<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 30 Jul 2026 23:08:38 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[Ajinkya Rahane: ಕೋಟಿ ಕೋಟಿ ಒಡೆಯ ಅಜಿಂಕ್ಯ ರಹಾನೆ! ಐಷಾರಾಮಿ ಕಾರು, ಬ್ಯುಸಿನೆಸ್‌ ಹೂಡಿಕೆ ಸೀಕ್ರೆಟ್ಸ್ ಇಲ್ಲಿದೆ]]></title>
            <link>https://kannada.asianetnews.com/gallery/cricket-sports/ajinkya-rahane-net-worth-after-retirement-cars-business-investments-khs-w0v6sb3</link>
            <guid isPermaLink="true">https://kannada.asianetnews.com/gallery/cricket-sports/ajinkya-rahane-net-worth-after-retirement-cars-business-investments-khs-w0v6sb3</guid>
            <pubDate>Thu, 30 Jul 2026 23:08:34 +0530</pubDate>
            <description><![CDATA[&lt;p&gt;ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಅಜಿಂಕ್ಯ ರಹಾನೆ ಗುಡ್&zwnj;ಬೈ ಹೇಳಿದ್ದಾರೆ. ಭಾರತ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ರಹಾನೆ ಅವರ ನಿವ್ವಳ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಅವರ ಐಷಾರಾಮಿ ಕಾರುಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಮನೆ ಮತ್ತು ಅವರ ಬ್ಯುಸಿನೆಸ್ ಹೂಡಿಕೆಗಳ ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyt1h81kfs8s9qa7qyav7s0j,imgname-ajinkya-rahane-net-worth-1785432940595.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಅಜಿಂಕ್ಯ ರಹಾನೆ ಗುಡ್&zwnj;ಬೈ ಹೇಳಿದ್ದಾರೆ. ಭಾರತ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವು ತಂದುಕೊಟ್ಟ ರಹಾನೆ ಅವರ ನಿವ್ವಳ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಅವರ ಐಷಾರಾಮಿ ಕಾರುಗಳು, ಕೋಟ್ಯಂತರ ರೂಪಾಯಿ ಮೌಲ್ಯದ ಮನೆ ಮತ್ತು ಅವರ ಬ್ಯುಸಿನೆಸ್ ಹೂಡಿಕೆಗಳ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;ಭಾರತೀಯ ಕ್ರಿಕೆಟ್&zwnj;ನ 'ಸೈಲೆಂಟ್ ಹೀರೋ' ಅಜಿಂಕ್ಯ ರಹಾನೆ ತಮ್ಮ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. 38 ವರ್ಷದ ರಹಾನೆ, ಭಾರತದ ಪರ ಒಟ್ಟು 195 ಪಂದ್ಯಗಳನ್ನಾಡಿದ್ದಾರೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಇದು ನಿವೃತ್ತಿಗೆ ಸರಿಯಾದ ಸಮಯ ಎಂದು ಅವರು ತಮ್ಮ ಕ್ರಿಕೆಟ್ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.&lt;img&gt;&lt;p&gt;2013ರ ಮಾರ್ಚ್&zwnj;ನಲ್ಲಿ ದೆಹಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ ರಹಾನೆ, ತಮ್ಮ ವೃತ್ತಿಜೀವನದಲ್ಲಿ 85 ಟೆಸ್ಟ್&zwnj;ಗಳನ್ನು ಆಡಿ 38.46ರ ಸರಾಸರಿಯಲ್ಲಿ 5,077 ರನ್ ಗಳಿಸಿದ್ದಾರೆ. ಇದರಲ್ಲಿ 12 ಶತಕ ಮತ್ತು 26 ಅರ್ಧಶತಕಗಳು ಸೇರಿವೆ. ವಿದೇಶಿ ನೆಲದ ಕಠಿಣ ಪಿಚ್&zwnj;ಗಳಲ್ಲಿ ರಹಾನೆ ಆಡಿದ ಇನ್ನಿಂಗ್ಸ್&zwnj;ಗಳು ಟೀಮ್ ಇಂಡಿಯಾಗೆ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿವೆ.&amp;nbsp;&lt;/p&gt;&lt;p&gt;2020-21ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ, ಅಡಿಲೇಡ್&zwnj;ನಲ್ಲಿ 36 ರನ್&zwnj;ಗಳಿಗೆ ಆಲೌಟ್ ಆದ ನಂತರ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಜವಾಬ್ದಾರಿ ಹೊತ್ತ ರಹಾನೆ, ಮೆಲ್ಬೋರ್ನ್ ಟೆಸ್ಟ್&zwnj;ನಲ್ಲಿ ಅದ್ಭುತ ಶತಕ ಸಿಡಿಸಿ ತಂಡವನ್ನು ಮುನ್ನಡೆಸಿ ಐತಿಹಾಸಿಕ ಸರಣಿ ಗೆಲುವಿಗೆ ಕಾರಣರಾದರು. ಏಕದಿನದಲ್ಲಿ 90 ಪಂದ್ಯಗಳಿಂದ 2,962 ರನ್ ಮತ್ತು 20 ಟಿ20 ಪಂದ್ಯಗಳಿಂದ 375 ರನ್ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ಮೈದಾನದಲ್ಲಿ ತುಂಬಾ ಸರಳವಾಗಿ ಕಾಣುವ ರಹಾನೆ ಆರ್ಥಿಕವಾಗಿ ಬಹಳ ಸದೃಢರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಹಾನೆ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು ₹80 ಕೋಟಿ. ಬಿಸಿಸಿಐ ಗುತ್ತಿಗೆ, ಐಪಿಎಲ್ ಸಂಬಳ, ಬ್ರ್ಯಾಂಡ್ ಎಂಡಾರ್ಸ್&zwnj;ಮೆಂಟ್&zwnj;ಗಳು ಮತ್ತು ವ್ಯಾಪಾರ ಹೂಡಿಕೆಗಳ ಮೂಲಕ ಅವರು ಈ ಪ್ರಮಾಣದ ಆಸ್ತಿಯನ್ನು ಗಳಿಸಿದ್ದಾರೆ.&amp;nbsp;&lt;/p&gt;&lt;p&gt;ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿದ್ದಾಗ, ಅವರು ಬಿ-ಗ್ರೇಡ್ ಅಡಿಯಲ್ಲಿ ವಾರ್ಷಿಕ ₹3 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಐಪಿಎಲ್&zwnj;ನಲ್ಲಿ 6 ವಿಭಿನ್ನ ಫ್ರಾಂಚೈಸಿಗಳಿಗೆ ಆಡಿರುವ ರಹಾನೆ, ಐಪಿಎಲ್ ಸಂಬಳದ ರೂಪದಲ್ಲೇ ಸುಮಾರು ₹54 ಕೋಟಿಗೂ ಹೆಚ್ಚು ಸಂಪಾದಿಸಿದ್ದಾರೆ. ಕಳೆದ ಐಪಿಎಲ್ ಸೀಸನ್&zwnj;ಗಳಲ್ಲಿ ಕೆಕೆಆರ್ ಅವರನ್ನು ₹1.5 ಕೋಟಿಗೆ ಖರೀದಿಸಿತ್ತು. 2016-2018ರ ಅವಧಿಯಲ್ಲಿ ಅವರು ₹8 ಕೋಟಿಯಿಂದ ₹9.5 ಕೋಟಿಯವರೆಗೆ ಪಡೆದಿದ್ದರು.&lt;/p&gt;&lt;img&gt;&lt;p&gt;ಕೇವಲ ಮೈದಾನದಲ್ಲಷ್ಟೇ ಅಲ್ಲ, ಹೊರಗೆ ಬ್ಯುಸಿನೆಸ್ ವಿಚಾರದಲ್ಲೂ ರಹಾನೆ ಬಹಳ ಬುದ್ಧಿವಂತಿಕೆಯಿಂದ ಹೆಜ್ಜೆ ಇಟ್ಟಿದ್ದಾರೆ. ರೈತರಿಗೆ ಬೇಕಾದ ಯಂತ್ರೋಪಕರಣಗಳು ಮತ್ತು ಉತ್ಪನ್ನಗಳನ್ನು ಒದಗಿಸುವ 'ಮೇರಾಕಿಸಾನ್' ಎಂಬ ಅಗ್ರಿಟೆಕ್ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ರಹಾನೆ ಹೂಡಿಕೆ ಮಾಡಿದ್ದಾರೆ.&amp;nbsp;&lt;/p&gt;&lt;p&gt;ಇದರೊಂದಿಗೆ, ಸ್ಪೋರ್ಟ್ಸ್ ಚಾನೆಲ್&zwnj;ಗಳನ್ನು ಬುಕ್ ಮಾಡಿಕೊಳ್ಳುವ 'ಹಡಲ್' ಎಂಬ ಸ್ಪೋರ್ಟ್ಸ್ ಟೆಕ್ ಪ್ಲಾಟ್&zwnj;ಫಾರ್ಮ್&zwnj;ನಲ್ಲೂ ಅವರು ಹೂಡಿಕೆ ಮಾಡಿದ್ದಾರೆ. ಮಕ್ಕಳಿಗಾಗಿ ರೂಪಿಸಲಾದ 'ಕ್ರಿಕೆಟ್ ಪಾಂಗ್' ಎಂಬ ಆನಿಮೇಟೆಡ್ ಸರಣಿಗೆ ಹೂಡಿಕೆದಾರರಾಗಿ ಮತ್ತು ಕ್ಯುರೇಟರ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈನ ಅತ್ಯಂತ ದುಬಾರಿ ಪ್ರದೇಶದಲ್ಲಿ, ಬಾಂದ್ರಾ-ವರ್ಲಿ ಸೀ ಲಿಂಕ್ ಮತ್ತು ಅರಬ್ಬಿ ಸಮುದ್ರ ಕಾಣುವ ಹಾಗೆ ರಹಾನೆಗೆ ಒಂದು ಐಷಾರಾಮಿ ಅಪಾರ್ಟ್&zwnj;ಮೆಂಟ್ ಇದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ₹20 ಕೋಟಿಗೂ ಅಧಿಕ. ಈ ಮನೆಯಲ್ಲಿ ಇಟಾಲಿಯನ್ ಮಾರ್ಬಲ್ ಫ್ಲೋರಿಂಗ್, ಯುರೋಪಿಯನ್ ಶೈಲಿಯ ಇಂಟೀರಿಯರ್ ಜೊತೆಗೆ ಅವರ ಕ್ರಿಕೆಟ್ ಮೈಲಿಗಲ್ಲುಗಳನ್ನು ಪ್ರದರ್ಶಿಸುವ ವಿಶೇಷ 'ಟ್ರೋಫಿ ವಾಲ್' ಇದೆ.&amp;nbsp;&lt;/p&gt;&lt;p&gt;ರಹಾನೆ ಅವರ ಕಾರುಗಳ ಕಲೆಕ್ಷನ್ ನೋಡಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. ಅವರ ಬಳಿ ₹3 ಕೋಟಿ ಮೌಲ್ಯದ 'ಮರ್ಸಿಡಿಸ್-ಮೇಬ್ಯಾಕ್ GLS 600' SUV ಇದೆ. ಇದರೊಂದಿಗೆ ಆಡಿ Q5, ಬಿಎಂಡಬ್ಲ್ಯೂ 6 ಸೀರೀಸ್ GT, ರೇಂಜ್ ರೋವರ್ ಮತ್ತು ವೋಲ್ವೋ SUV ನಂತಹ ಐಷಾರಾಮಿ ಕಾರುಗಳು ಅವರ ಗ್ಯಾರೇಜ್&zwnj;ನಲ್ಲಿವೆ.&lt;/p&gt;&lt;img&gt;ರಹಾನೆ ಅವರ ಕ್ಲೀನ್ ಇಮೇಜ್ ಮತ್ತು ನಂಬಿಕಾರ್ಹ ವ್ಯಕ್ತಿತ್ವದಿಂದಾಗಿ, ಪ್ರಮುಖ ಕಾರ್ಪೊರೇಟ್ ಕಂಪನಿಗಳು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿಸಿವೆ. ನೈಕಿ, ಅಡಿಡಾಸ್, ಸಿಯೆಟ್, ಬೂಸ್ಟ್, ಹೀರೋ ಮೋಟೋಕಾರ್ಪ್, ಮೈ11ಸರ್ಕಲ್, ಗೇಮ್ಸ್24x7, ನಿಯೋ ಗ್ರೋತ್, ಎಲ್ಸಾ ಕಾರ್ಪ್ ಮತ್ತು ಐಡಿಎಫ್&zwnj;ಸಿ ಫಸ್ಟ್ ಬ್ಯಾಂಕ್&zwnj;ನಂತಹ ಹಲವಾರು ದಿಗ್ಗಜ ಬ್ರ್ಯಾಂಡ್&zwnj;ಗಳಿಗೆ ಅವರು ರಾಯಭಾರಿಯಾಗಿದ್ದಾರೆ. ವರದಿಗಳ ಪ್ರಕಾರ, ಪ್ರತಿ ಬ್ರ್ಯಾಂಡ್ ಎಂಡಾರ್ಸ್&zwnj;ಮೆಂಟ್&zwnj;ಗೆ ಅವರು ಸುಮಾರು ₹1 ಕೋಟಿವರೆಗೆ ಶುಲ್ಕ ವಿಧಿಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿದರೂ, ಮುಂಬೈ ಡೊಮೆಸ್ಟಿಕ್ ತಂಡ ಮತ್ತು ಐಪಿಎಲ್&zwnj;ನಲ್ಲಿ ಅವರು ಮುಂದುವರಿಯುವ ಸಾಧ್ಯತೆ ಇದೆ.]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/ajinkya-rahane-net-worth-after-retirement-cars-business-investments-khs-w0v6sb3"/>
        </item>
        <item>
            <title><![CDATA[ಕ್ರಿಕೆಟ್ ಅಂಗಳದ ಆಪ್ತ ಮಿತ್ರನಿಗೆ ಕೊಹ್ಲಿಯ ಕಣ್ಣೀರಿನ ವಿದಾಯ! ರಹಾನೆ ನಂಟನ್ನು ನೆನೆದು ಭಾವುಕರಾದ ಕಿಂಗ್!]]></title>
            <link>https://kannada.asianetnews.com/gallery/cricket-sports/virat-kohli-tearful-farewell-ajinkya-rahane-emotional-bmk-kncxb85</link>
            <guid isPermaLink="true">https://kannada.asianetnews.com/gallery/cricket-sports/virat-kohli-tearful-farewell-ajinkya-rahane-emotional-bmk-kncxb85</guid>
            <pubDate>Thu, 30 Jul 2026 23:00:49 +0530</pubDate>
            <description><![CDATA[&lt;p&gt;ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ, ವಿರಾಟ್ ಕೊಹ್ಲಿ, &amp;nbsp;ರಹಾನೆ ಅವರ ವೃತ್ತಿಜೀವನವನ್ನು ಶ್ಲಾಘಿಸಿ, ಆ ದಿನಗಳನ್ನು ಮೆಲುಕು ಹಾಕಿ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmyx96xyaj51wynkgt24091e,imgname-virat-kohli-and-ajinkya-rahane-1774858836926.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಅಜಿಂಕ್ಯ ರಹಾನೆ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿವೃತ್ತಿಯ ನಂತರ, ವಿರಾಟ್ ಕೊಹ್ಲಿ, &amp;nbsp;ರಹಾನೆ ಅವರ ವೃತ್ತಿಜೀವನವನ್ನು ಶ್ಲಾಘಿಸಿ, ಆ ದಿನಗಳನ್ನು ಮೆಲುಕು ಹಾಕಿ ಭಾವನಾತ್ಮಕ ಮಾತುಗಳನ್ನು ಆಡಿದ್ದಾರೆ.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ ದಂತಕಥೆ ಕ್ರಿಕೆಟಿಗ ಅಜಿಂಕ್ಯ ರಹಾನೆ ಕ್ರಿಕೆಟ್&zwnj;ನಿಂದ ನಿವೃತ್ತಿ ಹೊಂದಿದ್ದು, ಗುರುವಾರ ಬೆಳಿಗ್ಗೆ, ಅಜಿಂಕ್ಯ ರಹಾನೆ ತಮ್ಮ ನಿವೃತ್ತಿ ಘೋಷಿಸಿದ ಭಾವನಾತ್ಮಕ ವೀಡಿಯೊ ಹಂಚಿಕೊಂಡಿದ್ದಾರೆ. ರಹಾನೆ ನಿವೃತ್ತಿಯ ನಂತರ, ಅವರ ಅನೇಕ ತಂಡದ ಸದಸ್ಯರು ಪ್ರತಿಕ್ರಿಯಿಸುತ್ತಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ವಿರಾಟ್ ಕೂಡ ರಹಾನೆ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ಲಿಪ್&zwnj;ನಲ್ಲಿ ಅತ್ಯಂತ ಸುರಕ್ಷಿತ ಮತ್ತು ನನ್ನ ನೆಚ್ಚಿನ ಟೆಸ್ಟ್ ಬ್ಯಾಟಿಂಗ್ ಪಾರ್ಟನರ್ ಎಂದು ಕೊಹ್ಲಿ ತಮ್ಮ ಪೋಸ್ಟ್&zwnj;ನಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ನೇತೃತ್ವದ ಭಾರತೀಯ ಟೆಸ್ಟ್ ತಂಡವು ಕ್ರಿಕೆಟ್&zwnj;ನಲ್ಲಿ ಹೊಸ ಹೆಜ್ಜೆ ಇಟ್ಟಿತ್ತು, ಅದರ ಉಪನಾಯಕ ಅಜಿಂಕ್ಯ ರಹಾನೆ. 'ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಜಿಂಕ್ಸ್. ನೀವು ಭಾರತೀಯ ಕ್ರಿಕೆಟ್&zwnj;ಗೆ ದೊಡ್ಡ ಕೊಡುಗೆ ನೀಡಿದ್ದೀರಿ. ಈ ಪ್ರಯಾಣದ ಹೆಮ್ಮೆಪಡುವಂತದ್ದು, ನೀವು ಯಾವಾಗಲೂ ಆರೋಗ್ಯವಾಗಿ, ಇನ್ನು ಒಳ್ಳೆ ಭವಿಷ್ಯ ನಿಮ್ಮದಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ದೇವರು ನಿಮ್ಮನ್ನು ಯಾವಾಗಲೂ ಸಂತೋಷವಾಗಿರಿಸಲಿ' ಎಂದು ವಿರಾಟ್ ಕೊಹ್ಲಿ ತಮ್ಮ ಪೋಸ್ಟ್&zwnj;ನಲ್ಲಿ ಬರೆದಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಹೊರತಾಗಿ, ಟೀಮ್ ಇಂಡಿಯಾದ ಇತರ ಕ್ರಿಕೆಟಿಗರು ಸಹ ರಹಾನೆಗೆ ಶುಭ ಹಾರೈಸಿದ್ದಾರೆ. ಯುವರಾಜ್ ಸಿಂಗ್ ಕೂಡ ರಹಾನೆ ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. 'ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ಈ ಪೀಳಿಗೆಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಎಲ್ಲಾ ಸ್ವರೂಪಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ನೀವು ಪ್ರತಿ ಬಾರಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೀರಿ, ನಿಮ್ಮ ಭವಿಷ್ಯಕ್ಕೆ ಶುಭವಾಗಲಿ' ಎಂದು ಯುವರಾಜ್ ಸಿಂಗ್ ಹೇಳಿದರು. ಹರ್ಭಜನ್ ಸಿಂಗ್ ಕೂಡ ಅಜಿಂಕ್ಯ ರಹಾನೆ ಅವರ ಶಾಂತ ಸ್ವಭಾವವನ್ನು ಶ್ಲಾಘಿಸಿದ್ದಾರೆ. ರಹಾನೆ ಶಾಂತತೆ ಮತ್ತು ಆಟದಲ್ಲಿ ಹೆಮ್ಮೆ ಹೊಂದಿರುವ ಉನ್ನತ ಗುಣಮಟ್ಟದ ಕ್ರಿಕೆಟಿಗ, ಆಸ್ಟ್ರೇಲಿಯಾದಲ್ಲಿ ಭಾರತವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ಮುನ್ನಡೆಸಿದ್ದಕ್ಕಾಗಿ ರಹಾನೆ ಯಾವಾಗಲೂ ಸ್ಮರಣೀಯರು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈ ಕ್ರಿಕೆಟ್&zwnj;ನಲ್ಲಿ ರಹಾನೆ ಅವರೊಂದಿಗೆ ದೀರ್ಘಕಾಲ ಆಡಿದ್ದ ಸೂರ್ಯಕುಮಾರ್ ಯಾದವ್ ಕೂಡ ರಹಾನೆ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ನಿಮ್ಮೊಂದಿಗೆ ಮೈದಾನ ಮತ್ತು ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲು ನನಗೆ ಗೌರವ ಸಿಕ್ಕಿದೆ. ಆಟಕ್ಕಾಗಿ ನಿಮ್ಮ ಶಾಂತತೆ ಮತ್ತು ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿ ನೀಡಿತು. ಹೊಸ ಇನ್ನಿಂಗ್ಸ್&zwnj;ಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು' ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.&lt;/p&gt;&lt;img&gt;&lt;p&gt;ಮುಂಬೈ ಕ್ರಿಕೆಟ್&zwnj;ನಲ್ಲಿ ರಹಾನೆ ಅವರೊಂದಿಗೆ ದೀರ್ಘಕಾಲ ಆಡಿದ್ದ ಸೂರ್ಯಕುಮಾರ್ ಯಾದವ್ ಕೂಡ ರಹಾನೆ ನಿವೃತ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮೊಂದಿಗೆ ಮೈದಾನ ಮತ್ತು ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದು ನನ್ನ ಹೆಮ್ಮೆ. ಕ್ರೀಡೆಯಲ್ಲಿನ ಸ್ಪೋರ್ಟಿವ್, ನಿಮ್ಮ ಶಾಂತತೆ ಮತ್ತು ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿ. ಹೊಸ ಇನ್ನಿಂಗ್ಸ್&zwnj;ಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭಾಶಯಗಳು' ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.&lt;/p&gt;&lt;img&gt;&lt;p&gt;ಅಜಿಂಕ್ಯ ರಹಾನೆ ನಾಯಕತ್ವದಲ್ಲಿ, ಟೀಮ್ ಇಂಡಿಯಾ 2020-21ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇತಿಹಾಸ ನಿರ್ಮಿಸಿತು. ಅಡಿಲೇಡ್ ಟೆಸ್ಟ್&zwnj;ನಲ್ಲಿ 36 ರನ್&zwnj;ಗಳಿಗೆ ಆಲೌಟ್ ಆದ ನಂತರ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದರು, ನಂತರ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಿದರು. ಭಾರತೀಯ ತಂಡದಲ್ಲಿ ಅನೇಕ ಆಟಗಾರರು ಗಾಯಗೊಂಡರು, ಆದರೆ ರಹಾನೆ ಅನನುಭವಿ ಯುವ ಆಟಗಾರರೊಂದಿಗೆ ಭಾರತವು 2-1 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೆಲ್ಬೋರ್ನ್&zwnj;ನಲ್ಲಿ ರಹಾನೆ ಅವರ ಶತಕವು ಪ್ರವಾಸದ ಮಹತ್ವದ ತಿರುವು ಎಂದು ಸಾಬೀತಾಯಿತು.&lt;/p&gt;&lt;img&gt;&lt;p&gt;ಅಜಿಂಕ್ಯ ರಹಾನೆ 2011 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದರು. 85 ಟೆಸ್ಟ್ ಪಂದ್ಯಗಳಲ್ಲಿ, ರಹಾನೆ 12 ಶತಕಗಳು ಮತ್ತು 26 ಅರ್ಧಶತಕಗಳ ಸಹಾಯದಿಂದ 5,077 ರನ್ ಗಳಿಸಿದ್ದಾರೆ. 90 ಏಕದಿನ ಪಂದ್ಯಗಳಲ್ಲಿ, ಅವರು 3 ಶತಕಗಳು ಮತ್ತು 24 ಅರ್ಧಶತಕಗಳೊಂದಿಗೆ 2,962 ರನ್ ಗಳಿಸಿದ್ದಾರೆ, ಆದರೆ 20 ಟಿ20 ಪಂದ್ಯಗಳಲ್ಲಿ ರಹಾನೆ 375 ರನ್ ಗಳಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/virat-kohli-tearful-farewell-ajinkya-rahane-emotional-bmk-kncxb85"/>
        </item>
        <item>
            <title><![CDATA['ನನ್ನನ್ನು ಆಯ್ಕೆ ಮಾಡಿಲ್ಲ': ಡೆತ್ ನೋಟ್ ಬರೆದಿಟ್ಟು ದುರಂತ ಸಾವು ಕಂಡ 17 ವರ್ಷದ ಮಹಿಳಾ ಕ್ರಿಕೆಟರ್!]]></title>
            <link>https://kannada.asianetnews.com/cricket-sports/nagpur-woman-cricketer-aditi-choukhande-vidarbha-cricket-association-selection-tragedy/articleshow-m3vdx77</link>
            <guid isPermaLink="true">https://kannada.asianetnews.com/cricket-sports/nagpur-woman-cricketer-aditi-choukhande-vidarbha-cricket-association-selection-tragedy/articleshow-m3vdx77</guid>
            <pubDate>Thu, 30 Jul 2026 22:43:36 +0530</pubDate>
            <description><![CDATA[&lt;p&gt;17 ವರ್ಷದ ಯುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಅದಿತಿ ದುರಂತ ಸಾವನ್ನಪ್ಪಿದ್ದಾರೆ. ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (VCA) ತಂಡಕ್ಕೆ ಆಯ್ಕೆಯಾಗದ ಕಾರಣ ತೀವ್ರ ನಿರಾಸೆಯಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ದುರಂತವು ಯುವ ಕ್ರೀಡಾಪಟುಗಳ ಮಾನಸಿಕ ಆರೋಗ್ಯ ಮತ್ತು ಸ್ಪರ್ಧೆಯ ಒತ್ತಡದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyt03eymgx3jjykpmv5tem8g,imgname-woman-cricketer-aditi-choukhande-1785431440340.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ನಾಗ್ಪುರದಲ್ಲಿ ಯುವ ಮಹಿಳಾ ಕ್ರಿಕೆಟ್ (Women's Cricket) ಆಟಗಾರ್ತಿಯೊಬ್ಬರ ದುರಂತ ಸಾವು ಕ್ರೀಡಾ ವಲಯದಲ್ಲಿ ತೀವ್ರ ಆಘಾತ ಮೂಡಿಸಿದೆ. ಕೇವಲ 17 ವರ್ಷದ ಪ್ರತಿಭಾವಂತ ಆಟಗಾರ್ತಿ ಅದಿತಿ ಮೋರ್ಶ್ವರ್ ಚೌಖಾಂಡೆ (Aditi Morshwar Choukhande) ಅವರು ಜೀವ ಕಳೆದುಕೊಂಡಿರುವ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (Vidarbha Cricket Association - VCA) ತಂಡದ ಆಯ್ಕೆ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದ ಕಾರಣ ಅವರು ತೀವ್ರ ನಿರಾಸೆಗೆ ಒಳಗಾಗಿದ್ದರು ಎನ್ನಲಾಗಿದೆ.&lt;/p&gt;&lt;p&gt;ಪೊಲೀಸರ ಮಾಹಿತಿ ಪ್ರಕಾರ, ಘಟನಾ ಸ್ಥಳದಲ್ಲಿ ಒಂದು ಪತ್ರ (Note) ಪತ್ತೆಯಾಗಿದ್ದು, ಅದರಲ್ಲಿ &quot;ನನ್ನನ್ನು VCA ತಂಡಕ್ಕೆ ಆಯ್ಕೆ ಮಾಡಿಲ್ಲ&quot; ಎಂದು ಉಲ್ಲೇಖಿಸಲಾಗಿದೆ. ಈ ಪತ್ರವನ್ನು ತನಿಖೆಯ ಪ್ರಮುಖ ಭಾಗವಾಗಿ ಪರಿಗಣಿಸಿರುವ ಪೊಲೀಸರು, ಪ್ರಕರಣದ ಎಲ್ಲ ಆಯಾಮಗಳಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿಯಂತೆ ಬೇರೆ ಯಾವುದೇ ಅನುಮಾನಾಸ್ಪದ ಕಾರಣಗಳು ಬೆಳಕಿಗೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಕ್ರಿಕೆಟ್&zwnj;ನಲ್ಲಿ ಸಾಧನೆಯ ಕನಸು&lt;/strong&gt;&lt;/h2&gt;&lt;p&gt;ಅದಿತಿ ವೃತ್ತಿಪರ ಕ್ರಿಕೆಟ್ (Professional Cricket) ಕ್ಷೇತ್ರದಲ್ಲಿ ಸಾಧನೆ ಮಾಡುವ ದೊಡ್ಡ ಕನಸು ಹೊಂದಿದ್ದರು. ಹಲವು ವರ್ಷಗಳಿಂದ ತರಬೇತಿ ಪಡೆದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅವರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯದಿರುವುದು ಅವರಿಗೆ ಭಾರೀ ನಿರಾಸೆ ಉಂಟುಮಾಡಿತ್ತು ಎಂದು ಆಪ್ತರು ಹೇಳಿರುವ ಮಾಹಿತಿ ಲಭ್ಯವಾಗಿದೆ. ಆದರೆ ಘಟನೆಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಅಂತಿಮ ವರದಿಯ ಬಳಿಕವೇ ಸಂಪೂರ್ಣ ಚಿತ್ರಣ ಸ್ಪಷ್ಟವಾಗಲಿದೆ.&lt;/p&gt;&lt;p&gt;ಈ ಘಟನೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ (Competition), ನಿರೀಕ್ಷೆಗಳ ಒತ್ತಡ (Performance Pressure) ಮತ್ತು ಯುವ ಕ್ರೀಡಾಪಟುಗಳ ಮಾನಸಿಕ ಕ್ಷೇಮ (Mental Well-being) ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ತಜ್ಞರ ಅಭಿಪ್ರಾಯದಂತೆ, ಸೋಲು ಅಥವಾ ಆಯ್ಕೆಯಾಗದಿರುವುದು ಯಾವುದೇ ಕ್ರೀಡಾ ಜೀವನದ ಅಂತ್ಯವಲ್ಲ. ಸೂಕ್ತ ಮಾರ್ಗದರ್ಶನ, ಕುಟುಂಬದ ಬೆಂಬಲ ಮತ್ತು ತರಬೇತುದಾರರ ಪ್ರೋತ್ಸಾಹ ಯುವ ಪ್ರತಿಭೆಗಳಿಗೆ ಅತ್ಯಂತ ಅಗತ್ಯವಾಗಿದೆ.&lt;/p&gt;&lt;h2&gt;&lt;strong&gt;ಕ್ರೀಡಾಭಿಮಾನಿಗಳಲ್ಲಿ ಆತಂಕ&lt;/strong&gt;&lt;/h2&gt;&lt;p&gt;ಅದಿತಿ ಅವರ ಅಕಾಲಿಕ ನಿಧನದಿಂದ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಸ್ಥಳೀಯ ಕ್ರಿಕೆಟ್ ವಲಯ ದುಃಖದಲ್ಲಿ ಮುಳುಗಿದೆ. ಅನೇಕ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಯುವ ಆಟಗಾರರ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ದುರಂತವು ಕ್ರೀಡೆಯಲ್ಲಿ ಯಶಸ್ಸಿನ ಜೊತೆಗೆ ಭಾವನಾತ್ಮಕ ಬೆಂಬಲ (Emotional Support) ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಸಮಾಜಕ್ಕೆ ಮತ್ತೊಮ್ಮೆ ನೆನಪಿಸಿದೆ. ತನಿಖೆ ಮುಂದುವರಿದಿದ್ದು, ಪೊಲೀಸರು ಅಧಿಕೃತ ಮಾಹಿತಿಯನ್ನು ಹಂತ ಹಂತವಾಗಿ ಪ್ರಕಟಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/nagpur-woman-cricketer-aditi-choukhande-vidarbha-cricket-association-selection-tragedy/articleshow-m3vdx77"/>
        </item>
        <item>
            <title><![CDATA[ಮೈದಾನದಲ್ಲಿ ಮಾತ್ರವಲ್ಲ, ಜೀವನದಲ್ಲೂ ಗ್ರೇಟ್: ಸೊಸೆಗಾಗಿ ಸಚಿನ್ ಮಾಡಿದ ಈ ಕೆಲಸಕ್ಕೆ ಫ್ಯಾನ್ಸ್ ಸಾಷ್ಟಾಂಗ ನಮಸ್ಕಾರ!]]></title>
            <link>https://kannada.asianetnews.com/cricket-sports/sachin-tendulkar-wins-hearts-with-sweet-gesture-towards-daughter-in-law/articleshow-queou3g</link>
            <guid isPermaLink="true">https://kannada.asianetnews.com/cricket-sports/sachin-tendulkar-wins-hearts-with-sweet-gesture-towards-daughter-in-law/articleshow-queou3g</guid>
            <pubDate>Thu, 30 Jul 2026 20:59:30 +0530</pubDate>
            <description><![CDATA[&lt;p&gt;ಮುಂಬೈ ಕಾರ್ಯಕ್ರಮದಲ್ಲಿ ಸಚಿನ್ ತೆಂಡೂಲ್ಕರ್ ತಮ್ಮ ಸೊಸೆ ಸಾನಿಯಾ ಚಾಂದೋಕ್ ಅವರಿಗೆ ಮೊದಲು ಟೀ ಬೇಕೇ ಎಂದು ಕೇಳಿದರು. ಅವರು ಬೇಡ ಎಂದಾಗ ತಕ್ಷಣ ಕೋಲ್ಡ್ ಕಾಫಿ ಆರ್ಡರ್ ಮಾಡಿದರು. ಈ ಸಣ್ಣ ಕಾಳಜಿ ಮತ್ತು ಆತ್ಮೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೊಸೆಯನ್ನು ಮಗಳಂತೆ ಕಾಣುವ ಸಚಿನ್ ಅವರ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyst169rwtsba6arnh20s0t5,imgname-sachin-tendulkar-spotted-with-family-in-mumbai-restaurant--quillbot.com--1785425074487.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈದಾನದ ಲೆಜೆಂಡ್, ಕುಟುಂಬದಲ್ಲೂ ಅಷ್ಟೇ ಸರಳ ವ್ಯಕ್ತಿತ್ವ,,!&lt;/strong&gt;&lt;/p&gt;&lt;p&gt;&lt;strong&gt;ಮುಂಬೈ:&lt;/strong&gt; ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಆದರೆ ಮೈದಾನದ ಹೊರಗಿನ ಅವರ ವಿನಯ, ಸರಳತೆ ಮತ್ತು ಕುಟುಂಬದ ಮೇಲಿನ ಪ್ರೀತಿ ಕೂಡ ಅಷ್ಟೇ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ, ಅವರ ವ್ಯಕ್ತಿತ್ವದ ಮತ್ತೊಂದು ಸುಂದರ ಮುಖವನ್ನು ಅನಾವರಣಗೊಳಿಸಿದೆ.&lt;/p&gt;&lt;p&gt;&lt;strong&gt;ಸೊಸೆಯ ಇಷ್ಟಕ್ಕೆ ಆದ್ಯತೆ ನೀಡಿದ ಕ್ಷಣ ವೈರಲ್..!&lt;/strong&gt;&lt;/p&gt;&lt;p&gt;ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿನ್, ಪತ್ನಿ ಅಂಜಲಿ ಮತ್ತು ಸೊಸೆ ಸಾನಿಯಾ ಚಾಂದೋಕ್ ಅವರೊಂದಿಗೆ ಭಾಗವಹಿಸಿದ್ದರು. ಅತಿಥಿಗಳಿಗೆ ಚಹಾ-ಕಾಫಿ ನೀಡುತ್ತಿದ್ದ ವೇಳೆ ಸಚಿನ್, ಸಾನಿಯಾ ಅವರಿಗೆ &quot;ಚಹಾ ಬೇಕಾ ಅಥವಾ ಕಾಫಿ?&quot; ಎಂದು ಆತ್ಮೀಯವಾಗಿ ಕೇಳಿದರು. ಸಾನಿಯಾ ಕಪ್ಪು ಕಾಫಿ ಬೇಕೆಂದು ಹೇಳುತ್ತಿದ್ದಂತೆ, ಅದನ್ನು ತರುವಂತೆ ಸಿಬ್ಬಂದಿಗೆ ವಿನಮ್ರವಾಗಿ ಸೂಚಿಸಿದರು. ಈ ಸಣ್ಣ ಕಾಳಜಿಯ ನಡೆ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಸಾನಿಯಾ ಚಾಂದೋಕ್ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;ಅರ್ಜುನ್ ತೆಂಡೂಲ್ಕರ್ ಅವರನ್ನು ವಿವಾಹವಾದ ಸಾನಿಯಾ ಚಾಂದೋಕ್ ಉದ್ಯಮಶೀಲ ಕುಟುಂಬದ ಸದಸ್ಯೆ. ಅವರು ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್&zwnj;ನಲ್ಲಿ ವಿದ್ಯಾಭ್ಯಾಸ ಮಾಡಿರುವ ಸಾನಿಯಾ, ಮುಂಬೈನಲ್ಲಿ ಪ್ರೀಮಿಯಂ ಪೆಟ್ ಸಲೂನ್, ಸ್ಪಾ ಮತ್ತು ಪೆಟ್ ಕೇರ್ ಸೇವೆಗಳನ್ನು ಒದಗಿಸುವ 'ಮಿಸ್ಟ್ ಪಾವ್' ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ.&lt;/p&gt;&lt;p&gt;&lt;strong&gt;ಸಣ್ಣ ನಡೆ, ದೊಡ್ಡ ಸಂದೇಶ!&lt;/strong&gt;&lt;/p&gt;&lt;p&gt;ಸಚಿನ್ ಅವರ ಈ ನಡೆ ಕೇವಲ ಆತಿಥ್ಯದ ಉದಾಹರಣೆ ಮಾತ್ರವಲ್ಲ. ಕುಟುಂಬದ ಪ್ರತಿಯೊಬ್ಬರ ಅಭಿರುಚಿಗೆ ಗೌರವ ನೀಡುವುದು, ಪರಸ್ಪರ ಕಾಳಜಿ ತೋರಿಸುವುದು ಮತ್ತು ಆತ್ಮೀಯವಾಗಿ ವರ್ತಿಸುವುದು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂಬ ಸಂದೇಶವನ್ನು ಇದು ಸಾರುತ್ತದೆ. ಅದಕ್ಕಾಗಿಯೇ ಈ ವಿಡಿಯೋಗೆ ಸಾವಿರಾರು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, &quot;ಸೊಸೆಯನ್ನು ಮಗಳಂತೆ ಕಾಣುವ ಮಾವ&quot; ಎಂದು ಸಚಿನ್ ಅವರನ್ನು ಹೊಗಳುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Viral Bhayani (@viralbhayani)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/sachin-tendulkar-wins-hearts-with-sweet-gesture-towards-daughter-in-law/articleshow-queou3g"/>
        </item>
        <item>
            <title><![CDATA[KKR ಮಾಜಿ ಕ್ರಿಕೆಟಿಗ ಈಗ ಬಾಂಗ್ಲಾದೇಶ ಏಕದಿನ ತಂಡದ ನೂತನ ನಾಯಕ..! ಹಿಂದೂ ಆಟಗಾರನಿಗೆ ಕ್ಯಾಪ್ಟನ್ ಪಟ್ಟ]]></title>
            <link>https://kannada.asianetnews.com/cricket-sports/bangladesh-captaincy-shake-up-litton-das-takes-charge-mehidy-hasan-removed-kvn/articleshow-rbds197</link>
            <guid isPermaLink="true">https://kannada.asianetnews.com/cricket-sports/bangladesh-captaincy-shake-up-litton-das-takes-charge-mehidy-hasan-removed-kvn/articleshow-rbds197</guid>
            <pubDate>Thu, 30 Jul 2026 18:11:38 +0530</pubDate>
            <description><![CDATA[2027ರ ಏಕದಿನ ವಿಶ್ವಕಪ್&zwnj; ಅನ್ನು ಗುರಿಯಾಗಿಸಿಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್&zwnj;ಗೆ ಸೀಮಿತ ಓವರ್&zwnj;ಗಳ ತಂಡದ ನಾಯಕತ್ವ ನೀಡಿದೆ. ಜಿಂಬಾಬ್ವೆ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ, ಮೆಹದಿ ಹಸನ್ ಮಿರಾಜ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gyfpazb45mzsnbe3gfh7ds1m,imgname-Litton-Das-1682006441316.jpg" type="image/jpeg" height="390" width="690"/>
            <content:encoded><![CDATA[&lt;p&gt;ಢಾಕಾ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್&zwnj;ಗೆ ನಾಯಕತ್ವ ಪಟ್ಟ ಕಟ್ಟಿದೆ. ಈ ಮೂಲಕ ಕಳೆದೊಂದು ವರ್ಷದಿಂದ ಬಾಂಗ್ಲಾದೇಶ ತಂಡದ ನಾಯಕರಾಗಿದ್ದ ಮೆಹದಿ ಹಸನ್ ಮಿರಾಜ್ ಅವರನ್ನು ಕೆಳಗಿಳಿಸಲಾಗಿದೆ.&lt;/p&gt;&lt;p&gt;ಬಾಂಗ್ಲಾದೇಶ ತಂಡವು ಇತ್ತೀಚೆಗಷ್ಟೇ ಜಿಂಬಾಬ್ವೆ ಎದುರು ಏಕದಿನ ಸರಣಿಯನ್ನು ಸೋತಿತ್ತು. ಇದರ ಬೆನ್ನಲ್ಲೇ ತಂಡದಲ್ಲಿ ಮೇಜರ್&zwnj; ಸರ್ಜರಿಯಾಗಿದ್ದು, ಮೆಹದಿ ಹಸನ್ ಅವರ ತಲೆದಂಡವಾಗಿದೆ. ಇದೀಗ ಹಿಂದೂ ಧರ್ಮದ ಲಿಟನ್ ದಾಸ್&zwnj;ಗೆ ಬಾಂಗ್ಲಾದೇಶ ಸೀಮಿತ ಓವರ್&zwnj;ಗಳ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಲಿಟನ್ ದಾಸ್ ನಾಯಕನಾಗಿ ಇನ್ನು ಮುಂದೆ ಬಾಂಗ್ಲಾದೇಶ ಏಕದಿನ ಹಾಗೂ ಟಿ20 ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ನಜ್ಮುಲ್ ಹೊಸೈನ್ ಶಾಂತೋ ಅವರು ಬಾಂಗ್ಲಾದೇಶ ಟೆಸ್ಟ್ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ.&lt;/p&gt;&lt;p&gt;Litton Das has been appointed captain of the Bangladesh ODI team, taking over from Mehidy Hasan Miraz  pic.twitter.com/eb2Qt7n2Nj&lt;/p&gt;&lt;p&gt;&mdash; Cricinfo (@cricinfo) July 29, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಹತ್ವದ ತೀರ್ಮಾನ:&lt;/strong&gt;&lt;/h2&gt;&lt;p&gt;ಬಾಂಗ್ಲಾದೇಶ ಕ್ರಿಕೆಟ್ ತಂಡವು ಮುಂದಿನ ವರ್ಷ ಅಂದರೆ 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿದ್ದು, ಇದೇ ಕಾರಣಕ್ಕೆ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಲಿಟನ್ ದಾಸ್&zwnj;ಗೆ ಬಾಂಗ್ಲಾದೇಶ ಏಕದಿನ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಇತ್ತೀಚೆಗಷ್ಟೇ ಮೆಹದಿ ಹಸನ್ ಮಿರಾಜ್ ನಾಯಕತ್ವದ ಬಾಂಗ್ಲಾದೇಶ ತಂಡವು 2-1 ಅಂತರದಲ್ಲಿ ಜಿಂಬಾಬ್ವೆ ಎದುರು ಏಕದಿನ ಸರಣಿ ಸೋತಿತ್ತು. ಮೆಹದಿ ಹಸನ್ 2025ರ ಜೂನ್&zwnj;ನಲ್ಲಿ ಬಾಂಗ್ಲಾದೇಶ ಸೀಮಿತ ಓವರ್&zwnj;ಗಳ ತಂಡದ ನಾಯಕರಾಗಿದ್ದರು. ಇದೀಗ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್, ಬಾಂಗ್ಲಾದೇಶ ಸೀಮಿತ ಓವರ್&zwnj;ಗಳ ತಂಡದ ನೂತನ ನಾಯಕರಾಗಿ ನೇಮಕವಾಗಿದ್ದಾರೆ.&lt;/p&gt;&lt;p&gt;ಮೆಹದಿ ಹಸನ್ ನಾಯಕತ್ವದಲ್ಲಿ ಬಾಂಗ್ಲಾದೇಶ ಆಡಿದ 20 ಪಂದ್ಯಗಳ ಪೈಕಿ 10ರಲ್ಲಿ ಗೆಲುವು ಹಾಗೂ ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇನ್ನು ಲಿಟನ್ ದಾಸ್ ಈಗಾಗಲೇ ಬಾಂಗ್ಲಾದೇಶ ಟಿ20 ತಂಡದ ನಾಯಕರಾಗಿದ್ದರು. ಇದೀಗ ಏಕದಿನ ತಂಡದ ನಾಯಕತ್ವದ ಜವಾಬ್ದಾರಿಯು ಲಿಟನ್ ದಾಸ್ ಹೆಗಲೇರಿದೆ.&lt;/p&gt;&lt;h3&gt;&lt;strong&gt;ತಮೀಮ್ ಇಕ್ಬಾಲ್ ಅವರಿಂದ ಮಹತ್ವದ ತೀರ್ಮಾನ:&lt;/strong&gt;&lt;/h3&gt;&lt;p&gt;ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಹಾಗೂ ಬಾಂಗ್ಲಾದೇಶ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಈ ಮಹತ್ವದ ತೀರ್ಮಾನ ಘೋಷಿಸಿದ್ದಾರೆ. 'ನಾವು ಈ ಮೊದಲು ಮೂರು ಮಾದರಿಯ ಕ್ರಿಕೆಟ್&zwnj;ಗೆ ಮೂರು ನಾಯಕರಿದ್ದರು. ನಮಗೆ ಎರಡು ನಾಯಕರು ಸಾಕು ಎಂದು ಅನಿಸಿದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೆಹದಿ ಒಳ್ಳೆಯ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶ ಆಡಿದ ಐದು ಸರಣಿಗಳ ಪೈಕಿ ನಾಲ್ಕು ಸರಣಿಗಳನ್ನು ಜಯಿಸಿದೆ. ಅವರು ಬ್ಯಾಟಿಂಗ್&zwnj;ನತ್ತ ಗಮನ ಹರಿಸಲಿ ಎನ್ನುವ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ. ಯಾಕೆಂದರೆ ಇತ್ತೀಚೆಗೆ ಅವರು ಬ್ಯಾಟಿಂಗ್&zwnj;ನಲ್ಲಿ ಒಳ್ಳೆಯ ಲಯದಲ್ಲಿ ಇಲ್ಲ' ಎಂದು ತಮೀಮ್ ಇಕ್ಬಾಲ್ ನಾಯಕತ್ವ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bangladesh-captaincy-shake-up-litton-das-takes-charge-mehidy-hasan-removed-kvn/articleshow-rbds197"/>
        </item>
        <item>
            <title><![CDATA[Ajinkya Rehane: ಕಾಡಿದ್ದು ವಯಸ್ಸಲ್ಲ, ಬಿಸಿಸಿಐ ಒತ್ತಡವೂ ಅಲ್ಲ; ಕ್ರಿಕೆಟ್‌ಗೆ ರಹಾನೆ ಗುಡ್‌ಬೈ ಹಿಂದಿದೆ ಬೇರೆಯದೇ ಟ್ವಿಸ್ಟ್!]]></title>
            <link>https://kannada.asianetnews.com/gallery/cricket-sports/ajinkya-rahane-retirement-real-twist-not-age-bcci-bmk-mtixl0w</link>
            <guid isPermaLink="true">https://kannada.asianetnews.com/gallery/cricket-sports/ajinkya-rahane-retirement-real-twist-not-age-bcci-bmk-mtixl0w</guid>
            <pubDate>Thu, 30 Jul 2026 17:26:20 +0530</pubDate>
            <description><![CDATA[&lt;p&gt;ಕ್ರಿಕೆಟ್&zwnj;ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ ಅವರ ಈ ನಿರ್ಧಾರದ ಹಿಂದೆ ಬಿಸಿಸಿಐ ಅಥವಾ ವಯಸ್ಸಿನ ಕಾರಣಕ್ಕಿಂತ, ಕೆಕೆಆರ್ ಫ್ರಾಂಚೈಸಿಯ ನಿರ್ಧಾರ ಪ್ರಮುಖ ಪಾತ್ರ ವಹಿಸಿದೆ. ಮುಂಬರುವ ಐಪಿಎಲ್&zwnj;ನಲ್ಲಿ ಕಡೆಗಣನೆಗೆ ಒಳಗಾಗುವ ಬದಲು, ಗೌರವಯುತವಾಗಿ ನಿವೃತ್ತಿ ಹೊಂದುವ ಹಾದಿಯನ್ನು ಅವರು ಆಯ್ದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhxgc5vk7wjcxq8ntry002c,imgname-ajinkya-rahane-kkr-1775496605883.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್&zwnj;ಗೆ ವಿದಾಯ ಹೇಳಿರುವ ಅಜಿಂಕ್ಯ ರಹಾನೆ ಅವರ ಈ ನಿರ್ಧಾರದ ಹಿಂದೆ ಬಿಸಿಸಿಐ ಅಥವಾ ವಯಸ್ಸಿನ ಕಾರಣಕ್ಕಿಂತ, ಕೆಕೆಆರ್ ಫ್ರಾಂಚೈಸಿಯ ನಿರ್ಧಾರ ಪ್ರಮುಖ ಪಾತ್ರ ವಹಿಸಿದೆ. ಮುಂಬರುವ ಐಪಿಎಲ್&zwnj;ನಲ್ಲಿ ಕಡೆಗಣನೆಗೆ ಒಳಗಾಗುವ ಬದಲು, ಗೌರವಯುತವಾಗಿ ನಿವೃತ್ತಿ ಹೊಂದುವ ಹಾದಿಯನ್ನು ಅವರು ಆಯ್ದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಾಲು-ಸಾಲು ಕಷ್ಟಗಳನ್ನು ಕಂಡು ಮೈದಾನದಲ್ಲಿ ಬೆವರು ಸುರಿಸಿ, ಶ್ರಮವನ್ನೆ ಜೀವಾಳವಾಗಿಸಿಕೊಂಡು, ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡ ಹಲವಾರು ಪ್ರತಿಭೆಗಳಿಗೆ ಸಂಘರ್ಷ ಬೇತಾಳನಂತೆ ಬೆನ್ನಿಗೆ ಇರುತ್ತದೆ. ಇವರಿಗೆ ಕೊಹ್ಲಿ, ಶರ್ಮಾ, ಧೋನಿಗೆ ಸಿಕ್ಕಷ್ಟು ಅವಕಾಶ ಸಿಕ್ಕಿಸಿರುವುದಿಲ್ಲ, ಅಂಥವರ ಲಿಸ್ಟ್&zwnj;ಲ್ಲಿಯೇ ರೆಹಾನೆ ಬರ್ತಾರೆ. ಇದ್ದ ಅವಕಾಶವನ್ನೆ ಬಳಿಸಿಕೊಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಗುಡ್&zwnj; ಬೈ ಹೇಳಿದ್ದಾರೆ. ಆದರೆ ಅದಕ್ಕೆ ಕಾರಣ ಬಿಸಿಸಿಐ ಮತ್ತು ವಯಸ್ಸಿನ ಕಾರಣವಲ್ಲವಂತೆ, ಹಾಗಾದರೆ ನೈಜ್&zwnj; ಕಾರಣ ಏನು? ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಐಪಿಎಲ್ ವಲಯದ ಒಳಗಿನ ಮೂಲಗಳ ಪ್ರಕಾರ ಮತ್ತು ಪ್ರಮುಖ ಕ್ರಿಕೆಟ್ ವಿಶ್ಲೇಷಣೆಯಂತೆ, ರಹಾನೆ ಅವರ ಈ ದಿಢೀರ್ ನಿರ್ಧಾರದ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಒಂದು ಪ್ರಮುಖ ನಿರ್ಧಾರ ಅಡಗಿದೆ. ಕಳೆದ ಸೀಸನ್&zwnj;ನಲ್ಲಿ ತಂಡವನ್ನು ಮುನ್ನಡೆಸಿದ್ದ ರಹಾನೆ ಅವರನ್ನು ಮುಂಬರುವ ಐಪಿಎಲ್ ಆವೃತ್ತಿಗಾಗಿ ನಾಯಕರನ್ನಾಗಿ ಮುಂದುವರಿಸಲು ಅಥವಾ ತಂಡದಲ್ಲೇ ಉಳಿಸಿಕೊಳ್ಳಲು ಕೆಕೆಆರ್&zwnj; ಮ್ಯಾನೇಜ್&zwnj;ಮೆಂಟ್ ಆಸಕ್ತಿ ಹೊಂದಿರಲಿಲ್ಲ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಫ್ರಾಂಚೈಸಿಯು ಯುವ ಮತ್ತು ಆಕ್ರಮಣಕಾರಿ ಆಟಗಾರರತ್ತ ಹೆಚ್ಚು ಗಮನ ಹರಿಸುತ್ತಿದ್ದು, ಈಗಾಗಲೇ ಬೇರೆ ತಂಡದಿಂದ ದೊಡ್ಡ ಮಟ್ಟದ ಆಟಗಾರನೊಬ್ಬನನ್ನು ಟ್ರೇಡ್ ಮಾಡಿಕೊಳ್ಳಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದೆ. ಮುಂಬರುವ ಸೀಸನ್&zwnj;ನಲ್ಲಿ ಆ ಹೊಸ ಆಟಗಾರನಿಗೆ ನಾಯಕತ್ವದ ಪಟ್ಟ ಕಟ್ಟಲು ಮಾಲೀಕರು ಯೋಜನೆ ರೂಪಿಸಿದ್ದಾರೆ. ಈ ಬದಲಾವಣೆಯ ಗಾಳಿ ರಹಾನೆಗೆ ಮುಂಚಿತವಾಗಿಯೇ ತಲುಪಿತ್ತು.&lt;/p&gt;&lt;img&gt;&lt;p&gt;ರಹಾನೆಗೆ ಈಗ 38 ವರ್ಷ. ಭಾರತ ಟೆಸ್ಟ್ ತಂಡದಿಂದಲೂ ಅವರು 2023ರ ಜುಲೈನಿಂದಲೇ ಹೊರಗುಳಿದಿದ್ದರು. ಮುಂಬರುವ ಐಪಿಎಲ್ ಹರಾಜಿನಲ್ಲಿ ಕಡೆಗಣನೆಗೆ ಒಳಗಾಗುವುದು, ಅಥವಾ ಯಾವುದೇ ತಂಡಗಳು ತನ್ನನ್ನು ಖರೀದಿಸದೆ ಅನ್&zwnj;ಸೋಲ್ಡ್ ಆಗಿ ಉಳಿಯುವುದಕ್ಕಿಂತ, ತಾವೇ ಸ್ವತಃ ಗೌರವಯುತವಾಗಿ ಎಲ್ಲಾ ಮಾದರಿಯ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸುವುದು ಸೂಕ್ತ ಎಂದು ರಹಾನೆ ಭಾವಿಸಿದ್ದಾರೆ. ಒಬ್ಬ ಆಟಗಾರನಾಗಿ ಅಂಗಳದಲ್ಲಿ ಗಳಿಸಿದ ಅಪಾರ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನಿರ್ಗಮಿಸುವುದು ರಹಾನೆಯಂತಹ ಜಂಟಲ್&zwnj;ಮನ್ ಕ್ರಿಕೆಟರ್&zwnj;ನ ಶೈಲಿಗೆ ಸೂಕ್ತವಾಗಿತ್ತು.&lt;/p&gt;&lt;img&gt;&lt;p&gt;ರಹಾನೆಯವರ ಈ ಪಯಣ ಸುಲಭದ್ದಾಗಿರಲಿಲ್ಲ. ಮುಂಬೈನ ಬಡತನದ ರಸ್ತೆಗಳಲ್ಲಿ ತಾಯಿ ಕಿಟ್&zwnj;ಬ್ಯಾಗ್ ಹೊತ್ತು 8 ಕಿ.ಮೀ ನಡೆಸಿಕೊಂಡು ಕರೆದೊಯ್ಯುತ್ತಿದ್ದ ದಿನಗಳಿಂದ ಹಿಡಿದು, ಭಾರತ ತಂಡದ ಹಂಗಾಮಿ ನಾಯಕನಾಗಿ ವಿದೇಶಿ ಮಣ್ಣಿನಲ್ಲಿ ತ್ರಿರಂಗ ಧ್ವಜ ಹಾರಿಸುವವರೆಗೆ ಅವರದ್ದು ರೋಚಕ ಪಯಣ. ಕಷ್ಟದ ದಿನಗಳಲ್ಲಿ ತಾಯಿಗೆ ಬೆನ್ನೆಲುಬಾಗಿ ನಿಂತು, ರಹಾನೆ ಬೆಳೆಯಲು ಸಾಥ್ ನೀಡಿದ್ದು ಅವರ ಕುಟುಂಬದ ಶ್ರಮ ಮತ್ತು ಶಿಸ್ತು. ಆಟೋಗೆ ದುಡ್ಡಿಲ್ಲದೆ ಕಾಲ್ನಡಿಗೆಯಲ್ಲೇ ದಿನದ ಪಯಣ ಶುರು ಮಾಡುತ್ತಿದ್ದ ಆ ಹುಡುಗ, ಮುಂದೆ ಭಾರತ ಕ್ರಿಕೆಟ್&zwnj;ನ 'ಮಹಾಗೋಡೆ'ಯಾಗಿ, ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದದ್ದು ಒಂದು ಪವಾಡವೇ ಸರಿ.&lt;/p&gt;&lt;img&gt;&lt;p&gt;ಇಂದಿನ ಕ್ರಿಕೆಟ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಐಪಿಎಲ್&zwnj;ನಂತಹ ಮೆಗಾ ಟೂರ್ನಿಗಳು ಈಗ ಯುವ ರಕ್ತ ಮತ್ತು ಅತಿ ಆಕ್ರಮಣಕಾರಿ ಶೈಲಿಯ ಆಟಕ್ಕೆ ಆದ್ಯತೆ ನೀಡುತ್ತಿವೆ. ಈ ಹಂತದಲ್ಲಿ, ಕಾಲದ ಕರೆಯನ್ನು ಅರ್ಥಮಾಡಿಕೊಂಡ ರಹಾನೆ, ತಮ್ಮ ಭವಿಷ್ಯ ಮತ್ತು ವಯಸ್ಸನ್ನು ಪರಿಗಣಿಸಿ ಈ ಒಟ್ಟಾರೆ ನಿರ್ಧಾರಕ್ಕೆ ಬಂದಿದ್ದಾರೆ. ಅಮ್ಮನ ತ್ಯಾಗದಿಂದ ಶುರುವಾದ ಆ 8 ಕಿಲೋಮೀಟರ್&zwnj;ನ ಸಣ್ಣ ಹೆಜ್ಜೆ, ಇಂದು ಜಗತ್ತಿನಾದ್ಯಂತ ಲಕ್ಷಾಂತರ ಯುವಕರಿಗೆ ಸ್ಪೂರ್ತಿಯಾಗಿದೆ. ಅಂಗಳದಲ್ಲಿ ರಹಾನೆಯ ಬ್ಯಾಟಿಂಗ್ ಅಥವಾ ನಾಯಕತ್ವ ಇನ್ಮುಂದೆ ಕಾಣ ಸಿಗದಿರಬಹುದು, ಆದರೆ ಕೆಕೆಆರ್ ಹಿಂಜರಿದರೂ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅವರ ಹೆಸರನ್ನು ಎಂದಿಗೂ ಅಳಿಸಿಹಾಕಲು ಸಾಧ್ಯವಿಲ್ಲ!&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/ajinkya-rahane-retirement-real-twist-not-age-bcci-bmk-mtixl0w"/>
        </item>
        <item>
            <title><![CDATA[ಅಜಿಂಕ್ಯ ರಹಾನೆ ನಿವೃತ್ತಿ ಬೆನ್ನಲ್ಲೇ ಅದೇ ಹಾದಿ ಹಿಡಿಯಲು ರೆಡಿಯಾದ ಐವರು ಕ್ರಿಕೆಟಿಗರು! ಲಿಸ್ಟ್‌ನಲ್ಲಿದ್ದಾರೆ ಏಕೈಕ ಕನ್ನಡಿಗ]]></title>
            <link>https://kannada.asianetnews.com/gallery/cricket-sports/from-karun-nair-to-mohammad-shami-5-indian-players-who-might-announce-retirement-next-kvn-44lhrta</link>
            <guid isPermaLink="true">https://kannada.asianetnews.com/gallery/cricket-sports/from-karun-nair-to-mohammad-shami-5-indian-players-who-might-announce-retirement-next-kvn-44lhrta</guid>
            <pubDate>Thu, 30 Jul 2026 16:46:37 +0530</pubDate>
            <description><![CDATA[&lt;p&gt;ಬೆಂಗಳೂರು: ಮುಂಬೈ ಮೂಲದ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಇನ್ನೂ ಐದು ಕ್ರಿಕೆಟಿಗರು ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಏಕೈಕ ಕನ್ನಡಿನ ಹೆಸರೂ ಇದೆ. ಈ ಕುರಿತಾದ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ ನೋಡಿ&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8jqbpfsyct2j89q1cjjjn9s,imgname-ajinkya-rahane-1761565071865.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮುಂಬೈ ಮೂಲದ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಇನ್ನೂ ಐದು ಕ್ರಿಕೆಟಿಗರು ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಏಕೈಕ ಕನ್ನಡಿನ ಹೆಸರೂ ಇದೆ. ಈ ಕುರಿತಾದ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ ನೋಡಿ&lt;/p&gt;&lt;p&gt;&lt;/p&gt;&lt;img&gt;&lt;p&gt;ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಇಂದು ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದ ರಹಾನೆ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಇದೀಗ ರಹಾನೆ ಮಾತ್ರವಲ್ಲದೇ ಅವರಂತೆಯೇ ಆಯ್ಕೆ ಸಮಿತಿಯಿಂದ ಪದೇ ಪದೇ ಕಡೆಗಣಿಸಲ್ಪುಡುತ್ತಿರುವ ಈ ಐವರು ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸುವ ಹೊಸ್ತಿಲಲ್ಲಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವುದನ್ನು ನೋಡೋಣ ಬನ್ನಿ&lt;/p&gt;&lt;img&gt;&lt;p&gt;ಸ್ವಿಂಗ್ ಕಿಂಗ್ ಖ್ಯಾತಿಯ ಭುವನೇಶ್ವರ್ ಕುಮಾರ್ ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಿದ್ದು ಸಾಕಷ್ಟು ಸಮಯದಿಂದ ಭುವಿ ಆಯ್ಕೆ ಸಮಿತಿಯಿಂದ ಕಡೆಗಣನೆಗೊಳಗಾಗಿದ್ದಾರೆ. ಹೀಗಾಗಿ ಭುವಿ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸುವ ಸಮಯ ದೂರವಿಲ್ಲ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಶಾರ್ದೂರ್ ಠಾಕೂರ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಡೋಲಾಯಮಾನವಾಗಿದೆ. ಅದರಲ್ಲೂ ಭಾರತ ತಂಡಕ್ಕೆ ಹರ್ಷಿತ್ ರಾಣಾ ಹಾಗೂ ಗುರ್ನೂರ್ ಬ್ರಾರ್ ಎಂಟ್ರಿಕೊಟ್ಟ ಮೇಲಂತೂ ಶಾರ್ದೂಲ್ ಠಾಕೂರ್ ಟೀಂ ಇಂಡಿಯಾ ಕಮ್&zwnj;ಬ್ಯಾಕ್ ಹಾದಿ ಮತ್ತಷ್ಟು ಕಠಿಣವಾಗಿದೆ. ಇದೀಗ ಶಾರ್ದೂಲ್ ಠಾಕೂರ್ ಕಮೆಂಟ್ರಿ ಮಾಡುತ್ತಿದ್ದು, ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಗುಡ್&zwnj; ಬೈ ಹೇಳಿದರೆ ಅಚ್ಚರಿಯೇನಿಲ್ಲ.&lt;/p&gt;&lt;img&gt;&lt;p&gt;ಇಶಾಂತ್ ಶರ್ಮಾ ಭಾರತ ಟೆಸ್ಟ್ ತಂಡವು ಕಂಡ ಅತ್ಯಂತ ಯಶಸ್ವಿ ವೇಗದ ಬೌಲರ್&zwnj;ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಬದುಕಿನ ಸಂಧ್ಯಾಕಾಲದಲ್ಲಿದ್ದಾರೆ. 37 ವರ್ಷದ ಇಶಾಂತ್ ಶರ್ಮಾ ಮತ್ತೆ ಟೀಂ ಇಂಡಿಯಾಗೆ ಕಮ್&zwnj;ಬ್ಯಾಕ್ ಮಾಡುವುದು ಕಷ್ಟಸಾಧ್ಯವಾದ ಮಾತು. ಹೀಗಾಗಿ ಸದ್ಯದಲ್ಲೇ ಇಶಾಂತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಹೇಳುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದ ಕನ್ನಡಿಗ ಕರುಣ್ ನಾಯರ್, ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಏಳು ವರ್ಷಗಳ ಬಳಿಕ ಕಮ್&zwnj;ಬ್ಯಾಕ್ ಮಾಡಿದ್ದರು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕರುಣ್ ನಾಯರ್ ವಿಫಲರಾಗಿದ್ದರು. ಸಿಕ್ಕ ನಾಲ್ಕು ಅವಕಾಶ ಕೈಚೆಲ್ಲಿರುವ ಕರುಣ್&zwnj; ನಾಯರ್ ಮತ್ತೆ ಟೀಂ ಇಂಡಿಯಾಗೆ ಕಮ್&zwnj;ಬ್ಯಾಕ್ ಮಾಡೋದು ಅನುಮಾನ. ಹೀಗಾಗಿ ಕರುಣ್ ನಾಯರ್ ಕೂಡಾ ನಿವೃತ್ತಿ ಹೊಸ್ತಿಲಲ್ಲಿದ್ದಾರೆ.&lt;/p&gt;&lt;img&gt;&lt;p&gt;ಮೊಹಮ್ಮದ್ ಶಮಿ ದೇಶಿ ಕ್ರಿಕೆಟ್&zwnj;ನಲ್ಲಿ ಅದ್ಭುತ ಪ್ರದರ್ಶನದ ಹೊರತಾಗಿಯೂ ಬಿಸಿಸಿಐ ಆಯ್ಕೆ ಸಮಿತಿ ಪದೇ ಪದೇ ಅವರನ್ನು ಕಡೆಗಣಿಸುತ್ತಿದೆ. ಇದೇ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/from-karun-nair-to-mohammad-shami-5-indian-players-who-might-announce-retirement-next-kvn-44lhrta"/>
        </item>
        <item>
            <title><![CDATA[Ajinkya Rehane: ಆಟೋಗೆ ದುಡ್ಡಿಲ್ಲದೆ 8 ಕಿ.ಮೀ ಕಿಟ್‌ ಹೊತ್ತು ನಡೆದ ಕರುಣಾಮಯಿ; ರೆಹಾನೆಗೆ ಸಾಥ್‌ ನೀಡಿದ್ದು ಇದೇ ಜೀವ!]]></title>
            <link>https://kannada.asianetnews.com/gallery/cricket-sports/mother-sujata-rehane-walks-8km-kit-no-money-auto-support-rehane-bmk-gksg1nv</link>
            <guid isPermaLink="true">https://kannada.asianetnews.com/gallery/cricket-sports/mother-sujata-rehane-walks-8km-kit-no-money-auto-support-rehane-bmk-gksg1nv</guid>
            <pubDate>Thu, 30 Jul 2026 16:12:51 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟಿಗ ಅಜಿಂಕ್ಯ ರೆಹಾನೆ ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಅವರಿಗೆ ನೀಡಿದ್ದಾರೆ. ಕ್ರಿಕೆಟ್ ತರಬೇತಿಗಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿದಿನ ಎಂಟು ಕಿಲೋಮೀಟರ್ ನಡೆದು ಕರೆದೊಯ್ಯುತ್ತಿದ್ದ &amp;nbsp;ತ್ಯಾಗ ಮತ್ತು ಆ ಬೆಂಬಲವನ್ನು ಅವರು ಭಾವನಾತ್ಮಕವಾಗಿ ನೆನೆಪಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhxgc5vk7wjcxq8ntry002c,imgname-ajinkya-rahane-kkr-1775496605883.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟಿಗ ಅಜಿಂಕ್ಯ ರೆಹಾನೆ ತಮ್ಮ ಯಶಸ್ಸಿನ ಸಂಪೂರ್ಣ ಶ್ರೇಯಸ್ಸನ್ನು ಅವರಿಗೆ ನೀಡಿದ್ದಾರೆ. ಕ್ರಿಕೆಟ್ ತರಬೇತಿಗಾಗಿ, ಆರ್ಥಿಕ ಸಂಕಷ್ಟದ ನಡುವೆಯೂ ಪ್ರತಿದಿನ ಎಂಟು ಕಿಲೋಮೀಟರ್ ನಡೆದು ಕರೆದೊಯ್ಯುತ್ತಿದ್ದ &amp;nbsp;ತ್ಯಾಗ ಮತ್ತು ಆ ಬೆಂಬಲವನ್ನು ಅವರು ಭಾವನಾತ್ಮಕವಾಗಿ ನೆನೆಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಭಾರತೀಯ ಕ್ರಿಕೆಟ್ ತಂಡದಲ್ಲಿ ಕೆಲವು ಆಟಗಾರರು ಬಹಳ ಕಷ್ಟಪಟ್ಟು ಪ್ರತಿಭೆಯನ್ನು ಹೊರ ಚೆಲ್ಲಿದ್ದಾರೆ. ಅಂತಹ ಪ್ರತಿಭಾನ್ವಿತ ಆಟಗಾರರಲ್ಲಿ ಅಜಿಂಕ್ಯ ರೆಹಾನೆ ಕೂಡ ಒಬ್ಬರು. ಇಂದು ಅಜಿಂಕ್ಯ ರೆಹಾನೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಗುಡ್&zwnj;ಬೈ ಹೇಳಿದ್ದಾರೆ. ತದನಂತರ ಅವರು ದೇಶಕ್ಕೆ ನೀಡಿದ ಪ್ರದರ್ಶನದ ಬಗ್ಗೆ ಚರ್ಚಿಸಲಾಗಿದೆ. ಆದರೆ ಪ್ರತಿಯೊಬ್ಬರ ಜೀವನದಲ್ಲೂ, ಸಂಘರ್ಷ, ಹೋರಾಟ ಸರ್ವೇ ಸಾಮಾನ್ಯ. ಅಂಥ ಒಂದು ಸಂಘರ್ಷದಲ್ಲಿ ರೆಹಾನೆಗೆ ಸಾಥ್ ನಿಡಿದ್ದು ಬೇರೆ ಯಾರೂ ಅಲ್ಲ, ಅವರ ತಾಯಿ, ಕರುಣಾಮಯಿ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಅಜಿಂಕ್ಯ ರಹಾನೆ ಇತ್ತೀಚೆಗೆ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡ್ಡು, ಆ ಕುರಿತು ಭಾವನಾತ್ಮಕವಾಗಿ ತಮ್ಮ ತಾಯಿ ಕುರಿತು ಹೇಳಿದ್ದರು. ಮಹಾರಾಷ್ಟ್ರದ ಸಾಮಾನ್ಯ ಕುಟುಂಬದ ಹುಡುಗನಿಂದ, ಟೀಮ್ ಇಂಡಿಯಾಗೆ ಬಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಹೆಸರು ರಾರಾಜಿಸುತ್ತಿದೆ ಎಂದರೆ, ಅದರ ಸಂಪೂರ್ಣ ಕ್ರೆಡಿಟ್ ತಮ್ಮ ತಾಯಿಗೆ ಕೊಡಬೇಕು ಎಂದು ಅವರು ಹೇಳಿದ್ದರು. ನಾನು ಕ್ರಿಕೆಟಿಗನಾಗಲು ನನ್ನ ತಾಯಿಯೇ ಕಾರಣ. ನನ್ನ ಕನಸನ್ನು ನನಸಾಗಿಸುವಲ್ಲಿ ನನ್ನ ತಾಯಿ ದೊಡ್ಡ ಪಾತ್ರ ವಹಿಸಿದ್ದಾರೆ. ನನ್ನ ಕ್ರಿಕೆಟ್ ತರಬೇತಿಗಾಗಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಪ್ರತಿದಿನ ಎಂಟು ಕಿಲೋಮೀಟರ್ ನಡೆದು ನನ್ನ ತರಬೇತಿ ಕೇಂದ್ರಕ್ಕೆ ಬಿಡುತ್ತಿದ್ದರು. ಅದಕ್ಕೆ ಕಾರಣವೆಂದರೆ ಆ ಸಮಯದಲ್ಲಿ, ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಗಿತ್ತೆಂದರೆ, ರಿಕ್ಷಾ ಶುಲ್ಕವನ್ನು ನಮ್ಮ ಕುಟುಂಬಕ್ಕೆ ಭರಿಸಲು ಇರುತ್ತಿರಲಿಲ್ಲ ಎಂದು ರಹಾನೆ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅನ್&zwnj;ಸರ್ಟೈನಿಟಿ ಪಾರ್ಟ್ ಆಫ್&zwnj; ಲೈಫ್&zwnj; ಅಂತಾರೆ, ಹಾಗೆ ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಅನಿಶ್ಚಿತವಾಗಿತ್ತು. ಆದ್ದರಿಂದಲೇ ಅಜಿಂಕ್ಯ ರಹಾನೆ ಯಾವಾಗಲೂ ತನ್ನ ತಾಯಿಯೊಂದಿಗೆ ತರಬೇತಿಗೆ ಹೋಗುತ್ತಿದ್ದರು. ಅವರ ತಾಯಿ ತಮ್ಮನನ್ನು ಒಂದು ತೋಳಿನಲ್ಲಿ ಮತ್ತು ಅಜಿಂಕ್ಯನ ಭಾರವಾದ ಕ್ರಿಕೆಟ್ ಬ್ಯಾಗ್ ಅನ್ನು ಇನ್ನೊಂದು ತೋಳಿನಲ್ಲಿ ಹೊತ್ತುಕೊಂಡು ಹೋಗುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರು ಸುಮಾರು ಎಂಟು ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. ವಾರದಲ್ಲಿ ಒಂದು ದಿನ ಮಾತ್ರ ರಿಕ್ಷಾದಲ್ಲಿ ಪ್ರಯಾಣಿಸಲು ಸಾಧ್ಯ ಎಂದು ಅಜಿಂಕ್ಯ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಭ್ಯಾಸ ಮಾಡಿದ ನಂತರ ತಾನು ತುಂಬಾ ದಣಿದಿದ್ದೇನೆ, ರಿಕ್ಷಾದಲ್ಲಿ ತನ್ನ ತಾಯಿಯ ಬಳಿಗೆ ಹೋಗಬೇಕೆಂದು ಒತ್ತಾಯಿಸುತ್ತಿದ್ದೆ, ಆದರೆ ಹಣದ ಕೊರತೆಯಿಂದಾಗಿ, ಅವನ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮೌನವಾಗಿ ಇರುತ್ತಿದ್ದರು. ಆದ್ದರಿಂದ, ರಿಕ್ಷಾವನ್ನು ವಾರಕ್ಕೊಮ್ಮೆ ಮಾತ್ರ ಬಳಸಲಾಗುತ್ತಿತ್ತು. ಅವನು ಈಗ ತಲುಪಿರುವ ಸ್ಥಾನವು ಅವನ ಹೆತ್ತವರಿಂದ ಮಾತ್ರ ಸಾಧ್ಯ. ಅವರಿಗೆ, ಅವನು ಇನ್ನೂ ಅದೇ ಹಳೆಯ ಅಜಿಂಕ್ಯ ಆಗಿಯೇ ಉಳಿದಿದ್ದಾರೆ. ಮುಂಬೈನಲ್ಲಿ ಸ್ಥಳೀಯ ರೈಲಿನಲ್ಲಿ ತನ್ನ ಪ್ರಯಾಣ ನೆನಪಿಸಿಕೊಳ್ಳುತ್ತಾ, ರಹಾನೆ ಹೇಳುವಂತೆ, ತಾನು ಕೇವಲ ಏಳು ವರ್ಷದವನಿದ್ದಾಗ, ತನ್ನ ತಂದೆ ಮೊದಲ ದಿನ ಡೊಂಬಿವ್ಲಿಯಿಂದ ಸಿಎಸ್&zwnj;ಟಿ ರೈಲಿನಲ್ಲಿ ತನ್ನನ್ನು ಬಿಟ್ಟು ಒಬ್ಬರನ್ನೇ ಪ್ರಯಾಣಿಸುವಂತೆ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಅಜಿಂಕ್ಯ ಅವರನ್ನು ಡೊಂಬಿವಲಿ ನಿಲ್ದಾಣದಲ್ಲಿ ಇಳಿಸಿ ಹೊರಟ ಮೇಲೆ ಅಲ್ಲಿಂದ ರೈಲು ಹತ್ತಿ ತರಬೇತಿ ಕೇಂದ್ರ ತಲುಪುತ್ತಿದ್ದರು. ಅಲ್ಲದೇ ರಹಾನೆ ನಂತರ ತಮ್ಮ ತಂದೆ ಅದೇ ರೈಲಿನ ಹಿಂದಿನ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದರು, ಅವರು ಸುರಕ್ಷಿತವಾಗಿ ಒಂಟಿಯಾಗಿ ಪ್ರಯಾಣಿಸಬಹುದೆಂದು ಖಚಿತಪಡಿಸಿಕೊಳ್ಳಲು ಅವರ ಮೇಲೆ ಕಣ್ಣಿಡುತ್ತಿದ್ದರು ಎಂದು ತಿಳಿದುಕೊಂಡಿದ್ದಾರೆ. ಅಜಿಂಕ್ಯ ರಹಾನೆ ಅವರು ತಮ್ಮ ಪೋಷಕರು ನೀಡಿದ ಪ್ರತಿಯೊಂದು ಸಲಹೆ, ಮಾಡಿದ ಅಪಾರ ತ್ಯಾಗಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಅವರ ಹೇಳಿಕೆಗಳೆ ಸಾಕ್ಷಿಯಾಗಿವೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/mother-sujata-rehane-walks-8km-kit-no-money-auto-support-rehane-bmk-gksg1nv"/>
        </item>
        <item>
            <title><![CDATA[ಅವನನ್ನು ಯಾಕೆ ಸೆಲೆಕ್ಟ್ ಮಾಡಿದ್ರು? ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರನ ಆಯ್ಕೆಯ ಬಗ್ಗೆ ಎಬಿ ಡಿವಿಲಿಯರ್ಸ್ ಅಚ್ಚರಿ]]></title>
            <link>https://kannada.asianetnews.com/gallery/cricket-sports/ab-de-villiers-surprised-by-rishabh-pant-selection-for-india-sri-lanka-test-series-kvn-apt4opv</link>
            <guid isPermaLink="true">https://kannada.asianetnews.com/gallery/cricket-sports/ab-de-villiers-surprised-by-rishabh-pant-selection-for-india-sri-lanka-test-series-kvn-apt4opv</guid>
            <pubDate>Thu, 30 Jul 2026 13:12:10 +0530</pubDate>
            <description><![CDATA[&lt;p&gt;ಬೆಂಗಳೂರು: ಕಳೆದ ಮಂಗಳವಾರ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಈ ಪೈಕಿ ಒಬ್ಬ ಆಟಗಾರನ ಆಯ್ಕೆಯ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jj6trpn418tb9fbk057z2g5j,imgname-gettyimages-1199104790.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಮಂಗಳವಾರ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಈ ಪೈಕಿ ಒಬ್ಬ ಆಟಗಾರನ ಆಯ್ಕೆಯ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಮುಂಬರುವ ಆಗಸ್ಟ್&zwnj; 15ರಿಂದ ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ ಭಾರತ ಕ್ರಿಕೆಟ್ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈ ಸರಣಿಯು 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಭಾರತ ತಂಡಕ್ಕೆ ಮಹತ್ವದ್ದಾಗಿದೆ. ಈ ಸರಣಿಗೆ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಶುಭ್&zwnj;ಮನ್ ಗಿಲ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.&lt;/p&gt;&lt;img&gt;&lt;p&gt;ಲಂಕಾ ಎದುರಿನ ಟೆಸ್ಟ್&zwnj; ಸರಣಿಗೆ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕಮ್&zwnj;ಬ್ಯಾಕ್ ಮಾಡಿದ್ದಾರೆ. ಹೀಗಿರುವಾಗಲೇ ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಪಂತ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ರಿಷಭ್ ಪಂತ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ನನಗೆ ನಿಜಕ್ಕೂ ಅಚ್ಚರಿ ಮೂಡಿಸಿತು. ನಾವೆಲ್ಲರೂ ಅವರ ಫಿಟ್ನೆಸ್ ಹೇಗಿದೆ ಎನ್ನುವುದನ್ನು ನೋಡಿದ್ದೇವೆ. ಅವರು ಐಪಿಎಲ್ ವೇಳೆಯಲ್ಲಿಯೇ ಅವರು ತಮ್ಮ ಆತ್ಮವಿಶ್ವಾಸ ಕಳೆದುಕೊಂಡಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ದೇಶವನ್ನು ಪ್ರತಿನಿಧಿಸುವಾಗ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಲ್ಲಬಲ್ಲರು. ಅವರು ಲಂಕಾ ಎದುರಿನ ಸರಣಿಯಲ್ಲಿ ಹೇಗೆ ಆಡಲಿದ್ದಾರೆ ಎನ್ನುವ ಕುತೂಹಲವಿದೆ ಎಂದು ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಎಬಿಡಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಇದೇ ವೇಳೆ ರವೀಂದ್ರ ಜಡೇಜಾ, ಭಾರತ ತಂಡಕ್ಕೆ ಕಮ್&zwnj;ಬ್ಯಾಕ್ ಮಾಡಿದ್ದರ ಬಗ್ಗೆ ಎಬಿಡಿ ಸಂತಸ ವ್ಯಕ್ತಪಡಿಸಿದ್ದಾರೆ. 'ತಂಡದಲ್ಲಿ ಜಡೇಜಾ ಹೆಸರಿರುವುದು ನಿಜಕ್ಕೂ ಒಳ್ಳೆಯ ಸಂಗತಿಯಾಗಿದೆ. ಅವರು ಇತ್ತೀಚಿನ ದಿನಗಳಲ್ಲಿ ಯಾವಾಗ ಆಡುತ್ತಾರೆ, ಯಾವಾಗ ಆಡುವುದಿಲ್ಲ ಎನ್ನುವುದೇ ಗೊತ್ತಾಗುತ್ತಿಲ್ಲ. ಇನ್ನು ಬುಮ್ರಾ ಕೂಡಾ ಕಮ್&zwnj;ಬ್ಯಾಕ್ ಮಾಡಿರುವುದರಿಂದ ಎದುರಾಳಿ ಬ್ಯಾಟರ್&zwnj;ಗಳು ಅವರ ಎದುರು ಎಚ್ಚರಿಕೆಯಿಂದ ಆಡಬೇಕು. ಯಾಕೆಂದರೆ ಅವರೊಬ್ಬ ವಿಶ್ವದರ್ಜೆ ಬೌಲರ್ ಎಂದು ಬುಮ್ರಾರನ್ನು ಕೊಂಡಾಡಿದ್ದಾರೆ.&lt;/p&gt;&lt;img&gt;&lt;p&gt;ಭಾರತ ತಂಡವು ಮೊದಲು ಗಾಲೆಯಲ್ಲಿ ಆ ಬಳಿಕ ಎರಡನೇ ಟೆಸ್ಟ್ ಪಂದ್ಯವನ್ನು ಕೊಲಂಬೊದಲ್ಲಿ ಆಡಲಿದೆ. ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಅಂಕಪಟ್ಟಿಯಲ್ಲಿ ಭಾರತ ತಂಡವು ಐದನೇ ಸ್ಥಾನದಲ್ಲಿದೆ. ಲಂಕಾ ಎದುರು ಉತ್ತಮ ಪ್ರದರ್ಶನ ತೋರಿ ಟೆಸ್ಟ್ ವಿಶ್ವಕಪ್ ಫೈನಲ್ ಕನಸನ್ನು ಜೀವಂತವಾಗಿಟ್ಟುಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ. ಇನ್ನೊಂದೆಡೆ ಶ್ರೀಲಂಕಾ ಆರನೇ ಸ್ಥಾನದಲ್ಲಿದ್ದು, ತವರಿನಲ್ಲಿ ಗಿಲ್ ಪಡೆಗೆ ಶಾಕ್ ನೀಡಲು ಎದುರು ನೋಡುತ್ತಿದೆ.&lt;/p&gt;&lt;img&gt;&lt;p&gt;ಶುಭ್&zwnj;ಮನ್ ಗಿಲ್(ನಾಯಕ), ಕೆ ಎಲ್ ರಾಹುಲ್(ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್(ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ*, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾನ್ಶ್&zwnj; ಜೈನ್.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/ab-de-villiers-surprised-by-rishabh-pant-selection-for-india-sri-lanka-test-series-kvn-apt4opv"/>
        </item>
        <item>
            <title><![CDATA[ಯಾವ ಬೌಲರ್‌ ಎದುರಿಸೋದು ಕಷ್ಟ? - ವೈಭವ್ ಸೂರ್ಯವಂಶಿ ಕೊಟ್ಟ 4 ಪದಗಳ ಖಡಕ್ ಉತ್ತರ ವೈರಲ್!]]></title>
            <link>https://kannada.asianetnews.com/cricket-sports/vaibhav-suryavanshi-says-no-ipl-bowler-troubles-him-jadeja-picks-his-toughest-rival/articleshow-cqg0g74</link>
            <guid isPermaLink="true">https://kannada.asianetnews.com/cricket-sports/vaibhav-suryavanshi-says-no-ipl-bowler-troubles-him-jadeja-picks-his-toughest-rival/articleshow-cqg0g74</guid>
            <pubDate>Thu, 30 Jul 2026 11:45:17 +0530</pubDate>
            <description><![CDATA[&lt;p&gt;ಐಪಿಎಲ್&zwnj;ನಲ್ಲಿ ತಮಗೆ ಭಯ ಹುಟ್ಟಿಸುವ ಬೌಲರ್ ಯಾರೂ ಇಲ್ಲ ಎಂದು ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅದೇ ವೇಳೆ ರವೀಂದ್ರ ಜಡೇಜಾ ಜೋಫ್ರಾ ಆರ್ಚರ್ ಅವರನ್ನು ಕಠಿಣ ಎದುರಾಳಿಯಾಗಿ ಆಯ್ಕೆ ಮಾಡಿದ್ದಾರೆ. ಇಬ್ಬರ ಹೇಳಿಕೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq6ay51k02sj1gt69adnn79,imgname-vaibhav-suryavanshi-1785337313440.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವೈಭವ್ ಸೂರ್ಯವಂಶಿಯ ಆತ್ಮವಿಶ್ವಾಸದ ಹೇಳಿಕೆ..!&lt;/strong&gt;&lt;/p&gt;&lt;p&gt;ಭಾರತದ ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ತಮ್ಮ ನಿರ್ಭೀತ ಆಟ ಮತ್ತು ಆತ್ಮವಿಶ್ವಾಸದಿಂದ ಈಗಾಗಲೇ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚಿನ ಸಂವಾದದಲ್ಲಿ, ಐಪಿಎಲ್&zwnj;ನಲ್ಲಿ ತಮಗೆ ಭಯ ಹುಟ್ಟಿಸುವ ಬೌಲರ್ ಯಾರೂ ಇಲ್ಲ ಎಂದು ಅವರು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;'ಸದ್ಯಕ್ಕೆ ಅಂತಹ ಬೌಲರ್ ಯಾರೂ ಇಲ್ಲ'&lt;/strong&gt;&lt;/p&gt;&lt;p&gt;ರಾಜಸ್ಥಾನ್ ರಾಯಲ್ಸ್ ಆಯೋಜಿಸಿದ್ದ ಸಂವಾದದಲ್ಲಿ ವೈಭವ್ ಅವರನ್ನು, &quot;ಯಾವ ಬೌಲರ್ ಎದುರಿಸಲು ಇಷ್ಟಪಡುವುದಿಲ್ಲ?&quot; ಎಂದು ಕೇಳಿದಾಗ ಅವರು, &quot;ಸದ್ಯಕ್ಕೆ ಅಂತಹ ಬೌಲರ್ ಯಾರೂ ಇಲ್ಲ&quot; ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು. ಈ ಹೇಳಿಕೆ ಯುವ ಆಟಗಾರನ ಆತ್ಮಸ್ಥೈರ್ಯವನ್ನು ತೋರಿಸಿದರೆ, ಕೆಲವರು ಇದನ್ನು ಅವರ ನಿರ್ಭೀತ ಮನೋಭಾವದ ಪ್ರತಿಬಿಂಬವೆಂದೂ ವಿಶ್ಲೇಷಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಶ್ವದ ಶ್ರೇಷ್ಠ ಬೌಲರ್&zwnj;ಗಳನ್ನೂ ಎದುರಿಸಿದ ಅನುಭವ..!&lt;/strong&gt;&lt;/p&gt;&lt;p&gt;ಐಪಿಎಲ್&zwnj;ನಲ್ಲಿ ವೈಭವ್ ಈಗಾಗಲೇ ಹಲವು ಖ್ಯಾತ ವೇಗಿಗಳು ಮತ್ತು ವಿಶ್ವಮಟ್ಟದ ಬೌಲರ್&zwnj;ಗಳ ವಿರುದ್ಧ ಬ್ಯಾಟಿಂಗ್ ಮಾಡಿದ್ದಾರೆ. ಅವರ ಆಕ್ರಮಣಕಾರಿ ಶೈಲಿ, ವೇಗದ ರನ್&zwnj;ಗಳಿಸುವ ಸಾಮರ್ಥ್ಯ ಹಾಗೂ ಒತ್ತಡದ ಸಂದರ್ಭದಲ್ಲೂ ದೊಡ್ಡ ಹೊಡೆತಗಳನ್ನು ಆಡಬಲ್ಲ ಕೌಶಲ್ಯ ಅವರನ್ನು ವಿಭಿನ್ನ ಆಟಗಾರನನ್ನಾಗಿ ಗುರುತಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;From Vaibhav being starstruck the first time he met Ravindra Jadeja to the two becoming best friends in Pink. Only the IPL could write this story  pic.twitter.com/7CA4Ze96sG&lt;/p&gt;&lt;p&gt;&mdash; Rajasthan Royals (@rajasthanroyals) July 29, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಜಡೇಜಾ ಆಯ್ಕೆ ಮಾಡಿದ ಕಠಿಣ ಬೌಲರ್..!&lt;/strong&gt;&lt;/p&gt;&lt;p&gt;ಅದೇ ಸಂವಾದದಲ್ಲಿ ಹಿರಿಯ ಆಲ್&zwnj;ರೌಂಡರ್ ರವೀಂದ್ರ ಜಡೇಜಾ ಅವರನ್ನು ಇದೇ ಪ್ರಶ್ನೆ ಕೇಳಿದಾಗ, ಅವರು ಇಂಗ್ಲೆಂಡ್&zwnj;ನ ವೇಗಿ ಜೋಫ್ರಾ ಆರ್ಚರ್ ಹೆಸರನ್ನು ಉಲ್ಲೇಖಿಸಿದರು. &quot;ಅವರು ನಮ್ಮ ತಂಡದಲ್ಲಿರುವುದು ಒಳ್ಳೆಯದು&quot; ಎಂದು ಜಡೇಜಾ ಹೇಳಿದ್ದು, ಆರ್ಚರ್ ಅವರ ವೇಗ ಮತ್ತು ನಿಖರತೆಯ ಬಗ್ಗೆ ಗೌರವವನ್ನು ವ್ಯಕ್ತಪಡಿಸಿತು.&lt;/p&gt;&lt;p&gt;&lt;strong&gt;ಯುವ ಆಟಗಾರನ ಮೇಲೆ ಹೆಚ್ಚಿದ ನಿರೀಕ್ಷೆ!&lt;/strong&gt;&lt;/p&gt;&lt;p&gt;ವೈಭವ್ ಸೂರ್ಯವಂಶಿಯ ನಿರಂತರ ಪ್ರದರ್ಶನ ಮತ್ತು ಆತ್ಮವಿಶ್ವಾಸದ ಮಾತುಗಳು ಅವರನ್ನು ಭಾರತದ ಭವಿಷ್ಯದ ಪ್ರಮುಖ ಬ್ಯಾಟರ್&zwnj;ಗಳಲ್ಲಿ ಒಬ್ಬರನ್ನಾಗಿ ಪರಿಗಣಿಸುವಂತೆ ಮಾಡಿವೆ. ಆದರೆ ಪ್ರತಿಭೆಯ ಜೊತೆಗೆ ನಿರಂತರ ಪ್ರದರ್ಶನ ಮತ್ತು ಸ್ಥಿರತೆ ಕೂಡ ಮುಖ್ಯ. ಮುಂದಿನ ಪಂದ್ಯಗಳಲ್ಲಿ ಅವರು ತಮ್ಮ ಮಾತಿಗೆ ತಕ್ಕ ಆಟವನ್ನು ಪ್ರದರ್ಶಿಸುತ್ತಾರೆಯೇ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;&lt;strong&gt;ಆತ್ಮವಿಶ್ವಾಸದ ಜೊತೆಗೆ ಸ್ಥಿರ ಪ್ರದರ್ಶನವೂ ಮುಖ್ಯ!&lt;/strong&gt;&lt;/p&gt;&lt;p&gt;ಕ್ರಿಕೆಟ್&zwnj;ನಲ್ಲಿ ಆತ್ಮವಿಶ್ವಾಸವು ಯಶಸ್ಸಿನ ಪ್ರಮುಖ ಅಂಶವಾಗಿದ್ದರೂ, ಅದನ್ನು ನಿರಂತರ ಪ್ರದರ್ಶನದ ಮೂಲಕ ಸಾಬೀತುಪಡಿಸುವುದು ಇನ್ನಷ್ಟು ಮಹತ್ವದ್ದಾಗಿದೆ. ವೈಭವ್ ಸೂರ್ಯವಂಶಿ ಈಗಾಗಲೇ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್&zwnj;ನಿಂದ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಆದರೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಮಟ್ಟದಲ್ಲಿ ದೀರ್ಘಕಾಲ ಯಶಸ್ಸು ಸಾಧಿಸಲು ವಿಭಿನ್ನ ಪಿಚ್&zwnj;ಗಳು, ಗುಣಮಟ್ಟದ ಬೌಲಿಂಗ್ ದಾಳಿ ಮತ್ತು ಒತ್ತಡದ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅಗತ್ಯ. ಇದೇ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದರೆ, ಅವರು ಭಾರತದ ಮುಂದಿನ ತಲೆಮಾರಿನ ಪ್ರಮುಖ ಬ್ಯಾಟರ್&zwnj;ಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/vaibhav-suryavanshi-says-no-ipl-bowler-troubles-him-jadeja-picks-his-toughest-rival/articleshow-cqg0g74"/>
        </item>
        <item>
            <title><![CDATA[ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಔಟ್; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/ajinkya-rahane-announces-shock-retirement-after-missing-sri-lanka-test-squad-kvn/articleshow-5oqn6dr</link>
            <guid isPermaLink="true">https://kannada.asianetnews.com/cricket-sports/ajinkya-rahane-announces-shock-retirement-after-missing-sri-lanka-test-squad-kvn/articleshow-5oqn6dr</guid>
            <pubDate>Thu, 30 Jul 2026 11:18:50 +0530</pubDate>
            <description><![CDATA[ಟೀಂ ಇಂಡಿಯಾದ ಮಾಜಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 2020-21ರ ಆಸ್ಟ್ರೇಲಿಯಾ ಸರಣಿ ಗೆಲುವಿನ ನಾಯಕರಾಗಿದ್ದ ರಹಾನೆ, ಆಯ್ಕೆ ಸಮಿತಿಯಿಂದ ನಿರಂತರ ಕಡೆಗಣನೆಗೆ ಒಳಗಾದ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ew02g2krnrpypv5ymn8n836v,imgname-gettyimages-1295743060-594x594-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಟೀಂ ಇಂಡಿಯಾ ಮಾಜಿ ಹಂಗಾಮಿ ನಾಯಕ, ದಿಗ್ಗಜ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದ ಅಜಿಂಕ್ಯ ರಹಾನೆ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ. ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಭಾರತ ತಂಡವು 2020-21ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಗೆದ್ದು ಬೀಗಿತ್ತು. ಇದೀಗ ಪದೇ ಪದೇ ಆಯ್ಕೆ ಸಮಿತಿಯಿಂದ ಕಡೆಗಣನೆಗೆ ಒಳಗಾಗಿದ್ದ ರಹಾನೆ, ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದಾರೆ.&lt;/p&gt;&lt;p&gt;ಭಾರತ ಪರ 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನಾಡಿ 8,000ಕ್ಕೂ ಅಧಿಕ ರನ್ ಬಾರಿಸಿರುವ ಅಜಿಂಕ್ಯ ರಹಾನೆ, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲ್ಯದ ಮೂಲಕ ಗಮನ ಸೆಳೆದಿದ್ದರು. ಅಜಿಂಕ್ಯ ರಹಾನೆ 2023ರಲ್ಲಿ ಕೊನೆಯ ಬಾರಿಗೆ ವೆಸ್ಟ್ ಇಂಡೀಸ್ ಎದುರು ಟೆಸ್ಟ್&zwnj; ಪಂದ್ಯವನ್ನಾಡಿದ್ದರು. ಇನ್ನು ಏಕದಿನ ಮಾದರಿಯಲ್ಲಿ ರಹಾನೆ 2018ರಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ವಿರುದ್ದ 2016ರಲ್ಲಿ ಕೊನೆಯ ಬಾರಿಗೆ ಭಾರತ ಟಿ20 ತಂಡದಲ್ಲಿ ಅಜಿಂಕ್ಯ ರಹಾನೆ ಸ್ಥಾನ ಪಡೆದಿದ್ದರು.&lt;/p&gt;&lt;p&gt;'ಕ್ಯಾಪ್ 278 ವಿದಾಯ ಹೇಳುತ್ತಿದೆ. ಇಷ್ಟು ವರ್ಷಗಳ ಕಾಲ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಸದಾ ಕೃತಜ್ಞನಾಗಿರುತ್ತೇನೆ' ಎಂದು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ ಮೂಲದ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Ajinkya Rahane (@ajinkyarahane)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h2&gt;&lt;strong&gt;2013ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ:&lt;/strong&gt;&lt;/h2&gt;&lt;p&gt;ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂತಹ ದಿಗ್ಗಜರ ಯುಗಾಂತ್ಯದ ಬಳಿಕ ಅಜಿಂಕ್ಯ ರಹಾನೆ 2013ರಲ್ಲಿ ಭಾರತ ಟೆಸ್ಟ್&zwnj; ತಂಡಕ್ಕೆ ಪಾದಾರ್ಪಣೆ ಮಾಡಿದರು. ಭಾರತ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ತಂಭವಾಗಿ ಗುರುತಿಸಿಕೊಂಡಿದ್ದ ರಹಾನೆ, 38.46ರ ಬ್ಯಾಟಿಂಗ್ ಸರಾಸರಿಯಲ್ಲಿ 5077 ರನ್ ಸಿಡಿಸಿದ್ದಾರೆ. ಇದರಲ್ಲಿ 12 ಶತಕಗಳು ಸೇರಿವೆ.&lt;/p&gt;&lt;h3&gt;&lt;strong&gt;ಭಾರತ ಪರ ಕಮ್&zwnj;ಬ್ಯಾಕ್ ಮಾಡುವ ಕನಸು ಕಂಡಿದ್ದ ರಹಾನೆ:&lt;/strong&gt;&lt;/h3&gt;&lt;p&gt;2023ರ ಬಳಿಕ ದೇಶಿ ಕ್ರಿಕೆಟ್&zwnj;ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಅಜಿಂಕ್ಯ ರಹಾನೆ ಟೀಂ ಇಂಡಿಯಾಗೆ ಕಮ್&zwnj;ಬ್ಯಾಕ್ ಮಾಡುವ ಕನಸು ಕಂಡಿದ್ದರು. ಹಲವಾರು ಸಂದರ್ಶನಗಳಲ್ಲೂ ರಹಾನೆ, ಮತ್ತೆ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಆಯ್ಕೆ ಸಮಿತಿಯು ಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದಾಗ ಅಲ್ಲಿ ರಹಾನೆ ಹೆಸರಿರಲಿಲ್ಲ. ಯುವ ಆಟಗಾರರಿಗೆ ಬಿಸಿಸಿಐ ಆಯ್ಕೆ ಸಮಿತಿ ಹೆಚ್ಚು ಒಲವು ತೋರುತ್ತಿರುವುದರಿಂದ, ರಹಾನೆಗೆ ಅವಕಾಶ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲೇ ಮುಂಬೈ ಮೂಲದ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿದ್ದಾರೆ.&lt;/p&gt;&lt;h3&gt;&lt;strong&gt;ಕೆಕೆಆರ್ ತಂಡದ ನಾಯಕತ್ವಕ್ಕೂ ರಹಾನೆ ಗುಡ್&zwnj; ಬೈ:&lt;/strong&gt;&lt;/h3&gt;&lt;p&gt;ಇನ್ನು ಕಳೆದೆರಡು ಸೀಸನ್ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದರು. ಆದರೆ ರಹಾನೆ ನಾಯಕತ್ವದಲ್ಲಿ ಕೆಕೆಆರ್ ತಂಡವು ಒಮ್ಮೆಯೂ ಪ್ಲೇ ಆಫ್&zwnj;ಗೆ ಅರ್ಹತೆ ಪಡೆಯಲು ಸಾಧ್ಯವಾಗಿರಲಿಲ್ಲ. ಎರಡು ಬಾರಿಯೂ ಕೆಕೆಆರ್ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ರಹಾನೆ ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ajinkya-rahane-announces-shock-retirement-after-missing-sri-lanka-test-squad-kvn/articleshow-5oqn6dr"/>
        </item>
        <item>
            <title><![CDATA[Vaibhav Sooryavanshi: 3 ಪಂದ್ಯ, 2 ಫಿಫ್ಟಿ, 151 ರನ್!: ಜಿಂಬಾಬ್ವೆಯಲ್ಲಿ ಕೇವಲ 4 ದಿನದಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ ಹಣವೆಷ್ಟು ಗೊತ್ತಾ?]]></title>
            <link>https://kannada.asianetnews.com/cricket-sports/vaibhav-suryavanshi-zimbabwe-earnings-151-runs-4-days-bmk/articleshow-y32gkhn</link>
            <guid isPermaLink="true">https://kannada.asianetnews.com/cricket-sports/vaibhav-suryavanshi-zimbabwe-earnings-151-runs-4-days-bmk/articleshow-y32gkhn</guid>
            <pubDate>Wed, 29 Jul 2026 21:02:43 +0530</pubDate>
            <description><![CDATA[&lt;p&gt;ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 151 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ನಾಲ್ಕು ದಿನಗಳ ಪ್ರವಾಸದಲ್ಲಿ ಪಂದ್ಯ ಶುಲ್ಕ ಮತ್ತು ಬಹುಮಾನದ ಹಣ ಸೇರಿ ಅವರು ಒಟ್ಟಾರೆ ಸಂಪಾದಿಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kybwe5345akp4t5mhb9v4kwa,imgname-vaibhav-suryavanshi-all-rounder-plan-1784957834340.gif" type="image/jpeg" height="390" width="690"/>
            <content:encoded><![CDATA[&lt;p&gt;ಕೇವಲ 15ರ ಹರೆಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿ ಇತಿಹಾಸ ಬರೆದ ಭಾರತದ ಯುವ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ, ಕ್ರಿಕೆಟ್ ಅಂಗಳದಲ್ಲಿ ತಮ್ಮ ಸಂಚಲನವನ್ನು ಮುಂದುವರಿಸಿದ್ದಾರೆ. ಐರ್ಲೆಂಡ್ ಪ್ರವಾಸದಲ್ಲಿ ಬೆಂಚ್ ಕಾಯಿಸಿದ್ದ ವೈಭವ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ, ಜಿಂಬಾಬ್ವೆ ಪ್ರವಾಸದಲ್ಲಿ ಆ ಎಲ್ಲಾ ವೈಫಲ್ಯಗಳನ್ನು ಭರ್ಜರಿಯಾಗಿ ಮೆಟ್ಟಿ ನಿಂತಿದ್ದಾರೆ.&lt;/p&gt;&lt;h2&gt;&lt;strong&gt;ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸೂರ್ಯವಂಶಿ!&lt;/strong&gt;&lt;/h2&gt;&lt;p&gt;ಜಿಂಬಾಬ್ವೆ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ವೈಭವ್ ಬ್ಯಾಟ್&zwnj;ನಿಂದ ರನ್ ಹೊಳೆ ಹರಿಯಿತು. ಮೊದಲ ಪಂದ್ಯದಲ್ಲಿ ಕೇವಲ 19 ಎಸೆತಗಳಲ್ಲಿ ಭರ್ಜರಿ 50 ರನ್ ಬಾರಿಸಿದ ಅವರು, ಎರಡನೇ ಪಂದ್ಯದಲ್ಲಿ 9 ಎಸೆತಗಳಲ್ಲಿ ಚುರುಕಾದ 20 ರನ್ ಗಳಿಸಿದರು. ಇನ್ನು ಮೂರನೇ ಪಂದ್ಯದಲ್ಲಂತೂ 49 ಎಸೆತಗಳಲ್ಲಿ ಭರ್ಜರಿ 81 ರನ್ ಚಚ್ಚಿದರು. ಒಟ್ಟಾರೆಯಾಗಿ ಈ ಸರಣಿಯ ಮೂರು ಪಂದ್ಯಗಳಲ್ಲಿ 50.33 ರ ಸರಾಸರಿ ಹಾಗೂ 180 ರ ಪ್ರಚಂಡ ಸ್ಟ್ರೈಕ್ ರೇಟ್&zwnj;ನಲ್ಲಿ 151 ರನ್ ಕಲೆಹಾಕಿದ ವೈಭವ್, ಮೂರನೇ ಪಂದ್ಯದ 'ಪಂದ್ಯಶ್ರೇಷ್ಠ' ಹಾಗೂ ಇಡೀ ಸರಣಿಯ 'ಸರಣಿಶ್ರೇಷ್ಠ' ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.&lt;/p&gt;&lt;h3&gt;&lt;strong&gt;4 ದಿನದ ಸರಣಿಯಲ್ಲಿ ಬಂತು ಭಾರೀ ಬಹುಮಾನ!&lt;/strong&gt;&lt;/h3&gt;&lt;p&gt;ಕೇವಲ ನಾಲ್ಕು ದಿನಗಳ ಕಾಲ ನಡೆದ ಈ ಸರಣಿಯಲ್ಲಿ ವೈಭವ್ ರನ್ ಅಷ್ಟೇ ಅಲ್ಲದೆ ಭಾರಿ ಮೊತ್ತದ ಬಹುಮಾನವನ್ನೂ ತಮ್ಮ ಜೇಬಿಗಿಳಿಸಿಕೊಂಡಿದ್ದಾರೆ. ಮೂರನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಾಗಿ 1 ಸಾವಿರ ಡಾಲರ್ ಅಂದರೆ ಸುಮಾರು 83,500 ರೂಪಾಯಿಗಳನ್ನು ಪಡೆದಿದ್ದರೆ, ಸರಣಿಶ್ರೇಷ್ಠ ಪ್ರಶಸ್ತಿಗೆ 2 ಸಾವಿರ ಡಾಲರ್ ಅಂದರೆ ಸುಮಾರು 1.67 ಲಕ್ಷ ರೂಪಾಯಿಗಳನ್ನು ತಮ್ಮದಾಗಿಸಿಕೊಂಡರು. ಇದರ ಜೊತೆಗೆ ಅಂತರರಾಷ್ಟ್ರೀಯ ಟಿ20 ಪಂದ್ಯಕ್ಕೆ ಬಿಸಿಸಿಐ ನೀಡುವ 3 ಲಕ್ಷ ರೂಪಾಯಿ ಪಂದ್ಯ ಶುಲ್ಕದಂತೆ, ಮೂರು ಪಂದ್ಯಗಳಿಗೆ ಒಟ್ಟು 9 ಲಕ್ಷ ರೂಪಾಯಿ ಪಡೆದಿದ್ದಾರೆ. ಹೀಗಾಗಿ ಜಿಂಬಾಬ್ವೆಯ ಕೇವಲ ನಾಲ್ಕು ದಿನಗಳ ಪ್ರವಾಸದಿಂದ ವೈಭವ್ ಸೂರ್ಯವಂಶಿ ಒಟ್ಟಾರೆಯಾಗಿ 11.87 ಲಕ್ಷಕ್ಕೂ ಅಧಿಕ ಹಣವನ್ನು ಗಳಿಸಿದಂತಾಗಿದೆ.&lt;/p&gt;&lt;h3&gt;&lt;strong&gt;ಐಪಿಎಲ್&zwnj;ನಲ್ಲೂ ಅಭೂತಪೂರ್ವ ಯಶಸ್ಸು!&lt;/strong&gt;&lt;/h3&gt;&lt;p&gt;ಜಿಂಬಾಬ್ವೆ ಸರಣಿಗೂ ಮುನ್ನ ನಡೆದ 2026ರ ಐಪಿಎಲ್ ಋತುವಿನಲ್ಲೂ ವೈಭವ್ ಅಭೂತಪೂರ್ವ ಯಶಸ್ಸು ಕಂಡಿದ್ದರು. ಆರೆಂಜ್ ಕ್ಯಾಪ್, ಉದಯೋನ್ಮುಖ ಆಟಗಾರ, ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಅತ್ಯಂತ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಸೇರಿದಂತೆ ಐದು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಐಪಿಎಲ್ ಹರಾಜಿನಲ್ಲಿ 1.10 ಕೋಟಿ ರೂಪಾಯಿ ಬೆಲೆ ಪಡೆದಿದ್ದ ಇವರು, 1.12 ಕೋಟಿ ರೂಪಾಯಿ ಪಂದ್ಯ ಶುಲ್ಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 55 ಲಕ್ಷ ರೂಪಾಯಿ ಬಹುಮಾನದ ಜೊತೆಗೆ ಒಂದು ಹೊಸ ಕಾರನ್ನೂ ಪಡೆದಿದ್ದರು. ಈ ಮೂಲಕ ಐಪಿಎಲ್ ಒಂದರಲ್ಲೇ ಅವರು ಒಟ್ಟು 2.77 ಕೋಟಿ ರೂಪಾಯಿ ಸಂಪಾದಿಸಿ ಎಲ್ಲರ ಹುಬ್ಬೇರಿಸಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/vaibhav-suryavanshi-zimbabwe-earnings-151-runs-4-days-bmk/articleshow-y32gkhn"/>
        </item>
        <item>
            <title><![CDATA[Vaibhav Sooryavanshi: ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾದ ವೈಭವ್; ಟೀಮ್ ಇಂಡಿಯಾದ ಯುವ ಪ್ರತಿಭೆಗೆ ಉಪನಾಯಕನ ಪಟ್ಟ!]]></title>
            <link>https://kannada.asianetnews.com/gallery/cricket-sports/vaibhav-team-india-vice-captain-milestone-bmk-fdh8rcg</link>
            <guid isPermaLink="true">https://kannada.asianetnews.com/gallery/cricket-sports/vaibhav-team-india-vice-captain-milestone-bmk-fdh8rcg</guid>
            <pubDate>Wed, 29 Jul 2026 20:10:31 +0530</pubDate>
            <description><![CDATA[&lt;p&gt;ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್&zwnj;ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky7qdrqtacczgwkqca2ry4sq,imgname-vaibhav-sooryavanshi-1784818361082.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಪನಾಯಕನಾಗಿ 15 ವರ್ಷದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಅಸಾಧಾರಣ ಬ್ಯಾಟಿಂಗ್ ಪ್ರದರ್ಶನ ಮತ್ತು ನಾಯಕತ್ವದ ಗುಣಗಳನ್ನು ಪರಿಗಣಿಸಿ ಆಯ್ಕೆ ಮಂಡಳಿ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಈ ಮೂಲಕ ದೇಶಿ ಕ್ರಿಕೆಟ್&zwnj;ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಈ ಜವಾಬ್ದಾರಿ ಪಡೆದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಭಾರತೀಯ ದೇಶಿ ಕ್ರಿಕೆಟ್ ಅಂಗಳದಲ್ಲಿ ಪ್ರತಿದಿನವೂ ನೂರಾರು ಪ್ರತಿಭೆಗಳು ಹುಟ್ಟಿಕೊಳ್ಳುತ್ತವೆ. ಆದರೆ, ಕೆಲವು ನಿರ್ಧಾರಗಳು ಇಡೀ ಕ್ರಿಕೆಟ್ ಲೋಕವೇ ತಿರುಗಿ ನೋಡುವಂತೆ ಮಾಡುತ್ತವೆ. ಮುಂಬರುವ ಪ್ರತಿಷ್ಠಿತ ದುಲೀಪ್ ಟ್ರೋಫಿ (Duleep Trophy) ಟೂರ್ನಿಗಾಗಿ ಪೂರ್ವ ವಲಯ (East Zone) ತನ್ನ ಹೊಸ ತಂಡವನ್ನು ಪ್ರಕಟಿಸಿದಾಗ, ಎಲ್ಲರ ಕಣ್ಣು ಬಿದ್ದದ್ದು ಆ ಒಂದು ಹೆಸರಿನ ಮೇಲೆ. ಹಲವು ಅನುಭವಿ ಆಟಗಾರರು, ರಣಜಿ ಆಡಿ ಪಳಗಿದ ದೈತ್ಯ ಕ್ರಿಕೆಟಿಗರು ಇರುವ ತಂಡದಲ್ಲಿ, ಕೇವಲ 15 ವರ್ಷದ ಹರೆಯದ ಬಾಲಕನೊಬ್ಬನಿಗೆ ತಂಡದ 'ಉಪನಾಯಕ' (Vice-Captain) ಎಂಬ ಮಹತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿತ್ತು! ಹೌದು, ಕಿರಿಯ ವಯಸ್ಸಿನಲ್ಲೇ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇಡೀ ಭಾರತೀಯ ಕ್ರಿಕೆಟ್&zwnj;ನಲ್ಲಿ ಸೌಂಡ್ ಮಾಡುತ್ತಿರುವ ಬಾಲಕ ವೈಭವ್ ಸೂರ್ಯವಂಶಿ ಅವರಿಗೆ ಆಯ್ಕೆ ಮಂಡಳಿ ಈ ಬಿಗ್ ಪ್ರಮೋಷನ್ ನೀಡಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ದುಲೀಪ್ ಟ್ರೋಫಿಯಂತಹ ಪ್ರಥಮ ದರ್ಜೆ ದೇಶಿ ಟೂರ್ನಿಗಳಲ್ಲಿ ನಾಯಕತ್ವ ಅಥವಾ ಉಪನಾಯಕತ್ವದ ಪಟ್ಟವನ್ನು ಅನುಭವಿಗಳಿಗೆ ನೀಡಲಾಗುತ್ತದೆ. ಆದರೆ, ವೈಭವ್ ಸೂರ್ಯವಂಶಿ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಅಸಾಧಾರಣ ಆಟ, ಅವರ ಕ್ರೀಡಾ ಮನೋಭಾವ ಮತ್ತು ಮೈದಾನದಲ್ಲಿನ ಮುಕ್ತ ನಿರ್ಧಾರಗಳು ಆಯ್ಕೆಗಾರರ ಮನಗೆದ್ದಿವೆ. ಕೇವಲ 15ರ ಹರೆಯದಲ್ಲೇ ಟಿ20 ಹಾಗೂ ದೇಶಿ ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಬೌಲರ್&zwnj;ಗಳನ್ನೇ ಬೆಂಡೆತ್ತಿದ ವೈಭವ್, ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲೂ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದು ತಮ್ಮ ಭವಿಷ್ಯದ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.&lt;/p&gt;&lt;img&gt;&lt;p&gt;ದೇಶಿ ಕ್ರಿಕೆಟ್&zwnj;ನ ಇತಿಹಾಸದಲ್ಲೇ ಇಷ್ಟು ಕಿರಿಯ ವಯಸ್ಸಿನಲ್ಲಿ ದುಲೀಪ್ ಟ್ರೋಫಿಯಂತಹ ದೊಡ್ಡ ಟೂರ್ನಿಗೆ ಉಪನಾಯಕನಾಗಿ ಆಯ್ಕೆಯಾದ ಅಪರೂಪದ ದಾಖಲೆ ವೈಭವ್ ಪಾಲಾಗಿದೆ. ಆಯ್ಕೆ ಮಂಡಳಿಯ ಈ ಅಚ್ಚರಿಯ ನಡೆಯು, &quot;ಭಾರತೀಯ ಕ್ರಿಕೆಟ್ ಕೇವಲ ಅನುಭವಕ್ಕೆ ಮಾತ್ರವಲ್ಲ, ಪ್ರಖರ ಪ್ರತಿಭೆ ಹಾಗೂ ನಾಯಕತ್ವದ ಗುಣಗಳಿಗೂ ಮಣೆ ಹಾಕುತ್ತದೆ&quot; ಎಂಬುದಕ್ಕೆ ಸಾಕ್ಷಿಯಾಗಿದೆ. ಉಪನಾಯಕನಾಗಿ ತಂಡವನ್ನು ಮುನ್ನಡೆಸುವ ಜತೆಗೆ, ಬ್ಯಾಟರ್ ಆಗಿ ಪೂರ್ವ ವಲಯಕ್ಕೆ ರನ್ ಹೊಳೆ ಹರಿಸುವ ದೊಡ್ಡ ಜವಾಬ್ದಾರಿ ಈಗ ಈ 15 ವರ್ಷದ ಯುವ ತಾರೆಯ ಹೆಗಲೇರಿದೆ. ವೈಭವ್ ಸೂರ್ಯವಂಶಿ ಅವರ ಈ ಅದ್ಭುತ ಬೆಳವಣಿಗೆಯನ್ನು ಕಂಡು ಕ್ರೀಡಾಪಂಡಿತರು ಹಾಗೂ ಅಭಿಮಾನಿಗಳು ಅಚ್ಚರಿಯ ಜತೆಗೆ ಹರ್ಷ ವ್ಯಕ್ತಪಡಿಸಿದ್ದು, ದುಲೀಪ್ ಟ್ರೋಫಿಯಲ್ಲಿ ಅವರ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಇಶಾನ್ ಕಿಶನ್ (ನಾಯಕ), ವೈಭವ್ ಸೂರ್ಯವಂಶಿ (ಉಪನಾಯಕ), ಅಭಿಮನ್ಯು ಈಶ್ವರನ್, ಕುಮಾರ್ ಕುಶಾಗ್ರಾ, ವಿರಾಟ್ ಸಿಂಗ್, ಅನುಕುಲ್ ರಾಯ್, ಸುದೀಪ್ ಘರಾಮಿ, ಶಿಖರ್ ಮೋಹನ್, ಸುಭ್ರಾಂಶು ಸೇನಾಪತಿ, ಅಭಿಜಿತ್ ಸರ್ಕಾರ್, ಡ್ಯಾನಿಶ್ ದಾಸ್, ಮುಹಮ್ಮದ್ ಸುಬಾಜ್ ವಾಲ್ ಮತ್ತು ಶಹಬಾಜ್ ವಾಲ್ ಶಮಿ,&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/vaibhav-team-india-vice-captain-milestone-bmk-fdh8rcg"/>
        </item>
        <item>
            <title><![CDATA[ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಗಾಯ; ಬೆಂಕಿಗೆ ತುಪ್ಪ ಸುರಿಯುವಂತೆ ಸವಾಲು ಹಾಕಿದ ಗ್ಲೆನ್ ಮೆಕ್‌ಗ್ರಾತ್!]]></title>
            <link>https://kannada.asianetnews.com/gallery/cricket-sports/jasprit-bumrah-injury-glenn-mcgrath-gives-crucial-advice-to-indian-pacer-over-career-longevity-38gx5xd</link>
            <guid isPermaLink="true">https://kannada.asianetnews.com/gallery/cricket-sports/jasprit-bumrah-injury-glenn-mcgrath-gives-crucial-advice-to-indian-pacer-over-career-longevity-38gx5xd</guid>
            <pubDate>Wed, 29 Jul 2026 20:05:07 +0530</pubDate>
            <description><![CDATA[&lt;p&gt;ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾರ ಗಾಯದ ಸಮಸ್ಯೆ ಮತ್ತೆ ಚರ್ಚೆಯಲ್ಲಿದೆ. ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ಬುಮ್ರಾ ದಾರಿ ಕಂಡುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ದಿಗ್ಗಜ ಗ್ಲೆನ್ ಮೆಕ್&zwnj;ಗ್ರಾತ್ ಸಲಹೆ ನೀಡಿದ್ದಾರೆ. ಟಿ-20, ಟೆಸ್ಟ್ ಬಗ್ಗೆ ಆಡುವುದಕ್ಕೆ ಸಲಹೆಯನ್ನೂ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq4qjt0tqs4bsdmyyvqvpq8,imgname-jasprit-bumrah-injury-glenn-mcgrath-advice-1785335630654.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾರ ಗಾಯದ ಸಮಸ್ಯೆ ಮತ್ತೆ ಚರ್ಚೆಯಲ್ಲಿದೆ. ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ಬುಮ್ರಾ ದಾರಿ ಕಂಡುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ದಿಗ್ಗಜ ಗ್ಲೆನ್ ಮೆಕ್&zwnj;ಗ್ರಾತ್ ಸಲಹೆ ನೀಡಿದ್ದಾರೆ. ಟಿ-20, ಟೆಸ್ಟ್ ಬಗ್ಗೆ ಆಡುವುದಕ್ಕೆ ಸಲಹೆಯನ್ನೂ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಮುಂಬೈ: ಟೀಂ&lt;/strong&gt; ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾರ ಗಾಯದ ಸಮಸ್ಯೆ ಮತ್ತೆ ತಂಡಕ್ಕೆ ತಲೆನೋವಾಗಿದೆ. ಶ್ರೀಲಂಕಾ ವಿರುದ್ಧದ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಬಿಸಿಸಿಐ ಬುಮ್ರಾರನ್ನು ಆಯ್ಕೆ ಮಾಡಿದೆ. ಆದರೆ, ಬಿಸಿಸಿಐನ 'ಸೆಂಟರ್ ಆಫ್ ಎಕ್ಸಲೆನ್ಸ್' ನಿಂದ ಫಿಟ್ನೆಸ್ ಕ್ಲಿಯರೆನ್ಸ್ ಸಿಕ್ಕರೆ ಮಾತ್ರ ಅವರು ಆಡುತ್ತಾರೆ. ಇಂಗ್ಲೆಂಡ್ ವಿರುದ್ಧದ ಕಳೆದ ಸರಣಿಯ ವೇಳೆ ಕಾರ್ಡಿಫ್&zwnj;ನಲ್ಲಿ ಬುಮ್ರಾರ ಮೊಣಕಾಲಿಗೆ ಗಾಯವಾಗಿತ್ತು.&lt;/p&gt;&lt;img&gt;&lt;p&gt;ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ತಮ್ಮ ವೃತ್ತಿಜೀವನವನ್ನು ದೀರ್ಘಕಾಲ ಮುಂದುವರಿಸಲು ದಾರಿ ಕಂಡುಕೊಳ್ಳಬೇಕು ಎಂದು ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್&zwnj;ಗ್ರಾತ್ ಹೇಳಿದ್ದಾರೆ. ಬುಮ್ರಾರ ದೇಹದ ರಚನೆ ಮತ್ತು ಗಾಯಗಳ ಬಗ್ಗೆ ಅವರು ಮಾತನಾಡಿದ್ದಾರೆ. &quot;ಬುಮ್ರಾಗೆ ಈಗ ವಯಸ್ಸು ಎಷ್ಟು? 31-32? ಆತ ಇನ್ನೂ ಯುವಕ. ಹಾಗಾಗಿ, ದೀರ್ಘಕಾಲ ಆಡಲು ಒಂದು ದಾರಿ ಕಂಡುಕೊಳ್ಳಲೇಬೇಕು. ದುರದೃಷ್ಟವಶಾತ್, ಅವರಿಗೆ ಕೆಲವು ಗಾಯಗಳಾಗಿವೆ. ಆದರೂ, ಆತ ವಿಶ್ವದರ್ಜೆಯ ಬೌಲರ್,&quot; ಎಂದು ಮೆಕ್&zwnj;ಗ್ರಾತ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಟೆಸ್ಟ್ ಕ್ರಿಕೆಟ್ ಮೇಲೆ ಗಮನ ಹರಿಸಬೇಕೋ ಅಥವಾ ಟಿ20 ಮಾತ್ರ ಆಡಬೇಕೋ ಎಂಬುದು ಬುಮ್ರಾರ ವೈಯಕ್ತಿಕ ನಿರ್ಧಾರ ಎಂದು ಮೆಕ್&zwnj;ಗ್ರಾತ್ ಸ್ಪಷ್ಟಪಡಿಸಿದ್ದಾರೆ. ಬೌಲಿಂಗ್ ಮಾಡುವಾಗ ಕೈಗಳನ್ನು ಹೆಚ್ಚು ಚಾಚುವುದರಿಂದ ಕೀಲುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಎಂದೂ ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ವೇಗಿಗಳಿಗೆ ಹೆಚ್ಚು ರಕ್ಷಣೆ ಬೇಡ ಎಂದ ಮೆಕ್&zwnj;ಗ್ರಾತ್&lt;/strong&gt;&lt;/p&gt;&lt;p&gt;ವೇಗದ ಬೌಲರ್&zwnj;ಗಳಿಗೆ ಅತಿಯಾದ ರಕ್ಷಣೆ ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದು ಮೆಕ್&zwnj;ಗ್ರಾತ್ ಖಡಾಖಂಡಿತವಾಗಿ ಹೇಳಿದ್ದಾರೆ. &quot;ಗಾಯಗಳು ವೇಗಿಗಳ ಕೆರಿಯರ್&zwnj;ನ ಒಂದು ಭಾಗ. ದೀರ್ಘಕಾಲ ವಿಶ್ರಾಂತಿ ಪಡೆಯುವ ಬದಲು, ಬೌಲರ್&zwnj;ಗಳು ಒತ್ತಡವನ್ನು ನಿಭಾಯಿಸುವಷ್ಟು ತಮ್ಮ ದೇಹವನ್ನು ಬಲಪಡಿಸಿಕೊಳ್ಳಬೇಕು,&quot; ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಿಂಗಳುಗಟ್ಟಲೆ ಆರೈಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಫಿಟ್ನೆಸ್ ಮತ್ತು ಶಕ್ತಿ ಕಡಿಮೆಯಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/jasprit-bumrah-injury-glenn-mcgrath-gives-crucial-advice-to-indian-pacer-over-career-longevity-38gx5xd"/>
        </item>
        <item>
            <title><![CDATA[Gambhir: ಟೀಮ್ ಇಂಡಿಯಾದಿಂದ ಆ ಹಿರಿಯ ಸ್ಟಾರ್‌ ಬೌಲರ್ ಔಟ್?: ಗಂಭೀರ್-ಅಗರ್‌ಕರ್ ಹೊಸ ಪ್ಲಾನ್ ಬೆನ್ನಲ್ಲೇ ಕಂಬ್ಯಾಕ್ ಕನಸು ನುಚ್ಚುನೂರು!]]></title>
            <link>https://kannada.asianetnews.com/gallery/cricket-sports/team-india-senior-bowler-shami-dropped-gambhir-agarkar-plan-bmk-d08w0qx</link>
            <guid isPermaLink="true">https://kannada.asianetnews.com/gallery/cricket-sports/team-india-senior-bowler-shami-dropped-gambhir-agarkar-plan-bmk-d08w0qx</guid>
            <pubDate>Wed, 29 Jul 2026 19:39:33 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟ್ ತಂಡದಲ್ಲಿ ಭವಿಷ್ಯದ ದೃಷ್ಟಿಯಿಂದ ಕೆಲ ಬದಲಾವಣೆಗಳಾಗುತ್ತಿದ್ದು, ಆಯ್ಕೆ ಸಮಿತಿ 15 ಯುವ ವೇಗಿಗಳ 'ಕೋರ್ ಗ್ರೂಪ್' ರಚಿಸಿದೆ. ಈ ಯೋಜನೆಯಲ್ಲಿ ಅನುಭವಿ ವೇಗಿಯೊಬ್ಬರಿಗೆ ಸ್ಥಾನವಿಲ್ಲದಿರುವುದು, ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2qfpqsfs6w2z5j8t7jmkz7,imgname-gettyimages-2223056716-1773913234168.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್ ತಂಡದಲ್ಲಿ ಭವಿಷ್ಯದ ದೃಷ್ಟಿಯಿಂದ ಕೆಲ ಬದಲಾವಣೆಗಳಾಗುತ್ತಿದ್ದು, ಆಯ್ಕೆ ಸಮಿತಿ 15 ಯುವ ವೇಗಿಗಳ 'ಕೋರ್ ಗ್ರೂಪ್' ರಚಿಸಿದೆ. ಈ ಯೋಜನೆಯಲ್ಲಿ ಅನುಭವಿ ವೇಗಿಯೊಬ್ಬರಿಗೆ ಸ್ಥಾನವಿಲ್ಲದಿರುವುದು, ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಅಂತ್ಯವನ್ನು ಸೂಚಿಸುತ್ತಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ಭಾರತೀಯ ಕ್ರಿಕೆಟ್ ತಂಡದಲ್ಲಿ ಇತ್ತೀಚಿನ ದಿನಗಳಲ್ಲಿ ಸೈಲೆಂಟ್ ಆಗಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ. ಮುಂಬರುವ ಸರಣಿಗಳಿಗೆ ಮತ್ತು ಮೆಗಾ ಟೂರ್ನಿಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭವಿಷ್ಯದ ದೃಷ್ಟಿಯಿಂದ ಹೊಸ ಹಾದಿ ತುಳಿಯುತ್ತಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಿದಾಗಲೂ ಈ ಪ್ರಮುಖ ಬದಲಾವಣೆಗಳು ಎದ್ದು ಕಾಣಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಭಾರತ ಕಂಡ ಶ್ರೇಷ್ಠ ಹಾಗೂ ಅಪಾಯಕಾರಿ ಅನುಭವಿ ವೇಗದ ಬೌಲರ್&zwnj; ಮೊಹಮ್ಮದ್ ಶಮಿ ಅವರ ಹೆಸರು ಮತ್ತೊಮ್ಮೆ ತಂಡದಲ್ಲಿ ಕಾಣಿಸದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ರಣಜಿ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ, ದೀರ್ಘ ಸ್ಪೆಲ್&zwnj;ಗಳನ್ನು ಎಸೆದು ಬರೋಬ್ಬರಿ 37 ವಿಕೆಟ್&zwnj;ಗಳನ್ನು ಕಬಳಿಸುವ ಮೂಲಕ ಶಮಿ ಅವರು ಕಂಬ್ಯಾಕ್ ಮಾಡಲು ಗಂಭೀರ ಶ್ರಮ ವಹಿಸಿದ್ದರು. ಆದರೆ, ಅವರ ಈ ಅತ್ಯುತ್ತಮ ಆಟವನ್ನು ಬದಿಗೊತ್ತಿ ಆಯ್ಕೆ ಮಂಡಳಿಯು ವಿಭಿನ್ನ ಹಾದಿಯನ್ನು ಆಯ್ದುಕೊಂಡಿದೆ.&lt;/p&gt;&lt;img&gt;&lt;p&gt;'ಸ್ಪೋರ್ಟ್ಸ್ ಸ್ಟಾರ್' ವರದಿಯ ಪ್ರಕಾರ, ಬಿಸಿಬಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ನೇತೃತ್ವದ ಆಯ್ಕೆ ಸಮಿತಿಯು ಮೂರೂ ಮಾದರಿಯ ಕ್ರಿಕೆಟ್&zwnj;ಗಾಗಿ 15 ಯುವ ವೇಗದ ಬೌಲರ್&zwnj;ಗಳ ಅತ್ಯಂತ ಬಲವಾದ 'ಕೋರ್ ಗ್ರೂಪ್' ಒಂದನ್ನು ಸಿದ್ಧಪಡಿಸಿದೆ. ಮುಂಬರುವ ದಿನಗಳಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ಹಾಗೂ 2027ರ ಏಕದಿನ ವಿಶ್ವಕಪ್ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯುವ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ವಿಶೇಷವೆಂದರೆ, ಆಯ್ಕೆ ಸಮಿತಿ ಸಿದ್ಧಪಡಿಸಿರುವ ಈ 15 ಆಟಗಾರರ ವಿಶೇಷ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಅವರ ಹೆಸರಿಲ್ಲ! ವಯಸ್ಸಾದ ಹಿರಿಯ ಆಟಗಾರರನ್ನು ಮತ್ತೆ ಮತ್ತೆ ತಂಡಕ್ಕೆ ಎಳೆದುಕೊಂಡು ಬರುವ ಬದಲು, ಯುವ ಆಟಗಾರರಿಗೆ ಈಗಿನಿಂದಲೇ ಅಂತರರಾಷ್ಟ್ರೀಯ ಪಂದ್ಯಗಳ ಅನುಭವ ನೀಡಿದರೆ, ದೊಡ್ಡ ಟೂರ್ನಿಗಳಲ್ಲಿ ಅವರು ಒತ್ತಡವಿಲ್ಲದೆ ಆಡಬಹುದು ಎಂಬುದು ಆಯ್ಕೆ ಮಂಡಳಿಯ ಮಾಸ್ಟರ್ ಪ್ಲಾನ್ ಆಗಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಜಸ್ಪ್ರೀತ್ ಬುಮ್ರಾ ಅವರು ಭಾರತದ ವೇಗದ ಬೌಲಿಂಗ್ ವಿಭಾಗದ ಮುಖ್ಯ ಬೆನ್ನೆಲುಬಾಗಿದ್ದಾರೆ. ಆದರೆ, ಅವರ ಗಾಯದ ಇತಿಹಾಸ ಮತ್ತು 'ವರ್ಕ್&zwnj;ಲೋಡ್ ಮ್ಯಾನೇಜ್&zwnj;ಮೆಂಟ್' (ಕೆಲಸದ ಒತ್ತಡ ನಿರ್ವಹಣೆ) ಕಾರಣದಿಂದಾಗಿ ಪ್ರತಿಯೊಂದು ಪಂದ್ಯ ಅಥವಾ ಸರಣಿಯಲ್ಲೂ ಅವರನ್ನು ಕಣಕ್ಕಿಳಿಸುವುದು ಅಪಾಯಕಾರಿ. ಹೀಗಾಗಿ, ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದಾಗ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿಯನ್ನು ಮೊಹಮ್ಮದ್ ಸಿರಾಜ್ ಅವರಿಗೆ ವಹಿಸಲು ಮಂಡಳಿ ನಿರ್ಧರಿಸಿದೆ.&lt;/p&gt;&lt;img&gt;&lt;p&gt;ತಂಡವು ಒಂದು ಪರಿವರ್ತನೆಯ ಹಂತದಲ್ಲಿರುವಾಗ, ಬುಮ್ರಾ ಅನುಪಸ್ಥಿತಿಯಲ್ಲಿ ಶಮಿ ಅವರಂತಹ ಅಪಾರ ಅನುಭವಿಯೊಬ್ಬರು ಯುವ ಆಟಗಾರರಿಗೆ ಮಾರ್ಗದರ್ಶನ ನೀಡಬಹುದಿತ್ತು ಎಂಬ ಅಭಿಪ್ರಾಯ ಕ್ರೀಡಾಪಟುಗಳಲ್ಲಿದೆ. ಆದರೆ, ಆಯ್ಕೆ ಸಮಿತಿಯ ಆಲೋಚನೆ ಸಂಪೂರ್ಣ ಭಿನ್ನವಾಗಿದೆ. &quot;ನಾವು ಮತ್ತೆ ಹಳೆಯ ಅನುಭವಿ ಆಟಗಾರರ ಕಡೆಗೆ ಮುಖ ಮಾಡಿದರೆ, ಭವಿಷ್ಯದ ಬದಲಾವಣೆಗಳು ಮತ್ತಷ್ಟು ತಡವಾಗುತ್ತವೆ. ನಾಳೆ ಮಾಡಬೇಕಾದ ಬದಲಾವಣೆಯನ್ನು ಇಂದೇ ಮಾಡಬೇಕು&quot; ಎಂಬ ಬಲವಾದ ನಂಬಿಕೆ ಅಗರ್ಕರ್ ಪಡೆಗಿದೆ.&lt;/p&gt;&lt;img&gt;&lt;p&gt;ಆಯ್ಕೆ ಮಂಡಳಿಯ ಈ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಮತ್ತು ದೂರದೃಷ್ಟಿಯ ಯೋಜನೆಯನ್ನು ಗಮನಿಸಿದರೆ, ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಸುದೀರ್ಘ ವೃತ್ತಿಜೀವನ ಬಹುತೇಕ ಮುಕ್ತಾಯಗೊಂಡಂತೆ ಭಾಸವಾಗುತ್ತಿದೆ. ಮುಂದೆ ಶಮಿ ಅವರಿಗೆ ಬ್ಲೂ ಜರ್ಸಿಯಲ್ಲಿ ಕಂಬ್ಯಾಕ್ ಮಾಡಲು ಅವಕಾಶ ಸಿಗುವುದು ಅತ್ಯಂತ ವಿರಳ ಎನ್ನಲಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/team-india-senior-bowler-shami-dropped-gambhir-agarkar-plan-bmk-d08w0qx"/>
        </item>
        <item>
            <title><![CDATA[ಮತ್ತೊಂದು ಥ್ಯಾಂಕ್ಯೂ ಹೇಳುವುದು ಬಾಕಿ ಇದೆ, ಕೈಮುಗಿದು ನಮಿಸಿ ಭಾವುಕರಾದ ಸಚಿನ್ ತೆಂಡೂಲ್ಕರ್]]></title>
            <link>https://kannada.asianetnews.com/cricket-sports/one-more-thank-you-is-still-due-sachin-tendulkar-pays-tribute-to-coach-ramakant-achrekar/articleshow-gglsunc</link>
            <guid isPermaLink="true">https://kannada.asianetnews.com/cricket-sports/one-more-thank-you-is-still-due-sachin-tendulkar-pays-tribute-to-coach-ramakant-achrekar/articleshow-gglsunc</guid>
            <pubDate>Wed, 29 Jul 2026 18:49:21 +0530</pubDate>
            <description><![CDATA[&lt;p&gt;ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. ಕೈಮುಗಿದು ನಮಿಸಿದ ಮಾಸ್ಟರ್ ಬ್ಲಾಸ್ಟರ್ ಎಷ್ಟು ವರ್ಷ ಕಳೆದರೂ ಮತ್ತೊಂದು ಧನ್ಯವಾದ ಹೇಳುವುದು ಬಾಕಿ ಇದ್ದೇ ಇರುತ್ತೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq0e0pxbkxr15j7pw672rs4,imgname-sachin-tendulkar-heartfelt-tribute-to-achrekar-1785331122909.png" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ (ಜು.29) ಭಾರತದಲ್ಲಿ ಕ್ರಿಕೆಟ್ ಪ್ರೀತಿ ಹೆಚ್ಚಿಸಿದ, ಯುವಕರಿಗೆ ಮಾದರಿಯಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾವುಕರಾಗಿದ್ದಾರೆ. ಕೈಮುಗಿದು ನಮನ ಸಲ್ಲಿಸಿದ ಸಚಿನ್ ತೆಂಡೂಲ್ಕರ್, ಅದೆಷ್ಟೇ ವರ್ಷ ಕಳೆದರೂ ಮತ್ತೊಂದು ಧನ್ಯವಾದ ಹೇಳಲು ಬಾಕಿ ಇದೆ ಎಂದು ಭಾಸವಾಗುತ್ತಿದೆ ಎಂದಿದ್ದಾರೆ. ಗುರುಪೂರ್ಣಿಮೆ ದಿನ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಕೋಚ್ ಹಾಗೂ ಇಡೀ ಕರಿಯರ್&zwnj;ನಲ್ಲಿ ಬೆನ್ನೆಲುಬಾಗಿ ನಿಂತಿದ್ದ ರಮಾಕಾಂತ್ ಅಚ್ರೇಕರ್ ಸರ್&zwnj;ಗೆ ಗೌರವ ನಮನ ಸಲ್ಲಿಸಿದ್ದಾರೆ.&lt;/p&gt;&lt;h2&gt;ಗುರು ರಮಾಕಾಂತ್ ಅಚ್ರೇಕರ್&zwnj;ಗೆ ನಮನ&lt;/h2&gt;&lt;p&gt;ಸಚಿನ್ ತೆಂಡೂಲ್ಕರ್ ಗುರುಪೂರ್ಣಿಮೆ ದಿನ ತನ್ನ ಗುರುಗಳ ನೆನೆದಿದ್ದಾರೆ. ಮುಂಬೈ ಶಿವಾಜಿ ಪಾರ್ಕ್&zwnj;ನಲ್ಲಿರುವ ಅಚ್ರೇಕರ್ ಸ್ಮಾರಕಕ್ಕೆ ಭೇಟಿ ನೀಡಿದ ಸಚಿನ್ ತೆಂಡೂಲ್ಕರ್ ಗೌರವ ನಮನ ಸಲ್ಲಿಸಿದ್ದಾರೆ. ಈ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ನಿಂತು ಕೈಮುಗಿದಾಗ ಭಾವುಕನಾಗುತ್ತೇನೆ. ಎಷ್ಟು ಕಾಲ ಉರುಳಿದರೂ, ಎಷ್ಟು ಸಮಯ ಕಳೆದರೂ ನಿಮ್ಮ ಮಾರ್ಗದರ್ಶನಕ್ಕೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನನ್ನ ಮೇಲೆ ಭರವಸೆ ಇಟ್ಟು ಕೈಹಿಡಿದು ಮುನ್ನಡೆಸಿದ ನಿಮಗೆ ಧನ್ಯವಾದಗಳು. ನಿಮಗೆ ಗುರುಪೂರ್ಣಿಮೆ ಶುಭಾಶಯಗಳು ಎಂದಿದ್ದಾರೆ&lt;/p&gt;&lt;p&gt;ರಮಾಕಾಂತ್ ಅಚ್ರೇಕರ್ 2019ರ ಜನವರಿಯಲ್ಲಿ ನಿಧರಾಗಿದ್ದಾರೆ. ನಿಧನ ಬಳಿಕ ಶಿವಾಜಿ ಪಾರ್ಕ್&zwnj;ನಲ್ಲಿ ಅಚ್ರೇಕರ್ ಸ್ಮಾರಕ ನಿರ್ಮಿಸಲಾಗಿದೆ. ಸಚಿನ್ ತೆಂಡೂಲ್ಕರ್ ಈಗಲೂ ತಮ್ಮ ಗುರಿನ ಆಶೀರ್ವಾದ ಪಡೆಯಲು ಈ ಪಾರ್ಕ್&zwnj;ಗೆ ತೆರಳುತ್ತಾರೆ. ಇಂದು ಗುರುಪೂರ್ಣಿಮೆಯ ವಿಶೇಷ ದಿನದಲ್ಲಿ ಗುರುವಿನ ಸ್ಮಾರಕಕ್ಕೆ ನಮನ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.&lt;/p&gt;&lt;p&gt;ಸಚಿನ್ ತೆಂಡೂಲ್ಕರ್ ಅನ್ನೋ ದೈತ್ಯ ಪ್ರತಿಭೆಯನ್ನು ಮೊದಲು ಗುರುತಿಸಿದ್ದು, ಪಳಗಿಸಿದ್ದು ಇದೇ ರಮಾಕಾಂತ್ ಅಚ್ರೇಕರ್. ಅಂತಾರಾಷ್ಟ್ರೀಯ ಮಟ್ಟದ ಬ್ಯಾಟ್ಸ್&zwnj;ಮನ್ ಆಗಿ ರೂಪಿಸಿ, ಶಿಸ್ತು, ತಾಳ್ಮೆ, ಸ್ಫೋಟಕ ಬ್ಯಾಟಿಂಗ್ ಸೇರಿದಂತೆ ಕ್ರಿಕೆಟ್&zwnj;ನ ಇಂಚಿಂಚು ಕಲಿಸಿಕೊಟ್ಟಿದ್ದು ರಮಾಕಾಂತ್ ಅಚ್ರೇಕರ್. ಇದೇ ರಮಾಕಾಂತ್ ಅಚ್ರೇಕರ್ ಶಿಷ್ಯರಲ್ಲಿ ಸಚಿನ್ ಮಾತ್ರವಲ್ಲ, ವಿನೋದ್ ಕಾಂಬ್ಳಿ, ಅಜಿಕ್ ಅಗರ್ಕರ್ ಸೇರಿದಂತೆ ಹಲವು ಪ್ರಮುಖರು ಇದ್ದಾರೆ.&lt;/p&gt;&lt;p&gt;1989ರಿಂದ 2013ರ ವರೆಗೆ ಸತತ 24 ವರ್ಷಗಳ ಕಾಲ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ ದೊರೆಯಾಗಿ ಮೆರೆದಿದ್ದಾರೆ. ಅಕ್ಷರಶಃ ವಿಶ್ವಕ್ರಿಕೆಟ್ ಆಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಶತಗಳ ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ಇದೀಗ ತಮ್ಮ ಗುರುವಿಗೆ ಗುರುಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/one-more-thank-you-is-still-due-sachin-tendulkar-pays-tribute-to-coach-ramakant-achrekar/articleshow-gglsunc"/>
        </item>
        <item>
            <title><![CDATA[Team India: ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು?  ಕಾರಣವೇನು?]]></title>
            <link>https://kannada.asianetnews.com/gallery/cricket-sports/rohit-sharma-virat-kohli-challenge-shubman-gill-icc-odi-rankings-bmk-71v5k5g</link>
            <guid isPermaLink="true">https://kannada.asianetnews.com/gallery/cricket-sports/rohit-sharma-virat-kohli-challenge-shubman-gill-icc-odi-rankings-bmk-71v5k5g</guid>
            <pubDate>Wed, 29 Jul 2026 17:48:28 +0530</pubDate>
            <description><![CDATA[&lt;p&gt;ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್&zwnj;ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gqhtsejnnkm7hhnh3jhydje9,imgname-ind-vs-nz24jan-1674562026068.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್&zwnj;ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುತ್ತಾ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಹಿರಿಯ ಆಟಗಾರರ ನಿವೃತ್ತಿಯ ಚರ್ಚೆಗಳು ಹೊಸದೇನಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಲ್ಲಿ ಸೋಲು ಕಂಡ ನಂತರ, ನಾಯಕ ರೋಹಿತ್ ಶರ್ಮಾ ಅವರ ನಿವೃತ್ತಿಯ ವದಂತಿಗಳು ಬಲವಾಗಿ ಕೇಳಿಬಂದಿದ್ದವು. ಲಾರ್ಡ್ಸ್&zwnj;ನಲ್ಲಿ ನಡೆದ ಮೂರನೇ ಏಕದಿನ ಪಂದ್ಯವೇ ರೋಹಿತ್ ಅವರಿಗೆ ಕೊನೆಯ ಪಂದ್ಯವಾಗಬಹುದು ಎಂದೇ ಕ್ರೀಡಾಲೋಕ ಭಾವಿಸಿತ್ತು. ಆದರೆ, ಆ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ ತಮ್ಮ ಮೇಲಿದ್ದ ಎಲ್ಲಾ ವದಂತಿಗಳಿಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ನಿವೃತ್ತಿಯ ಚರ್ಚೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (ರೋ-ಕೋ) ಜೋಡಿ, ಇದೀಗ ಏಕದಿನ ಕ್ರಿಕೆಟ್&zwnj;ನಲ್ಲಿ ಹೊಸ ಸಾಹಸಕ್ಕೆ ಕೈಹಾಕಿದೆ. ಈ ಹಿರಿಯ ಜೋಡಿಯ ಈ ಅಚ್ಚರಿಯ ನಡೆ ಈಗ 'ಆ ಹುಡುಗ'ನ ಸ್ಥಾನಕ್ಕೆ ಕುತ್ತು ತರುವಂತೆ ಭಾಸವಾಗುತ್ತಿದೆ.&lt;/p&gt;&lt;img&gt;&lt;p&gt;ಇತ್ತೀಚೆಗಷ್ಟೇ ಐಸಿಸಿ ಪ್ರಕಟಿಸಿದ ಏಕದಿನ ಶ್ರೇಯಾಂಕದಲ್ಲಿ ಶುಭಮನ್ ಗಿಲ್ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್&zwnj;ನ ಡ್ಯಾರಿಲ್ ಮಿಚೆಲ್&zwnj;ರನ್ನು ಹಿಂದಿಕ್ಕಿರುವ ಗಿಲ್, 801 ರೇಟಿಂಗ್ ಪಾಯಿಂಟ್ಸ್&zwnj;ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆದರೆ, ಈ ಸಂತಸದ ನಡುವೆಯೇ ಗಿಲ್ ಅವರಿಗೆ ತಮ್ಮ ತಂಡದ ಹಿರಿಯ ಆಟಗಾರರಿಂದಲೇ ದೊಡ್ಡ ಚಾಲೆಂಜ್ ಎದುರಾಗಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 767 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 758 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಮುಂದಿನ ಏಕದಿನ ಸರಣಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಈ ಸರಣಿಯಲ್ಲಿ ರೋಹಿತ್ ಮತ್ತು ವಿರಾಟ್ ತೋರುವ ಪ್ರದರ್ಶನವು ಗಿಲ್ ಅವರ ನಂಬರ್ ಒನ್ ಪಟ್ಟವನ್ನು ಕಸಿದುಕೊಳ್ಳುವ ಸಾಧ್ಯತೆಯಿದೆ. ರೇಟಿಂಗ್ ಪಾಯಿಂಟ್&zwnj;ಗಳ ವ್ಯತ್ಯಾಸ ತೀರ ಕಡಿಮೆಯಿರುವುದರಿಂದ, ಮುಂಬರುವ ಪಂದ್ಯಗಳಲ್ಲಿ 'ರೋ-ಕೋ' ಜಂಟಿ ಅಬ್ಬರ ಶುಭಮನ್ ಗಿಲ್ ಅವರನ್ನು ಎರಡನೇ ಅಥವಾ ಮೂರನೇ ಸ್ಥಾನಕ್ಕೆ ತಳ್ಳಿದರೂ ಅಚ್ಚರಿಯಿಲ್ಲ.&lt;/p&gt;&lt;img&gt;&lt;p&gt;ಇನ್ನೊಂದೆಡೆ, ಭಾರತೀಯ ಕ್ರಿಕೆಟ್&zwnj;ನ 15 ರ ಹರೆಯದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಟಿ20 ಕ್ರಿಕೆಟ್&zwnj;ನಲ್ಲಿ ದೊಡ್ಡ ಜಿಗಿತ ಕಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ 50.33 ಸರಾಸರಿಯಲ್ಲಿ 151 ರನ್ ಗಳಿಸಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ವೈಭವ್, ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರಿ ಬಡ್ತಿ ಪಡೆದು 48ನೇ ಸ್ಥಾನ ತಲುಪಿದ್ದಾರೆ.&lt;/p&gt;&lt;img&gt;&lt;p&gt;ಐಸಿಸಿ ಟಿ20 ಶ್ರೇಯಾಂಕದಲ್ಲಿ ಇಶಾನ್ ಕಿಶನ್ 910 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ತಿಲಕ್ ವರ್ಮಾ ಆರನೇ ಸ್ಥಾನಕ್ಕೆ ಮತ್ತು ಶ್ರೇಯಸ್ ಅಯ್ಯರ್ 24ನೇ ಸ್ಥಾನಕ್ಕೆ ಏರಿದ್ದಾರೆ. ಬೌಲಿಂಗ್&zwnj;ನಲ್ಲಿ ರವಿ ಬಿಷ್ಣೋಯ್ 41ನೇ ಸ್ಥಾನಕ್ಕೆ ಜಿಗಿದಿದ್ದರೆ, ವರುಣ್ ಚಕ್ರವರ್ತಿ ಗಾಯದ ಸಮಸ್ಯೆಯ ನಡುವೆಯೂ ಟಾಪ್-10ರಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಜಿಂಬಾಬ್ವೆ ಸರಣಿಯಲ್ಲಿ ಸತತ ವಿಫಲರಾದ ಅಭಿಷೇಕ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/cricket-sports/rohit-sharma-virat-kohli-challenge-shubman-gill-icc-odi-rankings-bmk-71v5k5g"/>
        </item>
        <item>
            <title><![CDATA[ICC ODI Rankings ಪ್ರಕಟ ಶುಭ್‌ಮನ್ ಗಿಲ್ ನಂ.1; ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/gallery/cricket-sports/shubman-gill-tops-icc-odi-rankings-again-here-is-where-virat-kohli-and-rohit-sharma-stand-kvn-gthw36e</link>
            <guid isPermaLink="true">https://kannada.asianetnews.com/gallery/cricket-sports/shubman-gill-tops-icc-odi-rankings-again-here-is-where-virat-kohli-and-rohit-sharma-stand-kvn-gthw36e</guid>
            <pubDate>Wed, 29 Jul 2026 17:16:25 +0530</pubDate>
            <description><![CDATA[&lt;p&gt;ದುಬೈ: ಐಸಿಸಿ ನೂತನ ಏಕದಿನ ರ್&zwj;ಯಾಂಕಿಂಗ್&zwnj; ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇನ್ನು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt61z8nwkt66dgz4dc40nssd,imgname-virat-kohli-rohit-sharma-1780467344060.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ: ಐಸಿಸಿ ನೂತನ ಏಕದಿನ ರ್&zwj;ಯಾಂಕಿಂಗ್&zwnj; ಪ್ರಕಟಗೊಂಡಿದೆ. ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇನ್ನು ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಎಷ್ಟನೇ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.&lt;/p&gt;&lt;p&gt;&lt;/p&gt;&lt;img&gt;&lt;p&gt;ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ಇದೀಗ ಮತ್ತೆ ಐಸಿಸಿ ಏಕದಿನ ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಬೆನ್ನಲ್ಲೇ ಗಿಲ್&zwnj; ಮತ್ತೆ ನಂ.1 ಸ್ಥಾನಕ್ಕೆರಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಶುಭ್&zwnj;ಮನ್ ಗಿಲ್ ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ರಮವಾಗಿ 80, 31 ಹಾಗೂ 77 ರನ್ ಚಚ್ಚಿದ್ದರು. ಈ ಮೂಲಕ ನ್ಯೂಜಿಲೆಂಡ್&zwnj;ನ ಡೇರಲ್ ಮಿಚೆಲ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಗಿಲ್ 801 ರೇಟಿಂಗ್ ಅಂಕಗಳನ್ನು ಹೊಂದಿದ್ದರೇ, ಡೇರಲ್ ಮಿಚೆಲ್ 794 ಅಂಕಗಳನ್ನು ಹೊಂದಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಇವೆಲ್ಲದರ ನಡುವೆ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಹೇಳಿ ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ರೋ-ಕೊ ಅಭಿಮಾನಿಗಳಿಗೂ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ, ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿ ಮಿಂಚಿದ್ದರು. ಸದ್ಯ 767 ರೇಟಿಂಗ್ ಅಂಕಗಳನ್ನು ಹೊಂದಿರುವ ವಿರಾಟ್ ಕೊಹ್ಲಿ, ಸದ್ಯ ಏಕದಿನ ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ಮೂರನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ, ಇಂಗ್ಲೆಂಡ್ ಎದುರಿನ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಂಕಾಗಿದ್ದ ಹಿಟ್&zwnj;ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಲಾರ್ಡ್ಸ್&zwnj;ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ಸದ್ಯ ರೋಹಿತ್ ಶರ್ಮಾ 758 ರೇಟಿಂಗ್ ಅಂಕ ಹೊಂದಿದ್ದು, ಏಕದಿನ ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ 2027ರ ಏಕದಿನ ವಿಶ್ವಕಪ್ ಟೂರ್ನಿಯ ಮೇಲೆ ಕಣ್ಣಿಟ್ಟಿರುವ ರೋ-ಕೊ ಜೋಡಿ ಏಕದಿನ ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ಟಾಪ್-5 ಪಟ್ಟಿಯೊಳಗೆ ಸ್ಥಾನ ಪಡೆದಿರುವುದು, ಏಕದಿನ ವಿಶ್ವಕಪ್ ಕನಸಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಮುಂಬರುವ ದಿನಗಳಲ್ಲಿ ರೋ-ಕೊ ಜೋಡಿ ಯಾವ ರೀತಿ ಪ್ರದರ್ಶನ ಮುಂದುವರೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/shubman-gill-tops-icc-odi-rankings-again-here-is-where-virat-kohli-and-rohit-sharma-stand-kvn-gthw36e"/>
        </item>
        <item>
            <title><![CDATA[ಇಬ್ಬರು ಕೋಚ್ ಟೀಂ ಇಂಡಿಯಾದಿಂದ ಹೊರನಡೆದ ಬೆನ್ನಲ್ಲೇ ಮೌನ ಮುರಿದ ಬಿಸಿಸಿಐ, ಏನಿದು ಕೋಲಾಹಲ?]]></title>
            <link>https://kannada.asianetnews.com/cricket-sports/bcci-breaks-silence-after-two-coaches-exit-team-india-here-what-happened/articleshow-7c50kna</link>
            <guid isPermaLink="true">https://kannada.asianetnews.com/cricket-sports/bcci-breaks-silence-after-two-coaches-exit-team-india-here-what-happened/articleshow-7c50kna</guid>
            <pubDate>Wed, 29 Jul 2026 17:06:43 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ ಕೋಚಿಂಗ್ ಸ್ಥಾನದಿಂದ ಇಬ್ಬರು ಹೊರನಡೆದಿದ್ದಾರೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. ಇತ್ತೀಚಿನ ಮನಸ್ತಾಪ, ಜಟಾಪಟಿಗಳ ನಡುವೆ ಈ ನಿರ್ಧಾರ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮೌನ ಮುರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxgae1grndny7b4sm0s7q3gf,imgname-assistant-coach-ryan-ten-doeschate-1784032986645.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.29) &lt;/strong&gt;ಸತತ ಸೋಲಿನಿಂದ ಕಂಗೆಟ್ಟಿದ್ದ ಟೀಂ ಇಂಡಿಯಾಗೆ ಜಿಂಬಾಬ್ವೆ ವಿರುದ್ದ ಸರಣಿ ರಿಲೀಫ್ ನೀಡಿದೆ. ಆದರೆ ಸಮಸ್ಯೆಗಳು, ಮನಸ್ತಾಪಗಳು, ಜಟಾಪಟಿಗಳು ಮುಂದುವರಿದಿದೆ. ವಿವಿಎಸ್ ಲಕ್ಷ್ಮಣ್ ಕೋಚಿಂಗ್&zwnj;ನಲ್ಲಿ ಭಾರತ ಗೆದ್ದಿದೆ, ಗೌತಮ್ ಗಂಭೀರ್ ಕೋಚಿಂಗ್&zwnj;ನಲ್ಲಿ ಸೋಲು ಕಾಣುತ್ತಿದೆ ಅನ್ನೋ ಚರ್ಚೆಗಳು ಶುರುವಾಗಿದೆ. ಗೌತಮ್ ಗಂಭೀರ್ ಕೋಚಿಂಗ್&zwnj; ವಿರುದ್ದ ಸೋಶಿಯಲ್ ಮೀಡಿಯಾಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ನಡುವೆ ಟೀಂ ಇಂಡಿಯಾ ಕೋಚಿಂಗ್&zwnj;ನಿಂದ ಇಬ್ಬರು ಹೊರನೆಡಿದಿದ್ದಾರೆ. ಅಸಿಸ್ಟೆಂಟ್ ಕೋಚ್ ರ್ಯಾನ್ ಟೆನ್&zwnj;ಡೊಶೆಟ್ ಹಾಗೂ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟೀಂ ಇಂಡಿಯಾ ತೊರೆದಿದ್ದಾರೆ. ಈ ಬೆಳವಣಿಗೆ ಭಾರಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಬಿಸಿಸಿಐ ಮೌನ ಮುರಿದಿದೆ.&lt;/p&gt;&lt;h2&gt;ಬಿಸಿಸಿಐ ಹೇಳಿದ್ದೇನು?&lt;/h2&gt;&lt;p&gt;ಇಬ್ಬರು ಕೋಚ್ ರಾಜೀನಾಮೆ ನೀಡಿ ತಂಡದಿಂದ ಹೊರ ನಡೆದಿದ್ದಾರೆ. ಜೊತೆಗೆ ಐಪಿಎಲ್ ಫ್ರಾಂಚೈಸಿ ಸೇರಿಕೊಂಡಿದ್ದಾರೆ. ತಂಡದೊಳಗಿನ ಮನಸ್ತಾಪ, ಕೋಚ್ ಜೊತೆಗಿನ ಜಟಾಪಟಿಗಳೇ ಕಾರಣ ಎಂಬ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿತ್ತು. ಈ ಬೆಳವಣಿಗೆಯಿಂದ ಬಿಸಿಸಿಐ ಸ್ಪಷ್ಟನೆ ನೀಡಿದೆ. ರ್ಯಾನ್ ಟೆನ್&zwnj;ಡೊಶೆಟ್ ಹಾಗೂ ಟಿ ದಿಲೀಪ್ ಕೋಚಿಂಗ್ ಅವಧಿ ಮುಗಿದಿದೆ. ಇಬ್ಬರು ರಾಜೀನಾಮೆ ನೀಡಿಲ್ಲ. ಅವಧಿ ಮತ್ತೆ ವಿಸ್ತರಣೆ ಮಾಡುವ ಉದ್ದೇಶಿ ಬಿಸಿಸಿಐಗೆ ಇರಲಿಲ್ಲ.ಅವಧಿ ಮುಗಿಯುತ್ತಿದ್ದಂತೆ ತೆರಳಿದ್ದಾರೆ. ರಾಜೀನಾಮೆ ನೀಡಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಸೋಲಿಗೆ ಕೋಚ್ ತಲೆದಂಡ ಮಾಡಲಾಗಿದೆ ಅನ್ನೋ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ, ಯಾರಿಂದಲೂ ರಾಜೀನಾಮೆ ಪಡೆಯಲಿಲ್ಲ. ಯಾರ ತಲೆದಂಡವೂ ಮಾಡಿಲ್ಲ. ಅವಧಿ ಮುಗಿದಿದೆ ಅಷ್ಟೇ. ಹೆಚ್ಚುವರಿ ಅವಧಿ ಮುಗಿದಿದೆ. ಹೊಸ ಕೋಚ್&zwnj;ಗಳ ನೇಮಕ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಹೇಳಿದೆ.&lt;/p&gt;&lt;h2&gt;ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್&lt;/h2&gt;&lt;p&gt;ಭಾರತ ತಂಡದ ಶ್ರೀಲಂಕಾ ಪ್ರವಾಸಕ್ಕೆ ಹೊಸ ಕೋಚ್ ನೇಮಕಗೊಳ್ಳಲಿದ್ದಾರೆ. ಈಗಗಾಲೆ ಕೆಲ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಟೀಂ ಇಂಡಿಯಾ ಮುಂದಿನ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಕೋಚ್ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಬಿಸಿಸಿಐ ಹೇಳಿದೆ.&lt;/p&gt;&lt;p&gt;ಗೌತಮ್ ಗಂಭೀರ್ ಆಪ್ತನಾಗಿರುವ ರ್ಯಾನ್ ಟೆನ್&zwnj;ಡೊಶೆಟ್ 2024ರಲ್ಲಿ ಕೆಕೆಆಕ್ ತಂಡದ ಕೋಚಿಂಗ್ ಜವಾಬ್ದಾರಿ ತೊರೆದು ಟೀಂ ಇಂಡಿಯಾ ಸೇರಿಕೊಂಡಿದ್ದರು. ಇದೀಗ ಟೀಂ ಇಂಡಿಯಾದಿಂದ ಅವಧಿ ಮುಗಿಸಿ ಹೊರಬಂದಿರುವ ರ್ಯಾನ್ ಟೆನ್&zwnj;ಡೊಶೆಟ್ ಕೆಕೆಆರ್ ಕೋಚಿಂಗ್ ಸೇರಿಕೊಂಡಿದ್ದಾರೆ. 2027ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಜೊತೆ ಕೆಲಸ ಮಾಡಲಿದ್ದಾರೆ.&lt;/p&gt;&lt;p&gt;ಜಿಂಬಾಬ್ವೆ ವಿರುದ್ದದ ಟಿ20 ಸರಣಿಗೆ ಗೌತಮ್ ಗಂಭೀರ್ ಸೇರಿದಂತೆ ಖಾಯಂ ಕೋಚ್ ಹಾಗೂ ಸ್ಟಾಫ್&zwnj;ಗಳಿಗೆ ವಿಶ್ರಾಂತಿ ನೀಡಲಾಗಿತ್ತು. ವಿವಿಎಸ್ ಲಕ್ಷ್ಮಣ್ ಪ್ರಧಾನ ಕೋಚ್ ಜವಾಬ್ದಾರಿ ವಹಿಸಿಕೊಂಡಿದ್ದರು. ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ 3 ಪಂದ್ಯಗಳನ್ನು ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿತ್ತು. ಇದಕ್ಕೂ ಮುನ್ನ ನಡೆದ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಟಿ20 ಹಾಗೂ ಏಕದಿನ ಎರಡರಲ್ಲೂ ಮುಗ್ಗರಿಸಿತ್ತು.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/bcci-breaks-silence-after-two-coaches-exit-team-india-here-what-happened/articleshow-7c50kna"/>
        </item>
        <item>
            <title><![CDATA[ODI ರ್‍ಯಾಂಕಿಂಗ್‌ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಶುಭ್‌ಮನ್ ಗಿಲ್! ಟಿ20ಯಲ್ಲಿ 230 ಸ್ಥಾನ ಜಿಗಿದ ವೈಭವ್ ಸೂರ್ಯವಂಶಿ]]></title>
            <link>https://kannada.asianetnews.com/cricket-sports/icc-odi-and-t20-rankings-shubman-gill-tops-odi-chart-vaibhav-sooryavanshi-climbs-230-spots-kvn/articleshow-kgaohqz</link>
            <guid isPermaLink="true">https://kannada.asianetnews.com/cricket-sports/icc-odi-and-t20-rankings-shubman-gill-tops-odi-chart-vaibhav-sooryavanshi-climbs-230-spots-kvn/articleshow-kgaohqz</guid>
            <pubDate>Wed, 29 Jul 2026 16:20:17 +0530</pubDate>
            <description><![CDATA[ನೂತನ ಐಸಿಸಿ ರ್&zwj;ಯಾಂಕಿಂಗ್&zwnj;ನಲ್ಲಿ, ಭಾರತದ ನಾಯಕ ಶುಭ್&zwnj;ಮನ್ ಗಿಲ್ ಏಕದಿನ ಬ್ಯಾಟಿಂಗ್&zwnj;ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಮಿಂಚಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಟಿ20 ರ್&zwj;ಯಾಂಕಿಂಗ್&zwnj;ನಲ್ಲಿ 230 ಸ್ಥಾನಗಳ ಭರ್ಜರಿ ಜಿಗಿತ ಕಂಡಿದ್ದಾರೆ. ತಿಲಕ್ ವರ್ಮಾ ಮತ್ತು ಶ್ರೇಯಸ್ ಅಯ್ಯರ್ ಕೂಡ ತಮ್ಮ ಶ್ರೇಯಾಂಕವನ್ನು ಸುಧಾರಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kypqp6nct9c7w7mxecnfw6ag,imgname-shubman-gill-vaibhav-sooryavanshi-1785321953963.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ: ಇತ್ತೀಚೆಗಷ್ಟೇ ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲೇ ನೂತನ ಐಸಿಸಿ ಏಕದಿನ ಹಾಗೂ ಟಿ20 ರ್&zwj;ಯಾಂಕಿಂಗ್&zwnj; ಪ್ರಕಟವಾಗಿದೆ. ಭಾರತ ಏಕದಿನ ತಂಡದ ನಾಯಕ ಶುಭ್&zwnj;ಮನ್ ಗಿಲ್ ಇದೀಗ ಏಕದಿನ ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಶುಭ್&zwnj;ಮನ್ ಗಿಲ್ 80, 31 ಹಾಗೂ 77 ರನ್ ಚಚ್ಚಿದ್ದರು. ಟೀಂ ಇಂಡಿಯಾ ಸರಣಿ ಸೋಲಿನ ಹೊರತಾಗಿಯೂ, ನಾಯಕ ಗಿಲ್ ನ್ಯೂಜಿಲೆಂಡ್ ಬ್ಯಾಟರ್ ಡೇರಲ್ ಮಿಚೆಲ್ ಹಿಂದಿಕ್ಕಿ ಇದೀಗ ನಂ.1 ಸ್ಥಾನಕ್ಕೇರಿದ್ದಾರೆ.&lt;/p&gt;&lt;p&gt;ಡೇರಲ್ ಮಿಚೆಲ್&zwnj; ವೆಸ್ಟ್ ಇಂಡೀಸ್ ಎದುರಿನ ಕೊನೆಯ ಏಕದಿನ ಪಂದ್ಯದಿಂದ ಹೊರಗುಳಿದ ಬೆನ್ನಲ್ಲೇ ಶುಭ್&zwnj;ಮನ್ ಗಿಲ್ ಏಕದಿನ ಬ್ಯಾಟಿಂಗ್ ರ್&zwj;ಯಾಂಕಿಂಗ್&zwnj;ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ಗಿಲ್ ಮೂರನೇ ಬಾರಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;h2&gt;&lt;strong&gt;230 ಸ್ಥಾನ ಜಿಗಿತ ಕಂಡ ವೈಭವ್ ಸೂರ್ಯವಂಶಿ:&lt;/strong&gt;&lt;/h2&gt;&lt;p&gt;ಇನ್ನು ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ನಿರಾಸೆ ಮೂಡಿಸಿದ್ದ 15 ವರ್ಷದ ವೈಭವ್ ಸೂರ್ಯವಂಶಿ, ಇದೀಗ ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಂಬಾಬ್ವೆ ಎದುರು ಮೊದಲ ಪಂದ್ಯದಲ್ಲಿ 50 ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಸ್ಪೋಟಕ 81 ರನ್ ಚಚ್ಚಿದ್ದ ವೈಭವ್ ಸೂರ್ಯವಂಶಿ ಬರೋಬ್ಬರಿ 230 ಸ್ಥಾನ ಜಿಗಿತ ಕಂಡು ಇದೀಗ 48ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಜಿಂಬಾಬ್ವೆ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದಕ್ಕೆ ವೈಭವ್ ಸೂರ್ಯವಂಶಿ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಜಿಂಬಾಬ್ವೆ ಎದುರಿನ ಟಿ20 ಸರಣಿಯಲ್ಲಿ ವೈಭವ್ 151 ರನ್ ಗಳಿಸಿದ್ದರು.&lt;/p&gt;&lt;p&gt;ಇನ್ನುಳಿದಂತೆ ಭಾರತ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ಎರಡು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ನಾಯಕ ಶ್ರೇಯಸ್ ಅಯ್ಯರ್ ಏಳು ಸ್ಥಾನ ಜಿಗಿತ ಕಂಡು 24ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಭಾರತ ಎದುರು ಮಿಂಚಿನ ದಾಳಿ ನಡೆಸಿದ ಬ್ಲೆಸ್ಸಿಂಗ್ ಮುಜರಬಾನಿ 10 ಸ್ಥಾನ ಜಿಗಿತ ಕಂಡು ಬೌಲರ್ ಶ್ರೇಯಾಂಕದಲ್ಲಿ 26ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಟಾಪ್ 20 ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡ ವೈಭವ್ ಸೂರ್ಯವಂಶಿ:&lt;/strong&gt;&lt;/h3&gt;&lt;p&gt;ಇನ್ನು ಕಳೆದ ಮೂರು ಟಿ20 ಸರಣಿಯಲ್ಲಿ ಭಾರತ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಇನ್ನೂ ಟಾಪ್ 20 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ 19ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಟಿ20 ಬೌಲಿಂಗ್ ವಿಭಾಗದಲ್ಲಿ ಟಾಪ್ 10 ಪಟ್ಟಿಯಲ್ಲಿ ಭಾರತದ ಏಕೈಕ ಬೌಲರ್ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿಯಿಂದ ಹೊರಬಿದ್ದ ವರುಣ್ ಚಕ್ರವರ್ತಿ ಮೂರು ಸ್ಥಾನ ಕುಸಿತ ಕಂಡು 9ನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಟಿ20 ಆಲ್ರೌಂಡರ್&zwnj;ಗಳ ರ್&zwj;ಯಾಂಕಿಂಗ್&zwnj;ನಲ್ಲಿ ಹಾರ್ದಿಕ್ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/icc-odi-and-t20-rankings-shubman-gill-tops-odi-chart-vaibhav-sooryavanshi-climbs-230-spots-kvn/articleshow-kgaohqz"/>
        </item>
        <item>
            <title><![CDATA[ಟೀಂ ಇಂಡಿಯಾಗೆ ಗುಡ್‌ಬೈ ಹೇಳಿದ 24 ಗಂಟೆಯಲ್ಲೇ ಗೌತಮ್ ಗಂಭೀರ್ ಆಪ್ತನ ಹೆಗಲೇರಿದ ಹೊಸ ಜವಾಬ್ದಾರಿ!]]></title>
            <link>https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</link>
            <guid isPermaLink="true">https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6</guid>
            <pubDate>Wed, 29 Jul 2026 14:36:12 +0530</pubDate>
            <description><![CDATA[ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ರಯಾನ್ ಟೆನ್ ಡೋಸ್ಕಾಟೆ, ಕೋಲ್ಕತಾ ನೈಟ್ ರೈಡರ್ಸ್ ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಭಾರತ ತಂಡದಿಂದ ಹೊರನಡೆದ ಅವರು, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೂ ಸಹಾಯಕ ಕೋಚ್ ಆಗಿ ಕೆಲಸ ಮಾಡಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxjfgf07zswv3rmskqbyhtxh,imgname-gettyimages-2185501565-1784105417730.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಟೀಂ ಇಂಡಿಯಾದ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ 24 ಗಂಟೆ ಕಳೆಯುವುದರೊಳಗೆ, ನೆದರ್ಲೆಂಡ್ಸ್&zwnj;ನ ಮಾಜಿ ಆಲ್&zwnj;ರೌಂಡರ್ ರಯಾನ್ ಟೆನ್ ಡೋಸ್ಕಾಟೆ ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಂಡಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಭಾರತ ತಂಡದಿಂದ ಹೊರನಡೆದಿದ್ದ ಅವರು, ಇದೀಗ ಕೋಲ್ಕತಾ ನೈಟ್ ರೈಡರ್ಸ್ (KKR) ಮಾಲೀಕತ್ವದ 'ನೈಟ್ ರೈಡರ್ಸ್ ಸ್ಪೋರ್ಟ್ಸ್' ಸಂಸ್ಥೆಯ ಜಾಗತಿಕ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ (Head of Global Cricket Strategy) ನೇಮಕಗೊಂಡಿದ್ದಾರೆ. 2027ರವರೆಗೆ ಒಪ್ಪಂದವನ್ನು ಮುಂದುವರಿಸುವ ಬಿಸಿಸಿಐ ಆಫರ್ ಅನ್ನು ತಿರಸ್ಕರಿಸಿ ಡೋಸ್ಕಾಟೆ ಟೀಂ ಇಂಡಿಯಾದಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಅವರು ಕೋಲ್ಕತಾ ತಂಡದಲ್ಲಿ ಹೊಸ ಹುದ್ದೆ ಸ್ವೀಕರಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.&lt;/p&gt;&lt;p&gt;ಕೋಲ್ಕತಾದ ಕ್ರಿಕೆಟ್ ತಂತ್ರಗಾರಿಕೆಯ ಮುಖ್ಯಸ್ಥರಾಗಿ, ನೈಟ್ ರೈಡರ್ಸ್&zwnj;ನ ಜಾಗತಿಕ ಫ್ರಾಂಚೈಸಿಗಳಿಗೆ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದು (ಸ್ಕೌಟಿಂಗ್), ನೇಮಕಾತಿ, ತಂಡದ ಯೋಜನೆ ಮತ್ತು ಆಟಗಾರರ ಪ್ರದರ್ಶನವನ್ನು ವಿಶ್ಲೇಷಿಸುವ ಜವಾಬ್ದಾರಿಯನ್ನು ಡೋಸ್ಕಾಟೆ ಹೊತ್ತಿದ್ದಾರೆ. ಇದರ ಜೊತೆಗೆ, ಕೆರಿಬಿಯನ್ ಪ್ರೀಮಿಯರ್ ಲೀಗ್&zwnj;ನಲ್ಲಿ ಟ್ರಿನ್&zwnj;ಬಾಗೊ ನೈಟ್ ರೈಡರ್ಸ್, ಐಎಲ್&zwnj;ಟಿ20ಯಲ್ಲಿ ಅಬುದಾಬಿ ನೈಟ್ ರೈಡರ್ಸ್ ಮತ್ತು ಮೇಜರ್ ಲೀಗ್ ಕ್ರಿಕೆಟ್&zwnj;ನಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಗಳ ಸಹಾಯಕ ಕೋಚ್ ಆಗಿಯೂ ಅವರು ಕೆಲಸ ಮಾಡಲಿದ್ದಾರೆ.&lt;/p&gt;&lt;h2&gt;&lt;strong&gt;ಡೋಸ್ಕಾಟೆಯನ್ನು ಆತ್ಮೀಯವಾಗಿ ಸ್ವಾಗತಿಸಿದ ಕೆಕೆಆರ್ ಫ್ರಾಂಚೈಸಿ&lt;/strong&gt;&lt;/h2&gt;&lt;p&gt;&quot;ಡೋಸ್ಕಾಟೆಯವರನ್ನು ಮತ್ತೆ ನೈಟ್ ರೈಡರ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಬಹಳ ಸಂತೋಷವಿದೆ. ನಮ್ಮ ತಂಡದ ಗುರಿ ಮತ್ತು ಶೈಲಿಯ ಬಗ್ಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಅವರ ಅನುಭವ ಈ ಜವಾಬ್ದಾರಿಗೆ ಸೂಕ್ತವಾಗಿದೆ,&quot; ಎಂದು ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಿಇಒ ವೆಂಕಿ ಮೈಸೂರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ 45 ವರ್ಷದ ಡೋಸ್ಕಾಟೆ, &quot;ನೈಟ್ ರೈಡರ್ಸ್ ಬಳಗಕ್ಕೆ ಮರಳಿರುವುದು ಖುಷಿ ತಂದಿದೆ. ಜಾಗತಿಕ ಮಟ್ಟದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸುವುದು ಮತ್ತು ದೀರ್ಘಾವಧಿಯ ಕ್ರಿಕೆಟ್ ತಂತ್ರಗಳನ್ನು ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ,&quot; ಎಂದರು.&lt;/p&gt;&lt;p&gt;ಡೋಸ್ಕಾಟೆ ಮತ್ತು ಕೋಲ್ಕತಾ ತಂಡಕ್ಕೆ ದಶಕಗಳ ಸಂಬಂಧವಿದೆ. 2011ರಲ್ಲಿ ಆಟಗಾರನಾಗಿ ತಂಡ ಸೇರಿದ್ದ ಅವರು, 2012 ಮತ್ತು 2014ರಲ್ಲಿ ತಂಡ ಚಾಂಪಿಯನ್ ಆದಾಗ ಪ್ರಮುಖ ಪಾತ್ರ ವಹಿಸಿದ್ದರು. 2022ರಲ್ಲಿ ನಿವೃತ್ತಿ ನಂತರ ಕೋಚಿಂಗ್ ಸಿಬ್ಬಂದಿಯಾಗಿ ತಂಡಕ್ಕೆ ಮರಳಿದ್ದರು. ಗೌತಮ್ ಗಂಭೀರ್ ಮೆಂಟರ್&zwnj;ಶಿಪ್&zwnj;ನಲ್ಲಿ ಕೋಲ್ಕತಾ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಾಗ, ಡೋಸ್ಕಾಟೆ ಸಹಾಯಕ ಸಿಬ್ಬಂದಿಯ ಪ್ರಮುಖ ಭಾಗವಾಗಿದ್ದರು.&lt;/p&gt;&lt;h3&gt;&lt;strong&gt;ಟೀಂ ಇಂಡಿಯಾ ಸಹಾಯಕ ಕೋಚ್ ಹುದ್ದೆಗೆ ಗುಡ್&zwnj;ಬೈ&lt;/strong&gt;&lt;/h3&gt;&lt;p&gt;2024ರ ಜುಲೈನಲ್ಲಿ ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆದಾಗ, ಡೋಸ್ಕಾಟೆ ಸಹಾಯಕ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಅವಧಿಯಲ್ಲಿ ಭಾರತ ತಂಡ 2025ರ ಏಷ್ಯಾ ಕಪ್ ಮತ್ತು 2026ರ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. 2027ರವರೆಗೆ ಒಪ್ಪಂದ ಮುಂದುವರಿಸಲು ಬಿಸಿಸಿಐ ಕೇಳಿಕೊಂಡರೂ, ನಿರಂತರ ಪ್ರಯಾಣವನ್ನು ತಪ್ಪಿಸಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಅವರು ಒಪ್ಪಂದವನ್ನು ನವೀಕರಿಸಲಿಲ್ಲ. ಸದ್ಯ ಅವರು ಅಂತರರಾಷ್ಟ್ರೀಯ ಪ್ರವಾಸಗಳ ಬದಲು ಫ್ರಾಂಚೈಸಿ ಲೀಗ್&zwnj;ಗಳ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/just-24-hours-after-india-exit-ryan-ten-doeschate-takes-up-new-kkr-role-kvn/articleshow-2464dh6"/>
        </item>
        <item>
            <title><![CDATA[ಐಪಿಎಲ್ ಮೌಲ್ಯ 2 ಲಕ್ಷ ಕೋಟಿಗೆ ಏರಿಕೆ, 10 ಫ್ರಾಂಚೈಸಿ ಪೈಕಿ ಆರ್‌ಸಿಬಿ ನಂ.1 ಬ್ರ್ಯಾಂಡ್ ವಾಲ್ಯೂ ತಂಡ]]></title>
            <link>https://kannada.asianetnews.com/cricket-sports/rcb-becomes-most-valuable-ipl-franchise-as-league-valuation-touches-rs-2-lakh-crore/articleshow-q28cugh</link>
            <guid isPermaLink="true">https://kannada.asianetnews.com/cricket-sports/rcb-becomes-most-valuable-ipl-franchise-as-league-valuation-touches-rs-2-lakh-crore/articleshow-q28cugh</guid>
            <pubDate>Wed, 29 Jul 2026 14:33:25 +0530</pubDate>
            <description><![CDATA[&lt;p&gt;ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ಸದ್ಯ 2 ಲಕ್ಷ ಕೋಟಿ ಗಡಿ ತಲುಪಿರುವ ಐಪಿಎಲ್ ವ್ಯಾಲ್ಯೂ ಹೊಸ ದಾಖಲೆ ಬರೆದಿದೆ. ಆರ್&zwnj;ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಎಷ್ಟು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyphtdar449c3j40jr0hat4d,imgname-ipl-worth-rs-2-lakh-crore-1785315800407.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.29)&lt;/strong&gt; ಐಪಿಎಲ್ ಲೀಗ್ ಟೂರ್ನಿ ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಕ್ರಿಕೆಟ್ ಟೂರ್ನಿ. ಅತೀ ಹೆಚ್ಚು ಹಣ, ವ್ಯವಹಾರ, ವ್ಯಾಲ್ಯೂ ಸೇರಿದಂತೆ ಎಲ್ಲವೂ ಐಪಿಎಲ್ ಟೂರ್ನಿಯಲ್ಲೇ ಗರಿಷ್ಠ. ಐಪಿಎಲ್ ಬ್ರ್ಯಾಂಡ್ ವಾಲ್ಯೂ ಪ್ರತಿ ವರ್ಷ ಹೆಚ್ಚಾಗುತ್ತಲೇ ಹೋಗಿದೆ. ಇದೀಗ ಐಪಿಎಲ್ ಬ್ರ್ಯಾಂಡ್ ವಾಲ್ಯೂ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. 2026ರ ಬ್ರ್ಯಾಂಡ್ ಮೌಲ್ಯಮಾಪನ ವರದಿಯ ಪ್ರಕಾರ, ಐಪಿಎಲ್&zwnj;ನ ಒಟ್ಟು ವ್ಯವಹಾರ ಮೌಲ್ಯವು ಬರೋಬ್ಬರಿ 20.6 ಬಿಲಿಯನ್ ಅಮೆರಿಕನ್ ಡಾಲರ್ ಎಂದಿದೆ.&lt;/p&gt;&lt;h2&gt;ಆರ್&zwnj;ಸಿಬಿ ನಂಬರ್ 1 ಬ್ರ್ಯಾಂಡ್ ವಾಲ್ಯೂ ತಂಡ&lt;/h2&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ಸತತ 2 ಪ್ರಶಸ್ತಿ ಗೆದ್ದು ಸಾಧನೆ ಮಾಡಿದೆ. ಆದರೆ ಆರ್&zwnj;ಸಿಬಿ ಪ್ರಶಸ್ತಿ ಗೆಲ್ಲುವ ಮೊದಲು ಅತೀ ಹೆಚ್ಚು ಬ್ರ್ಯಾಂಡ್ ವಾಲ್ಯೂ ಹೊಂದಿರುವ ಟಾಪ್ 5 ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಇದೀಗ 2025 ಹಾಗೂ 2026ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಆರ್&zwnj;ಸಿಬಿ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗಿದೆ. ಆರ್&zwnj;ಸಿಬಿ ಇಗೀದ ಗರಿಷ್ಠ ಬ್ರ್ಯಾಂಡ್ ವಾಲ್ಯೂ ಹೊಂದಿದೆ ನಂ.1 ತಂಡ. ಈ ಬಾರಿ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ 312 ಮಿಲಿಯನ್ ಅಮೆರಿಕನ್ ಡಾಲರ್&zwnj;ಗೆ ತಲುಪಿದೆ.&lt;/p&gt;&lt;p&gt;2026ರ ಐಪಿಎಲ್ ಟೂರ್ನಿ ಆರಂಭದಲ್ಲಿ ಆರ್&zwnj;ಸಿಬಿ ಫ್ರಾಂಚೈಸಿಯನ್ನು ಬಿರ್ಲಾ ಗ್ರೂಪ್, ಬೋಲ್ಟ್ ವೆಂಚರ್ಸ್ ಹಾಗೂ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಖರೀದಿಸಿದೆ. ಬರೋಬ್ಬರಿ 16,600 ಕೋಟಿ ರೂಪಾಯಿಗೆ ಫ್ರಾಂಚೈಸಿಯನ್ನು ಖರೀದಿಸಿದೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಗರಿಷ್ಠ ಮೊತ್ತಕ್ಕೆ ಮಾರಾಟವಾದ ತಂಡ ಅನ್ನೋ ದಾಖಲೆಯನ್ನು ಆರ್&zwnj;ಸಿಬಿ ಬರೆದಿದೆ.&lt;/p&gt;&lt;h2&gt;ಸಿಎಸ್&zwnj;ಕೆ ಬ್ರ್ಯಾಂಡ್ ವಾಲ್ಯೂ ಕುಸಿತ, ಕೆಕೆಆರ್&zwnj;ಗೆ ಜಾಕ್&zwnj;ಪಾಟ್&lt;/h2&gt;&lt;p&gt;ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್&zwnj;ಕೆ ತಂಡ ಐಪಿಎಲ್ ಟೂರ್ನಿಯ ನಂ.1 ಬ್ರ್ಯಾಂಡ್ ವಾಲ್ಯೂ ತಂಡವಾಗಿ ಹೊರಹೊಮ್ಮಿತ್ತು. ಧೋನಿ ತಂಡದಲ್ಲಿದ್ದರೂ ದೂರ ಸರಿದಿದ್ದಾರೆ. ಇತ್ತ ಸಿಎಸ್&zwnj;ಕೆ ಪ್ರದರ್ಶನ ನೆಲಕ್ಕಚಿದೆ. ಇದರಿಂದ ಬ್ರ್ಯಾಂಡ್ ವ್ಯಾಲ್ಯೂ ಕುಸಿದಿದೆ. ಇದೀಗ ಕೆಕೆಆರ್ ತಂಡ ಸಿಎಸ್&zwnj;ಕೆಯನ್ನು ಹಿಂದಿಕ್ಕಿ ಬ್ರ್ಯಾಂಡ್ ವಾಲ್ಯೂವಿನಲ್ಲಿ 3ನೇ ಸ್ಥಾನಕ್ಕಿರೆದ. ಮೂರನೇ ಸ್ಥಾನದಲ್ಲಿದ್ದ ಸಿಎಸ್&zwnj;ಕೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಎರಡನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ 264 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯ ಹೊಂದಿದೆ.&lt;/p&gt;&lt;p&gt;ತಂತ್ರವಾಗಿ ಐಪಿಎಲ್ ಲೀಗ್&zwnj;ನ ಬ್ರ್ಯಾಂಡ್ ಮೌಲ್ಯವೂ ಶೇಕಡಾ 10.3ರಷ್ಟು ಏರಿಕೆಯಾಗಿದ್ದು, 4.3 ಬಿಲಿಯನ್ ಡಾಲರ್&zwnj;ಗೆ (ಅಂದಾಜು ₹36,000 ಕೋಟಿ) ತಲುಪಿದೆ. ಪಂದ್ಯವೊಂದಕ್ಕೆ ಗಳಿಸುವ ಆದಾಯದ ಆಧಾರದ ಮೇಲೆ ಜಾಗತಿಕವಾಗಿ ಅಮೆರಿಕದ ಎನ್&zwnj;ಎಫ್&zwnj;ಎಲ್&zwnj; (NFL) ಲೀಗ್ ಬಿಟ್ಟರೆ ಐಪಿಎಲ್ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಆಗಿದೆ. ಇತ್ತೀಚೆಗೆ ಬ್ಲಾಕ್&zwnj;ಸ್ಟೋನ್ ಹಾಗೂ ಪೂನಾವಾಲಾ ಅವರಂತಹ ಪ್ರಮುಖ ಜಾಗತಿಕ ಹೂಡಿಕೆದಾರರು ಐಪಿಎಲ್ ಫ್ರಾಂಚೈಸಿಗಳ ಶೇರುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿರುವುದು ಈ ಭಾರಿ ಮೌಲ್ಯವರ್ಧನೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/rcb-becomes-most-valuable-ipl-franchise-as-league-valuation-touches-rs-2-lakh-crore/articleshow-q28cugh"/>
        </item>
        <item>
            <title><![CDATA[ಜಸ್ಪ್ರೀತ್ ಬುಮ್ರಾ ಕಡೆಗಣಿಸಿ, ಶ್ರೀಲಂಕಾ ಎದುರಿನ ಮೊದಲ ಟೆಸ್ಟ್‌ಗೆ ಬಲಿಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್!]]></title>
            <link>https://kannada.asianetnews.com/cricket-sports/r-ashwin-leaves-out-jasprit-bumrah-in-india-predicted-xi-for-sri-lanka-test-kvn/articleshow-813f7tg</link>
            <guid isPermaLink="true">https://kannada.asianetnews.com/cricket-sports/r-ashwin-leaves-out-jasprit-bumrah-in-india-predicted-xi-for-sri-lanka-test-kvn/articleshow-813f7tg</guid>
            <pubDate>Wed, 29 Jul 2026 13:37:36 +0530</pubDate>
            <description><![CDATA[ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್&zwnj;ಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಆಯ್ಕೆಯ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ನಾಲ್ವರು ಸ್ಪಿನ್ನರ್&zwnj;ಗಳನ್ನು ಒಳಗೊಂಡಿರುವ ಈ ತಂಡದಲ್ಲಿ, ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jh7jrvs9pw2xagep3855aj8a,imgname-gettyimages-2007295658.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಆಗಸ್ಟ್&zwnj; 15ರಂದು ಶ್ರೀಲಂಕಾ ವಿರುದ್ದ ಭಾರತ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್&zwnj; ನಿಟ್ಟಿನಲ್ಲಿ ಲಂಕಾ ಎದುರಿನ ಟೆಸ್ಟ್ ಸರಣಿಯು ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ. ಹೀಗಿರುವಾಗಲೇ ಶ್ರೀಲಂಕಾ ಎದುರಿನ ಮೊದಲ ಟೆಸ್ಟ್&zwnj;ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಬಲಿಷ್ಠ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿದ್ದಾರೆ. ಈ ಪೈಕಿ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ಭಾರತ ತಂಡ ಲಂಕಾ ಎದುರು ನಾಲ್ಕು ಸ್ಪಿನ್ನರ್&zwnj;ಗಳೊಂದಿಗೆ ಕಣಕ್ಕಿಳಿಯಲಿದೆ:&lt;/strong&gt;&lt;/h2&gt;&lt;p&gt;ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ರವೀಂದ್ರ ಜಡೇಜಾ, ಮಾನವ್ ಸುತಾರ್, ಸಾರಾನ್ಶ್&zwnj; ಜೈನ್ ಹಾಗೂ ಕುಲ್ದೀಪ್ ಯಾದವ್ ಹೀಗೆ ನಾಲ್ವರು ಸ್ಪಿನ್ನರ್&zwnj;ಗಳೊಂದಿಗೆ ಕಣಕ್ಕಿಳಿಯಬೇಕು ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಈ ನಾಲ್ವರು ಸ್ಪಿನ್ನರ್&zwnj;ಗಳ ಬೌಲಿಂಗ್ ಶೈಲಿಯು ವಿಭಿನ್ನವಾಗಿರುವುದರಿಂದ ಲಂಕಾ ಬ್ಯಾಟರ್&zwnj;ಗಳು ಪಿಚ್&zwnj;ಗೆ ಹೊಂದಿಕೊಳ್ಳಲು ಕಷ್ಟವಾಗಲಿದೆ ಎಂದು ಅಶ್ವಿನ್ ಹೇಳಿದ್ದಾರೆ.&lt;/p&gt;&lt;p&gt;ರವೀಂದ್ರ ಜಡೇಜಾ ಬೌಲಿಂಗ್&zwnj;ನಲ್ಲಿ ಮಾತ್ರವಲ್ಲದೇ ಓರ್ವ ಸ್ಪೆಷಲಿಸ್ಟ್ ಬ್ಯಾಟರ್ ಆಗಿಯೂ ತಂಡಕ್ಕೆ ಆಸರೆಯಾಗಬಲ್ಲರು. ಇನ್ನು ಸಾರಾನ್ಶ್&zwnj; ಜೈನ್ ಈಗಾಗಲೇ ದೇಶಿ ಕ್ರಿಕೆಟ್&zwnj;ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಜೈನ್ ಕೂಡಾ ಬ್ಯಾಟಿಂಗ್&zwnj;ನಲ್ಲಿ ತಂಡಕ್ಕೆ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.&lt;/p&gt;&lt;p&gt;'ಜಡೇಜಾ ಖಂಡಿತವಾಗಿಯೂ ಆಡುತ್ತಾರೆ. ಇನ್ನು ಮಾನವ್ ಸುತಾರ್ ಕಳೆದ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸಿದ್ದರು. ಹೀಗಾಗಿ ಸುತಾರ್&zwnj;ಗೆ ಕೂಡಾ ತಂಡದಲ್ಲಿ ಅವಕಾಶ ಸಿಗಲಿದೆ. ಇನ್ನು ತಜ್ಞ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡಾ ಆಡಲಿದ್ದಾರೆ. ಅಲ್ಲಿಗೆ ಮೂವರು ಸ್ಪಿನ್ನರ್&zwnj;ಗಳಾಯ್ತು. ಇನ್ನು ಏಳನೇ ಕ್ರಮಾಂಕದಲ್ಲಿ ಸಾರಾನ್ಶ್&zwnj; ಜೈನ್&zwnj;ಗೂ ಅವಕಾಶ ಸಿಗಬಹುದು. ಹೀಗಾದಲ್ಲಿ ಐದನೇ ಕ್ರಮಾಂಕದಲ್ಲಿ ರಿಷಭ್ ಪಂತ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಶುಭ್&zwnj;ಮನ್ ಗಿಲ್, ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಇಲ್ಲವೇ ಸಾಯಿ ಸುದರ್ಶನ್, ಆರಂಭಿಕರಾಗಿ ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆಯಲಿದ್ದಾರೆ. ಹೀಗಾದಲ್ಲಿ ಎರಡು ವೇಗಿಗಳ ಸ್ಥಾನ ಬಾಕಿ ಉಳಿಯಲಿದೆ ಎಂದು ಅಶ್ವಿನ್ ಹೇಳಿದ್ದಾರೆ.&lt;/p&gt;&lt;p&gt;ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ನಾಲ್ವರು ವೇಗಿಗಳು ಮಾತ್ರ ಸ್ಥಾನ ಪಡೆದಿದ್ದಾರೆ. ಈ ಪೈಕಿ ಮೊದಲ ಟೆಸ್ಟ್&zwnj;ಗೆ ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ದ್ ಕೃಷ್ಣ ನಡುವೆ ಪೈಪೋಟಿಯಿದೆ. ಈ ಮೂವರ ಪೈಕಿ ಇಬ್ಬರಿಗೆ ಸ್ಥಾನ ಸಿಗಲಿದೆ. ಹೀಗಾದಲ್ಲಿ ಜಸ್ಪ್ರೀತ್ ಬುಮ್ರಾಗೆ ರೆಸ್ಟ್&zwnj; ನೀಡುವುದು ಬೆಸ್ಟ್ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಶ್ರೀಲಂಕಾ ಎದುರಿನ ಮೊದಲ ಟೆಸ್ಟ್&zwnj; ಪಂದ್ಯಕ್ಕೆ ಅಶ್ವಿನ್ ಆಯ್ಕೆ ಮಾಡಿದ ಭಾರತ ಸಂಭಾವ್ಯ ತಂಡ ಹೀಗಿದೆ.&lt;/strong&gt;&lt;/h3&gt;&lt;p&gt;ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್/ದೇವದತ್ ಪಡಿಕ್ಕಲ್, ಶುಭ್&zwnj;ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸಾರಾನ್ಶ್&zwnj; ಜೈನ್, ಮಾನವ್ ಸುತಾರ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್, ಮೊಹಮ್ಮದ್ ಸಿರಾಜ್/ಪ್ರಸಿದ್ದ್ ಕೃಷ್ಣ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/r-ashwin-leaves-out-jasprit-bumrah-in-india-predicted-xi-for-sri-lanka-test-kvn/articleshow-813f7tg"/>
        </item>
        <item>
            <title><![CDATA[ರಜತ್ ಪಾಟೀದಾರ್‌ ಜತೆ ಈತನ ಹೋಲಿಕೆ ಸಾಧ್ಯವೇಯಿಲ್ಲ; ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಆಟಗಾರನ ಬಗ್ಗೆ ಮಾಜಿ ಕ್ರಿಕೆಟಿಗನ ಖಡಕ್ ಮಾತು!]]></title>
            <link>https://kannada.asianetnews.com/cricket-sports/pick-rajat-patidar-over-tilak-varma-kris-srikkanth-urges-selectors-after-zim-t20is-kvn/articleshow-esghbe3</link>
            <guid isPermaLink="true">https://kannada.asianetnews.com/cricket-sports/pick-rajat-patidar-over-tilak-varma-kris-srikkanth-urges-selectors-after-zim-t20is-kvn/articleshow-esghbe3</guid>
            <pubDate>Wed, 29 Jul 2026 12:42:16 +0530</pubDate>
            <description><![CDATA[ಮಾಜಿ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್, ಭಾರತ ಟಿ20 ತಂಡಕ್ಕೆ ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ತಿಲಕ್ ವರ್ಮಾ ಅವರ ಸ್ಥಿರತೆಯ ಬಗ್ಗೆ ಪ್ರಶ್ನಿಸಿರುವ ಅವರು, ಪಾಟೀದಾರ್ ಅವರ ನಾಯಕತ್ವ ಮತ್ತು ಸ್ಪೋಟಕ ಬ್ಯಾಟಿಂಗ್ ಅನ್ನು ಉಲ್ಲೇಖಿಸಿ ಅವಕಾಶ ನೀಡಲು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgx8ndq2z3vdhnzq4yp30w3,imgname-ajit-agarkar-rajat-patidar-1780831507895.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮುಂಬರುವ ಟಿ20 ಸರಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಭಾರತ ತಂಡಕ್ಕೆ ಆಯ್ಕೆ ಮಾಡಲಿ ಎಂದು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ಒತ್ತಾಯಿಸಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಮಾತನಾಡಿರುವ ಶ್ರೀಕಾಂತ್, ಭಾರತ ತಂಡದ ಉಪನಾಯಕ ತಿಲಕ್ ವರ್ಮಾ ಅವರ ಸ್ಥಾನದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತಿದ್ದಾರೆ.&lt;/p&gt;&lt;h2&gt;&lt;strong&gt;ರಜತ್ ಪಾಟೀದಾರ್ ಅವರ ಜತೆ ತಿಲಕ್ ವರ್ಮಾ ಅವರ ಹೋಲಿಕೆ ಸಾಧ್ಯವೇ ಇಲ್ಲ:&lt;/strong&gt;&lt;/h2&gt;&lt;p&gt;ಜಿಂಬಾಬ್ವೆ ಎದುರಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ತಿಲಕ್ ವರ್ಮಾ 9 ಎಸೆತಗಳನ್ನು ಎದುರಿಸಿ 11 ರನ್ ಗಳಿಸಿದ್ದರು. ಇದಕ್ಕೂ ಮೊದಲು ಎರಡನೇ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ 29 ಎಸೆತಗಳಲ್ಲಿ 60 ರನ್ ಬಾರಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಕಾಂತ್, ಸ್ಥಿರ ಪ್ರದರ್ಶನದ ವಿಚಾರದಲ್ಲಿ ರಜತ್ ಪಾಟೀದಾರ್ ಜತೆಗೆ ತಿಲಕ್ ವರ್ಮಾ ಹೋಲಿಕೆ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;'ಮತ್ತೊಮ್ಮೆ ತಿಲಕ್ ವರ್ಮಾ 9 ಬಾಲ್ ತಿಂದರು. ಅವರು ತುಂಬಾ ದೀರ್ಘ ಸಮಯ ವೇಗವಾಗಿ ರನ್ ಗಳಿಸಲ್ಲ. ಅಷ್ಟಕ್ಕೂ ಅವರಲ್ಲಿ ಸ್ಥಿರತೆ ಎಲ್ಲಿದೆ? ನೀವೇ ಹೇಳಿ? ಇಂಗ್ಲೆಂಡ್&zwnj;ನಲ್ಲಿ ಅವರು ಹೇಗೆ ಆಡಿದರು?. ಅಲ್ಲೊಂದು ಇಲ್ಲೊಂದು ಇನ್ನಿಂಗ್ಸ್ ಆಡಿದ್ದಾರೆ ಅಷ್ಟೇ. ಅವರ ಜತೆ ರಜತ್ ಪಾಟೀದಾರ್ ಹೋಲಿಕೆ ಸರಿಯಲ್ಲ. ನಿಮಗೆ ಒಳ್ಳೆಯ ಟಿ20 ಇನ್ನಿಂಗ್ಸ್ ಆಡುವ ಆಟಗಾರ ಬೇಕಿದ್ದರೇ ರಜತ್ ಪಾಟೀದಾರ್&zwnj;ಗೆ ಒಂದು ಅವಕಾಶ ಕೊಟ್ಟು ನೋಡಿ. ಯಶ್ ಠಾಕೂರ್ ಸೇರಿ ಎಲ್ಲರಿಗೂ ಅವಕಾಶ ಸಿಗುತ್ತಿದೆ. ಹಾಗೆಯೇ ರಜತ್ ಪಾಟೀದಾರ್&zwnj;ಗೆ ಒಂದು ಅವಕಾಶ ಕೊಡಿ ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತಿಲಕ್ ವರ್ಮಾ ಟ್ರ್ಯಾಕ್ ರೆಕಾರ್ಡ್&zwnj;&lt;/strong&gt;&lt;/h3&gt;&lt;p&gt;ತಿಲಕ್ ವರ್ಮಾ ಇದುವರೆಗೂ ಭಾರತ ಪರ 56 ಟಿ20 ಇನ್ನಿಂಗ್ಸ್&zwnj;ಗಳನ್ನಾಡಿ 44.45ರ ಬ್ಯಾಟಿಂಗ್ ಸರಾಸರಿಯಲ್ಲಿ 145.18ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ 1,645 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 9 ಅರ್ಧಶತಕಗಳು ಸೇರಿವೆ. ಅಜೇಯ 120 ರನ್ ತಿಲಕ್ ವರ್ಮಾ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ.&lt;/p&gt;&lt;p&gt;ಇನ್ನು ಈ ವರ್ಷ ತಿಲಕ್ ವರ್ಮಾ ಅವರಿಂದ ಮಿಶ್ರ ಪ್ರದರ್ಶನ ಮೂಡಿ ಬಂದಿದೆ. ಈ ವರ್ಷ ಭಾರತ ಪರ 19 ಪಂದ್ಯಗಳನ್ನಾಡಿರುವ ತಿಲಕ್ ವರ್ಮಾ 34ರ ಸರಾಸರಿಯಲ್ಲಿ 462 ರನ್ ಸಿಡಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.&lt;/p&gt;&lt;p&gt;ಇನ್ನೊಂದೆಡೆ ರಜತ್ ಪಾಟೀದಾರ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಪಾಟೀದಾರ್ ನಾಯಕನಾಗಿ ಮಾತ್ರವಲ್ಲದೇ ಬ್ಯಾಟರ್ ಆಗಿಯೂ ಕಳೆದೆರಡು ಸೀಸನ್&zwnj;ನಲ್ಲೂ ಸ್ಪೋಟಕ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹೀಗಿದ್ದೂ ರಜತ್ ಪಾಟೀದಾರ್&zwnj;ಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/pick-rajat-patidar-over-tilak-varma-kris-srikkanth-urges-selectors-after-zim-t20is-kvn/articleshow-esghbe3"/>
        </item>
        <item>
            <title><![CDATA[ವೆಸ್ಟ್‌ ಇಂಡೀಸ್ ಎದುರು ಪಾಕಿಸ್ತಾನಕ್ಕೆ ಹೀನಾಯ ಸೋಲು; ಬಾಬರ್ ಅಜಂ ಕ್ಯಾಪ್ಟನ್ ಆಗುತ್ತಿದ್ದಂತೆ ಪಾಕಿಸ್ತಾನ ದಿವಾಳಿ!]]></title>
            <link>https://kannada.asianetnews.com/cricket-sports/babar-azam-reappointed-era-begins-with-defeat-pakistan-sinks-to-8th-straight-away-test-loss-kvn/articleshow-zr813qm</link>
            <guid isPermaLink="true">https://kannada.asianetnews.com/cricket-sports/babar-azam-reappointed-era-begins-with-defeat-pakistan-sinks-to-8th-straight-away-test-loss-kvn/articleshow-zr813qm</guid>
            <pubDate>Wed, 29 Jul 2026 11:41:44 +0530</pubDate>
            <description><![CDATA[ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್&zwnj;ನಲ್ಲಿ 90 ರನ್&zwnj;ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ, ಪಾಕಿಸ್ತಾನವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ರೇಸ್&zwnj;ನಿಂದ ಬಹುತೇಕ ಹೊರಬಿದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krh3cyfx70rwwtrnsn4mh7br,imgname-gettyimages-2242362405-1778690456060.jpg" type="image/jpeg" height="390" width="690"/>
            <content:encoded><![CDATA[&lt;p&gt;ಟ್ರಿನಿಡ್ಯಾಡ್: ಬಾಬರ್ ಅಜಂ ಮತ್ತೊಮ್ಮೆ ಪಾಕಿಸ್ತಾನ ಟೆಸ್ಟ್ ತಂಡದ ನಾಯಕರಾದ ಬೆನ್ನಲ್ಲೇ ತಂಡ ವೆಸ್ಟ್ ಇಂಡೀಸ್ ಎದುರು ದಯನೀಯ ಸೋಲು ಅನುಭವಿಸಿದೆ. ಇದಷ್ಟೇ ಅಲ್ಲದೇ ಅಧಿಕೃತವಾಗಿ 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್&zwnj; ರೇಸ್&zwnj;ನಿಂದ ಬಹುತೇಕ ಹೊರಬಿದ್ದಿದೆ.&lt;/p&gt;&lt;p&gt;ವೆಸ್ಟ್&zwnj; ಇಂಡೀಸ್ ನೀಡಿದ್ದ 211 ರನ್&zwnj;ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಕೇವಲ 120 ರನ್&zwnj;ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ಮೊದಲ ಟೆಸ್ಟ್&zwnj; ಪಂದ್ಯವನ್ನು 90 ರನ್&zwnj;ಗಳಿಂದ ಜಯಿಸಿದೆ. ಇದರೊಂದಿಗೆ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವು 1-0 ಮುನ್ನಡೆ ಸಾಧಿಸಿದೆ. ಇನ್ನು ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj; ಅಂಕಪಟ್ಟಿಯಲ್ಲಿ ಬಾಬರ್ ಅಜಂ ಪಡೆ ಪಾತಾಳಕ್ಕೆ ಕುಸಿದಿದೆ.&lt;/p&gt;&lt;h2&gt;&lt;strong&gt;ವಿದೇಶಿ ನೆಲದಲ್ಲಿ ಸತತ 8ನೇ ಟೆಸ್ಟ್ ಸೋಲು ಕಂಡ ಪಾಕಿಸ್ತಾನ:&lt;/strong&gt;&lt;/h2&gt;&lt;p&gt;ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡದ ದುಸ್ಥಿತಿ ಹೇಳತೀರದಾಗಿದೆ. ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಸೋಲು, ಪಾಕಿಸ್ತಾನ ಪಾಲಿಗೆ ವಿದೇಶಿ ನೆಲದಲ್ಲಿ ಅನುಭವಿಸಿದ ಸತತ 8ನೇ ಟೆಸ್ಟ್ ಸೋಲು ಎನಿಸಿಕೊಂಡಿದೆ. ಈ ಸೋಲಿನೊಂದಿಗೆ ಪಾಕಿಸ್ತಾನವು ಪಾಯಿಂಟ್&zwnj; ಪ್ರತಿಶತದಲ್ಲಿ 8.33ರಿಂದ 6.66ಕ್ಕೆ ಕುಸಿದಿದೆ. ಈ ಸೋಲಿನೊಂದಿಗೆ ಪಾಕ್ ಬಹುತೇಕ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್&zwnj; ರೇಸ್&zwnj;ನಿಂದ ಹೊರಬಿದ್ದಂತೆ ಆಗಿದೆ. ಇನ್ನು ಪಾಕಿಸ್ತಾನ ಎದುರು ಗೆಲುವು ದಾಖಲಿಸಿದ ವೆಸ್ಟ್ ಇಂಡೀಸ್ ಇದೀಗ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಏರಿಕೆಯಾಗಿದೆ.&lt;/p&gt;&lt;h3&gt;&lt;strong&gt;ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಪಾತಾಳಕ್ಕೆ ಕುಸಿದ ಪಾಕಿಸ್ತಾನ:&lt;/strong&gt;&lt;/h3&gt;&lt;p&gt;ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್&zwnj; ಪಂದ್ಯದಲ್ಲಿ 90 ರನ್&zwnj;ಗಳ ಹೀನಾಯ ಸೋಲು ಅನುಭವಿಸಿದ ಪಾಕಿಸ್ತಾನ ಇದೀಗ 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಅಂಕಪಟ್ಟಿಯಲ್ಲಿ ಎಲ್ಲಕ್ಕಿಂತ ಕಡೆಯ ಸ್ಥಾನಕ್ಕೆ ಜಾರಿದೆ. 2025-27ನೇ ಸಾಲಿನ ವಿಶ್ವ ಟೆಸ್ಟ್&zwnj; ಚಾಂಪಿಯನ್&zwnj;ಶಿಪ್&zwnj;ನಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ತೀರಾ ನಿರಾಶಾದಾಯಕವಾಗಿದೆ. ಪಾಕಿಸ್ತಾನ ಇದುವರೆಗೂ ಆಡಿದ ಐದು ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನೊಂದು ಪಂದ್ಯದಲ್ಲಿ ಪಾಕ್ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;h3&gt;&lt;strong&gt;8ನೇ ಸ್ಥಾನಕ್ಕೆ ಜಿಗಿದ ವೆಸ್ಟ್&zwnj; ಇಂಡೀಸ್:&lt;/strong&gt;&lt;/h3&gt;&lt;p&gt;ಪಾಕಿಸ್ತಾನ ಎದುರು ಮೊದಲ ಟೆಸ್ಟ್&zwnj; ಪಂದ್ಯದಲ್ಲೇ ದಿಟ್ಟ ಪ್ರದರ್ಶನ ತೋರಿದ ಆತಿಥೇಯ ವೆಸ್ಟ್&zwnj; ಇಂಡೀಸ್ ತಂಡವು ಇದೀಗ 22.73% ನೊಂದಿಗೆ ಎಂಟನೇ ಸ್ಥಾನಕ್ಕೆ ಜಿಗಿದಿದೆ. ಈ ಸೀಸನ್&zwnj;ನಲ್ಲಿ ವೆಸ್ಟ್ ಇಂಡೀಸ್ ದಾಖಲಿಸಿದ ಎರಡನೇ ಗೆಲುವು ಇದಾಗಿದೆ. ವೆಸ್ಟ್ ಇಂಡೀಸ್ ತಂಡವು ಈ ಸೀಸನ್&zwnj;ನಲ್ಲಿ 11 ಟೆಸ್ಟ್ ಪಂದ್ಯಗಳನ್ನಾಡಿದ್ದು ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇನ್ನುಳಿದ 4 ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದಿದ್ದರೇ, ಇನ್ನೆರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.&lt;/p&gt;&lt;p&gt;A boost for West Indies on the World Test Championship standings following their convincing victory over Pakistan in the first Test of their #WTC27 series More  https://t.co/P77hdEAfrp pic.twitter.com/c9CzcyzSWm&lt;/p&gt;&lt;p&gt;&mdash; ICC (@ICC) July 29, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಆಸೀಸ್&zwnj;ಗೆ ಅಗ್ರಸ್ಥಾನ; ಐದನೇ ಸ್ಥಾನದಲ್ಲಿದೆ ಭಾರತ&lt;/strong&gt;&lt;/h3&gt;&lt;p&gt;ಇನ್ನು 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj; ಪರ್ಸೆಂಟೇಜ್ ಆಧಾರದಲ್ಲಿ ಸದ್ಯ ಆಸ್ಟ್ರೇಲಿಯಾ ತಂಡವು 87.50% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಈ ಸೀಸನ್&zwnj;ನಲ್ಲಿ ಆಸ್ಟ್ರೇಲಿಯಾ ಎಂಟು ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ಪೈಕಿ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯದಲ್ಲಿ ಮಾತ್ರ ಸೋಲು ಅನುಭವಿಸಿದೆ. ಇನ್ನು ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ(75), ನ್ಯೂಜಿಲೆಂಡ್(72.22) ಹಾಗೂ ಬಾಂಗ್ಲಾದೇಶ(58.33) ಅಂಕಗಳ ಸಹಿತ ಕ್ರಮವಾಗಿ ಮೊದಲ 4 ಸ್ಥಾನಗಳಲ್ಲಿ ಭದ್ರವಾಗಿದೆ.&lt;/p&gt;&lt;p&gt;ಇನ್ನು ಶುಭ್&zwnj;ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 48.15% ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂಬರುವ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಿದರೆ, ಅಂಕಪಟ್ಟಿಯಲ್ಲಿ ಮೇಲೇರುವಸ ಸಾಧ್ಯತೆಯಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/babar-azam-reappointed-era-begins-with-defeat-pakistan-sinks-to-8th-straight-away-test-loss-kvn/articleshow-zr813qm"/>
        </item>
        <item>
            <title><![CDATA[60 ವಿಕೆಟ್, 950 ರನ್ ಹೊಡೆದ್ರೂ ಸಿಗದ ಅವಕಾಶ! BCCI ನಿರ್ಲಕ್ಷಿಸಿದ ಆ ಆಲ್ರೌಂಡರ್ ಯಾರು?]]></title>
            <link>https://kannada.asianetnews.com/cricket-sports/ranji-best-all-round-performer-auqib-nabi-ignored-indias-test-squad-selection-sparks-debate/articleshow-yzi9gi8</link>
            <guid isPermaLink="true">https://kannada.asianetnews.com/cricket-sports/ranji-best-all-round-performer-auqib-nabi-ignored-indias-test-squad-selection-sparks-debate/articleshow-yzi9gi8</guid>
            <pubDate>Wed, 29 Jul 2026 10:49:50 +0530</pubDate>
            <description><![CDATA[&lt;p&gt;ಶ್ರೀಲಂಕಾ ವಿರುದ್ಧದ ಟೆಸ್ಟ್ ತಂಡ ಪ್ರಕಟವಾದ ಬಳಿಕ ರಣಜಿ ಟ್ರೋಫಿಯಲ್ಲಿ ಮಿಂಚಿದ ಔಕಿಬ್ ನಬಿ, ಮೊಹಮ್ಮದ್ ಶಮಿ, ಆರ್. ಸ್ಮರನ್ ಹಾಗೂ ಕರುಣ್ ನಾಯರ್&zwnj;ರನ್ನು ಕೈಬಿಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ದೇಶೀಯ ಪ್ರದರ್ಶನಕ್ಕಿಂತ ತಂಡದ ಸಮತೋಲನ, ಅನುಭವ ಹಾಗೂ ಭವಿಷ್ಯದ ಯೋಜನೆಗೆ ಆಯ್ಕೆ ಸಮಿತಿ ಹೆಚ್ಚಿನ ಆದ್ಯತೆ ನೀಡಿದೆಯೇ ಎಂಬ ಪ್ರಶ್ನೆ ಈಗ ಕೇಳಿಬರುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyp42s67tgat5v55f3rsked7,imgname-auqib-nabi-1785301394630.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಣಜಿ ಟ್ರೋಫಿಯಲ್ಲಿ ಮಿಂಚಿದರೂ ಟೆಸ್ಟ್ ತಂಡದಲ್ಲಿ ಸ್ಥಾನವಿಲ್ಲ!&lt;/strong&gt;&lt;/p&gt;&lt;p&gt;ಭಾರತದ ಶ್ರೀಲಂಕಾ ಪ್ರವಾಸಕ್ಕಾಗಿ ಪ್ರಕಟವಾದ ಟೆಸ್ಟ್ ತಂಡ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅನುಭವಿ ಆಟಗಾರರೊಂದಿಗೆ ಹೊಸ ಮುಖಗಳಿಗೆ ಅವಕಾಶ ನೀಡಿದ ಆಯ್ಕೆ ಸಮಿತಿ, ದೇಶೀಯ ಕ್ರಿಕೆಟ್&zwnj;ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೆಲ ಪ್ರಮುಖ ಆಟಗಾರರನ್ನು ಕೈಬಿಟ್ಟಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ರಣಜಿ ಪ್ರದರ್ಶನಕ್ಕೂ ಸಿಗಲಿಲ್ಲ ಪ್ರತಿಫಲ..!&lt;/strong&gt;&lt;/p&gt;&lt;p&gt;ಜಮ್ಮು ಮತ್ತು ಕಾಶ್ಮೀರದ ವೇಗಿ ಔಕಿಬ್ ನಬಿ ರಣಜಿ ಟ್ರೋಫಿಯಲ್ಲಿ 10 ಪಂದ್ಯಗಳಿಂದ 60 ವಿಕೆಟ್ ಕಬಳಿಸಿ ಅತ್ಯುತ್ತಮ ಬೌಲರ್&zwnj;ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದರು. ಕೇವಲ 12.56 ಸರಾಸರಿಯಲ್ಲಿ ವಿಕೆಟ್ ಪಡೆದಿದ್ದ ಅವರು ಏಳು ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದರು. ಇಷ್ಟೊಂದು ಅದ್ಭುತ ಪ್ರದರ್ಶನದ ನಡುವೆಯೂ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದಿರುವುದು ಅಚ್ಚರಿ ಮೂಡಿಸಿದೆ.&lt;/p&gt;&lt;p&gt;&lt;strong&gt;ಶಮಿ, ಸ್ಮರನ್, ಕರುಣ್ ನಾಯರ್&zwnj;ಗೂ ಅವಕಾಶವಿಲ್ಲ..!&lt;/strong&gt;&lt;/p&gt;&lt;p&gt;ಫಿಟ್&zwnj;ನೆಸ್&zwnj;ಗೆ ಮರಳಿದ ಮೊಹಮ್ಮದ್ ಶಮಿ ದೇಶೀಯ ಟೂರ್ನಿಯಲ್ಲಿ 37 ವಿಕೆಟ್ ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಕರ್ನಾಟಕದ ಆರ್. ಸ್ಮರನ್ 950 ರನ್ ಗಳಿಸಿ ಬ್ಯಾಟಿಂಗ್&zwnj;ನಲ್ಲಿ ಮಿಂಚಿದರೆ, ಅನುಭವಿ ಕರುಣ್ ನಾಯರ್ ಕೂಡ 699 ರನ್&zwnj;ಗಳೊಂದಿಗೆ ಮತ್ತೊಮ್ಮೆ ಗಮನ ಸೆಳೆದಿದ್ದರು. ಆದರೂ ಈ ಮೂವರಿಗೂ ಟೆಸ್ಟ್ ತಂಡದಲ್ಲಿ ಅವಕಾಶ ದೊರಕಲಿಲ್ಲ.&lt;/p&gt;&lt;p&gt;&lt;strong&gt;ಆಯ್ಕೆ ಸಮಿತಿ ನೋಡಿದ ಅಂಶಗಳೇನು?&lt;/strong&gt;&lt;/p&gt;&lt;p&gt;ರಾಷ್ಟ್ರೀಯ ತಂಡದ ಆಯ್ಕೆ ಕೇವಲ ಅಂಕಿಅಂಶಗಳ ಮೇಲೆ ನಿರ್ಧಾರವಾಗುವುದಿಲ್ಲ. ತಂಡದ ಸಮತೋಲನ, ವಿದೇಶಿ ಪಿಚ್ ಪರಿಸ್ಥಿತಿ, ಎದುರಾಳಿ ತಂಡ, ಆಟಗಾರರ ಅನುಭವ, ಫಿಟ್&zwnj;ನೆಸ್ ಹಾಗೂ ಭವಿಷ್ಯದ ಯೋಜನೆಗಳನ್ನೂ ಆಯ್ಕೆ ಸಮಿತಿ ಪರಿಗಣಿಸುತ್ತದೆ. ಇದೇ ಕಾರಣಕ್ಕೆ ಕೆಲ ಯುವ ಆಟಗಾರರಿಗೆ ಅವಕಾಶ ಸಿಕ್ಕಿದ್ದು, ಅನುಭವಿ ಆಟಗಾರರು ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;p&gt;&lt;strong&gt;ಟೀಮ್ ಇಂಡಿಯಾ ಸೆಲೆಕ್ಷನ್ ಮತ್ತೆ ಉದ್ಭವಿಸಿದ ದೊಡ್ಡ ಪ್ರಶ್ನೆ..!&lt;/strong&gt;&lt;/p&gt;&lt;p&gt;ದೇಶೀಯ ಕ್ರಿಕೆಟ್&zwnj;ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದಿದ್ದರೆ, ರಣಜಿ ಟ್ರೋಫಿಯ ಮೌಲ್ಯವೇನು ಎಂಬ ಪ್ರಶ್ನೆ ಮತ್ತೆ ಕೇಳಿಬರುತ್ತಿದೆ. ಆಯ್ಕೆ ಸಮಿತಿ ಭವಿಷ್ಯದ ಯೋಜನೆಗೆ ಆದ್ಯತೆ ನೀಡಿದೆಯೇ ಅಥವಾ ದೇಶೀಯ ಪ್ರದರ್ಶನಕ್ಕೆ ಸಾಕಷ್ಟು ಮಹತ್ವ ನೀಡಿಲ್ಲವೇ ಎಂಬ ಚರ್ಚೆ ಈಗ ಜೋರಾಗಿದೆ. ಮುಂದಿನ ಸರಣಿಗಳಲ್ಲಿ ಈ ರಣಜಿ ತಾರೆಯರಿಗೆ ಅವಕಾಶ ಸಿಗುತ್ತದೆಯೇ ಎಂಬುದರತ್ತ ಈಗ ಎಲ್ಲರ ಗಮನ ನೆಟ್ಟಿದೆ.&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/ranji-best-all-round-performer-auqib-nabi-ignored-indias-test-squad-selection-sparks-debate/articleshow-yzi9gi8"/>
        </item>
    </channel>
</rss>
