<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Jul 2026 18:00:29 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[ರಾಹುಲ್ ದ್ರಾವಿಡ್ ಇಬ್ಬರು ಪುತ್ರರಲ್ಲಿ ಅಪ್ಪನಂತೆ ಆಡುವವರು ಯಾರು..?]]></title>
            <link>https://kannada.asianetnews.com/cricket-sports/can-samit-and-anvay-dravid-match-rahul-dravid-legacy-kvn/articleshow-06uwf57</link>
            <guid isPermaLink="true">https://kannada.asianetnews.com/cricket-sports/can-samit-and-anvay-dravid-match-rahul-dravid-legacy-kvn/articleshow-06uwf57</guid>
            <pubDate>Wed, 08 Jul 2026 12:01:21 +0530</pubDate>
            <description><![CDATA[ಕ್ರಿಕೆಟ್ ದಂತಕಥೆ ರಾಹುಲ್ ದ್ರಾವಿಡ್ ಅವರ ಪುತ್ರರಾದ ಸಮಿತ್ ಮತ್ತು ಅನ್ವಯ್ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಆಲ್ರೌಂಡರ್ ಸಮಿತ್ ಮಹಾರಾಜ ಟ್ರೋಫಿಯಲ್ಲಿ ಮಿಂಚಿದರೆ, ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ ಭಾರತದ ಅಂಡರ್-19 ತಂಡದಲ್ಲಿ ಭರವಸೆ ಮೂಡಿಸಿದ್ದಾರೆ. ಈ ಲೇಖನವು ತಂದೆಯ ಪರಂಪರೆಯನ್ನು ಮುಂದುವರಿಸುವ ಸವಾಲು ಮತ್ತು ಅವರ ವಿಶಿಷ್ಟ ಆಟದ ಶೈಲಿಯನ್ನು ವಿಶ್ಲೇಷಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwxr6tbdvr9hcg5a52tnb576,imgname-rahul-dravid-sons-1783409895789.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&lt;strong&gt;ಸುದರ್ಶನ್, ಏಷ್ಯಾನೆಟ್ ಸುವರ್ಣನ್ಯೂಸ್&lt;/strong&gt;&lt;/li&gt;&lt;/ul&gt;&lt;p&gt;ರಾಹುಲ್ ದ್ರಾವಿಡ್ ಎಂದರೆ ಹಾಗೇ.. ಹಮ್ಮು-ಬಿಮ್ಮು ಅವರ ಹತ್ತಿರ ಸುಳಿಯಲಾರದು. ಇನ್ನು ಸೂಪರ್ ಸ್ಟಾರ್. ಅದು ಅವರ ಆಟಕ್ಕೆ ಸಿಕ್ಕ ಬಳುವಳಿ. ಆದರೆ ಮಕ್ಕಳ ಆಟವನ್ನು ನೋಡಲು ಬರುತ್ತಿದ್ದ ದ್ರಾವಿಡ್ ಸಾಮಾನ್ಯರಲ್ಲಿ ಸಾಮಾನ್ಯ. ಬೆಂಗಳೂರು, ಮೈಸೂರಲ್ಲಿ ಮಕ್ಕಳು ಆಡುತ್ತಿದ್ದರೆ ಅಲ್ಲೆಲ್ಲೋ ಕಲ್ಲಿನ ಮೆಟ್ಟಿಲುಗಳ ಮೇಲೋ, ಪ್ಲಾಸ್ಟಿಕ್ ಚೇರ್ ಮೇಲೋ ಕುಳಿತು ಪಂದ್ಯ ವೀಕ್ಷಿಸುವ ಅಪ್ಪ ದ್ರಾವಿಡ್.&lt;/p&gt;&lt;p&gt;ಅಪ್ಪ ಬ್ಯಾಟಿಂಗ್ ದಂತಕಥೆ. ಮಕ್ಕಳಿಬ್ಬರೂ ಆಲ್ರೌಂಡರ್&rsquo;ಗಳು. ದೊಡ್ಡವನು ಮಧ್ಯಮ ಕ್ರಮಾಂಕದ ಬ್ಯಾಟರ್+ಮಧ್ಯಮ ವೇಗದ ಬೌಲರ್. ಚಿಕ್ಕವನು ವಿಕೆಟ್ ಕೀಪರ್+ಮಿಡಲ್ ಆರ್ಡರ್ ಬ್ಯಾಟರ್. ದಂತಕಥೆಗಳು ಎನಿಸಿಕೊಂಡವರ ಮಕ್ಕಳು ಕ್ರಿಕೆಟ್ ಆಡಲು ಆರಂಭಿಸಿದಾಗ ನಿರೀಕ್ಷೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಮಕ್ಕಳನ್ನು ಅಪ್ಪನಿಗೆ ಹೋಲಿಕೆ ಮಾಡಲಾರಂಭಿಸುತ್ತಾರೆ. ಆ ಮಕ್ಕಳ ಪಾಲಿಗೆ ಆ ಹೋಲಿಕೆಯೇ ಮೊದಲ ಶತ್ರು.&lt;/p&gt;&lt;p&gt;ಕ್ರಿಕೆಟ್&rsquo;ನಲ್ಲಿ ಅಪ್ಪನಂತೆ ಮಗ ಆಡಲು ಸಾಧ್ಯವೇ ಇಲ್ಲ. ಅಪ್ಪ ಅಪ್ಪನೇ. ಮಗ ಮಗನೇ. ಸುನಿಲ್ ಗವಾಸ್ಕರ್&rsquo;ರಂತೆ ಅವರ ಮಗ ಆಡಲೇ ಇಲ್ಲ. ಸಚಿನ್ ತೆಂಡೂಲ್ಕರ್ ಪುತ್ರ ಮತ್ತೊಬ್ಬ ಸಚಿನ್ ಆಗಲು ಸಾಧ್ಯವಾಗಲಿಲ್ಲ. ರಾಹುಲ್ ದ್ರಾವಿಡ್ ಅವರ ಪುತ್ರರ ಕಥೆಯೇನು..? ಇಬ್ಬರೂ ಪ್ರತಿಭಾಸಂಪನ್ನರು.. ದೊಡ್ಡವನಿಗೆ 20 ವರ್ಷ, ಚಿಕ್ಕವನಿಗೆ 17 ವರ್ಷ. ಹತ್ತಿರದಲ್ಲಿ ನಿಂತರೆ ಎತ್ತರದಲ್ಲಿ ದ್ರಾವಿಡ್ ಅವರನ್ನೂ ಮೀರಿ ಬೆಳೆದಿರುವ ಹಿರಿಮಗ ಸಮಿತ್ ದ್ರಾವಿಡ್. ಆಟದ ಶೈಲಿಯಲ್ಲಿ ಅಪ್ಪನನ್ನೇ ನೆನಪಿಸುತ್ತಿರುವ ಕಿರಿಮಗ ಅನ್ವಯ್ ದ್ರಾವಿಡ್.&lt;/p&gt;&lt;h2&gt;&lt;strong&gt;ಅಣ್ಣ ಬ್ಯಾಟಿಂಗ್+ಬೌಲಿಂಗ್ ಆಲ್ರೌಂಡರ್. ತಮ್ಮ ಕೀಪರ್-ಬ್ಯಾಟರ್ ಆಲ್ರೌಂಡರ್..!&lt;/strong&gt;&lt;/h2&gt;&lt;p&gt;ಮಹಾರಾಜ ಟಿ20 ಟೂರ್ನಿಯಲ್ಲಿ ಸಮಿತ್ ದ್ರಾವಿಡ್ ಆಡಿದ ಕೆಲ ಪಂದ್ಯಗಳನ್ನು ನೋಡಿದೆ.. ಕೆಲ ಹೊಡೆತಗಳನ್ನು ದ್ರಾವಿಡ್ ಅವರಂತೆಯೇ ಬಾರಿಸುತ್ತಾನೆ. ಬೌಲಿಂಗ್&rsquo;ನಲ್ಲಿ ಆತ ಮಧ್ಯಮ ವೇಗಿ. ಬೌಲಿಂಗ್ ಮಾಡುವುದನ್ನು ನೋಡಿದಾಗ ಮೊದಲು ಅನ್ನಿಸಿದ್ದು &lsquo;ಹುಡುಗನ ಆ್ಯಕ್ಷನ್ ಚೆನ್ನಾಗಿದೆ&rsquo;. ಸಮಿತ್ ದ್ರಾವಿಡ್ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಬೇಕೆನ್ನುವುದು ತಾಯಿಯ ಆಸೆ ಎಂದು ಕೇಳಿ ಪಟ್ಟಿದ್ದೇನೆ. ಆತ ಬ್ಯಾಟಿಂಗನ್ನಷ್ಟೇ ಆಯ್ಕೆ ಮಾಡಿಕೊಂಡಿದ್ದರೆ ಅಪ್ಪ ಬ್ಯಾಟಿಂಗ್ ದಂತಕಥೆಯಾಗಿರುವ ಕಾರಣಕ್ಕೆ ಬಹುಬೇಗ ಅಗ್ನಿಪರೀಕ್ಷೆಗೆ ಒಳಗಾಗುತ್ತಿದ್ದ. ಆಲ್ರೌಂಡರ್ ಆಗಿದ್ದು ಇದೇ ಕಾರಣಕ್ಕಿರಬಹುದು. ಅಷ್ಟರ ಮಟ್ಟಿಗೆ ಅವನು ಕ್ರಿಕೆಟ್ ಮೈದಾನದಾಚೆಗಿನ ಒತ್ತಡಗಳಿಂದ ಮುಕ್ತ.&lt;/p&gt;&lt;h3&gt;&lt;strong&gt;ಅನ್ವಯ್ ಅಪ್ಪನಂತೆ ವಿಕೆಟ್ ಕೀಪರ್ ಬ್ಯಾಟರ್&lt;/strong&gt;&lt;/h3&gt;&lt;p&gt;ಕಿರಿಮಗ ಅನ್ವಯ್ ದ್ರಾವಿಡ್ ಅಪ್ಪನಂತೆ ವಿಕೆಟ್ ಕೀಪರ್ ಬ್ಯಾಟರ್. 16ನೇ ವಯಸ್ಸಿನವರೆಗೆ ರಾಹುಲ್ ದ್ರಾವಿಡ್ ವಿಕೆಟ್ ಕೀಪಿಂಗ್ ಬ್ಯಾಟ್ಸ್&rsquo;ಮನ್ ಆಗಿದ್ದವರು. ಬಳಿಕ ಬ್ಯಾಟಿಂಗ್ ಕಡೆಯಷ್ಟೇ ಗಮನ ಹರಿಸಿ ವಿಕೆಟ್ ಕೀಪಿಂಗ್ ಬಿಟ್ಟಿದ್ದರು. ಕರ್ನಾಟಕ ರಣಜಿ ತಂಡಕ್ಕೆ ಕಾಲಿಟ್ಟದ್ದು pure ಬ್ಯಾಟ್ಸ್&rsquo;ಮನ್ ಆಗಿ. ಮತ್ತೆ ದ್ರಾವಿಡ್ ಕೀಪಿಂಗ್ ಗ್ಲೌಸ್ ತೊಟ್ಟದ್ದು 15 ವರ್ಷಗಳ ನಂತರ. ಅದು ಭಾರತ ತಂಡದಲ್ಲಿ. ಅನಿವಾರ್ಯತೆಗಾಗಿ. ವಿಕೆಟ್ ಕೀಪಿಂಗ್ ಮಾಡುವಂತೆ ದ್ರಾವಿಡ್ ಅವರನ್ನು ಬಲವಂತ ಮಾಡಿ ಒಪ್ಪಿಸಿದ್ದು ಆಗಿನ ಭಾರತ ತಂಡದ ನಾಯಕ ಸೌರವ್ ಗಂಗೂಲಿ. ಮುಂದಿನದ್ದು ಇತಿಹಾಸ. ಒಂದಿಡೀ ವಿಶ್ವಕಪ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಮಾಡಿ ಭಾರತ ಫೈನಲ್ ತಲುಪಲು ಕೊಡುಗೆ ನೀಡಿದವರು ದ್ರಾವಿಡ್.&lt;/p&gt;&lt;p&gt;ಕಿರಿಮಗ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್-ಬ್ಯಾಟರ್ ಆಗಿಯೇ ಕ್ರಿಕೆಟ್ ಆರಂಭಿಸಿದ್ದಾನೆ. 17ನೇ ವಯಸ್ಸಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಅನ್ವಯ್ ಶ್ರೀಲಂಕಾದಲ್ಲಿ ನಡೆಯುತ್ತಿರುವ ಅಂಡರ್-19 ಏಕದಿನ ಸರಣಿಯ 2ನೇ ಪಂದ್ಯದಲ್ಲಿ 67 ಎಸೆತಗಳಲ್ಲಿ 87 ರನ್ ಗಳಿಸಿ ಮಿಂಚಿದ್ದಾರೆ. ಅಣ್ಣ ಮಹಾರಾಜ ಟ್ರೋಫಿಯಲ್ಲಿ ಮಿಂಚುತ್ತಿದ್ದರೆ, ತಮ್ಮ ಭಾರತ ಅಂಡರ್-19 ತಂಡದ ಪರ ಮಿಂಚುತ್ತಿದ್ದಾನೆ.&lt;/p&gt;&lt;p&gt;ಇಬ್ಬರು ಮಕ್ಕಳಲ್ಲಿ ಅಪ್ಪನಂತೆ ಆಗುವವನು ಯಾರು..? ನನ್ನನ್ನು ಕೇಳಿದರೆ ಯಾರೂ ಆಗಲಾರರು. ಏಕೆಂದರೆ ವಿಶ್ವಕ್ಕೊಬ್ಬನೇ ರಾಹುಲ್ ದ್ರಾವಿಡ್. ಅವರಂಥಾ ಮತ್ತೊಬ್ಬ ಕ್ರಿಕೆಟಿಗ ಹುಟ್ಟಲಾರ. ಬ್ಯಾಟಿಂಗ್ ಶೈಲಿ, ಕೆಲ ನಿರ್ದಿಷ್ಟ ಹೊಡೆತಗಳನ್ನು ಬಾರಿಸುವ ರೀತಿ, ಕ್ರೀಸ್&rsquo;ನಲ್ಲಿ ನಿಲ್ಲುವ ಭಂಗಿ. ಹೀಗೆ ಆಟದಲ್ಲಿ ಮಕ್ಕಳು ಅಪ್ಪನನ್ನು ನೆನಪಿಸಬಹುದಷ್ಟೇ ಹೊರತು, ಅಪ್ಪನಂತೆ ಆಗಲು ಸಾಧ್ಯವೇ ಇಲ್ಲ. ಸಾಧನೆಯಲ್ಲಿ ಅಪ್ಪನನ್ನು ಮೀರಿಸಬಹುದೇ..? ಈ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ರಾಹುಲ್ ದ್ರಾವಿಡ್ ಅವರಂತೆ ಕ್ರಿಕೆಟ್ ಆಡುವುದು ಅಸಾಧ್ಯ. ಒಂದು ವೇಳೆ ಆಡಿ ಬಿಟ್ಟರೆ ಅಲ್ಲಿ ಸೃಷ್ಠಿಯಾಗಲಿರುವುದು ಮತ್ತೊಂದು ಚರಿತ್ರೆ.&lt;/p&gt;&lt;p&gt;ರಾಹುಲ್ ದ್ರಾವಿಡ್ ಅವರ ಮಕ್ಕಳಿಬ್ಬರಿಗೂ ಶುಭವಾಗಲಿ..&lt;/p&gt;]]></content:encoded>
            <category>cricket-sports</category>
            <dc:creator>Suvarna News</dc:creator>
            <atom:link href="https://kannada.asianetnews.com/cricket-sports/can-samit-and-anvay-dravid-match-rahul-dravid-legacy-kvn/articleshow-06uwf57"/>
        </item>
        <item>
            <title><![CDATA[ಇಂಡಿಯನ್‌ ಟೀಂಗೆ ಸೋಲು; ವಿದೇಶಿ ಪಿಚ್‌ಗಳಲ್ಲಿ ಬಯಲಾಯ್ತು IPL ಹೀರೋಗಳ ಅಸಲಿ ಆಟ! ಮಕಾಡೆ ಮಲಗಲು ಕಾರಣವೇನು?]]></title>
            <link>https://kannada.asianetnews.com/sports/indian-team-failure-reason-t20-series-against-ireland-and-england/articleshow-2kuan6r</link>
            <guid isPermaLink="true">https://kannada.asianetnews.com/sports/indian-team-failure-reason-t20-series-against-ireland-and-england/articleshow-2kuan6r</guid>
            <pubDate>Thu, 09 Jul 2026 18:00:22 +0530</pubDate>
            <description><![CDATA[&lt;p&gt;Why India lost to Ireland T20: IPL ಮುಗಿದಿದೆ. ಈಗ ಭಾರತ ಟೀಂ ಬೇರೆ ದೇಶದ ಟೀಂ ವಿರುದ್ಧ ಆಟ ಆಡಿ ಗೆಲ್ಲಬೇಕಿತ್ತು. ಆದರೆ ಇಂಗ್ಲೆಂಡ್&zwnj;, ಐರ್ಲೆಂಡ್&zwnj; ಸರಣಿ ಸೋಲಿನಲ್ಲಿ ಇಂಡಿಯನ್&zwnj; ಟೀಂ ಸೋತಿದೆ. ಇದಕ್ಕೆ ಕಾರಣ ಏನು? ಯಾಕೆ ಹೀಗಾಯ್ತು?&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0a9zjry2br2bwrpxkz39vt,imgname-gettyimages-2284575628-1783495982680.jpg" type="image/jpeg" height="390" width="690"/>
            <content:encoded><![CDATA[&lt;p&gt;Why India lost to Ireland T20: ಐಪಿಎಲ್&zwnj; ಮುಗಿದು ಈಗ ಭಾರತ ಟೀಂ ತನ್ನ ದೇಶಕ್ಕೋಸ್ಕರ ಆಡಬೇಕು. ಆದರೆ ನಾಲ್ಕು ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದ ಭಾರತ ತಂಡ, ಈಗ ಸತತ ಸೋಲುಗಳಿಂದ ಕಂಗಾಲಾಗಿದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 76 ರನ್&zwnj;ಗಳಿಗೆ ಆಲೌಟ್ ಆಗುವ ಮೂಲಕ ಭಾರತ ದೊಡ್ಡ ಮುಖಭಂಗ ಅನುಭವಿಸಿದೆ. ತಂಡದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಅಸಲಿ ಸಮಸ್ಯೆ ಬೇರೆಯೇ ಇದೆ.&lt;/p&gt;&lt;h2&gt;&lt;strong&gt;ಮುಖ್ಯ ಕಾರಣಗಳಿವು&lt;/strong&gt;&lt;/h2&gt;&lt;h2&gt;ಅಸ್ಥಿರ ನಾಯಕತ್ವ&lt;/h2&gt;&lt;p&gt;ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನ ಹಾಗೂ ಮೈದಾನದಲ್ಲಿ ಅವರ ತಪ್ಪು ನಿರ್ಧಾರಗಳು ಟೀಕೆಗೆ ಒಳಗಾಗಿವೆ.&lt;/p&gt;&lt;h2&gt;ಐಪಿಎಲ್ ಹ್ಯಾಂಗೋವರ್&lt;/h2&gt;&lt;p&gt;ಭಾರತದ ಬ್ಯಾಟರ್&zwnj;ಗಳು ಐಪಿಎಲ್&zwnj;ನ ಫ್ಲಾಟ್ ಪಿಚ್&zwnj;ಗಳಲ್ಲಾಡುವಂತೆ ವಿದೇಶದಲ್ಲೂ ಅತಿಯಾದ ಆಕ್ರಮಣಕಾರಿ ಆಟಕ್ಕೆ ಕೈಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಂಗ್ಲೆಂಡ್&zwnj;ನಂತಹ ಪಿಚ್&zwnj;ಗಳಿಗೆ ಬೇಕಾದ ತಾಳ್ಮೆ ನಮ್ಮ ಆಟಗಾರರಲ್ಲಿ ಕಾಣಿಸುತ್ತಿಲ್ಲ.&lt;/p&gt;&lt;p&gt;ಫಾರ್ಮ್&zwnj;ನಲ್ಲಿಲ್ಲದ ಸಂಜು ಸ್ಯಾಮ್ಸನ್ ಬದಲಿಗೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕಠಿಣ ವಿದೇಶಿ ಪ್ರವಾಸಕ್ಕೆ ಆಯ್ಕೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.&lt;/p&gt;&lt;p&gt;ಬೌಲಿಂಗ್ ಮತ್ತು ಫೀಲ್ಡಿಂಗ್&zwnj;ನಲ್ಲಿ ಆಟಗಾರರು ಸಾಕಷ್ಟು ತಪ್ಪುಗಳನ್ನು ಮಾಡುತ್ತಿದ್ದಾರೆ (ಉದಾಹರಣೆಗೆ: ರವಿ ಬಿಷ್ಣೋಯ್ ಅವರ ನೋ-ಬಾಲ್ ಮತ್ತು ದುಬಾರಿ ಬೌಲಿಂಗ್).&lt;/p&gt;&lt;p&gt;ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಅವರಂತಹ ಹಿರಿಯ ಮತ್ತು ಅನುಭವಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಯುವ ಆಟಗಾರರ ದಂಡು ವಿದೇಶಿ ಪಿಚ್&zwnj;ಗಳಲ್ಲಿ ಕಷ್ಟಪಡುತ್ತಿದೆ.&lt;/p&gt;&lt;p&gt;ಕೋಚ್ ಗೌತಮ್ ಗಂಭೀರ್ ತಂಡದಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನಿಸುತ್ತಿರುವುದು ನಿಜ. ಆದರೆ, ಸದ್ಯದ ಭಾರತ ತಂಡ ವಿಶ್ವಕಪ್ ಗೆದ್ದ ತಂಡದಂತೆ ಭಯವಿಲ್ಲದೆ ಆಡಲು ಬಯಸುತ್ತಿದೆ, ಆದರೆ ಆ ಆಟಕ್ಕೆ ಬೇಕಾದ ಅನುಭವ ಸದ್ಯದ ತಂಡದಲ್ಲಿಲ್ಲ. ತಂಡವು ಎರಡು ಗೊಂದಲಗಳ ನಡುವೆ ಸಿಲುಕಿಕೊಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sports/indian-team-failure-reason-t20-series-against-ireland-and-england/articleshow-2kuan6r"/>
        </item>
        <item>
            <title><![CDATA[ಅಭಿಷೇಕ್ ಶರ್ಮಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹೈಕೋರ್ಟ್‌ನಿಂದ ಸಮನ್ಸ್ ಜಾರಿ]]></title>
            <link>https://kannada.asianetnews.com/cricket-sports/delhi-high-court-issues-summons-to-online-platforms-in-abhishek-sharma-case-gkn/articleshow-410qfc9</link>
            <guid isPermaLink="true">https://kannada.asianetnews.com/cricket-sports/delhi-high-court-issues-summons-to-online-platforms-in-abhishek-sharma-case-gkn/articleshow-410qfc9</guid>
            <pubDate>Thu, 09 Jul 2026 16:23:11 +0530</pubDate>
            <description><![CDATA[&lt;p&gt;ಕೆಲವು ಆನ್&zwnj;ಲೈನ್ ವೇದಿಕೆಗಳು ಟೀಂ ಇಂಡಿಯಾ ಸ್ಟಾರ್ ಅಭಿಷೇಕ್ ಶರ್ಮಾ ಅವರ ನಿದ್ದೆಗೆಡಿಸಿದ್ದವು. ಅವುಗಳ ವಿರುದ್ಧ ಕಾನೂನು ಸಮರ ಸಾರಿದ್ದ ಅಭಿಷೇಕ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಏನಿದು ಕೇಸ್ ಅನ್ನೋ ವಿವರ ಇಲ್ಲಿದೆ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx37z3d9ppqa49zgx81v679h,imgname-abhishek-sharma-court-case-1783594192297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್ ಶರ್ಮಾ ಮೈದಾನದ ಹೊರಗೆ ಕಾನೂನು ಸಮರಕ್ಕಿಳಿದಿದ್ದಾರೆ. ತಮ್ಮ ಹೆಸರು, ಭಾವಚಿತ್ರ ಮತ್ತು ವ್ಯಕ್ತಿತ್ವವನ್ನು ಅನುಮತಿಯಿಲ್ಲದೆ ಆನ್&zwnj;ಲೈನ್&zwnj;ನಲ್ಲಿ ಬಳಸುತ್ತಿರುವವರ ವಿರುದ್ಧ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಅಭಿಷೇಕ್ ಶರ್ಮಾ ಅವರ ಹೆಸರು ಮತ್ತು ಭಾವಚಿತ್ರಗಳನ್ನು ವಿವಿಧ ಆನ್&zwnj;ಲೈನ್ ವೇದಿಕೆಗಳಲ್ಲಿ ಅನುಮತಿಯಿಲ್ಲದೆ ಬಳಸಲಾಗುತ್ತಿದೆ. ಅಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI) ಬಳಸಿ ಅವರ ಚಿತ್ರಗಳನ್ನು ತಿರುಚಲಾಗಿದೆ (Manipulated content) ಎಂಬುದು ಅವರ ದೂರು. ಇದನ್ನು ವ್ಯಕ್ತಿತ್ವದ ಹಕ್ಕುಗಳ (Personality Rights) ಉಲ್ಲಂಘನೆ ಎಂದು ಅವರು ನ್ಯಾಯಾಲಯದಲ್ಲಿ ವಾದಿಸಿದ್ದಾರೆ.&lt;/p&gt;&lt;h3&gt;&lt;strong&gt;ನ್ಯಾಯಾಲಯದ ಕ್ರಮ&lt;/strong&gt;&lt;/h3&gt;&lt;p&gt;ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಥವಾ ಇತರ ಕಾನೂನುಬದ್ಧ ಮಾರ್ಗಗಳ ಮೂಲಕ ನೋಟಿಸ್ ನೀಡುವಂತೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ನಿಗದಿಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ಇಂಟರ್ನೆಟ್ ಸ್ವಚ್ಛಗೊಳಿಸುವುದು ನಮ್ಮ ಕೆಲಸವಲ್ಲ ಎಂದ ಮೆಟಾ&lt;/strong&gt;&lt;/h3&gt;&lt;p&gt;ಫೇಸ್&zwnj;ಬುಕ್ ಮತ್ತು ಇನ್&zwnj;ಸ್ಟಾಗ್ರಾಮ್&zwnj;ನ ಮಾತೃ ಸಂಸ್ಥೆ 'ಮೆಟಾ' (Meta) ಪರವಾಗಿ ಹಾಜರಾದ ವಕೀಲ ವರುಣ್ ಪಾಠಕ್, ಅಭಿಷೇಕ್ ಶರ್ಮಾ ಅವರ ಆಕ್ಷೇಪಾರ್ಹ ಪೋಸ್ಟ್&zwnj;ಗಳ ಪೈಕಿ ಹೆಚ್ಚಿನ ಲಿಂಕ್&zwnj;ಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ. ಈಗ ಕೇವಲ ಎರಡು ಲಿಂಕ್&zwnj;ಗಳು ಮಾತ್ರ ಲಭ್ಯವಿವೆ ಎಂದು ತಿಳಿಸಿದರು. ಇದೇ ವೇಳೆ, ಇಂಟರ್ನೆಟ್&zwnj;ನಲ್ಲಿರುವ ಪ್ರತಿಯೊಂದು ಪೋಸ್ಟ್ ಅನ್ನು ಪರಿಶೀಲಿಸಿ ಕ್ಲೀನ್ ಅಪ್ ಮಾಡುವುದು ಮಧ್ಯವರ್ತಿ ಸಂಸ್ಥೆಗಳಿಗೆ ಅಸಾಧ್ಯ ಎಂದು ಮೆಟಾ ವಾದಿಸಿದೆ.&lt;/p&gt;&lt;p&gt;ವಿಚಾರಣೆ ವೇಳೆ ಜಸ್ಟಿಸ್ ಜ್ಯೋತಿ ಸಿಂಗ್ ಅವರು ಒಂದು ಮಹತ್ವದ ಅಂಶವನ್ನು ಪ್ರಸ್ತಾಪಿಸಿದರು. ವ್ಯಕ್ತಿತ್ವದ ಹಕ್ಕುಗಳ ಉಲ್ಲಂಘನೆ ಮತ್ತು ಮಾನಹಾನಿ (Defamation) ಪ್ರಕರಣಗಳ ನಡುವೆ ತುಂಬಾ ತೆಳುವಾದ ಗೆರೆಯಿದೆ. ಇವೆರಡೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂದು ಅಭಿಪ್ರಾಯಪಟ್ಟರು. ಸದ್ಯಕ್ಕೆ ಪ್ರತಿವಾದಿಗಳಿಗೆ ಸಮನ್ಸ್ ಜಾರಿಯಾಗಿದ್ದು, ಅವರು ನೀಡುವ ಉತ್ತರದ ಮೇಲೆ ನ್ಯಾಯಾಲಯವು ತಡೆಯಾಜ್ಞೆ (Injunction) ನೀಡುವ ಬಗ್ಗೆ ನಿರ್ಧರಿಸಲಿದೆ.&lt;/p&gt;&lt;p&gt;ಸದ್ಯ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಪರವಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಇಂಗ್ಲೆಂಡ್&zwnj;ನಲ್ಲಿದ್ದಾರೆ. ಮೈದಾನದಲ್ಲಿ ಬ್ಯಾಟ್ ಮೂಲಕ ಸದ್ದು ಮಾಡುತ್ತಿರುವ ಅವರು, ಮೈದಾನದ ಹೊರಗೆ ತಮ್ಮ ಹಕ್ಕುಗಳ ರಕ್ಷಣೆಗಾಗಿ ನಡೆಸುತ್ತಿರುವ ಈ ಹೋರಾಟ ಗಮನ ಸೆಳೆದಿದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/delhi-high-court-issues-summons-to-online-platforms-in-abhishek-sharma-case-gkn/articleshow-410qfc9"/>
        </item>
        <item>
            <title><![CDATA[ಮಹಿಳಾ ಟಿ20 ವಿಶ್ವಕಪ್: ಶ್ರೇಷ್ಠ ತಂಡ ಪ್ರಕಟಿಸಿದ ಐಸಿಸಿ..! ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ]]></title>
            <link>https://kannada.asianetnews.com/cricket-sports/shri-charani-lone-indian-in-icc-womens-t20-world-cup-2026-team-of-the-tournament-kvn/articleshow-59ig9xm</link>
            <guid isPermaLink="true">https://kannada.asianetnews.com/cricket-sports/shri-charani-lone-indian-in-icc-womens-t20-world-cup-2026-team-of-the-tournament-kvn/articleshow-59ig9xm</guid>
            <pubDate>Wed, 08 Jul 2026 12:52:46 +0530</pubDate>
            <description><![CDATA[2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಐಸಿಸಿ ಪ್ರಕಟಿಸಿದ 'ಟೀಮ್ ಆಫ್&zwnj; ದಿ ಟೂರ್ನಮೆಂಟ್'ನಲ್ಲಿ ನಾಲ್ವರು ಆಸೀಸ್ ಆಟಗಾರ್ತಿಯರು ಸ್ಥಾನ ಪಡೆದರೆ, ಭಾರತದ ಪರ ಶ್ರೀ ಚಾರಿಣಿ ಏಕೈಕ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwsqmnw1kp20z96q000kxmwq,imgname-womens-t20-world-cup-2026-1783275083649.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಸೋಫಿ ಮೂಲಿನ್ಯುಕ್ಸ್ ನೇತೃತ್ವದ ಆಸ್ಟ್ರೇಲಿಯಾ ಚಾಂಪಿಯನ್ ಆಗುವುದರೊಂದಿಗೆ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯು ಅಧಿಕೃತವಾಗಿ ತೆರೆ ಕಂಡಿದೆ. ಇದರ ಬೆನ್ನಲ್ಲೇ ಐಸಿಸಿಯು ಈ ಬಾರಿಯ ಟೀಮ್ ಆಫ್&zwnj; ದಿ ಟೂರ್ನಮೆಂಟ್ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಏಕೈಕ ಭಾರತೀಯ ಆಟಗಾರ್ತಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;ಇಂಗ್ಲೆಂಡ್ ಹಾಗೂ ವೇಲ್ಸ್ ಜಂಟಿಯಾಗಿ ಆಯೋಜಿಸಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಫೈನಲ್&zwnj;ನಲ್ಲಿ ಮಣಿಸುವ ಮೂಲಕ ಕಾಂಗರೂ ಪಡೆ ದಾಖಲೆಯ ಏಳನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಇದೀಗ ಐಸಿಸಿ ಪ್ರಕಟಿಸಿದ ಟೀಮ್ ಆಫ್&zwnj; ದಿ ಟೂರ್ನಮೆಂಟ್&zwnj;ನಲ್ಲೂ ಆಸೀಸ್ ಆಟಗಾರ್ತಿಯರೇ ಸಿಂಹಪಾಲು ಪಡೆದುಕೊಂಡಿದ್ದಾರೆ. ಈ ಬಾರಿಯ ಟೀಮ್ ಆಫ್ ದಿ ಟೂರ್ನಮೆಂಟ್&zwnj;ನಲ್ಲಿ ಆಸೀಸ್ ನಾಯಕಿ ಸೋಫಿ ಮೂಲಿನ್ಯುಕ್ಸ್, ವಿಕೆಟ್ ಕೀಪರ್ ಬ್ಯಾಟರ್ ಬೆಥ್ ಮೂನಿ, ದಿಗ್ಗಜೆ ಆಲ್ರೌಂಡರ್ ಎಲೈಸಿ ಪೆರ್ರಿ ಹಾಗೂ ಆಶ್ಲೆ ಗಾರ್ಡ್ನರ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಲ್ವರು ಆಟಗಾರ್ತಿಯರು ಕಾಂಗರೂ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.&lt;/p&gt;&lt;p&gt;ಆಸೀಸ್ ಮೂಲದ ಬೆಥ್ ಮೂನಿ 7 ಪಂದ್ಯಗಳಿಂದ 238 ರನ್ ಗಳಿಸಿದರೆ, ವಿಕೆಟ್ ಕೀಪಿಂಗ್&zwnj;ನಲ್ಲಿ 5 ಮಹತ್ವದ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಆಲ್ರೌಂಡರ್ ಪೆರ್ರಿ 198 ರನ್ ಹಾಗೂ ಆರು ವಿಕೆಟ್ ಕಬಳಿಸಿದ್ದರು. ಆಶ್ಲೆ ಗಾರ್ಡ್ನರ್ ಆರು ಪಂದ್ಯಗಳಿಂದ 150 ರನ್ ಹಾಗೂ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರೆ, ನಾಯಕಿ ಸೋಫಿ 7 ಪಂದ್ಯಗಳಿಂದ 11 ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.&lt;/p&gt;&lt;h2&gt;&lt;strong&gt;ಏಕೈಕ ಭಾರತೀಯ ಆಟಗಾರ್ತಿಗೆ ಸ್ಥಾನ:&lt;/strong&gt;&lt;/h2&gt;&lt;p&gt;2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್&zwnj;ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡದ ಅಭಿಯಾನ ಗ್ರೂಪ್ ಹಂತದಲ್ಲೇ ಕೊನೆಯಾಗಿತ್ತು. ಇದರ ಹೊರತಾಗಿಯೂ ಗ್ರೂಪ್&zwnj; ಹಂತದಲ್ಲೇ ಅದ್ಬುತ ಪ್ರದರ್ಶನ ತೋರಿದ್ದ ಶ್ರೀ ಚಾರಿಣಿ, ಐಸಿಸಿ ಟೀಮ್&zwnj; ಆಫ್&zwnj; ದಿ ಟೂರ್ನಮೆಂಟ್&zwnj;ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಭಾರತ ಪರ ಅದ್ಭುತ ಪ್ರದರ್ಶನ ತೋರಿದ್ದ ಶ್ರೀ ಚಾರಿಣಿ ಕೇವಲ ಐದು ಪಂದ್ಯಗಳಲ್ಲೇ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು.&lt;/p&gt;&lt;p&gt;ಐಸಿಸಿ ಪ್ರಕಟಿಸಿದ ಟೀಮ್ ಆಫ್&zwnj; ದಿ ಟೂರ್ನಮೆಂಟ್&zwnj;ನಲ್ಲಿ ಆರಂಭಿಕರಾಗಿ ಬೆಥ್ ಮೂನಿ ಹಾಗೂ ನ್ಯಾಟ್ ಸೀವರ್ ಬ್ರಂಟ್ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಎಲೈಸಿ ಪೆರ್ರಿ, ನಾಲ್ಕನೇ ಕ್ರಮಾಂಕದಲ್ಲಿ ಐರ್ಲೆಂಡ್&zwnj;ನ ಓರ್ಲಾ ಪ್ರೆಂಡರ್ಗೆಸ್ಟ್&zwnj;, ಐದನೇ ಕ್ರಮಾಂಕದಲ್ಲಿ ಶ್ರೀಲಂಕಾದ ನಿಲಕ್ಸಿಕಾ ಸಿಲ್ವಾ ಸ್ಥಾನ ಪಡೆದಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್ರೌಂಡರ್ ಮರಿಜ್ಜಾನೆ ಕಾಪ್, ಏಳನೇ ಕ್ರಮಾಂಕದಲ್ಲಿ ಆಸೀಸ್ ಮೂಲದ ಅನುಭವಿ ಆಲ್ರೌಂಡರ್ ಆಶ್ ಗಾರ್ಡ್ನರ್ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಪಾಕಿಸ್ತಾನದ ಫಾತಿಮಾ ಸನಾ, ಆಸೀಸ್&zwnj; ನಾಯಕಿ ಸೋಫಿ ಮೂಲಿನ್ಯುಕ್ಸ್, ಭಾರತದ ಶ್ರೀ ಚಾರಣಿ ಸ್ಥಾನ ಪಡೆದಿದ್ದಾರೆ. 12ನೇ ಆಟಗಾರ್ತಿಯಾಗಿ ಸ್ಕಾಟ್ಲೆಂಡ್&zwnj;ನ ಬ್ಯಾಟರ್ ಡಾರ್ಸಿ ಕಾರ್ಟರ್ ಸ್ಥಾನ ಪಡೆದಿದ್ದಾರೆ.&lt;/p&gt;&lt;h3&gt;&lt;strong&gt;2026ರ ಐಸಿಸಿ ಟಿ20 ಟಿಮ್ ಆಫ್&zwnj; ದಿ ಟೂರ್ನಮೆಂಟ್ ಹೀಗಿದೆ ನೋಡಿ:&lt;/strong&gt;&lt;/h3&gt;&lt;p&gt;ಬೆಥ್ ಮೂನಿ(ವಿಕೆಟ್ ಕೀಪರ್), ನ್ಯಾಟ್ ಸೀವರ್ ಬ್ರಂಟ್, ಎಲೈಸಿ ಪರ್ರಿ, ಓರ್ಲಾ ಪ್ರೆಂಡರ್ಗೆಸ್ಟ್&zwnj;, ನಿಲಕ್ಸಿಕಾ ಸಿಲ್ವಾ, ಮರಿಜ್ಜಾನೆ ಕಾಪ್, ಆಶ್ ಗಾರ್ಡ್ನರ್, ಫಾತಿಮಾ ಸನಾ, ಸೋಫಿ ಮೂಲಿನ್ಯುಕ್ಸ್(ನಾಯಕಿ), ಶ್ರೀ ಚಾರಣಿ. (ಡಾರ್ಸಿ ಕಾರ್ಟರ್, 12ನೇ ಆಟಗಾರ್ತಿ).&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/shri-charani-lone-indian-in-icc-womens-t20-world-cup-2026-team-of-the-tournament-kvn/articleshow-59ig9xm"/>
        </item>
        <item>
            <title><![CDATA[IND vs ENG: ಟೀಂ ಇಂಡಿಯಾ ಹೆಡ್‌ ಕೋಚಿಂದ್ ಬಿಗ್‌ ಮೇಸೇಜ್‌; ವೈಭವ್‌ ಸೇರಿ ಇನ್ನೋರ್ವಗೆ ಶಾಕ್‌? ಇನ್ನಿಬ್ಬರಿಗೆ ಮಾಡು ಇಲ್ಲವೇ, ಮಡಿ!]]></title>
            <link>https://kannada.asianetnews.com/gallery/sports/team-india-coach-stern-message-shock-in-store-for-vaibhav-1-while-2-others-get-do-or-die-ultimatum-87an2xk</link>
            <guid isPermaLink="true">https://kannada.asianetnews.com/gallery/sports/team-india-coach-stern-message-shock-in-store-for-vaibhav-1-while-2-others-get-do-or-die-ultimatum-87an2xk</guid>
            <pubDate>Wed, 08 Jul 2026 22:38:57 +0530</pubDate>
            <description><![CDATA[&lt;p&gt;ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಭಾರತಕ್ಕೆ 'ಮಾಡು ಇಲ್ಲವೇ ಮಡಿ' ಸನ್ನಿವೇಶ ಸೃಷ್ಟಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡವು, ಬ್ಯಾಟಿಂಗ್ ಬಲಪಡಿಸಲು ಪ್ಲೇಯಿಂಗ್ ಇಲೆವೆನ್&zwnj;ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಿದೆ ಎನ್ನಲಾಗಿದೆ. ಈ ಕುರಿತು ಗಂಭೀರ್&zwnj; ಮಹತ್ವದ ಸುಳಿವು ನೀಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr1q91s8bk52w1ermd1r1f6,imgname-team-india--2--1783218545719.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯ ಭಾರತಕ್ಕೆ 'ಮಾಡು ಇಲ್ಲವೇ ಮಡಿ' ಸನ್ನಿವೇಶ ಸೃಷ್ಟಿಸಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡವು, ಬ್ಯಾಟಿಂಗ್ ಬಲಪಡಿಸಲು ಪ್ಲೇಯಿಂಗ್ ಇಲೆವೆನ್&zwnj;ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಿದೆ ಎನ್ನಲಾಗಿದೆ. ಈ ಕುರಿತು ಗಂಭೀರ್&zwnj; ಮಹತ್ವದ ಸುಳಿವು ನೀಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ನಾಲ್ಕನೇ ಪಂದ್ಯ ಗುರುವಾರ ಬ್ರಿಸ್ಟಲ್&zwnj;ನಲ್ಲಿ ನಡೆಯಲಿದ್ದು, ಇದು ಟೀಮ್ ಇಂಡಿಯಾಗೆ 'ಡೂ ಆರ್ ಡೈ' ಪಂದ್ಯವಾಗಿ ಪರಿಣಮಿಸಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ಅಂತ್ಯಗೊಂಡ ಬಳಿಕ ಉಳಿದ ಎರಡು ಪಂದ್ಯಗಳಲ್ಲಿ ಭಾರತ ಸೋಲು ಕಂಡಿದೆ. ಹೀಗಾಗಿ ಸರಣಿ ಜೀವಂತವಾಗಿಡಬೇಕಾದರೆ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.&lt;/p&gt;&lt;img&gt;&lt;p&gt;ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಅಯ್ಯರ್ ನಾಯಕತ್ವ ವಹಿಸಿಕೊಂಡ ನಂತರ ಭಾರತ ಕಳೆದ ಐದು ಟಿ20 ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದಿರುವುದು ತಂಡದ ಮೇಲೆ ಹೆಚ್ಚುವರಿ ಒತ್ತಡ ತಂದಿದೆ. ಅದರಲ್ಲೂ ಮೂರನೇ ಟಿ20ಯಲ್ಲಿ ಕೇವಲ 76 ರನ್&zwnj;ಗಳಿಗೆ ಆಲೌಟ್ ಆದ ಬ್ಯಾಟಿಂಗ್ ವೈಫಲ್ಯ ತಂಡದ ಆಯ್ಕೆ ಸಮಿತಿಗೆ ಹಾಗೂ ಕೋಚಿಂಗ್ ಸ್ಟಾಫ್&zwnj;ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಪರಿಣಾಮವಾಗಿ ನಾಲ್ಕನೇ ಟಿ20ಗೆ ಪ್ಲೇಯಿಂಗ್ ಇಲೆವೆನ್&zwnj;ನಲ್ಲಿ ಬದಲಾವಣೆಗಳು ಬಹುತೇಕ ಖಚಿತ ಎನ್ನಲಾಗುತ್ತಿದೆ.&lt;/p&gt;&lt;img&gt;&lt;p&gt;ಯುವ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಆರಂಭ ನೀಡಲು ವಿಫಲರಾಗಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್&zwnj;ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಸಂಜು ತಂಡಕ್ಕೆ ಮರಳಿದರೆ ಟಾಪ್ ಆರ್ಡರ್&zwnj;ಗೆ ಸ್ಥಿರತೆ ಸಿಗುವುದರ ಜೊತೆಗೆ ಪವರ್&zwnj;ಪ್ಲೇನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಆಯ್ಕೆಯೂ ಲಭ್ಯವಾಗಲಿದೆ. ಅದರಲ್ಲೂ ಟೀಂ ಇಂಡಿಯಾ ಹೆಡ್&zwnj; ಕೋಚ್&zwnj; ಸಂಜು ಆಡಿಸುವ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ, ಟೀಮ್ ಮ್ಯಾನೇಜ್&zwnj;ಮೆಂಟ್ ವೈಭವ್ ಅವರನ್ನು ಉಳಿಸಿಕೊಂಡೇ ಸಂಜು ಅವರನ್ನು ತಂಡದಲ್ಲಿ ಆಡಿಸಲು ನಿರ್ಧರಿಸಿದರೆ, ಅಭಿಷೇಕ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ಮೂವರು ಬ್ಯಾಟರ್&zwnj;ಗಳಿಗೂ ಅವಕಾಶ ನೀಡಬೇಕೆಂದರೆ ಸತತವಾಗಿ ರನ್ ಗಳಿಸಲು ವಿಫಲವಾಗುತ್ತಿರುವ ತಿಲಕ್ ವರ್ಮಾ ಅವರನ್ನು ಹೊರಗಿಡುವ ಆಯ್ಕೆ ಪರಿಗಣಿಸಲಾಗುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ಅವರ ಬ್ಯಾಟಿಂಗ್ ಪ್ರಭಾವ ಬೀರದ ಕಾರಣ ಈ ನಿರ್ಧಾರಕ್ಕೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ಸಂಜು ಸ್ಯಾಮ್ಸನ್ ತಂಡಕ್ಕೆ ಸೇರ್ಪಡೆಯಾದರೆ ಬ್ಯಾಟಿಂಗ್ ಲೈನ್&zwnj;ಅಪ್&zwnj;ನಲ್ಲಿ ಎಡ-ಬಲಗೈ ಬ್ಯಾಟರ್&zwnj;ಗಳ ಸಮತೋಲನವೂ ಸುಧಾರಿಸಲಿದೆ. ಪ್ರಸ್ತುತ ಟಾಪ್ ಆರ್ಡರ್&zwnj;ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮಾತ್ರ ಬಲಗೈ ಬ್ಯಾಟರ್ ಆಗಿದ್ದು, ಉಳಿದವರು ಎಡಗೈ ಬ್ಯಾಟರ್&zwnj;ಗಳಾಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಎದುರಾಳಿ ತಂಡದ ಸ್ಪಿನ್ ದಾಳಿಯನ್ನು ಎದುರಿಸಲು ಬಲ-ಎಡ ಸಂಯೋಜನೆ ಪ್ರಮುಖ ತಂತ್ರವಾಗಿ ಪರಿಣಮಿಸುತ್ತದೆ.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್ ಅವರ ಪುನರಾಗಮನದ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ. ಸಂಜು ಸಂಪೂರ್ಣ ಫಿಟ್ ಆಗಿದ್ದು, ಯಾವುದೇ ಹಂತದಲ್ಲಿ ಪ್ಲೇಯಿಂಗ್ ಇಲೆವೆನ್&zwnj;ಗೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದರಿಂದ ನಾಲ್ಕನೇ ಪಂದ್ಯದಲ್ಲಿ ಸಂಜು ಅವಕಾಶ ಪಡೆಯುವ ಸಾಧ್ಯತೆ ಇನ್ನಷ್ಟು ಬಲಗೊಂಡಿದೆ.&lt;/p&gt;&lt;img&gt;&lt;p&gt;ಬೌಲಿಂಗ್ ವಿಭಾಗದಲ್ಲಿಯೂ ಬದಲಾವಣೆ ಸಾಧ್ಯತೆ ಇದೆ. ಪ್ರಮುಖ ಲೆಗ್-ಸ್ಪಿನ್ನರ್ ವರುಣ್ ಚಕ್ರವರ್ತಿ ಇತ್ತೀಚಿನ ಪಂದ್ಯಗಳಲ್ಲಿ ವಿಕೆಟ್ ಪಡೆಯಲು ಹಾಗೂ ರನ್ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಆಲ್&zwnj;ರೌಂಡರ್ ವಾಷಿಂಗ್ಟನ್ ಸುಂದರ್ ಅಥವಾ ಯುವ ಸ್ಪಿನ್ನರ್ ಸೂರ್ಯಾಂಶ್ ಶೆಡ್ಜ್ ಅವರಿಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಾಷಿಂಗ್ಟನ್ ತಂಡಕ್ಕೆ ಹೆಚ್ಚುವರಿ ಬ್ಯಾಟಿಂಗ್ ಆಳವನ್ನೂ ಒದಗಿಸಬಲ್ಲ ಕಾರಣ ಅವರಿಗೆ ಆದ್ಯತೆ ಸಿಗುವ ಸಾಧ್ಯತೆ ಹೆಚ್ಚಿದೆ.ವೇಗದ ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ಹೊಸ ಚೆಂಡಿನ ಜವಾಬ್ದಾರಿ ವಹಿಸುವ ನಿರೀಕ್ಷೆಯಿದ್ದು, ಪ್ರಿನ್ಸ್ ಯಾದವ್ ಡೆತ್ ಓವರ್&zwnj;ಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಮಧ್ಯಮ ಓವರ್&zwnj;ಗಳಲ್ಲಿ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್ (ಅಥವಾ ವರುಣ್ ಚಕ್ರವರ್ತಿ) ಸ್ಪಿನ್ ದಾಳಿಯನ್ನು ಮುನ್ನಡೆಸುವ ಸಾಧ್ಯತೆ ಇದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/sports/team-india-coach-stern-message-shock-in-store-for-vaibhav-1-while-2-others-get-do-or-die-ultimatum-87an2xk"/>
        </item>
        <item>
            <title><![CDATA[ನೆಟ್ಸ್‌ ಅಭ್ಯಾಸದ ವೇಳೆ ವೈಭವ್‌ ಸೂರ್ಯವಂಶಿಗೆ ಗಾಯ, ಇಂದಿನ ಪಂದ್ಯದಲ್ಲಿ ಆಡೋದು ಅನುಮಾನ?]]></title>
            <link>https://kannada.asianetnews.com/cricket-sports/vaibhav-suryavanshi-injured-nets-ind-vs-eng-3rd-t20-raghavendra-throwdown-san/articleshow-8oex590</link>
            <guid isPermaLink="true">https://kannada.asianetnews.com/cricket-sports/vaibhav-suryavanshi-injured-nets-ind-vs-eng-3rd-t20-raghavendra-throwdown-san/articleshow-8oex590</guid>
            <pubDate>Tue, 07 Jul 2026 18:11:18 +0530</pubDate>
            <description><![CDATA[&lt;p&gt;ಭಾರತೀಯ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ನೆಟ್ಸ್&zwnj;ನಲ್ಲಿ ಗಾಯಗೊಂಡಿದ್ದಾರೆ. ಚೆಂಡು ಪಕ್ಕೆಲುಬಿಗೆ ಬಡಿದು ನೋವಿನಿಂದ ನರಳುತ್ತಿದ್ದರೂ, ಸಹಾಯಕ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ವಿವಾದಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy9e9nq2371gytzraqtfvxz,imgname-vaibhav-suryavanshi-1783427966647.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಟಿಂಗ್&zwnj;ಹ್ಯಾಂ (ಜು.7):&lt;/strong&gt; ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಕಿರಿಯ ಹಾಗೂ ಭರವಸೆಯ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Suryavanshi) ನೆಟ್ಸ್&zwnj;ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆಂಡು ಬಲವಾಗಿ ಬಡಿದು ಯುವ ಆಟಗಾರ ಮೈದಾನದಲ್ಲೇ ನೋವಿನಿಂದ ನರಳಾಡುತ್ತಿದ್ದರೂ, ಸಹಾಯಕ ಸಿಬ್ಬಂದಿ ಹಾಗೂ ಕೋಚ್ ಅದನ್ನು ನಿರ್ಲಕ್ಷಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವೆ ನಾಟಿಂಗ್&zwnj;ಹ್ಯಾಂನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಇಂದು ಮೂರನೇ ಟಿ20 ಪಂದ್ಯ ನಡೆಯಲಿದ್ದು, ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಎದುರಾಗಿರುವ ಈ ಘಟನೆಯು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.&lt;/p&gt;&lt;p&gt;ಮೂರನೇ ಟಿ20 ಪಂದ್ಯಕ್ಕಾಗಿ ವೈಭವ್ ಸೂರ್ಯವಂಶಿ ನೆಟ್ಸ್&zwnj;ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದರು. ಈ ವೇಳೆ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರು ವೈಭವ್&zwnj;ಗೆ ಬಾಲ್&zwnj; ಎಸೆಯುತ್ತಿದ್ದರು. ರಾಘವೇಂದ್ರ ಎಸೆದ ಅತ್ಯಂತ ವೇಗದ ಶಾರ್ಟ್ ಪಿಚ್ ಚೆಂಡನ್ನು ಸರಿಯಾಗಿ ಬ್ಯಾಟ್ ಮಾಡಲಾಗದೆ ವೈಭವ್ ತಬ್ಬಿಬ್ಬಾದರು. ಆ ವೇಗದ ಚೆಂಡು ನೇರವಾಗಿ ವೈಭವ್ ಅವರ ಪಕ್ಕೆಲುಬು (Ribs/Stomach) ಮತ್ತು ಹೊಟ್ಟೆಯ ಭಾಗಕ್ಕೆ ಬಲವಾಗಿ ಅಪ್ಪಳಿಸಿತು. ಹೊಡೆತದ ತೀವ್ರತೆಗೆ ತತ್ತರಿಸಿದ ವೈಭವ್ ತಕ್ಷಣವೇ ಬ್ಯಾಟ್ ಕೆಳಗಿಟ್ಟು, ಹೊಟ್ಟೆ ಹಿಡಿದುಕೊಂಡು ತೀವ್ರ ನೋವಿನಿಂದ ನರಳುತ್ತಾ ಅಲ್ಲೇ ಪಿಚ್ ಮೇಲೆಯೇ ಕುಳಿತುಕೊಂಡರು.&lt;/p&gt;&lt;h2&gt;&lt;strong&gt;ನೋವನ್ನು ಗಮನಿಸದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ವೈಭವ್ ಅಷ್ಟೊಂದು ತೀವ್ರ ನೋವಿನಿಂದ ನರಳುತ್ತಿದ್ದರೂ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಆಟಗಾರನ ಬಳಿ ಬಂದು ಪ್ರಥಮ ಚಿಕಿತ್ಸೆ ನೀಡುವ ಬದಲಿಗೆ ಕೇವಲ ಚೆಂಡನ್ನು ಎತ್ತಿಕೊಂಡು ವೈಭವ್&zwnj;ಗೆ ಏನೋ ಹೇಳುತ್ತಾ ಬೇಜವಾಬ್ದಾರಿಯಿಂದ ತಮ್ಮ ಎಂದಿನ ಬೌಲಿಂಗ್ ಮಾರ್ಕ್&zwnj;ಗೆ ವಾಪಸ್ ನಡೆದಿದ್ದಾರೆ. ಕೋಚ್ ಮತ್ತು ಸಹಾಯಕ ಸಿಬ್ಬಂದಿಯ ಈ ವರ್ತನೆಗೆ ಇಂಟರ್ನೆಟ್&zwnj;ನಲ್ಲಿ ಸದ್ಯ ಭಾರಿ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;ಪದಾರ್ಪಣೆಯ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ಯುವ ತಾರೆ&lt;/strong&gt;&lt;/h2&gt;&lt;p&gt;ಪ್ರಸ್ತುತ ಭಾರತೀಯ ಕ್ರಿಕೆಟ್&zwnj;ನ ಅತ್ಯಂತ ಕಿರಿಯ ಹಾಗೂ ಉದಯೋನ್ಮುಖ ತಾರೆಯಾಗಿರುವ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದ (Debuted) ಮೇಲೆಯೇ ಎಲ್ಲರ ಕಣ್ಣಿತ್ತು. ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿದ್ದರೂ, ವೈಭವ್ ಆಡಿದ ಶೈಲಿ ಮತ್ತು ಅವರ ಆಟವು ಅವರು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಸಂಪೂರ್ಣ ಸಜ್ಜಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿತ್ತು. ಅವರಿಗೆ ಸದ್ಯ ಸರಣಿಯಲ್ಲಿ ನಿರಂತರ ಅವಕಾಶಗಳ ಅಗತ್ಯವಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದರು. ಆದರೆ ಈಗ ಅವರ ಎರಡನೇ ಪಂದ್ಯಕ್ಕೂ ಮುನ್ನವೇ ಈ ಗಾಯದ ಆತಂಕ ಎದುರಾಗಿದೆ.&lt;/p&gt;&lt;h2&gt;&lt;strong&gt;ವೈಭವ್&zwnj; ಇಂದಿನ ಪಂದ್ಯದಲ್ಲಿ ಆಡ್ತಾರಾ?&lt;/strong&gt;&lt;/h2&gt;&lt;p&gt;ವೈಭವ್ ಅವರ ಗಾಯದ ತೀವ್ರತೆ ಎಷ್ಟಿದೆ? ಅವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆಯೇ ಅಥವಾ ಇಲ್ಲವೇ? ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಟೀಮ್ ಮ್ಯಾನೇಜ್&zwnj;ಮೆಂಟ್ ಅವರ ಗಾಯದ ಕುರಿತು ಯಾವುದೇ ಅಧಿಕೃತ ವೈದ್ಯಕೀಯ ಬುಲೆಟಿನ್ ಅಥವಾ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಸಾಮಾನ್ಯವಾಗಿ ಕ್ರಿಕೆಟ್ ಅಭ್ಯಾಸದ ಅವಧಿಯಲ್ಲಿ ಇಂತಹ ಸಣ್ಣಪುಟ್ಟ ಹೊಡೆತಗಳು ಬೀಳುವುದು ಸಾಮಾನ್ಯವಾಗಿದ್ದು, ಸ್ವಲ್ಪ ಸಮಯದ ವಿಶ್ರಾಂತಿ ಮತ್ತು ಫಿಸಿಯೋ ಚಿಕಿತ್ಸೆಯಿಂದ ಆಟಗಾರರು ಗುಣಮುಖರಾಗುತ್ತಾರೆ. ಆದರೆ, ಪಕ್ಕೆಲುಬಿನ ಭಾಗಕ್ಕೆ ಹೊಡೆತ ಬಿದ್ದಿರುವುದರಿಂದ ಅವರು ಇಂದು ಆಡುತ್ತಾರೋ ಇಲ್ಲವೋ ಎಂಬುದು ಪಂದ್ಯದ ಟಾಸ್ ವೇಳೆಯಷ್ಟೇ ಅಧಿಕೃತವಾಗಲಿದೆ. ಭಾರತ ತಂಡವು ಈ ಇಂಗ್ಲೆಂಡ್ ಪ್ರವಾಸದಲ್ಲಿ ತನ್ನ ಮೊದಲ ಗೆಲುವನ್ನು ಹುಡುಕುತ್ತಿದ್ದು, ಇಂದಿನ ನಾಟಿಂಗ್&zwnj;ಹ್ಯಾಂ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಂಪೂರ್ಣ ಗುಣಮುಖರಾಗಿ ಕಣಕ್ಕಿಳಿಯಲಿ ಎಂದು ಆಶಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Raghuvendra Dwivedi Throwdown Specialist Of Indian Cricket Team Bowled 150kmph Delivery That Hit Suryavanshi Badly On His Ribs. He Fell On The Ground And Raghuvendra&rsquo;s First Reaction Was To Pick Up The Ball Instead Of Checking On Him. Bro, He Is Just 15 Years Old. At Least Show&hellip; pic.twitter.com/H0hrnvXthh&lt;/p&gt;&lt;p&gt;&mdash; &Eacute;lys&eacute;eCricket (@CricketElysee) July 6, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/vaibhav-suryavanshi-injured-nets-ind-vs-eng-3rd-t20-raghavendra-throwdown-san/articleshow-8oex590"/>
        </item>
        <item>
            <title><![CDATA[Cricket: 76ಕ್ಕೆ ಆಲೌಟ್, ಗಂಭೀರ್ ಎದುರೇ ಆಕ್ರೋಶ; ವಿಡಿಯೋ ವೈರಲ್! ಇಂಗ್ಲೆಂಡ್‌ನಲ್ಲಿ ಗೌತಿಗೆ ತೀವ್ರ ಮುಖಭಂಗ!]]></title>
            <link>https://kannada.asianetnews.com/gallery/sports/all-out-for-76-anger-towards-gambhir-video-goes-viral-gauthi-gets-a-severe-facelift-in-england-8t93vxg</link>
            <guid isPermaLink="true">https://kannada.asianetnews.com/gallery/sports/all-out-for-76-anger-towards-gambhir-video-goes-viral-gauthi-gets-a-severe-facelift-in-england-8t93vxg</guid>
            <pubDate>Wed, 08 Jul 2026 20:23:56 +0530</pubDate>
            <description><![CDATA[&lt;p&gt;ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 76 ರನ್&zwnj;ಗಳಿಗೆ ಆಲೌಟ್ ಆಗಿತ್ತು. 202 ರನ್&zwnj;ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್&zwnj;ಗಳ ಹೀನಾಯ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಗಂಭೀರ್&zwnj; ಎದುರೆ ಒಂದು ಘಟನೆ ನಡೆಯಿತು. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbkdecq4gaz3pe4veacxbh7,imgname-thumb--5--1773137213846.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 76 ರನ್&zwnj;ಗಳಿಗೆ ಆಲೌಟ್ ಆಗಿತ್ತು. 202 ರನ್&zwnj;ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್&zwnj;ಗಳ ಹೀನಾಯ ಸೋಲುಂಟಾಯಿತು. ಈ ಹಿನ್ನೆಲೆಯಲ್ಲಿ ಗಂಭೀರ್&zwnj; ಎದುರೆ ಒಂದು ಘಟನೆ ನಡೆಯಿತು. ಅದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ!&lt;/p&gt;&lt;img&gt;&lt;p&gt;ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 76 ರನ್&zwnj;ಗಳಿಗೆ ಆಲೌಟ್ ಆಗಿತ್ತು. 202 ರನ್&zwnj;ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಕುಸಿತದಿಂದಾಗಿ 125 ರನ್&zwnj;ಗಳ ಹೀನಾಯ ಸೋಲುಂಟಾಯಿತು. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾದ ಅತಿದೊಡ್ಡ ಸೋಲು ಇದಾಗಿದೆ. ಈ ಸೋಲಿನೊಂದಿಗೆ, ಟೀಂ ಇಂಡಿಯಾ 5 ಪಂದ್ಯಗಳ ಟಿ20ಐ ಸರಣಿಯಲ್ಲಿ 2-ಹಿನ್ನಡೆಯಲ್ಲಿದೆ. ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ, ಭಾರತ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತು. ಈಗ, ಉಳಿದ ಎರಡು ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದರೂ, ಸರಣಿ ಡ್ರಾದಲ್ಲಿ ಕೊನೆಗೊಳ್ಳುತ್ತದೆ.&lt;/p&gt;&lt;img&gt;&lt;p&gt;ಮಾರ್ಚ್&zwnj;ನಲ್ಲಿ ಟಿ20 ವಿಶ್ವಕಪ್ ಗೆದ್ದ ನಂತರ, ಬಿಸಿಸಿಐ ಮತ್ತು ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಶ್ರೇಯಸ್ ಅಯ್ಯರ್ ಅವರಿಗೆ ನೀಡಿತು, ಆದರೆ ಶ್ರೇಯಸ್ ಅಯ್ಯರ್ ತಂಡದ ನಾಯಕರಾದ ನಂತರ, ಟೀಮ್ ಇಂಡಿಯಾ ಒಂದೇ ಒಂದು ಟಿ20 ಪಂದ್ಯ ಗೆದ್ದಿಲ್ಲ. ಐರ್ಲೆಂಡ್&zwnj;ನಲ್ಲಿ ಎರಡೂ ಟಿ20 ಪಂದ್ಯ ಸೋತ ನಂತರ, ಇಂಗ್ಲೆಂಡ್&zwnj;ನಲ್ಲಿ ಮೂರು ಟಿ20 ಪಂದ್ಯಗಳ ನಂತರವೂ ಟೀಮ್ ಇಂಡಿಯಾ ಗೆಲುವಿಗಾಗಿ ಕಾಯುತ್ತಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾ 5 ಟಿ20 ಪಂದ್ಯಗಳ ನಂತರ ಒಂದೇ ಒಂದು ಪಂದ್ಯವನ್ನು ಗೆಲ್ಲದಿರುವುದು ಇದೇ ಮೊದಲು.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ ಈ ನಿರಾಶಾದಾಯಕ ಪ್ರದರ್ಶನದ ನಂತರ, ಗೌತಮ್ ಗಂಭೀರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೂರನೇ ಟಿ20 ಪಂದ್ಯ ಮುಗಿದ ನಂತರ, ಗೌತಮ್ ಗಂಭೀರ್ ಕ್ರೀಡಾಂಗಣದಿಂದ ಹೊರನಡೆಯುತ್ತಿರುವಾಗ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. 'ನಮಗೆ ಸಂಜು ಬೇಕು' ಎಂದು ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಗೌತಮ್ ಗಂಭೀರ್ ಮುಂದೆ ಘೋಷಣೆಗಳನ್ನು ಕೂಗಿದರು.&lt;/p&gt;&lt;img&gt;&lt;p&gt;ಟಿ20 ವಿಶ್ವಕಪ್&zwnj;ನ ಕೊನೆಯ 3 ನಾಕೌಟ್ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ 3 ಅರ್ಧಶತಕಗಳನ್ನು ಗಳಿಸಿದರು, ಇದರಿಂದಾಗಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಿತು. ಟಿ20 ವಿಶ್ವಕಪ್&zwnj;ನಲ್ಲಿ ಸಂಜುಗೆ ಟೂರ್ನಮೆಂಟ್&zwnj;ನ ಆಟಗಾರ ಪ್ರಶಸ್ತಿಯೂ ದೊರೆಯಿತು, ಆದರೆ ಐರ್ಲೆಂಡ್ ವಿರುದ್ಧ 2 ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯಗಳಲ್ಲಿ ವಿಫಲವಾದ ನಂತರ, ಸಂಜು ಅವರನ್ನು ತಂಡದಿಂದ ಕೈಬಿಡಲಾಯಿತು ಮತ್ತು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಯಿತು, ಆದರೆ ವೈಭವ್ ಕೂಡ ಎರಡು ಪಂದ್ಯಗಳಲ್ಲಿ ವಿಫಲರಾದರು.&lt;/p&gt;&lt;img&gt;&lt;p&gt;ಸಂಜುಗೆ ಬೇಕಾದ ಸ್ಪಷ್ಟೀಕರಣ ನಾನು ನೀಡಿದ್ದೇನೆ. ನಮ್ಮ ನಡುವಿನ ಸಂಭಾಷಣೆ ಒಬ್ಬ ಆಟಗಾರ ಮತ್ತು ತರಬೇತುದಾರರ ನಡುವೆ, ನಾನು ಅದನ್ನು ಬಹಿರಂಗಪಡಿಸುವುದಿಲ್ಲ. ವಿಶ್ವಕಪ್&zwnj;ನಲ್ಲಿ ಸಂಜು ಮಾಡಿದ್ದು ಅತ್ಯುತ್ತಮವಾಗಿತ್ತು, ಆದರೆ ಕೆಲವೊಮ್ಮೆ ನೀವು ಆಟಗಾರನ ಫಾರ್ಮ್ ಅನ್ನು ನೋಡಬೇಕಾಗುತ್ತದೆ. ಈ ಸರಣಿಯಲ್ಲಿ ಸಂಜು ತಂಡದಲ್ಲಿ ಮರಳುವುದಿಲ್ಲ ಎಂಬ ನಿಯಮವಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಫಲಿತಾಂಶಗಳು ಮುಖ್ಯ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/sports/all-out-for-76-anger-towards-gambhir-video-goes-viral-gauthi-gets-a-severe-facelift-in-england-8t93vxg"/>
        </item>
        <item>
            <title><![CDATA[India vs England 4th T20I: ಒಂದು ಪೈಸೆ ಖರ್ಚಿಲ್ಲದೇ ಫ್ರೀ ಆಗಿ ಲೈವ್ ಮ್ಯಾಚ್ ನೋಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್]]></title>
            <link>https://kannada.asianetnews.com/gallery/cricket-sports/india-vs-england-4th-t20-live-streaming-how-to-watch-the-match-for-free-without-recharge-kvn-8vbectl</link>
            <guid isPermaLink="true">https://kannada.asianetnews.com/gallery/cricket-sports/india-vs-england-4th-t20-live-streaming-how-to-watch-the-match-for-free-without-recharge-kvn-8vbectl</guid>
            <pubDate>Thu, 09 Jul 2026 17:49:57 +0530</pubDate>
            <description><![CDATA[&lt;p&gt;ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯವನ್ನು ನೀವು ಯಾವುದೇ ರೀಚಾರ್ಜ್ ಇಲ್ಲದೇ ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxm7n8r07xzfc8pnfsam29v,imgname-india-vs-england-3rd-t20i-1-1783405729047.gif" type="image/jpeg" height="390" width="690"/>
            <content:encoded><![CDATA[&lt;p&gt;ಬ್ರಿಸ್ಟೊಲ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯವನ್ನು ನೀವು ಯಾವುದೇ ರೀಚಾರ್ಜ್ ಇಲ್ಲದೇ ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್&zwnj; ನಡುವಿನ ನಾಲ್ಕನೇ ಟಿ20 ಪಂದ್ಯಕ್ಕೆ ಬ್ರಿಸ್ಟೊಲ್&zwnj;ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಈ ಪಂದ್ಯವು ಭಾರತೀಯ ಕಾಲಮಾನ ಇಂದು ರಾತ್ರಿ 10 ಗಂಟೆಯಿಂದ ಆರಂಭವಾಗಲಿದೆ. ಸದ್ಯ ಆತಿಥೇಯ ಇಂಗ್ಲೆಂಡ್ ತಂಡವು 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಇಂಗ್ಲೆಂಡ್ ಇಂದಿನ ಪಂದ್ಯ ಗೆದ್ದು ಮೊದಲ ಸಲ ಭಾರತ ಎದುರು ಟಿ20 ಸರಣಿ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಭಾರತ ತಂಡವು ಈ ಪಂದ್ಯ ಗೆದ್ದು, ಸರಣಿಯಲ್ಲಿ ಕಮ್&zwnj;ಬ್ಯಾಕ್ ಮಾಡಲು ಎದುರು ನೋಡುತ್ತಿದೆ.&lt;/p&gt;&lt;img&gt;&lt;p&gt;ಇನ್ನು ಈ ಹೈವೋಲ್ಟೇಜ್ ಮ್ಯಾಚ್ ಅನ್ನು ಉಚಿತವಾಗಿ ವೀಕ್ಷಿಸಬಹುದು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಹೌದು, ಭಾರತ ಹಾಗೂ ಇಂಗ್ಲೆಂಡ್ ನಡುವೆ ಸಮಯದ ಅಂತರವಿರುವುದರಿಂದ ಈ ಪಂದ್ಯ ಭಾರತದಲ್ಲಿ ತಡರಾತ್ರಿ ಪ್ರಸಾರವಾಗಲಿದೆ. ಈ ಮ್ಯಾಚ್ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ.&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್&zwnj; ನೆಟ್&zwnj;ವರ್ಕ್ ಪಡೆದುಕೊಂಡಿದೆ. ಇನ್ನು ಓಟಿಟಿಯಲ್ಲಿ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿಯೂ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಅಂದಹಾಗೆ ಈ ಎರಡೂ ಚಾನೆಲ್&zwnj;ನಲ್ಲಿ ವೀಕ್ಷಿಸಲು ಸಬ್&zwnj;ಸ್ಕ್ರಿಪ್ಷನ್ ಪಡೆದುಕೊಂಡಿರಲೇಬೇಕಾಗುತ್ತದೆ.&lt;/p&gt;&lt;img&gt;&lt;p&gt;ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಹೌದು, ಇಂಡೋ-ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಪಂದ್ಯಗಳನ್ನು ಒಂದು ಪೈಸೆಯೂ ಖರ್ಚಿಲ್ಲದೇ ಫ್ರೀ ಡಿಶ್&zwnj;ನಲ್ಲಿ ವೀಕ್ಷಿಸಬಹುದು. ಡಿಡಿ ಸ್ಪೋರ್ಟ್ಸ್&zwnj; ಉಚಿತ ಚಾನೆಲ್ ಆಗಿದ್ದು, ಈ ಚಾನೆಲ್ ಮೂಲಕ ಉಚಿತವಾಗಿ ವೀಕ್ಷಿಸಬಹುದು.&lt;/p&gt;&lt;img&gt;&lt;p&gt;ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.&lt;/p&gt;&lt;img&gt;&lt;p&gt;ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್(ನಾಯಕ), ಜೇಕಬ್ ಬೆಥೆಲ್, ಟಾಮ್ ಬಾಂಟನ್, ಸ್ಯಾಮ್ ಕರ್ರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಶ್ ಟಂಗ್.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/india-vs-england-4th-t20-live-streaming-how-to-watch-the-match-for-free-without-recharge-kvn-8vbectl"/>
        </item>
        <item>
            <title><![CDATA[ಸೌರವ್ ಗಂಗೂಲಿ ₹40 ಕೋಟಿ ಬಂಗಲೆಯಲ್ಲಿದೆ 48 ರೂಮ್‌ಗಳು, ವಾಲ್ ಆಫ್ ಫೇಮ್ ಮತ್ತೆ ಕ್ರಿಕೆಟ್ ಪಿಚ್!]]></title>
            <link>https://kannada.asianetnews.com/cricket-sports/inside-sourav-ganguly-40-crore-rupees-kolkata-mansion-48-rooms-private-cricket-pitch-and-more-kvn/articleshow-avuzu5l</link>
            <guid isPermaLink="true">https://kannada.asianetnews.com/cricket-sports/inside-sourav-ganguly-40-crore-rupees-kolkata-mansion-48-rooms-private-cricket-pitch-and-more-kvn/articleshow-avuzu5l</guid>
            <pubDate>Wed, 08 Jul 2026 16:40:02 +0530</pubDate>
            <description><![CDATA[ಭಾರತ ಕ್ರಿಕೆಟ್&zwnj;ನ ದಾದಾ ಸೌರವ್ ಗಂಗೂಲಿ ಅವರ ಕೋಲ್ಕತಾದ ಬೆಹಾಲಾದಲ್ಲಿರುವ ಭವ್ಯ ಬಂಗಲೆಯ ಬಗ್ಗೆ ಈ ಲೇಖನ ವಿವರಿಸುತ್ತದೆ. ಸುಮಾರು 40 ಕೋಟಿ ಮೌಲ್ಯದ ಈ 48 ಕೋಣೆಗಳ ಮನೆಯು, ಸಾಂಪ್ರದಾಯಿಕ ವಾಸ್ತುಶಿಲ್ಪ, 'ವಾಲ್ ಆಫ್ ಫೇಮ್' ಮತ್ತು ಕ್ರಿಕೆಟ್ ಪಿಚ್&zwnj;ನಂತಹ ವಿಶೇಷತೆಗಳನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01dy6y9fp6ejc4cehc13ke5271,imgname-pjimage--25--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಕಂಡ ಯಶಸ್ವಿ ನಾಯಕ ಸೌರವ್ ಗಂಗೂಲಿ ಜುಲೈ 08ರ ಇಂದು ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಭಾರತ ಕ್ರಿಕೆಟ್&zwnj;ನ ದಾದಾ ಎಂದೇ ಕರೆಸಿಕೊಳ್ಳುವ ಕೋಲ್ಕತಾದ ಮಹಾರಾಜ ಸೌರವ್ ಗಂಗೂಲಿ, ತಮ್ಮ ಅದ್ಭುತ ಬ್ಯಾಟಿಂಗ್&zwnj; ಹಾಗೂ ಆಕ್ರಮಣಕಾರಿ ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇಂದು ದಾದಾ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ಭಾರತೀಯ ಕ್ರಿಕೆಟ್ ವಲಯದಲ್ಲಿ ಪ್ರಿನ್ಸ್ ಆಫ್ ಕೋಲ್ಕತಾ ಎಂದೇ ಕರೆಸಿಕೊಳ್ಳುವ ಸೌರವ್ ಗಂಗೂಲಿ ಭಾರತ ಕ್ರಿಕೆಟ್&zwnj;ನ ದಿಕ್ಕನ್ನೇ ಬದಲಿಸಿದ ದಿಟ್ಟ ನಾಯಕ ಎಂದರೆ ಅತಿಶಯೋಕ್ತಿಯಲ್ಲ. ಮ್ಯಾಚ್ ಫಿಕ್ಸಿಂಗ್ ಕರ್ಮಕಾಂಡದಿಂದ ನಲುಗಿ ಹೋಗಿದ್ದ ಭಾರತ ಕ್ರಿಕೆಟ್&zwnj;ಗೆ ಹೊಸ ಚೈತನ್ಯ ತಂದುಕೊಟ್ಟ ಲೀಡರ್ ಸೌರವ್ ಗಂಗೂಲಿ. ನಾವಿಂದು ಅವರ ಆಕರ್ಷಕ ಬ್ಯಾಟಿಂಗ್ ಶೈಲಿಯಿಂದ ನಮ್ಮ ಗಮನವನ್ನು ಕೋಲ್ಕತಾದ ಬೆಹಾಲಾ ಪ್ರದೇಶದಲ್ಲಿರುವ ಅವರ ಐಕಾನಿಕ್ ಪೂರ್ವಜರ ಬಂಗಲೆಯತ್ತ ಹರಿಸೋಣ; ಅಲ್ಲಿ ಅವರು ತಮ್ಮ ಪತ್ನಿ ಡೋನಾ, ಮಗಳು ಸನಾ ಮತ್ತು ತಮ್ಮ ದೊಡ್ಡ ಅವಿಭಕ್ತ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.&lt;/p&gt;&lt;p&gt;60 ವರ್ಷಗಳಿಗೂ ಹೆಚ್ಚು ಕಾಲದಿಂದ ಗಂಗೂಲಿ ಕುಟುಂಬದ ನಿವಾಸವಾಗಿರುವ ಈ ವಿಶಾಲವಾದ ಕೌಟುಂಬಿಕ ಮನೆಯು, ನಗರದ ಪ್ರಸಿದ್ಧ ಪರಂಪರೆಯ ಮನೆಗಳಲ್ಲಿ ಒಂದಾಗಿದೆ. ಜಾಗತಿಕವಾಗಿ ಖ್ಯಾತಿಯನ್ನು ಗಳಿಸಿದ ಹೊರತಾಗಿಯೂ ಸೌರವ್ ಗಂಗೂಲಿ, ತಮ್ಮ ಕುಟುಂಬದ ಜತೆ ನಿಕಟವಾದ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ಇದರ ಜತೆಗೆ ತಮ್ಮ ಭವ್ಯ ಬಂಗಲೆಯ ಜತೆಗೂ ಬಲವಾದ ನಂಟನ್ನು ಮುಂದುವರೆಸಿದ್ದಾರೆ.&lt;/p&gt;&lt;p&gt;ಈ ಬಂಗಲೆಯು ಸಾಂಪ್ರದಾಯಿಕ ವಾಸ್ತುಶಿಲ್ಪ, ವಿಶಾಲವಾದ ಒಳಾಂಗಣಗಳು ಮತ್ತು ಕಾಲಾತೀತ ಮೋಡಿಗೆ ಹೆಸರುವಾಸಿಯಾಗಿದೆ. ಹಳೆಯ ಜಗತ್ತಿನ ಸೊಬಗನ್ನು ಆಧುನಿಕ ಸೌಕರ್ಯಗಳೊಂದಿಗೆ ಬೆರೆಸುವ ಈ ಮನೆ, ಕುಟುಂಬದ ಪರಂಪರೆ ಮತ್ತು ಕೋಲ್ಕತಾದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಇದು ಗಂಗೂಲಿ ಕುಟುಂಬದ ಸಂಭ್ರಮಾಚರಣೆಗಳು, ಹಬ್ಬದ ಸಂದರ್ಭಗಳು ಹಾಗೂ ಆಪ್ತ ಸ್ನೇಹಿತರು ಮತ್ತು ಹಿತೈಷಿಗಳೊಂದಿಗಿನ ಒಡನಾಟಕ್ಕೆ ಆಗಾಗ್ಗೆ ವೇದಿಕೆಯಾಗಿದೆ.&lt;/p&gt;&lt;p&gt;ರಿಯಲ್ ಎಸ್ಟೇಟ್ ಕಂಪನಿ 'ನೋಬ್ರೋಕರ್' (NoBroker) ಪ್ರಕಾರ, ಬೆಹಾಲಾದ ಬಿರೇನ್ ರಾಯ್ ರಸ್ತೆಯಲ್ಲಿರುವ ಗಂಗೂಲಿ ಅವರ ನಿವಾಸದ ಮೌಲ್ಯ ಸುಮಾರು 40 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಐಷಾರಾಮಿ ಮನೆಯು 48 ಕೊಠಡಿಗಳನ್ನು ಹೊಂದಿದ್ದು, ನಗರದ ಅತಿದೊಡ್ಡ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ. ಮನೆಯ ಹೊರಭಾಗವು ಸಾಂಪ್ರದಾಯಿಕ ಕೆಂಪು ಮತ್ತು ಬಿಳಿ ಬಣ್ಣದ ವಿನ್ಯಾಸವನ್ನು ಹೊಂದಿದ್ದರೆ, ಒಳಭಾಗದಲ್ಲಿ ಬಿಳಿ ಮತ್ತು ಕಂದು ಬಣ್ಣಗಳ ಛಾಯೆಗಳು ಶಾಂತ ಹಾಗೂ ಅತ್ಯಾಧುನಿಕ ವಾತಾವರಣವನ್ನು ಸೃಷ್ಟಿಸಿವೆ.&lt;/p&gt;&lt;h2&gt;&lt;strong&gt;ವಾಲ್ ಆಫ್ ಫೇಮ್ ಮತ್ತು ಲಿವಿಂಗ್ ಏರಿಯಾ&lt;/strong&gt;&lt;/h2&gt;&lt;p&gt;ಅದ್ಭುತ ಕ್ರಿಕೆಟ್ ವೃತ್ತಿಜೀವನವನ್ನು ಆನಂದಿಸಿರುವ ಗಂಗೂಲಿ, ತಮ್ಮ ಸಾಧನೆಗಳನ್ನು ಹೆಮ್ಮೆಯಿಂದ ಪ್ರದರ್ಶಿಸುವ ವಾಲ್ ಆಫ್ ಫೇಮ್ ಅನ್ನು ಹೊಂದಿದ್ದಾರೆ. ಇದು ಅವರ ಅಮೂಲ್ಯವಾದ ಟ್ರೋಫಿಗಳನ್ನು ಒಳಗೊಂಡಿದೆ. ಇದು ಒಂದೆರಡು ಕಂದು ಚರ್ಮದ ಸೋಫಾಗಳನ್ನು ಸಹ ಹೊಂದಿದ್ದು, ಸಂದರ್ಶಕರು ಕುಳಿತು ಸಂಗ್ರಹವನ್ನು ಮೆಚ್ಚಿಕೊಳ್ಳಲು ಒಂದು ವೇದಿಕೆಯಾಗಿದೆ. ಇದರ ಜೊತೆಗೆ, ಈ ಬೃಹತ್ ಮನೆಯಲ್ಲಿ ಊಟದ ಕೋಣೆ, ಫ್ಯಾಮಿಲಿ ರೂಮ್ ಮತ್ತು ಅನೇಕ ವಾಸದ ಕೋಣೆಗಳಿವೆ. ಹೌದು, ನೀವು ಓದಿದ್ದು ನಿಜ. ಸೌರವ್ ಗಂಗೂಲಿ ಅವರ ಮನೆಯಲ್ಲಿ ವಿವಿಧ ಸಂದರ್ಭಗಳಲ್ಲಿ ಅತಿಥಿಗಳಿಗಾಗಿ ಅನೌಪಚಾರಿಕ ಮತ್ತು ಔಪಚಾರಿಕ ವಾಸದ ಕೋಣೆಗಳೆರಡೂ ಇವೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಮನೆಯ ಆವರಣದಲ್ಲಿಯೇ ಇದೆ ಕ್ರಿಕೆಟ್ ಪಿಚ್!&lt;/strong&gt;&lt;/h3&gt;&lt;p&gt;ಸೌರವ್ ಗಂಗೂಲಿ ನಿವಾಸವು ಹಚ್ಚ ಹಸಿರಿನ ಹಿತ್ತಲಿನಿಂದ ಕೂಡಿದ್ದು, ವಿವಿಧ ಜಾತಿಯ ಎತ್ತರದ ಮರಗಳನ್ನು ಹೊಂದಿದೆ. ಹಿತ್ತಲಿನಲ್ಲಿ ಓಟದ ಹಾದಿಯಿದ್ದು, ಸುತ್ತಲೂ ವಿಶಿಷ್ಟವಾದ ಬಿಳಿ ಮತ್ತು ಕೆಂಪು ಬಣ್ಣದ ಟೈಲ್ಸ್&zwnj;ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಹೊರಗೆ ಒಂದು ಚಿಕ್ಕ ಕ್ರಿಕೆಟ್ ಪಿಚ್ ಕೂಡ ಇದೆ; ಅಲ್ಲಿ ಸೌರವ್ ಗಂಗೂಲಿ ಈ ಕ್ರೀಡೆಯ ಮೇಲಿನ ತಮ್ಮ ಒಲವನ್ನು ತೋರಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/inside-sourav-ganguly-40-crore-rupees-kolkata-mansion-48-rooms-private-cricket-pitch-and-more-kvn/articleshow-avuzu5l"/>
        </item>
        <item>
            <title><![CDATA[ಜಸ್ಟ್ 76 ರನ್‌ಗೆ ಮಕಾಡೆ ಮಲಗಿದ್ಕೆ ಕುಂಬ್ಳೆ ಕಿಡಿ ಕಿಡಿ -ಮ್ಯಾನೇಜ್ಮೆಂಟ್ ವಿರುದ್ಧ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/cricket-sports/anil-kumble-on-team-india-management-about-india-vs-england-t20-series-gkn/articleshow-cxx1os4</link>
            <guid isPermaLink="true">https://kannada.asianetnews.com/cricket-sports/anil-kumble-on-team-india-management-about-india-vs-england-t20-series-gkn/articleshow-cxx1os4</guid>
            <pubDate>Thu, 09 Jul 2026 13:51:13 +0530</pubDate>
            <description><![CDATA[&lt;p&gt;ಟೀಂ ಇಂಡಿಯಾ ಮ್ಯಾನೇಜ್ಮೆಂಟ್&zwnj; ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸತತ ಸೋಲುಗಳ ಬಗ್ಗೆ ಪ್ರಶ್ನೆ ಮಾಡಿರುವ ಅವರು, ಸೋಲು ಎಲ್ಲಿಂದ ಆಯಿತು ಅನ್ನೋದನ್ನು ವಿವರಿಸಿದ್ದಾರೆ. ಕುಂಬ್ಳೆ ಏನು ಹೇಳಿದರು ಅನ್ನೋದ್ರ ವಿವರ ಇಲ್ಲಿದೆ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2z086atkrkrqycv1z980yh,imgname-anil-kumble-on-team-india-1783584792778.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಎರಡು ಸೋಲು ಕಂಡು ಮುಖಭಂಗ ಅನುಭವಿಸಿದೆ. ಎರಡನೇ ಪಂದ್ಯದಲ್ಲಿ ಕೇವಲ 76 ರನ್&zwnj;ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡ ಪಂದ್ಯವನ್ನು ಇಂಗ್ಲೆಂಡ್&zwnj;ಗೆ ಹಸ್ತಾಂತರಿಸಿತು. ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿರುವ ತಂಡವೊಂದು ಈ ರೀತಿ ಅಕ್ಷರಶಃ ಕೈಚೆಲ್ಲಿರುವುದು ದಂತಕತೆ ಅನಿಲ್ ಕುಂಬ್ಳೆ ಅವರನ್ನು ಕೆರಳಿಸಿದೆ.&lt;/p&gt;&lt;h2&gt;&lt;strong&gt;ಇದು ಹೀನಾಯ ಶರಣಾಗತಿ&lt;/strong&gt;&lt;/h2&gt;&lt;p&gt;&lt;strong&gt;ಪಂದ್ಯದ ನಂತರ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಮಾತನಾಡಿರುವ ಅನಿಲ್ ಕುಂಬ್ಳೆ, ಇದೊಂದು ಹೀನಾಯ ಶರಣಾಗತಿ (Abject Surrender). ವಿಶ್ವ ಚಾಂಪಿಯನ್ ಪಟ್ಟದಲ್ಲಿರುವ ತಂಡವೊಂದು ಈ ರೀತಿ ಮಕಾಡೆ ಮಲಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇಂಗ್ಲೆಂಡ್ ವೇಗಿಗಳಾದ ಜೋಫ್ರಾ ಆರ್ಚರ್ ಮತ್ತು ಜೋಶ್ ಟಂಗ್ ಅವರ ವೇಗವನ್ನು ಎದುರಿಸಲು ಭಾರತದ ಬ್ಯಾಟರ್&zwnj;ಗಳ ಬಳಿ ಯಾವುದೇ ಪ್ಲಾನ್ ಇರಲಿಲ್ಲ.&lt;/strong&gt;&lt;/p&gt;&lt;p&gt;&lt;strong&gt;ಬ್ಯಾಟರ್&zwnj;ಗಳು ತಾಳ್ಮೆ ತೋರಬೇಕಿತ್ತು. ಕ್ರೀಸ್&zwnj;ನಲ್ಲಿ ನಿಂತು ಒತ್ತಡ ನಿಭಾಯಿಸುವ ಬದಲು ಪ್ರತಿಯೊಬ್ಬರೂ ಅಟ್ಯಾಕ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. ಅನಿವಾರ್ಯ ರನ್ ರೇಟ್ 10 ಕ್ಕಿಂತ ಹೆಚ್ಚಿದ್ದರೂ ಸಹ ಯಾರಾದರೂ ಒಬ್ಬರು ಜವಾಬ್ದಾರಿಯುತವಾಗಿ ಬ್ಯಾಟ್ ಬೀಸಿ ಇನಿಂಗ್ಸ್ ಕಟ್ಟಬೇಕಿತ್ತು. ಆದರೆ ಎಲ್ಲರೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಕುಸಿತ ಕಂಡರು.&lt;/strong&gt;&lt;/p&gt;&lt;p&gt;&lt;strong&gt;ಟಿ20 ಕ್ರಿಕೆಟ್&zwnj;ನಲ್ಲಿ ನಿಮ್ಮ ಅತ್ಯುತ್ತಮ ಬ್ಯಾಟರ್&zwnj;ಗಳನ್ನು ಮುಂಚಿತವಾಗಿ ಕಳುಹಿಸಬೇಕು. ಈ ಪಂದ್ಯದಲ್ಲಿ ಅನುಭವವಿರುವ ಶಿವಂ ದುಬೆಗಿಂತ ಮೊದಲು ಹರ್ಷಿತ್ ರಾಣಾ ಅವರನ್ನು ಬ್ಯಾಟಿಂಗ್&zwnj;ಗೆ ಕಳುಹಿಸಿದ್ದು ತಪ್ಪು ನಿರ್ಧಾರ. 8ನೇ ಕ್ರಮಾಂಕದ ಬ್ಯಾಟರ್ ಬಂದು ಪಂದ್ಯ ಗೆಲ್ಲಿಸುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ.&lt;/strong&gt;&lt;/p&gt;&lt;p&gt;&lt;strong&gt;ತಂಡದಲ್ಲಿ ತುಂಬಾ ಬದಲಾವಣೆಗಳನ್ನು ಮಾಡುತ್ತಿರುವುದು ಸರಿಯಲ್ಲ. ಐರ್ಲೆಂಡ್ ವಿರುದ್ಧದ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಕೈಬಿಡಲಾಯಿತು. ಪ್ರಿನ್ಸ್ ಯಾದವ್ ಬಂದು ವಿಕೆಟ್ ಪಡೆದರೂ ತಂಡ ಸೋತಿತು. ಹೊಸ ನಾಯಕ ಐವರು ಸ್ಥಿರ ಬೌಲರ್&zwnj;ಗಳ ಮೇಲೆ ನಂಬಿಕೆ ಇಡಬೇಕು. ಬ್ಯಾಟರ್&zwnj;ಗಳು ರನ್ ಗಳಿಸಬಹುದು, ಆದರೆ ಬೌಲರ್&zwnj;ಗಳು ಪಂದ್ಯವನ್ನು ಗೆಲ್ಲಿಸುತ್ತಾರೆ.&lt;/strong&gt;&lt;/p&gt;&lt;p&gt;&lt;strong&gt;-ಅನಿಲ್ ಕುಂಬ್ಳೆ,ಮಾಜಿ ಕ್ರಿಕೆಟಿಗ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಸತತ ಸೋಲುಗಳಿಂದ ಕಂಗೆಟ್ಟಿರುವ ಭಾರತ ತಂಡಕ್ಕೆ ಕುಂಬ್ಳೆ ಅವರ ಈ ಮಾತುಗಳು ಎಚ್ಚರಿಕೆಯ ಗಂಟೆಯಾಗಿದ್ದು, ಮುಂದಿನ ಎರಡು ಪಂದ್ಯಗಳಲ್ಲಾದರೂ ಸರಣಿ ಸಮಬಲ ಮಾಡಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/anil-kumble-on-team-india-management-about-india-vs-england-t20-series-gkn/articleshow-cxx1os4"/>
        </item>
        <item>
            <title><![CDATA[ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಹೊರಗಿಟ್ಟಿದ್ದೇಕೆ..? ಸತತ ಸೋಲಿನ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್]]></title>
            <link>https://kannada.asianetnews.com/cricket-sports/gautam-gambhir-breaks-silence-on-sanju-samson-exclusion-after-india-heavy-defeat-kvn/articleshow-ezgc860</link>
            <guid isPermaLink="true">https://kannada.asianetnews.com/cricket-sports/gautam-gambhir-breaks-silence-on-sanju-samson-exclusion-after-india-heavy-defeat-kvn/articleshow-ezgc860</guid>
            <pubDate>Wed, 08 Jul 2026 14:11:57 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್&zwnj;ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನ ನಡುವೆ, ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್&zwnj;ರನ್ನು ತಂಡದಿಂದ ಕೈಬಿಟ್ಟಿರುವ ಬಗ್ಗೆ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಿದ್ದು, ಆಯ್ಕೆ ವಿವಾದ ತಾರಕಕ್ಕೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkc5a677eahtrawtyj4mq9g4,imgname-sanju-samson-gautam-gambhir--1--1773155981543.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ರಿಸ್ಟೋಲ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 125 ರನ್&zwnj;ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಸೆಲೆಕ್ಷನ್ ವಿವಾದ ಭುಗಿಲೆದ್ದಿದೆ. ಟಿ20 ಇತಿಹಾಸದಲ್ಲಿ ರನ್&zwnj;ಗಳ ಅಂತರದಲ್ಲಿ ಭಾರತ ಅನುಭವಿಸಿದ ಅತಿದೊಡ್ಡ ಸೋಲು ಇದಾಗಿದೆ. ಇಂಗ್ಲೆಂಡ್ ನೀಡಿದ್ದ 202 ರನ್&zwnj;ಗಳ ಗುರಿ ಬೆನ್ನತ್ತಿದ ಭಾರತ, ಕೇವಲ 76 ರನ್&zwnj;ಗಳಿಗೆ ಆಲೌಟ್ ಆಯ್ತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಆಡಿದ 5 ಪಂದ್ಯಗಳಲ್ಲಿ ಭಾರತ ನಾಲ್ಕರಲ್ಲಿ ಸೋತಿದ್ದು, ಗಂಭೀರ್ ಕೋಚಿಂಗ್&zwnj;ನಲ್ಲಿ ತಂಡ ತೀವ್ರ ಸಂಕಷ್ಟದಲ್ಲಿದೆ.&lt;/p&gt;&lt;p&gt;ಆದರೆ, ಈ ಸೋಲಿಗಿಂತಲೂ ಹೆಚ್ಚಾಗಿ, ಇತ್ತೀಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್&zwnj;ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಂಜು ಸ್ಯಾಮ್ಸನ್&zwnj;ರನ್ನು ಪ್ಲೇಯಿಂಗ್ 11ರಿಂದ ಪದೇ ಪದೇ ಕೈಬಿಡುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಗಂಭೀರ್-ಅಯ್ಯರ್ ಜೋಡಿ ಸಂಜುಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಪ್ರಶ್ನಿಸುತ್ತಿದ್ದಾರೆ. ಪವರ್&zwnj;ಪ್ಲೇನಲ್ಲಿ ವಿಕೆಟ್ ಬೀಳುತ್ತಿದ್ದಾಗ ಹರ್ಷಿತ್ ರಾಣಾರನ್ನು ಬ್ಯಾಟಿಂಗ್&zwnj;ಗೆ ಕಳುಹಿಸಿದ ಮ್ಯಾನೇಜ್&zwnj;ಮೆಂಟ್ ನಿರ್ಧಾರವನ್ನು ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಸೇರಿದಂತೆ ಹಲವರು ಬಹಿರಂಗವಾಗಿ ಟೀಕಿಸಿದ್ದಾರೆ.&lt;/p&gt;&lt;h2&gt;&lt;strong&gt;'ಸಂಜು ಜೊತೆ ಮಾತನಾಡಿದ್ದೇನೆ; ನಿಲುವು ಸ್ಪಷ್ಟಪಡಿಸಿದ ಗಂಭೀರ್&lt;/strong&gt;&lt;/h2&gt;&lt;p&gt;ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕೋಚ್ ಗೌತಮ್ ಗಂಭೀರ್, ಸಂಜು ಸ್ಯಾಮ್ಸನ್&zwnj;ರನ್ನು ತಂಡದಿಂದ ಕೈಬಿಟ್ಟ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಜುರನ್ನು ತಂಡದ ಯೋಜನೆಗಳಿಂದ ಸಂಪೂರ್ಣವಾಗಿ ಹೊರಗಿಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. &quot;ಸಂಜು ಸ್ಯಾಮ್ಸನ್&zwnj;ಗೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಅಗತ್ಯವಿದ್ದ ಸ್ಪಷ್ಟನೆಯನ್ನು ನಾನು ನೀಡಿದ್ದೇನೆ. ಅದು ಕೋಚ್ ಮತ್ತು ಆಟಗಾರನ ನಡುವಿನ ಖಾಸಗಿ ಮಾತುಕತೆ, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಸಂಜು ಭಾರತಕ್ಕಾಗಿ ಮಾಡಿರುವ ಸಾಧನೆ ಅಸಾಧಾರಣ. ಅದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಕೆಲವೊಮ್ಮೆ ನಾವು ಆಟಗಾರರ ಪ್ರಸ್ತುತ ಫಾರ್ಮ್ ಅನ್ನು ಸಹ ಪರಿಗಣಿಸಬೇಕಾಗುತ್ತದೆ. ಈ ಸರಣಿಯಲ್ಲಿ ಸಂಜು ಇನ್ನು ಮುಂದೆ ವಾಪಸ್ ಬರಲು ಸಾಧ್ಯವಿಲ್ಲ ಎಂದು ಎಲ್ಲಿಯೂ ಹೇಳಿಲ್ಲ&quot; ಎಂದು ಗಂಭೀರ್ ಹೇಳಿದರು.&lt;/p&gt;&lt;p&gt;ತಂಡದ ಆಯ್ಕೆಯಲ್ಲಿ ತಮ್ಮ ಕಠಿಣ ನಿಲುವನ್ನು ಗಂಭೀರ್ ಪುನರುಚ್ಚರಿಸಿದರು. &quot;ಅಂತಾರಾಷ್ಟ್ರೀಯ ಕ್ರಿಕೆಟ್ ಫಲಿತಾಂಶಗಳ ಮೇಲೆ ನಿಂತಿದೆ. ಯಾವ ಕಾಂಬಿನೇಷನ್ ತಂಡಕ್ಕೆ ಗೆಲುವು ತಂದುಕೊಡುತ್ತದೆಯೋ, ಅದೇ ಪ್ಲೇಯಿಂಗ್ 11 ಕಣಕ್ಕಿಳಿಯುತ್ತದೆ. ಪ್ರತಿಯೊಬ್ಬ ಆಟಗಾರನೂ ಭಾರತ ತಂಡದಲ್ಲಿ ಆಡಲು ತಮ್ಮ ಸ್ಥಾನವನ್ನು ಸ್ವಂತ ಪ್ರದರ್ಶನದ ಮೂಲಕ ಗಳಿಸಿಕೊಳ್ಳಬೇಕು ಎಂದು ನಾನು ನಂಬುತ್ತೇನೆ&quot; ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾರತ ತಂಡವು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲವಾಗಿದೆ ಎಂದು ಗಂಭೀರ್ ಒಪ್ಪಿಕೊಂಡರು. &quot;ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದು ಸತ್ಯ. ಅದು ಐರ್ಲೆಂಡ್&zwnj;ನಲ್ಲಾಗಲಿ, ಇಂಗ್ಲೆಂಡ್&zwnj;ನಲ್ಲಾಗಲಿ. ನಾವು ಚೆನ್ನಾಗಿ ಆಡಿದ್ದರೆ, ಸತತ ನಾಲ್ಕು ಪಂದ್ಯಗಳನ್ನು ಸೋಲುತ್ತಿರಲಿಲ್ಲ&quot; ಎಂದು ಗಂಭೀರ್ ಹೇಳಿದರು.&lt;/p&gt;&lt;h3&gt;&lt;strong&gt;2026ರ ಟಿ20 ವಿಶ್ವಕಪ್ ಗೆಲುವಿನ ರೂವಾರಿ ಸಂಜು ಸ್ಯಾಮ್ಸನ್&lt;/strong&gt;&lt;/h3&gt;&lt;p&gt;2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು ಸ್ಯಾಮ್ಸನ್, ಇದಾದ ಬಳಿಕ ಐರ್ಲೆಂಡ್ ಎದುರಿನ ಎರಡು ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲೂ ಸಂಜು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಹೊರಗಿಟ್ಟು 15 ವರ್ಷದ ವೈಭವ್ ಸೂರ್ಯವಂಶಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ವೈಭವ್ ಸೂರ್ಯವಂಶಿ ಕೂಡಾ ಕಳೆದೆರಡು ಪಂದ್ಯ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/gautam-gambhir-breaks-silence-on-sanju-samson-exclusion-after-india-heavy-defeat-kvn/articleshow-ezgc860"/>
        </item>
        <item>
            <title><![CDATA[ಇಂಗ್ಲೆಂಡ್ ಎದುರಿನ ನಾಲ್ಕನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಆ ಒಂದು ಬದಲಾವಣೆ ಮಾಡಿ ಎಂದ ಪಾರ್ಥಿವ್ ಪಟೇಲ್!]]></title>
            <link>https://kannada.asianetnews.com/cricket-sports/sanju-samson-must-play-parthiv-patel-suggests-big-change-for-team-india-for-4th-t20-vs-england-kvn/articleshow-fof68p5</link>
            <guid isPermaLink="true">https://kannada.asianetnews.com/cricket-sports/sanju-samson-must-play-parthiv-patel-suggests-big-change-for-team-india-for-4th-t20-vs-england-kvn/articleshow-fof68p5</guid>
            <pubDate>Thu, 09 Jul 2026 10:54:35 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಹಿನ್ನಡೆ ಅನುಭವಿಸಿರುವ ಭಾರತ, ಸರಣಿ ಉಳಿಸಿಕೊಳ್ಳಲು ನಾಲ್ಕನೇ ಪಂದ್ಯ ಗೆಲ್ಲಲೇಬೇಕಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲಲು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ತಂಡದ ಬ್ಯಾಟಿಂಗ್ ಸಮತೋಲನಕ್ಕಾಗಿ ಶಿವಂ ದುಬೆ ಬದಲು ಬಲಗೈ ಬ್ಯಾಟರ್ ಸಂಜು ಸ್ಯಾಮ್ಸನ್&zwnj;ಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-ani20250410032057,imgname-image-5890ffb7-3a8c-4f9b-9e5a-2f098b4878d0.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು, ಆತಿಥೇಯ ಇಂಗ್ಲೆಂಡ್ ತಂಡವು ಸದ್ಯ 2-0 ಮುನ್ನಡೆಯಲ್ಲಿದೆ. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ ಸರಣಿ ಸಮಬಲದ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೇ, ಇಂದು ನಡೆಯಲಿರುವ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದೆಲ್ಲದರ ನಡುವೆ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೇ ಆಡುವ ಹನ್ನೊಂದರ ಬಳಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್&zwnj; ಸಲಹೆ ನೀಡಿದ್ದಾರೆ.&lt;/p&gt;&lt;p&gt;ನಾಟಿಂಗ್&zwnj;ಹ್ಯಾಮ್&zwnj;ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 202 ರನ್&zwnj;ಗಳ ಕಠಿಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 76 ರನ್&zwnj;ಗಳ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತ್ತು. ಹೀಗಾಗಿ ನಾಲ್ಕನೇ ಪಂದ್ಯವನ್ನು ಗೆಲ್ಲಲು ಹಿರಿಯ ಅನುಭವಿ ಬ್ಯಾಟರ್&zwnj;ಗೆ ಮಣೆಹಾಕಲು ಟೀಮ್&zwnj; ಮ್ಯಾನೇಜ್&zwnj;ಮೆಂಟ್&zwnj;ಗೆ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಸಲಹೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಎಡಗೈ-ಬಲಗೈ ಕಾಂಬಿನೇಷನ್&zwnj;ಗಾಗಿ ಸಂಜುಗೆ ಅವಕಾಶ ಕೊಡಿ ಎಂದ ಪಾರ್ಥಿವ್ ಪಟೇಲ್:&lt;/strong&gt;&lt;/h2&gt;&lt;p&gt;ಇಂಗ್ಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 125 ರನ್&zwnj;ಗಳ ಹೀನಾಯ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ಮಾರಕ ವೇಗಿಗಳ ದಾಳಿಯ ಎದುರು ಭಾರತೀಯ ಅಗ್ರಕ್ರಮಾಂಕದ ಎಡಗೈ ಬ್ಯಾಟರ್&zwnj;ಗಳು ರನ್&zwnj; ಗಳಿಸಲು ಪರದಾಡಿದ್ದರು. ಈ ಕುರಿತಂತೆ ಜಿಯೋಹಾಟ್&zwnj;ಸ್ಟಾರ್&zwnj; ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಾರ್ಥಿವ್ ಪಟೇಲ್, ಭಾರತದ ಅಗ್ರಕ್ರಮಾಂಕದಲ್ಲಿ ಸಾಕಷ್ಟು ಎಡಗೈ ಬ್ಯಾಟರ್&zwnj;ಗಳಿರುವುದರಿಂದಾಗಿ ತಂಡದ ಸಮತೋಲನ ತಪ್ಪಿದೆ. ಈ ರೀತಿಯ ಬ್ಯಾಟಿಂಗ್ ಕ್ರಮಾಂಕ ಹೊಂದಿರುವುದರಿಂದ ಎದುರಾಳಿ ಇಂಗ್ಲೆಂಡ್ ಬೌಲರ್&zwnj;ಗಳು ಒಂದೇ ರೀತಿಯ ಪ್ಲಾನ್ ಮಾಡಿಕೊಂಡು ಭಾರತಕ್ಕೆ ಕಾಟ ಕೊಡಲಾರಂಭಿಸಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ತಂಡದೊಳಗಿದ್ದರೇ, ಎದುರಾಳಿ ಪಡೆಗೆ ಕಷ್ಟವಾಗಲಿದೆ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;'ನನ್ನ ಪ್ರಕಾರ, ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗದಲ್ಲಿ ಇರಲೇಬೇಕು. ಯಾಕೆಂದರೆ ನಾನು ಮೊದಲ ಮ್ಯಾಚ್&zwnj;ನಿಂದಲೂ ಹೇಳುತ್ತಲೇ ಬಂದಿದ್ದೇನೆ, ಟಾಪ್ 7 ಬ್ಯಾಟಿಂಗ್&zwnj;ನಲ್ಲಿ ಆರು ಎಡಗೈ ಬ್ಯಾಟರ್&zwnj;ಗಳು ಇರಲೇಬಾರದು ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಸಂಜು ಸ್ಯಾಮ್ಸನ್&zwnj;ಗಾಗಿ ಶಿವಂ ದುಬೆಯನ್ನು ಕೈಬಿಡಿ:&lt;/strong&gt;&lt;/h3&gt;&lt;p&gt;ಒಂದು ವೇಳೆ ನಾನೇ ಡ್ರೆಸ್ಸಿಂಗ್&zwnj; ರೂಮ್&zwnj;ನಲ್ಲಿದ್ದು, ತಂಡವನ್ನು ಆಯ್ಕೆ ಮಾಡುವ ಅವಕಾಶವಿದ್ದರೇ, ನನ್ನ ಗಮನ ತಿಲಕ್ ವರ್ಮಾ ಮೇಲಿರುತ್ತದೆ. ಯಾಕೆಂದರೆ ತಿಲಕ್ ವರ್ಮಾ ತಂಡದ ಉಪನಾಯಕರಾಗಿದ್ದಾರೆ. ಹೀಗಾಗಿ ನಾನು ಸಂಜು ಸ್ಯಾಮ್ಸನ್ ಆಡಿಸಲು, ಶಿವಂ ದುಬೆಯವರನ್ನು ಕೈಬಿಡುವ ತೀರ್ಮಾನ ತೆಗೆದುಕೊಳ್ಳುತ್ತಿದ್ದೆ. ಆಗ ನಮಗೆ ಆರನೇ ಬೌಲರ್ ಅವಕಾಶ ಇಲ್ಲದೇ ಹೋಗಬಹುದು, ಆದರೆ ಐವರು ಪ್ರಮುಖ ಬೌಲರ್&zwnj;ಗಳು ತಮ್ಮ ಕೋಟಾ ಮುಗಿಸಲು ಅವಕಾಶ ಮಾಡಿಕೊಡುತ್ತಿದ್ದೆ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.&lt;/p&gt;&lt;p&gt;ಇನ್ನು ಸಂಜು ಸ್ಯಾಮ್ಸನ್ ತಂಡದೊಳಗೆ ಬಂದರೆ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಬದಲು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ಸಲಹೆ ನೀಡಿದ್ದಾರೆ. ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದರೆ, ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ನಾಲ್ಕನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ಐದನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕಣಕ್ಕಿಳಿದರೆ ತಂಡ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಪಾರ್ಥಿವ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಬ್ರಿಸ್ಟೊಲ್&zwnj;ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯಕ್ಕೆ ಪಾರ್ಥಿವ್ ಪಟೇಲ್ ಆಯ್ಕೆ ಮಾಡಿದ ಭಾರತ ತಂಡ ಹೀಗಿದೆ:&lt;/strong&gt;&lt;/p&gt;&lt;p&gt;ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/sanju-samson-must-play-parthiv-patel-suggests-big-change-for-team-india-for-4th-t20-vs-england-kvn/articleshow-fof68p5"/>
        </item>
        <item>
            <title><![CDATA['ಕೋಪವೇ ವಿರಾಟ್ ಕೊಹ್ಲಿಯ ಟೆಸ್ಟ್ ವಿದಾಯಕ್ಕೆ ಕಾರಣ?' ಕಪಿಲ್ ದೇವ್ ಶಾಕಿಂಗ್ ಹೇಳಿಕೆ]]></title>
            <link>https://kannada.asianetnews.com/cricket-sports/former-indian-all-rounder-kapil-dev-breaks-silence-on-virat-kohlis-test-retirement/articleshow-gg40vdb</link>
            <guid isPermaLink="true">https://kannada.asianetnews.com/cricket-sports/former-indian-all-rounder-kapil-dev-breaks-silence-on-virat-kohlis-test-retirement/articleshow-gg40vdb</guid>
            <pubDate>Tue, 07 Jul 2026 17:35:02 +0530</pubDate>
            <description><![CDATA[&lt;p&gt;Kapil Dev on Virat Kohli's Test Retirement: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್&zwnj;ಗೆ ಬೇಗ ನಿವೃತ್ತಿ ಘೋಷಿಸಿದ್ದಾರೆ ಎಂದು ಮಾಜಿ ನಾಯಕ ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಕೋಪದಲ್ಲಿ ನಿರ್ಧಾರ ಕೈಗೊಳ್ಳಬಾರದು ಎಂದು ಸಲಹೆ ನೀಡಿದ ಅವರು, ಕೊಹ್ಲಿ ಇನ್ನೂ ಕೆಲವು ವರ್ಷ ಭಾರತಕ್ಕಾಗಿ ಟೆಸ್ಟ್ ಆಡಬಹುದಿತ್ತು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx2e1a1sepmfh47cje40vd7e,imgname-6-1749207263289.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ನಾಯಕ ಹಾಗೂ 1983ರ ವಿಶ್ವಕಪ್ ವಿಜೇತ ನಾಯಕ Kapil Dev ಅವರು Virat Kohli ಅವರ ಟೆಸ್ಟ್ ಕ್ರಿಕೆಟ್ ನಿವೃತ್ತಿ ಕುರಿತು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.&lt;strong&gt;ಕಪಿಲ್ ದೇವ್ ಏನು ಹೇಳಿದರು?&lt;/strong&gt;&lt;/p&gt;&lt;p&gt;ಕಪಿಲ್ ದೇವ್ ಅವರ ಅಭಿಪ್ರಾಯದಲ್ಲಿ, ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದರು. ಆದರೆ ಭಾವನಾತ್ಮಕ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಅವರು ಬೇಗನೆ ಟೆಸ್ಟ್ ಕ್ರಿಕೆಟ್&zwnj;ಗೆ ವಿದಾಯ ಹೇಳಿದರು ಎಂದು ಹೇಳಿದ್ದಾರೆ.&lt;/p&gt;&lt;p&gt;ಕಪಿಲ್ ದೇವ್ ಮಾತನಾಡುತ್ತಾ, &quot;10 ಸಾವಿರ ರನ್ ಗಳಿಸುವುದೇ ಮುಖ್ಯ ವಿಷಯವಲ್ಲ. ವಿರಾಟ್ ಆರು ತಿಂಗಳು ಕೋಪವನ್ನು ಬದಿಗಿಟ್ಟು, ಮತ್ತೊಮ್ಮೆ ಭಾರತಕ್ಕಾಗಿ ಆಡಲು ಅವಕಾಶ ನೀಡಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಒಮ್ಮೆ ಭಾರತಕ್ಕಾಗಿ ಆಡುವುದನ್ನು ನಿಲ್ಲಿಸಿದರೆ ಆ ಅವಕಾಶ ಮತ್ತೆ ಸಿಗುವುದಿಲ್ಲ&quot; ಎಂದು ಹೇಳಿದ್ದಾರೆ.&lt;strong&gt;ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸ್ವಭಾವದ ಬಗ್ಗೆ..&lt;/strong&gt;&lt;/p&gt;&lt;p&gt;ಅವರು ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಸ್ವಭಾವವನ್ನು ಟೆನಿಸ್ ದಿಗ್ಗಜ John McEnroe ಅವರೊಂದಿಗೆ ಹೋಲಿಕೆ ಮಾಡಿ, ಕೋಪವು ಕೆಲವೊಮ್ಮೆ ಅವರ ಯಶಸ್ಸಿನ ಭಾಗವಾಗಿದ್ದರೂ, ವೃತ್ತಿಜೀವನದ ಮಹತ್ವದ ನಿರ್ಧಾರಗಳನ್ನು ಭಾವೋದ್ವೇಗದಲ್ಲಿ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಆಯ್ಕೆಗಾರರು ಅಥವಾ ತಂಡದ ನಿರ್ವಹಣೆಯಿಂದ ಅವಕಾಶ ಸಿಗದಿದ್ದರೆ ನಿರಾಶೆಯಾಗದೆ ದೇಶೀಯ ಕ್ರಿಕೆಟ್&zwnj;ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ತಂಡಕ್ಕೆ ಮರಳಬೇಕು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಆಟಗಾರರು ಇದೇ ಮಾರ್ಗವನ್ನು ಅನುಸರಿಸಿ ಭಾರತ ತಂಡಕ್ಕೆ ಮರಳಿದ ಉದಾಹರಣೆಗಳಿವೆ ಎಂದೂ ಅವರು ತಿಳಿಸಿದ್ದಾರೆ.&lt;/p&gt;&lt;p&gt;ವಿರಾಟ್ ಕೊಹ್ಲಿ ಕಳೆದ ವರ್ಷ ಟೆಸ್ಟ್ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿ, ಈಗ ಏಕದಿನ ಕ್ರಿಕೆಟ್&zwnj;ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅವರ ನಿವೃತ್ತಿ ಕುರಿತು ಮಾಜಿ ಆಟಗಾರರು ಮತ್ತು ಅಭಿಮಾನಿಗಳ ನಡುವೆ ಚರ್ಚೆ ಇನ್ನೂ ಮುಂದುವರಿದಿದೆ.&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/former-indian-all-rounder-kapil-dev-breaks-silence-on-virat-kohlis-test-retirement/articleshow-gg40vdb"/>
        </item>
        <item>
            <title><![CDATA[ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್]]></title>
            <link>https://kannada.asianetnews.com/sports/cricketer-sourav-ganguly-biopic-rajkummar-rao-poster-release-videoshow-lt1ubzl</link>
            <guid isPermaLink="true">https://kannada.asianetnews.com/sports/cricketer-sourav-ganguly-biopic-rajkummar-rao-poster-release-videoshow-lt1ubzl</guid>
            <pubDate>Thu, 09 Jul 2026 15:58:28 +0530</pubDate>
            <description><![CDATA[&lt;p&gt;ಭಾರತೀಯ ಕ್ರಿಕೆಟ್ ಇತಿಹಾಸವನ್ನ ಬದಲಿಸಿದ, ಟೀಮ್ ಇಂಡಿಯಾಕ್ಕೆ ಆಕ್ರಮಣಕಾರಿ ಆಟ ಕಲಿಸಿದ ಆ ಪ್ರಿನ್ಸ್ ಆಫ್ ಕಲ್ಕತ್ತಾ ಸೌರವ್ ಗಂಗೂಲಿ ಲೈಫ್ ಸ್ಟೋರಿ ಈಗ ಬೆಳ್ಳಿಪರದೆಗೆ ಬರೋಕೆ ಸಜ್ಜಾಗಿದೆ. ಕಾತರದಿಂದ ಕಾಯುತ್ತಿದ್ದ 'ದಾದಾ' ಬಯೋಪಿಕ್&zwnj;ನ ಅಫೀಶಿಯಲ್ ಫಸ್ಟ್ ಲುಕ್ ರಿಲೀಸ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://geo.dailymotion.com/player/x1tbu.html?video=xanbkfu" medium="video" height="768" width="1024"/>
            <content:encoded><![CDATA[&lt;p&gt;&lt;/p&gt;&lt;p&gt;&lt;span&gt;&lt;span&gt;ಸೌರವ್ ಗಂಗೂಲಿ ಅಂದ್ರೆ ಕೇವಲ ಒಬ್ಬ ಆಟಗಾರನಲ್ಲ, ಭಾರತೀಯ ಕ್ರಿಕೆಟ್ ತಂಡದ ಜಾತಕವನ್ನೇ ಬದಲಿಸಿದ ಅದ್ಭುತ ನಾಯಕ. ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಶರ್ಟ್ ಬಿಚ್ಚಿ ಗಾಳಿಯಲ್ಲಿ ಹಾರಿಸಿ, ವಿದೇಶಿ ಮಣ್ಣಿನಲ್ಲಿ ಭಾರತ ಗೆಲ್ಲಬಲ್ಲದು ಅಂತ ತೋರಿಸಿಕೊಟ್ಟ ದಾದಾ ಬಯೋಪಿಕ್ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೆದಿತ್ತು. ಈಗ ಆ ಚಿತ್ರಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಫಸ್ಟ್ ಲುಕ್ ಸಖತ್ ಪ್ರಾಮಿಸಿಂಗ್ ಆಗಿ ಮೂಡಿಬಂದಿದೆ.&lt;/span&gt;&lt;/span&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sports/cricketer-sourav-ganguly-biopic-rajkummar-rao-poster-release-videoshow-lt1ubzl"/>
        </item>
        <item>
            <title><![CDATA[IPL Star Player: ಅಂದು ಐಪಿಎಲ್ ಮೈದಾನದಲ್ಲಿ ಅಬ್ಬರಿಸಿದ್ದ ಆಲ್ ರೌಂಡರ್;  ಇಂದು ರೈಲ್ವೆ ನಿಲ್ದಾಣದಲ್ಲಿ! ಇದು ಹಣೆಬರಹದ ಕ್ರೂರ ಆಟವೇ?]]></title>
            <link>https://kannada.asianetnews.com/sports/the-all-rounder-who-made-waves-on-the-ipl-field-that-day-today-at-the-railway-station-is-this-a-cruel-game-of-fate/articleshow-mpwz5sa</link>
            <guid isPermaLink="true">https://kannada.asianetnews.com/sports/the-all-rounder-who-made-waves-on-the-ipl-field-that-day-today-at-the-railway-station-is-this-a-cruel-game-of-fate/articleshow-mpwz5sa</guid>
            <pubDate>Wed, 08 Jul 2026 16:08:18 +0530</pubDate>
            <description><![CDATA[&lt;p&gt;ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಗಾಯಗೊಂಡಿದ್ದ ಐಪಿಎಲ್&zwnj; ಆಟಗಾರ ಇಂದು ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಕ್ರಿಕೆಟ್ ಹೊರತಾದ ಆ ಕ್ರಿಕೆಟರ್&zwnj; ಬದುಕಿನ ಕುರಿತು ಸಂಪೂರ್ಣ ವಿವರ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0mvcb1xh9rqkhqckyjfmqq,imgname-ipl-1783507038561.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್&zwnj; ಎಂಬುದು ಹಲವಾರು ಪ್ರತಿಭೆಗಳಿಗೆ ವೇಧಿಕೆಯಾಗಿದೆ. ಈ ನಿಟ್ಟಿನಲ್ಲಿ ತೆರೆಯ ಮರೆಯಲ್ಲಿ ಎಲೆಮರೆ ಕಾಯಂತಿರುವ ಅದ್ವಾನ ಪ್ರತಿಭೆಗಳು ನಮಗೆ ಐಪಿಎಲ್&zwnj; ಅಂಗಳದಲ್ಲಿ ಸಿಗುತ್ತಾರೆ. ಅದಕ್ಕೆ ವೈಭವ್ ಸೂರ್ಯವಂಶಿ ಸೇರಿ ಹಲವಾರು ಯುವ ಯಂಗ್&zwnj; ಪ್ಲೇಯರ್&zwnj;ಗಳು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಐಪಿಎಲ್ ಸ್ಟಾರ್&zwnj; ಕ್ರಿಕೆಟಿಗ್&zwnj;ರೊಬ್ಬರು ಇಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿ ಬಿದಿದ್ದಾರೆ. ಆದರೆ ಯಾರೆಂದು ಗುರುತಿಸಲಾಗಲಿಲ್ಲ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಈ ರೈಲು ನಿಲ್ದಾಣದಲ್ಲಿ ಸಿಕ್ಕಿ ಬಿದ್ದ ಸ್ಟಾರ್&zwnj; ಕ್ರಿಕೆಟಿಗ!&lt;/strong&gt;&lt;/h2&gt;&lt;p&gt;ಈ ವರ್ಷದ ಐಪಿಎಲ್&zwnj;ನಲ್ಲಿ ಅತ್ಯಂತ ವಿಶಿಷ್ಟ ಗಮನ ಸೆಳೆದದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ. ಚೆನ್ನೈ ಪ್ಲೇಆಫ್ ತಲುಪಲು ಪ್ರಯತ್ನಿಸಿತು, ಆದರೆ ತಲುಪಲು ಸಾಧ್ಯವಾಗಲಿಲ್ಲ. ಚೆನ್ನೈ ತಂಡ ಗಾಯಗಳಿಂದ ಬಳಲುತ್ತಿತ್ತು. ಚೆನ್ನೈನ ಅನೇಕ ಆಟಗಾರರು ಗಾಯಗೊಂಡು ಐಪಿಎಲ್&zwnj;ನಿಂದ ಹೊರಹೋಗಬೇಕಾಯಿತು. ಇದರಲ್ಲಿ ಈ ಆಟಗಾರನ ಹೆಸರೂ ಸೇರಿದೆ. ಈ ಆಟಗಾರನಿಗೆ ಕೇವಲ ಒಂದು ಪಂದ್ಯ ಆಡಲು ಅವಕಾಶ ಸಿಕ್ಕಿತು ಮತ್ತು ಅವರು ಗಾಯಗೊಂಡರು. ಈಗ ಅದೇ ಸಿಎಸ್&zwnj;ಕೆ ಸ್ಟಾರ್ ಪುಣೆ ರೈಲ್ವೆ ನಿಲ್ದಾಣದಲ್ಲಿ ಟಿಸಿಯಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅವರು ಗಾಯಗೊಂಡಿದ್ದರೂ, ಅವರು ಕೆಲಸವನ್ನು ಬಿಡಲಿಲ್ಲ.&lt;/p&gt;&lt;h3&gt;&lt;strong&gt;ಪುಣೆ ರೈಲು ನಿಲ್ದಾಣದಲ್ಲಿ ಟಿಸಿ ಕೆಲಸ!&lt;/strong&gt;&lt;/h3&gt;&lt;p&gt;ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗುತ್ತಿದೆ. ಅದರಲ್ಲಿ ಚೆನ್ನೈನ ಸ್ಟಾರ್ ಬೌಲರ್ ರಾಮಕೃಷ್ಣ ಘೋಷ್ ಪುಣೆ ರೈಲ್ವೆ ನಿಲ್ದಾಣದಲ್ಲಿ ಟಿಸಿ ಆಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಅಭಿಮಾನಿಯೊಬ್ಬರು ತಕ್ಷಣ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ರಾಮಕೃಷ್ಣ ಘೋಷ್ ಒಂದು ವಾರದ ಹಿಂದೆ ವಿವಾಹವಾದರು. ಅವರು ಗೌರಿ ಗುರವ್ ಅವರನ್ನು ವಿವಾಹವಾದರು. ಅವರ ಕಾಲಿನ ಗಾಯ ಈಗ ಗುಣವಾಗುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;h3&gt;&lt;strong&gt;ಮೊದಲ ಪಂದ್ಯದಲ್ಲೇ ಚಾಣಾಕ್ಷತನ ತೋರಿದ್ದ ಪ್ರತಿಭೆ!&lt;/strong&gt;&lt;/h3&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್ ಆಲ್ ರೌಂಡರ್ ರಾಮಕೃಷ್ಣ ಘೋಷ್ ಅವರ ಐಪಿಎಲ್ ಪ್ರದರ್ಶನವು ತುಂಬಾ ಕಠಿಣ ಮತ್ತು ದುರದೃಷ್ಟಕರವಾಗಿದೆ. 2025 ರ ಮೆಗಾ ಹರಾಜಿನಲ್ಲಿ, ಚೆನ್ನೈ ಈ ಯುವ ಆಟಗಾರನನ್ನು 30 ಲಕ್ಷ ರೂ. ಮೂಲ ಬೆಲೆಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿತ್ತು. ದೀರ್ಘ ಕಾಯುವಿಕೆಯ ನಂತರ, ಐಪಿಎಲ್ 2026 ರ ಋತುವಿನಲ್ಲಿ ಅವರಿಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಅವರ ಮೊದಲ ಪಂದ್ಯದಲ್ಲಿ, ಅವರು 3 ಓವರ್ ಬೌಲಿಂಗ್ ಮಾಡುವಾಗ 24 ರನ್&zwnj;ಗಳನ್ನು ನೀಡಿ ಸೂರ್ಯಕುಮಾರ್ ಯಾದವ್ ಅವರ ನಿರ್ಣಾಯಕ ವಿಕೆಟ್ ಪಡೆದರು.&lt;/p&gt;&lt;h3&gt;&lt;strong&gt;ಆಲ್&zwnj;ರೌಂಡರ್&zwnj; ಸಾಮರ್ಥ್ಯ ಶ್ಲಾಘಿಸಿದ ತಂಡ!&lt;/strong&gt;&lt;/h3&gt;&lt;p&gt;ಅದ್ಭುತ ಪ್ರದರ್ಶನದಿಂದಾಗಿ, ತಂಡದ ಆಡಳಿತ ಮಂಡಳಿ ಅವರ ಆಲ್&zwnj;ರೌಂಡರ್ ಸಾಮರ್ಥ್ಯವನ್ನು ಶ್ಲಾಘಿಸಿತು. ಆದರೆ ಅವರ ಅದೃಷ್ಟ ದುರದೃಷ್ಟಕರವಾಯಿತು. ಇದೇ ಪಂದ್ಯದ ಕೊನೆಯ ಹಂತಗಳಲ್ಲಿ, ರಾಮಕೃಷ್ಣ ಘೋಷ್ ಅವರ ಬಲಗಾಲಿಗೆ ಗಂಭೀರವಾದ ಗಾಯ (ಕಾಲು ಮುರಿತ) ಉಂಟಾಯಿತು. ಈ ಮುರಿತದಿಂದಾಗಿ, ಅವರು ಐಪಿಎಲ್ 2026 ರಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು. ಅವರ ಚೊಚ್ಚಲ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರೂ, ಗಾಯದಿಂದಾಗಿ ಹೊರಗುಳಿದಿರುವುದು ಅವರಿಗೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್&zwnj;ಗೆ ದೊಡ್ಡ ಹೊಡೆತವಾಗಿತ್ತು.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/sports/the-all-rounder-who-made-waves-on-the-ipl-field-that-day-today-at-the-railway-station-is-this-a-cruel-game-of-fate/articleshow-mpwz5sa"/>
        </item>
        <item>
            <title><![CDATA[Cricket: ಸಚಿನ್, ದ್ರಾವಿಡ್ ನಂತರ, ಅಂಡರ್-19 ತಂಡಕ್ಕೆ  ಮತ್ತೊಬ್ಬ ದಿಗ್ಗಜನ ಪುತ್ರ ಎಂಟ್ರಿ!]]></title>
            <link>https://kannada.asianetnews.com/sports/after-dravid-another-legends-son-enters-the-under-19-team-for-the-south-africa-series-bmk/articleshow-s0rd0v4</link>
            <guid isPermaLink="true">https://kannada.asianetnews.com/sports/after-dravid-another-legends-son-enters-the-under-19-team-for-the-south-africa-series-bmk/articleshow-s0rd0v4</guid>
            <pubDate>Thu, 09 Jul 2026 17:00:25 +0530</pubDate>
            <description><![CDATA[&lt;p&gt;ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಪುತ್ರರ ನಂತರ, ಇದೀಗ ಮತ್ತೊಬ್ಬ ದಿಗ್ಗಜನ ಪುತ್ರ ಕ್ರಿಕೆಟ್ ಜಗತ್ತಿನಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿರುವ ಅವರು, ಕ್ರಿಕೆಟ್&zwnj; ಲೋಕದಲ್ಲಿ ಸದ್ದು ಮಾಡುತ್ತಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3a5thycxwm7vfp0rq6g0eb,imgname-rahul-dravid-1783596509758.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರಿಗೆ ಈ ವರ್ಷದ ಐಪಿಎಲ್&zwnj;ನಲ್ಲಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ, ಆದರೆ ಲಕ್ನೋದಿಂದ ಸಿಕ್ಕ ಅವಕಾಶವನ್ನು ಅವರು ಸದ್ಬಳಿಸಿಕೊಂಡಿದ್ದಾರೆ. ಸಚಿನ್ ಮಗನ ನಂತರ, ಈಗ ರಾಹುಲ್ ದ್ರಾವಿಡ್ ಮಗ ಕೂಡ ಅಂಡರ್&zwnj; 19 ಕ್ರಿಕೆಟ್ ಆಡುತ್ತಿದ್ದಾರೆ. ದ್ರಾವಿಡ್ ಅವರ ಪುತ್ರ ಅನ್ವೇ ದ್ರಾವಿಡ್ ಶ್ರೀಲಂಕಾ ಅಂಡರ್ -19 ತಂಡದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಗಳಿಸಿದರು. ಸಚಿನ್ ಮತ್ತು ರಾಹುಲ್ ದ್ರಾವಿಡ್ ನಂತರ, ಈಗ ಮತ್ತೊಬ್ಬ ದಿಗ್ಗಜ ಆಟಗಾರನ ಮಗ 19 ವರ್ಷದೊಳಗಿನವರ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ!&lt;/p&gt;&lt;h2&gt;&lt;strong&gt;ಯಾರು ಆ ದಿಗ್ಗಜ!&lt;/strong&gt;&lt;/h2&gt;&lt;p&gt;ಹೌದು ಇಂಗ್ಲೆಂಡ್&zwnj;ನ ದಂತಕಥೆ ಆಲ್&zwnj;ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ಅವರ ಪುತ್ರ ರಾಕಿ ಫ್ಲಿಂಟಾಫ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಇಂಗ್ಲೆಂಡ್ ಕ್ರಿಕೆಟ್&zwnj;ನಲ್ಲಿ ಸುದ್ದಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್&zwnj;ನ ಅಂಡರ್-19 ತಂಡದಲ್ಲಿ ರಾಕಿ ಆಯ್ಕೆಯಾಗಿದ್ದಾರೆ.ರಾಕಿಯ ವೃತ್ತಿಜೀವನ ಭರ್ಜರಿಯಾಗಿ ಆರಂಭವಾಗಿದೆ.&lt;/p&gt;&lt;h3&gt;&lt;strong&gt;ಇನ್ನು ರಾಕಿ ಯುಗಾರಂಭ!&lt;/strong&gt;&lt;/h3&gt;&lt;p&gt;ಬಲಗೈ ಬ್ಯಾಟ್ಸ್&zwnj;ಮನ್ ಆಗಿರುವ ರಾಕಿ, ಇದುವರೆಗೆ 5 ಫಸ್ಟ್&zwnj; ಕ್ಲಾಸ್&zwnj; 8 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. ಇದಲ್ಲದೆ, ರಾಕಿ ಇಂಗ್ಲೆಂಡ್ ಲಯನ್ಸ್ ಮತ್ತು ಲಂಕಾಷೈರ್&zwnj;ನ ಎರಡನೇ ಇಲೆವೆನ್ ತಂಡದ ಭಾಗವಾಗಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಯಲ್ಲಿ ರಾಕಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಅವರು 29, ಔಟಾಗದೆ 79 ಮತ್ತು 55 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಲಯನ್ಸ್ ಪರ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;h3&gt;&lt;strong&gt;ದಾಖಲೆ ಬರೆದ ರಾಕಿ ಪ್ಲಿಂಟಾಫ್!&lt;/strong&gt;&lt;/h3&gt;&lt;p&gt;ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ರಾಕಿ ಫ್ಲಿಂಟಾಫ್ ಎರಡನೇ ಸ್ಥಾನ ಪಡೆದಿದ್ದಾರೆ. 81.5 ಸರಾಸರಿಯಲ್ಲಿ ಒಟ್ಟು 163 ರನ್ ಗಳಿಸಿದ ಅವರು 2 ಅರ್ಧಶತಕ ಗಳಿಸಿದ್ದಾರೆ. ಮುಂದಿನ ಸರಣಿಯಲ್ಲಿ ರಾಕಿ ಮೈದಾನಕ್ಕೆ ಇಳಿದರೆ, ಅವರು ಯೂತ್ ಟೆಸ್ಟ್ ಸರಣಿಯ ಭಾಗವಾಗುವುದು ಸತತ ಮೂರನೇ ಸೀಸನ್ ಆಗಿರುತ್ತದೆ. ಅವರು ಈ ಹಿಂದೆ 2025ರಲ್ಲಿ ಭಾರತದ ವಿರುದ್ಧ 93 ರನ್ ಗಳಿಸಿದ್ದರು ಮತ್ತು ಅದಕ್ಕೂ ಹಿಂದಿನ ಸೀಸನ್&zwnj;ನಲ್ಲಿ ಶ್ರೀಲಂಕಾ ವಿರುದ್ಧ ರಾಕಿ 106 ರನ್ ಗಳಿಸಿದ್ದಾರೆ.&lt;/p&gt;&lt;h3&gt;&lt;strong&gt;ರೋಲ್ಫ್ ಆಲ್ಬರ್ಟ್ ಗೆ ನಾಯಕತ್ವ!&lt;/strong&gt;&lt;/h3&gt;&lt;p&gt;ದಕ್ಷಿಣ ಆಫ್ರಿಕಾ ವಿರುದ್ಧದ ಯೂತ್ ಟೆಸ್ಟ್ ಸರಣಿಗೆ ಇಂಗ್ಲೆಂಡ್ 15 ಜನರ ತಂಡವನ್ನು ಪ್ರಕಟಿಸಿದ್ದು, ಸರ್ರೆಯ ರೋಲ್ಫ್ ಆಲ್ಬರ್ಟ್ ನಾಯಕತ್ವ ವಹಿಸಿದ್ದಾರೆ. ಆಲ್ಬರ್ಟ್ ನಾಯಕತ್ವದಲ್ಲಿ ಇಂಗ್ಲೆಂಡ್ ODI ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಸೋಮವಾರ ನಡೆದ ಅಂತಿಮ ODI ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾವನ್ನು 76 ರನ್&zwnj;ಗಳಿಂದ ಸೋಲಿಸಿತು. ಇದರ ನಂತರ, ಮುಂದಿನ ವಾರ ಯೂತ್ ಟೆಸ್ಟ್ ಆರಂಭವಾಗಲಿದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/sports/after-dravid-another-legends-son-enters-the-under-19-team-for-the-south-africa-series-bmk/articleshow-s0rd0v4"/>
        </item>
        <item>
            <title><![CDATA[‘‘ನೀನು ಎಂದರೆ, ನಿಮ್ಮಪ್ಪ’’ ಎನ್ನುತ್ತಿದ್ದ ನಾಯಕ..! ಆಕ್ರಮಣಕಾರಿ ಮನೋಭಾವ ಅವನ ಗುರುತು.. ಸ್ವಾಭಿಮಾನ ಅವನ ಹೆಗ್ಗುರುತು..!]]></title>
            <link>https://kannada.asianetnews.com/cricket-sports/happy-birthday-sourav-ganguly-the-fearless-leader-who-changed-indian-cricket-kvn/articleshow-s4panc9</link>
            <guid isPermaLink="true">https://kannada.asianetnews.com/cricket-sports/happy-birthday-sourav-ganguly-the-fearless-leader-who-changed-indian-cricket-kvn/articleshow-s4panc9</guid>
            <pubDate>Wed, 08 Jul 2026 13:14:14 +0530</pubDate>
            <description><![CDATA[ಸೌರವ್ ಗಂಗೂಲಿ, ಭಾರತೀಯ ಕ್ರಿಕೆಟ್&zwnj;ಗೆ ಹೊಸ ದಿಕ್ಕು ತೋರಿದ ನಾಯಕ. ತಮ್ಮ ಆಕ್ರಮಣಕಾರಿ ನಾಯಕತ್ವದಿಂದ, ವಿದೇಶದಲ್ಲೂ ಗೆಲ್ಲುವ ಛಾತಿಯನ್ನು ತಂಡದಲ್ಲಿ ತುಂಬಿದ್ದಲ್ಲದೆ, ಸೆಹ್ವಾಗ್, ಯುವರಾಜ್, ಧೋನಿಯಂತಹ ಮ್ಯಾಚ್ ವಿನ್ನರ್&zwnj;ಗಳನ್ನು ರೂಪಿಸಿ, ಭಾರತೀಯ ಕ್ರಿಕೆಟ್'ನ 'ನೇತಾರ' ಎನಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01jjc4j4wbm729d3yrvj1g307e,imgname-sourav-ganguly--1737721713546.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;&lsquo;ನೀನು ಎಂದರೆ, ನಿಮ್ಮಪ್ಪ&rsquo;&rsquo; ಎನ್ನುತ್ತಿದ್ದ ನಾಯಕ.. ಅವಮಾನವನ್ನು ಸಹಿಸದ ನಾಯಕ.. ನೆನಪಿದೆಯೇ ಆ ದೃಶ್ಯ..?&lt;/p&gt;&lt;p&gt;2002.. ಕ್ರಿಕೆಟ್ ಕಾಶಿ ಲಾರ್ಡ್ಸ್ ಪೆವಿಲಿಯನ್.. ಮೊಹಮ್ಮದ್ ಕೈಫ್ ಮತ್ತು ಜಹೀರ್ ಖಾನ್ ಭಾರತವನ್ನು ಗೆಲ್ಲಿಸುತ್ತಿದ್ದಂತೆ ದೇಹದ ಮೇಲಿದ್ದ ಜರ್ಸಿ ಬಿಚ್ಚಿ ಗಿರಗಿರ ತಿರುಗಿಸಿದ್ದ ದಾದಾ.. ಕ್ರಿಕೆಟ್ ಜಗತ್ತೇ ಅತ್ತ ತಿರುಗಿ ನೋಡುವಂತೆ ಸಂಭ್ರಮಿಸಿದ್ದ ಬಂಗಾಳದ ಮಹಾರಾಜ. ಭಾರತೀಯ ಕ್ರಿಕೆಟ್&rsquo;ನ ಐಕಾನಿಕ್ ಕ್ಷಣಗಳಲ್ಲೊಂದು ಆ ದೃಶ್ಯ. ಅವತ್ತು ಸೌರವ್ ಗಂಗೂಲಿ ಹಾಗೆ ಮಾಡಲು ಕಾರಣವಿತ್ತು.&lt;/p&gt;&lt;p&gt;ಒಂದೇ ವರ್ಷದ ಹಿಂದೆ.. 2001ರಲ್ಲಿ ಭಾರತಕ್ಕೆ ಬಂದಿದ್ದ ಇಂಗ್ಲೆಂಡ್ ಇಲ್ಲಿ 6 ಪಂದ್ಯಗಳ ಏಕದಿನ ಸರಣಿಯನ್ನು ಸಮಬಲ ಮಾಡಿಕೊಂಡು ಹೋಗಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಇಂಗ್ಲೆಂಡ್ ಅಲ್ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್ ಮೈದಾನದಲ್ಲೇ ಜರ್ಸಿ ಬಿಚ್ಚಿ ಕುಣಿದಾಡಿದ್ದ.&lt;/p&gt;&lt;p&gt;ಬಂಗಾಳದ ಹುಲಿ ಕೆರಳಿತ್ತು. ದಾದಾ ಯಾವತ್ತಿಗೂ &lsquo;ಕೊಟ್ಟದ್ದನ್ನು ವಾಪಸ್ ಕೊಡದೆ ಇರಲಾರ&rsquo;. ಯಾವ ನೆಲದಲ್ಲಿ ಕ್ರಿಕೆಟ್ ಹುಟ್ಟಿತೋ ಅದೇ ನೆಲದಲ್ಲಿ ನಿಂತು ಜರ್ಸಿ ಬಿಚ್ಚಿ ಅಬ್ಬರಿಸಿಬಿಟ್ಟ ದಾದಾ.&lt;/p&gt;&lt;h2&gt;&lt;strong&gt;ಗಂಗೂಲಿ ಆಡಲು ಬಂದವನಲ್ಲ ಆಳಲು ಬಂದವನು!&lt;/strong&gt;&lt;/h2&gt;&lt;p&gt;ಬಂಗಾಳದ ಮಹಾರಾಜನ ನಡಿಗೆಯಲ್ಲೇ ರಾಜಗಾಂಭೀರ್ಯವಿರುತ್ತಿತ್ತು. ಆಡಲು ಅಲ್ಲ, ಆಳಲೆಂದೇ ಹುಟ್ಟಿದವನು ಅವನು. He is the face of fearless Indian Cricket. ಇತಿಹಾಸವನ್ನು ಬೆನ್ನತ್ತಿದವನಲ್ಲ, ಇತಿಹಾಸ ಬರೆದವನು ಬಂಗಾಳದ ದಾದಾ. ಗಂಗೂಲಿ ಎರಡು ಹೆಜ್ಜೆ ಮುಂದೆ ನುಗ್ಗಿದನೆಂದರೆ ಎದುರಲ್ಲಿದ್ದ ಬೌಲರ್ ಹೆಜ್ಜೆ ಹಿಂದಿಡಲೇಬೇಕು. ಸೌರವ್ ಸಿಕ್ಸರ್ ಬಾರಿಸುತ್ತಿದ್ದ ಪರಿಯೇ ಅದ್ಭುತ. 90ರ ದಶಕದಿಂದೀಚೆಗೆ ಭಾರತೀಯ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಎಡಗೈ ದಾಂಡಿಗ ಸೌರವ್ ಗಂಗೂಲಿ. ಅತಿಶಯೋಕ್ತಿಯಲ್ಲ ಇದು.&lt;/p&gt;&lt;p&gt;ಯುವರಾಜ್ ಸಿಂಗ್ ಆಗಮನಕ್ಕೂ ಮುನ್ನ ಕಣ್ಣು ಕುಕ್ಕುವ ರೀತಿಯಲ್ಲಿ ಚೆಂಡನ್ನು ಲೀಲಾಜಾಲವಾಗಿ ಸಿಕ್ಸರ್&rsquo;ಗಟ್ಟುತ್ತಿದ್ದವನು ದಾದಾ. ದಾಖಲೆಗಳು ವ್ಯಕ್ತಿಗಷ್ಟೇ ಕೀರ್ತಿ ತಂದು ಕೊಡುತ್ತವೆ. ಪಂದ್ಯ ಗೆಲ್ಲಿಸುವುದು ಯಾವತ್ತೂ ಮ್ಯಾಚ್ ವಿನ್ನರ್&rsquo;ಗಳೇ. ಸೌರವ್ ಗಂಗೂಲಿ ಕಟ್ಟಿದ ತಂಡದ ಯಶಸ್ಸಿನ ಮೂಲ ಮಂತ್ರ ಅದೇ ಮ್ಯಾಚ್ ವಿನ್ನರ್&rsquo;ಗಳು. ಜಹೀರ್ ಖಾನ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್&rsquo;ರಂಥಾ ಮ್ಯಾಚ್ ವಿನ್ನರ್&rsquo;ಗಳನ್ನು ಬೆಳೆಸಿದ್ದ ಸೌರವ್ ಗಂಗೂಲಿ ಭಾರತ ತಂಡದಲ್ಲಿ ಹೊಸ ಹುಡುಗರ ಪಾಲಿಗೆ ನಿಜಕ್ಕೂ ದಾದಾನಂತಿದ್ದವನು.&lt;/p&gt;&lt;h3&gt;&lt;strong&gt;ಪಂದ್ಯ ಗೆಲ್ಲಿಸಬಲ್ಲ ಆಟಗಾರರನ್ನು ಹುಡುಕಿ ತಂದ ದಾದಾ&lt;/strong&gt;&lt;/h3&gt;&lt;p&gt;2000ನೇ ಇಸವಿಯಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಬೆನ್ನಲ್ಲೇ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಭಾರತ ತಂಡದಲ್ಲಿದ್ದರು. ಜಾವಗಲ್ ಶ್ರೀನಾಥ್ ಮಾಡಿದ ಒಂದೇ ಒಂದು ಫೋನ್ ಕಾಲ್&rsquo;ಗೆ ಜಹೀರ್ ಖಾನ್ ದಾದಾ ಗರಡಿಗೆ ಬಂದು ಸೇರಿದ್ದ. ಒಂದೇ ನೋಟಕ್ಕೆ ಹರ್ಭಜನ್ ಸಿಂಗ್ ಟೀಮ್ ಇಂಡಿಯಾಗೆ ಮರಳಿದ್ದ. ಮಹೇಂದ್ರ ಸಿಂಗ್ ಧೋನಿ ಎಂಬ ಬ್ಯಾಟಿಂಗ್ ಸಿಡಿಲನ್ನು ಹುಡುಕಿ ತಂದವರೂ ಅವರೇ. ಧೋನಿ ಬಗ್ಗೆ ಗಂಗೂಲಿಗೆ ಬಂಗಾಳದ ಜೊತೆಗಾರ ಸಾಬಾ ಕರೀಮ್ ಹೇಳಿದ್ದರಂತೆ. ಒಂದು ದಿನ ಜೆಮ್ಶೆಡ್&rsquo;ಪುರದಲ್ಲಿ ಧೋನಿ ಆಡುತ್ತಿದ್ದಾನೆ ಎಂಬ ಸುದ್ದಿ ಗಂಗೂಲಿ ಕಿವಿಗೆ ಬಿತ್ತು. ಕೋಲ್ಕತಾದಿಂದ ನೇರವಾಗಿ 283 ಕಿ.ಮಿ ದೂರದ ಜೆಮ್ಶೆಡ್&rsquo;ಪುರಕ್ಕೆ ಹೊರಟೇ ಬಿಟ್ಟರು ಸೌರವ್. ನನ್ನ ಆಟವನ್ನು ನೋಡಲು ಸ್ವತಃ ಭಾರತ ತಂಡದ ನಾಯಕನೇ ಬಂದಿದ್ದಾನೆ ಎಂಬ ಸಣ್ಣ ಸುಳಿವೂ ಧೋನಿಗಿರಲಿಲ್ಲ. ಆ ದಿನ ಧೋನಿ ಬಾರಿಸಿದ ದೊಡ್ಡ ದೊಡ್ಡ ಸಿಕ್ಸರ್&rsquo;ಗಳನ್ನು ನೋಡಿ ಸೌರವ್ ಗಂಗೂಲಿ ದಂಗಾಗಿ ಬಿಟ್ಟರು. ಕೆಲವೇ ದಿನಗಳ ಒಳಗೆ ಧೋನಿ ಭಾರತ ತಂಡದಲ್ಲಿದ್ದ.&lt;/p&gt;&lt;p&gt;ಪಂದ್ಯ ಗೆಲ್ಲಿಸಬಲ್ಲ ಆಟಗಾರ ಯಾವುದೇ ಮೂಲೆಯಲ್ಲಿರಲಿ.. ಸೌರವ್ ಗಂಗೂಲಿಯವರ ಹದ್ದಿನ ಕಣ್ಣುಗಳಿಗೆ ಬಿದ್ದರೆ ಆತ ನೇರವಾಗಿ ಭಾರತ ತಂಡದಲ್ಲಿರುತ್ತಿದ್ದ.&lt;/p&gt;&lt;p&gt;&lsquo;&lsquo;ಗಂಗೂಲಿಯಂಥಾ ನಾಯಕ ನನಗೆ ಸಿಕ್ಕಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್&rsquo;ನಲ್ಲಿ 500 ವಿಕೆಟ್&rsquo;ಗಳನ್ನು ಪಡೆಯುತ್ತಿದ್ದೆ&rsquo;&rsquo; ಎಂದವನು ಪಾಕಿಸ್ತಾನದ ಶರವೇಗದ ಸರದಾರ, ರಾವಲ್ಪಿಂಡಿ ಎಕ್ಸ್&rsquo;ಪ್ರೆಸ್ ಶೋಯೆಬ್ ಅಖ್ತರ್. ಹೌದು.. ಸೌರವ್ ಗಂಗೂಲಿ ಅಂಥಾ ನಾಯಕ.&lt;/p&gt;&lt;p&gt;ಏಕದಿನ ಕ್ರಿಕೆಟ್&rsquo;ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿಯವರದ್ದು ಅದ್ಭುತ ಆರಂಭಿಕ ಜೋಡಿ. ವಸೀಂ ಅಕ್ರಂ, ವಕಾರ್ ಯೂನಿಸ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರ್, ಗ್ಲೆನ್ ಮೆಗ್ರಾತ್, ಅಲನ್ ಡೊನಾಲ್ಡ್, ಶಾನ್ ಪೊಲ್ಲಾಕ್, ಚಮಿಂಡ ವಾಸ್&rsquo;ರಂತ ಶ್ರೇಷ್ಠರ ವಿರುದ್ಧ ಆಡಿ 26 ಏಕದಿನ ಶತಕಗಳ ಜೊತೆಯಾಟವಾಡಿದ್ದ ಜೋಡಿಯನ್ನು ಮುರಿದವನು ನಝಾಫ್&rsquo;ಗಢದ ನವಾಬ ವೀರೇಂದ್ರ ಸೆಹ್ವಾಗ್ ಮತ್ತು ಅದಕ್ಕೆ ಬೆಂಬಲವಾಗಿ ನಿಂತವರು ಸ್ವತಃ ಸೌರವ್ ಗಂಗೂಲಿ!&lt;/p&gt;&lt;p&gt;&lsquo;&lsquo;ಜಗತ್ತೇ ನಿನಗೆ ಎದುರಾಗಿ ನಿಲ್ಲಲಿ. ನಾನಿದ್ದೇನೆ ನಿನ್ನ ಜೊತೆ&rsquo;&rsquo; ಎಂದಿದ್ದರು ಗಂಗೂಲಿ. ಅಷ್ಟು ಸಾಕಿತ್ತು ನಝಾಫ್&rsquo;ಗಢದ ಬೀಡುಬೀಸಿನ ಯುವಕನಿಗೆ. &lsquo;&lsquo;ನನ್ನ ಜಾಗದಲ್ಲಿ ನೀನು ಆಡು..&rsquo;&rsquo; ಎಂಥಾ ದೊಡ್ಡ ಮನಸ್ಸು.. ದೊಡ್ಡ ನಿರ್ಧಾರ..!. &lsquo;&lsquo;ಇದು ನನ್ನ ಜಾಗ.. ಅದನ್ನು ಮತ್ತೊಬ್ಬನಿಗೆ ಬಿಟ್ಟು ಕೊಡಲಾರೆ&rsquo;&rsquo; ಎಂದವರ ಮಧ್ಯೆ ಸ್ವಾರ್ಥವನ್ನು ಬದಿಗಿಟ್ಟು ಯೋಚಿಸುವವರಿಗೆ ಮಾತ್ರ ಇಂತಹ ಯೋಚನೆ ಬರಲು ಸಾಧ್ಯ..&lt;/p&gt;&lt;p&gt;ಭಾರತೀಯ ಕ್ರಿಕೆಟ್&rsquo;ನ ಸರ್ವಶ್ರೇಷ್ಠ ನಾಯಕ ಯಾರು ಎಂದು ಕೇಳಿದರೆ, ಬಹುತೇಕರ ಆಯ್ಕೆ ಸೌರವ್ ಗಂಗೂಲಿ. ಆದರೆ ನನ್ನ ಪ್ರಕಾರ ಗಂಗೂಲಿ ನಾಯಕನೇ ಅಲ್ಲ.. ಅವನು ನೇತಾರ.. ಲೀಡರ್..! ಮ್ಯಾಚ್ ಫಿಕ್ಸಿಂಗ್ ಬಿರುಗಾಳಿಗೆ ಭಾರತೀಯ ಕ್ರಿಕೆಟ್&rsquo;ನ ಅಸ್ತಿತ್ವವೇ ಅಲುಗಾಡುತ್ತಿದ್ದ ಸಮಯ. ತಲೆ ತಗ್ಗಿಸಿ ನಿಂತವರು ಗರ್ವದಿಂದ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಗತ್ತು, ಗೌರತ್ತಿನ ನಾಯಕ ಸೌರವ್ ಗಂಗೂಲಿ. &lsquo;&lsquo;ತವರಿನ ಹುಲಿ, ವಿದೇಶದಲ್ಲಿ ಇಲಿ..&rsquo;&rsquo; ಬಾಲ್ಯದಲ್ಲಿ ಅದೆಷ್ಟು ಬಾರಿ ಇದನ್ನು ಕೇಳಿದ್ದೆವೋ. ವಿದೇಶಗಳಲ್ಲಿ.. ಅದರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್ ನೆಲಗಳಲ್ಲಿ ಭಾರತ ತಂಡ ಗೆಲ್ಲುವುದನ್ನೇ ಮರೆತಿದ್ದ ಕಾಲಘಟ್ಟ..&lt;/p&gt;&lt;p&gt;ತಂಡದಲ್ಲಿ ದಿಗ್ಗಜರೇ ಇದ್ದರು ನಿಜ. ಆದರೆ ನಮ್ಮದಲ್ಲದ ನೆಲಗಳಲ್ಲಿ ಗೆಲ್ಲುವುದು ಗೊತ್ತಿರಲಿಲ್ಲ. ಅಂಥಾ ತಂಡಕ್ಕೆ ಸಪ್ತಸಾಗರದಾಚೆ ಗೆಲ್ಲುವುದನ್ನು ಕಲಿಸಿಕೊಟ್ಟವರು ಸೌರವ್ ಗಂಗೂಲಿ.&lt;/p&gt;&lt;p&gt;ಯಾರ ಕೈಗೂ ದಾಳವಾಗದ, ಯಾರಿಗೂ ತಲೆ ಬಾಗದ ಸೌರವ್ ಗಂಗೂಲಿ ಕಲಿಸಿಕೊಟ್ಟದ್ದು ಸ್ವಾಭಿಮಾನದ ಆಟ...&lt;/p&gt;&lt;p&gt;ನನ್ನ ಇಷ್ಟದ ನಾಯಕನ ಜನ್ಮದಿನ ಇವತ್ತು. ಹುಟ್ಟುಹಬ್ಬದ ಶುಭಾಶಯಗಳು ದಾದಾ&lt;/p&gt;]]></content:encoded>
            <category>cricket-sports</category>
            <dc:creator>Suvarna News</dc:creator>
            <atom:link href="https://kannada.asianetnews.com/cricket-sports/happy-birthday-sourav-ganguly-the-fearless-leader-who-changed-indian-cricket-kvn/articleshow-s4panc9"/>
        </item>
        <item>
            <title><![CDATA[ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು]]></title>
            <link>https://kannada.asianetnews.com/gallery/cricket-sports/colse-friend-shapoor-zadran-rashid-khan-cried-while-carrying-the-dead-body-gkn-s8fpqkm</link>
            <guid isPermaLink="true">https://kannada.asianetnews.com/gallery/cricket-sports/colse-friend-shapoor-zadran-rashid-khan-cried-while-carrying-the-dead-body-gkn-s8fpqkm</guid>
            <pubDate>Thu, 09 Jul 2026 09:39:02 +0530</pubDate>
            <description><![CDATA[&lt;p&gt;ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್&zwnj;ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2g554gfeg8esr4d1ah3d33,imgname-shapoor-zadran--4--1783569224848.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್&zwnj;ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.&lt;/p&gt;&lt;img&gt;&lt;p&gt;ಕಾಬೂಲ್: ವಿಧಿಯ ಆಟ ಯಾರೂ ಬಲ್ಲರು? ಸಂಭ್ರಮಿಸಬೇಕಿದ್ದ ದಿನವೇ ಸೂತಕದ ಛಾಯೆ ಆವರಿಸಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ದಿಗ್ಗಜ ವೇಗಿ ಶಾಪೂರ್ ಜದ್ರಾನ್ ಅವರ ಅಂತ್ಯಕ್ರಿಯೆ ಅತೀವ ನೋವಿನ ನಡುವೆ ನಡೆದಿದೆ. ಜೀವನದ ಹೋರಾಟದಲ್ಲಿ ಗೆದ್ದಿದ್ದ ಈ ವೀರ, ಸಾವಿನ ಮುಂದೆ ಮಂಡಿಯೂರಿರುವುದು ಇಡೀ ಕ್ರಿಕೆಟ್ ಲೋಕವನ್ನೇ ಕಣ್ಣೀರಲ್ಲಿ ಮುಳುಗಿಸಿದೆ.&lt;/p&gt;&lt;img&gt;&lt;p&gt;ಜುಲೈ 8 ಶಾಪೂರ್ ಜದ್ರಾನ್ ಅವರ 39ನೇ ಹುಟ್ಟುಹಬ್ಬ. ಮನೆಯವರೆಲ್ಲಾ ಸಂಭ್ರಮದ ಸಿದ್ಧತೆಯಲ್ಲಿದ್ದರೆ, ಅತ್ತ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಅವರ ಪಾರ್ಥಿವ ಶರೀರ ಕಾಬೂಲ್&zwnj;ಗೆ ತಲುಪಿತು. ಕೇಕ್ ಕತ್ತರಿಸಿ ಸಂಭ್ರಮಿಸಬೇಕಿದ್ದ ದಿನವೇ ಕುಟುಂಬಸ್ಥರು ಮತ್ತು ಸಹ ಆಟಗಾರರು ಅವರ ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.&lt;/p&gt;&lt;img&gt;&lt;p&gt;ಕಾಬೂಲ್ ವಿಮಾನ ನಿಲ್ದಾಣಕ್ಕೆ ಶಾಪೂರ್ ಪಾರ್ಥಿವ ಶರೀರ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಹಾಗೂ ಕ್ರಿಕೆಟಿಗರ ಕಣ್ಣೀರ ಕೋಡಿ ಹರಿಯಿತು. ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ತಮ್ಮ ಹಿರಿಯ ಸಹೋದರನಂತಿದ್ದ ಶಾಪೂರ್ ಮೃತದೇಹ ಕಂಡು ಬಿಕ್ಕಿ ಬಿಕ್ಕಿ ಅತ್ತರು. ಅಷ್ಟೇ ಅಲ್ಲದೆ, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ತಾವೇ ಮುಂದೆ ನಿಂತು ಶಾಪೂರ್ ಅವರ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದರು. ವಿಶ್ವದ ಶ್ರೇಷ್ಠ ಸ್ಪಿನ್ನರ್ ತನ್ನ ಆಪ್ತ ಗೆಳೆಯನ ಶವಪೆಟ್ಟಿಗೆಯನ್ನು ಹೊತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುತ್ತಿವೆ.&lt;/p&gt;&lt;img&gt;&lt;p&gt;ರೋಗನಿರೋಧಕ ಶಕ್ತಿಗೆ (Immune System) ಸಂಬಂಧಿಸಿದ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶಾಪೂರ್ ಅವರು ದೆಹಲಿ-ಎನ್&zwnj;ಸಿಆರ್&zwnj;ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾರತದ ನೆಲದಲ್ಲಿ ಕೊನೆಯುಸಿರೆಳೆದ ಇವರು, ತಮ್ಮ ಕೆರಿಯರ್&zwnj;ನಲ್ಲಿ ಭಾರತದ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಅವರಂತಹ ಘಟಾನುಘಟಿಗಳ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಎತ್ತರದ ನಿಲುವು, ಹಾರುವ ಉದ್ದನೆಯ ಕೂದಲು ಮತ್ತು ಬೆಂಕಿಯಂತಹ ವೇಗದ ಬೌಲಿಂಗ್&zwnj;ಗೆ ಇವರು ಹೆಸರುವಾಸಿಯಾಗಿದ್ದರು.&lt;/p&gt;&lt;img&gt;&lt;p&gt;ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ನೇತೃತ್ವದಲ್ಲಿ ಗುರುವಾರ ಕಾಬೂಲ್&zwnj;ನ ಈದ್ಗಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದಿದೆ. ನಂತರ ಮರಂಜನ್ ಹಿಲ್ ಸ್ಮಶಾನದಲ್ಲಿ ಅವರನ್ನು ಸಕಲ ಗೌರವಗಳೊಂದಿಗೆ ಸುಪುರ್ದೆ-ಎ-ಖಾಕ್ (ಅಂತ್ಯಕ್ರಿಯೆ) ಮಾಡಲಾಗಿದೆ. ಅಫ್ಘಾನ್ ಕ್ರಿಕೆಟ್ ತಂಡ ಬೆಳೆದು ನಿಲ್ಲಲು ಭದ್ರ ಬುನಾದಿ ಹಾಕಿದ್ದ ಶಾಪೂರ್, ಇಂದು ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ರಶೀದ್ ಖಾನ್&zwnj;ರಂತಹ ಆಟಗಾರರು ಪ್ರತಿ ವಿಕೆಟ್ ಪಡೆದಾಗಲೂ ಶಾಪೂರ್ ನೆನಪಾಗುತ್ತಲೇ ಇರುತ್ತಾರೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/cricket-sports/colse-friend-shapoor-zadran-rashid-khan-cried-while-carrying-the-dead-body-gkn-s8fpqkm"/>
        </item>
        <item>
            <title><![CDATA['ಇನ್ನೂ ಎರಡು ಮ್ಯಾಚ್ ಇದೆ...': 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!]]></title>
            <link>https://kannada.asianetnews.com/gallery/cricket-sports/jofra-archer-sends-strong-warning-to-vaibhav-sooryavanshi-after-third-t20-kvn-t9zzx2x</link>
            <guid isPermaLink="true">https://kannada.asianetnews.com/gallery/cricket-sports/jofra-archer-sends-strong-warning-to-vaibhav-sooryavanshi-after-third-t20-kvn-t9zzx2x</guid>
            <pubDate>Wed, 08 Jul 2026 15:59:23 +0530</pubDate>
            <description><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwze56ry6htsys5vpmy5p4rk,imgname-england-v-india--vaibhav-sooryavanshi-1783466466078.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 202 ರನ್&zwnj;ಗಳ ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದರು. ಎರಡು ಸಿಕ್ಸರ್ ಸಿಡಿಸಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ 15 ವರ್ಷದ ವೈಭವ್ ಸೂರ್ಯವಂಶಿಯನ್ನು ಬಲಿ ಪಡೆಯುವಲ್ಲಿ ವೇಗಿ ಜೋಫ್ರಾ ಆರ್ಚರ್ ಯಶಸ್ವಿಯಾದರು. ಇದೀಗ ವೈಭವ್ ಸೂರ್ಯವಂಶಿ ಬಗ್ಗೆ ಆರ್ಚರ್ ಅಚ್ಚರಿಯ ಹೇಳಿಕೆ ನೀಡಿದ್ದು ಮಾತ್ರವಲ್ಲದೇ, ಮುಂಬರುವ ಪಂದ್ಯಗಳ ಕುರಿತಂತೆ ಯುವ ಆಟಗಾರನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಜೋಫ್ರಾ ಆರ್ಚರ್ ಹಾಗೂ ವೈಭವ್ ಸೂರ್ಯವಂಶಿ ನಡುವೆ ಈ ಟಿ20 ಸರಣಿಯಲ್ಲಿ ದೊಡ್ಡ ಪೈಪೋಟಿ ಏರ್ಪಟ್ಟಿದೆ. ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ, ಆರ್ಚರ್&zwnj;ಗೆ ಸಿಕ್ಸರ್ ಚಚ್ಚಿದ್ದರು. ಮೂರನೇ ಟಿ20 ಪಂದ್ಯದಲ್ಲೂ ಅದನ್ನೇ ರಿಪೀಟ್ ಮಾಡಿದ್ದರು. ಆದರೆ ಇದಾದ ಬಳಿಕ ಸತತವಾಗಿ ಬೌನ್ಸರ್ ಎಸೆಯುವ ಮೂಲಕ ಆರ್ಚರ್&zwnj;, ಸೂರ್ಯವಂಶಿಯನ್ನು ಕೇವಲ 13 ರನ್&zwnj;ಗಳಿಗೆ ಔಟ್ ಮಾಡುವಲ್ಲಿ ಯಶಸ್ವಿಯಾದರು.&lt;/p&gt;&lt;img&gt;&lt;p&gt;ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಮ್ಯಾಚ್ ಮುಕ್ತಾಯವಾದ ಬಳಿಕ ಮಾತನಾಡಿದ ಆರ್ಚರ್, ಎರಡು ಸಿಕ್ಸರ್ ಚಚ್ಚಿದ ವೈಭವ್ ಸೂರ್ಯವಂಶಿಯನ್ನು ಔಟ್ ಮಾಡಿ ಸೇಡು ತೀರಿಸಿಕೊಂಡೆ. ಈಗ ಲೆಕ್ಕ ಚುಕ್ತವಾಗಿದೆ ಎಂದೆನಿಸುತ್ತಿದೆ ಎಂದು ಇಂಗ್ಲೆಂಡ್ ಮಾರಕ ವೇಗಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಭಾರತ ಹಾಗೂ ಇಂಗ್ಲೆಂಡ್ ನಡುವೆ ಇನ್ನೂ ಎರಡು ಟಿ20 ಪಂದ್ಯಗಳು ನಡೆಯುವುದು ಬಾಕಿ ಇದೆ. ಮುಂದಿನ ಎರಡು ಪಂದ್ಯಗಳಿಗೂ ಮುನ್ನ 15 ವರ್ಷದ ಸೂರ್ಯವಂಶಿಗೆ ಆರ್ಚರ್&zwnj;ಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೂ ಎರಡು ಮ್ಯಾಚ್ ಬಾಕಿ ಇದೆ. ಯಾರು ಬೇಕಾದರೂ ಮೇಲುಗೈ ಸಾಧಿಸಬಹುದು. ಯಾರು ಚೆನ್ನಾಗಿ ಆಡುತ್ತಾರೋ ಅವರೇ ಮೇಲುಗೈ ಸಾಧಿಸುತ್ತಾರೆ ಎಂದು ಆರ್ಚರ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಹಾಲಿ ಚಾಂಪಿಯನ್ ಭಾರತ ಎದುರು ಸತತ ಎರಡು ಗೆಲುವು ಸಾಧಿಸಿದ ಇಂಗ್ಲೆಂಡ್ ಪ್ರದರ್ಶನದ ಬಗ್ಗೆ ಮಾತನಾಡಿದ ಆರ್ಚರ್, ಒಮ್ಮೊಮ್ಮೆ ತಮ್ಮ ಗೆಲುವಿನ ಜೋಶ್&zwnj; ಅನ್ನು ಕಂಟ್ರೋಲ್ ಮಾಡಬೇಕಾಗುತ್ತದೆ. ನಾವು ಚೆನ್ನಾಗಿ ಆಡಿದ್ದರಿಂದ ಫಲಿತಾಂಶ ನಮ್ಮ ಪರವಾಗಿ ಬಂದಿದೆ ಎಂದು ಆರ್ಚರ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವು ಜುಲೈ 09ರಂದು ಬ್ರಿಸ್ಟಾಲ್&zwnj;ನಲ್ಲಿ ನಡೆಯಲಿದೆ. ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ಅರ್ಧಕ್ಕೆ ರದ್ದಾಗಿತ್ತು. ಇದೀಗ ಸಮಬಲ ಸಾಧಿಸಬೇಕಿದ್ದರೇ ನಾಲ್ಕನೇ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಟೀಂ ಇಂಡಿಯಾ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/jofra-archer-sends-strong-warning-to-vaibhav-sooryavanshi-after-third-t20-kvn-t9zzx2x"/>
        </item>
        <item>
            <title><![CDATA[Ind vs Eng 4th T20I: ಸಂಜು ಸ್ಯಾಮ್ಸನ್‌ ನಾಲ್ಕನೇ ಟಿ20 ಮ್ಯಾಚ್ ಆಡೋದು ಫಿಕ್ಸ್, ಹಾಗಿದ್ರೆ ಗೇಟ್‌ಪಾಸ್ ಯಾರಿಗೆ?]]></title>
            <link>https://kannada.asianetnews.com/gallery/cricket-sports/sanju-samson-could-replace-tilak-varma-in-india-playing-xi-vs-england-in-4th-t20-kvn-wx62crx</link>
            <guid isPermaLink="true">https://kannada.asianetnews.com/gallery/cricket-sports/sanju-samson-could-replace-tilak-varma-in-india-playing-xi-vs-england-in-4th-t20-kvn-wx62crx</guid>
            <pubDate>Thu, 09 Jul 2026 14:46:42 +0530</pubDate>
            <description><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಮಹತ್ವದ ಪಂದ್ಯಕ್ಕೆ ಬ್ರಿಸ್ಟೊಲ್&zwnj;ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ, ಇಂದಿನ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0a9zjnerzp4cv7t4m571wm,imgname-gettyimages-2285099526-1783495982677.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಮಹತ್ವದ ಪಂದ್ಯಕ್ಕೆ ಬ್ರಿಸ್ಟೊಲ್&zwnj;ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ, ಇಂದಿನ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-0 ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದರೇ, ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರ ಎದುರು ಮೇಲುಗೈ ಸಾಧಿಸಿದೆ.&lt;/p&gt;&lt;img&gt;&lt;p&gt;ಇದೀಗ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಸರಣಿ ಸಮಬಲ ಸಾಧಿಸಬೇಕಿದ್ದರೇ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಟೀಮ್&zwnj; ಮ್ಯಾನೇಜ್&zwnj;ಮೆಂಟ್ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದ್ದ, ಅನುಭವಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;img&gt;&lt;p&gt;ಹೀಗಾದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಉಪನಾಯಕರಾಗಿರುವ ತಿಲಕ್ ವರ್ಮಾ ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಸಾಧ್ಯತೆಯಿದೆ. ಎಡಗೈ ಬ್ಯಾಟರ್ ತಿಲಕ್ ವರ್ಮಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಾ ಬಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ತಿಲಕ್ ವರ್ಮಾಗೆ ವಿಶ್ರಾಂತಿ ಸಿಕ್ಕರೂ ಅಚ್ಚರಿಯೇನಿಲ್ಲ. ತಿಲಕ್ ವರ್ಮಾ ಕಳೆದ ಮೂರು ಪಂದ್ಯಗಳಲ್ಲಿ ಕೇವಲ 114.29ರ ಸ್ಟ್ರೈಕ್&zwnj;ರೇಟ್&zwnj;ನಲ್ಲಿ ಬರೀ 40 ರನ್ ಬಾರಿಸಿ ನಿರಾಸೆ ಮೂಡಿಸಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಜತೆ ಆರಂಭಿಕನಾಗಿ ಇನ್ನಿಂಗ್ಸ್&zwnj; ಆರಂಭಿಸುವ ಸಾಧ್ಯತೆಯಿದೆ. ಇಲ್ಲದಿದ್ದರೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯಬಹುದು ಎನ್ನಲಾಗುತ್ತಿದೆ. ಟೀಮ್&zwnj; ಮ್ಯಾನೇಜ್&zwnj;ಮೆಂಟ್&zwnj; ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;&lt;img&gt;&lt;p&gt;ಅಂದಹಾಗೆ ಇಂಗ್ಲೆಂಡ್ ತಂಡವು ಭಾರತ ಎದುರು ಇದುವರೆಗೂ ದ್ವಿಪಕ್ಷೀಯ ಟಿ20 ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಇದೀಗ ಭಾರತ ಎದುರು ಐತಿಹಾಸಿಕ ಸಾಧನೆ ಮಾಡಲು ಇಂಗ್ಲೆಂಡ್&zwnj;ಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಇನ್ನೊಂದು ಗೆಲುವು ಬೇಕಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಗೆದ್ದು ಹ್ಯಾರಿ ಬ್ರೂಕ್ ಪಡೆ ಇತಿಹಾಸ ಬರೆಯಲು ತುದಿಗಾಲಿನಲ್ಲಿ ನಿಂತಿದೆ.&lt;/p&gt;&lt;img&gt;&lt;p&gt;ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/sanju-samson-could-replace-tilak-varma-in-india-playing-xi-vs-england-in-4th-t20-kvn-wx62crx"/>
        </item>
    </channel>
</rss>
