<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 11:03:52 +0530</lastBuildDate>
        <atom:link href="https://kannada.asianetnews.com/rss/chitradurga" rel="self" type="application/rss+xml"/>
        <item>
            <title><![CDATA[ರೇಣುಕಾಸ್ವಾಮಿ ಕೇಸ್: ಸಾಕ್ಷಿಗೆ ಬೆದರಿಕೆ ಪ್ರಕರಣದಲ್ಲಿ FSLನಿಂದ ಸ್ಫೋಟಕ ಸತ್ಯ, ಪ್ರಭಾವಿ ಮಹಿಳೆಯ ಹೆಸರು ಬೆಳಕಿಗೆ!]]></title>
            <link>https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96</link>
            <guid isPermaLink="true">https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96</guid>
            <pubDate>Tue, 11 Aug 2026 14:56:26 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್&zwnj;ಎಸ್&zwnj;ಎಲ್ ವರದಿಯು ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಇದರ ಹಿಂದೆ ಪ್ರಭಾವಿ ಮಹಿಳೆಯೊಬ್ಬಳ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಇದೀಗ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwp36b1jv3gq4p2t66ddzp7w,imgname-drashan-renukaswamy--1--1783152978994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ಮುಂದುವರಿದಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.&lt;/p&gt;&lt;h2&gt;ಕಿಡ್ನಾಪ್ ಮಾಡಿ ಜೀವ ಬೆದರಿಕೆ&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್ ಆವರಣದಲ್ಲೇ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಸಂದೀಪ್ ನೀಡಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನಟ ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದುಕೊಂಡು ಸಾಕ್ಷಿಗೆ ಬೆದರಿಕೆ ಹಾಕಿದ್ದ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಬಂಧಿಸಿದ್ದರು. ಪುನೀತ್ ತನ್ನ ತಂಡದ ಮೂಲಕ ಸಾಕ್ಷಿ ಸಂದೀಪ್&zwnj; ಅವರನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.&lt;/p&gt;&lt;h2&gt;FSL ವರದಿಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ&lt;/h2&gt;&lt;p&gt;ಸಂಶಯಾಸ್ಪದ ಕೃತ್ಯ ನಡೆದ ಸಮಯದಲ್ಲಿ ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿತ್ತು. FSL ವರದಿಯ ಆಧಾರದ ಮೇಲೆ, ಈ ಕಾನ್ಫರೆನ್ಸ್ ಕಾಲ್&zwnj;ನಲ್ಲಿ ಕಿರಣ್ ಮತ್ತು ಗೌರವ್ ಶೆಟ್ಟಿ ಎಂಬಿಬ್ಬರು ಸಕ್ರಿಯರಾಗಿದ್ದುದು ಪತ್ತೆಯಾಗಿದೆ. ಇವರಿಬ್ಬರೂ ಕಾಲ್&zwnj;ನಲ್ಲಿದ್ದುಕೊಂಡೇ ಪುನೀತ್ ಹಾಗೂ ಆತನ ತಂಡಕ್ಕೆ ಸಾಕ್ಷಿಯನ್ನು ಬೆದರಿಸುವ ಕುರಿತು ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;ಹಿಂದಿದೆಯಾ ಪ್ರಭಾವಿ ಮಹಿಳೆಯ ಕೈವಾಡ?&lt;/h2&gt;&lt;p&gt;ಈ ಇಡೀ ಜಾಲದ ಹಿಂದೆ ಓರ್ವ ಪ್ರಭಾವಿ ಮಹಿಳೆ ಇರುವುದು ತನಿಖೆಯಲ್ಲಿ ಕಂಡುಬಂದಿದೆ. ಬೆದರಿಕೆ ಕೃತ್ಯಕ್ಕೂ ಮುನ್ನ ಪುನೀತ್&zwnj;ಗೆ ಈ ಪ್ರಭಾವಿ ಮಹಿಳೆಯಿಂದ ಕರೆ ಬಂದಿದ್ದು, ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊ ಎಂದು ಆಕೆಯೇ ಸೂಚನೆ ನೀಡಿದ್ದಳು ಎಂಬ ಮಾಹಿತಿ ಎಫ್&zwnj;ಎಸ್&zwnj;ಎಲ್ ವರದಿಯಿಂದ ಬಯಲಾಗಿದೆ. ಈ ಮಹಿಳೆಯೇ ಗೌರವ್ ಶೆಟ್ಟಿ, ಕಿರಣ್ ಹಾಗೂ ಪುನೀತ್ ಪಡೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಸಾಕ್ಷಿಗಳಿಗೆ ಬೆದರಿಕೆ ಹಾಕಿಸುತ್ತಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಧೃಡಪಟ್ಟಿದೆ.&lt;/p&gt;&lt;h2&gt;ಕಾನೂನು ಕ್ರಮಕ್ಕೆ ಪೊಲೀಸರ ಸಿದ್ಧತೆ:&lt;/h2&gt;&lt;p&gt;ಪ್ರಕರಣದಲ್ಲಿ ಕಿರಣ್ ಹಾಗೂ ಗೌರವ್ ಶೆಟ್ಟಿ ಕೈವಾಡ ಸ್ಪಷ್ಟವಾಗಿರುವುದರಿಂದ ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಹಾಗೂ ಕಾನೂನು ಕ್ರಮ ಜರುಗಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ತಾಂತ್ರಿಕ ವರದಿ ಬರಬೇಕಿದ್ದು, ಆ ವರದಿ ಸಿಕ್ಕ ಬಳಿಕ ಈ ಪ್ರಕರಣದ ಹಿಂದಿರುವ ಪ್ರಭಾವಿ ಮಹಿಳೆ ಯಾರು ಹಾಗೂ ಆಕೆಯ ನಿಜವಾದ ಪಾತ್ರವೇನು ಎಂಬ ಸಂಪೂರ್ಣ ಸತ್ಯ ಹೊರಬರಲಿದೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96"/>
        </item>
        <item>
            <title><![CDATA[ಆಕಾಶಪ್ಪಾ, ಟೈಂ ಇದ್ರೆ ನಮ್ಮೂರಿಗೆ ಬಂದು ಹೋಗ್ತೀಯೇನಪ್ಪಾ..: ಕುಡಿವ ನೀರಿಗಾಗಿ ಮಹಿಳೆಯರ ಆರ್ತನಾದ!]]></title>
            <link>https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67</link>
            <guid isPermaLink="true">https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67</guid>
            <pubDate>Sat, 22 Aug 2026 18:16:57 +0530</pubDate>
            <description><![CDATA[&lt;p&gt;Kolahalu Village: ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mr2pn6ns8qzpfx47a8vcv0,imgname-chc-1787402738341.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಆ.22): &lt;/strong&gt;ಹೊಳಲ್ಕೆರೆ ತಾಲೂಕಿನ ಗಡಿಗ್ರಾಮ ಕೊಳಹಾಳು ಗ್ರಾಮದಲ್ಲಿ ಮತ್ತೆ ಕುಡಿವ ನೀರಿನ ಹಾಹಾಕಾರ ಶುರುವಾಗಿದೆ. ಹಿಂದೊಮ್ಮೆ ಕುಡಿವ ನೀರಿನ ಅಭಾವದಿಂದ ಬೇಸತ್ತಿದ್ದ ಜನತೆ ಪಿಡಿಓ ಹಾಗೂ ತಾಪಂ ಇಓಗೆ ಕೊಠಡಿಯಲ್ಲಿ ಕೂಡಿ ದಿಗ್ಬಂಧನ ಹಾಕಿದ್ದರು.&lt;/p&gt;&lt;p&gt;ರೊಚ್ಚಿಗೆದ್ದ ಜನರ ಮನ ತಣಿಸಲು ಎರಡು ಕೊಳವೆಬಾವಿ ಕೊರೆಯಿಸಿ ನೀರು ಪೂರೈಕೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಕುಡಿವ ನೀರಿನ ಅಭಾವದಿಂದ ಗ್ರಾಮ ಬಾಧಿತಗೊಂಡಿದೆ. ಮಳೆ ಬಾರದ ಕಾರಣ ಕೊಳವೆ ಬಾವಿಯಲ್ಲಿ ಅಂತರ್ಜಲ ಪಾತಾಳಕ್ಕಿಳಿದು ಒಂದು ವಾರದಿಂದ ಕೊಳವೆ ಬಾವಿಗಳು ಸ್ತಬ್ದವಾಗಿವೆ. ಮಹಿಳೆಯರು, ಮಕ್ಕಳು, ವೃದ್ಧರು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ.&lt;/p&gt;&lt;p&gt;ಹಾಲಿ ಇರುವ ಗ್ರಾಮದ ಒಂದು ಕೊಳಾಯಿ ಮುಂಭಾಗ ನೂರಾರು ಕೊಡಗಳು ಸರತಿಗಾಗಿ ಕಾದಿದ್ದು ದಿನವಿಡೀ ಕಾಲ ನೂಕಿದರೂ ಎರಡು ಬಿಂದಿಗೆ ನೀರು ದೊರೆಯದಂತಾಗಿದೆ. ಜಮೀನುಗಳಿಂದ ಹೇಗೋ ನೀರು ತರೋಣವೆಂದು ಜನತೆ ಭಾವಿಸದರೂ ಅದೂ ಸಾಧ್ಯವಾಗಂತಾಗಿದೆ. ನೀರಿಲ್ಲದೆ ಅಡಿಕೆ ತೋಟಗಳು ಒಣಗುತ್ತಿದ್ದು ಯಾರೊಬ್ಬರೂ ಒಂದು ಕೊಡ ನೀರು ಕೊಡುತ್ತಿಲ್ಲ. ದೂರದ ಗೋಪಾಲಪುರಕ್ಕೆ ಹೋಗಿ ನೀರು ತರಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ&lt;/strong&gt;&lt;/h2&gt;&lt;p&gt;ಹೊಸದುರ್ಗ, ಹಿರಿಯೂರು, ಹೊಳಲ್ಕೆರೆ ಗಡಿ ಗ್ರಾಮವಾಗಿರುವ ಕೊಳಹಾಳು ಒಂದು ರೀತಿಯಲ್ಲಿ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೂ ಒಳಗಾಗಿದೆ. ಅನತಿ ದೂರದಲ್ಲಿ ವಾಣಿವಿಲಾಸ ಸಾಗರ ಜಲಾಶಯವಿದ್ದರೂ ಕುಡಿವ ನೀರಿಗೆ ಗ್ರಾಮಸ್ಥರು ತತ್ವಾರ ಪಡುತ್ತಿರುವುದು ನಿಂತಿಲ್ಲ. ನೀರಿಲ್ಲದ ಕಾರಣಕ್ಕೆ ಶಾಲೆಯಲ್ಲಿ ಬಿಸಿಯೂಟ ಬಂದ್ ಆಗಿದೆ. ಮಕ್ಕಳಿಗೆ ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ ಇದೆ. ಹಲವು ತಿಂಗಳಿಂದ ಶಾಲಾ ಮಕ್ಕಳಿಗೆ ನೀರೇ ಸಿಕ್ಕಿಲ್ಲವೆನ್ನುತ್ತಾರೆ ಗ್ರಾಮಸ್ಥರು.&lt;/p&gt;&lt;p&gt;ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಸಚಿವರಾಗುತ್ತಿದ್ದಂತೆ ಅಧಿಕಾರಿಗಳ ಸಭೆ ಕರೆದು ಬರವನ್ನು ಸಮರ್ಥವಾಗಿ ನಿಭಾಯಿಸಬೇಕು. ಯಾವ ಹಳ್ಳಿಗಳೂ ಕುಡಿವ ನೀರಿನ ಬಾಧೆಯಿಂದ ನರಳುವಂತಾಗಬಾರದೆಂದು ಬಿಗಿ ನಿರ್ದೇಶನ ನೀಡಿದ್ದರು. ಆದರೆ ಕೊಳಹಾಳು ಗ್ರಾಮಕ್ಕೆ ಈ ನಿರ್ದೇಶನ ಅನ್ವಯ ವಾದಂತೆ ಕಾಣಿಸುತ್ತಿಲ್ಲ.&lt;/p&gt;&lt;p&gt;ಜಿಪಂ ಸಿಇಓ ಡಾ.ಆಕಾಶ್ ಗೆ ಕುಡಿವ ನೀರಿನ ಅಭಾವದ ಇಂತಹದ್ದೊಂದು ಗ್ರಾಮ ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಇದೆ ಎಂಬ ಬಗ್ಗೆ ಅಷ್ಟಾಗಿ ಮಾಹಿತಿ ಇದ್ದಂತಿಲ್ಲ. ಕೊಳಹಾಳು ಗ್ರಾಮದ ಜನರನ್ನು ಊರು ಬಿಡಿಸುವ ಪ್ಲಾನ್ ಏನಾದರೂ ಅಧಿಕಾರಿಗಳು ಹಾಕಿಕೊಂಡಿದ್ದಾರಾ ಎಂಬ ಶಂಕೆಗಳು ಗ್ರಾಮಸ್ಥರಲ್ಲಿ ಮೂಡಿವೆ. ಡಾ. ಆಕಾಶ್, ನಮ್ಮೂರಿಗೆ ಬಂದು ನೋಡಲು ಟೈಂ ಇದೆಯಾ ಎಂದು ಖಾಲಿ ಕೊಡಗಳ ಒಳಗಿನಿಂದ ಆರ್ತನಾದ ತೇಲಿ ಬರುತ್ತಿದೆ.&lt;/p&gt;&lt;p&gt;ಅಧಿಕಾರಿಗಳು ಬೆಳಿಗ್ಗೆ ಎದ್ದು ಸ್ನಾನ ಮಾಡಿ, ತಿಂಡಿ ತಿಂದು ನೀಟಾಗಿ ಮನೆ ಬಿಟ್ಟು ಆಫೀಸ್&zwnj;ಗೆ ಬರುತ್ತಾರೆ. ನಮಗೆ ಸ್ನಾನವೂ ಇಲ್ಲ, ನೀರು ಇಲ್ಲವೆನ್ನುವಂತಾಗಿದೆ. ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಏನು, ಎತ್ತ ಅಂತ ವಿಚಾರಿಸಿಲ್ಲ. ದನಕರು, ಮಕ್ಕಳಿಗೆ ನೀರಿಲ್ಲ. ಓದೋ ಹುಡುಗರ ಸಮಸ್ಯೆ ಹೇಳುವಂತಿಲ್ಲ. ನಮಗೆ ಒಬ್ಬೊಬ್ಬರೇ ಹೆಣ್ಣುಮಕ್ಕಳು ಇದ್ದಾರೆ. ಸನಿಹದ ಗೋಪಾಲಪುರಕ್ಕೆ ಹೋಗಿ ತರಬೇಕು. ಅದು ಕಷ್ಟದ ಕೆಲಸ.-ಗಿರಿಜಮ್ಮ, ಕೊಳಹಾಳು ಗ್ರಾಮದ ಮಹಿಳೆ.&lt;/p&gt;]]></content:encoded>
            <category>chitradurga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/drinking-water-crisis-returns-to-chitradurgas-kolahalu-village-gvd/articleshow-2pnvh67"/>
        </item>
        <item>
            <title><![CDATA[ಬುರುಡೆ ಪ್ರಕರಣ: ಕೋಟಿಗೆ ಎಷ್ಟು ಸೊನ್ನೆ ಇದೆ ಎಂದೇ ಗೊತ್ತಿಲ್ಲ, ನನ್ನ ವಿರುದ್ಧದ ಷಡ್ಯಂತ್ರ ಬಯಲಾಗಿದೆ: ರಮಾ ನಾಗರಾಜ್!]]></title>
            <link>https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha</link>
            <guid isPermaLink="true">https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha</guid>
            <pubDate>Sat, 01 Aug 2026 15:53:47 +0530</pubDate>
            <description><![CDATA[ಸೌಜನ್ಯ ಪ್ರಕರಣದಲ್ಲಿ ವಿದೇಶಿ ಫಂಡಿಂಗ್ ಪಡೆದ ಸುಳ್ಳು ಆರೋಪ ಎದುರಿಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್&zwnj; ಅವರಿಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಈ ಆರೋಪ ಮಾಡಲಾಗಿತ್ತು ಎಂದ ಅವರು, ಸತ್ಯಕ್ಕಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ವಿರೋಧಿಗಳಿಗೆ ಎಚ್ಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyd8kn2j50657jtfqpmc47d,imgname-activist-rama-nagaraj-1785579458210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ನಾವು ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರು. ನಾವು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಸತ್ಯದ ಹಾದಿಯಲ್ಲಿ ನಡೆಯುವ ನಮಗೆ ಕಾನೂನಿನ ಮೇಲೆ ಅಪಾರ ಗೌರವವಿದ್ದು, ನ್ಯಾಯಾಲಯ ನಮಗೆ ಸೂಕ್ತ ನ್ಯಾಯ ಒದಗಿಸಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರಮಾ ನಾಗರಾಜ್&zwnj; ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿರೋಧಿಗಳ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ತಮ್ಮ ಮೇಲಾಗಿದ್ದ ಸುಳ್ಳು ದೂರುಗಳು ಹಾಗೂ ಕಾನೂನು ಹೋರಾಟದ ಹಾದಿಯನ್ನು ಸುದೀರ್ಘವಾಗಿ ಹಂಚಿಕೊಂಡರು.&lt;/p&gt;&lt;h2&gt;ಸುಖಾಸುಮ್ಮನೆ ಕೋಟಿಗಟ್ಟಲೆ ಫಂಡಿಂಗ್ ಆರೋಪ!&lt;/h2&gt;&lt;p&gt;ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಎಂಬಾತ ತಾನಾಗಿಯೇ ಬಂದು ಶರಣಾಗಿದ್ದ. ಆ ಬಳಿಕ ಆತ ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣವರ್ ಹಾಗೂ ನನ್ನನ್ನೂ ಒಳಗೊಂಡಂತೆ ಐದು ಜನರ ಮೇಲೆ ಕೋಟಿಗಟ್ಟಲೆ ವಿದೇಶಿ ಫಂಡಿಂಗ್ ಪಡೆಯುತ್ತಿದ್ದೇವೆ ಎಂದು ಸುಖಾಸುಮ್ಮನೆ ಸುಳ್ಳು ಆರೋಪ ಹೊರಿಸಿದ್ದ. ಅಷ್ಟೇ ಅಲ್ಲದೆ, ನನ್ನ ಬ್ಯಾಂಕ್ ಖಾತೆಯಿಂದ ಆತನ ಪತ್ನಿಯ ಖಾತೆಗೆ ಹಣ ವರ್ಗಾವಣೆಯಾಗಿದೆ ಎಂದೂ ಸುಳ್ಳು ಹೇಳಿದ್ದ. ಕೋಟಿಗೆ ಎಷ್ಟು ಸೊನ್ನೆ ಇರುತ್ತದೆ ಎಂಬುದೇ ನನಗೆ ಗೊತ್ತಿಲ್ಲ. ಅಂತಹದರಲ್ಲಿ ಈ ರೀತಿ ಆಧಾರರಹಿತ ಆರೋಪ ಮಾಡಿದಾಗ, ನಾನು ನ್ಯಾಯಾಲಯದಲ್ಲೇ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಎಂದು ಸವಾಲು ಹಾಕಿದ್ದೆ. ನಾನು ಯಾವುದೇ ತಪ್ಪು ಮಾಡದೇ ಇರುವುದರಿಂದ ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಮಾ ನಾಗರಾಜ್ ಗುಡುಗಿದರು.&lt;/p&gt;&lt;h2&gt;ಗ್ರಾಮಾಭಿವೃದ್ಧಿ ಸಂಘಗಳ ದೌರ್ಜನ್ಯದ ವಿರುದ್ಧ ಧ್ವನಿ&lt;/h2&gt;&lt;p&gt;ಹಳ್ಳಿಗಳಲ್ಲಿ ನಡೆಯುತ್ತಿರುವ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದೇ ಈ ಎಲ್ಲಾ ಆರೋಪಗಳಿಗೆ ಕಾರಣ ಎಂದು ವಿವರಿಸಿದ ಅವರು, ಇಂದು ಹಳ್ಳಿ ಹಳ್ಳಿಗಳಲ್ಲಿ ಗ್ರಾಮಾಭಿವೃದ್ಧಿ ಸಂಘಗಳ ಹೆಸರಿನಲ್ಲಿ ಹೆಣ್ಣುಮಕ್ಕಳು ಬೀದಿಗೆ ಬರುವಂತಾಗಿದೆ. ಮಹಿಳೆಯರು ಕೇಳದಿದ್ದರೂ ಇವರೇ ಮನೆ ಬಾಗಿಲಿಗೆ ಹೋಗಿ ಸಾಲ ಕೊಟ್ಟು, ನಂತರ ಅದನ್ನು ವಸೂಲಿ ಮಾಡುವಾಗ ಅತಿಯಾದ ಮಾನಸಿಕ ಕಿರುಕುಳ (ಟಾರ್ಚರ್) ನೀಡುತ್ತಾರೆ. ಹೆಣ್ಣುಮಕ್ಕಳು ಇದುವರೆಗೆ ಕಟ್ಟಿರುವ ಉಳಿತಾಯದ ಹಣ ಎಷ್ಟು ಎಂಬುದನ್ನು ಕೇಳುವುದೇ ತಪ್ಪಾ? ಈ ದೌರ್ಜನ್ಯವನ್ನು ಪ್ರಶ್ನಿಸಿ, ಸಂತ್ರಸ್ತರ ಪರವಾಗಿ ನಾನು ಪೊಲೀಸ್ ದೂರು ಕೊಡಿಸಿದ್ದಕ್ಕೆ ಸುಮಾರು ೫೦ ಜನ ನನ್ನ ಮೇಲೆಯೇ ದಾಳಿ ಮಾಡಲು ಬಂದಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು.&lt;/p&gt;&lt;p&gt;&quot;ನಾವು ಕಾನೂನುಬದ್ಧವಾಗಿ ಹೋರಾಟಕ್ಕೆ ಇಳಿದಾಗ, ತಡೆದುಕೊಳ್ಳಲಾರದ ಸಂಘಟನೆಯ ಪ್ರಮುಖರು ಚಿನ್ನಯ್ಯನ ಹೆಗಲ ಮೇಲೆ ಬಂದೂಕಿಟ್ಟು ನಮ್ಮ ವಿರುದ್ಧ ಈ ರೀತಿಯ ಸುಳ್ಳು ಹೇಳಿಕೆಗಳನ್ನು ಕೊಡಿಸಿದರು. ಏಕಾಏಕಿ ಈ ಪ್ರಕರಣದಲ್ಲಿ ನನ್ನ ಹೆಸರನ್ನು ಮುನ್ನೆಲೆಗೆ ತರಲಾಯಿತು.&quot;&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಜಯ; ಕಾನೂನಿಗೆ ಗೌರವ&lt;/h2&gt;&lt;p&gt;ಸುಳ್ಳು ಆರೋಪಗಳ ವಿರುದ್ಧ ಸುದೀರ್ಘ ಕಾನೂನು ಹೋರಾಟ ನಡೆಸಿದ ರಮಾ ನಾಗರಾಜ್ ಅವರಿಗೆ ನ್ಯಾಯಾಲಯದಲ್ಲಿ ದೊಡ್ಡ ಜಯ ಸಿಕ್ಕಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ಅವರು, ನಮ್ಮ ನಿರಂತರ ಹೋರಾಟಕ್ಕೆ ನ್ಯಾಯ ಸಿಕ್ಕಿದ್ದು, ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ನ್ಯಾಯಾಲಯ ನಮ್ಮನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನನ್ನ ತಂದೆಯೂ ಒಬ್ಬ ನ್ಯಾಯಾಧೀಶರಾಗಿದ್ದರು. ಅವರ ಮಗಳಾಗಿ ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸದಾ ಪರಮ ಗೌರವವಿದೆ. ಸುಪ್ರೀಂ ಕೋರ್ಟ್&zwnj;ನಲ್ಲಿ ನನ್ನ ಪರವಾಗಿ ಹಿರಿಯ ವಕೀಲರಾದ ಬಾಲನ್ ಅವರು ಹಾಗೂ ಬೃಂದಾ ಅವರ ತಂಡ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿತ್ತು. ಇವರೆಲ್ಲರ ಅವಿರತ ಶ್ರಮದಿಂದ ನಮಗೆ ಇಂದು ಜಯ ಸಿಕ್ಕಿದೆ. ತಪ್ಪು ಮಾಡದವರಿಗೆ ಎಂದಿಗೂ ಕೆಟ್ಟದ್ದಾಗುವುದಿಲ್ಲ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ ಎಂದರು.&lt;/p&gt;&lt;h2&gt;ಹೆಣ್ಣುಮಕ್ಕಳು ಹೋರಾಟಕ್ಕೆ ಇಳಿದರೆ ಹಿಂದೆ ಸರಿಯಲ್ಲ!&lt;/h2&gt;&lt;p&gt;ಕೊನೆಯದಾಗಿ ಎಚ್ಚರಿಕೆಯ ಸಂದೇಶ ನೀಡಿದ ಅವರು, ಯಾರಾದರೂ ನನ್ನ ತಂಟೆಗೆ ಬಂದರೆ ಅಥವಾ ಸತ್ಯದ ಹಾದಿಯನ್ನು ಕೆಡಿಸಲು ಬಂದರೆ ನಾನು ಮಾತ್ರ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಒಮ್ಮೆ ಹೆಣ್ಣುಮಕ್ಕಳು ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದರೆ, ಸಾವು ಬರುವವರೆಗೂ ಹೋರಾಡಲು ಸಿದ್ಧರಿರುತ್ತಾರೆ ಎಂಬುದನ್ನು ವಿರೋಧಿಗಳು ನೆನಪಿನಲ್ಲಿಡಬೇಕು ಎಂದು ರಮಾ ನಾಗರಾಜ್&zwnj; ಎಚ್ಚರಿಸಿದರು.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/activist-rama-nagaraj-addressing-the-press-conference-in-chitradurga-regarding-the-saujanya-case-legal-victory-gdp/articleshow-8uggyha"/>
        </item>
        <item>
            <title><![CDATA[Chitradurga: ಶಿಕ್ಷಕರ ಬದ್ಧತೆಗೆ ಸಾಕ್ಷಿಯಾದ 1963ರಲ್ಲಿ ಶುರುವಾದ ಕೆಇಬಿ ಸರ್ಕಾರಿ ಶಾಲೆ]]></title>
            <link>https://kannada.asianetnews.com/karnataka-districts/chitradurga-hiriyur-keb-government-school-which-began-in-1963-is-a-testament-to-the-commitment-of-teachers-mrq/articleshow-9trsvbs</link>
            <guid isPermaLink="true">https://kannada.asianetnews.com/karnataka-districts/chitradurga-hiriyur-keb-government-school-which-began-in-1963-is-a-testament-to-the-commitment-of-teachers-mrq/articleshow-9trsvbs</guid>
            <pubDate>Wed, 02 Sep 2026 06:30:38 +0530</pubDate>
            <description><![CDATA[ಚಿತ್ರದುರ್ಗದ ವಿದ್ಯುತ್ ಕಾಲೋನಿ ಸರ್ಕಾರಿ ಶಾಲೆಯು ಶಿಕ್ಷಕರ ಬದ್ಧತೆ ಮತ್ತು ಸ್ವಂತ ಖರ್ಚಿನಿಂದಾಗಿ ಮಾದರಿಯಾಗಿ ಹೊರಹೊಮ್ಮಿದೆ. ಮಕ್ಕಳ ಕೊರತೆಯಿಂದ ಸೊರಗುತ್ತಿದ್ದ ಈ ಶಾಲೆಯಲ್ಲಿ, ಶಿಕ್ಷಕರು ದಾನಿಗಳ ನೆರವಿನಿಂದ ಕಾಂಪೌಂಡ್, ವಿಶೇಷ ಸಮವಸ್ತ್ರ, ಮತ್ತು ಆಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸಿ, ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1fss27pzaz90msq2897j34b,imgname-keb-school-1788310489334.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಮೇಶ್ ಬಿದರಕೆರೆ&lt;/strong&gt;&lt;/p&gt;&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳು ಸೊರಗುತ್ತಿರುವ ಕಾಲದಲ್ಲಿ ನಗರದ ಟಿಬಿ ವೃತ್ತದ ವಿದ್ಯುತ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಕ್ಷಕರ ಬದ್ಧತೆ ಮತ್ತು ಸಮರ್ಪಣಾ ಮನೋಭಾವದಿಂದ ನೋಡುಗರ ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಒಂದರಿಂದ ಏಳನೇ ತರಗತಿಯವರೆಗೆ ಸುಮಾರು 75 ಮಕ್ಕಳು ಕಲಿಯುತ್ತಿದ್ದು ಉತ್ಸಾಹಿ ಮತ್ತು ವೃತ್ತಿಪರತೆಯ ಶಿಕ್ಷಕರಿದ್ದಾರೆ. ಮೂವರು ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರಿರುವ ಶಾಲೆಯಲ್ಲಿ ಕೊಠಡಿ ಕೊರತೆಯಿಲ್ಲ. ಶಾಲೆಯ ಜಾಗ ಕೆಇಬಿ ಇಲಾಖೆಗೆ ಸೇರಿರುವುದರಿಂದ ಕೆಲವು ಸೌಲಭ್ಯಗಳು ಶಿಕ್ಷಣ ಇಲಾಖೆ ವತಿಯಿಂದ ಕೊಡಲಾಗುತ್ತಿಲ್ಲ. ಶಾಲೆಗೆ ಕಾoಪೌoಡ್ ಇಲ್ಲದ್ದು ಇಲ್ಲಿನ ಹಲವಾರು ವರ್ಷಗಳ ಸಮಸ್ಯೆಯಾಗಿದ್ದು ಶಾಲೆ ಜಾಗ ವಿದ್ಯುತ್ ಇಲಾಖೆಗೆ ಸೇರಿರುವುದರಿಂದ ಅನುದಾನ ಸಿಗುತ್ತಿಲ್ಲ. ಕಾಂಪೌoಡ್ ಇಲ್ಲದ್ದರಿಂದ ಹಂದಿಗಳು ನಾಯಿಗಳು ಶಾಲೆಯ ಕೊಠಡಿ ಬಾಗಿಲಿಗೆ ಬರುತ್ತಿದ್ದವು.&lt;/p&gt;&lt;h2&gt;&lt;strong&gt;ಫ್ಲೆಕ್ಸ್ ಗಳು, ಟಿವಿ, ಕಂಪ್ಯೂಟರ್, ಸ್ಪೆಷಲ್ ಯೂನಿಫಾರಂ&lt;/strong&gt;&lt;/h2&gt;&lt;p&gt;ಶಾಲೆ ಮುಂದಿನ ಗಿಡ ಮರಗಳನ್ನು ರಕ್ಷಿಸಿಕೊಳ್ಳಲು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಮುಖ್ಯ ಶಿಕ್ಷಕರೇ ತಮ್ಮ ಸ್ವಂತ 20 ಸಾವಿರ ಹಣ ಖರ್ಚು ಮಾಡಿ ಬಿದಿರಿನ ತಡಿಕೆಯ ಆವರಣ ನಿರ್ಮಿಸಿದ್ದಾರೆ. ಆವರಣದೊಳಕ್ಕೆ ಹತ್ತಾರು ಲೋಡ್ ಮಣ್ಣು ಸುರಿಸಿಕೊಂಡು ತೆಂಗು ಮುಂತಾದ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಮಕ್ಕಳ ಕೈ ತೊಳೆಯಲು ವಾಶ್ ಬೇಸಿನ್, ನಲಿ ಕಲಿ ಕೊಠಡಿಗೆ ಫ್ಲೆಕ್ಸ್ ಗಳು, ಟಿವಿ, ಕಂಪ್ಯೂಟರ್, ಸ್ಪೆಷಲ್ ಯೂನಿಫಾರಂಗಳನ್ನು ಶಿಕ್ಷಕರೇ ದಾನಿಗಳ ಸಹಾಯದಿಂದ ಖರೀದಿಸಿದ್ದಾರೆ. ಇಲಾಖೆ ನೀಡುವ ಸಮವಸ್ತ್ರದ ಜೊತೆಗೆ ದಾನಿಗಳ ನೆರವು ಪಡೆದು ಗುಣಮಟ್ಟದ, ಆಕರ್ಷಕವಾದ ಸಮವಸ್ತ್ರಗಳನ್ನು ಶಿಕ್ಷಕರು ಖರೀದಿಸಿಕೊಟ್ಟಿದ್ದು ವಾರದಲ್ಲಿ ಎರಡು ದಿನ ಮಕ್ಕಳು ಸ್ಪೆಷಲ್ ಯೂನಿಫಾರ್ಮ್ ಧರಿಸಿ ಬರುತ್ತಾರೆ.&lt;/p&gt;&lt;p&gt;ಪ್ರತಿ ಶನಿವಾರ ಮಕ್ಕಳಿಗೆ ಯೋಗ ತರಬೇತಿ ನೀಡಲಾಗುತ್ತಿದ್ದು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಮಕ್ಕಳಿಗೆ ದಿನಪತ್ರಿಕೆ ಓದಿಸುವುದು, ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿ ಉತ್ತರ ಕಲಿಸುವ ಪರಿಪಾಠವಿದೆ. ರಾಜ್ಯಗಳು, ಜಿಲ್ಲೆಗಳ ಹೆಸರು, ಮಗ್ಗಿ ಕಲಿಕೆಯನ್ನು ಪ್ರಾರ್ಥನ ಸಮಯದಲ್ಲೇ ಕಲಿಸಲಾಗುತ್ತಿದೆ.&lt;/p&gt;&lt;p&gt;ನಲಿ ಕಲಿ ಕೊಠಡಿಯಲ್ಲಿ ಮಾಹಿತಿ ಸಂಗ್ರಹದ ಚಾರ್ಟ್&zwnj;ಗಳು ಮಾಸಿ ಹೋಗುವುದು, ಹರಿಯುವುದರಿಂದ ಶಿಕ್ಷಕರು ದಾನಿಗಳ ನೆರವು ಪಡೆದು ವ್ಯಾಕರಣ, ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ, ಪ್ರಮುಖ ರಾಜರುಗಳ ಹೆಸರನ್ನು, ರಾಷ್ಟ್ರೀಯ ಹಬ್ಬಗಳ ಹೆಸರು, ವಚನಕಾರರ ಹೆಸರುಗಳ ಫ್ಲೆಕ್ಸ್ ಗಳನ್ನು ಮಾಡಿಸಿ ಅವುಗಳಿಗೆ ಫ್ರೆಮ್ ಹಾಕಿಸಿ ಗೋಡೆಗೆ ಹಾಕಲಾಗಿದ್ದು ನಲಿ ಕಲಿ ಕೊಠಡಿ ಸುಂದರವಾಗಿ ಕಾಣುತ್ತಿದೆ. ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಹಾಗೂ ವಿದ್ಯಾರ್ಥಿಗಳು ವಿಶ್ವಾಸ ಉಳಿಸಿಕೊಳ್ಳುವoತಾಗಿದೆ.&lt;/p&gt;&lt;p&gt;1963 ರಲ್ಲಿ ಶುರುವಾದ ವಿದ್ಯುತ್ ಕಾಲೋನಿ ಶಾಲೆಗೆ ಮುಖ್ಯ ಶಿಕ್ಷಕಿ ಎಚ್.ಲೋಕಮ್ಮ, ಸಹ ಶಿಕ್ಷಕರಾದ ವಸಂತ ಕುಮಾರ್, ಎಂ.ಮಾರುತಿಯವರು ಹೊಸ ರೂಪ ನೀಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಉಳಿದ ಶಾಲೆಗಳವರಿಗೆ ಮಾದರಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕಿದೆ&lt;/strong&gt;&lt;/h3&gt;&lt;p&gt;ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ಗೋ ಬಸವರಾಜ್ ಪ್ರತಿಕ್ರಿಯೆ ನೀಡಿ, ಸರ್ಕಾರಿ ಶಾಲೆಗಳನ್ನು ಶಿಕ್ಷಕರು ಮನಸು ಮಾಡಿದರೆ ಪೋಷಕರು ಬೆರಗುಗಣ್ಣಿನಿಂದ ನೋಡುವಂತೆ ಮಾಡಬಹುದು ಎಂಬುದಕ್ಕೆ ವಿದ್ಯುತ್ ಕಾಲೋನಿ ಶಾಲೆ ಮಾದರಿ. ಖಾಸಗಿ ಶಾಲೆಗಳ ಅಬ್ಬರದಲ್ಲಿ ಅಲ್ಲಲ್ಲಿ ಕಣ್ಮುಚ್ಚುತ್ತಿರುವ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಬೇಕಿದೆ. ನಾವೆಲ್ಲಾ ಗಮನಿಸಿದಂತೆ ನೋಡಲಿಕ್ಕು ಆಗದಂತ ವಾತಾವರಣವಿದ್ದ ಶಾಲೆಯನ್ನು ನೋಡುಗರು ಕಣ್ಣರಳಿಸುವಂತೆ ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chitradurga-hiriyur-keb-government-school-which-began-in-1963-is-a-testament-to-the-commitment-of-teachers-mrq/articleshow-9trsvbs"/>
        </item>
        <item>
            <title><![CDATA[ದಾವಣಗೆರೆ ಶಾಸಕ ಸಮರ್ಥ ಶಾಮನೂರು ಕಾರು ಭೀಕರ ಅಪಘಾತ; ಓವರ್‌ಟೇಕ್ ಮಾಡುವಾಗ ಅನಾಹುತ]]></title>
            <link>https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f</link>
            <guid isPermaLink="true">https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f</guid>
            <pubDate>Mon, 24 Aug 2026 18:25:01 +0530</pubDate>
            <description><![CDATA[&lt;p&gt;ದಾವಣಗೆರೆ ಶಾಸಕ ಸಮರ್ಥ ಶಾಮನೂರು ಅವರ ಕಾರು ಚಿತ್ರದುರ್ಗದ ಹಿರಿಯೂರು ಬಳಿ ಸರಣಿ ಅಪಘಾತಕ್ಕೀಡಾಗಿದ್ದು, ಶಾಸಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಸಂದೀಪ್ ಎಂಬುವವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಘಟನೆ ಹೇಗೆ ಆಯಿತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0sxby70wzd0ezjzrzsxzkrd,imgname-samarth-shamnuru-1787576056032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಬಳಿ ದಾವಣಗೆರೆ ಕ್ಷೇತ್ರದ ಶಾಸಕ ಸಮರ್ಥ ಶಾಮನೂರು ಅವರ ಕಾರು ಅಪಘಾತಕ್ಕೀಡಾಗಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಸಂಭವಿಸಿದ ಈ ಸರಣಿ ಅಪಘಾತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಶಾಸಕ ಸಮರ್ಥ ಶಾಮನೂರು ಅವರು ಬೆಂಗಳೂರಿನಿಂದ ದಾವಣಗೆರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಹಿರಿಯೂರು ತಾಲೂಕಿನ ಕೆ.ಆರ್.ಹಳ್ಳಿ ಗೇಟ್ ಸಮೀಪ ಬಂದಾಗ, ಅತಿ ವೇಗವಾಗಿ ಬಂದ ಕಾರೊಂದು ಮತ್ತೊಂದು ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ಶಾಸಕರು ಪ್ರಯಾಣಿಸುತ್ತಿದ್ದ ಕಾರು ಕೂಡ ಈ ವೇಳೆ ಹಿಂಬದಿಯಲ್ಲೇ ಬರುತ್ತಿತ್ತು. ಅಪಘಾತದ ಗಡಿಬಿಡಿಯಲ್ಲಿ ಶಾಸಕರ ಕಾರಿಗೆ ಮತ್ತೊಂದು ಎರ್ಟಿಗಾ ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಓರ್ವನಿಗೆ ಗಾಯ, ಬೆಂಗಳೂರಿಗೆ ರವಾನೆ&lt;/strong&gt;&lt;/h2&gt;&lt;p&gt;ಪಲ್ಟಿಯಾದ ಕಾರಿನಲ್ಲಿದ್ದ ಸಂದೀಪ್ (45) ಎಂಬುವವರಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಸಂದೀಪ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಶಾಸಕ ಸಮರ್ಥ ಶಾಮನೂರು ಅವರಿಗೆ ಯಾವುದೇ ಗಾಯಗಳಾಗಿಲ್ಲ. ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ನಂತರ ಮತ್ತೊಂದು ಕಾರಿನಲ್ಲಿ ದಾವಣಗೆರೆಗೆ ಪ್ರಯಾಣ ಮುಂದುವರಿಸಿದ್ದಾರೆ.&lt;/p&gt;&lt;p&gt;ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆ ಮತ್ತು ಅಜಾಗರೂಕತೆಯಿಂದ ಓವರ್ ಟೇಕ್ ಮಾಡಲು ಹೋದದ್ದು ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.&lt;/p&gt;]]></content:encoded>
            <category>chitradurga</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/davanagere-samarth-shamanuru-car-accident-in-chitradurga-gkn/articleshow-ammsa1f"/>
        </item>
        <item>
            <title><![CDATA[ಒಂದೆಡೆ 4 ಲಕ್ಷದ ಚಿನ್ನ ಕಳೆದುಕೊಂಡ ಆತಂಕ, ಮತ್ತೊಂದೆಡೆ ಶಿಕ್ಷಕನ ಪ್ರಾಮಾಣಿಕತೆ: ಕೊನೆಗೆ ಸಿಕ್ಕಿತು ಸಂತಸದ ಸುದ್ದಿ]]></title>
            <link>https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av</link>
            <guid isPermaLink="true">https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av</guid>
            <pubDate>Sat, 22 Aug 2026 17:45:48 +0530</pubDate>
            <description><![CDATA[&lt;p&gt;ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mpbg4x10e81j38mzeqv4zp,imgname-bvjvb-1787400929437.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಳ್ಳಕೆರೆ (ಆ.22): &lt;/strong&gt;ಚಳ್ಳಕೆರೆಯಲ್ಲಿ ಬಂಗಾರದ ಅಂಗಡಿ ಮಾಲೀಕರೊಬ್ಬರು ಗುರುವಾರ ಸಂಜೆ ಅಂಗಡಿ ಮುಚ್ಚಿಕೊಂಡು ಮನೆಗೆ ಬರುವಾಗ ತನ್ನ ಪರ್ಸ್ ನಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದ ಸುಮಾರು ನಾಲ್ಕು ಲಕ್ಷದ ಆಭರಣ ಹಾಗೂ ಇನ್ನಿತರೆ ವಸ್ತುಗಳನ್ನು ಕಳೆದು ಕೊಂಡಿದ್ದರು. ದಾರಿಯಲ್ಲಿ ಆಭರಣಗಳ ಪರ್ಸ್ ಶಿಕ್ಷಕ ವಿಶ್ವನಾಥ್ ಎಂಬುವರಿಗೆ ಸಿಕ್ಕಿದ್ದು, ಸಿಕ್ಕ ಆಭರಣವನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ನಡೆದಿದೆ.&lt;/p&gt;&lt;p&gt;ನಗರದ ತಿರುಮಲ ಬಂಗಾರದ ಅಂಗಡಿ ಮಾಲೀಕರಾದ ಸುಮಾ ವೆಂಕಟೇಶ್ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಆಭರಣ ಕೊಡಲು ಪರ್ಸ್ ನಲ್ಲಿ ಇಟ್ಟುಕೊಂಡು ಸ್ಕೂಟಿಯಲ್ಲಿ ಹೊರಟಿದ್ದರು. ರಸ್ತೆ ಉಬ್ಬಿನಲ್ಲಿ ಪರ್ಸ್ ಕಳೆದು ಹೋಗಿದೆ. ತಕ್ಷಣವೇ ಗಾಬರಿಯಾದ ಸುಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಭರಣ ಕಳೆದುಕೊಂಡು ಬಂದಿದ್ದ ಮಹಿಳೆಯನ್ನು ಸಮಾಧಾನ ಪಡಿಸಿದ ಸಿಪಿಐ ಕುಮಾರ್, ಪರ್ಸ್ ನಲ್ಲಿ ಏನೇನು ಇತ್ತು ಎಂಬ ವಿವರ ಪಡೆದು ಮೊಬೈಲ್ ಪರ್ಸ್ ನಲ್ಲೇ ಇದೆ ಎಂಬ ಮಾಹಿತಿ ಪಡೆದು ಲೋಕೇಷನ್ ಹಾಕಿದ್ದಾರೆ.&lt;/p&gt;&lt;p&gt;ಪರ್ಸ್ ನಲ್ಲೆ ಇದ್ದ ಮೊಬೈಲ್ ಲೋಕೇಷನ್ ತೋರಿದ ಕಡೆ ಸುಮಾರು ಹತ್ತು ಜನ ಪೊಲೀಸರು ಸುತ್ತುವರಿದು ಹುಡುಕಾಡ ತೊಡಗಿದ್ದಾರೆ. ಪೊಲೀಸರನ್ನು ಕಂಡ ಶಿಕ್ಷಕ ಸ್ಥಳದಲ್ಲೇ ಇದ್ದರು. ಶಿಕ್ಷಕ ವಿಶ್ವನಾಥ್ ಯಾವುದೋ ಪರ್ಸ್ ಸಿಕ್ಕಿದೆ ಎಂದು ತೋರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಪರ್ಸ್ ನಲ್ಲಿದ್ದ ಆಭರಣ ಪರಿಶೀಲಿಸಿದಾಗ ಎಲ್ಲಾ ಆಭರಣ ವಸ್ತುಗಳು ಹಾಗೇಯೇ ಇರುವುದನ್ನು ಕಂಡು ಸುಮಾ ಅವರಿಗೆ ಹೋದ ಜೀವ ಬಂದಂತಾಗಿದೆ. ಇದೆಲ್ಲವೂ ಅರ್ಧ ಗಂಟೆಯ ಒಳಗೆ ನಡೆದ ಘಟನಾವಳಿಯಾಗಿದೆ ಎಂದು ವೃತ್ತ ನಿರೀಕ್ಷಕ ಕೆ. ಕುಮಾರ್ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಕನ ಆದರ್ಶಕ್ಕೆ ಮೆಚ್ಚುಗೆ&lt;/strong&gt;&lt;/h2&gt;&lt;p&gt;ವರಮಹಾಲಕ್ಷ್ಮಿ ದಿನವೇ ಕಳೆದುಕೊಂಡಿದ್ದ ಆಭರಣ ಸಿಕ್ಕ ಖುಷಿಯಲ್ಲಿ ಮಹಿಳೆ ಇದ್ದರೆ, ಲಕ್ಷಾಂತರ ಬೆಲೆ ಬಾಳುವ ಆಭರಣ ಸಿಕ್ಕಿದ್ದನ್ನ ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದ ಶಿಕ್ಷಕ ವಿಶ್ವನಾಥ್ ಅವರ ಆದರ್ಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಆಭರಣವನ್ನು ಹುಡುಕಲು ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದ ಸಿಪಿಐ ಕುಮಾರ್ ಮತ್ತವರ ಪೋಲೀಸರ ತಂಡದ ಕಾರ್ಯ ಸಾರ್ವಜನಿಕ ಮೆಚ್ಚುಗೆಗೆ ಕಾರಣವಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/challakere-teacher-wins-praise-for-returning-4-lakh-gold-jewellery-gvd/articleshow-axsb2av"/>
        </item>
        <item>
            <title><![CDATA[ಡಿ ಬಾಸ್ ಗ್ಯಾಂಗ್‌ನಲ್ಲಿ ಮತ್ತೆ ಬಿರುಕು, ದರ್ಶನ್‌ ನಿಂದ ದೂರವಾಗಲು ನಿರ್ಧರಿಸಿದ A-6 ಮತ್ತು A-7 ಆರೋಪಿಗಳು!]]></title>
            <link>https://kannada.asianetnews.com/bengaluru-urban/renukaswamy-case-actor-darshan-aids-accused-a6-jagadish-and-a7-anukumar-seek-prison-transfer-to-chitradurga-jail-gdp/articleshow-ba40lc8</link>
            <guid isPermaLink="true">https://kannada.asianetnews.com/bengaluru-urban/renukaswamy-case-actor-darshan-aids-accused-a6-jagadish-and-a7-anukumar-seek-prison-transfer-to-chitradurga-jail-gdp/articleshow-ba40lc8</guid>
            <pubDate>Thu, 03 Sep 2026 13:08:16 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೊತೆ ಬಂಧಿತರಾಗಿರುವ ಆರೋಪಿಗಳಾದ ಜಗದೀಶ್ ಮತ್ತು ಅನುಕುಮಾರ್, ತಮ್ಮನ್ನು ಚಿತ್ರದುರ್ಗ ಜೈಲಿಗೆ ವರ್ಗಾಯಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದು ದರ್ಶನ್ ಬಳಗದಿಂದ ದೂರ ಸರಿಯುವ ಯತ್ನ ಎನ್ನಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1k32vsg2tb6c26m1y4prxxh,imgname-anukumar-and-jagadeesh-1788420910895.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಪ್ರಕರಣದಲ್ಲಿ ನಟ ದರ್ಶನ್ ಅವರೊಂದಿಗೆ ಬಂಧಿತರಾಗಿರುವ ಎ-5 ಜಗದೀಶ್ ಮತ್ತು ಎ-6 ಅನುಕುಮಾರ್ ಅವರು ನಟ ದರ್ಶನ್ ಪಡೆಯಿಂದ ದೂರ ಸರಿಯುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ತಮ್ಮನ್ನು ಚಿತ್ರದುರ್ಗದ ಜಿಲ್ಲಾ ಜೈಲಿಗೆ ವರ್ಗಾಯಿಸುವಂತೆ ಕೋರಿ ಇಬ್ಬರೂ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.&lt;/p&gt;&lt;h2&gt;ಜೈಲು ಅಧಿಕಾರಿಗಳ ಮೌನ, ಕೋರ್ಟ್ ಮೆಟ್ಟಿಲೇರಿದ ಆರೋಪಿಗಳು&lt;/h2&gt;&lt;p&gt;ಚಿತ್ರದುರ್ಗ ಮೂಲದವರಾದ ಆರೋಪಿ ಜಗದೀಶ್ (A-6) ಹಾಗೂ ಅನುಕುಮಾರ್ (A-7), ತಮ್ಮನ್ನು ಸ್ವಂತ ಜಿಲ್ಲೆಯಾದ ಚಿತ್ರದುರ್ಗದ ಕಾರಾಗೃಹಕ್ಕೆ ವರ್ಗಾಯಿಸುವಂತೆ ಈ ಹಿಂದೆಯೂ ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಆರೋಪಿಗಳು ಸಲ್ಲಿಸಿದ್ದ ಅರ್ಜಿಗೆ ಜೈಲು ಆಡಳಿತ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಅಥವಾ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ, ತಮ್ಮ ವರ್ಗಾವಣೆ ಅರ್ಜಿಯನ್ನು ಪುರಸ್ಕರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಆರೋಪಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;59ನೇ ಸಿಸಿಎಚ್ ನ್ಯಾಯಾಲಯದ ಮಹತ್ವದ ಆದೇಶ&lt;/h2&gt;&lt;p&gt;ಅರ್ಜಿಯ ವಿಚಾರಣೆ ನಡೆಸಿದ 59ನೇ ಸಿಸಿಎಚ್ (CCH) ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಆರೋಪಿಗಳು ಸಲ್ಲಿಸಿರುವ ಅರ್ಜಿಯ ಅನ್ವಯ ನಿಯಮಾನುಸಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಮತ್ತು ಈ ಮನವಿಯನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು ಎಂದು ಆದೇಶಿಸಿದೆ. ಅಷ್ಟೇ ಅಲ್ಲದೆ, ಅರ್ಜಿಯನ್ನು ಇತ್ಯರ್ಥಪಡಿಸಿದ ಬಳಿಕ ಆ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಜೈಲು ಆಡಳಿತಕ್ಕೆ ನಿರ್ದೇಶಿಸಿದೆ.&lt;/p&gt;&lt;h2&gt;ದರ್ಶನ್ ಜಾಲದಿಂದ ದೂರವಾಗುವ ಯತ್ನ?&lt;/h2&gt;&lt;p&gt;ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಅವರಿಂದ ತಮ್ಮನ್ನು ಕಾಯ್ದುಕೊಳ್ಳಲು ಹಾಗೂ ವಿಚಾರಣೆಯ ಅವಧಿಯಲ್ಲಿ ತಮ್ಮ ತವರು ಜಿಲ್ಲೆಯಲ್ಲೇ ಇರಲು ಈ ಇಬ್ಬರೂ ಆರೋಪಿಗಳು ಬಯಸುತ್ತಿದ್ದಾರೆ ಎಂಬುದು ಈ ನಡೆಯಿಂದ ವ್ಯಕ್ತವಾಗುತ್ತಿದೆ. ನ್ಯಾಯಾಲಯದ ಪ್ರಸ್ತುತ ಆದೇಶದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದು, A-6 ಮತ್ತು A-7 ಆರೋಪಿಗಳು ಚಿತ್ರದುರ್ಗ ಜೈಲಿಗೆ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.&lt;/p&gt;&lt;h2&gt;ಪ್ರದೂಷ್&zwnj; ಮಾಫಿ ಸಾಕ್ಷಿ ಪ್ರಶ್ನಿಸಿದ್ದ ದರ್ಶನ್&zwnj; ಅರ್ಜಿ: 7ಕ್ಕೆ ಹೈ ತೀರ್ಪು&lt;/h2&gt;&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಸಾಕ್ಷಿಯಾಗಿದ್ದ ಪ್ರದೂಷ್&zwnj; ಎಸ್&zwnj;.ರಾವ್&zwnj; ಅನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ನಗರದ 59ನೇ ಸಿಟಿ ಸಿವಿಲ್&zwnj; ತಮ್ಮ ಸೆಷನ್ಸ್ ಕೋರ್ಟ್&zwnj; ಆದೇಶ ರದ್ದು ಕೋರಿ ನಟ ದರ್ಶನ್&zwnj; ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಸೆ.7ರಂದು ಪ್ರಕಟಿಸುವುದಾಗಿ ಹೈಕೋರ್ಟ್&zwnj; ತಿಳಿಸಿದೆ. ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯವು ಪ್ರದೂಷ್&zwnj; ಸಾಕ್ಷ್ಯವನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡಿದೆ.&lt;/p&gt;&lt;p&gt;ಪ್ರಕರಣದ 2ನೇ ಆರೋಪಿಯಾಗಿರುವ ದರ್ಶನ್&zwnj; ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಬುಧವಾರ ಬೆಳಗ್ಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ಬುಧವಾರ ಕಲಾಪ ಆರಂಭವಾದ ನಂತರ, &lsquo;ಇಂದು ಸಾಕಷ್ಟು ಅರ್ಜಿಗಳ ವಿಚಾರಣೆ ನಿಗದಿಯಾಗಿವೆ. ಇದರಿಂದ ದಿನದ ಕಲಾಪದ ಕೊನೆಯಲ್ಲಿ ಅರ್ಜಿಯ ಕುರಿತ ಆದೇಶದ ಉಕ್ತಲೇಖನ ನೀಡುತ್ತೇನೆ&rsquo; ಎಂದು ದರ್ಶನ್&zwnj; ಪರ ವಕೀಲರಿಗೆ ನ್ಯಾಯಮೂರ್ತಿಗಳು ತಿಳಿಸಿದರು.&lt;/p&gt;&lt;p&gt;ಆದರೆ, ರಾತ್ರಿ 8 ಗಂಟೆಗೆ ದಿನದ ಕಲಾಪ ಮುಕ್ತಾಯವಾಯಿತು. ಆಗ ನ್ಯಾಯಮೂರ್ತಿಗಳು, &lsquo;ಈಗಾಗಲೇ 8 ಗಂಟೆಯಾಗಿದೆ. ಆದೇಶದ ಉಕ್ತಲೇಖನ ನೀಡಲು ಸಾಧ್ಯವೇ?&rsquo; ಎಂದು ದರ್ಶನ್&zwnj; ಪರ ವಕೀಲರನ್ನು ಕೇಳಿದರು.&lt;/p&gt;&lt;p&gt;ದರ್ಶನ್&zwnj; ಪರ ವಕೀಲರು, &lsquo;ಬೇರೊಂದು ದಿನ ಆದೇಶ ನೀಡಬೇಕು&rsquo; ಎಂದು ಕೋರಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ, &lsquo;ಸೆ.7ರಂದು ಅರ್ಜಿ ಕುರಿತ ಆದೇಶ ಪ್ರಕಟಿಸುತ್ತೇನೆ&rsquo; ಎಂದು ತಿಳಿಸಿದರು. ಅಲ್ಲದೆ, ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯವು ಪ್ರದೂಷ್&zwnj; ಸಾಕ್ಷ್ಯವನ್ನು ದಾಖಲಿಸುವ ಪ್ರಕ್ರಿಯೆ ಮುಂದೂಡಿ, ರಾತ್ರಿ 8 ಗಂಟೆ 7 ನಿಮಿಷಕ್ಕೆ ದಿನದ ಕಲಾಪ ಮುಕ್ತಾಯಗೊಳಿಸಿದರು.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/renukaswamy-case-actor-darshan-aids-accused-a6-jagadish-and-a7-anukumar-seek-prison-transfer-to-chitradurga-jail-gdp/articleshow-ba40lc8"/>
        </item>
        <item>
            <title><![CDATA[Indian Railways ಚಿಕ್ಕಜಾಜೂರು-ಬಳ್ಳಾರಿ ಹಳಿ ದ್ವಿಪಥಕ್ಕೆ ₹3340 ಕೋಟಿ: ಸೋಮಣ್ಣ]]></title>
            <link>https://kannada.asianetnews.com/karnataka-districts/rs-3340-crore-sanctioned-for-chikkajajur-ballary-doubling-project-central-railway-minister-v-somanna-mrq/articleshow-bsolhxo</link>
            <guid isPermaLink="true">https://kannada.asianetnews.com/karnataka-districts/rs-3340-crore-sanctioned-for-chikkajajur-ballary-doubling-project-central-railway-minister-v-somanna-mrq/articleshow-bsolhxo</guid>
            <pubDate>Mon, 31 Aug 2026 11:18:06 +0530</pubDate>
            <description><![CDATA[&lt;p&gt;ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ 33 ರೈಲ್ವೆ ಸೇತುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1b5pve9rem8zy35m66cesn3,imgname-indian-railways-1788155227593.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ:&lt;/strong&gt; ಚಿಕ್ಕಜಾಜೂರು-ಬಳ್ಳಾರಿ ಡಬ್ಲಿಂಗ್ ಯೋಜನೆಗೆ 3,340 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.&lt;/p&gt;&lt;p&gt;ನಗರದ ರೈಲ್ವೇ ನಿಲ್ದಾಣದ ಹತ್ತಿರದ ಲೆವೆಲ್ ಕ್ರಾಸಿಂಗ್ ಬಳಿ ನಿರ್ಮಿಸಲಾಗುತ್ತಿರುವ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಟ್ಟು 33 ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದರು.&lt;/p&gt;&lt;h2&gt;&lt;strong&gt;ದೇಶಾದ್ಯಂತ ರೈಲ್ವೆ ವಿದ್ಯುದ್ದೀಕರಣ ಶೇ.99ರಷ್ಟು ಪೂರ್ಣ&lt;/strong&gt;&lt;/h2&gt;&lt;p&gt;ದೇಶಾದ್ಯಂತ ರೈಲ್ವೆ ವಿದ್ಯುದ್ದೀಕರಣ ಶೇ.99ರಷ್ಟು ಪೂರ್ಣಗೊಂಡಿದ್ದು, ಈ ವರ್ಷದ ಕೊನೆಯೊಳಗೆ ಶೇ.100ರಷ್ಟು ಸಾಧಿಸಿ ವಿಶ್ವ ದಾಖಲೆ ಬರೆಯಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಕಾರ್ಯ 2 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಕರ್ನಾಟಕ ಶೇ.100ರಷ್ಟು ರೈಲ್ವೆ ವಿದ್ಯುದ್ದೀಕರಣ ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ವಿ.ಸೋಮಣ್ಣ ಭರವಸೆ ನೀಡಿದರು.&lt;/p&gt;&lt;p&gt;ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ 52,000 ಕೋಟಿ ರು.ಗೂ ಹೆಚ್ಚು ಅನುದಾನ ತಂದಿದ್ದೇನೆ. ಹೊಸ ರೈಲ್ವೇ ಯೋಜನೆಗಳಿಗೆ 15,000 ಕೋಟಿ ರು. ನೀಡಲಾಗಿದೆ. ಗದಗ-ವಾಡಿ, ಗಿಣಿಗೆರಾ-ರಾಯಚೂರು, ಶಿವಮೊಗ್ಗ-ರಾಣೆಬೆನ್ನೂರು, ಕಡೂರು-ಚಿಕ್ಕಮಗಳೂರು-ಬೇಲೂರು ಹಾಗೂ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗಗಳ ಕಾಮಗಾರಿಗಳು ಭರದಿಂದ ಸಾಗಿವೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಹಿಂದೆ ರಾಜ್ಯದ ರೈಲ್ವೆ ಯೋಜನೆಗಳಿಗೆ ವಾರ್ಷಿಕ 380 ರಿಂದ 400 ಕೋಟಿ ರು. ನೀಡಲಾಗುತ್ತಿತ್ತು. ಆದರೆ, ಈಗ ಪ್ರತಿ ವರ್ಷ 7,500 ರಿಂದ 8,000 ಕೋಟಿ ರು.ನೀಡಲಾಗುತ್ತಿದೆ. ರಾಜ್ಯದ ಸುಮಾರು 62 ರೈಲ್ವೆ ಸ್ಟೇಷನ್&zwj;ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.&lt;/p&gt;&lt;h3&gt;&lt;strong&gt;ತುಮಕೂರು - ಚಿತ್ರದುರ್ಗ - ದಾವಣಗೆರೆ ನೂತನ ನೇರ ರೈಲ್ವೆ ಮಾರ್ಗ&lt;/strong&gt;&lt;/h3&gt;&lt;p&gt;ತುಮಕೂರು - ಚಿತ್ರದುರ್ಗ - ದಾವಣಗೆರೆ ನೂತನ ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ.92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ ಶೇ.8 ರಷ್ಟು ಜಮೀನನ್ನು ಜಿಲ್ಲಾಡಳಿತ ಶೀಘ್ರವೇ ಹಸ್ತಾಂತರಿಸಿದರೆ, ಮುಂದಿನ ಒಂದೂವರೆ ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಇದಲ್ಲದೆ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.&lt;/p&gt;&lt;p&gt;ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.&lt;/p&gt;&lt;p&gt;ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ರೈಲ್ವೆ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿರುವುದರಿಂದ 25 ರಿಂದ 30 ವರ್ಷಗಳ ಸುದೀರ್ಘ ಸಂಚಾರ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ರಾಜ್ಯ ಸರ್ಕಾರ ಶೇ.50ರಷ್ಟು ವೆಚ್ಚ ಹಂಚಿಕೆ ಮಾಡಬೇಕಾದ ಯೋಜನೆಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಈ ಯೋಜನೆಗೆ ಶೇಕಡಾ 100ರಷ್ಟು ಹಣವನ್ನು ಕೇಂದ್ರ ಸರ್ಕಾರವೇ ಭರಿಸಿದೆ ಎಂದರು.&lt;/p&gt;&lt;p&gt;&lt;strong&gt;ವಿಶ್ವಮಾನವ ಎಕ್ಸ್ ಪ್ರೆಸ್, ಚಾಲುಕ್ಯ ಎಕ್ಸ್&zwj;ಪ್ರೆಸ್&zwj;&lt;/strong&gt;&lt;/p&gt;&lt;p&gt;ಹೊಸದುರ್ಗದಲ್ಲಿ ವಿಶ್ವಮಾನವ ಎಕ್ಸ್ ಪ್ರೆಸ್, ಚಾಲುಕ್ಯ ಎಕ್ಸ್&zwj;ಪ್ರೆಸ್&zwj;ಗಳ ರೈಲುಗಳ ನಿಲುಗಡೆ, ಹೊಳಲ್ಕೆರೆಯಲ್ಲಿ ಸಿದ್ಧಗಂಗಾ ಎಕ್ಸ್ ಪ್ರೆಸ್ ಹಾಗೂ ಚಿಕ್ಕಜಾಜೂರಿನಲ್ಲಿ ರಾಣಿ ಚನ್ನಮ್ಮ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್ ರೈಲಿಗೆ ನಿಲುಗಡೆ ಕಲ್ಪಿಸಬೇಕು ಎಂದು ಸಚಿವ ವಿ. ಸೋಮಣ್ಣ ಅವರಿಗೆ ಸಂಸದ ಗೋವಿಂದ ಎಂ ಕಾರಜೋಳ ಮನವಿ ಮಾಡಿದರು&lt;/p&gt;&lt;p&gt;ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ರಾಜಿ ಇರಬಾರದು ಎಂದು ಮನವಿ ಮಾಡಿದರು.&lt;/p&gt;&lt;p&gt;ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜೀಪೀರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಹೆಚ್ಚುವರಿ ರೈಲ್ವೇ ವಿಭಾಗೀಯ ಅಧಿಕಾರಿ ಶಬ್ಬಾಸ್ ಅಹ್ಮದ್ ಉಪಸ್ಥಿರಿದ್ದರು.&lt;/p&gt;&lt;p&gt;--&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rs-3340-crore-sanctioned-for-chikkajajur-ballary-doubling-project-central-railway-minister-v-somanna-mrq/articleshow-bsolhxo"/>
        </item>
        <item>
            <title><![CDATA[44 ವರ್ಷಗಳ ಇತಿಹಾಸವಿರೋ ಕೋನಿಗರಹಳ್ಳಿ ಬ್ರಿಡ್ಜ್ ಕುಸಿತ; ಮರೆಯಾದ ಗುಂಡೂರಾವ್ ಕಾಲದ ಸ್ಮರಣೀಯ ಸೇತುವೆ]]></title>
            <link>https://kannada.asianetnews.com/karnataka-districts/44-year-old-konigarahalli-bridge-inaugurated-by-late-cm-gundu-rao-collapses-gkn/articleshow-exhxqry</link>
            <guid isPermaLink="true">https://kannada.asianetnews.com/karnataka-districts/44-year-old-konigarahalli-bridge-inaugurated-by-late-cm-gundu-rao-collapses-gkn/articleshow-exhxqry</guid>
            <pubDate>Mon, 31 Aug 2026 22:12:04 +0530</pubDate>
            <description><![CDATA[&lt;p&gt;ಮಾಜಿ ಸಿಎಂ ದಿ. ಗುಂಡೂರಾವ್ 1982ರಲ್ಲಿ ಉದ್ಘಾಟಿಸಿದ್ದ ಚಳ್ಳಕೆರೆಯ ಕೋನಿಗರಹಳ್ಳಿ ಸೇತುವೆ ಈಗ ಕುಸಿತ ಕಂಡಿದ್ದು 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1cb3qs8p4z2r95qhjp45ksn,imgname-konigarahalli-bridge-1788194447144.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಳ್ಳಕೆರೆ: &lt;/strong&gt;ಸುಮಾರು 44 ವರ್ಷಗಳ ಇತಿಹಾಸ ಹೊಂದಿದ್ದ ಕೋನಿಗರಹಳ್ಳಿ ಸೇತುವೆ ಸಂಪೂರ್ಣವಾಗಿ ಕುಸಿತ ಕಂಡಿದ್ದು, 15ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.&lt;/p&gt;&lt;h2&gt;&lt;strong&gt;ಗುಂಡೂರಾವ್ ಕಾಲದ ಸ್ಮಾರಕಕ್ಕೀಗ ದುಸ್ಥಿತಿ!&lt;/strong&gt;&lt;/h2&gt;&lt;p&gt;1982ರಲ್ಲಿ ಅಂದಿನ ಸಿಎಂ ದಿವಂಗತ ಗುಂಡೂರಾವ್ ಅವರು ವೇದಾವತಿ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ಉದ್ಘಾಟಿಸಿದ್ದರು. ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಹರಿದು ಬರುವ ವೇದಾವತಿ ನದಿ ನೀರು ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಮೂಲಕ ಆಂಧ್ರಪ್ರದೇಶಕ್ಕೆ ಸಾಗುತ್ತದೆ. ಅಂತಹ ಪ್ರಮುಖ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಸೇತುವೆ ಕಳೆದ 4 ದಶಕಗಳಿಂದ ಸಾವಿರಾರು ಜನರಿಗೆ ದಾರಿಯಾಗಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಈ ಐತಿಹಾಸಿಕ ಸೇತುವೆ ಬಿರುಕು ಬಿಟ್ಟು ಕುಸಿದು ಬಿದ್ದಿದೆ.&lt;/p&gt;&lt;p&gt;ಕಳೆದ ಎರಡು ಮೂರು ವರ್ಷಗಳಿಂದ ಈ ಸೇತುವೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಲೇ ಇತ್ತು. ಅದರಲ್ಲೂ ಕಳೆದ ವರ್ಷ ಸುರಿದ ಭೀಕರ ಮಳೆಗೆ ವೇದಾವತಿ ನದಿ ತುಂಬಿ ಹರಿದು ಸೇತುವೆ ಜಲಾವೃತಗೊಂಡಿತ್ತು. ನೀರಿನ ರಭಸಕ್ಕೆ ಅಡಿಪಾಯ ಅಲುಗಾಡಿದ್ದು, ಈಗ ಸೇತುವೆ ಸಂಪೂರ್ಣವಾಗಿ ಕುಸಿಯುವ ಹಂತಕ್ಕೆ ತಲುಪಿದೆ. ಈ ಮಾರ್ಗವಾಗಿ ಸಂಚರಿಸುವಾಗ ಸೇತುವೆ ನಡುಗುತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.&lt;/p&gt;&lt;h2&gt;&lt;strong&gt;15 ಹಳ್ಳಿಗಳ ಶಾಲಾ ಮಕ್ಕಳ ಭವಿಷ್ಯಕ್ಕೆ ಅಡ್ಡಿ&lt;/strong&gt;&lt;/h2&gt;&lt;p&gt;ಪರಶುರಾಂಪುರ ಸೇರಿದಂತೆ ಸುತ್ತಮುತ್ತಲಿನ ಸುಮಾರು 15 ಹಳ್ಳಿಗಳಿಗೆ ಇದೇ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಪ್ರತಿದಿನ ನೂರಾರು ವಾಹನಗಳು, ಶಾಲಾ ಬಸ್&zwnj;ಗಳು ಇದೇ ಹಳೆಯ ಸೇತುವೆ ಮೇಲೆ ಸಂಚರಿಸುತ್ತವೆ. ಬೃಹತ್ ಗಾತ್ರದ ವಾಹನಗಳು ಬಂದಾಗ ಸೇತುವೆ ಕಂಪಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ದೊಡ್ಡ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.&lt;/p&gt;&lt;p&gt;24/08/2026 ರಂದು ಚಳ್ಳಕೆರೆ ತಾಲೂಕಿನ ಕೊನಿಗರಹಳ್ಳಿ ಇದೆ ಬ್ರೀಡ್ ಮೇಲೆ ಪ್ರಯಾಣ ಮಾಡಿದೆ ಇಂದು ಕುಸಿತ ಕಂಡಿದೆ&amp;nbsp;ಗುಂಡೂರಾವ್ ಉದ್ಘಾಟನೆ ಮಾಡಿದ್ದ https://t.co/Kybksxpf6X pic.twitter.com/CoOja74vQ0&lt;/p&gt;&lt;p&gt;&mdash; ಪವಿತ್ರ (@pavithraC1998) August 31, 2026&lt;/p&gt;&lt;p&gt;&lt;/p&gt;]]></content:encoded>
            <category>chitradurga</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/44-year-old-konigarahalli-bridge-inaugurated-by-late-cm-gundu-rao-collapses-gkn/articleshow-exhxqry"/>
        </item>
        <item>
            <title><![CDATA[ದರ್ಶನ್‌ಗೆ ಭಯ ಹುಟ್ಟಿಸಿದ ಮಾಫಿ ಸಾಕ್ಷಿ, 11 ಪುಟಗಳ ಅರ್ಜಿಯಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಭಯಾನಕ ಮಾಹಿತಿ ಇದು!]]></title>
            <link>https://kannada.asianetnews.com/state/renukaswamy-case-actor-darshan-aide-pradosh-files-approver-plea-details-shocking-assault-gdp/articleshow-he4eqn4</link>
            <guid isPermaLink="true">https://kannada.asianetnews.com/state/renukaswamy-case-actor-darshan-aide-pradosh-files-approver-plea-details-shocking-assault-gdp/articleshow-he4eqn4</guid>
            <pubDate>Mon, 10 Aug 2026 13:58:44 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಮತ್ತು ದರ್ಶನ್ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಜೂನ್ 8 ರಂದು ಪಟ್ಟಣಗೆರೆ ಶೆಡ್&zwnj;ನಲ್ಲಿ ನಡೆದ ಸಂಪೂರ್ಣ ಘಟನಾವಳಿ, ದರ್ಶನ್ ಮತ್ತು ಇತರ ಆರೋಪಿಗಳು ನಡೆಸಿದ ಭೀಕರ ಹಲ್ಲೆಯ ವಿವರಗಳನ್ನು ತನ್ನ ಅರ್ಜಿಯಲ್ಲಿ ಆತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzaska2xpybbwahthxak587h,imgname-pradosh-darshan-renukaswamy-case-1785995044956.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ದರ್ಶನ್ ತೂಗುದೀಪ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ಮತ್ತೊಂದು ಬಹುದೊಡ್ಡ ತಿರುವು ಸಿಕ್ಕಿದೆ. ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ದರ್ಶನ್&zwnj; ಅವರ ಆಪ್ತ ಸ್ನೇಹಿತ ಪ್ರದೋಷ್, ಪ್ರಕರಣದಲ್ಲಿ ತಮಗೆ ಪಶ್ಚಾತ್ತಾಪ ಉಂಟಾಗಿದ್ದು, ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಸಿದ್ಧರಿರುವುದಾಗಿ ತಿಳಿಸಿ 'ಮಾಫಿ ಸಾಕ್ಷಿ' (ಅಪ್ರೂವರ್) ಆಗಲು ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ. 59ನೇ ಸಿಸಿಎಚ್ ಕೋರ್ಟ್&zwnj;ಗೆ ಸಲ್ಲಿಸಲಾಗಿರುವ ಒಟ್ಟು 11 ಪುಟಗಳ ಸುದೀರ್ಘ ಅರ್ಜಿಯಲ್ಲಿ, ಘಟನೆ ನಡೆದ ದಿನದ ಪಿನ್ ಟು ಪಿನ್ ವಿವರಣೆ ಹಾಗೂ ಕೊಲೆ ನಡೆದ ಸ್ಥಳದಲ್ಲಿದ್ದ ಇತರ ಆರೋಪಿಗಳ ಭೀಕರ ಕೃತ್ಯಗಳನ್ನು ಪ್ರದೋಷ್ ಉಲ್ಲೇಖಿಸಿದ್ದಾನೆ.&lt;/p&gt;&lt;h2&gt;ಜೂನ್ 8ರ ಘಟನಾವಳಿ:&lt;/h2&gt;&lt;p&gt;2003ರಲ್ಲಿ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುವಾಗ ದರ್ಶನ್ ಅವರ ಪರಿಚಯವಾಗಿತ್ತು. ಅಲ್ಲಿಂದ ಸ್ನೇಹ ಬೆಳೆಯಿತು. ದರ್ಶನ್ ಅವರ ಮನೆ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ ಎಂದು ಪ್ರದೋಷ್ ತಿಳಿಸಿದ್ದಾನೆ. 2024ರ ಜೂನ್ 8ರಂದು ಬೆಳಗ್ಗೆ ದರ್ಶನ್ ನಿವಾಸಕ್ಕೆ ತೆರಳಿದ್ದೆ. ಅಲ್ಲಿ ಅವರು ಜಿಮ್&zwnj;ನಲ್ಲಿ ತನ್ನ ಟ್ರೈನರ್ ಜೊತೆಗೆ ವರ್ಕ್ಔಟ್&zwnj; ಮಾಡುತ್ತಿದ್ದರು. ಸ್ವಲ್ಪ ಸಮಯ ಅವರ ಜೊತೆಗೆ ಕಳೆದೆ. ಮನೆಗೆ ಹೊರಡುವ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ಒಂದು ಪಾರ್ಟಿ ಇದೆ. ಆರೋಪಿ ಸಂಖ್ಯೆ 10 ವಿನಯ್ ಒಡೆತನದ 'ಸ್ಟೋನಿ ಬ್ರೂಕ್ಸ್' ರೆಸ್ಟೋರೆಂಟ್&zwnj;ಗೆ ಹೋಗೋಣ ಎಂದರು. ಹೀಗಾಗಿ ಮಧ್ಯಾಹ್ನ ಸುಮಾರು 12:30 ಕ್ಕೆ ರೆಸ್ಟೋರೆಂಟ್&zwnj;ಗೆ ತಲುಪಿದೆವು. ರೆಸ್ಟೋರೆಂಟ್ ತಲುಪಿದ ತಕ್ಷಣ ರೆಸ್ಟೋರೆಂಟ್ ಮಾಲೀಕರಾದ ವಿನಯ್ ಮತ್ತು ಕನ್ನಡ ಚಿತ್ರನಟ ಯಶಸ್ ಸೂರ್ಯ ಈಗಾಗಲೇ ಅಲ್ಲಿದ್ದರು. ಅಲ್ಲಿಂದ ಮಹಡಿಗೆ ಹೋಗಿ ದರ್ಶನ್, ನಾಗರಾಜ್, ಯಶಸ್ ಸೂರ್ಯ ಮತ್ತು ವಿನಯ್ ಒಟ್ಟಿಗೆ ಕುಳಿತು ಮಾತನಾಡುತ್ತಿದ್ದಾಗ ನಟ ಚಿಕ್ಕಣ್ಣ ಕೂಡ ರೆಸ್ಟೋರೆಂಟ್&zwnj;ಗೆ ಬಂದರು. ಸ್ವಲ್ಪ ಸಮಯದ ನಂತರ, ಮಧ್ಯಾಹ್ನ ಸುಮಾರು 3 ಗಂಟೆಗೆ, ಪವಿತ್ರಾ ಗೌಡ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಎಂಬ ವ್ಯಕ್ತಿ ರೆಸ್ಟೋರೆಂಟ್&zwnj;ಗೆ ಬಂದನು. ಆತ ದರ್ಶನ್ ಅವರ ಕಿವಿಯಲ್ಲಿ ಏನನ್ನೋ ಪಿಸುಗುಡುತ್ತಾ ತಮ್ಮ ಮೊಬೈಲ್ ಫೋನ್&zwnj;ನಲ್ಲಿ ಏನನ್ನೋ ತೋರಿಸಿ ನಂತರ ಅಲ್ಲಿಂದ ಹೊರಟುಹೋದನು.&lt;/p&gt;&lt;p&gt;ತದನಂತರ, ದರ್ಶನ್ ಪವಿತ್ರಾ ಗೌಡ ಅವರಿಗೆ ಕರೆ ಮಾಡಿ ಊಟ ಬಂದಿದೆಯೇ ಎಂದು ಕೇಳಿದರು. ನೀನು ಊಟ ಮಾಡು, ಬೇಸರ ಮಾಡಿಕೊಳ್ಳಬೇಡ, ನಾನು ಇಲ್ಲಿದ್ದೇನೆ ಎಂದು ದರ್ಶನ್ ಪವಿತ್ರಾಗೆ ಹೇಳಿದರು ಈ ಸಂಭಾಷಣೆಯನ್ನು ನಾನು ಆಲಿಸಿದ್ದೆ ಎಂದು ಪ್ರದೋಷ್ ಹೇಳಿದ್ದಾನೆ. ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಪ್ರತ್ಯೇಕವಾಗಿ ಅಲ್ಲಿಂದ ತೆರಳಿದರು. ನಂತರ ದರ್ಶನ್ ಹೇಳಿದಂತೆ ಸಂಜೆ ಸುಮಾರು 4:30 ಕ್ಕೆ ಪವಿತ್ರಾ ಗೌಡ ಮನೆಗೆ ಕಾರಿನಲ್ಲಿ ಹೋದೆವು. ಪವಿತ್ರಾ ಗೌಡ ಮನೆಯಿಂದ ಕೆಳಗೆ ಬಂದರು ಮತ್ತು ದರ್ಶನ್ ಕಾರಿನಿಂದ ಇಳಿದು ವಿನಯ್ ಅವರಿಗೆ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಅದರಂತೆ ದರ್ಶನ್ ಮತ್ತು ಪವಿತ್ರಾ ಗೌಡ ಹಿಂಭಾಗದ ಸೀಟಿನಲ್ಲಿ ಕುಳಿತರೆ, ವಿನಯ್ ಮುಂಭಾಗದಲ್ಲಿ ಕುಳಿತರು. ವಿನಯ್ ಸೂಚನೆ ನೀಡಿದಂತೆ ಡ್ರೈವರ್ ಸೀಟಿನಲ್ಲಿದ್ದ ಪ್ರದೋಷ್ ಕಾರನ್ನು ಚಲಾಯಿಸಿದ್ದರಂತೆ. ಎಲ್ಲರೂ ಒಂದೇ ಕಾರಿನಲ್ಲಿ ರಾಜರಾಜೇಶ್ವರಿ ದೇವಸ್ಥಾನದ ಮಾರ್ಗವಾಗಿ ಪಟ್ಟಣಗೆರೆಯ ಶೆಡ್&zwnj;ಗೆ ಬಂದಿಳಿದಿದ್ದರು.&lt;/p&gt;&lt;h2&gt;ಶೆಡ್&zwnj;ನಲ್ಲಿ ನಡೆದ ಹಲ್ಲೆ ಹಾಗೂ ಭೀಕರ ಕೃತ್ಯ:&lt;/h2&gt;&lt;p&gt;ಶೆಡ್&zwnj;ಗೆ ಪ್ರವೇಶಿಸಿದಾಗ ಸುಮಾರು 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದನು. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್, ನಂದೀಶ್ ಸೇರಿದಂತೆ ಇತರರು ನೆರೆದಿದ್ದರು. ದರ್ಶನ್ ತಕ್ಷಣವೇ ರೇಣುಕಾಸ್ವಾಮಿಯನ್ನು ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿ, ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಮತ್ತು ಖಾಸಗಿ ಅಂಗಗಳ ಫೋಟೋ ಕಳುಹಿಸಿದ್ದಕ್ಕಾಗಿ ತೀವ್ರ ಹಲ್ಲೆ ನಡೆಸಿದರು. ನನ್ನ ಹೆಂಡತಿಗೆ ಅಂತಹ ಮೆಸೇಜ್ ಏಕೆ ಕಳುಹಿಸಿದೆ? ಎಂದು ದರ್ಶನ್ ಹಲ್ಲೆ ನಡೆಸಿದ್ದಾನೆ. ರೇಣುಕಾಸ್ವಾಮಿಯ ತಲೆಯಿಂದ ರಕ್ತ ಬರುತ್ತಿದ್ದುದನ್ನು ಕಂಡು, ಆತ ಸತ್ತು ಹೋಗಬಹುದು ಹಲ್ಲೆ ನಿಲ್ಲಿಸುವಂತೆ ತಾವು ಮನವಿ ಮಾಡಿದರೂ ಯಾರೂ ಕೇಳಲಿಲ್ಲ ಎಂದು ಪ್ರದೋಷ್ ಅರ್ಜಿಯಲ್ಲಿ ತಿಳಿಸಿದ್ದಾನೆ.&lt;/p&gt;&lt;p&gt;ಬಳಿಕ ದರ್ಶನ್ ಸೂಚನೆಯಂತೆ ಪವಿತ್ರಾ ಗೌಡರನ್ನು ರೇಣುಕಾಸ್ವಾಮಿ ಬಳಿಗೆ ಕರೆದುಕೊಂಡು ಹೋಗಿ, ಅವರಿಂದ ಚಪ್ಪಲಿಯಿಂದ ಹೊಡೆಸಲಾಯಿತು. ನಂತರ ಪವಿತ್ರಾ ಗೌಡರನ್ನು ಕಾರಿನಲ್ಲಿ ಕೂರಿಸಿ, ರೇಣುಕಾಸ್ವಾಮಿಯ ಉಡುಪುಗಳನ್ನು ಬಿಚ್ಚಿ ಕೇವಲ ಒಳಉಡುಪಿನಲ್ಲಿ ನಿಲ್ಲಿಸಲಾಯಿತು. ಆರೋಪಿ ನಂದೀಶ್ ರೇಣುಕಾಸ್ವಾಮಿಯನ್ನು ಎತ್ತಿ 'ಟಾಟಾ ಏಸ್' ವಾಹನಕ್ಕೆ ನೇಣು ಹಾಕಲು ಯತ್ನಿಸಿದನು. ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್ ಮತ್ತು ಪವನ್ ಮರದ ಕೋಲುಗಳಿಂದ ಬಾರಿಸಿದರು. ದರ್ಶನ್ ಕೂಡ ನೈಲಾನ್ ಹಗ್ಗದಿಂದ 3-4 ಬಾರಿ ತೀವ್ರವಾಗಿ ಹೊಡೆದರು.&lt;/p&gt;&lt;p&gt;ಬಳಿಕ ಊಟ ತರಿಸಿ ರೇಣುಕಾಸ್ವಾಮಿಗೆ ಕೊಡಲಾಗಿತ್ತು. ಊಟ ಮಾಡುತ್ತಿದ್ದಾಗ ಎದುರುಗಡೆ ದರ್ಶನ್ ಚಯರ್ ಹಾಕಿ ಕುಳಿತಿದ್ದ, ಈ ವೇಳೆ ಪವನ್, ರೇಣುಕಾಸ್ವಾಮಿಯ ಮೊಬೈಲ್&zwnj;ನಲ್ಲಿದ್ದ 'ಗೌತಮ್' ಎಂಬ ಇನ್&zwnj;ಸ್ಟಾಗ್ರಾಂ ಪ್ರೊಫೈಲ್ ಸಂದೇಶಗಳನ್ನು ಗಟ್ಟಿಯಾಗಿ ಓದುತ್ತಿದ್ದನು. ಅದರಲ್ಲಿ ಹಲವು ಮಹಿಳೆಯರಿಗೆ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ನೋಡಿ ಆಕ್ರೋಶಗೊಂಡ ದರ್ಶನ್, ಸಂದೇಶಗಳ ಆಧಾರದ ಮೇಲೆ ದರ್ಶನ್ ಮತ್ತೆ ರೇಣುಕಾಸ್ವಾಮಿ ಹಲ್ಲೆ ಮಾಡಿದ್ದಾರೆ. ರೇಣುಕಾಸ್ವಾಮಿಯ ಒಳಉಡುಪನ್ನೂ ತೆಗೆಸಿ ಅವರ ಖಾಸಗಿ ಅಂಗಕ್ಕೆ ಹಲವು ಬಾರಿ ಒದ್ದರು. ಈ ವೇಳೆ ರೇಣುಕಾಸ್ವಾಮಿ ಕುತ್ತಿಗೆ ವಾಲಿ ಆತ ಕೆಳಗೆ ಬಿದ್ದನು. ನಂತರ ಎರಡೂ ಕಾಲುಗಳಿಂದ ರೇಣುಕಾಸ್ವಾಮಿಯ ಎದೆಗೆ ಸತತವಾಗಿ ತುಳಿದರು. ಸಂಜೆ 5:30ರ ಸುಮಾರಿಗೆ ದರ್ಶನ್ ಮತ್ತು ವಿನಯ್ ಸ್ಥಳದಿಂದ ನಿರ್ಗಮಿಸಿದರು.&lt;/p&gt;&lt;h2&gt;ಸಾವು, ಸರೆಂಡರ್ ಹೈಡ್ರಾಮಾ &amp;amp; ಬೆದರಿಕೆ:&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡ ರೇಣುಕಾಸ್ವಾಮಿಯನ್ನು ನೋಡಿಕೊಳ್ಳಲು ರಾಘವೇಂದ್ರ, ನಂದೀಶ್, ದೀಪಕ್, ಲಕ್ಷ್ಮಣ್ ಮತ್ತಿತರರನ್ನು ಸ್ಥಳದಲ್ಲೇ ಉಳಿಯುವಂತೆ ಹೇಳಲಾಗಿತ್ತು. ರೇಣುಕಾಸ್ವಾಮಿ ಮೃತಪಟ್ಟ ವಿಷ್ಯವನ್ನು ಹೇಳಲು ಬಾಸ್&zwnj; ಗೆ ಹೇಳಲು ಭಯವಾಗುತ್ತಿದೆ ಎಂದು ಲಕ್ಷ್ಮಣ್ ಪ್ರದೋಷ್ ಗೆ ಹೇಳಿದ್ದ. ಹೀಗಾಗಿ ರೇಣುಕಾಸ್ವಾಮಿ ಮೃತಪಟ್ಟ ವಿಷಯ ದರ್ಶನ್&zwnj;ಗೆ ತಿಳಿಸಿದ್ದು ಪ್ರದೋಷ್ ಇದನ್ನು ಕೇಳಿ ಆಘಾತಕ್ಕೊಳಗಾದ ದರ್ಶನ್, ತಮ್ಮ ಬಳಿಯಿದ್ದ ಗನ್&zwnj;ನಿಂದ ಆತ್ಮHತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ, ತಮ್ಮನ್ನು ಈ ಪ್ರಕರಣದಿಂದ ಪಾರು ಮಾಡಲು ಸಹಾಯ ಕೋರಿದರು. ತಕ್ಷಣವೇ ಇನ್ಸ್&zwnj;ಪೆಕ್ಟರ್ ಒಬ್ಬರಿಗೆ ಕರೆ ಮಾಡಿ ಮಾಹಿತಿ ನೀಡಿದಾಗ, ಪ್ರಕರಣ ಗಂಭೀರವಾಗಿರುವುದರಿಂದ ಆರೋಪಿಗಳನ್ನು ಶರಣಾಗುವಂತೆ ಮಾಡಲು ಸೂಚಿಸಲಾಯಿತು.&lt;/p&gt;&lt;p&gt;ಬಳಿಕ ರಾಘವೇಂದ್ರ, ನಂದೀಶ್ ಮತ್ತು ಪವನ್ ಪೊಲೀಸರ ಮುಂದೆ ಶರಣಾಗಲು ಒಪ್ಪಿಕೊಂಡರು. ಮೃತದೇಹವನ್ನು 'ಸತ್ವ' ಅಪಾರ್ಟ್&zwnj;ಮೆಂಟ್ ಬಳಿ ಎಸೆದು, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಶರಣಾದರು. ಇದೇ ವೇಳೆ, ಶೆಡ್&zwnj;ನ ಹೆಸರು ಬಹಿರಂಗಪಡಿಸದಂತೆ ಮತ್ತೊಬ್ಬ ಆರೋಪಿ ವಿನಯ್ ತನಗೆ ಬೆದರಿಕೆ ಹಾಕಿದ್ದಾನೆ ಎಂದು ಪ್ರದೋಷ್ ಉಲ್ಲೇಖಿಸಿ ಆರೋಪಿಸಿದ್ದಾನೆ.&lt;/p&gt;&lt;h2&gt;ಇತರ ಆರೋಪಿಗಳಿಗೆ ಹೆಚ್ಚಿದ ಕಂಟಕ:&lt;/h2&gt;&lt;p&gt;ಇದೀಗ ತನಗೆ ಮನಸ್ಸಿನಲ್ಲಿ ತೀವ್ರ ಪಶ್ಚಾತ್ತಾಪ ಉಂಟಾಗಿದ್ದು, ನ್ಯಾಯಾಲಯದ ಮುಂದೆ ಸಂಪೂರ್ಣ ಸತ್ಯವನ್ನು ದಾಖಲಿಸಿ ಮಾಫಿ ಸಾಕ್ಷಿಯಾಗಲು ಸಿದ್ಧವಿರುವುದಾಗಿ ಪ್ರದೋಷ್ ಕೋರಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯ ಆಪ್ತನೊಬ್ಬನೇ ಇಡೀ ಕೊಲೆ ಕೃತ್ಯವನ್ನು ಎಳೆಎಳೆಯಾಗಿ ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿರುವುದು ನಟ ದರ್ಶನ್ ಸೇರಿದಂತೆ ಇತರ ಪ್ರಮುಖ ಆರೋಪಿಗಳಿಗೆ ಕಾನೂನಾತ್ಮಕವಾಗಿ ಬೃಹತ್ ಸಂಕಷ್ಟ ತಂದೊಡ್ಡುವುದು ನಿಶ್ಚಿತವಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-actor-darshan-aide-pradosh-files-approver-plea-details-shocking-assault-gdp/articleshow-he4eqn4"/>
        </item>
        <item>
            <title><![CDATA[ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ]]></title>
            <link>https://kannada.asianetnews.com/karnataka-districts/chitradurga-a-rare-inscription-from-the-palegara-period-was-discovered-while-ploughing-in-javagondanahalli-mrq/articleshow-isplb2g</link>
            <guid isPermaLink="true">https://kannada.asianetnews.com/karnataka-districts/chitradurga-a-rare-inscription-from-the-palegara-period-was-discovered-while-ploughing-in-javagondanahalli-mrq/articleshow-isplb2g</guid>
            <pubDate>Mon, 03 Aug 2026 08:13:36 +0530</pubDate>
            <description><![CDATA[ಚಿತ್ರದುರ್ಗ ಜಿಲ್ಲೆಯ ಜವಗೊಂಡನಹಳ್ಳಿಯಲ್ಲಿ ಉಳುಮೆ ಮಾಡುವಾಗ ಪಾಳೇಗಾರ ಅರಸ ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ ಕಾಲದ ಶಾಸನವೊಂದು ಪತ್ತೆಯಾಗಿದೆ. ಜನೋಪಕಾರಕ್ಕಾಗಿ ಕೆರೆ ಕಟ್ಟಿಸಿದ ದೊಡ್ಡಗೌಡನಿಗೆ ಅರಸರು ಉಂಬಳಿ ಭೂಮಿ ನೀಡಿದ್ದನ್ನು ಈ ಶಾಸನವು ದಾಖಲಿಸುತ್ತದೆ. ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz2qpw13f1d8rv08g46c6evb,imgname-shasana-1785724629027.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ:&lt;/strong&gt; ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಗ್ರಾಮದ ಕೆರೆಯ ಪಕ್ಕದ ಹೊಲವೊಂದರಲ್ಲಿ ಉಳುಮೆ ಮಾಡುವಾಗ ಚಿತ್ರದುರ್ಗದ ಪಾಳೇಗಾರ ಅರಸರ ಕಾಲಘಟ್ಟಕ್ಕೆ ಸೇರಿದ ಶಾಸನವೊಂದು ಪತ್ತೆಯಾಗಿದೆ.&lt;/p&gt;&lt;p&gt;ಪ್ರಸ್ತುತ ಈ ಶಾಸನವನ್ನು ಚಿತ್ರದುರ್ಗದ ರಂಗಯ್ಯನ ಬಾಗಿಲಿನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗಿದೆ. ಕರಿಕಲ್ಲಿನಲ್ಲಿ ಕೆತ್ತಲಾದ ಈ ಶಾಸನವು ಒಟ್ಟು 17 ಸಾಲುಗಳನ್ನು ಒಳಗೊಂಡಿದ್ದು, ಕನ್ನಡ ಲಿಪಿ ಹಾಗೂ ಭಾಷೆಯಲ್ಲಿದೆ. ಕಾಮಗೇತಿ ಇಮ್ಮಡಿ ಚಿಕ್ಕಣ್ಣ ನಾಯಕರ (ಕ್ರಿ.ಶ. 1575-1586) ಆಳ್ವಿಕೆಯ ಅವಧಿಯಲ್ಲಿ ಇದು ರಚನೆಯಾಗಿದೆ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ಉಂಬಳಿ ಭೂಮಿ ಕೊಡುಗೆ&lt;/strong&gt;&lt;/h2&gt;&lt;p&gt;ಕಾಮಗೇತಿ ಇಮ್ಮಡಿ ಚಿಕ್ಕಣ್ಣ ಅರಸನ ಅಧೀನ ಅಧಿಕಾರಿಯಾಗಿದ್ದ ಲಕ್ಕಜೀಯನ ಮಗ ದೊಡ್ಡಗೌಡ ಎಂಬುವವರು ಜವಗೊಂಡನಹಳ್ಳಿಯಲ್ಲಿ ಜನೋಪಕಾರಕ್ಕಾಗಿ ಕೆರೆಯೊಂದನ್ನು ಕಟ್ಟಿಸಿದ್ದರು. ಈ ಕಾರ್ಯಕ್ಕೆ ಮೆಚ್ಚಿದ ಅರಸರು ದೊಡ್ಡಗೌಡನಿಗೆ &lsquo;ಉಂಬಳಿ ಭೂಮಿ&rsquo;ಯನ್ನು ಕೊಡುಗೆಯಾಗಿ ನೀಡಿರುವುದೇ ಈ ಶಾಸನದ ಮುಖ್ಯ ವಿಷಯವಾಗಿದೆ.&lt;/p&gt;&lt;p&gt;ಲಿಪಿಕಾರ ಅಥವಾ ಖಂಡರಣೆಕಾರನ ಪ್ರಮಾದದಿಂದಾಗಿ ಶಾಸನದಲ್ಲಿ ಅಲ್ಲಲ್ಲಿ ವ್ಯಾಕರಣ ದೋಷಗಳು ನುಸುಳಿವೆ. &lsquo;ಕಾರ್ತಿಕ ಶುದ್ಧ 10 ಗುರುವಾರ ದಂದು ಇದು ರಚನೆಯಾಗಿದ್ದು, ಶಕವರ್ಷ ಹಾಗೂ ಸಂವತ್ಸರವನ್ನು ಗುರುತಿಸುವ ಅಕ್ಷರಗಳು ಅಸ್ಪಷ್ಟವಾಗಿವೆ.&lt;/p&gt;&lt;h3&gt;&lt;strong&gt;ಕಾಶಿಯಲ್ಲಿ ಆಕಳನ್ನು ಕೊಂದ ಪಾಪ&lt;/strong&gt;&lt;/h3&gt;&lt;p&gt;ಶಾಸನದ ಕೊನೆಯಲ್ಲಿ ಶಾಪಾಶಯವಿದ್ದು, ಈ ದಾನ ಭೂಮಿಯನ್ನು ದೊಡ್ಡಗೌಡರ ಕುಟುಂಬದವರು ಸೂರ್ಯ-ಚಂದ್ರರಿರುವವರೆಗೂ ಸುಖವಾಗಿ ಅನುಭವಿಸತಕ್ಕದ್ದು. ಯಾರಾದರೂ ಈ ಭೂಮಿಯನ್ನು ಅಪಹರಿಸಿದರೆ ಕಾಶಿಯಲ್ಲಿ ಆಕಳನ್ನು ಕೊಂದ ಪಾಪಕ್ಕೆ ಈಡಾಗುವರು ಎಂದು ಎಚ್ಚರಿಸಲಾಗಿದೆ. ಶಾಸನವು ಅಲ್ಲಲ್ಲಿ ತ್ರುಟಿತವಾಗಿದ್ದು, ಇನ್ನಷ್ಟು ಹೆಚ್ಚಿನ ಅಧ್ಯಯನದ ಅಗತ್ಯವಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉತ್ಖನನ ವೇಳೆ 30ಕ್ಕೂ ಅಧಿಕ ರಾವಣನ ವಿಗ್ರಹಗಳು ಪತ್ತೆ! ಇತಿಹಾಸ ತಜ್ಞರಲ್ಲಿ ಆಶ್ಚರ್ಯ&lt;/strong&gt;&lt;/p&gt;&lt;p&gt;ಶಾಸನ ದೊರೆತ ಸ್ಥಳಕ್ಕೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು. ಶಾಸನವನ್ನು ಓದಿ ವಿಶ್ಲೇಷಿಸಲು ಡಾ. ರವಿಕುಮಾರ ಕೆ. ನವಲಗುಂದ ಸಹಕರಿಸಿದ್ದಾರೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಜವನಗೊಂಡನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಹಾಂತೇಶ್, ಗ್ರಾಮದ ಮುಖಂಡರಾದ ಜಿ. ಹನುಮಂತೇಗೌಡ, ಕೆ.ಎಚ್. ಚಿತ್ರಲಿಂಗಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;356 ಎಕರೆಯ ಪಿಲಿಕುಳ ಅಭಿವೃದ್ಧಿಗೆ ಮಾಸ್ಟರ್&zwnj; ಪ್ಲ್ಯಾನ್&zwnj;, ತಾರಾಲಯಕ್ಕೆ 10 ಕೋಟಿ ರೂ. ವೆಚ್ಚದ ಲೇಸರ್ ತಂತ್ರಜ್ಞಾನ!&lt;/strong&gt;&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chitradurga-a-rare-inscription-from-the-palegara-period-was-discovered-while-ploughing-in-javagondanahalli-mrq/articleshow-isplb2g"/>
        </item>
        <item>
            <title><![CDATA[ನನಸಾಗುವತ್ತ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು, ಭದ್ರೆ ಹರಿವಿಗೆ ಚಾಲನೆ ನೀಡಿದ ಸಚಿವ]]></title>
            <link>https://kannada.asianetnews.com/karnataka-districts/bhadra-upper-bank-project-moves-toward-reality-minister-launches-water-flow/articleshow-khw0kxc</link>
            <guid isPermaLink="true">https://kannada.asianetnews.com/karnataka-districts/bhadra-upper-bank-project-moves-toward-reality-minister-launches-water-flow/articleshow-khw0kxc</guid>
            <pubDate>Tue, 08 Sep 2026 21:45:15 +0530</pubDate>
            <description><![CDATA[&lt;p&gt;ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಭಾನುವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಲಕ್ಕವಳ್ಳಿ ಅಣೆಕಟ್ಟಿನಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20wtkqt0qw7ya7mr77wk606,imgname-bhadra-upper-bank-project-takes-major-step-1788884111098.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಸೆ.08): &lt;/strong&gt;ಐದಾರು ದಶಕಗಳ ಕಾಲದ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು ಇಂದು ನನಸಾಗುವತ್ತ ಸಾಗಿದೆ. ಬಯಲು ಸೀಮೆಯ ಜನರ ಭಗೀರಥ ಪ್ರಯತ್ನಕ್ಕೆ ಭದ್ರೆ ಒಲಿದಿದ್ದು, 'ಭದ್ರಾವತರಣ'ಕ್ಕೆ ದಿನಗಣನೆ ಶುರುವಾಗಿದೆ. ಧಾವಂತದಿಂದ ಹರಿದು ಬರುತ್ತಿರುವ ಭದ್ರಾ ಜಿಲ್ಲೆಗೆ ಪ್ರವೇಶಿಸಿದೊಡನೆ ಸದಾ ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿಗೆ ಪಾಪವಿಮೋಚನೆಯಾಗುವ ಕನಸು ಚಿಗುರೊಡೆದಿದೆ. ಭದ್ರೆಯೊಡನೆ ಇನ್ನೆರಡು ತಿಂಗಳಲ್ಲಿ ತುಂಗೆಯೂ ಜಿಲ್ಲೆಯ ಕಡೆ ಮುಖಮಾಡಲಿದ್ದಾಳೆ.&lt;/p&gt;&lt;h2&gt;ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮ&lt;/h2&gt;&lt;p&gt;ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ರಮಕ್ಕೆ ಭದ್ರಾ ಮೇಲ್ದಂಡೆ ಯೋಜನೆಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿರುವ ಇನ್ ಟೇಕ್ ಪಾಯಿಂಟ್ (ಲಕ್ಕವಳ್ಳಿ ಅಣೆಕಟ್ಟು) ನಲ್ಲಿ ಭಾನುವಾರ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.&lt;/p&gt;&lt;p&gt;ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಟಿ. ರಘುಮೂರ್ತಿ, ಇಂದು ಇತಿಹಾಸದಲ್ಲಿ ನೆನಪಿಡಬೇಕಾದ ಮಹತ್ವದ ದಿನ. ಐದಾರು ದಶಕಗಳಿಂದ ಬಯಲುಸೀಮೆ ಜನರು ಕಂಡಿದ್ದ ಭದ್ರಾ ಮೇಲ್ದಂಡೆ ಯೋಜನೆಯ ಕನಸು ಇಂದು ನನಸಾಗುತ್ತಿದೆ. ಈ ಯೋಜನೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಹಾಗೂ ಸಚಿವರಾಗಿದ್ದ ಟಿ.ಬಿ. ಜಯಚಂದ್ರ ಸೇರಿದಂತೆ, ಯೋಜನೆಯ ಸಾಕಾರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬ ಹೋರಾಟಗಾರರು, ರೈತರು, ಸ್ವಾಮೀಜಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.&lt;/p&gt;&lt;p&gt;ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾದಿಂದ 17.4 ಟಿ.ಎಂ.ಸಿ ಹಾಗೂ ಭದ್ರಾದಿಂದ 12.5 ಟಿ.ಎಂ.ಸಿ ಸೇರಿ ಒಟ್ಟು 29.9 ಟಿ.ಎಂ.ಸಿ ನೀರು ಹಂಚಿಕೆಯಾಗಿದೆ. ಪ್ರಸ್ತುತ ಯೋಜನೆ ವೆಚ್ಚ ರೂ.21,500 ಕೋಟಿ ಆಗಿದೆ. ಯೋಜನೆಯಿಂದ ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಸೇರಿದಂತೆ 4 ಜಿಲ್ಲೆಗಳ 12 ತಾಲೂಕುಗಳಿಗೆ ಅನುಕೂಲವಾಗಲಿದೆ. ಒಟ್ಟು 2,25,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ಒಟ್ಟು 367 ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆ ಇದಾಗಿದೆ. ತುಂಗಾದಿಂದ ಬರಬೇಕಾದ 17.4 ಟಿ.ಎಂ.ಸಿ ನೀರಿನ ಕಾಮಗಾರಿಗಳು ಎರಡು ಟವರ್ ಕೆಲಸ ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಸಚಿವ ಟಿ. ರಘುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಭದ್ರಾ ಮೇಲ್ದಂಡೆ ಯೋಜನೆಗೆ ಧರಂ ಸಿಂಗ್, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಹಿಡಿದು ಸಿದ್ದರಾಮಯ್ಯನವರ ಸರ್ಕಾರದವರೆಗೆ ಹಲವು ಹಂತಗಳಲ್ಲಿ ಅನುದಾನ ಹಂಚಿಕೆಯಾಗಿದೆ. ಆರಂಭದಲ್ಲಿ ರೂ.2,814 ಕೋಟಿಗೆ ಚಾಲನೆ ಸಿಕ್ಕ ಈ ಯೋಜನೆಗೆ, ಆನಂತರದ ಸಮ್ಮಿಶ್ರ ಸರ್ಕಾರದಲ್ಲಿ ರೂ.5,500 ಕೋಟಿ, 2013-18ರ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರೂ.12,500 ಕೋಟಿ ಹಾಗೂ 2022ರ ಸರ್ಕಾರದ ಅವಧಿಯಲ್ಲಿ ರೂ.21,500 ಕೋಟಿಗೆ ಪರಿಷ್ಕೃತ ಮಂಜೂರಾತಿ ದೊರೆತಿದೆ. ಯೋಜನೆ ಅನುಷ್ಠಾನಗೊಳ್ಳಲು ಎಲ್ಲಾ ಪಕ್ಷಗಳು ಪಕ್ಷಾತೀತವಾಗಿ ನೆರವು ನೀಡಿದನ್ನು ಸಚಿವ ಟಿ. ರಘುಮೂರ್ತಿ ಸ್ಮರಿಸಿದರು.&lt;/p&gt;]]></content:encoded>
            <category>chitradurga</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/bhadra-upper-bank-project-moves-toward-reality-minister-launches-water-flow/articleshow-khw0kxc"/>
        </item>
        <item>
            <title><![CDATA[ಮಾಫಿ ಸಾಕ್ಷಿಗೆ ಯಾರ ಒತ್ತಡ ಇಲ್ಲವೆಂದ ದರ್ಶನ್‌ ಕೇಸ್‌ ಆರೋಪಿ ಪ್ರದೂಷ್‌ ಬಗ್ಗೆ ಪ್ರೊಬೇಷನ್‌ ಅಧಿಕಾರಿ ವರದಿ ಕೇಳಿದ ಕೋರ್ಟ್]]></title>
            <link>https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c</link>
            <guid isPermaLink="true">https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c</guid>
            <pubDate>Fri, 21 Aug 2026 09:58:26 +0530</pubDate>
            <description><![CDATA[&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್&zwnj; ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzaska2xpybbwahthxak587h,imgname-pradosh-darshan-renukaswamy-case-1785995044956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾದಾನ ನೀಡುವ ಮೂಲಕ ತನ್ನನ್ನು ಮಾಫಿ ಸಾಕ್ಷಿಯನ್ನಾಗಿಸಬೇಕು ಎಂದು ಕೋರಿ 14ನೇ ಆರೋಪಿ ಪ್ರದೂಷ್&zwnj; ಅರ್ಜಿ ಸಲ್ಲಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನಗರದ 59ನೇ ಸಿಟಿ ಸಿವಿಲ್&zwnj; ಮತ್ತು ಸೆಷನ್ಸ್&zwnj; ಕೋರ್ಟ್&zwnj;, ಕಾರಾಗೃಹದಲ್ಲಿ ಪ್ರದೂಷ್&zwnj; ಕುರಿತಂತೆ ವರದಿ ಸಲ್ಲಿಸಬೇಕು ಎಂದು ಪ್ರೊಬೆಷನ್&zwnj; ಅಧಿಕಾರಿಗೆ ನಿರ್ದೇಶಿಸಿದೆ.&lt;/p&gt;&lt;p&gt;ಪ್ರದೂಷ್&zwnj; ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಈ ಸೂಚನೆ ನೀಡಿ ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.&lt;/p&gt;&lt;p&gt;ಇದೇ ವೇಳೆ, ಪ್ರದೂಷ್&zwnj;ಗೆ ನ್ಯಾಯಾಲಯ ಗುರುವಾರ ಮತ್ತೆ ಹಲವು ಪ್ರಶ್ನೆಗಳನ್ನು ಕೇಳಿತು. ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೂಷ್&zwnj;, ನಾನು ಎಂಬಿಎ ಪದವೀಧರ. ನನಗೆ ಇಂಗ್ಲಿಷ್&zwnj; ಭಾಷೆ ಚೆನ್ನಾಗಿ ತಿಳಿದಿದೆ. ಅರ್ಜಿ ಮತ್ತು ಅದರಲ್ಲಿರುವ ಎಲ್ಲಾ ಅಂಶಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾರ ಪ್ರಭಾವ ಮತ್ತು ಒತ್ತಡಕ್ಕೆ ಒಳಗಾಗದೆ ಈ ಅರ್ಜಿ ಸಲ್ಲಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ಖಚಿತಪಡಿಸಿದರು.&lt;/p&gt;&lt;p&gt;ಪ್ರದೂಷ್&zwnj; ಅರ್ಜಿ ಕುರಿತು ಆ.18ರಂದು ವಿಚಾರಣೆ ಪೂಣರ್ಗೊಳಿಸಿದ್ದ ಗುರುವಾರ (ಆ.20ರಂದು) ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಗುರುವಾರ ಆದೇಶ ಪ್ರಕಟಿಸಲಿಲ್ಲ. ಬದಲಾಗಿ ಪ್ರದೂಷ್&zwnj; ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಪ್ರದೂಷ್&zwnj; ಅರ್ಜಿಯ ಸ್ವರೂಪ ಮತ್ತು ಅಪರಾಧ ಗಂಭೀರತೆಯಿಂದ ಕೂಡಿದೆ. ಇದರಿಂದ ಈ ಅರ್ಜಿ ಪರಿಗಣಿಸುವ ಮುನ್ನ ಪ್ರದೂಷ್&zwnj; ಕುರಿತು ಪ್ರೊಬೇಷನ್&zwnj; ಅಧಿಕಾರಿಯಿಂದ ವರದಿ ಪಡೆಯವುದು ಸೂಕ್ತವೆನಿಸುತ್ತಿದೆ. ಹಾಗಾಗಿ, ಪ್ರದೂಷ್&zwnj; ಕುರಿತು ಪ್ರೊಬೆಷನ್&zwnj; ಅಧಿಕಾರಿಯು ಆ.24ರಂದು ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸಬೇಕು. ಆ ವರದಿ ಬಂದನ ನಂತರ ಪ್ರದೂಷ್&zwnj; ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.&lt;/p&gt;&lt;h2&gt;ಯಾರು ಈ ಪ್ರೊಬೆಷನ್&zwnj; ಅಧಿಕಾರಿ?:&lt;/h2&gt;&lt;p&gt;ಪ್ರೊಬೆಷನ್&zwnj; ಅಧಿಕಾರಿಯು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಥವಾ ಸರ್ಕಾರದ ಇತರೆ ಇಲಾಖೆಯ ಉದ್ಯೋಗಿಯಾಗಿರುತ್ತಾರೆ. ಅವರು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಮೂಲಕ ಜೈಲಿನಲ್ಲಿರುವ ಪ್ರದೂಷ್&zwnj;ನನ್ನು ಭೇಟಿ ಮಾಡಿ ಸಮಾಲೋಚನೆ ಮಾಡುತ್ತಾರೆ. ಈ ವೇಳೆ ಪ್ರದೂಷ್&zwnj; ವೈಯಕ್ತಿಕ ವಿವರ, ಕುಟುಂಬದ ಹಿನ್ನೆಲೆ, ಅರ್ಜಿ ಸಲ್ಲಿಸಲು ಆತ ನೀಡುವ ಕಾರಣಗಳು, ಜೈಲಿನಲ್ಲಿನ ಆತನ ಪರಿಸ್ಥತಿ ಹಾಗೂ ಮಾನಸಿಕ ಸ್ಥಿತಿಗತಿ ಸೇರಿ ಇನ್ನಿತರ ವಿವರ ಸಂಗ್ರಹಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c"/>
        </item>
        <item>
            <title><![CDATA[ಹಸೆಮಣೆ ಏರಲು ಸಜ್ಜಾದ ವಿಶ್ವವಿಖ್ಯಾತ 'ಮಂಕಿಮ್ಯಾನ್' ಜ್ಯೋತಿರಾಜ್: ಸಾಹಸಿಯನ್ನ ವರಿಸೋ ವಧು ಯಾರು ಗೊತ್ತಾ?]]></title>
            <link>https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg</link>
            <guid isPermaLink="true">https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg</guid>
            <pubDate>Fri, 14 Aug 2026 15:01:36 +0530</pubDate>
            <description><![CDATA[&lt;p&gt;ವಿಶ್ವವಿಖ್ಯಾತ ಸಾಹಸಿ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ನಿವೇದಿತಾ ಎಂಬುವವರನ್ನು ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗದಲ್ಲಿ ವಿವಾಹವಾಗಲಿದ್ದಾರೆ. ಜ್ಯೋತಿರಾಜ್ ಅವರ ಸಾಹಸಮಯ ವೃತ್ತಿಯನ್ನು ಮೆಚ್ಚಿ ನಿವೇದಿತಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzs083newwtkyktnwj2fpxd,imgname-monkey-man-jyothi-raj-marriage-chitradurga-1786699063413.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವವಿಖ್ಯಾತ ಸಾಹಸಿ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ನಿವೇದಿತಾ ಎಂಬುವವರನ್ನು ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗದಲ್ಲಿ ವಿವಾಹವಾಗಲಿದ್ದಾರೆ. ಜ್ಯೋತಿರಾಜ್ ಅವರ ಸಾಹಸಮಯ ವೃತ್ತಿಯನ್ನು ಮೆಚ್ಚಿ ನಿವೇದಿತಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಚಿತ್ರದುರ್ಗ (ಆ.14): ಬರಿಗೈಯಲ್ಲೇ ಎತ್ತರದ ಕೋಟೆಗಳು, ಕಡಿದಾದ ಬಂಡೆಗಳು ಹಾಗೂ ಜಲಪಾತಗಳನ್ನು ಹತ್ತಿ ಪ್ರಪಂಚದಾದ್ಯಂತ 'ಸ್ಪೈಡರ್ ಮ್ಯಾನ್', 'ಮಂಕಿಮ್ಯಾನ್' ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಶೀಘ್ರದಲ್ಲೇ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದುರ್ಗದ ಈ ಸಾಹಸಿಗನ ಮದುವೆ ದಿನಾಂಕ ಹಾಗೂ ವಧುವಿನ ವಿವರಗಳು ಈಗ ಅಧಿಕೃತವಾಗಿ ಹೊರಬಿದ್ದಿದ್ದು, ಆಗಸ್ಟ್ 22 ಮತ್ತು 23ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಯಾರೀ ವಧು ನಿವೇದಿತಾ?&lt;/strong&gt;&lt;/p&gt;&lt;p&gt;ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ 'ದೊಡ್ಡ ಉಳ್ಳಾರ್ತಿ' ಗ್ರಾಮದ ನಿವಾಸಿಯಾಗಿರುವ ಪದವೀಧರೆ ನಿವೇದಿತಾ ಅವರ ಜೊತೆ ಜ್ಯೋತಿರಾಜ್ ಮದುವೆ ನಿಶ್ಚಯವಾಗಿದೆ. ನಿವೇದಿತಾ ಅವರು ಜ್ಯೋತಿರಾಜ್ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದಾರೆ. ಸಾಹಸ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಜೀವವನ್ನೇ ಪಣಕ್ಕಿಟ್ಟು ಸಾಧನೆ ಮಾಡುತ್ತಿರುವ ಜ್ಯೋತಿರಾಜ್ ಅವರ ವ್ಯಕ್ತಿತ್ವ ಹಾಗೂ ವೃತ್ತಿಯನ್ನು ಮೆಚ್ಚಿ ನಿವೇದಿತಾ ಮದುವೆಗೆ ಸಮ್ಮತಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಿತ್ರದುರ್ಗದಲ್ಲೇ ಮದುವೆ!&lt;/strong&gt;&lt;/p&gt;&lt;p&gt;ಜ್ಯೋತಿರಾಜ್ ಅವರ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಮಾಡುವಂತೆ ಸಲಹೆ ನೀಡಿದ್ದರು. ಆದರೆ 'ನಾನು ಕರ್ನಾಟಕದಲ್ಲಿ ಬೆಳೆದ ಕನ್ನಡಿಗ, ನನ್ನ ಸಾಧನೆಗೆ ಹೆಗಲು ನೀಡಿದ ಕೋಟೆಗಳ ನಗರಿ ಚಿತ್ರದುರ್ಗದಲ್ಲೇ ಮದುವೆಯಾಗುತ್ತೇನೆ' ಎಂದು ಜ್ಯೋತಿರಾಜ್ ಪಟ್ಟು ಹಿಡಿದು ಒಪ್ಪಿಸಿದ್ದಾರೆ. ಅದರಂತೆ ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗ ನಗರದ 'ವೈಭವ ಗಾರ್ಡನ್' ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ.&lt;/p&gt;&lt;img&gt;&lt;p&gt;&lt;strong&gt;ಸಾಹಸ ವೃತ್ತಿಯ ಸವಾಲು ಹಾಗೂ ಮುರಿದುಬಿದ್ದಿದ್ದ ಮದುವೆ&lt;/strong&gt;&lt;/p&gt;&lt;p&gt;ಕೆಲವು ವರ್ಷಗಳ ಹಿಂದೆ ಜ್ಯೋತಿರಾಜ್ ಅವರ ಮದುವೆ ನಿಶ್ಚಯವಾಗಿ, ನಂತರ ಮುರಿದುಬಿದ್ದಿತ್ತು. ಅವರು ಮಾಡುತ್ತಿದ್ದ ಅಪಾಯಕಾರಿ ರಾಕ್ ಕ್ಲೈಂಬಿಂಗ್ ಸಾಹಸ ವೃತ್ತಿಯ ಹಿನ್ನೆಲೆಯಲ್ಲಿ ಹಿಂದಿನ ಮದುವೆ ಸಂಬಂಧ ಕೈತಪ್ಪಿತ್ತು. ಆದರೆ ಈಗ ನಿವೇದಿತಾ ಅವರು ಈ ಸಾಹಸ ವೃತ್ತಿಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. &quot;ಮದುವೆಯ ನಂತರ ಹೆಂಡತಿ-ಕುಟುಂಬದ ಜವಾಬ್ದಾರಿ ಇರುವುದರಿಂದ ಸಾಹಸ ಪ್ರದರ್ಶನಗಳ ವೇಳೆ ಇನ್ನಷ್ಟು ಎಚ್ಚರಿಕೆ ವಹಿಸುತ್ತೇನೆ&quot; ಎಂದು ಜ್ಯೋತಿರಾಜ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೌಂಡರಿ ದಾಟಿದ ಸಾಧಕ&lt;/strong&gt;&lt;/p&gt;&lt;p&gt;ಜ್ಯೋತಿರಾಜ್ ಕೇವಲ ಕೋಟೆ ಹತ್ತುವ ಸಾಹಸಿಗ ಮಾತ್ರವಲ್ಲ. ಒಡಿಶಾ ರಾಜ್ಯದ 'ಸಾಹಸ ಕ್ರೀಡೆಗಳ ರಾಯಭಾರಿ'ಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ಚುನಾವಣೆಗಳ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಮತದಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜೀವನಾಧಾರಿತ ಕಥೆಯನ್ನು ಆಧರಿಸಿ ಕನ್ನಡದಲ್ಲಿ 'ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್' ಎಂಬ ಚಲನಚಿತ್ರವೂ ನಿರ್ಮಾಣವಾಗಿ ತೆರೆಕಂಡಿತ್ತು.&lt;/p&gt;&lt;p&gt;ಚಿತ್ರದುರ್ಗದ ಕಲ್ಲಿನ ಕೋಟೆಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಈ ಅಪ್ರತಿಮ ಸಾಹಸಿಯ ಮದುವೆಗೆ ಹಲವು ರಾಜಕೀಯ ಧುರೀಣರು, ಸಾಮಾಜಿಕ ಮುಖಂಡರು ಹಾಗೂ ಗಣ್ಯರು ನೆರವಿನ ಹಸ್ತ ಚಾಚಿದ್ದು, ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg"/>
        </item>
        <item>
            <title><![CDATA[265 ಎಕರೆ ಭೂಮಿ ಕೊಟ್ಟಿದ್ದೇವೆ, ನಮಗೇಕೆ ನೀರಿಲ್ಲ? ಕಾಲುವೆಗೆ ಇಳಿದು ಗ್ರಾಮಸ್ಥರ ಆಕ್ರೋಶ]]></title>
            <link>https://kannada.asianetnews.com/karnataka-districts/upper-bhadra-irrigation-project-strong-outrage-expressed-over-continuation-of-canal-without-releasing-water-to-lakes-mrq/articleshow-rlbb2ep</link>
            <guid isPermaLink="true">https://kannada.asianetnews.com/karnataka-districts/upper-bhadra-irrigation-project-strong-outrage-expressed-over-continuation-of-canal-without-releasing-water-to-lakes-mrq/articleshow-rlbb2ep</guid>
            <pubDate>Wed, 09 Sep 2026 09:30:33 +0530</pubDate>
            <description><![CDATA[ಭದ್ರಾ ಮೇಲ್ದಂಡೆ ಯೋಜನೆಗೆ 265 ಎಕರೆ ಭೂಮಿ ನೀಡಿದ ಚಿಕ್ಕಯಗಟಿ ಗ್ರಾಮಸ್ಥರು, ತಮ್ಮ ಕೆರೆಗಳಿಗೆ ನೀರು ಹರಿಸದೆ ಕಾಲುವೆ ಮುಂದುವರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೆ ಮೊದಲು ನೀರು ನೀಡಬೇಕೆಂದು ಆಗ್ರಹಿಸಿ ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದ್ದು, ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m224w39f7bhnpf30ygkbpja6,imgname-bhadra-1788926102831.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎನ್&zwnj;.ವಿಶ್ವನಾಥ್&zwnj; ಶ್ರೀರಾಂಪುರ&lt;/strong&gt;&lt;/p&gt;&lt;p&gt;&lt;strong&gt;ಹೊಸದುರ್ಗ: &lt;/strong&gt;ಭದ್ರಾ ಮೇಲ್ದಂಡೆ ಯೋಜನೆಗೆ 265 ಎಕರೆ ಭೂಮಿ ಕೊಟ್ಟಿದ್ದೇವೆ. ನಮಗೇಕೆ ನೀರಿಲ್ಲ, ನಮಗೆ ಕೊಟ್ಟೇ ಭದ್ರೆ ಮುಂದಕ್ಕೆ ಹರಿಯಬೇಕು.&lt;/p&gt;&lt;p&gt;ಚಿತ್ರದುರ್ಗ ಶಾಖಾ ಕಾಲುವೆಗೆ ಭದ್ರೆ ಹರಿಯುತ್ತಿರುವುದು ಜನರಲ್ಲಿ ಸಂತಸದ ಜೊತೆಯಲ್ಲಿಯೇ ಆಕ್ರೋಶದ ಕಿಚ್ಚನ್ನು ಹಚ್ಚಿರುವ ಪರಿ ಇದು. ಪ್ರಥಮ ಬಾರಿಗೆ ಹೊಸದುರ್ಗ ತಾಲೂಕನ್ನು ಸೋಮವಾರ ತಡರಾತ್ರಿ ಸ್ಪರ್ಶಿಸಿದ ಭದ್ರೆಗೆ ಸ್ವಾಗತ ಒಂದು ಕಡೆಯಾದರೆ ಕಾಲುವೆ ಅಣತಿ ದೂರದಲ್ಲಿದ್ದರೂ ಭದ್ರೆಯಿಂದ ದೂರವಿಡಲಾಗಿದೆ ಎಂದು ಚಿಕ್ಕಯಗಟಿ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಕಡಿಮೆ ಪರಿಹಾರ ಪಡೆದು ಸುಮಾರು 265 ಎಕರೆ ಭೂಮಿ&lt;/strong&gt;&lt;/h2&gt;&lt;p&gt;ನಾಲೆಗೆ ಇಳಿದ ಗ್ರಾಮಸ್ಥರು ನಮಗೆ ಮೊದಲು ನೀರು ಕೊಟ್ಟು ನಂತರ ಮುಂದಕ್ಕೆ ತೆಗೆದುಕೊಂಡು ಹೋಗಿ ಎಂದು ಮಣ್ಣು ಹಾಕಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ಭದ್ರಾ ಮೇಲ್ದಂಡೆ ಯೋಜನೆ ಹೊಸದುರ್ಗ ತಾಲೂಕಿನಲ್ಲಿ ಪ್ರಾರಂಭಗೊಂಡಿದ್ದು ಚಿಕ್ಕಯಗಟಿ ಗ್ರಾಮದಿಂದಲೇ. ಇಲ್ಲಿಯೇ ಕಾಮಗಾರಿ ಭೂಮಿ ಪೂಜೆಯೂ ನಡೆದಿತ್ತು. ನಮಗೆ ನೀರು ಸಿಗುತ್ತದೆ ಎಂಬ ಸಂತಸದಲ್ಲಿ ಕಡಿಮೆ ಪರಿಹಾರ ಪಡೆದು ಸುಮಾರು 265 ಎಕರೆ ಭೂಮಿಯನ್ನು ಯೋಜನೆಗೆ ಬಿಟ್ಟುಕೊಟ್ಟಿದ್ದೇವೆ.&lt;/p&gt;&lt;p&gt;ನಿಮಗೆ ಮೊದಲ ಹಂತದಲ್ಲಿಯೇ ನೀರು ಬರುತ್ತದೆ ಎಂಬ ನಂಬಿಕೆಯನ್ನು ಶಾಸಕರು ಹಾಗೂ ಅಧಿಕಾರಿಗಳು ಮೂಡಿಸಿದ್ದರು. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮಗೆ ನೀರು ಬರುವುದೇ ಅನುಮಾನ ಎಂಬುದು ಅವರ ಅಳಲು. ಸದ್ಯ ಯಾವುದೇ ಕೆರೆಗಳಿಗೆ ನೀರು ಬಿಡುವುದಿಲ್ಲ ಇದೊಂದು ಪ್ರಯೋಗಾತ್ಮಕ ಪ್ರಕ್ರಿಯೆ ಆಗಿದೆ. ನಿಮ್ಮ ಗ್ರಾಮದ ಕೆರೆಗಳಿಗೆ ಗ್ರಾವಿಟಿ ಮೂಲಕ ಹರಿಸಲು ಸಾಧ್ಯವಿಲ್ಲ ಪಂಪ್&zwnj; ಮಾಡುವ ಮೂಲಕ ನೀರು ಹರಿಸಬೇಕು. ತಡವಾಗಿಯಾದರೂ ನೀರು ಬರುತ್ತದೆ ಎಂಬ ಜಲ ನಿಗಮದ ಅಧಿಕಾರಿಗಳ ಮಾತಿಗೆ ಸಂತೃಪ್ತರಾಗದ ಗ್ರಾಮಸ್ಥರು ಬರವಣಿಗೆ ಮೂಲಕ ನಮಗೆ ಸ್ಪಷ್ಠತೆ ನೀಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;&lt;strong&gt;200 ಮೀಟರ್&zwnj; ಅಂತರದಲ್ಲಿಯೇ ಗ್ರಾಮದ 3 ಕೆರೆ&lt;/strong&gt;&lt;/h3&gt;&lt;p&gt;ಇದೆ ವೇಳೆ ಮಾದ್ಯಮಗಳ ಮುಂದೆ ಮಾತನಾಡಿದ ಗ್ರಾಮಸ್ಥರು, ಚಿತ್ರದುರ್ಗ ನಾಲೆಯಿಂದ ಕೇವಲ 200 ಮೀಟರ್&zwnj; ಅಂತರದಲ್ಲಿಯೇ ನಮ್ಮ ಗ್ರಾಮದ 3 ಕೆರೆಗಳಿವೆ ಆದರೆ ಅವುಗಳಿಗೆ ಏತ ನೀರಾವರಿ ಮೂಲಕ ನೀರು ಹರಿಸುತ್ತೇವೆ ಎನ್ನುತ್ತಾರೆ ಆದರೆ ಇದುವರೆವಿಗೂ ಪೈಪ್&zwnj;ಲೈನ್&zwnj; ಕಾಮಗಾರಿ ನಡೆದಿಲ್ಲ . ನಮಗೆ ವಿದ್ಯುತ್&zwnj; ಸಂಪರ್ಕ ಕಲ್ಪಿಸಿಕೊಡಿ ನಾವೇ ಮೋಟಾರ್&zwnj;ಗಳನ್ನು ತಂದು ನಮ್ಮ ಕೆರೆಗೆ ನೀರು ಹರಿಸಿಕೊಳ್ಳುತ್ತೇವೆ ಎಂದರೆ ಅದು ಸಾಧ್ಯವಿಲ್ಲ ಎನ್ನುತ್ತಾರೆ ಈಗಿರುವಾಗ ಇವರ ಮಾತನ್ನು ಹೇಗೆ ನಂಬಲಿ ಎನ್ನುವ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.&lt;/p&gt;&lt;p&gt;ಗ್ರಾಮಸ್ಥರು ಹರಿಯುವ ನೀರಿಗೆ ಅಡ್ಡಲಾಗಿ ಮಣ್ಣು ಹಾಕಿ ಪ್ರತಿಭಟನೆಗೆ ಮುಂದಾದರೂ ನಿಮ್ಮ ತಡೆ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂತೆ ನೀರು ಮಣ್ಣನ್ನು ಕೊರೆದು ಮುಂದೆ ಹೋಯಿತು. ನಾಲೆಯಿಂದ ಹೊರ ಬಂದ ಅವರುಗಳು ನಂತರ ಹೊಳಲ್ಕೆರೆ ಶಾಖಾ ಕಾಲುವೆಯಲ್ಲಿ ನೀರು ಹರಿಯುತ್ತಿರುವುದ ಗಮನಿಸಿ ನಮಗೆ ನೀರು ಇಲ್ಲದಿದ್ದ ಮೇಲೆ ಹೊಳಲ್ಕೆರೆ ತಾಲೂಕಿಗೆ ಏಕೆ ನೀರು ಎಂದು ಶಾಖಾ ನಾಲೆಯ ಗೇಟ್&zwnj; ಭದ್ರ ಪಡಿಸಿದರು. ನಮಗೆ ನೀರು ಕೊಡುವ ಸ್ಫಷ್ಠತೆ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಸಂಜೆಯೊಳಗೆ ಇದಕ್ಕೆ ಪರಿಹಾರ ಸೂಚಿಸದಿದ್ದರೆ ನಾಳೆಯಿಂದ ನೀರು ಮಂಚಿತ ಇನ್ನಿತರ ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.&lt;/p&gt;&lt;p&gt;ಚಿಕ್ಕಯಗಟಿ ಗ್ರಾಮದ ಕೆರೆಗೆ ಮೊದಲು ನೀರು ಹರಿಯುತ್ತದೆ ಎಂದು ಶಾಸಕರು ಯೋಜನೆಯ ಕಾಮಗಾರಿ ಭೂಮಿ ಪೂಜೆಗೆ ಬಂದಾಗ ಭರವಸೆ ನೀಡಿದ್ದರು . ಅವರ ಭರವಸೆಯಂತೆ ನಾವು ಕೂಡ ಭೂಮಿಯನ್ನು ಬಿಟ್ಟುಕೊಟ್ಟೆವು ಆದರೆ ಈಗ ನೀರು ಹರಿಸುವ ಬಗ್ಗೆ ಶಾಸಕರು ಚಕಾರವೆತ್ತುತ್ತಿಲ್ಲ . ಗ್ರಾಮಸ್ಥರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ ಎಂದು ಚಿಕ್ಕಯಗಟಿ ಗ್ರಾಮಸ್ಥ ಶಶಿಧರ್ ಹೇಳುತ್ತಾರೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/upper-bhadra-irrigation-project-strong-outrage-expressed-over-continuation-of-canal-without-releasing-water-to-lakes-mrq/articleshow-rlbb2ep"/>
        </item>
        <item>
            <title><![CDATA[ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?]]></title>
            <link>https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a</link>
            <guid isPermaLink="true">https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a</guid>
            <pubDate>Fri, 07 Aug 2026 09:11:23 +0530</pubDate>
            <description><![CDATA[ನಟ ದರ್ಶನ್&zwnj; ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆತನ ಆಪ್ತ ಸ್ನೇಹಿತರಾದ ಪ್ರದೋಷ್&zwnj; ಮತ್ತು ವಿನಯ್&zwnj; ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ದರ್ಶನ್&zwnj; ತಮಗೆ ಬೆದರಿಕೆ ಹಾಕಿದ್ದಾಗಿ ಪ್ರದೋಷ್&zwnj; ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಈ ಬೆಳವಣಿಗೆಯಿಂದ ಜೈಲಿನಲ್ಲಿರುವ ದರ್ಶನ್&zwnj;ಗೆ ತೀವ್ರ ಸಂಕಷ್ಟ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvst3z4z28htqeyycnpj5fmv,imgname-darshan-new-1782203939999.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಟ ದರ್ಶನ್&zwnj; ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹು ದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ದರ್ಶನ್&zwnj; ಆಪ್ತ ಸ್ನೇಹಿತರಾದ ಪ್ರಕರಣದ 10 ಮತ್ತು 14ನೇ ಆರೋಪಿಗಳಾಗಿರುವ ವಿನಯ್&zwnj; ಹಾಗೂ ಪ್ರದೋಷ್&zwnj; ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್&zwnj;ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದ್ದು, ತೀವ್ರ ಆತಂಕವನ್ನು ಸೃಷ್ಟಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ದರ್ಶನ್ ಆಪ್ತನಾಗಿರುವ ಪ್ರದೂಷ್, ನ್ಯಾಯಾಲಯದಲ್ಲಿ &lsquo;ಮಾಫಿ ಸಾಕ್ಷಿ&rsquo; (Approver) ಆಗಲು ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.&lt;/p&gt;&lt;p&gt;ತಮ್ಮದೇ ಆಪ್ತ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದರೆ ಕಾನೂನುಬದ್ಧವಾಗಿ ತಮಗೆ ದೊಡ್ಡ ಹಿನ್ನಡೆಯಾಗಲಿದೆ ಎಂಬ ಭೀತಿಯಿಂದ ನಟ ದರ್ಶನ್ ಜೈಲಿನಲ್ಲಿ ವಿಲವಿಲನೆ ಒದ್ದಾಡುತ್ತಿದ್ದಾರೆ. ಪ್ರದೂಷ್ ಅರ್ಜಿ ಸಲ್ಲಿಸಿದ ಸುದ್ದಿ ತಿಳಿಯುತ್ತಿದ್ದಂತೆ, ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.&lt;/p&gt;&lt;h2&gt;ಊಟ-ನಿದ್ರೆ ತೊರೆದು ಮೌನಕ್ಕೆ ಶರಣಾದ &lsquo;ಡಿ ಬಾಸ್&rsquo;&lt;/h2&gt;&lt;p&gt;ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತಿದ್ದರು. ಇತರ ಸಹ-ಬಂಧಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೆ ಮೌನಕ್ಕೆ ಶರಣಾಗಿದ್ದ ದರ್ಶನ್, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿ ಕಣ್ಣೇ ಮುಚ್ಚಿಲ್ಲವಂತೆ. ಈಗಾಗಲೇ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಕುಗ್ಗಿರುವ ದರ್ಶನ್&zwnj;ಗೆ, ಈ ಹೊಸ ಬೆಳವಣಿಗೆಯಿಂದಾಗಿ ಪ್ರಕರಣದ ಭವಿಷ್ಯ ಏನಾಗುವುದೋ ಎಂಬ ಭಯ ಹೆಚ್ಚಾಗಿದೆ.&lt;/p&gt;&lt;p&gt;ಶುಕ್ರವಾರ ಬೆಳಿಗ್ಗೆ ತಮ್ಮ ಬ್ಯಾರಕ್&zwnj;ನಲ್ಲಿಯೇ ಕೆಲಕಾಲ ವಾಕ್ ಮಾಡಿದ ದರ್ಶನ್, ದೇವರ ಫೋಟೋಗೆ ಕೈಮುಗಿದು ಕಾಫಿ ಸೇವಿಸಿದರು. ಆ ನಂತರ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ತಮ್ಮ ಪ್ರಕರಣದ ಸುದ್ದಿಯನ್ನು ಓದಿ, ಮತ್ತಷ್ಟು ಕಂಗಾಲಾಗಿ ಮತ್ತೆ ಮೌನಕ್ಕೆ ಜಾರಿದ್ದಾರೆ. ಒಟ್ಟಿನಲ್ಲಿ, ಆಪ್ತನ ನಿರ್ಧಾರದಿಂದಾಗಿ ದರ್ಶನ್ ಹಾಗೂ ಅವರ ಗ್ಯಾಂಗ್&zwnj;ಗೆ ಜೈಲಿನಲ್ಲಿ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ.&lt;/p&gt;&lt;h2&gt;ಮಾಫಿ ಅರ್ಜಿಯಲ್ಲಿ ಏನೇನು ಉಲ್ಲೇಖವಿದೆ?&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್&zwnj; ಸೇರಿದಂತೆ ಎಲ್ಲ ಆರೋಪಿಗಳು ವಹಿಸಿದ ಪಾತ್ರವನ್ನು ಅರ್ಜಿಯಲ್ಲಿ ಪ್ರದೋಷ್&zwnj; ವಿವರಿಸಿದ್ದಾನೆ. ಅಲ್ಲದೆ, &lsquo;ರೇಣುಕಾಸ್ವಾಮಿ ಮೊಬೈಲ್&zwnj;ನಲ್ಲಿದ್ದ ಮೆಸೇಜ್&zwnj;ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಸಾಯಿಸುವುದಾಗಿ ದರ್ಶನ್&zwnj; ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್&zwnj; ಪರ ನಾನು ಸಾಕ್ಷ್ಯ ನುಡಿಯುತ್ತೇನೆ&rsquo; ಎಂದು ಪ್ರದೋಷ್&zwnj; ಅರ್ಜಿಯಲ್ಲಿ ಕೋರಿದ್ದಾನೆ.&lt;/p&gt;&lt;p&gt;ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್&zwnj; ಲಿಖಿತವಾಗಿಯೇ ಈ ಅರ್ಜಿಗೆ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ, &lsquo;ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು&rsquo; ಎಂದು ದರ್ಶನ್&zwnj; ಹಾಗೂ ಇತರೆ ಆರೋಪಿಗಳು ನ್ಯಾಯಾಲಯವನ್ನು ಬಲವಾಗಿ ಕೋರಿದ್ದಾರೆ. ಹೀಗಾಗಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್&zwnj; ಮತ್ತು ಪ್ರದೋಷ್&zwnj; ಸಲ್ಲಿಸಿರುವ ಅರ್ಜಿ ಸಂಬಂಧ ಇತರೆ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆ.10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.&lt;/p&gt;&lt;h2&gt;ಕೃತ್ಯದ ಪಾತ್ರದ ಬಗ್ಗೆ ಉಲ್ಲೇಖ&lt;/h2&gt;&lt;p&gt;ಪ್ರದೋಷ್&zwnj; ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್&zwnj; ಜೊತೆಗಿನ ಸ್ನೇಹ, 2024ರ ಜೂ.9ರಂದು ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್&zwnj;, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ದರ್ಶನ್&zwnj; ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್&zwnj; ತಿಳಿಸಿದ್ದಾರೆ.&lt;/p&gt;&lt;h2&gt;ಪ್ರದೋಷ್&zwnj; ಹೇಳಿದ್ದೇನು?:&lt;/h2&gt;&lt;p&gt;ಇನ್ನು &lsquo;ರೇಣುಕಾಸ್ವಾಮಿ ಇನ್&zwnj;ಸ್ಟಾಗ್ರಾಂ, ಫೇಸ್&zwnj;ಬುಕ್&zwnj; ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದೆಯಷ್ಟೇ. ವಾಸ್ತವವಾಗಿ ಕೊಲೆ ಘಟನೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್&zwnj; ತಡೆಯಲು ಪ್ರಯತ್ನಿಸಿದೆ. ದರ್ಶನ್&zwnj; ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್&zwnj; ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗನ್&zwnj;ನಿಂದ ಗುಂಡು ಹಾರಿಸಿ ಸಾಯಿಸುವುದಾಗಿ ದರ್ಶನ್&zwnj; ಬೆದರಿಸಿದರು. ಹಾಗಾಗಿ ನಾನು ದರ್ಶನ್&zwnj;ಗೆ ಸಹಾಯ ಮಾಡಿದೆ&rsquo; ಎಂದು ಹೇಳಿರುವ ಪ್ರದೋಷ್&zwnj;, &lsquo;ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್&zwnj;ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು&rsquo; ಎಂದು ಅರ್ಜಿಯಲ್ಲಿ ಕೋರಿದ್ದಾರೆ.&lt;/p&gt;&lt;h2&gt;ವಿನಯ್&zwnj; ಕೂಡ ಮಾಫಿಸಾಕ್ಷಿ:&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್&zwnj; ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್&zwnj; ರೆಸ್ಟೋರೆಂಟ್&zwnj;ನ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್&zwnj; ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್&zwnj;ಪಿಪಿ ಪ್ರಸನ್ನ ಕುಮಾರ್&zwnj;, ಅರ್ಜಿಯಲ್ಲಿ ವಿನಯ್&zwnj; ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದ್ದಾರೆ.&lt;/p&gt;&lt;h2&gt;ಅರ್ಜಿಗೆ ಆಕ್ಷೇಪ:&lt;/h2&gt;&lt;p&gt;ಈ ಮಧ್ಯೆ ಪ್ರದೋಷ್&zwnj; ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್&zwnj; ಹಾಗೂ ಇತರೆ ಆರೋಪಿಗಳು, ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್&zwnj;ಪಿಪಿ ಪ್ರಸನ್ನ ಕುಮಾರ್&zwnj; ಅವರು, ಪ್ರದೋಷ್&zwnj;ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್&zwnj; ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್&zwnj;ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್&zwnj; ಖಚಿತಪಡಿಸಬೇಕು. ಇತರೆ ಆರೋಪಿಗಳ ವಿರುದ್ಧವೇ ಪ್ರದೋಷ್&zwnj; ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆ.10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a"/>
        </item>
        <item>
            <title><![CDATA[ಬರವನ್ನೇ ಹಾಸಿ ಹೊದ್ದ ಜಗಳೂರೇಕೆ ಕಾಣ್ತಿಲ್ಲ? ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿಲ್ಲ ಸ್ಥಾನ!]]></title>
            <link>https://kannada.asianetnews.com/karnataka-districts/jagalur-farmers-fume-as-drought-hit-taluk-is-left-out-of-government-list-kvn/articleshow-ugo9sv4</link>
            <guid isPermaLink="true">https://kannada.asianetnews.com/karnataka-districts/jagalur-farmers-fume-as-drought-hit-taluk-is-left-out-of-government-list-kvn/articleshow-ugo9sv4</guid>
            <pubDate>Sat, 29 Aug 2026 14:32:51 +0530</pubDate>
            <description><![CDATA[ತೀವ್ರ ಬರಗಾಲದಿಂದ ತತ್ತರಿಸಿರುವ ಮತ್ತು ಬೆಳೆ ನಾಶದಿಂದ ಸಂಕಷ್ಟದಲ್ಲಿರುವ ಜಗಳೂರು ತಾಲೂಕನ್ನು ಸರ್ಕಾರವು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದೆ. ಸರ್ಕಾರದ ಈ ನಿರ್ಧಾರವು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪರಿಹಾರಕ್ಕಾಗಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx0v3sr152fmv7dncjdg2qr7,imgname-untitled-design---2026-07-08t175404.470-1783513605889.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಗಳೂರು: ಸ್ವಾತಂತ್ರ್ಯ ಬಂದು 8 ದಶಕಗಳು ಕಳೆದರೂ, ಜನಪ್ರತಿನಿಧಿಗಳ ಆಡಳಿತದಲ್ಲಿ ಜಗಳೂರು ತಾಲೂಕು ಮಾತ್ರ ಇಂದಿಗೂ ಬಡತನ ಮತ್ತು ಬರದ ನಾಡಾಗಿಯೇ ಉಳಿದಿದೆ. ಬರವನ್ನು ಹಾಸಿ ಹೊದ್ದರೂ ಸರ್ಕಾರದ ಕಣ್ಣಿಗೆ ಜಗಳೂರು ರೈತರ ಸಂಕಷ್ಟ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿ ಈ ಬಾರಿಯ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಗಳೂರು ಇಲ್ಲ!?&lt;/p&gt;&lt;p&gt;ಅರ್ಥಶಾಸ್ತ್ರಜ್ಞ ಡಾ. ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಎರಡನೇ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರು, ಅಕ್ಷರಶಃ ಬರಗಾಲದ ಗೂಡಾಗಿದೆ. ಸ್ವಾತಂತ್ರ್ಯದ 80 ವರ್ಷಗಳ ಇತಿಹಾಸದಲ್ಲಿ ಸುಮಾರು 65 ವರ್ಷಗಳ ಕಾಲ ಬರವನ್ನೇ ಉಂಡು ಬದುಕಿನ ಜತೆ ಸೆಣಸಾಡುತ್ತಿರುವ ಇಲ್ಲಿನ ಜನರಿಗೆ, ಸರ್ಕಾರದ ಇತ್ತೀಚಿನ ನಿರ್ಧಾರ ಮೈಮೇಲೆ ಬಿಸಿಎಣ್ಣೆ ಎರಚಿದಂತಾಗಿದೆ.&lt;/p&gt;&lt;h2&gt;&lt;strong&gt;ಹೈರಾಣಾದ ರೈತಕುಲ:&lt;/strong&gt;&lt;/h2&gt;&lt;p&gt;ತಾಲೂಕಿನ 196 ಗ್ರಾಮಗಳಲ್ಲೂ ಬರಗಾಲದ ಕರಾಳ ಛಾಯೆ ಆವರಿಸಿದೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ನೆಲಕಚ್ಚಿವೆ. ಮೆಕ್ಕೆಜೋಳ, ರಾಗಿ, ದ್ವಿದಳ ಧಾನ್ಯಗಳು, ಹತ್ತಿ, ಶೇಂಗಾ ಹಾಗೂ ಸೂರ್ಯಕಾಂತಿ ಬೆಳೆಗಳು ತೇವಾಂಶವಿಲ್ಲದೆ ತೆನೆಯಲ್ಲೇ ಕಮರಿಹೋಗಿವೆ. ಅಲ್ಲದೇ ರೈತರು ಅಳಿಸಿ ಹಾಕಿದ್ದಾರೆ. ​ಜಮೀನಿಗೆ ಹಾಕಿದ ಬಿತ್ತನೆ ಖರ್ಚು, ರಸಗೊಬ್ಬರ ಹಾಗೂ ಉಳುಮೆ ಮಾಡಿದ ಸಾಲದ ಹೊರೆ ರೈತನ ತಲೆಮೇಲೆ ಬಂದು ಕುಳಿತಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಕುಡಿಯುವ ನೀರಿಗೂ ಪರದಾಡುವ ಭೀಕರ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ, ಅಧಿಕಾರ ಗದ್ದುಗೆಯಲ್ಲಿ ಇರುವವರಿಗೆ ಮಾತ್ರ ರೈತರ ಈ ಗೋಳು ಕೇಳಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕಣ್ಣುಮುಚ್ಚಿ ಕುಳಿತ ಆಡಳಿತ, ಜನಪ್ರತಿನಿಧಿಗಳು:&lt;/strong&gt;&lt;/h3&gt;&lt;p&gt;ರೈತರ ಪಾಲಿಗೆ ದಾರಿದೀಪವಾಗಬೇಕಿದ್ದ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಇಂದು ಕಣ್ಣುಮುಚ್ಚಿ ಕುಳಿತಿರುವುದು ಕ್ಷಮಿಸಲಾರದ ಅಪರಾಧ. ತಾಲೂಕಿನಲ್ಲಿ ಭೀಕರ ಬರ ತಾಂಡವವಾಡುತ್ತಿದ್ದರೂ, ಇದುವರೆಗೆ ಒಮ್ಮೆಯೂ ಅಧಿಕಾರಿಗಳನ್ನು ಕರೆದು ಮಳೆ ಹಾಗೂ ಬರದ ಪರಿಸ್ಥಿತಿ ಬಗ್ಗೆ ಉನ್ನತಮಟ್ಟದ ಪರಿಶೀಲನಾ ಸಭೆ ನಡೆಸುವ ಸೌಜನ್ಯ ತೋರಿಲ್ಲ ಎಂದು ರೈತರು ಕಿಡಿಕಾರಿದ್ದಾರೆ. ವಿರೋಧ ಪಕ್ಷದ ನಾಯಕ ಆರ್&zwnj;.ಅಶೋಕ ಜಗಳೂರು ತಾಲೂಕಿನ ರೈತರ ಹೊಲಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಸರ್ಕಾರಕ್ಕೆ ಒತ್ತಾಯಿಸಿದ್ದಷ್ಟೇ ರೈತರ ಭಾಗ್ಯ!&lt;/p&gt;&lt;p&gt;ಕಾಗದದ ಮೇಲಿನ ಅಂಕಿಅಂಶಗಳ ಆಟದಲ್ಲಿ ಸಿಲುಕಿ ಜಗಳೂರು ತಾಲೂಕಿನ ನೈಜ ಬರ ಪರಿಸ್ಥಿತಿ ಮುಚ್ಚಿಡುತ್ತಿರುವುದು ಖಂಡನೀಯ. ಸರ್ಕಾರ ಕೂಡಲೇ ತನ್ನ ಎಡವಟ್ಟನ್ನು ತಿದ್ದಿಕೊಂಡು, ಜಗಳೂರು ತಾಲೂಕನ್ನು ಅಧಿಕೃತವಾಗಿ ''ಬರಪೀಡಿತ ತಾಲೂಕು'' ಎಂದು ಘೋಷಿಸಬೇಕು. ರೈತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಬೇಕಾದ ಹೊಣೆ ಜನಪ್ರತಿನಿಧಿಗಳಲ್ಲಿ ಇರಬೇಕಿದೆ.&lt;/p&gt;&lt;p&gt;ಜಗಳೂರು ತಾಲೂಕಿಗಾದ ಅನ್ಯಾಯಕ್ಕೆ ಆಕ್ರೋಶಗೊಂಡ ಜಗಳೂರು ತಾಲೂಕಿನ ವಿರೋಧ ಪಕ್ಷವಾದ ಬಿಜೆಪಿಯು ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್&zwnj; ನೇತೃತ್ವದಲ್ಲಿ ಹಾಗೂ ರೈತಸಮೂಹ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಬೃಹತ್&zwnj; ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟದ ಕಿಚ್ಚುಹೊತ್ತಿದೆ. ಬರ ಪಟ್ಟಿಯಿಂದ ಜಗಳೂರು ಕೈಬಿಟ್ಟ ಹಿನ್ನೆಲೆ ಎಚ್ಚೆತ್ತ ಸ್ಥಳೀಯ ಶಾಸಕ ಬಿ.ದೇವೇಂದ್ರಪ್ಪ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮಂತ್ರಿ ಪರಮೇಶ್ವರ್&zwnj; ಅವರನ್ನು ಭೇಟಿಯಾಗಿ ಬರ ಪಟ್ಟಿಗೆ ಜಗಳೂರು ತಾಲೂಕನ್ನೂ ಸೇರಿಸುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/jagalur-farmers-fume-as-drought-hit-taluk-is-left-out-of-government-list-kvn/articleshow-ugo9sv4"/>
        </item>
        <item>
            <title><![CDATA[ದರ್ಶನ್‌ಗೆ ಮತ್ತಷ್ಟು ಸಂಕಷ್ಟ, ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ಕುಚುಕು ದೋಸ್ತ್ ವಿನಯ್, ರವಿಶಂಕರ್!]]></title>
            <link>https://kannada.asianetnews.com/state/renukaswamy-case-actor-darshan-in-trouble-as-accused-pradosh-vinay-and-ravishankar-seek-to-become-approvers-gdp/articleshow-v84wikv</link>
            <guid isPermaLink="true">https://kannada.asianetnews.com/state/renukaswamy-case-actor-darshan-in-trouble-as-accused-pradosh-vinay-and-ravishankar-seek-to-become-approvers-gdp/articleshow-v84wikv</guid>
            <pubDate>Thu, 06 Aug 2026 12:47:22 +0530</pubDate>
            <description><![CDATA[ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಇದೀಗ ನಟ ದರ್ಶನ್ ಆಪ್ತರಾದ ವಿನಯ್ ಮತ್ತು ರವಿಶಂಕರ್ ಕೂಡ ಮಾಫಿ ಸಾಕ್ಷಿಯಾಗಲು ನಿರ್ಧರಿಸಿದ್ದಾರೆ. ಇದು ಜೈಲಿನಲ್ಲಿರುವ ದರ್ಶನ್&zwnj;ಗೆ ಮತ್ತಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzaym0bzhp0cgw17dzx8yx23,imgname-vinay-ravishankar-darshan-renukaswamy-case-1786000310655.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವು ಸಿಗುತ್ತಿದ್ದು, ಪ್ರಕರಣದ ವಿಚಾರಣೆಯಲ್ಲಿ ಈಗ ಮತ್ತೊಂದು ಮೆಗಾ ಟ್ವಿಸ್ಟ್ ಸಿಕ್ಕಿದೆ. ಓರ್ವ ಈಗಾಗಲೇ ಮಾಫಿ ಸಾಕ್ಷಿಗೆ ಅರ್ಜಿ ಸಲ್ಲಿಸಿ ವಿಚಾರಣೆ ಆರಂಭವಾಗಿದ್ದು ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿಗೆ ನಿರ್ಧರಿಸಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಇದೀಗ ಬೇಲ್ ಸಿಗದೆ ಜೈಲಿನಲ್ಲಿರುವ ನಟ ದರ್ಶನ್&zwnj;ಗೆ ಮತ್ತಷ್ಟು ಕಾನೂನು ಸಂಕಷ್ಟ ತಂದಿಟ್ಟಿದೆ. ಪ್ರಕರಣದ 14ನೇ ಆರೋಪಿಯಾಗಿ (A-14) ಜೈಲು ಸೇರಿರುವ ಪ್ರದೋಶ್&zwnj;, ತನ್ನನ್ನು &lsquo;ಮಾಫಿ ಸಾಕ್ಷಿ&rsquo; (ಅಪ್ರೂವರ್) ಆಗಿ ಪರಿಗಣಿಸುವಂತೆ ಕೋರಿ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.&lt;/p&gt;&lt;p&gt;ಈ ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರದೋಶ್&zwnj;ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ವೇಳೆ ಪ್ರದೋಶ್ ಪರ ವಕೀಲ ದಿವಾಕರ್, &quot;ಮೊದಲು ನಮ್ಮ ಕಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿ. ಆ ನಂತರ ಪ್ರಾಸಿಕ್ಯೂಷನ್ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿ&quot; ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.&lt;/p&gt;&lt;p&gt;ಇದೇ ವೇಳೆ ಪ್ರಕರಣದಲ್ಲಿ ಜಾಮೀನು ಸಿಗದೆ ಜೈಲಿನಲ್ಲಿರುವ ನಟ ದರ್ಶನ್ ಅವರ ಆಪ್ತ, 10ನೇ ಆರೋಪಿ (A-10) ವಿನಯ್ ರಾಘವೇಂದ್ರ ಅಲಿಯಾಸ್ ವಿನಯ್ ಹಾಗೂ 8ನೇ ಆರೋಪಿ (A-8) ರವಿಶಂಕರ್ ಕೂಡ ತಮ್ಮನ್ನೂ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಅವರ ಪರ ವಕೀಲರು ಮಧ್ಯಾಹ್ನದ ವೇಳೆಗೆ ಕೋರ್ಟ್&zwnj;ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಆದರೆ, ಪ್ರದೋಶ್ ಪರ ವಕೀಲರು ತಮ್ಮ ಅರ್ಜಿಯೊಂದಿಗೆ ಇತರ ಆರೋಪಿಗಳ ಮನವಿಯನ್ನು ಸೇರಿಸದಂತೆ ಕೋರಿದ ಕಾರಣ, ನ್ಯಾಯಾಲಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಿತು.&lt;/p&gt;&lt;h2&gt;ಸ್ಟೋನಿ ಬ್ರೂಕ್ ಪಬ್&zwnj; ಮಾಲೀಕ ವಿನಯ್ ದರ್ಶನ್ ಅತ್ಯಾಪ್ತ&lt;/h2&gt;&lt;p&gt;ಆರ್.ಆರ್. ನಗರದ &lsquo;ಸ್ಟೋನಿ ಬ್ರೂಕ್&rsquo; ಪಬ್ ಮಾಲೀಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ವಿನಯ್ (A-10) ಮನೆ ಹಾಗೂ ಪಬ್&zwnj;ನಲ್ಲಿ ದರ್ಶನ್ ಗ್ಯಾಂಗ್ ಸಂಚು ರೂಪಿಸಿತ್ತು ಎನ್ನಲಾಗಿದೆ. ಕೊಲೆಯ ದಿನ ಪ್ರದೋಶ್ ಕೂಡ ಈ ಪಬ್&zwnj;ನಿಂದ ದರ್ಶನ್ ಜೊತೆಗೆ ಪಟ್ಟಣಗೆರೆಯ ಶೆಡ್&zwnj;ಗೆ ಹೋಗಿದ್ದ. ಶೆಡ್&zwnj;ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಪ್ರದೋಶ್ ಸ್ಥಳದಲ್ಲೇ ಇದ್ದು, ಹೊಡೆಯೋದು ಸಾಕು ನಿಲ್ಲಿಸಿ, ಸತ್ತು ಹೋಗ್ತಾನೆʼ ಎಂದು ತಡೆದಿದ್ದ ಎಂದು ಪೊಲೀಸರ ತನಿಖಾ ವರದಿಯಲ್ಲಿದೆ. ಅಲ್ಲದೆ, ಕೊಲೆಯ ನಂತರ ಶವ ಸಾಗಿಸಲು ಸಹಾಯ ಕೋರಿ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಪ್ರದೋಶ್ ಫೋನ್ ಮಾಡಿದ್ದ ಎನ್ನಲಾಗಿದೆ.&lt;/p&gt;&lt;h2&gt;ಡಿಲೀಟ್ ಆಗಿದ್ದ ಎಫ್&zwnj;ಎಸ್&zwnj;ಎಲ್ ಡೇಟಾ ರಿಟ್ರೀವ್&lt;/h2&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ವಿನಯ್ ಸೇರಿದಂತೆ ಎಲ್ಲಾ ಆರೋಪಿಗಳ ಮೊಬೈಲ್&zwnj;ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯ ನಡೆದ ಸ್ಥಳದಲ್ಲಿದ್ದ ದೃಶ್ಯಗಳು, ಹಲ್ಲೆ ನಡೆಸಿದ ಸಂದರ್ಭದಲ್ಲಿ ತೆಗೆದಿದ್ದ ಫೋಟೋಗಳು ಹಾಗೂ ಡಿಲೀಟ್ ಮಾಡಲಾಗಿದ್ದ ಪ್ರಮುಖ ಮಾಹಿತಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಯಶಸ್ವಿಯಾಗಿ ರಿಟ್ರೀವ್ ಮಾಡಿದ್ದಾರೆ. ಈ ಡಿಜಿಟಲ್ ಸಾಕ್ಷ್ಯಗಳು ಅತೀ ಹೆಚ್ಚು ವಿನಯ್ ಫೋನ್&zwnj; ನಲ್ಲಿ ಇತ್ತು ಎನ್ನಲಾಗಿದೆ&lt;/p&gt;&lt;h2&gt;ಯಾರು ಈ ರವಿಶಂಕರ್?&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-8 ಆರೋಪಿಯಾಗಿರುವ ರವಿಶಂಕರ್ (Ravi Shankar), ಚಿತ್ರದುರ್ಗದ ಮೂಲದವನಾಗಿದ್ದು, ಡಿ ಗ್ಯಾಂಗ್&zwnj; ಅಭಿಮಾನಿ ಸಂಘದವನು ನಟ ದರ್ಶನ್ ಗ್ಯಾಂಗ್&zwnj;ನಿಂದ ಅಪಹರಣಕ್ಕೊಳಗಾದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರಲು ಬಳಸಲಾದ ಟೊಯೋಟಾ ಇಟಿಯೋಸ್ (Toyota Etios) ಕಾರನ್ನು ಚಾಲನೆ ಮಾಡಿದ್ದ ವ್ಯಕ್ತಿ. ಕೃತ್ಯದ ಬಳಿಕ ಕೇಸ್&zwnj; ಮುಚ್ಚಿ ಹಾಕಲು ಪೊಲೀಸರಿಗೆ ಶರಣಾಗಿದ್ದವರಲ್ಲಿ ಒಬ್ಬ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-actor-darshan-in-trouble-as-accused-pradosh-vinay-and-ravishankar-seek-to-become-approvers-gdp/articleshow-v84wikv"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್ ಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್: ಪ್ರದೋಶ್ ಮಾಫಿ ಸಾಕ್ಷಿಯಾದರೆ ದರ್ಶನ್‌ಗೆ ಲಾಭ! ಇದು ಫ್ಲ್ಯಾನ್?]]></title>
            <link>https://kannada.asianetnews.com/state/renukaswamy-case-twist-will-pradosh-turning-approver-actually-benefit-actor-darshan-snehamayi-krishna-facebook-post/articleshow-x507k0t</link>
            <guid isPermaLink="true">https://kannada.asianetnews.com/state/renukaswamy-case-twist-will-pradosh-turning-approver-actually-benefit-actor-darshan-snehamayi-krishna-facebook-post/articleshow-x507k0t</guid>
            <pubDate>Thu, 06 Aug 2026 15:48:49 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ದರ್ಶನ್&zwnj;ಗೆ ಸಂಕಷ್ಟ ತರುವುದಿಲ್ಲ, ಬದಲಾಗಿ ಲಂಚ ಪಡೆದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಬಲೆಗೆ ಬೀಳಿಸಲಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಸ್ನೇಹಮಯಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzb8rdh2m4pdvtwhkznkmgan,imgname-vinay-pradosh-darshan-renukaswamy-case-1786010940961.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆಗಳು ಕಂಡುಬರುತ್ತಿದ್ದು, ಪ್ರಕರಣದ 14ನೇ ಆರೋಪಿ (A-14) ಪ್ರದೋಷ್ ತಾನು &lsquo;ಮಾಫಿ ಸಾಕ್ಷಿ&rsquo; (ಅಪ್ರೂವರ್) ಆಗಲು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಭಾರಿ ಸಂಚಲನ ಮೂಡಿಸಿದೆ. ಪ್ರದೋಶ್ ಮಾಫಿ ಸಾಕ್ಷಿಯಾದರೆ ನಟ ದರ್ಶನ್&zwnj;ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗಲಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಬೆನ್ನಲ್ಲೇ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಈ ಪ್ರಕರಣಕ್ಕೆ ಬೇರೆಯದೇ ಆಯಾಮ ನೀಡಿದೆ. ಪ್ರದೋಶ್ ಮಾಫಿ ಸಾಕ್ಷಿಯಾಗುವುದರಿಂದ ನಟ ದರ್ಶನ್&zwnj;ಗೆ ಯಾವುದೇ ತೊಂದರೆಯಾಗುವುದಿಲ್ಲ, ಬದಲಿಗೆ ಅನುಕೂಲವೇ ಆಗಲಿದೆ ಎಂದು ಸ್ನೇಹಮಯಿ ಕೃಷ್ಣ ಬರೆದುಕೊಂಡಿದ್ದಾರೆ&lt;/p&gt;&lt;h2&gt;ಸ್ನೇಹಮಯಿ ಕೃಷ್ಣ ಅವರ ಪೋಸ್ಟ್&zwnj;ನಲ್ಲಿ ಏನಿದೆ?&lt;/h2&gt;&lt;p&gt;&quot;ರೇಣುಕಾಸ್ವಾಮಿ ಹತ್ಯೆಯ ನಂತರ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದು ಬಿಸಾಡಲು, ಬೇರೆಯವರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿಹಾಕಲು ಇದೇ ಪ್ರದೋಶ್ ನೊಂದಿಗೆ ಶಾಮೀಲಾಗಿ ಸಂಚು ರೂಪಿಸಲಾಗಿತ್ತು. ಈ ಸಂಚಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ (PSI) ವಿನಯ್ ಹಾಗೂ ಪೊಲೀಸ್ ನಿರೀಕ್ಷಕ (PI) ಗಿರೀಶ್ ನಾಯಕ್ ಸಹಕರಿಸಿದ್ದರು. ಇದಕ್ಕಾಗಿ ಪ್ರದೋಶ್&zwnj;ನಿಂದ ಪಿಎಸ್&zwnj;ಐ ವಿನಯ್ ಲಕ್ಷಾಂತರ ರೂಪಾಯಿ ಹಣ ಪಡೆದುಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಉಪ ಪೊಲೀಸ್ ನಿರೀಕ್ಷಕ ತಲೆಮರೆಸಿಕೊಂಡಿದ್ದರು&quot; ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.&lt;/p&gt;&lt;h2&gt;ಪೊಲೀಸ್ ಅಧಿಕಾರಿಗಳ ರಕ್ಷಣೆಗೆ ಸುಳ್ಳು ದೋಷಾರೋಪಣ ಪತ್ರ?&lt;/h2&gt;&lt;p&gt;ತಮ್ಮ ಪೋಸ್ಟ್&zwnj;ನಲ್ಲಿ ಮುಂದುವರಿದು ತನಿಖಾ ತಂಡದ ವಿರುದ್ಧವೇ ನೇರ ಆರೋಪ ಮಾಡಿರುವ ಅವರು, &quot;ಈ ಪೊಲೀಸ್ ಅಧಿಕಾರಿಗಳನ್ನು ಪ್ರಕರಣದ ಆರೋಪಿಗಳನ್ನಾಗಿ ಮಾಡದೆ, ಅವರನ್ನು ರಕ್ಷಿಸುವ ಸಲುವಾಗಿ ತನಿಖಾಧಿಕಾರಿಗಳು ಸತ್ಯಾಂಶಗಳನ್ನು ಮುಚ್ಚಿಟ್ಟಿದ್ದಾರೆ. ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ (ACP) ಚಂದನ್ ಕುಮಾರ್ ಅವರು ನ್ಯಾಯಾಲಯಕ್ಕೆ ಸುಳ್ಳು ದೋಷಾರೋಪಣ ಪತ್ರವನ್ನು (Charge Sheet) ಸಲ್ಲಿಸಿದ್ದಾರೆ. ಈಗ ಪ್ರದೋಶ್ ಮಾಫಿ ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ನಿಜ ಹೇಳಿದರೆ, ಈ ಎಲ್ಲಾ ಸತ್ಯಗಳು ಹೊರಬರಲಿವೆ&quot; ಎಂದಿದ್ದಾರೆ.&lt;/p&gt;&lt;p&gt;ಪ್ರದೋಶ್ ನೀಡುವ ಮಾಫಿ ಸಾಕ್ಷಿ ಹೇಳಿಕೆಯಿಂದ ಇಡೀ ಪ್ರಕರಣವೇ ಹೊಸ ತಿರುವು ಪಡೆದುಕೊಳ್ಳಲಿದ್ದು, ಶವ ವಿಲೇವಾರಿಗೆ ಸಂಚು ರೂಪಿಸಿದ್ದ ಹಾಗೂ ಲಂಚ ಪಡೆದಿದ್ದ ಮೂವರು ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್&zwnj;ನಲ್ಲಿ ಉಲ್ಲೇಖಿಸಿದ್ದಾರೆ. ಮಾಫಿ ಸಾಕ್ಷಿಯಾಗಲು ಪ್ರದೋಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೋರ್ಟ್&zwnj;ನಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅರ್ಜಿಯ ಕುರಿತು ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಹಾಗೂ ತನಿಖಾ ಸಂಸ್ಥೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-twist-will-pradosh-turning-approver-actually-benefit-actor-darshan-snehamayi-krishna-facebook-post/articleshow-x507k0t"/>
        </item>
        <item>
            <title><![CDATA[ಐದು ದಶಕಗಳ ಬಳಿಕ ಚಿತ್ರದುರ್ಗ ಪ್ರವೇಶಿಸಿದ ಭದ್ರಾ ನೀರು! ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು!]]></title>
            <link>https://kannada.asianetnews.com/karnataka-districts/upper-bhadra-project-trial-run-to-chitradurga-branch-canal-begins-panditaradhya-seer-controversy-video-viral-rav/articleshow-yv1blpd</link>
            <guid isPermaLink="true">https://kannada.asianetnews.com/karnataka-districts/upper-bhadra-project-trial-run-to-chitradurga-branch-canal-begins-panditaradhya-seer-controversy-video-viral-rav/articleshow-yv1blpd</guid>
            <pubDate>Wed, 09 Sep 2026 11:03:47 +0530</pubDate>
            <description><![CDATA[ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಕೊನೆಗೂ ಫಲಿಸಿದ್ದು, ಚಿತ್ರದುರ್ಗ ಜಿಲ್ಲೆಗೆ ನೀರು ಹರಿದಿದೆ. ಈ ಸಂಭ್ರಮದ ವೇಳೆ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶ್ರೀಗಳು ಬಾಗಿನ ಅರ್ಪಿಸುವಾಗ 'ಬೇಗ ಸಾಯಲಿ' ಎಂದು ಹೇಳಿದ್ದು, ಈ ವಿಡಿಯೋ ವೈರಲ್ ಆಗಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m228ajktcm5c7dspdtbd4nge,imgname-upper-bhadra-project-trial-1788929723002.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರದುರ್ಗ (ಸೆ.9): ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗೆ ಪ್ರಯೋಗಿಕವಾಗಿ ನೀರು ಹರಿಸಲಾಗಿದೆ. ಚಿತ್ರದುರ್ಗ ಜಿಲ್ಲೆ ಪ್ರವೇಶಿಸಿದ ಸಂದರ್ಭದಲ್ಲಿ ಸಾಣೇಹಳ್ಳಿ ಬಳಿ ಕಾಲುವೆಗೆ ಬಾಗಿನ ಅರ್ಪಣೆ ಮಾಡಲಾಯಿತು.&lt;/p&gt;&lt;h2&gt;ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು&lt;/h2&gt;&lt;p&gt;ಐದು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ಈಗ ಫಲಿಸಿದೆ. ಭದ್ರಾ ಜಲಾಶಯದ ನೀರು ಕೊನೆಗೂ ಚಿತ್ರದುರ್ಗ ಪ್ರವೇಶಿಸಿದೆ ಎಂಥ ಸುಸಂದರ್ಭದಲ್ಲಿ ಬಾಗಿನ ಅರ್ಪಿಸುವ ವೇಳೆ ಪಂಡಿತಾರಾಧ್ಯ ಶ್ರೀಗಳು ಯಡವಟ್ಟು ಮಾಡಿರುವ ಘಟನೆ ನಡೆದಿದೆ.&lt;/p&gt;&lt;h2&gt;ಬಾಗಿನ ಅರ್ಪಣೆ ವೇಳೆ ಪಂಡಿತಾರಾಧ್ಯ ಶ್ರೀ ಯಡವಟ್ಟು&lt;/h2&gt;&lt;p&gt;ಭದ್ರಾ ಜಲಾಶಯದಿಂದ ಚಿತ್ರದುರ್ಗದ ಶಾಖಾ ಕಾಲುವೆಗಳಿಗೆ ಪ್ರವೇಶಿಸಿದಾಗ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಬಳಿ ಇರುವ ಕಾಲುವೆಗೆ ಮಹಿಳೆಯರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಈ ವೇಳೆ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ಮುತ್ತೈದೆ ಭಾಗ್ಯ ಕರುಣಿಸು ಎಂದು ಮಹಿಳೆಯರು ಬಾಗಿನ ಅರ್ಪಣೆ ವೇಳೆ, 'ಬೇಗ ಸಾಯಲಿ' ಎಂದ ಶ್ರೀಗಳು! ಸಾಣೇಹಳ್ಳಿ ಶ್ರೀಗಳು 'ಬೇಗ ಸಾಯಲಿ' ಎಂದಾಗ ಸ್ಥಳದಲ್ಲಿ ಮಹಿಳೆಯರು ನಕ್ಕಿದ್ದಾರೆ. ಶ್ರೀಗಳು ಯಾವ ಅರ್ಥದಲ್ಲಿ ಹೇಳಿದ್ದಾರೋ ತಿಳಿದಿಲ್ಲ. ಶ್ರೀಗಳ ಹೇಳಿಕೆಯಿಂದ ಮಹಿಳೆಯರು ನಕ್ಕಿರುವುದರಿಂದು ಅದೊಂದು ತಮಾಷೆಯಂತೆ ಕಾಣುತ್ತದೆ. ಶ್ರೀಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ &lsquo;ಬೇಗ ಸಾಯಲಿ&rsquo; ಎಂಬ ಹೇಳಿಕೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಣೆಹಳ್ಳಿ ಶ್ರೀಗಳ ನಡೆಗೆ ಕೆಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇಂಥ ಶುಭ ಸಂದರ್ಭದಲ್ಲಿ'ಸಾಯುವ' ಮಾತು ಬೇಕಿತ್ತಾ ಶ್ರೀಗಳಿಗೆ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;ಐದಾರು ದಶಕಗಳ ಕನಸು ಭದ್ರಾ ಜಲಾಶಯ:&lt;/h3&gt;&lt;p&gt;ಭದ್ರಾ ಜಲಾಶಯ ನಿನ್ನೆ ಮೊನ್ನೆಯದಲ್ಲ. ಇದಕ್ಕಾಗಿ ಐದಾರು ದಶಕಗಳ ಹೋರಾಟವೇ ನಡೆದಿದೆ. ಇದೀಗ ಭದ್ರಾ ಮೇಲ್ದಂಡೆಯ ಕನಸು ನನಸಾಗಿದೆ. ಇದು ಬಯಲು ಸೀಮೆಯ ಜನರ ಭಗಿರಥ ಪ್ರಯತ್ನ ಸಫಲವಾದಂತಾಗಿದೆ. ಬರಗಾಲದಿಂದ ತತ್ತರಿಸಿದ್ದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಪ್ರವೇಶಿಸುವತಿದ್ದಂತೆ ಪಾಪ ವಿಮೋಚನೆಯಾದಂತಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/upper-bhadra-project-trial-run-to-chitradurga-branch-canal-begins-panditaradhya-seer-controversy-video-viral-rav/articleshow-yv1blpd"/>
        </item>
    </channel>
</rss>
