<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 20 Aug 2026 23:33:50 +0530</lastBuildDate>
        <atom:link href="https://kannada.asianetnews.com/rss/cine-world" rel="self" type="application/rss+xml"/>
        <item>
            <title><![CDATA[ಸೆಲ್ಫ್ ಮೇಡ್ ಶೆಹಜಾದ ಯಶ್: ‘ಟಾಕ್ಸಿಕ್’ ನೋಡೋ ಮುನ್ನ ಈ ವಿಷಯ ತಿಳಿದುಕೊಳ್ಳಿ!]]></title>
            <link>https://kannada.asianetnews.com/entertainment/toxic-why-yash-most-ambitious-film-could-be-unlike-anything-before-gvd/articleshow-yw24u18</link>
            <guid isPermaLink="true">https://kannada.asianetnews.com/entertainment/toxic-why-yash-most-ambitious-film-could-be-unlike-anything-before-gvd/articleshow-yw24u18</guid>
            <pubDate>Thu, 20 Aug 2026 23:33:44 +0530</pubDate>
            <description><![CDATA[&lt;p&gt;ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0g38k035nx17py5rhyw0ggd,imgname-bvjb-1787246693379.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ಜೋಗಿ&lt;/strong&gt;&lt;/h2&gt;&lt;p&gt;ದೊಡ್ಡವರಿಗೋಸ್ಕರ ಒಂದು ಅದ್ಭುತ ರಮ್ಯ ಕತೆ.. -ಹೀಗೊಂದು ಸಾಲು ಕಾಣಿಸಿಕೊಳ್ಳುತ್ತಿದ್ದಂತೆ ಮಾತು ಶುರುವಾಯಿತು. ಮೊದಲ ಟೀಸರ್ ನೋಡುತ್ತಿದ್ದಂತೆ ಮಾತುಕತೆ ಕಾವೇರಿತು. ತಬಾಹಿ ಹಾಡು ಬರುತ್ತಿದ್ದಂತೆ ಅದನ್ನು ನೋಡಲಿಕ್ಕೆಂದೇ ಎಲ್ಲರೂ ದೊಡ್ಡವರಾದರು. ಟ್ರೇಲರ್ ಬರುವ ಹೊತ್ತಿಗೆ ದೊಡ್ಡವರ ಸಂಖ್ಯೆ ಹೆಚ್ಚಾಯಿತು. &lsquo;ಟಾಕ್ಸಿಕ್&rsquo; ಶುರುವಾದಾಗ ಇದ್ದ ನಿರೀಕ್ಷೆಗಳನ್ನೆಲ್ಲ ಟಾಕ್ಸಿಕ್&zwnj; ಚಿತ್ರದ ಟ್ರೇಲರ್ ಸುಳ್ಳು ಮಾಡಿದೆ. ಗೀತು ಮೋಹನದಾಸ್ ನಿರ್ದೇಶನದಲ್ಲಿ ಯಶ್ ನಟಿಸುತ್ತಾರೆ ಅನ್ನುವುದು ಅಂಥ ರೋಚಕ ಸುದ್ದಿಯೇನೂ ಆಗಿರಲಿಲ್ಲ. ಎರಡು ಸಾಧಾರಣ ಬಜೆಟ್ಟಿನ ಬ್ರಿಜ್ ಸಿನಿಮಾಗಳನ್ನಷ್ಟೇ ಗೀತು ಮೋಹನದಾಸ್ ನಿರ್ದೇಶಿಸಿದ್ದರು.&lt;/p&gt;&lt;p&gt;ಯಶ್ ಅವರನ್ನು ಯಾಕೆ ನಿರ್ದೇಶನಕ್ಕೆ ಆರಿಸಿಕೊಂಡರು ಅನ್ನುವುದಷ್ಟೇ ಆ ಹೊತ್ತಿನ ಕುತೂಹಲ. ಸಿನಿಮಾ ತಡವಾಗುತ್ತಿದ್ದಂತೆ ಊಹಾಪೋಹಗಳು ಕೇಳಿಬಂದವು. ಯಶ್ ಇಡೀ ಸಿನಿಮಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ನಿರ್ದೇಶಕರಿಗೆ ಸ್ವಾತಂತ್ರ್ಯ ಇಲ್ಲ. ಕತೆಯನ್ನು ತಿದ್ದಿದ್ದಾರೆ, ಚಿತ್ರಕತೆ ತಾವೇ ಬರೆಯುತ್ತಿದ್ದಾರೆ ಎಂದೆಲ್ಲ ಗುಲ್ಲಾಯಿತು. ರಾಯನನ್ನು ಪರಿಚಯಿಸಿದ ಮೊದಲ ಟ್ರೇಲರ್&zwnj; ಬರುತ್ತಿದ್ದಂತೆ &lsquo;ಟಾಕ್ಸಿಕ್&rsquo; ಸಣ್ಣವರನ್ನೆಲ್ಲ ದೊಡ್ಡವರನ್ನಾಗಿ ಮಾಡಿತು. ನೋಡುತ್ತಿರುವುದು ದೊಡ್ಡವರ ಕತೆಯೆಂಬುದು ಲೋಕಕ್ಕೆ ಗೊತ್ತಾಯಿತು.&lt;/p&gt;&lt;p&gt;ಯಶ್ ಕೂಡ ತನ್ನ ಗಡಿಗಳನ್ನು ಮೀರುತ್ತಾ ಹೋದದ್ದು ಹೀಗೆಯೇ. ಅವರ ಮೊದಲ ಸಿನಿಮಾ 2007ರಲ್ಲಿ ಬಿಡುಗಡೆಯಾದಾಗ, ಯಶ್ ಹೆಸರು ನಾಲ್ಕನೆಯದೋ ಐದನೆಯದೋ ಆಗಿತ್ತು. ಹತ್ತು ವರ್ಷಗಳ ನಂತರ &lsquo;ಕೆಜಿಎಫ್&zwnj;&rsquo; ಬರುವ ಹೊತ್ತಿಗೆ ಯಶ್ ಹೆಸರೊಂದೇ ಇಡೀ ಚಿತ್ರವನ್ನು ಗೆಲ್ಲಿಸಲು ಸಾಕಾಗಿತ್ತು. &lsquo;ಕೆಜಿಎಫ್&rsquo; ಕೂಡ ಯಶ್ ಚಿತ್ರರಂಗದಲ್ಲಿ ಸಾಗಿ ಬಂದ ದಾರಿಯನ್ನು ಪ್ರತಿಬಿಂಬಿಸುವಂತೆ, ಯಶ್ ಜೀವನಕತೆಯ ಪುಟಗಳಂತೆ ಇತ್ತು. ನಮ್ಮ ಕಣ್ಣೆದುರೇ ಇದ್ದ ಈ ಜಂಬದ ಹುಡುಗ ಎಲ್ಲಿಯ ತನಕ ಹೋಗುತ್ತಾನೋ ನೋಡೋಣ ಅಂತ ಮಾತಾಡುತ್ತಿದ್ದವರತ್ತ ಯಶ್ ತಿರುಗಿಯೂ ನೋಡಲಿಲ್ಲ. ತನ್ನ ಗುರಿ ಇದ್ಯಾವುದೂ ಅಲ್ಲ ಅಂತ ಯಾರೂ ತುಳಿಯದ ದಾರಿಯಲ್ಲಿ, ತನ್ನದೇ ದಾರಿ ಮಾಡಿಕೊಂಡು ನಡೆದು ಹೋದರು.&lt;/p&gt;&lt;p&gt;ಅಲ್ಲಿಯ ತನಕ ಕನ್ನಡ ಚಿತ್ರರಂಗದಲ್ಲಿ ಸ್ಪರ್ಧೆಯಿದ್ದದ್ದು ಇಲ್ಲಿಯೇ ನಟಿಸುತ್ತಿದ್ದ ಸ್ಟಾರುಗಳ ನಡುವೆ. ಸ್ಟಾರ್ ವಾರ್ ಅಂದರೆ ಒಬ್ಬ ನಟನ ಸಿನಿಮಾ ಬಿಡುಗಡೆ ಆಗುತ್ತಿದ್ದಂತೆ ಮತ್ತೊಬ್ಬ ನಟನ ಅಭಿಮಾನಿಗಳು ಗದ್ದಲ ಎಬ್ಬಿಸುವುದು ಎಂದಷ್ಟೇ ಅಂದುಕೊಂಡಿದ್ದರು. &lsquo;ಟಾಕ್ಸಿಕ್&rsquo; ಚಿತ್ರದ ಟೀಸರ್&zwnj;ನಲ್ಲಿ ಗದ್ದಲ ಮಾಡುತ್ತಿರುವ ಎಲ್ಲರ ನಡುವೆ ಹೆಗಲ ಮೇಲೊಂದು ಗನ್ ಇಟ್ಟುಕೊಂಡು ನಡೆದು ಹೋಗುವ ರಾಯನಂತೆ, ಯಶ್ ಕನ್ನಡ ಚಿತ್ರರಂಗದ ಸೀಮೆಯನ್ನು ದಾಟಿಬಿಟ್ಟರು. ಇವತ್ತಲ್ಲ ನಾಳೆ ವಾಪಸ್ ಬರ್ತಾರೆ ಬಿಡಿ ಅಂತ ಹೇಳಿದವರ ಮಾತು ಕಿವಿಗೆ ಬೀಳದಷ್ಟು ಯಶ್ ದೂರ ಹೋಗಿಬಿಟ್ಟಿದ್ದರು. ಎಲ್ಲರೂ ಯಶ್ ದೊಡ್ಡವರಿಗಾಗಿ ಸಿನಿಮಾ ಮಾಡಿದ್ದಾರಲ್ಲ ಅಂತ ಮಾತಾಡುವ ಹೊತ್ತಿಗೆ ಯಶ್ ನಿಜಕ್ಕೂ ದೊಡ್ಡವರೇ ಆಗಿಬಿಟ್ಟಿದ್ದಾರೆ.&lt;/p&gt;&lt;p&gt;ಕನ್ನಡ ಚಿತ್ರರಂಗ ತನ್ನ ಹೋಮ್ ಪಿಚ್&zwnj;ನಲ್ಲೇ ಆಟವಾಡಲು ಹಿಂಜರಿಯುತ್ತಿರುವ ಹೊತ್ತಿಗೆ ಯಶ್ ಅಂತಾರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಟಾಕ್ಸಿಕ್ ಕನ್ನಡ ಮೊದಲ ಗ್ಲೋಬಲ್ ಚಿತ್ರವಾಗಿ ಹೊರಹೊಮ್ಮುತ್ತಿದೆ. ಸರಿಯಾಗಿ ಏಳು ವರ್ಷಗಳ ಹಿಂದೆ ಮಾತಾಡುತ್ತಾ ಯಶ್ ಹೇಳಿದ್ದರು. &lsquo;ನನಗಿರುವುದು ಒಂದೇ ಆಸೆ. ಕನ್ನಡದ ಗಡಿಯನ್ನು ವಿಸ್ತರಿಸಬೇಕು. ನಾವು ಯಾರು ಅನ್ನುವುದನ್ನು ವಿಶ್ವಕ್ಕೆ ತೋರಿಸಬೇಕು. ನನ್ನ ಸ್ಪರ್ಧೆ ಇರುವುದು ನಮ್ಮ ನಮ್ಮ ನಡುವೆ ಅಲ್ಲವೇ ಅಲ್ಲ. ನನ್ನ ಉದ್ದೇಶ ಬೇರೆಯೇ ಇದೆ&rsquo;. ಅವರು ಸುಳ್ಳು ಹೇಳಿರಲಿಲ್ಲ. &lsquo;ಟಾಕ್ಸಿಕ್&rsquo; 12000 ಪ್ಲಸ್ ಸ್ಕ್ರೀನುಗಳಲ್ಲಿ ತೆರೆ ಕಾಣುತ್ತಿದೆ. ಲಯನ್ಸ್-ಗೇಟ್ &lsquo;ಟಾಕ್ಸಿಕ್&zwnj;&rsquo;ನ ಇಂಗ್ಲಿಷ್ ವರ್ಷನ್ ಹಂಚಿಕೆ ಮಾಡುತ್ತಿದೆ. ನಿರ್ಮಾಣದಲ್ಲೂ ಭಾಗಿಯಾಗಿರುವ ಯಶ್ ಅಂತಾರಾಷ್ಟ್ರೀಯ ಹಂಚಿಕೆದಾರರ ಜತೆ ಮಾತಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಯಶ್ ಹೇಳುವುದು ಒಂದೇ ಮಾತು&lt;/strong&gt;&lt;/p&gt;&lt;p&gt;&lsquo;ನನ್ನ ನಾಲ್ಕೂವರೆ ವರ್ಷಗಳನ್ನು ಈ ಸಿನಿಮಾಕ್ಕೆ ಕೊಟ್ಟಿದ್ದೇನೆ. ನಿರ್ದೇಶಕರ ಕನಸಿಗೆ ಜತೆಯಾಗಿ ನಿಂತಿದ್ದೇನೆ. ಅವರ ಕ್ರಿಯೇಟಿವ್ ಜರ್ನಿಗೆ ಬೆಂಬಲವಾಗಿದ್ದೇನೆ. ಅವರು ಸಿನಿಮಾವನ್ನು ಅವರಿಗೆ ಬೇಕಾದಂತೆ ಕಟ್ಟಿದ್ದಾರೆ. ನಾನು ಮೊದಲಿನಿಂದಲೂ ಹಾಗೆಯೇ ಇದ್ದವನು. ಯಾರೇ ದೊಡ್ಡ ಕನಸು ಕಂಡರೂ ನಾನು ಅವರಿಗೆ ಬೆಂಬಲವಾಗಿ ನಿಂತುಬಿಡುತ್ತೇನೆ.&rsquo;&lt;/p&gt;&lt;p&gt;ಹಿಂತಿರುಗಿ ನೋಡಿದರೆ ಯಶ್ ಮೊದಲಿನಿಂದಲೂ ಹಾಗೇ ಇದ್ದವರು ಅನ್ನುವುದು ಗೊತ್ತಾಗುತ್ತದೆ. ಅವರು ಉದ್ದಕ್ಕೂ ಹೊಸ ನಿರ್ದೇಶಕರ ಜತೆಗೇ ಸಿನಿಮಾ ಮಾಡುತ್ತಾ ಬಂದವರು. ಕತೆಯನ್ನೂ ಎಲ್ಲಕ್ಕಿಂತ ಹೆಚ್ಚು ನಂಬಿದವರು. ಒಂದು ಸಿನಿಮಾ ಶುರುವಾದ ನಂತರ ಇಡೀ ಜಗತ್ತನ್ನೇ ಮರೆತು ಅದರಲ್ಲೇ ಮುಳುಗಿ ಹೋದವರು. ತನಗೆ ಸಂಬಂಧಿಸದ ಸಂಗತಿಗಳನ್ನು ಯಾವತ್ತೂ ಮಾತಾಡದೇ ಉಳಿದವರು. ತನ್ನ ದಾರಿಯನ್ನು ತಾನೇ ಹುಡುಕಿಕೊಳ್ಳುವವರು. ಸೆಲ್ಫ್ ಮೇಡ್ ಶೆಹಜಾದ ಅನ್ನುವ ತನ್ನ ಹಾಡಿನ ಸಾಲನ್ನು ಬದುಕಿದವರು.&lt;/p&gt;&lt;p&gt;&lsquo;ಟಾಕ್ಸಿಕ್&rsquo; ದೊಡ್ಡವರಿಗಾಗಿ ಇರುವ ಸಿನಿಮಾ ಅಂತ ಚಿತ್ರತಂಡ ಹೇಳಿಕೊಂಡಿದೆ. ಟ್ರೇಲರ್&zwnj; ಕತೆಯನ್ನು ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ. ಅಲ್ಲಿ ಬರುವ ಪಾತ್ರಗಳ ವರ್ಚಸ್ಸು, ಆರ್ತನಾದ, ಆತಂಕ, ಸಂಕಟ ಮತ್ತು ಸಂಭ್ರಮಗಳನ್ನು ನೋಡಿದರೆ ಪ್ರತಿಯೊಂದು ಪಾತ್ರಕ್ಕೂ ಅದರಲ್ಲೇ ಆದ ಜೀವನರೇಖೆ ಇರುವಂತೆ ಕಾಣುತ್ತದೆ. ಟ್ರೇಲರ್ ಬರುವ ಹೊತ್ತಿಗೆ ಮೊದಲ ಟೀಸರ್&zwnj;ನಲ್ಲಿ ಭಯದಿಂದ ಓಡಿ ಬರುತ್ತಿದ್ದ ಮಕ್ಕಳ ಮುಖ ಮರೆತುಹೋಗಿದೆ. ಚಿತ್ರದಲ್ಲಿ ಎಷ್ಟೊಂದು ಮಕ್ಕಳಿದ್ದಾರೆ ಅಂದರೆ ಇದು ದೊಡ್ಡವರ ಕತೆಯಷ್ಟೇ ಆಗಿರಲು ಸಾಧ್ಯವಿಲ್ಲ. ಫೇರಿ ಟೇಲ್ ಅಂದರೆ ಮಕ್ಕಳಿಗಾಗಿ ಇರುವ ಕತೆ. ಇದು ದೊಡ್ಡವರಿಗಾಗಿ ಇರುವ ಮಕ್ಕಳ ಕತೆ. ಎಷ್ಟೋ ಸಲ ದೊಡ್ಡವರಿಗೆ ಬೇಕಾದ ನೀತಿ ಮಕ್ಕಳ ಕತೆಯಲ್ಲೇ ಇರುತ್ತದೆ. &lsquo;ಟಾಕ್ಸಿಕ್&rsquo; ಚಿತ್ರದ ಕುತೂಹಲ ಉಳಿದಿರುವುದು ನೋಡಿರುವ ಟ್ರೇಲರ್&zwnj;ನಲ್ಲಿ ಕಂಡ ದೃಶ್ಯಗಳಿಂದ ಅಲ್ಲ, ಗೀತು ಮೋಹನ್&zwnj;ದಾಸ್ ಎಂಬ ಪ್ರಜ್ಞಾವಂತ ಹೆಣ್ಣುಮಗಳು ನಮ್ಮ ಜಗತ್ತನ್ನು ಹೇಗೆ ಬೆಚ್ಚಿ ಬೀಳಿಸುವ ಸತ್ಯಗಳನ್ನು ಹೇಳುವ ಮೂಲಕ ಕದಲಿಸುತ್ತಾಳೆ ಎಂಬುದರ ಮೇಲೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/toxic-why-yash-most-ambitious-film-could-be-unlike-anything-before-gvd/articleshow-yw24u18"/>
        </item>
        <item>
            <title><![CDATA[‘ಟಾಕ್ಸಿಕ್’ ಸ್ವಾಗತಕ್ಕೆ ಹೇಗಿದೆ ಸಿದ್ಧತೆ? ಯಶ್ ಕಟೌಟ್‌ಗಳು ಹೇಳುತ್ತಿವೆ ರಾಕಿಂಗ್ ಸ್ಟಾರ್ ಕ್ರೇಜ್‌ನ ಕಥೆ!]]></title>
            <link>https://kannada.asianetnews.com/entertainment/yash-cutouts-ready-to-welcome-toxic-as-fans-gear-up-for-a-grand-celebration-gvd/articleshow-6zkabbr</link>
            <guid isPermaLink="true">https://kannada.asianetnews.com/entertainment/yash-cutouts-ready-to-welcome-toxic-as-fans-gear-up-for-a-grand-celebration-gvd/articleshow-6zkabbr</guid>
            <pubDate>Thu, 20 Aug 2026 22:46:48 +0530</pubDate>
            <description><![CDATA[&lt;p&gt;Yash Cutouts: &lsquo;ಟಾಕ್ಸಿಕ್&rsquo; ಸ್ವಾಗತಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲೂ ಚಿತ್ರತಂಡ ಹಾಗೂ ಅಭಿಮಾನಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0g1c6869r9nhjb19jcgdm7h,imgname-bjb-1787244714246.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾ ಪ್ರೇಕ್ಷಕರು ಕಾತುರದಿಂದ ಎದುರು ನೋಡುತ್ತಿರುವ ಈ ಚಿತ್ರ ಇದೀಗ ವಿದೇಶದಲ್ಲೂ ಭರ್ಜರಿ ಸದ್ದು ಮಾಡಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ಅದರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಭಿಮಾನಿಗಳ ಸಂಭ್ರಮವೂ ಜೋರಾಗಿದೆ.&lt;/p&gt;&lt;p&gt;&lt;strong&gt;ವರಮಹಾಲಕ್ಷ್ಮಿ ಹಬ್ಬದಂದೇ ಟಿಕೆಟ್ ಬುಕಿಂಗ್ ಓಪನ್!&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಸಿನಿಮಾದ ಟಿಕೆಟ್ ಬುಕಿಂಗ್ ಆಗಸ್ಟ್ 21ರಂದು, ವರಮಹಾಲಕ್ಷ್ಮಿ ಹಬ್ಬದ ವಿಶೇಷ ದಿನದಂದು ಆರಂಭವಾಗಲಿದೆ. ಟಿಕೆಟ್ ಬುಕಿಂಗ್ ಶುರುವಾಗುವುದಕ್ಕೂ ಮುನ್ನವೇ ಚಿತ್ರಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಮೊದಲ ದಿನದ ಶೋಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಬುಕಿಂಗ್ ಆರಂಭವಾದ ಬಳಿಕ ಯಾವ ಮಟ್ಟಿಗೆ ಪ್ರತಿಕ್ರಿಯೆ ಸಿಗಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;p&gt;&lt;strong&gt;ನೂರಾರು ಚಿತ್ರಮಂದಿರಗಳ ಮುಂದೆ ರಾರಾಜಿಸಲಿದೆ ಯಶ್ ಕಟೌಟ್!&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಸ್ವಾಗತಕ್ಕೆ ಅಭಿಮಾನಿಗಳು ಈಗಾಗಲೇ ಸಜ್ಜಾಗಿದ್ದಾರೆ. ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಲ್ಲೂ ಚಿತ್ರತಂಡ ಹಾಗೂ ಅಭಿಮಾನಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಸಿನಿಮಾ ಬಿಡುಗಡೆಯ ದಿನ ನೂರಾರು ಚಿತ್ರಮಂದಿರಗಳ ಮುಂದೆ ಯಶ್ ಅವರ ಬೃಹತ್ ಕಟೌಟ್&zwnj;ಗಳು ರಾರಾಜಿಸಲಿವೆ. ಹೊರ ರಾಜ್ಯಗಳಲ್ಲೂ &lsquo;ಟಾಕ್ಸಿಕ್&rsquo; ಬಗ್ಗೆ ಕ್ರೇಜ್ ಹೆಚ್ಚಾಗುತ್ತಿರುವುದು ಚಿತ್ರದ ಪ್ಯಾನ್ ಇಂಡಿಯಾ ವ್ಯಾಪ್ತಿಯನ್ನು ಮತ್ತೊಮ್ಮೆ ತೋರಿಸುತ್ತಿದೆ.&lt;/p&gt;&lt;h2&gt;&lt;strong&gt;ಸುಮಾರು 10 ಸಾವಿರ ಸ್ಕ್ರೀನ್&zwnj;ಗಳಲ್ಲಿ &lsquo;ಟಾಕ್ಸಿಕ್&rsquo;?&lt;/strong&gt;&lt;/h2&gt;&lt;p&gt;ಆಗಸ್ಟ್ 26ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿರುವ &lsquo;ಟಾಕ್ಸಿಕ್&rsquo;, ಬರೋಬ್ಬರಿ 10 ಸಾವಿರ ಪರದೆಗಳಲ್ಲಿ ಪ್ರದರ್ಶನ ಕಾಣಲಿದೆ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಯಶ್ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಿನಿಮಾದ ಪೋಸ್ಟರ್&zwnj;ಗಳು, ಟೀಸರ್&zwnj;, ಟ್ರೇಲರ್&zwnj; ಹಾಗೂ ಹಾಡುಗಳಿಂದ ಈಗಾಗಲೇ ಭಾರೀ ಹೈಪ್ ಸೃಷ್ಟಿಯಾಗಿದೆ. ಇದೀಗ ಟಿಕೆಟ್ ಬುಕಿಂಗ್ ಆರಂಭವಾಗುತ್ತಿರುವ ಬೆನ್ನಲ್ಲೇ &lsquo;ಟಾಕ್ಸಿಕ್&rsquo; ಬಾಕ್ಸ್ ಆಫೀಸ್&zwnj;ನಲ್ಲಿ ಯಾವ ರೀತಿಯ ದಾಖಲೆ ಬರೆಯಲಿದೆ ಎಂಬ ಚರ್ಚೆ ಶುರುವಾಗಿದೆ. ಇನ್ನು ಆಗಸ್ಟ್ 26ರಂದು &lsquo;ಟಾಕ್ಸಿಕ್&rsquo; ತೆರೆಗೆ ಬರಲಿದ್ದು, ಯಶ್ ಅವರ ಈ ಬಹುನಿರೀಕ್ಷಿತ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಯಾವ ಮಟ್ಟಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-cutouts-ready-to-welcome-toxic-as-fans-gear-up-for-a-grand-celebration-gvd/articleshow-6zkabbr"/>
        </item>
        <item>
            <title><![CDATA[ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ ಆತ್ಮಹತ್ಯೆಗೆ ಯತ್ನ!  ಅಂದು ಆದದ್ದಾದರೂ ಏನು]]></title>
            <link>https://kannada.asianetnews.com/relationship/raj-kundra-felt-to-die-after-shilpa-shetty-divorce-rumours-broke-while-he-was-in-jail-suc/articleshow-2nxwxx0</link>
            <guid isPermaLink="true">https://kannada.asianetnews.com/relationship/raj-kundra-felt-to-die-after-shilpa-shetty-divorce-rumours-broke-while-he-was-in-jail-suc/articleshow-2nxwxx0</guid>
            <pubDate>Thu, 20 Aug 2026 22:27:27 +0530</pubDate>
            <description><![CDATA[ನೀಲಿ ಚಿತ್ರ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ, ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿ ಕೇಳಿ ಉದ್ಯಮಿ ರಾಜ್ ಕುಂದ್ರಾ ಆತ್ಮಹತ್ಯೆಗೆ ಯೋಚಿಸಿದ್ದರು. ಆದರೆ, ಶಿಲ್ಪಾ ಶೆಟ್ಟಿ ಅವರೇ ಫೋನ್ ಮಾಡಿ ಧೈರ್ಯ ತುಂಬಿದ ನಂತರ ತಮ್ಮ ನಿರ್ಧಾರವನ್ನು ಬದಲಾಯಿಸಿಕೊಂಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಜೈಲಿನಲ್ಲಿದ್ದ 63 ದಿನಗಳ ಕಷ್ಟದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k5881267r8nrc5pgg4nwamh9,imgname-shilpa-shetty-raj-kundra-60-crore-scam-1757992224967.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj; ಬ್ಯೂಟಿ, ಫಿಟ್&zwnj;ನೆಸ್&zwnj; ರಾಣಿ ಎಂದೇ ಫೇಮಸ್&zwnj; ಆಗಿರೋ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ, ನೀಲಿ ಚಿತ್ರದ ಪ್ರಕರಣದಲ್ಲಿ ಜೈಲು ವಾಸಿಯಾಗಿದ್ದು ಎಲ್ಲರಿಗೂ ತಿಳಿದದ್ದೇ. 2021ರ ಸಮಯದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್&zwnj; ಕುಂದ್ರಾ ಲೈಫ್&zwnj;ನಲ್ಲಿ ಬಿರುಗಾಳಿ ಎದ್ದಿತ್ತು. ಅಶ್ಲೀಲ ಪ್ರಕರಣದಲ್ಲಿ ರಾಜ್&zwnj; ಕುಂದ್ರಾ ಅವರನ್ನು, ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ 63 ದಿನ ಬಂಧಿಸಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಆತ್ಮಹತ್ಯೆಯ ಯೋಚನೆ ಬಂದಿದ್ದ ಬಗ್ಗೆ ಈಗ ರಾಜ್&zwnj; ಕುಂದ್ರಾ ಅವರು ಓಪನ್&zwnj; ಆಗಿ ಮಾತನಾಡಿದ್ದಾರೆ. ಆ ದಿನಗಳು ತನ್ನ ಜೀವನದ ಅತ್ಯಂತ ಕಷ್ಟಕರ ಹಂತ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಇದಕ್ಕೆ ಕಾರಣ ಕೊಟ್ಟಿರುವ ಅವರು, ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ವಿಚ್ಛೇದನ ಕೊಡಲಿದ್ದಾಳೆ ಎನ್ನುವ ಸುದ್ದಿ ಬಂತು. ಇದನ್ನು ಕೇಳಿ ನನ್ನ ನೆಲವೇ ಕುಸಿದು ಹೋಯಿತು. ಸುದ್ದಿ ತಿಳಿದ ನಂತರ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ ಎಂದಿದ್ದಾರೆ ಉದ್ಯಮಿ.&lt;/p&gt;&lt;p&gt;ಎಬಿಪಿ ನ್ಯೂಸ್ ಜೊತೆಗಿನ ಸಂವಾದದಲ್ಲಿ ರಾಜ್ ಅವರು ಜೈಲಿನಲ್ಲಿದ್ದಾಗ ಪತ್ನಿ ಶಿಲ್ಪಾ ಶೆಟ್ಟಿ ನನ್ನನ್ನು ತೊರೆದಿದ್ದಾಳೆ ಮತ್ತು ಡಿವೋರ್ಸ್ ಪಡೆದುಕೊಳ್ಳಲಿದ್ದಾಳೆ ಎನ್ನುವ ಸುದ್ದಿ ಬಂತು. ನಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ಏನಾಗುತ್ತಿದೆ ಎಂದು ನನಗೆ ಗೊತ್ತಾಗಲಿಲ್ಲ. ಆ ರಾತ್ರಿ ನನಗೆ ನಿದ್ರೆ ಬರಲಿಲ್ಲ, ಈ ಸುದ್ದಿ ಕೇಳಿ ಶಾಕ್&zwnj; ಆಯ್ತು. ಆದ್ದರಿಂದ ನನ್ನ ಜೀವನವನ್ನು ಕೊನೆಗೊಳಿಸಲು ಬಯಸಿದೆ. ಬದುಕುವುದರಲ್ಲಿ ಅರ್ಥವಿಲ್ಲ ಎಂದು ನಾನು ಭಾವಿಸಿದೆ. ನನ್ನ ಹೆಂಡತಿ ಮತ್ತು ನನ್ನ ಕುಟುಂಬ ನನಗೆ ಅತ್ಯಂತ ಮುಖ್ಯವಾಗಿದೆ, ನಾನು ನನ್ನ ಜೀವನವನ್ನು ತ್ಯಜಿಸಲು ಬಯಸುತ್ತೇನೆ. ನಾನು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದೆ ಎಂದಿದ್ದಾರೆ ರಾಜ್&zwnj; ಕುಂದ್ರಾ.&lt;/p&gt;&lt;h2&gt;&lt;strong&gt;ಶಿಲ್ಪಾ ಮಾತಿನಿಂದ ಮನಸ್ಸು ಹಗುರಾಯಿತು&lt;/strong&gt;&lt;/h2&gt;&lt;p&gt;ಮಾಧ್ಯಮಗಳಲ್ಲಿ ಡಿವೋರ್ಸ್ ಸುದ್ದಿ ಕೇಳುತ್ತಲೇ, ಶಿಲ್ಪಾ ಶೆಟ್ಟಿ ಅವರೂ ಆಘಾತಕ್ಕೆ ಒಳಗಾಗಿದ್ದರು. ನಾನು ಈ ಸುದ್ದಿಯನ್ನು ನಿಜ ಎಂದು ನಂಬಿ ಆಕೆ ಜೊತೆ ಫೋನ್&zwnj;ನಲ್ಲಿ ಮಾತನಾಡಿದೆ. ಇದು ನಿಜವಾಗಿ ಇದ್ದರೆ ಸಾಯುವ ನಿರ್ಧಾರ ಮಾಡಿದ್ದೆ. ಕೊನೆಗೆ ಅವಳಿಗೆ ಕಾಲ್&zwnj; ಮಾಡಿದಾಗ, ಆಕೆ, &quot;ಇದು ನಾನ್ಸೆನ್ಸ್ ನ್ಯೂಸ್. ನಾನು ನಿಮ್ಮ ಜೊತೆ ಇದ್ದೇನೆ. ನಾನು ನಿನ್ನನ್ನು ನಂಬುತ್ತೇನೆ. ಅದರ ಬಗ್ಗೆ ಚಿಂತಿಸಬೇಡ&quot; ಎಂದು ಹೇಳಿದಳು. ಆಗ ನಾನು ನಿರಾಳನಾದೆ ಎಂದಿದ್ದಾರೆ ರಾಜ್&zwnj; ಕುಂದ್ರಾ.&lt;/p&gt;&lt;h3&gt;&lt;strong&gt;ಜೈಲಿನ ದಿನಗಳ ಸಿನಿಮಾ&lt;/strong&gt;&lt;/h3&gt;&lt;p&gt;ಶಿಲ್ಪಾಳ ಈ ಮಾತು ನನಗೆ ಧೈರ್ಯ ತುಂಬಿತು. ಯಾರು ಏನೇ ಮಾಡಿದರೂ ನನ್ನ ಪತ್ನಿ ನನ್ನ ಜೊತೆ ಇದ್ದಾಳೆ ಎನ್ನುವ ನಂಬಿಕೆ ಬಂತು. ಹೀಗೆ ಆದ್ದರಿಂದ ನಾನು ಇಡೀ ಜಗತ್ತನ್ನು ಎದುರಿಸಬಲ್ಲೆ. ನಾನು ಹೆದರುವುದಿಲ್ಲ ಎಂದುಕೊಂಡು ಸಾವಿನ ಮನಸ್ಸು ಬದಲಾಯಿಸಿದೆ ಎಂದಿದ್ದಾರೆ.&lt;/p&gt;&lt;p&gt;ಆರ್ಥರ್ ರೋಡ್ ಜೈಲಿನಲ್ಲಿ ಕಳೆದ ಸಮಯವನ್ನು ಸ್ಮರಿಸಿದ ರಾಜ್, ಅಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿತ್ತು. ಜೈಲಿನ ತಿಂಡಿ ತಿನ್ನುವಂತರಲಿಲ್ಲ. 63 ದಿನಗಳಲ್ಲಿ ಹೆಚ್ಚಾಗಿ ಪಾರ್ಲೆ-ಜಿ ಬಿಸ್ಕತ್ತುಗಳು ಮತ್ತು ನೀರಿನಿಂದ ಬದುಕುಳಿದೆ. ಜೈಲಿನಲ್ಲಿ ತೂಕ ಸುಮಾರು 17-18 ಕೆಜಿ ಕಡಿಮೆಯಾಯಿತು ಎಂದಿದ್ದಾರೆ. ಇವರ ಈ ಜೈಲಿನ ಚಿತ್ರಣ ಇರುವ, UT69 ಚಿತ್ರ 2023ರಲ್ಲಿ ಬಿಡುಗಡೆಯಾಗಿತ್ತು. ಇದು ರಾಜ್ ಕುಂದ್ರಾ ಅವರ ಜೈಲಿಗೆ ಹೋಗಿ ಜೈಲಿಗೆ ಹೋದ ಅನುಭವವನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಜ್ ಕುಂದ್ರಾ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.&lt;/p&gt;&lt;p&gt;ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009 ರಲ್ಲಿ ವಿವಾಹವಾದರು. ಈ ವಿವಾಹದಿಂದ ದಂಪತಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ರಾಜ್ ಎರಡು ಮದುವೆಯಾಗಿದ್ದರು. ಅವರ ಮೊದಲ ಮದುವೆ ಕವಿತಾ ಕುಂದ್ರಾ ಅವರೊಂದಿಗೆ. ಕೆಲವು ವರ್ಷಗಳ ನಂತರ ಇಬ್ಬರೂ ಬೇರ್ಪಟ್ಟರು.&lt;/p&gt;]]></content:encoded>
            <category>cine-world</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/raj-kundra-felt-to-die-after-shilpa-shetty-divorce-rumours-broke-while-he-was-in-jail-suc/articleshow-2nxwxx0"/>
        </item>
        <item>
            <title><![CDATA[ಅಲ್ಲು ಅರ್ಜುನ್ ಜೊತೆ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್? ‘ರಾಕ’ ಸಿನಿಮಾದಲ್ಲಿ ಮಹತ್ವದ ಪಾತ್ರದ ಆಫರ್!]]></title>
            <link>https://kannada.asianetnews.com/entertainment/will-smith-to-join-allu-arjun-raaka-heres-what-the-latest-report-says-gvd/articleshow-u3zc48g</link>
            <guid isPermaLink="true">https://kannada.asianetnews.com/entertainment/will-smith-to-join-allu-arjun-raaka-heres-what-the-latest-report-says-gvd/articleshow-u3zc48g</guid>
            <pubDate>Thu, 20 Aug 2026 21:45:49 +0530</pubDate>
            <description><![CDATA[&lt;p&gt;ಪುಷ್ಪ 2 ನಂತರ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಕ'. ಅಟ್ಲಿ ನಿರ್ದೇಶನದ ಈ ಚಿತ್ರದ ಬಗ್ಗೆ ಈಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fz99b54gs13nrttmpz843k,imgname-bjb-1787242521957.png" type="image/jpeg" height="390" width="690"/>
            <content:encoded><![CDATA[&lt;p&gt;'ಪುಷ್ಪ 2: ದಿ ರೂಲ್' ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅಲ್ಲು ಅರ್ಜುನ್ ಮತ್ತೆ ದೊಡ್ಡ ಪರದೆಗೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಪ್ರಾಜೆಕ್ಟ್ 'ರಾಕ' ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಇದೊಂದು ಸೈನ್ಸ್-ಫಿಕ್ಷನ್ ಫ್ಯಾಂಟಸಿ ಸಿನಿಮಾ ಆಗಿದ್ದು, ಇದನ್ನು ಅಟ್ಲಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ, ರಮ್ಯಾ ಕೃಷ್ಣನ್, ಅರ್ಷದ್ ವಾರ್ಸಿ ಮತ್ತು ಯೋಗಿ ಬಾಬು ಅವರಂತಹ ದೊಡ್ಡ ತಾರಾಬಳಗವೇ ಇದೆ.&lt;/p&gt;&lt;p&gt;ಮಿಡ್-ಡೇ ವರದಿಯ ಪ್ರಕಾರ, ಹಾಲಿವುಡ್ ನಟ ವಿಲ್ ಸ್ಮಿತ್ ಅವರನ್ನು ಈ ಚಿತ್ರದ ಒಂದು ಪ್ರಮುಖ ಪಾತ್ರಕ್ಕಾಗಿ ಚಿತ್ರತಂಡ ಸಂಪರ್ಕಿಸಿದೆಯಂತೆ. ಅವರ ಡೇಟ್ಸ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಅವರ ಕಾಸ್ಟ್ಯೂಮ್&zwnj;ಗಳು ಕೂಡ ಈಗಾಗಲೇ ಫೈನಲ್ ಆಗಿವೆ ಎಂದು ವರದಿ ಹೇಳಿದೆ. ಅಷ್ಟೇ ಅಲ್ಲ, ವಿಲ್ ಸ್ಮಿತ್ ಅವರ ಲಭ್ಯತೆಗೆ ತಕ್ಕಂತೆ ಮುಂದಿನ ವಿದೇಶಿ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ವಿಲ್ ಸ್ಮಿತ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ತಾರಾ?&lt;/strong&gt;&lt;/p&gt;&lt;p&gt;ವಿಲ್ ಸ್ಮಿತ್ 'ರಾಕ' ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಕಾಣಿಸಿಕೊಳ್ಳಬಹುದು ಎಂದೂ ಈ ವರದಿ ಹೇಳಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ, ಅಟ್ಲಿ ಅವರ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್&zwnj;ಗೆ ಮತ್ತೊಬ್ಬ ಅಂತರರಾಷ್ಟ್ರೀಯ ಸ್ಟಾರ್ ಸೇರ್ಪಡೆಯಾದಂತಾಗುತ್ತದೆ. ಇದು ಬಾಲಿವುಡ್&zwnj;ನಲ್ಲಿ ವಿಲ್ ಸ್ಮಿತ್ ಅವರ ಮೊದಲ ಸಿನಿಮಾ ಕೂಡ ಆಗಬಹುದು.&lt;/p&gt;&lt;p&gt;ಆದರೆ, ಈ ಬಗ್ಗೆ ವಿಲ್ ಸ್ಮಿತ್, ಅಲ್ಲು ಅರ್ಜುನ್ ಅಥವಾ 'ರಾಕ' ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಸದ್ಯಕ್ಕೆ ಇದೊಂದು ವರದಿಯಷ್ಟೇ. 'ರಾಕ' ಚಿತ್ರದ ಮೂಲಕ ಅಲ್ಲು ಅರ್ಜುನ್, ಅಟ್ಲಿ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಮೊದಲು 'AA22xA6' ಎಂದು ಹೆಸರಿಡಲಾಗಿತ್ತು. ಅಂದರೆ, ಅಲ್ಲು ಅರ್ಜುನ್ ಅವರ 22ನೇ ಸಿನಿಮಾ ಮತ್ತು ಅಟ್ಲಿ ಅವರ 6ನೇ ನಿರ್ದೇಶನದ ಚಿತ್ರ.&lt;/p&gt;&lt;h2&gt;&lt;strong&gt;'ರಾಕ' ಫಸ್ಟ್ ಲುಕ್ ಸೃಷ್ಟಿಸಿದ್ದ ಸಂಚಲನ&lt;/strong&gt;&lt;/h2&gt;&lt;p&gt;ಅಲ್ಲು ಅರ್ಜುನ್ ಅವರ 44ನೇ ಹುಟ್ಟುಹಬ್ಬದಂದು 'ರಾಕ' ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಇದರಲ್ಲಿ ಅಲ್ಲು ಅರ್ಜುನ್ ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಬೋಳು ತಲೆಯ ಲುಕ್&zwnj;ನಲ್ಲಿ, ಅವರ ಮುಖದ ಒಂದು ಭಾಗವನ್ನು ತೋಳದಂತಹ ಉಗುರುಗಳುಳ್ಳ ಕೈ ಮುಚ್ಚಿತ್ತು. ಈ ದೃಶ್ಯವು ಚಿತ್ರದ ಕಥೆ ಮತ್ತು ಪ್ರಪಂಚದ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.&lt;/p&gt;&lt;p&gt;ವರದಿಗಳ ಪ್ರಕಾರ, 700 ಕೋಟಿ ರೂಪಾಯಿಗೂ ಅಧಿಕ ಬಜೆಟ್&zwnj;ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇದು ಅಲ್ಲು ಅರ್ಜುನ್ ಅವರ ವೃತ್ತಿಜೀವನದ ಅತಿದೊಡ್ಡ ಪ್ರಾಜೆಕ್ಟ್&zwnj;ಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಈ ಚಿತ್ರವು 2027ರ ಡಿಸೆಂಬರ್&zwnj;ನಲ್ಲಿ ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ. ಅಟ್ಲಿ ನಿರ್ದೇಶನ, ದೊಡ್ಡ ತಾರಾಗಣ ಮತ್ತು ಈಗ ವಿಲ್ ಸ್ಮಿತ್ ಅವರ ಹೆಸರು ಕೇಳಿಬರುತ್ತಿರುವುದರಿಂದ, 'ರಾಕ' ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದಾಗಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/will-smith-to-join-allu-arjun-raaka-heres-what-the-latest-report-says-gvd/articleshow-u3zc48g"/>
        </item>
        <item>
            <title><![CDATA[Toxic ಸಿನಿಮಾನ್ನ ತಮಿಳು ಭಾಷೆ ಎನ್ನೋದಾ? ಬ್ರಿಟಿಷ್​ ಸೆನ್ಸಾರ್​ ಮಂಡಳಿ ಎಡವಟ್ಟಿಗೆ ಕನ್ನಡಿಗರು ಗರಂ]]></title>
            <link>https://kannada.asianetnews.com/entertainment/uk-censor-board-calls-yash-starrer-toxic-movie-as-a-tamil-language-kannadigas-angry-suc/articleshow-v1nqk6n</link>
            <guid isPermaLink="true">https://kannada.asianetnews.com/entertainment/uk-censor-board-calls-yash-starrer-toxic-movie-as-a-tamil-language-kannadigas-angry-suc/articleshow-v1nqk6n</guid>
            <pubDate>Thu, 20 Aug 2026 20:35:06 +0530</pubDate>
            <description><![CDATA[ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಇಂಗ್ಲಿಷ್ ಟ್ರೈಲರ್ ಬಿಡುಗಡೆಯಾಗಿದ್ದು, ಹಿಂದಿ ಆವೃತ್ತಿಗಿಂತ ಭಿನ್ನವಾಗಿದೆ. ಇದೇ ವೇಳೆ, ಬ್ರಿಟಿಷ್ ಸೆನ್ಸಾರ್ ಮಂಡಳಿ (BBFC) ಕನ್ನಡ ಚಿತ್ರವನ್ನು 'ತಮಿಳು' ಎಂದು ತಪ್ಪಾಗಿ ಉಲ್ಲೇಖಿಸಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರಕ್ಕೆ ಬ್ರಿಟನ್&zwnj;ನಲ್ಲಿ 18+ ಪ್ರಮಾಣಪತ್ರ ಸಿಕ್ಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0fv7ksa5pbvv13n67hrjz0e,imgname-toxic-1787238272810.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೀತು ಮೋಹನ್ದಾಸ್ ನಿರ್ದೇಶನದ, ಯಶ್​ ಅಭಿನಯದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; (Toxic a fairy tale for grown-ups) ಸಿನಿಮಾ ವಿದೇಶಗಳಲ್ಲಿಯೂ ಕಮಾಲ್​ ಮಾಡುತ್ತಿದೆ. ಹಿಂದಿ ಭಾಷೆಯ ಟ್ರೈಲರ್​ ಬಳಿಕ &quot;ಟಾಕ್ಸಿಕ್&quot; ನ ಇಂಗ್ಲಿಷ್ ಟ್ರೈಲರ್​ ಕೂಡ ಬಿಡುಗಡೆಯಾಗಿದೆ. ಇದನ್ನು ಬಿಡುಗಡೆ ಮಾಡಿದ ಬಳಿಕ, ಯಶ್​ ಫ್ಯಾನ್ಸ್​, ಕೆಲವು ವ್ಯತ್ಯಾಸಗಳನ್ನು ಗಮನಿಸಿದ್ದಾರೆ. ವಿಡಿಯೋದ ಅವಧಿ, ದೃಶ್ಯ ಪ್ರಸ್ತುತಿ ಮತ್ತು ಸಂಪಾದನೆಯಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿಂದಿ ಟ್ರೇಲರ್ 4 ನಿಮಿಷ 38 ಸೆಕೆಂಡುಗಳು ಉದ್ದವಿದ್ದರೆ, ಇಂಗ್ಲಿಷ್ ಆವೃತ್ತಿ 4 ನಿಮಿಷ 28 ಸೆಕೆಂಡುಗಳು ಉದ್ದವಾಗಿದೆ. ಇದರರ್ಥ ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದೆ ಮತ್ತು ಕೆಲವು ಇಂಗ್ಲಿಷ್ ಆವೃತ್ತಿಯಲ್ಲಿ ಬದಲಾಯಿಸಲಾಗಿದೆ.&lt;/p&gt;&lt;p&gt;ಉದಾಹರಣೆಗೆ, ಇಂಗ್ಲಿಷ್ ಆವೃತ್ತಿಯಲ್ಲಿ, ಯಶ್ ಮೆಗಾಫೋನ್ (ಲೌಡ್&zwnj;ಸ್ಪೀಕರ್) ಹಿಡಿದಿರುವುದು ಕಂಡುಬರುತ್ತದೆ, ಆದರೆ ಹಿಂದಿಯಲ್ಲಿ ಹಾಗಿರಲಿಲ್ಲ. ಯಶ್ ಪಾತ್ರವು ಇಂಗ್ಲಿಷ್ ಆವೃತ್ತಿಯಲ್ಲಿ ಹೆಚ್ಚು ನಿಂದನೀಯ ಭಾಷೆಯನ್ನು ಬಳಸುತ್ತದೆ, ಅದು ಹಿಂದಿಯಲ್ಲಿ ಇರಲಿಲ್ಲ. ಜನರು &quot;ಟಾಕ್ಸಿಕ್&quot; ನ ಇಂಗ್ಲಿಷ್ ಟ್ರೈಲರ್ ಅನ್ನು ಚಿಕ್ಕದಾಗಿದೆ ಮತ್ತು ಹೆಚ್ಚು ಸಾಂದ್ರವಾಗಿದೆ ಎಂದು ಬಣ್ಣಿಸಿದರು ಮತ್ತು ಅದರ ತೀಕ್ಷ್ಣವಾದ ಸಂಪಾದನೆಯಿಂದಾಗಿ ಇದು ಉತ್ತಮವಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಕನ್ನಡದ ಬದ್ಲು ತಮಿಳು ಎಂದ ಬ್ರಿಟಿಷರು!&lt;/strong&gt;&lt;/h2&gt;&lt;p&gt;ಆದರೆ ಇದೇ ಸಂದರ್ಭದಲ್ಲಿ, ಇಂಗ್ಲೆಂಡ್​ನ ಬ್ರಿಟಿಷ್ ಬೋರ್ಡ್ ಆಫ್ ಫಿಲ್ಮ್ ಕ್ಲಾಸಿಫಿಕೇಶನ್ (BBFC) ಒಂದು ಎಡವಟ್ಟು ಮಾಡಿದೆ. ಅದೇನೆಂದರೆ, ಯಶ್​ ಅವರ ಕನ್ನಡ ಭಾಷೆಯ ಸಿನಿಮಾ ಎನ್ನುವ ಬದಲು 'ತಮಿಳು ಭಾಷೆಯ ಆಕ್ಷನ್ ಚಿತ್ರದಲ್ಲಿ' ಎಂದು ವೆಬ್​ಸೈಟ್​ನಲ್ಲಿಯೇ ಹೇಳಿಬಿಟ್ಟಿದೆ. BBFC ಅಧಿಕೃತ ವೆಬ್&zwnj;ಸೈಟ್&zwnj;ನಲ್ಲಿ, ಟಾಕ್ಸಿಕ್&zwnj;ನ ವಿವರಣೆಯು ಹೀಗಿದೆ: &quot;ಈ ತಮಿಳು ಭಾಷೆಯ ಆಕ್ಷನ್ ಚಿತ್ರದಲ್ಲಿ, ಗೋವಾದ ಪ್ರಬಲ ಡ್ರಗ್ ಕಾರ್ಟೆಲ್&zwnj;ನ ನಾಯಕ ತನ್ನದೇ ಆದ ವಿನಾಶದ ಬೀಜಗಳನ್ನು ಬಿತ್ತುತ್ತಾನೆ ಎಂದಿದ್ದು, ಈ ಸಿನಿಮಾದ ಬಗ್ಗೆ ವಿವರಿಸಲಾಗಿದೆ.&lt;/p&gt;&lt;p&gt;ಇದಕ್ಕೆ ಕನ್ನಡಿಗರು ಗರಂ ಆಗಿದ್ದಾರೆ. ದಕ್ಷಿಣ ಭಾರತ ಎಂದರೆ ಹೆಚ್ಚಿನ ಕಡೆಗಳಲ್ಲಿ ತಮಿಳು ಎನ್ನುವ ರೂಢಿ ಇದೆ. ತಮಿಳು ಆ ಪರಿಯಲ್ಲಿ ಇಡೀ ವಿಶ್ವವನ್ನೇ ಆವರಿಸಿಬಿಟ್ಟಿದೆ. ಹಾಗೆಂದು ಇಷ್ಟು ಫೇಮಸ್​ ಕನ್ನಡದ ಸಿನಿಮಾವನ್ನು ತಮಿಳು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ. ಅದೂ ಸಾಮಾನ್ಯ ಜನರು ಹೇಳಿದ್ದರೆ, ಏನೋ ಗೊತ್ತಿಲ್ಲದೇ ಹೇಳಿದರು ಎನ್ನಬಹುದಿತ್ತು. ಆದರೆ ಖುದ್ದು ಸೆನ್ಸಾರ್​ ಮಂಡಳಿಯೇ ಈ ಎಡವಟ್ಟು ಮಾಡಬಹುದಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;'ಎ' ಸರ್ಟಿಫಿಕೇಟ್​&lt;/strong&gt;&lt;/h3&gt;&lt;p&gt;ಅಂದಹಾಗೆ, ಭಾರತದಲ್ಲಿ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರವನ್ನು ಪಡೆದ ನಂತರ, ಟಾಕ್ಸಿಕ್ ಅನ್ನು ಬ್ರಿಟಿಷ್ ಚಲನಚಿತ್ರ ಪ್ರಮಾಣೀಕರಣ ಮಂಡಳಿಯೂ ಪ್ರಮಾಣೀಕರಿಸಿದೆ. 'ಬಲವಾದ ರಕ್ತಸಿಕ್ತ ಹಿಂಸೆ' ಮತ್ತು ಬೋಲ್ಡ್​ ದೃಶ್ಯಗಳಿಗಾಗಿ 18+ ಪ್ರಮಾಣಪತ್ರವನ್ನು ನೀಡಿದೆ. ಈ ಹಿಂದೆ ಮಾರ್ಚ್&zwnj;ನಲ್ಲಿ ರಣವೀರ್ ಸಿಂಗ್ ಅವರ ಧುರಂಧರ್ ದಿ ರಿವೆಂಜ್ ಜೊತೆಗೆ ಬಿಡುಗಡೆಯಾಗಬೇಕಿದ್ದ ಟಾಕ್ಸಿಕ್ ಅನ್ನು ಜೂನ್&zwnj;ಗೆ ಸ್ಥಳಾಂತರಿಸಲಾಯಿತು ಮತ್ತು ಆಗಸ್ಟ್ 26 ಅನ್ನು ಅಂತಿಮ ಅಧಿಕೃತ ಬಿಡುಗಡೆ ದಿನಾಂಕವಾಗಿ ನಿಗದಿಪಡಿಸಲಾಯಿತು. ಈ ಚಿತ್ರವನ್ನು ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ.&lt;/p&gt;]]></content:encoded>
            <category>cine-world</category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/uk-censor-board-calls-yash-starrer-toxic-movie-as-a-tamil-language-kannadigas-angry-suc/articleshow-v1nqk6n"/>
        </item>
        <item>
            <title><![CDATA[ಸ್ಟಾರ್‌ ನಟಿಯಾಗಿದ್ದರೂ ಹಣ-ಖ್ಯಾತಿಗಿಂತ ಇದಕ್ಕೆ ಹೆಚ್ಚು ಬೆಲೆ ಕೊಡ್ತಾರಂತೆ ಶ್ರೀಲೀಲಾ: ಕಾರಣವೇನು?]]></title>
            <link>https://kannada.asianetnews.com/gallery/entertainment/money-or-fame-sreeleela-reveals-what-truly-makes-her-happy-gvd-7wnbg92</link>
            <guid isPermaLink="true">https://kannada.asianetnews.com/gallery/entertainment/money-or-fame-sreeleela-reveals-what-truly-makes-her-happy-gvd-7wnbg92</guid>
            <pubDate>Thu, 20 Aug 2026 20:14:13 +0530</pubDate>
            <description><![CDATA[&lt;p&gt;ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fsevapv4e6319pfffkr1bh,imgname-bj-1787236412758.png" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.&lt;/p&gt;&lt;img&gt;&lt;p&gt;ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತಮ್ಮ ನೃತ್ಯ ಮತ್ತು ಅಭಿನಯದ ಮೂಲಕವೇ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿರುವ ನಟಿ ಶ್ರೀಲೀಲಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ಬಳಿಕ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಶ್ರೀಲೀಲಾ, ತಮ್ಮ ಅಭಿಮಾನಿಗಳು ನೀಡುತ್ತಿರುವ ಪ್ರೀತಿಯ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಶ್ರೀಲೀಲಾ ತಮ್ಮ ನಟನೆ ಮಾತ್ರವಲ್ಲದೆ ಅದ್ಭುತ ನೃತ್ಯದಿಂದಲೂ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಕಡಿಮೆ ಅವಧಿಯಲ್ಲೇ ಸ್ಟಾರ್&zwnj; ನಟಿಯರ ಸಾಲಿಗೆ ಸೇರಿದ್ದಾರೆ. ಚಿತ್ರರಂಗದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರು, ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ದತ್ತು ಪಡೆದು ಬೆಳೆಸುವ ಮೂಲಕವೂ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;ಕನ್ನಡ ಸಿನಿಮಾದ ಮೂಲಕ ನಾಯಕಿಯಾಗಿ ವೃತ್ತಿಜೀವನ ಆರಂಭಿಸಿದ ಶ್ರೀಲೀಲಾ, ಬಳಿಕ ತೆಲುಗು ಚಿತ್ರರಂಗದಲ್ಲಿ ಹಲವು ಯಶಸ್ವಿ ಸಿನಿಮಾಗಳ ಭಾಗವಾದರು. ಇದೀಗ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲೂ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ನಟನೆಯ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲೂ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿರುವುದು ಅವರ ಮತ್ತೊಂದು ವಿಶೇಷತೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶ್ರೀಲೀಲಾ, ತಮ್ಮ ಅಭಿಮಾನಿಗಳು ನೀಡುತ್ತಿರುವ ಪ್ರೀತಿ ಹಾಗೂ ಬೆಂಬಲದ ಬಗ್ಗೆ ಮಾತನಾಡಿದ್ದಾರೆ. ಹಣ ಮತ್ತು ಖ್ಯಾತಿಗಿಂತಲೂ ಅಭಿಮಾನಿಗಳ ಪ್ರೀತಿಯೇ ತಮ್ಮನ್ನು ಹೆಚ್ಚು ಖುಷಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳಿಂದ ಸಿಗುತ್ತಿರುವ ಇಂತಹ ಅಪಾರ ಪ್ರೀತಿಯನ್ನು ಪಡೆಯುತ್ತಿರುವ ನಟಿಯಾಗಿರುವುದಕ್ಕೆ ತಮಗೆ ಹೆಮ್ಮೆ ಇದೆ ಎಂದು ಶ್ರೀಲೀಲಾ ತಿಳಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವೇ ತಮ್ಮನ್ನು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಈಗಾಗಲೇ ಗಮನ ಸೆಳೆದಿರುವ ಶ್ರೀಲೀಲಾ, ಇದೀಗ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. &lsquo;ಪರಾಶಕ್ತಿ&rsquo; ಸಿನಿಮಾದ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟಿರುವ ಅವರು, ಧನುಷ್ ಅಭಿನಯದ &lsquo;ಓಂ&rsquo; ಸಿನಿಮಾದಲ್ಲೂ ನಟಿಸುತ್ತಿದ್ದಾರೆ. &lsquo;ಓಂ&rsquo; ಚಿತ್ರದಲ್ಲಿ ಶ್ರೀಲೀಲಾ ವಿಭಿನ್ನವಾದ ಆ್ಯಕ್ಷನ್ ಹಾಗೂ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕುತೂಹಲ ಮೂಡಿದೆ. ಸ್ಟಾರ್&zwnj;ಡಮ್&zwnj;, ಹಣ, ಖ್ಯಾತಿಗಿಂತ ಅಭಿಮಾನಿಗಳ ಪ್ರೀತಿಯೇ ಮುಖ್ಯ ಎಂದು ಶ್ರೀಲೀಲಾ ಹೇಳಿರುವ ಮಾತುಗಳು ಇದೀಗ ಅಭಿಮಾನಿಗಳ ಮನ ಗೆದ್ದಿವೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/money-or-fame-sreeleela-reveals-what-truly-makes-her-happy-gvd-7wnbg92"/>
        </item>
        <item>
            <title><![CDATA[ಅಪ್ಪ-ಅಮ್ಮನ ನಡುವೆ ಹಾಯಾಗಿ ನಿದ್ರಿಸಿದ ವಿಜಯ್ ದೇವರಕೊಂಡ: ಫೋಟೋ ತೆಗೆದಿದ್ದು ಮಾತ್ರ ಸ್ಪೆಷಲ್ ವ್ಯಕ್ತಿ!]]></title>
            <link>https://kannada.asianetnews.com/entertainment/vijay-deverakonda-sleeps-between-his-parents-guess-who-took-the-cute-photo-gvd/articleshow-4knb4my</link>
            <guid isPermaLink="true">https://kannada.asianetnews.com/entertainment/vijay-deverakonda-sleeps-between-his-parents-guess-who-took-the-cute-photo-gvd/articleshow-4knb4my</guid>
            <pubDate>Thu, 20 Aug 2026 18:33:01 +0530</pubDate>
            <description><![CDATA[&lt;p&gt;ವಿಜಯ್ ದೇವರಕೊಂಡ ಅಪ್ಪ-ಅಮ್ಮನ ನಡುವೆ ನೆಮ್ಮದಿಯಾಗಿ ನಿದ್ರಿಸುತ್ತಿರುವ ಕ್ಯೂಟ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸ್ಪೆಷಲ್ ವ್ಯಕ್ತಿ ಕ್ಲಿಕ್ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fm8dcxsw0r8f4gjqtf4m9z,imgname-jj-1787230959005.png" type="image/jpeg" height="390" width="690"/>
            <content:encoded><![CDATA[&lt;p&gt;ಟಾಲಿವುಡ್&zwnj;ನ ಕ್ರೇಜಿ ಹೀರೋ ವಿಜಯ್ ದೇವರಕೊಂಡ ಅವರ ಕ್ರೇಜ್&zwnj; ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡ ಮಟ್ಟದ ಫ್ಯಾನ್&zwnj;ಬೇಸ್&zwnj; ಸಂಪಾದಿಸಿರುವ ವಿಜಯ್&zwnj;, ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಬಳಿಕ ಹೀರೋ ಆಗಿ ಸ್ಟಾರ್&zwnj; ಪಟ್ಟಕ್ಕೇರಿದ್ದಾರೆ. ಹಲವು ಬ್ಲಾಕ್&zwnj;ಬಸ್ಟರ್ ಸಿನಿಮಾಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಬ್ಯಾಕ್&zwnj; ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಭರ್ಜರಿ ಹಿಟ್&zwnj;ಗಾಗಿ ಎದುರು ನೋಡುತ್ತಿರುವ ಅವರು, ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್&zwnj; ನಡುವೆ ಸಿಕ್ಕ ಬಿಡುವಿನ ಸಮಯವನ್ನು ಇದೀಗ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ.&lt;/p&gt;&lt;p&gt;&lt;strong&gt;ಅಪ್ಪ-ಅಮ್ಮನ ನಡುವೆ ವಿಜಯ್&zwnj; ಕ್ಯೂಟ್&zwnj; ನಿದ್ರೆ!&lt;/strong&gt;&lt;/p&gt;&lt;p&gt;ವಿಜಯ್ ದೇವರಕೊಂಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋವೊಂದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅದರಲ್ಲಿ ವಿಜಯ್&zwnj;, ತಮ್ಮ ತಂದೆ-ತಾಯಿಯ ನಡುವೆ ಬಾಲ್ಯದ ದಿನಗಳಲ್ಲಿ ತಮಗೆ ಅತ್ಯಂತ ಇಷ್ಟವಾಗಿದ್ದ ಜಾಗದಲ್ಲೇ ನೆಮ್ಮದಿಯಾಗಿ ನಿದ್ರಿಸುತ್ತಿರುವ ದೃಶ್ಯವಿದೆ. ಸಾಮಾನ್ಯವಾಗಿ ಸ್ಟೈಲಿಶ್ ಲುಕ್&zwnj;, ಮಾಸ್&zwnj; ಅವತಾರದಲ್ಲಿ ಕಾಣಿಸಿಕೊಳ್ಳುವ ವಿಜಯ್&zwnj; ಅವರನ್ನು ಈ ರೀತಿಯ ಸಿಂಪಲ್&zwnj; ಹಾಗೂ ಫ್ಯಾಮಿಲಿ ಮ್ಯಾನ್&zwnj; ಲುಕ್&zwnj;ನಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಅಪ್ಪ-ಅಮ್ಮನ ನಡುವೆ ಮಧ್ಯಾಹ್ನದ ನಿದ್ದೆ ಮಾಡಿರುವ ಈ ಕ್ಷಣ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಈ ಕ್ಯೂಟ್&zwnj; ಫೋಟೋ ತೆಗೆದಿದ್ದು ರಶ್ಮಿಕಾ!&lt;/strong&gt;&lt;/p&gt;&lt;p&gt;ಇನ್ನು ಈ ಫೋಟೋದ ಹಿಂದಿರುವ ವ್ಯಕ್ತಿ ಯಾರು ಎಂಬುದೇ ಮತ್ತೊಂದು ಕುತೂಹಲಕಾರಿ ವಿಚಾರ. ವಿಜಯ್ ದೇವರಕೊಂಡ ಅವರ ಈ ಸುಂದರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಬೇರಾರೂ ಅಲ್ಲ, ಅವರ ಪತ್ನಿ ಹಾಗೂ ನಟಿ ರಶ್ಮಿಕಾ ಮಂದಣ್ಣ. ವಿಜಯ್ ತಮ್ಮ ಇನ್&zwnj;ಸ್ಟಾಗ್ರಾಂ ಪೋಸ್ಟ್&zwnj;ನಲ್ಲಿ ಫೋಟೋ ಕ್ರೆಡಿಟ್&zwnj; ಅನ್ನು ರಶ್ಮಿಕಾಗೆ ನೀಡಿದ್ದಾರೆ. ಮಳೆಯ ಕಾರಣದಿಂದ ಶೂಟಿಂಗ್&zwnj; ಸ್ಥಗಿತಗೊಂಡಿದ್ದರಿಂದ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿತ್ತು. ಈ ವೇಳೆ ಬಾಲ್ಯದ ನೆಚ್ಚಿನ ಜಾಗದಲ್ಲಿ ಅಪ್ಪ-ಅಮ್ಮನ ನಡುವೆ ನೆಮ್ಮದಿಯಾಗಿ ನಿದ್ರಿಸಿರುವುದರಿಂದ ತಮ್ಮ ಎನರ್ಜಿ ಮತ್ತೆ ರೀಚಾರ್ಜ್&zwnj; ಆಗಿದೆ ಎಂದು ವಿಜಯ್&zwnj; ಹೇಳಿಕೊಂಡಿದ್ದಾರೆ. ಸ್ಟಾರ್&zwnj; ಲೈಫ್&zwnj;ನ ಗ್ಲಾಮರ್&zwnj;ಗಿಂತ ಕುಟುಂಬದೊಂದಿಗೆ ಕಳೆಯುವ ಇಂತಹ ಸರಳ ಕ್ಷಣಗಳೇ ಎಷ್ಟು ವಿಶೇಷ ಎಂಬುದನ್ನು ವಿಜಯ್ ಅವರ ಈ ಫೋಟೋ ಮತ್ತೊಮ್ಮೆ ತೋರಿಸಿಕೊಟ್ಟಿದೆ.&lt;/p&gt;&lt;h2&gt;&lt;strong&gt;ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್&lt;/strong&gt;&lt;/h2&gt;&lt;p&gt;ಇನ್ನು ವಿಜಯ್ ದೇವರಕೊಂಡ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ, ಸದ್ಯ ಅವರು ರಶ್ಮಿಕಾ ಮಂದಣ್ಣ ಜೊತೆ &lsquo;ರಣಬಲಿ&rsquo; ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಹುಲ್ ಸಾಂಕೃತ್ಯಾಯನ್ ನಿರ್ದೇಶನದ ಈ ಚಿತ್ರದ ಶೂಟಿಂಗ್&zwnj; ಭರದಿಂದ ಸಾಗುತ್ತಿದೆ. ಇದರ ಜೊತೆಗೆ &lsquo;ರೌಡಿ ಜನಾರ್ದನ್&rsquo; ಸಿನಿಮಾದಲ್ಲೂ ವಿಜಯ್&zwnj; ನಟಿಸುತ್ತಿದ್ದಾರೆ. &lsquo;ಹಾಯ್ ನಾನ್ನ&rsquo; ಮೂಲಕ ಗಮನ ಸೆಳೆದ ನಿರ್ದೇಶಕ ಶೌರ್ಯುವ್ ಅವರ ನಿರ್ದೇಶನದಲ್ಲೂ ವಿಜಯ್&zwnj; ಮತ್ತೊಂದು ಸಿನಿಮಾವನ್ನು ಘೋಷಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾಗಳ ಬ್ಯುಸಿ ಶೆಡ್ಯೂಲ್&zwnj;ನ ನಡುವೆ ಅಪ್ಪ-ಅಮ್ಮನ ಜೊತೆ ಕಳೆದ ಈ ಕ್ಯೂಟ್&zwnj; ಕ್ಷಣವನ್ನು ವಿಜಯ್ ಹಂಚಿಕೊಂಡಿದ್ದು, ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/vijay-deverakonda-sleeps-between-his-parents-guess-who-took-the-cute-photo-gvd/articleshow-4knb4my"/>
        </item>
        <item>
            <title><![CDATA[ರಾಮಾಯಣ ಸಿನಿಮಾದಲ್ಲಿ ರಣಬೀರ್‌ಗಿಂತ ಯಶ್ ಅಬ್ಬರ ಉತ್ತಮವಾಗಿದೆ, ರಾವಣನಿಗೆ ಫಿದಾ ಆದ ಹನಿ ಸಿಂಗ್]]></title>
            <link>https://kannada.asianetnews.com/entertainment/yash-ravana-impresses-honey-singh-more-than-ranbir-kapoor-ram-in-ramayana-movie/articleshow-ebg36l7</link>
            <guid isPermaLink="true">https://kannada.asianetnews.com/entertainment/yash-ravana-impresses-honey-singh-more-than-ranbir-kapoor-ram-in-ramayana-movie/articleshow-ebg36l7</guid>
            <pubDate>Thu, 20 Aug 2026 18:30:44 +0530</pubDate>
            <description><![CDATA[&lt;p&gt;ನಾನು ರಾಮ ಭಕ್ತ, ಆದರೆ ರಾಮಾಯಣ ಟ್ರೇಲರ್ ನೋಡಿ ನಾನೀಗ ರಾವಣನ ಅಭಿಮಾನಿಯಾಗಿದ್ದೇನೆ. ರಣಬೀರ್ ಕಪೂರ್&zwnj;ಗಿಂತ ರಾವಣನಾಗಿ ಯಶ್ ಉತ್ತಮವಾಗಿ ಕಾಣಿಸುತ್ತಿದ್ದಾರೆ ಎಂದು ಸಿಂಗರ್ ಹನಿ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fm4ph9q329j1hsdtd3dk1h,imgname-honey-singh-is-all-praise-for-yash-ravana-in-ramayana-1787230837289.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.20) &lt;/strong&gt;ರಾಮಾಯಣ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಟ್ರೇಲರ್ ನೋಡಿ ಭಾರತೀಯರು ಮತ್ತೆ ರಾಮಯುಗ ನೆನಪಿಸಿಕೊಳ್ಳುತ್ತಿದ್ದಾರೆ. ರಾಮಾನಾಗಿ ರಣಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ತೆರೆ ಮೇಲೆ ಮೇಲೆ ನೋಡುವ ಕಾತುರ ಹೆಚ್ಚಾಗಿದೆ. ಸಿನಿಮಾದ ಟ್ರೇಲರ್, ಪೋಸ್ಟರ್&zwnj;ಗಳಲ್ಲಿ ರಣಬೀರ್ ಕಪೂರ್&zwnj;ಗಿಂತ ಹೆಚ್ಚು ಯಶ್ ಮಿಂಚುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಖ್ಯಾತ ಬಾಲಿವುಡ್ ಸಿಂಗರ್ ಹನಿ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ನನಗೆ ರಣಬೀರ್ ಕಪೂರ್&zwnj;ಗಿಂತ ಯಶ್ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಯಶ್ ನೋಡಿದಾಗ ರಾಮಾಯಾಣ ಕಾಲದ ರಾವಣನ ದರ್ಶನ ಮಾಡಿಸುವಂತಿದೆ ಎಂದು ಹೊಗಳಿದ್ದಾರೆ.&lt;/p&gt;&lt;h2&gt;ತೆರೆ ಮೇಲೆ ರಾವಣನಾಗಿ ಯಶ್ ಅದ್ಭುತ ಎಂದ ಹನಿ ಸಿಂಗ್&lt;/h2&gt;&lt;p&gt;ರಾಮಾಯಣ ಟೀಸರ್&zwnj;ನಲ್ಲಿ ರಾವಣನಾಗಿ ಯಶ್ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂದು ವಿಡಿಯೋ ಮೂಲಕ ಪ್ರಶಂಸಿದ್ದಾರೆ. ನಮ್ಮ ಬೆಂಗಳೂರಿನ ಯಶ್ ಭಾಯಿ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ನಾನು ಶ್ರೀರಾಮನ ದೊಡ್ಡ ಭಕ್ತ. ಆದರೆ ನನಗೆ ರಾವಣನ ಮೇಲೆ ಯಾವುದೇ ಆದರ, ಭಕ್ತಿ ಇಲ್ಲ. ರಾವಣನಿಗೆ ಅಷ್ಟೊಂದು ಪ್ರಾಮುಖ್ಯತೆ ಕೊಟ್ಟಿಲ್ಲ. ಆದರೆ ರಾಮಾಯಣದಲ್ಲಿ ರಾವಣನಾಗಿ ಯಶ್ ನೋಡಿದ ಬಳಿಕ ಫಿದಾ ಆಗಿದ್ದೇನೆ. ನನ್ನ ಅಭಿಪ್ರಾಯದಲ್ಲಿ ರಣಬೀರ್ ಕಪೂರ್&zwnj;ಗಿಂತ ಯಶ್ ಹೆಚ್ಚು ಉತ್ತಮವಾಗಿ, ಅದ್ಭುತವಾಗಿ ಕಾಣಿಸುತ್ತಿದ್ದಾರೆ.ಯಶ್ ಮಾತುಗಳು, ಡೈಲಾಗ್ ನನಗೆ ಹೆಚ್ಚು ಆಪ್ತವೆನಿಸುತ್ತಿದೆ ಎಂದು ಹನಿ ಸಿಂಗ್ ಹೇಳಿದ್ದಾರೆ.&lt;/p&gt;&lt;p&gt;ರಾಮಾಯಣ ಸಿನಿಮಾ ಅದ್ಭುತವಾಗಿ ಮೂಡಿ ಬರವು ವಿಶ್ವಾಸವಿದೆ. ನಾವು ಚಿಕ್ಕಂದಿನಿಂದ ರಾಮನ ಭಕ್ತನಾಗಿ, ಶ್ರೀರಾಮನ ದೇವಸ್ಥಾನ, ರಾಮಲೀಲಾ ನೋಡುತ್ತಾ ಬೆಳೆದಿದ್ದೇವೆ. ಶ್ರೀರಾಮನ ಆರಾಧಿಸುತ್ತಾ ಬಂದಿದ್ದೇವೆ. ಯಾರ ಭಾವನೆಗೂ ಧಕ್ಕೆ ಬಾರದಂತೆ ಸಿನಿಮಾ ತೆರೆಗೆ ಬರಲಿ. ಉತ್ತಮ ಸಿನಿಮಾ ಅದೇ ಗೌರವ, ಭಕ್ತಿಯೊಂದಿಗೆ ಪ್ರದರ್ಶನ ಕಾಣಲಿ ಎಂದು ಹನಿ ಸಿಂಗ್ ಹೇಳಿದ್ದಾರೆ.&lt;/p&gt;&lt;p&gt;ಹನಿ ಸಿಂಗ್ ವಿಡಿಯೋ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಹಲವು ಸೆಲೆಬ್ರೆಟಿಗಳು ರಾವಣ ಯಶ್ ನೋಡಲು ಕಾತರಗೊಂಡಿದ್ದಾರೆ. ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ನಿರ್ಮಾಣ, ನಟ ನಟಿಯರ ಸಂಭಾವನೆ, ಪ್ರೊಡಕ್ಷನ್, ಪ್ರಚಾರ ಸೇರಿದಂತೆ ಸಿನಿಮಾ ಒಟ್ಟು ಬಜೆಟ್ ಸರಿಸುಮಾರು 4000 ಕೋಟಿ ರೂಪಾಯಿ. ಬಿಗ್ ಬಜೆಟ್ ಸಿನಿಮಾ ಇದಾಗಿದೆ. ಇಷ್ಟೇ ಕುತೂಹಲ ನಿರೀಕ್ಷೆಗಳು ಈ ಸಿನಿಮಾದ ಮೇಲಿದೆ.&lt;/p&gt;]]></content:encoded>
            <category>cine-world</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/yash-ravana-impresses-honey-singh-more-than-ranbir-kapoor-ram-in-ramayana-movie/articleshow-ebg36l7"/>
        </item>
        <item>
            <title><![CDATA[ರನ್‌ಟೈಮ್‌ ಉದ್ದವಾದ್ರೆ ಏನಂತೆ?: ‘ಪುಷ್ಪ 2’, ‘ಅನಿಮಲ್’ ಬಳಿಕ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ]]></title>
            <link>https://kannada.asianetnews.com/entertainment/are-long-movies-the-new-trend-toxic-follows-pushpa-2-animal-and-dhurandhar-gvd/articleshow-gbvxg8o</link>
            <guid isPermaLink="true">https://kannada.asianetnews.com/entertainment/are-long-movies-the-new-trend-toxic-follows-pushpa-2-animal-and-dhurandhar-gvd/articleshow-gbvxg8o</guid>
            <pubDate>Thu, 20 Aug 2026 18:20:30 +0530</pubDate>
            <description><![CDATA[&lt;p&gt;ಯಶ್&zwnj; ಅಭಿನಯದ &lsquo;ಟಾಕ್ಸಿಕ್&rsquo; ಸಿನಿಮಾ 3 ಗಂಟೆಗೂ ಹೆಚ್ಚು ರನ್&zwnj;ಟೈಮ್&zwnj;ನೊಂದಿಗೆ ಬರಲಿದೆ ಎಂಬ ಚರ್ಚೆ ಶುರುವಾಗಿದೆ. &lsquo;ಪುಷ್ಪ 2&rsquo;, &lsquo;ಅನಿಮಲ್&rsquo;, &lsquo;ಧುರಂಧರ್&rsquo; ಬಳಿಕ ಲಾಂಗ್ ರನ್&zwnj;ಟೈಮ್&zwnj; ಸಿನಿಮಾಗಳ ಟ್ರೆಂಡ್&zwnj; ಬಗ್ಗೆ ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fkgtncd8wnrqhe445q7cy5,imgname-jvj-1787230186156.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ಅಂದ್ರೆ ಎರಡೂವರೆ ಗಂಟೆಯೊಳಗೇ ಮುಗಿಯಬೇಕು ಅನ್ನೋ ಮಾತು ಈಗ ಹಳೆಯದಾಗುತ್ತಿದೆ. ಕಥೆ ಮತ್ತು ಕಂಟೆಂಟ್&zwnj; ಗಟ್ಟಿಯಾಗಿದ್ದರೆ ಮೂರು ಗಂಟೆಯಲ್ಲ, ಮೂರೂವರೆ ಗಂಟೆಯ ಸಿನಿಮಾವನ್ನೂ ಪ್ರೇಕ್ಷಕರು ಕುತೂಹಲದಿಂದ ನೋಡುತ್ತಾರೆ ಎಂಬುದನ್ನು ಇತ್ತೀಚಿನ ಹಲವು ಸಿನಿಮಾಗಳು ಸಾಬೀತುಪಡಿಸಿವೆ. ಟಾಲಿವುಡ್&zwnj; ಮಾತ್ರವಲ್ಲದೆ ಬಾಲಿವುಡ್&zwnj;ನಲ್ಲೂ ಈ ಟ್ರೆಂಡ್&zwnj; ಈಗ ಸಕ್ಸಸ್&zwnj; ಫಾರ್ಮುಲಾ ಆಗುತ್ತಿರುವಂತಿದೆ.&lt;/p&gt;&lt;p&gt;ಸಾಮಾನ್ಯವಾಗಿ ಸಿನಿಮಾಗಳಿಗೆ ಎರಡೂವರೆ ಗಂಟೆಯ ರನ್&zwnj;ಟೈಮ್&zwnj; ಸೂಕ್ತ ಎನ್ನಲಾಗುತ್ತಿತ್ತು. ಆದರೆ ಈಗ ಮೇಕರ್ಸ್&zwnj; ಆ ಲೆಕ್ಕಾಚಾರವನ್ನೇ ಬದಲಿಸುತ್ತಿದ್ದಾರೆ. 2 ಗಂಟೆ 30 ನಿಮಿಷವಲ್ಲ... 3 ಗಂಟೆ, 3.30 ಗಂಟೆಯಾದರೂ ಪರವಾಗಿಲ್ಲ, ಸಿನಿಮಾದಲ್ಲಿ ವಿಷಯವಿರಬೇಕು ಎನ್ನುವ ನಿಲುವಿಗೆ ಬಂದಿದ್ದಾರೆ. ಈಗಾಗಲೇ &lsquo;ಪುಷ್ಪ 2&rsquo;, &lsquo;ಅನಿಮಲ್&rsquo;, &lsquo;ಆರ್&zwnj;ಆರ್&zwnj;ಆರ್&rsquo;, &lsquo;ಧುರಂಧರ್&rsquo; ಸೇರಿದಂತೆ ಹಲವು ಸಿನಿಮಾಗಳು ಮೂರು ಗಂಟೆಗೂ ಹೆಚ್ಚು ಅವಧಿಯಲ್ಲೇ ಬಂದು ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಸದ್ದು ಮಾಡಿವೆ.&lt;/p&gt;&lt;p&gt;&lt;strong&gt;&lsquo;ಪುಷ್ಪ 2&rsquo;ಯಿಂದ &lsquo;ಅನಿಮಲ್&zwnj;&rsquo;ವರೆಗೆ&hellip;&lt;/strong&gt;&lt;/p&gt;&lt;p&gt;ಸುಕುಮಾರ್ ನಿರ್ದೇಶನದ &lsquo;ಪುಷ್ಪ 2&rsquo; ಸಿನಿಮಾದ ಥಿಯೇಟ್ರಿಕಲ್&zwnj; ವರ್ಷನ್&zwnj; ಕೂಡ ಸುಮಾರು 3 ಗಂಟೆ 20 ನಿಮಿಷಕ್ಕೂ ಹೆಚ್ಚು ಅವಧಿಯಲ್ಲಿತ್ತು. ನಂತರ ಬಂದ ರೀಲೋಡೆಡ್&zwnj; ವರ್ಷನ್&zwnj; ಬರೋಬ್ಬರಿ 3 ಗಂಟೆ 44 ನಿಮಿಷಗಳಷ್ಟು ಉದ್ದವಾಗಿತ್ತು. ಇನ್ನು ರಣಬೀರ್ ಕಪೂರ್ ಅಭಿನಯದ &lsquo;ಅನಿಮಲ್&rsquo; ಕೂಡ ಸುಮಾರು 3 ಗಂಟೆ 21 ನಿಮಿಷಗಳ ರನ್&zwnj;ಟೈಮ್&zwnj;ನೊಂದಿಗೆ ತೆರೆಕಂಡಿತ್ತು. ಇಷ್ಟೊಂದು ದೀರ್ಘ ಸಿನಿಮಾಗಳನ್ನು ಪ್ರೇಕ್ಷಕರು ಸ್ವೀಕರಿಸುತ್ತಾರಾ ಎಂಬ ಅನುಮಾನಗಳಿದ್ದರೂ, ಕಂಟೆಂಟ್&zwnj; ಗಟ್ಟಿಯಾಗಿದ್ದರೆ ರನ್&zwnj;ಟೈಮ್&zwnj; ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಸಿನಿಮಾಗಳು ತೋರಿಸಿಕೊಟ್ಟವು. ಇದೇ ಸಾಲಿನಲ್ಲಿ &lsquo;ಆರ್&zwnj;ಆರ್&zwnj;ಆರ್&rsquo; ಸೇರಿದಂತೆ ಮೂರು ಗಂಟೆಗೂ ಅಧಿಕ ಅವಧಿಯ ಹಲವು ಸಿನಿಮಾಗಳು ಬಾಕ್ಸ್ ಆಫೀಸ್&zwnj;ನಲ್ಲಿ ಯಶಸ್ಸು ಕಂಡಿವೆ.&lt;/p&gt;&lt;p&gt;&lt;strong&gt;&lsquo;ಧುರಂಧರ್&rsquo; ಗೆಲುವು ಬದಲಿಸಿದ ಲೆಕ್ಕಾಚಾರ!&lt;/strong&gt;&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಸಿನಿಮಾದ ರನ್&zwnj;ಟೈಮ್&zwnj; ಬಗ್ಗೆ ಇದ್ದ ಎಲ್ಲಾ ಅನುಮಾನಗಳಿಗೆ ದೊಡ್ಡ ಉತ್ತರ ನೀಡಿದ ಸಿನಿಮಾ ಎಂದರೆ ರಣವೀರ್ ಸಿಂಗ್ ಅಭಿನಯದ &lsquo;ಧುರಂಧರ್&rsquo;. ಮೊದಲ ಭಾಗ ಬರೋಬ್ಬರಿ 3 ಗಂಟೆ 32 ನಿಮಿಷಗಳ ಅವಧಿಯೊಂದಿಗೆ ತೆರೆಕಂಡು ಸುಮಾರು ₹1,400 ಕೋಟಿ ಗಳಿಕೆ ಮಾಡಿತು. ಅದರ ಮುಂದುವರಿದ ಭಾಗ 3 ಗಂಟೆ 49 ನಿಮಿಷಗಳ ರನ್&zwnj;ಟೈಮ್&zwnj;ನೊಂದಿಗೆ ಬಂದು ಸುಮಾರು ₹1,800 ಕೋಟಿ ಕಲೆಕ್ಷನ್&zwnj; ಮಾಡಿತು. ಈ ರೀತಿಯ ಭರ್ಜರಿ ಯಶಸ್ಸುಗಳನ್ನು ನೋಡಿದ ಬಳಿಕ ಮೇಕರ್ಸ್&zwnj;ಗೂ ಒಂದು ವಿಚಾರ ಸ್ಪಷ್ಟವಾಗಿದೆ. ಸಿನಿಮಾದಲ್ಲಿ ಸರಿಯಾದ ಕಂಟೆಂಟ್&zwnj; ಇದ್ದರೆ, ಅದರ ಉದ್ದವೇ ಪ್ರೇಕ್ಷಕರಿಗೆ ದೊಡ್ಡ ಸಮಸ್ಯೆಯಾಗುವುದಿಲ್ಲ.&lt;/p&gt;&lt;h2&gt;&lt;strong&gt;ಈಗ &lsquo;ಟಾಕ್ಸಿಕ್&rsquo; ಸರದಿ!&lt;/strong&gt;&lt;/h2&gt;&lt;p&gt;ಈಗ ಇದೇ ವಿಚಾರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಸಿನಿಮಾದತ್ತ ತಿರುಗಿದೆ. ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಸಿನಿಮಾ 3 ಗಂಟೆ 14 ನಿಮಿಷಕ್ಕೂ ಹೆಚ್ಚು ರನ್&zwnj;ಟೈಮ್&zwnj; ಹೊಂದಿರಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ. ಅದಕ್ಕೂ ಮಿಗಿಲಾಗಿ ಸಿನಿಮಾ A ಸರ್ಟಿಫಿಕೇಟ್&zwnj; ಪಡೆದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಆಗಸ್ಟ್&zwnj; 26ರಂದು ತೆರೆಗೆ ಬರಲಿರುವ &lsquo;ಟಾಕ್ಸಿಕ್&rsquo; ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ.&lt;/p&gt;&lt;p&gt;ಟ್ರೇಲರ್&zwnj;, ಭರ್ಜರಿ ವಿಷುವಲ್ಸ್&zwnj;, ಹಾಡುಗಳು ಹಾಗೂ ಯಶ್ ಅವರ ವಿಭಿನ್ನ ಲುಕ್&zwnj; ಸಿನಿಮಾದ ಮೇಲಿನ ಹೈಪ್&zwnj; ಅನ್ನು ಮತ್ತಷ್ಟು ಹೆಚ್ಚಿಸಿವೆ. ಹೀಗಾಗಿ &lsquo;ಟಾಕ್ಸಿಕ್&rsquo; ವಿಚಾರದಲ್ಲೂ ಈಗ ಒಂದೇ ಪ್ರಶ್ನೆ-ಮೂರು ಗಂಟೆಗೂ ಮೀರಿದ ರನ್&zwnj;ಟೈಮ್&zwnj; ಪ್ರೇಕ್ಷಕರಿಗೆ ಸಮಸ್ಯೆಯಾಗುತ್ತಾ? ಅಥವಾ ಸಿನಿಮಾದಲ್ಲಿರುವ &lsquo;ಮ್ಯಾಟರ್&rsquo; ಎಲ್ಲವನ್ನೂ ಮರೆಸುತ್ತಾ? ಒಟ್ಟಿನಲ್ಲಿ ಇತ್ತೀಚಿನ ಬಾಕ್ಸ್ ಆಫೀಸ್&zwnj; ಫಲಿತಾಂಶಗಳನ್ನು ನೋಡಿದರೆ ಒಂದು ಮಾತು ಮಾತ್ರ ಹೇಳಬಹುದು: ಸಿನಿಮಾದಲ್ಲಿ ಮ್ಯಾಟರ್ ಇದ್ದರೆ&hellip; ರನ್&zwnj;ಟೈಮ್&zwnj; ನಿಜಕ್ಕೂ ಮ್ಯಾಟರೇ ಅಲ್ಲ!&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/are-long-movies-the-new-trend-toxic-follows-pushpa-2-animal-and-dhurandhar-gvd/articleshow-gbvxg8o"/>
        </item>
        <item>
            <title><![CDATA[ರಿಷಿಕಾ ಟೀಕೆಗೆ ತಂದೆಯ ತಿರುಗೇಟು: ಯಶ್‌ ‘ಕೊಹಿನೂರ್ ವಜ್ರ’ ಎಂದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು]]></title>
            <link>https://kannada.asianetnews.com/entertainment/toxic-controversy-rajendra-singh-babu-backs-yash-amid-daughter-rishika-criticism-gvd/articleshow-ofo9n82</link>
            <guid isPermaLink="true">https://kannada.asianetnews.com/entertainment/toxic-controversy-rajendra-singh-babu-backs-yash-amid-daughter-rishika-criticism-gvd/articleshow-ofo9n82</guid>
            <pubDate>Thu, 20 Aug 2026 17:11:49 +0530</pubDate>
            <description><![CDATA[&lt;p&gt;&lsquo;ಟಾಕ್ಸಿಕ್&rsquo; ಸಿನಿಮಾ ಕುರಿತು ರಿಷಿಕಾ ಸಿಂಗ್ ಟೀಕಿಸಿದ ಬೆನ್ನಲ್ಲೇ ತಂದೆ ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯಿಸಿದ್ದಾರೆ. ಯಶ್&zwnj; ಅವರನ್ನು ಕನ್ನಡ ಚಿತ್ರರಂಗದ &lsquo;ಕೊಹಿನೂರ್ ವಜ್ರ&rsquo; ಎಂದು ಹೊಗಳಿರುವ ಅವರು, ಮಗಳ ಅಭಿಪ್ರಾಯ ವೈಯಕ್ತಿಕ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ffjpn5et4qxer468pq9weg,imgname-bnkb-1787226053285.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್&rsquo; ಸಿನಿಮಾ ಸುತ್ತಲಿನ ಚರ್ಚೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ನಟಿ ರಿಷಿಕಾ ಸಿಂಗ್&zwnj; ಚಿತ್ರದ ಟ್ರೇಲರ್&zwnj; ಹಾಗೂ ಅದರಲ್ಲಿನ ಕೆಲವು ದೃಶ್ಯಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಟೀಕಿಸಿದ್ದ ಬೆನ್ನಲ್ಲೇ, ಇದೀಗ ಅವರ ತಂದೆ ಹಾಗೂ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ನೀಡಿರುವ ಹೇಳಿಕೆ ಗಮನ ಸೆಳೆದಿದೆ. ಮಗಳ ಅಭಿಪ್ರಾಯವನ್ನು ವೈಯಕ್ತಿಕ ನಿಲುವು ಎಂದು ಪರಿಗಣಿಸಿರುವ ರಾಜೇಂದ್ರ ಸಿಂಗ್ ಬಾಬು, ಮತ್ತೊಂದೆಡೆ ಯಶ್ ಅವರ ಸಿನಿಮಾ ಪಯಣ ಮತ್ತು &lsquo;ಟಾಕ್ಸಿಕ್&rsquo; ಸಿನಿಮಾದ ವ್ಯಾಪ್ತಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅದು ಅವರ ವೈಯಕ್ತಿಕ ಅಭಿಪ್ರಾಯ&rsquo;&lt;/strong&gt;&lt;/p&gt;&lt;p&gt;ರಿಷಿಕಾ ಸಿಂಗ್&zwnj; &lsquo;ಟಾಕ್ಸಿಕ್&rsquo; ಕುರಿತು ಮಾಡಿರುವ ಟೀಕೆಯ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ, ರಾಜೇಂದ್ರ ಸಿಂಗ್ ಬಾಬು ಅವರು ಮಗಳ ಅಭಿಪ್ರಾಯದ ಬಗ್ಗೆ ಯಾವುದೇ ವಿವಾದಕ್ಕೆ ಇಳಿಯದೆ ಅದು ಅವರ ವೈಯಕ್ತಿಕ ನಿಲುವು ಎಂದು ಹೇಳಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಅದನ್ನು ಯಾರು ಬೇಕಾದರೂ ವಿಮರ್ಶಿಸಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂಬ ನಿಲುವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ ಯಶ್ ಅವರ ಸಾಧನೆ ಹಾಗೂ ಅವರು ಕನ್ನಡ ಚಿತ್ರರಂಗಕ್ಕೆ ತಂದುಕೊಟ್ಟಿರುವ ಹೆಮ್ಮೆಯ ಬಗ್ಗೆ ಮಾತನಾಡುವಾಗ ರಾಜೇಂದ್ರ ಸಿಂಗ್ ಬಾಬು ಅವರ ಮಾತುಗಳು ಸಂಪೂರ್ಣ ಬೇರೆಯದ್ದಾಗಿದ್ದವು.&lt;/p&gt;&lt;p&gt;&lt;strong&gt;&lsquo;ಯಶ್&zwnj; ಬಗ್ಗೆ ನಮಗೆ ಹೆಮ್ಮೆ ಇರಬೇಕು&rsquo;&lt;/strong&gt;&lt;/p&gt;&lt;p&gt;ಯಶ್ ಮಾಡುತ್ತಿರುವ ಸಿನಿಮಾಗಳ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕು ಎಂದು ಹೇಳಿರುವ ರಾಜೇಂದ್ರ ಸಿಂಗ್ ಬಾಬು, &lsquo;ಟಾಕ್ಸಿಕ್&rsquo; ಮೂಲಕ ಯಶ್ ತಮ್ಮ ಮಾರುಕಟ್ಟೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಶ್ ಅವರ ಸಿನಿಮಾಗಾಗಿ ದೇಶಾದ್ಯಂತ ಪ್ರೇಕ್ಷಕರು ಕಾಯುತ್ತಿದ್ದಾರೆ. ಇಂತಹ ದೊಡ್ಡ ಮಟ್ಟದ ಸಿನಿಮಾವನ್ನು ಮಾಡುವ ಮೂಲಕ ಅವರು ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಮತ್ತೊಮ್ಮೆ ತೋರಿಸಿದ್ದಾರೆ ಎಂಬ ಅಭಿಪ್ರಾಯವನ್ನು ಹಿರಿಯ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕನ್ನಡ ಇಂಡಸ್ಟ್ರಿಯ ಕೊಹಿನೂರ್ ವಜ್ರ&rsquo;&lt;/strong&gt;&lt;/p&gt;&lt;p&gt;ಯಶ್ ಅವರನ್ನು ಹೊಗಳಿದ ರಾಜೇಂದ್ರ ಸಿಂಗ್ ಬಾಬು, &lsquo;ಯಶ್ ನಮ್ಮ ಕನ್ನಡ ಇಂಡಸ್ಟ್ರಿಗೆ ಕೊಹಿನೂರ್ ವಜ್ರ ಇದ್ದಂತೆ&rsquo; ಎಂದು ಬಣ್ಣಿಸಿದ್ದಾರೆ. ಯಶ್ ಅವರ ಬೆಳವಣಿಗೆ ಮತ್ತು ಅವರು ಕನ್ನಡ ಸಿನಿಮಾವನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯುತ್ತಿರುವ ರೀತಿಯ ಬಗ್ಗೆ ತಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮಗಳು ಚಿತ್ರದ ಬಗ್ಗೆ ಟೀಕೆ ಮಾಡಿದ್ದರೂ, ತಂದೆಯಾಗಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಪ್ರತ್ಯೇಕವಾಗಿ ಇಟ್ಟುಕೊಂಡು ಯಶ್ ಅವರ ಸಾಧನೆಯನ್ನು ಬೆಂಬಲಿಸಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ರಿಷಿಕಾ ಸಿಂಗ್&zwnj; ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಇದಕ್ಕೂ ಮುನ್ನ ರಿಷಿಕಾ ಸಿಂಗ್&zwnj;, &lsquo;ಟಾಕ್ಸಿಕ್&rsquo; ಟ್ರೇಲರ್&zwnj;ನಲ್ಲಿರುವ ಕೆಲವು ದೃಶ್ಯಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಮಹಿಳೆಯರನ್ನು ಗೌರವಯುತವಾಗಿ ತೋರಿಸಲಾಗಿಲ್ಲ ಎಂಬುದು ಅವರ ಪ್ರಮುಖ ಆರೋಪವಾಗಿತ್ತು. ಯಶ್ ಒಬ್ಬ ಜವಾಬ್ದಾರಿಯುತ ಪತಿ ಹಾಗೂ ತಂದೆಯಾಗಿರುವ ಹಿನ್ನೆಲೆಯಲ್ಲಿ, ಮಹಿಳೆಯರನ್ನು ಗೌರವಿಸದ ರೀತಿಯ ದೃಶ್ಯಗಳಲ್ಲಿ ನಟಿಸಲು ಹೇಗೆ ಒಪ್ಪಿಕೊಂಡರು ಎಂಬ ಪ್ರಶ್ನೆಯನ್ನೂ ಅವರು ಸಾಮಾಜಿಕ ಜಾಲತಾಣದ ವಿಡಿಯೋ ಮೂಲಕ ಎತ್ತಿದ್ದರು.&lt;/p&gt;&lt;p&gt;ಅವರ ಈ ಹೇಳಿಕೆ ವೈರಲ್ ಆದ ಬಳಿಕ ಯಶ್ ಅಭಿಮಾನಿಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಅದೇ ವಿವಾದದ ನಡುವೆ ರಾಜೇಂದ್ರ ಸಿಂಗ್ ಬಾಬು ಅವರು ಯಶ್ ಅವರನ್ನು &lsquo;ಕನ್ನಡ ಚಿತ್ರರಂಗದ ಕೊಹಿನೂರ್ ವಜ್ರ&rsquo; ಎಂದು ಕರೆದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನು &lsquo;ಟಾಕ್ಸಿಕ್&rsquo; ಸಿನಿಮಾ ತೆರೆಗೆ ಬಂದ ಬಳಿಕವೇ ಈ ಎಲ್ಲಾ ಚರ್ಚೆಗಳಿಗೆ ಸಿನಿಮಾ ಯಾವ ರೀತಿಯಲ್ಲಿ ಉತ್ತರ ನೀಡಲಿದೆ ಎಂಬ ಕುತೂಹಲ ಇದೀಗ ಮತ್ತಷ್ಟು ಹೆಚ್ಚಾಗಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/toxic-controversy-rajendra-singh-babu-backs-yash-amid-daughter-rishika-criticism-gvd/articleshow-ofo9n82"/>
        </item>
        <item>
            <title><![CDATA[‘ರಾಮಾಯಣ’ದಲ್ಲಿ ರಾವಣನ ಗರ್ಜನೆ ಯಾರದ್ದು? ಯಶ್ ವಾಯ್ಸ್ ಬಗ್ಗೆ ಪ್ರಜ್ವಲ್ ದೇವರಾಜ್ ಕೊಟ್ರು ಸ್ಪಷ್ಟನೆ!]]></title>
            <link>https://kannada.asianetnews.com/entertainment/ramayana-yash-himself-lent-his-voice-to-ravana-confirms-prajwal-devraj-gvd/articleshow-amvgqw6</link>
            <guid isPermaLink="true">https://kannada.asianetnews.com/entertainment/ramayana-yash-himself-lent-his-voice-to-ravana-confirms-prajwal-devraj-gvd/articleshow-amvgqw6</guid>
            <pubDate>Thu, 20 Aug 2026 16:42:51 +0530</pubDate>
            <description><![CDATA[&lt;p&gt;Yash Ravana Voice: &lsquo;ರಾಮಾಯಣ&rsquo; ಟ್ರೇಲರ್&zwnj;ನಲ್ಲಿ ರಾವಣನಾಗಿ ಯಶ್ ಅವರ ಗಂಭೀರ ಧ್ವನಿ ಕೇಳಿಬಂದಿತ್ತು. ಈ ಧ್ವನಿ ದೇವರಾಜ್ ಅವರದ್ದು ಎಂಬ ವದಂತಿಗೆ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0fdw6zs1ckyqe8sjnewswbk,imgname-vh-1787224267769.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುನಿರೀಕ್ಷಿತ &lsquo;ರಾಮಾಯಣ&rsquo; ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್&zwnj;ನಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರ ಲುಕ್ ಮತ್ತು ಗಂಭೀರ ಧ್ವನಿ ಅಭಿಮಾನಿಗಳ ಗಮನ ಸೆಳೆದಿತ್ತು. ಆದರೆ ಈ ಧ್ವನಿ ಯಶ್ ಅವರದ್ದೇನಾ ಅಥವಾ ಬೇರೆ ಯಾರದ್ದಾದರೂ ಧ್ವನಿಯನ್ನು ಬಳಸಲಾಗಿದೆಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿತ್ತು.&lt;/p&gt;&lt;p&gt;ಕೆಲವರು ಟ್ರೇಲರ್&zwnj;ನಲ್ಲಿ ಕೇಳಿಬಂದ ರಾವಣನ ಗಂಭೀರ ಗರ್ಜನೆ ಸ್ಯಾಂಡಲ್&zwnj;ವುಡ್&zwnj;ನ ಹಿರಿಯ ನಟ ದೇವರಾಜ್ ಅವರದ್ದು ಎಂದು ಹೇಳಿಕೊಂಡಿದ್ದರು. ಈ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು. ಇದೀಗ ನಟ ಪ್ರಜ್ವಲ್ ದೇವರಾಜ್ ಈ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದು, ರಾವಣನ ಧ್ವನಿ ಸ್ವತಃ ಯಶ್ ಅವರದ್ದೇ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಯಶ್ ಅವರ ಧ್ವನಿಯೇ ಅದು&rsquo; ಎಂದ ಪ್ರಜ್ವಲ್&lt;/strong&gt;&lt;/p&gt;&lt;p&gt;ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿರುವ ಪ್ರಜ್ವಲ್ ದೇವರಾಜ್, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ವದಂತಿ ಹರಡಿದ ಬಳಿಕ ತಾವೇ ಯಶ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದಾಗಿ ಪ್ರಜ್ವಲ್ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ತಂದೆ, ಹಿರಿಯ ನಟ ದೇವರಾಜ್ ಅವರೊಂದಿಗೂ ಯಶ್ ಮಾತನಾಡಿದ್ದರು. ಹಿರಿಯ ನಟ ದೇವರಾಜ್ ಅವರ ಗಂಭೀರ ಧ್ವನಿಗೆ ತಮ್ಮ ಧ್ವನಿಯನ್ನು ಹೋಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಯಶ್ ಹೇಳಿದ್ದಾಗಿ ಪ್ರಜ್ವಲ್ ಬಹಿರಂಗಪಡಿಸಿದ್ದಾರೆ. ಇದರಿಂದ &lsquo;ರಾಮಾಯಣ&rsquo; ಟ್ರೇಲರ್&zwnj;ನಲ್ಲಿ ಕೇಳಿಬಂದ ಆ ಗಂಭೀರ ಕಂಠ ಬೇರೆ ಯಾರದ್ದೂ ಅಲ್ಲ, ಯಶ್ ಅವರದ್ದೇ ಎಂಬುದು ಸ್ಪಷ್ಟವಾಗಿದೆ.&lt;/p&gt;&lt;p&gt;&lt;strong&gt;ರಾವಣನ ಪಾತ್ರಕ್ಕೆ ಯಶ್ ಧ್ವನಿಯೇ ಮತ್ತಷ್ಟು ಪ್ಲಸ್?&lt;/strong&gt;&lt;/p&gt;&lt;p&gt;ರಾವಣನ ಪಾತ್ರಕ್ಕೆ ಯಶ್ ಅವರ ಗಂಭೀರ ಹಾಗೂ ನೈಸರ್ಗಿಕ ಧ್ವನಿ ಮತ್ತಷ್ಟು ತೂಕ ನೀಡಿದೆ ಎಂಬ ಅಭಿಪ್ರಾಯ ಅಭಿಮಾನಿಗಳದ್ದು. ಟ್ರೇಲರ್&zwnj;ನಲ್ಲಿ ಯಶ್ ಅವರ ಲುಕ್ ಜೊತೆಗೆ ಅವರ ವಾಯ್ಸ್ ಮಾಡಿರುವ ಇಂಪ್ಯಾಕ್ಟ್ ಕೂಡ ಗಮನ ಸೆಳೆದಿದೆ. ವಿಶೇಷವಾಗಿ ರಾವಣನ ಪಾತ್ರದ ಗಾಂಭೀರ್ಯಕ್ಕೆ ಹೊಂದುವಂತಹ ಕಂಠ ಯಶ್ ಅವರಲ್ಲಿರುವುದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇದೀಗ ಧ್ವನಿಯ ಕುರಿತಿದ್ದ ಗೊಂದಲಕ್ಕೂ ತೆರೆ ಬಿದ್ದಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;h2&gt;&lt;strong&gt;2026ರಲ್ಲಿ ಯಶ್&zwnj; ಎರಡು ದೊಡ್ಡ ಸಿನಿಮಾಗಳು&lt;/strong&gt;&lt;/h2&gt;&lt;p&gt;ಯಶ್ ಅಭಿಮಾನಿಗಳಿಗೆ 2026 ಮತ್ತೊಂದು ವಿಶೇಷ ವರ್ಷವಾಗಲಿದೆ. ಯಶ್ ನಟನೆಯ ಬಹುನಿರೀಕ್ಷಿತ &lsquo;ಟಾಕ್ಸಿಕ್&rsquo; ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಮತ್ತೊಂದೆಡೆ &lsquo;ರಾಮಾಯಣ&rsquo; ಕೂಡ ಈ ವರ್ಷದ ದೀಪಾವಳಿ ವೇಳೆಗೆ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ.&lt;/p&gt;&lt;p&gt;A few people were spreading that the Ravana voice in Ramayana was actor Devraj&rsquo;s voice. But his son Prajwal Devaraj has now cleared the air it&rsquo;s Yash&rsquo;s own voice Rumours can spread fast, but the truth speaks louder. ️Yash&rsquo;s voice. Yash&rsquo;s power. Ravana&rsquo;s roar. &hellip; pic.twitter.com/6UKnc1Usjs&lt;/p&gt;&lt;p&gt;&mdash; ♛   ♛ (@Dudey212530) August 19, 2026&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ramayana-yash-himself-lent-his-voice-to-ravana-confirms-prajwal-devraj-gvd/articleshow-amvgqw6"/>
        </item>
        <item>
            <title><![CDATA[Toxic Countdown Day 06: ಟಾಕ್ಸಿಕ್ ಕೌಂಟ್‌ಡೌನ್ 06.. ಇಂಗ್ಲಿಷ್ ಟ್ರೇಲರ್ ಬಿಡುಗಡೆಗೆ ಬಳಿಕ ಯಶ್ ಸಿನಿಮಾದ ಕ್ರೇಜ್ ಹೇಗಿದೆ? ಈ ಸ್ಟೋರಿ ನೋಡಿ!]]></title>
            <link>https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx</link>
            <guid isPermaLink="true">https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx</guid>
            <pubDate>Thu, 20 Aug 2026 12:53:28 +0530</pubDate>
            <description><![CDATA[&lt;p&gt;ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0f0v2e866t10v7vzjt40aw2,imgname-whatsapp-image-2026-08-18-at-8.36.29-pm--1--1787210598856.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 06: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 06; ಇಂಗ್ಲಿಷ್ ಟ್ರೇಲರ್ ಬಿಡುಗಡೆ ಬಳಿಕ ಟಾಕ್ಸಿಕ್ ಕ್ರೇಜ್ ವಿದೇಶದಲ್ಲಿ ಹೇಗಿದೆ?&lt;/strong&gt;&lt;/p&gt;&lt;p&gt;ಸದ್ಯದಲ್ಲೇ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗಲಿರುವ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ವ್ಯಾಪಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ನಡೆಯುತ್ತಿದೆ. ಇನ್ನೇನು, ರಾಕಿ ಭಾಯ್ ಟಾಕ್ಸಿಕ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕೇವಲ 06 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳು ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಕರ್ನಾಟಕ, ಭಾರತ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಟಾಕ್ಸಿಕ್ ಸಿನಿಮಾ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿದೆ.&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಆಗಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಜಗತ್ತಿನಾದ್ಯಂತ 12000 ಸ್ಕ್ರೀನ್&zwnj;ಗಳಲ್ಲಿ ಟಾಕ್ಸಿಕ್ ತೆರೆಕಾಣಲಿದೆ.&lt;/p&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಜಂಟಿ ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಅಪಾರ ನಿರೀಕ್ಷೆ ಸೃಷ್ಟಿಯಾಗಿರುವ ಈ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 06 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ನಿನ್ನೆ ಟಾಕ್ಸಿಕ್ ಸಿನಿಮಾ ಟ್ರೇಲರ್&zwnj;ನ ಇಂಗ್ಲಿಷ್ ವರ್ಷನ್ ಬಿಡುಗಡೆ ಆಗಿದ್ದು, ಸಖತ್ ಕ್ರೇಜ್ ಸೃಷ್ಟಿಸಿದೆ. ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 06 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 06ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 05. ಪ್ರತಿದಿನದ ಅಪ್&zwnj;ಡೇಟ್&zwnj;ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-to-the-release-of-yash-starrer-toxic-on-26-august-2026-is-underway-with-only-06-days-to-go/articleshow-zogc7xx"/>
        </item>
        <item>
            <title><![CDATA[ನನ್ನ ಯೌವನದ ಬಗ್ಗೆ ಚಿಂತಿಸಬೇಡಿ, ಬಾಬಾ ರಾಮ್‌ ದೇವ್‌ ಗೆ ತಿರುಗೇಟು ನೀಡಿದ ಕಂಗನಾ ರಣಾವತ್]]></title>
            <link>https://kannada.asianetnews.com/cine-world/do-not-worry-about-my-youth-kangana-ranaut-hits-back-at-baba-ramdev/articleshow-rlv1mgm</link>
            <guid isPermaLink="true">https://kannada.asianetnews.com/cine-world/do-not-worry-about-my-youth-kangana-ranaut-hits-back-at-baba-ramdev/articleshow-rlv1mgm</guid>
            <pubDate>Wed, 19 Aug 2026 17:52:16 +0530</pubDate>
            <description><![CDATA[&lt;p&gt;Baba Ramdev vs Kangana : ನಟಿ ಕಂಗನಾ ಹಾಗೂ ಬಾಬಾ ರಾಮ್ ದೇವ್ ಮಾತಿನ ಸಮರ ಮುಂದುವರೆದಿದೆ. ರಾಮ್ ದೇವ್ ಗೆ ಕಂಗನಾ ತಿರುಗೇಟು ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0czg8vrs7mpvy3s4fbdd16n,imgname-baba-ramdev-vs-kangana-1787142087544.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್ದೇವ್ ನಡುವಿನ ಮಾತಿನ ಸಮರ ಜೋರಾಗಿದೆ. ಕಂಗನಾ ಈಗ ರಾಮ್ ದೇವ್ ಅವರಿಗೆ ತಿರುಗೇಟು ನೀಡಿದ್ದಾರೆ. ಕಂಗನಾ ಇತ್ತೀಚೆಗೆ ಭಾರತದ ಝೆನ್ ಜಿ ಅವರನ್ನು ಗಟರ್ ಜನರೇಷನ್ ಎಂದು ಕರೆದಿದ್ದರು. ಅದಕ್ಕೆ ಬಾಬಾ ರಾಮ್ ದೇವ್ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಗನಾ ಆರೋಪವನ್ನು ರಾಮ್ ದೇವ್ ಟೀಕಿಸಿದ್ದರು. ಅದಕ್ಕೀಗ ಕಂಗನಾ ಉತ್ತರ ನೀಡಿದ್ದಾರೆ.&lt;/p&gt;&lt;h2&gt;ಉಪನ್ಯಾಸ ಮಾಡ್ಬೇಡಿ&lt;/h2&gt;&lt;p&gt;ಕಂಗನಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ದೀರ್ಘವಾದ ಪೋಸ್ಟ್ ಹಂಚಿಕೊಂಡು ರಾಮ್ದೇವ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಯೌವನ ಅಥವಾ ವೈಯಕ್ತಿಕ ಜೀವನದ ಬಗ್ಗೆ ಊಹಾಪೋಹಗಳನ್ನು ಮಾಡುವುದನ್ನು ನಿಲ್ಲಿಸಿ, ವ್ಯಕ್ತಿತ್ವದ ಬಗ್ಗೆ ಪಾಠ ಹೇಳಬೇಡಿ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಕಂಗನಾ ತಮ್ಮ ಪೋಸ್ಟ್ನಲ್ಲಿ, ತಮ್ಮ ಯೌವನ ಅಥವಾ ಬೆಡ್ರೂಮ್ ಬಗ್ಗೆ ಹಗಲುಗನಸು ಕಾಣುವುದನ್ನು ಬಾಬಾ ರಾಮ್ದೇವ್ ನಿಲ್ಲಿಸಬೇಕು ಎಂದು ಕಟುವಾಗಿ ಹೇಳಿದ್ದಾರೆ. ತಮ್ಮ ಬಗ್ಗೆ ಜನರು ಕೇವಲ ವದಂತಿ ಮತ್ತು ಗಾಸಿಪ್ಗಳ ಆಧಾರದ ಮೇಲೆ ಊಹೆ ಮಾಡಬಾರದು ಎಂದಿದ್ದಾರೆ. ಇಷ್ಟಕ್ಕೆ ನಿಲ್ಲದ ಕಂಗನಾ, ಪತಂಜಲಿ ಸಂಸ್ಥೆಗೆ ಸಂಬಂಧಿಸಿದ ವಿವಾದಗಳನ್ನೂ ಪ್ರಸ್ತಾಪಿಸಿದ್ದಾರೆ. ಸುಳ್ಳು ಅಥವಾ ತಪ್ಪು ವೈದ್ಯಕೀಯ ಜಾಹೀರಾತುಗಳ ವಿಚಾರದಲ್ಲಿ ನನಗೆ ಸುಪ್ರೀಂ ಕೋರ್ಟ್ನಿಂದ ಎಂದಿಗೂ ಛೀಮಾರಿ ಬಿದ್ದಿಲ್ಲ ಎಂದಿದ್ದಾರೆ. ಮಾತುಗಳು ಗಾಸಿಪ್ ಆಧಾರಿತವಾಗಿವೆ. ದಾಖಲೆಗಳ ಮೇಲೆ ಆಧಾರಿತವಾಗಿವೆ ಎಂದು ಕಂಗನಾ ಪ್ರತಿಪಾದಿಸಿದ್ದಾರೆ.&lt;/p&gt;&lt;h3&gt;ವಿವಾದ ಶುರುವಾಗಿದ್ದು ಹೇಗೆ?&lt;/h3&gt;&lt;p&gt;ಇತ್ತೀಚೆಗೆ Gen Z ಬಗ್ಗೆ ಮಾತನಾಡಿದ್ದ ಕಂಗನಾ, ಈ ಪೀಳಿಗೆಯನ್ನು ಗಟರ್ ಜನರೇಷನ್ ಎಂದು ಕರೆದಿದ್ದರು. ಇದಕ್ಕೆ ಬಾಬಾ ರಾಮ್ದೇವ್ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಯುವಕರನ್ನು ಇಂತಹ ಪದಗಳಿಂದ ಕರೆಯುವುದು ತಪ್ಪು ಎಂದು ಹೇಳಿದ್ದ ಅವರು, ಕಂಗನಾ ಅವರ ಹಿಂದಿನ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದರು.&lt;/p&gt;&lt;p&gt;ಇದೀಗ ರಾಮ್ದೇವ್ ಅವರ ಹೇಳಿಕೆಗೆ ಕಂಗನಾ ನೀಡಿರುವ ತಿರುಗೇಟು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇಬ್ಬರು ಜನಪ್ರಿಯ ವ್ಯಕ್ತಿಗಳ ನಡುವಿನ ಈ ವಾಕ್ಸಮರ ಮುಂದೇನು ತಿರುವು ಪಡೆಯಲಿದೆ ಕಾದುನೋಡ್ಬೇಕಿದೆ.&lt;/p&gt;]]></content:encoded>
            <category>cine-world</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/do-not-worry-about-my-youth-kangana-ranaut-hits-back-at-baba-ramdev/articleshow-rlv1mgm"/>
        </item>
        <item>
            <title><![CDATA[Vinay Gowda: ಸರ್ಕಲ್ ಗೆ ಎಷ್ಟು ಸೈಡ್ಸ್ ? ಉತ್ತರ ನೀಡಿ ಟ್ರೋಲರ್ಸ್ ಬಾಯಿಗೆ ಆಹಾರವಾದ ವಿನಯ್ ಗೌಡ]]></title>
            <link>https://kannada.asianetnews.com/cine-world/vinay-gowda-becomes-the-target-of-trolls-after-asking-how-many-sides-a-circle-has-on-kannada-bigg-boss-agni-pariksha/articleshow-bphegeu</link>
            <guid isPermaLink="true">https://kannada.asianetnews.com/cine-world/vinay-gowda-becomes-the-target-of-trolls-after-asking-how-many-sides-a-circle-has-on-kannada-bigg-boss-agni-pariksha/articleshow-bphegeu</guid>
            <pubDate>Thu, 20 Aug 2026 11:10:21 +0530</pubDate>
            <description><![CDATA[&lt;p&gt;Kannada Bigg Boss Agni Pariksha : ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ವಿನಯ್ ಗೌಡ ಕೇಳಿದ ಪ್ರಶ್ನೆಯೊಂದು ಸದ್ಯ ಚರ್ಚೆಯಲ್ಲಿದೆ. ವಿನಯ್ ಗೌಡ ತಪ್ಪು ಉತ್ತರ ನೀಡಿ ಈಗ ಟ್ರೋಲರ್ ಕೈಗೆ ಸಿಕ್ಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0etvnxr5gdnk6jg1eb7mq27,imgname-vinay-gowda-1787204327352.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಕನ್ನಡ ಸೀಸನ್ 13 ಶುರುವಾಗುವ ಮುನ್ನ ಬಿಗ್ ಬಾಸ್ ಅಗ್ನಿಪರೀಕ್ಷೆ ನಡೀತಿದೆ. ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬಂದಿರುವ ವಿನಯ್ ಗೌಡ, ಸಂಗೀತಾ ಶೃಂಗೇರಿ, ಶ್ರುತಿ ಹಾಗೂ ಚಂದನ್ ಶೆಟ್ಟಿ ಪದೇ ಪದೇ ಟ್ರೋಲ್ ಆಗ್ತಾನೆ ಇದಾರೆ. ಆದ್ರೀಗ ವಿನಯ್ ಗೌಡ ಟ್ರೋಲರ್ ಕೈಗೆ ಸರಿಯಾಗಿ ಸಿಗ್ಬಿದ್ದಿದ್ದಾರೆ. ಎಲ್ಲಿ ನೋಡಿದ್ರೂ ವಿನಯ್ ಗೌಡ, ಸರ್ಕಲ್ ಸೈಡ್ಸ್ ವಿಡಿಯೋ ಕಾಣಸಿಗ್ತಿದೆ.&lt;/p&gt;&lt;h2&gt;ಸರ್ಕಲ್ ಗೆ ಎಷ್ಟು ಸೈಡ್ಸ್?&lt;/h2&gt;&lt;p&gt;ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳ ಆಯ್ಕೆ ಮಾಡ್ತಿರುವಾಗ ವಿನಯ್ ಗೌಡ ಸರ್ಕಲ್ ಗೆ ಎಷ್ಟು ಸೈಡ್ಸ್ ಅಂತ ಪ್ರಶ್ನೆ ಕೇಳ್ತಾರೆ. ಅದಕ್ಕೆ ಸ್ಪರ್ಧಿ, ಸರ್ಕಲ್ ಗೆ ಸೈಡ್ಸ್ ಇರೋದಿಲ್ಲ ಎನ್ನುವ ಉತ್ತರ ನೀಡ್ತಾರೆ. ಸ್ವಲ್ಪ ವ್ಯಂಗ್ಯವಾಗಿ ನಗುವ ವಿನಯ್ ಗೌಡ, ಸರ್ಕಲ್ ಗೆ ಎರಡು ಸೈಡ್ಸ್. ಒಂದು ಇನ್ ಇನ್ನೊಂದು ಔಟ್ ಅಂತ ಹೇಳ್ತಾರೆ.&lt;/p&gt;&lt;p&gt;ವಿನಯ್ ಗೌಡ ಈ ಸ್ಟೇಟ್ ಮೆಂಟ್ ಕೊಟ್ಟಿದ್ದೇ ತಡ ಟ್ರೋಲರ್ಸ್ ಫುಲ್ ಆಕ್ಟಿವ್ ಆಗಿದ್ದಾರೆ. ತಮ್ಮೆಲ್ಲ ಕ್ರಿಯೇಟಿವಿ ಬಳಸಿಕೊಂಡು ವಿನಯ್ ಗೌಡ ಅವರನ್ನು ಟ್ರೋಲ್ ಮಾಡ್ತಿದ್ದಾರೆ. ಎಐ ಟೂಲ್ಸ್ ಸಹಾಯದಿಂದ ಸಿದ್ಧವಾದ ಕೆಲ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ರಲ್ಲಿ ಸ್ಕೂಲ್ ಹುಡುಗನಿಗೆ ಟೀಚರ್, ಸರ್ಕಲ್ ನಲ್ಲಿ ಎಷ್ಟು ಸೈಡ್ಸ್ ಅಂತ ಪ್ರಶ್ನೆ ಕೇಳ್ತಾರೆ. ಅದಕ್ಕೆ ವಿದ್ಯಾರ್ಥಿ ಎರಡು ಅನ್ನೋದಲ್ದೆ ಅದಕ್ಕೆ ಕಾರಣ ವಿನಯ್ ಗೌಡ ಅಂತ ಉತ್ತರ ನೀಡ್ತಾರೆ. ಈ ವಿಡಿಯೋ ನೋಡಿದ ಜನರು, ವಿನಯ್ ಗೌಡ ಅವರಿಗೆ ಕರ್ನಾಟಕದ ರೇಖಾಗಣಿತ ಪಿತಾಮಹ ಎನ್ನುವ ಬಿರುದನ್ನು ನೀಡಿದ್ದಾರೆ.&lt;/p&gt;&lt;p&gt;ಇಷ್ಟೇ ಅಲ್ಲ ಇನ್ನೂ ಅನೇಕರು, ವಿನಯ್ ಗೌಡ ವಿಡಿಯೋ ಟ್ರೋಲ್ ಮಾಡಿದ್ದು, ಸರ್ಕಲ್ ಗೆ ಎಷ್ಟು ಸೈಡ್ಸ್ ಇದೆ ಎಂಬುದನ್ನು ವಿವರಿಸಿದ್ದಾರೆ. ಸರ್ಕಲ್ ಗೆ ಯಾವುದೇ ಸೈಡ್ಸ್ ಇಲ್ಲ. ಒಂದು ನಿರಂತರ ವಕ್ರ ಅಂಚು ಅಂದ್ರೆ ಕರ್ವ್ ಎಡ್ಜನ್ನು ಅದು ಹೊಂದಿರುತ್ತೆ. ಅದಕ್ಕೆ ಕಾರ್ನರ್ ಹಾಗೂ ಸೈಡ್ಸ್ ಇರೋದಿಲ್ಲ.&lt;/p&gt;&lt;p&gt;ಕೆಲವರು ಇದನ್ನು ವಿವರಿಸಿದ್ರೆ ಮತ್ತೆ ಕೆಲವರು ಜಡ್ಜ್ ಸ್ಥಾನದಲ್ಲಿ ಕುಳಿತು ಪ್ರಶ್ನೆ ಕೇಳುವಾಗ, ಆ ಪ್ರಶ್ನೆಗೆ ಸರಿಯಾದ ಉತ್ತರ ನಿಮಗೆ ಗೊತ್ತಿರಬೇಕು ಅಂತ ವಿನಯ್ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/vinay-gowda-becomes-the-target-of-trolls-after-asking-how-many-sides-a-circle-has-on-kannada-bigg-boss-agni-pariksha/articleshow-bphegeu"/>
        </item>
        <item>
            <title><![CDATA[ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ ದುರಂಧರ್​ ನಟಿ? ಯಾರೀ ಮಿಸ್ಟ್ರಿ ಮ್ಯಾನ್​- ಜಾಲತಾಣದಲ್ಲಿ ಹಲ್​ಚಲ್​]]></title>
            <link>https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv</link>
            <guid isPermaLink="true">https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv</guid>
            <pubDate>Wed, 19 Aug 2026 18:57:24 +0530</pubDate>
            <description><![CDATA['ಶರಾರತ್' ಹಾಡಿನ ಮೂಲಕ ಖ್ಯಾತಿ ಗಳಿಸಿದ ನಟಿ ಆಯೇಷಾ ಖಾನ್, ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆ ವಜ್ರದ ಉಂಗುರವಿರುವ ಫೋಟೋ ಹಂಚಿಕೊಂಡು ನಿಶ್ಚಿತಾರ್ಥದ ಕುತೂಹಲ ಮೂಡಿಸಿದ್ದಾರೆ. ಆದರೆ, ಇದು ನಿಜವಾದ ನಿಶ್ಚಿತಾರ್ಥವೇ ಅಥವಾ ಕೇವಲ ಜ್ಯುವೆಲ್ಲರಿ ಬ್ರ್ಯಾಂಡ್&zwnj;ನ ಫೋಟೋಶೂಟೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅಭಿಮಾನಿಗಳು ಸ್ಪಷ್ಟನೆಗಾಗಿ ಕಾಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0d38djvrfkfarcv422p5mbc,imgname-ayesha-khan-1787146024539.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದ, ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾದ &lsquo;ಶರಾರತ್&rsquo; ಹಾಡಿನ ಮೂಲಕ ಭಾರೀ ಸದ್ದು ಮಾಡಿದ್ದ ನಟಿ ಆಯೇಷಾ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಗ್ಲಾಮರಸ್ ಡ್ಯಾನಸ್​ನಿಂದ ಪ್ರೇಕ್ಷಕರ ಮನ ಗೆದ್ದಿದ್ದ ಈ ನಟಿ, ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿವೆ. ಈ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ ತನಗೆ ಪೀರಿಯಡ್ಸ್​ ಆಗಿತ್ತು, ಈ ಹಾಡಿನ ಸಮಯದಲ್ಲಿ ತನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸವಾಲಿನ ಕೆಲಸವಾಗಿತ್ತು ಎಂದು ಈಚೆಗೆ ಹೇಳಿಕೊಂಡಿದ್ದು ಭಾರಿ ಸದ್ದು ಮಾಡಿದ್ದರು ನಟಿ. ಆದರೆ ಈಗ ಮತ್ತೊಂದು ವಿಷಯಕ್ಕೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿದ್ದಾರೆ.&lt;/p&gt;&lt;h3&gt;&lt;strong&gt;ಗುಟ್ಟಾಗಿ ನಿಶ್ಚಿತಾರ್ಥ?&lt;/strong&gt;&lt;/h3&gt;&lt;p&gt;ಅದೇನೆಂದರೆ, ನಟಿ ಆಯೇಷಾ ಖಾನ್ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್&zwnj;ನಲ್ಲಿ ಆಕರ್ಷಕ ವಜ್ರದ ಉಂಗುರವೂ ಇದೆ. ಹೀಗಾಗಿ ಆಯೇಷಾ ಖಾನ್ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ ಈ ಕಥೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಇದೆ. ಆಯೇಷಾ ಖಾನ್ ಇತ್ತೀಚೆಗೆ ಮಿಸ್ಟ್ರಿ ಮ್ಯಾನ್ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಅವರ ಕೈಯಲ್ಲಿರುವ ವಜ್ರದ ಉಂಗುರ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಆಯೇಷಾ ತಮ್ಮ ಜೊತೆಗಿರುವ ವ್ಯಕ್ತಿಯ ಮುಖವನ್ನು ಎಲ್ಲೂ ಬಹಿರಂಗಪಡಿಸಿಲ್ಲ. ಜೊತೆಗೆ ಕೈಯಲ್ಲಿ ಡೈಮಂಡ್ ರಿಂಗ್ ಕಾಣಿಸುತ್ತಿದ್ದರೂ, ನಿಶ್ಚಿತಾರ್ಥ ಎಂದು ಹೇಳಿಲ್ಲ. ಇದು ಯಾವುದೋ ಪ್ರಸಿದ್ಧ ಜ್ಯುವೆಲ್ಲರಿ ಬ್ರ್ಯಾಂಡ್&zwnj;ನ ಫೋಟೋಶೂಟ್ ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ.&lt;/p&gt;&lt;h2&gt;&lt;strong&gt;ಹಾಡಿನ ಶೂಟಿಂಗ್​ ಕುರಿತು&lt;/strong&gt;&lt;/h2&gt;&lt;p&gt;ಅಂದಹಾಗೆ, ಭಾರಿ ಹಲ್​ಚಲ್​ ಸೃಷ್ಟಿಸಿರೋ ಶರಾರತ್​ ಚಿತ್ರೀಕರಣದ ದಿನಗಳನ್ನು ಈಚೆಗೆ ನೆನೆದಿದ್ದ ನಟಿ, ಆ ಎರಡು ದಿನಗಳಲ್ಲಿ ಕೆಲಸದ ಹೊರೆ ಎಷ್ಟು ತೀವ್ರವಾಗಿತ್ತೆಂದರೆ ಸುತ್ತಲೂ ನೋಡಲು ಸಹ ಸಮಯವಿರಲಿಲ್ಲ ಎಂದು ಆಯೇಷಾ ವಿವರಿಸಿದರು. ಆ ಸಮಯದಲ್ಲಿ ಚಿತ್ರದ ವಿವಾಹದ ಸನ್ನಿವೇಶವನ್ನು ಸಹ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು. &quot;ನಿರಂತರ ನೃತ್ಯದಿಂದ ನಮ್ಮ ಮೂಳೆಗಳು ನೋಯುತ್ತಿದ್ದವು. ನಾವು ತುಂಬಾ ದಣಿದಿದ್ದೆವು. ಚಿತ್ರೀಕರಣ ಮುಗಿದ ನಂತರ, ನನಗೆ ಕಣ್ಣೀರು ತಡೆದುಕೊಳ್ಳಲಾಗಲಿಲ್ಲ. ನಾನು ತುಂಬಾ ಅಳಲು ಪ್ರಾರಂಭಿಸಿದೆ. ಆ ಕಣ್ಣೀರು ಸಂತೋಷದಿಂದಲೋ ಅಥವಾ ನೋವಿನಿಂದಲೋ? ಇದರ ಹೊರತಾಗಿಯೂ, ನಾನು ಅದನ್ನು ಪೂರ್ಣಗೊಳಿಸಿದೆ&quot; ಎಂದು ಹೇಳಿದ್ದರು.&lt;/p&gt;&lt;p&gt;ಸದ್ಯ, ಈಗ ನಟಿಯ ಈ ಫೋಟೋ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದ್ದು, ನಟಿ ಆಯೇಷಾ ಖಾನ್ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ವೈರಲ್ ಆಗಿರುವ ವಜ್ರದ ಉಂಗುರ ಹಾಗೂ ಮಿಸ್ಟ್ರಿ ಮ್ಯಾನ್ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದ್ದಾರೆ. ಅಭಿಮಾನಿಗಳು ಅವರ ಅಧಿಕೃತ ಅನೌನ್ಸ್&zwnj;ಮೆಂಟ್ ಒಂದಕ್ಕಾಗಿ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/is-dhurandhar-actress-ayesha-engaged-posts-pictures-flaunting-diamond-ring-with-a-mystery-man-suc/articleshow-ulfvbwv"/>
        </item>
        <item>
            <title><![CDATA[ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಟಿ ಈಗ ಸಖತ್ ಸ್ಲಿಮ್: ಅಷ್ಟಕ್ಕೂ ಯಾರು ಗೊತ್ತಾ?]]></title>
            <link>https://kannada.asianetnews.com/entertainment/actress-nivetha-thomas-stuns-fans-with-her-new-slim-look-gvd/articleshow-y231qf8</link>
            <guid isPermaLink="true">https://kannada.asianetnews.com/entertainment/actress-nivetha-thomas-stuns-fans-with-her-new-slim-look-gvd/articleshow-y231qf8</guid>
            <pubDate>Wed, 19 Aug 2026 22:57:00 +0530</pubDate>
            <description><![CDATA[&lt;p&gt;ನಟಿ ನಿವೇತಾ ಥಾಮಸ್&zwnj; ಇತ್ತೀಚೆಗೆ ತಮ್ಮ ಹೊಸ ಲುಕ್&zwnj;ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dfeb0vb0dg2wb04cgd6j8k,imgname-hh-1787158801435.png" type="image/jpeg" height="390" width="690"/>
            <content:encoded><![CDATA[&lt;p&gt;90ರ ದಶಕದ ಮಕ್ಕಳಿಗೆ ಚಿರಪರಿಚಿತವಾಗಿರುವ &lsquo;ಮೈ ಡಿಯರ್ ಭೂತಂ&rsquo; ಧಾರಾವಾಹಿಯ ಬಾಲನಟಿ ನಿವೇತಾ ಥಾಮಸ್&zwnj; ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿರುವ ನಿವೇತಾ, ಇತ್ತೀಚೆಗೆ ತಮ್ಮ ಹೊಸ ಲುಕ್&zwnj;ನ ಫೋಟೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ನಟಿ ಸಾಕಷ್ಟು ತೂಕ ಇಳಿಸಿಕೊಂಡಿರುವುದು ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ.&lt;/p&gt;&lt;p&gt;&lt;strong&gt;&lsquo;ಮೈ ಡಿಯರ್ ಭೂತಂ&rsquo;ನ ಪುಟಾಣಿ ಈಗ ಹೀರೋಯಿನ್!&lt;/strong&gt;&lt;/p&gt;&lt;p&gt;ನಿವೇತಾ ಥಾಮಸ್&zwnj; ಅವರಿಗೆ ತಮಿಳು ಕಿರುತೆರೆಯ ಮೂಲಕವೇ ಬಾಲ್ಯದಲ್ಲಿ ದೊಡ್ಡ ಜನಪ್ರಿಯತೆ ಸಿಕ್ಕಿತ್ತು. ಅದರಲ್ಲೂ 90ರ ದಶಕದ ಮಕ್ಕಳ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾಗಿದ್ದ &lsquo;ಮೈ ಡಿಯರ್ ಭೂತಂ&rsquo;ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದರು. ಶಾಲೆ ಮುಗಿಸಿ ಮನೆಗೆ ಬಂದ ಕೂಡಲೇ ನೋಡುತ್ತಿದ್ದ ಧಾರಾವಾಹಿಗಳ ಪಟ್ಟಿಯಲ್ಲಿ &lsquo;ಮೈ ಡಿಯರ್ ಭೂತಂ&rsquo; ಕೂಡ ಇತ್ತು ಎಂದು ಇಂದಿಗೂ ಅನೇಕ 90s ಕಿಡ್ಸ್&zwnj;ಗಳು ನೆನಪಿಸಿಕೊಳ್ಳುತ್ತಾರೆ. ಕಿರುತೆರೆಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡ ನಿವೇತಾ, ನಂತರ ಬೆಳ್ಳಿತೆರೆಗೆ ಕಾಲಿಟ್ಟರು. ತಮಿಳು ಮಾತ್ರವಲ್ಲದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದ ನಿವೇತಾ!&lt;/strong&gt;&lt;/p&gt;&lt;p&gt;ನಿವೇತಾ ಥಾಮಸ್&zwnj; ನಟನೆಯ ಕೊನೆಯ ಪ್ರಮುಖ ಚಿತ್ರಗಳಲ್ಲಿ &lsquo;35 ಚಿನ್ನ ಕಥಾ ಕಾಡು&rsquo; ಕೂಡ ಒಂದು. 2024ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ನಿವೇತಾ ಇಬ್ಬರು ಮಕ್ಕಳ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನೂ ಹೆಚ್ಚಿಸಿಕೊಂಡಿದ್ದರು. ಸಿನಿಮಾ ಬಿಡುಗಡೆಯಾದ ಬಳಿಕ ನಿವೇತಾ ಅವರ ಬದಲಾಗಿದ್ದ ಲುಕ್&zwnj; ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸಾಕಷ್ಟು ಚರ್ಚೆ ನಡೆಸಿದ್ದರು. ನಟಿಯ ತೂಕ ಹೆಚ್ಚಾಗಿರುವುದನ್ನು ಗಮನಿಸಿದ ಕೆಲವರು ಕೂಡ ಪ್ರತಿಕ್ರಿಯೆ ನೀಡಿದ್ದರು.&lt;/p&gt;&lt;h2&gt;&lt;strong&gt;ಈಗ ಸ್ಲಿಮ್ ಲುಕ್&zwnj;ನಲ್ಲಿ ನಿವೇತಾ ಥಾಮಸ್&zwnj;!&lt;/strong&gt;&lt;/h2&gt;&lt;p&gt;ಇದೀಗ ಅದೇ ನಿವೇತಾ ಥಾಮಸ್&zwnj; ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಬದಲಾದ ಲುಕ್&zwnj;ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪಾತ್ರಕ್ಕಾಗಿ ದೇಹದಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಮತ್ತೆ ತಮ್ಮ ಫಿಟ್ ಲುಕ್&zwnj;ಗೆ ಮರಳಿರುವ ನಿವೇತಾ, ಹೊಸ ಫೋಟೋ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. &lsquo;ಮೈ ಡಿಯರ್ ಭೂತಂ&rsquo;ನ ಪುಟ್ಟ ಬಾಲನಟಿಯಿಂದ ದಕ್ಷಿಣ ಭಾರತದ ಬಹುಭಾಷಾ ನಾಯಕಿಯವರೆಗೆ ಬೆಳೆದಿರುವ ನಿವೇತಾ ಅವರ ಈ ಹೊಸ ಲುಕ್&zwnj; ಇದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-nivetha-thomas-stuns-fans-with-her-new-slim-look-gvd/articleshow-y231qf8"/>
        </item>
        <item>
            <title><![CDATA[ಪುಟ್ನಂಜ ನಟಿ ಮೀನಾ ಪತಿಯನ್ನು ಉಳಿಸಲು ಮಾಡಿದ್ದ ಪ್ರಯತ್ನಗಳೆಷ್ಟು? ಇಷ್ಟು ದಿನದ ಬಳಿಕ ಬಯಲಾಯ್ತು ಸತ್ಯ]]></title>
            <link>https://kannada.asianetnews.com/entertainment/actress-meena-reveals-the-struggle-to-save-husband-vidyasagar-gvd/articleshow-4doolt4</link>
            <guid isPermaLink="true">https://kannada.asianetnews.com/entertainment/actress-meena-reveals-the-struggle-to-save-husband-vidyasagar-gvd/articleshow-4doolt4</guid>
            <pubDate>Wed, 19 Aug 2026 22:13:31 +0530</pubDate>
            <description><![CDATA[&lt;p&gt;ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0defgjah09bx06dncxq632r,imgname-bjbj-1787157791306.png" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಭಾರತದ ಹಿರಿಯ ನಟಿ ಮೀನಾ ಅವರ ವೈಯಕ್ತಿಕ ಜೀವನದಲ್ಲಿ 2022ರ ವರ್ಷ ಮರೆಯಲಾಗದ ನೋವನ್ನು ತಂದಿತ್ತು. ಬಹಳ ವರ್ಷಗಳ ಕಾಲ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದ ನಟಿ, ಅದೇ ಸಮಯದಲ್ಲಿ ಪತಿ ವಿದ್ಯಾಸಾಗರ್ ಅವರನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದರು. ಪತಿಯ ನಿಧನದ ಬಳಿಕ ಅವರ ಸಾವಿನ ಕುರಿತು ಹಲವು ರೀತಿಯ ಸುದ್ದಿಗಳು ಹಾಗೂ ಊಹಾಪೋಹಗಳು ಹರಿದಾಡಿದ್ದವು. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ, ಪತಿಯನ್ನು ಉಳಿಸಿಕೊಳ್ಳಲು ತಾವು ಹಾಗೂ ಕುಟುಂಬ ನಡೆಸಿದ ಹೋರಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;ಪತಿಯನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ಮಾಡಿದ್ದೆವು!&lt;/strong&gt;&lt;/p&gt;&lt;p&gt;ಸಂದರ್ಶನದಲ್ಲಿ ತಮ್ಮ ಪತಿಯ ಆರೋಗ್ಯದ ಸ್ಥಿತಿಯನ್ನು ನೆನಪಿಸಿಕೊಂಡ ಮೀನಾ ಭಾವುಕರಾಗಿದ್ದಾರೆ. ವಿದ್ಯಾಸಾಗರ್ ಅವರಿಗೆ ಶ್ವಾಸಕೋಶ ಕಸಿ (Lung Transplant) ಅಗತ್ಯವಿತ್ತು. ಆದರೆ ಇಂತಹ ದೊಡ್ಡ ವೈದ್ಯಕೀಯ ಪ್ರಕ್ರಿಯೆ ಎಷ್ಟು ಸಂಕೀರ್ಣವಾಗಿರುತ್ತದೆ ಎಂಬುದು ಆರಂಭದಲ್ಲಿ ತಮಗೆ ತಿಳಿದಿರಲಿಲ್ಲ ಎಂದು ನಟಿ ಹೇಳಿದ್ದಾರೆ. ಚಿಕಿತ್ಸೆ ಹಲವು ದಿನಗಳ ಕಾಲ ಮುಂದುವರಿದಂತೆ ಅವರ ಪತಿಯ ಆರೋಗ್ಯ ಮತ್ತಷ್ಟು ಕ್ಷೀಣಿಸತೊಡಗಿತ್ತು. ಒಂದು ಹಂತದಲ್ಲಿ ದೇಹ ಯಾವುದೇ ಚಿಕಿತ್ಸೆಗೆ ಸ್ಪಂದಿಸದ ಪರಿಸ್ಥಿತಿ ಎದುರಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಕುಟುಂಬ ಕೊನೆಯವರೆಗೂ ಹೋರಾಡಿತ್ತು ಎಂದು ಮೀನಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಲಂಗ್ಸ್&zwnj;ಗಾಗಿ ದೇಶಾದ್ಯಂತ ಹುಡುಕಾಟ!&lt;/strong&gt;&lt;/p&gt;&lt;p&gt;ಪತಿಗೆ ಸೂಕ್ತವಾದ ಶ್ವಾಸಕೋಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಮೀನಾ ಭಾರತದೆಲ್ಲೆಡೆ ಪ್ರಯತ್ನ ನಡೆಸಿದ್ದರಂತೆ. ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಲಂಗ್ಸ್&zwnj;ಗಾಗಿ ಹುಡುಕಾಟ ನಡೆಸಿದ್ದಾಗಿ ಅವರು ಹೇಳಿದ್ದಾರೆ. ಒಂದು ಹಂತದಲ್ಲಿ ಉತ್ತಮ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಯೋಚನೆಯೂ ಕುಟುಂಬಕ್ಕೆ ಬಂದಿತ್ತು. ಅಲ್ಲಿ ಸಂಬಂಧಿಕರು ಹಾಗೂ ವೈದ್ಯರೂ ಇದ್ದ ಕಾರಣ ಆ ಸಾಧ್ಯತೆಯನ್ನು ಪರಿಶೀಲಿಸಿದ್ದರು. ಆದರೆ ಅಲ್ಲಿಗೆ ತೆರಳಿದರೂ ನಡೆಯುತ್ತಿರುವ ಚಿಕಿತ್ಸೆಯೇ ಮುಂದುವರಿಯಬೇಕಾಗುತ್ತದೆ ಹಾಗೂ ಆ ಸ್ಥಿತಿಯಲ್ಲಿ ಅವರನ್ನು ಸ್ಥಳಾಂತರಿಸುವುದು ಸೂಕ್ತವಲ್ಲ ಎಂಬ ಸಲಹೆ ವೈದ್ಯರಿಂದ ಬಂದಿತ್ತು. ಹೀಗಾಗಿ ಭಾರತದಲ್ಲೇ ಉಳಿದುಕೊಂಡು ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ಕೊಡಿಸಲು ಕುಟುಂಬ ನಿರ್ಧರಿಸಿತ್ತು.&lt;/p&gt;&lt;p&gt;&lt;strong&gt;ಹಲವು ಬಾರಿ ಟ್ರಾನ್ಸ್&zwnj;ಪ್ಲಾಂಟ್&zwnj;ಗೆ ಸಿದ್ಧರಾಗಿಯೂ ನಿರಾಸೆ!&lt;/strong&gt;&lt;/p&gt;&lt;p&gt;ಶ್ವಾಸಕೋಶ ಕಸಿ ಪ್ರಕ್ರಿಯೆಯಲ್ಲಿ ಹಲವು ವೈದ್ಯಕೀಯ ಮಾನದಂಡಗಳು ಹಾಗೂ ಹೊಂದಾಣಿಕೆಯ ಅವಶ್ಯಕತೆಗಳಿರುತ್ತವೆ. ಮೀನಾ ಅವರ ಪ್ರಕಾರ, ಕೆಲವು ಬಾರಿ ಲಂಗ್ಸ್&zwnj; ಲಭ್ಯವಾಗಿದೆ ಎಂಬ ಮಾಹಿತಿ ಬಂದರೂ, ಅಂತಿಮ ಹಂತದಲ್ಲಿ ಅಗತ್ಯ ಹೊಂದಾಣಿಕೆ ಆಗದೆ ಕಸಿ ಸಾಧ್ಯವಾಗಿರಲಿಲ್ಲ. ಮೂರು-ನಾಲ್ಕು ಬಾರಿ ಟ್ರಾನ್ಸ್&zwnj;ಪ್ಲಾಂಟ್&zwnj;ಗೆ ಸಿದ್ಧರಾಗಿ ಕೊನೆಯ ಕ್ಷಣದಲ್ಲಿ ಹೊಂದಾಣಿಕೆಯಾಗದೆ ಹಿಂದಿರುಗಬೇಕಾದ ಸಂದರ್ಭಗಳೂ ಎದುರಾಗಿದ್ದವು ಎಂದು ನಟಿ ಹೇಳಿದ್ದಾರೆ. ಈ ಸಂಪೂರ್ಣ ಪರಿಸ್ಥಿತಿ ತಮ್ಮ ಹಾಗೂ ಕುಟುಂಬದವರಿಗೆ ಹೊಸದಾಗಿತ್ತು. ಏನು ಮಾಡಬೇಕು, ಹೇಗೆ ಎದುರಿಸಬೇಕು ಎಂಬುದೇ ಅರ್ಥವಾಗದಷ್ಟು ಕಠಿಣ ಸಮಯವಾಗಿತ್ತು ಎಂದು ಮೀನಾ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅವರನ್ನು ಉಳಿಸಿಕೊಳ್ಳಲು ಶತವಿಧವಾಗಿ ಪ್ರಯತ್ನಿಸಿದೆವು&rsquo;&lt;/strong&gt;&lt;/p&gt;&lt;p&gt;ಪತಿಯ ಆರೋಗ್ಯಕ್ಕಾಗಿ ಸಾಧ್ಯವಿದ್ದ ಪ್ರತಿಯೊಂದು ಪ್ರಯತ್ನವನ್ನೂ ಮಾಡಿದ್ದರೂ, ಕೊನೆಗೆ ವಿಧಿಯ ಮುಂದೆ ಕುಟುಂಬ ಸೋಲಬೇಕಾಯಿತು ಎಂದು ಮೀನಾ ಭಾವುಕರಾಗಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ದುರದೃಷ್ಟವಶಾತ್ ವಿದ್ಯಾಸಾಗರ್ ತಮ್ಮನ್ನು ಅಗಲಿದರು ಎಂದು ಅವರು ಹೇಳಿದ್ದಾರೆ. ಪತಿಯ ನಿಧನದ ಬಳಿಕ ತಾವು ಹಲವು ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಆ ನೋವಿನಿಂದ ಸಂಪೂರ್ಣವಾಗಿ ಹೊರಬರುವುದು ಸುಲಭವಾಗಿರಲಿಲ್ಲ. ಇಂದಿಗೂ ಕೆಲವು ಸವಾಲುಗಳಿವೆ. ಆದರೆ ಸ್ನೇಹಿತರು ಹಾಗೂ ಸಿನಿಮಾಗಳ ಮೂಲಕ ನಿಧಾನವಾಗಿ ಆ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಮೀನಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಪತಿಯ ಸಾವಿನ ಬಗ್ಗೆ ಹಲವು ವದಂತಿಗಳು&lt;/strong&gt;&lt;/h2&gt;&lt;p&gt;ವಿದ್ಯಾಸಾಗರ್ ಅವರ ನಿಧನದ ಬಳಿಕ ಅವರ ಸಾವಿಗೆ ಸಂಬಂಧಿಸಿದಂತೆ ಹಲವು ರೀತಿಯ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ಮೀನಾ ನೀಡಿರುವ ಹೇಳಿಕೆ, ಪತಿಯ ಆರೋಗ್ಯ ಸ್ಥಿತಿ ಹಾಗೂ ಅವರನ್ನು ಉಳಿಸಿಕೊಳ್ಳಲು ಕುಟುಂಬ ನಡೆಸಿದ ಹೋರಾಟದ ಮತ್ತೊಂದು ಮುಖವನ್ನು ತೆರೆದಿಟ್ಟಿದೆ. ಸುಮಾರು ಮೂರು ದಶಕಗಳ ಕಾಲ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನಪ್ರಿಯ ನಾಯಕಿಯಾಗಿ ಗುರುತಿಸಿಕೊಂಡಿರುವ ಮೀನಾ, ವೈಯಕ್ತಿಕ ಜೀವನದ ಈ ಕಠಿಣ ಅಧ್ಯಾಯವನ್ನು ಇಷ್ಟು ವರ್ಷಗಳ ಬಳಿಕ ಮನಬಿಚ್ಚಿ ಹಂಚಿಕೊಂಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/actress-meena-reveals-the-struggle-to-save-husband-vidyasagar-gvd/articleshow-4doolt4"/>
        </item>
        <item>
            <title><![CDATA[‘ಭಯ ಹುಟ್ಟಿಸುವ ಸಂಗತಿಗಳಿಗೂ ಯೆಸ್ ಹೇಳಿ’: ಯಶ್ ‘ಟಾಕ್ಸಿಕ್’ ಅನುಭವ ಬಿಚ್ಚಿಟ್ಟ ಕಿಯಾರಾ]]></title>
            <link>https://kannada.asianetnews.com/entertainment/kiara-advani-opens-up-about-her-toxic-journey-with-yash-gvd/articleshow-qnrdy80</link>
            <guid isPermaLink="true">https://kannada.asianetnews.com/entertainment/kiara-advani-opens-up-about-her-toxic-journey-with-yash-gvd/articleshow-qnrdy80</guid>
            <pubDate>Wed, 19 Aug 2026 21:48:07 +0530</pubDate>
            <description><![CDATA[&lt;p&gt;Kiara Advani: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್&rsquo; ಪಯಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dd0j76s5ca5rthvv5a3hm5,imgname-ik-1787156252902.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್&rsquo; ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದ್ದು, ಈಗಾಗಲೇ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ. ಈ ನಡುವೆ ಸಿನಿಮಾದಲ್ಲಿ ಯಶ್&zwnj;ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, &lsquo;ಟಾಕ್ಸಿಕ್&rsquo; ಪಯಣದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ಟಾಕ್ಸಿಕ್&rsquo; ನನಗೆ ಹೊಸದನ್ನು ಕಲಿಸಿತು!&lt;/strong&gt;&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನ ತಮ್ಮ ಅನುಭವವನ್ನು ಹಂಚಿಕೊಂಡಿರುವ ಕಿಯಾರಾ, ಸಿನಿಮಾಗಳು ನಮಗೆ ಪರಿಚಯವೇ ಇಲ್ಲದ ಜಗತ್ತಿನೊಳಗೆ ಕರೆದೊಯ್ಯುವ ಅದ್ಭುತ ಶಕ್ತಿ ಹೊಂದಿವೆ ಎಂದು ಹೇಳಿದ್ದಾರೆ. ಪ್ರತಿಯೊಂದು ಹೊಸ ಪಾತ್ರ, ಹೊಸ ಸೆಟ್ ಹಾಗೂ ಹೊಸ ಸವಾಲುಗಳು ನಮ್ಮೊಳಗೆ ನಮಗೇ ಗೊತ್ತಿರದ ಸಾಮರ್ಥ್ಯವನ್ನು ಪರಿಚಯಿಸುತ್ತವೆ. &lsquo;ಟಾಕ್ಸಿಕ್&rsquo; ಸಿನಿಮಾ ಕೂಡ ತಮ್ಮನ್ನು ಹಲವು ರೀತಿಯಲ್ಲಿ ಹೊಸ ಅನುಭವಗಳಿಗೆ ತೆರೆದುಕೊಂಡಿದೆ ಎಂದು ಕಿಯಾರಾ ಹೇಳಿದ್ದಾರೆ. &lsquo;ಪರಿಚಯವಿಲ್ಲದ ಸಂಗತಿಗಳೊಂದಿಗೆ ಹೊಂದಿಕೊಳ್ಳಲು, ಕುತೂಹಲದಿಂದ ಇರಲು, ನಿರಂತರವಾಗಿ ಕಲಿಯಲು ಮತ್ತು ಈ ಸಂಪೂರ್ಣ ಪಯಣದಲ್ಲಿರುವ ಖುಷಿಯನ್ನು ಕಂಡುಕೊಳ್ಳಲು ಈ ಸಿನಿಮಾ ನನಗೆ ಕಲಿಸಿತು&rsquo; ಎಂಬ ಅರ್ಥದಲ್ಲಿ ಅವರು ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಭಯ ಹುಟ್ಟಿಸುವ ಸಂಗತಿಗಳಿಗೆ &lsquo;ಯೆಸ್&rsquo; ಹೇಳಬೇಕು!&lt;/strong&gt;&lt;/p&gt;&lt;p&gt;ತಮ್ಮ ಬೆಳವಣಿಗೆಗೆ ಹೊಸ ಸವಾಲುಗಳನ್ನು ಸ್ವೀಕರಿಸುವುದೇ ಕಾರಣ ಎಂದು ಹೇಳಿರುವ ಕಿಯಾರಾ, ತಮ್ಮನ್ನು ಸ್ವಲ್ಪ ಭಯಪಡಿಸುವ ವಿಚಾರಗಳಿಗೂ &lsquo;ಯೆಸ್&rsquo; ಎನ್ನುವುದರಲ್ಲಿ ತಾವು ನಂಬಿಕೆ ಇಟ್ಟಿರುವುದಾಗಿ ತಿಳಿಸಿದ್ದಾರೆ. &lsquo;ನನ್ನ ಪಾಲಿಗೆ ಬೆಳವಣಿಗೆ ಎಂದರೆ, ಸ್ವಲ್ಪ ಭಯ ಹುಟ್ಟಿಸುವ ಸಂಗತಿಗಳಿಗೆ ಹೌದು ಎನ್ನುವುದು ಮತ್ತು ಅದರ ನಂತರದ ಪಯಣವನ್ನು ಪ್ರೀತಿಸುವುದು&rsquo; ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಹೊಸ ಕೌಶಲ್ಯಗಳು, ಹೊಸ ಸಾಹಸಗಳು ಹಾಗೂ ಮತ್ತೆ ಮತ್ತೆ ಹೊಸ ಅನುಭವಗಳಿಗೆ ಧುಮುಕುವಂತೆ ಮಾಡುವ ಉತ್ಸಾಹದ ಬಗ್ಗೆ ಕಿಯಾರಾ ತಮ್ಮ ಪೋಸ್ಟ್&zwnj;ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಯಶ್&zwnj;ಗೆ ಜೋಡಿಯಾಗಿ &lsquo;ನಾದಿಯಾ&rsquo;!&lt;/strong&gt;&lt;/p&gt;&lt;p&gt;&lsquo;ಟಾಕ್ಸಿಕ್&rsquo; ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾದಿಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಈಗಾಗಲೇ ಕುತೂಹಲ ಮೂಡಿಸಿದೆ. ಕಿಯಾರಾ ಹಾಗೂ ಯಶ್ ಕಾಂಬಿನೇಷನ್ ಹೇಗೆ ಮೂಡಿಬರಲಿದೆ ಎಂಬುದರ ಬಗ್ಗೆಯೂ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಇವರ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರತಂಡದಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಆಗಸ್ಟ್ 26ಕ್ಕೆ &lsquo;ಟಾಕ್ಸಿಕ್&rsquo; ರಿಲೀಸ್!&lt;/strong&gt;&lt;/h2&gt;&lt;p&gt;&lsquo;KGF&rsquo; ಸರಣಿಯ ಬಳಿಕ ಯಶ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಎಂಬ ಕಾರಣಕ್ಕೆ &lsquo;ಟಾಕ್ಸಿಕ್&rsquo; ಈಗಾಗಲೇ ದೇಶಾದ್ಯಂತ ಸದ್ದು ಮಾಡುತ್ತಿದೆ. ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಚಿತ್ರ ವಿಭಿನ್ನ ಕಥೆ ಹಾಗೂ ಮೇಕಿಂಗ್ ಮೂಲಕ ಗಮನ ಸೆಳೆಯುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆಗೂ ಮುನ್ನ ಕಿಯಾರಾ ಹಂಚಿಕೊಂಡಿರುವ ಈ ಭಾವುಕ ಬರಹ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಆಗಸ್ಟ್ 26ರಂದು &lsquo;ಟಾಕ್ಸಿಕ್&rsquo; ತೆರೆಗೆ ಬಂದ ಬಳಿಕ ಅವರ ಈ ಹೊಸ ಅನುಭವ ಪ್ರೇಕ್ಷಕರಿಗೆ ಹೇಗನಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kiara-advani-opens-up-about-her-toxic-journey-with-yash-gvd/articleshow-qnrdy80"/>
        </item>
        <item>
            <title><![CDATA[ಕಿರಿಯ ತಮಿಳು ನಟನಿಗೆ ‘ಸರ್’ ಎಂದ ಶಿವಣ್ಣ: ‘ನಿಮ್ಮ ಸ್ಥಾನವೇ ಬೇರೆ’ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಿಗರು]]></title>
            <link>https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig</link>
            <guid isPermaLink="true">https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig</guid>
            <pubDate>Wed, 19 Aug 2026 20:06:58 +0530</pubDate>
            <description><![CDATA[&lt;p&gt;Shivarajkumar Viral Video: ಸ್ಯಾಂಡಲ್&zwnj;ವುಡ್&zwnj;ನ ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0d7739rk038b60f71tqqwzx,imgname-hvhvh-1787150175544.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ಅವರ ಸರಳತೆ ಹಾಗೂ ಕಿರಿಯ ನಟರನ್ನು ಪ್ರೋತ್ಸಾಹಿಸುವ ಗುಣಕ್ಕೆ ಅಭಿಮಾನಿಗಳಿಂದ ಸದಾ ಮೆಚ್ಚುಗೆ ವ್ಯಕ್ತವಾಗುತ್ತಿರುತ್ತದೆ. ಆದರೆ ಇದೀಗ ಇದೇ ಶಿವಣ್ಣ ಅವರ ಮಾತಿನಲ್ಲೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ತಮಿಳು ನಟ ಪ್ರದೀಪ್ ರಂಗನಾಥನ್ ಅವರನ್ನು ಶಿವರಾಜ್&zwnj;ಕುಮಾರ್ ಹೊಗಳಿರುವ ವಿಡಿಯೋವೊಂದು ವೈರಲ್ ಆಗಿದ್ದು, ಕೆಲ ಕನ್ನಡಿಗರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಪ್ರದೀಪ್ ರಂಗನಾಥನ್&zwnj;ಗೆ ಶಿವಣ್ಣ ಮೆಚ್ಚುಗೆ&lt;/strong&gt;&lt;/p&gt;&lt;p&gt;ಇತ್ತೀಚೆಗೆ ನಡೆದ ಆನಂದ ವಿಕಟನ್ ಪ್ರಶಸ್ತಿ ಸಮಾರಂಭದಲ್ಲಿ ಶಿವರಾಜ್&zwnj;ಕುಮಾರ್ ಭಾಗವಹಿಸಿದ್ದರು. ಈ ವೇಳೆ &lsquo;ಟೂರಿಸ್ಟ್ ಫ್ಯಾಮಿಲಿ&rsquo; ಚಿತ್ರದ ಅಭಿನಯಕ್ಕಾಗಿ ನಟ ಅಭಿಷನ್ ಜೀವಿಂತ್ ಅವರಿಗೆ ಶಿವಣ್ಣ ಪ್ರಶಸ್ತಿ ಪ್ರದಾನ ಮಾಡಿದರು. ಅಭಿಷನ್ ಅವರ ಅಭಿನಯ ಹಾಗೂ ನಿರ್ದೇಶಕ ಗೌತಮ್ ಶಿವರಾಮನ್ ಅವರ ಕಥೆ, ನಿರ್ದೇಶನದ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನಾಡಿದರು. &lsquo;ಟೂರಿಸ್ಟ್ ಫ್ಯಾಮಿಲಿ&rsquo; ಸಿನಿಮಾ ನೋಡಿದ ಬಳಿಕ ತಮಗೆ ತುಂಬಾ ಸಂತೋಷವಾಯಿತು. ಅಭಿಷನ್ ಅವರ ಪಾತ್ರ ತಮ್ಮ ಮನಸ್ಸಿಗೆ ತಟ್ಟಿತು. ಅವರ ನಿರ್ದೇಶನ ಶೈಲಿಯೂ ಬಹಳ ಇಷ್ಟವಾಯಿತು ಎಂದು ಶಿವರಾಜ್&zwnj;ಕುಮಾರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳಿನ ಯುವ ನಟ ಪ್ರದೀಪ್ ರಂಗನಾಥನ್ ಬಗ್ಗೆಯೂ ಶಿವಣ್ಣ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ನಿಮ್ಮ ಅಭಿಮಾನಿ&rsquo; ಎಂದ ಶಿವಣ್ಣ&lt;/strong&gt;&lt;/p&gt;&lt;p&gt;ಪ್ರದೀಪ್ ರಂಗನಾಥನ್ ಅವರನ್ನು ಹೊಗಳಿದ ಶಿವರಾಜ್&zwnj;ಕುಮಾರ್, ಅವರ ಸಿನಿಮಾಗಳನ್ನು ತಾವು ಇಷ್ಟಪಡುವುದಾಗಿ ಹೇಳಿದ್ದಾರೆ. ಅಲ್ಲದೆ, ಪ್ರದೀಪ್ ಅವರಿಗೆ &lsquo;ಸರ್&rsquo; ಎಂದು ಸಂಬೋಧಿಸಿ ತಲೆ ಬಾಗಿ ನಮಸ್ಕರಿಸಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರದೀಪ್ ರಂಗನಾಥನ್ ಅವರು ನಟ ಧನುಷ್ ಅವರ ಅಭಿಮಾನಿ ಎಂಬ ವಿಚಾರವನ್ನು ಉಲ್ಲೇಖಿಸಿದ ಶಿವಣ್ಣ, ಅವರನ್ನು ನೋಡಿದಾಗ ಧನುಷ್ ಅವರನ್ನು ನೋಡಿದಂತಾಗುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಇದೇ ವೇಳೆ ತಾನು ಕೂಡ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಶಿವಣ್ಣ ಮಾತಿಗೆ ಕೆಲ ಕನ್ನಡಿಗರ ಬೇಸರ&lt;/strong&gt;&lt;/p&gt;&lt;p&gt;ಶಿವಣ್ಣ ಅವರ ಈ ನಡೆಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಕೆಲವು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದಶಕಗಳ ಅನುಭವ ಹೊಂದಿರುವ ಶಿವರಾಜ್&zwnj;ಕುಮಾರ್, ಕಡಿಮೆ ಸಿನಿಮಾಗಳನ್ನು ಮಾಡಿರುವ ಯುವ ನಟನಿಗೆ ಈ ರೀತಿ &lsquo;ಸರ್&rsquo; ಎಂದು ಸಂಬೋಧಿಸುವ ಅಗತ್ಯವೇನಿತ್ತು? ಎಂದು ಕೆಲ ನೆಟ್ಟಿಗರು ಪ್ರಶ್ನಿಸಿದ್ದಾರೆ. &lsquo;ಶಿವಣ್ಣ ಅವರಂತಹ ಹಿರಿಯ ನಟರು ಯುವ ಕಲಾವಿದರನ್ನು ಗೌರವಿಸುವುದು ಒಳ್ಳೆಯ ವಿಚಾರ. ಆದರೆ ಕನ್ನಡದ ಹಿರಿಯ ನಟನೊಬ್ಬ ಕಿರಿಯ ನಟನಿಗೆ ತಲೆಬಾಗಿ ನಮಸ್ಕರಿಸುವ ದೃಶ್ಯವನ್ನು ನೋಡಲು ಮುಜುಗರವಾಗುತ್ತಿದೆ&rsquo; ಎಂಬ ಅಭಿಪ್ರಾಯವೂ ಕೆಲವರಿಂದ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;&lsquo;ಇಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದೀರಿ, ನೀವು ಸರ್ ಅಲ್ಲವೇ?&rsquo;&lt;/strong&gt;&lt;/h2&gt;&lt;p&gt;ವೈರಲ್ ಕ್ಲಿಪ್ ಹಂಚಿಕೊಂಡಿರುವ ಕೆಲ ಅಭಿಮಾನಿಗಳು, ಶಿವರಾಜ್&zwnj;ಕುಮಾರ್ ಅವರ ಸಿನಿ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. 20ಕ್ಕೂ ಹೆಚ್ಚು ಯಶಸ್ವಿ ಸಿನಿಮಾಗಳನ್ನು ನೀಡಿರುವ, ದಶಕಗಳ ಅನುಭವ ಹೊಂದಿರುವ ಶಿವಣ್ಣ ಅವರು ಕಿರಿಯ ನಟನಿಗೆ ಇಷ್ಟು ಗೌರವ ತೋರಿಸುವ ಅಗತ್ಯವಿತ್ತೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇನ್ನೂ ಕೆಲವರು ಮಾತ್ರ ಶಿವಣ್ಣ ಅವರ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದು, ಹಿರಿಯ ನಟನೊಬ್ಬ ಕಿರಿಯ ಕಲಾವಿದನ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ಅವರ ದೊಡ್ಡತನ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಯುವ ನಟನ ಮೇಲಿನ ಶಿವಣ್ಣ ಅವರ ಮೆಚ್ಚುಗೆಗಿಂತ ಅವರು ಬಳಸಿದ ಸಂಬೋಧನೆ ಹಾಗೂ ತಲೆಬಾಗಿ ನಮಸ್ಕರಿಸಿದ ಕ್ಷಣವೇ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ. ವೈರಲ್ ವಿಡಿಯೋಗೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಶಿವಣ್ಣ ಅವರ ಅಭಿಮಾನಿಗಳಲ್ಲೂ ಚರ್ಚೆ ಮುಂದುವರಿದಿದೆ.&lt;/p&gt;&lt;p&gt;I&rsquo;m a huge fan of @dhanushkraja, whenever I see you, I feel like seeing #Dhanush.~ Kannada Superstar Shiva rajKumar.#OM #Dhanush #ShivaRajkumar #KannadaSuperstar pic.twitter.com/UdVbaxzj69&lt;/p&gt;&lt;p&gt;&mdash; Dhanush Karthick.D (@DhanushKarthiDK) August 18, 2026&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/shivanna-praises-pradeep-ranganathan-his-sir-remark-sparks-discussion-gvd/articleshow-630hsig"/>
        </item>
        <item>
            <title><![CDATA[‘ಹೌದು, ನಾನು ಹೆಮ್ಮೆಯ ಅಂಧಭಕ್ತೆ’: ‘ಸೂರ್ಯವಂಶ’ ನಟಿಯ ಖಡಕ್ ಹೇಳಿಕೆ, ವೈರಲ್ ಆಯ್ತು ಇಶಾ ಕೊಪ್ಪಿಕರ್ ವಿಡಿಯೋ]]></title>
            <link>https://kannada.asianetnews.com/entertainment/isha-koppikar-says-i-am-proud-to-be-an-andhbhakt-video-sparks-mixed-reactions-gvd/articleshow-m5iom1b</link>
            <guid isPermaLink="true">https://kannada.asianetnews.com/entertainment/isha-koppikar-says-i-am-proud-to-be-an-andhbhakt-video-sparks-mixed-reactions-gvd/articleshow-m5iom1b</guid>
            <pubDate>Wed, 19 Aug 2026 17:14:43 +0530</pubDate>
            <description><![CDATA[&lt;p&gt;ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಒಂದು ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಯಾವುದೇ ಮುಜುಗರವಿಲ್ಲದೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರುವ ನಟಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cxc5bnc2ac8exm2avj5xf5,imgname-n-n-1787139855733.png" type="image/jpeg" height="390" width="690"/>
            <content:encoded><![CDATA[&lt;p&gt;ಬಹುಭಾಷಾ ನಟಿ ಇಶಾ ಕೊಪ್ಪಿಕರ್ ಇದೀಗ ತಮ್ಮ ಒಂದು ಹೇಳಿಕೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಯಾವುದೇ ಮುಜುಗರವಿಲ್ಲದೆ ತಮ್ಮ ಅಭಿಪ್ರಾಯವನ್ನು ನೇರವಾಗಿ ಹಂಚಿಕೊಂಡಿರುವ ನಟಿ, &lsquo;ನಾನು ಹೆಮ್ಮೆಯ ಅಂಧಭಕ್ತೆ&rsquo; ಎಂದು ಹೇಳಿಕೊಂಡಿದ್ದಾರೆ. ಇಶಾ ಕೊಪ್ಪಿಕರ್ ಹಂಚಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆಗೂ ಕಾರಣವಾಗಿದೆ. ಕನ್ನಡದ &lsquo;ಸೂರ್ಯವಂಶ&rsquo; ಸಿನಿಮಾದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ಇಶಾ ಕೊಪ್ಪಿಕರ್, ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಮ್ಮ &lsquo;ಅಂಧಭಕ್ತೆ&rsquo; ಎಂಬ ಹೇಳಿಕೆಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ಹೆಮ್ಮೆಯ ಅಂಧಭಕ್ತೆ&rsquo;&lt;/strong&gt;&lt;/p&gt;&lt;p&gt;ವಿಡಿಯೋದಲ್ಲಿ ಮಾತನಾಡಿರುವ ಇಶಾ ಕೊಪ್ಪಿಕರ್, ದೇಶವನ್ನು ಪ್ರೀತಿಸುವುದು, ಅದರ ಪ್ರಗತಿಯನ್ನು ಕಂಡು ಹೆಮ್ಮೆಪಡುವುದೇ &lsquo;ಭಕ್ತಿ&rsquo; ಎಂದಾದರೆ, ತಮ್ಮನ್ನು ಭಕ್ತೆ ಅಥವಾ ಅಂಧಭಕ್ತೆ ಎಂದು ಕರೆಯುವುದರಲ್ಲಿ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. ಆದರೆ ತಮ್ಮ ಈ ಭಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಭಾರತದ ಮೇಲಿನ ಪ್ರೀತಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೇಶವೇ ತಮಗೆ ಮೊದಲ ಆದ್ಯತೆ ಎಂದು ಹೇಳಿರುವ ಇಶಾ, ಸರ್ಕಾರದ ನೀತಿಗಳ ಬಗ್ಗೆ ಪ್ರಶ್ನಿಸುವ ಹಕ್ಕು ಹಾಗೂ ಭಿನ್ನಾಭಿಪ್ರಾಯ ಹೊಂದುವ ಸ್ವಾತಂತ್ರ್ಯವೂ ತನಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ದೇಶ ನನಗೆ ಏನು ಕೊಟ್ಟಿದೆ ಅನ್ನೋದಕ್ಕಿಂತ&hellip;&rsquo;&lt;/strong&gt;&lt;/p&gt;&lt;p&gt;ತಮ್ಮ ಮಾತಿನಲ್ಲಿ ದೇಶದ ಬಗ್ಗೆ ಜನರ ಚಿಂತನಾ ಕ್ರಮ ಬದಲಾಗಬೇಕು ಎಂಬ ಅಭಿಪ್ರಾಯವನ್ನೂ ಇಶಾ ವ್ಯಕ್ತಪಡಿಸಿದ್ದಾರೆ. &lsquo;ದೇಶ ನಮಗೆ ಏನು ಮಾಡಿದೆ?&rsquo; ಎಂದು ಪ್ರಶ್ನಿಸುವುದಕ್ಕಿಂತ, &lsquo;ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು?&rsquo; ಎಂದು ಯೋಚಿಸುವ ಸಮಯ ಬಂದಿದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. ಭಾರತ ವೇಗವಾಗಿ ಬದಲಾಗುತ್ತಿದ್ದು, ಹೊಸ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದೇ ವೇಳೆ, ತಮ್ಮನ್ನು ಭಕ್ತೆ, ಅಂಧಭಕ್ತೆ ಅಥವಾ ರಾಷ್ಟ್ರವಾದಿ ಎಂದು ಯಾವುದಾದರೂ ಹೆಸರಿನಿಂದ ಕರೆಯಬಹುದು. ಆದರೆ ತಾನು ಭಾರತೀಯಳು ಮತ್ತು ತನ್ನ ದೇಶವನ್ನು ಪ್ರೀತಿಸುತ್ತೇನೆ ಎಂಬುದು ಮಾತ್ರ ಮುಖ್ಯ ಎಂದು ಇಶಾ ಕೊಪ್ಪಿಕರ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಂಧಭಕ್ತಿ&rsquo; ಎಂದರೆ ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ!&lt;/strong&gt;&lt;/p&gt;&lt;p&gt;ವಿಡಿಯೋ ಮಾತ್ರವಲ್ಲದೆ, ಇಶಾ ಕೊಪ್ಪಿಕರ್ ತಮ್ಮ ಇನ್&zwnj;ಸ್ಟಾಗ್ರಾಂ ಪೋಸ್ಟ್&zwnj;ನ ಕ್ಯಾಪ್ಷನ್&zwnj;ನಲ್ಲಿಯೂ ಇದೇ ವಿಚಾರವನ್ನು ಮತ್ತಷ್ಟು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಭಾರತವನ್ನು ಪ್ರೀತಿಸುವುದೇ &lsquo;ಅಂಧಭಕ್ತಿ&rsquo; ಎಂದು ಕರೆಯುವುದಾದರೆ, ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ತಪ್ಪು ಎಂದು ಅನಿಸಿದ ವಿಚಾರಗಳನ್ನು ಪ್ರಶ್ನಿಸುವ ಮತ್ತು ಸರಿಯೆಂದು ಕಂಡದ್ದನ್ನು ಮೆಚ್ಚುವ ಹಕ್ಕು ತನಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ದೇಶವೇ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಇಶಾ ಕೊಪ್ಪಿಕರ್ ಅವರ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕೆಲವರು ನಟಿಯ ದೇಶಪ್ರೇಮದ ನಿಲುವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಶಾ ಕೊಪ್ಪಿಕರ್ ಅವರ ಸಿನಿಮಾ ಹಿನ್ನೆಲೆಯನ್ನೂ ಗಮನಿಸಿದರೆ, ಅವರು ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ &lsquo;ಸೂರ್ಯವಂಶ&rsquo; ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಇಂದಿಗೂ ಪರಿಚಿತ. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿರುವ ಇಶಾ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.&lt;/p&gt;View this post on Instagram&lt;p&gt;A post shared by Isha Koppikar (@isha_konnects)&lt;/p&gt;]]></content:encoded>
            <category>cine-world</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/isha-koppikar-says-i-am-proud-to-be-an-andhbhakt-video-sparks-mixed-reactions-gvd/articleshow-m5iom1b"/>
        </item>
        <item>
            <title><![CDATA[ನಟ ಗೋವಿಂದಾ ಜೊತೆ ಕಿತ್ತಾಟದ ಬಳಿಕ ಬಿಗ್ ಟ್ವಿಸ್ಟ್, ಸುನಿತಾ ಕೌಟುಂಬಿಕ ಕೋರ್ಟ್‌ಗೆ ಹಾಜರಾಗಿದ್ದೇಕೆ?]]></title>
            <link>https://kannada.asianetnews.com/cine-world/big-twist-after-feud-with-actor-govinda-sunita-ahuja-withdraws-divorce-petition/articleshow-yvdfnns</link>
            <guid isPermaLink="true">https://kannada.asianetnews.com/cine-world/big-twist-after-feud-with-actor-govinda-sunita-ahuja-withdraws-divorce-petition/articleshow-yvdfnns</guid>
            <pubDate>Wed, 19 Aug 2026 17:08:06 +0530</pubDate>
            <description><![CDATA[ಶುಗರ್ ಡ್ಯಾಡಿ ಎಂದು ಆರೋಪಿಸಿದ ಬಳಿಕ ಸುನಿತಾ ಅಹುತಾ ಹಾಗೂ ಪತಿ ನಟ ಗೋವಿಂದಾ ನಡುವಿನ ಜಗಳ ತಾರಕಕ್ಕೇರಿತ್ತು. ಇದರ ಬೆನ್ನಲ್ಲೇ ಕೌಟುಂಬಿಕ ನ್ಯಾಯಾಲಯದಲ್ಲಿ ಸುನಿತಾ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0cm4frn28bf8kh4s8q7x8gf,imgname-sunita-ahuja-divorce-1787130167059.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ (ಆ.19) ಬಾಲಿವುಡ್ ನಟ ಗೋವಿಂದಾ ವೈಯುಕ್ತಿಕ ಬದಕು ಇತ್ತೀಚೆಗೆ ಭಾರಿ ಚರ್ಚೆಯಾಗಿತ್ತು. ಯುವ ತಾರೆಯೊಂದಿಗೆ ಗೋವಿಂದಾ ಕಾಣಿಸಿಕೊಂಡ ಬೆನ್ನಲ್ಲೇ ಪತ್ನಿ ಸುನಿತಾ ಅಹುಜಾ ಕೆಂಡ ಕಾರಿದ್ದಾಳೆ. ಶುಗರ್ ಡ್ಯಾಡಿ ಎಂದು ಆರೋಪಿಸಿದ್ದ ಸುನೀತಾ ಅಹುಜಾಗೆ ಹದ್ದುಬಸ್ತಿನಲ್ಲಿ ಇರುವಂತೆ ಬಹಿರಂಗವಾಗಿಯೇ ಗೋವಿಂದಾ ವಾರ್ನಿಂಗ್ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸುನೀತಾ ಅಹುಜಾ ಕೌಟುಂಬಿಕ ನ್ಯಾಯಾಲದಲ್ಲಿ ಕಾಣಿಸಿಕೊಳ್ಳೋ ಮೂಲಕ ಭಾರಿ ಅಚ್ಚರಿಗೆ ಕಾರಣವಾಗಿದ್ದು. ಇದೀಗ ಬಿಗ್ ಟ್ವಿಸ್ಟ್ ನೀಡಿದ್ದಾರೆ.&lt;/p&gt; &lt;p&gt;ಬಾಲಿವುಡ್&zwnj;ನ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಬಿಕ್ಕಟ್ಟು ಕೊನೆಗೂ ಬಗೆಹರಿದಿದೆ. ಅನೇಕ ದಿನಗಳ ಸಾರ್ವಜನಿಕ ಜಗಳ, ಆರೋಪ-ಪ್ರತ್ಯಾರೋಪ, ವದಂತಿಗಳ ಸುಳಿಯ ನಂತರ&mdash; ಸುನೀತಾ ಅಹುಜಾ ಅವರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ ಎಂದು ಮ್ಯಾನೇಜರ್ ಖಚಿತಪಡಿಸಿದ್ದಾರೆ. ಡಿವೋರ್ಸ್ ಖಚಿತ ಎಂದೇ ಭಾವಿಸಿದ್ದ ವೇಳೆ ದಿಢೀರ್ ಪ್ರಕರಣ ಸುಖಾಂತ್ಯ ಕಂಡಿದೆ. &lt;/p&gt; &lt;p&gt; ದಂಪತಿಯ 38 ವರ್ಷಗಳ ದಾಂಪತ್ಯದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಸಾರ್ವಜನಿಕವಾಗಿ ತೀವ್ರ ಚರ್ಚೆಯಲ್ಲಿದ್ದ ವಿಚ್ಛೇದನ ಗೊಂದಲಕ್ಕೆ ಈಗ ತೆರೆ ಬಿದ್ದಿದೆ ಎಂದು ಗೋವಿಂದಾ ಮ್ಯಾನೇಜರ್ ಹೇಳಿದ್ದಾರೆ. &lt;/p&gt; &lt;h2&gt;ವಿಚ್ಛೇದನ ಅರ್ಜಿಯ ಹಿಂದಿನ ಕಾರಣಗಳು&lt;/h2&gt; &lt;p&gt;ಏನಾಗಿತ್ತು? ಹಿಂದೆ ಗೋವಿಂದ ಮತ್ತು ಸುನೀತಾ ನಡುವೆ ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಭುಗಿಲೆದ್ದಿದ್ದವು. ಸುನೀತಾ ಅಹುಜಾ, ಗೋವಿಂದರನ್ನು &quot;ಶುಗರ್ ಡ್ಯಾಡಿ&quot; ಎಂದು ಗಂಭೀರವಾಗಿ ಆರೋಪಿಸಿದ್ದರು. ಈ ಆರೋಪ ಬಾಲಿವುಡ್&zwnj;ನಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿತು. ಜೊತೆಗೆ, ಚಿತ್ರರಂಗದಲ್ಲಿ ಹೊಸದಾಗಿ ಗುರುತಿಸಿಕೊಂಡಿದ್ದ ಕೋಮಲ್ ರಾಣಿ ಸ್ವರ್ಣಕರ್ ಜೊತೆ ಗೋವಿಂದ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು. ಈ 'ಶುಗರ್ ಡ್ಯಾಡಿ' ಹೇಳಿಕೆ ಹಾಗೂ ಹೊಸ ಗೆಳತಿಯ ವದಂತಿಗಳ ಹಿನ್ನೆಲೆಯಲ್ಲಿ ಸುನೀತಾ ಅವರು ಡಿಸೆಂಬರ್ 2024 ರಲ್ಲಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಎಲ್ಲ ಘಟನೆಗಳ ನಂತರ ಸುನೀತಾ ಅರ್ಜಿ ಹಿಂಪಡೆದರು.&lt;/p&gt; &lt;h2&gt;ಸಂಬಂಧಗಳ ಹೊಸ ತಿರುವು&lt;/h2&gt; &lt;p&gt;'ಯಾವುದೇ ಪ್ರತ್ಯೇಕತೆ ಇಲ್ಲ, ದಂಪತಿಗಳು ಒಟ್ಟಾಗಿದ್ದಾರೆ' &ndash; ಗೋವಿಂದ ಅವರ ದೀರ್ಘಕಾಲದ ವ್ಯವಸ್ಥಾಪಕ ಶಶಿ ಸಿನ್ಹಾ ಹೀಗೆ ಸ್ಪಷ್ಟಪಡಿಸಿದ್ದಾರೆ. ಸುನೀತಾ ಅಹುಜಾ ವಿಚ್ಛೇದನ ಅರ್ಜಿ ಹಿಂಪಡೆದ ಸುದ್ದಿಯನ್ನು ಅವರು ದೃಢಪಡಿಸಿದರು. 'ಇದು ಸಂತೋಷದ ಸುದ್ದಿ' ಎಂದ ಸಿನ್ಹಾ, ಇಡೀ ಕುಟುಂಬಕ್ಕೆ ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದರು. ಕುಟುಂಬದ ಖಾಸಗಿ ವಿಷಯಗಳು ಸಾರ್ವಜನಿಕ ಚರ್ಚೆಯಾದದ್ದು ತಮಗೆ ವೈಯಕ್ತಿಕವಾಗಿ ಬೇಸರ ತಂದಿದೆ. 'ಕುಟುಂಬದ ವಿಷಯಗಳು ಖಾಸಗಿಯಾಗಿ ಉಳಿಯಬೇಕು' ಎಂದು ಅವರು ಮತ್ತೊಮ್ಮೆ ಹೇಳಿದರು. ಸುನೀತಾ ನಿರ್ಧಾರ ಅವರ ದೀರ್ಘಕಾಲದ ದಾಂಪತ್ಯಕ್ಕೆ ಹೊಸ ಭರವಸೆ ನೀಡಿದೆ ಎಂದು ಸಿನ್ಹಾ ತಿಳಿಸಿದರು.&lt;/p&gt; &lt;h2&gt;ದಾಂಪತ್ಯದ ಸೂಕ್ಷ್ಮತೆಗಳು&lt;/h2&gt; &lt;p&gt;ಸುನೀತಾ ಅಹುಜಾ ವಿಚ್ಛೇದನ ಅರ್ಜಿ ಹಿಂಪಡೆದಿದ್ದು ಬರೀ ಕಾನೂನು ನಿರ್ಧಾರವಲ್ಲ. ಸಂಬಂಧಗಳನ್ನು ಉಳಿಸಿಕೊಳ್ಳುವ ಅವರ ಗಟ್ಟಿ ಇಚ್ಛಾಶಕ್ತಿಯನ್ನು ಇದು ತೋರಿಸುತ್ತದೆ. ದಾಂಪತ್ಯದ ಏರಿಳಿತಗಳ ನಡುವೆಯೂ ದಂಪತಿ ತಮ್ಮ ಬದ್ಧತೆಯನ್ನು ಮತ್ತೆ ತೋರಿಸಿದ್ದಾರೆ. ಗೋವಿಂದರ ವ್ಯವಸ್ಥಾಪಕ ಶಶಿ ಸಿನ್ಹಾ, &quot;ತಮ್ಮ ತಪ್ಪನ್ನು ಅರಿತು ಮನೆಗೆ ಮರಳುವವರ ಕಥೆ ಇದು, ಅದು ಒಳ್ಳೆಯ ವಿಷಯ&quot; ಎಂದಿದ್ದಾರೆ. ಈ ಮಾತುಗಳು ದಾಂಪತ್ಯದ ಸೂಕ್ಷ್ಮತೆ, ಕ್ಷಮೆ, ರಾಜಿ ನಿರ್ಧಾರದ ಮಹತ್ವವನ್ನು ತೆರೆದಿಡುತ್ತವೆ. ಮಕ್ಕಳ ಭವಿಷ್ಯ, ಕುಟುಂಬದ ಏಕತೆ, 38 ವರ್ಷಗಳ ಬಾಂಧವ್ಯ &ndash; ಇವೇ ಸುನೀತಾ ನಿರ್ಧಾರದ ಹಿಂದಿನ ಪ್ರಮುಖ ಕಾರಣ ಎಂದು ವರದಿಯಾಗಿದೆ.&lt;/p&gt; &lt;p&gt;38 ವರ್ಷಗಳ ದಾಂಪತ್ಯದಲ್ಲಿ ಈ ನಿರ್ಧಾರ ಹೊಸ ಅಧ್ಯಾಯ ತೆರೆಯಿತು. ಸಾರ್ವಜನಿಕವಾಗಿ ಎದುರಾದ ಭಿನ್ನಾಭಿಪ್ರಾಯಗಳು, ಗಂಭೀರ ಆರೋಪಗಳು, ವ್ಯಾಪಕ ವದಂತಿಗಳ ನಡುವೆಯೂ ಗೋವಿಂದ-ಸುನೀತಾ ತಮ್ಮ ಸಂಬಂಧ ಉಳಿಸಿಕೊಳ್ಳಲು ಅಚಲ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಪ್ರೀತಿ, ತಿಳುವಳಿಕೆ, ಪರಸ್ಪರ ಗೌರವದಿಂದ ಎಲ್ಲ ಅಡೆತಡೆಗಳನ್ನು ನಿವಾರಿಸಬಹುದು ಎಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆ. ಬಾಲಿವುಡ್&zwnj;ನ ಇತರ ದಂಪತಿಗಳಿಗೆ ಅವರ ಬದ್ಧತೆ, ಸಂಘರ್ಷ ನಿರ್ವಹಣೆ ಮಾದರಿಯಾಗಬಹುದು.&lt;/p&gt;]]></content:encoded>
            <category>cine-world</category>
            <dc:creator>Chethan Kumar</dc:creator>
            <atom:link href="https://kannada.asianetnews.com/cine-world/big-twist-after-feud-with-actor-govinda-sunita-ahuja-withdraws-divorce-petition/articleshow-yvdfnns"/>
        </item>
        <item>
            <title><![CDATA[ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಶುರುವಾಗೋ ಡೇಟ್ 'ಇದು'.. 12 ಸಾವಿರ ಸ್ಕ್ರೀನ್‌ಗಳಲ್ಲಿ 'ರಾಕಿ ಭಾಯ್‌' ಯಶ್ ಅಬ್ಬರ!]]></title>
            <link>https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin</link>
            <guid isPermaLink="true">https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin</guid>
            <pubDate>Wed, 19 Aug 2026 15:45:14 +0530</pubDate>
            <description><![CDATA[&lt;p&gt;'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್&zwnj;ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cpf9qy7a4x3rezrcymwztc,imgname-whatsapp-image-2026-08-07-at-4.37.55-pm-1787132618494.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Toxic: A Fairy Tale for Grown-ups Advance Booking Starts: ಯಶ್&zwnj; ನಟನೆಯ ʻಟಾಕ್ಸಿಕ್&zwnj;ʼ ಚಿತ್ರದ ಮುಂಗಡ ಬುಕಿಂಗ್ ವರಮಹಾಲಕ್ಷ್ಮಿ ಹಬ್ಬ, 25 ಆಗಸ್ಟ್ 2026ರಂದು ಶುರುವಾಗಲಿದೆ.&lt;/strong&gt;&lt;/p&gt;&lt;p&gt;'ಟಾಕ್ಸಿಕ್' ಅಬ್ಬರಕ್ಕೆ ಮುಹೂರ್ತ ಫಿಕ್ಸ್: 12 ಸಾವಿರ ಪರದೆಗಳಲ್ಲಿ ರಾಕಿ ಭಾಯ್ ಅಲೆ - ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಬರ್ತಿದ್ದಾನೆ 'ಗ್ಲೋಬಲ್ ಸ್ಟಾರ್'!&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನಿಂದ ಜಾಗತಿಕ ಮಟ್ಟದವರೆಗೆ ತನ್ನ ಸಾಮ್ರಾಜ್ಯ ವಿಸ್ತರಿಸಿರೋ 'ರಾಕಿಂಗ್ ಸ್ಟಾರ್' ಯಶ್ ಅವರ ಮುಂದಿನ ಅಸ್ತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಈಗ ಇಡೀ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. 'ಕೆಜಿಎಫ್' ನಂತರ ಯಶ್ ಯಾವ ಸಿನಿಮಾ ಮಾಡ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಹಬ್ಬವೋ ಹಬ್ಬ! ಹೌದು, 'ಟಾಕ್ಸಿಕ್' ಸಿನಿಮಾದ ಬಿಡುಗಡೆಯ ದಿನಗಣನೆ ಅಧಿಕೃತವಾಗಿ ಶುರುವಾಗಿದ್ದು, ಬಾಕ್ಸ್ ಆಫೀಸ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ.&lt;/p&gt;&lt;h2&gt;ವರಮಹಾಲಕ್ಷ್ಮಿ ಹಬ್ಬಕ್ಕೆ 'ಟಾಕ್ಸಿಕ್' ಟಿಕೆಟ್ ಗಿಫ್ಟ್!&lt;/h2&gt;&lt;p&gt;ಯಶ್ ಅವರ ಸಿನಿಮಾಗಳೆಂದರೆ ಅಲ್ಲಿ ಒಂದು ಪ್ಲ್ಯಾನಿಂಗ್ ಇರುತ್ತೆ. ಅದರಂತೆ, ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಆಗಸ್ಟ್ 26 ರಂದು ಸಿನಿಮಾ ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಅದಕ್ಕಿಂತ ಐದು ದಿನ ಮೊದಲೇ ಅಂದರೆ ಆಗಸ್ಟ್ 21 ರಿಂದಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಲಿದೆ. ಹಬ್ಬದ ದಿನವೇ ರಾಕಿ ಭಾಯ್ ನೋಡಲು ಟಿಕೆಟ್ ಬುಕ್ ಮಾಡೋ ಅವಕಾಶ ಸಿಕ್ಕಿರೋದಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.&lt;/p&gt;&lt;p&gt;12 ಸಾವಿರ ಸ್ಕ್ರೀನ್&zwnj;ಗಳಲ್ಲಿ 'ಟಾಕ್ಸಿಕ್' ಆರ್ಭಟ!&lt;/p&gt;&lt;p&gt;ಈಗ ಕೇಳಿ ಬರ್ತಿರೋ ಅಸಲಿ ಸುದ್ದಿ ಅಂದ್ರೆ, ಈ ಚಿತ್ರದ ಸ್ಕೇಲ್! 'ಟಾಕ್ಸಿಕ್' ಸಿನಿಮಾವನ್ನು ಬರೋಬ್ಬರಿ 12,000ಕ್ಕೂ ಹೆಚ್ಚು ಸ್ಕ್ರೀನ್&zwnj;ಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತದ ಸಿನಿಮಾವೊಂದು ಈ ಮಟ್ಟಕ್ಕೆ ಜಾಗತಿಕವಾಗಿ ಅಬ್ಬರಿಸುತ್ತಿರೋದು ನಿಜಕ್ಕೂ ಹೆಮ್ಮೆಯ ವಿಷಯ. ಡಿಮ್ಯಾಂಡ್ ಹೆಚ್ಚಾದಂತೆ ಈ ಪರದೆಗಳ ಸಂಖ್ಯೆ ಇನ್ನೂ ಏರಿಕೆಯಾಗೋದು ಗ್ಯಾರಂಟಿ. ಮೊದಲ ದಿನವೇ ಈ ಸಿನಿಮಾ ನೂರಾರು ಕೋಟಿ ಲೂಟಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.&lt;/p&gt;&lt;p&gt;ದಿಗ್ಗಜರ ಕೈಯಲ್ಲಿ ವಿತರಣೆಯ ಜವಾಬ್ದಾರಿ&lt;/p&gt;&lt;p&gt;ಈ ಚಿತ್ರದ ಹಿಂದೆ ದೊಡ್ಡ ದೊಡ್ಡ ಸಂಸ್ಥೆಗಳೇ ನಿಂತಿವೆ. ಕರ್ನಾಟಕದಲ್ಲಿ ಯಶ್ ಅವರ 'ಮಾನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್' ಮತ್ತು 'ಕೆವಿಎನ್ ಪ್ರೊಡಕ್ಷನ್ಸ್' ಜಂಟಿಯಾಗಿ ಆರ್ಭಟಿಸಲಿದ್ದರೆ, ಆಂಧ್ರ-ತೆಲಂಗಾಣದಲ್ಲಿ ಖ್ಯಾತ ನಿರ್ಮಾಪಕ ದಿಲ್ ರಾಜು ಸಾಥ್ ನೀಡಿದ್ದಾರೆ. ಇನ್ನು ಉತ್ತರ ಭಾರತದಲ್ಲಿ ಎಎ ಫಿಲ್ಮ್ಸ್, ಕೇರಳದಲ್ಲಿ ಪನೋರಮಾ ಮತ್ತು ತಮಿಳುನಾಡಿನಲ್ಲಿ ಥಿಂಕ್ ಸ್ಟುಡಿಯೋಸ್ ಸಿನಿಮಾ ಹಂಚಿಕೆ ಮಾಡಲಿವೆ. ವಿಶೇಷ ಅಂದ್ರೆ, ಹಾಲಿವುಡ್&zwnj;ನ ಖ್ಯಾತ 'ಲಯನ್ಸ್&zwnj;ಗೇಟ್' ಸಂಸ್ಥೆ ಇಂಗ್ಲಿಷ್ ಆವೃತ್ತಿಯ ಜವಾಬ್ದಾರಿ ಹೊತ್ತುಕೊಂಡಿದೆ. ಅಂದ್ರೆ, ಇದು ಕೇವಲ ಪ್ಯಾನ್ ಇಂಡಿಯಾ ಅಲ್ಲ, ಪಕ್ಕಾ ಪ್ಯಾನ್ ವರ್ಲ್ಡ್ ಸಿನಿಮಾ!&lt;/p&gt;&lt;h3&gt;ತಾರಾಬಳಗದ ಮೆರುಗು - ಗೀತು ಮೋಹನ್&zwnj;ದಾಸ್ ಮ್ಯಾಜಿಕ್!&lt;/h3&gt;&lt;p&gt;ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಗ್ಯಾಂಗ್&zwnj;ಸ್ಟರ್ ಕಥೆಯಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಅವರಂತಹ ಲೇಡಿ ಸೂಪರ್ ಸ್ಟಾರ್&zwnj;ಗಳಿದ್ದಾರೆ. ಜೊತೆಗೆ ಹುಮಾ ಖುರೇಷಿ ಮತ್ತು ಅಕ್ಷಯ್ ಒಬೆರಾಯ್ ಅವರಂತ ಪ್ರತಿಭಾನ್ವಿತ ನಟರ ದಂಡೇ ಇದೆ. ರಾಜೀವ್ ರವಿ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕೆ ದೊಡ್ಡ ಶಕ್ತಿಯಾಗಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಆಗಸ್ಟ್ 26 ಕ್ಕೆ ಇಡೀ ವಿಶ್ವದ ಸಿನಿಮಾ ಪ್ರೇಮಿಗಳ ಕಣ್ಣು ಭಾರತದ ಕಡೆಗೆ ಇರಲಿದೆ. ರಾಕಿ ಭಾಯ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಮರಳಲು ಕೇವಲ ಕೆಲವೇ ದಿನಗಳು ಬಾಕಿ ಇವೆ!Prepare for the Toxic storm!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/toxic-a-fairy-tale-for-grown-ups-advance-booking-starts-from-21-august-2026-in-whole-world/articleshow-1osuuin"/>
        </item>
        <item>
            <title><![CDATA[Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!]]></title>
            <link>https://kannada.asianetnews.com/gallery/entertainment/actor-ravi-teja-profit-from-a-rs-12-lakh-investment-on-land-secret-wealth-revealed-sns-wtf0gyc</link>
            <guid isPermaLink="true">https://kannada.asianetnews.com/gallery/entertainment/actor-ravi-teja-profit-from-a-rs-12-lakh-investment-on-land-secret-wealth-revealed-sns-wtf0gyc</guid>
            <pubDate>Wed, 19 Aug 2026 12:10:55 +0530</pubDate>
            <description><![CDATA[&lt;p&gt;ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cbha43snb871cy75arf7de,imgname-ravi-teja-1787121150083.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ರವಿತೇಜ ಅವರು ವರ್ಷಗಳ ಹಿಂದೆ ಹೈದರಾಬಾದ್ ಬಳಿ ಕೇವಲ 12 ಲಕ್ಷಕ್ಕೆ 26 ಎಕರೆ ಭೂಮಿ ಖರೀದಿಸಿದ್ದರು. ನಟ ಅಜಯ್ ಘೋಷ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಪ್ರಸ್ತುತ ಆ ಭೂಮಿಯ ಮೌಲ್ಯ ಕೋಟಿಗಟ್ಟಲೆ ಆಗಿದೆ. ಇಷ್ಟೆಲ್ಲಾ ಆಸ್ತಿ ಇದ್ದರೂ, ತಮ್ಮ ಸರಳ ವ್ಯಕ್ತಿತ್ವದಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.&lt;/p&gt;&lt;img&gt;&lt;p&gt;ಟಾಲಿವುಡ್ ಸಿನಿಮಾ ರಂಗದಲ್ಲಿ ಹಲವರು ಕಲಾವಿದರು ತಾವು ದುಡಿದ ಹಣವನ್ನು ಭೂಮಿ ಸೇರಿದಂತೆ ಸ್ಥಿರಾಸ್ತಿಗಳಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ದಶಕಗಳ ಹಿಂದೆಯಿಂದಲೂ ಈ ರೀತಿ ಹಲವು ನಟ-ನಟಿಯರು ಹೂಡಿಕೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ರೀತಿ ವರ್ಷಗಳ ಹಿಂದೆ ಕಡಿಮೆ ಹಣಕ್ಕೆ ಖರೀದಿ ಮಾಡಿದ ಆಸ್ತಿಗಳು ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ.&lt;/p&gt;&lt;img&gt;&lt;p&gt;ಇದೇ ಸಾಲಿಗೆ ಸದ್ಯ ಟಾಲಿವುಡ್ ನಟ ರವಿತೇಜ ಸೇರ್ಪಡೆಯಾಗಿದ್ದಾರೆ. ಅವರ ಆಸ್ತಿಗೆ ಸಂಬಂಧಿಸಿದ ಸುದ್ದಿಯೊಂದು ಸಿನಿಮಾ ರಂಗದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ರವಿತೇಜ ಅವರ ಸಿನಿಮಾ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಈ ಸಂಗತಿ ರಿವೀಲ್ ಆಗಿದೆ.&lt;/p&gt;&lt;img&gt;&lt;p&gt;ನಟ ಅಜಯ್ ಘೋಷ್ ಅವರು ಇತ್ತೀಚೆಗೆ ನಡೆದ 'ಇರುಮುಡಿ' ಸಿನಿಮಾ ಪ್ರೀ-ರಿಲೀಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ರವಿತೇಜ ಅವರ ಆಸ್ತಿಯ ಬಗ್ಗೆ ಆಸಕ್ತಿಯುತ ವಿಚಾರಗಳನ್ನು ರಿವೀಲ್ ಮಾಡಿದ್ದರು. ರವಿತೇಜ, ಅಜಯ್ ಘೋಷ್ ಇಬ್ಬರ ಕಾಂಬಿನೇಷನ್&zwnj;ನಲ್ಲಿ ಬಂದಿದ್ದ 'ಮಾಸ್ ಜಾತರ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಎದುರಾದ ಕೆಲವು ಘಟನೆಗಳನ್ನು ಅಜಯ್ ಘೋಷ್ ರಿವೀಲ್ ಮಾಡಿದ್ದರು. ಹೈದರಾಬಾದ್ ಸಮೀಪದ ಶಂಕರ್&zwnj;ಪಲ್ಲಿ ಸಮೀಪ ರವಿತೇಜ ಸುಮಾರು 26 ಎಕರೆ ವಿಶಾಲವಾದ ಫಾರ್ಮ್ ಹೌಸ್ (ತೋಟ)ವನ್ನು ಖರೀದಿ ಮಾಡಿದ್ದರಂತೆ. 'ಮಾಸ್ ಜಾತ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಈ ತೋಟದಲ್ಲಿಯೇ ಕೆಲವು ಸಿನಿಮಾ ಸೆಟ್&zwnj;ಗಳನ್ನು ನಿರ್ಮಿಸಿ ಶೂಟಿಂಗ್ ಮಾಡಿದ್ದರಂತೆ.&lt;/p&gt;&lt;img&gt;&lt;p&gt;ಇದೇ ಸಂದರ್ಭದಲ್ಲಿ ಅಜಯ್ ಘೋಷ್ ಆಸಕ್ತಿಕರ ವಿಚಾರ ಹೇಳಿದ್ದು, ರವಿತೇಜ 26 ಎಕರೆ ಭೂಮಿಯನ್ನು ವರ್ಷಗಳ ಹಿಂದೆ ಕೇವಲ 12 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದರಂತೆ. ಆದರೆ ಹೈದರಾಬಾದ್ ನಗರ ಬೆಳೆಯುತ್ತಿದ್ದಂತೆ ಅದರ ಸುತ್ತಮುತ್ತ ಇರುವ ಭೂಮಿಯ ಬೆಲೆ ಕೂಡ ಡಬಲ್ ಆಗಿದ್ದು, ರಿಯಲ್ ಎಸ್ಟೇಟ್ ರಂಗಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿತ್ತಂತೆ. ಇದರಿಂದ ಲಕ್ಷಗಳಲ್ಲಿ ಖರೀದಿಸಿದ ಭೂಮಿ ಈಗ ಕೋಟಿ ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಘೋಷ್ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಅಧಿಕೃತವಾಗಿ ಎಷ್ಟು ಕೋಟಿ ಮೌಲ್ಯವನ್ನು ಹೊಂದಿದೆ ಎಂದು ಹೇಳದಿದ್ದರು, ಶಂಕರ್&zwnj;ಪಲ್ಲಿ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಅನ್ನೋದು ಮಾತ್ರ ಖಚಿತವಾಗಿದೆ.&lt;/p&gt;&lt;img&gt;&lt;p&gt;ಕೋಟಿ ಕೋಟಿ ಆಸ್ತಿ ಹೊಂದಿದ್ದರು ರವಿತೇಜ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯಾಗಿಲ್ಲ ಎಂದು ಅಜಯ್ ಘೋಷ್ ಹೇಳಿದ್ದಾರೆ. ಶೂಟಿಂಗ್ ಸಮಯದಲ್ಲಿ ವ್ಯಕ್ತಿಯೊಬ್ಬರು ತೋಟದ ಮೌಲ್ಯದ ಕುರಿತು ಅಚ್ಚರಿ ವ್ಯಕ್ತಪಡಿಸಿ ಪ್ರಶ್ನಿಸಿದ ಸಂದರ್ಭದಲ್ಲಿ, ರವಿತೇಜ ಹೇಳಿದ ಮಾತು ಭಾರೀ ಕುತೂಹಲ ಮೂಡಿಸಿತ್ತಂತೆ. 'ಈ ತೋಟ, ಭೂಮಿ ಎಲ್ಲವೂ ಇಲ್ಲೇ ಇರುತ್ತದೆ. ಆದರೆ ನಾವು ಹೋಗ್ತೀವಿ. ಇವು ಈಗ ನಮ್ಮೊಂದಿಗೆ ಇದೆ ಅಂತ ಖುಷಿಪಡುತ್ತಾ ನಮ್ಮ ಕೆಲಸವನ್ನು ನಾವು ಮಾಡಿಕೊಂಡು ಹೋಗುವುದು ಮುಖ್ಯ. ನಾವು ಇಲ್ಲಿ ಬಂದಿರೋದು ಇರುವಷ್ಟು ದಿನ ಕೆಲಸ ಮಾಡಲು ಆದ್ದರಿಂದ ನಿಮ್ಮ ಕೆಲಸ ಮಾಡಿ' ಎಂದು ರವಿತೇಜ ಹೇಳಿದ್ದರಂತೆ. ಈ ಮಾತುಗಳು ವೈರಲ್ ಆಗುತ್ತಿಂತೆ, ಆಸ್ತಿ-ಹಣ-ಅಂತಸ್ತಿನ ಬಗ್ಗೆ ರವಿತೇಜ ಅವರಿಗೆ ಇರುವ ಭಾವನೆ ಬಗ್ಗೆ ಅಭಿಮಾನಿಗಳ ಸಂತಸ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ರವಿತೇಜ ಅವರು ನಟಿಸುರವ 'ಇರುಮುಡಿ' ಸಿನಿಮಾ ಆಗಸ್ಟ್ 21ಕ್ಕೆ ಬಿಡುಗಡೆಯಾಗಲಿದ್ದು, ಸಾಲು ಸಾಲು ಸಿನಿಮಾಗಳ ಸೋಲಿನ ಬಳಿಕ ಹಿಟ್ ಸಿನಿಮಾ ಸಿಗುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಗೆ ಸಿನಿಮಾ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಈ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಪ್ರಿಯಾ ಭವಾನಿ ಶಂಕರ್, ಬೇಬಿ ನಕ್ಷತ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರವಿತೇಜ ಅವರ ವಿಭಿನ್ನ ಪಾತ್ರ, ಕೌಟುಂಬಿಕ ಭಕ್ತಿಪ್ರಧಾನ ಕಥೆಯನ್ನು ಸಿನಿಮಾ ಹೊಂದಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ.&lt;/p&gt;&lt;img&gt;&lt;p&gt;ಟಾಲಿವುಡ್ ಸಿನಿಮಾ ಇಂಡಸ್ಟ್ರೀಯಲ್ಲಿ ಹೀರೋಗಳು ಹಿರಿಯ ನಟ ಶೋಭನ್ ಬಾಬು ಅವರನ್ನೇ ಆದರ್ಶವಾಗಿ ನೋಡುತ್ತಾರೆ. ಅದರಂತೆ ಭೂಮಿಯ ಮೇಲೆಯೇ ಹೂಡಿಕೆ ಮಾಡುತ್ತಿದ್ದಾರೆ. ಇದರೊಂದಿಗೆ ಕೋಟಿ ಕೋಟಿ ಆದಾಯ ಮಾಡುತ್ತಿದ್ದಾರೆ. ನಟ ರವಿತೇಜ ಕೂಡ 12 ಲಕ್ಷ ರೂಪಾಯಿ ಹೂಡಿಕೆ ಮಾಡಿ, 100 ಕೋಟಿಗೂ ಅಧಿಕ ಮೊತ್ತ ಲಾಭ ಗಳಿಸಿದ್ದಾರೆ.&lt;/p&gt;]]></content:encoded>
            <category>cine-world</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/entertainment/actor-ravi-teja-profit-from-a-rs-12-lakh-investment-on-land-secret-wealth-revealed-sns-wtf0gyc"/>
        </item>
        <item>
            <title><![CDATA[ದೇಶದ ಯಾವ ಮೆಟ್ರೋ ಹತ್ತಿದರೂ ಯಶ್ ಟಾಕ್ಸಿಕ್ ಅಬ್ಬರ, ಇದೀಗ ಕೋಲ್ಕತಾದಲ್ಲಿ ಕನ್ನಡಿಗನ ಸಿನಿಮಾ]]></title>
            <link>https://kannada.asianetnews.com/cine-world/yash-toxic-takes-over-metro-stations-across-india-kannada-star-film-now-reaches-kolkata/articleshow-gacsab9</link>
            <guid isPermaLink="true">https://kannada.asianetnews.com/cine-world/yash-toxic-takes-over-metro-stations-across-india-kannada-star-film-now-reaches-kolkata/articleshow-gacsab9</guid>
            <pubDate>Wed, 19 Aug 2026 15:34:42 +0530</pubDate>
            <description><![CDATA[ದೇಶಾದ್ಯಂತ ಇದೀಗ ಯಶ್ ಟಾಕ್ಸಿಕ್ ಅಬ್ಬರ ಶುರುವಾಗಿದೆ. ದೇಶದ ಪ್ರಮುಖ ಮೆಟ್ರೋಗಳಲ್ಲಿ ರಾಕಿ ಬಾಯಿ ರಾರಾಜಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಇದೀಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಕೋಲ್ಕತಾ ಮೆಟ್ರೋದಲ್ಲಿ ಯಶ್ ಟಾಕ್ಸಿಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwe9s2r7s1jnyg59jnj88tfc,imgname-toxic-movie-3-1782891449095.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋಲ್ಕತಾ (ಆ.19) ಯಶ್ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಕೌಂಟ್&zwnj;ಡೌನ್ ಶುರುವಾಗಿದೆ. ಎಲ್ಲೆಡೆ ಭರ್ಜರಿ ಪ್ರಚಾರಗಳು ನಡೆಯುತ್ತಿದೆ. ಇತ್ತ ಹಾಲಿವುಡ್&zwnj;ನಲ್ಲಿ ಟ್ರೇಲರ್ ರಿಲೀಸ್ ಮಾಡಲಾಗುತ್ತಿದೆ. ಜೊತೆಗೆ ಭಾರತದ ಮೆಟ್ರೋಗಳಲ್ಲಿ ಯಶ್ ಟಾಕ್ಸಿಕ್ ಪ್ರಮೋಶನ್ ನಡೆಯುತ್ತಿದೆ. ನಮ್ಮ ಮೆಟ್ರೋ, ದೆಹಲಿ ಮೆಟ್ರೋ ಸೇರಿದಂತೆ ಪ್ರಮುಖ ಮೆಟ್ರೋಗಳಲ್ಲಿ ಯಶ್ ಟಾಕ್ಸಿಕ್ ಅಬ್ಬರದ ಪ್ರಚಾರ ನಡೆಯುತ್ತಿದೆ. ಇದೀಗ ಕೋಲ್ಕತಾ ಮೆಟ್ರೋದಲ್ಲಿ ಟಾಕ್ಸಿಕ್ ಪ್ರಮೋಶನ್ ಮಾಡಲಾಗಿದೆ. ಕೆಜಿಎಫ್' ಸರಣಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಯಶ್, 'ಟಾಕ್ಸಿಕ್' ಬಿಡುಗಡೆಗೆ ಸಕಲ ಸಿದ್ಧತೆ ಮಾಡಿದ್ದಾರೆ. ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಚಿತ್ರ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.&lt;/p&gt; &lt;h2&gt;ಕೋಲ್ಕತ್ತಾ ಮೆಟ್ರೋದಲ್ಲಿ 'ಟಾಕ್ಸಿಕ್' ಹವಾ&lt;/h2&gt; &lt;p&gt;ಬೆಂಗಳೂರು, ದೆಹಲಿಯಲ್ಲಿನ ಮೆಟ್ರೋ ಪ್ರಚಾರ ಭಾರಿ ಯಶಸ್ಸು ಕಂಡಿತು. ಆ ಬಳಿಕ 'ಟಾಕ್ಸಿಕ್' ಚಿತ್ರತಂಡ ತಮ್ಮ ಅಭಿಯಾನದ ಮೂರನೇ ಹಂತವಾಗಿ ಕೋಲ್ಕತ್ತಾ ಮೆಟ್ರೋ ಆಯ್ಕೆ ಮಾಡಿಕೊಂಡಿದೆ. ನವೆಂಬರ್&zwnj;ನಲ್ಲಿ 'ನಮ್ಮ ಮೆಟ್ರೋ' (ಬೆಂಗಳೂರು ಮೆಟ್ರೋ) ಬೋಗಿಗಳು ಹಾಗೂ ನಿಲ್ದಾಣಗಳಲ್ಲಿ 'ಟಾಕ್ಸಿಕ್' ಪೋಸ್ಟರ್&zwnj;ಗಳು ಮತ್ತು ಡಿಜಿಟಲ್ ಬೋರ್ಡ್&zwnj;ಗಳು ರಾರಾಜಿಸಿದ್ದವು. ಡಿಸೆಂಬರ್&zwnj;ನಲ್ಲಿ ದೆಹಲಿ ಮೆಟ್ರೋದಲ್ಲಿಯೂ ಇದೇ ರೀತಿಯ ವಿನೂತನ ಪ್ರಚಾರ ನಡೆಸಿ, ಉತ್ತರ ಭಾರತದ ಪ್ರೇಕ್ಷಕರನ್ನು ತಲುಪುವಲ್ಲಿ ತಂಡ ಯಶಸ್ವಿಯಾಯಿತು. ಈಗ, ಕೋಲ್ಕತ್ತಾ ಮೆಟ್ರೋದಲ್ಲಿಯೂ 'ಟಾಕ್ಸಿಕ್' ಚಿತ್ರದ ಪೋಸ್ಟರ್&zwnj;ಗಳು ಗಮನ ಸೆಳೆಯುತ್ತಿವೆ.&lt;/p&gt; &lt;p&gt;ಲಕ್ಷಾಂತರ ಪ್ರಯಾಣಿಕರು. ಪ್ರತಿದಿನ ಈ ನಗರದ ಮೆಟ್ರೋವನ್ನು ಬಳಸುತ್ತಾರೆ. ಕೋಲ್ಕತ್ತಾ ಪಶ್ಚಿಮ ಬಂಗಾಳದ ರಾಜಧಾನಿ. ಮೆಟ್ರೋ ವ್ಯವಸ್ಥೆಯು ನಗರದ ಹೃದಯಭಾಗದಲ್ಲಿ ಲಕ್ಷಾಂತರ ಜನರನ್ನು ಸುಲಭವಾಗಿ ತಲುಪುತ್ತದೆ. ಈ ಪ್ರಚಾರ ತಂತ್ರ 'ಟಾಕ್ಸಿಕ್' ಚಿತ್ರಕ್ಕೆ ವ್ಯಾಪಕ ಪ್ರಚಾರ ಒದಗಿಸುತ್ತಿದೆ. ಹಿಂದೆ, ಬೆಂಗಳೂರಿನ ನಮ್ಮ ಮೆಟ್ರೋ ರೈಲುಗಳ ಒಳಗೆ-ಹೊರಗೆ 'ಟಾಕ್ಸಿಕ್' ಪೋಸ್ಟರ್&zwnj;ಗಳನ್ನು ಅಳವಡಿಸಿ ಪ್ರಚಾರ ಮಾಡಿದರು. ಅದು ಪ್ರಾದೇಶಿಕ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು.&lt;/p&gt; &lt;h2&gt;ಯಶ್: ಪ್ಯಾನ್-ಇಂಡಿಯಾ ಮತ್ತು ಜಾಗತಿಕ ತಾರೆ&lt;/h2&gt; &lt;p&gt;2018ರಲ್ಲಿ 'ಕೆಜಿಎಫ್ ಚಾಪ್ಟರ್ 1' ಬಿಡುಗಡೆಯಾಯಿತು. 2022ರಲ್ಲಿ 'ಕೆಜಿಎಫ್ ಚಾಪ್ಟರ್ 2' ತೆರೆಕಂಡಿತು. ಈ ಚಿತ್ರಗಳ ಮೂಲಕ ಯಶ್ ಕೇವಲ ಕನ್ನಡ ನಟನಾಗಿ ಉಳಿಯಲಿಲ್ಲ, ಭಾರತದಾದ್ಯಂತ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡರು. ಒಬ್ಬ ಕನ್ನಡದ ಕಲಾವಿದನಾಗಿ ಹೊರಹೊಮ್ಮಿ, ಪ್ಯಾನ್-ಇಂಡಿಯಾ ಸ್ಟಾರ್ ಆಗಿ ತಮ್ಮ ಸ್ಥಾನ ಗಟ್ಟಿಗೊಳಿಸಿದರು. ಜೊತೆಗೆ 1000 ಕೋಟಿಗೂ ಹೆಚ್ಚು ಆದಾಯ ಗಳಿಸಿತು. 'ಕೆಜಿಎಫ್' ಸೀರಿಸ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆ ಬರೆಯಿತು. ಈಗ, ಅವರ ಹೊಸ ಚಿತ್ರ 'ಟಾಕ್ಸಿಕ್' ಬಿಡುಗಡೆಗೂ ಮುನ್ನವೇ ಈ ವಿನೂತನ ಪ್ರಚಾರಗಳು ಅವರ ಜಾಗತಿಕ ತಾರಾ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿವೆ. ಆಗಸ್ಟ್ 26ರ ವಿಶ್ವವ್ಯಾಪಿ ಬಿಡುಗಡೆಯಾಗುತ್ತಿದೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚಲು ಯಶ್ ಸಜ್ಜಾಗಿದ್ದಾರೆ.&lt;/p&gt; &lt;p&gt;ಯಶ್ ಬರಿ ನಟನಲ್ಲ. ತಮ್ಮ ಮಾನ್​ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ 'ಟಾಕ್ಸಿಕ್ ದೊಡ್ಡ ಬಜೆಟ್ ಚಿತ್ರಗಳನ್ನು ಸಹ-ನಿರ್ಮಿಸುತ್ತಿದ್ದಾರೆ. ಅವರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿದೆ. ಅವರ ದೃಷ್ಟಿ ಪ್ರಾದೇಶಿಕ ಮಾರುಕಟ್ಟೆಗೆ ಸೀಮಿತವಾಗಿಲ್ಲ ಎನ್ನುವುದನ್ನು ತೋರಿಸುತ್ತಿದೆ.&lt;/p&gt; &lt;h2&gt;ಮೆಟ್ರೋ ಪ್ರಚಾರದ ವಿನೂತನ ಪರಿಕಲ್ಪನೆ&lt;/h2&gt; &lt;p&gt;'ಟಾಕ್ಸಿಕ್' ಚಿತ್ರತಂಡ ಅಳವಡಿಸಿದ ಮೆಟ್ರೋ ಪ್ರಚಾರ ತಂತ್ರ ಭಾರತದಲ್ಲಿಯೇ ವಿಶಿಷ್ಟ. ಮೊದಲು ನಮ್ಮ ಮೆಟ್ರೋ (ಬೆಂಗಳೂರು), ಆನಂತರ ದೆಹಲಿ, ಈಗ ಕೋಲ್ಕತ್ತಾ ಮೆಟ್ರೋ. ಈ ಪ್ರಚಾರಗಳು ಬರೀ ಜಾಹೀರಾತುಗಳಲ್ಲ, ಒಂದು ಬ್ರ್ಯಾಂಡ್ ನಿರ್ಮಾಣದ ಭಾಗವಾಗಿವೆ. ನಗರದ ಪ್ರತಿ ಮೂಲೆಗೂ ತಲುಪುವ ಮೆಟ್ರೋ ರೈಲುಗಳು, ನಿಲ್ದಾಣಗಳು, ಡಿಜಿಟಲ್ ಪರದೆಗಳು &mdash; ಪ್ರತಿದಿನ ಲಕ್ಷಾಂತರ ಜನರನ್ನು ತಲುಪುವುದು ಈ ತಂತ್ರದ ಮುಖ್ಯ ಉದ್ದೇಶ. ಬೆಂಗಳೂರು, ದೆಹಲಿ, ಕೋಲ್ಕತ್ತಾ &mdash; ಈ ಮೂರೂ ಮೆಟ್ರೋಪಾಲಿಟನ್ ನಗರಗಳು ಭಾರತದ ಪ್ರಮುಖ ಜನಸಂಖ್ಯಾ ಕೇಂದ್ರಗಳು. ಇಲ್ಲಿನ ಪ್ರಚಾರ ಚಿತ್ರಕ್ಕೆ ರಾಷ್ಟ್ರವ್ಯಾಪಿ ಮಾನ್ಯತೆ ತಂದುಕೊಡುತ್ತದೆ. &lt;/p&gt;]]></content:encoded>
            <category>cine-world</category>
            <dc:creator>Chethan Kumar</dc:creator>
            <atom:link href="https://kannada.asianetnews.com/cine-world/yash-toxic-takes-over-metro-stations-across-india-kannada-star-film-now-reaches-kolkata/articleshow-gacsab9"/>
        </item>
        <item>
            <title><![CDATA[ಇಂದು ರಾತ್ರಿ 8.30ಕ್ಕೆ ಭಾರತ ಹಾಗೂ ವಿಶ್ವಾದ್ಯಂತ ಟಾಕ್ಸಿಕ್ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ರಿಲೀಸ್]]></title>
            <link>https://kannada.asianetnews.com/entertainment/yash-toxic-hollywood-english-trailer-to-release-worldwide-tonight-at-8-30-pm/articleshow-m4t0hgk</link>
            <guid isPermaLink="true">https://kannada.asianetnews.com/entertainment/yash-toxic-hollywood-english-trailer-to-release-worldwide-tonight-at-8-30-pm/articleshow-m4t0hgk</guid>
            <pubDate>Wed, 19 Aug 2026 15:11:54 +0530</pubDate>
            <description><![CDATA[&lt;p&gt;ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ಇಂದು ರಾತ್ರಿ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ಬಿಡುಗಡೆಯಾಗುತ್ತಿದೆ. ಗ್ಲೋಬಲ್ ಸ್ಟಾರ್ ಆಗಿರುವ ಯಶ್ ಇದೀಗ ಹಾಲಿವುಡ್&zwnj;ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cpbynf4zh86qxm1hbvqb9m,imgname-toxic-english-trailer-1787132508846.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.19)&lt;/strong&gt; ಭಾರತದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಹಾಲಿವುಡ್&zwnj;ನಲ್ಲಿ ಟಾಕ್ಸಿಕ್ ಟ್ರೇಲರ್ ಇಂದು ಬಿಡುಗಡೆಯಾಗುತ್ತಿದೆ. ಇಂದು ರಾತ್ರಿ 8.30ಕ್ಕೆ ದೇಶ ವಿದೇಶಗಳಲ್ಲಿ ಟಾಕ್ಸಿಕ್ ಇಂಗ್ಲೀಷ್ ಟ್ರೇಲರ್ ರಿಲೀಸ್ ಮಾಡಲಾಗುತ್ತಿದೆ. ಈ ಕುರಿತು ಟಾಕ್ಸಿಕ್ ಸಿನಿಮಾ ಮಹತ್ವದ ಅಪ್&zwnj;ಡೇಟ್ ಘೋಷಣೆ ಮಾಡಿದೆ.&lt;/p&gt;&lt;h2&gt;ಟಾಕ್ಸಿಕ್ ಹಾಲಿವುಡ್ ಇಂಗ್ಲೀಷ್ ಟ್ರೇಲರ್ ರಿಲೀಸ್ ಸಮಯ&lt;/h2&gt;&lt;ul&gt; &lt;li&gt;8.30 PM (ಐಎಸ್&zwnj;ಟಿ)&lt;/li&gt; &lt;li&gt;8:00 AM (ಪಿಎಸ್&zwnj;ಟಿ)&lt;/li&gt; &lt;li&gt;11:00 AM(ಇಎಸ್&zwnj;ಟಿ)&lt;/li&gt; &lt;li&gt;3:00 PM (ಜಿಎಂಟಿ )&lt;/li&gt;&lt;/ul&gt;&lt;p&gt;ಈಗಾಗಲೇ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಟ್ರೇಲಲ್ ಬಿಡುಗಡೆಯಾಗಿದೆ. ಈ ಟ್ರೇಲರ್ ನೋಡಿ ಅಭಿಮಾನಿಗಳು ಇದು ಹಾಲಿವುಡ್ ರೇಜ್ ಸಿನಿಮಾ ಎಂದೇ ಅಭಿಪ್ರಾಯ ಪಟ್ಟಿದ್ದಾರೆ. ಗೀತು ಮೋಹನ್&zwnj;ದಾಸ್ ನಿರ್ದೇಶನದ ಈ ಪ್ಯಾನ್-ವರ್ಲ್ಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಏಕಾಕಲದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣಗೊಂಡಿದೆ. ಈ ರೀತಿ ನಿರ್ಮಾಣಗೊಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಆ್ಯಕ್ಷನ್ ಡೈರೆಕ್ಟರ್,ಮ್ಯೂಸಿಕ್ ಡೈರೆಕ್ಟರ್ ಸೇರಿದಂತೆ ಹಲವು ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.&lt;/p&gt;&lt;p&gt;ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶದಲ್ಲಿ ಟಾಕ್ಸಿಕ್ ಸಿನಿಮಾ ಅಡ್ವಾನ್ಸ್ ಬುಕಿಂಗ್&zwnj;ನಲ್ಲಿ ದಾಖಲೆ ಬರೆದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕಿಂಗ್ ಮೂಲಕ 1 ಕೋಟಿ ರೂಪಾಯಿ ಅಧಿಕ ಗಳಿಕೆ ಮಾಡಿದೆ. ಅದ್ಭುತ ಮೇಕಿಂಗ್ ಹೊಂದಿರುವ ಟಾಕ್ಸಿಕ್ ಸಿನಿಮಾ ಭಾರತ ಹಾಗೂ ವಿದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.&lt;/p&gt;&lt;h2&gt;ಸ್ಟಾರ್ ಸೆಲೆಬ್ರೆಟಿಗಳ ದಂಡು&lt;/h2&gt;&lt;p&gt;ಯಶ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಸ್ಟಾರ್ ಸೆಲೆಬ್ರೆಟಿಗಳ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮೊನ್&zwnj;ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಭಾರತೀಯ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ಸೃಷ್ಟಿಸುವ ಸಾಧ್ಯತೆ ಇದೆ. ಹಾಲಿವುಡ್&zwnj;ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡ ನಟನ ಮೊದಲ ಸಿನಿಮಾ ಇದು.&lt;/p&gt;]]></content:encoded>
            <category>cine-world</category>
            <dc:creator>Chethan Kumar</dc:creator>
            <atom:link href="https://kannada.asianetnews.com/entertainment/yash-toxic-hollywood-english-trailer-to-release-worldwide-tonight-at-8-30-pm/articleshow-m4t0hgk"/>
        </item>
        <item>
            <title><![CDATA['ಬ್ರೇಕಪ್‌ ಸತ್ಯ' ಎಂದ ಅನುಪಮಾ ಆರೋಪಕ್ಕೆ ಎಕ್ಸ್‌-ಬಾಯ್‌ಫ್ರೆಂಡ್‌ ನಟ ಧ್ರುವ ವಿಕ್ರಮ್ ಹೇಳಿರೋ 'LOVE' ಸೀಕ್ರೆಟ್ ಇದು..!]]></title>
            <link>https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn</link>
            <guid isPermaLink="true">https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn</guid>
            <pubDate>Wed, 19 Aug 2026 14:43:44 +0530</pubDate>
            <description><![CDATA[&lt;p&gt;'ಬೈಸನ್ ಕಾಳಮಾದನ್' ಸಿನಿಮಾದ ಸೆಟ್&zwnj;ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎನ್ನಲಾಗಿದೆ. ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು'ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ' ಎಂದು ನಟಿ ಅನುಪಮಾ ಹೇಳುತ್ತಿದ್ದರೆ, ಅತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಆ ಸೀಕ್ರೆಟ್ ಬಗ್ಗೆ ಏನ್ ಹೇಳಿದಾರೆ ಧ್ರುವ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ckqy9gwvrr42ykwf6ab5n8,imgname-dhruv-vikram-anupama-anupama-parameswaran-1787129755952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Anupama's tears to Dhruva Vikram breaking his silence: Here is the secret behind this sensational love story! ಅನುಪಮಾ ಕಣ್ಣೀರು-ಮೌನ ಮುರಿದ ಧ್ರುವ ವಿಕ್ರಮ್: ಸಂಚಲನ ಮೂಡಿಸಿದ ಈ ಪ್ರೇಮಕಥೆ ಸೀಕ್ರೆಟ್ ಇಲ್ಲಿದೆ ನೋಡಿ!&lt;/strong&gt;&lt;/p&gt;&lt;p&gt;ಗ್ಲಾಮರ್ ಲೋಕದಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್&zwnj;ಗಳು ಸರ್ವೇ ಸಾಮಾನ್ಯ ಎನಿಸಿದರೂ, ಕೆಲವು ಜೋಡಿಗಳ ವಿಚ್ಛೇದನ ಮಾತ್ರ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುತ್ತವೆ. ಸದ್ಯ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅಂತಹದ್ದೇ ಒಂದು 'ಹಾಟ್ ಟಾಪಿಕ್' ಎಂದರೆ ಅದು ಮಲಯಾಳಂ ಬೆಡಗಿ ಅನುಪಮಾ ಪರಮೇಶ್ವರನ್ ಮತ್ತು ತಮಿಳು ನಟ ಧ್ರುವ ವಿಕ್ರಮ್ ಅವರ ನಡುವಿನ ಮುನಿಸು. ಇಷ್ಟು ದಿನ ಕೇವಲ ಊಹಾಪೋಹವಾಗಿದ್ದ ಇವರ ಸಂಬಂಧದ ಕಥೆ, ಈಗ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪದ ಹಂತಕ್ಕೆ ಬಂದು ನಿಂತಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಏನಿದು ನಾರ್ಸಿಸಿಸಮ್ ಕಿರಿಕ್?&lt;/h2&gt;&lt;p&gt;ಎಲ್ಲವೂ ಶುರುವಾಗಿದ್ದು ಅನುಪಮಾ ಪರಮೇಶ್ವರನ್ ನೀಡಿದ ಒಂದು ಸ್ಫೋಟಕ ಸಂದರ್ಶನದಿಂದ. ಸಾಮಾನ್ಯವಾಗಿ ನಗುನಗುತಲೇ ಇರೋ ಈ ನಟಿ, ತಮ್ಮ ಮಾಜಿ ಪ್ರಿಯತಮನ ಬಗ್ಗೆ ಮಾತನಾಡುತ್ತಾ 'ನಾರ್ಸಿಸಿಸಮ್' (Narcissism) ಎಂಬ ಪದ ಬಳಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಅಂದರೆ, ಎದುರಿಗಿರುವ ವ್ಯಕ್ತಿಯ ಭಾವನೆಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಕೇವಲ ತನ್ನ ಬಗ್ಗೆಯೇ ಯೋಚಿಸುವ ಸ್ವಭಾವ. &quot;ಕಳೆದ ಎರಡು ವರ್ಷಗಳ ಸಂಬಂಧದಲ್ಲಿ ನಾನು ಈ ನಾರ್ಸಿಸಿಸಮ್&zwnj;ನಿಂದಾಗಿ ಮಾನಸಿಕವಾಗಿ ಜರ್ಜರಿತವಾಗಿದ್ದೆ. ಹೊರಗಡೆ ನಗುನಗುತಲೇ ಕಾಣಿಸಿಕೊಳ್ಳುತ್ತಿದ್ದರೂ, ಒಳಗೆ ಅನುಭವಿಸಿದ ನೋವು ಅಷ್ಟಿಷ್ಟಲ್ಲ&quot; ಎಂದು ಅನುಪಮಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೆಂಪು ಚೂಡಿದಾರ್ ಮತ್ತು ಆ ಕಣ್ಣೀರಿನ ಕಥೆ!&lt;/p&gt;&lt;p&gt;ಅನುಪಮಾ ತಮ್ಮ ಬದುಕಿನ ಅತ್ಯಂತ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಒಂದು ಭಾವನಾತ್ಮಕ ಘಟನೆಯನ್ನು ವಿವರಿಸಿದ್ದಾರೆ. ಅದು 'ಪರದಾ' ಚಿತ್ರದ ಪ್ರಚಾರದ ಸಮಯ. ಕೆಂಪು ಬಣ್ಣದ ಚೂಡಿದಾರ್ ಧರಿಸಿ ಪತ್ರಿಕಾಗೋಷ್ಠಿಯಲ್ಲಿ ಕುಳಿತಿದ್ದ ಅನುಪಮಾ ಅವರಿಗೆ ಪತ್ರಕರ್ತರೊಬ್ಬರು ಕೇಳಿದ ಒಂದು ಪ್ರಶ್ನೆ ಅವರ ಹಳೆಯ ನೋವನ್ನು ಕೆದಕಿತ್ತು. &quot;ನಾನು ಯಾವುದೇ ಮುಖವಾಡ ಹಾಕಿಕೊಂಡು ಮನೆಯಿಂದ ಹೊರಬರುವವಳಲ್ಲ. ಆದರೆ ಅಂದು ವೇದಿಕೆಯ ಮೇಲೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ. ಎಷ್ಟೇ ಕಷ್ಟ ಬಂದರೂ ವೇದಿಕೆಯ ಮೇಲೆ ಅಳುವ ಹುಡುಗಿ ನಾನಲ್ಲ, ಆದರೂ ಅಂದು ಸುಮ್ಮನಿರಲಾಗಲಿಲ್ಲ&quot; ಎಂದು ಅವರು ಕಣ್ಣೀರು ಹಾಕಿದ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h3&gt;ಮೌನ ಮುರಿದ ಧ್ರುವ ವಿಕ್ರಮ್: ಎಕ್ಸ್&zwnj;-ಬಾಯ್&zwnj;ಫ್ರೆಂಡ್ ಹೇಳಿದ್ದೇನು?&lt;/h3&gt;&lt;p&gt;ಅನುಪಮಾ ಅವರ ಈ ಹೇಳಿಕೆಗಳು ನೇರವಾಗಿ 'ಬೈಸನ್ ಕಾಳಮಾದನ್' ಸಿನಿಮಾದ ಸಹನಟ ಧ್ರುವ ವಿಕ್ರಮ್ ಅವರ ಕಡೆಗೆ ಬೆರಳು ತೋರಿಸುತ್ತಿದ್ದವು. ಯಾಕೆಂದರೆ ಇವರಿಬ್ಬರ ಡೇಟಿಂಗ್ ವದಂತಿಗಳು ಅಷ್ಟರಮಟ್ಟಿಗೆ ಹಬ್ಬಿದ್ದವು. ತನ್ನ ಮೇಲೆ ಕೇಳಿಬಂದ 'ನಾರ್ಸಿಸಿಸ್ಟ್' ಎಂಬ ಪರೋಕ್ಷ ಆರೋಪಕ್ಕೆ ಧ್ರುವ ವಿಕ್ರಮ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. &quot;ಪ್ರೀತಿಯಲ್ಲಿ ವಾಸ್ತವವಾಗಿರುವುದು ಮುಖ್ಯ. ಪ್ರೀತಿಸುವವರನ್ನು ರಕ್ಷಿಸುವುದು ಕೂಡ ಅಷ್ಟೇ ಮುಖ್ಯ. ಆದರೆ ಈ ಇಡೀ ಬೆಳವಣಿಗೆ ಮತ್ತು ನನ್ನ ಮೇಲೆ ಕೇಳಿಬರುತ್ತಿರುವ ಆರೋಪಗಳು ನನ್ನ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿವೆ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಮೂಲಕ ತಾವು ಯಾರನ್ನೂ ನೋಯಿಸಿಲ್ಲ ಎಂಬರ್ಥದಲ್ಲಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;p&gt;ಬೆಳ್ಳಿತೆರೆಯ ಪ್ರೇಮ ಮತ್ತು ವಾಸ್ತವದ ಕಹಿ:&lt;/p&gt;&lt;p&gt;'ಬೈಸನ್ ಕಾಳಮಾದನ್' ಸಿನಿಮಾದ ಸೆಟ್&zwnj;ನಲ್ಲಿ ಚಿಗುರಿದ ಈ ಸ್ನೇಹ ಪ್ರೀತಿಯಾಗಿ ಅರಳಿತ್ತು ಎಂಬುದು ಅಭಿಮಾನಿಗಳ ನಂಬಿಕೆ. ಆದರೆ ಚಿತ್ರೀಕರಣ ಮುಗಿಯುವ ಹೊತ್ತಿಗೆ ಇಬ್ಬರ ನಡುವೆ ಬಿರುಕು ಮೂಡಿದ್ದು ಈಗ ಜಗಜ್ಜಾಹೀರಾಗಿದೆ. ಅನುಪಮಾ ಅವರು ತನ್ನ ಆತ್ಮಾಭಿಮಾನಕ್ಕಾಗಿ ಸಂಬಂಧದಿಂದ ಹೊರಬಂದೆ ಎಂದು ಹೇಳುತ್ತಿದ್ದರೆ, ಇತ್ತ ಧ್ರುವ ವಿಕ್ರಮ್ ಈ ಆರೋಪಗಳಿಂದ ಕಂಗೆಟ್ಟಿದ್ದಾರೆ. ಗ್ಲಾಮರ್ ಲೋಕದ ಈ ಸುಂದರ ಪ್ರೇಮಕಥೆ ಹೀಗೆ ಕಹಿಯಾಗಿ ಅಂತ್ಯಗೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅನುಪಮಾ ಪರವಾಗಿ ದೊಡ್ಡ ಅಲೆ ಎದ್ದಿದ್ದು, ಹುಡುಗಿಯರು ತಮ್ಮ ಆತ್ಮಾಭಿಮಾನ ಬಿಟ್ಟು ಕೊಡಬಾರದು ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ.&lt;/p&gt;&lt;p&gt;ಒಟ್ಟಿನಲ್ಲಿ, ಬಣ್ಣದ ಲೋಕದ ಈ ತಾರೆಯರ ಖಾಸಗಿ ಬದುಕು ಈಗ ಬೀದಿಗೆ ಬಂದಿದ್ದು, ಯಾರು ಸರಿ, ಯಾರು ತಪ್ಪು ಎಂಬ ಚರ್ಚೆ ಮಾತ್ರ ಇನ್ನೂ ಮುಗಿದಿಲ್ಲ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/following-anupama-explosive-claims-about-their-breakup-here-is-the-secret-statement-from-ex-boyfriend-dhruva-vikram/articleshow-hwb8lgn"/>
        </item>
        <item>
            <title><![CDATA[ಕನ್ನಡದ ನಟ ಗ್ಲೋಬಲ್ ಸ್ಟಾರ್‌ ಆಗಿದ್ದು ಹೇಗೆ? ಈ ಸೀಕ್ರೆಟ್ ಹಿಂದಿನ 'ಮಹಾಮಂತ್ರ'ದ ಸ್ಟೋರಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx</link>
            <guid isPermaLink="true">https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx</guid>
            <pubDate>Wed, 19 Aug 2026 13:05:37 +0530</pubDate>
            <description><![CDATA[&lt;p&gt;ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು ಇನ್ನೇನು 7 ದಿನಗಳಷ್ಟೇ ಬಾಕಿ..! ಈ ಸಕ್ಸಸ್ ಸ್ಟೋರಿ ಹಿಂದಿನ ಮಹಾಮಂತ್ರದ ಸೀಕ್ರೆಟ್ ಇಲ್ಲಿದೆ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cf3eeckp8vfnpvjjbp6x2f,imgname-rocking-star-yash--3--1787124890060.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Brand Yash- Rocking Star Yash-Successful Story from Sandalwood to Hollywood: ಬ್ರ್ಯಾಂಡ್ 'ಯಶ್': ಗಾಂಧಿನಗರದ ಗಲ್ಲಿಯಿಂದ ಗ್ಲೋಬಲ್ ಗತ್ತಿನವರೆಗೆ - ರಾಕಿ ಭಾಯ್ ಅನ್-ಟೋಲ್ಡ್ ಸ್ಟೋರಿ!&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ ಇತಿಹಾಸವನ್ನು 'KGF' ಗಿಂತ ಮೊದಲು ಮತ್ತು 'KGF' ನಂತರ ಎಂದು ವಿಭಾಗಿಸಬಹುದು. ಅಂದು ಮೈಸೂರಿನಿಂದ ಬೆಂಗಳೂರಿಗೆ ಪುಡಿಗಾಸು ಹಿಡಿದುಕೊಂಡು ಬಂದ ಒಬ್ಬ ಸಾಮಾನ್ಯ ಹುಡುಗ, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಅದು ಬೇರೆ ಯಾರೂ ಅಲ್ಲ, 'ರಾಕಿಂಗ್ ಸ್ಟಾರ್' ಯಶ್. ಯಶ್ ಅವರ ಛಲಕ್ಕೆ ಸಂದ ಜಯ ಇದು ಎನ್ನಬಹುದು.&lt;/p&gt;&lt;h2&gt;ಜಗತ್ತೇ ತಿರುಗಿನೋಡುವಂತೆ ಬೆಳೆದ ಯಶ್; ಈ ಸೀಕ್ರೆಟ್ ಹಿಂದಿನ &lsquo;ಮಹಾಮಂತ್ರ&rsquo; ಏನು?&lt;/h2&gt;&lt;p&gt;ಯಶ್ ಈಗ ಕೇವಲ ಹಿಟ್ ಅಥವಾ ಫ್ಲಾಪ್&zwnj;ಗಳ ಲೆಕ್ಕಾಚಾರದಲ್ಲಿಲ್ಲ. ಅವರು ದಾಟಿರೋ ಹಂತವೇ ಬೇರೆ. &quot;ಟಾಕ್ಸಿಕ್ ಚಿತ್ರದ ಕಂಟೆಂಟ್ ಏನಾದರೂ ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆದರೆ, ಬಾಕ್ಸ್ ಆಫೀಸ್&zwnj;ನಲ್ಲಿ ₹2000 ಕೋಟಿ ಕಲೆಕ್ಷನ್ ದಾಟಿದರೂ ಅಚ್ಚರಿಯಿಲ್ಲ&quot; ಎನ್ನುವುದು ಹಲವರ ಲೆಕ್ಕಾಚಾರ. ಟಾಕ್ಸಿಕ್ ಮಾತ್ರವಲ್ಲ, ನವೆಂಬರ್&zwnj;ನಲ್ಲಿ ಯಶ್ ರಾವಣನಾಗಿ ನಟಿಸಿರುವ 'ರಾಮಾಯಣ' ಕೂಡ ತೆರೆಗೆ ಬರುತ್ತಿದೆ. ಈ ಮೂಲಕ ನಟ ಯಶ್ ಅವರು ಕೇವಲ 2 ತಿಂಗಳ ಅವಧಿಯಲ್ಲಿ ಇಡೀ ಜಗತ್ತಿನ ತೆರೆಯಲ್ಲಿ ಮಿಂಚಲಿದ್ದಾರೆ. ಹೀಗಾಗಿ, ನಟ ಯಶ್ ಅವರು ಗ್ಲೋಬಲ್ ಲೆವೆಲ್&zwnj;ನಲ್ಲಿ ಮಿಂಚಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗೋದು ಖಂಡಿತ!&lt;/p&gt;&lt;h3&gt;ರಿಂಗ್&zwnj;ಟೋನ್&zwnj;ನಿಂದ ಡಿನ್ನರ್&zwnj; ಟೇಬಲ್&zwnj;ವರೆಗೆ: ಒಂದು ಮಾಂತ್ರಿಕ ಪಯಣ&lt;/h3&gt;&lt;p&gt;ಯಶ್ ಅವರ ಜೀವನವೇ ಒಂದು ದೊಡ್ಡ ಮ್ಯಾನಿಫೆಸ್ಟೇಷನ್ (Manifestation). &quot;ರಾಜಾಹುಲಿ ಸಿನಿಮಾದ ಸಮಯದಲ್ಲಿ ಯಶ್ ಮೊಬೈಲ್&zwnj;ನಲ್ಲಿ ಶಾರುಖ್ ಖಾನ್ ಅವರ 'ಡಾನ್' ಚಿತ್ರದ ಬಿಜಿಎಂ ರಿಂಗ್&zwnj;ಟೋನ್ ಆಗಿತ್ತು. ವಿಶೇಷವೆಂದರೆ, ಇಂದು ಅದೇ ಶಾರುಖ್ ಖಾನ್ ಅವರು ಯಶ್ ಅವರನ್ನು ಪ್ರೀತಿಯಿಂದ ಡಿನ್ನರ್&zwnj;ಗೆ ಆಹ್ವಾನಿಸುತ್ತಾರೆ! ಇದನ್ನು ಭಾರೀ ದೊಡ್ಡ ಯಶಸ್ಸು ಎನ್ನಲೇಬೇಕು. ಶಾರುಖ್ ಖಾನ್ ನಟನೆಯ 'ಝೀರೋ' ಚಿತ್ರದ ಎದುರು 'KGF' ಬಿಡುಗಡೆಯಾಗಿ ಸೂಪರ್ ಹಿಟ್ ಆದಾಗಲೂ ಕನ್ನಡಿಗ ಯಶ್ ಅಹಂಕಾರದ ಬದಲು ವಿನಯವಂತಿಕೆ ಮೆರೆದು 'ಉತ್ತಮ ಸಂಸ್ಕಾರ' ಏನೆಂದು ತೋರಿಸಿಕೊಟ್ಟಿದ್ದಾರೆ.&lt;/p&gt;&lt;p&gt;ಮುಂಬೈನ ಗೇಟ್&zwnj;ವೇ ಆಫ್ ಇಂಡಿಯಾದಲ್ಲಿ 'ಮಾಸ್ಟರ್ ಪೀಸ್' ಶೂಟಿಂಗ್ ನಡೆಯುತ್ತಿದ್ದಾಗ ನಡೆದ ಘಟನೆ ಯಶ್ ಅವರು ಅಂದೇ ಹೊಂದಿದ್ದ ದೂರದೃಷ್ಟಿಯನ್ನು ತಿಳಿಸುತ್ತದೆ. ಆವತ್ತು ಅಲ್ಲಿನ ಜನರು ಯಶ್ ಅವರನ್ನ ಗುರುತಿಸಿ ಮಾತನಾಡಿಸುತ್ತಿದ್ದಾಗಲೇ ಯಶ್ 'ಮುಂದೊಂದು ದಿನ ಕನ್ನಡ ಸಿನಿಮಾವನ್ನ ಇಡೀ ದೇಶಕ್ಕೆ ಎತ್ಕೊಂಡು ಹೋಗ್ಬೇಕು&quot; ಎಂದಿರುವುದು ಈಗ ಸುದ್ದಯಾಗುತ್ತಿದೆ.&lt;/p&gt;&lt;p&gt;ಯಶಸ್ಸಿನ ಶಿಖರದಲ್ಲೂ ಅದೇ ಸರಳತೆ!&lt;/p&gt;&lt;p&gt;ಯಶ್ ಎಷ್ಟೇ ದೊಡ್ಡ ಸ್ಟಾರ್ ಆದರೂ ತನ್ನ ಹಳೆಯ ಗೆಳೆಯರನ್ನು ಮರೆತಿಲ್ಲ ಎಂಬುದು ಅವರ ಸರಳತನ ಹಾಗೂ ವಿನಯವಂತಿಕೆಗೆ ಸಾಕ್ಷಿ. ಜೊತೆಗೆ, ನಟ ಯಶ್ರ ಅವರು ತಮ್ಮ ಜೊತೆಗಿದ್ದ ಹಳೆಯ ಕಲಾವಿದರ ಜೊತೆಗೆ, ಹೊಸ ಪ್ರತಿಭೆಗಳಿಗೆ ಕೂಡ ಅವಕಾಶ ಕೊಡುವುದನ್ನು ಎಂದಿಗೂ ಮರೆತಿಲ್ಲ. 'ಉಗ್ರಂ' ಸಿನಿಮಾ ನೋಡಿ ಪ್ರಶಾಂತ್ ನೀಲ್ ಅವರ ವಿಷನ್ ಗುರುತಿಸಿದ್ದು ಇದೇ ರಾಕಿ ಭಾಯ್. ನಾಲ್ಕು ವರ್ಷದ ಹಿಂದೆ, ಮಲಯಾಳಂ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಅವರಿಗೆ 'ಟಾಕ್ಸಿಕ್' ಜವಾಬ್ದಾರಿ ಕೊಟ್ಟಿದ್ದೂ ಕೂಡ ಅವರ ಪ್ರತಿಭೆಯ ಮೇಲೆ ನಂಬಿಕೆಗೆ ಸಾಕ್ಷಿ.&lt;/p&gt;&lt;p&gt;ಇಂದು ಯಶ್ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ. ಅವರ ಈ ಪಯಣಕ್ಕೆ ಎಲ್ಲಾ ಕನ್ನಡಿಗರ ಬೆಂಬಲ ಸದಾ ಇರಲಿದೆ. ಇಡೀ ಭಾರತವೇ ಯಶ್ ಸಕ್ಸಕ್ ಸ್ವಾಗತಿಸಲು ಎದುರುನೋಡುತ್ತಿದೆ. ಇನ್ನೇನು 7 ದಿನಗಳಷ್ಟೇ ಬಾಕಿ ಯಶ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ತೆರೆಗೆ ಬಂದು ಹೊಸ ಇತಿಹಾಸ ಸೃಷ್ಟಿಸಲು! ಕನ್ನಡದ ಸಿನಿಮಾ, ಆದರೆ, ಯಶ್ ಹೇಳುವಂತೆ ಭಾರತೀಯ ಚಿತ್ರವೊಂದು ಇಂದು ಜಾಗತಿಕ ಚಿತ್ರವಾಗುವ ಅಪೂರ್ವ ಘಳಿಗೆಗೆ ಕೌಂಟ್&zwnj;ಡೌನ್ ನಡೆಯುತ್ತಿದೆ. ಟಾಕ್ಸಿಕ್ ಹಬ್ಬ ಆಚರಿಸಲು ಕನ್ನಡನಾಡು, ಭಾರತ ಸೇರಿದಂತೆ ಇಡೀ ಜಗತ್ತು ಸಜ್ಜಾಗುತ್ತಿದೆ!&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/discover-the-secret-success-mantra-behind-rocking-star-yash-journey-to-becoming-a-global-icon/articleshow-a9crnfx"/>
        </item>
        <item>
            <title><![CDATA[Toxic Countdown Day 07: ಟಾಕ್ಸಿಕ್ ಕೌಂಟ್‌ಡೌನ್ 07.. ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದ ನಿರೀಕ್ಷೆಗಳೇನು? ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li</link>
            <guid isPermaLink="true">https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li</guid>
            <pubDate>Wed, 19 Aug 2026 12:10:42 +0530</pubDate>
            <description><![CDATA[&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0cby3rc44mwe9kwy2t9rrb0,imgname-whatsapp-image-2026-08-18-at-8.36.28-pm-1787121569548.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash Toxic Release Date-Rocking Star Yash-Toxic Movie Countdown 07: ಯಶ್&zwnj; ನಟನೆಯ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ 07.&lt;/strong&gt;&lt;/p&gt;&lt;p&gt;ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಹವಾ ಇಡೀ ಜಗತ್ತನ್ನೇ ಆವರಿಸಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಟಾಕ್ಸಿಕ್ ಸಿನಿಮಾಗೆ ಕೌಂಟ್&zwnj;ಡೌನ್ ಚಾಲನೆಯಲ್ಲಿದೆ. ಇನ್ನೇನು ಕೇವಲ 07 ದಿನಗಳಷ್ಟೇ ಬಾಕಿ ಇದೆ. ಯಶ್ ಫ್ಯಾನ್ಸ್ ಸೇರಿದಂತೆ ಜಗತ್ತಿನಾದ್ಯಂತ ಇರುವ ಸಿನಿಮಾ ಪ್ರೇಮಿಗಳಿಗೆ ಟಾಕ್ಸಿಕ್ ಬಿಡುಗಡೆಯನ್ನು ಒಂದು ರಾಷ್ಟ್ರೀಯ ಹಬ್ಬದಂತೆ ಆಚರಿಸಲಿದ್ದಾರೆ. ಟಾಕ್ಸಿಕ್&zwnj; ತೆರೆಯ ಮೇಲೆ ಕಾಣಿಸಿಕೊಳ್ಳಲು ಇನ್ನು 07 ದಿನಗಳಷ್ಟೇ ಬಾಕಿ ಇದ್ದು, ಪರದೆಯಲ್ಲಿ ಈ ಸಿನಿಮಾ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಹಗಲಿರುಳೂ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ನಟನೆ, ಗೀತು ಮೋಹನ್&zwnj;ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿದ್ಧವಾಗಿದೆ. ಆದರೆ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಕೆಲವು ವಿದೇಶಿ ಭಾಷೆಗಳಲ್ಲಿ ಕೂಡ ಡಬ್ ಆಗಿ ಬಿಡುಗಡೆ ಕಾಣಲಿದೆ. ಹಾಲಿವುಡ್ ಸೇರಿದಂತೆ, ಜಗತ್ತಿನ ಖ್ಯಾತ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದು, ಇಡೀ ಸಿನಿಮಾ ಹಾಲಿವುಡ್ ರೇಂಜ್ ಹಾಗೂ ರಿಚ್ ಮೇಕಿಂಗ್ ಮೂಲಕ ಮೂಡಿ ಬಂದಿದೆ. ಇದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಈ ಮೂಲಕ ಕನ್ನಡ ಸಿನಿಮಾ ಇದೇ ಮೊದಲ ಬಾರಿಗೆ ಜಗತ್ತಿನಾದ್ಯಂತ ಹಾಲಿವುಡ್ ಸಿನಿಮಾದಂತೆ ರಿಲೀಸ್ ಆಗಲಿದೆ. ಈ ಮೂಲಕ ಕರ್ನಾಟಕದ ಕೀರ್ತಿ ಪತಾಕೆ ಜಗತ್ತಿನಾದ್ಯಂತ ಮೆರೆದಾಡಲಿದೆ. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲಿ ಎಂದು ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಹಾಗೂ ಸಿನಿಮಾ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.&lt;/p&gt;&lt;h2&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj;&lt;/h2&gt;&lt;p&gt;ನಮಿತ್ ಮಲ್ಹೋತ್ರಾ ಹಾಗೂ ಯಶ್ ಪಾರ್ಟ್&zwnj;ನರ್&zwnj;ಶಿಪ್&zwnj; ನಿರ್ಮಾಣದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗಿದ್ದು, ಈ ಸಿನಿಮಾವನ್ನು 600 ಕೋಟಿ ಬಜೆಟ್ ಮೂಲಕ ಸಿದ್ಧಪಡಿಸಲಾಗಿದೆ. ಸಿನಿಮಾ ಮೇಕಿಂಗ್ ಹಾಗೂ ಪ್ರಚಾರದ ವೆಚ್ಚ ಕೂಡ ಈ ಬಜೆಟ್&zwnj;ನಲ್ಲಿ ಸೇರಿಕೊಂಡಿದೆ. ಈಗಾಗಲೇ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಸೃಷ್ಟಿಯಾಗಿದ್ದು, ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದು ಸಿನಿಮಾ ಬಾಕ್ಸ್&zwnj; ಆಫೀಸ್ ಪಂಡಿತರ ಹೇಳುತ್ತಿದ್ದಾರೆ. ನಟ ಯಶ್ ಅವರು ತಮ್ಮ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗೆ ಬರೋಬ್ಬರಿ 4.5 ವರ್ಷಗಳಷ್ಟಿ ಸಮಯವನ್ನು ಮೀಸಲಾಗಿಟ್ಟು, ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ 'ಪ್ಯಾನ್ ವರ್ಲ್ಡ್' ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ. ಇನ್ನೇನು ಟಾಕ್ಸಿಕ್ ಕೇವಲ 07 ದಿನಗಳ ಬಳಿಕ ತೆರೆಯ ಮೇಲೆ ರಾರಾಜಿಸಲಿದೆ. ಹಾಗೇ, ರಾಮಾಯಣ ಸಿನಿಮಾ ಇದೇ ದೀಪಾವಳಿಗೆ ಅಂದರೆ 08 ನವೆಂಬರ್ 2026ರಂದು ಜಗತ್ತಿನಾದ್ಯಂತ ತೆರೆಗೆ ಅಪ್ಪಳಿಸಲಿದೆ.&lt;/p&gt;&lt;p&gt;ಅಮೆರಿಕಾ ಸೇರಿದಂತೆ ಪ್ರಪಂಚದಾದ್ಯಂತ ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಪ್ರಚಾರಕಾರ್ಯ ಅಬ್ಬರದಿಂದ ಸಾಗಿದೆ. ಇನ್ನೇನು 09 ದಿನಗಳಲ್ಲಿ ಬಿಡುಗಡೆ ಆಗಲಿರುವ ಟಾಕ್ಸಿಕ್ ಚಿತ್ರವನ್ನು ನೋಡಲು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಯಶ್ ನಾಯಕತ್ವದ ಈ ಚಿತ್ರದಲ್ಲಿ ಭಾರತದ ಘಟಾನುಘಟಿ ತಾರೆಗಳು ನಟಿಸಿದ್ದಾರೆ. ಯಶ್ ನಾಯಕರಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನಾತಾರಾ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಕಿಯಾರಾ ಅಡ್ವಾನಿ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ, ಮುಖ್ಯ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್, ಸುದೇವ್ ನಾಯರ್ ನಟಿಸಿದ್ದು, ಈ ಚಿತ್ರವು ಬಹಳಷ್ಟು ಸಾಕಷ್ಟು ನಿರೀಕ್ಷೆ ಮೂಡಿಸಿದೆ.&lt;/p&gt;&lt;h3&gt;ಜಗತ್ತಿನಾದ್ಯಂತ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್&lt;/h3&gt;&lt;p&gt;ಒಟ್ಟಿನಲ್ಲಿ, ಕರ್ನಾಟಕ ಸೇರಿದಂತೆ ಜಗತ್ತಿನಾದ್ಯಂತ ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಹಬ್ಬಕ್ಕೆ ಕೌಂಟ್&zwnj;ಡೌನ್ ಚಾಲ್ತಿಯಲ್ಲಿದೆ. ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ 'ಆಪ್&zwnj; ಕಿ ಅದಾಲತ್&zwnj;'ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 07ರ ಕೌಂಟ್&zwnj;ಡೌನ್&zwnj;ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 06. ಪ್ರತಿದಿನದ ಅಪ್&zwnj;ಡೇಟ್&zwnj;ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ಫಾಲೋ ಮಾಡುತ್ತಿರಿ..&lt;/p&gt;]]></content:encoded>
            <category>cine-world</category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/countdown-for-yash-toxic-has-started-and-it-is-just-07-days-left-for-the-release-date-on-26-august-2026/articleshow-l3140li"/>
        </item>
        <item>
            <title><![CDATA[ಕಿಯಾರಾ ಕೈ ಹಿಡಿದು ಪ್ಲಾಫ್ ಆದ ರಾಮ್ ಚರಣ್‌! ಈಗ ₹3,200 ಕೋಟಿ ಬಾಚಿದ ನಾಯಕಿಗೆ ಗಾಳ ಹಾಕಿದ ಮೆಗಾ ಪವರ್‌ಸ್ಟಾರ್!]]></title>
            <link>https://kannada.asianetnews.com/gallery/cine-world/ram-charan-sukumar-movie-rc17-may-feature-dhurandhar-actress-sara-arjun-vlg1ttr</link>
            <guid isPermaLink="true">https://kannada.asianetnews.com/gallery/cine-world/ram-charan-sukumar-movie-rc17-may-feature-dhurandhar-actress-sara-arjun-vlg1ttr</guid>
            <pubDate>Wed, 19 Aug 2026 09:16:40 +0530</pubDate>
            <description><![CDATA[ಮೆಗಾ ಪವರ್&zwnj;ಸ್ಟಾರ್ ರಾಮ್ ಚರಣ್ 'ಪೆದ್ದಿ' ಸಿನಿಮಾದ ನಂತರ ನಿರ್ದೇಶಕ ಸುಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. RC17 ಎಂದು ತಾತ್ಕಾಲಿಕವಾಗಿ ಹೆಸರಿಡಲಾದ ಈ ಚಿತ್ರದಲ್ಲಿ 3200 ಕೋಟಿ ಗಳಿಕೆ ಕಂಡ ಚಿತ್ರದ ನಾಯಕಿ ರಾಮ್ ಚರಣ್&zwnj;ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0c1tedmfsvsqqa9rv8b42dp,imgname-kiara-advani-and-ram-charan-1787110963634.jpg" type="image/jpeg" height="390" width="690"/>
            <content:encoded><![CDATA[ಮೆಗಾ ಪವರ್&zwnj;ಸ್ಟಾರ್ ರಾಮ್ ಚರಣ್ 'ಪೆದ್ದಿ' ಸಿನಿಮಾದ ನಂತರ ನಿರ್ದೇಶಕ ಸುಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. RC17 ಎಂದು ತಾತ್ಕಾಲಿಕವಾಗಿ ಹೆಸರಿಡಲಾದ ಈ ಚಿತ್ರದಲ್ಲಿ 3200 ಕೋಟಿ ಗಳಿಕೆ ಕಂಡ ಚಿತ್ರದ ನಾಯಕಿ ರಾಮ್ ಚರಣ್&zwnj;ಗೆ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.&lt;img&gt;ಮೆಗಾ ಪವರ್&zwnj;ಸ್ಟಾರ್ ರಾಮ್ ಚರಣ್ ಇತ್ತೀಚೆಗೆ 'ಪೆದ್ದಿ' ಚಿತ್ರದ ಮೂಲಕ ಯಶಸ್ಸು ಕಂಡಿದ್ದಾರೆ. 'ಆಚಾರ್ಯ' ಮತ್ತು 'ಗೇಮ್ ಚೇಂಜರ್' ನಂತಹ ಸೋಲುಗಳ ನಂತರ 'ಪೆದ್ದಿ' ಸಿನಿಮಾ ಅವರಿಗೆ ದೊಡ್ಡ ರಿಲೀಫ್ ನೀಡಿದೆ. ಈ ಸಿನಿಮಾ ಕಮರ್ಷಿಯಲ್ ಆಗಿ ಕೆಲವು ಕಡೆ ಬ್ರೇಕ್ ಈವನ್ ಆಗದಿದ್ದರೂ, ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸಿನ ಹುಮ್ಮಸ್ಸಿನಲ್ಲಿ ರಾಮ್ ಚರಣ್ ತಮ್ಮ ಮುಂದಿನ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ 'RC17' ವರ್ಕಿಂಗ್ ಟೈಟಲ್&zwnj;ನಡಿ ಈ ಸಿನಿಮಾ ಶುರುವಾಗಲಿದೆ. ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.&lt;img&gt;ಸುಕುಮಾರ್ ನಿರ್ದೇಶನದಲ್ಲಿ ರಾಮ್ ಚರಣ್ ಈ ಹಿಂದೆ 'ರಂಗಸ್ಥಳಂ' ಚಿತ್ರದಲ್ಲಿ ನಟಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾ ಅಂದು ಬ್ಲಾಕ್&zwnj;ಬಸ್ಟರ್ ಆಗಿತ್ತು. ಅಂದಿನ ನಾನ್-ಬಾಹುಬಲಿ ದಾಖಲೆಗಳನ್ನು ಮುರಿದಿತ್ತು. 'ಪುಷ್ಪ' ಚಿತ್ರಗಳ ನಂತರ, ಸುಕುಮಾರ್ ಈಗ ಮತ್ತೆ ರಾಮ್ ಚರಣ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸುಕುಮಾರ್ ಈ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಇನ್ನೊಂದೆಡೆ, ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಸಹ ಮುಗಿಸುವ ತರಾತುರಿಯಲ್ಲಿದ್ದಾರಂತೆ. ಇದರ ಭಾಗವಾಗಿ, ನಾಯಕಿಯ ಕುರಿತ ಒಂದು ಅಪ್&zwnj;ಡೇಟ್ ಈಗ ಅಚ್ಚರಿ ಮೂಡಿಸುತ್ತಿದೆ.&lt;img&gt;&lt;p&gt;'RC17' ಚಿತ್ರಕ್ಕೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರನ್ನು ಮೊದಲು ಪರಿಗಣಿಸಲಾಗಿತ್ತು. ಬಹಳ ದಿನಗಳ ಹಿಂದೆಯೇ ಅವರನ್ನು ಫೈನಲ್ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ರಾಮ್ ಚರಣ್ ಮತ್ತು ಕಿಯಾರಾ ಕಾಂಬಿನೇಷನ್&zwnj;ನಲ್ಲಿ ಈಗಾಗಲೇ 'ವಿನಯ ವಿಧೇಯ ರಾಮ' ಮತ್ತು 'ಗೇಮ್ ಚೇಂಜರ್' ಎಂಬ ಎರಡು ಚಿತ್ರಗಳು ಬಂದಿವೆ. \&lt;/p&gt;&lt;p&gt;ಆದರೆ, ಈ ಎರಡೂ ಚಿತ್ರಗಳು ದೊಡ್ಡ ಡಿಸಾಸ್ಟರ್ ಆಗಿದ್ದವು. ಹೀಗಿರುವಾಗ ಕಿಯಾರಾ ಜೊತೆ ರಾಮ್ ಚರಣ್ ಮತ್ತೊಂದು ಸಿನಿಮಾ ಎನ್ನುವ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಆದರೆ ಈಗ ಕಿಯಾರಾ ಬದಲು ಬೇರೆ ನಾಯಕಿಯನ್ನು ಪರಿಗಣಿಸಲಾಗುತ್ತಿದೆ ಎಂಬ ಹೊಸ ಅಪ್&zwnj;ಡೇಟ್ ಬಂದಿದೆ.&lt;/p&gt;&lt;img&gt;&lt;p&gt;'RC17' ಚಿತ್ರದಲ್ಲಿ ರಾಮ್ ಚರಣ್ ಜೊತೆ 3200 ಕೋಟಿ ರೂಪಾಯಿ ಗಳಿಸಿದ ಚಿತ್ರದ ನಾಯಕಿ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆ ನಾಯಕಿಯೇ 'ದುರಂಧರ್' ಖ್ಯಾತಿಯ ಸಾರಾ ಅರ್ಜುನ್. ಇವರು 'ದುರಂಧರ್' ಮತ್ತು 'ದುರಂಧರ್ 2' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಭಾಗ ಸುಮಾರು 1350 ಕೋಟಿ ಗಳಿಸಿದರೆ, 'ದುರಂಧರ್ 2' ಬರೋಬ್ಬರಿ 1850 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;p&gt;ಇದು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಮುರಿದು, 'ಬಾಹುಬಲಿ 2' ಚಿತ್ರವನ್ನೇ ಮೀರಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಸಿನಿಮಾದಿಂದ ಸಾರಾ ಅರ್ಜುನ್ ಒಂದೇ ಬಾರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ಹಾಟ್ ಕೇಕ್ ಆಗಿದ್ದಾರೆ. ಹೀಗಾಗಿ, ರಾಮ್ ಚರಣ್-ಸುಕುಮಾರ್ ಚಿತ್ರಕ್ಕೆ ಇವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಲ್ಲಿ ನಿಜವೆಷ್ಟು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.&lt;/p&gt;]]></content:encoded>
            <category>cine-world</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/cine-world/ram-charan-sukumar-movie-rc17-may-feature-dhurandhar-actress-sara-arjun-vlg1ttr"/>
        </item>
        <item>
            <title><![CDATA[Jr NTR: 'ನನ್ನ ಪುಟ್ಟ ಗೆಳೆಯ, ನೀನು ಸದಾ ನೆನಪಲ್ಲಿರುತ್ತೀಯಾ..' ಭಗೀರಾಗೆ ಕಣ್ಣೀರ ವಿದಾಯ | ವಿಡಿಯೋ]]></title>
            <link>https://kannada.asianetnews.com/cine-world/jr-ntr-pens-heartfelt-tribute-to-pet-dog-bagheera-amidst-surgery-recovery/articleshow-yi2434y</link>
            <guid isPermaLink="true">https://kannada.asianetnews.com/cine-world/jr-ntr-pens-heartfelt-tribute-to-pet-dog-bagheera-amidst-surgery-recovery/articleshow-yi2434y</guid>
            <pubDate>Wed, 19 Aug 2026 14:34:48 +0530</pubDate>
            <description><![CDATA[&lt;p&gt;ನಟ ಜೂ. ಎನ್&zwnj;ಟಿಆರ್ ತಮ್ಮ ಪ್ರೀತಿಯ ಸಾಕು ನಾಯಿ 'ಬಗೀರಾ' ಸಾವಿಗೆ ಕಂಬನಿ ಮಿಡಿದಿದ್ದಾರೆ. ಇನ್&zwnj;ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು, 'ಬಗೀರಾ ನಮ್ಮ ಕುಟುಂಬದ ಸದಸ್ಯನಾಗಿದ್ದ' ಎಂದಿದ್ದಾರೆ. ನಾಲ್ಕು ವರ್ಷಗಳ ಸುಂದರ ನೆನಪುಗಳಿಗೆ ಧನ್ಯವಾದ ತಿಳಿಸಿದ್ದಾರೆ. ವಿಡಿಯೋ ನೋಡಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-344e7fbc-9185-4992-a8c7-10cdc7d04643.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಜೂ. ಎನ್&zwnj;ಟಿಆರ್(Jr NTR) ತಮ್ಮ ಮುದ್ದಿನ ಸಾಕು ನಾಯಿ'ಬಗೀರಾ' ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ತಮ್ಮ ಮುದ್ದಿನ ಶ್ವಾನದ ಜೊತೆಗಿನ ಅವಿನಾಭಾವ ಸಂಬಂಧವನ್ನು ನೆನೆದು ಭಾವುಕರಾಗಿದ್ದಾರೆ.&lt;/p&gt;&lt;p&gt;ಇನ್&zwnj;ಸ್ಟಾಗ್ರಾಂ(Instagram)ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಜೂ. ಎನ್&zwnj;ಟಿಆರ್, 'ಬಗೀರಾ, ನೀನು ನನ್ನ ಜೀವನಕ್ಕೆ ಬಂದಿದ್ದು ಒಬ್ಬ ಸಂಗಾತಿಯಾಗಿ, ಆದರೆ ನಿಧಾನವಾಗಿ ನಮ್ಮ ಕುಟುಂಬದ ಸದಸ್ಯನಾಗಿಬಿಟ್ಟೆ. ಪ್ರೀತಿ, ನಿಷ್ಠೆ, ತುಂಟಾಟ ಮತ್ತು ನೀನು ಮಾತ್ರ ನೀಡಬಲ್ಲ ವಿಶಿಷ್ಟವಾದ ಸಾಂತ್ವನದಿಂದ ನಮ್ಮ ದಿನಗಳನ್ನು ತುಂಬಿದ್ದೆ. ನಿನ್ನ ಅನುಪಸ್ಥಿತಿ ದೊಡ್ಡ ಮೌನವೊಂದು ಸೃಷ್ಟಿಸಿದೆ. ಆದರೆ ನೀನು ಬಿಟ್ಟುಹೋದ ಪ್ರೀತಿ ಅದಕ್ಕಿಂತಲೂ ದೊಡ್ಡದು' ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ತಮ್ಮ ಬಗೀರಾ ಜೊತೆಗಿನ ನಾಲ್ಕು ವರ್ಷಗಳ ಸುಂದರ ಪಯಣಕ್ಕೆ ಧನ್ಯವಾದ ತಿಳಿಸಿದ ಎನ್&zwnj;ಟಿಆರ್, ನನ್ನನ್ನು ಆಯ್ಕೆ ಮಾಡಿದ್ದಕ್ಕೆ, ನನ್ನ ಜೊತೆ ನಡೆದಿದ್ದಕ್ಕೆ ನಿನಗೆ ಥ್ಯಾಂಕ್ಸ್. ಮುಕ್ತವಾಗಿ ಓಡಾಡು ನನ್ನ ಪುಟ್ಟ ಗೆಳೆಯ. ನಿನ್ನನ್ನು ನಾವು ತುಂಬಾ ಪ್ರೀತಿಸುತ್ತಿದ್ದೆವು, ಮುಂದೆಯೂ ಪ್ರೀತಿಸುತ್ತಲೇ ಇರುತ್ತೇವೆ; ಎಂದು ಜೂ. ಎನ್&zwnj;ಟಿಆರ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ನೋವಿನ ಪೋಸ್ಟ್ ಜೊತೆಗೆ, ಜೂ.ಎನ್&zwnj;ಟಿಆರ್ ತಮ್ಮ ಪ್ರೀತಿಯ ನಾಯಿಯ ಜೊತೆಗಿನ ಕೆಲವು ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇಂಟರ್&zwnj;ನೆಟ್&zwnj;ನಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ನಟರಾದ ಅನಿಲ್ ಕಪೂರ್ ಮತ್ತು ಶ್ರುತಿ ಹಾಸನ್ ಕೂಡಾ ಕಾಮೆಂಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಜೂ. ಎನ್&zwnj;ಟಿಆರ್ ಆರೋಗ್ಯ ಹೇಗಿದೆ?&lt;/h2&gt;&lt;p&gt;ಇತ್ತೀಚೆಗೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜೂ. ಎನ್&zwnj;ಟಿಆರ್, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಪ್ರೀತಿಯ ನಾಯಿಯನ್ನು ಕಳೆದುಕೊಂಡಿರುವುದು ಅವರಿಗೆ ಮತ್ತಷ್ಟು ನೋವು ತಂದಿದೆ.&lt;/p&gt;&lt;p&gt;ಕಳೆದ ವಾರ, ಸಿಕಂದರಾಬಾದ್&zwnj;ನ ಕಿಮ್ಸ್ ಆಸ್ಪತ್ರೆಯಲ್ಲಿ (KIMS Hospitals) ಜೂ. ಎನ್&zwnj;ಟಿಆರ್&zwnj;ಗೆ ಆರ್ಥ್ರೋಸ್ಕೋಪಿಕ್ ಶೋಲ್ಡರ್ ಸರ್ಜರಿ ಯಶಸ್ವಿಯಾಗಿ ನಡೆದಿತ್ತು. ಆಸ್ಪತ್ರೆಯಿಂದ ಅವರು ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಅವರು ವೈದ್ಯರ ನಿಗಾದಲ್ಲಿ ಪುನಶ್ಚೇತನ ಕಾರ್ಯಕ್ರಮದಲ್ಲಿ (rehabilitation programme) ಭಾಗವಹಿಸಲಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.&lt;/p&gt;&lt;p&gt;ಅವರು ಚೇತರಿಸಿಕೊಳ್ಳುತ್ತಿದ್ದು, ಸಂಪೂರ್ಣವಾಗಿ ಗುಣಮುಖರಾಗಲು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ರಚನಾತ್ಮಕ ಪುನಶ್ಚೇತನ ಕಾರ್ಯಕ್ರಮವನ್ನು ಪ್ರಾರಂಭಿಸಲಿದ್ದಾರೆ&quot; ಎಂದು ಆಸ್ಪತ್ರೆ ಹೇಳಿದೆ.&lt;/p&gt;View this post on Instagram&lt;p&gt;A post shared by Jr NTR (@jrntr)&lt;/p&gt;&lt;p&gt;&lt;/p&gt;&lt;p&gt;ಇದಕ್ಕೂ ಮುನ್ನ, ಜೂ. ಎನ್&zwnj;ಟಿಆರ್ ಅವರ ಭುಜಕ್ಕೆ ಗಾಯವಾಗಿತ್ತು. ತಜ್ಞ ವೈದ್ಯರ ಸಲಹೆಯ ಮೇರೆಗೆ, ಶೀಘ್ರ ಮತ್ತು ಸಂಪೂರ್ಣ ಚೇತರಿಕೆಗಾಗಿ ಆರ್ಥ್ರೋಸ್ಕೋಪಿಕ್ ಸರ್ಜರಿ ಮಾಡಿಸಿಕೊಳ್ಳಲು ಅವರಿಗೆ ಸೂಚಿಸಲಾಗಿತ್ತು ಎಂದು ಕಿಮ್ಸ್ ಆಸ್ಪತ್ರೆ ಹೆಲ್ತ್ ಬುಲೆಟಿನ್&zwnj;ನಲ್ಲಿ ತಿಳಿಸಿತ್ತು.&lt;/p&gt;&lt;p&gt;ಎರಡರಿಂದ ಮೂರು ತಿಂಗಳೊಳಗೆ ಜೂ. ಎನ್&zwnj;ಟಿಆರ್ ಸಂಪೂರ್ಣವಾಗಿ ಗುಣಮುಖರಾಗಿ, ತಮ್ಮ ಸಹಜ ಸ್ಥಿತಿಗೆ ಮರಳಲಿದ್ದಾರೆ ಎಂದು ವೈದ್ಯರು ನಿರೀಕ್ಷಿಸಿದ್ದಾರೆ. ಜುಲೈ 27 ರಂದು ಅವರ ತಂಡವು, ಜೂ. ಎನ್&zwnj;ಟಿಆರ್ ಆರೋಗ್ಯ ಸ್ಥಿರವಾಗಿದೆ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿತ್ತು. (ANI)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದ ವಿಷಯವನ್ನು ಏಷ್ಯಾನೆಟ್ ನ್ಯೂಸ್ ಸಂಪಾದಕೀಯ ಸಿಬ್ಬಂದಿ ಬದಲಾಯಿಸಿಲ್ಲ ಮತ್ತು ಇದನ್ನು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category>cine-world</category>
            <dc:creator>Ravi Janekal</dc:creator>
            <atom:link href="https://kannada.asianetnews.com/cine-world/jr-ntr-pens-heartfelt-tribute-to-pet-dog-bagheera-amidst-surgery-recovery/articleshow-yi2434y"/>
        </item>
    </channel>
</rss>
