<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 21 Aug 2026 21:48:02 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[ಅದೊಂದು ಕಾರಣಕ್ಕಾಗಿ ಸಚಿನ್‌ಗಿಂತ ಕೊಹ್ಲಿಯೇ ಗ್ರೇಟ್ ಎಂದ ಎಬಿಡಿ..! ಸುಳ್ಳು ಹೇಳಿದ್ರಾ ಡಿವಿಲಿಯರ್ಸ್‌?]]></title>
            <link>https://kannada.asianetnews.com/cricket-sports/virat-kohli-better-than-sachin-tendulkar-overseas-ab-de-villiers-makes-big-statement-kvn/articleshow-1g3foc8</link>
            <guid isPermaLink="true">https://kannada.asianetnews.com/cricket-sports/virat-kohli-better-than-sachin-tendulkar-overseas-ab-de-villiers-makes-big-statement-kvn/articleshow-1g3foc8</guid>
            <pubDate>Thu, 20 Aug 2026 15:23:04 +0530</pubDate>
            <description><![CDATA[ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್&zwnj;ಗಿಂತ ವಿರಾಟ್ ಕೊಹ್ಲಿಯೇ ಶ್ರೇಷ್ಠ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಆದರೆ, ಅಂಕಿಅಂಶಗಳು ಸಚಿನ್ ಪರವಾಗಿದ್ದರೂ, ವಿದೇಶಿ ಸರಣಿಗಳನ್ನು ಗೆಲ್ಲುವ ತಂಡವಾಗಿ ಭಾರತವನ್ನು ರೂಪಿಸಿದ ಕೊಹ್ಲಿಯ ಪ್ರಭಾವವನ್ನು ಎಬಿಡಿ ಶ್ಲಾಘಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01fw64e9y8d5tv2znyyfj6h511,imgname-sachin-virat.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೊಹಾನ್ಸ್&zwnj;ಬರ್ಗ್: ವಿದೇಶಿ ಟೆಸ್ಟ್ ಪಂದ್ಯಗಳ ಪ್ರದರ್ಶನಕ್ಕೆ ಬಂದರೆ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್&zwnj;ಗಿಂತ ವಿರಾಟ್ ಕೊಹ್ಲಿನೇ ಬೆಸ್ಟ್. ಹೀಗೆಂದು ಹೇಳಿರುವುದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್. ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್&zwnj;ನಲ್ಲಿ ಭಾರತ 165 ರನ್&zwnj;ಗಳ ಭರ್ಜರಿ ಜಯ ಸಾಧಿಸಿದ ನಂತರ, ಎಬಿಡಿ ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಈ ಮಾತು ಹೇಳಿದ್ದಾರೆ. ಆರ್&zwnj;ಸಿಬಿಯಲ್ಲಿ ಕೊಹ್ಲಿ ಜೊತೆ ಆಡಿದ್ದ ಎಬಿಡಿ, ತಮ್ಮ ಮಾಜಿ ಸಹ ಆಟಗಾರನನ್ನು ಹಾಡಿ ಹೊಗಳಿದ್ದಾರೆ.&lt;/p&gt;&lt;h2&gt;&lt;strong&gt;ವಿದೇಶಿ ಪಿಚ್&zwnj;ಗಳಲ್ಲಿ ಸಚಿನ್&zwnj;ಗಿಂತ ಕೊಹ್ಲಿ ಬೆಸ್ಟ್?&lt;/strong&gt;&lt;/h2&gt;&lt;p&gt;ವಿದೇಶದ ಬೌನ್ಸಿ ಪಿಚ್&zwnj;ಗಳಲ್ಲಿ ಏಷ್ಯಾದ ಬ್ಯಾಟರ್&zwnj;ಗಳೂ ಮಿಂಚಬಲ್ಲರು ಅಂತ ಮೊದಲು ದಾರಿ ತೋರಿಸಿದ್ದೇ ಸಚಿನ್. ಆದರೆ, ಆ ನಂಬಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದು ವಿರಾಟ್ ಕೊಹ್ಲಿ ಅಂತ ಡಿವಿಲಿಯರ್ಸ್ ಹೇಳಿದ್ದಾರೆ. ಸಚಿನ್ ಶುರುಮಾಡಿದ ದಾರಿಯಲ್ಲಿ ನಡೆದು, ಕೊಹ್ಲಿ ವಿದೇಶಿ ಸರಣಿಗಳಲ್ಲಿ ಭಾರತ ತಂಡದ ಪ್ರದರ್ಶನದ ಮಟ್ಟವನ್ನೇ ಹೆಚ್ಚಿಸಿದರು ಅಂತಾನೂ ಎಬಿಡಿ ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಕಿಅಂಶಗಳನ್ನು ನೋಡಿದರೆ ಕಥೆಯೇ ಬೇರೆ. 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿರುವ ಸಚಿನ್ ರನ್ ಬೇಟೆಯಲ್ಲಿ ಮುಂದಿದ್ದಾರೆ. ವಿಶೇಷ ಅಂದರೆ, ಸಚಿನ್ ಗಳಿಸಿದ ಒಟ್ಟು ರನ್&zwnj;ಗಳಲ್ಲಿ ಶೇ. 55ರಷ್ಟು (8,705 ರನ್) ಬಂದಿದ್ದೇ ವಿದೇಶಿ ನೆಲದಲ್ಲಿ. ಇನ್ನೊಂದೆಡೆ, 123 ಟೆಸ್ಟ್&zwnj;ಗಳಿಂದ 9,230 ರನ್ ಗಳಿಸಿರುವ ಕೊಹ್ಲಿ, ವಿದೇಶದಲ್ಲಿ ಆಡಿದ 66 ಪಂದ್ಯಗಳಿಂದ 4,774 ರನ್ ಗಳಿಸಿದ್ದಾರೆ.&lt;/p&gt;&lt;h3&gt;&lt;strong&gt;SENA ದೇಶಗಳಲ್ಲೂ ಕೊಹ್ಲಿಗಿಂತ ಮುಂದಿದ್ದಾರೆ ಸಚಿನ್:&lt;/strong&gt;&lt;/h3&gt;&lt;p&gt;ಒಟ್ಟಾರೆ ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್&zwnj;ಗಳ ಪಟ್ಟಿಯಲ್ಲಿ ಸದ್ಯ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೇ, ಕಳೆದ ವರ್ಷವಷ್ಟೇ ಟೆಸ್ಟ್&zwnj; ಕ್ರಿಕೆಟ್&zwnj;ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ. ಇನ್ನು SENA(ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿನ ಪ್ರದರ್ಶನವನ್ನು ಗಮನಿಸಿದ್ರೂ ಸಚಿನ್ ಕೊಹ್ಲಿಗಿಂತಲೂ ಕೊಂಚ ಮುಂದಿದ್ದಾರೆ. ಸೆನಾ ದೇಶಗಳ ಎದುರು ಸಚಿನ್ ತೆಂಡೂಲ್ಕರ್ 63 ಪಂದ್ಯಗಳನ್ನು ಆಡಿ 17 ಶತಕ, 23 ಅರ್ಧಶತಕ ಸಹಿತ 51.30 ಬ್ಯಾಟಿಂಗ್ ಸರಾಸರಿಯಲ್ಲಿ 5387 ರನ್ ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸೆನಾ ದೇಶಗಳ ವಿರುದ್ದ 46 ಟೆಸ್ಟ್ ಪಂದ್ಯಗಳನ್ನಾಡಿ 12 ಶತಕ, 14 ಅರ್ಧಶತಕ ಸಹಿತ 42.08ರ ಬ್ಯಾಟಿಂಗ್ ಸರಾಸರಿಯಲ್ಲಿ 3,661 ರನ್ ಬಾರಿಸಿದ್ದಾರೆ.&lt;/p&gt;&lt;p&gt;ಕೇವಲ ಅಂಕಿಅಂಶಗಳನ್ನು ಮೀರಿ ನೋಡಬೇಕು ಅನ್ನೋದು ಎಬಿಡಿ ವಾದ. ವಿದೇಶಿ ಟೆಸ್ಟ್ ಸರಣಿಗಳನ್ನು ಗೆಲ್ಲುವ ತಂಡವಾಗಿ ಭಾರತವನ್ನು ರೂಪಿಸಿದ್ದೇ ಕೊಹ್ಲಿಯ ನಾಯಕತ್ವ ಮತ್ತು ಅವರ ಆಟ ಅಂತ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಸಚಿನ್ ಮತ್ತು ಕೊಹ್ಲಿ ಸೃಷ್ಟಿಸಿದ ಈ ಪ್ರಭಾವ, ಈಗಿನ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಅವರಿಗೂ ಸಹಾಯ ಮಾಡುತ್ತಿದೆ ಅಂತ ಎಬಿಡಿ ಹೇಳಿದ್ದಾರೆ. ತಾಂತ್ರಿಕವಾಗಿ ಅತ್ಯುತ್ತಮ ಕೌಶಲ್ಯ ಹೊಂದಿರುವ ಕೆ.ಎಲ್. ರಾಹುಲ್ ವಿದೇಶದಲ್ಲಿ ಉತ್ತಮ ಸರಾಸರಿಯಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು 100 ರನ್ ಗಳಿಸಿದರೆ ಸಾಲದು, ಅದನ್ನು 180ರವರೆಗೆ ಕೊಂಡೊಯ್ಯಲು ಗಮನ ಹರಿಸಬೇಕು ಅಂತಾನೂ ಡಿವಿಲಿಯರ್ಸ್ ಕಿವಿಮಾತು ನೀಡಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/virat-kohli-better-than-sachin-tendulkar-overseas-ab-de-villiers-makes-big-statement-kvn/articleshow-1g3foc8"/>
        </item>
        <item>
            <title><![CDATA[ಕ್ರಿಮಿನಲ್‌ ಕೇಸ್‌ನಿಂದ ರೈಲ್ವೆ ಉದ್ಯೋಗ ಕಳೆದುಕೊಂಡ; 22 ವರ್ಷಗಳ ಹೋರಾಟದ ಬಳಿಕ ಕೊನೆಗೂ ಕ್ಲೀನ್‌ಚಿಟ್ ಪಡೆದ ಟೀಂ ಇಂಡಿಯಾ ಕ್ರಿಕೆಟಿಗ..! ಮಾಡಿದ ತಪ್ಪೇನು?]]></title>
            <link>https://kannada.asianetnews.com/cricket-sports/former-india-cricketer-jacob-martin-gets-clean-chit-after-22-year-legal-battle-kvn/articleshow-1wbvwvt</link>
            <guid isPermaLink="true">https://kannada.asianetnews.com/cricket-sports/former-india-cricketer-jacob-martin-gets-clean-chit-after-22-year-legal-battle-kvn/articleshow-1wbvwvt</guid>
            <pubDate>Fri, 21 Aug 2026 16:57:28 +0530</pubDate>
            <description><![CDATA[ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ವಂಚನೆ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಪಟಿಯಾಲಾ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ಲೀನ್&zwnj;ಚಿಟ್ ನೀಡಿದ್ದು, ಈ ತೀರ್ಪು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kg05gftads2dg39gpfscd5qc,imgname-jacob-martin-1769532309322.jpeg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ತನ್ನ ಮೇಲೆ ಬಂದಿದ್ದ ಗುರುತರ ಆಪಾದನೆಯ ಬಗ್ಗೆ ಸತತ 22 ವರ್ಷಗಳಿಂದ ಕಾನೂನು ಹೋರಾಟ ಮಾಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಕೊನೆಗೂ ಪಟಿಯಾಲಾ ಹೈಕೋರ್ಟ್ ಕ್ಲೀನ್&zwnj;ಚಿಟ್ ನೀಡಿದೆ. ಹೌದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಇದೀಗ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಆಗಿದ್ದೇನು?&lt;/strong&gt;&lt;/h2&gt;&lt;p&gt;ವಡೋದರಾ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 2004ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಭಾರತ ತಂಡದ ಜತೆಗಿದ್ದರು. ಇಂಗ್ಲೆಂಡ್ ಪ್ರವಾಸ ಮುಗಿಸಿದ ಭಾರತ ತಂಡವು ವಾಪಾಸ್ಸಾಗಿತ್ತು. ಆದರೆ ಜೇಕಬ್ ಮಾರ್ಟಿನ್ ಮಾತ್ರ ವಾಪಾಸ್ಸಾಗಿರಲಿಲ್ಲ. ಜೇಕಬ್ ಮಾರ್ಟಿನ್ ಆರು ತಿಂಗಳ ಕಾಲ ಇಂಗ್ಲೆಂಡ್&zwnj;ನಲ್ಲಿರಲು ವೀಸಾದಲ್ಲಿ ಅವಕಾಶವಿತ್ತು. ವೀಸಾ ಅವಧಿ ಮುಗಿದ ಬಳಿಕವೂ ಜೇಕಬ್ ಮಾರ್ಟಿನ್, ನಕಲಿ ಸ್ಟಾಂಪ್ ಬಳಸಿ ಇಂಗ್ಲೆಂಡ್&zwnj;ನಲ್ಲಿ ಉಳಿದುಕೊಳ್ಳಲು ಬಯಸಿದ್ದರು. ಇದಾದ ಬಳಿಕ ಮತ್ತೆ ನಕಲಿ ಸ್ಟಾಂಪ್ ಬಳಸಿಯೇ ಭಾರತಕ್ಕೆ ವಾಪಾಸ್ಸಾಗಿದ್ದರು. ಇದಾದ ಬಳಿಕ ಪೊಲೀಸ್ ತನಿಖೆ ವೇಳೆಯಲ್ಲಿ ಫ್ರಾಡ್ ಮಾಡಿರುವ ವಿಚಾರ ಸದ್ದು ಮಾಡಿತ್ತು. ಹೀಗಾಗಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಸಾಕಷ್ಟು ಕಾನೂನು ಹೋರಾಟ ನಡೆಸಿದ ಬಳಿಕ ಜೇಕಬ್ ಮಾರ್ಟಿನ್ ವಂಚನೆ ನಡೆಸಿರುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರಿಗೆ ಪಟಿಯಾಲಾ ಕೋರ್ಟ್ ಕೊನೆಗೂ ದೋಷಮುಕ್ತರನ್ನಾಗಿ ತೀರ್ಪು ನೀಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತನಿಖೆಯ ಸಂದರ್ಭದಲ್ಲಿ ಮಾರ್ಟಿನ್ ಪೊಲೀಸರು ಮತ್ತು ಕ್ರಿಕೆಟ್ ಮಂಡಳಿ ಎರಡರೊಂದಿಗೂ ಸಹಕರಿಸಿದರು. ಅಂತಿಮವಾಗಿ ಆರೋಪಮುಕ್ತರಾದ ನಂತರ, ಭಾರತದ ಮಾಜಿ ಕ್ರಿಕೆಟಿಗರು ಈ ತೀರ್ಪನ್ನು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಬಣ್ಣಿಸಿದ್ದಾರೆ&lt;/p&gt;&lt;p&gt;ಆ ಪ್ರಕರಣ ಮುಗಿದ ನಂತರ ಮಾತನಾಡಿದ ಅವರು, 'ಈಗ, 22 ವರ್ಷಗಳ ಬಳಿಕ... ಈ 22 ವರ್ಷಗಳ ಅವಧಿಯಲ್ಲಿ ನನಗೆ ಬಿಸಿಸಿಐನಿಂದಲೂ ಯಾವುದೇ ಉತ್ತರ ಸಿಗಲಿಲ್ಲ; ರೈಲ್ವೆಯಲ್ಲಿದ್ದ ನನ್ನ ಕೆಲಸವನ್ನೂ ನಾನು ಕಳೆದುಕೊಂಡೆ. ಇದರಿಂದಾಗಿ ನನಗೆ ಸಾಕಷ್ಟು ಒತ್ತಡವಿತ್ತು, ಆದರೆ ಈಗ ಬಂದಿರುವ ಈ ತೀರ್ಪು... ನನಗೆ ಕ್ಲೀನ್ ಚಿಟ್ (ದೋಷಮುಕ್ತಿ) ಸಿಕ್ಕಿದೆ; ಇದು ನನ್ನ ಜೀವನದಲ್ಲಿ ಒಂದು ದೊಡ್ಡ ತಿರುವು. 22 ವರ್ಷಗಳ ನಂತರ ಬಂದಿರುವ ಈ ತೀರ್ಪು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ಬದಲಾವಣೆಯನ್ನು ತಂದಿದೆ,&quot; ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.&lt;/p&gt;&lt;h3&gt;&lt;strong&gt;ಜೇಕಬ್ ಮಾರ್ಟಿನ್ ಕ್ರಿಕೆಟ್ ಟ್ರ್ಯಾಕ್&zwnj; ರೆಕಾರ್ಡ್:&lt;/strong&gt;&lt;/h3&gt;&lt;p&gt;ವಿದರ್ಭ ಮೂಲದ ಬಲಗೈ ಬ್ಯಾಟರ್ ಜೇಕಬ್ ಮಾರ್ಟಿನ್, 1999ರಿಂದ 2001ರ ಅವಧಿಯಲ್ಲಿ ಟೀಂ ಇಂಡಿಯಾ ಪರ 10 ಏಕದಿನ ಪಂದ್ಯಗಳನ್ನಾಡಿ 22ರ ಬ್ಯಾಟಿಂಗ್ ಸರಾಸರಿಯಲ್ಲಿ 158 ರನ್ ಬಾರಿಸಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗಿಂತ ಜೇಕಬ್ ದೇಶಿ ಕ್ರಿಕೆಟ್&zwnj;ನಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಜೇಕಬ್ ಮಾರ್ಟಿನ್ 138 ಪ್ರಥಮ ದರ್ಜೆ ಪಂದ್ಯಗಳಿಂದ 9,192, 101 ಲಿಸ್ಟ್&zwnj; ಎ ಪಂದ್ಯಗಳಿಂದ 2,948 ರನ್ ಹಾಗೂ ಎರಡು ಟಿ20 ಪಂದ್ಯಗಳಿಂದ 14 ರನ್ ಸಿಡಿಸಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/former-india-cricketer-jacob-martin-gets-clean-chit-after-22-year-legal-battle-kvn/articleshow-1wbvwvt"/>
        </item>
        <item>
            <title><![CDATA[ಗಾಲೆ ಟೆಸ್ಟ್ ಸೋಲಿನ ಬೆನ್ನಲ್ಲೇ ಲಂಕಾದಲ್ಲಿ ಮೇಜರ್ ಚೇಂಜ್; ಕೊಲಂಬೊ ಟೆಸ್ಟ್‌ಗೆ ಎರಡು ಹೊಸ ಆಟಗಾರರಿಗೆ ಬುಲಾವ್!]]></title>
            <link>https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs</link>
            <guid isPermaLink="true">https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs</guid>
            <pubDate>Fri, 21 Aug 2026 18:54:12 +0530</pubDate>
            <description><![CDATA[ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಭಾರತದೆದುರು ಸೋತ ಬಳಿಕ, ಶ್ರೀಲಂಕಾ ತಂಡವು ಕೊಲಂಬೊದಲ್ಲಿನ ಎರಡನೇ ಟೆಸ್ಟ್&zwnj;ಗೆ ಎರಡು ಪ್ರಮುಖ ಬದಲಾವಣೆ ಮಾಡಿದೆ. ಸರಣಿ ಸಮಬಲಗೊಳಿಸುವ ಗುರಿಯೊಂದಿಗೆ, ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್&zwnj;ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0j3d0cc7zjxnrjvhwdp4yf6,imgname-arachike-1787313947020.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಲಂಬೊ: ಭಾರತ ವಿರುದ್ಧದ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಹೀನಾಯವಾಗಿ ಸೋತ ನಂತರ, ಶ್ರೀಲಂಕಾ ತಂಡವು ಕೊಲಂಬೊದಲ್ಲಿ ನಡೆಯಲಿರುವ ನಿರ್ಣಾಯಕ ಎರಡನೇ ಟೆಸ್ಟ್&zwnj; ಪಂದ್ಯಕ್ಕೆ ತನ್ನ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸರಣಿಯನ್ನು ಸಮಬಲ ಮಾಡಿಕೊಳ್ಳುವ ಗುರಿಯೊಂದಿಗೆ, ಹೊಸ ಬ್ಯಾಟರ್ ಕಾಮಿಲ್ ಮಿಶಾರ ಮತ್ತು ಆಲ್&zwnj;ರೌಂಡರ್ ಸಹನ್ ಅರಾಚಿಗೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.&lt;/p&gt;&lt;h2&gt;&lt;strong&gt;ಲಂಕಾ ತಂಡದಲ್ಲಿ ಎರಡು ಹೊಸ ಮುಖಗಳಿಗೆ ಮಣೆ&lt;/strong&gt;&lt;/h2&gt;&lt;p&gt;ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಭಾರತ 165 ರನ್&zwnj;ಗಳ ಭರ್ಜರಿ ಜಯ ಸಾಧಿಸಿ, ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಈಗ ರಮೇಶ್ ಮೆಂಡಿಸ್ ಬದಲಿಗೆ ತಂಡಕ್ಕೆ ಬಂದಿರುವ ಅರಾಚಿಗೆ, ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವುದರ ಜೊತೆಗೆ ಆಫ್ ಸ್ಪಿನ್ನರ್ ಆಗಿಯೂ ತಂಡಕ್ಕೆ ನೆರವಾಗಲಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ಮತ್ತು ಭಾರತ 'ಎ' ತಂಡದ ವಿರುದ್ಧದ ಸರಣಿಯಲ್ಲಿ ಅರಾಚಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಅವರು 4,365 ರನ್ ಮತ್ತು 63 ವಿಕೆಟ್&zwnj;ಗಳನ್ನು ಪಡೆದಿದ್ದಾರೆ.&lt;/p&gt;&lt;p&gt;ಇನ್ನು, ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಎಡಗೈ ಬ್ಯಾಟರ್ ಕಾಮಿಲ್ ಮಿಶಾರ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನಿಶಾನ್ ಮದುಶಂಕ ಬದಲಿಗೆ ತಂಡಕ್ಕೆ ಬಂದಿರುವ ಮಿಶಾರ, ಲಹಿರು ಉಡಾರ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಭಾರತದ ಎಡಗೈ ಸ್ಪಿನ್ನರ್&zwnj;ಗಳಾದ ಮಾನವ್ ಸುತಾರ್ ಮತ್ತು ರವೀಂದ್ರ ಜಡೇಜಾ ದಾಳಿಯನ್ನು ಎದುರಿಸಲು ಮಿಶಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್&zwnj; ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್ 10 ವಿಕೆಟ್ ಕಬಳಿಸುವ ಮೂಲಕ ಲಂಕಾ ತಂಡದ ಬ್ಯಾಟರ್&zwnj;ಗಳು ಪರದಾಡುವಂತೆ ಮಾಡಿದ್ದರು. ಮಾನವ್&zwnj; ಸುತಾರ್&zwnj;ಗೆ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡಾ ಉತ್ತಮ ಸಾಥ್ ನೀಡಿದ್ದರು. ಇದೀಗ ಈ ಇಬ್ಬರು ಬೌಲರ್&zwnj;ಗಳಿಗೆ ಕೌಂಟರ್ ನೀಡಲು ಲಂಕಾ ಟೀಮ್&zwnj; ಮ್ಯಾನೇಜ್&zwnj;ಮೆಂಟ್ ರಣತಂತ್ರ ಹೆಣೆದಿದೆ.&lt;/p&gt;&lt;p&gt;ಮೊದಲ ಟೆಸ್ಟ್ ವೇಳೆ ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದ ದಿನೇಶ್ ಚಾಂಡಿಮಲ್ ಈ ಪಂದ್ಯದಲ್ಲೂ ಆಡುವುದಿಲ್ಲ. ಇದಲ್ಲದೆ, ಕುಸಾಲ್ ಮೆಂಡಿಸ್ (ಸ್ನಾಯು ಸೆಳೆತ) ಮತ್ತು ಪತುಮ್ ನಿಸ್ಸಂಕ (ಬೆರಳಿಗೆ ಶಸ್ತ್ರಚಿಕಿತ್ಸೆ) ಅವರ ಸೇವೆಯೂ ಲಂಕಾ ತಂಡಕ್ಕೆ ಲಭ್ಯವಿರುವುದಿಲ್ಲ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಸೋತು ಮುಖಭಂಗ ಅನುಭವಿಸಿರುವ ಧನಂಜಯ ಡಿ'ಸಿಲ್ವಾ ನೇತೃತ್ವದ ಲಂಕಾ ತಂಡವು, ಎರಡನೇ ಪಂದ್ಯದಲ್ಲಿ ಪ್ರವಾಸಿ ಗಿಲ್ ಪಡೆಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ.&lt;/p&gt;&lt;h3&gt;&lt;strong&gt;ಎರಡನೇ ಟೆಸ್ಟ್&zwnj;ಗೆ ಶ್ರೀಲಂಕಾ ತಂಡ:&lt;/strong&gt;&lt;/h3&gt;&lt;p&gt;ಲಹಿರು ಉಡಾರ, ಕಾಮಿಲ್ ಮಿಶಾರ, ಪಸಿಂದು ಸೂರ್ಯಬಂದರ, ಕಾಮಿಂದು ಮೆಂಡಿಸ್ (ಉಪನಾಯಕ), ಧನಂಜಯ ಡಿ ಸಿಲ್ವ (ನಾಯಕ), ಸಹನ್ ಅರಾಚಿಗೆ, ಸೋನಾಲ್ ದಿನುಶ, ನಿರೋಷನ್ ಡಿಕ್ವೆಲ್ಲ, ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಮಿಲನ್ ರತ್ನಾಯಕೆ, ಲಹಿರು ಕುಮಾರ, ಅಸಿತ ಫೆರ್ನಾಂಡೊ, ವಿಶ್ವ ಫೆರ್ನಾಂಡೊ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/sri-lanka-make-two-changes-for-2nd-test-against-india-after-165-run-defeat-kvn/articleshow-20lv3fs"/>
        </item>
        <item>
            <title><![CDATA[WTC Final: ಗಂಭೀರ್ ತಂತ್ರಗಳಿಂದ ಟೀಂ ಇಂಡಿಯಾ ಕಥೆ ಮುಗೀತಾ? ಫೈನಲ್ ತಲುಪೋಕೆ ಇನ್ನೂ ಚಾನ್ಸ್ ಇದೆಯಾ?]]></title>
            <link>https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu</link>
            <guid isPermaLink="true">https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu</guid>
            <pubDate>Fri, 21 Aug 2026 18:34:09 +0530</pubDate>
            <description><![CDATA[ಹಲವು ಆಂತರಿಕ ಸವಾಲುಗಳು ಮತ್ತು ಹಿರಿಯ ಆಟಗಾರರ ನಿರ್ಗಮನದಿಂದ ಸಂಕಷ್ಟದಲ್ಲಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಉಳಿದಿರುವ 8 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಬೇಕಾದ ಕಠಿಣ ಪರಿಸ್ಥಿತಿಯಲ್ಲಿದ್ದು, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cyyjfksjavhb2fneq6a5st,imgname-20260819211l-1787141507567.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೌತಮ್ ಗಂಭೀರ್ ಅವರ ನಿರಂತರ ಪ್ರಯೋಗಗಳು ಮತ್ತು ತಂಡದ ನಿಲುವು, ಸರಿಯಾದ ಮೂರನೇ ಕ್ರಮಾಂಕದ ಬ್ಯಾಟರ್ ಇಲ್ಲದಿರುವುದು, ಫಸ್ಟ್ ಕ್ಲಾಸ್ ಕ್ರಿಕೆಟ್&zwnj;ನಲ್ಲಿ ಸಾಕಷ್ಟು ಅನುಭವವಿಲ್ಲದ ಆಟಗಾರರಿಗೆ ತಂಡದಲ್ಲಿ ನೇರ ಪ್ರವೇಶ ಸಿಗುತ್ತಿರುವುದು, ಕೇವಲ ಯುವ ಆಟಗಾರರಿಂದಲೇ ತುಂಬಿರುವ ಪೇಸ್ ಬೌಲಿಂಗ್ ವಿಭಾಗ... ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಕೆಲ ಆಟಗಾರರಿಗೆ ಮಾತ್ರ ಹೆಚ್ಚು ಅವಕಾಶಗಳನ್ನು ನೀಡಿ, ಉಳಿದವರನ್ನು ಕಡೆಗಣಿಸುವುದು, ಜಸ್ಪ್ರೀತ್ ಬುಮ್ರಾರಂತಹ ಅದ್ಭುತ ಪ್ರತಿಭೆ ಗಾಯದಿಂದಾಗಿ ತಂಡಕ್ಕೆ ಅಲಭ್ಯರಾಗಿರುವುದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರ ಹಠಾತ್ ನಿರ್ಗಮನ. ಹೀಗೆ ಟೀಂ ಇಂಡಿಯಾ ಒಂದು ರೀತಿ ಬದಲಾವಣೆಯ ಹಾದಿಯಲ್ಲಿದೆ.&lt;/p&gt;&lt;p&gt;ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದಂತಹ ತಂಡಗಳಿಗಿಂತಲೂ ಕೆಳಗಿದೆ. ಐದನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಮೇಲೆ ಹೇಳಿದ ಕಾರಣಗಳು ಸಾಕಾಗುವುದಿಲ್ಲ. ಯಾಕಂದ್ರೆ, ಭಾರತ ಆಡಿರುವ 10 ಟೆಸ್ಟ್&zwnj;ಗಳಲ್ಲಿ 5ರಲ್ಲಿ ಗೆದ್ದು, 4ರಲ್ಲಿ ಸೋತು, 1 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಒಟ್ಟು 64 ಪಾಯಿಂಟ್ಸ್ ಗಳಿಸಿ, 53.3% ಪರ್ಸೆಂಟೇಜ್ ಹೊಂದಿದೆ. ಈ ನಾಲ್ಕು ಸೋಲುಗಳಲ್ಲಿ ಎರಡು ಇಂಗ್ಲೆಂಡ್ ಪ್ರವಾಸದಲ್ಲಾದರೆ, ಇನ್ನೆರಡು ತವರಿನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಬಂದಿದ್ದು. ಒಂದು ಕಾಲದಲ್ಲಿ ಯಾವುದೇ ತಂಡವನ್ನು ತವರಿನಲ್ಲಿ ಸೋಲಿಸುವ ತಾಕತ್ತು ಭಾರತಕ್ಕಿತ್ತು.&lt;/p&gt;&lt;p&gt;ಆದರೆ, ಇಂದಿನ ಪರಿಸ್ಥಿತಿ ಹಾಗಿಲ್ಲ. ಹಾಗಾಗಿಯೇ, ಈ ಸಬೂಬುಗಳು ಸಾಕಾಗುವುದಿಲ್ಲ. ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ಮುಗಿದರೆ, ಈ WTC ಸೈಕಲ್&zwnj;ನಲ್ಲಿ ಭಾರತಕ್ಕೆ ಇನ್ನು ಕೇವಲ ಎರಡು ಸರಣಿಗಳು ಮಾತ್ರ ಬಾಕಿ ಉಳಿಯುತ್ತವೆ. ಹಾಗಾದರೆ, ಶುಭ್ಮನ್ ಗಿಲ್ ನಾಯಕತ್ವದ ತಂಡಕ್ಕೆ ಫೈನಲ್ ತಲುಪುವ ಅವಕಾಶ ಇದೆಯಾ?&lt;/p&gt;&lt;h2&gt;&lt;strong&gt;ಭಾರತದ ಮುಂದಿದೆ ಅಗ್ನಿ ಪರೀಕ್ಷೆ&lt;/strong&gt;&lt;/h2&gt;&lt;p&gt;ಗಾಲೆ ಟೆಸ್ಟ್&zwnj;ನಲ್ಲಿ ಭಾರತ ತಂಡದ ಗೆಲುವು, ತಂಡದ ಪಾಯಿಂಟ್ಸ್ ಶೇಕಡಾವಾರು ಪ್ರಮಾಣವನ್ನು 48.15% ರಿಂದ 53.33% ಕ್ಕೆ ಏರಿಸಿದೆ. ಇನ್ನು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್, ನಂತರ ನ್ಯೂಜಿಲೆಂಡ್ ವಿರುದ್ಧ ಅವರದೇ ನೆಲದಲ್ಲಿ ಎರಡು ಟೆಸ್ಟ್&zwnj;ಗಳ ಸರಣಿ, ಆ ಬಳಿಕ ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸದಲ್ಲಿ ಐದು ಪಂದ್ಯಗಳ ಸರಣಿ ನಡೆಯಲಿದೆ. ಅಂದರೆ, ಈ ಚಾಂಪಿಯನ್&zwnj;ಶಿಪ್ ಸೈಕಲ್&zwnj;ನಲ್ಲಿ ಭಾರತಕ್ಕೆ ಒಟ್ಟು 8 ಟೆಸ್ಟ್&zwnj;ಗಳು ಬಾಕಿ ಇವೆ.&lt;/p&gt;&lt;p&gt;ಕಳೆದ WTC ಸೈಕಲ್&zwnj;ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಫೈನಲ್ ತಲುಪಿದ್ದವು. ದಕ್ಷಿಣ ಆಫ್ರಿಕಾದ ಪಾಯಿಂಟ್ಸ್ ಶೇಕಡಾವಾರು 69.4% ಮತ್ತು ಆಸ್ಟ್ರೇಲಿಯಾದ್ದು 67.54% ಇತ್ತು. ಸದ್ಯ ಭಾರತದ ಪರ್ಸೆಂಟೇಜ್ 53.3%. ಫೈನಲ್ ತಲುಪಬೇಕಾದರೆ ಕನಿಷ್ಠ 60% ಆದರೂ ಬೇಕು. ಅಂದರೆ, ಭಾರತಕ್ಕೆ 66 ಪಾಯಿಂಟ್ಸ್ ಅವಶ್ಯಕತೆ ಇದೆ.&lt;/p&gt;&lt;h3&gt;&lt;strong&gt;ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ಪಾಯಿಂಟ್ಸ್ ಹಂಚಿಕೆ ಹೀಗಿದೆ:&amp;nbsp;&lt;/strong&gt;&lt;/h3&gt;&lt;p&gt;ಗೆಲುವಿಗೆ 12, ಟೈ ಆದರೆ 6, ಡ್ರಾ ಆದರೆ 4 ಮತ್ತು ಸೋತರೆ ಶೂನ್ಯ ಪಾಯಿಂಟ್ಸ್. ಒಟ್ಟು ಗಳಿಸಿದ ಪಾಯಿಂಟ್ಸ್ ಅನ್ನು, ಆಡಿದ ಪಂದ್ಯಗಳ ಒಟ್ಟು ಪಾಯಿಂಟ್ಸ್&zwnj;ನಿಂದ ಭಾಗಿಸಿ 100ರಿಂದ ಗುಣಿಸಿದರೆ ಶೇಕಡಾವಾರು ಸಿಗುತ್ತದೆ. ಉದಾಹರಣೆಗೆ, ಭಾರತ 10 ಟೆಸ್ಟ್ ಆಡಿದೆ, ಅಂದರೆ ಒಟ್ಟು 120 ಪಾಯಿಂಟ್&zwnj;ಗಳಿಗೆ ಸ್ಪರ್ಧಿಸಿದೆ. ಇದರಲ್ಲಿ 64 ಪಾಯಿಂಟ್ಸ್ ಗಳಿಸಿದೆ. (64/120)*100 = 53.3%.&lt;/p&gt;&lt;p&gt;ಈ 66 ಪಾಯಿಂಟ್ಸ್ ಗುರಿ ಮುಟ್ಟಲು ಭಾರತ, ಬಾಕಿ ಇರುವ 8 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಿ ಗೆದ್ದು, 2 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಬೇಕು. ಆಗ 68 ಪಾಯಿಂಟ್ಸ್ ಸಿಗುತ್ತದೆ. 6 ಪಂದ್ಯ ಗೆದ್ದರೆ 72 ಪಾಯಿಂಟ್ಸ್ ಆಗುತ್ತದೆ. 68 ಪಾಯಿಂಟ್ಸ್ ಗಳಿಸಿದರೆ, ಭಾರತದ ಪರ್ಸೆಂಟೇಜ್ 61% ತಲುಪಬಹುದು. ಆದರೆ, ಇದು ಕೂಡ ಸುರಕ್ಷಿತವಲ್ಲ. ಉಳಿದ 8 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದರೆ ಮಾತ್ರ ಭಾರತ 68% ಕ್ಕಿಂತ ಹೆಚ್ಚು ಗಳಿಸಿ ನಿರಾಳವಾಗಬಹುದು.&lt;/p&gt;&lt;p&gt;ಆದರೆ, ಇಲ್ಲಿ ದೊಡ್ಡ ಸವಾಲು ಇರುವುದೇ ಎದುರಾಳಿಗಳಿಂದ. ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ವಿಜೇತ ಆಸ್ಟ್ರೇಲಿಯಾ ಮತ್ತು ಬಲಿಷ್ಠ ನ್ಯೂಜಿಲೆಂಡ್ ತಂಡಗಳು. ಕಿವೀಸ್ ವಿರುದ್ಧ ಅವರದೇ ನೆಲದಲ್ಲಿ ಆಡುವುದು ಭಾರತಕ್ಕೆ ಸುಲಭವಲ್ಲ. ಇತ್ತ ಆಸ್ಟ್ರೇಲಿಯಾ ತಂಡಕ್ಕೆ ಭಾರತದ ಪಿಚ್&zwnj;ಗಳು ಹೊಸದೇನಲ್ಲ. ಈ ಹಿಂದೆ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಭಾರತವನ್ನು ಕ್ಲೀನ್ ಸ್ವೀಪ್ ಮಾಡಿದ್ದವು. ಹಾಗಾಗಿ, ಆಸ್ಟ್ರೇಲಿಯಾವನ್ನು ಸುಲಭವಾಗಿ ಮಣಿಸಬಹುದು ಎಂದು ಹೇಳಲಾಗದು.&lt;/p&gt;&lt;p&gt;ಹೀಗಾಗಿ, ಭಾರತದ ಫೈನಲ್ ಪ್ರವೇಶದ ಸಾಧ್ಯತೆಗಳು ತುಂಬಾ ಕಡಿಮೆ. ಒಂದು ಸಣ್ಣ ತಪ್ಪು ಕೂಡ ದಾರಿ ತಪ್ಪಿಸಬಹುದು. ಇಲ್ಲಿಂದ ಮುಂದಕ್ಕೆ ಪ್ರತಿ ಎಸೆತವೂ ನಿರ್ಣಾಯಕ ಎನ್ನುವುದರಲ್ಲಿ ಅನುಮಾನವಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/wtc-final-race-can-shubman-gill-led-team-india-still-qualify-for-the-final-kvn/articleshow-3bygysu"/>
        </item>
        <item>
            <title><![CDATA[ಸಚಿನ್ ತೆಂಡೂಲ್ಕರ್‌ಗೆ ಮೊದಲ ಬ್ಯಾಟ್ ನೀಡಿದ ಕಂಪನಿಗೆ ಸಂಕಷ್ಟ, ಮುಚ್ಚುವ ಭೀತಿಯಲ್ಲಿ ಕಾಶ್ಮೀರಿ ವಿಲೋ]]></title>
            <link>https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou</link>
            <guid isPermaLink="true">https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou</guid>
            <pubDate>Fri, 21 Aug 2026 18:48:40 +0530</pubDate>
            <description><![CDATA[&lt;p&gt;ಸಚಿನ್ ತೆಂಡೂಲ್ಕರ್ ದಿಗ್ಗಜನಾಗಿ ಮಾಡಿದ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಸಚಿನ್ ತೆಂಡೂಲ್ಕರ್&zwnj;ಗೆ ಮೊದಲ ಬ್ಯಾಟ್ ನೀಡಿದ ಕಂಪನಿ ಇದು. ಹಲವು ದಿಗ್ಗಜರು ಬಳಸುತ್ತಿರುವುದು ಇದೇ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಮುಚ್ಚುವ ಭೀತಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j7hh9zm5ty6nkycs3jh6t7,imgname-kashmiri-willow-bat-under-threat-1787318289724.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.21) &lt;/strong&gt;ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಆಟಕ್ಕೆ ನೆರವಾಗಿದ್ದ ಕಾಶ್ಮೀರ ವಿಲೋ ಬ್ಯಾಟ್. ಸಹೋದರಿ, ಆಪ್ತರು ಸಚಿನ್&zwnj;ಗೆ ಕೊಡಿಸಿದ ಮೊದಲ ಬ್ಯಾಟ್ ಕಾಶ್ಮೀರಿ ವಿಲೋ ಬ್ಯಾಟ್. ಬಳಿಕ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಬ್ಯಾಟ್ ಹಿಡಿದೇ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್&zwnj;ನ ದಿಗ್ಗಜನಾಗಿ ಮಾಡಿದ ಈ ಕಾಶ್ಮೀರ ವಿಲೋ ಕಂಪನಿ ಇದೀಗ ಸಂಕಷ್ಟದಲ್ಲಿದೆ. ಮರ ಸೇರಿದಂತೆ ಕಚ್ಚಾ ವಸ್ತು ಕೊರತೆಯಿಂದ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ತೀವ್ರ ಆತಂಕ ಎದುರಿಸುತ್ತಿದೆ.&lt;/p&gt;&lt;h2&gt;ಮರಗಳೇ ಇಲ್ಲದೆ ಸಮಸ್ಯೆ&lt;/h2&gt;&lt;p&gt;ಕಾಶ್ಮೀರದಲ್ಲಿ ಹಲವು ಬ್ಯಾಟ್ ಕಂಪನಿಗಳು ತಲೆ ಎತ್ತಿದೆ. ಆದರೆ ಕಾಶ್ಮೀರ ವಿಲೋ ಕಂಪನಿ ಅತ್ಯಂತ ಹಳೇಯ ಕಂಪನಿ. ಆಸ್ಟ್ರೇಲಿಯಾ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರು ಇಲ್ಲಿಂದ ಬ್ಯಾಟ್ ಪಡೆದುಕೊಂಡಿದ್ದಾರೆ. ಆದರೆ ಇದೀಗ ಹಲವು ಕಂಪನಿಗಳು ಬ್ಯಾಟ್ ಉತ್ಪಾದನೆಯಲ್ಲಿ ತೊಡಗಿದೆ. ಕಾಶ್ಮೀರದಲ್ಲಿ ಸಿಗುವ ಸಾಲಿಕ್ಸ್ ಆಲ್ಬಾ ಜಾತಿಯ ಮರಗಳನ್ನು ಬ್ಯಾಟ್ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ಆದರೆ ಹಲವು ಕಂಪನಿಗಳು ಅತಿಯಾಗಿ ಈ ಮರಗಳನ್ನು ಬಳಸುತ್ತಿದ್ದಾರೆ. ಹಲವು ಕಂಪನಿಗಳು ಚಿಕ್ಕ ಮರಗಳನ್ನು ಕಡಿಯುತ್ತಿದ್ದಾರೆ. ಇತ್ತ ಗಿಡಗಳನ್ನು ನೆಡುವ ಪ್ರಕ್ರಿಯೆ ಮಾಡುತ್ತಿಲ್ಲ. ಹೀಗಾಗಿ ಮರಗಳ ಕೊರತೆ ಎದುರಾಗಿದೆ. ಶೇಕಡಾ 40 ರಿಂದ 50ರಷ್ಟು ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಪರಿಣಾಮ ಕಾಶ್ಮೀರ ವಿಲೋ ಬ್ಯಾಟ್ ತೀವ್ರ ಸಮಸ್ಯೆ ಎದುರಿಸುತ್ತಿದೆ.&lt;/p&gt;&lt;h2&gt;ಇಂಗ್ಲೀಷ್ ವಿಲೋಗೆ ಪೈಪೋಟಿ ನೀಡಿದ್ದ ಕಾಶ್ಮೀರ ವಿಲೋ&lt;/h2&gt;&lt;p&gt;ಕ್ರಿಕೆಟ್&zwnj;ನಲ್ಲಿ ಇಂಗ್ಲೀಷ್ ವಿಲೋ ಬ್ಯಾಟ್ ಅತ್ಯಂತ ಜನಪ್ರಿಯ. ಆದರೆ ಇದು ದುಬಾರಿಯಾಗಿತ್ತು. ಹೀಗಾಗಿ ಇಂಗ್ಲೀಷ್ ವಿಲೋಗೆ ಪ್ರತಿಯಾಗಿ ಕಡಿಮೆ ಬೆಲೆಯಲ್ಲಿ ಹಾಗೂ ಅತ್ಯುತ್ತಮ ಗುಣಮಟ್ಟದಲ್ಲಿ ಕಾಶ್ಮೀರ ವಿಲೋ ಬ್ಯಾಟ್ ಕಂಪನಿ ಆರಂಭಗೊಂಡಿತ್ತು. ಹಲವು ದೇಶಗಳ ಕ್ರಿಕೆಟಿಗರು ಕಾಶ್ಮೀರ ವಿಲೋ ಬ್ಯಾಟ್ ಬಳಸುತ್ತಿದ್ದಾರೆ.&lt;/p&gt;&lt;h2&gt;ಅಕ್ರಮವಾಗಿ ಮರಗಳ ಸಾಗಾಟ&lt;/h2&gt;&lt;p&gt;ಫ್ಲೈವುಡ್ ಸೇರಿದಂತೆ ಇತರ ಬಳಕೆಗೆ ಈ ಮರಗಳನ್ನು ಬಳಸಲಾಗುತ್ತಿದೆ. ಇದರಿಂದ ಮರಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪರಿಣಾಮ ಕಾಶ್ಮೀರ ವಿಲೋ ಸೇರಿದಂತೆ ಬ್ಯಾಟ್ ಕಂಪನಿಗಳಿಗೆ ಸಮಸ್ಯೆ ಎದುರಾಗಿದೆ. ಸಚಿನ್ ತೆಂಡೂಲ್ಕರ್ ಹಲವು ಬಾರಿ ಕಾಶ್ಮೀರ ವಿಲೋ ಬ್ಯಾಟ್ ಕುರಿತು ಹೇಳಿದ್ದಾರೆ. ತನ್ನ ಆರಂಭಿಕ ದಿನಗಳಲ್ಲಿ ಸಹೋದರಿ ಕೊಡಿಸಿದ ಕಾಶ್ಮೀರ ವಿಲೋ ಬ್ಯಾಟ್ ಮೂಲಕ ಕ್ರಿಕೆಟ್ ಆರಂಭಿಸಿದ ಘಟನೆಯನ್ನು ವಿವರಿಸಿದ್ದಾರೆ.&lt;/p&gt;&lt;p&gt;2024ರಲ್ಲಿ ಸಚಿನ್ ತೆಂಡೂಲ್ಕರ್ ಕಾಶ್ಮೀರ ವಿಲೋ ಕಂಪನಿಗೆ ಭೇಟಿ ನೀಡಿದ್ದರು. ಕಾಶ್ಮೀರ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಬ್ಯಾಟ್ ಕಂಪನಿಗೆ ಭೇಟಿ ನೀಡಿದ್ದರು. ತನ್ನ ಮೊದಲ ಬ್ಯಾಟ್ ಹಾಗೂ ಕಂಪನಿಯ ಕುರಿತು ಸಚಿನ್ ತೆಂಡೂಲ್ಕರ್ ವಿವರಣೆ ನೀಡಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/sachin-tendulkar-first-bat-company-in-trouble-kashmiri-willow-industry-under-threat/articleshow-4yaoiou"/>
        </item>
        <item>
            <title><![CDATA[ಸಚಿನ್ ತೆಂಡೂಲ್ಕರ್ ಅಪರೂಪದ ವಿಶ್ವದಾಖಲೆ ಸರಿಗಟ್ಟಿದ ಜೋ ರೂಟ್! ಪಾಕ್ ವಿರುದ್ಧ ಇಂಗ್ಲೆಂಡ್ ನಾಯಕನ ಅಮೋಘ ಸಾಧನೆ]]></title>
            <link>https://kannada.asianetnews.com/cricket-sports/joe-root-equals-sachin-tendulkar-test-record-with-68th-half-century-against-pakistan-kvn/articleshow-83nhp2w</link>
            <guid isPermaLink="true">https://kannada.asianetnews.com/cricket-sports/joe-root-equals-sachin-tendulkar-test-record-with-68th-half-century-against-pakistan-kvn/articleshow-83nhp2w</guid>
            <pubDate>Fri, 21 Aug 2026 12:44:12 +0530</pubDate>
            <description><![CDATA[ಪಾಕಿಸ್ತಾನ ವಿರುದ್ಧದ ಟೆಸ್ಟ್&zwnj;ನಲ್ಲಿ ಅರ್ಧಶತಕ ಬಾರಿಸಿದ ಜೋ ರೂಟ್, ಅತಿ ಹೆಚ್ಚು ಟೆಸ್ಟ್ ಅರ್ಧಶತಕಗಳ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ, ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಇತಿಹಾಸದಲ್ಲಿ ನಾಯಕನಾಗಿ 3000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kbqmz076hxxegb48tea34d9d,imgname-sachin-tendulkar-and-joe-root-1764951556325.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಡಿಂಗ್ಲಿ: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್&zwnj;ನಲ್ಲಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್, ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಪಾಕ್ ವಿರುದ್ಧ 66 ರನ್ ಗಳಿಸಿ ಔಟಾದ ರೂಟ್, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಬ್ಬರೂ ಇದೀಗ ಟೆಸ್ಟ್ ಕ್ರಿಕೆಟ್&zwnj;ನಲ್ಲಿ ತಲಾ 68 ಅರ್ಧಶತಕಗಳನ್ನು ಬಾರಿಸಿ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಸಚಿನ್ 200 ಟೆಸ್ಟ್&zwnj;ಗಳ 329 ಇನ್ನಿಂಗ್ಸ್&zwnj;ಗಳಲ್ಲಿ ಈ ಸಾಧನೆ ಮಾಡಿದ್ದರೆ, ರೂಟ್ ಕೇವಲ 167 ಟೆಸ್ಟ್&zwnj;ಗಳ 305 ಇನ್ನಿಂಗ್ಸ್&zwnj;ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಅಂದರೆ, ಸಚಿನ್&zwnj;ಗಿಂತ 33 ಇನ್ನಿಂಗ್ಸ್&zwnj; ಕಡಿಮೆ ಆಡಿ ರೂಟ್ ಈ ಸಾಧನೆ ಮಾಡಿರುವುದು ವಿಶೇಷ.&lt;/p&gt;&lt;h2&gt;&lt;strong&gt;ಸಂಕಷ್ಟದಲ್ಲಿದ್ದ ಇಂಗ್ಲೆಂಡ್&zwnj;ಗೆ ಆಸರೆಯಾದ ಜೋ ರೂಟ್&lt;/strong&gt;&lt;/h2&gt;&lt;p&gt;ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಸ್ಕೋರ್ 171 ರನ್&zwnj;ಗಳನ್ನು ಬೆನ್ನಟ್ಟುವಾಗ ಇಂಗ್ಲೆಂಡ್ 48 ರನ್&zwnj;ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಕ್ರೀಸ್&zwnj;ಗೆ ಬಂದ ರೂಟ್, ಜೋರ್ಡಾನ್ ಕಾಕ್ಸ್ ಜೊತೆಗೂಡಿ 204 ಎಸೆತಗಳಲ್ಲಿ 150 ರನ್&zwnj;ಗಳ ನಿರ್ಣಾಯಕ ಜೊತೆಯಾಟವಾಡಿದರು. ರೂಟ್ ಅವರ ಆಕರ್ಷಕ ಇನ್ನಿಂಗ್ಸ್&zwnj;ನಲ್ಲಿ 10 ಬೌಂಡರಿಗಳು ಸೇರಿದ್ದವು. ಖುರ್ರಂ ಶೆಹಜಾದ್ ಅವರ ಬೌಲಿಂಗ್&zwnj;ನಲ್ಲಿ ಎಲ್&zwnj;ಬಿಡಬ್ಲ್ಯು ಆಗಿ ಔಟಾಗುವ ಮುನ್ನ, ರೂಟ್ ಇಂಗ್ಲೆಂಡ್&zwnj;ಗೆ ಉತ್ತಮ ಮುನ್ನಡೆ ತಂದುಕೊಟ್ಟರು. ಪಾಕ್ ಎದುರು ಜೋ ರೂಟ್ 112 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 66 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ತವರಿನ ಟೆಸ್ಟ್&zwnj;ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿಯಲು ರೂಟ್&zwnj;ಗೆ ಇನ್ನು ಕೇವಲ 13 ರನ್&zwnj;ಗಳು ಬೇಕಾಗಿವೆ.&lt;/p&gt;&lt;p&gt;ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು (15,921 ರನ್) ಮುರಿಯಲು ಜೋ ರೂಟ್&zwnj;ಗೆ (14,180 ರನ್) ಇನ್ನು ಕೇವಲ 1741 ರನ್&zwnj;ಗಳ ಅಗತ್ಯವಿದೆ. ಹಾಗೆಯೇ, ಸಚಿನ್ ಅವರ 51 ಶತಕಗಳ ದಾಖಲೆಯನ್ನು ಸರಿಗಟ್ಟಲು ರೂಟ್ (41) ಇನ್ನು 10 ಶತಕಗಳನ್ನು ಬಾರಿಸಬೇಕಿದೆ.&lt;/p&gt;&lt;h3&gt;&lt;strong&gt;ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ನಾಯಕನಾಗಿ ಅತಿಹೆಚ್ಚು ರನ್ ಬಾರಿಸಿ ದಾಖಲೆ ಬರೆದ ರೂಟ್:&lt;/strong&gt;&lt;/h3&gt;&lt;p&gt;ಇಂಗ್ಲೆಂಡ್&zwnj; ಟೆಸ್ಟ್ ತಂಡದ ನಾಯಕನಾಗಿ ಮತ್ತೊಮ್ಮೆ ಪುನರಾಯ್ಕೆಯಾಗಿರುವ ಜೋ ರೋಟ್, ಇದೀಗ ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್&zwnj; ಪಂದ್ಯದಲ್ಲೇ, ನಾಯಕನಾಗಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಜೋ ರೂಟ್ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj; ಇತಿಹಾಸದಲ್ಲಿ 3 ಸಾವಿರ ರನ್ ಬಾರಿಸಿದ ಜಗತ್ತಿನ ಮೊದಲ ನಾಯಕ ಎನ್ನುವ ಅಪರೂಪದ ಮೈಲಿಗಲ್ಲು ನೆಟ್ಟಿದ್ದಾರೆ.&lt;/p&gt;&lt;p&gt;ನಾಯಕನಾಗಿ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ 3000 ರನ್ ಪೂರೈಸಲು ಜೋ ರೂಟ್&zwnj;ಗೆ 42 ರನ್ ಅಗತ್ಯವಿತ್ತು. ಎರಡನೇ ದಿನದಾಟದಲ್ಲಿ ರೂಟ್ ಈ ಅಪರೂಪದ ಮೈಲಿಗಲ್ಲು ದಾಖಲಿಸಿದ್ದಾರೆ. ಜೋ ರೂಟ್ ನಾಯಕನಾಗಿ 34 ಟೆಸ್ಟ್ ಪಂದ್ಯಗಳನ್ನಾಡಿ 8 ಶತಕ, 13 ಅರ್ಧಶತಕ ಸಹಿತ 3000+ ರನ್ ಬಾರಿಸಿದ್ದಾರೆ. 35 ವರ್ಷದ ಜೋ ರೂಟ್, ಬೆನ್ ಸ್ಟೋಕ್ಸ್ ಟೆಸ್ಟ್ ನಿವೃತ್ತಿ ಬಳಿಕ ಮತ್ತೊಮ್ಮೆ ಇಂಗ್ಲೆಂಡ್ ಟೆಸ್ಟ್&zwnj; ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj; ಇತಿಹಾಸದಲ್ಲಿ ನಾಯಕನಾಗಿ ಎರಡನೇ ಅತಿಹೆಚ್ಚು ರನ್ ಗಳಿಸಿದ ದಾಖಲೆ ಮಾಜಿ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಸ್ಟೋಕ್ಸ್ 40 ಟೆಸ್ಟ್ ಪಂದ್ಯಗಳನ್ನಾಡಿ 2,160 ರನ್ ಬಾರಿಸಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/joe-root-equals-sachin-tendulkar-test-record-with-68th-half-century-against-pakistan-kvn/articleshow-83nhp2w"/>
        </item>
        <item>
            <title><![CDATA[ಭಾರತದ ಅಳಿಯ, ಆರ್‍‌ಸಿಬಿ ಮಾಜಿ ಸ್ಟಾರ್‍‌ ಮನೆಗೆ ಮಹಾಲಕ್ಷ್ಮಿ ಆಗಮನ.. ಹೆಸರೇನು ಗೊತ್ತಾ?]]></title>
            <link>https://kannada.asianetnews.com/cricket-sports/australian-cricketer-and-rcb-ex-star-glenn-maxwell-and-vini-raman-welcome-second-baby-gkn/articleshow-8u1lx6i</link>
            <guid isPermaLink="true">https://kannada.asianetnews.com/cricket-sports/australian-cricketer-and-rcb-ex-star-glenn-maxwell-and-vini-raman-welcome-second-baby-gkn/articleshow-8u1lx6i</guid>
            <pubDate>Thu, 20 Aug 2026 07:04:28 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾದ ಸ್ಟಾರ್ ಆಲ್&zwnj;ರೌಂಡರ್ ಗ್ಲೆನ್ ಮ್ಯಾಕ್ಸ್&zwnj;ವೆಲ್ ಮತ್ತು ವಿನಿ ರಾಮನ್ ದಂಪತಿಗೆ ಎರಡನೇ ಮಗು (ಹೆಣ್ಣು ಮಗು) ಜನಿಸಿದೆ. ಮುದ್ದಾದ ಮಗಳಿಗೆ ವೆಲ್&zwnj;ಕಮ್ ಹೇಳಿರುವ ಜೋಡಿ, ಏನು ಹೆಸರು ಇಟ್ಟಿದೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dh241sw608xfq2hrcry53b,imgname-glenn-maxwell-1787160498232.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಸ್ಟ್ರೇಲಿಯಾದ ಸ್ಟಾರ್ ಆಲ್&zwnj;ರೌಂಡರ್ ಹಾಗೂ ಐಪಿಎಲ್&zwnj;ನಲ್ಲಿ ಆರ್&zwnj;ಸಿಬಿ ಪರ ಆಡಿ ಕನ್ನಡಿಗರಿಗೆ ಆಪ್ತರಾಗಿದ್ದ ಗ್ಲೆನ್ ಮ್ಯಾಕ್ಸ್&zwnj;ವೆಲ್ (Glenn Maxwell) ಎರಡನೇ ಬಾರಿಗೆ ತಂದೆಯಾಗಿದ್ದಾರೆ. ಮ್ಯಾಕ್ಸ್&zwnj;ವೆಲ್ ಮತ್ತು ಅವರ ಪತ್ನಿ ವಿನಿ ರಾಮನ್ (Vini Raman) ದಂಪತಿಗೆ ಹೆಣ್ಣು ಮಗು ಜನಿಸಿದೆ.&lt;/p&gt;&lt;h2&gt;&lt;strong&gt;ಮಗಳ ಹೆಸರೇನು?&lt;/strong&gt;&lt;/h2&gt;&lt;p&gt;ತಮಗೆ ಹೆಣ್ಣು ಮಗು ಜನಿಸಿರುವ ವಿಷಯವನ್ನು ಮ್ಯಾಕ್ಸ್&zwnj;ವೆಲ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮಗುವಿನ ಫೋಟೋ ಶೇರ್ ಮಾಡಿರುವ ಅವರು, ಮಗಳಿಗೆ ಮೈಯಾ ಮ್ಯಾಕ್ಸ್&zwnj;ವೆಲ್ (Maia Maxwell) ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ. ನಮ್ಮ ಕನಸಿನ ರಾಣಿ ಬಂದಿದ್ದಾಳೆ, ಅವಳೇ ಮೈಯಾ ಮ್ಯಾಕ್ಸ್&zwnj;ವೆಲ್ ಎಂದು ದಂಪತಿ ಭಾವನಾತ್ಮಕವಾಗಿ ಬರೆದುಕೊಂಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಮ್ಯಾಕ್ಸ್&zwnj;ವೆಲ್ ದಂಪತಿಗೆ ಎರಡನೇ ಮಗು ಜನಿಸಿದ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಸಹ ಆಟಗಾರರು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದಾರೆ. ಈ ದಂಪತಿಗೆ ಈಗಾಗಲೇ ಲೋಗನ್ ಮಾವೆರಿಕ್ ಮ್ಯಾಕ್ಸ್&zwnj;ವೆಲ್ ಎಂಬ ಮಗನಿದ್ದಾನೆ. ಲೋಗನ್ 2023ರ ಸೆಪ್ಟೆಂಬರ್&zwnj;ನಲ್ಲಿ ಜನಿಸಿದ್ದ. ಇದೀಗ ಮೈಯಾ ಆಗಮನದಿಂದ ಮ್ಯಾಕ್ಸ್&zwnj;ವೆಲ್ ಕುಟುಂಬ ಪೂರ್ಣಗೊಂಡಂತಾಗಿದೆ.&lt;/p&gt;&lt;p&gt;ಗ್ಲೆನ್ ಮ್ಯಾಕ್ಸ್&zwnj;ವೆಲ್ ಅವರ ಪತ್ನಿ ವಿನಿ ರಾಮನ್ ಭಾರತೀಯ ಮೂಲದವರಾಗಿದ್ದು (ತಮಿಳುನಾಡು), ಆಸ್ಟ್ರೇಲಿಯಾದಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮ್ಯಾಕ್ಸ್&zwnj;ವೆಲ್ ಅವರನ್ನು ಭಾರತೀಯ ಅಭಿಮಾನಿಗಳು ಪ್ರೀತಿಯಿಂದ 'ಭಾರತದ ಅಳಿಯ' ಎಂದೇ ಕರೆಯುತ್ತಾರೆ. ಇವರಿಬ್ಬರು 2022ರ ಮಾರ್ಚ್&zwnj;ನಲ್ಲಿ ಮೆಲ್ಬೋರ್ನ್&zwnj;ನಲ್ಲಿ ವಿವಾಹವಾಗಿದ್ದರು. ವಿಶೇಷವೆಂದರೆ ಇವರ ಮದುವೆಯು ಕ್ರಿಶ್ಚಿಯನ್ ಸಂಪ್ರದಾಯದ ಜೊತೆಗೆ ತಮಿಳು ಬ್ರಾಹ್ಮಣ ಪದ್ಧತಿಯಂತೆಯೂ ಅದ್ದೂರಿಯಾಗಿ ನಡೆದಿತ್ತು. ಅಂದು ಮ್ಯಾಕ್ಸ್&zwnj;ವೆಲ್ ಸಾಂಪ್ರದಾಯಿಕ ಶೇರ್ವಾನಿ ಧರಿಸಿ ಮಿಂಚಿದ್ದು ಭಾರಿ ವೈರಲ್ ಆಗಿತ್ತು.&lt;/p&gt;&lt;h2&gt;&lt;strong&gt;ಸ್ನೇಹದಿಂದ ಪ್ರೇಮಕ್ಕೆ&lt;/strong&gt;&lt;/h2&gt;&lt;p&gt;ಮ್ಯಾಕ್ಸ್&zwnj;ವೆಲ್ ಮತ್ತು ವಿನಿ ರಾಮನ್ 2013 ರಿಂದ ಒಬ್ಬರಿಗೊಬ್ಬರು ಪರಿಚಯವಿದ್ದರು. ಮೊದಲು ಸ್ನೇಹಿತರಾಗಿದ್ದ ಇವರ ನಡುವೆ ನಂತರ ಪ್ರೀತಿ ಮೊಳೆತು, 2020ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮ್ಯಾಕ್ಸ್&zwnj;ವೆಲ್ ಅವರ ಕಷ್ಟದ ಕಾಲದಲ್ಲಿ (ಮಾನಸಿಕ ಒತ್ತಡದ ಸಮಯದಲ್ಲಿ) ವಿನಿ ರಾಮನ್ ದೊಡ್ಡ ಬೆಂಬಲವಾಗಿ ನಿಂತಿದ್ದರು ಎಂಬುದು ಗಮನಾರ್ಹ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/australian-cricketer-and-rcb-ex-star-glenn-maxwell-and-vini-raman-welcome-second-baby-gkn/articleshow-8u1lx6i"/>
        </item>
        <item>
            <title><![CDATA[2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದ ರಾಬಿನ್ ಉತ್ತಪ್ಪ..! ಅರ್‌ಸಿಬಿಯಿಂದ ಇಬ್ಬರು, ಏಕೈಕ ಕನ್ನಡಿಗನಿಗೆ ಸ್ಥಾನ]]></title>
            <link>https://kannada.asianetnews.com/cricket-sports/2027-world-cup-robin-uthappa-names-india-probable-squad-includes-sanju-samson-and-bhuvneshwar-kumar-kvn/articleshow-ctx5g5z</link>
            <guid isPermaLink="true">https://kannada.asianetnews.com/cricket-sports/2027-world-cup-robin-uthappa-names-india-probable-squad-includes-sanju-samson-and-bhuvneshwar-kumar-kvn/articleshow-ctx5g5z</guid>
            <pubDate>Thu, 20 Aug 2026 12:14:19 +0530</pubDate>
            <description><![CDATA[ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು 2027ರ ಏಕದಿನ ವಿಶ್ವಕಪ್&zwnj;ಗೆ ತಮ್ಮ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅಚ್ಚರಿಯ ಆಯ್ಕೆಗಳಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಏಕೈಕ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jves14yzd7k7cd0kf7rqe4vk,imgname-csk-rcb-1747473961951.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್&zwnj;ಗೆ ಭಾರತ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರಾ, ವೇಗದ ಬೌಲರ್&zwnj;ಗಳಾಗಿ ಯಾರು ಬರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಇದರ ನಡುವೆಯೇ, ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು 2027ರ ವಿಶ್ವಕಪ್&zwnj;ಗೆ ತಮ್ಮ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಉತ್ತಪ್ಪ ಪ್ರಕಟಿಸಿದ ತಂಡದಲ್ಲಿ ಏಕೈಕ ಕನ್ನಡಿಗ ಸ್ಥಾನ ಪಡೆದಿದ್ದು, ಇಬ್ಬರು ಆಟಗಾರರು ಸಂಭಾವ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಅಚ್ಚರಿಯ ಆಯ್ಕೆ ಸಂಜು ಸ್ಯಾಮ್ಸನ್:&lt;/strong&gt;&lt;/h2&gt;&lt;p&gt;ರಾಬಿನ್ ಉತ್ತಪ್ಪ ತಮ್ಮ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸ್ಥಾನ ನೀಡಿದ್ದಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ವಿಕೆಟ್ ಕೀಪರ್ ಆಗಿ ಕೇರಳದ ಆಟಗಾರ ಸಂಜು ಸ್ಯಾಮ್ಸನ್&zwnj;ರನ್ನು ಆಯ್ಕೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಸದ್ಯಕ್ಕೆ ಸಂಜು ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸದ್ಯ ಕೆ.ಎಲ್. ರಾಹುಲ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, ಇಶಾನ್ ಕಿಶನ್ ಎರಡನೇ ಆಯ್ಕೆಯಾಗಿದ್ದಾರೆ. 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದ ಸಂಜು ಅವರನ್ನು ನಂತರ ತಂಡಕ್ಕೆ ಪರಿಗಣಿಸಿಲ್ಲ. ಹೀಗಿದ್ದೂ ಸಂಜು ಸ್ಯಾಮ್ಸನ್&zwnj;ರನ್ನು ಉತ್ತಪ್ಪ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.&lt;/p&gt;&lt;p&gt;ಈ ವರ್ಷದ ಟಿ20 ವಿಶ್ವಕಪ್ ಗೆಲುವಿನಲ್ಲಿ ಸಂಜು ಪ್ರಮುಖ ಪಾತ್ರ ವಹಿಸಿದ್ದರೂ, ಟಿ20 ತಂಡದಲ್ಲಿಯೂ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ವೈಭವ್ ಸೂರ್ಯವಂಶಿ ಅವರ ಆಗಮನದಿಂದಾಗಿ, ಜಿಂಬಾಬ್ವೆ ಪ್ರವಾಸಕ್ಕೆ ಸಂಜುಗೆ ವಿಶ್ರಾಂತಿ ನೀಡಲಾಗಿತ್ತು. ಏಷ್ಯನ್ ಗೇಮ್ಸ್&zwnj;ನ ಟಿ20 ತಂಡದಲ್ಲಿ ಸಂಜು ಸ್ಥಾನ ಪಡೆದಿದ್ದರೂ, ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಸ್ಥಾನ ಭದ್ರಪಡಿಸಿಕೊಂಡರೆ, ಟಿ20 ತಂಡದಲ್ಲೂ ಸಂಜು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಉತ್ತಪ್ಪ, ಸಂಜು ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಸೇರಿಸಿರುವುದು ವಿಶೇಷ. ಸಂಜು ಅವರ ಬ್ಯಾಟಿಂಗ್ ಶೈಲಿ ಏಕದಿನ ಕ್ರಿಕೆಟ್&zwnj;ಗೆ ಹೆಚ್ಚು ಸೂಕ್ತವಾಗಿದೆ ಎಂಬ ಅಭಿಪ್ರಾಯವೂ ಇದೆ.&lt;/p&gt;&lt;h3&gt;&lt;strong&gt;ಓರ್ವ ಕನ್ನಡಿಗ, ಇಬ್ಬರು ಆರ್&zwnj;ಸಿಬಿ ಆಟಗಾರರಿಗೆ ಸ್ಥಾನ&lt;/strong&gt;&lt;/h3&gt;&lt;p&gt;2027ರ ಏಕದಿನ ವಿಶ್ವಕಪ್ ಟೂರ್ನಿಗೆ ಉತ್ತಪ್ಪ ಆಯ್ಕೆ ಮಾಡಿದ ಸಂಭಾವ್ಯ ತಂಡದಲ್ಲಿ ಕೆ ಎಲ್ ರಾಹುಲ್ ಸ್ಥಾನ ಪಡೆದ ಏಕೈಕ ಕನ್ನಡಿಗ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್&zwnj;ನಲ್ಲಿ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇನ್ನು ಆರ್&zwnj;ಸಿಬಿ ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅನುಭವಿ ಬೌಲರ್&zwnj; ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಕಳೆದೆರಡು ಐಪಿಎಲ್ ಟೂರ್ನಿಯಲ್ಲಿ ಆರ್&zwnj;ಸಿಬಿ ಚಾಂಪಿಯನ್ ಆಗುವಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ.&lt;/p&gt;&lt;p&gt;ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿರುವ ವೇಗಿ ಭುವನೇಶ್ವರ್ ಕುಮಾರ್ ಅವರನ್ನೂ ಉತ್ತಪ್ಪ ತಮ್ಮ ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡಿರುವುದು ಮತ್ತೊಂದು ಅಚ್ಚರಿಯ ಸಂಗತಿ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರು ಉತ್ತಪ್ಪ ಆಯ್ಕೆ ಮಾಡಿದ ತಂಡದ ಇತರ ವೇಗಿಗಳು. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್ ಇದ್ದರೆ, ಆಲ್&zwnj;ರೌಂಡರ್&zwnj;ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಉತ್ತಪ್ಪ ಆಯ್ಕೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ 2027ರ ಏಕದಿನ ವಿಶ್ವಕಪ್&zwnj; ತಂಡ:&lt;/strong&gt;&lt;/h3&gt;&lt;p&gt;ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/2027-world-cup-robin-uthappa-names-india-probable-squad-includes-sanju-samson-and-bhuvneshwar-kumar-kvn/articleshow-ctx5g5z"/>
        </item>
        <item>
            <title><![CDATA[ಮಹಿಳಾ ಏಷ್ಯಾಕಪ್ 2026: ಭಾರತ ಚಾಂಪಿಯನ್ ಆದರೆ ಪಿಸಿಬಿ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಪಡೆಯುತ್ತಾ ಹರ್ಮನ್‌ಪ್ರೀತ್ ಪಡೆ?]]></title>
            <link>https://kannada.asianetnews.com/cricket-sports/women-asia-cup-2026-india-trophy-controversy-mohsin-naqvi-san/articleshow-e23mirt</link>
            <guid isPermaLink="true">https://kannada.asianetnews.com/cricket-sports/women-asia-cup-2026-india-trophy-controversy-mohsin-naqvi-san/articleshow-e23mirt</guid>
            <pubDate>Thu, 20 Aug 2026 19:46:28 +0530</pubDate>
            <description><![CDATA[&lt;p&gt;ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್&zwnj;ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0frd5mh6vw8k8z7jxwv7wjf,imgname-indian-womens-cricket-team-1787235309201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.20): &lt;/strong&gt;ಮುಂಬರುವ ಮಹಿಳಾ ಏಷ್ಯಾಕಪ್ 2026ರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫೈನಲ್ ತಲುಪಿ ಚಾಂಪಿಯನ್ ಆದರೆ, ಟ್ರೋಫಿ ಪ್ರದಾನ ಸಮಾರಂಭದಲ್ಲಿ ಹಳೆಯ ವಿವಾದವೇ ಮತ್ತೆ ಮರುಕಳಿಸುವ ಸಾಧ್ಯತೆಯಿದೆ. ಯುಎಇಯ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಆಯೋಜಿಸುತ್ತಿದ್ದು, ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿಯೇ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;ಒಂದು ವೇಳೆ ಹರ್ಮನ್&zwnj;ಪ್ರೀತ್ ಕೌರ್ ಪಡೆ ಪ್ರಶಸ್ತಿ ಗೆದ್ದರೆ, ಅವರು ಟ್ರೋಫಿಯನ್ನು ಸ್ವೀಕರಿಸುತ್ತಾರೆಯೇ ಅಥವಾ ಪುರುಷರ ತಂಡದ ಸೂರ್ಯಕುಮಾರ್ ಯಾದವ್ ರೀತಿಯಲ್ಲೇ ಟ್ರೋಫಿ ಇಲ್ಲದೆಯೇ ವಿಜಯೋತ್ಸವ ಆಚರಿಸುತ್ತಾರೆಯೇ ಎಂಬ ದೊಡ್ಡ ಪ್ರಶ್ನೆ ಕ್ರೀಡಾಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ಪಾಕಿಸ್ತಾನ ವಿರುದ್ಧ ಸೆಪ್ಟೆಂಬರ್ 5ರಂದು ಸೆಣಸಾಟ&lt;/strong&gt;&lt;/h2&gt;&lt;p&gt;ಮಹಿಳಾ ಏಷ್ಯಾಕಪ್&zwnj;ನಲ್ಲಿ ಭಾರತ ತಂಡವು ಸೆಪ್ಟೆಂಬರ್ 5ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗರಿಷ್ಠ ಎರಡು ಬಾರಿ ಮಾತ್ರ ಎದುರಾಗುವ ಅವಕಾಶವಿದೆ (ಗುಂಪು ಹಂತದಲ್ಲಿ ಒಮ್ಮೆ ಮತ್ತು ಫೈನಲ್&zwnj;ನಲ್ಲಿ ಮತ್ತೊಮ್ಮೆ). ಈ ಪಂದ್ಯದ ವೇಳೆ ಭಾರತೀಯ ಆಟಗಾರ್ತಿಯರು ಪಾಕಿಸ್ತಾನಿ ಆಟಗಾರ್ತಿಯರೊಂದಿಗೆ ಹಸ್ತಲಾಘವ (Handshake) ಮಾಡುತ್ತಾರೆಯೇ ಇಲ್ಲವೇ ಎಂಬುದು ಮತ್ತೊಂದು ಪ್ರಮುಖ ಕುತೂಹಲವಾಗಿದೆ.&lt;/p&gt;&lt;h2&gt;&lt;strong&gt;ಟ್ರೋಫಿ ಸ್ವೀಕಾರದ ಗೊಂದಲ&lt;/strong&gt;&lt;/h2&gt;&lt;p&gt;ಹರ್ಮನ್&zwnj;ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಚಾಂಪಿಯನ್ ಪಟ್ಟಕ್ಕೇರಿದರೆ ಟ್ರೋಫಿ ಪಡೆಯಲಿದೆ. ಆದರೆ, ವೇದಿಕೆಯಲ್ಲಿ ಪ್ರಶಸ್ತಿ ನೀಡಲು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಉಪಸ್ಥಿತರಿದ್ದರೆ ಭಾರತ ತಂಡ ಏನು ಮಾಡಲಿದೆ ಅನ್ನೋದೇ ಕುತೂಹಲವಾಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಪುರುಷರ ತಂಡದಂತೆ ಟ್ರೋಫಿ ಸ್ವೀಕರಿಸದೆ ಕೇವಲ ಪಂದ್ಯ ಗೆದ್ದ ಖುಷಿಯಲ್ಲಿ ಸಂಭ್ರಮಿಸುವುದು ಒಂದು ದಾರಿಯಾಗಿದ್ದರೆ, ಇನ್ನೊಂದು, ಮೊಹ್ಸಿನ್ ನಖ್ವಿ ಅವರನ್ನು ಸಂಪೂರ್ಣವಾಗಿ ಬದಿಗೊತ್ತಿ, ಎಸಿಸಿಯ ಲಭ್ಯವಿರುವ ಇತರ ಹಿರಿಯ ಅಧಿಕಾರಿಯಿಂದ ಟ್ರೋಫಿ ಸ್ವೀಕರಿಸಲಿದೆ.&lt;/p&gt;&lt;h2&gt;&lt;strong&gt;ಪುರುಷರ ಏಷ್ಯಾಕಪ್&zwnj;ನಲ್ಲಿ ಏನಾಗಿತ್ತು?&lt;/strong&gt;&lt;/h2&gt;&lt;p&gt;ಈ ಹಿಂದೆ ಪುರುಷರ ಏಷ್ಯಾಕಪ್&zwnj;ನಲ್ಲಿ ಭಾರತೀಯ ತಂಡವು ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದಾಗ, 'ಭಾರತ ತಂಡವು ಎಸಿಸಿ ಕಚೇರಿಯಿಂದ ನೇರವಾಗಿ ಟ್ರೋಫಿ ಪಡೆದುಕೊಳ್ಳಬಹುದು' ಎಂದು ನಖ್ವಿ ಹೇಳಿದ್ದರು. ತದನಂತರ ಐಸಿಸಿ ಸಭೆಯೊಂದರಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಅವರು ನಖ್ವಿ ಅವರನ್ನು ಭೇಟಿಯಾಗಿ, 'ಹಿಮ ಕರಗಿದೆ (ಸಮಸ್ಯೆ ಶಮನವಾಗಿದೆ)' ಎಂದು ಹೇಳಿಕೆ ನೀಡಿದ್ದರೂ ಟ್ರೋಫಿ ವಿವಾದ ಬಗೆಹರಿದಿರಲಿಲ್ಲ. ಭಾರತ ತನ್ನಿಂದಲೇ ನೇರವಾಗಿ ಟ್ರೋಫಿ ಪಡೆಯಬೇಕು ಎಂದು ನಖ್ವಿ ಪಟ್ಟು ಹಿಡಿದಿದ್ದರು.&lt;/p&gt;&lt;h2&gt;&lt;strong&gt;'ನೋ-ಹ್ಯಾಂಡ್&zwnj;ಶೇಕ್' ನೀತಿ ಮುಂದುವರಿಯಲಿದೆಯೇ?&lt;/strong&gt;&lt;/h2&gt;&lt;p&gt;ಪಹಲ್ಗಾಮ್ ದಾಳಿ ಮತ್ತು 'ಆಪರೇಷನ್ ಸಿಂಧೂರ್' ನಂತರದ ಉದ್ವಿಗ್ನತೆಯಿಂದಾಗಿ ಕಳೆದ ವರ್ಷದ ಪುರುಷರ ಏಷ್ಯಾಕಪ್&zwnj;ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದರೂ ಒಮ್ಮೆಯೂ ಹಸ್ತಲಾಘವ ಮಾಡಿರಲಿಲ್ಲ. ಇದೇ ಹಾದಿಯನ್ನು ತುಳಿದಿದ್ದ ಭಾರತೀಯ ಮಹಿಳಾ ತಂಡವು 2025ರ ಏಕದಿನ ವಿಶ್ವಕಪ್ ಮತ್ತು 2026ರ ಟಿ20 ವಿಶ್ವಕಪ್&zwnj;ನಲ್ಲೂ ಪಾಕಿಸ್ತಾನ ಆಟಗಾರ್ತಿಯರಿಗೆ ಹಸ್ತಲಾಘವ ಮಾಡಿರಲಿಲ್ಲ.&lt;/p&gt;&lt;p&gt;ಫಾತಿಮಾ ಸನಾ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುವಾಗ ಹರ್ಮನ್&zwnj;ಪ್ರೀತ್ ಪಡೆ ಇದೇ 'ನೋ-ಹ್ಯಾಂಡ್&zwnj;ಶೇಕ್' ನೀತಿಯನ್ನು ಮುಂದುವರಿಸುವ ಸ್ಪಷ್ಟ ಸೂಚನೆಗಳಿವೆ. ಆದರೆ, 2026ರ ಹಾಕಿ ವಿಶ್ವಕಪ್&zwnj;ನಲ್ಲಿ ಆಮ್ಸ್ಟರ್&zwnj;ಡ್ಯಾಮ್&zwnj;ನಲ್ಲಿ ನಡೆದ ಪಂದ್ಯದ ವೇಳೆ ಹರ್ಮನ್&zwnj;ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡಿ ಹೈ-ಫೈವ್ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಕ್ರಿಕೆಟ್&zwnj;ನಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ಪರಿಣಾಮಗಳು ಹೆಚ್ಚು ಪ್ರಭಾವ ಬೀರುವುದರಿಂದ ಎಲ್ಲರ ಕಣ್ಣು ಮುಂಬರುವ ಈ ಪಂದ್ಯಾವಳಿಯ ಮೇಲಿದೆ.&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/women-asia-cup-2026-india-trophy-controversy-mohsin-naqvi-san/articleshow-e23mirt"/>
        </item>
        <item>
            <title><![CDATA[Watch: ಲಾರ್ಡ್ಸ್ ಬಾಲ್ಕನಿಯಲ್ಲಿ ಮರುಕಳಿಸಿದ 'ದಾದಾ' ಖದರ್: ಇಂಗ್ಲೆಂಡ್ ನೆಲದಲ್ಲಿ ಕೋಟ್ ಬಿಚ್ಚಿ ಸಂಭ್ರಮಿಸಿದ ಭಾರತೀಯ ದಿವ್ಯಾಂಗ ಕ್ರಿಕೆಟಿಗರು!]]></title>
            <link>https://kannada.asianetnews.com/cricket-sports/india-mixed-disability-cricket-team-ganguly-lords-celebration-england-san/articleshow-fyv7py0</link>
            <guid isPermaLink="true">https://kannada.asianetnews.com/cricket-sports/india-mixed-disability-cricket-team-ganguly-lords-celebration-england-san/articleshow-fyv7py0</guid>
            <pubDate>Thu, 20 Aug 2026 18:50:27 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ 7ನೇ ಟಿ20 ಪಂದ್ಯದಲ್ಲಿ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ 118 ರನ್&zwnj;ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವನ್ನು ತಂಡವು ಲಾರ್ಡ್ಸ್ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಶೈಲಿಯಲ್ಲಿ ಕೋಟ್ ಕಳಚಿ ಸಂಭ್ರಮಿಸುವ ಮೂಲಕ ಸ್ಮರಣೀಯವಾಗಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0fn4hefn7yss7xzzc3tb60t,imgname-indian-cricket-team--1787231880655.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.20): &lt;/strong&gt;ಮಿಶ್ರ ದಿವ್ಯಾಂಗ ಕ್ರಿಕೆಟ್ ಸರಣಿಯ (Mixed Disability Series) ಕೊನೆಯ ಹಾಗೂ 7ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 118 ರನ್&zwnj;ಗಳ ಬೃಹತ್ ಗೆಲುವು ಸಾಧಿಸಿದ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ, ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಐತಿಹಾಸಿಕ 'ಶರ್ಟ್&zwnj; ಕಳಚಿದ' ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿದೆ. ಕೇವಲ ಪಂದ್ಯ ಗೆಲ್ಲುವುದು ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಸಿದ್ಧ ವಿಜಯೋತ್ಸವಕ್ಕೆ ಅದ್ಭುತ ಗೌರವ ಸಲ್ಲಿಸುವ ಮೂಲಕ ದಿವ್ಯಾಂಗ ಆಟಗಾರರು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.&lt;/p&gt;&lt;h2&gt;&lt;strong&gt;ಬ್ಯಾಟಿಂಗ್ ಮತ್ತು ಬೌಲಿಂಗ್&zwnj;ನಲ್ಲಿ ಭಾರತದ ಅಬ್ಬರ&lt;/strong&gt;&lt;/h2&gt;&lt;p&gt;ಏಳು ಪಂದ್ಯಗಳ ಸರಣಿಯ ಕೊನೆಯ ಹಾಗೂ ಸಮಾಧಾನಕರ ಗೆಲುವಿನ ಪಂದ್ಯದಲ್ಲಿ ಭಾರತ ತಂಡ ಸರ್ವಾಂಗೀಣ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 206 ರನ್&zwnj;ಗಳ ಬೃಹತ್ ಮೊತ್ತ ಕಲೆಹಾಕಿತು. ಅರ್ಜುನ್ ಗಾವ್ರೆ 44 ಎಸೆತಗಳಲ್ಲಿ 68 ರನ್ ಗಳಿಸಿದರೆ, ನಾಯಕ ಮಜೀದ್ ಮಾಗ್ರೆ ಕೇವಲ 19 ಎಸೆತಗಳಲ್ಲಿ ಅಜೇಯ 63 ರನ್ ಬಾರಿಸಿ ಬಿರುಗಾಳಿ ಬ್ಯಾಟಿಂಗ್ ನಡೆಸಿದರು. 207 ರನ್&zwnj;ಗಳ ಕಠಿಣ ಗುರಿ ಬೆನ್ನಟ್ಟಿದ ಆತಿಥೇಯ ಇಂಗ್ಲೆಂಡ್ ತಂಡ ಕೇವಲ 88 ರನ್&zwnj;ಗಳಿಗೆ ಆಲೌಟ್ ಆಯಿತು. ಭಾರತದ ಪರ ಹಲಾಲ್ ಅಹಮದ್ ವಾನಿ 21 ರನ್ನಿಗೆ 4 ವಿಕೆಟ್ ಹಾಗೂ ಜಯೇಶ್ ಪರ್ಮಾರ್ 14 ರನ್ನಿಗೆ 3 ವಿಕೆಟ್ ಕಬಳಿಸಿ ಮಿಂಚಿದರು. ಕೊನೆಯ ಪಂದ್ಯವನ್ನು ಭಾರತ ಭಾರಿ ಅಂತರದಿಂದ ಗೆದ್ದುಕೊಂಡರೂ, 7 ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 4-3 ಅಂತರದಲ್ಲಿ ತನ್ನದಾಗಿಸಿಕೊಂಡಿತು.&lt;/p&gt;&lt;h2&gt;&lt;strong&gt;ಲಾರ್ಡ್ಸ್ ಅಂಗಳದಲ್ಲಿ ಗಂಗೂಲಿ ಶೈಲಿಯ ಆಚರಣೆ&lt;/strong&gt;&lt;/h2&gt;&lt;p&gt;2002ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟ್&zwnj;ವೆಸ್ಟ್&zwnj; ಟ್ರೋಫಿ ಫೈನಲ್ ಗೆದ್ದಾಗ ಅಂದಿನ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಬಾಲ್ಕನಿಯಲ್ಲಿ ಜೆರ್ಸಿ ಬಿಚ್ಚಿ ಗಾಳಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಅದೇ ಐತಿಹಾಸಿಕ ಕ್ಷಣವನ್ನು ನೆನಪಿಸುವಂತೆ, ಭಾರತೀಯ ದಿವ್ಯಾಂಗ ಕ್ರಿಕೆಟ್ ಮಂಡಳಿಯ (DCCI) ಆಟಗಾರರು ಮತ್ತು ಅಧಿಕಾರಿಗಳು ಲಾರ್ಡ್ಸ್ ಬಾಲ್ಕನಿಯಲ್ಲಿ ತಮ್ಮ ಕೋಟ್&zwnj;/ಬ್ಲೇಜರ್&zwnj;ಗಳನ್ನು ಕಳಚಿ, ತ್ರಿವರ್ಣ ಧ್ವಜವನ್ನು ಹಾರಿಸುತ್ತಾ ಆಚರಿಸಿದರು.&lt;/p&gt;&lt;p&gt;ಈ ಸಂಭ್ರಮಾಚರಣೆಯ ವಿಡಿಯೋವನ್ನು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ಡಿಬಿಸಿಐ, &quot;ಲಾರ್ಡ್ಸ್ ಅಂಗಳದಲ್ಲಿ ಭಾರತ ಗೆದ್ದಾಗ ಸಂಭ್ರಮಾಚರಣೆಯ ಹುಮ್ಮಸ್ಸೇ ಬೇರೆ! ಕೋಟ್&zwnj;ಗಳನ್ನು ಕಳಚಿ, ಹೈ ಸ್ಪಿರೀಟ್&zwnj;ನೊಂದಿಗೆ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ ಈ ಕ್ಷಣ ಎಂದಿಗೂ ಮರೆಯಲಾಗದು. 118 ರನ್&zwnj;ಗಳ ಅಮೋಘ ಗೆಲುವು, ಒಂದು ಅವಿಸ್ಮರಣೀಯ ಆಚರಣೆ&quot; ಎಂದು ಬರೆದುಕೊಂಡಿದೆ.&lt;/p&gt;&lt;h2&gt;&lt;strong&gt;ಏನಿದು 'ಮಿಶ್ರ ದಿವ್ಯಾಂಗ ಕ್ರಿಕೆಟ್' (Mixed Disability Cricket)?&lt;/strong&gt;&lt;/h2&gt;&lt;p&gt;ಮಿಶ್ರ ದಿವ್ಯಾಂಗ ಕ್ರಿಕೆಟ್ ಮಾದರಿಯು ದೈಹಿಕ ವಿಕಲಚೇತನ, ಶ್ರವಣ ದೋಷ (ಕಿವುಡು) ಮತ್ತು ಕಲಿಕಾ ನ್ಯೂನತೆಗಳನ್ನು ಒಳಗೊಂಡಂತೆ ವಿವಿಧ ರೀತಿಯ ಸವಾಲುಗಳನ್ನು ಎದುರಿಸುತ್ತಿರುವ ಕ್ರೀಡಾಪಟುಗಳನ್ನು ಒಳಗೊಂಡಿರುತ್ತದೆ. ಇಂತಹ ಎಲ್ಲಾ ಆಟಗಾರರನ್ನು ಒಂದೇ ತಂಡವಾಗಿ ಸೇರಿಸಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತದೆ.&lt;/p&gt;&lt;p&gt;When India wins at Lord&rsquo;s, the celebrations hit different.&amp;nbsp;A moment of pure cricketing joy on the Lord&rsquo;s Balcony &mdash; coats off, spirits high, and the Tricolour flying with pride.118 runs. One unforgettable celebration.@imRaviKChauhan@official_idca pic.twitter.com/o6IuoRJto8&lt;/p&gt;&lt;p&gt;&mdash; Differently Abled Cricket Council of India (@dcciofficial) August 19, 2026&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/india-mixed-disability-cricket-team-ganguly-lords-celebration-england-san/articleshow-fyv7py0"/>
        </item>
        <item>
            <title><![CDATA[GenZ '6-7' ಸೆಲಬ್ರೇಷನ್‌ ಮೂಲಕ ನೆಟ್ಟಿಗರ ಗಮನ ಸೆಳೆದ ದೆಹಲಿ ಕ್ರಿಕೆಟ್‌ ಬ್ಯೂಟಿ ಮೇಧವಿ ಬಿಧುರಿ!]]></title>
            <link>https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n</link>
            <guid isPermaLink="true">https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n</guid>
            <pubDate>Fri, 21 Aug 2026 21:47:33 +0530</pubDate>
            <description><![CDATA[ದೆಹಲಿ ಪ್ರೀಮಿಯರ್ ಲೀಗ್&zwnj;ನಲ್ಲಿ '6-7' ಸಂಭ್ರಮಾಚರಣೆಯ ಮೂಲಕ ವೈರಲ್ ಆದ ಯುವ ಕ್ರಿಕೆಟರ್ ಮೇಧವಿ ಬಿಧುರಿ ಅವರ ಹಿನ್ನೆಲೆಯನ್ನು ಈ ಲೇಖನ ವಿವರಿಸುತ್ತದೆ. ಅವರ ಕ್ರಿಕೆಟ್ ಪಯಣ, ಜೆನ್ ಜೀ ಟ್ರೆಂಡ್ ಆಗಿರುವ ಈ ಸಂಭ್ರಮದ ರಹಸ್ಯ ಮತ್ತು ಅವರ ಜೆರ್ಸಿ ಸಂಖ್ಯೆಗೂ ಇದಕ್ಕೂ ಇರುವ ಸಂಬಂಧವನ್ನು ಇಲ್ಲಿ ತಿಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jhbvemxd2zke4meeyw43qe,imgname-medhavi-bidhuri-1787328589268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಆ.21): &lt;/strong&gt;ಪ್ರಸಕ್ತ ಸಾಲಿನ ದೆಹಲಿ ಪ್ರೀಮಿಯರ್ ಲೀಗ್ (DPL 2026) ಟೂರ್ನಿಯಲ್ಲಿ ದೆಹಲಿಯ ಯುವ ಆಟಗಾರ್ತಿ ಮೇಧವಿ ಬಿಧುರಿ GenZ '6-7' ಸೆಲಬ್ರೇಷನ್&zwnj; ಮೂಲಕ ಸೋಶಿಯಲ್&zwnj; ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದಾರೆ. ಮೈದಾನದಲ್ಲಿ ಅವರು ಮಾಡಿದ ಕೈಸಂಜ್ಞೆಯ ಸಂಭ್ರಮವು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಇಷ್ಟಕ್ಕೂ ಯಾರೀ ಮೇಧಾವಿ ಬಿಧುರಿ? ಅವರ ಕ್ರಿಕೆಟ್&zwnj; ಹಿನ್ನೆಲೆಯೇನು? ಎಂಬ ಕುತೂಹಲ ಕ್ರಿಕೆಟ್&zwnj; ಅಭಿಮಾನಿಗಳಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;ಆಗಸ್ಟ್ 20ರಂದು ನಡೆದ ವುಮೆನ್ಸ್&zwnj; ದೆಹಲಿ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ'ಸೆಂಟ್ರಲ್ ದೆಹಲಿ ಕ್ವೀನ್ಸ್' ತಂಡವನ್ನು ಪ್ರತಿನಿಧಿಸಿದ್ದ 20 ಹರೆಯದ ಮೇಧವಿ ಬಿಧುರಿ, ಕಳೆದ ಬಾರಿಯ ಚಾಂಪಿಯನ್ಸ್ ವಿರುದ್ಧ ಎರಡು ಪ್ರಮುಖ ವಿಕೆಟ್ ಪಡೆದು ಮಿಂಚಿದರು. ತಮ್ಮ ಅದ್ಭುತ ಲೆಗ್-ಸ್ಪಿನ್ ಬೌಲಿಂಗ್ ಜೊತೆಗೆ ಈ ವಿಶಿಷ್ಟ ವೈರಲ್ ಸೆಲಬ್ರೇಷನ್&zwnj; ಕಾರಣದಿಂದ ಅವರು ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದರು.&lt;/p&gt;&lt;h2&gt;&lt;strong&gt;ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆದ ಆ ಒಂದು ಕ್ಷಣ&lt;/strong&gt;&lt;/h2&gt;&lt;p&gt;ಸೌತ್ ದೆಹಲಿ ಸೂಪರ್&zwnj;ಸ್ಟಾರ್ಜ್ ವಿರುದ್ಧದ ಪಂದ್ಯದ 16ನೇ ಓವರ್&zwnj;ನಲ್ಲಿ ಎದುರಾಳಿ ತಂಡದ ಬ್ಯಾಟರ್ ನಿಶಿಕಾ ಸಿಂಗ್ ಅವರ ವಿಕೆಟ್ ಉರುಳಿಸಿದಾಗ ಮೇಧವಿ ಈ ವಿಭಿನ್ನ ಸಂಭ್ರಮಾಚರಣೆ ಮಾಡಿದರು. ಸಾಂಪ್ರದಾಯಿಕವಾಗಿ ಮುಷ್ಟಿ ಬಿಗಿದು ಅಥವಾ ಜಿಗಿದು ಸಂಭ್ರಮಿಸುವ ಬದಲು, ತಮ್ಮ ಎರಡೂ ಕೈಗಳನ್ನು ಮೇಲಕ್ಕೆ-ಕೆಳಕ್ಕೆ ಆಡಿಸುತ್ತಾ &quot;ಸಿಕ್ಸ್-ಸೆವೆನ್&quot; (6-7) ಎಂದು ಸಂಭ್ರಮಿಸಿದ್ದಾರೆ. ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾದ ಈ ದೃಶ್ಯ ಸೋಶಿಯಲ್&zwnj; ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ಈ ಪಂದ್ಯದಲ್ಲಿ ಸೆಂಟ್ರಲ್ ದೆಹಲಿ ಕ್ವೀನ್ಸ್ ತಂಡ 29 ರನ್&zwnj;ಗಳಿಂದ ಸೋಲನುಭವಿಸಿದರೂ, ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದು ಮಾತ್ರ ಮೇಧವಿಯ ಈ ಸಂಭ್ರಮಾಚರಣೆ.&lt;/p&gt;&lt;h2&gt;&lt;strong&gt;ಯಾರೀ ಮೇಧವಿ ಬಿಧುರಿ?&lt;/strong&gt;&lt;/h2&gt;&lt;p&gt;ಕೇವಲ ಒಂದೇ ಒಂದು ವೈರಲ್ ವಿಡಿಯೋದಿಂದ ಜನಪ್ರಿಯತೆ ಗಳಿಸಿದವರ ಸಾಲಿಗೆ ಮೇಧವಿ ಸೇರುವುದಿಲ್ಲ. ಅವರು ಸುದೀರ್ಘ ಕಾಲದಿಂದ ದೆಹಲಿ ದೇಶೀಯ ಕ್ರಿಕೆಟ್&zwnj;ನಲ್ಲಿ ಸತತ ಪರಿಶ್ರಮ ವಹಿಸಿ ಬೆಳೆದುಬಂದ ಬೌಲರ್&zwnj;. ಬಲಗೈ ಲೆಗ್&zwnj;ಸ್ಪಿನ್ನರ್&zwnj; ಆಗಿರುವ ಈಕೆ, ದೆಹಲಿ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (DDCA) ಪಟ್ಟಿಯಲ್ಲಿ ಪ್ರಮುಖ ಲೆಗ್-ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ. ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2024 ರ ಹರಾಜು ಪಟ್ಟಿಯಲ್ಲೂ ಇವರ ಹೆಸರು ನೋಂದಾಯಿತವಾಗಿತ್ತು. ಕಳೆದ ಆವೃತ್ತಿಯ ದೆಹಲಿ ಪ್ರೀಮಿಯರ್ ಲೀಗ್ (DPL 2025) ಫೈನಲ್ ಪಂದ್ಯದಲ್ಲಿ ಸೂಪರ್&zwnj;ಸ್ಟಾರ್ಜ್ ತಂಡದ ಪರವಾಗಿ ಕಣಕ್ಕಿಳಿದು, 26 ರನ್&zwnj; ನೀಡಿ 3 ಪ್ರಮುಖ ವಿಕೆಟ್&zwnj;ಗಳನ್ನು ಕಬಳಿಸುವ ಮೂಲಕ ಬೊಂಬಾಟ್ ಪ್ರದರ್ಶನ ನೀಡಿದ್ದರು.&lt;/p&gt;&lt;h2&gt;&lt;strong&gt;ಏನಿದು '6-7' ಸಂಭ್ರಮಾಚರಣೆಯ ರಹಸ್ಯ?&lt;/strong&gt;&lt;/h2&gt;&lt;p&gt;ಪ್ರಸ್ತುತ ಜಾಗತಿಕ ಮಟ್ಟದಲ್ಲಿ '6-7' (ಸಿಕ್ಸ್-ಸೆವೆನ್) ಸಂಭ್ರಮಾಚರಣೆಯು 'ಜೆನ್ ಜೀ' (Gen Z) ಮತ್ತು 'ಜೆನ್ ಆಲ್ಫಾ' ಯುವಜನತೆಯಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದೆ. ಎರಡೂ ಕೈಗಳನ್ನು ತಕ್ಕಡಿಯಂತೆ ಅಥವಾ seesaw ಮಾದರಿಯಲ್ಲಿ ಮೇಲಕ್ಕೆ-ಕೆಳಕ್ಕೆ ಆಡಿಸುವ ಈ ಸಂಭ್ರಮಕ್ಕೆ ಯಾವುದೇ ನಿರ್ದಿಷ್ಟ ವ್ಯಾಖ್ಯಾನವಿಲ್ಲದಿದ್ದರೂ, ಟಿಕ್&zwnj;ಟಾಕ್&zwnj;ನಿಂದ ಹಿಡಿದು ಜಾಗತಿಕ ಕ್ರೀಡಾಂಗಣಗಳವರೆಗೆ ಇದು ವ್ಯಾಪಿಸಿದೆ. ಕೆವಿನ್ ಪೀಟರ್ಸನ್, ಡೇವಿಡ್ ವಾರ್ನರ್ ಹಾಗೂ ಫುಟ್&zwnj;ಬಾಲ್ ತಾರೆ ಕಾಸೆಮಿರೊ ಅವರಂತಹ ಜಾಗತಿಕ ಜಗತ್ತಿನ ದಿಗ್ಗಜರು ಕೂಡ ಈ ಸಂಭ್ರಮಾಚರಣೆಯನ್ನು ಅನುಕರಿಸಿದ್ದಾರೆ.&lt;/p&gt;&lt;p&gt;ಆದರೆ ಮೇಧವಿ ಬಿಧುರಿ ವಿಷಯದಲ್ಲಿ ಈ ಆಚರಣೆ ಮತ್ತಷ್ಟು ವಿಶೇಷವೆನಿಸಲು ಕಾರಣ ಅವರ ಜೆರ್ಸಿ ಸಂಖ್ಯೆ 67 (Sixty-Seven)! ತಮ್ಮ ಜೆರ್ಸಿ ಸಂಖ್ಯೆಗೆ ಹೊಂದುವ ರೀತಿಯಲ್ಲಿ ಅವರು ಈ ಸಂಭ್ರಮಾಚರಣೆ ಮಾಡಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/delhi-cricketer-medhavi-bidhuri-viral-6-7-celebration-dpl-2026-san/articleshow-geuy91n"/>
        </item>
        <item>
            <title><![CDATA[ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಪಂದ್ಯ ಮುಗಿದ ಬೆನ್ನಲ್ಲೇ ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಲಾಯ್ತು ಚೆಂಡು!]]></title>
            <link>https://kannada.asianetnews.com/cricket-sports/england-vs-pakistan-test-match-ball-cut-in-half-for-bowlers-san/articleshow-mgt4mv7</link>
            <guid isPermaLink="true">https://kannada.asianetnews.com/cricket-sports/england-vs-pakistan-test-match-ball-cut-in-half-for-bowlers-san/articleshow-mgt4mv7</guid>
            <pubDate>Thu, 20 Aug 2026 18:14:24 +0530</pubDate>
            <description><![CDATA[ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ, ಇಬ್ಬರು ಇಂಗ್ಲೆಂಡ್ ಬೌಲರ್&zwnj;ಗಳಾದ ಓಲ್ಲೀ ರಾಬಿನ್ಸನ್ ಮತ್ತು ಜೋಶ್ ಟಂಗ್ ತಲಾ 5 ವಿಕೆಟ್ ಪಡೆದರು. ಈ ಅಪರೂಪದ ಸಾಧನೆಗಾಗಿ, ಪಂದ್ಯದ ಚೆಂಡನ್ನು ಎರಡು ಭಾಗವಾಗಿ ಕತ್ತರಿಸಿ ಇಬ್ಬರಿಗೂ ನೆನಪಿನ ಕಾಣಿಕೆಯಾಗಿ ಹಂಚಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m0fk4795ybsrm90ckj5btmg0,imgname-test-cricket-1787229773093.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್&zwnj; (ಆ.20): &lt;/strong&gt;ಲೀಡ್ಸ್&zwnj;ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ವಿಶಿಷ್ಟ ಘಟನೆಯೊಂದು ಜರುಗಿದೆ. 171 ರನ್&zwnj;ಗಳಿಗೆ ಪಾಕಿಸ್ತಾನ ಆಲೌಟ್ ಆದ ನಂತರ, ಪಂದ್ಯದಲ್ಲಿ ಬಳಸಿದ್ದ ಚೆಂಡನ್ನು ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಿ ಇಬ್ಬರು ಇಂಗ್ಲೆಂಡ್ ಆಟಗಾರರಿಗೆ ಹಂಚಲಾಗಿದೆ.&lt;/p&gt;&lt;p&gt;ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡದ ನಿರ್ಧಾರವನ್ನು ಬೌಲರ್&zwnj;ಗಳು ಸಮರ್ಥಿಸಿಕೊಂಡರು. ಓಲ್ಲೀ ರಾಬಿನ್ಸನ್ ಮತ್ತು ಜೋಶ್ ಟಂಗ್ ಅವರ ಮಾರಕ ದಾಳಿಗೆ ನಲುಗಿದ ಪಾಕಿಸ್ತಾನ ಕೇವಲ 171 ರನ್&zwnj;ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಪಾಕ್ ಇನ್ನಿಂಗ್ಸ್ ಮುಕ್ತಾಯಗೊಂಡ ಬೆನ್ನಲ್ಲೇ, ಮೈದಾನದ ಸಿಬ್ಬಂದಿ ಚೆಂಡನ್ನು ಎರಡು ಭಾಗವಾಗಿ ಕತ್ತರಿಸಿ, ಒಂದು ಭಾಗವನ್ನು ರಾಬಿನ್ಸನ್&zwnj;ಗೆ ಮತ್ತು ಮತ್ತೊಂದು ಭಾಗವನ್ನು ಟಂಗ್&zwnj;ಗೆ ನೀಡಿದರು. ಚೆಂಡನ್ನು ಈ ರೀತಿ ಮಧ್ಯಕ್ಕೆ ಕತ್ತರಿಸಲು ಕಾರಣವೇನು ಎಂಬ ಪ್ರಶ್ನೆ ಇದೀಗ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;h2&gt;&lt;strong&gt;ಚೆಂಡನ್ನು ಕತ್ತರಿಸಿದ್ದಕ್ಕೆ ಪ್ರಮುಖ ಕಾರಣಗಳು&lt;/strong&gt;&lt;/h2&gt;&lt;p&gt;ಕ್ರಿಕೆಟ್ ನಿಯಮ ಹಾಗೂ ವಾಡಿಕೆಯಂತೆ, ಯಾವುದೇ ಬೌಲರ್ ಒಂದು ಇನ್ನಿಂಗ್ಸ್&zwnj;ನಲ್ಲಿ 5 ವಿಕೆಟ್ ಕಬಳಿಸಿದರೆ, ಆ ಚೆಂಡನ್ನು ನೆನಪಿನ ಕಾಣಿಕೆಯಾಗಿ ತಮ್ಮೊಂದಿಗೆ ಮೈದಾನದಿಂದ ಹೊರಗೆ ಕೊಂಡೊಯ್ಯುವ ಅವಕಾಶವಿರುತ್ತದೆ. ಹೆಡಿಂಗ್ಲೆ ಟೆಸ್ಟ್&zwnj;ನಲ್ಲಿ ಓಲ್ಲೀ ರಾಬಿನ್ಸನ್ 18 ಓವರ್&zwnj;ಗಳಲ್ಲಿ 3 ಮೇಡನ್ ಸಹಿತ 51 ರನ್ ನೀಡಿ 5 ವಿಕೆಟ್ ಕಿತ್ತರೆ, ಜೋಶ್ ಟಂಗ್ 9.1 ಓವರ್&zwnj;ಗಳಲ್ಲಿ 46 ರನ್ ನೀಡಿ 5 ವಿಕೆಟ್ ಪಡೆದರು. ಇಬ್ಬರೂ ತಲಾ 5 ವಿಕೆಟ್ ಪಡೆದಿದ್ದರಿಂದ ಚೆಂಡು ಯಾರಿಗೆ ಸೇರಬೇಕು ಎಂಬ ಗೊಂದಲ ಉಂಟಾಯಿತು. ಈ ಸಮಸ್ಯೆಗೆ ಪರಿಹಾರವಾಗಿ ಚೆಂಡನ್ನು ಎರಡು ಭಾಗವಾಗಿ ಕತ್ತರಿಸಿ ಇಬ್ಬರಿಗೂ ಸಮನಾಗಿ ಹಂಚಲಾಯಿತು.&lt;/p&gt;&lt;h2&gt;&lt;strong&gt;ಜೋಶ್ ಟಂಗ್ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;&quot;ಚೆಂಡನ್ನು ನಾವು ಎರಡು ಭಾಗವಾಗಿ ಹಂಚಿಕೊಳ್ಳೋಣ ಎಂದು ಓಲ್ಲೀ ರಾಬಿನ್ಸನ್ ಸಲಹೆ ನೀಡಿದರು. ಅದರಂತೆ ಗ್ರೌಂಡ್ ಸ್ಟಾಫ್&zwnj;ಗಳು ಚೆಂಡನ್ನು ಸಮನಾಗಿ ಕತ್ತರಿಸಿಕೊಟ್ಟರು. ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆಯನ್ನು ನಾನು ಇದೇ ಮೊದಲು ನೋಡುತ್ತಿದ್ದೇನೆ. ಆ ಚೆಂಡಿನ ಅರ್ಧ ಭಾಗವನ್ನು ನನ್ನ ಬಳಿಯೇ ಇಟ್ಟುಕೊಳ್ಳಲಿದ್ದು, ಜೀವಿತಾವಧಿಯಲ್ಲಿ ಈ ಅಪರೂಪದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ&quot; ಎಂದು ಟಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 20 ವರ್ಷಗಳ ಬಳಿಕ ಒಂದೇ ಇನ್ನಿಂಗ್ಸ್&zwnj;ನಲ್ಲಿ ಇಬ್ಬರು ಬೌಲರ್&zwnj;ಗಳು ತಲಾ 5 ವಿಕೆಟ್ ಪಡೆದ ಸಾಧನೆ ಮೂಡಿಬಂದಿದೆ. ವಿಶೇಷವೆಂದರೆ 2006ರಲ್ಲಿ ಪಾಕಿಸ್ತಾನದ ವಿರುದ್ಧವೇ ಸ್ಟೀವ್ ಹಾರ್ಮಿಸನ್ ಮತ್ತು ಮಾಂಟಿ ಪಣೇಸರ್ ತಲಾ 5 ವಿಕೆಟ್ ಪಡೆದು ಮಿಂಚಿದ್ದರು. ಆದರೆ ಆ ಸಮಯದಲ್ಲಿ ಚೆಂಡನ್ನು ಎರಡು ಭಾಗವಾಗಿ ಕತ್ತರಿಸುವ ಯಾವ ಘಟನೆಯೂ ನಡೆದಿರಲಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/england-vs-pakistan-test-match-ball-cut-in-half-for-bowlers-san/articleshow-mgt4mv7"/>
        </item>
        <item>
            <title><![CDATA[ರೋಹಿತ್ ಶರ್ಮಾ ಮಗಳು ಓದುತ್ತಿರೋರು ಈ ಪ್ರೀಮಿಯಂ ಶಾಲೆಯಲ್ಲಿ! ವಾರ್ಷಿಕ ಫೀಸ್ ಕೇಳಿದ್ರೆ ದಂಗಾಗ್ತೀರಾ!]]></title>
            <link>https://kannada.asianetnews.com/gallery/cricket-sports/rohit-sharma-daughter-samaira-sharma-studies-at-dhirubhai-ambani-international-school-gkn-nu97k0o</link>
            <guid isPermaLink="true">https://kannada.asianetnews.com/gallery/cricket-sports/rohit-sharma-daughter-samaira-sharma-studies-at-dhirubhai-ambani-international-school-gkn-nu97k0o</guid>
            <pubDate>Fri, 21 Aug 2026 09:09:07 +0530</pubDate>
            <description><![CDATA[&lt;p&gt;ರೋಹಿತ್ ಶರ್ಮಾ ಪುತ್ರಿ ಸಮೈರಾ ಮುಂಬೈನ ಪ್ರತಿಷ್ಠಿತ ಸ್ಕೂಲ್&zwnj;ನಲ್ಲಿ ಓದುತ್ತಿದ್ದು ಇದರ ವಾರ್ಷಿಕ ಫೀಸ್ 14 ರಿಂದ 20 ಲಕ್ಷ ರೂಪಾಯಿಗಳಷ್ಟಿದೆ. ಅಂಬಾನಿ ಕುಟುಂಬದ ಮೇಲ್ವಿಚಾರಣೆಯಲ್ಲಿರುವ ಈ ಶಾಲೆಯಲ್ಲಿ ಅರಾದ್ಯ ಬಚ್ಚನ್ ಮತ್ತು ಅಬ್ರಾಮ್ ಖಾನ್ ಅವರಂತಹ ಸ್ಟಾರ್ ಕಿಡ್ಸ್&zwnj;ಗಳು ವ್ಯಾಸಂಗ ಮಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fryzh6d50s5hytyk1zms18,imgname-rohit-sharma-with-daughter-samaira---1787235892774.jpg" type="image/jpeg" height="390" width="690"/>
            <content:encoded><![CDATA[&lt;p&gt;ರೋಹಿತ್ ಶರ್ಮಾ ಪುತ್ರಿ ಸಮೈರಾ ಮುಂಬೈನ ಪ್ರತಿಷ್ಠಿತ ಸ್ಕೂಲ್&zwnj;ನಲ್ಲಿ ಓದುತ್ತಿದ್ದು ಇದರ ವಾರ್ಷಿಕ ಫೀಸ್ 14 ರಿಂದ 20 ಲಕ್ಷ ರೂಪಾಯಿಗಳಷ್ಟಿದೆ. ಅಂಬಾನಿ ಕುಟುಂಬದ ಮೇಲ್ವಿಚಾರಣೆಯಲ್ಲಿರುವ ಈ ಶಾಲೆಯಲ್ಲಿ ಅರಾದ್ಯ ಬಚ್ಚನ್ ಮತ್ತು ಅಬ್ರಾಮ್ ಖಾನ್ ಅವರಂತಹ ಸ್ಟಾರ್ ಕಿಡ್ಸ್&zwnj;ಗಳು ವ್ಯಾಸಂಗ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಎಷ್ಟು ಖಡಕ್ ಆಗಿರುತ್ತಾರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಮೃದು ಸ್ವಭಾವದವರು. ಅದರಲ್ಲೂ ಮಗಳು ಸಮೈರಾ ಕಂಡರೆ ರೋಹಿತ್&zwnj;ಗೆ ಎಲ್ಲಿಲ್ಲದ ಪ್ರೀತಿ. ಇತ್ತೀಚೆಗೆ ಎರಡನೇ ಮಗುವಿನ (ಅಹಾನ್) ತಂದೆಯಾದ ರೋಹಿತ್ ಶರ್ಮಾ ಮತ್ತು ಪತ್ನಿ ರಿತಿಕಾ ಸಜ್ದೇ, ತಮ್ಮ ಮಕ್ಕಳ ಶಿಕ್ಷಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ರೋಹಿತ್ ಅವರ ಮುದ್ದಿನ ಮಗಳು ಸಮೈರಾ ಮುಂಬೈನ ಅತ್ಯಂತ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆ ಶಾಲೆಯ ಫೀಸ್ ಮತ್ತು ವಿಶೇಷತೆಗಳು ಎಲ್ಲರ ಗಮನ ಸೆಳೆಯುತ್ತಿವೆ.&lt;/p&gt;&lt;img&gt;&lt;p&gt;ಸಮೈರಾ ಶರ್ಮಾ ಮುಂಬೈನ ಅತ್ಯಂತ ಪ್ರೀಮಿಯಂ ಶಾಲೆಗಳಲ್ಲಿ ಒಂದಾದ 'ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್'ನಲ್ಲಿ (DAIS) ಓದುತ್ತಿದ್ದಾರೆ. 2003ರಲ್ಲಿ ಸ್ಥಾಪನೆಯಾದ ಈ ಶಾಲೆಯನ್ನು ಅಂಬಾನಿ ಕುಟುಂಬವೇ ನಿರ್ವಹಿಸುತ್ತಿದೆ. ಇದು ಕೇವಲ ಒಂದು ಶಾಲೆಯಲ್ಲ, ಬದಲಿಗೆ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪೂರಕವಾದ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿದೆ.&lt;/p&gt;&lt;img&gt;&lt;p&gt;ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಶಾಲೆಯ ವಾರ್ಷಿಕ ಶುಲ್ಕವು ಸಾಮಾನ್ಯರಿಗಿಂತ ಬಹಳಷ್ಟು ಪಟ್ಟು ಹೆಚ್ಚಿದೆ. 2023-24ನೇ ಶೈಕ್ಷಣಿಕ ವರ್ಷದ ಮಾಹಿತಿ ಪ್ರಕಾರ ಹೀಗಿದೆ..&lt;/p&gt;&lt;ul&gt; &lt;li&gt;ಕಿಂಡರ್&zwnj;ಗಾರ್ಟನ್ (LKG/UKG): ವಾರ್ಷಿಕ ಸುಮಾರು 14 ಲಕ್ಷ ರೂಪಾಯಿ&lt;/li&gt; &lt;li&gt;12ನೇ ತರಗತಿಯವರೆಗೆ: ತರಗತಿಗಳು ಹೆಚ್ಚಾದಂತೆ ಈ ಫೀಸ್ ಬರೋಬ್ಬರಿ 20 ಲಕ್ಷ ರೂಪಾಯಿ&lt;/li&gt; &lt;li&gt;ಅಂದರೆ, ಈ ಶಾಲೆಯಲ್ಲಿ ಓದಲು ಕೇವಲ ಶ್ರೀಮಂತರು ಮತ್ತು ಸೆಲೆಬ್ರಿಟಿಗಳಿಗೆ ಮಾತ್ರ ಸಾಧ್ಯ ಎಂಬುದು ಸ್ಪಷ್ಟವಾಗುತ್ತದೆ.&lt;/li&gt;&lt;/ul&gt;&lt;img&gt;&lt;p&gt;ನೀತಾ ಅಂಬಾನಿ ಈ ಶಾಲೆಯ ಸಂಸ್ಥಾಪಕಿ ಮತ್ತು ಅಧ್ಯಕ್ಷೆಯಾಗಿದ್ದರೆ.. ಇಶಾ ಅಂಬಾನಿ ವೈಸ್ ಚೇರ್&zwnj;ಪರ್ಸನ್ ಆಗಿದ್ದಾರೆ. ಇಲ್ಲಿ ಕೇವಲ ಪಾಠ ಮಾತ್ರವಲ್ಲದೆ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಐಸಿಎಸ್ಇ (ICSE) ಮತ್ತು ಐಜಿಸಿಎಸ್ಇ (IGCSE) ಪಠ್ಯಕ್ರಮಗಳನ್ನು ಇಲ್ಲಿ ಅನುಸರಿಸಲಾಗುತ್ತದೆ. ರೋಹಿತ್ ಮತ್ತು ರಿತಿಕಾ ಆಗಾಗ್ಗೆ ಶಾಲೆಯ ವಾರ್ಷಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಗಳ ಸಾಂಸ್ಕೃತಿಕ ಪ್ರದರ್ಶನವನ್ನು ನೋಡಿ ಸಂಭ್ರಮಿಸುವುದನ್ನು ನಾವು ನೋಡಿದ್ದೇವೆ.&lt;/p&gt;&lt;img&gt;&lt;p&gt;ಕೇವಲ ರೋಹಿತ್ ಶರ್ಮಾ ಮಗಳು ಮಾತ್ರವಲ್ಲದೇ ಬಾಲಿವುಡ್&zwnj;ನ ಘಟಾನುಘಟಿಗಳ ಮಕ್ಕಳು ಕೂಡ ಇಲ್ಲೇ ಓದುತ್ತಿದ್ದಾರೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಮಗಳು ಅರಾದ್ಯ ಬಚ್ಚನ್, ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪುತ್ರ ಅಬ್ರಾಮ್ ಖಾನ್ ಹೀಗೆ ಭಾರತದ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಕುಟುಂಬಗಳ ಮಕ್ಕಳಿಗೆ ಈ ಶಾಲೆ ಮೊದಲ ಆಯ್ಕೆಯಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ರೋಹಿತ್ ಶರ್ಮಾ ಮಗಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಸುಭದ್ರ ಭವಿಷ್ಯಕ್ಕಾಗಿ ಸ್ಟಾರ್ ಕ್ರಿಕೆಟಿಗರು ಇಂತಹ ದುಬಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.&lt;/p&gt;&lt;p&gt;ರೋಹಿತ್ ಶರ್ಮಾ ಪುತ್ರಿ ಸಮೈರಾ ಮುಂಬೈನ ಪ್ರತಿಷ್ಠಿತ ಸ್ಕೂಲ್&zwnj;ನಲ್ಲಿ ಓದುತ್ತಿದ್ದು ಇದರ ವಾರ್ಷಿಕ ಫೀಸ್ 14 ರಿಂದ 20 ಲಕ್ಷ ರೂಪಾಯಿಗಳಷ್ಟಿದೆ. ಅಂಬಾನಿ ಕುಟುಂಬದ ಮೇಲ್ವಿಚಾರಣೆಯಲ್ಲಿರುವ ಈ ಶಾಲೆಯಲ್ಲಿ ಅರಾದ್ಯ ಬಚ್ಚನ್ ಮತ್ತು ಅಬ್ರಾಮ್ ಖಾನ್ ಅವರಂತಹ ಸ್ಟಾರ್ ಕಿಡ್ಸ್&zwnj;ಗಳು ವ್ಯಾಸಂಗ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/cricket-sports/rohit-sharma-daughter-samaira-sharma-studies-at-dhirubhai-ambani-international-school-gkn-nu97k0o"/>
        </item>
        <item>
            <title><![CDATA[ಡೆಲ್ಲಿ ಪ್ರೀಮಿಯರ್‌ ಲೀಗ್‌ನಲ್ಲಿ 6-7 ಸೆಲೆಬ್ರೇಷನ್ ಮೂಲಕ ನ್ಯಾಷನಲ್ ಕ್ರಶ್ ಆದ ಮೇಧವಿ ಬಿಧೂರಿ]]></title>
            <link>https://kannada.asianetnews.com/cricket-sports/medhavi-bidhuri-becomes-national-crush-with-her-6-7-celebration-in-delhi-premier-league/articleshow-sn6yd0m</link>
            <guid isPermaLink="true">https://kannada.asianetnews.com/cricket-sports/medhavi-bidhuri-becomes-national-crush-with-her-6-7-celebration-in-delhi-premier-league/articleshow-sn6yd0m</guid>
            <pubDate>Fri, 21 Aug 2026 16:51:10 +0530</pubDate>
            <description><![CDATA[&lt;p&gt;ಡೆಲ್ಲಿ ಪ್ರೀಮಿಯರ್ ಲೀಗ್ ಮಹಿಳಾ ಟೂರ್ನಿಯಲ್ಲಿ ಮೇಧವಿ ಬಿಧೂರಿ ಸೆಲೆಬ್ರೇಷನ್ ಭಾರಿ ವೈರಲ್ ಆಗಿದೆ. ಈ ಸೆಲೆಬ್ರೇಷನ್&zwnj;ನಿಂದ ಮೇಧವಿ ಇದೀಗ ನ್ಯಾಷನಲ್ ಕ್ರಶ್ ಆಗಿ ಮಾರ್ಪಟ್ಟಿದ್ದಾರೆ. ಏನಿದು 6-7 ಸೆಲೆಬ್ರೇಷನ್?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j0jn3y9xnyk7sgrbzp3p1q,imgname-who-is-dpl-star-medhavi-bidhuri-1787310986366.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಆ.21) &lt;/strong&gt;ಡೆಲ್ಲಿ ಪ್ರೀಮಿಯರ್ ಲೀಗ್ ಮಹಿಳಾ ಟೂರ್ನಿ ರೋಚಕತೆ ಹೆಚ್ಚಿಸುತ್ತಿದೆ. ಭರ್ಜರಿ ಚೇಸಿಂಗ್, ದಿಢೀರ್ ವಿಕೆಟ್ ಪತನ, ಸಂಭ್ರಮಾಚರಣೆ ಮೂಲಕ ಮಹಿಳಾ ಲೀಗ್ ಟೂರ್ನಿ ದೇಶದ ಗಮನಸೆಳೆದಿದೆ. ವಿಶೇಷ ಅಂದರೆ ಈ ಟೂರ್ನಿಯಲ್ಲಿ ಲೆಗ್ ಸ್ಪಿನ್ನರ್ ಮೇಧವಿ ಬಿಧೂರಿಯ 6-7 ಸೆಲೆಬ್ರೇಷನ್ ಇದೀಗ ಭಾರಿ ವೈರಲ್ ಆಗಿದೆ. ಈ ಸಂಭ್ರಮಾಚರಣೆ ಮೂಲಕ ಮೇಧವಿ ಬಿಧೂರಿ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. 20ರ ಹರೆಯದ ಮೇಧವಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.&lt;/p&gt;&lt;h2&gt;ವಿಕೆಟ್ ಕಬಳಿ ಸಂಭ್ರಮಿಸಿದ ಮೇಧವಿ ಬಿಧೂರಿ&lt;/h2&gt;&lt;p&gt;ಸೆಂಟ್ರಲ್ ಡೆಲ್ಲಿ ಕ್ವೀನ್ಸ್ ತಂಡದ ಪರವಾಗಿ ಆಡುತ್ತಿರುವ ಮೇಧವಿ ಬಿಧೂರಿ ಅದ್ಭುತ ಬೌಲಿಂಗ್ ಮೂಲಕ ವಿಕೆಟ್ ಪಡೆದಿದ್ದಾರೆ. ಈ ವಿಕೆಟ್ ಸಂಭ್ರವನ್ನು ಮೇಧವಿ ಬಿಧೂರಿ ವಿಶೇಷವಾಗಿ ಮಾಡಿದ್ದಾರೆ. ಈ ಮೂಲಕ ವೈರಲ್ ಆಗಿದ್ದಾರೆ. ಜೊತಗೆ ತಮ್ಮ ಸೌಂದರ್ಯ, ನಗುವಿನಿಂದ ಕ್ರಿಕೆಟ್ ಅಭಿಮಾನಿಗಳ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಕ್ರಿಕೆಟ್ ಫ್ಯಾನ್ಸ್ ಮೇಧವಿ ಬಿಧೂರಿ ಕುರಿತು ತಿಳಿದುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;&lt;p&gt;ಸೌತ್ ಡೆಲ್ಲಿ ಸೂಪರ್&zwnj;ಸ್ಟಾರ್ಸ್ ತಂಡದ ನಿಶಿಕಾ ಸಿಂಗ್ ವಿಕೆಟ್ ಕಬಳಿಸಿದ ಮೇಧವಿ ಈ ಸಂಭ್ರಮಾಚರಣೆ ಮಾಡಿದ್ದಾರೆ. ಫೀಲ್ಡರ್ ಕ್ಯಾಚ್ ಹಿಡಿಯುತ್ತಿದ್ದಂತೆ ವಿಶೇಷ ಸೆಲೆಬ್ರೇಷನ್ ಮಾಡಿದ್ದಾರೆ. 6 ಹಾಗೂ 7 ಅಂಕಿ ಸೂಚಿಸುವ ರೀತಿಯಲ್ಲಿ ಮೇಧವಿ ಬಿಧೂರಿ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸೆಲೆಬ್ರೇಷನ್ ಕುರಿತು ಪಂದ್ಯದ ಬಳಿಕ ವಿವರಣೆ ನೀಡಿದ್ದಾರೆ.&lt;/p&gt;&lt;h2&gt;ಏನಿದು 6-7 ನಂಬರ್ ಸೆಲೆಬ್ರೇಷನ್&lt;/h2&gt;&lt;p&gt;ಮೇಧವಿ ಬಿಧೂರಿ ಮಾಡಿದ 6-7 ಅಂಕಿ ಸೂಚಿಸುವ ಸೆಲೆಬ್ರೇಷನ್ ಹಿಂದಿ ರಾಕೆಟ್ ಸೈನ್ಸ್ ಇಲ್ಲ ಎಂದು ಮೇಧವಿ ಹೇಳಿದ್ದಾರೆ. ತನ್ನ ಜರ್ಸಿ ನಂಬರ್ 67. ಹೀಗಾಗಿ ಈ ಸೆಲೆಬ್ರೇಷನ್ ಮಾಡಿದ್ದೇನೆ. ನನ್ನ ಇಷ್ಟ ಜರ್ಸಿ ನಂಬರ್ 12 ಆಗಿತ್ತು. ಆದರೆ ಈ ಜರ್ಸಿ ನಂಬರ್ ಲಾಕ್ ಆಗಿತ್ತು. ಹೀಗಾಗಿ ನನಗೆ 67 ಜರ್ಸಿ ನಂಬರ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಹೀಗಾಗಿ 6-7 ಅಂಕಿ ಸೂಚಿವು ಸೆಲೆಬ್ರೇಷನ್ ಮಾಡಿದ್ದೇನೆ ಎಂದು ಮೇಧವಿ ಬಿಧೂರಿ ನಗುತ್ತಲೇ ಹೇಳಿದ್ದಾರೆ.&lt;/p&gt;&lt;p&gt;ಕ್ರಿಕೆಟ್ ಫೀಲ್ಡ್&zwnj;ನಲ್ಲಿ ಸಿಗ್ನೆಚರ್ ಸೆಲೆಬ್ರೇಷನ್&zwnj;ಗಳು ಭಾರಿ ಸದ್ದು ಮಾಡಿದೆ. ಇದೀಗ ಮೇಧವಿ ಬಿಧೂರಿಯ 6-7 ಸೆಲೆಬ್ರೇಷನ್ ಸದ್ದು ಮಾಡುತ್ತಿದೆ. ಲೆಗ್ ಸ್ಪಿನ್ನರ್ ಆಗಿರುವ ಮೇಧವಿ ಬಿಧೂರಿ, ಡೆಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಹೊಸ ಸೆನ್ಸೇಶನ್ ಆಗಿ ಹೊರಹೊಮ್ಮಿದ್ದಾಳೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/medhavi-bidhuri-becomes-national-crush-with-her-6-7-celebration-in-delhi-premier-league/articleshow-sn6yd0m"/>
        </item>
        <item>
            <title><![CDATA[Cricket: 12,472 ರನ್‌ಗಳ ದಾಖಲೆ! 15 ಬ್ಯಾಟ್ಸ್‌ಮನ್‌ಗಳೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಶ್ವದ ಏಕೈಕ ಓಪನಿಂಗ್ ಬ್ಯಾಟ್ಸಮನ್!]]></title>
            <link>https://kannada.asianetnews.com/cricket-sports/alastair-cook-12472-runs-cricket-record-15-different-opening-partners-bmk/articleshow-tdzyttd</link>
            <guid isPermaLink="true">https://kannada.asianetnews.com/cricket-sports/alastair-cook-12472-runs-cricket-record-15-different-opening-partners-bmk/articleshow-tdzyttd</guid>
            <pubDate>Fri, 21 Aug 2026 16:45:21 +0530</pubDate>
            <description><![CDATA[&lt;p&gt;ಆ ಆರಂಭಿಕ ಬ್ಯಾಟ್ಸ್&zwnj;ಮನ್&zwnj; 12,472 ಟೆಸ್ಟ್ ರನ್&zwnj;ಗಳ ದಾಖಲೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 15 ವಿವಿಧ ಆಟಗಾರರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಶಿಷ್ಟ ದಾಖಲೆಯನ್ನು ಹೊಂದಿದ್ದು, ಇದು ಅವರ ಸ್ಥಿರತೆಯನ್ನು ತೋರಿಸುತ್ತದೆ. ಆ ಪ್ರತಿಭೆ ಯಾರು ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0j0fmzmfmd589j98e6snvak,imgname-eng-cricket--1787310887888.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಗ್ಲಿಷ್ ಕ್ರಿಕೆಟ್ ಇತಿಹಾಸದಲ್ಲಿ ಸರ್ ಅಲಸ್ಟೇರ್ ಕುಕ್ ಅತ್ಯಂತ ಶ್ರೇಷ್ಠ ಮತ್ತು ದೀರ್ಘಕಾಲಿಕ ಆರಂಭಿಕ ಬ್ಯಾಟ್ಸ್&zwnj;ಮನ್&zwnj;ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ರನ್ (12,472 ರನ್) ಬಾರಿಸಿದ ದಾಖಲೆ ಹೊಂದಿರುವ ಕುಕ್, ಅವರ ವೃತ್ತಿಜೀವನದಲ್ಲಿ ಅತ್ಯಂತ ವಿಶಿಷ್ಟ ಮತ್ತು ಆಸಕ್ತಿದಾಯಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ತಮ್ಮ ದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಕುಕ್, 15 ವಿಭಿನ್ನ ಆಟಗಾರರೊಂದಿಗೆ ಇಂಗ್ಲೆಂಡ್&zwnj;ಗೆ ಇನ್ನಿಂಗ್ಸ್ ಆರಂಭಿಸಿದ್ದರು. ಈ ಸುದೀರ್ಘ ದಾಖಲೆಯು ಕುಕ್ ಅವರ ಅಚಲ ಏಕಾಗ್ರತೆಯನ್ನು ತೋರಿಸುವುದಲ್ಲದೆ, ಅವರ ಜೊತೆಗಾರರಾಗಿ ಸ್ಥಿರವಾಗಿ ನಿಲ್ಲಲು ಮತ್ತೊಬ್ಬ ಬ್ಯಾಟರ್ ಸಿಗದೆ ಇಂಗ್ಲೆಂಡ್ ಪಟ್ಟ ಕಷ್ಟವನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;h2&gt;&lt;strong&gt;ಸ್ಟ್ರಾಸ್ ಜೊತೆಗಿನ ಯಶಸ್ಸು ಹಾಗೂ ನಂತರ ಎದುರಾದ ಸವಾಲು!&lt;/strong&gt;&lt;/h2&gt;&lt;p&gt;ಅಲಸ್ಟೇರ್ ಕುಕ್ 2006 ರಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ಶತಕ ಸಿಡಿಸುವ ಮೂಲಕ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು. ಆರಂಭಿಕ ವರ್ಷಗಳಲ್ಲಿ ಆಂಡ್ರ್ಯೂ ಸ್ಟ್ರಾಸ್ ಅವರೊಂದಿಗೆ ಅತ್ಯುತ್ತಮ ನಂಟು ಹೊಂದಿದ್ದರು. ಈ ಜೋಡಿ 2010-11ರ ಪ್ರಸಿದ್ಧ ಆಶಸ್ ಸರಣಿಯ ಗೆಲುವು ಸೇರಿದಂತೆ ಹಲವು ದಾಖಲೆಗಳಿಗೆ ಕಾರಣವಾಯಿತು. ಇಬ್ಬರೂ ಸೇರಿ ಆರಂಭಿಕ ವಿಕೆಟ್&zwnj;ಗೆ 5,000ಕ್ಕೂ ಹೆಚ್ಚು ರನ್ ಕಲೆಹಾಕಿದ್ದರು. ಆದರೆ 2012ರಲ್ಲಿ ಸ್ಟ್ರಾಸ್ ನಿವೃತ್ತಿಯಾದ ನಂತರ ಇಂಗ್ಲಿಷ್ ಕ್ರಿಕೆಟ್&zwnj;ನಲ್ಲಿ ಕುಕ್ ಪಾಲುದಾರನ ಹುಡುಕಾಟ ಶುರುವಾಯಿತು. ಒಂದು ತುದಿಯಲ್ಲಿ ಕುಕ್ ಬೆಟ್ಟದಂತೆ ನಿಂತಿದ್ದರೆ, ಇನ್ನೊಂದು ತುದಿಯಲ್ಲಿ ಆಟಗಾರರು ಬದಲಾಗುತ್ತಲೇ ಹೋದರು.&lt;/p&gt;&lt;h3&gt;&lt;strong&gt;ಕುಕ್ ಜೊತೆ ಇನ್ನಿಂಗ್ಸ್ ಆರಂಭಿಸಿದ 15 ಆಟಗಾರರ ಪಟ್ಟಿ!&lt;/strong&gt;&lt;/h3&gt;&lt;p&gt;ಸ್ಟ್ರಾಸ್ ನಿರ್ಗಮನದ ನಂತರ ಯುವ ಹಾಗೂ ಅನುಭವಿ ಆಟಗಾರರಿಗೆ ಅವಕಾಶ ನೀಡಲಾಯಿತಾದರೂ ಯಾರೂ ಶಾಶ್ವತವಾಗಿ ನೆಲೆಯೂರಲಿಲ್ಲ. ಕುಕ್ ಜೊತೆ ಓಪನರ್ ಆಗಿ ಕಣಕ್ಕಿಳಿದ 15 ಆಟಗಾರರೆಂದರೆ:&lt;/p&gt;&lt;p&gt;&lt;strong&gt;ಪ್ರಮುಖ ಆಟಗಾರರು;&lt;/strong&gt; ಆಂಡ್ರ್ಯೂ ಸ್ಟ್ರಾಸ್, ಮೈಕೆಲ್ ವಾಘನ್, ಇಯಾನ್ ಬೆಲ್, ಜೊನಾಥನ್ ಟ್ರಾಟ್, ನಿಕ್ ಕಾಂಪ್ಟನ್, ಜೋ ರೂಟ್.&lt;/p&gt;&lt;h3&gt;&lt;strong&gt;ನಂತರದ ಪ್ರಯೋಗಗಳು;&lt;/strong&gt; ಸ್ಯಾಮ್ ರಾಬ್ಸನ್, ಆಡಮ್ ಲಿಥ್, ಮೊಯಿನ್ ಅಲಿ, ಅಲೆಕ್ಸ್ ಹೇಲ್ಸ್, ಬೆನ್ ಡಕೆಟ್.&lt;/h3&gt;&lt;h3&gt;&lt;strong&gt;ಕೊನೆಯ ಘಟ್ಟದ ಜೋಡಿಗಳು;&lt;/strong&gt; ಹಸೀಬ್ ಹಮೀದ್, ಕೀಟನ್ ಜೆನ್ನಿಂಗ್ಸ್ ಮತ್ತು ಮಾರ್ಕ್ ಸ್ಟೋನ್&zwnj;ಮನ್.&lt;/h3&gt;&lt;h3&gt;ಮಧ್ಯಮ ಕ್ರಮಾಂಕದ ಬ್ಯಾಟರ್&zwnj;ಗಳಾದ ಜೋ ರೂಟ್ ಮತ್ತು ಮೊಯಿನ್ ಅಲಿ ಕೂಡ ತಂಡದ ಅಗತ್ಯಕ್ಕಾಗಿ ಕುಕ್ ಜೊತೆ ಓಪನಿಂಗ್ ಮಾಡಬೇಕಾಯಿತು.&lt;/h3&gt;&lt;h3&gt;&lt;strong&gt;ಸಾಟಿಯಿಲ್ಲದ ಮಾನಸಿಕ ದೃಢತೆ!&lt;/strong&gt;&lt;/h3&gt;&lt;p&gt;ಅಂತರರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಪ್ರತಿಯೊಂದು ಪಂದ್ಯದಲ್ಲೂ ಹೊಸ ಪಾಲುದಾರನಿಗೆ ಹೊಂದಿಕೊಳ್ಳುವುದು, ವಿಕೆಟ್&zwnj;ಗಳ ನಡುವೆ ಓಡುವುದು ಮತ್ತು ತಂತ್ರ ರೂಪಿಸುವುದು ಅತ್ಯಂತ ಸವಾಲಿನ ಕೆಲಸ. ಆದರೂ, ಪಾಲುದಾರರು ಬದಲಾಗುತ್ತಿದ್ದರೂ ಕುಕ್ ಅವರ ಗಮನ ಹಾಗೂ ಬ್ಯಾಟಿಂಗ್ ಫಾರ್ಮ್&zwnj;ಗೆ ಯಾವುದೇ ಭಂಗ ಬರಲಿಲ್ಲ. ಇಂಗ್ಲೆಂಡ್ ಪರ 161 ಟೆಸ್ಟ್ ಪಂದ್ಯಗಳನ್ನಾಡಿದ ಅವರು 33 ಶತಕಗಳನ್ನು ಸಿಡಿಸಿದರು. 2018 ರಲ್ಲಿ ಓವಲ್&zwnj;ನಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲೂ ಶತಕ ಬಾರಿಸಿ ಕುಕ್ ವಿದಾಯ ಹೇಳಿದರು. 15 ವಿವಿಧ ಪಾಲುದಾರರ ನಡುವೆಯೂ 12,472 ರನ್ ಕಲೆಹಾಕಿದ ಅಲಸ್ಟೇರ್ ಕುಕ್ ಅವರ ಈ ಸಾಧನೆ, ಅವರ ನಾಯಕತ್ವ, ತಾಳ್ಮೆ ಮತ್ತು ಅಪಾರ ಸಮರ್ಪಣೆಗೆ ಹಿಡಿದ ಕನ್ನಡಿಯಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/alastair-cook-12472-runs-cricket-record-15-different-opening-partners-bmk/articleshow-tdzyttd"/>
        </item>
        <item>
            <title><![CDATA[ಮದುವೆ ಬಳಿಕ ಮಹತ್ವದ ನಿರ್ಧಾರ ತೆಗೆದುಕೊಂಡ ಮಾಸ್ಟರ್ ಬ್ಲಾಸ್ಟರ್ ಪುತ್ರ ಅರ್ಜುನ್ ತೆಂಡೂಲ್ಕರ್]]></title>
            <link>https://kannada.asianetnews.com/cricket-sports/sachin-tendulkar-son-arjun-tendulkar-takes-major-career-decision-after-marriage/articleshow-v86z8ou</link>
            <guid isPermaLink="true">https://kannada.asianetnews.com/cricket-sports/sachin-tendulkar-son-arjun-tendulkar-takes-major-career-decision-after-marriage/articleshow-v86z8ou</guid>
            <pubDate>Fri, 21 Aug 2026 11:53:22 +0530</pubDate>
            <description><![CDATA[&lt;p&gt;ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಲವು ಗೊಂದಲಗಳಿಗೆ ತೆರೆ ಏಳೆದಿದ್ದಾರೆ. ಏನದು ಅರ್ಜುನ್ ನಿರ್ಧಾರ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3gbjhf7wk1ad7behbt0rgh,imgname-sachin-tendulkar-daughter-in-law-1783602989615.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.21)&lt;/strong&gt; ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ಬಹುಕಾಲದ ಗೆಳತಿ ಸಾನಿಯಾ ಚಂದೋಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ದೂರಿ ಮದುವೆ ಮಹೋತ್ಸವದಲ್ಲಿ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ಮದುವೆ ಬಳಿಕ ಐಪಿಎಲ್ ಟೂರ್ನಿ ಆಡಿದ ಅರ್ಜುನ್ ತೆಂಡೂಲ್ಕರ್ ಇದೀಗ ಕರಿಯರ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಗೊಂದಲ ಸೇರಿದಂತೆ ಹಲವು ಊಹಾಪೋಹಗಳಿಗೆ ತೆರೆ ಏಳೆದಿದ್ದಾರೆ.&lt;/p&gt;&lt;h2&gt;ಅರ್ಜುನ್ ತೆಂಡೂಲ್ಕರ್ ತೆಗೆದುಕೊಂಡ ನಿರ್ಧಾರವೇನು?&lt;/h2&gt;&lt;p&gt;ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಗೆ ಜಾರಿದ್ದ ಅರ್ಜುನ್ ತೆಂಡೂಲ್ಕರ್ ಪತ್ನಿ ಸಾನಿಯಾ ಚಂದೋಕ್ ಜೊತೆ ಪ್ರವಾಸದಲ್ಲಿದ್ದರು. ದೇಶಿ ಮಟ್ಟದಲ್ಲಿ ಗೋವಾ ರಾಜ್ಯದ ಪರ ಕ್ರಿಕೆಟ್ ಆಡುವ ಅರ್ಜುನ್ ತೆಂಡೂಲ್ಕರ್ ಕರಿಯರ್ ಕುರಿತು ಅನುಮಾನಗಳು ವ್ಯಕ್ತವಾಗಿತ್ತು. ಇತ್ತೀಚೆಗೆ ಗೋವಾ ತಂಡದ ಓಮನ್ ಪ್ರವಾಸಕ್ಕೂ ಅರ್ಜುನ್ ತೆಂಡೂಲ್ಕರ್ ಗೈರಾಗಿದ್ದರು. ಇದಕ್ಕೂ ಮೊದಲು ಕೆಲ ಟೂರ್ನಿಗಳಿಗೂ ಗೈರಾಗಿದ್ದರು. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ತೊರೆಯುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಈ ಕುರಿತು ಸ್ಪಷ್ಟನೆ ಹೊರಬಿದ್ದಿದೆ. ಅರ್ಜುನ್ ತೆಂಡೂಲ್ಕರ್ ಗೋವಾ ತಂಡದಲ್ಲೇ ಮುಂದುವರಿಯುತ್ತಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.&lt;/p&gt;&lt;p&gt;ಮುಂಬರುವ ದೇಶಿ ಟೂರ್ನಿಯಲ್ಲಿ ಗೋವಾ ತಂಡದ ಮುಂದುವರಿಯುವುದಾಗಿ ಅರ್ಜುನ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ ಈಗಾಗಲೇ ಅಭ್ಯಾಸ ಕೂಡ ಆರಂಭಿಸಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಕ್ ಸ್ಕಿಲ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಗೋವಾ ರಣಜಿ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಅರ್ಜುನ್ ತೆಂಡೂಲ್ಕರ್ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಲು ಮುಂದಾಗಿದ್ದಾರೆ.&lt;/p&gt;&lt;h2&gt;2022-23ರಲ್ಲಿ ಮುಂಬೈ ತೊರೆದು ಗೋವಾ ಸೇರಿದ್ದ ಅರ್ಜುನ್&lt;/h2&gt;&lt;p&gt;ಮುಂಬೈ ತಂಡದ ಪರ ಆಡುತ್ತಿದ್ದ ಅರ್ಜುನ್ ತೆಂಡೂಲ್ಕರ್&zwnj;ಗೆ ಅವಕಾಶದ ಕೊರತೆ ಎದುರಾಗಿತ್ತು. ಕೆಲ ವರ್ಷಗಳ ಕಾಲ ಮುಂಬೈ ತಂಡದಲ್ಲಿ ಅವಕಾಶಕ್ಕಾಗಿ ಕಾದ ಅರ್ಜುನ್ ತೆಂಡೂಲ್ಕರ್ ಅನಿವಾರ್ಯವಾಗಿ ಮುಂಬೈ ತಂಡವನ್ನು ತೊರೆದಿದ್ದರು. ಮುಂಬೈ ತೊರೆದ ಅರ್ಜುನ್ ತೆಂಡೂಲ್ಕರ್ ಗೋವಾ ತಂಡ ಸೇರಿಕೊಂಡಿದ್ದರು. ಗೋವಾ ತಂಡ ಸೇರಿಕೊಂಡ ಬೆನ್ನಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದರು. ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಅರ್ಜುನ್ ತೆಂಡೂಲ್ಕರ್ 50 ವಿಕೆಟ್ ಕಬಳಿಸಿ ಮಿಂಚಿದ್ದಾರೆ.&lt;/p&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿರುವ ಅರ್ಜುನ್ ತೆಂಡೂಲ್ಕರ್ ಉತ್ತಮ ಪ್ರದರ್ಶನದ ಮೂಲಕ ಗಮನಸೆಳೆದಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನದ ಮೂಲಕ ಆಯ್ಕೆ ಸಮಿತಿ ಗಮನಸೆಳೆಯಲು ಮುಂದಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/sachin-tendulkar-son-arjun-tendulkar-takes-major-career-decision-after-marriage/articleshow-v86z8ou"/>
        </item>
        <item>
            <title><![CDATA[ಸಚಿನ್ vs ಕೊಹ್ಲಿ: ಮಾಸ್ಟರ್ ಬ್ಲಾಸ್ಟರ್‌ ಹೆಸರಿನಲ್ಲಿರುವ ಈ ದಾಖಲೆಗಳನ್ನ ಮುರೀತಾರಾ ಚೇಸ್‌ ಮಾಸ್ಟರ್?]]></title>
            <link>https://kannada.asianetnews.com/cricket-sports/virat-kohli-completes-18-years-can-the-king-break-these-6-sachin-records/articleshow-vgmb8hl</link>
            <guid isPermaLink="true">https://kannada.asianetnews.com/cricket-sports/virat-kohli-completes-18-years-can-the-king-break-these-6-sachin-records/articleshow-vgmb8hl</guid>
            <pubDate>Thu, 20 Aug 2026 12:16:24 +0530</pubDate>
            <description><![CDATA[&lt;p&gt;ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿ 18 ವರ್ಷ ಪೂರ್ಣಗೊಳಿಸಿದ್ದಾರೆ. 2008ರಲ್ಲಿ 12 ರನ್&zwnj;ಗಳಿಂದ ಆರಂಭವಾದ ಪಯಣ ಇಂದು ದಾಖಲೆಗಳ ಸಾಮ್ರಾಜ್ಯವಾಗಿದೆ. ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಈಗಾಗಲೇ ಮುರಿದಿರುವ ಕೊಹ್ಲಿ, ಇನ್ನೂ ಒಟ್ಟು ರನ್, ಶತಕಗಳು ಸೇರಿದಂತೆ ಕೆಲವು ದೊಡ್ಡ ದಾಖಲೆಗಳತ್ತ ಕಣ್ಣಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0antt7qwxbrxewdsmqtp2rz,imgname-virat-kohli-sachin-tendulkar-1787064838391.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿ ಆಗಸ್ಟ್ 18, 2026ಕ್ಕೆ 18 ವರ್ಷ ಪೂರ್ಣಗೊಳಿಸಿದ್ದಾರೆ. 2008ರಲ್ಲಿ ಶ್ರೀಲಂಕಾ ವಿರುದ್ಧದ ಡಂಬುಲ್ಲಾ ಪಂದ್ಯದಲ್ಲಿ ಕೇವಲ 12 ರನ್&zwnj;ಗಳಿಂದ ಆರಂಭವಾದ ಅವರ ಪಯಣ ಇಂದು ದಾಖಲೆಗಳ ದೊಡ್ಡ ಪಟ್ಟಿಯನ್ನೇ ನಿರ್ಮಿಸಿದೆ.&lt;/p&gt;&lt;p&gt;&lt;strong&gt;ಕ್ರಿಕೆಟ್&zwnj;ನ ಕಿಂಗ್&zwnj;ವರೆಗೆ ಕೊಹ್ಲಿಯ ಪಯಣ!&lt;/strong&gt;&lt;/p&gt;&lt;p&gt;19 ವರ್ಷದ ಯುವಕನಾಗಿ ಭಾರತ ತಂಡಕ್ಕೆ ಬಂದ ಕೊಹ್ಲಿ, ನಂತರ ವಿಶ್ವದ ಶ್ರೇಷ್ಠ ಬ್ಯಾಟರ್&zwnj;ಗಳಲ್ಲಿ ಒಬ್ಬರಾದರು. ವಿಶೇಷವಾಗಿ ರನ್ ಚೇಸಿಂಗ್&zwnj;ನಲ್ಲಿ ಅವರ ಅದ್ಭುತ ಪ್ರದರ್ಶನದಿಂದ &lsquo;ಚೇಸ್ ಮಾಸ್ಟರ್&rsquo; ಎಂಬ ಖ್ಯಾತಿ ಗಳಿಸಿದರು. 2010ರ ದಶಕದಲ್ಲಿ ಅವರು 20,960 ಅಂತಾರಾಷ್ಟ್ರೀಯ ರನ್ ಗಳಿಸಿದ್ದು, ಒಂದೇ ದಶಕದಲ್ಲಿ 20 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ ಏಕೈಕ ಬ್ಯಾಟರ್ ಆಗಿದ್ದಾರೆ.&lt;/p&gt;&lt;p&gt;&lt;strong&gt;ಸಚಿನ್ ದಾಖಲೆ ಮುರಿಯುವ ಹಾದಿಯಲ್ಲಿ ಕೊಹ್ಲಿ!&lt;/strong&gt;&lt;/p&gt;&lt;p&gt;ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಈಗಾಗಲೇ ಕೊಹ್ಲಿ ಮುರಿದಿದ್ದಾರೆ. ಏಕದಿನ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಶತಕಗಳ ದಾಖಲೆ ಕೂಡ ಈಗ ಕೊಹ್ಲಿ ಹೆಸರಿನಲ್ಲಿದೆ. ವೇಗವಾಗಿ 10,000ರಿಂದ 14,000 ODI ರನ್&zwnj;ಗಳವರೆಗೆ ತಲುಪಿದ ದಾಖಲೆಗಳನ್ನೂ ಅವರು ತಮ್ಮದಾಗಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇನ್ನೂ ಯಾವ ದಾಖಲೆಗಳು ಕೊಹ್ಲಿಯ ಮುಂದಿವೆ?&lt;/strong&gt;&lt;/p&gt;&lt;p&gt;ಸಚಿನ್ ತೆಂಡೂಲ್ಕರ್ 34,357 ಅಂತಾರಾಷ್ಟ್ರೀಯ ರನ್ ಹಾಗೂ 100 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 28,359 ರನ್ ಮತ್ತು 85 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಸಚಿನ್&zwnj;ರ ಒಟ್ಟು ರನ್ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 5,999 ರನ್, 100 ಶತಕಗಳ ಮೈಲಿಗಲ್ಲು ದಾಟಲು ಇನ್ನೂ 16 ಶತಕ ಬೇಕಾಗುತ್ತದೆ.&lt;/p&gt;&lt;p&gt;&lt;strong&gt;ODIನಲ್ಲಿ ಮಾತ್ರ ಕೊಹ್ಲಿಗೆ ಇನ್ನೂ ಅವಕಾಶ!&lt;/strong&gt;&lt;/p&gt;&lt;p&gt;ಇಲ್ಲಿ ಒಂದು ಪ್ರಮುಖ ಅಂಶವೆಂದರೆ, ಕೊಹ್ಲಿ ಟೆಸ್ಟ್ ಮತ್ತು T20I ಕ್ರಿಕೆಟ್&zwnj;ನಿಂದ ನಿವೃತ್ತರಾಗಿರುವುದರಿಂದ ಅವರ ಅಂತಾರಾಷ್ಟ್ರೀಯ ರನ್ ಹಾಗೂ ಶತಕಗಳ ಸಂಖ್ಯೆ ಈಗ ODIಗಳಲ್ಲಿ ಮಾತ್ರ ಹೆಚ್ಚಾಗಲಿದೆ. ODIನಲ್ಲಿ ಸಚಿನ್ 18,426 ರನ್ ಗಳಿಸಿದ್ದರೆ, ಕೊಹ್ಲಿ ಈಗಾಗಲೇ 14,941 ರನ್&zwnj;ಗಳಲ್ಲಿದ್ದಾರೆ. ಅಂದರೆ ಸಚಿನ್&zwnj;ರ ODI ರನ್ ದಾಖಲೆ ಮುರಿಯಲು 3,486 ರನ್ ಬೇಕು. ಆದರೆ ODI ಶತಕಗಳ ವಿಷಯದಲ್ಲಿ ಕೊಹ್ಲಿ ಈಗಾಗಲೇ ಸಚಿನ್&zwnj;ರನ್ನು ಹಿಂದಿಕ್ಕಿದ್ದು, 54 ಶತಕಗಳೊಂದಿಗೆ ಸಚಿನ್&zwnj;ರ 49 ಶತಕಗಳ ದಾಖಲೆ ಮುರಿದಿದ್ದಾರೆ.&lt;/p&gt;&lt;p&gt;&lt;strong&gt;ಸಚಿನ್ ದಾಖಲೆಗಳನ್ನು ಮುರಿಯಲು ಸಾಧ್ಯವೇ?&lt;/strong&gt;&lt;/p&gt;&lt;p&gt;ಸಚಿನ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆ ಮತ್ತು ಒಟ್ಟು ರನ್&zwnj;ಗಳಂತಹ ಮೈಲಿಗಲ್ಲುಗಳು ಅತ್ಯಂತ ಕಠಿಣ ಸವಾಲು. ಕೊಹ್ಲಿ ಸ್ವತಃ ದಾಖಲೆಗಳ ಬೆನ್ನಟ್ಟುವಿಕೆಗೆ ಹೆಚ್ಚು ಒತ್ತು ನೀಡುವುದಿಲ್ಲ, ಬದಲಿಗೆ ಆಟವನ್ನು ಆನಂದಿಸುವುದೇ ಮುಖ್ಯ ಎಂದು ಹೇಳಿದ್ದಾರೆ. ಆದರೂ ಅವರ ಬ್ಯಾಟ್&zwnj; ಹೀಗೆ ಮುಂದುವರಿದರೆ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಮಾತ್ರ ಕಡಿಮೆಯಾಗುವುದಿಲ್ಲ.&lt;/p&gt;&lt;p&gt;&lt;strong&gt;18 ವರ್ಷಗಳ ಬಳಿಕವೂ &lsquo;ಕಿಂಗ್&rsquo;ನ ಅಬ್ಬರ!&lt;/strong&gt;&lt;/p&gt;&lt;p&gt;ಕೊಹ್ಲಿಯ ಪಯಣದಲ್ಲಿ ಏರಿಳಿತಗಳಿದ್ದರೂ, ಪ್ರಮುಖ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಅವರ ವಿಶೇಷತೆ. 2023ರ ODI ವಿಶ್ವಕಪ್&zwnj;ನಲ್ಲಿ 765 ರನ್ ಗಳಿಸಿ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/virat-kohli-completes-18-years-can-the-king-break-these-6-sachin-records/articleshow-vgmb8hl"/>
        </item>
        <item>
            <title><![CDATA[Cricket: ಟೀಮ್ ಇಂಡಿಯಾದಲ್ಲಿ ಏಕಾಏಕಿ ದೊಡ್ಡ ಬದಲಾವಣೆ! ಸ್ಟಾರ್‌ ಪ್ಲೇಯರ್‌ ಔಟ್? 2ನೇ ಟೆಸ್ಟ್‌ಗೆ ಭಾರತದ ಸರ್ಪ್ರೈಸ್ 'ಪ್ಲೇಯಿಂಗ್ 11]]></title>
            <link>https://kannada.asianetnews.com/cricket-sports/india-vs-sri-lanka-2nd-test-team-india-playing-xi-kuldeep-yadav-saransh-jain-bmk/articleshow-x8nat3h</link>
            <guid isPermaLink="true">https://kannada.asianetnews.com/cricket-sports/india-vs-sri-lanka-2nd-test-team-india-playing-xi-kuldeep-yadav-saransh-jain-bmk/articleshow-x8nat3h</guid>
            <pubDate>Thu, 20 Aug 2026 22:04:46 +0530</pubDate>
            <description><![CDATA[ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಗೆದ್ದರೂ, ಭಾರತ ತಂಡವು ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಆಡುವ XI ನಲ್ಲಿ ಬದಲಾವಣೆ ಮಾಡಲು ಯೋಜಿಸುತ್ತಿದೆ. ಸ್ಪಿನ್ನರ್ ಕುಲದೀಪ್ ಯಾದವ್ ಬದಲಿಗೆ ಆಲ್&zwnj;ರೌಂಡರ್ ಸರಾನ್ಶ್ ಜೈನ್ ಚೊಚ್ಚಲ ಪ್ರವೇಶ ಮಾಡುವ ಸಾಧ್ಯತೆಯಿದ್ದು, ಧ್ರುವ್ ಜುರೆಲ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7w1wd5fw654b2c3efneycn,imgname-team-india-test-1785896956325.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 165 ರನ್&zwnj;ಗಳ ಬೃಹತ್ ಅಂತರದಿಂದ ಭರ್ಜರಿ ಜಯ ಗಳಿಸಿದೆ. ಗಾಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದ ಗೆಲುವಿನೊಂದಿಗೆ, ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಗೆಲುವು ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ಫೈನಲ್ ರೇಸ್&zwnj;ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿದ್ದು, ಲಾರ್ಡ್ಸ್&zwnj;ನಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೆ ಅರ್ಹತೆ ಪಡೆಯುವ ಸ್ಪರ್ಧೆಯನ್ನು ಹೆಚ್ಚು ರೋಮಾಂಚನಗೊಳಿಸಿದೆ.&lt;/p&gt;&lt;h2&gt;&lt;strong&gt;ಪ್ರಮುಖ ಬದಲಾವಣೆ!&lt;/strong&gt;&lt;/h2&gt;&lt;p&gt;ಮೊದಲ ಟೆಸ್ಟ್&zwnj;ನಲ್ಲಿ ಸುಲಭ ಗೆಲುವು ಸಾಧಿಸಿದರೂ, ಆಗಸ್ಟ್ 23, 2026 ರಿಂದ ಕೊಲಂಬೊದ ಎಸ್&zwnj;ಎಸ್&zwnj;ಸಿ (SSC) ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಆಡುವ 11ರ ಬಳಗದಲ್ಲಿ (Playing XI) ಭಾರತ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲು ಯೋಜಿಸುತ್ತಿದೆ.&lt;/p&gt;&lt;h3&gt;&lt;strong&gt;ಸ್ಪಿನ್ ವಿಭಾಗದಲ್ಲಿ ಬದಲಾವಣೆ; ಕುಲದೀಪ್ ಯಾದವ್ ಔಟ್&zwnj;?&lt;/strong&gt;&lt;/h3&gt;&lt;p&gt;ನಾಯಕ ಶುಭಮನ್ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರಗಾರಿಕೆಯಲ್ಲಿ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಪ್ರಸ್ತುತ ಮೊದಲ ಆದ್ಯತೆಯಾಗಿ ಉಳಿದಿಲ್ಲ ಎಂಬುದು ಗಾಲೆ ಟೆಸ್ಟ್&zwnj;ನ ಅಂಕಿಅಂಶಗಳಿಂದ ಸ್ಪಷ್ಟವಾಗಿದೆ. ಮೊದಲ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ಸುದೀರ್ಘ ಓವರ್&zwnj;ಗಳ ಬೌಲಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡರೆ, ಕುಲದೀಪ್ ಯಾದವ್ ಇಡೀ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದು ಕೇವಲ 25 ಓವರ್&zwnj;ಗಳನ್ನು ಮಾತ್ರ.&lt;/p&gt;&lt;h3&gt;&lt;strong&gt;ಸರಾನ್ಶ್ ಜೈನ್ ಎಂಟ್ರಿ?&lt;/strong&gt;&lt;/h3&gt;&lt;p&gt;ತಂಡದ ಆಡಳಿತವು ಮೂರನೇ ಸ್ಪಿನ್ನರ್ ಸ್ಥಾನಕ್ಕೆ ಪರ್ಯಾಯ ಆಯ್ಕೆಯನ್ನು ಹುಡುಕುತ್ತಿದ್ದು, 33 ವರ್ಷದ ಮಧ್ಯಪ್ರದೇಶದ ಆಲ್&zwnj;ರೌಂಡರ್ ಸರಾನ್ಶ್ ಜೈನ್ ಎರಡನೇ ಟೆಸ್ಟ್ ಮೂಲಕ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್&zwnj;ಗೆ ಚೊಚ್ಚಲ ಪ್ರವೇಶ (Debut) ಮಾಡುವ ಸಾಧ್ಯತೆಯಿದೆ. ದೇಶೀಯ ಕ್ರಿಕೆಟ್&zwnj;ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಸರಾನ್ಶ್, ಉಪಯುಕ್ತ ಆಫ್-ಸ್ಪಿನ್ ಜೊತೆಗೆ ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ತಂಡದ ಸಮತೋಲನವನ್ನು ಹೆಚ್ಚಿಸಲಿದ್ದಾರೆ.&lt;/p&gt;&lt;h3&gt;&lt;strong&gt;ಜುರೆಲ್ ಪ್ರದರ್ಶನ ಮತ್ತು ಮಿಡಲ್ ಆರ್ಡರ್!&lt;/strong&gt;&lt;/h3&gt;&lt;p&gt;ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯ ಮತ್ತು ತಾಂತ್ರಿಕ ಸಂಯಮದ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್&zwnj;ನಲ್ಲಿ ಅವರು ಬಾರಿಸಿದ ನಿರ್ಣಾಯಕ ಅರ್ಧಶತಕವು ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾಯಿತು. ಒತ್ತಡದ ಪರಿಸ್ಥಿತಿಯನ್ನು ಜುರೆಲ್ ನಿಭಾಯಿಸಿದ ರೀತಿ ತಂಡದ ಮ್ಯಾನೇಜ್&zwnj;ಮೆಂಟ್&zwnj;ಗೆ ಆತ್ಮವಿಶ್ವಾಸ ನೀಡಿದ್ದು, ಪರಿಣಾಮವಾಗಿ ಸರ್ಫರಾಜ್ ಖಾನ್ ಮತ್ತೊಮ್ಮೆ ಕಾಯ್ದಿರಿಸಿದ ಆಟಗಾರರ ಸಾಲಿನಲ್ಲಿ (ಬೆಂಚ್&zwnj;) ಉಳಿಯಬೇಕಾಗಬಹುದು.&lt;/p&gt;&lt;h3&gt;&lt;strong&gt;ವೇಗದ ಬೌಲಿಂಗ್ ವಿಭಾಗ!&lt;/strong&gt;&lt;/h3&gt;&lt;p&gt;ಸ್ಪಿನ್ ಸ್ನೇಹಿ ಪಿಚ್&zwnj;ಗಳಲ್ಲಿ ವೇಗಿಗಳ ಪಾತ್ರ ಸೀಮಿತವಾಗಿದ್ದರೂ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ತಮ್ಮ ನಿಖರ ಎಸೆತಗಳಿಂದ ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದಲ್ಲಿ ಯುವ ವೇಗಿ ಗುರ್ನೂರ್ ಬ್ರಾರ್ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆಯಾದರೂ, ಸರಣಿಯ ನಿರ್ಣಾಯಕ ಹಂತದಲ್ಲಿ ಗೆಲ್ಲುವ ಸಂಯೋಜನೆಯನ್ನು ಬದಲಾಯಿಸುವ ಅಪಾಯವನ್ನು ತೆಗೆದುಕೊಳ್ಳಲು ಮ್ಯಾನೇಜ್&zwnj;ಮೆಂಟ್ ಇಷ್ಟಪಡುತ್ತಿಲ್ಲ. ಹೀಗಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.&lt;/p&gt;&lt;h3&gt;&lt;strong&gt;ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ XI!&lt;/strong&gt;&lt;/h3&gt;&lt;p&gt;ಆರಂಭಿಕರು; ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್&lt;/p&gt;&lt;p&gt;ಮಧ್ಯಮ ಕ್ರಮಾಂಕ; ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್&lt;/p&gt;&lt;p&gt;ಆಲ್&zwnj;ರೌಂಡರ್/ಸ್ಪಿನ್ನರ್&zwnj;ಗಳು; ರವೀಂದ್ರ ಜಡೇಜಾ, ಸರಾನ್ಶ್ ಜೈನ್, ಮಾನವ್ ಸುತಾರ್&lt;/p&gt;&lt;p&gt;ವೇಗದ ಬೌಲರ್&zwnj;ಗಳು; ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-sri-lanka-2nd-test-team-india-playing-xi-kuldeep-yadav-saransh-jain-bmk/articleshow-x8nat3h"/>
        </item>
        <item>
            <title><![CDATA[ಗಾಲೆ ಟೆಸ್ಟ್ ಹೀನಾಯ ಸೋಲಿನ ಬೆನ್ನಲ್ಲೇ ಶ್ರೀಲಂಕಾಗೆ ಡಬಲ್ ಶಾಕ್; ಎರಡನೇ ಟೆಸ್ಟ್‌ನಿಂದ ಇಬ್ಬರು ಸ್ಟಾರ್ ಕ್ರಿಕೆಟರ್ಸ್ ಔಟ್]]></title>
            <link>https://kannada.asianetnews.com/cricket-sports/india-vs-sri-lanka-2nd-test-dinesh-chandimal-kusal-mendis-ruled-out-big-blow-for-hosts-kvn/articleshow-xg6zyhn</link>
            <guid isPermaLink="true">https://kannada.asianetnews.com/cricket-sports/india-vs-sri-lanka-2nd-test-dinesh-chandimal-kusal-mendis-ruled-out-big-blow-for-hosts-kvn/articleshow-xg6zyhn</guid>
            <pubDate>Thu, 20 Aug 2026 11:21:39 +0530</pubDate>
            <description><![CDATA[ಭಾರತ ವಿರುದ್ಧದ ಗಾಲೆ ಟೆಸ್ಟ್&zwnj;ನಲ್ಲಿ ಹೀನಾಯ ಸೋಲು ಕಂಡ ಶ್ರೀಲಂಕಾ ತಂಡಕ್ಕೆ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ದೊಡ್ಡ ಆಘಾತ ಎದುರಾಗಿದೆ. ಗಾಯದ ಸಮಸ್ಯೆಯಿಂದಾಗಿ ತಂಡದ ಪ್ರಮುಖ ಬ್ಯಾಟರ್&zwnj;ಗಳಾದ ದಿನೇಶ್ ಚಂಡಿಮಾಲ್ ಮತ್ತು ಕುಸಾಲ್ ಮೆಂಡಿಸ್ ಕೊಲಂಬೊ ಟೆಸ್ಟ್&zwnj;ನಿಂದ ಹೊರಬಿದ್ದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m09bqc2nzdzte4a7z259r7xb,imgname-india-vs-sri-lanka-1st-test-1787020685397.gif" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್&zwnj; ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವು 165 ರನ್&zwnj;ಗಳ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನ ಶಾಕ್&zwnj;ನಿಂದ ಹೊರಬರುವ ಮುನ್ನವೇ ಲಂಕಾ ಪಡೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಆಗಸ್ಟ್&zwnj; 23ರಿಂದ ಆರಂಭವಾಗಲಿರುವ ಭಾರತ ಎದುರಿನ ಎರಡನೇ ಟೆಸ್ಟ್ ಪಂದ್ಯದಿಂದ ಇಬ್ಬರು ಆಟಗಾರರು ಹೊರಬಿದ್ದಿದ್ದಾರೆ. ಇದು ಲಂಕಾ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.&lt;/p&gt;&lt;p&gt;ಹೌದು, ಭಾರತ ಎದುರಿನ ಕೊಲಂಬೊ ಟೆಸ್ಟ್ ಪಂದ್ಯದಿಂದ ಲಂಕಾದ ಪ್ರಮುಖ ಬ್ಯಾಟರ್ ದಿನೇಶ್ ಚಂಡಿಮಾಲ್ ಹಾಗೂ ಕುಸಾಲ್ ಮೆಂಡಿಸ್ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್&zwnj; ತಂಡದ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್&zwnj; ಖಚಿತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸ್ನಾಯು ಸೆಳೆತದಿಂದ ಬಳಲುತ್ತಿರುವ ಮೆಂಡಿಸ್:&lt;/strong&gt;&lt;/h2&gt;&lt;p&gt;ಶ್ರೀಲಂಕಾದ ಅನುಭವಿ ಬ್ಯಾಟರ್ ಕುಸಾಲ್ ಮೆಂಡಿಸ್ ಸ್ನಾಯು ಸೆಳೆತದಿಂದ ಬಳಲುತ್ತಿದ್ದು, ಭಾನುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ಇನ್ನು ಸಹ ಆಟಗಾರ ಚಂಡಿಮಾಲ್, ಭಾರತ ಎದುರಿನ ಗಾಲೆ ಟೆಸ್ಟ್ ಪಂದ್ಯದ ವೇಳೆಯಲ್ಲಿ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದರು. ಹೀಗಾಗಿ ಕನ್&zwnj;ಕಷನ್ ಆಟಗಾರನ ರೂಪದಲ್ಲಿ ಚಂಡಿಮಾಲ್ ಬದಲಿಗೆ ಪಸಿಂದು ಸೂರ್ಯಬಂಡಾರ ಲಂಕಾ ತಂಡ ಕೂಡಿಕೊಂಡಿದ್ದರು.&lt;/p&gt;&lt;p&gt;ಐಸಿಸಿ ನಿಯಮಾವಳಿ ಪ್ರಕಾರ, ಕನ್&zwnj;ಕಷನ್ ಸಬ್&zwnj;ಸ್ಟಿಟ್ಯೂಟ್ ಆಟಗಾರನಾಗಿ ತಂಡದಿಂದ ಹೊರಗುಳಿದರೆ, ಆತ ಕಡ್ಡಾಯವಾಗಿ ಏಳು ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಿಂದ ವಿಶ್ರಾಂತಿ ಪಡೆಯಬೇಕಾಗುತ್ತದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ಕೇವಲ 4 ದಿನಗಳ ಅಂತರದಲ್ಲಿ ಆರಂಭವಾಗುತ್ತಿದೆ. ಹೀಗಾಗಿ ದಿನೇಶ್ ಚಂಡಿಮಾಲ್, ಅನಿವಾರ್ಯವಾಗಿ ಎರಡನೇ ಟೆಸ್ಟ್&zwnj;ನಿಂದ ಹೊರಬಿದ್ದಿದ್ದಾರೆ.&lt;/p&gt;&lt;p&gt;ಶ್ರೀಲಂಕಾ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಕುಸಾಲ್ ಮೆಂಡಿಸ್, ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆಯಲ್ಲಿಯೇ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. 'ದಿನೇಶ್ ಚಂಡಿಮಾಲ್ ಎರಡನೇ ಟೆಸ್ಟ್&zwnj;ಗೆ ಅಲಭ್ಯರಾಗಿದ್ದಾರೆ. ಅದೇ ರೀತಿ ಕುಸಾಲ್ ಮೆಂಡಿಸ್ ಕೂಡಾ ಭಾರತ ಎದುರಿನ ಕೊಲಂಬೊ ಟೆಸ್ಟ್&zwnj;ನಿಂದ ಹೊರಬಿದ್ದಿದ್ದಾರೆ' ಎಂದು ಶ್ರೀಲಂಕಾ ಹೆಡ್&zwnj; ಕೋಚ್ ಗ್ಯಾರಿ ಖಚಿತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಡಬ್ಲ್ಯುಟಿಸಿ ರ್&zwj;ಯಾಂಕಿಂಗ್&zwnj;ನಲ್ಲಿ 5ನೇ ಸ್ಥಾನದಲ್ಲೇ ಭಾರತ&lt;/strong&gt;&lt;/h3&gt;&lt;p&gt;ಶ್ರೀಲಂಕಾ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ 2025-27ರ ವಿಶ್ವ ಟೆಸ್ಟ್&zwnj; ಚಾಂಪಿಯನ್&zwnj;ಶಿಪ್&zwnj; ಅಂಕಪಟ್ಟಿಯಲ್ಲಿ ಭಾರತ ಪ್ರಗತಿ ಸಾಧಿಸಿದೆ. ತಂಡ 5ನೇ ಸ್ಥಾನದಲ್ಲೇ ಬಾಕಿಯಾಗಿದ್ದರೂ, ಗೆಲುವಿನ ಶೇಕಡಾವಾರು ದಾಖಲೆಯಲ್ಲಿ ಹೆಚ್ಚಳವಾಗಿದೆ.&lt;/p&gt;&lt;p&gt;ಪಂದ್ಯಕ್ಕೂ ಮುನ್ನ ಭಾರತದ ಗೆಲುವಿನ ದಾಖಲೆ ಶೇ.48.15 ಇತ್ತು. ಈಗ ಅದು ಶೇ.53.33ಕ್ಕೆ ಏರಿಕೆಯಾಗಿದೆ. ತಂಡ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದು, 5ರಲ್ಲಿ ಜಯಗಳಿಸಿದೆ. ಆಸ್ಟ್ರೇಲಿಯಾ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಶೇ.77.78 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. 5 ಪಂದ್ಯಗಳ ಪೈಕಿ ಕೇವಲ 1ರಲ್ಲಿ ಜಯಗಳಿಸಿರುವ ಶ್ರೀಲಂಕಾ ಶೇ.33.33 ಗೆಲುವಿನ ದಾಖಲೆಯೊಂದಿಗೆ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-sri-lanka-2nd-test-dinesh-chandimal-kusal-mendis-ruled-out-big-blow-for-hosts-kvn/articleshow-xg6zyhn"/>
        </item>
    </channel>
</rss>
