<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 29 May 2026 20:23:35 +0530</lastBuildDate>
        <atom:link href="https://kannada.asianetnews.com/rss/crime" rel="self" type="application/rss+xml"/>
        <item>
            <title><![CDATA[ಬಕ್ರೀದ್ ದಿನವೇ ಪತ್ನಿಯನ್ನ ಕೊಂದ ಪಾಪಿ ಪತಿ... ಚನ್ನರಾಯಪಟ್ಟಣದಲ್ಲಿ ನಿಜಕ್ಕೂ ಏನಾಯ್ತು?]]></title>
            <link>https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e</link>
            <guid isPermaLink="true">https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e</guid>
            <pubDate>Thu, 28 May 2026 22:08:43 +0530</pubDate>
            <description><![CDATA[&lt;p&gt;ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5p48hs215m8hwn7vvxgyt5p,imgname-fotojet---2025-09-21t180335.851-1758458038050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಮೇ.28): &lt;/strong&gt;ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು ಗುಲ್&zwnj;ಶರ್ ಬಾನು ಎಂದು ಗುರುತಿಸಲಾಗಿದ್ದು, ಪತಿ ಸೈಫ್ ಉಲ್ಲಾ ವಿರುದ್ಧ ಗಂಭೀರ ಆರೋಪಗಳು ಕೇಳಿಬರುತ್ತಿವೆ.&lt;/p&gt;&lt;p&gt;ಕುಟುಂಬದವರ ಮಾಹಿತಿ ಪ್ರಕಾರ, ಸೈಫ್ ಉಲ್ಲಾ ಮೊದಲಿನಿಂದಲೂ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಹಣಕ್ಕಾಗಿ ಪತ್ನಿಯ ಮನೆಯವರನ್ನು ನಿರಂತರವಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹಬ್ಬದ ದಿನವೂ ಜಗಳ ನಡೆಸಿ ಹಲ್ಲೆ ಮಾಡಿದ ಬಳಿಕ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಸೈಫ್ ಉಲ್ಲಾ ಕುಟುಂಬದವರ ಪಾತ್ರವೂ ಇದೆ ಎಂದು ಮೃತಳ ಕುಟುಂಬದವರು ಆರೋಪಿಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/channarayapatna-husband-kills-wife-crime-news-police-gvd/articleshow-1izvm2e"/>
        </item>
        <item>
            <title><![CDATA[MDMA case: ಡಗ್ಸ್‌ ಕೇಸಲ್ಲಿ ನೈಜೀರಿಯಾ ಪ್ರಜೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌]]></title>
            <link>https://kannada.asianetnews.com/crime/mdma-karnataka-hc-denies-bail-to-nigerian-national-in-dougs-case-rav/articleshow-24rugpt</link>
            <guid isPermaLink="true">https://kannada.asianetnews.com/crime/mdma-karnataka-hc-denies-bail-to-nigerian-national-in-dougs-case-rav/articleshow-24rugpt</guid>
            <pubDate>Thu, 28 May 2026 06:32:48 +0530</pubDate>
            <description><![CDATA[1 ಕೆಜಿ ಎಂಡಿಎಂಎ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತನಾಗಿದ್ದ ನೈಜೀರಿಯಾ ಪ್ರಜೆಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಮಾದಕ ವಸ್ತು ಪ್ರಕರಣಗಳಲ್ಲಿ ಜಾಮೀನು ನೀಡುವುದು ನಿಯಮವಲ್ಲ, ಅದೊಂದು ವಿನಾಯಿತಿ ಎಂದು ಪೀಠ ಅಭಿಪ್ರಾಯಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwzfa3ba9c8vm6zjhxb2sy25,imgname-karnataka-high-court-1749107936618.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.28)&lt;/strong&gt;: ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗೆ ಜಾಮೀನು ನಿರಾಕರಿಸುವುದು ನಿಯಮ ಮತ್ತು ಜಾಮೀನು ಮಂಜೂರಾತಿಯು ಒಂದು ವಿನಾಯಿತಿ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂಎ(MDMA) ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ನೈಜೀರಿಯಾ ಪ್ರಜೆ(Nigerian citizen)ಗೆ ಜಾಮೀನು(bail) ನಿರಾಕರಿಸಿದೆ&lt;/p&gt;&lt;h2&gt;ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ&lt;/h2&gt;&lt;p&gt;ಪ್ರಕರಣ &zwnj;ಸಂಬಂಧ ಜಾಮೀನು ಕೋರಿ ನೈಜೀರಿಯಾದ ಪ್ರಜೆ ಕ್ರಿಶ್ಚಿಯನ್&zwnj; ಸೊಪೋರುಚುಕ್ವು(Christian Soporuchukwu) ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ ಈ ಆದೇಶ ನೀಡಿದೆ.ಪ್ರಕರಣದ ದಾಖಲೆಗಳ ಪ್ರಕಾರ&zwnj; ಆರೋಪಿ ಅಕ್ರಮವಾಗಿ ಭಾರತದಲ್ಲಿ ಉಳಿದಿದ್ದು, 1 ಕೆಜಿ ಎಂಡಿಎಂಎ ಸಹಿತ ಸಿಕ್ಕಿಬಿದ್ದಿದ್ದಾನೆ.&lt;/p&gt;&lt;p&gt;ದಾಳಿ ನಡೆಸಿದ ಪೊಲೀಸರು ಆರೋಪಿಯಿಂದ ಮಾದಕ ವಸ್ತುಗಳ ಜೊತೆಗೆ ಮಿನಿ ಎಲೆಕ್ಟ್ರಾನಿಕ್ ತೂಕ ಯಂತ್ರ, ಮೊಬೈಲ್ ಹಾಗೂ ಬೈಕ್&zwnj; ಅನ್ನು ವಶಪಡಿಸಿಕೊಂಡಿದ್ದಾರೆ. ಬಂಧನದ ಕಾರಣಗಳನ್ನು ಸರಿಯಾಗಿ ತಿಳಿಸದಿರುವುದು ಕೆಲ ಪ್ರಕರಣಗಳಲ್ಲಿ ಜಾಮೀನು ನೀಡಲು ಆಧಾರವಾಗಬಹುದು. ಆದರೆ, ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಲೋಪಗಳ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.&lt;/p&gt;&lt;p&gt;ಪ್ರಕರಣದ ಹಿನ್ನೆಲೆ:&lt;/p&gt;&lt;p&gt;ಅರ್ಜಿದಾರ ಕ್ರಿಸ್ಟಿಯನ್ ಬಟ್ಟೆ ವ್ಯಾಪಾರಕ್ಕಾಗಿ ಬಿಸಿನೆಸ್ ವೀಸಾ(Business visa)ದ ಮೇಲೆ ಭಾರತಕ್ಕೆ ಬಂದಿದ್ದ. ಬಳಿಕ ಗೋವಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ವಾಸವಾಗಿದ್ದ.&zwnj;ಈ ವೇಳೆ ದಕ್ಷಿಣ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್&zwnj;ಗಳ ಪರಿಚಯ ಮಾಡಿಕೊಂಡು ಕಡಿಮೆ ದರದಲ್ಲಿ ಎಂಡಿಎಂಎ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂಗೆ 15 ಸಾವಿರದಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ಬೇಗೂರು ಪೊಲೀಸರು 1ಕೆಜಿ ಎಂಡಿಎಂಎ ಕ್ರಿಸ್ಟಲ್&zwnj;ಗಳೊಂದಿಗೆ 2025ರ ಏ.6ರಂದು ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ.&lt;/p&gt;&lt;p&gt;ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಬಂಧನಕ್ಕೆ ಸೂಕ್ತ ಕಾರಣಗಳನ್ನು ತಿಳಿಸಿಲ್ಲ. ಆದ್ದರಿಂದ ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.&lt;/p&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/mdma-karnataka-hc-denies-bail-to-nigerian-national-in-dougs-case-rav/articleshow-24rugpt"/>
        </item>
        <item>
            <title><![CDATA[10 ವರ್ಷ ಬಾಲೆಯ ಗ್ಯಾಂಗ್​ರೇ*ಪ್​, ಮರ್ಡರ್​  ಸುದ್ದಿಗೋಷ್ಠಿಯಲ್ಲಿ ಬಿದ್ದೂ ಬಿದ್ದೂ ನಕ್ಕ ಪೊಲೀಸ್​ ಅಧಿಕಾರಿ]]></title>
            <link>https://kannada.asianetnews.com/india-news/coimbatore-girl-murder-cop-caught-grinning-during-media-briefing-video-sparks-suc/articleshow-25d92y9</link>
            <guid isPermaLink="true">https://kannada.asianetnews.com/india-news/coimbatore-girl-murder-cop-caught-grinning-during-media-briefing-video-sparks-suc/articleshow-25d92y9</guid>
            <pubDate>Tue, 26 May 2026 16:13:11 +0530</pubDate>
            <description><![CDATA[&lt;p&gt;ಕೊಯಮತ್ತೂರಿನಲ್ಲಿ ಹತ್ತು ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅ*ತ್ಯಾಚಾರ ಮತ್ತು ಕೊಲೆ ಪ್ರಕರಣ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರಕರಣದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ನಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಧಿಕಾರಿ ಕೀರ್ತನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshy2agbdx1p771yvfrxk9h8,imgname-press-meet-1779792161291.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರವಾಗಿದ್ದು, ಆಕೆಯ ಕೊಲೆಯಾಗಿದೆ. ಈ ಭೀಕರ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇದು ರಾಜಕೀಯ ತಿರುವನ್ನೂ ಪಡೆದುಕೊಂಡಿದ್ದು ಮುಖ್ಯಮಂತ್ರಿ ಜೋಸೆಫ್​ ವಿಜಯ್ ಸರ್ಕಾರವನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ವಿರೋಧ ಪಕ್ಷಗಳು ಟಿವಿಕೆ ಸರ್ಕಾರವನ್ನು ನಿರಂತರವಾಗಿ ಗುರಿಯಾಗಿಸಿಕೊಂಡಿವೆ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಕೊಲೆಯ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ.&lt;/p&gt;&lt;p&gt;ಏತನ್ಮಧ್ಯೆ, 10 ವರ್ಷದ ಬಾಲಕಿಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿದಾಗ, ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಜರಿದ್ದರು. ಪತ್ರಿಕಾಗೋಷ್ಠಿಯ ಸಮಯದಲ್ಲಿ ಮೂವರೂ ಪದೇ ಪದೇ ನಗುತ್ತಿರುವುದು ಅದರಲ್ಲಿಯೂ ಮಹಿಳಾ ಅಧಿಕಾರಿ ಕೀರ್ತನಾ ಬಿದ್ದೂ ಬಿದ್ದೂ ನಗುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕಿಯ ಸಾವಿಗೆ ನಕ್ಕ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ನಗುವ ವಿಡಿಯೋ ವೈರಲ್​&lt;/strong&gt;&lt;/h2&gt;&lt;p&gt;ತಮಿಳುನಾಡಿನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಬಿದ್ದೂ ಬಿದ್ದೂ ನಗುತ್ತಿರುವ ವೈರಲ್ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಕೋಪವನ್ನು ಹುಟ್ಟುಹಾಕಿವೆ. ಬಾಲಕಿಯ ಭೀಕರ ಹತ್ಯೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಸಮಯದಲ್ಲಿ ಈ ಘಟನೆ ನಡೆದಿದೆ.&lt;/p&gt;&lt;h3&gt;&lt;strong&gt;ಏನಿದು ಕೇಸ್​?&lt;/strong&gt;&lt;/h3&gt;&lt;p&gt;ಹತ್ತು ವರ್ಷದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು, ಮತ್ತು ನಂತರ ಆಕೆಯ ಶವ ಕೊಳದ ಬಳಿ ಪತ್ತೆಯಾಗಿದೆ. ಈ ವಿಡಿಯೋದಲ್ಲಿ, ಮಹಿಳಾ ಅಧಿಕಾರಿ ಮತ್ತು ಪಶ್ಚಿಮ ವಲಯದ ಐಜಿ ಸೇರಿದಂತೆ ಮೂವರು ಅಧಿಕಾರಿಗಳು, ಸೂಕ್ಷ್ಮ ವಿಷಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ನಗುತ್ತಾ ನಗುತ್ತಿರುವುದನ್ನು ಕಾಣಬಹುದು. ಈ ದೃಶ್ಯಗಳು ಆನ್&zwnj;ಲೈನ್&zwnj;ನಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ. ಕೋಪಗೊಂಡ ಬಳಕೆದಾರರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಪ್ರಾಪ್ತ ವಯಸ್ಕನನ್ನು ಒಳಗೊಂಡ ಇಂತಹ ಗಂಭೀರ ಅಪರಾಧವನ್ನು ಎದುರಿಸುವಾಗ ಅಧಿಕಾರಿಗಳಿಗೆ ಸೂಕ್ಷ್ಮತೆಯ ಕೊರತೆ ಏಕೆ ಇದೆ ಎಂದು ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಒಬ್ಬ ಬಳಕೆದಾರರು &quot;ಐಪಿಎಸ್ ಅಧಿಕಾರಿಗಳು ತುಂಬಾ ವಿದ್ಯಾವಂತರು, ಅವರು ಇಷ್ಟೊಂದು ಸಂವೇದನಾಶೀಲರಾಗಿರಲು ಹೇಗೆ ಸಾಧ್ಯ?&quot; ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು &quot;ನಾಚಿಕೆಗೇಡು&quot; ಎಂದು ಬರೆದಿದ್ದಾರೆ. &quot;ಅವರಿಗೆ ಇದು ಕೇವಲ ಒಂದು ಪ್ರಕರಣ. ಅವರು ಕಾಳಜಿ ವಹಿಸುವುದಿಲ್ಲ, ಆದ್ದರಿಂದ ಅವರು ನಗುತ್ತಿದ್ದಾರೆ. ಈ ಜನರು ನಾಚಿಕೆಪಡಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.&lt;/p&gt;&lt;p&gt;ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಲೇ ಅಧಿಕಾರಿ ಕೀರ್ತನಾ ಅವರು, ರಾಜಕೀಯ ದುರುದ್ದೇಶದಿಂದ ಈ ವಿಡಿಯೋ ಬಳಸಿಕೊಳ್ಳಲಾಗುತ್ತಿದೆ. ಪತ್ರಿಕಾಗೋಷ್ಠಿ ಮುಗಿದ ಮೇಲೆ ಏನೋ ಮಾತನಾಡುತ್ತಿರುವಾಗ ಹಾಗೆ ನಕ್ಕಿದ್ದು. ಆದರೆ ನನ್ನ ಬಾಡಿ ಲ್ಯಾಂಗ್ವೇಜ್​ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾನು ನಕ್ಕಿರುವುದಕ್ಕೂ ಈ ಕೇಸ್​ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/coimbatore-girl-murder-cop-caught-grinning-during-media-briefing-video-sparks-suc/articleshow-25d92y9"/>
        </item>
        <item>
            <title><![CDATA[ಎದೆ ಮೇಲೆ ಬೈಬಲ್ ಇಟ್ಟು ಸತ್ತ ಮಗನಿಗೆ ಜೀವ ತುಂಬಲು ಹೆತ್ತ ತಾಯಿ ಪರದಾಟ, ಮುಂದೆ ಆಗಿದ್ದು ಇದೇ!]]></title>
            <link>https://kannada.asianetnews.com/crime/mother-kept-dead-son-body-from-five-days-and-praying-with-bible/articleshow-3liaaqw</link>
            <guid isPermaLink="true">https://kannada.asianetnews.com/crime/mother-kept-dead-son-body-from-five-days-and-praying-with-bible/articleshow-3liaaqw</guid>
            <pubDate>Tue, 26 May 2026 14:32:41 +0530</pubDate>
            <description><![CDATA[&lt;p&gt;Heartbreaking incident : ಪಾಲಕರ ಮುಂದೆ ಮಕ್ಕಳು ಸಾವನ್ನಪ್ಪಿದ್ರೆ ನೋವು ಹೇಳತೀರದು. ಅನೇಕರು ಈ ಕಟು ಸತ್ಯವನ್ನು ನಂಬಲು ಸಿದ್ಧವಿರೋದಿಲ್ಲ. ಮಕ್ಕಳನ್ನು ಬದುಕಿಸುವ ಪ್ರಯತ್ನ ನಡೆಸ್ತಾರೆ. ಮಧ್ಯಪ್ರದೇಶದಲ್ಲೂ ತಾಯಿಯೊಬ್ಬಳು ಐದು ದಿನಗಳ ಕಾಲ ಸತ್ತ ಮಗನನ್ನು ಬದುಕಿಸುವ ಯತ್ನ ಮಾಡಿದ್ದಾಳೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshr49nn5kxa1vjqmy14fbx3,imgname-heartbreaking-incident-1779785934517.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಧ್ಯಪ್ರದೇಶದ ವಿದಿಶಾ (Vidisha)ದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗ ಸತ್ತು ಐದು ದಿನಗಳಾದ್ರೂ ತಾಯಿ ಸಂಬಂಧಿಕರಿಗೆ ವಿಷ್ಯ ತಿಳಿಸದೆ ಮಗನನ್ನು ಬದುಕಿಸುವ ಪ್ರಯತ್ನ ಮಾಡಿದ್ದಾಳೆ. ಬೈಬಲ್ ಹಿಡಿದು ಪ್ರಾರ್ಥನೆ ಮಾಡ್ತಿದ್ದ ತಾಯಿ, ಮಗ ಸತ್ತಿರೋದನ್ನು ಒಪ್ಪಿಕೊಳ್ಳಲು ಸಿದ್ದವಿರಲಿಲ್ಲ.&lt;/p&gt;&lt;h2&gt;ಮಗನನ್ನು ಬದುಕಿಸಲು ತಾಯಿಯ ನಿರಂತರ ಪ್ರಯತ್ನ&lt;/h2&gt;&lt;p&gt;ಪಾಲಕರ ಮುಂದೆ ಮಕ್ಕಳು ಸತ್ರೆ ಅದ್ರಂತ ನೋವು ಮತ್ತ್ಯಾವುದಿಲ್ಲ. ಪುತ್ರ ಶೋಕಂ ನಿರಂತರಂ ಎನ್ನುವ ಮಾತಿದೆ. ಮಧ್ಯಪ್ರದೇಶದ ಮಹಿಳೆಯೊಬ್ಬಳು ಸತ್ತ ಮಗನನ್ನು ಬದುಕಿಸಲು ನಿರಂತರ ಪ್ರಯತ್ನ ಮಾಡಿದ್ದಾಳೆ. ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿದ್ದಾಳೆ. ಆದರೆ ತಾಯಿ ಪ್ರಾರ್ಥನೆ ಫಲಿಸಲಿಲ್ಲ. ಸತ್ತ ಮಗ ಮತ್ತೆ ಕಣ್ಣು ಬಿಡಲಿಲ್ಲ. ಆತನ ಶವ ಕೊಳೆಯಲು ಶುರುವಾಗಿದೆ. ವಾಸನೆ ಮನೆ ತುಂಬ ಹರಡಿದೆ. ಆದ್ರೂ ತಾಯಿ ಜೀವ ಸತ್ಯ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಮಗನ ಅಂತ್ಯ ಸಂಸ್ಕಾರಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಕೊನೆಯಲ್ಲಿ ಮನೆಗೆ ಹಾಲಿನವನು ಬಂದಾಗ, ಮಗ ಸತ್ತ ಸಂಗತಿ ಬಹಿರಂಗವಾಗಿದೆ.&lt;/p&gt;&lt;p&gt;ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್&zwnj;ಗೆ ಪೊಲೀಸರೇ ಶಾಕ್!&lt;/p&gt;&lt;p&gt;ಮೃತನ ಹೆಸರು ಶಿನು ವರ್ಗಿಸ್. 42 ವರ್ಷದ ಮೃತನ ತಾಯಿ ಹೆಸರು ಮರಿಯಾಮಾ ವರ್ಗಿಸ್. ಶಿನು ವರ್ಗಿಸ್ ಕೆಲ ವರ್ಷ ಮುಂಬೈನಲ್ಲಿ ಫ್ಯಾಷನ್ ಡಿಸೈನರ್ ಆಗಿ ಕೆಲ್ಸ ಮಾಡ್ತಿದ್ದ. ಕಳೆದ ಎರಡು ವರ್ಷಗಳಿಂದ ತಾಯಿ ಜೊತೆ ವಿದಿಶಾದಲ್ಲಿ ವಾಸವಾಗಿದ್ದ. ಮರಿಯಾಮಾ ವರ್ಗಿಸ್ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಮರಿಯಾಮಾ ವರ್ಗಿಸ್ ಪತಿ ಕಳೆದ ವರ್ಷ ಸಾವನ್ನಪ್ಪಿದ್ದರು. ನಂತ್ರ ತಾಯಿ &ndash; ಮಗ ಇಬ್ಬರೇ ವಾಸವಾಗಿದ್ದರು. ದೇವರನ್ನು ಅಪಾರವಾಗಿ ನಂಬುತ್ತಿದ್ದ ಮರಿಯಾಮಾ ವರ್ಗಿಸ್, ಮಗನನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಬೈಬಲ್ ಓಡಿದ್ರೆ ಮಗ ಬದುಕಿ ಬರ್ತಾನೆ ಅಂತ ನಂಬಿದ್ದಾರೆ. ಶವದ ಎದೆ ಮೇಲೆ ಬೈಬಲ್ ಇಟ್ಟು ಪ್ರಾರ್ಥನೆ ಮಾಡಿದ್ದಾರೆ.&lt;/p&gt;&lt;p&gt;ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ&lt;/p&gt;&lt;p&gt;ಶಿನು ಮನೆಗೆ ಯಾರೂ ಬರ್ತಿರಲಿಲ್ಲ, ಶಿನು ಅವನ ತಾಯಿ ಕೂಡ ಯಾರ ಮನೆಗೂ ಹೋಗ್ತಿರಲಿಲ್ಲ. ಹಾಗಾಗಿ ಶಿನು ಸಾವಿನ ಸುದ್ದಿ ಯಾರಿಗೂ ತಿಳಿದಿರಲಿಲ್ಲ. ಹಾಲಿನವನು ಮನೆಗೆ ಬಂದಾಗ ವಾಸನೆ ಬಂದಿದೆ. ಬೆಡ್ ರೂಮಿನಲ್ಲಿ ರಕ್ತ ಕಾಣಿಸಿದೆ. ಅಕ್ಕಪಕ್ಕದವರಿಗೆ ಹಾಲಿನವನು ವಿಷ್ಯ ಮುಟ್ಟಿಸಿದ್ದಾನೆ. ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಶಿನು ವರ್ಗಿಸ್ ಮನೆಗೆ ಬಂದಿದ್ದಾರೆ. ಮನೆ ಪ್ರವೇಶಿಸಲು ಮರಿಯಾಮಾ ವರ್ಗಿಸ್ ನಿರಾಕರಿಸಿದ್ದಾರೆ. ಪೊಲೀಸರು ಬಲವಂತವಾಗಿ ಮನೆ ಪ್ರವೇಶ ಮಾಡಿದಾಗ ಶಿನು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ಶವ ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತ್ರ ಸಾವಿನ ಸತ್ಯ ಬಯಲಾಗಬೇಕಿದೆ. ಶಿನು ಸ್ವಲ್ಪ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ತಾಯಿ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ. ಮನೆಯಿಂದ ವಾಸನೆ ಬರ್ತಿದ್ರೂ ನೆರೆಯವರು ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಪ್ರಾಣಿ ಸತ್ತಿರಬೇಕೆಂದು ಭಾವಿಸಿದ್ರು.&lt;/p&gt;]]></content:encoded>
            <category>crime</category>
            <dc:creator>Roopa Hegde</dc:creator>
            <atom:link href="https://kannada.asianetnews.com/crime/mother-kept-dead-son-body-from-five-days-and-praying-with-bible/articleshow-3liaaqw"/>
        </item>
        <item>
            <title><![CDATA[ಕಣ್ಣಮುಂದೆ ಬಂಗಾರ ಇದ್ರೂ ಮುಟ್ಟಲ್ಲ.. ಬೆಳ್ಳಿ ಕಂಡ್ರೆ ಬಿಡೋಲ್ಲ! ಬೆಂಗಳೂರಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್‌ಗೆ ಪೊಲೀಸರೇ ಶಾಕ್!]]></title>
            <link>https://kannada.asianetnews.com/crime/gold-ignored-silver-stolen-police-bust-strange-theft-gang-in-hesaraghatta-bengaluru-rav/articleshow-4r3e3ir</link>
            <guid isPermaLink="true">https://kannada.asianetnews.com/crime/gold-ignored-silver-stolen-police-bust-strange-theft-gang-in-hesaraghatta-bengaluru-rav/articleshow-4r3e3ir</guid>
            <pubDate>Tue, 26 May 2026 14:07:42 +0530</pubDate>
            <description><![CDATA[&lt;p&gt;ಬೆಂಗಳೂರಿನ ಹೆಸರಘಟ್ಟದಲ್ಲಿರುವ ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ನುಗ್ಗಿದ ಕಳ್ಳರ ಗ್ಯಾಂಗ್, ಬಂಗಾರವನ್ನು ಮುಟ್ಟದೆ ಕೆಜಿಗಟ್ಟಲೆ ಬೆಳ್ಳಿ ಮಾತ್ರ ದೋಚಿತ್ತು. ಈ ಪ್ರಕರಣವನ್ನು ಭೇದಿಸಿದ ಬಾಗಲಗುಂಟೆ ಪೊಲೀಸರು, ರಾಜಸ್ಥಾನದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ 36 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshpvh6e8scv1qqc4vk5v4mw,imgname-----------------------2026-05-26t134635.936-1779784598734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.26):&lt;/strong&gt; ಬೆಂಗಳೂರು ಪೊಲೀಸರನ್ನೇ ಬೆಚ್ಚಿಬೀಳಿಸಿದ ಕಳ್ಳರ ಗ್ಯಾಂಗ್ ಒಂದು ವಿಚಿತ್ರ ಸ್ಟೈಲ್&zwnj;ನಲ್ಲಿ ಜ್ಯುವೆಲರಿ ಅಂಗಡಿಗೆ ಕನ್ನ ಹಾಕಿದೆ. ಅಂಗಡಿಯಲ್ಲಿ ಕೆಜಿಗಟ್ಟಲೇ ಬಂಗಾರ ಕಣ್ಣ ಮುಂದೆ ಇತ್ತಂತೆ. ಆದರೆ ಖದೀಮರು ಅದನ್ನ ತಿರುಗಿಯೂ ನೋಡಿಲ್ಲ ಎಂದರೆ ನಂಬುತ್ತೀರಾ? ಚಿನ್ನ ಅಂದರೆ ಯಾರಿಗೆ ಬೇಡ? ಆದರೆ ಈ ಖದೀಮರಿಗೆ ಚಿನ್ನ ಅಂದ್ರೆ ಅಲರ್ಜಿ, ಬೆಳ್ಳಿ ಅಂದ್ರೆ ಎನರ್ಜಿ! ಈ ಖದೀಮರ ಟಾರ್ಗೆಟ್ ಒಂದೇ ಬೆಳ್ಳಿ! 'ಬಂಗಾರ ಇದ್ರೂ ಮುಟ್ಟಲ್ಲ, ಬೆಳ್ಳಿ ಕಂಡ್ರೆ ಬಿಡಲ್ಲ' ಅನ್ನೋ ರೀತಿ ಪ್ಲಾನ್ ಮಾಡಿ ಬಂದಿದ್ದ ಗ್ಯಾಂಗ್, ರಾತ್ರಿ ಹೊತ್ತು ಅಂಗಡಿಯ ಗೋಡೆ ಕೊರೆದು ಒಳಗೆ ನುಗ್ಗಿದೆ.&lt;/p&gt;&lt;h2&gt;ಹೆಸರಘಟ್ಟದ ಜ್ಯುವೆಲರಿ ಅಂಗಡಿಯಲ್ಲಿ ಫಿಲ್ಮ್ ಸ್ಟೈಲ್&zwnj;ನಲ್ಲಿ ಕಳ್ಳತನ!&lt;/h2&gt;&lt;p&gt;ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂಬಿ ಜ್ಯುವೆಲರ್ಸ್ ಅಂಗಡಿ ಮೇಲೆ ಏಪ್ರಿಲ್ 27ರ ಬೆಳಗಿನ ಜಾವ ದಾಳಿ ನಡೆದಿತ್ತು. ಗೋಡೆ ಕೊರೆದು ಒಳಗೆ ನುಗ್ಗಿದ ಕಳ್ಳರು, ನೇರವಾಗಿ ಬೆಳ್ಳಿ ಇಟ್ಟ ಜಾಗಕ್ಕೆ ಹೋಗಿದ್ದಾರೆ. ಕೆಲವೇ ನಿಮಿಷಗಳಲ್ಲಿ ಕೆಜಿಗಟ್ಟಲೇ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ. ಬೆಳಗ್ಗೆ ಅಂಗಡಿ ತೆರೆಯಲು ಬಂದ ಮಾಲೀಕ ಶಾಕ್ ಆಗಿದ್ದ. ಯಾಕೆಂದರೆ ಜ್ಯೂವೆಲ್ಲರಿ ಶಾಪ್&zwnj;ನಲ್ಲಿ ಬೆಳೆಬಾಳುವ ಬಂಗಾರ ಹಾಗೇ ಇದ್ದು, ಬೆಳ್ಳಿ ಮಾತ್ರ ಒಂದು ತುಂಡು ಬಿಡದೆ ದೋಚಿದ್ದ ಖದೀಮರು! ಸಿಸಿಟಿವಿ ದೃಶ್ಯ ನೋಡಿ ಪೊಲೀಸರೂ ಕಂಗಾಲಾಗಿದ್ದರು.&lt;/p&gt;&lt;h3&gt;ಹೈದರಾಬಾದ್&zwnj;ನಲ್ಲಿ ಬೆಳ್ಳಿ ಸೇಲ್... ನಂತರ ರಾಜಸ್ಥಾನ ಎಸ್ಕೇಪ್!&lt;/h3&gt;&lt;p&gt;ಜ್ಯೂವೆಲ್ಲರಿ ಶಾಪ್ ಕಳ್ಳತನದ ಬಳಿಕ ಗ್ಯಾಂಗ್ ನೇರವಾಗಿ ಹೈದರಾಬಾದ್&zwnj;ಗೆ ಹೋಗಿದೆ. ಅಲ್ಲಿ ಅರ್ಧ ಬೆಳ್ಳಿಯನ್ನು ಮಾರಾಟ ಮಾಡಿತ್ತು. ಅಲ್ಲಿಂದ ಯಾರಿಗೂ ಸುಳಿವು ಸಿಗದಂತೆ ರಾಜಸ್ಥಾನಕ್ಕೆ ಎಸ್ಕೇಪ್ ಆಗಿತ್ತು. ಆದರೆ ಬಾಗಲಗುಂಟೆ ಪೊಲೀಸರ ಸೈಲೆಂಟಾಗಿ ಖದೀಮರ ಹೆಜ್ಜೆ ಜಾಡು ಹಿಡಿದು ಬೆನ್ನತ್ತಿದ್ದರು. ಕೊನೆಗೆ ಸಿಸಿಟಿವಿ, ಮೊಬೈಲ್ ಲೊಕೇಶನ್ ಮತ್ತು ಟ್ರಾವೆಲ್ ಡೀಟೇಲ್ಸ್ ಆಧರಿಸಿ ಪೊಲೀಸರು ರಾಜಸ್ಥಾನದಲ್ಲಿ ದಾಳಿ ನಡೆಸಿ ಜಾಟ್ ಸುರೇಶ್, ಧನರಾಮ್ ಮತ್ತು ನೇಮಿ ಚಂದ್ ಎಂಬ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;&lt;strong&gt;36 ಕೆಜಿ ಬೆಳ್ಳಿ ವಶ... ಕಿಂಗ್&zwnj;ಪಿನ್ ಪರಾರಿ!&lt;/strong&gt;&lt;/p&gt;&lt;p&gt;ಬಂಧಿತರಿಂದ ಸುಮಾರು 1 ಕೋಟಿ ಮೌಲ್ಯದ 36 ಕೆಜಿಯಷ್ಟು ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ಗ್ಯಾಂಗ್&zwnj;ನ ಮಾಸ್ಟರ್ ಮೈಂಡ್ ಮಹೇಂದ್ರ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಆತನಿಗಾಗಿ ಬಾಗಲಗುಂಟೆ ಪೊಲೀಸರು ಬಲೆ ಬೀಸಿದ್ದಾರೆ. ಮಹೇಂದ್ರ ಸಿಕ್ಕಿಬಿದ್ದರೆ ಇನ್ನಷ್ಟು ಶಾಕಿಂಗ್ ಕಳ್ಳತನ ಪ್ರಕರಣಗಳು ಬಯಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/gold-ignored-silver-stolen-police-bust-strange-theft-gang-in-hesaraghatta-bengaluru-rav/articleshow-4r3e3ir"/>
        </item>
        <item>
            <title><![CDATA[ಕೃಷಿಕನಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಟೆಕ್ಕಿಯ ಜೀವ ಕಸಿದ ಸಿಡಿಲು: ಕೊಡಗಿನ ಯುವಕ ಬಲಿ]]></title>
            <link>https://kannada.asianetnews.com/karnataka-districts/karnataka-techie-turns-farmer-struck-dead-by-lightning-while-checking-his-field-in-kodagu-suc/articleshow-avq0vtg</link>
            <guid isPermaLink="true">https://kannada.asianetnews.com/karnataka-districts/karnataka-techie-turns-farmer-struck-dead-by-lightning-while-checking-his-field-in-kodagu-suc/articleshow-avq0vtg</guid>
            <pubDate>Thu, 28 May 2026 17:53:10 +0530</pubDate>
            <description><![CDATA[ಸಾಫ್ಟ್​ವೇರ್​ ಉದ್ಯೋಗ ತೊರೆದು ಕೃಷಿಯಲ್ಲಿ ಹೊಸ ಪ್ರಯೋಗ ಮಾಡಲು ಬಂದಿದ್ದ ಟೆಕ್ಕಿಯೊಬ್ಬರು ಕೊಡಗಿನಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ತಮ್ಮ ಹೊಲದಲ್ಲಿ ಮಾವು ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಜೊತೆಗಿದ್ದ ಪತ್ನಿ ಮತ್ತು ಮಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksq8kajtvryn30jcj0ymrh71,imgname-techie-death-1779970976346.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗ ಹಲವಾರು ಮಂದಿ ಸಾಫ್ಟ್​ವೇರ್​ ಉದ್ಯೋಗ ತೊರೆದು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಸಾಫ್ಟ್​ವೇರ್​ ಕ್ಷೇತ್ರದಲ್ಲಿ ತಾವು ಕಲಿತಿರುವ ತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಹೊಸ ಹೊಸ ಪ್ರಯೋಗ ಮಾಡುವಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಮಾಡುವ ಕನಸು ಕಂಡು ಸಾಫ್ಟ್​ವೇರ್​ ಉದ್ಯೋಗ ತೊರೆದು ಬಂದಿದ್ದ ಟೆಕ್ಕಿಯ ಜೀವವನ್ನು ಸಿಡಿಲು ಬಲಿ ಪಡೆದಿರುವ ದುರ್ಘಟನೆ ಕೊಡಗಿನಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಮಾವು ಕೀಳುವಾಗ ಸಿಡಿಲು&lt;/strong&gt;&lt;/h2&gt;&lt;p&gt;ಹೊಲದಲ್ಲಿ ಇದ್ದ ವೇಳೆ, ಸಿಡಿಲು ಬಡಿದಿದೆ. ಇವರ ಜೊತೆಗಿದ್ದ ಪತ್ನಿ ಮತ್ತು ಮಗ ಅವರಿಗೂ ಸಿಡಿಲು ಬಡಿದಿದೆ. ಆದರೆ ಅದೃಷ್ಟವಶಾತ್​ ಅವರು ಬಚಾವಾಗಿದ್ದು, ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದ ಹೊಸೊಕ್ಲು ರೋಷನ್ ಬಾಲಕೃಷ್ಣ ಸಾವನ್ನಪ್ಪಿದ್ದಾರೆ. ಇವರು, ಮಡಿಕೇರಿ ಬಳಿಯ ಹೆರವನಾಡ್ ಗ್ರಾಮದ ದಿವಂಗತ ಹೊಸೊಕ್ಲು ಬಾಲಕೃಷ್ಣ ಅವರ ಪುತ್ರ. ವರದಿಯ ಪ್ರಕಾರ, ರೋಷನ್ ತಮ್ಮ ಐಟಿ ವೃತ್ತಿಯನ್ನು ತೊರೆದು ಸಹೋದ್ಯೋಗಿಯೊಂದಿಗೆ ಆಧುನಿಕ ಕೃಷಿ ಉಪಕರಣಗಳ ಪ್ರಚಾರ ಮತ್ತು ಮಾರುಕಟ್ಟೆ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಂಡಿದ್ದರು. ಅವರು ತಮ್ಮ ಪತ್ನಿ ಮತ್ತು ಮಗನೊಂದಿಗೆ ಯೆಲ್ವಾಲ್ ಬಳಿ ತಮ್ಮ ಒಡೆತನದ ಆಸ್ತಿಯನ್ನು ನೋಡಲು ಹೋಗಿದ್ದರು. ಅವರು ಹೊಲದಿಂದ ಮಾವು ಕೀಳಲು ಹೋದಾಗ ಸಿಡಿಲು ಬಡಿದು ಸ್ಥಳದಲ್ಲೇ ಕುಸಿದು ಬಿದ್ದರು. ಆ ಸಮಯದಲ್ಲಿ ಅವರೊಂದಿಗೆ ಇದ್ದ ವ್ಯಕ್ತಿಗೂ ಗಾಯಗಳಾಗಿದ್ದರೂ ಬದುಕುಳಿದರು ಎಂದು ವರದಿ ತಿಳಿಸಿದೆ. ರೋಷನ್ ಅವರ ಪತ್ನಿ ಮತ್ತು ಒಬ್ಬ ಮಗ ಬದುಕುಳಿದರು.&lt;/p&gt;&lt;h3&gt;&lt;strong&gt;ಪ್ರತ್ಯೇಕ ಘಟನೆಗಳು&lt;/strong&gt;&lt;/h3&gt;&lt;p&gt;ಮರುದಿನ, ಮೈಸೂರು ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಇನ್ನಿಬ್ಬರು ಸಾವುಗಳು ವರದಿಯಾಗಿವೆ ಎಂದು ವರದಿ ತಿಳಿಸಿದೆ. ಹುಣಸೂರು ತಾಲ್ಲೂಕಿನ ಹೊಸಪುರ ಗ್ರಾಮದ ನಿವಾಸಿ ದಿವಂಗತ ಬೋರೇಗೌಡ ಅವರ ಪತ್ನಿ ಯಶೋದಮ್ಮ ಅವರು ಹಳೇಪುರ ಗ್ರಾಮದ ತಮ್ಮ ಕುಟುಂಬದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದರು. ಕುಟುಂಬಕ್ಕೆ ಅಲ್ಲಿ ಅರ್ಧ ಎಕರೆ ಜಮೀನಿತ್ತು. ವರದಿಯ ಪ್ರಕಾರ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.&lt;/p&gt;&lt;p&gt;ಅದೇ ದಿನ ನಡೆದ ಮತ್ತೊಂದು ಘಟನೆಯಲ್ಲಿ, ಎಚ್&zwnj;ಡಿ ಕೋಟೆ ತಾಲ್ಲೂಕಿನ ಮಲದಹಳ್ಳಿ ಗ್ರಾಮದ ಸುಬ್ಬ ಅವರ ಮಗ ಅಪ್ಪಯ್ಯ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿಡಿಲು ಬಡಿದು ಮರದ ಕೆಳಗೆ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಎಚ್&zwnj;ಡಿ ಕೋಟೆಯ ಅಂತರಸಂತೆಯಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ ಪ್ರತ್ಯೇಕ ಸಿಡಿಲು ಬಡಿದು ಹಸುವೊಂದು ಸಾವನ್ನಪ್ಪಿದೆ ಎಂದು ವರದಿ ಉಲ್ಲೇಖಿಸಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/karnataka-techie-turns-farmer-struck-dead-by-lightning-while-checking-his-field-in-kodagu-suc/articleshow-avq0vtg"/>
        </item>
        <item>
            <title><![CDATA[ಕಣ್ಣು ಕಾಣದ ಸ್ನೇಹಿತೆಯ ಮನೆಯಲ್ಲಿ ಚಿನ್ನ ಕದ್ದ ಖತರ್ನಾಕ್ ದಂಪತಿ! ಒಂದು ವರ್ಷದ ಬಳಿಕ ಪ್ರಕರಣ ಬಯಲು, ಅರೆಸ್ಟ್!]]></title>
            <link>https://kannada.asianetnews.com/crime/couple-arrested-for-stealing-gold-from-visually-impaired-friend-s-house-rr-nagar-bengaluru-rav/articleshow-es5oovn</link>
            <guid isPermaLink="true">https://kannada.asianetnews.com/crime/couple-arrested-for-stealing-gold-from-visually-impaired-friend-s-house-rr-nagar-bengaluru-rav/articleshow-es5oovn</guid>
            <pubDate>Tue, 26 May 2026 14:37:39 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ನಂಬಿಕೆದ್ರೋಹದ ಪ್ರಕರಣ ಬೆಳಕಿಗೆ ಬಂದಿದೆ. ರಾಜರಾಜೇಶ್ವರಿನಗರದಲ್ಲಿ ವಾಸವಿರುವ ಅಂಧ ಮಹಿಳೆಯ ಮನೆಗೆ ಸ್ನೇಹಿತರಂತೆ ಮನೆಗೆ ಬರುತ್ತಿದ್ದ ದಂಪತಿಗಳು ಚಿನ್ನಾಭರಣ ದೋಚಿದ್ದಾರೆ, ವರ್ಷದ ಬಳಿಕ ಕಳ್ಳತನ ಗೊತ್ತಾಗಿ ಎಫ್&zwnj;ಐಆರ್ ದಾಖಲಿಸಿದಾಗ ಪೊಲೀಸರು ಖದೀಮರನ್ನ ಹೇಗೆ ಪತ್ತೆಹಚ್ಚಿದರು ಗೊತ್ತಾ?.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshrfm1zfw84mjqgtbfgvy36,imgname-----------------------2026-05-26t141351.996-1779786305599.jpg" type="image/jpeg" height="390" width="690"/>
            <content:encoded><![CDATA[&lt;p&gt;ಈ ಕಾಲದಲ್ಲಿ ಸ್ನೇಹ ಸಂಬಂಧಗಳೆಲ್ಲ ಹಳಸಲು, ಯಾರನ್ನೂ ನಂಬುವಂತಿಲ್ಲ, ನಂಬಿಕೆದ್ರೋಹ ಎಸಗುವ ಪ್ರಕರಣಗಳು ದಿನೇದಿನೆ ನಡೆಯುತ್ತಲೇ ಇವೆ. ಬೆಂಗಳೂರಿನ ಆರ್&zwnj;ಆರ್ ನಗರದಲ್ಲಿ ಅಂಥದ್ದೊಂದು ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತೆಯ ಮನೆಗೆ ಆಗಾಗ್ಗೆ ಓಡಾಡುತ್ತಿದ್ದ ದಂಪತಿ, ಅದೇ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದರು. ಮನೆಯಾಕೆಯ ನಂಬಿಕೆ ಗಳಿಸಿದ್ದ ಈ ಜೋಡಿ, ಯಾರಿಗೂ ಅನುಮಾನ ಬಾರದಂತೆ ಪ್ಲ್ಯಾನ್ ಮಾಡಿಕೊಂಡು ಚಿನ್ನಾಭರಣ ಎಗರಿಸಿದ್ದರು.&lt;/p&gt;&lt;h2&gt;ಕಣ್ಣು ಕಾಣದ ಮಹಿಳೆಗೆ ಚಿನ್ನಾಭರಣ ಕದ್ದಿದ್ದು ಗೊತ್ತಾಗಲೇ ಇಲ್ಲ&lt;/h2&gt;&lt;p&gt;ಪದ್ಮಜಾರಾವ್ ಎಂಬ ಮಹಿಳೆಗೆ ಕಣ್ಣು ಕಾಣಿಸುತ್ತಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಆರೋಪಿಗಳಾದ ಶರ್ಮಿಳಾ ಮತ್ತು ಗಣೇಶ್ ಕುಮಾರ್, ಒಂದು ವರ್ಷದ ಹಿಂದೆಯೇ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣವನ್ನು ಸ್ವಲ್ಪ ಸ್ವಲ್ಪವಾಗಿ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯಲ್ಲೇ ಓಡಾಡುತ್ತಿದ್ದವರ ಮೇಲೆ ಅನುಮಾನವೇ ಬರಲಿಲ್ಲ. ಚಿನ್ನ ಕಣ್ಮರೆಯಾಗಿದ್ದರೂ, ಪದ್ಮಜಾರಾವ್ ಅವರಿಗೆ ಚಿನ್ನ ಕಳುವು ಆಗಿರುವ ಬಗ್ಗೆ ಸುಳಿವೇ ಇರಲಿಲ್ಲ.&lt;/p&gt;&lt;h3&gt;ಒಂದು ವರ್ಷ ಬಳಿಕ ಅನುಮಾನ... ಠಾಣೆ ಮೆಟ್ಟಿಲೇರಿದ ಮಹಿಳೆ!&lt;/h3&gt;&lt;p&gt;ಇತ್ತೀಚೆಗೆ ಮನೆಯಲ್ಲಿದ್ದ ಚಿನ್ನಾಭರಣ ಸಂಪೂರ್ಣ ಕಾಣೆಯಾಗಿರುವ ಅನುಮಾನ ಬಂದು, ಇದೇ ಮೇ ತಿಂಗಳಲ್ಲಿ ಪದ್ಮಜಾರಾವ್ ಆರ್&zwnj;ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯವರ ಓಡಾಟ ಮತ್ತು ಪರಿಚಯಸ್ಥರ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದರು.&lt;/p&gt;&lt;p&gt;&lt;strong&gt;ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ದಂಪತಿ&lt;/strong&gt;&lt;/p&gt;&lt;p&gt;ತನಿಖೆ ವೇಳೆ ಶರ್ಮಿಳಾ ಮತ್ತು ಗಣೇಶ್ ಕುಮಾರ್ ಮೇಲೆಯೇ ಪೊಲೀಸರಿಗೆ ಅನುಮಾನ ಗಟ್ಟಿಯಾಗುತ್ತಾ ಹೋಯ್ತು. ಈ ದಂಪತಿಗಳು ಪದ್ಮಜಾರಾವ್ ಮನೆಗೆ ಹೆಚ್ಚು ಬರುತ್ತಿದ್ದಿದ್ದು ಯೋಗಕ್ಷೇಮ ವಿಚಾರಿಸುವುದಕ್ಕಿಂತಲೂ ಮನೆಯಲ್ಲಿದ್ದ ಚಿನ್ನಾಭರಣ ದೋಚಲು ಎಂಬುದು ಖಾತ್ರಿ ಆಗಿತ್ತು. ಕೊನೆಗೆ ಇಬ್ಬರನ್ನೂ ಬಂಧಿಸಿದ ಆರ್&zwnj;ಆರ್ ನಗರ ಪೊಲೀಸರು. ಮೊದಲಿಗೆ ದಂಪತಿ ತಾವು ಕಳ್ಳತನ ಮಾಡಿಲ್ಲ ಎಂದು ಸಾಚಾತನ ತೋರಿಸಿದ್ದರು. ಆದರೆ ಆದರೆ ಪೊಲೀಸರು ತನಿಖೆ ಯಾವ ರೀತಿ ಇರುತ್ತೆ ಅನ್ನೋದು ಗೊತ್ತಿರುತ್ತಲ್ಲ? ಕೊನೆಗೆ ಚಿನ್ನ ಕದ್ದಿದ್ದು ಬಾಯಿಬಿಟ್ಟಿದ್ದಾರೆ. ಬಳಿಕ ಪೊಲೀಸರು ದಂಪತಿಯಿಂದ ಸುಮಾರು 230 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಂಬಿಕೆ ಇಟ್ಟು ಮನೆಗೆ ಒಳಗೆ ಕರೆದುಕೊಂಡ ಸ್ನೇಹಿತರೇ ಕಳ್ಳರಾಗಿದ್ದ ವಿಚಾರ ತಿಳಿದು ಪದ್ಮಜಾರಾವ್ ಕುಟುಂಬ ಬೆಚ್ಚಿಬಿದ್ದಿದೆ. ಅದಕ್ಕೆ ಹೇಳಿದ್ದು, ಯಾರನ್ನೂ ನಂಬದ ಕಾಲವಿದು!&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/couple-arrested-for-stealing-gold-from-visually-impaired-friend-s-house-rr-nagar-bengaluru-rav/articleshow-es5oovn"/>
        </item>
        <item>
            <title><![CDATA[Crime Shocking: ಲೈಂಗಿಕ ಕಿರುಕುಳ ಆರೋಪದಲ್ಲಿ FIR; 'ಧುರಂಧರ್' ಟೀಮ್ ಸದಸ್ಯನ ಪರಿಸ್ಥಿತಿ ಏನಾಗಿದೆ ಈಗ?]]></title>
            <link>https://kannada.asianetnews.com/cine-world/dhurandhar-production-designer-saini-s-johray-booked-over-serious-harassment-allegation-case/articleshow-fuzql0c</link>
            <guid isPermaLink="true">https://kannada.asianetnews.com/cine-world/dhurandhar-production-designer-saini-s-johray-booked-over-serious-harassment-allegation-case/articleshow-fuzql0c</guid>
            <pubDate>Wed, 27 May 2026 13:21:20 +0530</pubDate>
            <description><![CDATA[&lt;p&gt;ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವಾಗಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ. 'ಧುರಂಧರ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ತಂಡಕ್ಕೆ ಈ ಕಾನೂನು ಸಮರ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯಕ್ಕೆ ಆರೋಪಿ ಜೋಹ್ರ ಮೌನ ವಹಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksm6n0qanm9wk3k8r4dw0fzp,imgname-saini-s-johray-1779868271338.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಾಕಿಂಗ್&zwnj; ನ್ಯೂಸ್&zwnj;: 'ಧುರಂಧರ್' ಚಿತ್ರತಂಡದಲ್ಲಿ 'ಮೀ ಟೂ' ಕಂಪನ! ಹೋಟೆಲ್ ರೂಮಿನಲ್ಲಿ ನಡೆದಿದ್ದೇನು?&lt;/strong&gt;&lt;/p&gt;&lt;p&gt;ಚಿತ್ರರಂಗ ಅಂದಮೇಲೆ ಅಲ್ಲಿ ಬಣ್ಣದ ಲೋಕದ ಹೊಳಪು ಎಷ್ಟು ಇರುತ್ತದೋ, ಅಷ್ಟೇ ಕರಾಳ ಮುಖಗಳು ಆಗಾಗ ಅನಾವರಣಗೊಳ್ಳುತ್ತಲೇ ಇರುತ್ತವೆ. ಸದ್ಯ ಸಿನಿದುನಿಯಾದಲ್ಲಿ ಅಂತಹದ್ದೇ ಒಂದು ಕಹಿ ಸುದ್ದಿ ಸಂಚಲನ ಮೂಡಿಸಿದೆ. ಬಹುನಿರೀಕ್ಷಿತ 'ಧುರಂಧರ್' (Dhurandhar) ಚಿತ್ರದ ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೋಹ್ರ (Saini S Johray) ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಚಿತ್ರತಂಡ ಈಗ ಮುಜುಗರಕ್ಕೆ ಈಡಾಗಿದೆ.&lt;/p&gt;&lt;p&gt;ಕೆಲಸದ ನೆಪ, ಹೋಟೆಲ್&zwnj;ನಲ್ಲಿ ಟ್ರ್ಯಾಪ್!&lt;/p&gt;&lt;p&gt;ದೂರು ನೀಡಿರುವ ಮಹಿಳೆಯು ಅದೇ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಅವರ ಕಥೆ ಕೇಳಿದರೆ ಎದೆ ನಡುಗುತ್ತದೆ. ದೂರಿನ ಪ್ರಕಾರ, ಪ್ರೊಡಕ್ಷನ್ ಡಿಸೈನರ್ ಸೈನಿ ಎಸ್. ಜೋಹ್ರ ಕೆಲಸದ ವಿಷಯ ಚರ್ಚಿಸಬೇಕು ಎಂಬ ನೆಪದಲ್ಲಿ ಮಹಿಳೆಯನ್ನು ಚಂಡೀಗಢದ ಪ್ರತಿಷ್ಠಿತ 'ತಾಜ್ ಹೋಟೆಲ್'ಗೆ ಕರೆಸಿಕೊಂಡಿದ್ದನು. ಮೊದಮೊದಲು ಅದು ಸಾಮಾನ್ಯ ಮೀಟಿಂಗ್ ಎಂದು ನಂಬಿದ್ದ ಆಕೆಗೆ, ಅಲ್ಲಿ ಹೋದ ನಂತರವೇ ಗೊತ್ತಾಗಿದ್ದು ಅಲ್ಲಿ ಇನ್ಯಾರೂ ಇಲ್ಲ, ಕೇವಲ ಜೋಹ್ರ ಮಾತ್ರ ಇದ್ದಾನೆ ಎಂದು!&lt;/p&gt;&lt;h2&gt;ಮದ್ಯ ಕುಡಿಸಿ ವಿಕೃತಿ ಮೆರೆದ ಆರೋಪ:&lt;/h2&gt;&lt;p&gt;ಸೆಪ್ಟೆಂಬರ್ 10ರ ರಾತ್ರಿ ನಡೆದ ಆ ಘಟನೆ ನಿಜಕ್ಕೂ ಭಯಾನಕವಾಗಿತ್ತು. ರಾತ್ರಿ 8:30ರ ಸುಮಾರಿಗೆ ಹೋಟೆಲ್ ತಲುಪಿದ ದೂರುದಾರ ಮಹಿಳೆಗೆ ಜೋಹ್ರ ಮದ್ಯ ಸೇವಿಸುವಂತೆ ಬಲವಂತ ಮಾಡಿದ್ದಾನೆ. ಮಹಿಳೆ ನಿರಾಕರಿಸಿದರೂ ಕೇಳದ ಆತ, ವೈನ್ ಮತ್ತು ರಮ್ ಬೆರೆಸಿದ ಪಾನೀಯವನ್ನು ಸಿದ್ಧಪಡಿಸಿ ಅದನ್ನು ಕುಡಿಯಲೇಬೇಕು ಎಂದು ಒತ್ತಾಯಿಸಿದ್ದಾನೆ. ಪಾನೀಯ ಸೇವಿಸಿದ ಕೆಲವೇ ಕ್ಷಣಗಳಲ್ಲಿ ಆಕೆಗೆ ತಲೆತಿರುಗಲು ಶುರುವಾಗಿದೆ. ಅಸ್ವಸ್ಥಗೊಂಡ ಆಕೆ ರೂಮಿನಿಂದ ಹೊರಗೆ ಹೋಗಲು ಪ್ರಯತ್ನಿಸಿದರೂ, ಕಾಮಾಂಧ ಜೋಹ್ರ ಅದಕ್ಕೆ ಅವಕಾಶ ನೀಡಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;ನೃತ್ಯದ ಹೆಸರಲ್ಲಿ ಅಸಭ್ಯ ವರ್ತನೆ:&lt;/p&gt;&lt;p&gt;ಇಷ್ಟಕ್ಕೇ ನಿಲ್ಲದ ಈತನ ವಿಕೃತಿ, ನೃತ್ಯ ಕಲಿಸುವ ನೆಪದಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ದೈಹಿಕ ಸಂಪರ್ಕ ಬೆಳೆಸಲು ಮುಂದಾಗಿದ್ದಾನೆ. ಮಹಿಳೆ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರೂ, ಆಕೆಯನ್ನು ರೂಮಿನಿಂದ ಹೊರಗೆ ಹೋಗದಂತೆ ತಡೆದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ಯಾರಿಗೂ ತಿಳಿಸಬಾರದು, ತಿಳಿಸಿದರೆ ನಿನ್ನ ವೃತ್ತಿಜೀವನ ಹಾಳು ಮಾಡುತ್ತೇನೆ ಎಂದು ಬೆದರಿಕೆಯನ್ನೂ ಹಾಕಿದ್ದನಂತೆ!&lt;/p&gt;&lt;h3&gt;ಖಾಕಿ ಕಣ್ಗಾವಲಿನಲ್ಲಿ 'ಧುರಂಧರ್' ಸೈನಿಕ!&lt;/h3&gt;&lt;p&gt;ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಚಂಡೀಗಢ ಪೊಲೀಸರು, ಸೈನಿ ಎಸ್. ಜೋಹ್ರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 74, 79, 123 ಮತ್ತು 126(2) ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಹ್ರ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾನೆ ಎನ್ನಲಾಗಿದ್ದರೂ, ತನಿಖೆ ಮಾತ್ರ ಚುರುಕಾಗಿ ಸಾಗುತ್ತಿದೆ.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವಾಗಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ. 'ಧುರಂಧರ್' ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ತಂಡಕ್ಕೆ ಈ ಕಾನೂನು ಸಮರ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಸದ್ಯಕ್ಕೆ ಆರೋಪಿ ಜೋಹ್ರ ಮೌನ ವಹಿಸಿದ್ದು, ಪೊಲೀಸರ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಬೆಳ್ಳಿಪರದೆಯ ಮೇಲೆ ಹೀರೋಯಿಸಂ ತೋರಿಸುವ ಚಿತ್ರರಂಗದ ಒಳಗಿನ ಇಂತಹ 'ವಿಲನ್' ಚೇಷ್ಟೆಗಳು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.&lt;/p&gt;]]></content:encoded>
            <category>crime</category>
            <dc:creator>Shriram Bhat</dc:creator>
            <atom:link href="https://kannada.asianetnews.com/cine-world/dhurandhar-production-designer-saini-s-johray-booked-over-serious-harassment-allegation-case/articleshow-fuzql0c"/>
        </item>
        <item>
            <title><![CDATA[ಕೆಲ್ಸನೇ ಇಲ್ಲದಿದ್ರೂ ಕೋಟ್ಯಧಿಪತಿ ಆಗ್ಬೇಕಾ? ವಿಜಯ್​ರ ಈ ಘೋಷಣೆ ರಾಜ್ಯದಲ್ಲೂ ಮಾಡಿ- ಓಪನ್​ ಸವಾಲು]]></title>
            <link>https://kannada.asianetnews.com/politics/vijay-govt-announce-1-lakh-reward-to-end-corruption-will-state-govt-do-this-asks-netizens-suc/articleshow-g2r5kdy</link>
            <guid isPermaLink="true">https://kannada.asianetnews.com/politics/vijay-govt-announce-1-lakh-reward-to-end-corruption-will-state-govt-do-this-asks-netizens-suc/articleshow-g2r5kdy</guid>
            <pubDate>Mon, 25 May 2026 14:48:35 +0530</pubDate>
            <description><![CDATA[&lt;p&gt;ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಸುಳಿವು ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವ ನಟ ವಿಜಯ್ ಅವರ ಘೋಷಣೆಯೊಂದು ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದರೆ, ಇಲ್ಲಿನ ವ್ಯಾಪಕ ಭ್ರಷ್ಟಾಚಾರದಿಂದಾಗಿ ಪ್ರತಿಯೊಬ್ಬರೂ ಕೋಟ್ಯಧಿಪತಿಯಾಗಬಹುದು ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksf6kww6ecb0kecv5trr8wt7,imgname-thalapathy-vijay-and-siddaramaiah-1779700462470.jpg" type="image/jpeg" height="390" width="690"/>
            <content:encoded><![CDATA[&lt;p&gt;ಇರಲಿ ಬಿಡಿ. ಆ ವಿಷಯ ಅಲ್ಲಿಗೇ ಇರಲಿ. ಆದರೆ ಇದೀಗ ಜೋಸೆಫ್​ ವಿಜಯ್​ ಅವರ ಘೋಷಣೆಯೊಂದು ಕರ್ನಾಟಕ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ತಾಕತ್ತು ಇದ್ದರೆ ಇದನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡಲು ಸಾಧ್ಯನಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಜೋಸೆಫ್​ ವಿಜಯ್​ ಸರ್ಕಾರ ಅಧಿಕಾರಕ್ಕೆ ಬಂದಾಗ, ಖುಷಿಪಟ್ಟ ಕಾಂಗ್ರೆಸ್​ ಸರ್ಕಾರ, ಅವರ ಈ ಒಂದೇ ಒಂದು ಘೋಷಣೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ್ರೆ ಪ್ರತಿಯೊಬ್ಬರೂ ಪಕ್ಕಾ ಕೋಟ್ಯಧಿಪತಿ ಆಗ್ತಾರೆ. ಯಾವುದೇ ಗ್ಯಾರೆಂಟಿಗಳೂ ಬೇಡ. ಸರ್ಕಾರ ಈಗ ಕೊಟ್ಟಿರೋ ಎಲ್ಲಾ ಗ್ಯಾರೆಂಟಿಗಳನ್ನೂ ರದ್ದು ಮಾಡಿದ್ರೂ ಪರವಾಗಿಲ್ಲ, ಜನರೆಲ್ಲಾ ಕೋಟ್ಯಧಿಪತಿಯಾಗುವುದೇ ದೊಡ್ಡ ಗ್ಯಾರೆಂಟಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಭ್ರಷ್ಟಾಚಾರಿಗಳಿಗೆ ಪಾಠ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಅಂಥದ್ದೇನು ಘೋಷಣೆ ಮಾಡಿದ್ದಾರೆ ಗೊತ್ತಾ? ತಮಿಳುನಾಡು ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಿಎಂ ವಿಜಯ್&zwnj; ಅವರು ಹೊಸದೊಂದು ಯೋಜನೆ ಜಾರಿಗೆ ಮುಂದಾಗಿದ್ದಾರೆ. ಅದೇ ಭ್ರಷ್ಟಾಚಾರಿಗಳಿಗೆ ಪಾಠ ಕಲಿಸುವುದು. ಭ್ರಷ್ಟರ ಸುಳಿವು ನೀಡುವ ಸಾರ್ವಜನಿಕರಿಗೆ 1 ಲಕ್ಷ ರೂ. ಭರ್ಜರಿ ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ವಿಜಯ್​ ಘೋಷಿಸಿದ್ದಾರೆ.&lt;/p&gt;&lt;h3&gt;&lt;strong&gt;ಹೊಸ ಘೋಷಣೆ&lt;/strong&gt;&lt;/h3&gt;&lt;p&gt;ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಆ ಇಲಾಖೆಗೆ ಯಾವುದೇ ಒತ್ತಡವಿಲ್ಲದೆ ಕಾರ್ಯನಿರ್ವಹಿಸುವ 'ಸಂಪೂರ್ಣ ಅಧಿಕಾರ' ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ವಿಜಯ್ ತಿಳಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿಯ ಲಂಚ ಅಥವಾ ಆರ್ಥಿಕ ಲಾಭಕ್ಕಾಗಿ ಸಾರ್ವಜನಿಕರನ್ನು ಪೀಡಿಸಿದರೆ, ವಿಳಂಬವಿಲ್ಲದೆ ಈ ಇಲಾಖೆಗೆ ದೂರು ನೀಡಬಹುದು ಎಂದಿರುವ ವಿಜಯ್​, ಸರ್ಕಾರಿ ಅಧಿಕಾರಿಗಳು ಕೇವಲ ಒಂದು ಸಾವಿರ ರೂಪಾಯಿ ಲಂಚ ಕೇಳಿದ್ದರೂ ಸಾರ್ವಜನಿಕರು ಹೆದರದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಬಹುದು. ಇದಕ್ಕೆ ವಿಡಿಯೋ ಸಾಕ್ಷಿ ಬೇಕು ಅಷ್ಟೇ ಎಂದಿದ್ದಾರೆ.&lt;/p&gt;&lt;h3&gt;&lt;strong&gt;ರಾಜ್ಯ ಸರ್ಕಾರಕ್ಕೆ ಧೈರ್ಯ ಇದೆಯಾ?&lt;/strong&gt;&lt;/h3&gt;&lt;p&gt;ಕರ್ನಾಟಕದಲ್ಲಿ ಯಾವ ಮಟ್ಟದಿಂದ ಯಾವ ಮಟ್ಟದವರೆಗೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ಅದರ ಸಂತ್ರಸ್ತರಿಗೇ ತಿಳಿದ ವಿಷಯವಾಗಿದೆ. ಕೆಲವೊಂದು ಇಲಾಖೆಗಳಲ್ಲಂತೂ ಅಸಹ್ಯ ಪಡುವಷ್ಟರ ಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದು ಯಾರಿಗೂ ತಿಳಿಯದ ಸತ್ಯವೇನಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟಲು ಹೆದರುವವರೇ ಎಲ್ಲಾ. ದನಿ ಎತ್ತುವ ಜನರು ದೂರು ಕೊಡುವುದಾದರೂ ಎಲ್ಲಿಗೆ, ನ್ಯಾಯ ಸಿಗತ್ತಾ ನ್ಯಾಯ ಕೊಡಲು ಹೋದರೆ ಅಲ್ಲಿಯೂ ದಕ್ಷ ಅಧಿಕಾರಿಗಳ ಜೊತೆ ಲಂಚಕೋರರೂ ಇದ್ದಾರಲ್ಲ ಎನ್ನುವ ಗಂಭೀರ ಆರೋಪಗಳು ಸೋಷಿಯಲ್​ ಮೀಡಿಯಾದಲ್ಲಿ ಜನ ಮಾಡುತ್ತಲೇ ಇರುತ್ತಾರೆ. ಆದರೆ ನಮ್ಮ ಸರ್ಕಾರಕ್ಕೆ ಇಂಥದ್ದೊಂದು ಘೋಷಣೆ ಮಾಡುವ ತಾಕತ್ತು ಬಂದರೆ, ಬಹುಮಾನದ ಹಣ ಪಡೆದೇ ಪ್ರತಿಯೊಬ್ಬರೂ ಕೋಟ್ಯಧಿಪತಿ ಆಗ್ತಾರೆ ಎಂದು ಚರ್ಚೆ ಶುರುವಾಗಿದೆ. ಅಲ್ಲಿಗೆ ಲಂಚಾವತಾರದಿಂದ ಎಷ್ಟು ಮಂದಿ ನೊಂದಿದ್ದಾರೆ ಎನ್ನುವುದು ಇದರಿಂದ ತಿಳಿಯುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/politics/vijay-govt-announce-1-lakh-reward-to-end-corruption-will-state-govt-do-this-asks-netizens-suc/articleshow-g2r5kdy"/>
        </item>
        <item>
            <title><![CDATA[Love Jihad ಎಲ್ಲರಂತಲ್ಲ ನನ್ನ... ಎಂದು ಹಿಂದೆ ಹೋದವಳಿಗೆ ಬೆತ್ತಲು ಮಾಡಿದ! ಹಿಂದೂ ಸಂಘಟನೆಗೆ ಸಿಕ್ಕಿಬಿದ್ದ ಹುಬ್ಬಳ್ಳಿಯವ]]></title>
            <link>https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</link>
            <guid isPermaLink="true">https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh</guid>
            <pubDate>Mon, 25 May 2026 12:15:42 +0530</pubDate>
            <description><![CDATA[ಹುಬ್ಬಳ್ಳಿಯಲ್ಲಿ 'ಲವ್ ಜಿಹಾದ್' ಪ್ರಕರಣಗಳು ಹೆಚ್ಚುತ್ತಿದ್ದು, ಐಷಾರಾಮಿ ಜೀವನದ ಆಮಿಷವೊಡ್ಡಿ ಹಿಂದೂ ಯುವತಿಯರನ್ನು ಬಲೆಗೆ ಬೀಳಿಸಲಾಗುತ್ತಿದೆ. ಮಾದಕ ದ್ರವ್ಯ ನೀಡಿ, ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡುವ ಜಾಲದ ಬಗ್ಗೆ ಈ ಲೇಖನ ಎಚ್ಚರಿಸುತ್ತದೆ. ಇತ್ತೀಚೆಗೆ ನಡೆದ ಸಾಜಿದ್ ಉಣಕಲ್ ಪ್ರಕರಣವೂ ಸೇರಿದಂತೆ, ಇಂತಹ ಘಟನೆಗಳ ಬಗ್ಗೆ ಪೊಲೀಸರು ಮತ್ತು ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksexy7gvrbzwxpdxdxb5jq20,imgname-love-jihad-1779691363867.jpg" type="image/jpeg" height="390" width="690"/>
            <content:encoded><![CDATA[&lt;p&gt;ಥಳುಕು ಬಳುಕು, ಬಣ್ಣಬಣ್ಣದ ಮಾತು, ಐಷಾರಾಮಿ ಕಾರು, ಬೈಕು, ಹೀರೋಗಳ ಸ್ಟೈಲ್​ನಲ್ಲಿ ಹೇರ್​ಸ್ಟೈಲ್​, ದಿನವೂ ಪಿಕ್​ ಅಪ್​ ಡ್ರಾಪ್​, ಶ್ರೀಮಂತಿಕೆ, ಇಂಥ ಕನಸನ್ನು ಕಾಣುವುದು ಎಲ್ಲಿಯವರೆಗೆ ಹಿಂದೂ ಯುವತಿಯರು ಬಿಡುವುದಿಲ್ಲವೋ ಅಲ್ಲಿಯವರೆಗೆ ಅಂಥವರೇ ಬೆತ್ತಲಾಗುವುದು ಗ್ಯಾರೆಂಟಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನನ್ನವ ಎಲ್ಲರಂಥವನಲ್ಲ ಎಂದರೆ ನಿಮ್ಮ ವಿಡಿಯೋಗಳು ಪೋ*ರ್ನ್​ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಆಗಿಯೋ, ಇಲ್ಲವೇ ಮಕ್ಕಳನ್ನು ಹೆರುವ ಮಷಿನ್​ ಆಗಿಯೋ, ಬೀದಿಗೆ ಬರುವುದೋ ಕೊನೆಗೆ ಆ*ತ್ಮಹತ್ಯೆ ಒಂದೇ ದಾರಿ ಎಂದುಕೊಳ್ಳುವುದೋ ತಪ್ಪಲ್ಲ ಎಂದು ಪೊಲೀಸರು, ಹಿಂದೂ ಸಂಘಟನೆಗಳು ದಿನನಿತ್ಯವೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ.&lt;/p&gt;&lt;p&gt;ಅದೆಷ್ಟೋ ಹಿಂದೂ ಯುವತಿಯರು ನರಕದ ಬಾಯಿಗೆ ಹೋಗಿ ಹೇಳಿಕೊಳ್ಳಲಾಗದ ಸಂಕಷ್ಟ ಅನುಭವಿಸುತ್ತ ಕೊನೆಗೆ ಸಾವಿನ ಹಾದಿ ಹಿಡಿದಿರುವ ಬಗ್ಗೆ ಪೊಲೀಸರು ಪತ್ರಿಕಾಗೋಷ್ಠಿ ಮಾಡಿ ಎಚ್ಚರ ಕೊಡುತ್ತಲೇ ಇದ್ದರೂ, ನಾನು ಎಜುಕೇಟೆಡ್​, ನನಗೆ ಇವೆಲ್ಲಾ ಬುದ್ಧಿಮಾತು ನಿಮ್ಮಿಂದ ಕಲಿಯಬೇಕಿಲ್ಲ ಎನ್ನುವ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.&lt;/p&gt;&lt;h2&gt;&lt;strong&gt;ಲವ್​ ಜಿಹಾದ್​ ಕೇಂದ್ರ&lt;/strong&gt;&lt;/h2&gt;&lt;p&gt;ಇದಾಗಲೇ ಹುಬ್ಬಳ್ಳಿಯ ಲವ್​ ಜಿಹಾದ್​ ಕೇಂದ್ರವಾಗಿದೆ. ಹುಬ್ಬಳ್ಳಿಯ ಜಿಮ್​ ಓನರ್​ ಸಮೀರ್​ ಮುಲ್ಲಾ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೊಬೈಲ್​ಗಳಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲವೊಂದನ್ನು ಖುದ್ದು ಯುವತಿಯರೇ ಖುಷಿಯಿಂದ ತೆಗೆದುಕೊಂಡರೆ, ಇನ್ನು ಕೆಲವು ಮಾದಕ ದ್ರವ್ಯ ನೀಡಿಯೋ ಅಥವಾ ಇನ್ನೇನೋ ಕೊಟ್ಟು ಯುವತಿಯರನ್ನು ಬೆತ್ತಲು ಮಾಡಿ, ರೇ*ಪ್ ಮಾಡಿರುವ ವಿಡಿಯೋ ಅವು. ಇಷ್ಟಾದರೂ ಯುವತಿಯರು ಥಳಕು ಬಳುಕಿನದ್ದಕ್ಕೆ ಮೊರೆ ಹೋಗುತ್ತಿರುವುದು ಹುಬ್ಬಳ್ಳಿಯಿಂದಲೇ ವರದಿಯಾಗಿದೆ. ​&lt;/p&gt;&lt;h3&gt;&lt;strong&gt;ಬ್ರೈನ್​ವಾಷ್​&lt;/strong&gt;&lt;/h3&gt;&lt;p&gt;ಕಾಲೇಜು ಯುವತಿಯೊಬ್ಬಳ ಬ್ರೈನ್​ವಾಷ್​ ಮಾಡಿ ಆಕೆಯನ್ನುತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಸಾಜಿದ್ ಉಣಕಲ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿರುವ ಈತ ಆಕೆಗೆ ಮಾದಕ ದ್ರವ್ಯ ನೀಡಿ ಬೆತ್ತಲುಮಾಡಿದ್ದ ಎನ್ನುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನ ಮನೆಗೆ ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/crime/another-love-jihad-in-hubballi-hindu-organisation-found-muslim-youth-suc/articleshow-km3osfh"/>
        </item>
        <item>
            <title><![CDATA[ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ  6 ಜನರ ಭೀಕರ ಹ*ತ್ಯೆ!]]></title>
            <link>https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</link>
            <guid isPermaLink="true">https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz</guid>
            <pubDate>Fri, 29 May 2026 19:19:34 +0530</pubDate>
            <description><![CDATA[&lt;p&gt;ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವ್ಯಾಜ್ಯವು ಭೀಕರ ಸ್ವರೂಪ ಪಡೆದಿದೆ. ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವಿನ ಆಸ್ತಿ ವಿವಾದವು ಗುಂಡಿನ ದಾಳಿ ಹಾಗೂ ಮಾರಕಾಸ್ತ್ರಗಳ ಬಳಕೆಗೆ ಕಾರಣವಾಗಿ, ಒಂದೇ ಕುಟುಂಬದ ಆರು ಮಂದಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksszffedx8mp0bxbdpqrmx48,imgname-vijayapura-bhima-teera-murders-1780062076365.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಮೇ.29): &lt;/strong&gt;ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭೀಕರ ನರಮೇಧ ನಡೆದಿದ್ದು, ಇಡೀ ಭೀಮಾತೀರ ಮತ್ತೊಮ್ಮೆ ರಕ್ತಸಿಕ್ತವಾಗಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಎದುರಾಳಿಗಳು ನಡೆಸಿದ ದಿಢೀರ್ ಫೈರಿಂಗ್ ಹಾಗೂ ಮಾರಕಾಸ್ತ್ರಗಳ ದಾಳಿಗೆ ಬರೋಬ್ಬರಿ ಆರು ಜನ ಭೀಕರವಾಗಿ ಹತ್ಯೆಗೀಡಾಗಿದ್ದಾರೆ. ಈ ಘಟನೆಯಿಂದಾಗಿ ಇಡೀ ಜಿಲ್ಲೆ ಬೆಚ್ಚಿಬಿದ್ದಿದ್ದು, ಗ್ರಾಮದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯ!&lt;/strong&gt;&lt;/h2&gt;&lt;p&gt;ಗೋವಿಂದಪುರ ಗ್ರಾಮದ ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಕಳೆದ ಕೆಲವು ಸಮಯದಿಂದ ಜಮೀನಿಗೆ ಸಂಬಂಧಿಸಿದಂತೆ ತೀವ್ರ ಆಸ್ತಿ ವಿವಾದ ನಡೆದುಕೊಂಡು ಬಂದಿತ್ತು. ಇಂದು ಈ ವಿವಾದ ವಿಕೋಪಕ್ಕೆ ತಿರುಗಿದ್ದು, ಗೊಳಗಿ ಕುಟುಂಬದ ಸದಸ್ಯರು ನಿರಾಳೆ ಕುಟುಂಬದವರ ಮೇಲೆ ಏಕಾಏಕಿ ಬಂದೂಕಿನಿಂದ ಗುಂಡಿನ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ. ಗೊಳಗಿ ಕುಟುಂಬದವರ ಈ ಭೀಕರ ದಾಳಿಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ರೇವಣಸಿದ್ದಪ್ಪ ನಿರಾಳೆ, ದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಶೇಖರ್ ನಿರಾಳೆ, ಶಬ್ಬಿರ್ ನದಾಫ್ (ಇವರೊಂದಿಗೆ ಮತ್ತೊಬ್ಬರ ಹತ್ಯೆಯಾಗಿದ್ದು, ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ).&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಧಾವಿಸಿದ ಪೊಲೀಸ್ ಪಡೆ, ಗ್ರಾಮದಲ್ಲಿ ಬಿಗಿಬಂದೋಬಸ್ತ್!&lt;/strong&gt;&lt;/h2&gt;&lt;p&gt;ಒಂದೇ ಗ್ರಾಮದ ಆರು ಜನರ ಭೀಕರ ಹತ್ಯೆಯಿಂದಾಗಿ ಭೀಮಾತೀರದಾದ್ಯಂತ ಹಳೇ ಹಗೆತನದ ನೆರಳು ಮತ್ತೆ ಆವರಿಸಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ದಂಡು ಸಶಸ್ತ್ರ ಪಡೆಗಳೊಂದಿಗೆ ಗೋವಿಂದಪುರ ಗ್ರಾಮಕ್ಕೆ ಧಾವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಮುಂದಿನ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಇಡೀ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಒಟ್ಟು 25 ಏಕರೆ ಜಮೀನಿನ ವಿವಾದ ಇದಾಗಿದ್ದು, ಪ್ರತಿ ಏಕರೆಗೆ 15 ಲಕ್ಷದಂತೆ ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕಾ ಜಮೀನು ಮೌಲ್ಯ ಬಂದು 25 ಲಕ್ಷ ಇತ್ತು. ಆದರೆ, ನಿರಾಳೆ ಕುಟುಂಬ 15 ಲಕ್ಷಕ್ಕೆ ಖರೀದಿ ಮಾಡಿತ್ತು.ಈ ಜಮೀನು ಪಕ್ಕದಲ್ಲಿಯೇ ಅಪ್ಪುಗೌಡ ಗೊಳಗಿ ಜಮೀನು ಕೂಡ ಇತ್ತು. ನಿರಾಳೆ ಕುಟುಂಬ ಖರೀದಿಸಿದ ಜಮೀನು ಮೇಲೆ ಅಪ್ಪುಗೌಡ ಗೊಳಗಿ ಕಣ್ಣಿಟ್ಟಿದ್ದ. ಆ ಜಮೀನು ಖರೀದಿ ಮಾಡದಂತೆ ನಿರಾಳೆ ಕುಟುಂಬಕ್ಕೆ ಅಪ್ಪುಗೌಡ ಗೊಳಗಿ ಧಮ್ಕಿ ಹಾಕಿದ್ದ. ಇದನ್ನು ಮೀರಿ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ಪಕ್ಕದ&zwnj; ಜಮೀನು ಹೋಯ್ತಲ್ಲ ಎಂದು ಇಡೀ ನಿರಾಳೆ ಕುಟುಂಬವನ್ನೆ ಗೊಳಗಿ ಕುಟುಂಬ ಸರ್ವನಾಶ ಮಾಡಿದೆ.&lt;/p&gt;&lt;p&gt;ನಿರಾಳೆ ಚಡಚಣ ಮೂಲದವರು, ಗೊಳಗಿ ಗೋವಿಂದಪುರ ಗ್ರಾಮದವರು. ಚಡಚಣ ಊರಲ್ಲಿ ನಿರಾಳೆ ಫ್ಯಾಮಿಲಿ ಕೂಡು ಕುಟುಂಬ ಹೊಂದಿತ್ತು. ಒಂದೆ ಮನೆಯಲ್ಲಿ 30ಕ್ಕೂ ಅಧಿಕ ಜನ ವಾಸವಿದ್ದರು. ಚಡಚಣದ ಶ್ರೀಮಂತ ಕುಟುಂಬ ಪೈಕಿ ಒಂದಾಗಿತ್ತು. ಹತ್ಯೆಯಾಗಿರುವ ಚಂದು ನಿರಾಳೆ ತಾಲೂಕು ಪಂಚಾಯಿಸಿ ಮಾಜಿ ಸದಸ್ಯ ಕೂಡ ಆಗಿದ್ದ.&lt;/p&gt;&lt;h2&gt;&lt;strong&gt;10ಕ್ಕೂ ಅಧಿಕ ಜನರಿಂದ ಕೃತ್ಯ&lt;/strong&gt;&lt;/h2&gt;&lt;p&gt;ಅಪ್ಪುಗೌಡ ಗೊಳಗಿ ಸೇರಿ 10ಕ್ಕಿಂತ ಅಧಿಕ ಜನರಿಂದ ನಿರಾಳೆ ಕುಟುಂಬಸ್ಥರನ್ನು ಹತ್ಎ ಮಾಡಲಾಗಿದೆ. ಕಬ್ಬು ಕತ್ತರಿಸುವ ಕತ್ತಿಯಿಂದ ಹತ್ಯೆ ಮಾಡಲಾಗಿದೆ. ತೇಲಿ ಕುಟುಂಬಕ್ಕೆ ಸೇರಿದ 25 ಏಕರೆ ಜಮೀನನ್ನು 1 ವರ್ಷದ ಹಿಂದೆಯೇ ಮಾರಾಟ ಮಾಡಲಾಗಿತ್ತು. 15 ವರ್ಷಗಳಿಂದ ತೇಲಿ ಕುಟುಂಬಕ್ಕೂ ಗೊಳಗಿ ಕುಟುಂಬಕ್ಕೂ ಈ ಕುರಿತಾಗಿ ವಿವಾದವಿತ್ತು. ತೇಲಿ ಕುಟುಂಬದಿಂದ ಕಡಿಮೆ ದರಕ್ಕೆ 25 ಏಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿ ಮಾಡಿತ್ತು. ನಿರಾಳೆ ಕುಟುಂಬ ಕಡಿಮೆ ದರಕ್ಕೆ ತೇಲಿ ಕುಟುಂಬದಿಂದ 25 ಏಕರೆ ಖರೀದಿ ಮಾಡಿದ್ದಕ್ಕೆ ಗೊಳಗಿ ಕುಟುಂಬಕ್ಕೆ ಸಿಟ್ಟಾಗಿತ್ತು. ಇದೇ ಕಾರಣಕ್ಕೆ ನಿರಾಳೆ ಕುಟುಂಬಸ್ಥರನ್ನ ಅಟ್ಟಾಡಿಸಿ ಹೊಡೆದು ಗೊಳಗಿ ಕುಟುಂಬ ಹತ್ಯೆ ಮಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/vijayapura-bhimateera-6-killed-firing-property-dispute-chadachan-govindpur-san/articleshow-mdtcsxz"/>
        </item>
        <item>
            <title><![CDATA[Tantan Dating App; ₹1.66 ಕೋಟಿ ಹೂಡಿಕೆ… ಲಾಭ ಕೇವಲ ₹4,250! ಡೇಟಿಂಗ್ ಆ್ಯಪ್‌ನಲ್ಲಿ ಸಿಕ್ಕ ಸುಂದರಿ ಮಾತು ಕೇಳಿ ಬೆತ್ತಲಾದ ಟೆಕ್ಕಿ!]]></title>
            <link>https://kannada.asianetnews.com/crime/bengaluru-techie-loses-rs-1-66-crore-in-tantan-dating-app-trading-scam-gets-back-only-rs-4-250/articleshow-n9af1ql</link>
            <guid isPermaLink="true">https://kannada.asianetnews.com/crime/bengaluru-techie-loses-rs-1-66-crore-in-tantan-dating-app-trading-scam-gets-back-only-rs-4-250/articleshow-n9af1ql</guid>
            <pubDate>Thu, 28 May 2026 10:39:38 +0530</pubDate>
            <description><![CDATA[ಬೆಂಗಳೂರಿನ ಟೆಕ್ಕಿಯೊಬ್ಬರು ಡೇಟಿಂಗ್ ಆ್ಯಪ್&zwnj;ನಲ್ಲಿ ಪರಿಚಯವಾದ ಸುಂದರಿಯ ಪ್ರೀತಿಯ ಬಲೆಗೆ ಬಿದ್ದು, ಆನ್&zwnj;ಲೈನ್ ಟ್ರೇಡಿಂಗ್&zwnj;ನಲ್ಲಿ ₹1.66 ಕೋಟಿ ಕಳೆದುಕೊಂಡಿದ್ದಾರೆ. ಮದುವೆಯ ಭರವಸೆ ನೀಡಿ ವಂಚಿಸಿದ ಯುವತಿ ವಿರುದ್ಧ ಇದೀಗ ಪೊಲೀಸ್ ದೂರು ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspejegn8tm93d8m1t21hgw2,imgname-----------------------2026-05-28t101740.039-1779943684629.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಯ್&hellip; ಫ್ರೆಂಡ್ ಆಗೋಣವಾ? ಸುಂದರಿ ಕಳಿಸಿದ ಈ ಒಂದು ಮೆಸೇಜ್&zwnj;ನಿಂದ ಬೆಂಗಳೂರು ಟೆಕ್ಕಿಯೊಬ್ಬ ಕೋಟಿ ಕೋಟಿ ಹಣ ಕಳೆದುಕೊಳ್ಳಬೇಕಾಯ್ತು. ಅಪರಿಚಿತರೊಂದಿಗೆ ಡೇಟಿಂಗ್&zwnj;, ಆನ್&zwnj;ಲೈನ್ ಟ್ರೇಡಿಂಗ್ ಮಾಡಬಾರದು ಅಂತಾ ಎಷ್ಟೇ ಎಚ್ಚರಿಕೆ ನೀಡಿದರೂ, ಯುವ ಪೀಳಿಗೆ ಕೇಳುತ್ತಿಲ್ಲ. ಇನ್ನೂ ಸುಲಭವಾಗಿ ಮೋಸದ ಬಲೆಗೆ ಬೀಳುತ್ತಿದ್ದಾರೆ. ಅದರಲ್ಲೂ ಸುಂದರ ಹುಡುಗಿಯೊಬ್ಬಳ ಸ್ನೇಹದ ಬಲೆಗೆ ಬಿದ್ದರೆ, ಎಂಥ ಬುದ್ಧಿವಂತನೂ ಯೋಚನೆ ಮಾಡುವ ಶಕ್ತಿ ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಈ ಪ್ರಕರಣವೇ ಒಂದು ತಾಜಾ ಉದಾಹರಣೆ.&lt;/p&gt;&lt;h2&gt;ರಿಯಾ ಜೊತೆ ಸ್ನೇಹ&hellip; ನಂತರ ಪ್ರೀತಿ, ಹಣ..!&lt;/h2&gt;&lt;p&gt;ಸೌರವ್ ದುಬೆ ಎಂಬ ಟೆಕ್ಕಿಗೆ ಫೆಬ್ರವರಿ 15ರಂದು Tantan ಡೇಟಿಂಗ್ ಆ್ಯಪ್&zwnj;ನಲ್ಲಿ &lsquo;ರಿಯಾ ಅಗರ್ವಾಲ್&rsquo; ಎಂಬ ಯುವತಿಯ ಪರಿಚಯವಾಗುತ್ತೆ. ಮೊದ ಮೊದಲು ಹಾಯ್ ಬಾಯ್ ಅನ್ನೋ ಸಾಮಾನ್ಯ ಚಾಟ್&zwnj;ಗಳಿಂದ ಶುರುವಾದ ಇಬ್ಬರ ನಡುವಿನ ಮಾತುಕತೆ ಬರುಬರುತ್ತಾ ಆಡಿಯೋ-ವಿಡಿಯೋ ಕಾಲ್&zwnj;ಗಳವರೆಗೆ ಹೋಗಿದೆ. ಯಾವಾಗ ಸುಂದರಿ ಪ್ರತಿದಿನ ಸರಿಯಾದ ಹೊತ್ತಿಗೆ ವಿಡಿಯೋ ಕಾಲ್ ಮಾಡಲು ಶುರು ಮಾಡಿದಳೋ ಆಗಿನಿಂದ ರಿಯಾ ನಿಧಾನವಾಗಿ ಸೌರವ್&zwnj; ದುಬೆಯನ್ನ ಬಲೆಗೆ ಹಾಕುವಲ್ಲಿ ಯಶಸ್ವಿಯಾದಳು. ಐ ಲವ್&zwnj; ಯು ಸೋ ಮಚ್ ಎನ್ನುತ್ತಾ 'ನಾವು ಮದುವೆಯಾಗಬಹುದು' ಎಂಬ ಮಾತುಗಳಿಂದ ಅವನಿಗೆ ಬಣ್ಣ ಬಣ್ಣದ ಕನಸು ಕಟ್ಟಿಬಿಟ್ಟಳು.ಮೊದಲೇ ಸುಂದರಿಯಾಗಿದ್ದ ರಿಯಾ ಇವಳನ್ನು ಮದುವೆಯಾಗುವುದಾದರೆ ಏನಕ್ಕೂ ಸಿದ್ಧ ಎಂಬಂತೆ ಟೆಕ್ಕಿ ವರ್ತಿಸತೊಡಗಿದ!&lt;/p&gt;&lt;h3&gt;ಟ್ರೇಡಿಂಗ್ ಹೆಸರಿನಲ್ಲಿ ಕೋಟ್ಯಂತರ ವಂಚನೆ&lt;/h3&gt;&lt;p&gt;ಪರಿಚಯ ಸ್ನೇಹವಾಯ್ತು, ಸ್ನೇಹ ಪ್ರೀತಿಯಾಗಿ ಬದಲಾಯ್ತು. ಇದೀಗ ಸುಂದರಿ ಮದುವೆಯಾಗುವ ಭರವಸೆ ನೀಡಿದ್ದರಿಂದ ಟೆಕ್ಕಿ ಇವಳ ಮಾತನ್ನ ಗಂಭೀರವಾಗಿ ನಂಬಿ ಕೂತಿದ್ದ. ಇದೇ ಸರಿಯಾದ ಸಮಯ ಎಂದುಕೊಂಡ ಸುಂದರಿ ರಿಯಾ ಪ್ರೀತಿಯ ಮಾತಿನ ನಡುವೆಯೇ ಟ್ರೇಡಿಂಗ್&zwnj;ನಲ್ಲಿ ಹಣ ಹೂಡಿದರೆ ಭಾರೀ ಲಾಭ ಸಿಗುತ್ತದೆ ಎಂದು ಟೆಕ್ಕಿಗೆ ನಂಬಿಸಿದ್ದಳು. ಅವಳ ಮಾತನ್ನು ನಂಬಿದ ಸೌರವ್ ಹಂತಹಂತವಾಗಿ ಹಣ ಹೂಡಲು ಆರಂಭಿಸಿದರು. ಅವರ ಪ್ರೇಮ ಪಾಶದ ಬಲೆಯೊಳಗೆ ಬಿದ್ದಿದ್ದ ಟೆಕ್ಕಿ ಕೇವಲ ಮೂರು ತಿಂಗಳಲ್ಲಿ ಅವರು ಬರೋಬ್ಬರಿ ₹1.66 ಕೋಟಿ ಹೂಡಿಕೆ ಮಾಡಿಬಿಟ್ಟಿದ್ದ! ಲಾಭ ಇಂದು ಬರುತ್ತೆ ನಾಳೆ ಬರುತ್ತೆ ಅಂತಾ ನಂಬಿಕೆಯಿಂದ ಕಾದಿದ್ದೇ ಬಂತು. ಆದರೆ ಲಾಭದ ಹೆಸರಿನಲ್ಲಿ ಮರಳಿ ಬಂದಿದ್ದು ಕೇವಲ ₹4,250 ಮಾತ್ರ. ಆಗಲೇ ತಾನು ಮೋಸ ಹೋಗಿದ್ದೇನೆ ಎಂಬ ಅನುಮಾನ ಸೌರವ್&zwnj;ಗೆ ಶುರುವಾಯಿತು.&lt;/p&gt;&lt;p&gt;&lt;strong&gt;ಹಣ ಕೇಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್!&lt;/strong&gt;&lt;/p&gt;&lt;p&gt;ಹೂಡಿಕೆ ಮಾಡಿದ ಹಣವನ್ನು ವಾಪಸ್ ಕೇಳುತ್ತಿದ್ದಂತೆ ರಿಯಾ ಅಗರ್ವಾಲ್&zwnj;ನ ಮೊಬೈಲ್ ನಂಬರ್ ಏಕಾಏಕಿ ಸ್ವಿಚ್ ಆಫ್ ಆಯಿತು. ಮತ್ತೆ ಸಂಪರ್ಕ ಸಾಧ್ಯವಾಗದೇ ಸೌರವ್ ಬೆಚ್ಚಿಬಿದ್ದ. ಕೊನೆಗೆ ತಾನು ಭಾರೀ ಮೋಸದ ಜಾಲಕ್ಕೆ ಸಿಲುಕಿದ್ದೇನೆ ಎಂಬುದು ಅರಿವಾಗಿ ಸೀದಾ ಅಲ್ಲಿಂದ ಅಗ್ನೇಯ ವಿಭಾಗದ ಸೆನ್ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯೆಲ್ಲ ಪೊಲೀಸರಿಗೆ ತಿಳಿಸಿ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ &lsquo;ರಿಯಾ&rsquo; ಅನ್ನೋ ಸುಂದರಿ ಯಾರು? ಮೋಸ ಮಾಡುವುದೇ ಅವಳ ಕೆಲಸವಾ? ಅವಳ ನಿಜ ನಾಮ ಏನು? ಹೆಸರಿನ ಹಿಂದೆ ಯಾರು ಇದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bengaluru-techie-loses-rs-1-66-crore-in-tantan-dating-app-trading-scam-gets-back-only-rs-4-250/articleshow-n9af1ql"/>
        </item>
        <item>
            <title><![CDATA[ಅಯ್ಯೋ ದುರ್ವಿಧಿಯೇ.. ಬೇಸಿಗೆ ರಜೆಗೆ ಬಂದಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವು!]]></title>
            <link>https://kannada.asianetnews.com/karnataka-districts/kolar-farm-pond-accident-two-brothers-death-gvd/articleshow-ntugoen</link>
            <guid isPermaLink="true">https://kannada.asianetnews.com/karnataka-districts/kolar-farm-pond-accident-two-brothers-death-gvd/articleshow-ntugoen</guid>
            <pubDate>Mon, 25 May 2026 20:39:56 +0530</pubDate>
            <description><![CDATA[&lt;p&gt;ಬೇಸಿಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksftyge5kx0atp26gah1y239,imgname-jkv-1779721781701.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ (ಮೇ.25): &lt;/strong&gt;ಜಿಲ್ಲೆಯಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಬೇಸಿಗೆ ರಜೆಗೆಂದು ತಾತನ ಮನೆಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಮಾಲೂರು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.&lt;/p&gt;&lt;p&gt;ಮೃತರನ್ನು 12 ವರ್ಷದ ದೇವಕಿರಣ್ ಹಾಗೂ 9 ವರ್ಷದ ವಿನುತ್ ಎಂದು ಗುರುತಿಸಲಾಗಿದೆ. ಇಬ್ಬರೂ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ರಜೆ ಹಿನ್ನೆಲೆ ತಾತನ ಮನೆಗೆ ಬಂದಿದ್ದರು. ಆಟವಾಡುವ ವೇಳೆ ಕೃಷಿ ಹೊಂಡದ ಬಳಿ ಕಾಲು ಜಾರಿ ಬಿದ್ದ ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಸ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.&lt;/p&gt;&lt;p&gt;ಗಮನಾರ್ಹ ಸಂಗತಿ ಎಂದರೆ, ಕಳೆದ ಕೇವಲ 15 ದಿನಗಳಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ, ಮತ್ತೊಂದು ಅಮಾಯಕ ಜೀವ ಬಲಿಯಾಗಿರುವುದು ಆತಂಕ ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ದುರಂತದ ಬಳಿಕ ಪ್ರಶ್ನೆ ಒಂದೇ&lt;/strong&gt;&lt;/h2&gt;&lt;p&gt;ಕೃಷಿ ಹೊಂಡಗಳ ಸುರಕ್ಷತೆ ಕುರಿತು ಆದೇಶಗಳು ಕಾಗದಕ್ಕೆ ಮಾತ್ರ ಸೀಮಿತವಾಗಿದೆಯೇ? ಅಮಾಯಕ ಮಕ್ಕಳ ಜೀವ ಹೋಗುವ ಮುನ್ನ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಯಾವಾಗ? ಎಂಬ ಪ್ರಶ್ನೆ ಮೂಡಿದೆ.&lt;/p&gt;]]></content:encoded>
            <category>crime</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kolar-farm-pond-accident-two-brothers-death-gvd/articleshow-ntugoen"/>
        </item>
        <item>
            <title><![CDATA[ರಾಜ್ಯದಲ್ಲಿ SIRಗೆ ವಿರೋಧ:  ಬಂಗಾಳದಿಂದ ಕರ್ನಾಟಕ ನುಗ್ಗುತ್ತಿರುವ ನುಸುಳುಕೋರರು- ಶಾಕಿಂಗ್​ ವಿಡಿಯೋ ವೈರಲ್​]]></title>
            <link>https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z</link>
            <guid isPermaLink="true">https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z</guid>
            <pubDate>Mon, 25 May 2026 16:22:23 +0530</pubDate>
            <description><![CDATA[ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಬಿದ್ದ ಬಾಂಗ್ಲಾ ನುಸುಳುಕೋರರು ಈಗ ಕರ್ನಾಟಕದತ್ತ ಮುಖಮಾಡುತ್ತಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ. ನಕಲಿ ಆಧಾರ್ ಕಾರ್ಡ್ ಬಳಸಿ ವಲಸಿಗರು ರಾಜ್ಯ ಪ್ರವೇಶಿಸುತ್ತಿದ್ದು, ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯವನ್ನುಂಟುಮಾಡಬಹುದು ಎಂದು ಹಿಂದೂಪರ ಸಂಘಟನೆಗಳು ಎಚ್ಚರಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksfc64m9t0c0ysjz1tg5jy0a,imgname-bangladeshis-1779706303113.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದ ನುಸುಳುಕೋರರನ್ನು ಮತದಾರರ ಪಟ್ಟಿ ಪರಿಷ್ಕರಣೆ (SIR) ಮಾಡುವ ಮೂಲಕ ಹೊರಕ್ಕೆ ದಬ್ಬಿರುವುದು ಗೊತ್ತೇ ಇದೆ. ಮಮತಾ ಬ್ಯಾನರ್ಜಿ ಅವರ ವೋಟ್​ ಬ್ಯಾಂಕ್​ ಆಗಿದ್ದ ಈ ನುಸುಳುಕೋರರು, ಪಶ್ಚಿಮ ಬಂಗಾಳದಲ್ಲಿ ಇನ್ನಿಲ್ಲದ ಭಯೋತ್ಪಾದನಾ ಕೃತ್ಯ ಸೇರಿದಂತೆ ದೇಶ ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಈ ನುಸುಳುಕೋರರಿಗೆ ರಕ್ಷಣೆ ಒದಗಿಸುತ್ತಿದ್ದ ದೀದಿ, ಅಲ್ಲಿಯ ಹಿಂದೂಗಳ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿದ್ದರು. ತಮ್ಮ ವೋಟ್​ಬ್ಯಾಂಕ್​ ಹೋಗುತ್ತೆ ಎನ್ನುವಕಾರಣಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಂತೆ ಕೋರ್ಟ್​ ಮೆಟ್ಟಿಲೆಲ್ಲಾ ಏರಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೆ, ನುಸುಳುಕೋರರು ಬಂಗಾಳ ಬಿಟ್ಟು ಹೋಗುವಂತಾಯಿತು.&lt;/p&gt;&lt;p&gt;ಮುಸ್ಲಿಂ ನುಸುಳುಕೋರರರಿಗೆ ಯಾವ ಮುಸ್ಲಿಂ ರಾಷ್ಟ್ರಗಳೂ ಸ್ವಾಗತ ಕೋರುವುದಿಲ್ಲ. ಬಾಂಗ್ಲಾದೇಶಿಗರಿಗೂ ಹಾಗೆಯೇ ಆಗಿದೆ. ನುಸುಳುಕೋರರಾಗಿ ಸದ್ಯ ಇರುವುದು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ತುಂಬು ಹೃದಯದ ಸ್ವಾಗತ ಎನ್ನುವ ವಿಷಯಗಳು ಕೇಳಿಬರುತ್ತಿದೆ. ಇತ್ತ ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯದಂತೆ ಸರ್ಕಾರ ಭಾರಿ ಪ್ರಯತ್ನ ಮಾಡುತ್ತಿದೆ. ಕೋರ್ಟ್​ಗೆ ಹೋಗಲಿದೆ. ಇದಾಗಲೇ ಈ ಬಗ್ಗೆ ಮೀಟಿಂಗ್​ ಕೂಡ ನಡೆದಿದೆ. ಇದರ ಬೆನ್ನಲ್ಲೇ ನುಸುಳುಕೋರರು ಕರ್ನಾಟಕವನ್ನು ಪ್ರವೇಶಿಸುತ್ತಿರುವ ಆಘಾತಕಾರಿ ವಿಡಿಯೋ ವೈರಲ್​ ಆಗ್ತಿದೆ.&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ನುಸುಳುಕೋರರಿಗೆ ಕರ್ನಾಟಕವೇ ಸೇಫ್​?&lt;/strong&gt;&lt;/h2&gt;&lt;p&gt;ಇದಾಗಲೇ ಬಾಂಗ್ಲಾ ವಲಸಿಗರು ಹುಬ್ಬಳ್ಳಿ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳತ್ತ ಮುಖ ಮಾಡುತ್ತಿರುವ ವಿಡಿಯೋಗಳು ವೈರಲ್​ ಆಗುತ್ತವೆ. ಇತ್ತೀಚೆಗೆ ಪಶ್ಚಿಮ ಬಂಗಾಳದಿಂದ ಬಂದಿದ್ದ ಕೆಲ ಶಂಕಿತರನ್ನು ರೈಲ್ವೆ ಪೊಲೀಸರು ಕೇವಲ ಆಧಾರ್ ಕಾರ್ಡ್ ಪರಿಶೀಲಿಸಿ ಬಿಟ್ಟು ಕಳುಹಿಸಿದ್ದರು. ಅವರು ಬಾಗಲಕೋಟೆಗೆ ಕೂಲಿ ಕೆಲಸಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಆದರೆ, ನಕಲಿ ಆಧಾರ್ ಕಾರ್ಡ್&zwnj;ಗಳನ್ನು ಸೃಷ್ಟಿಸಿ ವಲಸಿಗರು ಬರುತ್ತಿರುವ ಸಾಧ್ಯತೆ ಇರುವುದರಿಂದ ಸಮಗ್ರ ತನಿಖೆ ನಡೆಸಬೇಕು ಎನ್ನುವುದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹವಾಗಿದೆ. ಏಕೆಂದರೆ ಪಶ್ಚಿಮ ಬಂಗಾಳದಲ್ಲಿಯೂ ಇವರಿಗೆಲ್ಲಾ ಮಮತಾ ಬ್ಯಾನರ್ಜಿ ನಕಲಿ ಆಧಾರ್​ ಕಾರ್ಡ್​ ಮಾಡಿಸಿಕೊಟ್ಟಿದ್ದರು. ಇಲ್ಲಿಯೂ ಆ ರೀತಿ ಆಗಿರುವ ಸಾಧ್ಯತೆ ಇದೆ, ಇದರಿಂದ ರಾಜ್ಯಕ್ಕೆ ಭಾರಿ ಸಂಕಷ್ಟ ಎದುರಾಗಲಿದ್ದು, ಭದ್ರತೆ ದೃಷ್ಟಿಯಿಂದ ಇದು ಅತ್ಯಂತ ಕಠಿಣ ಪರಿಸ್ಥಿತಿಯಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಹೇಳುತ್ತಿವೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ನಕಲಿ ಆಧಾರ್​ ಕಾರ್ಡ್​?&lt;/strong&gt;&lt;/h3&gt;&lt;p&gt;ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ತಂಡೋಪತಂಡವಾಗಿ ಬಾಂಗ್ಲಾದೇಶಿಯರು ಬಂದಿರುವ ಅನುಮಾನ ವ್ಯಕ್ತವಾಗುತ್ತಿದೆ. ಅದಕ್ಕೆ ಪುರಾವೆ ಎನ್ನುವಂತೆ ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ, ಅವರು ಪಶ್ಚಿಮ ಬಂಗಾಳದಿಂದ ಬಂದಿದ್ದು, ಕೂಲಿ ಕೆಲಸಕ್ಕೆ ಬಾಗಲಕೋಟೆಗೆ ಹೋಗುತ್ತಿರುವುದಾಗಿ ಹೇಳಿದ್ದರು! ಆದರೆ ಆಧಾರ ಕಾರ್ಡ್ ತೋರಿಸಿದ್ದರಿಂದ ಅವರನ್ನು ರೈಲ್ವೆ ಪೊಲೀಸರು ಬಿಟ್ಟು ಕಳುಹಿಸಿದ್ದರು. ಇದೀಗ ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕೇವಲ ಆಧಾರ ಕಾರ್ಡ್ ನೋಡಿ ಬಿಟ್ಟು ಕಳುಹಿಸಿದರೆ ಸಾಲದು, ಏಕೆಂದರೆ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಅನೇಕರು ಬರುತ್ತಿದ್ದಾರೆ. ಹೀಗಾಗಿ ಪಶ್ಚಿಮ ಬಂಗಾಳದಿಂದ ಯಾರೆಲ್ಲಾ ಹುಬ್ಬಳ್ಳಿಗೆ ಬರುತ್ತಾರೆ ಅವರನ್ನು ಸಮಗ್ರ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಕಾಟಾಚಾರಕ್ಕೆ ತಪಾಸಣೆ&lt;/strong&gt;&lt;/h3&gt;&lt;p&gt;ಹಿಂದೂ ಪರ ಸಂಘಟನೆ ಪ್ರತಿಭಟನೆ ಜೋರಾದಂತೆ, ಕಾಟಾಚಾರಕ್ಕೆ ಪೊಲೀಸರು ರೈಲಿನಲ್ಲಿ ಬರುವವರ ತಪಾಸಣೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನೂರಾರು ಪ್ರಯಾಣಿಕರು ಬಂದಿದ್ದರಿಂದ ಪೊಲೀಸರು ಯಾರನ್ನು ಕೂಡ ಸರಿಯಾಗಿ ತಪಾಸಣೆ ಮಾಡಲು ಸಾಧ್ಯವಾಗಲಿಲ್ಲ. ಹಿಂದೂಪರ ಸಂಘಟನೆಗಳ ಆರೋಪಗಳ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಮಾಹಿತಿ ನೀಡದೇ ಇದ್ದರು ಕೂಡ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆ ಮೇರೆಗೆ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.ಹೀಗೆ ಕಾಟಾಚಾರಕ್ಕೆ ಅವರ ತಪಾಸಣೆ ಒಂದೆಡೆಯಾದರೆ, SIR ಗೆ ಕಾಂಗ್ರೆಸ್​ ಸರ್ಕಾರದ ವಿರೋಧ ಇನ್ನೊಂದೆಡೆ. ಇದು ಕರ್ನಾಟಕ ದೀದೀ ನಾಡು ಪಶ್ಚಿಮ ಬಂಗಾಳ ಆಗುತ್ತದೆಯೇ ಎನ್ನುವ ಆತಂಕ ಹಲವರಲ್ಲಿ ಮನೆಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/bangladeshis-entering-karnataka-from-west-bengal-shocking-video-goes-viral-suc/articleshow-p9y0o1z"/>
        </item>
        <item>
            <title><![CDATA[ಡಿವೋರ್ಸ್​ ಮಗಳು ಬೇಕೋ, ಆಕೆ ಹೆಣ ಬೇಕೊ? ಗೋಡೆಗೆ ಗುದ್ದುವವರೆಗೂ ಕಾಯ್ತೀರಾ? ಕೋರ್ಟ್​ ಪ್ರಶ್ನೆ]]></title>
            <link>https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f</link>
            <guid isPermaLink="true">https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f</guid>
            <pubDate>Tue, 26 May 2026 12:26:51 +0530</pubDate>
            <description><![CDATA[ಭಾರತದಲ್ಲಿ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ಸಂಭವಿಸುತ್ತಿದ್ದು, ನಟಿ ತ್ವಿಷಾ ಶರ್ಮಾ ಪ್ರಕರಣವು ಈ ಕರಾಳ ಸತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ದೌರ್ಜನ್ಯ ಸಹಿಸಿಕೊಳ್ಳುವ ಬದಲು ವಿಚ್ಛೇದನ ಪಡೆಯುವುದು ಉತ್ತಮವೇ ಎಂಬ ಬಗ್ಗೆ ನ್ಯಾಯಾಲಯಗಳು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಚರ್ಚೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshh46t1gjhf31z9ph4n402w,imgname-high-court-case-1779778591553.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಇಂದಿಗೂ ಪ್ರತಿ 90 ನಿಮಿಷಕ್ಕೆ ಒಂದರಂತೆ ವರದಕ್ಷಿಣೆ ಸಾವು ನಡೆಯುತ್ತಿದೆ ಎಂದು ಈಚೆಗೆ ಬಂದಿರುವ ಅಂಕಿ ಅಂಶ ಹೇಳುತ್ತದೆ. ಎಷ್ಟೋಕೇಸ್​ಗಳಲ್ಲಿ ಸಾಕ್ಷ್ಯಾಧಾರಗಳೇ ಇಲ್ಲದೇ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ ಕೇಸ್​ಗಳನ್ನು ಹೆಣ್ಣುಮಕ್ಕಳು ಎಷ್ಟು ದುರುಪಯೋಗ ಮಾಡಿಕೊಂಡು ಗಂಡನ ಮನೆಯವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆಯೋ ಅದಕ್ಕಿಂತಲೂ ಹೆಚ್ಚು ಘಟನೆಗಳಲ್ಲಿ ವರದಕ್ಷಿಣೆಗಾಗಿ ಆಕೆಯ ಕೊ*ಲೆ ಆಗುತ್ತಿದೆ. ಕೆಲವೊಂದು ಹೈಪ್ರೊಫೈಲ್​ ಕೇಸ್​ಗಳಾದರೆ ಅದು ರಾತ್ರೋರಾತ್ರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ದೇಶಾದ್ಯಂತ ಚರ್ಚೆಯಾದರೆ, ಇನ್ನೆಷ್ಟೋ ಕೇಸ್​ಗಳಲ್ಲಿ ಕೊನೆಯ ಪಕ್ಷ ಆ ಹೆಣ್ಣಿನ ಸಾವಿಗೆ ಕಾರಣವಾದ ಕ್ರೂರಿಗಳಿಗೆ ಶಿಕ್ಷೆಯೂ ಆಗದೇ ಹೋಗುವುದು ದೊಡ್ಡ ದುರಂತ.&lt;/p&gt;&lt;h2&gt;&lt;strong&gt;ತ್ವಿಷಾ ಶರ್ಮಾ ಕೇಸ್​&lt;/strong&gt;&lt;/h2&gt;&lt;p&gt;ಇದೀಗ, ನಟಿ, ಮಾಡೆಲ್​, ಮಿಸ್​ ಪುಣೆ ತ್ವಿಷಾ ಶರ್ಮಾ ಕೇಸ್​ನಿಂದ ಈ ವಿಷಯಗಳನ್ನು ಬಹುತೇಕ ಕೋರ್ಟ್​ಗಳು ಕೂಡ ಚರ್ಚೆ ಮಾಡುತ್ತಿವೆ. ಮದುವೆಯಾಗಿ ಐದೇ ತಿಂಗಳಿಗೆ ಕೊ*ಲೆಯಾಗಿರುವ ತ್ವಿಷಾ ಶರ್ಮಾಳ ಅಪರಾಧಿಗಳಾದ ಮಾಜಿ ನ್ಯಾಯಾಧೀಶೆ ಅತ್ತೆ ಕೂಡ ತಪ್ಪಿಸಿಕೊಳ್ಳಲು ಎಲ್ಲಾಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಆಕೆಯನ್ನು ಇನ್ನೂ ಅರೆಸ್ಟ್​ ಮಾಡಿಲ್ಲ ಎಂದು ಜೋರಾಗಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಘಟನೆಯಿಂದಾಗಿ ಇದೀಗ ಬಹುತೇಕ ಕೋರ್ಟ್​ಗಳಲ್ಲಿಯೂ ನ್ಯಾಯಾಧೀಶರು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ.&lt;/p&gt;&lt;p&gt;ಅಷ್ಟಕ್ಕೂ ತ್ವಿಷಾ ಶರ್ಮಾ ಕೇಸ್​ನಲ್ಲಿ ಆಕೆ ಕಿರುಕುಳ ಸಹಿಸಲಾಗದೇ ವಾಪಸ್​ ತವರಿಗೆ ಬರುವುದಾಗಿ ಹೇಳಿದ್ದಳು. ಅದರಂತೆ ಸಿದ್ಧತೆ ಕೂಡ ಮಾಡಿಕೊಂಡಿದ್ದಳು. ಅಷ್ಟರಲ್ಲಿಯೇ ಹೆಣವಾದಳು. ಆದರೆ ಅದೆಷ್ಟು ಮನೆಗಳಲ್ಲಿ ಹೆಣ್ಣನ್ನು ತವರಿನವರು ವಾಪಸ್​ ಕರೆಸಿಕೊಳ್ಳುತ್ತಾರೆ ಹೇಳಿ. ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ, ಗಂಡನ ಮನೆಯೇ ಅವಳಿಗೆ ಎಲ್ಲವೂ. ಏನಾದರೂ ಅಡ್ಜಸ್ಟ್​ ಮಾಡಿಕೊಳ್ಳಿ ಎನ್ನುವ ಕುಟುಂಬಗಳೇ ಹಲವು. ಏಕೆಂದರೆ, ಅವರಿಗೆ ಮಗಳು ವಾಪಸ್​ ಬಂದರೆ ಸಮಾಜ ಏನು ಹೇಳುತ್ತದೆ ಎನ್ನುವ ಭಯ. ಅಷ್ಟಕ್ಕೂ ಡಿವೋರ್ಸ್​ ಆಗಿ ಬಂದವರನ್ನು ನೋಡಿದಾಗ ಕುಹಕ ಆಡುವವರು ಕಡಿಮೆಯೆ, ಅದರಲ್ಲಿಯೂ ಹೆಂಗಸರೇ ಇದರಲ್ಲಿ ಒಂದುಕೈ ಮುಂದೆ ಎನ್ನಬಹುದು. ಅದಕ್ಕಾಗಿಯೇ ಹೆಣ್ಣು ಏನೇ ಆದರೂ ತವರು ಮನೆಯಲ್ಲಿ ಹೇಳುವುದೇ ಇಲ್ಲ, ಹೇಳಿದರೂ ಸಹಿಸಿಕೊಂಡು ಹೋಗು ಎನ್ನುವ ಉತ್ತರ. ಹೆಣ್ಣಿನ ಹುಟ್ಟು ತವರಿನಲ್ಲಿ ಆಕೆಯ ಶವ ಬರಬೇಕಾದದ್ದು ಗಂಡನ ಮನೆಯಿಂದ ಎನ್ನುವ ಮಾತಿದೆ. ಈಗಲೂ ಹಾಗೆಯೇ ಆಗುತ್ತಿದೆ.&lt;/p&gt;&lt;h3&gt;&lt;strong&gt;ಡಿವೋರ್ಸ್​ ಮಗಳು ಬೇಕಾ...?&lt;/strong&gt;&lt;/h3&gt;&lt;p&gt;ಇದರ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆಗೆ ಬಂದಾಗ ಸಾಲಿಸಿಟರಲ್​ ಜನರ್​ ಎಸ್​.ಜಿ.ಮೆಹ್ತಾ ಅವರು ಡಿವೋರ್ಸ್​ ಆಗಿರೋ ಮಗಳು ಬೇಕಾ, ಅಥವಾ ಅವಳ ಹೆಣ ಬೇಕಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಹೆಣಕ್ಕಿಂತಲೂ ಡಿವೋರ್ಸ್​ ಒಳ್ಳೆಯದು ಎಂದು ಹೇಳಿದ್ದಾರೆ. ಅದೇ ರೀತಿ ಕರ್ನಾಟಕ ಹೈಕೋರ್ಟ್​ನಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗೆಗಿನ ವಿಚಾರಣೆ ವೇಳೆ, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು, ಹೆಣ್ಣುಮಕ್ಕಳು ತಮಗೆ ತೊಂದರೆ ಆಗುತ್ತಿದೆ ಎಂದ ತಕ್ಷಣವೇ ಕಂಪ್ಲೇಂಟ್​ ಕೊಡುವುದಿಲ್ಲ. ಗೋಡೆಗೆ ಹೋಗಿ ಅವರನ್ನು ಗುದ್ದುವವರೆಗೂ ಸಹಿಸಿಕೊಂಡು ಇರುತ್ತಾರೆ. ಹೀಗೆ ಏಕೆ ಸಹಿಸಿಕೊಳ್ಳಬೇಕು, ಹೆಣ್ಣುಮಕ್ಕಳು ಹೀಗೆಲ್ಲಾ ಮಾಡಬಾರದು ಎಂದಿದ್ದಾರೆ. ಪ್ರತಿ ಬಾರಿಯೂ ಅಡ್ಜಸ್ಟ್​ ಮಾಡಿಕೊಂಡು ಹೋಗೋಣ ಎಂದುಕೊಳ್ಳುವುದು ತಪ್ಪು ಎಂದಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/women/better-to-have-a-divorced-daughter-than-a-dead-one-why-dont-women-file-case-suc/articleshow-pq7b55f"/>
        </item>
        <item>
            <title><![CDATA[ಜಾಹೀರಾತು ಶೂಟಿಂಗ್​ಗೆ ಹೋಗಿದ್ದ ಖ್ಯಾತ ಮಾಡೆಲ್​ ದುರಂತ ಸಾವು: ಆಯ ತಪ್ಪಿ ಕ್ವಾರಿಯಲ್ಲಿ ಬಿದ್ದು ಘಟನೆ]]></title>
            <link>https://kannada.asianetnews.com/india-news/delhi-model-divyanshu-joshi-drowns-in-kerala-rock-quarry-during-visit-to-shooting-location-suc/articleshow-qmldpu0</link>
            <guid isPermaLink="true">https://kannada.asianetnews.com/india-news/delhi-model-divyanshu-joshi-drowns-in-kerala-rock-quarry-during-visit-to-shooting-location-suc/articleshow-qmldpu0</guid>
            <pubDate>Fri, 29 May 2026 19:44:36 +0530</pubDate>
            <description><![CDATA[ಬಟ್ಟೆ ಜಾಹೀರಾತಿನ ಶೂಟಿಂಗ್&zwnj;ಗಾಗಿ ಕೇರಳಕ್ಕೆ ಬಂದಿದ್ದ ದೆಹಲಿಯ 26 ವರ್ಷದ ಮಾಡೆಲ್, ಎರ್ನಾಕುಲಂನ ನಿಷಿದ್ಧ ಕ್ವಾರಿಯೊಂದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶೂಟಿಂಗ್ ಸ್ಥಳ ಪರಿಶೀಲನೆ ವೇಳೆ ನೀರಿಗೆ ಇಳಿದಾಗ ಈ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳದವರು 30 ಅಡಿ ಆಳದಿಂದ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kst18asrp5dkw98zfpzt44sq,imgname-himamshu-joshi-1780063939384.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಟ್ಟೆ ಜಾಹೀರಾತೊಂದರ ಶೂಟಿಂಗ್​ ವೇಳೆ ಕೇರಳಕ್ಕೆ ಬಂದಿದ್ದ ದೆಹಲಿಯ 26 ವರ್ಷದ ಮಾಡೆಲ್ ಎರ್ನಾಕುಲಂನ ಪೆರುಂಬವೂರಿನಲ್ಲಿ ನೀರು ತುಂಬಿದ ಕ್ವಾರಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ದೆಹಲಿಯ ಅಂಬೇಡ್ಕರ್ ನಗರದ ನಿವಾಸಿ ದಿವ್ಯಾಂಶು ಜೋಶಿ ಎಂದು ಗುರುತಿಸಲಾಗಿದೆ. ದೆಹಲಿ ಮೂಲದ ಉಡುಪು ತಯಾರಿಕಾ ಕಂಪನಿಯ ಜಾಹೀರಾತಿನ ಚಿತ್ರೀಕರಣಕ್ಕೆ ಬಂದಿದ್ದ ನಾಲ್ವರು ಸದಸ್ಯರ ತಂಡದ ಭಾಗವಾಗಿದ್ದರು ಎಂದು ಮನೋರಮಾ ವರದಿ ಮಾಡಿದೆ.&lt;/p&gt;&lt;p&gt;ಕುರುಪ್ಪುಂಪಾಡಿ ಬಳಿಯ ಮುದಕ್ಕುಳ ಪಂಚಾಯತ್&zwnj;ನಲ್ಲಿರುವ ಪೆಟ್ಟಿಮಲ ಬಂಡೆ ಕ್ವಾರಿಯಲ್ಲಿ ಈ ಘಟನೆ ಸಂಭವಿಸಿದೆ. ಸುದ್ದಿವಾಹಿನಿಯ ಪ್ರಕಾರ, ಈ ಪ್ರದೇಶದಲ್ಲಿ ಮುಳುಗಡೆಯ ಹಿಂದಿನ ಘಟನೆಗಳಿಂದಾಗಿ ಕ್ವಾರಿಗೆ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕ್ವಾರಿಯಲ್ಲಿರುವ ನೀರಿನ ಮೂಲವು 100 ಅಡಿಗಳಿಗಿಂತ ಹೆಚ್ಚು ಆಳದಲ್ಲಿದೆ ಮತ್ತು ಹಲವಾರು ಬಂಡೆಗಳ ಪದರಗಳನ್ನು ಹೊಂದಿದೆ.&lt;/p&gt;&lt;h2&gt;&lt;strong&gt;ನೀರಿಗೆ ಇಳಿದಾಗ ಅನಾಹುತ&lt;/strong&gt;&lt;/h2&gt;&lt;p&gt;ಬಕ್ರೀದ್&zwnj;ಗಾಗಿ ಕಚೇರಿ ಮುಚ್ಚಲ್ಪಟ್ಟಿದ್ದರಿಂದ ಶುಕ್ರವಾರ ತಂಡವು ಪಂಚಾಯತ್&zwnj;ನಿಂದ ಅನುಮತಿ ಪಡೆಯಲು ನಿರ್ಧರಿಸಲಾಗಿತ್ತು ಎಂದು ಕೊಡನಾಡ್ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಗುರುವಾರ, ತಂಡದ ಕೆಲವು ಸದಸ್ಯರು ಶೂಟಿಂಗ್ ಸ್ಥಳವನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ್ದರು. ಅವರು ಬಂದಾಗ, ತಂಡದ ಮತ್ತೊಬ್ಬ ವ್ಯಕ್ತಿ ವಿಡಿಯೋ ಚಿತ್ರೀಕರಣ ಮಾಡಲು ಪ್ರಯತ್ನಿಸಿದಾಗ ದಿವ್ಯಾಂಶು ಜೋಶಿ ನೀರಿಗೆ ಇಳಿದರು. ಆಗ ಅವರು ಕ್ವಾರಿಯ ಆಳವಾದ ಭಾಗಕ್ಕೆ ಮುಳುಗಿದರು ಎಂದು ಹೇಳಲಾಗಿದೆ.&lt;/p&gt;&lt;h3&gt;&lt;strong&gt;30 ಅಡಿ ಆಳದಲ್ಲಿ ಪತ್ತೆ&lt;/strong&gt;&lt;/h3&gt;&lt;p&gt;ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು ಮಾಹಿತಿ ನೀಡಿದ ತಕ್ಷಣ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದವು. ದಿವ್ಯಾಂಶು ಜೋಶಿ ಸುಮಾರು 30 ಅಡಿ ಆಳದಿಂದ ಪತ್ತೆಯಾಗಿದ್ದು, ಅವರನ್ನು ಪೆರುಂಬವೂರ್ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಅವರ ದೇಹವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/delhi-model-divyanshu-joshi-drowns-in-kerala-rock-quarry-during-visit-to-shooting-location-suc/articleshow-qmldpu0"/>
        </item>
        <item>
            <title><![CDATA[Bengaluru murder case: ಮದುವೆ ಆಗಿದ್ದ ಗೆಳತಿಯನ್ನ ನೋಡಲು ಹೋಗಿದ್ದ ಗುಜರಿ ವ್ಯಾಪಾರಿ ಕೊಲೆ! ಗಂಡ ಮನೆಗೆ ಬಂದಾಗ ನಡಿದ್ದೇನು?]]></title>
            <link>https://kannada.asianetnews.com/crime/man-killed-while-visiting-married-friend-in-bapujinagar-bengaluru-rav/articleshow-qtav2ab</link>
            <guid isPermaLink="true">https://kannada.asianetnews.com/crime/man-killed-while-visiting-married-friend-in-bapujinagar-bengaluru-rav/articleshow-qtav2ab</guid>
            <pubDate>Thu, 28 May 2026 07:07:20 +0530</pubDate>
            <description><![CDATA[&lt;p&gt;ಬೆಂಗಳೂರಿನ ಬ್ಯಾಟರಾಯನಪುರದಲ್ಲಿ, ತನ್ನ ಸ್ನೇಹಿತೆಯ ಮನೆಗೆ ಭೇಟಿ ನೀಡಿದ್ದ ಗುಜರಿ ವ್ಯಾಪಾರಿಯನ್ನು ಆಕೆಯ ಪತಿ ಮತ್ತು ಸಂಬಂಧಿಕರು ಸೇರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಪ್ರೌಢಶಾಲಾ ದಿನಗಳಿಂದ ಈ ಸ್ನೇಹಕ್ಕೆ ಪತಿ ವಿರೋಧ ವ್ಯಕ್ತಪಡಿಸಿದ್ದು, ಹಲ್ಲೆಗೊಳಗಾದ ವ್ಯಕ್ತಿ ನಂತರ ಚಿಕಿತ್ಸೆ ಫಲಿಸದೇ ಸಾವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksp3jn0reyc6nhg4cbvnn3ah,imgname-----------------------2026-05-28t070518.788-1779932156952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.28): &lt;/strong&gt;ತನ್ನ ಸ್ನೇಹಿತೆ ಮನೆಗೆ ಬಂದಿದ್ದ ಗುಜರಿ ವ್ಯಾಪಾರಿಯೊಬ್ಬನನ್ನು ಆಕೆಯ ಪತಿ ಹಾಗೂ ಸಂಬಂಧಿಕರು ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬ್ಯಾಟರಾಟನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;ರಾಮನಗರದ ಬೀಡಿ ಕಾಲೋನಿಯ ನಿವಾಸಿ ಮೊಹಮ್ಮದ್ ಕಾಸಿಫ್&zwnj;(Mohammed Kasif) (27) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತೆ ಪತಿ ಅಕ್ಬರ್ ಹಾಗೂ ಆತನ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 2 ದಿನಗಳ ಹಿಂದೆ ಬಾಪೂಜಿನಗರದಲ್ಲಿರುವ ಗೆಳತಿ ಮನೆಗೆ ಮೊಹಮ್ಮದ್ ಬಂದಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ರಾಮನಗರದಲ್ಲಿ ಗುಜರಿ ವ್ಯವಹಾರ ನಡೆಸಿಕೊಂಡು ಮೊಹಮ್ಮದ್, ತಮ್ಮ ಕುಟುಂಬದ ಜತೆ ಅಲ್ಲೇ ನೆಲೆಸಿದ್ದ. ಈ ಮೊದಲು ಬಾಪೂಜಿನಗರವು ಆತನ ನೆಲೆವೀಡಾಗಿತ್ತು. ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್&zwnj;ಗೆ ಅಕ್ಬರ್ ಪತ್ನಿ ಪರಿಚಯವಾಗಿತ್ತು. ಈತ 10ನೇ ತರಗತಿ ಹಾಗೂ ಆಕೆ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹೀಗಿದ್ದರೂ ಇಬ್ಬರ ಮಧ್ಯೆ ಗೆಳೆತನ ಬೆಳೆದು ಆತ್ಮೀಯ ಒಡನಾಟ ಇತ್ತು. ಮದುವೆ ಬಳಿಕವು ಈ ಸ್ನೇಹವೂ ಮುಂದುವರೆದಿತ್ತು. ಆದರೆ ಈ ಸ್ನೇಹಕ್ಕೆ ಅಕ್ಬರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಹೀಗಿದ್ದರೂ ಗೆಳತನ ಜತೆ ಆತನ ಪತ್ನಿ ಸಂಪರ್ಕ ಅಭಾದಿತವಾಗಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;p&gt;ಅಂತೆಯೇ ತನ್ನ ಸ್ನೇಹಿತೆಯನ್ನು ಕಾಣಲು ಬಾಪೂಜಿನಗರದಲ್ಲಿದ್ದ ಆಕೆಯ ಮನೆಗೆ ಸೋಮವಾರ ಸಂಜೆ ಮೊಹಮ್ಮದ್ ಬಂದಿದ್ದ. ಅದೇ ವೇಳೆ ಮನೆಗೆ ಬಂದ ಅಕ್ಬರ್&zwnj;ಗೆ ಮೊಹಮ್ಮದ್ ಕಂಡು ನಖಶಿಖಾಂತ ಉರಿದು ಹೋಗಿದೆ. ನೀನ್ಯಾಕೆ ಮನೆಗೆ ಬಂದೆ ಎಂದು ಪ್ರಶ್ನಿಸಿ ಏಕಾಏಕಿ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಕೂಡಲೇ ಆತನ ಸಂಬಂಧಿಕರು ಬಂದು ಗಲಾಟೆಯಲ್ಲಿ ಕೈ ಜೋಡಿಸಿದ್ದಾರೆ. ಮನಬಂದಂತೆ ಹೊಡೆದು ಮೊಹಮ್ಮದ್&zwnj;ನನ್ನು ಆರೋಪಿಗಳು ಕಳುಹಿಸಿದ್ದಾರೆ. ಈ ಹಲ್ಲೆಯಿಂದ ಮೃತನ ದೇಹವು ಮೈ ಎಲ್ಲ ಹಣ್ಣುಗಾಯಿ ಆಗಿತ್ತು.&lt;/p&gt;&lt;p&gt;ಈ ಘಟನೆ ಬಳಿಕ ರಾಮನಗರದ ಮನೆಗೆ ಮರಳಿದ ಮೊಹಮ್ಮದ್&zwnj;ಗೆ ರಾತ್ರಿ ಉಸಿರಾಟ ಸಮಸ್ಯೆ ಉಂಟಾಗಿದೆ. ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ದು ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗುಜರಿ ವ್ಯಾಪಾರಿ ಕೊನೆಯುಸಿರೆಳೆದಿದ್ದಾನೆ. ಈತನ ತಪಾಸಣೆ ನಡೆಸಿದ ವೈದ್ಯರು, ಮೃತನ ಮೇಲೆ ಮರಣಾಂತಿಕ ಹಲ್ಲೆ ನಡೆದಿದೆ ಎಂದಿದ್ದರು. ಬಳಿಕ ಬ್ಯಾಟರಾಯನಪುರ ಠಾಣೆಗೆ ಆಗಮಿಸಿ ಮೃತನ ಕುಟುಂಬದವರು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;ul&gt; &lt;li&gt;ಪ್ರೌಢಶಾಲೆಯಲ್ಲಿ ಓದುವಾಗ ಪರಿಚಯ ಆಗಿದ್ದ ಗೆಳತಿ&lt;/li&gt; &lt;li&gt;ಸ್ನೇಹಿತೆಯ ಮದುವೆ ಬಳಿಕವು ಮುಂದುವರಿದಿದ್ದ ಸ್ನೇಹ&lt;/li&gt; &lt;li&gt;ಇವರಿಬ್ಬರ ಸ್ನೇಹಕ್ಕೆ ಗೆಳತಿಯ ಪತಿಯಿಂದ ವಿರೋಧ&lt;/li&gt; &lt;li&gt;ಗೆಳತಿಯನ್ನು ನೋಡಲು ಹೋದಾಗ ಸಂಬಂಧಿಕರಿಂದ ಕೊಲೆ&amp;nbsp;&lt;/li&gt;&lt;/ul&gt;]]></content:encoded>
            <category>crime</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/man-killed-while-visiting-married-friend-in-bapujinagar-bengaluru-rav/articleshow-qtav2ab"/>
        </item>
        <item>
            <title><![CDATA[ಬಕ್ರೀದ್​ಗೆಂದು ಅವ್ರು ಕುರಿ ತಂದ್ರೆ, ಇವ್ರು ಹಂದಿ ತಂದ್ರು! ಹಂದಿ ಹಿಡಿದು ಓಡಿದ ಪೊಲೀಸ್ರು: ವಿಡಿಯೋ ವೈರಲ್​]]></title>
            <link>https://kannada.asianetnews.com/viral/hindu-activists-brought-pig-to-goat-selling-market-police-entry-video-viral-suc/articleshow-ve3s215</link>
            <guid isPermaLink="true">https://kannada.asianetnews.com/viral/hindu-activists-brought-pig-to-goat-selling-market-police-entry-video-viral-suc/articleshow-ve3s215</guid>
            <pubDate>Wed, 27 May 2026 13:04:31 +0530</pubDate>
            <description><![CDATA[ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಕುರಿ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಂದಿಯನ್ನು ತಂದು ಗಲಾಟೆ ಸೃಷ್ಟಿಸಿದ್ದಾನೆ. ಮುಸ್ಲಿಮರು ಹಂದಿಯನ್ನು ಅಶುದ್ಧವೆಂದು ಪರಿಗಣಿಸುವುದರಿಂದ ಈ ಕೃತ್ಯ ಎಸಗಲಾಗಿದ್ದು, ನಂತರ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksm5n5cb62rqwtf6wcx3h247,imgname-bakrid-fighting-1779867227531.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಳೆ ಬಕ್ರೀದ್​ ಹಬ್ಬದ ಹಿನ್ನೆಲೆಯಲ್ಲಿ ಎಲ್ಲೆಡೆಗಳಲ್ಲಿ ಕುರಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಮುಸ್ಲಿಮರು ಹಲವಾರು ಕಡೆಗಳಲ್ಲಿ, ಜನ ವಸತಿ ಪ್ರದೇಶಗಳಲ್ಲಿ ಎಲ್ಲೆಡೆಗಳಲ್ಲಿಯೂ ಕುರಿ ಮಾರಾಟ ಮಾಡುತ್ತಾರೆ. ಹಾಗೆಂದು ಕೇವಲ ಮುಸ್ಲಿಮರು ಮಾತ್ರವಲ್ಲ, ಕುರಿ ಕಾಯುವ ಹಿಂದೂಗಳು ಕೂಡ ಕುರಿ, ಮೇಕೆ, ಆಡು ಮುಂತಾದವುಗಳನ್ನು ಮಾರಾಟ ಮಾಡುತ್ತಾರೆ.&lt;/p&gt;&lt;h2&gt;&lt;strong&gt;ಗೋವು ತಿನ್ನಲ್ಲ&lt;/strong&gt;&lt;/h2&gt;&lt;p&gt;ಇದಾಗಲೇ ಗೋವುಗಳನ್ನು ನಾವು ಬಕ್ರೀದ್​ ಸಮಯದಲ್ಲಿ ತಿನ್ನುವುದಿಲ್ಲ ಎಂದು ಹಲವು ಮುಸ್ಲಿಂ ಸಂಘಟನೆಗಳು ಘೋಷಿಸಿದ್ದರಿಂದ, ಗೋವು ಮಾರಾಟ ಮಾಡುತ್ತಿರುವ ಹಿಂದೂಗಳೂ ಕಕ್ಕಾಬಿಕ್ಕಿಯಾಗಿರುವ ಘಟನೆಗಳು ವೈರಲ್​ ಆಗುತ್ತಲೇ ಇವೆ. ಆದರೆ, ಇದೇ ವೇಳೆ, ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಜನ ವಸತಿ ಪ್ರದೇಶ ಒಂದರಲ್ಲಿ ಕುರಿಗಳನ್ನು ಮಾರಲು ಮುಸ್ಲಿಮರು ಮುಂದಾದಾಗ, ಅವರ ಎದುರು ಹಿಂದೂ ಸಂಘಟನೆಯ ಕಾರ್ಯಕರ್ತನೊಬ್ಬ ಹಂದಿಯನ್ನು ತಂದು ಹಲ್​ಚಲ್​ ಸೃಷ್ಟಿಸಿದ್ದಾನೆ. ಅದರ ವಿಡಿಯೋ ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ಹಂದಿ ಗಲಾಟೆ&lt;/strong&gt;&lt;/h3&gt;&lt;p&gt;ಮೊದಲು ಕಾರ್ಯಕರ್ತನೊಬ್ಬ ಹಂದಿ ತಂದು ಗಲಾಟೆ ಸೃಷ್ಟಿಸಿದ. ಬಳಿಕ ಪೊಲೀಸರು ಎಂಟ್ರಿ ಕೊಟ್ಟು ಹಂದಿ ಹಿಡಿದು ಓಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಷ್ಟಕ್ಕೂ ಮುಸ್ಲಿಂ ಸಮುದಾಯಕ್ಕೂ ಹಂದಿಗೂ ಆಗಿಬರುವುದಿಲ್ಲ. ಅವರು ಹಂದಿಯನ್ನು ತಿನ್ನುವುದಿಲ್ಲ. ಇದೇ ಕಾರಣಕ್ಕೆ ಈ ಕಿತಾಪತಿ ಮಾಡಲಾಗಿದೆ.&lt;/p&gt;&lt;p&gt;ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸದ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (ಹರಾಮ್). ಕುರಾನ್&zwnj;ನಲ್ಲಿ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಹಂದಿಯನ್ನು ಸಹಜವಾಗಿ ಅಶುದ್ಧ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಮುಸ್ಲಿಮರು ಯಾವುದೇ ರೀತಿಯ ಹಂದಿ ಮಾಂಸ ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವುದಿಲ್ಲ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Fierce Bharat (@fiercebharat)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/viral/hindu-activists-brought-pig-to-goat-selling-market-police-entry-video-viral-suc/articleshow-ve3s215"/>
        </item>
        <item>
            <title><![CDATA[ಕುಡಿದ ಮತ್ತಲ್ಲಿ ಇಬ್ಬರ ಕೊಂದ ಬಾಲಕನಿಗೆ ಪ್ರಬಂಧ ಬರೆಯೋ ಶಿಕ್ಷೆ: ಸಾಕ್ಷಿ ನಾಶಕ್ಕೆ ನೋಡಿದ ಅಪ್ಪನಿಗೆ ಜಾಮೀನು]]></title>
            <link>https://kannada.asianetnews.com/india-news/pune-porsche-crash-accused-teens-father-seen-dancing-and-celebrating-bail-with-family-suc/articleshow-yhogk7a</link>
            <guid isPermaLink="true">https://kannada.asianetnews.com/india-news/pune-porsche-crash-accused-teens-father-seen-dancing-and-celebrating-bail-with-family-suc/articleshow-yhogk7a</guid>
            <pubDate>Wed, 27 May 2026 19:19:32 +0530</pubDate>
            <description><![CDATA[2024ರ ಪುಣೆ ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಎಂಜಿನಿಯರ್&zwnj;ಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸಾಕ್ಷ್ಯ ತಿರುಚಿದ ಆರೋಪದ ಮೇಲೆ ಬಂಧಿತನಾಗಿದ್ದ ಅಪ್ರಾಪ್ತನ ತಂದೆ ವಿಶಾಲ್ ಅಗರ್&zwnj;ವಾಲ್&zwnj;ಗೆ ಇದೀಗ ಜಾಮೀನು ಸಿಕ್ಕಿದ್ದು, ಆತನ ಕುಟುಂಬ ನೋಟಿನ ಹಾರ ಹಾಕಿ ಸಂಭ್ರಮಿಸಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksmv3fcccqvh1esyyq90rbmk,imgname-accident-1779889716620.jpg" type="image/jpeg" height="390" width="690"/>
            <content:encoded><![CDATA[&lt;p&gt;2024ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಭೀಕರ ಅಪಘಾತ ಬೆಚ್ಚಿಬೀಳಿಸಿತ್ತು. ಪೋರ್ಷೆ ಕಾರು ಅಪಘಾತದಲ್ಲಿ ಇಬ್ಬರು ಯುವ ಐಟಿ ಎಂಜಿನಿಯರ್&zwnj;ಗಳು ಈ ಅಪಘಾತದಲ್ಲಿ ಸಾವನ್ನಿಪ್ಪಿದ್ದರು. ಅಲ್ಲಿ ನಡೆದದ್ದು ಬರಿಯ ಅಪಘಾತವಲ್ಲ. ಎರಡು ಕುಟುಂಬಗಳ ಕಣ್ಣೀರು. ಅಷ್ಟಕ್ಕೂ ಈ ನೀಚ ಕೆಲಸ ಮಾಡಿದ್ದು ಶ್ರೀಮಂತಿಕೆಗೆ ಮದದಲ್ಲಿ ಮೆರೆಯುತ್ತಿದ್ದ ಶ್ರೀಮಂತ ವಿಶಾಲ್ ಅಗರ್ವಾಲ್ ಎಂಬಾತನ ಅಪ್ರಾಪ್ತ ಮಗ. ಕುಡಿದ ಅಮಲಿನಲ್ಲಿ ತೇಲಾಡುತ್ತಿದ್ದ ಈ ಬಾಲಕ, ಐಷಾರಾಮಿ ಪೋರ್ಷೆ ಕಾರನ್ನು ಚಲಾಯಿಸಿದ್ದ. ಈತನ ಕುಡಿತಕ್ಕೆ ಬಲಿಯಾದದ್ದು ಅನೀಶ್ ಅವಧಿಯ ಮತ್ತು ಅಶ್ವಿನಿ ಕೋಷ್ಟಾ ಎನ್ನುವ ಯುವ ಎಂಜಿನಿಯರ್ಸ್​.&lt;/p&gt;&lt;p&gt;ಅತ್ತ ತಮ್ಮ ಮಕ್ಕಳನ್ನು ಕಳೆದುಕೊಂಡು ಆ ಕುಟುಂಬವಿನ್ನೂ ಕಣ್ಣೀರಿನಲ್ಲಿ ಇರುವಾಗ, ಇತ್ತ ಅಪ್ರಾಪ್ತ ಎನ್ನುವ ಕಾರಣಕ್ಕೆ ಆತನಿಗೆ ರಿಮಾಂಡ್​ ಹೋಮ್​ಗೆ ಕಳುಹಿಸಲಾಗಿತ್ತು. ಅಪಘಾತದ 15 ಗಂಟೆಗಳ ಒಳಗೆ ಬಾಲ ನ್ಯಾಯ ಮಂಡಳಿಯು ಆರಂಭದಲ್ಲಿ ಬಾಲಕನಿಗೆ ಜಾಮೀನು ನೀಡಿದಾಗ ಈ ಪ್ರಕರಣವು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಷರತ್ತುಗಳ ಅಡಿಯಲ್ಲಿ, 15 ದಿನಗಳವರೆಗೆ ಸಂಚಾರ ಪೊಲೀಸರಿಗೆ ಸಹಾಯ ಮಾಡಲು ಮತ್ತು ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಬರೆಯಲು ಆತನಿಗೆ ಹೇಳಲಾಗಿತ್ತು. ವ್ಯಾಪಕ ಸಾರ್ವಜನಿಕ ಆಕ್ರೋಶದ ನಂತರ, ಹದಿಹರೆಯದವರನ್ನು ನಂತರ ವೀಕ್ಷಣಾ ಗೃಹಕ್ಕೆ ಕಳುಹಿಸಲಾಯಿತು.&lt;/p&gt;&lt;p&gt;ಆದರೆ, ಆತ ಕಾರನ್ನು ಚಲಾಯಿಸಲೇ ಇಲ್ಲ ಎಂದು ಸಾಬೀತು ಮಾಡಲು ಅಪ್ಪ ವಿಶಾಲ್ ಅಗರ್ವಾಲ್, ಆತನ ರಕ್ತದ ಮಾದರಿಗಳನ್ನು ತಿರುಚಲು ಪ್ರಯತ್ನಿಸಿದ್ದ. ಈ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. ಅಷ್ಟೇ ಅಲ್ಲದೇ, ಈ ಅಪಘಾತ ತಾನು ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಆತ ಡ್ರೈವರ್​ ಮೇಲೆ ಒತ್ತಡ ಹೇರಿದ್ದ. ಇವೆಲ್ಲಾ ಆರೋಪ ಆತನ ಮೇಲಿದ್ದು, ಆತನಿಗೆ ಈಗ ಜಾಮೀನು ಸಿಕ್ಕಿದೆ.&lt;/p&gt;&lt;h2&gt;&lt;strong&gt;ನೋಟಿನೊಂದಿಗೆ ಆಚರಣೆ&lt;/strong&gt;&lt;/h2&gt;&lt;p&gt;ವಿಶಾಲ್ ಅಗರ್ವಾಲ್ ಬಿಡುಗಡೆಯನ್ನು ಅಗರ್ವಾಲ್ ಕುಟುಂಬ ಆಚರಿಸುತ್ತಿರುವ ವಿಡಿಯೋವೊಂದು ಇದೀಗ ಹೊರಬಿದ್ದಿದೆ. ಈ ದೃಶ್ಯಾವಳಿಯಲ್ಲಿ ಕುಟುಂಬ ಸದಸ್ಯರು ನೃತ್ಯ ಮಾಡುತ್ತಿರುವುದನ್ನು ತೋರಿಸಲಾಗಿದ್ದು, 1977 ರ ಬಾಲಿವುಡ್ ಹಾಡು &quot;ಬಾಂಬೆ ಸೆ ಆಯಾ ಮೇರಾ ದೋಸ್ತ್, ದೋಸ್ತ್ ಕೋ ಸಲಾಮ್ ಕರೋ&quot; ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದೆ. ಸುಮಾರು ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ವಿಶಾಲ್ ಅಗರ್ವಾಲ್ ಹೂವಿನ ಹಾರಗಳು ಮತ್ತು ನೋಟುಗಳನ್ನು ಧರಿಸಿರುವುದನ್ನು ಕಾಣಬಹುದು. ವೀಡಿಯೊದಲ್ಲಿ ಅವರ ಮಗ ಅವನನ್ನು ಎತ್ತುತ್ತಿರುವುದನ್ನು ಕಾಣಬಹುದು, ಆದರೆ ಹತ್ತಿರದಲ್ಲಿ ಲೈವ್ ಬ್ಯಾಂಡ್ ಪ್ರದರ್ಶನ ನೀಡುತ್ತಿದೆ. ಅಗರ್ವಾಲ್ ಅವರ ಪತ್ನಿ ಕೂಡ ಕರೆನ್ಸಿ ನೋಟುಗಳ ಹಾರದಿಂದ ಅಲಂಕರಿಸಲ್ಪಟ್ಟಿದ್ದು, ಆಚರಣೆಯಲ್ಲಿ ಸೇರುತ್ತಾರೆ, ಆದರೆ ಕುಟುಂಬ ಸದಸ್ಯರು ಒಟ್ಟಿಗೆ ನೃತ್ಯ ಮಾಡುತ್ತಾರೆ ಮತ್ತು ನಗುತ್ತಾರೆ.&lt;/p&gt;&lt;h3&gt;&lt;strong&gt;ಸುಪ್ರೀಂಕೋರ್ಟ್​ ಕೊಟ್ಟ ಕಾರಣವೇನು?&lt;/strong&gt;&lt;/h3&gt;&lt;p&gt;ಅಷ್ಟಕ್ಕೂ ಜಾಮೀನು ನೀಡಲು ಸುಪ್ರೀಂಕೋರ್ಟ್​ ಕಾರಣವನ್ನೂ ನೀಡಿದೆ. ಅವರು ಈಗಾಗಲೇ 22 ತಿಂಗಳುಗಳನ್ನು ಕಸ್ಟಡಿಯಲ್ಲಿ ಕಳೆದಿದ್ದಾರೆ ಎನ್ನುವುದು. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಸಂಪರ್ಕಿಸುವುದನ್ನು ನಿಷೇಧಿಸುವುದು ಸೇರಿದಂತೆ ಹಲವಾರು ಷರತ್ತುಗಳನ್ನು ನ್ಯಾಯಾಲಯ ವಿಧಿಸಿತು.&lt;/p&gt;&lt;h3&gt;&lt;strong&gt;ಹಣಕ್ಕೇ ಬೆಲೆ!&lt;/strong&gt;&lt;/h3&gt;&lt;p&gt;ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಈ ದೃಶ್ಯಾವಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ, ಈ ಒಂದೇ ವಿಡಿಯೋ ಸಮಾಜ ಮತ್ತು ಆಡಳಿತದ ಅವನತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಭಾರತದಲ್ಲಿ, ಹಣವು ಅಪರಾಧಿಗಳು ಆಚರಿಸುವುದನ್ನು ಖಚಿತಪಡಿಸುತ್ತದೆ, ಆದರೆ ನ್ಯಾಯವನ್ನು ಬಯಸುವವರು ಗಾಳಿಯಲ್ಲಿ ಬಾಣಗಳನ್ನು ಹಾರಿಸುತ್ತಾರೆ. ಅಗರ್ವಾಲ್ ಕುಟುಂಬವು ತಮ್ಮ ಮಗನನ್ನು ಉಳಿಸಲು ಸಾಕಷ್ಟು ತಂತ್ರಗಳನ್ನು ಆಶ್ರಯಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಪಘಾತದ ಸಮಯದಲ್ಲಿ ಅಪ್ರಾಪ್ತ ವಯಸ್ಕ ಕುಡಿದಿರಲಿಲ್ಲ ಎಂದು ಸುಳ್ಳು ಸಾಬೀತುಪಡಿಸಲು ಅವರು ರಕ್ತದ ಮಾದರಿಗಳನ್ನು ಸಹ ತಿರುಚಿದ್ದಾರೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;They're not celebrating their son cracking UPSC or winning an Olympic medal. They're the family members of Pune Porsche hit-and-run case, celebrating bail for their son, who killed two innocents that night.Let that sink in.The joke is on system!pic.twitter.com/3stRZhZoBM&lt;/p&gt;&lt;p&gt;&mdash; Mr Sinha (@Mrsinha) May 27, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/india-news/pune-porsche-crash-accused-teens-father-seen-dancing-and-celebrating-bail-with-family-suc/articleshow-yhogk7a"/>
        </item>
        <item>
            <title><![CDATA[ಡೇಟಿಂಗ್​ ಆ್ಯಪ್​ನಲ್ಲಿ ಸುಂದರಿಯ ನೋಡುತ್ತಲೇ 1.66 ಕೋಟಿ ರೂ. ಕಳಕೊಂಡ ಬೆಂಗಳೂರು ಟೆಕ್ಕಿ]]></title>
            <link>https://kannada.asianetnews.com/gallery/relationship/a-bengaluru-based-software-engineer-lost-rs-166-lakhs-to-a-woman-he-met-on-a-dating-app-suc-ytnhu6s</link>
            <guid isPermaLink="true">https://kannada.asianetnews.com/gallery/relationship/a-bengaluru-based-software-engineer-lost-rs-166-lakhs-to-a-woman-he-met-on-a-dating-app-suc-ytnhu6s</guid>
            <pubDate>Fri, 29 May 2026 18:50:44 +0530</pubDate>
            <description><![CDATA[&lt;p&gt;ಬೆಂಗಳೂರು ಮೂಲದ ಸಾಫ್ಟ್&zwnj;ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್&zwnj;ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್&zwnj;ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssy2de2gnfm46vn0sgk6f9b,imgname-dating-app-1780060599746.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮೂಲದ ಸಾಫ್ಟ್&zwnj;ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್&zwnj;ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್&zwnj;ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.&lt;/p&gt;&lt;img&gt;&lt;p&gt;ಸೈಬರ್​ ಕ್ರೈಂ ಬಗ್ಗೆ ಎಷ್ಟೇ ಪೊಲೀಸರು, ಮಾಧ್ಯಮಗಳು ಬಾಯಿ ಬಾಯಿ ಬಡಿದುಕೊಂಡರೂ ಎಜುಕೇಟೆಡ್​ ಎನ್ನಿಸಿಕೊಂಡಿರುವವರ ತಲೆಗೆ ಅದು ಹೋಗುವುದೇ ಇಲ್ಲ. ಹಣ ದುಪ್ಪಟ್ಟು ಮಾಡುವುದಾಗಿ ಹೇಳಿಯೋ, ಇಲ್ಲವೇ ಸುಂದರಿಯ ವೇಷದಲ್ಲಿ ಬಂದೋ ಸುಶಿಕ್ಷಿತ, ಶ್ರೀಮಂತರನ್ನೂ, ಯುವಕರನ್ನೂ ಮೂರ್ಖರನ್ನಾಗಿ ಮಾಡುವುದು ಹೆಚ್ಚುತ್ತಲೇ ಸಾಗಿದೆ. ಅದರಲ್ಲಿಯೂ ಸುಂದರಿ ಎದುರಿಗೆ ಬಂದಳು ಎಂದರೆ, ಬೇರೆ ಹುಡುಗಿಯೇ ಸಿಗುವುದಿಲ್ಲವೇನೋ ಎನ್ನುವಂತೆ ಈ ಕೋಟ್ಯಧಿಪತಿ ಯುವಕರು ಆಕೆಯ ಹಿಂದೆ ಬೀಳುವುದು ಮಾತ್ರ ಅತ್ಯಂಥ ಅಚ್ಚರಿಯ ವಿಷಯವೂ ಆಗಿದೆ. ಅದೇ ರೀತಿ ಇದೀಗ ಬೆಂಗಳೂರು ಮೂಲದ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬಾತ, ಡೇಟಿಂಗ್ ಆ್ಯಪ್ ಮೂಲಕ ನಕಲಿ ಪ್ರಣಯ ಸಂಬಂಧದಲ್ಲಿ ಸಿಲುಕಿಕೊಂಡು 1.66 ಕೋಟಿ ಕಳೆದುಕೊಂಡಿದ್ದಾನೆ! ಭಾವನೆಗಳು ಮತ್ತು ನಂಬಿಕೆಯನ್ನು ಬಳಸಿಕೊಂಡು ಶ್ರೀಮಂತ ಯುವಕರನ್ನು ಟಾರ್ಗೆಟ್​ ಮಾಡುವ, ಅವರ ಹಣ ಲಪಟಾಯಿಸಿಕೊಂಡು ಹೋಗುವ ಹಲವಾರು ಘಟನೆಗಳ ನಡುವೆ ಇದೂ ಒಂದು ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಆನ್&zwnj;ಲೈನ್ ಡೇಟಿಂಗ್ ಮತ್ತು ಹೂಡಿಕೆ ವಂಚನೆಗಳ ಬಗ್ಗೆ ಸೈಬರ್ ಅಪರಾಧ ಅಧಿಕಾರಿಗಳಿಂದ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಹಲವಾರು ಯುವ ವೃತ್ತಿಪರರು ಇಂತಹ ವಂಚನೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ, ಡೇಟಿಂಗ್ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಸಾಂದರ್ಭಿಕ ಸಂವಹನವಾಗಿ ಪ್ರಾರಂಭವಾದದ್ದು ಅಂತಿಮವಾಗಿ ಬಹುಕೋಟಿ ಹಣಕಾಸು ಹಗರಣವಾಗಿ ಮಾರ್ಪಟ್ಟಿದೆ.&lt;/p&gt;&lt;img&gt;&lt;p&gt;ದೂರಿನ ಪ್ರಕಾರ, ಫೆಬ್ರವರಿ 15 ರಂದು ಸೌರವ್ ದುಬೆಗೆ ಟಂಟನ್ ಡೇಟಿಂಗ್ ಆ್ಯಪ್&zwnj;ನಲ್ಲಿ 'ರಿಯಾ ಅಗರ್ವಾಲ್' ಎಂದು ಗುರುತಿಸಿಕೊಂಡ ಯುವತಿಯ ಪರಿಚಯವಾಗಿದೆ. ಆಕೆಯ ಸೌಂದರ್ಯ ನೋಡಿ ಮಾರು ಹೋಗಿರುವ ಸೌರವ್​, ಪರಿಚಯ ಮಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ, ಡೇಟಿಂಗ್​ ಹೋಗುವವರೆಗೂ ಮುಂದುವರೆದಿದ್ದಾರೆ.&lt;/p&gt;&lt;img&gt;&lt;p&gt;ಅದಾದ ಬಳಿಕ ಆಡಿಯೋ, ವಿಡಿಯೋ ಸಂದೇಶಗಳ ರವಾನೆಯಾಗಿದೆ. ರಿಯಾ ಆಗಾಗ್ಗೆ ತನಗೆ ನಿನ್ನ ಮೇಲೆ ಲವ್​ ಆಗಿದೆ ಎಂದು ಹೇಳಿದ್ದಾಳೆ. ಆಕೆಯ ಪ್ರೀತಿಯಲ್ಲಿ ತೇಲಿ ಹೋದ ಸೌರವ್​ಗೆ ಇದು ತನ್ನನ್ನು ಟ್ರ್ಯಾಪ್​ ಮಾಡುತ್ತಿರುವುದು ಎಂದು ತಿಳಿಯಲೇ ಇಲ್ಲ. ಮದುವೆಯ ಬಗ್ಗೆಯೂ ಆಕೆ ಚರ್ಚಿಸಿದ ತಕ್ಷಣ, ಆಕೆಯ ಮೇಲೆ ಯಾವ ಡೌಟೂ ಬರಲೇ ಇಲ್ಲ. ಕೊನೆಗೆ ಆಕೆಯ ಜೊತೆಗಿನ ವ್ಯವಹಾರ ಹೆಚ್ಚಾಯಿತು.&lt;/p&gt;&lt;img&gt;&lt;p&gt;ತನ್ನ ವಿಶ್ವಾಸವನ್ನು ಗಳಿಸಿದ ನಂತರ, ರಿಯಾ ಸೌರವ್&zwnj;ಗೆ ಆನ್&zwnj;ಲೈನ್ ವ್ಯಾಪಾರ ಹೂಡಿಕೆ ಯೋಜನೆಗೆ ಪರಿಚಯಿಸಿದಳು, ಭಾರಿ ಲಾಭದ ಭರವಸೆ ನೀಡಿದಳು. ಆಕೆಯ ಹೇಳಿಕೆಗಳನ್ನು ನಂಬಿದ ಅವನು ಬಹು ಹಂತಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದ. ಸುಮಾರು ಮೂರು ತಿಂಗಳ ಕಾಲ, ಸೌರವ್ ಈ ಯೋಜನೆಯಲ್ಲಿ ₹1.66 ಕೋಟಿ ಹೂಡಿಕೆ ಮಾಡಿದ್ದಾನೆ. ಆದಾಗ್ಯೂ, ದೊಡ್ಡ ಹೂಡಿಕೆಯ ಹೊರತಾಗಿಯೂ, ಅವನಿಗೆ ₹4,250 ಮಾತ್ರ ಪ್ರತಿಫಲ ಸಿಕ್ಕಿತು. ಆಮೇಲೆ ಡೌಟ್​ ಶುರುವಾಗಿದೆ ಈ ಯುವಕನಿಗೆ. ತಾನು ಮೋಸ ಹೋಗಿದ್ದೇನೆ ಎಂದು ಅವನು ಅನುಮಾನಿಸಲು ಪ್ರಾರಂಭಿಸಿದ.&lt;/p&gt;&lt;img&gt;&lt;p&gt;ಅನುಮಾನ ಪ್ರಾರಂಭವಾಗಿದ್ದು ಯುವತಿಗೆ ಗೊತ್ತಾಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡಲಾಗಿದೆ. ಇಷ್ಟಾದ ಮೇಲೆ ತಾನು ಹಳ್ಳಕ್ಕೆ ಬಿದ್ದಿರುವುದು ಸೌರವ್​ಗೆ ಗೊತ್ತಾಗಿದೆ. ದೂರಿನ ಪ್ರಕಾರ, ಸೌರವ್ ರಿಯಾಗೆ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಪರಿಸ್ಥಿತಿ ಆಘಾತಕಾರಿ ತಿರುವು ಪಡೆದುಕೊಂಡಿತು. ಶೀಘ್ರದಲ್ಲೇ, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಅವಳೊಂದಿಗಿನ ಎಲ್ಲಾ ಸಂವಹನಗಳು ನಿಂತುಹೋದವು ಎಂದು ವರದಿಯಾಗಿದೆ. ತಾನು ದೊಡ್ಡ ಸೈಬರ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿತುಕೊಂಡ ಸೌರವ್, ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಘಟನೆಯ ವಿವರಗಳೊಂದಿಗೆ ದೂರು ದಾಖಲಿಸಿದ್ದಾರೆ.&lt;/p&gt;]]></content:encoded>
            <category>crime</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/a-bengaluru-based-software-engineer-lost-rs-166-lakhs-to-a-woman-he-met-on-a-dating-app-suc-ytnhu6s"/>
        </item>
    </channel>
</rss>
