<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 09 May 2026 16:14:41 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[Virat Kohli: ವಿರಾಟ್‌ ಕೊಹ್ಲಿಗೆ ಬೌಲಿಂಗ್‌ ಮಾಡಿದ ಉತ್ತರ ಕನ್ನಡದ ಸಿದ್ದಾಪುರ ಹುಡುಗ; ವಿಶೇಷ ವಿಷಯ ಬಿಚ್ಚಿಟ್ರು!]]></title>
            <link>https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</link>
            <guid isPermaLink="true">https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy</guid>
            <pubDate>Thu, 07 May 2026 12:05:13 +0530</pubDate>
            <description><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0j2spk2xnxvgz6zakxcn6b,imgname-new-project---2026-05-07t115820.601-1778135426771.jpg" type="image/jpeg" height="390" width="690"/>
            <content:encoded><![CDATA[&lt;p&gt;Siddapura Nagaraj Hegde bowling Virat Kohli: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜೊತೆ ಸಿದ್ದಾಪುರ ತಾಲೂಕಿನ ನಾಗರಾಜ ಹೆಗಡೆ ಕಾಣಿಸಿಕೊಂಡಿದ್ದಾರೆ. ಪ್ರತಿಷ್ಠಿತ ಓಕ್ತಿ ಸನ್ ಗ್ಲಾಸ್ ಜಾಹೀರಾತಿನಲ್ಲಿ ನಾಗರಾಜ್&zwnj; ಹೆಗಡೆ ನಟಿಸುವ ಮೂಲಕ ಮೂಲಕ ಗಮನ ಸೆಳೆಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೂಲತಃ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆಯವರು. ಸಿದ್ದಾಪುರ ವಿದ್ಯಾಗಿರಿಯಲ್ಲಿ ವಾಸಿಸುತ್ತಿರುವ ಶಿಕ್ಷಕ ಜಿ.ಜಿ ಹೆಗಡೆ ಮತ್ತು ರೂಪಾ ಹೆಬ್ಬಾರ ದಂಪತಿಯ ಮತ್ರ.&lt;/p&gt;&lt;img&gt;&lt;p&gt;ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ ಕಾಲೇಜು ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಾಲ್ಯದಿಂದಲೆ ವಾಲಿಬಾಲ್, ಬ್ಯಾಡ್ಮಿಟನ್, ಕ್ರಿಕೆಟ್&zwnj;ಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ನಾಗರಾಜ ಹೆಗಡೆ ನಾಲ್ಕು ಐದು ವರ್ಷಗಳಿಂದ ಶಿಕ್ಷಣದ ಜತೆ ಜತೆಗೆ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್&zwnj;ನಲ್ಲಿ ಕ್ರಿಕೆಟ್ ತರಬೇತಿ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಇವರು ಆಡುತ್ತಿರುವ ಕ್ಲಬ್&zwnj;ಗೆ ಜಾಹೀರಾತು ಆಫರ್ ಬಂದಿದ್ದು 30 ಜನರಲ್ಲಿ ಇವರು ಆಯ್ಕೆಯಾಗಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಜತೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಇದು ನಿಜವೋ ಎಂಬಂತೆ ಇಂದಿಗೂ ಅನಿಸುತ್ತಿಲ್ಲ, ಆ ಕ್ಷಣದ ಕೆಲವು ನೆನಪುಗಳು ಇಲ್ಲಿವೆ.&lt;/p&gt;&lt;p&gt;ಅವರನ್ನು ನೋಡುತ್ತಾ ಬೆಳೆದ ನಾನು, ಇಂದು ವಿರಾಟ್ ಕೊಹ್ಲಿ ಅವರ ಜೊತೆ ಪರದೆಯನ್ನು ಹಂಚಿಕೊಳ್ಳುತ್ತಿರುವುದು ನೋಡಿದರೆ, ಜೀವನವು ನಮ್ಮನ್ನು ಅತ್ಯುತ್ತಮ ರೀತಿಯಲ್ಲಿ ಅಚ್ಚರಿಗೊಳಿಸುತ್ತದೆ ಎಂದು ಅನಿಸುತ್ತದೆ.&lt;/p&gt;&lt;img&gt;&lt;p&gt;'Oakley Meta AI' ಗ್ಲಾಸಸ್&zwnj;ಗಳ ಈ ಚಿತ್ರೀಕರಣದ ಭಾಗವಾಗಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ. ನಾನು ಯಾವಾಗಲೂ ಗೌರವದಿಂದ ಕಾಣುವ ವ್ಯಕ್ತಿಯೊಂದಿಗೆ ಮಾತುಕತೆ ಆಡಿದ್ದು, ಈ ಅನುಭವಕ್ಕೆ ನಾನು ಚಿರಋಣಿ.&lt;/p&gt;&lt;p&gt;ಈ ಕ್ಷಣದಲ್ಲಿ ನನಗೆ ವಿಶೇಷವಾಗಿ ಅನ್ನಿಸಿದ್ದು ಅವರ ಸಾಧನೆಯಲ್ಲ, ಬದಲಾಗಿ ಕ್ರಿಕೆಟ್ ಲೋಕದಲ್ಲಿ ಎಲ್ಲವನ್ನೂ ಸಾಧಿಸಿದ್ದರೂ ಅವರು ತೋರುವ ಆ ನಮ್ರತೆ ಮತ್ತು ಅವರ ವ್ಯಕ್ತಿತ್ವ.&lt;/p&gt;&lt;img&gt;&lt;p&gt;ಇದು ನಾನು ಯಾವಾಗಲೂ ಹತ್ತಿರವಾಗಿ ಇಟ್ಟುಕೊಳ್ಳುವ ನೆನಪುಗಳಲ್ಲಿ ಒಂದು. ಕೆಲವೊಮ್ಮೆ ಕೇವಲ ಮೆಚ್ಚುಗೆಯಾಗಿ ಆರಂಭವಾಗಿದ್ದು ಹೇಗೆ ವಾಸ್ತವವಾಗಿ ಬದಲಾಗಬಲ್ಲದು ಎಂಬುದಕ್ಕೆ ಇದೊಂದು ನೆನಪಿನ ಬುತ್ತಿ.&lt;/p&gt;&lt;img&gt;&lt;p&gt;ವಿರಾಟ್&zwnj; ಕೊಹ್ಲಿ ಅವರಿಂದ ಆಟೋಗ್ರಾಫ್&zwnj; ಕೂಡ ಪಡೆದಿದ್ದಾರೆ.&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/cricket-sports/uttara-kannada-siddapura-nagaraj-hegde-bowling-to-cricketer-virat-kohli-0yf7wgy"/>
        </item>
        <item>
            <title><![CDATA[ವಿರಾಟ್ ಅತ್ಯಾಪ್ತ ಗೆಳೆಯ ಅಕಾಲಿಕ ನಿಧನ; ಅಂಡರ್-19 ಸಹ ಆಟಗಾರನಿಗೆ ಸಂತಾಪ ಸೂಚಿಸಿದ ಕೊಹ್ಲಿ!]]></title>
            <link>https://kannada.asianetnews.com/cricket-sports/virat-kohli-s-former-u-19-teammate-amanpreet-singh-gill-passes-away-kohli-and-yuvraj-singh-pay-tribute-sat/articleshow-2ungv4q</link>
            <guid isPermaLink="true">https://kannada.asianetnews.com/cricket-sports/virat-kohli-s-former-u-19-teammate-amanpreet-singh-gill-passes-away-kohli-and-yuvraj-singh-pay-tribute-sat/articleshow-2ungv4q</guid>
            <pubDate>Thu, 07 May 2026 14:51:22 +0530</pubDate>
            <description><![CDATA[&lt;p&gt;ರಾಟ್ ಕೊಹ್ಲಿ ಅವರ ಅಂಡರ್-19 ತಂಡದ ಸಹ ಆಟಗಾರ, ಪಂಜಾಬ್ ಮಾಜಿ ಕ್ರಿಕೆಟಿಗ ಅಮನ್&zwnj;ಪ್ರೀತ್ ಸಿಂಗ್ ಗಿಲ್ (36) ನಿಧನರಾಗಿದ್ದಾರೆ. ಇವರ ನಿಧನಕ್ಕೆ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqzc497z59zceqqx1rhm3r40,imgname-amanpreet-singh-gill-1778095629567.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಂಜಾಬ್&zwnj;ನ ಮಾಜಿ ಕ್ರಿಕೆಟಿಗ ಹಾಗೂ ವಿರಾಟ್ ಕೊಹ್ಲಿಯ ಅಂಡರ್-19 ತಂಡದ ಸಹ ಆಟಗಾರರಾಗಿದ್ದ ಅಮನ್&zwnj;ಪ್ರೀತ್ ಸಿಂಗ್ ಗಿಲ್ (36) ಬುಧವಾರ ನಿಧನರಾಗಿದ್ದಾರೆ. ಅವರ ಈ ಅಕಾಲಿಕ ಸಾವು ಇಡೀ ಕ್ರಿಕೆಟ್ ಜಗತ್ತನ್ನೇ ದುಃಖದಲ್ಲಿ ಮುಳುಗಿಸಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಂಜಾಬ್ ಪರ 6 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಅಮನ್&zwnj;ಪ್ರೀತ್, 11 ವಿಕೆಟ್&zwnj;ಗಳನ್ನು ಪಡೆದಿದ್ದರು. ಐಪಿಎಲ್&zwnj;ನ ಮೊದಲ ಸೀಸನ್&zwnj;ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಭಾಗವಾಗಿದ್ದರು. ನಂತರ ಪಂಜಾಬ್&zwnj;ನ ಹಿರಿಯರ ಆಯ್ಕೆ ಸಮಿತಿಯಲ್ಲೂ ಅವರು ಸೇವೆ ಸಲ್ಲಿಸಿದ್ದರು.&lt;/p&gt;&lt;p&gt;ತನ್ನ ಸಹ ಆಟಗಾರನ ಸಾವಿಗೆ ವಿರಾಟ್ ಕೊಹ್ಲಿ ಎಕ್ಸ್ (ಹಿಂದಿನ ಟ್ವಿಟರ್) ಮೂಲಕ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. 'ಅಮನ್&zwnj;ಪ್ರೀತ್ ಗಿಲ್ ಅವರ ಸಾವಿನ ಸುದ್ದಿ ಕೇಳಿ ಆಘಾತ ಮತ್ತು ದುಃಖವಾಯಿತು. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ದೇವರು ಶಕ್ತಿ ನೀಡಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ,' ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;Shocked and saddened to hear about Amanpreet Gill&rsquo;s passing. Sending prayers and strength to his family and loved ones. Rest in peace. Om Shanti &lt;/p&gt;&lt;p&gt;&mdash; Virat Kohli (@imVkohli) May 7, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಯುವರಾಜ್ ಸಿಂಗ್ ಮತ್ತು ಪಂಜಾಬ್ ಕಿಂಗ್ಸ್ ಸಂತಾಪ&lt;/strong&gt;&lt;/h2&gt;&lt;p&gt;ಭಾರತದ ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಕೂಡ ಅಮನ್&zwnj;ಪ್ರೀತ್&zwnj;ಗೆ ಶ್ರದ್ಧಾಂಜಲಿ ಸಲ್ಲಿಸಿವೆ. &quot;ನಮ್ಮ ಆರಂಭದ ದಿನಗಳಲ್ಲಿ ನಾವು ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದೆವು. ಆಟವನ್ನು ಪ್ರೀತಿಸುತ್ತಿದ್ದ ಆತ, ಶಾಂತ ಸ್ವಭಾವದ ಮತ್ತು ಕಠಿಣ ಪರಿಶ್ರಮದ ಕ್ರಿಕೆಟಿಗನಾಗಿದ್ದ,&quot; ಎಂದು ಯುವರಾಜ್ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;Deeply saddened to hear about Amanpreet Singh Gill&rsquo;s passing. Shared the dressing room in our early days, he was a quiet, hardworking cricketer who loved the game. My heartfelt condolences to his family and loved ones. Rest in peace  Om Shanti#AmanpreetSinghGill@pcacricket&lt;/p&gt;&lt;p&gt;&mdash; Yuvraj Singh (@YUVSTRONG12) May 6, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಆಟಗಾರನ ಸಾವಿಗೆ ಪಂಜಾಬ್ ಕಿಂಗ್ಸ್ ತಂಡವು ತನ್ನ ಅಧಿಕೃತ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಸಂತಾಪ ಸೂಚಿಸಿದೆ.&lt;/p&gt;&lt;h2&gt;&lt;strong&gt;ಕ್ರಿಕೆಟ್ ವೃತ್ತಿಜೀವನ&lt;/strong&gt;&lt;/h2&gt;&lt;p&gt;2007ರಲ್ಲಿ ಭಾರತದ ಪರ 5 ಯೂತ್ ಏಕದಿನ ಮತ್ತು ಒಂದು ಯೂತ್ ಟೆಸ್ಟ್ ಪಂದ್ಯದಲ್ಲಿ ಅಮನ್&zwnj;ಪ್ರೀತ್ ಆಡಿದ್ದರು. ತನ್ನ ಏಕೈಕ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ತಿಸಾರ ಪೆರೆರಾ ಅವರ ವಿಕೆಟ್ ಪಡೆದಿದ್ದರು. 2008ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದ ಅಂಡರ್-19 ತಂಡಕ್ಕೆ ಅವರು ಆಯ್ಕೆಯಾಗಿರಲಿಲ್ಲ. ಆದರೆ, ಆ ಬ್ಯಾಚ್&zwnj;ನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/virat-kohli-s-former-u-19-teammate-amanpreet-singh-gill-passes-away-kohli-and-yuvraj-singh-pay-tribute-sat/articleshow-2ungv4q"/>
        </item>
        <item>
            <title><![CDATA[ವಿಮಾನದಲ್ಲಿ ಚಾಹಲ್ ಕೈಯಲ್ಲಿ ಇ-ಸಿಗರೇಟ್? ಅರ್ಶದೀಪ್ ವಿಡಿಯೋದಿಂದ ಶುರುವಾಯ್ತು ಸಂಕಷ್ಟ]]></title>
            <link>https://kannada.asianetnews.com/cricket-sports/arshdeep-singh-video-lands-chahal-in-trouble-over-alleged-e-cigarette-use/articleshow-42k9pal</link>
            <guid isPermaLink="true">https://kannada.asianetnews.com/cricket-sports/arshdeep-singh-video-lands-chahal-in-trouble-over-alleged-e-cigarette-use/articleshow-42k9pal</guid>
            <pubDate>Fri, 08 May 2026 12:24:04 +0530</pubDate>
            <description><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ರಿಯಾನ್ ಪರಾಗ್ ವೇಪಿಂಗ್ (ಧೂಮಪಾನ) ಚಟ ಭಾರಿ ಕೋಲಾಹಲ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ಚಹಾಲ್ ವಿಮಾನದಲ್ಲಿ ವೇಪಿಂಗ್ ಮಾಡುತ್ತಿರುವ ಕುರಿತ ವಿಡಿಯೋ ವಿವಾದ ಸೃಷ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr14wbdt5nwkytt11gpnem0x,imgname-yuzvendra-chahal-1778155138490.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬದ್ (ಮೇ.08) &lt;/strong&gt;ಐಪಿಎಲ್ ಟೂರ್ನಿಯಲ್ಲಿ ಒಂದರ ಮೇಲೊಂದರಂತೆ ವಿವಾದಗಳು ಸೃಷ್ಟಿಯಾಗುತ್ತಿದೆ. ರಾಜಸ್ಥಾನ ರಾಯಲ್ಸ್ ತಂಡದ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಂನಲ್ಲಿ ವೇಪಿಂಗ್ ಮಾಡುತ್ತಿರುವ ದೃಶ್ಯ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಕೂಡ ಗರಂ ಆಗಿತ್ತು. ಈ ವಿವಾದ ಮರೆಯಾಗುತ್ತಿದ್ದಂತೆ ಇದೀಗ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ವೇಪಿಂಗ್ ವಿವಾದ ಭಾರಿ ಸದ್ದು ಮಾಡುತ್ತಿದೆ. ವಿಮಾನದಲ್ಲಿ ಕುಳಿತ ಯಜುವೇಂದ್ರ ಚಹಾಲ್ ವೇಪಿಂಗ್ ಮಾಡಿ ಸಿಕ್ಕಿಬಿದ್ರಾ? ವೇಗಿ ಅರ್ಶದೀಪ್ ಸಿಂಗ್ ವ್ಲಾಗಿಂಗ್ ವಿಡಿಯೋದಲ್ಲಿ ಚಹಾಲ್ ದೃಶ್ಯವೊಂದು ಸರೆಯಾಗಿದೆ. ಇದರಲ್ಲಿ ಚಹಾಲ್ ವೇಪಿಂಗ್ ಮಾಡುತ್ತಿರುವ ರೀತಿಯ ದೃಶ್ಯವೇ ಈ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ಮೇ 6 ರಂದು ಪಂಜಾಬ್ ಕಿಂಗ್ಸ್ ತಂಡ ಹೈದರಾಬಾದ್&zwnj;ಗೆ ಪ್ರಯಾಣ ಬೆಳೆಸಿತ್ತು. ವಿಮಾನದಲ್ಲಿ ವೇಗಿ ಅರ್ಶದೀಪ್ ಸಿಂಗ್ ತಮ್ಮ ಟ್ರಾವೆಲ್ ವ್ಲಾಗ್&zwnj;ಗಾಗಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ತಂಡದ ಸಹ ಆಟಗಾರರನ್ನು ಮಾತನಾಡಿಸುತ್ತಾ,ತಮಾಷೆ ಮಾಡುತ್ತಾ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ವಿಮಾನದಲ್ಲಿ ಅರ್ಶದೀಪ್ ಸಿಂಗ್ ವಿಡಿಯೋ ರೆಕಾರ್ಡ್ ಮಾಡುತ್ತಿರುವಾಗ ಕುಳಿತಿದ್ದ ಯಜುವೇಂದ್ರ ಚಹಾಲ್, ವೇಪಿಂಗ್ ಮಾಡುತ್ತಿರುವ ರೀತಿಯ ದೃಶ್ಯ ರೆಕಾರ್ಡ್ ಆಗಿದೆ. ಅರ್ಶದೀಪ್ ಟ್ರಾವೆಲ್ ವ್ಲಾಗ್ ವಿಡಿಯೋವನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ತುಣುಕು ಭಾರಿ ಕೋಲಾಹಲ ಸೃಷ್ಟಿಸಿದೆ.&lt;/p&gt;&lt;p&gt;ಯಜುವೇಂದ್ರ ಚಹಾಲ್ ವಿಮಾನದ ವಿಂಡೋ ಸೀಟ್ ಬಳಿ ಕುಳಿತಿದ್ದಾರೆ. ಕೈಯಲ್ಲಿ ಏನೋ ಹಿಡಿದು ವೇಪಿಂಗ್ ಮಾಡುತ್ತಿರುವಂತೆ ದೃಶ್ಯದಲ್ಲಿ ದಾಖಲಾಗಿದೆ. ಈ ವಿಡಿಯೋ ಅರ್ಶದೀಪ್ ಸಿಂಗ್ ಯೂಟ್ಯೂಬ್&zwnj;ನಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಹಲವರು ಚಹಾಲ್ ವಿಡಿಯೋ ತುಣುಕನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Look at Yuzvendra Chahal, man. He was risking everyone&rsquo;s safety by vaping an e-cigarette inside the flight while Shashank Singh and other Punjab Kings⁠ players were around him. This is totally unacceptable and highly risky for everyone. Such behavior violates flight safety&hellip; pic.twitter.com/YnXlPmPhjr&lt;/p&gt;&lt;p&gt;&mdash; Sonu (@Cricket_live247) May 7, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಚಹಾಲ್ ವೇಪಿಂಗ್ ಮಾಡುವುದು ನಿಜವೇ?&lt;/h2&gt;&lt;p&gt;ಚಹಾಲ್ ವಿಮಾನದಲ್ಲಿ ವೇಪಿಂಗ್ ಮಾಡಿರುವುದು ನಿಜವೆ? ಹಲವರು ಇದು ರಿಯಾನ್ ಪರಾಗ್&zwnj;ಗೆ ಠಕ್ಕರ್ ನೀಡಿದ ಪ್ರಯತ್ನ ಎಂದಿದ್ದಾರೆ. ಚಹಾಲ್ ಬೇರೆ ವಸ್ತು ಬಳಸಿ ವೇಪಿಂಗ್ ಮಾಡುವ ರೀತಿ ನಟಿಸಿದ್ದಾರೆ. ಮಿಮಿಕ್ ಮಾಡಿ ಅಣಕಿಸಿದ್ದಾರೆ. ಆದರೆ ವಿಡಿಯೋದಲ್ಲಿ ಇದರ ತುಣುಕು ಮಾತ್ರ ಕತ್ತರಿಸಿ ಪೋಸ್ಟ್ ಮಾಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಸ್ಪೇ ಹಿಡಿದು ಚಹಾಲ್ ಈ ರೀತಿ ಮಾಡಿದ್ದಾರೆ. ಇದು ತಮಾಷೆಗಾಗಿ, ಅಣಕಿಸಲು ಮಾಡಿದ ಪ್ರಯತ್ನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.&lt;/p&gt;&lt;p&gt;ಇದೇ ವೇಳೆ ಹಲವರು ಚಹಾಲ್ ವಿರುದ್ದ ಕಿಡಿಕಾರಿದ್ದಾರೆ. ವಿಮಾನದಲ್ಲಿ ಧೂಮಪಾನ, ವೇಪಿಂಗ್ ಕಾನೂನು ಬಾಹಿರ. ಇದೇ ವೇಳೆ ಒಬ್ಬ ಕ್ರಿಕೆಟಿಗ ಆದರ್ಶವಾಗಿರಬೇಕು. ರಿಯಾನ್ ಪರಾಗ್ ಬೆನ್ನಲ್ಲೇ ಇದೀಗ ಯಜುವೇಂದ್ರ ಚಹಾಲ್ ವೇಪಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ. ಭಾರತೀಯ ಕ್ರಿಕೆಟ್, ಐಪಿಎಲ್ ಮೂಲಕ ಅಪಾಯದಲ್ಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/arshdeep-singh-video-lands-chahal-in-trouble-over-alleged-e-cigarette-use/articleshow-42k9pal"/>
        </item>
        <item>
            <title><![CDATA[ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?]]></title>
            <link>https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr</link>
            <guid isPermaLink="true">https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr</guid>
            <pubDate>Sat, 09 May 2026 14:56:42 +0530</pubDate>
            <description><![CDATA[&lt;p&gt;ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್&zwnj;ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jvenpjh86k43kqnnwd3qr2ej,imgname-kkr-1747470469672.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್&zwnj;ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಒಂದು ಸಣ್ಣ ಎಡವಟ್ಟು ಕೂಡ ತಂಡವನ್ನು ಲೀಗ್&zwnj;ನಿಂದಲೇ ಹೊರಗೆ ದಬ್ಬುವ ಸಾಧ್ಯತೆ ಹೆಚ್ಚಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್&zwnj;ಸಿಬಿ ಸತತ 2 ಸೋಲು ಕಂಡು 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸೋಲಿನಿಂ ಕಂಗೆಟ್ಟ ಕೆಕೆಆರ್ ಸತತ 4 ಗೆಲುವಿನ ಮೂಲಕ ಪ್ಲೇ ಆಫ್ ರೇಸ್&zwnj;ನಲ್ಲಿ ಕಾಣಿಸಿಕೊಂಡಿದೆ.&lt;/p&gt;&lt;img&gt;&lt;p&gt;ಲಖನೌ ವಿರುದ್ಧದ ಸೋಲಿನಿಂದ ಆರ್&zwnj;ಸಿಬಿ ಸತತ 2 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಆರ್&zwnj;ಸಿಬಿ ನೆಟ್&zwnj; ರನ್&zwnj;ರೇಟ್ +1.234 ಇರುವ ಕಾರಣ 3ನೇ ಸ್ಥಾನದಲ್ಲಿದೆ. ಸದ್ಯ ಪರಿಸ್ಥಿತಿಯಲ್ಲಿ ಆರ್&zwnj;&zwj;ಸಿಬಿಗೆ ಇನ್ನೊಂದು ಗೆಲುವು ಅನಿವಾರ್ಯವಾಗಿದೆ. ಬಳಿಕ ಎಲ್ಲಾ ನೆಟ್ ರನ್&zwnj;ರೇಟ್ ಲೆಕ್ಕಾಚಾರ ನಡೆಯಲಿದೆ. ಆದರೆ 2 ಅಥವ ಅದಕ್ಕಿಂತ ಹೆಚ್ಚಿನ ಗೆಲುವು ಆರ್&zwnj;ಸಿಬಿ ತಂಡವನ್ನು ಯಾವುದೇ ಅಡೆ ತಡೆ ಇಲ್ಲದೆ ಪ್ಲೇ ಆಫ್ ಟಾಪ್ 2 ಸ್ಥಾನಕ್ಕೆ ಕೊಂಡೊಯ್ಯಲಿದೆ.&lt;/p&gt;&lt;img&gt;&lt;p&gt;ಆರ್&zwnj;ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್, ಹಾಗೂ ಎಸ್ಆರ್&zwnj;ಹೆಚ್ ತಂಡಗಳ ವಿರುದ್ದ ಪಂದ್ಯ ಬಾಕಿ ಇದೆ. ನಾಲ್ಕು ಪಂದ್ಯದಲ್ಲಿ 1 ಗೆಲುವು ದಾಖಲಿಸಿದರೆ 14 ಅಂಕದೊಂದಿಗೆ ಆರ್&zwnj;ಸಿಬಿ ಪ್ರಯಾಸದಲ್ಲಿ ಪ್ಲೇ ಆಫ್ ಸಾಧ್ಯತೆ ಪಡೆಯಲಿದೆ. 14 ಅಂಕ ಪಡೆದರೆ ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕನಿಷ್ಠ 2 ಗೆಲುವು 16 ದೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ.&lt;/p&gt;&lt;img&gt;&lt;p&gt;ಪ್ರತಿ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ, ಗೆಲುವಿನ ಆಧಾರದಲ್ಲಿ ಪ್ಲೇ ಆಫ್ ಕಟ್ ಆಫ್ ಪಾಯಿಂಟ್ ನಿರ್ಧಾರವಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಕನಿಷ್ಠ 14 ಅಂಕ ಬೇಕೇ ಬೇಕು, 18 ಅಂಕ ಸಂಪಾದಿಸಿದರೆ ಹೆಚ್ಚಿನ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಡಲು ಸಾಧ್ಯವಾಗಲಿದೆ.&lt;/p&gt;&lt;img&gt;&lt;p&gt;ಕೆಕೆಆರ್ ಪ್ಲೇ ಆಫ್ ರೇಸ್&zwnj;ನಿಂದ ಬಹುತೇಕ ದೂರ ಉಳಿದಿತ್ತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡ ಸತತ 4 ಗೆಲುವು ದಾಖಲಿಸಿ 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಟ್ಟು ಅಂಕ 17 ಆಗಲಿದೆ. ಈ ಮೂಲಕ ಕೆಕೆಆರ್ ಕೊನೆಯ ಅವಕಾಶ ಒಂದನ್ನು ಪಡೆಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;ol&gt; &lt;li&gt;ಬಾಕಿ ಉಳಿದ ಎಲ್ಲಾ ಪಂದ್ಯ ಗೆದ್ದರೆ, 20 ಅಂಕದೊಂದಿಗೆ ಪ್ಲೇಆಫ್ ಟಾಪ್ 2 ಸ್ಥಾನ&lt;/li&gt; &lt;li&gt;ಮೂರು ಪಂದ್ಯ ಗೆದ್ದರೆ, 18 ಅಂಕದೊಂದಿಗೆ ಪ್ಲೇ ಆಫ್ ಹಾದಿ ಸುಗಮ&lt;/li&gt; &lt;li&gt;2 ಪಂದ್ಯ ಗೆದ್ದರೆ, 16 ಅಂಕದೊಂದಿಗೆ ಪ್ಲೇ ಆಪ್ ಸ್ಥಾನ ಖಚಿತಪಡಿಸುವ ಅವಕಾಶ&lt;/li&gt; &lt;li&gt;1 ಪಂದ್ಯ ಗೆದ್ದರೆ, 14 ಅಂಕದ ಜೊತೆಗೆ ನೆಟ್ ರನ್&zwnj;ರೇಟ್ ಮೂಲಕ ಪ್ಲೇ ಆಫ್ ಅವಕಾಶ&lt;/li&gt; &lt;li&gt;ಬಾಕಿ ಉಳಿದ ನಾಲ್ಕು ಪಂದ್ಯ ಸೋತರೆ, 12 ಅಂಕದೊಂದಿಗೆ ಎಲಿಮಿನೇಶನ್&lt;/li&gt;&lt;/ol&gt;&lt;h2&gt;ಪ್ಲೇ ಆಫ್ ಸಿನಾರಿಯೋ&lt;/h2&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/ipl-points-table-twist-how-rcb-and-kkr-playoff-chances-changed-dramatically-7vvktkr"/>
        </item>
        <item>
            <title><![CDATA[ಇಲ್ಲಿದೆ ಐಪಿಎಲ್‌ ಪ್ಲೇಆಫ್‌ ಲೆಕ್ಕಾಚಾರ: ಆರ್‌ಸಿಬಿಗೆ ಹೇಗಿದೆ ಚಾನ್ಸ್‌? ಉಳಿದ ತಂಡಗಳ ಅವಕಾಶ ಎಷ್ಟಿದೆ?]]></title>
            <link>https://kannada.asianetnews.com/cricket-sports/ipl-2026-playoffs-qualification-scenarios-all-10-teams-points-table-nrr-san/articleshow-7xcecci</link>
            <guid isPermaLink="true">https://kannada.asianetnews.com/cricket-sports/ipl-2026-playoffs-qualification-scenarios-all-10-teams-points-table-nrr-san/articleshow-7xcecci</guid>
            <pubDate>Wed, 06 May 2026 18:12:16 +0530</pubDate>
            <description><![CDATA[&lt;p&gt;ಐಪಿಎಲ್ 2026ರ ಸೀಸನ್&zwnj;ನಲ್ಲಿ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಪ್ಲೇಆಫ್ ರೇಸ್&zwnj;ಗೆ ಮರಳಿದೆ. ಸನ್&zwnj;ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ಮತ್ತು ರಾಜಸ್ಥಾನ್ ರಾಯಲ್ಸ್ ಜೊತೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq1w5ax0kvbh5aqq52axqw9p,imgname-ipl-1777105808288.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ (ಮೇ.6): ಐಪಿಎಲ್ 2026ರ ಸೀಸನ್ ಆರಂಭದಲ್ಲಿ ಮಂಕಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK), ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆಲ್ಲುವ ಮೂಲಕ ಮತ್ತೆ ಪ್ಲೇಆಫ್ ರೇಸ್&zwnj;ಗೆ ಮರಳಿದೆ. ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್&zwnj;ಕೆಗೆ ಇನ್ನು 4 ಪಂದ್ಯಗಳು ಬಾಕಿ ಇವೆ. ಉಳಿದ ಎಂಟೂ ಅಂಕಗಳನ್ನು ಬಾಚಿಕೊಂಡು ಸುಲಭವಾಗಿ ಮುಂದಿನ ಹಂತಕ್ಕೆ ಏರಬೇಕೆನ್ನುವುದು ತಂಡದ ಲೆಕ್ಕಾಚಾರ. ಆದರೆ, ಸನ್&zwnj;ರೈಸರ್ಸ್ ಹೈದರಾಬಾದ್ (SRH), ಗುಜರಾತ್ ಟೈಟಾನ್ಸ್ (GT), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ 3 ಮತ್ತು 4ನೇ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಲೆಕ್ಕಾಚಾರದ ಪ್ರಕಾರ ಹತ್ತು ತಂಡಗಳೂ ಇನ್ನೂ ರೇಸ್&zwnj;ನಲ್ಲಿವೆ.&lt;/p&gt;&lt;h2&gt;&lt;strong&gt;ಅಂಕಪಟ್ಟಿಯ ಮುಂಚೂಣಿಯಲ್ಲಿರುವ ತಂಡಗಳು&lt;/strong&gt;&lt;/h2&gt;&lt;p&gt;ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ (PBKS: 13 ಅಂಕ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB: 12 ಅಂಕ) ಮೊದಲ ಎರಡು ಸ್ಥಾನಗಳಲ್ಲಿವೆ. ಹೈದರಾಬಾದ್, ರಾಜಸ್ಥಾನ್ ಮತ್ತು ಗುಜರಾತ್ ತಂಡಗಳ ಬಳಿಯೂ ತಲಾ 12 ಅಂಕಗಳಿದ್ದರೂ, ಪಂಜಾಬ್ ಮತ್ತು ಬೆಂಗಳೂರು ತಂಡಗಳು ಇವರಿಗಿಂತ ಒಂದು ಪಂದ್ಯ ಕಡಿಮೆ ಆಡಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಎಲ್ಲಾ 10 ತಂಡಗಳ ಪ್ಲೇಆಫ್&zwnj; ಲೆಕ್ಕಾಚಾರ&lt;/strong&gt;&lt;/h2&gt;&lt;p&gt;&lt;strong&gt;ಪಂಜಾಬ್ ಕಿಂಗ್ಸ್ (PBKS): &lt;/strong&gt;ಇನ್ನುಳಿದ 5 ಪಂದ್ಯಗಳಲ್ಲಿ ಕೇವಲ 2 ಗೆಲುವು ಸಾಧಿಸಿದರೆ 17 ಅಂಕಗಳೊಂದಿಗೆ ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ. ಅವರ ನೆಟ್ ರನ್&zwnj;ರೇಟ್ (NRR +0.855) ಉತ್ತಮವಾಗಿದ್ದು, ಕೇವಲ 1 ಗೆಲುವು ಕೂಡ ಅವರನ್ನು ಹಂತಕ್ಕೇರಿಸಬಹುದು.&lt;/p&gt;&lt;p&gt;&lt;strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): &lt;/strong&gt;16 ರಿಂದ 18 ಅಂಕ ತಲುಪಲು ಇವರಿಗೆ 2-3 ಗೆಲುವುಗಳ ಅವಶ್ಯಕತೆಯಿದೆ. ತಂಡದ ಬೃಹತ್ ನೆಟ್ ರನ್&zwnj;ರೇಟ್ (+1.420) ಇವರಿಗೆ ವರದಾನವಾಗಿದ್ದು, ಇತರ ಫಲಿತಾಂಶಗಳು ಪೂರಕವಾಗಿದ್ದರೆ 14 ಅಂಕಗಳಲ್ಲೂ ಅರ್ಹತೆ ಪಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಸನ್&zwnj;ರೈಸರ್ಸ್ ಹೈದರಾಬಾದ್ (SRH):&lt;/strong&gt; ಸುರಕ್ಷಿತವಾಗಿ 16 ಅಂಕ ತಲುಪಲು ಇನ್ನುಳಿದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಲೇಬೇಕು. ಅವರ ಪ್ರಬಲ ಬ್ಯಾಟಿಂಗ್ ಲೈನಪ್ ಎನ್&zwnj;ಆರ್&zwnj;ಆರ್ (+0.644) ಕಾಯ್ದುಕೊಳ್ಳಲು ನೆರವಾಗುತ್ತಿದೆ.&lt;/p&gt;&lt;p&gt;&lt;strong&gt;ರಾಜಸ್ಥಾನ್ ರಾಯಲ್ಸ್ (RR):&lt;/strong&gt; ಹೈದರಾಬಾದ್&zwnj;ನಂತೆಯೇ ಇವರಿಗೂ 16 ಅಂಕ ತಲುಪಲು 2 ಗೆಲುವು ಬೇಕಿದೆ. ಆದರೆ ಪ್ರಸ್ತುತ ಅವರ ಫಾರ್ಮ್ ಏರುಪೇರಾಗಿದ್ದು, ನೆಟ್ ರನ್&zwnj;ರೇಟ್ (+0.510) ಕಾಪಾಡಿಕೊಳ್ಳುವುದು ಅನಿವಾರ್ಯ.&lt;/p&gt;&lt;p&gt;&lt;strong&gt;ಗುಜರಾತ್ ಟೈಟಾನ್ಸ್ (GT): &lt;/strong&gt;ಇವರ ಬಳಿ 12 ಅಂಕಗಳಿದ್ದರೂ ನೆಗೆಟಿವ್&zwnj; ನೆಟ್ ರನ್&zwnj;ರೇಟ್ (-0.147) ಇವರಿಗೆ ಅಡ್ಡಿಯಾಗಿದೆ. ರಾಜಸ್ಥಾನ್ ಅಥವಾ ಹೈದರಾಬಾದ್ ಅನ್ನು ಹಿಂದಿಕ್ಕಲು ಇನ್ನುಳಿದ 4 ಪಂದ್ಯಗಳಲ್ಲಿ 2 ಅನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ.&lt;/p&gt;&lt;p&gt;&lt;strong&gt;ಚೆನ್ನೈ ಸೂಪರ್ ಕಿಂಗ್ಸ್ (CSK): &lt;/strong&gt;16 ಅಂಕ ತಲುಪಲು ಉಳಿದ 4 ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇಬೇಕು. ಅವರ ನೆಟ್ ರನ್&zwnj;ರೇಟ್ (+0.151) ಸಕಾರಾತ್ಮಕವಾಗಿದ್ದು, ಅಂಕಗಳು ಸಮನಾದಾಗ ಇದು ನೆರವಿಗೆ ಬರಲಿದೆ.&lt;/p&gt;&lt;p&gt;&lt;strong&gt;ಡೆಲ್ಲಿ ಕ್ಯಾಪಿಟಲ್ಸ್ (DC): &lt;/strong&gt;ಈಗ ಇವರಿಗೆ ತಪ್ಪು ಮಾಡಲು ಅವಕಾಶವೇ ಇಲ್ಲ. ಪ್ಲೇಆಫ್ ಆಸೆ ಜೀವಂತವಾಗಿಡಲು ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು. ಜೊತೆಗೆ ಅತಿ ಕಡಿಮೆ ಇರುವ ಎನ್&zwnj;ಆರ್&zwnj;ಆರ್ (-0.949) ಕೂಡ ಇವರಿಗೆ ದೊಡ್ಡ ತಲೆನೋವಾಗಿದೆ.&lt;/p&gt;&lt;p&gt;&lt;strong&gt;ಕೋಲ್ಕತ್ತಾ ನೈಟ್ ರೈಡರ್ಸ್ (KKR): &lt;/strong&gt;17 ಅಂಕ ತಲುಪಲು ಉಳಿದ 5 ಪಂದ್ಯಗಳನ್ನೂ ಗೆಲ್ಲಲೇಬೇಕು. ಒಂದು ವೇಳೆ 4 ಗೆದ್ದರೂ (-0.539) ಎನ್&zwnj;ಆರ್&zwnj;ಆರ್ ಕಾರಣದಿಂದ ಇವರು ಹೊರಬೀಳುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;p&gt;&lt;strong&gt;ಮುಂಬೈ ಇಂಡಿಯನ್ಸ್ (MI): &lt;/strong&gt;ಮುಂಬೈ ಗರಿಷ್ಠ 14 ಅಂಕಗಳನ್ನಷ್ಟೇ ಗಳಿಸಲು ಸಾಧ್ಯ. ಇನ್ನುಳಿದ ಎಲ್ಲಾ ಪಂದ್ಯ ಗೆದ್ದು, 12 ಅಂಕವಿರುವ ಇತರ ತಂಡಗಳು ಎಲ್ಲಾ ಪಂದ್ಯ ಸೋಲಲಿ ಎಂದು ಪ್ರಾರ್ಥಿಸಬೇಕಿದೆ. ಇವರ ಎನ್&zwnj;ಆರ್&zwnj;ಆರ್ (-0.649) ಕೂಡ ಕಳಪೆಯಾಗಿದೆ.&lt;/p&gt;&lt;p&gt;&lt;strong&gt;ಲಕ್ನೋ ಸೂಪರ್ ಜೈಂಟ್ಸ್ (LSG): &lt;/strong&gt;ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಉಳಿದ 5 ಪಂದ್ಯಗಳನ್ನು ಗೆದ್ದರೂ 14 ಅಂಕಗಳಷ್ಟೇ ಸಿಗಲಿವೆ. ಅತಿ ಕೆಟ್ಟ ಎನ್&zwnj;ಆರ್&zwnj;ಆರ್ (-1.076) ಕಾರಣದಿಂದ ಇವರ ಹಾದಿ ಸಂಪೂರ್ಣ ಬಂದ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/ipl-2026-playoffs-qualification-scenarios-all-10-teams-points-table-nrr-san/articleshow-7xcecci"/>
        </item>
        <item>
            <title><![CDATA['ನಾನೂ ಒಬ್ಬ ಟಿ20 ಪ್ಲೇಯರ್ ಅಂತ ಯಾರೂ ನೋಡ್ಲೇ ಇಲ್ಲ, ಟೆಸ್ಟ್ ಸ್ಪೆಷಲಿಸ್ಟ್ ಅಂದ್ರು' - ರಾಹುಲ್ ನೋವಿನ ಮಾತು]]></title>
            <link>https://kannada.asianetnews.com/cricket-sports/kl-rahul-opens-up-on-being-sidelined-as-test-specialist-and-his-t20-redemption-ms-dhoni-sat/articleshow-8r076af</link>
            <guid isPermaLink="true">https://kannada.asianetnews.com/cricket-sports/kl-rahul-opens-up-on-being-sidelined-as-test-specialist-and-his-t20-redemption-ms-dhoni-sat/articleshow-8r076af</guid>
            <pubDate>Tue, 05 May 2026 22:21:26 +0530</pubDate>
            <description><![CDATA[ದೆಹಲಿ ಕ್ಯಾಪಿಟಲ್ಸ್ ಓಪನರ್ ಕೆ.ಎಲ್. ರಾಹುಲ್, ತಮ್ಮನ್ನು 'ಟೆಸ್ಟ್ ಸ್ಪೆಷಲಿಸ್ಟ್' ಎಂದು ಕರೆಯುತ್ತಿದ್ದ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಂದೆಯಾದ ನಂತರ ತಮ್ಮ ದೃಷ್ಟಿಕೋನ ಬದಲಾಗಿದ್ದು, ವೈಯಕ್ತಿಕ ದಾಖಲೆಗಳಿಗಿಂತ ತಂಡಕ್ಕಾಗಿ ಟ್ರೋಫಿ ಗೆಲ್ಲುವುದೇ ತಮ್ಮ ಗುರಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq2b50qa0pcgd1kf6nasr581,imgname-kl-rahul-ipl-1777121526506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: ಭಾ&lt;/strong&gt;ರತೀಯ ಕ್ರಿಕೆಟ್ ಜಗತ್ತಿನಲ್ಲಿ ತಮ್ಮನ್ನು ಕೇವಲ 'ಟೆಸ್ಟ್ ಸ್ಪೆಷಲಿಸ್ಟ್' ಎಂದು ಮುದ್ರೆ ಒತ್ತಿದ್ದ ದಿನಗಳ ಬಗ್ಗೆ ದೆಹಲಿ ಕ್ಯಾಪಿಟಲ್ಸ್ ಓಪನರ್ ಕೆ.ಎಲ್. ರಾಹುಲ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ತಮ್ಮ ವೃತ್ತಿ ಬದುಕಿನ ಆರಂಭದಲ್ಲಿ ಯಾರೂ ತಮ್ಮನ್ನು ಒಬ್ಬ ಉತ್ತಮ ಟಿ20 ಆಟಗಾರ ಅಥವಾ ವೈಟ್-ಬಾಲ್ ಪ್ಲೇಯರ್ ಅಂತ ಪರಿಗಣಿಸಿರಲಿಲ್ಲ ಎಂದು ಜಿಯೋ ಸ್ಟಾರ್&zwnj;ನ 'ಸೂಪರ್&zwnj;ಸ್ಟಾರ್ಸ್' ಶೋನಲ್ಲಿ ರಾಹುಲ್ ಹೇಳಿಕೊಂಡಿದ್ದಾರೆ. &quot;ಹತ್ತು ವರ್ಷಗಳ ಹಿಂದೆ, ಒಂದು ಟಿ20 ತಂಡದಲ್ಲಿ ಜಾಗ ಸಿಗುವುದಕ್ಕೆ ನಾನು ಏನು ಬೇಕಾದರೂ ಕೊಡಲು ಸಿದ್ಧನಿದ್ದೆ. ನನ್ನನ್ನು ಯಾರೂ ಟಿ20 ಆಟಗಾರ ಅಂತ ಅಂದ್ಕೊಂಡೇ ಇರಲಿಲ್ಲ. ಆ 'ಟೆಸ್ಟ್ ಪ್ಲೇಯರ್' ಅನ್ನೋ ಹಣೆಪಟ್ಟಿಯಿಂದ ಹೊರಬಂದು, ವೈಟ್-ಬಾಲ್ ಕ್ರಿಕೆಟ್&zwnj;ನಲ್ಲಿ ಇಷ್ಟು ದೂರ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ,&quot; ಅಂತಾನೂ ರಾಹುಲ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿ ಕಷ್ಟದ ಸಂದರ್ಭದಲ್ಲೂ 100% ಶ್ರಮ&lt;/strong&gt;&lt;/h2&gt;&lt;p&gt;ತಮ್ಮ ವೃತ್ತಿಜೀವನದಲ್ಲಿ ಹಲವು ತಪ್ಪುಗಳನ್ನು ಮಾಡಿರಬಹುದು, ಆದರೆ ಪ್ರತಿಯೊಂದು ಕಷ್ಟದ ಸಂದರ್ಭದಲ್ಲೂ ತಮ್ಮ 100% ಶ್ರಮ ಹಾಕಿದ್ದೇನೆ ಎಂದು ರಾಹುಲ್ ತಿಳಿಸಿದ್ದಾರೆ. 2022ರ ನಂತರ ರಾಹುಲ್ ಭಾರತ ತಂಡಕ್ಕೆ ಟಿ20 ಆಡಿಲ್ಲ. ಆದರೂ, ಐಪಿಎಲ್&zwnj;ನಲ್ಲಿ ತಮ್ಮ ಪ್ರದರ್ಶನದ ಮೂಲಕವೇ ಟೀಕಾಕಾರರ ಬಾಯಿ ಮುಚ್ಚಿಸುತ್ತಿದ್ದಾರೆ. ಈ ಸೀಸನ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಹುಲ್ ಗಳಿಸಿದ 152* ರನ್ (67 ಎಸೆತಗಳಲ್ಲಿ) ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಆಗಿದೆ. ಈ ಮೂಲಕ, ಐಪಿಎಲ್&zwnj;ನಲ್ಲಿ ಮೂರು ಬೇರೆ ಬೇರೆ ತಂಡಗಳ ಪರ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪಾಸಿಟಿವ್ ಪರಿಣಾಮ&lt;/strong&gt;&lt;/h2&gt;&lt;p&gt;ಮಗಳ ಹುಟ್ಟು, ಕ್ರಿಕೆಟ್ ಬಗ್ಗೆ ತಮ್ಮ ದೃಷ್ಟಿಕೋನವನ್ನೇ ಬದಲಾಯಿಸಿತು ಅಂತ ರಾಹುಲ್ ಹೇಳಿದ್ದಾರೆ. ಕಳೆದ ವರ್ಷ (ಮಾರ್ಚ್ 2025 ರಲ್ಲಿ) ರಾಹುಲ್ ಮತ್ತು ನಟಿ ಆಥಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. &lsquo;ಅಪ್ಪನಾದದ್ದು ನನ್ನ ಜೀವನದ ಅತ್ಯಂತ ಸುಂದರ ಅನುಭವ. ನನ್ನ ಮಗಳ ನಗು ನೋಡಿದಾಗ, ನನ್ನೆಲ್ಲಾ ನೋವು, ಚಿಂತೆಗಳನ್ನು ಮರೆತುಬಿಡುತ್ತೇನೆ. ಇದು ನನ್ನ ಕ್ರಿಕೆಟ್ ಮೇಲೂ ಪಾಸಿಟಿವ್ ಪರಿಣಾಮ ಬೀರಿದೆ. ಈಗ ನಾನು ಆಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆ 4-5 ಗಂಟೆಗಳ ಕಾಲ, ನಾನು ಆಟವನ್ನು ಎಂಜಾಯ್ ಮಾಡಲು ಮಾತ್ರ ಪ್ರಯತ್ನಿಸುತ್ತೇನೆ&rsquo; ಎಂದು ರಾಹುಲ್ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ತಂಡಕ್ಕಾಗಿ ಇನ್ನಷ್ಟು ಪ್ರಶಸ್ತಿ&lt;/strong&gt;&lt;/h2&gt;&lt;p&gt;ಐಪಿಎಲ್&zwnj;ನ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎಂ.ಎಸ್. ಧೋನಿಯನ್ನು ಹಿಂದಿಕ್ಕಿ ಐದನೇ ಸ್ಥಾನಕ್ಕೇರಿದ್ದರೂ, ತಮ್ಮ ಗಮನ ಇರುವುದು ದಾಖಲೆಗಳ ಮೇಲಲ್ಲ, ಟ್ರೋಫಿಗಳ ಮೇಲೆ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. &lsquo;ರನ್&zwnj;ಗಳ ವಿಚಾರದಲ್ಲಿ ಧೋನಿ ಭಾಯ್ ಅವರನ್ನು ನಾನು ಹಿಂದಿಕ್ಕಿದ್ದು ನನಗೆ ಗೊತ್ತೇ ಇರಲಿಲ್ಲ. ಆದರೆ ಅವರ ಹಾಗೆ ಐದು ಐಪಿಎಲ್ ಟ್ರೋಫಿಗಳನ್ನು ಗೆಲ್ಲಬೇಕು ಎಂಬ ಆಸೆ ನನಗಿದೆ. ವೈಯಕ್ತಿಕ ಸಾಧನೆಗಳಿಗಿಂತ ತಂಡದ ಗೆಲುವಿಗೆ ನಾನು ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ&rsquo; ಎಂದು ರಾಹುಲ್ ಹೇಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇನ್ನೂ ಹಲವು ವರ್ಷಗಳು ಬಾಕಿ ಇವೆ ಮತ್ತು ದೇಶಕ್ಕಾಗಿ ಹಾಗೂ ತಂಡಕ್ಕಾಗಿ ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವುದೇ ತಮ್ಮ ಗುರಿ ಎಂದು ರಾಹುಲ್ ತಿಳಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/kl-rahul-opens-up-on-being-sidelined-as-test-specialist-and-his-t20-redemption-ms-dhoni-sat/articleshow-8r076af"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರದಿಂದ 10,000 ಫ್ರೀ ಟಿಕೆಟ್ ಬೇಡಿಕೆ, ಬೆಂಗಳೂರಿಗೆ ಐಪಿಎಲ್ ಫೈನಲ್ ಮ್ಯಾಚ್ ಕೈತಪ್ಪಲು ಅಸಲಿ ಕಾರಣ ಬಿಚ್ಚಿಟ್ಟ ಬಿಸಿಸಿಐ!]]></title>
            <link>https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6</link>
            <guid isPermaLink="true">https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6</guid>
            <pubDate>Fri, 08 May 2026 10:51:52 +0530</pubDate>
            <description><![CDATA[&lt;p&gt;IPL Final Row ಬೆಂಗಳೂರಿನಿಂದ ಐಪಿಎಲ್ ಫೈನಲ್ ಪಂದ್ಯ ಕೈತಪ್ಪಲು ಕ್ರೀಡಾಂಗಣದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ಸರ್ಕಾರದ 10,000 ಉಚಿತ ವಿವಿಐಪಿ ಟಿಕೆಟ್&zwnj;ಗಳ ಬೇಡಿಕೆಯೇ ಕಾರಣ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹಿರಂಗಪಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr30csb29z0kvsvyc5he84h2,imgname-----------------------2026-05-08t104034.749-1778217543010.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8)&lt;/strong&gt;: ಆರ್&zwnj;ಸಿಬಿ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನಿಂದ ಕೈತಪ್ಪಲು ಕ್ರೀಡಾಂಗಣದ ಸಾಮರ್ಥ್ಯ ಕಾರಣವಲ್ಲ, ಬದಲಾಗಿ ಸರ್ಕಾರದ ದುರಾಸೆ ಕಾರಣ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರವು 'ಕ್ರೀಡಾಂಗಣದ ಸಾಮರ್ಥ್ಯ' ಕಡಿಮೆ ಇದೆ ಎಂಬ ಕುಂಟು ನೆಪ ಹೇಳಿ ಜನರ ದಾರಿ ತಪ್ಪಿಸುತ್ತಿದ್ದರೆ, ಇತ್ತ ಬಿಸಿಸಿಐ ಅಸಲಿ ಕಾರಣವನ್ನು ಬಿಚ್ಚಿಟ್ಟಿದೆ. ಹಾಗಾದರೆ ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು? ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.&lt;/p&gt;&lt;p&gt;ಕಾಂಗ್ರೆಸ್ ಸರ್ಕಾರ 'ಕ್ರೀಡಾಂಗಣದ ಸಾಮರ್ಥ್ಯ&quot;ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000 ಉಚಿತ ಟಿಕೆಟ್&zwnj;ಗಳಿಗಾಗಿ ಇವರು ಬೇಡಿಕೆಯಿಟ್ಟಿದ್ದರು! .&lt;/p&gt;&lt;p&gt;ಈ ಉಚಿತ ಟಿಕೆಟ್&zwnj;ಗಳ ಪಟ್ಟಿಯಲ್ಲಿ 900 ಟಿಕೆಟ್&zwnj;ಗಳು ಶಾಸಕರಿಗೆ ಹಾಗೂ 700 ಟಿಕೆಟ್&zwnj;ಗಳು ನೇರವಾಗಿ ಸರ್ಕಾರಕ್ಕೆ ಬೇಕೆಂದು ಪಟ್ಟು ಹಿಡಿಯಲಾಗಿತ್ತು ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ಕೇವಲ ಐಷಾರಾಮಿ ಸವಲತ್ತುಗಳಿಗಾಗಿ ಹಠಕ್ಕೆ ಬಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ಕ್ರೀಡಾಭಿಮಾನಿಗಳು ಐಪಿಎಲ್ ಫೈನಲ್&zwnj;ರ ರಣರೋಚಕ, ಅದ್ಭುತ ಪಂದ್ಯವನ್ನ ಕಳೆದುಕೊಳ್ಳುವಂತಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ರಿಯಾಯಿತಿ ದರದಲ್ಲಿ ಸರ್ಕಾರದಿಂದ ಜಮೀನು ಪಡೆದ ಕೆಎಸ್&zwj;ಸಿಎ (KSCA) ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿರುವ ಈ ಸಂಸ್ಥೆ, ಸಾಮಾನ್ಯ ಅಭಿಮಾನಿಗಳಿಗೆ ಮಾತ್ರ 'ಡೈನಾಮಿಕ್ ಪ್ರೈಸಿಂಗ್' ಹೆಸರಲ್ಲಿ ಟಿಕೆಟ್ ದರ ಏರಿಸಿ ಲೂಟಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಚಿನ್ನಸ್ವಾಮಿ ಕ್ರೀಡಾಂಗಣವು ಕನ್ನಡಿಗರ ಮತ್ತು ಅಭಿಮಾನಿಗಳ ಆಸ್ತಿಯೇ ಹೊರತು, ರಾಜಕಾರಣಿಗಳ ಖಾಸಗಿ ಪಾರ್ಟಿ ಹಾಲ್ ಅಲ್ಲ. ವಿವಿಐಪಿ ಬಾಕ್ಸ್&zwnj;ನಲ್ಲಿ ಕುಳಿತು ಉಚಿತವಾಗಿ ತಿಂಡಿ ತಿನ್ನಲು ಮತ್ತು ಮಜಾ ಮಾಡಲು ಅಭಿಮಾನಿಗಳ ಭಾವನೆಯನ್ನೇ ಸರ್ಕಾರ ಒತ್ತೆ ಇಟ್ಟಿದೆ. ಬೆಂಗಳೂರಿನ ಜನತೆ ಈ ನಂಬಿಕೆ ದ್ರೋಹವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂಬ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ಪ್ರಿಯಾಂಕ್ ಖರ್ಗೆ ಹೇಳಿದ್ದೇನು?&lt;/h2&gt;&lt;p&gt;ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರಿನಿಂದ ಗುಜರಾತ್&zwnj;ಗೆ ಸ್ಥಳಾಂತರಗೊಂಡ ವಿಚಾರವಾಗಿ ನಿನ್ನೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ಬಿಸಿಸಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.&lt;/p&gt;&lt;p&gt;ಕರ್ನಾಟಕಕ್ಕೆ ಬರಬೇಕಾದ ಬಂಡವಾಳ ಮತ್ತು ಐಪಿಎಲ್ ಪಂದ್ಯಗಳನ್ನು ಗುಜರಾತ್&zwnj;ಗೆ ಹೈಜಾಕ್ ಮಾಡಲಾಗುತ್ತಿದೆ. ಸೆಮಿಕಂಡಕ್ಟರ್ ಯೋಜನೆಗಳಿಗೆ ಕಂಪನಿಗಳು ಕರ್ನಾಟಕವನ್ನು ಆಯ್ಕೆ ಮಾಡಿದರೂ ಅವುಗಳನ್ನು ಅಸ್ಸಾಂ ಅಥವಾ ಗುಜರಾತ್&zwnj;ಗೆ ಕೊಂಡೊಯ್ಯಲಾಗುತ್ತಿದೆ. ಬಿಸಿಸಿಐನಲ್ಲಿ ಜಯ್ ಶಾ ಇರುವುದರಿಂದ ಅವರಿಗೆ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ, ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದರು. ಅದರೆ ಐಪಿಎಲ್ ಫೈನಲ್ ಮ್ಯಾಚ್ ಬೆಂಗಳೂರು ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಯಲು ಮಾಡಿದ್ದಾರೆ.&lt;/p&gt;&lt;p&gt;ಬೆಂಗಳೂರಿನಿಂದ ಐಪಿಎಲ್ ಫೈನಲ್ ಕೈತಪ್ಪಲು ಅಸಲಿ ಕಾರಣವೇನು ಎಂಬುದನ್ನು @BCCI ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ಬಾಯಲ್ಲೇ ಕೇಳಿ.@INCKarnataka ಸರ್ಕಾರ &quot;ಕ್ರೀಡಾಂಗಣದ ಸಾಮರ್ಥ್ಯ&quot;ದ ಬಗ್ಗೆ ಸುಳ್ಳು ಕಥೆಗಳನ್ನು ಹೇಳುತ್ತಿದ್ದರೆ, ಇತ್ತ ಬಿಸಿಸಿಐ ಸತ್ಯವನ್ನೇ ಬಿಚ್ಚಿಟ್ಟಿದೆ: ಕೇವಲ ತಮ್ಮ ವಿವಿಐಪಿ (VVIP) ಬಳಗಕ್ಕಾಗಿ ಬರೋಬ್ಬರಿ 10,000&hellip; pic.twitter.com/Gcompeax3y&lt;/p&gt;&lt;p&gt;&mdash; Nikhil Kumar (@Nikhil_Kumar_k) May 8, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/ipl-final-row-bcci-claims-bengaluru-lost-match-over-govt-s-10-000-ticket-demand/articleshow-8yh4co6"/>
        </item>
        <item>
            <title><![CDATA[ಐಪಿಎಲ್ ಟೂರ್ನಿಗೆ ಹೊಸ ತಲೆನೋವು ಪ್ಲೇಯರ್ಸ್‌ಗೆ ಹನಿಟ್ರಾಪ್, ಲೈಂಗಿಕ ಕಿರುಕುಳ ಭೀತಿ, ಬಿಸಿಸಿಐ ಕ್ರಮ]]></title>
            <link>https://kannada.asianetnews.com/gallery/cricket-sports/bcci-takes-action-after-honey-trap-concerns-emerge-during-ipl-tournament-as9upxg</link>
            <guid isPermaLink="true">https://kannada.asianetnews.com/gallery/cricket-sports/bcci-takes-action-after-honey-trap-concerns-emerge-during-ipl-tournament-as9upxg</guid>
            <pubDate>Fri, 08 May 2026 10:16:04 +0530</pubDate>
            <description><![CDATA[&lt;p&gt;ಐಪಿಎಲ್&zwnj;ನಲ್ಲಿ ಹನಿಟ್ರಾಪ್, ಸಂಭಾವ್ಯ ಲೈಂಗಿಕ ಕಿರುಕಳ ಭೀತಿ ಎದುರಾಗಿದೆ. ಬಿಸಿಸಿಐನಿಂದ ಕಠಿಣ ಮಾರ್ಗಸೂಚಿ ಹೊರಡಿಸಿದೆ. ಸುಂದರ ಯುವತಿಯನ್ನು ಆಟಗಾರರು ಆಟಗಾರರು, ತಂಡದ ಸ್ಟಾಫ್&zwnj;ಗಳ ಹೊಟೆಲ್ ರೂಂಗೆ ಕಳುಹಿಸುತ್ತಿರುವ ಅಪಾಯ ಎದುರಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2xrafth04sp30vjb1skcbv,imgname-ipl-honey-trapping-case-1778214775290.png" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್&zwnj;ನಲ್ಲಿ ಹನಿಟ್ರಾಪ್, ಸಂಭಾವ್ಯ ಲೈಂಗಿಕ ಕಿರುಕಳ ಭೀತಿ ಎದುರಾಗಿದೆ. ಬಿಸಿಸಿಐನಿಂದ ಕಠಿಣ ಮಾರ್ಗಸೂಚಿ ಹೊರಡಿಸಿದೆ. ಸುಂದರ ಯುವತಿಯನ್ನು ಆಟಗಾರರು ಆಟಗಾರರು, ತಂಡದ ಸ್ಟಾಫ್&zwnj;ಗಳ ಹೊಟೆಲ್ ರೂಂಗೆ ಕಳುಹಿಸುತ್ತಿರುವ ಅಪಾಯ ಎದುರಾಗಿದೆ.&lt;/p&gt;&lt;img&gt;&lt;p&gt;ಸ್ಪಾಟ್ ಫಿಕ್ಸಿಂಗ್ ಬಳಿಕ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪಂದ್ಯದ ಬಳಿಕ ನಡೆಯುತ್ತಿದ್ದ ಭರ್ಜರಿ ಪಾರ್ಟಿ ಸೇರಿದಂತೆ ಹಲವು ಸಂಭಾವ್ಯ ಅಪಾಯಗಳಿಗೆ ಕಡಿವಾಣ ಹಾಕಲಾಗಿದೆ. ಇದೀಗ ಬಿಸಿಸಿಐಗೆ ಹೊಸ ತಲೆನೋವು ಎದುರಾಗಿದೆ. ಐಪಿಎಲ್ ಟೂರ್ನಿಯಲ್ಲಿ ಆಟಗಾರರು, ತಂಡದ ಸ್ಟಾಫ್&zwnj;&zwnj;ನ್ನು ಹನಿಟ್ರಾಪ್, ಲೈಂಗಿಕತೆಗೆ ತಳ್ಳಿ ರಹಸ್ಯ ಮಾಹಿತಿ ಸೋರಿಕೆ ಮಾಡುವ ಅಪಾಯ ಎದುರಾಗಿದೆ.&lt;/p&gt;&lt;img&gt;&lt;p&gt;ಕೆಲ ಸಂಘಟನೆಗಳು, ಬುಕ್ಕಿಗಳು ಯುವತಿಯರನ್ನು ಬಳಸಿಕೊಂಡು ತಂಡದ ರಹಸ್ಯ ಮಾಹಿತಿ ಸೋರಿಕೆ ಮಾಡುವ, ಈ ಮೂಲಕ ಫಿಕ್ಸಿಂಗ್ ಅಥವಾ ಇತರ ಉದ್ದೇಶಕ್ಕೆ ಬಳಸಿಕೊಳ್ಳುವ ಅಪಾಯ ಎದುರಾಗಿದೆ. ಆಟಗಾರರು, ಸ್ಟಾಫ್ ತಂಗವು ಹೊಟೆಲ್ ರೂಂಗೆ ಮಹಿಳೆಯರನ್ನು, ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗರಿಗೆ ಪರಿಚಯವಾಗುವ ಯುವತಿಯರನ್ನು ಕಳುಹಿಸಿ ಹನಿಟ್ರಾಪ್ ಮಾಡುವ ಅಪಾಯದ ಸುಳಿವು ಬಿಸಿಸಿಐಗೆ ಸಿಕ್ಕಿದೆ.&lt;/p&gt;&lt;img&gt;&lt;p&gt;ಹೊಟೆಲ್ ರೂಂಗೆ ಯುವತಿಯರನ್ನು ಕಳುಹಿಸಿ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವ , ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮೂಲಕ ಬೆದರಿಸಿ ರಹಸ್ಯ ಮಾಹಿತಿ ಸೋರಿಕೆ ಮಾಡುವ ಅಪಾಯದ ಸೂಚನೆ ಸಿಕ್ಕಿದೆ. ಹೊಟೆಲ್ ರೂಂಗೆ ಅಪರಿಚಿತ ಯುವತಿಯರ ಪ್ರವೇಶದ ಕುರಿತು ಬಿಸಿಸಿಐ ಮಾಹಿತಿ ಕಲೆ ಹಾಕಿದೆ. ಐಪಿಎಲ್ ಟೂರ್ನಿಯ ಹಿಡಿತ ಬಿಸಿಸಿಐನಿಂದ ಕೈತಪ್ಪುವ ಮೊದಲೇ ಎಚ್ಚೆತ್ತುಕೊಂಡಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಹನಿಟ್ರಾಪ್ ಹಾಗೂ ಲೈಂಗಿಕ ಅಪಾಯ ಭೀತಿ ಎದುರಾಗಿರುವ ಕಾರಣ ಬಿಸಿಸಿಐ 7 ಪುಟಗಳ ಭದ್ರತಾ ಮಾರ್ಗಸೂಚಿ ಹೊರಡಿಸಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಐಪಿಎಲ್ ಲೀಗ್ ಟೂರ್ನಿಯ ಗೌರವ ಹಾಗೂ ನಂಬಿಕೆ ಕಾಪಾಡಲು ಮಾರ್ಗಸೂಚಿ ಹೊರಡಿಸಿದೆ.&lt;/p&gt;&lt;img&gt;&lt;p&gt;ಆಟಗಾರರು ತಂಗಿರುವ ಹೊಟೆಲ್ ಕೊಠಡಿಗಳಿಗೆ ಅಪರಿಚತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಷ್ಟೇ ಅಲ್ಲ ಕೊಠಡಿಗಳಿಗೆ ಯಾರನ್ನೇ ಆಹ್ವಾನಿಸಲು ಬಿಸಿಸಿಐ ಭದ್ರತಾ ಅಧಿಕಾರಿಗಳ ಅನುಮತಿ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಸೋಶಿಯಲ್ ಮೀಡಿಯಾ ಸೇರಿದಂತೆ ಪ್ಲಾಟ್&zwnj;ಫಾರ್ಮ್ ಮೂಲಕ ಪರಿಚಯವಾಗುವ ವ್ಯಕ್ತಿಗಳ ಜೊತೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಕಠಿಣ ಸೂಚನೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಈ ಕುರಿತು ತೀವ್ರ ನಿಗಾಇಟ್ಟಿದೆ. ಸಾರ್ವಜನಿಕರ ಜೊತೆ, ಖಾಸಗಿ ವ್ಯಕ್ತಿಗಳ ಜೊತೆ ಹೇಗೆ ವರ್ತಿಸಬೇಕು ಅನ್ನೋ ಕುರಿತು ಸೂಚನೆ ನೀಡಲಾಗಿದೆ. ಲೀಗ್ ಮೇಲೆ ದೇಶದ ಪ್ರತಿಷ್ಠೆ ಅಡಗಿದೆ. ಅಭಿಮಾನಿಗಳು ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ನಂಬಿಕೆ ಇದೆ. ಯುವ ಕ್ರಿಕೆಟಿಗರ ಬದುಕು ರೂಪಿಸುವ ಲೀಗ್ ಆಗಿದೆ. ಹೀಗಾಗಿ ಯಾವುದೇ ರೀತಿಯ ಲೋಪಕ್ಕೆ ಅವಕಾಶವಿಲ್ಲ ಎಂದಿದೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/bcci-takes-action-after-honey-trap-concerns-emerge-during-ipl-tournament-as9upxg"/>
        </item>
        <item>
            <title><![CDATA[15 ವರ್ಷದ ನೋವು, ಜೈ ಶ್ರೀರಾಮ್ ನೋಟ್ ಬರೆದು ಮೊದಲ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್]]></title>
            <link>https://kannada.asianetnews.com/cricket-sports/emotional-moment-mumbai-spinner-marks-first-ipl-wicket-with-jai-shri-ram-message/articleshow-bw5odwz</link>
            <guid isPermaLink="true">https://kannada.asianetnews.com/cricket-sports/emotional-moment-mumbai-spinner-marks-first-ipl-wicket-with-jai-shri-ram-message/articleshow-bw5odwz</guid>
            <pubDate>Mon, 04 May 2026 23:07:49 +0530</pubDate>
            <description><![CDATA[&lt;p&gt;15 ವರ್ಷದ ನೋವು, ಜೈ ಶ್ರೀರಾಮ್ ನೋಟ್ ಬರೆದು ಮೊದಲ ವಿಕೆಟ್ ಸಂಭ್ರಮಿಸಿದ ಮುಂಬೈ ಸ್ಪಿನ್ನರ್, ವಿಕೆಟ್ ಪಡೆದ ಬೆನ್ನಲ್ಲೇ ಸ್ಪಿನ್ನರ್ ತಂದಿದ್ದ ಚೀಟಿಯನ್ನು ಎತ್ತಿ ತೋರಿಸಿ ಸಂಭ್ರಮಿಸಿದರು. ಈ ನೋಟ್ ಭಾರಿ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqt11fg9mh2f110qnmc1b5mg,imgname-raghu-sharma-celebration-1777916231176.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.04) &lt;/strong&gt;ಐಪಿಎಲ್ ಟೂರ್ನಿಯಲ್ಲಿ ಆಟಗಾರರ ಸ್ಟೈಲ್, ಸೆಲೆಬ್ರೇಷನ್ ಸೇರಿದಂತೆ ಎಲ್ಲವೂ ಅತ್ಯಂತ ಮುಖ್ಯವಾಗುತ್ತದೆ. ಅಭಿಮಾನಿಗಳ ನಡುವೆ ಈ ರೀತಿಯ ಕೆಲ ವಿಚಾರಗಳು ಭಾರಿ ಸದ್ದು ಮಾಡುತ್ತದೆ. ಈ ಪೈಕಿ ವಿಕೆಟ್ ಪಡೆದಾಗ ನಡೆಯುವ ಸೆಲೆಬ್ರೇಷನ್ ಹಲವು ಬಾರಿ ವೈರಲ್ ಆಗಿದೆ. ಇದೀಗ ಲಖನೌ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸ್ಪಿನ್ನರ್ ರಾಘು ಶರ್ಮಾ ಐಪಿಎಲ್&zwnj;ನ ಚೊಚ್ಚಲ ವಿಕೆಟ್ ಗಿಟ್ಟಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸಂಭ್ರಮದಲ್ಲಿ ಜೇಬಿನಲ್ಲಿದ್ದ ಚೀಟಿಯೊಂದನ್ನು ಎತ್ತಿ ತೋರಿಸಿ ಸಂಭ್ರಮಿಸಿದ್ದಾರೆ. ಜೈ ಶ್ರೀರಾಮ್ ಬರೆದ ಈ ಚೀಟಿಯಲ್ಲಿ ಕೆಲ ಸಂದೇಶವನ್ನು ರವಾನಿಸಿ ಭಾರಿ ವೈರಲ್ ಆಗಿದ್ದಾರೆ.&lt;/p&gt;&lt;p&gt;2026ರಲ್ಲಿ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ ರಾಘು ಶರ್ಮಾ ಮುಂಬೈ ತಂಡದ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ಲಖನೌ ವಿರುದ್ಧ ರಾಘು ಶರ್ಮಾ ಮೊದಲ ವಿಕೆಟ್ ಸಂಭ್ರಮ ಮಾಡಿದ್ದಾರೆ. 13ನೇ ಓವರ್&zwnj;ನಲ್ಲಿ ಲಖನೌ ತಂಡದ ಅಕ್ಷತ್ ರಘುವಾನಿ ವಿಕೆಟ್ ಪಡೆದಿದ್ದಾರೆ. ಇಡೀ ತಂಡ ಸಂಭ್ರಮಿಸಲು ಆಗಮಿಸುತ್ತಿದ್ದಂತೆ ರಾಘು ಶರ್ಮಾ ತಮ್ಮ ಜೇಬಿನಿಂದ ಚೀಟಿ ಎತ್ತಿ ತೋರಿಸಿ ವಿಕೆಟ್ ಸಂಭ್ರಮಿಸಿದರು.&lt;/p&gt;&lt;h2&gt;ನೋಟ್&zwnj;ನಲ್ಲಿ ಏನು ಬರೆದಿತ್ತು?&lt;/h2&gt;&lt;p&gt;ರಾಧೆ ರಾಧೆ, ಗುರದೇವನ ದೈವಿಕ ಕೃಪೆ ಹಾಗೂ ಆಶೀರ್ವಾದದಿಂದ ನನ್ನ ನೋವಿನ 15 ವರ್ಷಗಳು ಇಂದು ಅಂತ್ಯಗೊಂಡಿದೆ. ನನಗೆ ಮಹತ್ವದ ವೇದಿಕೆಯಲ್ಲಿ ಈ ಅವಕಾಶ ನೀಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಜೈ ಶ್ರೀರಾಮ್ ಎಂದು ರಾಘು ಶರ್ಮಾ ಬರೆದಿದ್ದರು. ಈ ಚೀಟಿ ಹಿಡಿದು ವಿಕೆಟ್ ಸಂಭ್ರಮಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;#RaghuSharma makes a statement with that wicket Years of hard work and belief are finally paying off. #TATAIPL Revenge Week 2026 ➡️ #MIvLSG | LIVE NOW https://t.co/hc4PVkY1Pc pic.twitter.com/QFbQB1OeRg&lt;/p&gt;&lt;p&gt;&mdash; Star Sports (@StarSportsIndia) May 4, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಯಾರು ಈ ರಾಘು ಶರ್ಮಾ&lt;/h2&gt;&lt;p&gt;ಪಂಜಾಬ್ ಮೂಲದ ರಾಘು ಶರ್ಮಾ ಲೆಗ್ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ರಾಘು ಶರ್ಮಾ ಹೆಚ್ಚಿನ ಅವಕಾಶಗಳು ಸಿಗದೆ ನಿರಾಸೆ ಗೊಂಡಿದ್ದರು. 12 ಪ್ರಥಮ ದರ್ಜೆ ಪಂದ್ಯಗಳಿಂದ 57 ವಿಕೆಟ್ ಕಬಳಿಸಿದ್ದಾರೆ. ದೇಸಿ ಮಟ್ಟದಲ್ಲಿ ಕೇವಲ 5 ಟಿ20 ಪಂದ್ಯದಲ್ಲಿ ಆಡೋ ಅವಕಾಶ ಸಿಕ್ಕಿದ್ದು, 4 ವಿಕೆಟ್ ಕಬಳಿಸಿದ್ದರು. ಕಳೆದ ವರ್ಷ (2025) ರಾಘು ಶರ್ಮಾ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಆದರೆ ಆಡೋ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಹರಾಜಿನಲ್ಲಿ ರಾಘು ಶರ್ಮಾರನ್ನು ಮುಂಬೈ ಇಂಡಿಯನ್ಸ್ ರಿಟೇನ್ ಮಾಡಿಕೊಂಡಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/emotional-moment-mumbai-spinner-marks-first-ipl-wicket-with-jai-shri-ram-message/articleshow-bw5odwz"/>
        </item>
        <item>
            <title><![CDATA['ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ', IPL ಫೈನಲ್ ಅಹಮದಾಬಾದ್‌ಗೆ ಶಿಫ್ಟ್: ನಿಖಿಲ್ ಕುಮಾರಸ್ವಾಮಿ ಕಿಡಿ]]></title>
            <link>https://kannada.asianetnews.com/state/ipl-match-shift-bengaluru-to-ahmedabad-nikhil-kumaraswamy-vs-dk-shivakumar-clash-sat/articleshow-cdrw568</link>
            <guid isPermaLink="true">https://kannada.asianetnews.com/state/ipl-match-shift-bengaluru-to-ahmedabad-nikhil-kumaraswamy-vs-dk-shivakumar-clash-sat/articleshow-cdrw568</guid>
            <pubDate>Wed, 06 May 2026 17:14:58 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಐಪಿಎಲ್ ಪಂದ್ಯಗಳ ಸ್ಥಳಾಂತರವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಶಾಸಕರ ಟಿಕೆಟ್ ವ್ಯಾಮೋಹದಿಂದ ಹೀಗಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರೆ, ಕ್ರೀಡಾಂಗಣದ ಸಾಮರ್ಥ್ಯವೇ ಕಾರಣ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyhkjdp4drjvc1z06vbq8zm,imgname-bengaluru-ipl-match-1778067818934.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ (IPL) ಪಂದ್ಯಗಳು ಅಹಮದಾಬಾದ್&zwnj;ಗೆ ಸ್ಥಳಾಂತರಗೊಂಡಿರುವ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಈ ವಿಚಾರವಾಗಿ 'ಟಿಕೆಟ್ ವಾರ್' ಶುರುವಾಗಿದೆ.&lt;/p&gt;&lt;h3&gt;&lt;strong&gt;ನಿಖಿಲ್ ಕುಮಾರಸ್ವಾಮಿ ಕಿಡಿ: ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ&lt;/strong&gt;&lt;/h3&gt;&lt;p&gt;ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವೀರೋಚಿತವಾಗಿ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, 'ನಮ್ಮ ರಾಜ್ಯದ ನಾಯಕರಿಗೆ ಅಭಿನಂದನೆಗಳು! ಕೇವಲ ವಿವಿಐಪಿ ಪಾಸ್&zwnj;ಗಳ ಹಪಾಹಪಿಯಿಂದಾಗಿ ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್&zwnj;ಗೆ ಉಡುಗೊರೆಯಾಗಿ ನೀಡಿದ್ದೀರಿ' ಎಂದು ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ಕ್ರೀಡಾಂಗಣ ಇರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ಕೆಲವು ಶಾಸಕರು ಉಚಿತ ಟಿಕೆಟ್&zwnj;ಗಳಿಗಾಗಿ ತೋರಿದ ವ್ಯಾಮೋಹ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡಿದ್ದರಿಂದಲೇ ಇಂದು ಬೆಂಗಳೂರಿನ ಘನತೆ ರಾಷ್ಟ್ರಮಟ್ಟದಲ್ಲಿ ಕುಸಿದಿದೆ. ಬಿಸಿಸಿಐ ನಿರ್ಧಾರವು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ನಮ್ಮ ರಾಜ್ಯದ ನಾಯಕರಿಗೆ 'ಅಭಿನಂದನೆಗಳು'!ಕೇವಲ ತಮ್ಮ ವಿವಿಐಪಿ ಪಾಸ್&zwnj;ಗಳ ಹಪಾಹಪಿ ಯಿಂದಾಗಿ, ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್&zwnj;ಗೆ ಉಡುಗೊರೆಯಾಗಿ* ನೀಡಿದ್ದೀರಿ.ನಾನು ಅಂದೇ ಹೇಳಿದ್ದೆ, ಇಂದೂ ಪುನರುಚ್ಚರಿಸುತ್ತಿದ್ದೇನೆ: ಕ್ರೀಡಾಂಗಣವಿರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ನಮ್ಮ&hellip; pic.twitter.com/6Ql8rN3iZI&lt;/p&gt;&lt;p&gt;&mdash; Nikhil Kumar (@Nikhil_Kumar_k) May 6, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಡಿ.ಕೆ. ಶಿವಕುಮಾರ್ ತಿರುಗೇಟು:&amp;nbsp;&lt;/strong&gt;&lt;/h2&gt;&lt;p&gt;ನಿಖಿಲ್ ಕುಮಾರಸ್ವಾಮಿ ಅವರ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ಅದೆಲ್ಲ ಸುಳ್ಳು, ಟಿಕೆಟ್&zwnj;ಗೂ ಪಂದ್ಯ ಶಿಫ್ಟ್ ಆಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಬೇರೆ ಕಡೆಗಳಲ್ಲೂ 50 ಪ್ರತಿಶತದಷ್ಟು ಸೀಟುಗಳನ್ನು ಕೊಡುತ್ತಾರೆ. ಅಹಮದಾಬಾದ್&zwnj;ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಬಹುದು ಎಂಬ ಕಾರಣಕ್ಕೆ ಅಲ್ಲಿಗೆ ಪಂದ್ಯಗಳನ್ನು ಶಿಫ್ಟ್ ಮಾಡಿರಬಹುದು ಅಷ್ಟೇ. ಯಾರೋ ಇನ್ಫ್ಲೂಯೆನ್ಸ್ ಮಾಡಿ ದೊಡ್ಡ ಸ್ಟೇಡಿಯಂ ಬೇಕು ಎಂದು ಮಾಡಿರಬಹುದು. ಟಿಕೆಟ್ ವಿಚಾರವಾಗಿ ಪಂದ್ಯ ಸ್ಥಳಾಂತರವಾಗಿದೆ ಎಂದು ಯಾರು ಹೇಳಿದರು? ಮೊದಲು ಬಿಸಿಸಿಐನವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿ, ಆಮೇಲೆ ನಾನು ಅವರಿಗೆ ಉತ್ತರ ಕೊಡುತ್ತೇನೆ' ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;ಐಪಿಎಲ್ ಕ್ರಿಕೆಟ್ ಪಂದ್ಯದ ವಿಚಾರವಾಗಿ ಆರಂಭವಾದ ಈ ಆರೋಪ-ಪ್ರತ್ಯಾರೋಪಗಳು ಈಗ ರಾಜ್ಯದ ಸತ್ತಾ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಬದಲಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/ipl-match-shift-bengaluru-to-ahmedabad-nikhil-kumaraswamy-vs-dk-shivakumar-clash-sat/articleshow-cdrw568"/>
        </item>
        <item>
            <title><![CDATA[IPL 2026 Final: ಬೆಂಗಳೂರು ಕೈತಪ್ಪಿದ ಐಪಿಎಲ್‌ ಫೈನಲ್‌! ಮೇ 31ರ ಫೈನಲ್‌ ಮ್ಯಾಚ್ ಎಲ್ಲಿ?]]></title>
            <link>https://kannada.asianetnews.com/cricket-sports/ipl-2026-final-bengaluru-loses-hosting-rights-to-ahmedabad-ksca-clarified-rav/articleshow-f03qsmg</link>
            <guid isPermaLink="true">https://kannada.asianetnews.com/cricket-sports/ipl-2026-final-bengaluru-loses-hosting-rights-to-ahmedabad-ksca-clarified-rav/articleshow-f03qsmg</guid>
            <pubDate>Thu, 07 May 2026 05:52:01 +0530</pubDate>
            <description><![CDATA[2026ರ ಐಪಿಎಲ್&zwnj; ಫೈನಲ್&zwnj; ಪಂದ್ಯದ ಆತಿಥ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿ, ಅಹಮದಾಬಾದ್&zwnj;ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ. ಕೆಎಸ್&zwnj;ಸಿಎಯ ಬೇಡಿಕೆಗಳು ಮತ್ತು ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯ ಈ ನಿರ್ಧಾರಕ್ಕೆ ಕಾರಣವೆಂದು ಬಿಸಿಸಿಐ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqzwys4f0btag2ctcv1z4481,imgname-----------------------2026-05-07t055102.402-1778113275023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.7):&lt;/strong&gt; ಬೆಂಗಳೂರಿನಲ್ಲಿ ನಡೆವ ಪ್ರತಿ ಐಪಿಎಲ್&zwnj; ಪಂದ್ಯಗಳಿಗೂ ಕರ್ನಾಟಕದ ಎಲ್ಲಾ ಶಾಸಕರಿಗೂ ಉಚಿತ ಟಿಕೆಟ್&zwnj; ನೀಡುವ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದ್ದ ನಡುವೆಯೇ 2026ರ ಐಪಿಎಲ್&zwnj; ಫೈನಲ್&zwnj; ಪಂದ್ಯದ ಆತಿಥ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿದೆ. ಮೇ 31ರಂದು ಫೈನಲ್&zwnj; ಪಂದ್ಯ ಗುಜರಾತ್&zwnj;ನ ಅಹಮದಾಬಾದ್&zwnj;ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಘೋಷಿಸಿದೆ.&lt;/p&gt;&lt;p&gt;ಹಾಲಿ ಚಾಂಪಿಯನ್&zwnj; ತಂಡದ ತವರು ಕ್ರೀಡಾಂಗಣದಲ್ಲಿ ಪ್ಲೇ-ಆಫ್&zwnj; ಹಾಗೂ ಫೈನಲ್&zwnj; ಪಂದ್ಯ ನಡೆಸಬೇಕೆಂಬುದು ಬಿಸಿಸಿಐ ನಿಯಮ. ಇದರ ಪ್ರಕಾರ, 2025ರಲ್ಲಿ ಚಾಂಪಿಯನ್&zwnj; ಆಗಿದ್ದ ಆರ್&zwnj;ಸಿಬಿ ತಂಡದ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಫೈನಲ್&zwnj; ನಡೆಯಬೇಕಿತ್ತು. ಅಲ್ಲದೆ, ಕ್ವಾಲಿಫೈಯರ್&zwnj; ಅಥವಾ ಎಲಿಮಿನೇಟರ್&zwnj; ಪಂದ್ಯಕ್ಕೂ ಬೆಂಗಳೂರು ಆತಿಥ್ಯ ವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಪಂದ್ಯ ನಡೆಸದಿರುವ ಬಿಸಿಸಿಐ ನಿರ್ಧರಿಸಿದೆ.&lt;/p&gt;&lt;p&gt;ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, &lsquo;ಫೈನಲ್ ಪಂದ್ಯವನ್ನು ಆಯೋಜಿಸಲು ಬೆಂಗಳೂರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಕೆಎಸ್&zwnj;ಸಿಎ ಹಾಗೂ ಅಧಿಕಾರಿಗಳ ಕೆಲ ಬೇಡಿಕೆ ಪೂರೈಸುವುದು ಬಿಸಿಸಿಐನ ಮಾರ್ಗಸೂಚಿ ಹಾಗೂ ಶಿಷ್ಟಾಚಾರದ ವ್ಯಾಪ್ತಿಯನ್ನು ಮೀರುವುದರಿಂದಾಗಿ ಫೈನಲ್&zwnj; ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲಾಗಿದೆ&rsquo; ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಮೇ 24ರಂದು ಲೀಗ್&zwnj; ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಮೇ 26ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್&zwnj;-1 ಪಂದ್ಯ ನಡೆಯಲಿದೆ. ಬಳಿಕ ನವ ಚಂಡೀಗಢದ ಮುಲ್ಲಾನ್&zwnj;ಪುರ ಕ್ರೀಡಾಂಗಣದಲ್ಲಿ ಮೇ 27ರಂದು ಎಲಿಮಿನೇಟರ್&zwnj;, ಮೇ 29ಕ್ಕೆ ಕ್ವಾಲಿಫೈಯರ್&zwnj;-2 ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.&lt;/p&gt;&lt;p&gt;ಆಸನ ಸಾಮರ್ಥ್ಯ ಹೆಚ್ಚು:&lt;/p&gt;&lt;p&gt;ಬಿಸಿಸಿಐ ಮೂಲಗಳ ಪ್ರಕಾರ, ಕ್ರೀಡಾಂಗಣದ ಆಸನ ಸಾಮರ್ಥ್ಯದ ಕಾರಣಕ್ಕೆ ಬೆಂಗಳೂರು ಬದಲು ಅಹಮದಾಬಾದ್ ಕ್ರೀಡಾಂಗಣಕ್ಕೆ ಫೈನಲ್&zwnj; ಪಂದ್ಯ ಸ್ಥಳಾಂತರಿಸಲಾಗಿದೆ. ಚಿನ್ನಸ್ವಾಮಿಯಲ್ಲಿ 35000 ಆಸನ ಸಾಮರ್ಥ್ಯವಿದೆ. ಆದರೆ ವಿಶ್ವದ ಅತಿ ದೊಡ್ಡ ಕ್ರಿಕೆಟ್&zwnj; ಕ್ರೀಡಾಂಗಣ ಎನಿಸಿಕೊಂಡಿರುವ ಅಹಮದಾಬಾದ್&zwnj; 132000 ಆಸನ ಸಾಮರ್ಥ್ಯ ಹೊಂದಿದೆ.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/ipl-2026-final-bengaluru-loses-hosting-rights-to-ahmedabad-ksca-clarified-rav/articleshow-f03qsmg"/>
        </item>
        <item>
            <title><![CDATA[BCCI Warns: ಐಪಿಎಲ್ ವೇಳೆ ಹನಿಟ್ರ್ಯಾಪ್ ಬಗ್ಗೆ ಆಟಗಾರರಿಗೆ ಬಿಸಿಸಿಐ ನೀಡಿದ ಗುಪ್ತ ಎಚ್ಚರಿಕೆ ಏನು?]]></title>
            <link>https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt</link>
            <guid isPermaLink="true">https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt</guid>
            <pubDate>Sat, 09 May 2026 09:05:32 +0530</pubDate>
            <description><![CDATA[&lt;p&gt;ಐಪಿಎಲ್&zwnj; ವೇಳೆ ಸಂಭವನೀಯ ಹನಿಟ್ರ್ಯಾಪ್&zwnj; ಮತ್ತು ಭದ್ರತಾ ಅಪಾಯಗಳ ಬಗ್ಗೆ ಬಿಸಿಸಿಐ ಆಟಗಾರರಿಗೆ ಎಚ್ಚರಿಕೆ ನೀಡಿದೆ. ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಗಳನ್ನು ನೀಡಿದ್ದು, ತಂಡದ ಮಾಲೀಕರಿಗೂ ಪಂದ್ಯದ ವೇಳೆ ಆಟಗಾರರೊಂದಿಗೆ ಸಂವಹನ ನಡೆಸದಂತೆ ಸೂಚನೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5cdmy585fg4yr18zr0pqvg,imgname-----------------------2026-05-09t085657.299-1778297263045.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಐಪಿಎಲ್&zwnj; ವೇಳೆ ಸಂಭಾವ್ಯ ಹನಿಟ್ರ್ಯಾಪ್&zwnj;, ಭದ್ರತಾ ಅಪಾಯ ಹಾಗೂ ಕಾನೂನು ಸಂಕಷ್ಟದ ಬಗ್ಗೆ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ ನೀಡಿದೆ. ಈ ಕುರಿತು ಎಲ್ಲಾ 10 ಫ್ರಾಂಚೈಸಿಗಳಿಗೆ ಮಾರ್ಗಸೂಚಿಯನ್ನು ನೀಡಲಾಗಿದ್ದು, ಅನಧಿಕೃತ ವ್ಯಕ್ತಿಗಳ ಪ್ರವೇಶ ಕುರಿತು ಎಚ್ಚರಿಕೆ ಪಾಲಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.&lt;/p&gt;&lt;p&gt;ಪಂದ್ಯಗಳ ವೇಳೆ ಡಗೌಟ್&zwnj;, ಹೋಟೆಲ್&zwnj; ರೂಮ್&zwnj;, ತಂಡದ ಬಸ್&zwnj; ಸೇರಿ ಹಲವೆಡೆ ಆಟಗಾರರ ಜೊತೆ ಕೆಲ ಅನಧಿಕೃತ ವ್ಯಕ್ತಿಗಳು ಕಾಣಿಸಿಕೊಂಡಿದ್ದನ್ನು ಬಿಸಿಸಿಐ ಗಂಭೀರವಾಗಿ ತೆಗೆದುಕೊಂಡಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ತಂಡಗಳಿಗೆ ಪತ್ರ ಬರೆದಿದ್ದಾರೆ. &lsquo;ಈ ಬಾರಿ ಐಪಿಎಲ್&zwnj; ವೇಳೆ ಆಟಗಾರರು, ಸಹಾಯಕ ಸಿಬ್ಬಂದಿ ಹಾಗೂ ತಂಡದ ಅಧಿಕೃತರಿಂದ ನಿಯಮ ಉಲ್ಲಂಘನೆ, ಸ್ವೀಕಾರಾರ್ಹವಲ್ಲದ ಘಟನೆಗಳು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಹಾಗೇ ಬಿಟ್ಟರೆ ಐಪಿಎಲ್&zwnj; ಹಾಗೂ ಬಿಸಿಸಿಐ ಖ್ಯಾತಿಗೆ ದಕ್ಕೆ ಉಂಟುಮಾಡಬಹುದು. ಭವಿಷ್ಯದಲ್ಲಿ ಗಂಭೀರ ಸ್ವರೂಪದ ಕಾನೂನು ಸಮಸ್ಯೆ ಹಾಗೂ ಭದ್ರತಾ ಅಪಾಯ ತಂದೊಡ್ಡಬಹುದು&rsquo; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;&lsquo;ಕೆಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯು ತಂಡದ ಮ್ಯಾನೇಜರ್&zwnj;ಗೆ ತಿಳಿಸದೆ ಅಥವಾ ಅನುಮೋದನೆ ಪಡೆಯದೆ ಅನಧಿಕೃತ ವ್ಯಕ್ತಿಗಳನ್ನು ತಮ್ಮ ಹೋಟೆಲ್&zwnj; ಕೋಣೆಗೆ ಕರೆಸಿಕೊಂಡಿರುವುದು ಗಮನಕ್ಕೆ ಬಂದಿದೆ. ಇಂತಹ ನಡವಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು. ಮ್ಯಾನೇಜರ್&zwnj;ರಿಂದ ಅನುಮತಿ ಇಲ್ಲದೆ ಅನಧಿಕೃತ ವ್ಯಕ್ತಿಗಳು, ಅತಿಥಿಗಳನ್ನು ತಮ್ಮ ಹೋಟೆಲ್&zwnj; ಕೋಣೆಗಳಿಗೆ ಆಹ್ವಾನಿಸಬಾರದು. ಉನ್ನತ ಮಟ್ಟದ ಕ್ರೀಡಾ ವಾತಾವರಣದಲ್ಲಿ ಹನಿಟ್ರ್ಯಾಪ್&zwnj; ಅಪಾಯಗಳ ಬಗ್ಗೆ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಗಮನ ಸೆಳೆಯುತ್ತದೆ. ಇಂತಹ ಘಟನೆಗಳು ಗಂಭೀರ ಕಾನೂನು ಉಲ್ಲಂಘನೆಗೆ ಕಾರಣವಾಗುತ್ತದೆ. ಹೀಗಾಗಿ ಫ್ರಾಂಚೈಸಿಗಳು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಬೇಕು&rsquo; ಎಂದು ಸೈಕಿಯಾ ಅವರು ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ಮಾಲೀಕರಿಗೂ ನಿರ್ಬಂಧ:&lt;/h2&gt;&lt;p&gt;ಇನ್ನು, ಪಂದ್ಯದ ವೇಳೆ ಡಗೌಟ್&zwnj;, ರೂಮ್&zwnj; ಅಥವಾ ಮೈದಾನದ ಬಳಿಕ ಆಟಗಾರರ ಜೊತೆ ತಂಡಗಳ ಮಾಲಿಕರ ಸಂಭಾಷನೆ, ಆಲಿಂಘನ ಕೂಡಾ ನಿಷೇಧಿಸಲಾಗಿದೆ. &lsquo; ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಪಂದ್ಯದ ಸಂದರ್ಭಗಳಲ್ಲಿ ಆಟಗಾರರೊಂದಿಗೆ ಸಂವಹನ ನಡೆಸಲು, ಸಮೀಪಿಸಲು, ತಬ್ಬಿಕೊಳ್ಳಲು ಪ್ರಯತ್ನಿಸುವ ನಿದರ್ಶನ ಗಮನಿಸಲಾಗಿದೆ. ಅಂತಹ ನಡವಳಿಕೆಯು ಸದುದ್ದೇಶದಿಂದ ಕೂಡಿದ್ದರೂ, ಅದು ಬಿಸಿಸಿಐ ಶಿಷ್ಟಾಚಾರದ ಉಲ್ಲಂಘನೆಯಾಗಿರುತ್ತದೆ&rsquo; ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;ಯಾವುದಕ್ಕೆಲ್ಲಾ ನಿರ್ಬಂಧ?&lt;/h3&gt;&lt;p&gt;1. ಹೋಟೆಲ್&zwnj; ರೂಮ್&zwnj;ಗೆ ಅನಧಿಕೃತ ವ್ಯಕ್ತಿಗಳ ಪ್ರವೇಶ.&lt;/p&gt;&lt;p&gt;2. ಪಂದ್ಯದ ವೇಳೆ ಆಟಗಾರರ ಜೊತೆ ಮಾಲಿಕರ ಭೇಟಿ.&lt;/p&gt;&lt;p&gt;3. ಪಂದ್ಯ ನಡೆಯುವ ಸ್ಥಳದಲ್ಲಿ ವೇಪಿಂಗ್&zwnj;.&lt;/p&gt;&lt;p&gt;4. ಅನುಮತಿ ಇಲ್ಲದೆ ಹೋಟೆಲ್&zwnj;ನಿಂದ ಹೊರಬರುವುದು.&lt;/p&gt;]]></content:encoded>
            <category>cricket-sports</category>
            <dc:creator>Ravi Janekal</dc:creator>
            <atom:link href="https://kannada.asianetnews.com/cricket-sports/bcci-warns-players-about-honey-trapping-risks-during-ipl-rav/articleshow-gvfiszt"/>
        </item>
        <item>
            <title><![CDATA[ರೋಹಿತ್ ಶರ್ಮಾ ಕಟ್ಟಿದ್ದ 3.25 ಕೋಟಿ ರೂ ವಾಚ್ ಕದಿಯಲು ಯತ್ನಿಸಿದ್ರಾ ಫ್ಯಾನ್ಸ್, ದೃಶ್ಯ ಸೆರೆ]]></title>
            <link>https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg</link>
            <guid isPermaLink="true">https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg</guid>
            <pubDate>Sat, 09 May 2026 16:14:36 +0530</pubDate>
            <description><![CDATA[&lt;p&gt;ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಕೈಕುಲುತ್ತಾ ಸಾಗುವ ವೇಳೆ ಕಟ್ಟಿದ್ದ 3.25 ಕೋಟಿ ಮೌಲ್ಯದ ವಾಚ್ ಕದಿಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ಈ ದೃಶ್ಯ ಸೆರೆಯಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr65cc17683dx41amvtygjm3,imgname-rohit-sharma-watch-1778323435559.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.09)&lt;/strong&gt; ಐಪಿಎಲ್ ಟೂರ್ನಿ ನಡುವೆ ಕ್ರಿಕೆಟಿಗರು ಫ್ಯಾನ್ಸ್ ಜೊತೆ ಮಾತುಕತೆ, ಸಂವಾದ ಸಹಜ. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ಜೊತೆಗೆ ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ರೋಹಿತ್ ಶರ್ಮಾ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಆಗಮಿಸಿದ ರೋಹಿತ್ ಶರ್ಮಾ, ಹೊರಗಿದ್ದ ಪುಟಾಣಿ ಅಭಿಮಾನಿಳಿಗೆ ಕೈಕುಲುಕಿ ಸಂಬ್ರಮಪಡಿಸಲು ಮುಂದಾಗಿದ್ದಾರೆ. ಆದರೆ ಈ ಪುಟಾಣಿ ಅಭಿಮಾನಿಗಳು ರೋಹಿತ್ ಶರ್ಮಾ ಕೈ ಹಿಡಿದು ಎಳೆದು ವಾಚ್ ಕಳವು ಮಾಡುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋಗಳು ಸೆರೆಯಾಗಿದೆ.&lt;/p&gt;&lt;h2&gt;ದೃಶ್ಯದಲ್ಲಿ ಸೆರೆಯಾದ ಪ್ರಯತ್ನ&lt;/h2&gt;&lt;p&gt;ದೃಶ್ಯದಲ್ಲಿ ರೋಹಿತ್ ಶರ್ಮಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ. ಅಭಿಮಾನಿಗಳು ಫೋಟೋ ತೆಗೆಯಲು, ಶುಭಕೋರಲು ಕಾದು ಕುಳಿತಿದ್ದರು. ಕಾರು ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಕಾರಿನ ಹಿಂಬದಿಯ ವಿಂಡೋ ತೆರೆದು ಕೈ ಹೊರಗೆ ಹಾಕಿದ್ದಾರೆ. ಬಳಿಕ ಕಾರಿನ ಪಕ್ಕಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಕೈಕುಲುಕಲು ಮುಂದಾಗಿದ್ದಾರೆ. ಆರಂಭದಲ್ಲಿ ಎಲ್ಲವೂ ಒಕೆ ಆಗಿತ್ತು. ಕೆಲ ಅಭಿಮಾನಿಗಳು, ಪುಟಾಣಿಗಳು ರೋಹಿತ್ ಶರ್ಮಾ ಕೈ ಕುಲುಕಿ ಸಂಭ್ರಮಿಸಿದರು.&lt;/p&gt;&lt;h2&gt;3.25 ಕೋಟಿ ರೂಪಾಯಿ ಮೌಲ್ಯದ ವಾಚ್&lt;/h2&gt;&lt;p&gt;ಆದರೆ ಓರ್ವ ಪುಟಾಣಿ ಅಭಿಮಾನಿ ನೇರವಾಗಿ ರೋಹಿತ್ ಶರ್ಮಾ ಕೈಗೆ ಕಟ್ಟಿದ ವಾಚ್ ಬಳಿ ಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾನೆ. ರೋಹಿತ್ ಶರ್ಮಾ ಕೈಗಳನ್ನು ತಳ್ಳಿದರೂ ಅಭಿಮಾನಿ ಮಾತ್ರ ತನ್ನ ಎರಡು ಕೈಗಳಿಂದ ರೋಹಿತ್ ಶರ್ಮಾ ಕೈಯಲ್ಲಿದ್ದ ಬರೋಬ್ಬರಿ 3.25 ಕೋಟಿ ರೂಪಾಯಿ ಮೌಲ್ಯದ ವಾಚ್ ಎಳೆಯುವ ಪ್ರಯತ್ನ ಮಾಡಿದ್ದಾನೆ.&lt;/p&gt;&lt;p&gt;ಪರಿಸ್ಥಿತಿ ಅರಿತ ರೋಹಿತ್ ಶರ್ಮಾ ತಕ್ಷಣವೇ ತಮ್ಮ ಕೈಗಳನ್ನು ಎಳೆದುಕೊಂಡಿದ್ದಾರೆ. ಬಳಿಕ ಕಾರಿನ ಒಳಗಿನಿಂದಲೇ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ವೇಗದಲ್ಲಿ ಕಾರಿನ ವಿಂಡೋ ಕ್ಲೋಸ್ ಮಾಡಿ ಸ್ಥಳದಿಂದ ತೆರಳಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Rohit Sharma Fans tried to snatch his 3.25 Cr &quot;Giraffe&quot; watch from his wrist. And suddenly he close the mirror. pic.twitter.com/vMIQFxcdxt&lt;/p&gt;&lt;p&gt;&mdash; Aman (@Proteinkohli) May 8, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;ಐಪಿಎಲ್&zwnj;ನಲ್ಲಿ ರೋಹಿತ್ ಅಬ್ಬರ&lt;/h2&gt;&lt;p&gt;ಐಪಿಎಲ್ 2026 ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದಾರೆ. ಲಖನೌ ಸೂಪರ್&zwnj;ಜೈಂಟ್ಸ್ ವಿರುದ್ಧ ರೋಹಿತ್ ಶರ್ಮಾ 44 ಎಸೆತದಲ್ಲಿ 84 ರನ್ ಸಿಡಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ 229 ರನ್ ಟಾರ್ಗೆಟ್ ಚೇಸ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 10 ಪಂದ್ಯದಲ್ಲಿ 7 ಪಂದ್ಯಗಳನ್ನು ಸೋತರೆ, ಕೇವಲ 3 ಗೆಲುವು ಕಂಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/fans-try-to-snatch-rohit-sharma-expensive-rs-3-25-crore-watch-caught-on-camera/articleshow-ihh8wwg"/>
        </item>
        <item>
            <title><![CDATA[ಶಾಸಕರಿಗೆ ಸೇರಿ 10,000 ಉಚಿತ ಟಿಕೆಟ್ ಕೇಳಿದ KSCA; ಬೆಂಗಳೂರು ಫೈನಲ್ ಪಂದ್ಯವನ್ನೇ ಶಿಫ್ಟ್ ಮಾಡಬೇಕಾಯ್ತು ಎಂದ BCCI]]></title>
            <link>https://kannada.asianetnews.com/gallery/cricket-sports/ipl-2026-final-shifted-from-bengaluru-to-ahmedabad-ksca-free-ticket-scandal-bcci-devajit-saikia-sat-lkzrg5m</link>
            <guid isPermaLink="true">https://kannada.asianetnews.com/gallery/cricket-sports/ipl-2026-final-shifted-from-bengaluru-to-ahmedabad-ksca-free-ticket-scandal-bcci-devajit-saikia-sat-lkzrg5m</guid>
            <pubDate>Thu, 07 May 2026 22:02:37 +0530</pubDate>
            <description><![CDATA[&lt;p&gt;ಕರ್ನಾಟಕದ ಶಾಸಕರು ಮತ್ತು ಕೆಎಸ್&zwnj;ಸಿಎ ವತಿಯಿಂದ 10,000ಕ್ಕೂ ಹೆಚ್ಚು ಉಚಿತ ಟಿಕೆಟ್&zwnj;ಗಳಿಗೆ ಬೇಡಿಕೆ ಬಂದಿದ್ದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km5kqexnw2381h8ach112ha3,imgname-bcci-1774009957301.jpeg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಶಾಸಕರು ಮತ್ತು ಕೆಎಸ್&zwnj;ಸಿಎ ವತಿಯಿಂದ 10,000ಕ್ಕೂ ಹೆಚ್ಚು ಉಚಿತ ಟಿಕೆಟ್&zwnj;ಗಳಿಗೆ ಬೇಡಿಕೆ ಬಂದಿದ್ದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಪ್ರತಿ ಬಾರಿ ಐಪಿಎಲ್ ಪಂದ್ಯ ನಡೆದಾಗಲೂ 'ಈ ಸಲ ಕಪ್ ನಮ್ದೇ' ಎಂದು ಅಬ್ಬರಿಸುವ ಆರ್&zwnj;ಸಿಬಿ ಅಭಿಮಾನಿಗಳಿಗೆ ಈ ಬಾರಿ ತವರು ನೆಲದಲ್ಲೇ ಫೈನಲ್ ನೋಡುವ ಸೌಭಾಗ್ಯ ತಪ್ಪಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯ ಈಗ ಅಹಮದಾಬಾದ್&zwnj;ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಗೊಂಡಿದೆ.&amp;nbsp;&lt;/p&gt;&lt;p&gt;ಇದಕ್ಕೆ ಕಾರಣ ಭದ್ರತೆಯೋ ಅಥವಾ ಮಳೆಯೋ ಅಲ್ಲ, ಬದಲಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಮತ್ತು ರಾಜ್ಯದ ಶಾಸಕರ &lsquo;ಉಚಿತ ಟಿಕೆಟ್&rsquo; ಹಸಿವು ಎನ್ನುವ ಆಘಾತಕಾರಿ ವಿಚಾರವನ್ನು ಬಿಸಿಸಿಐ ಬಯಲು ಮಾಡಿದೆ.&lt;/p&gt;&lt;img&gt;&lt;p&gt;ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದು, ಕೆಎಸ್ಸಿಎ (KSCA) ನಡೆಸಿರುವ ಟಿಕೆಟ್ ಲೂಟಿಯನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಶಿಷ್ಟಾಚಾರದ ಪ್ರಕಾರ, ಪಂದ್ಯ ಆಯೋಜಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಒಟ್ಟು ಆಸನ ಸಾಮರ್ಥ್ಯದ ಕೇವಲ 15% ರಷ್ಟು ಟಿಕೆಟ್&zwnj;ಗಳನ್ನು ಮಾತ್ರ ಉಚಿತವಾಗಿ (Complimentary Passes) ನೀಡಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.&lt;/p&gt;&lt;img&gt;&lt;p&gt;ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಕೆಎಸ್ಸಿಎ ತನ್ನ ಸದಸ್ಯರು, ಕ್ಲಬ್&zwnj;ಗಳು ಮತ್ತು ಇತರರಿಗಾಗಿ ನಿಗದಿತ 15% ಕೋಟಾದ ಹೊರತಾಗಿ ಸುಮಾರು 10,000 ಹೆಚ್ಚುವರಿ ಉಚಿತ ಟಿಕೆಟ್&zwnj;ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು. ಈ ಬಗ್ಗೆ ಬಿಸಿಸಿಐ ವಿವರಣೆ ಕೇಳಿ ಮೇ 2 ರಂದು ಇಮೇಲ್ ಕಳುಹಿಸಿತ್ತು. ಇದಕ್ಕೆ ಕೆಎಸ್ಸಿಎ ನೀಡಿದ ಉತ್ತರ ಕಂಡು ಬಿಸಿಸಿಐ ಅಧಿಕಾರಿಗಳೇ ಆಘಾತಕ್ಕೊಳಗಾಗಿದ್ದಾರೆ.&lt;/p&gt;&lt;img&gt;&lt;p&gt;ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದ ಶಾಸಕರು (MLAs) ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ (MLCs) ಸುಮಾರು 700ಕ್ಕೂ ಹೆಚ್ಚು ಉಚಿತ ಟಿಕೆಟ್&zwnj;ಗಳನ್ನು ನೀಡಬೇಕೆಂದು ಕೆಎಸ್ಸಿಎ ಬೇಡಿಕೆ ಇಟ್ಟಿತ್ತು. ರಾಜ್ಯ ಸರ್ಕಾರದ ಸದಸ್ಯರಿಗೂ ಉಚಿತ ಪಾಸ್ ನೀಡಬೇಕೆಂಬ ಒತ್ತಡವಿತ್ತು. ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಭಿಮಾನಿಗಳ ನಡುವೆ, ಜನಪ್ರತಿನಿಧಿಗಳ ಈ ಉಚಿತ ಟಿಕೆಟ್ ದಾಹದಿಂದಾಗಿ ಇಡೀ ಫೈನಲ್ ಪಂದ್ಯವೇ ಬೆಂಗಳೂರಿನಿಂದ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ನಿಯಮ ಮೀರಿ 10,000ಕ್ಕೂ ಹೆಚ್ಚು ಉಚಿತ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಬಿಸಿಸಿಐ, ಇಂತಹ 'ಟಿಕೆಟ್ ಹಗರಣದ' ನಡುವೆ ಪಂದ್ಯ ನಡೆಸುವುದು ಅಸಾಧ್ಯ ಎಂದು ನಿರ್ಧರಿಸಿತು. ಹೀಗಾಗಿ ಫೈನಲ್ ಪಂದ್ಯವನ್ನು ಅಹಮದಾಬಾದ್&zwnj;ಗೆ ಹಾಗೂ ಇತರ ಪ್ಲೇ ಆಫ್ ಪಂದ್ಯಗಳನ್ನು ಧರ್ಮಶಾಲಾ ಮತ್ತು ಹೊಸ ಚಂಡೀಗಢಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಪಾಯಿಂಟ್ಸ್ ಟೇಬಲ್&zwnj;ನಲ್ಲಿ ಆರ್&zwnj;ಸಿಬಿ ತಂಡವು 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ತಂಡದ ಅದ್ಭುತ ಪ್ರದರ್ಶನ ಕಂಡು ಅಭಿಮಾನಿಗಳು ಫೈನಲ್ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೋಡಿ ಸಂಭ್ರಮಿಸಲು ಕಾಯುತ್ತಿದ್ದರು. ಆದರೆ ಸಾರ್ವಜನಿಕರ ಹಿತ ಕಾಯಬೇಕಾದ ಶಾಸಕರೇ ಉಚಿತ ಟಿಕೆಟ್&zwnj;ಗಾಗಿ ಹಠ ಮಾಡಿದ್ದರಿಂದ ಅಭಿಮಾನಿಗಳ ಕನಸು ಭಗ್ನಗೊಂಡಿದೆ.&lt;/p&gt;]]></content:encoded>
            <category>cricket-sports</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cricket-sports/ipl-2026-final-shifted-from-bengaluru-to-ahmedabad-ksca-free-ticket-scandal-bcci-devajit-saikia-sat-lkzrg5m"/>
        </item>
        <item>
            <title><![CDATA[ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್‌ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್]]></title>
            <link>https://kannada.asianetnews.com/gallery/cricket-sports/rcb-suffers-major-blow-as-opener-phil-salt-returns-home-mid-ipl-syo3h0g</link>
            <guid isPermaLink="true">https://kannada.asianetnews.com/gallery/cricket-sports/rcb-suffers-major-blow-as-opener-phil-salt-returns-home-mid-ipl-syo3h0g</guid>
            <pubDate>Mon, 04 May 2026 19:33:06 +0530</pubDate>
            <description><![CDATA[&lt;p&gt;ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್&zwnj;ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್, ಪ್ಲೇ ಆಫ್ ಪ್ರವೇಶಕ್ಕೆ ಹೋರಾಟ ತೀವ್ರಗೊಳ್ಳುತ್ತಿರುವಾಗಲೇ ಸಾಲ್ಟ್ ಇಂಗ್ಲೆಂಡ್&zwnj;ಗೆ ತೆರಳಿರುವುದು ಆರ್&zwnj;ಸಿಬಿ ಆತಂಕ ಹೆಚ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knfcete32z36w29a43zwe3xn,imgname-20260405444l-1775411620291.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಮಹತ್ವದ ಘಟ್ಟದಲ್ಲೇ ಆರ್&zwnj;ಸಿಬಿ ಶಾಕ್, ತವರಿಗೆ ಮರಳಿದ ಆರಂಭಿಕ ಫಿಲ್ ಸಾಲ್ಟ್, ಪ್ಲೇ ಆಫ್ ಪ್ರವೇಶಕ್ಕೆ ಹೋರಾಟ ತೀವ್ರಗೊಳ್ಳುತ್ತಿರುವಾಗಲೇ ಸಾಲ್ಟ್ ಇಂಗ್ಲೆಂಡ್&zwnj;ಗೆ ತೆರಳಿರುವುದು ಆರ್&zwnj;ಸಿಬಿ ಆತಂಕ ಹೆಚ್ಚಿಸಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿ ಮಹತ್ವದ ಘಟಕ್ಕ ತಲುಪಿದೆ. ಪ್ಲೇ ಆಫ್ ಲೆಕ್ಕಾಚಾರಗಳು ತೀವ್ರಗೊಳ್ಳುತ್ತಿದೆ. ಕಳೆದ ಪಂದ್ಯದ ಸೋಲಿನಿಂದ ಆರ್&zwnj;ಸಿಬಿ ಇದೀಗ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿ ಉಳಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ನಡುವೆ ಆರ್&zwnj;ಸಿಬಿ ಸಮಸ್ಯೆಗಳು ತೀವ್ರಗೊಳ್ಳುತ್ತಿದೆ. ಇದೀಗ ಫಿಲ್ ಸಾಲ್ಟ್ ಟೂರ್ನಿ ನಡುವೆ ತವರಿಗೆ ಮರಳಿದ್ದಾರೆ.&lt;/p&gt;&lt;img&gt;&lt;p&gt;ಆರ್&zwnj;&zwnj;ಸಿಬಿಗೆ ಉತ್ತಮ ಆರಂಭ ನೀಡುತ್ತಿದ್ದ ಫಿಲ್ ಸಾಲ್ಟ್ ಇಂಜುರಿ ಕಾರಣದಿಂದ ಕಳೆದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಕೈಬೆರಳಿನ ಗಾಯದಿಂದ ಫಿಲ್ಟ್ ಚೇತರಿಸಿಕೊಂಡಿಲ್ಲ. ಹೀಗಾಗಿ ದಿಢೀರ್ ಸಾಲ್ಟ್ ತವರಿಗೆ ಮರಳಿದ್ದಾರೆ. ಇಂಗ್ಲೆಂಡ್&zwnj;ನಲ್ಲಿ ಚಿಕಿತ್ಸೆ ಮುಂದುವರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಫೀಲ್ಡಿಂಗ್ ಮಾಡುವ ವೇಳೆ ಇಂಜುರಿಯಾಗಿದ್ದರು. ಬಳಿಕ ಮೂರು ಪಂದ್ಯಗಳಲ್ಲಿ ಸಾಲ್ಟ್ ಅಲಭ್ಯರಾಗಿದ್ದರು. ಫಿಲ್ ಸಾಲ್ಟ್ ಬದಲು ಬೆತೆಲ್ ತಂಡ ಸೇರಿಕೊಂಡಿದ್ದರು. ಆದರೆ ಬೆತೆಲ್ ಇನ್ನೂ ಲಯ ಕಂಡುಕೊಂಡಿಲ್ಲ.&lt;/p&gt;&lt;img&gt;&lt;p&gt;ಎಪ್ರಿಲ್ 7 ರಂದು ಆರ್&zwnj;ಸಿಬಿ ತಂಡಕ್ಕೆ ಲಖನೌ ಸೂಪರ್ ಜೈಂಟ್ಸ್ ಸವಾಲು. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ದ ಮುಗ್ಗರಿಸಿದ ಆರ್&zwnj;ಸಿಬಿಗೆ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದೆ. ಇದರ ನಡುವೆ ಸಾಲ್ಟ್ ಸದ್ಯಕ್ಕೆ ಲಭ್ಯರಿಲ್ಲ ಅನ್ನೋದು ಖಚಿತಗೊಂಡಿದೆ.&lt;/p&gt;&lt;img&gt;&lt;p&gt;ಅಂಕಪಟ್ಟಿಯಲ್ಲಿ ಆರ್&zwnj;ಸಿಬಿ ಸದ್ಯ 2ನೇ ಸ್ಥಾನದಲ್ಲಿದೆ. 9 ಪಂದ್ಯದಲ್ಲಿ 6 ಗೆಲುವು ಹಾಗೂ 3 ಸೋಲು ಕಂಡಿದೆ. 12 ಅಂಕ ಸಂಪಾದಿಸಿರುವ ಆರ್&zwnj;ಸಿಬಿ ಇದೀಗ ಪ್ಲೇ ಆಫ್ ಖಚಿತಪಡಿಸಿಕೊಳ್ಳಲು ಮುಂದಾಗಿದೆ. ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಆರ್&zwnj;ಸಿಬಿ, ಸನ್&zwnj;ರೈಸರ್ಸ್ ಹೈದರಾಬಾದ್ 3 ಹಾಗೂ ರಾಜಸ್ಥಾನ ರಾಯಲ್ಸ್ 4ನೇ ಸ್ಥಾನದಲ್ಲಿದೆ.&lt;/p&gt;&lt;h2&gt;ಅಂಕಪಟ್ಟಿಯಲ್ಲಿ 2ನೇ ಸ್ಥಾನ&lt;/h2&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/rcb-suffers-major-blow-as-opener-phil-salt-returns-home-mid-ipl-syo3h0g"/>
        </item>
        <item>
            <title><![CDATA[T20 World Cup ಗೆದ್ದರೂ ಸೂರ್ಯಕುಮಾರ್‌ಗೆ ಬಂತು ಕುತ್ತು ! ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಹೊಸ ಆಟಗಾರ ಎಂಟ್ರಿ?]]></title>
            <link>https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh</link>
            <guid isPermaLink="true">https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh</guid>
            <pubDate>Fri, 08 May 2026 11:27:44 +0530</pubDate>
            <description><![CDATA[&lt;p&gt;Suryakumar Yadav: ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾ ಟಿ20 ತಂಡವನ್ನು ಮುನ್ನಡೆಸಿದ್ದ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ಒಂದೂ ಸರಣಿ ಸೋತಿಲ್ಲ. ಆದರೂ ಅವರ ಕಳಪೆ ಫಾರ್ಮ್&zwnj;ನಿಂದಾಗಿ ಬಿಸಿಸಿಐ ಅವರನ್ನು ಕೆಳಗಿಳಿಸಲು ಚಿಂತಿಸುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkmes8h8pshgqvpf9x8vfpzg,imgname-thumb--5--1773434348072.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ:&lt;/strong&gt; ಭಾರತೀಯ ಟಿ20 ತಂಡದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನೇ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಲು ಬಿಸಿಸಿಐ ಗಂಭೀರ ಚಿಂತನೆ ನಡೆಸಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.&amp;nbsp;&lt;/p&gt;&lt;h2&gt;35 ವರ್ಷದ ಸೂರ್ಯಕುಮಾರ್&zwnj;ಗೆ ಕ್ಯಾಪ್ಟನ್ಸಿ ಇಲ್ಲವೇ?&lt;/h2&gt;&lt;p&gt;ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್, ಅದರಲ್ಲೂ ಐಪಿಎಲ್&zwnj;ನಲ್ಲಿನ ಕಳಪೆ ಪ್ರದರ್ಶನವೇ ಈ ಕಠಿಣ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಅವರ ಬದಲಿಗೆ, ಐಪಿಎಲ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ಮಿಂಚುತ್ತಿರುವ ಶ್ರೇಯಸ್ ಅಯ್ಯರ್ ಅವರನ್ನು ಟಿ20 ನಾಯಕತ್ವಕ್ಕೆ ಪರಿಗಣಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. 2028ರ ವಿಶ್ವಕಪ್ ಮತ್ತು ಒಲಿಂಪಿಕ್ಸ್ ತನಕ ನಾಯಕನಾಗಿ ಮುಂದುವರಿಯಲು 35 ವರ್ಷದ ಸೂರ್ಯಕುಮಾರ್ ಯಾದವ್ ಆಸಕ್ತಿ ತೋರಿಸಿದ್ದರೂ, ಆಯ್ಕೆ ಸಮಿತಿಗೆ ಇದರಲ್ಲಿ ಒಲವಿಲ್ಲ.&lt;/p&gt;&lt;p&gt;ರೋಹಿತ್ ಶರ್ಮಾ ನಿವೃತ್ತಿಯ ನಂತರ ಟೀಂ ಇಂಡಿಯಾವನ್ನು ಮುನ್ನಡೆಸಿದ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ಒಂದೇ ಒಂದು ಟಿ20 ಸರಣಿಯನ್ನೂ ಸೋತಿಲ್ಲ. ಏಷ್ಯಾ ಕಪ್ ಮತ್ತು ಟಿ20 ವಿಶ್ವಕಪ್ ಎರಡನ್ನೂ ಗೆದ್ದುಕೊಟ್ಟಿದ್ದಾರೆ. ತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಸೂರ್ಯ ಅವರ ವೈಯಕ್ತಿಕ ಫಾರ್ಮ್ ಆಯ್ಕೆ ಸಮಿತಿಯನ್ನು ಈ ಕಠಿಣ ನಿರ್ಧಾರಕ್ಕೆ ದೂಡುತ್ತಿದೆ. ಈ ಬಾರಿಯ ಐಪಿಎಲ್ ಸೀಸನ್&zwnj;ನಲ್ಲಿ ಮುಂಬೈ ಇಂಡಿಯನ್ಸ್&zwnj; ಪರ 10 ಪಂದ್ಯಗಳಿಂದ ಸೂರ್ಯ ಗಳಿಸಿದ್ದು ಕೇವಲ 195 ರನ್. ಟಿ20 ವಿಶ್ವಕಪ್&zwnj;ನಲ್ಲಿ ಭಾರತ ಚಾಂಪಿಯನ್ ಆದಾಗ 9 ಇನ್ನಿಂಗ್ಸ್&zwnj;ಗಳಿಂದ 242 ರನ್ ಗಳಿಸಿದ್ದರೂ, ಅದರಲ್ಲಿ 84 ರನ್&zwnj;ಗಳು ಅಮೆರಿಕ ವಿರುದ್ಧವೇ ಬಂದಿದ್ದವು. ಫೈನಲ್ ಸೇರಿದಂತೆ ದೊಡ್ಡ ತಂಡಗಳ ವಿರುದ್ಧದ ಒತ್ತಡದ ಪಂದ್ಯಗಳಲ್ಲಿ ಸೂರ್ಯ ಮಿಂಚಲು ವಿಫಲರಾಗಿದ್ದರು.&lt;/p&gt;&lt;h2&gt;9 ಇನ್ನಿಂಗ್ಸ್&zwnj;ಗಳಿಂದ 333 ರನ್&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಸೂರ್ಯಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೈ ನೋವಿನ ನಡುವೆಯೂ ಅವರು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ, ಅವರನ್ನು ಕೇವಲ ಬ್ಯಾಟರ್ ಆಗಿ ತಂಡದಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಆಯ್ಕೆ ಸಮಿತಿಯಲ್ಲಿ ಭಿನ್ನಾಭಿಪ್ರಾಯವಿದೆ. ಸುಮಾರು ಎರಡು ವರ್ಷಗಳ ಕಾಲ ಟಿ20 ತಂಡದಿಂದ ಹೊರಗಿದ್ದ ಶ್ರೇಯಸ್ ಅಯ್ಯರ್, ಐಪಿಎಲ್&zwnj;ನಲ್ಲಿನ ಭರ್ಜರಿ ಪ್ರದರ್ಶನದ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಈ ಸೀಸನ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್, ಮೊದಲ ಏಳು ಪಂದ್ಯಗಳಲ್ಲಿ ಆರರಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಬ್ಯಾಟಿಂಗ್&zwnj;ನಲ್ಲೂ ಮಿಂಚಿರುವ ಅವರು 9 ಇನ್ನಿಂಗ್ಸ್&zwnj;ಗಳಿಂದ 333 ರನ್ ಗಳಿಸಿದ್ದಾರೆ.&lt;/p&gt;&lt;p&gt;ಐಪಿಎಲ್ ನಂತರ ನಡೆಯಲಿರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಂದಲೇ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ವಿಶ್ವಕಪ್ ಗೆಲುವಿನ ನಂತರ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಗುರಿ ಇಟ್ಟುಕೊಂಡಿದೆ. ಕೊನೇ ಕ್ಷಣದಲ್ಲಿ ಯಾವುದೇ ಬದಲಾವಣೆಗಳಾಗದಿದ್ದರೆ, ಶ್ರೇಯಸ್ ಅಯ್ಯರ್ ಅವರೇ ಭಾರತದ ಮುಂದಿನ ಟಿ20 ನಾಯಕನಾಗುವುದು ಬಹುತೇಕ ಖಚಿತ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Padmashree Bhat</dc:creator>
            <atom:link href="https://kannada.asianetnews.com/cricket-sports/bcci-consider-shreyas-iyer-as-t20-captain-replacement-of-suryakumar-yadav/articleshow-uxmemeh"/>
        </item>
        <item>
            <title><![CDATA[ರಾಜಕೀಯ ಪ್ರಭಾವ ಬಳಸಿ ಐಪಿಎಲ್‌ ಫೈನಲ್ ಶಿಫ್ಟ್‌: ಬಿಸಿಸಿಐ ಹೇಳಿಕೆಯೇ ಬೋಗಸ್ ಎಂದ ಡಿಕೆಶಿ!]]></title>
            <link>https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</link>
            <guid isPermaLink="true">https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970</guid>
            <pubDate>Sat, 09 May 2026 10:14:06 +0530</pubDate>
            <description><![CDATA[&lt;p&gt;ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ರಾಜಕೀಯ ಪ್ರಭಾವ ಬಳಸಿ ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಬಿಸಿಸಿಐ ಸುಳ್ಳು ಹೇಳುತ್ತಿದ್ದು, ಗುಜರಾತ್&zwnj;ಗೆ ಆರ್ಥಿಕ ಲಾಭ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5g2g9d9e3m1b7d20e1pnvx,imgname-----------------------2026-05-09t100052.692-1778301092141.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಮೇ.9): ಐಪಿಎಲ್&zwnj; ಫೈನಲ್&zwnj; ಪಂದ್ಯ ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರುವ ವಿಚಾರದಲ್ಲಿ ಬಿಸಿಸಿಐ ಸಂಪೂರ್ಣ ಮಾಹಿತಿ ನೀಡದೆ, ಸುಳ್ಳು ಹೇಳುತ್ತಿದೆ. ರಾಜಕೀಯ ಪ್ರಭಾವ ಬಳಸಿ ಐಪಿಎಲ್&zwnj; ಫೈನಲ್&zwnj; ಪಂದ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್&zwnj;ಗೆ ಸ್ಥಳಾಂತರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್&zwnj; ಕಿಡಿಕಾರಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್&zwnj;, ಬಿಸಿಸಿಐ ಕಾರ್ಯದರ್ಶಿ ಬೋಗಸ್&zwnj; ಹೇಳಿಕೆ ನೀಡುತ್ತಿದ್ದು, ಸಂಪೂರ್ಣ ಮಾಹಿತಿ ನೀಡಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್&zwnj; ಪಂದ್ಯಾವಳಿ ವೀಕ್ಷಿಸಲು ಶಾಸಕರಿಗೆ ತಲಾ 2 ಟಿಕೆಟ್&zwnj; ನೀಡುತ್ತಿದ್ದರು. ಅದು ಹೆಚ್ಚಾಗುತ್ತದೆಯೇ? ನಮ್ಮ ಮೇಲೆ ಆರೋಪಿಸುತ್ತಿರುವ ಬಿಜೆಪಿ-ಜೆಡಿಎಸ್&zwnj; ನಾಯಕರು, ತಾವು ಪಡೆದಿದ್ದ ಟಿಕೆಟ್&zwnj; ವಾಪಸ್&zwnj; ಕೊಡಬೇಕಿತ್ತು. ನಮ್ಮ ಶಾಸಕರಿಗೆ ಅವರದ್ದೇ ಸ್ಥಾನ, ಗೌರವವಿದೆ ಎಂದರು.&lt;/p&gt;&lt;p&gt;ಐಪಿಎಲ್&zwnj; ಪಂದ್ಯ ಸ್ಥಳಾಂತರ ಬಿಜೆಪಿ ನಾಯಕತ್ವದಲ್ಲಿ ನಡೆಯುತ್ತಿದೆ. ಗುಜರಾತ್&zwnj;ಗೆ ದೊಡ್ಡ ಆರ್ಥಿಕ ಅನುಕೂಲ ಮಾಡಿಕೊಡಲು ಸ್ಥಳಾಂತರ ಮಾಡಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 30 ಸಾವಿರ ಆಸನ ಸಾಮರ್ಥ್ಯವಿದೆ. ಅಹಮದಾಬಾದ್&zwnj;ನಲ್ಲಿ 1 ಲಕ್ಷದವರೆಗೆ ಆಸನವಿದೆ. ಅದರಿಂದ ದೊಡ್ಡ ಲಾಭವಾಗುತ್ತದೆ ಎಂದು ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಅದರ ಜತೆಗೆ ರಾಜಕೀಯ ಪ್ರಭಾವವೂ ಇದಕ್ಕೆ ಕಾರಣ. ಪ್ರತಿವರ್ಷ ಇದೇ ರೀತಿ ಐಪಿಎಲ್&zwnj; ಫೈನಲ್&zwnj; ಪಂದ್ಯ ಸ್ಥಳಾಂತರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಅಹಮದಾಬಾದ್&zwnj; ಕ್ರೀಡಾಂಗಣ ಮಾದರಿಯಲ್ಲೇ ರಾಜ್ಯದಲ್ಲೂ ದೊಡ್ಡ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 2 ಕ್ರೀಡಾಂಗಣ ನಿರ್ಮಾಣಕ್ಕೆ ಅನುಮತಿಸಲಾಗಿದೆ. ಅದರ ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು 60 ಸಾವಿರ ಆಸನ ಸಾಮರ್ಥ್ಯಕ್ಕೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್&zwnj;ಸಿಎ ಜತೆಗೂ ಮಾತನಾಡಲಾಗಿದ್ದು, ಅದಕ್ಕೆ ಸರ್ಕಾರ ನೆರವು ನೀಡಲಿದೆ ಎಂದರು.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ipl-final-shifted-using-political-influence-karnataka-dcm-dk-shivakumar-slams-bcci-statement-as-bogus-rav/articleshow-vh72970"/>
        </item>
        <item>
            <title><![CDATA[ಆರ್‌ಸಿಬಿ ಪಂದ್ಯ ಅಹಮದಾಬಾದ್‌ಗೆ ಶಿಫ್ಟ್: ಸರ್ಕಾರದ ಪಾತ್ರ ಇಲ್ಲ, ವಾಣಿಜ್ಯ ಕಾರಣವಿರಬಹುದು: ಗೃಹ ಸಚಿವ ಪರಮೇಶ್ವರ]]></title>
            <link>https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310</link>
            <guid isPermaLink="true">https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310</guid>
            <pubDate>Fri, 08 May 2026 10:59:14 +0530</pubDate>
            <description><![CDATA[ಆರ್ಸಿಬಿ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇದು ಸಂಪೂರ್ಣವಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಯ ವಾಣಿಜ್ಯ ನಿರ್ಧಾರವಾಗಿದ್ದು, ಭದ್ರತಾ ಕೊರತೆಯ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kegtrfnhchr9nsc70ryj8cs8,imgname-dr-g-parameshwara-1767943978672.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರದಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಸಿಬಿ ಮತ್ತು ಬಿಸಿಸಿಐ ನಡುವಿನ ಒಪ್ಪಂದಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಪಂದ್ಯವನ್ನು ಸ್ಥಳಾಂತರಿಸುವುದು ಸಂಪೂರ್ಣವಾಗಿ ಅವರ ನಿರ್ಧಾರ. ಟಿಕೆಟ್ ಹಾಗೂ ವಾಣಿಜ್ಯ ಉದ್ದೇಶಗಳಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಣುತ್ತದೆ ಎಂದು ಹೇಳಿದರು&lt;/p&gt;&lt;h2&gt;ಭದ್ರತಾ ಕೊರತೆ ಇಲ್ಲ&lt;/h2&gt;&lt;p&gt;ಪಂದ್ಯವನ್ನು ಭದ್ರತಾ ಕಾರಣಗಳಿಂದ ಶಿಫ್ಟ್ ಮಾಡಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಸಚಿವ ಡಾ.ಜಿ. ಪರಮೇಶ್ವರ , ಭದ್ರತೆಯ ಯಾವುದೇ ಕೊರತೆ ಇಲ್ಲ. ಕಳೆದ ವರ್ಷ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಕುನ್ಹಾ ವರದಿ ಆಧಾರವಾಗಿ ಹಲವು ಬದಲಾವಣೆಗಳನ್ನು ಮಾಡಿದ್ದೇವೆ. ಕಡಿಮೆ ಸಮಯದಲ್ಲಿಯೇ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದರು&lt;/p&gt;&lt;h2&gt;ವಾಣಿಜ್ಯ ಕಾರಣಗಳೇ ಪ್ರಮುಖ&lt;/h2&gt;&lt;p&gt;ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು ಮತ್ತು ಹೆಚ್ಚಿನ ಆಸನ ವ್ಯವಸ್ಥೆ ದೊರಕುವ ಉದ್ದೇಶದಿಂದ ಪಂದ್ಯವನ್ನು ಅಹಮದಾಬಾದ್&zwnj;ಗೆ ಸ್ಥಳಾಂತರಿಸಿರಬಹುದು ಎಂದ ಅವರು, ಇದು ಸಂಪೂರ್ಣವಾಗಿ ವಾಣಿಜ್ಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿರಬಹುದು. ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. 600 ಸೀಟುಗಳನ್ನು ಶಾಸಕರಿಗೆ ನೀಡಲು ಪಂದ್ಯವನ್ನು ಸ್ಥಳಾಂತರಿಸುತ್ತಾರೆಯೇ? ಹಾಗೇನಾದರೂ ಇದ್ದರೆ ವಿವರಗಳನ್ನು ಬಹಿರಂಗಪಡಿಸಲಿ. ಯಾರು ಎಷ್ಟು ಟಿಕೆಟ್ ಪಡೆದಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಖಾರವಾಗಿ ಪ್ರತಿಕ್ರಯಿಸಿದರು.&lt;/p&gt;&lt;h2&gt;ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯೆ&lt;/h2&gt;&lt;p&gt;ಆರ್ಸಿಬಿ ಅಭಿಮಾನಿಗಳಿಗೆ ಮೋಸವಾಗಿದೆ ಎಂಬ ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಬಿಜೆಪಿ ಮತ್ತು ಜೆಡಿಎಸ್ ಕ್ರೀಡಾ ಕ್ಷೇತ್ರಕ್ಕೆ ಯಾವ ರೀತಿಯ ಸಹಕಾರ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಯಾರು ಏನು ಮಾಡಿದ್ದಾರೆ ಎಂಬುದನ್ನು ಜನರು ಚೆನ್ನಾಗಿ ಅರಿತಿದ್ದಾರೆ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಈ ಮೂಲಕ ಆರ್ಸಿಬಿ ಪಂದ್ಯ ಸ್ಥಳಾಂತರದ ವಿಚಾರದಲ್ಲಿ ಸರ್ಕಾರದ ಪಾತ್ರವಿಲ್ಲ ಎಂಬುದನ್ನು ಗೃಹ ಸಚಿವರು ಸ್ಪಷ್ಟಪಡಿಸಿದ್ದು, ಈ ನಿರ್ಧಾರ ಸಂಪೂರ್ಣವಾಗಿ ಬಿಸಿಸಿಐ ಮತ್ತು ಫ್ರಾಂಚೈಸಿಯ ವಾಣಿಜ್ಯ ಹಾಗೂ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದೆ ಎಂಬುದನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ತಮಿಳುನಾಡು ರಾಜಕೀಯ ಬೆಳವಣಿಗೆಗಳ ಬಗ್ಗೆ&lt;/h2&gt;&lt;p&gt;ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಬೆಂಬಲ ಪತ್ರ ಕೇಳಿರುವ ವಿಚಾರಕ್ಕ ಪ್ರತಿಕ್ರಿಯಿಸಿದ ಸಚಿವರು ಸಂವಿಧಾನದಲ್ಲಿ ಈ ಸಂಬಂಧ ಕೆಲವು ವಿಧಿಗಳು ಸ್ಪಷ್ಟವಾಗಿವೆ. ರಾಜ್ಯಪಾಲರು ಕಾನೂನು ಮತ್ತು ಸಂವಿಧಾನದ ಪ್ರಕಾರವೇ ಕ್ರಮ ಕೈಗೊಳ್ಳುತ್ತಾರೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಬಹುದು ಎನ್ನುವ ಸಾಧ್ಯತೆ ಇದೆ ಎಂದರು.&lt;/p&gt;]]></content:encoded>
            <category>cricket-sports</category>
            <dc:creator>Gowthami K</dc:creator>
            <atom:link href="https://kannada.asianetnews.com/cricket-sports/no-role-of-karnataka-government-in-rcb-match-shift-to-ahmedabad-home-minister-g-parameshwara-gdp/articleshow-wiye310"/>
        </item>
        <item>
            <title><![CDATA[ಐಪಿಎಲ್ 2026 ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ: ಟಿವಿ ರೇಟಿಂಗ್ ಮಹಾ ಕುಸಿತ!]]></title>
            <link>https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi</link>
            <guid isPermaLink="true">https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi</guid>
            <pubDate>Sat, 09 May 2026 15:51:31 +0530</pubDate>
            <description><![CDATA[&lt;p&gt;ಪ್ರಸಕ್ತ ಐಪಿಎಲ್ ಸೀಸನ್&zwnj;ನಲ್ಲಿ ಸಾಂಪ್ರದಾಯಿಕ ಟಿವಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಡಿಜಿಟಲ್ ವೇದಿಕೆಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ವೀಕ್ಷಕರು ಟಿವಿಯಿಂದ ಸ್ಮಾರ್ಟ್&zwnj;ಫೋನ್&zwnj;ಗಳಿಗೆ ಸ್ಥಳಾಂತರಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8495m0tezb3j7wmvs6hsv4,imgname-20260427391l-1777315649152.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.9):&lt;/strong&gt; ಭಾರತದ ಕ್ರಿಕೆಟ್ ಹಬ್ಬ ಎಂದೇ ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತನ್ನ 19ನೇ ಆವೃತ್ತಿಯಲ್ಲಿ ವಿಭಿನ್ನ ತಿರುವು ಪಡೆದುಕೊಂಡಿದೆ. ಐಪಿಎಲ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆಯೇ ಅಥವಾ ವೀಕ್ಷಣಾ ಮಾದರಿಯು ಸಂಪೂರ್ಣವಾಗಿ ಬದಲಾಗುತ್ತಿದೆಯೇ ಎಂಬ ಚರ್ಚೆ ಈಗ ಕ್ರೀಡಾಲೋಕದಲ್ಲಿ ಮುನ್ನೆಲೆಗೆ ಬಂದಿದೆ. ಬಾರ್ಕ್ (BARC) ಇಂಡಿಯಾ ಮತ್ತು ಟ್ಯಾಮ್ (TAM) ಸ್ಪೋರ್ಟ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಡೇಟಾ ಪ್ರಕಾರ, ಪ್ರಸಕ್ತ ಸೀಸನ್&zwnj;ನ ಮೊದಲಾರ್ಧದಲ್ಲಿ ಸಾಂಪ್ರದಾಯಿಕ ಟೆಲಿವಿಷನ್ (TV) ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಟಿವಿ ರೇಟಿಂಗ್&zwnj; ಶೇ. 18.8ರಷ್ಟು ಕುಸಿದಿದ್ದರೆ, ಸರಾಸರಿ ವೀಕ್ಷಣೆ ಶೇ. 26ರಷ್ಟು ಇಳಿಮುಖವಾಗಿದೆ. ಕಳೆದ ವರ್ಷಕ್ಕೆ (2025) ಹೋಲಿಸಿದರೆ ಲೀನಿಯರ್ ಟೆಲಿವಿಷನ್ ತಲುಪುವಿಕೆಯೂ ಕ್ಷೀಣಿಸಿದೆ.&lt;/p&gt;&lt;h2&gt;&lt;strong&gt;ಟಿವಿಯಲ್ಲಿ ಇಳಿಮುಖ, ಡಿಜಿಟಲ್&zwnj;ನಲ್ಲಿ ಭರ್ಜರಿ ಏರಿಕೆ&lt;/strong&gt;&lt;/h2&gt;&lt;p&gt;ಇದು ಕೇವಲ ನಾಣ್ಯದ ಒಂದು ಮುಖ ಮಾತ್ರ. ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಡಿಜಿಟಲ್ ವೇದಿಕೆಗಳಲ್ಲಿ ಐಪಿಎಲ್ ಹೊಸ ದಾಖಲೆ ಬರೆಯುತ್ತಿದೆ. ಜಿಯೋಸ್ಟಾರ್ (JioStar) ವರದಿಯ ಪ್ರಕಾರ, ಕೇವಲ ಉದ್ಘಾಟನಾ ವಾರಾಂತ್ಯದಲ್ಲೇ 51.5 ಕೋಟಿಗೂ ಅಧಿಕ ಡಿಜಿಟಲ್ ವೀಕ್ಷಕರು ಲಗ್ಗೆ ಇಟ್ಟಿದ್ದಾರೆ ಮತ್ತು ಒಟ್ಟು 3,200 ಕೋಟಿ ನಿಮಿಷಗಳಷ್ಟು ವೀಕ್ಷಣಾ ಸಮಯ ದಾಖಲಾಗಿದೆ. ಅಂದರೆ, ವೀಕ್ಷಕರು ಮಾಯವಾಗಿಲ್ಲ, ಅವರು ಟಿವಿಯಿಂದ ಸ್ಮಾರ್ಟ್&zwnj;ಫೋನ್&zwnj;ಗಳಿಗೆ ಸ್ಥಳಾಂತರಗೊಂಡಿದ್ದಾರೆ!&lt;/p&gt;&lt;h2&gt;&lt;strong&gt;ವೀಕ್ಷಕರಲ್ಲಿ ಆವರಿಸಿದೆಯೇ 'ಕ್ರಿಕೆಟ್ ಸುಸ್ತು'?&lt;/strong&gt;&lt;/h2&gt;&lt;p&gt;ಐಪಿಎಲ್ ವೀಕ್ಷಣೆಯಲ್ಲಿನ ಕುಸಿತಕ್ಕೆ ವೀಕ್ಷಕರಲ್ಲಿ ಮೂಡಿರುವ ಒಂದು ರೀತಿಯ ಬೇಸರ ಅಥವಾ ಆಯಾಸವೂ ಕಾರಣವಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿ ಪಂದ್ಯದಲ್ಲೂ 220ಕ್ಕೂ ಅಧಿಕ ರನ್ ಗಳಿಸುವುದು, ಬ್ಯಾಟಿಂಗ್&zwnj;ಗೆ ಪೂರಕವಾದ ಫ್ಲಾಟ್ ಪಿಚ್&zwnj;ಗಳು ಮತ್ತು ಸತತ ಸಿಕ್ಸರ್&zwnj;ಗಳ ಅಬ್ಬರದಿಂದ ಪಂದ್ಯಗಳು ಏಕತಾನತೆಯಿಂದ ಕೂಡಿವೆ ಎಂಬ ದೂರು ಕೇಳಿಬರುತ್ತಿದೆ. ಹತ್ತು ವರ್ಷಗಳ ಹಿಂದೆ 200 ರನ್ ಬೆನ್ನಟ್ಟುವುದು ಅಸಾಧ್ಯದ ಮಾತಾಗಿತ್ತು. ಆದರೆ ಈಗ 225 ರನ್&zwnj;ಗಳನ್ನು ಅನಾಯಾಸವಾಗಿ ಬೆನ್ನಟ್ಟುತ್ತಿರುವುದು ಪಂದ್ಯದ ಭಾವನಾತ್ಮಕ ತೀವ್ರತೆಯನ್ನು ಕಡಿಮೆ ಮಾಡಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.&lt;/p&gt;&lt;p&gt;ಈ ವರದಿಯ ಅತ್ಯಂತ ಗಂಭೀರ ಅಂಶವೆಂದರೆ ಟಿವಿ ಜಾಹೀರಾತುದಾರರ ಪಾಲ್ಗೊಳ್ಳುವಿಕೆಯಲ್ಲಿ ಉಂಟಾಗಿರುವ ಶೇ. 31ರಷ್ಟು ಕುಸಿತ. ಫ್ಯಾಂಟಸಿ ಗೇಮಿಂಗ್ ಮತ್ತು ಬೆಟ್ಟಿಂಗ್ ಆ್ಯಪ್&zwnj;ಗಳ ಮೇಲಿನ ನಿರ್ಬಂಧಗಳು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಅಲ್ಲದೆ, ಬ್ರ್ಯಾಂಡ್&zwnj;ಗಳು ಈಗ ಟಿವಿಗಿಂತ ಹೆಚ್ಚಾಗಿ ಡಿಜಿಟಲ್ ಅಭಿಯಾನಗಳು ಮತ್ತು ಇನ್&zwnj;ಫ್ಲುಯೆನ್ಸರ್ ಮಾರ್ಕೆಟಿಂಗ್&zwnj;ಗೆ ಹೆಚ್ಚಿನ ಒತ್ತು ನೀಡುತ್ತಿವೆ.&lt;/p&gt;&lt;h2&gt;&lt;strong&gt;ಬದಲಾದ ವೀಕ್ಷಣಾ ಶೈಲಿ&lt;/strong&gt;&lt;/h2&gt;&lt;p&gt;ಯುವ ವೀಕ್ಷಕರು ಈಗ ಟಿವಿ ಮುಂದೆ ಸತತ ನಾಲ್ಕು ಗಂಟೆಗಳ ಕಾಲ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಾಗಿ, ಮೊಬೈಲ್&zwnj;ನಲ್ಲಿ ಸ್ಕೋರ್ ಚೆಕ್ ಮಾಡುವುದು, ಹೈಲೈಟ್ಸ್ ನೋಡುವುದು ಅಥವಾ ಕನೆಕ್ಟೆಡ್ ಟಿವಿ (Connected TV) ಮೂಲಕ ಸ್ಟ್ರೀಮಿಂಗ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಜೊತೆಗೆ ಫ್ಯಾಂಟಸಿ ಕ್ರಿಕೆಟ್&zwnj;ನಂತಹ ಅಂಶಗಳು ಜನರನ್ನು ಕ್ರಿಕೆಟ್ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿಲ್ಲ, ಬದಲಾಗಿ ಪರಿವರ್ತನೆಯ ಹಂತದಲ್ಲಿದೆ. 2026ರ ಸೀಸನ್ ಭಾರತೀಯ ಕ್ರೀಡಾ ಪ್ರಸಾರ ಇತಿಹಾಸದಲ್ಲಿ ಟಿವಿಯನ್ನು ಡಿಜಿಟಲ್ ಸಂಪೂರ್ಣವಾಗಿ ಹಿಂದಿಕ್ಕಿದ ವರ್ಷವಾಗಿ ನೆನಪಿನಲ್ಲಿ ಉಳಿಯಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/ipl-2026-viewership-drop-tv-ratings-vs-digital-streaming-growth-jiostar-data-san/articleshow-xx7aegi"/>
        </item>
        <item>
            <title><![CDATA[ಹಾರ್ದಿಕ್ ಪಾಂಡ್ಯ ಕಿರಿಕ್, ಐಪಿಎಲ್‌ನಲ್ಲಿ ಗರ್ಲ್‌ಫ್ರೆಂಡ್ ಸಂಸ್ಕೃತಿಗೆ ಬ್ರೇಕ್ ಹಾಕಲು ಮುಂದಾದ ಬಿಸಿಸಿಐ]]></title>
            <link>https://kannada.asianetnews.com/gallery/cricket-sports/hardik-pandya-controversy-bcci-moves-to-curb-girlfriend-culture-in-ipl-y32fg5i</link>
            <guid isPermaLink="true">https://kannada.asianetnews.com/gallery/cricket-sports/hardik-pandya-controversy-bcci-moves-to-curb-girlfriend-culture-in-ipl-y32fg5i</guid>
            <pubDate>Mon, 04 May 2026 16:09:02 +0530</pubDate>
            <description><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಗರ್ಲ್&zwnj;ಫ್ರೆಂಡ್ ಜೊತೆ ಸುತ್ತಾಡುವ, ಪ್ರತಿ ಪಂದ್ಯಕ್ಕೆ, ಹೊಟೆಲ್&zwnj;ಗೆ ತೆರಳುವಾಗ ಜೊತೆಯಲ್ಲಿ ಕರೆದುಕೊಂಡು ಹೋಗುವ ಪದ್ಧತಿಗೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqs1zm3xtr4rdr49xbtw28va,imgname-hardik-pandya-and-arshdeep-singh-1777883664509.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಟೂರ್ನಿಯಲ್ಲಿ ಗರ್ಲ್&zwnj;ಫ್ರೆಂಡ್ ಜೊತೆ ಸುತ್ತಾಡುವ, ಪ್ರತಿ ಪಂದ್ಯಕ್ಕೆ, ಹೊಟೆಲ್&zwnj;ಗೆ ತೆರಳುವಾಗ ಜೊತೆಯಲ್ಲಿ ಕರೆದುಕೊಂಡು ಹೋಗುವ ಪದ್ಧತಿಗೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಹಲವು ಕಟ್ಟು ನಿಟ್ಟಿನ ನಿಯಮ ಜಾರಿಯಲ್ಲಿದೆ. ಆದರೆ ಆಟಗಾರರು ತಮ್ಮ ಗರ್ಲ್&zwnj;ಫ್ರೆಂಡ್ ಕರೆದುಕೊಂಡೇ ಪಂದ್ಯ,ಹೊಟೆಲ್ ಸೇರಿದಂತೆ ಎಲ್ಲೆಡೆ ಸುತ್ತಾಡುವ ಪದ್ಧತಿ ಇದೆ. ಇಷ್ಟು ಐಪಿಎಲ್ ಟೂರ್ನಿಯಲ್ಲಿ ಗರ್ಲ್&zwnj;ಫ್ರೆಂಡ್ ಟಾರ್ಗೆಟ್ ಆಗಿರಲಿಲ್ಲ. ಆದರೆ ಈ ಬಾರಿ ಬಿಸಿಸಿಐ ಗರ್ಲ್&zwnj;ಫ್ರಂಡ್ ಕಲ್ಚರ್&zwnj;ಗೆ ಬ್ರೇಕ್ ಹಾಕಲು ಮುಂದಾಗಿದೆ.&lt;/p&gt;&lt;img&gt;&lt;p&gt;ಐಪಿಎಲ್ ಆಟಗಾರರ ಪೈಕಿ ಹಲವರು ತಮ್ಮ ತಮ್ಮ ಗರ್ಲ್&zwnj;ಫ್ರೆಂಡ್ ಜೊತೆ ಟೀಂ ಬಸ್ ಹತ್ತುತ್ತಿದ್ದಾರೆ. ಇತ್ತ ಡಗೌಟ್&zwnj;ನಲ್ಲಿ ಪೋನ್ ಬಳಕೆ, ಡ್ರೆಸ್ಸಿಂಗ್ ರೂಂನಲ್ಲಿ ಸಿಗರೇಟು ಘಟನೆಗಳಿಂದ ಬಿಸಿಸಿಐ ತೀವ್ರ ಮುಜುಗರಕ್ಕೆ ಈಡಾಗಿದೆ. 2023ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದರೂ ಮತ್ತೆ ಮತ್ತೆ ಕೆಲ ಘಟನೆಗಳು ಬಿಸಿಸಿಐ ಆತಂಕ ಹೆಚ್ಚಿಸುತ್ತಿದೆ.&lt;/p&gt;&lt;img&gt;&lt;p&gt;ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಇಶಾನ್ ಕಿಶನ್ ಹಾಗೂ ಯಶಸ್ವಿ ಜೈಸ್ವಾಲ್ ಸೇರಿದಂತೆ ಕೆಲ ಕ್ರಿಕೆಟಿಗರು ಗರ್ಲ್&zwnj;ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. ಈ ಪೈಕಿ ಹಾರ್ದಿಕ್ ಪಾಂಡ್ಯ ತನ್ನ ಗರ್ಲ್&zwnj;ಫ್ರೆಂಡ್ ಜೊತೆಗಿನ ಸುತ್ತಾಟ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು.&lt;/p&gt;&lt;img&gt;&lt;p&gt;ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಗರ್ಲ್&zwnj;ಫ್ರೆಂಡ್ ಮಹಿಕಾ ಆಗಮಿಸಲು ವಿಳಂಬವಾದ ಕಾರಣ ಅರ್ಧ ಗಂಟೆಗೂ ಹೆಚ್ಟು ಕಾಲ ಟೀಂ ಬಸ್ ನಿಲ್ಲಿಸಲಾಗಿತ್ತು. ಇದು ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇದೇ ಘಟನೆ ಬಿಸಿಸಿಐಗೂ ಇರಿಸು ಮುರಿಸು ತಂದಿತ್ತು. ಹೀಗಾಗಿ ಗರ್ಲ್&zwnj;ಫ್ರೆಂಡ್ ಸಂಸ್ಕೃತಿಗೆ ಬ್ರೇಕ್ ಹಾಕಲು ಬಿಸಿಸಿಐ ಮುಂದಾಗಿದೆ.&lt;/p&gt;&lt;img&gt;&lt;p&gt;ಈಗಲೇ ಕಠಿಣ ನಿಯಮ ಬೇಕು ಎಂದು ಬಿಸಿಸಿಐನ ಹಲವರು ಆಗ್ರಹಿಸಿದ್ದಾರೆ. ವಾರ್ನಿಂಗ್ ನೀಡುವುದಕ್ಕಿಂತ ನಿಯಮ ಮಾಡಿದರೆ ಒಳಿತು ಎಂದಿದ್ದಾರೆ. ಹೊಸ ನಿಯಮದಲ್ಲಿ ಗರ್ಲ್&zwnj;ಫ್ರೆಂಡ್ ಮಾತ್ರವಲ್ಲ, ಜೊತೆಗೆ ಡ್ರೆಸ್ಸಿಂಗ್ ರೂಂನಲ್ಲಿ ನಿಯಮ ಬಾಹಿರವಾಗಿ ಸಿಗರೇಟು, ಫೋನ್ ಬಳಕೆ ಸೇರಿದಂತೆ ಈ ನಿಟ್ಟಿನಲ್ಲೂ ಬಿಸಿಸಿಐ ಕಠಿಣ ನಿಯಮ ಜಾರಿಗೊಳಿಸುತ್ತಿದೆ. 2027ರಿಂದ ಹೊಸ ನಿಯಮ ಜಾರಿಯಾಗುವ ಸಾಧ್ಯತೆ ಇದೆ.&lt;/p&gt;&lt;h2&gt;2027ರ ಐಪಿಎಲ್ ಟೂರ್ನಿಯಿಂದ ಕಠಿಣ ನಿಯಮ&lt;/h2&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/hardik-pandya-controversy-bcci-moves-to-curb-girlfriend-culture-in-ipl-y32fg5i"/>
        </item>
    </channel>
</rss>
