<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 18 Jun 2026 17:28:44 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[ಬುರುಡೆ ಗ್ಯಾಂಗ್‌ನಿಂದ ಜೀವ ಬೆದರಿಕೆಯಿದೆ: ಮಾಸ್ಕ್‌ಮ್ಯಾನ್ ಚಿನ್ನಯ್ಯ ಆರೋಪ! ಅಷ್ಟಕ್ಕೂ SIT ಗೆ ಸಲ್ಲಿಸಿದ ದೂರಿನಲ್ಲಿ ಏನಿದೆ?]]></title>
            <link>https://kannada.asianetnews.com/state/dharmasthala-burial-case-masked-witness-chinnayya-alleges-death-threats-seeks-police-protection-from-sit-kvn/articleshow-3abmxqs</link>
            <guid isPermaLink="true">https://kannada.asianetnews.com/state/dharmasthala-burial-case-masked-witness-chinnayya-alleges-death-threats-seeks-police-protection-from-sit-kvn/articleshow-3abmxqs</guid>
            <pubDate>Tue, 16 Jun 2026 08:22:02 +0530</pubDate>
            <description><![CDATA[ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ ಸಾಕ್ಷಿಯಿಂದ ಆರೋಪಿಯಾಗಿರುವ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇದೆ ಎಂದು ಎಸ್ಐಟಿಗೆ ದೂರು ನೀಡಿದ್ದಾನೆ. ಹೈಕೋರ್ಟ್&zwnj;ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ಗಿರೀಶ್ ಮಟ್ಟಣ್ಣನವರ್ ಮತ್ತು ಇತರರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01katzjp52ww8v4jf9pn1cbsd1,imgname-dharmmasthala-case-chinnayya-1763989608610.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದಲ್ಲಿ ಸಾಕ್ಷಿ, ದೂರುದಾರನಾಗಿ ಬಂದು ಆರೋಪಿಯಾಗಿರುವ ಚಿನ್ನಯ್ಯ, ತನಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ದೂರು ನೀಡಿದ್ದಾನೆ.&lt;/p&gt;&lt;p&gt;ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್&zwnj;ಗೆ ರಿಟ್ ಅರ್ಜಿ ಸಲ್ಲಿಸಿದ ಬಳಿಕ ತನಗೆ ಜೀವ ಬೆದರಿಕೆ ಹಾಗೂ ಮಾನಸಿಕ ಒತ್ತಡ ಹಾಕಲಾಗುತ್ತಿದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಆರೋಪಿಸಿದ್ದಾನೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಸೋಮವಾರ ತನ್ನ ಪತ್ನಿ ರತ್ನಾ ಜತೆ ಆಗಮಿಸಿದ ಚಿನ್ನಯ್ಯ, &lsquo;ನನಗೆ ಮತ್ತು ನನ್ನ ಕುಟುಂಬಕ್ಕೆ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರರಿಂದ ಜೀವ ಬೆದರಿಕೆ ಇದೆ&rsquo; ಎಂದು ದೂರು ನೀಡಿದ್ದಾನೆ.&lt;/p&gt;&lt;p&gt;ಗಿರೀಶ್ ಮಟ್ಟಣ್ಣವರ್, ಯುನೈಟೆಡ್ ಮೀಡಿಯಾದ ಅಭಿಷೇಕ್&zwnj; ಅವರು ತನ್ನ ಅಳಿಯ ಪುರುಷೋತ್ತಮ ಹಾಗೂ ಕುಟುಂಬದ ಕೆಲವರಿಗೆ ಫೋನ್&zwnj; ಮಾಡಿ, ಹೈಕೋರ್ಟ್&zwnj;ಗೆ ರಿಟ್ ಅರ್ಜಿ ಹಾಕಿರುವ ಬಗ್ಗೆ ವಿಚಾರಿಸುತ್ತಿದ್ದಾರೆ. ಕರೆ ಮಾಡಿ ಮಾಹಿತಿಗಳನ್ನು ಕೇಳುತ್ತಿದ್ದಾರೆ. ಇವರಿಂದ ತಮಗೆ, ತಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಪೊಲೀಸ್ ರಕ್ಷಣೆ ನೀಡಬೇಕು. ಪ್ರಕರಣದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿನ್ನಯ್ಯ ದೂರಿನಲ್ಲಿ ಉಲ್ಲೇಖಿಸಿದ್ದಾನೆ.&lt;/p&gt;&lt;h2&gt;&lt;strong&gt;ದೂರಿನ ವಿವರ:&lt;/strong&gt;&lt;/h2&gt;&lt;p&gt;ಜೂ.12ರ ರಾತ್ರಿ 9ರ ಸುಮಾರಿಗೆ ಯುನೈಟೆಡ್ ಮೀಡಿಯಾಗೆ ಸಂಬಂಧಿಸಿದ ಅಭಿಷೇಕ ಎಂಬಾತ ನನ್ನ ಅಳಿಯ ಪುರುಷೋತ್ತಮ್ ಅವರ ಮೊಬೈಲ್ ಸಂಖ್ಯೆಗೆ ವಾಟ್ಸ್&zwnj;ಆ್ಯಪ್&zwnj; ಕರೆ ಮಾಡಿ, ನಾನು ಸಲ್ಲಿಸಿರುವ ರಿಟ್ ಅರ್ಜಿ ಕುರಿತು ವಿಚಾರಿಸಿದ್ದಲ್ಲದೆ, ಈ ಅರ್ಜಿಯ ಹಿಂದೆ ಯಾರು ಇದ್ದಾರೆ, ನಿಮಗೆ ಯಾರು ಸಹಾಯ ಮಾಡುತ್ತಿದ್ದಾರೆ, ಈ ಕೆಲಸವನ್ನು ಯಾರ ಪ್ರೇರಣೆಯಿಂದ ಮಾಡುತ್ತಿದ್ದೀರಿ? ಎಂಬುದರ ಕುರಿತು ಪದೇ ಪದೇ ಪ್ರಶ್ನೆಗಳನ್ನು ಕೇಳಿ, ನನ್ನ ಮೊಬೈಲ್ ನಂಬ&zwnj;ರ್ ಅನ್ನು ಕೇಳಿ, ನನ್ನ ಬಳಿ ಮಾತನಾಡಬೇಕೆಂದು ಹೇಳಿರುತ್ತಾರೆ ಹಾಗೂ ನನ್ನ ಕುಟುಂಬದವರ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾನೆ. ಬೆದರಿಕೆ ಹಾಕುವ ಹಾಗೂ ಮಾನಸಿಕ ಒತ್ತಡ ಹೇರುವ ರೀತಿಯಲ್ಲಿ ಮಾತನಾಡಿದ್ದಾನೆ.&lt;/p&gt;&lt;p&gt;ಅದೇ ದಿನ ರಾತ್ರಿ 9 ಗಂಟೆಗೆ ಗಿರೀಶ್ ಮಟ್ಟಣ್ಣವರ್ ಅವರು ನನ್ನ ಪತ್ನಿಯ ಅಕ್ಕನ ಮಗನಾದ ರವಿ ಅವರ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್&zwnj; ಕರೆ ಮಾಡಿ, ನನ್ನ ಬಗ್ಗೆ ಹಾಗೂ ನಾನು ರಿಟ್ ಅರ್ಜಿ ಸಲ್ಲಿಸಲು ಕಾರಣವಾದ ಕುರಿತು ಮಾಹಿತಿ ಕಲೆಹಾಕಲು ಪ್ರಯತ್ನಿಸಿದ್ದಾರೆ. ಹೀಗಾಗಿ ಈ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿಪಡಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಧರ್ಮಸ್ಥಳ ಕೇಸ್&zwnj; ಸಿಬಿಐಗೆ ಕೊಡಿ: ಎನ್&zwnj;. ರವಿಕುಮಾರ್&zwnj;&lt;/strong&gt;&lt;/h3&gt;&lt;p&gt;ಬೆಂಗಳೂರು: ಧರ್ಮಸ್ಥಳದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್&zwnj;.ರವಿಕುಮಾರ್&zwnj; ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಅಂತರರಾಜ್ಯ ಸಂಬಂಧಗಳ ಜೊತೆಗೆ ವಿದೇಶಿ ಕೈಗಳೂ ಇರಬಹುದು ಎಂಬ ಅನುಮಾನ ಜನರಲ್ಲಿ ಗಾಢವಾಗಿದೆ. ಇಂತಹ ಗಂಭೀರ ವಿಚಾರಗಳನ್ನು ರಾಜ್ಯ ಪೊಲೀಸ್ ತನಿಖೆ ಮಾಡಲು ಸಾಧ್ಯವಿಲ್ಲ, ಸಿಬಿಐ ಮಾತ್ರ ಸಂಪೂರ್ಣವಾಗಿ ತನಿಖೆ ನಡೆಸಬಲ್ಲದು ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಪಾತ್ರವನ್ನು ತನಿಖೆ ಮಾಡಬೇಕಿದೆ. ಜೊತೆಗೆ ಮುಖವಾಡ ಧರಿಸಿದ ಚಿನ್ನಯ್ಯ ಆರೋಪಿಸಿದ 200 ಕೋಟಿ ರು. ಕಪ್ಪುಹಣದ ಮೂಲವನ್ನು ಪತ್ತೆಹಚ್ಚುವುದು ಅಗತ್ಯ. ಈ ಪ್ರಕರಣದಲ್ಲಿ ಅಂತರರಾಜ್ಯ ಶಕ್ತಿಶಾಲಿ ವ್ಯಕ್ತಿಗಳ ಕೈವಾಡವಿದೆ. ರಾಜ್ಯ ಪೊಲೀಸರು ಪ್ರಭಾವಿ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಸಾಧ್ಯ. ಹೀಗಾಗಿ ಸಿಬಿಐ ತನಿಖೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಧರ್ಮಸ್ಥಳದ ಬಗ್ಗೆ ಕುತಂತ್ರಿಗಳು ಮಾಡಿದ ಅಪವಾದ, ಅಭಿಯಾನ ಮತ್ತು ಗಂಭೀರ ಆರೋಪಗಳು ಲಕ್ಷಾಂತರ ಜನರ ನಂಬಿಕೆಗೆ ಭಾರೀ ಹೊಡೆತ ನೀಡಿವೆ. ಅಪರಾಧಿಗಳನ್ನು ಹಾಗೂ ಕುತಂತ್ರಿಗಳನ್ನು ಕಾನೂನಿನ ಮುಂದೆ ತಂದು ಕಠಿಣವಾಗಿ ಶಿಕ್ಷಿಸಬೇಕು. ಈ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಖಾಂತರವೇ ಹಿಂದೂ ಸಮುದಾಯದ ಮನಸ್ಸಿಗೆ ಶಾಂತಿ ನೀಡಲು ಸಾಧ್ಯ ಎಂದು ರವಿಕುಮಾರ್&zwnj; ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/dharmasthala-burial-case-masked-witness-chinnayya-alleges-death-threats-seeks-police-protection-from-sit-kvn/articleshow-3abmxqs"/>
        </item>
        <item>
            <title><![CDATA[ವೆನ್ನೆಲ್ಲಾ ಹ*ತ್ಯೆ ಕೇಸ್‌: FSL ವರದಿಯಲ್ಲಿ ಕೊಲೆಯ ಮತ್ತಷ್ಟು ಭೀಕರತೆ ಬೆಳಕಿಗೆ! ಕೊಲೆ ನಡೆದದ್ದು ಹೇಗೆ?]]></title>
            <link>https://kannada.asianetnews.com/karnataka-districts/bengaluru-vennella-murder-case-postmortem-report-reveals-brutal-assault-suffocation-led-to-6-year-old-death-kvn/articleshow-4g897im</link>
            <guid isPermaLink="true">https://kannada.asianetnews.com/karnataka-districts/bengaluru-vennella-murder-case-postmortem-report-reveals-brutal-assault-suffocation-led-to-6-year-old-death-kvn/articleshow-4g897im</guid>
            <pubDate>Wed, 17 Jun 2026 09:30:45 +0530</pubDate>
            <description><![CDATA[ಕಾಡುಗೋಡಿಯಲ್ಲಿ ನಡೆದ 6 ವರ್ಷದ ಬಾಲಕಿ ವೆನ್ನೆಲ್ಲಾ ಸಾವು ಕೊಲೆ ಎಂದು ಮರಣೋತ್ತರ ಮತ್ತು ಎಫ್&zwnj;ಎಸ್&zwnj;ಎಲ್&zwnj; ವರದಿಯಲ್ಲಿ ದೃಢಪಟ್ಟಿದೆ. ತಾಯಿಯ ಪ್ರಿಯಕರ ಮೋಹನ್ ಹೊಟ್ಟೆಗೆ ಗುದ್ದಿ, ಉಸಿರುಗಟ್ಟಿಸಿ ಕೊಂದಿರುವುದು ಬಹಿರಂಗವಾಗಿದ್ದು, ಪೊಲೀಸರು ಆರೋಪಿ ಮೋಹನ್ ಮತ್ತು ತಾಯಿ ಪ್ರಿಯಾಂಕಳನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jx1xem9v1nyhcgfevr7bzh64,imgname-17-month-old-baby-died-after-being-thrown-by-stepfather-1749189873979.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಾಡುಗೋಡಿಯಲ್ಲಿ ನಡೆದಿದ್ದ 6 ವರ್ಷದ ಬಾಲಕಿ ವೆನ್ನೆಲ್ಲಾ ಕೊಲೆ ಪ್ರಕರಣದ ಸಂಬಂಧ ಮರಣೊತ್ತರ ವರದಿ ಮತ್ತು ಎಫ್&zwnj;ಎಸ್&zwnj;ಎಲ್&zwnj; ವರದಿಯಲ್ಲಿ ಬಾಲಕಿ ಕೊಲೆಯ ಬಗ್ಗೆ ಹಲವು ವಿಚಾರಗಳು ಬಹಿರಂಗವಾಗಿದೆ. ವೆನ್ನೆಲ್ಲಾ ಮುಖದ ಮೇಲೆ ಹಲವು ಗಾಯಗಳು, ಸವೆತದ ಗುರುತುಗಳು, ಮೂಗು ಮತ್ತು ಬಾಯಿಯಿಂದ ರಕ್ತ ಮಿಶ್ರಿತ ದ್ರವ ಬಂದಿರುವುದು. ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟಿದ ಗಡ್ಡೆಗಳು ಕಂಡು ಬಂದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಬಾಲಕಿಯ ತಾಯಿ ಪ್ರಿಯಾಂಕ ಅವರ ಪ್ರಿಯಕರನಾದ ಮೋಹನ್&zwnj; ಮೊಣಕೈಯಿಂದ ಗುದ್ದಿದ್ದ ಹಿನ್ನೆಲೆಯಲ್ಲಿ ಬಾಲಕಿ ವೆನ್ನೆಲ್ಲಾ (6) ಮಾ.24 ರಂದು ಮೃತಪಟ್ಟಿದ್ದಳು. ಆರಂಭದಲ್ಲಿ ಈ ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಲಾಗಿತ್ತು. ಬಳಿಕ ಮರಣೋತ್ತರ ಪರೀಕ್ಷೆ ಮತ್ತು ಎಫ್&zwnj;ಎಸ್&zwnj;ಎಲ್&zwnj; ವರದಿಗಳ ಆಧಾರದ ಮೇಲೆ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಯಿತು. ಕೊಲೆ ಪ್ರಕರಣ ದಾಖಲಿಸಿದ ಬಳಿಕ ಆರೋಪಿಗಳಾದ ಮೋಹನ್&zwnj; ಮತ್ತು ಪ್ರಿಯಾಂಕಳನ್ನು ಬಂಧಿಸಲಾಯಿತು.&lt;/p&gt;&lt;h2&gt;&lt;strong&gt;ಕೊಲೆ ಎಂದು ಸ್ಪಷ್ಟಪಡಿಸಿದ ವರದಿಗಳು:&amp;nbsp;&lt;/strong&gt;&lt;/h2&gt;&lt;p&gt;ಮರಣೋತ್ತರ ಪರೀಕ್ಷೆ ಹಾಗೂ ಎಫ್&zwnj;ಎಸ್&zwnj;ಎಲ್&zwnj; ವರದಿಗಳು ಇದು ಕೊಲೆ ಎಂಬುದನ್ನು ಸ್ಪಷ್ಟಪಡಿಸಿದೆ. ಪೊಲೀಸರ ಎಫ್ಎಸ್&zwnj;ಎಲ್ ವರದಿ ಬರಲಿ ಎಂದು ಕೊಲೆ&zwnj; ಕೇಸ್ ದಾಖಲಿಸದೆ ಕಾಯ್ದಿದ್ದರು. ಎಫ್&zwnj;ಎಸ್&zwnj;ಎಲ್&zwnj; ವರದಿ ಬರುವ ಮೊದಲೇ ಇದೊಂದು ಕೊಲೆ&zwnj; ಎಂಬುದು ಪತ್ತೆಮಾಡಲು ಸಾಕಷ್ಟು ಅವಕಾಶ ಇದ್ದರೂ ಸುಮನಿದ್ದರು ಎಂದು ಆರೋಪ. ಇದೇ ಕಾರಣಕ್ಕೆ ಕರ್ತವ್ಯ ಲೋಪ ಎಸಗಿದ್ದ ಆರೋಪದ ಹಿನ್ನೆಲೆಯಲ್ಲಿ ಆಗಿನ ಇನ್ಸ್&zwnj;ಪೆಕ್ಟರ್ ರಂಗಸ್ವಾಮಿ ಸೇರಿ ಮೂವರನ್ನು ಅಮಾನತು ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಕೊಲೆ ನಡೆದಿದ್ದು ಹೇಗೆ?&lt;/strong&gt;&lt;/h3&gt;&lt;p&gt;ಐಸ್&zwnj;ಕ್ರೀಂ ವಿಚಾರವಾಗಿ ಬಾಲಕಿ ವೆನ್ನೆಲ್ಲಾ ಅಳುತ್ತಿದ್ದಾಗ ಆರೋಪಿ ಮೋಹನ್ ಹೊಟ್ಟೆಗೆ ಮೊಣಕೈಯಿಂದ ಬಲವಾಗಿ ಹೊಡೆದಿದ್ದ. ನಂತರ ಆಕೆಯ ಮೂಗು ಬಾಯಿ ಮುಚ್ಚಿದ್ದ ಪರಿಣಾಮ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಳು. ನಂತರ ಬಾಲಕಿಯನ್ನು ಆಸ್ಪತ್ರೆಗೆ ಕರೆ ತಂದ್ದಾಗ ಪರೀಕ್ಷಿಸಿ ವೈದ್ಯರು ಆಕೆಯು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ದೃಢಪಡಿಸಿದ್ದರು.&lt;/p&gt;&lt;h3&gt;&lt;strong&gt;ವರದಿಯಲ್ಲಿ ಬಹಿರಂಗವಾದ ಅಂಶಗಳು&lt;/strong&gt;&lt;/h3&gt;&lt;p&gt;ವೆನ್ನೆಲಾಳ ಮುಖದ ಮೇಲೆ ಹಲವು ಗಾಯಗಳು ಮತ್ತು ಸವೆತದ ಗುರುತುಗಳು ಕಂಡುಬಂದಿವೆ, ಮೂಗು ಮತ್ತು ಬಾಯಿಯಿಂದ ರಕ್ತಮಿಶ್ರಿತ ದ್ರವ ಹೊರಬಂದಿರುವುದು ದಾಖಲಾಗಿದೆ. ಕೈ ಬೆರಳುಗಳ ತುದಿಗಳು ಮತ್ತು ಉಗುರುಗಳ ಬಳಿ ನೀಲಿ ಬಣ್ಣದ ಬದಲಾವಣೆ ಕಂಡುಬಂದಿದೆ. ಉಸಿರಾಟದ ಮಾರ್ಗ (Airway) ಮುಚ್ಚಿಹೋಗಿರುವುದು (Asphyxia), ಹೊಟ್ಟೆಗೆ (Abdomen) ಬಲವಾದ ಹೊಡೆತದಿಂದ ಉಂಟಾದ ಗಾಯ, ಈ ಎರಡು ಕಾರಣದಿಂದ ಮರಣ ಸಂಭವಿಸಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಹೊಟ್ಟೆಯಲ್ಲಿ ಸುಮಾರು 400 ಮಿ.ಲೀ. ರಕ್ತ ಪತ್ತೆ, ರಕ್ತ ಹೆಪ್ಪುಗಟ್ಟಿದ ಗಡ್ಡೆಗಳು (Blood clots) ಪತ್ತೆ. ಇದರಿಂದ ಹೊಟ್ಟೆಗೆ ಗಂಭೀರವಾದ ಆಂತರಿಕ ಗಾಯವಾಗಿರುವುದು ದೃಢ. ವಿಷಯುಕ್ತ ಆಹಾರದಿಂದ ಸಾವು ಸಂಭವಿಸಿಲ್ಲ ಎಂದು ಉಲ್ಲೇಖ.&lt;/p&gt;&lt;p&gt;ಕಾಡುಗೋಡಿ ಪೊಲೀಸ್&zwnj; ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಬಾಲಕಿ ವೆಲ್ಲೆನಾ ಕೊಲೆ ಪ್ರಕರಣ ಸೂಕ್ಮ ವಿಚಾರವಾಗಿದೆ. ಬೇರೆ ವಿಭಾಗದ ಎಸಿಪಿ ನೇತೃತ್ವದಲ್ಲಿ ಈ ಪ್ರಕರಣ ತನಿಖೆ ನಡೆಯುತ್ತಿದೆ. ಅದರ ವರದಿ ಬಂದ ನಂತರ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿವೆ. -ಸೀಮಂತ್&zwnj; ಕುಮಾರ್&zwnj; ಸಿಂಗ್&zwnj;, ನಗರ ಪೊಲೀಸ್&zwnj; ಆಯುಕ್ತ&amp;nbsp;&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-vennella-murder-case-postmortem-report-reveals-brutal-assault-suffocation-led-to-6-year-old-death-kvn/articleshow-4g897im"/>
        </item>
        <item>
            <title><![CDATA[ಹೊಸ ಡ್ರೆಸ್ ನೋಡಲು ಬಾರೋ ಎಂದು ಕರೆದ ಪ್ರೇಯಸಿ:  ಕರೆಗೆ ಓಗೊಟ್ಟು ಬಂದು ಹೆಣವಾದ ಪ್ರಿಯಕರ]]></title>
            <link>https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u</link>
            <guid isPermaLink="true">https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u</guid>
            <pubDate>Wed, 17 Jun 2026 14:29:31 +0530</pubDate>
            <description><![CDATA[ಬಿಹಾರದ ಜಮುಯಿಯಲ್ಲಿ, ಪ್ರೇಯಸಿ ಆರತಿ ಹೊಸ ಡ್ರೆಸ್ ನೋಡಲು ಕರೆದಿದ್ದಾಳೆಂದು ಹೋದ ಪ್ರೇಮಿ ಸಣ್ಣಲಾಲ್&zwnj;ನನ್ನು, ಯುವತಿಯ ತಂದೆಯೇ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ನಂತರ ಆತನ ಶವವನ್ನು ಜಲಾಶಯಕ್ಕೆ ಎಸೆದಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvacwraq2yx27407fmnps84e,imgname-lover-s-death-1781686755671.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಹಾರದ ಜಮುಯಿ ಜಿಲ್ಲೆಯ ಚಪೋಲವಾ ಗ್ರಾಮದಲ್ಲಿ ಪ್ರೀತಿಯ ಹೆಸರಿನಲ್ಲಿ ಅತ್ಯಂತ ಆಘಾತಕಾರಿ ಮತ್ತು ಕ್ರೂರ ಘಟನೆಯೊಂದು ನಡೆದಿದೆ. ಆರತಿ ಎಂಬ ಯುವತಿ ತನ್ನ ಪ್ರೇಮಿ ಸಣ್ಣಲಾಲ್&zwnj;ಗೆ ಫೋನ್ ಮಾಡಿ, &ldquo;ನಾನು ಹೊಸ ಡ್ರೆಸ್ ತಂದಿದ್ದೇನೆ, ನೋಡಲು ಬಾ&rdquo; ಎಂದು ಕರೆದಿದ್ದಾಳೆ. ಪ್ರೇಯಸಿಯ ಮಾತನ್ನು ಕೇಳಿ ಸಂತೋಷಗೊಂಡ ಸಣ್ಣಲಾಲ್ ತನ್ನ ಬೈಕ್ ಹತ್ತಿ ಸುಮಾರು ಎಪ್ಪತ್ತು ಕಿಲೋಮೀಟರ್ ದೂರವನ್ನು ಕೇವಲ ಮೂರು ಗಂಟೆಗಳಲ್ಲಿ ಕ್ರಮಿಸಿ, ರಾತ್ರಿ ಒಂಬತ್ತುವರೆ ಗಂಟೆಗೆ ಆಕೆಯ ಮನೆಯ ಹತ್ತಿರ ತಲುಪಿದ್ದಾನೆ.&lt;/p&gt;&lt;h2&gt;&lt;strong&gt;ನೋಡಿದ ಹುಡುಗಿಯ ತಂದೆ&lt;/strong&gt;&lt;/h2&gt;&lt;p&gt;ತನ್ನ ಸ್ನೇಹಿತ ಮನೋಜ್ ಜೊತೆ ಆಕೆಯ ಮನೆಯ ಕಡೆಗೆ ಹೋಗುತ್ತಿದ್ದಾಗ, ಹುಡುಗಿಯ ತಂದೆ ಇವರನ್ನು ಮೇಲುಗಡೆಯಿಂದ ನೋಡಿಬಿಟ್ಟಿದ್ದಾರೆ. ತನ್ನ ಮಗಳ ಲವರ್​ ಎಂದು ತಿಳಿದ ತಕ್ಷಣ, ಸಿಡಿಮಿಡಿಗೊಂಡ ತಂದೆ, ಕೂಡಲೇ ಸಣ್ಣಲಾಲ್ ಮೇಲೆ ದಾಳಿ ಮಾಡಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸ್ನೇಹಿತ ಮನೋಜ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಪೋಷಕರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.&lt;/p&gt;&lt;h3&gt;&lt;strong&gt;ಹೆಣವಾಗಿ ಹೋದ&lt;/strong&gt;&lt;/h3&gt;&lt;p&gt;ಅಷ್ಟರಲ್ಲಿಯೇ ಹುಡುಗಿಯ ಮನೆಯವರು ಸಣ್ಣಲಾಲ್ ಶವವನ್ನು ಜಲಾಶಯದಲ್ಲಿ ಬೀಸಾಡಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸ್ನೇಹಿತೆ ಖರೀದಿ ಮಾಡಿದ ಹೊಸ ಡ್ರೆಸ್​ ನೋಡಲು ಬಂದವ ಹೆಣವಾಗಿ ಹೋಗಿದ್ದಾನೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/lover-death-after-came-to-see-his-girlfriends-new-cloth-and-caught-by-girls-father-suc/articleshow-68wa90u"/>
        </item>
        <item>
            <title><![CDATA[Bengaluru crime:  ತಾಯಿ-ಅಕ್ಕನ ಬಗ್ಗೆ ಆಡಿದ ಆ ಮಾತಿಗೆ ಗೆಳೆಯನ್ನೇ ಇರಿದು ಕೊಂದ ಯುವಕ!]]></title>
            <link>https://kannada.asianetnews.com/crime/bengaluru-young-man-killed-his-friend-for-abusing-his-mother-and-sister-incident-happened-nimhans-layout-rav/articleshow-71aw6iz</link>
            <guid isPermaLink="true">https://kannada.asianetnews.com/crime/bengaluru-young-man-killed-his-friend-for-abusing-his-mother-and-sister-incident-happened-nimhans-layout-rav/articleshow-71aw6iz</guid>
            <pubDate>Wed, 17 Jun 2026 10:26:39 +0530</pubDate>
            <description><![CDATA[&lt;p&gt;ಬೆಂಗಳೂರಿನ ನಿಮ್ಹಾನ್ಸ್ ಲೇಔಟ್&zwnj;(Bengaluru nimhans layout)ನಲ್ಲಿ ಕ್ಷುಲ್ಲಕ ಕಾರಣಕ್ಕೆ ಗೆಳೆಯರಾದ ವಾಸಿಂ ಮತ್ತು ಸೈಯದ್ ನಡುವೆ ಜಗಳ ನಡೆದಿದೆ. ಸೈಯದ್&zwnj;ನ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯವಾಗಿ ನಿಂದಿಸಿದ್ದರಿಂದ ಕೋಪಗೊಂಡ ಸೈಯದ್, ಚಾಕುವಿನಿಂದ ಇರಿದು ವಾಸಿಂನನ್ನು ಕೊಲೆ ಮಾಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9yt6zv1z1bkq5dq6fcvdd9,imgname-----------------------2026-06-17t102236.609-1781671992315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17)&lt;/strong&gt; ಕ್ಷುಲ್ಲಕ ಕಾರಣಕ್ಕಾಗಿ ಗೆಳೆಯರಿಬ್ಬರ ನಡುವೆ ಆದ ಜಗಳ ಕೊಲೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಬೆಂಗಳೂರಿನ ನಿಮ್ಹಾನ್ಸ್ ಲೇಔಟ್&zwnj;ನಲ್ಲಿ ನಡೆದಿದೆ.&lt;/p&gt;&lt;p&gt;ವಾಸಿಂ, ಚಾಕು ಇರಿತದಿಂದ ಕೊಲೆಯಾದ ವ್ಯಕ್ತಿ. ಪೊಲೀಸರ ಮಾಹಿತಿ ಪ್ರಕಾರ, ಸೈಯದ್ ಕೊಲೆ ಆರೋಪಿ. ವಾಸಿಂ ಮತ್ತು ಸೈಯದ್ ಇಬ್ಬರೂ ಗೆಳೆಯರಾಗಿದ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಸೈಯದ್ ಚಾಕು ಇರಿದಿದ್ದರಿಂದ ತೀವ್ರ ಗಾಯಗೊಂಡು ವಾಸಿಂ ಸತ್ತಿದ್ದಾನೆ.&lt;/p&gt;&lt;h2&gt;ಸೈಯದ್ ತಾಯಿ ಅಕ್ಕನ ಬಗ್ಗೆ ವಾಸಿಂ ಅವಾಚ್ಯ ನಿಂದನೆ&lt;/h2&gt;&lt;p&gt;ಹತ್ಯೆಯಾದ ವಾಸಿಂ ಸ್ನೇಹಿತ ಸೈಯದ್&zwnj;ನ ತಾಯಿ ಹಾಗೂ ಅಕ್ಕನ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಸೈಯದ್ ಕುಪಿತಗೊಂಡು ವಾಸಿಂ ಮೇಲೆ ದಾಳಿ ಮಾಡಿದ್ದಾನೆ. ವಾಸಿಂ ಕೂಡ ಸೈಯದ್ ಮೇಲೆ ಹಲ್ಲೆ ಮಾಡಿದ್ದಾನೆ. ಇಬ್ಬರ ನಡುವೆ ಜಗಳ ವಿಕೋಪಕ್ಕೆ ತಿರುಗಿ ಸೈಯದ್ ಚಾಕುವಿನಿಂದ ಮನಬಂದಂತೆ ವಾಸಿಂಗೆ ಇರಿದಿದ್ದಾನೆ. ಈ ದಾಳಿಯಿಂದ ಗಂಭೀರ ಗಾಯಗೊಂಡ ವಾಸಿಂನನ್ನ ಆರೋಪಿ ಸೈಯದ್ ತಾನೇ ಮುಂದಾಗಿ ಆಸ್ಪತ್ರೆಗೆ ಕರೆದೊಯ್ಯದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಾಸಿಂ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.&lt;/p&gt;&lt;h3&gt;ಸುದ್ದಗುಂಟೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು&lt;/h3&gt;&lt;p&gt;ಸದ್ಯ ಘಟನೆ ಸಂಬಂಧ ಸುದ್ದಗುಂಟೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಬ್ಬರು ಗೆಳೆಯರಾಗಿದ್ದರೂ ಕ್ಷುಲ್ಲಕ ಕಾರಣಕ್ಕೆ, ಮಾತಿನಲ್ಲೇ ಬಗೆಹರಿಸಬಹುದಾಗಿ ಘಟನೆಯನ್ನ ಕೋಪದ ಕೈಗೆ ಬುದ್ಧಿ ಕೊಟ್ಟು ಪರಸ್ಪರ ಬಡಿದಾಡಿಕೊಂಡು ಒಬ್ಬನ ಕೊಲೆಯಾದರೆ ಇನ್ನೊಬ್ಬ ಜೈಲಿನ ಕಂಬಿ ಎಣಿಸುವಂತಾಯ್ತು!&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bengaluru-young-man-killed-his-friend-for-abusing-his-mother-and-sister-incident-happened-nimhans-layout-rav/articleshow-71aw6iz"/>
        </item>
        <item>
            <title><![CDATA[Bengaluru NICE road accident: ರಸ್ತೆ ಅಪಘಾತದಲ್ಲಿ ಅರ್ಧದೇಹ ಸಿಕ್ಕಿದೆ, ಗುರುತು ಸಿಕ್ಕಿಲ್ಲ! ಪೊಲೀಸರಿಗೆ ತಲೆನೋವಾದ ಪ್ರಕರಣ!]]></title>
            <link>https://kannada.asianetnews.com/crime/bengaluru-nice-road-mystery-half-body-found-in-accident-case-identity-still-unknown-police-face-investigation-rav/articleshow-9obzitp</link>
            <guid isPermaLink="true">https://kannada.asianetnews.com/crime/bengaluru-nice-road-mystery-half-body-found-in-accident-case-identity-still-unknown-police-face-investigation-rav/articleshow-9obzitp</guid>
            <pubDate>Wed, 17 Jun 2026 08:53:38 +0530</pubDate>
            <description><![CDATA[&lt;p&gt;ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮೇ 4 ರಂದು ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಪತ್ತೆಯಾಗಿದೆ. ಒಂದೂವರೆ ತಿಂಗಳು ಕಳೆದರೂ ಮೃತರ ಗುರುತು ಅಥವಾ ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಿಗೂಢ ಪ್ರಕರಣವನ್ನು ಭೇದಿಸಲು ಕಾಮಾಕ್ಷಿಪಾಳ್ಯ ಸಂಚಾ ಪೊಲೀಸರಿಂದ ತನಿಖೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv9sd05g7qg6cf9r06z6dxr2,imgname-----------------------2026-06-17t084804.688-1781666316463.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಬೆಂಗಳೂರು (ಜೂ.17): ನೈಸ್&zwnj; ರಸ್ತೆ ಅಪಘಾತ(Nice road accident)ದಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ದೇಹ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣ(Missing case)ವನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು (Kamakshipalya Traffic Station Police) ಜಾಲಾಡುತ್ತಿದ್ದಾರೆ.&amp;nbsp;&lt;/p&gt;&lt;h2&gt;ಮೇ.4 ರಂದು ನೈಸ್&zwnj; ರಸ್ತೆಯಲ್ಲಿ ಅಪಘಾತ&lt;/h2&gt;&lt;p&gt;ಕಳೆದ ಮೇ 4ರಂದು ನೈಸ್&zwnj; ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ವಿಷಯ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯೊಬ್ಬರ ಅಪ್ಪಚ್ಚಿಯಾಗಿದ್ದ ಅರ್ಧ ದೇಹ ಸಿಕ್ಕಿದೆ. ಆದರೆ ಮೃತರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರು 35-40 ವರ್ಷದವರು ಎಂದು ಕಂಡು ಬಂದಿದೆ.&lt;/p&gt;&lt;h3&gt;ಅರ್ಧದೇಹದ ಗುರುತು ಪತ್ತೆಯಾಗಿಲ್ಲ&lt;/h3&gt;&lt;p&gt;ಅಪಘಾತ ಸ್ಥಳದಲ್ಲಿ ಮೃತ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಘಟನೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ ಮೃತರ ಗುರುತು ಪತ್ತೆಯಾಗಿಲ್ಲ. ಅಪಘಾತ ಮಾಡಿದ ವಾಹನ ಯಾವುದು ಎಂಬುದು ಕೂಡ ಪತ್ತೆಯಾಗಿಲ್ಲ. ಹೀಗಾಗಿ ಈ ಅಪಘಾತ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಬೆನ್ನು ಬಿದ್ದಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/bengaluru-nice-road-mystery-half-body-found-in-accident-case-identity-still-unknown-police-face-investigation-rav/articleshow-9obzitp"/>
        </item>
        <item>
            <title><![CDATA[ಜೈಲಿನಲ್ಲಿ ಪವಿತ್ರಾ ಗೌಡಗೆ ರಾಜಾತಿಥ್ಯ, ಕಾಲೊತ್ತುವ ಸಿಬ್ಬಂದಿ, ಮನೆಯಿಂದ ಊಟದ ಆರೋಪ: ದೂರು ದಾಖಲು]]></title>
            <link>https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</link>
            <guid isPermaLink="true">https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz</guid>
            <pubDate>Thu, 18 Jun 2026 17:28:39 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvd9c26ghwhnzegpxcb5y8b2,imgname-pavitra-gowda-and-sandhya-1781783726288.jpg" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಸಂಧ್ಯಾ ಎಂಬುವವರು ಆರೋಪಿಸಿದ್ದಾರೆ. ಮನೆಯೂಟ, ಮೇಕಪ್ ಸೌಲಭ್ಯದ ಜೊತೆಗೆ ಸಿಬ್ಬಂದಿ ಕಾಲು ಒತ್ತುತ್ತಾರೆ ಎಂದಿದ್ದು, ಈ ಆರೋಪ ಮಾಡಿದವರ ವಿರುದ್ಧ ದೂರು ದಾಖಲಾಗಿದೆ. &amp;nbsp;&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ವಿಡಿಯೋ ವೈರಲ್​ ಆಗಿ, ಅದು ಸಾಕಷ್ಟು ಸದ್ದು ಮಾಡಿತ್ತು. ಆ ಬಳಿಕ, ಇದರಿಂದಾಗಿ ಜೈಲಿನ ಕೆಲವು ಸಿಬ್ಬಂದಿ ಕೆಲಸ ಕೂಡ ಕಳೆದುಕೊಂಡಿದ್ದರು. ಇದೀಗ ಅದೇ ಆರೋಪ ಇದೇ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavitra Gowda) ಅವರ ಮೇಲೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಸಂಧ್ಯಾ ಪವಿತ್ರಾ ನಾಗರಾಜ್ ಎನ್ನುವವರು ಪವಿತ್ರಾ ಗೌಡ ವಿರುದ್ಧ ಇಂಥದ್ದೊಂದು ಆರೋಪವನ್ನು ಮಾಧ್ಯಮದ ಎದುರು ಮಾಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸಂಧ್ಯಾ ಅವರು ಜೈಲಿಗೆ ಹೋಗಿದ್ದರು. ಅಲ್ಲಿ ಪವಿತ್ರಾ ಗೌಡ ಅವರಿಗೆ ರಾಜಾತಿಥ್ಯ ನೀಡುತ್ತಿರುವುದಾಗಿ ಅವರು ಆರೋಪಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಮನೆಯೂಟ ಬರುತ್ತೆ, ಐಷಾರಾಮಿಯಾಗಿ ಜೈಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲದೇ, ಸಂಧ್ಯಾ ಅವರು ಇನ್ನೂ ಕೆಲವು ಆಪಾದನೆ ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಅವರ ಕಾಲು ಒತ್ತುತ್ತಾರೆ. ಅವರೇ ಊಟವನ್ನೂ ತೆಗೆದುಕೊಂಡು ಕೊಡುತ್ತಾರೆ. ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂಬೆಲ್ಲಾ ಆರೋಪ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಆದ್ದರಿಂದ ಪವಿತ್ರಾ ಗೌಡ ಅವರು ಸಾಕಷ್ಟು ಎಂಜಾಯ್​ ಮಾಡುತ್ತಿದ್ದಾರೆ,, ದರ್ಶನ್​ಗೆ ಯಾವುದೇ ಸೌಲಭ್ಯಗಳು ಸಿಕ್ತಿಲ್ಲ, ಪವಿತ್ರಾಗೌಡಗೆ ಅಲ್ಲಿರೋ ಭದ್ರತಾ ಸಿಬ್ಬಂದಿಯೇ ಎಲ್ಲಾ ವ್ಯವಸ್ಥೆ ಮಾಡ್ತಾರೆ ಎಂದು ಹೇಳಿದ್ದು, ಇದೀಗ ಸಂಧ್ಯಾ ಅವರ ವಿರುದ್ಧ ದೂರು ದಾಖಲು ಮಾಡಲಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಇಂಥದ್ದೊಂದು ಗಂಭೀರ ಆರೋಪ ಮಾಡಿರುವ ಸಂಧ್ಯಾ ವಿರುದ್ಧ ಈಗ ಭದ್ರತಾ ಸಿಬ್ಬಂದಿಯಾಗಿರುವ ರಶ್ಮಿ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಸಂಧ್ಯಾ ವಿರುದ್ಧ ಎನ್​​ಸಿಆರ್ (Non-Cognizable Report) ದಾಖಲಾಗಿದೆ. ಸಂಧ್ಯಾ ಅವರ ವಿರುದ್ಧ ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ ಪವಿತ್ರಾ ಗೌಡ ಅವರು, ಜೈಲಿನಲ್ಲಿ ಆತ್ಮಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿದೆ. ಇದರಲ್ಲಿ ಏನು ಇರಲಿವೆ, ರೇಣುಕಾಸ್ವಾಮಿ ಕೊಲೆಯ ಬಗ್ಗೆ ಹೇಳ್ತಾರಾ, ತಮ್ಮ ಮತ್ತು ದರ್ಶನ್​ ಸ್ನೇಹದ ಬಗ್ಗೆ ವಿವರಿಸ್ತಾರಾ ಅಥವಾ ಇನ್ನೇನು ಇರಲಿದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/pavitra-gowda-gets-all-facilities-in-jail-says-sandhya-nagaraj-complaint-lodge-suc-e505quz"/>
        </item>
        <item>
            <title><![CDATA[ಮಂಡ್ಯ: ವೃದ್ಧೆಗೆ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗಲು ಯತ್ನ, ಗ್ರಾಮಸ್ಥರಿಗೆ ವಿಷಯ ತಿಳಿದು ಮುಂದಾಗಿದ್ದೇ ಬೇರೆ!]]></title>
            <link>https://kannada.asianetnews.com/crime/mandya-police-arrested-thieves-in-halagur-earring-theft-case-rav/articleshow-g6op8q0</link>
            <guid isPermaLink="true">https://kannada.asianetnews.com/crime/mandya-police-arrested-thieves-in-halagur-earring-theft-case-rav/articleshow-g6op8q0</guid>
            <pubDate>Thu, 18 Jun 2026 12:32:20 +0530</pubDate>
            <description><![CDATA[&lt;p&gt;ಸಾಗ್ಯ ಗ್ರಾಮದಲ್ಲಿ ವೃದ್ಧೆಯೊಬ್ಬರಿಗೆ ಚಾಕು ತೋರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಸಾಗ್ಯ ಮತ್ತು ಅಂಕನಹಳ್ಳಿ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಕದ್ದ ಓಲೆಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcrbw4dcce1ntqn2jwpn6tx,imgname---------------------1781765894285.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಲಗೂರು (ಜೂ.18): &lt;/strong&gt;ಚಾಕು ತೋರಿಸಿ ವೃದ್ಧೆಯನ್ನ ಬೆದರಿಸಿ ಕಿವಿ ಓಲೆ ಕಿತ್ತು ಪರಾರಿಯಾಗುತ್ತಿದ್ದ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಾಗ್ಯ- ಅಂಕನಹಳ್ಳಿ ಗ್ರಾಮಗಳ ಬಳಿ ನಡೆದಿದೆ.&lt;/p&gt;&lt;p&gt;ಸಮೀಪದ ಸಾಗ್ಯ ಗ್ರಾಮದ ಕೃಷ್ಣಪ್ಪರ ಪತ್ನಿ ಶಾಂತಮ್ಮರನ್ನು ಇಬ್ಬರು ಕಳ್ಳರು ಚಾಕು ತೋರಿಸಿ ಹೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಮೂರು ಗ್ರಾಂ ಚಿನ್ನದ ಓಲೆಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಮಂಡ್ಯ ತಾಲೂಕು ಕೆರಗೋಡು ಸಮೀಪದ ಶಿವಾರ ಗ್ರಾಮದ ಹೊಂಬಾಳಯ್ಯ ಮತ್ತು ಅಪ್ರಾಪ್ತ ಬಾಲಕ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದಾರೆ.&lt;/p&gt;&lt;p&gt;ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶಾಂತಮ್ಮ ಎಂದಿನಂತೆ ಸಾಗ್ಯ ಗ್ರಾಮದ ಕೆಂಪೇಗೌಡರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ನಂತರ ತಿಂಡಿ ತಿನ್ನುತ್ತಿದ್ದ ವೇಳೆ ಅಲ್ಲಿಗೆ ಬಂದ ಕಳ್ಳರು ಶಾಂತಮ್ಮನಿಗೆ ಚಾಕು ತೋರಿಸಿ ಬೆದರಿಸಿ ಅವರ ಎರಡು ಕಿವಿಗಳಲ್ಲಿದ್ದ ಓಲೆಗಳನ್ನು ಕಿತ್ತುಕೊಂಡಿದ್ದಾರೆ.&lt;/p&gt;&lt;p&gt;ನಂತರ ಕಳ್ಳರು ಪರಾರಿಯಾಗುತ್ತಿದ್ದಾಗ ಶಾಂತಮ್ಮ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಜಮೀನಿನವರು ವೃದ್ಧೆ ಶಬ್ಧ ಕೇಳಿ ತಕ್ಷಣ ಅಂಕನಹಳ್ಳಿ ಗ್ರಾಮಸ್ಥರಿಗೆ ದೂರವಾಣಿ ಮುಖಾಂತರ ವಿಷಯ ತಿಳಿಸಿದ್ದಾರೆ. ನಂತರ ಅಂಕನಹಳ್ಳಿ ಮತ್ತು ಸಾಗ್ಯ ಗ್ರಾಮಸ್ಥರು ಸೇರಿ ಕಳ್ಳರನ್ನು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.&lt;/p&gt;&lt;p&gt;ಸ್ಥಳಕ್ಕೆ ಬಂದ ಸಬ್ ಇನ್ಸ್&zwnj;ಪೆಕ್ಟರ್&zwnj; ಲೋಕೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಅವರ ಬಳಿ ಇದ್ದ ಓಲೆಗಳು, ಕಳ್ಳರ ಬಳಿ ಇದ್ದ ಚಾಕು, ಸ್ಕೂಟರ್&zwnj;ಗಳನ್ನು ವಶಪಡಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.&lt;/p&gt;&lt;p&gt;ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್&zwnj;ಪಿ ಯಶ್ವಂತ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಓಲೆ ಕಿತ್ತುಕೊಂಡಾಗ ಕಿವಿಯಿಂದ ರಕ್ತ ಬರುತ್ತಿದ್ದ ಶಾಂತಮ್ಮನನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಧರ್ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/mandya-police-arrested-thieves-in-halagur-earring-theft-case-rav/articleshow-g6op8q0"/>
        </item>
        <item>
            <title><![CDATA['ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​: ವಯನಾಡಿನ ಸುಂದರಿ ಸಿಕ್ಕಿಬಿದ್ದದ್ದೇ ರೋಚಕ]]></title>
            <link>https://kannada.asianetnews.com/india-news/model-arrested-for-smuggling-weed-worth-rs-11-crore-from-bangkok-to-mumbai-suc/articleshow-ggcnyho</link>
            <guid isPermaLink="true">https://kannada.asianetnews.com/india-news/model-arrested-for-smuggling-weed-worth-rs-11-crore-from-bangkok-to-mumbai-suc/articleshow-ggcnyho</guid>
            <pubDate>Sun, 14 Jun 2026 16:27:54 +0530</pubDate>
            <description><![CDATA['ಮಿಸಸ್​ ಕೇರಳ' ಸ್ಪರ್ಧೆಯ ರನ್ನರ್​ ಅಪ್​ ಹಾಗೂ 'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಿದ್ದ ಮಾಡೆಲ್ ಹರ್ಷಾ ಸನ್ನಿ, ಮುಂಬೈ ವಿಮಾನ ನಿಲ್ದಾಣದಲ್ಲಿ 118 ಕೋಟಿ ಮೌಲ್ಯದ ಡ್ರಗ್ಸ್​ ಸಮೇತ ಸಿಕ್ಕಿಬಿದ್ದಿದ್ದಾರೆ. ಬ್ಯಾಂಕಾಕ್&zwnj;ನಿಂದ ಬಂದ ಆಕೆಯ ಬ್ಯಾಗ್&zwnj;ನಲ್ಲಿ 11.824 ಕೆ.ಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv2wd3tfnrdrgz7v9yy16zrd,imgname-drugs-pedler-1781434584911.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;/p&gt;&lt;p&gt;'ಕೇರಳದ ಸ್ಫೂರ್ತಿದಾಯಕ ಮಹಿಳೆ' ಕಿರೀಟ ಪಡೆದಾಕೆ ಈಗ ಡ್ರಗ್ಸ್​ ಪೆಡ್ಲರ್​: ಸುಂದರಿ ಸಿಕ್ಕಿಬಿದದ್ದೇ ರೋಚಕ&lt;/p&gt;&lt;p&gt;&amp;nbsp;&lt;/p&gt;&lt;p&gt;ಕೇರಳದ ಸುಂದರಿ ಹೈ ಪ್ರೊಫೈಲ್​ ಸ್ವಪ್ನಾ ಸುರೇಶ್​ ಅವರ ಚಿನ್ನದ ಸಾಗಾಣಿಕೆ ವಿಷ್ಯ ಇನ್ನೂ ಹಸಿಹಸಿಯಾಗಿಯೇ ಇದೆ. ಈಕೆ ಹೊರದೇಶಗಳಿಂದ ಚಿನ್ನ ತರುವಾಗ ಅಧಿಕಾರಿಗಳು ಹೇಗೆ ನೆರವಾಗುತ್ತಿದ್ದರು ಎನ್ನುವುದು ಆತಂಕ ತಂದಿತ್ತು. ಅದರ ಬೆನ್ನಲ್ಲೇ ಇದೀಗ ಕೇರಳದ ಮತ್ತೋರ್ವ ಸುಂದರಿ ಮಿಸಸ್​ ಕೇರಳ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದು ರನ್ನರ್​ ಅಪ್​ ಆಗಿದ್ದೂ ಅಲ್ಲದೇ 'ಕೇರಳದ ಸ್ಫೂರ್ತಿದಾಯಕ ಮಹಿಳೆ' (Kerala's inspiring woman) ಎನ್ನುವ ಕಿರೀಟ ಪಡೆದಿದ್ದ ಹರ್ಷಾ ಸನ್ನಿ ಎಂಬಾಕೆ ಇದೀಗ ಡ್ರಗ್​ ಪೆಡ್ಲರ್​ ಆಗಿ ಹೊರಹೊಮ್ಮಿರುವ ಆತಂಕದ ಘಟನೆ ನಡೆದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (CSMIA) ವಾಯು ಗುಪ್ತಚರ ಘಟಕ (AIU) ಪ್ರಮುಖ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿದೆ. ಕಸ್ಟಮ್ಸ್ ಇಲಾಖೆಯು ಕೇರಳ ಮಾಡೆಲ್ ಹರ್ಷ ಸನ್ನಿ ಅವರನ್ನು 11.824 ಕಿಲೋಗ್ರಾಂಗಳಷ್ಟು ಹೈಡ್ರೋಪೋನಿಕ್ ಡ್ರಗ್ಸ್​ನೊಂದಿಗೆ ಬಂಧಿಸಿದೆ. ಈ ಔಷಧದ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹118.24 ಮಿಲಿಯನ್ ಆಗಿದೆ. ಕಸ್ಟಮ್ಸ್ ಇಲಾಖೆಯು ಆರೋಪಿ ಮಾಡೆಲ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕೋರಿದೆ.&lt;/p&gt;&lt;p&gt;ಬಂಧಿತ ಮಾಡೆಲ್ ಹರ್ಷ ಸನ್ನಿ ಯಾರು?&lt;/p&gt;&lt;p&gt;ಹರ್ಷ ಸನ್ನಿ ಮೂಲತಃ ಕೇರಳದ ವಯನಾಡ್ ಜಿಲ್ಲೆಯವಳು. ಮಾಡೆಲ್, ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ವೃತ್ತಿಯಲ್ಲಿ ನರ್ತಕಿ. ಕೊಚ್ಚಿಯಲ್ಲಿ ನಡೆದ &quot;ಮಿಸಸ್​ ಕೇರಳ ಗ್ಲೋಬಲ್ 2025&quot; ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರು &quot;ಮಿಸಸ್​ ಕೇರಳ ಇನ್ಸ್ಪೈರಿಂಗ್&quot; ಎಂಬ ಉಪಶೀರ್ಷಿಕೆಯನ್ನು ಸಹ ಪಡೆದರು.&lt;/p&gt;&lt;p&gt;ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಅಡ್ವಾನ್ಸ್ಡ್ ಪ್ಯಾಸೆಂಜರ್ ಇನ್ಫರ್ಮೇಷನ್ ಸಿಸ್ಟಮ್ (APIS) ಪ್ರೊಫೈಲಿಂಗ್ ಆಧಾರದ ಮೇಲೆ ಹರ್ಷ ಸನ್ನಿಯನ್ನು ಅನುಮಾನಾಸ್ಪದ ಪ್ರಯಾಣಿಕ ಎಂದು ಗುರುತಿಸಲಾಗಿದೆ. ಜೂನ್ 11, 2026 ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅವರು ಬ್ಯಾಂಕಾಕ್&zwnj;ನಿಂದ ಥಾಯ್ ಏರ್&zwnj;ವೇಸ್ ವಿಮಾನದಲ್ಲಿ (TG-351) ಮುಂಬೈಗೆ ಬಂದಳು. NDPS ಕಾಯ್ದೆಯಡಿಯಲ್ಲಿ ವೈಯಕ್ತಿಕ ಶೋಧ ನಡೆಸಲಾಯಿತು, ಆದರೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ನಂತರ ಆಕೆಯ ಸಾಮಾನುಗಳನ್ನು ಪರಿಶೀಲಿಸಲಾಯಿತು. &quot;ಸ್ವಿಸ್ ಸ್ಟಾರ್&quot; ಬ್ರ್ಯಾಂಡ್ ಹೊಂದಿರುವ ಬೀಜ್ ಟ್ರಾಲಿ ಬ್ಯಾಗ್&zwnj;ನಲ್ಲಿ ಹನ್ನೆರಡು ವ್ಯಾಕ್ಯೂಮ್-ಸೀಲ್ಡ್ ಪ್ಲಾಸ್ಟಿಕ್ ಪ್ಯಾಕೆಟ್&zwnj;ಗಳನ್ನು ಮರೆಮಾಡಲಾಗಿತ್ತು. ತೆರೆದಾಗ, ಸಿಕ್ಕಾಪಟ್ಟೆ ಗಾಢ ವಾಸನೆ ಬಂದಿತ್ತು. NDPS ಕಿಟ್&zwnj;ನೊಂದಿಗೆ ಪರೀಕ್ಷಿಸಿದಾಗ ಅವು ಹೈಡ್ರೋಪೋನಿಕ್ ಗಾಂಜಾ (ಗಾಂಜಾ) ಎಂದು ದೃಢಪಟ್ಟಿತು, ಇದು ಒಟ್ಟು 11.824 ಕಿಲೋಗ್ರಾಂಗಳಷ್ಟು ತೂಕವಿತ್ತು.&lt;/p&gt;&lt;h2&gt;&lt;strong&gt;ಪಾಪ ಗೊತ್ತೇ ಇರಲಿಲ್ಲ ಎಂದ ವಕೀಲ&lt;/strong&gt;&lt;/h2&gt;&lt;p&gt;ಹರ್ಷ ಸನ್ನಿಯನ್ನು ಪ್ರತಿನಿಧಿಸುವ ಪ್ರಭಾಕರ್ ತಿವಾರಿ, ಬ್ಯಾಗ್&zwnj;ನಲ್ಲಿ ಡ್ರಗ್ಸ್ ಇದೆ ಎಂದು ಮಾಡೆಲ್&zwnj;ಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡರು. ವಕೀಲರ ಪ್ರಕಾರ, ಹರ್ಷ ಉಗುರು ಕಲೆಯನ್ನು ಅಧ್ಯಯನ ಮಾಡಲು ಬ್ಯಾಂಕಾಕ್&zwnj;ಗೆ ಹೋಗಿದ್ದರು, ಅಲ್ಲಿ ಅವರು ಭಾರತೀಯ ಪ್ರಜೆಯನ್ನು ಭೇಟಿಯಾದರು. ಆ ವ್ಯಕ್ತಿ ಹರ್ಷ ಅವರನ್ನು ಮುಂಬೈನಲ್ಲಿರುವ ತನ್ನ ಕುಟುಂಬಕ್ಕೆ ಕೆಲವು &quot;ಉಡುಗೊರೆಗಳು ಮತ್ತು ಚಾಕೊಲೇಟ್&zwnj;ಗಳನ್ನು&quot; ತಲುಪಿಸಲು ಕೇಳಿಕೊಂಡರು. ವಿಮಾನ ಸಮಯ ಹತ್ತಿರವಾಗಿದ್ದರಿಂದ, ಪ್ಯಾಕೆಟ್&zwnj;ಗಳನ್ನು ತೆರೆಯಲು ಹರ್ಷ ಅವರಿಗೆ ಸಮಯವಿರಲಿಲ್ಲ. ಮುಂಬೈ ವಿಮಾನ ನಿಲ್ದಾಣದ ಹೊರಗೆ ಆ ವ್ಯಕ್ತಿಯ ಪತ್ನಿ ಅಥವಾ ಮಗುವನ್ನು ಭೇಟಿಯಾಗುವುದಾಗಿ ಮತ್ತು ಅವರಿಗೆ ಪ್ಯಾಕೆಟ್&zwnj;ಗಳನ್ನು ತಲುಪಿಸುವುದಾಗಿ ಆಕೆಗೆ ತಿಳಿಸಲಾಯಿತು.&lt;/p&gt;&lt;h3&gt;&lt;strong&gt;ಮುಂದಿನ ಕ್ರಮ ಮತ್ತು ತನಿಖೆ&lt;/strong&gt;&lt;/h3&gt;&lt;p&gt;ಹರ್ಷ ಅವರ ಹೇಳಿಕೆಗಳು ಅನುಮಾನಾಸ್ಪದವೆಂದು ಕಂಡುಕೊಂಡ ಕಸ್ಟಮ್ಸ್ ಇಲಾಖೆಯು, NDPS ಕಾಯ್ದೆ, 1985 ರ ಸೆಕ್ಷನ್ 8(ಸಿ), 20(ಬಿ), 23(ಬಿ), 28, 29, 30, 35, ಮತ್ತು 54 ರ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ, ಔಪಚಾರಿಕವಾಗಿ ಬಂಧಿಸಿತು. ಬ್ಯಾಂಕಾಕ್&zwnj;ನಲ್ಲಿ ಮಾದಕವಸ್ತು ಪ್ಯಾಕೆಟ್&zwnj;ಗಳನ್ನು ತಲುಪಿಸಿದ ವ್ಯಕ್ತಿ ಯಾರು ಮತ್ತು ಭಾರತದಲ್ಲಿ ಯಾರಿಗೆ ಸರಕನ್ನು ತಲುಪಿಸಬೇಕು ಎಂಬುದನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ಈಗ ಪ್ರಯತ್ನಿಸುತ್ತಿವೆ. ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್&zwnj;ನಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರೆದಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/model-arrested-for-smuggling-weed-worth-rs-11-crore-from-bangkok-to-mumbai-suc/articleshow-ggcnyho"/>
        </item>
        <item>
            <title><![CDATA[ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ: ಮತಾಂತರದ ವೀಡಿಯೋ ವೈರಲ್!]]></title>
            <link>https://kannada.asianetnews.com/india-news/nagpur-iaf-officer-wife-raped-forced-conversion-islam-ayaz-madare-arrest-san/articleshow-gokn3vb</link>
            <guid isPermaLink="true">https://kannada.asianetnews.com/india-news/nagpur-iaf-officer-wife-raped-forced-conversion-islam-ayaz-madare-arrest-san/articleshow-gokn3vb</guid>
            <pubDate>Tue, 16 Jun 2026 15:17:30 +0530</pubDate>
            <description><![CDATA[&lt;p&gt;ನಾಗ್ಪುರದಲ್ಲಿ ವಾಯುಪಡೆ ಅಧಿಕಾರಿಯ ಪತ್ನಿಯನ್ನು ಆಕೆಯ ಶಾಲಾ ಸ್ನೇಹಿತ ಆಯಾಜ್ ತಾಜ್ ಮದಾರೆ ಎಂಬಾತ ವಂಚಿಸಿ, ಅ*ತ್ಯಾಚಾರ ಎಸಗಿದ್ದಾನೆ. ನಂತರ ಬ್ಲಾಕ್&zwnj;ಮೇಲ್ ಮಾಡಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ನಿಕಾಹ್ ಮಾಡಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv7x075j1e8pvs32fcdcaf9k,imgname-forced-conversion-1781602983089.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗ್ಪುರ (ಜೂ.16): &lt;/strong&gt;ಭಾರತೀಯ ವಾಯುಪಡೆಯ (IAF) ಅಧಿಕಾರಿಯೊಬ್ಬರ ಪತ್ನಿಯನ್ನು ವಂಚಿಸಿ ಅ*ತ್ಯಾಚಾ*ರ ಎಸಗಿ, ಬ್ಲಾಕ್&zwnj;ಮೇಲ್ ಮಾಡುವ ಮೂಲಕ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದ ಮುಖ್ಯ ಆರೋಪಿ ಆಯಾಜ್ ತಾಜ್ ಮದಾರೆ ಎಂಬಾತ ಸಂತ್ರಸ್ತೆಯ ಶಾಲಾ ದಿನಗಳ ಸ್ನೇಹಿತನಾಗಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮತಾಂತರದ ವಿಡಿಯೋ ಕೂಡ ಸೋಶಿಯಲ್&zwnj; ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಆರೋಪಿ ಆಯಾಜ್ ಸಂತ್ರಸ್ತೆಯ ಕೈಹಿಡಿದು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಿರುವುದು ಕಂಡುಬಂದಿದೆ. ಆ ವಿಡಿಯೋದಲ್ಲಿ ಮಹಿಳೆಯು ಅಳುತ್ತಾ, &quot;ನನ್ನ ಕೈ ಬಿಡು... ನನ್ನನ್ನು ಬಿಟ್ಟುಬಿಡು!&quot; ಎಂದು ಪ್ರತಿಭಟಿಸುತ್ತಿರುವುದು ಮತ್ತು ಆರೋಪಿ ಆಕೆಯ ಕೈಗಳನ್ನು ಬಲವಾಗಿ ಹಿಡಿದುಕೊಂಡಿರುವುದು ದಾಖಲಾಗಿದೆ.&lt;/p&gt;&lt;h2&gt;&lt;strong&gt;ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದ ಮಹಿಳೆ; ಬೇರೆ ನಗರದಲ್ಲಿದ್ದ ಪತಿ&lt;/strong&gt;&lt;/h2&gt;&lt;p&gt;ಪೊಲೀಸರ ಮಾಹಿತಿ ಪ್ರಕಾರ, 24 ವರ್ಷದ ಸಂತ್ರಸ್ತೆಯ ಪತಿ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು, ಸದ್ಯ ಬೇರೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯು ನಾಗ್ಪುರದಲ್ಲಿ ಪ್ರಾಪರ್ಟಿ ಡೀಲಿಂಗ್ (ರಿಯಲ್ ಎಸ್ಟೇಟ್) ಉದ್ಯಮ ನಡೆಸುತ್ತಿದ್ದರು. 2025ರ ಫೆಬ್ರವರಿಯಲ್ಲಿ ಆರೋಪಿ ಆಯಾಜ್ ಜಮೀನು (ಪ್ಲಾಟ್) ಖರೀದಿಸುವ ನೆಪದಲ್ಲಿ ಈಕೆಯನ್ನು ಸಂಪರ್ಕಿಸಿದ್ದ.&lt;/p&gt;&lt;p&gt;ಪ್ರಥಮ ಮಾಹಿತಿ ವರದಿ (FIR) ಪ್ರಕಾರ, ಆರೋಪಿಯು ಮಹಿಳೆಯನ್ನು ವರ್ಧಾ ರಸ್ತೆಯಲ್ಲಿರುವ ಹೋಟೆಲ್&zwnj;ವೊಂದಕ್ಕೆ ಪುಸಲಾಯಿಸಿ ಕರೆದೊಯ್ದಿದ್ದ. ಅಲ್ಲಿ ಆಕೆಗೆ ನೀಡಿದ ಜ್ಯೂಸ್&zwnj;ನಲ್ಲಿ ಪ್ರಜ್ಞೆ ತಪ್ಪಿಸುವ ಮಾದಕ ದ್ರವ್ಯ ಬೆರೆಸಲಾಗಿತ್ತು. ಮಹಿಳೆ ಪ್ರಜ್ಞೆ ಕಳೆದುಕೊಂಡಾಗ ಆಕೆಯ ಮೇಲೆ ಅ*ತ್ಯಾಚಾ*ರ ಎಸಗಿ, ಆಕ್ಷೇಪಾರ್ಹ ಫೋಟೋ ಮತ್ತು ವೀಡಿಯೋಗಳನ್ನು ತೆಗೆದುಕೊಳ್ಳಲಾಗಿತ್ತು.&lt;/p&gt;&lt;h2&gt;&lt;strong&gt;ಬ್ಲಾಕ್&zwnj;ಮೇಲ್, 4 ಲಕ್ಷ ರೂ. ಸುಲಿಗೆ ಹಾಗೂ ಮಾಟಮಂತ್ರದ ಕಿರುಕುಳ&lt;/strong&gt;&lt;/h2&gt;&lt;p&gt;ಅದಾದ ನಂತರ ಆಕ್ಷೇಪಾರ್ಹ ವೀಡಿಯೋಗಳನ್ನು ತೋರಿಸಿ ಮಹಿಳೆಯನ್ನು ನಿರಂತರವಾಗಿ ಬ್ಲಾಕ್&zwnj;ಮೇಲ್ ಮಾಡಲು ಆರಂಭಿಸಿದ ಆರೋಪಿ, ಆಕೆಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಸುಮಾರು 4 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದ. ಇದರೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿ, ಧಾರ್ಮಿಕ ಆಚರಣೆಗಳ ನೆಪದಲ್ಲಿ ಮಾಟಮಂತ್ರ ಹಾಗೂ ವಿವಿಧ ವಿಧಿವಿಧಾನಗಳನ್ನು ಬಲವಂತವಾಗಿ ಮಾಡಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಲವಂತವಾಗಿ 'ಕಬೂಲ್ ಹೈ' ಎನ್ನಿಸಿ ನಿಕಾಹ್ ನಾಟಕ&lt;/strong&gt;&lt;/h2&gt;&lt;p&gt;ಸಂತ್ರಸ್ತೆಯ ದೂರಿನ ಪ್ರಕಾರ, ಮೇ 31 ರಂದು ಆಯಾಜ್ ಆಕೆಯನ್ನು ನಾಗ್ಪುರ ಸಮೀಪದ ಕಲ್ಮೇಶ್ವರ್&zwnj;ಗೆ ಬಲವಂತವಾಗಿ ಕರೆದೊಯ್ದಿದ್ದ. ಅಲ್ಲಿ ಆಕೆಗೆ ಅಮೀನ್ ಶೇಖ್ ಮತ್ತು ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ತಮಿಯಾ ಗ್ರಾಮದ ನಿವಾಸಿಯಾದ ಹಜರತ್ ಮೌಲಾನಾ ಎಂಬುವವರ ಪರಿಚಯ ಮಾಡಿಸಲಾಗಿತ್ತು. ಅಲ್ಲಿಂದ ಈ ಮೂವರು ಸೇರಿ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಮೌಲಾನಾ ಆಕೆಯ ಮೇಲೆ ಕೆಲವು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ, ಬಲವಂತವಾಗಿ &quot;ಖುಬೂಲ್ ಹೈ&quot; (Qubool Hai) ಎಂದು ಹೇಳಿಸಿದ್ದಾರೆ. ಆ ನಂತರ ನಿನ್ನ ಮತಾಂತರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯಾಜ್ ಮದಾರೆ ಜೊತೆ ನಿನಗೆ ಮದುವೆಯಾಗಿದೆ ಎಂದು ಹೆದರಿಸಿದ್ದಾರೆ.&lt;/p&gt;&lt;h2&gt;&lt;strong&gt;ಪತಿ ಮನೆಗೆ ಮರಳಿದಾಗ ಬಯಲಾದ ಸತ್ಯ: ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಈ ಘಟನೆಯ ನಂತರವೂ ಮಹಿಳೆಯ ಮೇಲೆ ಮತ್ತೆ ಅ*ತ್ಯಾಚಾ*ರ ಎಸಗಲಾಗಿತ್ತು. ಜೂನ್ 12 ರಂದು ಆಕೆಯ ಪತಿ ಕರ್ತವ್ಯ ಮುಗಿಸಿ ಮನೆಗೆ ಮರಳಿದಾಗ, ಮಹಿಳೆ ತನಗೆ ಎದುರಾದ ಇಡೀ ನರಕಯಾತನೆಯನ್ನು ಅವರ ಮುಂದೆ ಬಿಚ್ಚಿಟ್ಟಿದ್ದಾರೆ. ತಕ್ಷಣವೇ ದಂಪತಿ ನಾಗ್ಪುರದ ಸೋನೆಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.&lt;/p&gt;&lt;p&gt;ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಅ*ತ್ಯಾಚಾ*ರ, ನಿರಂತರ ಲೈಂಗಿಕ ದೌರ್ಜನ್ಯ, ಬ್ಲಾಕ್&zwnj;ಮೇಲ್, ಸುಲಿಗೆ, ಬಲವಂತದ ಧಾರ್ಮಿಕ ಮತಾಂತರ ಮತ್ತು ಮಹಾರಾಷ್ಟ್ರ ಮಾಟಮಂತ್ರ ಹಾಗೂ ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಖ್ಯ ಆರೋಪಿಯ ಎಲೆಕ್ಟ್ರಾನಿಕ್ ಸಾಧನ ಹಾಗೂ ಮೊಬೈಲ್ ಫೋನ್&zwnj;ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ವಿಧಿವಿಜ್ಞಾನ (Forensic) ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/nagpur-iaf-officer-wife-raped-forced-conversion-islam-ayaz-madare-arrest-san/articleshow-gokn3vb"/>
        </item>
        <item>
            <title><![CDATA[ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?]]></title>
            <link>https://kannada.asianetnews.com/crime/5-year-old-girl-mu-rder-case-three-policemen-suspended-priyanka-arrest-gvd-videoshow-kkl6r3p</link>
            <guid isPermaLink="true">https://kannada.asianetnews.com/crime/5-year-old-girl-mu-rder-case-three-policemen-suspended-priyanka-arrest-gvd-videoshow-kkl6r3p</guid>
            <pubDate>Sat, 13 Jun 2026 20:26:10 +0530</pubDate>
            <description><![CDATA[&lt;p&gt;Suvarna FIR: ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್​ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್​​ ಆಗಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xaf938y" medium="video" height="768" width="1024"/>
            <content:encoded><![CDATA[&lt;p&gt;ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್​ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್​​ ಆಗಿದ್ದಾರೆ.. ಮಗು ಸತ್ತು 3 ತಿಂಗಳು ಎಫ್​.ಐ.ಆರ್​​ನೇ ದಾಖಲಿಸದ ಅಧಿಕಾರಿಗಳು ಇನ್ನೇನು ಮಾಡಿಯಾರು ಅಂತ ಅವರನ್ನ ಮನೆಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ಸಸ್ಪೆಂಡ್​​​ ಆದ ಆ ಮೂವರು ಪೊಲೀಸರು ಯಾರು..?&lt;/p&gt;&lt;p&gt;ಅವರು ಈ ಕೇಸ್​​ನಲ್ಲಿ ಮಾಡಿದ ಲೋಪಗಳೇನು..? ಇನ್ನೂ ಅರೆಸ್ಟ್​​ ಆಗಿರೋ ಪ್ರಿಯಾಂಕ ಪೊಲೀಸರ ಮುಂದೆ ಹೇಳಿರುವ ಸತ್ಯಗಳೇನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​.ಐ.ಆರ್​​. ದೊಡ್ಡವರ ತಪ್ಪಿಗೆ ಚಿಕ್ಕವರಿಗೆ ಶಿಕ್ಷೆ ಅನ್ನೋ ಹಾಗಾಗಿದೆ ಪೊಲೀಸರ ಅಮಾನತ್ತು ಕಥೆ.. ಸದ್ಯ ಕೇಸ್​​​ ACP ಅನುಷಾ ರವರಿಗೆ ಹೋಗಿದೆ.. ನೋಡೋಣ ಹೆಣ್ಣುಮಗಳ ಸಾವಿಗೆ ಮತ್ತೊಬ್ಬ ಹೆಣ್ಣುಮಗಳು ನ್ಯಾಯ ಕೊಡಿಸುತ್ತಾರಾ ಅಂತ. ನಿನ್ನೆ ಪೊಲೀಸರು ಸಕಲೇಶ್​ಪುರದವರೆಗೆ ಹೋಗಿ ಪ್ರಿಯಾಂಕಳನ್ನ ಅರೆಸ್ಟ್​​ ಮಾಡಿಕೊಂಡು ಕರೆತಂದಿದ್ರು.. ಜಡ್ಜ್​ ಮುಂದೆ ಹಾಜರುಪಡಿಸಿ 5 ದಿನ ಕಸ್ಟಡಿಗೂ ತಗೆದುಕೊಂಡರು.&lt;/p&gt;&lt;p&gt;ಇನ್ನೂ ಪೊಲೀಸರ ಮುಂದೆ ಕೂತು ಆ ಕಿಲ್ಲರ್​​ ಅಮ್ಮನ್ನ ಮಗುವನ್ನ ಕೊಂದ ನಂತರ ಏನೇನು ಮಾಡಿದ್ಲು..? ಆ ಮಗುವನ್ನ ಯಾಕಾಗಿ ಕೊಂದ್ಲು ಅಂತ ಡಿಟೇಲಾಗಿ ಹೇಳಿದ್ಲು.. ಇನ್ನೂ ಆ ಪರಮ ಪಾಪಿ ಹೆಳಿದನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ರು. ನಿಜಕ್ಕೂ ಇವರಿಬ್ಬರು ಮನುಷ್ಯ ಜಾತಿಗೇ ಅವಮಾನ. ಇವರಿಗೆ ಅದೇನ್​ ಶಿಕ್ಷೆ ಕೊಟ್ಟರೂ ಕಡಿಮೇನೇ.. ಇನ್ನೂ ಇಂಥಹ ಕ್ರೂರತೆಯನ್ನ ತಿಳಿದರೂ ಕ್ರಮಕೈಗೊಳ್ಳದ ಇಂಥಹ ಪೊಲೀಸರಿಗೂ ಬಿಸಿ ಮುಟ್ಟಿಸಬೇಕು ಇಲ್ಲವಾದ್ರೆ ಸಮಾಜಕ್ಕೆ ರಾಂಗ್​ ಮೆಸೆಜ್ ಹೋಗುತ್ತೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/5-year-old-girl-mu-rder-case-three-policemen-suspended-priyanka-arrest-gvd-videoshow-kkl6r3p"/>
        </item>
        <item>
            <title><![CDATA[Gangavathi: ಅಪ್ರಾಪ್ತ ಬಾಲಕಿಯ ಮದುವೆ ಪ್ರಕರಣಕ್ಕೆ 8 ವರ್ಷಗಳ ಬಳಿಕ ತೀರ್ಪು: ನಾಲ್ವರಿಗೆ 2 ವರ್ಷ ಜೈಲು]]></title>
            <link>https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t</link>
            <guid isPermaLink="true">https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t</guid>
            <pubDate>Wed, 17 Jun 2026 19:42:46 +0530</pubDate>
            <description><![CDATA[&lt;p&gt;Gangavathi ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ 2018ರಲ್ಲಿ ನಡೆದ ಅಪ್ರಾಪ್ತ ಬಾಲಕಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವರ ಸೇರಿ ನಾಲ್ವರಿಗೆ ದಂಡ ವಿಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvaytpfhsk52dxd23nzvybyy,imgname-ccj-1781705562608.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಜೂ.17):&lt;/strong&gt; ಕಳೆದ 8 ವರ್ಷಗಳ ಹಿಂದೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಜರುಗಿದ ಅಪ್ರಾಪ್ತ ಬಾಲಕಿ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯವು ನಾಲ್ಕು ಜನರಿಗೆ 2 ವರ್ಷ ಜೈಲು ಮತ್ತು ತಲಾ 10 ಸಾವಿರ ರು ದಂಡ ವಿಧಿಸಿ ತೀರ್ಪು ನೀಡಿದೆ.&lt;/p&gt;&lt;p&gt;2018ರಲ್ಲಿ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಗುಡದಪ್ಪ ಎನ್ನುವವರ ಜೊತೆ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು. ಆಗಿನ ಸಿಪಿಐ ಆಗಿದ್ದ ಪ್ರಕಾಶ ಮಾಳೆ ಅವರು ನ್ಯಾಯಲಯಕ್ಕೆ ದೋಷರೋಪಣಪಟ್ಟಿ ನೀಡಿದ್ದರು.&lt;/p&gt;&lt;h2&gt;&lt;strong&gt;ಮಹತ್ವದ ತೀರ್ಪು&lt;/strong&gt;&lt;/h2&gt;&lt;p&gt;ಈ ಪ್ರಕರವನ್ನು ಕೈಗೆತ್ತಿಕೊಂಡಿದ್ದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಲಯದ ನ್ಯಾಯಧೀಶರಾದ ನಾಗೇಶ ಪಾಟೀಲ್ ಅವರು ಸಾಕ್ಷಾಧಾರಗಳಿಂದ ವಿಚಾರಣೆ ಕೈಗೊಂಡಿದ್ದ ಸಂದರ್ಭದಲ್ಲಿ ದೃಢ ಪಟ್ಟಿದ್ದರಿದಂದ ವಿವಾಹವಾಗಿದ್ದ ಗುಡದಪ್ಪ, ಈತನ ತಂದೆ ಮರಿಯಪ್ಪ, ತಾಯಿ ಹುಲಿಗೆಮ್ಮ ಮತ್ತು ಬಾಲಕಿ ತಾಯಿ ಚೆನ್ನಮ್ಮ ಅವರು ದೋಷಿಗಳೆಂದು ತೀರ್ಪ ನೀಡಿ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10 ಸಾವಿರ ದಂಡ ವಿಧಿಸುವಂತೆ ತೀರ್ಪು ನೀಡಿದ್ದಾರೆ. ಸರಕಾರಿ ಅಭಿಯೋಜಕರಾದ ನಿರಂಜನಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gangavathi-child-marriage-case-four-convicted-2-years-jail-gvd/articleshow-lw9o26t"/>
        </item>
        <item>
            <title><![CDATA[Chikkamagaluru: ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ: ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ]]></title>
            <link>https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87</link>
            <guid isPermaLink="true">https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87</guid>
            <pubDate>Mon, 15 Jun 2026 21:01:43 +0530</pubDate>
            <description><![CDATA[&lt;p&gt;Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5yc3kj9nb37bkkfq3pfme2,imgname-bkb-1781537312370.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.15): &lt;/strong&gt;ಹಣಕ್ಕಾಗಿ ಪೋಷಕರೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು 27 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರದೀಪ್ ಪೋಷಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ದುಡಿದು ಸಂಪಾದಿಸುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು.&lt;/p&gt;&lt;p&gt;ಇದರ ನಡುವೆಯೇ, ಸಂಘದಿಂದ ಸಾಲ ಮಾಡಿಕೊಡುವಂತೆ ಪ್ರದೀಪ್ ಒತ್ತಾಯಿಸಿದ್ದು, ಅದಕ್ಕೂ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳದ ಬಳಿಕ ಆಕ್ರೋಶದಿಂದ ಮನೆಯಿಂದ ಹೊರನಡೆದಿದ್ದ ಪ್ರದೀಪ್, ಬಳಿಕ ನಾಪತ್ತೆಯಾಗಿದ್ದ.&lt;/p&gt;&lt;h2&gt;&lt;strong&gt;ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ನಂತರ ಗ್ರಾಮದ ಸಮೀಪದ ಕಾಫಿ ತೋಟದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87"/>
        </item>
        <item>
            <title><![CDATA[Bengaluru theft case: ಆಭರಣಗಳ ಫೋಟೋ ತೆಗೆವ ನೆಪದಲ್ಲಿ1.64 ಕೋಟಿ ಚಿನ್ನ ದೋಚಿದ್ದವರ ಸೆರೆ]]></title>
            <link>https://kannada.asianetnews.com/crime/bengaluru-two-arrest-made-for-stealing-rs-1-64-crore-gold-on-pretext-of-taking-photos-of-jewellery-rav/articleshow-mhckd6z</link>
            <guid isPermaLink="true">https://kannada.asianetnews.com/crime/bengaluru-two-arrest-made-for-stealing-rs-1-64-crore-gold-on-pretext-of-taking-photos-of-jewellery-rav/articleshow-mhckd6z</guid>
            <pubDate>Wed, 17 Jun 2026 05:34:58 +0530</pubDate>
            <description><![CDATA[&lt;p&gt;ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಸಿಬ್ಬಂದಿಗೆ 1.64 ಕೋಟಿ ರೂ. ವಂಚಿಸಿದ್ದ ಮುಂಬೈ ಮೂಲದ ಇಬ್ಬರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋಗಿ, ಅಲ್ಲಿಂದಲೇ ಚಿನ್ನದೊಂದಿಗೆ ಪರಾರಿಯಾಗಿದ್ದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jyqjyjexqxz8bdnbbp9q6hq3,imgname-----------------------2025-06-27t074911.273-1750990801373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.17): &lt;/strong&gt;ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್&zwnj; ಸಿಬ್ಬಂದಿಯಿಂದ 1.64 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮಹಾರಾಷ್ಟ್ರದ ಮುಂಬೈ ಮೂಲದ ಪರೇಶ್&zwnj; ಸೋನಿ(Paresh sony) (49) ಹಾಗೂ ಪ್ರವೀಣ್&zwnj; ಅಲಿಯಾಸ್&zwnj; ಪಪ್ಪು(44) ಬಂಧಿತರು. ಶ್ಯಾಮ್&zwnj; ಹಾಗೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.&lt;/p&gt;&lt;p&gt;ಆರೋಪಿಗಳು ಮೇ 16ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಕಚೇರಿಯೊಂದರಲ್ಲಿ ಈ ಕೃತ್ಯ ನಡೆದಿತ್ತು. ಬಂಧಿತರಿಂದ 1.64 ಕೋಟಿ ರು. ಮೌಲ್ಯದ 1.08 ಕೆ.ಜಿ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಚಿಕ್ಕಪೇಟೆಯ ಮಹೇಂದ್ರ ಕುಮಾರ್&zwnj; ಡಿ. ಜೈನ್&zwnj; ಎಂಬುವರು ಮೇ 16ರಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲೂ ಆಭರಣ ಖರೀದಿಸುವುದಾಗಿ ನಂಬಿಸಿ ಆರೋಪಿಗಳು ವಂಚಿಸಿದ್ದರು. ಮಹಾರಾಷ್ಟ್ರದ 15 ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ಆರೋಪಿಗಳು ಕೈಚಳಕ ತೋರಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಅಲ್ಲಿನ ಪೊಲೀಸರು ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ.&lt;/p&gt;&lt;p&gt;ಆರೋಪಿಗಳು ಮುಂಬೈನ ಜವಾರಿ ಬಜಾರ್ ಸೇರಿ ಹಲವು ಕಡೆ ಆಭರಣಗಳನ್ನು ಆರೋಪಿಗಳು ಮಾರಾಟ ಮಾಡಿದ್ದರು. ನಗರ್ತಪೇಟೆಯ ಮೆಹ್ತಾ ಗೋಲ್ಡ್ ಮಳಿಗೆಯ ಮಾರಾಟ ವಿಭಾಗದ ವ್ಯವಸ್ಥಾಪಕರಾಗಿ ಮಹೇಂದ್ರ ಕುಮಾರ್ ಜೈನ್&zwnj; ಹಾಗೂ ಸಹಾಯಕ ವ್ಯವಸ್ಥಾಪಕರಾಗಿ ಗೌತಮ್&zwnj; ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರದಲ್ಲಿ ಮಾಹಿ ಎಂಟರ್&zwnj;ಪ್ರೈಸಸ್ ಹೆಸರಿನಲ್ಲಿ ಆರೋಪಿ ಪರೇಶ್&zwnj; ಸೋನಿ ಮಳಿಗೆ ತೆರೆದಿದ್ದರು. ಮೇ 16ರಂದು ಗೌತಮ್&zwnj;ಗೆ ಕರೆ ಮಾಡಿ ತಮ್ಮ ಸಂಸ್ಥೆಗೆ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂಬುದಾಗಿ ಹೇಳಿದ್ದರು. ಹೀಗಾಗಿ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕಚೇರಿಗೆ ಚಿನ್ನಾಭರಣಗಳ ಮಾದರಿಯನ್ನು ತಂದು ತೋರಿಸುವಂತೆ ಕೋರಿದ್ದರು. ಮಹೇಂದ್ರ ಕುಮಾರ್ ಜೈನ್&zwnj; ಮತ್ತು ಸಿಬ್ಬಂದಿ ಪ್ರಕಾಶ್&zwnj; ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಭರಣಗಳ ಜತೆಗೆ ಬಂದಿದ್ದರು.&lt;/p&gt;&lt;h2&gt;ಫೋಟೋ ತೆಗೆಯುವ ನೆಪದಲ್ಲಿ ಚಿನ್ನ ದೋಚಿದ್ದರು&lt;/h2&gt;&lt;p&gt;ಆರೋಪಿಗಳಾದ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್&zwnj; ಅವರು ಚಿನ್ನಾಭರಣಗಳ ಮಾದರಿಯನ್ನು ನೋಡಿ, ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಆಭರಣಗಳನ್ನು ಕೊಂಡೊಯ್ದಿದ್ದರು. ಕೆಲ ಸಮಯ ಕಳೆದರೂ ಆರೋಪಿಗಳು ಕೋಣೆಯಿಂದ ಹೊರಕ್ಕೆ ಬಂದಿಲ್ಲ. ಕೋಣೆಯ ಒಳಗೆ ಹೋಗಿ ಪರಿಶೀಲಿಸಿದಾಗ, ಆಭರಣ ಸಹಿತ ಆರೋಪಿಗಳು ನಾಪತ್ತೆ ಆಗಿರುವುದು ಪತ್ತೆಯಾಗಿತ್ತು. ಬಳಿಕ ಠಾಣೆಗೆ ಬಂದು ಮಹೇಂದ್ರ ಕುಮಾರ್&zwnj; ಡಿ. ಜೈನ್&zwnj; ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/bengaluru-two-arrest-made-for-stealing-rs-1-64-crore-gold-on-pretext-of-taking-photos-of-jewellery-rav/articleshow-mhckd6z"/>
        </item>
        <item>
            <title><![CDATA[10 ದಿನದಲ್ಲಿ ಪೂಜೆ ಮಾಡಿಸದಿದ್ರೆ ಸೋದರನ ಸಾವು: ಬೆಂಗಳೂರಿನ ಮಹಿಳಾ ಟೆಕ್ಕಿಗೆ ವಂಚನೆ]]></title>
            <link>https://kannada.asianetnews.com/bengaluru-urban/female-techie-in-bengaluru-was-duped-of-rs-7-lakh-in-gold-jewellery-under-the-pretext-of-worship-mrq/articleshow-p8swci0</link>
            <guid isPermaLink="true">https://kannada.asianetnews.com/bengaluru-urban/female-techie-in-bengaluru-was-duped-of-rs-7-lakh-in-gold-jewellery-under-the-pretext-of-worship-mrq/articleshow-p8swci0</guid>
            <pubDate>Sun, 14 Jun 2026 08:07:56 +0530</pubDate>
            <description><![CDATA[ವೈಟ್&zwnj;ಫೀಲ್ಡ್&zwnj;ನಲ್ಲಿ, ಸಹೋದರನಿಗೆ ಗಂಡಾಂತರವಿದೆ, ಪೂಜೆ ಮಾಡಿಸದಿದ್ದರೆ 10 ದಿನದಲ್ಲಿ ಸಾಯುತ್ತಾನೆ ಎಂದು ಹೆದರಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ ವಂಚಿಸಲಾಗಿದೆ. ಪೂಜೆಯ ನೆಪದಲ್ಲಿ ಮನೆಗೆ ಬಂದ ಆರೋಪಿಗಳು, ಸುಮಾರು 7 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನವೀದಾ ಸುಲ್ತಾನ ಮತ್ತು ಪರ್ವೇಜ್​ ವಿರುದ್ಧ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv1zn9qe18q5j2d5xxqvfqce,imgname-cheating-1781404444398.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪೂಜೆಯ ನೆಪದಲ್ಲಿ ಖಾಸಗಿ ಸಂಸ್ಥೆಯ ಮಹಿಳಾ ಉದ್ಯೋಗಿಯಿಂದ ₹7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ವೈಟ್&zwnj;ಫೀಲ್ಡ್​​​​ ಪೊಲೀಸ್​​​ ಠಾಣೆಯಲ್ಲಿ ನಡೆದಿದ್ದು, ಈ ಸಂಬಂಧ ಮಹಿಳೆ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ವೈಟ್&zwnj;ಫೀಲ್ಡ್&zwnj;ನ ಅಂಬೇಡ್ಕರ್​​ ನಗರ ನಿವಾಸಿ ಮೋಯಿನ್​​ ಪಾಷಾ ಎಂಬುವರು ನೀಡಿದ ದೂರಿನನ್ವಯ ನವೀದಾ ಸುಲ್ತಾನ ಮತ್ತು ಪರ್ವೇಜ್​ ವಿರುದ್ಧ ಎಫ್ಐಆರ್​​ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆ ವಿವರ&lt;/strong&gt;&lt;/h2&gt;&lt;p&gt;ದೂರುದಾರರಾದ ಮೋಯಿನ್ ಪಾಷಾ ಅವರು, ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್&zwnj;ವೇರ್&zwnj; ಎಂಜಿನಿಯರ್&zwnj; ಆಗಿದ್ದು, ಮೇ 23ರಂದು ಸ್ನೇಹಿತನ ಮನವಿ ಮೇರೆಗೆ ನವೀದಾ ಸುಲ್ತಾನ ಎಂಬಾಕೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡಿದ್ದೆ. ಈ ವೇಳೆ ನನ್ನ ಸಹೋದರನನ್ನು ನೋಡಿ, ಈತನಿಗೆ ಗಂಡಾಂತರವಿದೆ. ಪೂಜೆ ಮಾಡಿಸದಿದ್ದರೆ 10 ದಿನದೊಳಗೆ ಸಾಯುತ್ತಾನೆ ಎಂದು ಬೆದರಿಸಿದ್ದಳು.&amp;nbsp;&lt;/p&gt;&lt;p&gt;ಇದರಿಂದ ಹೆದರಿ ಆಕೆಯ ಅಣತಿಯಂತೆ ಪೂಜೆಗೆ ಬೇಕಾದ ಅಗತ್ಯ ಸಾಮಗ್ರಿ ಸಿದ್ಧಪಡಿಸಿಕೊಂಡು ಮೇ 25ರಂದು ಮನೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದೆ. ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನ ಜಾವದವರೆಗೆ ಪೂಜೆ ಮಾಡಲಾಗಿತ್ತು. ಪೂಜೆ ವೇಳೆ ಆರೋಪಿಗಳ ಸೂಚನೆ ಮೇರೆಗೆ ಮನೆಯಲ್ಲಿದ್ದ 35 ಗ್ರಾಂ ಚಿನ್ನಾಭರಣ ತಂದಿಡಲಾಗಿತ್ತು. ಕಬ್ಬಿಣದ ಪೆಟ್ಟಿಗೆಯೊಳಗೆ ಬಟ್ಟೆಯಲ್ಲಿ ಚಿನ್ನವಿಟ್ಟು ಗಂಟು ಹಾಕಿ 90 ದಿನಗಳ ಕಾಲ ತೆಗೆಯದಂತೆ ತಿಳಿಸಿದ್ದರಿಂದ ಅದನ್ನು ರೂಮಿನಲ್ಲಿ ಇಡಲಾಗಿತ್ತು. ಪೂಜೆಯ ಬಳಿಕ ಬೆಳಗಿನ ಜಾವ ಆರೋಪಿಗಳು ತೆರಳಿದ್ದರು. ಅಂದು ಪೂಜೆಗಾಗಿ ಸುಮಾರು ₹30 ಸಾವಿರ ಖರ್ಚು ಮಾಡಲಾಗಿತ್ತು.&lt;/p&gt;&lt;p&gt;ಕೆಲ ದಿನಗಳ ಬಳಿಕ ನವೀದಾ ಕರೆ ಮಾಡಿ ₹60 ಸಾವಿರ ಸಾಲ ನೀಡುವಂತೆ ಕೇಳಿದ್ದಳು. ಹಣ ನೀಡಲು ನಿರಾಕರಿಸಿದ್ದಕ್ಕೆ ತನ್ನ ವಿರುದ್ಧವೇ ಕಿಡಿಕಾರಿದ್ದಳು. ಆಕೆಯ ಮೇಲೆ ಅನುಮಾನಗೊಂಡು ಮನೆಗೆ ಬಂದು ಪೆಟ್ಟಿಗೆಯನ್ನು ತೆಗೆದು ನೋಡಿದ್ದಾಗ ಗಂಟು ಕಟ್ಟಿದ ಬಟ್ಟೆಯಲ್ಲಿದ್ದ ಚಿನ್ನ ನಾಪತ್ತೆಯಾಗಿತ್ತು. ಚಿನ್ನಾಭರಣ ನೀಡುವಂತೆ ಪ್ರಶ್ನಿಸಿದಾಗ ಕೊಡುವುದಾಗಿ ನೆಪಗಳನ್ನು ಹೇಳಿ ಈವರೆಗೂ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;p&gt;ಈ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/female-techie-in-bengaluru-was-duped-of-rs-7-lakh-in-gold-jewellery-under-the-pretext-of-worship-mrq/articleshow-p8swci0"/>
        </item>
        <item>
            <title><![CDATA[ಮದುವೆಯಾಗಿ 48 ದಿನ: ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್‌ರೂಮ್‌ನಲ್ಲೂ CCTV! ಡಾಕ್ಟರ್ ಗಂಡನ ಕ್ರೌರ್ಯಕ್ಕೆ ನವವಧು ಬಲಿ]]></title>
            <link>https://kannada.asianetnews.com/india-news/mumbai-dowry-harassment-tragedy-newlywed-woman-dies-just-48-days-after-marriage-doctor-husband-arrested-kvn/articleshow-qz4com1</link>
            <guid isPermaLink="true">https://kannada.asianetnews.com/india-news/mumbai-dowry-harassment-tragedy-newlywed-woman-dies-just-48-days-after-marriage-doctor-husband-arrested-kvn/articleshow-qz4com1</guid>
            <pubDate>Thu, 18 Jun 2026 09:06:46 +0530</pubDate>
            <description><![CDATA[&lt;p&gt;ಮುಂಬೈನ ಅಂಬರ್&zwnj;ನಾಥ್&zwnj;ನಲ್ಲಿ ಮದುವೆಯಾದ 48 ದಿನಗಳಲ್ಲಿ ನವವಧು ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆಗಾಗಿ ಪತಿ ನಿತಿನ್ ನೀಡುತ್ತಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆ ಹಾಗೂ ಸಿಸಿಟಿವಿ ಕಣ್ಗಾವಲಿನಿಂದ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತಿಯನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvc81vnzwn2q6mvb6kvyssdf,imgname-vishakha-tilkar-suicide-death-1781748788927.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಮದುವೆಯಾಗಿ ಎರಡು ತಿಂಗಳು ತುಂಬುವ ಮೊದಲೇ ನವವಧುವೊಬ್ಬಳು ಗಂಡನ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಮುಂಬೈ ಸಮೀಪದ ಅಂಬರ್&zwnj;ನಾಥ್&zwnj;ನಲ್ಲಿ ಈ ಘಟನೆ ನಡೆದಿದೆ. ವರದಕ್ಷಿಣೆ ವಿಚಾರವಾಗಿ ಗಂಡ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಹಿಂಸೆ ತಾಳಲಾರದೆ 26 ವರ್ಷದ ವಿಶಾಖಾ ತಿಲ್ಕರ್ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ, ವಿಶಾಖಾ ಅವರ ಪತಿ ಡಾಕ್ಟರ್ ನಿತಿನ್ ತಿಲ್ಕರ್&zwnj;ನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರ ಮದುವೆಯಾಗಿ ಕೇವಲ 48 ದಿನಗಳಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಕಳೆದ ಏಪ್ರಿಲ್ 30 ರಂದು ವಿಶಾಖಾ ಮತ್ತು ಡಾಕ್ಟರ್ ನಿತಿನ್ ತಿಲ್ಕರ್ ಅವರ ವಿವಾಹವಾಗಿತ್ತು. ಮದುವೆಗೂ ಮುನ್ನ ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಮದುವೆಯಾದ ತಕ್ಷಣ ವಿಶಾಖಾಳ ಜೀವನ ನರಕವಾಗಿ ಬದಲಾಯಿತು ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ವರದಕ್ಷಿಣೆ ಕಿರುಕುಳಕ್ಕೆ ನವವಧು ಬಲಿ&lt;/strong&gt;&lt;/h2&gt;&lt;p&gt;ಮದುವೆ ಸಮಯದಲ್ಲಿ ತಾವು ನಿರೀಕ್ಷಿಸಿದಷ್ಟು ಉಡುಗೊರೆ ಮತ್ತು ಗೌರವ ಸಿಗಲಿಲ್ಲ ಎಂದು ಆರೋಪಿಸಿ ಗಂಡನ ಮನೆಯವರು ವಿಶಾಖಾಗೆ ಕಿರುಕುಳ ನೀಡಲು ಆರಂಭಿಸಿದ್ದರು. ತವರು ಮನೆಯಿಂದ ಹೆಚ್ಚು ಹಣ ಮತ್ತು ಚಿನ್ನ ತರುವಂತೆ ವಿಶಾಖಾ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಕುಟುಂಬಸ್ಥರು ದೂರಿದ್ದಾರೆ. ವಿಶಾಖಾ ಅನುಭವಿಸುತ್ತಿದ್ದ ಹಿಂಸೆ ಕೇವಲ ದೈಹಿಕ ಹಲ್ಲೆಗೆ ಸೀಮಿತವಾಗಿರಲಿಲ್ಲ. ಆಕೆಯ ಪ್ರತಿಯೊಂದು ಚಲನವಲನವನ್ನು ಗಮನಿಸಲು ಪತಿ ನಿತಿನ್, ಮನೆಯೊಳಗೆ ಮತ್ತು ಹೊರಗೆ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಇದರಿಂದ ವಿಶಾಖಾ ತನ್ನ ಸಂಪೂರ್ಣ ಖಾಸಗಿತನವನ್ನು ಕಳೆದುಕೊಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಸಂಬಂಧಿಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ತಾಯಿ ಬಳಿ ನೋವು ತೋಡಿಕೊಂಡ ವಿಶಾಖಾ&lt;/strong&gt;&lt;/h3&gt;&lt;p&gt;ಮನೆಯಲ್ಲಿ ವಿಶಾಖಾ ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ನಿತಿನ್ ಈ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಗಮನಿಸುತ್ತಿದ್ದ. ಮನೆಯಿಂದ ಹೊರಗೆ ಹೋಗಿ ಯಾರೊಂದಿಗಾದರೂ ಮಾತನಾಡಿದರೆ ಸಾಕು, ವಿಶಾಖಾಗೆ ಕಾದಿರುತ್ತಿದ್ದುದು ಭೀಕರ ಹಲ್ಲೆ. ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ, ಅಕ್ಕಪಕ್ಕದ ಮಹಿಳೆಯೊಬ್ಬರೊಂದಿಗೆ ಮಾತನಾಡಿದ್ದಕ್ಕೆ ಪತಿ ಬರ್ಬರವಾಗಿ ಥಳಿಸಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ತಾನು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ವಿಶಾಖಾ ತನ್ನ ತಾಯಿಗೆ ಫೋನ್ ಮಾಡಿ ಅಳುತ್ತಾ ಹೇಳಿಕೊಂಡಿದ್ದಳು. ಮಗಳ ಸಂಕಷ್ಟ ಅರಿತ ಪೋಷಕರು, ಆಕೆಯನ್ನು ಗಂಡನ ಮನೆಯಿಂದ ವಾಪಾಸ್ ಕರೆತರಲು ಸಿದ್ಧತೆ ನಡೆಸುತ್ತಿರುವಾಗಲೇ, ವಿಶಾಖಾ ನೇಣು ಬಿಗಿದುಕೊಂಡು ಆ*ತ್ಮ*ಹ*ತ್ಯೆ ಮಾಡಿಕೊಂಡ ಸುದ್ದಿ ಬಂದಿದೆ.&lt;/p&gt;&lt;p&gt;&quot;ವಿಶಾಖಾ ಏನು ಮಾಡ್ತಾಳೆ, ಯಾರ ಜೊತೆ ಮಾತಾಡ್ತಾಳೆ ಅಂತ ನೋಡೋಕೆ ನಿತಿನ್ ಮನೆಯೊಳಗೆ, ಹೊರಗೆಲ್ಲಾ ಸಿಸಿಟಿವಿ ಹಾಕಿದ್ದ. ಅವಳು ಯಾರಾದ್ರೂ ಜೊತೆ ಮಾತಾಡಿದ್ರೆ ಮನೆಗೆ ಬಂದ್ಮೇಲೆ ಸಿಕ್ಕಾಪಟ್ಟೆ ಹೊಡೀತಿದ್ದ. ಇದೆಲ್ಲಾ ಸಹಿಸೋಕೆ ಆಗದೆ ಅವಳು ಪ್ರಾಣ ಬಿಟ್ಲು,&quot; ಎಂದು ವಿಶಾಖಾ ಅವರ ಕುಟುಂಬದ ಸದಸ್ಯರೊಬ್ಬರು ನೋವು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಘಟನೆ ಸಂಬಂಧ ವಿಶಾಖಾ ಕುಟುಂಬದ ದೂರಿನ ಮೇರೆಗೆ ಅಂಬರ್&zwnj;ನಾಥ್ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ, ಆ*ತ್ಮ*ಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪತಿ ನಿತಿನ್ ತಿಲ್ಕರ್, ಆತನ ತಾಯಿ ಛಾಯಾ ಮತ್ತು ಸಹೋದರ ನಿನಾದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ನಿತಿನ್ ತಿಲ್ಕರ್&zwnj;ನನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ತಾಯಿ ಮತ್ತು ಸಹೋದರನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ನೆನಪಿಡಿ:&lt;/strong&gt; ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ದುಡುಕಿನಿಂದ ಆ8ಹತ್ಯೆಯ ನಿರ್ಧಾರ ತೆಗೆದುಕೊಳ್ಳುವುದರಿಂದ ಸಮಸ್ಯೆಗೆ ಯಾವುದೇ ಪರಿಹಾರ ಸಿಗಲ್ಲ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ಸ್ವಯಂಹಾನಿ ಮಾಡಿಕೊಳ್ಳುವ ಯೋಚನೆ/ಮನೋವ್ಯಥೆ ಅನುಭವಿಸುತ್ತಿದ್ದರೆ ಅಥವಾ ಸಂಕಷ್ಟದ ಸ್ಥಿತಿಯಲ್ಲಿದ್ದರೆ, ದಯವಿಟ್ಟು ಯಾರೊಂದಿಗಾದರೂ ಮಾತನಾಡಿ, ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಕರ್ನಾಟಕದಲ್ಲಿ ಸಹಾಯ ಮತ್ತು ಸಮಾಲೋಚನೆಗಾಗಿ ಕೆಳಗಿನ ಸೇವೆಗಳು ಲಭ್ಯವಿವೆ: 24&times;7 ಮಾನಸಿಕ ಆರೋಗ್ಯ ಸಹಾಯವಾಣಿ ಟೆಲಿ-ಮಾನಸ್ (Tele-MANAS): 14416 ಅಥವಾ 1800-89-14416 (ರಾಷ್ಟ್ರೀಯ ಟೆಲಿ-ಮಾನಸಿಕ ಆರೋಗ್ಯ ಸೇವೆ).&lt;/p&gt;]]></content:encoded>
            <category>crime</category>
            <dc:creator>Naveen Kodase</dc:creator>
            <atom:link href="https://kannada.asianetnews.com/india-news/mumbai-dowry-harassment-tragedy-newlywed-woman-dies-just-48-days-after-marriage-doctor-husband-arrested-kvn/articleshow-qz4com1"/>
        </item>
        <item>
            <title><![CDATA[ಟೀ-ಬನ್​ ಬಿಟ್ಟಿ ತಿಂದು ಕುಡಿದು ಸೆಲ್ಯೂಟ್ ಹೊಡೆಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ಈ 'ಐಪಿಎಸ್​ ಅಧಿಕಾರಿ']]></title>
            <link>https://kannada.asianetnews.com/india-news/fake-ips-officer-demands-respect-instead-of-paying-rs-40-tea-bill-in-lucknow-suc/articleshow-riauh6q</link>
            <guid isPermaLink="true">https://kannada.asianetnews.com/india-news/fake-ips-officer-demands-respect-instead-of-paying-rs-40-tea-bill-in-lucknow-suc/articleshow-riauh6q</guid>
            <pubDate>Wed, 17 Jun 2026 13:49:31 +0530</pubDate>
            <description><![CDATA[ಉತ್ತರ ಪ್ರದೇಶದ ಲಖನೌದಲ್ಲಿ, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಉಚಿತವಾಗಿ ಟೀ ಕುಡಿದು, ನಂತರ ಅಲ್ಲಿದ್ದ ಪೇದೆಗೆ ಸೆಲ್ಯೂಟ್ ಮಾಡಲು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಪೇದೆಗಳು ಆತನನ್ನು ವಿಚಾರಿಸಿದಾಗ, ಆತ ನಕಲಿ ಅಧಿಕಾರಿ ಎಂದು ತಿಳಿದುಬಂದಿದ್ದು, ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvaak5m7yz3s00haete8vcdw,imgname-fake-ips-1781684344455.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವು ಪೊಲೀಸರು ಬೀದಿಬದಿಗಳಲ್ಲಿ ಇರುವ ವ್ಯಾಪಾರಿಗಳಿಂದ ಫ್ರೀ ಆಗಿ ಕುಡಿಯುವುದು, ತಿನ್ನುವುದು ಹೊಸ ವಿಷಯವೇನಲ್ಲ. ಬೀದಿಗಳಲ್ಲಿ ವ್ಯಾಪಾರಿಗಳು ನೆಮ್ಮದಿಯಾಗಿ ಬದುಕಬೇಕು ಎಂದರೆ ಅಲ್ಲಿಗೆ ಬರುವ ಪೊಲೀಸರಿಗೆ ಒಂದಿಷ್ಟು 'ಮಾಮೂಲಿ' ನೀಡಲೇಬೇಕು. ಇದರ ಬಗ್ಗೆ ಇಂಥ ವ್ಯಾಪಾರಿಗಳನ್ನು ಮಾತನಾಡಿಸಿದಾಗ ಬರುವ ಮಾತುಗಳು ಕೇಳಿದ್ರೆ ಪರಿಸ್ಥಿತಿ ಯಾವ ಮಟ್ಟಿಗೆ ಇದೆ ಎನ್ನುವುದು ತಿಳಿಯುತ್ತದೆ. ಆದ್ದರಿಂದ ಬರುವವರು ನಕಲಿಯೋ, ಅಸಲಿಯೋ ತಿಳಿಯುವುದು ಕೂಡ ಭಯವಾಗಿ 10-20 ರೂಪಾಯಿ ಕೊಟ್ಟಾದರೂ ಸಮಾಧಾನ ಪಡಿಸುವ ಪರಿಸ್ಥಿತಿ ನಮ್ಮ ಈ ಸಮಾಜದಲ್ಲಿ ಇದೆ.&lt;/p&gt;&lt;h2&gt;&lt;strong&gt;ಬಿಟ್ಟಿ ತಿಂದು ಹೋದ&lt;/strong&gt;&lt;/h2&gt;&lt;p&gt;ಅದೇ ರೀತಿ ಉತ್ತರ ಪ್ರದೇಶದ ಲಖನೌದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಅಲ್ಲೊಂದು ತಾನು ಐಪಿಎಸ್ ಅಧಿಕಾರಿ ಎಂದು ಬಂದು ಫ್ರೀ ಟೀ ಕುಡಿದ, ಫ್ರೀ ಬನ್​ ಕೇಳಿದ. ಪೊಲೀಸರ ಈ ನಡವಳಿಕೆ ಬಗ್ಗೆ ಅರಿವಿದ್ದ ಅಂಗಡಿಯವ ಪಾಪ ಕಮ್​ ಕಿಮ್​ ಎನ್ನದೇ ಕೊಟ್ಟುಬಿಟ್ಟ. ಆದರೆ ಕೊನೆಗೆ ಆಗಿದ್ದೇ ಬೇರೆ. ಹೀಗೆ ಉಚಿತವಾಗಿ ಏನೋ ತಿಂದುಂಡು ಹೋದವ ಸುಮ್ಮನೇ ಹೋಗಿದ್ದರೆ ಇದು ಪೊಲೀಸರ ದಿನನಿತ್ಯದ ಕಾರ್ಯ ಎಂದು ಎಲ್ಲರೂ ಸುಮ್ಮನಾಗುತ್ತಿದ್ದರು. ಬಿಟ್ಟಿಯಾಗಿ ತಿಂದು ಹೋಗುವ ಬದಲು ಈ ಪೊಲೀಸಪ್ಪ, ಅಂತೂ ಬಿಟ್ಟಿ ತಿಂದು ಸಕ್ಸಸ್​ ಆದೆ ಎಂದುಕೊಂಡು ಬೀಗಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ ಎಂದು ಅಲ್ಲಿ ಇದ್ದ ಪೊಲೀಸ್​ ಪೇದೆ ಸೆಲ್ಯೂಟ್ ಮಾಡಲಿಲ್ಲ ಎಂದು ಕೋಪಗೊಂಡು ಸೆಲ್ಯೂಟ್​ ಹೊಡೆಯುವಂತೆ ಹೇಳಿದ್ದಾನೆ. ಪದೇ ಪದೇ ಎಲ್ಲರೂ ಸೆಲ್ಯೂಟ್​ ಹೊಡೆಯುವಂತೆ ಕೇಳಿದ್ದಾನೆ.&lt;/p&gt;&lt;h3&gt;&lt;strong&gt;ಕಾನ್​ಸ್ಟೆಬಲ್​ರಿಂದ ವಿಚಾರಣೆ&lt;/strong&gt;&lt;/h3&gt;&lt;p&gt;ಸ್ಟಾಲ್ ಮಾಲೀಕರಿಗೆ ಯಾಕೋ ಇದು ಸ್ವಲ್ಪ ಅತಿಯಾಯ್ತು ಎನ್ನಿಸಿದೆ. ಮಾಮೂಲಾಗಿ ಬರುವ ಪೊಲೀಸರು ಬಿಟ್ಟಿ ತಿಂದುಂಡು ಹೋಗುವುದನ್ನು ದಿನನಿತ್ಯವೂ ನೋಡಿದ್ದ ಆತನಿಗೆ ಇದ್ಯಾಕೆ ವಿಚಿತ್ರ ಎನ್ನಿಸಿದೆ. ಆತ ಅಲ್ಲಿಯೇ ಇದ್ದ ಪೊಲೀಸರಿಗೆ ಈ ಬಗ್ಗೆ ಪ್ರಶ್ನಿಸಿದ್ದಾನೆ. ಕೊನೆಗೆ ಕಾನ್​ಸ್ಟೆಬಲ್​ಗಳಿಗೂ ಡೌಟ್​ ಬರಲು ಶುರುವಾಗಿದೆ. ಏಕೆಂದರೆ, ಯೂನಿಫಾರ್ಮ್​ನಲ್ಲಿ ಇಲ್ಲದಾಗ ಸೆಲ್ಯೂಟ್​ ನೀಡಲಾಗುವುದಿಲ್ಲ. ಆದ್ದರಿಂದ ಈತ ನಕಲಿ ಎನ್ನುವುದು ತಿಳಿದಿದೆ. ನಿಜವಾಗಿಯೂ ಪೊಲೀಸ್ ಅಧಿಕಾರಿಯಾಗಿದ್ದರೆ, ಮೊದಲು ತಮ್ಮ ಸಮವಸ್ತ್ರವನ್ನು ಧರಿಸಿ ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಹೇಳಿದರು.&lt;/p&gt;&lt;p&gt;&quot;ಸರಿಯಾದ ಪೊಲೀಸ್ ಉಡುಪಿನಲ್ಲಿ ಬನ್ನಿ, ನಿಮ್ಮ ಗುರುತಿನ ಚೀಟಿಯನ್ನು ನನಗೆ ತೋರಿಸಿ, ನಂತರ ನಾನು ನಿಮಗೆ ಸೆಲ್ಯೂಟ್ ಮಾಡುತ್ತೇನೆ. ಅದಕ್ಕಿಂತ ಮೊದಲು ಅಲ್ಲ,&quot; ಕಾನ್&zwnj;ಸ್ಟೆಬಲ್ ಹೇಳಿದಾಗ, ಆತ ತಾನು ನಿಯೋಜನೆಗೊಂಡಿರುವ ಐಪಿಎಸ್​ ಅಧಿಕಾರಿ ಎಂದಿದ್ದಾನೆ. ಐಡಿ ಕಾರ್ಡ್​ ಯಾಕೆ ತೋರಿಸಬೇಕು ಎಂದು ದರ್ಪ ಮಾಡಿದಾಗ, ಕಾನ್​ಸ್ಟೆಬಲ್​ಗಳು ಈ ಬಗ್ಗೆ ಉನ್ನತ ಅಧಿಕಾರಿಗಳಲ್ಲಿ ದೂರಿದ್ದಾರೆ. ಅವರು ಅಲ್ಲಿಗೆ ಬಂದು ನಕಲಿ ಐಪಿಎಸ್​ ಅಧಿಕಾರಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/fake-ips-officer-demands-respect-instead-of-paying-rs-40-tea-bill-in-lucknow-suc/articleshow-riauh6q"/>
        </item>
        <item>
            <title><![CDATA[NEET ಮರು ಪರೀಕ್ಷೆಗೆ 3 ದಿನ ಇರುವಾಗ್ಲೇ ಮತ್ತೋರ್ವ ವಿದ್ಯಾರ್ಥಿನಿ ಬಲಿ: ಡೆತ್​ನೋಟ್​ನಲ್ಲಿ ಏನಿದೆ]]></title>
            <link>https://kannada.asianetnews.com/india-news/19-year-old-neet-aspirant-dies-by-suicide-in-coimbatore-over-retest-pressure-suc/articleshow-ti6a06u</link>
            <guid isPermaLink="true">https://kannada.asianetnews.com/india-news/19-year-old-neet-aspirant-dies-by-suicide-in-coimbatore-over-retest-pressure-suc/articleshow-ti6a06u</guid>
            <pubDate>Thu, 18 Jun 2026 16:33:09 +0530</pubDate>
            <description><![CDATA[ನೀಟ್ ಮರುಪರೀಕ್ಷೆಯ ಭಯದಿಂದ ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ವಿದ್ಯಾರ್ಥಿನಿ ಅನುಕೀರ್ತನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪರೀಕ್ಷೆಗಾಗಿ ತಂದೆ ಮಾಡಿದ ಖರ್ಚು ಮತ್ತು ಮತ್ತೆ ಪರೀಕ್ಷೆ ಎದುರಿಸುವ ಆತಂಕವನ್ನು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದು, ನೀಟ್ ಪರೀಕ್ಷೆ ರದ್ದಾದ ನಂತರ ದೇಶದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗಳಲ್ಲಿ ಇದು ಒಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvd6b393885axh3dk4c5bn3f,imgname-keerthana-1781780548898.jpg" type="image/jpeg" height="390" width="690"/>
            <content:encoded><![CDATA[&lt;p&gt;ವೈದ್ಯರಾಗುವ ಹಂಬಲದಿಂದ ನೀಟ್​ ಪರೀಕ್ಷೆ ಒಮ್ಮೆ ಬರೆದಿರುವ ವಿದ್ಯಾರ್ಥಿಗಳು, ಅದನ್ನೇ ಮತ್ತೊಮ್ಮೆ ಬರೆಯಲು ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಆತಂಕಕಾರಿ ಘಟನೆ ನಡೆಯುತ್ತಲೇ ಇದೆ. ಇದಾಗಲೇ ಕೆಲವು ವಿದ್ಯಾರ್ಥಿಗಳು ನೀಟ್​ ಮರು ಪರೀಕ್ಷೆ ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿ ಸಾವಿನ ಹಾದಿ ತುಳಿದಿದ್ದಾರೆ. ಇದರಲ್ಲಿ ಒಬ್ಬಾಕೆಯ ಸಾವು ನೀಟ್​ನಿಂದ ಆಗಿದ್ದು ಎಂದು ಹೇಳಿ ಸದ್ದು ಮಾಡಿದ್ದರೂ ಕೊನೆಗೆ ಆಕೆ ಸತ್ತಿದ್ದು ವೈಯಕ್ತಿಯ ಕಾರಣದಿಂದ ಎನ್ನುವುದು ತಿಳಿದುಬಂದಿತ್ತು. ವೈದ್ಯಕೀಯ ವೃತ್ತಿಯ ಆಕಾಂಕ್ಷಿಗಳಾಗಿರುವ ವಿದ್ಯಾರ್ಥಿಗಳು ಒಮ್ಮೆ ಪರೀಕ್ಷೆಗೆ ತಯಾರಿ ನಡೆಸಿ ಚೆನ್ನಾಗಿ ಬರೆದಿದ್ದರೆ ಅದನ್ನೇ ಮತ್ತೊಮ್ಮೆ ಬರೆಯಲು ಆಗದೇ ಖಿನ್ನತೆಗೆ ಜಾರುತ್ತಿರುವುದು ಕಳವಳ ಉಂಟು ಮಾಡುತ್ತಿರುವ ವಿಷಯವಾಗಿದ್ದು, ಇದರ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಮತ್ತೊಂದು ಘಟನೆ ನಡೆದಿದೆ..&lt;/p&gt;&lt;h2&gt;&lt;strong&gt;ಸಾವಿನ ಹಾದಿ ತುಳಿದ ವಿದ್ಯಾರ್ಥಿನಿ&lt;/strong&gt;&lt;/h2&gt;&lt;p&gt;ತಮಿಳುನಾಡಿನ ಕೊಯಮತ್ತೂರಿನ 19 ವರ್ಷದ ನೀಟ್ ವಿದ್ಯಾರ್ಥಿನಿ ಅನುಕೀರ್ತನಾ ಮರು ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎಂದು ಹೇಳಿ ಸಾವಿನ ಹಾದಿ ಹಿಡಿದಿದ್ದಾಳೆ. ಬರುವ ಭಾನುವಾರವೇ ಮರು ಪರೀಕ್ಷೆ. ಇದಾಗಲೇ ಈ ಪರೀಕ್ಷೆಗೆ ಹೆಚ್ಚುವರಿ ಶುಲ್ಕ ಪಡೆದುಕೊಳ್ಳಲ್ಲ, ಈ ಹಿಂದೆ ನೀಡಿದ್ದ ಶುಲ್ಕವನ್ನು ವಾಪಸ್​ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದರೂ, ಅನುಕೀರ್ತನಾ ಎನ್ನುವ ವಿದ್ಯಾರ್ಥಿನಿ ಹಣದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ಕುಟುಂವನ್ನು ದಿಗ್ಭ್ರಮೆಗೊಳಿಸಿದೆ. ನಾನು ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕಾಲೇಜಿಗೆ ಪ್ರವೇಶಕ್ಕಾಗಿ ಕಾಯುತ್ತಿದ್ದೆ, ಆದರೆ ಪರೀಕ್ಷೆ ರದ್ದಾಗಿದೆ. ಈಗ ಮತ್ತೆ ಪರೀಕ್ಷೆ ಬರೆಯಲು ಭಯವಾಗುತ್ತಿದೆ. ನನ್ನ ತಂದೆ ನನಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ, ಮತ್ತು ನಾನು ಅವರನ್ನು ಮತ್ತೆ ಹೇಗೆ ಎದುರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಡೆತ್​ನೋಟ್​ನಲ್ಲಿ ವಿದ್ಯಾರ್ಥಿನಿ ಬರೆದಿರುವುದು ತಿಳಿದಿದೆ.&lt;/p&gt;&lt;p&gt;ಈ ಡೆತ್​ನೋಟ್​ ರೂಪದಲ್ಲಿ ಆಕೆ ಸಾಯುವ ಮುನ್ನ ತನ್ನ ಚಿಕ್ಕಪ್ಪ ಮತ್ತು ಹತ್ತಿರದ ಸಂಬಂಧಿಕರಿಗೆ ವಾಟ್ಸ್​ಆ್ಯಪ್​ ಸಂದೇಶ ಕಳುಹಿಸಿದ್ದಾಳೆ. ವಿದ್ಯಾರ್ಥಿನಿಯ ಸಂದೇಶವನ್ನು ಓದಿದ ನಂತರ, ಅವರ ಕುಟುಂಬವು ಅವರ ಮನೆಗೆ ಧಾವಿಸಿತು. ಬಾಗಿಲು ಒಡೆದು ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾಳೆ.&lt;/p&gt;&lt;h3&gt;&lt;strong&gt;ಟ್ರೇಡ್ ಯೂನಿಯನ್&zwnj;ನ ಜಿಲ್ಲಾ ಕಾರ್ಯದರ್ಶಿ ಪುತ್ರಿ&lt;/strong&gt;&lt;/h3&gt;&lt;p&gt;ಅನುಕೀರ್ತನಾ ಕೊಯಮತ್ತೂರಿನ ಕೋವೈಪುದೂರಿನ ಪಾರ್ಕ್ ಟೌನ್ ನಿವಾಸಿಯಾಗಿದ್ದಳು. ಆಕೆಯ ತಂದೆ ಸೆಂಥಿಲ್ ಪ್ರಭು, ಸಿಐಟಿಯು ಜೊತೆ ಸಂಯೋಜಿತವಾಗಿರುವ TASMAC ಟ್ರೇಡ್ ಯೂನಿಯನ್&zwnj;ನ ಜಿಲ್ಲಾ ಕಾರ್ಯದರ್ಶಿ. ಅನುಕೀರ್ತನಾ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯರು. ಅವರು 12 ನೇ ತರಗತಿಯವರೆಗೆ ಎಟ್ಟುಮನೂರಿನ ಖಾಸಗಿ ಶಾಲೆಯಲ್ಲಿ ಓದಿದ್ದಳು. ವೈದ್ಯೆಯಾಗುವುದು ಮತ್ತು ಬಡವರಿಗೆ ಸಹಾಯ ಮಾಡುವುದು ಆಕೆಯ ಕನಸಾಗಿತ್ತು. ಆದಾಗ್ಯೂ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ನೀಟ್ ಪರೀಕ್ಷೆ ರದ್ದತಿ ಮತ್ತು ಜೂನ್ 21 ರಂದು ಮರು ಪರೀಕ್ಷೆಯ ಘೋಷಣೆಯು ಅವರನ್ನು ತೀವ್ರವಾಗಿ ದುಃಖಿತರನ್ನಾಗಿ ಮಾಡಿತು. ಬುಧವಾರ ಬೆಳಿಗ್ಗೆ, ಅವರು ಸಂಬಂಧಿಕರಿಗೆ ದೀರ್ಘ ವಾಟ್ಸ್​ಆ್ಯಪ್​ ಸಂದೇಶವನ್ನು ಕಳುಹಿಸಿರುವುದು ತಿಳಿದುಬಂದಿದೆ!&lt;/p&gt;&lt;p&gt;ಇತ್ತೀಚಿನ ದಿದನಗಳಲ್ಲಿ ನೀಟ್ ಹೆಸರಿನಲ್ಲಿ ನಡೆಸಿರುವ ನಾಲ್ಕನೇ ಆತ್ಮಹತ್ಯೆ ಇದಾಗಿದೆ. ಇದಕ್ಕೂ ಮೊದಲು, ಜೂನ್ 16 ರಂದು, ಡೆಹ್ರಾಡೂನ್&zwnj;ನಲ್ಲಿ 23 ವರ್ಷದ ರಿಯಾ ಥಾಪಾ ಮತ್ತು ಲಖನೌದಲ್ಲಿ 17 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡರು. ಮೇ 12 ರಂದು ನೀಟ್ ಪರೀಕ್ಷೆ ರದ್ದಾದ ನಂತರ, ದೇಶಾದ್ಯಂತ ಸುಮಾರು 12 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/19-year-old-neet-aspirant-dies-by-suicide-in-coimbatore-over-retest-pressure-suc/articleshow-ti6a06u"/>
        </item>
        <item>
            <title><![CDATA[ಹೆಣ್ಮಕ್ಕಳ ಅ*ಶ್ಲೀ*ಲ ವಿಡಿಯೋ ಮಾಡಿ, ಒಪ್ಪಿಗೆ ಇಲ್ಲದೇ ಶೇರ್‌ ಮಾಡಿದ್ರೆ ಜೈಲೂಟ ಫಿಕ್ಸ್! ನಮ್ಮ ರಾಜ್ಯದಲ್ಲಿ ಹೊಸ ಮಾರ್ಗಸೂಚಿ]]></title>
            <link>https://kannada.asianetnews.com/crime/karnataka-police-mandates-immediate-firs-for-unauthorized-sharing-of-private-photos-and-videos-kvn/articleshow-vil7uxl</link>
            <guid isPermaLink="true">https://kannada.asianetnews.com/crime/karnataka-police-mandates-immediate-firs-for-unauthorized-sharing-of-private-photos-and-videos-kvn/articleshow-vil7uxl</guid>
            <pubDate>Wed, 17 Jun 2026 12:38:31 +0530</pubDate>
            <description><![CDATA[ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೋ ಪ್ರಸಾರ ಮಾಡುವ ಪ್ರಕರಣಗಳಲ್ಲಿ ತಕ್ಷಣ ಎಫ್&zwnj;ಐಆರ್&zwnj; ದಾಖಲಿಸಲು ರಾಜ್ಯ ಪೊಲೀಸ್&zwnj; ಮಹಾ ನಿರ್ದೇಶಕರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಯು ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ ಎಂದು ಸ್ಪಷ್ಟಪಡಿಸಲಾಗಿದ್ದು, ದೂರು ದಾಖಲಿಸಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g1bg4ee379vx9z45jbyhjfnz,imgname-porn-course.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ವಿಡಿಯೋ ಮತ್ತು ಫೋಟೋ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ತಡ ಮಾಡದೆ ತಕ್ಷಣ ದೂರು (ಎಫ್&zwnj;ಐಆರ್&zwnj;) ದಾಖಲಿಸಬೇಕು. ಜತೆಗೆ ಇಂಥ ಪ್ರಕರಣಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯ ಪೊಲೀಸ್&zwnj; ಮಹಾ ನಿರ್ದೇಶಕ ಡಾ। ಎಂ.ಎ.ಸಲೀಂ ಅವರು ಮಾರ್ಗಸೂಚಿ ಒಳಗೊಂಡ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಅಶ್ಲೀಲ ಚಿತ್ರ/ವಿಡಿಯೋ ಚಿತ್ರೀಕರಣ ಹಾಗೂ ವೈರಲ್ ಕುರಿತ ಪ್ರಕರಣಗಳ ದಾಖಲಿಸುವಲ್ಲಿ ಸಂತ್ರಸ್ತರು ಚಿತ್ರೀಕರಿಸಲು ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.&lt;/p&gt;&lt;p&gt;ಚಿತ್ರ/ವಿಡಿಯೋ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದರೆ ಪ್ರಸಾರಕ್ಕೂ ಒಪ್ಪಿಗೆ ನೀಡಿದಂತೆ ಅಲ್ಲ ಎಂಬ ಕಾನೂನು ಸ್ಥಿತಿಯನ್ನು ಸ್ಪಷ್ಟಪಡಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿ ಚಿತ್ರ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ, ಅದನ್ನು ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡದಿದ್ದರೆ, ಅದು ಸಂಜ್ಞೆಯ ಅಪರಾಧವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಖಾಸಗಿ ಫೋಟೋ/ವಿಡಿಯೋಗಳ ಚಿತ್ರೀಕರಣಕ್ಕೆ ಒಪ್ಪಿಗೆಯಿದ್ದು, ನಂತರದ ಹಂಚಿಕೆಗೆ ಒಪ್ಪಿಗೆ ಇಲ್ಲದೆ ಅವುಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅದು ಕಾನೂನು ಪ್ರಕಾರ ಸಂಜ್ಞೆಯ ಅಪರಾಧವಾಗುತ್ತದೆ. ಸುಪ್ರೀಂ ಕೋರ್ಟ್&zwnj; ತನ್ನ ತೀರ್ಪಿನಲ್ಲಿ ಗೌಪ್ಯತೆ ಹಕ್ಕನ್ನು ಮಾನ್ಯ ಮಾಡಿದೆ. ಹೀಗಾಗಿ, ವ್ಯಕ್ತಿಯ ಅನುಮತಿಯಿಲ್ಲದೆ ಅವರ ಖಾಸಗಿ ವಿಡಿಯೋ ಮತ್ತು ಫೋಟೋ ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಪೊಲೀಸರು ತಕ್ಷಣವೇ ಎಫ್&zwnj;ಐಆರ್&zwnj; ದಾಖಲಿಸಬೇಕು.&lt;/p&gt;&lt;p&gt;ಜತೆಗೆ, ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ ಪ್ರಕರಣದ ವಾಸ್ತಾವಾಂಶಗಳಿಂದ ಅಪರಾಧದ ಸಾಧ್ಯತೆ ಕಂಡು ಬಂದಲ್ಲಿ ಆ ಅಂಶಗಳನ್ನು ಸಹ ಎಫ್&zwnj;ಐಆರ್&zwnj;ನಲ್ಲಿ ಸೇರಿಸಬೇಕು. ಇಂತಹ ಪ್ರಕರಣಗಳಲ್ಲಿ ಎಫ್&zwnj;ಐಆರ್&zwnj; ದಾಖಲಿಸದಿರುವುದು ಅಥವಾ ಪೂರ್ವಾನುಮತಿ ಎಂಬ ಕಾರಣ ಕೊಟ್ಟು ಎಫ್&zwnj;ಐಆರ್&zwnj; ವಿಳಂಬ ಮಾಡಿದರೆ ಅದನ್ನು ಕರ್ತವ್ಯ ಲೋಪವೆಂದು ಪರಿಗಣಿಸಿ ಅಂತಹ ಅಧಿಕಾರಿ-ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳು:&lt;/strong&gt;&lt;/h2&gt;&lt;p&gt;-ಖಾಸಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ. ಬಿಎನ್&zwnj;ಎಸ್&zwnj; ಸೆಕ್ಷ ನ್&zwnj; 77ರ ವಿವರಣೆ 2ರ ಪ್ರಕಾರ ಖಾಸಗಿ ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯಲು ಒಪ್ಪಿಗೆ ನೀಡಿದ್ದರೂ 3ನೇ ವ್ಯಕ್ತಿಗಳಿಗೆ ಹಂಚಲು ಸಮ್ಮತಿಸದೆ ಅವು ಹಂಚಿಕೆಯಾಗಿದ್ದರೆ ಅದು ಅಪರಾಧ.&lt;/p&gt;&lt;p&gt;- ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷ ನ್&zwnj; 66(ಇ), 67 ಮತ್ತು 67(ಎ)ಗಳು ಲಿಂಗ ತಟಸ್ಥವಾಗಿದ್ದು, ಚಿತ್ರೀಕರಣಕ್ಕೆ ಪೂರ್ವಾನುಮತಿ ಇದ್ದರೂ ಅನುಮತಿಯಿಲ್ಲದೆ ಪ್ರಸಾರ ಮಾಡಿದರೆ ಮುಖ್ಯ ಅಪರಾಧವಾಗುತ್ತದೆ.&lt;/p&gt;&lt;p&gt;- ಮಹಿಳೆ ಖಾಸಗಿ ಕ್ರಿಯೆಯಲ್ಲಿ ತೊಡಗಿರುವಾಗ ಯಾರೂ ನೋಡಬಾರದು ಎಂಬ ನಿರೀಕ್ಷೆಯ ಪರಿಸ್ಥಿತಿಯಲ್ಲಿ ಆಕೆಯನ್ನು ನೋಡುವುದು, ಫೋಟೋ ಅಥವಾ ವಿಡಿಯೋ ಸೆರೆ ಹಿಡಿಯುವುದು, ಅವುಗಳನ್ನು ಪ್ರಸಾರ ಮಾಡುವುದು ಬಿಎನ್&zwnj;ಎಸ್&zwnj; ಸೆಕ್ಷ ನ್&zwnj; 77ರ ಪ್ರಕಾರ ಅಪರಾಧ. (ಇದು ಮಹಿಳಾ ಸಂತ್ರಸ್ತರಿಗೆ ಮಾತ್ರ ಅನ್ವಯ)&lt;/p&gt;&lt;p&gt;-ವ್ಯಕ್ತಿಯ ಖಾಸಗಿ ಅಂಗಗಳ ಫೋಟೋ ಅಥವಾ ವಿಡಿಯೋವನ್ನು ಅವರ ಅನುಮತಿಯಿಲ್ಲದೆ ಸೆರೆ ಹಿಡಿಯುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು, ಗೌಪ್ಯತೆಯನ್ನು ಉಲ್ಲಂಘಿಸುವ ಸಂದರ್ಭಗಳಲ್ಲಿ ನಡೆದರೆ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್&zwnj; 66ಇ ಪ್ರಕಾರ ಅಪರಾಧ.&lt;/p&gt;&lt;p&gt;- ಎಲೆಕ್ಟ್ರಾನಿಕ್&zwnj; ರೂಪದಲ್ಲಿ ಅಶ್ಲೀಲ, ಕಾಮ ಉದ್ದೀಪನ ಅಥವಾ ಕಾಮ ಪ್ರಚೋದಕ ವಿಷಯ ಪ್ರಕಟಿಸುವುದು, ಪ್ರಸಾರ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷ ನ್&zwnj; 67ರ ಅನ್ವಯ ಅಪರಾಧ.&lt;/p&gt;&lt;p&gt;- ಲೈಂಗಿಕ ಕ್ರಿಯೆ ಅಥವಾ ಲೈಂಗಿಕವಾಗಿ ಸ್ಪಷ್ಟ ವಿಷಯ ಹೊಂದಿರುವ ವಸ್ತುಗಳನ್ನು ಎಲೆಕ್ಟ್ರಾನಿಕ್&zwnj; ರೂಪದಲ್ಲಿ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷ ನ್&zwnj; 67(ಎ) ಪ್ರಕಾರ ಅಪರಾಧ.&lt;/p&gt;&lt;p&gt;-ಖಾಸಗಿ ವಿಡಿಯೋಗಳ ಪ್ರಸಾರ ಬ್ಲ್ಯಾಕ್&zwnj;ಮೇಲ್&zwnj; ವಿಡಿಯೋಗಳು, ರಿವೆಂಜ್&zwnj; ಫೋರ್ನೋಗ್ರಫಿ ಇತರೆ ಪ್ರಕರಣಗಳ ಕುರಿತು ದೂರು ಬಂದ ತಕ್ಷಣ ಎಫ್&zwnj;ಐಆರ್&zwnj; ದಾಖಲಿಸುವುದು ಕಡ್ಡಾಯ.&lt;/p&gt;&lt;p&gt;-ಪೂರ್ವಾನುಮತಿ ಆಧಾರದಲ್ಲಿ ಎಫ್&zwnj;ಐಆರ್&zwnj; ದಾಖಲಿಸಲು ನಿರಾಕರಿಸಬಾರದು.&lt;/p&gt;&lt;p&gt;-ಖಾಸಗಿ ಫೋಟೋ ಅಥವಾ ವಿಡಿಯೊಗಳನ್ನು ಬಳಸಿ ಹಣ ಸುಲಿಗೆ, ಲೈಂಗಿಕ ದೌರ್ಜನ್ಯ ನಡೆಸಿದರೆ ಸುಲಿಗೆ ಮತ್ತು ಕ್ರಿಮಿನಲ್&zwnj; ಬೆದರಿಕೆಗೆ ಸಂಬಂಧಿಸಿದ ಕಾಯ್ದೆ ಜತೆಗೆ ಐಟಿ ಕಾಯ್ದೆಯ ಸೆಕ್ಷನ್&zwnj;ಗಳನ್ನು ಹಾಕಬೇಕು.&lt;/p&gt;&lt;p&gt;-ಅಪರಾಧ ಕೃತ್ಯ ಸ್ಥಳೀಯ ಠಾಣೆ ವ್ಯಾಪ್ತಿ ಹೊರಗೆ ನಡೆದಿದ್ದರೆ ಬಿಎನ್&zwnj;ಎಸ್&zwnj; ಪ್ರಕಾರ ಝೀರೋ ಎಫ್&zwnj;ಐಆರ್&zwnj; ದಾಖಲಿಸಿ, ನಂತರ ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಬೇಕು.&lt;/p&gt;&lt;p&gt;-ಕಂಟೆಂಟ್&zwnj; ತೆಗೆದು ಹಾಕುವುದು ಮತ್ತು ಸಾಕ್ಷ್ಯ ಸಂರಕ್ಷಣೆ ಮಾಡಬೇಕು.&lt;/p&gt;&lt;p&gt;-ಸಂತ್ರಸ್ತರ ರಕ್ಷಣೆ ಮಾಡಬೇಕು, ಪ್ರಕರಣದಲ್ಲಿ ಸೈಬರ್&zwnj; ಘಟಕಗಳೊಂದಿಗೆ ಸಮನ್ವಯತೆ ಸಾಧಿಸಬೇಕು.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/karnataka-police-mandates-immediate-firs-for-unauthorized-sharing-of-private-photos-and-videos-kvn/articleshow-vil7uxl"/>
        </item>
        <item>
            <title><![CDATA[Mandya: ಲಕ್ಷ್ಮೀಸಾಗರದಲ್ಲಿ ಕಣ್ಣೀರಿನ ಕಥೆ: ಚೆಂಡಿನೊಂದಿಗೆ ಆಟವಾಡುತ್ತಿದ್ದ ಮಗು ನೀರಿನ ಸಂಪಿಗೆ ಬಿದ್ದು ಸಾವು]]></title>
            <link>https://kannada.asianetnews.com/crime/pandavapura-2-year-old-boy-dies-after-falling-into-water-sump-gvd/articleshow-w6eige6</link>
            <guid isPermaLink="true">https://kannada.asianetnews.com/crime/pandavapura-2-year-old-boy-dies-after-falling-into-water-sump-gvd/articleshow-w6eige6</guid>
            <pubDate>Sun, 14 Jun 2026 19:48:05 +0530</pubDate>
            <description><![CDATA[&lt;p&gt;Mandya: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ವಿನೀಶ್ (ವಿನು) (2) ಮೃತ ಬಾಲಕ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6nnmaht3ar51achbefv9ra,imgname-bengaluru-mother-suicide-child-death-accident-mental-health-family-tragedy-0-1775119290705.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಾಂಡವಪುರ (ಜೂ.14): &lt;/strong&gt;ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ಗ್ರಾಮದ ಸುಷ್ಮಾ ಮತ್ತು ಹರೀಶ್ ದಂಪತಿ ಪುತ್ರ ವಿನೀಶ್ (ವಿನು) (2) ಮೃತ ಬಾಲಕ.&lt;/p&gt;&lt;p&gt;ಮೃತ ಮಗುವಿನ ಪಾಲಕರು ಗ್ರಾಮದಲ್ಲಿ ಚಿಲ್ಲರೆ (ದಿನಸಿ) ಅಂಗಡಿ ನಡೆಸುತ್ತಿದ್ದರು. ಘಟನೆಗೂ ಮುನ್ನ ಮಗುವಿನ ತಂದೆ ಹರೀಶ್ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾರೆ. ತಾಯಿ ಮನೆಗೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಮನೆಯಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಸಂಪಿಗೆ ಉರುಳಿದೆ.&lt;/p&gt;&lt;p&gt;ಚೆಂಡನ್ನು ಹಿಂಬಾಲಿಸುತ್ತಾ ಹೋದ ಮಗು ಆಕಸ್ಮಿಕವಾಗಿ ಸಂಪಿಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಗುವಿನ ಅಜ್ಜಿ ಮತ್ತು ತಾಯಿ ಮಗುವನ್ನು ತಂದೆ ಹೊರಗೆ ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಹರೀಶ್&zwnj; ಮನೆಗೆ ಹಿಂದಿರುಗಿದಾಗ ಮಗು ಕಾಣದಿರುವುದಕ್ಕೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಬಂಧಿಕರ ಆಕ್ರಂದನ&lt;/strong&gt;&lt;/h2&gt;&lt;p&gt;ಈ ವೇಳೆ ಮಗು ಸಂಪಿನಲ್ಲಿ ಕಂಡು ಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಮಗು ಸಾವನ್ನಪ್ಪಿರುವುದನ್ನು ವೈದ್ಯರು ಧೃಡ ಪಡಿಸಿದ್ದಾರೆ. ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಎರಡು ವರ್ಷದ ಮಗು ಸಂಪಿಗೆ ಬಿದ್ದು ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಧಿಯ ಆಟಕ್ಕೆ ಶಪಿಸಿದರು. ಗ್ರಾಮಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/pandavapura-2-year-old-boy-dies-after-falling-into-water-sump-gvd/articleshow-w6eige6"/>
        </item>
        <item>
            <title><![CDATA[ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?]]></title>
            <link>https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</link>
            <guid isPermaLink="true">https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p</guid>
            <pubDate>Wed, 17 Jun 2026 17:02:20 +0530</pubDate>
            <description><![CDATA[&lt;p&gt;ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಏನಾಗಲಿದೆ ಮುಂದೆ?&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xagcsje" medium="video" height="768" width="1024"/>
            <content:encoded><![CDATA[&lt;p&gt;ಏನಾಗಲಿದೆ ದರ್ಶನ್ ಭವಿಷ್ಯ..? ಆತಂಕದಲ್ಲಿ ಫ್ಯಾನ್ಸ್..!ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ &amp;nbsp;ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ &amp;nbsp;ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಕೋರ್ಟ್ ಅಂಗಳದಲ್ಲಿ ನಡೆದಿರೋ ಆ ಮಹತ್ವದ ಬೆಳವಣಿಗೆಯಾದರೂ ಏನು? ನೋಡೋಣ ಬನ್ನಿ.&lt;/p&gt;&lt;p&gt;ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ದಾಸನ ಕೇಸ್..!ದರ್ಶನ್&zwnj;ಗೆ ಸಿಕ್ಕೋದು ಬೇಲಾ..? ಪರ್ಮನೆಂಟ್ ಜೈಲಾ..?ಸಿಸಿಹೆಚ್-59 ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಮೇಲೆ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆಗೆ ವೇಗ ಸಿಕ್ಕಿದೆ. ಸೋಮವಾರ ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಈ ವೇಳೆ ಪ್ರಾಸಿಕ್ಯೂಶನ್ ಮತ್ತು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ಹಲವು ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಈಗ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಈ ಕೇಸ್ ವಿಚಾರಣೆ ಮಿಂಚಿನ ವೇಗದಲ್ಲಿ ಸಾಗಲಿದೆ.ಹಾಗಿದ್ದರೆ ಏನಾಗ್ತಿದೆ ದರ್ಶನ್ ಕೇಸ್&zwnj; ಬೆಳವಣಿಗೆ? ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/darshan-case-enquiry-is-in-fast-track-now-and-it-will-finish-with-in-one-year-as-the-sources-are-concerned-videoshow-x7oea0p"/>
        </item>
    </channel>
</rss>
