<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 26 Sep 2025 10:23:02 +0530</lastBuildDate>
        <atom:link href="https://kannada.asianetnews.com/rss/coronavirus" rel="self" type="application/rss+xml"/>
        <item>
            <title><![CDATA[ಪ್ರತಾಪ್ ಸಿಂಹಗೆ ಕೃತಜ್ಞತೆ ಹೇಳಿದ ಎಚ್‌ಡಿ ದೇವೇಗೌಡ!]]></title>
            <link>https://kannada.asianetnews.com/politics/jds-supremo-hd-devegowda-thanks-to-mysuru-bjp-mp-pratap-simha-rbj-qrszzx</link>
            <guid isPermaLink="true">https://kannada.asianetnews.com/politics/jds-supremo-hd-devegowda-thanks-to-mysuru-bjp-mp-pratap-simha-rbj-qrszzx</guid>
            <pubDate>Mon, 19 Apr 2021 14:37:10 +0530</pubDate>
            <description><![CDATA[&lt;p&gt;ರಾಜಕೀಯ ಬದ್ಧವೈರಿ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಎಚ್&zwnj;ಡಿ ದೇವೇಗೌಡ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಕಾರಣ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01f3mp2gzjq8wkdh2p0ceqkx5q,imgname-bbbbbbbbb-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು, (ಏ.19): &lt;/strong&gt;ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್&zwnj;ಡಿ ದೇವೇಗೌಡ ಅವರು ಕೊರೋನಾದಿಂದ ಗುಣಮುಖರಾಗಿದ್ದು, ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೃತಜ್ಞತೆ ಪತ್ರ ಬರೆದಿದ್ದಾರೆ.&lt;/p&gt;&lt;p&gt;ಹೌದು...ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವೇಳೆ ದೇವಗೌಡ್ರ ಆರೋಗ್ಯ ಸುಧಾರಿಸಲಿ ಎಂದು ಪ್ರತಾಪ್ ಸಿಂಹ ಪ್ರಾರ್ಥಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಜಕೀಯ ಬದ್ಧವೈರಿ ಪ್ರತಾಪ್ ಸಿಂಹ ಅವರಿಗೆ ದೇವೇಗೌಡ ಅವರು ಪತ್ರದ ಮೂಲಕ ಕೃತಜ್ಞತೆ ಹೇಳಿದ್ದಾರೆ. ದೊಡ್ಡಗೌಡ್ರ ಬರೆದ ಪತ್ರ ಈ ಕೆಳಗಿನಂತಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;ನಾನು ಮತ್ತು ನನ್ನ ಪತ್ನಿ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದಾಗ ಯತಾವು ವ್ಯಕ್ತಪಡಿಸಿದ ಆತಂಕ ತೋರಿದ ಕಾಳಜಿಗೆ ನಾನು ಕೃತಜ್ಞ, ತಾವು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದು, ಹಲವು ಕಾರ್ಯ, ಒತ್ತಡದ ಮಧ್ಯೆ ನನ್ನ ಆರೋಗ್ಯದ ಬಗ್ಗೆ ತಾವು ಯೋಗಕ್ಷೇಮ ವಿಚಾರಿಸಿದ್ದು, ನಿಮ್ಮ ದೊಡ್ಡತನಕ್ಕೆ ಸಾಕ್ಷಿ, ನಿಮ್ಮ ಹಾರೈಕೆ ಹರಕೆಯೊಂದಿಗೆ ನಾವಿಬ್ಬರು ಗುಣಮುಖರಾಗಿದ್ದೇವೆ. ಈ ನಿಮ್ಮ ಸೌಜನ್ಯ ನಡಾವಳಿಗೆ ನಾನು ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.&lt;/p&gt;&lt;p&gt;ಇದಕ್ಕೆ ಪ್ರತಿಯಾಗಿ ಪ್ರತಾಪ್ ಸಿಂಹ,&amp;nbsp;ಸರ್, ನೀವು ಹೆಸರಿಗಷ್ಟೇ ಅಲ್ಲ, ಗುಣ, ಸೌಜನ್ಯದಲ್ಲೂ ದೊಡ್ಡ ಗೌಡರೇ. ತಾಯಿ ಚಾಮುಂಡೇಶ್ವರಿ ಮತ್ತು ಹಾಸನಾಂಬ ಕೃಪೆ ನಿಮಗಿದೆ. ಧನ್ಯವಾದಗಳು ಹೇಳಿದ್ದಾರೆ.&lt;/p&gt;]]></content:encoded>
            <category>coronavirus</category>
            <dc:creator>Suvarna News</dc:creator>
            <atom:link href="https://kannada.asianetnews.com/politics/jds-supremo-hd-devegowda-thanks-to-mysuru-bjp-mp-pratap-simha-rbj-qrszzx"/>
        </item>
        <item>
            <title><![CDATA[ಕರ್ನಾಟಕದಲ್ಲಿ ಮತ್ತೆ ಕೊರೋನಾ ಹೆಚ್ಚಳ:  ಹೊಸ ವರ್ಷಾಚರಣೆಗೆ ನಿರ್ಬಂಧ ಫಿಕ್ಸ್‌?]]></title>
            <link>https://kannada.asianetnews.com/coronavirus/coronavirus-cases-increased-in-karnataka-grg-s692wt</link>
            <guid isPermaLink="true">https://kannada.asianetnews.com/coronavirus/coronavirus-cases-increased-in-karnataka-grg-s692wt</guid>
            <pubDate>Tue, 26 Dec 2023 07:01:41 +0530</pubDate>
            <description><![CDATA[<p><strong>ಬೆಂಗಳೂರು(ಡಿ.26): &nbsp;</strong>ನೂತನ ಉಪತಳಿ ವೇಗವಾಗಿ ಹರಡುವ ಲಕ್ಷಣ ಹೊಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕು ಉಲ್ಬಣವಾಗುವ ಆತಂಕವನ್ನೂ ಸೃಷ್ಟಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕೋವಿಡ್ ಸೊಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಡೆಸಿದ ಜಿನೋಮ್ ಸಿಕ್ವೇನ್ಸಿಂಗ್‌ನಲ್ಲಿ (ವೈರಾಣು ವಂಶವಾಹಿ ರಚನೆ ವಿಶ್ಲೇಷಣೆ) ನಿರೀಕ್ಷೆಯಂತೆ ಓಮಿಕ್ರಾನ್ ವೈರಾಣು ಉಪತಳಿ ಜೆಎನ್‌.1 ಪತ್ತೆಯಾಗಿದೆ. 34 ಕೋವಿಡ್ ಸೋಂಕಿತರಿಗೆ ಜೆಎನ್‌.1 ಪಾಸಿಟಿವ್ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.</p>  <p><strong>ಆತಂಕ ಬೇಕಾಗಿಲ್ಲ:</strong></p>  <p>ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ. ಜೆಎನ್‌.1 ಉಪತಳಿ ಅಪಾಯಕಾರಿ ಅಲ್ಲ ಎಂಬುದನ್ನು ತಜ್ಞರು ಈಗಾಗಲೇ ಹೇಳಿದ್ದಾರೆ. ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ಹರಡದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ಬಲ್ಪ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ಕೂಡ ಈಗಾಗಲೇ ಎಲ್ಲ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್ ಎದುರಿಸಲು ಸನ್ನದ್ಧರಾಗುವಂತೆ ಎರಡು ಮೂರು ಬಾರಿ ಸಭೆ ನಡೆಸಿ ಆಸ್ಪತ್ರೆಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.</p>  <p><a href="https://kannada.asianetnews.com/india-news/india-report-63-jn1-virus-total-covid-19-active-case-crossed-4000-mark-ckm-s67y6y" onclick="gtagEvent(`search_topic`, 1)" rel="nofollow" target="_blank" title="India Report 63 JN1 virus total covid 19 active case crossed 4000 mark ckm">ಹೊಸ ವರ್ಷಕ್ಕೆ ಕೋವಿಡ್ 4ನೇ ಅಲೆ ಭೀತಿ, JN.1 ಪ್ರಕರಣ 63ಕ್ಕೆ ಏರಿಕೆ, ಸಕ್ರಿಯ ಕೊರೋನಾ 4054!</a></p>  <p><strong>ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ:</strong></p>  <p>ಜೆಎನ್ .1 ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ಹೊಸ ಮಾರ್ಗಸೂಚಿ ಬಂದಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸುವ ಯಾವುದೇ ಚಿಂತನೆಗಳಿಲ್ಲ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು&nbsp;&nbsp;ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.&nbsp;</p> ]]></description>
            <media:content url="https://static-ai.asianetnews.com/images/01gxx5yckbmha1gwva2kk7wybp/41.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್‌ ಮಾರಿಗೆ ಮಂಗಳೂರಿನ 40 ವರ್ಷದ ವ್ಯಕ್ತಿ ಬಲಿ]]></title>
            <link>https://kannada.asianetnews.com/coronavirus/40-year-old-person-dies-due-to-coronavirus-in-mangaluru-grg-s63cu3</link>
            <guid isPermaLink="true">https://kannada.asianetnews.com/coronavirus/40-year-old-person-dies-due-to-coronavirus-in-mangaluru-grg-s63cu3</guid>
            <pubDate>Sat, 23 Dec 2023 04:50:30 +0530</pubDate>
            <description><![CDATA[<p><strong>ಬೆಂಗಳೂರು(ಡಿ.23): </strong>ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿದ್ದು, ಶುಕ್ರವಾರ ಬರೋಬ್ಬರಿ 78 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾದ ಸಾವಿನಿಂದಾಗಿ ಕಳೆದ ಒಂದು ವಾರದಲ್ಲೇ ನಾಲ್ಕು ಮಂದಿ ಕೊರೋನಾ ಸೋಂಕಿಗೆ ಬಲಿಯಾದಂತಾಗಿದೆ.</p>  <p>ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳಲ್ಲಿ 2,366 ಪರೀಕ್ಷೆ ನಡೆಸಿದ್ದು, ಶೇ.3.29 ಪಾಸಿಟಿವಿಟಿ ದರದಂತೆ 78 ಮಂದಿಗೆ ಸೋಂಕು ದೃಢಪಟ್ಟಿದೆ. ತನ್ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 175ಕ್ಕೆ ತಲುಪಿದೆ. ಈ ಪೈಕಿ 162 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಲ್ಲಿ ಆರು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>  <p><a href="https://kannada.asianetnews.com/coronavirus/create-awareness-of-covid-19-safety-measures-says-dharwad-dc-gurudatta-hegde-grg-s62qzm" onclick="gtagEvent(`search_topic`, 1)" rel="nofollow" target="_blank" title="Create Awareness of Covid 19 Safety Measures Says Dharwad DC Gurudatta Hegde grg ">ಧಾರವಾಡ: ಕೋವಿಡ್ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ, ಡಿಸಿ ಗುರುದತ್ತ ಹೆಗಡೆ</a></p>  <p>ಶುಕ್ರವಾರ ವರದಿಯಾದ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 67, ಚಿಕ್ಕಮಗಳೂರು 4, ರಾಮನಗರ ಹಾಗೂ ದಕ್ಷಿಣ ಕನ್ನಡ 2, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ದೃಢಪಟ್ಟಿದೆ.</p>  <p><strong>40 ವರ್ಷದ ವ್ಯಕ್ತಿ ಸಾವು:</strong></p>  <p>ಶುಕ್ರವಾರ ವರದಿಯಾದ ಒಂದು ಸಾವು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಉಂಟಾಗಿದ್ದು, ಉತ್ತರ ಭಾರತ ಮೂಲದ 40 ವರ್ಷದ ವ್ಯಕ್ತಿಗೆ ಡಯಾಬಿಟಿಸ್‌ ಮೆಲ್ಲಿಟಸ್‌ (ಮಧುಮೇಹ ಕಾಯಿಲೆ) ಹೊರತುಪಡಿಸಿ ಬೇರೆ ದೀರ್ಘಕಾಲೀನ ಕಾಯಿಲೆ ಇರಲಿಲ್ಲ. ವ್ಯಕ್ತಿಯು ಡಿ.19ರಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಡಿ.20ರಂದು ಸಾವನ್ನಪ್ಪಿದ್ದಾರೆ. ಕಳೆದ ಮೂರು ಸಾವುಗಳು 60 ವರ್ಷ ಮೇಲ್ಪಟ್ಟವರಲ್ಲಿ ವರದಿಯಾಗಿತ್ತು. ಇದೀಗ 40 ವರ್ಷದ ವ್ಯಕ್ತಿ ಮೃತಪಟ್ಟಿರುವುದರಿಂದ ಆತಂಕ ಶುರುವಾಗಿದೆ.</p> ]]></description>
            <media:content url="https://static-ai.asianetnews.com/images/01gxx5yckbmha1gwva2kk7wybp/41.jpg" medium="image" height="400" width="760"/>
        </item>
        <item>
            <title><![CDATA[ಮತ್ತೆ ಕೊರೋನಾ ಕಾಟ: ಜೆಎನ್‌1 ರೂಪಾಂತರಿಗೂ ಶೀಘ್ರ ಬೇರೆ ಲಸಿಕೆ?]]></title>
            <link>https://kannada.asianetnews.com/coronavirus/vaccine-for-the-jn1-mutation-is-also-coming-soon-says-serum-institute-india-grg-s62xfp</link>
            <guid isPermaLink="true">https://kannada.asianetnews.com/coronavirus/vaccine-for-the-jn1-mutation-is-also-coming-soon-says-serum-institute-india-grg-s62xfp</guid>
            <pubDate>Sat, 23 Dec 2023 03:00:36 +0530</pubDate>
            <description><![CDATA[<p><strong>ನವದೆಹಲಿ(ಡಿ.23):</strong> ಈ ಹಿಂದಿನ ಕೋವಿಡ್‌ ಅಲೆಗಳಲ್ಲಿ ಕೋವಿಶೀಲ್ಡ್‌ ಲಸಿಕೆಯ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಸಾವಿನಿಂದ ಕಾಪಾಡಿದ ಖ್ಯಾತಿಯುಳ್ಳ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಇದೀಗ ಜಗತ್ತನ್ನು ಕಂಗೆಡಿಸಿರುವ ಜೆಎನ್‌.1 ಕೊರೋನಾ ರೂಪಾಂತರಿ ತಳಿಯ ವಿರುದ್ಧವೂ ಲಸಿಕೆ ಬಿಡುಗಡೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.</p>  <p>ಜೆಎನ್‌.1 ರೂಪಾಂತರಿ ವೈರಸ್‌ನಿಂದ ಸೋಂಕಿತರಾದರೆ ಅವರಲ್ಲಿ ಸೋಂಕಿನ ಲಕ್ಷಣಗಳು ತೀವ್ರಗೊಳ್ಳದಂತೆ ಹಾಗೂ ಸಾವು ಸಂಭವಿಸದಂತೆ ಈಗಿರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ ಸೀರಂ ಸಂಸ್ಥೆ ಪ್ರತ್ಯೇಕ ಲಸಿಕೆಯೊಂದನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರ ಪರವಾನಗಿಗೆ ಕೇಂದ್ರ ಸರ್ಕಾರದ ಬಳಿ ಅನುಮತಿ ಕೇಳಲಿದೆ ಎಂದು ಮೂಲಗಳು ಹೇಳಿವೆ.</p>  <p><a href="https://kannada.asianetnews.com/state/past-covid-mistakes-must-not-be-repeated-says-cm-siddaramaiah-gvd-s61ji6" onclick="gtagEvent(`search_topic`, 3)" rel="nofollow" target="_blank" title="Past covid mistakes must not be repeated Says CM Siddaramaiah gvd">ಹಿಂದಿನ ಕೋವಿಡ್‌ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ</a></p>  <p>ಈ ಕುರಿತು ಕೆಲ ಮಾಧ್ಯಮ ಸಂಸ್ಥೆಗಳ ಜೊತೆ ಮಾತನಾಡಿರುವ ಸೀರಂ ಸಂಸ್ಥೆಯ ವಕ್ತಾರ, ‘ಅಮೆರಿಕ ಮತ್ತು ಯುರೋಪ್‌ನಲ್ಲಿ ನಾವು ಈಗಾಗಲೇ ಜೆಎನ್‌.1 ರೂಪಾಂತರಿಯ ಜೊತೆ ಅತ್ಯಂತ ಸಮೀಪದ ಸಾಮ್ಯತೆ ಹೊಂದಿರುವ ಎಕ್ಸ್‌ಬಿಬಿ1 ರೂಪಾಂತರಿಗೆ ಲಸಿಕೆ ಬಿಡುಗಡೆ ಮಾಡಿದ್ದೇವೆ. ಮುಂದಿನ ತಿಂಗಳುಗಳಲ್ಲಿ ಭಾರತದಲ್ಲೂ ಅದರ ಲೈಸನ್ಸ್‌ಗೆ ಅನುಮತಿ ಕೋರುತ್ತೇವೆ. ಜನರಿಗೆ ಈ ಲಸಿಕೆ ಸಿಗುವಂತೆ ಮಾಡಲು ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದಾರೆ.</p> ]]></description>
            <media:content url="https://static-ai.asianetnews.com/images/01hevpmx39fmaq5cqwcqja0crk/vaccine-for-chikungunya.jpg" medium="image" height="400" width="760"/>
        </item>
        <item>
            <title><![CDATA[ಕೊರೋನಾತಂಕ: ಗದಗ ಜಿಲ್ಲೆಯಲ್ಲಿ ಸಿದ್ಧವಿದೆ 80 ಐಸೋಲೇಶನ್‌ ಬೆಡ್]]></title>
            <link>https://kannada.asianetnews.com/coronavirus/80-isolation-beds-are-ready-in-gadag-district-for-coronavirus-grg-s62rdf</link>
            <guid isPermaLink="true">https://kannada.asianetnews.com/coronavirus/80-isolation-beds-are-ready-in-gadag-district-for-coronavirus-grg-s62rdf</guid>
            <pubDate>Fri, 22 Dec 2023 22:00:34 +0530</pubDate>
            <description><![CDATA[<p><strong>ಶಿವಕುಮಾರ ಕುಷ್ಟಗಿ</strong></p>  <p><strong>ಗದಗ(ಡಿ.22): </strong>ರಾಜ್ಯದ ವಿವಿಧೆಡೆ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಹೊಸ ರೂಪಾಂತರ ತಳಿ ಜೆಎನ್ 1 ಪತ್ತೆಯಾದ ಹಿನ್ನೆಲೆಯಲ್ಲಿ ಸರ್ಕಾರ ಕೋವಿಡ್ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರನ್ವಯ ಗದಗ ಜಿಲ್ಲೆಯಲ್ಲಿಯೂ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ನೆಗಡಿ, ಕೆಮ್ಮು, ತೀವ್ರತರ ಜ್ವರ ಸೇರಿದಂತೆ (ಸಾರಿ) ಸಮಸ್ಯೆ ಕಂಡು ಬಂದ 100 ಜನರನ್ನು ನಿತ್ಯವೂ ತಪಾಸಣೆಗೊಳಿಸಲಾಗುತ್ತಿದೆ.</p>  <p><strong>120 ಐಸೋಲೇಶನ್ ಬೆಡ್&nbsp;</strong></p>  <p>ಕೋವಿಡ್ ಹೊಸ ರೂಪಾಂತರಿ ಜೆಎನ್ 1 ತಳಿ ಕಾಣಿಸಿಕೊಂಡಿರುವುದು ಮತ್ತು ಪಕ್ಕದ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಗದಗ ಜಿಲ್ಲೆ ಪ್ರಮುಖ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಕೋವಿಡ್ 2ನೇ ಅಲೆಯಲ್ಲಿ ಸಿದ್ಧ ಪಡಿಸಿಕೊಂಡಿದ್ದ 120 ವೆಂಟಿಲೇಟರ್ ಹೊಂದಿದ ಬೆಡ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದ್ದು, ಅವುಗಳಲ್ಲಿ ಸದ್ಯ 80 ಕಾರ್ಯ ನಿರ್ವಹಿಸುತ್ತಿದ್ದು, ಇನ್ನು 40 ಬೆಡ್‌ಗಳನ್ನು ಮಾತ್ರ ಸಣ್ಣಪುಟ್ಟ ದುರಸ್ತಿ ಮಾಡಬೇಕಿದ್ದು, ಆಕ್ಸಿಜನ್ ಸೇರಿದಂತೆ ಎಲ್ಲವೂ ಲಭ್ಯವಿದೆ.</p>  <p><a href="https://kannada.asianetnews.com/coronavirus/create-awareness-of-covid-19-safety-measures-says-dharwad-dc-gurudatta-hegde-grg-s62qzm" onclick="gtagEvent(`search_topic`, 1)" rel="nofollow" target="_blank" title="Create Awareness of Covid 19 Safety Measures Says Dharwad DC Gurudatta Hegde grg ">ಧಾರವಾಡ: ಕೋವಿಡ್ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ, ಡಿಸಿ ಗುರುದತ್ತ ಹೆಗಡೆ</a></p>  <p><strong>750 ಹಾಸಿಗೆಗಳ ಆಸ್ಪತ್ರೆ ಲಭ್ಯ</strong></p>  <p>ಜಿಮ್ಸ್ ನಲ್ಲಿ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ 450 ಹಾಸಿಗೆಗಳ ಆಸ್ಪತ್ರೆ ಹಾಗೂ ಹಳೆಯ 300 ಹಾಸಿಗೆಗಳ ಆಸ್ಪತ್ರೆ ಸೇರಿದಂತೆ ಒಟ್ಟು 750 ಬೆಡ್‌ಗಳ ಆಸ್ಪತ್ರೆ ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಲಭ್ಯವಿದೆ. ಇದರೊಟ್ಟಿಗೆ ಪ್ರತಿ ತಾಲೂಕು ಕೇಂದ್ರದಲ್ಲಿಯೂ 50 ಹಾಸಿಗೆಗಳ ಆಸ್ಪತ್ರೆಗಳಿದ್ದು ಅಲ್ಲಿಯೂ ಕೂಡಾ ಕೋವಿಡ್ ಸೋಂಕು ಉಲ್ಬಣವಾದಲ್ಲಿ ತಕ್ಷಣಕ್ಕೆ ಬೇಕಾಗುವ ಐಸೋಲೇಶನ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ.</p>  <p><strong>ಅಗತ್ಯ ಸಿದ್ಧತೆಗಳು ಪೂರ್ಣ</strong></p>  <p>ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ ಎಚ್1ಎನ್1, ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ 10 ಬೆಡ್ ಗಳನ್ನು ಮೀಸಲಿಡಲಾಗಿದೆ. ಇದುವರೆಗೂ ಜಿಲ್ಲೆಯ ಯಾರೊಬ್ಬರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿಲ್ಲ, ಒಂದೊಮ್ಮೆ ಸೋಂಕು ಪತ್ತೆಯಾದಲ್ಲಿ ಸಂಪೂರ್ಣ ಆ ವಿಭಾಗದ ಎಲ್ಲಾ ಬೆಡ್‌ಗಳನ್ನು (ಪ್ರಾಥಮಿಕ ಹಂತದ ಸೋಂಕಿನ ವಾರ್ಡಾಗಿ) ಕೋವಿಡ್ ವಾರ್ಡಾಗಿ ಪರಿವರ್ತಿಸಲು ಬೇಕಾದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೋವಿಡ್ ಸೋಂಕು ಪತ್ತೆಯಾದಲ್ಲಿ ಅದನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಆರೋಗ್ಯ ಇಲಾಖೆ ಹಾಗೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾಡಿಕೊಂಡಿದೆ.</p>  <p><strong>ಮಾದರಿ ಕಾರ್ಯ</strong></p>  <p>ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ 2 ನೇ ಅಲೆಯಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ಕಾರ್ಯತ್ಪರತೆ ಎಷ್ಟೊಂದು ಮೆಚ್ಚುಗೆಗೆ ಪಾತ್ರವಾಗಿತ್ತು ಎಂದರೆ ಅಕ್ಕ ಪಕ್ಕದ ಹಾವೇರಿ, ಧಾರವಾಡ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಕೋವಿಡ್ ರೋಗಿಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದರು. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೊರತು ಪಡಿಸಿದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ವೆಂಟಿಲೇಟರ್ ಬೆಡ್‌ಗಳಿರುವುದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಎನ್ನುವುದು ಗಮನಾರ್ಹ ಸಂಗತಿ.</p>  <p><a href="https://kannada.asianetnews.com/state/karnataka-covid-case-increase-formation-of-cabinet-sub-committee-for-covid-control-at-bengaluru-rav-s62ltc" onclick="gtagEvent(`search_topic`, 2)" rel="nofollow" target="_blank" title="Karnataka Covid case increase formation of Cabinet Sub Committee for Covid Control at bengaluru rav">ಕೊವಿಡ್ ಕಟ್ಟಿಹಾಕಲು ಸಜ್ಜಾದ ಸರ್ಕಾರ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ</a></p>  <p><strong>ಸದ್ಯ ಯಾವುದೇ ಪಾಸಿಟಿವ್ ಇಲ್ಲ</strong></p>  <p>ಸರ್ಕಾರದ ಸೂಚನೆಯ ಪ್ರಕಾರ ನಿತ್ಯವೂ 100ಕ್ಕೂ ಅಧಿಕ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಇದುವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ, ಆದರೆ ಕಳೆದೊಂದು ವಾರದಿಂದ ಅತಿಯಾದ ಶೀತಗಾಳಿ ಮತ್ತು ಚಳಿ ಹಿನ್ನೆಲೆಯಲ್ಲಿ ಸಹಜವಾಗಿಯೇ ನೆಗಡಿ, ಕೆಮ್ಮು, ಜ್ವರ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸಹಜವಾಗಿಯೇ ಆತಂಕ ಶುರುವಾಗಿದೆ.</p>  <p>ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಮ್ಸ್ ಆವರಣದಲ್ಲಿಯೇ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್, ಅಗತ್ಯ ಬೆಡ್‌ಗಳು ಇದಕ್ಕಾಗಿ ಬೇಕಾಗುವ ನುರಿತ ಸಿಬ್ಬಂದಿಗಳು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿಯೂ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ ಎಂದು ಗದಗ ಡಿ.ಎಚ್.ಓ ಡಾ. ಎಸ್.ಎಸ್. ನೀಲಗುಂದ ತಿಳಿಸಿದ್ದಾರೆ.&nbsp;</p> ]]></description>
            <media:content url="https://static-ai.asianetnews.com/images/01hj92q0b6sbz19pvx8z1b3ajs/hospital-784.jpg" medium="image" height="400" width="760"/>
        </item>
        <item>
            <title><![CDATA[ಧಾರವಾಡ: ಕೋವಿಡ್ ಸುರಕ್ಷತಾ ಕ್ರಮಗಳ ಜಾಗೃತಿ ಮೂಡಿಸಿ, ಡಿಸಿ ಗುರುದತ್ತ ಹೆಗಡೆ]]></title>
            <link>https://kannada.asianetnews.com/coronavirus/create-awareness-of-covid-19-safety-measures-says-dharwad-dc-gurudatta-hegde-grg-s62qzm</link>
            <guid isPermaLink="true">https://kannada.asianetnews.com/coronavirus/create-awareness-of-covid-19-safety-measures-says-dharwad-dc-gurudatta-hegde-grg-s62qzm</guid>
            <pubDate>Fri, 22 Dec 2023 20:58:34 +0530</pubDate>
            <description><![CDATA[<p><strong>ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ&nbsp;</strong></p>  <p><strong>ಧಾರವಾಡ(ಡಿ.22): </strong>ಕೋವಿಡ್ ಹೊಸ ರೂಪಾಂತರಿ ತಳಿ ಬಗ್ಗೆ ಹೆಚ್ಚಿನ ಭಯ ಬೇಡ. ಜನಸಾಮಾನ್ಯರಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಅಗತ್ಯ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಕೋವಿಡ್ ಪರೀಕ್ಷೆ, ನಿಯಂತ್ರಣಕ್ಕೆ ಅಗತ್ಯ ಸಿಬ್ಬಂದಿಗಳ ಸಿದ್ಧತೆ, ಔಷಧಿಗಳ ದಾಸ್ತಾನು ಇರುವಂತೆ ಮುಂಜಾಗೃತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು. ಇಂದು(ಶುಕ್ರವಾರ) ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ಪೊಲೀಸ್ ಮತ್ತು ಇತರ ಇಲಾಖೆಗಳ ಅಧಿಕಾರಿಗಳ ಸಭೆ ಜರುಗಿಸಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕುರಿತು ಸಭೆ ಜರುಗಿಸಿ ಮಾತನಾಡಿದರು.</p>  <p>ಕೋವಿಡ್ ಹೊಸ ರೂಪಾಂತರಿ ತಳಿಯ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಆತಂಕ, ಭಯ ಬೇಡ. ಈಗಾಗಲೇ ರಾಜ್ಯಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಮತ್ತು ಸಲಹಾತ್ಮಕ ಕ್ರಮಗಳನ್ನು ಪಾಲಿಸುವ ಮೂಲಕ ಜಾಗೃತಿ ವಹಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಕಳೆದ ಕೋವಿಡ್ ಅವದಿಯಲ್ಲಿ ಅನುಸರಿಸಿದ ಸೂಕ್ತ ಕ್ರಮಗಳನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗುವುದು. ಹಿಂದಿನ ಕೋವೀಡ್ ಸಂದರ್ಭದಲ್ಲಿ ರಚಿಸಿದ ಸಮಿತಿಗಳನ್ನು ಪುನರ್ ಸಿದ್ದಗೊಳಸಿ, ಅಗತ್ಯವಿದ್ದಲ್ಲಿ ಸಮಿತಿಗಳಿಗೆ ಕಾರ್ಯ ಹಂಚಿಕೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.</p>  <p><a href="https://kannada.asianetnews.com/state/karnataka-covid-case-increase-formation-of-cabinet-sub-committee-for-covid-control-at-bengaluru-rav-s62ltc" onclick="gtagEvent(`search_topic`, 1)" rel="nofollow" target="_blank" title="Karnataka Covid case increase formation of Cabinet Sub Committee for Covid Control at bengaluru rav">ಕೊವಿಡ್ ಕಟ್ಟಿಹಾಕಲು ಸಜ್ಜಾದ ಸರ್ಕಾರ; ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ</a></p>  <p>ರಾಜ್ಯ ಆರೋಗ್ಯ ಇಲಾಖೆಯಿಂದ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ಇತರ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕೇಂದು ಅವರು ಹೇಳಿದರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಮತ್ತು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಸಭೆಯಲ್ಲಿ ವಿವರಿಸಿದರು.</p>  <p>ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಿಮ್ಸ ವೈಧ್ಯಕೀಯ ಅಧೀಕ್ಷಕ ಡಾ.ಸಿ ಅರುಣಕುಮಾರ ಸೇರಿದಂತೆ ವಿವಿಧ ತಾಲ್ಲೂಕು ಆಸ್ಪತ್ರಗಳ ವೈದ್ಯಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆಯ ಕಾರ್ಯಕ್ರಮದ &nbsp;ಅಧಿಕಾರಿಗಳು ಭಾಗವಹಿಸಿದ್ದರು.</p> ]]></description>
            <media:content url="https://static-ai.asianetnews.com/images/01hj9280mzf5z35yfn2vrr7c4c/47001081-e28e-48ee-92e0-00886d5083e9.jpg" medium="image" height="400" width="760"/>
        </item>
        <item>
            <title><![CDATA[ಬೆಂಗ್ಳೂರಲ್ಲಿ ಕೋವಿಡ್‌ ಶವ ಸಂಸ್ಕಾರಕ್ಕೆ ಬಿಬಿಎಂಪಿ 4 ಚಿತಾಗಾರ ಮೀಸಲು..!]]></title>
            <link>https://kannada.asianetnews.com/coronavirus/bbmp-reserved-4-crematoriums-for-covid-cremation-in-bengaluru-grg-s61hjh</link>
            <guid isPermaLink="true">https://kannada.asianetnews.com/coronavirus/bbmp-reserved-4-crematoriums-for-covid-cremation-in-bengaluru-grg-s61hjh</guid>
            <pubDate>Fri, 22 Dec 2023 04:36:55 +0530</pubDate>
            <description><![CDATA[<p><strong>ಗಿರೀಶ್‌ ಗರಗ</strong></p>  <p><strong>ಬೆಂಗಳೂರು(ಡಿ.22):</strong> &nbsp;ರಾಜ್ಯದಲ್ಲಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುತ್ತಿದ್ದು, ಅದರ ಪರಿಣಾಮ ಪ್ರತಿದಿನ ಸೋಂಕಿನಿಂದ ಸಾವನ್ನಪ್ಪುತ್ತಿರುವ ಪ್ರಕರಣವು ದಾಖಲಾಗುತ್ತಿದೆ. ಹೀಗೆ ಸೋಂಕಿನಿಂದ ಸಾವನ್ನಪ್ಪಿದವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ ಪ್ರತ್ಯೇಕ ಚಿತಾಗಾರಗಳನ್ನು ಮೀಸಲಿಡುತ್ತಿದೆ.</p>  <p>ಕೇರಳದಲ್ಲಿ ಕೊರೋನಾ ಉಪತಳಿ ಪತ್ತೆಯಿಂದಾಗಿ ರಾಜ್ಯದಲ್ಲಿ ಆತಂಕ ಸೃಷ್ಟಿಯಾಗಿದೆ. ಅದರ ಜತೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಆರೋಗ್ಯ ಇಲಾಖೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಮಾಣ ತಗ್ಗಿಸುವ ಸಲುವಾಗಿ ಬಿಬಿಎಂಪಿ ವಿವಿಧ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಅಲ್ಲದೆ ಈ ಹಿಂದೆ ಕೊರೋನಾ ಸೋಂಕು ತೀವ್ರಗೊಂಡಾಗ ಉಂಟಾಗಿದ್ದ ಅವ್ಯವಸ್ಥೆ ಮರುಕಳಿಸದಂತೆ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಸೋಂಕಿನಿಂದ ಸಾವನ್ನಪ್ಪುವವರ ಅಂತ್ಯಸಂಸ್ಕಾರಕ್ಕಾಗಿ ನಾಲ್ಕು ಚಿತಾಗಾರಗಳನ್ನು ಮೀಸಲಿಡಲಾಗುತ್ತಿದ್ದು, ಅಲ್ಲಿ ಬೇರೆ ಯಾವುದೇ ರೀತಿಯ ಅಂತ್ಯಸಂಸ್ಕಾರ ನಡೆಸದಂತೆ ಆದೇಶಿಸಲು ಅಧಿಕಾರಿಗಳು ಮುಂದಾಗಿದ್ದಾರೆ.</p>  <p><a href="https://kannada.asianetnews.com/coronavirus/do-not-worry-about-the-covid-19-mutant-jn1-variant-grg-s610cb" onclick="gtagEvent(`search_topic`, 1)" rel="nofollow" target="_blank" title="Do not Worry about the Covid 19 Mutant JN1 Variant grg ">ಬಾಗಲಕೋಟೆ: ಕೋವಿಡ್-19 ರೂಪಾಂತರಿ ಬಗ್ಗೆ ಆತಂಕ ಬೇಡ, ಡಿಸಿ ಜಾನಕಿ</a></p>  <p><strong>12 ಚಿತಾಗಾರಗಳಲ್ಲಿ 4 ಮೀಸಲು:</strong></p>  <p>ಬಿಬಿಎಂಪಿ ನಿರ್ವಹಣೆಯಲ್ಲಿ ಒಟ್ಟು 12 ವಿದ್ಯುತ್‌ ಚಿತಾಗಾರಗಳು, 50ಕ್ಕೂ ಹೆಚ್ಚಿನ ರುದ್ರಭೂಮಿಗಳಿವೆ. ಕಳೆದ ಮೂರು ಕೊರೋನಾ ಅಲೆ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿನ ಹೊರವಲಯದ ಕಲ್ಪಳ್ಳಿ ರುದ್ರಭೂಮಿ ಮತ್ತು ಚಿತಾಗಾರವನ್ನು ಮೀಸಲಿಡಲಾಗಿತ್ತು. ಆದರೆ, ಆ ರುದ್ರಭೂಮಿಯು ಭರ್ತಿಯಾಗಿದ್ದು, ಅಂತ್ಯಸಂಸ್ಕಾರ ಮಾಡಲು ಜಾಗವೇ ಇಲ್ಲದಂತಾಗಿದೆ. ಅಲ್ಲದೆ, ಕಳೆದ ಮೂರು ಅಲೆಯಲ್ಲೂ ಅಂತ್ಯಸಂಸ್ಕಾರಕ್ಕೆ ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡದ ಕಾರಣ, ಸಾಕಷ್ಟು ಸಮಸ್ಯೆಯಾಗಿತ್ತು.</p>  <p>ಹೀಗಾಗಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಕೊರೋನಾ ಸೋಂಕಿನ ತೀವ್ರತೆ ಹೆಚ್ಚುವುದಕ್ಕೆ ಮುನ್ನವೇ ಚಿತಾಗಾರಗಳನ್ನು ಮೀಸಲಿಡಲಾಗುತ್ತಿದೆ. ಬನಶಂಕರಿ, ಮೇಡಿಅಗ್ರಹಾರ, ಹೆಬ್ಬಾಳ ಮತ್ತು ಸುಮನಹಳ್ಳಿಯ ಚಿತಾಗಾರಗಳನ್ನು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮೀಸಲಿಟ್ಟು, ಅಲ್ಲಿ ಬೇರೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.&nbsp;</p>  <p><strong>ವಲಯಕ್ಕೊಂದು ಆ್ಯಂಬುಲೆನ್ಸ್‌</strong></p>  <p>ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರನ್ನು ಸಾಗಿಸಲೂ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಮೃತದೇಹ ಸಾಗಿಸಲು ಕೂಡ ಆ್ಯಂಬುಲೆನ್ಸ್‌ ಅಥವಾ ಬೇರೆ ವಾಹನ ಸಿಗದೆ ಪರದಾಡುವಂತಾಗಿತ್ತು. ಈ ಬಾರಿ ಅದನ್ನು ತಪ್ಪಿಸಲು ಮೃತದೇಹವನ್ನು ಚಿತಾಗಾರಗಳಿಗೆ ತೆಗೆದುಕೊಂಡು ಹೋಗಲು 8 ವಲಯಕ್ಕೂ ತಲಾ ಒಂದು ಆ್ಯಂಬುಲೆನ್ಸ್‌ ಮೀಸಲಿಡಲಾಗುತ್ತಿದೆ. ಸದ್ಯ ಕೊರೋನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆಯಿರುವ ಕಾರಣ ವಲಯಕ್ಕೊಂದು ಆ್ಯಂಬುಲೆನ್ಸ್‌ ಮೀಸಲಿಡಲಾಗಿದೆ. ಮುಂದೆ ಪ್ರಮಾಣ ಹೆಚ್ಚಾದರೆ ಆ್ಯಂಬುಲೆನ್ಸ್‌ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ.</p>  <p><a href="https://kannada.asianetnews.com/india-news/coronavirus-alert-kerala-report-300-fresh-covid-19-cases-in-last-24-hours-ckm-s60xuc" onclick="gtagEvent(`search_topic`, 2)" rel="nofollow" target="_blank" title="Coronavirus alert Kerala Report 300 fresh covid 19 cases in last 24 hours ckm">ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!</a></p>  <p><strong>ರುದ್ರಭೂಮಿ ಸಿಬ್ಬಂದಿಗೆ ಪಿಪಿಇ ಕಿಟ್‌ ಪೂರೈಕೆ</strong></p>  <p>ಕೊರೋನಾ ಸಂದರ್ಭದಲ್ಲಿ ರುದ್ರಭೂಮಿ ಹಾಗೂ ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸುರಕ್ಷತೆ ಬಗ್ಗೆಯೂ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಬಿಬಿಎಂಪಿಯ ಎಲ್ಲ ಚಿತಾಗಾರ ಹಾಗೂ ರುದ್ರಭೂಮಿಗಳಲ್ಲಿ ಒಟ್ಟು 148 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೂ ಪಿಪಿಇ ಕಿಟ್‌ಗಳನ್ನು ನೀಡುವುದಕ್ಕೆ ಅನುಮತಿ ಕೋರಿ ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಪಿಪಿಇ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.</p>  <p>ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ನಡೆಸಲು ಹಾಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು 4 ಚಿತಾಗಾರಗಳನ್ನು ಮೀಸಲಿಡಲಾಗುತ್ತಿದೆ. ಅದರ ಜತೆಗೆ ಮೃತದೇಹಗಳನ್ನು ಸಾಗಿಸಲು 8 ವಲಯಗಳಲ್ಲೂ ತಲಾ ಒಂದು ಆ್ಯಂಬುಲೆನ್ಸ್‌ ಮೀಸಲಿಡಲಾಗುವುದು. ರುದ್ರಭೂಮಿ ಮತ್ತು ಚಿತಾಗಾರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಪಿಪಿಇ ಕಿಟ್‌ಗಳನ್ನು ವಿತರಿಸಲು ಸರ್ಕಾರದಿಂದ ಅನುಮತಿ ಕೋರಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರೆಡ್ಡಿ ಶಂಕರಬಾಬು ತಿಳಿಸಿದ್ದಾರೆ. &nbsp;</p> ]]></description>
            <media:content url="https://static-ai.asianetnews.com/images/01fq3k585tgnps3fpkgmmx1s21/3.jpg" medium="image" height="400" width="760"/>
        </item>
        <item>
            <title><![CDATA[ಬಾಗಲಕೋಟೆ: ಕೋವಿಡ್-19 ರೂಪಾಂತರಿ ಬಗ್ಗೆ ಆತಂಕ ಬೇಡ, ಡಿಸಿ  ಜಾನಕಿ]]></title>
            <link>https://kannada.asianetnews.com/coronavirus/do-not-worry-about-the-covid-19-mutant-jn1-variant-grg-s610cb</link>
            <guid isPermaLink="true">https://kannada.asianetnews.com/coronavirus/do-not-worry-about-the-covid-19-mutant-jn1-variant-grg-s610cb</guid>
            <pubDate>Thu, 21 Dec 2023 22:25:24 +0530</pubDate>
            <description><![CDATA[<p><strong>ಬಾಗಲಕೋಟೆ(ಡಿ.21):</strong> ಕೋವಿಡ್-19 ರೂಪಾಂತರಿ ಜೆಎನ್‌ 1 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.</p>  <p>ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ರೂಪಾಂತರಿ ಕೋವಿಡ್-19 ನಿಯಂತ್ರಣ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಪ್ರತಿದಿನ ಕನಿಷ್ಟ 120 ತಪಾಸಣೆ ಮಾಡಬೇಕು. ಔಷಧಿ ಲಭ್ಯತೆ ಮತ್ತು ಯಂತ್ರೋಪಕರಣ ಸುಸ್ಥಿತಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿ ಬೇಜವಾಬ್ದಾರಿ ತೋರುವಂತಿಲ್ಲ. ರೋಗಿಗಳು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಮನ ಪರಿವರ್ತಿಸುವ ಕಾರ್ಯವಾಗಬೇಕು ಎಂದರು.</p>  <p><a href="https://kannada.asianetnews.com/india-news/coronavirus-alert-kerala-report-300-fresh-covid-19-cases-in-last-24-hours-ckm-s60xuc" onclick="gtagEvent(`search_topic`, 1)" rel="nofollow" target="_blank" title="Coronavirus alert Kerala Report 300 fresh covid 19 cases in last 24 hours ckm">ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!</a></p>  <p>ಕೇರಳದಿಂದ ವಾಪಾಸ್‌ ಆಗುತ್ತಿರುವ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಕೋವಿಡ್‌ ಲಕ್ಷಣಗಳು ಕಂಡುಬಂದಲ್ಲಿ ಪ್ರತ್ಯೇಕ ವಾಸ ವ್ಯವಸ್ಥೆಯ ಜೊತೆಗೆ ಔಷದೋಪಚಾರ ಹಾಗೂ ಊಟೋಪಚಾರ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಶಾಲಾ ಕಾಲೇಜು, ಬೇರೆ ರಾಜ್ಯದಿಂದ ಬರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಹಾಗೂ ವಸತಿ ನಿಲಯಗಳಲ್ಲಿ ಹಾಗೂ ಜಿಲ್ಲೆಯಲ್ಲಿ ನಡೆಯುತ್ತಿರುವ ವಾರದ ಸಂತೆ, ಗ್ರಾಮೀಣ ಪ್ರದೇಶದಲ್ಲಿನ ಜಾತ್ರೆ ಉತ್ಸವ, ನಗರದ ಚಿತ್ರಮಂದಿರ, ಮದುವೆ ಸಮಾರಂಭಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.</p>  <p>ವಿಶೇಷವಾಗಿ 60 ವರ್ಷ ಮೇಲ್ಪಟ್ಟ ವೃದ್ದರಿಗೆ, ಚಿಕ್ಕ ಮಕ್ಕಳಿಗೆ, ಗರ್ಭಣಿಯರ ಮೇಲೆ ಕಾಳಜಿ ವಹಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಬೇಕು. ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ರೋಗಿಗೆ ಚಿಕಿತ್ಸೆ ಸಿಗದಿದ್ದಲ್ಲಿ ಕೂಡಲೇ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ರೂಪಾತರಿ ಬಗ್ಗೆ ಈಗಾಗಲೇ ಜನರಿಗೆ ತಿಳಿದಿದೆ. ಆದರೆ, ನಿರ್ಲಕ್ಷ್ಯ ವಹಿಸುವಂತಿಲ್ಲ. ಜನರಲ್ಲಿ ಭಯದ ವಾತವರಣ ಮೂಡದಂತೆ, ತಾಲೂಕು ವೈದ್ಯಾಧಿಕಾರಿ ಹಾಗೂ ತಹಸೀಲ್ದಾರ್‌ ಎಚ್ಚರಿಕೆ ವಹಿಸಬೇಕು. ಸಕ್ಕರೆ ಕಾರ್ಖಾನೆ ಹೆಚ್ಚಾಗಿರುವ ಮುಧೋಳ, ಜಮಖಂಡಿ, ಬೀಳಗಿ ಪ್ರದೇಶಗಳಲ್ಲಿ ಬೇರೆ ರಾಜ್ಯದ ಕಬ್ಬು ಕಟಾವು ಕೂಲಿ ಕಾರ್ಮಿಕರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆರೋಗ್ಯ ಅಧಿಕಾರಿ ಹಾಗೂ ಸಿಬ್ಬಂದಿ ಮೊದಲು ಕಟ್ಟುನಿಟ್ಟಿನ ಜಾಗೃತಿ ವಹಿಸಬೇಕು ಎಂದರು.</p>  <p>ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.</p> ]]></description>
            <media:content url="https://static-ai.asianetnews.com/images/01hj0kjz3vrmtcvb8dqzxy68dv/fotojet--18-.jpg" medium="image" height="400" width="760"/>
        </item>
        <item>
            <title><![CDATA[ಮತ್ತೆ ಕೋವಿಡ್‌ ಆತಂಕ: ಬೆಳಗಾವಿಯಲ್ಲಿ ಹೈಅಲರ್ಟ್..!]]></title>
            <link>https://kannada.asianetnews.com/coronavirus/high-alert-in-belagavi-due-to-coronavirus-cases-increased-grg-s60yjn</link>
            <guid isPermaLink="true">https://kannada.asianetnews.com/coronavirus/high-alert-in-belagavi-due-to-coronavirus-cases-increased-grg-s60yjn</guid>
            <pubDate>Thu, 21 Dec 2023 22:00:35 +0530</pubDate>
            <description><![CDATA[<p><strong>ಬೆಳಗಾವಿ(ಡಿ.21): </strong>&nbsp;ಜೆಎನ್1 ರೂಪಾಂತರಿ&nbsp;ಕೋವಿಡ್-19 ಸೋಂಕು ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬೆಡ್ ಹಾಗೂ ಆಕ್ಸಿಜನ್, ಐಸಿಯು ಬೆಡ್ ಗಳ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು(ಗುರುವಾರ) ನಡೆದ ಕೋವಿಡ್ -19 ರೂಪಾಂತರಿ ವೈರಸ್ ಜೆಎನ್-1 ನಿಯಂತ್ರಣಕ್ಕೆ ಅಗತ್ಯವಿರುವ ಪೂರ್ವ ಸಿದ್ಧತೆ ಕುರಿತು ಅವರು ನಿರ್ದೇಶನ ನೀಡಿದರು.</p>  <p>ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಸಬೇಕು. ಗಡಿ ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಿ ವರದಿಯನ್ನು ಸಲ್ಲಿಸಬೇಕು. &nbsp;ತೀವ್ರ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ಇರುವವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದು ತಿಳಿಸಿದರು.</p>  <p><a href="https://kannada.asianetnews.com/india-news/coronavirus-alert-kerala-report-300-fresh-covid-19-cases-in-last-24-hours-ckm-s60xuc" onclick="gtagEvent(`search_topic`, 1)" rel="nofollow" target="_blank" title="Coronavirus alert Kerala Report 300 fresh covid 19 cases in last 24 hours ckm">ಭಾರತಕ್ಕೆ ಅಪಾಯದ ಸೂಚನೆ ನೀಡಿದ ಕೇರಳ; 24 ಗಂಟೆಯಲ್ಲಿ 300 ಕೋವಿಡ್ ಕೇಸ್, 3 ಸಾವು!</a></p>  <p>ತೀವ್ರ ಶ್ವಾಸಕೋಶ, ಉಸಿರಾಟದ ಸಮಸ್ಯೆ &nbsp;ಹಾಗೂ ರೋಗ ಲಕ್ಷಣ ಇರುವವರನ್ನು ಕೂಡಲೇ ಕೊವಿಡ್‌ ಪರಿಶೀಲನೆಗೆ ಒಳಪಡಿಸಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿ ಸ್ಥಾಪನೆ ಸೂಚನೆ ನೀಡಬೇಕು.<br /> ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಲು ಹಾಗೂ ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸಾರ್ವಜನಿಕರಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.</p>  <p>ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ವೈದಗಯಕೀಯ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.</p>  <p>ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುವ ಸಂಭವವಿದೆ. ಈ ಹಿಂದೆ ಈಗಾಗಲೇ ಗಂಭೀರ ಪರಿಸ್ಥಿತಿ ಎದುರಿಸಿದ್ದೇವೆ. ಅದನ್ನು ಗಮನದಲ್ಲಿಟ್ಟುಕೊಂಡು ಯಾವುದೇ ರೀತಿಯ ಬೆಡ್ ಆಕ್ಸಿಜನ್ ಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಜೊತೆಗೆ ಇರುವ ಅಟೆಂಡರ್ ಗಳು ರೋಗಿಯೊಂದಿಗೆ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಸಂಬಂಧಿಸಿದ ವೈದ್ಯಾಧಿಕಾರಿಗಳು, ತಹಶೀಲ್ದಾರ್ ಗಳು ಆಸ್ಪತ್ರೆಗಳಲ್ಲಿ ಭೇಟಿ ನೀಡಿ ಬೆಡ್ ಗಳ ಲಭ್ಯತೆ &nbsp;ಕುರಿತು ನಿರಂತರ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.</p> ]]></description>
            <media:content url="https://static-ai.asianetnews.com/images/01gxx5yckbmha1gwva2kk7wybp/41.jpg" medium="image" height="400" width="760"/>
        </item>
        <item>
            <title><![CDATA[ಒಂದೇ ದಿನ ಬೆಂಗ್ಳೂರಲ್ಲಿ 19 ಕೊರೋನಾ ಕೇಸ್‌ ಪತ್ತೆ]]></title>
            <link>https://kannada.asianetnews.com/coronavirus/19-new-coronavirus-case-on-dec-20th-in-bengaluru-grg-s5zmor</link>
            <guid isPermaLink="true">https://kannada.asianetnews.com/coronavirus/19-new-coronavirus-case-on-dec-20th-in-bengaluru-grg-s5zmor</guid>
            <pubDate>Thu, 21 Dec 2023 04:32:52 +0530</pubDate>
            <description><![CDATA[<p><strong>ಬೆಂಗಳೂರು(ಡಿ.21): </strong>&nbsp;ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 19 ಹೊಸ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿವೆ.</p>  <p>ಕೊರೋನಾ ಸೋಂಕು ಹೆಚ್ಚಳ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದ್ದು, ಬುಧವಾರ ನಗರದಲ್ಲಿ ಕೋರೋನಾ ಸೋಂಕು ಪರೀಕ್ಷೆ ನಡೆಸಿದ 359 ಮಂದಿ ಪೈಕಿ 19 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 328 ಜನರಿಗೆ ನಡೆಸಿದ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ 17 ಮಂದಿಗೆ ಹಾಗೂ 31 ಮಂದಿಗೆ ನಡೆಸಿದ ರ್‍ಯಾಪಿಡ್‌ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ಖಚಿತಪಟ್ಟಿದೆ.</p>  <p><a href="https://kannada.asianetnews.com/health-life/minister-dinesh-gundu-rao-revealed-health-department-plan-to-stop-covid-4th-wave-sat-s5yz0b" onclick="gtagEvent(`search_topic`, 1)" rel="nofollow" target="_blank" title="Minister Dinesh Gundu rao revealed health department plan to stop Covid 4th wave sat">ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!</a></p>  <p><strong>19 ದಿನದಲ್ಲಿ 59 ಕೊರೋನಾ ಪ್ರಕರಣ:</strong></p>  <p>ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯದಲ್ಲಿ ಡಿಸೆಂಬರ್‌ 1ರಿಂದ 19ರ ಅವಧಿಯಲ್ಲಿ ಒಟ್ಟು 59 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಡಿ.16 ರಂದು 5 ಪ್ರಕರಣ, ಡಿ.17ರಂದು 4, ಡಿ.18ರಂದು 13 ಹಾಗೂ ಡಿ.19ರಂದು 17 ಪ್ರಕರಣ ಕಾಣಿಸಿಕೊಂಡಿವೆ. ಡಿ.1ರಿಂದ 15ರ ಅವಧಿಯಲ್ಲಿ 3ಕ್ಕಿಂತ ಕಡಿಮೆ ಪ್ರಕರಣ ಕಾಣಿಸಿಕೊಂಡಿದ್ದವು.</p> ]]></description>
            <media:content url="https://static-ai.asianetnews.com/images/01hj4qe7c4t54vmkxjapffbsgx/3620bial-6-902.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್‌ 7 ತಿಂಗಳ ಗರಿಷ್ಠ: ಸಕ್ರಿಯ ಕೇಸಲ್ಲಿ ದೇಶಕ್ಕೆ ಕರ್ನಾಟಕ ನಂ.2..!]]></title>
            <link>https://kannada.asianetnews.com/coronavirus/92-coronavirus-positive-case-in-karnataka-grg-s5zlfm</link>
            <guid isPermaLink="true">https://kannada.asianetnews.com/coronavirus/92-coronavirus-positive-case-in-karnataka-grg-s5zlfm</guid>
            <pubDate>Thu, 21 Dec 2023 04:05:48 +0530</pubDate>
            <description><![CDATA[<p><strong>ಬೆಂಗಳೂರು(ಡಿ.21): </strong>ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರುಮುಖವಾಗಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. 2041 ಸಕ್ರಿಯ ಪ್ರಕರಣಗಳೊಂದಿಗೆ ನೆರೆಯ ಕೇರಳ ಮೊದಲ ಸ್ಥಾನದಲ್ಲಿದ್ದರೆ, 92 ಪ್ರಕರಣಗಳೊಂದಿಗೆ ಕರ್ನಾಟಕ 2ನೇ ಸ್ಥಾನ ತಲುಪಿರುವುದು ಆತಂಕ ಮೂಡಿಸಿದೆ.</p>  <p>ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.</p>  <p><a href="https://kannada.asianetnews.com/health-life/minister-dinesh-gundu-rao-revealed-health-department-plan-to-stop-covid-4th-wave-sat-s5yz0b" onclick="gtagEvent(`search_topic`, 1)" rel="nofollow" target="_blank" title="Minister Dinesh Gundu rao revealed health department plan to stop Covid 4th wave sat">ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!</a></p>  <p><strong>ದಿನೇ ದಿನೇ ಹೆಚ್ಚಳ:</strong></p>  <p>ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಶೇ.1.72 ಪಾಸಿಟಿವಿಟಿ ದರದಂತೆ ಸರಾಸರಿ 17 ಪ್ರಕರಣ ವರದಿಯಾಗುತ್ತಿವೆ. ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಈ ಪೈಕಿ ಡಿ.18 ರಂದು ಒಂದೇ ದಿನ 27 ಪ್ರಕರಣ ವರದಿಯಾಗಿದ್ದರೆ, ಡಿ.19 ರಂದು 44 ಪ್ರಕರಣ ವರದಿಯಾಗಿವೆ. ಡಿ.20 ರಂದು 22 ಪ್ರಕರಣ ವರದಿಯಾಗಿವೆ.</p>  <p><strong>7 ಮಂದಿ ಐಸಿಯುನಲ್ಲಿ:</strong></p>  <p>ರಾಜ್ಯದಲ್ಲಿನ 92 ಸೋಂಕಿತರಲ್ಲಿ 72 ಮಂದಿ ಹೋಂ ಐಸೊಲೇಷನ್‌ನಲ್ಲೇ ಇದ್ದಾರೆ. ಉಳಿದಂತೆ 20 ಮಂದಿ ಆಸ್ಪತ್ರೆಯಲ್ಲಿದ್ದು ಈ ಪೈಕಿ 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.19ರ ವರದಿ ಪ್ರಕಾರ ಗರಿಷ್ಠ ಕೊರೋನಾ ಪರೀಕ್ಷೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 2,394, ಕರ್ನಾಟಕದಲ್ಲಿ 1,112 (ಡಿ.20 ರಂದು 808), ಕೇರಳದಲ್ಲಿ 1,094 ಪರೀಕ್ಷೆ ನಡೆಸಲಾಗಿದೆ.</p>  <p><a href="https://kannada.asianetnews.com/health-life/karnataka-covid-19-new-variant-update-two-died-from-jn1-virus-and-bengaluru-is-high-risk-city-sat-s5yx46" onclick="gtagEvent(`search_topic`, 2)" rel="nofollow" target="_blank" title="Karnataka covid 19 new variant update two died from JN1 virus and Bengaluru is high risk city sat">ಕೋವಿಡ್ ಹೊಸ ವೈರಸ್‌ಗೆ 2 ಬಲಿ: ಶತಕದ ಗಡಿ ತಲುಪಿದ ಸೋಂಕಿತರ ಸಂಖ್ಯೆ!</a></p>  <p>ವಿಶ್ವದಾದ್ಯಂತ ನಿತ್ಯ 51,214 ಸರಾಸರಿ ವರದಿಯಾಗುತ್ತಿದ್ದು 2.16 ಕೋಟಿ ಸಕ್ರಿಯ ಸೋಂಕಿತರು ವಿಶ್ವದಾದ್ಯಂತ ಇದ್ದಾರೆ. ಈ ಪೈಕಿ ಬ್ರೆಜಿಲ್‌ 11.73 ಲಕ್ಷ, ಅಮೆರಿಕ 9.89 ಲಕ್ಷ, ವಿಯೆಟ್ನಾಂ 9.39 ಲಕ್ಷದಷ್ಟಿದೆ. ವಿಶ್ವದ ಒಟ್ಟಾರೆ ಪ್ರಕರಣಗಳಲ್ಲಿ ಭಾರತದಲ್ಲಿ ಶೇ.0.009 ರಷ್ಟು ಮಾತ್ರ ಇವೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.</p>  <p><strong>ಟಾಪ್‌ 3 ಸಕ್ರಿಯ ಕೇಸುಗಳಿರುವ ರಾಜ್ಯಗಳು</strong></p>  <p><strong>ರಾಜ್ಯ ಸಕ್ರಿಯ ಕೇಸು</strong></p>  <p>ಕೇರಳ 2041<br /> ಕರ್ನಾಟಕ 92<br /> ತಮಿಳುನಾಡು 77</p> ]]></description>
            <media:content url="https://static-ai.asianetnews.com/images/01gxx5yckbmha1gwva2kk7wybp/41.jpg" medium="image" height="400" width="760"/>
        </item>
        <item>
            <title><![CDATA[ಕೇರಳದಲ್ಲಿ ಕೊರೋನಾ ಆರ್ಭಟ: ಕರ್ನಾಟಕದ ಗಡಿಗ್ರಾಮಗಳಲ್ಲಿ ಹೈಅಲರ್ಟ್]]></title>
            <link>https://kannada.asianetnews.com/coronavirus/high-alert-in-border-villages-of-karnataka-due-to-coronavirus-cases-increased-in-kerala-grg-s5zak3</link>
            <guid isPermaLink="true">https://kannada.asianetnews.com/coronavirus/high-alert-in-border-villages-of-karnataka-due-to-coronavirus-cases-increased-in-kerala-grg-s5zak3</guid>
            <pubDate>Thu, 21 Dec 2023 03:00:36 +0530</pubDate>
            <description><![CDATA[<p><strong>ಚಾಮರಾಜನಗರ(ಡಿ.21): </strong>ಕೇರಳದಲ್ಲಿ ರೂಪಾಂತರಿ ಕೊರೋನಾ ಆರ್ಭಟ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಗಡಿಗ್ರಾಮಗಳಲ್ಲಿ ಆರೋಗ್ಯ ಇಲಾಖೆ ಹೈಅಲರ್ಟ್ ಘೋಷಿಸಿದೆ. ಕೇರಳ ಗಡಿ ಹೊಂದಿಕೊಂಡಂತಿರುವ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿ, ಕಗ್ಗಳದಹುಂಡಿ ಗ್ರಾಮಗಳಿಗೆ ಬುಧವಾರ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಮನೆ-ಮನೆ ಸಮೀಕ್ಷೆ ನಡೆಸಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.</p>  <p>ನೆಗಡಿ, ಕೆಮ್ಮು, ಜ್ವರದಿಂದ ಬಳಲುವವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು ಕೇರಳದಿಂದ ಬಂದವರಿಗೆ ಸ್ವಯಂ ಕ್ವಾರಂಟೈನ್ ಆಗಲು ಸೂಚನೆ ಕೊಡಲಾಗುತ್ತಿದೆ. ಶಬರಿಮಲೆಯಿಂದ ಯಾರಾದರೂ ಹಿಂತಿರುಗಿದ್ದರ ಬಗ್ಗೆಯೂ ಆರೋಗ್ಯ ಮಾಹಿತಿ ಕಲೆ ಹಾಕುತ್ತಿದ್ದು ಕೊರೋನಾ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ.</p>  <p><a href="https://kannada.asianetnews.com/health-life/minister-dinesh-gundu-rao-revealed-health-department-plan-to-stop-covid-4th-wave-sat-s5yz0b" onclick="gtagEvent(`search_topic`, 1)" rel="nofollow" target="_blank" title="Minister Dinesh Gundu rao revealed health department plan to stop Covid 4th wave sat">ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!</a></p>  <p><strong>ಚೆಕ್‌ಪೋಸ್ಟ್‌ನಲ್ಲಿ ಹದ್ದಿನ ಕಣ್ಣು:</strong></p>  <p>ಕರ್ನಾಟಕ ಮತ್ತು ಕೇರಳ ಗಡಿಭಾಗವಾದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಬುಧವಾರದಿಂದ ವಾಹನ ತಪಾಸಣೆ ಕೈಗೊಂಡಿದ್ದು ಜ್ವರ, ಶೀತದಿಂದ ಬಳಲುವ ಕೇರಳದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಶಬರಿಮಲೆಯಿಂದ ಹಿಂತಿರುಗುವ ಕನ್ನಡಿಗರ ಮೇಲೆ ನಿಗಾ ಇಡಲಾಗುತ್ತಿದ್ದು ಅವರ ಸಂಪೂರ್ಣ ವಿವರ ತೆಗೆದುಕೊಂಡು ಜ್ವರ ತಪಾಸಣೆ ಹಾಗೂ ಕೆಲವರಿಗೆ ಜ್ವರ ತಪಾಸಣೆ ಮಾಡಲು ಆರೋಗ್ಯ ಇಲಾಖೆಯು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಜಿಎನ್‌.1 ರೂಪಾಂತರಿ ಕೊರೋನಾ ತಳಿ ಬಗ್ಗೆ ಗಡಿಜಿಲ್ಲೆಯಲ್ಲಿಯೂ ಭೀತಿ ಆವರಿಸಿದೆ. ತೀವ್ರ ನಿಗಾ ಇರಿಸುವಂತೆ ಆರೋಗ್ಯ ಇಲಾಖೆಯು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.</p> ]]></description>
            <media:content url="https://static-ai.asianetnews.com/images/01gn9a6scyx1k70y2a25gescad/coronaa.jpg" medium="image" height="400" width="760"/>
        </item>
        <item>
            <title><![CDATA[ಮತ್ತೆ ಕೊರೋನಾ: ಮಹತ್ವದ ಮಾಹಿತಿ ನೀಡಿದ ಗೃಹ ಸಚಿವ ಪರಮೇಶ್ವರ್]]></title>
            <link>https://kannada.asianetnews.com/coronavirus/home-minister-dr-g-parameshwar-talks-over-coronavirus-grg-s5xaa3</link>
            <guid isPermaLink="true">https://kannada.asianetnews.com/coronavirus/home-minister-dr-g-parameshwar-talks-over-coronavirus-grg-s5xaa3</guid>
            <pubDate>Wed, 20 Dec 2023 00:00:35 +0530</pubDate>
            <description><![CDATA[<p><strong>ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು&nbsp;</strong></p>  <p><strong>ಚಿಕ್ಕಮಗಳೂರು(ಡಿ.20): </strong>&nbsp;ಕೋವಿಡ್ 19 ಹಾಗೂ ಹೊಸ ಉಪ ತಳಿ ಜೆಎನ್.1 ಸೋಂಕಿನ ವಿಚಾರದಲ್ಲಿ ಇನ್ನೂ ಸಹ ರಾಜ್ಯದಲ್ಲಿ ಆತಂಕದ ಸ್ಥಿತಿ ಉದ್ಭವವಾಗಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.&nbsp;<br /> ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಅಗತ್ಯ ಬಂದಾಗ ಸರ್ಕಾರ, ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತದೆ. ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕ್ರಮ ಮಾಡುತ್ತದೆ ಎಂದು ತಿಳಿಸಿದರು.&nbsp;</p>  <p>ಹೊಸ ವರ್ಷಾಚರಣೆ ಸಂಬಂಧ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚಿಸಿ ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಮಾಸ್ಕ್ ಹಾಕುವುದು, ಹೆಚ್ಚು ಜನರು ಸೇರದಿರುವುದು ಸೇರಿದಂತೆ ಕೆಲವು ಸೂಚನೆಗಳನ್ನು ನೀಡಲಾಗುವುದು ಎಂದರು.</p>  <p><a href="https://kannada.asianetnews.com/karnataka-districts/congress-mla-hd-thammaiah-wearing-dattamala-and-barefoot-walking-sat-s5wv0b" onclick="gtagEvent('karnataka-districts/chikkamagalur', 1)" rel="nofollow" target="_blank" title="ಕಾಂಗ್ರೆಸ್ ಸೆಕ್ಯೂಲರಿಸಂ ಮಡಿವಂತಿಕೆ ಗಾಳಿಗೆ ತೂರಿ ಭಜರಂಗಿ ದತ್ತಮಾಲಾ ಧರಿಸಿದ ಕೈ ಶಾಸಕ ಹೆಚ್.ಡಿ. ತಮ್ಮಯ್ಯ!">ಕಾಂಗ್ರೆಸ್ ಸೆಕ್ಯೂಲರಿಸಂ ಮಡಿವಂತಿಕೆ ಗಾಳಿಗೆ ತೂರಿ ಭಜರಂಗಿ ದತ್ತಮಾಲಾ ಧರಿಸಿದ ಕೈ ಶಾಸಕ ಹೆಚ್.ಡಿ. ತಮ್ಮಯ್ಯ!</a></p>  <p><strong>ಆತ್ಮಸ್ಥೈರ್ಯ ಕುಗ್ಗಿಸಲು ಆಗುವುದಿಲ್ಲ. ಪೊಲೀಸ್ ಎಂದರೆ ಶಿಸ್ತಿನ ಪಡೆ :&nbsp;</strong></p>  <p>ಚಿಕ್ಕಮಗಳೂರು ನಗರದಲ್ಲಿ ಪೊಲೀಸರಿಂದ ವಕೀಲನ ಮೇಲೆ ನಡೆದ ಹಲ್ಲೆ, ಪೊಲೀಸರು ಮತ್ತು ವಕೀಲರು ನಡೆಸಿದ ಪ್ರತಿಭಟನೆ ಈ ಎಲ್ಲಾ ವಿಚಾರಗಳು ಈಗ ನ್ಯಾಯಾಲಯದ ಮುಂದಿರುವ ಹಿನ್ನೆಲೆಯಲ್ಲಿ ಆ ಕುರಿತು ಹೆಚ್ಚೇನನ್ನೂ ಪ್ರತಿಕ್ರಿಯುಸುವುದಿಲ್ಲ ಎಂದರು.ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಮಾನಸಿಕವಾಗಿ ಪರಿಣಾಮ ಉಂಟಾಗಿದೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕ ಪೊಲೀಸ್ ಬಹಳ ಸಮರ್ಥವಾಗಿದೆ. ಇಂತಹ ಘಟನೆಗಳು ನಡೆದರೂ ಅದನ್ನು ಸಂಯಮದಿಂದ ತೆಗೆದುಕೊಂಡು ಹೋಗುತ್ತಾರೆ. ಕರ್ತವ್ಯಕ್ಕೆ ಮಹತ್ವ ಕೊಡುತ್ತಾರೆ. ಅವರ ಆತ್ಮಸ್ಥೈರ್ಯ ಕುಗ್ಗಿಸಲು ಆಗುವುದಿಲ್ಲ. ಪೊಲೀಸ್ ಎಂದರೆ ಶಿಸ್ತಿನ ಪಡೆ ಎಂದರು.</p>  <p><a href="https://kannada.asianetnews.com/karnataka-districts/another-controversy-ct-ravi-statement-about-dattapeeta-dattatreya-property-gow-s5ti0k" onclick="gtagEvent('karnataka-districts/chikkamagalur', 2)" rel="nofollow" target="_blank">ದತ್ತಪೀಠದ ಹೆಸರಲ್ಲಿ ಮತ್ತೊಂದು ವಿವಾದ, ದತ್ತಾತ್ರೇಯರ ಸ್ಥಿರಾಸ್ಥಿ- ಚರಾಸ್ಥಿ ಏನಾಯ್ತು?</a></p>  <p><strong>ಬಿಜೆಪಿ ಅವರಿಂದ ರಾಜಕೀಯ:</strong></p>  <p>ಬೆಳಗಾವಿ ಜಲ್ಲೆ ಹೊಸ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ ಎನ್ನಿಸುತ್ತಿದೆ ಎಂದು ಆರೋಪಿಸಿದರು.ಸರ್ಕಾರ ಇದರಲ್ಲಿ ಎಲ್ಲಾ ರೀತಿ ಕ್ರಮಗಳನ್ನೂ ಕೈಗೊಂಡಿದೆ. ಇದನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಬಿಜೆಪಿ ಹೊರಟಿದೆ ಎಂದರು. ಕೋಲಾರದಲ್ಲಿ ಶಾಲಾ ಮಕ್ಕಳಿಂದ ಶೌಚಗುಂಡಿ ಸ್ವಚ್ಛ ಮಾಡಿಸಿರುವ ಪ್ರಕರಣದ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಶೌಚಗುಂಡಿಯನ್ನು ಶುಚಿಗೊಳಿಸುವುದು, ತಾಜ್ಯವನ್ನು ಸಾಗಿಸುವುದು ಎಲ್ಲವನ್ನೂ ತಾಂತ್ರಿಕತೆ ಉಪಯೋಗಿಸಿ ಕೈಗೊಳ್ಳಬೇಕು. ಮನುಷ್ಯರನ್ನು ಇದಕ್ಕೆ ಬಳಸಿಕೊಳ್ಳಬಾರದು ಎಂದು ದೇವರಾಜ ಅರಸು ಅವರ ಕಾಲದಲ್ಲೇ ಕಾನೂನನ್ನು ಮಾಡಲಾಗಿದೆ. ಹಾಗಿದ್ದರೂ ಶಾಲೆಯಲ್ಲಿ ಮಕ್ಕಳನ್ನು ಉಪಯೋಗಿಸುವಂತಹ ಕೆಲಸ ಯಾವ ಕಾರಣಕ್ಕೂ ಆಗಬಾರದು ಆ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.ನಿಗಮ ಮಂಡಳಿ ನೇಮಕಾತಿ ಕುರಿತಾಗಿ ವಿಳಂಭ ಮಾಡುತ್ತಿಲ್ಲ. ಈ ಸಂಬಂಧ ಯಾವುದೇ ಸಮಯ ನಿಗಧಿ ಮಾಡಿಲ್ಲ. ನಮ್ಮ ಮುಖ್ಯಮಂತ್ರಿ, ಅಧ್ಯಕ್ಷರು ದೆಹಲಿಗೆ ಹೋಗಿದ್ದಾರೆ. ಅವರು ತೀರ್ಮಾನಿಸಿ ಹೈ ಕಮಾಂಡ್ ಜೊತೆ ಚರ್ಚಿಸಿ ಅಂತಿಮ ಗೊಳಿಸುತ್ತಾರೆ. ಯಾವುದೇ ಗೊಂದಲಗಳಿಲ್ಲ ಎಂದರು.</p>  <p><strong>ದತ್ತ ಜಯಂತಿ ಶಾಂತಿಯುತವಾಗಿ ನಡೆಯಬೇಕು :&nbsp;</strong></p>  <p>ದತ್ತ ಪೀಠದ ಆಚರಣೆಗಳ ವಿಚಾರದಲ್ಲಿ ಕೋರ್ಟ್ ಆದೇಶದ ಪ್ರಕಾರವೇ ನಡೆದುಕೊಳ್ಳಲಾಗುತ್ತದೆ. ಕೋರ್ಟ್ ಆದೇಶ ಉಲ್ಲಂಘನೆ ಮಾಡಲು ಆಗುವುದಿಲ್ಲ. ವೈಯಕ್ತಿಕ ಅಭಿಪ್ರಾಯಗಳು ಲೆಕ್ಕಕ್ಕೆ ಬರುವುದಿಲ್ಲ ಎಂದರು .ದತ್ತಯಜಂತಿ ಕಾರ್ಯಕ್ರಮಗಳನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ಕಾಂಗ್ರೆಸಿಗರೇ ಹೇಳುತ್ತಿರುವ ಬಗ್ಗೆ ಅವರು ಮೇಲಿನಂತೆ ಪ್ರತಿಕ್ರಿಯಿಸಿದು.ಡಿಸೆಂಬರ್ 25 ರಂದು ನಡೆಯುವ ದತ್ತ ಜಯಂತಿ ಪ್ರಯುಕ್ತ ಇಲಾಖೆಯಿಂದ ಹಮ್ಮಿಕೊಳ್ಳಬೇಕಾದ ಕ್ರಮಗಳು ಹಾಗೂ ಶಾಂತಿಯಿಂದ ದತ್ತ ಜಯಂತಿ ಆಚರಿಸಲು ಅಗತ್ಯವಿರುವ ಕ್ರಮಗಳ ಬಗ್ಗೆ ಪರಿಶೀಲಿಸುತ್ತೇನೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಆಗಬೇಕಿರುವ ಕಾರ್ಯಗಳ ಕುರಿತು ಎಸ್ಪಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.</p> ]]></description>
            <media:content url="https://static-ai.asianetnews.com/images/01hbn2fpv68ycwp0n17sv953pr/parameshwar.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್‌ ಬಳಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಹೆಚ್ಚಳ]]></title>
            <link>https://kannada.asianetnews.com/coronavirus/increase-in-fever-cold-cough-in-children-after-covid-in-india-grg-s27yyh</link>
            <guid isPermaLink="true">https://kannada.asianetnews.com/coronavirus/increase-in-fever-cold-cough-in-children-after-covid-in-india-grg-s27yyh</guid>
            <pubDate>Mon, 09 Oct 2023 00:00:35 +0530</pubDate>
            <description><![CDATA[<p><strong>ನವದೆಹಲಿ(ಅ.09): </strong>ಕೋವಿಡ್‌ ಬಳಿಕ ದೇಶದ ಮಕ್ಕಳಲ್ಲಿ ಜ್ವರ ಹಾಗೂ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಕೋವಿಡ್‌ಗಿಂತ ಹಿಂದೆ ವರ್ಷಕ್ಕೆ 2-3 ಸಲ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದರೆ, ಈಗ ಅದು ನಾಲ್ಕಕ್ಕಿಂತ ಹೆಚ್ಚು ಸಲ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಈಗ ಮಕ್ಕಳಿಗೆ ಜ್ವರ, ನೆಗಡಿ ಹಾಗೂ ಶ್ವಾಸಕೋಶ ಸಂಬಂಧಿ ಅನಾರೋಗ್ಯ ಕಾಣಿಸಿಕೊಂಡರೆ ಅದು ಗುಣವಾಗುವುದೂ ತಡವಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.</p>  <p>ಸೋಷಿಯಲ್‌ ಮೀಡಿಯಾದಲ್ಲಿ ಸಮೀಕ್ಷೆ ನಡೆಸುವ ಲೋಕಲ್‌ ಸರ್ಕಲ್‌ ಸಂಸ್ಥೆಯು ದೇಶಾದ್ಯಂತ 317 ಜಿಲ್ಲೆಗಳ 31,000 ಪೋಷಕರಿಂದ ಪಡೆದ ಮಾಹಿತಿಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.<br /> ಶಾಲೆಗೆ ಹೋಗುವ ಮಕ್ಕಳು ಈಗ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಾನಾ ರೀತಿಯ ಇನ್‌ಫ್ಲುಯೆಂಜಾ ವೈರಸ್‌ಗಳು ದೇಶದಲ್ಲಿ ಹರಡುತ್ತಿರುವುದು ಅದಕ್ಕೆ ಕೋವಿಡ್‌ ಕಾರಣವಿರಬಹುದು. ಮಕ್ಕಳಿಂದ ಅವು ತಂದೆ-ತಾಯಿಗೂ ಹರಡುತ್ತಿವೆ ಎಂದು ಸಮೀಕ್ಷೆ ತಿಳಿಸಿದೆ.</p>  <p><a href="https://kannada.asianetnews.com/health-life/disease-x-could-bring-next-pandemic-kill-50-million-people-says-expert-ash-s1l4u7" onclick="gtagEvent(`search_topic`, 3)" rel="nofollow" target="_blank" title="disease x could bring next pandemic kill 50 million people says expert ash">ಶೀಘ್ರದಲ್ಲೇ ಅಪ್ಪಳಿಸಲಿದೆ ಕೋವಿಡ್‌ಗಿಂತ ಭೀಕರ ಸಾಂಕ್ರಾಮಿಕ ರೋಗ; 5 ಕೋಟಿ ಜನರನ್ನು ಕೊಲ್ಲಲಿದೆ ‘’‍X’’!</a></p>  <p>ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.30ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಕಳೆದ 12 ತಿಂಗಳಲ್ಲಿ 4-6 ಸಲ ಜ್ವರ, ನೆಗಡಿ, ಕೆಮ್ಮು ಬಂದಿದೆ ಎಂದಿದ್ದಾರೆ. ಶೇ.3ರಷ್ಟು ಪೋಷಕರು 7-12 ಸಲ ಬಂದಿದೆ ಎಂದಿದ್ದಾರೆ. ಶೇ.38ರಷ್ಟು ಪೋಷಕರು 2-3 ಸಲ ಬಂದಿದೆ ಎಂದಿದ್ದಾರೆ.</p>  <p>ವೈದ್ಯರು ಕೂಡ ಇದನ್ನು ಪುಷ್ಟೀಕರಿಸಿದ್ದು, ‘ಕೋವಿಡ್‌ ಬಳಿಕ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಖಂಡಿತ ಹೆಚ್ಚಾಗಿದೆ. ಜೊತೆಗೆ, ಅದು ಗುಣವಾಗಲು ಈಗ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಮೊದಲೆಲ್ಲಾ ನಾವು 5 ಅಥವಾ 10 ದಿನಗಳ ಕಾಲ ಆ್ಯಂಟಿಬಯೋಟಿಕ್‌ ನೀಡುತ್ತಿದ್ದೆವು. ಈಗ ಇನ್ನೂ ಹೆಚ್ಚಿನ ಅವಧಿಗೆ ನೀಡಬೇಕಾಗಿ ಬರುತ್ತಿದೆ. ಏಕೆಂದರೆ ಸೋಂಕಿನ ಪ್ರಮಾಣ ಹೆಚ್ಚಿರುತ್ತದೆ’ ಎಂದು ವೈದ್ಯರು ಹೇಳಿದ್ದಾರೆ.</p>  <p>ಕೋವಿಡ್‌ ಅವಧಿಯಲ್ಲಿ ಸುಮಾರು 2 ವರ್ಷ ಮನೆಯಲ್ಲೇ ಇದ್ದ ಮಕ್ಕಳು ಈಗ ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಹೋಗುತ್ತಿರುವುದು ಕೂಡ ಅವರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಕಾರಣವಿರಬಹುದು ಎಂದೂ ವೈದ್ಯರು ಊಹಿಸಿದ್ದಾರೆ.</p> ]]></description>
            <media:content url="https://static-ai.asianetnews.com/images/01g6ref8adhedf1p9bhz24qwm1/covid19-02.jpg" medium="image" height="400" width="760"/>
        </item>
        <item>
            <title><![CDATA[5 ತಿಂಗಳ ಬಳಿಕ ಕರ್ನಾಟಕದಲ್ಲಿ ಕೊರೋನಾಕ್ಕೆ ವೃದ್ಧ ಬಲಿ]]></title>
            <link>https://kannada.asianetnews.com/coronavirus/94-year-old-man-dies-due-to-covid19-after-5-months-in-karnataka-grg-s08tgc</link>
            <guid isPermaLink="true">https://kannada.asianetnews.com/coronavirus/94-year-old-man-dies-due-to-covid19-after-5-months-in-karnataka-grg-s08tgc</guid>
            <pubDate>Thu, 31 Aug 2023 12:15:48 +0530</pubDate>
            <description><![CDATA[<p><strong>ಬೆಂಗಳೂರು(ಆ.31):</strong> ರಾಜ್ಯದಲ್ಲಿ ಐದು ತಿಂಗಳ ಬಳಿಕ ಮತ್ತೆ ಕೊರೋನಾ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ಕಳೆದ ಮಾ.9 ರಂದು ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟ ವರದಿಯಾಗಿತ್ತು. ಇದೀಗ ಬೆಂಗಳೂರಿನ 94 ವರ್ಷದ ವೃದ್ಧ ಮೃತಪಟ್ಟಿದ್ದಾರೆ.&nbsp;</p>  <p>ಕಳೆದ ಆ.26 ರಂದು ಜ್ವರದಿಂದ ಬಳಲುತ್ತಿದ್ದ ಸೋಂಕಿತ ವೃದ್ಧರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆ.29ರ ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.&nbsp;</p>  <p><a href="https://kannada.asianetnews.com/state/investigation-into-procurement-of-covid-equipment-says-minister-dinesh-gundu-rao-grg-ry0m2d" onclick="gtagEvent(`search_topic`, 4)" rel="nofollow" target="_blank" title="Investigation into Procurement of Covid Equipment Says Minister Dinesh Gundu Rao grg">ಕೋವಿಡ್‌ ಉಪಕರಣ ಖರೀದಿ ಕುರಿತು ತನಿಖೆ: ಸಚಿವ ದಿನೇಶ್‌ ಗುಂಡೂರಾವ್‌</a></p>  <p>ಬುಧವಾರ ರಾಜ್ಯದಲ್ಲಿ ನಾಲ್ವರಲ್ಲಿ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ. ಸೋಂಕಿನಿಂದ ಮೂವರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 2,228 ಜನರಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, 8 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ. ಉಳಿದ ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p> ]]></description>
            <media:content url="https://static.asianetnews.com/images/01g6ref8adhedf1p9bhz24qwm1/covid19-02_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕದಲ್ಲಿ 374 ಮಂದಿಗೆ ಕೋವಿಡ್‌, ಶೂನ್ಯ ಸಾವು]]></title>
            <link>https://kannada.asianetnews.com/coronavirus/374-new-coronavirus-case-on-april-22nd-in-karnataka-grg-rtj2vn</link>
            <guid isPermaLink="true">https://kannada.asianetnews.com/coronavirus/374-new-coronavirus-case-on-april-22nd-in-karnataka-grg-rtj2vn</guid>
            <pubDate>Sun, 23 Apr 2023 02:30:36 +0530</pubDate>
            <description><![CDATA[<p><strong>ಬೆಂಗಳೂರು(ಏ.23):</strong> ರಾಜ್ಯದಲ್ಲಿ ಶನಿವಾರ 374 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 272 ಮಂದಿ ಗುಣಮುಖರಾಗಿದ್ದಾರೆ.</p>  <p>ಕಳೆದ 24 ಗಂಟೆಗಳ ಅವಧಿಯಲ್ಲಿ 17,319 ಕೊರೋನಾ ಪರೀಕ್ಷೆ ನಡೆಸಿದ್ದು, ಶೇ.2.15ರಷ್ಟು ಪಾಸಿಟಿವಿಟಿ ದರದಂತೆ 374 ಮಂದಿಗೆ ಸೋಂಕು ಖಚಿತವಾಗಿದೆ. ಸೋಂಕಿನಿಂದ 272 ಮಂದಿ ಗುಣಮುಖರಾಗಿದ್ದಾರೆ. ಕೊರೋನಾದಿಂದ ಮೃತಪಟ್ಟ ವರದಿ ಆಗಿಲ್ಲ.</p>  <p><a href="https://kannada.asianetnews.com/coronavirus/central-government-alert-for-8-states-including-karnataka-says-increasing-coronavirus-grg-rth8cs" rel="nofollow" target="_blank" title="ಕೋವಿಡ್‌ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ">ಕೋವಿಡ್‌ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ</a></p>  <p>ಒಟ್ಟು 2172 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೃಢಪಟ್ಟಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರ ಜಿಲ್ಲೆ 210, ಬೆಂಗಳೂರು ಗ್ರಾಮಾಂತರ 31, ಶಿವಮೊಗ್ಗ 26, ಮೈಸೂರು 15, ಉತ್ತರ ಕನ್ನಡ 14, ಹಾಸನ 11, ಬಳ್ಳಾರಿ 10, ಬಾಗಲಕೋಟೆ, ವಿಜಯನಗರ ತಲಾ 9, ದಾವಣಗೆರೆ 6, ರಾಯಚೂರು ಹಾಗೂ ಕಲಬುರಗಿಯಲ್ಲಿ ತಲಾ 5, ಬೆಳಗಾವಿ 4, ಧಾರವಾಡ ಹಾಗೂ ಕೊಪ್ಪಳದಲ್ಲಿ ತಲಾ 3, ಉಡುಪಿ, ಕೋಲಾರ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಹಾವೇರಿಯಲ್ಲಿ ತಲಾ 2, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ ಒಂದು ಪ್ರಕರಣ ಕಾಣಿಸಿಕೊಂಡಿವೆ. ಉಳಿದ ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.</p> ]]></description>
            <media:content url="https://static.asianetnews.com/images/01g5t1qd6sd17w5710pjp4hvhd/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್‌ ಹೆಚ್ಚಳ: ಕರ್ನಾಟಕ ಸೇರಿ 8 ರಾಜ್ಯಕ್ಕೆ ಕೇಂದ್ರ ಎಚ್ಚರಿಕೆ]]></title>
            <link>https://kannada.asianetnews.com/coronavirus/central-government-alert-for-8-states-including-karnataka-says-increasing-coronavirus-grg-rth8cs</link>
            <guid isPermaLink="true">https://kannada.asianetnews.com/coronavirus/central-government-alert-for-8-states-including-karnataka-says-increasing-coronavirus-grg-rth8cs</guid>
            <pubDate>Sat, 22 Apr 2023 03:00:36 +0530</pubDate>
            <description><![CDATA[<p><strong>ನವದೆಹಲಿ(ಏ.22): </strong>&nbsp;ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಇನ್ನೂ ಸಹ ಮುಗಿದಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿರುವ ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ.</p>  <p>ಈ ಕುರಿತಾಗಿ 8 ರಾಜ್ಯಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌, ‘ದೇಶದಲ್ಲಿ ಸಾಂಕ್ರಾಮಿಕ ಇನ್ನೂ ಸಹ ಮುಗಿದಿಲ್ಲ. ಹಾಗಾಗಿ ಯಾವುದೇ ಅಲಕ್ಷ್ಯ ತೋರದೇ ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಈವರೆಗೆ ಕೋವಿಡ್‌ ನಿಯಂತ್ರಣ ಕ್ರಮಗಳಿಂದ ನಾವು ಸಾಧಿಸಿದ್ದು ಇಲ್ಲವಾಗುತ್ತದೆ’ ಎಂದು ಹೇಳಿದ್ದಾರೆ.</p>  <p><a href="https://kannada.asianetnews.com/coronavirus/central-government-given-2141-crore-of-covid-vaccine-to-karnataka-says-k-sudhakar-grg-rst3ba" rel="nofollow" target="_blank">ಕರ್ನಾಟಕಕ್ಕೆ ಕೇಂದ್ರ ಕೊಟ್ಟಿದ್ದು 2,141 ಕೋಟಿ ಕೋವಿಡ್‌ ಲಸಿಕೆ: ಡಾ.ಕೆ.ಸುಧಾಕರ್‌</a></p>  <p>ದೇಶದಲ್ಲಿ ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಕೆಲವು ರಾಜ್ಯಗಳಲ್ಲಿ ದಾಖಲಾಗುತ್ತಿರುವ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ನ್ನು ದಾಟಿದೆ. ಇಂತಹ ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗುವುದನ್ನು ತಡೆಗಟ್ಟಲು ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾಗಿ ಆರಂಭಿಕ ಹಂತದಲ್ಲೇ ಸೋಂಕನ್ನು ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.</p>  <p>ಕರ್ನಾಟಕ, ಮಹಾರಾಷ್ಟ್ರ, ಕೇರಳ, ಹರ್ಯಾಣ, ದೆಹಲಿ, ರಾಜಸ್ಥಾನ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಕೇರಳದಲ್ಲಿ 14 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಉಳಿದಂತೆ ಹರ್ಯಾಣ (12), ದೆಹಲಿ (11), ತಮಿಳುನಾಡು (11) ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಏರಿದೆ.</p> ]]></description>
            <media:content url="https://static.asianetnews.com/images/01g5w3g7b4k6zpnzzsfhe348pb/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕಕ್ಕೆ ಕೇಂದ್ರ ಕೊಟ್ಟಿದ್ದು 2,141 ಕೋಟಿ ಕೋವಿಡ್‌ ಲಸಿಕೆ: ಡಾ.ಕೆ.ಸುಧಾಕರ್‌]]></title>
            <link>https://kannada.asianetnews.com/coronavirus/central-government-given-2141-crore-of-covid-vaccine-to-karnataka-says-k-sudhakar-grg-rst3ba</link>
            <guid isPermaLink="true">https://kannada.asianetnews.com/coronavirus/central-government-given-2141-crore-of-covid-vaccine-to-karnataka-says-k-sudhakar-grg-rst3ba</guid>
            <pubDate>Sun, 09 Apr 2023 02:00:35 +0530</pubDate>
            <description><![CDATA[<p><strong>ಬೆಂಗಳೂರು(ಏ.09): &nbsp;</strong>ಕೋವಿಡ್‌ ವೇಳೆ ಆರ್ಥಿಕ, ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಆದಾಗ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟನಾಯಕತ್ವ ತೋರಿದ್ದು, ಬಡ ದೇಶಗಳಿಗೆ ಕೋವಿಡ್‌ ಲಸಿಕೆ ಪೂರೈಸಿ ಹೃದಯ ಶ್ರೀಮಂತಿಕೆ ಮೆರೆದಿದ್ದರು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಬಣ್ಣಿಸಿದ್ದಾರೆ.</p>  <p>ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 220 ಕೋಟಿ ಮತ್ತು ರಾಜ್ಯದಲ್ಲಿ 12 ಕೋಟಿಗೂ ಅಧಿಕ ಲಸಿಕೆಗಳನ್ನು ನೀಡಲಾಗಿದೆ. ರಾಜ್ಯದಲ್ಲಿ 1.15 ಕೋಟಿ ಬೂಸ್ಟರ್‌ ಡೋಸ್‌ ನೀಡಲಾಗಿದೆ. ರಾಜ್ಯಕ್ಕೆ ಉಚಿತವಾಗಿ ನೀಡಿದ ಲಸಿಕೆಗಳ ಬೆಲೆ 2,141 ಕೋಟಿ ರು. ಆಗಿದ್ದು, ಅದನ್ನು ಕೇಂದ್ರವೇ ನೀಡಿದೆ. ಮುಂದುವರಿದ ದೇಶಗಳು ಸಹ ಕೋವಿಡ್‌ ಅನ್ನು ಭಾರತದಂತೆ ನಿರ್ವಹಣೆ ಮಾಡಲು ಸಾಧ್ಯವಾಗಲಿಲ್ಲ. ಅಮೆರಿಕ ಸೇರಿದಂತೆ ಹಲವು ದೇಶಗಳು ಮೊದಲ ಅಲೆಯಲ್ಲಿಯೇ ತತ್ತರಿಸಿಹೋಗಿದ್ದವು. ಮೊದಲ ಅಲೆಯಲ್ಲಿ ಭಾರತ ಉತ್ತಮವಾಗಿ ನಿಯಂತ್ರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಉಚಿತ ಅಕ್ಕಿ ನೀಡಿದರು. ರಾಜ್ಯದ್ದು ಸಹ ಸೇರಿ ಮೂರು ವರ್ಷಗಳ ಕಾಲ ತಲಾ 10 ಕೆಜಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.</p>  <p><a href="https://kannada.asianetnews.com/coronavirus/coronavirus-cases-may-rise-in-next-15-to-20-days-in-india-grg-rsraln" rel="nofollow" target="_blank" title="ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು">ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು</a></p>  <p><strong>ಲಸಿಕೆಯಲ್ಲಿ ರಾಜಕೀಯ:</strong></p>  <p>ಲಸಿಕೆ ಬರುವ ಮುನ್ನವೇ ಕಾಂಗ್ರೆಸ್‌ ರಾಜಕೀಯ ಆರಂಭಿಸಿತ್ತು. ದೇಶಕ್ಕೆ ತುರ್ತು ಪರಿಸ್ಥಿತಿ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ದೇಶವನ್ನು ಕಾಪಾಡುತ್ತವೆ. ಆದರೆ, ಕಾಂಗ್ರೆಸ್‌ ಎಲ್ಲದರಲ್ಲಿಯೂ ರಾಜಕಾರಣವನ್ನು ಬೆರೆಸಿದೆಯೇ ಹೊರತು, ಸರ್ಕಾರಕ್ಕೆ ಸಹಕಾರ ನೀಡಲಿಲ್ಲ. ಇದು ಜನರಿಗೆ ಮಾಡಿದ ಘೋರ ಅಪರಾಧ. ಆದರೂ ಪ್ರಧಾನಿಯವರ ನಾಯಕತ್ವದಲ್ಲಿ ಸಮರ್ಥವಾಗಿ ಕೋವಿಡ್‌ ಎದುರಿಸಿ ಹಿಂದಿನ ಸ್ಥಿತಿಗೆ ಮರಳಿದ್ದೇವೆ. ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸಿಕೊಂಡಿದೆ ಎಂದು ತಿಳಿಸಿದರು.</p>  <p>ಲಸಿಕೆಯನ್ನು ಅಪಹಾಸ್ಯ ಮಾಡಿ, ‘ಮೋದಿ ಲಸಿಕೆ’ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ, ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು. ಲಸಿಕೆ ಬಂದ ಬಳಿಕ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಂಶೋಧನಾ ಸಂಸ್ಥೆಗಳಿಗೆ ಅಪಮಾನ ಮಾಡಿದ್ದರು. ಪೋಲಿಯೋ ಲಸಿಕೆ ಬರಲು 23 ವರ್ಷ, ಹೆಪಟೈಟಿಸ್‌ ಬಿ ಲಸಿಕೆ ಬರಲು 30 ವರ್ಷವಾಯಿತು. ಕೋವಿಡ್‌ ಲಸಿಕೆ ಮಾತ್ರ ನಮ್ಮ ದೇಶದಲ್ಲಿಯೇ ತಯಾರಾಗಿ ಬೇಗ ಜನರಿಗೆ ದೊರೆಯಿತು ಎಂದರು.</p>  <p>ಇಡೀ ರಾಜ್ಯದಲ್ಲಿ 5-6 ಸಾವಿರ ಆಮ್ಲಜನಕ ಹಾಸಿಗೆಗಳಿದ್ದವು. ಕೆಲವೇ ತಿಂಗಳಲ್ಲಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್‌ ಕಾಲೇಜು ತನಕ 30 ಸಾವಿರ ಹಾಸಿಗೆಗಳಿಗೆ ಆಮ್ಲಜನಕ ಅಳವಡಿಸಲಾಯಿತು. 2,025 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಲಾಗಿದೆ. 1.12 ಕೋಟಿ ಜನರು ಟೆಲಿಕನ್ಸಲ್ಟೇಷನ್‌ ಮೂಲಕ ಆರೋಗ್ಯ ಸೇವೆ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ ಎಂದು ಹೇಳಿದರು.</p>  <p><a href="https://kannada.asianetnews.com/coronavirus/highest-number-of-coronavirus-cases-in-the-year-in-bengaluru-grg-rsf0b7" rel="nofollow" target="_blank">ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!</a></p>  <p><strong>ಕೋವಿಡ್‌ ನಿಯಂತ್ರಣದಲ್ಲಿದೆ, ಆದರೂ 3ನೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಿರಿ</strong></p>  <p>ಕಳೆದ ವಾರವಷ್ಟೇ ಕೋವಿಡ್‌ಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲಾಗಿದೆ. ಪರೀಕ್ಷೆ ಹೆಚ್ಚಳ, ಜೀನೋಮಿಕ್‌ ಸೀಕ್ವೆನ್ಸ್‌, ಆಸ್ಪತ್ರೆ ದಾಖಲು ಮೊದಲಾದವುಗಳ ಬಗ್ಗೆ ಗಮನಹರಿಸಲಾಗಿದೆ. ರಾಜ್ಯದಲ್ಲಿ ಈಗ ಕೋವಿಡ್‌ ನಿಯಂತ್ರಣದಲ್ಲಿದೆ. ಆದರೆ, ಜನರು ಮೂರನೇ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು. ಜತೆಗೆ ಜನಸಂದಣಿಯ ಪ್ರದೇಶಗಳಿಗೆ ಹೋಗಬಾರದು, ಮಾಸ್ಕ್‌ ಧರಿಸಬೇಕು. ಕೇಂದ್ರ ಸರ್ಕಾರ ಕಾನೂನು ಪ್ರಕಾರ ಎಲ್ಲವನ್ನೂ ಮಾಡುತ್ತದೆ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ರೂಪಿಸಲಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿಯೂ ಉತ್ತಮ ಯೋಜನೆಗಳನ್ನು ನೀಡಿದೆ. ಆದರೆ, ಕಾಂಗ್ರೆಸ್‌ ಪಕ್ಷ ಆಧಾರರಹಿತವಾಗಿ ಎಲ್ಲದಕ್ಕೂ ಆರೋಪ ಮಾಡುತ್ತಿದೆ ಎಂದು ಡಾ.ಸುಧಾಕರ್‌ ಹೇಳಿದರು.</p>  <p><strong>ಅಪಪ್ರಚಾರ ಮಾಡಿದ್ದ ಕಾಂಗ್ರೆಸ್ಸಿಗರಿಗೂ ಲಸಿಕೆ</strong></p>  <p>ಕೋವಿಡ್‌ ಲಸಿಕೆಯನ್ನು ಅಪಹಾಸ್ಯ ಮಾಡಿ, ‘ಮೋದಿ ಲಸಿಕೆ’ ಎಂದು ಕರೆಯಲಾಯಿತು. ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್‌ ಮಾಡಿತು. ಆದರೆ, ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರು ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.&nbsp;</p> ]]></description>
            <media:content url="https://static.asianetnews.com/images/01gm6cv9fzt0mr0ptzrkge6psz/sudhakar_760x400.jpg" medium="image" height="400" width="760"/>
        </item>
        <item>
            <title><![CDATA[ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು]]></title>
            <link>https://kannada.asianetnews.com/coronavirus/coronavirus-cases-may-rise-in-next-15-to-20-days-in-india-grg-rsraln</link>
            <guid isPermaLink="true">https://kannada.asianetnews.com/coronavirus/coronavirus-cases-may-rise-in-next-15-to-20-days-in-india-grg-rsraln</guid>
            <pubDate>Sat, 08 Apr 2023 00:30:35 +0530</pubDate>
            <description><![CDATA[<p><strong>ನವದೆಹಲಿ(ಏ.08): </strong>‘ದೇಶದಲ್ಲಿ ಕೋವಿಡ್‌ ಸೋಂಕು ಮುಂದಿನ 15ರಿಂದ 20 ದಿನಗಳಲ್ಲಿ ತಾರಕಕ್ಕೆ ಏರಬಹುದು. ಆದರೆ 4ನೇ ಅಲೆ ಉಂಟಾಗುವ ಭಯವಿಲ್ಲ. ಕೋವಿಡ್‌ ಸಾಂಕ್ರಾಮಿಕ ಈಗಾಗಲೇ ಎಂಡೆಮಿಕ್‌ ಹಂತಕ್ಕೆ ತಲುಪಿದ್ದು, ಲಕ್ಷಣಗಳು ತೀರಾ ಸೌಮ್ಯವಾಗಿವೆ. ಕೇವಲ ಕೆಮ್ಮು, ನೆಗಡಿಗೆ ಸೀಮಿತವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಸಾಕು’ ಎಂದು ತಜ್ಞರು ಶುಕ್ರವಾರ ಹೇಳಿದ್ದಾರೆ. ದೇಶದಲ್ಲಿ ಈಗ ನಿತ್ಯ 5-6 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾತಿ ಆರಂಭವಾಗಿದ್ದು, ಇದರ ನಡುವೆಯೇ ತಜ್ಞರ ಈ ಹೇಳಿಕೆ ಬಂದಿದೆ.</p>  <p>‘ಶುಕ್ರವಾರ ದೇಶದಲ್ಲಿ ಕಳೆದ ಸೆಪ್ಟೆಂಬರ್‌ನಿಂದಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ಮುಂದಿನ 20 ದಿನಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಬಹುದು. ದೇಶದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಬಹುದು. ಇದಾದ ಬಳಿಕ ಸೋಂಕು ಇಳಿಕೆಯಾಗಲಿದೆ’ ಎಂದು ಕೋವಿಡ್‌ ತಜ್ಞರಾದ ರಘುವಿಂದರ್‌ ಪರಾಶರ್‌ ಅವರು ಹೇಳಿದ್ದಾರೆ. ‘ಅಲ್ಲದೇ ದೇಶದಲ್ಲಿ ಈಗ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಎಕ್ಸ್‌ಬಿಬಿ.1.16 ಕಾರಣವಾಗಿದೆ. ಆದರೆ ಈ ಹಿಂದೆ 2ನೇ ಅಲೆಗೆ ಕಾರಣವಾಗಿದ್ದ ‘ಡೆಲ್ಟಾ’ ಉಪತಳಿಯಷ್ಟುಇದು ಶಕ್ತಿ ಹೊಂದಿಲ್ಲ’ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>  <p><a href="https://kannada.asianetnews.com/india-news/covid-19-raise-in-poll-bound-karnataka-and-6-other-state-center-ask-to-increase-testing-and-vaccination-ckm-rsr3r3" rel="nofollow" target="_blank">ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕ ಸೇರಿ 7 ರಾಜ್ಯದಲ್ಲಿ ಕೋವಿಡ್ ಆತಂಕ, ಹಾಟ್‌ಸ್ಪಾಟ್ ಗುರುತಿಸಲು ಸೂಚನೆ!</a></p>  <p><strong>ಸೋಂಕು ಹೆಚ್ಚಾದರೂ ಭಯವಿಲ್ಲ:</strong></p>  <p>ಕೋವಿಡ್‌ ತಾರಕಕ್ಕೇರಿದರೂ 4ನೇ ಅಲೆಯ ಭಯವಿಲ್ಲ. ಏಕೆಂದರೆ ಕೋವಿಡ್‌ ಸೋಂಕಿನಿಂದಾಗಿ ಈಗ ಸಾಮಾನ್ಯಕೆಮ್ಮು, ನೆಗಡಿ, ಗಂಟಲು ಕೆರೆತದಂಥ ಲಕ್ಷಣಗಳು ಮಾತ್ರ ಉಂಟಾಗುತ್ತಿವೆ. ಏಕೆಂದರೆ ಕೋವಿಡ್‌ ಬಹುತೇಕ ಎಂಡೆಮಿಕ್‌ ಹಂತಕ್ಕೆ ತಲುಪಿದೆ. ಸಾವು-ನೋವು, ಆಸ್ಪತ್ರೆ ದಾಖಲೀಕರಣವು 2ನೇ ಅಲೆಯಷ್ಟುಇರುವುದಿಲ್ಲ’ ಎಂದಿದ್ದಾರೆ.</p>  <p>‘ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹೆಚ್ಚಳವಾದರೂ ಸಹ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಇನ್ನು ಮುಂದೆ ಕೋವಿಡ್‌ ಸಹ ಸಾಮಾನ್ಯ ಶೀತ ಹರಡುವ ವೈರಸ್‌ನಂತೆ ಪದೇ ಪದೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಜನರು ಲಸಿಕೆ ಪಡೆದಿದ್ದಾರೆ ಹಾಗೂ ಈ ಹಿಂದೆ ಸೋಂಕಿಗೆ ಒಳಗಾದವರಲ್ಲಿ ಪ್ರತಿಕಾಯ ಉತ್ಪತ್ತಿ ಆಗಿವೆ. ಹೀಗಾಗಿ ಈಗ ಹೆಚ್ಚು ಕೇಸು ದಾಖಲಾಗುತ್ತಿದ್ದರೂ ಆಸ್ಪತ್ರೆ ದಾಖಲೀಕರಣ, ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. ಸೋಂಕಿತರು ಆಸ್ಪತ್ರೆಗೆ ಬಂದರೂ ಹೊರರೋಗಿಗಳ ವಿಭಾಗದಲ್ಲಿ ಅವರ ತಪಾಸಣೆ ನಡೆಸಿ ಮಾತ್ರೆ, ಚುಚ್ಚುಮದ್ದು ನೀಡಿ ಮನೆಗೆ ಕಳಿಸಲಾಗುತ್ತಿದೆ’ ಎಂದು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.</p>  <p><a href="https://kannada.asianetnews.com/coronavirus/highest-number-of-coronavirus-cases-in-the-year-in-bengaluru-grg-rsf0b7" rel="nofollow" target="_blank" title="ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!">ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!</a></p>  <p><strong>ಮುನ್ನೆಚ್ಚರಿಕೆ ಅಗತ್ಯ:</strong></p>  <p>‘ಆದರೆ ಲಕ್ಷಣಗಳು ಸೌಮ್ಯವಾಗಿದ್ದರೂ ಸೋಂಕಿನಿಂದ ರಕ್ಷಿಸಿಕೊಳ್ಳಲು ಹಿರಿಯ ನಾಗರಿಕರು ಮತ್ತು ಆರೋಗ್ಯ ಸಮಸ್ಯೆ ಇರುವವರು ಮಾಸ್‌್ಕ ಧರಿಸುವುದು ಸೇರಿ ಇತರ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಷ್ಟುಮಾಡಿದರೆ ಸಾಕು. ಸೋಂಕಿನಿಂದ ದೂರ ಉಳಿಯಬಹುದು’ ಎಂದು ಹರ್ಯಾಣದ ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್‌ ಗೌತಮ್‌ ಮೆನನ್‌ ಹೇಳಿದ್ದಾರೆ.</p>  <p><strong>ಸಿದ್ಧತೆ ಕೈಗೊಳ್ಳಲು ಕೇಂದ್ರದ ಸೂಚನೆ</strong></p>  <p>ನವದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ನಿರ್ವಹಣಾ ವ್ಯವಸ್ಥೆಗಳನ್ನು ಸುಧಾರಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಲಸಿಕಾಕರಣ ಹೆಚ್ಚಿಸಲು, ಜಿನೋಮ್‌ ಸೀಕ್ವೆನ್ಸಿಂಗ್‌ ನಡೆಸಲು ಹಾಗೂ ಕೋವಿಡ್‌ ಸನ್ನಡತೆ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದೆ.</p> ]]></description>
            <media:content url="https://static.asianetnews.com/images/01g5psqk0wqetn6ww5v4v7qppw/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ವರ್ಷದಲ್ಲೇ ಅತ್ಯಧಿಕ ಕೊರೋನಾ ಕೇಸ್‌..!]]></title>
            <link>https://kannada.asianetnews.com/coronavirus/highest-number-of-coronavirus-cases-in-the-year-in-bengaluru-grg-rsf0b7</link>
            <guid isPermaLink="true">https://kannada.asianetnews.com/coronavirus/highest-number-of-coronavirus-cases-in-the-year-in-bengaluru-grg-rsf0b7</guid>
            <pubDate>Sat, 01 Apr 2023 08:00:44 +0530</pubDate>
            <description><![CDATA[<p><strong>ಬೆಂಗಳೂರು(ಏ.01):</strong> &nbsp;ಪ್ರಸಕ್ತ ವರ್ಷದಲ್ಲೇ ಶುಕ್ರವಾರ ಅತಿ ಹೆಚ್ಚು 170 ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಈ ವರ್ಷದಲ್ಲಿ ನೂರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಮಾರ್ಚ್‌ 8ರಂದು 101 ಪ್ರಕರಣ, ಮಾ.26ರಂದು 120 ಪ್ರಕರಣ, ಮಾ.30ರಂದು 143 ಪ್ರಕರಣಗಳು ದಾಖಲಾಗಿದ್ದು, ಈವರೆಗಿನ ಅತ್ಯಧಿಕ ಸೋಂಕಿತ ಪ್ರಕರಣಗಳಾಗಿದ್ದವು.</p>  <p>ಕಳೆದ ವರ್ಷ ಸೆಪ್ಟೆಂಬರ್‌ 29ರಂದು 171 ಸೋಂಕಿತ ಪ್ರಕರಣಗಳು ದಾಖಲಾಗಿದ್ದು ಹೊರತುಪಡಿಸಿದರೆ ಪ್ರಸ್ತಕ ವರ್ಷದ ಮಾರ್ಚ್‌ 8ರಂದು ಮೊದಲ ಬಾರಿಗೆ ನೂರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗಿತ್ತು.</p>  <p><a href="https://kannada.asianetnews.com/coronavirus/even-if-corona-rising-there-is-no-possibility-of-new-wave-in-karnataka-says-experts-grg-rset54" rel="nofollow" target="_blank" title="ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?">ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?</a></p>  <p>ಇದೀಗ 170 ಸೋಂಕಿತ ಪ್ರಕರಣಗಳು ಪತ್ತೆಯಾಗುವ ಮೂಲಕ ಪಾಸಿಟಿವಿಟಿ ದರ ಶೇ.3.39 ದಾಖಲಾಗಿದೆ. ಸೋಂಕಿನಿಂದ 106 ಮಂದಿ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ಸದ್ಯ ನಗರದಲ್ಲಿ 551 ಸಕ್ರಿಯ ಸೋಂಕು ಪ್ರಕರಣಗಳಿವೆ. ಈ ಪೈಕಿ 41 ಮಂದಿ ಆಸ್ಪತ್ರೆಯಲ್ಲಿದ್ದು, 2 ಐಸಿಯು ವೆಂಟಿಲೇಟರ್‌, 5 ಮಂದಿ ಐಸಿಯು ಮತ್ತು ಓರ್ವ ಎಚ್‌ಡಿಯು ಮತ್ತು 33 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3411 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು 1,602 ರಾರ‍ಯಂಟಿಜನ್‌ ಮತ್ತು 1,809 ಆರ್‌ಟಿಪಿಸಿಆರ್‌ ಪರೀಕ್ಷೆಗಳು ನಡೆದಿವೆ.</p>  <p>ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡ 53 ಮಂದಿಯ ಪೈಕಿ 12 ಮಂದಿ ಮೊದಲ ಡೋಸ್‌, 16 ಮಂದಿ ಎರಡನೇ ಡೋಸ್‌ ಮತ್ತು 25 ಮಂದಿ ಬೂಸ್ಟರ್‌ ಡೋಸ್‌ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.</p> ]]></description>
            <media:content url="https://static.asianetnews.com/images/01g5q04nznx6j66w097qr2afx1/covid-test-03_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?]]></title>
            <link>https://kannada.asianetnews.com/coronavirus/even-if-corona-rising-there-is-no-possibility-of-new-wave-in-karnataka-says-experts-grg-rset54</link>
            <guid isPermaLink="true">https://kannada.asianetnews.com/coronavirus/even-if-corona-rising-there-is-no-possibility-of-new-wave-in-karnataka-says-experts-grg-rset54</guid>
            <pubDate>Sat, 01 Apr 2023 05:25:52 +0530</pubDate>
            <description><![CDATA[<p><strong>ಬೆಂಗಳೂರು(ಏ.01): </strong>ರಾಜ್ಯದಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಗುರುವಾರ ಹಾಗೂ ಶುಕ್ರವಾರ ಕ್ರಮವಾಗಿ 288 ಹಾಗೂ 286 ಪ್ರಕರಣಗಳು ವರದಿಯಾಗಿ ಆತಂಕ ಸೃಷ್ಟಿಸಿದೆ. ಆದರೂ, ಇದು ಕೊರೋನಾ ಅಲೆಯಾಗಿ ಮಾರ್ಪಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>  <p>ಶುಕ್ರವಾರ ರಾಜ್ಯದಲ್ಲಿ 286 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ, ಶಿವಮೊಗ್ಗದಲ್ಲಿ 71 ವರ್ಷದ ಮಹಿಳೆ, ದಾವಣಗೆರೆಯಲ್ಲಿ 51 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳಿಂದ 100ಕ್ಕೂ ಕಡಿಮೆ ಪ್ರಕರಣ ವರದಿಯಾಗುತ್ತಿದ್ದ ರಾಜ್ಯದಲ್ಲಿ ಕಳೆದ 15 ದಿನಗಳಿಂದ ಈಚೆಗೆ ಪ್ರಕರಣಗಳ ಸಂಖ್ಯೆ ಏರುಗತಿಯತ್ತ ಸಾಗಿದೆ. ಇದು ಜನರಲ್ಲಿ ಮತ್ತೊಂದು ಅಲೆ ಸೃಷ್ಟಿಯಾಗುವ ಆತಂಕ ಸೃಷ್ಟಿಸಿತ್ತು.</p>  <p><a href="https://kannada.asianetnews.com/coronavirus/covid-19-wearing-face-mask-mandatory-in-tamil-nadu-hospitals-from-april-1st-gvd-rseec0" rel="nofollow" target="_blank" title="ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್‌ ಕಡ್ಡಾಯ">ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್‌ ಕಡ್ಡಾಯ</a></p>  <p>ಆದರೆ, ಈ ಬಗ್ಗೆ ಪ್ರಕ್ರಿಯಿಸಿರುವ ವೈರಾಣು ತಜ್ಞ ಡಾ.ರವಿ, ಇದು ಕೊರೋನಾ ಅಲೆ ಉಂಟಾಗುವುದರ ಮುನ್ಸೂಚನೆಯಲ್ಲ. ಈಗ ಕೊರೋನಾ ಸೋಂಕನ್ನು ಹರಡುತ್ತಿರುವುದು ಎಕ್ಸ್‌ಬಿಬಿ1.6 ಮಾದರಿ ವೈರಾಣುವಾಗಿದ್ದು, ಇದು ಸಾಂಕ್ರಾಮಿಕವಾಗಿರುವ ಕಾರಣ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ, ಇದು ಗಂಭೀರ ಪ್ರಕರಣಗಳನ್ನು ಸೃಷ್ಟಿಸಲು ಸಾಧ್ಯವಿಲ್ಲವಾದ್ದರಿಂದ ಮತ್ತೊಂದು ಅಲೆಗೆ ಕಾರಣವಾಗಲಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.</p>  <p>ಇನ್ನು ಈ ಕೊರೋನಾ ಅಥವಾ ಯಾವುದೇ ವೈರಾಣು ಸೋಂಕಿಗೆ ಅಂತ್ಯ ಎಂಬುದೇ ಇರುವುದಿಲ್ಲ. ಪ್ರತಿ ವರ್ಷ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಆಯಾ ಕಾಲಕ್ಕೆ (ಸೀಸನ್‌) ತಕ್ಕಂತೆ ಕೆಲ ಪ್ರಕರಣ ವರದಿಯಾಗುತ್ತವೆ. ಆದರೆ ಇದನ್ನು ಮತ್ತೊಂದು ಅಲೆ ಎಂದು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.</p>  <p>ದೇಶದಲ್ಲೇ 4ನೇ ಅತಿ ಹೆಚ್ಚು ಸಕ್ರಿಯ ಸೋಂಕು ಹೊಂದಿರುವ ರಾಜ್ಯ ಕರ್ನಾಟಕ. ಗುರುವಾರ 288 ಪ್ರಕರಣ ಹಾಗೂ ಶುಕ್ರವಾರ 286 ಪ್ರಕರಣ ವರದಿಯಾಗಿದ್ದವು. ಹೀಗಾಗಿ ಸಕ್ರಿಯ ಸೋಂಕುಗಳ ಸಂಖ್ಯೆ ಮಾ.31ರ ವೇಳೆಗೆ 1,108ಕ್ಕೆ ತಲುಪಿತ್ತು. ಪಾಸಿಟಿವಿಟಿ ದರ ಕಳೆದ ಒಂದು ವಾರದಲ್ಲಿ ಶೇ.2.47ರಷ್ಟುವರದಿಯಾಗಿದೆ. ಶುಕ್ರವಾರ ಇದರ ಪ್ರಮಾಣ ಶೇ.2.87ರಷ್ಟಿತ್ತು. ಕೊರೋನಾ ಸೋಂಕಿನ ಪರೀಕ್ಷೆಗಳ ಹೆಚ್ಚಳದಿಂದ ಸೋಂಕು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿತ್ತು.</p>  <p><a href="https://kannada.asianetnews.com/coronavirus/3016-new-coronavirus-cases-in-a-day-in-india-after-6-six-months-grg-rscypw" rel="nofollow" target="_blank">ಒಂದೇ ದಿನ 3016 ಕೋವಿಡ್‌ ಕೇಸ್‌: 6 ತಿಂಗಳಲ್ಲೇ ಗರಿಷ್ಠ</a></p>  <p>ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕೊರೋನಾ ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲ ಮಾಡುತ್ತಿರುವುದರಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಬಹುತೇಕರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಮನೆಯಲ್ಲೇ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗುತ್ತಿದ್ದಾರೆ. ಕೊರೋನಾ ಮಾರ್ಗಸೂಚಿ ಪಾಲಿಸಿದರೆ ಈ ಪ್ರಕರಣಗಳೂ ಕಡಿಮೆಯಾಗುತ್ತವೆ ಎಂದು ಹೇಳಿದ್ದಾರೆ.</p>  <p><strong>ಶುಕ್ರವಾರ 286 ಮಂದಿಗೆ ಸೋಂಕು, 2 ಸಾವು:</strong></p>  <p>ರಾಜ್ಯದಲ್ಲಿ ಶುಕ್ರವಾರ 286 ಮಂದಿಗೆ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 170, ಶಿವಮೊಗ್ಗ 34, ಕಲಬುರಗಿ 13, ಧಾರವಾಡ 8, ಬಳ್ಳಾರಿ, ಉತ್ತರ ಕನ್ನಡ, ಕೋಲಾರದಲ್ಲಿ ತಲಾ 7, ರಾಯಚೂರು 5, ಹಾಸನ, ಬಾಗಲಕೋಟೆ ತಲಾ 3, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮೈಸೂರು, ಉಡುಪಿ ತಲಾ 2, ವಿಜಯಪುರ, ಕೊಡಗು, ಹಾವೇರಿ, ದಾವಣಗೆರೆ, ಬೆಳಗಾವಿಯಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.</p> ]]></description>
            <media:content url="https://static.asianetnews.com/images/01g5mymz9zpgr52hqa0d1grn12/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್‌ ಕಡ್ಡಾಯ]]></title>
            <link>https://kannada.asianetnews.com/coronavirus/covid-19-wearing-face-mask-mandatory-in-tamil-nadu-hospitals-from-april-1st-gvd-rseec0</link>
            <guid isPermaLink="true">https://kannada.asianetnews.com/coronavirus/covid-19-wearing-face-mask-mandatory-in-tamil-nadu-hospitals-from-april-1st-gvd-rseec0</guid>
            <pubDate>Sat, 01 Apr 2023 03:20:37 +0530</pubDate>
            <description><![CDATA[<p><strong>ನವದೆಹಲಿ (ಏ.01): </strong>ದೇಶದಲ್ಲಿ ದಿನೇ ದಿನೇ ಕೋವಿಡ್‌ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಏ.1ರಿಂದ ತಮಿಳುನಾಡು ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿದೆ. ಈ ನಡುವೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತುರ್ತು ಸಭೆ ನಡೆಸಿ, ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಮಿಳುನಾಡಿನಲ್ಲೂ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ಶನಿವಾರದಿಂದ ಕಡ್ಡಾಯಗೊಳಿಸಲಾಗಿದೆ.&nbsp;</p>  <p>ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರು ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ತಮಿಳುನಾಡಿನಲ್ಲಿ ಎಕ್ಸ್‌ಬಿಬಿ ಮತ್ತು ಬಿ.ಎ.2 ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿದೆ. ಹಾಗಾಗಿ ಮಾಸ್ಕ್‌ ಧರಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ಆರೋಗ್ಯ ಸಚಿವ ಮಾ ಸುಬ್ರಮಣಿಯನ್‌ ಕರೆ ನೀಡಿದ್ದಾರೆ.</p>  <p><a href="https://kannada.asianetnews.com/politics/allocation-of-ticket-based-on-opinion-of-activists-in-davanagere-says-shobha-karandlaje-gvd-rsea6u" rel="nofollow" target="_blank"><strong>ದಾವಣಗೆರೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ, ಟಿಕೆಟ್‌ ಹಂಚಿಕೆ: ಶೋಭಾ ಕರಂದ್ಲಾಜೆ</strong></a></p>  <p><strong>ಸಜ್ಜಾಗಿ- ಕೇಜ್ರಿವಾಲ್‌: ಇ</strong>ನ್ನು ದೆಹಲಿಯಲ್ಲಿ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಸ್ತುತ ದೆಹಲಿಯಲ್ಲಿರುವ ಪರಿಸ್ಥಿತಿ ಕಳವಳಕಾರಿಯಾಗಿಲ್ಲ. ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಆದರೂ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್‌ ಪರಿಸ್ಥಿತಿಯ ಮೇಲೆ ದೆಹಲಿ ಸರ್ಕಾರ ಕಣ್ಣಿಟ್ಟಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.'</p>  <p><strong>ಈ ವರ್ಷದ ಅತ್ಯಧಿಕ ಕೊರೋನಾ ಸೋಂಕು: </strong>ಬೆಂಗಳೂರಿನಲ್ಲಿ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು 143 ಕೊರೋನಾ ಸೋಂಕು ದೃಢ ಪ್ರಕರಣ ಗುರುವಾರ ದಾಖಲಾಗಿವೆ. ಮಾ.8ರಂದು 101 ಪ್ರಕರಣ, ಮಾ.26ರಂದು 120 ಪ್ರಕರಣ ದಾಖಲಾಗಿತ್ತು. ಕಳೆದ ವರ್ಷದ ಸೆ.29ರಂದು 171 ಪ್ರಕರಣ ಕಾಣಿಸಿಕೊಂಡಿದ್ದವು. ಅದಾದ ಬಳಿಕ ಮಾಚ್‌ರ್‍ 8ವರೆಗೆ ನೂರಕ್ಕಿಂತ ಹೆಚ್ಚು ಪ್ರಕರಣ ಕಾಣಿಸಿಕೊಂಡಿರಲಿಲ್ಲ. ಆದರೆ, ಮಾ.8 ರಿಂದ ಮಾ.30ರ ಅವಧಿಯಲ್ಲಿ ಮೂರು ಬಾರಿ ನೂರಕ್ಕಿಂತ ಹೆಚ್ಚಿನ ಕೊರೋನಾ ಸೋಂಕು ಪ್ರಕರಣ ಕಾಣಿಸಿಕೊಂಡಿರುವುದು ನಗರದಲ್ಲಿ ಆತಂಕ ಹೆಚ್ಚಿಸಿದೆ.</p>  <p><a href="https://kannada.asianetnews.com/state/pm-narendra-modis-visit-to-bandipur-on-april-9th-gvd-rse9dp" rel="nofollow" target="_blank"><strong>Chamarajanagar: ಏ.9ಕ್ಕೆ ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ?: ಸಫಾರಿಗೆ ಹೋಗ್ತಾರಂತೆ ಮೋದಿ</strong></a></p>  <p>ಇನ್ನು ಗುರುವಾರ ಪಾಸಿಟಿವಿಟಿ ದರ ಶೇ.3.09 ದಾಖಲಾಗಿದೆ. ಸೋಂಕಿನಿಂದ 43 ಜನ ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 487ಕ್ಕೆ ಏರಿಕೆಯಾಗಿದ್ದು, 42 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 228 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 7 ಮಂದಿ ಮೊದಲ ಡೋಸ್‌, 13 ಮಂದಿ ಎರಡನೇ ಡೋಸ್‌ ಮತ್ತು 208 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 3,609 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.</p> ]]></description>
            <media:content url="https://static.asianetnews.com/images/01g00wmznd0pcfnpb4q39sy3hf/new-coronavirus-variant-xe-01_760x400.jpg" medium="image" height="400" width="760"/>
        </item>
        <item>
            <title><![CDATA[ಒಂದೇ ದಿನ 3016 ಕೋವಿಡ್‌ ಕೇಸ್‌: 6 ತಿಂಗಳಲ್ಲೇ ಗರಿಷ್ಠ]]></title>
            <link>https://kannada.asianetnews.com/coronavirus/3016-new-coronavirus-cases-in-a-day-in-india-after-6-six-months-grg-rscypw</link>
            <guid isPermaLink="true">https://kannada.asianetnews.com/coronavirus/3016-new-coronavirus-cases-in-a-day-in-india-after-6-six-months-grg-rscypw</guid>
            <pubDate>Fri, 31 Mar 2023 05:31:08 +0530</pubDate>
            <description><![CDATA[<p><strong>ನವದೆಹಲಿ(ಮಾ.31): </strong>ದೇಶದಲ್ಲಿ ಮತ್ತೆ ಕೋವಿಡ್‌ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ದೇಶದಲ್ಲಿ ಗುರುವಾರ ಒಂದೇ ದಿನ 3,016 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಆರು ತಿಂಗಳ ಅವಧಿಯಲ್ಲೇ ದಾಖಲಾದ ಗರಿಷ್ಠ ಪ್ರಕರಣವಾಗಿದೆ.</p>  <p>ಕಳೆದ ವರ್ಷದ ಅಕ್ಟೋಬರ್‌ 2ರಂದು 3,375 ಕೋವಿಡ್‌ ಕೇಸು ದಾಖಲಾಗಿದ್ದವು. ಇದಾದ ನಂತರದ ಗರಿಷ್ಠ ಸೋಂಕಿನ ಪ್ರಮಾಣ ಇದಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 3, ದೆಹಲಿಯಲ್ಲಿ 2, ಹಿಮಾಚಲದಲ್ಲಿ 1, ಹಾಗೂ ಕೇರಳದಲ್ಲಿ 8 ಸೇರಿದಂತೆ ಒಟ್ಟು 14 ಸೋಂಕಿತರು ಸಾವನ್ನಪ್ಪಿದ್ದಾರೆ.</p>  <p><a href="https://kannada.asianetnews.com/coronavirus/215-new-coronavirus-cases-in-karnataka-on-march-30th-grg-rsb8bj" rel="nofollow" target="_blank" title="ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್‌ ಪತ್ತೆ...!">ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್‌ ಪತ್ತೆ...!</a></p>  <p>ಇನ್ನು ದೈನನಂದಿನ ಪಾಸಿಟಿವಿಟಿ ದರವು ಹೆಚ್ಚು ಎನ್ನಬಹುದಾದ 2.73 ರಷ್ಟುಹಾಗೂ ವಾರದ ಪಾಸಿಟಿವಿಟಿ ದರವು 1.71 ರಷ್ಟು ದಾಖಲಾಗಿದೆ. ಸೋಂಕಿತರ ಚೇತರಿಕೆಯ ಪ್ರಮಾಣವು 98.78 ರಷ್ಟುದಾಖಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 4.47 ಕೋಟಿ ಜನರಿಗೆ ಕೋವಿಡ್‌ ತಗುಲಿದ್ದು, ಒಟ್ಟು 220.65 ಕೋಟಿ ಡೋಸ್‌ ಕೋವಿಡ್‌ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.</p> ]]></description>
            <media:content url="https://static.asianetnews.com/images/01g5q04nznx6j66w097qr2afx1/covid-test-03_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್‌ ಪತ್ತೆ...!]]></title>
            <link>https://kannada.asianetnews.com/coronavirus/215-new-coronavirus-cases-in-karnataka-on-march-30th-grg-rsb8bj</link>
            <guid isPermaLink="true">https://kannada.asianetnews.com/coronavirus/215-new-coronavirus-cases-in-karnataka-on-march-30th-grg-rsb8bj</guid>
            <pubDate>Thu, 30 Mar 2023 07:03:19 +0530</pubDate>
            <description><![CDATA[<p><strong>ಬೆಂಗಳೂರು(ಮಾ.30):</strong> ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಬುಧವಾರ 215 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತನ್ಮೂಲಕ ಪ್ರಸಕ್ತ ವರ್ಷದಲ್ಲಿ ಎರಡನೇ ಬಾರಿಗೆ ಸೋಂಕಿನ ಪ್ರಕರಣಗಳು 200ರ ಗಡಿ ದಾಟಿದ್ದು, ಬುಧವಾರದ 215 ಪ್ರಕರಣ ಈ ವರ್ಷದ ಅತಿ ಹೆಚ್ಚು ಪ್ರಕರಣ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.&nbsp;</p>  <p>ಬುಧವಾರ 9,855 ಮಂದಿಗೆ ಪರೀಕ್ಷೆ ನಡೆಸಿದ್ದು ಶೇ.3.08 ಪಾಸಿಟಿವಿಟಿ ದರ ದಾಖಲಾಗಿದೆ. 114 ಮಂದಿ ಗುಣಮುಖ ಹೊಂದಿದ್ದು, 907 ಸಕ್ರಿಯ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ 75, ಶಿವಮೊಗ್ಗ 51, ಬಳ್ಳಾರಿ 16, ಕಲಬುರಗಿ 13, ಚಿಕ್ಕಮಗಳೂರು, ಮೈಸೂರು ತಲಾ 8, ಉತ್ತರ ಕನ್ನಡ 7, ರಾಯಚೂರು 6, ವಿಜಯಪುರ, ಕೋಲಾರ, ಹಾಸನದಲ್ಲಿ ತಲಾ 5, ಬೆಂಗಳೂರು ಗ್ರಾಮಾಂತರ 3, ಹಾವೇರಿಯಲ್ಲಿ ತಲಾ 3 ಕೇಸ್‌ ವರದಿಯಾಗಿದೆ.</p>  <p><a href="https://kannada.asianetnews.com/coronavirus/1890-new-coronavirus-cases-on-march-26th-in-india-grg-rs51qs" rel="nofollow" target="_blank" title="1890 ಹೊಸ ಕೋವಿಡ್‌ ಕೇಸ್‌: 149 ದಿನದ ದಾಖಲೆ">1890 ಹೊಸ ಕೋವಿಡ್‌ ಕೇಸ್‌: 149 ದಿನದ ದಾಖಲೆ</a></p>  <p><strong>2151 ಕೋವಿಡ್‌ ಪ್ರಕರಣ, 7 ಸಾವು: ಹೊಸ ಕೇಸಿನ ಪ್ರಮಾಣ 5 ತಿಂಗಳ ಗರಿಷ್ಠ</strong></p>  <p>ನವದೆಹಲಿ: ದೇಶದಲ್ಲಿ ದಿನೇ ದಿನೇ ಹೊಸ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದ್ದು ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 2151 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 5 ತಿಂಗಳ ದಾಖಲೆಯನ್ನು ದಾಟಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.1.51ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮಹಾರಾಷ್ಟ್ರ, ಕೇರಳದಲ್ಲಿ ತಲಾ ಮೂರು ಹಾಗೂ ಕರ್ನಾಟಕದಲ್ಲಿ ಒಬ್ಬರು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ ಗುಣಮುಖರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ರಿಯ ಪ್ರಕರಣಗಳು 11,903ಕ್ಕೆ ಏರಿಕೆಯಾಗಿ ಪ್ರಮಾಣವು ಶೇ.0.03ಕ್ಕೆ ಏರಿದೆ.</p>  <p>ದೇಶದಲ್ಲಿ ಈವರೆಗೂ 4.46 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದರೆ ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದು, 5.30 ಲಕ್ಷ ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇದುವರೆಗೂ 220.65 ಕೋಟಿ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.</p> ]]></description>
            <media:content url="https://static.asianetnews.com/images/01g6ref8adhedf1p9bhz24qwm1/covid19-02_760x400.jpg" medium="image" height="400" width="760"/>
        </item>
        <item>
            <title><![CDATA[1890 ಹೊಸ ಕೋವಿಡ್‌ ಕೇಸ್‌: 149 ದಿನದ ದಾಖಲೆ]]></title>
            <link>https://kannada.asianetnews.com/coronavirus/1890-new-coronavirus-cases-on-march-26th-in-india-grg-rs51qs</link>
            <guid isPermaLink="true">https://kannada.asianetnews.com/coronavirus/1890-new-coronavirus-cases-on-march-26th-in-india-grg-rs51qs</guid>
            <pubDate>Mon, 27 Mar 2023 00:00:35 +0530</pubDate>
            <description><![CDATA[<p><strong>ನವದೆಹಲಿ(ಮಾ.27):</strong> &nbsp;ಭಾರತದಲ್ಲಿ ಬೆಳಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆ ಅವಧಿಯಲ್ಲಿ 1890 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 149 ದಿನಗಳ ಗರಿಷ್ಠವಾಗಿದೆ. ಸೋಂಕಿಗೆ 7 ಮಂದಿ ಬಲಿಯಾಗಿದ್ದು, ಇವರಲ್ಲಿ ಕೇರಳದ 3, ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಇಬ್ಬರು ಇಬ್ಬರಿದ್ದಾರೆ.</p>  <p>ಹೊಸ ಪ್ರಕರಣಗಳ ಹೆಚ್ಚಳ ಹಾಗೂ ಗುಣಮುಖರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ರಿಯ ಪ್ರಕರಣಗಳ 9,433ಕ್ಕೆ ಏರಿಕೆಯಾಗಿದೆ. ಶೇ.1.56ರಷ್ಟು ದೈನಂದಿನ ಪಾಸಿಟಿವಿಟಿ ದರ ದಾಖಲಾಗಿದೆ.</p>  <p><a href="https://kannada.asianetnews.com/coronavirus/mock-drill-for-covid-preparedness-test-april-10th-and-11th-across-the-country-grg-rs36a1" rel="nofollow" target="_blank" title="ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌">ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌</a></p>  <p>ದೇಶದಲ್ಲಿ ಈವರೆಗೂ 4.47 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದು, ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದಾರೆ ಹಾಗೂ 5.30 ಲಕ್ಷ ಜನ ಸಾವನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಪ್ರಮಾಣವು ಶೇ.0.02ರಷ್ಟಿದೆ.<br /> ಭಾರತದ ಲಸಿಕಾಕರಣವು 220.65 ಕೋಟಿ ಡೋಸ್‌ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.</p> ]]></description>
            <media:content url="https://static.asianetnews.com/images/01g5psqk0wqetn6ww5v4v7qppw/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕೋವಿಡ್‌ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್‌]]></title>
            <link>https://kannada.asianetnews.com/coronavirus/mock-drill-for-covid-preparedness-test-april-10th-and-11th-across-the-country-grg-rs36a1</link>
            <guid isPermaLink="true">https://kannada.asianetnews.com/coronavirus/mock-drill-for-covid-preparedness-test-april-10th-and-11th-across-the-country-grg-rs36a1</guid>
            <pubDate>Sun, 26 Mar 2023 01:30:36 +0530</pubDate>
            <description><![CDATA[<p><strong>ನವದೆಹಲಿ(ಮಾ.26): &nbsp;</strong>ಕೋವಿಡ್‌ ಪ್ರಕರಣಗಳು ಹಾಗೂ ಜ್ವರಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಏ.10 ಮತ್ತು 11ರಂದು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.</p>  <p>ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ, ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ವೈದ್ಯಕೀಯ ಆಕ್ಸಿಜನ್‌ ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶನಿವಾರ ಜಂಟಿ ಸಲಹಾವಳಿಯನ್ನು ಹೊರಡಿಸಿವೆ.</p>  <p><a href="https://kannada.asianetnews.com/coronavirus/131-new-coronavirus-cases-on-march-24th-in-karnataka-grg-rs1ed6" rel="nofollow" target="_blank" title="ಕರ್ನಾಟಕದಲ್ಲಿ 131 ಮಂದಿಗೆ ಕೊರೋನಾ: ಪಾಸಿಟಿವಿಟಿ ಶೇ.2.65">ಕರ್ನಾಟಕದಲ್ಲಿ 131 ಮಂದಿಗೆ ಕೊರೋನಾ: ಪಾಸಿಟಿವಿಟಿ ಶೇ.2.65</a></p>  <p>ಮಾ.27ರಂದು ರಾಜ್ಯಗಳ ಜತೆ ವರ್ಚುವಲ್‌ ಸಭೆ ಆಯೋಜನೆಯಾಗಿದ್ದು, ಅಂದು ಅಣಕು ಕಾರ್ಯಾಚರಣೆಗೆ ಸಂಬಂಧಿಸಿದ ವಿವರಗಳನ್ನು ನೀಡಲಾಗುತ್ತದೆ ಎಂದು ಸಲಹಾವಳಿ ಹೇಳಿದೆ. ಕೆಲವು ರಾಜ್ಯಗಳಲ್ಲಿ ಕೋವಿಡ್‌ ಪರೀಕ್ಷೆ ಕುಸಿದಿದೆ. ಪ್ರತಿ 10 ಲಕ್ಷ ಜನರಿಗೆ 140 ಪರೀಕ್ಷೆಗಳು ನಡೆಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾನದಂಡ ನಿಗದಿಗೊಳಿಸಿದೆ. ಆದರೆ ಈಗ ನಡೆಯುತ್ತಿರುವ ಪರೀಕ್ಷೆಗಳ ಪ್ರಮಾಣ ಆ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂದು ಸಲಹಾವಳಿಯಲ್ಲಿ ಸರ್ಕಾರ ಬೇಸರ ವ್ಯಕ್ತಪಡಿಸಿದೆ.</p> ]]></description>
            <media:content url="https://static.asianetnews.com/images/01g5ygk4r17bad7ntq8jbzya9f/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕದಲ್ಲಿ 131 ಮಂದಿಗೆ ಕೊರೋನಾ: ಪಾಸಿಟಿವಿಟಿ ಶೇ.2.65]]></title>
            <link>https://kannada.asianetnews.com/coronavirus/131-new-coronavirus-cases-on-march-24th-in-karnataka-grg-rs1ed6</link>
            <guid isPermaLink="true">https://kannada.asianetnews.com/coronavirus/131-new-coronavirus-cases-on-march-24th-in-karnataka-grg-rs1ed6</guid>
            <pubDate>Sat, 25 Mar 2023 01:00:36 +0530</pubDate>
            <description><![CDATA[<p><strong>ಬೆಂಗಳೂರು(ಮಾ.25): </strong>&nbsp;ರಾಜ್ಯದಲ್ಲಿ ಶುಕ್ರವಾರ 131 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿನಿಂದಾಗಿ ಬೆಂಗಳೂರು ಗ್ರಾಮಾಂತರದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರದ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 5,179 ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ.2.65 ಪಾಸಿಟಿವಿಟಿ ದರದಂತೆ 131 ಮಂದಿಗೆ ಸೋಂಕು ದೃಢಪಟ್ಟಿದೆ.</p>  <p>ಬೆಂಗಳೂರು ಗ್ರಾಮಾಂತದಲ್ಲಿ ಐಎಲ್‌ಐ, ಜ್ವರ, ಅಧಿಕ ರಕ್ತದೊತ್ತಡದಂತಹ ಅನಾರೋಗ್ಯ ಸಮಸ್ಯೆಗಳಿಂದ ಮಾ.15 ರಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮಾ.20 ರಂದು ಮೃತಪಟ್ಟಿದ್ದರು. ಉಳಿದಂತೆ ಶುಕ್ರವಾರ 126 ಮಂದಿ ಗುಣಮುಖರಾಗಿದ್ದು 635 ಸಕ್ರಿಯ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 131 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 61, ಶಿವಮೊಗ್ಗ 27, ಚಿಕ್ಕಮಗಳೂರು 13, ಮೈಸೂರು 5, ಬಳ್ಳಾರಿ, ಹಾಸನ ತಲಾ 4 ಮಂದಿಗೆ ಸೋಂಕು ತಗುಲಿದೆ.</p>  <p><a href="https://kannada.asianetnews.com/coronavirus/goal-of-6-thousand-daily-corona-tests-in-bengaluru-says-tushar-girinath-gvd-rrwfu8" rel="nofollow" target="_blank" title="ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌">ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌</a></p>  <p>ಕೋಲಾರ, ದಾವಣಗೆರೆ ಜಿಲ್ಲೆಗಳಲ್ಲಿ ತಲಾ 3, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ 2, ಯಾದಗಿರಿ, ಮಂಡ್ಯ, ಕೊಪ್ಪಳ, ಬೀದರ್‌, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.</p> ]]></description>
            <media:content url="https://static.asianetnews.com/images/01g5ygk4r17bad7ntq8jbzya9f/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ನಿತ್ಯ 6 ಸಾವಿರ ಕೊರೋನಾ ಪರೀಕ್ಷೆ ಗುರಿ: ತುಷಾರ್‌ ಗಿರಿನಾಥ್‌]]></title>
            <link>https://kannada.asianetnews.com/coronavirus/goal-of-6-thousand-daily-corona-tests-in-bengaluru-says-tushar-girinath-gvd-rrwfu8</link>
            <guid isPermaLink="true">https://kannada.asianetnews.com/coronavirus/goal-of-6-thousand-daily-corona-tests-in-bengaluru-says-tushar-girinath-gvd-rrwfu8</guid>
            <pubDate>Wed, 22 Mar 2023 07:21:45 +0530</pubDate>
            <description><![CDATA[<p><strong>ಬೆಂಗಳೂರು (ಮಾ.22): </strong>ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳದ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆ ಪ್ರಮಾಣವನ್ನು 6 ಸಾವಿರಕ್ಕೆ ಏರಿಕೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕಾರಣ ದಿನಕ್ಕೆ ಆರು ಸಾವಿರ ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಆದರೆ, ನಿತ್ಯ ನಾಲ್ಕು ಸಾವಿರ ಮಂದಿ ಪರೀಕ್ಷೆ ಮಾಡುತ್ತಿದ್ದೇವೆ. ಮುಖ್ಯವಾಗಿ ಸೋಂಕಿತ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಹೆಚ್ಚಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಗರದಲ್ಲಿ ಕೊರೋನಾ ಪಾಸಿಟಿವ್‌ ದರ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ ಎಂದು ಹೇಳಿದರು.</p>  <p><strong>71 ಜನರಲ್ಲಿ ಕೊರೋನಾ: </strong>ನಗರದಲ್ಲಿ ಮಂಗಳವಾರ 71 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.8.32 ದಾಖಲಾಗಿದೆ. ಸೋಂಕಿನಿಂದ 38 ಜನ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. 427 ಸಕ್ರಿಯ ಸೋಂಕು ಪ್ರಕರಣಗಳಿದ್ದು, 68 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 62 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 16 ಮಂದಿ ಮೊದಲ ಡೋಸ್‌, 13 ಮಂದಿ ಎರಡನೇ ಡೋಸ್‌ ಮತ್ತು 33 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 756 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.</p>  <p><a href="https://kannada.asianetnews.com/education/karnataka-high-court-rejects-postponement-of-5th-8th-class-board-exams-gvd-rrwb80" rel="nofollow" target="_blank"><strong>5, 8ನೇ ಕ್ಲಾಸ್‌ ಪರೀಕ್ಷೆ ಮುಂದೂಡಿಕೆಗೆ ಹೈಕೋರ್ಟ್‌ ನಕಾರ</strong></a></p>  <p><strong>ರಾಜ್ಯದಲ್ಲಿ 5.21%ಕ್ಕೆ ಜಿಗಿದ ಪಾಸಿಟಿವಿಟಿ ದರ: </strong>ರಾಜ್ಯದಲ್ಲಿ ಸೋಮವಾರ 71 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿನ ಪಾಸಿಟಿವಿಟಿ ದರ ಶೇ.5.21ರಷ್ಟುದಾಖಲಾಗುವ ಮೂಲಕ ಆತಂಕ ಸೃಷ್ಟಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ಶೇ.1.5 ರಿಂದ ಶೇ.3ರಷ್ಟುಪಾಸಿಟಿವಿಟಿ ದರದೊಂದಿಗೆ ಸೋಂಕು ವರದಿಯಾಗುತ್ತಿತ್ತು. ಆದರೆ, ಇದೀಗ ಕೊನೆಯದಾಗಿ ಮೂರನೇ ಅಲೆ ವೇಳೆ ವರದಿಯಾಗಿದ್ದಂತೆ ಶೇ.5.21 ರಷ್ಟು ಪಾಸಿಟಿವಿಟಿ ದರದಲ್ಲಿ ಸೋಂಕು ಕಾಣಿಸಿಕೊಂಡಿದೆ. ರೋಗಾಣು ತಜ್ಞರ ಪ್ರಕಾರ, ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಾದರೆ ಸೋಂಕು ಉಲ್ಬಣಿಸಿದೆ ಎಂದರ್ಥ. ಈ ಹಿನ್ನೆಲೆಯಲ್ಲಿ ಸೋಮವಾರದ ವರದಿ ಆತಂಕ ಉಂಟು ಮಾಡಿದೆ.</p>  <p><a href="https://kannada.asianetnews.com/state/another-life-threatening-call-to-nitin-gadkaris-office-in-the-name-of-prisoner-of-hindalaga-gvd-rrwacg" rel="nofollow" target="_blank"><strong>ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ</strong></a></p>  <p>ಕಳೆದ 24 ಗಂಟೆಗಳ ಅವಧಿಯಲ್ಲಿ 883 ಪರೀಕ್ಷೆ ನಡೆಸಿದ್ದು 71 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 71 ಮಂದಿ ಗುಣಮುಖರಾಗಿದ್ದು 615 ಸಕ್ರಿಯ ಸೋಂಕಿತರು ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 71 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 53, ಚಿತ್ರದುರ್ಗ 4, ಮೈಸೂರು 3, ಬಳ್ಳಾರಿ, ಕಲಬುರಗಿ, ಕೊಡಗು ಜಿಲ್ಲೆಗಳಲ್ಲಿ ತಲಾ ಎರಡು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಮಂಡ್ಯ, ರಾಯಚೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ.</p> ]]></description>
            <media:content url="https://static.asianetnews.com/images/01g2n17w90zyek8wvs15qst12x/tushar-girinath_760x400.jpg" medium="image" height="400" width="760"/>
        </item>
        <item>
            <title><![CDATA[ಈ ವರ್ಷ ಕರ್ನಾಟಕದಲ್ಲಿ ಕೋವಿಡ್‌ಗೆ ಮೊದಲ ಬಲಿ]]></title>
            <link>https://kannada.asianetnews.com/coronavirus/first-covid-patient-dies-in-karnataka-2023-grg-ron15w</link>
            <guid isPermaLink="true">https://kannada.asianetnews.com/coronavirus/first-covid-patient-dies-in-karnataka-2023-grg-ron15w</guid>
            <pubDate>Wed, 18 Jan 2023 00:30:35 +0530</pubDate>
            <description><![CDATA[<p><strong>ಬೆಂಗಳೂರು(ಜ.18): </strong>&nbsp;ಪ್ರಸಕ್ತ ವರ್ಷದಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಕೊಪ್ಪಳದಲ್ಲಿ 65 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಮಂಗಳವಾರ 17 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. ಜ.15 ರಂದು ಕೊಪ್ಪಳದಲ್ಲಿ ಕೊರೋನಾ ತಗುಲಿದ್ದ ವೃದ್ಧೆ ಸಾವಿಗೀಡಾಗಿದ್ದು, ಜ.17ರಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ವರದಿಯಾಗಿದೆ. ವೃದ್ಧೆಗೆ ಕ್ಷಯ (ಟಿಬಿ) ಕೂಡಾ ಇತ್ತು.</p>  <p>7,716 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 0.2 ರಷ್ಟುದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಐದು ಸಾವಿರ ಹೆಚ್ಚು ನಡೆಸಲಾಗಿದೆ. ಹೊಸ ಪ್ರಕರಣಗಳು 7 ಇಳಿಕೆಯಾಗಿವೆ. (ಸೋಮವಾರ 24 ಪ್ರಕರಣ, ಶೂನ್ಯ ಸಾವು).</p>  <p><a href="https://kannada.asianetnews.com/karnataka-districts/6-thousand-covishield-vaccine-came-to-uttara-kannada-district-from-belagavi-gvd-rold91" rel="nofollow" target="_blank" title="ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂತು 6 ಸಾವಿರ ಕೋವಿಶೀಲ್ಡ್ ಲಸಿಕೆ">ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂತು 6 ಸಾವಿರ ಕೋವಿಶೀಲ್ಡ್ ಲಸಿಕೆ</a></p>  <p>ಬೆಂಗಳೂರು ಒಂದರಲ್ಲಿಯೇ 17 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪ್ರಸ್ತುತ 103 ಸಕ್ರಿಯ ಕೊರೋನಾ ಸೋಂಕಿತರಿದ್ದು, ಈ ಪೈಕಿ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 96 ಮಂದಿ ಮನೆಯ ಆರೈಕೆಯಲ್ಲಿದ್ದಾರೆ.</p>  <p><strong>ವರ್ಷದ ಮೊದಲ ಸಾವು:</strong></p>  <p>ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. ಜ.15 ರಂದು ಕೊಪ್ಪಳದಲ್ಲಿ ಕೊರೋನಾ ತಗುಲಿದ್ದ ವೃದ್ಧೆ ಸಾವಿಗೀಡಾಗಿದ್ದು, ಜ.17ರಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ವರದಿಯಾಗಿದೆ. ವೃದ್ಧೆಗೆ ಕ್ಷಯ (ಟಿಬಿ) ಕೂಡಾ ಇತ್ತು. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p> ]]></description>
            <media:content url="https://static.asianetnews.com/images/01g5t1qd6sd17w5710pjp4hvhd/covid19-01_760x400.jpg" medium="image" height="400" width="760"/>
        </item>
        <item>
            <title><![CDATA[ಕರ್ನಾಟಕದ ಮೇಲೆ ‘ಚೀನಾ ಕೊರೋನಾ ಅಲೆ’ ಪ್ರಭಾವವಿಲ್ಲ?]]></title>
            <link>https://kannada.asianetnews.com/coronavirus/no-impact-of-china-wave-on-karnataka-grg-roas63</link>
            <guid isPermaLink="true">https://kannada.asianetnews.com/coronavirus/no-impact-of-china-wave-on-karnataka-grg-roas63</guid>
            <pubDate>Wed, 11 Jan 2023 07:30:35 +0530</pubDate>
            <description><![CDATA[<p><strong>ಬೆಂಗಳೂರು(ಜ.11):</strong> ಚೀನಾ ಸೇರಿದಂತೆ ವಿದೇಶಗಳಲ್ಲಿ ಕೊರೋನಾ ಆರ್ಭಟ ಆರಂಭವಾಗಿ ಮೂರು ವಾರ ಕಳೆದರೂ ರಾಜ್ಯದಲ್ಲಿ ಸೋಂಕಿನ ಹೊಸ ಪ್ರಕರಣ, ಪಾಸಿಟಿವಿಟಿ ದರ, ಸಾವು, ಆಸ್ಪತ್ರೆ ದಾಖಲಾತಿ ಸೇರಿದಂತೆ ಕೊರೋನಾ ಎಲ್ಲಾ ಅಂಶಗಳು ಸಂಪೂರ್ಣ ನಿಯಂತ್ರಣದಲ್ಲಿವೆ. ಮಾತ್ರವಲ್ಲದೇ ಒಬ್ಬರಲ್ಲಿಯೂ ಬಿಎಫ್‌.7 ರೂಪಾಂತರಿ ಪತ್ತೆಯೇ ಆಗಿಲ್ಲ. ಹೊಸವರ್ಷದಿಂದೀಚೆಗೆ ಒಬ್ಬರ ಸಾವೂ ಆಗಿಲ್ಲ. ವಾರದಿಂದ ವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳ ಇಳಿಮುಖ ಕೂಡಾ ಆರಂಭವಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಉಂಟಾಗುವ ಆತಂಕ ದೂರವಾಗಿದೆ ಎಂದು ವಿಶ್ಲೇಷಿಸಲಾಗಿದೆ.</p>  <p>ಡಿಸೆಂಬರ್‌ ಮೂರನೇ ವಾರದಲ್ಲಿ ನೆರೆಯ ಚೀನಾದಲ್ಲಿ ಕೊರೋನಾ ಹೊಸ ರೂಪಾಂತರಿ ಬಿಎಫ್‌.7 ಪತ್ತೆಯಾಗಿ ಅತ್ಯಂತ ವೇಗವಾಗಿ ಹಬ್ಬಿತ್ತು. ಕೆಲ ದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಗೆ ಉಂಟಾಗಿ ಕೊರೋನಾ ನಾಲ್ಕನೇ ಅಲೆ ಎಂದು ಕರೆಯಲಾಗಿತ್ತು. ಜತೆಗೆ ಭಾರತಕ್ಕೂ ಹೊಸ ರೂಪಾಂತರಿ ದಾಳಿ ಮಾಡುವ ಆತಂಕ ಉಂಟಾಗಿತ್ತು. ಇದರಿಂದಲೇ ವಿದೇಶದಿಂದ ಆಗಮಿಸುವವರ ಸೋಂಕು ತಪಾಸಣೆ ಆರಂಭಿಸಿ, ರಾಜ್ಯಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿತ್ತು. ಕರ್ನಾಟಕ ಸರ್ಕಾರವು ಕೂಡಾ ಮಾಸ್‌್ಕಗೆ ಸಲಹೆ ನೀಡಿ, ಸೋಂಕು ಪರೀಕ್ಷೆ, ವಂಶವಾಹಿ ಪರೀಕ್ಷೆ ಹೆಚ್ಚಳ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿತ್ತು. ಸದ್ಯ ಮೂರು ವಾರಗಳಾಗಿದ್ದು, ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಹೊಸ ಪ್ರಕರಣ 30 ಆಸುಪಾಸಿನಲ್ಲಿದ್ದು, ಪಾಸಿಟಿವಿಟಿ ದರ ಸರಾಸರಿ 0.3ರಷ್ಟಿದೆ. ಆಸ್ಪತ್ರೆಯ ನಾಲ್ಕು ಮಂದಿ ಮಾತ್ರಚಿಕಿತ್ಸೆ (ಸಾಮಾನ್ಯ ವಾರ್ಡ್‌ನಲ್ಲಿ) ಪಡೆಯುತ್ತಿದ್ದಾರೆ.</p>  <p><a href="https://kannada.asianetnews.com/coronavirus/more-antibodies-in-those-who-received-covishield-than-covaxin-grg-ro4ic0" rel="nofollow" target="_blank" title="ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಪಡೆದವರಿಗೆ ಹೆಚ್ಚು ಪ್ರತಿಕಾಯ: ಅಧ್ಯಯನ">ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಪಡೆದವರಿಗೆ ಹೆಚ್ಚು ಪ್ರತಿಕಾಯ: ಅಧ್ಯಯನ</a></p>  <p><strong>ಇಳಿಮುಖ ಆರಂಭ:</strong></p>  <p>ಡಿಸೆಂಬರ್‌ ಕೊನೆಯ ವಾರ ಹಾಗೂ ಜನವರಿ ಮೊದಲ ವಾರಕ್ಕೆ ಹೋಲಿಸಿದರೆ ಸೋಂಕು ಪ್ರಕರಣಗಳು ಹಾಗೂ ಪಾಸಿಟಿವಿಟಿ ದರ ಅರ್ಧದಷ್ಟುಕಡಿಮೆಯಾಗಿದೆ. ಡಿ.28 ರಿಂದ ಜ.3ವರೆಗೂ 67 ಸಾವಿರ ಸೋಂಕು ಪರೀಕ್ಷೆ ನಡೆದಿದ್ದು, 465 ಪ್ರಕರಣಗಳು ವರದಿಯಾಗಿ ಶೇ.0.6ರಷ್ಟುಪಾಸಿಟಿವಿಟಿ ದರ ದಾಖಲಾಗಿತ್ತು. ಒಬ್ಬರು ಸಾವಿಗೀಡಾಗಿದ್ದರು. ಆದರೆ, ಜ.4 ರಿಂದ ಜ.10ವರೆಗೂ 67 ಸಾವಿರ ಪರೀಕ್ಷೆ ನಡೆಸಿದ್ದು, 235 ಪ್ರಕರಣಗಳು ವರದಿಯಾಗಿ ಶೇ.0.3ರಷ್ಟುಪಾಸಿಟಿವಿಟಿ ದರ ದಾಖಲಾಗಿತ್ತು. ಸಾವು ಒಂದೂ ವರದಿಯಾಗಿಲ್ಲ. ಈ ಮೂಲಕ ಒಂದು ವಾರಕ್ಕೆ ಸೋಂಕು ಅರ್ಧಕ್ಕರ್ಧ ತಗ್ಗಿದೆ ಎನ್ನುತ್ತಿವೆ ಅಂಶ ಅಂಶಗಳು.</p>  <p><a href="https://kannada.asianetnews.com/state/omicron-xbb-most-prevalent-variant-circulating-in-india-says-insacog-gvd-rnxso0" rel="nofollow" target="_blank">Corona Crisis: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ</a></p>  <p><strong>ಒಬ್ಬರಲ್ಲೂ ಪತ್ತೆಯಾಗಿಲ್ಲ ಬಿಎಫ್‌.7:</strong></p>  <p>ಡಿ.24 ರಿಂದ ವಿದೇಶದಿಂದ ಆಗಮಿಸಿದವರ ಪೈಕಿ ಒಟ್ಟು 25 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಲ್ಲರ ಮಾದರಿಯನ್ನು ವಂಶವಾಹಿ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ಈ ಹಿಂದೆ ಕಾಣಿಸಿಕೊಂಡಿರುವ ಒಮಿಕ್ರೋನ್‌ ತಳಿ ತಗುಲಿರುವುದು ಪತ್ತೆಯಾಗಿದೆ. ಹೊಸ ತಳಿಯಾದ ಬಿಎಫ್‌7 ದೃಢಪಟ್ಟಿಲ್ಲ. ಜತೆಗೆ ಸೋಂಕಿನ ತೀವ್ರತೆ ಹೆಚ್ಚಿರುವವರ ವಂಶವಾಹಿ ಪರೀಕ್ಷೆ ನಡೆಸಿದ್ದು, ಯಾರಲ್ಲಿಯೂ ಬಿಎಫ್‌ 7 ಪತ್ತೆಯಾಗಿಲ್ಲ. ಹೊಸ ವರ್ಷದಿಂದ ಈಚೆಗೆ (10 ದಿನ) ಸೋಂಕು ಹೆಚ್ಚಿರುವ ದೇಶಗಳಿಂದ ಬಂದ 1,118 ಪ್ರಯಾಣಿಕರನ್ನು ತಪಾಸಣೆ ನಡೆಸಿದ್ದು, ಕೇವಲ 9 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಕಡಿಮೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>  <p><strong>ಹೊಸ ವರ್ಷ ಸಂಭ್ರಮದಿಂದಲೂ ಹೆಚ್ಚಾಗಿಲ್ಲ:</strong></p>  <p>ಇನ್ನೊಂದೆಡೆ ಹೊಸವರ್ಷ ಸಂಭ್ರಮಾಚರಣೆಯಿಂದ ಸೋಂಕು ಹೆಚ್ಚಾಗುತ್ತದೆ ಎಂಬ ಆತಂಕವೂ ಇತ್ತು. ಆದರೆ, 10 ದಿನ ಕಳೆದಿದ್ದು, ಪಾಸಿಟಿವಿಟಿ ದರ, ಸೋಂಕಿತರ ಆಸ್ಪತ್ರೆ ದಾಖಲಾತಿ ಹೆಚ್ಚಳವಾಗಿಲ್ಲ. ಹೊಸವರ್ಷದಿಂದೀಚೆಗೆ ಒಬ್ಬ ಕೊರೋನಾ ಸೋಂಕಿತರ ಸಾವು ಕೂಡಾ ವರದಿಯಾಗಿಲ್ಲ.</p> ]]></description>
            <media:content url="https://static.asianetnews.com/images/01g7d0f33p0e6rv7sxd2c7z1nr/covid19-03_760x400.jpg" medium="image" height="400" width="760"/>
        </item>
        <item>
            <title><![CDATA[ಕೋವ್ಯಾಕ್ಸಿನ್‌ಗಿಂತ ಕೋವಿಶೀಲ್ಡ್‌ ಪಡೆದವರಿಗೆ ಹೆಚ್ಚು ಪ್ರತಿಕಾಯ: ಅಧ್ಯಯನ]]></title>
            <link>https://kannada.asianetnews.com/coronavirus/more-antibodies-in-those-who-received-covishield-than-covaxin-grg-ro4ic0</link>
            <guid isPermaLink="true">https://kannada.asianetnews.com/coronavirus/more-antibodies-in-those-who-received-covishield-than-covaxin-grg-ro4ic0</guid>
            <pubDate>Sun, 08 Jan 2023 00:00:35 +0530</pubDate>
            <description><![CDATA[<p><strong>ನವದೆಹಲಿ(ಜ.08): </strong>ಕೋವಿಡ್‌ ಸೋಂಕು ತಡೆಗಾಗಿ ನೀಡಲಾಗುವ ಲಸಿಕೆಗಳ ಪೈಕಿ ಕೋವ್ಯಾಕ್ಸಿನ್‌ ಪಡೆದವರಿಗಿಂತ ಕೋವಿಶೀಲ್ಡ್‌ ಪಡೆದವರ ದೇಹದಲ್ಲೇ ಹೆಚ್ಚು ಪ್ರತಿಕಾಯ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಮೂಲ ಕೋವಿಡ್‌ ವೈರಸ್‌ ಮತ್ತು ಅದರ ಹಲವು ಉಪತಳಿಗಳ ವಿಷಯದಲ್ಲೂ ಇದು ಸಾಬೀತಾಗಿದೆ ಎಂದು ವರದಿ ಹೇಳಿದೆ.</p>  <p>ಬೆಂಗಳೂರು ನಗರ ಹಾಗೂ ಗ್ರಾಮೀಣ ಮತ್ತು ಪುಣೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆದ 18-45ರ ವಯೋಮಾನದ 691 ಜನರ ಮೇಲೆ 2021ರ ಜೂನ್‌ 2022ರ ಜನವರಿ ಅವಧಿಯಲ್ಲಿ ನಡೆಸಿದ ಪರೀಕ್ಷೆ ವೇಳೆ ಈ ಅಂಶ ಕಂಡುಬಂದಿದೆ ಎಂದು ವರದಿ ಹೇಳಿದೆ. ಇನ್ನೂ ತಜ್ಞರ ವಿಶ್ಲೇಷಣೆಗೆ ಒಳಪಡದ ಈ ಅಧ್ಯಯನ ವರದಿಯನ್ನು ‘ಮೆಡ್‌ಆರ್‌ಎಕ್ಸ್‌ಐವಿ’ ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.</p>  <p><a href="https://kannada.asianetnews.com/state/omicron-xbb-most-prevalent-variant-circulating-in-india-says-insacog-gvd-rnxso0" rel="nofollow" target="_blank" title=" Corona Crisis: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ">CORONA CRISIS: ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ</a></p>  <p>ಲಸಿಕೆ ಪೂರ್ವ ಸಮಯದಲ್ಲಿ ವ್ಯಕ್ತಿಗಳ ದೇಹದಲ್ಲಿ ಇದ್ದ ರೋಗ ನಿರೋಧಕ ಮಟ್ಟಕ್ಕಿಂತ, ಲಸಿಕೆ ಪಡೆದ ಬಳಿಕ ವ್ಯಕ್ತಿಗಳ ದೇಹದಲ್ಲಿ ಕೋವಿಡ್‌ ವೈರಸ್‌ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿದೆ. ಆದರೆ ಈ ಪೈಕಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್‌ ಲಸಿಕೆ ಪಡೆದವರಿಗಿಂತ, ಕೋವಿಶೀಲ್ಡ್‌ ಲಸಿಕೆ ಪಡೆದವರ ದೇಹದಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಪ್ರತಿಕಾಯ ಪರೀಕ್ಷೆಯಲ್ಲಿ ಕಂಡುಬಂದಿದೆ ಎಂದು ಅದು ಹೇಳಿದೆ.</p> ]]></description>
            <media:content url="https://static.asianetnews.com/images/01ftdyxsbfshty1sg3z2sjpt9r/untitled-design--60-_760x400.jpg" medium="image" height="400" width="760"/>
        </item>
    </channel>
</rss>
