<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Jul 2026 11:44:18 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[ದರ್ಶನ್​ ವಿಷ್ಯದಲ್ಲಿ ಹಲ್​ಚಲ್ ಸೃಷ್ಟಿಸಿದ್ದ ಸೋನು ಶೆಟ್ಟಿ ವಿರುದ್ಧ ದೂರು: ಲೈವ್​ಗೆ ಬಂದು ಸೋನು ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/complaint-against-content-creator-sonu-shetty-by-sandhya-suc-37u6tyx</link>
            <guid isPermaLink="true">https://kannada.asianetnews.com/gallery/tv-talk/complaint-against-content-creator-sonu-shetty-by-sandhya-suc-37u6tyx</guid>
            <pubDate>Sat, 29 Nov 2025 12:58:34 +0530</pubDate>
            <description><![CDATA[&lt;p&gt;ದರ್ಶನ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಲೈವ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb77tvcvbxn9kgbry12bekxz,imgname-sonu-shetty-07-1764400917914.jpg" type="image/jpeg" height="390" width="690"/>
            <content:encoded><![CDATA[&lt;p&gt;ದರ್ಶನ್ ಪ್ರಕರಣದಲ್ಲಿ ಸುದ್ದಿಯಾಗಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿ ವಿರುದ್ಧ ಇದೀಗ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಪರಾರಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಲೈವ್​ ಮೂಲಕ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ಕಂಟೆಂಟ್​ ಕ್ರಿಯೇಟರ್​ ಇನ್​ಫ್ಲುಯೆನ್ಸರ್​ ಸೋನು ಶೆಟ್ಟಿ (Sonu Shetty) ಸುದ್ದಿಯಲ್ಲಿದ್ದಾರೆ. ದರ್ಶನ್​ ಅವರು ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲಿಗೆ ದಾಖಲಾಗುತ್ತಿದ್ದಂತೆಯೇ, ದರ್ಶನ್​ ಮತ್ತು ಸುದೀಪ್ ಫ್ಯಾನ್ಸ್​ ನಡುವೆ ಕೆಲವು ವಾಕ್ಸಮರಗಳು ನಡೆದ ಸಂದರ್ಭದಲ್ಲಿ ಸೋನು ಶೆಟ್ಟಿ ಎಂಟ್ರಿಯಾಗಿತ್ತು!&lt;/p&gt;&lt;img&gt;&lt;p&gt;&lsquo;ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ&rsquo; ಎಂದಿದ್ದ ಸೋನು ಶೆಟ್ಟಿ ದರ್ಶನ್​ ವಿರುದ್ಧ ಮಾತನಾಡಿದ್ದರು. ಇದರಿಂದ ದರ್ಶನ್​ ಅವರ ಅಭಿಮಾನಿಗಳು ಸೋನು ಅವರಿಗೆ ತೀರಾ ಕೆಟ್ಟ ಶಬ್ದಗಳಿಂದ ನಿಂದಿಸಿದ್ದರು. ಅಲ್ಲಿಂದ ಫೇಮಸ್​ ಆದವರು ಈ ಸೋನು ಶೆಟ್ಟಿ.&lt;/p&gt;&lt;img&gt;&lt;p&gt;ತಮಗೆ ಬಂದಿರುವ ಕಮೆಂಟ್ಸ್​ ಬಗ್ಗೆ ಆಗ ಮಾತನಾಡಿದ್ದ ಸೋನು ಶೆಟ್ಟಿ, ನನ್ನ ಮೇಲೆ ಪದಗಳನ್ನು ಹೇಳಲು ಕೂಡ ಸಾಧ್ಯವಾಗದಷ್ಟರ ಮಟ್ಟಿಗೆ ಕೆಟ್ಟದಾಗಿ ಕಾಮೆಂಟ್&zwnj; ಮಾಡುತ್ತಿದ್ದಾರೆ. ಇದನ್ನು ಸಹಿಸಲು ಆಗುವುದಿಲ್ಲ ಎಂದಿದ್ದರು. ಅಷ್ಟಕ್ಕೂ ಇವರ ಬಗ್ಗೆ ಕಮೆಂಟ್​ ಮಾಡಿದವರೆಲ್ಲಾ ಇವರ ಬಟ್ಟೆಯ ಬಗ್ಗೆನೇ ಹೇಳಿದವರು ಹೆಚ್ಚು.&lt;/p&gt;&lt;img&gt;&lt;p&gt;&ldquo;ನೀನು ಸರಿಯಾಗಿ ಬಟ್ಟೆ ಹಾಕೋದು ಕಲಿತುಕೋ, ಆ ರೀತಿ ಬಟ್ಟೆ ಹಾಕಿ ಯಾಕೆ ವಿಡಿಯೋ ಮಾಡ್ತೀಯಾ&rdquo; ಅಂತೆಲ್ಲ ಕಾಮೆಂಟ್&zwnj; ಮಾಡ್ತಾರೆ. ನಾನು ಏನಾದರೂ ಬಟ್ಟೆ ಹಾಕಿಕೊಳ್ತೀನಿ, ನನ್ನ ಬಗ್ಗೆ ಕಾಮೆಂಟ್&zwnj; ಮಾಡೋ ಮುನ್ನ ಹತ್ತು ಬಾರಿ ಸ್ನಾನ ಮಾಡಿ ಬನ್ನಿ ಎಂದು ಸೋನು ಹೇಳಿದ್ದರು.&lt;/p&gt;&lt;img&gt;&lt;p&gt;ಇದೀಗ , ಸೋನು ಅವರ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಅವರು, ದೂರನ್ನು ದಾಖಲು ಮಾಡಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;img&gt;&lt;p&gt;ಅದರಲ್ಲಿ ಇರುವುದು ಏನೆಂದರೆ, ಸೋನು ಶೆಟ್ಟಿ ಎನ್ನುವವರು ತಮ್ಮ ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​ ಖಾತೆಯಿಂದ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಆರೋಪ ಮಾಡುತ್ತಿದ್ದಾರೆ. ಅರ್ಜಿದಾರರ ಮೇಲೆ ನಡೆದಿರುವ ಲೈಂ*ಗಿಕ ದೌರ್ಜನ್ಯ ಮಾಡಿರುವ ಹಳೆಯ ವಿಡಿಯೋ ಇಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ಅರ್ಜಿದಾರರು ಹೋರಾಟದ ಹೆಸರಿನಲ್ಲಿ ಎಲ್ಲರ ಹತ್ತಿರ ಹಣವನ್ನು ಪೀಕಿಕೊಂಡು ಬದುಕುತ್ತಿದ್ದಯಾ ಎಂದು ನಿಂದಿಸಿ ಸಅಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.&lt;/p&gt;&lt;img&gt;&lt;p&gt;ದಿನಾಂಕ 26.11.2025ರಂದು ಸೋನು ಶೆಟ್ಟಿ ಅವರು ಅರ್ಜಿದಾರರಿಗೆ ಕರೆ ಮಾಡಿ ಬೆದರಿಕೆ ಹಾಕಿರುತ್ತಾರೆ. ಸದರಿ ವಿಚಾರದಲ್ಲಿ ಅರ್ಜಿದಾರರಿಗೆ ಮುತ್ತುರಾಜ್ ಎನ್ನುವವರ ಮೇಲೆ ಅನುಮಾನವಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.&lt;/p&gt;&lt;img&gt;&lt;p&gt;ದೂರು ದಾಖಲಾಗುತ್ತಿದ್ದಂತೆಯೇ ಸೋನು ಶೆಟ್ಟಿ ಪರಾರಿಯಾಗಿರುವುದಾಗಿ ವರದಿಯಾಗಿತ್ತು. ಇದರಿಂದ ಕೆಂಡಾಮಂಡಲವಾಗಿರುವ ಸೋನು, ಲೈವ್​ಗೆ ಬಂದು ನಾನು ಎಲ್ಲಿಯೂ ಪರಾರಿಯಾಗಿಲ್ಲ, ಇಲ್ಲಿಯೇ ಇದ್ದೇನೆ. ಇಂಥ ಸುದ್ದಿ ಕೇಳಿ ನಗು ಬರುತ್ತಿದೆ ಎಂದಿದ್ದಾರೆ. ನಾನು ಏನೂ ಮಾಡಿಲ್ಲ, ನನ್ನಲ್ಲಿ ಬೇಕಾದಷ್ಟು ಸಾಕ್ಷಿಗಳಿವೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/complaint-against-content-creator-sonu-shetty-by-sandhya-suc-37u6tyx"/>
        </item>
        <item>
            <title><![CDATA[ಗಂಡಸ್ರು ಬೆಚ್ಚಿಬೀಳೋ ಇನ್ನೊಂದು ಕೊಲೆ: ಬಾತ್​ರೂಮ್​ನಲ್ಲೇ ಗಂಡನ ಸಮಾಧಿ! 45 ದಿನ ಯಾಮಾರಿಸಿದ ಖತರ್ನಾಕ್​ ಲೇಡಿ]]></title>
            <link>https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi</link>
            <guid isPermaLink="true">https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi</guid>
            <pubDate>Sun, 05 Jul 2026 14:04:42 +0530</pubDate>
            <description><![CDATA[ಆಗ್ರಾದಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು, ಶವವನ್ನು ಮನೆಯ ಸ್ನಾನಗೃಹದಲ್ಲಿಯೇ ಹೂತುಹಾಕಿದ್ದಾಳೆ. ಬಳಿಕ 45 ದಿನಗಳ ಕಾಲ ಪತಿ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದು, ಮೃತನ ಸಹೋದರನ ಅನುಮಾನದಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrpj1ez4m3v78spkembsce7,imgname-husband-s-murder-1783240394207.jpg" type="image/jpeg" height="390" width="690"/>
            <content:encoded><![CDATA[&lt;p&gt;ಪತಿ, ಭಾವಿ ಪತಿ, ಸ್ನೇಹಿತರ ಕೊಲೆ ಮಾಡುವ ಮೂಲಕ ಹೆಚ್ಚಾಗಿ ಮಹಿಳೆಯರೇ ಕೊಲೆಗಾರರಾಗುತ್ತಿರುವ ಆತಂಕಕಾರಿ ಘಟನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಹನಿಮೂನ್​ನಲ್ಲಿ ಪತಿಯನ್ನು ಕೊಂದ ಸೋನಂ ರಘುವಂಶಿ ಬಳಿಕ, ಈಚೆಗೆ ಭಾವಿ ಪತಿಯನ್ನು ಕೊಂದ ಸಿಯಾಳ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಮತ್ತೊಂದು ಆತಂಕಕಾಗಿ ಘಟನೆ ಪುರುಷ ವರ್ಗವನ್ನು ಬೆಚ್ಚಿಬೀಳಿಸಿದೆ. ಪುರುಷರೇ ಕೊಲೆಗಾರರಾಗುತ್ತಿರುವ ಘಟನೆಗಳು ನಿಂತಿಲ್ಲವಾದರೂ, ಇದರ ನಡುವೆಯೇ ಯಾವುದೇ ಕಾರಣ ಇಲ್ಲದೇ, ಪುರುಷರ ತಪ್ಪೇ ಇಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರು ಕೊಲೆಗಾತಿಯಾಗುತ್ತಿರುವ ಶಾಕಿಂಗ್​ ಘಟನೆ ನಡೆಯುತ್ತಿದ್ದು, ಆಗ್ರಾದಲ್ಲಿನ ಒಂದು ಘಟನೆ ಬೆಚ್ಚಿ ಬೀಳಿಸುವಂತಿದೆ.&lt;/p&gt;&lt;h2&gt;&lt;strong&gt;ಬಾತ್​ರೋಮ್​ನಲ್ಲಿ ಹೂತು ಹಾಕಿದ್ಲು!&lt;/strong&gt;&lt;/h2&gt;&lt;p&gt;ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವ ಘಟನೆಯಾಗಿದೆ. ಪತ್ನಿಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ್ದಾಳೆ. ಕೊನೆಗೆ ಎಲ್ಲರೂ ಮಾಡುವಂತೆ ಪತಿ ಕಣ್ಮೆರೆಯಾಗಿರುವುದಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಸುರೇಂದ್ರ ಶರ್ಮಾ ಎನ್ನುವವರ ಪತ್ನಿ ರೂಬಿ ಈ ಖತರ್ನಾಕ್​ ಹಂತಕಿ. ಪತಿಯನ್ನು ಕೊಂದ ಬಳಿಕ ಯಾರಿಗೂ ಡೌಟೇ ಬರದಂತೆ ದಿನವೂ ಕಣ್ಣೀರು ಹಾಕುತ್ತಿದ್ದಾಳೆ. ಹೀಗೆ ಈ ನಾಟಕ 45 ದಿನಗಳು ಮುಂದುವರೆದಿವೆ. ಸುರೇಂದ್ರ ಅವರ ಸಹೋದರ ಅನಿಲ್​ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದಾಗ, ಮನೆಯ ಬಳಿಕ ಆಸುಪಾಸಿನ ಸಿಸಿಟಿವಿ ಎಲ್ಲಾ ಪರಿಶೀಲನೆ ಮಾಡಲಾಗಿತ್ತು. ಆದರೆ ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋದ ಸುಳಿವೇ ಸಿಗದೇ ಪೊಲೀಸರು ಕಂಗಾಲಾಗಿ ಹೋಗಿದ್ದರು.&lt;/p&gt;&lt;p&gt;ಪತಿ ಕಾಣೆಯಾಗಿರುವುದಾಗಿ ಹೇಳುತ್ತಲೇ ಬಂದ ರೂಬಿ, ಕೊನೆಗೆ ಪತಿಯ ಪಿಂಚಣಿಯ ಬಗ್ಗೆ ವಿಚಾರಿಸುತ್ತಿರುವಾಗಿ ಸಹೋದರ ಅನಿಲ್​ ಶರ್ಮಾ ಅವರಿಗೆ ಡೌಟ್​ ಬಂದಿದೆ. ತಮ್ಮ ಅತ್ತಿಗೆಯನ್ನು ಬೇರೆ ಬೇರೆ ರೀತಿಯಲ್ಲಿ ವಿಚಾರಿಸಿದ್ರೂ ಆಕೆ ಮಾತ್ರ ಅಳುತ್ತಲೇ ಗಂಡ ಎಲ್ಲೋ ಹೋದವ ಬರಲೇಇಲ್ಲ ಎಂದು ಗೋಳಾಡುತ್ತಲೇ ಇದ್ದಳು. ಅನಿಲ್ ಶರ್ಮಾ, ರೂಬಿಯನ್ನು ಸುರೇಂದ್ರ ಬಗ್ಗೆ ಪದೇ ಪದೇ ಕೇಳಿದಾಗ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು. ಪ್ರತಿ ಬಾರಿಯೂ, ರೂಬಿ ಸುರೇಂದ್ರ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾನೆ ಮತ್ತು ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಉತ್ತರಿಸಿದಳು. ಆದಾಗ್ಯೂ, ಅನಿಲ್ ಶರ್ಮಾ ಪದೇ ಪದೇ ಅವಳನ್ನು ಪ್ರಶ್ನಿಸಿದಾಗ ಮತ್ತು ಸತ್ಯವನ್ನು ಕಂಡುಹಿಡಿಯಲು ಅವಳ ಮೇಲೆ ಒತ್ತಡ ಹೇರಿದಾಗ, ರೂಬಿ ಕೋಪಗೊಂಡು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ಸುರೇಂದ್ರನ ಶವವನ್ನು ಮನೆಯ ಸ್ನಾನಗೃಹದ ಕೆಳಗೆ ಹೂಳಲಾಗಿದೆ ಮತ್ತು ಹೊಸ ಪ್ಲಾಸ್ಟರ್ ಅನ್ನು ಅನ್ವಯಿಸಲಾಗಿದೆ ಎಂದು ಅವಳು ಬಹಿರಂಗಪಡಿಸಿದಳು.&lt;/p&gt;&lt;h3&gt;&lt;strong&gt;ಮೃತನ ಸಹೋದರನಿಂದ ದೂರು&lt;/strong&gt;&lt;/h3&gt;&lt;p&gt;ಇದನ್ನು ಕೇಳಿದ ಮೃತನ ಸಹೋದರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ನಾನಗೃಹದ ನೆಲವನ್ನು ಒಡೆದು ಶವವನ್ನು ಹೊರತೆಗೆದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ತನ್ನ ಗಂಡನ ಶವವನ್ನು ಸ್ನಾನಗೃಹದಲ್ಲಿ ಹೂಳಿದ್ದಾಳೆ ಎಂದು ತಿಳಿದುಬಂದಿದೆ ಎಂದು ಎಸಿಪಿ ಹರಿಪರ್ವತ್ ಅಮಿಷಾ ಹೇಳಿದ್ದಾರೆ. ಪ್ರಸ್ತುತ, ಆರೋಪಿ ಪತ್ನಿ ರೂಬಿಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸುರೇಂದ್ರನ ಸಾವಿನ ಸಂದರ್ಭಗಳನ್ನು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ಪರೀಕ್ಷೆ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ದುಡ್ಡಿಗಾಗಿ ಈ ಕೃತ್ಯ ಎಸಗಿದ್ದಾಳೋ ಅಥವಾ ಇನ್ನೇನು ದುರುದ್ದೇಶ ಇದೆಯೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi"/>
        </item>
        <item>
            <title><![CDATA[ಕಚೇರಿಯ ಮೀಟಿಂಗ್‌ನಲ್ಲಿ ಬಿಟ್ಟ ಬಿಸ್ಕೆಟ್‌ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್‌ಗೆ ವಜಾ ಶಿಕ್ಷೆ: ಹೈಕೋರ್ಟ್ ಗರಂ]]></title>
            <link>https://kannada.asianetnews.com/india-news/tea-and-biscuits-cost-him-a-17-year-job-high-court-reinstates-dismissed-peon-suc/articleshow-2toi3xs</link>
            <guid isPermaLink="true">https://kannada.asianetnews.com/india-news/tea-and-biscuits-cost-him-a-17-year-job-high-court-reinstates-dismissed-peon-suc/articleshow-2toi3xs</guid>
            <pubDate>Tue, 07 Jul 2026 22:02:28 +0530</pubDate>
            <description><![CDATA[ಕಚೇರಿಯಲ್ಲಿ ಉಳಿದಿದ್ದ ಬಿಸ್ಕೆಟ್&zwnj; ಅನ್ನು ಹಸಿದ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್&zwnj; ಮೇಲೆ ಕಳ್ಳತನದ ಆರೋಪ ಹೊರಿಸಿ ಕೆಲಸದಿಂದ ವಜಾಗೊಳಿಸಲಾಗಿತ್ತು. 17 ವರ್ಷಗಳ ಸೇವೆ ಸಲ್ಲಿಸಿದ್ದ ನೌಕರನಿಗೆ ಅಂತಿಮವಾಗಿ ನ್ಯಾಯಾಲಯವು ನ್ಯಾಯ ಒದಗಿಸಿದ್ದು, ಮರುನೇಮಕಕ್ಕೆ ಆದೇಶಿಸಿ, ಬಾಕಿ ವೇತನ ಪಾವತಿಸುವಂತೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwypqv49phwkb3c7x5xbsy9r,imgname-theft-case-1783441910921.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಟಿ ಕೋಟಿ ಲೂಟಿ ಮಾಡಿ, ನಾಚಿಕೆ ಮಾನ ಮರ್ಯಾದೆ ಇಲ್ಲದೇ ಜನರಿಂದ ಪ್ರತಿಯೊಂದು ಕೆಲಸಕ್ಕೂ ಲಂಚಕ್ಕೆ ಬೇಡಿಕೆಯೊಡ್ಡುವ ಅಧಿಕಾರಿಗಳು ಎಷ್ಟೋ ಕಡೆಗಳಲ್ಲಿ ನಿಶ್ಚಿಂತೆಯಿಂದ ಇದ್ದಾರೆ. ಕೆಲವು ಕಚೇರಿಗಳಲ್ಲಿ ಲಂಚ ಇಲ್ಲದೇ ಅಲ್ಲಿರುವ ಸಿಬ್ಬಂದಿಯನ್ನು ಮಾತನಾಡಿಸಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದೆ. ಅದೇ ಇನ್ನೊಂದೆಡೆ, ಶ್ರೀಮಂತಿಕೆಯ ಮದದಲ್ಲಿ, ಊಟದ ತಟ್ಟೆಯಲ್ಲಿ ಅರ್ಧಕ್ಕರ್ಧ ಚೆಲ್ಲಿ, ಶ್ರೀಮಂತಿಕೆಯನ್ನು ಮೆರೆಯುವ ಜನರೂ ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಇದರ ನಡುವೆ, ಹಸಿದ ಮಕ್ಕಳಿಗೆ ಕಚೇರಿಯ ಸಿಬ್ಬಂದಿ ಬಿಟ್ಟ ಬಿಸ್ಕೆಟ್&zwnj; ಕೊಂಡೊಯ್ದ ಅಟೆಂಡರ್&zwnj; ಒಬ್ಬರನ್ನು ಕೆಲಸದಿಂದಲೇ ವಜಾ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.&lt;/p&gt;&lt;p&gt;ಸಾಮಾನ್ಯವಾಗಿ ಕಚೇರಿಗಳಲ್ಲಿ ಮೀಟಿಂಗ್&zwnj; ಮಾಡಿದಾಗ, ಅರ್ಧಂಬರ್ಧ ತಿನ್ನುವುದು ಇದ್ದೇ ಇದೆ. ಕೊನೆಗೆ ಉಳಿದ ಬಿಸ್ಕೆಟ್&zwnj; ಅಥವಾ ಆಹಾರವನ್ನು ಡಸ್ಟ್&zwnj;ಬಿನ್&zwnj;ಗೆ ಹಾಕಿ ವ್ಯರ್ಥ ಮಾಡಲಾಗುತ್ತದೆ. ಹಸಿದ ಪ್ರಾಣಿಗಳಿಗೂ ಅದನ್ನು ಕೊಡುವುದಿಲ್ಲ, ಇಂಥ ಅಳಿದುಳಿದ ಬಿಸ್ಕೆಟ್&zwnj; ಅನ್ನು ತನ್ನ ಹಸಿದ ಮಕ್ಕಳಿಗೆ ತೆಗೆದುಕೊಂಡು ಹೋಗಿದ್ದಕ್ಕೆ ಈ ಅಟೆಂಡರ್&zwnj;ಗೆ ಕಳ್ಳತನದ ಆರೋಪ ಹೊರಿಸಿ ಕಚೇರಿಯಿಂದ ವಜಾ ಮಾಡಿರುವ ಅಮಾನವೀಯ ಘಟನೆ ನಡೆದದ್ದು ಜಾರ್ಖಂಡ್&zwnj;ನಲ್ಲಿ.&lt;/p&gt;&lt;h2&gt;ಏನಿದು ಸ್ಟೋರಿ?&lt;/h2&gt;&lt;p&gt;2005 ರಲ್ಲಿ ಈ ಘಟನೆ ನಡೆದಿದೆ! DRDAಯಲ್ಲಿ ಕೆಲಸ ಮಾಡುತ್ತಿದ್ದ ಹಿಮಾಂಶು ಎನ್ನುವವರು ಸುಮಾರು 17 ವರ್ಷಗಳ ಕಾಲ ಇಲ್ಲಿ ಸೇವೆ ಸಲ್ಲಿಸಿದ್ದರು. ಮಾರ್ಚ್ 2022 ರಲ್ಲಿ ವೈಯಕ್ತಿಕ ಬಳಕೆಗಾಗಿ ಕಚೇರಿಯಿಂದ &quot;ಕೆಲವು ವಸ್ತುಗಳನ್ನು&quot; ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಶೋ-ಕಾಸ್ ನೋಟಿಸ್ ನೀಡಲಾಗಿತ್ತು. ಕಳ್ಳತನದ ಆರೋಪ ಹೊರಿಸಿದ್ದರೂ, ನೋಟಿಸ್&zwnj;ನಲ್ಲಿ ವಸ್ತುಗಳು ಏನು ಎಂದು ಹೇಳಿರಲಿಲ್ಲ. ಏಕೆಂದರೆ, ಹಾಗೆ ಹೇಳಿದರೆ ಇದ್ದ ಮರ್ಯಾದೆ ಹೋಗುವುದು ಎಂದು ಅನ್ನಿಸಿತ್ತೋ ಏನೊ. ಆದರೆ ಈ ಬಡವನನ್ನು ವಜಾ ಮಾಡಲಾಗಿತ್ತು.&lt;/p&gt;&lt;h3&gt;ಕೋರ್ಟ್​ ಹೇಳಿದ್ದೇನು?&lt;/h3&gt;&lt;p&gt;ಕೊನೆಗೆ ಅವರು ಕೋರ್ಟ್ ಮೊರೆ ಹೋಗಿದ್ದರು. ನಂತರ ಅವರ ಪರ ವಕೀಲರು ನ್ಯಾಯಾಲಯಕ್ಕೆ ಉಳಿದ ಚಹಾ ಪುಡಿ ಮತ್ತು ಕೆಲವು ಬಿಸ್ಕತ್ತುಗಳನ್ನು ಕೊಂಡೊಯ್ದ ಬಗ್ಗೆ ಕೋರ್ಟ್&zwnj;ಗೆ ತಿಳಿಸಿದರು. ಇದನ್ನು ಕೇಳಿದ ಕೋರ್ಟ್ ಕಚೇರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅವರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳುವಂತೆ ಜಾರ್ಖಂಡ್ ಹೈಕೋರ್ಟ್ ಆದೇಶಿಸಿದೆ, ಈ ಶಿಕ್ಷೆಯು ಆಘಾತಕಾರಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಂ.ಎಸ್. ಸೋನಕ್ ಮತ್ತು ನ್ಯಾಯಮೂರ್ತಿ ರಾಜೇಶ್ ಶಂಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ನಾಲ್ಕು ವರ್ಷ ಕೆಲಸವಿಲ್ಲದೇ ನೋವು ಅನುಭವಿಸುತ್ತಿದ್ದ ಹಿಮಾಂಶು ಅವರು ಇದೀಗ ಮರು ನೇಮಕಗೊಳ್ಳಲಿದ್ದಾರೆ. ಜೊತೆಗೆ, ಕೋರ್ಟ್ ಅವರಿಗೆ ಜುಲೈ 31 ರೊಳಗೆ 50 ಪ್ರತಿಶತ ಬಾಕಿ ವೇತನವನ್ನು ಪಾವತಿಸಲು ಆದೇಶಿಸಿದೆ.&lt;/p&gt;&lt;p&gt;ಹಿಮಾಂಶು ವಿರುದ್ಧ ಈ ಹಿಂದೆ ಯಾವುದೇ ದುಷ್ಕೃತ್ಯದ ಆರೋಪವಿರಲಿಲ್ಲ ಮತ್ತು ಹಿರಿಯ ಅಧಿಕಾರಿಗಳು ನೀಡಿದ ಪ್ರಶಂಸಾಪತ್ರಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಪೀಠ ಗಮನಿಸಿತು. ಅವರನ್ನು ಮರುನೇಮಕಕ್ಕೆ ಆದೇಶಿಸುವಾಗ, ಶೇಕಡಾ 50 ರಷ್ಟು ವೇತನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಆರೋಪದ ಲೋಪಕ್ಕೆ ಸಾಕಷ್ಟು ಶಿಕ್ಷೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/tea-and-biscuits-cost-him-a-17-year-job-high-court-reinstates-dismissed-peon-suc/articleshow-2toi3xs"/>
        </item>
        <item>
            <title><![CDATA[ಮದ್ಯ ಸೇವಿಸಿ ಕಾರು ಚಾಲನೆ: 17 ಕಿ.ಮೀ ಅಟ್ಟಿಸಿಕೊಂಡು ಖ್ಯಾತ ಯುಟ್ಯೂಬರ್​ ಧನ್ಯಾಳ ಹಿಡಿದ ಪೊಲೀಸರು]]></title>
            <link>https://kannada.asianetnews.com/gallery/crime/influencer-helen-of-spartas-dhanya-car-seized-by-cops-after-17-km-chase-booked-for-drunk-drivin-suc-c0ogfol</link>
            <guid isPermaLink="true">https://kannada.asianetnews.com/gallery/crime/influencer-helen-of-spartas-dhanya-car-seized-by-cops-after-17-km-chase-booked-for-drunk-drivin-suc-c0ogfol</guid>
            <pubDate>Mon, 06 Jul 2026 20:22:46 +0530</pubDate>
            <description><![CDATA[&lt;p&gt;'ಸ್ಪಾರ್ಟಾದ ಹೆಲೆನ್' ಖ್ಯಾತಿಯ ಯುಟ್ಯೂಬರ್ ಧನ್ಯಾ ಎಸ್&zwnj;.ಆರ್ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಪೊಲೀಸರ ವಶವಾಗಿದ್ದಾರೆ. 17 ಕಿಲೋಮೀಟರ್&zwnj;ಗಳ ಚೇಸ್ ನಂತರ ಅವರನ್ನು ತಡೆದಾಗ, ಅವರ ಆಲ್ಕೋಹಾಲ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvy1cqpvsdxt7h8nn9pyq75,imgname-dhanya-01-1783348900598.jpg" type="image/jpeg" height="390" width="690"/>
            <content:encoded><![CDATA[&lt;p&gt;'ಸ್ಪಾರ್ಟಾದ ಹೆಲೆನ್' ಖ್ಯಾತಿಯ ಯುಟ್ಯೂಬರ್ ಧನ್ಯಾ ಎಸ್&zwnj;.ಆರ್ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಕಾಸರಗೋಡಿನಲ್ಲಿ ಪೊಲೀಸರ ವಶವಾಗಿದ್ದಾರೆ. 17 ಕಿಲೋಮೀಟರ್&zwnj;ಗಳ ಚೇಸ್ ನಂತರ ಅವರನ್ನು ತಡೆದಾಗ, ಅವರ ಆಲ್ಕೋಹಾಲ್ ಮಟ್ಟವು ನಿಗದಿತ ಮಿತಿಗಿಂತ ಹೆಚ್ಚಾಗಿತ್ತು.&lt;/p&gt;&lt;img&gt;&lt;p&gt;ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಒಂದು ಮಿಲಿಯನ್ ಫಾಲೋವರ್&zwnj;ಗಳನ್ನು ಹೊಂದಿರುವ ಯುಟ್ಯೂಬರ್​ ಧನ್ಯಾ ಎಸ್&zwnj;.ಆರ್ (28) ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 17 ಕಿಲೋಮೀಟರ್ ಪೊಲೀಸರು ನಡೆಸಿದ ಕಾರ್ಯಾಚರಣೆಯ ನಂತರ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ 'ಸ್ಪಾರ್ಟಾದ ಹೆಲೆನ್' ಎಂದು ಜನಪ್ರಿಯರಾಗಿರುವ ಧನ್ಯಾ ಚಲಾಯಿಸುತ್ತಿದ್ದ ಟಾಟಾ ಪಂಚ್ ಕಾರನ್ನು ಕುಂಬ್ಳ ಪೊಲೀಸರು ನಸುಕಿನ 2 ಗಂಟೆ ಸುಮಾರಿಗೆ ಬಂಡಿಯೋಡ್&zwnj;ನಲ್ಲಿ ತಡೆದು ವಶಪಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಫ್&zwnj;ಐಆರ್ ಪ್ರಕಾರ, ಇನ್ಸ್&zwnj;ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದ ಪೊಲೀಸ್ ಗಸ್ತು ತಂಡವು ವಿದ್ಯಾನಗರ ಪೊಲೀಸ್ ಠಾಣೆಯಿಂದ ಕುಂಬ್ಳಕ್ಕೆ ಹಿಂತಿರುಗುತ್ತಿದ್ದಾಗ, ವಿದ್ಯಾನಗರ ಬಳಿಯ ಅನಂಗೂರಿನಲ್ಲಿರುವ ಆರು ಪಥದ NH66 ರ ಮಧ್ಯದಲ್ಲಿ ಅಪಾಯಕಾರಿಯಾಗಿ ನಿಂತಿದ್ದ ಕಾರನ್ನು ಗಮನಿಸಿದರು.&lt;/p&gt;&lt;img&gt;&lt;p&gt;ವಾಹನ ಏಕೆ ನಿಂತಿತು ಎಂದು ವಿಚಾರಿಸಲು ಅಧಿಕಾರಿಗಳು ವಾಹನವನ್ನು ಸಮೀಪಿಸಿದಾಗ, ನಿಲ್ಲಿಸಲು ಪದೇ ಪದೇ ಆದೇಶಿಸಿದ ಆಜ್ಞೆಗಳನ್ನು ನಿರ್ಲಕ್ಷಿಸಿ ಚಾಲಕ ವೇಗವಾಗಿ ಓಡಿಸಿದ್ದಾನೆ ಎನ್ನಲಾಗಿದೆ. ಮಂಗಲ್ಪಾಡಿ ಗ್ರಾಮದ ಭಗವತಿ ನಗರದಲ್ಲಿ ಕಾರನ್ನು ನಿಲ್ಲಿಸುವ ಮೊದಲು 17 ಕಿಲೋಮೀಟರ್&zwnj;ಗಳಿಗೂ ಹೆಚ್ಚು ಕಾಲ ಕಾರನ್ನು ಬೆನ್ನಟ್ಟಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಧನ್ಯಾ ಮಾತನಾಡುತ್ತಿರುವಾಗ ಅವರ ಉಸಿರು ಮದ್ಯದ ವಾಸನೆ ಬರುತ್ತಿತ್ತು ಎಂದು ಇನ್ಸ್&zwnj;ಪೆಕ್ಟರ್ ವರದಿ ಮಾಡಿದ್ದಾರೆ. ಬೆಳಗಿನ ಜಾವ 2:06 ಕ್ಕೆ ಬ್ರೀಥಲೈಜರ್ ಪರೀಕ್ಷೆ ನಡೆಸಲಾಯಿತು, ಮತ್ತು ಆಲ್ಕೋಹಾಲ್ ರೀಡಿಂಗ್ 82 ಆಗಿತ್ತು, ಇದು ಮೋಟಾರು ವಾಹನ ಕಾಯ್ದೆಯಡಿ ನಿಗದಿಪಡಿಸಿದ 100 ಮಿಲಿಲೀಟರ್&zwnj;ಗೆ 30 ಮಿಲಿಗ್ರಾಂ ಮಿತಿಗಿಂತ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅವರ ಪತಿ ರಾಜೇಶ್ ಕೆ.ಆರ್. ಅವರಿಗೆ ಅಪರಾಧಗಳ ಬಗ್ಗೆ ತಿಳಿಸಲಾಯಿತು. ನಂತರ ಪೊಲೀಸರು ಧನ್ಯಾ ಅವರಿಗೆ ಭಾರತೀಯ ರಾಷ್ಟ್ರೀಯ ಭದ್ರತಾ ಸಂಹಿತೆಯ (ಬಿಎನ್&zwnj;ಎಸ್&zwnj;ಎಸ್) ಸೆಕ್ಷನ್ 35(3) ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿದರು, ಅವರನ್ನು ಕೆಲ ಕಾಲ ವಶಕ್ಕೆ ಪಡೆದು ವಿಚಾರಿಸಿದರು, ಆದರೆ ಬಂಧಿಸಿಲ್ಲ ಎನ್ನಲಾಗಿದೆ. ನಂತರ ಟಾಟಾ ಪಂಚ್ ವಾಹನವನ್ನು ವಶಪಡಿಸಿಕೊಂಡು ಕುಂಬ್ಲಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಧನ್ಯಾ ವಿರುದ್ಧ ಐಪಿಸಿಯ ಸೆಕ್ಷನ್ 281 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 132(1), 179, ಮತ್ತು 185 ರ ಅಡಿಯಲ್ಲಿ ಅವಿಧೇಯತೆಯ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಘಟನೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಧನ್ಯಾ, ತಾವು ಮದ್ಯದ ಪ್ರಭಾವದಡಿಯಲ್ಲಿ ವಾಹನ ಚಲಾಯಿಸುತ್ತಿದ್ದು, ಪೊಲೀಸರು ದಂಡವನ್ನು ಮಾತ್ರ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾದಕ ವಸ್ತುಗಳ ಪ್ರಭಾವದಲ್ಲಿದ್ದೇನೆ ಎಂದು ಕೆಲವರು ತಪ್ಪಾಗಿ ವರದಿ ಮಾಡಿದ್ದಾರೆ ಎಂದಿದ್ದಾರೆ. ತಮ್ಮನ್ನು ಬಂಧಿಸಲಾಗಿಲ್ಲ ಮತ್ತು ತನ್ನ ವಾಹನವನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದಿದ್ದಾರೆ. ದಾಖಲೆಗಾಗಿ, ವಾಹನವನ್ನು ವಶಪಡಿಸಿಕೊಂಡು ತಕ್ಷಣವೇ ಬಿಡುಗಡೆ ಮಾಡಲಾಯಿತು ಎಂದಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/crime/influencer-helen-of-spartas-dhanya-car-seized-by-cops-after-17-km-chase-booked-for-drunk-drivin-suc-c0ogfol"/>
        </item>
        <item>
            <title><![CDATA[Bengaluru: 4 ವರ್ಷದ ಮಗು ಜತೆ ಕಟ್ಟಡದ ಮೇಲೆ ನಿಂತು ಆತ್ಮ*ಹತ್ಯೆಗೆ ಯತ್ನಿಸಿದ ಮಹಿಳೆ]]></title>
            <link>https://kannada.asianetnews.com/crime/bengaluru-woman-standing-on-the-edge-of-a-building-with-her-4-year-old-child-mrq/articleshow-ev25bx1</link>
            <guid isPermaLink="true">https://kannada.asianetnews.com/crime/bengaluru-woman-standing-on-the-edge-of-a-building-with-her-4-year-old-child-mrq/articleshow-ev25bx1</guid>
            <pubDate>Mon, 06 Jul 2026 06:48:25 +0530</pubDate>
            <description><![CDATA[&lt;p&gt;ಬೆಂಗಳೂರಿನ ದೊಡ್ಡಕಮ್ಮನಹಳ್ಳಿಯಲ್ಲಿ, ನಿವೃತ್ತ ಐಎಎಸ್&zwnj; ಅಧಿಕಾರಿಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ 4 ವರ್ಷದ ಮಗುವಿನೊಂದಿಗೆ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಬೇಕೆಂದು ಪಟ್ಟು ಹಿಡಿದಿದ್ದ ತಾಯಿ-ಮಗುವನ್ನು ಪೊಲೀಸರು ಸತತ 2 ಗಂಟೆಗಳ ಕಾಲ ಮನವೊಲಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwtfyt91ptmwfzh39x0d0fkt,imgname-mother-son-1783300581665.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಿವೃತ್ತ ಐಎಎಸ್&zwnj; ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ಆಗಿರುವ ಅನ್ಯಾಯ ಸರಿಪಡಿಸಲು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಒತ್ತಾಯಿಸಿ 4 ಅಂತಸ್ತಿನ ಕಟ್ಟಡದ ಮೇಲೆ ನಿಂತು ಆತ್ಮ*ಹತ್ಯೆಗೆ ಯತ್ನಿಸಿದ ತಾಯಿ ಹಾಗೂ ಮಗುವನ್ನು ಪೊಲೀಸ್&zwnj; ಅಧಿಕಾರಿ ಸತತವಾಗಿ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್&zwnj; ಕಾಲೇಜು ಸಮೀಪದ ಕಟ್ಟಡದಲ್ಲಿ ನಡೆದಿದೆ.&lt;/p&gt;&lt;p&gt;ಕೇರಳ ಮೂಲದ ಮರಿಯಾ (32) ಮತ್ತು ಆಕೆಯ 4 ವರ್ಷದ ಮಗುವನ್ನು ರಕ್ಷಿಸಲಾಗಿದ್ದು, ಮಹಿಳೆಗೆ ಆಪ್ತ ಸಮಾಲೋಚಕರ ಮೂಲಕ ಕೌನ್ಸೆಲಿಂಗ್&zwnj; ಕೊಡಿಸಲಾಗುತ್ತಿದೆ. ಭಾನುವಾರ ಮಧ್ಯಾಹ್ನ 11.30ರ ಸುಮಾರಿಗೆ ದೊಡ್ಡಕಮ್ಮನಹಳ್ಳಿ ಸಮೀಪದ ನೋಬೋನಗರದ ಮಾರುತಿ ಡೆಂಟಲ್&zwnj; ಕಾಲೇಜು ಸಮೀಪದ ಕಟ್ಟಡದಲ್ಲಿ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಬಹಳ ವರ್ಷಗಳಿಂದ ನಗರದಲ್ಲಿಯೇ ವಾಸವಾಗಿರುವ ಮರಿಯಾ ಮೊದಲು ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. 4 ತಿಂಗಳಿಂದ ದೊಡ್ಡಕಮ್ಮನಹಳ್ಳಿಯ ಮಾರುತಿ ಡೆಂಟಲ್&zwnj; ಕಾಲೇಜು ಪಕ್ಕದ ಕಟ್ಟಡದ 4ನೇ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ 4 ವರ್ಷದ ಮಗು ಜತೆ ವಾಸವಾಗಿದ್ದಾರೆ. ಭಾನುವಾರ ಮಧ್ಯಾಹ್ನ ತನ್ನ ಕೊಠಡಿ ಮೇಲ್ಭಾಗದಲ್ಲಿರುವ ವಾಟರ್&zwnj; ಟ್ಯಾಂಕ್&zwnj; ಮೇಲೆ ಹತ್ತಿ ಆತ್ಮ*ಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಸ್ಥಳಕ್ಕೆ ಬಂದ ಹುಳಿಮಾವು ಠಾಣೆಯ ಪೊಲೀಸರು ಮಹಿಳೆಗೆ ಮನವೊಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ವೇಳೆ ನಿವೃತ್ತ ಐಎಎಸ್&zwnj; ಅಧಿಕಾರಿ, ಸ್ಥಳೀಯ ಯುವಕನೊಬ್ಬನಿಂದ ನನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯ ಅಗ್ನಿಶಾಮಕ ದಳ ಮತ್ತು ಸಿವಿಲ್&zwnj; ಡಿಫೆನ್ಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಕಟ್ಟಡದ ಕೆಳಗೆ ಬಲೂನ್ ಬೆಡ್&zwnj; ಸಿದ್ದಪಡಿಸಿಕೊಂಡಿದ್ದರು. ನಂತರ ಇನ್&zwnj;ಸ್ಪೆಕ್ಟರ್&zwnj; ಜಗದೀಶ್&zwnj; ಅವರು ಆಕೆಗೆ ಸುಮಾರು 2 ಗಂಟೆಗಳ ಕಾಲ ಆಕೆಯನ್ನು ಮನವೊಲಿಸಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಸಿಎಂ ಭೇಟಿ ಮಾಡಿಸಲು ಪಟ್ಟು&lt;/strong&gt;&lt;/h3&gt;&lt;p&gt;ಮಹಿಳೆಯು ನನಗೆ ಪೊಲೀಸರು, ಕೋರ್ಟ್&zwnj; ಹಾಗೂ ಸರ್ಕಾರದಿಂದ ಅನ್ಯಾಯವಾಗಿದೆ. ಯಾರ ಮೇಲೂ ನಂಬಿಕೆ ಇಲ್ಲ. ನಾನು ಇಳಿಯಬೇಕೆಂದರೆ, ಕೂಡಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಪೊಲೀಸರು, ಭೇಟಿ ಮಾಡಿಸುವ ಭರವಸೆ ನೀಡಿದ ಬಳಿಕ ಆಕೆ ಕೆಳಗೆ ಇಳಿದು ಬಂದಿದ್ದಾರೆ. ವಿಚಾರಣೆ ವೇಳೆ ಈ ಹಿಂದಿನ ಪ್ರಕರಣಗಳಲ್ಲಿ ನನಗೆ ಅನ್ಯಾಯವಾಗಿದೆ. ನಿವೃತ್ತ ಐಎಎಸ್&zwnj; ಅಧಿಕಾರಿ ಹಾಗೂ ಹುಳಿಮಾವು ನಿವಾಸಿಯಾಗಿರುವ ಯುವಕನಿಂದ ಮೋಸವಾಗಿದೆ ಎಂದು ಹೇಳುತ್ತಿದ್ದಾರೆ. ಯಾವುದಕ್ಕೂ ಸಮರ್ಪಕ ಉತ್ತರ ನೀಡುತ್ತಿಲ್ಲ. ಸದ್ಯ ಆಕೆ ಆರೋಪಿಸಿದ ಯುವಕನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/bengaluru-woman-standing-on-the-edge-of-a-building-with-her-4-year-old-child-mrq/articleshow-ev25bx1"/>
        </item>
        <item>
            <title><![CDATA[ಬೆಂಗಳೂರಲ್ಲಿ ರಕ್ತಪಾತ: ಬಾರ್‌ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ ಬಾಟಲಿ ಚುಚ್ಚಿ ಹತ್ಯೆ]]></title>
            <link>https://kannada.asianetnews.com/bengaluru-urban/horror-incident-in-bengaluru-stabbed-to-death-with-a-beer-bottle-for-staring-at-someone-in-bar-gkn/articleshow-gwrwdb8</link>
            <guid isPermaLink="true">https://kannada.asianetnews.com/bengaluru-urban/horror-incident-in-bengaluru-stabbed-to-death-with-a-beer-bottle-for-staring-at-someone-in-bar-gkn/articleshow-gwrwdb8</guid>
            <pubDate>Tue, 07 Jul 2026 09:20:53 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ರಕ್ತಪಾತ ನಡೆದಿದೆ. ಬಾರ್&zwj;&zwnj;ನಲ್ಲಿ ಕೂತು ಗುರಾಯಿಸಿದ ಎಂಬ ಕಾರಣಕ್ಕೆ ವ್ಯಕ್ತಿಗೆ ಬೀರ್ ಬಾಟಲ್&zwnj;ನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxb5816z2eh2nsx9g3yr3rj,imgname-bengaluru-bar-uday-murder-1783396212774.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೂ ರಕ್ತಪಾತ ನಡೆಯುತ್ತಿರುವುದು ಆತಂಕ ಮೂಡಿಸಿದೆ. ಕೇವಲ ಗುರಾಯಿಸಿದ ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಚಾಕು ಹಾಗೂ ಬಿಯರ್ ಬಾಟಲಿಯಿಂದ ಚುಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಉದಯ್ ಕುಮಾರ್ ಕೊಲೆಯಾದ ದುರ್ದೈವಿ. ನಿನ್ನೆ ರಾತ್ರಿ ಸುಮಾರು 8:30 ರ ಸುಮಾರಿಗೆ ಜರಗನಹಳ್ಳಿಯ ಬಾರ್&zwnj; ಒಂದರ ಮುಂಭಾಗ ಈ ಕೃತ್ಯ ನಡೆದಿದೆ. ಆರೋಪಿಗಳಾದ ಚೆಲುವ ಮತ್ತು ತೇಜ ಎಂಬುವವರು ಉದಯ್ ಕುಮಾರ್&zwnj;ನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಮೃತ ಉದಯ್ ಕುಮಾರ್ ಮತ್ತು ಆರೋಪಿಗಳಿಗೆ ಮೊದಲೇ ಯಾವುದೇ ಪರಿಚಯವಿರಲಿಲ್ಲ. ಘಟನೆ ನಡೆದ ರಾತ್ರಿ ಬಾರ್&zwnj;ನಲ್ಲಿ ಕುಳಿತಿದ್ದಾಗ ಉದಯ್, ಆರೋಪಿಗಳ ಕಡೆಗೆ ಗುರಾಯಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಬಾರ್&zwnj;ನಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ತಾರಕಕ್ಕೇರಿದಾಗ ಉದಯ್ ಬಾರ್&zwnj;ನಿಂದ ಹೊರಬಂದು ನಡೆಯತೊಡಗಿದ್ದಾರೆ.&lt;/p&gt;&lt;p&gt;ಆದರೆ, ಸಿಟ್ಟಿನಲ್ಲಿದ್ದ ಆರೋಪಿಗಳು ಉದಯ್&zwnj;ನನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಾರ್&zwnj;ನಿಂದ ಸ್ವಲ್ಪ ದೂರ ಬಂದ ಮೇಲೆ ಮತ್ತೆ ಗಲಾಟೆ ಶುರು ಮಾಡಿದ್ದಲ್ಲದೆ, ಬಿಯರ್ ಬಾಟಲಿಯಿಂದ ಉದಯ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಬಾಟಲಿಯನ್ನು ಒಡೆದು ಉದಯ್&zwnj;ನ ಎದೆಯ ಎಡಭಾಗಕ್ಕೆ ಬಲವಾಗಿ ಚುಚ್ಚಿದ್ದಾರೆ.&lt;/p&gt;&lt;p&gt;ಬಾಟಲಿಯಿಂದ ಚುಚ್ಚಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿದ್ದು, ಉದಯ್ ಸ್ವಲ್ಪ ದೂರ ನಡೆದುಕೊಂಡು ಹೋಗಿ ಅಲ್ಲಿಯೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪುಟ್ಟೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲೇ ಇಂತಹ ಸಣ್ಣ ವಿಚಾರಕ್ಕೆ ಕೊಲೆ ನಡೆದಿರುವುದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.&lt;/p&gt;]]></content:encoded>
            <category>crime</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/horror-incident-in-bengaluru-stabbed-to-death-with-a-beer-bottle-for-staring-at-someone-in-bar-gkn/articleshow-gwrwdb8"/>
        </item>
        <item>
            <title><![CDATA[Bengaluru ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ, ಪ್ರಿಯಕರನಿಗೆ ಮೆಸೇಜ್ ಕಳುಹಿಸಿ ಆತ್ಮ*ತ್ಯೆಗೆ ಶರಣು!]]></title>
            <link>https://kannada.asianetnews.com/karnataka-districts/20-year-old-student-teju-dies-at-bengaluru-sankey-tank-gdp/articleshow-gxg9lgx</link>
            <guid isPermaLink="true">https://kannada.asianetnews.com/karnataka-districts/20-year-old-student-teju-dies-at-bengaluru-sankey-tank-gdp/articleshow-gxg9lgx</guid>
            <pubDate>Tue, 07 Jul 2026 09:12:43 +0530</pubDate>
            <description><![CDATA[&lt;p&gt;ಬೆಂಗಳೂರಿನ ಮಲ್ಲೇಶ್ವರಂನ ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ತೇಜು ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುನ್ನ ತನ್ನ ಪ್ರಿಯಕರನಿಗೆ 'ಸಾಯುತ್ತಿದ್ದೇನೆ' ಎಂದು ಸಂದೇಶ ಕಳುಹಿಸಿದ್ದು, ಪ್ರೇಮ ವೈಫಲ್ಯ ಹಾಗೂ ಕೌಟುಂಬಿಕ ಸಮಸ್ಯೆಗಳು ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಸದಾಶಿವನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxaeg083fxtreh3atw4vm96,imgname-bengaluru-sankey-tank-1783395467272.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧ ಸ್ಯಾಂಕಿ ಕೆರೆಗೆ ಹಾರಿ ಯುವತಿಯೊಬ್ಬಳು ಸಾವಿಗೆ ಶರಣಾಗಿದ್ದಾಳೆ, ಮೃತ ಯುವತಿಯನ್ನು ಬೆಂಗಳೂರಿನ ಚಿಕ್ಕಬಾಣವಾರ ಭಾಗದಲ್ಲಿ ವಾಸವಿದ್ದ 20 ವರ್ಷದ ವಿದ್ಯಾರ್ಥಿನಿ ತೇಜು ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇದು ಪ್ರೇಮ ವೈಫಲ್ಯ ಇರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;h2&gt;ರಾತ್ರಿ ವೇಳೆ ಒಬ್ಬಳೇ ಬಂದು ನೀರಿಗೆ ಜಿಗಿದ ಯುವತಿ!&lt;/h2&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ತೇಜು ಸೋಮವಾರ ರಾತ್ರಿ ವೇಳೆ ಸ್ಯಾಂಕಿ ಕೆರೆಯ ಬಳಿ ಒಬ್ಬಳೇ ಬಂದಿದ್ದಾಳೆ. ಕೆರೆಯ ಆವರಣದೊಳಗೆ ಪ್ರವೇಶಿಸಿ, ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ನೀರಿಗೆ ಹಾರಿ ಸಾವು ಕಂಡಿದ್ದಾಳೆ. ಮಂಗಳವಾರ ಬೆಳಿಗ್ಗೆ ಕೆರೆಯಲ್ಲಿ ಯುವತಿಯ ಶವ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಸಾಯುವ ಮುನ್ನ ಪ್ರಿಯಕರನಿಗೆ ಮೆಸೇಜ್ ಮಾಡಿದ್ದ ತೇಜು!&lt;/h2&gt;&lt;p&gt;ಈಕೆಗೆ ಪ್ರೇಮ ಪ್ರಸಂಗದ ಹಿನ್ನೆಲೆ ಇರುವುದು ಬೆಳಕಿಗೆ ಬಂದಿದೆ. ಸಾವಿಗೆ ಶರಣಾಗುವ ಮುನ್ನ ತೇಜು ತನ್ನ ಬಾಯ್&zwnj;ಫ್ರೆಂಡ್&zwnj;ಗೆ &quot;ನಾನು ಸಾಯುತ್ತಿದ್ದೇನೆ&quot; ಎಂದು ಮೊಬೈಲ್&zwnj;ನಲ್ಲಿ ಮೆಸೇಜ್ ಕಳುಹಿಸಿದ್ದಳು. ಇದನ್ನು ಕಂಡು ಆತಂಕಗೊಂಡ ಪ್ರಿಯಕರ, ತಕ್ಷಣವೇ ಆ ಮೆಸೇಜ್ ಅನ್ನು ಯುವತಿಯ ತಾಯಿಗೆ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದಾನೆ. ಆದರೆ, ಅಷ್ಟರಲ್ಲಾಗಲೇ ತೇಜು ಸ್ಯಾಂಕಿ ಕೆರೆಗೆ ಹಾರಿ ತನ್ನ ಜೀವನ ಮುಗಿಸಿಕೊಂಡಿದ್ದಾಳೆ.&lt;/p&gt;&lt;p&gt;ತೇಜು ಅವರ ತಂದೆ ಮತ್ತು ತಾಯಿ ಕೆಲ ವರ್ಷಗಳ ಹಿಂದೆಯೇ ವಿಚ್ಛೇದನ (ಡೈವೋರ್ಸ್) ಪಡೆದು ದೂರಾಗಿದ್ದರು ಎನ್ನಲಾಗಿದೆ. ತಾಯಿ ಮೆಟ್ರೋ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಮಗಳನ್ನು ಸಾಕಿ ಸಲಹುತ್ತಿದ್ದರು. ಹೆತ್ತವರ ವಿಚ್ಛೇದನ ಹಾಗೂ ಪ್ರೇಮ ಜೀವನದಲ್ಲಾದ ಏರುಪೇರು ಯುವತಿಯನ್ನು ತೀವ್ರ ಮಾನಸಿಕ ಖಿನ್ನತೆಗೆ ದೂಡಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;h2&gt;ಸ್ಥಳಕ್ಕೆ ಸದಾಶಿವನಗರ ಪೊಲೀಸರ ಭೇಟಿ&lt;/h2&gt;&lt;p&gt;ಘಟನಾ ಸ್ಥಳಕ್ಕೆ ಸದಾಶಿವನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆರೆಯಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಈಗಾಗಲೇ ಯುವತಿಯ ಪೋಷಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಪೋಷಕರು ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ಬರುವುದಕ್ಕಾಗಿ ಕಾಯುತ್ತಿದ್ದಾರೆ.&lt;/p&gt;&lt;p&gt;ಯುವತಿಯ ಮೊಬೈಲ್ ಕರೆಗಳ ವಿವರ (CDR) ಹಾಗೂ ಆಕೆ ಪ್ರಿಯಕರನಿಗೆ ಕಳುಹಿಸಿದ್ದ ಮೆಸೇಜ್&zwnj;ಗಳನ್ನು ಆಧರಿಸಿ ಸದಾಶಿವನಗರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿ ವಿಚಾರಣೆಯ ಬಳಿಕವಷ್ಟೇ ಬೆಳಕಿಗೆ ಬರಬೇಕಿದೆ.&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/20-year-old-student-teju-dies-at-bengaluru-sankey-tank-gdp/articleshow-gxg9lgx"/>
        </item>
        <item>
            <title><![CDATA[Theft: ಹೈವೇಯಲ್ಲಿ ಹೈಡ್ರಾಮಾ; 13 ಕಿಮೀ ಬೆನ್ನಟ್ಟಿ ಪೊಲೀಸ್‌ನ ಕಾಲರ್ ಹಿಡಿದು ಧರ್ಮದೇಟು ನೀಡಿದ ಟ್ರಕ್‌ ಚಾಲಕ!]]></title>
            <link>https://kannada.asianetnews.com/india-news/drama-on-the-highway-truck-driver-gives-alms-to-police-after-13-km-chase-do-you-know-why-the-policeman-fell-bmk/articleshow-k0ieb9l</link>
            <guid isPermaLink="true">https://kannada.asianetnews.com/india-news/drama-on-the-highway-truck-driver-gives-alms-to-police-after-13-km-chase-do-you-know-why-the-policeman-fell-bmk/articleshow-k0ieb9l</guid>
            <pubDate>Mon, 06 Jul 2026 21:33:37 +0530</pubDate>
            <description><![CDATA[&lt;p&gt;police officer stealing money: &amp;nbsp;ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್&zwnj;ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww2n9e4yrtd0mn9q2ehqy4m,imgname-untitled-design--26--1783353746884.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನರ ರಕ್ಷಕಣೆ ಭಕ್ಷಕನಾದಗ, ಸಾರ್ವಜನಿಕ ಜನ ಜೀವನ ಏನಾಗಬೇಕು. ಹೌದು ಬೇಲಿನೇ ಎದ್ದು ಹೊಲ ಮೇಯ್ದಂತೆ, ಪೊಲೀಸ್&zwnj;ನೆ ಕಳ್ಳತನ ಮಾಡಿ ನಡು ರಸ್ತೆಯಲ್ಲಿ ಧರ್ಮದೇಟು ತಿಂದ ಘಟನೆಯೊಂದು ಸಂಭವಿಸಿದೆ. ಈ ಕಥೆಯನ್ನು ಕೇಳಿದರೆ, ನೀವು ಬೆಚ್ಚಿಬೀಳ್ತೀರಾ. ಈ ಸ್ಟೋರಿ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಹಮೀರ್&zwnj;ಪುರದಲ್ಲಿ ಧರ್ಮಸಂಕಟ!&lt;/strong&gt;&lt;/h2&gt;&lt;p&gt;ಹೌದು ಉತ್ತರ ಪ್ರದೇಶದ ಹಮೀದ್&zwnj;ಪುರದಲ್ಲಿ ಪೊಲೀಸ್&zwnj; ಅಧಿಕಾರಿಯೊಬ್ಬರು ಧರ್ಮ ಸಂಕಟಕ್ಕೆ ಸಿಲುಕಿದ ಘಟನೆಯೊಂದು ನಡೆದಿದೆ. ಪೊಲೀಸ್&zwnj; ಟ್ರಕ್&zwnj; ಡ್ರೈವರ್&zwnj;ನನ್ನು ಯಾಮಾರಿಸಿದ್ದು, ನಂತರ ಅವನನ್ನು ಚೇಸ್ ಮಾಡಿದ್ದೆಲ್ಲ ಸಿನಿಮೀಯ ಸ್ಟೈಲ್&zwnj;ನಲ್ಲಿ ನಡೆದಿದೆ. ಇನ್ನು ಪೊಲೀಸ್&zwnj; ಕದ್ದ ಬಗೆಯನ್ನು ನೋಡುವುದಾದರೆ, ಪೊಲೀಸ್&zwnj; ಅಧಿಕಾರಿ ಘಟಂಪುರದಿಂದ ಹಮೀರ್&zwnj;ಪುರಕ್ಕೆ ಹೋಗುವ ದಾರಿಯಲ್ಲಿ ಟ್ರಕ್&zwnj;ವೊಂದಕ್ಕೆ ಲಿಫ್ಟ್&zwnj; ಕೇಳಿದ್ದಾನೆ. ಅದಕ್ಕೆ ಇವರನ್ನು ಹತ್ತಿಸಿಕೊಂಡ ಟ್ರಕ್&zwnj; ಡ್ರೈವರ್&zwnj; ಮಾನವೀಯತೆ ಮೆರೆದರೆ, ಪೊಲೀಸ್&zwnj;ನು ಮೆತ್ತಗೆ ಲಾರಿ ಕ್ಯಾಬಿನ್&zwnj;ನಲ್ಲಿ 20,000 ಎಗರಿಸಿ, ಓಡಿ ಹೋಗಿದ್ದಾನೆ. ನಂತರ ಖಾಕಿ ಖದೀಮ ಸಿಕ್ಕಿ ಬಿದ್ದಿದ್ದೆ ರೋಚಕ.&lt;/p&gt;&lt;h3&gt;&lt;strong&gt;ಸಿನಿಮೀಯ ಸ್ಟೈಲ್&zwnj;ನಲ್ಲಿ ಚೇಸ್!&lt;/strong&gt;&lt;/h3&gt;&lt;p&gt;ಟ್ರಕ್&zwnj; ಚಾಲಕನ ದುಡ್ಡು ಅಪಹರಿಸಿ ಓಡಿ ಹೋಗಿದ್ದ ಆರೋಪಿಯನ್ನು ಟ್ರಕ್ ಚಾಕ 13 ಕೀ.ಮೀ ಚೇಸ್ ಮಾಡಿ, ಅವನನ್ನು ಹಿಡಿದಿದ್ದಾನೆ. ಅಷ್ಟೇ ಅಲ್ಲ, ಸಿಕ್ಕ ತಕ್ಷಣ ಹಣ ವಸೂಲಿ ಮಾಡಿ, ನಡು ರಸ್ತೆಯಲ್ಲೇ ಕಾಲರ್ ಹಿಡಿದು, ತರಾಟೆಗೆ ತೆಗೆದುಗೊಂಡು ಧರ್ಮದೇಟು ನೀಡಿದ್ದಾನೆ. ಅಷ್ಟೇ ಅಲ್ಲ ವೈರಲ್ ವಿಡಿಯೋ ಬೆನ್ನಲ್ಲೇ ಸಬ್&zwnj; ಇನ್&zwnj;ಸ್ಪೆಕ್ಟರ್ ತಕ್ಷಣ ಅಮಾನತುಗೊಳಿಸಿದ್ದಲ್ಲದೇ ಅರೆಸ್ಟ್&zwnj; ಮಾಡಲಾಗಿದೆ.&lt;/p&gt;&lt;h3&gt;&lt;strong&gt;ವ್ಯವಸ್ಥೆಗೆ ಹಿಡಿದ ಕೈ ಗನ್ನಡಿ!&lt;/strong&gt;&lt;/h3&gt;&lt;p&gt;ಸಾರ್ವಜನಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಬೇಕಾದ ಜವಾಬ್ದಾರಿಯುತ ಪೊಲೀಸ್ ಅಧಿಕಾರಿಯೇ ಕಳ್ಳತನಕ್ಕೆ ಇಳಿದಿರುವುದು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ತಪ್ಪು ಮಾಡಿದ ಅಧಿಕಾರಿಯನ್ನು ಇಲಾಖೆಯು ತಕ್ಷಣವೇ ಅಮಾನತುಗೊಳಿಸಿ, ಕಾನೂನು ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇಂತಹ ಕಠಿಣ ಕ್ರಮಗಳು ಇಲಾಖೆಯ ಮೇಲಿರುವ ಸಾರ್ವಜನಿಕರ ನಂಬಿಕೆಯನ್ನು ಉಳಿಸಲು ಮತ್ತು ಇತರ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಅತ್ಯಂತ ಅತ್ಯಗತ್ಯವಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಲ್ಲಿ ಮನೆ ಮಾಡಿದ ಆತಂಕ&lt;/strong&gt;ಇತ್ತೀಚಿನ ದಿನಗಳಲ್ಲಿ ಇಲಾಖೆಯ ಘನತೆಗೆ ಧಕ್ಕೆ ತರುವ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೇವಲ ಅಮಾನತು ಶಿಕ್ಷೆಗೆ ಮಾತ್ರ ಸೀಮಿತವಾಗದೆ, ಇಂತಹ ಭ್ರಷ್ಟ ಮತ್ತು ಅಪರಾಧ ಮನೋಭಾವದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ. ಆಗ ಮಾತ್ರ ಸಾರ್ವಜನಿಕ ವಲಯದಲ್ಲಿ ಖಾಕಿ ಮುಖವಾಡ ಧರಿಸಿದ ಅಪರಾಧಿಗಳಿಗೆ ಸೂಕ್ತ ನಡುಕ ಹುಟ್ಟಿಸಲು ಮತ್ತು ಪೊಲೀಸ್ ಇಲಾಖೆಯ ನೈಜ ಗೌರವವನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ.&lt;/h3&gt;]]></content:encoded>
            <category>crime</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/india-news/drama-on-the-highway-truck-driver-gives-alms-to-police-after-13-km-chase-do-you-know-why-the-policeman-fell-bmk/articleshow-k0ieb9l"/>
        </item>
        <item>
            <title><![CDATA[ಹುಟ್ಟುಹಬ್ಬದ ದಿನವೇ ಹ*ತ್ಯೆಯಾದ ಪುತ್ರ, ಕಣ್ಣೀರಿಟ್ಟು ತಾಯಿಯ ಗೋಳಾಟ: ಮಂಡ್ಯದಲ್ಲಿ ಹೃದಯವಿದ್ರಾವಕ ಘಟನೆ]]></title>
            <link>https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss</link>
            <guid isPermaLink="true">https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss</guid>
            <pubDate>Tue, 07 Jul 2026 17:52:24 +0530</pubDate>
            <description><![CDATA[&lt;p&gt;ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್&zwnj;ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದಾನೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy8dvfjk5wvvrmn3xz89nfg,imgname-xm-1783426903538.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಜು.07): &lt;/strong&gt;ಹುಟ್ಟುಹಬ್ಬದ ಸಂಭ್ರಮ ಇರಬೇಕಿದ್ದ ದಿನವೇ ತಾಯಿಯ ಮಡಿಲಿಗೆ ಮಗನ ಮೃತದೇಹ ಬಂದಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್&zwnj;ನಲ್ಲಿ ನಡೆದಿದೆ. ಬಂಡಿಹೊಳೆ ಗ್ರಾಮದ ಯುವಕ ರಾಕೇಶ್ ಬರ್ಬರವಾಗಿ ಹ*ತ್ಯೆಯಾಗಿದ್ದು, ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಸ್ಥಳದಲ್ಲಿದ್ದವರ ಕಣ್ಣಂಚನ್ನೂ ತೇವಗೊಳಿಸಿದೆ. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ರಾಕೇಶ್, ಬುಧವಾರ ಬೆಳಗ್ಗೆ ಮೈಸೂರಿನ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು.&lt;/p&gt;&lt;p&gt;&lt;strong&gt;ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ&lt;/strong&gt;&lt;/p&gt;&lt;p&gt;ಮನೆ ಬಿಡುವ ಮುನ್ನ ತಾಯಿಗೆ ₹1,000 ಅನ್ನು ಫೋನ್&zwnj;ಪೇ ಮೂಲಕ ಕಳುಹಿಸಿದ್ದರೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲಸ ಮುಗಿದ ಬಳಿಕ ಮನೆಗೆ ವಾಪಸ್ ಬರುತ್ತೇನೆ ಎಂದು ಹೇಳಿದ್ದ ರಾಕೇಶ್, ರಾತ್ರಿ ಮತ್ತೆ ಕುಟುಂಬವನ್ನು ಸಂಪರ್ಕಿಸಿರಲಿಲ್ಲ. ಮಗ ತಡವಾಗುತ್ತಿದ್ದಂತೆ ಆತಂಕಗೊಂಡ ತಾಯಿ ಹಲವು ಬಾರಿ ಕರೆ ಮಾಡಿದ್ದರು. ಆದರೆ ಬೆಳಗಿನ ಜಾವ ಸುಮಾರು 5.30ರ ವೇಳೆಗೆ ಕರೆ ಸ್ವೀಕರಿಸಿದ್ದು ರಾಕೇಶ್ ಅಲ್ಲ, ಬೇರೊಬ್ಬ ವ್ಯಕ್ತಿ. ಆಗ ಮೊಬೈಲ್ ಎಲ್ಲೋ ಕಳೆದುಹೋಗಿರಬಹುದು ಎಂದುಕೊಂಡಿದ್ದ ತಾಯಿಗೆ, ಕೆಲವೇ ಗಂಟೆಗಳಲ್ಲಿ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿದೆ.&lt;/p&gt;&lt;p&gt;&lt;strong&gt;ಆರೋಪಿಗಳ ಪತ್ತೆಗೆ ತನಿಖೆ&lt;/strong&gt;&lt;/p&gt;&lt;p&gt;ತಾಯಿ ಹೇಳುವ ಪ್ರಕಾರ, &quot;ರಾತ್ರಿ ಪ್ರಯಾಣ ಬೇಡ, ಸಂಬಂಧಿಕರ ಮನೆಯಲ್ಲಿ ಉಳಿದು ಬೆಳಿಗ್ಗೆ ಬಾ&quot; ಎಂದು ಮಗನಿಗೆ ಹೇಳಿದ್ದರು. ರಾಕೇಶ್ ಕೂಡ ಬೆಳಿಗ್ಗೆ ಬರುತ್ತೇನೆ ಎಂದಿದ್ದ. ಆದರೆ ಆ ಮಾತು ಕೊನೆಯ ಮಾತಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪ್ರಾಥಮಿಕ ಮಾಹಿತಿಯಂತೆ, ಬುಧವಾರ ಮಧ್ಯರಾತ್ರಿ ಕೆ.ಆರ್.ಎಸ್. ಬಸ್ ನಿಲ್ದಾಣದ ಬಳಿ ರಾಕೇಶ್ ಮೇಲೆ ದುಷ್ಕರ್ಮಿಗಳು ಕಲ್ಲಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹ*ತ್ಯೆ ಮಾಡಿದ್ದಾರೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ನನ್ನ ಮಗನೇ ನನ್ನ ಪ್ರಪಂಚ&lt;/strong&gt;&lt;/h2&gt;&lt;p&gt;ಅತ್ಯಂತ ವೇದನಾದಾಯಕ ಸಂಗತಿಯೆಂದರೆ, ಘಟನೆ ನಡೆದ ದಿನವೇ ರಾಕೇಶ್ ಅವರ ಹುಟ್ಟುಹಬ್ಬವಾಗಿತ್ತು. &quot;ನನ್ನ ಮಗನೇ ನನ್ನ ಪ್ರಪಂಚ... ಯಾರಿಗೆ ಏನು ದ್ರೋಹ ಮಾಡಿದ್ದನೋ ಗೊತ್ತಿಲ್ಲ&quot; ಎಂದು ತಾಯಿ ಎದೆಬಡಿದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯ ಕಂಡವರ ಮನಕಲಕುವಂತಿತ್ತು. ಈ ಹ*ತ್ಯೆಗೆ ನಿಖರ ಕಾರಣವೇನು, ದುಷ್ಕರ್ಮಿಗಳು ಯಾರು ಎಂಬುದು ಇನ್ನಷ್ಟೇ ತನಿಖೆಯಿಂದ ಬಹಿರಂಗವಾಗಬೇಕಿದೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/mandya-krs-mu-rder-youth-killed-on-birthday-investigation-begins-gvd/articleshow-kddngss"/>
        </item>
        <item>
            <title><![CDATA[Ketan Murder ಬೆಚ್ಚಿಬೀಳೋ ರಹಸ್ಯ ಬಯಲು ​: ಸಿಯಾಗೆ ಮದ್ವೆಯಾಗಿ 4 ತಿಂಗಳು? ಹನಿಮೂನ್‌ ಹಂತಕಿ ಸೋನಂ ಈಕೆ ಗುರು]]></title>
            <link>https://kannada.asianetnews.com/gallery/crime/police-claims-siya-chetan-were-married-researched-sonam-raghuvanshis-case-to-plot-ketan-to-finish-suc-kyukl8y</link>
            <guid isPermaLink="true">https://kannada.asianetnews.com/gallery/crime/police-claims-siya-chetan-were-married-researched-sonam-raghuvanshis-case-to-plot-ketan-to-finish-suc-kyukl8y</guid>
            <pubDate>Tue, 07 Jul 2026 20:46:17 +0530</pubDate>
            <description><![CDATA[ಭಾವಿ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್, ತನ್ನ ಲವರ್&zwnj;ನನ್ನು ಮೊದಲೇ ಮದುವೆಯಾಗಿದ್ದಳು. ಕೊಲೆ ಮಾಡಿ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಹೇಗೆಂದು ತಿಳಿಯಲು, ಈಕೆ ಗೂಗಲ್&zwnj;ನಲ್ಲಿ 'ಹನಿಮೂನ್&zwnj; ಹಂತಕಿ' ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwyj7j3gz0by1ckvda0s21e8,imgname-ketan-murder-case-1783437183087.jpg" type="image/jpeg" height="390" width="690"/>
            <content:encoded><![CDATA[ಭಾವಿ ಪತಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿರುವ ಸಿಯಾ ಗೋಯಲ್, ತನ್ನ ಲವರ್&zwnj;ನನ್ನು ಮೊದಲೇ ಮದುವೆಯಾಗಿದ್ದಳು. ಕೊಲೆ ಮಾಡಿ ಸಿಕ್ಕಿಬಿದ್ದರೆ ತಪ್ಪಿಸಿಕೊಳ್ಳುವುದು ಹೇಗೆಂದು ತಿಳಿಯಲು, ಈಕೆ ಗೂಗಲ್&zwnj;ನಲ್ಲಿ 'ಹನಿಮೂನ್&zwnj; ಹಂತಕಿ' ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ.&lt;img&gt;&lt;p&gt;ಮದುವೆ ಇಷ್ಟವಿಲ್ಲವೆಂದು ಲವರ್&zwnj; ಜೊತೆಗೂಡಿ ಭಾವಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತಿರುವ ಸಿಯಾ ಗೋಯಲ್&zwnj; ಕುರಿತಾದ ಒಂದೊಂದೇ ಶಾಕಿಂಗ್&zwnj; ಮಾಹಿತಿಗಳು ಹೊರಬರುತ್ತಲೇ ಇವೆ. ಇದಾಗಲೇ ತಮ್ಮ ಮಗಳು ತಪ್ಪಿತಸ್ಥಳಾಗಿದ್ದರೆ ಅದೇ ಸ್ಥಳದಿಂದ ತಳ್ಳಿ ಸಾಯಿಸಿ ಎಂದಿದ್ದರು ತಂದೆ, ಆಕೆ ಕೊಲೆಗಾತಿ ಎಂದು ಸಾಬೀತಾದರೆ ಗಲ್ಲು ಶಿಕ್ಷೆ ನೀಡಿ ಎಂದಿದ್ದರು ತಾಯಿ.&lt;/p&gt;&lt;img&gt;&lt;p&gt;ಇವೆಲ್ಲವುಗಳ ನಡುವೆ, ಸಿಯಾ ಇದಾಗಲೇ ನಾಲ್ಕು ತಿಂಗಳ ಹಿಂದೆ ಲವರ್&zwnj; ಚೇತನ್&zwnj; ಜೊತೆ ಮದುವೆಯಾಗಿರುವುದಾಗಿ ಪೊಲೀಸರ ತನಿಖೆಯಿಂದ ಬಯಲಾಗಿದೆ! ಚೇತನ್&zwnj; ಜೊತೆ ಮದ್ವೆಯಾಗಿದ್ದನ್ನು ಎಲ್ಲಿಯೂ ಹೇಳಿಕೊಳ್ಳದೇ ಇನ್ನೊಂದು ಮದ್ವೆಗೆ ಸಿದ್ಧಳಾಗಿ ಕೊಲೆ ಮಾಡುವ ಹಂತಕ್ಕೆ ಹೋಗಿದ್ದಾರೆ ಸಿಯಾ.&lt;/p&gt;&lt;img&gt;&lt;p&gt;ಅಷ್ಟಕ್ಕೂ ತಾನು ಕೊಲೆ ಮಾಡಿ ಸಿಕ್ಕಿಹಾಕಿಕೊಂಡಿದ್ರೆ, ಹೇಗೆ ತಪ್ಪಿಸಿಕೊಳ್ಳಬಹುದು ಎಂದು ಮೊದಲೇ ಯೋಚನೆ ಮಾಡಿದ್ದ ಈ ಹಂತಕಿ, ಗೂಗಲ್&zwnj;ನಲ್ಲಿ ಹನಿಮೂನ್&zwnj; ಹಂತಕಿ ಸೋನಂ ರಘುವಂಶಿ ಕುರಿತು ಅಧ್ಯಯನ ಮಾಡಿದ್ದಳು. ನಮ್ಮ ಕಾನೂನು ವ್ಯವಸ್ಥೆಯ ಅಡಿಯಲ್ಲಿ ಪತಿಯನ್ನೇ ಕೊಲೆ ಮಾಡಿರುವ ಆರೋಪ ಹೊತ್ತ ಸೋನಂ ಹೇಗೆ ಸುಲಭದಲ್ಲಿ ಜಾಮೀನು ಪಡೆದುಕೊಂಡಿದ್ದಳು ಎನ್ನುವ ಬಗ್ಗೆ ಈಕೆ ಗೂಗಲ್&zwnj;ನಲ್ಲಿ ಸರ್ಚ್ ಮಾಡಿರುವುದು ಬಯಲಾಗಿದೆ.&lt;/p&gt;&lt;img&gt;&lt;p&gt;ಹೆಣ್ಣುಮಕ್ಕಳನ್ನು ಪೊಲೀಸ್ ಠಾಣೆಯಲ್ಲಿ ಹೊಡೆಯುತ್ತಾರೆಯೇ, ಸಿಕ್ಕಿ ಹಾಕಿಕೊಂಡರೆ ಪೊಲೀಸ್&zwnj; ಸ್ಟೇಷನ್&zwnj;ನಲ್ಲಿ ಹೆಣ್ಣುಮಕ್ಕಳಿಗೆ ಟ್ರೀಟ್&zwnj;ಮೆಂಟ್&zwnj; ಹೇಗಿರುತ್ತದೆ ಎಂದೆಲ್ಲಾ ಗೂಗಲ್&zwnj;ನಲ್ಲಿ ಸರ್ಚ್ ಮಾಡಿದ್ದ ಸಿಯಾ, ಸೋನಂ ರಘುವಂಶಿ ಸುಲಭದಲ್ಲಿ ಜಾಮೀನು ಪಡೆದುಕೊಂಡದ್ದು ಹೇಗೆ, ಅವಳು ಹೇಗೆ ಸಿಕ್ಕಿಬಿದ್ದಿದ್ದಳು ಎನ್ನೋದನ್ನೆಲ್ಲಾ ಡೀಪ್&zwnj; ಸ್ಟಡಿ ಮಾಡಿದ್ದಳು ಎನ್ನುವುದು ತಿಳಿದುಬಂದಿದೆ! ಕೊಲೆ ಮಾಡುವಾಗ ಸೋನಂ ಮಾಡಿದ ತಪ್ಪೇನು ಎನ್ನುವ ಬಗ್ಗೆಯೂ ಇವಳು ಅಧ್ಯಯನ ಮಾಡಿದ್ದಳು ಎನ್ನುವುದು ಪೊಲೀಸ್​ ತನಿಖೆ ವೇಳೆ ತಿಳಿದುಬಂದಿದೆ!&lt;/p&gt;&lt;img&gt;&lt;p&gt;ಅಷ್ಟಕ್ಕೂ ಸೋನಂ ರಘುವಂಶಿಯ ಜಾಮೀನನ್ನು ರದ್ದು ಮಾಡಲು ಸುಪ್ರೀಂಕೋರ್ಟ್ ಕೂಡ ನಿರಾಕರಿಸಿರುವ ಹಿನ್ನೆಲೆಯಲ್ಲಿ, ತಮ್ಮ ಮಗನನ್ನು ಕಳೆದುಕೊಂಡಿರುವ ಅಪ್ಪ-ಅಮ್ಮನ ಕಣ್ಣೀರು ಒಂದೆಡೆಯಾದರೆ, ಇಂಥ ಕ್ರೌರ್ಯ ಎಸಗಿರುವ ಆರೋಪಿ ಜಾಮೀನಿನ ಮೇಲೆ ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾಳೆ. ಇವೆಲ್ಲವೂ ಸಿಯಾಗೆ ವರದಾನ ಆಗಿರುವುದು ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ನಮ್ಮ ಕಾನೂನು ವ್ಯವಸ್ಥೆ ಹೇಗೆ ಇನ್ನೊಂದು ಕೊಲೆ ಮಾಡಲು ಪ್ರೇರೇಪಣೆ ನೀಡುತ್ತಿದೆ ಎನ್ನುವ ಶಾಕಿಂಗ್&zwnj; ಸತ್ಯ ಈಕೆಯ ಗೂಗಲ್&zwnj; ಸರ್ಚ್&zwnj;ನಿಂದ ತಿಳಿದುಬರುತ್ತಿದೆ. ಕೊಲೆ ಮಾಡಿ ಹೋದ್ರೂ ಸುಲಭದಲ್ಲಿ ಹೇಗೆ ಜಾಮೀನು ಪಡೆದುಕೊಳ್ಳಬಹುದು ಎನ್ನೋದನ್ನು ಮೊದಲೇ ಪ್ಲ್ಯಾನ್&zwnj; ಮಾಡಿದ್ದಳು ಎಂದ ಮೇಲೆ ಯಾವ ರೀತಿಯಲ್ಲಿ ಈಕೆ ತಲೆ ಉಪಯೋಗಿಸರಬಹುದು ಲೆಕ್ಕ ಹಾಕಿ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/crime/police-claims-siya-chetan-were-married-researched-sonam-raghuvanshis-case-to-plot-ketan-to-finish-suc-kyukl8y"/>
        </item>
        <item>
            <title><![CDATA[ರಾಮ ಮಂದಿರದಲ್ಲಿ ಕಳ್ಳತನ ಘಟನೆ: ಭಾಗಿಯಾದವರ ಬಗ್ಗೆ ಶಾಕಿಂಗ್​ ಮಾಹಿತಿ ಬಾಯ್ದಿಟ್ಟ ಆರೋಪಿ]]></title>
            <link>https://kannada.asianetnews.com/india-news/accused-admits-lavish-spending-as-ram-mandir-temple-theft-probe-deepens-suc/articleshow-nummzyf</link>
            <guid isPermaLink="true">https://kannada.asianetnews.com/india-news/accused-admits-lavish-spending-as-ram-mandir-temple-theft-probe-deepens-suc/articleshow-nummzyf</guid>
            <pubDate>Mon, 06 Jul 2026 17:58:26 +0530</pubDate>
            <description><![CDATA[ಅಯೋಧ್ಯೆಯ ರಾಮಮಂದಿರ ದರೋಡೆ ಪ್ರಕರಣದಲ್ಲಿ, 15 ಸಾವಿರ ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಈತ, ಗ್ಯಾಂಗ್&zwnj;ನ ರಹಸ್ಯ ಸಭೆಗಳು ಮತ್ತು ಹಣದ ಬಳಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪೊಲೀಸರು ಸಂಪೂರ್ಣ ಜಾಲವನ್ನು ಭೇದಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwvpc2ppkstdchee6jyf70a9,imgname-ram-mandir-1783340862166.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ದರೋಡೆ, ಚಿನ್ನಾಭರಣ ಲೂಟಿಯ ಬಗ್ಗೆ ದಿನದಿಂದ ದಿನಕ್ಕೆ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ಇದಾಗಲೇ ಕೆಲವರನ್ನು ಪೊಲೀಸರು ಅರೆಸ್ಟ್​ ಮಾಡಿ ತಮ್ಮದೇ ಆದ ರೀತಿಯಲ್ಲಿ ಬಾಯಿ ಬಿಡಿಸುತ್ತಿದ್ದಾರೆ. ಇದೀಗ ಐಷಾರಾಮಿ ಜೀವನ ನಡೆಸುತ್ತಿದ್ದ 15 ಸಾವಿರ ರೂಪಾಯಿ ಸಂಬಳದ ಅವಿನಾಶ್ ಶುಕ್ಲಾ ಶಾಕಿಂಗ್​ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಭಾಗಿಯಾದವರು ಯಾರು, ಎಲ್ಲರೂ ಸೇರಿ ಹೇಗೆ ಸಭೆ ನಡೆಸುತ್ತಿದ್ದೆವು, ಅವರ ಗುಪ್ತ ಜಾಗ ಯಾವುದಾಗಿತ್ತು ಎಲ್ಲವನ್ನೂ ವಿವರಿಸಿದ್ದಾನೆ.&lt;/p&gt;&lt;h2&gt;&lt;strong&gt;15 ಸಾವಿರ ಸಂಬಳ: ಐಷಾರಾಮಿ ಜೀವನ&lt;/strong&gt;&lt;/h2&gt;&lt;p&gt;ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ ಮತ್ತು ರಾಮಶಂಕರ್ ಮಿಶ್ರಾ ಸೇರಿದಂತೆ ನಮಗೆಲ್ಲರೂ ಈ ಕಳ್ಳತನದ ಮಾಹಿತಿ ಇತ್ತು. ಕಳ್ಳತನ ಮಾಡಿದ ನಂತರ, ನಾವೆಲ್ಲಾ ರಹಸ್ಯವಾಗಿ ಭೇಟಿಯಾಗಿ ಸಭೆಗಳನ್ನು ನಡೆಸುತ್ತಿದ್ದೆವು. ಸಭೆಗಳಿಗಾಗಿ 14 ಕೋಸಿ ಪರಿಕ್ರಮ ಮಾರ್ಗದಲ್ಲಿರುವ ಏಕಾಂತ ಪ್ರದೇಶವನ್ನು ಆರಿಸಿಕೊಂಡಿದ್ದೆವು ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ. ಮಾತ್ರವಲ್ಲದೇ, ಅವಿನಾಶ್ ಶುಕ್ಲಾಗೆ ಬರುತ್ತಿದ್ದುದು 15 ಸಾವಿರ ರೂಪಾಯಿ ಸಂಬಳ, ಆದರೆ ಕದ್ದ ಹಣದಿಂದ ಲಕ್ಷ ಲಕ್ಷ ಹಣವನ್ನು ಗರ್ಲ್&zwnj;ಫ್ರೆಂಡ್&zwnj; ಅಕೌಂಟ್&zwnj;ಗೆ ಹಾಕಿದ್ದ. ಅವಳಿಗೆ ದುಬಾರಿ ಬೆಲೆಯ ಐಫೋನ್ ಗಿಫ್ಟ್ ಕೊಟ್ಟಿದ್ದ. ಹೊಸ ಮನೆ ಕಟ್ಟಿಸಿ, ಸ್ವಂತ ಕಾರನ್ನು ಕೂಡ ಖರೀದಿ ಮಾಡಿದ್ದ. ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಿಸಿದ್ದ, ಅವರು ಶಿಕ್ಷಕರಾಗಿರುವ ಕಾರಣ, ಯಾರಿಗೂ ಸಂಶಯ ಬರಲಾರದು ಎನ್ನುವುದು ಆತನ ಪ್ಲ್ಯಾನ್​ ಆಗಿತ್ತು ಎನ್ನುವುದು ತಿಳಿದಿದೆ.&lt;/p&gt;&lt;p&gt;ವಿಚಾರಣೆಯ ಸಮಯದಲ್ಲಿ, ಮೊದಲಿಗೆ ಏನನ್ನು ಬಾಯಿ ಬಿಟ್ಟಿರಲಿಲ್ಲ ಅವಿನಾಶ್ ಶುಕ್ಲಾ. ಆಮೇಲೆ ಆತನಿಗೆ ಕಳೆದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಯಿತು. ದೃಶ್ಯಾವಳಿಯಲ್ಲಿ ಕಾಣಿಕೆಗಳಿಂದ ಹಣವನ್ನು ತೆಗೆದಯುತ್ತಿರುವ ದೃಶ್ಯ ನೋಡುತ್ತಿದ್ದಂತೆಯೇ ಬೆವರು ಇಳಿಸಿಕೊಂಡ ಅವಿನಾಶ್​ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಯೋಧ್ಯಾ ಪೊಲೀಸ್ ಮೂಲಗಳ ಪ್ರಕಾರ, ರಾಮ ದೇವಾಲಯ ಕಾಣಿಕೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಭೂಮಿ ಮತ್ತು ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡಿದ್ದಾನೆ ಮತ್ತು ಅಪರಾಧದ ಸಂಭಾವ್ಯ ಆದಾಯವನ್ನು ನಿರ್ಧರಿಸಲು ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಪಡೆದ ಸುಮಾರು 20 ಭೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್&zwnj;ಗೆ ಸೇರಿದ ನಂತರ ಈ ಆಸ್ತಿಗಳನ್ನು ಖರೀದಿಸಲಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಏಕೆಂದರೆ ಇದು ಅಪರಾಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.&lt;/p&gt;&lt;h3&gt;&lt;strong&gt;ಮತ್ತಷ್ಟು ಮಾಹಿತಿ ಸಂಗ್ರಹ&lt;/strong&gt;&lt;/h3&gt;&lt;p&gt;ಕದ್ದ ಹಣದಿಂದ ಬ್ರೆಝಾ ಕಾರನ್ನು ಖರೀದಿಸಲಾಗಿದೆ ಎಂದು ಅವಿನಾಶ್ ಬಹಿರಂಗಪಡಿಸಿದ್ದರಿಂದ ಬ್ರೆಝಾ ಕಾರನ್ನು ಪತ್ತೆಹಚ್ಚಿದ ಪೊಲೀಸರು ತಕ್ಷಣ ಪ್ರತಾಪ್&zwnj;ಗಢದಲ್ಲಿರುವ ಅವರ ಸಹೋದರನ ಮನೆಗೆ ಹೋದರು. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಯ ಸಹೋದರ ಅಭಿಷೇಕ್ ಅವರನ್ನು ಸಹ ಪ್ರಶ್ನಿಸಿದ್ದಾರೆ. ಕದ್ದ ಹಣದ ಬಳಕೆ ಮತ್ತು ಆಸ್ತಿ ಖರೀದಿಯಲ್ಲಿ ಯಾರು ಪಾತ್ರ ವಹಿಸಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಕಿಂಗ್​ಪಿನ್​ ರಾಮಶಂಕರ್ ಯಾದವ್ ಉರ್ಫ್​ ಟಿನ್ನು ಯಾದವ್ ಅವರ ಸೋದರಳಿಯ ಕೂಡ ಕಳ್ಳತನದ ನಂತರದ ಸಭೆಗಳಿಗೆ ಹಾಜರಾಗುತ್ತಿರುವುದು ತಿಳಿದಿದೆ. ಕಾಣಿಕೆ ಕಳ್ಳತನ ಪ್ರಕರಣ ಬೆಳಕಿಗೆ ಬರುವ ಮೊದಲು, ಮೇ ಕೊನೆಯ ವಾರದಲ್ಲಿ ಆರೋಪಿಗಳ ದೊಡ್ಡ ಸಭೆ ನಡೆದಿತ್ತು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಈಗ, ಅಯೋಧ್ಯೆ ಪೊಲೀಸರು ಈ ಸಭೆಗಳ ಉದ್ದೇಶ ಮತ್ತು ಅವರ ಸಂಪೂರ್ಣ ಜಾಲವನ್ನು ಬಹಿರಂಗಪಡಿಸಲು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/accused-admits-lavish-spending-as-ram-mandir-temple-theft-probe-deepens-suc/articleshow-nummzyf"/>
        </item>
        <item>
            <title><![CDATA[ಮುಖ್ಯಮಂತ್ರಿ ವಿಜಯ್​- ನಟಿ ತ್ರಿಶಾ ವಿರುದ್ಧ ಹೇಳಿಕೆ:  ಶಾಸಕ ಅರೆಸ್ಟ್​- ಅಂಥದ್ದೇನು ಹೇಳಿದ್ರು ನೋಡಿ]]></title>
            <link>https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp</link>
            <guid isPermaLink="true">https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp</guid>
            <pubDate>Sat, 04 Jul 2026 19:51:40 +0530</pubDate>
            <description><![CDATA[ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಮತ್ತು ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ಶಾಸಕ ಅನಿತ ರಾಧಾಕೃಷ್ಣನ್ ಅವರನ್ನು ಬಂಧಿಸಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಟಿವಿಕೆ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwpr194s75z47528xv370xrx,imgname-vijay-and-trisha-1783174833305.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ದಳಪತಿ ವಿಜಯ್ ಮತ್ತು ಅವರ ಸ್ನೇಹಿತೆ, ನಟಿ ತ್ರಿಶಾ ಕೃಷ್ಣನ್​ (Joseph Vijay and Trisha Krishnan) ವಿರುದ್ಧ ಅವಹೇಳನಕಾರಿ ಮತ್ತು ಅಸಭ್ಯ ಹೇಳಿಕೆ ನೀಡಿದ ಡಿಎಂಕೆ ಶಾಸಕ ಅನಿತ ರಾಧಾಕೃಷ್ಣನ್ ಅವರನ್ನು ಅರೆಸ್ಟ್​ ಮಾಡಲಾಗಿದೆ. ತಮ್ಮ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ನಿರೀಕ್ಷಣಾ ಜಾಮೀನು ಕೋರಿ ಅವರು ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್​ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್​ ಮಾಡಲಾಗಿದೆ. ತಿರುಚೆಂಡೂರು ಶಾಸಕರಾಗಿರುವ ಅನಿತ ರಾಧಾಕೃಷ್ಣನ್ ಅವರನ್ನು ಮೊದಲು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುವ ಮೊದಲು ವೈದ್ಯಕೀಯ ಪರೀಕ್ಷೆ ನಡೆಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆಯೇ ಅಥವಾ ಸ್ಥಳೀಯ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;h2&gt;&lt;strong&gt;ಏನಿದು ವಿವಾದ?&lt;/strong&gt;&lt;/h2&gt;&lt;p&gt;ಜೂನ್ 20 ರಂದು ಅನಿತ ರಾಧಾಕೃಷ್ಣನ್ ಅವರು ಮುಖ್ಯಮಂತ್ರಿ ವಿಜಯ್​ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾದ ವಿವಾದಾತ್ಮಕ ಭಾಷಣ ಇದಾಗಿದೆ. ಈ ಹೇಳಿಕೆಗಳಲ್ಲಿ ನಟಿ ತ್ರಿಶಾ ವಿಜಯ್ ಹಂಚಿಕೊಂಡ ಹುಟ್ಟುಹಬ್ಬದ ಫೋಟೋದ ಉಲ್ಲೇಖವೂ ಸೇರಿದೆ. ನಟಿ ತ್ರಿಶಾ ಅವರ ಹುಟ್ಟುಹಬ್ಬದಂದು ಸಿಎಂ ಜೋಸೆಫ್​ ವಿಜಯ್​ ಅವರು ವಿಧಾನಸಭೆಯಲ್ಲಿ ಇದ್ದರು. ಇದನ್ನು ಅಣಕಿಸಿದ್ದ, ಅನಿತ ರಾಧಾಕೃಷ್ಣನ್​, 'ನಾನು ನಟಿಯೊಂದಿಗೆ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೆ, ಈಗ ನಾನು ಇಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ವಿಜಯ್​ ಅವರು ಅಂದುಕೊಳ್ಳುತ್ತಿರುವಂತೆ ಕಾಣುತ್ತಿದೆ' ಎಂದಿದ್ದರು. ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಮತ್ತು ದ್ವೇಷ ಅಥವಾ ಕೆಟ್ಟ ಇಚ್ಛೆಯನ್ನು ಉತ್ತೇಜಿಸುವ ಉದ್ದೇಶದಿಂದ ಹೇಳಿಕೆಗಳನ್ನು ಒಳಗೊಂಡಂತೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರಾಧಾಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೂನ್ 23 ರಂದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 352 ಮತ್ತು 353 ರ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಸೆಕ್ಷನ್&zwnj;ಗಳು ಉದ್ದೇಶಪೂರ್ವಕ ಅವಮಾನ ಮತ್ತು ದ್ವೇಷವನ್ನು ಉತ್ತೇಜಿಸುವುದಕ್ಕೆ ಸಂಬಂಧಿಸಿವೆ.&lt;/p&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಎರಡು ಸಮನ್ಸ್&zwnj;ಗಳನ್ನು ಸ್ವೀಕರಿಸಿದ್ದರೂ ಅನಿತ ರಾಧಾಕೃಷ್ಣನ್ ತನಿಖಾ ಅಧಿಕಾರಿಗಳ ಮುಂದೆ ಹಾಜರಾಗಲಿಲ್ಲ. ನಂತರ ಅವರು ನಿರೀಕ್ಷಣಾ ಜಾಮೀನಿಗಾಗಿ ಮದ್ರಾಸ್ ಹೈಕೋರ್ಟ್&zwnj;ಗೆ ಮೊರೆ ಹೋದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು, ಇದು ಅವರ ಬಂಧನಕ್ಕೆ ದಾರಿ ಮಾಡಿಕೊಟ್ಟಿತು. ಆಡಳಿತಾರೂಢ ಟಿವಿಕೆ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷದ ನಾಯಕನ ವಿರುದ್ಧ ಇದು ಮೊದಲ ಪ್ರಮುಖ ರಾಜಕೀಯ ಕ್ರಮವಾಗಿದೆ. ಇದು ಸರ್ಕಾರ ಮತ್ತು ವಿರೋಧ ಪಕ್ಷದ ಡಿಎಂಕೆ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.&lt;/p&gt;&lt;h3&gt;&lt;strong&gt;ಸಿನಿಮಾ ಶೈಲಿಯ ಪೊಲೀಸ್ ರಾಜ್: ಸ್ಟಾಲಿನ್&lt;/strong&gt;&lt;/h3&gt;&lt;p&gt;ಡಿಎಂಕೆ ಬಂಧನವನ್ನು ಸರ್ಕಾರದ &quot;ಅತಿಯಾದ ಕ್ರಮ&quot; ಎಂದು ಕರೆದಿದೆ. ರಾಜ್ಯ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಇದು ಎಂದು ಪಕ್ಷ ಆರೋಪಿಸಿದೆ. ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು ಮತ್ತು ವಿರೋಧ ಪಕ್ಷಗಳ ಶಾಸಕರನ್ನು ಸೆಳೆಯಲು ಟಿವಿಕೆ ಕುದುರೆ ವ್ಯಾಪಾರ ಮಾಡುತ್ತಿರುವ ಆರೋಪಗಳು ಈ ವಿಷಯಗಳಲ್ಲಿ ಸೇರಿವೆ. ಟಿವಿಕೆ ಈ ಆರೋಪಗಳನ್ನು ನಿರಾಕರಿಸಿದೆ.&lt;/p&gt;&lt;p&gt;ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬಂಧನವನ್ನು ಬಲವಾಗಿ ಟೀಕಿಸಿದ್ದಾರೆ. ಶಾಸಕರಿಗೆ ಇನ್ನೂ ಕಾನೂನು ಮಾರ್ಗವಿದ್ದರೂ ಸರ್ಕಾರ ಆತುರದಿಂದ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 'ಎಕ್ಸ್' ಕುರಿತು ಹೇಳಿಕೆಯಲ್ಲಿ, ಮುಖ್ಯಮಂತ್ರಿ ವಿಜಯ್ &quot;ಸಿನಿಮಾ ಶೈಲಿಯ ಪೊಲೀಸ್ ರಾಜ್&quot; ನಡೆಸುತ್ತಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಶ್ರೀವೈಕುಂಠಂನ ಟಿವಿಕೆ ಶಾಸಕಿಯ ವಿರುದ್ಧ ಸಾಮೂಹಿಕ ಅತ್ಯಾ*ಚಾರ ಸಂತ್ರಸ್ತೆ ನೀಡಿದ ದೂರಿನ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲು ಕಾರಣವೇನು ಎಂದು ಅವರು ಪ್ರಶ್ನಿಸಿದರು. ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಮತ್ತು ವಿರೋಧ ಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವತ್ತ ಗಮನಹರಿಸಿದೆ ಎಂದು ಅವರು ಆರೋಪಿಸಿದರು. ಕೇವಲ ಮಾನನಷ್ಟಕ್ಕಾಗಿ ಬಂಧನಗಳನ್ನು ಮಾಡಲು ಸಾಧ್ಯವಾದರೆ, &quot;ಇಂದಿನ ಅನೇಕ ಸಚಿವರು&quot; ಸಹ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.&lt;/p&gt;&lt;h3&gt;&lt;strong&gt;ಕನಿಮೋಳಿ ಕರುಣಾನಿಧಿ ಏನು ಹೇಳಿದರು?&lt;/strong&gt;&lt;/h3&gt;&lt;p&gt;ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಕೂಡ ಬಂಧನವನ್ನು ಖಂಡಿಸಿದರು. ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸುವಾಗ ವಿರೋಧ ಪಕ್ಷದ ಶಾಸಕಿಯನ್ನು &quot;ಸರ್ವಾಧಿಕಾರಿ ರೀತಿಯಲ್ಲಿ&quot; ಬಂಧಿಸಲಾಗಿದೆ ಎಂದು ಅವರು ಆರೋಪಿಸಿದರು. ಡಿಎಂಕೆ ಇಂತಹ ದಮನಕಾರಿ ತಂತ್ರಗಳಿಗೆ ಎಂದಿಗೂ ಮಣಿಯುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ವಿರೋಧ ಪಕ್ಷದ ಟೀಕೆಗೆ ಟಿವಿಕೆ ಸರ್ಕಾರ ಇನ್ನೂ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/politics/dmk-mla-anitha-radhakrishnan-arrested-over-remarks-against-cm-vijay-and-trisha-suc/articleshow-oedt2cp"/>
        </item>
        <item>
            <title><![CDATA[ಗಂಗಾವತಿಯಲ್ಲಿ ಬೆಚ್ಚಿಬೀಳಿಸಿದ ಘಟನೆ: ಯುವಕನ ಕೊಲೆ ಮಾಡಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು]]></title>
            <link>https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc</link>
            <guid isPermaLink="true">https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc</guid>
            <pubDate>Sun, 05 Jul 2026 21:42:30 +0530</pubDate>
            <description><![CDATA[&lt;p&gt;ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyk54a7zg48733zetfgbsr1d,imgname-crime-scene-1750842091775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜು.05): &lt;/strong&gt;ಸಮೀಪದ ಚಿರ್ಚನಗುಡ್ಡ ತಾಂಡಾ ಬಳಿ ಅಪರಚಿತ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿ ಪರಾರಿಯಾಧ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕನಕಗಿರಿ ತಾಲೂಕಿನ ಚಿರ್ಚನ ಗುಡ್ಡ ತಾಂಡಾದ ಬಳಿ ನಡೆದಿದೆ.&lt;/p&gt;&lt;p&gt;ಕಳೆದ ತಿಂಗಳು ಕನಕಗಿರಿಯಲ್ಲಿ ಮಹಿಳೆಯ ಮೇಲೆ ಅತ್ಯಾ*ಚಾರ ನಡೆಸಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಮಾಸುವ ಮುನ್ನವೆ ಮತ್ತೇ ಕನಕಗಿರಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದರಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಚಿರ್ಚನ ಗುಡ್ಡದ ತಾಂಡಾದ ಹೊರವಲಯದಲ್ಲಿ 25 ರಿಂದ 30 ವರ್ಷದ ಯುವಕನನ್ನು ಕೊಲೆ ಮಾಡಿ ಬಿಸಾಡಿದ್ದು, ಬೆಂಕಿ ಹಚ್ಚಿದ್ದಾರೆ. ಈ ಕೃತ್ಯ 3 -4 ದಿನಗಳಿಂದ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.&lt;/p&gt;&lt;h2&gt;&lt;strong&gt;ದುರ್ವಾಸೆಯಿಂದ ಪತ್ತೆಯಾದ ಕರಕಲು ಶವ&lt;/strong&gt;&lt;/h2&gt;&lt;p&gt;ನಿರ್ಜನ ಪ್ರದೇಶದಲ್ಲಿ ಕರಕಲಾದ ಶವದ ದುರ್ವಾಸನೆಯಿಂದ ಶವ ಪತ್ತೆಯಾಗಿದೆ. ಮಹಿಳೆಯೊಬ್ಬರು ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ದುರ್ವಾಸನೆ ಬಂದಿದೆ, ಇದನ್ನು ಜಾಡು ಹಿಡಿದ ಮಹಿಳೆ ವೀಕ್ಷಿಸಿದಾಗ ಕರಕಲಾದ ಶವ ಕಾಣಿಸಿಕೊಂಡಿದೆ.&lt;/p&gt;&lt;p&gt;ನಂತರ ಗ್ರಾಮಸ್ಥರು ಕೂಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಕೊಲೆಯಾಗಿದೆ ಎಂದು ಶಂಕಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತಯೇ ಶನಿವಾರ ರಾತ್ರಿ ಎಸ್ ಪಿ ರಾಮ್ ಎಲ್ ಅರಸಿದ್ದಿ, ಗಂಗಾವತಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್, ಕನಕಗಿರಿ ಪೊಲೀಸ್ ಠಾಣೆಯ ಸಿಪಿಐ ನಾರಾಯಣ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gangavathi-young-man-mu-rder-burnt-body-found-chirchanagudda-tanda-gvd/articleshow-sinzmmc"/>
        </item>
        <item>
            <title><![CDATA[ತಪ್ಪು ವಿಳಾಸಕ್ಕೆ ಆರ್ಡರ್, ನಕಲಿ ರಿಟರ್ನ್;  ಲಕ್ಷಾಂತರ ರೂ. ದೋಚುತ್ತಿದ್ದ ಖದೀಮರು ಸಿಕ್ಕಿ ಬಿದ್ದದ್ದು ಅದೊಂದು ತಪ್ಪಿನಿಂದ!]]></title>
            <link>https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44</link>
            <guid isPermaLink="true">https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44</guid>
            <pubDate>Sun, 05 Jul 2026 18:25:09 +0530</pubDate>
            <description><![CDATA[&lt;p&gt;ರಾಜಸ್ಥಾನದಲ್ಲಿ ಆನ್&zwnj;ಲೈನ್&zwnj; ಆರ್ಡರ್&zwnj; ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದುಬಾರಿ ವಸ್ತುಗಳನ್ನು ತಪ್ಪು ವಿಳಾಸಕ್ಕೆ ಆರ್ಡರ್ ಮಾಡಿ, ರಿಟರ್ನ್ ಪ್ರಕ್ರಿಯೆಯಲ್ಲಿ ಅಸಲಿ ವಸ್ತುಗಳನ್ನು ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kws5gcw0a032a08yqadyqqsp,imgname-amazon-1783256068992.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೌದು ಇ ಕಾಮರ್ಸ್ ಕಂಪನಿ ಅಮೆಜಾನ್&zwnj;ಗೆ ಲಕ್ಷಾಂತರ ರೂ., ವಂಚಿಸಿದ ಘಟನೆ ನಡೆದಿದ್ದು, ಕಳ್ಳರು ಹಿಡಿದ ದಾರಿಯನ್ನು ಕೇಳಿದರೆ ನೀವು ದಂಗಾಗುತ್ತಿರಾ. ಅಷ್ಟಕ್ಕೂ ಆಗಿದ್ದೇನು? ಖದೀಮರು ವಂಚಿಸಿದ್ದೇಗೆ? ಹಾಗೂ ಎಲ್ಲಿ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ರಾಜಸ್ಥಾನದಲ್ಲಿ ನಡೆದ ಘಟನೆ!&lt;/strong&gt;&lt;/h2&gt;&lt;p&gt;ರಾಜಸ್ಥಾನದ ದೌಸಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ಇ-ಕಾಮರ್ಸ್ ಕಂಪನಿ ಅಮೆಜಾನ್&zwnj;ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಪ್ರಕಾರ, ಆರೋಪಿಗಳು ಆನ್&zwnj;ಲೈನ್&zwnj;ನಲ್ಲಿ ದುಬಾರಿ ಉತ್ಪನ್ನಗಳನ್ನು ಬುಕ್ ಮಾಡುವ ಮೂಲಕ ಕಂಪನಿಗೆ ಸುಮಾರು 19.38 ಲಕ್ಷ ರೂಪಾಯಿಗಳ ನಷ್ಟವನ್ನುಂಟುಮಾಡಿದ್ದಾರೆ. ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿಡ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ಲ್ಯಾನ್&zwnj; ಹೇಗಿತ್ತು ಗೊತ್ತಾ?&lt;/strong&gt;&lt;/h3&gt;&lt;p&gt;ಈ ವಂಚನೆಯ ಯೋಜನೆಯು ಅಮೆಜಾನ್&zwnj;ನಿಂದ ಆರಂಭವಾಗಿತ್ತು. ಆರೋಪಿಯು ಮೊದಲು ಆನ್&zwnj;ಲೈನ್&zwnj;ನಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಿದ್ದನು. ಈ ಯೋಜನೆಯಲ್ಲಿ ಕೇವಲ ಆತ ಮಾತ್ರ ಇರಲಿಲ್ಲ, ಬದಲಿಗೆ ಸಾಮಗ್ರಿಗಳನ್ನು ತಲುಪಿಸುವ ಡೆಲಿವರಿ ಬಾಯ್ ಮತ್ತು ಗೋದಾಮಿನ ನಿರ್ವಾಹಕರು ಕೂಡಾ ಸಂಪೂರ್ಣವಾಗಿ ಕೈಜೋಡಿಸಿದ್ದರು. ಇವರೆಲ್ಲರೂ ಸೇರಿಯೇ ಪ್ಲಾನ್&zwnj; ಮಾಡಿದ್ದರು ಎನ್ನುವುದು ಪೊಲೀಸ್&zwnj;ರಿಂದ ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;ವಿಳಾಸದಲ್ಲಿ ವ್ಯತ್ಯಾಸ!&lt;/strong&gt;&lt;/h3&gt;&lt;p&gt;ಸಾಮಗ್ರಿಗಳನ್ನು ವಿತರಣೆ ಮಾಡುವ ಸಮಯದಲ್ಲಿ, ಆರೋಪಿಗಳು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಅಪೂರ್ಣವಾದ ವಿಳಾಸವನ್ನು ನಮೂದಿಸುತ್ತಿದ್ದರು. ವಿಳಾಸ ಸರಿಯಾಗಿ ಇಲ್ಲದ ಕಾರಣ ಆ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ತಾನಾಗಿಯೇ ಆರ್ಡರ್ ವಾಪಸ್ ಕಳುಹಿಸುವ ರಿಟರ್ನ್ ಪ್ರಕ್ರಿಯೆಯನ್ನು ಪ್ರಚೋದಿಸುತ್ತಿತ್ತು. ಈ ರಿಟರ್ನ್ ನೆಪದಲ್ಲಿ ಅಸಲಿ ದುಬಾರಿ ವಸ್ತುಗಳನ್ನು ಸುಲಭವಾಗಿ ಬೇರೆಡೆಗೆ ಸಾಗಿಸಿ, ಕಂಪನಿಗೆ ದೊಡ್ಡ ಮಟ್ಟದ ಮೋಸ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಪೊಲೀಸ್&zwnj;ರು ಹೇಳುವುದೇನು?&lt;/strong&gt;&lt;/p&gt;&lt;p&gt;ಪೊಲೀಸರ ಪ್ರಕಾರ, ಆರೋಪಿಗಳು ಪಾರ್ಸೆಲ್&zwnj;ಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಮಧ್ಯದಲ್ಲಿ ವಶಪಡಿಸಿಕೊಂಡು ಒಳಗಿನ ದುಬಾರಿ ವಸ್ತುಗಳನ್ನು ತೆಗೆದುಹಾಕುತ್ತಿದ್ದರು. ನಂತರ, ಪ್ಯಾಕೇಜ್&zwnj;ಗಳನ್ನು ಮತ್ತೆ ಮುಚ್ಚಲಾಗುತ್ತಿತ್ತು, ಮೊದಲ ನೋಟದಲ್ಲೇ ಅವುಗಳಿಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಈ ವಿಧಾನವು ಕಂಪನಿಗೆ ಆರ್ಥಿಕ ನಷ್ಟವನ್ನುಂಟುಮಾಡಿತು ಮತ್ತು ಕದ್ದ ವಸ್ತುಗಳನ್ನು ನಂತರ ಮರುಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;19 ಆಪಲ್ ವಾಚ್&zwnj;, ಕೆಲ ಮೆಮೊರಿ ಕಾರ್ಡ್&zwnj;ಗಳು ಕಳ್ಳತನ!&lt;/strong&gt;&lt;/h3&gt;&lt;p&gt;ತನಿಖೆಯಲ್ಲಿ ಆರೋಪಿಗಳು ಸುಮಾರು ₹1,00,000 ಮೌಲ್ಯದ 19 ಆಪಲ್ ವಾಚ್&zwnj;ಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಗಮಧ್ಯೆ ಎರಡು ಮೆಮೊರಿ ಕಾರ್ಡ್ ಪ್ಯಾಕೆಟ್&zwnj;ಗಳನ್ನು ಸಹ ಕಳವು ಮಾಡಲಾಗಿದೆ. ಈ ಸಂಪೂರ್ಣ ವಂಚನೆ ಚೆನ್ನಾಗಿ ಪ್ಲ್ಯಾನ್ ಮಾಡಿ ರೂಪಿಸಿದ್ದು ಎನ್ನಲಾಗಿದೆ. ಆರೋಪಿಗಳು ಬಹಳ ಸಮಯದಿಂದ ಇಂತಹ ಅಪರಾಧಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೈಬರ್ ಪೊಲೀಸರ ವಶಕ್ಕೆ!&lt;/strong&gt;&lt;/h3&gt;&lt;p&gt;ದೂರು ಸ್ವೀಕರಿಸಿದ ನಂತರ, ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ತಾಂತ್ರಿಕ ಪುರಾವೆಗಳು, ದಾಖಲೆಗಳು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದೆ. ತನಿಖೆಯಲ್ಲಿ ಆರೋಪಿಗಳ ಪಾತ್ರ ಬಹಿರಂಗಗೊಳ್ಳುತ್ತಿದ್ದಂತೆ, ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿದ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ತನಿಖೆ ಜಾರಿಯಲ್ಲಿದೆ!&lt;/strong&gt;&lt;/h3&gt;&lt;p&gt;ಈ ವಂಚನೆಯಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ವಿತರಣಾ ಸರಪಳಿಯೊಳಗಿನ ವಂಚನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಆರೋಪಿಗಳು ಇತರ ಇ-ಕಾಮರ್ಸ್ ಕಂಪನಿಗಳ ವಿರುದ್ಧವೂ ಇದೇ ರೀತ ವಂಚನೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಜಾಆರಿಯಲ್ಲಿರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44"/>
        </item>
        <item>
            <title><![CDATA[ಜೈಲು ಸೇರಿದ್ರೂ ಪ್ರೇಯಸಿ ಕೈಕೊಡಲಿಲ್ಲ; 3 ಕೊಲೆ ಮಾಡಿದ್ರೂ ಅದೃಷ್ಟ ಕೈಬಿಡಲಿಲ್ಲ: ರಾಜ್ಯದಲ್ಲಿ ಬಿಡುಗಡೆ ಭಾಗ್ಯ]]></title>
            <link>https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b</link>
            <guid isPermaLink="true">https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b</guid>
            <pubDate>Sun, 05 Jul 2026 13:22:13 +0530</pubDate>
            <description><![CDATA[ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ 24 ಜೀವಾವಧಿ ಸಜಾ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ, 15 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಪ್ರೇಯಸಿ ಕೈಬಿಡದ ಮಣಿಕಂಠ ಹಾಗೂ ಮೂರು ಕೊಲೆಗಳಿಗಾಗಿ 37 ವರ್ಷ ಶಿಕ್ಷೆ ಅನುಭವಿಸಿದ ಸಾಯಿಬಣ್ಣ ಎಂಬುವರ ಕಥೆಗಳು ಗಮನ ಸೆಳೆಯುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrkzs8y4sbtqybbzawwst16,imgname-parappana-agrahara-1783237698846.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಹಲವು ವರ್ಷಗಳಿಂದ ಬಂಧಿಯಾಗಿದ್ದ ಅಪರಾಧಿಗಳು, ಅದರಲ್ಲಿಯೂ ಹೆಚ್ಚಾಗಿ ಕೊಲೆ ಕೇಸ್​ನಲ್ಲಿ ಶಿಕ್ಷೆಗೆ ಒಳಗಾದವರಿಗೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರು, ಸನ್ನಡತೆ ತೋರಿ ಸೆರೆಮನೆಯಿಂದ ಬಂಧಮುಕ್ತರಾದ 24 ಜೀವಾವಧಿ ಸಜಾ ಕೈದಿಗಳಿಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೀಳ್ಕೊಟ್ಟರು.&lt;/p&gt;&lt;p&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಂಧಮುಕ್ತರಾದ ಕೈದಿಗಳಿಗೆ ಪ್ರಮಾಣ ವಿತರಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಚಿವರು ಹಾರೈಸಿದರು.&lt;/p&gt;&lt;p&gt;ಹೀಗೆ ಬಿಡುಗಡೆಯ ಭಾಗ್ಯ ಪಡೆದಿರುವವರದ್ದು ಒಂದೊಂದು ಕಥೆ, ಒಂದೊಂದು ವ್ಯಥೆ. ಇವರಲ್ಲಿ ಹೆಚ್ಚು ಗಮನ ಸೆಳೆದದ್ದು, ಹಾಗೂ ಸದ್ದು ಮಾಡುತ್ತಿರುವುದು ಇಬ್ಬರ ಸ್ಟೋರಿ. ಒಬ್ಬರು ಚಿಕ್ಕಮಗಳೂರಿನ ವ್ಯಕ್ತಿ ಹಾಗೂ ಇನ್ನೊಬ್ಬರು ಜೇವರ್ಗಿಯ ವ್ಯಕ್ತಿ.&lt;/p&gt;&lt;h2&gt;&lt;strong&gt;ಕೈಬಿಡದ ಪ್ರೇಯಸಿ&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರಿನ ವ್ಯಕ್ತಿಯ ಸ್ಟೋರಿ ಹೇಳುವುದಾರೆ, ಕೊಲೆ ಕೇಸ್​​ನಲ್ಲಿ ಇವರು 15 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಇವರ ಹೆಸರು ಮಣಿಕಂಠ. ಈಗ ಬಿಡುಗಡೆ ಪಡೆದಿರುವ ಅವರು, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಾವು ಮಾಡಿರುವ ಕೃತ್ಯದ ಬಗ್ಗೆ ನೊಂದುಕೊಂಡಿದ್ದಾರೆ. 'ಆಕಸ್ಮಿಕವಾಗಿ ಒಂದು ಕೊಲೆ ಕೇಸ್​ನಲ್ಲಿ ಸಿಕ್ಕಾಕಿಕೊಂಡು 15 ವರ್ಷ ಜೈಲಲ್ಲೇ ಇದ್ದೆ. ಜೈಲಿನಲ್ಲಿಯೇ 10 ವರ್ಷ ಬೇಕರಿ ಕೆಲಸ ಮಾಡಿ ಸಂಪಾದನೆ ಮಾಡಿದ್ದೇನೆ' ಎಂದಿದ್ದಾರೆ. ನಡುವೆ ಒಮ್ಮೆ ಮದುವೆಗೆಂದು ಪರೋಲ್​ ಮೇಲೆ ಹೊರಕ್ಕೆ ಬಂದೆ. ಜೈಲಿನಲ್ಲಿ ಇದ್ದರೂ ನಾನು ಪ್ರೀತಿಸಿದ ಹುಡುಗಿ ಕೈಬಿಡಲಿಲ್ಲ. ಆಕೆಯ ಜೊತೆ ಮದುವೆಯಾದೆ. ನಾಲ್ಕು ವರ್ಷದ ಮಗುವಿದೆ ಎಂದಿರುವ ಮಣಿಕಂಠ ಅವರು, ಯಾರೂ ಕೂಡ ಕೋಪದ ಕೈಗೆ ಬುದ್ಧಿಕೊಟ್ಟು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಬೇಡಿ, ಅಪರಾಧವನ್ನು ಮಾಡಬೇಡಿ' ಎಂದು ಕಿವಿಮಾತು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;3 ಕೊಲೆ- 37 ವರ್ಷ ಶಿಕ್ಷೆ&lt;/strong&gt;&lt;/h3&gt;&lt;p&gt;ಇನ್ನು ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಾಟೇಕರ್ ಅವರ ಸ್ಟೋರಿ ಮಾತ್ರ ಸ್ವಲ್ಪ ಭಯಾನಕವಾಗಿದೆ. ಇವರು ಜೈಲಿನಲ್ಲಿ ಇದದ್ದು 37 ವರ್ಷಗಳು! ಏಕೆಂದರೆ, ಇವರು ಮಾಡಿದ್ದು, ಒಂದಲ್ಲ, ಮೂರು ಕೊಲೆಗಳು! ಲಿಂಗಪ್ಪ ಕರ್ನಾಟಕ ಸ್ಟೇಟ್​ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಕೊಂದೇ ಬಿಟ್ಟರು. ಜೈಲು ಸೇರಿದರು. ಇದು ಅವರ ಮೊದಲ ಕೊಲೆ. 2ನೇ ಮದುವೆಗೆಂದು ಪರೋಲ್​ ಪಡೆದು ಬಂದು ಮದುವೆಯಾದರು. ಎರಡು ವರ್ಷದ ನಂತರ ಮತ್ತೆ ಹೊರಕ್ಕೆ ಬಂದಾಗ, 2ನೇ ಪತ್ನಿ ಇನ್ನೊಬ್ಬನ ಜೊತೆ ಇರುವುದನ್ನು ನೋಡಿದರು. ಅವರ ಜೊತೆ ಮಗಳೂ ಇದ್ದಳು. ಪತ್ನಿಯ ಮೇಲೆ ಕೋಪಗೊಂಡ ಸಾಯಿಬಣ್ಣ ಅವರನ್ನೂ ಕೊಲೆ ಮಾಡಿದ್ರು. ಬಿಡಿಸಲು ಬಂದ ಮಗಳ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆಯೂ ಸಾವನ್ನಪ್ಪಿದಳು. ಎಲ್ಲಾ ಸೇರಿ 37 ವರ್ಷ ಶಿಕ್ಷೆಯಾಯಿತು. ಕೋಪ ತಣ್ಣಗಾದ ಮೇಲೆ ಇವರು, ಚಾಕುನಲ್ಲಿ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಬದುಕುಳಿದಿದ್ದರು. ಅಂದು ಜೈಲು ಸೇರಿದ್ದ ಲಿಂಗಪ್ಪ 37 ವರ್ಷಗಳ ನಂತರ ಇದೀಗ ಬಿಡುಗಡೆಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b"/>
        </item>
        <item>
            <title><![CDATA[Udupi: ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕಳ್ಳಿಯರ ಕೈಚಳಕ: ಭಕ್ತೆಯ ಬ್ಯಾಗ್‌ನಿಂದ ₹80 ಸಾವಿರ ಕಳವು!]]></title>
            <link>https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k</link>
            <guid isPermaLink="true">https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k</guid>
            <pubDate>Mon, 06 Jul 2026 18:01:46 +0530</pubDate>
            <description><![CDATA[&lt;p&gt;Udupi: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್&zwnj;ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvpjzjhw0twb5v2enhf9283,imgname-kk-1783341088337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ (ಜು.06): &lt;/strong&gt;ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್&zwnj;ನಿಂದ ₹80 ಸಾವಿರ ನಗದು ಕಳವು ಮಾಡಿದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲೇ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳಾ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಹಿಂದೆಯೂ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;p&gt;&lt;strong&gt;ಏನಿದು ಘಟನೆ?&lt;/strong&gt;&lt;/p&gt;&lt;p&gt;ಮೂಕಾಂಬಿಕಾ ದೇವಿಯ ದರ್ಶನಕ್ಕೆ ಬಂದಿದ್ದ ನಿಮಿಶಾ ಎಂಬ ಭಕ್ತೆಯ ವ್ಯಾನಿಟಿ ಬ್ಯಾಗ್&zwnj;ನಲ್ಲಿದ್ದ ₹80 ಸಾವಿರ ನಗದು ದೇವಸ್ಥಾನದ ಆವರಣದಲ್ಲೇ ಕಳ್ಳತನವಾಗಿತ್ತು. ಹಣ ಕಾಣೆಯಾಗಿರುವುದು ತಿಳಿದ ಬಳಿಕ ಅವರು ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.&lt;/p&gt;&lt;p&gt;&lt;strong&gt;ಬಂಧಿಸುವಲ್ಲಿ ಯಶಸ್ವಿ&lt;/strong&gt;&lt;/p&gt;&lt;p&gt;ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಮೊಬೈಲ್&zwnj;ನಲ್ಲಿ ಸೆರೆಹಿಡಿದಿದ್ದ ಫೋಟೋಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ಮಾಹಿತಿ ಹಾಗೂ ದೃಶ್ಯ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲೇ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದರು.&lt;/p&gt;&lt;p&gt;&lt;strong&gt;ಪೊಲೀಸ್ ತನಿಖೆಯಲ್ಲಿ ಬಹಿರಂಗ&lt;/strong&gt;&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿಗಳಾದ ನೇತ್ರಾವತಿ, ಶಾರದಾ ಹಾಗೂ ದುರ್ಗಮ್ಮ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಈಗಾಗಲೇ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ದುರ್ಗಮ್ಮ ವಿರುದ್ಧ ಎರಡು ಹಾಗೂ ಶಾರದಾ ವಿರುದ್ಧ ಮೂರು ಪ್ರಕರಣಗಳಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;h2&gt;&lt;strong&gt;ಸುಳಿವು ಸಿಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಪ್ರಸಿದ್ಧ ಯಾತ್ರಾ ಕ್ಷೇತ್ರಗಳಲ್ಲಿ ಭಕ್ತರನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಈ ಮಹಿಳಾ ತಂಡದ ಬಂಧನದಿಂದ ಮತ್ತಷ್ಟು ಪ್ರಕರಣಗಳ ಸುಳಿವು ಸಿಗುವ ಸಾಧ್ಯತೆ ಇದೆ. ಬಂಧಿತರಿಂದ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಕೊಲ್ಲೂರು ಪೊಲೀಸರು, ಇತರ ಜಿಲ್ಲೆಗಳಲ್ಲೂ ಇದೇ ತಂಡದ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/udupi-kollur-mookambika-theft-case-3-women-arrested-gvd/articleshow-vmwgi4k"/>
        </item>
        <item>
            <title><![CDATA[Snake's Revenge: ಬೆಳಿಗ್ಗೆ ಮರಿ ಹಾವು ಸಾಯ್ಸಿದ್ದ ಬಾಲಕನ ಮೇಲೆ ರಾತ್ರಿ ನಾಗನ ದಾಳಿ ! ಹಾವು ಕಚ್ಚೇ ಸತ್ತಿದ್ದ ತಂದೆ]]></title>
            <link>https://kannada.asianetnews.com/crime/12-year-old-boy-bitten-by-black-cobra-after-snake-baby-was-killed-what-really-happened/articleshow-wzrb6yw</link>
            <guid isPermaLink="true">https://kannada.asianetnews.com/crime/12-year-old-boy-bitten-by-black-cobra-after-snake-baby-was-killed-what-really-happened/articleshow-wzrb6yw</guid>
            <pubDate>Tue, 07 Jul 2026 12:22:39 +0530</pubDate>
            <description><![CDATA[&lt;p&gt;Snake Revenge : ಸೇಡು ತೀರಿಸಕೊಂಡ ಹಾವು! ಉತ್ತರ ಪ್ರದೇಶದಲ್ಲಿ ಅಚ್ಚರಿ ಘಟನೆ ನಡೆದಿದೆ. ಬೆಳಿಗ್ಗೆ ನಡೆದ ಘಟನೆಗೆ ರಾತ್ರಿ ಹಾವು ಸೇಡು ತೀರಿಸಿಕೊಂಡಿದ್ದು, ಹಾವಿನ ಕೋಪಕ್ಕೆ ಬಾಲಕ ಬಲಿಯಾಗಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxnjpqctkpg9ayttggqacka,imgname-snake-revenge-1783407139564.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ. ಆದ್ರೆ ಉತ್ತರ ಪ್ರದೇಶದ ಬಾಗ್ಪತ್ ನಲ್ಲಿ ಹಾವೊಂದು ಬೆಳಿಗ್ಗೆ ನಡೆದ ಘಟನೆಗೆ ರಾತ್ರಿಯೇ ಸೇಡು ತೀರಿಸಿಕೊಂಡಿದೆ. ಇನ್ನೊಂದು ಅಚ್ಚರಿ ಅಂದ್ರೆ, ಎರಡು ವರ್ಷಗಳ ಹಿಂದೆ ಬಾಲಕನ ಅಪ್ಪ ಕೂಡ ಹಾವು ಕಚ್ಚಿ ಸಾವನ್ನಪ್ಪಿದ. ಈಗ ಮಗ ಕೂಡ ಬಾಲಕ ಕಚ್ಚಿ ಸತ್ತಿದ್ದಾನೆ. ವಿಚಿತ್ರ ಅಂದ್ರೆ ಇಬ್ಬರ ಸಾವು ಗುರುವಾರ ರಾತ್ರಿಯೇ ನಡೆದಿದೆ.&amp;nbsp;&lt;/p&gt;&lt;h2&gt;ಹಾವಿನ ಮರಿ ಕೊಂದಿದ್ದ ಬಾಲಕ&lt;/h2&gt;&lt;p&gt;ಮಲ್ಕಾಪುರ ರಸ್ತೆಯ ಕಾನ್ಶಿರಾಮ್ ಕಾಲೋನಿಯಲ್ಲಿ, 12 ವರ್ಷದ ಬಾಲಕ ಅಯಾನ್ ಗುರುವಾರ ಬೆಳಿಗ್ಗೆ ಆಟವಾಡ್ತಾ ಹಾವಿನ ಮರಿಯನ್ನು ಕೊಂದಿದ್ದ. ಕೋಲಿನಿಂದ ಹೊಡೆದು ಹಾವಿನ ಮರಿಯನ್ನು ಕಬ್ಬಿನ ಗದ್ದೆಗೆ ಎಸೆದಿದ್ದ. ನಂತ್ರ ಆರಾಮವಾಗಿ ಮನೆಗೆ ಬಂದಿದ್ದಾನೆ.&amp;nbsp;&lt;/p&gt;&lt;p&gt;ಬೆಂಗಳೂರಲ್ಲಿ ರಕ್ತಪಾತ: ಬಾರ್&zwnj;ನಲ್ಲಿ ಗುರಾಯಿಸಿದ್ದೇ ತಪ್ಪಾಯ್ತು, ಯುವಕನ ಎದೆಗೆ&lt;/p&gt;&lt;h3&gt;ರಾತ್ರಿ ನಡೀತು ದುರಂತ&lt;/h3&gt;&lt;p&gt;ರಾತ್ರಿ ಮನೆಯಲ್ಲಿ ಮಲಗಿದ್ದಾಗ ನಾಗ ಅಯಾನ್ ಮೇಲೆ ದಾಳಿ ಮಾಡಿದೆ. ಹಾವು ಕಚ್ಚಿದ ನೋವಿನಲ್ಲಿ ಬಾಲಕ ಕೂಗಿದ್ದಾನೆ. ಅಮ್ಮ ಲೈಟ್ ಹಾಕಿ ನೋಡಿದಾಗ ಬೆಡ್ ಬಳಿ ಹಾವು ಕಂಡಿದೆ. ಸುಮಾರು ಐದರಿಂದ ಆರು ಅಡಿ ಉದ್ದವಿದ್ದ ಹಾವನ್ನು ಅಯಾನ್ ಅಮ್ಮ ನಸ್ರೀನ್ ಕೋಲಿನಿಂದ ಹೊಡೆದು ಸಾಯಿಸಿದ್ದಾಳೆ. ಆದ್ರೆ ಆಗ್ಲೇ ಅಯಾನ್ ಗೆ ಹಾವು ಕಚ್ಚಿತ್ತು. ಅಯಾನ್ ಅಜ್ಜ, ಬಾಯಿಂದ ವಿಷ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಹಾವಿನ ವಿಷ ರಕ್ತ ಸೇರಬಾರದೆಂದು ಬಿಗಿಯಾಗಿ ಬಟ್ಟೆ ಕಟ್ಟಿದ್ದಾರೆ. ನಂತ್ರ ಅಯಾನ್ ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೆ ಅಯಾನ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.&amp;nbsp;&lt;/p&gt;&lt;p&gt;Bengaluru ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ, ಪ್ರಿಯಕರನಿಗೆ ಮೆಸೇಜ್ ಕಳುಹಿಸಿ ಆತ್ಮ*ತ್ಯೆಗೆ ಶರಣು!&lt;/p&gt;&lt;p&gt;&lt;strong&gt;ವಿಚಿತ್ರ ಘಟನೆ&lt;/strong&gt;&lt;/p&gt;&lt;p&gt;ಎರಡು ವರ್ಷಗಳ ಹಿಂದೆ ಅಯಾನ್ ತಂದೆ ಕೂಡ ಹಾವು ಕಚ್ಚಿ ಸಾವನ್ನಪ್ಪಿದ್ದ. ಅದು ಗುರುವಾರ ರಾತ್ರಿಯೇ ಅಯಾನ್ ತಂದೆ ಮೇಲೆ ಹಾವು ದಾಳಿ ನಡೆಸಿತ್ತು. ಈಗ ಮಗ ಅಯಾನ್ ಮೇಲೆಯೂ ಗುರುವಾರವೇ ದಾಳಿ ನಡೆಸಿದೆ. ಇದು ಕುಟುಂಬಸ್ಥರನ್ನು ಆತಂಕಕ್ಕೆ ನೂಕಿದೆ. ಇಬ್ಬರನ್ನು ಕಳೆದುಕೊಂಡ ನಸ್ರೀನ್ ನೋವಿನಲ್ಲಿದ್ದಾಳೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/12-year-old-boy-bitten-by-black-cobra-after-snake-baby-was-killed-what-really-happened/articleshow-wzrb6yw"/>
        </item>
        <item>
            <title><![CDATA[Viral Kiss Video: ಮದುವೆಯಾಗದೇ ಚುಂಬಿಸಿದ್ದಕ್ಕಾಗಿ ಜೋಡಿಗೆ 21 ಛಡಿಯೇಟಿನ ಕ್ರೂರ ಶಿಕ್ಷೆ- ನಾಲ್ಕು ತಿಂಗಳು ಜೈಲು]]></title>
            <link>https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e</link>
            <guid isPermaLink="true">https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e</guid>
            <pubDate>Mon, 06 Jul 2026 12:37:46 +0530</pubDate>
            <description><![CDATA[ಇಂಡೋನೇಷ್ಯಾದಲ್ಲಿ, ಟಿಕ್​ಟಾಕ್​ ಲೈವ್ ವಿಡಿಯೋದಲ್ಲಿ ಚುಂಬಿಸಿದ್ದಕ್ಕಾಗಿ ಅವಿವಾಹಿತ ಜೋಡಿಯೊಂದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಇಸ್ಲಾಮಿಕ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರಿಗೆ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದ್ದು, ಈ ಘಟನೆ ಮಾನವ ಹಕ್ಕುಗಳ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwv41k0wy45pmr2qtc562xqk,imgname-crime-1783321644060.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವೊಂದು ದೇಶಗಳಲ್ಲಿ ಹಲವಾರು ರೀತಿಯ ಕಠಿಣ ಕಾನೂನುಗಳಿವೆ. ಅದರಲ್ಲಿಯೂ ಹೆಣ್ಣು-ಗಂಡಿನ ಸಂಬಂಧಗಳ ಮೇಲೆ ಕ್ರೂರವಾಗಿರುವ ಶಿಕ್ಷೆಯಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವೇ ಇರದ ಕಾರಣ, ಅವರಿಗೆ ಅತ್ಯಂತ ಕ್ರೂರ ಎನ್ನಿಸುವಂಥ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಅದರಲ್ಲಿಯೂ ಇಂಥ ಕಠಿಣ ಹಾಗೂ ಬೇರೆಯವರಿಗೆ ಅತ್ಯಂತ ಕ್ರೂರ ಎನ್ನಿಸುವ ಶಿಕ್ಷೆಗಳ ವಿಷಯದಲ್ಲಿ ಹಲವಾರು ಮುಸ್ಲಿಂ ರಾಷ್ಟ್ರಗಳೇ ಮುಂದಿವೆ.&lt;/p&gt;&lt;p&gt;ಇದೀಗ ಅಂಥದ್ದೇ ಒಂದು ಘಟನೆ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ನಡೆದಿದೆ. ಟಿಕ್​ಟಾಕ್​ಗಾಗಿ ಪರಸ್ಪರ ಚುಂಬಿಸುತ್ತಿರುವ ಅವಿವಾಹಿತ ಜೋಡಿಯ ದೃಶ್ಯಗಳು ವೈರಲ್​ ಆಗುತ್ತಲೇ, ಇಬ್ಬರಿಗೂ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗಿದೆ. ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದೆ. ನಾಲ್ಕು ತಿಂಗಳು ಜೈಲು ಶಿಕ್ಷೆಯಯ ಬಳಿಕ ದೊಡ್ಡ ಜನಸಮೂಹದ ಎದುರು ಛಡಿಯೇಟು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಟಿಕ್​ಟಾಕ್​ ವಿಡಿಯೋ ತಂದ ಸಂಕಷ್ಟ&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಫೆಬ್ರವರಿ 27 ರಂದು 22 ವರ್ಷದ ಯುವಕ ಮತ್ತು 25 ವರ್ಷದ ಯುವತಿ, ಕಾರಿನೊಳಗೆ ಟಿಕ್&zwnj;ಟಾಕ್ ವಿಡಿಯೋಗಳನ್ನು ನೇರ ಪ್ರಸಾರ ಮಾಡುತ್ತಿದ್ದರು. ಇಲ್ಲಿಯ ಕಾನೂನಿನ ಅರಿವಿದ್ದಾಗೂ ಇಂಥದ್ದೊಂದು ಸಾಹಸಕ್ಕೆ ಇವರು ಕೈಹಾಕಿದ್ದರೋ ಅಥವಾ ಹೀಗೆ ಮಾಡಿದ್ರೆ ಇಂಥದ್ದೊಂದು ಶಿಕ್ಷೆ ಸಿಗುತ್ತದೆ ಎನ್ನುವ ಅರಿವು ಇರಲಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ವಿಡಿಯೋದಲ್ಲಿ ಸಮಯದಲ್ಲಿ, ಅವರು ಪರಸ್ಪರ ಚುಂಬಿಸಿದರು. ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಸ್ಥಳೀಯ ನಿವಾಸಿಗಳು ಘಟನೆಯನ್ನು ಷರಿಯಾ ಅಧಿಕಾರಿಗಳಿಗೆ ವರದಿ ಮಾಡಲು ಪ್ರೇರೇಪಿಸಿತು.&lt;/p&gt;&lt;h3&gt;&lt;strong&gt;ನಾಲ್ಕು ತಿಂಗಳ ಶಿಕ್ಷೆ&lt;/strong&gt;&lt;/h3&gt;&lt;p&gt;ಬಳಿಕ ಏಪ್ರಿಲ್&zwnj;ನಲ್ಲಿ ಈ ಜೋಡಿಯನ್ನು ಬಂಧಿಸಲಾಯಿತು. ಇದರ ರೆಕಾರ್ಡಿಂಗ್​ ಮಾಡುತ್ತಿದ್ದ ನಾಲ್ವರನ್ನೂ ಅರೆಸ್ಟ್​ಮಾಡಲಾಯಿತು. ವಿಡಿಯೋ ಮಾಡುತ್ತಿದ್ದವರನ್ನು ಆನ್&zwnj;ಲೈನ್ ಜೂಜಾಟದ ಅಡಿ ಹಾಗೂ ಈ ಜೋಡಿಯನ್ನು ವಿವಾಹೇತರ ಸಂಬಂಧಗಳಿಗಾಗಿ ಸಾರ್ವಜನಿಕವಾಗಿ ಛಡಿಯೇಟಿಗೆ ಗುರಿಪಡಿಸಲಾಯಿತು. ಇದಕ್ಕೂ ಮುನ್ನ ಇವರನ್ನು ಜೈಲಿಗೆ ತಳ್ಳಲಾಯಿತು. ಬಂಧನದ ನಂತರ, ಇಬ್ಬರನ್ನೂ ಸುಮಾರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ನಂತರದ ವಿಚಾರಣೆಯಲ್ಲಿ, ನ್ಯಾಯಾಲಯವು ಅವರಿಗೆ ತಲಾ ಛಡಿಯೇಟು ಶಿಕ್ಷೆ ವಿಧಿಸಿತು. ಸಾಕ್ಷಿಯಾಗಿ ಟಿಕ್&zwnj;ಟಾಕ್ ಲೈವ್ ರೆಕಾರ್ಡಿಂಗ್&zwnj;ಗಳನ್ನು ಹೊಂದಿರುವ ಮೊಬೈಲ್ ಫೋನ್ ಮತ್ತು ಯುಎಸ್&zwnj;ಬಿ ಡ್ರೈವ್ ಅನ್ನು ನಾಶಮಾಡಲು ನ್ಯಾಯಾಲಯ ಆದೇಶಿಸಿತು.&lt;/p&gt;&lt;p&gt;ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡೋನೇಷ್ಯಾ ಶಿಕ್ಷೆಯನ್ನು ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ನಡವಳಿಕೆಯನ್ನು ತಪ್ಪು ಎಂದು ಪರಿಗಣಿಸಬಹುದಾದರೂ, ಅದಕ್ಕೆ ಜೈಲು ಶಿಕ್ಷೆ ಅಥವಾ ಸಾರ್ವಜನಿಕವಾಗಿ ಚಾಟಿಯೇಟು ಹೊಡೆಯುವುದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಉಸ್ಮಾನ್ ಹಮೀದ್ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/indonesian-couple-publicly-caned-21-times-over-tiktok-kissing-video-suc/articleshow-xinrc1e"/>
        </item>
        <item>
            <title><![CDATA[ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರ ವಿರುದ್ಧ 3,500 ಪುಟಗಳ ಚಾರ್ಜ್‌ಶೀಟ್! ಹ್ಯಾಕರ್‌ಗಳಿಗೆ ಬಿಗಿಯಾದ ಇಡಿ ಪಾಶ]]></title>
            <link>https://kannada.asianetnews.com/state/karnataka-bitcoin-scam-ed-files-3500-page-chargesheet-against-hacker-sriki-2-others-gdp/articleshow-xosg0mz</link>
            <guid isPermaLink="true">https://kannada.asianetnews.com/state/karnataka-bitcoin-scam-ed-files-3500-page-chargesheet-against-hacker-sriki-2-others-gdp/articleshow-xosg0mz</guid>
            <pubDate>Tue, 07 Jul 2026 17:01:01 +0530</pubDate>
            <description><![CDATA[ಬಹುಕೋಟಿ ಮೌಲ್ಯದ ಬಿಟ್&zwnj;ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು (ಇ.ಡಿ) ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರ ವಿರುದ್ಧ 3,500 ಪುಟಗಳ ಬೃಹತ್ ದೋಷಾರೋಪಪಟ್ಟಿ ಸಲ್ಲಿಸಿದೆ. ಈ ಚಾರ್ಜ್&zwnj;ಶೀಟ್&zwnj;ನಲ್ಲಿ ಆರೋಪಿಗಳ ಹೈಟೆಕ್ ಹ್ಯಾಕಿಂಗ್, ಡಾರ್ಕ್&zwnj;ನೆಟ್ ಕಾರ್ಯಾಚರಣೆ, ಮತ್ತು ಅಕ್ರಮ ಹಣ ವರ್ಗಾವಣೆಯ ಸಂಪೂರ್ಣ ಜಾಲವನ್ನು ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8hasp4gv5fngaapmp9ajft,imgname-sriki-bitcoin-case-1778403075780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬಹುಕೋಟಿ ಮೌಲ್ಯದ ಬಿಟ್&zwnj;ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಪ್ರಕರಣದ ಮುಖ್ಯ ಆರೋಪಿ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರು ಪ್ರಮುಖ ಆರೋಪಿಗಳ ವಿರುದ್ಧ ಸೋಮವಾರ ನಗರದ ವಿಶೇಷ ಇ.ಡಿ. ನ್ಯಾಯಾಲಯಕ್ಕೆ ಸುಮಾರು 3,500 ಪುಟಗಳ ಬೃಹತ್ ದೋಷಾರೋಪಪಟ್ಟಿ (ಚಾರ್ಜ್&zwnj;ಶೀಟ್) ಸಲ್ಲಿಸಲಾಗಿದೆ.&lt;/p&gt;&lt;p&gt;ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ, ಕ್ರಿಪ್ಟೋಕರೆನ್ಸಿ ವ್ಯಾಪಾರಿ ರಾಬಿನ್ ಖಂಡೇವಾಲ್ ಮತ್ತು ಉದ್ಯಮಿ ಸುನೀಶ್ ಹೆಗ್ಡೆ ವಿರುದ್ಧ ಈ ದೋಷಾರೋಪಪಟ್ಟಿ ಸಲ್ಲಿಕೆಯಾಗಿದ್ದು, ಆರೋಪಿಗಳ ಹೈಟೆಕ್ ಹ್ಯಾಕಿಂಗ್ ತಂತ್ರಗಳು, ಡಾರ್ಕ್&zwnj;ನೆಟ್ ಕಾರ್ಯಾಚರಣೆ, ಸೈಬರ್ ಸುಲಿಗೆ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿ ವರ್ಗಾವಣೆಯ ಸಂಪೂರ್ಣ ಜಾಲವನ್ನು ಇದರಲ್ಲಿ ಬಿಚ್ಚಿಡಲಾಗಿದೆ. ಅಷ್ಟೇ ಅಲ್ಲದೆ, ಈ ಕೃತ್ಯಕ್ಕೆ ಸಾಥ್ ನೀಡಿದ್ದ ಒಂದು ಖಾಸಗಿ ಕಂಪನಿ ಹಾಗೂ ಇಬ್ಬರು ವ್ಯಕ್ತಿಗಳ ಹೆಸರನ್ನೂ ಸಹ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಸರ್ವರ್&zwnj;ಗಳ ದುರ್ಬಲತೆ ಬಳಸಿ ಹ್ಯಾಕ್ ಮಾಡುತ್ತಿದ್ದ ಮಾಸ್ಟರ್&zwnj;ಮೈಂಡ್&lt;/h2&gt;&lt;p&gt;ಈ ಇಡೀ ಹಗರಣದ ಸೂತ್ರಧಾರ (ಮಾಸ್ಟರ್&zwnj;ಮೈಂಡ್) ಪ್ರಮುಖ ಆರೋಪಿ ಶ್ರೀಕಿ. ಈತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳು (Exchanges), ಗೇಮಿಂಗ್ ಪ್ಲಾಟ್&zwnj;ಫಾರ್ಮ್&zwnj;ಗಳು ಮತ್ತು ಪ್ರಮುಖ ಕಾರ್ಪೊರೇಟ್ ಸರ್ವರ್&zwnj;ಗಳ ಭದ್ರತಾ ಲೋಪಗಳನ್ನು (ದುರ್ಬಲತೆ) ಪತ್ತೆಹಚ್ಚಿ ಅವುಗಳನ್ನು ಹ್ಯಾಕ್ ಮಾಡುತ್ತಿದ್ದ.&lt;/p&gt;&lt;h2&gt;ಸರ್ಕಾರಿ ಪೋರ್ಟಲ್&zwnj;ಗೆ ಕನ್ನ&lt;/h2&gt;&lt;p&gt;ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್&zwnj;ಮೆಂಟ್ ಪೋರ್ಟಲ್ ಅನ್ನು ವ್ಯವಸ್ಥಿತವಾಗಿ ಹ್ಯಾಕ್ ಮಾಡಿ, ಬರೋಬ್ಬರಿ 11.50 ಕೋಟಿ ರೂಪಾಯಿಗಳನ್ನು ಈತ ಕಬಳಿಸಿದ್ದಾನೆ ಎಂಬ ಗಂಭೀರ ಆರೋಪವಿದೆ. ಇದರೊಂದಿಗೆ 'ಯುನಿಕಾನ್' ಕ್ರಿಪ್ಟೋ ವಿನಿಮಯ ಕೇಂದ್ರ ಹಾಗೂ ಪ್ರಮುಖ ಆನ್&zwnj;ಲೈನ್ ಪೋಕರ್ ಅಪ್ಲಿಕೇಶನ್&zwnj;ಗಳನ್ನು ಹ್ಯಾಕ್ ಮಾಡಿರುವುದಾಗಿಯೂ ಇ.ಡಿ. ತನ್ನ ದೋಷಾರೋಪಪಟ್ಟಿಯಲ್ಲಿ ದಾಖಲಿಸಿದೆ.&lt;/p&gt;&lt;h2&gt;ಆನ್&zwnj;ಲೈನ್ ಸುಲಿಗೆಗೆ ರಾಜಕೀಯ ನಂಟಿನ ಉದ್ಯಮಿ ಸ್ಕೆಚ್&zwnj;&lt;/h2&gt;&lt;p&gt;ಪ್ರಕರಣದ ಎರಡನೇ ಆರೋಪಿ ಸುನೀಶ್ ಹೆಗ್ಡೆ, ರಾಜಕೀಯ ಸಂಪರ್ಕ ಹೊಂದಿರುವ ಜೂಜಿನ ಉದ್ಯಮಿ ಹಾಗೂ ಗುತ್ತಿಗೆದಾರನಾಗಿದ್ದಾನೆ. ಈತ ಮುಖ್ಯ ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನಕ್ಕೆ ಅಗತ್ಯವಿರುವ ಎಲ್ಲಾ ಹಣಕಾಸಿನ ನೆರವು ನೀಡುತ್ತಿದ್ದ ಎನ್ನಲಾಗಿದೆ.&lt;/p&gt;&lt;p&gt;ಪ್ರತಿಯಾಗಿ, ಆನ್&zwnj;ಲೈನ್ ಪೋಕರ್ ಸೈಟ್&zwnj;ಗಳನ್ನು ಹ್ಯಾಕ್ ಮಾಡುವಂತೆ ಶ್ರೀಕಿಗೆ ಈತ ಒತ್ತಡ ಹೇರುತ್ತಿದ್ದ ಹಾಗೂ ಆನ್&zwnj;ಲೈನ್ ಸುಲಿಗೆಗೆ ಯೋಜನೆಗಳನ್ನು (ಪ್ಲಾನ್) ರೂಪಿಸುತ್ತಿದ್ದ. ಆರೋಪಿಗಳು ಗೇಮಿಂಗ್ ಪೋರ್ಟಲ್&zwnj;ಗಳನ್ನು ಹ್ಯಾಕ್ ಮಾಡಿದ ನಂತರ, ಆಡಳಿತ ಮಂಡಳಿಯನ್ನು ಹೆದರಿಸಿ 2 ಕೋಟಿ ರೂಪಾಯಿ ನಗದು, ಕ್ಯಾಸಿನೋ ಚಿಪ್ಸ್ ಮತ್ತು ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು ನೀಡುವಂತೆ ಬೇಡಿಕೆ ಇಟ್ಟು ಸುಲಿಗೆಗೆ ಯತ್ನಿಸಿದ್ದರು ಎಂದು ಚಾರ್ಜ್&zwnj;ಶೀಟ್&zwnj;ನಲ್ಲಿ ವಿವರಿಸಲಾಗಿದೆ.&lt;/p&gt;&lt;h2&gt;ವ್ಯವಸ್ಥಿತವಾಗಿ ನಡೆಯುತ್ತಿತ್ತು ಅಕ್ರಮ ಹಣ ವರ್ಗಾವಣೆ (Money Laundering)&lt;/h2&gt;&lt;p&gt;ಈ ಜಾಲದ ಮೂರನೇ ಪ್ರಮುಖ ಆರೋಪಿ ರಾಬಿನ್ ಖಂಡೇವಾಲ್ ಒಬ್ಬ ಕ್ರಿಪ್ಟೋಕರೆನ್ಸಿ ವ್ಯಾಪಾರಿಯಾಗಿದ್ದಾನೆ. ಶ್ರೀಕಿ ಮತ್ತು ಸುನೀಶ್ ಹೆಗ್ಡೆ ಹ್ಯಾಕಿಂಗ್ ಹಾಗೂ ಸುಲಿಗೆಯ ಮೂಲಕ ಕದ್ದ ವರ್ಚುವಲ್ ಸ್ವತ್ತುಗಳನ್ನು (ಬಿಟ್&zwnj;ಕಾಯಿನ್ ಇತ್ಯಾದಿ) ಹಣವಾಗಿ ಪರಿವರ್ತಿಸುವ ಜವಾಬ್ದಾರಿ ಈತನದ್ದಾಗಿತ್ತು.&lt;/p&gt;&lt;p&gt;ಅಂತರರಾಷ್ಟ್ರೀಯ ಕ್ರಿಪ್ಟೋ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಬಳಸಿಕೊಂಡು ಈ ಡಿಜಿಟಲ್ ಸ್ವತ್ತುಗಳನ್ನು ನಗದಾಗಿ ಪರಿವರ್ತಿಸುತ್ತಿದ್ದ ರಾಬಿನ್, ಆ ಹಣವನ್ನು ಅತ್ಯಂತ ವ್ಯವಸ್ಥಿತವಾಗಿ ಶ್ರೀಕಿ ಮತ್ತು ಆತನ ಆಪ್ತ ವಲಯದವರು ನಿಯಂತ್ರಿಸುತ್ತಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಿದ್ದ ಎಂದು ಇ.ಡಿ. ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.&lt;/p&gt;&lt;h2&gt;ಡ್ರಗ್ಸ್&zwnj;ನಿಂದ ಬಯಲಾದ ಬಿಟ್&zwnj;ಕಾಯಿನ್ ದಂಧೆ&lt;/h2&gt;&lt;p&gt;2020ರಲ್ಲಿ ಬೆಂಗಳೂರು ಪೊಲೀಸರು ಡಾರ್ಕ್ ವೆಬ್ (Dark Web) ಮೂಲಕ ಮಾದಕವಸ್ತು (ಡ್ರಗ್ಸ್) ಖರೀದಿಸಿದ ಆರೋಪದ ಮೇಲೆ ಶ್ರೀಕಿಯನ್ನು ಮೊದಲ ಬಾರಿಗೆ ಬಂಧಿಸಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಹ್ಯಾಕರ್ ಶ್ರೀಕಿಯ ಕೋಟ್ಯಂತರ ರೂಪಾಯಿಗಳ ಕ್ರಿಪ್ಟೋಕರೆನ್ಸಿ ಹಗರಣದ ಸುರುಳಿ ಬಿಚ್ಚಿಕೊಳ್ಳಲಾರಂಭಿಸಿತು. ಪೊಲೀಸ್ ವಿಚಾರಣೆಯ ವೇಳೆ ಆರೋಪಿಗಳು ನಡೆಸಿರುವ ಹಳೆಯ ಸೈಬರ್ ಅಪರಾಧಗಳು ಒಂದೊಂದಾಗಿ ಹೊರಬಂದವು. 2017ರಲ್ಲಿ 'ಯುನೋ ಕಾಯಿನ್' ಕ್ರಿಪ್ಟೋ ವಿನಿಮಯ ಕೇಂದ್ರವನ್ನು ಹ್ಯಾಕ್ ಮಾಡಿ 60ಕ್ಕೂ ಹೆಚ್ಚು ಬಿಟ್&zwnj;ಕಾಯಿನ್&zwnj;ಗಳ ಕಳ್ಳತನ ಮಾಡಿದ್ದ. 2018ರಲ್ಲಿ ಆನ್&zwnj;ಲೈನ್ ಪೋಕರ್ ಆಪ್&zwnj;ಗಳು ಹಾಗೂ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್&zwnj;ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.50 ಕೋಟಿ ರೂ. ದೋಚಿದ ಪ್ರಕರಣ ದಾಖಲಾಗಿತ್ತು. ಈ ಬಿಟ್&zwnj;ಕಾಯಿನ್ ಹಗರಣದ ಆಳ-ಅಗಲ ದೊಡ್ಡದಾಗಿದ್ದರಿಂದ, ಇದರ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ದಳವನ್ನು (SIT) ರಚಿಸಿತ್ತು. ಎಸ್&zwnj;ಐಟಿ ನಡೆಸಿದ ಆಳವಾದ ತನಿಖೆಯಲ್ಲಿ ಶ್ರೀಕಿ ಮತ್ತು ಆತನ ಸಹಚರರ ಅಂತರರಾಷ್ಟ್ರೀಯ ವಂಚನೆ ಜಾಲ ಸಂಪೂರ್ಣವಾಗಿ ಬಯಲಿಗೆ ಬಂದಿತ್ತು.&lt;/p&gt;&lt;h2&gt;12 ಕಡೆ ಇ.ಡಿ ದಾಳಿ ಮತ್ತು ಆರೋಪಿಗಳ ಬಂಧನ&lt;/h2&gt;&lt;p&gt;ಹಗರಣದಲ್ಲಿ ಭಾರಿ ಪ್ರಮಾಣದ ಅಕ್ರಮ ಹಣ ವರ್ಗಾವಣೆ ನಡೆದಿರುವ ಹಿನ್ನೆಲೆಯಲ್ಲಿ ಇ.ಡಿ. ಪ್ರತ್ಯೇಕವಾಗಿ ತನಿಖೆ ಕೈಗೆತ್ತಿಕೊಂಡಿತ್ತು. ತನಿಖೆಯ ಭಾಗವಾಗಿ ಕಳೆದ ಏಪ್ರಿಲ್ 20ರಂದು ಇ.ಡಿ. ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದರು. ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್, ಅವರ ಪುತ್ರರಾದ ಮೊಹಮ್ಮದ್ ನಲಪಾಡ್, ಒಮರ್ ನಲಪಾಡ್, ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಅವರ ಮೊಮ್ಮಗ ಅಕೀಬ್ ಖಾನ್ ನಿವಾಸಗಳು ಹಾಗೂ ಹ್ಯಾಕರ್ ಶ್ರೀಕಿ ಮನೆ ಸೇರಿದಂತೆ ಒಟ್ಟು 12 ಪ್ರಮುಖ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ನಡೆಸಲಾಗಿತ್ತು. ಈ ವೇಳೆ ಆರ್ಥಿಕ ವಹಿವಾಟಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಮೊಬೈಲ್ ಫೋನ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿತ್ತು.&lt;/p&gt;&lt;p&gt;ದಾಳಿಯ ನಂತರ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ, ಮೇ 8ರಂದು ಕುಖ್ಯಾತ ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ್ ಮತ್ತು ಸುನೀಶ್ ಹೆಗ್ಡೆಯನ್ನು ಇ.ಡಿ. ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಈ ಮೂವರೂ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಸಲ್ಲಿಕೆಯಾಗಿರುವ 3,500 ಪುಟಗಳ ಚಾರ್ಜ್&zwnj;ಶೀಟ್ ಆರೋಪಿಗಳಿಗೆ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗುವಂತೆ ಮಾಡಿದೆ.&lt;/p&gt;&lt;p&gt;ಬಹುಕೋಟಿ ಮೊತ್ತ ಬಿಟ್&zwnj; ಕಾಯಿನ್&zwnj; ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಮುಖ ಆರೋಪಿ ಹ್ಯಾಕರ್&zwnj; ಶ್ರೀಕೃಷ್ಣ ರಮೇಶ್&zwnj; ಅಲಿಯಾಸ್&zwnj; ಶ್ರೀಕಿ ಸೇರಿ ಮೂವರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳು ಸೋಮವಾರ ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಸುಮಾರು 3,500 ಪುಟಗಳ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಹ್ಯಾಕರ್&zwnj; ಶ್ರೀಕಿ, ಕ್ರಿಪ್ಟೋಕರೆನ್ಸಿ ವ್ಯಾಪಾರಿ ರಾಬಿನ್&zwnj; ಖಂಡೆವಾಲಾ, ಉದ್ಯಮಿ ಸುನೀಶ್&zwnj; ಹೆಗ್ಡೆ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆಯಾಗಿದೆ.&lt;/p&gt;&lt;p&gt;ಆರೋಪಿಗಳ ಉನ್ನತ ಮಟ್ಟದ ಹ್ಯಾಕಿಂಗ್&zwnj;, ಡಾರ್ಕ್&zwnj;ನೆಟ್&zwnj; ಕಾರ್ಯಾಚರಣೆಗಳು, ಸೈಬರ್&zwnj; ಸುಲಿಗೆ, ಬಹುಕೋಟಿ ಕ್ರಿಪ್ಟೋಕರೆನ್ಸಿ ವರ್ಗಾವಣೆ ಬಗ್ಗೆ ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ. ಈ ಅಪರಾಧದಲ್ಲಿ ಆರೋಪಿಗಳಿಗೆ ಸಾಥ್&zwnj; ನೀಡಿದ ಖಾಸಗಿ ಕಂಪನಿ ಹಾಗೂ ಇಬ್ಬರು ವ್ಯಕ್ತಿಗಳ ಹೆಸರನ್ನೂ ಪ್ರಸ್ತಾಪಿಸಲಾಗಿದೆ.&lt;/p&gt;&lt;p&gt;ಪ್ರಮುಖ ಆರೋಪಿ ಶ್ರೀಕಿ ಹಗರಣದ ಮಾಸ್ಟರ್&zwnj; ಮೈಂಡ್&zwnj;. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಪ್ಟೋ ಕರೆನ್ಸಿ ವಿನಿಮಯ ಕೇಂದ್ರಗಳು, ಗೇಮಿಂಗ್&zwnj; ಪ್ಲಾಟ್&zwnj;ಫಾರ್ಮ್&zwnj;ಗಳು ಮತ್ತು ಕಾರ್ಪೊರೇಟ್&zwnj; ಸರ್ವರ್&zwnj;ಗಳ ದುರ್ಬಲತೆ ಬಳಸಿಕೊಂಡು ಈತ ಹ್ಯಾಕ್&zwnj; ಮಾಡುತ್ತಿದ್ದ. ಈತನ ವಿರುದ್ಧ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್&zwnj;ಮೆಂಟ್ ಪೋರ್ಟಲ್&zwnj; ಹ್ಯಾಕ್&zwnj; ಮಾಡಿ 11.50 ಕೋಟಿ ರು. ಕಬಳಿಸಿದ ಆರೋಪವೂ ಇದೆ. ಅಂತೆಯೇ ಯುನಿಕಾನ್ ಕ್ರಿಪ್ಟೋ ವಿನಿಮಯ ಮತ್ತು ಪ್ರಮುಖ ಪೋಕರ್&zwnj; ಅಪ್ಲಿಕೇಶನ್&zwnj;ಗಳನ್ನು ಹ್ಯಾಕ್&zwnj; ಮಾಡಿದ್ದಾನೆಂದು ಚಾರ್ಜ್&zwnj;ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-bitcoin-scam-ed-files-3500-page-chargesheet-against-hacker-sriki-2-others-gdp/articleshow-xosg0mz"/>
        </item>
        <item>
            <title><![CDATA[ರಾಮಲಲ್ಲಾನ ಕದ್ದ ಆಭರಣಗಳೆಲ್ಲಾ ಕರಗಿ ಬಿಸ್ಕೆಟ್ ಆಗಿಬಿಟ್ಟವಾ? ಅಗೆದಷ್ಟೂ ಬಗೆಹರಿಯದ ಪ್ರಶ್ನೆಗಳು]]></title>
            <link>https://kannada.asianetnews.com/crime/is-stolen-ram-temple-gold-melted-into-biscuits-cops-probe-new-angle-in-theft-case-suc/articleshow-yobaq7w</link>
            <guid isPermaLink="true">https://kannada.asianetnews.com/crime/is-stolen-ram-temple-gold-melted-into-biscuits-cops-probe-new-angle-in-theft-case-suc/articleshow-yobaq7w</guid>
            <pubDate>Sat, 04 Jul 2026 19:06:55 +0530</pubDate>
            <description><![CDATA[ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ನಡೆಸುತ್ತಿದೆ. ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕರಗಿಸಿರಬಹುದೆಂಬ ಶಂಕೆಯ ಮೇಲೆ ತನಿಖೆ ಕೇಂದ್ರೀಕೃತವಾಗಿದ್ದು, ಟ್ರಸ್ಟ್&zwnj;ನ ದಾಖಲೆಗಳು ಮತ್ತು ಟಂಕಸಾಲೆಯೊಂದಿಗಿನ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwpng3fm5yd4kjxhj8g0vq9h,imgname-ram-mandir-1783172173300.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಯೋಧ್ಯೆಯ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕರಗಿಸಿ ಅವುಗಳ ಗುರುತನ್ನು ಅಳಿಸಿಹಾಕಿರಬಹುದಾದ ಸಾಧ್ಯತೆಯ ಬಗ್ಗೆ ವಿಶೇಷ ತನಿಖಾ ತಂಡ (SIT) ಈಗ ತನಿಖೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಇಲ್ಲಿಯವರೆಗೆ ನಡೆಸಿದ ದಾಳಿಗಳಲ್ಲಿ ಕದ್ದ ಆಭರಣಗಳು ಪತ್ತೆಯಾಗದ ನಂತರ ತನಿಖಾ ಸಂಸ್ಥೆಗಳ ಅನುಮಾನಗಳು ಮತ್ತಷ್ಟು ಹೆಚ್ಚಿವೆ. ಈ ನಿಟ್ಟಿನಲ್ಲಿ, ಆಭರಣಗಳ ದಾಖಲೆಗಳು, ಅವುಗಳ ನಿರ್ವಹಣೆ ಮತ್ತು ಟಂಕಸಾಲೆಗೆ ಕಳುಹಿಸಲಾದ ಅಮೂಲ್ಯ ಲೋಹಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ.&lt;/p&gt;&lt;h3&gt;&lt;strong&gt;ಟಂಕಸಾಲೆಗೆ ಕಳುಹಿಸಲಾದ ಲೋಹಗಳ ತನಿಖೆ&lt;/strong&gt;&lt;/h3&gt;&lt;p&gt;ಮೂಲಗಳ ಪ್ರಕಾರ, ರಾಮ್ ಲಲ್ಲಾಗೆ ಭೇಟಿ ನೀಡಿದ ನಂತರ, SIT ಅಧಿಕಾರಿಗಳು ದೇವಾಲಯದಲ್ಲಿ ಆಭರಣಗಳು, ಅಮೂಲ್ಯ ಕಾಣಿಕೆಗಳು ಮತ್ತು ಅವುಗಳ ನಿರ್ವಹಣಾ ವ್ಯವಸ್ಥೆಗಳ ಬಗ್ಗೆ ಉಸ್ತುವಾರಿ ಕೆ.ಡಿ. ಬಾಬು ಅವರಿಂದ ವಿವರವಾದ ಮಾಹಿತಿಯನ್ನು ಪಡೆದರು. ಆಭರಣಗಳು ಮತ್ತು ಇತರ ಅಮೂಲ್ಯ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ದಾಖಲೆಗಳನ್ನು ಹಾಗೂ ಭಾರತ ಸರ್ಕಾರದ ಒಂದು ಉದ್ಯಮವಾದ ಪ್ರಿಂಟಿಂಗ್ ಮತ್ತು ಟಂಕಸಾಲೆ ನಿಗಮ (ಟಂಕಸಾಲೆ) ದೊಂದಿಗಿನ ವಹಿವಾಟಿನ ಸಂಪೂರ್ಣ ಖಾತೆಯನ್ನು ತನಿಖಾ ತಂಡವು ಕೋರಿದೆ. ಇದಲ್ಲದೆ, ಬ್ಯಾಂಕುಗಳು ಮತ್ತು ಟಂಕಸಾಲೆಗೆ ಕಳುಹಿಸಲಾದ ಲೋಹಗಳ ಸಂಪೂರ್ಣ ಖಾತೆಯನ್ನು ಸಂಪೂರ್ಣ ಪ್ರಕ್ರಿಯೆಯನ್ನು ಪರಿಶೀಲಿಸಲು ಪರಿಶೀಲಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಚಿನ್ನದ ಬಿಸ್ಕತ್ತು?&lt;/strong&gt;&lt;/h2&gt;&lt;p&gt;ಕಳ್ಳತನ ಮಾಡಲಾದ ಚಿನ್ನ ಮತ್ತು ಬೆಳ್ಳಿ ಆಭರಣಗಳ ಗುರುತನ್ನು ಕರಗಿಸಿ ನಾಶಮಾಡಲು ಯಾವುದೇ ಪ್ರಯತ್ನ ನಡೆದಿದೆಯೇ ಎಂಬುದರ ಬಗ್ಗೆಯೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮೂಲಗಳ ಪ್ರಕಾರ, ಪ್ರಶ್ನಾರ್ಹ ಆಭರಣಗಳನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿಲ್ಲ, ಅದಕ್ಕಾಗಿಯೇ ಈ ಅಂಶವನ್ನು ತನಿಖೆಯಲ್ಲಿ ಸೇರಿಸಲಾಗಿದೆ. ಪ್ರಸ್ತುತ, ಲಭ್ಯವಿರುವ ಎಲ್ಲಾ ಪುರಾವೆಗಳು, ದಾಖಲೆಗಳು ಮತ್ತು ದಾಖಲೆಗಳ ಆಧಾರದ ಮೇಲೆ ಎಸ್&zwnj;ಐಟಿ ಇಡೀ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದೆ.&lt;/p&gt;&lt;p&gt;ಟ್ರಸ್ಟ್&zwnj;ನ ತ್ರೈಮಾಸಿಕ ಸಭೆಗಳಲ್ಲಿ ನಗದು ದೇಣಿಗೆ ಮತ್ತು ಆದಾಯದ ವಿವರಗಳನ್ನು ಪ್ರಸ್ತುತಪಡಿಸಲಾಗಿದ್ದರೂ, ದಾನ ಮಾಡಿದ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳ ಪ್ರಮಾಣ, ಮೌಲ್ಯಮಾಪನ ಮತ್ತು ಲಭ್ಯವಿರುವ ದಾಸ್ತಾನುಗಳ ಬಗ್ಗೆ ವಿವರವಾದ ಮಾಹಿತಿಯು ನಿಯಮಿತ ಕಾರ್ಯಸೂಚಿಯ ಭಾಗವಾಗಿರಲಿಲ್ಲ ಎಂದು ಎಸ್&zwnj;ಐಟಿ ತನಿಖೆಯು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ, ಟ್ರಸ್ಟ್ ಆರಂಭದಲ್ಲಿ 9.44 ಕ್ವಿಂಟಾಲ್ (944 ಕಿಲೋಗ್ರಾಂ) ಬೆಳ್ಳಿಯನ್ನು ಭಾರತ ಸರ್ಕಾರಿ ಸಂಸ್ಥೆಯಾದ ಮಿಂಟ್&zwnj;ಗೆ ಪರೀಕ್ಷೆ ಮತ್ತು ಕರಗಿಸುವಿಕೆಗಾಗಿ ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಮೌಲ್ಯಮಾಪನ ಮಾಡಲು ಕಳುಹಿಸಿದೆ. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಹಿಂದೆ ದೇವಾಲಯವು ಸುಮಾರು 13 ಕ್ವಿಂಟಾಲ್ ಬೆಳ್ಳಿ ಮತ್ತು 20 ಕಿಲೋಗ್ರಾಂಗಳಷ್ಟು ಚಿನ್ನವನ್ನು ದೇಣಿಗೆಯಾಗಿ ಸ್ವೀಕರಿಸಿದೆ ಎಂದು ಸಾರ್ವಜನಿಕವಾಗಿ ಹೇಳಿದ್ದಾರೆ. ಇಡೀ ವಿಷಯವು ಪ್ರಸ್ತುತ ತನಿಖೆಯಲ್ಲಿದೆ, ಮತ್ತು ಎಲ್ಲಾ ಸಂಗತಿಗಳನ್ನು ಪರಿಶೀಲಿಸಿದ ನಂತರ ವಿಶೇಷ ತನಿಖಾ ತಂಡ (SIT) ಮುಂದಿನ ಕ್ರಮ ಕೈಗೊಳ್ಳುತ್ತದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/is-stolen-ram-temple-gold-melted-into-biscuits-cops-probe-new-angle-in-theft-case-suc/articleshow-yobaq7w"/>
        </item>
        <item>
            <title><![CDATA[ಬಳ್ಳಾರಿಯಲ್ಲಿ ಡಬಲ್ ಮರ್ಡರ್: ಪತ್ನಿ-ಮಾವನನ್ನು ಚಾಕುವಿನಿಂದ ಕೊಂದ ಪತಿರಾಯ!]]></title>
            <link>https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3</link>
            <guid isPermaLink="true">https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3</guid>
            <pubDate>Tue, 07 Jul 2026 18:51:33 +0530</pubDate>
            <description><![CDATA[&lt;p&gt;ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwybsmgzr844qkyw26nyyc73,imgname-cghc-1783430435359.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜು.07):&lt;/strong&gt; ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಮೃತರನ್ನು ನಾಗಲಕ್ಷ್ಮಿ (24) ಮತ್ತು ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಆರೋಪಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ (50) ಈ ದ್ವಿಹ*ತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p&gt;ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ತೇಜಾ ತನ್ನ ಪತ್ನಿ ನಾಗಲಕ್ಷ್ಮಿ ಮೇಲೆ ಅನುಮಾನ ಪಟ್ಟು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜೀ ಸಂಧಾನ ನಡೆಸಲು ಶ್ರೀನಿವಾಸ ಸ್ಥಳಕ್ಕೆ ಬಂದಿದ್ದರು. ಆದರೆ ಮಾತುಕತೆ ವೇಳೆ ವಾಗ್ವಾದ ತಾರಕಕ್ಕೇರಿ, ಆರೋಪಿ ತೇಜಾ ಹಾಗೂ ಆತನ ತಂದೆ ಸೇರಿ ನಾಗಲಕ್ಷ್ಮಿ ಮತ್ತು ಶ್ರೀನಿವಾಸ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣ?&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ದೋಬಿ (ಇಸ್ತ್ರಿ) ಕೆಲಸ ಮಾಡಿಕೊಂಡಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದ್ವಿಹ*ತ್ಯೆಗೆ ನಿಖರ ಕಾರಣವೇನು ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಏನು ಎಂಬುದರ ಕುರಿತು ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3"/>
        </item>
    </channel>
</rss>
