<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 31 Jul 2026 12:32:30 +0530</lastBuildDate>
        <atom:link href="https://kannada.asianetnews.com/rss/cine-world" rel="self" type="application/rss+xml"/>
        <item>
            <title><![CDATA[‘ಸತ್ಯ ತಿಳಿಯದೇ ಪ್ರಚಾರ ಮಾಡಬೇಡಿ': ರಕ್ಷಿತಾ ಶೆಟ್ಟಿ ಏಕಾಏಕಿ ಹೀಗೆ ಹೇಳಲು ಕಾರಣವೇನು?]]></title>
            <link>https://kannada.asianetnews.com/gallery/entertainment/bbk-12-runner-up-rakshita-shetty-slams-social-media-for-misleading-news-tb3fekv</link>
            <guid isPermaLink="true">https://kannada.asianetnews.com/gallery/entertainment/bbk-12-runner-up-rakshita-shetty-slams-social-media-for-misleading-news-tb3fekv</guid>
            <pubDate>Fri, 31 Jul 2026 12:32:24 +0530</pubDate>
            <description><![CDATA[&lt;p&gt;Rakshita Shetty Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಸತ್ಯ ತಿಳಿಯದೆ ಸುದ್ದಿ ಮಾಡುವ ಮಾಧ್ಯಮಗಳ ವೈಖರಿ ಹಾಗೂ ರಿಯಾಲಿಟಿ ಶೋಗಳ ಎಡಿಟಿಂಗ್ ಕುರಿತಾದ ಚರ್ಚೆಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvfcdyv4nydff15t5ypd5fa,imgname-thumbnail---2026-07-31t122517.497-1785481017307.jpg" type="image/jpeg" height="390" width="690"/>
            <content:encoded><![CDATA[&lt;p&gt;Rakshita Shetty Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಸತ್ಯ ತಿಳಿಯದೆ ಸುದ್ದಿ ಮಾಡುವ ಮಾಧ್ಯಮಗಳ ವೈಖರಿ ಹಾಗೂ ರಿಯಾಲಿಟಿ ಶೋಗಳ ಎಡಿಟಿಂಗ್ ಕುರಿತಾದ ಚರ್ಚೆಗಳಿಗೆ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ&lt;/strong&gt;ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿ, ತಮ್ಮ ಮುಗ್ಧತೆ ಹಾಗೂ ನೇರ ನಡೆ-ನುಡಿಯಿಂದ ಕನ್ನಡಿಗರ ಮನೆಮಾತಾಗಿರುವ ರಕ್ಷಿತಾ ಶೆಟ್ಟಿ, ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸತ್ಯ ತಿಳಿಯದೆ ಸುದ್ದಿಗಳು ಪ್ರಸಾರವಾಗುತ್ತಿರುವ ಬಗ್ಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;'ಗಿಲ್ಲಿ' ಸಿನಿಮಾಗೆ ಶುಭ ಹಾರೈಕೆ&lt;/strong&gt;ಸಂದರ್ಶನವೊಂದರಲ್ಲಿ 'ಗಿಲ್ಲಿ' ಅವರಿಗೆ ಹೊಸ ಸಿನಿಮಾ ವಿಚಾರವಾಗಿ ವಿಶ್ ಮಾಡಿದ್ರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, &quot;ಹೌದು, ಅವರಿಗೆ ಆಲ್ ದಿ ಬೆಸ್ಟ್. ಒಳ್ಳೆಯದಾಗಲಿ&quot; ಎಂದು ಹಾರೈಸಿದರು.&lt;/p&gt;&lt;img&gt;&lt;p&gt;&lt;strong&gt;ಬೇಸರ ಹೊರಹಾಕಿದ ರಕ್ಷಿತಾ ಶೆಟ್ಟಿ&lt;/strong&gt;ಇದೇ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳ ಪ್ರಚಾರದ ಬಗ್ಗೆ ಪ್ರಶ್ನೆ ಎತ್ತಿದ ರಕ್ಷಿತಾ ಶೆಟ್ಟಿ, &quot;ಯಾರಾದರೂ ಎಲ್ಲೋ ಒಂದು ಕಡೆ ಒಂದು ಹೇಳಿಕೆ (Statement) ಕೊಟ್ಟರೆ, ಅದನ್ನೇ ದೊಡ್ಡದಾಗಿ ಪಬ್ಲಿಸಿಟಿ ಮಾಡುತ್ತೀರಿ. ಆದರೆ ಇನ್ನೊಂದು ಕಡೆ ಇರುವ ಅಸಲಿ ಸತ್ಯ ಏನು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡುವುದಿಲ್ಲ. ಸತ್ಯ ಏನೆಂದು ಗೊತ್ತಿಲ್ಲದಿದ್ದರೂ ಕೇವಲ ಪ್ರಚಾರಕ್ಕಾಗಿ ಸುದ್ದಿ ಮಾಡುತ್ತೀರಿ&quot; ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;'ಬಿಗ್ ಬಾಸ್' ಕುರಿತು ಸ್ಪಷ್ಟನೆ&lt;/strong&gt;ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಮಾತನಾಡಿದ ರಕ್ಷಿತಾ, ಈಗ ನಾನು ಹಸಿರು ಬಣ್ಣದ ಉಡುಪು (ಗ್ರೀನ್ ಡ್ರೆಸ್) ಹಾಕಿಕೊಂಡಿದ್ದೇನೆ, ಅದನ್ನು ಕೆಂಪು (ರೆಡ್) ಎಂದು ತೋರಿಸಲು ಸಾಧ್ಯವೇ? ಅಲ್ಲಿ ಏನಿದೆಯೋ ಅದನ್ನೇ ಅಲ್ವಾ ತೋರಿಸುವುದು? ಅಲ್ಲಿ ಹೇಗಿದೆಯೋ ಹಾಗೆಯೇ ಪ್ರಸಾರ ಮಾಡುತ್ತಾರೆ&quot; ಎಂದು ಕಾರ್ಯಕ್ರಮದ ನೈಜತೆಯನ್ನು ಸಮರ್ಥಿಸಿಕೊಂಡರು.&lt;/p&gt;&lt;img&gt;&lt;p&gt;&lt;strong&gt;ನೇರ ನುಡಿಯ ಮೂಲಕ ಸುದ್ದಿಯಲ್ಲಿದ್ದಾರೆ ರಕ್ಷಿತಾ&lt;/strong&gt;ಬಹಳ ದಿನಗಳಿಂದ ಈ ವಿಚಾರಗಳು ನನ್ನ ಮನಸ್ಸಿನಲ್ಲಿದ್ದವು, ಇಂದು ಅದನ್ನು ಹೊರಹಾಕುತ್ತಿದ್ದೇನೆ ಎಂದು ರಕ್ಷಿತಾ ಹೇಳಿದಾಗ, &quot;ಈಗ ನಿಮಗೆ ಮನಸ್ಸು ಹಗುರವಾಯಿತಾ?&quot; ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅವರು, ಕೊನೆಗೂ ತಮ್ಮ ಮನದ ಗೊಂದಲ ಮತ್ತು ನೋವನ್ನು ಹಂಚಿಕೊಂಡ ಸಮಾಧಾನ ವ್ಯಕ್ತಪಡಿಸಿದರು. ತಮ್ಮ ವ್ಲಾಗ್&zwnj;ಗಳ ಮೂಲಕ ಜನಪ್ರಿಯರಾಗಿದ್ದ ರಕ್ಷಿತಾ ಶೆಟ್ಟಿ, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಅದೇ ನೇರ ನುಡಿಯ ಮೂಲಕ ಸುದ್ದಿಯಲ್ಲಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/entertainment/bbk-12-runner-up-rakshita-shetty-slams-social-media-for-misleading-news-tb3fekv"/>
        </item>
        <item>
            <title><![CDATA[ಟೈಟ್ ಜೀನ್ಸ್, ಟಿ-ಶರ್ಟ್, ಸನ್ ಗ್ಲಾಸ್ ಧರಿಸಿ ಶಿವನಿಗೆ ಅಭಿಷೇಕ... ಬಾಲಿವುಡ್ ನಟಿಗೆ ನೆಟ್ಟಿಗರಿಂದ ಟ್ರೋಲ್]]></title>
            <link>https://kannada.asianetnews.com/cine-world/bhumi-pednekar-trolled-for-wearing-sunglasses-while-worshiping-lord-shiva/articleshow-itahgwl</link>
            <guid isPermaLink="true">https://kannada.asianetnews.com/cine-world/bhumi-pednekar-trolled-for-wearing-sunglasses-while-worshiping-lord-shiva/articleshow-itahgwl</guid>
            <pubDate>Thu, 30 Jul 2026 16:52:54 +0530</pubDate>
            <description><![CDATA[&lt;p&gt;ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್&zwnj;ಗೆ ಗುರಿಯಾಗಿದ್ದಾರೆ. ಈ ಬಾರಿ ಅವರು ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ವೇಳೆ ಧರಿಸಿದ್ದ ಕನ್ನಡಕ ಹಾಗೂ ಡ್ರೆಸ್ ಮಾಡಿರುವ ರೀತಿ ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಹಲವರು ನಟಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysc5pr5mxts5hm05g72rr8r,imgname-bhumi-pednekar-1785410542341.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸೋಶಿಯಲ್ ಮೀಡೀಯಾದಲ್ಲಿ ಮತ್ತೆ ಟ್ರೋಲ್ ಆದ ಭೂಮಿ ಪೆಡ್ನೇಕರ್&lt;/strong&gt;&lt;/h2&gt;&lt;p&gt;ಪವಿತ್ರ ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸುವ ವೀಡಿಯೊವನ್ನು ಹಂಚಿಕೊಂಡ ನಂತರ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. &quot;ದಮ್ ಲಗಾ ಕೆ ಹೈಶಾ&quot; ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಭೂಮಿ ಪೆಡ್ನೇಕರ್, &quot;ಬಾಲಾ&quot;, &quot;ಶುಭ್ ಮಂಗಲ್ ಸಾವಧಾನ್&quot; ಮತ್ತು &quot;ಭುಜ್&quot; ನಂತಹ ಚಿತ್ರಗಳಲ್ಲಿನ ನಟಿ ತಮ್ಮ ನೈಜ್ಯ ಅಭಿನಯದಿಂದ ಜನ ಮನ ಗೆದ್ದಿದ್ದರು. ಸ್ಕ್ರೀನ್ ಮೇಲೆ ಹೆಚ್ಚಾಗಿ ಸ್ಟ್ರಾಂಗ್ ಪಾತ್ರಗಳಲ್ಲಿ ನಟಿಸುವ ಭೂಮಿ ತಮ್ಮ ಜೀವನದ ಸಣ್ಣ ಮತ್ತು ದೊಡ್ಡ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಜಿಮ್ ವೀಡಿಯೊಗಳಾಗಲಿ ಅಥವಾ ಅವರ ಕುಟುಂಬದೊಂದಿಗೆ ಫೋಟೋಗಳಾಗಲಿ, ಭೂಮಿ ಎಲ್ಲವನ್ನೂ ಬಹಿರಂಗವಾಗಿ ಪೋಸ್ಟ್ ಮಾಡುತ್ತಾರೆ.&lt;/p&gt;&lt;h3&gt;&lt;strong&gt;ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುತ್ತಿರುವ ಭೂಮಿ ಪೆಡ್ನೇಕರ್&lt;/strong&gt;&lt;/h3&gt;&lt;p&gt;ಇದೀಗ ಭೂಮಿ ಪೆಡ್ನೇಕರ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಶಿವನನ್ನು ಪೂಜಿಸುತ್ತಿರುವ ಫೋಟೋಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಭೂಮಿ ಶಿವಲಿಂಗಕ್ಕೆ ನೀರು ಅರ್ಪಿಸುತ್ತಿರುವುದು ಕಂಡುಬಂದಿದೆ. ಅವರು ಪೋಸ್ಟ್ ಗೆ &quot;ಶ್ರಾವಣ ಪ್ರಾರಂಭವಾಗುತ್ತಿದ್ದಂತೆ, ನಾನು ಆರಾಮ ಜೀವನಕ್ಕಾಗಿ ಅಲ್ಲ, ಜೀವನವನ್ನು ಅತ್ಯುತ್ತಮವಾಗಿ ಬದುಕಲು ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತೇನೆ. ಹರ್ ಹರ್ ಮಹಾದೇವ್&quot; ಎಂದು ಶೀರ್ಷಿಕೆ ನೀಡಿದ್ದಾರೆ.&lt;/p&gt;&lt;p&gt;ಆದರೆ ಭೂಮಿ ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಪೋಸ್ಟ್ ಮಾಡಿದ ನಂತರ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾರೆ. ಅದಕ್ಕೆ ಕಾರಣ, ಭೂಮಿ ಧರಿಸಿದ್ದ ಡ್ರೆಸ್, ಹಾಕಿಕೊಂಡಿದ್ದ ಕನ್ನಡಕ. ಭೂಮಿ ಶಿವನಿಗೆ ಅಭಿಷೇಕ ಮಾಡುವ ಸಮಯದಲ್ಲಿ ಟೈಟ್ ಆಗಿರುವ ಜೀನ್ಸ್, ಟೀ ಶರ್ಟ್ ಧರಿಸಿದ್ದರು, ಜೊತೆಗೆ ಸನ್ ಗ್ಲಾಸ್ ಕೂಡ ಧರಿಸಿದ್ದರು. ಪೂಜೆಯ ಸಮಯದಲ್ಲೂ ಅವರು ಕನ್ನಡಕ ಧರಿಸಿದ್ದನ್ನು ಗಮನಿಸಿದ ಕೆಲ ನೆಟ್ಟಿಗರು, &quot;ದೇವರ ಮುಂದೆ ಕನ್ನಡಕ ತೆಗೆದು ಗೌರವ ತೋರಬೇಕಿತ್ತು&quot; ಎಂದು ಟೀಕಿಸಿದ್ದಾರೆ.&lt;/p&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, &quot;ಪೂಜೆ ಕೂಡ ಪ್ರದರ್ಶನಕ್ಕಾಗಿ ಮಾಡುತ್ತಿದ್ದಾರಾ?&quot;, &quot;ಭಕ್ತಿಗಿಂತ ಫ್ಯಾಷನ್&zwnj;ಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ&quot; ಎಂಬ ರೀತಿಯ ಕಾಮೆಂಟ್&zwnj;ಗಳು ಹರಿದಾಡುತ್ತಿವೆ. ಇನ್ನೂ ಕೆಲವರು, ವ್ಯಕ್ತಿಯ ಉಡುಗೆ ಅಥವಾ ಕನ್ನಡಕ ಧರಿಸಿರುವುದರ ಆಧಾರದಲ್ಲಿ ಅವರ ಭಕ್ತಿಯನ್ನು ಅಳೆಯಬಾರದು ಎಂದು ನಟಿಯ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭೂಮಿ ಪೆಡ್ನೇಕರ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>cine-world</category>
            <dc:creator>Pavna Das</dc:creator>
            <atom:link href="https://kannada.asianetnews.com/cine-world/bhumi-pednekar-trolled-for-wearing-sunglasses-while-worshiping-lord-shiva/articleshow-itahgwl"/>
        </item>
        <item>
            <title><![CDATA[ಏನ್ರೀ ಇದು.. ರಶ್ಮಿಕಾ ಜೊತೆ ಮದುವೆ ಬಳಿಕ 10 ವರ್ಷದ ಹಿಂದಿನ 'ಆ ವ್ಯಕ್ತಿ' ನೆನಪಿಸಿಕೊಂಡ ವಿಜಯ್ ದೇವರಕೊಂಡ!]]></title>
            <link>https://kannada.asianetnews.com/entertainment/vijay-deverakonda-post-about-his-10-years-cinema-carrier-journey-becomes-viral/articleshow-toqcxdh</link>
            <guid isPermaLink="true">https://kannada.asianetnews.com/entertainment/vijay-deverakonda-post-about-his-10-years-cinema-carrier-journey-becomes-viral/articleshow-toqcxdh</guid>
            <pubDate>Fri, 31 Jul 2026 10:19:07 +0530</pubDate>
            <description><![CDATA[&lt;p&gt;&quot;ಇಂದಿನಿಂದ ನಾನು ಮಾಡುವ ಪ್ರತಿಯೊಂದು ಕೆಲಸವೂ ಹೃದಯದಿಂದಲೇ ಇರುತ್ತದೆ.&quot; ಸೋಲುಗಳು ಅವರನ್ನು ಬದಲಿಸಿರಬಹುದು, ಆದರೆ ಅವರಲ್ಲಿನ ಆ ಹಠ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿ ಮಾತ್ರ ಬದಲಾಗಿಲ್ಲ.. &quot; ರಶ್ಮಿಕಾ ಮಂದಣ್ಣ ಪತಿ ವಿಜಯ್ ಹೀಗ್ ಹೇಳಿದ್ಯಾಕೆ? ಈ ಸ್ಟೋರಿ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmypx6dt6r58wxa7kmpxwrnv,imgname-vijay-deverakonda-1774852151738.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Vijay Deverakonda Emotional Viral Post: ವಿಜಯ್ ದೇವರಕೊಂಡ: 'ರೌಡಿ' ಪಯಣದ ಹತ್ತು ವರ್ಷಗಳ ಹಬ್ಬ; ಸೋಲು-ಗೆಲುವಿನ ನಡುವೆ ಅರಳಿದ ಭಾವನಾತ್ಮಕ ಕಥೆ!&lt;/strong&gt;&lt;/p&gt;&lt;p&gt;ತೆಲುಗು ಚಿತ್ರರಂಗದ &lsquo;ಸೆನ್ಸೇಷನಲ್ ಸ್ಟಾರ್&rsquo;, ಅಪ್ಪಟ &lsquo;ರೌಡಿ&rsquo; ವಿಜಯ್ ದೇವರಕೊಂಡ (Vijay Deverakonda) ಈಗ ಸಂಭ್ರಮದ ಮೂಡ್&zwnj;ನಲ್ಲಿದ್ದಾರೆ. ಯಾಕೆ ಗೊತ್ತಾ? ಚಿತ್ರರಂಗಕ್ಕೆ ಅವರು ಕಾಲಿಟ್ಟು ಹತ್ತು ವರ್ಷಗಳು ಉರುಳಿವೆ. ಒಂದು ದಶಕದ ಈ ಸುದೀರ್ಘ ಪಯಣದಲ್ಲಿ ವಿಜಯ್ ಕಂಡ ಏಳು-ಬೀಳುಗಳು ಅಷ್ಟಿಷ್ಟಲ್ಲ. ಇಂದು ಅವರು ಹಂಚಿಕೊಂಡಿರುವ ಒಂದು ಭಾವನಾತ್ಮಕ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.&lt;/p&gt;&lt;h2&gt;ಆವತ್ತು ಆಟ ಶುರುವಾಗಿತ್ತು...&lt;/h2&gt;&lt;p&gt;ಹತ್ತು ವರ್ಷಗಳ ಹಿಂದೆ, ಒಬ್ಬ ಸಾಮಾನ್ಯ ಯುವಕನಾಗಿ ಚಿತ್ರರಂಗಕ್ಕೆ ಬಂದ ವಿಜಯ್&zwnj;ಗೆ ಅಂದು ತಾನು ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಸ್ಟಾರ್ ಆಗುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲವೇನೋ! ವಿಜಯ್ ದೇವರಕೊಂಡ ಅಂದ್ರೆ ಕೇವಲ ಒಬ್ಬ ನಟನಲ್ಲ, ಅದೊಂದು ಎಮೋಷನ್. 'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಸಿನಿಪ್ರಿಯರ ಎದೆಯಲ್ಲಿ ಕಿಚ್ಚು ಹಚ್ಚಿದ್ದ ಈ ನಟ, 'ಗೀತ ಗೋವಿಂದಂ' ಮೂಲಕ ಚಾಕೊಲೇಟ್ ಬಾಯ್ ಆಗಿಯೂ ಮೋಡಿ ಮಾಡಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಅದೃಷ್ಟ ಅಷ್ಟಾಗಿ ಕೈ ಹಿಡಿದಿಲ್ಲ. ಆದರೂ ಅವರ ಇಮೇಜ್ ಮಾತ್ರ ಕಿಂಚಿತ್ತೂ ಕುಂದಿಲ್ಲ ಅನ್ನೋದೇ ವಿಶೇಷ.&lt;/p&gt;&lt;p&gt;ಭಾವುಕರಾದ ವಿಜಯ್: ಹಳೆಯ ನೆನಪುಗಳ ಮೆಲುಕು&lt;/p&gt;&lt;p&gt;ತಮ್ಮ ಸಿನಿ ಜರ್ನಿಯ ಬಗ್ಗೆ ಒಂದು ವೀಡಿಯೊ ಹಂಚಿಕೊಂಡಿರುವ ವಿಜಯ್, &quot;ಬೆಳಗ್ಗೆ 7 ಗಂಟೆಯ ಚಿತ್ರೀಕರಣಕ್ಕಾಗಿ 6.30ಕ್ಕೇ ಸೆಟ್&zwnj;ನಲ್ಲಿ ಇರಬೇಕಾದ ಅನಿವಾರ್ಯತೆ ಇತ್ತು. ಆ ದಿನಗಳ ಕಷ್ಟ, ಆ ಯುವಕನ ಕನಸುಗಳು ಇಂದು ನನಗೆ ತುಂಬಾ ಹತ್ತಿರ ಅನಿಸುತ್ತಿವೆ&quot; ಎಂದು ಬರೆದುಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದೆ ಥಿಯೇಟರ್&zwnj;ಗಳಲ್ಲಿ ಪ್ರೇಕ್ಷಕರನ್ನು ಭೇಟಿ ಮಾಡಿದ್ದು ನೆನಪಿಸಿಕೊಂಡರೆ ಅವರಿಗೆ ಈಗಲೂ ಮೈ ರೋಮಾಂಚನವಾಗುತ್ತದೆಯಂತೆ. &quot;ನನ್ನ ಬಂಡಾಯ ಮನಸ್ಸಿನ ಕನಸುಗಳು ಮೂರ್ಖತನವಲ್ಲ ಎಂದು ಸಾಬೀತಾಗಿದೆ. ತೆಲುಗು ಪ್ರೇಕ್ಷಕರೇ, ನಿಮ್ಮ ಪ್ರೀತಿಗೆ ನಾನು ಚಿರಋಣಿ&quot; ಎಂದು ಭಾವುಕರಾಗಿ ನುಡಿದಿದ್ದಾರೆ.&lt;/p&gt;&lt;h3&gt;ಸೋಲಿನ ಕಹಿ, ಗೆಲುವಿನ ಹಂಬಲ&lt;/h3&gt;&lt;p&gt;'ಡಿಯರ್ ಕಾಮ್ರೇಡ್' ನಂತರ ವಿಜಯ್ ಪಾಲಿಗೆ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅವರ ಮಹತ್ವಾಕಾಂಕ್ಷೆಯ 'ಹೀರೋ' ಮತ್ತು 'ಜನ ಗಣ ಮನ' ಚಿತ್ರಗಳು ಅರ್ಧಕ್ಕೇ ನಿಂತುಹೋದವು. 2024ರಲ್ಲಿ ಬಂದ 'ದಿ ಫ್ಯಾಮಿಲಿ ಸ್ಟಾರ್' ಮತ್ತು ಈ ವರ್ಷದ 'ಕಿಂಗ್&zwnj;ಡಮ್' ಬಾಕ್ಸ್ ಆಫೀಸ್&zwnj;ನಲ್ಲಿ ಮಕಾಡೆ ಮಲಗಿದವು. ಇಷ್ಟೆಲ್ಲಾ ಆದರೂ ವಿಜಯ್ ಕುಗ್ಗಿಲ್ಲ. 'ಕಲ್ಕಿ 2898 ಎಡಿ' ಸಿನಿಮಾದ ಅರ್ಜುನನ ಪಾತ್ರದಲ್ಲಿ ಅವರು ನೀಡಿದ ಗೆಸ್ಟ್ ಅಪಿಯರೆನ್ಸ್ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಿತ್ತು.&lt;/p&gt;&lt;p&gt;ಮುಂದಿದೆ ಬಿಗ್ ಪ್ಲಾನ್!&lt;/p&gt;&lt;p&gt;ಸದ್ಯ ವಿಜಯ್ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ರವಿ ಕಿರಣ್ ಕೋಲಾ ನಿರ್ದೇಶನದ 'ರೌಡಿ ಜನಾರ್ದನ' ಚಿತ್ರದಲ್ಲಿ ಕೀರ್ತಿ ಸುರೇಶ್ ಜೊತೆ ವಿಜಯ್ ಮಿಂಚಲಿದ್ದಾರೆ. ಅಷ್ಟೇ ಅಲ್ಲ, ಅಭಿಮಾನಿಗಳ ನೆಚ್ಚಿನ ಜೋಡಿ ವಿಜಯ್ ಮತ್ತು ರಶ್ಮಿಕಾ ಮಂದಣ್ಣ ಮತ್ತೆ 'ರಣಬಾಲಿ' ಚಿತ್ರದ ಮೂಲಕ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ರೌಡಿ ಫ್ಯಾನ್ಸ್&zwnj;ಗೆ ಹಬ್ಬದಂತಿದೆ.&lt;/p&gt;&lt;p&gt;ಕೊನೆಯಲ್ಲಿ ವಿಜಯ್ ಒಂದು ಮಾತು ಹೇಳಿದ್ದಾರೆ- &quot;ಇಂದಿನಿಂದ ನಾನು ಮಾಡುವ ಪ್ರತಿಯೊಂದು ಕೆಲಸವೂ ಹೃದಯದಿಂದಲೇ ಇರುತ್ತದೆ.&quot; ಸೋಲುಗಳು ಅವರನ್ನು ಬದಲಿಸಿರಬಹುದು, ಆದರೆ ಅವರಲ್ಲಿನ ಆ ಹಠ ಮತ್ತು ಪ್ರೇಕ್ಷಕರ ಮೇಲಿನ ಪ್ರೀತಿ ಮಾತ್ರ ಬದಲಾಗಿಲ್ಲ. ಹತ್ತು ವರ್ಷಗಳ ಈ ಸಾರ್ಥಕ ಪಯಣಕ್ಕೆ ಶುಭಾಶಯಗಳು ವಿಜಯ್! ನಿಮ್ಮ ಮುಂದಿನ ಇನ್ನಿಂಗ್ಸ್ 'ಬ್ಲಾಕ್ ಬಸ್ಟರ್' ಆಗಿರಲಿ ಎಂಬುದು ಎಲ್ಲರ ಹಾರೈಕೆ.&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/vijay-deverakonda-post-about-his-10-years-cinema-carrier-journey-becomes-viral/articleshow-toqcxdh"/>
        </item>
        <item>
            <title><![CDATA[ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ: ರಾಮಾಯಣ ಟ್ರೇಲರ್‌ ನೋಡಿ ರಿಷಬ್ ಶೆಟ್ಟಿ ಹೇಳಿದ್ದೇನು?]]></title>
            <link>https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w</link>
            <guid isPermaLink="true">https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w</guid>
            <pubDate>Thu, 30 Jul 2026 22:49:16 +0530</pubDate>
            <description><![CDATA[&lt;p&gt;Rishab Shetty: 'ರಾಮಾಯಣ' ಸಿನಿಮಾದ ಟ್ರೇಲರ್&zwnj; ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyt05kq10s1f5jtvp7arzk75,imgname-vjv-1785431510753.png" type="image/jpeg" height="390" width="690"/>
            <content:encoded><![CDATA[&lt;p&gt;'ರಾಮಾಯಣ' ಸಿನಿಮಾದ ಟ್ರೇಲರ್&zwnj; ನೋಡಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಬಿಕೆ ಬರುವಂತಹ ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಕ್ಕೆ ಇಡೀ ತಂಡವನ್ನು ಕೊಂಡಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ದೈವತ್ವವನ್ನು ತೋರಿಸಿದರೆ, ರಾವಣನಾಗಿ ಯಶ್ ತಮ್ಮ ನಟನೆಯಿಂದ ಬೆರಗುಗೊಳಿಸಿದ್ದಾರೆ. ಕನ್ನಡಿಗರಾದ ನಮಗೆಲ್ಲಾ ಹೆಮ್ಮೆ ತಂದಿದ್ದಾರೆ ಎಂದು ಹೇಳಿದ್ದಾರೆ.&lt;/p&gt;&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ, ರಣಬೀರ್ ಕಪೂರ್ ಮತ್ತು ಯಶ್ ನಟನೆಯ 'ರಾಮಾಯಣ' ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ತಮ್ಮ ಇನ್&zwnj;ಸ್ಟಾಗ್ರಾಂನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಪ್ರಮುಖ ನಟರಾದ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಸೇರಿದಂತೆ ಇಡೀ ತಂಡಕ್ಕೆ ಮೆಚ್ಚುಗೆ ತಿಳಿಸಿದ್ದಾರೆ.&lt;/p&gt;&lt;p&gt;&quot;ನಮ್ಮ ಪುರಾಣಗಳ ಕಥೆ ಮತ್ತು ಪಾತ್ರಗಳ ಮೂಲಕ ಜನರನ್ನು ಒಪ್ಪಿಸುವುದು ಸುಲಭವಲ್ಲ. ನಾವೆಲ್ಲರೂ ಈ ಕಥೆಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಪ್ರತಿಯೊಬ್ಬರಿಗೂ ಈ ಬಗ್ಗೆ ತಮ್ಮದೇ ಆದ ಕಲ್ಪನೆ ಇರುತ್ತದೆ. ಇಂತಹ ಅದ್ಭುತ ಹಾಗೂ ನಂಬಿಕೆ ಬರುವಂತಹ ಜಗತ್ತನ್ನು ಸೃಷ್ಟಿಸಿದ ಇಡೀ ತಂಡಕ್ಕೆ ನನ್ನ ಹ್ಯಾಟ್ಸ್ ಆಫ್. ನಿತೇಶ್ ತಿವಾರಿ, ನಮೀತ್ ಮಲ್ಹೋತ್ರ ನಿಮಗೊಂದು ಸಲಾಂ&quot; ಎಂದು ರಿಷಬ್ ಬರೆದುಕೊಂಡಿದ್ದಾರೆ.&lt;/p&gt;&lt;p&gt;ನಟರ ಅದ್ಭುತ ಅಭಿನಯ ಮತ್ತು ಎ.ಆರ್. ರೆಹಮಾನ್ ಹಾಗೂ ಹ್ಯಾನ್ಸ್ ಜಿಮ್ಮರ್ ಅವರ ಸಂಗೀತವನ್ನು ಹೊಗಳಿದ 'ಕಾಂತಾರ' ಸ್ಟಾರ್, &quot;ಇಂತಹ ಐಕಾನಿಕ್ ಪಾತ್ರಗಳನ್ನು ಮಾಡುವಾಗ ಒಬ್ಬ ನಟನ ಮೇಲಿರುವ ಒತ್ತಡವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಪ್ರತಿಯೊಬ್ಬ ನಟರೂ ಆ ಜವಾಬ್ದಾರಿಯನ್ನು ಅರಿತು ಅದ್ಭುತವಾಗಿ ನಟಿಸಿದ್ದಾರೆ. ರವಿ ದುಬೆ, ಸಾಯಿ ಪಲ್ಲವಿ, ರಕುಲ್ ಪ್ರೀತ್, ಎ.ಆರ್.ರೆಹಮಾನ್, ಹ್ಯಾನ್ಸ್ ಜಿಮ್ಮರ್ ನಿಮ್ಮ ಸಂಗೀತವು ಪ್ರತಿಯೊಂದು ಭಾವನೆಗೂ ಜೀವ ತುಂಬಿದೆ. ಎಂತಹ ಅದ್ಭುತ ಸಂಗೀತ,&quot; ಎಂದು ಸೇರಿಸಿದ್ದಾರೆ.&lt;/p&gt;&lt;p&gt;ರಣಬೀರ್ ಕಪೂರ್ ಅವರ ನಟನೆಯು 'ರಾಮನ ದೈವತ್ವ ಮತ್ತು ಪ್ರಭಾವಳಿಯನ್ನು ನಿಜವಾಗಿಯೂ ಅನುಭವಿಸುವಂತೆ ಮಾಡಿತು' ಎಂದು ರಿಷಬ್ ಹೇಳಿದ್ದಾರೆ. ಇನ್ನು ರಾವಣನಾಗಿ ಯಶ್ ಅವರನ್ನು ನೋಡಿ ಬೆರಗಾದೆ ಎಂದಿದ್ದಾರೆ. &quot;ರಣಬೀರ್&zwnj; ಕಪೂರ್ ಸಹೋದರ, ನೀವು ರಾಮನ ದೈವತ್ವವನ್ನು ನಮಗೆ ನಿಜವಾಗಿಯೂ ಅನುಭವಿಸುವಂತೆ ಮಾಡಿದ್ದೀರಿ. ಯಶ್ ಸರ್, ನಿಮ್ಮ ಪ್ರತಿಯೊಂದು ಶಾಟ್ ನೋಡುವಾಗಲೂ ನನ್ನ ಕಣ್ಣುಗಳು ದೊಡ್ಡದಾಗುತ್ತಿದ್ದವು. ಆ ಪಾತ್ರಕ್ಕೆ ಬೇರೆ ಯಾರೂ ನ್ಯಾಯ ಒದಗಿಸಲು ಸಾಧ್ಯವಿರಲಿಲ್ಲವೇನೋ. ನಿಮ್ಮ ಅದ್ಭುತ ನಟನೆಯ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ. ಆದರೆ ಒಂದು ಮಾತು, ಒಬ್ಬ ಕನ್ನಡಿಗನಾಗಿ ನೀವು ನಮಗೆ ಯಾವಾಗಲೂ ಹೆಮ್ಮೆ ತಂದಿದ್ದೀರಿ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;'ರಾಮಾಯಣ: ಭಾಗ 1' ಟ್ರೇಲರ್&zwnj; ಬಿಡುಗಡೆ&lt;/strong&gt;&lt;/p&gt;&lt;p&gt;ದಿನದ ಆರಂಭದಲ್ಲಿ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ: ಭಾಗ 1' ಸಿನಿಮಾದ ಟ್ರೇಲರ್&zwnj; ಅನ್ನು ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆ ಮಾಡಲಾಗಿದೆ. ಯಶ್ ಅಭಿನಯದ ರಾವಣನ ಪಾತ್ರದ ಪರಿಚಯದೊಂದಿಗೆ ಟ್ರೇಲರ್&zwnj; ಆರಂಭವಾಗುತ್ತದೆ. ಕತ್ತಲೆಯಿಂದ ಹೊರಬರುವ ರಾವಣ, ಭವ್ಯವಾದ ಅರಮನೆಗೆ ಏರಿ ಮೂರು ಲೋಕಗಳಿಗೂ ತಾನೇ ಅಧಿಪತಿ ಎಂದು ಘೋಷಿಸುತ್ತಾನೆ. ಕತ್ತಲೆ ಆವರಿಸುತ್ತಿದ್ದಂತೆ, ವಿಷ್ಣುವು ಭೂಮಿಯ ಮೇಲೆ ರಾಜಕುಮಾರ ರಾಮನಾಗಿ ಮರುಜನ್ಮ ಪಡೆಯುತ್ತಾನೆ. ಅರುಣ್ ಗೋವಿಲ್ ಅವರು ರಾಜ ದಶರಥನ ಪಾತ್ರದಲ್ಲಿದ್ದು, ತಮ್ಮ ಜನರಿಗೆ ರಾಮನನ್ನು ಪರಿಚಯಿಸುತ್ತಾರೆ. ಚಿನ್ನದ ಅಯೋಧ್ಯೆಯ ಭವ್ಯ ದೃಶ್ಯಗಳ ನಂತರ, ಸಾಯಿ ಪಲ್ಲವಿ ನಿರ್ವಹಿಸಿದ ಸೀತೆಯೊಂದಿಗೆ ರಾಮನ ವಿವಾಹದ ದೃಶ್ಯ ಬರುತ್ತದೆ.&lt;/p&gt;&lt;p&gt;ತನ್ನ ಮಲತಾಯಿ ಕೈಕೇಯಿಯ ಬೇಡಿಕೆಯನ್ನು ರಾಮ ಒಪ್ಪಿಕೊಳ್ಳುವುದರೊಂದಿಗೆ ಕಥೆಯು ಭಾವನಾತ್ಮಕ ತಿರುವು ಪಡೆಯುತ್ತದೆ. ರವಿ ದುಬೆ ನಿರ್ವಹಿಸಿದ ತನ್ನ ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ವನವಾಸಕ್ಕೆ ಹೊರಡುತ್ತಾನೆ. ರಕುಲ್ ಪ್ರೀತ್ ನಿರ್ವಹಿಸಿದ ಶೂರ್ಪನಖಿಯೊಂದಿಗಿನ ಸಂಘರ್ಷ, ಸೀತೆಯ ಅಪಹರಣದಂತಹ ಮಹಾಕಾವ್ಯದ ಪ್ರಮುಖ ಕ್ಷಣಗಳ ಝಲಕ್ ಅನ್ನು ಟ್ರೇಲರ್&zwnj; ನೀಡುತ್ತದೆ. ಬೃಹತ್ ಸೇನೆಗಳು, ಪೌರಾಣಿಕ ಜೀವಿಗಳು ಮತ್ತು ತೀವ್ರವಾದ ಕತ್ತಿವರಸೆಯೊಂದಿಗೆ ದೊಡ್ಡ ಪ್ರಮಾಣದ ಯುದ್ಧದತ್ತ ಕಥೆ ಸಾಗುತ್ತದೆ. ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ ಸಂಯೋಜಕ ಹ್ಯಾನ್ಸ್ ಜಿಮ್ಮರ್ ಅವರ ಜುಗಲ್ಬಂದಿ ಈ ಸಿನಿಮಾದ ಸಂಗೀತದ ಮತ್ತೊಂದು ಪ್ರಮುಖ ಹೈಲೈಟ್ ಆಗಿದೆ.&lt;/p&gt;&lt;h2&gt;&lt;strong&gt;ತಾರಾಗಣ ಮತ್ತು ಬಿಡುಗಡೆ ಮಾಹಿತಿ&lt;/strong&gt;&lt;/h2&gt;&lt;p&gt;ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿದ್ದಾರೆ. ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. 'ರಾಮಾಯಣ: ಭಾಗ 1' ಸಿನಿಮಾ 2026ರ ದೀಪಾವಳಿ ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಎರಡನೇ ಭಾಗವು 2027ರ ದೀಪಾವಳಿಗೆ ತೆರೆಗೆ ಬರುವ ನಿರೀಕ್ಷೆಯಿದೆ.&amp;nbsp;&lt;/p&gt;&lt;p&gt;It&rsquo;s not easy to convince people with the stories and characters of our epics. We have all grown up listening to them, and each of us carries our own imagination of these timeless legends. Hats off to the team for creating such an incredibly convincing world. @niteshtiwari22&hellip; pic.twitter.com/mLrLuUZqoi&lt;/p&gt;&lt;p&gt;&mdash; Rishab Shetty (@shetty_rishab) July 30, 2026&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rishab-shetty-showers-praise-on-yashs-ravana-in-ramayana-trailer-gvd/articleshow-3786k9w"/>
        </item>
        <item>
            <title><![CDATA[Spider-Man Brand New Day Review: ಪೀಟರ್ ಸಾಹಸ ಈ ಸಲ ಹೇಗಿದೆ: ಇಲ್ಲಿದೆ ಸಂಪೂರ್ಣ ವಿಮರ್ಶೆ]]></title>
            <link>https://kannada.asianetnews.com/movie-reviews/spider-man-brand-new-day-review-is-tom-hollands-new-film-worth-watching-gvd/articleshow-1pked34</link>
            <guid isPermaLink="true">https://kannada.asianetnews.com/movie-reviews/spider-man-brand-new-day-review-is-tom-hollands-new-film-worth-watching-gvd/articleshow-1pked34</guid>
            <pubDate>Thu, 30 Jul 2026 22:13:43 +0530</pubDate>
            <description><![CDATA[&lt;p&gt;ಸ್ಪೈಡರ್ ಮ್ಯಾನ್ ಸರಣಿಯಿಂದ ಈಗಾಗಲೇ ಹಲವು ಸಿನಿಮಾಗಳು ಬಂದಿವೆ, ಎಲ್ಲರನ್ನೂ ರಂಜಿಸಿವೆ. ಈಗ ಅದೇ ಸರಣಿಯ 'ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ' ಸಿನಿಮಾ ತೆರೆಕಂಡಿದೆ. ಹಾಗಿದ್ರೆ ಈ ಹೊಸ ಸಿನಿಮಾ ಹೇಗಿದೆ? ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysxreeshvmz0hp55b9fh5gb,imgname-kb-1785428982233.png" type="image/jpeg" height="390" width="690"/>
            <content:encoded><![CDATA[&lt;p&gt;ಹಾಲಿವುಡ್&zwnj;ನ 'ಸ್ಪೈಡರ್ ಮ್ಯಾನ್' ಸಿನಿಮಾಗಳು ಇಡೀ ಜಗತ್ತನ್ನೇ ಸೆಳೆಯುತ್ತಿವೆ. ನಮ್ಮ ದೇಶದಲ್ಲೂ ಈ ಚಿತ್ರಗಳಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈಗಂತೂ ನಮ್ಮ ಜನ ಸ್ಟಾರ್ ನಟರ ಸಿನಿಮಾಗಳಿಗಿಂತ ಹಾಲಿವುಡ್ ಆ್ಯಕ್ಷನ್ ಚಿತ್ರಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಈ ಚಿತ್ರಗಳಿಗೆ ಸಿಗುವ ಓಪನಿಂಗ್ಸ್ ನೋಡಿದ್ರೆ ಆಶ್ಚರ್ಯ ಆಗುತ್ತೆ. ಇದೀಗ, ಈ ಸರಣಿಯ ಮತ್ತೊಂದು ಚಿತ್ರ 'ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ' ಬಂದಿದೆ. ಇದು 2021ರಲ್ಲಿ ಬಂದ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಮುಂದುವರಿದ ಭಾಗ. ಇದರಲ್ಲಿ ಹಲ್ಕ್, ಪನಿಷರ್ ಮತ್ತು ಜೀನ್ ಪಾತ್ರಗಳು ಸೇರಿಕೊಂಡಿದ್ದು, ನಿರೀಕ್ಷೆ ಹೆಚ್ಚಾಗಿದೆ. ಜುಲೈ 30, ಗುರುವಾರ ಬಿಡುಗಡೆಯಾದ ಈ ಸಿನಿಮಾ ಹೇಗಿದೆ, ಹಿಂದಿನ ಚಿತ್ರಗಳಿಗಿಂತ ಉತ್ತಮವಾಗಿದೆಯೇ? ಪೀಟರ್ ಸಾಹಸಗಳು ಇಷ್ಟವಾದವಾ? ಬನ್ನಿ, ವಿಮರ್ಶೆಯಲ್ಲಿ ನೋಡೋಣ.&lt;/p&gt;&lt;p&gt;ಈ ಚಿತ್ರದ ಕಥೆ 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ನಂತರ ಶುರುವಾಗುತ್ತೆ. ಆ ಚಿತ್ರದಲ್ಲಿ ಸ್ಪೈಡರ್ ಮ್ಯಾನ್ ಮತ್ತು ಡಾಕ್ಟರ್ ಸ್ಟ್ರೇಂಜ್ ಮಾಡಿದ ಯಡವಟ್ಟಿನಿಂದ, ಡ್ಯಾಮೇಜ್ ಕಂಟ್ರೋಲ್&zwnj;ನ ಮಹಿಳಾ ಅಧಿಕಾರಿಯನ್ನು ಬಿಟ್ಟು ಇಡೀ ಜಗತ್ತೇ ಸ್ಪೈಡರ್ ಮ್ಯಾನ್&zwnj;ನನ್ನು ಮರೆತುಬಿಡುತ್ತದೆ. ಕೊನೆಗೆ ಅವನ ಗೆಳತಿ ಎಮ್&zwnj;ಜೆ ಮತ್ತು ಸ್ನೇಹಿತನಿಗೂ ಅವನು ನೆನಪಿರುವುದಿಲ್ಲ. ಇದರಿಂದ ಪೀಟರ್ ಪಾರ್ಕರ್ ತನ್ನವರ ಬಳಿ ಇದ್ದರೂ ಅವರು ಗುರುತಿಸುವುದಿಲ್ಲ. ಅವರಿಬ್ಬರು ಮಾಡುವ ರೀಲ್ಸ್ ನೋಡುತ್ತಾ ಸ್ಪೈಡರ್ ಮ್ಯಾನ್ ನೋವು ಅನುಭವಿಸುತ್ತಾನೆ. ಅಷ್ಟೇ ಅಲ್ಲ, ತನ್ನ ಪ್ರೇಯಸಿ ಬೇರೊಬ್ಬನ ಜೊತೆ ಕ್ಲೋಸ್ ಆಗಿರುವುದನ್ನು, ಕಿಸ್ ಮಾಡುವುದನ್ನು ನೋಡಿ ಅವನ ಹೃದಯ ಒಡೆಯುತ್ತದೆ. ತನ್ನ ನೋವನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಒಳಗೊಳಗೆ ಕುಗ್ಗುತ್ತಾನೆ.&lt;img&gt;&lt;/p&gt;&lt;p&gt;ಇನ್ನೊಂದೆಡೆ, ನ್ಯೂಯಾರ್ಕ್ ಸಿಟಿಯಲ್ಲಿ ಯಾವುದೇ ಅನಾಹುತ ನಡೆಯುವ ಮುನ್ನವೇ ಅದನ್ನು ತಡೆಯುತ್ತಿರುತ್ತಾನೆ. ಅಮೆರಿಕದ ರಕ್ಷಣಾ ಸಂಸ್ಥೆಯಾದ 'ಡ್ಯಾಮೇಜ್ ಕಂಟ್ರೋಲ್' ಜೊತೆ ಸೇರಿ ಜನರನ್ನು ರಕ್ಷಿಸುವ ಜವಾಬ್ದಾರಿ ಹೊರುತ್ತಾನೆ. ಆಗ, ನಗರಕ್ಕೆ ಅನಿರೀಕ್ಷಿತವಾಗಿ ಒಂದು ಶಕ್ತಿ ಪ್ರವೇಶಿಸುತ್ತದೆ. ಅದು ಬೇರೆಯವರ ಮೆದುಳಿನ ಮೇಲೆ ಪ್ರಭಾವ ಬೀರಬಲ್ಲ ಶಕ್ತಿ. ಅವಳೇ ಜೀನ್ (ಸೇಡೀ ಸಿಂಕ್). ಜೀನ್ ತನ್ನ ಶಕ್ತಿಯಿಂದ 'ಡ್ಯಾಮೇಜ್ ಕಂಟ್ರೋಲ್' ಮೇಲೆ ದಾಳಿ ಮಾಡುತ್ತಾಳೆ. ಆ ಶಕ್ತಿ ಒಬ್ಬ ಮಹಿಳೆ ಎಂದು ತಿಳಿದ ಸ್ಪೈಡರ್ ಮ್ಯಾನ್ ಅವಳನ್ನು ಹೇಗೆ ಎದುರಿಸಿದ? ಆಕೆ ಯಾರು? ವಿ-ಮ್ಯಾಕ್ಸ್ ಅಂದ್ರೆ ಏನು? ಪೀಟರ್ ತನ್ನ ಪ್ರೇಯಸಿಯನ್ನು ಮತ್ತೆ ಸೇರಿಕೊಂಡನಾ? ಇಲ್ವಾ? ಅನ್ನೋದೇ ಉಳಿದ ಸಿನಿಮಾ.&lt;/p&gt;&lt;p&gt;ಹಿಂದಿನ ಸ್ಪೈಡರ್ ಮ್ಯಾನ್ ಚಿತ್ರದ ಮುಂದುವರಿದ ಭಾಗವಾದರೂ, ಕಥೆ ಮಾತ್ರ ಹೊಸದಾಗಿದೆ. ಸ್ಪೈಡರ್ ಮ್ಯಾನ್ ಮಾಡುವ ಸಾಹಸಗಳನ್ನು ಫ್ರೆಶ್ ಆಗಿ ತೋರಿಸಿದ್ದಾರೆ. ಜನರನ್ನು ಅಪಾಯದಿಂದ ಪಾರು ಮಾಡಲು ಅವನು ಮಾಡುವ ಹೋರಾಟಗಳು ಆಕರ್ಷಕವಾಗಿವೆ. ಎಂದಿನಂತೆ ಅವು ಇಷ್ಟವಾಗುತ್ತವೆ. ಆದರೆ, ಈ ಬಾರಿ ಭಾರಿ ಆ್ಯಕ್ಷನ್ ದೃಶ್ಯಗಳು, ಸೂಪರ್ ಹೀರೋಗಳ ಬ್ಲಾಸ್ಟಿಂಗ್, ಚೇಸಿಂಗ್&zwnj;ಗಳಿಲ್ಲದೆ, ಇದ್ದಷ್ಟರಲ್ಲೇ ಡೀಸೆಂಟ್ ಆಗಿ, ರಿಯಲಿಸ್ಟಿಕ್ ಆಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕರು ಆ್ಯಕ್ಷನ್ ಮತ್ತು ಎಮೋಷನ್ಸ್&zwnj;ಗಳನ್ನು ಬ್ಯಾಲೆನ್ಸ್ ಮಾಡಿದ್ದಾರೆ. ತನ್ನ ಗೆಳತಿ ಗತಕಾಲವನ್ನು ಮರೆತಾಗ, ಅವಳ ರೀಲ್ಸ್ ನೋಡುತ್ತಾ ಪೀಟರ್ ಪಾರ್ಕರ್ ಅನುಭವಿಸುವ ನೋವು, ಒಂಟಿತನದಿಂದ ಕುಗ್ಗುವ ದೃಶ್ಯಗಳು ಎಮೋಷನಲ್ ಆಗಿವೆ. ಈ ಮಾನಸಿಕ ಗೊಂದಲದಿಂದ ಅವನ ಶಕ್ತಿಗಳ ಮೇಲೂ ಪರಿಣಾಮ ಬೀರುತ್ತದೆ.&lt;img&gt;&lt;/p&gt;&lt;p&gt;ಹೈಪರ್ ಟೆನ್ಷನ್ ಅನುಭವಿಸುತ್ತಾನೆ. ಅದನ್ನು ನಿಯಂತ್ರಿಸಲು ಅವನು ಪಡುವ ಕಷ್ಟವನ್ನು ಚೆನ್ನಾಗಿ ತೋರಿಸಿದ್ದಾರೆ. ಇನ್ನೊಂದೆಡೆ, ನಗರಕ್ಕೆ ಬಂದ ಹೊಸ ಲೇಡಿ ವಿಲನ್, ಸ್ಪೈಡರ್&zwnj;ಮ್ಯಾನ್&zwnj;ಗಿಂತಲೂ ಪವರ್&zwnj;ಫುಲ್ ಆಗಿರುತ್ತಾಳೆ. ಅವಳನ್ನು ಎದುರಿಸಲು 'ಡ್ಯಾಮೇಜ್ ಕಂಟ್ರೋಲ್' ಜೊತೆ ಸ್ಪೈಡರ್&zwnj;ಮ್ಯಾನ್ ಕೈಜೋಡಿಸುವ ದೃಶ್ಯಗಳು ಎಂಗೇಜಿಂಗ್ ಆಗಿವೆ. ಈ ಸಿನಿಮಾದಲ್ಲಿ ಮಾನವೀಯ ಭಾವನೆಗಳಿಗೆ ಹೆಚ್ಚು ಒತ್ತು ನೀಡಿರುವುದರಿಂದ ಭಾರತೀಯರಿಗೆ ಇದು ಬೇಗ ಕನೆಕ್ಟ್ ಆಗುತ್ತದೆ. ಲವ್ ಸೀನ್&zwnj;ಗಳು ಚೆನ್ನಾಗಿವೆ. ಪ್ರೇಯಸಿಯ ವಿಚಾರದಲ್ಲಿ ಪೀಟರ್ ಎದುರಿಸುವ ಸಂಘರ್ಷ ಮನಮುಟ್ಟುತ್ತದೆ. ಹಾಗೆಯೇ, ಪನಿಷರ್ ಜೊತೆಗಿನ ಆ್ಯಕ್ಷನ್ ಸೀನ್ ಗಮನ ಸೆಳೆಯುತ್ತದೆ. ವಿಲನ್ ಜೊತೆಗಿನ ಕ್ಲೈಮ್ಯಾಕ್ಸ್ ದೃಶ್ಯಗಳು ರೋಚಕವಾಗಿವೆ. VFX ಮತ್ತು ವಿಜ್ಯುವಲ್ಸ್ ಚಿತ್ರದ ಮತ್ತೊಂದು ಹೈಲೈಟ್.&lt;/p&gt;&lt;p&gt;ಈ ಚಿತ್ರದ ಅತಿ ದೊಡ್ಡ ಹೈಲೈಟ್ ಅಂದ್ರೆ ಹಲ್ಕ್ ಪಾತ್ರ. ವಿಲನ್&zwnj;ನ ಹಿಡಿತಕ್ಕೆ ಸಿಕ್ಕ ಹಲ್ಕ್ ಜೊತೆ ಸ್ಪೈಡರ್ ಮ್ಯಾನ್ ಫೈಟ್ ಮಾಡುವ ಸೀನ್ ಸಖತ್ ಆಗಿದೆ. ಸ್ಪೈಡರ್ ಮ್ಯಾನ್ ಆದರೂ ತಾನೂ ಒಬ್ಬ ಸಾಮಾನ್ಯ ಮನುಷ್ಯ, ತನಗೂ ಎಲ್ಲರಂತೆ ಭಾವನೆಗಳಿವೆ, ಮನಸ್ಸಿದೆ, ನೋವಿದೆ ಎಂದು ಹೇಳುವ ರೀತಿ ಇಷ್ಟವಾಗುತ್ತದೆ. ಒಟ್ಟಿನಲ್ಲಿ, ಈ ಸಿನಿಮಾ ಆ್ಯಕ್ಷನ್ ಜೊತೆಗೆ ಎಮೋಷನ್ಸ್ ಹೈಲೈಟ್ ಆಗಿ ಸಾಗುತ್ತದೆ. ಪೀಟರ್ ಆಗಿ, ಸ್ಪೈಡರ್ ಮ್ಯಾನ್ ಆಗಿ ಟಾಮ್ ಹಾಲೆಂಡ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ತುಂಬಾ ಮೆಚ್ಯೂರ್ಡ್ ಆಗಿ ನಟಿಸಿದ್ದಾರೆ. ಯಾವುದೇ ಆತುರವಿಲ್ಲದೆ, ಸೆಟಲ್ಡ್ ಆಗಿ ನಟಿಸಿ ಮೆಚ್ಚಿಸಿದ್ದಾರೆ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ತಮ್ಮ ಬೆಸ್ಟ್ ನೀಡಿದ್ದಾರೆ.&lt;/p&gt;&lt;p&gt;ಹಲವು ಕಡೆ ವಾವ್ ಎನಿಸುತ್ತಾರೆ. ಒಂದು ಕಡೆ ಅದೃಶ್ಯ ಶಕ್ತಿಯೊಂದಿಗೆ ಹೋರಾಡುತ್ತಾ, ನಗರವನ್ನು ಕಾಪಾಡುತ್ತಾ, ಇನ್ನೊಂದೆಡೆ ತನ್ನ ಪ್ರೇಯಸಿಯ ವಿಚಾರದಲ್ಲಿ ಮಾನಸಿಕವಾಗಿ ನರಳುವ ವ್ಯಕ್ತಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಪ್ರೀತಿಯ ದೃಶ್ಯಗಳಲ್ಲಿ ಮತ್ತು ತನ್ನಲ್ಲೇ ಕುಗ್ಗುವ ಸೀನ್&zwnj;ಗಳಲ್ಲಿ ಮಿಂಚಿದ್ದಾರೆ. ಎಮ್&zwnj;ಜೆ ಪಾತ್ರದಲ್ಲಿ ಜೆಂಡಾಯಾ ನಟನೆಯೂ ಚೆನ್ನಾಗಿದೆ. ಅವರ ಎಕ್ಸ್&zwnj;ಪ್ರೆಶನ್ಸ್ ಮತ್ತು ಎಮೋಷನ್ಸ್ ಆಕರ್ಷಕವಾಗಿವೆ. ನೆಡ್ ಪಾತ್ರ ನಗಿಸುತ್ತದೆ. ಜೀನ್ ಪಾತ್ರದಲ್ಲಿ ಸೇಡೀ ಸಿಂಕ್ ಕೂಡ ಗಮನ ಸೆಳೆಯುತ್ತಾರೆ. ಪನಿಷರ್ ಆಗಿ ಜಾನ್ ಬರ್ನ್&zwnj;ಥಾಲ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಧಾರಿಗಳು ಓಕೆ. ವಿಜ್ಯುವಲ್ಸ್ ಸಿನಿಮಾದ ಮುಖ್ಯ ಹೈಲೈಟ್. VFX ಕೂಡ ಅಷ್ಟೇ ಚೆನ್ನಾಗಿ ಮೂಡಿಬಂದಿದೆ. ನಮಗೆ ಒಂದು ಹೊಸ ಅನುಭವ ನೀಡುತ್ತದೆ.&lt;img&gt;&lt;/p&gt;&lt;h2&gt;&lt;strong&gt;ಕೊನೆಯ ಮಾತು: ನೋಡಬಹುದಾ, ಬೇಡ್ವಾ?&lt;/strong&gt;&lt;/h2&gt;&lt;p&gt;ನಿರ್ದೇಶನ ಚೆನ್ನಾಗಿದೆ, ಆದರೆ ಸಿನಿಮಾ ಸ್ವಲ್ಪ ನಿಧಾನ ಎನಿಸುತ್ತದೆ. ಕೆಲವು ದೃಶ್ಯಗಳನ್ನು ಎಳೆದಂತೆ ಭಾಸವಾಗುತ್ತದೆ. ಎಡಿಟಿಂಗ್ ಪರವಾಗಿಲ್ಲ. ಸಂಗೀತದ ವಿಚಾರದಲ್ಲಿ ಸಿನಿಮಾ ಚೆನ್ನಾಗಿದೆ. ಹಿನ್ನೆಲೆ ಸಂಗೀತ ತುಂಬಾ ನೀಟ್ ಆಗಿದೆ ಮತ್ತು ಕಥೆಗೆ ಪೂರಕವಾಗಿದೆ. ಭಾವನಾತ್ಮಕ ದೃಶ್ಯಗಳಲ್ಲಿ ಇದು ಚೆನ್ನಾಗಿ ವರ್ಕ್ ಆಗಿದೆ. 'ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ' ಸಿನಿಮಾವು ಆ್ಯಕ್ಷನ್, ವಿಜ್ಯುವಲ್ಸ್ ಮತ್ತು ಎಮೋಷನ್ಸ್&zwnj;ನಿಂದ ಕಣ್ಮನ ಸೆಳೆಯುವ ಚಿತ್ರ. ಈ ಸರಣಿಯ ಅಭಿಮಾನಿಗಳನ್ನು ಮಾತ್ರವಲ್ಲದೆ, ಸಾಮಾನ್ಯ ಪ್ರೇಕ್ಷಕರನ್ನೂ ಈ ಸಿನಿಮಾ ರಂಜಿಸುತ್ತದೆ. ಇದೊಂದು ಒಳ್ಳೊಳ್ಳೆ ಥಿಯೇಟ್ರಿಕಲ್ ಅನುಭವ ನೀಡುತ್ತದೆ ಎನ್ನಬಹುದು.&lt;/p&gt;&lt;p&gt;&lt;strong&gt;ರೇಟಿಂಗ್:&lt;/strong&gt; 3&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/spider-man-brand-new-day-review-is-tom-hollands-new-film-worth-watching-gvd/articleshow-1pked34"/>
        </item>
        <item>
            <title><![CDATA[ಸಿಕ್ಕಾಪಟ್ಟೆ ಹಣ ಕಳೆದುಕೊಂಡ ಸ್ಟಾರ್ ನಟಿ, OTP ಹೇಳಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ.. ಆದ್ರೂ ಹೀಗೆ ಆಗಿದ್ದು ಹೇಗೆ?!]]></title>
            <link>https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</link>
            <guid isPermaLink="true">https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp</guid>
            <pubDate>Thu, 30 Jul 2026 20:51:22 +0530</pubDate>
            <description><![CDATA[&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್&zwnj;ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyssdkpc2tdesyx1v004mgxx,imgname-kirti-kulhari-1785424432844.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;OTP ನೀಡಿಲ್ಲ, ಲಿಂಕ್ ಕ್ಲಿಕ್ ಮಾಡಿಲ್ಲ; ಆದ್ರೂ ನಟಿಯ ಅಕೌಂಟ್&zwnj;ನಿಂದ ಲಕ್ಷ ಲಕ್ಷ ಮಾಯ! ಸೈಬರ್ ಕಳ್ಳರ ಈ 'ಖತರ್ನಾಕ್' ಪ್ಲಾನ್ ಬೆಚ್ಚಿಬೀಳಿಸುವಂತಿದೆ!&lt;/strong&gt;&lt;/p&gt;&lt;p&gt;ಇಂದಿನ ಡಿಜಿಟಲ್ ಜಗತ್ತಿನಲ್ಲಿ ನಾವೆಲ್ಲರೂ ನಮ್ಮ ಹಣ ಸೇಫ್ ಆಗಿದೆ ಅಂದುಕೊಳ್ಳುತ್ತೇವೆ. ಆದರೆ, ಹ್ಯಾಕರ್ಸ್&zwnj;ಗಳು ಸಾಮಾನ್ಯ ಜನರನ್ನು ಬಿಡಿ, ಸ್ವತಃ ಸೆಲೆಬ್ರಿಟಿಗಳನ್ನೇ ಬೆನ್ನತ್ತಿ ಶಾಕ್ ನೀಡುತ್ತಿದ್ದಾರೆ. 'ಪಿಂಕ್' (Pink) ಮತ್ತು 'ಉರಿ' (Uri) ಸಿನಿಮಾಗಳ ಮೂಲಕ ಕಮಾಲ್ ಮಾಡಿದ್ದ ಖ್ಯಾತ ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ (Kirti Kulhari) ಅವರ ಬ್ಯಾಂಕ್ ಅಕೌಂಟ್&zwnj;ಗೆ ಕನ್ನ ಹಾಕಿರುವ ಖತರ್ನಾಕ್ ಕಳ್ಳರು, ಯಾವ ಸಿನಿಮಾ ಸೀನ್&zwnj;ಗೂ ಕಮ್ಮಿ ಇಲ್ಲದಂತೆ ಲಕ್ಷಾಂತರ ರೂಪಾಯಿ ಲೂಟಿ ಮಾಡಿದ್ದಾರೆ!&lt;/p&gt;&lt;p&gt;&lt;img&gt;&lt;/p&gt;&lt;h2&gt;ಥಿಯೇಟರ್&zwnj;ನಲ್ಲಿ ಸಿನಿಮಾ ನೋಡುತ್ತಿದ್ದ ನಟಿಗೆ ಅಸಲಿ ಸಿನಿಮಾ ಶುರುವಾಗಿದ್ದು ಅಲ್ಲಿ!&lt;/h2&gt;&lt;p&gt;ಕಳೆದ ಜುಲೈ 24ರ ರಾತ್ರಿ, ಮುಂಬೈನ ಅಂಧೇರಿಯಲ್ಲಿರುವ ಮಲ್ಟಿಪ್ಲೆಕ್ಸ್&zwnj;ವೊಂದರಲ್ಲಿ ಕೀರ್ತಿ ಕುಲ್ಹಾರಿ ಅವರು ಆರಾಮವಾಗಿ ಸಿನಿಮಾ ವೀಕ್ಷಿಸುತ್ತಿದ್ದರು. ಆದರೆ, ತೆರೆಯ ಮೇಲೆ ಸಿನಿಮಾ ಓಡುತ್ತಿದ್ದರೆ, ಅವರ ಮೊಬೈಲ್&zwnj;ಗೆ ಬ್ಯಾಂಕ್&zwnj;ನಿಂದ ಲಟಾ ಲಟಾ ಅಂತ ಮೆಸೇಜ್&zwnj;ಗಳು ಬರತೊಡಗಿದವು. ಅವರು ಯಾವುದೇ ಶಾಪಿಂಗ್ ಮಾಡಿರಲಿಲ್ಲ, ಯಾರಿಗೂ ಹಣ ಕಳುಹಿಸಿರಲಿಲ್ಲ. ಆದರೆ, ಮೆಕ್ಸಿಕೋದ 'ಏರೋಮೆಕ್ಸಿಕೊ' ಹೆಸರಿನಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಪಾವತಿಯಾಗುತ್ತಿದೆ ಎಂಬ ನೋಟಿಫಿಕೇಶನ್ ನೋಡಿ ನಟಿ ಕಂಗಾಲಾದರು.&lt;/p&gt;&lt;p&gt;ಅರೆಕ್ಷಣದಲ್ಲಿ ಮಾಯವಾಯಿತು 2.43 ಲಕ್ಷ ರೂಪಾಯಿ!&lt;/p&gt;&lt;p&gt;ಕೇವಲ ಕೆಲವೇ ನಿಮಿಷಗಳಲ್ಲಿ ವಂಚಕರು ನಟಿಯ ಕ್ರೆಡಿಟ್ ಕಾರ್ಡ್&zwnj;ನಿಂದ ಬರೋಬ್ಬರಿ 2.11 ಲಕ್ಷ ರೂಪಾಯಿಯನ್ನು ಎಗರಿಸಿದ್ದರು. ಅಷ್ಟಕ್ಕೆ ಸುಮ್ಮನಾಗದ ಹ್ಯಾಕರ್ಸ್ ಮತ್ತೆ ನಾಲ್ಕು ಬಾರಿ ಹಣ ಕದಿಯಲು ಯತ್ನಿಸಿದರು. ತಕ್ಷಣವೇ ಬ್ಯಾಂಕ್&zwnj;ನಿಂದ ಕರೆ ಬಂದಾಗ ಎಚ್ಚೆತ್ತ ಕೀರ್ತಿ, ಅಕೌಂಟ್&zwnj;ನಲ್ಲಿ ಏನೋ ದೊಡ್ಡ ವಂಚನೆ ನಡೆಯುತ್ತಿದೆ ಎಂದು ಅರಿತು ತಮ್ಮ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿಸಿದರು. ಅಷ್ಟರಲ್ಲಾಗಲೇ 2.43 ಲಕ್ಷ ರೂಪಾಯಿ ಅವರ ಕೈಬಿಟ್ಟು ಹೋಗಿತ್ತು. ಕೂಡಲೇ ಅವರು ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೌಡಾಯಿಸಿ ಸೈಬರ್ ಕ್ರೈಮ್ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;ಇಲ್ಲಿ ಅಸಲಿ ಪ್ರಶ್ನೆ ಇರೋದೇ ಇಲ್ಲಿ; OTP ನೀಡದಿದ್ದರೂ ಹಣ ಹೋಗಿದ್ದು ಹೇಗೆ?&lt;/h3&gt;&lt;p&gt;ಸಾಮಾನ್ಯವಾಗಿ ನಾವು ಯಾರೊಂದಿಗೂ OTP (One Time Password) ಹಂಚಿಕೊಳ್ಳದಿದ್ದರೆ ಹಣ ಸುರಕ್ಷಿತವಾಗಿರುತ್ತದೆ ಎಂದು ನಂಬುತ್ತೇವೆ. ಆದರೆ ಕೀರ್ತಿ ಕುಲ್ಹಾರಿ ಅವರ ಪ್ರಕರಣ ಸೈಬರ್ ತಜ್ಞರನ್ನೂ ಚಿಂತೆಗೀಡು ಮಾಡಿದೆ. ನಟಿ ಪೊಲೀಸರಿಗೆ ನೀಡಿದ ಹೇಳಿಕೆಯಂತೆ, ಅವರು ಯಾರೊಂದಿಗೂ OTP ಹೇಳಿಲ್ಲ, ಕಾರ್ಡ್ ಪಿನ್ ಹಂಚಿಕೊಂಡಿಲ್ಲ ಅಥವಾ ಯಾವುದೇ ಅನುಮಾನಾಸ್ಪದ ಲಿಂಕ್ ಮೇಲೆ ಕ್ಲಿಕ್ ಮಾಡಿಲ್ಲ.&lt;/p&gt;&lt;p&gt;ಸೈಬರ್ ಪೊಲೀಸರ ಪ್ರಕಾರ, ಇದು 'ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್' ಲೂಪ್&zwnj;ಹೋಲ್! ಹೌದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಣ ಪಾವತಿ ಮಾಡುವಾಗ ಭಾರತದಂತೆ OTP ಕೇಳುವುದಿಲ್ಲ. ಕೇವಲ ಕಾರ್ಡ್ ನಂಬರ್ ಮತ್ತು CVV ಇದ್ದರೆ ಸಾಕು, ಜಗತ್ತಿನ ಯಾವುದೇ ಮೂಲೆಯಿಂದ ಹಣ ವರ್ಗಾಯಿಸಬಹುದು. ವಂಚಕರು 'ಡಾರ್ಕ್ ವೆಬ್' ಮೂಲಕ ನಟಿಯ ಕಾರ್ಡ್ ವಿವರಗಳನ್ನು ಖರೀದಿಸಿರಬಹುದು ಅಥವಾ ಅವರ ಮೊಬೈಲ್&zwnj;ಗೆ ಗುಟ್ಟಾಗಿ 'ಸ್ಪೈವೇರ್' ಕಳುಹಿಸಿ ಮಾಹಿತಿ ಕದ್ದಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸೈಬರ್ ತಜ್ಞರ ಎಚ್ಚರಿಕೆ: ನೀವು ಸೇಫ್ ಆಗಿರಬೇಕೆ?&lt;/p&gt;&lt;p&gt;ಈ ಘಟನೆಯಿಂದ ನಾವೆಲ್ಲರೂ ಕಲಿಯಬೇಕಾದ ದೊಡ್ಡ ಪಾಠವಿದೆ. ಫ್ರೀ ಸಿಗುತ್ತದೆ ಎಂದು ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣ ಅಥವಾ ಕೆಫೆಗಳಲ್ಲಿ 'ಪಬ್ಲಿಕ್ ವೈ-ಫೈ' (Public Wi-Fi) ಬಳಸಿ ಹಣದ ವ್ಯವಹಾರ ಮಾಡಬೇಡಿ. ನಿಮ್ಮ ಕ್ರೆಡಿಟ್ ಕಾರ್ಡ್&zwnj;ನಲ್ಲಿ ಇಂಟರ್ನ್ಯಾಷನಲ್ ಟ್ರಾನ್ಸಾಕ್ಷನ್ ಲಿಮಿಟ್ ಅನ್ನು ಆಫ್ ಮಾಡಿ ಇಡಿ ಅಥವಾ ಕಡಿಮೆ ಮಾಡಿಡಿ. ಕೆವೈಸಿ ಅಪ್&zwnj;ಡೇಟ್ ಅಥವಾ ಉಚಿತ ಉಡುಗೊರೆಯ ಹೆಸರಿನಲ್ಲಿ ಬರುವ ಲಿಂಕ್&zwnj;ಗಳಿಂದ ದೂರವಿರಿ.&lt;/p&gt;&lt;p&gt;ಒಟ್ಟಿನಲ್ಲಿ, ಕೀರ್ತಿ ಕುಲ್ಹಾರಿ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಹಣ ಉಳಿದಿದ್ದರೂ, ಸೈಬರ್ ಕಳ್ಳರ ಈ ಹೊಸ ಅವತಾರ ಮಾತ್ರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/cyber-fraudsters-loot-lakhs-of-rupees-from-bollywood-actress-kirti-kulhari-bank-account/articleshow-58tgawp"/>
        </item>
        <item>
            <title><![CDATA[ನಿಕ್ ಜೋನಸ್ ಜೊತೆ ಪ್ರಿಯಾಂಕಾ, ಪಕ್ಕದಲ್ಲಿ ಮಹೇಶ್ ಬಾಬು: ವೈರಲ್ ಆಯ್ತು ಈ ಫೋಟೋ]]></title>
            <link>https://kannada.asianetnews.com/entertainment/priyanka-chopra-nick-jonas-and-mahesh-babu-enjoy-movie-night-in-hyderabad-gvd/articleshow-xor4g8n</link>
            <guid isPermaLink="true">https://kannada.asianetnews.com/entertainment/priyanka-chopra-nick-jonas-and-mahesh-babu-enjoy-movie-night-in-hyderabad-gvd/articleshow-xor4g8n</guid>
            <pubDate>Thu, 30 Jul 2026 19:44:21 +0530</pubDate>
            <description><![CDATA[&lt;p&gt;ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ ಜೊತೆ ಹೈದರಾಬಾದ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಸೂಪರ್&zwnj;ಸ್ಟಾರ್ ಮಹೇಶ್ ಬಾಬು ಜೊತೆ ಅವರು ಮೂವಿ ನೈಟ್ ಎಂಜಾಯ್ ಮಾಡಿದ್ದಾರೆ. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಶೂಟಿಂಗ್&zwnj;ಗಾಗಿ ಪ್ರಿಯಾಂಕಾ ಹೈದರಾಬಾದ್&zwnj;ನಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysnzca1hvqv9r986j32xpav,imgname-v-1785420820801.png" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಕಾರಣ, ಅವರು ಪತಿ ನಿಕ್ ಜೋನಸ್ ಜೊತೆ ಹೈದರಾಬಾದ್&zwnj;ನಲ್ಲಿ ಮೂವಿ ನೈಟ್ ಎಂಜಾಯ್ ಮಾಡಿದ್ದಾರೆ. ಇವರಿಗೆ ಸಾಥ್ ಕೊಟ್ಟಿದ್ದು ತೆಲುಗು ಸೂಪರ್&zwnj;ಸ್ಟಾರ್ ಮಹೇಶ್ ಬಾಬು. ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಶೂಟಿಂಗ್ ನಡುವೆ ಪ್ರಿಯಾಂಕಾ ಈ ರೀತಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಹೈದರಾಬಾದ್, ಗ್ಲೋಬಲ್ ಎಂಟರ್&zwnj;ಟೈನ್&zwnj;ಮೆಂಟ್&zwnj; ಹಬ್ ಆಗಿ ಬೆಳೆಯುತ್ತಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.&lt;/p&gt;&lt;p&gt;ಎಸ್.ಎಸ್. ರಾಜಮೌಳಿ ನಿರ್ದೇಶನದ ಆ್ಯಕ್ಷನ್-ಅಡ್ವೆಂಚರ್ ಚಿತ್ರಕ್ಕಾಗಿ ಪ್ರಿಯಾಂಕಾ ಹೈದರಾಬಾದ್&zwnj;ನಲ್ಲಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಕೂಡ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ಪ್ರಿಯಾಂಕಾ ವೃತ್ತಿಜೀವನದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಪತಿ ನಿಕ್ ಜೋನಸ್ ಮತ್ತು ಮಗಳು ಮಾಲ್ತಿ ಮೇರಿ ಕೂಡ ಅವರ ಜೊತೆಗಿದ್ದಾರೆ. ಹೀಗಾಗಿ, ಈ ಐತಿಹಾಸಿಕ ನಗರದಲ್ಲಿ ಪ್ರಿಯಾಂಕಾ ಕೆಲಸ ಮತ್ತು ಕುಟುಂಬ ಎರಡಕ್ಕೂ ಸಮಯ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;AMB ಸಿನಿಮಾಸ್&zwnj;ನಲ್ಲಿ ಸ್ಟಾರ್&zwnj;ಗಳ ದಂಡು, ಫ್ಯಾನ್ಸ್ ಫುಲ್ ಖುಷ್&lt;/strong&gt;&lt;/p&gt;&lt;p&gt;ಹೈದರಾಬಾದ್&zwnj;ನ AMB ಸಿನಿಮಾಸ್&zwnj;ನಲ್ಲಿ ಈ ಮೂವರು ಸ್ಟಾರ್&zwnj;ಗಳು ಒಟ್ಟಿಗೆ ಕಾಣಿಸಿಕೊಂಡು ಅಕ್ಷರಶಃ ಮಿಂಚಿದ್ದಾರೆ. ಈ ಪ್ರೀಮಿಯಂ ಮಲ್ಟಿಪ್ಲೆಕ್ಸ್ ಚೈನ್&zwnj;ನ ಸಹ-ಮಾಲೀಕ ಸ್ವತಃ ಮಹೇಶ್ ಬಾಬು. ಹೀಗಾಗಿ ಈ ಭೇಟಿ ಅಭಿಮಾನಿಗಳಿಗೆ ಮತ್ತಷ್ಟು ಸ್ಪೆಷಲ್ ಎನಿಸಿದೆ. ಈ ಸ್ಟಾರ್&zwnj;ಗಳು ಬಂದಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಇವರ ಕ್ಯಾಂಡಿಡ್ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.&lt;/p&gt;&lt;p&gt;ಈ ವೇಳೆ ಪ್ರಿಯಾಂಕಾ ಚೋಪ್ರಾ ಸಿಂಪಲ್ ಆದ್ರೂ ಸ್ಟೈಲಿಶ್ ಲುಕ್&zwnj;ನಲ್ಲಿದ್ದರು. ಅವರು ಸ್ಲೀವ್&zwnj;ಲೆಸ್ ಐವರಿ ವಿ-ನೆಕ್ ಟಾಪ್ ಧರಿಸಿದ್ದರು. ಜೊತೆಗೆ ಟಿಂಟೆಡ್ ಓವರ್&zwnj;ಸೈಜ್ಡ್ ಸನ್&zwnj;ಗ್ಲಾಸ್ ಮತ್ತು ಶೋಲ್ಡರ್ ಲೆಂತ್ ಹೇರ್&zwnj;ಸ್ಟೈಲ್ ಅವರ ಲುಕ್ ಹೆಚ್ಚಿಸಿತ್ತು. ನಿಕ್ ಜೋನಸ್ ಸಂಪೂರ್ಣ ಬಿಳಿ ಬಣ್ಣದ ಉಡುಪಿನಲ್ಲಿ ಕೂಲ್ ಆಗಿ ಕಾಣುತ್ತಿದ್ದರು. ಇನ್ನು, 'ಮ್ಯಾನ್ ಆಫ್ ದಿ ಪೀಪಲ್' ಮಹೇಶ್ ಬಾಬು, ಕಪ್ಪು ಬಣ್ಣದ ಓವರ್&zwnj;ಸೈಜ್ಡ್ ಟೀ-ಶರ್ಟ್, ಮ್ಯಾಚಿಂಗ್ ಕ್ಯಾಪ್ ಮತ್ತು ಟ್ರೌಸರ್&zwnj;ನಲ್ಲಿ ಎಂದಿನಂತೆ ಕ್ಯಾಶುವಲ್ ಹಾಗೂ ಎಲಿಗೆಂಟ್ ಆಗಿ ಕಾಣಿಸಿಕೊಂಡರು. ಅವರ ಈ ಲುಕ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;ಹೈದರಾಬಾದ್: ಶೂಟಿಂಗ್ ಮತ್ತು ಫ್ಯಾಮಿಲಿ ಲೈಫ್&zwnj;ಗೆ ಗ್ಲೋಬಲ್ ಹಬ್&lt;/strong&gt;&lt;/p&gt;&lt;p&gt;'ವಾರಣಾಸಿ' ಚಿತ್ರದ ಶೂಟಿಂಗ್ ಪ್ರಿಯಾಂಕಾ ಚೋಪ್ರಾ ಅವರನ್ನು ಹೈದರಾಬಾದ್&zwnj;ಗೆ ಕರೆತಂದಿದೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬಹಳ ದಿನಗಳ ನಂತರ ಪ್ರಿಯಾಂಕಾ ಭಾರತೀಯ ಚಿತ್ರರಂಗಕ್ಕೆ ಮರಳಿದ್ದು ಮಾತ್ರವಲ್ಲ, ಇದೇ ಮೊದಲ ಬಾರಿಗೆ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರ ಇಬ್ಬರು ದಿಗ್ಗಜರನ್ನು ಒಂದುಗೂಡಿಸಿದೆ. ಈ ಸಿನಿಮಾದ ಪ್ರಮುಖ ಭಾಗದ ಶೂಟಿಂಗ್&zwnj;ಗೆ ಹೈದರಾಬಾದ್ ಆಯ್ಕೆಯಾಗಿರುವುದು, ಅಂತರಾಷ್ಟ್ರೀಯ ಸಿನಿಮಾ ರಂಗದಲ್ಲಿ ಈ ನಗರದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇಂತಹ ದೊಡ್ಡ ಚಿತ್ರಕ್ಕೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳು ಮತ್ತು ಸಾಂಸ್ಕೃತಿಕ ಹಿನ್ನೆಲೆ ಈ ನಗರದಲ್ಲಿದೆ.&lt;/p&gt;&lt;h2&gt;&lt;strong&gt;'ವಾರಣಾಸಿ' ಚಿತ್ರದ ಬಗ್ಗೆ&lt;/strong&gt;&lt;/h2&gt;&lt;p&gt;'ವಾರಣಾಸಿ' ಸಿನಿಮಾ 2027ರ ಏಪ್ರಿಲ್ 7 ರಂದು ತೆರೆಗೆ ಬರಲಿದೆ. ಎಸ್.ಎಸ್. ರಾಜಮೌಳಿ ನಿರ್ದೇಶನ, ಪ್ರಿಯಾಂಕಾ ಚೋಪ್ರಾ ಅವರ ಸ್ಟಾರ್ ಪವರ್ ಮತ್ತು ಮಹೇಶ್ ಬಾಬು ಅವರ ಪ್ರಾದೇಶಿಕ ವರ್ಚಸ್ಸು, ಎಲ್ಲವೂ ಹೈದರಾಬಾದ್&zwnj;ನಲ್ಲಿ ಒಂದಾಗಿದೆ. ಇಷ್ಟು ದೂರದ ರಿಲೀಸ್ ಡೇಟ್, ಚಿತ್ರದ ಬೃಹತ್ ಯೋಜನೆ ಮತ್ತು ತಯಾರಿಯ ಬಗ್ಗೆ ಸುಳಿವು ನೀಡುತ್ತದೆ. ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವುದು ಖಚಿತ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/priyanka-chopra-nick-jonas-and-mahesh-babu-enjoy-movie-night-in-hyderabad-gvd/articleshow-xor4g8n"/>
        </item>
        <item>
            <title><![CDATA[ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ ಸಂಗತಿಗಳು ಇವೇ ನೋಡಿ..!]]></title>
            <link>https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d</link>
            <guid isPermaLink="true">https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d</guid>
            <pubDate>Thu, 30 Jul 2026 18:09:36 +0530</pubDate>
            <description><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು 'ರಾಮಾಯಣ'. ಬಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು, ಬಿಗ್ ಬಜೆಟ್&zwnj;ನ ಈ ಮಹಾಕಾವ್ಯ ರಾಮಾಯಣದ ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಇಂಟರ್ನೆಟ್&zwnj;ನಲ್ಲಿ ಬೆಂಕಿ ಹಚ್ಚಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysg8ps42xsv562xyjbych0h,imgname-ramayana-trailer--1--1785414834980.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ 'ರಾಮಾಯಣ' ಸುನಾಮಿ: ರಾಕಿಂಗ್ ಸ್ಟಾರ್ ರಾವಣನ ಅಬ್ಬರಕ್ಕೆ ನಡುಗಿದ ಲಂಕೆ!&lt;/strong&gt;&lt;/p&gt;&lt;p&gt;ಭಾರತೀಯ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು 'ರಾಮಾಯಣ'. ಬಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು, ಬಿಗ್ ಬಜೆಟ್&zwnj;ನ ಈ ಮಹಾಕಾವ್ಯ ರಾಮಾಯಣದ (Ramayana Trailer) ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಇಂಟರ್ನೆಟ್&zwnj;ನಲ್ಲಿ ಬೆಂಕಿ ಹಚ್ಚಿದೆ. ಕೇವಲ ಟ್ರೇಲರ್ ಅಲ್ಲ, ಇದು ದೃಶ್ಯ ಕಾವ್ಯ! ಅದೂ ನಮ್ಮ ಹೆಮ್ಮೆಯ 'ರಾಕಿಂಗ್ ಸ್ಟಾರ್' ಯಶ್ ಅವರು ರಾವಣನಾಗಿ ಅಬ್ಬರಿಸುತ್ತಿದ್ದರೆ, ಫ್ಯಾನ್ಸ್ ಎದೆಯಲ್ಲಿ ನೂರಾರು ಆನೆಗಳ ಬಲ ಬಂದಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಈ ಮೂರು ನಿಮಿಷಗಳ ಟ್ರೇಲರ್&zwnj;ನಲ್ಲಿ ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ, ಕಿಕ್ಕೇರಿಸಿದ ಆ 5 ಅಂಶಗಳು ಇಲ್ಲಿವೆ ನೋಡಿ:&lt;/h2&gt;&lt;p&gt;1. ರಾವಣನಾಗಿ ಯಶ್ 'ಮಾನ್ಸ್ಟರ್' ಎಂಟ್ರಿ!&lt;/p&gt;&lt;p&gt;ಟ್ರೇಲರ್&zwnj;ನ ಹೈಲೈಟ್ ಅಂದರೆ ಅದು ಲಂಕೇಶ್ವರನಾಗಿ ಯಶ್ ಅವರ ದರ್ಶನ. &quot;ಮೂರು ಲೋಕಗಳು ರಾವಣ ರಾಜ್ಯವನ್ನು ವೀಕ್ಷಿಸಲಿವೆ&quot; ಎನ್ನುವ ಸಂಭಾಷಣೆಯೊಂದಿಗೆ ಅವರು ತೆರೆಯ ಮೇಲೆ ಕಾಣಿಸಿಕೊಂಡಾಗ ಸಿಗುವ ಕಿಕ್ ಅಷ್ಟಿಷ್ಟಲ್ಲ. ಚಿನ್ನದ ಲಂಕೆಯಲ್ಲಿ ಲಕ್ಷಾಂತರ ಸೈನಿಕರ ಮುಂದೆ ನಿಂತು ಘರ್ಜಿಸುವ ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಮತ್ತು ಆಟಿಟ್ಯೂಡ್ ಸಖತ್ ಮಾಸ್ ಆಗಿದೆ. ಕೇವಲ ನಾಯಕನಾಗಿ ಮೆರೆದಿದ್ದ ರಾಕಿ ಭಾಯ್, ಈಗ ಜಗತ್ತಿನ ಅತೀ ದೊಡ್ಡ ವಿಲನ್ ಆಗಿ ಹೇಗೆ ಅಬ್ಬರಿಸಲಿದ್ದಾರೆ ಎಂಬ ಕುತೂಹಲ ದುಪ್ಪಟ್ಟಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;2. ಕಣ್ಮನ ಸೆಳೆಯುವ ಮಹಾವಿಷ್ಣುವಿನ ಅವತಾರ&lt;/p&gt;&lt;p&gt;ವಿಎಫ್&zwnj;ಎಕ್ಸ್ (VFX) ಅಂದರೆ ಹೀಗಿರಬೇಕು ಎಂಬಂತೆ ಚಿತ್ರದ ದೃಶ್ಯಗಳು ಮೂಡಿಬಂದಿವೆ. ಭೂಮಿಯ ಮೇಲೆ ಅಧರ್ಮ ಹೆಚ್ಚಾದಾಗ ಶ್ರೀಮನ್ನಾರಾಯಣ ಅವತರಿಸುವ ಸನ್ನಿವೇಶವು ಅದ್ಭುತವಾಗಿದೆ. ಶೇಷನಾಗನ ಮೇಲೆ ಪವಡಿಸಿರುವ ವಿಷ್ಣು, ಶಂಖ ಮತ್ತು ಕಮಲ ಹಿಡಿದು ದರ್ಶನ ನೀಡುವ ದೃಶ್ಯವು ಪ್ರೇಕ್ಷಕರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಹಾಲಿವುಡ್ ಮಟ್ಟದ ತಾಂತ್ರಿಕತೆ ಇಲ್ಲಿ ಎದ್ದು ಕಾಣುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;3. ಶಾಂತಸ್ವರೂಪಿ ರಾಮನ ಸುತ್ತ ಕಮಲದ ಹೂವುಗಳು!&lt;/p&gt;&lt;p&gt;ರಣಬೀರ್ ಕಪೂರ್ ಶ್ರೀರಾಮನಾಗಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನಬಹುದು. ಅವರು ಧ್ಯಾನಕ್ಕೆ ಕುಳಿತಾಗ ಅವರ ಸುತ್ತ ಬೃಹತ್ ಗಾತ್ರದ ಕಮಲದ ದಳಗಳು ಅರಳುವ ದೃಶ್ಯವಂತೂ ಕಣ್ಣಿಗೆ ಹಬ್ಬ. ರಾಮನ ಶಾಂತಿ ಮತ್ತು ಒಳಗಿನ ಶಕ್ತಿಯನ್ನು ಬಿಂಬಿಸುವ ಈ ದೃಶ್ಯವು ನಿರ್ದೇಶಕರ ಸೃಜನಶೀಲತೆಗೆ ಹಿಡಿದ ಕನ್ನಡಿಯಾಗಿದೆ. ಲಕ್ಷ್ಮಣನಾಗಿ ರವಿ ದುಬೆ ಕೂಡ ಅಷ್ಟೇ ಗಾಂಭೀರ್ಯದಿಂದ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;4. ಸೀತೆಯ ಕೈಯಲ್ಲಿ ಖಡ್ಗ? ಇದೇ ನೋಡಿ ಟ್ವಿಸ್ಟ್!&lt;/p&gt;&lt;p&gt;ಎಲ್ಲರೂ ಸೀತೆಯನ್ನು ಮೃದುಸ್ವಭಾವದವಳು ಎಂದು ಭಾವಿಸಿದ್ದರು. ಆದರೆ ಈ ಸಿನಿಮಾದಲ್ಲಿ ಸೈ ಪಲ್ಲವಿ ನಿರ್ವಹಿಸಿರುವ ಸೀತೆ ಕೇವಲ ಸೌಮ್ಯವತಿಯಲ್ಲ, ಆಕೆ ವೀರನಾರಿ ಕೂಡ! ಟ್ರೇಲರ್&zwnj;ನಲ್ಲಿ ಸೈ ಪಲ್ಲವಿ ಅವರು ಖಡ್ಗ ಹಿಡಿದು ಹೋರಾಡುವ ದೃಶ್ಯವು ಎಲ್ಲರ ಹುಬ್ಬೇರಿಸಿದೆ. ಇದು ಸೀತೆಯ ಶಕ್ತಿಯ ಹೊಸ ಆಯಾಮವನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನದಂತೆ ತೋರುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;5. ಬ್ರಹ್ಮಾಸ್ತ್ರದ ಮೂಲಕ ರಾಮಯುಗ ಆರಂಭ!&lt;/p&gt;&lt;p&gt;ಟ್ರೇಲರ್ ಮುಕ್ತಾಯವಾಗುವುದು ಒಂದು ಮಾಸ್ ಡೈಲಾಗ್ ಮತ್ತು ಅದ್ಭುತ ಆಕ್ಷನ್ ಸೀನ್ ಮೂಲಕ. &quot;ಇದು ರಾಮಯುಗದ ಆರಂಭ&quot; ಎಂದು ಹೇಳುತ್ತಾ ಶ್ರೀರಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ದೃಶ್ಯವು ರೋಮಾಂಚನಕಾರಿಯಾಗಿದೆ. ಅಗ್ನಿ ಮತ್ತು ಪಂಚಭೂತಗಳು ಒಂದಾಗುವ ಈ ದೃಶ್ಯವು ಪ್ರೇಕ್ಷಕರಿಗೆ ಗೂಸ್&zwnj;ಬಂಪ್ಸ್ ಗ್ಯಾರಂಟಿ ನೀಡುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇದಕ್ಕೆ ಆಸ್ಕರ್ ವಿಜೇತರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರ ಸಂಗೀತವು ಜೀವ ತುಂಬಿದೆ. ಒಟ್ಟಿನಲ್ಲಿ, 2026ರ ದೀಪಾವಳಿಗೆ ಭಾರತೀಯ ಚಿತ್ರರಂಗ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಚಿತ್ರ ಕೇವಲ ಸಿನಿಮಾವಲ್ಲ, ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆ ಎನ್ನುವುದರಲ್ಲಿ ಸಂಶಯವೇ ಇಲ್ಲ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/ramayana-trailer-sets-the-internet-ablaze-and-here-are-5-mind-blowing-elements-driving-movie-buffs-wild/articleshow-fgmsq6d"/>
        </item>
        <item>
            <title><![CDATA[ಚಿನ್ನದ ಕಿರೀಟ, ರಾಜವೈಭವ, ರೌದ್ರ ರೂಪ: ಇಲ್ಲಿದೆ ರಾಜಾಧಿರಾಜ ಯಶ್ ರಾವಣ ಪಾತ್ರದ 5 ವಿಶೇಷತೆಗಳು]]></title>
            <link>https://kannada.asianetnews.com/gallery/entertainment/yashs-ravana-avatar-in-ramayana-creates-massive-buzz-among-fans-gvd-4yepd4m</link>
            <guid isPermaLink="true">https://kannada.asianetnews.com/gallery/entertainment/yashs-ravana-avatar-in-ramayana-creates-massive-buzz-among-fans-gvd-4yepd4m</guid>
            <pubDate>Thu, 30 Jul 2026 18:06:56 +0530</pubDate>
            <description><![CDATA[&lt;p&gt;ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಲುಕ್&zwnj;ಗಳು ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysg1rq21jtpcdxcqw7b8a8d,imgname-11-1785414607586.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಲುಕ್&zwnj;ಗಳು ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.&lt;/p&gt;&lt;img&gt;&lt;p&gt;ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಲುಕ್&zwnj;ಗಳು ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಲಂಕೇಶ್ವರನಾಗಿ ಯಶ್ ಅವರ ಅವತಾರವು ಕೇವಲ ಶಕ್ತಿಯ ಪ್ರದರ್ಶನವಲ್ಲದೆ, ರಾವಣನ ಅಹಂಕಾರ, ಕ್ರೌರ್ಯ, ಸಾಮ್ರಾಜ್ಯದ ವೈಭವ ಮತ್ತು ರಾಜಗಾಂಭೀರ್ಯವನ್ನು ಪ್ರತಿಬಿಂಬಿಸುವಂತಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಈ ವಿಶೇಷ ಝಲಕ್&zwnj;ಗಳಲ್ಲಿ ಯಶ್ ಅವರ ಪಾತ್ರ ವಿನ್ಯಾಸ, ಭವ್ಯ ಸೆಟ್&zwnj;ಗಳು ಮತ್ತು ಅದ್ದೂರಿ ಮೇಕಿಂಗ್ ಗಮನ ಸೆಳೆಯುತ್ತಿವೆ. ಭಾರತೀಯ ಚಿತ್ರರಂಗದಲ್ಲಿ ರಾವಣನ ಪಾತ್ರಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯನ್ನು ಈ ದೃಶ್ಯಗಳು ಹುಟ್ಟುಹಾಕಿವೆ.&lt;/p&gt;&lt;img&gt;&lt;p&gt;ಬಿಡುಗಡೆಯಾದ ಮೊದಲ ದೃಶ್ಯದಲ್ಲೇ ರಾವಣನ ಸಾಮ್ರಾಜ್ಯದ ವೈಭವ ಅನಾವರಣಗೊಳ್ಳುತ್ತದೆ. ಭವ್ಯ ಅರಮನೆಯ ಮುಂಭಾಗದಲ್ಲಿ ಅಪಾರ ಸೈನ್ಯದ ಎದುರು ಕೈಚಾಚಿ ನಿಂತಿರುವ ಯಶ್, ಮೂರು ಲೋಕಗಳ ಅಧಿಪತಿಯಂತೆ ಕಾಣಿಸುತ್ತಾರೆ. ಈ ದೃಶ್ಯವು ರಾವಣನ ಅಧಿಕಾರ, ಪ್ರಭಾವ ಮತ್ತು ಅಜೇಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ.&lt;/p&gt;&lt;img&gt;&lt;p&gt;ನವರತ್ನಗಳಿಂದ ಅಲಂಕರಿಸಿರುವ ಭವ್ಯ ಕಿರೀಟ, ಚಿನ್ನದ ಆಭರಣಗಳು, ದಟ್ಟ ಗಡ್ಡ ಮತ್ತು ಗಂಭೀರ ಮುಖಭಾವದೊಂದಿಗೆ ಯಶ್ ಅವರ ರಾವಣನ ಲುಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಲಂಕಾಧಿಪತಿಯ ಅಹಂಕಾರ ಮತ್ತು ರಾಜಮರ್ಯಾದೆಯನ್ನು ಈ ಪಾತ್ರ ವಿನ್ಯಾಸ ಅದ್ಭುತವಾಗಿ ಪ್ರತಿಬಿಂಬಿಸಿದೆ.&lt;/p&gt;&lt;img&gt;&lt;p&gt;ರಾಜ ಸಿಂಹಾಸನದ ಮೇಲೆ ಕುಳಿತಿರುವ ಯಶ್ ಅವರ ದೃಶ್ಯವು ರಾವಣನ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಕಪ್ಪು-ಹಸಿರು ಬಣ್ಣದ ರಾಜವಸ್ತ್ರ, ಚಿನ್ನದ ಕವಚ ಮತ್ತು ಭವ್ಯ ಹಿನ್ನೆಲೆ ಲಂಕೆಯ ಸಾಮ್ರಾಜ್ಯದ ಶ್ರೀಮಂತಿಕೆಯನ್ನು ತೋರಿಸುತ್ತದೆ.&lt;/p&gt;&lt;img&gt;&lt;p&gt;ಮತ್ತೊಂದು ದೃಶ್ಯದಲ್ಲಿ ಸಿಂಹದ ಎದುರು ರಾವಣನ ರೌದ್ರಾವತಾರ ಕಾಣಿಸಿಕೊಂಡಿದೆ. ಹಣೆಯ ಮೇಲಿನ ಶಿವನ ನಾಮ, ಕೋಪಭರಿತ ಕಣ್ಣುಗಳು ಮತ್ತು ಮುಖದಲ್ಲಿನ ತೇಜಸ್ಸು ರಾವಣನೊಳಗಿನ ಅಗಾಧ ಶಕ್ತಿ ಹಾಗೂ ಶಿವಭಕ್ತಿಯ ಮತ್ತೊಂದು ಮುಖವನ್ನು ಪರಿಚಯಿಸುತ್ತವೆ.&lt;/p&gt;&lt;img&gt;&lt;p&gt;ಅರಮನೆಯ ವಿಶಾಲ ಆವರಣದಲ್ಲಿ ಎರಡೂ ಕೈಗಳನ್ನು ಚಾಚಿ ಆರ್ಭಟಿಸುವ ರಾವಣನ ದೃಶ್ಯವು ಪಾತ್ರದ ಅಪಾರ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತದೆ. ಯಶ್ ಅವರ ದೇಹಭಾಷೆ ಮತ್ತು ಅಭಿನಯದ ಝಲಕ್&zwnj;ಗಳು ರಾವಣನನ್ನು ಕೇವಲ ಖಳನಾಯಕನಾಗಿ ಅಲ್ಲದೆ, ಅಪಾರ ಸಾಮರ್ಥ್ಯ ಹೊಂದಿದ ಮಹಾಪರಾಕ್ರಮಿಯಂತೆ ಪರಿಚಯಿಸುತ್ತಿವೆ. ಇನ್ನು 'ರಾಮಾಯಣ'ದಲ್ಲಿ ಯಶ್ ಅವರ ರಾವಣ ಪಾತ್ರ ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದ್ದು, ಚಿತ್ರ ಬಿಡುಗಡೆಯಾದ ಬಳಿಕ ಈ ಪಾತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/yashs-ravana-avatar-in-ramayana-creates-massive-buzz-among-fans-gvd-4yepd4m"/>
        </item>
        <item>
            <title><![CDATA[ರಾವಣನಾಗಿ ಯಶ್ ರೌದ್ರಾವತಾರ: 'ರಾಮಾಯಣ' ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದ ಆ 5 ದೃಶ್ಯಗಳು ಯಾವುವು?]]></title>
            <link>https://kannada.asianetnews.com/entertainment/ramayana-part-1-trailer-unveiled-top-5-scenes-fans-cant-stop-talking-about-gvd/articleshow-zweygok</link>
            <guid isPermaLink="true">https://kannada.asianetnews.com/entertainment/ramayana-part-1-trailer-unveiled-top-5-scenes-fans-cant-stop-talking-about-gvd/articleshow-zweygok</guid>
            <pubDate>Thu, 30 Jul 2026 17:09:50 +0530</pubDate>
            <description><![CDATA[&lt;p&gt;ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysd4z43eq80nazcs59aep17,imgname-jv-1785411566723.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಪ್ರಿಯರು ಹಲವು ತಿಂಗಳುಗಳಿಂದ ಕಾತರದಿಂದ ಕಾಯುತ್ತಿದ್ದ 'ರಾಮಾಯಣ: ಪಾರ್ಟ್ 1' ಚಿತ್ರದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಮಹಾಕಾವ್ಯ 'ರಾಮಾಯಣ' ಆಧಾರಿತ ಈ ಬಿಗ್ ಬಜೆಟ್ ಸಿನಿಮಾ ತನ್ನ ಅದ್ಭುತ ದೃಶ್ಯ ವೈಭವ, ಹಾಲಿವುಡ್ ಮಟ್ಟದ ವಿಎಫ್&zwnj;ಎಕ್ಸ್ ಹಾಗೂ ಭಾವನಾತ್ಮಕ ನಿರೂಪಣೆಯಿಂದ ಮೊದಲ ನೋಟದಲ್ಲೇ ಪ್ರೇಕ್ಷಕರ ಗಮನ ಸೆಳೆದಿದೆ. ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ಟ್ರೇಲರ್ ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶೇಷವಾಗಿ ಅದರ ತಾಂತ್ರಿಕ ಗುಣಮಟ್ಟ, ಹಿನ್ನೆಲೆ ಸಂಗೀತ ಮತ್ತು ಪಾತ್ರಗಳ ವಿನ್ಯಾಸದ ಬಗ್ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಹ್ಯಾನ್ಸ್ ಝಿಮ್ಮರ್ ಮತ್ತು ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜಂಟಿಯಾಗಿ ನೀಡಿರುವ ಹಿನ್ನೆಲೆ ಸಂಗೀತ ಟ್ರೇಲರ್&zwnj;ನ ಪ್ರತಿಯೊಂದು ಫ್ರೇಮ್&zwnj;ಗೆ ಮತ್ತಷ್ಟು ಭವ್ಯತೆಯನ್ನು ನೀಡಿದೆ.&lt;/p&gt;&lt;h2&gt;&lt;strong&gt;ಟ್ರೇಲರ್&zwnj;ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ 5 ದೃಶ್ಯಗಳು&lt;/strong&gt;&lt;/h2&gt;&lt;p&gt;&lt;strong&gt;1. ರಾವಣನಾಗಿ ಯಶ್&zwnj;ರ ಭರ್ಜರಿ ಎಂಟ್ರಿ: &lt;/strong&gt;ಟ್ರೇಲರ್&zwnj;ನಲ್ಲೇ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿರುವುದು ಯಶ್ ಅವರ ರಾವಣ ಅವತಾರ. ಮೂರು ಲೋಕಗಳ ಅಧಿಪತಿಯಾಗಿ ಭವ್ಯವಾಗಿ ಕಾಣಿಸಿಕೊಂಡಿರುವ ರಾವಣ ತನ್ನ ಸಾಮ್ರಾಜ್ಯದ ಶಕ್ತಿಯನ್ನು ಸಾರುವ ಸಂಭಾಷಣೆಯೊಂದಿಗೆ ಅಬ್ಬರಿಸುತ್ತಾನೆ. ಈ ಪಾತ್ರದ ಲುಕ್, ಬಾಡಿ ಲ್ಯಾಂಗ್ವೇಜ್ ಮತ್ತು ಪ್ರೆಸೆನ್ಸ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;&lt;strong&gt;2. ಶ್ರೀಮನ್ನಾರಾಯಣನ ದಿವ್ಯ ಅವತಾರ: &lt;/strong&gt;ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗ ಧರ್ಮರಕ್ಷಣೆಗೆ ವಿಷ್ಣು ಅವತರಿಸುವ ಕ್ಷಣವನ್ನು ಅತ್ಯಂತ ಅದ್ದೂರಿಯಾಗಿ ಚಿತ್ರಿಸಲಾಗಿದೆ. ಶೇಷನಾಗನ ಮೇಲೆ ವಿರಾಜಮಾನನಾಗಿರುವ ಶ್ರೀಮನ್ನಾರಾಯಣನ ದೃಶ್ಯವು ಆಧ್ಯಾತ್ಮಿಕತೆ ಮತ್ತು ದೃಶ್ಯ ವೈಭವವನ್ನು ಒಂದೇ ವೇಳೆ ಅನುಭವಿಸುವಂತೆ ಮಾಡುತ್ತದೆ.&lt;/p&gt;&lt;p&gt;&lt;strong&gt;3. ಧ್ಯಾನಸ್ಥ ಶ್ರೀರಾಮನ ದೃಶ್ಯ:&lt;/strong&gt; ಶ್ರೀರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಶಾಂತ, ಗಂಭೀರ ಮತ್ತು ದಿವ್ಯವಾಗಿ ಕಾಣಿಸಿಕೊಂಡಿದ್ದಾರೆ. ಧ್ಯಾನದಲ್ಲಿ ತಲ್ಲೀನನಾಗಿರುವ ರಾಮನ ಸುತ್ತ ಕಮಲದ ದಳಗಳು ಅರಳುವ ದೃಶ್ಯವು ಟ್ರೇಲರ್&zwnj;ನ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗಿದೆ. ಲಕ್ಷ್ಮಣನಾಗಿ ರವಿ ದುಬೆ ಅವರ ಪಾತ್ರವೂ ಗಮನ ಸೆಳೆಯುತ್ತದೆ.&lt;/p&gt;&lt;p&gt;&lt;strong&gt;4. ಖಡ್ಗ ಹಿಡಿದ ಸೀತೆ: &lt;/strong&gt;ಸಾಯಿ ಪಲ್ಲವಿ ಅಭಿನಯದ ಸೀತೆಯ ಪಾತ್ರ ಟ್ರೇಲರ್&zwnj;ನ ಅಚ್ಚರಿಯ ಅಂಶವಾಗಿದೆ. ಕೇವಲ ಕರುಣೆ ಮತ್ತು ತ್ಯಾಗದ ಪ್ರತಿರೂಪವಾಗಿ ಮಾತ್ರವಲ್ಲದೆ, ಆತ್ಮಸ್ಥೈರ್ಯ ಮತ್ತು ಧೈರ್ಯದ ಪ್ರತೀಕವಾಗಿಯೂ ಸೀತೆಯನ್ನು ಚಿತ್ರಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಖಡ್ಗ ಹಿಡಿದಿರುವ ಸೀತೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.&lt;/p&gt;&lt;p&gt;&lt;strong&gt;5. ಬ್ರಹ್ಮಾಸ್ತ್ರದೊಂದಿಗೆ ಟ್ರೇಲರ್&zwnj;ಗೆ ಕ್ಲೈಮ್ಯಾಕ್ಸ್: &lt;/strong&gt;&quot;ಇದು ರಾಮಯುಗದ ಆರಂಭ&quot; ಎಂಬ ಸಂಭಾಷಣೆಯೊಂದಿಗೆ ಶ್ರೀರಾಮ ಬ್ರಹ್ಮಾಸ್ತ್ರವನ್ನು ಆಹ್ವಾನಿಸುವ ದೃಶ್ಯ ಟ್ರೇಲರ್&zwnj;ಗೆ ಭವ್ಯ ಅಂತ್ಯ ನೀಡುತ್ತದೆ. ಪಂಚಭೂತಗಳ ಶಕ್ತಿಯನ್ನು ಅದ್ಭುತ ವಿಎಫ್&zwnj;ಎಕ್ಸ್ ಮೂಲಕ ಮೂಡಿಸಿರುವ ಈ ದೃಶ್ಯ ಚಿತ್ರದ ತಾಂತ್ರಿಕ ಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.&lt;/p&gt;&lt;p&gt;&lt;strong&gt;ನಿರೀಕ್ಷೆ ಹೆಚ್ಚಿಸಿದ 'ರಾಮಾಯಣ': &lt;/strong&gt;ರಾಮಾಯಣದ ಮೇಲಿನ ಜನರ ಭಾವನೆಗಳಿಗೆ ಗೌರವ ನೀಡುವ ಉದ್ದೇಶದಿಂದ ಈ ಚಿತ್ರವನ್ನು ಅತ್ಯಂತ ಕಾಳಜಿಯಿಂದ ನಿರ್ಮಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಭವ್ಯ ತಾರಾಗಣ, ವಿಶ್ವಮಟ್ಟದ ತಾಂತ್ರಿಕ ತಂಡ ಮತ್ತು ಅದ್ದೂರಿ ನಿರ್ಮಾಣ ಮೌಲ್ಯಗಳಿಂದ ಈಗಾಗಲೇ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ 'ರಾಮಾಯಣ: ಪಾರ್ಟ್ 1' 2026ರ ದೀಪಾವಳಿ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಟ್ರೇಲರ್ ನೋಡಿದ ಸಿನಿಪ್ರಿಯರು ಈಗ ಚಿತ್ರಕ್ಕಾಗಿ ದಿನಗಣನೆ ಆರಂಭಿಸಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ramayana-part-1-trailer-unveiled-top-5-scenes-fans-cant-stop-talking-about-gvd/articleshow-zweygok"/>
        </item>
        <item>
            <title><![CDATA[Ramayana Trailer:  2 ಸೆಕೆಂಡ್ ಕಾಣಿಸಿಕೊಂಡ್ರೂ ಫ್ಯಾನ್ಸ್ ಗಮನ ಸೆಳೆದ ವಿವೇಕ್ ಓಬೆರಾಯ್!]]></title>
            <link>https://kannada.asianetnews.com/gallery/cine-world/just-2-seconds-on-screen-vivek-oberoi-epic-fight-with-raavan-goes-viral-z178dd9</link>
            <guid isPermaLink="true">https://kannada.asianetnews.com/gallery/cine-world/just-2-seconds-on-screen-vivek-oberoi-epic-fight-with-raavan-goes-viral-z178dd9</guid>
            <pubDate>Thu, 30 Jul 2026 15:40:29 +0530</pubDate>
            <description><![CDATA[&lt;p&gt;Ramayana Trailer : ಬಹುನಿರೀಕ್ಷಿತ ರಾಮಾಯಣ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದ್ರಲ್ಲಿ ವಿವೇಕ್ ಓಬೆರಾಯ್ ಎಲ್ಲರ ಗಮನ ಸೆಳೆದಿದ್ದಾರೆ. ಅವ್ರ ಪಾತ್ರ ಯಾವ್ದು ಎಂಬ ಗುಟ್ಟು ಬಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kys7qvmdzxd0wbmxedvnxnz4,imgname-vivek-oberoi-1785405894285.jpg" type="image/jpeg" height="390" width="690"/>
            <content:encoded><![CDATA[&lt;p&gt;Ramayana Trailer : ಬಹುನಿರೀಕ್ಷಿತ ರಾಮಾಯಣ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಇದ್ರಲ್ಲಿ ವಿವೇಕ್ ಓಬೆರಾಯ್ ಎಲ್ಲರ ಗಮನ ಸೆಳೆದಿದ್ದಾರೆ. ಅವ್ರ ಪಾತ್ರ ಯಾವ್ದು ಎಂಬ ಗುಟ್ಟು ಬಯಲಾಗಿದೆ.&lt;/p&gt;&lt;img&gt;&lt;p&gt;ಯಶ್, ರಣಬೀರ್ ಕಪೂರ್ ಅಭಿನಯದ, ಬಹುನಿರೀಕ್ಷಿತ ಸಿನಿಮಾ ರಾಮಾಯಣದ ಪಾರ್ಟ್ 1 ರ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲಿ ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಪಾತ್ರಗಳನ್ನು ಮಾತ್ರವಲ್ಲದೆ, ಶೀಬಾ ಚಡ್ಡಾ ಮತ್ತು ರಾಕುಲ್ ಪ್ರೀತ್ ಸಿಂಗ್ ಪಾತ್ರಗಳನ್ನು ಬಹಿರಂಗಪಡಿಸಲಾಗಿದೆ. ಆದ್ರೆ ಈ ಟ್ರೇಲರ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ವಿವೇಕ್ ಒಬೆರಾಯ್.&lt;/p&gt;&lt;img&gt;&lt;p&gt;ರಾಮಾಯಣ ಟ್ರೇಲರ್ನಲ್ಲಿ ವಿವೇಕ್ ಒಬೆರಾಯ್ ಅವರ ಸೀನ್ ಕೇವಲ ಎರಡು ಸೆಕೆಂಡುಗಳ ಕಾಲ ಬಂದು ಹೋಗುತ್ತೆ. ಆದ್ರೆ ಅದೇ ಪ್ರೇಕ್ಷಕರ ಗಮನ ಸೆಳೆದಿದೆ. ವಿವೇಕ್ ಓಬೆರಾಯ್, ರಾವಣ ಅಲಿಯಾಸ್ ಯಶ್ ಜೊತೆ ಯುದ್ಧ ಮಾಡ್ತಿರೋದನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಈಗ ಸಿನಿಮಾದಲ್ಲಿ ಓಬೆರಾಯ್ ಪಾತ್ರ ಯಾವ್ದು ಎನ್ನುವ ಚರ್ಚೆ ಶುರುವಾಗಿದೆ.&lt;/p&gt;&lt;img&gt;&lt;p&gt;ವಿವೇಕ್ ಓಬೆರಾಯ್ ವಿದ್ಯುತ್ಜಿಹ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿದ್ಯುತ್ಜಿಹ್ವ ಕಲ್ಕೇಯ ರಾಕ್ಷಸ ಕುಲದ ರಾಜಕುಮಾರ ಮತ್ತು ಶೂರ್ಪನಖಿ ಪತಿ. ರಾವಣನು ಯುದ್ಧದಲ್ಲಿ ವಿದ್ಯುತ್ಜಿಹ್ವನನ್ನು ಕೊಲ್ಲುತ್ತಾನೆ.&lt;/p&gt;&lt;img&gt;&lt;p&gt;ಈಗ ಬಿಡುಗಡೆಯಾದ ಟ್ರೇಲರ್ನಲ್ಲಿ ವಿವೇಕ್ ಮತ್ತು ಯಶ್ ನಡುವಿನ ಹೋರಾಟದ ದೃಶ್ಯ ಇದೆ. ಅದು ಅದ್ಭುತವಾಗಿ ಮೂಡಿ ಬಂದಿದೆ. ಜನರು ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಓಬೆರಾಯ್ ದೃಶ್ಯವನ್ನು ಇಷ್ಟಪಡುತ್ತಿದ್ದಾರೆ. ಜನರು ಆ ಪಾತ್ರ ವಿವೇಕ್ ಗೆ ಸೂಕ್ತವಾಗಿದೆ ಅಂತ ಕಮೆಂಟ್ ಮಾಡ್ತಿದ್ದಾರೆ.&lt;/p&gt;&lt;img&gt;&lt;p&gt;ನಿತೇಶ್ ತಿವಾರಿ ಅವರ ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ ಈ ವರ್ಷ ದೀಪಾವಳಿಯಂದು ಬಿಡುಗಡೆಯಾಗಲಿದೆ. 4,000 ಕೋಟಿ ವೆಚ್ಚದ ಈ ಚಿತ್ರವನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ರಣಬೀರ್ ಕಪೂರ್ ಮೊದಲ ಬಾರಿಗೆ ಪರದೆಯ ಮೇಲೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/cine-world/just-2-seconds-on-screen-vivek-oberoi-epic-fight-with-raavan-goes-viral-z178dd9"/>
        </item>
        <item>
            <title><![CDATA[ರಾಮ, ರಾವಣ ಭರ್ಜರಿಯಾಗಿ ಮಿಂಚಿದ ‘Ramayana’ ಟ್ರೈಲರ್’ನಲ್ಲಿ ಮುಖ್ಯ ಪಾತ್ರವೇ ಮಿಸ್ಸಿಂಗ್…. ವೀಕ್ಷಕರ ಬೇಸರ]]></title>
            <link>https://kannada.asianetnews.com/cine-world/ramayana-trailer-sparks-buzz-but-fans-disappointed-as-hanuman-is-missing/articleshow-c0hzyiz</link>
            <guid isPermaLink="true">https://kannada.asianetnews.com/cine-world/ramayana-trailer-sparks-buzz-but-fans-disappointed-as-hanuman-is-missing/articleshow-c0hzyiz</guid>
            <pubDate>Thu, 30 Jul 2026 16:29:18 +0530</pubDate>
            <description><![CDATA[&lt;p&gt;Ramayana Trailer: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಚಿತ್ರ 'ರಾಮಾಯಣ'ದ ಟ್ರೇಲರ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅವರನ್ನು ಸಾಕಷ್ಟು ಹೊಗಳಲಾಗುತ್ತಿದ್ದರೂ, ಒಂದು ಪಾತ್ರವನ್ನು ಅಭಿಮಾನಿಗಳು ಮಿಸ್ ಮಾಡುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kysas6eyg9fdn2rjty67hmss,imgname-ramayana-trailer-1785409083869.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;&lsquo;ರಾಮಾಯಣ&rsquo; ಟ್ರೈಲರ್ ನಲ್ಲಿ ಮುಖ್ಯ ಪಾತ್ರಧಾರಿಯೇ ಮಿಸ್ಸಿಂಗ್&lt;/strong&gt;&lt;/h2&gt;&lt;p&gt;ನಿತೇಶ್ ತಿವಾರಿ ಅವರ ಮೆಗಾ-ಬಜೆಟ್ ಸಿನಿಮಾ &quot;ರಾಮಾಯಣ&quot;. ಸಿನಿಮಾ ಘೋಷಣೆಯಾದಾಗಿನಿಂದ, ಪ್ರೇಕ್ಷಕರು ಅದರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ದೀಪಾವಳಿಯ ಆಸುಪಾಸಿನಲ್ಲಿ ಇದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಟ್ರೇಲರ್ ಈಗ ಬಿಡುಗಡೆಯಾಗಿದ್ದು, 4 ನಿಮಿಷ, 9 ಸೆಕೆಂಡುಗಳ ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದ್ದು, ಟ್ರೈಲರ್ ನೋಡಿ ಅಭಿಮಾನಿಗಳು, ಸಿನಿರಸಿಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಟ್ರೇಲರ್ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಿದೆ ಎಂದು ವರದಿಯಾಗಿದೆ. ಟ್ರೇಲರ್ ನೋಡಿದ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಆದರೆ ಟ್ರೈಲರ್ ನಲ್ಲಿ ಮುಖ್ಯ ಪಾತ್ರವೇ ಮಿಸ್ಸಿಂಗ್ ಎನ್ನುತ್ತಿದ್ದಾರೆ ಜನ.&lt;/p&gt;&lt;p&gt;ಟ್ರೇಲರ್&zwnj;ನಲ್ಲಿ, ರಣಬೀರ್ ಕಪೂರ್ ಭಗವಾನ್ ಶ್ರೀರಾಮನಾಗಿ ಡಿವೈನ್ ಮತ್ತು ಶಕ್ತಿಶಾಲಿಯಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ತಾಯಿ ಸೀತೆಯ ಪಾತ್ರದಲ್ಲಿ ಸುಂದರವಾಗಿ ಮತ್ತು ಪರ್ಫೆಕ್ಟ್ ಆಗಿ ಕಾಣುತ್ತಾರೆ, ಆ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ. ಯಶ್ ಬಗ್ಗೆ ಹೇಳುವುದಾದರೆ, ಟ್ರೇಲರ್&zwnj;ನಲ್ಲಿ ಅವರು ರಾವಣನ ಪಾತ್ರದಲ್ಲಿ ಸಂಪೂರ್ಣವಾಗಿ ಟ್ರೈಲರ್&rsquo;ನಲ್ಲಿ ಆವರಿಸಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದಾರೆ. ಟ್ರೇಲರ್&zwnj;ನ ಭವ್ಯ ದೃಶ್ಯಗಳು, ಬೃಹತ್ ಸೆಟ್&zwnj;ಗಳು ಮತ್ತು ಮಹಾಕಾವ್ಯದ ಭಾವನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಆದರೂ, ವೀಕ್ಷಕರನ್ನು ಕಾಡುತ್ತಿರುವ ಒಂದು ವಿಷಯವೆಂದರೆ ಹನುಮಾನ್, ಅಂದ್ರೆ ಸನ್ನಿ ಡಿಯೋಲ್ ಎಲ್ಲಿಯೂ ಕಾಣಿಸದಿರುವುದು. ಟ್ರೇಲರ್ ಬಿಡುಗಡೆಯಾದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ &quot;ಹನುಮಾನ್ ಎಲ್ಲಿ?&quot; ಎನ್ನುವ ಪ್ರಶ್ನೆ ಚರ್ಚೆಯಲ್ಲಿದೆ.&lt;/p&gt;&lt;h3&gt;&lt;strong&gt;&lsquo;ಹನುಮಾನ್ ಎಲ್ಲಿ?&rsquo; ಕೇಳುತ್ತಿದ್ದಾರೆ ಸಿನಿ ರಸಿಕರು&lt;/strong&gt;&lt;/h3&gt;&lt;p&gt;4 ನಿಮಿಷ 9 ಸೆಕೆಂಡುಗಳ ಈ ಟ್ರೇಲರ್&zwnj;ನಲ್ಲಿ ರಾಮ ಮತ್ತು ಸೀತೆಯ ಮದುವೆ, ವನವಾಸ, ಶೂರ್ಪನಖಿಯ ಘಟನೆ, ಸೀತೆಯ ಅಪಹರಣ ಮತ್ತು ರಾವಣನೊಂದಿಗಿನ ಯುದ್ಧದ ಬಹುತೇಕ ಎಲ್ಲಾ ಅಂಶಗಳು ಒಳಗೊಂಡಿವೆ. ಆದರೆ, ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿರುವ ಸನ್ನಿ ಡಿಯೋಲ್ ಟ್ರೇಲರ್&zwnj;ನಲ್ಲಿ ಕಾಣೆಯಾಗಿದ್ದು, ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಟ್ರೇಲರ್&zwnj;ನಲ್ಲಿ ಅಂತಹ ಪ್ರಮುಖ ಪಾತ್ರವನ್ನು ಏಕೆ ಸೇರಿಸಲಾಗಿಲ್ಲ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಅಥವಾ ರಾಮಾಯಣ ಭಾಗ 2ಕ್ಕಾಗಿ ಹನುಮಂತನ ಪಾತ್ರವನ್ನು ಸೀಕ್ರೆಟ್ ಆಗಿ ಇಡಲಾಗಿದೆಯೇ ಎಂದು ಸಹ ಹೇಳಲಾಗುತ್ತಿದೆ.&lt;/p&gt;&lt;p&gt;ಈ ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಗುತ್ತಿದೆ. ರಾಮಾಯಣದ ಮೊದಲ ಭಾಗ 2026 ರ ದೀಪಾವಳಿಯ ಸುಮಾರಿಗೆ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027 ರಲ್ಲಿ ಬಿಡುಗಡೆಯಾಗಲಿದೆ. ರಾಮಾಯಣ ಕಥೆಯಲ್ಲಿ, ಸೀತೆಯ ಅಪಹರಣದ ನಂತರ ಹನುಮಂತನ ಪ್ರವೇಶವಾಗುತ್ತದೆ. ಮೊದಲ ಚಿತ್ರ ಸೀತೆಯ ಅಪಹರಣದೊಂದಿಗೆ ಕೊನೆಗೊಂಡರೆ, ಎರಡನೇ ಭಾಗದಲ್ಲಿ ಹನುಮನ ಪೂರ್ಣ ಪಾತ್ರವನ್ನು ತೋರಿಸುವ ಸಾಧ್ಯತೆಯಿದೆ. ಇದು ಚಿತ್ರದ ದೊಡ್ಡ ಹೈಲೈಟ್ ಆಗಬಹುದು ಎನ್ನಲಾಗಿದೆ&lt;/p&gt;&lt;h3&gt;&lt;strong&gt;ಚಿತ್ರದಲ್ಲಿ ಯಾರಿದ್ದಾರೆ?&lt;/strong&gt;&lt;/h3&gt;&lt;p&gt;ರಾಮಾಯಣದ ತಾರಾಬಳಗ ಬಹು ದೊಡ್ಡದೇ ಇದೆ. ರಣಬೀರ್ ಕಪೂರ್ (ರಾಮ್), ಸಾಯಿ ಪಲ್ಲವಿ (ಸೀತಾ), ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಾನ್), ಜೊತೆಗೆ ರವಿ ದುಬೆ, ಲಾರಾ ದತ್ತ, ಅರುಣ್ ಗೋವಿಲ್, ರಾಕುಲ್ ಪ್ರೀತ್ ಸಿಂಗ್ ಮತ್ತು ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರಂತಹ ಪ್ರಸಿದ್ಧ ಸಂಯೋಜಕರು ಸಂಯೋಜಿಸಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Pavna Das</dc:creator>
            <atom:link href="https://kannada.asianetnews.com/cine-world/ramayana-trailer-sparks-buzz-but-fans-disappointed-as-hanuman-is-missing/articleshow-c0hzyiz"/>
        </item>
        <item>
            <title><![CDATA[ಲೇಡಿ ಸೂಪರ್‌ಸ್ಟಾರ್ ಆದ್ರೂ ಚಿಕ್ಕ ಚಿಕ್ಕ ಕಿವಿ ಓಲೆ ಮಾರಿ ಮನೆ ಮಾಡಲು ರೆಡಿಯಾಗಿದ್ದ ನಟಿ ರಚಿತಾ ರಾಮ್]]></title>
            <link>https://kannada.asianetnews.com/gallery/entertainment/rachita-rams-sacrifice-pawning-ornaments-for-a-dream-home-peg4hyz</link>
            <guid isPermaLink="true">https://kannada.asianetnews.com/gallery/entertainment/rachita-rams-sacrifice-pawning-ornaments-for-a-dream-home-peg4hyz</guid>
            <pubDate>Thu, 30 Jul 2026 12:23:06 +0530</pubDate>
            <description><![CDATA[&lt;p&gt;Rachita Ram Dream House: ಸ್ಟಾರ್ ನಟಿಯಾದ್ರೂ ರಚಿತಾ ರಾಮ್ ಅವರಿಗೆ ದೊಡ್ಡ ಮನೆ ಕೊಳ್ಳುವಷ್ಟು ಕೈಯ್ಯಲ್ಲಿ ಹಣವಿರಲಿಲ್ಲ. ಆಗ ಆರ್.ಆರ್. ನಗರದಲ್ಲೇ ಮನೆ ಖರೀದಿಸಲು ರಚಿತಾ ರಾಮ್ ಮಾಡಿದ್ದೇನು ? ಅಂದು ಅವರ ಆಪ್ತರ ಬಳಿ ರಚಿತಾ ಹಂಚಿಕೊಂಡ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krdez3ke4jb4nszw0z4qxgj9,imgname-rachita-ram-1-1778568367726.jpg" type="image/jpeg" height="390" width="690"/>
            <content:encoded><![CDATA[&lt;p&gt;Rachita Ram Dream House: ಸ್ಟಾರ್ ನಟಿಯಾದ್ರೂ ರಚಿತಾ ರಾಮ್ ಅವರಿಗೆ ದೊಡ್ಡ ಮನೆ ಕೊಳ್ಳುವಷ್ಟು ಕೈಯ್ಯಲ್ಲಿ ಹಣವಿರಲಿಲ್ಲ. ಆಗ ಆರ್.ಆರ್. ನಗರದಲ್ಲೇ ಮನೆ ಖರೀದಿಸಲು ರಚಿತಾ ರಾಮ್ ಮಾಡಿದ್ದೇನು ? ಅಂದು ಅವರ ಆಪ್ತರ ಬಳಿ ರಚಿತಾ ಹಂಚಿಕೊಂಡ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;&lt;strong&gt;ಭಾವುಕರಾಗಿ ಹಂಚಿಕೊಂಡ ದಿನೇಶ್&lt;/strong&gt;'ಬುಲ್ ಬುಲ್' ಸಿನಿಮಾದ ಮೂಲಕ ಜನಪ್ರಿಯರಾದ ರಚಿತಾ ರಾಮ್, ಅತಿ ಕಡಿಮೆ ಸಮಯದಲ್ಲಿ ಬಹುಭಾಷಾ ತಾರೆಯಾಗಿ ಮಿಂಚಿದವರು. ಇಂದು ಅವರು ದೊಡ್ಡ ಮಟ್ಟದ ಯಶಸ್ಸು ಕಂಡಿರಬಹುದು, ಆದರೆ ಈ ಯಶಸ್ಸಿನ ಹಿಂದೆ ಅತಿ ದೊಡ್ಡ ಪರಿಶ್ರಮವೇ ಇದೆ. ಅಂದಹಾಗೆ ರಚಿತಾ ರಾಮ್ ಅವರು ತಮ್ಮ ಕನಸಿನ ಮನೆಯನ್ನು ಖರೀದಿಸಲು ಎದುರಿಸಿದ ಸಂಕಷ್ಟಗಳನ್ನು ಅವರ ಆಪ್ತರಾದ ದಿನೇಶ್ ಕಣ್ಣಾರೆ ಕಂಡಿದ್ದು, ಇದನ್ನು ಸಂದರ್ಶನವೊಂದರಲ್ಲಿ ಭಾವುಕರಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಿನ್ನಾಭರಣ ಅಡವಿಟ್ಟು ಮನೆ ಖರೀದಿಸಿದ ರಚಿತಾ&lt;/strong&gt;ನಾವೆಲ್ಲಾ ಸಾಮಾನ್ಯವಾಗಿ ಸ್ಟಾರ್ ನಟಿಯರು ಅಂದಾಕ್ಷಣ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ, ಅವರ ಜೀವನ ಸುಖಮಯವಾಗಿರುತ್ತದೆ ಎಂದು ಭಾವಿಸುತ್ತೇವೆ ಅಲ್ಲವೇ, ಆದರೆ ರಚಿತಾ ರಾಮ್ ವಿಷಯದಲ್ಲಿ ಅದು ಸುಳ್ಳಾಗಿತ್ತು. ಅವರಿಗೆ ಬೆಂಗಳೂರಿನ ಆರ್.ಆರ್ ನಗರದಲ್ಲಿ (ರಾಜರಾಜೇಶ್ವರಿ ನಗರ) ಒಂದು ಮನೆ ತೆಗೆದುಕೊಳ್ಳಬೇಕು ಎಂಬುದು ದೊಡ್ಡ ಕನಸಾಗಿತ್ತು. ಆದರೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರೂ, ಒಂದು ದೊಡ್ಡ ಮನೆ ಖರೀದಿಸುವಷ್ಟು ಹೆಚ್ಚಿನ ಹಣ ಅವರ ಬಳಿ ಇರಲಿಲ್ಲವಂತೆ. ಆಗ ಅವರು ತಮ್ಮಲ್ಲಿದ್ದ ಸಣ್ಣ ಸಣ್ಣ ಓಲೆ, ಮೂಗುಬೊಟ್ಟು ಸೇರಿದಂತೆ ಪ್ರತಿಯೊಂದು ಚಿನ್ನಾಭರಣವನ್ನೂ ಅಡವಿಟ್ಟು ಮನೆ ಖರೀದಿಸಲು ಪ್ಲಾನ್ ಮಾಡಿದ್ದರಂತೆ. ಆ ಸಮಯದಲ್ಲಿ ಅವರು ಅನುಭವಿಸಿದ ಮಾನಸಿಕ ಒತ್ತಡ ಹಾಗೂ ಆರ್ಥಿಕ ಮುಗ್ಗಟ್ಟನ್ನು ಅವರ ಆಪ್ತ ದಿನೇಶ್ ನೆನಪಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಸಂಭಾವನೆ ವಿಚಾರವನ್ನು ಶೇರ್ ಮಾಡಿದ್ದ ರಚಿತಾ&lt;/strong&gt;ಕೊನೆಗೂ ಕಷ್ಟಪಟ್ಟು ಮನೆ ಕೊಂಡುಕೊಂಡ ದಿನ, ರಚಿತಾ ರಾಮ್ ಅವರು ತಮ್ಮ ಆಪ್ತರೆಲ್ಲರನ್ನೂ ಕರೆದಿದ್ದರು. ಅಂದು ತಮ್ಮ ನೋವನ್ನೆಲ್ಲಾ ಹೊರಹಾಕುತ್ತಾ, &quot;ಈ ಮನೆ ತೆಗೆದುಕೊಳ್ಳಲು ನಾನು ಎಷ್ಟು ಒದ್ದಾಡಿದ್ದೇನೆ ಎಂಬುದು ನನಗೆ ಗೊತ್ತು&quot; ಎಂದು ಅತ್ತುಬಿಟ್ಟಿದ್ದರಂತೆ. ನಟಿಯರಿಗೆ ಸಿಗುವ ಅಸಲಿ ಸಂಭಾವನೆ ಎಷ್ಟು ಎಂಬ ಸತ್ಯವನ್ನು ಕೂಡ ಅವರು ಅಂದು ಆಪ್ತರ ಬಳಿ ಹಂಚಿಕೊಂಡಿದ್ದರು.&lt;/p&gt;&lt;img&gt;&lt;p&gt;&lt;strong&gt;ಕೊನೆಗೂ ದೊಡ್ಡ ಕಾರಿನ ಒಡತಿಯಾದ ರಚ್ಚು&lt;/strong&gt;ಚಿಕ್ಕವರಿದ್ದಾಗ ರಚಿತಾ ರಾಮ್ ಅವರಿಗೆ ಕಾರಿನಲ್ಲಿ ಪ್ರಯಾಣಿಸುವಾಗ ವಾಂತಿ ಮಾಡಿಕೊಳ್ಳುವ (Motion Sickness) ಅಭ್ಯಾಸವಿತ್ತು. ಇದೇ ಕಾರಣಕ್ಕೆ ಅವರ ಸಂಬಂಧಿಕರು ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಳ್ಳದೆ, ಬಸ್ಸಿನಲ್ಲಿ ಕಳುಹಿಸುತ್ತಿದ್ದರಂತೆ. ಈ ಅವಮಾನ ರಚಿತಾ ಅವರ ಮನಸ್ಸಿಗೆ ತೀವ್ರವಾಗಿ ತಟ್ಟಿತ್ತು. ಅಂದು ಅಮ್ಮನ ಬಳಿ ಅವರು ಶಪಥ ಮಾಡಿದ್ದರಂತೆ, &quot;ಮುಂದೊಂದು ದಿನ ನಾನು ದೊಡ್ಡ ಕಾರ್ ತಗೋಬೇಕು, ಅದರಲ್ಲಿ ಯಾರು ಬೇಕಾದರೂ ವಾಂತಿ ಮಾಡಿಕೊಳ್ಳಲಿ, ನಾನು ಯಾರನ್ನೂ ಇಳಿಸುವುದಿಲ್ಲ&quot; ಎಂದು. ಇಂದು ಅವರು ದೊಡ್ಡ ಕಾರಿನಲ್ಲೇ ಓಡಾಡುತ್ತಿದ್ದಾರೆ ಎಂದರೆ ಅದಕ್ಕೆ ಅಂದಿನ ಆ ಅವಮಾನವೇ ಸ್ಫೂರ್ತಿ.&lt;/p&gt;&lt;img&gt;&lt;p&gt;&lt;strong&gt;ಗಾಸಿಪ್&zwnj;ಗಳಿಗೆ ತಲೆಕೆಡಿಸಿಕೊಳ್ಳದ ನಟಿ&lt;/strong&gt;ರಚಿತಾ ರಾಮ್ ಇಷ್ಟು ದೊಡ್ಡ ಮನೆ ಕಟ್ಟಿಸಿದಾಗ, &quot;ಇದನ್ನು ಯಾರೋ ಕೊಡಿಸಿದ್ದು&quot; ಎಂಬ ಕೆಟ್ಟ ಮಾತುಗಳು ಕೇಳಿಬಂದಿದ್ದವಂತೆ. ಆಗ ಅವರ ತಾಯಿ ನೀಡಿದ ಧೈರ್ಯವೇ ಅವರಿಗೆ ಪ್ರೇರಣೆಯಂತೆ. &quot;ಹೆಣ್ಣುಮಕ್ಕಳು ಕಷ್ಟಪಟ್ಟು ಮೇಲೆ ಬಂದರೆ ಸಮಾಜ ಹೀಗೆಯೇ ಮಾತನಾಡುತ್ತದೆ, ಅದಕ್ಕೆ ತಲೆಕೆಡಿಸಿಕೊಳ್ಳಬೇಡ&quot; ಎಂದು ತಾಯಿ ಹೇಳಿಕೊಟ್ಟ ಮಾತುಗಳನ್ನು ರಚಿತಾ ಇಂದಿಗೂ ಪಾಲಿಸುತ್ತಿದ್ದಾರೆ. ಪ್ರತಿಭೆ ಮತ್ತು ಛಲದಿಂದ ಇಂದು ರಚಿತಾ ರಾಮ್ ಅವರು ಈ ಎತ್ತರಕ್ಕೆ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.&lt;/p&gt;]]></content:encoded>
            <category>cine-world</category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/entertainment/rachita-rams-sacrifice-pawning-ornaments-for-a-dream-home-peg4hyz"/>
        </item>
        <item>
            <title><![CDATA[Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ..]]></title>
            <link>https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl</link>
            <guid isPermaLink="true">https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl</guid>
            <pubDate>Thu, 30 Jul 2026 10:16:57 +0530</pubDate>
            <description><![CDATA[&lt;p&gt;ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ಪ್ರಶ್ನೆ ಎತ್ತಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyrn6xk91xf6zewv2spntd1m,imgname-ramayana-trailer-1785386464873.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ, 4-15 ಕ್ಕೆ ರಾಮಾಯಣ ಟ್ರೇಲರ್ ಬಿಡುಗಡೆ&lt;/strong&gt;&lt;/p&gt;&lt;p&gt;ಜಾಗತಿಕವಾಗಿ ಭಾರೀ ನಿರೀಕ್ಷೆ ಸೃಷ್ಟಿಸಿದ್ದ 'ರಾಮಾಯಣ' ಚಿತ್ರದ ಟ್ರೈಲರ್ (Ramayana Trailer) ಚಿತ್ರತಂಡ ಘೋಷಿಸಿದಂತೆ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ರಣಬೀರ್ ಕಪೂರ್ 'ರಾಮ', ಯಶ್ 'ರಾವಣ', ಹಾಗೂ ಸಾಯಿ ಪಲ್ಲವಿ 'ಸೀತೆ'ಯಾಗಿ ಮುಂಬರುವ ಈ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಬಹುನಿರೀಕ್ಷಿತ ರಾಮಾಯಣ ಟ್ರೇಲರ್ ಬಿಡುಗಡೆ ಬೆನ್ನಲ್ಲೇ, ರಾಮಾಯಣದ ಟ್ರೇಲರ್ ಹಾಗೂ ಪಾತ್ರಧಾರಿಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಿನ ಜಾವ, ಬ್ರಹ್ಮ ಮುಹೂರ್ತದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಇಂದು ಬೆಳಗ್ಗೆ 4.15ಕ್ಕೆ ರಿಲೀಸ್ ಆಗಿರುವ ರಾಮಾಯಣ ಚಿತ್ರದ ಟ್ರೈಲರ್ ಬಗ್ಗೆ ಇದೀಗ ಮನೆಮನೆಗಳಲ್ಲೂ ಟಾಕ್ ಶುರುವಾಗಿದೆ. ಯೂಟ್ಯೂಬ್&zwnj; ನೋಡಿ ಜನರು ರಾಮಾಯಣದ ತುಣುಕನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. 4 ಸಾವಿರ ಕೋಟಿ ಬಜೆಟ್&zwnj;ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಚಿತ್ರದ ಬಗ್ಗೆಯೇ ವಿಶ್ವದಲ್ಲಿ ಈಗ ಎಲ್ಲಾ ಕಡೆ ಚರ್ಚೆ ಶುರುವಾಗಿದೆ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಜೊತೆಗೆ ಯಶ್ ಕೂಡ ಬಂಡವಾಳ ಹೂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನ್ ಹೇಳ್ತಿದೆ ಅಂತರ್ಜಾಲ?!&lt;/h2&gt;&lt;p&gt;ಹೌದು, ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ರಾಮನಾಗಿ ರಣಬೀರ್ ಕಪೂರ್ ನ್ಯಾಯ ಒದಗಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಪ್ರಶ್ನೆ ಮಾಡಿದ್ದರು. ರಾವಣನ ಆಯ್ಕೆಯನ್ನು ಕೂಡ ಕೆಲವರು ಟೀಕಿಸಿದ್ದರು. ಇಂದು ಟ್ರೇಲರ್ ಬಡುಗಡೆ ಆಗುವವರೆಗೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇತ್ತು. ಆದರೆ, ಈಗ ಇಂಟರ್&zwnj;ನೆಟ್ ಜಗತ್ತು ಏನು ಹೇಳ್ತಿದೆ ಗೊತ್ತಾ? ಮುಂದೆ ನೋಡಿ..&lt;/p&gt;&lt;p&gt;&lt;img&gt;&lt;/p&gt;&lt;p&gt;ರಾವಣನಾಗಿ ಯಶ್ ಆರ್ಭಟ&lt;/p&gt;&lt;p&gt;ರಾಮಾಯಣ ಚಿತ್ರದ ಟ್ರೇಲರ್ ಶುರುವಿನಲ್ಲೇ ರಾವಣ ಪಾತ್ರಧಾರಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ರಾವಣನ ಎಂಟ್ರಿ, ಡೈಲಾಗ್, ರಾಮಾಯಣದ ಸೆಟ್ ಕಟ್ಟಿಕೊಟ್ಟಿರುವ ರೀತಿ ಅನನ್ಯ ಹಾಗೂ ಅಮೋಘ ಎಂಬಂತೆ ಮೂಡಿಬಂದಿದೆ. ರಾವಣನ ಪಾತ್ರಕ್ಕೆ ಯಶ್ ಸೂಕ್ತ ಆಯ್ಕೆ ಎಂಬ ಮಾತು ಬಹುತೇಕರಿಂದ ಕೇಳಿಬರುತ್ತಿದೆ. ಕನ್ನಡದ ಹೆಮ್ಮೆಯ ನಟ ಯಶ್ ಅವರು ರಾವಣ ಪಾತ್ರದ ಜೊತೆಗೆ ಮುಂಬರುವ ರಾಮಾಯಣ ಚಿತ್ರದ ನಿರ್ಮಾಣದಲ್ಲಿ ಕೂಡ ಭಾಗಿಯಾಗಿರುವುದು ವಿಶೇಷ.&lt;/p&gt;&lt;p&gt;&lt;img&gt;&lt;/p&gt;&lt;h3&gt;ರಾಮನಾಗಿ ರಣಬೀರ್ ಕಪೂರ್!&lt;/h3&gt;&lt;p&gt;ಇಂದು ಬಿಡುಗಡೆ ಆಗಿರುವ ರಾಮಾಯಣ ಟ್ರೇಲರ್&zwnj;ನಲ್ಲಿ, ಬಾಲವುಡ್ ನಟ ರಣಬೀರ್&zwnj; ಕಪೂರ್ ಅವರು ಅಮೋಘವಾಗಿ ಮಿಂಚಿದ್ದಾರೆ. ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಲುಕ್ ಹಾಗೂ ಪಾತ್ರಪೋಷಣೆ ಅತ್ಯದ್ಭುತ ಎಂಬಂತೆ ಮೂಡಿಬಂದಿದೆ. ಬಿಡುಗಡೆ ಆಗಿರುವ ಟ್ರೇಲರ್&zwnj;ನಲ್ಲಿ ಸನ್ನಿವೇಶಕ್ಕೆ ತಕ್ಕಂತೆ, ಸೌಮ್ಯ ಸ್ವಭಾವದ ರಾಮನಾಗಿ ನಟ ರಣಬೀರ್ ಕಪೂರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸೀತೆಯಾಗಿ ಸಾಯಿ ಪಲ್ಲವಿ!&lt;/p&gt;&lt;p&gt;ಈ ಮೊದಲು ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಟೀಕೆ ಮಾಡಿದ್ದವರಿಗೆ ಉತ್ತರ ಎಂಬಂತೆ ನಟಿ ಸಾಯಿ ಪಲ್ಲವಿಯವರು ಟ್ರೇಲರ್&zwnj;ನಲ್ಲಿ ಮಿಂಚು ಹರಿಸಿದ್ದಾರೆ. ಮುಗ್ಧ ನೋಟ, ದೈವಿಕ ಕಳೆಯ ಮೂಲಕ ನಟಿ ಸಾಯಿ ಪಲ್ಲವಿ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ಟ್ರೇಲರ್&zwnj;ನ ಕೆಲವೇ ಕೆಲವು ಸೆಕೆಂಡ್&zwnj;ಗಳ ಝಲಕ್&zwnj;ನಲ್ಲಿ ಕೂಡ ಸಾಯಿ ಪಲ್ಲವಿಯವರು ತಮ್ಮ ಅತ್ಯಮೋಘ ನಟನೆಯಿಂದ ಮನಸೂರೆಗೊಂಡಿದ್ದಾರೆ. ರಾಣಿಯ ಲುಕ್&zwnj;ನಲ್ಲಿ ಸಾಯಿ ಪಲ್ಲವಿ ಅಕ್ಷರಶಃ ಮಿಂಚಿದ್ದಾರೆ. ಹೊಸ ಸೀತೆಯಾಗಿ ನಟಿ ಸಾಯಿ ಪಲ್ಲವಿಯನ್ನು ಜಗತ್ತು ಒಪ್ಪಿಕೊಳ್ಳುವುದರಲ್ಲಿ ಸಂದೇಹವೆ ಇಲ್ಲ ಎಂಬಂತೆ ಸಾಯಿ ಪಲ್ಲವಿ ಪಾತ್ರಪೋಷಣೆ ಹಾಗೂ ನಟನೆ ಹೈಲೈಟ್ಸ್&zwnj; ಆಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಅಂದಹಾಗೆ, ನಿತೇಶ್ ತಿವಾರಿ ನಿರ್ದೇಶನದ ಈ ರಾಮಾಯಣ ಸಿನಿಮಾ ಇದೇ ವರ್ಷ, ದೀಪಾವಳಿಗೆ ಹಬ್ಬದ ಉಡುಗೊರೆಯಾಗಿ ತೆರೆಗೆ ಬರಲಿದೆ. ಜಗತ್ತಿನಾದ್ಯಂತ ಈ ಮೊದಲೇ ಸೃಷ್ಟಿಯಾಗಿದ್ದ ಭಾರೀ ನಿರೀಕ್ಷೆಯನ್ನು ಇಂದು ಬಡುಗಡೆ ಆಗಿರುವ ಟ್ರೇಲರ್&zwnj; ಸಾವಿ ಪಟ್ಟು ಜಾಸ್ತಿ ಮಾಡಿದೆ. ಸದ್ಯ ಇಡೀ ವಿಶ್ವದಲ್ಲಿ ಭಾರತದ ರಾಮಾಯಣ ಟ್ರೇಲರ್ ಬಗ್ಗೆ ಮಾತುಕತೆ, ಚರ್ಚೆ ಜೋರಾಗಿ ನಡೆಯುತ್ತಿದೆ.&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/social-media-response-about-today-launched-ramayana-trailer-to-know-here/articleshow-ns99wcl"/>
        </item>
        <item>
            <title><![CDATA[ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?]]></title>
            <link>https://kannada.asianetnews.com/entertainment/how-much-does-ss-rajamouli-charge-per-movie-heres-the-truth-gvd/articleshow-a2gnrmn</link>
            <guid isPermaLink="true">https://kannada.asianetnews.com/entertainment/how-much-does-ss-rajamouli-charge-per-movie-heres-the-truth-gvd/articleshow-a2gnrmn</guid>
            <pubDate>Wed, 29 Jul 2026 23:42:25 +0530</pubDate>
            <description><![CDATA[&lt;p&gt;ಟಾಲಿವುಡ್&zwnj;ನ ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಗಳು ನೂರಾರು, ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಇಂತಹ ಬೃಹತ್ ಚಿತ್ರಗಳನ್ನು ಮಾಡುವ ಜಕ್ಕಣ್ಣ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyqf1b8pqwed8a94gdfetczx,imgname-ch-1785346436374.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿಗೆ ವಿಶೇಷ ಸ್ಥಾನವಿದೆ. ಅವರು ನಿರ್ದೇಶಿಸಿದ ಪ್ರತಿಯೊಂದು ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ದಾಖಲೆಗಳನ್ನು ಬರೆಯುತ್ತದೆ. ನಿರ್ಮಾಪಕರಿಗೆ ಜಕ್ಕಣ್ಣ ಜೊತೆ ಸಿನಿಮಾ ಮಾಡುವುದೆಂದರೆ ಅದೊಂದು ಚಿನ್ನದ ಗಣಿ ಇದ್ದಂತೆ. ಅಷ್ಟೊಂದು ಲಾಭ ತಂದುಕೊಡುವ ರಾಜಮೌಳಿ, ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ? ಹಿಂದೆ ನಡೆದ ಸಂದರ್ಶನವೊಂದರಲ್ಲಿ ರಾಜಮೌಳಿ ತಮ್ಮ ಸಂಭಾವನೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ತಮ್ಮ ಸಂಭಾವನೆ ವಿಧಾನ ಮತ್ತು ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಬಾಹುಬಲಿ'ಗೆ ಎಷ್ಟು ಪಡೆದರು ಎಂಬುದನ್ನು ಅವರು ಬಹಿರಂಗಪಡಿಸಿದ್ದರು.&lt;/p&gt;&lt;p&gt;ತೆಲುಗು ಚಿತ್ರರಂಗದ ಅನೇಕ ನಿರ್ದೇಶಕರು ಮುಂಗಡವಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಆದರೆ ರಾಜಮೌಳಿ ಅವರ ವಿಧಾನ ಇದಕ್ಕೆ ತದ್ವಿರುದ್ಧ. ಅವರು ಯಾವುದೇ ದೊಡ್ಡ ಮೊತ್ತದ ಸಂಭಾವನೆಯನ್ನು ಮೊದಲೇ ನಿರೀಕ್ಷಿಸುವುದಿಲ್ಲ. ಬದಲಾಗಿ, ಸಿನಿಮಾದ ಲಾಭದಲ್ಲಿ ಪಾಲು (ಪ್ರಾಫಿಟ್ ಶೇರಿಂಗ್) ಪಡೆಯುವ ಪದ್ಧತಿಯನ್ನು ಅನುಸರಿಸುತ್ತಾರೆ. ಸಿನಿಮಾ ಯಶಸ್ವಿಯಾದಾಗ ಮಾತ್ರ ನಿರ್ಮಾಪಕರಿಂದ ತಮ್ಮ ಪಾಲನ್ನು ತೆಗೆದುಕೊಳ್ಳುತ್ತಾರೆ. ಕೆಲವು ಚಿತ್ರಗಳಿಗೆ ತಾನು ಹೆಚ್ಚು ಹಣ ಪಡೆದಿಲ್ಲ, ಕೇವಲ ಖರ್ಚುಗಳಿಗಾಗಿ ಮಾತ್ರ ತೆಗೆದುಕೊಂಡಿದ್ದೇನೆ ಎಂದು ರಾಜಮೌಳಿ ಹೇಳಿದ್ದಾರೆ.&lt;/p&gt;&lt;p&gt;ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡ 'ಬಾಹುಬಲಿ' ಸರಣಿಗೆ ರಾಜಮೌಳಿ ಎಷ್ಟು ಸಂಭಾವನೆ ಪಡೆದರು ಎಂಬುದು ಕುತೂಹಲಕಾರಿ. ಈ ಚಿತ್ರಕ್ಕೆ ರಾಜಮೌಳಿ ನೇರವಾಗಿ ನಿಗದಿತ ಸಂಭಾವನೆ ಪಡೆಯದೆ, ಲಾಭದಲ್ಲಿ ಶೇಕಡಾವಾರು ಪಾಲಿನ ರೂಪದಲ್ಲಿ ದೊಡ್ಡ ಮೊತ್ತವನ್ನು ಪಡೆದರು. ಚಿತ್ರದ ಯಶಸ್ಸಿನ ಮೇಲೆ ನಂಬಿಕೆ ಇಟ್ಟು, ಪ್ರಾಜೆಕ್ಟ್ ಪೂರ್ಣಗೊಳ್ಳಲು ತೆಗೆದುಕೊಂಡ ನಾಲ್ಕೈದು ವರ್ಷಗಳ ಕಾಲ ಬಜೆಟ್&zwnj;ಗೆ ಹೊರೆಯಾಗದಂತೆ ಲಾಭದಲ್ಲಿ ಪಾಲು ಪಡೆಯುವ ಒಪ್ಪಂದ ಮಾಡಿಕೊಂಡಿದ್ದರು. 'ವಾರಣಾಸಿ' ವಿಷಯದಲ್ಲೂ ಇದೇ ರೀತಿ ಆಗುತ್ತಿದೆ ಎನ್ನಲಾಗಿದೆ. 'ಬಾಹುಬಲಿ' ಸಮಯದಲ್ಲಿ ತಾನು ದೊಡ್ಡ ಮೊತ್ತವನ್ನೇನೂ ಪಡೆದಿಲ್ಲ ಎಂದು ರಾಜಮೌಳಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ 'RRR' ಚಿತ್ರದಿಂದ ಭಾರಿ ಲಾಭ ಗಳಿಸಿದ್ದಾರೆ ಎನ್ನಲಾಗಿದೆ. ಈ ಲೆಕ್ಕಾಚಾರದಲ್ಲಿ 'ವಾರಣಾಸಿ' ಹಿಟ್ ಆದರೆ, ಜಕ್ಕಣ್ಣ ನೂರಾರು ಕೋಟಿ ಸಂಭಾವನೆ ಪಡೆಯುವ ನಿರ್ದೇಶಕರಾಗುವುದು ಖಚಿತ.&lt;/p&gt;&lt;p&gt;ರಾಜಮೌಳಿ ಒಂದೇ ನಿರ್ಮಾಪಕರೊಂದಿಗೆ ಅಥವಾ ತಮ್ಮ ನಂಬಿಕಸ್ಥ ನಿರ್ಮಾಪಕರಿಗೆ ಸತತವಾಗಿ ಅವಕಾಶಗಳನ್ನು ನೀಡುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಪರಸ್ಪರ ನಂಬಿಕೆ ಮತ್ತು ತಿಳುವಳಿಕೆ. ದೊಡ್ಡ ಬಜೆಟ್ ಚಿತ್ರಗಳನ್ನು ಮಾಡುವಾಗ ನಿರ್ದೇಶಕ-ನಿರ್ಮಾಪಕರ ನಡುವೆ ಒಮ್ಮತ ಮತ್ತು ನಂಬಿಕೆ ಬಹಳ ಮುಖ್ಯ. ನಿರ್ಮಾಪಕರು ರಾಜಮೌಳಿಯವರ ದೃಷ್ಟಿಕೋನ ಮತ್ತು ಪರಿಕಲ್ಪನೆಯನ್ನು ನಂಬಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ರಾಜಮೌಳಿಗೆ ನಿರ್ಮಾಪಕರು ಸಂಪೂರ್ಣ ಕ್ರಿಯೇಟಿವ್ ಫ್ರೀಡಂ ನೀಡುತ್ತಾರೆ. ಸೆಟ್&zwnj;ನಲ್ಲಿ ರಾಜಮೌಳಿಗಿರುವ ಸ್ಪಷ್ಟತೆ ಮತ್ತು ಕಠಿಣ ಪರಿಶ್ರಮವನ್ನು ನೋಡಿ, ನಿರ್ಮಾಪಕರು ಕಥೆ ಅಥವಾ ಮೇಕಿಂಗ್ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಈ ರೀತಿಯ ಆರೋಗ್ಯಕರ ಕೆಲಸದ ವಾತಾವರಣವೇ ಅವರು ಹಳೆಯ ನಿರ್ಮಾಪಕರೊಂದಿಗೆ ಮತ್ತೆ ಮತ್ತೆ ಕೆಲಸ ಮಾಡಲು ಕಾರಣ.&lt;/p&gt;&lt;h2&gt;&lt;strong&gt;ರಾಜಮೌಳಿಯ ಅಸಲಿ ಬಲ ಯಾರೆಂದರೆ?&lt;/strong&gt;&lt;/h2&gt;&lt;p&gt;ಸಿನಿಮಾ ನಿರ್ಮಾಣದ ಸಮಯದಲ್ಲಿ ಪ್ರತಿ ರೂಪಾಯಿ ಎಲ್ಲಿ, ಹೇಗೆ ಖರ್ಚಾಗುತ್ತಿದೆ ಎಂಬುದರ ಬಗ್ಗೆ ರಾಜಮೌಳಿ ಅತ್ಯಂತ ಪಾರದರ್ಶಕತೆ ಕಾಯ್ದುಕೊಳ್ಳುತ್ತಾರೆ. ಲೆಕ್ಕಾಚಾರಗಳು ಪಕ್ಕಾ ಆಗಿರುವುದರಿಂದ ನಿರ್ಮಾಪಕರು ಮತ್ತು ಅವರ ನಡುವೆ ಯಾವುದೇ ವಿವಾದಗಳು ಉದ್ಭವಿಸುವುದಿಲ್ಲ. ಅಕೌಂಟಿಂಗ್ ಮತ್ತು ಬಜೆಟಿಂಗ್ ಸ್ಪಷ್ಟವಾಗಿರುವುದೇ ನಿರ್ಮಾಪಕರು ರಾಜಮೌಳಿಯೊಂದಿಗೆ ದೀರ್ಘಕಾಲ ಪ್ರಯಾಣಿಸಲು ಮತ್ತೊಂದು ಮುಖ್ಯ ಕಾರಣ. ಇನ್ನು ರಾಜಮೌಳಿ ಸಿನಿಮಾಗಳಲ್ಲಿ ಅವರ ಕುಟುಂಬ ಸದಸ್ಯರಾದ ಕೀರವಾಣಿ, ವಲ್ಲಿ, ರಮಾ ರಾಜಮೌಳಿ ಮತ್ತು ಕಾರ್ತಿಕೇಯ ಪ್ರಮುಖ ಪಾತ್ರ ವಹಿಸುತ್ತಾರೆ. ಅವರೇ ರಾಜಮೌಳಿಯ ನಿಜವಾದ ಶಕ್ತಿ. ಕೇವಲ ಹಣಕ್ಕಾಗಿ ಅಲ್ಲದೆ, ಸಿನಿಮಾದ ಯಶಸ್ಸು ಮತ್ತು ಮೇಕಿಂಗ್ ಗುಣಮಟ್ಟದ ಮೇಲೆ ರಾಜಮೌಳಿ ಗಮನ ಹರಿಸುತ್ತಾರೆ. ಇದೇ ಕಾರಣಕ್ಕೆ ಅವರು ಭಾರತೀಯ ಸಿನಿಮಾದ ಮಟ್ಟವನ್ನು ಅಂತರರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯಲು ಸಾಧ್ಯವಾಗುತ್ತಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/how-much-does-ss-rajamouli-charge-per-movie-heres-the-truth-gvd/articleshow-a2gnrmn"/>
        </item>
        <item>
            <title><![CDATA[ಪವನ್ ಕಲ್ಯಾಣ್ ಪತ್ನಿ ಹೆಸರು ಬದಲಾವಣೆ.. ಅನ್ನಾ ಲೆಝ್ನೋವಾ ಹೊಸ ಹೆಸರೇನು ಗೊತ್ತಾ?]]></title>
            <link>https://kannada.asianetnews.com/entertainment/pawan-kalyans-wife-anna-lezhneva-officially-changes-her-name-to-anna-konidela-gvd/articleshow-5tfeln0</link>
            <guid isPermaLink="true">https://kannada.asianetnews.com/entertainment/pawan-kalyans-wife-anna-lezhneva-officially-changes-her-name-to-anna-konidela-gvd/articleshow-5tfeln0</guid>
            <pubDate>Wed, 29 Jul 2026 22:51:30 +0530</pubDate>
            <description><![CDATA[&lt;p&gt;ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyqdsszqwtmmtg8v0xt22r4s,imgname-vj-1785345140727.png" type="image/jpeg" height="390" width="690"/>
            <content:encoded><![CDATA[&lt;p&gt;ಅನ್ನಾ ಲೆಝ್ನೋವಾ... ರಷ್ಯಾದಲ್ಲಿ ಹುಟ್ಟಿ ಬೆಳೆದ ಇವರು, ಕೊನಿದೆಲಾ ಮನೆ ಸೊಸೆಯಾಗಿ ತೆಲುಗು ಜನರಿಗೆ ಪರಿಚಯವಾದರು. ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರ ಪತ್ನಿಯಾಗಿ ಅವರಿಗೆ ವಿಶೇಷ ಸ್ಥಾನವಿದೆ. ಆದರೆ ಅವರ ವಿದೇಶಿ ಹೆಸರು ತೆಲುಗು ಜನರಿಗೆ ಅಷ್ಟಾಗಿ ಕನೆಕ್ಟ್ ಆಗುತ್ತಿರಲಿಲ್ಲ. ಇದೀಗ ಅವರು ತಮ್ಮ ಹೆಸರನ್ನು ಬದಲಿಸಿಕೊಂಡು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅನ್ನಾ ಲೆಝ್ನೋವಾ ಅವರ ಹೊಸ ಹೆಸರೇನು? ಮುಂದೆ ಓದಿ.&lt;/p&gt;&lt;p&gt;ಮದುವೆಯ ನಂತರ ಸಾಮಾನ್ಯವಾಗಿ ಹೆಣ್ಣುಮಕ್ಕಳ ಸರ್&zwnj;ನೇಮ್ ಬದಲಾಗುತ್ತದೆ. ಪವನ್ ಕಲ್ಯಾಣ್ ಅವರನ್ನು ಮದುವೆಯಾದ ನಂತರವೂ ಎಲ್ಲರೂ ಅನ್ನಾ ಲೆಝ್ನೋವಾ ಎಂದೇ ಕರೆಯುತ್ತಿದ್ದರು. ಇದೀಗ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ತನ್ನನ್ನು 'ಅನ್ನಾ ಕೊನಿದೆಲಾ' ಎಂದು ಕರೆಯುವಂತೆ ಅವರು ವಿನಂತಿಸಿದ್ದಾರೆ. ಪತಿಯ ಸರ್&zwnj;ನೇಮ್ ತನ್ನ ಹೆಸರಿನ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.&lt;img&gt;&lt;/p&gt;&lt;p&gt;'ಶೀಘ್ರದಲ್ಲೇ ನನ್ನ ಹುಟ್ಟುಹಬ್ಬ ಬರಲಿದೆ. ಹಾಗಾಗಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇದು ಸರಿಯಾದ ಸಮಯ. ಇನ್&zwnj;ಸ್ಟಾಗ್ರಾಮ್ ಖಾತೆ ತೆರೆದಾಗಿನಿಂದ ಈ ವಿಷಯ ಹೇಳಬೇಕೆಂದುಕೊಂಡಿದ್ದೆ. ಹಲವು ಬಾರಿ ಟೈಪ್ ಮಾಡಿ ಡಿಲೀಟ್ ಮಾಡಿದ್ದೆ. ಈಗ ಸರಿಯಾದ ಸಮಯ ಬಂದಿದೆ' ಎಂದು ಅನ್ನಾ ಬರೆದುಕೊಂಡಿದ್ದಾರೆ. ನಾನು ಪವನ್ ಕಲ್ಯಾಣ್ ಅವರನ್ನು ಮದುವೆಯಾದಾಗ ನನ್ನ ಹೆಸರು ಅನ್ನಾ ಲೆಝ್ನೋವಾ ಆಗಿತ್ತು. ಆದರೆ ಮದುವೆಯ ನಂತರ ನನ್ನ ಹೆಸರು ಅನ್ನಾ ಕೊನಿದೆಲಾ ಎಂದು ಬದಲಾಗಿದೆ. ಇನ್ನು ಮುಂದೆ ನನ್ನನ್ನು ಅನ್ನಾ ಕೊನಿದೆಲಾ ಎಂದೇ ಕರೆಯಿರಿ.&lt;/p&gt;&lt;p&gt;ಈ ಹೆಸರು ನನಗೆ ತುಂಬಾ ವಿಶೇಷ ಎಂದು ಆಂಧ್ರದ ಡಿಸಿಎಂ ಪತ್ನಿ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಬರೆದುಕೊಂಡಿದ್ದಾರೆ. ಹೆಸರು ಬದಲಾವಣೆಯ ಪೋಸ್ಟ್ ಜೊತೆಗೆ, ಅನ್ನಾ ಕೊನಿದೆಲಾ ತಮ್ಮ ಪತಿ ಪವನ್ ಕಲ್ಯಾಣ್ ಜೊತೆಗಿನ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಹೊಸದರಲ್ಲಿ ರಷ್ಯಾದ ಸೇಂಟ್ ಪೀಟರ್ಸ್&zwnj;ಬರ್ಗ್&zwnj;ಗೆ ಭೇಟಿ ನೀಡಿದ್ದಾಗ ತೆಗೆದ ಫೋಟೋ ಇದಾಗಿದೆ. ಈ ಫೋಟೋದಲ್ಲಿ ಪವನ್ ಮತ್ತು ಅನ್ನಾ ಜೋಡಿ ಯಂಗ್ ಆಗಿ, ಮುದ್ದಾಗಿ ಕಾಣುತ್ತಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.&lt;img&gt;&lt;/p&gt;&lt;h2&gt;&lt;strong&gt;ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ತನ್ನನ್ನು ಅನ್ನಾ ಲೆಝ್ನೋವಾ ಬದಲಿಗೆ ಅನ್ನಾ ಕೊನಿದೆಲಾ ಎಂದು ಕರೆಯುವಂತೆ ಅವರು ಮಾಡಿದ ಇನ್&zwnj;ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗಿದೆ. ಪವನ್ ಕಲ್ಯಾಣ್ ಅಭಿಮಾನಿಗಳು, 'ನಮ್ಮ ಅಣ್ಣನಿಗಾಗಿ ವದಿನಮ್ಮ (ಅತ್ತಿಗೆ) ತನ್ನ ಹೆಸರನ್ನು ಬದಲಿಸಿಕೊಂಡಿದ್ದಾರೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್&zwnj;ಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಸಾವಿರಾರು ಕಾಮೆಂಟ್&zwnj;ಗಳು ಹರಿದುಬರುತ್ತಿವೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/pawan-kalyans-wife-anna-lezhneva-officially-changes-her-name-to-anna-konidela-gvd/articleshow-5tfeln0"/>
        </item>
        <item>
            <title><![CDATA[ಒಂದೇ ದೃಶ್ಯದಲ್ಲಿ ಸಿಂಹವನ್ನೇ ಮೌನಗೊಳಿಸಿದ ರಾವಣ: ಯಶ್ ಅಬ್ಬರದ ರಾಮಾಯಣ ಟ್ರೇಲರ್ ಲೀಕ್!]]></title>
            <link>https://kannada.asianetnews.com/entertainment/ramayana-trailer-leaked-yash-fierce-ravana-avatar-goes-viral-ahead-of-official-release-gvd/articleshow-z1r2zfa</link>
            <guid isPermaLink="true">https://kannada.asianetnews.com/entertainment/ramayana-trailer-leaked-yash-fierce-ravana-avatar-goes-viral-ahead-of-official-release-gvd/articleshow-z1r2zfa</guid>
            <pubDate>Wed, 29 Jul 2026 22:08:00 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ &lsquo;ರಾಮಾಯಣ&rsquo; ಚಿತ್ರದ ಟ್ರೇಲರ್&zwnj; ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyqbgc42cyg2yfbkjjn9j9z9,imgname-kk-1785342734466.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ಕ್ಷಣಗಣನೆ ಶುರುವಾಗಿರುವಾಗಲೇ, ಬಹುನಿರೀಕ್ಷಿತ &lsquo;ರಾಮಾಯಣ&rsquo; ಚಿತ್ರದ ಟ್ರೇಲರ್&zwnj; ಅಧಿಕೃತ ಬಿಡುಗಡೆಯ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವುದು ಸಿನಿಪ್ರಿಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾನ್&zwnj;ನಲ್ಲಿ ವಿಶೇಷ ಪ್ರದರ್ಶನ ಕಂಡಿದ್ದ ಟ್ರೇಲರ್&zwnj; ಅನ್ನು ಕೆಲವರು ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿ ಆನ್&zwnj;ಲೈನ್&zwnj;ಗೆ ಹರಿಬಿಟ್ಟಿದ್ದು, ಕಡಿಮೆ ಗುಣಮಟ್ಟದ ವಿಡಿಯೊ ಆಗಿದ್ದರೂ ಅದರಲ್ಲಿರುವ ಅದ್ದೂರಿ ದೃಶ್ಯಗಳು ಈಗಾಗಲೇ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;p&gt;&lt;strong&gt;ಲೀಕ್ ಟ್ರೇಲರ್&zwnj;&zwnj;ನಲ್ಲಿ ರಾವಣನಾಗಿ ಯಶ್ ರೌದ್ರಾವತಾರ&lt;/strong&gt;&lt;/p&gt;&lt;p&gt;ಟ್ರೇಲರ್&zwnj;&zwnj;ನ ಪ್ರಮುಖ ಹೈಲೈಟ್ ಎಂದರೆ ರಾವಣನಾಗಿ ಯಶ್ ಅವರ ಅದ್ಧೂರಿ ಎಂಟ್ರಿ. ಘರ್ಜಿಸುತ್ತಿರುವ ಸಿಂಹದ ಎದುರು ಇನ್ನಷ್ಟು ಆವೇಶದಿಂದ ಘರ್ಜಿಸುವ ರಾವಣನ ದೃಶ್ಯ ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ತನ್ನ ವ್ಯಕ್ತಿತ್ವದ ಪ್ರಭಾವದಿಂದಲೇ ಸಿಂಹವನ್ನು ಶಾಂತಗೊಳಿಸುವ ದೃಶ್ಯ, ಜೊತೆಗೆ ಬಾಹುಗಳನ್ನು ಚಾಚಿ ಸಂಭಾಷಣೆ ಹೇಳುವ ಕ್ಷಣಗಳು ಟ್ರೇಲರ್&zwnj;&zwnj;ನ ಅತ್ಯಂತ ಮಾಸ್ ಹೈಲೈಟ್&zwnj;ಗಳಾಗಿ ಕಾಣಿಸಿಕೊಂಡಿವೆ.&lt;/p&gt;&lt;p&gt;&lt;strong&gt;ರಾಮ, ಸೀತೆ, ಹನುಮಂತನ ದರ್ಶನ&lt;/strong&gt;&lt;/p&gt;&lt;p&gt;ಲೀಕ್ ಆದ ಟ್ರೇಲರ್&zwnj;&zwnj;ನಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ರಕುಲ್ ಪ್ರೀತ್ ಸಿಂಗ್ ಶೂರ್ಪಣಖಿಯಾಗಿ ಕಾಣಿಸಿಕೊಂಡಿದ್ದಾರೆ. ರಾಮನ ವನವಾಸ, ದಶರಥ-ರಾಮ ಭಾವನಾತ್ಮಕ ಕ್ಷಣಗಳು, ಸೀತಾ ಕಲ್ಯಾಣ, ಶೂರ್ಪಣಖಿಯ ಮೂಗು ಕತ್ತರಿಸುವ ದೃಶ್ಯ, ಹನುಮಂತನ ಭವ್ಯ ಎಂಟ್ರಿ ಸೇರಿದಂತೆ ರಾಮಾಯಣದ ಪ್ರಮುಖ ಅಧ್ಯಾಯಗಳ ಝಲಕ್ ಟ್ರೇಲರ್&zwnj;&zwnj;ನಲ್ಲಿ ಕಾಣಸಿಗುತ್ತದೆ. ಕೇವಲ ಕೆಲವು ನಿಮಿಷಗಳ ದೃಶ್ಯಗಳೇ ಚಿತ್ರದ ಅದ್ದೂರಿ ನಿರ್ಮಾಣವನ್ನು ಸೂಚಿಸುತ್ತಿವೆ.&lt;/p&gt;&lt;p&gt;&lt;strong&gt;ಕಡಿಮೆ ಗುಣಮಟ್ಟದಲ್ಲೂ ಅದ್ದೂರಿ ಮೇಕಿಂಗ್&lt;/strong&gt;&lt;/p&gt;&lt;p&gt;ಲೀಕ್ ಆದ ವಿಡಿಯೊ ಮೊಬೈಲ್&zwnj;ನಲ್ಲಿ ಚಿತ್ರೀಕರಿಸಲ್ಪಟ್ಟ ಕಾರಣ ದೃಶ್ಯ ಗುಣಮಟ್ಟ ಉತ್ತಮವಾಗಿಲ್ಲ. ಆದರೂ ಚಿತ್ರದ ಅದ್ದೂರಿ ಸೆಟ್&zwnj;ಗಳು, ಅತ್ಯಾಧುನಿಕ VFX ಹಾಗೂ ಭವ್ಯ ದೃಶ್ಯ ಸಂಯೋಜನೆ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅಧಿಕೃತ ಟ್ರೇಲರ್&zwnj; ಬಿಡುಗಡೆಯಾದ ಬಳಿಕ ಈ ದೃಶ್ಯಗಳು ಇನ್ನಷ್ಟು ಅದ್ಭುತವಾಗಿ ಮೂಡಿಬರಲಿವೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.&lt;/p&gt;&lt;p&gt;&lt;strong&gt;ನಾಳೆ ಅಧಿಕೃತ ಟ್ರೇಲರ್&zwnj; ಬಿಡುಗಡೆ&lt;/strong&gt;&lt;/p&gt;&lt;p&gt;ಚಿತ್ರತಂಡ ಈಗಾಗಲೇ ಅಧಿಕೃತ ಟ್ರೇಲರ್&zwnj; ಬಿಡುಗಡೆಗೆ ಸಜ್ಜಾಗಿದ್ದು, ಜುಲೈ 30ರಂದು ಬೆಳಿಗ್ಗೆ 4:15ಕ್ಕೆ ಟ್ರೇಲರ್&zwnj; ಬಿಡುಗಡೆಯಾಗಲಿದೆ. ಲೀಕ್ ವಿಡಿಯೊ ಈಗಾಗಲೇ ವೈರಲ್ ಆಗಿರುವ ಹಿನ್ನೆಲೆ, ಅಧಿಕೃತ ಟ್ರೇಲರ್&zwnj;&zwnj;ಗೆ ದಾಖಲೆ ಮಟ್ಟದ ವೀಕ್ಷಣೆ ಸಿಗುವ ನಿರೀಕ್ಷೆ ಇದೆ.&lt;/p&gt;&lt;h2&gt;&lt;strong&gt;₹2000 ಕೋಟಿ ವೆಚ್ಚದ ಮಹಾಕಾವ್ಯ&lt;/strong&gt;&lt;/h2&gt;&lt;p&gt;ನಿತೀಶ್ ತಿವಾರಿ ನಿರ್ದೇಶನದ &lsquo;ರಾಮಾಯಣ&rsquo; ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿದೆ. ಎರಡು ಭಾಗಗಳಲ್ಲಿ ಮೂಡಿಬರುತ್ತಿರುವ ಈ ಮಹಾಕಾವ್ಯಕ್ಕೆ ಸುಮಾರು ₹2000 ಕೋಟಿ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಸೇರಿದಂತೆ ಭಾರೀ ತಾರಾಗಣ ಚಿತ್ರದಲ್ಲಿದ್ದು, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಯಶ್ ಸಹ ನಿರ್ಮಾಪಕರಾಗಿದ್ದಾರೆ. ಮೊದಲ ಭಾಗ ಇದೇ ನವೆಂಬರ್&zwnj;ನಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ ಮುಂದಿನ ವರ್ಷದ ನವೆಂಬರ್&zwnj;ನಲ್ಲಿ ತೆರೆಗೆ ಬರಲಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ramayana-trailer-leaked-yash-fierce-ravana-avatar-goes-viral-ahead-of-official-release-gvd/articleshow-z1r2zfa"/>
        </item>
        <item>
            <title><![CDATA[ಟಾಕ್ಸಿಕ್ ಕಥೆಯ ನಿಜವಾದ ಹೀರೋ ಯಾರು? ರಾಕಿಂಗ್ ಸ್ಟಾರ್ ಯಶ್ ಹೇಳಿದ ಉತ್ತರವೇ ಹೈಲೈಟ್]]></title>
            <link>https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue</link>
            <guid isPermaLink="true">https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue</guid>
            <pubDate>Wed, 29 Jul 2026 21:23:48 +0530</pubDate>
            <description><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್&zwnj;ವರ್ಲ್ಡ್ ಸಿನಿಮಾ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq94kwgcqw8chbgejg18k0w,imgname-vj-1785340252048.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್&zwnj;ವರ್ಲ್ಡ್ ಸಿನಿಮಾ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಟೀಸರ್ ಮೂಲಕ ಈಗಾಗಲೇ ವಿಭಿನ್ನ ಲೋಕ ಮತ್ತು ಅದ್ಧೂರಿ ಆ್ಯಕ್ಷನ್&zwnj;ನ ಝಲಕ್ ನೀಡಿರುವ ಚಿತ್ರ, ಕೇವಲ ಆ್ಯಕ್ಷನ್&zwnj;ಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ವತಃ ಯಶ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, &lsquo;ಟಾಕ್ಸಿಕ್&rsquo; ಚಿತ್ರದ ಕಥೆಯ ಹೃದಯವೇ ಭಾವನೆಗಳು ಎಂದು ಹೇಳಿದ್ದು, ಪ್ರೇಕ್ಷಕರಿಗೆ ಮರೆಯಲಾಗದ ಅನುಭವ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&quot;ಆ್ಯಕ್ಷನ್ ಜೊತೆಗೆ ಭಾವನೆ ಇದ್ದಾಗಲೇ ಸಿನಿಮಾ ಗೆಲ್ಲುತ್ತದೆ&quot;&lt;/strong&gt;&lt;/p&gt;&lt;p&gt;ಚಿತ್ರದ ಬಗ್ಗೆ ಮಾತನಾಡಿದ ಯಶ್, &quot;&lsquo;ಟಾಕ್ಸಿಕ್&rsquo; ಒಂದು ರೋಲರ್&zwnj;ಕೋಸ್ಟರ್ ಅನುಭವ. ಕಥೆ ತುಂಬಾ ಆಳವಾಗಿದೆ, ಅದ್ದೂರಿಯಾಗಿದೆ ಮತ್ತು ಜೀವನಕ್ಕಿಂತ ದೊಡ್ಡ ಕ್ಯಾನ್ವಾಸ್ ಹೊಂದಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾವನೆಗಳಿಂದ ಕೂಡಿದ ಸಿನಿಮಾ. ಆ್ಯಕ್ಷನ್ ಮತ್ತು ಎಮೋಷನ್&zwnj;ನ ಈ ಸಂಯೋಜನೆಯೇ ಚಿತ್ರದ ದೊಡ್ಡ ಶಕ್ತಿ. ಸಿನಿಮಾ ನೋಡಿ ಹೊರಬರುವವರು &lsquo;ಏನಿದು ಅದ್ಭುತ ಅನುಭವ!&rsquo; ಎಂದು ಹೇಳುತ್ತಾರೆ ಎಂಬ ನಂಬಿಕೆ ಇದೆ,&quot; ಎಂದು ಹೇಳಿದ್ದಾರೆ. ಟೀಸರ್&zwnj;ನಲ್ಲಿ ಚಿತ್ರದ ಸ್ಟೈಲಿಷ್ ಆ್ಯಕ್ಷನ್ ಮತ್ತು ಗಾಢ ವಾತಾವರಣ ಗಮನ ಸೆಳೆದಿದ್ದರೂ, ಅದರ ಹಿಂದಿರುವ ಭಾವನಾತ್ಮಕ ಕಥೆಯೇ ಚಿತ್ರದ ಆತ್ಮ ಎಂದು ಯಶ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಜಾನ್ ವಿಕ್ ಖ್ಯಾತಿಯ ಜೆಜೆ ಪೆರಿಗೆ ಯಶ್ ಮೆಚ್ಚುಗೆ&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿರುವ ಜೆಜೆ ಪೆರಿ ಬಗ್ಗೆ ಕೂಡ ಯಶ್ ವಿಶೇಷವಾಗಿ ಮಾತನಾಡಿದರು. &lsquo;ಜಾನ್ ವಿಕ್&rsquo; ಸರಣಿಯ ಆ್ಯಕ್ಷನ್ ದೃಶ್ಯಗಳಿಗೆ ಖ್ಯಾತರಾಗಿರುವ ಜೆಜೆ ಪೆರಿಯ ಕೆಲಸವನ್ನು ತಾವು ಬಹಳ ಹಿಂದಿನಿಂದಲೇ ಮೆಚ್ಚಿಕೊಂಡಿದ್ದಾಗಿ ಹೇಳಿದರು. &quot;ನನಗೆ ಆ್ಯಕ್ಷನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಆ್ಯಕ್ಷನ್ ದೃಶ್ಯಗಳಲ್ಲಿ ಅಭಿನಯಿಸುವಾಗ ನಾನು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇನೆ. ಜೆಜೆ ಪೆರಿ ಅದ್ಭುತ ಕೆಲಸ ಮಾಡಿದ್ದಾರೆ. ಅವರು ವಿನ್ಯಾಸಗೊಳಿಸಿರುವ ಆ್ಯಕ್ಷನ್ ಸೀಕ್ವೆನ್ಸ್&zwnj;ಗಳು ನನಗೆ ಯಾವಾಗಲೂ ಸ್ಫೂರ್ತಿ ನೀಡಿವೆ,&quot; ಎಂದು ಯಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&quot;ಪ್ರತಿ ಆ್ಯಕ್ಷನ್ ಹಿಂದೆ ಭಾವನೆ ಇರಬೇಕು&quot;&lt;/strong&gt;&lt;/p&gt;&lt;p&gt;ಆದರೆ, ಆ್ಯಕ್ಷನ್ ಮಾತ್ರವೇ ಸಿನಿಮಾದ ಗುರಿಯಾಗಿರಲಿಲ್ಲ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ. &quot;ನನಗೆ ಆ್ಯಕ್ಷನ್ ಜೊತೆಗೆ ಭಾವನೆಗಳು ಇರಬೇಕು. &lsquo;ಟಾಕ್ಸಿಕ್&rsquo; ಚಿತ್ರದ ಮೂಲ ಅಂಶವೂ ಅದೇ. ಪ್ರತಿಯೊಂದು ಆ್ಯಕ್ಷನ್ ದೃಶ್ಯದ ಹಿಂದೆ ಪ್ರಬಲ ಭಾವನೆ ಇರಬೇಕು. ಆಗ ಮಾತ್ರ ಅದು ಪ್ರೇಕ್ಷಕರನ್ನು ನಿಜವಾಗಿ ತಟ್ಟುತ್ತದೆ,&quot; ಎಂದು ಅವರು ಹೇಳಿದರು.&lt;/p&gt;&lt;p&gt;&lt;strong&gt;&lsquo;ರಾಮಾಯಣ&rsquo;ದಲ್ಲೂ ಇದೇ ಮ್ಯಾಜಿಕ್&lt;/strong&gt;&lt;/p&gt;&lt;p&gt;ಯಶ್ ತಮ್ಮ ಮತ್ತೊಂದು ಬಹುನಿರೀಕ್ಷಿತ ಸಿನಿಮಾ &lsquo;ರಾಮಾಯಣ&rsquo; ಬಗ್ಗೆಯೂ ಮಾತನಾಡಿದ್ದು, ಆ ಚಿತ್ರದಲ್ಲೂ ಅದ್ದೂರಿ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಕಥೆಗೆ ಸಮಾನ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. &quot;&lsquo;ರಾಮಾಯಣ&rsquo;ದಲ್ಲೂ ಅದ್ಭುತ ಆ್ಯಕ್ಷನ್ ದೃಶ್ಯಗಳನ್ನು ನೋಡಬಹುದು. ಆದರೆ ಅಲ್ಲಿಯೂ ಭಾವನೆಗಳೇ ಕಥೆಯನ್ನು ಮುನ್ನಡೆಸುವ ಶಕ್ತಿ,&quot; ಎಂದು ಯಶ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಆಗಸ್ಟ್ 26ಕ್ಕೆ ವಿಶ್ವದಾದ್ಯಂತ ಬಿಡುಗಡೆ&lt;/strong&gt;&lt;/h2&gt;&lt;p&gt;ನಿರ್ದೇಶಕಿ ಗೀತು ಮೋಹನದಾಸ್ ಸಾರಥ್ಯದಲ್ಲಿ ಮೂಡಿಬರುತ್ತಿರುವ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸಿರುವ ಈ ಸಿನಿಮಾ, ಬಹುಭಾಷೆಗಳಲ್ಲಿ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದ್ದು, ಯಶ್ ಅಭಿಮಾನಿಗಳು ಈ ಪ್ಯಾನ್&zwnj;ವರ್&zwnj;ಲ್ಡ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-reveals-why-emotion-is-the-biggest-strength-of-toxic-gvd/articleshow-d4cknue"/>
        </item>
        <item>
            <title><![CDATA[ಹಿಂದೂ ಆಗಿ ಹುಟ್ಟಿ, ಕ್ರಿಶ್ಚಿಯನ್ ಆಗಿ, ಪ್ರೀತಿಗಾಗಿ ಇಸ್ಲಾಂಗೆ ಮತಾಂತರವಾದ ಈ ನಟಿ ಯಾರು ಗೊತ್ತೇ!]]></title>
            <link>https://kannada.asianetnews.com/entertainment/rakhi-sawant-religion-change-journey-from-hinduism-to-islam-and-life-controversies-gvd/articleshow-0r27rao</link>
            <guid isPermaLink="true">https://kannada.asianetnews.com/entertainment/rakhi-sawant-religion-change-journey-from-hinduism-to-islam-and-life-controversies-gvd/articleshow-0r27rao</guid>
            <pubDate>Wed, 29 Jul 2026 20:47:20 +0530</pubDate>
            <description><![CDATA[&lt;p&gt;ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq74f3pv9wkyxg8fakkcj5v,imgname-hchc-1785338150006.png" type="image/jpeg" height="390" width="690"/>
            <content:encoded><![CDATA[&lt;p&gt;ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು. ಅವರ ಆಧ್ಯಾತ್ಮಿಕ ಪಯಣ, ಮದುವೆಗಳು, ಕಾನೂನು ಹೋರಾಟಗಳು ಮತ್ತು ಸದ್ಯ ಅವರ ಧಾರ್ಮಿಕ ನಿಲುವು ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ. ನವೆಂಬರ್ 25, 1978ರಂದು ಮುಂಬೈನಲ್ಲಿ ನೀರು ಭೇಡಾ ಆಗಿ ಜನಿಸಿದ ರಾಖಿ ಸಾವಂತ್, ಮಧ್ಯಮ ವರ್ಗದ ಮರಾಠಿ ಹಿಂದೂ ಕುಟುಂಬದಲ್ಲಿ ಬೆಳೆದರು.&lt;/p&gt;&lt;p&gt;ಅವರ ತಾಯಿ ಜಯಾ ಭೇಡಾ ಆರ್ಥಿಕವಾಗಿ ಕಷ್ಟಪಡುತ್ತಿದ್ದರಿಂದ, ರಾಖಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಆರಂಭಿಸಿದರು. 1990ರ ದಶಕದ ಕೊನೆಯಲ್ಲಿ ಹಿನ್ನೆಲೆ ನರ್ತಕಿಯಾಗಿ ವೃತ್ತಿ ಆರಂಭಿಸಿದ ಅವರು, ತಾಯಿ ಮರುಮದುವೆಯಾದ ನಂತರ 'ಸಾವಂತ್' ಎಂಬ ಉಪನಾಮವನ್ನು ಅಳವಡಿಸಿಕೊಂಡರು. 2000ನೇ ಇಸವಿಯ ಹೊತ್ತಿಗೆ 'ಮೈ ಹೂ ನಾ', 'ಮಸ್ತಿ'ಯಂತಹ ಚಿತ್ರಗಳಲ್ಲಿನ ಡ್ಯಾನ್ಸ್ ನಂಬರ್&zwnj;ಗಳ ಮೂಲಕ ರಾಖಿ ಪರಿಚಿತರಾದರು. ನಂತರ ಭಾರತದ ಪ್ರಸಿದ್ಧ ರಿಯಾಲಿಟಿ ಟಿವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.&lt;img&gt;&lt;/p&gt;&lt;p&gt;ಸುಮಾರು 2009ರಲ್ಲಿ, ರಾಖಿ ಮತ್ತು ಅವರ ತಾಯಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಈ ನಿರ್ಧಾರದ ಬಗ್ಗೆ ಅವರು ಸಾರ್ವಜನಿಕವಾಗಿ ಹೆಚ್ಚು ಮಾತನಾಡಲಿಲ್ಲ, ಇದೊಂದು ವೈಯಕ್ತಿಕ ವಿಷಯ ಎಂದು ಹೇಳಿದ್ದರು. ಧರ್ಮ ಬದಲಾದರೂ, ಅವರು ಬಾಲಿವುಡ್ ಮತ್ತು ರಿಯಾಲಿಟಿ ಟೆಲಿವಿಷನ್&zwnj;ನಲ್ಲಿ ತಮ್ಮ ಕೆಲಸವನ್ನು ಮುಂದುವರಿಸಿದರು. ಚಿತ್ರರಂಗದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿ ಉಳಿದುಕೊಂಡರು.&lt;/p&gt;&lt;p&gt;2019ರಲ್ಲಿ, ರಾಖಿ ಅವರು ಯುಕೆ ಮೂಲದ ಎನ್&zwnj;ಆರ್&zwnj;ಐ ರಿತೇಶ್ ಸಿಂಗ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದರು. ಬಿಗ್ ಬಾಸ್ 15ರಲ್ಲಿ ರಿತೇಶ್ ಕಾಣಿಸಿಕೊಳ್ಳುವವರೆಗೂ ಈ ಮದುವೆ ಬಗ್ಗೆ ಊಹಾಪೋಹಗಳಿದ್ದವು. 2022ರ ಆರಂಭದಲ್ಲಿ ಈ ಜೋಡಿ ಬೇರ್ಪಟ್ಟಿತು. ಅದೇ ವರ್ಷ, ರಾಖಿ ಆದಿಲ್ ಖಾನ್ ದುರಾನಿಯನ್ನು ಭೇಟಿಯಾದರು. ಜೂನ್ 2022ರಲ್ಲಿ ಅವರನ್ನು ಮದುವೆಯಾಗುವ ಮೊದಲು, ಅವರು ಇಸ್ಲಾಂಗೆ ಮತಾಂತರಗೊಂಡು, ಫಾತಿಮಾ ಎಂಬ ಹೆಸರನ್ನು ಅಳವಡಿಸಿಕೊಂಡು ಬುರ್ಖಾ ಧರಿಸಲು ಪ್ರಾರಂಭಿಸಿದರು.&lt;/p&gt;&lt;p&gt;ಆರಂಭದಲ್ಲಿ ಈ ಜೋಡಿ ತಮ್ಮ ಮದುವೆಯನ್ನು ಖಾಸಗಿಯಾಗಿಟ್ಟಿದ್ದರೂ, ಜನವರಿ 2023ರಲ್ಲಿ ಸಾರ್ವಜನಿಕವಾಗಿ ಘೋಷಿಸಿದರು. ಮದುವೆಯನ್ನು ಸಾರ್ವಜನಿಕವಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ, ಸಂಬಂಧವು ನಾಟಕೀಯ ತಿರುವು ಪಡೆಯಿತು. ಆದಿಲ್ ತನ್ನ ಹಿನ್ನೆಲೆಯ ಬಗ್ಗೆ ಪ್ರಮುಖ ವಿವರಗಳನ್ನು ಮುಚ್ಚಿಟ್ಟಿದ್ದಾರೆ ಎಂದು ರಾಖಿ ಆರೋಪಿಸಿದರು. ಪ್ರಾಮಾಣಿಕತೆಗೆ ಎಲ್ಲಕ್ಕಿಂತ ಹೆಚ್ಚು ಬೆಲೆ ಇರುತ್ತಿತ್ತು ಎಂದು ಸಾರ್ವಜನಿಕವಾಗಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.&lt;img&gt;&lt;/p&gt;&lt;p&gt;ಫೆಬ್ರವರಿ 7, 2023ರಂದು, ಅವರು ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಿಸಿದರು. ಆದಿಲ್ ವಿರುದ್ಧ ಕೌಟುಂಬಿಕ ದೌರ್ಜನ್ಯ, ವಂಚನೆ, ಆರ್ಥಿಕ ದುರ್ನಡತೆ ಮತ್ತು ಇತರ ಆರೋಪಗಳನ್ನು ಮಾಡಿದರು. ಅದೇ ದಿನ ಆದಿಲ್&zwnj;ನನ್ನು ಬಂಧಿಸಲಾಯಿತು ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಮೈಸೂರಿನಲ್ಲಿದ್ದ ಆದಿಲ್ ಕುಟುಂಬವನ್ನು ಭೇಟಿಯಾದಾಗ, ತಾನು ಮೂಲತಃ ಹಿಂದೂ ಕುಟುಂಬದಲ್ಲಿ ಜನಿಸಿದ್ದರಿಂದ ಅವರು ತಮ್ಮ ಮದುವೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದೂ ರಾಖಿ ಹೇಳಿಕೊಂಡಿದ್ದರು.&lt;/p&gt;&lt;h2&gt;&lt;strong&gt;ವಿವಾದವು ಅಧಿಕೃತವಾಗಿ ಅಂತ್ಯ&lt;/strong&gt;&lt;/h2&gt;&lt;p&gt;ಹಲವು ತಿಂಗಳ ಕಾನೂನು ಪ್ರಕ್ರಿಯೆಗಳ ನಂತರ, 2025ರ ಕೊನೆಯಲ್ಲಿ ರಾಖಿ ಮತ್ತು ಆದಿಲ್ ಸೌಹಾರ್ದಯುತ ಇತ್ಯರ್ಥದ ನಂತರ ಪರಸ್ಪರ ದಾಖಲಿಸಿದ್ದ ಎಫ್&zwnj;ಐಆರ್&zwnj;ಗಳನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತು. ಇದರಿಂದ ಅವರ ಕಾನೂನು ವಿವಾದವು ಅಧಿಕೃತವಾಗಿ ಅಂತ್ಯಗೊಂಡಿತು. 2026ರ ಹೊತ್ತಿಗೆ, ರಾಖಿ ಸಾವಂತ್ ತಮ್ಮ ಪ್ರಸ್ತುತ ಧಾರ್ಮಿಕ ಗುರುತನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಿಲ್ಲ. ಅವರು ಇಸ್ಲಾಂ ಧರ್ಮವನ್ನು ಮುಂದುವರಿಸುತ್ತಿದ್ದಾರೆಯೇ, ಕ್ರಿಶ್ಚಿಯನ್ ಧರ್ಮಕ್ಕೆ ಮರಳಿದ್ದಾರೆಯೇ ಅಥವಾ ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಲ್ಲ. ಹೀಗಾಗಿ ಅವರ ಆಧ್ಯಾತ್ಮಿಕ ಪಯಣವು ಊಹಾಪೋಹಗಳಿಗೆ ತೆರೆದುಕೊಂಡಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/rakhi-sawant-religion-change-journey-from-hinduism-to-islam-and-life-controversies-gvd/articleshow-0r27rao"/>
        </item>
        <item>
            <title><![CDATA[ನಿಮ್ಗೆ ಇಷ್ಟವಾದ ಹುಡ್ಗಿ ಮನೆ ಮುಂದೆ ಹೋಗಿ ಕಾಯಿರಿ, ಪರ್ವಾಗಿಲ್ಲ'.. ಹೀಗ್ 'ಮಾಸ್ ಮೆಸೇಜ್' ಕೊಟ್ಟಿದ್ದೇಕೆ ಅಲ್ಲು ಅರ್ಜುನ್?]]></title>
            <link>https://kannada.asianetnews.com/entertainment/if-you-like-a-girl-go-ahead-and-wait-outside-her-house-if-you-must-that-is-fine-says-pushpa-movie-star-allu-arjun/articleshow-5lse5tg</link>
            <guid isPermaLink="true">https://kannada.asianetnews.com/entertainment/if-you-like-a-girl-go-ahead-and-wait-outside-her-house-if-you-must-that-is-fine-says-pushpa-movie-star-allu-arjun/articleshow-5lse5tg</guid>
            <pubDate>Wed, 29 Jul 2026 14:19:08 +0530</pubDate>
            <description><![CDATA[&lt;p&gt;ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ &lsquo;ರಾಕಾ&rsquo; ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypesd09sn1hcmwtrn5tgy6y,imgname-allu-arjun-1785312621565.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಕಾನ್ ಸ್ಟಾರ್ ಅಲ್ಲು ಅರ್ಜುನ್ &lsquo;ಮಾಸ್&rsquo; ಮೆಸೇಜ್: &quot;ಹುಡುಗಿ ಮನೆ ಮುಂದೆ ಕಾಯಿರಿ ಪರವಾಗಿಲ್ಲ, ಆದ್ರೆ ಟ್ರೋಲ್ ಮಾತ್ರ ಮಾಡ್ಬೇಡಿ!&quot;&lt;/p&gt;&lt;p&gt;ಟಾಲಿವುಡ್&zwnj;ನ &lsquo;ಪುಷ್ಪರಾಜ್&rsquo; ಅಲಿಯಾಸ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸಖತ್ &lsquo;ಸ್ಟೈಲಿಶ್&rsquo; ಮತ್ತು &lsquo;ಖಡಕ್&rsquo;. ಇತ್ತೀಚೆಗೆ ಹೈದರಾಬಾದ್&zwnj;ನಲ್ಲಿ ನಡೆದ &lsquo;ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್&rsquo; ಸಭೆಯಲ್ಲಿ ಬನ್ನಿ ನೀಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಟ್ರೇಡ್&zwnj;ಮಾರ್ಕ್ ಕಪ್ಪು ಉಡುಪಿನಲ್ಲಿ ಮಿಂಚಿದ ಅರ್ಜುನ್, ಫ್ಯಾನ್ಸ್&zwnj;ಗೆ ಮಾತ್ರವಲ್ಲ, ತಮ್ಮನ್ನು ದ್ವೇಷಿಸುವವರಿಗೂ (Haters) ಒಂದು ಮಸ್ತ್ ಮೆಸೇಜ್ ಕೊಟ್ಟಿದ್ದಾರೆ.&lt;/p&gt;&lt;p&gt;ಪ್ರೀತಿ ಇರಲಿ, ನೆಗೆಟಿವಿಟಿ ಬೇಡ!&lt;/p&gt;&lt;p&gt;ಸಿನಿಮಾ ಅಂದಮೇಲೆ ಫ್ಯಾನ್ ವಾರ್ ಕಾಮನ್. ಆದರೆ, ಇದು ಅತಿರೇಕಕ್ಕೆ ಹೋಗಬಾರದು ಅನ್ನೋದು ಅಲ್ಲು ಅರ್ಜುನ್ ಆಶಯ. ವೇದಿಕೆ ಮೇಲೆ ಮೈಕ್ ಹಿಡಿದ ಬನ್ನಿ, &quot;ನನ್ನ ಅಭಿಮಾನಿಗಳು, ವಿರೋಧಿಗಳು ಮತ್ತು ದ್ವೇಷಿಸುವವರಿಗೆ ಒಂದು ಮಾತು ಹೇಳಬೇಕಿದೆ. ನಿಮಗೆ ಯಾರನ್ನಾದರೂ ಇಷ್ಟವಾಗದಿದ್ದರೆ, ಅವರನ್ನು ದ್ವೇಷಿಸಿ ಅಥವಾ ಟ್ರೋಲ್ ಮಾಡಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಹತ್ತಿರ 100 ರೂಪಾಯಿ ಹಣ ಇದ್ದರೆ, ಅದನ್ನು ನಿಮಗೆ ಇಷ್ಟವಿಲ್ಲದ ವಸ್ತುವಿನ ಮೇಲೆ ಖರ್ಚು ಮಾಡ್ತೀರಾ? ಇಲ್ಲ ತಾನೇ? ಹಾಗೆಯೇ ನಿಮ್ಮ ಸಮಯ ಕೂಡ,&quot; ಎಂದು ತರ್ಕಬದ್ಧವಾಗಿ ಮಾತನಾಡಿದರು.&lt;/p&gt;&lt;p&gt;ಇದೇ ವೇಳೆ ಅಭಿಮಾನಿಗಳಿಗೆ ಒಂದು ತಮಾಷೆಯ ಕಿವಿಮಾತು ಹೇಳಿದ ನಟ, &quot;ನಿಮಗೆ ಯಾರಾದರೂ ಇಷ್ಟವಾದರೆ, ಬೇಕಿದ್ದರೆ ಆ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ! ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಆದರೆ ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ' ಎಂದು ನಗುತ್ತಲೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.&lt;/p&gt;&lt;p&gt;ಅಭಿಮಾನಿಗಳಿಗಾಗಿ 6 ಗಂಟೆಗಳ ಕಾಲ ನಿಂತೇ ಫೋಟೋ ನೀಡಿದ ನಟ!&lt;/p&gt;&lt;p&gt;ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳೆಂದರೆ ಪ್ರಾಣ. ಈ ಕಾರ್ಯಕ್ರಮದಲ್ಲಿ ಕೇವಲ ಭಾಷಣ ಅಷ್ಟೇ ಅಲ್ಲ, ದೂರದ ಊರುಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಸತತ 6 ಗಂಟೆಗಳ ಕಾಲ ನಿಂತಲೇ ಇದ್ದರು. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿ ಸಂಘದ ಸದಸ್ಯರಿಗಾಗಿ 'ಅಪಘಾತ ವಿಮೆ' ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಅವರು ಘೋಷಿಸಿದ್ದಾರೆ.&lt;/p&gt;&lt;p&gt;ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾನ್ಸ್ ಜೊತೆ ಸೆಲ್ಫಿ&lt;/p&gt;&lt;p&gt;ಕಾರ್ಯಕ್ರಮ ಮುಗಿದ ನಂತರ ತಮ್ಮ ಅಧಿಕೃತ ಪೇಜ್&zwnj;ನಲ್ಲಿ ಅಭಿಮಾನಿಗಳೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡ ಅವರು, &quot;ನಿಮ್ಮ ಪ್ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ,&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ &lsquo;ರಾಕಾ&rsquo; ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬನ್ನಿ ಈಗ ಕೇವಲ ಸಿನಿಮಾದಿಂದ ಮಾತ್ರವಲ್ಲ, ತಮ್ಮ ಈ ಹೊಸ ಚಿಂತನೆಯಿಂದಲೂ ಸುದ್ದಿಯಲ್ಲಿದ್ದಾರೆ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/if-you-like-a-girl-go-ahead-and-wait-outside-her-house-if-you-must-that-is-fine-says-pushpa-movie-star-allu-arjun/articleshow-5lse5tg"/>
        </item>
        <item>
            <title><![CDATA['ಇಂತಹ ನಿರ್ದೇಶಕರನ್ನು ನಾನು ನೋಡಿಲ್ಲ': ರಿಷಬ್ ಕೆಲಸದ ಶೈಲಿಗೆ ಫಿದಾ ಆದ ಹಿರಿಯ ನಟ ಜಯರಾಮ್]]></title>
            <link>https://kannada.asianetnews.com/entertainment/never-seen-a-director-like-rishab-shetty-says-veteran-actor-jayaram-gvd/articleshow-gq9u4xh</link>
            <guid isPermaLink="true">https://kannada.asianetnews.com/entertainment/never-seen-a-director-like-rishab-shetty-says-veteran-actor-jayaram-gvd/articleshow-gq9u4xh</guid>
            <pubDate>Wed, 29 Jul 2026 20:18:55 +0530</pubDate>
            <description><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಈ ಯಶಸ್ಸಿನ ಹಿಂದೆ ಇರುವ ಪರಿಶ್ರಮ ಮತ್ತು ಸಿನಿಮಾ ಮೇಲಿನ ಸಮರ್ಪಣೆಯನ್ನು ಕಂಡಿರುವ ಹಿರಿಯ ನಟ ಜಯರಾಮ್ ಇದೀಗ ಅವರ ಕೆಲಸದ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq5gpa1k8w1jqhh8r1dq3c3,imgname-hn-1785336453441.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಕಾಂತಾರ&rsquo; ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ-ನಿರ್ದೇಶಕ ರಿಷಬ್ ಶೆಟ್ಟಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿಯೂ ತಮ್ಮ ವಿಭಿನ್ನ ದೃಷ್ಟಿಕೋನ, ಸೃಜನಶೀಲತೆ ಮತ್ತು ಸಿನಿಮಾ ಮೇಲಿನ ಅಪಾರ ಪ್ರೀತಿಯಿಂದ ರಿಷಬ್ ಶೆಟ್ಟಿ ಇಂದು ಬಹುಬೇಡಿಕೆಯ ಕಲಾವಿದರ ಸಾಲಿನಲ್ಲಿ ನಿಂತಿದ್ದಾರೆ. ರಿಷಬ್ ಅವರ ಈ ಯಶಸ್ಸಿನ ಹಿಂದೆ ಇರುವ ಪರಿಶ್ರಮ ಮತ್ತು ಸಿನಿಮಾ ಮೇಲಿನ ಸಮರ್ಪಣೆಯನ್ನು ಕಂಡಿರುವ ಹಿರಿಯ ನಟ ಜಯರಾಮ್ ಇದೀಗ ಅವರ ಕೆಲಸದ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;'ರಿಷಬ್ ಸೆಟ್&zwnj;ನಲ್ಲಿ ಪಾದರಸದಂತೆ ಓಡಾಡುತ್ತಿರುತ್ತಾರೆ'&lt;/strong&gt;&lt;/p&gt;&lt;p&gt;&lsquo;ಕಾಂತಾರ: ಚಾಪ್ಟರ್ 1&rsquo; ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡಿರುವ ಜಯರಾಮ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಒಬ್ಬ ನಿರ್ದೇಶಕರಾಗಿ ಮಾತ್ರವಲ್ಲದೆ, ಸಿನಿಮಾದ ಪ್ರತಿಯೊಂದು ವಿಭಾಗದಲ್ಲೂ ತೊಡಗಿಸಿಕೊಳ್ಳುವ ವ್ಯಕ್ತಿ ಎಂದು ಜಯರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;'ರಿಷಬ್ ಸೆಟ್&zwnj;ನಲ್ಲಿ ಪಾದರಸದಂತೆ ಇರುತ್ತಾರೆ. ಸದಾ ಚಲಿಸುತ್ತಲೇ ಇರುತ್ತಾರೆ. ಶೂಟಿಂಗ್&zwnj;ನ ಪ್ರತಿಯೊಂದು ವಿಭಾಗದಲ್ಲೂ ಅವರ ಗಮನ ಇರುತ್ತದೆ. ಸೆಟ್ ನಿರ್ಮಾಣ, ಮೇಕಪ್, ಕ್ಯಾಮೆರಾ, ಆ್ಯಕ್ಷನ್ ಸೇರಿದಂತೆ ಎಲ್ಲದರಲ್ಲೂ ಅವರು ತೊಡಗಿಸಿಕೊಳ್ಳುತ್ತಾರೆ ಮತ್ತು ತಮ್ಮ ಸಲಹೆಗಳನ್ನು ನೀಡುತ್ತಾರೆ. ಸೆಟ್&zwnj;ಗೆ ಬಂದ ಕ್ಷಣದಿಂದ ಹೊರಡುವವರೆಗೂ ಅವರ ಮನಸ್ಸು ಸಿನಿಮಾದಲ್ಲೇ ಇರುತ್ತದೆ' ಎಂದು ಜಯರಾಮ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;'ರಿಷಬ್&zwnj;ನಂತಹ ನಿರ್ದೇಶಕರನ್ನು ನಾನು ನೋಡಿಲ್ಲ'&lt;/strong&gt;&lt;/p&gt;&lt;p&gt;ರಿಷಬ್ ಶೆಟ್ಟಿಯ ಸಿನಿಮಾ ಮೇಲಿನ ಬದ್ಧತೆಯನ್ನು ಶ್ಲಾಘಿಸಿರುವ ಜಯರಾಮ್, ತಮ್ಮ ದೀರ್ಘ ಸಿನಿ ಅನುಭವದಲ್ಲೂ ಇಂತಹ ನಿರ್ದೇಶಕರನ್ನು ಅಪರೂಪವಾಗಿ ನೋಡಿದ್ದೇನೆ ಎಂದಿದ್ದಾರೆ. 'ರಿಷಬ್ ಶೆಟ್ಟಿ ರೀತಿಯಲ್ಲಿ ಪ್ರತಿಯೊಂದು ವಿಭಾಗದಲ್ಲೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ನಿರ್ದೇಶಕರನ್ನು ನಾನು ನೋಡಿಲ್ಲ. ನನ್ನ ದೃಶ್ಯಗಳ ಚಿತ್ರೀಕರಣ ಮುಗಿದ ಬಳಿಕವೂ ನಾನು ಸೆಟ್&zwnj;ನಲ್ಲಿ ಉಳಿದುಕೊಂಡು ಅವರ ಕೆಲಸವನ್ನು ಗಮನಿಸುತ್ತಿದ್ದೆ. ಅವರಿಂದ ಕಲಿಯುವುದು ತುಂಬಾ ಇದೆ. ಯುವ ನಿರ್ದೇಶಕರು ಮತ್ತು ನಟರು ಅವರನ್ನು ಮಾದರಿಯಾಗಿ ನೋಡಬೇಕು' ಎಂದು ಜಯರಾಮ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಕಾಂತಾರ: ಚಾಪ್ಟರ್ 1&rsquo;ನಲ್ಲಿ ಖಳನಾಯಕನಾಗಿ ಜಯರಾಮ್&lt;/strong&gt;&lt;/h2&gt;&lt;p&gt;&lsquo;ಕಾಂತಾರ: ಚಾಪ್ಟರ್ 1&rsquo; ಸಿನಿಮಾದಲ್ಲಿ ಜಯರಾಮ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ರುಕ್ಮಿಣಿ ವಸಂತ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದು, ಕಥೆಯಲ್ಲಿ ಪ್ರಮುಖ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಇದಕ್ಕೂ ಮೊದಲು ಅವರು ಶಿವರಾಜ್&zwnj;ಕುಮಾರ್ ಅಭಿನಯದ &lsquo;ಘೋಸ್ಟ್&rsquo; ಸಿನಿಮಾದಲ್ಲೂ ನಟಿಸಿದ್ದರು. ಮೂಲತಃ ಮಲಯಾಳಂ ಚಿತ್ರರಂಗದ ಖ್ಯಾತ ನಟರಾಗಿರುವ ಜಯರಾಮ್, ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳ ಸಿನಿಮಾಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ.&lt;/p&gt;&lt;p&gt;ನಟನೆಯ ಜೊತೆಗೆ ಗಾಯನದಲ್ಲೂ ಆಸಕ್ತಿ ಹೊಂದಿರುವ ಜಯರಾಮ್, ಪುನೀತ್ ರಾಜ್&zwnj;ಕುಮಾರ್ ಅವರ ಹಾಡೊಂದನ್ನು ಹಾಡಿದ ವಿಡಿಯೋ ಕೂಡ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಿಷಬ್ ಶೆಟ್ಟಿಯ ಸಿನಿಮಾ ಮೇಲಿನ ಪ್ರೀತಿ ಮತ್ತು ಪರಿಶ್ರಮಕ್ಕೆ ಇದೀಗ ಮತ್ತೊಬ್ಬ ಹಿರಿಯ ನಟನಿಂದ ಮೆಚ್ಚುಗೆ ವ್ಯಕ್ತವಾಗಿದ್ದು, &lsquo;ಕಾಂತಾರ&rsquo; ತಂಡದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/never-seen-a-director-like-rishab-shetty-says-veteran-actor-jayaram-gvd/articleshow-gq9u4xh"/>
        </item>
        <item>
            <title><![CDATA['ನಮ್ಮ ಬದುಕಿನ ಬೆಳಕು ಬಂದಳು': ಮಗಳು ಹುಟ್ಟಿದ ಖುಷಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ]]></title>
            <link>https://kannada.asianetnews.com/entertainment/ratnan-prapancha-actress-reba-john-announces-birth-of-baby-girl-kiara-joseph-gvd/articleshow-ldwyuga</link>
            <guid isPermaLink="true">https://kannada.asianetnews.com/entertainment/ratnan-prapancha-actress-reba-john-announces-birth-of-baby-girl-kiara-joseph-gvd/articleshow-ldwyuga</guid>
            <pubDate>Wed, 29 Jul 2026 19:52:13 +0530</pubDate>
            <description><![CDATA[&lt;p&gt;Reba Monica John Baby Girl: ʻರತ್ನನ್&zwnj; ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ &lsquo;ಬಿಗಿಲ್&rsquo; ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyq41e3r8wg1xxxqac2xjmzq,imgname-chg-1785334904952.png" type="image/jpeg" height="390" width="690"/>
            <content:encoded><![CDATA[&lt;p&gt;ʻರತ್ನನ್&zwnj; ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್. ತಮಿಳಿನಲ್ಲಿ ವಿಜಯ್ ಜೊತೆ ನಟಿಸಿದ್ದ &lsquo;ಬಿಗಿಲ್&rsquo; ಚಿತ್ರದ ಪಾತ್ರ ಕೂಡ ರೆಬಾಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ರೆಬಾ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದು ಒಂದು ಟೆಲಿವಿಷನ್ ಶೋ ಮೂಲಕ. 2022ರಲ್ಲಿ ಅವರು ಜೋಮನ್ ಜೋಸೆಫ್ ಅವರನ್ನು ಮದುವೆಯಾಗಿದ್ದರು.&lt;/p&gt;&lt;p&gt;ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ತಿಳಿಸಿದ್ದರು. ಈಗ, ತಮಗೆ ಹೆಣ್ಣು ಮಗು ಜನಿಸಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಜುಲೈ 22ರಂದು ಇವರಿಗೆ ಮಗಳು ಹುಟ್ಟಿದ್ದಾಳೆ. ಈ ಹೊಸ ಸನ್ನಿವೇಶಕ್ಕೆ ಹೊಂದಿಕೊಳ್ಳುತ್ತಿದ್ದ ಕಾರಣ, ಈ ಖುಷಿ ಸುದ್ದಿಯನ್ನು ಹಂಚಿಕೊಳ್ಳಲು ತಡವಾಯಿತು ಎಂದು ರೆಬಾ ಇನ್&zwnj;ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;&quot;ಹಲೋ ವರ್ಲ್ಡ್, ನಮ್ಮ ಪುಟ್ಟ ರಾಜಕುಮಾರಿ ಇಲ್ಲಿದ್ದಾಳೆ.... ಕಿಯಾರಾ ಜೋಸೆಫ್... ನಮ್ಮ ಬದುಕಿಗೆ ಬೆಳಕಾಗಿ ಬಂದ ನಮ್ಮ ಮಗಳು... ಕಳೆದ ಕೆಲವು ದಿನಗಳಿಂದ ನಾವು ಜೀವನದ ಈ ಹೊಸ ಹಂತವನ್ನು ಅರ್ಥಮಾಡಿಕೊಳ್ಳುತ್ತಾ, ನಮ್ಮ ಈ ಪುಟ್ಟ ದೇವತೆಯನ್ನು ಹತ್ತಿರದಿಂದ ತಿಳಿಯುತ್ತಾ, ಪ್ರತಿ ಕ್ಷಣವನ್ನೂ ಆನಂದಿಸುತ್ತಿದ್ದೆವು.&quot;&lt;/p&gt;&lt;h2&gt;&lt;strong&gt;ಪ್ರೀತಿ ಮತ್ತು ಆಶೀರ್ವಾದ ಇರಲಿ&lt;/strong&gt;&lt;/h2&gt;&lt;p&gt;&quot;ಒಂದು ಜೀವವನ್ನು ತನ್ನ ದೇಹದೊಳಗೆ ಬೆಳೆಸುವ ಶಕ್ತಿ ಮಹಿಳೆಯ ದೇಹಕ್ಕಿದೆ ಎನ್ನುವುದು ನಿಜಕ್ಕೂ ಒಂದು ಅದ್ಭುತ. ಕಳೆದ ಒಂಬತ್ತು ತಿಂಗಳು ಅವಳು ನನಗೆ ಪ್ರೀತಿ ಮತ್ತು ಕಾಳಜಿಯನ್ನು ಮಾತ್ರ ನೀಡಿದ್ದಾಳೆ. ಈಗ ಅವಳು ನಮ್ಮ ಕೈಯಲ್ಲಿದ್ದಾಳೆ. ಇನ್ನು ಮುಂದೆ ನಮ್ಮ ಕಣ್ಣುಗಳ ಮೂಲಕ ಅವಳಿಗೆ ಈ ಜಗತ್ತನ್ನು ತೋರಿಸಲು ಮತ್ತು ನಾವೆಲ್ಲರೂ ಸೇರಿ ಸಾಕಷ್ಟು ನೆನಪುಗಳನ್ನು ಸೃಷ್ಟಿಸಲು ಕಾಯುತ್ತಿದ್ದೇವೆ. ಜೀವನದ ಈ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ನಮ್ಮ ಮೂವರಿಗೂ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ,&quot; ಎಂದು ರೆಬಾ ಇನ್&zwnj;ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಸಿನಿಮಾ ರಂಗದ ಗಣ್ಯರು ಸೇರಿದಂತೆ ಅನೇಕರು ಈ ಜೋಡಿಗೆ ಶುಭಾಶಯ ತಿಳಿಸಿ ಕಾಮೆಂಟ್ ಮಾಡುತ್ತಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ratnan-prapancha-actress-reba-john-announces-birth-of-baby-girl-kiara-joseph-gvd/articleshow-ldwyuga"/>
        </item>
        <item>
            <title><![CDATA[ವಿಜಯ್ ಕೊನೆ ಸಿನಿಮಾದಲ್ಲಿ 6.3 ಅಡಿ ಎತ್ತರದ ಕನ್ನಡಿಗನ ಖದರ್: ಕಾಲಿವುಡ್‌ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ!]]></title>
            <link>https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw</link>
            <guid isPermaLink="true">https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw</guid>
            <pubDate>Wed, 29 Jul 2026 17:38:14 +0530</pubDate>
            <description><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್&zwnj;ಗೆ ಭರ್ಜರಿ ಎಂಟ್ರಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypwaxrrgbdsk07bqfpk6e4s,imgname-hch-1785326827288.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನಲ್ಲಿ ನಾಯಕನಾಗಿಯೂ, ಖಳನಾಯಕನಾಗಿಯೂ ತನ್ನದೇ ಛಾಪು ಮೂಡಿಸಿರುವ ನಟ ವಜ್ರಾಂಗ್ ಶೆಟ್ಟಿ ಈಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಈ ಬಾರಿ ಅವರು ಕಾಲಿವುಡ್&zwnj;ಗೆ ಭರ್ಜರಿ ಎಂಟ್ರಿ ನೀಡಿದ್ದು, ತಮಿಳು ಸೂಪರ್&zwnj;ಸ್ಟಾರ್ ವಿಜಯ್ ದಳಪತಿ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ ವಿದಾಯ ಚಿತ್ರವೆಂದು ಹೇಳಲಾಗುತ್ತಿರುವ 'ಜನನಾಯಗನ್' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.&lt;/p&gt;&lt;p&gt;ಕಳೆದ ವಾರ ಬಿಡುಗಡೆಯಾದ ಜನನಾಯಗನ್ ಸಿನಿಮಾ ತಮಿಳುನಾಡಿನಲ್ಲಿ ಭರ್ಜರಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರದ ಖಳನಾಯಕ ಬಾಬಿ ಡಿಯೋಲ್ ನಂತರ ಗಮನ ಸೆಳೆದ ಮತ್ತೊಂದು ಹೆಸರು ವಜ್ರಾಂಗ್ ಶೆಟ್ಟಿ. ವಿಶೇಷವಾಗಿ ವಿಜಯ್ ಮತ್ತು ವಜ್ರಾಂಗ್ ನಡುವಿನ ಮಾಸ್ ಆ್ಯಕ್ಷನ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಲಿವುಡ್ ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸಿವೆ.&lt;/p&gt;&lt;p&gt;ಮೂಲತಃ ಕುಂದಾಪುರದವರಾದ ಮಣಿ ಶೆಟ್ಟಿ, ಚಿತ್ರರಂಗದಲ್ಲಿ ವಜ್ರಾಂಗ್ ಶೆಟ್ಟಿ ಎಂದೇ ಪರಿಚಿತರು. 2014ರಲ್ಲಿ ಮಿಸ್ಟರ್ ಕುಂದಾಪುರ ಪಟ್ಟ ಗೆದ್ದ ಅವರು, ಸುಮಾರು 6.3 ಅಡಿ ಎತ್ತರದ ಆಕರ್ಷಕ ವ್ಯಕ್ತಿತ್ವ ಮತ್ತು ದಿಟ್ಟ ಮೈಕಟ್ಟಿನ ಮೂಲಕ ಆರಂಭದಿಂದಲೇ ಗಮನ ಸೆಳೆದಿದ್ದರು. ಇದೇ ಕಾರಣಕ್ಕೆ ನಾಯಕ ಹಾಗೂ ಖಳನಾಯಕ ಎರಡೂ ಬಗೆಯ ಪಾತ್ರಗಳಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ.&lt;/p&gt;&lt;p&gt;ವಿನಯ್ ರಾಜ್&zwnj;ಕುಮಾರ್ ಅಭಿನಯದ 'ಸಿದ್ದಾರ್ಥ' ಚಿತ್ರದ ಮೂಲಕ ಖಳನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ವಜ್ರಾಂಗ್, ಪಾರ್ವತಮ್ಮ ರಾಜ್&zwnj;ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್&zwnj;ನಿಂದ ತಮ್ಮ ಸಿನಿಪಯಣ ಆರಂಭಿಸಿದರು. ನಂತರ 'ಮಂತ್ರಂ' ಹಾಗೂ 'ಬಬ್ಲುಷಾ' ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಗಮನ ಸೆಳೆದರು. ಪ್ರಜ್ವಲ್ ದೇವರಾಜ್ ಅಭಿನಯದ 'ಮಾದ ಮತ್ತು ಮಾನಸಿ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅವರು, ಪುನೀತ್ ರಾಜ್&zwnj;ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್'ನಲ್ಲಿ ಪ್ರತಾಪ್ ಅರಸ್ ಎಂಬ ಖಳಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.&lt;/p&gt;&lt;p&gt;ಕನ್ನಡದ ಬಳಿಕ ಟಾಲಿವುಡ್&zwnj;ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ವಜ್ರಾಂಗ್ ಶೆಟ್ಟಿ, ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ವಿಷ್ಣು ಎಂಬ ಪಾತ್ರದ ಮೂಲಕ ತೆಲುಗು ಪ್ರೇಕ್ಷಕರ ಗಮನ ಸೆಳೆದರು. ವಿಶೇಷವಾಗಿ ಪ್ರಭಾಸ್ ಜೊತೆಗಿನ ಆ್ಯಕ್ಷನ್ ದೃಶ್ಯಗಳು ಇಂದಿಗೂ ಅಭಿಮಾನಿಗಳ ಮೆಚ್ಚಿನ ಕ್ಷಣಗಳಾಗಿ ಉಳಿದಿವೆ.&lt;/p&gt;&lt;h2&gt;&lt;strong&gt;ಬಹುಬೇಡಿಕೆಯ ನಟರಲ್ಲಿ ಒಬ್ಬ&lt;/strong&gt;&lt;/h2&gt;&lt;p&gt;ಈಗ ಜನನಾಯಗನ್ ಮೂಲಕ ಕಾಲಿವುಡ್&zwnj;ನಲ್ಲೂ ಅದ್ದೂರಿ ಪ್ರವೇಶ ಮಾಡಿರುವ ವಜ್ರಾಂಗ್ ಶೆಟ್ಟಿ, ಕನ್ನಡದಿಂದ ತೆಲುಗು, ಅಲ್ಲಿಂದ ತಮಿಳು ಚಿತ್ರರಂಗದವರೆಗೆ ತಮ್ಮ ಪ್ರತಿಭೆಯ ಛಾಪು ಮೂಡಿಸುತ್ತಿದ್ದಾರೆ. ಪ್ರತಿಯೊಂದು ಭಾಷೆಯಲ್ಲೂ ತಮ್ಮದೇ ಆದ ಪ್ರಭಾವ ಬೀರುತ್ತಿರುವ ಈ ಕನ್ನಡದ ಪ್ರತಿಭೆ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vajrang-shetty-makes-powerful-kollywood-debut-with-vijay-gvd/articleshow-m83q4lw"/>
        </item>
        <item>
            <title><![CDATA[ಅಲ್ಲು ಅರ್ಜುನ್‌ಗೆ ಹುಬ್ಬಳ್ಳಿ ಅಭಿಮಾನಿಯ ಅದ್ಭುತ ಗಿಫ್ಟ್.. ಸಿದ್ಧಾರೂಢರ ಮೂರ್ತಿಯನ್ನು ಹೇಗೆ ಇಸ್ಕೊಂಡ್ರು ನೋಡಿ!]]></title>
            <link>https://kannada.asianetnews.com/entertainment/tollywood-star-actor-allu-arjun-blessed-with-hubballi-shri-siddharoodha-swamiji-proud-memento/articleshow-mygz7vr</link>
            <guid isPermaLink="true">https://kannada.asianetnews.com/entertainment/tollywood-star-actor-allu-arjun-blessed-with-hubballi-shri-siddharoodha-swamiji-proud-memento/articleshow-mygz7vr</guid>
            <pubDate>Wed, 29 Jul 2026 16:43:58 +0530</pubDate>
            <description><![CDATA[&lt;p&gt;ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್&zwnj; ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyprdayaaajznr5bfq76j477,imgname-allu-arjun--2--1785322712010.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ಗೌರವ!&lt;/strong&gt;&lt;/p&gt;&lt;p&gt;ಟಾಲಿವುಡ್&zwnj;ನ &lsquo;ಪುಷ್ಪರಾಜ್&rsquo; ಅಲಿಯಾಸ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ರಿಯಲ್ ಹೀರೋ. ಇತ್ತೀಚೆಗೆ ಹೈದರಾಬಾದ್&zwnj;ನಲ್ಲಿ ನಡೆದ &lsquo;ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್&rsquo; ಸಭೆಯಲ್ಲಿ ಟಾಲಿವುಡ್&zwnj;ನ ಸ್ಟಾರ್ ನಟ ಅಲ್ಲು ಅರ್ಜುನ್&zwnj; ಅವರಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮೀಜಿಯವರ ಮಮೆಂಟೋ ನೀಡಿ ಗೌರವಿಸಲಾಯಿತು. ಸಿದ್ದಾರೂಢ ಸ್ವಾಮೀಜಿಗಳ ಪ್ರತಿಕೃತಿ ಸ್ವೀಕರಿಸುವ ವೇಳೆ ನಟ ಅಲ್ಲು ಅರ್ಜುನ್ ಅವರು ತಮ್ಮ ಶೂ ತೆಗೆದು ಸ್ವೀಕರಿಸುವ ಮೂಲಕ ಶ್ರೀಗಳಿಗೆ ಗೌರವ ಸಮರ್ಪಿಸಿದ್ದಾರೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಅಗಿದ್ದು ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929)&lt;/h2&gt;&lt;p&gt;ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿಸಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ಸರಿಸುಮಾರು ನೂರು ವರ್ಷಗಳ ಹಿಂದೆ (9 ದಶಕದ ಹಿಂದೆ) ಶ್ರೀಗಳು ಮಾಡಿರುವ ಸಮಾಜ ಸೇವೆ ಇಂದಿಗೂ ಕೂಡ ಯಾರೂ ಮರೆಯಲಾಗದ್ದು. ಜೊತೆಗೆ, ಇಂದಿಗೂ ಹುಬ್ಬಳ್ಳಿ ಸೇರಿದಂತೆ ವಿಶ್ವದ ನಾನಾ ಭಾಗಗಳಿಂದ ಜನರು ಸಿದ್ದಾರೂಢರ ಮಠಕ್ಕೆ ಬಂದು ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಾರೆ.&lt;/p&gt;&lt;p&gt;ಅಂದಹಾಗೆ, ನಟ ಅಲ್ಲು ಅರ್ಜುನ್ ಅವರು ಈ ಕಾರ್ಯಕ್ರಮದಲ್ಲಿ ಮಾಡಿದ ಭಾಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗ್ತಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಟ್ರೇಡ್&zwnj;ಮಾರ್ಕ್ ಕಪ್ಪು ಉಡುಪಿನಲ್ಲಿ ಮಿಂಚಿದ ಅರ್ಜುನ್, ಫ್ಯಾನ್ಸ್&zwnj;ಗೆ ಮಾತ್ರವಲ್ಲ, ತಮ್ಮನ್ನು ದ್ವೇಷಿಸುವವರಿಗೂ (Haters) ಒಂದು ಮಸ್ತ್ ಮೆಸೇಜ್ ಕೊಟ್ಟಿದ್ದಾರೆ.&lt;/p&gt;&lt;h3&gt;ಪ್ರೀತಿ ಇರಲಿ, ನೆಗೆಟಿವಿಟಿ ಬೇಡ!&lt;/h3&gt;&lt;p&gt;ಸಿನಿಮಾ ಅಂದಮೇಲೆ ಫ್ಯಾನ್ ವಾರ್ ಕಾಮನ್. ಆದರೆ, ಇದು ಅತಿರೇಕಕ್ಕೆ ಹೋಗಬಾರದು ಅನ್ನೋದು ಅಲ್ಲು ಅರ್ಜುನ್ ಆಶಯ. ವೇದಿಕೆ ಮೇಲೆ ಮೈಕ್ ಹಿಡಿದ ಬನ್ನಿ, &quot;ನನ್ನ ಅಭಿಮಾನಿಗಳು, ವಿರೋಧಿಗಳು ಮತ್ತು ದ್ವೇಷಿಸುವವರಿಗೆ ಒಂದು ಮಾತು ಹೇಳಬೇಕಿದೆ. ನಿಮಗೆ ಯಾರನ್ನಾದರೂ ಇಷ್ಟವಾಗದಿದ್ದರೆ, ಅವರನ್ನು ದ್ವೇಷಿಸಿ ಅಥವಾ ಟ್ರೋಲ್ ಮಾಡಿ ನಿಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಹತ್ತಿರ 100 ರೂಪಾಯಿ ಹಣ ಇದ್ದರೆ, ಅದನ್ನು ನಿಮಗೆ ಇಷ್ಟವಿಲ್ಲದ ವಸ್ತುವಿನ ಮೇಲೆ ಖರ್ಚು ಮಾಡ್ತೀರಾ? ಇಲ್ಲ ತಾನೇ? ಹಾಗೆಯೇ ನಿಮ್ಮ ಸಮಯ ಕೂಡ,&quot; ಎಂದು ತರ್ಕಬದ್ಧವಾಗಿ ಮಾತನಾಡಿದರು.&lt;/p&gt;&lt;p&gt;ಇದೇ ವೇಳೆ ಅಭಿಮಾನಿಗಳಿಗೆ ಒಂದು ತಮಾಷೆಯ ಕಿವಿಮಾತು ಹೇಳಿದ ನಟ, &quot;ನಿಮಗೆ ಯಾರಾದರೂ ಇಷ್ಟವಾದರೆ, ಬೇಕಿದ್ದರೆ ಆ ಹುಡುಗಿಯ ಮನೆ ಮುಂದೆ ಹೋಗಿ ಕಾಯಿರಿ, ಪರವಾಗಿಲ್ಲ! ಕನಿಷ್ಠ ಆ ಸಮಯದಲ್ಲಾದರೂ ನೀವು ಖುಷಿಯಾಗಿರುತ್ತೀರಿ. ಆದರೆ ದಯವಿಟ್ಟು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವಿಟಿ ಹರಡಬೇಡಿ' ಎಂದು ನಗುತ್ತಲೇ ಜವಾಬ್ದಾರಿಯುತ ಸಂದೇಶ ರವಾನಿಸಿದರು.&lt;/p&gt;&lt;p&gt;ಅಭಿಮಾನಿಗಳಿಗಾಗಿ 6 ಗಂಟೆಗಳ ಕಾಲ ನಿಂತೇ ಫೋಟೋ ನೀಡಿದ ನಟ!&lt;/p&gt;&lt;p&gt;ಅಲ್ಲು ಅರ್ಜುನ್ ಅವರಿಗೆ ಅಭಿಮಾನಿಗಳೆಂದರೆ ಪ್ರಾಣ. ಈ ಕಾರ್ಯಕ್ರಮದಲ್ಲಿ ಕೇವಲ ಭಾಷಣ ಅಷ್ಟೇ ಅಲ್ಲ, ದೂರದ ಊರುಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳ ಜೊತೆ ಫೋಟೋ ತೆಗೆಸಿಕೊಳ್ಳಲು ಸತತ 6 ಗಂಟೆಗಳ ಕಾಲ ನಿಂತಲೇ ಇದ್ದರು. ಅಷ್ಟೇ ಅಲ್ಲದೆ, ದೇಶದಲ್ಲೇ ಮೊದಲ ಬಾರಿಗೆ ತಮ್ಮ ಅಭಿಮಾನಿ ಸಂಘದ ಸದಸ್ಯರಿಗಾಗಿ 'ಅಪಘಾತ ವಿಮೆ' ಘೋಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಜ್ಯ ಸಮಿತಿ ಸದಸ್ಯರಿಗೆ 5 ಲಕ್ಷ ಹಾಗೂ ಜಿಲ್ಲಾ ಸದಸ್ಯರಿಗೆ 3 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಅವರು ಘೋಷಿಸಿದ್ದಾರೆ.&lt;/p&gt;&lt;p&gt;ಬ್ಯುಸಿ ಶೆಡ್ಯೂಲ್ ನಡುವೆಯೂ ಫ್ಯಾನ್ಸ್ ಜೊತೆ ಸೆಲ್ಫಿ&lt;/p&gt;&lt;p&gt;ಕಾರ್ಯಕ್ರಮ ಮುಗಿದ ನಂತರ ತಮ್ಮ ಅಧಿಕೃತ ಪೇಜ್&zwnj;ನಲ್ಲಿ ಅಭಿಮಾನಿಗಳೊಂದಿಗೆ ತೆಗೆದ ಸೆಲ್ಫಿಯನ್ನು ಹಂಚಿಕೊಂಡ ಅವರು, &quot;ನಿಮ್ಮ ಪ್ರೀತಿ ಕಂಡು ನನ್ನ ಹೃದಯ ತುಂಬಿ ಬಂದಿದೆ,&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಸದ್ಯಕ್ಕೆ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇದರ ಜೊತೆಗೆ ಅಟ್ಲೀ ನಿರ್ದೇಶನದ &lsquo;ರಾಕಾ&rsquo; ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಲೋಕೇಶ್ ಕನಕರಾಜ್ ಜೊತೆಗಿನ ಬಹುನಿರೀಕ್ಷಿತ 'AA23' ಚಿತ್ರಕ್ಕೂ ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ, ಸ್ಟಾರ್ ನಟ ಅಲ್ಲು ಅರ್ಜುನ್ ಈಗ ಸಿನಿಮಾ ಜೊತೆಗೆ ಈ ಹೊಸ ಈವೆಂಟ್ಗ್ ಮೂಲಕವೂ ಸುದ್ದಿಯಲ್ಲಿದ್ದಾರೆ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/tollywood-star-actor-allu-arjun-blessed-with-hubballi-shri-siddharoodha-swamiji-proud-memento/articleshow-mygz7vr"/>
        </item>
        <item>
            <title><![CDATA['ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿಗೆ ಮತ್ತೊಂದು ಗರಿ: ಮೆಲ್ಬೋರ್ನ್‌ನಲ್ಲಿ 'ಲೀಡರ್‌ಶಿಪ್ ಇನ್ ಸಿನಿಮಾ' ಪ್ರಶಸ್ತಿ!]]></title>
            <link>https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt</link>
            <guid isPermaLink="true">https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt</guid>
            <pubDate>Wed, 29 Jul 2026 18:02:05 +0530</pubDate>
            <description><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್&zwnj;ನಲ್ಲಿ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ್ದಕ್ಕಾಗಿ ಈ ಗೌರವ ಸಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kbf22sh9kfw8e7xa2jxarant,imgname-rishab-shetty-1764663322153.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಪ್ರತಿಷ್ಠಿತ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ಸಿಗಲಿದೆ. 2026ರ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ (IFFM) ಈ ಗೌರವವನ್ನು ನೀಡುತ್ತಿದೆ. ಭಾರತದ ಅಪ್ಪಟ ಸಂಸ್ಕೃತಿ, ಪರಂಪರೆಯನ್ನು ತಮ್ಮ ಸಿನಿಮಾಗಳ ಮೂಲಕ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ತಂದಿದ್ದಕ್ಕಾಗಿ ರಿಷಬ್&zwnj;ಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. &lsquo;ಕಾಂತಾರ&rsquo; ಸ್ಟಾರ್ ರಿಷಬ್ ಶೆಟ್ಟಿ, 2026ರ IFFM ಫೆಸ್ಟಿವಲ್&zwnj;ನ ಪ್ರಮುಖ ಅತಿಥಿಗಳಲ್ಲಿ ಒಬ್ಬರಾಗಿ ಭಾಗವಹಿಸಲಿದ್ದಾರೆ.&lt;/p&gt;&lt;p&gt;&lt;strong&gt;ಈ ಗೌರವಕ್ಕೆ ಪ್ರತಿಕ್ರಿಯೆಗಳು&lt;/strong&gt;&lt;/p&gt;&lt;p&gt;ಈ ಗೌರವದ ಬಗ್ಗೆ ಮಾತನಾಡಿದ ರಿಷಬ್ ಶೆಟ್ಟಿ, &quot;ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್&zwnj;ನಿಂದ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ಸಿಗುತ್ತಿರುವುದು ನನಗೆ ಬಹಳ ಗೌರವ ತಂದಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ನಮಗೆ ಸ್ಫೂರ್ತಿ ನೀಡುವ ಸಮುದಾಯಗಳನ್ನು ಸಂಭ್ರಮಿಸಲು ಕಥೆ ಹೇಳುವುದು ನನ್ನ ದಾರಿ. ನಮ್ಮ ಪರಂಪರೆಯಲ್ಲಿ ಬೇರೂರಿರುವ ಕಥೆಗಳು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ತಲುಪುತ್ತಿರುವುದು ತುಂಬಾ ಅರ್ಥಪೂರ್ಣವಾಗಿದೆ. ಮೆಲ್ಬೋರ್ನ್&zwnj;ಗೆ ಹೋಗಿ, ಅಲ್ಲಿ ಇತರ ಸಿನಿಮಾ ನಿರ್ಮಾಪಕರು ಮತ್ತು ಪ್ರೇಕ್ಷಕರೊಂದಿಗೆ ಭಾರತೀಯ ಸಿನಿಮಾದ ವೈವಿಧ್ಯತೆ ಮತ್ತು ಶಕ್ತಿಯನ್ನು ಸಂಭ್ರಮಿಸಲು ನಾನು ಎದುರು ನೋಡುತ್ತಿದ್ದೇನೆ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಫೆಸ್ಟಿವಲ್ ನಿರ್ದೇಶಕಿ ಮಿತು ಭೌಮಿಕ್ ಲಾಂಗೇ, &quot;ರಿಷಬ್ ಶೆಟ್ಟಿ ಭಾರತೀಯ ಸಿನಿಮಾ ನಿರ್ಮಾಪಕರ ಹೊಸ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ. ಅವರ ಕೆಲಸಗಳು ಸ್ಥಳೀಯವಾಗಿದ್ದರೂ ಜಾಗತಿಕ ಮಟ್ಟದಲ್ಲಿ ಪ್ರಸ್ತುತವಾಗಿವೆ. ತಮ್ಮ ವಿಶಿಷ್ಟ ಕಥಾಹಂದರದ ಮೂಲಕ, ಸ್ಥಳೀಯ ಕಥೆಗಳು ಹೇಗೆ ಗಡಿಗಳನ್ನು ಮೀರಿ ಎಲ್ಲೆಡೆ ಪ್ರೇಕ್ಷಕರನ್ನು ತಲುಪಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರಿಗೆ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಪ್ರಶಸ್ತಿ ನೀಡಿ ಗೌರವಿಸಲು ನಮಗೆ ಸಂತೋಷವಿದೆ. IFFM 2026ಕ್ಕೆ ಅವರನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ವಿಚಾರಕ್ಕೆ ಬಂದರೆ&lt;/strong&gt;&lt;/h2&gt;&lt;p&gt;ಕಳೆದ ಕೆಲವು ವರ್ಷಗಳಲ್ಲಿ, ರಿಷಬ್ ಶೆಟ್ಟಿ ತಮ್ಮ ವಿಶಿಷ್ಟ ಸಿನಿಮಾಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಅದರಲ್ಲೂ 'ಕಾಂತಾರ' ಫ್ರಾಂಚೈಸಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಸದ್ಯ, ಅವರು ಸಂದೀಪ್ ಸಿಂಗ್ ನಿರ್ಮಾಣದ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಎಂಬ ಎರಡು ಭಾಗಗಳ ಐತಿಹಾಸಿಕ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗೆ ನಟಿ ಭೂಮಿ ಪೆಡ್ನೇಕರ್ ಕೂಡ ಈ ಸಿನಿಮಾದ ಬಳಗ ಸೇರಿಕೊಂಡಿದ್ದಾರೆ.&lt;/p&gt;&lt;p&gt;ಅವರು ವೀರ ರಾಣಿ ಬೆಳವಾಡಿ ಮಲ್ಲಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಿಷಿ ವಿರ್ಮಾನಿ ಈ ಐತಿಹಾಸಿಕ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/rishab-shetty-to-receive-leadership-in-cinema-award-at-iffm-2026-gvd/articleshow-phmklxt"/>
        </item>
    </channel>
</rss>
