnj;ಗಳಿಂದ ಬೇಸತ್ತು ಆಟೋ, ಕ್ಯಾಬ್&zwnj; ಬುಕ್&zwnj; ಮಾಡುವವರ ಸಂಖ್ಯೆ ವಿಪರೀತ ಹೆಚ್ಚುತ್ತಿದೆ. ಹೀಗೆ ಆಟೋ, ಕ್ಯಾಬ್&zwnj; ಬುಕ್&zwnj; ಮಾಡಿದವರ ಪೈಕಿ ನೀವೂ ಒಬ್ಬರಾಗಿದ್ದರೆ, ನಿಮಗಿದು ಸಾಕಷ್ಟು ಬಾರಿ ಗಮನಕ್ಕೆ ಬಂದಿರಬಹುದು, ನೀವು ಬುಕ್&zwnj; ಮಾಡಿದಾಗ ಇರುವ ಆಟೋ, ಕ್ಯಾಬ್&zwnj; ಸಂಖ್ಯೆನೇ ಬೇರೆ, ನಿಮ್ಮ ಮನೆ ಬಾಗಿಲಿಗೆ ಬರುವ ಆಟೋ, ಕ್ಯಾಬ್&zwnj; ಸಂಖ್ಯೆನೇ ಬೇರೆ. ಆಗ ಆಟೋ, ಕ್ಯಾಬ್&zwnj; ಡ್ರೈವರ್&zwnj;ರನ್ನು ಕೇಳಿದ್ರೆ ಆಟೋ, ಕ್ಯಾಬ್&zwnj; ಚೇಂಜ್&zwnj; ಮಾಡಿದೆ, ಅದು ಹಾಳಾಯ್ತು, ಹಾಗೆ... ಹೀಗೆ ಏನೇನೋ ನೆಪ ಹೇಳುವುದು ಇದೆ. ಹೆಚ್ಚು ಹೆಚ್ಚು ಆಟೋ, ಕ್ಯಾಬ್&zwnj;ದಲ್ಲಿ ಹೋಗುವವರಿಗೆ ಇದರ ಅನುಭವ ಆಗೇ ಇರುತ್ತದೆ.&lt;/p&gt;&lt;h2&gt;&lt;strong&gt;ನೀವೇ ಜವಾಬ್ದಾರರಾಗ್ತೀರಿ ಹುಷಾರ್&zwnj;&lt;/strong&gt;&lt;/h2&gt;&lt;p&gt;ಆದರೆ, ಈ ರೀತಿ ಬುಕ್&zwnj; ಮಾಡಿದ ಆಟೋ, ಕ್ಯಾಬ್&zwnj;, ಕ್ಯಾಬ್&zwnj; ನಂಬರ್&zwnj;ಗೂ, ನಿಮ್ಮ ಮನೆಗೂ ಬರುವ ಆಟೋ, ಕ್ಯಾಬ್&zwnj;, ಕ್ಯಾಬ್&zwnj; ನಂಬರ್&zwnj;ನಲ್ಲಿ ವ್ಯತ್ಯಾಸ ಇದ್ದರೆ, ಖಂಡಿತ ಅದನ್ನು ಹತ್ತಲೇ ಬೇಡಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಹೀಗೇನಾದರೂ ನೀವು ಹತ್ತಿ, ಏನಾದರೂ ಹೆಚ್ಚೂ ಕಮ್ಮಿ ಆದ್ರೆ ಯಾರೂ ಜವಾಬ್ದಾರರಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಒಂದು ವೇಳೆ ಹೀಗೆ ನಂಬರ್&zwnj; ಬದಲಾಗಿದ್ದರೆ, ತಕ್ಷಣವೇ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿರುವ ಅವರು, ಮಾರ್ಗಸೂಚಿಗಳ ಉಲ್ಲಂಘನೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಓಲಾ, ಉಬರ್, ರ್&zwj;ಯಾಪಿಡೋ ಹಾಗೂ ನಮ್ಮ ಯಾತ್ರೆಯಂತಹ ರೈಡ್&zwnj; ಆ್ಯಪ್&zwnj;ಗಳಲ್ಲಿ ಆಟೋ, ಕ್ಯಾಬ್&zwnj; ಅಥವಾ ಟ್ಯಾಕ್ಸಿ ಬುಕ್ ಮಾಡಿದಾಗ, ಆ್ಯಪ್&zwnj;ನಲ್ಲಿ ಕಾಣಿಸುವ ನೋಂದಣಿ ಸಂಖ್ಯೆಗಿಂತ ಸಂಪೂರ್ಣ ಭಿನ್ನವಾದ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಲು ಬರುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ಸಮಸ್ಯೆ ಏನು?&lt;/strong&gt;&lt;/h3&gt;&lt;p&gt;ನೀವು APP ಮೂಲಕ ದಾಖಲಾಗಿರದ ವಾಹನವನ್ನು ಹತ್ತಿದರೆ, ಆ್ಯಪ್&zwnj;ನ ಜಿಪಿಎಸ್ ಟ್ರ್ಯಾಕಿಂಗ್ ಮತ್ತು ತುರ್ತು ಎಸ್&zwnj;ಒಎಸ್ ವೈಶಿಷ್ಟ್ಯಗಳು ಕೆಲಸ ಮಾಡುವುದಿಲ್ಲ. ಜೊತೆಗೆ, ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ, ಈ ವಾಹನ ನಮ್ಮ ಸಿಸ್ಟಮ್ ಮೂಲಕ ಬುಕ್ ಆಗಿಲ್ಲ ಎಂದು ಹೇಳಿ ಆ್ಯಪ್ ಕಂಪನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು. ಅದರಲ್ಲೂ, ಸಿಂಗಲ್ ನಂಬರ್ ಪ್ಲೇಟ್ ದುರುಪಯೋಗಪಡಿಸಿಕೊಳ್ಳುವ ಅಥವಾ ಸೂಕ್ತ ಪರವಾನಗಿ ಮತ್ತು ಪೊಲೀಸ್ ವೆರಿಫಿಕೇಶನ್ ಇಲ್ಲದ ಚಾಲಕರು ಇಂತಹ ಕೃತ್ಯ ಎಸಗುತ್ತಾರೆ ಎಂದು ವಾರ್ನ್ ಮಾಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/if-number-plate-of-booked-auto-and-auto-which-comes-to-you-is-dangerous-says-commissioner-suc/articleshow-srha3vz"/>
        </item>
        <item>
            <title><![CDATA[ಕರುಣೆ ಇಲ್ಲದ ಅಮ್ಮ.. ಏಳು ತಿಂಗಳ ಹಸುಗೂಸಿನ ಎದುರೇ ಪ್ರಾಣಬಿಟ್ಟಳು..!]]></title>
            <link>https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq</link>
            <guid isPermaLink="true">https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq</guid>
            <pubDate>Sun, 26 Jul 2026 12:10:42 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ಮಾನಸಿಕ ಹಿಂಸೆಯಿಂದ ನೊಂದ 24 ವರ್ಷದ ತಾಯಿಯೊಬ್ಬಳು ತನ್ನ ಏಳು ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ನೋಡುತ್ತಿದ್ದಂತೆಯೇ ವಿಡಿಯೋ ಕಾಲ್&zwnj;ನಲ್ಲೇ ಬದುಕು ಅಂತ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyejdhe1g801ajm6s6vaz9c4,imgname-mother-died-1785047991745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಏಳು ತಿಂಗಳ ಹಸಿಗೂಸನ್ನು ಬಿಟ್ಟು ತಾಯಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ಅಕ್ರಮ ಸಂಬಂಧ ಹಾಗೂ ಆತ ನೀಡಿದ ಮಾನಸಿಕ ಹಿಂಸೆಗೆ ಬೇಸತ್ತು ಸಾನಿಕ ಗೌಡ (24) ಎಂಬುವವರು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಸಾನಿಕ ಗೌಡಗೆ ಚಿಕ್ಕಮಗಳೂರು ಮೂಲದ ಶರಣ್ ಗೌಡ ಎಂಬುವವರ ಜೊತೆ ಒಂದು ವರ್ಷ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಇತ್ತೀಚೆಗಷ್ಟೇ ಸಾನಿಕ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನಕ್ಕಾಗಿ ರಾಯಸಂದ್ರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದ ಸಾನಿಕ, ಅಲ್ಲಿಯೇ ಜೀವನ ಅಂತ್ಯಗೊಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಪತಿಯ ಕ್ರೌರ್ಯಕ್ಕೆ ಬಲಿಯಾದ ಸಾನಿಕ?&lt;/strong&gt;&lt;/h3&gt;&lt;p&gt;ಆರೋಪಿ ಪತಿ ಶರಣ್ ಗೌಡ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅಮಾನವೀಯತೆಯ ಪರಮಾವಧಿ ಎಂಬಂತೆ, ಶರಣ್ ಗೌಡ ತಾನು ಪ್ರಿಯತಮೆ ಜೊತೆ ಮಾತನಾಡುತ್ತಿರುವ ವಿಡಿಯೋ ಮತ್ತು ಆಡಿಯೋ ಕ್ಲಿಪ್&zwnj;ಗಳನ್ನು ಪತ್ನಿ ಸಾನಿಕಳಿಗೆ ಕಳುಹಿಸಿ ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಇದನ್ನು ಕಂಡು ತೀವ್ರ ಮನನೊಂದ ಸಾನಿಕ, ಪತಿಗೆ ವಿಡಿಯೋ ಕಾಲ್ ಮಾಡಿ ಆತ ನೋಡುತ್ತಿರುವಂತೆಯೇ ನೇಣಿಗೆ ಶರಣಾಗಿದ್ದಾರೆ.&lt;/p&gt;&lt;p&gt;ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಸಾನಿಕ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಸಣ್ಣ ಮಗು ಹಸಿವಿನಿಂದ ಅಳುತ್ತಿದ್ದರೂ ಗಮನಿಸದಷ್ಟು ನೋವಿನಲ್ಲಿದ್ದ ತಾಯಿ, ಕೊನೆಗೆ ಸಾವಿನ ಹಾದಿ ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪರಪ್ಪನ ಅಗ್ರಹಾರ ಪೊಲೀಸರು ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸಾನಿಕ ಅವರ ಪೋಷಕರು ಪತಿ ಶರಣ್ ಗೌಡ ವಿರುದ್ಧ ಕಿರುಕುಳ ಹಾಗೂ ಆತ್ಮ*ತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ದೂರು ನೀಡಿದ್ದಾರೆ. ಮಗುವಿನ ಭವಿಷ್ಯವನ್ನು ಕಿತ್ತುಕೊಂಡ ಪತಿಯ ಅಕ್ರಮ ಸಂಬಂಧದ ವಿಡಿಯೋಗಳೇ ಈಗ ಈ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ..&lt;/p&gt;]]></content:encoded>
            <category>crime</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq"/>
        </item>
        <item>
            <title><![CDATA[Lift Accident: ಲಿಫ್ಟ್  ದುರ್ಘಟನೆಗೆ ಯಾರು ಹೊಣೆ ? ಮೂವರ ಹೆಸರು ಸೂಚಿಸಿದ ಸುಪ್ರೀಂ ಕೋರ್ಟ್]]></title>
            <link>https://kannada.asianetnews.com/crime/lift-accident-who-is-responsible-supreme-court-identifies-three-parties/articleshow-wbe35l7</link>
            <guid isPermaLink="true">https://kannada.asianetnews.com/crime/lift-accident-who-is-responsible-supreme-court-identifies-three-parties/articleshow-wbe35l7</guid>
            <pubDate>Thu, 30 Jul 2026 13:47:39 +0530</pubDate>
            <description><![CDATA[&lt;p&gt;Supreme Court verdict : ಲಿಫ್ಟ್&zwnj; ಅಪಘಾತವಾದ್ರೆ ಯಾರು ಹೊಣೆ? ಯಾರು ಪರಿಹಾರ ನೀಡ್ಬೇಕು? &amp;nbsp;ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್&zwnj; ಮೂವರ ಹೆಸರನ್ನು ಸೂಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys1ehz9yvtccapc7djyzbsr,imgname-lift-accident-1785399298024.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಿಫ್ಟ್&zwnj;ನಲ್ಲಿ ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ಲಿಫ್ಟ್ನಲ್ಲಿ ಸಂಭವಿಸುವ ಯಾವುದೇ ಅಪಘಾತಕ್ಕೆ ಲಿಫ್ಟ್ ತಯಾರಿಸಿದ ಕಂಪನಿ, ಅದರ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಹಾಗೂ ಕಟ್ಟಡದ ಮಾಲೀಕರು ಅಥವಾ ಆಡಳಿತ ಮಂಡಳಿ ಈ ಮೂವರೂ ಜಂಟಿಯಾಗಿ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.&lt;/p&gt;&lt;h2&gt;ಏನಿದು ಪ್ರಕರಣ?&amp;nbsp;&lt;/h2&gt;&lt;p&gt;ಈ ಪ್ರಕರಣ 2003ರಲ್ಲಿ ನವದೆಹಲಿಯಲ್ಲಿರುವ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಪ್ರಧಾನ ಕಚೇರಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದೆ. ಕಟ್ಟಡದ ಲಿಫ್ಟ್ನಲ್ಲಿ 13 ಅಧಿಕಾರಿಗಳು ಪ್ರಯಾಣಿಸುತ್ತಿದ್ದಾಗ, ಲಿಫ್ಟ್ ಆರನೇ ಮತ್ತು ಏಳನೇ ಮಹಡಿಯ ಮಧ್ಯೆ ಏಕಾಏಕಿ ನಿಂತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅಧಿಕಾರಿ ವಿಪಿನ್ ಹಂಡಾ ಅವರು ಲಿಫ್ಟ್ನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಲಿಫ್ಟ್ ಹಠಾತ್ ಕೆಳಕ್ಕೆ ಚಲಿಸಿದ್ದರಿಂದ ಅವರು ಗಂಭೀರವಾಗಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.&lt;/p&gt;&lt;h3&gt;ಕಂಪನಿಯ ವಾದವೇನು?&amp;nbsp;&lt;/h3&gt;&lt;p&gt;ಲಿಫ್ಟ್ ತಯಾರಿಸಿದ ಕಂಪನಿ, ಈ ದುರ್ಘಟನೆ ರಕ್ಷಣಾ ಕಾರ್ಯಾಚರಣೆಯ ವೇಳೆ ನಡೆದ ಮಾನವೀಯ ತಪ್ಪಿನಿಂದ ಸಂಭವಿಸಿದೆ ಎಂದು ವಾದಿಸಿತು. ಅಲ್ಲದೆ ಕಟ್ಟಡದಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತ ಇರುವ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿತು.&lt;/p&gt;&lt;p&gt;&lt;strong&gt;ಸುಪ್ರೀಂ ಕೋರ್ಟ್ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಲಿಫ್ಟ್ನಲ್ಲಿ ಬಹಳ ದಿನಗಳಿಂದ ತಾಂತ್ರಿಕ ದೋಷಗಳಿದ್ದರೂ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದು ಸಂಬಂಧಪಟ್ಟ ಎಲ್ಲಾ ಪಕ್ಷಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅದರಂತೆ ಪರಿಹಾರದ ಶೇಕಡಾ 70ರಷ್ಟು ಮೊತ್ತವನ್ನು ಲಿಫ್ಟ್ ಕಂಪನಿ, ಶೇಕಡಾ 25 ರಷ್ಟು ಮೊತ್ತವನ್ನು ನಿರ್ವಹಣಾ ಸಂಸ್ಥೆ (MES) ಹಾಗೂ ಉಳಿದ ಶೇಕಡಾ 5 ರಷ್ಟು ಮೊತ್ತವನ್ನು RAW ಭರಿಸಬೇಕು ಎಂದು ಆದೇಶಿಸಿದೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/lift-accident-who-is-responsible-supreme-court-identifies-three-parties/articleshow-wbe35l7"/>
        </item>
        <item>
            <title><![CDATA[ಅತ್ತೆ ವಶೀಕರಣ:  ಗಂಡ ಕಳ್ಸಿದ ವಿಡಿಯೋ ನೋಡಿ ಟೀಗೆ ಇದನ್ನು ಹಾಕ್ತಿದ್ಲು ಸೊಸೆ - ಈಗ ತಿರುಗಿ ಬಿದ್ದ ಪತಿ]]></title>
            <link>https://kannada.asianetnews.com/crime/what-did-the-daughter-in-law-mix-in-the-tea-to-keep-her-mother-in-law-under-control/articleshow-ynnw9o3</link>
            <guid isPermaLink="true">https://kannada.asianetnews.com/crime/what-did-the-daughter-in-law-mix-in-the-tea-to-keep-her-mother-in-law-under-control/articleshow-ynnw9o3</guid>
            <pubDate>Wed, 29 Jul 2026 13:42:43 +0530</pubDate>
            <description><![CDATA[&lt;p&gt;Viral News : ಅತ್ತೆ ಮತ್ತು ಗಂಡ ಕುಡಿಯುವ ಟೀಗೆ ವಿಷ ಹಾಕ್ತಿದ್ದ ಸೊಸೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್&zwnj; ಸಿಕ್ಕಿದೆ. ಸೊಸೆ ಟೀಗೆ ವಿಷ ಹಾಕೋ ಬದಲು ಏನು ಹಾಕ್ತಿದ್ಲು ಎಂಬ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyperbd9ewctsp828kzcn8kt,imgname-daughter-in-law-1785312587177.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಹಾದಲ್ಲಿ ರಾಸಾಯನಿಕ ಬೆರೆಸಿ ಗಂಡ- ಅತ್ತೆ ಮಾವನಿಗೆ ನೀಡ್ತಿದ್ದಾರೆ ಎಂಬ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್&zwnj; ಸಿಕ್ಕಿದೆ. ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಜ್ಯೋತಿ ಗುಪ್ತಾ ಇದ್ರ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ.&lt;/p&gt;&lt;h2&gt;ಟೀಗೆ ಹಾಕಿದ್ದೇನು?&amp;nbsp;&lt;/h2&gt;&lt;p&gt;ಜ್ಯೋತಿ ಗುಪ್ತಾ, ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ನಾನು ಚಹಾದಲ್ಲಿ ಯಾವುದೇ ವಿಷಕಾರಿ ರಾಸಾಯನಿಕ ಹಾಕಿಲ್ಲ. ಕೇವಲ ಅರಿಶಿನ ಮತ್ತು ಲವಂಗವನ್ನು ಮಾತ್ರ ಸೇರಿಸಿದ್ದೆ ಎಂದಿದ್ದಾರೆ, ಇದಕ್ಕೆ ಕಾರಣ ಏನು ಎಂಬುದನ್ನೂ ಜ್ಯೋತಿ ಗುಪ್ತಾ ತಿಳಿಸಿದ್ದಾರೆ.&lt;/p&gt;&lt;p&gt;ಅತ್ತೆ ಒಲಿಸಿಕೊಳ್ಳಲು ಲವಂಗ ! ಜ್ಯೋತಿ ಪತಿ ಹಿಮಾಂಶು ಗುಪ್ತಾ, ಪತ್ನಿಗೆ ಅತ್ತೆ ಒಲಿಸಿಕೊಳ್ಳೋದು ಹೇಗೆ ಎನ್ನುವ ವಿಡಿಯೋ ಕಳುಹಿಸಿದ್ದರಂತೆ. ಅದನ್ನು ನೋಡಿಯೇ ಜ್ಯೋತಿ ಟೀಗೆ ಅರಿಶಿನ ಮತ್ತು ಲವಂಗ ಹಾಕ್ತಿದ್ದರಂತೆ. ಅವರ ವಿಡಿಯೋ ನೋಡಿ ನಾನು ಪ್ರತಿ ದಿನ ಟೀಗೆ ಇದನ್ನು ಹಾಕ್ತಿದ್ದೆ ಎಂದು ಜ್ಯೋತಿ ಹೇಳಿದ್ದಾರೆ.&lt;/p&gt;&lt;p&gt;ಇದೀಗ ಅದೇ ವಿಡಿಯೋವನ್ನು ಬಳಸಿಕೊಂಡು ತನ್ನನ್ನು ಸಂಕಷ್ಟಕ್ಕೆ ಸಿಲುಕಿಸಲು ಪತಿ ಯತ್ನಿಸುತ್ತಿದ್ದಾನೆ ಎಂದು ಜ್ಯೋತಿ ಆರೋಪ ಮಾಡಿದ್ದಾರೆ. ಈ ಘಟನೆ ನಡೆದದ್ದು ಸುಮಾರು ಒಂದೂವರೆ ವರ್ಷದ ಹಿಂದೆ. ವಿಡಿಯೋ ಅಷ್ಟು ಮುಖ್ಯವಾಗಿದ್ದರೆ ಆಗಲೇ ಪೊಲೀಸರಿಗೆ ಅಥವಾ ವಿಚ್ಛೇದನ ಪ್ರಕರಣದಲ್ಲಿ ಅವರು ಸಲ್ಲಿಸಬಹುದಿತ್ತು. ಆದ್ರೆ ಅದನ್ನು ಪೊಲೀಸರಿಗೆ ನೀಡಿಲ್ಲ. ಈಗ ವಿಡಿಯೋ ವೈರಲ್&zwnj; ಮಾಡಿದ್ದಾರೆ ಅನ್ನೋದು ಜ್ಯೋತಿ ಆರೋಪ.&lt;/p&gt;&lt;h3&gt;ಪತಿ ಮೇಲೆ ಆರೋಪ&lt;/h3&gt;&lt;p&gt;ಜ್ಯೋತಿ, ಪತಿ ಮೇಲೆ ಗಂಭಿರ ಆರೋಪ ಕೂಡ ಮಾಡಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಬೆಂಗಳೂರಿನ ಯುವತಿಯೊಬ್ಬಳೊಂದಿಗೆ ಪ್ರೇಮ ಸಂಬಂಧವಿತ್ತು ಅಂತ ತಿಳಿಸಿದ್ದರಂತೆ. ಆಕೆಯನ್ನೇ ಮದುವೆಯಾಗಬೇಕೆಂಬ ಆಸೆ ಇತ್ತು ಅಂತ ಹೇಳಿದ್ದನಂತೆ. ಅದಕ್ಕಾಗಿಯೇ ನನ್ನನ್ನು ದೂರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಜ್ಯೋತಿ ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಇತ್ತ ಹಿಮಾಂಶು ಗುಪ್ತಾ ಮಾತ್ರ, ಪತ್ನಿ ಚಹಾದಲ್ಲಿ ರಾಸಾಯನಿಕ ಬೆರೆಸುತ್ತಿದ್ದಾಳೆ ಎಂಬ ಅನುಮಾನದಿಂದ ಮನೆಯೊಳಗೆ ಹಿಡನ್ ಕ್ಯಾಮೆರಾ ಅಳವಡಿಸಿದ್ದೆ ಎಂದು ಹೇಳಿದ್ದಾರೆ. ವಿಡಿಯೋದಲ್ಲಿ ಪತ್ನಿ ಚಹಾದಲ್ಲಿ ಏನೋ ಬೆರೆಸುತ್ತಿರುವ ದೃಶ್ಯ ಸೆರೆಯಾಗಿದೆ ಎಂದು ಅವರು ಆರೋಪ ಮಾಡಿದ್ದಾರೆ.&lt;/p&gt;&lt;p&gt;ಈ ಪ್ರಕರಣದ ಕುರಿತು ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಚಹಾದಲ್ಲಿ ನಿಜವಾಗಿಯೂ ರಾಸಾಯನಿಕ ಇತ್ತೇ? ಅಥವಾ ಕೇವಲ ಅರಿಶಿನ ಮತ್ತು ಲವಂಗವೇ? ಎಂಬುದು ವೈಜ್ಞಾನಿಕ ಪರೀಕ್ಷೆಯ ನಂತರವೇ ಸ್ಪಷ್ಟವಾಗಲಿದೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/what-did-the-daughter-in-law-mix-in-the-tea-to-keep-her-mother-in-law-under-control/articleshow-ynnw9o3"/>
        </item>
        <item>
            <title><![CDATA[Buried Alive for a Stunt: ಗೋಣಿಚೀಲದಲ್ಲಿ ಕಟ್ಟಿ ಮಣ್ಣು ಮುಚ್ಚಿದ್ರು - ಮೂರನೇ ದಿನ ಸಮಾಧಿ ಅಗೆದಾಗ ಏನಾಯ್ತು?]]></title>
            <link>https://kannada.asianetnews.com/crime/buried-alive-for-a-stunt-man-found-dead-after-three-days/articleshow-zat6t35</link>
            <guid isPermaLink="true">https://kannada.asianetnews.com/crime/buried-alive-for-a-stunt-man-found-dead-after-three-days/articleshow-zat6t35</guid>
            <pubDate>Wed, 29 Jul 2026 11:17:52 +0530</pubDate>
            <description><![CDATA[&lt;p&gt;ಸ್ಟಂಟ್ ಮಿತಿ ಮೀರಿದ್ರೆ ಅಪಾಯ ಗ್ಯಾರಂಟಿ. ಸ್ಟಂಟ್ ಮಾಡುವ ಮುನ್ನ ಮುನ್ನೆಚ್ಚರಿಕೆ ಅಗತ್ಯವಿದೆ. ಇಲ್ಲೊಬ್ಬ ವ್ಯಕ್ತಿ ಗೋಣಿ ಚೀಲದಲ್ಲಿ ಬಂಧಿ ಮಾಡ್ಕೊಂಡು ಸಮಾಧಿ ಸೇರಿದ್ದ. ಆಮೇಲೇನಾಯ್ತು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp6m8ddnrhm2eekx3atkhd7,imgname-buried-alive-1785304064429.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಿಯಾಣದ ನುಹ್ ನಲ್ಲಿ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಸ್ಟಂಟ್ ಹೆಸರಿನಲ್ಲಿ ಮೂರ್ಖತನಕ್ಕೆ ಕೈ ಹಾಕಿ ವ್ಯಕ್ತಿ ಸಾವನ್ನಪ್ಪಿದ್ದಾನೆ. 27 ವರ್ಷದ ವ್ಯಕ್ತಿ ವಿಚಿತ್ರ ಸರ್ಕಸ್ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಅದೇ ಅವನ ಸಾವಿಗೆ ಕಾರಣವಾಗಿದೆ.&lt;/p&gt;&lt;h2&gt;ಜೀವಂತ ಸಮಾಧಿ&lt;/h2&gt;&lt;p&gt;ಸ್ಟಂಟ್ ಹೆಸರಿನಲ್ಲಿ ಮೊದಲು ಗೋಣಿ ಚೀಲದಲ್ಲಿ ಈತನನ್ನು ತುಂಬಲಾಗಿದೆ. ನಂತ್ರ ಸಮಾಧಿಗೆ ಹಾಕಿ ಮಣ್ಣು ಮುಚ್ಚಲಾಗಿದೆ. ಇನ್ನು ಮೂರು ದಿನಗಳಲ್ಲಿ ಆತ ಜೀವಂತವಾಗಿ ಹೊರ ಬರ್ತಾನೆ ಅಂತ ಪ್ರಚಾರ ಮಾಡಲಾಗಿದೆ. ಆದ್ರೆ ಮೂರು ದಿನಗಳ ನಂತ್ರ ಅಲ್ಲಿ ಆಗಿದ್ದೇ ಬೇರೆ.&amp;nbsp;&lt;/p&gt;&lt;p&gt;https://kannada.asianetnews.com/india-news/mohammad-junaid-who-was-seen-during-the-cjp-protest-has-claimed-he-was-ignored-after-the-movement-suc/articleshow-7y2d8ug&lt;/p&gt;&lt;h3&gt;ಸಮಾಧಿ ತೆಗೆದಾಗ ಸಿಕ್ಕಿದ್ದು ಶವ&lt;/h3&gt;&lt;p&gt;ಸಾಹಸಿಗಳ ಗುಂಪು ಸಮಾಧಿ ಮುಚ್ಚಿದ ಮೇಲೆ ಅದನ್ನು ತೆಗೆಯುವ ಪ್ರಯತ್ನಕ್ಕೆ ಹೋಗಲಿಲ್ಲ. ಮೂರನೇ ದಿನ ಸಮಾಧಿ ತೆಗೆದು, ಗೋಣಿ ಚೀಲ ಬಿಚ್ಚಿದಾಗ ದೀಪಕ್ ಹೆಣವಾಗಿದ್ದ. ಫರಿದಾಬಾದ್ನ ಗೌಂಚಿ ಗ್ರಾಮದ ನಿವಾಸಿ ದೀಪಕ್, ಪ್ರವಾಸಿ ಬೈಸಿಕಲ್ ಸರ್ಕಸ್ ನಲ್ಲಿ ಕೆಲ್ಸ ಮಾಡ್ತಿದ್ದ. ಸರ್ಕಸ್ ಸದ್ಯ ಟೌರುವಿನ ಖೋರಿ ಗ್ರಾಮಕ್ಕೆ ಬಂದಿದೆ.&lt;/p&gt;&lt;p&gt;https://kannada.asianetnews.com/sandalwood/sandalwood-actor-dhanveer-gowda-meets-his-close-friend-darshan-thoogudeepa-in-parappana-agahara-jail/articleshow-6l5buvs&lt;/p&gt;&lt;p&gt;ಜೀವಂತ ಸಮಾಧಿ ಮುನ್ನ ದೀಪಕ್ ಸಾಕಷ್ಟು ಸೈಕಲ್ ಸಾಹಸಗಳನ್ನು ಪ್ರದರ್ಶಿಸಿದ್ದರು. ನಂತ್ರ ಅವರನ್ನು ಸಮಾಧಿ ಮಾಡಲಾಯ್ತು. ಅದ್ರೆ ಸಮಾಧಿಯನ್ನು ಯಾವಾಗ ತೆಗೆದ್ರು ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಜೀವಂತ ಸಮಾಧಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಲಾಗುತ್ತದೆ. ಜೊತೆಗೆ ಒಂದು ದಿನ ಮಾತ್ರ ಅಲ್ಲಿರಲು ಅನುಮತಿ ನೀಡಲಾಗುತ್ತದೆ. ಎಷ್ಟೇ ಜಾಗರೂಕರಾಗಿದ್ದರೂ ಇಂಥಹ ಸಾಹಸಗಳು ಅಪಾಯಕಾರಿ. ಸಮಾಧಿಯ ಸೀಮಿತ ಜಾಗದಲ್ಲಿ ಬದುಕುಳಿಯುವುದು ಲಭ್ಯವಿರುವ ಆಮ್ಲಜನಕದ ಪ್ರಮಾಣ, ವಾತಾಯನ ಮತ್ತು ತಾಪಮಾನವನ್ನು ಅವಲಂಬಿಸಿರುತ್ತದೆ. ಆಮ್ಲಜನಕದ ಮಟ್ಟಗಳು ಕಡಿಮೆಯಾಗಿ ಇಂಗಾಲದ ಡೈಆಕ್ಸೈಡ್ ಮಟ್ಟಗಳು ಹೆಚ್ಚಾದಂತೆ, ಉಸಿರಾಟವು ಕಷ್ಟಕರವಾಗುತ್ತದೆ. ಆಮ್ಲಜನಕದ ಮಟ್ಟಗಳು ತುಂಬಾ ಕಡಿಮೆಯಾದರೆ, ಅವರು ಪ್ರಜ್ಞಾಹೀನರಾಗಬಹುದು. ಉಸಿರುಗಟ್ಟಿ ಸಾಯುವ ಅಪಾಯವೂ ಇದೆ. ದೀಪಕ್ ಇದ್ರಲ್ಲಿ ಹತ್ತು ವರ್ಷಗಳ ಅನುಭವ ಹೊಂದಿದ್ದ. 2017 ರಲ್ಲಿ, ಪಾಣಿಪತ್ನಲ್ಲಿ 17 ವರ್ಷದ ಬಾಲಕ ಇದೇ ರೀತಿಯ ಸಾಹಸಕ್ಕೆ ಕೈ ಹಾಕಿ ಸಾವನ್ನಪ್ಪಿದ್ದ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/buried-alive-for-a-stunt-man-found-dead-after-three-days/articleshow-zat6t35"/>
        </item>
        <item>
            <title><![CDATA[ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?]]></title>
            <link>https://kannada.asianetnews.com/crime/husband-arrested-for-allegedly-killing-wife-after-bringing-her-home-gvd-videoshow-zolzxqh</link>
            <guid isPermaLink="true">https://kannada.asianetnews.com/crime/husband-arrested-for-allegedly-killing-wife-after-bringing-her-home-gvd-videoshow-zolzxqh</guid>
            <pubDate>Thu, 30 Jul 2026 16:47:51 +0530</pubDate>
            <description><![CDATA[&lt;p&gt;ಅದು 6 ವರ್ಷದ ಸಂಸಾರ.. ಗಂಡ ಹೆಂಡತಿ ಮತ್ತು ನಾಲ್ಕು ವರ್ಷದ ಮಗ. ಗಂಡ ಡ್ರೈವರ್​​. ಹೆಂಡತಿ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಇತ್ತಿಚೆಗೆ ಗಂಡ ಹೆಂಡತಿ ನಡುವೆ ಏನೇನೂ ಅರಿ ಇರಲಿಲ್ಲ.&lt;/p&gt;]]></description>
            <media:content url="https://geo.dailymotion.com/player/x1tbu.html?video=xatcs2y" medium="video" height="768" width="1024"/>
            <content:encoded><![CDATA[&lt;p&gt;ಅದು 6 ವರ್ಷದ ಸಂಸಾರ.. ಗಂಡ ಹೆಂಡತಿ ಮತ್ತು ನಾಲ್ಕು ವರ್ಷದ ಮಗ. ಗಂಡ ಡ್ರೈವರ್​​. ಹೆಂಡತಿ ಮಗುವನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಆದ್ರೆ ಇತ್ತಿಚೆಗೆ ಗಂಡ ಹೆಂಡತಿ ನಡುವೆ ಏನೇನೂ ಅರಿ ಇರಲಿಲ್ಲ. ಗಂಡನ ಮೇಲೆ ಮುನಿಸಿಕೊಂಡು ಹೆಂಡತಿ ತವರು ಮನೆ ಸೇರಿದ್ದಳು. ಆದ್ರೆ ನಿನ್ನೆ(ರಿಪೀಟ್​ಗೆ ಮೊನ್ನೆ) ಗಂಡನೇ ಹೋಗಿ ತಪ್ಪಾಯ್ತು ಅಂತ ಹೇಳಿ ಹೆಂಡತಿಯನ್ನ ಕರೆತಂದಿದ್ದ. ಅವನನ್ನ ನಂಬಿ ಹೆಂಡತಿ ವಾಪಸ್​​ ತನ್ನ ಮನೆಗೆ ಬಂದಿದ್ಲು. ಬಟ್​​ ರಾತ್ರಿ ಆಗುವಷ್ಟರಲ್ಲೇ ಆ ಹೆಂಡತಿ ಬರ್ಬರವಾಗಿ ಕೊಲೆಯಾಗಿ ಹೋದ್ಲು. ಇನ್ನೂ ಕೊಲೆ ಮಾಡಿದವನು ಗಂಡನೇ.&lt;/p&gt;&lt;p&gt;ಅಷ್ಟೇ ಅಲ್ಲ ಹೆಂಡತಿಯ ಹೆಣ ಹಾಕಿ ಆಕೆಯ ಕೊನೆ ಕ್ಷಣದ ವಿಡಿಯೋ ಮಾಡಿದ್ದ. ಅಷ್ಟಕ್ಕೂ ಆ ಪರಮ ಪಾಪಿ ಹೀಗ್ಯಾಕೆ ಮಾಡಿದ.? ಅಂಥಹ ತಪ್ಪು ಆಕೆ ಮಾಡಿದ್ದೇನು.? ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಹೆಂಡತಿ ತಪ್ಪು ಮಾಡಿದ್ದಾಳೆ ನಿಜ. ಅದಕ್ಕೆ ಕೊಲೆಯೇ ಪರಿಹಾರವಲ್ಲ. ಆಕೆಯನ್ನ ಬಿಟ್ಟು ಪ್ರವೀಣ ಹೊಸ ಜೀವನ ಆರಂಭಿಸಬಹುದಿತ್ತು. ಮಗು ಮುಖ ನೋಡಿಕೊಂಡಾದ್ರೂ ಆತ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು. ಅದು ರೈತ ಕುಟುಂಬ. ಗಂಡ ಹೆಂಡತಿ. ಮಗ ಮತ್ತು ಸೊಸೆ. ನಲ್ಕೈದು ಎಕರೆ ಜಮೀನಿನಲ್ಲೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬ ಅದು.&lt;/p&gt;&lt;p&gt;ಆದ್ರೆ ಆವತ್ತು ಎಲ್ಲರೂ ಜಮೀನಿಗೆ ಹೋಗಿದ್ರು. ಈ ಟೈಂನಲ್ಲಿ ಯಾರೋ ಕಳ್ಳ ನುಗ್ಗಿ ಮನೆಯಲ್ಲಿದ್ದ ಬಂಗಾರ, ಹಣವನ್ನೆಲ್ಲಾ ಕದ್ದೊಯ್ದಿದ್ರು. ಮನೆಯ ಒಡೆಯ ಕೂಡಲೇ ಪೊಲೀಸ್​​ ಕಂಪ್ಲೆಂಟ್​​ ಕೊಟ್ಟರು. ತನಿಖೆ ನಡೆಸಿದ ಪೊಲೀಸರಿಗೆ ಗೊತ್ತಾಗಿದ್ದ ಕಳ್ಳ ಅದೇ ಮನೆಯವರು ಅಂತ. ಮನೆ ಉದ್ದಾರ ಮಾಡಬೇಕಿದ್ದ ಸೊಸೆಯೇ ಪರ ಪುರುಷನ ಮೋಹದಲ್ಲಿ ಮನೆಯನ್ನೆ ಗುಡಿಸಿ ಗುಂಡಾಂತರ ಮಾಡಿದ್ದು ವಿಪರ್ಯಾಸ. ಸದ್ಯ ಪೊಲೀಸರು ಅಮೃತಾ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ಅರೆಸ್ಟ್​ ಮಾಡಿ ಜೈಲಿಗಟ್ಟಿದ್ದಾರೆ. ಇದು ಇವತ್ತಿನ ಎಫ್​.ಐ.ಆರ್​​.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/husband-arrested-for-allegedly-killing-wife-after-bringing-her-home-gvd-videoshow-zolzxqh"/>
        </item>
    </channel>
</rss>
