<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 19 Jun 2026 13:04:08 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಗಳಿಸಿದ ರನ್ ಎಷ್ಟು? ಬಾರಿಸಿದ ಬೌಂಡರಿ, ಸಿಕ್ಸರ್‌ಗಳೆಷ್ಟು?]]></title>
            <link>https://kannada.asianetnews.com/cricket-sports/vaibhav-suryavanshi-struggles-to-replicate-ipl-heroics-in-india-a-tri-series-ahead-of-england-tour-kvn/articleshow-164te3r</link>
            <guid isPermaLink="true">https://kannada.asianetnews.com/cricket-sports/vaibhav-suryavanshi-struggles-to-replicate-ipl-heroics-in-india-a-tri-series-ahead-of-england-tour-kvn/articleshow-164te3r</guid>
            <pubDate>Thu, 18 Jun 2026 14:05:44 +0530</pubDate>
            <description><![CDATA[ಐಪಿಎಲ್ ಆರೆಂಜ್ ಕ್ಯಾಪ್ ವಿಜೇತ ವೈಭವ್ ಸೂರ್ಯವಂಶಿ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಭಾರತ 'ಎ' ತ್ರಿಕೋನ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಐಪಿಎಲ್&zwnj;ನಲ್ಲಿ ಅಬ್ಬರಿಸಿದ್ದ ಅವರು, ಈ ಸರಣಿಯ ನಾಲ್ಕು ಇನ್ನಿಂಗ್ಸ್&zwnj;ಗಳಲ್ಲಿ ಕೇವಲ 117 ರನ್ ಗಳಿಸಿ, ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಸರಣಿಗೂ ಮುನ್ನ ಫಾರ್ಮ್&zwnj;ಗಾಗಿ ಪರದಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv51zmz789k87fzsxssc09dk,imgname-vaibhav-sooryavanshi-1781507544039.jpeg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸಿ ಬೊಬ್ಬರಿಯುವ ಮೂಲಕ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಮೇಲೆ ಎಲ್ಲರ ಕಣ್ಣಿತ್ತು. ತ್ರಿಕೋನ ಸರಣಿಯನ್ನಾಡಲು ಭಾರತ 'ಎ' ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಈ ಸರಣಿಯಲ್ಲಿ ಭಾರತ 'ಎ' ತಂಡವು ಶ್ರೀಲಂಕಾ 'ಎ' ಹಾಗೂ ಆಫ್ಘಾನಿಸ್ತಾನ 'ಎ' ತಂಡಗಳು ಕಾದಾಡುತ್ತಿವೆ.&lt;/p&gt;&lt;p&gt;ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಯಾವ ರೀತಿ ಆಡುತ್ತಾರೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿತ್ತು. ಯಾಕೆಂದರೆ 2026ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ, ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್&zwnj;ವುಡ್, ಕಗಿಸೋ ರಬಾಡ ಅವರಂತಹ ವಿಶ್ವ ದರ್ಜೆಯ ಬೌಲರ್&zwnj;ಗಳ ಎದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ್ದರು. ಇದಷ್ಟೇ ಅಲ್ಲದೇ ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೂ ಭಾರತ ಸೀನಿಯರ್ಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ. ಈ ಹೈವೋಲ್ಟೇಜ್ ಸರಣಿಗೂ ಮುನ್ನ ತ್ರಿಕೋನ ಸರಣಿಯು ವೈಭವ್ ಸೂರ್ಯವಂಶಿ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿತು.&lt;/p&gt;&lt;h2&gt;&lt;strong&gt;ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಗಳಿಸಿದ್ದೆಷ್ಟು?&lt;/strong&gt;&lt;/h2&gt;&lt;p&gt;ಆಫ್ಘಾನಿಸ್ತಾನ 'ಎ' ಎದುರಿನ ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಉತ್ತಮ ಆರಂಭ ಪಡೆದರಾದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಆಫ್ಘಾನಿಸ್ತಾನ 'ಎ' ತಂಡದ ಎದುರು ವೈಭವ್ ಸೂರ್ಯವಂಶಿ, ಕೇವಲ 28 ಎಸೆತಗಳನ್ನು ಎದುರಿಸಿ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮತ್ತೊಮ್ಮೆ ಅರ್ಧಶತಕ ಸಿಡಿಸುವ ಅವಕಾಶವನ್ನು ಕೈಚೆಲ್ಲಿದರು.&lt;/p&gt;&lt;p&gt;ಅಂದಹಾಗೆ ಆಫ್ಘಾನಿಸ್ತಾನ 'ಎ' ಎದುರಿನ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿ, ಈ ತ್ರಿಕೋನ ಸರಣಿಯಲ್ಲಿ ಕ್ರಮವಾಗಿ 14,44,21 ರನ್ ಸಿಡಿಸಿದ್ದರು. ಇದೀಗ ವೈಭವ್ 38 ರನ್ ಬಾರಿಸಿದ್ದಾರೆ. 2026ರ ಐಪಿಎಲ್&zwnj;ನಲ್ಲಿ 16 ಇನ್ನಿಂಗ್ಸ್&zwnj;ಗಳನ್ನಾಡಿ 776 ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ವೈಭವ್ ಸೂರ್ಯವಂಶಿ, ತಮ್ಮ ಹಳೆಯ ಖದರ್&zwnj; ಅನ್ನು ಈ ತ್ರಿಕೋನ ಸರಣಿಯಲ್ಲಿ ಪರಿವರ್ತಿಸಲು ವಿಫಲವಾದರು. ಈ ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಇದುವರೆಗೂ ಒಟ್ಟು ನಾಲ್ಕು ಇನ್ನಿಂಗ್ಸ್&zwnj;ಗಳನ್ನಾಡಿ 117 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಸರಣಿಯಲ್ಲಾದರೂ ಸೂರ್ಯವಂಶಿ, ಫಾರ್ಮ್ ಕಂಡುಕೊಳ್ಳುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-struggles-to-replicate-ipl-heroics-in-india-a-tri-series-ahead-of-england-tour-kvn/articleshow-164te3r"/>
        </item>
        <item>
            <title><![CDATA[ವೈಭವ್ ಸೂರ್ಯವಂಶಿ ಬೆನ್ನಿಗೆ ನಿಂತ ಬಿಸಿಸಿಐ; ಮೈದಾನದಲ್ಲಿ ಕಿರಿಕ್ ಮಾಡಿದ ಶ್ರೀಲಂಕಾ ಆಟಗಾರನಿಗೆ ಬಿತ್ತು ಭಾರೀ ದಂಡ!]]></title>
            <link>https://kannada.asianetnews.com/cricket-sports/bcci-backs-vaibhav-suryavanshi-after-india-a-sri-lanka-a-clash-lankan-player-faces-disciplinary-action-kvn/articleshow-1cmt0vu</link>
            <guid isPermaLink="true">https://kannada.asianetnews.com/cricket-sports/bcci-backs-vaibhav-suryavanshi-after-india-a-sri-lanka-a-clash-lankan-player-faces-disciplinary-action-kvn/articleshow-1cmt0vu</guid>
            <pubDate>Wed, 17 Jun 2026 12:09:59 +0530</pubDate>
            <description><![CDATA[ದಾಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಕ್ರಿಕೆಟ್ ಪಂದ್ಯದ ನಂತರ ಆಟಗಾರರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣದಲ್ಲಿ, ಬಿಸಿಸಿಐ ತನ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ. ಆದರೆ, ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರನ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8mje8rxxs2n76t8zf0sp59,imgname-vaibhav-1781627697432.jpg" type="image/jpeg" height="390" width="690"/>
            <content:encoded><![CDATA[&lt;p&gt;ದಾಂಬುಲ್ಲಾ: ತ್ರಿರಾಷ್ಟ್ರ ಏಕದಿನ ಸರಣಿಯ ಭಾಗವಾಗಿ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯದ ನಂತರ ಮೈದಾನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ, ಬಿಸಿಸಿಐ ತನ್ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿ ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್&zwnj;ಬಝ್ ವರದಿ ಮಾಡಿದೆ. ಸೋಮವಾರ ದಾಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್&zwnj;ನಲ್ಲಿ ಸೋತ ಬೆನ್ನಲ್ಲೇ ಎರಡೂ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.&lt;/p&gt;&lt;p&gt;ಪಂದ್ಯದ ನಂತರ ಎದುರಾಳಿ ಆಟಗಾರನೊಂದಿಗೆ ಗಲಾಟೆಯಲ್ಲಿ ಭಾಗಿಯಾಗಿದ್ದರಿಂದ, ಬಿಸಿಸಿಐ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಶೋಕಾಸ್ ನೋಟಿಸ್ ಅಥವಾ ಎಚ್ಚರಿಕೆ ನೀಡಬಹುದು ಎಂಬ ವರದಿಗಳಿದ್ದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. &quot;ಆಟಗಾರರು ಆಟದ ಕಡೆ ಗಮನ ಕೊಡಲಿ. ಬೇರೆ ಬಾಹ್ಯ ವಿಷಯಗಳಿಗೆ ಅವರ ಗಮನ ಬೇರೆಡೆ ಹೋಗುವುದು ನಮಗೆ ಇಷ್ಟವಿಲ್ಲ,&quot; ಎಂದು ದೇವಜಿತ್ ಸೈಕಿಯಾ ಹೇಳುವ ಮೂಲಕ ಬಿಸಿಸಿಐ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಲಂಕಾ ಆಟಗಾರನಿಗೆ ಕಠಿಣ ಶಿಕ್ಷೆ, ಡಿಕ್ವೆಲ್ಲಗೂ ದಂಡ!&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಜಗಳಕ್ಕೆ ಮೂಲ ಕಾರಣನಾದ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್&zwnj;ಬಝ್ ವರದಿ ಮಾಡಿದೆ. ಜೂನ್ 9ರಂದು ನಡೆದ ಮೊದಲ ಪಂದ್ಯದಲ್ಲೂ ಹಾಗೂ ಸೋಮವಾರದ ಪಂದ್ಯದಲ್ಲೂ ಹಾಲಂಬಾಗೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿದ್ದ. ಈ ಟೂರ್ನಿಯು ಐಸಿಸಿಯ ನೇರ ಶಿಸ್ತು ಕ್ರಮದ ವ್ಯಾಪ್ತಿಗೆ ಬರದ ಕಾರಣ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರ ವರದಿಯನ್ನು ಆಧರಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ಆಟಗಾರರಿಗೆ ದಂಡ ಮತ್ತು ಶಿಕ್ಷೆ ವಿಧಿಸಿದೆ.&lt;/p&gt;&lt;p&gt;Vaibhav got into a heated argument with Sri Lankan players after the super over pic.twitter.com/wnGyEF6Nvw&lt;/p&gt;&lt;p&gt;&mdash; Abhi (@AbhiMSD_07) June 15, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಜಗಳವನ್ನು ಸಮಾಧಾನಪಡಿಸಲು ಮಧ್ಯಪ್ರವೇಶಿಸಿದ್ದ ಶ್ರೀಲಂಕಾ 'ಎ' ತಂಡದ ಹಿರಿಯ ಆಟಗಾರ ಮತ್ತು ವಿಕೆಟ್ ಕೀಪರ್ ನಿರೋಷನ್ ಡಿಕ್&zwnj;ವೆಲ್ಲ ಅವರಿಗೂ ದಂಡ ವಿಧಿಸಲಾಗಿದೆ. ಆದರೆ, ಇದು ಈ ಗಲಾಟೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಪಂದ್ಯದ ವೇಳೆ ಅವರು ಮಾಡಿದ ಬೇರೊಂದು ಶಿಸ್ತು ಉಲ್ಲಂಘನೆಗಾಗಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಸೂರ್ಯವಂಶಿಯನ್ನು ಪದೇ ಪದೇ ಕೆಣಕ್ಕಿದ್ದ ಹಾಲಂಬಾಗೆ&lt;/strong&gt;&lt;/h3&gt;&lt;p&gt;ಜೂನ್ 9ರ ಪಂದ್ಯದಿಂದಲೇ ಹಾಲಂಬಾಗೆ, ವೈಭವ್ ಸೂರ್ಯವಂಶಿಯನ್ನು ಕೆಣಕಲು ಆರಂಭಿಸಿದ್ದ. ಸೋಮವಾರದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್&zwnj;ನಲ್ಲಿ ಬ್ಯಾಟಿಂಗ್&zwnj;ಗೆ ಇಳಿದಾಗ ಈ ಸ್ಲೆಡ್ಜಿಂಗ್ ಮಿತಿ ಮೀರಿತ್ತು. &quot;ಮನೆಗೆ ಹೋಗು, ಇದು ನಿನ್ನ ಐಪಿಎಲ್ ಅಲ್ಲ&quot; ಎಂಬಂತಹ ಕೀಳು ಮಟ್ಟದ ಮಾತುಗಳನ್ನು ಲಂಕಾ ಆಟಗಾರ ಭಾರತೀಯ ಓಪನರ್ ವೈಭವ್ ಸೂರ್ಯವಂಶಿ ವಿರುದ್ಧ ಬಳಸಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪಂದ್ಯದ ನಂತರ ಗಲಾಟೆ ನಡೆದಿದೆ.&lt;/p&gt;&lt;p&gt;ರೋಚಕ ಗೆಲುವಿನ ಹೊರತಾಗಿಯೂ ಇಂತಹ ಕೆಟ್ಟ ವರ್ತನೆಯಿಂದಾಗಿ ಗೆಲುವಿಗೆ ಕಪ್ಪುಚುಕ್ಕೆ ಬಂದಂತಾಗಿದ್ದಕ್ಕೆ ಶ್ರೀಲಂಕಾ ತಂಡದ ಬಹುತೇಕ ಆಟಗಾರರು ಮತ್ತು ಮ್ಯಾನೇಜ್&zwnj;ಮೆಂಟ್&zwnj;ಗೆ ತೀವ್ರ ಅಸಮಾಧಾನವಿದೆ. ಈ ಘಟನೆಗೆ ಶ್ರೀಲಂಕಾ ತಂಡ ಅಧಿಕೃತವಾಗಿ ಭಾರತದ ಬಳಿ ಕ್ಷಮೆ ಕೇಳಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಬಿಸಿಸಿಐ ಮಾತ್ರ ವೈಭವ್ ಅವರನ್ನು ಸಂಪೂರ್ಣವಾಗಿ ರಕ್ಷಿಸುವ ನಿಲುವು ತಾಳಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bcci-backs-vaibhav-suryavanshi-after-india-a-sri-lanka-a-clash-lankan-player-faces-disciplinary-action-kvn/articleshow-1cmt0vu"/>
        </item>
        <item>
            <title><![CDATA[ವಿರಾಟ್ ಕೊಹ್ಲಿ ಸಲಹೆಗೆ ಕ್ಯಾರೇ ಎನ್ನದ ವೈಭವ್ ಸೂರ್ಯವಂಶಿ..! ಈ ರೀತಿ ಕಿರಿಕ್ ಇದೇ ಮೊದಲಲ್ಲ]]></title>
            <link>https://kannada.asianetnews.com/cricket-sports/vaibhav-suryavanshi-loses-cool-in-india-a-vs-sri-lanka-a-clash-weeks-after-virat-kohli-advice-kvn/articleshow-2pigwuu</link>
            <guid isPermaLink="true">https://kannada.asianetnews.com/cricket-sports/vaibhav-suryavanshi-loses-cool-in-india-a-vs-sri-lanka-a-clash-weeks-after-virat-kohli-advice-kvn/articleshow-2pigwuu</guid>
            <pubDate>Tue, 16 Jun 2026 15:20:04 +0530</pubDate>
            <description><![CDATA[ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ನೀಡಿದ ಕಿವಿಮಾತನ್ನು ಮರೆತಂತೆ ವರ್ತಿಸಿರುವ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಮೈದಾನದಲ್ಲೇ ಜಗಳವಾಡಿದ್ದಾರೆ. ಈ ಹಿಂದೆ ಕೂಡಾ ಇದೇ ರೀತಿ ಆಕ್ರಮಣಕಾರಿ ವರ್ತನೆ ತೋರಿದ್ದ ವೈಭವ್, ತಮ್ಮ ಪ್ರತಿಭೆಯ ಜೊತೆಗೆ ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕಿದೆ ಎಂಬುದು ಲೇಖನದ ಸಾರ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgvs8armrbgwcm1k2dxxrc2,imgname-vaibhav-love-for-rcb-and-kohli-revealed-1780829954392.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಎರಡು ವಾರಗಳ ಹಿಂದಷ್ಟೇ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ, ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 15 ವರ್ಷದ ಯುವ ಪ್ರತಿಭಾನ್ವಿತ ಬ್ಯಾಟರ್ ವೈಭವ್ ಸೂರ್ಯವಂಶಿ ಹೆಗಲ ಮೇಲೆ ಕೈಹಾಕಿ ಒಂದಷ್ಟು ಒಳ್ಳೆಯ ಕಿವಿಮಾತು ಹೇಳಿದ್ದರು. ಇದಾಗಿ ತಿಂಗಳು ತುಂಬುವುದರೊಳಗೆ ವೈಭವ್ ಸೂರ್ಯವಂಶಿ, ಕೊಹ್ಲಿಯ ಮಾತನ್ನು ಗಾಳಿಗೆ ತೂರುವ ಕೆಲಸ ಮಾಡಿದ್ದಾರೆ.&lt;/p&gt;&lt;p&gt;&quot;ಯಾರು ಏನೇ ಹೇಳಿದರೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ&quot; ಇದು ಐಪಿಎಲ್ ಫೈನಲ್ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ, ವೈಭವ್ ಸೂರ್ಯವಂಶಿ ಅವರನ್ನು ಉದ್ದೇಶಿಸಿ ಹೇಳಿದ ಮಾತಿದು. 2026ರ ಐಪಿಎಲ್ ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಅಕ್ಷರಶಃ ವೈಭವ್ ಸೂರ್ಯವಂಶಿಯ ಹಿರಿಯಣ್ಣನಂತೆ ಹೆಗಲ ಮೇಲೆ ಕೈಹಾಕಿ ಆತ್ಮೀಯವಾಗಿ ಕಿವಿಮಾತು ಹೇಳಿದ್ದರು. ಈ ಬಗ್ಗೆ ಮಾತನಾಡಿದ್ದ ವೈಭವ್ ಸೂರ್ಯವಂಶಿ, ಇದೊಂಥರ ಕನಸಿನಂತೆ ಫೀಲ್ ಆಗುತ್ತಿದೆ ಎಂದೆಲ್ಲಾ ಹೇಳಿದ್ದರು.&lt;/p&gt;&lt;h2&gt;&lt;strong&gt;ಮೈದಾನದಲ್ಲೇ ಕಿರಿಕ್ ಮಾಡಿಕೊಂಡ ವೈಭವ್ ಸೂರ್ಯವಂಶಿ:&lt;/strong&gt;&lt;/h2&gt;&lt;p&gt;ಸೋಮವಾರ ತ್ರಿಕೋನ ಸರಣಿಯಲ್ಲಿ ರೋಚಕ ಪಂದ್ಯದ ಬಳಿಕ ಭಾರತ &lsquo;ಎ&rsquo; ಹಾಗೂ ಶ್ರೀಲಂಕಾ &lsquo;ಎ&rsquo; ಆಟಗಾರರ ನಡುವೆ ತೀವ್ರ ವಾಗ್ವಾದ ನಡೆದು, ಪರಸ್ಪರ ದೂಡಿದ ಘಟನೆಯೂ ನಡೆಯಿತು.&lt;/p&gt;&lt;p&gt;ಸೂಪರ್ ಓವರ್ ಗೆದ್ದ ನಂತರ ಲಂಕಾ ಆಟಗಾರರು ಸಂಭ್ರಮಾಚರಣೆ ಮಾಡುತ್ತಿದ್ದರು. ಈ ವೇಳೆ ವೈಭವ್&zwnj; ಪೆವಿಲಿಯನ್​​ ಕಡೆ ಹೋಗುತ್ತಿದ್ದರು. ಆಗ ಸೂರ್ಯಾನ್ಶ್&zwnj; ಹಾಗೂ ವೈಭವ್&zwnj;ರನ್ನು ಲಂಕಾ ಆಟಗಾರರು ಕೆಣಕಿದ್ದಾರೆ. ಈ ವೇಳೆ ಅವರ ಹತ್ತಿರ ಹೋದ ವೈಭವ್&zwnj;, ವಿಶೇನ್ ಹಾಲಂಬಗೆಯನ್ನ ತಳ್ಳಿದ್ದಾರೆ. ಅವರು ಕೂಡ ವೈಭವ್​​​ರನ್ನು ತಳ್ಳಿದ್ದಾರೆ. ಆಗ ಇತರ ಆಟಗಾರರು ಮಧ್ಯಪ್ರವೇಶಿಸಿದ್ದಾರೆ. ಬಳಿಕ ವೈಭವ್&zwnj; ಲಂಕಾ ಆಟಗಾರರ ಕಡೆ ಕೈ ತೋರಿಸಿ ಕೋಪದಲ್ಲಿ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;p&gt;Vaibhav got into a heated argument with Sri Lankan players after the super over pic.twitter.com/wnGyEF6Nvw&lt;/p&gt;&lt;p&gt;&mdash; Abhi (@AbhiMSD_07) June 15, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ವೈಭವ್ ಸೂರ್ಯವಂಶಿ ಮೈದಾನದಲ್ಲಿ ಸಿಟ್ಟಾಗಿದ್ದು ಇದೇ ಮೊದಲ ಸಲವೇನಲ್ಲ!&lt;/strong&gt;&lt;/h3&gt;&lt;p&gt;ಅಂದಹಾಗೆ ವೈಭವ್ ಸೂರ್ಯವಂಶಿ, ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿದ್ದು ಇದೇ ಮೊದಲೇನಲ್ಲ. ಕೆಲ ತಿಂಗಳ ಹಿಂದಷ್ಟೇ ದುಬೈನಲ್ಲಿ ನಡೆದ ಐಸಿಸಿ ಅಂಡರ್-19 ಏಷ್ಯಾಕಪ್ ಫೈನಲ್&zwnj;ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಭಾರತ ತಂಡವು 348 ರನ್&zwnj;ಗಳ ಕಠಿಣ ಗುರಿ ಬೆನ್ನತ್ತಿತ್ತು. ಭಾರತ ಪರ ಇನ್ನಿಂಗ್ಸ್ ಆರಂಭಿಸಿದ್ದ ವೈಭವ್ ಸೂರ್ಯವಂಶಿ ಕೇವಲ 10 ಎಸೆತಗಳಲ್ಲಿ 26 ರನ್ ಚಚ್ಚಿದ್ದರು. ಬಳಿಕ ಪಾಕಿಸ್ತಾನದ ವೇಗಿ ಅಲಿ ರಾಜಾ, ವೈಭವ್ ವಿಕೆಟ್ ಪಡೆದು ಆಕ್ರಮಣಕಾರಿ ಸಂಭ್ರಮಾಚರಣೆ ಮಾಡಿದರು. ಇದಷ್ಟೇ ಅಲ್ಲದೇ ವೈಭವ್&zwnj; ಅವರನ್ನು ಬೊಟ್ಟು ಮಾಡಿ ಇದು ಅಬ್ಬರಿಸಲು ನಿಮ್ಮ ಐಪಿಎಲ್ ಅಲ್ಲ ಎಂಬರ್ಥದಲ್ಲಿ ಹೇಳಿದ್ದರು. ಆಗ ಪೆವಿಲಿಯನ್&zwnj;ನತ್ತ ವಾಪಾಸ್ಸಾಗುತ್ತಿದ್ದ ವೈಭವ್ ಸೂರ್ಯವಂಶಿ, ಪಾಕ್ ಬೌಲರ್&zwnj;ಗೆ ನೀವು ನನ್ನ ಕಾಲಿನ ಧೂಳಿಗೆ ಸಮವಲ್ಲ ಎಂಬರ್ಥದ ಸನ್ಹೆ ಮಾಡಿದ್ದರು. ಆ ವಿಡಿಯೋ ಕೂಡಾ ಆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.&lt;/p&gt;&lt;p&gt;ಕೇವಲ 15ನೇ ವಯಸ್ಸಿಗೆ ಐಪಿಎಲ್&zwnj;ನಲ್ಲಿ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್&zwnj;ವುಡ್, ಕಗಿಸೋ ರಬಾಡ ಅವರಂತಹ ವಿಶ್ವದರ್ಜೆಯ ಬೌಲರ್&zwnj;ಗಳನ್ನು ಚೆಂಡಾಡಿರುವ ವೈಭವ್ ತನ್ನ ಸಾಮರ್ಥ್ಯ ಅನಾವರಣ ಮಾಡಿದ್ದಾರೆ. ಆದರೆ ಓರ್ವ ಕ್ರಿಕೆಟಿಗನಾಗಿ ಸೂರ್ಯವಂಶಿ ಕೊಂಚ ಪಳಗಬೇಕು ಜತೆಗೆ ಕ್ರೀಡಾಸ್ಪೂರ್ತಿಯನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎನ್ನುವುದು ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-loses-cool-in-india-a-vs-sri-lanka-a-clash-weeks-after-virat-kohli-advice-kvn/articleshow-2pigwuu"/>
        </item>
        <item>
            <title><![CDATA[ಇದೇ ಕಾರಣಕ್ಕೆ ಶ್ರೀಲಂಕಾ ಬೌಲರ್ ಎದುರು ಸಿಟ್ಟಾದ ವೈಭವ್ ಸೂರ್ಯವಂಶಿ..! ಕೊನೆಗೂ ಬಯಲಾಯ್ತು ಇಂಟ್ರೆಸ್ಟಿಂಗ್ ಡೀಟೈಲ್ಸ್]]></title>
            <link>https://kannada.asianetnews.com/cricket-sports/this-is-not-ipl-sledging-sparks-heated-clash-between-vaibhav-suryavanshi-and-sri-lanka-a-players-kvn/articleshow-49ovqfn</link>
            <guid isPermaLink="true">https://kannada.asianetnews.com/cricket-sports/this-is-not-ipl-sledging-sparks-heated-clash-between-vaibhav-suryavanshi-and-sri-lanka-a-players-kvn/articleshow-49ovqfn</guid>
            <pubDate>Tue, 16 Jun 2026 13:22:50 +0530</pubDate>
            <description><![CDATA[ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿ ಪಂದ್ಯದ ಸೂಪರ್ ಓವರ್ ಸೋಲಿನ ನಂತರ, ಶ್ರೀಲಂಕಾ ಆಟಗಾರರು ವೈಭವ್ ಸೂರ್ಯವಂಶಿಯನ್ನು ಸ್ಲೆಡ್ಜ್ ಮಾಡಿದರು. 'ಇದು ನಿನ್ನ ಐಪಿಎಲ್ ಅಲ್ಲ' ಎಂಬ ಗೇಲಿಗೆ ಕೋಪಗೊಂಡ ವೈಭವ್, ಲಂಕಾ ಆಟಗಾರನನ್ನು ತಳ್ಳಿದ್ದರಿಂದ ಮೈದಾನದಲ್ಲಿ ಗಲಾಟೆ ನಡೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kv74c9pxyth9d82vk50z69fb,imgname-vaibhav-sooryavanshi-1781577164508.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Vaibhav Sooryavanshi fight:&lt;/strong&gt; ತ್ರಿಕೋನ ಸರಣಿಯ ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯದ ಬಳಿಕ, ಟೀಂ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರರ ನಡುವೆ ನಡೆದ ಗಲಾಟೆಯ ಬಗ್ಗೆ ಹೆಚ್ಚಿನ ವಿವರಗಳು ಹೊರಬಿದ್ದಿವೆ. ಇಲ್ಲಿನ ರಂಗಿರಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಸೂಪರ್ ಓವರ್ ಮುಗಿದ ತಕ್ಷಣ ಮೈದಾನದಲ್ಲಿ ತಳ್ಳಾಟ, ನೂಕಾಟ ನಡೆದಿತ್ತು. ಸೂಪರ್ ಓವರ್&zwnj;ನಲ್ಲಿ ಗೆದ್ದ ನಂತರ ಲಂಕಾ ಆಟಗಾರರು ಅತಿಯಾಗಿ ಸ್ಲೆಡ್ಜಿಂಗ್ ಮಾಡಿದ್ದೇ ಶಾಂತ ಸ್ವಭಾವದ ವೈಭವ್ ಕೋಪಗೊಳ್ಳಲು ಕಾರಣ ಎಂದು ಇದೀಗ ವರದಿಯಾಗಿದೆ.&lt;/p&gt;&lt;p&gt;ಹೌದು, ನಿಗದಿತ ಓವರ್&zwnj;ಗಳಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಕೊನೆಯ ಎಸೆತದಲ್ಲಿ ಗೆಲ್ಲಲು ಎರಡು ರನ್ ಬೇಕಿದ್ದಾಗ, ಶ್ರೀಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಪಂದ್ಯ ಸೂಪರ್ ಓವರ್&zwnj;ಗೆ ಹೋಯ್ತು. ಸೂಪರ್ ಓವರ್&zwnj;ನಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 18 ರನ್ ಗಳಿಸಿತು. 19 ರನ್&zwnj;ಗಳ ಗುರಿ ಬೆನ್ನತ್ತಿದ ಭಾರತದ ಪರವಾಗಿ ಸೂರ್ಯಾಂಶ್ ಶೆಡ್ಗೆ ಮೊದಲ ಮೂರು ಎಸೆತಗಳನ್ನು ಎದುರಿಸಿದರು. ಕೊನೆಯ ಮೂರು ಎಸೆತಗಳಲ್ಲಿ ಭಾರತಕ್ಕೆ ಗೆಲ್ಲಲು 14 ರನ್ ಬೇಕಿದ್ದಾಗ ವೈಭವ್ ಸೂರ್ಯವಂಶಿ ಸ್ಟ್ರೈಕ್&zwnj;ಗೆ ಬಂದರು.&lt;/p&gt;&lt;p&gt;ಲಂಕಾ ವೇಗಿ ಕುಗದಾಸ್ ಮತುಲನ್ ಅವರ ನಾಲ್ಕನೇ ಎಸೆತ ಯಾರ್ಕರ್ ಆಗಿತ್ತು, ವೈಭವ್&zwnj;ಗೆ ಕೇವಲ ಎರಡು ರನ್ ಗಳಿಸಲು ಸಾಧ್ಯವಾಯಿತು. ಐದನೇ ಎಸೆತದಲ್ಲಿ ವೈಭವ್ ಬೌಂಡರಿ ಬಾರಿಸಿದರು. ಇದರಿಂದ ಕೊನೆಯ ಎಸೆತದಲ್ಲಿ ಗೆಲುವಿಗೆ ಎಂಟು ರನ್ ಬೇಕಿತ್ತು. ಮತುಲನ್ ಎಸೆದ ವೈಡ್ ಯಾರ್ಕರ್ ಎಸೆತದಲ್ಲಿ ವೈಭವ್&zwnj;ಗೆ ರನ್ ಗಳಿಸಲು ಆಗಲಿಲ್ಲ. ಇದರ ಬೆನ್ನಲ್ಲೇ ಶ್ರೀಲಂಕಾ ತಂಡದ ಆಟಗಾರರು ಭಾರತೀಯ ಆಟಗಾರರ ಬಳಿ ಬಂದು ವಿಜಯೋತ್ಸವ ಆಚರಿಸಿದರು.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡಿದ್ದೇಕೆ?&lt;/strong&gt;&lt;/h2&gt;&lt;p&gt;ಈ ವೇಳೆ, ಲಂಕಾ ಆಟಗಾರರು ವೈಭವ್ ಮತ್ತು ಶೆಡ್ಗೆ ಅವರನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಸ್ಲೆಡ್ಜ್ ಮಾಡಲು ಶುರುಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಪಂದ್ಯ ಮುಗಿಸಿ ವಾಪಸ್ ಹೋಗುತ್ತಿದ್ದ ಭಾರತೀಯ ಬ್ಯಾಟರ್&zwnj;ಗಳನ್ನು ಲಂಕಾ ಆಟಗಾರರು ಹಿಂಬಾಲಿಸಿ ಕೆಣಕುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತೆ.&lt;/p&gt;&lt;p&gt;Vaibhav got into a heated argument with Sri Lankan players after the super over pic.twitter.com/wnGyEF6Nvw&lt;/p&gt;&lt;p&gt;&mdash; Abhi (@AbhiMSD_07) June 15, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ, ರಾಜಸ್ಥಾನ ರಾಯಲ್ಸ್ ಆಟಗಾರನಾದ ವೈಭವ್&zwnj;ಗೆ ಲಂಕಾ ಆಟಗಾರರು 'ಇದು ನಿನ್ನ ಐಪಿಎಲ್ ಅಲ್ಲ' ಎಂದು ಗೇಲಿ ಮಾಡಿದ್ದೇ ಜಗಳಕ್ಕೆ ಕಾರಣವಾಯ್ತು. ಕಳೆದ ವರ್ಷದ ಅಂಡರ್-19 ಏಷ್ಯಾಕಪ್&zwnj;ನಲ್ಲಿ ಪಾಕಿಸ್ತಾನದ ಆಟಗಾರರು ಕೂಡ ವೈಭವ್ ವಿರುದ್ಧ ಇದೇ ಮಾತುಗಳನ್ನು ಬಳಸಿದ್ದರು. ಮೊದಲಿಗೆ ಏನೂ ಪ್ರತಿಕ್ರಿಯಿಸದೆ ಮುಂದೆ ನಡೆದ ವೈಭವ್, ಲಂಕಾ ಆಟಗಾರರ ಸ್ಲೆಡ್ಜಿಂಗ್&zwnj; ಮಿತಿಮೀರಿದಾಗ ನಿಯಂತ್ರಣ ಕಳೆದುಕೊಂಡು ಶ್ರೀಲಂಕಾದ ಆಟಗಾರನೊಬ್ಬನನ್ನು ತಳ್ಳಿದ್ದಾರೆ. ತಕ್ಷಣವೇ ಇತರ ಆಟಗಾರರು ಮತ್ತು ಅಂಪೈರ್&zwnj;ಗಳು ಮಧ್ಯಪ್ರವೇಶಿಸಿ ವೈಭವ್ ಅವರನ್ನು ಅಲ್ಲಿಂದ ಸಮಾಧಾನಪಡಿಸಿ ಕರೆದೊಯ್ದರು.&lt;/p&gt;&lt;h3&gt;&lt;strong&gt;ಸೂಪರ್&zwnj; ಓವರ್&zwnj; ಸೋತ ಭಾರತ &lsquo;ಎ&rsquo;&lt;/strong&gt;&lt;/h3&gt;&lt;p&gt;ಡಾಂಬುಲಾ: ತ್ರಿಕೋನ ಸರಣಿಯಲ್ಲಿ ಭಾರತ &lsquo;ಎ&rsquo; ತಂಡ ಸತತ 2ನೇ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪರಾಭವಗೊಂಡಿದ್ದ ತಿಲಕ್&zwnj; ವರ್ಮಾ ನಾಯಕತ್ವದ ಭಾರತ &lsquo;ಎ&rsquo;, ಸೋಮವಾರ ಆತಿಥೇಯ ಶ್ರೀಲಂಕಾ ವಿರುದ್ಧ ಸೂಪರ್&zwnj; ಓವರ್&zwnj;ನಲ್ಲಿ ಸೋಲು ಕಂಡಿತು. ಇದರೊಂದಿಗೆ ತಂಡದ ಫೈನಲ್&zwnj; ಹಾದಿ ಕಠಿಣಗೊಂಡಿದೆ.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಭಭಾರತ 49.2 ಓವರ್&zwnj;ಗಳಲ್ಲಿ 265 ರನ್&zwnj;ಗೆ ಆಲೌಟಾಯಿತು. ವೈಭವ್&zwnj;(21) ಮತ್ತೆ ವಿಫಲರಾದರು. 143ಕ್ಕೆ 7 ವಿಕೆಟ್&zwnj; ಕಳೆದುಕೊಂಡ ಬಳಿಕ ಸೂರ್ಯಾನ್ಶ್&zwnj; ಶೆಡ್ಗೆ(72), ವಿಪ್ರಾಜ್&zwnj; ನಿಗಂ(51) ತಂಡಕ್ಕೆ ಆಸರೆಯಾದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಂಕಾ 50 ಓವರಲ್ಲಿ 9 ವಿಕೆಟ್&zwnj; ನಷ್ಟದಲ್ಲಿ 265 ರನ್&zwnj; ಗಳಿಸಿದ್ದರಿಂದ ಪಂದ್ಯ ಟೈ ಆಯಿತು. ಕೊನೆ ಓವರ್&zwnj;ನಲ್ಲಿ 5 ರನ್&zwnj; ಬೇಕಿದ್ದಾಗ ಅರ್ಶದ್&zwnj; ಖಾನ್&zwnj; ಕೇವಲ 4 ರನ್&zwnj; ನೀಡಿದರು.&lt;/p&gt;&lt;h3&gt;&lt;strong&gt;ಸೂಪರ್ ಓವರ್&zwnj;:&lt;/strong&gt;&lt;/h3&gt;&lt;p&gt;ತಿಲಕ್&zwnj; ವರ್ಮಾ ಒತ್ತಾಯದ ಬಳಿಕ ಅಂಪೈರ್&zwnj;ಗಳು ಸೂಪರ್&zwnj; ಓವರ್&zwnj; ಆಡಿಸಲು ನಿರ್ಧರಿಸಿದರು. ಮೊದಲು ಬ್ಯಾಟ್&zwnj; ಮಾಡಿದ ಲಂಕಾ, ಅರ್ಶದ್&zwnj; ಓವರ್&zwnj;ನಲ್ಲಿ 16 ರನ್&zwnj; ಗಳಿಸಿತು. 17 ರನ್&zwnj; ಗುರಿ ಪಡೆದ ಭಾರತ 9 ರನ್&zwnj; ಗಳಿಸಿ ಸೋಲೊಪ್ಪಿಕೊಂಡಿತು. ಮೊದಲ 3 ಎಸೆತವನ್ನು ಸೂರ್ಯಾನ್ಶ್&zwnj; ಎದುರಿಸಿ 3 ರನ್&zwnj; ಗಳಿಸಿದರೆ, ಕೊನೆ 3 ಎಸೆತದಲ್ಲಿ ವೈಭವ್&zwnj; 6 ರನ್ ಗಳಿಸಿದರು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/this-is-not-ipl-sledging-sparks-heated-clash-between-vaibhav-suryavanshi-and-sri-lanka-a-players-kvn/articleshow-49ovqfn"/>
        </item>
        <item>
            <title><![CDATA[403 ರನ್ ಬೃಹತ್ ಟಾರ್ಗೆಟ್ ಮುಂದೆ ಹೋರಾಟ ನೀಡಿ ಸೋತ ಆಫ್ಘಾನ್,  ಭಾರತಕ್ಕೆ 170 ರನ್ ಭರ್ಜರಿ ಗೆಲುವು]]></title>
            <link>https://kannada.asianetnews.com/cricket-sports/india-crush-afghanistan-by-170-runs-after-posting-massive-403-run-target-in-odi/articleshow-4cp37s2</link>
            <guid isPermaLink="true">https://kannada.asianetnews.com/cricket-sports/india-crush-afghanistan-by-170-runs-after-posting-massive-403-run-target-in-odi/articleshow-4cp37s2</guid>
            <pubDate>Wed, 17 Jun 2026 21:51:53 +0530</pubDate>
            <description><![CDATA[&lt;p&gt;ಭಾರತ ನೀಡಿದ 402 ರನ್ ಬೃಹತ್ ಟಾರ್ಗೆಟ್ ಮುಂದೆ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ರಹಮತ್ ಶಾ ಬ್ಯಾಟಿಂಗ್ ಆಫ್ಘಾನಿಸ್ತಾನ ತಂಡವನ್ನು ಹೀನಾಯ ಸೋಲಿನಿಂದ ತಪ್ಪಿಸಿತ್ತು. ಆದರೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ಸರಣಿ ಗೆದ್ದುಕೊಂಡಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv1tj7az745rdv7jnacyezex,imgname-team-india--3--1781399100767.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಖನೌ (ಜೂ.17)&lt;/strong&gt; ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ 2ನೇ ಏಕದಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ 403 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಟಾರ್ಗೆಟ್ ಪಡೆದ ಆಫ್ಘಾನಿಸ್ತಾನ ದಿಟ್ಟ ಹೋರಾಟ ನೀಡಿದೆ. ಉತ್ತಮ ಆರಂಭ ಪಡೆದ ಬಳಿಕ ದಿಢೀರ್ ಕುಸಿತ ಕಂಡ ಆಫ್ಘಾನಿಸ್ತಾನ ತಂಡಕ್ಕೆ ರಹಮತ್ ಶಾ ಆಸೆರೆಯಾದರು. ಏಕಾಂಗಿ ಹೋರಾಟ ನೀಡಿದರು. ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆಫ್ಘಾನಿಸ್ತಾನ 44.3 ಓವರ್&zwnj;ನಲ್ಲಿ 232 ರನ್ ಸಿಡಿಸಿ ಸೋಲು ಕಂಡಿತು. ಭಾರತ 170 ರನ್ ಗೆಲುವಿನೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿತು.&lt;/p&gt;&lt;h2&gt;ರಹಮತ್ ಶಾ ಏಕಾಂಗಿ ಹೋರಾಟ&lt;/h2&gt;&lt;p&gt;ಆಫ್ಘಾನಿಸ್ತಾನ ಉತ್ತಮ ಆರಂಭ ಪಡೆದಿತ್ತು. ರೆಹಮಾನುಲ್ಹಾ ಗುರ್ಬಾಜ್ ಹಾಗೂ ಇಬ್ರಾಹಿಂ ಜರ್ದಾನ್ ಅರ್ಧಶತಕ ಜೊತೆಯಾಟ ನೀಡಿದ್ದರು. ಗರ್ಬಾಜ್ 33 ಎಸೆತದಲ್ಲಿ 44 ರನ್ ಸಿಡಿಸಿದ್ದರು. ಇತ್ತ ಇಬ್ರಾಹಿಂ 21 ರನ್ ಕಾಣಿಕೆ ನೀಡಿದ್ದರು. ಸೆದಿಖುಲ್ಹಾ ಅತಲ್ ಹೋರಾಟ ನೀಡಿ 42 ರನ್ ಸಿಡಿಸಿದರು. ತಂಡದ ವಿಕೆಟ್ ಪತನವಾಗುತ್ತಿದ್ದಂತೆ ರಹಮತ್ ಶಾ ಏಕಾಂಗಹಿ ಹೋರಾಟ ಆರಂಭಗೊಂಡಿತು. ರಹಮತ್ ಶಾಗೆ ಇತರರಿಂದ ಸಾಥ್ ಸಿಗಲಿಲ್ಲ. ಅರ್ಶದೀಪ್ ಸಿಂಗ್ ಹಾಗೂ ಗುರ್ನೂರ್ ಬ್ರಾರ್ ದಾಳಿಗೆ ಆಫ್ಘಾನಿಸ್ತಾನ ತತ್ತರಿಸಿತು. ಇತ್ತ ವಾಶಿಂಗ್ಟನ್ ಸುಂದರ್ ಹಾಗೂ ಪ್ರಿನ್ಸ್ ಯಾದವ್ ಕೂಡ ವಿಕೆಟ್ ಕಬಳಿಸಿ ಆಫ್ಘಾನಿಸ್ತಾನ ಕಟ್ಟಿ ಹಾಕಿದರು.&lt;/p&gt;&lt;h2&gt;ಭಾರತಕ್ಕೆ 170 ರನ್ ಭರ್ಜರಿ ಗೆಲುವು&lt;/h2&gt;&lt;p&gt;ಏಕಾಂಗಿ ಹೋರಾಟ ನೀಡಿದ ರಹಮತ್ ಶಾ 79 ರನ್ ಸಿಡಿಸಿ ಔಟಾದರು.ಇತ್ತಆಫ್ಘಾನಿಸ್ತಾನ 44.3 ಓವರ್&zwnj;ಗಳಲ್ಲಿ 232 ರನ್ ಸಿಡಿಸಿ ಆಲೌಟ್ ಆಯಿತು. ಭಾರತ 170 ರನ್&zwnj;ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದಕೊಂಡಿತು.&lt;/p&gt;&lt;h2&gt;ಅತ್ಯಂತ ಗರಿಷ್ಠ ಅಂತರದ ಸೋಲು&lt;/h2&gt;&lt;p&gt;ಆಫ್ಘಾನಿಸ್ತಾನಕ್ಕೆ ಈ ಸೋಲು ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಅಂತರದ ಸೋಲಾಗಿ ಪರಿಣಮಿಸಿದೆ.&lt;/p&gt;&lt;ul&gt; &lt;li&gt;275 ರನ್ ಸೋಲು vs ಆಸ್ಟ್ರೇಲಿಯಾ ( 2015)&lt;/li&gt; &lt;li&gt;170 ರನ್ ಸೋಲು vs ಭಾರತ( 2026 )&lt;/li&gt; &lt;li&gt;155 ರನ್ ಸೋಲು vs ಶ್ರೀಲಂಕಾ (2024)&lt;/li&gt; &lt;li&gt;154 ರನ್ ಸೋಲು vs ಜಿಂಬಾಬ್ವೆ ( 2018)&lt;/li&gt;&lt;/ul&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/india-crush-afghanistan-by-170-runs-after-posting-massive-403-run-target-in-odi/articleshow-4cp37s2"/>
        </item>
        <item>
            <title><![CDATA[ವೈಭವ್ ಸೂರ್ಯವಂಶಿ ಮನೆಯಲ್ಲಿ ಎಲ್ಲರೂ ಸೆಲೆಬ್ರೆಟೀಸ್, ಅಭ್ಯಾಸಕ್ಕೆ ಮನೆಯ ಹಿಂದಿಂದೆ ಗ್ರೌಂಡ್]]></title>
            <link>https://kannada.asianetnews.com/gallery/cricket-sports/inside-vaibhav-suryavanshi-unique-life-famous-family-and-home-practice-facility-7i3we3z</link>
            <guid isPermaLink="true">https://kannada.asianetnews.com/gallery/cricket-sports/inside-vaibhav-suryavanshi-unique-life-famous-family-and-home-practice-facility-7i3we3z</guid>
            <pubDate>Wed, 17 Jun 2026 19:32:52 +0530</pubDate>
            <description><![CDATA[&lt;p&gt;15ರ ವಯಸ್ಸಿನಲ್ಲಿ ಭಾರತ ಎ ತಂಡದ ಪರ, ಶೀಘ್ರದಲ್ಲೇ ಸೀನಿಯರ್ ತಂಡ ಸೇರಿಕೊಳ್ಳಲಿರುವ ವೈಭವ್ ಸೂರ್ಯವಂಶಿ ಕುಟುಂಬ ಇದೀಗ ಭಾರಿ ಚರ್ಚೆಯಾಗುತ್ತಿದೆ. ವೈಭವ್ ಮನೆಯ ಹಿಂದೇ ಅಭ್ಯಾಸಕ್ಕೆ ಮೈದಾನವಿದೆ. ಇನ್&zwnj;ಸೈಡ್ ವೈಭವ್ ಹೋಮ್ ಕಹಾನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvasqstk6s4mbsgze79sfjmh,imgname-vaibhav-suryavanshi-and-family-1781700224851.png" type="image/jpeg" height="390" width="690"/>
            <content:encoded><![CDATA[&lt;p&gt;15ರ ವಯಸ್ಸಿನಲ್ಲಿ ಭಾರತ ಎ ತಂಡದ ಪರ, ಶೀಘ್ರದಲ್ಲೇ ಸೀನಿಯರ್ ತಂಡ ಸೇರಿಕೊಳ್ಳಲಿರುವ ವೈಭವ್ ಸೂರ್ಯವಂಶಿ ಕುಟುಂಬ ಇದೀಗ ಭಾರಿ ಚರ್ಚೆಯಾಗುತ್ತಿದೆ. ವೈಭವ್ ಮನೆಯ ಹಿಂದೇ ಅಭ್ಯಾಸಕ್ಕೆ ಮೈದಾನವಿದೆ. ಇನ್&zwnj;ಸೈಡ್ ವೈಭವ್ ಹೋಮ್ ಕಹಾನಿ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಘಟನೆ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಪ್ರತಿಭೆ, ಬ್ಯಾಟಿಂಗ್ ಶೈಲಿ, ಎಂತಾ ಬೌಲರ್&zwnj;ಗಳನ್ನು ಚೆಂಡಾಡುವ ರೀತಿಗೆ ಭಾರಿ ಮೆಚ್ಚುಗೆ ಇದೆ. ಇದೇ ವೇಳೆ ವೈಭವ್ ಸೂರ್ಯವಂಶಿ ಯಶಸ್ಸಿನ ಹಿಂದೆ ಕುಟುಂಬದ ಸಹಕಾರವಿದೆ. ಇಷ್ಟೇ ಅಲ್ಲ ಮನೆಯ ಹಿಂಭಾಗದಲ್ಲೇ ಮೈದಾನವಿದ್ದು, ನಿರಂತರ ಅಭ್ಯಾಸವೂ ಯಶಸ್ಸಿಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಮನೆ ಬಿಹಾರದ ಸಮಸ್ತಿಪುರ್ ಜಿಲ್ಲೆಯ ಮೋತಿಪುರ್ ಗ್ರಾಮದಲ್ಲಿದೆ. ಎರಡು ಮಹಡಿಯ ಸರಳ ಮನೆ. ವೈಭವ್ ಪೋಷಕರು ಸಾಲ ಮಾಡಿ ಕಟ್ಟಿದ ಮನೆ. ಮಧ್ಯಮ ವರ್ಗದ ಕುಟುಂಬಕ್ಕೆ ಬೇಕಾದಂತೆ ಮನೆ ಕಟ್ಟಲಾಗಿದೆ. ಮನೆಯ ಹಿಂಭಾಗದಲ್ಲೇ ಮೈದಾನವಿದೆ. ಇದೇ ಮೈದಾನ ವೈಭವ್ ಅಭ್ಯಾಸದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ.&lt;/p&gt;&lt;img&gt;&lt;p&gt;ಮಕ್ಕಳ ಕ್ರಿಕೆಟ್ ಅಭ್ಯಾಸಕ್ಕಾಗಿ ವೈಭವ್ ತಂದ ಮನೆಯ ಪಕ್ಕದಲ್ಲೇ ನೆಟ್, ಟರ್ಫ್, ಫೀಲ್ಡ್, ಪಿಚ್ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿದ್ದಾರೆ. ಈ ಮೂಲಕ ಮಕ್ಕಳು ಹೆಚ್ಚಿನ ಸಮಯ ಉಪಯುಕ್ತವಾಗಿ ಅಭ್ಯಾಸ ಮಾಡುತ್ತಾ ಕಳೆಯುವಂತೆ ಮಾಡಿದ್ದಾರೆ. ಇದರ ಪರಿಣಾಮ ವೈಭವ್ 15ರ ವಯಸ್ಸಿನಲ್ಲೇ ಟೀಂ ಇಂಡಿಯಾ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.&lt;/p&gt;&lt;img&gt;&lt;p&gt;ವೈಭವ್ ಕ್ರಿಕೆಟ್ ಪ್ರತಿಭೆ ಹಾಗೂ ಆಸಕ್ತಿಗೆ ತಕ್ಕಂತೆ ಸೌಲಭ್ಯ ನೀಡಲು ವೈಭವ್ ತಂದೆಗೆ ಕಷ್ಟವಾಗಿತ್ತು. ಆರ್ಥಿಕ ಸಮಸ್ಯೆಗಳು ಎದುರಾಗಿತ್ತು. ಕ್ರಿಕೆಟ್ ಕಿಟ್ ಸೇರಿದಂತೆ ಇತರ ಸೌಲಭ್ಯಕ್ಕೆ ಪ್ರತಿ ದಿನ ಹಣ ಖರ್ಚು ಮಾಡಬೇಕಿತ್ತು. ಹೀಗಾಗಿ ತಮ್ಮ ಪೂರ್ವಜರಿಂದ ಬಂದಿದ್ದ ಆಸ್ತಿಯಲ್ಲಿ ಜಮೀನನ್ನು ಮಾರಾಟ ಮಾಡಿದ್ದರು. ಈ ಎಲ್ಲಾ ಹಣವನ್ನು ಮಕ್ಕಳ ಕ್ರಿಕೆಟ್&zwnj;ಗಾಗಿ ಹಾಕಿದ್ದಾರೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಬೆಳಗ್ಗೆ 5 ಗಂಟೆಗೆ ಎದ್ದು ಅಭ್ಯಾಸ ಮಾಡುತ್ತಿದ್ದರು. ಕ್ಲಬ್ ಕ್ರಿಕೆಟ್&zwnj;ಗೆ ತೆರಳುತ್ತಿದ್ದರು. ಹೀಗಾಗಿ ಮಗನ ಕರಿಯರ್&zwnj;ಗೆ ಸಮಸ್ಯೆಯಾಗಬಾರದು ಎಂದು ಬೆಳಗ್ಗೆ 3 ಗಂಟೆ ವೈಭವ್ ತಾಯಿ ಎದ್ದು ತಿಂಡಿ ತಯಾರಿಸುತ್ತಿದ್ದರು. ಪೋಷಕರ ತ್ಯಾಗದ ಪ್ರತಿಫಲ ಈಗ ಸಿಕ್ಕಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ 1.15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ವೈಭವ್ ಸೂರ್ಯವಂಶಿ ಹಲವು ಪ್ರಾಯೋಜಕತ್ವದಿಂದಲೂ ಭಾರಿ ಆದಾಯಗಳಿಸುತ್ತಿದ್ದಾರೆ. ಈ ಸಂಭಾವನೆಗಳಿಂದ ಈ ಬಾರಿ ವೈಭವ್ ಸೂರ್ಯವಂಶಿ ಮುಂಬೈನಲ್ಲಿ 2.5 ಕೋಟಿಯಿಂ 3 ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/inside-vaibhav-suryavanshi-unique-life-famous-family-and-home-practice-facility-7i3we3z"/>
        </item>
        <item>
            <title><![CDATA[ಆಟವಾಡಲು ಮಗನನ್ನು ಲಂಡನ್ ಸಿಟಿ ಪಾರ್ಕ್‌ಗೆ ಕರೆದೊಯ್ದ ವಿರಾಟ್ ಕೊಹ್ಲಿ, ಫ್ಯಾನ್ಸ್‌ನಿಂದ ವಿಶೇಷ ಮನವಿ]]></title>
            <link>https://kannada.asianetnews.com/gallery/cricket-sports/virat-kohli-spotted-with-son-at-london-park-fans-flood-social-media-with-messages-89lits2</link>
            <guid isPermaLink="true">https://kannada.asianetnews.com/gallery/cricket-sports/virat-kohli-spotted-with-son-at-london-park-fans-flood-social-media-with-messages-89lits2</guid>
            <pubDate>Tue, 16 Jun 2026 19:38:03 +0530</pubDate>
            <description><![CDATA[&lt;p&gt;ಐಪಿಎಲ್ ಬಳಿಕ ಇಂಜುರಿ ಕಾರಣದಿಂದ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಮಗನನ್ನು ಲಂಡನ್ ನಗರದ ಪಾರ್ಕ್&zwnj;ಗೆ ಕರೆದೊಯ್ದ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv8bhj9b95yfp2035jjsse8z,imgname-kohli-london-park-visit-with-son-1781618231594.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಬಳಿಕ ಇಂಜುರಿ ಕಾರಣದಿಂದ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಮಗನನ್ನು ಲಂಡನ್ ನಗರದ ಪಾರ್ಕ್&zwnj;ಗೆ ಕರೆದೊಯ್ದ ಫೋಟೋಗಳು ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಐಪಿಎಲ್ ಟೂರ್ನಿ ಬಳಿಕ ಇಂಜುರಿ ಕಾರಣದಿಂದ ಆಫ್ಘಾನಿಸ್ತಾನ ವಿರುದ್ದದ ಸರಣಿಯಿಂದ ಹೊರಗುಳಿದಿದ್ದಾರೆ. ವಿಶ್ರಾಂತಿಯಲ್ಲಿರುವ ಕೊಹ್ಲಿ ಸದ್ಯ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇದೀಗ ಮಗ ಅಕಾಯ್ ಜೊತೆ ಲಂಡನ್ ನಗರದ ಪಾರ್ಕ್&zwnj;ನಲ್ಲಿ ಕಾಲ ಕಳೆದ ಕೆಲ ಫೋಟೋಗಳು ಭಾರಿ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಲಂಡನ್ ನಗರದ ಪಾರ್ಕ್&zwnj;ನಲ್ಲಿ ಮಗನ ಜೊತೆ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ ಫೋಟೋಗಳನ್ನು ಆಶೀಫ್ ಪಟೇಲ್ ಹಂಚಿಕೊಂಡಿದ್ದಾರೆ. ಕೊಹ್ಲಿ ಬ್ಲಾಕ್&zwnj; ಟಿಶರ್ಟ್ ಹಾಗೂ ಬ್ಲಾಕ್ ಜಾಕೆಟ್ ಧರಿಸಿದ್ದರೆ, ಮಗ ಆಕಾಯ್ ಸ್ವೆಟರ್ ಹಾಗೂ ಟ್ರೌಶರ್ ಧರಿಸಿದ್ದಾರೆ. ಕೊಹ್ಲಿ ಭುಜಲ್ಲಿ ಅಕಾಯ್ ವಿಶ್ರಾಂತಿ ಪಡೆಯುತ್ತಿರುವ ಫೋಟೋಗಳು ಇದಾಗಿದೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಪಾರ್ಕ್&zwnj;ನಲ್ಲಿ ಮಗನ ಜೊತೆ ಕಾಲ ಕಳೆಯುತ್ತಿರುವ ಹಲವು ಫೋಟೋಗಳು ವೈರಲ್ ಆಗಿದೆ. ಈ ಎಲ್ಲಾ ಫೋಟೋಗಳಲ್ಲಿ ವಿರಾಟ್ ಕೊಹ್ಲಿ ಪುತ್ರ ಅಕಾಯ್ ಮುಖ ಕ್ಯಾಮೆರಾ ಕಣ್ಣಿಗೆ ಬೀಳದಂತೆ ತೆಗೆಯಲಾಗಿದೆ. ಭಾರಿ ಕುತೂಹಲದಲ್ಲಿದ್ದ ಅಭಿಮಾನಿಗಳು ಅಕಾಯ್ ಮುಖ ನೋಡದೆ ನಿರಾಸೆಗೊಂಡಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ 2017ರಿಂದ ಮುಂಬೈನಲ್ಲಿ ನೆಲೆಸಿದ್ದರು. ಆದರೆ 2024ರಿಂದ ಲಂಡನ್&zwnj;ಗೆ ಶಿಫ್ಟ್ ಆಗಿದ್ದಾರೆ. ಕ್ರಿಕೆಟ್ ಸರಣಿಗಳಿದ್ದರೆ ಮಾತ್ರ ಭಾರತಕ್ಕೆ ಆಗಮಿಸುತ್ತಾರೆ. ಕೊಹ್ಲಿ ಲಂಡನ್&zwnj;ಗೆ ಶಿಫ್ಟ್ ಆಗುತ್ತಿದ್ದಾರೆ ಅನ್ನೋ ಸುದ್ದಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಸದ್ಯ ಏಕದಿನ ಕ್ರಿಕೆಟ್&zwnj;ನಲ್ಲಿ ಮಾತ್ರ ಮುಂದುವರಿದಿರುವ ಕೊಹ್ಲಿ ಹೆಚ್ಚಿನ ಸಮಯವನ್ನು ಕುಟುಂಬದ ಜೊತೆ ಕಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2021ರಲ್ಲಿ ಕೊಹ್ಲಿ ಹಾಗೂ ಅನುಷ್ಕಾ ದಂಪತಿ ಪೋಷಕರಾಗಿ ಬಡ್ತಿ ಪಡೆದಿದ್ದರು. ಮಗಳು ವಮಿಕಾ ಜನಿಸಿದ ಬಳಿಕ 2024ರಲ್ಲಿ ಮಗ ಅಕಾಯ್ ಜನಿಸಿದ್ದಾರೆ. ವಿಶೇಷ ಅಂದರೆ ಇಬ್ಬರು ಮಗ್ಗಳನ್ನು ಸಾರ್ವಜನಿಕರಿಗೆ ದೂರವೇ ಇಟ್ಟಿದ್ದಾರೆ. ಯಾವುದೇ ಫೋಟೋ, ವಿಡಿಯೋಗಳಲ್ಲಿ ಮುಖ ತೋರಿಸದೆ ಮರೆಮಾಚುತ್ತಾರೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಸತತ 2ನೇ ಟ್ರೋಫಿ ಗೆಲುವನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಕೊಹ್ಲಿಯನ್ನು ಟೀಂ ಇಂಡಿಯಾದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊಹ್ಲಿ ಕೂಡ ಉತ್ಸುಕರಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/virat-kohli-spotted-with-son-at-london-park-fans-flood-social-media-with-messages-89lits2"/>
        </item>
        <item>
            <title><![CDATA[ʻಧೈರ್ಯವಿದ್ರೆ ರಿಂಗ್ ಗೆ ಬನ್ನಿʼ ಹರ್ಭಜನ್ ಸಿಂಗ್‌ ಗೆ ಬಹಿರಂಗ ಸವಾಲು ಹಾಕಿದ ಶ್ರೀಶಾಂತ್]]></title>
            <link>https://kannada.asianetnews.com/cricket-sports/sreesanth-challenges-harbhajan-for-ring-fight-over-slapgate-controversy/articleshow-b981f67</link>
            <guid isPermaLink="true">https://kannada.asianetnews.com/cricket-sports/sreesanth-challenges-harbhajan-for-ring-fight-over-slapgate-controversy/articleshow-b981f67</guid>
            <pubDate>Fri, 19 Jun 2026 12:23:54 +0530</pubDate>
            <description><![CDATA[&lt;p&gt;18 ವರ್ಷಗಳ ಹಿಂದೆ ನಡೆದ ಸ್ಲ್ಯಾಪ್ ಗೇಟ್ ವಿವಾದ ಮತ್ತೆ ಚರ್ಚೆಗೆ ಬಂದಿದೆ. ಹರ್ಭಜನ್ ಜೊತೆ ಸೆಣೆಸಲು ಶ್ರೀಶಾಂತ್ ಸಜ್ಜಾಗಿದ್ದಾರೆ. ಬಾಕ್ಸಿಂಗ್ ರಿಂಗ್ ಒಳಗೆ ಬರಲು ಸವಾಲು ಹಾಕಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfacn99nhkv12gxkj6g11tv,imgname-slapgate-controversy-1781851903272.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ಮತ್ತು ಹೆಚ್ಚು ಚರ್ಚೆಯಾಗಿದ್ದ &quot;ಸ್ಲ್ಯಾಪ್ಗೇಟ್&quot; ವಿವಾದ ಮತ್ತೊಮ್ಮೆ ಬಿಸಿ ಪಡೆದಿದೆ. 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ ಹರ್ಭಜನ್ ಸಿಂಗ್,ಎಸ್. ಶ್ರೀಶಾಂತ್ ಅವರಿಗೆ ಹೊಡೆದಿದ್ರು. 18 ವರ್ಷಗಳ ನಂತರವೂ ಭಾರತದ ಮಾಜಿ ವೇಗಿ ಎಸ್. ಶ್ರೀಶಾಂತ್ ಕೋಪ ತಣ್ಣಗಾಗಿಲ್ಲ. ಹರ್ಭಜನ್ ಸಿಂಗ್ ಅವರನ್ನು ಶ್ರೀಶಾಂತ್ ಅಖಾಡಕ್ಕೆ ಆಹ್ವಾನಿಸಿದ್ದಾರೆ. ಬಾಕ್ಸಿಂಗ್ ರಿಂಗ್ ಒಳಗೆ ಮುಖಾಮುಖಿ ಹೋರಾಟ ನಡೆಸಲು ಬಹಿರಂಗವಾಗಿ ಸವಾಲು ಹಾಕಿದ್ದಾರೆ.&lt;/p&gt;&lt;h2&gt;ಬಹಿರಂಗ ಸವಾಲು&lt;/h2&gt;&lt;p&gt;ದಿ ಲಲ್ಲಂಟಾಪ್ ನಲ್ಲಿ ನಡೆದ ಸಂದರ್ಶನವೊಂದರಲ್ಲಿ, ಶ್ರೀಶಾಂತ್ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಹಿಂದಿನ ಜಾಹೀರಾತೊಂದರ ಫೋಟೋ ತೋರಿಸಲಾಗಿದೆ. ಅದ್ರಲ್ಲಿ ಶ್ರೀಶಾಂತ್ ಹಾಗೂ ಹರ್ಭಜನ್ ಬಾಕ್ಸಿಂಗ್ ಗ್ಲೌಸ್ ಹಾಕಿಕೊಂಡಿದ್ದಾರೆ. ಇದನ್ನು ನೋಡಿ ಅಭಿಪ್ರಾಯ ತಿಳಿಸುವಂತೆ ಶ್ರೀಶಾಂತ್ ಗೆ ಹೇಳಿದಾಗ, ಬೇರೆ ಆಲೋಚನೆ ಮಾಡ್ದೆ ನೇರವಾಗಿ ಹರ್ಭಜನ್ ಅವರಿಗೆ ಶ್ರೀಶಾಂತ್ ಸವಾಲು ಹಾಕಿದ್ದಾರೆ.&lt;/p&gt;&lt;p&gt;Vaibhav Sooryavanshi: ವೈಭವ್ ಸೂರ್ಯವಂಶಿಗೆ ಶಿಕ್ಷೆ ಕೊಡಿ ಎಂದವರಿಗೆ ಮುಟ್ಟಿ&lt;/p&gt;&lt;p&gt;ಹರ್ಭಜನ್ ಸಿಂಗ್ ಇನ್ನೂ ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ ಮತ್ತು ಅದರಿಂದ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಈ ಹಳೆ ಘಟನೆಗೆ ಶ್ವಾಶ್ವತ ಮುಕ್ತಿ ನೀಡುವ ಅಗತ್ಯವಿದೆ. ಅದಕ್ಕಾಗಿ ಹರ್ಭಜನ್ ಅವರನು ಬಾಕ್ಸಿಂಗ್ ರಿಂಗ್ ಒಳಗೆ ಆಹ್ವಾನಿಸ್ತಿದ್ದೇನೆ. ನಿಮಗೆ ರಿಂಗ್ ಒಳಗೆ ಪ್ರವೇಶಿಸಲು ಧೈರ್ಯವಿದೆಯೇ ಅಂತ ಶ್ರೀಶಾಂತ್ ಕೇಳಿದ್ದಾರೆ.&lt;/p&gt;&lt;p&gt;ನಿಮಗೆ ಧೈರ್ಯವಿದೆಯೇ? ನನ್ನ ಜೊತೆ ರಿಂಗ್ಗೆ ಬರಲು ಧೈರ್ಯವಿದೆಯೇ? ನೀವು ಬರಬಹುದೇ? ನನ್ನ ಜೊತೆ ರಿಂಗ್ ಒಳಗೆ ಬರಲು ನಿಮಗೆ ಧೈರ್ಯವಿದೆಯೇ? ಇದು ನಟನೆಯಲ್ಲ, ನಾನು ನಗುತ್ತಿದ್ದೇನೆ. ನೀವು ನಗುತ್ತಿಲ್ಲ, ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. ನೋಡೋಣ. ಇದು ಮುಕ್ತ ಸವಾಲು ಎಂದು ಶ್ರೀಶಾಂತ್ ಹೇಳಿದ್ದಾರೆ.&lt;/p&gt;&lt;p&gt;IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್&zwnj;ನ ಮಹತ್ವದ ಅಪ್&zwnj;ಡೇಟ್ಸ್&zwnj; ಇಲ್ಲಿದೆ&lt;/p&gt;&lt;p&gt;ಜಾಹೀರಾತುಗಳು ಅಥವಾ ಸಾರ್ವಜನಿಕ ನಿಂದನೆಯ ಬದಲಾಗಿ ನಿಜವಾದ ಹೋರಾಟದಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಂತೆ ಹರ್ಭಜನ್ಗೆ ಶ್ರೀಶಾಂತ್ ಹೇಳಿದ್ದಾರೆ. ಇದನ್ನು ಸ್ವಾಭಿಮಾನದ ವಿಷಯ ಎಂದ ಶ್ರೀಶಾಂತ್, ಹರ್ಭಜನ್ ಅವರನ್ನು ರಿಂಗ್ನಲ್ಲಿ ಎದುರಿಸಲು ಸಿದ್ಧ ಎಂದಿದ್ದಾರೆ. ಅಷ್ಟೇ ಅಲ್ಲ, ಭಜ್ಜಿ, ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮಗೆ ಮತ್ತು ನನಗೆ ಹೊಡೆತದ ಘಟನೆಯಿಂದ ಸಮಸ್ಯೆ ಆಗಿದ್ದು, ನೀವು ಅದ್ರಿಂದ ಕೈತುಂಬಾ ಸಂಪಾದಿಸುತ್ತಿದ್ದರೆ, ನಾನು ಸಹ ಗಳಿಸಲು ಶುರು ಮಾಡ್ತೇನೆ. ರಿಂಗ್ಗೆ ಬನ್ನಿ. ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಕರೆಯುತ್ತಿದ್ದೇನೆ. ನಮಗೆ ಸ್ವಾಭಿಮಾನವಿದ್ದರೆ, ಜಾಹೀರಾತು ಮಾಡ್ಬೇಡಿ, ನಿಜವಾದ ರೀತಿಯಲ್ಲಿ ಫೈಟ್ ಮಾಡೋಣ. ಎಲ್ಲಾ ಮಲಯಾಳಿಗಳು ಮತ್ತು ಎಲ್ಲಾ ಸರ್ದಾರ್ಗಳಿಗಾಗಿ ದಯವಿಟ್ಟು ಬನ್ನಿ ಎಂದಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ವರ್ಷಗಳಿಂದ, ಇಬ್ಬರು ಆಟಗಾರರು ಹಲವಾರು ಸಾರ್ವಜನಿಕ ವೇದಿಕೆಗಳು, ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದ್ರೆ ಇತ್ತೀಚಿಗೆ ಒಂದು ಜಾಹೀರಾತಿನ ಕಾರಣಕ್ಕೆ ಮತ್ತೆ ಇಬ್ಬರ ಸಂಬಂಧ ಹಳಸಿದೆ. ಇಬ್ಬರೂ ಮತ್ತೆ ದೂರವಾಗಿದ್ದಾರೆ. ಶ್ರೀಶಾಂತ್ ಈ ಸಂಬಂಧವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಪ್ರಸ್ತುತ, ಈ ಸವಾಲಿಗೆ ಹರ್ಭಜನ್ ಸಿಂಗ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದ್ರೆ ಶ್ರೀಶಾಂತ್ ಅವರ ಹೇಳಿಕೆ 2008 ರ ಸ್ಲ್ಯಾಪ್ಗೇಟ್ ವಿವಾದವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ.&lt;/p&gt;]]></content:encoded>
            <category>cricket-sports</category>
            <dc:creator>Roopa Hegde</dc:creator>
            <atom:link href="https://kannada.asianetnews.com/cricket-sports/sreesanth-challenges-harbhajan-for-ring-fight-over-slapgate-controversy/articleshow-b981f67"/>
        </item>
        <item>
            <title><![CDATA[Ind vs Afg: ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಮತ್ತೋರ್ವ ಸ್ಟಾರ್ ಕ್ರಿಕೆಟಿಗನಿಗೆ ಗಾಯ!]]></title>
            <link>https://kannada.asianetnews.com/cricket-sports/india-suffer-fresh-injury-blow-as-nitish-kumar-reddy-ruled-out-of-2nd-odi-vs-afghanistan-kvn/articleshow-beoyxy0</link>
            <guid isPermaLink="true">https://kannada.asianetnews.com/cricket-sports/india-suffer-fresh-injury-blow-as-nitish-kumar-reddy-ruled-out-of-2nd-odi-vs-afghanistan-kvn/articleshow-beoyxy0</guid>
            <pubDate>Wed, 17 Jun 2026 16:09:34 +0530</pubDate>
            <description><![CDATA[ಆಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದ್ದು, ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಂಡದಿಂದ ಹೊರಬಿದ್ದಿದ್ದಾರೆ. ಈ ಹಿನ್ನಡೆಯ ನಡುವೆಯೂ, ನಾಯಕ ಶುಭ್&zwnj;ಮನ್ ಗಿಲ್ ಮತ್ತು ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv1tj7b23vrk7a02kmx489ff,imgname-team-india--5--1781399100770.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಖನೌ: ಭಾರತ ತಂಡ ಹಾಗೂ ಗಾಯದ ಸಮಸ್ಯೆಗೆ ಬಿಡಿಸಲಾರದ ನಂಟಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಆಫ್ಘಾನಿಸ್ತಾನ ಎದುರಿನ ಏಕದಿನ ಸರಣಿ ಆರಂಭಕ್ಕೂ ಮೊದಲೇ ಭಾರತ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಅನುಭವಿ ಆಲ್ರೌಂಡರ್&zwnj;ಗಳಾದ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಹೊರಬಿದ್ದಿದ್ದರು. ಇದೀಗ ಆಫ್ಘಾನಿಸ್ತಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಕಣಕ್ಕಿಳಿದಿದ್ದ ಮತ್ತೋರ್ವ ಸ್ಟಾರ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಆಫ್ಘಾನಿಸ್ತಾನ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.&lt;/p&gt;&lt;h2&gt;&lt;strong&gt;ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ:&lt;/strong&gt;&lt;/h2&gt;&lt;p&gt;ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಫ್ಘಾನಿಸ್ತಾನ ಎದುರು ಎರಡನೇ ಏಕದಿನ ಪಂದ್ಯವನ್ನಾಡಲು ಕಣಕ್ಕಿಳಿದ ಟೀಂ ಇಂಡಿಯಾ ನಾಯಕ, ಇಂದಿನ ಪಂದ್ಯದಲ್ಲಿ ತಂಡದಲ್ಲಿ ಮೂರು ಬದಲಾವಣೆಗಳಾಗಿವೆ ಎಂದು ತಿಳಿಸಿದರು. ಇದನ್ನು ಕೇಳಿ ಎಲ್ಲರೂ ಅಚ್ಚರಿಗೊಳಗಾದರು. ಟಾಸ್ ಬಳಿಕ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್(ಈಗ ಎಕ್ಸ್&zwnj;) ಖಾತೆಯಲ್ಲಿ ಗಾಯದ ಸಮಸ್ಯೆಯಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಎರಡನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ತಿಳಿಸಿದೆ.&lt;/p&gt;&lt;p&gt;ಬಿಸಿಸಿಐ ವೈದ್ಯಕೀಯ ಸಿಬ್ಬಂದಿ, ನಿತೀಶ್ ಕುಮಾರ್ ರೆಡ್ಡಿ ಅವರ ಗಾಯದ ಮೇಲೆ ಕಣ್ಣಿಟ್ಟಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದೆ. ಮೂರನೇ ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ ಆಗುತ್ತಾರೋ ಅಥವಾ ಇಲ್ಲವೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಮೊದಲಿಗೆ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಇದೀಗ ನಿತೀಶ್ ಕುಮಾರ್ ರೆಡ್ಡಿ ಕೂಡಾ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದು, ಕ್ಯಾಪ್ಟನ್ ಗಿಲ್ ಹಾಗೂ ಕೋಚ್ ಗೌತಮ್ ಗಂಭೀರ್ ತಲೆನೋವು ಹೆಚ್ಚುವಂತೆ ಮಾಡಿದೆ.&lt;/p&gt;&lt;p&gt;Update Mr Nitish Kumar Reddy was unavailable for selection for the second ODI due to a sore left thigh.The BCCI Medical Team is monitoring his progress.Match updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank&lt;/p&gt;&lt;p&gt;&mdash; BCCI (@BCCI) June 17, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಗಿಲ್-ಇಶಾನ್ ಕಿಶನ್ ಶತಕ, ಬೃಹತ್ ಮೊತ್ತದತ್ತ ಭಾರತ:&lt;/strong&gt;&lt;/h3&gt;&lt;p&gt;ಇನ್ನು ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯೂ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಭಾರತ ತಂಡವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್(4) ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ರೋಹಿತ್ ಶರ್ಮಾ 48 ರನ್ ಬಾರಿಸಿ ರಶೀದ್ ಖಾನ್&zwnj;ಗೆ ವಿಕೆಟ್ ಒಪ್ಪಿಸಿದರು.&lt;/p&gt;&lt;p&gt;...... A masterclass in timing and sheer elegance from Captain @ShubmanGill His 9️⃣th in ODIs Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank pic.twitter.com/RxveCbw53E&lt;/p&gt;&lt;p&gt;&mdash; BCCI (@BCCI) June 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;Stamping his authority in some style A fantastic 7️⃣1️⃣-ball HUNDRED for Ishan Kishan His second in ODIs!Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ishankishan51 pic.twitter.com/VucK0F87Y7&lt;/p&gt;&lt;p&gt;&mdash; BCCI (@BCCI) June 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್&zwnj;ಗೆ ಜತೆಯಾದ ಶುಭ್&zwnj;ಮನ್ ಗಿಲ್ ಹಾಗೂ ಇಶಾನ್ ಕಿಶನ್ ಸ್ಪೋಟಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸದ್ಯ 34 ಓವರ್ ಅಂತ್ಯದ ವೇಳೆಗೆ ಭಾರತ ತಂಡವು ಕೇವಲ ಎರಡು ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿದೆ. ನಾಯಕ ಶುಭ್&zwnj;ಮನ್ ಗಿಲ್ ಅಜೇಯ 113 ರನ್ ಬಾರಿಸಿದ್ದರೇ, ಇಶಾನ್ ಕಿಶನ್ ಅಜೇಯ 104 ರನ್ ಸಿಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-suffer-fresh-injury-blow-as-nitish-kumar-reddy-ruled-out-of-2nd-odi-vs-afghanistan-kvn/articleshow-beoyxy0"/>
        </item>
        <item>
            <title><![CDATA[Ira Aery: ಕ್ರಿಕೆಟ್ ಲೋಕದ ಹೊಸ ಕ್ರಶ್: ಆಸೀಸ್‌ ಟೀಮ್‌ನಲ್ಲಿ ಮಿಂಚುತ್ತಿರುವ ಭಾರತೀಯ ಮೂಲದ ಮೂಗುತಿ ಸುಂದರಿ]]></title>
            <link>https://kannada.asianetnews.com/gallery/cricket-sports/ira-aery-australia-under-19-cricketer-indian-origin-cricket-crush-san-cqo1w3y</link>
            <guid isPermaLink="true">https://kannada.asianetnews.com/gallery/cricket-sports/ira-aery-australia-under-19-cricketer-indian-origin-cricket-crush-san-cqo1w3y</guid>
            <pubDate>Thu, 18 Jun 2026 15:43:55 +0530</pubDate>
            <description><![CDATA[ಭಾರತೀಯ ಮೂಲದ ಯುವ ಆಲ್&zwnj;ರೌಂಡರ್ ಇರಾ ಏರಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್&zwnj;ನಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಅಂಡರ್-19 ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇರಾ, ತಮ್ಮ ಆಟ ಮತ್ತು ಸೌಂದರ್ಯದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕ್ರಶ್ ಆಗಿ ಹೊರಹೊಮ್ಮಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvd3607rx0ws6xe77vm8zc51,imgname-ira-aery-australia-cricketer-1781777236216.jpeg" type="image/jpeg" height="390" width="690"/>
            <content:encoded><![CDATA[ಭಾರತೀಯ ಮೂಲದ ಯುವ ಆಲ್&zwnj;ರೌಂಡರ್ ಇರಾ ಏರಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್&zwnj;ನಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ತಮ್ಮ 17ನೇ ವಯಸ್ಸಿನಲ್ಲಿಯೇ ಅಂಡರ್-19 ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇರಾ, ತಮ್ಮ ಆಟ ಮತ್ತು ಸೌಂದರ್ಯದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಕ್ರಶ್ ಆಗಿ ಹೊರಹೊಮ್ಮಿದ್ದಾರೆ.&lt;img&gt;&lt;p&gt;ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್&zwnj;ನಲ್ಲಿ ಮತ್ತೊಂದು ಹೊಸ ಸ್ಟಾರ್&zwnj; ಉದಯವಾಗ್ತಿದೆ. ಭಾರತೀಯ ಮೂಲದ ಯುವ ಆಲ್&zwnj;ರೌಂಡರ್ ಇರಾ ಏರಿ, ತನ್ನ ಅದ್ಭುತ ಆಟದ ಜೊತೆಗೆ ಮನಮೋಹಕ ಸೌಂದರ್ಯದಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಕೇವಲ 17 ನೇ ವಯಸ್ಸಿನಲ್ಲಿಯೇ ಆಸ್ಟ್ರೇಲಿಯಾ ಅಂಡರ್-19 ಮಹಿಳಾ ತಂಡದಲ್ಲಿ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಇರಾ, ಭವಿಷ್ಯದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ.&lt;/p&gt;&lt;img&gt;&lt;p&gt;2009 ರ ಫೆಬ್ರವರಿ 25 ರಂದು ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿರುವ ಹೈಡೆಲ್ಬರ್ಗ್&zwnj;ನಲ್ಲಿ ಜನಿಸಿದ ಇರಾ ಏರಿ, ಅಲ್ಲಿಯೇ ನೆಲೆಸಿರುವ ಭಾರತೀಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಚಿಕ್ಕಂದಿನಿಂದಲೇ ಕ್ರಿಕೆಟ್&zwnj;ನತ್ತ ಅಪಾರ ಒಲವು ಬೆಳೆಸಿಕೊಂಡಿದ್ದ ಇರಾ, ಸ್ಥಳೀಯ ಕ್ಲಬ್&zwnj;ಗಳಲ್ಲಿ ಆಡುತ್ತಾ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದರು. ಶಾಲಾ ಮಟ್ಟದ ಟೂರ್ನಮೆಂಟ್&zwnj;ಗಳಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಕೋಚ್&zwnj; ಪ್ರಶಂಸೆಗೆ ಪಾತ್ರರಾಗಿದ್ದರು.&lt;/p&gt;&lt;img&gt;&lt;p&gt;ಆಸ್ಟ್ರೇಲಿಯಾದ ವಿಕ್ಟೋರಿಯಾ ವೆಸ್ಟರ್ನ್ ರೀಜನ್ ಜೂನಿಯರ್ ಕ್ರಿಕೆಟ್ ಅಸೋಸಿಯೇಷನ್ ​​ಮೂಲಕ ಇರಾ ಅವರ ಕ್ರಿಕೆಟ್ ಪ್ರಯಾಣ ಆರಂಭವಾಯಿತು. ಕಠಿಣ ಶಿಸ್ತು, ಅತ್ಯುತ್ತಮ ಫಿಟ್&zwnj;ನೆಸ್ ಮತ್ತು ಆಟದ ಮೇಲಿನ ಅಚಲ ಭಕ್ತಿಯಿಂದಾಗಿ ಹಂತ-ಹಂತವಾಗಿ ಬೆಳೆದ ಅವರು, ಶೀಘ್ರದಲ್ಲೇ ರಾಜ್ಯ ಮಟ್ಟದ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಅದಾದ ಬಳಿಕ ತಮ್ಮ ವೃತ್ತಿಜೀವನದ ಪ್ರಮುಖ ಮೈಲಿಗಲ್ಲಾಗಿ ಆಸ್ಟ್ರೇಲಿಯಾ ಮಹಿಳಾ ಅಂಡರ್-19 ತಂಡಕ್ಕೆ ಆಯ್ಕೆಯಾದರು.&lt;/p&gt;&lt;img&gt;&lt;p&gt;ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಮಹಿಳಾ ಅಂಡರ್-19 ತ್ರಿಕೋನ ಸರಣಿಯಲ್ಲಿ ಇರಾ ಏರಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಡೀ ಟೂರ್ನಮೆಂಟ್&zwnj;ನಲ್ಲಿ ಒಟ್ಟು 13 ವಿಕೆಟ್&zwnj;ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒತ್ತಡದ ಸಂದರ್ಭಗಳಲ್ಲೂ ವಿಕೆಟ್ ಪಡೆಯುವ ಅವರ ಸಾಮರ್ಥ್ಯ ಮತ್ತು ಬೌಲಿಂಗ್ ಸ್ಥಿರತೆಯು ಸೆಲೆಕ್ಟರ್&zwnj;ಗಳ ಮನಗೆದ್ದಿದೆ.&lt;/p&gt;&lt;img&gt;&lt;p&gt;ಪ್ರಸ್ತುತ ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರಿಕೆಟ್ ಆಯ್ಕೆದಾರರು ಇರಾ ಅವರ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದೇ ಫಾರ್ಮ್ ಅನ್ನು ಮುಂದುವರಿಸಿದರೆ, ಅವರು ಶೀಘ್ರದಲ್ಲೇ ಆಸ್ಟ್ರೇಲಿಯಾದ ಸೀನಿಯರ್ ಮಹಿಳಾ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಆಲ್&zwnj;ರೌಂಡರ್ ಆಗಿ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ನೆರವಾಗುವ ಗುಣ ಹೊಂದಿರುವುದು ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.&lt;/p&gt;&lt;img&gt;&lt;p&gt;ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇರಾ ಏರಿ ಹೆಸರು ವೈರಲ್&zwnj; ಆಗುತ್ತಿದೆ. ಇವರ ಸೌಂದರ್ಯ, ಫಿಟ್&zwnj;ನೆಸ್ ಮತ್ತು ವಿಶಿಷ್ಟ ಆಟದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲವು ಅಭಿಮಾನಿಗಳಂತೂ ಇವರನ್ನು ಆಸ್ಟ್ರೇಲಿಯಾದ ಸ್ಟಾರ್ ಮಹಿಳಾ ಕ್ರಿಕೆಟರ್ ಎಲಿಸ್ ಪೆರ್ರಿ (Ellyse Perry) ಅವರಿಗೆ ಹೋಲಿಸಿ ಪ್ರಶಂಸಿಸುತ್ತಿದ್ದಾರೆ. ಆದರೆ ಕ್ರಿಕೆಟ್ ವಿಶ್ಲೇಷಕರ ಪ್ರಕಾರ, ಇರಾ ತನ್ನದೇ ಆದ ಸ್ವಂತ ಪ್ರತಿಭೆಯಿಂದ ವಿಶಿಷ್ಟ ಗುರುತನ್ನು ಗಳಿಸುತ್ತಿದ್ದಾರೆ. ಭಾರತೀಯ ಮೂಲದ ಈ ಯುವ ಕ್ರಿಕೆಟರ್ ಈಗ ವಿಶ್ವದಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳ 'ಹೊಸ ಕ್ರಶ್' ಆಗಿ ಬದಲಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/cricket-sports/ira-aery-australia-under-19-cricketer-indian-origin-cricket-crush-san-cqo1w3y"/>
        </item>
        <item>
            <title><![CDATA[ಪೊಲೀಸ್ ಠಾಣೆ ಮೆಟ್ಟಿಲೇರಿದ ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷನಿಗೆ ಎದುರಾದ ಸಂಕಷ್ಟವೇನು?]]></title>
            <link>https://kannada.asianetnews.com/gallery/cricket-sports/former-cricketer-sourav-ganguly-upset-over-fan-page-lodges-official-complaint-kolkata-drof85s</link>
            <guid isPermaLink="true">https://kannada.asianetnews.com/gallery/cricket-sports/former-cricketer-sourav-ganguly-upset-over-fan-page-lodges-official-complaint-kolkata-drof85s</guid>
            <pubDate>Tue, 16 Jun 2026 18:03:18 +0530</pubDate>
            <description><![CDATA[&lt;p&gt;ಮಾಜಿ ಕ್ರಿಕೆಟಗ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾರೆ. ಗಂಗೂಲಿ ದಿಡೀರ್ ಪೊಲೀಸರ ಬಳಿ ತೆರಳಿದ್ದೇಕೆ? ಮೈದಾನದಲ್ಲಿ ಅಗ್ರೆಸ್ಸೀವ್ ಆಗಿದ್ದ ಗಂಗೂಲಿ ಇದೀಗ ಆಫ್ ದಿ ಫೀಲ್ಡ್&zwnj;ನಲ್ಲಿ ಕೆರಳಿದ್ದೇಕೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01fff24xzszrhfm27rd0h2er1n,imgname-sourav-ganguly--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಕ್ರಿಕೆಟಗ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಪೊಲೀಸ್ ಠಾಣೆ ಮೆಟ್ಟೆಲೇರಿದ್ದಾರೆ. ಗಂಗೂಲಿ ದಿಡೀರ್ ಪೊಲೀಸರ ಬಳಿ ತೆರಳಿದ್ದೇಕೆ? ಮೈದಾನದಲ್ಲಿ ಅಗ್ರೆಸ್ಸೀವ್ ಆಗಿದ್ದ ಗಂಗೂಲಿ ಇದೀಗ ಆಫ್ ದಿ ಫೀಲ್ಡ್&zwnj;ನಲ್ಲಿ ಕೆರಳಿದ್ದೇಕೆ?&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಗರಂ ಆಗಿದ್ದಾರೆ. ಬಂಗಾಳ ಕ್ರಿಕೆಟ್ ಅಧ್ಯಕ್ಷ ಸೌರವ್ ಗಂಗೂಲಿ ನೇರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ಕೋಲ್ಕತಾ ಪೊಲೀಸರಿಗೆ ದೂರು ನೀಡಿರುವ ಸೌರವ್ ಗಂಗೂಲಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಏನಿದು ಪ್ರಕರಣ?&lt;/p&gt;&lt;img&gt;&lt;p&gt;ಸೌರವ್ ಗಂಗೂಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಮಾಡುತ್ತಿರುವ ಅಪಪ್ರಚಾರದ ವಿರುದ್ದ ಕೆರಳಿದ್ದಾರೆ. ಸೌರವ್ ಗಂಗೂಲಿ ಫ್ಯಾನ್ಸ್ ಅನ್ನೋ ಫೇಸ್&zwnj;ಬುಕ್ ಪೇಜ್ ವಿರುದ್ದ ಗಂಗೂಲಿ ದೂರು ನೀಡಿದ್ದಾರೆ. ಗಂಗೂಲಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ. ಇಷ್ಟೇ ಅಲ್ಲ ಕಠಿಣ ಕ್ರಮದ ಭರವಸೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಸೌರವ್ ಗಂಗೂಲಿ ಹೆಸರಿನಲ್ಲಿ ಇರುವ ಸೌರವ್ ಗಂಗೂಲಿ ಫ್ಯಾನ್ ಪೇಜ್&zwnj;ನಲ್ಲಿ ತಪ್ಪು ಮಾಹಿತಿ, ಅಪಪ್ರಚಾರ ಮಾಡಲಾಗುತ್ತಿದೆ. ಟೀಕೆ ಟಿಪ್ಪಿಗಳಿಗೆ ಸ್ವಾಗತ. ಆದರೆ ಇಲ್ಲದ ಸಲ್ಲದ ಮಾಹಿತಿ, ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ತಮ್ಮ ಘನೆತೆಗೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಸೌರವ್ ಗಂಗೂಲಿ ಉಲ್ಲೇಖಿಸಿದ್ದಾರೆ.&lt;/p&gt;&lt;img&gt;&lt;p&gt;ಸಾರ್ವಜನಿಕ ಜೀವನದಲ್ಲಿ ಟೀಕೆ, ವಿರೋಧಗಳು ಇದ್ದೇ ಇರುತ್ತದೆ. ಇದನ್ನು ನಾನು ಅರಿತಿದ್ದೇನೆ. ಆದರೆ ತಪ್ಪು ಮಾಹಿತಿ, ತಪ್ಪು ವಿಚಾರಗಳನ್ನು ಪ್ರಚಾರ ಮಾಡುವುದು, ವ್ಯಕ್ತಿಯ ಘನತೆಗೆ ಧಕ್ಕೆ ತರುವುದು, ಸುಳ್ಳು ಸುದ್ದಿ ಹಬ್ಬಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಸೌರವ್ ಗಂಗೂಲಿ ಫ್ಯಾನ್ ಪೇಜ್ ಮೂಲಕ ನಿರಂತರವಾಗಿ ಈ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಪಶ್ಚಿಮ ಬಂಗಾಳ ಕ್ರಿಕೆಟ್ ಅಧ್ಯಕ್ಷನಾಗಿರುವ ಸೌರವ್ ಗಂಗೂಲಿ, ಬಂಗಾಳ ಕ್ರಿಕೆಟ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದರ ನಡುವೆ ಸೌರವ್ ಗಂಗೂಲಿ ಮಮತಾ ಬ್ಯಾನರ್ಜಿ ಟಿಎಂಸಿ ಪಕ್ಷ ಸೇರುತ್ತಿದ್ದಾರೆ. ಯೂಸೂಫ್ ಪಠಾಣ್ ರಾಜೀನಾಮೆ ಕೊಡಿಸಿ ಅವರ ಸ್ಥಾನದಲ್ಲಿ ಸೌರವ್ ಗಂಗೂಲಿಯನ್ನು ಸ್ಪರ್ಧೆ ಮಾಡಿಸಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಊಹಾಪೋಗಳಿಗೆ ಗಂಗೂಲಿ ಸ್ಪಷ್ಟನೆ ನೀಡಿದ್ದರು.&lt;/p&gt;&lt;img&gt;&lt;p&gt;ಸೌರವ್ ಗಂಗೂಲಿ ಭಾರತ ತಂಡದ ನಾಯಕನಾಗಿ ಮಹತ್ತರ ಬದಲಾವಣೆಗೆ ಕಾರಣಾಗಿದ್ದಾರೆ. ಹೊಸ ತಂಡ ಕಟ್ಟಿದ, ವಿಶ್ವವೇ ತಿರುಗಿ ನೋಡುವಂತೆ ತಂಡ ಕಟ್ಟಿದ ಹೆಮ್ಮೆ ಸೌರವ್ ಗಂಗೂಲಿಗಿದೆ. ಯುವ ಕ್ರಿಕೆಟಿಗರನ್ನು ಬೆಳೆಸಿ ಭಾರತ ತಂಡಕ್ಕೆ ಹೊಸ ಹಿರಿಮೆ ನೀಡಿದ ಕೀರ್ತಿ ಸೌರವ್ ಗಂಗೂಲಿಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/former-cricketer-sourav-ganguly-upset-over-fan-page-lodges-official-complaint-kolkata-drof85s"/>
        </item>
        <item>
            <title><![CDATA[ಭಾರತ ಎದುರು ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ! ಟೀಂ ಇಂಡಿಯಾದಲ್ಲಿ ಮೂರು ಮೇಜರ್ ಚೇಂಜ್]]></title>
            <link>https://kannada.asianetnews.com/cricket-sports/ind-vs-afg-2nd-odi-afghanistan-opt-to-bowl-prince-yadav-makes-india-debut-as-teams-ring-in-changes-kvn/articleshow-fkslf9x</link>
            <guid isPermaLink="true">https://kannada.asianetnews.com/cricket-sports/ind-vs-afg-2nd-odi-afghanistan-opt-to-bowl-prince-yadav-makes-india-debut-as-teams-ring-in-changes-kvn/articleshow-fkslf9x</guid>
            <pubDate>Wed, 17 Jun 2026 13:35:12 +0530</pubDate>
            <description><![CDATA[ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ತಲಾ ಮೂರು ಬದಲಾವಣೆ ಮಾಡಿದ್ದು, ಭಾರತದ ಪರ ಪ್ರಿನ್ಸ್ ಯಾದವ್ ಹಾಗೂ ಆಫ್ಘಾನಿಸ್ತಾನ ಪರ ಡೌರಿಷ್ ರಸೋಲಿ ಪದಾರ್ಪಣೆ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hm41ynndnjppy5tvmdnrzr02,imgname-india-vs-afghanistan-toss--1-.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ಹಸ್ಮತುಲ್ಲಾ ಶಾಹಿದಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಜಯಿಸಿರುವ ಟೀಂ ಇಂಡಿಯಾ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.&lt;/p&gt;&lt;h2&gt;&lt;strong&gt;ಭಾರತ ತಂಡದಲ್ಲಿ ಮೂರು ಬದಲಾವಣೆ:&lt;/strong&gt;&lt;/h2&gt;&lt;p&gt;ಆಫ್ಘಾನಿಸ್ತಾನ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಶುಭ್&zwnj;ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಏಳು ವಿಕೆಟ್&zwnj;ಗಳ ಸುಲಭ ಗೆಲುವು ದಾಖಲಿಸಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಮೂರು ಪ್ರಮುಖ ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಎರಡನೇ ಏಕದಿನ ಪಂದ್ಯಕ್ಕೆ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗಿಗಳಾದ ಪ್ರಸಿದ್ದ್ ಕೃಷ್ಣ ಹಾಗೂ ಹರ್ಷ್ ದುಬೆಗೆ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್, ಕುಲ್ದೀಪ್ ಯಾದವ್ ಹಾಗೂ ಪ್ರಿನ್ಸ್ ಯಾದವ್ ತಂಡ ಕೂಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಪ್ರಿನ್ಸ್ ಯಾದವ್:&lt;/strong&gt;&lt;/h3&gt;&lt;p&gt;19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದ ಪ್ರಿನ್ಸ್ ಯಾದವ್ ಇದೀಗ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಪನಾಯಕ ಶ್ರೇಯಸ್ ಅಯ್ಯರ್, ಪ್ರಿನ್ಸ್&zwnj; ಯಾದವ್&zwnj;ಗೆ ಕ್ಯಾಪ್ ನೀಡುವ ಮೂಲಕ ಟೀಂ ಇಂಡಿಯಾಗೆ ಬರ ಮಾಡಿಕೊಂಡರು. ಅಂದಹಾಗೆ ಈ ಸರಣಿಯಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಮೂರನೇ ಕ್ರಿಕೆಟಿಗ ಪ್ರಿನ್ಸ್ ಯಾದವ್ ಆಗಿದ್ದಾರೆ. ಈ ಮೊದಲು ಮೊದಲ ಏಕದಿನ ಪಂದ್ಯದಲ್ಲಿ ಹರ್ಷ್ ದುಬೆ ಹಾಗೂ ಗುರ್ನೂರ್ ಬ್ರಾರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು.&lt;/p&gt;&lt;p&gt;Here's how #TeamIndia lines up for the 2️⃣nd #INDvAFG ODI Updates ▶️ https://t.co/JYJ5l44iJ6@IDFCFIRSTBank pic.twitter.com/ebEzTRX2zE&lt;/p&gt;&lt;p&gt;&mdash; BCCI (@BCCI) June 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಇನ್ನು ಭಾರತ ಮಾತ್ರವಲ್ಲದೇ ಆಫ್ಘಾನಿಸ್ತಾನ ತಂಡದಲ್ಲೂ ಮೂರು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ನಬಿ, ಜಿಯಾ ಶರೀಫಿ, ಅಝ್ಮತುಲ್ಲಾ ಓಮರ್&zwnj;ಝೈ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ನಂಗೇಲಿಯಾ ಖರೋಟಿ, ಬಿಲಾಲ್ ಶಮಿ ಹಾಗೂ ಡೌರಿಷ್ ರಸೋಲಿ ತಂಡ ಕೂಡಿಕೊಂಡಿದ್ದಾರೆ. ರಸೋಲಿ ಇದೀಗ ಏಕದಿನ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ind-vs-afg-2nd-odi-afghanistan-opt-to-bowl-prince-yadav-makes-india-debut-as-teams-ring-in-changes-kvn/articleshow-fkslf9x"/>
        </item>
        <item>
            <title><![CDATA[ಗಾಳಿಯಲ್ಲಿ ಹಾರಿ ಚಿರತೆಯಂತೆ ಜಿಗಿದು ಅದ್ಭುತ ಕ್ಯಾಚ್ ಹಿಡಿದ ವೈಭವ್ ಸೂರ್ಯವಂಶಿ! ವಿಡಿಯೋ ವೈರಲ್]]></title>
            <link>https://kannada.asianetnews.com/cricket-sports/vaibhav-suryavanshi-stuns-with-spectacular-diving-catch-against-afghanistan-a-video-goes-viral-kvn/articleshow-g8b1bsw</link>
            <guid isPermaLink="true">https://kannada.asianetnews.com/cricket-sports/vaibhav-suryavanshi-stuns-with-spectacular-diving-catch-against-afghanistan-a-video-goes-viral-kvn/articleshow-g8b1bsw</guid>
            <pubDate>Thu, 18 Jun 2026 08:28:24 +0530</pubDate>
            <description><![CDATA[ಅಫ್ಘಾನಿಸ್ತಾನ 'ಎ' ವಿರುದ್ಧದ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಬ್ಯಾಟಿಂಗ್&zwnj;ನಲ್ಲೂ 38 ರನ್ ಗಳಿಸಿದ ಅವರು, ಭಾರತ 'ಎ' ತಂಡದ 101 ರನ್&zwnj;ಗಳ ಗೆಲುವಿಗೆ ಕಾರಣರಾದರು. ಈ ಕ್ಯಾಚ್&zwnj;ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvb29g1a585213wx66yzjg06,imgname-va-1781709193258.jpg" type="image/jpeg" height="390" width="690"/>
            <content:encoded><![CDATA[&lt;p&gt;ದಂಬುಲ್ಲಾ: ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧದ ಪಂದ್ಯದಲ್ಲಿ ಭಾರತದ 15 ವರ್ಷದ ಹುಡುಗ ವೈಭವ್ ಸೂರ್ಯವಂಶಿ ಬ್ಯಾಟಿಂಗ್&zwnj;ನಲ್ಲಿ ಮಾತ್ರವಲ್ಲ, ಫೀಲ್ಡಿಂಗ್&zwnj;ನಲ್ಲೂ ಕಮಾಲ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಹಿಡಿದ ಒಂದು ಅದ್ಭುತ ಡೈವಿಂಗ್ ಕ್ಯಾಚ್&zwnj;ನ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.&lt;/p&gt;&lt;p&gt;ಅಫ್ಘಾನಿಸ್ತಾನ ಇನ್ನಿಂಗ್ಸ್&zwnj;ನ ಆರನೇ ಓವರ್&zwnj;ನಲ್ಲಿ ಈ ಅದ್ಭುತ ಕ್ಷಣ ನಡೆಯಿತು. ಭಾರತದ ಬೌಲರ್ ಅಂಶುಲ್ ಕಂಬೋಜ್ ಎಸೆದ ಚೆಂಡನ್ನು ಅಫ್ಘಾನ್ ಬ್ಯಾಟರ್ ಖಾಲಿದ್ ತಾನಿಪಾಲ್ ಲೆಗ್ ಸೈಡ್&zwnj;ಗೆ ಬಾರಿಸಿದರು. ಆಗ ಶಾರ್ಟ್ ಮಿಡ್-ವಿಕೆಟ್&zwnj;ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯವಂಶಿ ಬಳಿ ಬಾಲ್ ಹೋಯ್ತು. ಆದರೆ, ಮೊದಲ ಪ್ರಯತ್ನದಲ್ಲಿ ಅವರಿಗೆ ಸರಿಯಾಗಿ ಕ್ಯಾಚ್ ಹಿಡಿಯಲು ಆಗಲಿಲ್ಲ. ಕೈಯಿಂದ ಜಾರಿದ ಚೆಂಡು ನೆಲಕ್ಕೆ ಬೀಳುವ ಮುನ್ನವೇ, ಸೂರ್ಯವಂಶಿ ಸ್ವಲ್ಪವೂ ಧೈರ್ಯ ಕಳೆದುಕೊಳ್ಳದೆ, ಗಾಳಿಯಲ್ಲಿ ಪಕ್ಕಕ್ಕೆ ಹಾರಿ ತಮ್ಮ ಬಲಗೈಯಲ್ಲಿ ಚೆಂಡನ್ನು ಹಿಡಿದುಬಿಟ್ಟರು.&amp;nbsp;&lt;/p&gt;&lt;p&gt;&lt;strong&gt;ಆ ವಿಡಿಯೋ ಇಲ್ಲಿದೆ ನೋಡಿ:&amp;nbsp;&lt;/strong&gt;&lt;/p&gt;&lt;p&gt;JUST LOOK AT THE STUNNING CATCH BY VAIBHAV SOORYAVANSHI! A jaw-dropping grab in the field,Tough moment for the haters. #INDvsAFG #VaibhaSooryavanshi pic.twitter.com/hKxKI0G3WV&lt;/p&gt;&lt;p&gt;&mdash; Faruk (@uf2151593) June 17, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಅದ್ಭುತ ಕ್ಯಾಚ್&zwnj;ನಿಂದಾಗಿ, 13 ರನ್ ಗಳಿಸಿದ್ದ ತಾನಿಪಾಲ್ ಪೆವಿಲಿಯನ್&zwnj;ಗೆ ಮರಳಬೇಕಾಯ್ತು. ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;&lt;strong&gt;ಬ್ಯಾಟಿಂಗ್&zwnj;ನಲ್ಲೂ ಮಿಂಚು, ಅದೃಷ್ಟವೂ ಜೊತೆಗಿತ್ತು!&lt;/strong&gt;&lt;/h2&gt;&lt;p&gt;ಫೀಲ್ಡಿಂಗ್&zwnj;ನಲ್ಲಿ ಮಿಂಚುವ ಮುನ್ನ, ಸೂರ್ಯವಂಶಿ ಬ್ಯಾಟಿಂಗ್&zwnj;ನಲ್ಲೂ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಇನ್ನಿಂಗ್ಸ್&zwnj;ನ ಆರಂಭದಲ್ಲಿ ಅವರಿಗೆ ಅದೃಷ್ಟ ಕೂಡ ಕೈಹಿಡಿದಿತ್ತು. ಖಾತೆ ತೆರೆಯುವ ಮುನ್ನವೇ ಪಾಯಿಂಟ್&zwnj;ನಲ್ಲಿ ಅವರು ನೀಡಿದ ಕ್ಯಾಚ್ ಅನ್ನು ಫೀಲ್ಡರ್ ಕೈಚೆಲ್ಲಿದರು. ಇದಾದ ನಂತರ, ಅಫ್ಘಾನ್ ಫೀಲ್ಡರ್&zwnj;ಗಳು ಇನ್ನೂ ಎರಡು ಬಾರಿ ಸೂರ್ಯವಂಶಿಯ ಕ್ಯಾಚ್&zwnj;ಗಳನ್ನು ಬಿಟ್ಟರು. ಸಿಕ್ಕ ಈ ಜೀವದಾನಗಳನ್ನು ಚೆನ್ನಾಗಿ ಬಳಸಿಕೊಂಡ ಸೂರ್ಯವಂಶಿ, ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್&zwnj;ಗಳೊಂದಿಗೆ 38 ರನ್ ಚಚ್ಚಿದರು.&lt;/p&gt;&lt;h3&gt;&lt;strong&gt;ತ್ರಿಕೋನ ಸರಣಿ: ಆಫ್ಘನ್&zwnj; ವಿರುದ್ಧ ಗೆದ್ದ ಭಾರತ &lsquo;ಎ&rsquo;&lt;/strong&gt;&lt;/h3&gt;&lt;p&gt;ದಾಂಬುಲಾ: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ &lsquo;ಎ&rsquo; ಫೈನಲ್&zwnj;ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅಫ್ಘಾನಿಸ್ತಾನ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಭಾರತ &lsquo;ಎ&rsquo; 101 ರನ್&zwnj; ಜಯ ಸಾಧಿಸಿತು. ಭಾರತ &lsquo;ಎ&rsquo; 9 ವಿಕೆಟ್&zwnj;ಗೆ 319 ರನ್&zwnj; ಗಳಿಸಿದರೆ, ಆಫ್ಘನ್&zwnj; &lsquo;ಎ&rsquo; 36.5 ಓವರಲ್ಲಿ 218 ರನ್&zwnj;ಗೆ ಆಲೌಟ್&zwnj; ಆಯಿತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-suryavanshi-stuns-with-spectacular-diving-catch-against-afghanistan-a-video-goes-viral-kvn/articleshow-g8b1bsw"/>
        </item>
        <item>
            <title><![CDATA[ಆಫ್ಘಾನ್ ಎದುರು ದೊಡ್ಡ ಶತಕ ಸಿಡಿಸಿ ಶಿಖರ್ ಧವನ್, ವಿರಾಟ್ ಕೊಹ್ಲಿಯ ಅಪರೂಪದ ದಾಖಲೆ ಮುರಿದ ಶುಭ್‌ಮನ್ ಗಿಲ್..!]]></title>
            <link>https://kannada.asianetnews.com/gallery/cricket-sports/india-vs-afghanistan-2nd-odi-shubman-gill-smashes-154-becomes-fastest-indian-to-reach-3000-odi-runs-kvn-i6my76w</link>
            <guid isPermaLink="true">https://kannada.asianetnews.com/gallery/cricket-sports/india-vs-afghanistan-2nd-odi-shubman-gill-smashes-154-becomes-fastest-indian-to-reach-3000-odi-runs-kvn-i6my76w</guid>
            <pubDate>Wed, 17 Jun 2026 17:41:38 +0530</pubDate>
            <description><![CDATA[&lt;p&gt;ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ದೊಡ್ಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದರ ಜತೆಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv1tj7b2fp4wgmn7gw140k8j,imgname-team-india--1--1781399100770.jpg" type="image/jpeg" height="390" width="690"/>
            <content:encoded><![CDATA[&lt;p&gt;ಲಖನೌ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ದೊಡ್ಡ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಇದರ ಜತೆಗೆ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ನುಚ್ಚುನೂರು ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಲ್ಲಿನ ಏಕಾನ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್&zwnj;ಮನ್ ಗಿಲ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಗಿಲ್ ಕೇವಲ 110 ಎಸೆತಗಳನ್ನು ಎದುರಿಸಿ 22 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 154 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.&lt;/p&gt;&lt;img&gt;&lt;p&gt;ಭಾರತ ಪರ ಮೂರನೇ ವಿಕೆಟ್&zwnj;ಗೆ ಶುಭ್&zwnj;ಮನ್ ಗಿಲ್ ಹಾಗೂ ಇಶಾನ್ ಕಿಶನ್&zwnj; ಜೋಡಿ ಬರೋಬ್ಬರಿ 224 ರನ್&zwnj;ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಅನಾಯಾಸವಾಗಿ 350ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ಇದೇ ವೇಳೆ ಶುಭ್&zwnj;ಮನ್ ಗಿಲ್, ಏಕದಿನ ಕ್ರಿಕೆಟ್&zwnj;ನಲ್ಲಿ ಅಪರೂಪದ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಶುಭ್&zwnj;ಮನ್ ಗಿಲ್ ಇದೀಗ ಕೇವಲ 62 ಏಕದಿನ ಇನ್ನಿಂಗ್ಸ್&zwnj;ಗಳನ್ನಾಡಿ 3000 ರನ್ ಪೂರೈಸುವ ಮೂಲಕ ಅತಿವೇಗವಾಗಿ ಏಕದಿನ ಕ್ರಿಕೆಟ್&zwnj;ನಲ್ಲಿ 3000 ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ಬರೆದಿದ್ದಾರೆ. ಈ ಮೊದಲು ಶಿಖರ್ ಧವನ್ ಹಾಗೂ ಶ್ರೇಯಸ್ 72 ಇನ್ನಿಂಗ್ಸ್&zwnj;ಗಳನ್ನಾಡಿ 3 ಸಾವಿರ ರನ್ ಪೂರೈಸುವ ಮೂಲಕ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿ 75 ಏಕದಿನ ಇನ್ನಿಂಗ್ಸ್&zwnj;ಗಳನ್ನಾಡಿ 3000 ರನ್ ಪೂರೈಸಿದ್ದರು.&lt;/p&gt;&lt;img&gt;&lt;p&gt;ಶುಭ್&zwnj;ಮನ್ ಗಿಲ್ ಏಕದಿನ ಕ್ರಿಕೆಟ್&zwnj;ನಲ್ಲಿ 3000 ರನ್ ಬಾರಿಸಲು 3016 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಎರಡನೇ ಸ್ಥಾನಕ್ಖೇರಿದ್ದಾರೆ. ಇನ್ನು 2995 ಎಸೆತಗಳಲ್ಲಿ 3000 ರನ್ ಬಾರಿಸಿರುವ ಕಪಿಲ್ ದೇವ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಶ್ರೇಯಸ್ ಅಯ್ಯರ್(3049) ಹಾಗೂ ವಿರೇಂದ್ರ ಸೆಹ್ವಾಗ್(3164) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಶುಭ್&zwnj;ಮನ್ ಗಿಲ್ 108 ಎಸೆತಗಳನ್ನು ಎದುರಿಸಿ 150 ರನ್ ಬಾರಿಸುವ ಮೂಲಕ ಭಾರತ ಪರ ಏಕದಿನ ಕ್ರಿಕೆಟ್&zwnj;ನಲ್ಲಿ ಅತಿವೇಗವಾಗಿ 150+ ರನ್ ಬಾರಿಸಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಇಶಾನ್ ಕಿಶನ್(103 ಎಸೆತ) ಹಾಗೂ ವಿರಾಟ್ ಕೊಹ್ಲಿ 106 ಎಸೆತಗಳಲ್ಲಿ 150 ರನ್ ಬಾರಿಸಿ ಮೊದಲೆರಡು ಸ್ಥಾನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಭಾರತ-ಆಫ್ಘಾನಿಸ್ತಾನ ನಡುವಿನ ಎರಡನೇ ಏಕದಿನ ಮ್ಯಾಚ್ ವಿಚಾರಕ್ಕೆ ಬರುವುದಾದರೇ, ಶುಭ್&zwnj;ಮನ್ ಗಿಲ್(154) ಹಾಗೂ ಇಶಾನ್ ಕಿಶನ್(125) ಸ್ಪೋಟಕ ಶತಕಗಳ ನೆರವಿನಿಂದ 49.5 ಓವರ್&zwnj;ಗಳಲ್ಲಿ 402 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು ಆಫ್ಘಾನಿಸ್ತಾನಕ್ಕೆ ಕಠಿಣ ಗುರಿ ನೀಡಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/india-vs-afghanistan-2nd-odi-shubman-gill-smashes-154-becomes-fastest-indian-to-reach-3000-odi-runs-kvn-i6my76w"/>
        </item>
        <item>
            <title><![CDATA[ಮಹಿಳಾ ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರಿನ ಪಂದ್ಯಕ್ಕೂ ಮುನ್ನ ಶ್ರೇಯಾಂಕ ಪಾಟೀಲ್ ಟೂರ್ನಿಯಿಂದಲೇ ಔಟ್! RCB ಆಟಗಾರ್ತಿ ಸೇರ್ಪಡೆ]]></title>
            <link>https://kannada.asianetnews.com/cricket-sports/big-blow-for-india-women-shreyanka-patil-ruled-out-of-t20-world-cup-rcb-spinner-prema-rawat-named-replacement-kvn/articleshow-kgvbu9x</link>
            <guid isPermaLink="true">https://kannada.asianetnews.com/cricket-sports/big-blow-for-india-women-shreyanka-patil-ruled-out-of-t20-world-cup-rcb-spinner-prema-rawat-named-replacement-kvn/articleshow-kgvbu9x</guid>
            <pubDate>Fri, 19 Jun 2026 13:04:03 +0530</pubDate>
            <description><![CDATA[&lt;p&gt;ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡಿರುವ ಭಾರತದ ಸ್ಟಾರ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ನೆದರ್&zwnj;ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಅವರ ಸ್ಥಾನಕ್ಕೆ ಮತ್ತೋರ್ವ ಆರ್&zwnj;ಸಿಬಿ ಆಟಗಾರ್ತಿ, ಲೆಗ್&zwnj; ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcne3gfk3104jaf05hp744r,imgname-shreyanka-patil-1781762821647.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹರ್ಮನ್&zwnj;ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಗೆಲುವುಗಳನ್ನು ದಾಖಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಇದೀಗ ಜೂನ್ 21ರಂದು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ಹೀಗಿರುವಾಗಲೇ ಭಾರತ ಮಹಿಳಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್, ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಹರ್ಮನ್&zwnj;ಪ್ರೀತ್ ಕೌರ್ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಇದೀಗ ಶ್ರೇಯಾಂಕಾ ಪಾಟೀಲ್ ಸ್ಥಾನಕ್ಕೆ ಮತ್ತೋರ್ವ ಆರ್&zwnj;ಸಿಬಿ ಆಟಗಾರ್ತಿ ಭಾರತ ತಂಡ ಕೂಡಿಕೊಂಡಿದ್ದಾರೆ.&lt;/p&gt;&lt;p&gt;ಶ್ರೇಯಾಂಕಾ ಪಾಟೀಲ್, ನೆದರ್&zwnj;ಲೆಂಡ್ಸ್ ಎದುರಿನ ಗ್ರೂಪ್ 'ಎ' ಹಂತದ ಎರಡನೇ ಪಂದ್ಯದಲ್ಲಿ ಬೌಲಿಂಗ್ ಮಾಡಿ ಕ್ಷೇತ್ರ ರಕ್ಷಣೆ ಮಾಡುವ ಸಂದರ್ಭದಲ್ಲಿ ಜಾರಿ ಬಿದ್ದಿದ್ದರು. ಇದಾದ ಬಳಿಕ ತೀವ್ರ ಬಲಗಾಲ ಪಾದದ ನೋವಿನಿಂದ ಬಳಲಿದ ಶ್ರೇಯಾಂಕಾ ಪಾಟೀಲ್ ಅವರನ್ನು ಸ್ಟ್ರೆಚರ್ ಮೂಲಕ ಡ್ರೆಸ್ಸಿಂಗ್ ರೂಮ್&zwnj;ಗೆ ಕರೆದೊಯ್ಯಲಾಯಿತು. ಇದೀಗ ಶ್ರೇಯಾಂಕಾ ಪಾಟೀಲ್ ತೀವ್ರವಾಗಿ ಗಾಯಗೊಂಡಿರುವುದು ಬಿಸಿಸಿಐ ವೈದ್ಯಕೀಯ ಮೂಲಗಳು ಖಚಿತಪಡಿಸಿರುವುದರಿಂದ ಸಂಪೂರ್ಣ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೊರಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಕನ್ನಡತಿ ಶ್ರೇಯಾಂಕಾಗೆ ನಿರಾಸೆ:&lt;/strong&gt;&lt;/h2&gt;&lt;p&gt;ಸಾಕಷ್ಟು ಗಾಯದ ಸಮಸ್ಯೆಯಿಂದಾಗಿಯೇ ಭಾರತ ತಂಡದಿಂದ ಹೊರಗುಳಿದಿದ್ದ ಶ್ರೇಯಾಂಕಾ ಪಾಟೀಲ್, ಇದೀಗ ಚುಟುಕು ವಿಶ್ವಕಪ್&zwnj;ಗೆ ಭಾರತ ತಂಡ ಕೂಡಿಕೊಂಡಿದ್ದರು. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಶ್ರೇಯಾಂಕಾ ಮೂರು ಓವರ್&zwnj; ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿದ್ದರು. ಇದಷ್ಟೇ ಅಲ್ಲದೇ ಫೀಲ್ಡಿಂಗ್&zwnj;ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದಿದ್ದರು.&lt;/p&gt;&lt;p&gt; News Prema Rawat replaces the injured Shreyanka Patil in #TeamIndia's squad at ICC Women's T20 World Cup 2026.Following Prema's inclusion in the squad, Niki Prasad has been added to the India A T20 squad and Minnu Mani has been added to the India A One-Day squad.More&hellip;&lt;/p&gt;&lt;p&gt;&mdash; BCCI Women (@BCCIWomen) June 19, 2026&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ಶ್ರೇಯಾಂಕಾ ಪಾಟೀಲ್ ಬದಲಿ ಆಟಗಾರ್ತಿ ಭಾರತ ತಂಡ ಸೇರ್ಪಡೆ:&lt;/strong&gt;&lt;/h3&gt;&lt;p&gt;ಇನ್ನು ಗಾಯಗೊಂಡು ಇಡೀ ಟೂರ್ನಿಯಿಂದ ಶ್ರೇಯಾಂಕಾ ಪಾಟೀಲ್ ಹೊರಬಿದ್ದ ಬೆನ್ನಲ್ಲೇ ಅವರ ಸ್ಥಾನಕ್ಕೆ ಲೆಗ್&zwnj; ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ತಂಡ ಕೂಡಿಕೊಳ್ಳಲು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಆಯೋಜನಾ ಟೆಕ್ನಿಕಲ್ ಕಮಿಟಿಯು ಅನುಮತಿ ನೀಡಿದೆ. ಪ್ರೇಮಾ ರಾವತ್ ಸದ್ಯ ಭಾರತ ಮಹಿಳಾ 'ಎ' ತಂಡದ ಜತೆಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಇದೀಗ ಪ್ರೇಮಾ ರಾವತ್ ಭಾರತ ಮಹಿಳಾ ಸೀನಿಯರ್ಸ್ ತಂಡ ಕೂಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಯಾರು ಈ ಪ್ರೇಮಾ ರಾವತ್?&lt;/strong&gt;&lt;/h3&gt;&lt;p&gt;ಇನ್ನೂ ಐಸಿಸಿ ಸೀನಿಯರ್ಸ್ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡದ ಪ್ರೇಮಾ ರಾವತ್, ದೇಶಿ ಕ್ರಿಕೆಟ್&zwnj;ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. 24 ವರ್ಷದ ಪ್ರೇಮಾ ರಾವತ್, ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚುವ ಮುನ್ನ ವುಮೆನ್ಸ್ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು 2025-26ರ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್&zwnj;ಸಿಬಿ ಪರ ಪ್ರೇಮಾ ರಾವತ್ ಮೂರು ಪಂದ್ಯಗಳನ್ನಾಡಿ ಎರಡು ವಿಕೆಟ್ ಕಬಳಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/big-blow-for-india-women-shreyanka-patil-ruled-out-of-t20-world-cup-rcb-spinner-prema-rawat-named-replacement-kvn/articleshow-kgvbu9x"/>
        </item>
        <item>
            <title><![CDATA[ಮಹಾರಾಜ ಟ್ರೋಫಿಗೆ ಶಿವಮೊಗ್ಗ ಯೋಧಾಸ್ ತಂಡದ ಹೊಸ ಜರ್ಸಿ ಬಿಡುಗಡೆ]]></title>
            <link>https://kannada.asianetnews.com/cricket-sports/shivamogga-yodhas-unveil-new-jersey-and-official-anthem-ahead-of-maharaja-trophy-ksca-t20-2026-kvn/articleshow-o163pkg</link>
            <guid isPermaLink="true">https://kannada.asianetnews.com/cricket-sports/shivamogga-yodhas-unveil-new-jersey-and-official-anthem-ahead-of-maharaja-trophy-ksca-t20-2026-kvn/articleshow-o163pkg</guid>
            <pubDate>Thu, 18 Jun 2026 09:36:58 +0530</pubDate>
            <description><![CDATA[ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ-20 ಪಂದ್ಯಾವಳಿಗಾಗಿ ಶಿವಮೊಗ್ಗ ಯೋಧಾಸ್ ತಂಡದ ನೂತನ ಜರ್ಸಿ ಮತ್ತು ಅಧಿಕೃತ ಗೀತೆಯನ್ನು ಸಂಸದ ಬಿ.ವೈ.ರಾಘವೇಂದ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ, ಶಿವಮೊಗ್ಗದಲ್ಲಿ ಭವಿಷ್ಯದ ಪಂದ್ಯಗಳನ್ನು ಆಯೋಜಿಸುವ ಮತ್ತು ಒಳಾಂಗಣ ಕ್ರಿಕೆಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಕೆಎಸ್&zwnj;ಸಿಎ ಯೋಜನೆಗಳನ್ನು ಪ್ರಕಟಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kvceb66wj2pdk2m340me8140,imgname-shivamogga-yoddhas-1781755386075.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಮೊಗ್ಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯ 5ನೇ ಆವೃತ್ತಿಗೆ ಅದ್ಧೂರಿ ವೇದಿಕೆ ಸಿದ್ಧಗೊಂಡಿದ್ದು, ಶಿವಮೊಗ್ಗ ಯೋಧಾಸ್ ತಂಡದ ನೂತನ ಜರ್ಸಿ ಹಾಗೂ ಅಧಿಕೃತ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಲಾಯಿತು.&lt;/p&gt;&lt;h2&gt;&lt;strong&gt;ಶಿವಮೊಗ್ಗ ಯೋಧಾಸ್ ತಂಡಕ್ಕೆ ಶುಭಹಾರೈಸಿದ ಸಂಸದ ರಾಘವೇಂದ್ರ&lt;/strong&gt;&lt;/h2&gt;&lt;p&gt;ನಗರದ ಹೊರವಲಯದಲ್ಲಿರುವ ಮಲ್ನಾಡ್ ಶೈರ್ ಹೋಟೆಲ್&zwnj;ನಲ್ಲಿ ಮಂಗಳವಾರ ಸಂಜೆ ಸಂಸದ ಬಿ.ವೈ.ರಾಘವೇಂದ್ರ ಪೋಷಾಕನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಮಹಾರಾಜ ಟ್ರೋಫಿಯು ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಅಪ್ರತಿಮ ಕೌಶಲ್ಯವನ್ನು ಪ್ರದರ್ಶಿಸಲು ಸಿಕ್ಕಿರುವ ಸುವರ್ಣ ಅವಕಾಶವಾಗಿದೆ. ಈ ಕ್ರೀಡಾಕೂಟವು ಕರ್ನಾಟಕದ ಕ್ರಿಕೆಟ್ ಪ್ರಗತಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ ಎಂದರು.&lt;/p&gt;&lt;p&gt;ಈ ಬಾರಿ ಶಿವಮೊಗ್ಗ ಯೋಧಾಸ್ ತಂಡವು ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡಲಿದ್ದು, ಈ ಹೊಸ ಉಡುಪು ಕೇವಲ ಡ್ರೆಸ್ ಕೋಡ್ ಆಗಿ ಉಳಿಯದೆ ತಂಡದ ವಿಜಯದ ಹೆಗ್ಗುರುತಾಗಲಿ ಎಂದು ಹಾರೈಸಿದರು.&lt;/p&gt;&lt;p&gt;ತಂಡದ ರಾಯಭಾರಿ ನಟ ದಿಗಂತ್ ಮಂಚಾಲೆ ಮಾತನಾಡಿ, ಕ್ರೀಡೆಯು ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ. ಮಲೆನಾಡಿನ ಕ್ರೀಡಾಭಿಮಾನಿಗಳು ನಮ್ಮ ಶಿವಮೊಗ್ಗ ಯೋಧಾಸ್ ತಂಡಕ್ಕೆ ಕ್ರೀಡಾಂಗಣದಲ್ಲಿ ಭರ್ಜರಿ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಕೆಎಸ್&zwnj;ಸಿಎ ವಕ್ತಾರ ವಿನಯ್ ಮೃತ್ಯುಂಜಯ ಮಾತನಾಡಿ, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಕ್ರಿಕೆಟ್ ಮೂಲಸೌಕರ್ಯವನ್ನು ಬಲಪಡಿಸುವ ಕೆಎಸ್&zwnj;ಸಿಎ ಬದ್ಧತೆಯನ್ನು ಒತ್ತಿ ಹೇಳಿದರು.&lt;/p&gt;&lt;p&gt;ಮುಂದಿನ ಮಹಾರಾಜ ಟ್ರೋಫಿ ಕೆಎಸ್&zwnj;ಸಿಎ ಟಿ20 ಆವೃತ್ತಿಗಳಲ್ಲಿ ಶಿವಮೊಗ್ಗದಲ್ಲಿ ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದ ಅವರು, ಕ್ರೀಡಾಂಗಣದಲ್ಲಿ ಶೀಘ್ರವೇ ಫ್ಲಡ್&zwnj;ಲೈಟ್&zwnj;ಗಳನ್ನು ಅಳವಡಿಸಲು ಕೆಎಸ್&zwnj;ಸಿಎ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದರು.&lt;/p&gt;&lt;p&gt;ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಹಾಗೂ ನಮ್ಮ ಹೆಮ್ಮೆಯ &quot;ಶಿವಮೊಗ್ಗ ಯೋಧಾಸ್&quot; ತಂಡದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಂಡದ ಅಧಿಕೃತ ಜರ್ಸಿ ಅನಾವರಣ, ಆಂಥೆಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಲಾಯಿತು,ಮಹಾರಾಜ ಟ್ರೋಫಿ ಕೆಎಸ್&zwnj;ಸಿಎ T2೦ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗವನ್ನು ಪ್ರತಿನಿಧಿಸುತ್ತಿರುವ &quot;ಶಿವಮೊಗ್ಗ&hellip; pic.twitter.com/NkCipshuWJ&lt;/p&gt;&lt;p&gt;&mdash; B Y Raghavendra (@BYRBJP) June 16, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಇದಲ್ಲದೆ, ಶಿವಮೊಗ್ಗ ನಗರದಲ್ಲಿ ಅತ್ಯಾಧುನಿಕ ಒಳಾಂಗಣ (ಇಂಡೋರ್) ಕ್ರಿಕೆಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನೂ ಅವರು ಪ್ರಕಟಿಸಿದರು. ಈ ಮೂಲಕ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಈ ಭಾಗದ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಕೆಎಸ್&zwnj;ಸಿಎಯ ಉದ್ದೇಶವಾಗಿದೆ ಎಂದು ತಿಳಿಸಿದರು&lt;/p&gt;&lt;p&gt;ಜಂಟಿ ಕಾರ್ಯದರ್ಶಿ ಬಿ.ಕೆ. ರವಿ ಮಾತನಾಡಿ, ಮುಂಬರುವ ಜೂನ್ 20 ರಂದು ಮೈಸೂರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಈ ಟಿ-20 ಕ್ರೀಡಾ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ತಲಾ 12 ಮತ್ತು ಬೆಂಗಳೂರಿನಲ್ಲಿ 10 ಪಂದ್ಯಗಳು ಸೇರಿ ಒಟ್ಟು 34 ಟಿ-20 ಪಂದ್ಯಗಳು ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿವೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಆರುಣ್, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮಾಜಿ ಸದಸ್ಯೆ ಶಾಂತಾ ರಂಗಸ್ವಾಮಿ, ತಂಡದ ಮಾಲೀಕ ಮಿಥುನ್ ಕುಮಾರ್, ಅಭಿಷೇಕ್ ಆಗರ್ವಾಲ್, ಕೆಎಸ್&zwnj;ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕಲ್ಪನಾ ವೆಂಕಟಾಚಾರ್, ಸುಭಾಷ್ ರಾಘವೇಂದ್ರ, ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್ ಹಾಗೂ ಉದ್ಯಮಿ ಶ್ರೀನಿವಾಸ ಮೂರ್ತಿ ಪ್ರಮುಖರು ಹಾಜರಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/shivamogga-yodhas-unveil-new-jersey-and-official-anthem-ahead-of-maharaja-trophy-ksca-t20-2026-kvn/articleshow-o163pkg"/>
        </item>
        <item>
            <title><![CDATA[ರೋಹಿತ್ ಶರ್ಮಾ ವಿದಾಯ ಪಂದ್ಯದ ಡೇಟ್ ಫಿಕ್ಸ್? ಚಿಪಕ್ ಪಂದ್ಯದ ವೈರಲ್ ಪೋಸ್ಟ್ ಸತ್ಯ ಬಹಿರಂಗ]]></title>
            <link>https://kannada.asianetnews.com/gallery/cricket-sports/viral-post-claims-rohit-sharma-farewell-match-at-chepauk-fact-check-reveals-reality-pf6qwlx</link>
            <guid isPermaLink="true">https://kannada.asianetnews.com/gallery/cricket-sports/viral-post-claims-rohit-sharma-farewell-match-at-chepauk-fact-check-reveals-reality-pf6qwlx</guid>
            <pubDate>Wed, 17 Jun 2026 16:21:15 +0530</pubDate>
            <description><![CDATA[&lt;p&gt;ಆಫ್ಘಾನಿಸ್ತಾನ ವಿರುದ್ಧದ ಚಿಪಕ್ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ವಿದಾಯದ ಪಂದ್ಯವೇ? ಈ ಕುರಿತ ಪೋಸ್ಟ್ ಭಾರಿ ವೈರಲ್ ಆಗಿದೆ. ಏನಿದು ವೈರಲ್ ಪೋಸ್ಟ್, ಇದರ ಅಸಲಿಯತ್ತೇನು? ರೋಹಿತ್ ಏಕದಿನದಿಂದಲೂ ವಿದಾಯ ಹೇಳುತ್ತಿದ್ದಾರಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k8d880z7jy8p1k7jtpj57pmr,imgname-rohit-sharma--2--1761381450727.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಫ್ಘಾನಿಸ್ತಾನ ವಿರುದ್ಧದ ಚಿಪಕ್ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ವಿದಾಯದ ಪಂದ್ಯವೇ? ಈ ಕುರಿತ ಪೋಸ್ಟ್ ಭಾರಿ ವೈರಲ್ ಆಗಿದೆ. ಏನಿದು ವೈರಲ್ ಪೋಸ್ಟ್, ಇದರ ಅಸಲಿಯತ್ತೇನು? ರೋಹಿತ್ ಏಕದಿನದಿಂದಲೂ ವಿದಾಯ ಹೇಳುತ್ತಿದ್ದಾರಾ?&lt;/p&gt;&lt;img&gt;&lt;p&gt;ಟಿ20, ಟೆಸ್ಟ್ ಕ್ರಿಕೆಟ್&zwnj;ನಿಂದ ವಿದಾಯ ಹೇಳಿರುವ ರೋಹಿತ್ ಶರ್ಮಾ ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಮುಂದುವರಿದಿದ್ದಾರೆ. ಆಫ್ಘಾನಿಸ್ತಾನ ವಿರುದ್ದ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡುತ್ತಿದ್ದಾರೆ. ಆದರೆ ಆಫ್ಘಾನಿಸ್ತಾನ ವಿರುದ್ದ ಚೆನ್ನೈ ಚಿಪಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯವೇ ರೋಹಿತ್ ಶರ್ಮಾ ಕೊನೆಯ ಪಂದ್ಯ ಅನ್ನೋ ಮಾತುಗಳು, ಪೋಸ್ಟರ್&zwnj;ಗಳು ಹರಿದಾಡುತ್ತಿದೆ. ಇದರ ಅಸಲಿಯತ್ತು ಬಹಿರಂಗವಾಗಿದೆ.&lt;/p&gt;&lt;img&gt;&lt;p&gt;ರೋಹಿತ್ ಶರ್ಮಾ ಯಾವುದೇ ವಿದಾಯ ಘೋಷಣೆ ಮಾಡಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರೋಹಿತ್ ವಿದಾಯದ ಪೋಸ್ಟರ್ ನಕಲಿಯಾಗಿದೆ. ಈ ಕುರಿತು ಯಾವುದೇ ಘೋಷಣೆಯಾಗಲಿ, ಬಿಸಿಸಿಐಗೆ ಯಾವುದೇ ವಿದಾಯ ಪತ್ರವನ್ನು, ಸುಳಿವನ್ನು ನೀಡಿಲ್ಲ. ನಕಲಿ ಸುದ್ದಿ ಹರಡಲಾಗುತ್ತಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.&lt;/p&gt;&lt;img&gt;&lt;p&gt;ರೋಹಿತ್ ಶರ್ಮಾ ವಯಸ್ಸಿನ ಕಾರಣದಿಂದ ಬಿಸಿಸಿಐ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಪರಿಗಣಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಜೂನ್ 20ಕ್ಕೆ ರೋಹಿತ್ ಶರ್ಮಾ ವಿದಾಯ ಹೇಳುತ್ತಿದ್ದಾರೆ. ಚಿಪಕ್ ಪಂದ್ಯದ ಬಳಿಕ ರೋಹಿತ್ ಏಕದಿನ ಮಾದರಿಯಿಂದಲೂ ನಿವೃತ್ತಿಯಾಗುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್, ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಯೂಟ್ಯೂಬ್&zwnj;ನಲ್ಲಿ ಹಲವು ವಿಡಿಯೋಗಳು ಈ ಕುರಿತು ಸುದ್ದಿ ನೀಡಲಾಗಿದೆ. 2027ರ ಅಕ್ಟೋಬರ್ ತಿಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಇನ್ನೂ ಒಂದೂವರೆ ವರ್ಷ ಸಮಯವಿದೆ. ಹೀಗಾಗಿ ರೋಹಿತ್ ಶರ್ಮಾ ಫಿಟ್ನೆಸ್, ಫಾರ್ಮ್ ಹಾಗೂ ವಯಸ್ಸಿನ ಕಾರಣ ಬಿಸಿಸಿಐ ಏಕದಿನ ವಿಶ್ವಕಪ್&zwnj;ಗೆ ಪರಿಗಣಿಸುವುದಿಲ್ಲ ಎಂದು ಯೂಟ್ಯೂಬ್ ವಿಡಿಯೋಗಳಲ್ಲಿ ಹೇಳಲಾಗಿದೆ.ಆದರೆ ಈ ಸುದ್ದಿ ಸುಳ್ಳು ಅನ್ನೋದು ಖಚಿತವಾಗಿದೆ.&lt;/p&gt;&lt;img&gt;&lt;p&gt;ಆಫ್ಘಾನಿಸ್ತಾನ ವಿರುದ್ದ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ರೋಹಿತ್ ಶರ್ಮಾ 2ನೇ ಪಂದ್ಯದಲ್ಲಿ ಅಬ್ಬರಿಸಿದ್ದಾರೆ. 39 ಎಸೆತದಲ್ಲಿ 48 ರನ್ ಸಿಡಿಸಿದ್ದಾರೆ. ಏಕದಿನದಲ್ಲಿ ಉತ್ತಮ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲೂ ಮುಂಬೈ ಇಂಡಿಯನ್ಸ್ ಪರ ನಿರೀಕ್ಷಿತ ಹೋರಾಟ ನೀಡಿರಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ಫಾರ್ಮ್ ಕುರಿತು ಹಲವು ಅನುಮಾನ ಮೂಡಿತ್ತು. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ವಿರುದ್ಧ ಮೊದಲ ಪಂದ್ಯದಲ್ಲಿ 16 ರನ್ ಸಿಡಿಸಿದ್ದರು. ಆದರೆ 2ನೇ ಪಂದ್ಯದಲ್ಲಿ 48 ರನ್ ಕಾಣಿಕೆ ನೀಡಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/viral-post-claims-rohit-sharma-farewell-match-at-chepauk-fact-check-reveals-reality-pf6qwlx"/>
        </item>
        <item>
            <title><![CDATA[Vaibhav Sooryavanshi: ವೈಭವ್ ಸೂರ್ಯವಂಶಿಗೆ ಶಿಕ್ಷೆ ಕೊಡಿ ಎಂದವರಿಗೆ ಮುಟ್ಟಿ ನೋಡಿಕೊಳ್ಳೋ ಉತ್ತರ ಕೊಟ್ಟ ಬಿಸಿಸಿಐ!]]></title>
            <link>https://kannada.asianetnews.com/gallery/cricket-sports/bcci-reacts-to-vaibhav-sooryavanshi-punishment-reports-after-spat-with-sri-lanka-star-r7aev55</link>
            <guid isPermaLink="true">https://kannada.asianetnews.com/gallery/cricket-sports/bcci-reacts-to-vaibhav-sooryavanshi-punishment-reports-after-spat-with-sri-lanka-star-r7aev55</guid>
            <pubDate>Thu, 18 Jun 2026 21:22:52 +0530</pubDate>
            <description><![CDATA[&lt;p&gt;ಭಾರತ 'ಎ' ಮತ್ತು ಶ್ರೀಲಂಕಾ 'ಎ' ಪಂದ್ಯದ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರನ ನಡುವೆ ನಡೆದ ಗಲಾಟೆಯ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದೆ. &amp;nbsp;ಇನ್ನು ವೈಭವ್&zwnj;ಗೆ ಶಿಕ್ಷೆ ಕೊಡಲೇಬೇಕು ಎಂದು ಪಟ್ಟು ಹಿಡಿದ ನೆಟ್ಟಿಗರಿಗೆ ಬಿಸಿಸಿಐ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ಕೊಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5rm40xvwmpk0t6m0jt2n3n,imgname-vaibhav-sooryavanshi-fight-1781531283485.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ 'ಎ' ಮತ್ತು ಶ್ರೀಲಂಕಾ 'ಎ' ಪಂದ್ಯದ ವೇಳೆ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಶ್ರೀಲಂಕಾ ಆಟಗಾರನ ನಡುವೆ ನಡೆದ ಗಲಾಟೆಯ ಕುರಿತು ಬಿಸಿಸಿಐ ಸ್ಪಷ್ಟನೆ ನೀಡಿದೆ. &amp;nbsp;ಇನ್ನು ವೈಭವ್&zwnj;ಗೆ ಶಿಕ್ಷೆ ಕೊಡಲೇಬೇಕು ಎಂದು ಪಟ್ಟು ಹಿಡಿದ ನೆಟ್ಟಿಗರಿಗೆ ಬಿಸಿಸಿಐ ಮುಟ್ಟಿ ನೋಡಿಕೊಳ್ಳುವಂತಹ ತಿರುಗೇಟು ಕೊಟ್ಟಿದೆ.&lt;/p&gt;&lt;img&gt;&lt;p&gt;ಭಾರತದ ಉದಯೋನ್ಮುಖ ಕ್ರಿಕೆಟ್ ತಾರೆ, 15 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ಮತ್ತು ಶ್ರೀಲಂಕಾ 'ಎ' ತಂಡದ ಆಟಗಾರ ವಿಶೇನ್ ಹಲಂಬಗೆ ನಡುವೆ ಮೈದಾನದಲ್ಲಿ ನಡೆದ ಗಲಾಟೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈಭವ್ ವಿರುದ್ಧ ಬಿಸಿಸಿಐ (BCCI) ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ವದಂತಿಗಳು ಹರಡಿರುವ ಬೆನ್ನಲ್ಲೇ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಏನಿದು ಘಟನೆ?&lt;/p&gt;&lt;p&gt;ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಲಂಕಾ ಆಟಗಾರ ವಿಶೇನ್ ಹಲಂಬಗೆ ಅವರು ಭಾರತೀಯ ಬ್ಯಾಟರ್&zwnj;ಗಳ ಬಗ್ಗೆ ಪ್ರಚೋದನಾತ್ಮಕ ಕಾಮೆಂಟ್&zwnj;ಗಳನ್ನು ಮಾಡಿದ್ದರು ಎನ್ನಲಾಗಿದೆ. ಇದು ತಾರಕಕ್ಕೇರಿ ವೈಭವ್ ಸೂರ್ಯವಂಶಿ ಮತ್ತು ಹಲಂಬಗೆ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಇಬ್ಬರೂ ಪರಸ್ಪರ ಹತ್ತಿರ ಬಂದಾಗ, ವೈಭವ್ ಅವರು ಲಂಕಾ ಆಟಗಾರನನ್ನು ಕೈಯಿಂದ ತಳ್ಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.&lt;/p&gt;&lt;img&gt;&lt;p&gt;ಬಿಸಿಸಿಐ ಹೇಳಿದ್ದೇನು?&lt;/p&gt;&lt;p&gt;ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, .ಬಿಸಿಸಿಐ ವೈಭವ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬ ವದಂತಿಗಳನ್ನು ನೋಡಿ ಆಶ್ಚರ್ಯವಾಯಿತು. ಮ್ಯಾಚ್ ರೆಫರಿಗಳ ಅಧಿಕಾರ ವ್ಯಾಪ್ತಿಯಲ್ಲಿ ಬಿಸಿಸಿಐ ಹಸ್ತಕ್ಷೇಪ ಮಾಡಬೇಕೆಂದು ನೀವು ಬಯಸುತ್ತೀರಾ? ಮೈದಾನದಲ್ಲಿ ನಡೆಯುವ ಘಟನೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಮ್ಯಾಚ್ ರೆಫರಿ ಮತ್ತು ಅಂಪೈರ್&zwnj;ಗಳಿದ್ದಾರೆ. ಬಿಸಿಸಿಐ ಅದರಲ್ಲಿ ಮಧ್ಯಪ್ರವೇಶಿಸುವ ಅಧಿಕಾರ ಹೊಂದಿಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಯಾರಿಗೆ ಎಷ್ಟು ದಂಡ?&lt;/p&gt;&lt;p&gt;ವರದಿಗಳ ಪ್ರಕಾರ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ವೈಭವ್ ಸೂರ್ಯವಂಶಿ ಮತ್ತು ವಿಶೇನ್ ಹಲಂಬಗೆ ಇಬ್ಬರಿಗೂ ಅವರ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡ ವಿಧಿಸಲು ಶಿಫಾರಸು ಮಾಡಿದ್ದಾರೆ. ಅಲ್ಲದೆ, ಅಂಪೈರ್&zwnj;ಗಳ ಜೊತೆ ವಾಗ್ವಾದ ನಡೆಸಿದ ಕಾರಣಕ್ಕೆ ಭಾರತ ತಂಡದ ನಾಯಕ ತಿಲಕ್ ವರ್ಮಾ (Tilak Varma) ಅವರಿಗೆ ಶೇ. 30 ರಷ್ಟು ದಂಡ ವಿಧಿಸುವಂತೆ ಶಿಫಾರಸು ಮಾಡಲಾಗಿದೆ.&lt;/p&gt;&lt;p&gt;ಇದು 'ಎ' ತಂಡಗಳ ಪಂದ್ಯವಾಗಿರುವುದರಿಂದ ಐಸಿಸಿ ನೇರವಾಗಿ ದಂಡ ವಿಧಿಸುವುದಿಲ್ಲ. ಬದಲಾಗಿ ಮ್ಯಾಚ್ ರೆಫರಿ ನೀಡಿದ ವರದಿಯನ್ನು ಆಯಾ ದೇಶಗಳ ಕ್ರಿಕೆಟ್ ಮಂಡಳಿಗಳಿಗೆ (BCCI ಮತ್ತು SLC) ಕಳುಹಿಸಲಾಗುತ್ತದೆ. ಈ ಮಂಡಳಿಗಳು ರೆಫರಿಯ ಶಿಫಾರಸನ್ನು ಒಪ್ಪಿ ದಂಡ ವಿಧಿಸಬೇಕೇ ಅಥವಾ ಬೇಡವೇ ಎಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲಿವೆ.&lt;/p&gt;&lt;img&gt;&lt;p&gt;ತಿಲಕ್ ವರ್ಮಾ ವಾಗ್ವಾದಕ್ಕೆ ಕಾರಣವೇನು?&lt;/p&gt;&lt;p&gt;ಬೆಳಕಿನ ಕೊರತೆಯ ನಡುವೆಯೂ ಸೂಪರ್ ಓವರ್ ನಡೆಸುವಂತೆ ಅಂಪೈರ್&zwnj;ಗಳನ್ನು ಒತ್ತಾಯಿಸಿದ ಕಾರಣಕ್ಕೆ ತಿಲಕ್ ವರ್ಮಾ ಅವರು ದಂಡ ಎದುರಿಸುವಂತಾಗಿದೆ. ಮತ್ತೊಂದೆಡೆ, ಶ್ರೀಲಂಕಾದ ಹಿರಿಯ ಆಟಗಾರ ನಿರೋಶನ್ ಡಿಕ್ವೆಲ್ಲಾ ಕೂಡ ಅತಿಯಾದ ಅಪೀಲಿಂಗ್ ಮಾಡಿದ ಕಾರಣಕ್ಕೆ ರೆಫರಿಯಿಂದ ಎಚ್ಚರಿಕೆ ಅಥವಾ ದಂಡವನ್ನು ಎದುರಿಸುತ್ತಿದ್ದಾರೆ. ಸದ್ಯಕ್ಕೆ ವೈಭವ್ ಸೂರ್ಯವಂಶಿ ಅವರು ಬಿಸಿಸಿಐನಿಂದ ಯಾವುದೇ ಅಧಿಕೃತ ಅಮಾನತು ಅಥವಾ ದೊಡ್ಡ ಮಟ್ಟದ ಶಿಕ್ಷೆಗೆ ಒಳಗಾಗಿಲ್ಲ, ಕೇವಲ ದಂಡದ ಶಿಫಾರಸು ಮಾತ್ರ ನಡೆದಿದೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/bcci-reacts-to-vaibhav-sooryavanshi-punishment-reports-after-spat-with-sri-lanka-star-r7aev55"/>
        </item>
        <item>
            <title><![CDATA[ಪಿಚ್ ಯಾವುದಾದ್ರೇನು, ಬಾರಿಸೋದೇ ನಮ್ಮ ಕೆಲಸ! ಏಕದಿನದಲ್ಲಿ Team India ಟಾಪ್-5 ಸ್ಕೋರ್‌ಗಳಿವು!]]></title>
            <link>https://kannada.asianetnews.com/gallery/cricket-sports/team-india-top-5-highest-odi-scores-and-match-details-all-you-need-to-know-kvn-sud5bcm</link>
            <guid isPermaLink="true">https://kannada.asianetnews.com/gallery/cricket-sports/team-india-top-5-highest-odi-scores-and-match-details-all-you-need-to-know-kvn-sud5bcm</guid>
            <pubDate>Thu, 18 Jun 2026 12:59:17 +0530</pubDate>
            <description><![CDATA[&lt;p&gt;ಏಕದಿನ ಕ್ರಿಕೆಟ್&zwnj;ನಲ್ಲಿ ಟೀಂ ಇಂಡಿಯಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಾಗಾದ್ರೆ, ಏಕದಿನದಲ್ಲಿ ಭಾರತದ ಟಾಪ್ 5 ಗರಿಷ್ಠ ಸ್ಕೋರ್&zwnj;ಗಳು ಯಾವುವು? ಆ ಪಂದ್ಯಗಳ ರೋಚಕ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kh1fgjfpbfx24qa3manweamg,imgname-aa1vqyxz-1770650094070.jpg" type="image/jpeg" height="390" width="690"/>
            <content:encoded><![CDATA[&lt;p&gt;ಏಕದಿನ ಕ್ರಿಕೆಟ್&zwnj;ನಲ್ಲಿ ಟೀಂ ಇಂಡಿಯಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಹಾಗಾದ್ರೆ, ಏಕದಿನದಲ್ಲಿ ಭಾರತದ ಟಾಪ್ 5 ಗರಿಷ್ಠ ಸ್ಕೋರ್&zwnj;ಗಳು ಯಾವುವು? ಆ ಪಂದ್ಯಗಳ ರೋಚಕ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನಮ್ಮ ಟೀಂ ಇಂಡಿಯಾದ್ದೇ ಬೇರೆ ಲೆವೆಲ್. ದಶಕಗಳಿಂದ ವಿಶ್ವದರ್ಜೆಯ ಬ್ಯಾಟರ್&zwnj;ಗಳನ್ನು ನೀಡುತ್ತಿರುವ ಭಾರತ, ಏಕದಿನ ಪಂದ್ಯಗಳಲ್ಲಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಎದುರಾಳಿ ಬೌಲರ್&zwnj;ಗಳನ್ನು ದಂಡಿಸುತ್ತಾ ಸ್ಕೋರ್ ಬೋರ್ಡ್ ಏರಿಸುವುದರಲ್ಲಿ ಭಾರತ ಯಾವಾಗಲೂ ಮುಂದಿರುತ್ತದೆ. ಇಲ್ಲಿಯವರೆಗೆ, ದಕ್ಷಿಣ ಆಫ್ರಿಕಾ ಜೊತೆ ಭಾರತ (ತಲಾ 8 ಬಾರಿ) ಅತಿ ಹೆಚ್ಚು ಬಾರಿ 400+ ರನ್ ಗಳಿಸಿದ ತಂಡವಾಗಿದೆ. ಇಂಗ್ಲೆಂಡ್ 7 ಬಾರಿ ಮತ್ತು ಆಸ್ಟ್ರೇಲಿಯಾ 3 ಬಾರಿ ಈ ಸಾಧನೆ ಮಾಡಿವೆ. ಹಾಗಾದರೆ, ಟೀಮ್ ಇಂಡಿಯಾದ ಟಾಪ್ 5 ಗರಿಷ್ಠ ಸ್ಕೋರ್&zwnj;ಗಳು ಯಾವುವು ನೋಡೋಣ.&lt;/p&gt;&lt;img&gt;&lt;p&gt;ಟೀಂ ಇಂಡಿಯಾದ ಏಕದಿನ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ 418/5. ಈ ಐತಿಹಾಸಿಕ ದಾಖಲೆ 2011ರ ಡಿಸೆಂಬರ್ 8 ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಾಖಲಾಯಿತು. ಇಂದೋರ್&zwnj;ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್&zwnj;ಗಳು ಅಕ್ಷರಶಃ ಅಬ್ಬರಿಸಿದರು. 50 ಓವರ್&zwnj;ಗಳಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್&zwnj;ಗಳ ಬೃಹತ್ ಮೊತ್ತ ಕಲೆಹಾಕಿದರು. 50 ಓವರ್&zwnj;ಗಳ ಮಾದರಿಯಲ್ಲಿ ಭಾರತ 415 ರನ್&zwnj;ಗಳ ಗಡಿ ದಾಟಿದ್ದು ಇದೇ ಮೊದಲು. ಈ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು.&lt;/p&gt;&lt;img&gt;ಭಾರತದ ಏಕದಿನ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಸ್ಕೋರ್ 414/7. 2009ರ ಡಿಸೆಂಬರ್ 15 ರಂದು ರಾಜ್&zwnj;ಕೋಟ್&zwnj;ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಈ ದಾಖಲೆ ಬರೆಯಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, 50 ಓವರ್&zwnj;ಗಳಲ್ಲಿ 7 ವಿಕೆಟ್&zwnj;ಗೆ 414 ರನ್ ಗಳಿಸಿತು. ಶ್ರೀಲಂಕಾ ಕೂಡ ಭರ್ಜರಿ ಪೈಪೋಟಿ ನೀಡಿದರೂ, ಕೊನೆಗೆ ಭಾರತವೇ ಗೆಲುವಿನ ನಗೆ ಬೀರಿತು. ರಾಜ್&zwnj;ಕೋಟ್&zwnj;ನ ಫ್ಲಾಟ್ ಪಿಚ್ ಮತ್ತು ಚಿಕ್ಕ ಬೌಂಡರಿಗಳು ಭಾರತದ ಬ್ಯಾಟರ್&zwnj;ಗಳಿಗೆ ಪ್ಲಸ್ ಆಗಿತ್ತು.&lt;img&gt;&lt;p&gt;ಐಸಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎಂಬ ಹೊಸ ದಾಖಲೆಯನ್ನು ಭಾರತ ಸೃಷ್ಟಿಸಿತು. 2007ರ ಮಾರ್ಚ್ 19 ರಂದು ಪೋರ್ಟ್ ಆಫ್ ಸ್ಪೇನ್&zwnj;ನಲ್ಲಿ (ಟ್ರಿನಿಡಾಡ್) ಬರ್ಮುಡಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಈ ಸಾಧನೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ನಿಗದಿತ 50 ಓವರ್&zwnj;ಗಳಲ್ಲಿ 5 ವಿಕೆಟ್ ನಷ್ಟಕ್ಕೆ 413 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ ಭಾರಿ ರನ್ ರೇಟ್&zwnj;ನೊಂದಿಗೆ ಗೆದ್ದು ದಾಖಲೆ ಬರೆಯಿತು.&lt;/p&gt;&lt;img&gt;&lt;p&gt;2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್&zwnj;ನಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತ್ತು. ಈ ಸರಣಿಯ ಭಾಗವಾಗಿ 2023ರ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್&zwnj;ಗಳು ಅಬ್ಬರಿಸಿದರು. ಹಬ್ಬದ ದಿನದಂದು ಫೋರ್, ಸಿಕ್ಸರ್&zwnj;ಗಳ ಮಳೆ ಸುರಿಸಿ 50 ಓವರ್&zwnj;ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 410 ರನ್&zwnj;ಗಳ ಬೃಹತ್ ಮೊತ್ತವನ್ನು ಪೇರಿಸಿದರು. ಈ ಪಂದ್ಯದಲ್ಲೂ ಭಾರತ ಏಕಪಕ್ಷೀಯವಾಗಿ ಗೆಲುವು ಸಾಧಿಸಿತು.&lt;/p&gt;&lt;img&gt;ಟೀಮ್ ಇಂಡಿಯಾದ ಟಾಪ್ 5 ಏಕದಿನ ಸ್ಕೋರ್&zwnj;ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಗಳಿಸಿದ ಸ್ಕೋರ್ ಐದನೇ ಸ್ಥಾನದಲ್ಲಿದೆ. 2022ರ ಡಿಸೆಂಬರ್ 10 ರಂದು ಬಾಂಗ್ಲಾದೇಶದ ಚಟ್ಟೋಗ್ರಾಮ್&zwnj;ನಲ್ಲಿ ನಡೆದ ಪಂದ್ಯದಲ್ಲಿ ಭಾರತ ದಾಖಲೆಯ ಇನ್ನಿಂಗ್ಸ್ ಆಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಿಗದಿತ 50 ಓವರ್&zwnj;ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಬಾಂಗ್ಲಾ ಬೌಲರ್&zwnj;ಗಳಿಗೆ ಬೆವರಿಳಿಸಿ ಗಳಿಸಿದ ಈ ಬೃಹತ್ ಮೊತ್ತದೊಂದಿಗೆ ಭಾರತ ಭರ್ಜರಿ ಜಯ ಸಾಧಿಸಿತು.&lt;img&gt;&lt;p&gt;ಭಾರತ ತಂಡ ಏಕದಿನ ಪಂದ್ಯಗಳಲ್ಲಿ ಇಷ್ಟೊಂದು ಬಾರಿ 400+ ರನ್ ಗಳಿಸಲು ತವರಿನ ಅಂಗಳಗಳು ಪ್ರಮುಖ ಪಾತ್ರ ವಹಿಸಿವೆ. ಭಾರತ ದಾಖಲಿಸಿದ ಒಟ್ಟು ಆರು 400+ ಸ್ಕೋರ್&zwnj;ಗಳಲ್ಲಿ, ಐದು ಸ್ಕೋರ್&zwnj;ಗಳು ಭಾರತದ ಪಿಚ್&zwnj;ಗಳಲ್ಲೇ ಬಂದಿವೆ. ಇಲ್ಲಿನ ಪಿಚ್&zwnj;ಗಳು ಸಂಪೂರ್ಣವಾಗಿ ಬ್ಯಾಟಿಂಗ್&zwnj;ಗೆ ಸಹಕಾರಿಯಾಗಿವೆ. ಫ್ಲಾಟ್ ಸರ್ಫೇಸ್ ಮತ್ತು ಚಿಕ್ಕ ಬೌಂಡರಿಗಳಿಂದಾಗಿ ಬ್ಯಾಟರ್&zwnj;ಗಳು ಸುಲಭವಾಗಿ ಭಾರೀ ಸ್ಕೋರ್ ಗಳಿಸಲು ಸಾಧ್ಯವಾಗುತ್ತಿದೆ. ಇಂದೋರ್&zwnj;ನ ಹೋಳ್ಕರ್ ಸ್ಟೇಡಿಯಂ ಮತ್ತು ರಾಜ್&zwnj;ಕೋಟ್&zwnj;ನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಗ್ರೌಂಡ್ ಇದಕ್ಕೆ ಉತ್ತಮ ಉದಾಹರಣೆಗಳು. ಬುಧವಾರ (17 ಜೂನ್ 2026) ಲಕ್ನೋದಲ್ಲಿ ಅಫ್ಘಾನಿಸ್ತಾನದ ವಿರುದ್ಧ ನಡೆದ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ 49.5 ಓವರ್&zwnj;ಗಳಲ್ಲಿ 402 ರನ್ ಗಳಿಸಿ ಈ ಎಲೈಟ್ ಲಿಸ್ಟ್&zwnj;ಗೆ ಮತ್ತೊಮ್ಮೆ ಸೇರ್ಪಡೆಯಾಗಿದೆ. &amp;nbsp;&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/team-india-top-5-highest-odi-scores-and-match-details-all-you-need-to-know-kvn-sud5bcm"/>
        </item>
        <item>
            <title><![CDATA[IPL 2027 ಆರಂಭ ಯಾವಾಗಿನಿಂದ? ಫೈನಲ್ ಮ್ಯಾಚ್ ಯಾವಾಗ? ಮುಂಬರುವ ಐಪಿಎಲ್‌ನ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ]]></title>
            <link>https://kannada.asianetnews.com/cricket-sports/ipl-2027-schedule-bcci-plans-early-start-no-increase-in-matches-expected-kvn/articleshow-z6cqsuc</link>
            <guid isPermaLink="true">https://kannada.asianetnews.com/cricket-sports/ipl-2027-schedule-bcci-plans-early-start-no-increase-in-matches-expected-kvn/articleshow-z6cqsuc</guid>
            <pubDate>Thu, 18 Jun 2026 16:54:03 +0530</pubDate>
            <description><![CDATA[2027ರ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಮಳೆಯಿಂದಾಗುವ ಅಡಚಣೆಗಳನ್ನು ತಪ್ಪಿಸಲು, ಟೂರ್ನಿಯನ್ನು ಮಾರ್ಚ್ 10 ರಂದು ಪ್ರಾರಂಭಿಸಿ ಮೇ 15 ರೊಳಗೆ ಫೈನಲ್ ನಡೆಸಲು ಚಿಂತನೆ ನಡೆಸಿದೆ. ಪಂದ್ಯಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ, 74 ಪಂದ್ಯಗಳು ನಡೆಯಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt1hkpeedpc3k8k5wma7kyvt,imgname-20260601027l-1780315969997.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಇದೀಗ 20ನೇ ಸೀಸನ್ ಐಪಿಎಲ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಕೆಲ ದಿನಗಳ ಹಿಂದೆ ಬಿಸಿಸಿಐ ಮುಂಬರುವ ಐಪಿಎಲ್ ಟೂರ್ನಿಯನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯಲ್ಲಿದ್ದು, ಮ್ಯಾಚ್&zwnj;ಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನಿಸಿದೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಮೂಲಗಳು ಮುಂಬರುವ ಐಪಿಎಲ್&zwnj;ನಲ್ಲಿ ಮ್ಯಾಚ್&zwnj;ಗಳ ಸಂಖ್ಯೆ ಹೆಚ್ಚಿಸುವ ಯಾವುದೇ ಪ್ಲಾನ್ ಇಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.&lt;/p&gt;&lt;p&gt;ಪಿಟಿಐ ಸುದ್ದಿಸಂಸ್ಥೆ ವರದಿಯ ಪ್ರಕಾರ, 2027ರ ಐಪಿಎಲ್ ಟೂರ್ನಿಯು ಕೊಂಚ ಮುಂಚಿತವಾಗಿಯೇ ಆರಂಭವಾಗಲಿದೆ. ಯಾಕೆಂದರೆ ಕಳೆದ ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಎದುರಾದ ಮಳೆಯಿಂದಾಗಿ ಕೆಲ ಪಂದ್ಯಗಳು ರದ್ದಾಗಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಬಿಸಿಸಿಐ, ಮುಂಬರುವ ಐಪಿಎಲ್ ಟೂರ್ನಿಯನ್ನು ಕೊಂಚ ಮುಂಚಿತವಾಗಿ ಆರಂಭಿಸಲು ಬಿಸಿಸಿಐ ಅಧ್ಯಕ್ಷ ದೇವಜಿತ್ ಸೈಕಿಯಾ ಒಲವು ತೋರಿದ್ದಾರೆ. ಟೂರ್ನಿ ಆಯೋಜನೆಯ ಸಂಭಾವ್ಯ ವೇಳಾಪಟ್ಟಿಯೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;&lt;strong&gt;IPL 2027 ಯಾವಾಗ ಆರಂಭವಾಗಬಹುದು?&lt;/strong&gt;&lt;/h2&gt;&lt;p&gt;ಪಿಟಿಐ ವರದಿಯ ಪ್ರಕಾರ 2027ರ ಐಪಿಎಲ್ ಟೂರ್ನಿಯು ಮುಂಬರುವ ಮಾರ್ಚ್ 10ರಂದು ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಐಪಿಎಲ್ ಟೂರ್ನಿ ಕೊಂಚ ಮುಂಚಿತವಾಗಿ ಆರಂಭವಾಗಲು ಕಾರಣ, ಹವಾಮಾನ ವರದಿ ಎನ್ನಲಾಗುತ್ತಿದೆ. 2027ರ ಐಪಿಎಲ್ ಟೂರ್ನಿಯ ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಕ್ಕೆ ಯಾವುದೇ ಹವಾಮಾನ ವಾತಾವರಣ ಅಡ್ಡಿಯಾಗಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಐಪಿಎಲ್ ಟೂರ್ನಿಯನ್ನು ಕೊಂಚ ಮುಂಚಿತವಾಗಿ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ.&lt;/p&gt;&lt;h3&gt;&lt;strong&gt;ಇನ್ನು 2027ರ ಫೈನಲ್ ಮ್ಯಾಚ್ ಯಾವಾಗ?&lt;/strong&gt;&lt;/h3&gt;&lt;p&gt;2026ರ ಐಪಿಎಲ್ ಫೈನಲ್ ಪಂದ್ಯವು ಮೇ 31ರಂದು ನಡೆದಿತ್ತು. ಆದರೆ ಮುಂಬರುವ ಐಪಿಎಲ್ ಟೂರ್ನಿಯು ಕೊಂಚ ಮುಂಚಿತವಾಗಿಯೇ ಆರಂಭಿಸಿ, ಫೈನಲ್&zwnj; ಮ್ಯಾಚ್ ಯಾವುದೇ ಅಡ್ಡಿ ಆತಂಕವಿಲ್ಲದೇ ಕೊನೆಗೊಳಿಸುವ ಚಿಂತನೆಯಲ್ಲಿದೆ. ಹೀಗಾಗಿ ಪಿಟಿಐ ವರದಿಯ ಪ್ರಕಾರ ಮೇ 15ಕ್ಕೆ 2027ರ ಐಪಿಎಲ್ ಫೈನಲ್&zwnj; ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;h3&gt;&lt;strong&gt;ಟೂರ್ನಮೆಂಟ್&zwnj;ನ ಫಾರ್ಮ್ಯಾಟ್&zwnj;ನಲ್ಲಿ ಯಾವುದೇ ವ್ಯತ್ಯಾಸವಿಲ್ಲ!&lt;/strong&gt;&lt;/h3&gt;&lt;p&gt;ಕೆಲದಿನಗಳ ಹಿಂದಿನ ವರದಿಯ ಪ್ರಕಾರ, ಟೂರ್ನಿಯ ಪಂದ್ಯಗಳ ಸಂಖ್ಯೆ ಹೆಚ್ಚಳವಾಗಬಹುದು ಎಂದು ವರದಿಯಾಗಿತ್ತು. ಆದರೆ ಇದೀಗ ಸದ್ಯದ ವರದಿಯ ಪ್ರಕಾರ, ಪ್ರತಿ ವರ್ಷದಂತೆ ಮುಂಬರುವ ಐಪಿಎಲ್ ಟೂರ್ನಿಯಲ್ಲೂ 74 ಪಂದ್ಯಗಳು ನಡೆಯಲಿವೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2027-schedule-bcci-plans-early-start-no-increase-in-matches-expected-kvn/articleshow-z6cqsuc"/>
        </item>
    </channel>
</rss>
