<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 29 May 2026 23:30:54 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[IPL Qualifier 2: ರಾಜಸ್ಥಾನ ವಿರುದ್ಧ ಭರ್ಜರಿ ಜಯ, RCB ವಿರುದ್ಧ ಫೈನಲ್‌ಗೆ ಅರ್ಹತೆ ಪಡೆದ ಗುಜರಾತ್‌ ಟೈಟಾನ್ಸ್‌]]></title>
            <link>https://kannada.asianetnews.com/cricket-sports/gt-beats-rr-qualifier-2-enters-ipl-2026-final-against-rcb-shubman-gill-104-san/articleshow-lhwicat</link>
            <guid isPermaLink="true">https://kannada.asianetnews.com/cricket-sports/gt-beats-rr-qualifier-2-enters-ipl-2026-final-against-rcb-shubman-gill-104-san/articleshow-lhwicat</guid>
            <pubDate>Fri, 29 May 2026 23:30:50 +0530</pubDate>
            <description><![CDATA[&lt;p&gt;ಶುಭಮನ್ ಗಿಲ್ ಅವರ ಭರ್ಜರಿ ಶತಕ ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್, ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್&zwnj;ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ತಂಡವು ಆರ್&zwnj;ಸಿಬಿ ವಿರುದ್ಧ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kste4s4309cwb8684hvcjtyj,imgname-gt-vs-rr-qualifier-2-ipl-2026-1780077454467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂಡೀಗಢ (ಮೇ.29): &lt;/strong&gt;ಐಪಿಎಲ್ 2026ರ ಹೈ-ವೋಲ್ಟೇಜ್ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 7 ವಿಕೆಟ್&zwnj;ಗಳ ಭರ್ಜರಿ ಜಯ ದಾಖಲಿಸಿದೆ. ಅದರೊಂದಿಗೆ ಭಾನುವಾರ ಅಹಮದಾಬಾದ್&zwnj;ನಲ್ಲಿ ನಡೆಯಲಿರುವ ಆರ್&zwnj;ಸಿಬಿ ವಿರುದ್ಧದ ಫೈನಲ್&zwnj; ಪಂದ್ಯಕ್ಕೆ ಗುಜರಾತ್&zwnj; ಟೈಟಾನ್ಸ್&zwnj; ಅಣಿಯಾಗಿದೆ. ಗುಜರಾತ್&zwnj; ಟೈಟಾನ್ಸ್&zwnj; ಹಾಗೂ ಆರ್&zwnj;ಸಿಬಿ ತಂಡ ಹಾಲಿ ಟೂರ್ನಿಯಲ್ಲಿ 4ನೇ ಬಾರಿಗೆ ಮುಖಾಮುಖಿಯಾಗಲಿದೆ. ಲೀಗ್&zwnj; ಹಂತದಲ್ಲಿ 2 ಬಾರಿ, ಹಾಗೂ ಮೊದಲ ಕ್ವಾಲಿಫೈಯರ್&zwnj; ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ನಾಯಕ ಶುಭಮನ್ ಗಿಲ್ ಅವರ ಆಕರ್ಷಕ ಶತಕ ಹಾಗೂ ಸಾಯಿ ಸುದರ್ಶನ್ ಅವರ ಸ್ಫೋಟಕ ಅರ್ಧಶತಕದ ನೆರವೇರಿಕೆಯಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ನೀಡಿದ್ದ 215 ರನ್&zwnj;ಗಳ ಬೃಹತ್ ಗುರಿಯನ್ನು ಅತ್ಯಂತ ಸುಲಭವಾಗಿ ಚೇಸ್ ಮಾಡಿ, ಪ್ರತಿಷ್ಠಿತ ಫೈನಲ್&zwnj;ಗೆ ಅರ್ಹತೆ ಪಡೆದಿದೆ.&lt;/p&gt;&lt;p&gt;ಇದರೊಂದಿಗೆ ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ದಿಟ್ಟ ಹೋರಾಟ ಮತ್ತು 96 ರನ್&zwnj;ಗಳ ಇನ್ನಿಂಗ್ಸ್ ವ್ಯರ್ಥವಾದಂತಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್&zwnj;ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ 9 ರನ್ ಗಳಿಸುವಷ್ಟರಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೇಲ್ ವಿಕೆಟ್ ಕಳೆದುಕೊಂಡು ತಂಡ ಶೋಚನೀಯ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಕ್ರೀಸ್&zwnj;ಗಿಳಿದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಅವರು ಕೇವಲ 4 ರನ್&zwnj;ಗಳಿಂದ ಸತತ ಎರಡನೇ ಶತಕ ಮಿಸ್ ಮಾಡಿಕೊಂಡು 96 ರನ್&zwnj;ಗೆ ಔಟಾದರು.&lt;/p&gt;&lt;p&gt;ಕೊನೆಯಲ್ಲಿ ರವೀಂದ್ರ ಜಡೇಜಾ ಅವರ ಅಜೇಯ 45 ರನ್ ಮತ್ತು ಡೊನೊವನ್ ಫೆರಿರಾ ಅವರ ಸಿಡಿಲಬ್ಬರದ ಬ್ಯಾಟಿಂಗ್ (11 ಎಸೆತಗಳಲ್ಲಿ 38 ರನ್) ನೆರವಿನಿಂದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 214 ರನ್&zwnj;ಗಳ ಬೃಹತ್ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಗುಜರಾತ್&zwnj; ಟೈಟಾನ್ಸ್&zwnj; ತಂಡ 18.4 ಓವರ್&zwnj;ಗಳಲ್ಲಿ 3 ವಿಕೆಟ್&zwnj;ಗೆ 219 ರನ್&zwnj; ಬಾರಿಸಿ ಗೆಲುವು ಕಂಡಿತು.&lt;/p&gt;&lt;p&gt;215 ರನ್&zwnj;ಗಳ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ನಾಯಕ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಮೊದಲ ವಿಕೆಟ್&zwnj;ಗೆ ಸ್ಫೋಟಕ ಬ್ಯಾಟಿಂಗ್ ನಡೆಸಿ ಅಡಿಪಾಯ ಹಾಕಿಕೊಟ್ಟರು. ರಾಜಸ್ಥಾನದ ಪ್ರತಿಯೊಬ್ಬ ಬೌಲರ್&zwnj;ಗಳನ್ನೂ ಮನಬಂದಂತೆ ದಂಡಿಸಿದ ಈ ಜೋಡಿ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ ಸುದರ್ಶನ್ ಕೇವಲ 32 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 58 ರನ್ ಚಚ್ಚಿ ಬ್ರಿಜೇಶ್ ಶರ್ಮಾ ಎಸೆತದಲ್ಲಿ ಸತತ 2ನೇ ಪಂದ್ಯದಲ್ಲೂ 'ಹಿಟ್ ವಿಕೆಟ್' ಆಗಿ ಔಟಾದರು. ಔಟಾಗುವಾಗ ಅವರ ಸ್ಟ್ರೈಕ್ ರೇಟ್ 181.25 ರಷ್ಟಿತ್ತು!&lt;/p&gt;&lt;p&gt;ಜವಾಬ್ದಾರಿಯುತ ಹಾಗೂ ಅಷ್ಟೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಕ್ಯಾಪ್ಟನ್ ಶುಭಮನ್ ಗಿಲ್ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 15 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್&zwnj;ಗಳ ನೆರವಿನಿಂದ 104 ರನ್ ಸಿಡಿಸಿ ಅಬ್ಬರಿಸಿದರು. 196.23ರ ಸ್ಟ್ರೈಕ್ ರೇಟ್&zwnj;ನಲ್ಲಿ ಬ್ಯಾಟ್ ಬೀಸಿದ ಗಿಲ್, ಜೋಫ್ರಾ ಆರ್ಚರ್ ಎಸೆತದಲ್ಲಿ ಎಲ್&zwnj;ಬಿಡಬ್ಲ್ಯೂ (lbw) ಆಗಿ ನಿರ್ಗಮಿಸುವಷ್ಟರಲ್ಲಿ ಗುಜರಾತ್ ತಂಡ ಗೆಲುವಿನ ದಡ ಸೇರುವುದು ಖಚಿತವಾಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/gt-beats-rr-qualifier-2-enters-ipl-2026-final-against-rcb-shubman-gill-104-san/articleshow-lhwicat"/>
        </item>
        <item>
            <title><![CDATA[ಮತ್ತೊಂದು ಶತಕ ಮಿಸ್‌ ಮಾಡಿಕೊಂಡ ವೈಭವ್‌ ಸೂರ್ಯವಂಶಿ, ಗುಜರಾತ್‌ಗೆ 215 ರನ್‌ ಟಾರ್ಗೆಟ್‌]]></title>
            <link>https://kannada.asianetnews.com/cricket-sports/vaibhav-suryavanshi-misses-century-rr-vs-gt-qualifier-2-ipl-2026-san/articleshow-k27rlr7</link>
            <guid isPermaLink="true">https://kannada.asianetnews.com/cricket-sports/vaibhav-suryavanshi-misses-century-rr-vs-gt-qualifier-2-ipl-2026-san/articleshow-k27rlr7</guid>
            <pubDate>Fri, 29 May 2026 21:35:08 +0530</pubDate>
            <description><![CDATA[&lt;p&gt;ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧದ ಕ್ವಾಲಿಫೈಯರ್&zwnj;-2 ಪಂದ್ಯದಲ್ಲಿ ವೈಭವ್&zwnj; ಸೂರ್ಯವಂಶಿ 96 ರನ್&zwnj;ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಶತಕದಿಂದ ವಂಚಿತರಾದರು. ಈ ಮೂಲಕ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಮೂರನೇ ಬಾರಿಗೆ 90ರ ಗಡಿಯಲ್ಲಿ ಔಟಾದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst78wqge3phsqcy6qwrg5vy,imgname-vaibhav-soryavanshi-1780070249200.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂಡೀಗಢ (ಮೇ.29):&lt;/strong&gt; ಹಾಲಿ ವರ್ಷದ ಐಪಿಎಲ್&zwnj;ನಲ್ಲಿ ತನ್ನ ಬ್ಯಾಟಿಂಗ್&zwnj; ಪ್ರಹಾರದ ಮೂಲಕ ವಿಶ್ವದ ಗಮನ ಸೆಳೆದಿರುವ ಯುವ ಬ್ಯಾಟ್ಸ್&zwnj;ಮನ್&zwnj; ವೈಭವ್&zwnj; ಸೂರ್ಯವಂಶಿ ಸತತ 2ನೇ ಪಂದ್ಯದಲ್ಲಿ ಶತಕದಿಂದ ವಂಚಿತರಾಗಿದ್ದಾರೆ. ಎಲಿಮಿನೇಟರ್&zwnj; ಪಂದ್ಯದಲ್ಲಿ 97 ರನ್&zwnj;ಗೆ ಔಟಾಗಿದ್ದ ವೈಭವ್&zwnj; ಸೂರ್ಯವಂಶಿ, ಶುಕ್ರವಾರ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧದ ಕ್ವಾಲಿಫೈಯರ್&zwnj;-2 ಪಂದ್ಯದಲ್ಲಿ ಪ್ರಬುದ್ಧ ಆಟವಾಡಿದರೂ 96 ರನ್&zwnj;ಗೆ ಔಟಾಗಿ ನಿರಾಸೆ ಮೂಡಿಸಿದರು. ಹಾಲಿ ವರ್ಷದ ಐಪಿಎಲ್&zwnj;ನಲ್ಲಿ ಒಂದು ಶತಕ ಬಾರಿಸಿರುವ ವೈಭವ್&zwnj; ಸೂರ್ಯವಂಶಿ, ಮೂರು ಬಾರಿ 90 ಪ್ಲಸ್&zwnj; ರನ್&zwnj;ಗೆ ಔಟಾಗಿದ್ದಾರೆ.&lt;/p&gt;&lt;p&gt;ಮಹಾರಾಜ ಯಾದವಿಂದ್ರ ಸಿಂಗ್&zwnj; ಸ್ಟೇಡಿಯಂನಲ್ಲಿ ವಿವಾದಿತ ಟಾಸ್&zwnj; ರಾಜಸ್ಥಾನ ರಾಯಲ್ಸ್&zwnj; ಮೊದಲು ಬ್ಯಾಟಿಂಗ್&zwnj; ಮಾಡುವ ನಿರ್ಧಾರ ಮಾಡಿತು. ಎಂದಿನಂತೆ ವೈಭವ್&zwnj; ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್&zwnj; ನೆರವಿನಿಂದ ರಾಜಸ್ಥಾನ ರಾಯಲ್ಸ್&zwnj; ತಂಡ 6 ವಿಕೆಟ್&zwnj;ಗೆ 214 ರನ್&zwnj; ಪೇರಿಸಿದ್ದು, ಗುಜರಾತ್&zwnj; ಗೆಲುವಿಗೆ 215 ರನ್&zwnj; ಟಾರ್ಗೆಟ್&zwnj; ನೀಡಿದೆ. ಐಪಿಎಲ್&zwnj;ನಲ್ಲಿ 90 ಪ್ಲಸ್&zwnj; ರನ್&zwnj;ಗೆ 3 ಬಾರಿ ಔಟಾದ ಪ್ಲೇಯರ್ಸ್&zwnj;ಗಳ ಪಟ್ಟಿಯಲ್ಲಿ ವೈಭವ್&zwnj; ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಡೇವಿಡ್&zwnj; ವಾರ್ನರ್&zwnj;, ಕೆಎಲ್&zwnj; ರಾಹುಲ್&zwnj;, ಗ್ಲೆನ್&zwnj; ಮ್ಯಾಕ್ಸ್&zwnj;ವೆಲ್,&zwnj; ಹಾಗೂ ರುತುರಾಜ್&zwnj; ಗಾಯಕ್ವಾಡ್&zwnj; ಈ ಕುಖ್ಯಾತಿ ಗಳಿಸಿದ್ದರು. ಒಂದೇ ಆವೃತ್ತಿಯಲ್ಲಿ ಮೂರನೇ ಬಾರಿಗೆ 90 ಪ್ಲಸ್&zwnj;ಗೆ ಔಟಾದ ಪಟ್ಟಿಯಲ್ಲಿ ವೈಭವ್&zwnj; ಸೂರ್ಯವಂಶಿ, ಗ್ಲೆನ್&zwnj; ಮ್ಯಾಕ್ಸ್&zwnj;ವೆಲ್&zwnj; ಹಾಗೂ ಮಿಚೆಲ್&zwnj; ಮಾರ್ಷ್&zwnj;ರೊಂದಿಗೆ ಸ್ಥಾನ ಪಡೆದಿದ್ದಾರೆ.&lt;/p&gt;&lt;p&gt;ಮೊದಲು ಬ್ಯಾಟಿಂಗ್&zwnj;ಗೆ ಇಳಿದ ರಾಜಸ್ಥಾನ ರಾಯಲ್ಸ್&zwnj;ಗೆ ಈ ಬಾರಿ ಎಂದಿನ ಆರಂಭ ಸಿಗಲಿಲ್ಲ. 9 ರನ್&zwnj; ಗಳಿಸುವ ವೇಳೆಗಾಗಲೇ ಆರಂಭಿಕ ಬ್ಯಾಟ್ಸ್&zwnj;ಮನ್&zwnj; ಯಶಸ್ವಿ ಜೈಸ್ವಾಲ್&zwnj; ಹಾಗೂ ವನ್&zwnj;ಡೌನ್&zwnj; ಬ್ಯಾಟ್ಸ್&zwnj;ಮನ್&zwnj; ಧ್ರುವ್&zwnj; ಜುರೇಲ್&zwnj; ವಿಕೆಟ್&zwnj; ಕಳೆದುಕೊಂಡಿತ್ತು. ಇದಾದ ಕೆಲವೇ ಹೊತ್ತಿನಲ್ಲಿ ವೈಭವ್&zwnj; ಸೂರ್ಯವಂಶಿಗೆ ಜೀವದಾನ ಕೂಡ ಪಡೆದುಕೊಂಡರು. ಸಾಮಾನ್ಯವಾಗಿ ಪವರ್&zwnj; ಪ್ಲೇ ಓವರ್&zwnj;ಗಳಲ್ಲಿ ಅಬ್ಬರಿಸುವ ರಾಜಸ್ಥಾನ ರಾಯಲ್ಸ್&zwnj; ಆರಂಭಿಕ ವಿಕೆಟ್&zwnj; ಕಳೆದುಕೊಂಡಿದ್ದರಿಂದ ಮೊದಲ 6 ಓವರ್&zwnj;ಗಳಲ್ಲಿ 70 ರನ್&zwnj; ಬಾರಿಸಲಷ್ಟೇ ಸಾಧ್ಯವಾಯಿತು. ಇದರಲ್ಲಿ ಹೆಚ್ಚಿನ ಕಾಣಿಕೆ ಇದ್ದಿದ್ದು ವೈಭವ್&zwnj; ಸೂರ್ಯವಂಶಿಯಿಂದ.&lt;/p&gt;&lt;p&gt;ವೈಭವ್&zwnj; ಸೂರ್ಯವಂಶಿಗೆ ಮೂರನೇ ವಿಕೆಟ್&zwnj; ರವೀಂದ್ರ ಜಡೇಜಾ ಕೆಲ ಹೊತ್ತು ಸಾಥ್&zwnj; ನೀಡಿದರೂ. ಬಳಿಕ ಗಾಯದ ಕಾರಣದಿಂದಾಗೊ ಹೊರಗುಳಿದರು. ನಾಯಕ ರಿಯಾನ್&zwnj; ಪರಾಗ್&zwnj;ರಿಂದ ದೊಡ್ಡ ಇನ್ನಿಂಗ್ಸ್&zwnj; ಬರದ ಕಾರಣ ರಾಜಸ್ಥಾನ ತಂಡ ತನ್ನ 3ನೇ ವಿಕೆಟ್&zwnj;ಅನ್ನು 101 ರನ್&zwnj;ಗೆ ಕಳೆದುಕೊಂಡಿತು.ಇದರ ಬೆನ್ನಲ್ಲಿಯೇ ದಸುನ್&zwnj; ಶನಕ, ಜೋಫ್ರಾ ಆರ್ಚರ್&zwnj; ಕೂಡ ಔಟಾದಾಗ ರಾಜಸ್ಥಾನ ಪರಿಸ್ಥಿತಿ 12.4 ಓವರ್&zwnj;ಗಳಲ್ಲಿ 118 ರನ್&zwnj; ಬಾರಿಸಿ ಶೋಚನೀಯವಾಗಿತ್ತು. ಒಂದಡೆಯಿದ್ದ ವೈಭವ್&zwnj; ಸೂರ್ಯವಂಶಿಗೆ ಈ ಹಂತದಲ್ಲಿ ಮತ್ತೆ ಸಾಥ್&zwnj; ನೀಡಿದ್ದಯ ರವೀಂದ್ರ ಜಡೇಜಾ.&lt;/p&gt;&lt;p&gt;ಜಡೇಜಾ ಅವರೊಂದಿಗೆ ಕ್ರೀಸ್&zwnj;ನಲ್ಲಿದ್ದ ಅಬ್ಬರಿಸಿದ್ದ ವೈಭವ್&zwnj; ಸೂರ್ಯವಂಶಿ ಈಗ ಮತ್ತೊಮ್ಮೆ ಅದೇ ರೀತಿಯ ಆಟಕ್ಕೆ ಇಳಿದಿದ್ದರು. ಸಿಕ್ಸರ್&zwnj;, ಬೌಂಡರಿಗಳ ಸುರಿಮಳೆಗೈದು ಶತಕದ ಸನಿಹ ಧಾವಿಸಿದ್ದರು. 18ನೇ ಓವರ್&zwnj; ಎಸೆದ ರಬಾಡ ಅವರ 2ನೇ ಎಸೆತವನ್ನು ಸಿಕ್ಸರ್&zwnj;ಗಟ್ಟಿ ಶತಕ ಬಾರಿಸುವ ಹಾದಿಯಲ್ಲಿ ವೈಭವ್&zwnj; ಸೂರ್ಯವಂಶಿ ಥರ್ಡ್&zwnj;ಮ್ಯಾನ್&zwnj;ನಲ್ಲಿ ಮತ್ತೊಮ್ಮೆ ಅದೇ ರೀತಿಯ ಕ್ಯಾಚ್&zwnj; ನೀಡಿ ನಿರಾಸೆಯಿಂದ ನಿರ್ಗಮಿಸಿದರು.&lt;/p&gt;&lt;p&gt;ಕೊನೆಯಲ್ಲಿ ರವೀಂದ್ರ ಜಡೇಜಾಗೆ ಜೊತೆಯಾಗಿದ್ದ ದೊನೊವನ್&zwnj; ಫೆರಿರಾ 11 ಎಸೆತಗಳಲ್ಲಿ 2 ಬೌಂಡರಿ 4 ಸಿಕ್ಸರ್&zwnj;ಗಳಿದ್ದ ಅಜೇಯ 38 ರನ್&zwnj; ಬಾರಿಸಿ ತಂಡದ ಮೊತ್ತವನ್ನು 214ಕ್ಕೆ ಏರಿಸುವಲ್ಲಿ ಯಶಸ್ವಿಯಾದರು. ಜಡೇಜಾ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್&zwnj; ಇದ್ದ ಅಜೇಯ 45 ರನ್&zwnj; ಬಾರಿಸಿದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/vaibhav-suryavanshi-misses-century-rr-vs-gt-qualifier-2-ipl-2026-san/articleshow-k27rlr7"/>
        </item>
        <item>
            <title><![CDATA[ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡು ಬಾರಿ ಟಾಸ್ ಹಾಕಿದ್ದೇಕೆ? ಗುಜರಾತ್‌ಗೆ ಆಯಿತಾ ಅನ್ಯಾಯಾ?]]></title>
            <link>https://kannada.asianetnews.com/cricket-sports/ipl-qualifier-2-gujarat-titans-rajastah-roysls-two-toss-drama-sparks-questions/articleshow-nk0v2mi</link>
            <guid isPermaLink="true">https://kannada.asianetnews.com/cricket-sports/ipl-qualifier-2-gujarat-titans-rajastah-roysls-two-toss-drama-sparks-questions/articleshow-nk0v2mi</guid>
            <pubDate>Fri, 29 May 2026 20:36:41 +0530</pubDate>
            <description><![CDATA[&lt;p&gt;ಕ್ವಾಲಿಫೈಯರ್ 2 ಪಂದ್ಯದಲ್ಲಿ ಒಂದಲ್ಲ ಎರಡು ಬಾರಿ ಟಾಸ್ ಹಾಕಲಾಗಿದೆ. ಮೊದಲ ಬಾರಿಗೆ ಗುಜರಾತ್ ಪರ ಟಾಸ್ ಬಿದ್ದರೆ, ಎರಡನೇ ಬಾರಿಗೆ ರಾಜಸ್ಥಾನ ರಾಯಲ್ಸ್ ಪರವಾಗಿತ್ತು. ಅಷ್ಟಕ್ಕೂ 2 ಬಾರಿ ಟಾಸ್ ಹಾಕಿ ಟೈಟಾನ್ಸ್&zwnj;ಗೆ ಅನ್ಯಾಯ ಮಾಡಿದ್ರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksszw1rfnhtqxv7e06jdev2x,imgname-gt-vs-rr-toss-drama-1780062488335.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಂಡೀಘಡ (ಮೇ.29) ಐಪಿಎಲ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಐಪಿಎಲ್ 2026 ಟೂರ್ನಿಯ ಫೈನಲ್ ಪ್ರವೇಶದ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸುತ್ತಿದೆ. ಈ ಪಂದ್ಯದ ಟಾಸ್ ಅತ್ಯಂತ ಮುಖ್ಯವಾಗಿತ್ತು. ಆದರೆ ಟಾಸ್ ಪ್ರಕ್ರಿಯೆ ಎರಡು ಬಾರಿ ಮಾಡಲಾಗಿದೆ. ಮೊದಲ ಬಾರಿ ಟಾಸ್ ಹಾಕಿದಾಗ ಗುಜರಾತ್ ಟೈಟಾನ್ಸ್ ಪರವಾಗಿದ್ದರೆ, ಎರಡನೇ ಬಾರಿ ಟಾಸ್ ಹಾಕಿದಾಗ ರಾಜಸ್ಥಾನ ರಾಯಲ್ಸ್ ಪರವಾಗಿ ಬಿದ್ದಿದೆ. ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಎರಡು ಬಾರಿ ಟಾಸ್ ಹಾಕಿ ಇದೀಗ ವಿವಾದ ಸೃಷ್ಟಿಯಾಗಿದೆ.&lt;/p&gt;&lt;h2&gt;ಎರಡನೇ ಬಾರಿ ಟಾಸ್ ಹಾಕಲು ಸೂಚಿಸಿದ ಮ್ಯಾಚ್ ರೆಫ್ರಿ&lt;/h2&gt;&lt;p&gt;2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಬಮನ್ ಗಿಲ್ ಕಾಯಿನ್ ಹಿಡಿದು ನಿಂತಿದ್ದರು. ಇತ್ತ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಕಾಲ್ ನೀಡಬೇಕಿತ್ತು. ರವಿ ಶಾಸ್ತ್ರಿ ನಿರೂಪಣೆ ಮಾಡುತ್ತಿದ್ದರೆ, ಇತ್ತ ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಅಧಿಕೃತವಾಗಿ ಘೋಷಣೆ ಮಾಡಲು ನಿಂತಿದ್ದರು. ಗಿಲ್ ಕಾಯಿನ್ ಟಾಸ್ ಮಾಡಿದರೆ ರಿಯಾನ್ ಪರಾಗ್ ತಮ್ಮ ಕಾಲ್ ಹೇಳಿದ್ದಾರೆ. ಆದರೆ ರಿಯಾನ್ ಪರಾಗ್ ಹೇಳಿದ ನಿರ್ಧಾರ ಮ್ಯಾಚ್ ರೆಫ್ರಿಗೆ ಕೇಳಿಸಲೇ ಇಲ್ಲ. ಹೀಗಾಗಿ ತಕ್ಷಣವೇ ಮ್ಯಾಚ್ ರೆಫ್ರಿ ಟಾಸ್ ಮತ್ತೊಮ್ಮೆ ಹಾಕಲು ಸೂಚಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;TOSS DRAMA IN QUALIFIER 2.-Toss flipped twice in today's GT vs RR qualifier 2 Game. pic.twitter.com/WMgVvEUYwR&lt;/p&gt;&lt;p&gt;&mdash; U' (@toxifyxe) May 29, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ರಿಯಾನ್ ಪರಾಗ್ ಹೇಳಿದ ನಿರ್ಧಾರ ಕೇಳಿಸದ ಕಾರಣ ಮ್ಯಾಚ್ ರೆಫ್ರಿ ಕಾಯಿನ್ ನೆಲಕ್ಕೆ ಬೀಳುವ ಮೊದಲೇ ಟಾಸ್ ಪ್ರಕ್ರಿಯೆ ಮತ್ತೊಮ್ಮೆ ಮಾಡಲು ಸೂಚಿಸಿದ್ದಾರೆ. ಬಳಿಕ ಕಾಯಿನ್ ಹೆಕ್ಕಿ ತಂದು ಗಿಲ್&zwnj;ಗೆ ನೀಡಿದ್ದಾರೆ. ಆದರೆ ಮೊದಲ ಬಾರಿ ಟಾಸ್ ಹಾಕಿದಾಗ ರಿಯಾನ್ ಪರಾಗ್ ನಿರ್ಧಾರದ ಬದಲು ಗುಜರಾತ್ ಪರ ಬಿದ್ದಿತ್ತು. ಎರಡನೇ ಬಾರಿ ಟಾಸ್ ಹಾಕಿದಾಗ ರಾಜಸ್ಥಾನ ರಾಯಲ್ಸ್ ಪರ ಬಿದ್ದಿತ್ತು. ರಾಜಸ್ಥಾನ ರಾಯಲ್ಸ್ ತನ್ನ ಬ್ಯಾಟಿಂಗ್ ಸ್ಟ್ರೆಂಥ್ ಹಾಗೂ ಪಿಚ್ ಅನುಗುಣವಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.&lt;/p&gt;&lt;h2&gt;ಆಕ್ರೋಶ ಹೊರಹಾಕಿದ ಶುಬಮನ್ ಗಿಲ್&lt;/h2&gt;&lt;p&gt;ಮೊದಲ ಟಾಸ್ ಹಾಕಿದಾಗ ಗುಜರಾತ್ ಪರ ಟಾಸ್ ಬಿದ್ದಿತ್ತು. ತಾವು ಕೂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದೇವು. ಈ ಪಿಚ್&zwnj;ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ಸ್ಕೋರ್ ಮಾಡುವ ಲೆಕ್ಕಾಚಾರದಲ್ಲಿದ್ದೇವು.ಪಿಚ್ ಕೂಡ ಇದಕ್ಕೆ ಸಹಾಕಾರಿಯಾಗಿತ್ತು. ಆದರೆ ಅನಿರೀಕ್ಷಿತ ಬೆಳವಣಿಗೆ ಕಾರಣ ಟಾಸ್&zwnj;ನಲ್ಲಿ ಸೋಲಾಗಿದೆ ಎಂದು ಗಿಲ್ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/ipl-qualifier-2-gujarat-titans-rajastah-roysls-two-toss-drama-sparks-questions/articleshow-nk0v2mi"/>
        </item>
        <item>
            <title><![CDATA[ಆರ್‌ಸಿಬಿ ಈ ಸಲ ಕಪ್ ಗೆದ್ರೂ ಪಟಾಕಿ ಹೊಡೆಯಂಗಿಲ್ಲ, ರೋಡ್‌ಗೆ ಬಂದು ಕುಣಿಯಂಗಿಲ್ಲ; ಪೊಲೀಸರಿಂದ 6 ಮಾರ್ಗಸೂಚಿ ಬಿಡುಗಡೆ!]]></title>
            <link>https://kannada.asianetnews.com/state/bengaluru-police-guidelines-for-rcb-fans-ipl-final-chinnaswamy-stadium-stampede-effect-sat/articleshow-f684gvs</link>
            <guid isPermaLink="true">https://kannada.asianetnews.com/state/bengaluru-police-guidelines-for-rcb-fans-ipl-final-chinnaswamy-stadium-stampede-effect-sat/articleshow-f684gvs</guid>
            <pubDate>Fri, 29 May 2026 20:30:06 +0530</pubDate>
            <description><![CDATA[&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ತಲುಪಿದ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸರು ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷದ ಕಾಲ್ತುಳಿತದ ಘಟನೆಯಿಂದ ಪಾಠ ಕಲಿತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kst3mmw6wd5cxtn2tcnxtqqc,imgname-bengaluru-police-guidelenes-rcb-final-match-1780066440070.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 29): ರಾ&lt;/strong&gt;ಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru - RCB) ತಂಡವು ಫೈನಲ್ ತಲುಪುತ್ತಿದ್ದಂತೆಯೇ ಇಡೀ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru RCB Fans) ಸಂಭ್ರಮದ ವಾತಾವರಣ ಮನೆಮಾಡಿದೆ. ಆದರೆ, ಈ ಸಂಭ್ರಮ ಹದ್ದುಮೀರಿ ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎಂಬ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ (Bengaluru City Police) ಈಗಿನಿಂದಲೇ ಎಚ್ಚೆತ್ತುಕೊಂಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಬಳಿ ನಡೆದ ಕಾಲ್ತುಳಿತದಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಬಾರಿ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಆರ್&zwnj;ಸಿಬಿ ಕಪ್ ಗೆದ್ದರೂ ಪಟಾಕಿ ಹೊಡೆಯುವಂತಿಲ್ಲ ಎಂದು ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;ಚಿನ್ನಸ್ವಾಮಿ ಕಾಲ್ತುಳಿತದ ಎಫೆಕ್ಟ್:&lt;/strong&gt;&lt;/h2&gt;&lt;p&gt;ಕಳೆದ ಬಾರಿ ಆರ್&zwnj;ಸಿಬಿ 18 ವರ್ಷದ ಬಳಿಕ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ವಿಜಯೋತ್ಸವ ಆಚರಣೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಾಗ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಉಂಟಾದ ಅವಾಂತರಗಳು ಪೊಲೀಸರಿಗೆ ದೊಡ್ಡ ಪಾಠ ಕಲಿಸಿವೆ. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಆರ್&zwnj;ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಹೀಗಾಗಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಲಾಖೆ ಸಿದ್ಧವಿಲ್ಲ. ಹೀಗಾಗಿ, ಪಂದ್ಯದ ದಿನದಂದು ನಗರದಾದ್ಯಂತ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಮುಂದಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರು ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:&lt;/strong&gt;&lt;/h2&gt;&lt;p&gt;&lt;strong&gt;ಸಾರ್ವಜನಿಕ ಸಂಭ್ರಮಾಚರಣೆಗೆ ನಿರ್ಬಂಧ: &lt;/strong&gt;ರಸ್ತೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ಸಂಭ್ರಮಾಚರಣೆ ಮಾಡುವಂತಿಲ್ಲ. ಇದು ಸಂಚಾರ ದಟ್ಟಣೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದರಿಂದ ಇದಕ್ಕೆ ನಿಷೇಧ ಹೇರಲಾಗಿದೆ.&lt;/p&gt;&lt;p&gt;&lt;strong&gt;ಎಲ್ ಇ ಡಿ (LED) ವಾಲ್ ಪ್ರಸಾರಕ್ಕೆ ಬ್ರೇಕ್: &lt;/strong&gt;ಅನುಮತಿ ಇಲ್ಲದೆ ರಸ್ತೆಗಳಿಗೆ ಮುಖಮಾಡಿ ದೊಡ್ಡ ಎಲ್ ಇ ಡಿ ವಾಲ್ ಗಳನ್ನು ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ. ಈಗಾಗಲೇ ಅಳವಡಿಸಿರುವ ಸ್ಕ್ರೀನ್&zwnj;ಗಳಲ್ಲೂ ಪಂದ್ಯದ ಲೈವ್ ಸ್ಟ್ರೀಮಿಂಗ್ ಮಾಡಲು ಅವಕಾಶವಿಲ್ಲ.&lt;/p&gt;&lt;p&gt;&lt;strong&gt;ಪಟಾಕಿ ಸಿಡಿಸುವಂತಿಲ್ಲ: &lt;/strong&gt;ಆರ್ ಸಿ ಬಿ ಫೈನಲ್ ಗೆದ್ದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಶಬ್ದ ಮಾಲಿನ್ಯ ಅಥವಾ ಅನಾಹುತಗಳಿಗೆ ದಾರಿ ಮಾಡಿಕೊಡುವಂತಿಲ್ಲ.&lt;/p&gt;&lt;p&gt;&lt;strong&gt;ಸಾರಿಗೆ ನಿಯಮಗಳ ಪಾಲನೆ:&lt;/strong&gt; ಬೈಕ್ ರ್ಯಾಲಿ ನಡೆಸುವುದು, ಅತಿವೇಗವಾಗಿ ಚಾಲನೆ ಮಾಡುವುದು, ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಮತ್ತು ಕರ್ಕಶ ಹಾರ್ನ್ ಬಳಸುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.&lt;/p&gt;&lt;p&gt;&lt;strong&gt;ಮದ್ಯಪಾನ ನಿಷೇಧ: &lt;/strong&gt;ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಥವಾ ಮದ್ಯ ಸೇವಿಸಿ ಗಲಾಟೆ ಮಾಡುವುದು ಕಂಡುಬಂದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲಾಗುವುದು.&lt;/p&gt;&lt;p&gt;&lt;strong&gt;ಸಾಮಾಜಿಕ ಜಾಲತಾಣದ ಮೇಲೆ ನಿಗಾ: &lt;/strong&gt;ಫೇಸ್&zwnj;ಬುಕ್, ಎಕ್ಸ್ (ಟ್ವಿಟರ್) ಅಥವಾ ಇನ್ಸ್ಟಾಗ್ರಾಮ್&zwnj;ನಲ್ಲಿ ಬೇರೆ ತಂಡದ ಅಭಿಮಾನಿಗಳ ವಿರುದ್ಧ ದ್ವೇಷಪೂರಿತ ಪೋಸ್ಟ್ ಹಾಕುವಂತಿಲ್ಲ. ಅಶಾಂತಿ ಸೃಷ್ಟಿಸುವ ಯಾವುದೇ ಪೋಸ್ಟ್ ಹಂಚಿಕೊಂಡರೆ ಐಟಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು.&lt;/p&gt;&lt;h2&gt;&lt;strong&gt;ಅಭಿಮಾನಿಗಳಿಗೆ ಮನವಿ:&lt;/strong&gt;&lt;/h2&gt;&lt;p&gt;ಪಂದ್ಯದ ಫಲಿತಾಂಶ ಏನೇ ಇರಲಿ, ಬೇರೆ ತಂಡದ ಅಭಿಮಾನಿಗಳನ್ನು ನಿಂದಿಸುವುದು ಅಥವಾ ಜಗಳಕ್ಕೆ ಪ್ರಚೋದನೆ ನೀಡುವುದನ್ನು ಮಾಡಬಾರದು. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಕಾಣಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ನಗರದ ಪ್ರಮುಖ ವೃತ್ತಗಳು ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸಿಸಿಟಿವಿ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.&lt;/p&gt;&lt;p&gt;ಈ ಮಾರ್ಗಸೂಚಿಗಳನ್ನು ಮೀರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಆರ್ ಸಿ ಬಿ ಅಭಿಮಾನಿಗಳು ಜವಾಬ್ದಾರಿಯುತವಾಗಿ ವರ್ತಿಸಿ, ನಗರದ ಶಾಂತಿ ಕಾಪಾಡುವಂತೆ ಕೋರಲಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-police-guidelines-for-rcb-fans-ipl-final-chinnaswamy-stadium-stampede-effect-sat/articleshow-f684gvs"/>
        </item>
        <item>
            <title><![CDATA[ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ಹಠಾತ್ ಗುಡ್‌ಬೈ: ಕೋಚ್ ಜೊತೆಗಿನ ಜಗಳ, ಇಂಟರ್ನಲ್ ಪಾಲಿಟಿಕ್ಸ್ ಬಿಚ್ಚಿಟ್ಟ ಇನ್‌ಸೈಡ್ ಸ್ಟೋರಿ!]]></title>
            <link>https://kannada.asianetnews.com/cricket-sports/why-rishabh-pant-left-lsg-captaincy-will-he-leave-lucknow-super-giants-san/articleshow-2y73que</link>
            <guid isPermaLink="true">https://kannada.asianetnews.com/cricket-sports/why-rishabh-pant-left-lsg-captaincy-will-he-leave-lucknow-super-giants-san/articleshow-2y73que</guid>
            <pubDate>Fri, 29 May 2026 20:14:54 +0530</pubDate>
            <description><![CDATA[&lt;p&gt;ಐಪಿಎಲ್ 2026ರಲ್ಲಿ ಲಕ್ನೋ ತಂಡದ ಹೀನಾಯ ಪ್ರದರ್ಶನದ ನಂತರ ರಿಷಭ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾನೇಜ್&zwnj;ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯ, ನಿರ್ಧಾರಗಳಲ್ಲಿ ಸ್ವಾತಂತ್ರ್ಯದ ಕೊರತೆ ಮತ್ತು ತಮ್ಮ ಬ್ಯಾಟಿಂಗ್ ಮೇಲೆ ಗಮನಹರಿಸುವ ಉದ್ದೇಶದಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp0y001vtc5ztjan8fev8513,imgname-20260412125l-1776000434235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.29):&lt;/strong&gt; ಸ್ಟಾರ್ ವಿಕೆಟ್&zwnj;ಕೀಪರ್ ಬ್ಯಾಟರ್ ರಿಷಭ್ ಪಂತ್ (rishabh pant) ಅವರ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕತ್ವದ ಪಯಣ ಅತ್ಯಂತ ದುರಂತಮಯವಾಗಿ ಅಂತ್ಯಗೊಂಡಿದೆ. ಐಪಿಎಲ್ 2026ರ (IPL 2026) ಪ್ರಸಕ್ತ ಆವೃತ್ತಿಯಲ್ಲಿ ಲಕ್ನೋ ಫ್ರಾಂಚೈಸಿಯು ಅಂಕಪಟ್ಟಿಯಲ್ಲಿ ಅತ್ಯಂತ ಕೊನೆಯ ಸ್ಥಾನ ಪಡೆದು ಹೀನಾಯ ಪ್ರದರ್ಶನ ನೀಡಿದ ಬೆನ್ನಲ್ಲೇ ಪಂತ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಫ್ರಾಂಚೈಸಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ರಿಷಭ್ ಪಂತ್ ತಾವು ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಲು ವಿನಂತಿಸಿದ್ದರು ಮತ್ತು ಅದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂಗೀಕರಿಸಲಾಗಿದೆ ಎಂದು ಖಚಿತಪಡಿಸಿದೆ. ಮೇಲ್ನೋಟಕ್ಕೆ ಇದು ಟೂರ್ನಿ ಮುಗಿದ ಬಳಿಕ ಕೈಗೊಂಡ ನಿರ್ಧಾರದಂತೆ ಕಂಡರೂ, ಕಳೆದ ಕೆಲವು ವಾರಗಳಿಂದಲೇ ಮ್ಯಾನೇಜ್&zwnj;ಮೆಂಟ್ ಜೊತೆಗಿನ ಅಸಮಾಧಾನ ಮತ್ತು ಹತಾಶೆಯಿಂದಾಗಿ ಪಂತ್ ಈ ತೀರ್ಮಾನಕ್ಕೆ ಬಂದಿದ್ದರು ಎಂಬುದು ಈಗ ಬಹಿರಂಗವಾಗಿದೆ.&lt;/p&gt;&lt;p&gt;ಪಂತ್ ಅವರು ನಾಯಕತ್ವ ತ್ಯಜಿಸುವ ನಿರ್ಧಾರಕ್ಕೆ ಕಾರಣಗಳು ಸೀಸನ್&zwnj;ನ ಆರಂಭದಲ್ಲೇ ಸಿಕ್ಕಿದ್ದವು. ಪಂದ್ಯ ಮುಗಿದ ಬಳಿಕ ನಡೆಯುತ್ತಿದ್ದ ಪತ್ರಿಕಾಗೋಷ್ಠಿಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಪಂತ್ ಅವರ ಅಸಮಾಧಾನದ ಸುಳಿವು ಸಿಗುತ್ತಿತ್ತು. ತಂಡದ ನಿರ್ಧಾರಗಳಲ್ಲಿ ಒಂದಕ್ಕಿಂತ ಹೆಚ್ಚು ಧ್ವನಿಗಳು (ಹಲವರ ಹಸ್ತಕ್ಷೇಪ) ಕೇಳಿಬರುತ್ತಿರುವ ವಾತಾವರಣದಲ್ಲಿ ನಾಯಕತ್ವ ನಿರ್ವಹಿಸುವುದು ತಮಗೆ ಸವಾಲಾಗಿದೆ ಎಂದು ಪಂತ್ ಪದೇ ಪದೇ ಹೇಳುತ್ತಿದ್ದರು.&lt;/p&gt;&lt;p&gt;ಲಕ್ನೋ ತಂಡದ ಲೀಡರ್&zwnj;ಶಿಪ್ ಗ್ರೂಪ್&zwnj;ನಲ್ಲಿ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್, ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ, ಸಹಾಯಕ ತರಬೇತುದಾರ ಲ್ಯಾನ್ಸ್ ಕ್ಲೂಸ್ನರ್ ಮತ್ತು ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಅವರಂತಹ ದೈತ್ಯರಿದ್ದರು. ಫ್ರಾಂಚೈಸಿ ಕ್ರಿಕೆಟ್&zwnj;ನಲ್ಲಿ ಇಂತಹ ವ್ಯವಸ್ಥೆ ಸಾಮಾನ್ಯವಾದರೂ, ಪಂತ್&zwnj;ಗೆ ಈ ಜಂಟಿ ನಿರ್ಧಾರಗಳ ಪ್ರಕ್ರಿಯೆ ಕಿರಿಕಿರಿ ಉಂಟುಮಾಡುತ್ತಿತ್ತು. ಹಲವು ದಿಕ್ಕುಗಳಿಂದ ಬರುತ್ತಿದ್ದ ಸಲಹೆಗಳಿಂದ ಪಂತ್ ಬೇಸತ್ತಿದ್ದರು, ಅತ್ತ ಮ್ಯಾನೇಜ್&zwnj;ಮೆಂಟ್ ಕೂಡ ಪಂತ್ ಅವರ ನಾಯಕತ್ವದ ನಿರ್ಧಾರಗಳನ್ನು ಬಹಿರಂಗವಾಗಿಯೇ ಪ್ರಶ್ನಿಸಲು ಶುರು ಮಾಡಿತ್ತು. &quot;ಯೋಜನೆಗಳನ್ನು ರೂಪಿಸುವುದು ಸುಲಭ, ಆದರೆ ಮೈದಾನದಲ್ಲಿ ಅದನ್ನು ಕಾರ್ಯಗತಗೊಳಿಸುವುದು ತುಂಬಾ ಕಷ್ಟ&quot; ಎಂದು ಪಂತ್ ನೀಡಿದ್ದ ಹೇಳಿಕೆಯೇ ತಂಡದ ಒಳಗಿನ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಗಿತ್ತು.&lt;/p&gt;&lt;h2&gt;&lt;strong&gt;ಟೂರ್ನಿ ಮುಗಿಯುವ ಮುನ್ನವೇ ನಿರ್ಧಾರವಾಗಿತ್ತು!&lt;/strong&gt;&lt;/h2&gt;&lt;p&gt;ಲಕ್ನೋ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ನಂತರ ಪಂತ್ ಈ ನಿರ್ಧಾರ ತಳೆದಿದ್ದಾರೆ ಎಂದು ಎಲ್ಲರೂ ಭಾವಿಸಿದ್ದಾರೆ, ಆದರೆ ಅಸಲಿ ಸಮಾಚಾರವೇ ಬೇರೆ ಇದೆ. ಟೂರ್ನಿಯ ದ್ವಿತೀಯಾರ್ಧದಲ್ಲೇ (ಕೊನೆಯ ಕೆಲವು ಪಂದ್ಯಗಳು ಬಾಕಿ ಇರುವಾಗಲೇ) ತಾವು ನಾಯಕತ್ವದಿಂದ ಕೆಳಗಿಳಿಯುವುದಾಗಿ ಪಂತ್ ಮ್ಯಾನೇಜ್&zwnj;ಮೆಂಟ್ ಮತ್ತು ಮಾಲೀಕರಿಗೆ ತಿಳಿಸಿದ್ದರು.&lt;/p&gt;&lt;p&gt;ಆರಂಭದಲ್ಲಿ ಫ್ರಾಂಚೈಸಿಯು ಪಂತ್ ಅವರ ಮನವೊಲಿಸಲು ಪ್ರಯತ್ನಿಸಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತರಾತುರಿಯಲ್ಲಿ ತೀರ್ಮಾನ ಕೈಗೊಳ್ಳುವುದು ಬೇಡ ಎಂದು ಮ್ಯಾನೇಜ್&zwnj;ಮೆಂಟ್ ಹೇಳಿತ್ತು. ಆದರೆ ಪಂತ್ ಮಾತ್ರ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು. ಸೀಸನ್ ಮುಂದುವರಿದಂತೆಲ್ಲಾ ಅವರು ತಮ್ಮ ನಿಲುವನ್ನು ಪುನರುಚ್ಚರಿಸಿದರು. ಅಂತಿಮವಾಗಿ ಹಲವು ಸುತ್ತಿನ ಮಾತುಕತೆಗಳ ನಂತರ ಲಕ್ನೋ ಅವರ ವಿನಂತಿಯನ್ನು ಒಪ್ಪಿಕೊಂಡಿತು.&lt;/p&gt;&lt;h2&gt;&lt;strong&gt;ನಾಯಕನ ಸ್ವಾತಂತ್ರ್ಯದ (Autonomy) ಪ್ರಶ್ನೆ&lt;/strong&gt;&lt;/h2&gt;&lt;p&gt;ಈ ಇಡೀ ವಿವಾದದ ಕೇಂದ್ರ ಬಿಂದು ನಾಯಕನಿಗೆ ಸಿಗಬೇಕಾದ ಸ್ವಾತಂತ್ರ್ಯ. ರಿಷಭ್ ಪಂತ್ ಯಾವಾಗಲೂ ಮೈದಾನದಲ್ಲಿ ತಮ್ಮ ಅಂತಃಪ್ರಜ್ಞೆ (Instincts) ಮತ್ತು ಸ್ವಂತ ನಿರ್ಧಾರಗಳನ್ನು ನಂಬುವ ನಾಯಕ. ಡಗೌಟ್&zwnj;ನಿಂದ ಬರುವ ನಿರ್ದೇಶನಗಳಿಗಿಂತ ಮೈದಾನದ ಪರಿಸ್ಥಿತಿಗೆ ತಕ್ಕಂತೆ ತಾವೇ ನಿರ್ಧಾರ ಕೈಗೊಂಡು ಅದರ ಜವಾಬ್ದಾರಿ ಹೊರಲು ಅವರು ಇಷ್ಟಪಡುತ್ತಾರೆ.&lt;/p&gt;&lt;p&gt;ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡದಲ್ಲಿದ್ದಾಗಲೂ ಸಹ ಸಪೋರ್ಟ್ ಸ್ಟಾಫ್&zwnj;ಗಳ ಸಲಹೆಗೆ ವಿರುದ್ಧವಾಗಿದ್ದರೂ ಪಂತ್ ತಮ್ಮದೇ ತೀರ್ಮಾನಗಳನ್ನು ಪ್ರಕಟಿಸುತ್ತಿದ್ದರು ಮತ್ತು ಮ್ಯಾನೇಜ್&zwnj;ಮೆಂಟ್ ಅದಕ್ಕೆ ಬೆಂಬಲ ನೀಡುತ್ತಿತ್ತು. ಆದರೆ ಲಕ್ನೋ ತಂಡದಲ್ಲಿ ತಮಗೆ ಮುಕ್ತವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶ ತೀರಾ ಸೀಮಿತವಾಗಿದೆ ಎಂಬ ಭಾವನೆ ಪಂತ್ ಅವರನ್ನು ಕಾಡತೊಡಗಿತ್ತು.&lt;/p&gt;&lt;h2&gt;&lt;strong&gt;ಸೂಪರ್ ಓವರ್&zwnj;ನಲ್ಲಿ ನಡೆದ ಆ ಒಂದು ವಿವಾದಾತ್ಮಕ ನಿರ್ಧಾರ!&lt;/strong&gt;&lt;/h2&gt;&lt;p&gt;ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದ ಸೂಪರ್ ಓವರ್ ವೇಳೆ ಮ್ಯಾನೇಜ್&zwnj;ಮೆಂಟ್ ಮತ್ತು ಪಂತ್ ನಡುವಿನ ಭಿನ್ನಾಭಿಪ್ರಾಯ ಸ್ಪಷ್ಟವಾಗಿ ಜಗಜ್ಜಾಹೀರಾಯಿತು. ಸೂಪರ್ ಓವರ್&zwnj;ನಲ್ಲಿ ಬ್ಯಾಟಿಂಗ್ ಮಾಡಲು ನಿಕೋಲಸ್ ಪೂರನ್ ಅವರನ್ನು ಕಳುಹಿಸುವುದು ಪಂತ್&zwnj;ಗೆ ಇಷ್ಟವಿರಲಿಲ್ಲ. ಪೂರನ್ ಅವರ ಸಾಮರ್ಥ್ಯದ ಬಗ್ಗೆ ಪಂತ್&zwnj;ಗೆ ಅನುಮಾನವಿರಲಿಲ್ಲ, ಆದರೆ ಆ ಸಮಯದಲ್ಲಿ ಪೂರನ್ ಕಳಪೆ ಫಾರ್ಮ್&zwnj;ನಲ್ಲಿದ್ದರು. ಅದೇ ಟೂರ್ನಿಯಲ್ಲಿ ಆಯುಷ್ ಬದೋನಿ ಭರ್ಜರಿ ಲಯದಲ್ಲಿದ್ದರು ಮತ್ತು ವೇಗವಾಗಿ ರನ್ ಗಳಿಸುತ್ತಿದ್ದರು. ಬದೋನಿ ಅವರಲ್ಲಿರುವ ಆತ್ಮವಿಶ್ವಾಸ ಸೂಪರ್ ಓವರ್&zwnj;ಗೆ ಸೂಕ್ತ ಎಂದು ಪಂತ್ ವಾದಿಸಿದ್ದರು. ಆದರೆ ಮ್ಯಾನೇಜ್&zwnj;ಮೆಂಟ್ ಮಾತ್ರ ಪಂತ್ ಮಾತನ್ನು ಮೀರಿ ಪೂರನ್ ಅವರನ್ನೇ ಕಳುಹಿಸಿತು. ಇದು ದೊಡ್ಡ ಜಗಳವಾಗದಿದ್ದರೂ, ಇಬ್ಬರ ನಡುವಿನ ಕ್ರಿಕೆಟಿಂಗ್ ತತ್ವಗಳು ಹೊಂದಾಣಿಕೆಯಾಗುತ್ತಿಲ್ಲ ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿತ್ತು.&lt;/p&gt;&lt;h2&gt;&lt;strong&gt;ಕಳಪೆ ಫಾರ್ಮ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್&zwnj;ನ ಒತ್ತಡ!&lt;/strong&gt;&lt;/h2&gt;&lt;p&gt;ರಿಷಭ್ ಪಂತ್&zwnj;ಗೆ ಇದು ಕೇವಲ ನಾಯಕತ್ವದ ಸವಾಲಾಗಿರಲಿಲ್ಲ, ಬ್ಯಾಟಿಂಗ್&zwnj;ನಲ್ಲೂ ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಐಪಿಎಲ್ ಸೀಸನ್ ಆಗಿತ್ತು. ರನ್ ಗಳಿಸಲು ಅವರು ತೀವ್ರವಾಗಿ ಪರದಾಡುತ್ತಿದ್ದರು. ಇದರ ಜೊತೆಗೆ ತಂಡದ ಸೋಲು ಅವರ ಮೇಲಿನ ಒತ್ತಡವನ್ನು ದುಪ್ಪಟ್ಟು ಮಾಡಿತ್ತು.&lt;/p&gt;&lt;p&gt;ಮತ್ತೊಂದೆಡೆ, ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲೂ ಪಂತ್ ಈಗ ಕಷ್ಟದ ಹಾದಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಮೂರೂ ಮಾದರಿಯ ನಿಯಮಿತ ಆಟಗಾರನಾಗಿದ್ದ ಪಂತ್, ಸದ್ಯ ಭಾರತದ ವೈಟ್-ಬಾಲ್ (ಟಿ20 ಮತ್ತು ಏಕದಿನ) ಯೋಜನೆಯಿಂದ ಹೊರಗುಳಿದಿದ್ದಾರೆ. ಜೊತೆಗೆ ಟೆಸ್ಟ್ ತಂಡದ ವೈಸ್-ಕ್ಯಾಪ್ಟನ್ಸಿ ಜವಾಬ್ದಾರಿಯನ್ನೂ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಐಪಿಎಲ್ ನಾಯಕತ್ವವು ಅವರಿಗೆ ಮತ್ತೊಂದು ಅನಗತ್ಯ ಹೊರೆಯಾಗಿ ಪರಿಣಮಿಸಿತ್ತು. ಸದ್ಯ ಅವರ ಮೊದಲ ಆದ್ಯತೆ ಐಪಿಎಲ್ ನಾಯಕತ್ವ ಉಳಿಸಿಕೊಳ್ಳುವುದಲ್ಲ, ಬದಲಿಗೆ ಬ್ಯಾಟಿಂಗ್ ಲಯ ಕಂಡುಕೊಂಡು ದೇಶೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ರನ್ ಮಳೆ ಹರಿಸಿ ಟೀಮ್ ಇಂಡಿಯಾ ನಿಯಮಿತ ಓವರ್&zwnj;ಗಳ ತಂಡಕ್ಕೆ ಕಂಬ್ಯಾಕ್ ಮಾಡುವುದಾಗಿದೆ.&lt;/p&gt;&lt;h2&gt;&lt;strong&gt;ಲಕ್ನೋ ತಂಡದಲ್ಲಿ ಈಗ ಮಹಾ ಪುನರ್ರಚನೆ ಪರ್ವ!&lt;/strong&gt;&lt;/h2&gt;&lt;p&gt;ಪಂತ್ ನಾಯಕತ್ವದಿಂದ ಕೆಳಗಿಳಿದಿರುವುದು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ನಾಯಕತ್ವ ಬಿಟ್ಟರೂ ಪಂತ್ ಆಟಗಾರನಾಗಿ ತಂಡದಲ್ಲೇ ಮುಂದುವರಿಯಲಿದ್ದಾರೆ ಮತ್ತು ತಮ್ಮ ಒಪ್ಪಂದದ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ. ಲಕ್ನೋ ಕೂಡ ಅವರನ್ನು ತಂಡದ ಪ್ರಮುಖ ಆಟಗಾರ ಎಂದೇ ಪರಿಗಣಿಸಿದೆ.&lt;/p&gt;&lt;p&gt;ಸದ್ಯ ಲಕ್ನೋದ ಮುಂದಿನ ನಾಯಕ ಯಾರು ಎಂಬ ಚರ್ಚೆ ಶುರುವಾಗಿದ್ದು, ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಮಾರ್ಷ್ ಅವರ ನಾಯಕತ್ವದ ಅನುಭವ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಇದರ ನಡುವೆ, ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅವರ ಅವಧಿಯೂ ಮುಕ್ತಾಯದ ಹಂತಕ್ಕೆ ಬಂದಿದ್ದು, ಐಪಿಎಲ್ 2027ರ ಸೀಸನ್&zwnj;ಗಾಗಿ ಲಕ್ನೋ ಹೊಸ ಕೋಚ್ ಮತ್ತು ಹೊಸ ನಾಯಕನೊಂದಿಗೆ ಸಂಪೂರ್ಣ ಹೊಸ ರೂಪದಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಅತ್ತ ರಿಷಭ್ ಪಂತ್ ನಾಯಕತ್ವದ ಮುಳ್ಳಿನ ಹಾದಿ ಮುಗಿಸಿ, ತಮ್ಮ ಹಳೆಯ ಅಂಜಿಕೆಯಿಲ್ಲದ (Fearless) ಬ್ಯಾಟಿಂಗ್ ವೈಭವವನ್ನು ಮರಳಿ ಪಡೆಯುವ ಅಖಾಡಕ್ಕೆ ಸಜ್ಜಾಗುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/why-rishabh-pant-left-lsg-captaincy-will-he-leave-lucknow-super-giants-san/articleshow-2y73que"/>
        </item>
        <item>
            <title><![CDATA[ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ರಿಷಬ್ ಪಂತ್, ತಂಡದಿಂದ ಘೋಷಣೆ]]></title>
            <link>https://kannada.asianetnews.com/cricket-sports/rishabh-pant-steps-down-as-lucknow-super-giants-captain-after-disappointing-season/articleshow-xb6rgtz</link>
            <guid isPermaLink="true">https://kannada.asianetnews.com/cricket-sports/rishabh-pant-steps-down-as-lucknow-super-giants-captain-after-disappointing-season/articleshow-xb6rgtz</guid>
            <pubDate>Fri, 29 May 2026 20:00:23 +0530</pubDate>
            <description><![CDATA[&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಕಳಪೆ ಪ್ರದರ್ಶನಕ್ಕೆ ತೀವ್ರ ಟೀಕೆ ಎದುರಿಸಿದ ನಾಯಕ ರಿಷಬ್ ಪಂತ್ ಇದೀಗ ನಾಯಕತ್ವ ತ್ಯಜಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvs4bam7jwyz5tkbj2h3peb,imgname-rishabh-pant-1777975045460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ (ಮೇ.29) &lt;/strong&gt;ಐಪಿಎಲ್ ಟೂರ್ನಿ ಅಂತಿಮ ಘಟ್ಟದಲ್ಲಿದೆ. ಇದರ ನಡುವೆ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ಹೀನಾಯ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. 14 ಲೀಗ್ ಪಂದ್ಯದಲ್ಲಿ ಕೇವಲ 4 ಪಂದ್ಯ ಗೆದ್ದು 10ನೇ ಸ್ಥಾನದಲ್ಲಿದೆ. ಪ್ರತಿ ಸೋಲಿನ ಬಳಿಕ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಹಾಗೂ ನಾಯಕನ ನಡುವಿನ ಮಾತುಕತೆ, ಆಕ್ರೋಶಗಳು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಜೊತೆಗೆ ಟೀಕೆಗಳನ್ನು ಎದುರಿಸಿದೆ. ಈ ಬೆಳವಣಿಗೆ ನಡುವೆ ಇದೀಗ ತಂಡದ ನಾಯಕತ್ವದಿಂದ ರಿಷಬ್ ಪಂತ್ ಹಿಂದೆ ಸರಿದಿದ್ದಾರೆ.&lt;/p&gt;&lt;h2&gt;ರಿಷಬ್ ಪಂತ್ ರಾಜೀನಾಮೆ ಸ್ವೀಕರಿಸಿದ ಫ್ರಾಂಚೈಸಿ&lt;/h2&gt;&lt;p&gt;ತೀವ್ರ ಟೀಕೆಗಳಿಂದ ಕಂಗೆಟ್ಟ ರಿಷಬ್ ಪಂತ್ ತಾವು ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಫ್ರಾಂಚೈಸಿ ಹಾಗೂ ತಂಡದ ಮ್ಯಾನೇಜ್ಮೆಂಟ್&zwnj;ಗೆ ಸೂಚಿಸಿದ್ದಾರೆ. ಇತ್ತ ಇದನ್ನೇ ಕಾಯುತ್ತಿದ್ದ ಲಖನೌ ಸೂಪರ್ ಜೈಂಟ್ಸ್ ತಕ್ಷಣವೇ ರಿಷಬ್ ಪಂತ್ ರಾಜೀನಾಮೆಯನ್ನು ಸ್ವೀಕರಿಸಿದೆ.&lt;/p&gt;&lt;h2&gt;ತಂಡದಿಂದ ಮಹತ್ವದ ಘೋಷಣೆ&lt;/h2&gt;&lt;p&gt;ಲಖನೌ ಸೂಪರ್ ಜೈಂಟ್ಸ್ ತಂಡ ಈ ಮೂಲಕ ಮಹತ್ವದ ಘೋಷಣೆ ಮಾಡುತ್ತಿದೆ. ತಂಡದ ನಾಯಕತ್ವದಿಂದ ತಾನು ಹಿಂದೆ ಸರಿಯುತ್ತಿದ್ದೇನೆ. ನಾಯಕತ್ವ ಜವಾಬ್ದಾರಿಯಿಂದ ಮುಕ್ತಿಗೊಳಿಸಬೇಕಾಗಿ ರಿಷಬ್ ಪಂತ್ ಮನವಿ ಮಾಡಿದ್ದರು. ಈ ಮನವಿಯನ್ನು ಫ್ರಾಂಚೈಸಿ ಸ್ವೀಕರಿಸಿದೆ ಎಂದು ಲಖನೌ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಟಾಮ್ ಮೂಡಿ ಹೇಳಿದ್ದಾರೆ.&lt;/p&gt;&lt;p&gt;ರಿಷಬ್ ಪಂತ್ ಅತ್ಯಂತ ಗೌರವಯುತವಾಗಿ ತಂಡದ ಮ್ಯಾನೇಜ್ಮೆಂಟ್ ಬಳಿ ನಾಯಕತ್ವದಿಂದ ಮುಕ್ತಿಗೊಳಿಸಬೇಕಾಗಿ ಮನವಿ ಮಾಡಿದ್ದರು. ರಿಷಬ್ ಪಂತ್ ಮನವಿ ಸ್ವೀಕರಿಸುವುದು ತಂಡಕ್ಕೆ ಸುಲಭದ ದಾರಿಯಾಗಿರಲಿಲ್ಲ. ನಾಯಕನಾಗಿ ತಂಡವನ್ನು ಮುನ್ನಡೆಸಿದ ರೀತಿ, ತಂಡದ ಡ್ರೆಸ್ಸಿಂಗ್ ರೂಂನಲ್ಲಿನ ಉತ್ತಮ ಸಂಸ್ಕೃತಿ ಸೇರಿದಂತೆ ರಿಷಬ್ ಕೊಡುಗೆಗೆ ಫ್ರಾಂಚೈಸಿ ಋಣಿಯಾಗಿದೆ. ಇದೀಗ ತಂಡವನ್ನು ಮತ್ತಷ್ಟು ಉತ್ತಮವಾಗಿ ಕಟ್ಟುತ್ತೇವೆ ಎಂದು ಟಾಮ್ ಮೂಡಿ ಹೇಳಿದ್ದಾರೆ.&lt;/p&gt;&lt;h2&gt;27 ಕೋಟಿ ರೂಪಾಯಿಗೆ ಖರೀದಿಸಿದ್ದ ಲಖನೌ&lt;/h2&gt;&lt;p&gt;ಲಖನೌ ಸೂಪರ್ ಜೈಂಟ್ಸ್ ಐಪಿಎಲ್ ಹರಾಜಿನಲ್ಲಿ ರಿಷಬ್ ಪಂತ್&zwnj;ಗೆ ದುಬಾರಿ ಮೊತ್ತ ನೀಡಿದೆ. ಬರೋಬ್ಬರಿ 27 ಕೋಟಿ ರೂಪಾಯಿ ನೀಡಿ ರಿಷಬ್ ಪಂತ್ ಖರೀದಿಸಿತ್ತು. ಹೊಸ ತಂಡ ಕಟ್ಟುವ ಕಾರಣ ದುಬಾರಿ ಮೊತ್ತ ನೀಡಿ ಪಂತ್ ಖರೀದಿಸಿದ ಲಖನೌ ಸೂಪರ್ ಜೈಂಟ್ಸ್ ಹಣೆಬರಹ ಬದಲಾಗಲಿಲ್ಲ. ಈ ಬಾರಿ ಕೇವಲ 4 ಪಂದ್ಯ ಮಾತ್ರ ಗೆದ್ದು ಕೊನೆಯ ಸ್ಥಾನ ಪಡೆದಿದೆ. ರಿಷಬ್ ಪಂತ್ ನಾಯಕನಾಗಿ, ಬ್ಯಾಟರ್ ಆಗಿ ಈ ಐಪಿಎಲ್ ಟೂರ್ನಿಯಲ್ಲಿ ವಿಫಲರಾಗಿದ್ದಾರೆ.&lt;/p&gt;&lt;h2&gt;ಮುಂದಿನ ನಾಯಕ ಯಾರು&lt;/h2&gt;&lt;p&gt;ರಿಷಬ್ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಕಾರಣ ಇದೀಗ ಮುಂದಿನ ನಾಯಕ ಯಾರು ಅನ್ನೋ ಪ್ರಶ್ನೆ ಎದುರಾಗಿದೆ. ಈ ಬಾರಿ ಲಖನೌ ಸೂಪರ್ ಜೈಂಟ್ಸ್ ನಾಯಕತ್ವನ್ನು ವಿದೇಶಿ ಕ್ರಿಕೆಟಿಗರಿಗೆ ನೀಡಲು ಮುಂದಾಗಿದೆ. ಸೌತ್ ಆಪ್ರಿಕಾ ಟಿ20 ನಾಯಕ ಆ್ಯಡಿನ್ ಮಾರ್ಕ್ರಮ್ ಹಾಗೂ ಆಸ್ಟ್ರೇಲಿಯಾ ಟಿ20 ನಾಯಕ ಮಿಚೆಲ್ ಮಾರ್ಶ್ ಮುಂಚೂಣಿಯಲ್ಲಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/rishabh-pant-steps-down-as-lucknow-super-giants-captain-after-disappointing-season/articleshow-xb6rgtz"/>
        </item>
        <item>
            <title><![CDATA[ಇನ್ಮುಂದೆ ಸ್ಮಾರ್ಟ್ ಗ್ಲಾಸ್ ಹಾಕಂಗಿಲ್ಲ! ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್]]></title>
            <link>https://kannada.asianetnews.com/cricket-sports/bcci-bans-smart-glasses-in-ipl-matches-new-acsu-rule-for-players-and-support-staff-kvn/articleshow-h2hovn6</link>
            <guid isPermaLink="true">https://kannada.asianetnews.com/cricket-sports/bcci-bans-smart-glasses-in-ipl-matches-new-acsu-rule-for-players-and-support-staff-kvn/articleshow-h2hovn6</guid>
            <pubDate>Fri, 29 May 2026 17:50:42 +0530</pubDate>
            <description><![CDATA[ಐಪಿಎಲ್ ಪಂದ್ಯದ ದಿನಗಳಲ್ಲಿ ಆಟಗಾರರು ಮತ್ತು ಸಿಬ್ಬಂದಿ ಸ್ಮಾರ್ಟ್ ಗ್ಲಾಸ್ ಬಳಸುವುದನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ ನಿಷೇಧಿಸಿದೆ. ಪಂದ್ಯದ ಪಾರದರ್ಶಕತೆ ಕಾಪಾಡಲು ಮತ್ತು ಲೈವ್ ಸ್ಟ್ರೀಮಿಂಗ್, ರೆಕಾರ್ಡಿಂಗ್&zwnj;ನಂತಹ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಡ್ರೆಸ್ಸಿಂಗ್ ರೂಮ್ ಮತ್ತು ಡಗೌಟ್&zwnj;ನಂತಹ ಪ್ರದೇಶಗಳಲ್ಲಿ ಇವುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kssmwaafwkbavtp5wp8j8pcq,imgname-bcci-bans-smart-sunglass-1780050962767.png" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್ ಮ್ಯಾಚ್ ದಿನದಂದು ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಮಾರ್ಟ್ ಗ್ಲಾಸ್&zwnj;ಗಳನ್ನು ಅಥವಾ ಯಾವುದೇ ರೀತಿಯ ಹೈಟೆಕ್ ಕನ್ನಡಕಗಳನ್ನು ಬಳಸಬಾರದು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಮತ್ತು ಭದ್ರತಾ ಘಟಕ (ACSU) ಕಟ್ಟುನಿಟ್ಟಿನ ಸೂಚನೆ ನೀಡಿದೆ. ಟೂರ್ನಿಯ ಪಾರದರ್ಶಕತೆ ಕಾಪಾಡಲು ಮತ್ತು ನಿಗದಿತ ಪ್ರದೇಶಗಳಲ್ಲಿ ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಹಲವು ಟೆಕ್ ಕಂಪನಿಗಳು ಐಪಿಎಲ್ ಆಟಗಾರರು ಮತ್ತು ಫ್ರಾಂಚೈಸಿಗಳಿಗೆ ಸ್ಮಾರ್ಟ್ ಸನ್ ಗ್ಲಾಸ್&zwnj;ಗಳನ್ನು ಪ್ರಮೋಟ್ ಮಾಡುತ್ತಿರುವುದನ್ನು ಬಿಸಿಸಿಐ ಗಮನಿಸಿತ್ತು.&lt;/p&gt;&lt;p&gt;ನೋಡಲು ಸಾಮಾನ್ಯ ಕನ್ನಡಕದಂತೆ ಕಂಡರೂ, ಈ ಸ್ಮಾರ್ಟ್ ಗ್ಲಾಸ್&zwnj;ಗಳಲ್ಲಿರುವ ಫೀಚರ್&zwnj;ಗಳು ಟೂರ್ನಿ ಆಯೋಜಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಗ್ಲಾಸ್&zwnj;ಗಳನ್ನು ಬಳಸಿ ವಿಡಿಯೋ ರೆಕಾರ್ಡ್ ಮಾಡಬಹುದು, ಲೈವ್ ಸ್ಟ್ರೀಮ್ ಮಾಡಬಹುದು, ಮೆಸೇಜ್ ಕಳುಹಿಸಬಹುದು ಮತ್ತು ಸ್ವೀಕರಿಸಬಹುದು. ಅಷ್ಟೇ ಅಲ್ಲ, ಮೊಬೈಲ್ ಡೇಟಾ ಅಥವಾ ವೈಫೈ ಮೂಲಕ ಆಡಿಯೋ-ವಿಡಿಯೋ ಕರೆಗಳನ್ನು ಕೂಡ ಮಾಡಬಹುದು. ಈ ಕಾರಣಗಳಿಂದ, ಐಪಿಎಲ್ ನಿಯಮಗಳ ಪ್ರಕಾರ ಈ ಗ್ಲಾಸ್&zwnj;ಗಳನ್ನು ಸಂವಹನ ಮತ್ತು ರೆಕಾರ್ಡಿಂಗ್ ಸಾಧನಗಳೆಂದು ಪರಿಗಣಿಸಲಾಗಿದೆ.&lt;/p&gt;&lt;h2&gt;&lt;strong&gt;ಮ್ಯಾಚ್ ದಿನದಂದು ಹೊಸ ರೂಲ್ಸ್&lt;/strong&gt;&lt;/h2&gt;&lt;p&gt;ಹೊಸ ನಿಯಮದ ಪ್ರಕಾರ, ಮ್ಯಾಚ್ ದಿನದಂದು 'ಪ್ಲೇಯರ್ಸ್ &amp;amp; ಮ್ಯಾಚ್ ಆಫೀಶಿಯಲ್ಸ್ ಏರಿಯಾ' (PMOA) ದಲ್ಲಿ ಸ್ಮಾರ್ಟ್ ಗ್ಲಾಸ್ ಇಟ್ಟುಕೊಳ್ಳುವುದು ಅಥವಾ ಬಳಸುವುದು ಸಂಪೂರ್ಣ ನಿಷಿದ್ಧ. ಡ್ರೆಸ್ಸಿಂಗ್ ರೂಮ್, ಡಗೌಟ್ ಮತ್ತು ಆಟಗಾರರು ಕೂರುವ ಇತರೆ ಹೈ-ಸೆಕ್ಯುರಿಟಿ ಜಾಗಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಪಂದ್ಯದ ವೇಳೆ ಲೈವ್ ಮಾಹಿತಿ ರವಾನಿಸಲು ಅಥವಾ ಭದ್ರತಾ ಲೋಪ ಎಸಗಲು ಇಂತಹ ಸಾಧನಗಳನ್ನು ಬಳಸಬಹುದು ಎಂದು ಭದ್ರತಾ ವಿಭಾಗ ಆತಂಕ ವ್ಯಕ್ತಪಡಿಸಿದೆ.&lt;/p&gt;&lt;p&gt;ಈ ಅಪಾಯವನ್ನು ತಪ್ಪಿಸಲು, ಈಗಾಗಲೇ ನಿಷೇಧಿಸಲಾಗಿರುವ ಇತರ ಎಲೆಕ್ಟ್ರಾನಿಕ್ ಸಾಧನಗಳ ಸಾಲಿಗೆ ಸ್ಮಾರ್ಟ್ ಗ್ಲಾಸ್&zwnj;ಗಳನ್ನೂ ಸೇರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಸ್ಟೇಡಿಯಂಗೆ ಬಂದ ತಕ್ಷಣ ತಮ್ಮ ಸ್ಮಾರ್ಟ್ ಗ್ಲಾಸ್&zwnj;ಗಳನ್ನು 'ಸೆಕ್ಯುರಿಟಿ ಲೈಸೆನ್ ಆಫೀಸರ್' ಬಳಿ ಒಪ್ಪಿಸಬೇಕು. ಮೊಬೈಲ್ ಫೋನ್, ಸ್ಮಾರ್ಟ್ ವಾಚ್&zwnj;ಗಳ ಜೊತೆಗೆ ಈ ಗ್ಲಾಸ್&zwnj;ಗಳನ್ನು ಕೂಡ ನಿಗದಿತ ಪ್ರದೇಶಗಳಿಗೆ ಪ್ರವೇಶಿಸುವ ಮುನ್ನ ಡೆಪಾಸಿಟ್ ಮಾಡಬೇಕಾಗುತ್ತದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bcci-bans-smart-glasses-in-ipl-matches-new-acsu-rule-for-players-and-support-staff-kvn/articleshow-h2hovn6"/>
        </item>
        <item>
            <title><![CDATA[ಸೂರ್ಯವಂಶಿಯನ್ನು 14ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್, ಪ್ರವೀಣ್ ತಾಂಬೆಯನ್ನು 41ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್..!]]></title>
            <link>https://kannada.asianetnews.com/cricket-sports/how-rahul-dravid-discovered-vaibhav-suryavanshi-from-13-year-old-wonderkid-to-ipl-biggest-superstar-kvn/articleshow-kaolxmg</link>
            <guid isPermaLink="true">https://kannada.asianetnews.com/cricket-sports/how-rahul-dravid-discovered-vaibhav-suryavanshi-from-13-year-old-wonderkid-to-ipl-biggest-superstar-kvn/articleshow-kaolxmg</guid>
            <pubDate>Fri, 29 May 2026 17:28:34 +0530</pubDate>
            <description><![CDATA[ರಾಹುಲ್ ದ್ರಾವಿಡ್ ಅವರ ಅಸಾಮಾನ್ಯ ಪ್ರತಿಭಾ ಶೋಧನೆಯನ್ನು ಈ ಲೇಖನ ವಿವರಿಸುತ್ತದೆ. 13 ವರ್ಷದ ವೈಭವ್ ಸೂರ್ಯವಂಶಿ ಮತ್ತು 41 ವರ್ಷದ ಪ್ರವೀಣ್ ತಾಂಬೆ ಅವರಂತಹ ವಯಸ್ಸಿನ ಹಂಗಿಲ್ಲದೆ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಐಪಿಎಲ್&zwnj;ನಲ್ಲಿ ಅವಕಾಶ ನೀಡಿದ ಅವರ ನಿರ್ಧಾರಗಳ ಹಿಂದಿನ ಕಥೆಯನ್ನು ಇದು ತೆರೆದಿಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspw36dbk1fc8p8x5djfgb0g,imgname-vaibhav-sooryavanshi--1--1779957864875.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್&lt;/strong&gt;&lt;/p&gt;&lt;p&gt;ಅಲ್ಲಿದ್ದ ಜನ ನಕ್ಕಿದ್ದರು ಆ ದಿನ. ಇದೇನು ಮಾಡಲು ಹೊರಟಿದ್ದಾರೆ ದ್ರಾವಿಡ್..? 13 ವರ್ಷದ ಹುಡುಗನನ್ನು ಐಪಿಎಲ್&rsquo;ನಲ್ಲಿ ಆಡಿಸುವ ನಿರ್ಧಾರ..?&lt;/p&gt;&lt;p&gt;ವಯಸ್ಸಿನಲ್ಲಿ ದ್ರಾವಿಡ್ ಅವರ ಸಣ್ಣ ಮಗನಿಗಿಂತಲೂ ಅವನು ಚಿಕ್ಕವನು. ಇನ್ನೂ SSLC ಮೆಟ್ಟಿಲು ಹತ್ತಿಲ್ಲ ಆಗಲೇ ಐಪಿಎಲ್..? &lsquo;ಇದೆಂಥಾ ಹುಚ್ಚಾಟ&rsquo; ಎಂದು ಕುತೂಹಲದ ಕಣ್ಣುಗಳಿಂದ ದ್ರಾವಿಡ್ ಅವರತ್ತ ನೋಡುತ್ತಿದ್ದಂತೆ, 1 ಕೋಟಿ 10 ಲಕ್ಷಕ್ಕೆ ಹುಡುಗನನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದ್ರಾವಿಡ್ ಖರೀದಿ ಮಾಡಿಯಾಗಿತ್ತು. ಅದೇ ಐಪಿಎಲ್ ಇತಿಹಾಸದ best bid ಆಗಲಿದೆ ಎಂಬ ಸಣ್ಣ ಸುಳಿವೂ ದ್ರಾವಿಡ್ ಅವರಿಗೆ ಇರಲಿಲ್ಲ.&lt;/p&gt;&lt;h2&gt;&lt;strong&gt;ಹಾಲುಗಲ್ಲದ ಹುಡುಗನನ್ನು ಕರೆತಂದ ರಾಹುಲ್ ದ್ರಾವಿಡ್&lt;/strong&gt;&lt;/h2&gt;&lt;p&gt;&lsquo;ಇವನು ಸಾಮಾನ್ಯ ಹುಡುಗನಲ್ಲ&rsquo; ಎಂಬುದಂತೂ ದ್ರಾವಿಡ್ ಅವರಿಗೆ ಗೊತ್ತಾಗಿತ್ತು. ಐಪಿಎಲ್ ಹರಾಜಿಗೂ ಮುನ್ನ ಸೂರ್ಯವಂಶಿಯನ್ನು ರಾಜಸ್ಥಾನ ರಾಯಲ್ಸ್ ತಂಡದ ಟ್ರಯಲ್ಸ್'ಗೆ ಕರೆಸಿದ್ದರು ದ್ರಾವಿಡ್. ಎದುರಿಸಿದ ಮೊದಲ ಎಸೆತವನ್ನೇ ಮೈದಾನದಿಂದ ಮಾರುದ್ದ ದೂರ ಬಾರಿಸಿದ್ದ. ಅದು ಸೀದಾ ಹೋಗಿ ಬಿದ್ದದ್ದು ರಾಜಸ್ಥಾನ ತಂಡದ ಬಾಗಿಲಿಗೆ. ಬಾಗಿಲು ತೆರೆದಿತ್ತು. ಬಾಗಿಲಲ್ಲಿ ನಿಂತಿದ್ದ ಕೋಚ್ ರಾಹುಲ್ ದ್ರಾವಿಡ್ ಹಾಲುಗಲ್ಲದ ಹುಡುಗನನ್ನು ರಾಯಲ್ಸ್ ಕುಟುಂಬಕ್ಕೆ ಬರಮಾಡಿಕೊಂಡಿದ್ದರು.&lt;/p&gt;&lt;p&gt;ಅಲ್ಲಿಂದ ಒಂದೂವರೆ ವರ್ಷದಲ್ಲಿ ವೈಭವ್ ಸೂರ್ಯವಂಶಿ ಎಲ್ಲಿ ನಿಂತಿದ್ದಾನೆ ನೋಡಿ. ಈ ವರ್ಷದ ಐಪಿಎಲ್'ನಲ್ಲಿ 680 ರನ್. ಇದರಲ್ಲಿ 610 ರನ್'ಗಳು ಬಂದಿರುವುದು ಕೇವಲ 120 ಎಸೆತಗಳಲ್ಲಿ. ಅಂದರೆ ಬೌಂಡರಿ+ಸಿಕ್ಸರ್'ಗಳಿಂದಲೇ (220+390) 600+ ರನ್. 15 ಪಂದ್ಯಗಳ ಅಂತ್ಯಕ್ಕೆ 243 ಸ್ಟ್ರೈಕ್'ರೇಟ್.&lt;/p&gt;&lt;p&gt;Unreal consistency ಇದು. ಅತಿರಥ ಮಹಾರಥಿಗಳನ್ನೆಲ್ಲಾ ಮೀರಿಸಿ ಆರೆಂಜ್ ಕ್ಯಾಪ್'ಗೆ ಈ ಹುಡುಗನೇ ಒಡೆಯ. 15 ಪಂದ್ಯಗಳಲ್ಲಿ ಒಮ್ಮೆಯೂ ವೈಭವ್ ಸೂರ್ಯವಂಶಿ 15 ಓವರ್'ವರೆಗೆ ಆಡಿಯೇ ಇಲ್ಲ. 10 ಓವರ್'ಗಳಿಗಿಂತ ಹೆಚ್ಚು ಕ್ರೀಸ್'ನಲ್ಲಿ ನಿಂತದ್ದು ಎರಡು ಬಾರಿ ಅಷ್ಟೇ. ಉಳಿದ 13 ಪಂದ್ಯಗಳಲ್ಲಿ 8 ಓವರ್'ಗಳ ಒಳಗೇ ಮುಗಿದಿದೆ ಅವನ ಆಟ. ಅಷ್ಟರಲ್ಲಿ ಇಡೀ ಕ್ರೀಡಾಂಗಣವನ್ನೇ ನಡುಗಿಸಿ ಬಿಟ್ಟಿದ್ದಾನೆ. ಇವನೇನಾದರೂ ಪೂರ್ತಿ 20 ಓವರ್ ಆಡಿ ಬಿಟ್ಟರೆ ಕಥೆಯೇನು? ಅವನು ಟಿ20 ಇನ್ನಿಂಗ್ಸ್&rsquo;ನಲ್ಲಿ 200 ರನ್ ಮೇಲೆ ಗುರಿ ಇಟ್ಟಿದ್ದಾನೆ. ಖಂಡಿತಾ ಗುರಿ ಮುಟ್ಟುತ್ತಾನೆ.&lt;/p&gt;&lt;p&gt;ರಾಹುಲ್ ದ್ರಾವಿಡ್ ಅವರ ನಿರ್ಧಾರ ಸರಿಯಿದೆ. ಹುಡುಗನೆಂದು ನೋಡದೆ ಅವರು ಸಮರ್ಥನನ್ನೇ ಬೆನ್ನು ತಟ್ಟಿದ್ದರು. ಕಳೆದ ವರ್ಷ ಐಪಿಎಲ್ ಶತಕ ಬಾರಿಸಿದ ನಂತರ ಸೂರ್ಯವಂಶಿಗೆ ದ್ರಾವಿಡ್ ಒಂದು ಮಾತು ಹೇಳುತ್ತಾರೆ. &lsquo;&lsquo;ಈ ಬಾರಿ ಶತಕ ಹೊಡೆದಿದ್ದೀಯಾ..? ಆದರೆ ನಿನ್ನಿಂದ ಸಿಕ್ಸರ್&rsquo;ಗಳನ್ನು ಚಚ್ಚಿಸಿಕೊಂಡ ಬೌಲರ್&rsquo;ಗಳು ಮುಂದಿನ ವರ್ಷ ತಯಾರಿ ಮಾಡಿಯೇ ಬರುತ್ತಾರೆ.. ನಿನ್ನ ತಯಾರಿ ಅವರಿಗಿಂತ ಒಂದು ಹೆಜ್ಜೆ ಮುಂದಿರಬೇಕು&rsquo;&rsquo; ಅದು ರಾಹುಲ್ ದ್ರಾವಿಡ್ ಅವರ ಅನುಭವದ ಮಾತು.&lt;/p&gt;&lt;p&gt;ದಿಗ್ಗಜ ದ್ರಾವಿಡ್ ಮಾತನ್ನು ಹುಡುಗ ಅದೆಷ್ಟು ಗಂಭೀರವಾಗಿ ತೆಗೆದುಕೊಂಡನೆಂದರೆ ಬೌಲರ್&rsquo;ಗಳಿಗಿಂತ ಒಂದಲ್ಲ, 10 ಹೆಜ್ಜೆ ಮುಂದಿದ್ದಾನೆ ಸೂರ್ಯವಂಶಿ.&lt;/p&gt;&lt;p&gt;ತಮ್ಮ ಇಬ್ಬರು ಗಂಡು ಮಕ್ಕಳಿಗಿಂತಲೂ ಚಿಕ್ಕವನಾದ ವೈಭವ್ ಸೂರ್ಯವಂಶಿಯ ಮೇಲೆ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಕಾಳಜಿ. ಕಾರಣ, ಐಪಿಎಲ್&rsquo;ನಲ್ಲಿ ಅವರೇ ಬೆಳಕಿಗೆ ತಂದ ಪ್ರತಿಭೆಯವನು.&lt;/p&gt;&lt;h3&gt;&lt;strong&gt;ವೈಭವ್ ಸೂರ್ಯವಂಶಿ ಬಗೆಗಿನ ಶುದ್ದ ಸುಳ್ಳು&lt;/strong&gt;&lt;/h3&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದನ್ನು ನೋಡಿದೆ. &lsquo;&lsquo;ಸೂರ್ಯವಂಶಿಯ ಆಟವನ್ನು ದ್ರಾವಿಡ್ ಅವರ ಮಗ ನೋಡಿದ್ದನಂತೆ.. ಅದನ್ನು ತಂದೆಗೆ ಹೇಳಿದ್ದನಂತೆ. ಆ ನಂತರ ಸೂರ್ಯವಂಶಿಯ ಮೇಲೆ ದ್ರಾವಿಡ್ ಅವರ ಕಣ್ಣು ಬಿತ್ತಂತೆ..&rsquo;&rsquo; ಶುದ್ಧಸುಳ್ಳು.&lt;/p&gt;&lt;p&gt;ವೈಭವ್ ಸೂರ್ಯವಂಶಿಯ ಬಗ್ಗೆ ದ್ರಾವಿಡ್ ಅವರಿಗೆ ಮೊದಲ ಬಾರಿ ಹೇಳಿದವರು ವಿವಿಎಸ್ ಲಕ್ಷ್ಮಣ್. ಎರಡು ವರ್ಷಗಳ ಹಿಂದೆ. ಭಾರತ ಜ್ಯೂನಿಯರ್ ತಂಡ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಂಡರ್-19 one-day Challenger tournament ಆಡುತ್ತಿತ್ತು. ಭಾರತ ಪರ ಆಟಕ್ಕಿಳಿದ ಹದಿಮೂರರ ಹುಡುಗ ಸೂರ್ಯವಂಶಿ 58 ಎಸೆತಗಳಲ್ಲಿ ಶತಕ ಬಾರಿಸಿ ಬಿಟ್ಟ. ಆತ ಬಾರಿಸಿದ ಒಂದೊಂದು ಸಿಕ್ಸರ್&rsquo;ಗಳನ್ನು ನೋಡಿ ಹುಬ್ಬೇರಿಸಿ ಬಿಟ್ಟರು ವಿವಿಎಸ್ ಲಕ್ಷ್ಮಣ್. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್, ಆಗ ಭಾರತ ಅಂಡರ್-19 ತಂಡದ ಜೊತೆಗಿದ್ದರು.&lt;/p&gt;&lt;p&gt;&lsquo;ಇವನು ಪೋರನಲ್ಲ, ಪ್ರಚಂಡ ಪೋರ&rsquo; ಎಂದುಕೊಂಡವರೇ ಪಂದ್ಯ ಮುಗಿದ ನಂತರ ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡುತ್ತಾರೆ. ಆಗ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಹೆಡ್ ಕೋಚ್. &lsquo;&lsquo;ಹೀಗೊಬ್ಬ ಹುಡುಗನಿದ್ದಾನೆ, ನೋಡು&rsquo;&rsquo; ಎನ್ನುತ್ತಾರೆ ಲಕ್ಷ್ಮಣ್. ಹೊಸ ಹುಡುಗರನ್ನು ಸದಾ ಬೆರಗುಗಣ್ಣುಗಳಿಂದ ನೋಡುವ ಮಹಾಗುರು ದ್ರಾವಿಡ್ ತಡಮಾಡದೆ ಸೂರ್ಯವಂಶಿಯನ್ನು ರಾಜಸ್ಥಾನ್ ರಾಯಲ್ಸ್ ಶಿಬಿರಕ್ಕೆ ಕರೆಸುತ್ತಾರೆ. ಅವನ ಪ್ರವೇಶ ಹೇಗಿತ್ತು ಎಂದರೆ ಮೊದಲ ಎಸೆತವನ್ನೇ ಕ್ರೀಡಾಂಗಣದಿಂದ ಹೊರಗೆ ಅಟ್ಟಿ ಬಿಡುತ್ತಾನೆ. ಹುಡುಗ ರೆಡಿ ಇದ್ದ.. 2025ರ ಐಪಿಎಲ್ ಟೂರ್ನಿಯಲ್ಲಿ ಸೂರ್ಯವಂಶಿಯನ್ನು ಐಪಿಎಲ್ ಅಖಾಡಕ್ಕೆ ಇಳಿಸಿಯೇ ಬಿಡುತ್ತಾರೆ ದ್ರಾವಿಡ್. ಸಣ್ಣವನ ಕಣ್ಣುಗಳಲ್ಲಿದ್ದ ಧೈರ್ಯ ದೊಡ್ಡದು. ಅದು &lsquo;ಯಾರೇ ಎದುರು ನಿಂತರೂ ಸಿಕ್ಸರ್ ಬಾರಿಸಿ ಬಿಡುವೆ&rsquo; ಎಂಬ ಹುಂಬ ಧೈರ್ಯ.. ಹಾಗೇ ಮಾಡಿ ಬಿಟ್ಟ ಸೂರ್ಯವಂಶಿ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯ. ಜೀವನದ ಮೊಟ್ಟ ಮೊದಲ ಐಪಿಎಲ್ ಮ್ಯಾಚ್. ಎದುರಲ್ಲಿದ್ದ ಬೌಲರ್ ಸ್ವಿಂಗ್ ಚತುರ ಶಾರ್ದೂಲ್ ಠಾಕೂರ್. ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್&rsquo;ಗೆ ಅಟ್ಟಿ ಬಿಟ್ಟ. ಅದು ಭಾರತೀಯ ಕ್ರಿಕೆಟ್&rsquo;ನಲ್ಲಿ ಹೊಸ ಪ್ರತಿಭೆಯೊಂದು ಉದಯಿಸಿದ ಕ್ಷಣ.&lt;/p&gt;&lt;p&gt;ಈಗ ವೈಭವ್ ಸೂರ್ಯವಂಶಿ ಮೈದಾನಕ್ಕಿಳಿಯುವಾಗ ಇಡೀ ಕ್ರೀಡಾಂಗಣಕ್ಕೆ ಕ್ರೀಡಾಂಗಣವೇ ತುದಿಗಾಲಲ್ಲಿ ನಿಂತಿರುತ್ತದೆ. ಔಟಾಗಿ ಮರಳುವಾಗ ಇಡೀ ಕ್ರೀಡಾಂಗಣದವೇ ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿರುತ್ತದೆ. &quot;ಶಹಬ್ಬಾಸ್ ಮಗನೇ&quot; ಎನ್ನದವರಿಲ್ಲ. ಹೇಗಿದೆ ನೋಡಿ 15 ವರ್ಷದ ಹುಡುಗನ Aura..&lt;/p&gt;&lt;p&gt;ಇದು 15 ವರ್ಷದ ಹುಡುಗನ ಕಥೆಯಾದರೆ, 2013ರಲ್ಲಿ ಮುಂಬೈನಿಂದ 41 ವಯಸ್ಸಿನ ಹಿರಿಯನೊಬ್ಬನನ್ನು ಕರೆ ತಂದು ರಾಜಸ್ಥಾನ ರಾಯಲ್ಸ್ ಪರ ಆಡಿಸುತ್ತಾರೆ ದ್ರಾವಿಡ್. ಅಲ್ಲಿವರೆಗೆ ಮುಂಬೈನ ಮಹಾನುಭಾವರ ಕಣ್ಣಿಗೆ ಬೀಳದ ಪ್ರತಿಭೆ ದ್ರಾವಿಡ್ ಕಣ್ಣಿಗೆ ಬೀಳುತ್ತಿದ್ದಂತೆ 41ನೇ ವರ್ಷದಲ್ಲಿ ಐಪಿಎಲ್'ಗೆ ಪದಾರ್ಪಣೆ ಮಾಡುವ ಅವಕಾಶ. ಆ ಕ್ರಿಕೆಟಿಗ ಮರುವರ್ಷ ಮುಂಬೈ ಪರ ಚೊಚ್ಚಲ ರಣಜಿ ಪಂದ್ಯವಾಡುತ್ತಾನೆ. ಮುಂದೆ ಆತನ ಜೀವನ ಸಿನಿಮಾ ಆಗಿ ಬಿಡುತ್ತದೆ. ಆ ಕ್ರಿಕೆಟಿಗನ ಹೆಸರು ಪ್ರವೀಣ್ ತಾಂಬೆ.&lt;/p&gt;&lt;p&gt;ದ್ರಾವಿಡ್'ರಂಥಾ ಕೋಚ್'ಗಳ ಕೈಗೆ ಅಧಿಕಾರ ಸಿಕ್ಕಿದರೆ 14ನೇ ವಯಸ್ಸಿಗೆ ವೈಭವ್ ಸೂರ್ಯವಂಶಿಯೂ ಐಪಿಎಲ್ ಆಡುತ್ತಾನೆ.. 41ನೇ ವಯಸ್ಸಿಗೆ ಪ್ರವೀಣ್ ತಾಂಬೆಗೂ ಅದೃಷ್ಟ ಖುಲಾಯಿಸುತ್ತದೆ. ರಾಹುಲ್ ದ್ರಾವಿಡ್ ಶ್ರೇಷ್ಠರೆನಿಸಿಕೊಳ್ಳುವುದು ಇಂತಹ ಕಾರಣಗಳಿಗೆ.&lt;/p&gt;]]></content:encoded>
            <category>cricket-sports</category>
            <dc:creator>Suvarna News</dc:creator>
            <atom:link href="https://kannada.asianetnews.com/cricket-sports/how-rahul-dravid-discovered-vaibhav-suryavanshi-from-13-year-old-wonderkid-to-ipl-biggest-superstar-kvn/articleshow-kaolxmg"/>
        </item>
        <item>
            <title><![CDATA[ಅದೊಂದು ಕಾರಣಕ್ಕಾಗಿ ಐಪಿಎಲ್ ಮಧ್ಯದಲ್ಲಿಯೇ ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾಗಿದ್ದ ಹಾರ್ದಿಕ್ ಪಾಂಡ್ಯ..!]]></title>
            <link>https://kannada.asianetnews.com/cricket-sports/hardik-pandya-wanted-to-leave-mumbai-indians-mid-season-after-ipl-2026-disaster-shocking-report-goes-viral-kvn/articleshow-lph5ggu</link>
            <guid isPermaLink="true">https://kannada.asianetnews.com/cricket-sports/hardik-pandya-wanted-to-leave-mumbai-indians-mid-season-after-ipl-2026-disaster-shocking-report-goes-viral-kvn/articleshow-lph5ggu</guid>
            <pubDate>Fri, 29 May 2026 16:25:02 +0530</pubDate>
            <description><![CDATA[2026ರ ಐಪಿಎಲ್&zwnj;ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ತಂಡವನ್ನು ತೊರೆಯಲು ಮುಂದಾಗಿದ್ದರು ಎಂದು ವರದಿಯಾಗಿದೆ. ಮಾನಸಿಕ ಒತ್ತಡ ಮತ್ತು ತಂಡದ ಹೀನಾಯ ಸೋಲಿನಿಂದಾಗಿ, ಪ್ಲೇ ಆಫ್ ರೇಸ್&zwnj;ನಿಂದ ಹೊರಬಿದ್ದ ನಂತರ ಪಾಂಡ್ಯ ಈ ನಿರ್ಧಾರವನ್ನು ಫ್ರಾಂಚೈಸಿಗೆ ತಿಳಿಸಿದ್ದರು ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1z8yx7z7ntteghnhpv1nbm,imgname-harthik-rohit--1777109072807.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪಾಲಿಗೆ ಒಂದು ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದ ಆಡಿದ 14 ಪಂದ್ಯಗಳಲ್ಲಿ ಕೇವಲ 4 ರಲ್ಲಿ ಗೆದ್ದು, 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನವನ್ನು ಮುಗಿಸಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, 19ನೇ ಸೀಸನ್ ಐಪಿಎಲ್ ಮಧ್ಯದಲ್ಲಿಯೇ ತಂಡ ತೊರೆಯಲು ಮುಂದಾಗಿದ್ದರು ಎನ್ನುವ ಆಘಾತಕಾರಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಷ್ಟಕ್ಕೂ ಪಾಂಡ್ಯ ಮಧ್ಯದಲ್ಲೇ ದಿಢೀರ್ ತಂಡ ತೊರೆಯಲು ಮುಂದಾಗಿದ್ದೇಕೆ ಎನ್ನುವ ವಿಚಾರವೂ ಇದೀಗ ಬಯಲಾಗಿದೆ.&lt;/p&gt;&lt;h2&gt;&lt;strong&gt;ದೊಡ್ಡ ತೀರ್ಮಾನಕ್ಕೆ ರೆಡಿಯಾದ ಹಾರ್ದಿಕ್ ಪಾಂಡ್ಯ!&lt;/strong&gt;&lt;/h2&gt;&lt;p&gt;ಪಿಟಿಐ ಮಾಧ್ಯಮ ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಪ್ಲೇ ಆಫ್&zwnj; ರೇಸ್&zwnj;ನಿಂದ ಹೊರಬಿದ್ದ ಬೆನ್ನಲ್ಲೇ ಮುಂಬೈ ಫ್ರಾಂಚೈಸಿ ಹಾಗೂ ಪಾಂಡ್ಯ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಹಾರ್ದಿಕ್ ಪಾಂಡ್ಯ ಸ್ವಯಂ ಪ್ರೇರಿತರಾಗಿ ಮುಂಬೈ ಇಂಡಿಯನ್ಸ್ ತಂಡದಿಂದ ಹೊರ ಹೋಗಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ಮಧ್ಯದಲ್ಲೇ ಹಾರ್ದಿಕ್ ಪಾಂಡ್ಯ ಮುಂಬೈ ತಂಡ ತೊರೆಯಲು ಮುಂದಾಗಿದ್ದೇಕೆ?&lt;/strong&gt;&lt;/h3&gt;&lt;p&gt;ಹಾರ್ದಿಕ್ ಪಾಂಡ್ಯ 19ನೇ ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ತಂಡದ ಹೀನಾಯ ಪ್ರದರ್ಶನದಿಂದ ನಿರಾಸೆಗೊಳಗಾಗಿದ್ದರು. ಇದಷ್ಟೇ ಅಲ್ಲದೇ ತಂಡ ಹಾಗೂ ವೈಯುಕ್ತಿಕ ಫಾರ್ಮ್&zwnj; ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಇದು ಡ್ರೆಸ್ಸಿಂಗ್ ರೂಮ್&zwnj;ನಲ್ಲೂ ಪ್ರತಿಫಲಿಸುತ್ತಿತ್ತು. ಇನ್ನು ಮಧ್ಯ ಭಾಗದಲ್ಲಿ ಹಾರ್ದಿಕ್ ಪಾಂಡ್ಯಗೆ ಸೊಂಟದ ನೋವು ಕಾಣಿಸಿಕೊಂಡಿತ್ತು. ಪಿಟಿಐ ಮೂಲಗಳ ಪ್ರಕಾರ, 'ಹಾರ್ದಿಕ್ ಪಾಂಡ್ಯ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದರು. ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಲ್ಲಿ ಪ್ಲೇ ಆಫ್&zwnj; ರೇಸ್&zwnj;ನಿಂದ ಹೊರಬೀಳುತ್ತಿದ್ದಂತೆಯೇ ತಾವು ಮುಂದಿನ ಸೀಸನ್&zwnj; ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವುದಾಗಿ ಫ್ರಾಂಚೈಸಿಗೆ ತಿಳಿಸಿದ್ದಾಗಿ' ವರದಿಯಾಗಿದೆ.&lt;/p&gt;&lt;h3&gt;&lt;strong&gt;ನಾಯಕನಾಗಿ ಮುಂಬೈ ಇಂಡಿಯನ್ಸ್ ನಿರೀಕ್ಷೆ ಹುಸಿಗೊಳಿಸಿದ ಹಾರ್ದಿಕ್ ಪಾಂಡ್ಯ:&lt;/strong&gt;&lt;/h3&gt;&lt;p&gt;2022ರಲ್ಲಿ ಮೊದಲ ಬಾರಿಗೆ ಐಪಿಎಲ್&zwnj;ನಲ್ಲಿ ನಾಯಕರಾದ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಮರು ವರ್ಷ ಕೂಡಾ ಗುಜರಾತ್ ಟೈಟಾನ್ಸ್&zwnj; ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ ಫೈನಲ್&zwnj;ಗೇರಿತ್ತು. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಐದು ಬಾರಿ ತಂಡಕ್ಕೆ ಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ಮುಂಬೈ ತಂಡದ ನಾಯಕ ಪಟ್ಟ ಕಟ್ಟಿತು. ಅಲ್ಲಿಂದ ಮುಂಬೈ ಇಂಡಿಯನ್ಸ್ ತಂಡದ ಅದಃಪತನ ಶುರುವಾಯಿತು. 2024ರಲ್ಲಿ ಮುಂಬೈ ಇಂಡಿಯನ್ಸ್ ಕೇವಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇನ್ನು ಕಳೆದ ಸೀಸನ್&zwnj;ನಲ್ಲಿ ಮುಂಬೈ ಪ್ಲೇ ಆಫ್&zwnj; ಪ್ರವೇಶಿಸಿತ್ತಾದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಮತ್ತೊಮ್ಮೆ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಲೀಗ್ ಹಂತದಲ್ಲೇ ಹೊರಬಿದ್ದಿದೆ. ಹೀಗಾಗಿ ಮುಂಬೈ ಫ್ರಾಂಚೈಸಿಯು ಪಾಂಡ್ಯ ಮೇಲೆ ಇಟ್ಟಿದ್ದ ವಿಶ್ವಾಸ ಮಣ್ಣುಪಾಲಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-wanted-to-leave-mumbai-indians-mid-season-after-ipl-2026-disaster-shocking-report-goes-viral-kvn/articleshow-lph5ggu"/>
        </item>
        <item>
            <title><![CDATA[ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ನಿರ್ಧಾರ, ಸ್ಮಾರ್ಟ್ ಸನ್‌ಗ್ಲಾಸ್ ಬ್ಯಾನ್]]></title>
            <link>https://kannada.asianetnews.com/gallery/cricket-sports/bcci-takes-major-decision-ahead-of-ipl-final-smart-sunglasses-banned-bum8m2f</link>
            <guid isPermaLink="true">https://kannada.asianetnews.com/gallery/cricket-sports/bcci-takes-major-decision-ahead-of-ipl-final-smart-sunglasses-banned-bum8m2f</guid>
            <pubDate>Fri, 29 May 2026 16:13:38 +0530</pubDate>
            <description><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ನಿಯಮ ಮತ್ತಷ್ಟು ಕಠಿಣಗೊಳಿಸಿದೆ. ಇದೀಗ 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೂ ಮುನ್ನ ಪ್ಲೇಯರ್ಸ್ ಹಾಗೂ ಅಂಪೈರ್ಸ್ ಸ್ಮಾರ್ಟ್ ಸನ್&zwnj;ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssmwaafwkbavtp5wp8j8pcq,imgname-bcci-bans-smart-sunglass-1780050962767.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ನಿಯಮ ಮತ್ತಷ್ಟು ಕಠಿಣಗೊಳಿಸಿದೆ. ಇದೀಗ 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೂ ಮುನ್ನ ಪ್ಲೇಯರ್ಸ್ ಹಾಗೂ ಅಂಪೈರ್ಸ್ ಸ್ಮಾರ್ಟ್ ಸನ್&zwnj;ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.&lt;/p&gt;&lt;img&gt;&lt;p&gt;ಐಪಿಎಲ್ 2026ರ ಟೂರ್ನಿಯ ಅಂತಿಮ ಘಟ್ಟದಲ್ಲಿ ಬಿಸಿಸಿಐ ಖಡಕ್ ವಾರ್ನಿಂಗ್ ಜೊತೆ ಆಟಗಾರರ ಕೆಲ ನಿರ್ಬಂಧ ಹೇರಿದೆ. ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಇದೀಗ ಐಪಿಎಲ್ ಫ್ರಾಂಚೈಸಿ ಹಾಗೂ ಆಟಗಾರರಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಕೇವಲ ಎರಡು ಪಂದ್ಯ ಮಾತ್ರ ಬಾಕಿ ಇದೆ. ಅದಕ್ಕೂ ಮೊದಲೇ ಬಿಸಿಸಿಐ ಆಟಗಾರರು, ತಂಡದ ಸ್ಟಾಫ್ ಸ್ಮಾರ್ಟ್ ಸನ್&zwnj;ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.&lt;/p&gt;&lt;img&gt;&lt;p&gt;ಹಲವು ಕಂಪನಿಗಳು ಪ್ರಮೋಶನ್ ಹೆಸರಿನಲ್ಲಿ ಆಟಗಾರರು, ತಂಡದ ಸಪೋರ್ಟ್ ಸ್ಟಾಫ್&zwnj;ಗೆ ಸ್ಮಾರ್ಟ್ ಸನ್&zwnj;ಗ್ಲಾಸ್ ಉಚಿತವಾಗಿ ನೀಡುತ್ತಿದೆ. ಈ ಸನ್&zwnj;ಗ್ಲಾಸ್&zwnj;ನಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ, ವಿಡಿಯೋ ಕಾಲ್, ವೈಫೈ ನೆಟ್&zwnj;ವರ್ಕ್, ಮೊಬೈಲ್ ಡೇಟಾ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರಿಂದ ಮಹತ್ವದ ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಸಿಸಿಐ ಎಸಿಯು ವಿಭಾಗ ಸ್ಮಾರ್ಟ್ ಸನ್&zwnj;ಗ್ಲಾಸ್ ಬ್ಯಾನ್ ಮಾಡಿದೆ.&lt;/p&gt;&lt;img&gt;&lt;p&gt;ಸ್ಮಾರ್ಟ್ ಸನ್&zwnj;ಗ್ಲಾಸ್ ಮಾತ್ರವಲ್ಲ, ಯಾವುದೇ ಕಮ್ಯೂನಿಕೇಶನ್ ಡಿವೈಸ್, ಲೈವ್ ಸ್ಟ್ರೀಮಿಂಗ್, ಟೆಕ್ಸ್ಟ್ ಮೆಸೇಜ್, ಆಡಿಯೋ, ವಿಡಿಯೋ ಕಾಲ್ ಡಿವೈಸ್ ಗಳನ್ನು ಬಳಸುವಂತಿಲ್ಲ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿತ್ತು. ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ಆಟಗಾರ ರೋಮಿ ಬಿಂಧರ್ ಮೊಬೈಲ್ ಫೋನ್ ಬಳಸಿದ್ದ ಕಾರಣಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.&lt;/p&gt;&lt;img&gt;&lt;p&gt;ಸ್ಮಾರ್ಟ್ ಡಿವೈಸ್&zwnj;ಗಳನ್ನು ಪಂದ್ಯ ಆರಂಭಕ್ಕೂ ಮೊದಲೇ ಸೆಕ್ಯೂರಿಟಿ ಬಳಿ ಡೆಪಾಸಿಟ್ ಮಾಡಬೇಕು. ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿಯೊಂದು ನಿಯಮಗಳು ಕಠಿಣವಾಗುತ್ತಿದೆ. ಆಟಗಾರರು, ತಂಡದ ಸಪೋರ್ಟ್ ಸ್ಟಾಪ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಹನಿ ಟ್ರಾಪ್ ಆತಂಕ ಎದುರಾಗಿತ್ತು. ಹೀಗಾಗಿ ಹೊಟೆಲ್ ರೂಂಗಳಿಗೆ ಅಪರಿಚಿತರ ಎಂಟ್ರಿಯನ್ನು ಬಿಸಿಸಿಐ ಬ್ಯಾನ್ ಮಾಡಿದೆ. ಪಾರ್ಟಿ ಸೇರಿದಂತೆ ಹಲವು ನೆಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾಗಿರುವ, ತಂಡದ ಹೊರಗಿನವರು ಆಟಗಾರರ ರೂಂ ಎಂಟ್ರಿಕೊಡುವುದು ಬ್ಯಾನ್ ಮಾಡಲಾಗಿದೆ.&lt;/p&gt;&lt;img&gt;&lt;p&gt;2026ರ ಐಪಿಎಲ್ ಟೂರ್ನಿಯಲ್ಲಿ ಕೆಲ ಆಟಗಾರರಿಂದ ನಿಯಮದ ಉಲ್ಲಂಘನೆಯಾಗಿದೆ. ಈ ಕುರಿತು ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಖಡಕ್ ವಾರ್ನಿಂಗ್ ನೀಡಿದೆ. ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ. ಐಪಿಎಲ್ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬಿಸಿಸಿಐ ಫ್ರಾಂಚೈಸಿಗಳಿಗೆ ವಾರ್ನಿಂಗ್ ನೀಡಿದೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/bcci-takes-major-decision-ahead-of-ipl-final-smart-sunglasses-banned-bum8m2f"/>
        </item>
        <item>
            <title><![CDATA[IPL Winner ಐಪಿಎಲ್ 2026 ಟ್ರೋಫಿ ಗೆಲ್ಲುವ ತಂಡ ಯಾವುದು? ಸ್ಫೋಟಕ ಭವಿಷ್ಯ ನುಡಿದ ಗ್ರೊಕ್ ಎಐ]]></title>
            <link>https://kannada.asianetnews.com/gallery/cricket-sports/ipl-2026-winner-prediction-grok-ai-makes-explosive-claim-about-rcb-rapddfb</link>
            <guid isPermaLink="true">https://kannada.asianetnews.com/gallery/cricket-sports/ipl-2026-winner-prediction-grok-ai-makes-explosive-claim-about-rcb-rapddfb</guid>
            <pubDate>Fri, 29 May 2026 14:41:45 +0530</pubDate>
            <description><![CDATA[&lt;p&gt;ಐಪಿಎಲ್ 2 ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸುವ 2ನೇ ತಂಡ ಯಾವುದು? ಫೈನಲ್ ಪಂದ್ಯದಲ್ಲಿ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು? ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಮಾಲೀಕತ್ವದ ಗ್ರೂಕ್ ಎಐ ನುಡಿದ ಭವಿಷ್ಯ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssfpk7wehrnk7hj67z1gaag,imgname-grok-ai-ipl-2026-prediction-1780045532412.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ 2 ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸುವ 2ನೇ ತಂಡ ಯಾವುದು? ಫೈನಲ್ ಪಂದ್ಯದಲ್ಲಿ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು? ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಮಾಲೀಕತ್ವದ ಗ್ರೂಕ್ ಎಐ ನುಡಿದ ಭವಿಷ್ಯ ಏನು?&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿ (IPL 2026) ಅಂತಿಮ ಘಟ್ಟ ತಲುಪುತ್ತಿದೆ. ಇಂದು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ (Gujarat Titans vs Rajasthan Royals) ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ (IPL Final) ಪಂದ್ಯದಲ್ಲಿ ಆರ್&zwnj;ಸಿಬಿ (RCB) ವಿರುದ್ಧ ಹೋರಾಟ ನಡೆಸಲಿದೆ. ಫೈನಲ್ ಪ್ರವೇಶಿಸುವ ತಂಡ ಯಾವುದು? ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು ಅನ್ನೋ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್&zwnj;&zwj;ನ ಗ್ರೊಕ್ ಎಐ ಸ್ಫೋಟಕ ಭವಿಷ್ಯ ನುಡಿದಿದೆ.&lt;/p&gt;&lt;img&gt;&lt;p&gt;ಎಕ್ಸ್ ತಾಣದಲ್ಲಿ ಗ್ರೊಕ್ ಎಐಗೆ ಪ್ರಶ್ನೆ ಕೇಳಲಾಗಿದೆ. ರಾಜಸ್ಥಾನ ರಾಯಲ್ಸ್, ಆರ್&zwnj;ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಈ ಮೂರು ತಂಡದಲ್ಲಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಫೋಟೋವನ್ನು ತೆಗೆದುಬಿಡಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ನೇರವಾಗಿ ಗ್ರೂಕ್ ಎಐ ಆರ್&zwnj;ಸಿಬಿ ಫೋಟೋ ರಿಮೂವ್ ಮಾಡಿ, ಈ ಬಾರಿ ಆರ್&zwnj;ಸಿಬಿ ಟ್ರೋಫಿ ಗೆಲ್ಲಲಿದೆ ಎಂದಿದೆ. ಜೊತೆಗೆ ಕಾರಣನ್ನು ಹೇಳಿದೆ.&lt;/p&gt;&lt;img&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026 ಟ್ರೋಫಿ ಗೆಲ್ಲಲಿದೆ. ಬಲಿಷ್ಠ ತಂಡ, ಅನುಭವ, ಆರ್&zwnj;ಸಿಬಿ ತಂಡದ ಎನರ್ಜಿ, ರಾಜಸ್ಥಾನ ಹಾಗೂ ಗುಜರಾತ್ ತಂಡ ಅಪಾಯಕಾರಿಯಾಗಿದೆ. ಆದರೆ ಈ ಬಾರಿ ಆರ್&zwnj;ಸಿಬಿ ತಂಡಕ್ಕೆ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಆರ್&zwnj;ಸಿಬಿ ಟ್ರೋಫಿ ಗೆಲ್ಲಲಿದೆ ಎಂದಿದೆ.&lt;/p&gt;&lt;img&gt;&lt;p&gt;ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದಿಂದ ಇಲ್ಲಿವರೆಗೂ ಆರ್&zwnj;ಸಿಬಿ ಗೆಲುವಿನ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ತಂಡ ಬ್ಯಾಲೆನ್ಸಿಂಗ್ ಆಗಿದ್ದು, ಪ್ರತಿಯೊಬ್ಬರು ಕೊಡುಗೆ ನೀಡುತ್ತಿದ್ದಾರೆ. ಒಬ್ಬರನ್ನು ತಂಡ ನೆಚ್ಚಿಕೊಂಡಿಲ್ಲ.&lt;/p&gt;&lt;img&gt;&lt;p&gt;ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ಬಲಿಷ್ಠ ತಂಡಗಳು. ಒಂದೆಡೆ ಗಿಲ್, ಬಟ್ಲರ್, ಸಾಯಿ ಸುದರ್ಶನ್ ಇದ್ದರೆ, ಮತ್ತೊಂದೆಡೆ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಅಬ್ಬರ ಇದೆ. ಹೀಗಾಗಿ ಇಂದು ಅತ್ಯಂತ ರೋಚಕ ಹೋರಾಟ ನಡೆಯಲಿದೆ.&lt;/p&gt;&lt;img&gt;&lt;p&gt;ಮೇ.31ರಂದು ಅಹಮ್ಮದಾಬಾದ್&zwnj;ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬಗ್ಗು ಬಡಿದ ಆರ್&zwnj;ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಈಗಾಗಲೇ ಆರ್&zwnj;ಸಿಬಿ ಅಭಿಮಾನಿಗಳು ಅಹಮ್ಮದಾಬಾದ್&zwnj;ನತ್ತ ಪ್ರಯಾಣ ಬೆಳೆಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/ipl-2026-winner-prediction-grok-ai-makes-explosive-claim-about-rcb-rapddfb"/>
        </item>
        <item>
            <title><![CDATA[IPL ಕ್ವಾಲಿಫೈಯರ್-2: ರಾಜಸ್ಥಾನ ಎದುರಿನ ಹೈವೋಲ್ಟೇಜ್ ಮ್ಯಾಚ್‌ಗೆ ಗುಜರಾತ್ ತಂಡದಲ್ಲಿ 2 ಮೇಜರ್ ಚೇಂಜ್! ಸ್ಟಾರ್ ಆಟಗಾರರು ಔಟ್]]></title>
            <link>https://kannada.asianetnews.com/gallery/cricket-sports/gt-vs-rr-qualifier-2-gujarat-titans-likely-to-make-two-big-changes-against-rajasthan-royals-in-ipl-2026-clash-kvn-ywbesq0</link>
            <guid isPermaLink="true">https://kannada.asianetnews.com/gallery/cricket-sports/gt-vs-rr-qualifier-2-gujarat-titans-likely-to-make-two-big-changes-against-rajasthan-royals-in-ipl-2026-clash-kvn-ywbesq0</guid>
            <pubDate>Fri, 29 May 2026 14:41:17 +0530</pubDate>
            <description><![CDATA[&lt;p&gt;ಮುಲ್ಲನ್&zwnj;ಪುರ್: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ಎದುರು ಗುಜರಾತ್ ಟೈಟಾನ್ಸ್ ತಂಡವು ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jsytvkn2et90jzya15vc87zt,imgname-2-1745865264802.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಲ್ಲನ್&zwnj;ಪುರ್: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ಎದುರು ಗುಜರಾತ್ ಟೈಟಾನ್ಸ್ ತಂಡವು ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ರೆಡಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2026ರ ಐಪಿಎಲ್ ಟೂರ್ನಿಯ ಮಹತ್ವದ ಕ್ವಾಲಿಫೈಯರ್-2 ಪಂದ್ಯದ ಮೇಲೆ ಎಲ್ಲರ ಕಣ್ಣಿದೆ. ಮಾಜಿ ಚಾಂಪಿಯನ್ನರಾದ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಫೈನಲ್&zwnj; ಟಿಕೆಟ್&zwnj;ಗಾಗಿ ಸೆಣಸಾಟ ನಡೆಸಲಿವೆ. ಒಂದು ಕಡೆ ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್&zwnj;ಸಿಬಿ ಎದುರು ಸೋತಿರುವ ಗಿಲ್ ನೇತೃತ್ವದ ಗುಜರಾತ್ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್, ಬಲಿಷ್ಠ ಸನ್&zwnj;ರೈಸರ್ಸ್&zwnj;ಗೆ ಸೋಲುಣಿಸಿದ್ದು, ತಮ್ಮ ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಕಾತರಿಸುತ್ತಿದೆ.&lt;/p&gt;&lt;img&gt;&lt;p&gt;ಹೀಗಾಗಿ ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj;ಗೆ ಸೋಲಿನ ಶಾಕ್ ನೀಡಲು ಗುಜರಾತ್ ಟೈಟಾನ್ಸ್ ರಣತಂತ್ರ ಹೆಣೆಯುತ್ತಿದೆ. ಇದೇ ಕಾರಣಕ್ಕಾಗಿ ಗಿಲ್ ಪಡೆ ಕ್ವಾಲಿಫೈಯರ್-2 ಪಂದ್ಯಕ್ಕೆ ಎರಡು ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಆರಂಭಿಕರಾಗಿ ಸಾಯಿ ಸುದರ್ಶನ್ ಹಾಗೂ ನಾಯಕ ಶುಭ್&zwnj;ಮನ್ ಗಿಲ್ ಕಣಕ್ಕಿಳಿಯಲಿದ್ದಾರೆ. ಈ ಐಪಿಎಲ್&zwnj;ನ ಅತ್ಯಂತ ಯಶಸ್ವಿ ಆರಂಭಿಕ ಜೋಡಿಯಾಗಿ ಗಿಲ್-ಸಾಯಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ಪಂದ್ಯದಲ್ಲಿ ನಿಶಾಂತ್ ಸಿಂಧು ಬ್ಯಾಟಿಂಗ್&zwnj;ನಲ್ಲಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಇಂದಿನ ಪಂದ್ಯಕ್ಕೆ ಸಿಂಧು ಬದಲಿಗೆ ಶಾರುಕ್ ಖಾನ್&zwnj;ಗೆ ಗುಜರಾತ್ ಆಡುವ ಹನ್ನೊಂದರ ಬಳಗದಲ್ಲಿ ಮಣೆ ಹಾಕುವ ನಿರೀಕ್ಷೆಯಿದೆ. ಹೀಗಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಶಾರುಕ್ ಖಾನ್ ಹಾಗೂ ಜೇಸನ್ ಹೋಲ್ಡರ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜವಾಬ್ದಾರಿ ಹೊರುವ ನಿರೀಕ್ಷೆಯಿದೆ. ಸುಂದರ್ ಹಾಗೂ ಹೋಲ್ಡರ್ ಬೌಲಿಂಗ್&zwnj;ನಲ್ಲೂ ಆಸರೆಯಾಗಬಲ್ಲರು.&lt;/p&gt;&lt;img&gt;&lt;p&gt;ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕುಲ್ವಂತ್ ಖೆಜ್ರೋಲಿಯಾ ಸಾಕಷ್ಟು ದುಬಾರಿಯಾಗಿದ್ದರು. ಹೀಗಾಗಿ ಖೆಜ್ರೋಲಿಯಾ ಬದಲಿಗೆ ತಂಡದಲ್ಲಿ ಅಶೋಕ್ ಶರ್ಮಾಗೆ ಅವಕಾಶ ನೀಡುವ ನಿರೀಕ್ಷೆಯಿದೆ. ಹೀಗಾದಲ್ಲಿ ಪ್ರಸಿದ್ದ್ ಕೃಷ್ಣ, ಕಗಿಸೋ ರಬಾಡ, ರಶೀದ್ ಖಾನ್ ಹಾಗೂ ಮೊಹಮ್ಮದ್ ಸಿರಾಜ್ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊರಲಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ಎದುರು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಪರ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ರಾಹುಲ್ ತೆವಾಟಿಯಾ ಸ್ಪೋಟಕ 68 ರನ್ ಚಚ್ಚಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲೂ ತೆವಾಟಿಯಾ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಗುಜರಾತ್ ಟೈಟಾನ್ಸ್ ಮೊದಲು ಬ್ಯಾಟ್ ಮಾಡಿದರೆ, ತೆವಾಟಿಯಾ ಆಡುವ ಹನ್ನೊಂದರ ಬಳಗದಲ್ಲಿರಲಿದ್ದು, ಪ್ರಸಿದ್ದ್ ಕೃಷ್ಣ ಇಂಪ್ಯಾಕ್ಟ್ ಆಟಗಾರನಾಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಸಾಯಿ ಸುದರ್ಶನ್, ಶುಭ್&zwnj;ಮನ್ ಗಿಲ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಶಾರುಕ್ ಖಾನ್, ಜೇಸನ್ ಹೋಲ್ಡರ್, ರಶೀದ್ ಖಾನ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ, ಪ್ರಸಿದ್ದ್ ಕೃಷ್ಣ.(ಇಂಪ್ಯಾಕ್ಟ್&zwnj; ಪ್ಲೇಯರ್: ರಾಹುಲ್ ತೆವಾಟಿಯಾ)&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/gt-vs-rr-qualifier-2-gujarat-titans-likely-to-make-two-big-changes-against-rajasthan-royals-in-ipl-2026-clash-kvn-ywbesq0"/>
        </item>
        <item>
            <title><![CDATA[IPL 2026 GT vs RR ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ; ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲೆ!]]></title>
            <link>https://kannada.asianetnews.com/cricket-sports/all-eyes-on-vaibhav-suryavanshi-as-rajasthan-royals-face-gujarat-titans-in-ipl-qualifier-2-kvn/articleshow-9gtv0ko</link>
            <guid isPermaLink="true">https://kannada.asianetnews.com/cricket-sports/all-eyes-on-vaibhav-suryavanshi-as-rajasthan-royals-face-gujarat-titans-in-ipl-qualifier-2-kvn/articleshow-9gtv0ko</guid>
            <pubDate>Fri, 29 May 2026 13:32:19 +0530</pubDate>
            <description><![CDATA[ರಾಜಸ್ಥಾನ ರಾಯಲ್ಸ್&zwnj;ನ ಯುವ ಆಟಗಾರ ವೈಭವ್ ಸೂರ್ಯವಂಶಿ, ಎಲಿಮಿನೇಟರ್ ಪಂದ್ಯದಲ್ಲಿ 29 ಎಸೆತಗಳಲ್ಲಿ 97 ರನ್ ಸಿಡಿಸಿ ಮಿಂಚಿದ್ದಾರೆ. ಅವರ ಈ ಸ್ಫೋಟಕ ಬ್ಯಾಟಿಂಗ್&zwnj;ಗೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಎಲ್ಲರ ಕಣ್ಣು ಕ್ವಾಲಿಫೈಯರ್ ಪಂದ್ಯದ ಮೇಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksn4d5pd9fmsmwk3mqfgzwb3,imgname-20260425383l-1779899471565.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯೂ ಚಂಡೀಗಢ: ಐಪಿಎಲ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಾಡಲಿದ್ದು, ಎಲ್ಲರ ಕಣ್ಣುಗಳು ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವನ್ನು ಧೂಳೀಪಟ ಮಾಡಿದ್ದ ವೈಭವ್, ಇಂದೂ ಕೂಡ ಅದೇ ಮ್ಯಾಜಿಕ್ ಮಾಡ್ತಾರೆ ಅಂತ ಫ್ಯಾನ್ಸ್ ಕಾಯ್ತಾ ಇದ್ದಾರೆ. ಪವರ್&zwnj;ಪ್ಲೇ ಅಂದ್ರೆ ಅದು ತನ್ನದೇ ಆಟ ಅಂತ ಯುವ ಸೆನ್ಸೇಷನ್ ಸೂರ್ಯವಂಶಿ ಸಾಬೀತುಪಡಿಸುತ್ತಿದ್ದಾರೆ. ಎಲಿಮಿನೇಟರ್&zwnj;ನಲ್ಲಿ ಹೈದರಾಬಾದ್ ತಂಡ ನಿಜವಾಗಿಯೂ ಸೋತಿದ್ದು ಸೂರ್ಯವಂಶಿ ಆಟದ ಮುಂದೆಯೇ.&lt;/p&gt;&lt;h2&gt;&lt;strong&gt;ಎಲ್ಲರ ಕಣ್ಣು 15ರ ಪೋರ ವೈಭವ್ ಸೂರ್ಯವಂಶಿ ಮೇಲೆ&lt;/strong&gt;&lt;/h2&gt;&lt;p&gt;ಕ್ರೀಸ್&zwnj;ನಲ್ಲಿದ್ದಾಗ ವೈಭವ್ ಕೇವಲ 29 ಎಸೆತಗಳಲ್ಲಿ 12 ಸಿಕ್ಸರ್&zwnj;ಗಳ ಸಹಿತ 97 ರನ್ ಚಚ್ಚಿದ್ದರು. ತಂತ್ರಗಾರಿಕೆಯ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಕೂಡ ವೈಭವ್ ಆಟದ ಮುಂದೆ ಕಂಗಾಲಾಗಿದ್ದರು. ತಾನೊಬ್ಬ ಕಂಪ್ಲೀಟ್ ಟೀಮ್ ಮ್ಯಾನ್, ಪರಿಸ್ಥಿತಿಗೆ ತಕ್ಕಂತೆ ಗೇಮ್ ಪ್ಲಾನ್ ಬದಲಿಸುತ್ತೇನೆ ಎಂದು ವೈಭವ್ ಹೇಳುತ್ತಾರೆ. ಸೂರ್ಯವಂಶಿ ಅವರ ಈ ಭರ್ಜರಿ ಇನ್ನಿಂಗ್ಸ್&zwnj;ಗೆ ಮಾಜಿ ಆಟಗಾರರಿಂದಲೂ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿದೆ. ಸೂರ್ಯವಂಶಿ ಅವರ ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಒಂದು ಐಪಿಎಲ್ ಸೀಸನ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸೂರ್ಯವಂಶಿ ಈಗಾಗಲೇ ಮುರಿದಿದ್ದಾರೆ. ಅತಿ ವೇಗದ ಟಿ20 ಶತಕದ ದಾಖಲೆಯತ್ತ ವೈಭವ್ ಈಗ ಚಿತ್ತ ನೆಟ್ಟಿದ್ದಾರೆ. ಕಳೆದ ಪಂದ್ಯದಲ್ಲಿ ಈ ದಾಖಲೆ ಸ್ವಲ್ಪದರಲ್ಲೇ ಮಿಸ್ ಆದರೂ, ಮುಂದಿನ ಬಾರಿ ವೈಭವ್ ಇದನ್ನು ಸಾಧಿಸುತ್ತಾರೆ ಎಂಬುದು ಅಭಿಮಾನಿಗಳ ನಿರೀಕ್ಷೆ.&lt;/p&gt;&lt;h3&gt;&lt;strong&gt;ವೈಭವ್&zwnj; ಬ್ಯಾಟಿಂಗ್&zwnj;ಗೆ ಸಚಿನ್&zwnj;, ಕುಂಬ್ಳೆ ಎಬಿಡಿ ಸೇರಿ ಕ್ರಿಕೆಟ್&zwnj; ದಿಗ್ಗಜರ ಮೆಚ್ಚುಗೆ&lt;/strong&gt;&lt;/h3&gt;&lt;p&gt;ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; ವಿರುದ್ಧದ ಐಪಿಎಲ್&zwnj;ನ ಎಲಿಮಿನೇಟರ್&zwnj; ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್&zwnj;ನ 15ರ ವೈಭವ್&zwnj; ಸೂರ್ಯವಂಶಿ 29 ಎಸೆತದಲ್ಲಿ 97 ರನ್&zwnj; ಸಿಡಿಸಿದ್ದಕ್ಕೆ, ಕ್ರಿಕೆಟ್&zwnj; ದಿಗ್ಗಜ ಸಚಿನ್ ತೆಂಡುಲ್ಕರ್&zwnj;, ಅನಿಲ್&zwnj; ಕುಂಬ್ಳೆ, ಎಬಿ ಡಿವಿಲಿಯರ್ಸ್&zwnj;, ಸುರೇಶ್&zwnj; ರೈನಾ, ಯುವರಾಜ್&zwnj; ಸಿಂಗ್ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಎಕ್ಸ್&zwnj;ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿನ್&zwnj;, &lsquo;ವೈಭವ್&zwnj; ಬ್ಯಾಟಿಂಗ್&zwnj; ಅದ್ಭುತ ಆಟವಲ್ಲದೆ ಮತ್ತೇನೂ ಅಲ್ಲ&rsquo; ಎಂದು ಬಣ್ಣಿಸಿದ್ದಾರೆ. &lsquo;ಯಾವುದೇ ಒತ್ತಡಕ್ಕೂ ತಾವು ಒಳಗಾಗುವುದಿಲ್ಲ&rsquo; ಎಂದು ವೈಭವ್&zwnj; ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ಕುಂಬ್ಳೆ ಹೇಳಿದ್ದಾರೆ. &lsquo; ಬಾಸ್&zwnj; ಬೇಬಿ ವಿಶ್ವ ಬಾಸ್&zwnj; ದಾಖಲೆಯನ್ನು ಮುರಿದಿದ್ದಾರೆ. ಅದ್ಭುತ ಆಟ&rsquo; ಎಂದು ಯುವಿ ಹೊಗಳಿದ್ದಾರೆ. ಸುರೇಶ್&zwnj; ರೈನಾ ಕೂಡ ಪ್ರತಿಕ್ರಿಯಿಸಿದ್ದು, &lsquo; ವೈಭವ್&zwnj; ಆಟ ವರ್ಣಿಸಲು ನಿಘಂಟಿನಲ್ಲಿ ಪದಗಳಿಲ್ಲ&rsquo; ಎಂದಿದ್ದಾರೆ.&lt;/p&gt;&lt;p&gt;ಆಸ್ಟ್ರೇಲಿಯಾದ ಮಾಜಿ ಬ್ಯಾಟರ್&zwnj;, ಲಖನೌ ಸೂಪರ್&zwnj;ಜೈಂಟ್ಸ್&zwnj; ತಂಡದ ಕೋಚ್&zwnj; ಜಸ್ಟಿನ್&zwnj; ಲ್ಯಾಂಗರ್&zwnj; &lsquo;ನಾನು ನನ್ನ ಜೀವನದಲ್ಲಿ ಕೇವಲ ಇಬ್ಬರು ಕ್ರೀಡಾಪಟು ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೇನೆ. ಅದರಲ್ಲಿ ವೈಭವ್ ಒಬ್ಬರು&rsquo; ಎಂದಿದ್ದಾರೆ. ಇನ್ನು, ಮೊಹಮ್ಮದ್&zwnj; ಕೈಫ್&zwnj;, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಇಯಾನ್ ಬಿಷಪ್, ಕೆವಿನ್ ಪೀಟರ್ಸನ್, ಮೈಕೆಲ್ ವಾನ್&zwnj; ಸೇರಿ ಹಲವರು ವೈಭವ್&zwnj;ರನ್ನು ಕೊಂಡಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/all-eyes-on-vaibhav-suryavanshi-as-rajasthan-royals-face-gujarat-titans-in-ipl-qualifier-2-kvn/articleshow-9gtv0ko"/>
        </item>
        <item>
            <title><![CDATA[IPL 2026: ಗುಜರಾತ್-ರಾಜಸ್ಥಾನ ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ವಿಲನ್ ಆಗುತ್ತಾ? ಹೇಗಿದೆ ನ್ಯೂ ಚಂಡೀಗಢ ಹವಾಮಾನ ವರದಿ?]]></title>
            <link>https://kannada.asianetnews.com/gallery/cricket-sports/ipl-2026-qualifier-2-weather-report-will-rain-wash-out-gujarat-titans-vs-rajasthan-royals-clash-in-mullanpur-kvn-5k5sieg</link>
            <guid isPermaLink="true">https://kannada.asianetnews.com/gallery/cricket-sports/ipl-2026-qualifier-2-weather-report-will-rain-wash-out-gujarat-titans-vs-rajasthan-royals-clash-in-mullanpur-kvn-5k5sieg</guid>
            <pubDate>Fri, 29 May 2026 13:05:53 +0530</pubDate>
            <description><![CDATA[&lt;p&gt;ಮುಲ್ಲನ್&zwnj;ಪುರ: 2026ರ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬನ್ನಿ ಸದ್ಯ ನ್ಯೂ ಚಂಡೀಗಢದಲ್ಲಿ ಹವಾಮಾನ ಪರಿಸ್ಥಿತಿ ಹೇಗಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01dc3nccngbb9rvk7mawxk36br,imgname-Cricket-rain.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಲ್ಲನ್&zwnj;ಪುರ: 2026ರ ಐಪಿಎಲ್ ಟೂರ್ನಿಯ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಬನ್ನಿ ಸದ್ಯ ನ್ಯೂ ಚಂಡೀಗಢದಲ್ಲಿ ಹವಾಮಾನ ಪರಿಸ್ಥಿತಿ ಹೇಗಿದೆ ನೋಡೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿಂದು ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ನ್ಯೂ ಚಂಡೀಗಢದ ಮಹಾರಾಜ್ ಯುದುವೀಂದ್ರ ಸಿಂಗ್ ಇಂಟರ್&zwnj;ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಉಭಯ ತಂಡಗಳು ಫೈನಲ್&zwnj;ಗೇರಲು ಕೊನೆಯ ಅವಕಾಶ ಇದಾಗಿದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಇವತ್ತಿನ ಅಲ್ಲಿಯ ಹವಾಮಾನ ವರದಿ ಹೇಗಿದೆ ತಿಳಿಯೋಣ ಬನ್ನಿ.&lt;/p&gt;&lt;img&gt;&lt;p&gt;ನ್ಯೂ ಚಂಡೀಗಢದ ವಾತಾವರಣ ಪಂದ್ಯ ಆಯೋಜನೆಗೆ ಸೂಕ್ತವಾಗಿದೆ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಪಂಜಾಬ್&zwnj;ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆದರೆ ನ್ಯೂ ಚಂಡೀಗಢದಲ್ಲಿ ಮಳೆ ಸಾಧ್ಯತೆ ಕಡಿಮೆಯಿದೆ ಎಂದು ತಿಳಿಸಿದೆ. ಇದಷ್ಟೇ ಅಲ್ಲದೇ ಮುಲ್ಲನ್&zwnj;ಪುರ್&zwnj;ನಲ್ಲಿ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.&lt;/p&gt;&lt;img&gt;&lt;p&gt;ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಒಂದು ವೇಳೆ ಅಚಾನಕ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ಪಂದ್ಯ ರದ್ದಾದರೇ, ಲೀಗ್ ಹಂತ ಅಂತ್ಯದ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಗುಜರಾತ್ ಟೈಟಾನ್ಸ್ ನೇರವಾಗಿ ಫೈನಲ್&zwnj;ಗೆ ಎಂಟ್ರಿ ಕೊಡಲಿದೆ.&lt;/p&gt;&lt;img&gt;&lt;p&gt;ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್-2 ಮ್ಯಾಚ್ ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದೆ. 7 ಗಂಟೆಗೆ ಟಾಸ್ ಪ್ರಕ್ರಿಯೆ ಶುರುವಾಗಲಿದೆ. ಈ ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ವೀಕ್ಷಿಸಬಹುದಾಗಿದೆ.&lt;/p&gt;&lt;img&gt;&lt;p&gt;ಸಾಯಿ ಸುದರ್ಶನ್, ಶುಭ್&zwnj;ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಶದ್ ಖಾನ್/ಸಾಯಿ ಕಿಶೋರ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.&lt;/p&gt;&lt;img&gt;&lt;p&gt;ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್(ನಾಯಕ), ಡೊನೊವನ್ ಪೆರೆರಿಯಾ, ದಶುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಂದ್ರೆ ಬರ್ಗರ್, ಯಶ್ ರಾಜ್ ಪೂಂಜ, ಬ್ರಿಜೇಶ್ ಶರ್ಮಾ, ಸುಶಾಂತ್ ಮಿಶ್ರಾ/ತುಷಾರ್ ದೇಶಪಾಂಡೆ/ರವಿ ಬಿಷ್ಣೋಯಿ&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/ipl-2026-qualifier-2-weather-report-will-rain-wash-out-gujarat-titans-vs-rajasthan-royals-clash-in-mullanpur-kvn-5k5sieg"/>
        </item>
        <item>
            <title><![CDATA[15 ವರ್ಷದ ವೈಭವ್ ಸೂರ್ಯವಂಶಿ ಹರಾಜಿಗೆ ಬಂದ್ರೆ 50 ಕೋಟಿಗೆ ಬಿಡ್..! ಅಚ್ಚರಿ ಭವಿಷ್ಯ ನುಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/vaibhav-suryavanshi-could-become-ipl-first-50-crore-rupees-player-says-aakash-chopra-kvn/articleshow-eg7nf4i</link>
            <guid isPermaLink="true">https://kannada.asianetnews.com/cricket-sports/vaibhav-suryavanshi-could-become-ipl-first-50-crore-rupees-player-says-aakash-chopra-kvn/articleshow-eg7nf4i</guid>
            <pubDate>Fri, 29 May 2026 11:12:59 +0530</pubDate>
            <description><![CDATA[2026ರ ಐಪಿಎಲ್&zwnj;ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅಬ್ಬರಿಸುತ್ತಿರುವ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ, ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಅವರ ಸ್ಪೋಟಕ ಆಟವನ್ನು ಗಮನಿಸಿ, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ವೈಭವ್ ಹರಾಜಿಗೆ ಬಂದರೆ 50 ಕೋಟಿ ರೂ. ಪಡೆಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krvcmgvcrth5kaeazp70mrpa,imgname-vaibhav-suryawanshi-most-sixes-record-1779035685740.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 15 ವರ್ಷದ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ವಿಶ್ವ ದರ್ಜೆಯ ಎದುರಾಳಿ ಬೌಲರ್&zwnj;ಗಳನ್ನು ವೈಭವ್ ಸೂರ್ಯವಂಶಿ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಸದ್ಯ ಕ್ವಾಲಿಫೈಯರ್-2 ಪಂದ್ಯಕ್ಕೂ ಮುನ್ನ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದರ ಜತೆಗೆ ಆರೆಂಜ್ ಕ್ಯಾಪ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ.&amp;nbsp;&lt;/p&gt;&lt;p&gt;ಐಪಿಎಲ್&zwnj; ಎಲಿಮಿನೇಟರ್ ಸನ್&zwnj;ರೈಸರ್ಸ್ ಹೈದರಾಬಾದ್ ಎದುರು ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳನ್ನು ಎದುರಿಸಿ 97 ರನ್ ಚಚ್ಚುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್-2 ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೈಭವ್ ಅವರನ್ನು 1.10 ಕೋಟಿ ನೀಡಿ ಖರೀದಿಸಿತ್ತು. ವೈಭವ್ ಸೂರ್ಯವಂಶಿ ಅವರ ಈ ಟ್ಯಾಲೆಂಟ್ ಗಮನಿಸಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಲಿದೆ. ಆದರೆ ಇನ್ನುಳಿದ ಫ್ರಾಂಚೈಸಿಗಳು ಒಂದು ವೇಳೆ ವೈಭವ್ ಹರಾಜಿಗೆ ಹೆಸರು ರಿಜಿಸ್ಟರ್ ಮಾಡಿದರೆ ಕೋಟ್ಯಾಂತರ ರುಪಾಯಿ ಸುರಿಯಲು ರೆಡಿಯಾಗಿವೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್&zwnj; ಚೋಪ್ರಾ ಅಚ್ಚರಿ ಹೇಳಿಕೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿಗೆ 50 ಕೋಟಿ ರುಪಾಯಿ ಬಿಡ್?&lt;/strong&gt;&lt;/h2&gt;&lt;p&gt;ಸನ್&zwnj;ರೈಸರ್ಸ್ ಹೈದರಾಬಾದ್&zwnj; ಎದುರಿನ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡಿದ ಸ್ಪೋಟಕ ಇನ್ನಿಂಗ್ಸ್&zwnj; ನೋಡಿ ಆಕಾಶ್&zwnj; ಅಚ್ಚರಿ ಭವಿಷ್ಯ ನುಡಿದಿದ್ದಾರೆ. 'ವೈಭವ್ ಸೂರ್ಯವಂಶಿ ಒಂದು ವೇಳೆ ಐಪಿಎಲ್&zwnj; ಹರಾಜಿಗೆ ಬಂದರೆ ಐಪಿಎಲ್ ಹರಾಜಿನ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಹರಾಜಾಗಲಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರನ್ನು ಅಷ್ಟು ಸುಲಭಕ್ಕೆ ತಂಡದಿಂದ ರಿಲೀಜ್&zwnj; ಮಾಡುವುದಿಲ್ಲ' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮುಂದುವರೆದು, 'ಐಪಿಎಲ್&zwnj; ಹರಾಜಿನಲ್ಲಿ ರಿಷಭ್ ಪಂತ್ 27 ಕೋಟಿ ರುಪಾಯಿಗೆ ಹರಾಜಾಗುವ ಮೂಲಕ ದುಬಾರಿ ಮೊತ್ತಕ್ಕೆ ಹರಜಾದ ಆಟಗಾರ ಎನಿಸಿಕೊಂಡಿದ್ದಾರೆ. ಇದುವರೆಗೂ ಯಾವ ಆಟಗಾರರು 30 ಕೋಟಿಗಿಂತ ಹೆಚ್ಚಿಗೆ ಮೊತ್ತಕ್ಕೆ ಹರಾಜಾಗಿಲ್ಲ. ಆದರೆ ಒಂದು ವೇಳೆ ವೈಭವ್&zwnj; ಸೂರ್ಯವಂಶಿ ಹರಾಜಿಗೆ ಬಂದರೆ 30 ಕೋಟಿ ಇರಲಿ, ಕನಿಷ್ಠ 30, 32, 33 ಕೋಟಿ ರುಪಾಯಿ ಸಿಗಬಹುದು. ಒಂದು ವೇಳೆ ಫ್ರಾಂಚೈಸಿಯ ಪರ್ಸ್&zwnj; ಅನ್ನು 200 ಕೋಟಿ ರುಪಾಯಿಗೆ ಹೆಚ್ಚಿಸಿದರೆ, ವೈಭವ್ ಸೂರ್ಯವಂಶಿಗೆ ಕನಿಷ್ಠ 50 ಕೋಟಿ ರುಪಾಯಿ ಹರಾಜಾಗಬಹುದು' ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ವೈಭವ್ ಸೂರ್ಯವಂಶಿ:&lt;/strong&gt;&lt;/h3&gt;&lt;p&gt;ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸುತ್ತಿದ್ದಾರೆ. ಇದುವರೆಗೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 45ರ ಸರಾಸರಿಯಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕ ಸಹಿತ 680 ರನ್ ಸಿಡಿಸಿದ್ದಾರೆ. ಇದಷ್ಟೇ ಅಲ್ಲದೇ ಐಪಿಎಲ್&zwnj; ಸೀಸನ್&zwnj;ವೊಂದರಲ್ಲಿ 65 ಸಿಕ್ಸರ್ ಸಿಡಿಸುವ ಮೂಲಕ, ಅತಿಹೆಚ್ಚು ಸಿಕ್ಸರ್ ಸಿಡಿಸಿದ ಅಪರೂಪದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-could-become-ipl-first-50-crore-rupees-player-says-aakash-chopra-kvn/articleshow-eg7nf4i"/>
        </item>
        <item>
            <title><![CDATA[ವೈಭವ್ ಸೂರ್ಯವಂಶಿ ಎನ್ನುವ ವಜ್ರವನ್ನು ಹುಡುಕಿದ್ದು ದ್ರಾವಿಡ್ ಅಲ್ಲ, ಲಕ್ಷ್ಮಣ್‌ ಕೂಡಾ ಅಲ್ಲ! ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಕಥೆ ಗೊತ್ತಾ?]]></title>
            <link>https://kannada.asianetnews.com/gallery/cricket-sports/who-discovered-vaibhav-suryavanshi-meet-the-rajasthan-royals-scout-behind-the-wonderkid-kvn-qnz2sqs</link>
            <guid isPermaLink="true">https://kannada.asianetnews.com/gallery/cricket-sports/who-discovered-vaibhav-suryavanshi-meet-the-rajasthan-royals-scout-behind-the-wonderkid-kvn-qnz2sqs</guid>
            <pubDate>Fri, 29 May 2026 09:26:54 +0530</pubDate>
            <description><![CDATA[&lt;p&gt;2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 13 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 1.10 ಕೋಟಿ ರುಪಾಯಿಗೆ ಖರೀದಿಸಿತ್ತು. ಇಂದು ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ವೈಭವ್ ಎನ್ನುವ ವಜ್ರವನ್ನು ಹುಡುಕಿದ್ದು ಯಾರು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7x80m6cvd6113apsr69x96k,imgname-vaibhav-suryavanshi-4-1760844337356.jpg" type="image/jpeg" height="390" width="690"/>
            <content:encoded><![CDATA[&lt;p&gt;2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 13 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 1.10 ಕೋಟಿ ರುಪಾಯಿಗೆ ಖರೀದಿಸಿತ್ತು. ಇಂದು ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ವೈಭವ್ ಎನ್ನುವ ವಜ್ರವನ್ನು ಹುಡುಕಿದ್ದು ಯಾರು ಗೊತ್ತಾ?&lt;/p&gt;&lt;img&gt;&lt;p&gt;2025ರ ಐಪಿಎಲ್ ಮೆಗಾ ಹರಾಜಿನಲ್ಲಿ 13 ವರ್ಷದ ಯುವ ಆಟಗಾರನಾಗಿದ್ದ ವೈಭವ್ ಸೂರ್ಯವಂಶಿಯನ್ನು ಬರೋಬ್ಬರಿ 1.10 ಕೋಟಿ ರುಪಾಯಿ ನೀಡಿ ರಾಜಸ್ಥಾನ ರಾಯಲ್ಸ್ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 30 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ವೈಭವ್ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವಾದರೂ, ಕೊನೆಗೂ ವೈಭವ್, ರಾಯಲ್ಸ್ ಪಾಲಾದರು.&lt;/p&gt;&lt;img&gt;&lt;p&gt;ಕಳೆದೆರಡು ಸೀಸನ್&zwnj;ನಲ್ಲಿ ವೈಭವ್ ಸೂರ್ಯವಂಶಿ ಆಡುತ್ತಿರುವ ನಿರ್ಭೀತ ಬ್ಯಾಟಿಂಗ್ ಕಂಡ ಉಳಿದ ಫ್ರಾಂಚೈಸಿಗಳು ನಾವು ಆ ಹುಡುಗನನ್ನು ಖರೀದಿಸದೇ ಎಂತ ದೊಡ್ಡ ತಪ್ಪು ಮಾಡಿದೆವು ಎಂದು ಪಶ್ಚಾತಾಪ ಪಡುತ್ತಿವೆ. ಆದರೆ ವೈಭವ್ ಸೂರ್ಯವಂಶಿಯನ್ನು 1.10 ಕೋಟಿಗೆ ಖರೀದಿಸಲು ಆಗಿನ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್, ಎನ್&zwnj;ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಕಾರಣ ಎಂದೆಲ್ಲ ವರದಿಯಾಗಿತ್ತು. ಆದರೆ ಅದು ಸಂಪೂರ್ಣ ನಿಜವಲ್ಲ. ವೈಭವ್ ಆಯ್ಕೆಯ ಹಿಂದೆ ಸಮರ್ ಖಾದ್ರಿ ಎನ್ನುವವರ ಪಾತ್ರವಿತ್ತು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.&lt;/p&gt;&lt;img&gt;&lt;p&gt;ಬಿಹಾರ ಕ್ರಿಕೆಟ್ ತಂಡದ ಮಾಜಿ ಲೆಗ್ ಸ್ಪಿನ್ನರ್ ಆಗಿದ್ದ ಸಮರ್ ಖಾದ್ರಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ರಾಜಸ್ಥಾನ ರಾಯಲ್ಸ್ ತಂಡದ ಟ್ಯಾಲೆಂಟ್ &amp;amp; ಸ್ಕೌಟ್&zwnj; ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಮರ್ ಖಾದ್ರಿ ಕೆಲಸ ಸಣ್ಣ ಸಣ್ಣ ನಗರಗಳಿಗೆ ಹೋಗಿ ರಾಜಸ್ಥಾನ ತಂಡಕ್ಕಾಗಿ ಪ್ರತಿಭಾನ್ವಿತ ಆಟಗಾರರನ್ನು ಹುಡುಕುವುದಾಗಿತ್ತು. ವೈಭವ್ ಸೂರ್ಯವಂಶಿಯನ್ನು ಹುಡುಕಿದ್ದು ಮಾತ್ರವಲ್ಲದೇ ಆತನನ್ನು ಖರೀದಿಸಲೇಬೇಕು ಎಂದು ಪಟ್ಟು ಫ್ರಾಂಚೈಸಿ ಬಳಿ ಪಟ್ಟು ಹಿಡಿದಿದ್ದೇ ಈ ಸಮರ್ ಖಾದ್ರಿ.&lt;/p&gt;&lt;img&gt;&lt;p&gt;ಸಮರ್ ಖಾದ್ರಿ ದೇಶಿ ಕ್ರಿಕೆಟ್&zwnj;ನಲ್ಲಿ ಜಾರ್ಖಂಡ್ ಹಾಗೂ ಬಿಹಾರ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಅವರು 45 ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ ಲಿಸ್ಟ್&zwnj; 'ಎ'ನಲ್ಲಿ 18 ಹಾಗೂ 17 ಟಿ20 ಪಂದ್ಯಗಳನ್ನೂ ಆಡಿದ್ದಾರೆ. 2009ರಲ್ಲಿ ಸಮರ್ ಖಾದ್ರಿ ಜಾರ್ಖಂಡ್&zwnj; ಪರ ಮೊದಲ ಪಂದ್ಯವನ್ನಾಡಿದ್ದರು.&lt;/p&gt;&lt;img&gt;&lt;p&gt;ಸಂದರ್ಶನವೊಂದರಲ್ಲಿ ರಾಜಸ್ಥಾನ ರಾಯಲ್ಸ್&zwnj; ಸ್ಕೌಟ್ ಟೀಂ ಸದಸ್ಯರಾಗಿರುವ ಸಮರ್ ಖಾದ್ರಿ ಈ ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ವೈಭವ್ ಸುಮಾರು 11-12 ವರ್ಷದವರಿದ್ದಾಗ ಆತನ ಹೆಸರನ್ನು ಮೊದಲ ಬಾರಿಗೆ ತಾವು ಕೇಳಿದ್ದಾಗಿ ಹೇಳಿದ್ದಾರೆ. ಪಟನಾದಲ್ಲಿ ನಡೆದ ಒಂದು ಲೋಕಲ್&zwnj; ಮ್ಯಾಚ್&zwnj;ನಲ್ಲಿ ವೈಭವ್ 50 ಎಸೆತಗಳಲ್ಲಿ ಆಗ ಶತಕ ಸಿಡಿಸಿದ್ದರು. ಇನ್ನು ಇಂಟ್ರೆಸ್ಟಿಂಗ್ ವಿಚಾರವೆಂದರೆ ಸಮರ್ ಖಾದ್ರಿ ಎದುರು ವೈಭವ್ ಆಗಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದರಂತೆ.&lt;/p&gt;&lt;img&gt;&lt;p&gt;ಇದಾದ ಬಳಿಕ ಸಮರ್ ಖಾದ್ರಿ, ರಾಜಸ್ಥಾನ ರಾಯಲ್ಸ್ ತಂಡದ ಹೈ ಫರ್ಫಾಮೆನ್ಸ್ ಡೈರೆಕ್ಟರ್ ಜುಬೀನ್ ಬರೋಚ್ ಅವರಿಗೆ ವೈಭವ್ ಸೂರ್ಯವಂಶಿಯ ಬಗ್ಗೆ ಹೇಳಿದರು. ಇದಾದ ಬಳಿಕ ಸೂರ್ಯವಂಶಿಯನ್ನು ರಾಯಲ್ಸ್&zwnj; ಫ್ರಾಂಚೈಸಿ ಟ್ರಯಲ್ಸ್&zwnj;ಗೆ ಕರೆಸಲಾಯಿತು. ಟ್ರಯಲ್ಸ್&zwnj;ನಲ್ಲಿ ವೈಭವ್ ಸೂರ್ಯವಂಶಿ ವೇಗದ ಬೌಲಿಂಗ್&zwnj;ಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಇದು ಆಗಿನ ರಾಜಸ್ಥಾನ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಸಂಜು ಸ್ಯಾಮ್ಸನ್&zwnj;ಗೂ ಇಷ್ಟವಾಯಿತು. ಇದೇ ಕಾರಣಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಕಳೆದ ಸೀಸನ್&zwnj; ಐಪಿಎಲ್&zwnj;ನಲ್ಲಿ ವೈಭವ್&zwnj;ಗೆ ರಾಜಸ್ಥಾನ ರಾಯಲ್ಸ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಲಾಯಿತು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/who-discovered-vaibhav-suryavanshi-meet-the-rajasthan-royals-scout-behind-the-wonderkid-kvn-qnz2sqs"/>
        </item>
        <item>
            <title><![CDATA[IPL ಕ್ವಾಲಿಫೈಯರ್-2: ಫೈನಲ್‌ ಟಿಕೆಟ್‌ಗಾಗಿಂದು ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಫೈಟ್]]></title>
            <link>https://kannada.asianetnews.com/cricket-sports/gujarat-titans-vs-rajasthan-royals-who-will-face-rcb-in-ipl-2026-final-kvn/articleshow-26avntg</link>
            <guid isPermaLink="true">https://kannada.asianetnews.com/cricket-sports/gujarat-titans-vs-rajasthan-royals-who-will-face-rcb-in-ipl-2026-final-kvn/articleshow-26avntg</guid>
            <pubDate>Fri, 29 May 2026 08:27:52 +0530</pubDate>
            <description><![CDATA[ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಫೈನಲ್ ಟಿಕೆಟ್&zwnj;ಗಾಗಿ ಸೆಣಸಲಿವೆ. ಎರಡೂ ತಂಡಗಳು ತಮ್ಮ ಅಗ್ರ ಕ್ರಮಾಂಕದ ಬ್ಯಾಟರ್&zwnj;ಗಳ ಮೇಲೆ ಅವಲಂಬಿತವಾಗಿದ್ದು, ಬಲಿಷ್ಠ ಬೌಲಿಂಗ್ ಪಡೆಗಳನ್ನು ಹೊಂದಿವೆ. ಈ ಪಂದ್ಯದ ವಿಜೇತರು ಫೈನಲ್&zwnj;ನಲ್ಲಿ ಆರ್&zwnj;ಸಿಬಿ ತಂಡವನ್ನು ಎದುರಿಸಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksr4qx3z6xr74pwam3sfetp6,imgname-20260509536l-1780000486527.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಲ್ಲಾನ್&zwnj;ಪುರ್&zwnj;: ಶುಕ್ರವಾರ ಸಂಜೆ, ಇಲ್ಲಿನ ಪಂಜಾಬ್&zwnj; ಕ್ರಿಕೆಟ್&zwnj; ಸಂಸ್ಥೆ ಕ್ರೀಡಾಂಗಣ ಐಪಿಎಲ್&zwnj;ನ ಕ್ವಾಲಿಫೈಯರ್&zwnj;-2 ಪಂದ್ಯಕ್ಕೆ ವೇದಿಕೆ ಒದಗಿಸಲಿದ್ದು, ಸಮಬಲರ ನಡುವೆ ಫೈನಲ್&zwnj; ಟಿಕೆಟ್&zwnj;ಗಾಗಿ ಭರ್ಜರಿ ಪೈಪೋಟಿ ನಡೆಯಲಿದೆ. ಮೊದಲ ಕ್ವಾಲಿಫೈಯರ್&zwnj;ನಲ್ಲಿ ಆರ್&zwnj;ಸಿಬಿ ವಿರುದ್ಧ ಸೋತ ಗುಜರಾತ್&zwnj; ಟೈಟಾನ್ಸ್&zwnj; ಹಾಗೂ ಎಲಿಮಿನೇಟರ್&zwnj;ನಲ್ಲಿ ಸನ್&zwnj;ರೈಸರ್ಸ್&zwnj; ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್&zwnj;, ಪರಸ್ಪರ ಮುಖಾಮುಖಿಯಾಗಲಿವೆ.&lt;/p&gt;&lt;p&gt;ಇತ್ತಂಡಗಳಲ್ಲಿ ಹಲವು ಸಾಮ್ಯತೆಗಳಿವೆ. ಎರಡೂ ತಂಡಗಳು ತಮ್ಮ ಅಗ್ರ-3 ಬ್ಯಾಟರ್&zwnj;ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿವೆ. ಎರಡೂ ತಂಡಗಳ ಮಧ್ಯಮ ಕ್ರಮಾಂಕ ಅಷ್ಟೇನೂ ಬಲಿಷ್ಠವಾಗಿಲ್ಲ. ಎರಡೂ ಕಡೆಗಳಲ್ಲಿ ಪ್ರಚಂಡ ವೇಗಿಗಳಿದ್ದಾರೆ. ಆದರೂ, ಎರಡೂ ತಂಡಗಳು ಪಂದ್ಯವನ್ನು ನೋಡುವ ರೀತಿ ವಿಭಿನ್ನ.&lt;/p&gt;&lt;h2&gt;&lt;strong&gt;ಸಾಯಿ ಸುದರ್ಶನ್- ಶುಭ್&zwnj;ಮನ್ ಗಿಲ್ ಜುಗಲ್ಬಂದಿ&lt;/strong&gt;&lt;/h2&gt;&lt;p&gt;ಹೊಡಿಬಡಿ ಯುಗದಲ್ಲೂ ಗುಜರಾತ್&zwnj;ನ ಆರಂಭಿಕರಾದ ಸಾಯಿ ಸುದರ್ಶನ್ ಹಾಗೂ ಶುಭ್&zwnj;ಮನ್&zwnj; ಗಿಲ್&zwnj;, ರನ್&zwnj; ಕಲೆಹಾಕಲು ಸುರಕ್ಷಿತ ಮಾರ್ಗಗಳನ್ನು ಅನುಸರಿಸುತ್ತಾರೆ. ಈ ಋತುವಿನಲ್ಲಿ ಪವರ್&zwnj;-ಪ್ಲೇನಲ್ಲಿ ಗುಜರಾತ್&zwnj;ನ ರನ್&zwnj;ರೇಟ್&zwnj; 9.66 ಇದ್ದು, ಪ್ಲೇ-ಆಫ್&zwnj;ಗೇರಿದ ತಂಡಗಳ ಪೈಕಿ ಇದು ಕನಿಷ್ಠ. ಸುರಕ್ಷಿತ ಮೊತ್ತಕ್ಕೆ ತೃಪ್ತಿಪಡುವ ಗುಜರಾತ್&zwnj;, ತನ್ನ ಬೌಲರ್&zwnj;ಗಳ ಮೇಲೆ ಹೆಚ್ಚು ವಿಶ್ವಾಸವಿಟ್ಟು ಪಂದ್ಯ ಗೆಲ್ಲುತ್ತಾ ಬಂದಿದೆ.&lt;/p&gt;&lt;p&gt;ಆದರೆ, ರಾಜಸ್ಥಾನ ತಂಡದಲ್ಲಿ 15 ವರ್ಷದ &lsquo;ರನ್ನಾಸುರ&rsquo;ನೊಬ್ಬನಿದ್ದಾನೆ. ಆತನ ಹೆಸರು ವೈಭವ್&zwnj; ಸೂರ್ಯವಂಶಿ. ಆತ ತಾನೆದುರಿಸುವ ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್&zwnj;ಗಟ್ಟಲು ಪ್ರಯತ್ನಿಸುತ್ತಾನೆ. ಈ ಆವೃತ್ತಿಯಲ್ಲಿ ಸುದರ್ಶನ್&zwnj; ಹಾಗೂ ಗಿಲ್&zwnj; ಸೇರಿ ಒಟ್ಟು 59 ಸಿಕ್ಸರ್&zwnj; ಬಾರಿಸಿದ್ದಾರೆ. ವೈಭವ್&zwnj; ಒಬ್ಬರೇ ದಾಖಲೆಯ 65 ಸಿಕ್ಸರ್&zwnj; ಚಚ್ಚಿದ್ದಾರೆ.&lt;/p&gt;&lt;p&gt;ವೈಭವ್&zwnj;ರ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್&zwnj; ಲಯದಲ್ಲಿ ಇಲ್ಲದಿದ್ದರೂ ರಾಜಸ್ಥಾನ ಮೊದಲ 6 ಓವರಲ್ಲಿ 11.66ರ ರನ್&zwnj;ರೇಟ್&zwnj; ಹೊಂದಿದೆ. ಇದು ಈ ಆವೃತ್ತಿಯಲ್ಲಿ ಗರಿಷ್ಠ.&lt;/p&gt;&lt;p&gt;ಬೌಲಿಂಗ್&zwnj; ವಿಭಾಗದಲ್ಲಿ ಗುಜರಾತ್&zwnj;, ಕಗಿಸೋ ರಬಾಡ ಹಾಗೂ ಮೊಹಮದ್&zwnj; ಸಿರಾಜ್&zwnj; ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ರಬಾಡ ಪವರ್&zwnj;-ಪ್ಲೇನಲ್ಲೇ 3 ಓವರ್&zwnj; ಹಾಕುತ್ತಿದ್ದಾರೆ. ರಶೀದ್&zwnj; ಖಾನ್&zwnj; ನಿರೀಕ್ಷಿತ ಪ್ರದರ್ಶನ ತೋರದೆ ಇರುವುದು, ತಂಡಕ್ಕೆ ದೊಡ್ಡ ಹಿನ್ನಡೆ ಆಗಿ ಪರಿಣಮಿಸಿದೆ. ಕುಲ್ವಂತ್&zwnj;ರನ್ನು ಹೊರಗಿಟ್ಟು, ಸ್ಪಿನ್ನರ್&zwnj; ಮಾನವ್&zwnj; ಸುಥಾರ್&zwnj; ಅಥವಾ ಸಾಯಿ ಕಿಶೋರ್&zwnj;ರನ್ನು ಆಡಿಸಬಹುದು.&lt;/p&gt;&lt;p&gt;ಮತ್ತೊಂದೆಡೆ, ರಾಜಸ್ಥಾನ ಜೋಫ್ರಾ ಆರ್ಚರ್&zwnj; ಮೇಲೆ ಸಂಪೂರ್ಣ ಭಾರ ಹಾಕಲಿದೆ. ಬ್ರಿಜೇಶ್&zwnj; ಶರ್ಮಾ, ನ್ಯಾಂಡ್ರೆ ಬರ್ಗರ್&zwnj;, ಸುಶಾಂತ್&zwnj; ಮಿಶ್ರಾ ಹಾಗೂ ಯಶ್&zwnj; ಪೂಂಜಾ, ಆರ್ಚರ್&zwnj;ಗೆ ಉತ್ತಮ ಬೆಂಬಲ ನೀಡಬೇಕಿದೆ.&lt;/p&gt;&lt;p&gt;ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡುವ ನಿರೀಕ್ಷೆ ಇದ್ದು, ಫೈನಲ್&zwnj;ನಲ್ಲಿ ಆರ್&zwnj;ಸಿಬಿಗೆ ಎದುರಾಗುವ ತಂಡ ಯಾವುದು ಎನ್ನುವ ಕುತೂಹಲ ಅಭಿಮಾನಿಗಳದ್ದು.&lt;/p&gt;&lt;h3&gt;&lt;strong&gt;ಪಿಚ್&zwnj; ರಿಪೋರ್ಟ್&zwnj;&lt;/strong&gt;&lt;/h3&gt;&lt;p&gt;ಎಲಿಮಿನೇಟರ್&zwnj; ಪಂದ್ಯಕ್ಕೆ ಬಳಸಿದ ಪಿಚ್&zwnj; ಅನ್ನೇ ಈ ಪಂದ್ಯಕ್ಕೂ ಆಯ್ಕೆ ಮಾಡಲಾಗಿದೆ. ಹೀಗಾಗಿ ಮತ್ತೊಂದು ದೊಡ್ಡ ಸ್ಕೋರ್&zwnj; ನಿರೀಕ್ಷೆ ಮಾಡಬಹುದು. 3 ದಿನಗಳಲ್ಲಿ 2ನೇ ಬಾರಿಗೆ ಪಿಚ್&zwnj; ಬಳಕೆಯಾಗಲಿರುವ ಕಾರಣ, 2ನೇ ಇನ್ನಿಂಗ್ಸ್&zwnj; ಹೊತ್ತಿಗೆ ಪಿಚ್&zwnj; ಗುಣಮಟ್ಟ ಕಳೆದುಕೊಳ್ಳಬಹುದು. ಹೀಗಾಗಿ ಟಾಸ್&zwnj; ಗೆಲ್ಲುವ ತಂಡ ಮೊದಲು ಬ್ಯಾಟ್&zwnj; ಮಾಡಿದರೆ ಅಚ್ಚರಿಯಿಲ್ಲ.&lt;/p&gt;&lt;h3&gt;&lt;strong&gt;ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:&lt;/strong&gt;&lt;/h3&gt;&lt;p&gt;ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್&zwnj;ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅರ್ಶದ್ ಖಾನ್/ಸಾಯಿ ಕಿಶೋರ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.&lt;/p&gt;&lt;p&gt;ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್(ವಿಕೆಟ್ ಕೀಪರ್), ರಿಯಾನ್ ಪರಾಗ್(ನಾಯಕ), ಡೊನೊವನ್ ಪೆರೆರಿಯಾ, ದಶುನ್ ಶನಕ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಂದ್ರೆ ಬರ್ಗರ್, ಯಶ್ ರಾಜ್ ಪೂಂಜ, ಬ್ರಿಜೇಶ್ ಶರ್ಮಾ, ಸುಶಾಂತ್ ಮಿಶ್ರಾ/ತುಷಾರ್ ದೇಶಪಾಂಡೆ/ರವಿ ಬಿಷ್ಣೋಯಿ&lt;/p&gt;&lt;p&gt;ಪಂದ್ಯ ಆರಂಭ: ಸಂಜೆ 7.30ಕ್ಕೆ&lt;/p&gt;&lt;p&gt;ನೇರ ಪ್ರಸಾರ: ಸ್ಟಾರ್&zwnj; ಸ್ಪೋರ್ಟ್ಸ್&zwnj;/ಜಿಯೋ ಹಾಟ್&zwnj;ಸ್ಟಾರ್&zwnj;&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/gujarat-titans-vs-rajasthan-royals-who-will-face-rcb-in-ipl-2026-final-kvn/articleshow-26avntg"/>
        </item>
        <item>
            <title><![CDATA['ಕೊಹ್ಲಿ ಬಹುಶಃ ಮುದುಕ ಇರಬಹುದು, ನಾನಲ್ಲ..': ಐಪಿಎಲ್ ಫೈನಲ್‌ಗೂ ಮುನ್ನ ಕಿಂಗ್ ಕೊಹ್ಲಿ ಕಾಲೆಳೆದ ಭುವಿ]]></title>
            <link>https://kannada.asianetnews.com/cricket-sports/bhuvneshwar-kumar-calls-virat-kohli-old-man-rcb-viral-video-ipl-2026-san/articleshow-bo24fgo</link>
            <guid isPermaLink="true">https://kannada.asianetnews.com/cricket-sports/bhuvneshwar-kumar-calls-virat-kohli-old-man-rcb-viral-video-ipl-2026-san/articleshow-bo24fgo</guid>
            <pubDate>Thu, 28 May 2026 22:51:40 +0530</pubDate>
            <description><![CDATA[&lt;p&gt;ಐಪಿಎಲ್ 2026 ಫೈನಲ್ ತಲುಪಿರುವ ಆರ್&zwnj;ಸಿಬಿ ತಂಡದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ, ತಂಡದ ವೇಗಿ ಭುವನೇಶ್ವರ್ ಕುಮಾರ್, ಸಂದರ್ಶನವೊಂದರಲ್ಲಿ ತಮಾಷೆಯಾಗಿ ವಿರಾಟ್ ಕೊಹ್ಲಿಯನ್ನು 'ಮುದುಕ' ಎಂದು ಕರೆದಿರುವುದು ವೈರಲ್ ಆಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km3ysvn7ryb3sq8vh9h4k73d,imgname-bhuvneshwar-kumar-virat-kohli-1773954461347.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.28): &lt;/strong&gt;ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್ ತಲುಪಿ ಭರ್ಜರಿ ಫಾರ್ಮ್&zwnj;ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಈಗ ಸಂಭ್ರಮದ ವಾತಾವರಣವಿದೆ. ಈ ಯಶಸ್ಸಿನಲ್ಲಿ ತಂಡದ ಬೌಲಿಂಗ್ ವಿಭಾಗದ ಕೊಡುಗೆ ಅಪಾರವಾಗಿದೆ. ಹೀಗಿರುವಾಗ ಆರ್&zwnj;ಸಿಬಿ ತಂಡದ ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ರನ್ ಮಷಿನ್ ವಿರಾಟ್ ಕೊಹ್ಲಿ ಅವರನ್ನು &lsquo;ಮುದುಕ&rsquo; (Old Man) ಎಂದು ಕರೆದಿರುವ ವಿಡಿಯೋವೊಂದು ಇಂಟರ್ನೆಟ್&zwnj;ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಭುವಿ ಹೀಗೆ ಹೇಳಿದ್ದೇಕೆ?&lt;/p&gt;&lt;p&gt;ಐಪಿಎಲ್ 2026ರ ಈ ಸೀಸನ್&zwnj;ನಲ್ಲಿ ಭುವನೇಶ್ವರ್ ಕುಮಾರ್ ಅವರ ಸ್ವಿಂಗ್ ಬೌಲಿಂಗ್ ಎದುರಾಳಿ ಬ್ಯಾಟರ್&zwnj;ಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ತಮ್ಮ ಅಪಾರ ಅನುಭವದ ಬಲದಿಂದ ಆರ್&zwnj;ಸಿಬಿ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ಭುವಿ, ಟೂರ್ನಿಯಲ್ಲಿ ಇದುವರೆಗೆ ಆಡಿದ 15 ಪಂದ್ಯಗಳಿಂದ ಬರೋಬ್ಬರಿ 26 ವಿಕೆಟ್ ಕಲೆಹಾಕಿದ್ದಾರೆ. ಕೇವಲ 8 ರ ಎಕಾನಮಿ ರೇಟ್&zwnj;ನಲ್ಲಿ ರನ್ ನೀಡಿ ನಿಯಂತ್ರಣ ಸಾಧಿಸಿರುವ ಭುವಿ, ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ &lsquo;ಪರ್ಪಲ್ ಕ್ಯಾಪ್&rsquo; (Purple Cap) ತನ್ನದಾಗಿಸಿಕೊಂಡಿದ್ದಾರೆ. ಹೊಸ ಚೆಂಡು ಹಾಗೂ ಡೆತ್ ಓವರ್&zwnj;ಗಳಲ್ಲಿ ವಿಕೆಟ್ ಕೀಳುವ ಭುವಿಯ ಈ ಅಪ್ರತಿಮ ಪ್ರದರ್ಶನವೇ ಆರ್&zwnj;ಸಿಬಿ ಫೈನಲ್ ತಲುಪಲು ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ವಿರಾಟ್ ಕೊಹ್ಲಿಯನ್ನು ಮುದುಕ ಎಂದಿದ್ದೇಕೆ ಭುವಿ? ಇಲ್ಲಿದೆ ಕಂಪ್ಲೀಟ್ ಸ್ಟೋರಿ!&lt;/strong&gt;&lt;/h2&gt;&lt;p&gt;ಆರ್&zwnj;ಸಿಬಿ ತನ್ನ ಸೋಶಿಯಲ್&zwnj; ಮೀಡಿಯಾ ಅಕೌಂಟ್&zwnj;ನಲ್ಲಿ ಖಾತೆಯಲ್ಲಿ ಹಂಚಿಕೊಂಡಿರುವ ವಿಶೇಷ ಸಂದರ್ಶನದ ವಿಡಿಯೋದಲ್ಲಿ ಈ ತಮಾಷೆಯ ಪ್ರಸಂಗ ಜರುಗಿದೆ.&lt;/p&gt;&lt;p&gt;ಆರ್&zwnj;ಸಿಬಿ ಇನ್&zwnj;ಸೈಡರ್&zwnj; ಕಾರ್ಯಕ್ರಮದ ನಿರೂಪಕ ಡ್ಯಾನಿಶ್&zwnj; ಸೇಠ್&zwnj;, ಭುವನೇಶ್ವರ್ ಕುಮಾರ್ ಅವರಿಗೆ, 'ಎಲ್ಲರೂ ನೀವು ವಯಸ್ಸಿಗೆ ಮೀರಿ ಅತ್ಯಂತ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದೀರಿ ಎಂದು ಹೇಳುತ್ತಿದ್ದಾರೆ. ನಿಮಗೇನಾದರೂ ನಿಮ್ಮ ವಯಸ್ಸಿನ ಲೆಕ್ಕಾಚಾರದಲ್ಲಿ ನೀವೀಗ ಮುದುಕನಾಗಿದ್ದೀರಿ ಎನಿಸುತ್ತಿದೆಯೇ?' ಎಂದು ಪ್ರಶ್ನಿಸುತ್ತಾರೆ.&lt;/p&gt;&lt;p&gt;ಇದಕ್ಕೆ ತಕ್ಷಣವೇ ಭುವಿ ನಗುತ್ತಾ, &quot;ಇಲ್ಲ, ಖಂಡಿತಾ ಇಲ್ಲ&quot; ಎಂದು ಉತ್ತರಿಸುತ್ತಾರೆ. ಆದರೆ ಡ್ಯಾನಿಶ್&zwnj; ಬಿಡದೆ, &quot;ಆದರೆ ನೀವು ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಒಂದೇ ವಯಸ್ಸಿನವರಲ್ವಾ? (ಸಮಕಾಲೀನರು)&quot; ಎಂದು ಮತ್ತೊಂದು ಪ್ರಶ್ನೆ ಎಸೆಯುತ್ತಾರೆ. ಇದಕ್ಕೆ ಭುವನೇಶ್ವರ್ ಕುಮಾರ್ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡುತ್ತಾ, &quot;ಹೌದು.. ವಿರಾಟ್ ಕೊಹ್ಲಿ ಬಹುಶಃ ಮುದುಕನಾಗಿರಬಹುದು, ಆದರೆ ನಾನಂತೂ ಅಲ್ಲ!&quot; ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಸದ್ಯ ಭುವಿಯ ಈ ಮಜಾವಾದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.&lt;/p&gt;&lt;p&gt;WTF!! Bro Bhuvneshwar Kumar you should hesitate sometimesOnly Bhuvi can take a dig on Virat Kohli!! pic.twitter.com/WxrOl7gmCw&lt;/p&gt;&lt;p&gt;&mdash; Gagan Choudhary (@trigguuuu) May 28, 2026&lt;/p&gt;&lt;h2&gt;&lt;strong&gt;ಬ್ಯಾಟಿಂಗ್&zwnj;ನಲ್ಲಿ ಅಬ್ಬರಿಸಿದ ಕಿಂಗ್ ಕೊಹ್ಲಿ&lt;/strong&gt;&lt;/h2&gt;&lt;p&gt;ಒಂದೆಡೆ ಭುವಿ ಬೌಲಿಂಗ್&zwnj;ನಲ್ಲಿ ಕಮಾಲ್ ಮಾಡುತ್ತಿದ್ದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಬ್ಯಾಟ್&zwnj;ನಿಂದ ರನ್&zwnj;ಗಳ ಸುರಿಮಳೆಯೇ ಹರಿದುಬರುತ್ತಿದೆ. ಈ ಸೀಸನ್&zwnj;ನಲ್ಲೂ ಕಿಂಗ್ ಕೊಹ್ಲಿ 600 ರನ್&zwnj;ಗಳ ಗಡಿಯನ್ನು ದಾಟುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಭವ್ಯ ದಾಖಲೆ ಬರೆದಿದ್ದಾರೆ. ಐಪಿಎಲ್&zwnj;ನ ಒಟ್ಟು ನಾಲ್ಕು ಸೀಸನ್&zwnj;ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಏಕೈಕ ಬ್ಯಾಟರ್ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ. ಟೂರ್ನಿಯ 15 ಪಂದ್ಯಗಳಲ್ಲಿ 50 ರ ಸರಾಸರಿಯಲ್ಲಿ 600 ರನ್ ಬಾರಿಸಿರುವ ಕೊಹ್ಲಿ, 160 ಕ್ಕೂ ಹೆಚ್ಚು ಭರ್ಜರಿ ಸ್ಟ್ರೈಕ್ ರೇಟ್&zwnj;ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ 1 ಆಕರ್ಷಕ ಶತಕ ಮತ್ತು 4 ಅರ್ಧಶತಕಗಳು ಸೇರಿವೆ. ಇದೀಗ ಮುಂಬರುವ ಮಹಾ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಮತ್ತೊಮ್ಮೆ ಕ್ಲಿಕ್ ಆದಲ್ಲಿ ಆರ್&zwnj;ಸಿಬಿ ತಂಡ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/bhuvneshwar-kumar-calls-virat-kohli-old-man-rcb-viral-video-ipl-2026-san/articleshow-bo24fgo"/>
        </item>
        <item>
            <title><![CDATA[ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ? ಸಂಚಲನ ಮೂಡಿಸಿದ ಎಸ್ ಬದ್ರಿನಾಥ್ ಮೆಗಾ ಟ್ರೇಡ್ ಐಡಿಯಾ!]]></title>
            <link>https://kannada.asianetnews.com/cricket-sports/hardik-pandya-to-csk-s-badrinath-suggests-mega-ipl-trade-with-mumbai-indians-kvn/articleshow-tpvy0li</link>
            <guid isPermaLink="true">https://kannada.asianetnews.com/cricket-sports/hardik-pandya-to-csk-s-badrinath-suggests-mega-ipl-trade-with-mumbai-indians-kvn/articleshow-tpvy0li</guid>
            <pubDate>Thu, 28 May 2026 20:50:51 +0530</pubDate>
            <description><![CDATA[&lt;p&gt;ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್, ಮುಂಬೈ ಇಂಡಿಯನ್ಸ್&zwnj;ನ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್&zwnj;ಗೆ ನೀಡಿ, ಪ್ರತಿಯಾಗಿ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ಮುಂಬೈಗೆ ಸೇರಿಸಿಕೊಳ್ಳುವ ಮೆಗಾ ಟ್ರೇಡ್ ಸಲಹೆಯನ್ನು ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾರ್ದಿಕ್ CSKಗೆ ಬಂದರೆ ಅವರನ್ನೇ ನಾಯಕನನ್ನಾಗಿ ಮಾಡಬೇಕು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq4kxd3vetr8s7hjyq0ep4g,imgname-sanju-samson-hardik-pandya-1779966801315.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: 19ನೇ ಸೀಸನ್ ಐಪಿಎಲ್&zwnj;ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಎರಡೂ ತಂಡಗಳು ಪ್ಲೇಆಫ್&zwnj;ನಿಂದ ಹೊರಬಿದ್ದಿವೆ. ಇದರ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್&zwnj; ಮಾಜಿ ಆಟಗಾರ ಸುಬ್ರಮಣ್ಯಂ ಬದ್ರಿನಾಥ್ ಕ್ರಿಕೆಟ್ ಜಗತ್ತನ್ನೇ ಬೆಚ್ಚಿಬೀಳಿಸುವಂತಹ ಒಂದು ಮೆಗಾ ಟ್ರೇಡ್ ಐಡಿಯಾ ಮುಂದಿಟ್ಟಿದ್ದಾರೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್&zwnj;ಗೆ ನೀಡಿ, ಪ್ರತಿಯಾಗಿ ಚೆನ್ನೈನಿಂದ ಶಿವಂ ದುಬೆ ಮತ್ತು ಯುವ ಓಪನರ್ ಆಯುಷ್ ಮಾತ್ರೆಯನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನೋದು ಬದ್ರಿನಾಥ್ ಸಲಹೆ.&lt;/p&gt;&lt;p&gt;ಅಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಮುಂಬೈ ಬಿಟ್ಟು ಚೆನ್ನೈಗೆ ಬಂದರೆ, ಅವರನ್ನೇ CSK ಕ್ಯಾಪ್ಟನ್ ಮಾಡಬೇಕು ಅಂತಾನೂ ಬದ್ರಿನಾಥ್ ಹೇಳಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಈ ಸೀಸನ್&zwnj;ನಲ್ಲಿ ಆಡಿದ 10 ಪಂದ್ಯಗಳಲ್ಲಿ ಮುಂಬೈ ಗೆದ್ದಿದ್ದು ಕೇವಲ 4ರಲ್ಲಿ ಮಾತ್ರ. ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಬದ್ರಿನಾಥ್ ಈ ಮೆಗಾ ಟ್ರೇಡ್ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ಮೆಗಾ ಟ್ರೇಡ್&zwnj; ಪ್ಲಾನ್ ಬಿಚ್ಚಿಟ್ಟ ಎಸ್ ಬದ್ರಿನಾಥ್&lt;/strong&gt;&lt;/h2&gt;&lt;p&gt;&quot;ನಾನೇನಾದ್ರೂ ಮುಂಬೈ ಇಂಡಿಯನ್ಸ್ ಮ್ಯಾನೇಜ್&zwnj;ಮೆಂಟ್&zwnj;ನಲ್ಲಿದ್ರೆ, ಹಾರ್ದಿಕ್ ಪಾಂಡ್ಯರನ್ನು ಚೆನ್ನೈಗೆ ಕೊಟ್ಟು, ಬದಲಿಗೆ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ತಂಡಕ್ಕೆ ತರುತ್ತಿದ್ದೆ' ಎಂದು ಹೇಳಿದ್ದಾರೆ. ಆಯುಷ್ ಮಾತ್ರೆ ಹಾಗೂ ಶಿವಂ ದುಬೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು.&lt;/p&gt;&lt;p&gt;'ಸಂಜು ಸ್ಯಾಮ್ಸನ್, ಋತುರಾಜ್ ಗಾಯಕ್ವಾಡ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಆಟಗಾರರು ಒಂದಾದರೆ, CSK ಬ್ರ್ಯಾಂಡ್ ಮೌಲ್ಯ ಬೇರೆಯೇ ಮಟ್ಟಕ್ಕೆ ಹೋಗುತ್ತೆ. ಹಾರ್ದಿಕ್ ಚೆನ್ನೈ ಕ್ಯಾಪ್ಟನ್ಸಿ ಕೇಳಿದರೆ, ನಾನೇ ಅವನನ್ನು CSK ನಾಯಕನನ್ನಾಗಿ ಮಾಡುತ್ತೇನೆ. ಎಂ.ಎಸ್. ಧೋನಿ ಜೊತೆ ಹಾರ್ದಿಕ್&zwnj;ಗೆ ಒಳ್ಳೆ ಸಂಬಂಧ ಇರೋದು ಇದಕ್ಕೆ ಸಹಾಯ ಮಾಡುತ್ತೆ,&quot; ಎಂದು ಬದ್ರಿನಾಥ್ ವಿವರಿಸಿದ್ದಾರೆ.&lt;/p&gt;&lt;p&gt;&quot;ಹಾರ್ದಿಕ್ ಐಪಿಎಲ್ ಕೆರಿಯರ್&zwnj;ನಲ್ಲಿ ಇನ್ನೂ ಮೂರು ಒಳ್ಳೆ ಸೀಸನ್&zwnj;ಗಳು ಬಾಕಿ ಇವೆ. ಅವರು ಬಂದರೆ ಚೆನ್ನೈ ತಂಡಕ್ಕೆ ಅದ್ಭುತ ಬ್ಯಾಲೆನ್ಸ್ ಸಿಗುತ್ತೆ. ಹಾರ್ದಿಕ್&zwnj;ನನ್ನು ಮುಂದಿಟ್ಟುಕೊಂಡು CSK ಒಂದು ಹೊಸ ತಂಡವನ್ನೇ ಕಟ್ಟಬಹುದು. ಬೇರೆ ಫ್ರಾಂಚೈಸಿಗೆ ಹೋಗೋದಕ್ಕಿಂತ, ಚೆನ್ನೈಗೆ ಬರೋದೇ ಹಾರ್ದಿಕ್&zwnj;ಗೆ ಹೆಚ್ಚು ಲಾಭ. ಯಾಕಂದ್ರೆ, ಒಬ್ಬ ಆಟಗಾರನ ಇಮೇಜ್ ಬದಲಾಯಿಸಲು CSKಗಿಂತ ಉತ್ತಮ ತಂಡ ಮತ್ತೊಂದಿಲ್ಲ,&quot; ಎಂದು ಬದ್ರಿನಾಥ್ ಸ್ಪಷ್ಟಪಡಿಸಿದ್ದಾರೆ. ಈ ಸೀಸನ್&zwnj;ನಲ್ಲಿ ಹಾರ್ದಿಕ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಕೆರಿಯರ್&zwnj;ನಲ್ಲೇ ಅತ್ಯಂತ ಕಳಪೆ ಫಾರ್ಮ್&zwnj;ನಲ್ಲಿದ್ದರು.&lt;/p&gt;&lt;h3&gt;&lt;strong&gt;ಗುಜರಾತ್ ಟೈಟಾನ್ಸ್&zwnj;ನಿಂದ ಪಾಂಡ್ಯ ಕರೆತಂದಿದ್ದು ಮುಂಬೈನ ತಪ್ಪು ನಿರ್ಧಾರ&lt;/strong&gt;&lt;/h3&gt;&lt;p&gt;ಗುಜರಾತ್ ಟೈಟಾನ್ಸ್&zwnj;ನಿಂದ ಹಾರ್ದಿಕ್ ಮುಂಬೈಗೆ ವಾಪಸ್ ಬಂದಿದ್ದು ಮತ್ತು ರೋಹಿತ್ ಶರ್ಮಾರನ್ನು ಬದಿಗೊತ್ತಿ ಕ್ಯಾಪ್ಟನ್ ಆಗಿದ್ದೇ ಮುಂಬೈ ಇಂಡಿಯನ್ಸ್ ಪತನಕ್ಕೆ ಕಾರಣ ಅಂತ ಬದ್ರಿನಾಥ್ ಬೆಟ್ಟು ಮಾಡಿದ್ದಾರೆ. &quot;ರೋಹಿತ್ ಶರ್ಮಾ ಮುಂಬೈ ಪರ 15 ವರ್ಷ ಆಡಿ, 5 ಟ್ರೋಫಿಗಳನ್ನು ಗೆದ್ದುಕೊಟ್ಟಿರುವ ಮುಂಬೈನ ಸ್ವಂತ ನಾಯಕ. ರೋಹಿತ್&zwnj;ರನ್ನು ಬದಲಿಸಿ ಹಾರ್ದಿಕ್ ಬಂದಾಗಿನಿಂದ ಮುಂಬೈನಲ್ಲಿ ಯಾವುದೂ ಸರಿಯಾಗಿ ನಡೀತಿಲ್ಲ. ಅದಕ್ಕೆ, ಹಾರ್ದಿಕ್&zwnj;ನನ್ನು ಕೈಬಿಟ್ಟರೂ ಮುಂಬೈ ಈಗಲೂ ಒಂದು ಬಲಿಷ್ಠ ತಂಡವೇ. ಹಾರ್ದಿಕ್&zwnj;ನನ್ನು ರಿಲೀಸ್ ಮಾಡಿ ತಿಲಕ್ ವರ್ಮಾ, ಜಸ್ಪ್ರೀತ್ ಬುಮ್ರಾ ಅಥವಾ ಸೂರ್ಯಕುಮಾರ್ ಯಾದವ್&zwnj;ರನ್ನ ಮುಂಬೈ ಕ್ಯಾಪ್ಟನ್ ಮಾಡಬೇಕು. ಇದು ಹಾರ್ದಿಕ್ ತಪ್ಪಲ್ಲ, ಆದರೆ ಅವರ ಕ್ಯಾಪ್ಟನ್ಸಿ ಆಸೆ ತಂಡದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಿತು,&quot; ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ, ಇಂತಹದೊಂದು ದೊಡ್ಡ ಟ್ರೇಡ್&zwnj;ಗೆ ಚೆನ್ನೈ ಮತ್ತು ಮುಂಬೈ ತಂಡಗಳು ಸಿದ್ಧವಾಗುತ್ತವೆಯೇ ಎಂದು ಕ್ರಿಕೆಟ್ ಜಗತ್ತು ಈಗ ಕುತೂಹಲದಿಂದ ನೋಡುತ್ತಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-to-csk-s-badrinath-suggests-mega-ipl-trade-with-mumbai-indians-kvn/articleshow-tpvy0li"/>
        </item>
        <item>
            <title><![CDATA[20 ಲಕ್ಷಕ್ಕೆ RCB ಸೇರಿ ನಾಲ್ಕೇ ನಾಲ್ಕು ಪಂದ್ಯಗಳಲ್ಲಿ ತಂಡಕ್ಕೆ ಬೇಡವಾಗಿದ್ದನು ಈಗ ಬೆಲೆ ಕಟ್ಟಲಾಗದ ನಾಯಕನಾಗಿ ಬಿಟ್ಟ..!]]></title>
            <link>https://kannada.asianetnews.com/cricket-sports/rajat-patidar-the-calm-leader-behind-rcb-back-to-back-ipl-final-journey-kvn/articleshow-2l6wxa8</link>
            <guid isPermaLink="true">https://kannada.asianetnews.com/cricket-sports/rajat-patidar-the-calm-leader-behind-rcb-back-to-back-ipl-final-journey-kvn/articleshow-2l6wxa8</guid>
            <pubDate>Thu, 28 May 2026 13:22:18 +0530</pubDate>
            <description><![CDATA[ಒಮ್ಮೆ ತಂಡದಿಂದ ಕೈಬಿಡಲ್ಪಟ್ಟ ರಜತ್ ಪಾಟಿದಾರ್, ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ ನಾಯಕನಾಗಿ ಹೊರಹೊಮ್ಮಿದ. ಹರಾಜಿನಲ್ಲಿ ಮಾರಾಟವಾಗದೆ, ಬದಲಿ ಆಟಗಾರನಾಗಿ ಬಂದು ತಂಡವನ್ನು ಮುನ್ನಡೆಸಿ ಕಪ್ ಗೆದ್ದುಕೊಟ್ಟ ಅವನ ರೋಚಕ ಪಯಣದ ಕಥೆಯಿದು.]]></description>
            <media:content url="https://static.asianetnews.com/images/w-1280,h-720,format-jpg,imgid-01ksm9hqdbc9n8hd2xbkny1t01,imgname-rajat-patidar-1779871309226.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್&lt;/strong&gt;&lt;/p&gt;&lt;p&gt;ರಜತ್ ಪಾಟಿದಾರ್. ಈ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಎಂದಿಗೂ ಮರೆಯಲಾರರು. ಆರ್.ಸಿ.ಬಿಯ 18 ವರ್ಷಗಳ ಕಪ್ ಕನಸನ್ನು ನನಸು ಮಾಡಿದ್ದ ನಾಯಕನಿವನು. ಆರ್.ಸಿ.ಬಿಯನ್ನು ಸತತ 2ನೇ ಬಾರಿ ಫೈನಲ್&rsquo;ಗೆ ಮುನ್ನಡೆಸಿದ ಸಾರಥಿಯಿವನು.&lt;/p&gt;&lt;p&gt;ಹಿಮಾಲಯದ ತಪ್ಪಲಲ್ಲಿನ ಮೈದಾನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅವನು ಆಡಿದ ಆಟವಿದೆಯಲ್ಲಾ. ಅದು ಹಿಮಾಲಯದೆತ್ತರದ ಸಾಧನೆ. 33 ಎಸೆತಗಳಲ್ಲಿ 93 ರನ್. 9 ಸಿಕ್ಸರ್&rsquo;ಗಳು. ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಜೇಸನ್ ಹೋಲ್ಡರ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್&rsquo;ರನ್ನೊಳಗೊಂಡ ಬಲಿಷ್ಠ ಬೌಲಿಂಗ್ ಆಕ್ರಮಣದ ಮುಂದೆ ಇಂಥಾ ಆಟವಾಡಲು ಗಟ್ಟಿ ಗುಂಡಿಗೆ ಬೇಕು.&lt;/p&gt;&lt;h2&gt;&lt;strong&gt;ಆರ್&zwnj;ಸಿಬಿ ತಂಡದ ಕೊಹಿನೂರು ವಜ್ರ ರಜತ್ ಪಾಟೀದಾರ್&lt;/strong&gt;&lt;/h2&gt;&lt;p&gt;ಕೊಹ್ಲಿ ಕಟ್ಟಿದ ಸಾಮ್ರಾಜ್ಯ ಆರ್.ಸಿ.ಬಿಗೆ ಸಿಕ್ಕ ಕೊಹಿನೂರ್ ವಜ್ರ ಈ ರಜತ್ ಪಾಟಿದಾರ್. ಕೆಂಪು ಸೈನ್ಯದ ಸೇನಾಧಿಪತಿ ಇವನು. 2021ರಲ್ಲಿ 20 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡದ್ದ ಮಧ್ಯಪ್ರದೇಶ ಕ್ರಿಕೆಟಿಗನ ಆಟ, ನಾಯಕತ್ವ ಆರ್.ಸಿ.ಬಿ ಪಾಲಿಗೆ ಬೆಲೆ ಕಟ್ಟಲಾಗದ್ದು. 2021ರಲ್ಲಿ ಆರ್.ಸಿ.ಬಿಗೆ ಕಾಲಿಟ್ಟವನು ಆ ವರ್ಷ ನಾಲ್ಕು ಪಂದ್ಯಗಳಲ್ಲಿ 71 ರನ್ ಹೊಡೆದಿದ್ದ. ಅದೇ ವರ್ಷ ತಂಡದಿಂದ ಬಿಡುಗಡೆಗೊ೦ಡಿದ್ದ. ತಾಕತ್ತಿನ ಆಟಗಾರರನ್ನು ತಂಡದಿಂದ ಕೈ ಬಿಡುವುದು ಆ ದಿನಗಳಲ್ಲಿ ಆರ್.ಸಿ.ಬಿ ಜಾಯಮಾನ. ಹಾಗೆ ತಂಡದಿಂದ ಹೊರ ಬಿದ್ದ ರಜತ್ ಪಾಟಿದಾರ್. ಆದರೆ ವಿಧಿ ಬರೆದ ಕಥೆ ಬೇರೆಯೇ ಇತ್ತು.&lt;/p&gt;&lt;h3&gt;&lt;strong&gt;ಅನ್&zwnj;ಸೋಲ್ಡ್ ಆದ ಆಟಗಾರನ ಕೈಬೀಸಿ ಕರೆದ&lt;/strong&gt;&lt;/h3&gt;&lt;p&gt;2022ರ ಐಪಿಎಲ್ ಹರಾಜಿನಲ್ಲಿ ಅವನನ್ನು ಯಾರೂ ಖರೀದಿಸಲಿಲ್ಲ. ಹಾಗೆಂದು ಅದೃಷ್ಟದೇವತೆ ಅವನ ಕೈ ಬಿಡಲಿಲ್ಲ. ಆರ್.ಸಿ.ಬಿ ತಂಡದಲ್ಲಿದ್ದ ಕರ್ನಾಟಕದ ಹುಡುಗ ಲವನೀತ್ ಸಿಸೋಡಿಯಾ 2022ರ ಟೂರ್ನಿಯ ಮಧ್ಯದಲ್ಲೇ ಗಾಯಗೊಂಡು ಹೊರ ನಡೆಯುತ್ತಾನೆ. ಅವನಿಗೆ ಬದಲಿ ಆಟಗಾರನಾಗಿ ಬಂದವನೇ ಈ ರಜತ್ ಪಾಟಿದಾರ್. ಆರ್.ಸಿ.ಬಿ ಪ್ಲೇ ಆಫ್ ತಲುಪಿತ್ತು ಆ ವರ್ಷ. ಲಕ್ನೋ ವಿರುದ್ಧದ ಎಲಿಮೆನೇಟರ್ ಪಂದ್ಯದಲ್ಲಿ ಪಾಟಿದಾರ್ ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಚಚ್ಚಿ ಬಿಸಾಕಿದ್ದ. ವಿರಾಟ್ ಕೊಹ್ಲಿ ಆರ್.ಸಿ.ಬಿ ನಾಯಕತ್ವ ತ್ಯಜಿಸುತ್ತಿದ್ದಂತೆ ಮುಂದೆ ಯಾರು ಎಂಬ ಪ್ರಶ್ನೆಗೆ ಉತ್ತರವಾದವನು ರಜತ್ ಪಾಟಿದಾರ್. ಫಾಫ್ ಡುಪ್ಲೆಸಿಸ್ ಕೈಯಿಂದ ನಾಯಕತ್ವದ ದಂಡ ಸ್ವೀಕರಿಸಿದ ಪಾಟಿದಾರ್, 2025ರಲ್ಲಿ ತಂಡಕ್ಕೆ ಕಪ್ ಗೆದ್ದು ಕೊಟ್ಟ.&lt;/p&gt;&lt;p&gt;ಈ ವರ್ಷ ಸ್ವತಃ ತಾನೇ ಮುಂಚೂಣಿಯಲ್ಲಿ ನಿಂತು ಕ್ವಾಲಿಫೈಯರ್ ಪಂದ್ಯದಲ್ಲಿ ಆರ್.ಸಿ.ಬಿಯನ್ನು ಗೆಲ್ಲಿಸಿ ಫೈನಲ್&rsquo;ಗೆ ತಂದು ನಿಲ್ಲಿಸಿದ್ದಾನೆ. ಒತ್ತಡವನ್ನು ನಿಭಾಯಿಸುವ ರೀತಿ ಅವನ ಅಸಲಿ ಶಕ್ತಿ. ಅದೆಂಥಾ ಒತ್ತಡವೇ ಇರಲಿ ತಾಳ್ಮೆ ಕಳೆದುಕೊಳ್ಳಲಾರ. ಜ್ವಾಲಾಮುಖಿಯನ್ನೇ ನುಂಗಿದರೂ ಮಂಜನ್ನೇ ಎರಕ ಹೊಯ್ದ ಮುಖ.&lt;/p&gt;&lt;p&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂಥಾ ಅತೀ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಫ್ರಾಂಚೈಸಿಯನ್ನು ಮುನ್ನಡೆಸುವುದು ಸುಲಭವಲ್ಲ. ಅಲ್ಲಿ ಒತ್ತಡವೂ ಇರುತ್ತದೆ, ನಿರೀಕ್ಷೆಗಳೂ ನೂರ್ಮಡಿಯಾಗಿರುತ್ತವೆ. ರಜತ್ ಪಾಟಿದಾರ್ ಅವನೆಲ್ಲವನ್ನೂ ಸಲೀಸಾಗಿ ನಿಭಾಯಿಸುತ್ತಿದ್ದಾನೆ.&lt;/p&gt;&lt;p&gt;2022ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಫೈನಲ್&rsquo;ನಲ್ಲಿ ಮುಂಬೈ ವಿರುದ್ಧ ಶತಕ ಬಾರಿಸಿ ಮಧ್ಯಪ್ರದೇಶಕ್ಕೆ ಮೊಟ್ಟ ಮೊದಲ ರಣಜಿ ಟ್ರೋಫಿ ಗೆದ್ದು ಕೊಟ್ಟವನು ರಜತ್ ಪಾಟಿದಾರ್. ಈಗ ಆರ್.ಸಿ.ಬಿಗೆ ಸತತ 2ನೇ ಕಪ್ ಗೆದ್ದು ಕೊಡುವ ಹಾದಿಯಲ್ಲಿದ್ದಾನೆ.&lt;/p&gt;]]></content:encoded>
            <category>cricket-sports</category>
            <dc:creator>Suvarna News</dc:creator>
            <atom:link href="https://kannada.asianetnews.com/cricket-sports/rajat-patidar-the-calm-leader-behind-rcb-back-to-back-ipl-final-journey-kvn/articleshow-2l6wxa8"/>
        </item>
        <item>
            <title><![CDATA[IPL 2026 Qualifier 2: ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಮ್ಯಾಚ್ ನಡಿಯೋದೇ ಡೌಟ್..! ಟೈಟಾನ್ಸ್ ಫೈನಲ್‌ಗೆ, ರಾಯಲ್ಸ್‌ಗೆ ನಿರಾಸೆ?]]></title>
            <link>https://kannada.asianetnews.com/cricket-sports/ipl-2026-qualifier-2-under-rain-threat-gujarat-titans-could-reach-final-without-playing-kvn/articleshow-xb9nfig</link>
            <guid isPermaLink="true">https://kannada.asianetnews.com/cricket-sports/ipl-2026-qualifier-2-under-rain-threat-gujarat-titans-could-reach-final-without-playing-kvn/articleshow-xb9nfig</guid>
            <pubDate>Thu, 28 May 2026 20:25:22 +0530</pubDate>
            <description><![CDATA[ಐಪಿಎಲ್ 2026ರ ಕ್ವಾಲಿಫೈಯರ್-2 ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಒಂದು ವೇಳೆ ಪಂದ್ಯ ರದ್ದಾದರೆ, ಲೀಗ್ ಹಂತದಲ್ಲಿ ಉತ್ತಮ ಅಂಕ ಹೊಂದಿರುವ ಗುಜರಾತ್ ತಂಡವು ಐಪಿಎಲ್ ನಿಯಮದ ಪ್ರಕಾರ ನೇರವಾಗಿ ಫೈನಲ್&zwnj;ಗೆ ಪ್ರವೇಶಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspvst0bvn3wyx8hd8x214b0,imgname-ipl-1779957557259.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯು ಇದೀಗ ಅಂತಿಮ ಹಂತದಲ್ಲಿದೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಫೈನಲ್ ಟಿಕೆಟ್&zwnj;ಗಾಗಿ ಕಾದಾಡಲಿವೆ. ಫೈನಲ್&zwnj; ಪಂದ್ಯವು ಮೇ 31ರಂದು ನಿಗದಿಯಾಗಿದ್ದು, ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆಲ್ಲುವ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಇದೆಲ್ಲದರ ನಡುವೆ ಕೆಲ ಮಾಧ್ಯಮ ವರದಿಗಳ ಪ್ರಕಾರ ಕ್ವಾಲಿಫೈಯರ್-2 ಪಂದ್ಯ ನಡೆಯೋದೇ ಡೌಟ್ ಎನ್ನಲಾಗುತ್ತಿದೆ. ಹೀಗಾದಲ್ಲಿ ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿರುವ ರಾಜಸ್ಥಾನ ರಾಯಲ್ಸ್ ತಂಡದ ಕನಸು ನುಚ್ಚುನೂರಾಗಲಿದೆ. ಇನ್ನು ಕ್ವಾಲಿಫೈಯರ್-2 ಮ್ಯಾಚ್ ಆಡದೆಯೇ ಶುಭ್&zwnj;ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಫೈನಲ್&zwnj;ಗೆ ಲಗ್ಗೆಯಿಡುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಕ್ವಾಲಿಫೈಯರ್-2 ಪಂದ್ಯಕ್ಕೆ ವರುಣನ ಭೀತಿ, ಮ್ಯಾಚ್ ರದ್ದಾಗುವ ಸಾಧ್ಯತೆ!&lt;/strong&gt;&lt;/h2&gt;&lt;p&gt;ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಮಹತ್ವದ ಕ್ವಾಲಿಫೈಯರ್-2 ಪಂದ್ಯವು ಇದೇ ಮೇ 29ರಂದು ಮಹರಾಜ ಯದುವೇಂದ್ರ ಸಿಂಗ್ ಇಂಟರ್&zwnj;ನ್ಯಾಷನಲ್ ಸ್ಟೇಡಿಯಂ ಮುಲ್ಲನಪುರದಲ್ಲಿ ನಿಗದಿಯಾಗಿದೆ. ಮ್ಯಾಚ್ ನಿಗದಿಯಾಗಿರುವ ಮೇ 29ರಂದು ನ್ಯೂ ಚಂಡೀಗಢದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ. ಇದು ಕ್ವಾಲಿಫೈಯರ್-2 ಮ್ಯಾಚ್ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಕ್ವಾಲಿಫೈಯರ್-2 ಮ್ಯಾಚ್ ಆಡದೆಯೇ ಗುಜರಾತ್ ಟೈಟಾನ್ಸ್ ಫೈನಲ್&zwnj;ಗೆ ಎಂಟ್ರಿ?&lt;/strong&gt;&lt;/h3&gt;&lt;p&gt;ಮಳೆ ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಒಂದು ವೇಳೆ ಮ್ಯಾಚ್ ರದ್ದಾದರೇ, ಐಪಿಎಲ್ ನಿಯಮಾವಳಿಗಳ ಪ್ರಕಾರ ಗುಜರಾತ್ ಟೈಟಾನ್ಸ್ ತಂಡವು ಅನಾಯಾಸವಾಗಿ ಫೈನಲ್&zwnj;ಗೆ ಎಂಟ್ರಿಕೊಡಲಿದೆ. ಬಿಸಿಸಿಐ ಪ್ರಕಾರ ಫೈನಲ್ ಹೊರತುಪಡಿಸಿ ಐಪಿಎಲ್&zwnj;ನ ಯಾವುದೇ ಪ್ಲೇ ಆಫ್&zwnj; ಪಂದ್ಯಗಳಿಗೆ ಮೀಸಲು ದಿನವಿಲ್ಲ. ಪ್ಲೇ ಆಫ್&zwnj; ಪಂದ್ಯಗಳು ಮಳೆಯಿಂದ ರದ್ದಾದರೇ, ಲೀಗ್ ಹಂತದ ಅಂತ್ಯದ ವೇಳೆಗೆ ಉಭಯ ತಂಡಗಳ ಪೈಕಿ ಯಾವ ತಂಡವು ಅಂಕಪಟ್ಟಿಯಲ್ಲಿ ಮೇಲಿರುತ್ತದೆಯೋ ಆ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಕ್ವಾಲಿಫೈಯರ್-2 ಪಂದ್ಯವು ಮಳೆಯಿಂದ ರದ್ದಾದರೆ, ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಲೀಗ್ ಹಂತದ ಕೊನೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡವು ಗ್ರೂಪ್ ಹಂತದ ಅಂತ್ಯಕ್ಕೆ 16 ಅಂಕ ಗಳಿಸಿತ್ತು. ಹೀಗಾಗಿ ರಾಜಸ್ಥಾನ ರಾಯಲ್ಸ್&zwnj;ಗಿಂತ ಉತ್ತಮ ಅಂಕ ಹೊಂದಿರುವ ಗಿಲ್ ಪಡೆ ಕ್ವಾಲಿಫೈಯರ್-2 ಮ್ಯಾಚ್ ಆಡದೆಯೂ ಫೈನಲ್ ಪ್ರವೇಶಿಸಿದರೇ ಅಚ್ಚರಿಯೇನಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2026-qualifier-2-under-rain-threat-gujarat-titans-could-reach-final-without-playing-kvn/articleshow-xb9nfig"/>
        </item>
        <item>
            <title><![CDATA['ಅದೊಂದು ಕಾರಣಕ್ಕಾಗಿ ರಾಜಸ್ಥಾನ ರಾಯಲ್ಸ್‌ ಬಿಟ್ಟು ಈ ತಂಡಕ್ಕೆ ಹೋಗು': ಯಶಸ್ವಿ ಜೈಸ್ವಾಲ್‌ಗೆ ಅಂಬಟಿ ರಾಯುಡು ಖಡಕ್ ಸಲಹೆ!]]></title>
            <link>https://kannada.asianetnews.com/cricket-sports/ambati-rayudu-urges-yashasvi-jaiswal-to-leave-rajasthan-royals-after-vaibhav-suryavanshi-rise-kvn/articleshow-aqltere</link>
            <guid isPermaLink="true">https://kannada.asianetnews.com/cricket-sports/ambati-rayudu-urges-yashasvi-jaiswal-to-leave-rajasthan-royals-after-vaibhav-suryavanshi-rise-kvn/articleshow-aqltere</guid>
            <pubDate>Thu, 28 May 2026 19:34:26 +0530</pubDate>
            <description><![CDATA[ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್&zwnj;ನಿಂದ ಯಶಸ್ವಿ ಜೈಸ್ವಾಲ್ ನೆರಳಿಗೆ ಸರಿಯುತ್ತಿದ್ದಾರೆ ಎಂದು ಮಾಜಿ ಆಟಗಾರ ಅಂಬಟಿ ರಾಯುಡು ಅಭಿಪ್ರಾಯಪಟ್ಟಿದ್ದಾರೆ. ಜೈಸ್ವಾಲ್ ತಮ್ಮ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲು ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಮುಂಬೈ ಇಂಡಿಯನ್ಸ್&zwnj;ನಂತಹ ತಂಡಕ್ಕೆ ಸೇರುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcfnc7prxz531zwm6knfed3,imgname-20260428387l-1777461801206.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐಪಿಎಲ್&zwnj;ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್&zwnj;ನಿಂದಾಗಿ, ಸಹ ಓಪನರ್ ಯಶಸ್ವಿ ಜೈಸ್ವಾಲ್ ಸಂಪೂರ್ಣವಾಗಿ ನೆರಳಿಗೆ ಸರಿದಿದ್ದಾರೆ ಎಂದು ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದ್ದಾರೆ. ಜೈಸ್ವಾಲ್ ತನ್ನ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲು ರಾಜಸ್ಥಾನ ರಾಯಲ್ಸ್ ಬಿಟ್ಟು ಮುಂಬೈ ಇಂಡಿಯನ್ಸ್&zwnj;ನಂತಹ ಬೇರೆ ಫ್ರಾಂಚೈಸಿಗೆ ಹೋಗಬೇಕು ಎಂದು ರಾಯುಡು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಭಾರತದ ಪರ 55 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರುವ, ಟೆಸ್ಟ್ ಕ್ರಿಕೆಟ್&zwnj;ನಲ್ಲೂ ಸಕ್ರಿಯರಾಗಿರುವ ಜೈಸ್ವಾಲ್&zwnj;ಗೆ ಇದು ಏಳನೇ ಐಪಿಎಲ್ ಸೀಸನ್. ಆದರೆ, ವೈಭವ್ ಸೂರ್ಯವಂಶಿ ಆಡುತ್ತಿರುವುದು ಕೇವಲ ಎರಡನೇ ಸೀಸನ್. ಆದರೂ ಈ ಬಾರಿ ರನ್ ಗಳಿಕೆ ಮತ್ತು ಜನಪ್ರಿಯತೆಯಲ್ಲಿ ವೈಭವ್, ಜೈಸ್ವಾಲ್&zwnj;ನನ್ನು ಬಹಳ ಹಿಂದೆ ಹಾಕಿದ್ದಾರೆ. ಈ ಸೀಸನ್&zwnj;ನಲ್ಲಿ ಜೈಸ್ವಾಲ್ 15 ಪಂದ್ಯಗಳಿಂದ 426 ರನ್ ಗಳಿಸಿದ್ದರೆ, ವೈಭವ್ ಬರೋಬ್ಬರಿ 680 ರನ್ ಸಿಡಿಸಿ ವಿರಾಟ್ ಕೊಹ್ಲಿಯನ್ನೂ ಹಿಂದಿಕ್ಕಿ ಮಿಂಚುತ್ತಿದ್ದಾರೆ. ವೈಭವ್ ಅವರ ಈ ಅಬ್ಬರದ ಮುಂದೆ ಜೈಸ್ವಾಲ್ ಪ್ರದರ್ಶನ ಯಾರಿಗೂ ಕಾಣದಂತಾಗಿದೆ.&lt;/p&gt;&lt;p&gt;ವೈಭವ್ ಜೊತೆಗಿನ ಅನಾರೋಗ್ಯಕರ ಸ್ಪರ್ಧೆಯಿಂದಾಗಿ ಜೈಸ್ವಾಲ್ ತಮ್ಮ ಸಹಜ ಆಟವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರವಿಚಂದ್ರನ್ ಅಶ್ವಿನ್ ಕೂಡ ಹೇಳಿದ್ದರು. ಇದೇ ಮಾತನ್ನು ಈಗ ಇಎಸ್&zwnj;ಪಿಎನ್ ಕ್ರಿಕ್&zwnj;ಇನ್&zwnj;ಫೋ ಜೊತೆ ಮಾತನಾಡಿದ ಅಂಬಟಿ ರಾಯುಡು ಪುನರುಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಶಸ್ವಿ ಜೈಸ್ವಾಲ್ ರಾಜಸ್ಥಾನ ರಾಯಲ್ಸ್ ತಂಡ ತೊರೆಯಲಿ&lt;/strong&gt;&lt;/h2&gt;&lt;p&gt;&quot;ಯಶಸ್ವಿ ಜೈಸ್ವಾಲ್ ತನ್ನ ತಂಡವನ್ನು ಬದಲಿಸಬೇಕು. ಯಾಕಂದ್ರೆ ವೈಭವ್ ಜೊತೆ ಬ್ಯಾಟಿಂಗ್ ಮಾಡುವಾಗ ಪ್ರತಿ ಬಾರಿಯೂ ಅವನು ನೆರಳಿನಲ್ಲಿ ಮುಳುಗಿ ಹೋಗುತ್ತಿದ್ದಾನೆ. ಜೈಸ್ವಾಲ್ ಸ್ವತಃ ಒಬ್ಬ ದೊಡ್ಡ ಸೂಪರ್&zwnj;ಸ್ಟಾರ್. ಬೇರೆ ತಂಡಕ್ಕೆ ಹೋದರೆ, ಒಬ್ಬನೇ ಪಂದ್ಯಗಳನ್ನು ಗೆಲ್ಲಿಸಬಲ್ಲ. ಅವನಿಗೆ ತನ್ನದೇ ಆದ ಸ್ಪೇಸ್ ಮತ್ತು ವೇದಿಕೆ ಬೇಕು. ಯಾಕಂದ್ರೆ ವೈಭವ್ ತನ್ನ ಜೊತೆಗಾರರನ್ನು ಹೀಗೆಯೇ ನೆರಳಿಗೆ ತಳ್ಳುತ್ತಲೇ ಇರುತ್ತಾನೆ. ವೈಭವ್&zwnj;ನ ಈ ಬೆಳವಣಿಗೆಯನ್ನು ಒಪ್ಪಿಕೊಂಡು, ನಾನ್-ಸ್ಟ್ರೈಕರ್ ಜೊತೆ ಸ್ಪರ್ಧಿಸದ ಒಬ್ಬ ಹಿರಿಯ ಆಟಗಾರ ಈಗ ರಾಜಸ್ಥಾನ ರಾಯಲ್ಸ್&zwnj; ತಂಡಕ್ಕೆ ಬೇಕು&quot; ಎಂದು ರಾಯುಡು ಹೇಳಿದ್ದಾರೆ.&lt;/p&gt;&lt;p&gt;ಒಂದು ವೇಳೆ ರಾಜಸ್ಥಾನ ತಂಡವನ್ನು ತೊರೆದರೆ, ಯಶಸ್ವಿ ಜೈಸ್ವಾಲ್&zwnj;ಗೆ ಮುಂಬೈ ಇಂಡಿಯನ್ಸ್ ಅತ್ಯಂತ ಸೂಕ್ತವಾದ ತಂಡ ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ. &quot;ರೋಹಿತ್ ಶರ್ಮಾ ಮುಂಬೈ ತಂಡದಲ್ಲಿ ಇನ್ನು ಎಷ್ಟು ಕಾಲ ಇರುತ್ತಾರೆ ಎಂಬುದು ಚರ್ಚೆಯಲ್ಲಿದೆ. ಭಾರತದ ಏಕದಿನ ತಂಡದಲ್ಲಿ ರೋಹಿತ್&zwnj;ಗೆ ನೇರ ಬದಲಿ ಆಟಗಾರನಾಗುವ ಎಲ್ಲ ಅರ್ಹತೆ ಜೈಸ್ವಾಲ್&zwnj;ಗಿದೆ. ಅಷ್ಟೇ ಅಲ್ಲ, ಜೈಸ್ವಾಲ್ ಬೆಳೆದಿದ್ದು ಮತ್ತು ದೇಶೀಯ ಕ್ರಿಕೆಟ್ (ರಣಜಿ ಟ್ರೋಫಿ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಆಡಿದ್ದೂ ಮುಂಬೈ ಪರವಾಗಿಯೇ. ಹಾಗಾಗಿ, ಜೈಸ್ವಾಲ್ ತನ್ನ ತವರು ತಂಡವಾದ ಮುಂಬೈ ಇಂಡಿಯನ್ಸ್&zwnj;ಗೆ ಮರಳುವುದು ಇಬ್ಬರಿಗೂ ಲಾಭದಾಯಕ&quot; ಎಂದು ರಾಯುಡು ವಿಶ್ಲೇಷಿಸಿದ್ದಾರೆ.&lt;/p&gt;&lt;h3&gt;&lt;strong&gt;ಕ್ವಾಲಿಫೈಯರ್-2ಗೆ ಅರ್ಹತೆ ಪಡೆದ ರಾಜಸ್ಥಾನ ರಾಯಲ್ಸ್:&lt;/strong&gt;&lt;/h3&gt;&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್&zwnj;ಗೆ ಎಂಟ್ರಿಕೊಟ್ಟಿದ್ದ ರಾಜಸ್ಥಾನ ರಾಯಲ್ಸ್ ತಂಡವು ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್&zwnj; ತಂಡವನ್ನು ಅನಾಯಾಸವಾಗಿ ಬಗ್ಗುಬಡಿದು ಇದೀಗ ಕ್ವಾಲಿಫೈಯರ್-2ಗೆ ಅರ್ಹತೆ ಪಡೆದಿದೆ. ಇದೀಗ ಮೇ 29ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಮೇ 31ರಂದು ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್&zwnj;ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ambati-rayudu-urges-yashasvi-jaiswal-to-leave-rajasthan-royals-after-vaibhav-suryavanshi-rise-kvn/articleshow-aqltere"/>
        </item>
        <item>
            <title><![CDATA[ವೈಭವ್ ಸೂರ್ಯವಂಶಿ ವಿಚಾರದಲ್ಲಿ ಅದೊಂದು ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌..! ಇದೀಗ ಹಳೆ ವಿಡಿಯೋ ವೈರಲ್]]></title>
            <link>https://kannada.asianetnews.com/cricket-sports/vaibhav-sooryavanshi-ipl-auction-story-how-rr-signed-the-13-year-old-sensation-kvn/articleshow-l4hz2k6</link>
            <guid isPermaLink="true">https://kannada.asianetnews.com/cricket-sports/vaibhav-sooryavanshi-ipl-auction-story-how-rr-signed-the-13-year-old-sensation-kvn/articleshow-l4hz2k6</guid>
            <pubDate>Thu, 28 May 2026 18:36:14 +0530</pubDate>
            <description><![CDATA[15 ವರ್ಷದ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ, ಐಪಿಎಲ್&zwnj;ನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ 97 ರನ್ ಸಿಡಿಸಿ, ಆರೆಂಜ್ ಕ್ಯಾಪ್ ಗೆದ್ದಿರುವ ಇವರನ್ನು ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಖರೀದಿಸಿತ್ತು. ಆದರೆ, ಕಡಿಮೆ ಮೊತ್ತಕ್ಕೆ ಕೈಬಿಟ್ಟ ಡೆಲ್ಲಿ ಕ್ಯಾಪಿಟಲ್ಸ್ ಈಗ ಪಶ್ಚಾತ್ತಾಪ ಪಡುತ್ತಿರುವ ಕುತೂಹಲಕಾರಿ ಕಥೆ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksn4d5pd9fmsmwk3mqfgzwb3,imgname-20260425383l-1779899471565.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Vaibhav Suryavanshi IPL Auction Story:&lt;/strong&gt; 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಭಾರತ ಕ್ರಿಕೆಟ್&zwnj;ನ ಭವಿಷ್ಯದ ತಾರೆಯಾಗಿ ಹೊರಹೊಮ್ಮುತ್ತಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ಅಪರೂಪದ ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದ ವೈಭವ್, ಇದೀಗ 19ನೇ ಆವೃತ್ತಿಯ ಐಪಿಎಲ್&zwnj;ನಲ್ಲಿ ತಮ್ಮ ರೌದ್ರಾವತಾರ ತೋರಿಸಿದ್ದಾರೆ. ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ಟ್ಯಾಲೆಂಟ್ ಇರುವ ಆಟಗಾರ ಸಿಗುವುದು ಅಪರೂಪದಲ್ಲೇ ಅಪರೂಪ ಎಂದು ವೈಭವ್ ಸೂರ್ಯವಂಶಿ ಅವರನ್ನು ಕ್ರಿಕೆಟ್ ಪಂಡಿತರು ಗುಣಗಾನ ಮಾಡುತ್ತಿದ್ದಾರೆ.&lt;/p&gt;&lt;p&gt;ವೈಭವ್ ಸೂರ್ಯವಂಶಿ ಬುಧವಾರ(ಮೇ.27)ದಂದು ನಡೆದ ಐಪಿಎಲ್ ಎಲಿಮಿನೇಟರ್&zwnj; ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಎದುರಾಳಿ ತಂಡ ಬೆಚ್ಚಿಬೀಳುವಂತೆ ಮಾಡಿದರು. ಕೇವಲ 29 ಎಸೆತಗಳನ್ನು ಎದುರಿಸಿದ ವೈಭವ್ 12 ಮುಗಿಲೆತ್ತರದ ಸಿಕ್ಸರ್ ಹಾಗೂ 5 ಆಕರ್ಷಕ ಬೌಂಡರಿ ಸಹಿತ 97 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ 15 ಪಂದ್ಯಗಳನ್ನಾಡಿ 680 ರನ್ ಬಾರಿಸುವ ಮೂಲಕ ಮತ್ತೊಮ್ಮೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಇಂಟ್ರೆಸ್ಟಿಂಗ್ ಆಗಿದೆ ವೈಭವ್ ಸೂರ್ಯವಂಶಿಯ ಐಪಿಎಲ್ ಎಂಟ್ರಿ..!&lt;/strong&gt;&lt;/h2&gt;&lt;p&gt;ಹೌದು, 15 ವರ್ಷದ ವೈಭವ್ ಸೂರ್ಯವಂಶಿ ಸದ್ಯ ಎಲ್ಲರ ಮನೆಮಾತಾಗಿದ್ದಾರೆ. ವಿಶ್ವ ದರ್ಜೆಯ ಬೌಲರ್&zwnj;ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸುವ ವೈಭವ್, ಸದ್ಯ ಸಣ್ಣ ಹುಡುಗರಿಂದ ಹಿಡಿದು ವಯೋವೃದ್ದರವರೆಗೂ ಫೇವರೇಟ್ ಆಟಗಾರ ಎನಿಸಿಕೊಂಡಿದ್ದಾರೆ. 2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ವೈಭವ್ ಸೂರ್ಯವಂಶಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಬೇಕಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಆಗ 13 ವರ್ಷದ ವೈಭವ್ ಸೂರ್ಯವಂಶಿಗೆ ಕೇವಲ 1.10 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.&lt;/p&gt;&lt;h3&gt;&lt;strong&gt;ಆ ಒಂದು ತಪ್ಪಿಗೆ ಈಗಲೂ ಪಶ್ಚಾತಾಪ ಪಡುತ್ತಿದೆ ಡೆಲ್ಲಿ ಕ್ಯಾಪಿಟಲ್ಸ್!&lt;/strong&gt;&lt;/h3&gt;&lt;p&gt;2024ರ ನವೆಂಬರ್ 24 ಮತ್ತು 25ರಂದು ಐಪಿಎಲ್ ಮೆಗಾ ಹರಾಜು ಆಯೋಜನೆಗೊಂಡಿತ್ತು. ಆಗ ವೈಭವ್ ಸೂರ್ಯವಂಶಿ ವಯಸ್ಸು ಕೇವಲ 13 ವರ್ಷ. ಐಪಿಎಲ್&zwnj;ನಲ್ಲಿ ಹೆಸರು ನೋಂದಾಯಿಸಿದ ಅತಿಕಿರಿಯ ಆಟಗಾರ ಎನ್ನುವ ಹೆಗ್ಗಳಿಕೆ ವೈಭವ್ ಸೂರ್ಯವಂಶಿ ಅವರದ್ದಾಗಿತ್ತು. ವೈಭವ್ ಸೂರ್ಯವಂಶಿಯ ಮೂಲ ಬೆಲೆ 30 ಲಕ್ಷ ರುಪಾಯಿ ನಿಗದಿ ಪಡಿಸಲಾಗಿತ್ತು. ಆದರೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ಬರೋಬ್ಬರಿ 1.10 ಕೋಟಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಆಗ ವೈಭವ್ ಸೂರ್ಯವಂಶಿಯನ್ನು ಖರೀದಿಸಲು ಎರಡು ತಂಡಗಳು ಹಟಕ್ಕೆ ಬಿದ್ದಂತೆ ಪೈಪೋಟಿ ನಡೆಸಿದ್ದವು.&lt;/p&gt;&lt;p&gt;ಹರಾಜಿನಲ್ಲಿ ವೈಭವ್ ಸೂರ್ಯವಂಶಿಯ ಹೆಸರು ಬರುತ್ತಿದ್ದಂತೆಯೇ ಆತನನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪೈಪೋಟಿ ನಡೆಸಿದವು. ವೈಭವ್ ಅವರಿಗೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 1.10 ಕೋಟಿ ರುಪಾಯಿ ಬಿಡ್ ಮಾಡುತ್ತಿದ್ದಂತೆಯೇ, ಡೆಲ್ಲಿ ಕ್ಯಾಪಿಟಲ್ಸ್ ಮತ್ತೆ ಬಿಡ್ ಮಾಡಲು ಮನಸ್ಸು ಮಾಡಲಿಲ್ಲ. ಇನ್ನೊಂದು ಸ್ವಲ್ಪ ಬಿಡ್ ಮಾಡಿದ್ದರೇ ಬಹುಶಃ ವೈಭವ್ ಡೆಲ್ಲಿ ತಂಡದಲ್ಲಿರುತ್ತಿದ್ದರು. ಆದರೆ ಬಿಡ್ಡಿಂಗ್&zwnj;ನಲ್ಲಿ ಮಾಡಿದ ಅದೊಂದು ತಪ್ಪಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈಗಲೂ ಪಶ್ಚಾತಾಪ ಪಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-sooryavanshi-ipl-auction-story-how-rr-signed-the-13-year-old-sensation-kvn/articleshow-l4hz2k6"/>
        </item>
        <item>
            <title><![CDATA[IPL 2026 ಕ್ವಾಲಿಫೈಯರ್-2: ಗುಜರಾತ್ ಟೈಟಾನ್ಸ್‌ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ರದ್ದಾದ್ರೆ ಫೈನಲ್‌ಗೇರೋದು ಯಾರು?]]></title>
            <link>https://kannada.asianetnews.com/gallery/cricket-sports/what-happens-if-ipl-2026-qualifier-2-gets-washed-out-gujarat-titans-hold-advantage-kvn-cdcll7a</link>
            <guid isPermaLink="true">https://kannada.asianetnews.com/gallery/cricket-sports/what-happens-if-ipl-2026-qualifier-2-gets-washed-out-gujarat-titans-hold-advantage-kvn-cdcll7a</guid>
            <pubDate>Thu, 28 May 2026 17:00:08 +0530</pubDate>
            <description><![CDATA[&lt;p&gt;&lt;strong&gt;IPL 2026 Qualifier 2 Rain Rules:&lt;/strong&gt; 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದ್ರೆ ಫೈನಲ್&zwnj;ಗೇರೋದು ಯಾರು? ಮೀಸಲು ದಿನ ಇದೆಯಾ? ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr4bpt7pcvf6pz7h6514repw,imgname-rr-vs-gt-match-today-1778262960372.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;IPL 2026 Qualifier 2 Rain Rules:&lt;/strong&gt; 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದ್ರೆ ಫೈನಲ್&zwnj;ಗೇರೋದು ಯಾರು? ಮೀಸಲು ದಿನ ಇದೆಯಾ? ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇನ್ನುಳಿದ ಎರಡು ಪಂದ್ಯಗಳು ಈ ಬಾರಿಯ ಚಾಂಪಿಯನ್ ಯಾರು ಎನ್ನುವುದನ್ನು ನಿರ್ಧರಿಸಲಿದೆ. ಈಗಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿದ್ದು, ಎರಡನೇ ಕ್ವಾಲಿಫೈಯರ್ ಆಡಲು ಸಜ್ಜಾಗಿರುವ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಎದುರಿಸಲಿದೆ.&lt;/p&gt;&lt;img&gt;&lt;p&gt;ಕ್ವಾಲಿಫೈಯರ್-1 ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್&zwnj;ಸಿಬಿ ತಂಡವು ಗುಜರಾತ್ ಟೈಟಾನ್ಸ್&zwnj; ಪಡೆಯನ್ನು ಅನಾಯಾಸವಾಗಿ ಮಣಿಸಿ ಫೈನಲ್ ಪ್ರವೇಶಿಸಿದೆ. ಇನ್ನೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವನ್ನು ಬಗ್ಗುಬಡಿದ ರಾಜಸ್ಥಾನ ರಾಯಲ್ಸ್ ತಂಡವು ಕ್ವಾಲಿಫೈಯರ್-2 ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;ಇದೀಗ ಮೇ 29ರ ಶುಕ್ರವಾರ ಮುಲ್ಲನ್&zwnj;ಪುರದ ಹೊಸ ಪಿಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಮಾಜಿ ಚಾಂಪಿಯನ್ನರಾದ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಇದು ನಾಕೌಟ್ ಪಂದ್ಯವಾಗಿದ್ದು, ಗೆಲ್ಲುವ ತಂಡ ಫೈನಲ್ ಪ್ರವೇಶಿಸಿದರೆ, ಸೋಲುವ ತಂಡ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.&lt;/p&gt;&lt;img&gt;&lt;p&gt;ಹೀಗಿರುವಾಗಲೇ ಒಂದು ವೇಳೆ ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಮ್ಯಾಚ್ ಮಳೆಯಿಂದ ರದ್ದಾದರೇ ಫೈನಲ್ ಪ್ರವೇಶಿಸುವುದು ಯಾರು? ಕ್ವಾಲಿಫೈಯರ್-2 ಪಂದ್ಯಕ್ಕೆ ಮೀಸಲು ದಿನ ವಿದೆಯೇ ಎನ್ನುವ ಕುತೂಹಲ ಕಾಡುತ್ತಿದೆ. ಈ ಎಲ್ಲಾ ಕುತೂಹಲಕ್ಕೆ ನಾವಿಂದು ಉತ್ತರು ಕೊಡುತ್ತಿದ್ದೇವೆ.&lt;/p&gt;&lt;img&gt;&lt;p&gt;ಐಪಿಎಲ್&zwnj;ನ ಪ್ಲೇ ಆಫ್&zwnj; ಪಂದ್ಯಗಳಿಗೆ ದುರಾದೃಷ್ಟವಶಾತ್ ಯಾವುದೇ ಮೀಸಲು ದಿನಗಳು ಲಭ್ಯವಿಲ್ಲ. ಫೈನಲ್&zwnj; ಪಂದ್ಯಕ್ಕೆ ಮಾತ್ರ ಮೀಸಲು ದಿನ ಲಭ್ಯವಿದೆ. ಕ್ವಾಲಿಫೈಯರ್-2 ಪಂದ್ಯವು ಮಳೆ ಅಡ್ಡಿ ಪಡಿಸಿದರೆ ಕೊನೆಯ ಪಕ್ಷ 5 ಓವರ್&zwnj;ಗಳ ಮ್ಯಾಚ್ ನಡೆಸಲು ಬಿಸಿಸಿಐ ಪ್ರಯತ್ನಿಸಲಿದೆ. ಅದೂ ಸಾಧ್ಯವಾಗದಿದ್ದರೇ, ಭಾರತೀಯ ಕಾಲಮಾನ ತಡರಾತ್ರಿ 12.50ಕ್ಕೆ ಒಂದು ಓವರ್ ಸೂಪರ್ ಓವರ್ ಆಡಿಸಿಯಾದರೂ ಫಲಿತಾಂಶ ಪಡೆಯಲು ಪ್ರಯತ್ನಿಸಲಿದೆ.&lt;/p&gt;&lt;img&gt;&lt;p&gt;ಒಂದು ವೇಳೆ ಐದು ಓವರ್ ಇಲ್ಲವೇ ಸೂಪರ್ ಓವರ್ ಕೂಡಾ ಆಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾದರೇ, ಆಗ ಪಂದ್ಯವನ್ನು ಅಧಿಕೃತ ರದ್ದು ಎಂದು ಘೋಷಿಸಲಾಗುತ್ತದೆ. ಹೀಗಾದಲ್ಲಿ ಗ್ರೂಪ್&zwnj; ಹಂತದಲ್ಲಿ ಯಾವ ತಂಡ ಗರಿಷ್ಠ ಅಂಕ ಸಂಪಾದಿಸಿರುತ್ತದೋ ಆ ತಂಡ ಫೈನಲ್&zwnj;ಗೆ ಪ್ರವೇಶಿಸಲಿದೆ. ಒಂದು ವೇಳೆ ಕ್ವಾಲಿಫೈಯರ್-2 ಪಂದ್ಯವು ಮಳೆಯಿಂದ ರದ್ದಾದರೆ, ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಲಿದೆ. ಯಾಕೆಂದರೆ ಲೀಗ್ ಹಂತದ ಕೊನೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವು 18 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡವು ಗ್ರೂಪ್ ಹಂತದ ಅಂತ್ಯಕ್ಕೆ 16 ಅಂಕ ಗಳಿಸಿತ್ತು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/what-happens-if-ipl-2026-qualifier-2-gets-washed-out-gujarat-titans-hold-advantage-kvn-cdcll7a"/>
        </item>
        <item>
            <title><![CDATA[ಮತ್ತೆ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡ ವೈಭವ್ ಸೂರ್ಯವಂಶಿ! ಟಾಪ್-5 ಗರಿಷ್ಠ ರನ್ ಸರದಾರರ ಪಟ್ಟಿಯಿಂದ ವಿರಾಟ್ ಕೊಹ್ಲಿ ಔಟ್!]]></title>
            <link>https://kannada.asianetnews.com/cricket-sports/vaibhav-suryavanshi-claims-orange-cap-after-blazing-97-in-ipl-2026-eliminator-kvn/articleshow-6d2pbex</link>
            <guid isPermaLink="true">https://kannada.asianetnews.com/cricket-sports/vaibhav-suryavanshi-claims-orange-cap-after-blazing-97-in-ipl-2026-eliminator-kvn/articleshow-6d2pbex</guid>
            <pubDate>Thu, 28 May 2026 16:12:50 +0530</pubDate>
            <description><![CDATA[ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ವಿರುದ್ಧ ಸ್ಪೋಟಕ 97 ರನ್ ಗಳಿಸಿದ ವೈಭವ್ ಸೂರ್ಯವಂಶಿ, ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರದರ್ಶನದ ಮೂಲಕ ಅವರು ಒಂದೇ ಸೀಸನ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಮತ್ತು 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್&zwnj;ನಲ್ಲಿ 600+ ರನ್ ಗಳಿಸಿದ ಮೊದಲ ಆಟಗಾರ ಎಂಬಂತಹ ಹಲವು ದಾಖಲೆಗಳನ್ನು ಬರೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kspw36dbk1fc8p8x5djfgb0g,imgname-vaibhav-sooryavanshi--1--1779957864875.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್&zwnj;ರೈಸರ್ಸ್ ಹೈದರಾಬಾದ್ ವಿರುದ್ಧ ವೈಭವ್ ಸೂರ್ಯವಂಶಿ ಸ್ಪೋಟಕ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಅವರು ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡುವ ಆರೆಂಜ್ ಕ್ಯಾಪ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದ ವೈಭವ್, ಒಟ್ಟು 15 ಪಂದ್ಯಗಳಿಂದ 680 ರನ್&zwnj;ಗಳೊಂದಿಗೆ ಸಾಯಿ ಸುದರ್ಶನ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.&lt;/p&gt;&lt;h2&gt;&lt;strong&gt;ಹಲವು ಅಪರೂಪದ ದಾಖಲೆ ಬರೆದ ವೈಭವ್ ಸೂರ್ಯವಂಶಿ&lt;/strong&gt;&lt;/h2&gt;&lt;p&gt;ಈ ಸೀಸನ್&zwnj;ನಲ್ಲಿ ವೈಭವ್ ಒಟ್ಟು 65 ಸಿಕ್ಸರ್&zwnj; ಮತ್ತು 55 ಬೌಂಡರಿಗಳನ್ನು ಬಾರಿಸಿದ್ದಾರೆ. 45.33ರ ಸರಾಸರಿ ಮತ್ತು 242.85ರ ಸ್ಟ್ರೈಕ್ ರೇಟ್&zwnj;ನಲ್ಲಿ ರನ್ ಗಳಿಸಿದ್ದಾರೆ. ಒಂದೇ ಐಪಿಎಲ್ ಸೀಸನ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್&zwnj;ನಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಯೂ ಇದೀಗ ವೈಭವ್ ಪಾಲಾಗಿದೆ. ಇದಷ್ಟೇ ಅಲ್ಲದೇ ಅತಿವೇಗವಾಗಿ 600 ರನ್ ಬಾರಿಸಿದ ಅನ್&zwnj;ಕ್ಯಾಪ್ಡ್ ಆಟಗಾರನಾಗಿ ವೈಭವ್ ಸೂರ್ಯವಂಶಿ ಹೊರಹೊಮ್ಮಿದ್ದಾರೆ&lt;/p&gt;&lt;p&gt;ಗುಜರಾತ್ ತಂಡದ ಓಪನರ್ ಸಾಯಿ ಸುದರ್ಶನ್ 15 ಪಂದ್ಯಗಳಿಂದ 652 ರನ್&zwnj;ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ವಿರುದ್ಧ 10 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದ ಹೈದರಾಬಾದ್&zwnj;ನ ಹೆನ್ರಿಚ್ ಕ್ಲಾಸೆನ್, 15 ಪಂದ್ಯಗಳಿಂದ 624 ರನ್&zwnj;ಗಳೊಂದಿಗೆ ಗುಜರಾತ್ ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ. ಗಿಲ್ 618 ರನ್&zwnj;ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ ವಿರುದ್ಧ 11 ಎಸೆತಗಳಲ್ಲಿ 33 ರನ್ ಸಿಡಿಸಿದ ಇಶಾನ್ ಕಿಶನ್, 602 ರನ್&zwnj;ಗಳೊಂದಿಗೆ ಈ ಸೀಸನ್ ಮುಗಿಸಿದ್ದಾರೆ. ಅವರು ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಸದ್ಯ ಐದನೇ ಸ್ಥಾನದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಟಾಪ್-5 ಪಟ್ಟಿಯಿಂದ ಹೊರಬಿದ್ದ ವಿರಾಟ್ ಕೊಹ್ಲಿ&lt;/strong&gt;&lt;/h3&gt;&lt;p&gt;ಕ್ವಾಲಿಫೈಯರ್-1 ಪಂದ್ಯದಲ್ಲಿ ಅರ್ಧಶತಕ ಸಿಡಿಸಲು ವಿಫಲವಾದ ವಿರಾಟ್ ಕೊಹ್ಲಿ ಇದೀಗ ಆರೆಂಜ್&zwnj; ಕ್ಯಾಪ್&zwnj; ರೇಸ್&zwnj;ನಲ್ಲಿ ಟಾಪ್-5 ಪಟ್ಟಿಯಿಂದ ಹೊರಬಿದ್ದಿದ್ದಾರೆ. ಸದ್ಯ ಆರ್&zwnj;ಸಿಬಿ ರನ್ ಮಷೀನ್ ವಿರಾಟ್ ಕೊಹ್ಲಿ 600 ರನ್&zwnj;ಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಕೆ.ಎಲ್. ರಾಹುಲ್ 593 ರನ್&zwnj;ಗಳೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ. ಹೈದರಾಬಾದ್&zwnj;ನ ಅಭಿಷೇಕ್ ಶರ್ಮಾ 563 ರನ್&zwnj;ಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ. ನಿನ್ನೆ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶೂನ್ಯಕ್ಕೆ ಔಟಾಗಿದ್ದರು. ಲಖನೌ ಸೂಪರ್ ಜೈಂಟ್ಸ್&zwnj; ತಂಡದ ಓಪನರ್ ಮಿಚೆಲ್ ಮಾರ್ಷ್ 563 ರನ್&zwnj;ಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ಓಪನರ್ ಪ್ರಭ್&zwnj;ಸಿಮ್ರಾನ್ ಸಿಂಗ್ 510 ರನ್&zwnj;ಗಳೊಂದಿಗೆ ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ನಿನ್ನೆ ಹೈದರಾಬಾದ್ ವಿರುದ್ಧ 21 ಎಸೆತಗಳಲ್ಲಿ 50 ರನ್ ಗಳಿಸಿದ ರಾಜಸ್ಥಾನ ಆಟಗಾರ ಧ್ರುವ್ ಜುರೆಲ್, 15 ಪಂದ್ಯಗಳಿಂದ 508 ರನ್&zwnj;ಗಳೊಂದಿಗೆ 11ನೇ ಸ್ಥಾನಕ್ಕೆ ಏರಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-claims-orange-cap-after-blazing-97-in-ipl-2026-eliminator-kvn/articleshow-6d2pbex"/>
        </item>
        <item>
            <title><![CDATA[ಆಂಟಿಲಿಯಾದಲ್ಲಿ ಫ್ಲಾಟ್, ಮಾಲ್ಡೀವ್ಸ್‌ ನಲ್ಲಿ ಐಲ್ಯಾಂಡ್ ಜೊತೆ 30 ಕೋಟಿ ಚೆಕ್ ! ಮುಂಬೈ ಇಂಡಿಯನ್ಸ್ ಸೇರ್ತಾರಾ ವೈಭವ್ ಸೂರ್ಯವಂಶಿ?]]></title>
            <link>https://kannada.asianetnews.com/gallery/ipl/will-vaibhav-suryavanshi-leave-rajasthan-royals-for-mumbai-indians-lalit-modi-reacts-orsfkt2</link>
            <guid isPermaLink="true">https://kannada.asianetnews.com/gallery/ipl/will-vaibhav-suryavanshi-leave-rajasthan-royals-for-mumbai-indians-lalit-modi-reacts-orsfkt2</guid>
            <pubDate>Thu, 28 May 2026 13:36:29 +0530</pubDate>
            <description><![CDATA[&lt;p&gt;vaibhav sooryavanshi : ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಮಿಂಚಿದ ವೈಭವ್ ಸೂರ್ಯವಂಶಿ ಮುಂಬೈ ತಂಡ ಸೇರ್ತಾರಾ? ಸದ್ಯ ಹೀಗೊಂದು ಚರ್ಚೆ ನಡೆಯುತ್ತಿದೆ. ನೀತಾ ಅಂಬಾನಿ, ವೈಭವ್ ಗೆ ಆಫರ್ ನೀಡಿದ್ದೇನು? ಮುಂದೇನಾಗುತ್ತೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kspsggseaqyrbtse1t6xpaa9,imgname-vaibhav-sooryavanshi-1779955155758.jpg" type="image/jpeg" height="390" width="690"/>
            <content:encoded><![CDATA[&lt;p&gt;vaibhav sooryavanshi : ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಮಿಂಚಿದ ವೈಭವ್ ಸೂರ್ಯವಂಶಿ ಮುಂಬೈ ತಂಡ ಸೇರ್ತಾರಾ? ಸದ್ಯ ಹೀಗೊಂದು ಚರ್ಚೆ ನಡೆಯುತ್ತಿದೆ. ನೀತಾ ಅಂಬಾನಿ, ವೈಭವ್ ಗೆ ಆಫರ್ ನೀಡಿದ್ದೇನು? ಮುಂದೇನಾಗುತ್ತೆ?&lt;/p&gt;&lt;img&gt;&lt;p&gt;2026 ರ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಭಾರಿ ಸದ್ದು ಮಾಡ್ತಿದ್ದಾರೆ. ಐಪಿಎಲ್ ನಲ್ಲಿ ವೈಭವ್ ಸೂರ್ಯವಂಶಿ ರನ್ಗಳ ಮಳೆ ಸುರಿಸುತ್ತಿದ್ದಾರೆ. ರಾಜಸ್ತಾನ್ ರಾಯಲ್ಸ್ ಮತ್ತು ಎಸ್ ಆರ್ ಎಚ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದ ವೈಭವ್ ಕೇವಲ ಮೂರು ರನ್ ಗಳಲ್ಲಿ ದಾಖಲೆ ಮುರಿಯುವ ಅವಕಾಶ ಕಳೆದುಕೊಂಡ್ರು. ಒಂದ್ವೇಳೆ ವೈಭವ್ ಶತಕ ಸಿಡಿಸಿದ್ದರೆ, ಕ್ರಿಸ್ ಗೇಲ್ ಶತಕದ ದಾಖಲೆ ಮುರಿಯುತ್ತಿತ್ತು. 30 ಎಸೆತಗಳಲ್ಲಿ ಕ್ರಿಸ್ಗೇಲ್ ಶತಕ ಗಳಿಸಿ, ಐಪಿಎಲ್ ಇತಿಹಾಸದಲ್ಲಿ ವೇಗದ ಶತಕದ ದಾಖಲೆಯನ್ನು ಹೊಂದಿದ್ದಾರೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ರಾಜಸ್ಥಾನ ರಾಯಲ್ಸ್ ಪರ ಆಟವಾಡ್ತಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಅವರನ್ನು 1.10 ಕೋಟಿಗೆ ಖರೀದಿಸಿತ್ತು. ಈಗ ವೈಭವ್ ಸೂರ್ಯವಂಶಿ ಬಗ್ಗೆ ವದಂತಿಯೊಂದು ಹಬ್ಬಿದೆ. ಮುಂಬೈ ಇಂಡಿಯನ್ಸ್ ತಂಡ ವೈಭವ್ ಸೂರ್ಯವಂಶಿ ಅವರಿಗೆ 30 ಕೋಟಿ ರೂಪಾಯಿ ಮತ್ತು ಆಂಟಿಲಿಯಾದಲ್ಲಿ ಫ್ಲಾಟ್ ನೀಡುವ ಆಫರ್ ನೀಡಿದೆ ಎನ್ನಲಾಗ್ತಿದೆ. ನೀತಾ ಅಂಬಾನಿ, ಮಾಲ್ಡೀವ್ಸ್ ನಲ್ಲಿ ಒಂದು ಖಾಸಗಿ ಐಲ್ಯಾಂಡ್ ನೀಡುವ ಆಫರ್ ನೀಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಇಷ್ಟೇ ಅಲ್ಲ, ನಿರ್ಧಾರ ತೆಗೆದುಕೊಳ್ಳಲು ವೈಭವ್ ಸೂರ್ಯವಂಶಿ ಸಮಯ ಕೇಳಿದ್ರೆ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ಹಸ್ತಕ್ಷೇಪ ಮಾಡ್ತಿದ್ದಾರೆ ಎಂಬ ಸುದ್ದಿ ಕಾಲುಬಾಲ ಪಡೆದಿದೆ.&lt;/p&gt;&lt;img&gt;&lt;p&gt;ಈ ಪೋಸ್ಟ್ ಐಪಿಎಲ್ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕಣ್ಣಿಗೆ ಬಿದ್ದಿದೆ. ಅವರು ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ಸುಳ್ಳು. ಹಾಗೆ ತಂಡ ಬದಲಾವಣೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಲಲಿತ್ ಮೋದಿ ಪ್ರಕಾರ, ಆಟಗಾರರ ಬದಲಾವಣೆಗೆ ಸಂಬಂಧಿಸಿದಂತೆ ಐಪಿಎಲ್ ನಲ್ಲಿ ನಿಯಮಗಳಿವೆ. ಆಟಗಾರರು ತಮ್ಮಿಷ್ಟದಂತೆ ತಂಡ ಬದಲಿಸಲು ಸಾಧ್ಯವಿಲ್ಲ. ಆಟಗಾರರನ್ನು ಹೀಗೆ ತಂಡದಿಂದ ತಂಡಕ್ಕೆ ಬದಲಿಸಲು ಸಾಧ್ಯವಿಲ್ಲ. ರಾಜಸ್ಥಾನ ರಾಯಲ್ಸ್ ಟೀಂ ವೈಭವ್ ಸೂರ್ಯವಂಶಿ ಅವರನ್ನು ಬಿಡುಗಡೆ ಮಾಡಿದ್ರೆ ವೈಭವ್ ಹರಾಜಿಗೆ ಹೋಗ್ಬೇಕು. ಹರಾಜಿನಲ್ಲಿ ಅವರನ್ನು ಬೇರೆ ತಂಡಗಳು ಖರೀದಿ ಮಾಡ್ಬಹುದು ಎಂದು ಲಲಿತ್ ಮೋದಿ ಹೇಳಿದ್ದಾರೆ. ಹೆಚ್ಚಿನ ಹಣದ ಆಫರ್ ನೀಡಿ, ಮಧ್ಯದಲ್ಲಿ ಆಟಗಾರರನ್ನು ವಿನಿಮಯ ಮಾಡುವ ನಿಯಮ ಐಪಿಎಲ್ ನಲ್ಲಿ ಇಲ್ಲ ಎಂದು ಲಲಿತ್ ಮೋದಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ನಿನ್ನೆಯ ಮ್ಯಾಚ್ ನಲ್ಲಿ ವೈಭವ್ ಸೂರ್ಯವಂಶಿ ದಾಖಲೆ ಬರೆಯಲಾಗ್ಲಿಲ್ಲ. ಆದ್ರೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದ ರಾಜಸ್ಥಾನ ರಾಯಲ್ಸ್ ಕ್ವಾಲಿಫೈಯರ್ 2ಗೆ ಪ್ರವೇಶ ಮಾಡಿದೆ. ತನ್ನ ದಾಖಲೆಗಿಂತ ತಂಡದ ಗೆಲುವು ಮುಖ್ಯ. ಔಟ್ ಆಗಿ ಹೊರಗೆ ಬಂದ್ಮೇಲೆ ದಾಖಲೆ ಬಗ್ಗೆ ನನಗೆ ತಿಳಿದಿದ್ದು ಎನ್ನುವ ಮೂಲಕ 15 ವರ್ಷದ ವೈಭವ್ ಸೂರ್ಯವಂಶಿ, ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/ipl/will-vaibhav-suryavanshi-leave-rajasthan-royals-for-mumbai-indians-lalit-modi-reacts-orsfkt2"/>
        </item>
        <item>
            <title><![CDATA[IPL 2026 ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಸನ್‌ರೈಸರ್ಸ್ ಹೈದರಾಬಾದ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು?]]></title>
            <link>https://kannada.asianetnews.com/gallery/cricket-sports/ipl-2026-prize-money-sunrisers-hyderabad-reward-after-eliminator-defeat-vs-rajasthan-royals-kvn-ty5ksgi</link>
            <guid isPermaLink="true">https://kannada.asianetnews.com/gallery/cricket-sports/ipl-2026-prize-money-sunrisers-hyderabad-reward-after-eliminator-defeat-vs-rajasthan-royals-kvn-ty5ksgi</guid>
            <pubDate>Thu, 28 May 2026 10:11:44 +0530</pubDate>
            <description><![CDATA[&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸನ್&zwnj;ರೈಸರ್ಸ್ ಹೈದರಾಬಾದ್ ಅಭಿಯಾನ ಎಲಿಮಿನೇಟರ್ ಪಂದ್ಯದಲ್ಲಿಯೇ ಕೊನೆಯಾಗಿದೆ. ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಆರೆಂಜ್ ಆರ್ಮಿಗೆ ಬಿಸಿಸಿಐನಿಂದ ಸಿಗುವ ನಗದು ಬಹುಮಾನ ಎಷ್ಟು ಎಂದು ತಿಳಿಯೋಣ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmdce2nc6jfpy02wy1xk2ym,imgname-red-and-black-retro-landscape-youtube-thumbnail-background--1--1779875330133.jpg" type="image/jpeg" height="390" width="690"/>
            <content:encoded><![CDATA[&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸನ್&zwnj;ರೈಸರ್ಸ್ ಹೈದರಾಬಾದ್ ಅಭಿಯಾನ ಎಲಿಮಿನೇಟರ್ ಪಂದ್ಯದಲ್ಲಿಯೇ ಕೊನೆಯಾಗಿದೆ. ಎಲಿಮಿನೇಟರ್ ಪಂದ್ಯದಲ್ಲೇ ಹೊರಬಿದ್ದ ಆರೆಂಜ್ ಆರ್ಮಿಗೆ ಬಿಸಿಸಿಐನಿಂದ ಸಿಗುವ ನಗದು ಬಹುಮಾನ ಎಷ್ಟು ಎಂದು ತಿಳಿಯೋಣ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;2026ರ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್&zwnj;ಗೆ ಎಂಟ್ರಿಕೊಟ್ಟಿದ್ದ ಪ್ಯಾಟ್ ಕಮಿನ್ಸ್ ನೇತೃತ್ವದ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವು, ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 47 ರನ್&zwnj;ಗಳ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಉಭಯ ತಂಡಗಳ ಪಾಲಿಗೆ ಈ ಎಲಿಮಿನೇಟರ್ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಂಡಿತ್ತು. ಟಾಸ್ ಗೆದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಪ್ಯಾಟ್ ಕಮಿನ್ಸ್ ಪಡೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿದರೆ, ಧ್ರುವ್ ಜುರೆಲ್ 21 ಎಸೆತಗಳಲ್ಲಿ 50 ರನ್ ಸಿಡಿಸಿದರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್&zwnj;ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು.&lt;/p&gt;&lt;img&gt;&lt;p&gt;ಇನ್ನು ಗುರಿ ಬೆನ್ನತ್ತಿದ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವು ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ಸನ್&zwnj;ರೈಸರ್ಸ್&zwnj;ನ ಯಾವೊಬ್ಬ ಬ್ಯಾಟರ್&zwnj; 40+ ಬಾರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಸನ್&zwnj;ರೈಸರ್ಸ್ ಹೈದರಾಬಾದ್ ತಂಡವು 19.2 ಓವರ್&zwnj;ಗಳಲ್ಲಿ 196 ರನ್&zwnj;ಗಳಿಗೆ ಸರ್ವಪತನ ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು.&lt;/p&gt;&lt;img&gt;&lt;p&gt;ಇನ್ನು ಎಲಿಮಿನೇಟರ್ ಪಂದ್ಯದಲ್ಲೇ ತನ್ನ ಅಭಿಯಾನ ಮುಗಿಸಿದ ಸನ್&zwnj;ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಮಾರು 6.5 ಕೋಟಿ ರುಪಾಯಿ ನಗದು ಬಹುಮಾನ ಸಿಗಲಿದೆ ಎಂದು ವರದಿಯಾಗಿದೆ. ಕಳೆದ ಬಾರಿ ಕೂಡಾ ನಾಲ್ಕನೇ ಸ್ಥಾನ ಪಡೆದ ತಂಡವು ಆರೂವರೆ ಕೋಟಿ ರುಪಾಯಿ ನಗದು ಬಹುಮಾನ ಜೇಬಿಗಿಳಿಸಿಕೊಂಡಿತ್ತು.&lt;/p&gt;&lt;img&gt;&lt;p&gt;2025ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡಕ್ಕೆ 20 ಕೋಟಿ ರುಪಾಯಿ ನಗದು ಬಹುಮಾನ ಸಿಕ್ಕಿತ್ತು. ಈ ಬಾರಿ ಕೂಡಾ ಚಾಂಪಿಯನ್ ಆಗುವ ತಂಡಕ್ಕೆ 20 ಕೋಟಿ ರುಪಾಯಿ ನಗದು ಬಹುಮಾನ ಸಿಗಲಿದೆ. ಇನ್ನು ರನ್ನರ್-ಅಪ್ ತಂಡಕ್ಕೆ 12.5 ಕೋಟಿ ರುಪಾಯಿ ನಗದು ಬಹುಮಾನ ಸಿಗಲಿದೆ.&lt;/p&gt;&lt;img&gt;&lt;p&gt;ಕಳೆದ ಬಾರಿ ಪ್ಲೇ ಆಫ್&zwnj; ಪ್ರವೇಶಿಸಿದ ನಾಲ್ಕು ತಂಡಗಳು ಸುಮಾರು 47 ಕೋಟಿ ರುಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದವು. ಈ ಬಾರಿ ಕೂಡಾ ಬಹುತೇಕ ಇಷ್ಟೇ ಹಣವನ್ನು ಆರ್&zwnj;ಸಿಬಿ, ಗುಜರಾತ್, ಸನ್&zwnj;ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪಡೆದುಕೊಳ್ಳಲಿವೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/ipl-2026-prize-money-sunrisers-hyderabad-reward-after-eliminator-defeat-vs-rajasthan-royals-kvn-ty5ksgi"/>
        </item>
        <item>
            <title><![CDATA[IPL 2026 ರಾಜಸ್ಥಾನ ರಾಯಲ್ಸ್-ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ ಮ್ಯಾಚ್ ಎಲ್ಲಿ? ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್]]></title>
            <link>https://kannada.asianetnews.com/gallery/cricket-sports/rajasthan-royals-vs-gujarat-titans-qualifier-2-match-time-venue-and-live-streaming-details-kvn-ow7dq4m</link>
            <guid isPermaLink="true">https://kannada.asianetnews.com/gallery/cricket-sports/rajasthan-royals-vs-gujarat-titans-qualifier-2-match-time-venue-and-live-streaming-details-kvn-ow7dq4m</guid>
            <pubDate>Thu, 28 May 2026 08:58:47 +0530</pubDate>
            <description><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎಲಿಮಿನೇಟರ್ ಪಂದ್ಯ ಮುಕ್ತಾಯವಾಗಿದ್ದು, ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಕ್ವಾಲಿಫೈಯರ್-2 ಮ್ಯಾಚ್ ಎಲ್ಲಿ? ಯಾವಾಗ? ನೇರ ಪ್ರಸಾರ ಎಲ್ಲಿ? ಎಷ್ಟು ಗಂಟೆಗೆ ಆರಂಭ ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jsytvkn2et90jzya15vc87zt,imgname-2-1745865264802.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ಇದೀಗ ಎಲಿಮಿನೇಟರ್ ಪಂದ್ಯ ಮುಕ್ತಾಯವಾಗಿದ್ದು, ಕ್ವಾಲಿಫೈಯರ್-2 ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇದೀಗ ಕ್ವಾಲಿಫೈಯರ್-2 ಮ್ಯಾಚ್ ಎಲ್ಲಿ? ಯಾವಾಗ? ನೇರ ಪ್ರಸಾರ ಎಲ್ಲಿ? ಎಷ್ಟು ಗಂಟೆಗೆ ಆರಂಭ ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;19ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್&zwnj; ಎದುರು ಆಘಾತಕಾರಿ ಸೋಲು ಕಾಣುವ ಮೂಲಕ ಸನ್&zwnj;ರೈಸರ್ಸ್ ಹೈದರಾಬಾದ್ ತನ್ನ ಅಭಿಯಾನ ಮುಗಿಸಿದೆ. ಇದೀಗ ಕ್ವಾಲಿಫೈಯರ್-2 ಪಂದ್ಯದಲ್ಲಿ ಮಾಜಿ ಚಾಂಪಿಯನ್ನರಾದ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಡಲಿವೆ.&lt;/p&gt;&lt;img&gt;&lt;p&gt;ಲೀಗ್ ಹಂತ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡವು ಕ್ವಾಲಿಫೈಯರ್-1 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್&zwnj;ಸಿಬಿ ಎದುರು ಸೋಲು ಅನುಭವಿಸಿತ್ತು. ಇದೀಗ ಕ್ವಾಲಿಫೈಯರ್-2 ಪಂದ್ಯದಲ್ಲಿ ಆರೆಂಜ್ ಆರ್ಮಿ ಎದುರು ಗೆದ್ದು ಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ ಶುಭ್&zwnj;ಮನ್ ಗಿಲ್ ಪಡೆ.&lt;/p&gt;&lt;img&gt;&lt;p&gt;ಕ್ವಾಲಿಫೈಯರ್-2 ಕೂಡಾ ನಾಕೌಟ್ ಮಾದರಿಯ ಪಂದ್ಯವಾಗಿದ್ದು, ಗೆದ್ದ ತಂಡ ಫೈನಲ್&zwnj;ಗೆ ಲಗ್ಗೆಯಿಟ್ಟರೇ, ಸೋಲುವ ತಂಡ ಐಪಿಎಲ್ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಗುಜರಾತ್-ಸನ್&zwnj;ರೈಸರ್ಸ್&zwnj; ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯವು ಮೇ 29ರಂದು ಚಂಡೀಗಢದ ಮುಲ್ಲಾನ್&zwnj;ಪುರ ಇಂಟರ್&zwnj;ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.&lt;/p&gt;&lt;img&gt;&lt;p&gt;ಉಭಯ ತಂಡಗಳಿಗೆ ಫೈನಲ್&zwnj; ಪ್ರವೇಶಿಸಲು ಕೊನೆಯ ಅವಕಾಶ ಇದಾಗಿರುವುದರಿಂದ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಗುಜರಾತ್-ಹೈದರಾಬಾದ್&zwnj; ನಡುವಿನ ಹೈವೋಲ್ಟೇಜ್ ಮ್ಯಾಚ್ ಭಾರತೀಯ ಕಾಲಮಾನ ಸಂಜೆ 7.30ರಿಂದ ಆರಂಭವಾಗಲಿದೆ. ಈ ಮ್ಯಾಚ್ ಸ್ಟಾರ್ ಸ್ಪೋರ್ಟ್ಸ್&zwnj; ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.&lt;/p&gt;&lt;img&gt;&lt;p&gt;ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್-2 ಮ್ಯಾಚ್ ಗೆದ್ದ ತಂಡವು ಮೇ.31ರಂದು ನಡೆಯಲಿರುವ ಫೈನಲ್&zwnj;ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಮ್ಯಾಚ್&zwnj;ಗೆ ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಿದೆ.&lt;/p&gt;&lt;img&gt;&lt;p&gt;ರಾಜಸ್ಥಾನ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್&zwnj; ನಡುವಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ? ಯಾವ ತಂಡ ಗೆದ್ದರೆ ಆರ್&zwnj;ಸಿಬಿ ಅನುಕೂಲವಾಗಬಹುದು ಎನ್ನುವುದನ್ನು ಕಮೆಂಟ್ ಮಾಡಿ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/rajasthan-royals-vs-gujarat-titans-qualifier-2-match-time-venue-and-live-streaming-details-kvn-ow7dq4m"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್-ಸನ್‌ರೈಸರ್ಸ್ ಹೈದರಾಬಾದ್ ಎಲಿಮಿನೇಟರ್ ಪಂದ್ಯ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-rajasthan-royals-vs-sunrisers-hyderabad-ipl-eliminator-match-kvn/articleshow-cq4qbal</link>
            <guid isPermaLink="true">https://kannada.asianetnews.com/cricket-sports/who-won-yesterday-rajasthan-royals-vs-sunrisers-hyderabad-ipl-eliminator-match-kvn/articleshow-cq4qbal</guid>
            <pubDate>Thu, 28 May 2026 08:06:50 +0530</pubDate>
            <description><![CDATA[ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್, ಸನ್&zwnj;ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕ್ವಾಲಿಫೈಯರ್&zwnj;-2 ಪ್ರವೇಶಿಸಿದೆ. ಈ ಪಂದ್ಯದಲ್ಲಿ 12 ಸಿಕ್ಸರ್&zwnj; ಸಿಡಿಸಿದ ವೈಭವ್, ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್&zwnj; ಬಾರಿಸಿದ 14 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01ksnfehywsd2yhqzrdatwjqb1,imgname-20260527525l-1779911051227.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಲ್ಲಾನ್&zwnj;ಪುರ: ವೈಭವ್&zwnj; ಸೂರ್ಯವಂಶಿಯ ಸಿಕ್ಸರ್&zwnj; ಮಳೆಗೆ ಸಾಕ್ಷಿಯಾದ ಈ ಬಾರಿ ಐಪಿಎಲ್&zwnj;ನ ಎಲಿಮಿನೇಟರ್&zwnj; ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್&zwnj; ವಿರುದ್ಧ ಸನ್&zwnj;ರೈಸರ್ಸ್&zwnj; ಹೈದರಾಬಾದ್&zwnj; 47 ರನ್&zwnj;ಗಳಿಂದ ಸೋಲನುಭವಿಸಿದ್ದು, ಟೂರ್ನಿಯಿಂದಲೇ ಹೊರಬಿದ್ದಿದೆ. ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಗಿ ಪ್ಲೇ-ಆಫ್&zwnj; ತಲುಪಿದ್ದ ರಾಜಸ್ಥಾನ ಕ್ವಾಲಿಫೈಯರ್&zwnj;-2 ಪ್ರವೇಶಿಸಿತು.&lt;/p&gt;&lt;p&gt;ಮಂಗಳವಾರ ಆರ್&zwnj;ಸಿಬಿ-ಗುಜರಾತ್&zwnj; ನಡುವಿನ ಕ್ವಾಲಿಫೈಯರ್&zwnj;-1 ಪಂದ್ಯದಂತೆ, ಬುಧವಾರದ ಪಂದ್ಯವೂ ಏಕಮುಖವಾಗಿ ಸಾಗಿತು. ರಾಜಸ್ಥಾನ ಬ್ಯಾಟಿಂಗ್&zwnj;, ಬೌಲಿಂಗ್&zwnj; ಎರಡರಲ್ಲೂ ಅಬ್ಬರಿಸಿದರೆ ಸನ್&zwnj;ರೈಸರ್ಸ್&zwnj; ಎರಡರಲ್ಲೂ ಸಪ್ಪೆಯಾಗಿ ಆಘಾತಕಾರಿ ಸೋಲನುಭವಿಸಿತು. ಮೊದಲು ಬ್ಯಾಟ್&zwnj; ಮಾಡಿದ ರಾಜಸ್ಥಾನ ಕಲೆಹಾಕಿದ್ದು ಬರೋಬ್ಬರಿ 243 ರನ್&zwnj;. ಕಳೆದುಕೊಂಡಿದ್ದು 8 ವಿಕೆಟ್&zwnj;. ತಮ್ಮ ಮೇಲೆಯೇ ಕೇಂದ್ರೀಕೃತವಾಗಿದ್ದ ಪಂದ್ಯದಲ್ಲಿ ವೈಭವ್&zwnj; ಅಕ್ಷರಶಃ ಆರ್ಭಟಿಸಿದರು. ಒಬ್ಬ ಬೌಲರನ್ನೂ ಬಿಡದೆ ದಂಡಿಸಿದರು. ಅವರು ಬ್ಯಾಟ್&zwnj;ನಿಂದ ಸಿಡಿದದ್ದು 29 ಎಸೆತಕ್ಕೆ 97 ರನ್&zwnj;. ಐಪಿಎಲ್&zwnj;ನ ಅತಿ ವೇಗದ ಶತಕದ ದಾಖಲೆ ಮುರಿಯವ ಅವಕಾಶದಿಂದ ವಂಚಿತರಾದರೂ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್&zwnj;ನಲ್ಲಿ 5 ಬೌಂಡರಿ, 12 ಸಿಕ್ಸರ್&zwnj;ಗಳಿದ್ದವು. ಧ್ರುವ್&zwnj; ಜುರೆಲ್&zwnj; 21 ಎಸೆತಕ್ಕೆ 50, ನಾಯಕ ರಿಯಾನ್&zwnj; ಪರಾಗ್&zwnj; 12 ಎಸೆತಕ್ಕೆ 26, ಜೈಸ್ವಾಲ್&zwnj; 29 ಎಸೆತಕ್ಕೆ 29 ರನ್&zwnj; ಸಿಡಿಸಿದರು. ಮೊದಲ 8 ಓವರ್&zwnj;ನಲ್ಲೇ 125 ರನ್&zwnj; ಗಳಿಸಿದ್ದ ತಂಡ, ಕೊನೆ 12 ಓವರ್&zwnj;ನಲ್ಲಿ 118 ರನ್&zwnj; ಕಲೆಹಾಕಿತು.&lt;/p&gt;&lt;p&gt;ಆಕ್ರಮಣಕಾರಿ ಆಟಗಾರರ ಪಡೆಯನ್ನೇ ಹೊಂದಿದ್ದ ಸನ್&zwnj;ರೈಸರ್ಸ್&zwnj;, ಈ ಮೊತ್ತವನ್ನು ಬೆನ್ನತ್ತಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಒತ್ತಡಕ್ಕೊಳಗಾದ ಬ್ಯಾಟರ್ಸ್&zwnj; ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್&zwnj; ಸೇರಿದರು. ಅಭಿಷೇಕ್&zwnj; ಸೊನ್ನೆ ಸುತ್ತಿದರು. ಇಶಾನ್&zwnj; ಕಿಶನ್ ಅಬ್ಬರ 33 ರನ್&zwnj;(11 ಎಸೆತ)ಗೆ ಕೊನೆಗೊಂಡಿತು. ಟ್ರ್ಯಾವಿಸ್&zwnj; ಹೆಡ್&zwnj;(17) ಹೆನ್ರಿಚ್&zwnj; ಕ್ಲಾಸೆನ್(18) ವಿಫಲರಾಗುವುದರೊಂದಿಗೆ ತಂಡದ ಸೋಲು ಖಚಿತವಾಯಿತು. ಪವರ್&zwnj;-ಪ್ಲೇನಲ್ಲೇ ಸೋಲಿನತ್ತ ಮುಖ ಮಾಡಿದ್ದ ತಂಡ 19.2 ಓವರ್&zwnj;ಗಳಲ್ಲಿ 196 ರನ್&zwnj; ಗಳಿಸಿ ಸೋಲೊಪ್ಪಿಕೊಂಡಿತು. ಮತ್ತೆ ಮಾರಕ ದಾಳಿ ಸಂಘಟಿಸಿದ ಜೋಫ್ರಾ ಆರ್ಚರ್ 3 ವಿಕೆಟ್&zwnj; ಪಡೆದರು.&lt;/p&gt;&lt;p&gt;ಸ್ಕೋರ್&zwnj;: ರಾಜಸ್ಥಾನ 20 ಓವರಲ್ಲಿ 243/8 (ವೈಭವ್&zwnj; 97, ಜುರೆಲ್&zwnj; 50, ರಿಯಾನ್&zwnj; 26, ಪ್ರಫುಲ್&zwnj; 3-54), ಸನ್&zwnj;ರೈಸರ್ಸ್&zwnj; 00 ಓವರಲ್ಲಿ 000 (ನಿತೀಶ್&zwnj; 38, ಇಶಾನ್&zwnj; 33, ಆರ್ಚರ್ ---)&lt;/p&gt;&lt;p&gt;ಪಂದ್ಯಶ್ರೇಷ್ಠ: ವೈಭವ್&zwnj; ಸೂರ್ಯವಂಶಿ&lt;/p&gt;&lt;h2&gt;&lt;strong&gt;ರಾಯಲ್ಸ್&zwnj; vs ಗುಜರಾತ್&zwnj; ನಾಳೆ ಕ್ವಾಲಿಫೈಯರ್&zwnj;-2&lt;/strong&gt;&lt;/h2&gt;&lt;p&gt;ಈ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ರಾಜಸ್ಥಾನ ಫೈನಲ್&zwnj;ಗೇರಿಲ್ಲ. ತಂಡ ಶುಕ್ರವಾರ ಕ್ವಾಲಿಫೈಯರ್&zwnj;-2 ಪಂದ್ಯದಲ್ಲಿ ಗುಜರಾತ್&zwnj; ಟೈಟಾನ್ಸ್&zwnj; ವಿರುದ್ಧ ಆಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್&zwnj;ಗೇರಲಿದೆ. ಗುಜರಾತ್&zwnj; ತಂಡ ಮಂಗಳವಾರ ಕ್ವಾಲಿಫೈಯರ್&zwnj;-1ರಲ್ಲಿ ಆರ್&zwnj;ಸಿಬಿ ವಿರುದ್ಧ ಸೋತಿತ್ತು.&lt;/p&gt;&lt;p&gt;--&lt;/p&gt;&lt;h3&gt;&lt;strong&gt;ಈ ಬಾರಿ ಸೂರ್&zwj;ಯವಂಶಿ 61 ಸಿಕ್ಸರ್&zwnj;: ಐಪಿಎಲ್&zwnj; ಆವೃತ್ತಿಯೊಂದರ ಗರಿಷ್ಠ&lt;/strong&gt;&lt;/h3&gt;&lt;p&gt;ಮುಲ್ಲಾನ್&zwnj;ಪುರ: ಈ ಬಾರಿ ಐಪಿಎಲ್&zwnj;ನಲ್ಲಿ ರಾಜಸ್ಥಾನ ರಾಯಲ್ಸ್&zwnj; ಬ್ಯಾಟರ್&zwnj; ವೈಭವ್&zwnj; ಸೂರ್ಯವಂಶಿ 65 ಸಿಕ್ಸರ್&zwnj; ಬಾರಿಸಿದ್ದು, ಐಪಿಎಲ್&zwnj; ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್&zwnj; ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;p&gt;ಬುಧವಾರ ಸನ್&zwnj;ರೈಸರ್ಸ್&zwnj; ಹೈದರಾಬಾದ್ ವಿರುದ್ಧ ಎಲಿಮಿನೇಟರ್&zwnj; ಪಂದ್ಯದಲ್ಲಿ ವೈಭವ್&zwnj; 12 ಸಿಕ್ಸರ್&zwnj; ಸಿಡಿಸಿ, ಕ್ರಿಸ್&zwnj; ಗೇಲ್&zwnj; ದಾಖಲೆ ಮುರಿದರು. ಆವೃತ್ತಿಯೊಂದರಲ್ಲಿ ಗರಿಷ್ಠ ಸಿಕ್ಸರ್&zwnj; ದಾಖಲೆ ಬರೋಬ್ಬರಿ 14 ವರ್ಷಗಳ ಕಾಲ ಗೇಲ್&zwnj; ಹೆಸರಲ್ಲಿತ್ತು. ಅವರು 2012ರ ಐಪಿಎಲ್&zwnj;ನಲ್ಲಿ 59 ಸಿಕ್ಸರ್&zwnj; ಸಿಡಿಸಿದ್ದರು. ಅವರನ್ನು ವೈಭವ್&zwnj; ಹಿಂದಿಕ್ಕಿದ್ದಾರೆ. ಆ್ಯಂಡ್ರೆ ರಸೆಲ್&zwnj; 2019ರಲ್ಲಿ 52, ಕ್ರಿಸ್&zwnj; ಗೇಲ್&zwnj; 2013ರಲ್ಲಿ 51 ಸಿಕ್ಸರ್&zwnj; ಬಾರಿಸಿದ್ದರು.&lt;/p&gt;&lt;h3&gt;&lt;strong&gt;ಅರ್ಧಶತಕದ ದಾಖಲೆ:&lt;/strong&gt;&lt;/h3&gt;&lt;p&gt;ವೈಭವ್&zwnj; ಕೇವಲ 16 ಎಸೆತಕ್ಕೆ ಅರ್ಧಶತಕ ಬಾರಿಸಿದರು. ಐಪಿಎಲ್&zwnj;ನಲ್ಲಿ ಅವರು 5 ಬಾರಿ 20ಕ್ಕಿಂತ ಕಡಿಮೆ ಎಸೆತಗಳಲ್ಲಿ 50 ರನ್ ಪೂರೈಸಿದ್ದಾರೆ. ಇದು 2ನೇ ಗರಿಷ್ಠ. ಅಭಿಷೇಕ್&zwnj; 6, ನಿಕೋಲಸ್&zwnj; ಪೂರನ್&zwnj; 5 ಬಾರಿ ಈ ಸಾಧನೆ ಮಾಡಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-rajasthan-royals-vs-sunrisers-hyderabad-ipl-eliminator-match-kvn/articleshow-cq4qbal"/>
        </item>
    </channel>
</rss>
