<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 10 Sep 2026 22:05:23 +0530</lastBuildDate>
        <atom:link href="https://kannada.asianetnews.com/rss/cricket-sports" rel="self" type="application/rss+xml"/>
        <item>
            <title><![CDATA[Cricket: ಭಾರತ-ಅಫ್ಘಾನಿಸ್ತಾನ್ 1ನೇ ಟಿ20 ಪಂದ್ಯ ರದ್ದು?: ಆ ಒಂದು ಪತ್ರದ ಗೊಂದಲ, ಬಿಬಿಸಿಐ ಕೊಟ್ಟ ಸ್ಪಷ್ಟನೆ ಏನು?]]></title>
            <link>https://kannada.asianetnews.com/cricket-sports/india-vs-afghanistan-first-t20-september-13-delhi-arun-jaitley-stadium-brics-summit-ddca-match-update-bmk/articleshow-hfl0mvd</link>
            <guid isPermaLink="true">https://kannada.asianetnews.com/cricket-sports/india-vs-afghanistan-first-t20-september-13-delhi-arun-jaitley-stadium-brics-summit-ddca-match-update-bmk/articleshow-hfl0mvd</guid>
            <pubDate>Thu, 10 Sep 2026 22:05:18 +0530</pubDate>
            <description><![CDATA[&lt;p&gt;ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಭದ್ರತಾ ಕಾರಣಗಳಿಂದಾಗಿ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿಯನ್ನೊಮ್ಮೆ ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m262rca98ycmyybf81x9nqcd,imgname-cricket-afg-vs-ins-1789058101577.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 13 ರಿಂದ ಆರಂಭವಾಗಬೇಕಿದ್ದ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಬಹುನಿರೀಕ್ಷಿತ ಟಿ20 ಸರಣಿಯ ಮೊದಲ ಪಂದ್ಯದ ಮೇಲೆ ದಿಢೀರನೆ ಕಪ್ಪು ಮೋಡಗಳು ಆವರಿಸಿದ್ದವು. ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಈ ಪಂದ್ಯ ರದ್ದಾಗುತ್ತದೆಯೇ ಅಥವಾ ಮುಂದೂಡಲ್ಪಡುತ್ತದೆಯೇ ಎಂಬ ಗಂಭೀರ ಅನುಮಾನವೊಂದು ಇಡೀ ದೇಶದ ಕ್ರೀಡಾಲೋಕವನ್ನು ಕ್ಷಣಕಾಲ ಆತಂಕಕ್ಕೆ ತಳ್ಳಿತ್ತು. ದೆಹಲಿ ಟ್ರಾಫಿಕ್ ಪೊಲೀಸ್ ಉಪ ಆಯುಕ್ತರ ಕಚೇರಿಯಿಂದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಘಕ್ಕೆ (DDCA) ತಲುಪಿದ ಆ ಒಂದು ತುರ್ತು ಪತ್ರವೇ ಈ ಎಲ್ಲಾ ಕಂಟಕ ಮತ್ತು ರಾದ್ಧಾಂತಕ್ಕೆ ಮುಖ್ಯ ಕಾರಣವಾಗಿತ್ತು. ಆ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಪೋಲಿಸರ ಆ ಒಂದು ಪತ್ರದಲ್ಲಿದ್ದ ರಹಸ್ಯವೇನು?&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ದೆಹಲಿ ಸಂಚಾರ ಪೊಲೀಸರು ಡಿಡಿಸಿಎಗೆ ಬರೆದ ಆ ಪತ್ರದಲ್ಲೇನಿತ್ತು? ನವದೆಹಲಿಯಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ಅತ್ಯಂತ ಪ್ರತಿಷ್ಠಿತ 'ಬ್ರಿಕ್ಸ್ (BRICS) ಶೃಂಗಸಭೆ' ಆಯೋಜನೆಗೊಂಡಿದೆ. ವಿಶ್ವದ ಸಾಲು ಸಾಲು ಗಣ್ಯರು ಹಾಗೂ ಜಾಗತಿಕ ವಿವಿಐಪಿ (VVIP) ನಾಯಕರು ದೆಹಲಿಗೆ ಆಗಮಿಸುತ್ತಿದ್ದು, ಅವರ ರಕ್ಷಣೆ ಮತ್ತು ಸುಗಮ ಸಂಚಾರಕ್ಕಾಗಿ ದೆಹಲಿ ಪೊಲೀಸರು ಹಗಲಿರುಳು ಶ್ರಮಿಸಬೇಕಾಗಿದೆ. ಈ ಬೃಹತ್ ಜಾಗತಿಕ ಕಾರ್ಯಕ್ರಮದ ಕಾರಣದಿಂದ ರಸ್ತೆಗಳಲ್ಲಿ ಭಾರಿ ಭದ್ರತೆ ಒದಗಿಸುವುದು ಮತ್ತು ಟ್ರಾಫಿಕ್ ಅನ್ನು ಬೇರೆಡೆಗೆ ತಿರುಗಿಸುವ ಬೃಹತ್ ಜವಾಬ್ದಾರಿ ಸಂಚಾರ ಪೊಲೀಸರ ಮೇಲಿದೆ.&lt;/p&gt;&lt;h3&gt;&lt;strong&gt;ದಟ್ಟವಾಗಿದ್ದ ಅನುಮಾನ!&lt;/strong&gt;&lt;/h3&gt;&lt;p&gt;ಇದೇ ಸಮಯದಲ್ಲಿ ಅಂದರೆ ಸೆಪ್ಟೆಂಬರ್ 13 ರಂದೇ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪ್ರಥಮ ಟಿ20 ಪಂದ್ಯವೂ ನಿಗದಿಯಾಗಿತ್ತು. ಒಂದೆಡೆ ವಿಶ್ವ ನಾಯಕರ ಭದ್ರತೆ, ಇನ್ನೊಂದೆಡೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ನಿಯಂತ್ರಿಸುವ ಸವಾಲು! ಒಂದೇ ದಿನ ಎರಡು ಬೃಹತ್ ನೊಗವನ್ನು ಹೊರಲು ಸಾಧ್ಯವಾಗದೆ, ಟ್ರಾಫಿಕ್ ಪೊಲೀಸರು ಪಂದ್ಯವನ್ನು ಮುಂದೂಡುವಂತೆ ಅಥವಾ ರದ್ದುಗೊಳಿಸುವಂತೆ ವಿನಂತಿಸಿ ಡಿಡಿಸಿಎಗೆ ನೇರ ಪತ್ರ ರವಾನಿಸಿದ್ದರು. ಈ ಸುದ್ದಿ ಹೊರಬಿದ್ದ ತಕ್ಷಣ ಪಂದ್ಯ ನಡೆಯುವುದೇ ಇಲ್ಲವೇ ಎಂಬ ಅನುಮಾನ ದಟ್ಟವಾಗಿತ್ತು.&lt;/p&gt;&lt;h3&gt;&lt;strong&gt;ಕಡೆಗೂ ಮೌನ ಮುರಿದು ಕ್ಲಾರಿಟಿ ಕೊಟ್ಟ DDCA!&lt;/strong&gt;&lt;/h3&gt;&lt;p&gt;ಪೋಲಿಸರ ಪತ್ರದಿಂದ ಭಾರಿ ಚರ್ಚೆ ಮತ್ತು ಗೊಂದಲ ಸೃಷ್ಟಿಯಾಗುತ್ತಿದ್ದಂತೆ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಡಿಡಿಸಿಎ ತಕ್ಷಣವೇ ರಂಗಕ್ಕಿಳಿಯಿತು. ದೆಹಲಿ ಸಂಚಾರ ಪೊಲೀಸರೊಂದಿಗೆ ತಾಸುಗಳ ಕಾಲ ಸುದೀರ್ಘ ಸಭೆ ನಡೆಸಿದ ಕ್ರಿಕೆಟ್ ಮಂಡಳಿಯು, ಪಂದ್ಯದ ಭವಿಷ್ಯದ ಕುರಿತು ಮಹತ್ವದ ಅಧಿಕೃತ ಸ್ಪಷ್ಟನೆ ನೀಡಿದೆ.&lt;/p&gt;&lt;h3&gt;&lt;strong&gt;ಡಿಡಿಸಿಎ ಸ್ಪಷ್ಟನೆ ಏನು?&lt;/strong&gt;&lt;/h3&gt;&lt;p&gt;ಸೆಪ್ಟೆಂಬರ್ 13 ರಂದು ಅರುಣ್ ಜೇಟ್ಲಿ ಮೈದಾನದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಬೇಕಿದ್ದ ಮೊದಲ ಟಿ20 ಪಂದ್ಯವು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ, ನಿಗದಿತ ವೇಳಾಪಟ್ಟಿಯಂತೆಯೇ ಯಶಸ್ವಿಯಾಗಿ ನಡೆಯಲಿದೆ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ. ಪೊಲೀಸರ ಆತಂಕವನ್ನು ಶಮನ ಮಾಡಲು ಪಂದ್ಯಾವಳಿಯ ನಿರ್ವಹಣೆಗೆ ಬೇಕಾದ ಎಲ್ಲಾ ರೀತಿಯ ಹೆಚ್ಚುವರಿ ವ್ಯವಸ್ಥೆ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಯ ಸಹಕಾರವನ್ನು ತಾನೇ ಒದಗಿಸುವುದಾಗಿ ಮಂಡಳಿ ಭರವಸೆ ನೀಡಿದೆ.&lt;/p&gt;&lt;h3&gt;&lt;strong&gt;ಸರಣಿಯ ವೇಳಾಪಟ್ಟಿ ಹಾಗೂ ಭಾರತ ತಂಡ!&lt;/strong&gt;&lt;/h3&gt;&lt;p&gt;ಮೂರೂ ಟಿ20 ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲೇ ಜರುಗಲಿದ್ದು, ವೇಳಾಪಟ್ಟಿ ಹೀಗಿದೆ:&lt;/p&gt;&lt;p&gt;&lt;strong&gt;ಮೊದಲ ಟಿ20; &lt;/strong&gt;ಸೆಪ್ಟೆಂಬರ್ 13&lt;/p&gt;&lt;p&gt;&lt;strong&gt;ಎರಡನೇ ಟಿ20;&lt;/strong&gt; ಸೆಪ್ಟೆಂಬರ್ 15&lt;/p&gt;&lt;p&gt;&lt;strong&gt;ಮೂರನೇ ಟಿ20;&lt;/strong&gt; ಸೆಪ್ಟೆಂಬರ್ 17&lt;/p&gt;&lt;h3&gt;&lt;strong&gt;ಬಲಶಾಲಿ ಭಾರತ ತಂಡ!&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಯಶ್ ಠಾಕೂರ್. ಕೊನೆಗೂ ದೆಹಲಿ ಪೊಲೀಸರ ಅಭಯ ಮತ್ತು ಡಿಡಿಸಿಎ ನೀಡಿದ ಪಕ್ಕಾ ಪ್ಲಾನಿಂಗ್&zwnj;ನಿಂದಾಗಿ ಪಂದ್ಯದ ಮೇಲಿದ್ದ ರದ್ದತಿಯ ಕಂಟಕ ಸಂಪೂರ್ಣವಾಗಿ ದೂರವಾಗಿದ್ದು, ಸೆಪ್ಟೆಂಬರ್ 13 ರಂದು ಮೈದಾನದಲ್ಲಿ ಹೈ-ವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-afghanistan-first-t20-september-13-delhi-arun-jaitley-stadium-brics-summit-ddca-match-update-bmk/articleshow-hfl0mvd"/>
        </item>
        <item>
            <title><![CDATA[ಫೈನಲ್ ಮ್ಯಾಚ್‌ ಡ್ರಾ ಆದರೂ ದುಲಿಪ್ ಟ್ರೋಫಿ ಎತ್ತಿಹಿಡಿದ ಕಿಶನ್; ಗೆದ್ದ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ?]]></title>
            <link>https://kannada.asianetnews.com/cricket-sports/duleep-trophy-2026-final-east-zone-won-the-title-price-money-rs-1-crore/articleshow-fkup3yo</link>
            <guid isPermaLink="true">https://kannada.asianetnews.com/cricket-sports/duleep-trophy-2026-final-east-zone-won-the-title-price-money-rs-1-crore/articleshow-fkup3yo</guid>
            <pubDate>Thu, 10 Sep 2026 20:22:03 +0530</pubDate>
            <description><![CDATA[&lt;p&gt;ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್&zwnj;ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25wvfq84123n8zgvbmxcfrw,imgname-ishan-kishan-duleep-trophy-1789051911912.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್&zwnj;ನಲ್ಲಿ ದಾಖಲಿಸಿದ ಬೃಹತ್ ಮುನ್ನಡೆಯ ಆಧಾರದ ಮೇಲೆ ಇಶಾನ್ ಕಿಶನ್ ಸಾರಥ್ಯದ ಈಸ್ಟ್ ಜೋನ್ (East Zone) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಈಸ್ಟ್ ಜೋನ್ ಪ್ರಶಸ್ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿಯ ಜೊತೆಗೆ ಚಾಂಪಿಯನ್ ತಂಡ ಭರ್ಜರಿ ನಗದು ಬಹುಮಾನನು ಬಾಚಿಕೊಂಡಿದ್ದರೆ, ರನ್ನರ್-ಅಪ್ ಆದ ಸೌತ್ ಜೋನ್&zwnj; ಮೇಲೂ (South Zone) ಹಣದ ಮಳೆಯಾಗಿದೆ!&lt;/p&gt;&lt;h2&gt;&lt;strong&gt;ಈಸ್ಟ್ ಜೋನ್ 708 ರನ್!&lt;/strong&gt;&lt;/h2&gt;&lt;p&gt;ಫೈನಲ್ ಕದನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್&zwnj;ನಲ್ಲಿ ರನ್&zwnj;ಗಳ ಬೆಟ್ಟವನ್ನೇ ನಿರ್ಮಿಸಿತು.&lt;/p&gt;&lt;p&gt;ನಾಯಕ ಇಶಾನ್ ಕಿಶನ್ ಆಕರ್ಷಕ 270 ರನ್&zwnj;ಗಳ ದ್ವಿಶತಕ ಸಿಡಿಸಿ ಮಿಂಚಿದರೆ ಕುಮಾರ್ ಕುಶಾಗ್ರ 101 ರನ್ ಬಾರಿಸಿದರು. ಪರಿಣಾಮ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್&zwnj;ನಲ್ಲಿ 708 ರನ್&zwnj;ಗಳ ಬೃಹತ್ ಮೊತ್ತ ಗಳಿಸಿತು. ಇದಕ್ಕೆ ಉತ್ತರವಾಗಿ ಸೌತ್ ಜೋನ್ ಮೊದಲ ಇನ್ನಿಂಗ್ಸ್&zwnj;ನಲ್ಲಿ ಕೇವಲ 336 ರನ್&zwnj;ಗಳಿಗೆ ಸರ್ವಪತನ ಕಂಡಿತು. ಇದರಿಂದ ಈಸ್ಟ್ ಜೋನ್ ಮೊದಲ ಇನ್ನಿಂಗ್ಸ್&zwnj;ನಲ್ಲಿ ಬರೋಬ್ಬರಿ 372 ರನ್&zwnj;ಗಳ ಬೃಹತ್ ಮುನ್ನಡೆ ಪಡೆಯಿತು.&lt;/p&gt;&lt;h2&gt;&lt;strong&gt;ಪಂದ್ಯ ಡ್ರಾ ಆದರೂ ಟ್ರೋಫಿ ಸಿಕ್ಕಿದ್ದು ಹೇಗೆ?&lt;/strong&gt;&lt;/h2&gt;&lt;p&gt;ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಪ್ರಥಮ ದರ್ಜೆ ಕ್ರಿಕೆಟ್&zwnj;ನ ನಿಯಮಗಳ ಪ್ರಕಾರ..ಫೈನಲ್ ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್&zwnj;ನಲ್ಲಿ ಅತಿ ಹೆಚ್ಚು ರನ್ ಮುನ್ನಡೆ ಪಡೆದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಈ ಆಧಾರದ ಮೇಲೆ 372 ರನ್&zwnj;ಗಳ ಮುನ್ನಡೆ ಹೊಂದಿದ್ದ ಈಸ್ಟ್ ಜೋನ್ ತಂಡವನ್ನು ಅಧಿಕೃತವಾಗಿ ಚಾಂಪಿಯನ್ ಎಂದು ಘೋಷಿಸಲಾಯಿತು. 2013ರ ನಂತರ ಈಸ್ಟ್ ಜೋನ್&zwnj;ಗೆ ಒಲಿದ ಮೊದಲ ದುಲೀಪ್ ಟ್ರೋಫಿ ಇದಾಗಿದೆ.&lt;/p&gt;&lt;h2&gt;&lt;strong&gt;ಯಾರಿಗೆ ಎಷ್ಟು ಲಕ್ಷ?&lt;/strong&gt;&lt;/h2&gt;&lt;p&gt;ದುಲೀಪ್ ಟ್ರೋಫಿ 2026 ಟೂರ್ನಿಗೆ ಒಟ್ಟು 1.5 ಕೋಟಿ ರೂಪಾಯಿ ಬಹುಮಾನ ಮೊತ್ತ ನಿಗದಿಪಡಿಸಲಾಗಿತ್ತು. ಚಾಂಪಿಯನ್ (ಈಸ್ಟ್ ಜೋನ್) ಟ್ರೋಫಿಯ ಜೊತೆಗೆ ಬರೋಬ್ಬರಿ 1 ಕೋಟಿ ರೂಪಾಯಿ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್-ಅಪ್ (ಸೌತ್ ಜೋನ್): ಪ್ರಶಸ್ತಿ ಗೆಲ್ಲಲು ವಿಫಲವಾದರೂ ಸೌತ್ ಜೋನ್ ತಂಡಕ್ಕೆ 50 ಲಕ್ಷ ರೂಪಾಯಿ ಪ್ರೈಜ್ ಮನಿ ಲಭಿಸಿದೆ. ಈ ಬಹುಮಾನದ ಮೊತ್ತವು ಯಾವುದೇ ಒಬ್ಬ ಆಟಗಾರನಿಗೆ ಸೀಮಿತವಾಗಿರದೆ ಇಡೀ ತಂಡದ ಆಟಗಾರರು ಹಾಗೂ ಸಪೋರ್ಟ್ ಸಿಬ್ಬಂದಿಯ ನಡುವೆ ಸಮನಾಗಿ ಹಂಚಿಕೆಯಾಗಲಿದೆ. ಒಟ್ಟಿನಲ್ಲಿ 13 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡ ಈಸ್ಟ್ ಜೋನ್ ಕೋಟಿ ರೂಪಾಯಿ ಬಹುಮಾನದೊಂದಿಗೆ ಬೀಗಿದರೆ ಫೈನಲ್&zwnj;ನಲ್ಲಿ ಎಡವಿದ ಸೌತ್ ಜೋನ್ ಅರ್ಧ ಕೋಟಿ ರೂಪಾಯಿ ನಗದು ಬಹುಮಾನದೊಂದಿಗೆ ಸಮಾಧಾನಪಟ್ಟುಕೊಂಡಿದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/duleep-trophy-2026-final-east-zone-won-the-title-price-money-rs-1-crore/articleshow-fkup3yo"/>
        </item>
        <item>
            <title><![CDATA[CSK ತಂಡದ ಫ್ಲೆಮಿಂಗ್ ಜಾಗಕ್ಕೆ ಭಾರತದ ಮಾಜಿ ಕ್ರಿಕೆಟರ್, ಕಠಿಣ ಷರತ್ತು ವಿಧಿಸಿದ ಧೋನಿ]]></title>
            <link>https://kannada.asianetnews.com/cricket-sports/cricketer-hemang-badani-to-replace-csk-is-andy-fleming-ms-dhoni-imposed-tough-conditions-gkn/articleshow-sk3sgxk</link>
            <guid isPermaLink="true">https://kannada.asianetnews.com/cricket-sports/cricketer-hemang-badani-to-replace-csk-is-andy-fleming-ms-dhoni-imposed-tough-conditions-gkn/articleshow-sk3sgxk</guid>
            <pubDate>Thu, 10 Sep 2026 17:35:04 +0530</pubDate>
            <description><![CDATA[&lt;p&gt;ಸಿಎಸ್&zwnj;ಕೆ ತನ್ನ ನೂತನ ಕೋಚ್ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದೆ. ಅಧಿಕೃತಿ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ಇದೆಲ್ಲದ ನಡುವೆ ಎಂ ಎಸ್&zwnj; ಧೋನಿ ಹೊಸ ಕೋಚ್&zwnj;ಗೆ ಕಠಿಣ ಷರತ್ತು ವಿಧಿಸಿದ್ದಾರೆ. ಆ ಷರತ್ತು ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpv442ahv0t951xzsgaz9yyk,imgname-ms-dhoni--1776879274321.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಹಾಗೂ ಯಶಸ್ವಿ ಫ್ರಾಂಚೈಸಿ ಎಂದೇ ಹೆಸರುವಾಸಿಯಾದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಮಹತ್ವದ ಬದಲಾವಣೆಯ ಪರ್ವ ಆರಂಭವಾಗಿದೆ. ದೀರ್ಘ ಕಾಲದಿಂದ ಸಿಎಸ್&zwnj;ಕೆ ಯಶಸ್ಸಿನ ಹಿಂದಿನ ರೂವಾರಿಯಾಗಿದ್ದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು, ಅವರ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.&lt;/p&gt;&lt;p&gt;ಈಗ ಕೇಳಿಬರುತ್ತಿರುವ ಬಿಸಿಬಿಸಿ ಸುದ್ದಿಯ ಪ್ರಕಾರ.. ಭಾರತ ತಂಡದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ (Hemang Badani) ಸಿಎಸ್&zwnj;ಕೆಯ ನೂತನ ಹೆಡ್ ಕೋಚ್ ರೇಸ್&zwnj;ನಲ್ಲಿ ಮುಂಚೂಣಿಯಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಮುಂದಿನ ವಾರವೇ ಅಧಿಕೃತ ಘೋಷಣೆ?&lt;/strong&gt;&lt;/h2&gt;&lt;p&gt;ದಿ ಇಂಡಿಯನ್ ಎಕ್ಸ್&zwnj;ಪ್ರೆಸ್ ವರದಿಯ ಪ್ರಕಾರ, ನೂತನ ಮುಖ್ಯ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿದ್ದು, ಮುಂದಿನ ವಾರವೇ ಈ ಬಗ್ಗೆ ಅಧಿಕೃತ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ. ಮಾಜಿ ನಾಯಕ ಎಂ.ಎಸ್. ಧೋನಿ, ಪ್ರಸ್ತುತ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಸಿಎಸ್&zwnj;ಕೆ ಮ್ಯಾನೇಜ್&zwnj;ಮೆಂಟ್ ಒಟ್ಟಾಗಿ ಈ ನಿರ್ಧಾರ ಕೈಗೊಳ್ಳಲಿವೆ.&lt;/p&gt;&lt;p&gt;ಸಿಎಸ್&zwnj;ಕೆ ತಂಡಕ್ಕೆ ಈ ಬಾರಿ ಭಾರತೀಯ ಮೂಲದ ಕೋಚಿಂಗ್ ಸಿಬ್ಬಂದಿಯೇ ಇರಬೇಕು ಎಂದು ಧೋನಿ ಪ್ರಬಲವಾಗಿ ಪ್ರತಿಪಾದಿಸಿದ್ದಾರೆ ಎನ್ನಲಾಗಿದೆ. ಭಾರತೀಯ ಆಟಗಾರರ ಮನಸ್ಥಿತಿ ಹಾಗೂ ಸ್ಥಳೀಯ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿರುವ ದೇಶಿ ಕೋಚ್ ಬಂದರೆ ತಂಡಕ್ಕೆ ಹೆಚ್ಚು ಅನುಕೂಲ ಎಂಬುದು ಧೋನಿ ಲೆಕ್ಕಾಚಾರ. ಈ ಕಾರಣಕ್ಕಾಗಿಯೇ ಹೇಮಂಗ್ ಬದಾನಿ ಹೆಸರು ಮುಂಚೂಣಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಧೋನಿ ವಿಧಿಸಿರುವ ಮುಖ್ಯ ಷರತ್ತೇನು?&lt;/strong&gt;&lt;/h2&gt;&lt;p&gt;ಹೊಸ ಕೋಚ್ ಆಯ್ಕೆಯಲ್ಲಿ ಎಂ.ಎಸ್. ಧೋನಿ ಒಂದು ಮಹತ್ವದ ನಿಯಮವನ್ನು ಮುಂದಿಟ್ಟಿದ್ದಾರೆ. ಅದೇನೆಂದರೆ&mdash; ಹೊಸ ಮುಖ್ಯ ಕೋಚ್ ಸಂಪೂರ್ಣವಾಗಿ ಸಿಎಸ್&zwnj;ಕೆಗೆ ಮಾತ್ರ ಸೀಮಿತವಾಗಿರಬೇಕು. ಈ ಹಿಂದೆ ಸ್ಟೀಫನ್ ಫ್ಲೆಮಿಂಗ್ ಐಪಿಎಲ್&zwnj;ನ ಸಿಎಸ್&zwnj;ಕೆ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ 'ಜೋಹಾನ್ಸ್&zwnj;ಬರ್ಗ್ ಸೂಪರ್ ಕಿಂಗ್ಸ್' (SA20) ಮತ್ತು ಅಮೆರಿಕದ 'ಟೆಕ್ಸಾಸ್ ಸೂಪರ್ ಕಿಂಗ್ಸ್' (MLC) ತಂಡಗಳಿಗೂ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಧೋನಿ ಈ ಪದ್ಧತಿಗೆ ಬ್ರೇಕ್ ಹಾಕಲು ಬಯಸಿದ್ದಾರೆ. ಬೇರೆ ಯಾವುದೇ ವಿದೇಶಿ ಲೀಗ್&zwnj;ಗಳ ಕಡೆ ಗಮನ ಹರಿಸದೆ, ಕೇವಲ ಐಪಿಎಲ್&zwnj;ನಲ್ಲಿ ಸಿಎಸ್&zwnj;ಕೆ ತಂಡದ ಅಭಿವೃದ್ಧಿ ಹಾಗೂ ಪ್ರದರ್ಶನದ ಕಡೆಗೆ ಮಾತ್ರ 100% ಗಮನ ನೀಡುವ ಕೋಚ್ ಬೇಕು ಎಂಬುದು ಧೋನಿ ನಿಲುವು.&lt;/p&gt;&lt;h2&gt;&lt;strong&gt;ಹೇಮಂಗ್ ಬದಾನಿ ಯಾರು?&lt;/strong&gt;&lt;/h2&gt;&lt;p&gt;ಭಾರತ ಪರ ಆಡಿರುವ ಹೇಮಂಗ್ ಬದಾನಿ ಜಾಗತಿಕ ಟಿ20 ಲೀಗ್&zwnj;ಗಳಲ್ಲಿ ಕೋಚ್ ಆಗಿ ಅಪಾರ ಅನುಭವ ಹೊಂದಿದ್ದಾರೆ. ಐಪಿಎಲ್&zwnj;ನಲ್ಲಿ ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೊತೆ ಕಾರ್ಯನಿರ್ವಹಿಸಿದ ಅನುಭವವಿದೆ. ಇಂಗ್ಲೆಂಡ್&zwnj;ನ 'ದಿ ಹಂಡ್ರೆಡ್' ಟೂರ್ನಿಯಲ್ಲಿ 'ಸದರ್ನ್ ಬ್ರೇವ್' (Southern Brave) ತಂಡದ ಕೋಚ್ ಆಗಿದ್ದಾರೆ. ಯುಎಇಯ 'ಐಎಲ್&zwnj;ಟಿ20' (ILT20) ಲೀಗ್&zwnj;ನಲ್ಲಿ 'ದುಬೈ ಕ್ಯಾಪಿಟಲ್ಸ್' ತಂಡದ ಮುಖ್ಯ ಕೋಚ್ ಆಗಿ ಯಶಸ್ಸು ಕಂಡಿದ್ದಾರೆ. ಜೊತೆಗೆ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್&zwnj;ನ 'ಸಿಯಾಟಲ್ ಓರ್ಕಾಸ್' ತಂಡಕ್ಕೆ ಕನ್ಸಲ್ಟೆಂಟ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.&lt;/p&gt;&lt;p&gt;2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ನಂತರ ಸಿಎಸ್&zwnj;ಕೆ ಪ್ರದರ್ಶನದಲ್ಲಿ ಸ್ಥಿರತೆ ಕಾಣೆಯಾಗಿದೆ. ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ ಪ್ರವೇಶಿಸಲು ತಂಡ ವಿಫಲವಾಗಿದ್ದು, ಕಳೆದ ಸೀಸನ್&zwnj;ನಲ್ಲಿ (IPL 2026) ಎಂಟನೇ ಸ್ಥಾನಕ್ಕೆ ಕುಸಿದಿತ್ತು. ಸದಾ ಆಟಗಾರರ ಬೆಂಬಲಕ್ಕೆ ನಿಲ್ಲುವ ಸಿಎಸ್&zwnj;ಕೆ, ತಂಡಕ್ಕೆ ಮರುಜೀವ ನೀಡಲು ಮತ್ತು ಹೊಸ ರಣತಂತ್ರ ರೂಪಿಸಲು ಈಗ ಹೊಸ ನಾಯಕತ್ವ ಹಾಗೂ ಕೋಚಿಂಗ್ ಬಳಗದ ಮೊರೆ ಹೋಗಿದೆ. ಬದಾನಿ ಅವರು ವಿದೇಶಿ ಲೀಗ್&zwnj;ಗಳೊಂದಿಗಿನ ತಮ್ಮ ಒಪ್ಪಂದಗಳನ್ನು ಬದಿಗೊತ್ತಿ ಧೋನಿಯ ಷರತ್ತಿಗೆ ಒಪ್ಪಿಕೊಳ್ಳುತ್ತಾರಾ? ಸಿಎಸ್&zwnj;ಕೆ ಅಧಿಕೃತ ಮುದ್ರೆ ಬೀಳುವುದೊಂದೇ ಬಾಕಿ ಇದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/cricketer-hemang-badani-to-replace-csk-is-andy-fleming-ms-dhoni-imposed-tough-conditions-gkn/articleshow-sk3sgxk"/>
        </item>
        <item>
            <title><![CDATA[Cricket: ಮೈಕ್ ಹೆಸ್ಸನ್ ಭಾರತದ ಏಜೆಂಟ್?": ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ವಿಲಕ್ಷಣ ಆರೋಪ, 'ಧುರಂಧರ್' ಚಿತ್ರಕ್ಕೆ ಹೋಲಿಸಿ ಟ್ರೋಲ್!]]></title>
            <link>https://kannada.asianetnews.com/cricket-sports/rashid-latif-mike-hesson-indian-agent-dhurandhar-movie-netizens-troll-pakistan-cricket-news-bmk/articleshow-z6nv3bh</link>
            <guid isPermaLink="true">https://kannada.asianetnews.com/cricket-sports/rashid-latif-mike-hesson-indian-agent-dhurandhar-movie-netizens-troll-pakistan-cricket-news-bmk/articleshow-z6nv3bh</guid>
            <pubDate>Thu, 10 Sep 2026 16:40:37 +0530</pubDate>
            <description><![CDATA[&lt;p&gt;ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್, ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಅವರನ್ನು 'ಭಾರತೀಯ ಏಜೆಂಟ್' ಎಂದು ಕರೆದು ಹೊಸ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್&zwnj;ಗೆ ಕಾರಣವಾಗಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25g3f55frfsatmkt37p7bgb,imgname-pakistan-cricket-1789038541988.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ವಿವಾದಗಳಿಗೆ ಹಳೆಯ ನಂಟಿದೆ. ಸದ್ಯ ಪಾಕಿಸ್ತಾನ ಕ್ರಿಕೆಟ್ ತಂಡವು ತೀವ್ರ ಹಿನ್ನಡೆ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ, ಮತ್ತೊಂದು ವಿಲಕ್ಷಣ ಹಾಗೂ ವಿಚಿತ್ರ ವಿವಾದ ಮುನ್ನೆಲೆಗೆ ಬಂದಿದೆ. ತಂಡದ ಮುಖ್ಯ ತರಬೇತುದಾರರಾದ (ಕೋಚ್) ಮೈಕ್ ಹೆಸ್ಸನ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ &quot;ಭಾರತೀಯ ಏಜೆಂಟ್&quot; ಎಂದು ಕರೆದಿರುವುದು ಕ್ರೀಡಾಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ರಶೀದ್ ಲತೀಫ್ ಆರೋಪವೇನು?&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವೀಡಿಯೊವೊಂದರಲ್ಲಿ, ಡಾ. ನೌಮನ್ ನಿಯಾಜ್ ಅವರೊಂದಿಗೆ ಚರ್ಚೆ ನಡೆಸುವಾಗ ರಶೀದ್ ಲತೀಫ್ ಈ ಹೇಳಿಕೆ ನೀಡಿದ್ದಾರೆ. ಮೈಕ್ ಹೆಸ್ಸನ್ ಅವರಿಗೆ ಭಾರತ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜೊತೆಗಿನ ನಿಕಟ ಸಂಪರ್ಕವನ್ನು ಲತೀಫ್ ಇಲ್ಲಿ ಎತ್ತಿ ತೋರಿಸಿದ್ದಾರೆ. ಹೆಸ್ಸನ್ ಅವರು ಭಾರತದಲ್ಲಿ ಸುದೀರ್ಘ ಸಮಯವನ್ನು ಕಳೆದಿದ್ದಾರೆ ಹಾಗೂ ಐಪಿಎಲ್ ಕ್ರಿಕೆಟ್&zwnj;ನಲ್ಲಿ ಹಲವು ವರ್ಷಗಳ ಕಾಲ ಸಕ್ರಿಯರಾಗಿದ್ದರು. ಈ ಸಂಪರ್ಕಗಳನ್ನೇ ಆಧಾರವಾಗಿಟ್ಟುಕೊಂಡು, ಅವರನ್ನು ದುರುದ್ದೇಶಪೂರ್ವಕವಾಗಿ ಪಾಕಿಸ್ತಾನಕ್ಕೆ ಕಳುಹಿಸಿರಬಹುದು ಮತ್ತು ಅವರು 'ಭಾರತೀಯ ಏಜೆಂಟ್' ಆಗಿ ಕೆಲಸ ಮಾಡುತ್ತಿರಬಹುದು ಎಂಬ ಅನುಮಾನವನ್ನು ಲತೀಫ್ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾಕ್ಷ್ಯಾಧಾರಗಳಿವೆ?&lt;/strong&gt;&lt;/h3&gt;&lt;p&gt;ಆದರೆ, ಈ ಗಂಭೀರ ಆರೋಪಕ್ಕೆ ಯಾವುದೇ ರೀತಿಯ ಆಧಾರ ಅಥವಾ ಪುರಾವೆಗಳನ್ನು ನೀಡಲು ಲತೀಫ್ ಅವರಿಗೆ ಸಾಧ್ಯವಾಗಿಲ್ಲ. ಸ್ವತಃ ಲತೀಫ್ ಮತ್ತು ನಿಯಾಜ್ ಅವರು ಈ ಚರ್ಚೆಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದು, ಇದನ್ನು ಕೇವಲ ಜೋರಾಗಿ ಯೋಚಿಸುವುದು ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ವೀಡಿಯೊ ಹಳೆಯದೋ ಅಥವಾ ಇತ್ತೀಚಿನದೋ ಎಂಬುದರ ಮೂಲ ದಿನಾಂಕವೂ ಸ್ವತಂತ್ರವಾಗಿ ದೃಢಪಟ್ಟಿಲ್ಲ.&lt;/p&gt;&lt;h3&gt;&lt;strong&gt;ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಹಾಸ್ಯ ಹಾಗೂ ಟ್ರೋಲ್ಸ್!&lt;/strong&gt;&lt;/h3&gt;&lt;p&gt;ರಶೀದ್ ಲತೀಫ್ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಇದನ್ನು ತೀವ್ರವಾಗಿ ಹಾಸ್ಯಕ್ಕೆ ಈಡುಮಾಡಿದ್ದಾರೆ. ಯಾವುದೇ ಆಧಾರವಿಲ್ಲದ ಇಂತಹ ಪಿತೂರಿ ಸಿದ್ಧಾಂತವನ್ನು ಕೇಳಿ ಕ್ರೀಡಾಭಿಮಾನಿಗಳು ಅಪನಂಬಿಕೆ ಮತ್ತು ನಗೆಪಾಟಲು ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಧುರಂಧರ್&zwnj; ಚಿತ್ರಕ್ಕೆ ಹೋಲಿಸಿದ ನೆಟ್ಟಿಗರು!&lt;/strong&gt;&lt;/h3&gt;&lt;p&gt;ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್&zwnj;ನ ಗೂಢಚಾರಿಕೆಯ ಕಥಾಹಂದರ ಹೊಂದಿರುವ 'ಧುರಂಧರ್' ಚಿತ್ರಕ್ಕೆ ಈ ಘಟನೆಯನ್ನು ಜೋಡಿಸಿ ನೆಟ್ಟಿಗರು ತಮಾಷೆಯ ಮೀಮ್ಸ್&zwnj;ಗಳನ್ನು ಹಂಚಿಕೊಳ್ಳುತ್ತಿದ್ದಾರೆ. &quot;ರಶೀದ್ ಲತೀಫ್ ನಿನ್ನೆ ರಾತ್ರಿ ಧುರಂಧರ್ ಸಿನಿಮಾ ನೋಡಿರಬೇಕು, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ&quot; ಎಂದು ಹಲವರು ತಮಾಷೆ ಮಾಡಿದ್ದಾರೆ. ಪಾಕ್ ತಂಡದ ಹಿನ್ನಡೆಗೆ ಕೋಚ್ ಮೇಲೆ ಇಂತಹ ವಿಲಕ್ಷಣ ಆರೋಪ ಹೊರಿಸುತ್ತಿರುವುದನ್ನು ಜಾಲತಾಣಗಳಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಸಂಕಷ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ಹಾಗೂ ಹೆಸ್ಸನ್ ಪಾತ್ರ!&lt;/strong&gt;&lt;/h3&gt;&lt;p&gt;ಪ್ರಸ್ತುತ ಪಾಕಿಸ್ತಾನ ಕ್ರಿಕೆಟ್ ತಂಡವು ತೀವ್ರ ಕಷ್ಟದ ಹಂತದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಶೋಚನೀಯವಾಗಿ ಸೋತ ನಂತರ, ತಂಡದಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿತ್ತು. ಪ್ರಮುಖ ಆಟಗಾರರನ್ನು ತಂಡದಿಂದ ಹೊರಗಿಟ್ಟು, ಮುಖ್ಯ ಕೋಚ್ ಆಗಿದ್ದ ಸರ್ಫ್ರಾಜ್ ಅಹ್ಮದ್ ಅವರನ್ನು ಬದಲಾಯಿಸಿ, ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಮೈಕ್ ಹೆಸ್ಸನ್ ಅವರನ್ನು ತರಬೇತುದಾರರಾಗಿ ನೇಮಿಸಲಾಗಿತ್ತು.&lt;/p&gt;&lt;h3&gt;&lt;strong&gt;ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲ!&lt;/strong&gt;&lt;/h3&gt;&lt;p&gt;ತಂಡದ ಸಾಲು ಸಾಲು ಸೋಲುಗಳು, ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿನ ಗೊಂದಲಗಳು, ಕೋಚ್&zwnj;ಗಳ ಪದೇ ಪದೇ ಬದಲಾವಣೆ ಮತ್ತು ಆಂತರಿಕ ಶಿಸ್ತಿನ ವಿಚಾರಣೆಗಳಿಂದ ಪಾಕಿಸ್ತಾನ ಕ್ರಿಕೆಟ್ ಈಗಾಗಲೇ ತತ್ತರಿಸಿಹೋಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಹೆಸ್ಸನ್ ವಿರುದ್ಧ ಬಂದಿರುವ ಈ ಆಧಾರರಹಿತ ಆರೋಪವು ಪಾಕಿಸ್ತಾನದ ಇಂಗ್ಲೆಂಡ್ ಪ್ರವಾಸಕ್ಕೆ ಮತ್ತಷ್ಟು ನಾಟಕೀಯ ತಿರುವು ನೀಡಿದೆ.&lt;/p&gt;&lt;h3&gt;&lt;strong&gt;ಅಂತಿಮ ಸತ್ಯ!&lt;/strong&gt;&lt;/h3&gt;&lt;p&gt;ಮೈಕ್ ಹೆಸ್ಸನ್ ಒಬ್ಬ ವೃತ್ತಿಪರ ಕ್ರಿಕೆಟ್ ತರಬೇತುದಾರರಾಗಿದ್ದು, ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಪ್ರಮುಖ ತಂಡಗಳಿಗೆ ಯಶಸ್ವಿ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ರಶೀದ್ ಲತೀಫ್ ಮಾಡಿರುವ ಈ &quot;ಭಾರತೀಯ ಏಜೆಂಟ್&quot; ಆರೋಪ ಸಂಪೂರ್ಣವಾಗಿ ಆಧಾರರಹಿತವಾಗಿದ್ದು, ಇದನ್ನು ಯಾವುದೇ ಸತ್ಯ ಸಾಬೀತಾದ ಘಟನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಕೇವಲ ಪಾಕಿಸ್ತಾನ ಕ್ರಿಕೆಟ್&zwnj;ನ ಪ್ರಸ್ತುತ ವೈಫಲ್ಯಗಳನ್ನು ಮರೆಮಾಚಲು ಹುಟ್ಟುಹಾಕಿದ ಮತ್ತೊಂದು ವಿವಾದವಷ್ಟೇ ಆಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/rashid-latif-mike-hesson-indian-agent-dhurandhar-movie-netizens-troll-pakistan-cricket-news-bmk/articleshow-z6nv3bh"/>
        </item>
        <item>
            <title><![CDATA[ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೂ ಮುನ್ನ ಭಾರತಕ್ಕೆ ಶಾಕ್; ಸ್ಟಾರ್ ವೇಗಿ ಔಟ್, ಬದಲಿ ಆಟಗಾರನ ಘೋಷಣೆ!]]></title>
            <link>https://kannada.asianetnews.com/cricket-sports/india-vs-afghanistan-t20-harshit-rana-ruled-out-with-injury-yash-thakur-named-replacement-kvn/articleshow-5lf3vr4</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-harshit-rana-ruled-out-with-injury-yash-thakur-named-replacement-kvn/articleshow-5lf3vr4</guid>
            <pubDate>Thu, 10 Sep 2026 16:09:20 +0530</pubDate>
            <description><![CDATA[ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ, ಸ್ನಾಯು ಸೆಳೆತದ ಕಾರಣದಿಂದಾಗಿ ಟೀಂ ಇಂಡಿಯಾದ ಪ್ರಮುಖ ವೇಗಿ ಹರ್ಷಿತ್ ರಾಣಾ ತಂಡದಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ವಿದರ್ಭ ಮೂಲದ ಯುವ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಬದಲಿ ಆಟಗಾರನಾಗಿ ಆಯ್ಕೆ ಮಾಡಿದೆ. ಇದೇ ವೇಳೆ, ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k6sgzcttxjw2bpdca8jc088k,imgname-harshit-rana-1759645774682.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಸೆಪ್ಟೆಂಬರ್ 13ರಿಂದ ಆರಂಭವಾಗಲಿರುವ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಟಿ20 ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ವೇಗಿ ಹರ್ಷಿತ್ ರಾಣಾ ಹೊರಬಿದ್ದಿದ್ದಾರೆ. ಜುಲೈ 07, 2026ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ಹರ್ಷಿತ್ ರಾಣಾ, ಸದ್ಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೂ ಮುನ್ನ ಫಿಟ್ನೆಸ್ ಸಾಬೀತುಪಡಿಸದ ಹಿನ್ನೆಲೆಯಲ್ಲಿ, ತಂಡದಿಂದ ಹೊರಬಿದ್ದಿದ್ದಾರೆ.&lt;/p&gt;&lt;p&gt;'ಹರ್ಷಿತ್ ರಾಣಾ, ಇನ್ನೂ ಸಂಪೂರ್ಣವಾಗಿ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿಲ್ಲ. ಅವರು ಸಂಪೂರ್ಣವಾಗಿ ಈ ಗಾಯದ ಸಮಸ್ಯೆಯಿಂದ ಗುಣಮುಖರಾಗಲು ಇನ್ನಷ್ಟು ಸಮಯ ಕಾಯಬೇಕಿದೆ' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿಯಾಗಿದೆ. ಇದೇ ಸೆಪ್ಟೆಂಬರ್ 01ರಂದು ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿತ್ತು. ಈ ವೇಳೆ ಹರ್ಷಿತ್ ರಾಣಾಗೂ ಅವಕಾಶ ಕಲ್ಪಿಸಿತ್ತಾದರೂ, ಟಿ20 ಸರಣಿಗೂ ಮುನ್ನ ಅವರು ಫಿಟ್ನೆಸ್ ಟೆಸ್ಟ್ ಪಾಸ್ ಮಾಡಬೇಕು ಎಂದು ಸೂಚಿಸಿತ್ತು. ಆಫ್ಘಾನಿಸ್ತಾನ ಎದುರಿನ ಟಿ20 ಸರಣಿ ಮಾತ್ರವಲ್ಲದೇ ಸೆಪ್ಟೆಂಬರ್ 28ರಿಂದ ಆರಂಭವಾಗಲಿರುವ ಏಷ್ಯನ್ ಗೇಮ್ಸ್ ಟೂರ್ನಿಗೂ ಹರ್ಷಿತ್ ರಾಣಾ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ರಾಣಾ, ಏಷ್ಯನ್ ಗೇಮ್ಸ್&zwnj;ಗೂ ಮೊದಲು ಫಿಟ್ನೆಸ್&zwnj; ಟೆಸ್ಟ್ ಕ್ಲಿಯರ್ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;&lt;h2&gt;&lt;strong&gt;ಬದಲಿ ಆಟಗಾರನಾಗಿ ಯಶ್ ಠಾಕೂರ್&zwnj;ಗೆ ಸ್ಥಾನ:&lt;/strong&gt;&lt;/h2&gt;&lt;p&gt;ಇನ್ನು ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಯಿಂದ ಹರ್ಷಿತ್ ರಾಣಾ ಹೊರಬೀಳುತ್ತಿದ್ದಂತೆಯೇ ಅವರ ಸ್ಥಾನಕ್ಕೆ ಬದಲಿ ಆಟಗಾರನ ಹೆಸರನ್ನು ಬಿಸಿಸಿಐ ಘೋಷಿಸಿದೆ. ಹರ್ಷಿತ್ ರಾಣಾ ಅವರ ಬದಲಿಗೆ ವಿದರ್ಭ ಮೂಲದ 27 ವರ್ಷದ ಯುವ ವೇಗಿ ಯಶ್ ಠಾಕೂರ್ ಅವರನ್ನು ಬಿಸಿಸಿಐ ಬದಲಿ ಆಟಗಾರನಾಗಿ ಭಾರತ ತಂಡಕ್ಕೆ ಸೇರಿಸಿಕೊಂಡಿದೆ. ಯಶ್ ಠಾಕೂರ್, ಇತ್ತೀಚೆಗಷ್ಟೇ, ಜಿಂಬಾಬ್ವೆ ಎದುರು ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಜಿಂಬಾಬ್ವೆ ಎದುರು ಎರಡು ಪಂದ್ಯಗಳನ್ನಾಡಿದ್ದ ಯಶ್ ಠಾಕೂರ್ 4 ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಯಶ್ ಠಾಕೂರ್ ಇದುವರೆಗೂ 50 ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಗಳನ್ನಾಡಿದ್ದು, 81 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.&lt;/p&gt;&lt;h3&gt;&lt;strong&gt;ಫಿಟ್ನೆಸ್&zwnj; ಟೆಸ್ಟ್ ಕ್ಲಿಯರ್ ಮಾಡಿದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್:&lt;/strong&gt;&lt;/h3&gt;&lt;p&gt;ಇನ್ನು ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹಾಗೂ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಬ್ಬರೂ ಕೂಡಾ ಇದೀಗ ಫಿಟ್ನೆಸ್ ಟೆಸ್ಟ್ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಇಬ್ಬರೂ ಕೂಡಾ ಆಫ್ಘಾನಿಸ್ತಾನ ಎದುರಿನ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅವರಿಗೂ ಸಹ ಬಿಸಿಸಿಐ ಫಿಟ್ನೆಸ್ ಟೆಸ್ಟ್&zwnj; ಪಾಸ್ ಮಾಡಲು ಸೂಚಿಸಿತ್ತು.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-afghanistan-t20-harshit-rana-ruled-out-with-injury-yash-thakur-named-replacement-kvn/articleshow-5lf3vr4"/>
        </item>
        <item>
            <title><![CDATA['ಕೆಂಗೇರಿ To ಕಬ್ಬನ್‌ ಪಾರ್ಕ್‌ ಜಸ್ಟ್‌ 35 ನಿಮಿಷ' ನಮ್ಮ ಮೆಟ್ರೋದಲ್ಲಿ ಸಿಂಪಲ್‌ ಸಂಚಾರ ಮಾಡಿದ ಟೀಮ್‌ ಇಂಡಿಯಾ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌]]></title>
            <link>https://kannada.asianetnews.com/bengaluru-urban/venkatesh-prasad-namma-metro-travel-kengeri-to-cubbon-park-san/articleshow-wyxptsb</link>
            <guid isPermaLink="true">https://kannada.asianetnews.com/bengaluru-urban/venkatesh-prasad-namma-metro-travel-kengeri-to-cubbon-park-san/articleshow-wyxptsb</guid>
            <pubDate>Thu, 10 Sep 2026 16:04:16 +0530</pubDate>
            <description><![CDATA[&lt;p&gt;ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್&zwnj;ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ಭೀಕರ ಸಂಚಾರ ದಟ್ಟಣೆ ತಪ್ಪಿಸಲು 'ನಮ್ಮ ಮೆಟ್ರೋ'ದಲ್ಲಿ ಕೆಂಗೇರಿಯಿಂದ ಕಬ್ಬನ್ ಪಾರ್ಕ್&zwnj;ಗೆ ಪ್ರಯಾಣಿಸಿದರು. ತಮ್ಮ ಈ ವೇಗದ ಹಾಗೂ ಸುಲಭ ಪಯಣದ ಅನುಭವವನ್ನು ಅವರು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25dzz6pefytgmfbk3x1bp11,imgname-venkatesh-prasad-namma-metro-1789036330197.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.10): &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರಿನ ಭೀಕರ ರಸ್ತೆ ಸಂಚಾರ ದಟ್ಟಣೆಗೆ (Traffic) ಬಲಿಬೀಳದೆ, ಸಾರ್ವಜನಿಕ ಸಾರಿಗೆಯಾದ 'ನಮ್ಮ ಮೆಟ್ರೋ'ವನ್ನು ನೆಚ್ಚಿಕೊಳ್ಳುವ ಪ್ರಮುಖ ಗಣ್ಯರ ಪಟ್ಟಿಗೆ ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಅಧ್ಯಕ್ಷ ವೆಂಕಟೇಶ್ ಪ್ರಸಾದ್ (Venkatesh Prasad) ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೆಂಗೇರಿಯಿಂದ ಕಬ್ಬನ್ ಪಾರ್ಕ್&zwnj;ಗೆ ಮೆಟ್ರೋದಲ್ಲಿ ಅತ್ಯಂತ ಸಿಂಪಲ್ ಆಗಿ ಸಂಚರಿಸಿದ ಅವರು, ತಮ್ಮ ಈ ವೇಗದ ಹಾಗೂ ಸುಲಭ ಪಯಣದ ಅನುಭವವನ್ನು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ವೆಂಕಟೇಶ್ ಪ್ರಸಾದ್ ಅವರು ಕೆಎಸ್&zwnj;ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಅವರೊಂದಿಗೆ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಕಬ್ಬನ್ ಪಾರ್ಕ್ (ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ) ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ವೇಳೆ ಸಾಮಾನ್ಯ ಪ್ರಯಾಣಿಕರಂತೆ ಆಸನದಲ್ಲಿ ಕುಳಿತು ಪ್ರಯಾಣಿಸಿದ ಫೋಟೋವನ್ನು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;&quot;ಧನ್ಯವಾದಗಳು ನಮ್ಮ ಮೆಟ್ರೋ&quot;:&lt;/strong&gt;&lt;/h3&gt;&lt;p&gt;ತಮ್ಮ ಮೆಟ್ರೋ ಪ್ರಯಾಣದ ಅನುಭವವನ್ನು ಹಂಚಿಕೊಂಡಿರುವ ವೆಂಕಟೇಶ್ ಪ್ರಸಾದ್, ಕೆಎಸ್&zwnj;ಸಿಎ ಕಾರ್ಯದರ್ಶಿ ಶ್ರೀ ತೋಷ್ ಮೆನನ್ ಅವರೊಂದಿಗೆ ಕೆಂಗೇರಿಯಿಂದ ಕಬ್ಬನ್ ಪಾರ್ಕ್&zwnj;ವರೆಗೆ (ಎಂ. ಚಿನ್ನಸ್ವಾಮಿ ಕ್ರೀಡಾಂಗಣ) 'ನಮ್ಮ ಮೆಟ್ರೋ'ದಲ್ಲಿ ಪಯಣಿಸಿದೆ. ಸುಮಾರು 20 ಕಿಲೋಮೀಟರ್&zwnj;ಗಳಷ್ಟು ದೀರ್ಘ ದೂರವನ್ನು ಕೇವಲ 35 ನಿಮಿಷಗಳಲ್ಲಿ ತಲುಪಿದೆವು! ಇದೊಂದು ಅದ್ಭುತ ಅನುಭವ, ಅತ್ಯಂತ ಅನುಕೂಲಕರ ಮತ್ತು ಅತ್ಯುತ್ತಮ ಸೇವೆ. ಧನ್ಯವಾದಗಳು ನಮ್ಮ ಮೆಟ್ರೋ ಎಂದು ಬರೆದುಕೊಂಡು ಬಿಎಂಆರ್&zwnj;ಸಿಎಲ್ (BMRCL) ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೊನ್ನೆ ಶ್ರೀನಾಥ್, ಇಂದು ವೆಂಕಟೇಶ್ ಪ್ರಸಾದ್!&lt;/strong&gt;&lt;/h2&gt;&lt;p&gt;ವಿಶೇಷವೆಂದರೆ, ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ದಂತಕಥೆ ಹಾಗೂ ಮಾಜಿ ವೇಗಿ ಜಾವಗಲ್ ಶ್ರೀನಾಥ್ (Javagal Srinath) ಕೂಡ ಬೆಂಗಳೂರಿನ ಕಾರುಗಳ ಟ್ರಾಫಿಕ್ ಕಿರಿಕಿರಿ ತಪ್ಪಿಸಲು 'ನಮ್ಮ ಮೆಟ್ರೋ'ವನ್ನು ನೆಚ್ಚಿಕೊಂಡು ಸಿಂಪಲ್ ಆಗಿ ಪ್ರಯಾಣಿಸಿದ್ದರು. ಶ್ರೀನಾಥ್ ಮೆಟ್ರೋದಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಫೋಟೋಗಳು ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆಗಿ ಅಪಾರ ಮೆಚ್ಚುಗೆ ಗಳಿಸಿದ್ದವು. ಇದೀಗ ಅವರ ಜತೆಗಾರರಾಗಿದ್ದ ವೆಂಕಟೇಶ್ ಪ್ರಸಾದ್ ಕೂಡ ಅದೇ ಮೆಟ್ರೋ ಹಾದಿ ಹಿಡಿದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ನಗರದ ಜನತೆಗೆ ಸಂತಸ ತಂದಿದೆ.&lt;/p&gt;&lt;h2&gt;&lt;strong&gt;ವೆಂಕಟೇಶ್ ಪ್ರಸಾದ್ ಕ್ರಿಕೆಟ್ ಪ್ರಯಾಣ&lt;/strong&gt;&lt;/h2&gt;&lt;p&gt;ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್&zwnj;ಗಳಲ್ಲಿ ಒಬ್ಬರಾದ ವೆಂಕಟೇಶ್ ಪ್ರಸಾದ್ ಅವರು 2001 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ನಿವೃತ್ತಿ ಘೋಷಿಸಿದ್ದರು. 2025 ರ ಕೊನೆಯಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಪ್ರಸ್ತುತ ರಾಜ್ಯ ಕ್ರಿಕೆಟ್ ಆಡಳಿತವನ್ನು ಮುನ್ನಡೆಸುತ್ತಿದ್ದಾರೆ.&lt;/p&gt;&lt;p&gt;ನಿವೃತ್ತಿಯ ನಂತರ 2007 ರಿಂದ 2009 ರವರೆಗೆ ಭಾರತೀಯ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ, ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕಿಂಗ್ಸ್ XI ಪಂಜಾಬ್ (KXIP) ತಂಡಗಳಿಗೆ ಕೋಚ್&zwnj; ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ, ಬಿಸಿಸಿಐ ಜೂನಿಯರ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ 2018 ರಲ್ಲಿ ಭಾರತ ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಸ್ತುತ ಪ್ರಮುಖ ಕ್ರಿಕೆಟ್ ವಿಶ್ಲೇಷಕರಾಗಿಯೂ ಗುರುತಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್&zwnj;ನಲ್ಲಿ ಸಿಲುಕುವ ಬದಲು, ಕೇವಲ 35 ನಿಮಿಷದಲ್ಲಿ 20 ಕಿ.ಮೀ ದೂರ ಕ್ರಮಿಸಿ ಕ್ರೀಡಾಂಗಣ ತಲುಪಿದ ಇವರ ಪಯಣ, 'ನಮ್ಮ ಮೆಟ್ರೋ' ನಗರದ ಲೈಫ್&zwnj;ಲೈನ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;View this post on Instagram&lt;p&gt;A post shared by Venkatesh Prasad (@bkvenkateshprasad)&lt;/p&gt;&lt;p&gt;&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/venkatesh-prasad-namma-metro-travel-kengeri-to-cubbon-park-san/articleshow-wyxptsb"/>
        </item>
        <item>
            <title><![CDATA[ಶಾಕಿಂಗ್‌ ! ಶುಭಮನ್‌ ಗಿಲ್‌ ಒಬ್ಬರೇ ಮಾಡಿದ ಕೆಲ್ಸವನ್ನು ಪಾಕ್‌ ಇಡೀ ತಂಡ ಮಾಡಿಲ್ಲ]]></title>
            <link>https://kannada.asianetnews.com/cricket-sports/unbelievable-what-shubman-gill-achieved-single-handedly-the-entire-pakistan-team-could-not-manage-together/articleshow-p4b4319</link>
            <guid isPermaLink="true">https://kannada.asianetnews.com/cricket-sports/unbelievable-what-shubman-gill-achieved-single-handedly-the-entire-pakistan-team-could-not-manage-together/articleshow-p4b4319</guid>
            <pubDate>Thu, 10 Sep 2026 14:48:01 +0530</pubDate>
            <description><![CDATA[&lt;p&gt;ನೆರೆ ರಾಷ್ಟ್ರ ಪಾಕ್&zwnj; ಏನೇ ಮಾಡಿದ್ರೂ ಅದು ಭಾರತದ ಜೊತೆ ಹೋಲಿಕೆಯಾಗುತ್ತೆ. ಕ್ರಿಕೆಟ್&zwnj; ವಿಷ್ಯದಲ್ಲೂ ಇದು ಸತ್ಯ. ಈಗ ಪಾಕ್&zwnj; ಇಡೀ ತಂಡಕ್ಕೆ ಶುಭಮನ್&zwnj; ಗಿಲ್&zwnj; ಒಬ್ಬರೇ ಮಾಡಿದ ಸ್ಕೋರ್ ಮಾಡಲು ಸಾಧ್ಯವಾಗಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m259nkryqnqa46sm5cfjz6ft,imgname-pakistan-cricket-team-1789031796510.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಬ್ಯಾಟಿಂಗ್ ಸಂಕಷ್ಟ ಮತ್ತಷ್ಟು ಗಂಭೀರವಾಗಿದೆ. ಮೂರು ಟೆಸ್ಟ್ ಪಂದ್ಯಗಳ ಬಳಿಕ ಪಾಕಿಸ್ತಾನದ ಇಡೀ ತಂಡ ಗಳಿಸಿರುವ ಒಟ್ಟು ರನ್ಗಿಂತ, ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ನಡೆದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತದ ಶುಭಮನ್ ಗಿಲ್ ಒಬ್ಬರೇ ಗಳಿಸಿದ್ದ ರನ್ ಹೆಚ್ಚಿದೆ.&lt;/p&gt;&lt;p&gt;ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಲ್ಲಿ ಶುಭಮನ್ ಗಿಲ್ ಒಟ್ಟು 754 ರನ್ ಗಳಿಸಿದ್ದರು. ಆದರೆ ಪಾಕಿಸ್ತಾನದ ತಂಡ ಮೊದಲ ಎರಡು ಟೆಸ್ಟ್ ಪಂದ್ಯಗಳು ಹಾಗೂ ಎಜ್ಬಾಸ್ಟನ್ನಲ್ಲಿ ನಡೆದ ಮೂರನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ ಸೇರಿ ಕೇವಲ 743 ರನ್ ಗಳಿಸಿದೆ. ಬುಧವಾರ ಪಾಕಿಸ್ತಾನ ಕೇವಲ 133 ರನ್ಗೆ ಆಲೌಟ್ ಆಗಿದ್ದು, ತಂಡದ ಬ್ಯಾಟಿಂಗ್ ವೈಫಲ್ಯ ಮತ್ತೊಮ್ಮೆ ಬಹಿರಂಗವಾಗಿದೆ.&lt;/p&gt;&lt;h2&gt;ಬ್ಯಾಟಿಂಗ್ ಸಂಕಷ್ಟ&lt;/h2&gt;&lt;p&gt;ಇತ್ತೀಚಿನ ವೈಫಲ್ಯಗಳ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿತ್ತು. ಹೆಡಿಂಗ್ಲಿ ಹಾಗೂ ಲಾರ್ಡ್ಸ್ನಲ್ಲಿ ಸೋಲು ಕಂಡ ಬಳಿಕ ಏಳು ಆಟಗಾರರನ್ನು ತಂಡದಿಂದ ಕೈಬಿಡಲಾಗಿತ್ತು. ಕೋಚಿಂಗ್ ಸಿಬ್ಬಂದಿಯನ್ನೂ ವಜಾಗೊಳಿಸಲಾಗಿತ್ತು. ಆದರೆ ಈ ಬದಲಾವಣೆಗಳು ಯಾವುದೇ ದೊಡ್ಡ ಪರಿಣಾಮ ಬೀರಿಲ್ಲ. ಟಾಸ್ ವೇಳೆ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರಿಗೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವುದು ಎಷ್ಟು ಕಷ್ಟ ಎಂದು ಪ್ರಶ್ನಿಸಲಾಗಿತ್ತು.&lt;/p&gt;&lt;p&gt;ಇದಕ್ಕೆ ಬಾಬರ್, ಕಷ್ಟವಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿದ್ದೇವೆ. ಹೊಸ ಆಟಗಾರರಿಗೆ ಇದು ಉತ್ತಮ ಅವಕಾಶ. ಈ ಪಂದ್ಯದಲ್ಲಿ ನಮ್ಮ ಕೈಲಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು. ಆದರೆ ಪಂದ್ಯ ಆರಂಭವಾದ ಮೊದಲ ಸೆಷನ್ನಲ್ಲೇ ಪಾಕಿಸ್ತಾನದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬುದು ಸ್ಪಷ್ಟವಾಯಿತು.&lt;/p&gt;&lt;h3&gt;ಅಗ್ರ ಕ್ರಮಾಂಕ ಮತ್ತೊಮ್ಮೆ ವಿಫಲ&lt;/h3&gt;&lt;p&gt;ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಆರಂಭದಿಂದಲೇ ವಿಕೆಟ್ಗಳ ಪತನ ಶುರುವಾಯಿತು. ಅಂತಿಮವಾಗಿ ಇಡೀ ತಂಡ ಕೇವಲ 133 ರನ್ಗೆ ಆಲೌಟ್ ಆಯಿತು. ಮೊದಲ ದಿನದ ಆಟದ ಅಂತ್ಯಕ್ಕೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಈ ಮೂಲಕ ಪಾಕಿಸ್ತಾನದ ವಿರುದ್ಧ 23 ರನ್ಗಳ ಮುನ್ನಡೆ ಸಾಧಿಸಿತ್ತು.&lt;/p&gt;]]></content:encoded>
            <category>cricket-sports</category>
            <dc:creator>Roopa Hegde</dc:creator>
            <atom:link href="https://kannada.asianetnews.com/cricket-sports/unbelievable-what-shubman-gill-achieved-single-handedly-the-entire-pakistan-team-could-not-manage-together/articleshow-p4b4319"/>
        </item>
        <item>
            <title><![CDATA[ದುಲೀಪ್‌ ಟ್ರೋಫಿ ಫೈನಲ್‌: ದಕ್ಷಿಣ ವಲಯಕ್ಕೆ ಬಿಗ್‌ ಶಾಕ್‌; ಪೂರ್ವ ವಲಯಕ್ಕೆ 584 ರನ್‌ ಮುನ್ನಡೆ!]]></title>
            <link>https://kannada.asianetnews.com/cricket-sports/duleep-trophy-final-east-zone-take-584-run-lead-south-zone-all-out-for-336-kvn/articleshow-67y2l12</link>
            <guid isPermaLink="true">https://kannada.asianetnews.com/cricket-sports/duleep-trophy-final-east-zone-take-584-run-lead-south-zone-all-out-for-336-kvn/articleshow-67y2l12</guid>
            <pubDate>Thu, 10 Sep 2026 09:31:49 +0530</pubDate>
            <description><![CDATA[ದುಲೀಪ್&zwnj; ಟ್ರೋಫಿ ಫೈನಲ್&zwnj;ನಲ್ಲಿ ಪೂರ್ವ ವಲಯವು ಮೊದಲ ಇನ್ನಿಂಗ್ಸ್&zwnj;ನಲ್ಲಿ 708 ರನ್&zwnj; ಗಳಿಸಿ, ದಕ್ಷಿಣ ವಲಯವನ್ನು 336 ರನ್&zwnj;ಗಳಿಗೆ ಆಲೌಟ್ ಮಾಡಿತು. ತಿಲಕ್ ವರ್ಮಾ 99 ರನ್&zwnj; ಗಳಿಸಿ ಶತಕ ವಂಚಿತರಾದರು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಪೂರ್ವ ವಲಯವು 584 ರನ್&zwnj;ಗಳ ಬೃಹತ್ ಮುನ್ನಡೆ ಸಾಧಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m203f3927try5jnwtnts59nz,imgname-ishan-kishan-1788857519394.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ದುಲೀಪ್&zwnj; ಟ್ರೋಫಿ ದೇಸಿ ಪ್ರಥಮ ದರ್ಜೆ ಕ್ರಿಕೆಟ್&zwnj; ಟೂರ್ನಿಯ ಫೈನಲ್&zwnj;ನಲ್ಲಿ ದಕ್ಷಿಣ ವಲಯ ವಿರುದ್ಧ ಪೂರ್ವ ವಲಯ ಬೃಹತ್&zwnj; ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್&zwnj;ನಲ್ಲಿ ಪೂರ್ವದ 708 ರನ್&zwnj;ಗೆ ಉತ್ತರವಾಗಿ, ದಕ್ಷಿಣ ವಲಯ ಬುಧವಾರ 336 ರನ್&zwnj;ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್&zwnj; ಆರಂಭಿಸಿರುವ ಪೂರ್ವ ವಲಯ 4ನೇ ದಿನದಂತ್ಯಕ್ಕೆ 5 ವಿಕೆಟ್&zwnj; ನಷ್ಟದಲ್ಲಿ 212 ರನ್ ಗಳಿಸಿದ್ದು, ಬರೋಬ್ಬರಿ 584 ರನ್&zwnj; ಮುನ್ನಡೆ ಪಡೆದಿದೆ.&lt;/p&gt;&lt;p&gt;ಮಂಗಳವಾರ ದಕ್ಷಿಣ ತಂಡ 6 ವಿಕೆಟ್&zwnj; ನಷ್ಟದಲ್ಲಿ 242 ರನ್&zwnj; ಗಳಿಸಿತ್ತು. ನಾಯಕ ತಿಲಕ್&zwnj; 56 ರನ್&zwnj; ಗಳಿಸಿ ಕ್ರೀಸ್&zwnj;ನಲ್ಲಿದ್ದರು. ಬುಧವಾರ ಅವರಿಗೆ ಜೊತೆಯಾದ ಚಾಮಾ ಮಿಲಿಂದ್&zwnj;(43 ರನ್&zwnj;) ತಂಡಕ್ಕೆ ಆಸರೆಯಾದರು. ಆದರೆ ಇವರ ಆಟ ತಂಡದ ಇನ್ನಿಂಗ್ಸ್&zwnj; ಹಿನ್ನಡೆ ತಪ್ಪಿಸಲು ನೆರವಾಗಲಿಲ್ಲ. ತಿಲಕ್&zwnj; 99 ರನ್&zwnj; ಗಳಿಸಿದ್ದಾಗ ಔಟಾಗುವುದರೊಂದಿಗೆ ತಂಡದ ಇನ್ನಿಂಗ್ಸ್&zwnj;ಗೆ ತೆರೆಬಿತ್ತು.&lt;/p&gt;&lt;h2&gt;&lt;strong&gt;ಫಾಲೋ ಆನ್ ಹೇರದೇ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಪೂರ್ವ ವಲಯ&lt;/strong&gt;&lt;/h2&gt;&lt;p&gt;372 ರನ್&zwnj;ಗಳ ಭರ್ಜರಿ ಮುನ್ನಡೆ ಸಾಧಿಸಿದರೂ ಪೂರ್ವ ವಲಯ ಫಾಲೋ-ಆನ್&zwnj; ಹೇರದೆ 2ನೇ ಇನ್ನಿಂಗ್ಸ್&zwnj; ಬ್ಯಾಟಿಂಗ್&zwnj; ಆರಂಭಿಸಿತು. ಮೊದಲ ಇನ್ನಿಂಗ್ಸ್&zwnj;ನಲ್ಲಿ 270 ರನ್&zwnj; ಗಳಿಸಿದ್ದ ನಾಯಕ ಇಶಾನ್&zwnj; ಕಿಶನ್&zwnj; ಈ ಬಾರಿ 80 ರನ್&zwnj;ಗೆ ಔಟಾದರು. ಶಿಖರ್&zwnj; ಮೋಹನ್&zwnj; 52, ಕುಮಾರ್&zwnj; ಕುಶಾಗ್ರ ಔಟಾಗದೆ 34 ರನ್ ಗಳಿಸಿದ್ದಾರೆ.&lt;/p&gt;&lt;p&gt;ಸ್ಕೋರ್&zwnj;: ಪೂರ್ವ ವಲಯ 708/10 ಮತ್ತು 212/5 (ಇಶಾನ್&zwnj; 80, ಶಿಖರ್&zwnj; 52, ಸಿರಾಜ್&zwnj; 1-17, ನಿಧೀಶ್&zwnj; 1-14), ದಕ್ಷಿಣ ವಲಯ 336/10 (ತಿಲಕ್&zwnj; 99, ಮಿಲಿಂದ್&zwnj; 43, ಮುಕೇಶ್&zwnj; 3-62)&lt;/p&gt;&lt;h3&gt;&lt;strong&gt;ಬಿಸಿಸಿಐ, ರಾಜ್ಯ ಕ್ರಿಕೆಟ್&zwnj; ಸಂಸ್ಥೆಗಳನ್ನು ಕ್ರೀಡಾ ನೀತಿ ವ್ಯಾಪ್ತಿಗೇಕೆ ತರಬಾರದು?&lt;/strong&gt;&lt;/h3&gt;&lt;p&gt;ನವದೆಹಲಿ: ಭಾರತೀಯ ಕ್ರಿಕೆಟ್&zwnj; ನಿಯಂತ್ರಣ ಮಂಡಳಿ ಮತ್ತು ರಾಜ್ಯ ಕ್ರಿಕೆಟ್&zwnj; ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್&zwnj; ಪ್ರಶ್ನಿಸಿದೆ,&lt;/p&gt;&lt;p&gt;ಬಿಸಿಸಿಐ ವಿಚಾರದಲ್ಲಿ ಕೆಲ ಕ್ರಿಕೆಟ್&zwnj; ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್&zwnj; ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್&zwnj; ಅವರ ನೇತೃತ್ವದ ಪೀಠ, &lsquo;ಬಿಸಿಸಿಐ ಮತ್ತು ಕ್ರಿಕೆಟ್&zwnj; ಸಂಸ್ಥೆಗಳ ಪದಾಧಿಕಾರಿಗಳ ಸೇವಾ ನಿಯಮಗಳನ್ನು ರಾಷ್ಟ್ರೀಯ ಕ್ರೀಡಾ ನೀತಿ-2025ರಿಂದ ಏಕೆ ನಿಯಂತ್ರಿಸಬಾರದು?&rsquo; ಎಂದು ಪ್ರಶ್ನಿಸಿದೆ. ಸ್ಪಷ್ಟ ಉತ್ತರ ನೀಡುವಂತೆ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ.&lt;/p&gt;&lt;p&gt;2014ರಿಂದಲೂ ಬಿಸಿಸಿಐಗೆ ಸಂಬಂಧಿಸಿದ ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್&zwnj; ನಡೆಸಿಕೊಂಡು ಬರುತ್ತಿದೆ. ಬಿಸಿಸಿಐಗೆ ಸುಧಾರಣಾ ಕ್ರಮಕ್ಕಾಗಿ ಈ ಹಿಂದೆ ನ್ಯಾಯಮೂರ್ತಿ ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಸಮಿತಿಯೊಂದನ್ನು ಕೂಡ ರಚಿಸಿತ್ತು.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/duleep-trophy-final-east-zone-take-584-run-lead-south-zone-all-out-for-336-kvn/articleshow-67y2l12"/>
        </item>
        <item>
            <title><![CDATA[U19 ತಂಡದಲ್ಲಿ ತಂದೆಗೆ ತಕ್ಕ ಮಕ್ಕಳು; ಸೆಹ್ವಾಗ್, ದ್ರಾವಿಡ್ ಪುತ್ರರ ಬಗ್ಗೆ ಕ್ಯಾಪ್ಟನ್ ಸ್ಫೋಟಕ ಹೇಳಿಕೆ]]></title>
            <link>https://kannada.asianetnews.com/cricket-sports/india-u19-captain-lakshya-raichandani-on-handling-spotlight-on-anvay-dravid-and-aaryavir-sehwag-gkn/articleshow-eo6tbdp</link>
            <guid isPermaLink="true">https://kannada.asianetnews.com/cricket-sports/india-u19-captain-lakshya-raichandani-on-handling-spotlight-on-anvay-dravid-and-aaryavir-sehwag-gkn/articleshow-eo6tbdp</guid>
            <pubDate>Wed, 09 Sep 2026 23:03:06 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ U19 ತಂಡದಲ್ಲಿ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಮತ್ತು ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಆಯ್ಕೆಯಾಗಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಯಕ ಲಕ್ಷ್ಯ ರಾಯ್&zwnj;ಚಂದಾನಿ, ಎಷ್ಟೇ ಮಾಧ್ಯಮಗಳ ಗಮನವಿದ್ದರೂ ಯಾವುದೇ ವ್ಯಕ್ತಿಗಿಂತ ತಂಡದ ಹಿತಾಸಕ್ತಿಯೇ ನಮಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m23knhxx4zpjfsazddjxwed5,imgname-veerendra-sewag-and-rahul-dravid-1788975171517.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕ್ರಿಕೆಟ್&zwnj;ನ ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ಒಟ್ಟಿಗೆ ಕಣಕ್ಕಿಳಿದರೆ ಎದುರಾಳಿ ಬೌಲರ್&zwnj;ಗಳಿಗೆ ನಡುಕ ಹುಟ್ಟುತ್ತಿತ್ತು. ಇದೀಗ ಅವರ ಇಬ್ಬರ ಪುತ್ರರಾದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್ ಒಟ್ಟಿಗೆ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗುವ ಮೂಲಕ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಸೆಪ್ಟೆಂಬರ್ 18 ರಿಂದ ಆಸ್ಟ್ರೇಲಿಯಾ ಅಂಡರ್-19 ವಿರುದ್ಧ ಆರಂಭವಾಗಲಿರುವ ಸರಣಿಗೆ ಭಾರತ ತಂಡ ಸಜ್ಜಾಗಿದೆ. ಎಲ್ಲರ ಚಿತ್ತ ಇರುವುದು ದ್ರಾವಿಡ್ ಮತ್ತು ಸೆಹ್ವಾಗ್ ಪುತ್ರರ ಮೇಲೆಯೇ! ತಂಡದಲ್ಲಿ ಇಬ್ಬರು ಸೂಪರ್&zwnj;ಸ್ಟಾರ್ ಮಕ್ಕಳಿರುವಾಗ, ಮಾಧ್ಯಮಗಳ ಅತಿಯಾದ ಗಮನ ಮತ್ತು ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಭಾರತ U19 ತಂಡದ ಯುವ ನಾಯಕ ಲಕ್ಷ್ಯ ರಾಯ್&zwnj;ಚಂದಾನಿ (Lakshya Raichandani) ಖಡಕ್ ಉತ್ತರ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಯಾರೇ ಇರಲಿ, ವ್ಯಕ್ತಿಗಿಂತ ತಂಡವೇ ಮೊದಲು&lt;/strong&gt;&lt;/h2&gt;&lt;p&gt;ತಂಡದಲ್ಲಿ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್ ಇರುವುದರಿಂದ ಉಂಟಾಗುವ ಹೈಪ್ ಹಾಗೂ ತಂಡದ ವಾತಾವರಣದ ಬಗ್ಗೆ ಮಾತನಾಡಿದ ನಾಯಕ ಲಕ್ಷ್ಯ, ತಂಡದಲ್ಲಿ ಯಾರೇ ಆಟಗಾರರಿರಲಿ, ಯಾವುದೇ ಒಬ್ಬ ವ್ಯಕ್ತಿಗಿಂತ ಇಡೀ ತಂಡದ ಹಿತಾಸಕ್ತಿಯೇ ನಮಗೆ ಮೊದಲ ಆದ್ಯತೆ. ನಾನು ತಂಡವನ್ನು ಮುನ್ನಡೆಸುವ ರೀತಿಯೇ ಹಾಗೆ. ತಂಡದಲ್ಲಿ ಯಾರೂ ಕೂಡ ಕಡೆಗಣಿಸಲ್ಪಟ್ಟ ಭಾವನೆ ಬಾರದಂತೆ ನೋಡಿಕೊಳ್ಳುವುದು ಮತ್ತು ಪ್ರತಿಯೊಬ್ಬರನ್ನೂ ಒಂದೇ ಸೂರಿನಡಿ ತಂದು ಒಗ್ಗಟ್ಟಿನಿಂದ ಆಡುವುದು ನಮ್ಮ ಮುಖ್ಯ ಗುರಿ. ಎಲ್ಲರೂ ಒತ್ತಡವಿಲ್ಲದೆ ಆಡುವಂತಹ ಸಕಾರಾತ್ಮಕ ವಾತಾವರಣ ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ತಂದೆಯರ ಹಾದಿಯಲ್ಲೇ ಪುತ್ರರ ಪಯಣ&lt;/strong&gt;&lt;/h2&gt;&lt;p&gt;ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಜೋಡಿ ಅದೆಷ್ಟೋ ಸ್ಮರಣೀಯ ಇನ್ನಿಂಗ್ಸ್&zwnj;ಗಳನ್ನು ಕಟ್ಟಿದೆ. ಈಗ ಅವರ ಮಕ್ಕಳಾದ ಅನ್ವಯ್ (ವಿಕೆಟ್ ಕೀಪರ್ ಬ್ಯಾಟರ್) ಮತ್ತು ಆರ್ಯವೀರ್ (ಆರಂಭಿಕ ಬ್ಯಾಟರ್) ಜೂನಿಯರ್ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ದೇಶೀಯ ಹಾಗೂ ವಯೋಮಿತಿ ಕ್ರಿಕೆಟ್&zwnj;ನಲ್ಲಿ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿಯೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ 17 ವರ್ಷದ ಲಕ್ಷ್ಯ ರಾಯ್&zwnj;ಚಂದಾನಿ ಕೂಡ ಸಾಮಾನ್ಯ ಪ್ರತಿಭೆಯಲ್ಲ. ಶ್ರೀಲಂಕಾ U19 ವಿರುದ್ಧ 207 ರನ್ ಗಳಿಸಿ ಅಬ್ಬರಿಸಿದ್ದ ಲಕ್ಷ್ಯ, ರಣಜಿ ಟ್ರೋಫಿ ಸೆಮಿಫೈನಲ್&zwnj;ನಲ್ಲಿ ಬಲಿಷ್ಠ ಕರ್ನಾಟಕ ತಂಡದ ವಿರುದ್ಧ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಈ ಹಿಂದೆ ವಿರಾಟ್ ಕೊಹ್ಲಿ, ಮೊಹಮ್ಮದ್ ಕೈಫ್ ಮತ್ತು ಪೃಥ್ವಿ ಶಾ ಮುನ್ನಡೆಸಿದ್ದ ಸ್ಥಾನದಲ್ಲಿ ಈಗ ಲಕ್ಷ್ಯ ನಿಂತಿದ್ದಾರೆ.&lt;/p&gt;&lt;p&gt;ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯು ದ್ರಾವಿಡ್ ಮತ್ತು ಸೆಹ್ವಾಗ್ ಪುತ್ರರಿಗೆ ಮಾತ್ರವಲ್ಲದೆ ಇಡೀ ಭಾರತ ಯುವ ಪಡೆಗೆ ಭವಿಷ್ಯದ ಟೀಮ್ ಇಂಡಿಯಾ ಬಾಗಿಲು ತಟ್ಟಲು ಅತ್ಯುತ್ತಮ ವೇದಿಕೆಯಾಗಲಿದೆ. ಜೂನಿಯರ್ ಸೆಹ್ವಾಗ್ ಹಾಗೂ ಜೂನಿಯರ್ ದ್ರಾವಿಡ್ ತಮ್ಮ ತಂದೆಯರಂತೆ ಮೈದಾನದಲ್ಲಿ ಮೋಡಿ ಮಾಡುತ್ತಾರಾ ಎಂದು ನೋಡಲು ಇಡೀ ದೇಶ ಕಾಯುತ್ತಿದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/india-u19-captain-lakshya-raichandani-on-handling-spotlight-on-anvay-dravid-and-aaryavir-sehwag-gkn/articleshow-eo6tbdp"/>
        </item>
        <item>
            <title><![CDATA[Cricket: ಇಂಡಿಯನ್ ಕ್ಯಾಂಪ್‌ಗೆ ಬೂಸ್ಟರ್ ಡೋಸ್! ಟಿ೨೦ ಸರಣಿಗೆ ಸಂಪೂರ್ಣ ಫಿಟ್ ಆದ ಮ್ಯಾಚ್ ವಿನ್ನರ್ ಆಲ್‌ರೌಂಡರ್!]]></title>
            <link>https://kannada.asianetnews.com/sports/nitish-kumar-reddy-passes-fitness-test-team-india-comeback-afghanistan-t20-series-bmk/articleshow-9fyr7yg</link>
            <guid isPermaLink="true">https://kannada.asianetnews.com/sports/nitish-kumar-reddy-passes-fitness-test-team-india-comeback-afghanistan-t20-series-bmk/articleshow-9fyr7yg</guid>
            <pubDate>Wed, 09 Sep 2026 22:55:50 +0530</pubDate>
            <description><![CDATA[&lt;p&gt;ಆ ಯುವ ಆಲ್&zwnj;ರೌಂಡರ್ ಗಾಯದಿಂದ ಚೇತರಿಸಿಕೊಂಡು ಫಿಟ್&zwnj;ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಅವರು ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದು, ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2110h4qksrgasxqjwxfn5n7,imgname-team-india-1788888499351.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಗೂ ಮುನ್ನ ಭಾರತೀಯ ಕ್ರಿಕೆಟ್&zwnj; ತಂಡಕ್ಕೆ ದೊಡ್ದ ಸಿಹಿ ಸುದ್ದಿ ಸಿಕ್ಕಿದೆ. ಯುವ ಹಾಗೂ ಧಾಕಡ್ ಆಲ್&zwnj;ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಫಿಟ್&zwnj;ನೆಸ್ ಪರೀಕ್ಷೆಯಲ್ಲಿ ಸಂಪೂರ್ಣ ಉತ್ತೀರ್ಣರಾಗಿದ್ದು, ಬಿಸಿಸಿಐ (BCCI) ವೈದ್ಯಕೀಯ ತಂಡದಿಂದ ಹಸಿರು ನಿಶಾನೆ ಪಡೆದುಕೊಂಡಿದ್ದಾರೆ. ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದು, ಕಣಕ್ಕಿಳಿಯಲು ಸಜ್ಜಾಗಿದ್ದಾರೆ.&lt;/p&gt;&lt;h2&gt;&lt;strong&gt;ಗಾಯದ ಸಮಸ್ಯೆ ಮತ್ತು ಸುದೀರ್ಘ ಚೇತರಿಕೆ!&lt;/strong&gt;&lt;/h2&gt;&lt;p&gt;23 ವರ್ಷದ ನಿತೀಶ್ ಅವರು ಜೂನ್ ೨೦೨೬ ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿದ್ದರು. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಅಸ್ವಸ್ಥತೆ ಅನುಭವಿಸಿದ ಕಾರಣ, ಅವರಿಗೆ ಸುದೀರ್ಘ ವಿಶ್ರಾಂತಿ ಹಾಗೂ ಪುನರ್ವಸತಿಯ (Rehab) ಅಗತ್ಯವಿತ್ತು. ಈ ಗಾಯದ ಸಮಸ್ಯೆಯಿಂದಾಗಿ ಅವರು ಇಂಗ್ಲೆಂಡ್, ಐರ್ಲೆಂಡ್, ಜಿಂಬಾಬ್ವೆ ಸರಣಿ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿಯಬೇಕಾಯಿತು.&lt;/p&gt;&lt;h3&gt;&lt;strong&gt;ಸೆಂಟರ್ ಆಫ್ ಎಕ್ಸಲೆನ್ಸ್&zwnj;ನಲ್ಲಿ ಗ್ರೀನ್ ಸಿಗ್ನಲ್!&lt;/strong&gt;&lt;/h3&gt;&lt;p&gt;ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ತಜ್ಞರು ನಿತೀಶ್ ಅವರ ಚೇತರಿಕೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು. ಬುಧವಾರ ನಡೆದ ಅಂತಿಮ ಪಂದ್ಯದ ಸಿಮ್ಯುಲೇಶನ್ ಟೆಸ್ಟ್&zwnj;ನಲ್ಲಿ (Match Simulation) ನಿತೀಶ್ ಬೌಲಿಂಗ್ ಹಾಗೂ ಬ್ಯಾಟಿಂಗ್&zwnj; ಎರಡರಲ್ಲೂ ನಿಗದಿತ ನಿಯತಾಂಕಗಳನ್ನು ಯಶಸ್ವಿಯಾಗಿ ತಲುಪಿ ಫಿಟ್ ಎಂದು ಸಾಬೀತುಪಡಿಸಿದ್ದಾರೆ. ಈಗ ಅವರು ದೀರ್ಘ ಸ್ಪೆಲ್&zwnj;ಗಳನ್ನು ಬೌಲ್ ಮಾಡಲು ಸಂಪೂರ್ಣ ಅರ್ಹರಾಗಿದ್ದಾರೆ.&lt;/p&gt;&lt;h3&gt;&lt;strong&gt;ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರಿ ನೆರವು!&lt;/strong&gt;&lt;/h3&gt;&lt;p&gt;ಸ್ಟಾರ್ ಆಲ್&zwnj;ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರ ಎಂಟ್ರಿ ಭಾರತೀಯ ತಂಡಕ್ಕೆ ಭಾರಿ ಆನೆಬಲ ತಂದಿದೆ. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ಶಿಸ್ತುಬದ್ಧ ಮಧ್ಯಮ ವೇಗದ ಬೌಲಿಂಗ್ ಮಾಡುವ ಸಾಮರ್ಥ್ಯ ಇವರಿಗಿದೆ. ಪ್ಲೇಯಿಂಗ್&zwnj; ೧೧ ನಲ್ಲಿ ಸ್ಥಾನಕ್ಕಾಗಿ ಇವರು ಶಿವಂ ದುಬೆ ಅವರೊಂದಿಗೆ ಸ್ಪರ್ಧಿಸಲಿದ್ದರೂ, ಇವರ ಬೌಲಿಂಗ್ ಕೌಶಲ್ಯ ತಂಡಕ್ಕೆ ಹೆಚ್ಚಿನ ಸಮತೋಲನ ನೀಡುತ್ತದೆ.&lt;/p&gt;&lt;h3&gt;&lt;strong&gt;ಏಷ್ಯನ್ ಗೇಮ್ಸ್ 2026 ಕ್ಕೆ ಪ್ರಮುಖ ಹೆಜ್ಜೆ!&lt;/strong&gt;&lt;/h3&gt;&lt;p&gt;ಅಕ್ಟೋಬರ್ 2024 ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ನಿತೀಶ್, ಈಗಾಗಲೇ ಮೂರೂ ಮಾದರಿಯ ಕ್ರಿಕೆಟ್&zwnj;ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ 2026ರ ಏಷ್ಯನ್ ಕ್ರೀಡಾಕೂಟಕ್ಕೂ ನಿತೀಶ್ ಆಯ್ಕೆಯಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಈ ಟಿ೨೦ ಸರಣಿಯು ಅವರಿಗೆ ಉತ್ತಮ ಅಭ್ಯಾಸ ಹಾಗೂ ಆತ್ಮವಿಶ್ವಾಸ ನೀಡಲಿದೆ.&lt;/p&gt;&lt;h3&gt;&lt;strong&gt;ಬಲಶಾಲಿಯಾದ ಶ್ರೇಯಸ್ ಅಯ್ಯರ್ ಬಳಗ!&lt;/strong&gt;&lt;/h3&gt;&lt;p&gt;ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಶ್ರೇಯಸ್ ಅಯ್ಯರ್ ನಾಯಕನಾಗಿದ್ದು, ತಿಲಕ್ ವರ್ಮಾ ಉಪನಾಯಕನಾಗಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಅವರಂತಹ ಯುವ ಪಡೆ ಹಾಗೂ ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಬಲ ತಂಡಕ್ಕಿದೆ. ನಿತೀಶ್ ಕುಮಾರ್ ರೆಡ್ಡಿ ಅವರ ಮರಳುವಿಕೆಯು ತಂಡದ ಸಂಯೋಜನೆಯನ್ನು ಮತ್ತಷ್ಟು ದೃಢಗೊಳಿಸಿದೆ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/sports/nitish-kumar-reddy-passes-fitness-test-team-india-comeback-afghanistan-t20-series-bmk/articleshow-9fyr7yg"/>
        </item>
        <item>
            <title><![CDATA['ಬಿಸಿಲಲ್ಲಿ ನಿಂತು ನನ್ನ ಗಡ್ಡ ಬೆಳ್ಳಗಾಗಿದ್ದಲ್ಲ' ನಕಲ್ ಬಾಲ್ ಎಸೆದು ಬೈಗುಳ ತಿಂದ ದೀಪಕ್‌ ಚಹರ್‌ ಕಥೆ ಬಿಚ್ಚಿಟ್ಟ ಎಂಎಸ್‌ ಧೋನಿ]]></title>
            <link>https://kannada.asianetnews.com/cricket-sports/dhoni-opens-up-about-scolding-deepak-chahar-knuckleball-anecdote-san/articleshow-4g0i2ec</link>
            <guid isPermaLink="true">https://kannada.asianetnews.com/cricket-sports/dhoni-opens-up-about-scolding-deepak-chahar-knuckleball-anecdote-san/articleshow-4g0i2ec</guid>
            <pubDate>Wed, 09 Sep 2026 20:42:50 +0530</pubDate>
            <description><![CDATA[&lt;p&gt;ಎಂ.ಎಸ್. ಧೋನಿ ಅವರು ದೀಪಕ್ ಚಹರ್&zwnj;ಗೆ ಬೈದ ಪ್ರಸಂಗದ ಹಿಂದಿನ ಸ್ವಾರಸ್ಯಕರ ಸತ್ಯವನ್ನು ಇದೀಗ ಬಹಿರಂಗಪಡಿಸಿದ್ದಾರೆ. ಡೆತ್ ಓವರ್&zwnj;ಗಳಲ್ಲಿ 'ನಕುಲ್ ಬಾಲ್' ಹಾಕಬೇಡ ಎಂದು ಎಚ್ಚರಿಸಿದರೂ, ಚಹರ್ ಕೇಳದಿದ್ದಾಗ ತಾನು ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದೇಕೆ ಎಂಬುದನ್ನು ಧೋನಿ ವಿವರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m23bjhctchzv24emnch18vt0,imgname-ms-dhoni-and-deepak-chahar-1788966684058.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೀ&lt;/strong&gt;ಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಎಂ.ಎಸ್. ಧೋನಿ (MS Dhoni) ಮೈದಾನದಲ್ಲಿ ಎಷ್ಟೇ 'ಕ್ಯಾಪ್ಟನ್ ಕೂಲ್' ಆಗಿದ್ದರೂ, ಸಂದರ್ಭ ಬಂದರೆ ಆಟಗಾರರಿಗೆ ತಮ್ಮದೇ ಶೈಲಿಯಲ್ಲಿ ಕ್ಲಾಸ್ ತೆಗೆದುಕೊಳ್ತಾರೆ ಅನ್ನೋು ಗೊತ್ತಿರುವ ವಿಚಾರ. ಇತ್ತೀಚೆಗೆ ವೇಗಿ ದೀಪಕ್ ಚಹರ್ (Deepak Chahar) ತಮ್ಮ ಸಂದರ್ಶನವೊಂದರಲ್ಲಿ ಧೋನಿಯಿಂದ ಬೈಗುಳ ತಿಂದ ಪ್ರಸಂಗವನ್ನು ನೆನಪಿಸಿಕೊಂಡಿದ್ದರು. ಇದೀಗ ಸ್ವತಃ ಧೋನಿಯವರೇ ಆ ಘಟನೆಯ ಹಿಂದಿನ ನೈಜ ಹಾಗೂ ಅತ್ಯಂತ ಸ್ವಾರಸ್ಯಕರ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಸ್ವತಃ ದೀಪಕ್ ಚಹರ್ ಈಗ ತನಗೆ ಬಿದ್ದ ಬೈಗುಳದ ಬಗ್ಗೆ ಮಾತಾಡಿದ್ದಾನೆ ಎಂದ ಮೇಲೆ ನಾನು ಕೂಡ ಈ ವಿಷಯವನ್ನು ಓಪನ್ ಆಗಿ ಹೇಳಲೇಬೇಕಿದೆ ಎಂದು ಧೋನಿ ತಮಾಷೆಯಾಗಿ ಮಾತು ಆರಂಭಿಸಿದ್ದಾರೆ.&lt;/p&gt;&lt;h2&gt;&lt;strong&gt;ಡೆತ್ ಓವರ್ಸ್ ದೂರು ಮತ್ತು 'ನಕುಲ್ ಬಾಲ್' ಹಠ&lt;/strong&gt;&lt;/h2&gt;&lt;p&gt;ದೀಪಕ್ ಚಹರ್ ನಮ್ಮ ತಂಡಕ್ಕಾಗಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದಾನೆ. ಆದರೆ ಆತನಿಗೆ ನನ್ನ ಮೇಲೆ ಸದಾ ಒಂದು ದೂರಿತ್ತು. 'ಮಾಹಿ ಭಾಯ್, ನೀವು ನನಗೆ ಡೆತ್ ಓವರ್&zwnj;ಗಳಲ್ಲಿ (ಕೊನೆಯ ಓವರ್&zwnj;ಗಳು) ಬೌಲಿಂಗ್ ಮಾಡಲು ಅವಕಾಶವೇ ಕೊಡುವುದಿಲ್ಲ' ಎಂದು ಕೇಳುತ್ತಿದ್ದ. ಅದಕ್ಕೆ ನಾನು 'ಆರಂಭಿಕ ಓವರ್&zwnj;ಗಳಲ್ಲೇ ನೀನು ವಿಕೆಟ್ ತೆಗೆದು ಚೆನ್ನಾಗಿ ಬೌಲಿಂಗ್ ಮಾಡುತ್ತಿರುವಾಗ, ಕೊನೆಯಲ್ಲಿ ಬೌಲಿಂಗ್ ಮಾಡುವ ಅಗತ್ಯವೇನಿದೆ?' ಎಂದು ತಿಳಿಹೇಳುತ್ತಿದ್ದೆ ಎಂದಿದ್ದಾರೆ.&lt;/p&gt;&lt;p&gt;&quot;ಇನ್ನು ಆತನಿಗೆ ಹೊಸ ವಿಧದ ಬೌಲಿಂಗ್ ವೇರಿಯೇಷನ್ ಮಾಡುವುದೆಂದರೆ ವಿಪರೀತ ಕ್ರೇಜ್. ಜೊತೆಗೆ ಆತನಿಗೆ ಬೆವರು ಹರಿಯುವುದು ತುಂಬಾ ಜಾಸ್ತಿ. ಸುಮ್ಮನೆ ನಿಂತಿದ್ದರೂ ನೀರು ಸುರಿದಂತೆ ಬೆವರುತ್ತಾ ಇರುತ್ತಾನೆ. ಬೆವರುತ್ತಿರುವಾಗ ಕೈಯಲ್ಲಿ ಗ್ರಿಪ್ (ಫ್ರಿಕ್ಷನ್) ಸಿಗುವುದಿಲ್ಲ. ಹಾಗಾಗಿ 'ಬ್ರದರ್, ನಕುಲ್ ಬಾಲ್ (Knuckleball) ಹಾಕಬೇಡ, ಅದು ತುಂಬಾ ಕಷ್ಟದ ಎಸೆತ' ಎಂದು ಮೊದಲೇ ಎಚ್ಚರಿಕೆ ನೀಡುತ್ತಿದೆ ಎಂದು ಧೋನಿ ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬಿಸಿಲಿನಲ್ಲಿ ನಿಂತು ಗಡ್ಡ ನರೆತಿಲ್ಲಪ್ಪಾ!&lt;/strong&gt;&lt;/h2&gt;&lt;p&gt;ಧೋನಿ ಎಷ್ಟೇ ಬೇಡ ಎಂದರೂ ಚಹರ್ ಪಂದ್ಯದಲ್ಲಿ ನಕುಲ್ ಬಾಲ್ ಎಸೆದು ನೋ-ಬಾಲ್ ಮಾಡಿಕೊಂಡಿದ್ದರು. ಈ ಘಟನೆಯನ್ನು ನೆನಪಿಸಿಕೊಂಡ ಧೋನಿ, 'ಆತನಿಗೆ ಎಲ್ಲವೂ ಗೊತ್ತು ಎಂಬ ಭಾವನೆ. ನಾವಿಲ್ಲಿ ಇಷ್ಟೆಲ್ಲಾ ಅನುಭವ ಪಡೆದು ಗಡ್ಡ ಬಿಳಿ ಮಾಡಿಕೊಂಡಿದ್ದೇವೆ, ಆತನೇನೋ ಬಿಸಿಲಿನಲ್ಲಿ ನಿಂತು ಗಡ್ಡ ನರೆತಿದೆ ಎಂದುಕೊಂಡಿದ್ದಾನೆ. ನಾನು ಬೇಡ ಎಂದರೂ ಆತ ನಕುಲ್ ಬಾಲ್ ಎಸೆದು ಎಡವಟ್ಟು ಮಾಡಿದ. ತಕ್ಷಣ ನಾನು ಆತನ ಬಳಿ ಹೋಗಿದ್ದೆ' ಎಂದು ಧೋನಿ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;'ವರ್ಣರಂಜಿತ' ಭಾಷೆಯಲ್ಲಿ ಕ್ಲಾಸ್!:&lt;/strong&gt;&lt;/h2&gt;&lt;p&gt;ಚಹರ್&zwnj;ಗೆ ಬುದ್ಧಿ ಕಲಿಸಿದ ಸಂದರ್ಭವನ್ನು ನೆನಪಿಸಿಕೊಂಡ ಧೋನಿ, &quot;ನಾನು ಅಲ್ಲಿ ಬಳಸಿದ ನಿಖರವಾದ ಪದಗಳನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ (ಸ್ವಲ್ಪ ಲೋಕಲ್ ಭಾಷೆ ಬಳಕೆಯಾಗಿತ್ತು!). ಆದರೆ ಸರಳವಾಗಿ ಒಂದು ಮಾತು ಹೇಳಿದೆ. ನೋಡು ದೀಪಕ್, 'ನಿನ್ನ ಬಾಣಲೆಯಲ್ಲಿರುವ ಎಲ್ಲಾ ಬಾಣಗಳನ್ನು (Variations) ನನಗೆ ತೋರಿಸುವ ಅಗತ್ಯವಿಲ್ಲ. ನಿನ್ನ ಹತ್ತಿರ ಏನೇನು ತಂತ್ರಗಳಿವೆ ಎಂದು ನನಗೆ ಚೆನ್ನಾಗಿ ಗೊತ್ತು. ವಾತಾವರಣ ಮತ್ತು ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡು. ತಂಡಕ್ಕೆ ಏನು ಬೇಕೋ ಅದನ್ನು ಎಸೆ. ನಿನ್ನ ಬಾಣಗಳನ್ನು ಯಾವಾಗ ಎಸೆಯಬೇಕು ಎಂಬುದು ನನಗೆ ಗೊತ್ತು' ಎಂದು ಗರಂ ಆಗಿಯೇ ಹೇಳಿದ್ದೆ&quot; ಎಂದಿದ್ದಾರೆ.&lt;/p&gt;&lt;p&gt;ಕೊನೆಯಲ್ಲಿ ಧೋನಿ ನಗುತ್ತಲೇ, &quot;ಆ ದಿನ ನಾನು ಚಹರ್&zwnj;ಗೆ 'ನೀನು ತಪ್ಪು ಮಾಡಿಲ್ಲಪ್ಪಾ, ನಿನ್ನಿಂದ ಏನನ್ನೋ ನಿರೀಕ್ಷೆ ಮಾಡುತ್ತಿರುವುದೇ ನನ್ನ ತಪ್ಪು' ಎಂದು ಹೇಳಿದ್ದು ಹೌದು, ಅದು ಸತ್ಯ ಕೂಡ!&quot; ಎಂದು ಹೇಳುವ ಮೂಲಕ ಮಾತು ಮುಗಿಸಿದ್ದಾರೆ.&lt;/p&gt;&lt;p&gt;ವಿಶೇಷವೆಂದರೆ, ಧೋನಿಯಿಂದ ಬೈಗುಳ ತಿಂದರೂ ದೀಪಕ್ ಚಹರ್ ಸೇರಿದಂತೆ ಅನೇಕ ಆಟಗಾರರು 'ಮಾಹಿ ಭಾಯ್ ಬೈದರೆ ನಮಗೆ ಬೇಸರವಾಗುವುದಿಲ್ಲ, ಬದಲಿಗೆ ಖುಷಿಯಾಗುತ್ತದೆ' ಎಂದು ಧನ್ಯತೆ ವ್ಯಕ್ತಪಡಿಸುವುದು ಧೋನಿಯ ನಾಯಕತ್ವದ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;p&gt;&lt;strong&gt;ಯಾವ ಪಂದ್ಯ ಇದು: &lt;/strong&gt;2019ರ ಐಪಿಎಲ್&zwnj;ನಲ್ಲಿ ಚೆನ್ನೈ ಸೂಪರ್&zwnj; ಕಿಂಗ್ಸ್&zwnj; ಹಾಗೂ ಪಂಜಾಬ್&zwnj; ಕಿಂಗ್ಸ್&zwnj; ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಚೆನ್ನೈ ಈ ಪಂದ್ಯದಲ್ಲಿ 160 ರನ್&zwnj; ಅನ್ನು ಯಶಸ್ವಿಯಾಗಿ ರಕ್ಷಣೆ ಮಾಡಿಕೊಂಡಿತ್ತು.&lt;/p&gt;]]></content:encoded>
            <category>cricket-sports</category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/dhoni-opens-up-about-scolding-deepak-chahar-knuckleball-anecdote-san/articleshow-4g0i2ec"/>
        </item>
        <item>
            <title><![CDATA[ಜೋ ರೂಟ್‌ ಮತ್ತೊಂದು ಇತಿಹಾಸ; ಸ್ಟೀವ್‌ ವಾ-ಪಾಂಟಿಂಗ್‌ ಹಿಂದಿಕ್ಕಿದ ಇಂಗ್ಲೆಂಡ್‌ ಸ್ಟಾರ್‌]]></title>
            <link>https://kannada.asianetnews.com/cricket-sports/joe-root-makes-history-against-pakistan-surpasses-australian-legends-steve-waugh-and-ponting-kvn/articleshow-g4wgze1</link>
            <guid isPermaLink="true">https://kannada.asianetnews.com/cricket-sports/joe-root-makes-history-against-pakistan-surpasses-australian-legends-steve-waugh-and-ponting-kvn/articleshow-g4wgze1</guid>
            <pubDate>Wed, 09 Sep 2026 20:15:24 +0530</pubDate>
            <description><![CDATA[&lt;p&gt;ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್, ಪಾಕಿಸ್ತಾನ ವಿರುದ್ಧ ತಮ್ಮ 169ನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ, ಅತಿ ಹೆಚ್ಚು ಟೆಸ್ಟ್ ಆಡಿದವರ ಪಟ್ಟಿಯಲ್ಲಿ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಜೇಮ್ಸ್ ಆಂಡರ್ಸನ್ ನಂತರದ ಸ್ಥಾನ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke99x437ae6wywa578pjb4f3,imgname-2-1767691423847.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರ್ಮಿಂಗ್&zwnj;ಹ್ಯಾಮ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಜೋ ರೂಟ್, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ, ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ದಿಗ್ಗಜರಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.&lt;/p&gt;&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;ನ ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ನಡೆಯುತ್ತಿರುವ ಈ ಪಂದ್ಯವು ಜೋ ರೂಟ್ ಅವರ ವೃತ್ತಿಜೀವನದ 169ನೇ ಟೆಸ್ಟ್ ಆಗಿದೆ. ಈ ಮೂಲಕ, ತಲಾ 168 ಟೆಸ್ಟ್ ಪಂದ್ಯಗಳನ್ನಾಡಿದ್ದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. 2012ರ ಡಿಸೆಂಬರ್&zwnj;ನಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದ ಜೋ ರೂಟ್, ಸದ್ಯ ಈ ಪಟ್ಟಿಯಲ್ಲಿ ಭಾರತದ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (200 ಪಂದ್ಯಗಳು) ಮತ್ತು ತಮ್ಮದೇ ತಂಡದ ಜೇಮ್ಸ್ ಆಂಡರ್ಸನ್ (188 ಪಂದ್ಯಗಳು) ನಂತರದ ಸ್ಥಾನದಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಅತಿಹೆಚ್ಚು ಟೆಸ್ಟ್&zwnj; ಪಂದ್ಯವನ್ನಾಡಿದ ಟಾಪ್-10 ಆಟಗಾರರು&lt;/strong&gt;&lt;/h2&gt;&lt;p&gt;ಟೆಸ್ಟ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ಸಚಿನ್, ಆಂಡರ್ಸನ್, ರೂಟ್, ಸ್ಟೀವ್ ವಾ, ಪಾಂಟಿಂಗ್ ನಂತರ ಸ್ಟುವರ್ಟ್ ಬ್ರಾಡ್ (167), ಜಾಕ್ ಕಾಲಿಸ್ (166), ಶಿವನಾರಾಯಣ್ ಚಂದ್ರಪಾಲ್ (164), ರಾಹುಲ್ ದ್ರಾವಿಡ್ (164) ಮತ್ತು ಅಲಿಸ್ಟರ್ ಕುಕ್ (161) ಇದ್ದಾರೆ.&lt;/p&gt;&lt;p&gt;ಇದಲ್ಲದೆ, ಜೋ ರೂಟ್ ಮತ್ತೊಂದು ಅಪರೂಪದ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. ಇದು ಇಂಗ್ಲೆಂಡ್ ನೆಲದಲ್ಲಿ ಅವರು ಆಡುತ್ತಿರುವ 200ನೇ ಅಂತಾರಾಷ್ಟ್ರೀಯ ಪಂದ್ಯವಾಗಿದೆ (ಎಲ್ಲಾ ಮಾದರಿ ಸೇರಿ). ತವರಿನಲ್ಲಿ ಈಗಾಗಲೇ 11,928 ರನ್ ಗಳಿಸಿರುವ ರೂಟ್, ಇಂಗ್ಲೆಂಡ್&zwnj;ನಲ್ಲಿ 12,000 ಅಂತಾರಾಷ್ಟ್ರೀಯ ರನ್ ಪೂರೈಸಲು ಕೇವಲ 72 ರನ್&zwnj;ಗಳ ಅಗತ್ಯವಿದೆ. ಈ ಸಾಧನೆ ಮಾಡಿದ ಮೊದಲ ಇಂಗ್ಲಿಷ್ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ತವರಿನಲ್ಲಿ 12,000ಕ್ಕೂ ಹೆಚ್ಚು ರನ್ ಗಳಿಸಿದ ಐವರು ಆಟಗಾರರ ಪಟ್ಟಿಯಲ್ಲಿ ಭಾರತದ ಸಚಿನ್ ತೆಂಡೂಲ್ಕರ್ (14,192 ರನ್) ಅಗ್ರಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್, ಮೂರನೇ ಟೆಸ್ಟ್ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿದೆ.&lt;/p&gt;&lt;h3&gt;&lt;strong&gt;ಬರ್ಮಿಂಗ್&zwnj;ಹ್ಯಾಮ್ ಟೆಸ್ಟ್&zwnj;ನಲ್ಲೂ ಮಕಾಡೆ ಮಲಗಿದ ಪಾಕ್:&lt;/strong&gt;&lt;/h3&gt;&lt;p&gt;ಇನ್ನು ಈಗಾಗಲೇ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡವು ಮೂರನೇ ಟೆಸ್ಟ್&zwnj;ನಲ್ಲಾದರೂ ಇಂಗ್ಲೆಂಡ್&zwnj;ಗೆ ಕಠಿಣ ಪೈಪೋಟಿ ನೀಡಬಹುದೇನೋ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಪಾಕಿಸ್ತಾನ, ಓಲಿ ರಾಬಿನ್&zwnj;ಸನ್, ಜೋಶ್ ಟಂಗ್ ಮಾರಕ ದಾಳಿಗೆ ತತ್ತರಿಸಿ ಕೇವಲ 133 ರನ್&zwnj;ಗಳಿಗೆ ಸರ್ವಪತನ ಕಂಡಿತು. ಜೋಶ್ ಟಂಗ್ 4 ವಿಕೆಟ್ ಪಡೆದರೆ, ಓಲಿ ರಾಬಿನ್&zwnj;ಸನ್ ಹಾಗೂ ಜೋಫ್ರಾ ಆರ್ಚರ್ ತಲಾ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/joe-root-makes-history-against-pakistan-surpasses-australian-legends-steve-waugh-and-ponting-kvn/articleshow-g4wgze1"/>
        </item>
        <item>
            <title><![CDATA[Cricket: ದುಲೀಪ್ ಟ್ರೋಫಿಯಲ್ಲಿ ವೈಭವ್ ಗಳಿಸಿದ್ದೆಷ್ಟು? ಶತಕ ಕೈತಪ್ಪಿದರೂ ಸೂರ್ಯವಂಶಿಗೆ ಈ ಪಂದ್ಯಾವಳಿ ಮಹಾ ಲಾಭ ತಂದಿದ್ದೇಗೆ?]]></title>
            <link>https://kannada.asianetnews.com/cricket-sports/suryavanshi-duleep-trophy-performance-century-not-scored-but-tournament-proved-beneficial-bmk/articleshow-utir5i1</link>
            <guid isPermaLink="true">https://kannada.asianetnews.com/cricket-sports/suryavanshi-duleep-trophy-performance-century-not-scored-but-tournament-proved-beneficial-bmk/articleshow-utir5i1</guid>
            <pubDate>Wed, 09 Sep 2026 18:47:48 +0530</pubDate>
            <description><![CDATA[&lt;p&gt;15 ವರ್ಷದ ವೈಭವ್ ಸೂರ್ಯವಂಶಿ, ದುಲೀಪ್ ಟ್ರೋಫಿಯಲ್ಲಿ 57 ವರ್ಷಗಳ ಹಳೆಯ ದಾಖಲೆ ಮುರಿದು ಅರ್ಧಶತಕ ಗಳಿಸಿದ ಅತೀ ಕಿರಿಯ ಆಟಗಾರನಾಗಿದ್ದಾರೆ. ತಮ್ಮ ನಿರ್ಭೀತ ಆಟದಿಂದ ಮೊಹಮ್ಮದ್ ಸಿರಾಜ್&zwnj;ರಂತಹ ಬೌಲರ್&zwnj;ಗಳನ್ನು ಎದುರಿಸಿದ ಅವರು, ನಾಯಕತ್ವದ ಜವಾಬ್ದಾರಿಯನ್ನೂ ನಿಭಾಯಿಸಿ ಭರವಸೆ ಮೂಡಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1p46sdqc1gqvgx4bnat37bv,imgname-vaibhav--1788522751414.jpg" type="image/jpeg" height="390" width="690"/>
            <content:encoded><![CDATA[&lt;p&gt;2026ರ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ದೊಡ್ಡ ಮಟ್ಟದ ಶತಕಗಳನ್ನು ಗಳಿಸದಿದ್ದರೂ, ೧೫ ವರ್ಷದ ಹುಡುಗ ವೈಭವ್ ಸೂರ್ಯವಂಶಿ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಪಂದ್ಯಾವಳಿಯ ನಂತರ ಈ ಪ್ರಥಮ ದರ್ಜೆ ಟೂರ್ನಿಯು ವೈಭವ್&zwnj;ಗೆ ಲಾಭ ತಂದಿದೆಯೇ ಅಥವಾ ನಷ್ಟವನ್ನುಂಟುಮಾಡಿದೆಯೇ ಎಂಬ ಚರ್ಚೆ ಶುರುವಾಗಿತ್ತು. ಆದರೆ, ವೈಭವ್ ಅವರ ನಿರ್ಭೀತ ಆಟ ಮತ್ತು ಅಂತರರಾಷ್ಟ್ರೀಯ ಮಟ್ಟದ ಬೌಲರ್&zwnj;ಗಳನ್ನು ಎದುರಿಸಿದ ರೀತಿ, ಈ ಟೂರ್ನಿಯು ಅವರ ಭವಿಷ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸಿದೆ.&lt;/p&gt;&lt;h2&gt;&lt;strong&gt;57 ವರ್ಷಗಳ ಹಳೆಯ ದಾಖಲೆ ಧ್ವಂಸ!&lt;/strong&gt;&lt;/h2&gt;&lt;p&gt;15 ನೇ ವಯಸ್ಸಿನಲ್ಲಿಯೇ ದುಲೀಪ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ವೈಭವ್ ಇತಿಹಾಸ ನಿರ್ಮಿಸಿದ್ದಾರೆ. ಇಡೀ ಪಂದ್ಯಾವಳಿಯಲ್ಲಿ ವೈಭವ್ ಮೂರು ಪಂದ್ಯಗಳ ೫ ಇನ್ನಿಂಗ್ಸ್&zwnj;ಗಳಲ್ಲಿ 104.91 ರ ಅದ್ಭುತ ಸ್ಟ್ರೈಕ್ ರೇಟ್&zwnj;ನಲ್ಲಿ 14 ಸಿಕ್ಸರ್ ಸಹಿತ 192 ರನ್ ಕಲೆಹಾಕಿದರು. ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್&zwnj;ನಲ್ಲೂ ಟಿ20 ಮಾದರಿಯಂತೆ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಇವರ ವಿಶೇಷತೆಯಾಗಿತ್ತು.&lt;/p&gt;&lt;h3&gt;&lt;strong&gt;ದೌರ್ಬಲ್ಯವೇನು? ಆತುರದ ನಿರ್ಧಾರ ಮತ್ತು ಅಪ್ರಬುದ್ಧತೆ!&lt;/strong&gt;&lt;/h3&gt;&lt;p&gt;ಎದುರಾಳಿ ಬೌಲರ್&zwnj;ಗಳು ತಮ್ಮ ಲೈನ್ ಮತ್ತು ಲೆಂತ್&zwnj;ನಿಂದ ವೈಭವ್&zwnj;ರನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಆದರೆ, ಸ್ವಂತ ತಪ್ಪುಗಳಿಂದಲೇ ವೈಭವ್ ವಿಕೆಟ್ ಒಪ್ಪಿಸಿದರು. ಸೆಂಟ್ರಲ್ ಝೋನ್ ವಿರುದ್ಧದ ಸೆಮಿಫೈನಲ್&zwnj;ನಲ್ಲಿ ೯೨ ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಶತಕದ ಹೊಸ್ತಿಲಲ್ಲಿ ಸಿಕ್ಸರ್&zwnj;ಗೆ ಯತ್ನಿಸಿ ಕ್ಯಾಚ್ ಔಟ್ ಆದರು. ದಕ್ಷಿಣ ವಲಯದ ವಿರುದ್ಧದ ಫೈನಲ್&zwnj;ನಲ್ಲಿ ಸ್ಪಿನ್ನರ್ ವಿರುದ್ಧ ದೊಡ್ಡ ಹೊಡೆತಕ್ಕೆ ಹೋಗಿ ಸ್ಟಂಪ್ಡ್ ಆದರು. ಇದು ಬೌಲರ್&zwnj;ಗಳ ಶ್ರೇಷ್ಠತೆಯಿಂದಾದ ಔಟ್ ಅಲ್ಲ, ಬದಲಿಗೆ ವೈಭವ್ ಅವರ ಅತಿಯಾದ ಆಕ್ರಮಣಶೀಲತೆ ಮತ್ತು ಶಾಟ್ ಆಯ್ಕೆಯಲ್ಲಾದ ಅಪ್ರಬುದ್ಧತೆ ಎಂದು ಸ್ಪಷ್ಟವಾಗುತ್ತದೆ.&lt;/p&gt;&lt;h3&gt;&lt;strong&gt;ಮೊಹಮ್ಮದ್ ಸಿರಾಜ್&zwnj;ಗೆ ಡೋಂಟ್ ಕೇರ್, ತಿಲಕ್ ವರ್ಮಾ ಜೊತೆ ವಾಗ್ವಾದ!&lt;/strong&gt;&lt;/h3&gt;&lt;p&gt;ಈ ದುಲೀಪ್ ಟ್ರೋಫಿ ವೈಭವ್&zwnj;ಗೆ ಕೇವಲ ರನ್ ಗಳಿಸಲು ಮಾತ್ರವಲ್ಲ, ಮಾನಸಿಕವಾಗಿ ಗಟ್ಟಿಯಾಗಲು ಸಹಾಯ ಮಾಡಿತು. ದಕ್ಷಿಣ ವಲಯದ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್&zwnj;ನಲ್ಲಿ ಸತತ ಬೌಂಡರಿ ಬಾರಿಸಿದಾಗ, ಸಿರಾಜ್ ಮತ್ತು ವೈಭವ್ ನಡುವೆ ಬಿಸಿಬಿಸಿ ಮಾತಿನ ಚಕಮಕಿ ನಡೆಯಿತು. ಆದರೆ, ೧೫ ವರ್ಷದ ವೈಭವ್ ಅಂತರರಾಷ್ಟ್ರೀಯ ಬೌಲರ್&zwnj;ನ ಕಣ್ಣಲ್ಲಿ ಕಣ್ಣಿಟ್ಟು ಸೂಕ್ತ ಪ್ರತ್ಯುತ್ತರ ನೀಡಿದರು. ಅಷ್ಟೇ ಅಲ್ಲದೆ, ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಜೊತೆಯೂ ವಾಗ್ವಾದ ನಡೆಸಿ, ತಾನು ಹಿರಿಯ ಆಟಗಾರರ ಹೆಸರಿಗೆ ಹೆದರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟರು.&lt;/p&gt;&lt;h3&gt;&lt;strong&gt;ಇಶಾನ್ ಕಿಶನ್ ಗಾಯ: ನಾಯಕತ್ವ ಮತ್ತು ಡಿಆರ್&zwnj;ಎಸ್&zwnj;ನಲ್ಲಿ ಮಿಂಚು!&lt;/strong&gt;&lt;/h3&gt;&lt;p&gt;ಪೂರ್ವ ವಲಯದ ನಾಯಕ ಇಶಾನ್ ಕಿಶನ್ ಗಾಯಗೊಂಡಾಗ, ವೈಭವ್ ಸ್ಟ್ಯಾಂಡ್-ಇನ್ ನಾಯಕನಾಗಿ ತಂಡದ ಜವಾಬ್ದಾರಿ ವಹಿಸಿಕೊಂಡರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮೈದಾನದಲ್ಲಿ ಫೀಲ್ಡಿಂಗ್ ಹೊಂದಿಸುವುದು ಮತ್ತು ಅಂಪೈರ್ ತೀರ್ಪುಗಳನ್ನು ಸವಾಲು ಮಾಡಿ ರದ್ದುಗೊಳಿಸುವ ನಿಖರ DRS ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.&lt;/p&gt;&lt;h3&gt;&lt;strong&gt;ಭವಿಷ್ಯದ ಸೂಪರ್&zwnj; ಸ್ಟಾರ್!&lt;/strong&gt;&lt;/h3&gt;&lt;p&gt;ಶತಕದ ಕೊರತೆ ಇದ್ದರೂ, ವಿಶ್ವಮಟ್ಟದ ಬೌಲಿಂಗ್ ದಾಳಿಯನ್ನು ಧೂಳಿಪಟ ಮಾಡುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ವೈಭವ್ ಸೂರ್ಯವಂಶಿ ಸಾಬೀತುಪಡಿಸಿದ್ದಾರೆ. ಶಾಟ್ ಆಯ್ಕೆ ಮತ್ತು ಮಾನಸಿಕ ಹಿಡಿತವನ್ನು ಸರಿಪಡಿಸಿಕೊಂಡರೆ, ಭಾರತೀಯ ಕ್ರಿಕೆಟ್&zwnj;ನ ಭವಿಷ್ಯದ ದೊಡ್ಡ ಸೂಪರ್&zwnj;ಸ್ಟಾರ್ ಆಗುವುದರಲ್ಲಿ ಅನುಮಾನವಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/suryavanshi-duleep-trophy-performance-century-not-scored-but-tournament-proved-beneficial-bmk/articleshow-utir5i1"/>
        </item>
        <item>
            <title><![CDATA[Cricket: ಹೋಮ್ ಗ್ರೌಂಡ್‌ನಲ್ಲೇ ಹೆಚ್ಚು ಟೆಸ್ಟ್ ಸೋತ ಟಾಪ್ 5 ಕ್ಯಾಪ್ಟನ್‌ಗಳು; 12 ವರ್ಷಗಳಿಂದ ಮುರಿಯದ ವಿಶ್ವ ದಾಖಲೆ ಯಾರದ್ದು?]]></title>
            <link>https://kannada.asianetnews.com/cricket-sports/graeme-smith-most-test-losses-at-home-as-captain-david-gower-michael-atherton-allan-fleming-test-record-bmk/articleshow-qfiml4o</link>
            <guid isPermaLink="true">https://kannada.asianetnews.com/cricket-sports/graeme-smith-most-test-losses-at-home-as-captain-david-gower-michael-atherton-allan-fleming-test-record-bmk/articleshow-qfiml4o</guid>
            <pubDate>Wed, 09 Sep 2026 17:29:24 +0530</pubDate>
            <description><![CDATA[&lt;p&gt;ಕೆಲವು ದಿಗ್ಗಜ ಕ್ರಿಕೆಟ್ ನಾಯಕರು ತವರಿನಲ್ಲೇ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಈ ಸ್ಟೋರಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಸೇರಿದಂತೆ, ಈ ಪಟ್ಟಿಯಲ್ಲಿರುವ ಟಾಪ್ 5 ನಾಯಕರ ಸೋಲಿನ ಕಥೆ ಹೇಳುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vgv0dkknwwatfsg2ay8kwy,imgname-cricket-ball-bat-1788703769011.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್ ಮೈದಾನದಲ್ಲಿ ಗೆಲುವು ಮತ್ತು ಸೋಲು ಸಹಜ. ಕಪ್ ಹಿಡಿದು ಸಂಭ್ರಮಿಸುವ ನಾಯಕರನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ. ಆದರೆ, ನಾಯಕನಾಗಿ ತಾಯ್ನಾಡಿನಲ್ಲೇ (ಹೋಮ್ ಗ್ರೌಂಡ್) ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ಅಪ್ರಿಯ ವಿಶ್ವ ದಾಖಲೆಯನ್ನು ಕೆಲವು ದಿಗ್ಗಜ ನಾಯಕರು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. 12 ವರ್ಷಗಳಿಂದ ಮುರಿಯದ ಈ ಅಚ್ಚರಿಯ ವಿಶ್ವ ದಾಖಲೆ ಮತ್ತು ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸೋಲುಂಡ ಟಾಪ್ 5 ನಾಯಕರ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;1. ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ); 15 ಸೋಲು!&lt;/strong&gt;&lt;/h2&gt;&lt;p&gt;ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಗ್ರೇಮ್ ಸ್ಮಿತ್, ತವರಿನಲ್ಲಿ ಅತಿ ಹೆಚ್ಚು ಟೆಸ್ಟ್ ಸೋತ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 2004 ರಿಂದ 2014ರ ನಡುವೆ ಇವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತವರಿನಲ್ಲೇ ಬರೋಬ್ಬರಿ 15 ಟೆಸ್ಟ್ ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸೋತ ಪಂದ್ಯಗಳಲ್ಲಿ ಸ್ಮಿತ್ ಅವರ ಬ್ಯಾಟಿಂಗ್ ಪ್ರದರ್ಶನವೂ ಕಳಪೆಯಾಗಿತ್ತು. 29 ಇನ್ನಿಂಗ್ಸ್&zwnj;ಗಳಲ್ಲಿ ಕೇವಲ 23.77 ಸರಾಸರಿಯಲ್ಲಿ 642 ರನ್ ಗಳಿಸಿದ ಇವರು, ಒಂದೂ ಶತಕ ಬಾರಿಸಲಿಲ್ಲ. ೪ ಅರ್ಧಶತಕ ಗಳಿಸಿದರೂ, 3 ಬಾರಿ ಶೂನ್ಯಕ್ಕೆ (ಡಕ್ ಔಟ್) ನಿರ್ಗಮಿಸಿದ್ದರು.&lt;/p&gt;&lt;h3&gt;&lt;strong&gt;2. ಡೇವಿಡ್ ಗೋವರ್ (ಇಂಗ್ಲೆಂಡ್); 12 ಸೋಲು!&lt;/strong&gt;&lt;/h3&gt;&lt;p&gt;ಇಂಗ್ಲೆಂಡ್&zwnj;ನ ಸೊಗಸಾದ ಬ್ಯಾಟರ್ ಡೇವಿಡ್ ಗೋವರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 1982 ರಿಂದ 1989 ರ ಅವಧಿಯಲ್ಲಿ ಗೋವರ್ ನಾಯಕತ್ವದಲ್ಲಿ ಇಂಗ್ಲೆಂಡ್ ತವರಿನಲ್ಲಿ ೧೨ ಟೆಸ್ಟ್ ಪಂದ್ಯಗಳನ್ನು ಸೋತಿತು. ಈ ಸೋತ ಪಂದ್ಯಗಳ 24 ಇನ್ನಿಂಗ್ಸ್&zwnj;ಗಳಲ್ಲಿ ಗೋವರ್ 27.08 ಸರಾಸರಿಯಲ್ಲಿ 623 ರನ್ ಕಲೆಹಾಕಿದ್ದರು. ತಂಡ ಸೋತರೂ ಇವರು ಒಮ್ಮೆ 106 ರನ್&zwnj;ಗಳ ರೋಚಕ ಶತಕ ಹಾಗೂ 3 ಅರ್ಧಶತಕಗಳನ್ನು ಬಾರಿಸಿ ಹೋರಾಟ ನಡೆಸಿದ್ದರು.&lt;/p&gt;&lt;h3&gt;&lt;strong&gt;3. ಮೈಕೆಲ್ ಅಥರ್ಟನ್ (ಇಂಗ್ಲೆಂಡ್); 11 ಸೋಲು!&lt;/strong&gt;&lt;/h3&gt;&lt;p&gt;ಇಂಗ್ಲೆಂಡ್&zwnj;ನ ಕ್ರೂರಿ ನಾಯಕ ಎಂದೇ ಹೆಸರಾಗಿದ್ದ ಮೈಕೆಲ್ ಅಥರ್ಟನ್ 1993ರಿಂದ 2001ರವರೆಗೆ ತಂಡವನ್ನು ಮುನ್ನಡೆಸಿದರು. ಈ ಅವಧಿಯಲ್ಲಿ ಇಂಗ್ಲೆಂಡ್ ತವರಿನಲ್ಲಿ 11 ಟೆಸ್ಟ್ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿತು. ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದ ಅಥರ್ಟನ್, ಸೋತ ಪಂದ್ಯಗಳ 22 ಇನ್ನಿಂಗ್ಸ್&zwnj;ಗಳಲ್ಲಿ 26.90 ಸರಾಸರಿಯಲ್ಲಿ 592 ರನ್ ಗಳಿಸಿದರು. ಇವರ ಗರಿಷ್ಠ ಸ್ಕೋರ್ 81 ರನ್ ಆಗಿದ್ದು, 4 ಅರ್ಧಶತಕಗಳನ್ನು ಬಾರಿಸಿದ್ದರು.&lt;/p&gt;&lt;h3&gt;&lt;strong&gt;4. ಅಲನ್ ಬಾರ್ಡರ್ (ಆಸ್ಟ್ರೇಲಿಯಾ); 11 ಸೋಲು!&lt;/strong&gt;&lt;/h3&gt;&lt;p&gt;ಆಸ್ಟ್ರೇಲಿಯಾ ಕ್ರಿಕೆಟ್&zwnj;ಗೆ ಹೊಸ ಆಯಾಮ ನೀಡಿದ ಆಕ್ರಮಣಕಾರಿ ನಾಯಕ ಅಲನ್ ಬಾರ್ಡರ್ ಕೂಡ ಈ ಪಟ್ಟಿಯಲ್ಲಿದ್ದಾರೆ. 1984 ರಿಂದ 1994 ರವರೆಗೆ ಬಾರ್ಡರ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತವರಿನಲ್ಲಿ 11 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಈ ಸೋತ ಪಂದ್ಯಗಳ 22 ಇನ್ನಿಂಗ್ಸ್&zwnj;ಗಳಲ್ಲಿ ಇವರು 25.66 ಸರಾಸರಿಯಲ್ಲಿ 539 ರನ್ ಗಳಿಸಿದರು. ತಂಡ ಸೋತರೂ ಸಹ ಬಾರ್ಡರ್ 152 ರನ್&zwnj;ಗಳ ಅಜೇಯ ಶತಕ ಬಾರಿಸಿ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿದ್ದರು.&lt;/p&gt;&lt;h3&gt;&lt;strong&gt;5. ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್); 11 ಸೋಲು!&lt;/strong&gt;&lt;/h3&gt;&lt;p&gt;ನ್ಯೂಜಿಲೆಂಡ್&zwnj;ನ ಚಾಣಾಕ್ಷ ನಾಯಕ ಸ್ಟೀಫನ್ ಫ್ಲೆಮಿಂಗ್ ಐದನೇ ಸ್ಥಾನದಲ್ಲಿದ್ದಾರೆ. 1997ರಿಂದ 2006ರ ನಡುವೆ ಫ್ಲೆಮಿಂಗ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ತವರಿನಲ್ಲೇ 11 ಟೆಸ್ಟ್&zwnj;ಗಳಲ್ಲಿ ಸೋಲು ಕಂಡಿತು. ಸೋತ ಪಂದ್ಯಗಳ 22 ಇನ್ನಿಂಗ್ಸ್&zwnj;ಗಳಲ್ಲಿ ಫ್ಲೆಮಿಂಗ್ 25.18 ಸರಾಸರಿಯಲ್ಲಿ 554 ರನ್ ಬಾರಿಸಿದರು. ಇದರಲ್ಲಿ 86 ರನ್ ಇವರ ಗರಿಷ್ಠ ಸ್ಕೋರ್ ಆಗಿದ್ದು, ಒಟ್ಟು 4 ಅರ್ಧಶತಕಗಳನ್ನು ಗಳಿಸಿದ್ದರು. ಯಷ್ಟೇ ದೊಡ್ಡ ನಾಯಕರಾಗಿದ್ದರೂ, ಸುದೀರ್ಘ ಆಟದ ಸ್ವರೂಪವಾದ ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಸ್ವದೇಶದ ಮೈದಾನದಲ್ಲೇ ಸೋಲಿನ ಕಹಿ ಉಣ್ಣುವುದು ತಪ್ಪಿದ್ದಲ್ಲ ಎಂಬುದಕ್ಕೆ ಈ ಗ್ರೇಮ್ ಸ್ಮಿತ್ ನೇತೃತ್ವದ ದಿಗ್ಗಜರ ಪಟ್ಟಿಯೇ ಸಾಕ್ಷಿ.&lt;/p&gt;]]></content:encoded>
            <category>cricket-sports</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/graeme-smith-most-test-losses-at-home-as-captain-david-gower-michael-atherton-allan-fleming-test-record-bmk/articleshow-qfiml4o"/>
        </item>
        <item>
            <title><![CDATA[ಬಿಸಿಸಿಐಗೆ ಬಿಗ್‌ ಶಾಕ್‌? ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದ ಸುಪ್ರೀಂ ಕೋರ್ಟ್‌]]></title>
            <link>https://kannada.asianetnews.com/cricket-sports/bcci-under-national-sports-policy-supreme-court-seeks-clear-answer-from-cricket-bodies-kvn/articleshow-d47eqhx</link>
            <guid isPermaLink="true">https://kannada.asianetnews.com/cricket-sports/bcci-under-national-sports-policy-supreme-court-seeks-clear-answer-from-cricket-bodies-kvn/articleshow-d47eqhx</guid>
            <pubDate>Wed, 09 Sep 2026 17:23:29 +0530</pubDate>
            <description><![CDATA[ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಲೋಧಾ ಸಮಿತಿ ಶಿಫಾರಸುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಪದಾಧಿಕಾರಿಗಳ ಸೇವಾ ನಿಯಮಗಳ ಬಗ್ಗೆಯೂ ಕೋರ್ಟ್ ಸ್ಪಷ್ಟನೆ ಕೇಳಿದ್ದು, ಇದು ಬಿಸಿಸಿಐ ಆಡಳಿತದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m23040hqfmxarf5kdfp410am,imgname-untitled-design--50--1788954673718.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ಯಾಕೆ ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ತರಬಾರದು ಅಂತ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳ ಸೇವಾ ನಿಯಮಗಳು ಮತ್ತು ಷರತ್ತುಗಳನ್ನು ಈ ಕಾಯ್ದೆಯಡಿ ಯಾಕೆ ತರಬಾರದು ಅಂತಾನೂ ಕೋರ್ಟ್ ಕೇಳಿದೆ.&lt;/p&gt;&lt;p&gt;ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠ, ಮಂಗಳವಾರ ಕೆಲವು ಕ್ರಿಕೆಟ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸುವಾಗ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ಪಷ್ಟ ಉತ್ತರ ನೀಡುವಂತೆ ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಅಂದಹಾಗೆ, ಈ ಕೇಸ್ 2014ರಿಂದಲೂ ಸುಪ್ರೀಂ ಕೋರ್ಟ್&zwnj;ನಲ್ಲಿ ವಿಚಾರಣೆಯಲ್ಲಿದೆ.&lt;/p&gt;&lt;h2&gt;&lt;strong&gt;ಲೋಧಾ ಸಮಿತಿ ಶಿಫಾರಸುಗಳು ಮತ್ತು ಹಿಂದಿನ ಆದೇಶಗಳು&lt;/strong&gt;&lt;/h2&gt;&lt;p&gt;ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರಲು ಮತ್ತು ಪಾರದರ್ಶಕತೆ ಖಚಿತಪಡಿಸಲು, ಸುಪ್ರೀಂ ಕೋರ್ಟ್ ಈ ಹಿಂದೆ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತ್ತು. ಲೋಧಾ ಸಮಿತಿ ಮುಂದಿಟ್ಟಿದ್ದ ಸಂವಿಧಾನಾತ್ಮಕ ಬದಲಾವಣೆಗಳು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಸುಪ್ರೀಂ ಕೋರ್ಟ್ ನಂತರ ಒಪ್ಪಿಕೊಂಡಿತ್ತು.&lt;/p&gt;&lt;p&gt;ನಂತರ, 2022ರ ಸೆಪ್ಟೆಂಬರ್&zwnj;ನಲ್ಲಿ ಬಿಸಿಸಿಐ ಸಂವಿಧಾನದಲ್ಲಿ ಬದಲಾವಣೆ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಇದರ ಪ್ರಕಾರ, ಒಬ್ಬ ಪದಾಧಿಕಾರಿ ಸತತ 12 ವರ್ಷಗಳ ಕಾಲ (6 ವರ್ಷ ರಾಜ್ಯ ಸಂಸ್ಥೆಯಲ್ಲಿ ಮತ್ತು 6 ವರ್ಷ ಬಿಸಿಸಿಐನಲ್ಲಿ) ಹುದ್ದೆಯಲ್ಲಿ ಮುಂದುವರಿಯಬಹುದು. ನಂತರ 3 ವರ್ಷಗಳ ಕಡ್ಡಾಯ 'ಕೂಲಿಂಗ್-ಆಫ್' ಅವಧಿ (ವಿರಾಮ) ತೆಗೆದುಕೊಂಡರೆ ಸಾಕು ಅಂತ ತೀರ್ಪು ನೀಡಿತ್ತು. ಆದರೆ, ಇದಕ್ಕೂ ಮೊದಲು ಕೋರ್ಟ್ ಒಪ್ಪಿದ್ದ ನಿಯಮದ ಪ್ರಕಾರ, ರಾಜ್ಯ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ಸತತವಾಗಿ ಎರಡು ಅವಧಿಗೆ (ತಲಾ ಮೂರು ವರ್ಷ) ಹುದ್ದೆ ಅಲಂಕರಿಸಿದರೆ, ಮೂರು ವರ್ಷಗಳ ಕೂಲಿಂಗ್-ಆಫ್ ಅವಧಿ ಕಡ್ಡಾಯವಾಗಿತ್ತು. ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ತರುವ ಗುರಿ ಹೊಂದಿರುವ 2025ರ ಹೊಸ ಕ್ರೀಡಾ ನೀತಿಯನ್ನು ಬಿಸಿಸಿಐಗೂ ಅನ್ವಯಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮುಂಬರುವ ದಿನಗಳಲ್ಲಿ ಹೆಚ್ಚಿನ ವಿಚಾರಣೆ ನಡೆಸಲಿದೆ.&lt;/p&gt;&lt;h3&gt;&lt;strong&gt;ಏಷ್ಯಾಡ್&zwnj;ನಲ್ಲಿ ಆಯೋಜಕರು ನೀಡಿದ ಹೋಟೆಲ್&zwnj;ನಲ್ಲಿಯೇ ಕ್ರಿಕೆಟಿಗರ ವಾಸ್ತವ್ಯ: ಬಿಸಿಸಿಐ&lt;/strong&gt;&lt;/h3&gt;&lt;p&gt;ನವದೆಹಲಿ: ಜಪಾನ್&zwnj;ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್&zwnj;ನಲ್ಲಿ ಕ್ರಿಕೆಟ್&zwnj; ಸೌಲಭ್ಯಗಳ ಬಗ್ಗೆ ಬಿಸಿಸಿಐ ಅಸಮಾಧಾನ ಸುದ್ದಿ ನಡುವೆ ಕ್ರಿಕೆಟಿಗರು ಏಷ್ಯಾಡ್&zwnj; ಗೇಮ್ಸ್&zwnj; ಆಯೋಜಕರು ನೀಡಿದ ಹೋಟೆಲ್&zwnj;ಗಳಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ&rsquo; ಎಂದು ಭಾರತೀಯ ಕ್ರಿಕೆಟ್&zwnj; ನಿಯಂತ್ರಣ ಮಂಡಳಿ ಬಿಸಿಸಿಐ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಬಿಸಿಸಿಐ ಉಪಾಧ್ಯಕ್ಷ ರಾಜೀವ್&zwnj; ಶುಕ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, &lsquo;ಕ್ರೀಡಾಕೂಟ ನಡೆಯಲಿರುವ ನಗೋಯಾದಲ್ಲಿ ಉನ್ನತ ದರ್ಜೆಯ ಹೋಟೆಲ್&zwnj;ಗಳ ಕೊರತೆಯಿಂದಾಗಿ ಕ್ರಿಕೆಟಿಗರಿಗೆ ಹೋಟೆಲ್&zwnj;ಗಳ ವಸತಿ ಸಮಸ್ಯೆ ಉದ್ಭವಿಸಿದೆ. ಕ್ರಿಕೆಟಿಗರಿಗೆ ವಸತಿ ದೊಡ್ಡ ಸಮಸ್ಯೆಯಲ್ಲ. ಬಿಸಿಸಿಐ ಮತ್ತು ಆಟಗಾರರು ಈ ವ್ಯವಸ್ಥೆಯಿಂದ ತೃಪ್ತರಾಗಿದ್ದಾರೆ. ಅವರು ಏನು ಒದಗಿಸುತ್ತಾರೆಯೋ ನಾವು ಅಲ್ಲಿಯೇ ಉಳಿದುಕೊಳ್ಳುತ್ತೇವೆ, ಅವರು ಕೂಡ ಆಟಗಾರರಿಗೆ ಅರಾಮಾದಾಯಕ ವಸತಿ ಸೌಕರ್ಯ ನೀಡುತ್ತಾರೆ ಎಂದು ಭಾವಿಸುತ್ತೇವೆ&rsquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bcci-under-national-sports-policy-supreme-court-seeks-clear-answer-from-cricket-bodies-kvn/articleshow-d47eqhx"/>
        </item>
        <item>
            <title><![CDATA[ಕನ್ನಡಿಗ ಪಡಿಕ್ಕಲ್, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಜತ್ ಪಾಟೀದಾರ್, ಪಾಂಡ್ಯಗೂ ಚಾನ್ಸ್‌..! ಆಸೀಸ್‌ ಸರಣಿಗೆ ಬಿಸಿಸಿಐನಿಂದ ತಂಡ ಪ್ರಕಟ]]></title>
            <link>https://kannada.asianetnews.com/cricket-sports/india-a-vs-australia-a-devdutt-padikkal-to-lead-multi-day-games-ruturaj-gaikwad-named-odi-captain-kvn/articleshow-ud7eg5g</link>
            <guid isPermaLink="true">https://kannada.asianetnews.com/cricket-sports/india-a-vs-australia-a-devdutt-padikkal-to-lead-multi-day-games-ruturaj-gaikwad-named-odi-captain-kvn/articleshow-ud7eg5g</guid>
            <pubDate>Wed, 09 Sep 2026 16:31:35 +0530</pubDate>
            <description><![CDATA[ಮುಂಬರುವ ಆಸ್ಟ್ರೇಲಿಯಾ 'ಎ' ವಿರುದ್ಧದ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಮಲ್ಟಿ ಡೇ ಪಂದ್ಯಗಳಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ನಾಯಕರಾದರೆ, ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kes2w41ahbzzjx0hwqsjap77,imgname-devdutt-padikkal-1768220921898.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಮುಂಬರುವ ಆಸ್ಟ್ರೇಲಿಯಾ 'ಎ' ಎದುರಿನ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ, ಭಾರತ 'ಎ' ತಂಡವನ್ನು ಆಯ್ಕೆ ಮಾಡಿದೆ. ಎರಡು ತಂಡಗಳು ಮೊದಲಿಗೆ ಎರಡು ಮಲ್ಟಿ ಡೇ ಪಂದ್ಯಗಳನ್ನು ಆಡಲಿವೆ. ಇದಾದ ಬಳಿಕ ಉಭಯ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ. ಈ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.&lt;/p&gt;&lt;h2&gt;&lt;strong&gt;ಮಲ್ಟಿ ಡೇ ಪಂದ್ಯಗಳಿಗೆ ದೇವದತ್ ಪಡಿಕ್ಕಲ್&zwnj;ಗೆ ನಾಯಕತ್ವ ಪಟ್ಟ:&lt;/strong&gt;&lt;/h2&gt;&lt;p&gt;ಇತ್ತೀಚಿಗಿನ ಐಪಿಎಲ್ ಹಾಗೂ ದೇಶಿ ಕ್ರಿಕೆಟ್&zwnj;ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿರುವ ಕನ್ನಡಿಗ ದೇವದತ್ ಪಡಿಕ್ಕಲ್, ಇದೀಗ ಆಸ್ಟ್ರೇಲಿಯಾ 'ಎ' ಎದುರಿನ ಮಲ್ಟಿ ಡೇ ಪಂದ್ಯಕ್ಕೆ ಭಾರತ 'ಎ' ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ದೇವದತ್ ಪಡಿಕ್ಕಲ್ ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದರು. ಇನ್ನು ಮಲ್ಟಿ ಡೇ ಪಂದ್ಯಗಳ ಸರಣಿಗೆ ಉಪನಾಯಕರಾಗಿ ಸಾಯಿ ಸುದರ್ಶನ್ ನೇಮಕವಾಗಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸಾಯಿ ಸುದರ್ಶನ್ ಶ್ರೀಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಸಾಯಿ ಸುದರ್ಶನ್ ಭಾರತ 'ಎ' ತಂಡದ ಮೂಲಕ ಟೀಂ ಇಂಡಿಯಾಗೆ ಕಮ್&zwnj;ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ. ಮಲ್ಟಿ ಡೇ ಪಂದ್ಯಗಳು ನಾಲ್ಕು ದಿನಗಳ ಕಾಲ ನಡೆಯಲಿದೆ.&lt;/p&gt;&lt;h3&gt;&lt;strong&gt;ಏಕದಿನ ಪಂದ್ಯಕ್ಕೆ ಗಾಯಕ್ವಾಡ್&zwnj;ಗೆ ನಾಯಕ ಪಟ್ಟ:&lt;/strong&gt;&lt;/h3&gt;&lt;p&gt;ಚೆನ್ನೈ ಸೂಪರ್ ಕಿಂಗ್ಸ್&zwnj; ತಂಡದ ನಾಯಕ ಋತುರಾಜ್ ಗಾಯಕ್ವಾಡ್, ಇದೀಗ ಆಸ್ಟ್ರೇಲಿಯಾ 'ಎ' ಎದುರಿನ 3 ಪಂದ್ಯಗಳ ಏಕದಿನ ಸರಣಿಗೆ ನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಈ ಸರಣಿಗೆ ಉಪನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ಏಕದಿನ ಸರಣಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್&zwnj;ಗೆ ಅವಕಾಶ ನೀಡಲಾಗಿದ್ದು, ಈ ಸರಣಿ ಮೂಲಕ ಟೀಂ ಇಂಡಿಯಾಗೆ ಎಂಟ್ರಿ ಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದಷ್ಟೇ ಅಲ್ಲದೇ ಹಾರ್ದಿಕ್ ಪಾಂಡ್ಯಗೂ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಭಾರತ 'ಎ' ಹಾಗೂ ಆಸ್ಟ್ರೇಲಿಯಾ 'ಎ' ಸರಣಿಯ ವೇಳಾಪಟ್ಟಿ&lt;/strong&gt;&lt;/h3&gt;&lt;p&gt;ಸೆಪ್ಟೆಂಬರ್ 22ರಿಂದ 26: ಮೊದಲ ಮಲ್ಟಿ ಡೇ ಪಂದ್ಯ: ಪುದುಚೆರಿ&lt;/p&gt;&lt;p&gt;ಸೆಪ್ಟೆಂಬರ್ 29ರಿಂದ ಅಕ್ಟೋಬರ್ 02: ಮಲ್ಟಿ ಡೇ ಪಂದ್ಯ: ಪುದುಚೆರೆ&lt;/p&gt;&lt;p&gt;ಅಕ್ಟೋಬರ್ 06: ಮೊದಲ ಏಕದಿನ ಪಂದ್ಯ: ಪುದುಚೆರಿ&lt;/p&gt;&lt;p&gt;ಅಕ್ಟೋಬರ್ 09: ಎರಡನೇ ಏಕದಿನ ಪಂದ್ಯ: ಪುದುಚೆರಿ&lt;/p&gt;&lt;p&gt;ಅಕ್ಟೋಬರ್ 11: ಮೂರನೇ ಏಕದಿನ ಪಂದ್ಯ: ಪುದುಚೆರಿ&lt;/p&gt;&lt;h3&gt;&lt;strong&gt;ಮಲ್ಟಿ ಡೇ ಪಂದ್ಯಕ್ಕೆ ಭಾರತ 'ಎ' ತಂಡ:&lt;/strong&gt;&lt;/h3&gt;&lt;p&gt;ಅಮನ್ ಮೋಖಾಡೆ, ಆಯುಷ್ ಪಾಂಡೆ, ದೇವದತ್ ಪಡಿಕ್ಕಲ್(ನಾಯಕ), ಸಾಯಿ ಸುದರ್ಶನ್(ಉಪನಾಯಕ), ಯಶ್ ರಾಥೋಡ್, ಶೇಕ್ ರಶೀದ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೊಟ್ಯಾನ್, ತುಷಾರ್ ದೇಶಪಾಂಡೆ, ಅನ್ಸೂಲ್ ಕಂಬೋಜ್, ಪ್ರಫುಲ್ ಹಿಂಗೆ, ಎನ್. ಜಗದೀಶನ್(ವಿಕೆಟ್ ಕೀಪರ್), ನಚಿಕೇತ್ ಬೌವುತೆ, ವಿಜಯ್ ಕುಮಾರ್ ವೈಶಾಕ್*.&lt;/p&gt;&lt;h3&gt;&lt;strong&gt;ಏಕದಿನ ಸರಣಿಗೆ ಭಾರತ 'ಎ' ತಂಡ:&lt;/strong&gt;&lt;/h3&gt;&lt;p&gt;ಪ್ರಿಯಾನ್ಶ್&zwnj; ಆರ್ಯಾ, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್(ಉಪನಾಯಕ), ಋತುರಾಜ್ ಗಾಯಕ್ವಾಡ್(ನಾಯಕ), ರಜತ್ ಪಾಟೀದಾರ್, ಕುಮಾರ್ ಕುಶಾಗ್ರ(ವಿಕೆಟ್ ಕೀಪರ್), ನಿಶಾಂತ್ ಸಿಂಧು, ಅರ್ಶಿನ್ ಕುಲಕರ್ಣಿ, ಅರ್ಶದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ*, ಪ್ರಭ್&zwnj;ಸಿಮ್ರನ್ ಸಿಂಗ್(ವಿಕೆಟ್&zwnj; ಕೀಪರ್), ಗುರ್ಜಪನೀತ್ ಸಿಂಗ್, ಯಶ್ ಠಾಕೂರ್.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-a-vs-australia-a-devdutt-padikkal-to-lead-multi-day-games-ruturaj-gaikwad-named-odi-captain-kvn/articleshow-ud7eg5g"/>
        </item>
        <item>
            <title><![CDATA['ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ': ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ]]></title>
            <link>https://kannada.asianetnews.com/cricket-sports/please-beat-india-pakistan-fans-emotional-plea-to-wahab-riaz-sparks-viral-buzz-kvn/articleshow-61figyw</link>
            <guid isPermaLink="true">https://kannada.asianetnews.com/cricket-sports/please-beat-india-pakistan-fans-emotional-plea-to-wahab-riaz-sparks-viral-buzz-kvn/articleshow-61figyw</guid>
            <pubDate>Wed, 09 Sep 2026 13:04:30 +0530</pubDate>
            <description><![CDATA[ಮಹಿಳಾ ಏಷ್ಯಾಕಪ್&zwnj;ನಲ್ಲಿ ಪಾಕಿಸ್ತಾನ ಸೆಮಿಫೈನಲ್&zwnj; ಪ್ರವೇಶಿಸಿದ ಬಳಿಕ, ಅಭಿಮಾನಿಯೊಬ್ಬರು ಕೋಚ್ ವಹಾಬ್ ರಿಯಾಜ್ ಬಳಿ ಭಾರತವನ್ನು ಸೋಲಿಸುವಂತೆ ಮನವಿ ಮಾಡಿದ್ದಾರೆ. ನಮಗೆ ಏಷ್ಯಾಕಪ್ ಟ್ರೋಫಿಗಿಂತ ಭಾರತದ ವಿರುದ್ಧದ ಗೆಲುವೇ ಮುಖ್ಯ ಎಂದು ಹತಾಶೆಯಿಂದ ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m20518m3am3xx1p97nyyd0c4,imgname-pakistan-fan-viral-video-1788859163267.gif" type="image/jpeg" height="390" width="690"/>
            <content:encoded><![CDATA[&lt;h2&gt;ಮಹಿಳಾ ಏಷ್ಯಾಕಪ್&zwnj;: ಸೆಮೀಸ್&zwnj; ಖಚಿತವಾದ ಬೆನ್ನಲ್ಲೇ ಪಾಕ್&zwnj; ಫ್ಯಾನ್&zwnj; ವಿಚಿತ್ರ ಬೇಡಿಕೆ; ವಿಡಿಯೋ ವೈರಲ್&lt;/h2&gt;&lt;p&gt;ಬೆಂಗಳೂರು: ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯ ಪಾಕಿಸ್ತಾನ ಹಾಗೂ ಹಾಂಕಾಂಗ್ ನಡುವಿನ ಪಂದ್ಯದ ಬಳಿಕ ಒಂದು ವಿಚಿತ್ರ ಸಂಗತಿಗೆ ಸಾಕ್ಷಿಯಾಯಿತು. ಸನಾ ಫಾತೀಮಾ ನೇತೃತ್ವದ ಪಾಕಿಸ್ತಾನ ಮಹಿಳಾ ತಂಡವು ಸೆಮಿಫೈನಲ್&zwnj; ಸ್ಥಾನ ಖಚಿತಪಡಿಸಿಕೊಳ್ಳುತ್ತಿದ್ದಂತೆಯೇ, ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಪಾಕ್ ಮಹಿಳಾ ತಂಡದ ಹೆಡ್ ಕೋಚ್ ವಹಾಬ್ ರಿಯಾಜ್, ಬೌಂಡರಿ ಲೈನ್ ಬಳಿ ತೆರಳಿದರು. ಈ ವೇಳೆ ಓರ್ವ ಅಭಿಮಾನಿ ತಮ್ಮ ಹತಾಶೆ ಹೊರಹಾಕಿದ್ದಾರೆ.&lt;/p&gt;&lt;p&gt;ಓರ್ವ ಅಭಿಮಾನಿ, ಟೂರ್ನಿಯಲ್ಲಿ ಚಾಂಪಿಯನ್&zwnj;ಶಿಪ್&zwnj; ಪ್ರಶಸ್ತಿಯನ್ನು ಗೆಲ್ಲುವುದಕ್ಕಿಂತಲೂ ನೆರೆಯ ಬದ್ದ ಎದುರಾಳಿ ಎದುರು ಗೆಲ್ಲುವುದು ಹೆಚ್ಚು ಮಹತ್ವದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ. 'ವಹಾಬ್ ಸಾಹೆಬ್ರೇ, ಭಾರತವನ್ನು ಸೋಲಿಸಲು ಪ್ರಯತ್ನಪಡಿ. ನಾವು ಭಾರತವನ್ನು ಸೋಲಿಸಬೇಕಿದೆ. ನಮಗೆ ಏಷ್ಯಾಕಪ್ ಟ್ರೋಫಿ ಬೇಡ. ಆದ್ರೆ ಭಾರತವನ್ನು ಸೋಲಿಸಬೇಕು. ಭಾರತವನ್ನು ಸೋಲಿಸದೇ ಬಿಡಬೇಡಿ' ಎಂದು ಹತಾಶೆಯಿಂದ ಪಾಕ್ ಅಭಿಮಾನಿ ವಹಾಬ್ ರಿಯಾಜ್ ಅವರ ಬಳಿ ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಹೀಗಿದೆ ನೋಡಿ ಆ ವೈರಲ್ ವಿಡಿಯೋ:&lt;/strong&gt;&lt;/p&gt;&lt;p&gt;A fan to Wahab Riaz: &ldquo;We don&rsquo;t need the trophy, we just want to beat India!&rdquo;  pic.twitter.com/kJrEB7hCRr&lt;/p&gt;&lt;p&gt;&mdash; Ahtasham Riaz (@ahtashamriaz22) September 7, 2026&lt;/p&gt;&lt;p&gt;&lt;/p&gt;&lt;h3&gt;&lt;strong&gt;ಗ್ರೂಪ್&zwnj; ಹಂತದಲ್ಲಿ ಭಾರತ ಎದುರು ಪಾಕ್&zwnj;ಗೆ ಹೀನಾಯ ಸೋಲು:&lt;/strong&gt;&lt;/h3&gt;&lt;p&gt;ಅಂದಹಾಗೆ ಮಹಿಳಾ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಹರ್ಮನ್&zwnj;ಪ್ರೀತ್ ಕೌರ್ ಪಡೆ ಹೀನಾಯವಾಗಿ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಪಾಕ್ 18.1 ಓವರ್&zwnj;ಗಳಲ್ಲಿ 55 ರನ್&zwnj;ಗಳಿಗೆ ಸರ್ವಪತನ ಕಂಡಿತ್ತು. ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 8.4 ಓವರ್&zwnj;ಗಳಲ್ಲೇ ಗೆಲುವಿನ ನಗೆ ಬೀರಿತ್ತು&lt;/p&gt;&lt;h3&gt;&lt;strong&gt;ನಾಕೌಟ್&zwnj; ಪಂದ್ಯಾಟಕ್ಕೆ ವೇದಿಕೆ ರೆಡಿ&lt;/strong&gt;&lt;/h3&gt;&lt;p&gt;ಇದೀಗ ಮಹಿಳಾ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ನಾಕೌಟ್ ಪಂದ್ಯಾಟಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾವನ್ನು ಎದುರಿಸಲಿದೆ. ಈ ಎರಡು ತಂಡಗಳು ಸೆಮೀಸ್&zwnj;ನಲ್ಲಿ ಗೆಲುವು ಸಾಧಿಸಿದರೇ, ಫೈನಲ್&zwnj;ನಲ್ಲಿ ಮತ್ತೊಮ್ಮೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾದಾಟಕ್ಕೆ ಸಾಕ್ಷಿಯಾಗಬಹುದು. ಫೈನಲ್&zwnj; ಪಂದ್ಯ ಸೆ.13ರಂದು ನಿಗದಿಯಾಗಿದೆ.&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/please-beat-india-pakistan-fans-emotional-plea-to-wahab-riaz-sparks-viral-buzz-kvn/articleshow-61figyw"/>
        </item>
        <item>
            <title><![CDATA[ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ಯಾವಾಗಿನಿಂದ ಆರಂಭ? ಎಲ್ಲಿ ನೇರ ಪ್ರಸಾರ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್]]></title>
            <link>https://kannada.asianetnews.com/cricket-sports/india-vs-afghanistan-t20-series-2026-full-schedule-squads-dates-time-and-live-telecast-kvn/articleshow-3chyzwe</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-series-2026-full-schedule-squads-dates-time-and-live-telecast-kvn/articleshow-3chyzwe</guid>
            <pubDate>Wed, 09 Sep 2026 12:04:36 +0530</pubDate>
            <description><![CDATA[ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಮೂರು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿ ಆಯೋಜನೆಗೊಂಡಿದೆ. ಸೆಪ್ಟೆಂಬರ್ 13 ರಿಂದ ದೆಹಲಿಯಲ್ಲಿ ಆರಂಭವಾಗಲಿರುವ ಈ ಸರಣಿಯಲ್ಲಿ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದು, ಇದು ಮುಂಬರುವ ಏಷ್ಯನ್ ಗೇಮ್ಸ್&zwnj;ಗೆ ಪೂರ್ವಭಾವಿ ಪಂದ್ಯವಾಗಿರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22dqc4gj1z2dwyjb0nhbx5t,imgname-untitled-design--48--1788935385232.jpg" type="image/jpeg" height="390" width="690"/>
            <content:encoded><![CDATA[&lt;h2&gt;ಭಾರತ-ಆಫ್ಘಾನಿಸ್ತಾನ ಟಿ20 ಸರಣಿ 2026: ವೇಳಾಪಟ್ಟಿ, ತಂಡಗಳು, ದಿನಾಂಕ, ಸಮಯದ ಸಂಪೂರ್ಣ ಮಾಹಿತಿ&lt;/h2&gt;&lt;p&gt;ಬೆಂಗಳೂರು: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಹೈವೋಲ್ಟೇಜ್ ಟಿ20 ಸರಣಿಗೆ ಕ್ಷಣಗಣನೆ ಶುರುವಾಗಿದೆ. ಟೂರ್ನಿಗೆ ಆಫ್ಘಾನಿಸ್ತಾನವೇ ಆತಿಥ್ಯ ವಹಿಸಿದ್ದರೂ, ಈ ಮೂರು ಪಂದ್ಯಗಳು ಭಾರತದಲ್ಲಿಯೇ ನಡೆಯಲಿದೆ. ನವದೆಹಲಿಯ ಅರುಣ್ ಜೇಟ್ಲೀ ಮೈದಾನದಲ್ಲಿ ಸೆಪ್ಟೆಂಬರ್ 13, ಸೆ.15, ಸೆ.17ಕ್ಕೆ ಪಂದ್ಯಗಳು ನಡೆಯಲಿವೆ.&lt;/p&gt;&lt;p&gt;ಈ ಮೊದಲು ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಒಂದು ಟೆಸ್ಟ್ ಹಾಗೂ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಿದ್ದವು. ಇದೀಗ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಗೊಂಡಿದೆ. ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗೂ ಮುನ್ನ ಈ ಸರಣಿಯನ್ನು ವಾರ್ಮ್ ಅಪ್ ಮ್ಯಾಚ್&zwnj; ಆಗಿ ಭಾರತ ಬಳಸಿಕೊಳ್ಳುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಭಾರತ-ಆಫ್ಘಾನಿಸ್ತಾನ ಟಿ20 ಸರಣಿ ವೇಳಾಪಟ್ಟಿ, ದಿನಾಂಕ, ಸಮಯ:&lt;/strong&gt;&lt;/h3&gt;&lt;p&gt;ಮೊದಲ ಟಿ20 ಪಂದ್ಯ: ಭಾನುವಾರ, 13 ಸೆಪ್ಟೆಂಬರ್ 2026&lt;/p&gt;&lt;p&gt;ಎರಡನೇ ಟಿ20 ಪಂದ್ಯ: ಮಂಗಳವಾರ, 15 ಸೆಪ್ಟೆಂಬರ್ 2026&lt;/p&gt;&lt;p&gt;ಮೂರನೇ ಟಿ20 ಪಂದ್ಯ: ಗುರುವಾರ, 17 ಸೆಪ್ಟೆಂಬರ್ 2026&lt;/p&gt;&lt;p&gt;ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.&lt;/p&gt;&lt;h3&gt;&lt;strong&gt;ಸೋನಿ ತೆಕ್ಕೆಗೆ ಅಫ್ಘಾನಿಸ್ತಾನ ಸರಣಿಯ ನೇರ ಪ್ರಸಾರ ಹಕ್ಕು&lt;/strong&gt;&lt;/h3&gt;&lt;p&gt;ಸೆ.13ರಿಂದ ಅರಂಭವಾಗಲಿರುವ ಭಾರತ-ಅಪ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಟಿ.ವಿ. ನೇರ ಪ್ರಸಾರದ ಹಕ್ಕು ಸೋನಿ ಸ್ಪೋರ್ಟ್ಸ್&zwnj; ನೆಟ್ವರ್ಕ್&zwnj; ಪಾಲಾಗಿದೆ. ಟೀಂ ಇಂಡಿಯಾವನ್ನು ಶ್ರೇಯಸ್&zwnj; ಅಯ್ಯರ್&zwnj; ಮುನ್ನಡೆಸಲಿದ್ದಾರೆ. ಅಫ್ಘಾನಿಸ್ತಾನ ನಾಯಕತ್ವ ಜವಾಬ್ದಾರಿಯನ್ನು ಇಬ್ರಾಹಿಂ ಜದ್ರಾನ್ ವಹಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.&lt;/p&gt;&lt;h3&gt;&lt;strong&gt;ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್&zwnj;ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್&zwnj;ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್&zwnj;ಝೈ, ನವೀನ್ ಉಲ್ ಹಕ್&lt;/p&gt;]]></content:encoded>
            <category>cricket-sports</category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-afghanistan-t20-series-2026-full-schedule-squads-dates-time-and-live-telecast-kvn/articleshow-3chyzwe"/>
        </item>
        <item>
            <title><![CDATA[ದುಲೀಪ್‌ ಟ್ರೋಫಿ ಫೈನಲ್‌: ಈಸ್ಟ್‌ ಝೋನ್‌ ಗೆಲುವಿನ ಸನಿಹ; ಸೌತ್‌ ಝೋನ್‌ಗೆ ಬಿಗ್‌ ಶಾಕ್‌]]></title>
            <link>https://kannada.asianetnews.com/cricket-sports/duleep-trophy-final-east-zone-dominate-south-zone-move-closer-to-14-year-first-trophy-kvn/articleshow-44tgwy8</link>
            <guid isPermaLink="true">https://kannada.asianetnews.com/cricket-sports/duleep-trophy-final-east-zone-dominate-south-zone-move-closer-to-14-year-first-trophy-kvn/articleshow-44tgwy8</guid>
            <pubDate>Wed, 09 Sep 2026 09:33:20 +0530</pubDate>
            <description><![CDATA[ದುಲೀಪ್ ಟ್ರೋಫಿ ಫೈನಲ್&zwnj;ನಲ್ಲಿ ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 708 ರನ್&zwnj;ಗಳ ಬೃಹತ್ ಮೊತ್ತ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ, ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯವು 242 ರನ್&zwnj;ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೂಲಕ ಪೂರ್ವ ವಲಯ 14 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಸನಿಹದಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k4wev6hpqfbm6r3mrd46smjz,imgname-salman-nizar-1757596719670.png" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಈ ಬಾರಿ ದುಲೀಪ್&zwnj; ಟ್ರೋಫಿ ಫೈನಲ್&zwnj;ನಲ್ಲಿ ದಕ್ಷಿಣ ವಲಯ ತಂಡದ ವಿರುದ್ಧ ಪೂರ್ವ ವಲಯ ಭರ್ಜರಿ ಗೆಲುವಿನ ಸನಿಹದಲ್ಲಿದೆ. ಈ ಮೂಲಕ ಬರೋಬ್ಬರಿ 14 ವರ್ಷಗಳ ಬಳಿಕ ಚಾಂಪಿಯನ್&zwnj; ಆಗುವತ್ತ ಹೆಜ್ಜೆ ಇಟ್ಟಿದೆ.&lt;/p&gt;&lt;p&gt;ಇಶಾನ್&zwnj; ಕಿಶನ್&zwnj; ನಾಯಕತ್ವದ ಪೂರ್ವ ತಂಡ ಮೊದಲೆರಡು ದಿನ ಭರ್ಜರಿ ಬ್ಯಾಟಿಂಗ್&zwnj; ಪ್ರದರ್ಶನ ನೀಡಿ 708 ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ಮಂಗಳವಾರ ಇನ್ನಿಂಗ್ಸ್&zwnj; ಆರಂಭಿಸಿದ ತಿಲಕ್&zwnj; ವರ್ಮಾ ನಾಯಕತ್ವದ ದಕ್ಷಿಣ ತಂಡ 6 ವಿಕೆಟ್&zwnj; ನಷ್ಟದಲ್ಲಿ 242 ರನ್&zwnj; ಗಳಿಸಿದ್ದು, ಇನ್ನಿಂಗ್ಸ್&zwnj; ಹಿನ್ನಡೆ ತಪ್ಪಿಸಲು ಇನ್ನೂ 466 ರನ್&zwnj; ಅಗತ್ಯವಿದೆ. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್&zwnj; ಆಧಾರದ ಮೇಲೆ ಗೆಲುವು ನಿರ್ಧಾರವಾಗುವುದು ಬಹುತೇಕ ಖಚಿತವಾಗಿದ್ದರಿಂದ ದಕ್ಷಿಣ ವಲಯ ತಂಡ ಅಸಾಧಾರಣ ಹೋರಾಟ ಪ್ರದರ್ಶಿಸಿ ಮುನ್ನಡೆ ಪಡೆಯಬೇಕಿದೆ.&lt;/p&gt;&lt;h2&gt;&lt;strong&gt;ದಕ್ಷಿಣ ವಲಯಕ್ಕೆ ಆರಂಭಿಕ ಆಘಾತ&lt;/strong&gt;&lt;/h2&gt;&lt;p&gt;ಆರಂಭಿಕ ಆಟಗಾರ ರಿಕ್ಕಿ ಭುಯಿ ಕೇವಲ 1 ರನ್&zwnj;ಗೆ ಔಟಾದರೆ, ಎನ್&zwnj;.ಜಗದೀಶನ್&zwnj; 32, ಶೇಖ್&zwnj; ರಶೀದ್&zwnj; 27 ರನ್&zwnj; ಗಳಿಸಲಷ್ಟೇ ಶಕ್ತರಾದರು. ಈ ಮೂವರಿಂದಲೂ ತಂಡಕ್ಕೆ ಅಗತ್ಯವಿಲ್ಲ ದೊಡ್ಡ ಇನ್ನಿಂಗ್ಸ್&zwnj; ನೆರವು ಸಿಗಲಿಲ್ಲ. ಕರ್ನಾಟಕದ ಆರ್&zwnj;.ಸ್ಮರಣ್&zwnj;(23), ಶ್ರೇಯಸ್&zwnj; ಗೋಪಾಲ್&zwnj;(26) ಕೂಡಾ ಆಪತ್ಕಾಲದಲ್ಲಿ ತಂಡಕ್ಕೆ ಆಸರೆಯಾಗಲಿಲ್ಲ. ಈ ವೇಳೆ ತಂಡಕ್ಕೆ ಅಲ್ಪ ನೆರವಾಗಿದ್ದು ದೇವದತ್&zwnj; ಪಡಿಕ್ಕಲ್&zwnj; ಹಾಗೂ ತಿಲಕ್&zwnj; ವರ್ಮಾ. ದೇವದತ್&zwnj; ಆಟ 62 ರನ್&zwnj;ಗೆ ಕೊನೆಗೊಂಡರೆ, ತಿಲಕ್&zwnj; ಔಟಾಗದೆ 56 ರನ್&zwnj; ಸಿಡಿಸಿ 4ನೇ ದಿನಕ್ಕೆ ಕ್ರೀಸ್&zwnj; ಕಾಯ್ದುಕೊಂಡಿದ್ದಾರೆ.&lt;/p&gt;&lt;p&gt;ತಂಡ ಬುಧವಾರ ಬೇಗನೇ ಆಲೌಟ್&zwnj; ಆದರೆ, ಪೂರ್ವ ವಲಯ ಫಾಲೋಆನ್&zwnj; ಹೇರಿ ಮತ್ತೆ ದಕ್ಷಿಣ ವಲಯವನ್ನು ಬ್ಯಾಟಿಂಗ್&zwnj;ಗೆ ಆಹ್ವಾನಿಸುವ ಸಾಧ್ಯತೆ ಹೆಚ್ಚು. ಬಳಿಕ ಸುಲಭದಲ್ಲಿ ಪಂದ್ಯ ಗೆಲ್ಲುವುದು ಪೂರ್ವ ವಲಯದ ಯೋಜನೆ. ತಂಡದ ಪರ ಮೊಹಮ್ಮದ್&zwnj; ಶಮಿ 2, ಮುಕೇಶ್&zwnj; ಕುಮಾರ್&zwnj; 2 ವಿಕೆಟ್&zwnj; ಪಡೆದಿದ್ದಾರೆ.&lt;/p&gt;&lt;p&gt;ಸ್ಕೋರ್&zwnj;: ಪೂರ್ವ ವಲಯ ಮೊದಲ ಇನ್ನಿಂಗ್ಸ್&zwnj; 708/10, ದಕ್ಷಿಣ ವಲಯ ಮೊದಲ ಇನ್ನಿಂಗ್ಸ್&zwnj; 242/6 (3ನೇ ದಿನದಂತ್ಯಕ್ಕೆ) ( ದೇವದತ್&zwnj; 62, ತಿಲಕ್&zwnj; ಔಟಾಗದೆ 56, ಶಮಿ 2-17, ಮುಕೇಶ್&zwnj; 2-36).&lt;/p&gt;&lt;h3&gt;&lt;strong&gt;ಭಾರತೀಯ ಕ್ರಿಕೆಟ್&zwnj; ತಂಡಕ್ಕೆ ಚಾಟ್&zwnj;ಜಿಪಿಟಿ, ಕ್ಯಾಂಪಾ, ಎಸ್&zwnj;ಬಿಐ ಹೊಸ ಪಾಲುದಾರರು&lt;/strong&gt;&lt;/h3&gt;&lt;p&gt;ನವದೆಹಲಿ: ಇನ್ನು ಮುಂದೆ ಭಾರತ ಕ್ರಿಕೆಟ್&zwnj; ತಂಡ ತವರಿನಲ್ಲಿ ಆಡುವ ಎಲ್ಲಾ ಪಂದ್ಯಗಳಿಗೆ ಕ್ಯಾಂಪಾ, ಎಸ್&zwnj;ಬಿಐ ಲೈಫ್&zwnj; ಮತ್ತು ಚಾಟ್&zwnj; ಜಿಪಿಟಿ ಸಹ ಪಾಲುದಾರರಾಗಿರಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ. ಎರಡು ವರ್ಷಗಳ ಅವಧಿಗೆ ಈ ಒಪ್ಪಂದ ನಡೆದಿದೆ.&lt;/p&gt;&lt;p&gt;ಮೂರು ಕಂಪನಿಗಳ ಪಾಲುದಾರಿಕೆ ಮೌಲ್ಯ 130 ಕೋಟಿ ರು. ಆಗಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ.44ರಷ್ಟು ಹೆಚ್ಚು. ಈ ಒಪ್ಪಂದವು ಮುಂಬರುವ ವೆಸ್ಟ್&zwnj; ಇಂಡೀಸ್&zwnj; ಸರಣಿಯಿಂದ ಆರಂಭವಾಗಲಿದ್ದು, 2028ರ ಮಾರ್ಚ್&zwnj; ತನಕ ಇರಲಿದೆ. ಈ ಅವಧಿಯಲ್ಲಿ 35 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯಕ್ಕೆ ಕ್ಯಾಂಪಾ ಕೋಲಾ ತಲಾ ₹1.31 ಕೋಟಿ, ಎಸ್&zwnj;ಬಿಐ ಲೈಫ್&zwnj; ₹1.2 ಕೋಟಿ, ಚಾಟ್&zwnj; ಜಿಪಿಟಿ ₹1.2 ಕೋಟಿ ಪಾವತಿಸಲಿದೆ. ಇದು ಭಾರತದಲ್ಲಿ ನಡೆಯುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್&zwnj; ಪಂದ್ಯಗಳಿಗೆ ಅನ್ವಯವಾಗಲಿದೆ.&lt;/p&gt;]]></content:encoded>
            <category>cricket-sports</category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/duleep-trophy-final-east-zone-dominate-south-zone-move-closer-to-14-year-first-trophy-kvn/articleshow-44tgwy8"/>
        </item>
        <item>
            <title><![CDATA[ಕೊಹ್ಲಿ ದಾಖಲೆಯನ್ನೇ ಪುಡಿಪುಡಿ ಮಾಡಿದ್ದ ಆಟಗಾರ! ಧೋನಿ-ಸಾಹಾ ಎದುರು ಮಂಕಾಯ್ತಾ ಈ ಕ್ರಿಕೆಟಿಗನ ಕನಸು?]]></title>
            <link>https://kannada.asianetnews.com/cricket-sports/outscored-virat-kohli-hit-447-runs-at-111-average-yet-india-call-up-never-came-untold-story-of-shreevats-goswami/articleshow-5u2bg2y</link>
            <guid isPermaLink="true">https://kannada.asianetnews.com/cricket-sports/outscored-virat-kohli-hit-447-runs-at-111-average-yet-india-call-up-never-came-untold-story-of-shreevats-goswami/articleshow-5u2bg2y</guid>
            <pubDate>Wed, 09 Sep 2026 10:00:45 +0530</pubDate>
            <description><![CDATA[&lt;p&gt;ಅಂಡರ್-19 ವಿಶ್ವಕಪ್ ವಿಜೇತ ಶ್ರೀವತ್ಸ ಗೋಸ್ವಾಮಿ ಐಪಿಎಲ್ ಪದಾರ್ಪಣೆಯಲ್ಲೇ 52 ರನ್ ಸಿಡಿಸಿ ಗಮನ ಸೆಳೆದಿದ್ದರು. 2014-15ರ ವಿಜಯ್ ಹಜಾರೆ ಟ್ರೋಫಿಯಲ್ಲಿ 447 ರನ್&zwnj;ಗಳನ್ನು 111.75ರ ಸರಾಸರಿಯಲ್ಲಿ ಗಳಿಸಿದ್ದರು. ಆದರೂ ಧೋನಿ, ಸಾಹಾ ಹಾಗೂ ಬಳಿಕ ಪಂತ್ ಅವರ ಸ್ಪರ್ಧೆ ನಡುವೆ ಭಾರತ ಹಿರಿಯ ತಂಡದ ಪರ ಆಡುವ ಅವಕಾಶ ಅವರಿಗೆ ಸಿಗಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20mr6bj49hbktjxkr2wrj69,imgname-shreevats-goswami-with-virat-kohli-1788875643250.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕೊಹ್ಲಿಗಿಂತ ಭರ್ಜರಿ ಪ್ರದರ್ಶನ, ಆದರೂ ಟೀಂ ಇಂಡಿಯಾ ಕರೆ ಮಾತ್ರ ಬರಲಿಲ್ಲ!&lt;/h2&gt;&lt;p&gt;ಕ್ರಿಕೆಟ್&zwnj;ನಲ್ಲಿ ಪ್ರತಿಭೆ ಮಾತ್ರ ಸಾಕಾಗುವುದಿಲ್ಲ; ಸರಿಯಾದ ಸಮಯ, ಸ್ಪರ್ಧೆ ಮತ್ತು ನಿರಂತರ ಪ್ರದರ್ಶನವೂ ಬಹಳ ಮುಖ್ಯ. ಇದಕ್ಕೆ ಅತ್ಯುತ್ತಮ ಉದಾಹರಣೆ ಮಾಜಿ ವಿಕೆಟ್&zwnj;ಕೀಪರ್-ಬ್ಯಾಟರ್ ಶ್ರೀವತ್ಸ ಗೋಸ್ವಾಮಿ. ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದ ಅವರು, ಬಳಿಕ ಐಪಿಎಲ್&zwnj;ನಲ್ಲೂ ಭರ್ಜರಿ ಆರಂಭ ಪಡೆದರೂ ಭಾರತ ಹಿರಿಯ ತಂಡದ ಪರ ಆಡುವ ಅವಕಾಶ ಮಾತ್ರ ಸಿಗಲಿಲ್ಲ.&lt;/p&gt;&lt;h3&gt;19ರ ವಯಸ್ಸಿನಲ್ಲೇ ಐಪಿಎಲ್&zwnj;ನಲ್ಲಿ ಸದ್ದು&lt;/h3&gt;&lt;p&gt;2008ರ ಅಂಡರ್-19 ವಿಶ್ವಕಪ್&zwnj;ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಗೋಸ್ವಾಮಿ, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್&zwnj;ನಲ್ಲಿ 51 ರನ್ ಗಳಿಸಿದ್ದರು. ಅದೇ ವರ್ಷ ನಡೆದ ಮೊದಲ ಐಪಿಎಲ್&zwnj;ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಪದಾರ್ಪಣೆ ಮಾಡಿದ ಅವರು, ಡೆಲ್ಲಿ ತಂಡದ ವಿರುದ್ಧ ಕೇವಲ 42 ಎಸೆತಗಳಲ್ಲಿ 52 ರನ್ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.&lt;/p&gt;&lt;p&gt;ಆ ಋತುವಿನ ಅಂತ್ಯದಲ್ಲಿ ಅವರು ಅಂಡರ್-19 ಆಟಗಾರರ ವಿಭಾಗದ ಅತ್ಯುತ್ತಮ ಆಟಗಾರ ಪ್ರಶಸ್ತಿಯ ಮೊದಲ ವಿಜೇತರಾದರು. ಇಂದಿನ &lsquo;ಎಮರ್ಜಿಂಗ್ ಪ್ಲೇಯರ್&rsquo; ಪ್ರಶಸ್ತಿಯ ಹಿಂದಿನ ರೂಪ ಇದಾಗಿತ್ತು.&lt;/p&gt;&lt;p&gt;&lt;strong&gt;ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಬ್ಯಾಟಿಂಗ್&lt;/strong&gt;&lt;/p&gt;&lt;p&gt;ಗೋಸ್ವಾಮಿಯ ದೇಶೀಯ ಕ್ರಿಕೆಟ್ ದಾಖಲೆಗಳಲ್ಲೂ ಹಲವು ಗಮನಾರ್ಹ ಸಾಧನೆಗಳಿವೆ. 2009-10ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ಪರ ಏಳು ಇನ್ನಿಂಗ್ಸ್&zwnj;ಗಳಲ್ಲಿ 568 ರನ್ ಗಳಿಸಿ ಟೂರ್ನಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಇದರಲ್ಲಿ ಮೂರು ಶತಕ ಹಾಗೂ ಒಂದು ಅರ್ಧಶತಕ ಸೇರಿದ್ದವು.&lt;/p&gt;&lt;p&gt;2014-15ರ ವಿಜಯ್ ಹಜಾರೆ ಟ್ರೋಫಿಯಲ್ಲೂ ಅವರ ಬ್ಯಾಟ್ ಅಬ್ಬರಿಸಿತು. ಆರು ಇನ್ನಿಂಗ್ಸ್&zwnj;ಗಳಲ್ಲಿ 447 ರನ್&zwnj;ಗಳನ್ನು 111.75ರ ಸರಾಸರಿಯಲ್ಲಿ ಗಳಿಸಿದರು. ಎರಡು ಶತಕ ಹಾಗೂ ಎರಡು ಅರ್ಧಶತಕಗಳು ಅವರ ಖಾತೆಯಲ್ಲಿದ್ದವು. ಆ ಟೂರ್ನಿಯಲ್ಲಿ ಮನೀಶ್ ಪಾಂಡೆ ಮಾತ್ರ ಅವರಿಗಿಂತ ಹೆಚ್ಚು ರನ್ ಗಳಿಸಿದ್ದರು.&lt;/p&gt;&lt;p&gt;&lt;strong&gt;ಧೋನಿ-ಸಾಹಾ ಸ್ಪರ್ಧೆ ದೊಡ್ಡ ಸವಾಲಾಯಿತು&lt;/strong&gt;&lt;/p&gt;&lt;p&gt;ಆ ಸಮಯದಲ್ಲಿ ಭಾರತ ತಂಡದ ವಿಕೆಟ್&zwnj;ಕೀಪರ್ ಸ್ಥಾನವನ್ನು ಎಂ.ಎಸ್. ಧೋನಿ ಬಲವಾಗಿ ಹಿಡಿದಿದ್ದರು. ಬಂಗಾಳ ತಂಡದಲ್ಲೂ ವೃದ್ಧಿಮಾನ್ ಸಾಹಾ ಪ್ರಮುಖ ವಿಕೆಟ್&zwnj;ಕೀಪರ್ ಆಗಿದ್ದರು. ಹೀಗಾಗಿ ಗೋಸ್ವಾಮಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವುದು ಸುಲಭವಾಗಲಿಲ್ಲ.&lt;/p&gt;&lt;p&gt;ಅವರ ಪ್ರಥಮ ದರ್ಜೆ ಕ್ರಿಕೆಟ್ ಪ್ರದರ್ಶನವೂ ಸದಾ ಸ್ಥಿರವಾಗಿರಲಿಲ್ಲ. 61 ಪಂದ್ಯಗಳಲ್ಲಿ 3,019 ರನ್ ಗಳಿಸಿದ ಅವರು 32ಕ್ಕಿಂತ ಸ್ವಲ್ಪ ಹೆಚ್ಚಿನ ಸರಾಸರಿ ಹೊಂದಿದ್ದರು. 2016ರಲ್ಲಿ ಮಧ್ಯಪ್ರದೇಶ ವಿರುದ್ಧ ಅಜೇಯ 225 ರನ್ ಗಳಿಸಿದ್ದು ಅವರ ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್&zwnj;ಗಳಲ್ಲಿ ಒಂದಾಗಿದೆ.&lt;/p&gt;&lt;p&gt;&lt;strong&gt;28ನೇ ವಯಸ್ಸಿನಲ್ಲಿ ಬಂದ India A ಅವಕಾಶ&lt;/strong&gt;&lt;/p&gt;&lt;p&gt;ಗೋಸ್ವಾಮಿಗೆ ಭಾರತ A ತಂಡದ ಅವಕಾಶ ಕೊನೆಗೂ 2017ರಲ್ಲಿ, ಅಂದರೆ 28ನೇ ವಯಸ್ಸಿನಲ್ಲಿ ಸಿಕ್ಕಿತು. ಆದರೆ ಆಗ ರಿಷಭ್ ಪಂತ್ ಸೇರಿದಂತೆ ಹೊಸ ತಲೆಮಾರಿನ ವಿಕೆಟ್&zwnj;ಕೀಪರ್&zwnj;ಗಳು ಮುನ್ನೆಲೆಗೆ ಬಂದಿದ್ದರು. ಹೀಗಾಗಿ ಆ ಅವಕಾಶವೂ ಹಿರಿಯ ಭಾರತ ತಂಡದ ಆಯ್ಕೆಯಾಗಿ ಬದಲಾಗಲಿಲ್ಲ.&lt;/p&gt;&lt;p&gt;ಐಪಿಎಲ್&zwnj;ನಲ್ಲೂ ಅವರ ವೃತ್ತಿಜೀವನ ನಿರೀಕ್ಷಿಸಿದಷ್ಟು ದೊಡ್ಡದಾಗಲಿಲ್ಲ. ವಿವಿಧ ತಂಡಗಳ ಪರ ಒಟ್ಟು 31 ಪಂದ್ಯಗಳನ್ನು ಆಡಿದ ಅವರು 293 ರನ್ ಗಳಿಸಿದರು. 2023ರಲ್ಲಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು ಅಂತ್ಯಗೊಳಿಸಿದರು.&lt;/p&gt;&lt;p&gt;ಶ್ರೀವತ್ಸ ಗೋಸ್ವಾಮಿಯ ಕಥೆ ಪ್ರತಿಭೆಯ ಕೊರತೆಯ ಕಥೆಯಲ್ಲ. ಸರಿಯಾದ ಸಮಯ ಸಿಗದಿರುವುದು, ಬಲಿಷ್ಠ ಸ್ಪರ್ಧೆ ಮತ್ತು ನಿರಂತರತೆಯ ಕೊರತೆ&mdash;ಈ ಮೂರು ಅಂಶಗಳು ಒಟ್ಟಾಗಿ ಅವರ ಭಾರತ ತಂಡದ ಕನಸನ್ನು ದೂರ ಮಾಡಿತು. ಅಂಡರ್-19 ವಿಶ್ವಕಪ್ ವಿಜೇತ, ಐಪಿಎಲ್&zwnj;ನಲ್ಲಿ ಪದಾರ್ಪಣೆಯಲ್ಲೇ ಅರ್ಧಶತಕ, ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ದಾಖಲೆ&mdash;ಇಷ್ಟೆಲ್ಲ ಸಾಧನೆಗಳಿದ್ದರೂ ಭಾರತ ಕ್ಯಾಪ್ ಮಾತ್ರ ಅವರ ಕೈ ಸೇರಲಿಲ್ಲ.&lt;/p&gt;]]></content:encoded>
            <category>cricket-sports</category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/outscored-virat-kohli-hit-447-runs-at-111-average-yet-india-call-up-never-came-untold-story-of-shreevats-goswami/articleshow-5u2bg2y"/>
        </item>
        <item>
            <title><![CDATA[ಏಷ್ಯನ್ ಗೇಮ್ಸ್ ಹೋಟೆಲ್ ವಿವಾದ: ಕೊನೆಗೂ ಮೌನ ಮುರಿದ ಬಿಸಿಸಿಐ]]></title>
            <link>https://kannada.asianetnews.com/cricket-sports/bcci-clarifies-team-indias-accommodation-controversy-for-asian-games-gkn/articleshow-oat3x8o</link>
            <guid isPermaLink="true">https://kannada.asianetnews.com/cricket-sports/bcci-clarifies-team-indias-accommodation-controversy-for-asian-games-gkn/articleshow-oat3x8o</guid>
            <pubDate>Tue, 08 Sep 2026 23:02:24 +0530</pubDate>
            <description><![CDATA[&lt;p&gt;ಏಷ್ಯನ್ ಗೇಮ್ಸ್ ನಡೆಯುವ ಜಪಾನ್&zwnj;ನ ನಗೋಯಾದಲ್ಲಿ ಪಂಚತಾರಾ ಹೋಟೆಲ್&zwnj;ಗಳ ಕೊರತೆ ಇರುವುದರಿಂದ ಆಯೋಜಕರು ನೀಡಿರುವ ವಸತಿಯಲ್ಲೇ ಭಾರತೀಯ ಕ್ರಿಕೆಟಿಗರು ಉಳಿಯಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹೋಟೆಲ್&zwnj;ಗಿಂತ ಹೆಚ್ಚಾಗಿ ಮೈದಾನ ಮತ್ತು ಪಿಚ್&zwnj;ಗಳ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಪ್ರತಿಭಾವಂತ ಆಟಗಾರರನ್ನೇ ಕಳುಹಿಸಲಾಗುತ್ತಿದೆ ಎಂದು ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2110h4qksrgasxqjwxfn5n7,imgname-team-india-1788888499351.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಪಾನ್&zwnj;ನಲ್ಲಿ ನಡೆಯಲಿರುವ ಮುಂಬರುವ ಏಷ್ಯನ್ ಗೇಮ್ಸ್&zwnj;ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಕ್ರಿಕೆಟ್ ತಂಡದ ವಸತಿ ಸೌಕರ್ಯದ ಬಗ್ಗೆ ಕೇಳಿಬರುತ್ತಿದ್ದ ವಿವಾದಕ್ಕೆ ಬಿಸಿಸಿಐ (BCCI) ತೆರೆ ಎಳೆದಿದೆ. ಸಾಮಾನ್ಯವಾಗಿ ವಿದೇಶಿ ಪ್ರವಾಸಗಳಲ್ಲಿ ಪಂಚತಾರಾ (5-Star) ಹೋಟೆಲ್&zwnj;ಗಳಲ್ಲಿ ಉಳಿದುಕೊಳ್ಳುವ ಭಾರತೀಯ ಕ್ರಿಕೆಟಿಗರಿಗೆ ಈ ಬಾರಿ ಅಂತಹ ಸೌಲಭ್ಯ ಸಿಗುತ್ತಿಲ್ಲ ಎಂಬ ಚರ್ಚೆ ಜೋರಾಗಿತ್ತು. ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಈ ಬಾರಿ ಏಷ್ಯನ್ ಗೇಮ್ಸ್ ಜಪಾನ್&zwnj;ನ ನಗೋಯಾದಲ್ಲಿ ನಡೆಯುತ್ತಿದೆ. ನಗೋಯಾದಲ್ಲಿ ಉತ್ತಮ ಗುಣಮಟ್ಟದ ಪಂಚತಾರಾ ಹೋಟೆಲ್&zwnj;ಗಳ ಸಂಖ್ಯೆ ಕಡಿಮೆ ಇರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಆಯೋಜಕರು ಒದಗಿಸಿರುವ ವಸತಿ ಸೌಕರ್ಯ ಪಂಚತಾರಾ ಮಟ್ಟದ್ದಲ್ಲದಿರಬಹುದು, ಆದರೆ ಅದು ಆರಾಮದಾಯಕವಾಗಿದೆ. ಅಲ್ಲಿನ ವೀಡಿಯೊ ಮತ್ತು ಫೋಟೋಗಳನ್ನು ನಾವು ಪರಿಶೀಲಿಸಿದ್ದು, ಆಟಗಾರರು ಅಲ್ಲಿ ಉಳಿಯಲು ತೊಂದರೆಯಿಲ್ಲ ಎಂದು ನಮಗೆ ಅನಿಸಿದೆ ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.&lt;/p&gt;&lt;p&gt;ಆಟಗಾರರನ್ನು ಟೋಕಿಯೋ ಅಥವಾ ಒಸಾಕಾದ ಪಂಚತಾರಾ ಹೋಟೆಲ್&zwnj;ಗಳಲ್ಲಿ ಇರಿಸುವ ಆಯ್ಕೆ ಇತ್ತಾದರೂ, ಅವು ಕ್ರೀಡಾಕೂಟ ನಡೆಯುವ ಸ್ಥಳದಿಂದ ಬಹಳ ದೂರವಿವೆ. ಬುಲೆಟ್ ಟ್ರೈನ್&zwnj;ನಲ್ಲಿ ಪ್ರಯಾಣಿಸಿದರೂ ಒಂದೂವರೆ ಗಂಟೆ ಬೇಕಾಗುತ್ತದೆ. ಹೀಗಾಗಿ ಆಟಗಾರರ ಅನುಕೂಲಕ್ಕಾಗಿ ಕೂಟ ನಡೆಯುವ ನಗೋಯಾದಲ್ಲೇ ಉಳಿಯಲು ನಿರ್ಧರಿಸಲಾಗಿದೆ. ಆಟಗಾರರು ರೂಮ್&zwnj;ಗಳನ್ನು ಹಂಚಿಕೊಳ್ಳದೆ (Twin sharing) ಪ್ರತ್ಯೇಕವಾಗಿ ಇರಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಮೈದಾನ ಮತ್ತು ಪಿಚ್ ಬಗ್ಗೆ ಗಮನ&lt;/strong&gt;&lt;/h2&gt;&lt;p&gt;ಹೋಟೆಲ್&zwnj;ಗಿಂತ ಹೆಚ್ಚಾಗಿ ಮೈದಾನ, ಪಿಚ್ ಮತ್ತು ಡ್ರೆಸ್ಸಿಂಗ್ ರೂಮ್&zwnj;ಗಳ ಬಗ್ಗೆ ನಾವು ಗಮನ ಹರಿಸಿದ್ದೇವೆ ಎಂದು ಶುಕ್ಲಾ ಹೇಳಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ತಂಡವು ಈಗಾಗಲೇ ಜಪಾನ್&zwnj;ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೈದಾನ ಮತ್ತು ಪಿಚ್&zwnj;ಗಳ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದ್ದು, ಕ್ರಿಕೆಟ್ ಆಡಲು ಎಲ್ಲವೂ ಸಿದ್ಧವಾಗಿದೆ ಎಂದು ಅವರು ವಿವರಿಸಿದರು.&lt;/p&gt;&lt;h2&gt;&lt;strong&gt;ಇದು 'ಬಿ' ತಂಡವಲ್ಲ&lt;/strong&gt;&lt;/h2&gt;&lt;p&gt;ಇದೇ ವೇಳೆ ಭಾರತ ಎರಡನೇ ದರ್ಜೆಯ (B Team) ತಂಡವನ್ನು ಕಳುಹಿಸುತ್ತಿದೆ ಎಂಬ ವದಂತಿಗಳನ್ನು ಶುಕ್ಲಾ ತಳ್ಳಿಹಾಕಿದ್ದಾರೆ. ನಾವು ನಮ್ಮ ಅತ್ಯಂತ ಪ್ರತಿಭಾವಂತ ಆಟಗಾರರ ತಂಡವನ್ನೇ ಕಳುಹಿಸುತ್ತಿದ್ದೇವೆ. ಭಾರತ ಖಂಡಿತವಾಗಿಯೂ ಚಿನ್ನದ ಪದಕ ಗೆಲ್ಲಲಿದೆ ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ. ಸೆಪ್ಟೆಂಬರ್ 20 ರಂದು ಭಾರತ ತಂಡ ಜಪಾನ್&zwnj;ಗೆ ತೆರಳಲಿದ್ದು, ಸೆಪ್ಟೆಂಬರ್ 22 ರಂದು ಜಪಾನ್ ವಿರುದ್ಧ ಐತಿಹಾಸಿಕ ಟಿ20 ಪಂದ್ಯವನ್ನಾಡಲಿದೆ. ಸೆಪ್ಟೆಂಬರ್ 28 ರಿಂದ ಭಾರತದ ಏಷ್ಯನ್ ಗೇಮ್ಸ್ ಅಭಿಯಾನ ಆರಂಭವಾಗಲಿದೆ.&lt;/p&gt;]]></content:encoded>
            <category>cricket-sports</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/bcci-clarifies-team-indias-accommodation-controversy-for-asian-games-gkn/articleshow-oat3x8o"/>
        </item>
    </channel>
</rss>
