<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Apr 2026 16:51:39 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!]]></title>
            <link>https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</link>
            <guid isPermaLink="true">https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze</guid>
            <pubDate>Fri, 17 Apr 2026 23:07:15 +0530</pubDate>
            <description><![CDATA[ವಿಜಯಪುರ ಜಿಲ್ಲೆಯ ಕುಖ್ಯಾತ ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ನಡುರಸ್ತೆಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ 6 ಸುತ್ತು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ.]]></description>
            <media:content url="https://geo.dailymotion.com/player/x1tbu.html?video=xa5ptqk" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.17): &lt;/strong&gt;ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಬಂದೂಕಿನ ನಳಿಕೆಗಳು ಮತ್ತೆ ಬೆಂಕಿ ಉಗುಳಿವೆ! ಹೌದು, ಶಾಂತಿ ನೆಲೆಸಿತು ಎನ್ನುವಷ್ಟರಲ್ಲೇ ಗುಂಡಿನ ಸದ್ದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.&amp;nbsp;&lt;/p&gt;&lt;h3&gt;&lt;strong&gt;ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ&lt;/strong&gt;&lt;/h3&gt;&lt;p&gt;ಕೆಲವೇ ದಿನಗಳ ಹಿಂದೆ ಜ್ಯುವೆಲರಿ ಶಾಪ್ ಮತ್ತು ಬ್ಯಾಂಕ್ ಲೂಟಿ ಮಾಡಿದ್ದ ಗ್ಯಾಂಗ್&zwnj;ಗಳ ಆರ್ಭಟ ತಣ್ಣಗಾಗುವ ಮೊದಲೇ, ಈಗ ನಡುರಸ್ತೆಯಲ್ಲೇ ನೆತ್ತರು ಹರಿದಿದೆ. ಥೇಟ್ ಯುಪಿ, ಬಿಹಾರ್ ಮಾದರಿಯಲ್ಲಿ 6 ರೌಂಡ್ ಫೈರಿಂಗ್ ನಡೆಸಿ ಮಾಜಿ ಗ್ರಾ.ಪಂ ಸದಸ್ಯನನ್ನ ಹತ್ಯೆ ಮಾಡಲಾಗಿದೆ.&amp;nbsp;ಈ ಭೀಕರ ಹತ್ಯಾಕಾಂಡ ಕಂಡ ಜನ ಮೌನಕ್ಕೆ ಶರಣಾಗಿದ್ದಾರೆ. ಹಾಗಾದ್ರೆ, ಭೀಮಾತೀರದಲ್ಲಿ ಮತ್ತೆ ಶತ್ರು ಸಂಹಾರಕ್ಕೆ ಸ್ಕೆಚ್ ಹಾಕಿದ್ದು ಯಾರು? ಯಾರ ಬಂದೂಕಿನಿಂದ ಸಿಡಿದ ಬುಲೆಟ್&zwnj;ಗಳು ರಾಜು ಎದೆಯನ್ನು ಸೀಳಿದವು?&amp;nbsp;&amp;nbsp;&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhima-teera-former-gram-panchayat-member-raju-murder-case-updates-san-videoshow-0w2p5ze"/>
        </item>
        <item>
            <title><![CDATA[ಆರೈಕೆ ಮಾಡಿ ರೋಸಿ ಹೋದನಾ ಮಗ: ಹಾಸಿಗೆ ಹಿಡಿದಿದ್ದ ಅಮ್ಮನನ್ನು 4ನೇ ಮಹಡಿಯಿಂದ ಕೆಳಗೆಸೆದು ಕೊಂದ ಮಗ]]></title>
            <link>https://kannada.asianetnews.com/bengaluru-urban/son-killed-bedridden-mother-by-throwing-her-from-4th-floor-of-the-building/articleshow-3t0gkfh</link>
            <guid isPermaLink="true">https://kannada.asianetnews.com/bengaluru-urban/son-killed-bedridden-mother-by-throwing-her-from-4th-floor-of-the-building/articleshow-3t0gkfh</guid>
            <pubDate>Thu, 16 Apr 2026 11:45:01 +0530</pubDate>
            <description><![CDATA[&lt;p&gt;ಬೆಂಗಳೂರಿನ ಆರ್ ಆರ್ ನಗರದಲ್ಲಿ, ಅನಾರೋಗ್ಯದಿಂದ ಬಳಲುತ್ತಿದ್ದ 72 ವರ್ಷದ ತಾಯಿಯನ್ನು ಅವರ ಮಗನೇ ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpae88ez1p3sfph1zr076vep,imgname-son-killed-mother-1776319472095.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಅಮ್ಮನ ಅನಾರೋಗ್ಯವೇ ಮಗನಿಗೆ ಹೊರೆಯಾಯಿತೇ?&lt;/strong&gt;&lt;/h2&gt;&lt;p&gt;ಬೆಂಗಳೂರು: ಅನಾರೋಗ್ಯಕ್ಕೆ ಒಳಗಾಗಿದ್ದ ತಾಯಿಯನ್ನೇ ಮಗನೋರ್ವ 4ನೇ ಮಹಡಿಯಿಂದ ಕೆಳಗೆಸೆದು ಕೊಂದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಆರ್&zwnj; ಆರ್&zwnj; ನಗರದಲ್ಲಿ ನಡೆದಿದೆ. 72 ವರ್ಷದ ಸಾವಿತ್ರಮ್ಮ ಮಗನಿಂದಲೇ ಹೀಗೆ ಭಯಾನಕವಾಗಿ ಹತ್ಯೆಗೀಡಾದ ಮಹಿಳೆ. ಮೃತ ಸಾವಿತ್ರಮ ಅವರು ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿ ಹಾಸಿಗೆ ಹಿಡಿದಿದ್ದರು. ಇವರ ಆರೈಕೆ ಮಾಡಿ ರೋಸಿ ಹೋಗಿದ್ದ ಮಗ ಅವರನ್ನೇ ಕೊಲ್ಲುವ ಕಠೋರ ನಿರ್ಧಾರ ಮಾಡಿದ್ದು, ತಾನು ವಾಸ ಮಾಡುತ್ತಿದ್ದ ಕಟ್ಟಡದ 4ನೇ ಮಹಡಿಯಿಂದ ಕೆಳಗೆ ಎಸೆದು ಅವರನ್ನು ಸಾಯಿಸಿದ್ದಾನೆ. 4ನೇ ಮಹಡಿಯಿಂದ ಕೆಳಗೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಹಾಸಿಗೆ ಹಿಡಿದಿದ್ದ ಅಮ್ಮನನ್ನು ಮಹಡಿಯಿಂದ ಕೆಳಗೆಸೆದು ಕೊಂದ ಮಗ&lt;/strong&gt;&lt;/h3&gt;&lt;p&gt;ಆರ್ ಆರ್ ನಗರದ ಬಿಯಿಎಂಎಲ್ ಲೇಔಟ್&zwnj;ನಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿತ್ರಮ್ಮ ಅವರ 42 ವರ್ಷದ ಮಗ ವೆಂಕಟೇಶ್ ತಾಯಿಯನ್ನೇ ಕೊಲೆ ಮಾಡಿದ ಆರೋಪಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಎಪಿಗೆ ಬೇಡವಾದ ಚಡ್ಡಾ ಮೇಲೆ ಕೇಂದ್ರಕ್ಕೆ ಪ್ರೀತಿ: ಸಂಸದ ರಾಘವ್ ಚಡ್ಡಾಗೆ ಈಗ 'ಜೆಡ್' ಕೆಟಗರಿ ಭದ್ರತೆ ನೀಡಿದ ಕೇಂದ್ರ&lt;/strong&gt;&lt;/p&gt;&lt;p&gt;ತಾಯಿಯ ನಿರಂತರವಾದ ಅನಾರೋಗ್ಯವನ್ನು ನೋಡುವುದಕ್ಕೆ ಸಾಧ್ಯವಾಗದೇ ಅವರನ್ನು ಸಾಯಿಸುವ ನಿರ್ಧಾರ ಮಾಡಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ವೆಂಕಟೇಶ್&zwnj;ಗೆ ಮದುವೆಯಾಗಿದ್ದು ತನ್ನ ಪತ್ನಿಯ ಜತೆ 2ನೇ ಮಹಡಿಯಲ್ಲಿ ವಾಸವಿದ್ದ. ಘಟನೆ ನಡೆದಂದು ತಾಯಿಯನ್ನು 4ನೇ ಮಹಡಿಗೆ ಎತ್ತಿಕೊಂಡು ಹೋದ ಆರೋಪಿ ಬಳಿಕ ಆಕೆಯನ್ನು 4ನೇ ಮಹಡಿಯಿಂದ ಕೆಳಗೆಸೆದಿದ್ದಾನೆ. ಘಟನೆಯ ಬಳಿಕ ಪೊಲೀಸರು ಪಾಪಿ ಮಗನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದ ಆರೋಪಿಯ ಮಾನಸಿಕ ಸ್ಥಿತಿ ಬಗ್ಗೆಯೂ ವೈದ್ಯರ ಮೂಲಕ ಪರಿಶೀಲಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ಲಾಲಿ ಹಾಡಿ ಮಲಗಿಸಿದವಳ ಚಿರನಿದ್ರೆಗೆ ಜಾರಿಸಿದ ಪಾಪಿ ಮಗ&lt;/strong&gt;&lt;/p&gt;&lt;p&gt;ಬಾಲ್ಯದಲ್ಲಿ ಮಕ್ಕಳಿಗೆ ಅನಾರೋಗ್ಯವಾದರೆ ಮಗು ಸಂಪೂರ್ಣವಾಗಿ ಹುಷಾರಾಗುವವರೆಗೆ ಅಮ್ಮನಿಗೆ ಸರಿಯಾಗಿ ನಿದ್ದೆಯೇ ಬರದು. ಆಕೆ ತನಗೆ ಸಾಧ್ಯವಾದ ಎಲ್ಲಾ ಆರೈಕೆಗಳನ್ನು ಮಗುವಿಗಾಗಿ ಮಾಡುತ್ತಾಳೆ. ಅಂತಹ ತಾಯಿ ತನ್ನ ಇಳಿವಯಸ್ಸಿನಲ್ಲಿ ಅನಾರೋಗ್ಯಪೀಡಿತವಾದರೆ ಆಕೆಯನ್ನು ನೋಡುವುದು ಮಕ್ಕಳ ಕರ್ತವ್ಯ. ಅಮ್ಮನಿಲ್ಲದ ಮಕ್ಕಳು ಛೇ ಅಮ್ಮ ಇದ್ದಿದ್ದರೆ ಎಂದು ಮರುಗುತ್ತಿದ್ದರೆ ಇಲ್ಲಿ ಪಾಪಿ ಮಗ ಅನಾರೋಗ್ಯಕ್ಕೀಡಾದ ಅಮ್ಮನನ್ನು ಕೊಂದೇ ಬಿಟ್ಟಿರುವುದು ವಿಧಿ ವಿಪರ್ಯಾಸವೇ ಸರಿ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕ 40ರ ಅಂಟಿ ಪ್ರೇಮದಲ್ಲಿ ಬಿದ್ದು ಮನೆಬಿಟ್ಟು ಓಡಿ ಹೋದ 21ರ ಹರೆಯದ ಹುಡುಗ&lt;/strong&gt;&lt;/p&gt;]]></content:encoded>
            <category>crime</category>
            <dc:creator>Anusha Kb</dc:creator>
            <atom:link href="https://kannada.asianetnews.com/bengaluru-urban/son-killed-bedridden-mother-by-throwing-her-from-4th-floor-of-the-building/articleshow-3t0gkfh"/>
        </item>
        <item>
            <title><![CDATA['ನನ್ನ ಬಟ್ಟೆ ನಾನೇ ಬಿಚ್ಚಿಕೊಂಡು ಕೇಸ್ ಹಾಕ್ತೀನಿ': ವಾಸ್ತು ತಜ್ಞನನ್ನೇ ಬೆದರಿಸಿ ಕಿಡ್ನಾಪ್ ಮಾಡಲು ಯತ್ನಿಸಿತೇ ಲತಾ ಗ್ಯಾಂಗ್?]]></title>
            <link>https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9</link>
            <guid isPermaLink="true">https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9</guid>
            <pubDate>Sat, 18 Apr 2026 13:20:36 +0530</pubDate>
            <description><![CDATA[&lt;p&gt;ಬೆಂಗಳೂರಿನ ವಾಸ್ತು ತಜ್ಞ ಶಾಂತಕುಮಾರ್ ವಿರುದ್ಧ ಗರ್ಭಿಣಿಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ, ಶಾಂತಕುಮಾರ್ ಅವರು ಆ ಮಹಿಳೆ 'ವಸೂಲಿ ಗ್ಯಾಂಗ್'ನ ಭಾಗವಾಗಿದ್ದು, ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮಾಡಿ, ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfrmhd6zrrq92tqrnf5hqtt,imgname-bengaluru-vastu-1776498132390.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18): &lt;/strong&gt;ರಾಜಧಾನಿಯ ವಿಜಯನಗರದಲ್ಲಿರುವ 'ಶ್ರೀ ಅನಂತ್ ಮೆಡಿಕಲ್ ಸಲ್ಯೂಷನ್ಸ್' ಎಂಬ ವಾಸ್ತು ಕೇಂದ್ರ ಈಗ ಪರಸ್ಪರ ದೂರು-ಪ್ರತಿದೂರುಗಳ ಸಮರಕ್ಕೆ ಸಾಕ್ಷಿಯಾಗಿದೆ. ಗರ್ಭಿಣಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರೆ, ಎದುರು ಪಕ್ಷದವರು ಆಕೆ 'ವಸೂಲಿ ಗ್ಯಾಂಗ್' ಸದಸ್ಯೆ ಎಂದು ಎಫ್&zwnj;ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆ ಎನ್ನಲಾದ ಲತಾ ಎಂಬುವವರು ತಮ್ಮ ಮನೆಯ ವಾಸ್ತು ಕೇಳಲು ಈ ತಿಂಗಳ 4ನೇ ತಾರೀಖಿನಂದು ಶಾಂತಕುಮಾರ್ ಎಂಬುವವರ ಕಚೇರಿಗೆ ಹೋಗಿದ್ದರು. ಈ ವೇಳೆ ಶಾಂತಕುಮಾರ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ವಾಸ್ತು ಹೇಳುವ ನೆಪದಲ್ಲಿ ಶಾಂತಕುಮಾರ್ ಅವರು ಗರ್ಭಿಣಿ ಲತಾ ಅವರ ಹೊಟ್ಟೆ ಹಾಗೂ ಎದೆಯ ಭಾಗವನ್ನು ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿ ಹಾಗೂ ಶಾಂತಕುಮಾರ್ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತು ಸಲಹೆಗಾಗಿ ಶಾಂತಕುಮಾರ್ ಈಗಾಗಲೇ 15 ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲತಾ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಇವರದ್ದು ವಸೂಲಿ ಗ್ಯಾಂಗ್&zwnj; ಎಂದ ವಾಸ್ತುತಜ್ಞ ಶಾಂತರಾಜು&lt;/strong&gt;&lt;/h2&gt;&lt;p&gt;ಈ ಬೆನ್ನಲ್ಲೇ ವಾಸ್ತು ಕೇಂದ್ರದ ಮಾಲೀಕ ಶಾಂತರಾಜು ಅವರು ಲತಾ ಹಾಗೂ ಆಕೆಯ ಗ್ಯಾಂಗ್ ವಿರುದ್ಧ ಪ್ರತಿಯಾಗಿ ದೂರು ನೀಡಿದ್ದು, ಇದು ದೊಡ್ಡ ಮಟ್ಟದ ವಸೂಲಿ ಜಾಲ ಎಂದು ಆರೋಪಿಸಿದ್ದಾರೆ. ಲತಾ, ಜಮಾಲ್ ಮತ್ತು ಅಮೃತ ಲಿಂಗಂ ಎಂಬ ಮೂವರು ಕಚೇರಿಗೆ ಬಂದು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ನಾವು ಒಪ್ಪದಿದ್ದಾಗ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಶಾಂತರಾಜು ಅವರ ಪತ್ನಿ ಶೋಭಾ ರಾಣಿ ಬಿಡಿಸಲು ಬಂದಾಗ ಅವರ ಮೇಲೆಯೂ ಜಮಾಲ್ ಮತ್ತು ಅಮೃತಲಿಂಗಂ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.&lt;/p&gt;&lt;p&gt;ಲತಾ ಎಂಬಾಕೆ ತಾನು 'ದಲಿತ್ ವಾಯ್ಸ್' ಸಂಘಟನೆಯವಳು ಹಾಗೂ ಪೊಲೀಸ್ ಎಂದು ಬೆದರಿಸಿದ್ದರೆ, ಅಮೃತಲಿಂಗಂ ತಾನು ಪ್ರೆಸ್ ಮತ್ತು ಮೀಡಿಯಾದವನೆಂದು ಹೇಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇಲ್ಲದಿದ್ದರೆ ಮಾನ ಹರಾಜು ಹಾಕುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಮೊಬೈಲ್ ಲೂಟಿ ಹಾಗೂ ಕಿಡ್ನಾಪ್ ಯತ್ನ&lt;/strong&gt;&lt;/h2&gt;&lt;p&gt;ಶಾಂತರಾಜು ಅವರ ಬಳಿಯಿದ್ದ ಸುಮಾರು 1 ಲಕ್ಷ ರೂ. ಬೆಲೆಯ ಸ್ಯಾಮ್&zwnj;ಸಂಗ್ S-23 ಅಲ್ಟ್ರಾ ಮೊಬೈಲ್ ಫೋನನ್ನು ಈ ಗ್ಯಾಂಗ್ ಕಿತ್ತುಕೊಂಡಿದೆ. ಅಲ್ಲದೆ, ಶಾಂತರಾಜು ಮತ್ತು ಅವರ ಪತ್ನಿಯನ್ನು ಬಲವಂತವಾಗಿ ಆಟೋದಲ್ಲಿ ಕುಳ್ಳಿರಿಸಿಕೊಂಡು ಜಯನಗರದ ಕಡೆಗೆ ಅಪಹರಿಸಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;&quot;ಬಟ್ಟೆ ಬಿಚ್ಚಿಕೊಂಡು ದೂರು ನೀಡುವೆ&quot;:&lt;/strong&gt;&lt;/h2&gt;&lt;p&gt;ಆಟೋದಲ್ಲಿ ಕರೆದೊಯ್ಯುವಾಗ ಲತಾ ಎಂಬಾಕೆ, &quot;ನನ್ನ ಬಟ್ಟೆಯನ್ನು ನಾನೇ ಬಿಚ್ಚಿಕೊಂಡು, ನೀನೇ ನನ್ನ ಮೇಲೆ ದೌರ್ಜನ್ಯ ಮಾಡಿದೆ ಎಂದು ದೂರು ನೀಡಿ ನಿನ್ನ ಮಾನ ಕಳೆಯುತ್ತೇನೆ&quot; ಎಂದು ಬೆದರಿಕೆ ಹಾಕಿದ್ದಾಳೆ ಎಂದು ಶಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ. ದಾರಿಯುದ್ದಕ್ಕೂ ಹಲ್ಲೆ ನಡೆಸುತ್ತಿದ್ದಾಗ ಕಿರುಚಿಕೊಂಡ ಶಾಂತರಾಜು, ಆಟೋ ನಿಲ್ಲಿಸಿದ ತಕ್ಷಣ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರ ಮೊರೆ ಹೋಗಿದ್ದಾರೆ.&lt;/p&gt;&lt;p&gt;ಒಂದೆಡೆ ಲೈಂಗಿಕ ದೌರ್ಜನ್ಯದ ಆರೋಪ, ಇನ್ನೊಂದೆಡೆ ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮತ್ತು ಕಿಡ್ನಾಪ್ ಆರೋಪ. ಇಬ್ಬರ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸರು ಪರಸ್ಪರ ಎಫ್&zwnj;ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲತಾ ನಿಜಕ್ಕೂ ಸಂತ್ರಸ್ತೆಯೇ ಅಥವಾ ವಸೂಲಿ ಗ್ಯಾಂಗ್&zwnj;ನ ಭಾಗವೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/vijayanagar-vastu-center-harassment-allegation-honey-trap-extortion-case-san/articleshow-6fr5ch9"/>
        </item>
        <item>
            <title><![CDATA[ಬೆಂಗಳೂರು: ಪ್ರೀತಿ ನಿರಾಕರಿಸಿದ ಹಿಂದೂ ಮಾಡೆಲ್‌ಗೆ ಹಿಗ್ಗಾ ಮುಗ್ಗಾ ಥಳಿಸಿದ ಜುಹೇದ್!]]></title>
            <link>https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug</link>
            <guid isPermaLink="true">https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug</guid>
            <pubDate>Thu, 16 Apr 2026 11:34:47 +0530</pubDate>
            <description><![CDATA[ಬೆಂಗಳೂರಿನ ಪುಲಕೇಶಿನಗರದಲ್ಲಿ, ಮದುವೆ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕೆ ಒಡಿಶಾ ಮೂಲದ ಯುವತಿ ಮತ್ತು ಆಕೆಯ ಸ್ನೇಹಿತೆಯ ಮೇಲೆ ಜುಹೇದ್ ಎಂಬಾತ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpae6a4kh0jfwa7qfjd8myxs,imgname-bengaluru-model-assault-case-1776319408274.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹಿಂದೂ ಯುವತಿ ಮದುವೆ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಪುಲಕೇಶಿನಗರ ಪೊಲೀಸರು ಜುಹೇದ್ (30) ಎಂಬಾತನನ್ನು ಬಂಧಿಸಿದ್ದಾರೆ. ಒಡಿಶಾ ಮೂಲದ ಯುವತಿ ಹಾಗೂ ಆಕೆಯ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿದ ಆರೋಪ ಇದ್ದು ಈತನ ಮೇಲೆ ದೂರು ದಾಖಲಿಸಲಾಗಿದೆ.&lt;/p&gt;&lt;p&gt;ದೂರುದಾರ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಆಕೆ ತನ್ನ ಸ್ನೇಹಿತೆಯೊಂದಿಗೆ ಪುಲಕೇಶಿನಗರ ಪ್ರದೇಶದಲ್ಲಿ ವಾಸವಾಗಿದ್ದಳು. ಇದೇ ವೇಳೆ ಆರೋಪಿ ಜುಹೇದ್ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಒಂದೇ ಪ್ರಾಜೆಕ್ಟ್&zwnj;ನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಇವರಿಬ್ಬರಿಗೂ ಪರಿಚಯವಾಗಿತ್ತು.&lt;/p&gt;&lt;h2&gt;ಮದುವೆಯಾಗುವಂತೆ ಒತ್ತಾಯ ಒಪ್ಪದ್ದಕ್ಕೆ ಹಲ್ಲೆ&lt;/h2&gt;&lt;p&gt;ಆ ಪರಿಚಯದ ಬಳಿಕ ಜುಹೇದ್, 2024ರಿಂದ ಯುವತಿಯ ಹಿಂದೆ ಬಿದ್ದು ಮದುವೆಯಾಗುವಂತೆ ಒತ್ತಾಯ ಮಾಡುತ್ತಿದ್ದನೆಂದು ಯುವತಿ ಆರೋಪಿಸಿದ್ದು, ನನ್ನ ಬಳಿ ಅದಕ್ಕೆ ಸಾಕ್ಷಿ ಇದೆ ಎಂದು ವಿಡಿಯೋ ಬಿಡುಗಡೆ ಮಾಡಿ ಆರೋಪಿಸಿದ್ದಾಳೆ. ಯಾವಾಗ ಜುಹೇದ್&zwnj; ನನ್ನು ಮದುವೆಯಾಗಲು ನಿರಾಕರಿಸಿದಳೋ ಅಂದಿನಿಂದ ಆಕೆಗೆ ಪ್ರಾಣ ಬೆದರಿಕೆ ಹಾಕುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಸ್ನೇಹಿತೆ ಮೇಲೂ ಹಲ್ಲೆ ನಡೆಸಿದ ಆರೋಪಿ&lt;/h2&gt;&lt;p&gt;ಇತ್ತೀಚೆಗೆ ಆರೋಪಿ ತನ್ನ ಡಿಪಿಯಲ್ಲಿ ಕೂಡ ಯುವತಿಯ ಫೋಟೋವನ್ನು ಹಾಕಿಕೊಂಡಿದ್ದನಂತೆ. ಇದನ್ನು ಪ್ರಶ್ನಿಸಲು ಮಂಗಳವಾರ ಯುವತಿ ತನ್ನ ಸ್ನೇಹಿತೆಯೊಂದಿಗೆ ಆರೋಪಿ ಮನೆಯ ಬಳಿ ತೆರಳಿದ್ದಳು. ಈ ವೇಳೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿ, ಆರೋಪಿ ಇಬ್ಬರ ಮೇಲೂ ಥಳಿಸಿ ರಕ್ತ ಬರುವಂತೆ ಹೊಡೆದಿದ್ದಾನೆ.&lt;/p&gt;&lt;p&gt;ಈ ಸಂಬಂಧ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪುಲಕೇಶಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಕ್ಷಣವೇ ಆರೋಪಿ ಜುಹೇದ್ ಅನ್ನು ಬಂಧಿಸಿದ್ದಾರೆ. ತನಿಖೆ ಮುಂದುವರಿಸಲಾಗಿದೆ. ಈ ಘಟನೆ ನಗರದಲ್ಲಿ ಮಹಿಳೆಯರ ಮೇಲಿನ ಹಲ್ಲೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಕಾಳಜಿ ಹೆಚ್ಚಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-model-assaulted-by-man-who-refused-marriage-proposal-arrested-after-complaint-gdp/articleshow-7oileug"/>
        </item>
        <item>
            <title><![CDATA[TCS Love Jihad ಬೇಧಿಸಲು ಟಾಯ್ಲೆಟ್​ ತೊಳೆದ ಪೊಲೀಸರು! ಹಿಂದೂಗಳ ಬುರ್ಖಾ ಸೆಲ್ಫಿ- ಸಿನಿಮಾ ಮೀರಿಸೋ ಸ್ಟೋರಿ]]></title>
            <link>https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</link>
            <guid isPermaLink="true">https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns</guid>
            <pubDate>Thu, 16 Apr 2026 20:28:00 +0530</pubDate>
            <description><![CDATA[ನಾಸಿಕ್&zwnj;ನ ಟಾಟಾ ಕನ್ಸಲ್ಟೆನ್ಸಿ (ಟಿಸಿಎಸ್) ಕಚೇರಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮಹಿಳಾ ಕಾನ್ಸ್&zwnj;ಟೇಬಲ್&zwnj;ಗಳು ಹೌಸ್ ಕೀಪಿಂಗ್ ಸಿಬ್ಬಂದಿಯ ಮಾರುವೇಷದಲ್ಲಿ ಸಾಕ್ಷ್ಯ ಸಂಗ್ರಹಿಸಿ, ಹಿಂದೂ ಯುವತಿಯರನ್ನು ಮತಾಂತರಕ್ಕೆ ಪ್ರೇರೇಪಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಜಾಲದ ಕಿಂಗ್&zwnj;ಪಿನ್ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpbcqyxhb77ezfwdqc1esy7v,imgname-love-jihad-1776351443889.jpg" type="image/jpeg" height="390" width="690"/>
            <content:encoded><![CDATA[&lt;p&gt;ಲವ್​ ಜಿಹಾದ್​ ಎನ್ನೋದು ಇದೀಗ ಭಾರಿ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ದಿ ಕೇರಳ ಸ್ಟೋರಿಯಲ್ಲಿ ತೋರಿದ ಪ್ರತಿಯೊಂದು ಅಂಶದಂತೆ, ಅದೇ ಮಾದರಿಯಲ್ಲಿ ಪ್ರತಿಯೊಂದು ಲವ್ ಜಿಹಾದ್​ (Love Jihad) ನಡೆಯುತ್ತಿದೆ. ಅದೇ ಒಬ್ಬಳು ಹುಡುಗಿ, ಅದೇ ಬುದ್ಧಿ ಇಲ್ಲದ ಹಿಂದೂ ಹುಡುಗಿಯರು, ಅದೇ ರೀತಿಯ ಬ್ರೈನ್​ ವಾಷ್​, ಅಲ್ಲೊಬ್ಬ ಸ್ಮಾರ್ಟ್​ ಹುಡುಗ, ಹುಡುಗನನ್ನು ಪರಿಚಯ ಮಾಡಿಸುವ ಅವನ ಗ್ಯಾಂಗ್​ನವರು, ಆ ಹುಡುಗನ ಶ್ರೀಮಂತಿಕೆಗೋ, ಲವ್​ ಮಾಡುವ ವಿಧಾನಕ್ಕೋ ಇನ್ನಾವುದಕ್ಕೋ ಮನಸೋಲುವ ಹಿಂದೂ ಹುಡುಗಿಯರು... ಎಲ್ಲವೂ ಸೇಮ್​ ಟು ಸೇಮ್​. ಅದೂ ಸೋ ಕಾಲ್ಡ್​ ಎಜುಕೇಟೆಡ್​ ಎನ್ನುವ ಹುಡುಗಿಯರು ಎನ್ನುವುದು ಮಾತ್ರ ತೀವ್ರ ಅಚ್ಚರಿ ತರುವಂಥ ಹಾಗೂ ಅಷ್ಟೇ ನಿಗೂಢವಾಗಿರುವ ವಿಷಯವಾಗಿದೆ.&lt;/p&gt;&lt;h2&gt;&lt;strong&gt;ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​&lt;/strong&gt;&lt;/h2&gt;&lt;p&gt;ಇದೀಗ ಮಹಾರಾಷ್ಟ್ರದ ನಾಸಿಕ್​ನಲ್ಲಿ ಟಾಟಾ ಕನ್ಸಲ್​ಟೆನ್ಸಿಯ ಲವ್​ ಜಿಹಾದ್​ ಪ್ರಕರಣ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹಿಂದೂ ಅಪ್ಪ-ಅಮ್ಮ ತಮ್ಮ ಹೆಣ್ಣುಮಕ್ಕಳು ಉದ್ಯೋಗಕ್ಕೇ ಕಳುಹಿಸಲು ಬೆದರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕಿಂಗ್​ಪಿನ್​ ನಿದಾ ಖಾನ್​ (Nida Khan- Love Jihad). ಅಷ್ಟಕ್ಕೂ ಈ ಪ್ರಕರಣವನ್ನು ಭೇದಿಸಲು ಪೊಲೀಸರು ಸಿನಿಮಾ ಸ್ಟೋರಿಯನ್ನೂ ಮೀರುವ ರೀತಿಯಲ್ಲಿ ಕಾರ್ಯಾಚರಣೆ ಮಾಡಿರುವ ಸಂಗತಿ ಇದೀಗ ಬಯಲಿದೆ ಬಂದಿದೆ.&lt;/p&gt;&lt;h3&gt;&lt;strong&gt;ಪೊಲೀಸರು ಮಾಡಿದ್ದೇನು?&lt;/strong&gt;&lt;/h3&gt;&lt;p&gt;ಮೊದಲಿಗೆ ನಾಲ್ಕು ಜನ ಫೀಮೇಲ್ ಕಾನ್​ಸ್ಟೆಬಲ್​ಗಳನ್ನು ಟಿಸಿಎಸ್ ನ ಒಳಗಡೆ ಕೆಲಸಕ್ಕೆ ಅಂತ ಸೇರಿಸಿದರು, ಅದೂ ಮಾರುವಷದಲ್ಲಿ. ಹೌಸ್ ಕೀಪಿಂಗ್ ಕೆಲಸವದು. ಅಷ್ಟಕ್ಕೂ ಈ ಕಂಪೆನಿಯಲ್ಲಿ ಜಾಬ್ ತಗೊಳ್ಬೇಕು ಅಂತಂದ್ರೆ ಅದಕ್ಕೆ ಅದರದೇ ಆದ ಕ್ವಾಲಿಫಿಕೇಶನ್ ಇರುತ್ತದೆ. ಆದರೆ ಹೌಸ್​ ಕೀಪಿಂಗ್​ ಔಟ್​ ಸೋರ್ಸ್​ ಮಾಡುವ ಕಾರಣ ಆ ಏಜೆನ್ಸಿಗೆ ಹೋದ ಪೊಲೀಸರು ನಮ್ಮವರು ನಾಲ್ಕು ಜನ ಅಲ್ಲಿ ಕೆಲಸಕ್ಕೆ ಕಳಿಸಿ ಎಂದರು. ಪಾಪ ಅಲ್ಲಿ ಅವರ ಕೆಲಸ ಕಸ ಗುಡಿಸುವುದು, ಟಾಯ್ಲೆಟ್ ಕ್ಲೀನ್ ಮಾಡುವುದು, ನೆಲ ಒರೆಸುವುದು, ಕಾಫಿ ಟೀ ಕೊಡುವುದು ಇತ್ಯಾದಿ.&lt;/p&gt;&lt;p&gt;ಕೊನೆಗೆ ಒಂದೊಂದೇ ಸಾಕ್ಷ್ಯ ಸಂಗ್ರಹ ಮಾಡಿದರು. ಅಲ್ಲಿಯ ಲವ್​ ಜಿಹಾದ್​ನ ದೊಡ್ಡ ಪ್ರಪಂಚವೇ ತೆರೆದುಕೊಂಡಿತು. ಒಂದೊಂದೇ ಸಾಕ್ಷ ಸಂಗ್ರಹ ಮಾಡಿದ ಬಳಿಕ ಕೊನೆಗೆ ಒಬ್ಬ ಸಿಕ್ಕ. ಪೊಲೀಸರು ಅವನನ್ನು ಅರೆಸ್ಟ್ ಮಾಡಿಕೊಂಡು ಬಂದರು. ಅವನು ನನಗೇನೂ ಗೊತ್ತಿಲ್ಲ ಎಂದ, ಇನ್ನೊಬ್ಬನ ಹೆಸರು ಹೇಳಿದ. ಅವನ ಮೊಬೈಲ್ ತೆಗೆದರೆ ಹಿಂದೂ ಹುಡುಗಿಯರು ಹಿಜಾಬ್ ಹಾಕೊಂಡು ನಿಕಾಬ್ ಹಾಕೊಂಡು ಕಳಿಸಿರುವ ಫೋಟೋಗಳು ಸೆಲ್ಫಿಗಳು ಅವನ ಮೊಬೈನ್​ನಲ್ಲಿ ಕಂಡವು. ಹಿಂದೂ ಹುಡುಗಿಯರನ್ನು ಮರಳು ಮಾಡುವ ಹಿಂದೆ ನಿದಾ ಖಾನ್ ಕೈವಾಡ ಇರುವುದು ತಿಳಿಯಿತು. ಪೊಲೀಸರು ತನ್ನ ಚೇಲಾಗಳನ್ನು ಅರೆಸ್ಟ್​ ಮಾಡುತ್ತಿದ್ದಂತೆಯೇ ಆಕೆ ಎಸ್ಕೇಪ್​ ಆಗಿದ್ದಾಳೆ.&lt;/p&gt;&lt;h3&gt;&lt;strong&gt;ಬುರ್ಖಾ ನಮಾಜ್​&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಈ ಹಿಂದೂ ಹುಡುಗಿಯರು ಇವರ ಬಲೆಗೆ ಬಿದ್ದು, ಮನೆಯಲ್ಲಿ ಯಾರಿಗೂ ತಿಳಿಯದಂತೆ ಬುರ್ಖಾ ಹಾಕಿಕೊಂಡು ನಮಾಜ್​ ಮಾಡುತ್ತಾ, ತಾನು ಇದೆಲ್ಲಾ ಮಾಡುತ್ತಿದ್ದೇನೆ ಎಂದು ಈ ಅರೆಸ್ಟ್​ ಆದ ಆಸಾಮಿಗೆ ಫೋಟೋ ಕಳಿಸುತ್ತಿದ್ದುದು ತಿಳಿಯಿತು. ಇವೆಲ್ಲರೂ ಶ್ರೀಮಂತ ಮನೆತನದವರಾಗಿದ್ದರಿಂದ ಅವರಿಗೇ ಆದ ಸೆಪೆರೇಟ್​ ರೂಮ್​ಗಳು ಇರುತ್ತಿದ್ದುದರಿಂದ ಅಪ್ಪ-ಅಮ್ಮನಿಗೆ ತಮ್ಮ ಮಗಳು ಹೀಗೆಲ್ಲಾ ಮಾಡುತ್ತಿದ್ದಾಳೆ ಎನ್ನೋದು ಅರಿವೇ ಇರಲಿಲ್ಲ. ಕೊನೆಗೆ ಒಬ್ಬಳ ಪೋಷಕರಿಗೆ ಮಗಳ ಸ್ವಭಾವದ ಬಗ್ಗೆ ಡೌಟ್​ ಬರುತ್ತಲೇ ವಿಷಯ ಬೆಳಕಿಗೆ ಬಂದು, ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;p&gt;ನಿದಾ ಖಾನ್​ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದಾಳೆ. ಅದು ಎಷ್ಟು ವ್ಯವಸ್ಥಿತ ಪ್ರದೇಶ ಎಂದರೆ ಎಲ್ಲರೂ ಮುಸ್ಲಿಂಮರು, ಎಲ್ಲರೂ ಬುರ್ಖಾ ಹಾಕಿಕೊಂಡವರು. ಆದ್ದರಿಂದ ಪೊಲೀಸರಿಗೆ ಅವಳನ್ನು ಹಿಡಿಯುವುದೇ ದೊಡ್ಡ ತಲೆನೋವಾಗಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/tcs-love-jihad-case-lady-police-in-guise-of-house-keepers-suc/articleshow-7s2s2ns"/>
        </item>
        <item>
            <title><![CDATA[TCS ಕಂಪೆನಿ Love Jihad ರಾಣಿ ನಿದಾ ಖಾನ್​ಗೆ ದೆಹಲಿ ಬಾಂಬ್​ಬ್ಲಾಸ್ಟ್​ ಲಿಂಕ್​? ಏನಿದು ಸ್ಫೋಟಕ ಮಾಹಿತಿ]]></title>
            <link>https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2</link>
            <guid isPermaLink="true">https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2</guid>
            <pubDate>Thu, 16 Apr 2026 17:10:14 +0530</pubDate>
            <description><![CDATA[&lt;p&gt;ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb19bwy2h5habv6a7yg5vq8,imgname-nida-khan-1776339431326.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕಾರ್ಪೊರೇಟ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ಮಾನವ ಸಂಪನ್ಮೂಲ ಅಧಿಕಾರಿ ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ. ಇದೀಗ ಈಕೆಯ ಕೈವಾಡ ದೆಹಲಿಯ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲೂ ಇರಬಹುದೆಂಬ ಆತಂಕಕಾರಿ ವರದಿ ಬಂದಿದೆ. ಏನಿದು ಕೇಸ್​?&lt;/p&gt;&lt;img&gt;&lt;p&gt;ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು ಉದ್ಯೋಗಕ್ಕೆ ಬಿಡಲು ಹೆದರುವ ಸ್ಥಿತಿ ನಿರ್ಮಾಣ ಆಗಿರುವ ಆತಂಕಕಾರಿ ಘಟನೆ ನಡೆಯುತ್ತಿದೆ. ಎಜುಕೇಟೆಡ್​ ಎನ್ನಿಸಿಕೊಂಡಿರುವ ಹೆಣ್ಣುಮಕ್ಕಳ ಬ್ರೈನ್​ವಾಷ್​ ಮಾಡಿ ಲವ್​ಜಿಹಾದ್​ಗೆ ಬಳಸಿಕೊಂಡು, ಅವರ ಬಾಳನ್ನು ನರಕ ಮಾಡುತ್ತಿರುವ TCS ಕಾರ್ಪೋರೇಟ್ ಕಂಪೆನಿ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ದೇಶ ಬೆಚ್ಚಿಬಿದ್ದಿದೆ. ಇದರ ರೂವಾರಿಯೇ ನಿದಾ ಖಾನ್​.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ನಾಸಿಕ್&zwnj;ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (TCS) ಕಂಪನಿಯಲ್ಲಿ ನಡೆದಿರುವ ಅತೀ ದೊಡ್ಡ ಕಾರ್ಪೋರೇಟ್ ಜಿಹಾದ್ ಪ್ರಕರಣದಲ್ಲಿ ಈಗಾಗಲೇ 6 ಟೀಮ್ ಲೀಡರ್ಸ್ ಅರೆಸ್ಟ್ ಆಗಿದ್ದಾರೆ. ಇದರ ಬೆನ್ನಲ್ಲೇ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (HR) ನಿದಾ ಖಾನ್ ತಲೆಮರೆಸಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಇದರ ಬೆನ್ನಲ್ಲೇ ಇದೀಗ ಶಾಕಿಂಗ್​ ಎನ್ನುವಂಥ ಘಟನೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ದೆಹಲಿಯಲ್ಲಿ ಕಳೆದ ವರ್ಷ ನಡೆದಿರುವ ಕೆಂಪು ಕೋಟೆ ಸ್ಫೋಟ ಪ್ರಕರಣದಲ್ಲಿ ಈಕೆಯ ಕೈವಾಡ ಇದೆ ಎನ್ನುವ ಆತಂಕಕಾರಿ ವರದಿ ಇದೀಗ ಬಂದಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಇದಾಗಲೇ ಬಂಧಿಸಲ್ಪಟ್ಟ ಡಾ. ಶಾಹೀನ್ ಶಾಹಿದ್ ಜೊತೆ ನಿದಾ ಖಾನ್​ಗೆ ಲಿಂಕ್​ ಇದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ!&lt;/p&gt;&lt;img&gt;&lt;p&gt;ಈ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಿದಾ ಖಾನ್​ ಮತ್ತು ಶಾಹೀನ್​ ಶಾಹಿದ್​ ಸಂಪರ್ಕದಲ್ಲಿ ಇರುವುದು ತಿಳಿದುಬಂದಿದ್ದರೂ, ಬಾಂಬ್​ಬ್ಲಾಸ್​​ ಕೇಸ್​ ಬಗ್ಗೆ ಇನ್ನಷ್ಟೇ ಆಳವಾದ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗ ಆರಂಭಿಕ ತನಿಖೆಯಿಂದ ಹಾಗೂ ಹಲವಾರು ಸಾಮಾಜಿಕ ಮಾಧ್ಯಮ ಪೋಸ್ಟ್&zwnj;ಗಳನ್ನು ಗಮನಿಸಿದಾಗ, ನಿದಾ ಖಾನ್ ದೆಹಲಿಯಲ್ಲಿ ಡಾ. ಶಾಹೀನ್ ಶಾಹಿದ್ ಳನ್ನು ಭೇಟಿಯಾಗಿರುವುದು ಖಚಿತವಾಗಿದೆ.&lt;/p&gt;&lt;img&gt;&lt;p&gt;ಕೆಂಪು ಕೋಟೆ ಸ್ಫೋಟ ಪ್ರಕರಣವು ರಾಷ್ಟ್ರೀಯ ಭದ್ರತಾ ಕಾಳಜಿಯನ್ನು ಒಳಗೊಂಡಿದ್ದರೆ, ನಾಸಿಕ್​ ಪ್ರಕರಣ, ಕೆಲಸದ ಸ್ಥಳದಲ್ಲಿ ಕಿರುಕುಳ, ಬಲವಂತ ಮತ್ತು ಉದ್ಯೋಗಿ ದೂರುಗಳ ಮೇಲೆ ಕ್ರಮ ಕೈಗೊಳ್ಳದಿರುವ ಆರೋಪದ ಮೇಲೆ ಕೇಂದ್ರೀಕೃತವಾಗಿದೆ. ಆದ್ದರಿಂದ ನಿದಾ ಖಾನ್ ಮತ್ತು ಡಾ. ಶಾಹೀನ್ ಶಾಹಿದ್ ನಡುವೆ ಯಾವುದೇ ನೇರ ಸಂಬಂಧದ ಅಧಿಕೃತ ದೃಢೀಕರಣವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿಯೂ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.&lt;/p&gt;&lt;img&gt;&lt;p&gt;ಲೈ0ಗಿಕ ಕಿರುಕುಳ, ಪ್ರೀತಿ ಹಾಗೂ ಮೋಸ, ಅತ್ಯಾ**ರ, ಮತಾಂತರ ಸೇರಿದಂತೆ 6ಕ್ಕೂ ಹೆಚ್ಚು ಎಫ್ಐಆರ್ ದಾಖಲಾಗಿದೆ. ಈ ಎಲ್ಲಾ ಪ್ರಕರಣಗಳ ಹಿಂದಿನ ಪ್ರಮುಖ ಆರೋಪಿಗಳ ಪೈಕಿ ಹೆಚ್ಆರ್ ನಿದಾ ಖಾನ್ ಕೂಡ ಒಬ್ಬರು. ಟಿಸಿಎಸ್ ಕಂಪನಿಯಲ್ಲಿ ತಮ್ಮ ಸಮುದಾಯದವರಿಗೆ ಅರ್ಹತೆ ಇಲ್ಲದಿದ್ದರೂ ಅವಕಾಶ ನೀಡುತ್ತಿದ್ದ ನಿಧಾ ಖಾನ್ ಬಳಿಕ ಲವ್ ಜಿಹಾದ್&zwnj;ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/women/what-is-nida-khans-connection-with-the-delhi-red-fort-blast-case-as-tcs-nashik-suc-8fr8ln2"/>
        </item>
        <item>
            <title><![CDATA[ಉಟ್ಟ ಬಟ್ಟೆಯಲ್ಲಿ 3 ದಿನ ಕಳೆದ ವಿನಯ್ ಕುಲಕರ್ಣಿ & ಗ್ಯಾಂಗ್; ಬಟ್ಟೆ ಬದಲಿಸಲು ಅನುಮತಿ ಕೇಳಿ ಕಣ್ಣೀರಿಟ್ಟ ಕೊಲೆಗಾರರು!]]></title>
            <link>https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b</link>
            <guid isPermaLink="true">https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b</guid>
            <pubDate>Fri, 17 Apr 2026 17:07:56 +0530</pubDate>
            <description><![CDATA[&lt;p&gt;ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದ ಅಂತಿಮ ತೀರ್ಪು ನೀಡುವುದಕ್ಕೆ ಮೂರು ದಿನಗಳ ಕಾಲ ಕೋರ್ಟ್ ವಿಚಾರಣೆ ನಡೆಸಿ, ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ. ಇದರ ಬೆನ್ನಲ್ಲೇ ಅಪರಾಧಿಗಳು ಬಟ್ಟೆ ಬದಲಿಸಿ 3 ದಿನಗಳಾಗಿದ್ದು, ಬಟ್ಟೆ ಬದಲಿಸಲು ಅವಕಾಶಕ್ಕೆ ಮನವಿ ಮಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdkegv1hjw084hcqkre1n9r,imgname-vinay-kulkarni-in-jail-1776425583457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಧಾ&lt;/strong&gt;ರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಜನರ ಗ್ಯಾಂಗ್&zwnj;ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ವೇಳೆ ಕಣ್ಣೀರಿಟ್ಟ ಎಲ್ಲ ಅಪರಾಧಿಗಳು ಕಳೆದ ಮೂರು ದಿನಗಳಿಂದ ಕೋರ್ಟ್ ವಿಚಾರಣೆಗೆ ಬಂದು ಒಂದೇ ಬಟ್ಟೆಯಲ್ಲಿದ್ದಾರೆ. ಅವರಿಗೆ ಬಟ್ಟೆಯನ್ನು ಬದಲಾವಣೆಗೆ ಅವಕಾಶ ಮಾಡಿಕೊಡಿ ಎಂದು ವಕೀಲರು ಮನವಿ ಮಾಡಿದ್ದಾರೆ.&lt;/p&gt;&lt;p&gt;ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯ ದೇವತೆ ಅಂತಿಮ ತೀರ್ಪು ನೀಡಿದ್ದಾಳೆ. ಪ್ರಭಾವಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಬೆನ್ನಲ್ಲೇ, ಈಗ ಅಪರಾಧಿಗಳು 3 ದಿನಗಳ ಕಾಲ ಜೈಲಿನಲ್ಲಿ ಕಳೆದ ಸ್ಥಿತಿ ಹೇಗಿತ್ತು ಎಂಬ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಮೂರು ದಿನದಿಂದ ಒಂದೇ ಬಟ್ಟೆಯಲ್ಲಿ ಅಪರಾಧಿಗಳು!&lt;/strong&gt;&lt;/h2&gt;&lt;p&gt;ಪ್ರಕರಣದ ತೀರ್ಪು ಪ್ರಕಟವಾದ ದಿನದಿಂದಲೂ ಅಂದರೆ ಕಳೆದ ಮೂರು ದಿನಗಳಿಂದ ಅಪರಾಧಿಗಳು ಒಂದೇ ಬಟ್ಟೆಯಲ್ಲಿದ್ದಾರೆ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದೆ. ಏಪ್ರಿಲ್ 15 ರಂದು ನ್ಯಾಯಾಲಯವು ಇವರನ್ನು ದೋಷಿಗಳೆಂದು ಘೋಷಿಸಿ ವಶಕ್ಕೆ ಪಡೆದ ಕ್ಷಣದಿಂದಲೂ ಇವರು ಬಟ್ಟೆ ಬದಲಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧಿಗಳ ಪರ ವಕೀಲರು ನ್ಯಾಯಾಲಯಕ್ಕೆ ವಿಶೇಷ ಮನವಿ ಸಲ್ಲಿಸಿದ್ದಾರೆ. 'ಅಪರಾಧಿಗಳು ಕಳೆದ ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿದ್ದು, ಅವರಿಗೆ ಬಟ್ಟೆ ಬದಲಿಸಲು ಹಾಗೂ ಅಗತ್ಯ ವೈಯಕ್ತಿಕ ವಸ್ತುಗಳನ್ನು ಬಳಸಲು ಅವಕಾಶ ನೀಡಬೇಕು' ಎಂದು ಕೋರಿದರು. ಈ ಮನವಿಯನ್ನು ಆಲಿಸಿದ ನ್ಯಾಯಾಧೀಶರು, ಜೈಲು ಮ್ಯಾನುವಲ್ (Jail Manual) ಪ್ರಕಾರ ನಿಯಮಾನುಸಾರ ಬಟ್ಟೆ ಬದಲಾವಣೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಶಿಕ್ಷೆಯ ವಿವರ ಮತ್ತು ದಂಡದ ಮೊತ್ತ:&lt;/strong&gt;&lt;/h3&gt;&lt;p&gt;ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದ್ದಾರೆ. ಹತ್ಯೆಯ ಸಂಚು ರೂಪಿಸಿದ 15ನೇ ಆರೋಪಿ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪೊಲೀಸ್ ಇನ್ಸ್&zwnj;ಪೆಕ್ಟರ್ ಆಗಿದ್ದ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದ ಅಪರಾಧಿಗಳಿಗೆ ಒಟ್ಟು 16 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಮೃತ ಯೋಗೇಶ್ ಗೌಡ ಅವರ ಮಕ್ಕಳಿಗೆ ಮತ್ತು ಸಹೋದರ ಗುರುನಾಥ್ ಗೌಡ ಅವರಿಗೆ ಪರಿಹಾರವಾಗಿ ನೀಡಲು ನ್ಯಾಯಾಲಯ ಆದೇಶಿಸಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h2&gt;&lt;p&gt;2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಜಿಮ್&zwnj;ನಲ್ಲಿ ಯೋಗೇಶ್ ಗೌಡ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದರೂ, ನಂತರ ಪ್ರಕರಣವು ಸಿಬಿಐ ಕೈಗೆ ಹಸ್ತಾಂತರವಾಯಿತು. ಸುಮಾರು 8 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ 17 ಮಂದಿ ಅಪರಾಧಿಗಳು ಎಂದು ಸಾಬೀತಾಗಿದೆ. ಸಿಬಿಐ ಪರ ವಕೀಲರು ಈ ಪ್ರಕರಣವನ್ನು &quot;ಅಪರೂಪದಲ್ಲಿ ಅಪರೂಪದ ಪ್ರಕರಣ&quot; ಎಂದು ಪರಿಗಣಿಸಿ ಗರಿಷ್ಠ ಶಿಕ್ಷೆ ನೀಡಬೇಕೆಂದು ವಾದಿಸಿದ್ದರು.&lt;/p&gt;&lt;h3&gt;&lt;strong&gt;ಯಾರ ಮೇಲೆ ಯಾವ ಸೆಕ್ಷನ್?&lt;/strong&gt;&lt;/h3&gt;&lt;p&gt;ನ್ಯಾಯಾಲಯವು ಐಪಿಸಿ ಸೆಕ್ಷನ್ 302 (ಕೊಲೆ), 120 ಬಿ (ಅಪರಾಧಿಕ ಒಳಸಂಚು), 201 (ಸಾಕ್ಷ್ಯ ನಾಶ) ಸೇರಿದಂತೆ ಅಕ್ರಮ ಕೂಟ ಮತ್ತು ಗಲಭೆ ಎಸಗಿದ ಆರೋಪದಡಿ ಶಿಕ್ಷೆ ವಿಧಿಸಿದೆ. ವಿಶೇಷವೆಂದರೆ, 19ನೇ ಆರೋಪಿಯಾಗಿದ್ದ ಇನ್ಸ್&zwnj;ಪೆಕ್ಟರ್ ಚನ್ನಕೇಶವ ಅವರು ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ತಪ್ಪು ದಾಖಲೆ ಸೃಷ್ಟಿಸಿ ಅಪರಾಧಿಗಳಿಗೆ ಸಹಾಯ ಮಾಡಿದ ಕಾರಣಕ್ಕಾಗಿ ಸೆಕ್ಷನ್ 218ರ ಅಡಿ ಶಿಕ್ಷೆಗೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದ್ದು, ಇನ್ನಿಬ್ಬರನ್ನು ಮಾಫಿ ಸಾಕ್ಷಿಗಳನ್ನಾಗಿ ಮಾಡಲಾಗಿತ್ತು.&lt;/p&gt;]]></content:encoded>
            <category>crime</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/vinay-kulkarni-sentenced-to-life-imprisonment-yogesh-gowda-murder-case-final-verdict-clothes-change-request-sat/articleshow-bbcpm8b"/>
        </item>
        <item>
            <title><![CDATA[ಬೆಂಗಳೂರು: ಲಿವಿಂಗ್ ಇನ್‌ ಟುಗೆದರ್‌, ಮೋಜಿನ ಜೀವನ, ಬೀಗ ಹಾಕಿದ ಮನೆಯೇ ಟಾರ್ಗೆಟ್‌ ಮಂಡ್ಯ ರ್‍ಯಾಪಿಡೋ ಚಾಲಕನ ಕಳ್ಳತನ!]]></title>
            <link>https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</link>
            <guid isPermaLink="true">https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph</guid>
            <pubDate>Sat, 18 Apr 2026 16:51:30 +0530</pubDate>
            <description><![CDATA[ಬೆಂಗಳೂರಿನಲ್ಲಿ ಹಗಲು ಹೊತ್ತಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಚಾಲಕ ನಾಗರಾಜ್&zwnj;ನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪ್ರೇಯಸಿಯೊಂದಿಗಿನ ಮೋಜಿನ ಜೀವನಕ್ಕಾಗಿ ಈ ಕೃತ್ಯ ಎಸಗುತ್ತಿದ್ದು, ಆತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g92a9zw2r95j8wpt4ad9pfts,imgname-new-thumbnail-2022-new.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಹಗಲು ಹೊತ್ತಿನಲ್ಲೇ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ರ್&zwj;ಯಾಪಿಡೋ ಕ್ಯಾಬ್ ಚಾಲಕನನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಾಮಮೂರ್ತಿ ನಗರದ ನಿವಾಸಿ ನಾಗರಾಜ್ ಎಂದು ಗುರುತಿಸಲಾಗಿದ್ದು, ಆತನಿಂದ ಸುಮಾರು 240 ಗ್ರಾಂ ಚಿನ್ನಾಭರಣ, 89 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು 35 ಲಕ್ಷ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಜಯನಗರದ ಟಿ ಬ್ಲಾಕ್ ಪ್ರದೇಶದಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್&zwnj;ಪೆಕ್ಟರ್ ವಿಶ್ವನಾಥ್ ನೇತೃತ್ವದ ಪೊಲೀಸ್ ತಂಡ ತಾಂತ್ರಿಕ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ.&lt;/p&gt;&lt;h2&gt;ಮಂಡ್ಯ ಮೂಲದವನಿಗೆ ಕ್ರಿಮಿನಲ್ ಹಿನ್ನೆಲೆ&lt;/h2&gt;&lt;p&gt;ಮಂಡ್ಯ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಮೂಲದ ನಾಗರಾಜ್&zwnj;ಗೆ ಕ್ರಿಮಿನಲ್ ಹಿನ್ನೆಲೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ರ್&zwj;ಯಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಕಳ್ಳತನದ ದಾರಿಗೆ ತಿರುಗಿದ್ದಾನೆ. ರಾಮಮೂರ್ತಿ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.&lt;/p&gt;&lt;p&gt;ನಾಗರಾಜ್&zwnj; ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡುವುದರಲ್ಲಿ ಪರಿಣತನಾಗಿದ್ದನು. ಮನೆಯವರು ಹೊರಗೆ ತೆರಳುವ ವೇಳೆ ಗೇಟ್ ಮತ್ತು ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡಿರುವ ಮನೆಗಳನ್ನು ಗುರುತಿಸಿ, ಅವುಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಈ ರೀತಿಯಾಗಿ ಮನೆಗಳಲ್ಲಿ ಯಾರೂ ಇಲ್ಲದ ಸಮಯವನ್ನು ಸದುಪಯೋಗಪಡಿಸಿಕೊಂಡು ಆತನಿಂದ ಹಲವಾರು ಕೃತ್ಯಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.&lt;/p&gt;&lt;p&gt;ಕಳೆದ ತಿಂಗಳು ಜಯನಗರದ 4ನೇ ಹಂತದಲ್ಲಿ ವಾಸವಾಗಿರುವ ಕುಟುಂಬವೊಂದು ಮನೆ ಬಾಗಿಲಿಗೆ ಚೀಲ ಹಾಕಿ, ಗೇಟ್ ಲಾಕ್ ಮಾಡಿಕೊಂಡು ದಿನಸಿ ಖರೀದಿಗೆ ತೆರಳಿತ್ತು. ಈ ವೇಳೆ ಮನೆಯೊಳಗೆ ನುಗ್ಗಿದ ನಾಗರಾಜ್ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. ನಂತರ ಮನೆಮಂದಿ ಮರಳಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಲಿವಿಂಗ್ ಇನ್&zwnj; ಟುಗೆದರ್&zwnj;, ಮೋಜಿನ ಜೀವನಕ್ಕೆ ಕಳ್ಳತನ!&lt;/h2&gt;&lt;p&gt;ಇನ್ನು ವೈಯಕ್ತಿಕ ಜೀವನದಲ್ಲಿ, ನಾಗರಾಜ್ ತನ್ನ ಪ್ರೇಯಸಿಯೊಂದಿಗೆ ಸಹಜೀವನ (ಲಿವಿಂಗ್ ಇನ್&zwnj; ಟುಗೆದರ್&zwnj;) ನಡೆಸುತ್ತಿದ್ದನು. ಕಳ್ಳತನದ ಮೂಲಕ ಗಳಿಸಿದ ಹಣವನ್ನು ವೈಭವಯುತ ಜೀವನಕ್ಕೆ ಹಾಗೂ ಮೋಜು-ಮಸ್ತಿಗೆ ಬಳಸುತ್ತಿದ್ದನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಒಟ್ಟಾರೆ, ನಗರದಲ್ಲಿ ಹೆಚ್ಚುತ್ತಿರುವ ಮನೆಕಳ್ಳತನ ಪ್ರಕರಣಗಳ ನಡುವೆಯೇ ತಿಲಕನಗರ ಪೊಲೀಸರ ಈ ಕಾರ್ಯಾಚರಣೆ ಪ್ರಮುಖವಾಗಿದ್ದು, ಆರೋಪಿಯನ್ನು ಬಂಧಿಸುವ ಮೂಲಕ ಇನ್ನಷ್ಟು ಕೃತ್ಯಗಳನ್ನು ತಡೆಗಟ್ಟಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-rapido-driver-arrested-for-daytime-burglaries-targeting-locked-homes-gdp/articleshow-ge2l5ph"/>
        </item>
        <item>
            <title><![CDATA[ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ]]></title>
            <link>https://kannada.asianetnews.com/crime/jealous-woman-made-his-co-sisters-son-drink-acid/articleshow-glteulo</link>
            <guid isPermaLink="true">https://kannada.asianetnews.com/crime/jealous-woman-made-his-co-sisters-son-drink-acid/articleshow-glteulo</guid>
            <pubDate>Fri, 17 Apr 2026 12:29:05 +0530</pubDate>
            <description><![CDATA[ಹೈದರಾಬಾದ್&zwnj;ನಲ್ಲಿ, ಅತ್ತೆ-ಮಾವ ತನ್ನ ಮಗನಿಗಿಂತ ಓರಗಿತ್ತಿಯ ಮಗನಿಗೆ ಹೆಚ್ಚು ಪ್ರೀತಿ ತೋರುತ್ತಾರೆ ಎಂಬ ಅಸೂಯೆಯಿಂದ ಮಹಿಳೆಯೊಬ್ಬಳು ಆ ಬಾಲಕನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿ ಕೊಲ್ಲಲು ಯತ್ನಿಸಿದ್ದಾಳೆ. ಮಗು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpd3rjck5rq3thqs7qj9xas0,imgname-aunt-mix-acid-in-kids-juice-1776409135506.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು:&lt;/strong&gt;&lt;/h2&gt;&lt;p&gt;ಹೈದರಾಬಾದ್: ಒರಗಿತ್ತಿಯರ ಜಗಳವೊಂದು ಬಾಲಕನ ಜೀವಕ್ಕೆ ಎರವಾದಂತಹ ಘಟನೆ ನಡೆದಿದೆ. ಸಾಮಾನ್ಯವಾಗಿ ಸೀರಿಯಲ್&zwnj;ಗಳಲ್ಲಿ ಇಂತಹ ದೃಶ್ಯಗಳನ್ನು ನೀವು ನೋಡಿರುತ್ತಿರಿ. ಅಣ್ಣತಮ್ಮಂದಿರ ಮಕ್ಕಳೇ ದಯಾದಿಗಳಾಗೋದು, ಅವರ ನಡುವೆ ಪೋಷಕರು ಅಥವಾ ಮನೆಯ ಹಿರಿಯರು ಬೇದಭಾವ ತೋರುವುದು. ಇದರಿಂದ ಮಕ್ಕಳ ಪೋಷಕರು ಸಿಟ್ಟಿಗೆದ್ದು, ಮನೆಯ ಹಿರಿಯರು ಯಾರ ಮೇಲೆ ಹೆಚ್ಚು ಪ್ರೀತಿಸುತ್ತಾರೋ ಆ ಮಕ್ಕಳ ಕತೆಯನ್ನೇ ಮುಗಿಸುವುದಕ್ಕೆ ನೋಡುವುದು ಇಂತಹ ಘಟನೆಗಳನ್ನು ನೀವು ಸೀರಿಯಲ್&zwnj;ಗಳಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಕಡೆ ಇಂತಹದ್ದೇ ಘಟನೆಯೊಂದು ನಿಜವಾಗಿಯೂ ನಡೆದಿದ್ದು, ತನ್ನ ಓರಗಿತ್ತಿಯ ಮಗುವನ್ನು ಸಾಯಿಸುವುದಕ್ಕೆ ಯತ್ನಿಸಿದಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದ ರಾಜಧಾಣಿ ಹೈದರಾಬಾದ್&zwnj;ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಮಗುವಿಗೆ ಜ್ಯೂಸ್ ಎಂದು ಆಸಿಡ್ ಕುಡಿಸಿದ ಮಹಿಳೆಯನ್ನು ಬಂಧಿಸಲಾಗಿದೆ.&lt;/p&gt;&lt;h3&gt;&lt;strong&gt;ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/strong&gt;&lt;/h3&gt;&lt;p&gt;ಆರೋಪಿ ಹಾಗೂ ದೂರುದಾರ ಮಹಿಳೆ ಇಬ್ಬರು ಒಂದೇ ಮನೆಯಲ್ಲಿ ವಾಸಿಸುವ ಕೂಡು ಕುಟುಂಬದ ಅಣ್ಣ ತಮ್ಮಂದಿರ ಪತ್ನಿಯರಾಗಿದ್ದು, ಇಬ್ಬರಿಗೂ ಒಂದೊಂದು ಮಕ್ಕಳಿದ್ದರು. ಮನೆಯಲ್ಲಿದ್ದ ಹಿರಿಯರು ಎಂದರೆ ಅತ್ತೆ ಮಾವ ಈ ಮಕ್ಕಳಲ್ಲಿ ಬೇದಭಾವ ತೋರುತ್ತಿದ್ದರು. ಆರೋಪಿ ಮಹಿಳೆಯ ಮಗುವಿಗಿಂತ ದೂರುದಾರ ಮಹಿಳೆಯ ಮಗುವಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದರು. ಆತನನ್ನು ಹೆಚ್ಚು ಪ್ರೀತಿ ಮಾಡುತ್ತಿದ್ದರು. ಮಕ್ಕಳ ನಡುವೆ ಈ ರೀತಿ ಬೇದಭಾವ ತೋರುತ್ತಿರುವುದು, ಹಾಗೂ ತನ್ನ ಮಗುವಿನ ಬದಲು ಆ ಮಗುವಿಗೆ ಹೆಚ್ಚು ಪ್ರೀತಿ ನೀಡುವುದನ್ನು ನೋಡಿ ತಾಯಿಯ ಹೊಟ್ಟೆ ಉರಿಯಲು ಶುರುವಾಗಿತ್ತು. ಇದುವೇ ಅಸೂಯೆ ಹಾಗೂ ದ್ವೇಷವಾಗಿ ಬದಲಾಗಿದ್ದು, ಇದಕ್ಕೊಂದು ಮುಕ್ತಿ ಕಾಣಿಸಲು ತಾಯಿ ನಿರ್ಧರಿಸಿದ್ದಾಳೆ.&lt;/p&gt;&lt;h3&gt;&lt;strong&gt;ಓರಗಿತ್ತಿಯ ಮಗನಿಗೆ ಜ್ಯೂಸ್ ನೆಪದಲ್ಲಿ ಆಸಿಡ್ ಕುಡಿಸಿದ ಮಹಿಳೆ&lt;/strong&gt;&lt;/h3&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ನೀಡಿದ್ದು, ಈ ದೂರಿನಲ್ಲಿರುವ ಪ್ರಕಾರ ಆಕೆಯ ಓರಗಿತ್ತಿ ಏಪ್ರಿಲ್ 9ರಂದು ಮನೆಯ ಅಡುಗೆ ಮನೆಯಲ್ಲಿ ಮಗುವಿಗೆ ಹಣ್ಣಿನ ಜ್ಯೂಸ್&zwnj; ನೀಡುವ ನೆಪದಲ್ಲಿ ಆಸಿಡ್ ಕುಡಿಸಿ ಆತನನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಈ ಜ್ಯೂಸ್ ಕುಡಿದರೆ ಚಾಕೋಲೇಟ್ ನೀಡುವುದಾಗಿ ಆಕೆ ಹೇಳಿದ್ದಾಳೆ. ಇತ್ತ ಆಕೆಯ ಮಾತು ನಂಬಿ ಸಂಚಿನ ಅರಿವಿಲ್ಲದೇ ಮಗು ಜ್ಯೂಸ್ ಕುಡಿದಿದ್ದು, ನಂತರ ಮಗು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿಲಾಗಿದೆ. ನಂತರ ಬಾಲಕ ಚೇತರಿಸಿಕೊಂಡಿದೆ ಎಂದು ಮೆಡಿಪಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತನ್ನ ಮಗುವಿಗೆ ಮನೆಯವರ ಪ್ರೀತಿ ಸಿಗಲಿಲ್ಲವೆಂದು ಓರಗಿತ್ತಿಯ ಮಗುವಿಗೆ ಆಸಿಡ್&lt;/strong&gt;&lt;/h3&gt;&lt;p&gt;ಪೊಲೀಸರ ತನಿಖೆ ವೇಳೆ ಮಗುವಿನ ಅಜ್ಜ ಅಜ್ಜಿ ಇಬ್ಬರು ಮಕ್ಕಳ ಮಕ್ಕಳಲ್ಲಿ ಒಂದು ಮಗುವಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದಿದೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈ ಮಕ್ಕಳ ಅಜ್ಜ, ದೂರುದಾರರ ಮಗುವಿನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಇದು ಆರೋಪಿ ಮಹಿಳೆಯನ್ನು ಮತ್ತಷ್ಟು ಉರಿದು ಬೀಳುವಂತೆ ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;TCSನಲ್ಲಿ ಉದ್ಯೋಗಿಗಳ ಮತಾಂತರ ಕಿರುಕುಳ ಕೇಸ್&zwnj;: ಬಂಧನ ಭೀತಿಯಲ್ಲಿ HR ನಿದಾ ಖಾನ್; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನಿಗೆ ಅರ್ಜಿ!&lt;/strong&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Anusha Kb</dc:creator>
            <atom:link href="https://kannada.asianetnews.com/crime/jealous-woman-made-his-co-sisters-son-drink-acid/articleshow-glteulo"/>
        </item>
        <item>
            <title><![CDATA[ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?]]></title>
            <link>https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</link>
            <guid isPermaLink="true">https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq</guid>
            <pubDate>Fri, 17 Apr 2026 17:25:35 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್&zwnj;ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್&zwnj;ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jahtbgdde206k1zz4sghk5hd,imgname-fotojet---2024-10-19t124927.356.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ಸಾಗುತ್ತಿದೆ. ಅದರಲ್ಲೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ಹಾಗೆಯೇ ತವರಿನಾಚೆ ಅದ್ಭುತ ಪ್ರದರ್ಶನ ತೋರುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದೆ. ಇನ್ನು ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಬೇಕು ಎಂದು ತುದಿಗಾಲಿನಲ್ಲಿ ಅಭಿಮಾನಿಗಳು ನಿಂತಿರುತ್ತಾರೆ. ಆದರೆ ಟಿಕೆಟ್ ಆನ್&zwnj;ಲೈನ್&zwnj;ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡೌಟ್ ಆಗಿ ಬಿಡುತ್ತವೆ. ಆರ್&zwnj;ಸಿಬಿ ಫ್ರಾಂಚೈಸಿ ಹಾಗೂ ಕೆಎಸ್&zwnj;ಸಿಎ ಈ ಬಾರಿ ಐಪಿಎಲ್ ಟಿಕೆಟ್ ಮಾರಾಟದ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದು ಈಗ ಯಾಕೋ ಅಭಿಮಾನಿಗಳ ಕಿವಿ ಮೇಲೆ ಹೂವಿಟ್ಟಂತೆ ಅನಿಸಲಾರಂಭಿಸಿದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕ್ಯಾಂಟೀನ್ ಇಟ್ಟುಕೊಂಡಾತನ ಬಳಿ ರಾಶಿರಾಶಿ ಐಪಿಎಲ್ ಟಿಕೆಟ್&zwnj;ಗಳು ಪತ್ತೆಯಾಗಿದ್ದು, ಬೆಂಗಳೂರು ಸಿಸಿಬಿ ಪೊಲೀಸರು ಈ ಖದೀಮನನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಐಪಿಎಲ್ ಕಾಳಸಂತೆಯ ಟಿಕೆಟ್ ದಂಧೆ ಬಯಲಿಗೆಳೆದ ಸಿಸಿಬಿ&lt;/strong&gt;&lt;/h2&gt;&lt;p&gt;ಒಂದು ಕಡೆ ಒಂದು ಐಪಿಎಲ್ ಟಿಕೆಟ್ ಸಿಕ್ಕರೇ ಸಾಕಪ್ಪ ಎಂದು ಕಾದು ಕುಳಿತು, ಆನ್&zwnj;ಲೈನ್&zwnj;ನಲ್ಲಿ ಐಪಿಎಲ್ ಮ್ಯಾಚ್ ಟಿಕೆಟ್ ಖರೀದಿಸಲು ಸಾವಿರಾರು ಮಂದಿ ತುದಿಗಾಲಿನಲ್ಲಿ ನಿಂತಿರುತ್ತಾರೆ. ಹೀಗಿರುವಾಗಲೇ ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡುವವರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್ ನೌಕರನ ಮೂಲಕವೇ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟಕ್ಕೆ ಕೆಎಸ್&zwnj;ಸಿಎ ಸದಸ್ಯನೇ ಮುಂದಾಗಿದ್ದಾರೆ ಎಂದು ವರದಿಯಾಗಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Vishnu Prasad (@bangalorebro_)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h3&gt;&lt;strong&gt;ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ&lt;/strong&gt;&lt;/h3&gt;&lt;p&gt;ಹೌದು, ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿರುವ ಶ್ರೀ ಲಕ್ಷ್ಮಿ ಕೇಟರರ್ಸ್&zwnj;ನ 49 ವರ್ಷದ ಚಂದ್ರಶೇಖರ್ ಪಿ ಎಂಬಾತನನ್ನು ಸೆಂಟ್ರಲ್ ಕ್ರೈಮ್ ಬ್ರಾಂಚ್&zwnj;ನ ಪೊಲೀಸರ್ ಐಪಿಎಲ್ ಬ್ಲಾಕ್ ಟಿಕೆಟ್ ಮಾರಾಟ ಮಾಡುವಾಗ ರೆಡ್&zwnj; ಹ್ಯಾಂಡ್&zwnj; ಆಗಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ಆರ್&zwnj;ಸಿಬಿ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವೆ ಇತ್ತೀಚೆಗಷ್ಟೇ ನಡೆದ ಪಂದ್ಯದ ಟಿಕೆಟ್&zwnj;ಗಳನ್ನು 15,000 ದಿಂದ 19,000 ರುಪಾಯಿ ವರೆಗೆ ಒಂದು ಟಿಕೆಟ್ ಮಾರಾಟ ಮಾಡಿದ್ದಾರೆ. ಒಟ್ಟಾರೆ ಈತ 181 ಟಿಕೆಟ್&zwnj;ಗಳಿಂದ 17.52 ಲಕ್ಷ ರುಪಾಯಿ ಗಳಿಸಿದ್ದಾನೆ ಎನ್ನಲಾಗುತ್ತಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಈಗ ಕ್ಯಾಂಟೀನ್ ನೌಕರ ಸಿಕ್ಕಿಬಿದ್ದಿದ್ದು, ಇದರ ಹಿಂದಿರುವ ಕಾಣದ ಕೈಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಬೇಕಿದೆ. ಇದಷ್ಟೇ ಅಲ್ಲದೇ ಕೆಎಸ್&zwnj;ಸಿಎ ಚುನಾವಣೆ ವೇಳೆಯಲ್ಲಿ ನಾವು ಪಾರದರ್ಶಕತೆ ಕಾಯ್ದುಕೊಳ್ಳುತ್ತೇವೆ ಎಂದು ಪುನರುಚ್ಚಿಸುತ್ತಲೇ ಬಂದಿರುವ ಕೆಎಸ್&zwnj;ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಈ ಬಗ್ಗೆ ಏನ್ ಹೇಳ್ತಾರೆ ಕಾದು ನೋಡಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rcb-ipl-ticket-black-market-busted-ccb-arrests-man-near-m-chinnaswamy-stadium-kvn/articleshow-kdi7oeq"/>
        </item>
        <item>
            <title><![CDATA[ದಾಬಸ್‍ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾಳ ತಲೆಬುರುಡೆ ಪತ್ತೆ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕೊನೆಯ ದೃಶ್ಯ !]]></title>
            <link>https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u</link>
            <guid isPermaLink="true">https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u</guid>
            <pubDate>Fri, 17 Apr 2026 07:56:59 +0530</pubDate>
            <description><![CDATA[ದಾಬಸ್&zwj;ಪೇಟೆ ಬಳಿ ನಾಪತ್ತೆಯಾಗಿದ್ದ ಯಮುನಾ ಎಂಬ ಮಹಿಳೆಯ ತಲೆಬುರುಡೆ ಮತ್ತು ಮೂಳೆಗಳು ಪತ್ತೆಯಾಗಿವೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದು, ಸಿಸಿ ಕ್ಯಾಮೆರಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpckzvjyv16s1vfp6mrtymt6,imgname-----------------------2026-04-17t074554.140-1776392597086.jpg" type="image/jpeg" height="390" width="690"/>
            <content:encoded><![CDATA[&lt;p&gt;ಬುರುಡೆ, ಮೂಳೆ, ಬ್ಯಾಗ್, ಕಂಪನಿಯ ಐಡಿ ಕಾರ್ಡ್ ಪತ್ತೆ । ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ&lt;/p&gt;&lt;p&gt;&lt;strong&gt;&amp;nbsp;ದಾಬಸ್&zwj;ಪೇಟೆ (ಏ.17): &amp;nbsp;&lt;/strong&gt;ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕಳೆಬರ ಪತ್ತೆಯಾಗಿರುವ ಘಟನೆ ದಾಬಸ್&zwj;ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;ತುಮಕೂರು ಜಿಲ್ಲೆಯ ಕ್ಯಾತ್ಸಂದ್ರದ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದ ಯಮುನಾ (38) ಮೃತಪಟ್ಟ ಮಹಿಳೆಯಾಗಿದ್ದು, ಹಳೆನಿಜಗಲ್ ಬಳಿಯಿರುವ ರಿಲಯನ್ಸ್ ಕಂಪನಿಯಲ್ಲಿ ಕಳೆದ ಆರೇಳು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದರು. ಮಹಿಳೆ ಮಲ್ಲಿಕಾರ್ಜುನ್ ಎಂಬುವವರ ಜೊತೆ 19 ವರ್ಷದ ಹಿಂದೆ ವಿವಾಹವಾಗಿದ್ದರು. ಈಕೆಗೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಈಕೆಯ ತಲೆಬುರುಡೆ, ಬ್ಯಾಗ್, ಬಟ್ಟೆಯು ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ- 48ರ ರಸ್ತೆಪಕ್ಕದ ಜಮೀನಿನಲ್ಲಿ ಪತ್ತೆಯಾಗಿದೆ.&lt;/p&gt;&lt;h2&gt;ಘಟನಾ ಹಿನ್ನೆಲೆ:&lt;/h2&gt;&lt;p&gt;ಮೃತ ಯಮುನಾ ಕಳೆದ ಮಾ.21ರಂದು ಕೆಲಸಕ್ಕೆ ಬಂದಿದ್ದು, ನಂತರ ಮನೆಗೆ ವಾಪಾಸ್ಸು ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮೃತಳ ಪತಿ ಮಲ್ಲಿಕಾರ್ಜುನ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.&lt;/p&gt;&lt;p&gt;ನಂದಿಹಳ್ಳಿ ಗ್ರಾಮದ ಉಮೇಶ್ ಎಂಬುವವರು ತನ್ನ ಜಮೀನಿನಲ್ಲಿ ದೇವರ ಕಲ್ಲುಗಳಿದ್ದು, ಅದನ್ನು ಪೂಜಿಸಲು ಬಂದಾಗ ತಲೆಬುರುಡೆ ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ತಲೆಬುರುಡೆ, ಮೂಳೆ, ಬ್ಯಾಗ್, ಬಟ್ಟೆ ಪತ್ತೆ:&lt;/h3&gt;&lt;p&gt;ಘಟನಾ ಸ್ಥಳಕ್ಕೆ ದಾಬಸ್&zwj;ಪೇಟೆ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ತಲೆಬುರುಡೆ, ಕಾಲಿನ ಮೂಳೆಗಳು, ಬ್ಯಾಗ್, ವಾಟರ್ ಬಾಟಲ್, ಕಂಪನಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಮಹಿಳೆಯ ಗುರುತು ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಅನೈತಿಕ ಸಂಬಂಧದ ಶಂಕೆ:&lt;/strong&gt;&lt;/p&gt;&lt;p&gt;ಮೃತಳಿಗೆ ಗಂಡನ ತವರೂರಾದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಆತನ ಜೊತೆ ಆರೇಳು ವರ್ಷ ಸಂಸಾರ ನಡೆಸಿ ನಂತರ ಗಂಡನ ಮನೆಗೆ ವಾಪಾಸ್ಸು ಬಂದಿದ್ದರು. ಆದಾದ ಮೇಲೂ ರಾಘವೇಂದ್ರ ಈಕೆಗೆ ಮತ್ತೆ ನನ್ನ ಜೊತೆ ಬಂದು ಸಂಸಾರ ನಡೆಸುವಂತೆ ಕಿರುಕುಳ ಕೊಡುವುದಲ್ಲದೆ ನನ್ನ ಜೊತೆ ಬಾರದಿದ್ದರೆ ನಿನ್ನ ಗಂಡ, ಮಕ್ಕಳು ಸೇರಿದಂತೆ ನಿನ್ನನ್ನು ಸಾಯಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h3&gt;ಕೊಲೆ ಮಾಡಿರುವ ಶಂಕೆ:&lt;/h3&gt;&lt;p&gt;ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;&lt;p&gt;ರಸ್ತೆ ಪಕ್ಕದಲ್ಲೇ ಇರುವ ಜಮೀನಿಗೆ ಇಬ್ಬರೂ ಹೋಗಿದ್ದು ಅಲ್ಲಿ ಮೃತ ಯುಮುನಾ ಹಾಗೂ ರಾಘವೇಂದ್ರನ ನಡುವೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ರಾಘವೇಂದ್ರ ಆಕೆಯನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದು, ನಾಪತ್ತೆಯಾಗಿರುವ ರಾಘವೇಂದ್ರನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್ ಗಳಾದ ಭರತ್ ಗೌಡ, ಗಿರೀಶ್, ನರೇಂದ್ರಬಾಬು, ಸಬ್ ಇನ್ಸ್ ಪೆಕ್ಟರ್ ಗಳಾದ ಸಿದ್ದಪ್ಪ, ದಿವ್ಯ, ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;/p&gt;&lt;p&gt;--------&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/missing-yamunas-skull-found-near-dabaspet-last-scene-captured-on-cctv-rav/articleshow-l439u4u"/>
        </item>
        <item>
            <title><![CDATA[ಪದೇ ಪದೇ ರಸಗುಲ್ಲ ಕೇಳಿದ್ದೇ ತಪ್ಪಾಯ್ತು, ಕೋಪದಲ್ಲಿ ರಾಕ್ಷಸನಾದ ಅಡುಗೆ ಕಾರ್ಮಿಕ]]></title>
            <link>https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236</link>
            <guid isPermaLink="true">https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236</guid>
            <pubDate>Fri, 17 Apr 2026 15:05:29 +0530</pubDate>
            <description><![CDATA[&lt;p&gt;ಮದುವೆ ಮನೆಯಲ್ಲಿ ಸ್ವೀಟ್ ಗಾಘಿ ಕೆಲ ಮಕ್ಕಳೂ ಹಠ ಮಾಡೋದು ಕಾಮನ್. ಆದ್ರೆ ಇಲ್ಲೊಬ್ಬ ಬಾಲಕನಿಗೆ ರಸಗುಲ್ಲ ಕೇಳಿದ್ದೇ ತಪ್ಪಾಗಿದೆ. ಈಗ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುವಂತಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdcndt3754wrtqjv0aspzef,imgname-burning-tandoor-1776418469699.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹುಡುಗನೊಬ್ಬ ಪದೇ ಪದೇ ರಸಗುಲ್ಲ ಕೇಳಿದ ಎನ್ನುವ ಕೋಪಕ್ಕೆ ಅಡುಗೆ ಕೆಲಸಗಾರ ಆತನ ಜೊತೆ ರಕ್ಷಸನಂತೆ ವರ್ತಿಸಿದ್ದಾನೆ. ಅಡುಗೆ ಕಾರ್ಮಿಕನ ಕೋಪಕ್ಕೆ ಅಪ್ರಾಪ್ತ ಬಾಲಕ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ.&lt;/p&gt;&lt;h2&gt;ರಸಗುಲ್ಲ ಕೇಳಿದ್ದೇ ತಪ್ಪಾಯ್ತು&lt;/h2&gt;&lt;p&gt;ಘಟನೆ ಕೇಬಸ್ತಿ ಜಿಲ್ಲೆಯ ಕಂಟೋನ್ಮೆಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಲೋಲಿ ಗೋಸಾಯಿ ಗ್ರಾಮದಲ್ಲಿ ನಡೆದಿದೆ. ಅಲ್ಲಿ ಮದುವೆ ನಡೆಯುತ್ತಿತ್ತು. ಎಲ್ಲರೂ ಮದುವೆ ಸಂಭ್ರಮದಲ್ಲಿದ್ದರು. ಆದ್ರೆ ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ದುಃಖದ ಮನೆಯಾಗಿ ಬದಲಾಗಿದೆ. ಮುಖದಿಂದ ಸೊಂಟದವರೆಗೆ ಸುಟ್ಟಿರುವ ಹುಡುಗ ಜೀವನ್ಮರಣದ ಮಧ್ಯೆ ಹೋರಾಡ್ತಿದ್ದಾನೆ.&lt;/p&gt;&lt;p&gt;ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು&lt;/p&gt;&lt;p&gt;ದುರ್ಜನ್ಪುರ ನಿವಾಸಿ ಸಂತೋಷ್ ಅವರ ಮಗ 11 ವರ್ಷದ ಚಮನ್, ತನ್ನ ತಾಯಿ ಸಾವಿನ ನಂತ್ರ ಬಸ್ತಿಯ ಬಘನಾಲದಲ್ಲಿರುವ ತನ್ನ ಅಜ್ಜ-ಅಜ್ಜಿಯರ ಮನೆಯಲ್ಲಿ ವಾಸಿಸುತ್ತಿದ್ದ. ಬುಧವಾರ, ಅಜ್ಜಿಯೊಂದಿಗೆ ಮಲೋಲಿ ಗೋಸಾಯಿ ಗ್ರಾಮದಲ್ಲಿನಡೆಯುತ್ತಿದ್ದ ಸಂಬಂಧಿಕರ ಮದುವೆಗೆ ಹೋಗಿದ್ದ. ಆಟವಾಡ್ತಾ ಖುಷಿಯಾಗಿದ್ದ ಸಮನ್ ಕಣ್ಣು ರಸಗುಲ್ಲ ಮೇಲೆ ಬಿದ್ದಿದೆ. ಅಡುಗೆ ಮನೆಗೆ ಹೋಗಿ ರಸಗುಲ್ಲ ತಿಂದಿದ್ದಾನೆ. ಒಂದಕ್ಕೆ ಆತನ ಬಯಕೆ ನಿಲ್ಲಲಿಲ್ಲ. ಪದೇ ಪದೇ ರಸಗುಲ್ಲ ತಿನ್ನಲು ಬಂದಿದ್ದಾನೆ. ಇದನ್ನು ನೋಡಿ ಅಡುಗೆ ಗುತ್ತಿಗೆದಾರನಿಗೆ ಕೋಪ ಬಂದಿದೆ. ಮೊದಲು ಚಮನ್ ನಿಲ್ಲಿಸಿ, ಬುದ್ಧಿ ಹೇಳಿದ್ದಾನೆ. ಇದಕ್ಕೂ ಚಮನ್ ಬಗ್ಗದೆ ಹೋದಾಗ ಚಮನನ್ನು ತಂದೂರಿ ಒಲೆ ಮೇಲೆ ಎತ್ತಿದ್ದಾನೆ. ನಿಯಂತ್ರಣ ತಪ್ಪಿ ಚಮನ್ ಉರಿಯುತ್ತಿದ್ದ ಒಲೆಯೊಳಗೆ ಬಿದ್ದಿದ್ದಾನೆ.&lt;/p&gt;&lt;p&gt;ಚಮನ್ ಕೂಗಾಟ ಕೇಳಿ ಅಲ್ಲಿದ್ದವರು ಓಡಿ ಬಂದಿದ್ದಾರೆ. ತಕ್ಷಣ ಚಮನ್ ನನ್ನು ಅಯೋಧ್ಯಾ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಆದ್ರೆ ತೀವ್ರ ಸುಟ್ಟ ಗಾಯದಿಂದ ಬಳಲುತ್ತಿರುವ ಚಮನ್ ನನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಮನ್ ಗೆ ಚಿಕಿತ್ಸ ನಡೆಯುತ್ತಿದೆ. ಪರಿಸ್ಥಿರಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.&lt;/p&gt;&lt;p&gt;ಮಗುವಿನ ಜೀವಕ್ಕೆ ಸಂಚಕಾರ ತಂದ ಓರಗಿತ್ತಿಯ ಹೊಟ್ಟೆಕಿಚ್ಚು: ಜ್ಯೂಸ್ ಹೆಸರಲ್ಲಿ ಮಗುವಿಗೆ ಆಸಿಡ್ ಕೊಟ್ಟ ಚಿಕ್ಕಮ್ಮ&lt;/p&gt;&lt;p&gt;ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯೇಕ ದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ. ದೂರು ದಾಖಲಿಸಿಕೊಂಡು ಅರೋಪಿ ಪತ್ತೆಗೆ ಮುಂದಾಗಿದ್ದಾರೆ. ಘಟನಾ ಸ್ಥಳದಿಂದ ಆರೋಪಿ ಪರಾರಿಯಾಗಿದ್ದಾನೆ. ಅಮಾಯಕ ಚಮಚನ್ ರಸಗುಲ್ಲವನ್ನು ಪದೇ ಪದೇ ಕೇಳಿದ್ದೇ ತಪ್ಪಾಗಿದೆ. ಚಮನ್ ಅಜ್ಜಿಯ ಮನೆಯಲ್ಲಿ ಓದುತ್ತಿದ್ದ. ಮದುವೆ ಮನೆಗೆ ಬಂದಿದ್ದ ಆತ ಅಜ್ಜಿಯ ಜೊತೆ ಖುಷಿಯಾಗಿದ್ದ. ಮುಗ್ದ ಮಗು ಜೊತೆ ಅಡುಗೆ ಗುತ್ತಿಗೆದಾರ ನಡೆದುಕೊಂಡು ರೀತಿ ಎಲ್ಲರನ್ನು ಕೋಪಗೊಳಿಸಿದೆ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮಕೈಗೊಳ್ಳವಂತೆ ಜನರು ಆಗ್ರಹಿಸಿದ್ದಾರೆ. ಈ ಘಟನೆ ಪ್ರದೇಶದ ಜನರಲ್ಲಿ ವ್ಯಾಪಕ ಕೋಪವನ್ನು ಹುಟ್ಟುಹಾಕಿದೆ. ಒಂದು ರಸಗುಲ್ಲ ಇಷ್ಟೆಲ್ಲ ಗಲಾಟೆಗೆ ಕಾರಣವಾಗುತ್ತೆ ಎಂಬುದನ್ನು ಯಾರೂ ಊಹಿಸಿರಲಿಲ್ಲ. ಮದುವೆ ಮನೆ ಈಗ ನೋವಿನ ಮನೆಯಾಗಿ ಬದಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/child-attending-wedding-kept-repeatedly-asking-for-a-rasgulla-the-confectioner-threw-him-into-burning-tandoor/articleshow-m6ts236"/>
        </item>
        <item>
            <title><![CDATA[ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ದೋಷಿ, ಕೋರ್ಟ್ ಬಿಗ್ ತೀರ್ಪು]]></title>
            <link>https://kannada.asianetnews.com/state/dharwad-zp-member-yogesh-gowda-murder-case-congress-mla-vinay-kulkarni-convicted-and-accused-sentenced-gdp/articleshow-n8saomh</link>
            <guid isPermaLink="true">https://kannada.asianetnews.com/state/dharwad-zp-member-yogesh-gowda-murder-case-congress-mla-vinay-kulkarni-convicted-and-accused-sentenced-gdp/articleshow-n8saomh</guid>
            <pubDate>Wed, 15 Apr 2026 17:41:36 +0530</pubDate>
            <description><![CDATA[ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ಪ್ರಕಟಿಸಿದೆ. 2016ರಲ್ಲಿ ನಡೆದ ಈ ಕೊಲೆಯು ಆಸ್ತಿ ವಿವಾದ ಮತ್ತು ರಾಜಕೀಯ ಪ್ರೇರಿತವಾಗಿದ್ದು, ಸಿಬಿಐ ತನಿಖೆಯ ನಂತರ ನ್ಯಾಯಾಲಯವು ಈ ಮಹತ್ವದ ತೀರ್ಪು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kp7v1w3ssae3zg146z32qbb3,imgname-vinay-kulkarni-and-yogesh-gowda--1--1776232231033.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಒಟ್ಟು 21 ಆರೋಪಿಗಳಲ್ಲಿ &amp;nbsp;A20 - ವಾಸುದೇವ್​​ ನಿಲೇಕಣಿ , A21 - ಸೋಮಶೇಖರ್​ ಬಸಪ್ಪ ನ್ಯಾಮಗೌಡ ನಿರ್ದೋಷಿ, ಮುತ್ತಗಿ ಹಾಗೂ ಶ್ರೀಶೈಲ ಬಿರಾದರ್ ಮಾಫಿ ಸಾಕ್ಷಿ ಎಂದು ಘೋಷಿಸಿದ್ದು, ಉಳಿದ 17 ಮಂದಿ ಅಪರಾಧಿಗಳನ್ನು ವಶಕ್ಕೆ ಪಡೆಯುವಂತೆ ಕೋರ್ಟ್ ಸೂಚನೆ ನೀಡಿತು. Crpc 302, 120b, 201, 148, 149, ಸೆಕ್ಷನ್ ಅಡಿ ಆರೋಪಿಗಳು ದೋಷಿ ಎಂದು ತೀರ್ಪು ನೀಡಿತು. &amp;nbsp;ಈ ಮೂಲಕ ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ಕೊನೆಗೂ ಈ ಪ್ರಕರಣದಲ್ಲಿ ಶಿಕ್ಷೆಯಾಗಿ ನ್ಯಾಯಾಂಗ ಅಂತಿಮ ಮುದ್ರೆ ಬಿದ್ದಿದೆ. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ 15ನೇ ಅಪರಾಧಿಯಾಗಿದ್ದಾರೆ. ನ್ಯಾ. ಸಂತೋಷ್ ಗಜಾನನ ಭಟ್ ಅವರಿಂದ ಈ &amp;nbsp;ತೀರ್ಪು ಪ್ರಕಟವಾಗಿದ್ದು, ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ತೀರ್ಪು ಬಳಿಕ ಕೋರ್ಟ್ ಹಾಲ್ ನಲ್ಲಿಯೇ ಎಲ್ಲಾ ಆರೋಪಿಗಳನ್ನ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದರು. &amp;nbsp;&lt;/p&gt;&lt;h2&gt;ತೀರ್ಪು ಪ್ರಕಟಣೆ ಮುಂದೂಡಲ್ಪಟ್ಟಿದ್ದು ಏಕೆ?&lt;/h2&gt;&lt;p&gt;ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಲಯವು ಏಪ್ರಿಲ್ 9ರಂದು ತೀರ್ಪು ಪ್ರಕಟಿಸುವುದಾಗಿ ಮೊದಲು ತಿಳಿಸಿತ್ತು. ಆದರೆ ತಾಂತ್ರಿಕ ಕಾರಣಗಳು ಹಾಗೂ ತೀರ್ಪು ರಚನೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅದನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿತ್ತು. ಇದೀಗ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಕೊಲೆ ಆರೋಪಿಗಳ ಜೊತೆ ವಿನಯ್&zwnj;ಕುಲಕರ್ಣಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದರು ಎಂಬ ಗಂಭೀರ ಆರೋಪ ಕೇಳಿ ಬಂದಿತು. ಒಟ್ಟು 3 ಚಾರ್ಜ್&zwnj;ಶೀಟ್&zwnj;ಗಳು ಸಲ್ಲಿಕೆಯಾಗಿದ್ದು, 113 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. 40 ಜನ ಸಾಕ್ಷಿಗಳ ವಿಡಿಯೋ ಹೇಳಿಕೆ ದಾಖಲಿಸಲಾಗಿದೆ. &amp;nbsp;ಪ್ರಕರಣದ ತೀರ್ಪು ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ನ್ಯಾಯಾಲಯಕ್ಕೆ ಕುಲಕರ್ಣಿ ಆಗಮಿಸಿದ್ದರು. ಧಾರವಾಡದಿಂದ ಬೆಂಬಲಿಗರು ಕೂಡ ಆಗಮಿಸಿದ್ದರು.&lt;/p&gt;&lt;h2&gt;19 &amp;nbsp;ಅಪರಾಧಿಗಳ ಪಟ್ಟಿ ಇಂತಿದೆ&lt;/h2&gt;&lt;p&gt;A1 - ಬಸವರಾಜ್&zwnj; ಮುತ್ತಗಿ (ಮಾಫಿ ಸಾಕ್ಷಿ), A2 - ವಿಕ್ರಂ ಬಳ್ಳಾರಿ, A3 - ಕೀರ್ತಿ ಕುಮಾರ್​, A4 - ಸಂದೀಪ್​, A5 - ವಿನಾಯಕ್, ​​A6 - ಮಹಾಬಲೇಶ್ವರ, &amp;nbsp;A7 - ಸಂತೋಷ್, &amp;nbsp;A8 - ದಿನೇಶ್​​, A9 - ಅಶ್ವಥ್​​, A10 - ಸುನೀಲ್​​ ಕೆ.ಎಸ್​, A11 - ನಜರ್ ಅಹಮದ್​, A12 - ಶಹನವಾಜ್​​, A13 - ನೂತನ್, ​​A14 - ಹರ್ಷಿತ್, ​​A15 - ವಿನಯ್ ಕುಲಕರ್ಣಿ, &amp;nbsp;A16 - ಚಂದ್ರಶೇಖರ್​ ಇಂಡಿ , A17 - ಶಿವಾನಂದ್​​ ಶ್ರೀಶೈಲ ಬಿರಾದರ್ (ಮಾಫಿ ಸಾಕ್ಷಿ), ​A18 - ವಿಕಾಸ್​​ ಕಲಬುರ್ಗಿ, &amp;nbsp;A19 - ಚೆನ್ನಕೇಶವ ಟಿಂಗರಿಕರ್&amp;nbsp;&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;2016ರ ಜೂನ್ 15ರಂದು ಧಾರವಾಡದಲ್ಲಿ ನಡೆದಿದ್ದ ಈ ಭೀಕರ ಘಟನೆಯಲ್ಲಿ, ಯೋಗೇಶ್ ಗೌಡ ಅವರನ್ನು ಮುಂಜಾನೆ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರಂಭಿಕ ತನಿಖೆಯಲ್ಲಿ ಆಸ್ತಿ ವಿವಾದವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು.&lt;/p&gt;&lt;p&gt;ಮೊದಲ ಹಂತದಲ್ಲಿ ಆರು ಮಂದಿಯ ವಿರುದ್ಧ ಪೊಲೀಸರು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಮತ್ತು ರಾಜಕೀಯ ಅಂಶಗಳ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದಂತೆ, ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣವನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (CBI)ಗೆ ಹಸ್ತಾಂತರಿಸಲಾಯಿತು.&lt;/p&gt;&lt;p&gt;ಯೋಗೇಶ್ ಗೌಡ ಕೊಲೆ ಪ್ರಕರಣ ಹಿನ್ನೆಲೆ ಕೋರ್ಟ್ ತೀರ್ಪಿಗೂ ಮುನ್ನ ಸದಾಶಿವನಗರ ನಿವಾಸದಲ್ಲಿ ಶಾಸಕ ವಿನಯ್ ಕುಲಕರ್ಣಿ ಹೇಳಿಕೆ ನೀಡಿ, ಇವತ್ತು ತೀರ್ಪು ಕೊಡ್ತೀನಿ ಅಂತ ಹೇಳಿದ್ರು. ನ್ಯಾಯಾಂಗ ವ್ಯವಸ್ಥೆ ಮೇಲೆ&zwnj; ವಿಶ್ವಾಸ ಇದೆ. ತೀರ್ಪು ಬಂದ ಬಳಿಕ ಮಾತನಾಡುತ್ತೇನೆ. ಈ ಸಂದರ್ಭದಲ್ಲಿ ಚಾರ್ಜ್ ಶೀಟ್ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದರು.&lt;/p&gt;&lt;p&gt;ಸುಮಾರು 10 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ತೀರ್ಪು ಹೊರಬಿದ್ದಿರುವುದು ಯೋಗೇಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ. ರಾಜಕೀಯ, ಆಸ್ತಿ ವಿವಾದ ಮತ್ತು ವೈಯಕ್ತಿಕ ವೈಮನಸ್ಸು ಎಲ್ಲಾ ಸೇರಿ ನಡೆದ ಈ ಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲೂ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ ನ್ಯಾಯಾಲಯದ ತೀರ್ಪು ಈ ಪ್ರಕರಣಕ್ಕೆ ಒಂದು ಮಹತ್ವದ ತಿರುವು ನೀಡಿದೆ.&amp;nbsp;&lt;/p&gt;]]></content:encoded>
            <category>crime</category>
            <dc:creator>Gowthami K</dc:creator>
            <atom:link href="https://kannada.asianetnews.com/state/dharwad-zp-member-yogesh-gowda-murder-case-congress-mla-vinay-kulkarni-convicted-and-accused-sentenced-gdp/articleshow-n8saomh"/>
        </item>
        <item>
            <title><![CDATA[ರೋಹಿತ್ ಶೆಟ್ಟಿ ಮನೆ ಮುಂದೆ ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಸೆರೆ; ಯಾರಿವನು, ಯಾಕೆ ದಾಳಿ ನಡೆಸಿದ್ದ ಗೊತ್ತಾ?]]></title>
            <link>https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8</link>
            <guid isPermaLink="true">https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8</guid>
            <pubDate>Fri, 17 Apr 2026 11:55:49 +0530</pubDate>
            <description><![CDATA[&lt;p&gt;ಮುಂಬೈನ ಜುಹುವಿನಲ್ಲಿರುವ ರೋಹಿತ್ ಶೆಟ್ಟಿ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd1b7m5vsx8e61dns8f9eqj,imgname-rohit-shetty-1776406601349.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಲಿವುಡ್ &lsquo;ಸಿಂಗಂ&rsquo; ಮನೆ ಮುಂದೆ ಗುಂಡಿನ ಸದ್ದು: ಇದು ಸಿನಿಮೀಯ ಶೈಲಿಯ ಅಸಲಿ ಪೊಲೀಸ್&zwnj; ಬೇಟೆ!&lt;/strong&gt;&lt;/p&gt;&lt;p&gt;ಬಾಲಿವುಡ್ ಚಿತ್ರರಂಗದಲ್ಲಿ ಗಾಳಿಯಲ್ಲಿ ಹಾರುವ ಕಾರುಗಳು, ಖಡಕ್ ಪೊಲೀಸ್ ಅಧಿಕಾರಿಗಳು ಮತ್ತು ಮೈ ನಡುಗಿಸುವ ಆಕ್ಷನ್ ದೃಶ್ಯಗಳಿಗೆ ಹೆಸರಾದವರು ನಿರ್ದೇಶಕ ರೋಹಿತ್ ಶೆಟ್ಟಿ. ಆದರೆ, ಕಳೆದ ಫೆಬ್ರವರಿಯಲ್ಲಿ ಅವರ ಜೀವನದಲ್ಲೇ ಒಂದು ಅನಿರೀಕ್ಷಿತ 'ರಿಯಲ್ ಲೈಫ್' ಕ್ರೈಮ್ ಸೀನ್ ಸೃಷ್ಟಿಯಾಗಿತ್ತು. ಮುಂಬೈನ ಜುಹುವಿನಲ್ಲಿರುವ ಅವರ (Rohit Shetty) ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 'ಬ್ಲಾಕ್ ಬಸ್ಟರ್' ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾರೆ!&lt;/p&gt;&lt;p&gt;ಆಗ್ರಾ ರಸ್ತೆಯಲ್ಲಿ ನಡೆದ ಹೈ-ವೋಲ್ಟೇಜ್ ಡ್ರಾಮಾ!&lt;/p&gt;&lt;p&gt;ಅದು ಗುರುವಾರ ಮಧ್ಯಾಹ್ನ ಸುಮಾರು 3:56ರ ಸಮಯ. ಉತ್ತರ ಪ್ರದೇಶದ ಆಗ್ರಾ-ಎಟಾ ರಸ್ತೆಯ ಛದಮಿ ಮತ್ತಾ ಪ್ರದೇಶದಲ್ಲಿ ಪೊಲೀಸರು ಹೊಂಚು ಹಾಕಿ ಕುಳಿತಿದ್ದರು. ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಮತ್ತು ಮುಂಬೈ ಕ್ರೈಮ್ ಬ್ರಾಂಚ್ ಪೊಲೀಸರ ಜಂಟಿ ತಂಡಕ್ಕೆ ಸಿಕ್ಕ ಖಚಿತ ಮಾಹಿತಿಯಂತೆ, ಹ್ಯಾಟ್ರಿಕ್ ದಾಳಿ ನಡೆಸಿದ್ದ ಶೂಟರ್ ಅಲ್ಲಿ ಅಡಗಿದ್ದ. ಪೊಲೀಸರು ಕ್ಷಿಪ್ರವಾಗಿ ದಾಳಿ ನಡೆಸಿ, ಪ್ರದೀಪ್ ಕುಮಾರ್ ಅಲಿಯಾಸ್ ಗಾತ್ ಎಂಬ ಆರೋಪಿಯನ್ನು ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ. ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಈ ಹಂತಕ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.&lt;/p&gt;&lt;h2&gt;ಏನಿದು ದಗಾ? ಯಾಕಿಷ್ಟು ಭಯ?&lt;/h2&gt;&lt;p&gt;ಫೆಬ್ರವರಿ 1, 2026ರ ಕತ್ತಲ ರಾತ್ರಿ ಮುಂಬೈನ ಜುಹು ಉಪನಗರದಲ್ಲಿರುವ ರೋಹಿತ್ ಶೆಟ್ಟಿ ಅವರ 'ಶೆಟ್ಟಿ ಟವರ್' ನಿವಾಸದ ಮೇಲೆ ಗುಂಡಿನ ದಾಳಿ ನಡೆದಿತ್ತು. ಇದು ಕೇವಲ ದಾಳಿಯಲ್ಲ, ಬದಲಾಗಿ ಅಂಡರ್ ವರ್ಲ್ಡ್&zwnj;ನ ಕರಾಳ ಮುಖವಾಗಿತ್ತು. ಕುಖ್ಯಾತ ಶುಭಂ ಲೋಂಕರ್ ಗ್ಯಾಂಗ್&zwnj;ನ ಆದೇಶದ ಮೇರೆಗೆ ಈ ಕೃತ್ಯ ಎಸಗಲಾಗಿತ್ತು ಎನ್ನಲಾಗಿದೆ. ಚಲನಚಿತ್ರೋದ್ಯಮದಲ್ಲಿ ಭಯ ಹುಟ್ಟಿಸಿ, ಕೋಟಿ ಕೋಟಿ ಹಣ ಸುಲಿಗೆ ಮಾಡುವುದು ಈ ಗ್ಯಾಂಗ್&zwnj;ನ ಮುಖ್ಯ ಉದ್ದೇಶವಾಗಿತ್ತು. ರೋಹಿತ್ ಶೆಟ್ಟಿಯಂತಹ ಸ್ಟಾರ್ ನಿರ್ದೇಶಕರನ್ನೇ ಗುರಿ ಮಾಡಿದ್ದರಿಂದ ಇಡೀ ಬಾಲಿವುಡ್ ಒಂದು ಕ್ಷಣ ಆತಂಕಕ್ಕೀಡಾಗಿತ್ತು.&lt;/p&gt;&lt;p&gt;ಪೊಲೀಸರ ಖಡಕ್ ಆಕ್ಷನ್:&lt;/p&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಠಿಣ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹೈಪ್ರೊಫೈಲ್ ಕೇಸ್&zwnj;ನಲ್ಲಿ ಈಗಾಗಲೇ ಪ್ರದೀಪ್ ಶರ್ಮಾ ಅಲಿಯಾಸ್ ಗೋಲು, ದೀಪಕ್ ಮತ್ತು ವಿಷ್ಣು ಕುಶ್ವಾಹ ಸೇರಿದಂತೆ ಎಂಟು ಜನರನ್ನು ಜೈಲಿಗಟ್ಟಲಾಗಿತ್ತು. ಈಗ ಪ್ರದೀಪ್ ಕುಮಾರ್ ಒಂಬತ್ತನೇ ಆರೋಪಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h3&gt;ರೋಹಿತ್ ಶೆಟ್ಟಿ: ದ ರಿಯಲ್ ಬಾಸ್!&lt;/h3&gt;&lt;p&gt;ಹಿಂದಿ ಚಿತ್ರರಂಗದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ರೋಹಿತ್ ಶೆಟ್ಟಿ, ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ 'ಗೋಲ್ಮಾಲ್', 'ಸಿಂಗಂ'ನಂತಹ ಬೃಹತ್ ಫ್ರಾಂಚೈಸಿಗಳನ್ನು ನೀಡಿದವರು. ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅವರನ್ನೊಳಗೊಂಡ 'ಕಾಪ್ ಯೂನಿವರ್ಸ್' ಸೃಷ್ಟಿಸಿದ ಕೀರ್ತಿ ಇವರದ್ದು. ತೆರೆಯ ಮೇಲೆ ಪೊಲೀಸರ ಶೌರ್ಯವನ್ನು ವೈಭವೀಕರಿಸುವ ರೋಹಿತ್, ಈಗ ನಿಜ ಜೀವನದಲ್ಲೂ ಪೊಲೀಸರ ಸಮಯಪ್ರಜ್ಞೆಯಿಂದಾಗಿ ಅಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿನಿಮಾದಲ್ಲಿ ವಿಲನ್&zwnj;ಗಳನ್ನು ಮಟ್ಟಹಾಕುವ ರೋಹಿತ್ ಶೆಟ್ಟಿ ಅವರ ಶತ್ರುಗಳನ್ನು ಈಗ ಅಸಲಿ ಪೊಲೀಸರು ಜೈಲಿಗೆ ಕಳುಹಿಸುತ್ತಿದ್ದಾರೆ. &quot;ಸಿಂಗಂ&quot; ಸ್ಟೈಲ್&zwnj;ನಲ್ಲಿಯೇ ಈ ಕೇಸ್ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ!&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/police-arrested-the-key-accused-in-connection-with-director-rohit-shetty-residence-fire-in-mumbai-juhu/articleshow-nvurnu8"/>
        </item>
        <item>
            <title><![CDATA[ಪ್ರೀತಿಗಾಗಿ ಪ್ರಾಣ ಬಿಟ್ಟ ಸತ್ಯವ್ವ: 12ನೇ ವಯಸ್ಸಿನಲ್ಲೇ ಮದುವೆ ಫಿಕ್ಸ್ ಮಾಡಿ ಮಗಳ ಬದುಕನ್ನೇ ಕಸಿದುಕೊಂಡ ಪೋಷಕರು]]></title>
            <link>https://kannada.asianetnews.com/gallery/relationship/belagavi-honor-killing-fixed-marriage-at-12-her-own-family-kills-her-for-loving-pcfnzuy</link>
            <guid isPermaLink="true">https://kannada.asianetnews.com/gallery/relationship/belagavi-honor-killing-fixed-marriage-at-12-her-own-family-kills-her-for-loving-pcfnzuy</guid>
            <pubDate>Wed, 15 Apr 2026 17:30:56 +0530</pubDate>
            <description><![CDATA[&lt;p&gt;ಆಕೆಗೆ ಏನು ಅರಿಯದ ವಯಸ್ಸಲ್ಲಿ ಕುಟುಂಬದವರೇ ಮದ್ವೆ ನಿಶ್ಚಯ ಮಾಡಿದ್ದರು. ಆದರೆ ಹರೆಯಕ್ಕೆ ಕಾಲಿರಿಸಿದ ಆಕೆಗೆ ಬೇರೊಬ್ಬನ ಜತೆ ಪ್ರೀತಿಯಾಗಿತ್ತು. ಪ್ರೀತಿ ತಿಳಿಯುತ್ತಿದ್ದಂತೆ ಮದುವೆ ಮಾಡಿದ್ರು ಪೋಷಕರು ಆದರೆ ಪ್ರೀತಿಸಿದವನೊಂದಿಗೆ ಅಲ್ಲ. ಹೀಗಾಗಿ ತನ್ನ ಗಂಡನ ಬಿಟ್ಟು ಓಡಿ ಹೋದ ಆಕೆಯ ಕತೆ ಮುಂದೇನಾಯ್ತು&hellip;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8f2cgwvy74wjzcqr16paf8,imgname-belgavi-maryada-hatye--1--1776253219355.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಕೆಗೆ ಏನು ಅರಿಯದ ವಯಸ್ಸಲ್ಲಿ ಕುಟುಂಬದವರೇ ಮದ್ವೆ ನಿಶ್ಚಯ ಮಾಡಿದ್ದರು. ಆದರೆ ಹರೆಯಕ್ಕೆ ಕಾಲಿರಿಸಿದ ಆಕೆಗೆ ಬೇರೊಬ್ಬನ ಜತೆ ಪ್ರೀತಿಯಾಗಿತ್ತು. ಪ್ರೀತಿ ತಿಳಿಯುತ್ತಿದ್ದಂತೆ ಮದುವೆ ಮಾಡಿದ್ರು ಪೋಷಕರು ಆದರೆ ಪ್ರೀತಿಸಿದವನೊಂದಿಗೆ ಅಲ್ಲ. ಹೀಗಾಗಿ ತನ್ನ ಗಂಡನ ಬಿಟ್ಟು ಓಡಿ ಹೋದ ಆಕೆಯ ಕತೆ ಮುಂದೇನಾಯ್ತು&hellip;&lt;/p&gt;&lt;img&gt;&lt;p&gt;ವಿವಾಹಿತನ ಬಿಟ್ಟು ಪ್ರೀತಿಸಿದಾತನ ಜೊತೆ ಓಡಿ ಹೋಗಿ ಮನೆಯ ಮಾನ ಕಳೆದಳು ಎಂದು ಪೋಷಕರೇ ತಮ್ಮ ವಿವಾಹಿತ ಮಗಳನ್ನು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದಲ್ಲಿ ನಡೆದಿದ್ದು, ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಮಾಹಿತಿ ನೀಡಿದ್ದು, ಪ್ರಕರಣದ ಪಿನ್ ಟು ಪಿನ್ ಡಿಟೇಲ್ ಇಲ್ಲಿದೆ. ಕೊಲೆಯಾದ ಸತ್ಯೆವ್ವಾ ಹೆಳವರ್&zwnj;ಗೆ 12ನೇ ವಯಸ್ಸಿನಲ್ಲಿಯೇ ಮದುವೆ ನಿಗದಿ ಮಾಡಲಾಗಿತ್ತು. ಆದರೆ ಸತ್ಯೆವ್ವಾ ತನ್ನದೇ ಗ್ರಾಮದ ಕೃಷ್ಣಾ ಪಾಟೀಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು.&lt;/p&gt;&lt;img&gt;&lt;p&gt;ಕೃಷ್ಣ ಪಾಟೀಲ್ ಜೊತೆಗಿನ ಸತ್ಯೆವ್ವಾಳ ಪ್ರೀತಿಯ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ಸತ್ಯೆವ್ವಾಳ ಕುಟುಂಬದವರು ಆಕೆಗೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಜೊತೆಗೆ ಮದುವೆ ಮಾಡಿದ್ದರು. ನಾಲ್ಕು ವರ್ಷದ ಹಿಂದೆ ಸತ್ಯೆವ್ವಾಳ ಮದುವೆ ಸಂತೋಷ್ ಹೆಳವಿ ಜೊತೆ ನಡೆದಿತ್ತು. ಆದರೆ ಮದುವೆಯ ನಂತರವೂ ಸತ್ಯೆವ್ವಾಗೆ ತಾನು ಪ್ರೀತಿಸಿದ ಕೃಷ್ಣಾ ಪಾಟೀಲ್ ಜೊತೆ ಸಂಪರ್ಕವಿತ್ತು. ಇತ್ತ ಆಕೆಯ ಪತಿ ಸಂತೋಷ್ ಹೆಳವಿ ಕುಡಿತಕ್ಕೆ ದಾಸನಾಗಿದ್ದ. ಇತ್ತೀಚೆಗೆ ಅಂದರೆ ಫೆ.17 ರಂದು ಸತ್ಯೆವ್ವಾ ಗಂಡನ ಮನೆಯಿಂದ ಬಂದು ತನ್ನ ಪ್ರಿಯಕರ ಕೃಷ್ಣಾ ಪಾಟೀಲ್ ಜೊತೆ ಓಡಿ ಹೋಗಿದ್ದಳು.&lt;/p&gt;&lt;img&gt;&lt;p&gt;ಓಡಿ ಹೋದ ನಂತರ ಸವದತ್ತಿ ತಾಲೂಕಿನ ಬೆಳವಾಡಿಯಲ್ಲಿ ಬಾಡಿಗೆ ಮನೆ ಮಾಡಿದ ಈ ಜೋಡಿ ಅಲ್ಲೇ ಉಳಿದಿದ್ದರು. ಈ ವಿಚಾರ ಸತ್ಯವ್ವಾ ಮನೆಯವರಿಗೆ ಗೊತ್ತಾಗಿ ಹದಿನೈದು ದಿನದ ಹಿಂದೆ ಅವರನ್ನು ಬೆಳವಾಡಿಯಿಂದ ತಮ್ಮ ಮನೆಗೆ ಕರೆತಂದಿದ್ದರು. ನಂತರ ಎರಡು ಕುಟುಂಬಗಳ ಮಧ್ಯೆ ಸಂಧಾನ ನಡೆದು ಸತ್ಯೆವ್ವಾಳನ್ನು ಆಕೆಯ ಮನೆಗೆ ಹಾಗೂ ಕೃಷ್ಣ ಪಾಟೀಲ್&zwnj;ನನ್ನು ಆತನ ಮನೆಗೆ ಆತನ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದರು.&lt;/p&gt;&lt;img&gt;&lt;p&gt;ನಂತರ ಆಕೆಯನ್ನು ಆಕೆಯ ಕುಟುಂಬದವರು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾರ್ಚ್&zwnj; 21ರಂದು ಅಲ್ಲಿ ಸಂಧಾನ ನಡೆದಿದ್ದು, ಈ ವೇಳೆ ಗಲಾಟೆಯಾಗಿದ್ದು, ಸತ್ಯವ್ವ ತಾನು ಕೃಷ್ಣ ಪಾಟೀಲ್ ಜೊತೆಗೆ ಇರುವುದಾಗಿ ಹೇಳಿದ್ದಾರೆ. ತಾಯಿಯ ಜೊತೆಗೂ ಸತ್ಯವ್ವ ಗಲಾಟೆ ಮಾಡಿದ್ದು, ನಂತರ ಆಕೆಯ ಚಿಕ್ಕಪ್ಪ ಪ್ರಕಾಶ, ಸಹೋದರ ಶಾನೂರು ಹೇಳವರ್, ಅಕ್ಕನ್ನ ಗಂಡ ಕಲ್ಲಪ್ಪ ಸೇರಿ ಸತ್ಯವ್ವಗೆ ಇಲಿ ಪಾಶಾಣ ನೀಡಿದ್ದು, ವಿಷ ಪ್ರಾಶನದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ. ತಕ್ಷಣವೇ ಸ್ಥಳೀಯರ ಸಹಾಯ ಪಡೆದು ಆಕೆಯ ಅಂತ್ಯಸಂಸ್ಖಾರ ಮಾಡಿದ ಆಕೆಯ ಮನೆಯವರು ಬಳಿಕ ಸಂಬಂಧಿಕರಿಗೆ ಆಕೆ ಲೋಬಿಪಿಯಿಂದ ಸಾವನ್ನಪ್ಪಿದ್ದಾಗಿ ಸುಳ್ಳು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಏಪ್ರಿಲ್ 10ರಂದು ಈ ಬಗ್ಗೆ ರಹಸ್ಯ ಮಾಹಿತಿಯೊಂದು ಪೊಲೀಸರಿಗೆ ಸಿಕ್ಕಿದ್ದು, ತಂದೆ ತಾಯಿಯೇ ಸೇರಿ ಮಹಾರಾಷ್ಟ್ರದಲ್ಲಿ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಜೊತೆಗೆ ಸತ್ಯವ್ವ ನಾಪತ್ತೆ ಆಗಿರುವ ವಿಚಾರವೂ ತಿಳಿಯುತ್ತದೆ. ಈ ಸಂಬಂಧ ಪೊಲೀಸರು ಕೃಷ್ಣ ಪಾಟೀಲ್&zwnj;ನನ್ನು ವಿಚಾರಣೆ ಮಾಡುತ್ತಾರೆ. ಈ ವಿಚಾರಣೆ ವೇಳೆ ಈ ಮರ್ಯಾದಾ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದಾಗಿ ಎಸ್&zwnj;ಪಿ ಕೆ ರಾಮರಾಜನ್ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/relationship/belagavi-honor-killing-fixed-marriage-at-12-her-own-family-kills-her-for-loving-pcfnzuy"/>
        </item>
        <item>
            <title><![CDATA[ನಸುಕಿನಲ್ಲಿ ಪಿಜಿಗಳಿಗೆ ಕನ್ನಾಹಾಕುತ್ತಿದ್ದ ಖದೀಮ ಅರೆಸ್ಟ್; 5 ಲ್ಯಾಪ್‌ಟಾಪ್, ಮೊಬೈಲ್, 3 ಬೈಕ್ ಜಪ್ತಿ]]></title>
            <link>https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8</link>
            <guid isPermaLink="true">https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8</guid>
            <pubDate>Sat, 18 Apr 2026 07:02:14 +0530</pubDate>
            <description><![CDATA[&lt;p&gt;ಬೆಂಗಳೂರಿನ ಪಿಜಿಗಳನ್ನು ಗುರಿಯಾಗಿಸಿಕೊಂಡು ಮೊಬೈಲ್, ಲ್ಯಾಪ್&zwnj;ಟಾಪ್ ಮತ್ತು ಬೈಕ್&zwnj;ಗಳನ್ನು ಕದಿಯುತ್ತಿದ್ದ ತಮಿಳುನಾಡು ಮೂಲದ ಶಕ್ತಿವೇಲು ಎಂಬಾತನನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.6 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpf2v7s3zt6fysc12bgkvm06,imgname-----------------------2026-04-18t065047.488-1776475283235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.18):&lt;/strong&gt; ಪಿಜಿಗಳಲ್ಲಿ ಗುರಿಯಾಗಿಸಿ ಮೊಬೈಲ್ ಹಾಗೂ ಬೈಕ್ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ತಮಿಳುನಾಡು ಮೂಲದ ಶಕ್ತಿವೇಲು ಬಂಧಿತನಾಗಿದ್ದು, ಆರೋಪಿಯಿಂದ ತಲಾ 5 ಲ್ಯಾಪ್&zwnj;ಟಾಪ್&zwnj;, ಮೊಬೈಲ್&zwnj; ಹಾಗೂ 3 ಬೈಕ್&zwnj;ಗಳು ಸೇರಿ 6 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಕೆಲ ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ದೂರಿನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಮುಂಜಾನೆ ಕಾರ್ಯಾಚರಣೆ:&lt;/strong&gt; ಸುಲಭವಾಗಿ ಹಣ ಸಂಪಾದನೆಗೆ ಪಿಜಿಗಳಲ್ಲಿ ಶಕ್ತಿವೇಲು ಕಳ್ಳತನಕ್ಕಿಳಿದಿದ್ದ. ಐಟಿ-ಬಿಟಿ ಉದ್ಯೋಗಿಗಳ ಬಾಹುಳ್ಯವಿರುವ ವೈಟ್&zwnj;ಫೀಲ್ಡ್&zwnj; ಹಾಗೂ ಎಲೆಕ್ಟ್ರಾನಿಕ್ ಸಿಟಿ ಪ್ರದೇಶದ ಪಿಜಿಗಳೇ ಆತನ ಟಾರ್ಗೆಟ್ ಆಗಿದ್ದವು. ನಸುಕಿನಲ್ಲಿ ಕೆಲಸ ಮುಗಿಸಿ ಬಂದು ಕೋಣೆ ಬಾಗಿಲು ಹಾಕದೆ ಐಟಿ ಉದ್ಯೋಗಿಗಳು ಮಲಗುತ್ತಿದ್ದರು. ಆ ವೇಳೆ ಅವರಿಂದ ಮೊಬೈಲ್, ಲ್ಯಾಪ್&zwnj;ಟಾಪ್ ಮಾತ್ರವಲ್ಲದೆ ಬೈಕ್ ಕೀ ಪಡೆದು ಬೈಕ್ ಅನ್ನು ಕಳವು ಮಾಡುತ್ತಿದ್ದ. ಇದಕ್ಕಾಗಿ ತನ್ನೂರು ತಮಿಳುನಾಡಿನಿಂದ ನಸುಕಿನಲ್ಲಿ ಬಂದು ಕೃತ್ಯ ಎಸಗಿ ಶಕ್ತಿವೇಲು ಮರಳುತ್ತಿದ್ದ. ಅಂತೆಯೇ ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಪಿಜಿಯಲ್ಲಿ ಆತ ಕೈ ಚಳಕ ತೋರಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/early-morning-theft-in-bengaluru-pgs-arrested-miscreant-at-benaluru-rav/articleshow-pxd1bb8"/>
        </item>
        <item>
            <title><![CDATA['ನಾನು ಜಾತ್ಯತೀತಳು, ಯಾರನ್ನಾದ್ರೂ ಮದ್ವೆ ಆಗ್ತೇನೆ' ಎಂದ ನಟಿ ಹಿಂದೂ ಧರ್ಮಕ್ಕೆ ವಾಪಸ್​: ಕರಾಳ ದಿನಗಳ ನೆನೆದ ತಾರೆ]]></title>
            <link>https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q</link>
            <guid isPermaLink="true">https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q</guid>
            <pubDate>Sat, 18 Apr 2026 13:31:01 +0530</pubDate>
            <description><![CDATA[&lt;p&gt;ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfsnkt7rma0a4kedm2cnfbz,imgname-chahat-khanna-1776499216199.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ, ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರಗೊಂಡಿದ್ದರು. ಆರಂಭದಲ್ಲಿ ಜಾತ್ಯತೀತಳು ಎಂದು ಹೇಳಿದ್ದ ಅವರು, ನಂತರ ತಾನು ಅನುಭವಿಸಿದ ಚಿತ್ರಹಿಂಸೆ ಮತ್ತು ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ತಮ್ಮ ತಪ್ಪಿನ ಅರಿವಾಗಿ, ಸನಾತನ ಧರ್ಮಕ್ಕೆ ಮರಳಿದ್ದಾರೆ.&lt;/p&gt;&lt;img&gt;&lt;p&gt;ಈಗ ಎಲ್ಲೆಲ್ಲೂ ಲವ್​ ಜಿಹಾದ್​, ಮತಾಂತರದ್ದೇ ಮಾತು. ಅದರಲ್ಲಿಯೂ ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ (TCS) ಲವ್ ಜಿಹಾದ್​ ಪ್ರಕರಣದಿಂದ ಕಾರ್ಪೋರೇಟ್​ ಜಗತ್ತಿಗೂ ಕಾಲಿಟ್ಟ ಜಿಹಾದಿಗಳ ಬಗ್ಗೆ ದೇಶಾದ್ಯಂತ ಹಿಂದೂಗಳಲ್ಲಿ ಆತಂಕ ಎದುರಾಗಿದೆ. ಹಿಂದೂ ಹೆಣ್ಣುಮಕ್ಕಳು ಅದ್ಹೇಗೆ ಮರುಳಾಗುತ್ತಾರೆ, ಅಲ್ಲಿ ಏನು ನಡೆಯುತ್ತದೆ, ಅಸಲಿಗೆ ಆಗೋದೇನು ಎನ್ನುವುದನ್ನು ಅರಿಯದೇ ಬೆಚ್ಚಿಬಿದ್ದಿದ್ದಾರೆ ಪೋಷಕರು. ಈಚೆಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳೂ ಎಲ್ಲರನ್ನು ನಡುಗಿಸುವಂತಿದೆ. ಹಾಗೆಂದು ಈ ಲವ್​ ಜಿಹಾದ್​ ಅಥವಾ ಮತಾಂತರ ಈಗಿನ ಮಾತಲ್ಲ, ಬದಲಿಗೆ ಸೋಷಿಯಲ್​ ಮೀಡಿಯಾಗಳಿಂದ ಇವು ಬೆಳಕಿಗೆ ಬರುತ್ತಿವೆ ಅಷ್ಟೇ.&lt;/p&gt;&lt;img&gt;&lt;p&gt;ಅಂಥದ್ದೇ ಒಂದು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಖ್ಯಾತ ಕಿರುತೆರೆ ನಟಿ ಚಾಹತ್ ಖನ್ನಾ. ಹಿಂದಿ ಸೀರಿಯಲ್​ ನೋಡುವವರಿಗೆ ಚಾಹತ್​ ಖನ್ನಾ ಪರಿಚಿತ ಮುಖ. ಹಲವಾರು ಫೇಮಸ್​ ಸೀರಿಯಲ್​ಗಳಲ್ಲಿ ನಟಿಸಿದ್ದಾರೆ ಈಕೆ. ಮುಸ್ಲಿಂ ಯುವಕನನ್ನು ನಂಬಿ ಮದುವೆಯಾಗಿ ಕೊನೆಗೆ ಸತ್ಯದ ಅರಿವಾಗಿ ಸನಾತನ ಧರ್ಮಕ್ಕೆ ವಾಪಸಾಗಿರುವ ಈ ನಟಿಯ ಈಗ ತಾನು ಅನುಭವಿಸಿದ ಹಿಂಸೆಗಳ ಬಗ್ಗೆ ಬಿಚ್ಚಿಡುತ್ತಿದ್ದಾಳೆ. ಮದುವೆಯಾಗುವ ಸಂದರ್ಭದಲ್ಲಿ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದ ನಟಿ, ನಾನು ಜಾತ್ಯಾತೀತಳು, ಸ್ವಯಂ ಪ್ರೇರಣೆಯಿಂದ ಈ ಮದುವೆಯಾಗುತ್ತಿದ್ದೇನೆ. ಇದನ್ನು ಪ್ರಶ್ನಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದಿದ್ದಳು!&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟಿಗೆ ಇದಾಗಲೇ ಮದುವೆಯಾಗಿತ್ತು. 2006 ರಲ್ಲಿ ಭರತ್ ನರಸಿಂಘಾನಿ ಎನ್ನುವವರ ಜೊತೆ ಮದುವೆಯಾಗಿತ್ತು. ಆದರೆ ಈ ಮದುವೆ ವರ್ಷದಲ್ಲಿಯೇ ಮುರಿದು ಬಿತ್ತು. ಆಗಲೇ ಪರಿಚಯವಾದದ್ದು ಫರ್ಹಾನ್ ಮಿರ್ಜಾ. 2013 ರಲ್ಲಿ ಫರ್ಹಾನ್ ಮಿರ್ಜಾ ಜೊತೆ ಮದುವೆಯಾಯಿತು. ಮತಾಂತರಗೊಂಡಳು ನಟಿ. ಎರಡು ಮಕ್ಕಳಾಯಿತು. ಅಲ್ಲಿಯವರೆಗೂ ತನಗೆ ಚಿತ್ರಹಿಂಸೆಯನ್ನೇ ನೀಡಲಾಗುತ್ತಿತ್ತು. ಆದರೂ ಸಹಿಸಿಕೊಂಡಿದ್ದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅನಾರೋಗ್ಯ ಇದ್ದರೂ ದೈಹಿಕ ಸಂಪರ್ಕ ಬೆಳೆಸುವಂತೆ ಗಂಡ ಒತ್ತಾಯಿಸುತ್ತಿದ್ದ. ನಾನು ಬಹುದೊಡ್ಡ ತಪ್ಪು ಮಾಡಿದ್ದು ಆಗಲೇ ಗೊತ್ತಾಯಿತು. ಹಿಂದೂ ಧರ್ಮ ಬಿಟ್ಟುಬಂದು ಬಹುದೊಡ್ಡ ತಪ್ಪು ಮಾಡಿದೆ. ಅದರ ಮಹತ್ವ ಕೊನೆಗೆ ತಿಳಿಯಿತು ಎಂದು ನಟಿ ಮಾಧ್ಯಮಗಳ ಮುಂದೆ ಬಂದು ಗೋಳೋ ಎಂದು ಅತ್ತಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ, ತನ್ನ ತಪ್ಪಿನ ಅರಿವಾಗಿ ಗಂಡನ ವಿರುದ್ಧ ಕೇಸ್​ ಹಾಕಿ ಇದೀಗ ಸನಾತನ ಧರ್ಮಕ್ಕೆ ವಾಪಸಾಗಿದ್ದಾರೆ ನಟಿ. ಇದಕ್ಕೂ ಮೊದಲು ಮತಾಂತರವಾಗಬೇಕಿದ್ದ ಸಂದರ್ಭದಲ್ಲಿ, ನನಗೆ ಯಾರೂ ಒತ್ತಡ ಹಾಕುತ್ತಿಲ್ಲ. ನಾನು ಸ್ವಂತ ಇಚ್ಛೆಯಿಂದ ಮತಾಂತರವಾಗುತ್ತಿದ್ದೇನೆ ಎಂದವರು ಈಗ ತಾವು ಅನುಭವಿಸಿರುವ ಕಷ್ಟಗಳ ಬಗ್ಗೆ ವಿವರಿಸಿದ್ದಾರೆ.&lt;/p&gt;&lt;img&gt;&lt;p&gt;ನಾನು ಜಾತ್ಯತೀತಳು. ಅವರ ಮನೆಯಲ್ಲಿ ಈದ್ ಮತ್ತು ದೀಪಾವಳಿ ಎರಡನ್ನೂ ಸಮಾನ ಸಂತೋಷದಿಂದ ಆಚರಿಸುತ್ತಾರೆ ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದರು. ನಾನು ಹೀಗೆ ಹೇಳಿದ್ರೆ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಆದರೆ ಅವರು ತುಂಬಾ ಒಳ್ಳೆಯವರು ಎಂದಾಕೆ ಈಗ ಉಲ್ಟಾ ಹೊಡೆದಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/chahatt-khanna-reveals-details-of-her-conversion-during-marriage-and-two-divorces-suc-qf3gl1q"/>
        </item>
        <item>
            <title><![CDATA[25ರ ಹರೆಯದ ಹುಡುಗನ ಪದೇ ಪದೇ ಕರಿತಿದ್ದ ಆಂಟಿ: ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಆಂಟಿ ಕಡೆಯವರು]]></title>
            <link>https://kannada.asianetnews.com/relationship/punjab-news-25-year-old-man-friendship-with-married-woman-cost-his-life/articleshow-rhsak40</link>
            <guid isPermaLink="true">https://kannada.asianetnews.com/relationship/punjab-news-25-year-old-man-friendship-with-married-woman-cost-his-life/articleshow-rhsak40</guid>
            <pubDate>Wed, 15 Apr 2026 14:59:55 +0530</pubDate>
            <description><![CDATA[&lt;p&gt;ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ 25 ವರ್ಷದ ಯುವಕನನ್ನು ಆಕೆಯ ಕುಟುಂಬಸ್ಥರು ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಯುವಕ ಮೃತಪಟ್ಟಿದ್ದಾನೆ. ಘಟನೆ ವೀಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp86tq2k3nxmwn7fa0m2tb0b,imgname-man-murdered-for-illegal-affair-1776244579411.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮೂರು ಮಕ್ಕಳ ತಾಯಿಯ ಸಹವಾಸಕ್ಕೆ ಬಿದ್ದಿದ್ದ ಯುವಕನ ಕೊಲೆ&lt;/strong&gt;&lt;/h2&gt;&lt;p&gt;ಚಂಡಿಗಢ: ವಿವಾಹಿತ ಮಹಿಳೆಯ ಸಹವಾಸಕ್ಕೆ ಬಿದ್ದಿದ್ದ 25ರ ಹರೆಯದ ತರುಣನನ್ನು ಆ ಮಹಿಳೆಯ ಕಡೆಯವರು ಮರಕ್ಕೆ ಕಟ್ಟಿ ಹೊಡೆದು ಸಾಯಿಸಿದ ಆಘಾತಕಾರಿ ಘಟನೆ ಪಂಜಾಬ್&zwnj;ನ ಮಾನ್ಸಾದಲ್ಲಿ ನಡೆದಿದೆ. ಮೃತ ಯುವಕನ್ನು ಖೊಖರ್ ರಸ್ತೆಯ 25 ವರ್ಷದ ಜಶ್&zwnj;ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಯುವಕನಿಗೆ ಈ ಹಿಂದೆಯೂ ಮಹಿಳೆಯ ಕಡೆಯವರು ಥಳಿಸಿದ್ದಾರೆ ಎಂದು ಯುವಕನ ಕಡೆಯವರು ದೂರಿದ್ದಾರೆ. ಯುವಕನನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;25ರ ತರುಣನನ್ನು ಮರಕ್ಕೆ ಕಟ್ಟಿ ಬಡಿದು ಕೊಂದ ಮಹಿಳೆಯ ಕಡೆಯವರು&lt;/strong&gt;&lt;/h3&gt;&lt;p&gt;ಈತನ ಜೊತೆ ಸಂಬಂಧ ಹೊಂದಿದ್ದ ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದು, ಆತನ ನೆರೆಮನೆಯಲ್ಲಿ ವಾಸ ಮಾಡುತ್ತಿದ್ದಳು. ಜಶ್&zwnj;ದೀಪ್ ಕುಟುಂಬದವರ ಪ್ರಕಾರ ಆತನನ್ನು ಮಹಿಳೆಯ ಕುಟುಂಬದವರು ಟಾರ್ಗೆಟ್ ಮಾಡುತ್ತಿದ್ದಿದ್ದು ಇದೇ ಮೊದಲಲ್ಲ, ಇದೇ ವಿಚಾರಕ್ಕೆ ಅವರು ಈ ಹಿಂದೆಯೂ ಆತನ ಮೇಲೆ ಹಲ್ಲೆ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;ಬೊಲೆರೋವೊಂದರಲ್ಲಿ 4 ರಿಂದ 5 ಜನ ಪುರುಷರು ಹಾಗೂ ಇಬ್ಬರು ಮಹಿಳೆಯರು ಆಗಮಿಸಿ ತಮ್ಮ ಮಗನನ್ನು ಬೀದಿಯಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ಭೀಕರವಾಗಿ ಥಳಿಸಿದ್ದಾರೆ ಎಂದು ಜಶ್&zwnj;ದೀಪ್ ತಂದೆ ಗುರುಸೇವಕ್ ಎಂಬುವವರು ಹೇಳಿದ್ದಾರೆ. ಜಶ್&zwnj;ದೀಪ್&zwnj;ನ ತಾಯಿ ಹೇಳುವ ಪ್ರಕಾರ, ಜಶ್&zwnj;ದೀಪ್ ಜೊತೆ ಹೊಂದಿರುವ ಸಂಬಂಧವನ್ನು ನಿಲ್ಲಿಸುವಂತೆ ಆ ಮಹಿಳೆಗೆ ಪದೇ ಪದೇ ಮನವಿ ಮಾಡಿದ್ದರು ಆಕೆ ಮತ್ತೆ ಮತ್ತೆ ಆತನನ್ನು ಕರೆಯುತ್ತಿದ್ದಳು ಎಂದು ದೂರಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಬಿಸಿಲ ಧಗೆಯ ನಡುವೆ ರಾಯಚೂರಲ್ಲೂ ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಮೂವರು ಪಿಂಪ್&zwnj;ಗಳು ಅಂದರ್&lt;/p&gt;&lt;p&gt;ಮಹಿಳೆಯ ಕರೆಗೆ ಕರಗಿ ಬಂದವನನ್ನು ಆಕೆಯ ಕುಟುಂಬಸ್ಥರು ಜನ ಮಾಡಿ ಥಳಿಸಿದ್ದು, ಮರಕ್ಕೆ ಕಟ್ಟಿ ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಆತ ಗಂಭೀರ ಗಾಯಗೊಂಡಿದ್ದು, ಆತನ ಕಾಲುಗಳು ಹಾಗೂ ದೇಹದಲ್ಲಿ ಹಲವು ಮುರಿತಗಳು ಉಂಟಾಗಿದ್ದವು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಆತ ಸಾವನ್ನಪ್ಪಿದ್ದಾನೆ.&lt;/p&gt;&lt;p&gt;ಜಶ್&zwnj;ದೀಪ್ ಸಾವಿನ ಹಿನ್ನೆಲೆ ಆ ಮಹಿಳೆಯ ಮನೆಯವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆತನ ಕುಟುಂಬದವರು ಆಗ್ರಹಿಸಿದ್ದಾರೆ. ಅತನನ್ನು ಅಸಹಾಯಕ ಸ್ಥಿತಿಯಲ್ಲಿ ಅವರು ಬಿಟ್ಟು ಹೋಗಿದ್ದರು. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಜಶ್&zwnj;ದೀಪ್ ಸೋದರ ಹರ್&zwnj;ದೀಪ್ ಸಿಂಗ್ ಆಗ್ರಹಿಸಿದ್ದಾರೆ. ಘಟನೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಅಯಾಜ್&zwnj;ನಿಂದ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಸಂತ್ರಸ್ತರಿಗೆ ಬುದ್ಧಿಮಾತು ಹೇಳಿದ ಕೈ ನಾಯಕಿ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ&lt;/strong&gt;&lt;/p&gt;]]></content:encoded>
            <category>crime</category>
            <dc:creator>Anusha Kb</dc:creator>
            <atom:link href="https://kannada.asianetnews.com/relationship/punjab-news-25-year-old-man-friendship-with-married-woman-cost-his-life/articleshow-rhsak40"/>
        </item>
        <item>
            <title><![CDATA[ರಾವಣನ ಹಣ್ಣು ರಾಮ ಕದ್ದ: ಪ್ರಕಾಶ್​ ರಾಜ್​ ಹೊಸ ರಾಮಾಯಣ ಸ್ಟೋರಿ; ಗೋಮಾಂಸ ಹಬ್ಬ- FIR ದಾಖಲು]]></title>
            <link>https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</link>
            <guid isPermaLink="true">https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2</guid>
            <pubDate>Fri, 17 Apr 2026 12:51:11 +0530</pubDate>
            <description><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd4vy0gex4razqeq7ransrp,imgname-prakash-raj-about-ramayana-1776410294288.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದ ಸಾಹಿತ್ಯ ಉತ್ಸವದಲ್ಲಿ ನಟ ಪ್ರಕಾಶ್ ರಾಜ್, ರಾಮಾಯಣದ ಕಥೆಯನ್ನು ತಿರುಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಮತ್ತು ರಾವಣರ ಕುರಿತು ತಮ್ಮದೇ ಆದ ಕಥೆ ಕಟ್ಟಿ, ಅದನ್ನು ಹಿಂದಿ ಹೇರಿಕೆ ಮತ್ತು ಜಿಎಸ್&zwnj;ಟಿಗೆ ಹೋಲಿಸಿದ್ದು, &amp;nbsp;ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಟ ಪ್ರಕಾಶ್​ ರಾಜ್​ ಅವರಿಗೆ ಕಾಂಟ್ರವರ್ಸಿ ಮೂಲಕ ಫೇಮಸ್​ ಆಗುವುದು ಎಂದರೆ ಇನ್ನಿಲ್ಲದ ಖುಷಿ. ಸದಾ ಬಿಜೆಪಿ, ಕೇಂದ್ರ ಸರ್ಕಾರ, ಪ್ರಧಾನಿ ವಿರುದ್ಧ ಟೀಕೆ ಮಾಡುತ್ತಲೇ ಒಂದಷ್ಟು ವರ್ಗವನ್ನು ಓಲೈಸಲು, ತಮ್ಮ ಮೇಲೆ ಕೇಸ್​ ಆದರೂ ಏನೂ ಆಗುವುದಿಲ್ಲ ಎನ್ನುವ ಬಂಢ ಧೈರ್ಯದಿಂದಲೇ ಹಿಂದೂಗಳ ವಿರುದ್ಧವೂ ಸಾಕಷ್ಟು ಚರ್ಚಾಸ್ಪದ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಅದರಲ್ಲಿ ಇದೀಗ ಕೇರಳಿಗರ ಓಲೈಕೆಗೆ, ಅವರ ಚಪ್ಪಾಳೆ ಗಿಟ್ಟಿಸಲು ಅಲ್ಲಿ ಕೆಲವು ಮಾತನಾಡಿದ್ದು, ಇದೀಗ ಅವರ ವಿರುದ್ಧ ಕ್ರಿಮಿನಲ್​ ಕೇಸ್​​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ನಟ ರಾಮಾಯಣದ ಬಗ್ಗೆ ಅತ್ಯಂತ ಕೆಟ್ಟದ್ದಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ, ಹಿಂದಿ ಭಾಷೆ ಎಲ್ಲವನ್ನೂ ಟೀಕಿಸುವ ಭರದಲ್ಲಿ, ಶ್ರೀರಾಮಚಂದ್ರನನ್ನೇ ಉದಾಹರಣೆ ಮಾಡಿಕೊಂಡು ಕಾಂಟ್ರವರ್ಸಿ ಕ್ರಿಯೇಟ್​ ಮಾಡಿದ್ದಾರೆ ಪ್ರಕಾಶ್​ ರಾಜ್​.&lt;/p&gt;&lt;img&gt;&lt;p&gt;ಶ್ರೀರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ. ರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾನೆ ಎನ್ನುವ ಮೂಲಕ ತಾವೇ ಸೃಷ್ಟಿಸಿರುವ ಕಥೆಯೊಂದನ್ನು ಹೇಳಿದ್ದಾರೆ. ರಾಮ, ಲಕ್ಷ್ಮಣ, ಸೀತೆ ದಕ್ಷಿಣ ಭಾರತಕ್ಕೆ ಅವರಿಗೆ ಒಂದು ತೋಟದಲ್ಲಿ ಹಣ್ಣುಗಳು ಕಾಣುತ್ತವೆ. ಆಗ ಲಕ್ಷ್ಮಣ ಆ ಹಣ್ಣುಗಳನ್ನು ನಾವು ತಿನ್ನಬಹುದೇ ಎಂದು ರಾಮನಲ್ಲಿ ಕೇಳಿದಾಗ, ರಾಮ ಹಸಿವಾಗಿದ್ದರೆ ತಿನ್ನು ಎನ್ನುತ್ತಾನೆ. ಹಣ್ಣುಗಳನ್ನು ತಿನ್ನುವಾಗ, ಶೂರ್ಪನಕಿ ಹಾಗೂ ರಾವಣ ಬರುತ್ತಾರೆ. ಶೂರ್ಪನಕಿಗೆ ಸಿಟ್ಟು ಬಂದು ರಾವಣನಲ್ಲಿ ವಿಷಯ ಹೇಳುತ್ತಾಳೆ ಎಂದು ತಮ್ಮ ಸ್ಟೋರಿ ಆರಂಭಿಸಿದ್ದಾರೆ.&lt;/p&gt;&lt;img&gt;&lt;p&gt;ಬಳಿಕ, ರಾವಣ ಅವರಿಗೆ ಹಸಿವಾಗಿದೆ ಬಿಡು ತಿನ್ನಲಿ, ಆ ಮೇಲೆ ಮಾತಾಡೋಣ ಎನ್ನುತ್ತಾನೆ. ಅದಾದ ಬಳಿಕ ರಾವಣ, ಶೂರ್ಪನಕಿ ರಾಮ, ಲಕ್ಷ್ಮಣರ ಎದುರಿಗೆ ಹೋದಾಗ ರಾಮ ಯಾರೋ ಬುಡಕಟ್ಟ ಜನಾಂಗದವರು ಬಂದರು ಎನ್ನುತ್ತಾನೆ. ಹಣ್ಣುಗಳನ್ನು ತಿಂದಿದ್ದಕ್ಕೆ ಹಣ ನೀಡಬೇಕು ಎಂದು ರಾವಣ ಹೇಳುತ್ತಾನೆ. ಲೆಕ್ಕ ಮಾಡಿ 2000 ಸಾವಿರ ಡಾಲರ್ ಜೊತೆ ಜಿಎಸ್&zwnj;ಟಿ ಕಟ್ಟಬೇಕು ಎಂದು ಹೇಳುತ್ತಾನೆ ಎನ್ನುವುದು ಈ ಕಥೆಯ ಮುಂದುವರೆದ ಭಾಗ.&lt;/p&gt;&lt;img&gt;&lt;p&gt;ಆಗ ರಾಮ, ಲಕ್ಷ್ಮಣ ನಮ್ಮ ಬಳಿ ಹಣವಿಲ್ಲ ಹೇಳುತ್ತಾರೆ . ಆ ಸಮಯದಲ್ಲಿ ರಾವಣ ನಿಮಗೆ ಕೆಲವೊಂದು ರಿಯಾಯ್ತಿ ನೀಡುತ್ತೇವೆ ಎಂದು ಹೇಳಿದರೂ ನಮ್ಮ ಬಳಿ ಹಣ ಇಲ್ಲ ಎನ್ನುತ್ತಾನೆ ರಾಮ. ಆಗ ರಾವಣ ಹಣ್ಣುಗಳನ್ನು ತಿಂದ ಬಳಿಕ ಉಳಿದ ಬೀಜವನ್ನು ನೆಟ್ಟು ಅದನ್ನು ಗಿಡವನ್ನಾಗಿ ಮಾಡಿ ಹೋಗಿ ಎನ್ನುತ್ತಾನೆ. ಹಾಗೆಯೇ ಹೆಸರು ಕೇಳಿದಾಗ, ನಾನು ರಾಮ, ನಾವು ಉತ್ತರ ಭಾರತದವರು ಎಂದು ಹೇಳುತ್ತಾನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕೊನೆಗೆ ಇದನ್ನು ಹಿಂದಿಗೆ ಲಿಂಕ್​ ಮಾಡಿ, ಹಿಂದಿ ಹೇರಿಕೆ ಸ್ಥಿತಿಯೂ ಇದೇ ಆಗಿದೆ. ದುಡ್ಡೇ ಇಲ್ಲದ ಮೇಲೆ ಡಿಸ್ಕೌಂಟ್​ ಕೊಟ್ರೆ ಏನು ಪ್ರಯೋಜನ ಎನ್ನುವ ರೀತಿ ಹಿಂದಿ ಹೇರಿಕೆ ಮಾಡಬೇಡಿ. ಇಲ್ಲಿ ಬಂದು ನೀವು ಮಲಯಾಳಂ ಕಲಿಯಿರಿ. ನಾವು ಬೀಫ್ ಫೆಸ್ಟ್ ಮಾಡುತ್ತೇವೆ&rsquo; ಎಂದಿದ್ದಾರೆ ಪ್ರಕಾಶ್ ರಾಜ್. ರಾಮಾಯಣ ಹಾಗೂ ಬೀಫ್​ ಫೆಸ್ಟ್​ ಬಗ್ಗೆ ಮಾತನಾಡಿದ್ದಕ್ಕೆ ಕ್ರಿಮಿನಲ್​ ಕೇಸ್​ ದಾಖಲಾಗಿದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/prakash-raj-contraversy-statement-against-ramayana-and-also-beef-fest-suc-vzciok2"/>
        </item>
        <item>
            <title><![CDATA[ಬಿಸಿಲ ಧಗೆಯ ನಡುವೆ ರಾಯಚೂರಲ್ಲೂ ಮಾಂಸದಂಧೆ: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಮೂವರು ಪಿಂಪ್‌ಗಳು ಅಂದರ್]]></title>
            <link>https://kannada.asianetnews.com/state/3-middleman-arrested-in-hightech-prostitution-at-raichur/articleshow-x1bo4nn</link>
            <guid isPermaLink="true">https://kannada.asianetnews.com/state/3-middleman-arrested-in-hightech-prostitution-at-raichur/articleshow-x1bo4nn</guid>
            <pubDate>Wed, 15 Apr 2026 13:34:33 +0530</pubDate>
            <description><![CDATA[&lt;p&gt;ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ, ಕಿಂಗ್&zwnj;ಪಿನ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನು ಕರೆತಂದು ಈ ಅಕ್ರಮ ದಂಧೆ ನಡೆಸುತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp821h07mrdq4rtbdfn04t55,imgname-3-arrested-for-prostitution-1776239559687.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನು ಕರೆಸಿ ದಂಧೆ ನಡೆಸುತ್ತಿದ್ದ ಕಿಂಗ್&zwnj;ಪಿನ್ ಅರೆಸ್ಟ್&lt;/strong&gt;&lt;/h2&gt;&lt;p&gt;ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯಲ್ಲೂ ವೇಶ್ಯಾವಾಟಿಕೆ ದಂಧೆಯೊಂದು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ಈ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಸಿಂಧನೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳು ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹಟ್ಟಿ ರಸ್ತೆಯ ನ್ಯಾಶನಲ್ ಲೇಔಟ್&zwnj; ನಲ್ಲಿ ಈ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಬಂಧಿತರನ್ನ ವಿಜಯ್, ಗಂಗಾಧರ, ಮೆಹಬೂಬ್ ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಬಿಸಿಲ ಧಗೆಯ ನಡುವೆ ರಾಯಚೂರಲ್ಲೂ ಮಾಂಸದಂಧೆ&lt;/strong&gt;&lt;/h3&gt;&lt;p&gt;ಈ ಆರೋಪಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹುಡುಗಿಯರನ್ನ ಇಲ್ಲಿಗೆ ಕರೆಸಿ ಗಿರಾಕಿಗಳಿಗೆ ಪೂರೈಕೆ ಮಾಡುವ ಮೂಲಕ ಹಣ ಮಾಡುತ್ತಿದ್ದರು. ಈ ಪ್ರಕರಣದ ಪ್ರಮುಖ ಕಿಂಗ್ ಪಿನ್ ವಿಜಯ್ ಎಂದು ತಿಳಿದು ಬಂದಿದ್ದು, ಪೊಲೀಸರು ಈಗ ಮೂವರನ್ನು ವಶಕ್ಕೆ ಪಡೆದು ವಿಚಾರಣ ನಡೆಸುತ್ತಿದ್ದು, ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಯಾಜ್&zwnj;ನಿಂದ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಸಂತ್ರಸ್ತರಿಗೆ ಬುದ್ಧಿಮಾತು ಹೇಳಿದ ಕೈ ನಾಯಕಿ ಬೇಜವಾಬ್ದಾರಿ ಹೇಳಿಕೆಗೆ ಆಕ್ರೋಶ&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಇಂತಹ ಚಟುವಟಿಕೆಗಳು ಕೆಲವು ಪ್ರವಾಸಿ ತಾಣಗಳಲ್ಲಿ ಕದ್ದುಮುಚ್ಚಿ ಸಾಮಾನ್ಯ ಎಂಬಂತೆ ನಡೆಯುತ್ತಿರುತ್ತವೆ. ಆದರೆ ಬಿಸಿಲಿನ ದಾಹ ಭಯಾನಕವಾಗಿರುವ ರಾಯಚೂರಿನಲ್ಲಿ ಬೇಸಿಗೆಯಲ್ಲಿ ಉಸಿರಾಡಿದರೆ ಸಾಕು ಎಂಬಂತಹ ಸ್ಥಿತಿ ಇದ್ದು, ಇಂತಹ ಸ್ಥಳದಲ್ಲೂ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ..&lt;/p&gt;]]></content:encoded>
            <category>crime</category>
            <dc:creator>Anusha Kb</dc:creator>
            <atom:link href="https://kannada.asianetnews.com/state/3-middleman-arrested-in-hightech-prostitution-at-raichur/articleshow-x1bo4nn"/>
        </item>
    </channel>
</rss>
