<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 13 May 2026 14:28:33 +0530</lastBuildDate>
        <atom:link href="https://kannada.asianetnews.com/rss/chitradurga" rel="self" type="application/rss+xml"/>
        <item>
            <title><![CDATA[ಚಿತ್ರದುರ್ಗ ಪ್ರತಿಷ್ಠಿತ ಮಠದ ಶಾಲೆಯಲ್ಲಿ6 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಕಾಮುಕ ಶಿಕ್ಷಕ ಅರೆಸ್ಟ್]]></title>
            <link>https://kannada.asianetnews.com/crime/chitradurga-teacher-arrested-for-sexual-harassment-6-minor-schoolgirls/articleshow-y9kcte6</link>
            <guid isPermaLink="true">https://kannada.asianetnews.com/crime/chitradurga-teacher-arrested-for-sexual-harassment-6-minor-schoolgirls/articleshow-y9kcte6</guid>
            <pubDate>Tue, 03 Feb 2026 13:34:31 +0530</pubDate>
            <description><![CDATA[ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಶಾಲಾ ಆಡಳಿತ ಮಂಡಳಿಯ ದೂರಿನ ಮೇರೆಗೆ, ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgh85c1fhc8qffca84a90nhv,imgname-----------------------2026-02-03t132412.656-1770105516079.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಫೆ.3):&lt;/strong&gt; ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಪ್ರತಿಷ್ಠಿತ ಮಠವೊಂದಕ್ಕೆ ಸೇರಿದ ಖಾಸಗಿ ಶಾಲೆಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ವಿದ್ಯಾಬುದ್ಧಿ ಕಲಿಸಬೇಕಾದ ಶಿಕ್ಷಕನೇ ಕಾಮಪಿಶಾಚಿಯಂತೆ ವರ್ತಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ವಿದ್ಯಾರ್ಥಿನಿಯರನ್ನ ಪ್ರತ್ಯೇಕ ಕೋಣೆಗೆ ಕರೆದು ದುಷ್ಕೃತ್ಯ&lt;/h2&gt;&lt;p&gt;ಆರೋಪಿ ಶಿಕ್ಷಕ ರಂಗಣ್ಣ ಎಂಬುವವನು ಶಾಲೆಯ ಸುಮಾರು 6 ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೋಣೆಗೆ ಬರುವಂತೆ ಸೂಚಿಸಿ, ಅಲ್ಲಿ ಅವರಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಷಯ ತಿಳಿದು ಆಘಾತಕ್ಕೊಳಗಾದ ಶಾಲಾ ಆಡಳಿತ ಮಂಡಳಿಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಕಾನೂನು ಕ್ರಮಕ್ಕೆ ಮುಂದಾಗಿದೆ.&lt;/p&gt;&lt;h3&gt;ಆಡಳಿತ ಮಂಡಳಿಯಿಂದಲೇ ದೂರು&lt;/h3&gt;&lt;p&gt;ಶಾಲೆಯ ಆಡಳಿತ ಸಮಿತಿಯು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಭರಮಸಾಗರ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕ ರಂಗಣ್ಣನ ವಿರುದ್ಧ ಅಧಿಕೃತವಾಗಿ ದೂರು ನೀಡಿದೆ. ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು&lt;/strong&gt;&lt;/p&gt;&lt;p&gt;ಬಂಧಿತ ಶಿಕ್ಷಕನ ವಿರುದ್ಧ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಫೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರತಿಷ್ಠಿತ ಸಂಸ್ಥೆಯಲ್ಲೇ ಇಂತಹ ಘಟನೆ ನಡೆದಿರುವುದು ಚಿತ್ರದುರ್ಗದ ಜನರು ಬೆಚ್ಚಿಬಿದ್ದಿದ್ದಾರೆ. ಶಿಕ್ಷಕರೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. ಒಂದು ಕಾಲದಲ್ಲಿ ಮಕ್ಕಳು ಶಾಲೆಗೆ ಹೋದರೆ ಸುರಕ್ಷಿತರಾಗಿರುತ್ತಾರೆ ಎಂಬ ಭಾವನೆಯಿತ್ತು. ಆದರೆ ಇತ್ತೀಚೆಗೆ ದಿನ ಬೆಳಗಾದರೆ ಶಾಲಾ ಮಕ್ಕಳ ಮೇಲೆ ಶಿಕ್ಷಕರೇ ಎಸಗುತ್ತಿರುವ ಪೈಶಾಚಿಕ ಕೃತ್ಯಗಳು ಪೋಷಕರಿಗೆ ಆಘಾತವುಂಟುಮಾಡಿದವೆ.&lt;/p&gt;]]></content:encoded>
            <category>chitradurga</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/chitradurga-teacher-arrested-for-sexual-harassment-6-minor-schoolgirls/articleshow-y9kcte6"/>
        </item>
        <item>
            <title><![CDATA[ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನಲೆ, ಚಿತ್ರದುರ್ಗದಲ್ಲಿ ಮನೆಗೆ ನುಗ್ಗಿ ವ್ಯಕ್ತಿಯ ಭೀಕರ ಹತ್ಯೆ]]></title>
            <link>https://kannada.asianetnews.com/karnataka-districts/chitradurga-man-killed-after-intruding-into-house-over-alleged-affair-police-probe/articleshow-1asvvbs</link>
            <guid isPermaLink="true">https://kannada.asianetnews.com/karnataka-districts/chitradurga-man-killed-after-intruding-into-house-over-alleged-affair-police-probe/articleshow-1asvvbs</guid>
            <pubDate>Sun, 03 May 2026 12:20:16 +0530</pubDate>
            <description><![CDATA[&lt;p&gt;ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನಲೆ, ಚಿತ್ರದುರ್ಗದಲ್ಲಿ ಮನೆಗೆ ನುಗ್ಗಿ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಬೆಳಗ್ಗೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಕೃತ್ಯ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqa49q4nyj2kch0f8qd709kx,imgname-bengaluru-police-1777382775957.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.03)&lt;/strong&gt;: ಮಹಿಳೆ ಜೊತೆ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಮನೆಗೆ ನುಗ್ಗಿ ವ್ಯಕ್ತಿಯೊಬ್ಬನ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗದ ರಾಮದಾಸ್ ಕಾಂಪೌಂಡ್ ಬಡಾವಣೆಯಲ್ಲಿ ನಡೆದಿದೆ. 46 ವರ್ಷದ ಪ್ರಮೋದ್ ಭೀಕರವಾಗಿ ಕೊಲೆಯಾಗಿದ್ದಾನೆ. ನಿನ್ನೆ (ಮೇ.02) ರಾತ್ರಿ ಈ ಹತ್ಯೆ ನಡೆದಿದ್ದು ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;ರಾಮದಾಸ್ ಕಂಪೌಂಡ್ ಬಡಾವಣೆಯ ನಿವಾಸಿ ಪ್ರಮೋದ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಅನ್ನೋ ಆರೋಪಗಳು ಕೇಳಿಬಂದಿದೆ. ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಕಾರಣ ಮಹಿಳೆಯ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡಿದ್ದರು. ಈ ಸಂಬಂಧ ಈಗಾಗಲೇ ಮಾತಿನ ಚಕಮಕಿಗಳು ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಮೋದ್ ಮೇಲೆ ಕಣ್ಣಿಟ್ಟಿದ್ದ ಮಹಿಳೆ ಕುಟುಂಬಸ್ಥರು ನಿನ್ನೆ ತಡ ರಾತ್ರಿ ಪ್ರಮೋದ್ ಮನೆಗೆ ನುಗ್ಗಿದ್ದಾರೆ.&lt;/p&gt;&lt;p&gt;ಮನೆಯಲ್ಲಿ ಏಕಾಂಗಿಯಾಗಿರುವ ಪ್ರಮೋದ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಏಕಾಂಗಿಯಾಗಿದ್ದ ಕಾರಣ ಮನೆಯಲ್ಲಿ ಹತ್ಯೆ ಮಾಡಲು ಪ್ಲಾನ್ ಮಾಡಲಾಗಿತ್ತು. ಹೀಗಾಗಿ ತಡ ರಾತ್ರಿ ಮಾರಾಕಸ್ತ್ರಗಳಿಂದ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ನೇರವಾಗಿ ಪ್ರಮೋದ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಬಳಿಕ ಆರೋಪಿಗೆ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ಅರುಣ್ ಗೌಡ, ಸಿಪಿಐ ನಯೀಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.&lt;/p&gt;&lt;h2&gt;ರಾಯಚೂರಿನಲ್ಲಿ ಟ್ರಾಕ್ಟರ್ ಹರಿಸಿ ಕೊಲೆ&lt;/h2&gt;&lt;p&gt;ರಾಯಚೂರು ಜಿಲ್ಲೆ ದೇವದುರ್ಗ ತಾ. ಜಾಗಟಗಲ್ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಟ್ಯಾಕ್ಟರ್ ಹರಿಸಿ ವ್ಯಕ್ತಿ ಕೊಲೆ ಮಾಡಿದ ಘಟನೆ ನಡೆದಿದೆ. ಮಣ್ಣು ತುಂಬುವ ಕೆಲಸಕ್ಕಾಗಿ ಟ್ಯಾಕ್ಟರ್ ಡ್ರೈವಿಂಗ್ ಗೆ ಹೋಗಿದ್ದ ಸಿದ್ದಪ್ಪನನ್ನು ಹತ್ಯೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಣ್ಣು ತುಂಬುವ ಕೆಲಸದ ವೇಳೆ ಸಿದ್ದಪ್ಪನ ಮೇಲೆ ಮತ್ತೊಬ್ಬ ಡ್ರೈವರ್ ಮಲ್ಲಪ್ಪ ಹಾಗೂ ಇತರರು ಟ್ಯಾಕ್ಟರ್ ಹರಿಸಿ ಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಸಿದ್ದಪ್ಪ ಆಸ್ಪತ್ರೆಗೆ ಸಾಗುವ ಮಧ್ಯೆ ಸಾವು ಕಂಡಿದ್ದಾರೆ. ಘಟನೆ ಬಳಿಕ ಆರೋಪಿಗಳ ಮನೆ ಎದುರು ಸಿದ್ದಪ್ಪನ ಮೃತದೇಹ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಗಬ್ಬುರೂ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chitradurga</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/chitradurga-man-killed-after-intruding-into-house-over-alleged-affair-police-probe/articleshow-1asvvbs"/>
        </item>
        <item>
            <title><![CDATA[ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಬರುವ 10 ಲಕ್ಷ ಜನರಿಗೆ ಊಟದ ವ್ಯವಸ್ಥೆ! ಊಟದ ಮೇನುವಿನಲ್ಲಿ ಏನಿದೆ?]]></title>
            <link>https://kannada.asianetnews.com/state/bsy-abhimanotsav-grand-event-in-chitradurga-food-arrangement-made-for-10-lakh-people-rav/articleshow-3rut99w</link>
            <guid isPermaLink="true">https://kannada.asianetnews.com/state/bsy-abhimanotsav-grand-event-in-chitradurga-food-arrangement-made-for-10-lakh-people-rav/articleshow-3rut99w</guid>
            <pubDate>Sat, 09 May 2026 10:49:20 +0530</pubDate>
            <description><![CDATA[ಚಿತ್ರದುರ್ಗದಲ್ಲಿ ನಡೆಯಲಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಟೊಮೆಟೋ ಬಾತ್, ಮೊಸರನ್ನ ಹಾಗೂ ಮೈಸೂರು ಪಾಕ್ ಒಳಗೊಂಡ ಸರಳ ಊಟದ ವ್ಯವಸ್ಥೆ ಮಾಡಲಾಗಿದ್ದು, 5 ನಗರಗಳ ಬಾಣಸಿಗರು ಇದನ್ನು ನಿರ್ವಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5jdnpz8n5sn2s68d116597,imgname-----------------------2026-05-09t104204.963-1778303555295.jpg" type="image/jpeg" height="390" width="690"/>
            <content:encoded><![CDATA[&lt;p&gt;- ಮೆನುನಲ್ಲಿ ಟೊಮೆಟೋ ಬಾತ್, ಮೊಸರನ್ನ, ಮೈಸೂರು ಪಾಕ್ । 5 ಊರಿಂದ ಬಂದಿರುವ ಬಾಣಸಿಗರು&lt;/p&gt;&lt;p&gt;ಚಿತ್ರದುರ್ಗ (ಮೇ.9): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ, ಪುರಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳ ಹಸಿವು ನೀಗಿಸಲು ಟೊಮೆಟೋ ಬಾತ್, ಮೊಸರನ್ನ, ಮೈಸೂರು ಪಾಕ್ ಸಿದ್ಧವಾಗುತ್ತಿದೆ.&lt;/p&gt;&lt;p&gt;ಹತ್ತು ಲಕ್ಷ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡುವುದು ಸವಾಲಿನ ಕೆಲಸವಾಗಿದೆ. ಸರಾಗಗೊಳಿಸುವ ನಿಟ್ಟಿನಲ್ಲಿ ಸರಳ ಊಟದ ವ್ಯವಸ್ಥೆಗೆ ಮೊರೆ ಹೋಗಲಾಗಿದೆ. ಟೊಮೆಟೋ ಬಾತ್, ಮೊಸರನ್ನ ಸೂಕ್ತವೆಂದು ತೀರ್ಮಾನಿಸಲಾಗಿದೆ. ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಸದ ಗೋವಿಂದ ಕಾರಜೋಳ, .ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು ಮೊದಲಾದ 5 ಕಡೆಯ ಪ್ರಮುಖ ಅಡುಗೆಯವರಿಗೆ ನಿರ್ವಹಣೆ ಕೊಟ್ಟಿದ್ದೇವೆ. ಊಟ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಅರ್ಧ ಲೀಟರ್ ಕುಡಿಯುವ ನೀರನ್ನೂ ಕೊಡುತ್ತೇವೆ. ಸಂಜೆ 6ರವರೆಗೂ ಊಟ ಮುಂದುವರೆಯುತ್ತದೆ ಎಂದರು.&lt;/p&gt;&lt;p&gt;ಒಂದೊಂದು ಅಡುಗೆ ಮನೆ ಬಳಿ ಬೆಂಗಳೂರಿನ ಶಾಸಕರ ಜೊತೆ 100ರಂತೆ ಸ್ವಯಂಸೇವಕರೂ ಇರುತ್ತಾರೆ. ಹಂತ ಹಂತವಾಗಿ ಬಿಸಿಯೂಟವನ್ನೇ ಕೊಡಲು ಕ್ರಮ ಕೈಗೊಳ್ಳಲಿದ್ದಾರೆ. ಸರತಿ ಸಾಲಿನಲ್ಲೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bsy-abhimanotsav-grand-event-in-chitradurga-food-arrangement-made-for-10-lakh-people-rav/articleshow-3rut99w"/>
        </item>
        <item>
            <title><![CDATA[Chitradurga: ಮಾತು ಬಾರದ ಜೋಡಿ ಸಂಗೀತಾ-ಅವಿನಾಶ್ ಪ್ರೇರಣಾದಾಯಕ ವೈವಾಹಿಕ ಜೀವನಾರಂಭ]]></title>
            <link>https://kannada.asianetnews.com/karnataka-districts/hosadurga-chitradurga-young-couple-sangeeta-and-avinash-who-are-both-speechless-and-hearing-impaired-get-married-mrq/articleshow-4zap7ud</link>
            <guid isPermaLink="true">https://kannada.asianetnews.com/karnataka-districts/hosadurga-chitradurga-young-couple-sangeeta-and-avinash-who-are-both-speechless-and-hearing-impaired-get-married-mrq/articleshow-4zap7ud</guid>
            <pubDate>Tue, 05 May 2026 05:55:42 +0530</pubDate>
            <description><![CDATA[ಹುಟ್ಟಿನಿಂದಲೇ ಮಾತು ಬಾರದ ಹಾಗೂ ಶ್ರವಣ ದೋಷ ಹೊಂದಿರುವ ಸಂಗೀತಾ ಮತ್ತು ಅವಿನಾಶ್ ಎಂಬ ಯುವ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಮೈಸೂರಿನಲ್ಲಿ ಒಟ್ಟಿಗೆ ಓದಿದ್ದ ಇವರು, ಮನೆಯವರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವರ ಅವಿನಾಶ್ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಸಾಧಕರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqtrcacktr8kwkk79jyaskkx,imgname-marriage--1--1777940703635.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಮಾತಿಲ್ಲದ ಮೌನ&hellip; ಕೇಳಿಸದ ಲೋಕ&hellip; ಆದರೆ ಹೃದಯಗಳ ಸಂಭಾಷಣೆ ಮಾತ್ರ ಅನಂತ. ಇಂತಹ ಅಪರೂಪದ ಭಾವನೆಗಳಿಗೆ ಸಾಕ್ಷಿಯಾಗಿ, ಹುಟ್ಟಿನಿಂದಲೇ ಮಾತು ಬಾರದ ಹಾಗೂ ಶ್ರವಣ ದೋಷ ಹೊಂದಿರುವ ಯುವ ಜೋಡಿಯೊಂದು ಗುರು ಹಿರಿಯರು, ಬಂಧು ಮಿತ್ರರ ಸಮ್ಮುಖದಲ್ಲಿ ಸೋಮವಾರ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.&lt;/p&gt;&lt;p&gt;ಹೊಸದುರ್ಗ ತಾಲೂಕಿನ ಹಳೇಮಳಲಿ ಗ್ರಾಮದ ಕೃಷಿಕರಾದ ಶೋಭಾ ಹಾಗೂ ಪ್ರಕಾಶ ಅವರ ಪುತ್ರಿ ಸಂಗೀತಾ ಪಿ (ಯಶಸ್ವಿನಿ) ಹಾಗೂ ಕಡೂರು ತಾಲೂಕಿನ ಕಾಮನಕರೆ ಗ್ರಾಮದ ಕೃಷಿಕರಾದ ಕೋಮಲಾ ಶಿವಲಿಂಗಪ್ಪ ಅವರ ಪುತ್ರ ಕೆ.ಎಸ್.ಅವಿನಾಶ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ಮೌನ ಜೋಡಿಗಳು.&lt;/p&gt;&lt;h2&gt;&lt;strong&gt;ಮನೆಯವರ ಒಪ್ಪಿಗೆ ಪಡೆದು ಮದುವೆ&lt;/strong&gt;&lt;/h2&gt;&lt;p&gt;ಸಂಗೀತಾ ಮತ್ತು ಅವಿನಾಶ್ ಮೈಸೂರಿನ ಜೆಎಸ್&zwj;ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದು, ಕಳೆದ ಎರಡು ವರ್ಷಗಳಿಂದ ಪರಸ್ಪರರ ಮನೆಯಲ್ಲಿ ವಿವಾಹಕ್ಕೆ ವಧು ವರರನ್ನು ಹುಡುಕುತ್ತಿದ್ದರು. ಮೂರ್ನಾಲ್ಕು ಸಂಬಂಧಗಳು ಹುಡುಕಿಕೊಂಡು ಬಂದಿದ್ದರು ಒಪ್ಪಿಗೆ ಆಗಿರಲಿಲ್ಲ. ಈ ನಡುವೆ ಇಬ್ಬರಿಗೂ ಮೊದಲೇ ಪರಿಚಯ ಇದ್ದುದ್ದರಿಂದ ಮನೆಯವರ ಒಪ್ಪಿಗೆ ಮೂಲಕ ವಿವಾಹ ಕಾರ್ಯ ನೆರವೇರಿಸಲಾಗಿದೆ. ಇದು ಅರೆಂಜ್ ಮ್ಯಾರೇಜ್ ಎಂದು ಸಂಗೀತಾ ಅವರ ತಂದೆ ಪ್ರಕಾಶ್ ಹೇಳಿದರು.&lt;/p&gt;&lt;p&gt;ಮೈಸೂರಿನ ಜೆಎಸ್&zwj;ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಗೀತಾ ಮತ್ತು ಅವಿನಾಶ್ ಒಟ್ಟಿಗೆ ಓದಿದ್ದಾರೆ. ಅವಿನಾಶ್ ಡಿಪ್ಲೋಮಾ ಇನ್ ಜ್ಯೂವೆಲ್ಲರಿ ಡಿಸೈನರ್ ವಿಭಾಗದಲ್ಲಿ ಅಧ್ಯಯನ ಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಜ್ಯೂವೆಲ್ಲರಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಸಂಗೀತಾ ಕೂಡ ದೊಡ್ಡಬಳ್ಳಾಪುರದ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರ ಮದುವೆಗೆ ಆಗಮಿಸಿದ್ದ ಸಹಪಾಠಿಗಳು ನೂತನ ಜೋಡಿಗಳಿಗೆ ಶುಭ ಹಾರೈಸಿದರು.&lt;/p&gt;&lt;h3&gt;&lt;strong&gt;ಪದಕ ವಿಜೇತ ಅವಿನಾಶ್&lt;/strong&gt;&lt;/h3&gt;&lt;p&gt;&amp;nbsp;ವರ ಅವಿನಾಶ ಅವರು 2023ರ ಮಾರ್ಚ್&zwnj;ನಲ್ಲಿ ಫ್ರಾನ್ಸ್&zwnj;ನ ಮೆಟ್ಜ್ ನಗರದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಅಬಿಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಭಾಗವಹಿಸಿ ಕೌಶಲ್ಯ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಒಟ್ಟು 7 ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮಹತ್ವದ ಸಾಧನೆಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವಿರೇಂದ್ರ ಕುಮಾರ್ ಅವರಿಂದ ಸನ್ಮಾನ ಸ್ವೀಕರಿಸಿದ್ದಾರೆ. ಮದುವೆಗೆ ಆಗಮಿಸಿದ್ದ ಬಂಧುಗಳು ದಂಪತಿಗಳು ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ಹೊಂದಾಣಿಕೆಯಿಂದ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಮನತುಂಬಿ ಆಶೀರ್ವದಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ, ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಕೆ. ಲೋಕೇಶ್ವರಪ್ಪ, ಖಜಾಂಚಿ ಟಿ.ಪಾಲಾಕ್ಷಪ್ಪ ಅವರು ಶುಭ ಹಾರೈಸಿ, ಈ ದಾಂಪತ್ಯ ಜೀವನ ಯುವಜನತೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.&lt;/p&gt;&lt;h3&gt;&lt;strong&gt;ಮಾತಿಲ್ಲದರೂ ಮನಸ್ಸುಗಳಿಂದ ಹಾರೈಸಿದ ಸ್ನೇಹಿತರು&lt;/strong&gt;&lt;/h3&gt;&lt;p&gt;ಈ ವಿವಾಹದ ನಿಜವಾದ ವಿಶೇಷ ಮೌನದಲ್ಲೂ ಮಾತನಾಡುವ ಪ್ರೀತಿ. ವಾಕ್ ಮತ್ತು ಶ್ರವಣ ದೋಷ ಹೊಂದಿರುವ ಸುಮಾರು 160 ಮಂದಿ ಸ್ನೇಹಿತರು, ಸಹೋದ್ಯೋಗಿಗಳು ಭಾಗವಹಿಸಿ ತಮ್ಮದೇ ಸಂಕೇತ ಭಾಷೆಯಲ್ಲಿ ನೂತನ ದಂಪತಿಗೆ ಶುಭಾಶಯಗಳನ್ನು ತಿಳಿಸಿದ ಕ್ಷಣಗಳು ಎಲ್ಲರ ಕಣ್ಣನ್ನೂ ತೇವಗೊಳಿಸಿದವು. ಮಾತಿಲ್ಲದರೂ ಮನಸ್ಸುಗಳಿಂದ ಹಂಚಿದ ಆ ಹಾರೈಕೆಗಳು ಸಮಾರಂಭಕ್ಕೆ ವಿಭಿನ್ನ ಮೆರಗು ತಂದವು.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hosadurga-chitradurga-young-couple-sangeeta-and-avinash-who-are-both-speechless-and-hearing-impaired-get-married-mrq/articleshow-4zap7ud"/>
        </item>
        <item>
            <title><![CDATA[ಚಿತ್ರದುರ್ಗದಲ್ಲಿ BSY ಅಭಿಮಾನೋತ್ಸವ: ಕಾರ್ಯಕ್ರಮಕ್ಕೆ ಬರುವ ವಾಹನ ಪಾರ್ಕಿಂಗ್ ಸ್ಥಳಗಳಿಗೆ ನಾಡಿನ ನದಿಗಳ ಹೆಸರು!]]></title>
            <link>https://kannada.asianetnews.com/karnataka-districts/bsy-abhimanotsava-in-chitradurga-parking-zones-named-karnataka-s-rivers-rav/articleshow-5uxvl47</link>
            <guid isPermaLink="true">https://kannada.asianetnews.com/karnataka-districts/bsy-abhimanotsava-in-chitradurga-parking-zones-named-karnataka-s-rivers-rav/articleshow-5uxvl47</guid>
            <pubDate>Sat, 09 May 2026 11:03:26 +0530</pubDate>
            <description><![CDATA[&lt;p&gt;ಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ 'ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ವಾಹನ ನಿಲುಗಡೆ ಸ್ಥಳಗಳಿಗೆ ಕಾವೇರಿ, ವೇದಾವತಿ, ಭದ್ರಾ, ತುಂಗಾ ಎಂಬ ನದಿಗಳ ಹೆಸರಿಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5k9enjcd1c0hmnt913s858,imgname-----------------------2026-05-09t105419.356-1778304465586.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಡೇಕುಂಟೆ ಮಂಜುನಾಥ್&lt;/strong&gt;&lt;/p&gt;&lt;p&gt;ಚಿತ್ರದುರ್ಗ (ಮೇ.9): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕಾರಣಕ್ಕೆ ಬಂದು 50 ವರ್ಷ ತುಂಬಿದ ಹಿನ್ನೆಲೆ ಚಿತ್ರದುರ್ಗದ ದಾವಣಗೆರೆ ರಸ್ತೆಯ ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಹಿಂಭಾಗದ ವಿಶಾಲ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಮಾಡಿ ಆಯೋಜಿಸಿರುವ ಅಭಿಮಾನೋತ್ಸವ ಎಂಬ ವಿನೂತನ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರ ವಾಹನಗಳೂ ಸೇರಿದಂತೆ ವಿಐಪಿ, ವಿವಿಐಪಿಗಳ ವಾಹನ ನಿಲುಗಡೆಯ ಸ್ಥಳಗಳಿಗೆ ನಾಡಿನ ಪ್ರಮುಖ ನದಿಗಳ ಹೆಸರುಗಳನ್ನು ಸೂಚಿಸುವ ಮೂಲಕ ಪೋಲೀಸ್ ಇಲಾಖೆ ನಾಡಿನ ಹಿರಿಮೆಯನ್ನು ಸಾರುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸಕ್ಕೆ ಮುಂದಾಗಿದೆ.&lt;/p&gt;&lt;p&gt;ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ ಕಡೆಯಿಂದ ಬರುವ ವಾಹನಗಳಿಗೆ ದಾವಣಗೆರೆ ರಸ್ತೆಯ ಮಡಿವಾಳ ಮಾಚಿದೇವ ಮಠದ ಕಡೆಗೆ ವೇದಾವತಿ ವಾಹನ ನಿಲುಗಡೆ ಪ್ರದೇಶ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಬೃಹತ್ ವೇದಿಕೆ ಬಲಭಾಗದ ಹಿಂಭಾಗದಲ್ಲಿ ವಿಐಪಿ, ವಿವಿಐಪಿಗಳಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರದೇಶಕ್ಕೆ ಕಾವೇರಿ ಎಂದು ನಾಮಕರಣ ಮಾಡಲಾಗಿದೆ.&lt;/p&gt;&lt;p&gt;ಬೆಂಗಳೂರು, ತುಮಕೂರು, ಹಾಸನ, ಮಂಡ್ಯ, ಮೈಸೂರು ಕಡೆಗಳಿಂದ ಬರುವ ವಾಹನಗಳಿಗೆ ಎಸ್ ಜೆ ಎಂ ಹೆಲಿಪ್ಯಾಡ್ ಹಿಂಭಾಗದ ಮೂರು ಎಕರೆ ಪ್ರದೇಶದಲ್ಲಿ ಭದ್ರಾ ಹೆಸರಿನ ನಿಲುಗಡೆ ಪ್ರದೇಶವನ್ನು ಮೀಸಲಿಡಲಾಗಿದೆ.&lt;/p&gt;&lt;p&gt;ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಕಡೆಗಳಿಂದ ಬರುವ ವಾಹನಗಳಿಗೆ ಈಚಲನಾಗೇನಹಳ್ಳಿ ಹತ್ತಿರ ತುಂಗಾ ಹೆಸರಿನ ನಿಲುಗಡೆ ಪ್ರದೇಶದಲ್ಲಿ ವ್ಯವಸ್ಥೆ ಮಾಡಲಾಗಿದೆ.&lt;/p&gt;&lt;h2&gt;ವೇದಿಕೆ ಹತ್ತಿರವೇ ಹೆಲಿಪ್ಯಾಡ್:&lt;/h2&gt;&lt;p&gt;ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಸಿ ನೇರವಾಗಿ ಶಿವಮೊಗ್ಗದ ವಿಮಾನ ನಿಲ್ಧಾಣಕ್ಕೆ ಬಂದಿಳಿದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ಪ್ರೇವೇಶಿಸಲಿದ್ದಾರೆ. ಇದಕ್ಕಾಗಿಯೇ ಮಾದಾರ ಚೆನ್ನಯ್ಯ ಮಠದ ಹತ್ತಿರ ಅಂದರೆ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದು. ಯಾವುದೇ ಸಾರ್ವಜನಿಕ ಕಿರಿಕಿರಿಗೆ ಅವಕಾಶ ನೀಡದೇ ನೇರವಾಗಿ ವೇದಿಕೆಗೆ ಕರೆತರಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.&lt;/p&gt;&lt;p&gt;ಚಳ್ಳಕೆರೆ ಗೇಟ್ ಹತ್ತಿರ ಮುರುಘರಾಜೇಂದ್ರ ಕ್ರೀಡಾಂಗಣ ಮತ್ತು ಎಸ್ ಜೆ ಎಂ ಕ್ರೀಡಾಂಗಣ ಎರಡು ಹೆಲಿಪ್ಯಾಡ್ ಗಳು ಇದ್ದರೂ ಹೊಸದಾಗಿ ನಿರ್ಮಿಸಿರುವ ವೇದಿಕೆ ಹಿಂಭಾಗದ ಹೆಲಿಪ್ಯಾಡ್ ನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದಿಳಿಯಲಿದ್ದಾರೆ.&lt;/p&gt;&lt;h3&gt;ಬೃಹತ್ ಕಟೌಟುಗಳು:&lt;/h3&gt;&lt;p&gt;ಯಡಿಯೂರಪ್ಪ ಅವರ ಬಣ್ಣ ಬಣ್ಣದ ಕಟೌಟ್ ಗಳು, ಪ್ಲೆಕ್ಸ್&zwnj;ಗಳು, ಕೇಸರಿ ಬಣ್ಣದಲ್ಲಿ ವಿವಿಧ ಅಲಂಕಾರಗಳನ್ನು ಮಾಡಲಾಗಿದೆ. ಯಡಿಯೂರಪ್ಪ ಅವರ ಜೊತೆಗೆ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ಬಿ.ವೈ.ವಿಜಯೇಂದ್ರ ಅವರ ಕಟೌಟುಗಳು ಎಲ್ಲರ ಗಮನಸೆಳೆಯುತ್ತಿವೆ. ಮಾದಾರ ಚೆನ್ನಯ್ಯ ಗುರುಪೀಠದ ಸರ್ವಿಸ್ ರಸ್ತೆಯಿಂದ ಸೀದಾ ವೇದಿಕೆಗೆ ಹೋಗಲು ಮುಖ್ಯ ದ್ವಾರವನ್ನು ಹೊಕ್ಕು ಒಳಹೋಗುತ್ತಿದ್ದರೆ ಯಾವುದೋ ಬೇರೆ ಲೋಕಕ್ಕೆ ಹೋಗುತ್ತಿದ್ದೇವಾ ಎಂಬಷ್ಟರ ಮಟ್ಟಿಗೆ ವಿಜೃಂಭಣೆಯಿಂದ ಅಲಕಾಂರ ಮಾಡಲಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bsy-abhimanotsava-in-chitradurga-parking-zones-named-karnataka-s-rivers-rav/articleshow-5uxvl47"/>
        </item>
        <item>
            <title><![CDATA[BSY Abhimanotsav: ದಣಿವರಿಯದ ಅವಿಶ್ರಾಂತ ಚೇತನ ಯಡಿಯೂರಪ್ಪ - ಪ್ರಲ್ಹಾದ್ ಜೋಶಿ ಅಂಕಣ]]></title>
            <link>https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706</link>
            <guid isPermaLink="true">https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706</guid>
            <pubDate>Fri, 08 May 2026 07:19:20 +0530</pubDate>
            <description><![CDATA[&lt;p&gt;ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕಿಂತ ಹೆಚ್ಚಾಗಿ ಹೋರಾಟದ ಮೂಲಕ ಗುರುತಿಸಿಕೊಂಡ ಧೀಮಂತ ನಾಯಕ. ಶೂನ್ಯದಿಂದ ಪಕ್ಷವನ್ನು ಕಟ್ಟಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರು, ತಮ್ಮ 50 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಜನಪರ ಯೋಜನೆಗಳ ಮೂಲಕ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2m0p6w1qm8cpvxv37fsmc1,imgname-----------------------2026-05-08t071054.374-1778204563676.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಪ್ರಲ್ಹಾದ ಜೋಶಿ, ಕೇಂದ್ರ ಸಚಿವರು.&lt;/strong&gt;&lt;/p&gt;&lt;p&gt;&lsquo;ಈ ಅರ್ಥಪೂರ್ಣ ಮಾತು ಹುಟ್ಟು ಹೋರಾಟಗಾರ ಹಾಗೂ ಕರ್ನಾಟಕ ಕಂಡ ಧೀಮಂತ ನಾಯಕ ಶ್ರೀ ಯಡಿಯೂರಪ್ಪ ಅವರಿಗೆ ಪೂರ್ತಿಯಾಗಿ ಅನ್ವಯಿಸುತ್ತದೆ.&lt;/p&gt;&lt;p&gt;ರಾಜಕೀಯವೆಂದರೆ ಕೇವಲ ಅಧಿಕಾರವಲ್ಲ, ಅದು ನಿರಂತರ ಹೋರಾಟ ಮತ್ತು ಜನರೊಂದಿಗಿನ ಅವಿನಾಭಾವ ಸಂಬಂಧ ಎಂಬುದನ್ನು ಸಾಬೀತುಪಡಿಸಿದವರು ಬಿ.ಎಸ್. ಯಡಿಯೂರಪ್ಪನವರು. ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸುತ್ತಿರುವುದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಅದು ಒಂದು ಸುದೀರ್ಘ ಕ್ರಾಂತಿಯ ಪಯಣ.&lt;/p&gt;&lt;p&gt;ಇವರನ್ನು ರಾಜಕಾರಣಿ ಎನ್ನುವುದಕ್ಕಿಂತ ಜನಪರ ಚಿಂತನೆಗಳಿರೋ ಅಪ್ಪಟ ಹೋರಾಟಗಾರ ಎನ್ನುವುದು ಸೂಕ್ತ. ಧರಣಿ, ಸತ್ಯಾಗ್ರಹದಿಂದ ಹಿಡಿದು ಭಾರಿ ಬಹಿರಂಗ ಸಭೆಯವರೆಗೆ, ಜಿಲ್ಲಾಧಿಕಾರಿ ಕಚೇರಿಯಿಂದ ವಿಧಾನಸೌಧದವರೆಗೆ, ಮುತ್ತಿಗೆಯಿಂದ ಹಿಡಿದು ರಸ್ತೆತಡೆ, ರೈಲು ತಡೆ, ಮೆಕ್ಕೆಜೋಳದಿಂದ ಹಿಡಿದು ನಕಲಿ ಛಾಪಾ ಕಾಗದದವರೆಗೆ, ಕೆಪಿಟಿಸಿಎಲ್ ಮುತ್ತಿಗೆಯಿಂದ ಹಿಡಿದು ಬಗರ್ ಹುಕುಂ ಸಾಗುವಳಿದಾರರಿಗೆ, ಬಡರೈತನಿಗೆ ವಿಮೆ ಕೊಡಿಸುವವರೆಗೆ. ಹೀಗೆ ಸಾಲು, ಸಾಲು ಹೋರಾಟಗಳು ಇವರ ದಾಖಲೆಯಲ್ಲಿವೆ. ಇದು ಕೇವಲ ದಾಖಲೆಗಾಗಿ ನಡೆಸಿದ ಹೋರಾಟವಲ್ಲ. ಬದಲಾಗಿ ನಮ್ಮನ್ನಾಳುವ ಮಂದಿ ಎಚ್ಚರ ತಪ್ಪಿದಾಗ, ಹಾದಿ ತೊರೆದಾಗ, ಅವರನ್ನು ಸದಾ ಎಚ್ಚರಿಸುತ್ತಾ ಸರಿದಾರಿಗೆ ತಂದ ಸಾಧನೆ ಇದಾಗಿದೆ.&lt;/p&gt;&lt;p&gt;ಹಗಲು ರಾತ್ರಿ ಧರಣಿ ಪ್ರವರ್ತಕ ಯಡಿಯೂರಪ್ಪ:&lt;/p&gt;&lt;p&gt;ಹೀಗಾಗಿ ಯಡಿಯೂರಪ್ಪ ಯಾವುದೇ ಚಳುವಳಿಗೆ ಧುಮುಕಿದರೂ ಆಡಳಿತ ಪಕ್ಷ ಥರಗುಟ್ಟುತ್ತದೆ. ಈ ಕಾರಣದಿಂದಾಗಿಯೇ ಯಡಿಯೂರಪ್ಪ ಅವರ ಚಳುವಳಿಗೊಂದು ಮೌಲ್ಯ ಇರುವುದು. ಎಂಥಹ ಪ್ರತಿಕೂಲ ಪರಿಸ್ಥಿತಿಯನ್ನೂ ಅನುಕೂಲಕರವಾಗಿ ಪರಿವರ್ತಿಸಿಕೊಳ್ಳುವ ಚಾಣಕ್ಷ್ಯ ವ್ಯಕ್ತಿಯ ಮನೋಭಾವ. ಅದೇ ರೀತಿಯಲ್ಲಿ ತಮ್ಮ ಜೀವನದಲ್ಲಿ ತಲೆದೋರಿದ ಪ್ರತಿಯೊಂದು ಕಷ್ಟಕಾರ್ಪಣ್ಯಗಳನ್ನೂ ಜೀರ್ಣಿಸಿಕೊಂಡು ಅವುಗಳನ್ನು ಜೀವನದ ಏಳ್ಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿನ ಶಿಖರಕ್ಕೆ ಏರಿದರು.&lt;/p&gt;&lt;p&gt;1975ರ ಹೊತ್ತಿಗೆ ಅದೇ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಅಧ್ಯಕ್ಷರೂ ಆಗುತ್ತಾರೆ. ಶಿಕಾರಿಪುರದಲ್ಲಿ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ. ಯಾವುದಕ್ಕೂ ಜಗ್ಗದ-ಬಗ್ಗದ ಛಾತಿಯ ಯಡಿಯೂರಪ್ಪ ಮತ್ತಷ್ಟು ಪ್ರಖರ ಹೋರಾಟಗಾರರಾಗಿ ಹೊರಹೊಮ್ಮುತ್ತಾರೆ. 1977ರ ಎಮರ್ಜೆನ್ಸಿಯಲ್ಲಿ ಸೆರೆಮನೆ ವಾಸ. ಜನತಾರಂಗದೊಳಗೆ ವಿಲೀನವಾಗಿದ್ದ ಜನಸಂಘ 1980ರಲ್ಲಿ ಬಿಜೆಪಿಯಾಗಿ ರೂಪುಗೊಂಡ ನಂತರ 1983ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಹಾಗೂ ಆ ನಂತರದ ಮೂರೇ ವರ್ಷಗಳಲ್ಲಿ ರಾಜ್ಯಾಧ್ಯಕ್ಷರೂ ಆಗಿ ಬಿಡುತ್ತಾರೆ. ಹೀಗೆ ಹಿಂದಿರುಗಿ ನೋಡದ ರಾಜಕೀಯ ಪಯಣದಲ್ಲಿ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆಗಳಲ್ಲಿ ಸದಸ್ಯರಾಗಿ, ಮೂರು ಸಲ ವಿರೋಧ ಪಕ್ಷದ ನಾಯಕರಾಗುತ್ತಾರೆ. ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗುತ್ತಾರೆ.&lt;/p&gt;&lt;p&gt;ತುರ್ತು ಪರಿಸ್ಥಿತಿ ಸಂದರ್ಭ ಜೈಲಿನಲ್ಲಿದ್ದಾಗಲೂ ಅವರು ತಮ್ಮ ಚಳುವಳಿ ಬಿಡಲಿಲ್ಲ. ಜೈಲಿನಲ್ಲಿ ಕೊಡುತ್ತಿದ್ದ ಚಪಾತಿ ಮತ್ತು ಅನ್ನದಲ್ಲಿ ಹುಳು ಕಲ್ಲುಗಳು, ಸರಿಯಾಗಿ ಬೇಯಿಸದಿರುವುದರಿಂದ ಅವರು ರೋಸಿ ಹೋಗಿದ್ದರು. ಕೈದಿಗಳು ಕಣ್ಣು ಮುಚ್ಚಿಕೊಂಡು ಅದನ್ನೇ ತಿನ್ನುತ್ತಿದ್ದರು. ಯಡಿಯೂರಪ್ಪ ಜೈಲಿಗೆ ಹೋಗಿ ಒಂದು ವಾರ ಕಳೆಯಿತು. ಅಷ್ಟೊತ್ತಿಗಾಗಲೆ ಅಲ್ಲಿನ ಅವ್ಯವಸ್ಥೆಯ ಅರಿವಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು. ಇದರಿಂದಾಗಿ ಜೈಲಿನ ಅವ್ಯವಸ್ಥೆ ಸರಿದಾರಿಗೆ ಬಂತು. ಈ ಘಟನೆ ಬಳಿಕ ಕೇವಲ ಶಿಕಾರಿಪುರಕ್ಕೆ ಸೀಮಿತವಾಗಿದ್ದ ಯಡಿಯೂರಪ್ಪ ರಾಜ್ಯವ್ಯಾಪಿ ಗುರುತಿಸಿಕೊಂಡರು. ಸಂಘಟನೆ, ಹೋರಾಟ, ಸಾಧನೆಗಳಲ್ಲಿಯೇ ಬದುಕಿನ ಸಾರ್ಥಕ್ಯವನ್ನು ಕಂಡುಕೊಂಡಿರುವ ಯಡಿಯೂರಪ್ಪ ಅವರಲ್ಲಿ ಸಾಧಿಸಬೇಕೆಂಬ ಛಲ ಇನ್ನೂ ಇದೆ. 83ರ ಇಳಿವಯಸ್ಸಿನಲ್ಲೂ 20ರ ಯುವಕನಂತೆ ಕೆಲಸ ಮಾಡುವ, ಮುಂಜಾನೆ ಬೇಗನೆ ಎದ್ದು ವಾಕಿಂಗ್ ಮಾಡಿ ಬೆಳಗ್ಗೆ 8ಕ್ಕೆ ಮುನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುವ ಅವರ ಗುಣ ಇತರರಿಗೆ ಅನುಕರಣೀಯ. ತಾನೂ ಬೆಳೆದು, ತನ್ನವರನ್ನೂ ಬೆಳೆಸುವ ತನ್ಮೂಲಕ ಸಮಾಜವನ್ನು ಬಲಪಡಿಸುವ ಅವರ ಆಶಯ ಇತರರಿಗೆ ಮಾದರಿ. ಹಲವಾರು ಹೋರಾಟಗಳನ್ನು ಕಂಡಿರುವ ಧೀಮಂತ ನಾಯಕ ಯಡಿಯೂರಪ್ಪ ಶಿಸ್ತಿನ ಸಿಪಾಯಿಯಂತೆ, ದಣಿವರಿಯದ ನಾಯಕನಂತೆ ಪಕ್ಷಕ್ಕೆ ದುಡಿದಿದ್ದಾರೆ.&lt;/p&gt;&lt;p&gt;ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದಾಸಶ್ರೇಷ್ಠ ಕನಕದಾಸರ ಜನ್ಮದಿನವನ್ನು ಸರ್ಕಾರಿ ಹಬ್ಬವನ್ನಾಗಿ ಆಚರಿಸಲು ಆದೇಶಿಸಿ, ಅಂದು ಸಾರ್ವಜನಿಕ ರಜೆಯನ್ನು ಘೋಷಿಸಿದರಲ್ಲದೇ, ರಾಮಾಯಣ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಸಹ ಸರ್ಕಾರಿ ಮಟ್ಟದಲ್ಲಿ ಆಚರಿಸಲು ಮತ್ತು ಸಾರ್ವಜನಿಕ ರಜೆ ನೀಡಲು ಯಡಿಯೂರಪ್ಪ ಅವರ ಸರ್ಕಾರವೇ ಆದೇಶ ಹೊರಡಿಸಿತ್ತು. ಹಿಂದೂ ಧರ್ಮ ಮತ್ತು ಸ್ವರಾಜ್ಯದ ರಕ್ಷಣೆಗಾಗಿ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆಯನ್ನು ಸ್ಮರಿಸಲು ಕರ್ನಾಟಕದಲ್ಲಿ ಸರ್ಕಾರಿ ಮಟ್ಟದ ಜಯಂತಿ ಆಚರಣೆಗೆ ಯಡಿಯೂರಪ್ಪ ಅವರು ಚಾಲನೆ ನೀಡಿದ್ದರು.&lt;/p&gt;&lt;p&gt;ಶೂನ್ಯದಿಂದ ಸೃಷ್ಟಿಸಿದ ಸಾಮ್ರಾಜ್ಯ:ಯಡಿಯೂರಪ್ಪನವರು ಪಕ್ಷ ಕಟ್ಟಲು ಜಾಥಾ, ಕಾಲ್ನಡಿಗೆ, ಪಾದಯಾತ್ರೆ, ಸೈಕಲ್ ಮೇಲೆ ಊರೂರು ಸುತ್ತಿದ ದಿನಗಳನ್ನು ನಾವು ಮರೆಯಲು ಸಾಧ್ಯವಿಲ್ಲ. ಅಂದು ಅವರು ಬಿತ್ತಿದ ಸಣ್ಣ ಸಸಿ ಇಂದು ನಾಡಿನಲ್ಲಿ ಬಿಜೆಪಿಯೆಂಬ ಹೆಮ್ಮರವಾಗಿ ಬೆಳೆದು ನಿಂತಿದೆ. ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವ ಮೂಲಕ ಅವರು ಇತಿಹಾಸ ನಿರ್ಮಿಸಿದರು.&lt;/p&gt;&lt;p&gt;ಧೀಮಂತ ಹೋರಾಟಗಾರ:&lt;/p&gt;&lt;p&gt;ಅವರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಿಂದ ಹಿಡಿದು ಅಯೋಧ್ಯೆ ರಾಮ ಮಂದಿರ ಚಳವಳಿಯವರೆಗೆ ಅವರ ಪಾತ್ರ ದೊಡ್ಡದು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಕರ್ತರಿಗೆ ಧೈರ್ಯ ತುಂಬುವ ಹೋರಾಟಕ್ಕಿಳಿಯುವ ಅವರ ಗುಣ ಅನನ್ಯ.&lt;/p&gt;&lt;p&gt;ಮಾರ್ಗದರ್ಶಕ ಶಕ್ತಿ:&lt;/p&gt;&lt;p&gt;&lsquo;ಶೀಘ್ರ ಕೋಪಿ ಆದರೆ ದೀರ್ಘ ದ್ವೇಷಿಯಂತೂ ಅಲ್ಲ&rsquo; ಎಂಬ ಮಾತು ಯಡಿಯೂರಪ್ಪನವರಿಗೆ ಅನ್ವಯಿಸುತ್ತದೆ. ಒಮ್ಮೊಮ್ಮೆ ಭಿನ್ನಾಭಿಪ್ರಾಯಗಳು ಮೂಡಿದರೂ, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಮರೆತು ಒಗ್ಗೂಡಿ ಕೆಲಸ ಮಾಡುವ ಅವರ ದೊಡ್ಡಗುಣ ನಮಗೆಲ್ಲರಿಗೂ ಆದರ್ಶ. ಕರ್ನಾಟಕದ ರಾಜಕೀಯ ಭೂಪಟದಲ್ಲಿ ಬಿ.ಎಸ್.ಯಡಿಯೂರಪ್ಪ ಎಂಬ ಹೆಸರು ಒಂದು ಶಕ್ತಿ. ಶೂನ್ಯದಿಂದ ಅಧಿಕಾರದ ಶಿಖರದವರೆಗೆ ಅವರು ನಡೆದು ಬಂದ ಹಾದಿ ಅಸಾಧಾರಣವಾದುದು. ಶಿಕಾರಿಪುರದ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಯಾನ ಆರಂಭಿಸಿ, ಇಂದು ದೇಶದ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.&lt;/p&gt;&lt;p&gt;ಉದ್ಯಮಃ ಸಾಹಸಂ ಧೈಯರ್ಂ ಬುದ್ಧಿಃ ಶಕ್ತಿಃ ಪರಾಕ್ರಮಃ&lt;/p&gt;&lt;p&gt;ಷಡೇತೇ ಯತ್ರ ವತರ್ಂತೇ ತತ್ರ ದೇವಃ ಸಹಾಯಕೃತ್ ॥&lt;/p&gt;&lt;p&gt;(ಉದ್ಯೋಗ, ಸಾಹಸ, ಧೈರ್ಯ, ಬುದ್ಧಿ, ಶಕ್ತಿ ಮತ್ತು ಪರಾಕ್ರಮ, ಈ ಆರು ಗುಣಗಳು ಯಾರಲ್ಲಿ ಇರುತ್ತವೆಯೋ ಅವರಿಗೆ ದೈವವು ಸಹಾಯ ಮಾಡುತ್ತದೆ.)&lt;/p&gt;&lt;p&gt;ಯಡಿಯೂರಪ್ಪನವರು ಹಳ್ಳಿ ಹಳ್ಳಿಗಳನ್ನು ಸುತ್ತಿ ಪಕ್ಷ ಸಂಘಟಿಸಿದ ರೀತಿ ಅವರ &lsquo;ಉದ್ಯಮ&rsquo; ಮತ್ತು &lsquo;ಸಾಹಸ&rsquo;ಕ್ಕೆ ಸಾಕ್ಷಿ. 2021ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರವೂ, ಅವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾದ ಸಂಸದೀಯ ಮಂಡಳಿಗೆ (Parliamentary Board) ನೇಮಕ ಮಾಡಲಾಯಿತು. ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಆಧಾರವಾಗಿರುವ &lsquo;ಧ್ರುವತಾರೆ&rsquo; ಎಂದೇ ಪರಿಗಣಿಸುತ್ತಾರೆ. ಒಟ್ಟಾರೆಯಾಗಿ, ಯಡಿಯೂರಪ್ಪ ಅವರು ಕೇವಲ ಒಬ್ಬ ಪ್ರಾದೇಶಿಕ ನಾಯಕರಾಗಿ ಉಳಿಯದೆ, ಕರ್ನಾಟಕದಲ್ಲಿ ಬಿಜೆಪಿಯ ಅಸ್ತಿತ್ವಕ್ಕೆ ಅಡಿಪಾಯ ಹಾಕಿದರು. ಕರ್ನಾಟಕದಲ್ಲಿ ಬಿಜೆಪಿ ಅಸ್ಥಿತ್ವ ಬೇರೂರುವುದೇ ಎಂಬ ಪ್ರಶ್ನೆ ಇದ್ದ ಸಂದರ್ಭದಲ್ಲಿ ಹೋರಾಟ ಹಾಗೂ ರಾಜಕೀಯ ಚಾಣಕ್ಷರೇ ಆಗಿದ್ದ ಯಡಿಯೂರಪ್ಪ ಅವರ ಸಂಘಟಿತ ದುಡಿಮೆ ಇಲ್ಲದಿದ್ದರೆ ಇಂದು ಪಕ್ಷ ರಾಜ್ಯದಲ್ಲಿ ಉನ್ನತಸ್ಥಿತಿಯಲ್ಲಿ ಇರುತ್ತಿರಲಿಲ್ಲ ಎಂಬುದು ಸರ್ವವಿದಿತ.&lt;/p&gt;&lt;p&gt;ಮುಖಂಡರನ್ನು ಬೆಳೆಸಿದ ಬಿಎಸ್&zwnj;ವೈ:&lt;/p&gt;&lt;p&gt;ಕರ್ನಾಟಕದಲ್ಲಿ ಮೊದಲು ಕಾಂಗ್ರೆಸ್ ಪಾರಮ್ಯವಿದ್ದರೆ ಎಂಬತ್ತರ ದಶಕದಿಂದ ಜನತಾ ಪರಿವಾರದ ಇನ್ನಿಂಗ್ಸ್ ಪ್ರಾರಂಭವಾಗಿತ್ತು. ಇದರ ಮಧ್ಯೆ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದ ಬಿಜೆಪಿಗೆ ಕರ್ನಾಟಕದಲ್ಲಿ ನೆಲೆ ಕಲ್ಪಿಸಲು ಶ್ರಮ ವಹಿಸಿದವರು ಬಿ.ಎಸ್.ಯಡಿಯೂರಪ್ಪ. ಕರ್ನಾಟಕ ಬಿಜೆಪಿಗೆ ಅಂದಿನಿಂದ ಇಂದಿನ ವರೆಗೂ ಯಡಿಯೂರಪ್ಪ ಮಹಾರಥಿ. ಅವರ ಪರಿಶ್ರಮದ ಫಲವಾಗಿ ಹಲವು ಮುಖಂಡರು ಬೆಳೆದಿದ್ದಾರೆ. ಅವರನ್ನೆಲ್ಲ ಮುಂಬೆಳಕಿಗೆ ತಂದು ತಯಾರು ಮಾಡಿದವರು ಯಡಿಯೂರಪ್ಪ. ಹಾಗಾಗಿ ಕರ್ನಾಟಕ ಬಿಜೆಪಿ ಮತ್ತು ಬಿ.ಎಸ್.ವೈ ಎಂಬ ಹೆಸರುಗಳು ಆವಿನಾಭಾವದ ನಿದರ್ಶನ.&lt;/p&gt;&lt;p&gt;ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸಂಸದರನ್ನು ಗೆಲ್ಲಿಸಿ ದಿಲ್ಲಿಗೆ ಕಳುಹಿಸಿ ಕೊಡುವುದರಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. 2019ರ ಪಾರ್ಲಿಮೆಂಟ್ ಎಲೆಕ್ಷನ್&zwnj;ನಲ್ಲಿ ರಾಜ್ಯ ಬಿಜೆಪಿಯಿಂದ 25 ಸಂಸದರು ಆಯ್ಕೆಯಾಗಿರುವುದು ಅಭೂತಪೂರ್ವ ಸಾಧನೆ. ಬಿಜೆಪಿ ಈ ಯಶೋಗಾಥೆಯಲ್ಲಿ ಯಡಿಯೂರಪ್ಪ ಅವರ ಯೋಗದಾನ ಬಹಳ ದೊಡ್ಡದು.&lt;/p&gt;&lt;p&gt;ಸುದೀರ್ಘ ರಾಜಕೀಯ ಹೋರಾಟದಲ್ಲಿ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲೇ ಹೆಚ್ಚು ಸಮಯವಿದ್ದರು ಎಂದರೆ ತಪ್ಪಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಲೋಕಸಭೆಗೆ ಹೆಚ್ಚಿನ ಸಂಸದರನ್ನು ಕಳುಹಿಸುವ ದಿಸೆಯಲ್ಲಿ ಸಂಘಟನೆ ಕೈಗೊಂಡಿದ್ದು ಸಣ್ಣ ಸಾಧನೆಯಲ್ಲ. ಈಗಲೂ ಪಕ್ಷಕ್ಕಾಗಿ ಅವರು ಅವಿರತವಾಗಿ ದುಡಿಯುತ್ತಿದ್ದಾರೆ. ಯಡಿಯೂರಪ್ಪ ಅವರ ಈ ಕಾರ್ಯ ನಿಷ್ಠೆ ಕೆಳ ಹಂತದ ಕಾರ್ಯಕರ್ತನಿಂದ ಉನ್ನತ ಮಟ್ಟದ ನಾಯಕರವರೆಗೂ ಮಾದರಿಯಾಗಿದೆ ಎಂದು ಧಾರಾಳವಾಗಿ ಹೇಳಬಹುದು.&lt;/p&gt;&lt;p&gt;ಭಾಗ್ಯಲಕ್ಷ್ಮಿ ಯೋಜನೆ, ಸಂಧ್ಯಾ ಸುರಕ್ಷಾ ಮತ್ತು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಮೂಲಕ ಅವರು ಈ ಶ್ಲೋಕದ ಆಶಯವನ್ನು ಜಾರಿಗೆ ತಂದರು.&lt;/p&gt;&lt;p&gt;ಭಗವದ್ಗೀತೆಯಲ್ಲಿ ಹೇಳಿದಂತೆ...&lt;/p&gt;&lt;p&gt;ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ&lt;/p&gt;&lt;p&gt;ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ ॥&lt;/p&gt;&lt;p&gt;(ಶ್ರೇಷ್ಠ ವ್ಯಕ್ತಿಯು ಏನನ್ನು ಆಚರಿಸುತ್ತಾನೋ, ಇತರರು ಅದನ್ನೇ ಅನುಸರಿಸುತ್ತಾರೆ. ಅವನು ಏನನ್ನು ಪ್ರಮಾಣವೆಂದು ಒಪ್ಪುತ್ತಾನೋ, ಲೋಕವು ಅದನ್ನೇ ಪಾಲಿಸುತ್ತದೆ.)&lt;/p&gt;&lt;p&gt;ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರುವವರು ತಮ್ಮ ನಡವಳಿಕೆಯ ಮೂಲಕ ಸಾಮಾನ್ಯ ಜನರಿಗೆ ಮಾದರಿಯಾಗುತ್ತಾರೆ. ಇಂದು ಕರ್ನಾಟಕ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಯಡಿಯೂರಪ್ಪನವರೇ ಅತಿ ದೊಡ್ಡ ಪ್ರೇರಣೆ. ಯಡಿಯೂರಪ್ಪನವರ ಜೀವನವು &lsquo;ಸೇವೆಯೇ ಪರಮೋಚ್ಚ&rsquo; ಎಂಬ ತತ್ವಕ್ಕೆ ಸಾಕ್ಷಿಯಾಗಿದೆ. ಅವರ ಅನುಭವ ಮತ್ತು ಮಾರ್ಗದರ್ಶನ ಮುಂದಿನ ಪೀಳಿಗೆಗೂ ಪಕ್ಷಕ್ಕೆ ದಾರಿದೀಪವಾಗಿದೆ. ಈ ಐತಿಹಾಸಿಕ ಸಮಾರಂಭವು ಅತ್ಯಂತ ಯಶಸ್ವಿಯಾಗಿ ನಡೆಯಲಿ ಮತ್ತು ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ಈ ಕ್ಷಣ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸೋಣ.&lt;/p&gt;&lt;p&gt;ಚಿತ್ರದುರ್ಗದ ಈ &lsquo;ಅಭಿಮಾನೋತ್ಸವ&rsquo; ಕೇವಲ ಒಂದು ಸಮಾವೇಶವಲ್ಲ, ಇದು ಐದು ದಶಕಗಳ ಕಾಲ ನಾಡಿಗಾಗಿ ಮಿಡಿದ ಹೃದಯಕ್ಕೆ ಜನತೆ ಸಲ್ಲಿಸುತ್ತಿರುವ ಗೌರವ ಸಮರ್ಪಣೆ. ಯಡಿಯೂರಪ್ಪನವರು ಹಾಕಿಕೊಟ್ಟ ಜನಸೇವೆಯ ಹಾದಿ ಮುಂದಿನ ತಲೆಮಾರಿನ ರಾಜಕಾರಣಿಗಳಿಗೆ ದಾರಿದೀಪ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bsy-abhimanotsav-50-years-of-relentless-service-bsy-celebrated-as-a-tireless-leader-in-chitradurga-rav/articleshow-7xyb706"/>
        </item>
        <item>
            <title><![CDATA[ಬೆಂಗಳೂರು: ಸಂಸಾರ ತ್ಯಜಿಸಿದ ಮಹಿಳೆ ಜತೆ ಚಿತ್ರದುರ್ಗ ಯುವಕನ ಲಿವ್-ಇನ್, ಪ್ರೇಮಕಥೆಯಲ್ಲಿ ಅನುಮಾನದ ಸಾವು!]]></title>
            <link>https://kannada.asianetnews.com/karnataka-districts/chitradurga-man-found-dead-in-suspected-death-live-in-bengaluru-partner-missing-gdp/articleshow-8sffecr</link>
            <guid isPermaLink="true">https://kannada.asianetnews.com/karnataka-districts/chitradurga-man-found-dead-in-suspected-death-live-in-bengaluru-partner-missing-gdp/articleshow-8sffecr</guid>
            <pubDate>Sat, 09 May 2026 12:34:28 +0530</pubDate>
            <description><![CDATA[ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಚಿತ್ರದುರ್ಗ ಮೂಲದ ಯುವಕ ತಿಪ್ಪೇಸ್ವಾಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ವಾಸಿಸುತ್ತಿದ್ದ ಆತನ ಸಾವಿಗೆ ಆಕೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jj94qynb58eq46thnazwnymz,imgname-Live-in-relationship-1737621240491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು &lt;/strong&gt;ನಗರದ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮ*ಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿನ ಬಗ್ಗೆ ಮೃತನ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.&lt;/p&gt;&lt;p&gt;ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ವ್ಯಕ್ತಿಯಾಗಿದ್ದು, ಆತ ಬೆಂಗಳೂರಿನ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇದೇ ವೇಳೆ, ದಾವಣಗೆರೆ ಮೂಲದ ಮಹಿಳೆಯೊಬ್ಬಳೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿಬಳಿಕ ಇಬ್ಬರೂ ಒಂದೇ ಗಾರ್ಮೆಂಟ್ಸ್&zwnj;ನಲ್ಲಿ ಕೆಲಸ ಮಾಡುತ್ತಾ ಹತ್ತಿರವಾಗಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ಲಿವ್-ಇನ್ ಸಂಬಂಧದಲ್ಲಿದ್ದು, ಶ್ರೀಗಂಧನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.&lt;/p&gt;&lt;h2&gt;ಮದುವೆಯಾಗಿ ಇಬ್ಬರು ಮಕ್ಕಳ ತಾಯಿ&lt;/h2&gt;&lt;p&gt;ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಆ ಮಹಿಳೆ ತನ್ನ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜೊತೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಮನೆ ಮಾಲೀಕರಿಗೆ ನಾವಿಬ್ಬರೂ ಗಂಡ-ಹೆಂಡತಿ ಎಂದು ಹೇಳಿದ ಜೋಡಿ ತಿಂಗಳಿಗೆ ಸುಮಾರು 3 ಸಾವಿರ ರೂಪಾಯಿ ಬಾಡಿಗೆ ನೀಡಿ ಜೊತೆಯಾಗಿ ವಾಸಿಸುತ್ತಿದ್ದರು.&lt;/p&gt;&lt;h2&gt;ಇಬ್ಬರ ಮಧ್ಯೆ ಕಲಹ&lt;/h2&gt;&lt;p&gt;ಆದರೆ ಕೆಲ ದಿನಗಳಿಂದ ಜೋಡಿಗಳಿಬ್ಬರ ನಡುವೆ ಕಲಹ ಉಂಟಾಗಿತ್ತಂತೆ, &ldquo;ನನ್ನನ್ನು ನೋಡಿಕೊಳ್ಳಲು ಆಗುವುದಿಲ್ಲ, ನನ್ನನ್ನು ಬಿಟ್ಟುಬಿಡು&rdquo; ಎಂದು ಮಹಿಳೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮನನೊಂದ ತಿಪ್ಪೇಸ್ವಾಮಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಇದೇ ವೇಳೆ, ತಿಪ್ಪೇಸ್ವಾಮಿ ಸಾವಿಗೆ ಪ್ರಿಯಾಂಕಾ ಎಂಬ ಮಹಿಳೆಯೇ ಕಾರಣ ಎಂದು ಮೃತನ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸದ್ಯ ನಾಪತ್ತೆಯಾಗಿರುವ ಮಹಿಳೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chitradurga-man-found-dead-in-suspected-death-live-in-bengaluru-partner-missing-gdp/articleshow-8sffecr"/>
        </item>
        <item>
            <title><![CDATA[ನಮ್ಮ ಸಾವು ಯಾವಾಗ ಗೊತ್ತಿಲ್ಲ, ಕೊನೆ ಕಾರ್ಯಕ್ರಮದಲ್ಲಿ ಮೃತ್ಯು ಬಗ್ಗೆ ಮಾತನಾಡಿದ್ದ ಸಚಿವ ಡಿ ಸುಧಾಕರ್]]></title>
            <link>https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11</link>
            <guid isPermaLink="true">https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11</guid>
            <pubDate>Mon, 11 May 2026 07:26:09 +0530</pubDate>
            <description><![CDATA[&lt;p&gt;ಅನಾರೋಗ್ಯದಿಂದ ವಿಧಿವಶರಾದ ಸಚಿವ ಡಿ ಸುಧಾಕರ್ ಅಂತ್ಯಕ್ರಿಯೆ ಇಂದು ನಡೆಯಲಿದೆ. ಆದೆರೆ ಸಚಿವ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದರು. ಈ ವಿಡಿಯೋ ವೈರಲ್ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr7qmm78f98ykjhm6adnhjng,imgname-d-sudhakar--3--1778376134888.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.11) &lt;/strong&gt;ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿ ನಿಧನರಾದ ಯೋಜನೆ ಮತ್ತು ಸಾಂಖಿಕ ಸಚಿವ ಡಿ ಸುಧಾಕರ್ ಅಂತ್ಯಕ್ರಿಯ ಇಂದು ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಚಳ್ಳಕೆರೆಯ ಡಿ ಸುಧಾಕರ್ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸುಧಾಕರ್ ಅವರ ಸೆಟಲ್ ಕಾಕ್ ಕೋಟ್&zwnj;ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಚಿವ ಡಿ ಸುಧಾಕರ್ ಭಾಗವಹಿಸಿದ್ದ ಕೊನೆಯ ಕಾರ್ಯಕ್ರಮದ ವಿಡಿಯೋ ಇದೀಗ ಹರಿದಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಸುಧಾಕರ್ ತಮ್ಮ ಸಾವು ಯಾವಗ ಗೊತ್ತಿಲ್ಲ, ನಾವು ನಾಳೆ ಇರುತ್ತೀವೋ ಇಲ್ಲವೋ ಅನ್ನೋದು ಗೊತ್ತಿಲ್ಲ ಎಂದು ಮಾರ್ವಿಕವಾಗಿ ಸಾವಿನ ಕುರಿತು ಮಾತನಾಡಿದ್ದರು.&lt;/p&gt;&lt;p&gt;ಸಚಿವ ಡಿ ಸುಧಾಕರ್ ಭಾಗವಹಿಸಿದ ಹಾಗೂ ಭಾಷಣ ಮಾಡಿದ ಕೊನೆಯ ಕಾರ್ಯಕ್ರಮ ಹಿರಿಯೂರು ಪಟ್ಟಣದಲ್ಲಿನ ಶಾರದಾ ಆಶ್ರಮದ ಭೂಮಿಪೂಜೆ ಕಾರ್ಯಕ್ರಮ. ಭೂಮಿಪೂಜೆ ನೆರವೇರಿಸಿದ್ದ ಡಿ ಸುಧಾಕರ್, ಬಳಿಕ ಸಾರ್ವಜನಿಕರ ಉದ್ದೇಶಿ ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಸುಧಾಕರ್ ಮಾಡಿದ್ದ ಭಾಷಣ ಕೊನೆಯದ್ದಾಗುತ್ತೆ ಎಂದು ಯಾರು ಊಹಿಸಿರಲಿಲ್ಲ. ಈ ಭಾಷಣದಲ್ಲಿ ಸುಧಾಕರ್ ಮೃತ್ಯು ಕುರಿತು ಮಾತನಾಡಿದ್ದಾರೆ.&lt;/p&gt;&lt;h2&gt;ಇರುವಷ್ಟು ದಿನ ಭಗವಂತನ ಸ್ಮರಣೆ ಮಾಡಿ&lt;/h2&gt;&lt;p&gt;ಭಗವಂತನ ಸ್ಮರಣೆ,ಸ ಧಾರ್ಮಿಕತೆ ಕುರಿತು ಮಾತನಾಡಿದ ಡಿ ಸುಧಾಕರ್, ನಾವು ಇವತ್ತು ಇರುತ್ತಿವೋ ಇಲ್ಲವೋ ಗೊತ್ತಿಲ್ಲ, ನಮ್ಮ ಸಾವು ಯಾವಾಗ ಅನ್ನೋದು ಗೊತ್ತಿಲ್ಲ. ಹೀಗಾಗಿ ನಾವು ಒಂದು ರೀತಿ ಉರಿಯುವ ಬಲ್ಬ್ ಇದ್ದಂತೆ ಯಾವಾಗ ಆಫ್ ಆಗುತ್ತೋ ಗೊತ್ತಿಲ್ಲ. ಇರುವಷ್ಟು ದಿನ ಧಾರ್ಮಿಕವಾಗಿ ಭಗವಂತನ ಸ್ಮರಣೆಯಲ್ಲಿ ಇರಬೇಕು. ಒಬ್ಬೊಬ್ಬರದ್ದು ಒಂದೊಂದು ನಂಬಿಕೆ, ಭಗವಂತ ಇದ್ದಾನೆ. ಕಾಯಕವೇ ಕೈಲಾಸ ಅಂತಾರೆ. ಕೆಲವರು ಪರೋಪಕಾರವೇ ಭಗವಂತನ ಸ್ಮರಣೆ ಎನ್ನುತ್ತಾರೆ ಎಂದು ಸುಧಾಕರ್ ಮಾತನಾಡಿದ್ದಾರೆ.&lt;/p&gt;&lt;p&gt;ಸಚಿವ ಮೊಣಕಾಲು ಆಪರೇಶನ್&zwnj;ಗೆ ತೆರಳುವ ಮುಂದಿನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮೊಣಕಾಲು ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆ ಬೆನ್ನಲ್ಲೇ ಡಿ ಸುಧಾಕರ್&zwnj;ಗೆ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕಳೆದ ಕೆಲ ತಿಂಗಳಿನಿಂದ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿದಿತ್ತು. ಮಣಿಪಾಲ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ಡಿ ಸುಧಾಕರ್ ಸ್ಥಳಾಂತರ ಮಾಡಲಾಗಿತ್ತು. ಆದರೆ ಸುಧಾಕರ್ ಆರೋಗ್ಯದಲ್ಲಿ ಚೇತರಿಕೆ ಕಾಣದ ವಿಧಿವಶರಾಗಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>chitradurga</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/minister-d-sudhakar-final-speech-on-life-and-death-goes-viral-after-tragic-demise/articleshow-9xg7s11"/>
        </item>
        <item>
            <title><![CDATA[ಸರ್ಕಾರಿ ಗೌರವದ ಜತೆ ಚಳ್ಳಕೆರೆಯಲ್ಲಿ ಇಂದು ಸಚಿವ ಸುಧಾಕರ್‌ ಅಂತ್ಯಕ್ರಿಯೆ]]></title>
            <link>https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg</link>
            <guid isPermaLink="true">https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg</guid>
            <pubDate>Mon, 11 May 2026 06:12:27 +0530</pubDate>
            <description><![CDATA[ಭಾನುವಾರ ನಿಧನರಾದ ಸಚಿವ ಡಿ.ಸುಧಾಕರ್ ಅವರ ಅಂತ್ಯ ಸಂಸ್ಕಾರವು ಸೋಮವಾರ ಮಧ್ಯಾಹ್ನ 4 ಗಂಟೆಗೆ ಚಳ್ಳಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7qmm773k2vpsezezd6ydjq,imgname-d-sudhakar--1--1778376134887.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ&lt;/strong&gt;: ಭಾನುವಾರ ಮುಂಜಾನೆ ನಿಧನ ಹೊಂದಿದ ಸಚಿವ ಡಿ.ಸುಧಾಕರ್ ಅವರ ಪಾರ್ಥಿವ ಶರೀರವನ್ನು ಚಳ್ಳಕೆರೆಯ ಅವರ ನಿವಾಸ, &lsquo;ಗೊಮ್ಮಟ ನಿಲಯ&rsquo;ಕ್ಕೆ ತರಲಾಗಿದ್ದು, ಸೋಮವಾರ ಮಧ್ಯಾಹ್ನ 4 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.&lt;/p&gt;&lt;p&gt;ಇದಕ್ಕೂ ಮೊದಲು, ಸೋಮವಾರ ಬೆಳಗ್ಗೆ ಸಚಿವರ ಸ್ವಂತ ಮನೆ ಗೊಮ್ಮಟ ನಿಲಯದಲ್ಲಿ ಮುಂಜಾನೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಬಳಿಕ, ಚಳ್ಳಕೆರೆ ಎಚ್&zwnj;ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಿ.ಸುಧಾಕರ್ ಮೈದಾನಕ್ಕೆ ಮೃತದೇಹ ಕೊಂಡೊಯ್ದು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗ ರಸ್ತೆಯ ವಿಠ್ಠಲ ನಗರದಲ್ಲಿರುವ ಶಾಂತಕುಮಾರ್ ಮೆಮೋರಿಯಲ್ ಶೆಟಲ್ ಕೋರ್ಟ್ ಆವರಣಕ್ಕೆ ಮೃತದೇಹವನ್ನು ಕೊಂಡೊಯ್ಯಲಾಗುವುದು. ಬಳಿಕ, ಸಕಲ ಸರ್ಕಾರಿ ಗೌರವಗಳೊಂದಿಗೆ, ಜೈನ ಧರ್ಮದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ &zwnj;ಸಿಂಗ್ ಸುರ್ಜೆವಾಲ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಶಾಸಕರು, ಮಂತ್ರಿಗಳು, ಮುಖಂಡರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವ ಸುಧಾಕರ್ ನಿಧನಕ್ಕೆ ರಾಹುಲ್ ಗಾಂಧಿ ಸಂತಾಪ&lt;/strong&gt;&lt;/h2&gt;&lt;p&gt;ಚಳ್ಳಕೆರೆ: ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಖಾತೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಸುಧಾಕರ್ ನಿಧನಕ್ಕೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಭಾರತ್ ಜೋಡೋ ಯಾತ್ರೆಯಲ್ಲಿ ತಮ್ಮನ್ನು ಸುಧಾಕರ್ ಅಪ್ಪಿಕೊಂಡಿದ್ದ ಫೋಟೋವನ್ನು ಎಕ್ಸ್&zwnj;ನಲ್ಲಿ ಅವರು ಹಂಚಿಕೊಂಡಿದ್ದಾರೆ. ಸುಧಾಕರ್ ಬಡವರ ಪರ ಇದ್ದವರು. ಇವರ ಅಕಾಲಿಕ ಸಾವು ತಮಗೆ ಅತೀವ ನೋವು ತಂದಿದೆ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಸುಧಾಕರ್&zwnj; ನಿಧನ ರಾಜ್ಯಾದ್ಯಂತ 3 ದಿನ ಶೋಕಾಚರಣೆ ಘೋಷಣೆ&lt;/strong&gt;&lt;/h3&gt;&lt;p&gt;ಸಚಿವ ಡಿ.ಸುಧಾಕರ್ ಅವರ ನಿಧನದ ಹಿನ್ನೆಲೆಯಲ್ಲಿ ಮೇ 10 ರಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಪ್ರಕಟಿಸಿದ್ದು, ಮೇ 11 ರಂದು ಸೋಮವಾರ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು, ಚಿತ್ರದುರ್ಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್&zwnj; ನಿಧನದ ಹಿನ್ನೆಲೆ ಮೇ 11 ರಂದು ಸೋಮವಾರ ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ಕಚೇರಿಗಳು, ಎಲ್ಲಾ ಶಾಲಾ ಕಾಲೇಜುಗಳು (ಅನುದಾನ ಪಡೆಯುವ ಎಲ್ಲಾ ವಿದ್ಯಾಸಂಸ್ಥೆ ಸೇರಿ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಮೇ 10 ರಿಂದ ಮೇ 12 ರವರೆಗೆ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಮಾಡಲಾಗುವುದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನರಂಜನಾ ಕಾರ್ಯಮಗಳು ಇರುವುದಿಲ್ಲ. ಕಟ್ಟಡಗಳ ಮೇ&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-d-sudhakar-s-funeral-today-with-state-honours-in-challakere-mrq/articleshow-donmzkg"/>
        </item>
        <item>
            <title><![CDATA[BSY 50 years in politics: ಚಿತ್ರದುರ್ಗದಲ್ಲಿ ವೈಭವದ ಅಭಿಮಾನೋತ್ಸವ, ದಕ್ಷಿಣಕ್ಕೊಬ್ಬರೇ ಯಡಿಯೂರಪ್ಪ -ಶಾ!]]></title>
            <link>https://kannada.asianetnews.com/politics/bsy-abhimanotsav-grand-event-yadiyurappa-only-one-for-the-south-praises-amit-shah-rav/articleshow-gp2fv4x</link>
            <guid isPermaLink="true">https://kannada.asianetnews.com/politics/bsy-abhimanotsav-grand-event-yadiyurappa-only-one-for-the-south-praises-amit-shah-rav/articleshow-gp2fv4x</guid>
            <pubDate>Sun, 10 May 2026 04:51:39 +0530</pubDate>
            <description><![CDATA[ಚಿತ್ರದುರ್ಗದಲ್ಲಿ ನಡೆದ 'ಬಿಎಸ್&zwnj;ವೈ ಅಭಿಮಾನೋತ್ಸವ'ದಲ್ಲಿ ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರು ಬಿ.ಎಸ್&zwnj;.ಯಡಿಯೂರಪ್ಪರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ, ಅವರ ಹೋರಾಟದ ಬದುಕು ಯುವಕರಿಗೆ ಮಾದರಿ ಎಂದು ಕೊಂಡಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr7g5pbrvjbkhx93trfr8gmj,imgname-----------------------2026-05-10t044127.685-1778368305528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಮೇ.10): &lt;/strong&gt;ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಬಿ.ಎಸ್&zwnj;.ಯಡಿಯೂರಪ್ಪ ಕಾರಣ. ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರ ದಾಖಲೆ ಬರೆಯುವಾಗ ಯಡಿಯೂರಪ್ಪ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಬಿ.ಎಸ್&zwnj;.ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣೋತ್ಸವ ಪ್ರಯುಕ್ತ ಶನಿವಾರ ಚಿತ್ರದುರ್ಗದಲ್ಲಿ ಆಯೋಜಿಸಿದ್ದ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ದಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಅವರ ಐದು ದಶಕಗಳ ಸಾರ್ವಜನಿಕ ಜೀವನ ಹಾಗೂ ಹೋರಾಟಗಳು ಯುವ ಜನತೆಗೆ ಮಾದರಿ ಎಂದು ಮೆಚ್ಚುಗೆ ಸೂಚಿಸಿದರು.&lt;/p&gt;&lt;p&gt;ಯಡಿಯೂರಪ್ಪ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಲವು ಸಂಘರ್ಷಗಳ ನಡುವೆ ದಕ್ಷಿಣ ಭಾರತದ ಬಿಜೆಪಿಯ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಯಡಿಯೂರಪ್ಪ ಅವರಂತಹ ಮತ್ತೊಬ್ಬ ನಾಯಕನಿಲ್ಲ. ರೈತನ ಮಗನಾಗಿ ಹುಟ್ಟಿದ ಯಡಿಯೂರಪ್ಪ ಅವರು ಕ್ಲರ್ಕ್&zwnj; ಆಗಿ, ರೈಸ್&zwnj; ಮಿಲ್&zwnj;ನಲ್ಲಿ ಕೆಲಸ ಮಾಡಿ ಬಳಿಕ ಸಾರ್ವಜನಿಕ ಜೀವನಕ್ಕೆ ಬಂದವರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.&lt;/p&gt;&lt;p&gt;ಶಿಕಾರಿಪುರದಿಂದ ತಮ್ಮ ರಾಜಕೀಯ ಜೀವನ ಆರಂಭಿಸಿ, ಹೋರಾಟಗಳ ಮುಖಾಂತರ ದೊಡ್ಡ ನಾಯಕನಾಗಿ ಬೆಳೆದವರು. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಪ್ರಥಮ ಬಾರಿಗೆ ಅಧಿಕಾರದ ಬಾಗಿಲು ತೆರೆದವರು. ಇಂಥ ಯಡಿಯೂರಪ್ಪ ಅವರಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾಗುವ ಸೌಭಾಗ್ಯ ಸಿಕ್ಕಿದೆ ಎಂದು ಕೊಂಡಾಡಿದರು.&lt;/p&gt;&lt;h2&gt;ರೈತರ ಕಲ್ಯಾಣಕ್ಕೆ ಶ್ರಮ:&lt;/h2&gt;&lt;p&gt;ರೈತರ ಕಲ್ಯಾಣವಾದರೆ, ರಾಜ್ಯದ ಕಲ್ಯಾಣವಾಗುತ್ತದೆ ಎಂದು ದೇಶದಲ್ಲೇ ಮೊದಲ ಬಾರಿ ಪ್ರತ್ಯೇಕ ಕೃಷಿ ಬಜೆಟ್&zwnj; ಮಂಡಿಸಿದವರು ಬಿ.ಎಸ್&zwnj;.ಯಡಿಯೂರಪ್ಪ. ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಐವತ್ತು ವರ್ಷಗಳ ಕಾಲ ಜನಸೇವೆ ಮತ್ತು ರೈತರ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಸಾಮಾನ್ಯವಾಗಿ ಎರಡು ರೀತಿಯ ನಾಯಕರು ಇರುತ್ತಾರೆ. ಇರುವ ರಸ್ತೆಯಲ್ಲಿ ಚಲಿಸುವವರು ಮತ್ತು ಹೊಸ ಮಾರ್ಗದಲ್ಲಿ ಚಲಿಸುವವರು. ಯಡಿಯೂರಪ್ಪ ಅವರು ತಮ್ಮದೇ ಆದ ಪ್ರತ್ಯೇಕ ಹಾದಿ ಸೃಷ್ಟಿಸಿ ಇತರರಿಗೂ ದಾರಿ ತೋರಿಸಿಕೊಟ್ಟವರು. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಸಾಧಾರಣ ಕುಟುಂಬದಿಂದ ಬಂದು ಇಚ್ಛಾಶಕ್ತಿ, ಸಂಘದ ಸಂಸ್ಕಾರ, ರಾಷ್ಟ್ರಭಕ್ತಿ, ಸೈದ್ಧಾಂತಿಕ ನಿಲುವುಗಳೊಂದಿಗೆ ಅವರು ದೊಡ್ಡ ನಾಯಕನಾಗಿ ಬೆಳೆದಿದ್ದಾರೆ ಎಂದು ಶ್ಲಾಘಿಸಿದರು.&lt;/p&gt;&lt;p&gt;ಬಸ್&zwnj; ಸಿಗದಿದ್ದಾಗ ಸೈಕಲ್&zwnj;ನಲ್ಲಿ ರಾಜ್ಯದ ಹಳ್ಳಿ ಹಳ್ಳಿಗೆ ಸುತ್ತಾಡಿ ಬಿಜೆಪಿಯನ್ನು ಸದೃಢವಾಗಿ ಕಟ್ಟಿದ್ದಾರೆ. ರೈತರ ಪರವಾಗಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಹೋರಾಟ ಮಾಡಿದ್ದಾರೆ. ಈ ಮುಖಾಂತರ ರೈತ ನಾಯಕನಾಗಿ ಹೊರಹೊಮ್ಮಿದ್ದಾರೆ. ತಮ್ಮ ಹೋರಾಟ ದಿನಗಳಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ ಎಂದು ಯಡಿಯೂರಪ್ಪ ಅವರ ಬದುಕು ಮತ್ತು ಸಾಧನೆಗಳನ್ನು ಸ್ಮರಿಸಿದರು.&lt;/p&gt;&lt;p&gt;ನಾನು 2014ರಿಂದಲೂ ಕರ್ನಾಟಕಕ್ಕೆ ಬರುತ್ತಿದ್ದೇನೆ. ಎಲ್ಲ ಮತ-ಸಂಪ್ರದಾಯಗಳ ಸ್ವಾಮೀಜಿಗಳು ಈ ವೇದಿಕೆಯಲ್ಲಿದ್ದಾರೆ. ಇದು ಯಡಿಯೂರಪ್ಪ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ತೋರಿಸುತ್ತದೆ. ಯಡಿಯೂರಪ್ಪ ಅವರದು ಮಾದರಿ ಜೀವನ. ನಾನು ಯಡಿಯೂರಪ್ಪ ಅವರ ಪರ ಮೂರು ಚುನಾವಣೆಗಳಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನರು ಸಮಸ್ಯೆಗಳನ್ನು ಹೇಳಿಕೊಂಡಾಗ ಯಡಿಯೂರಪ್ಪ ಅವರು ಅದನ್ನು ಸಣ್ಣ ಡೈರಿಯಲ್ಲಿ ಬರೆದುಕೊಳ್ಳುವುದನ್ನು ನೋಡಿದ್ದೇನೆ. ಸಣ್ಣ ಸಮಸ್ಯೆಗಳಿಗೂ ಅವರು ಸ್ಪಂದಿಸುವ ಗುಣವನ್ನು ಕಣ್ಣಾರೆ ಕಂಡಿದ್ದೇನೆ ಎಂದು ಯಡಿಯೂರಪ್ಪ ಅವರ ಕಾರ್ಯ ವೈಖರಿಯನ್ನು ಅಮಿತ್ ಶಾ ಗುಣಗಾನ ಮಾಡಿದರು.&lt;/p&gt;&lt;h3&gt;ಕೇಂದ್ರ ಸಚಿವರಾಗುವ ಅವಕಾಶವಿತ್ತು:&lt;/h3&gt;&lt;p&gt;ಇವತ್ತು ಬೆಂಗಳೂರು ಗ್ಲೋಬಲ್&zwnj; ಟೆಕ್&zwnj; ನಗರವಾಗಿ ಬೆಳೆಯುವಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದಿದೆ. ಅವರ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಸಾಧಿಸಿದೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ದುಡಿದಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಯಡಿಯೂರಪ್ಪ ಅವರಿಗೆ ಸಚಿವರಾಗುವ ಅವಕಾಶವಿತ್ತು. ಆದರೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕು ಎಂದು ಸಚಿವ ಸ್ಥಾನ ನಿರಾಕರಿಸಿದ್ದರು ಎಂದು ಯಡಿಯೂರಪ್ಪ ಅವರ ಬದ್ಧತೆಯನ್ನು ಹೊಗಳಿದರು.&lt;/p&gt;&lt;p&gt;ಯಡಿಯೂರಪ್ಪ ಅವರ ಆರೋಗ್ಯ ಚೆನ್ನಾಗಿದೆ. ಅವರು ಶತಾಯುಷಿಯಾಗಿ ಬಾಳಬೇಕು. ದೀರ್ಘಕಾಲ ಬಿಜೆಪಿಗೆ ಮಾರ್ಗದರ್ಶನ ಮಾಡಬೇಕು. ಯಡಿಯೂರಪ್ಪ ರಾಜಕೀಯ ಜೀವನ ಯುವ ಕಾರ್ಯಕರ್ತರು ಹಾಗೂ ತಮಗೆಲ್ಲರಿಗೂ ಮಾದರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಇವತ್ತು ಬಿಜೆಪಿ ಅಧಿಕಾರ ಹಿಡಿಯುತ್ತಿದೆ. ಇದೇ ದಿನ ಚಿತ್ರದುರ್ಗದಲ್ಲಿ ಬಿ.ಎಸ್&zwnj;.ಯಡಿಯೂರಪ್ಪ ಅವರ ರಾಜಕೀಯ ಬದುಕಿಗೆ 50 ವರ್ಷ ತುಂಬಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷ ತಂದಿದೆ ಎಂದು ಅಮಿತ್&zwnj; ಶಾ ಹೇಳಿದರು.&lt;/p&gt;&lt;p&gt;ಚಿತ್ರದುರ್ಗವು ರಾಜ ಮದಕರಿ ನಾಯಕರ ನಾಡು. ಹೈದರಾಲಿಯನ್ನು ಸೋಲಿಸಿದ ಓಡಿಸಿದ ವೀರರ ನಾಡು. ಈ ನಾಡಿನ ಹೆಣ್ಣು ಮಗಳು ಒನಕೆ ಓಬವ್ವ ಅವರ ಹೋರಾಟ ಎಲ್ಲರಿಗೂ ಪ್ರೇರಣೆ ಮತ್ತು ಸ್ಫೂರ್ತಿ ಎಂದು ಸ್ಮರಿಸಿದರು.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bsy-abhimanotsav-grand-event-yadiyurappa-only-one-for-the-south-praises-amit-shah-rav/articleshow-gp2fv4x"/>
        </item>
        <item>
            <title><![CDATA[ಸಚಿವ ಡಿ ಸುಧಾಕರ್ ಸಾವಿಗೆ ಬಿಗ್ ಟ್ವಿಸ್ಟ್, ಅನಾರೋಗ್ಯವಾ? ನಿಗೂಢ ಶಕ್ತಿಗಳ ಆಟವಾ? ನಿವಾಸದ ಬಳಿ ಪತ್ತೆಯಾಗಿದ್ದೇನು?]]></title>
            <link>https://kannada.asianetnews.com/state/witchcraft-objects-found-near-minister-d-sudhakar-s-house-after-his-demise-shocking-video-goes-viral/articleshow-gvtsz0k</link>
            <guid isPermaLink="true">https://kannada.asianetnews.com/state/witchcraft-objects-found-near-minister-d-sudhakar-s-house-after-his-demise-shocking-video-goes-viral/articleshow-gvtsz0k</guid>
            <pubDate>Wed, 13 May 2026 09:53:34 +0530</pubDate>
            <description><![CDATA[ಮಾಜಿ ಸಚಿವ ಸುಧಾಕರ್ ಅವರು ಅನಾರೋಗ್ಯದಿಂದ ನಿಧನರಾದರು. ಆದರೆ, ಅವರ ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣುಗಳಂತಹ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆಯಾಗಿದ್ದು, ಇದು ಅವರ ಸಾವಿನ ಕುರಿತು ವಾಮಾಚಾರದ ಶಂಕೆಗಳನ್ನು ಹುಟ್ಟುಹಾಕಿದೆ ಮತ್ತು ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krfrvghf8eypym4152nbxejg,imgname-----------------------2026-05-13t092456.194-1778645844527.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.13): &lt;/strong&gt;ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಶಾಸಕರಾಗಿ ಎರಡು ಬಾರಿ ಮಂತ್ರಿಗಳಾಗಿದ್ದ ಸಚಿವ ಸುಧಾಕರ್ ಅನಾರೋಗ್ಯದಿಂದ ಅಕಾಲಿಕ ಮರಣದಿಂದ ಪಂಚಭೂತಗಳಲ್ಲಿ ಲೀನವಾದರು.&lt;/p&gt;&lt;p&gt;ಸುಧಾಕರ್ ಬದುಕಿನ ಅಂತಿಮ ವಿದಾಯಕ್ಕೆ ಸರ್ಕಾರದ ಬಹುತೇಕ ಸಚಿವರು ಸೇರಿದಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಇಕ್ಕಟ್ಟಾದ ಪ್ರದೇಶದಲ್ಲಿರುವ ಜೈನ ರುದ್ರಭೂಮಿಯ ಅಂಗಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಈ ನಡುವೆ ಅವರ ಸಾವು, ಅನಾರೋಗ್ಯದ ಕುರಿತು ಚರ್ಚೆಗಳು ನಡೆದಿದೆ.&lt;/p&gt;&lt;h2&gt;ಸಚಿವರ ಸಾವಿನ ಹಿಂದೆ ವಾಮಾಚಾರ?&lt;/h2&gt;&lt;p&gt;ಚಳ್ಳಕೆರೆ ಪಟ್ಟಣದ ಸಚಿವರ ನಿವಾಸದ ಸಮೀಪ, ಬೋರ್&zwnj;ವೆಲ್ ಬಳಿ ಕೆಲವು ವಿಚಿತ್ರ ವಸ್ತುಗಳು ಪತ್ತೆಯಾಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ತಾಮ್ರದ ಪತ್ರ, ನಿಂಬೆಹಣ್ಣು, ಮಾಂಸದ ತುಂಡು ಸೇರಿದಂತೆ ಕೆಲವು ವಾಮಾಚಾರಕ್ಕೆ ಬಳಸಲಾಗುವ ವಸ್ತುಗಳು ಕಂಡುಬಂದಿರುವ ವಿಡಿಯೋ ವೈರಲ್ ಆಗಿದೆ.&lt;/p&gt;&lt;h3&gt;ವಾಮಾಚಾರದ ವಸ್ತುಗಳ ಮೊದಲು ನೋಡಿದ್ದು ಯಾರು?&lt;/h3&gt;&lt;p&gt;ಈ ವಸ್ತುಗಳನ್ನು ಮೊದಲಿಗೆ ಮನೆ ಕೆಲಸಗಾರ ಚಂದ್ರು ಗಮನಿಸಿದ್ದಾನೆ ಎಂದು ಹೇಳಲಾಗುತ್ತಿದೆ.ಅವನು ಅವುಗಳನ್ನು ಹೊರತೆಗೆದು ಜನರಿಗೆ ತೋರಿಸಿದ ವಿಡಿಯೋ ಈಗ ಹಿರಿಯೂರು ಹಾಗೂ ಚಳ್ಳಕೆರೆ ಭಾಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 'ಇದು ಸಾಮಾನ್ಯ ಪೂಜೆ ಅಲ್ಲ&hellip; ಯಾರೋ ಉದ್ದೇಶಪೂರ್ವಕವಾಗಿ ವಾಮಾಚಾರ ಮಾಡಿದ್ದಾರೆ' ಎಂದು ಕೆಲವರು ಹೇಳುತ್ತಿದ್ದರೆ, 'ಇದು ಕೇವಲ ಮೂಢನಂಬಿಕೆ&hellip; ಸಾವಿಗೆ ಇದನ್ನು ಜೋಡಿಸುವುದು ಸರಿಯಲ್ಲ'ಎಂದು ಇನ್ನೂ ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ.&lt;/p&gt;&lt;p&gt;ಗ್ರಾಮೀಣ ಭಾಗಗಳಲ್ಲಿ ತಮಗಾಗದ ಶತ್ರುಗಳ ವಿರುದ್ಧ ಸೇಡು ತೀರಿಸಲು ನಿಂಬೆಹಣ್ಣು, ತಾಮ್ರದ ಪತ್ರ, ರಕ್ತ ಅಥವಾ ಮಾಂಸದ ತುಂಡುಗಳನ್ನು ಬಳಸಿಕೊಂಡು ನಿಗೂಢ ಶಕ್ತಿಗಳ ಆರಾಧನೆ ನಡೆಸುತ್ತಾರೆ. ಇದೀಗ ಪತ್ತೆಯಾಗಿರುವ ವಸ್ತುಗಳನ್ನ ನೋಡಿದರೆ ಮೃತ ಸುಧಾಕರ್ ವಿರುದ್ಧವೂ ವಾಮಾಚಾರ ನಡೆದಿತ್ತಾ ಎಂಬ ಅನುಮಾನ ಮೂಡಿಸಿದೆ. ಆದರೆ ವೈದ್ಯಕೀಯವಾಗಿ ನೋಡಿದರೆ, ಸಚಿವ ಸುಧಾಕರ್ ಅವರು ಅನಾರೋಗ್ಯದಿಂದಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಈಗಾಗಲೇ ಹೊರಬಂದಿದೆ. ಆದರೂ ಮನೆ ಬಳಿ ಪತ್ತೆಯಾದ ವಸ್ತುಗಳು ಜನರಲ್ಲಿ ಕುತೂಹಲ, ಭಯ ಮತ್ತು ಸಂಶಯ ಮೂಡಿಸಿರುವುದು ಸತ್ಯ.&lt;/p&gt;&lt;p&gt;ಸದ್ಯ ವಾಮಾಚಾರದ ವಿಡಿಯೋ ವೈರಲ್ ಆಗಿದ್ದು, ಚಿತ್ರದುರ್ಗ ಜಿಲ್ಲೆಯ ರಾಜಕೀಯ ವಲಯದಲ್ಲೂ ಚರ್ಚೆ ಜೋರಾಗಿದೆ. ನಿಜವಾಗಿಯೂ ವಾಮಾಚಾರ ನಡೆದಿತ್ತಾ..? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.&lt;/p&gt;]]></content:encoded>
            <category>chitradurga</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/witchcraft-objects-found-near-minister-d-sudhakar-s-house-after-his-demise-shocking-video-goes-viral/articleshow-gvtsz0k"/>
        </item>
        <item>
            <title><![CDATA[BSY ಅಭಿಮಾನೋತ್ಸವಕ್ಕೆ 112 ಅಡಿ ಉದ್ದ, 40 ಅಡಿ ಅಗಲದ ವೇದಿಕೆ! ಚಿತ್ರದುರ್ಗದಲ್ಲಿ ನಡೆಯುತ್ತಿರೋದೇನು?]]></title>
            <link>https://kannada.asianetnews.com/karnataka-districts/bsy-abhimanotsava-a-grand-stage-measuring-112-feet-long-and-40-feet-wide-rav/articleshow-hc6r409</link>
            <guid isPermaLink="true">https://kannada.asianetnews.com/karnataka-districts/bsy-abhimanotsava-a-grand-stage-measuring-112-feet-long-and-40-feet-wide-rav/articleshow-hc6r409</guid>
            <pubDate>Sat, 09 May 2026 11:58:04 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಚಿತ್ರದುರ್ಗದಲ್ಲಿ ಬೃಹತ್ ಅಭಿಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಜನರಿಗೆ ಆಸನದ ವ್ಯವಸ್ಥೆ, ಬೃಹತ್ ವೇದಿಕೆ, ಸಾವಿರಾರು ಜನರಿಂದ ಅಡುಗೆ ಭಾರೀ ವ್ಯವಸ್ಥೆ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5pf9xtrvcyj3barwm6sjfp,imgname-----------------------2026-05-09t115256.572-1778307803066.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಮೇಶ್ ಬಿದರಕೆರೆ&lt;/strong&gt;&lt;/p&gt;&lt;p&gt;&lt;strong&gt;ಚಿತ್ರದುರ್ಗ :&lt;/strong&gt; ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಹಿಂಭಾಗದಲ್ಲಿ ಸುಮಾರು 60 ಎಕರೆಗೂ ಹೆಚ್ಚು ಜಾಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರ 50 ವರ್ಷದ ರಾಜಕೀಯ ಬದುಕಿನ ನೆನಪಿಗಾಗಿ ಅಭಿಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿರು ಬಿಸಿಲಿನ ನಡುವೆಯೂ ಭರದ ಸಿದ್ಧತೆಗಳು ಪೂರ್ಣಗೊಂಡಿದ್ದು ಕ್ಷಣಗಣನೆ ಆರಂಭವಾಗಿದೆ.&lt;/p&gt;&lt;h2&gt;112 ಅಡಿ ಉದ್ದ ಹಾಗೂ 40 ಅಡಿ ಅಗಲದ ಬೃಹತ್ ವೇದಿಕೆ&lt;/h2&gt;&lt;p&gt;ನಾಡಿನ ವಿವಿಧ ಮಠಗಳ ಸ್ವಾಮೀಜಿಗಳಿಗೆ, ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಸಭಾಂಗಣ ವ್ಯವಸ್ಥೆ ಮಾಡಲಾಗಿದೆ. ಅಭಿಮಾನೋತ್ಸವ ಕಾರ್ಯಕ್ರಮಕ್ಕೆ 112 ಅಡಿ ಉದ್ದ ಹಾಗೂ 40 ಅಡಿ ಅಗಲ, ಹತ್ತು ಅಡಿ ಎತ್ತರದ ಬೃಹತ್ ವೇದಿಕೆ ನಿರ್ಮಿಸಲಾಗಿದೆ. 150ಕ್ಕೂ ಹೆಚ್ಚು ಕಾರ್ಮಿಕರ ಶ್ರಮದಿಂದ ಸುಂದರ ಹಾಗೂ ವಿಶಾಲವಾದ ವೇದಿಕೆ ತಯಾರಾಗಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಎಲ್&zwnj;ಇಡಿ ವಾಲ್&zwnj;ಗಳನ್ನು ಅಳವಡಿಸಿದ್ದು ಲಕ್ಷಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.&lt;/p&gt;&lt;p&gt;ಬೃಹತ್ ವೇದಿಕೆಯಲ್ಲಿ ಅತಿಥಿಗಳಿಗೆ ಮೊದಲ ಸಾಲಿನಲ್ಲಿ 25 ಮತ್ತು ಅವುಗಳ ಹಿಂಭಾಗ 25 ಆಸನಗಳನ್ನು ಹಾಕಲಾಗಿದೆ. ಸುಮಾರು ಹತ್ತು ಲಕ್ಷ ಜನ ಸೇರುವ ನಿರೀಕ್ಷೆ ಇದ್ದು ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಯ ಐದು ಕೌoಟರ್ ಗಳಲ್ಲಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಅಡುಗೆ ತಯಾರಿ ಮಾಡಲಾಗುತ್ತಿದೆ. ಒಂದೊಂದು ಕೌoಟರ್&zwnj;ನಲ್ಲಿ ಅಡುಗೆ ಭಟ್ಟರು ಜತೆಗೆ ಸಹಾಯಕರು ಸೇರಿ ಸುಮಾರು 250ಕ್ಕೂ ಅಧಿಕ ಮಂದಿ ಅಡುಗೆ ತಯಾರಿಕೆಯಲ್ಲಿ ನಿರತರಾಗಿದ್ದಾರೆ.&lt;/p&gt;&lt;h3&gt;ಸಾವಿರಾರು ಜನರು ಅಡುಗೆ ತಯಾರಿಕೆಗೆ&lt;/h3&gt;&lt;p&gt;ಐದು ಕೌoಟರ್ ಸೇರಿ ಸಾವಿರಾರು ಜನರು ಅಡುಗೆ ತಯಾರಿಕೆಗೆ ಕೆಲಸ ಮಾಡುತ್ತಿದ್ದಾರೆ.ಯಲಹಂಕ ಶಾಸಕ ವಿಶ್ವನಾಥ್, ಊಟದ ಉಸ್ತುವಾರಿ ವಹಿಸಿದ್ದು ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರದುರ್ಗದ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಯುವಕರನ್ನು ಕೆಲಸಕ್ಕೆ ಪಡೆದು ಅಡುಗೆ, ಶಾಮಿಯಾನ, ಕುರ್ಚಿಗಳನ್ನು ಹಾಕಲಾಗುತ್ತಿದೆ.ಕಾರ್ಯಕ್ರಮಕ್ಕೆ ಬರುವ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಮೊಸರನ್ನ, ಪಲಾವ್ ಹಾಗೂ ಮೈಸೂರು ಪಾಕ್&zwnj; ಊಟ ಕೊಡುವ ತಯಾರಿ ನಡೆದಿದ್ದು ರಾಶಿ ರಾಶಿ ತರಕಾರಿ ಗುಡ್ಡೆಗಳೇ ಕಂಡು ಬಂದವು.&lt;/p&gt;&lt;p&gt;ಕಾರ್ಯಕ್ರಮದ ಬಂದೋಬಸ್ತ್&zwnj;ಗಾಗಿ ಸುಮಾರು 2500 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು ವ್ಯವಸ್ಥಿತ ಕಾರ್ಯಕ್ರಮ ಜರುಗಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆಯ ಬಳಿಯ ಮುಖ್ಯ ರಸ್ತೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸ್ವಾಗತಕ್ಕೆ ಅದ್ದೂರಿ ತಯಾರಿ ನಡೆಸಲಾಗಿದೆ. ಕಾರ್ಯಕ್ರಮದ ಸ್ಥಳ ತಲುಪುವ ಮುಖ್ಯ ರಸ್ತೆಗಳಲ್ಲಿ ಸಾಲು ಸಾಲು ಫ್ಲೆಕ್ಸ್, ಕಟೌಟ್&zwnj;ಗಳನ್ನು ನಿಲ್ಲಿಸಲಾಗಿದೆ.&lt;/p&gt;&lt;p&gt;ಬಿರು ಬೇಸಗೆ ಧಗೆ ಹಿನ್ನೆಲೆ ಸುಮಾರು 30 ಕ್ಕೂ ಹೆಚ್ಚು ಹೆಲಿಕಾಪ್ಟರ್ ಫ್ಯಾನ್&zwnj;ಗಳನ್ನು ಅಳವಡಿಸಲಾಗಿದ್ದು ಒಂದೊಂದು ಫ್ಯಾನ್ ಸಹ ಸುಮಾರು 1500 ಇಂದ 2000 ಜನರಿಗೆ ಗಾಳಿ ಒದಗಿಸಲಿವೆ ಎನ್ನಲಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bsy-abhimanotsava-a-grand-stage-measuring-112-feet-long-and-40-feet-wide-rav/articleshow-hc6r409"/>
        </item>
        <item>
            <title><![CDATA[ಅವಾಂತರಗಳ ಮಧ್ಯೆ ಕೂಲ್ ಆದ ಬೆಂಗಳೂರು, 25 ವರ್ಷಗಳ ದಾಖಲೆ ಮೀರಿದ ಮಳೆ! ಈ ಮೂರು ಜಿಲ್ಲೆಗಳಿಗೆ ಮತ್ತೆ ಹೈ ಅಲರ್ಟ್ ಘೋಷಣೆ]]></title>
            <link>https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7</link>
            <guid isPermaLink="true">https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7</guid>
            <pubDate>Thu, 30 Apr 2026 11:08:15 +0530</pubDate>
            <description><![CDATA[ಏಪ್ರಿಲ್ 29 ರಂದು ಬೆಂಗಳೂರಿನಲ್ಲಿ ಸುರಿದ 111.0 ಮಿ.ಮೀ ಮಳೆಯು ಹಲವು ವರ್ಷಗಳ ದಾಖಲೆಯನ್ನು ಮುರಿದಿದೆ. ಈ ಭಾರೀ ಮಳೆಯೊಂದಿಗೆ ಬಲವಾದ ಗಾಳಿ, ಆಲಿಕಲ್ಲು ಮಳೆ ಕೂಡ ಸಂಭವಿಸಿದ್ದು, ಹವಾಮಾನ ಇಲಾಖೆಯು ಮುಂದಿನ ದಿನಗಳಲ್ಲಿಯೂ ಮಳೆಯಾಗುವ ಮುನ್ಸೂಚನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcr7cd3yx2fnwsndqf4rzvb,imgname-bengaluru-rains--2--1777470779811.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದಲ್ಲಿ ಏಪ್ರಿಲ್ 29ರಂದು ಸುರಿದ ಭಾರೀ ಮಳೆ ಹಲವು ವರ್ಷಗಳ ದಾಖಲೆಗಳನ್ನು ಮುರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ನಗರದ ವೀಕ್ಷಣಾಲಯ ನೀಡಿದ ಮಾಹಿತಿಯ ಪ್ರಕಾರ, ಒಂದೇ ದಿನದಲ್ಲಿ 111.0 ಮಿಲಿಮೀಟರ್ ಮಳೆಯು ದಾಖಲಾಗಿದ್ದು, ಇದು ಏಪ್ರಿಲ್ ತಿಂಗಳಲ್ಲಿ ಈವರೆಗೆ ಕಂಡುಬಂದ ಅತ್ಯಧಿಕ ಮಳೆಯಾಗಿದೆ. ಇದಕ್ಕೂ ಮೊದಲು 2001ರ ಏಪ್ರಿಲ್&zwnj;ನಲ್ಲಿ 108.6 ಮಿಲಿಮೀಟರ್ ಮಳೆಯೇ ಗರಿಷ್ಠ ದಾಖಲೆಯಾಗಿತ್ತು.&lt;/p&gt;&lt;h2&gt;ಮಳೆ ಜೊತೆಗೆ ಬಲವಾದ ಗಾಳಿ&lt;/h2&gt;&lt;p&gt;ನಿನ್ನೆ ಸುರಿದ ಮಳೆ ಕೇವಲ ಪ್ರಮಾಣದಲ್ಲೇ ಅಲ್ಲ, ತೀವ್ರತೆಯಲ್ಲಿಯೂ ಗಮನಾರ್ಹವಾಗಿತ್ತು. ಕೇವಲ ಒಂದು ಗಂಟೆಯ ಅವಧಿಯಲ್ಲಿ ಭಾರೀ ಮಳೆಯೊಂದಿಗೆ ಮಿಂಚು, ಗುಡುಗು ಮತ್ತು ಆಲಿಕಲ್ಲು ಮಳೆಯೂ ಸಂಭವಿಸಿತು. ಜೊತೆಗೆ ಗಂಟೆಗೆ ಸುಮಾರು 75 ಕಿಲೋಮೀಟರ್ ವೇಗದ ಬಲವಾದ ಗಾಳಿಯೂ ಬೀಸಿದ ಪರಿಣಾಮ ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮರಗಳು ಉರುಳುವುದು, ವಿದ್ಯುತ್ ವ್ಯತ್ಯಯ, ರಸ್ತೆಗಳಲ್ಲಿನ ನೀರಿನ ನಿಲುಗಡೆ ಸೇರಿದಂತೆ ಹಲವು ಅವಾಂತರ ಆಯ್ತು.&lt;/p&gt;&lt;p&gt;ಈ ಅಕಾಲಿಕ ಮಳೆಯ ಪರಿಣಾಮವಾಗಿ ನಗರದಲ್ಲಿ ತಾಪಮಾನ ತಕ್ಷಣವೇ ಕುಸಿತಗೊಂಡಿದ್ದು, ಸುಮಾರು 10 ಡಿಗ್ರಿ ಸೆಲ್ಸಿಯಸ್ ಮಟ್ಟಿಗೆ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆಯಿಂದ ಬಳಲುತ್ತಿದ್ದ ನಾಗರಿಕರಿಗೆ ತಾತ್ಕಾಲಿಕ ತಂಪಿನ ಅನುಭವ ನೀಡಿದರೂ, ಆಲಿಕಲ್ಲು ಮಳೆ ಮತ್ತು ಬಲವಾದ ಗಾಳಿಯಿಂದ ಉಂಟಾದ ಹಾನಿ ಮಾತ್ರ ಹೇಳ ತೀರದಾಗಿದೆ.&lt;/p&gt;&lt;h2&gt;ಅತ್ಯಂತ ತೀವ್ರ ಆಲಿಕಲ್ಲು ಮಳೆ&lt;/h2&gt;&lt;p&gt;ಐಎಂಡಿ ಬೆಂಗಳೂರು ನಿರ್ದೇಶಕ (ಕಾರ್ಯನಿರ್ವಹಣೆ) ಎನ್. ಪುವಿಯಾರಸನ್ ಅವರು ಈ ಕುರಿತು ಮಾತನಾಡಿ, ಇತ್ತೀಚಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಮಳೆಯಲ್ಲಿದು ಮೂರನೇ ಹಾಗೂ ಅತ್ಯಂತ ತೀವ್ರ ಆಲಿಕಲ್ಲು ಮಳೆಯಾಗಿದೆ. ಮಾರ್ಚ್ ತಿಂಗಳ ಎರಡನೇ ವಾರ ಮತ್ತು ಏಪ್ರಿಲ್ ಮೊದಲ ವಾರದಲ್ಲಿಯೂ ನಗರದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯ ಘಟನೆಗಳು ವರದಿಯಾಗಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಮುಂದಿನ ದಿನಗಳ ಹವಾಮಾನ ಕುರಿತು ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆಗಳಲ್ಲಿ ಆಲಿಕಲ್ಲು ಮಳೆಯ ಸಾಧ್ಯತೆಯೂ ಇದೆ. ಇದೇ ವೇಳೆ ಗರಿಷ್ಠ ತಾಪಮಾನದಲ್ಲಿ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡುಬರುವ ಸಾಧ್ಯತೆ ಇದೆ ಎಂದು ತಿಳಿಸಿದೆ.&lt;/p&gt;&lt;h2&gt;ಮೂರು ಜಿಲ್ಲೆಗಳಿಗೆ ಅಲರ್ಟ್&lt;/h2&gt;&lt;p&gt;ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.&lt;/p&gt;&lt;p&gt;ಒಟ್ಟಾರೆ, ಏಪ್ರಿಲ್ ತಿಂಗಳಲ್ಲೇ ಇಷ್ಟು ತೀವ್ರ ಮಳೆಯಾಗಿರುವುದು ಹವಾಮಾನ ವೈಪರಿತ್ಯದ ಸೂಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಹವಾಮಾನ ಇಲಾಖೆ ಸಲಹೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-records-highest-april-rainfall-in-history-111-mm-rain-breaks-25-year-record-gdp/articleshow-heb2wp7"/>
        </item>
        <item>
            <title><![CDATA[Abhimanotsav: ಗ್ರಾಮಗಳಿಗೆ ನೀರು ಕೊಟ್ಟ ಭಗೀರಥ ಬಿಎಸ್‌ವೈ:  ತರಳಬಾಳು ಜಗದ್ಗುರು]]></title>
            <link>https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</link>
            <guid isPermaLink="true">https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de</guid>
            <pubDate>Fri, 08 May 2026 07:05:06 +0530</pubDate>
            <description><![CDATA[&lt;p&gt;ಸಿರಿಗೆರೆಯ ತರಳಬಾಳು ಜಗದ್ಗುರುಗಳು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಠಕ್ಕೆ ಸಹಾಯ ಮಾಡಲು ಮುಂದಾದಾಗ, ಅದರ ಬದಲು ಸಿರಿಗೆರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಕೇಳಿದರು. ಯಡಿಯೂರಪ್ಪ ತಕ್ಷಣವೇ ಸೂಳೆಕೆರೆಯಿಂದ ನೀರು ಪೂರೈಸುವ ಯೋಜನೆಗೆ ಅನುಮೋದನೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ। ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,&lt;/strong&gt;&lt;/p&gt;&lt;p&gt;ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ&lt;/p&gt;&lt;p&gt;ಸುಮಾರು ಹನ್ನೆರಡು ವರ್ಷಗಳ ಹಿಂದಿನ ಘಟನೆ. ಆಗ ದೆಹಲಿಯಲ್ಲಿ ಯಾವುದೋ ಒಂದು ಕಾರ್ಯಕ್ರಮವಿತ್ತು. ಅದಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಮ್ಮ ಪ್ರಯಾಣ ಸಾಗಿತ್ತು. ಮಾರ್ಗಮಧ್ಯೆ ಇದ್ದಕ್ಕಿದ್ದಂತೆ ನಮ್ಮ ಮೊಬೈಲ್&zwnj; ರಿಂಗಣಿಸಿತು. ಉತ್ತರಿಸಲು ಕೈಗೆತ್ತಿಕೊಂಡಾಗ ಕಾಣಿಸಿದ್ದು ಕರೆ ಮಾಡಿದವರು ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.&zwnj; ಯಡಿಯೂರಪ್ಪ ಅವರು. ತೀರಾ ಅನಿರೀಕ್ಷಿತವಾದ ಕರೆ. ಮುಖ್ಯಮಂತ್ರಿಗಳಾಗಿ ಅವರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ತಪ್ಪದೆ ನಮಗೆ ದೂರವಾಣಿ ಕರೆ ಮಾಡಿ ಆಶೀರ್ವಾದ ಬೇಡುತ್ತಾ ಬಂದಿರುವುದು ಅವರು ರೂಢಿಸಿಕೊಂಡು ಬಂದ ಧಾರ್ಮಿಕ ಶ್ರದ್ಧೆ. ಆದರೆ ಅಂದಿನ ಕರೆಯ ಉದ್ದೇಶ ಬೇರೆಯೇ ಆಗಿತ್ತು.&lt;/p&gt;&lt;p&gt;ಉಭಯ ಕುಶಲೋಪರಿಯ ನಂತರ ಅವರು &lsquo;ಬುದ್ದಿ, ನಾಳೆ ನಾನು ರಾಜ್ಯದ ಬಜೆಟ್&zwnj; ಮಂಡಿಸಲಿದ್ದೇನೆ. ತಮ್ಮ ಆಶೀರ್ವಾದ ಬೇಕು. ಮಠಕ್ಕಾಗಿ ಏನಾದರೂ ಮಾಡಬೇಕೆಂದಿದ್ದೇನೆ. ಏನು ಮಾಡಲಿ?&rsquo; ಎಂದು ಕೇಳಿದರು. ಅವರ ಧಾರ್ಮಿಕ ಶ್ರದ್ಧೆ ನಿಷ್ಕಳಂಕವಾಗಿದ್ದರೂ, ಅವರು ನಾಡಿನ ಮುಖ್ಯಮಂತ್ರಿಗಳಾಗಿ ಯಾವುದೇ ತಾರತಮ್ಯ ಮಾಡದೆ ಎಲ್ಲ ಜನಾಂಗದವರ ಧಾರ್ಮಿಕ ಸಂಸ್ಥೆಗಳಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. &lsquo;ನಮ್ಮ ಮಠಕ್ಕೆ ಏನು ಮಾಡಲಿ&rsquo; ಎಂದು ಕೇಳಿದ ಪ್ರಶ್ನೆ ನಮಗೆ ಸರಿ ಕಾಣಲಿಲ್ಲ. &lsquo;ಮಠಕ್ಕೆ ಕಾಣಿಕೆ ಕೊಡಲು ಮಠದ ಶಿಷ್ಯರಿದ್ದಾರೆ, ನೀವು ಸ್ವಜಾತಿಯ ಮಠಕ್ಕೆ ಸಹಾಯ ಮಾಡಿದರೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತೀರಿ&rsquo; ಎಂದು ಕಟುವಾಗಿ ಪ್ರತಿಕ್ರಿಯಿಸಿದಾಗ ಅವರು ನಿರುತ್ತರರಾದರು. &lsquo;ಹಾಗಾದರೆ ನಾನೇನು ಮಾಡಲಿ?&rsquo; ಎಂದು ವಿನಮ್ರತೆಯಿಂದ ಮರು ಸವಾಲು ಹಾಕಿ ನಮ್ಮನ್ನು &lsquo;ಭಕ್ತಿಕಂಪಿತ&rsquo;ರನ್ನಾಗಿ ಮಾಡಿದರು.&lt;/p&gt;&lt;h2&gt;ಗ್ರಾಮೀಣರಿಗೆ ನೀರು ಕೊಟ್ಟ ನಾಯಕ:&lt;/h2&gt;&lt;p&gt;ಆಗ ನಮ್ಮ ಕಣ್ಮುಂದೆ ಸುಳಿದಾಡಿದ್ದು ಬೇಸಿಗೆಯ ಕಾಲದಲ್ಲಿ ಬೆಳಗಿನ ಹೊತ್ತು ವಾಯುವಿಹಾರದಿಂದ ಹಿಂದಿರುಗುವಾಗ ಸಾಲುಸಾಲಾಗಿ ನಿಂತು ಬೀದಿ ನಲ್ಲಿಯಲ್ಲಿ ನೀರು ಹಿಡಿಯಲು ಕೈಯಲ್ಲಿ ಬಿಂದಿಗೆಗಳನ್ನು ಹಿಡಿದು ನಿಂತ ಮಹಿಳೆಯರ ದೃಶ್ಯ! ತಕ್ಷಣವೇ ನಮ್ಮ ಉತ್ತರವನ್ನೇ ನಿರೀಕ್ಷಿಸುತ್ತಿದ್ದ ಮುಖ್ಯಮಂತ್ರಿಗಳಿಗೆ &lsquo;ಸಿರಿಗೆರೆ ಮತ್ತು ಸುತ್ತಮುತ್ತಲಿನ ೫೦ - ೬೦ ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ತೊಂದರೆ ಇದೆ. ಸಮೀಪದ ಚನ್ನಗಿರಿ ತಾಲೂಕಿನ ಸೂಳೆಕೆರೆಯಿಂದ ಕುಡಿಯುವ ನೀರು ಪೂರೈಕೆ ಆಗುವಂತೆ ಒಂದು ಯೋಜನೆಯನ್ನು ಮಂಜೂರು ಮಾಡಿಕೊಟ್ಟರೆ ತುಂಬಾ ಪುಣ್ಯಕಾರ್ಯ ಮಾಡಿದಂತಾಗುತ್ತದೆ&rsquo; ಎಂದಾಗ ಯಡಿಯೂರಪ್ಪ ಅವರು ತಡಮಾಡದೆ &lsquo;ಹಾಗೆಯೇ ಆಗಲಿ, ತಮ್ಮ ಅಪೇಕ್ಷೆಯಂತೆ ಮಾಡುತ್ತೇನೆ&rsquo; ಎಂದು ಭರವಸೆ ಕೊಟ್ಟರು.&lt;/p&gt;&lt;h3&gt;ಮರುದಿನವೇ ಬಜೆಟ್&zwnj;ನಲ್ಲಿ ಘೋಷಣೆ.&lt;/h3&gt;&lt;p&gt;ಸಾಮಾನ್ಯವಾಗಿ ರಾಜಕೀಯ ಧುರೀಣರು ಕೊಡುವ ಪೊಳ್ಳು ಭರವಸೆ ಅದಾಗಿರಲಿಲ್ಲ. ಮಾರನೆಯ ದಿನವೇ ವಿಧಾನಸಭೆಯಲ್ಲಿ ಅವರು ಮಂಡಿಸಿದ ಬಜೆಟ್&zwnj;ನಲ್ಲಿ ಮೇಲ್ಕಂಡ ಕುಡಿಯುವ ನೀರಿನ ಯೋಜನೆಗೆ ಅವರು ₹೨೫ ಕೋಟಿ ಸೇರ್ಪಡೆ ಮಾಡಿದ್ದು ಈ ಭಾಗದ ಹಳ್ಳಿಯ ಜನರನ್ನು ನಿಬ್ಬೆರಗುಗೊಳಿಸಿತು. ಕ್ರಮೇಣ ಸಿರಿಗೆರೆ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳು ಹೊಸದಾಗಿ ಸೇರ್ಪಡೆಯಾಗಿ ಯೋಜನೆಯ ಗಾತ್ರ ₹೮೦ ಕೋಟಿಗಳಿಗೆ ಹಿಗ್ಗಿತು. ಆರಂಭದಲ್ಲಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಆಗುತ್ತಿದ್ದಾಗ ಅಷ್ಟಾಗಿ ಈ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇದ್ದ ಹಳ್ಳಿಗರು ಈಗ ಅಂತರ್ಜಲ ಬತ್ತಿರುವುದರಿಂದ ಈ ಯೋಜನೆಯು ಕಾರ್ಯರೂಪಕ್ಕೆ ಬರದೇ ಹೋಗಿದ್ದರೆ ತಮ್ಮ ಗತಿ ಏನಾಗುತ್ತಿತ್ತು ಎಂದು ಉದ್ಗರಿಸುತ್ತಿದ್ದಾರೆ!&lt;/p&gt;&lt;p&gt;ಯಡಿಯೂರಪ್ಪ ಅವರು ಮತ್ತು ನಮ್ಮ ಸಂಬಂಧ ನಿನ್ನೆ ಮೊನ್ನೆಯದಲ್ಲ. ನಮ್ಮ ಮಠದ ವಾರ್ಷಿಕ ಸಮಾರಂಭವಾದ &lsquo;ಸರ್ವಜನಾಂಗದ ಶಾಂತಿಯ ತೋಟ&rsquo;ವೆಂದೇ ಜನಮಾನಸದಲ್ಲಿ ನೆಲೆಗೊಂಡಿರುವ &lsquo;ತರಳಬಾಳು ಹುಣ್ಣಿಮೆ ಮಹೋತ್ಸವ&rsquo;ವು ೩೭ ವರ್ಷಗಳ ಹಿಂದೆ (೧೯೮೫) ಶಿಕಾರಿಪುರದಲ್ಲಿ ನಡೆದಾಗ ಅವರು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಆಗಿದ್ದರು. ಅಂದಿನಿಂದಲೂ ನಮ್ಮೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿರಲಿ, ಆಡಳಿತ ಪಕ್ಷದಲ್ಲಿರಲಿ, ಮಂತ್ರಿಗಳಾಗಿರಲಿ, ಮಾಜಿ ಮಂತ್ರಿಗಳಾಗಿರಲಿ ನಮ್ಮ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ಅನನ್ಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.&lt;/p&gt;&lt;h3&gt;ಸದಾ ಜನಕಲ್ಯಾಣದ ಕನಸು:&lt;/h3&gt;&lt;p&gt;ಯಡಿಯೂರಪ್ಪನವರು ಕನ್ನಡ ನಾಡು ಕಂಡ ಅಪ್ರತಿಮ ರೈತಪರ ಹೋರಾಟಗಾರರು. ಅಪಾರ ಜನಪರ ಕಾಳಜಿ ಉಳ್ಳವರು. ಜನರ ಮಧ್ಯೆ ಬೆಳೆದು ಬಂದ ಅವರು ಕರೋನಾ ಬಿಕ್ಕಟ್ಟಿನಲ್ಲಿ ಬೆಂಗಳೂರಿನ ಗೃಹಕಚೇರಿಯಲ್ಲಿ ಅಣೆಕಟ್ಟೆಯಲ್ಲಿ ಹಿಡಿದಿಟ್ಟ ಅಪಾರ ಶಕ್ತಿಯುಳ್ಳ ಜಲರಾಶಿಯಂತೆ ಬಂಧಿಯಾಗಿದ್ದರೂ ನಾಡಿನ ಜನರ ಕಲ್ಯಾಣದ ಕನಸನ್ನೇ ಸದಾ ಕಾಣುತ್ತಿದ್ದರು. ಅವರು ರಾಜ್ಯದ ಅನೇಕ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ನಮ್ಮ ಯೋಜನೆಗಳಿಗೆ ಹಿಂದುಮುಂದು ನೋಡದೆ ಸರ್ಕಾರದ ಒಪ್ಪಿಗೆಯನ್ನು ನೀಡಿ ಉದಾರವಾಗಿ ಅನುದಾನ ನೀಡಿ ಸಹಕರಿಸಿರುವುದನ್ನು ನಾವೆಂದೂ ಮರೆಯಲಾರೆವು.&lt;/p&gt;&lt;p&gt;ಚನ್ನಗಿರಿಯ ಉಬ್ರಾಣಿ-ಅಮೃತಾಪುರ, ಹರಿಹರದ ರಾಜನಹಳ್ಳಿ, ಹೊನ್ನಾಳಿಯ ಸಾಸ್ವೆಹಳ್ಳಿ, ಬ್ಯಾಡಗಿ ತಾಲೂಕಿನ ಅಣೂರು ಮತ್ತು ಬುಡಪನಹಳ್ಳಿ, ಜಗಳೂರು ಮತ್ತು ಭರಮಸಾಗರ ಇತ್ಯಾದಿ ಯಾವುದೇ ಏತ ನೀರಾವರಿ ಯೋಜನೆ ಇರಲಿ, ಯಾವುದೇ ಸರಕಾರವಿದ್ದಾಗ ಕೋಟ್ಯಂತರ ರು.ಗಳ ಹಣ ಬಿಡುಗಡೆ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.&lt;/p&gt;&lt;h3&gt;ಕೊನೆಗೂ ನಮ್ಮ ಆಶಯ ಸಾಕಾರ:&lt;/h3&gt;&lt;p&gt;ಈ ಹಿಂದೆ ಇಂತಹ ಯೋಜನೆಗಳಿಗೆ ಧಾರಾಳವಾಗಿ ಹಣ ಮಂಜೂರು ಮಾಡುತ್ತಿದ್ದ ಅವರು ಭರಮಸಾಗರ ಮತ್ತು ಜಗಳೂರು ಏತ ನೀರಾವರಿಗೆ ಒಂದೇ ಕಂತಿನಲ್ಲಿ ಅನುದಾನ ನೀಡಲು ರಾಜ್ಯದ ಆರ್ಥಿಕ ದುರ್ಭರತೆಯ ಕಾರಣದಿಂದ ಹಿಂದೇಟು ಹಾಕಿದರು. ₹೧,೨೨೦ ಕೋಟಿಗಳ ಜಗಳೂರು ಮತ್ತು ಭರಮಸಾಗರ ಬೃಹತ್&zwnj; ಏತನೀರಾವರಿ ಯೋಜನೆಗಳನ್ನು ₹೨೨೫ ಕೋಟಿಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದ್ದು ನಮಗೆ ಅಸಂತುಷ್ಟಿಯನ್ನುಂಟು ಮಾಡಿತು. ನಂತರ ನಮ್ಮ ಒತ್ತಾಸೆಗೆ ಮಣಿದು ಒಂದೇ ವಾರದಲ್ಲಿ ಮೇಲ್ಕಂಡ ಸರಕಾರದ ಆದೇಶವನ್ನು ಹಿಂಪಡೆದು ಪೂರಾ ಹಣವನ್ನು ಒಂದೇ ಕಂತಿನಲ್ಲಿ ಮಂಜೂರು ಮಾಡಿ ಮರು ಆದೇಶ ಹೊರಡಿಸಿದರು. ಈ ಎರಡೂ ಯೋಜನೆಗಳ ಕಾಮಗಾರಿ ಕರೋನಾ ಬಿಕ್ಕಟ್ಟಿನ ನಡುವೆಯೂ ಭರದಿಂದ ಸಾಗಿ ಸುಮಾರು ೧೦೦ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಯಿತು.&lt;/p&gt;&lt;p&gt;ಸುಮಾರು ೧೦೦ ಕೆರೆಗಳಿಗೆ ದುಮ್ಮಿಕ್ಕಿ ಹರಿಯುತ್ತಿರುವ ತುಂಗಭದ್ರೆಯ ಜಲರಾಶಿಯು ಈ ಭಾಗದ ಜನರ ಆರ್ಥಿಕ ಚೈತನ್ಯವನ್ನು ಅಭಿವೃದ್ಧಿಗೊಳಿಸಿ ಅವರ ಭಾವಕೋಶದಲ್ಲಿ ಹೊಸ ಕೃಷಿ ಚಟುವಟಿಕೆಯ ಭಾಷ್ಯ ಬರೆದಿದೆ.&lt;/p&gt;&lt;p&gt;ಶತಮಾನಗಳಿಂದ ಬರಗಾಲದ ಬೇಗೆಯಿಂದ ತತ್ತರಿಸಿದ ಈ ಭಾಗದ ಗ್ರಾಮೀಣ ಜನರು &lsquo;ಇಳಿದು ಬಾ ತಾಯೆ, ಇಳಿದು ಬಾ...&rsquo; ಎಂಬ ಕವಿವಾಣಿಯನ್ನು ಈಗ ಮನೆ ಮನಗಳಲ್ಲಿ ಜಪಿಸುತ್ತಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bsy-bhagiratha-who-brought-water-to-our-villages-taralabalu-seer-dr-shivamurthy-shivacharya-swamiji-rav/articleshow-i30a5de"/>
        </item>
        <item>
            <title><![CDATA[BSY Abhimanotsav: ಇಂದು ಅಭಿಮಾನೋತ್ಸವ ಹಿನ್ನೆಲೆ, ನಿನ್ನೆ ಚಿತ್ರದುರ್ಗ ಪುರಪ್ರವೇಶ ಬಿಎಸ್‌ವೈಗೆ ಅದ್ಧೂರಿ ಸ್ವಾಗತ!]]></title>
            <link>https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</link>
            <guid isPermaLink="true">https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas</guid>
            <pubDate>Sat, 09 May 2026 04:20:42 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಅಭಿಮಾನೋತ್ಸವ' ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಬಿಎಸ್&zwnj;ವೈ ಅವರಿಗೆ ಕೋಟೆನಾಡಿನ ಜನತೆ 'ಮಿನಿ ದಸರಾ' ಮಾದರಿಯಲ್ಲಿ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr4w78je3t4c64zjmtmnwdxy,imgname-----------------------2026-05-09t041410.250-1778280276558.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.9)&lt;/strong&gt;: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ ಐವತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿರುವ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರು ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಕೋಟೆ ನಾಡಿನ ಜನ ಅದ್ಧೂರಿಯಾಗಿ ಸ್ವಾಗತ ಕೋರಿದರು. &lsquo;ಮಿನಿ ದಸರಾ&rsquo; ಮಾದರಿಯಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.&lt;/p&gt;&lt;h2&gt;ಬಿಎಸ್&zwnj;ವೈ ಅದ್ಧೂರಿ ಪುರಪ್ರವೇಶ&lt;/h2&gt;&lt;p&gt;ಸಂಜೆ ನಾಲ್ಕು ಗಂಟೆಗೆ ಯಡಿಯೂರಪ್ಪ ಚಿತ್ರದುರ್ಗ ಪುರಪ್ರವೇಶ ಮಾಡಬೇಕಿತ್ತು. ಆದರೆ ಬಿಎಸ್&zwnj;ವೈ ಆಗಮನ ಆದಾಗ ಸೂರ್ಯ ನಿಧಾನವಾಗಿ ಮೋಡದಿಂದ ಮರೆಯಾಗುತ್ತಿದ್ದ. ಇದೇ ಗೋಧೂಳಿ ಸಮಯದಲ್ಲಿ ನೇರವಾಗಿ ಪುಷ್ಪಾಲಂಕೃತ ವಾಹನ ಏರಿದ ಯಡಿಯೂರಪ್ಪ ಅವರು ನೆರೆದಿದ್ದ ಅಭಿಮಾನಿ ಸಮೂಹದತ್ತ ಕೈ ಬೀಸಿದರು. ರಾಜಕೀಯ ನಾಯಕರು ಹಾಗೂ ರೈತರು ಗಾಳಿಯಲ್ಲಿ ಹಸಿರು ಶಾಲು ಬೀಸಿ ಯಡಿಯೂರಪ್ಪ ಅವರ ರೈತ ಪರ ಹೋರಾಟದ ನೆನಪು ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಕೈಯಲ್ಲಿ ನೇಗಿಲು ಎತ್ತಿ ಹಿಡಿದು ಮೆರವಣಿಗೆಗೆ ಒಕ್ಕಲುತನದ ಸ್ಪರ್ಶ ನೀಡಿದರು. ಕ್ರೇನ್ ಸಹಾಯದಿಂದ ಬಿಎಸ್&zwnj;ವೈ ಅವರ ಮೇಲೆ ಹೂ ಮಳೆಗರೆಯಲಾಯಿತು.&lt;/p&gt;&lt;p&gt;ಯಡಿಯೂರಪ್ಪ ಅವರು ಪುಷ್ಪಾಲಂಕೃತ ಸಾರೋಟ್&zwnj;ನಲ್ಲಿ ಸಾಗಬೇಕಾಗಿತ್ತು. ಆದರೆ ಅವರ ಜೊತೆಗೆ ಬಹಳಷ್ಟು ನಾಯಕರು ಸಾಗುವುದು ಕಷ್ಟವೆಂಬ ಕಾರಣಕ್ಕೆ ವಾಹನವೊಂದಕ್ಕೆ ಪುಷ್ಪಾಲಂಕಾರ ಮಾಡಿ ಅದರಲ್ಲಿ ಬಿಎಸ್&zwnj;ವೈ ಅವರ ಮೆರಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ ಮತ್ತೊಂದಿಷ್ಟು ಮಂದಿ ಕೈಲಿ ಒನಕೆ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಬಿಎಸ್&zwnj;ವೈ ಪುರಪ್ರವೇಶಕ್ಕೆ ಸಂಭ್ರಮದ ಕಳೆ ತಂದರು. ಇದರೊಂದಿಗೆ ತನ್ನ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಬಡವರ, ರೈತರ, ಮಹಿಳೆಯರ ಪರ ಹೋರಾಡಿದ ಕುರುಹುಗಳು ಸಾಂಕೇತಿಕವಾಗಿ ಪುರಪ್ರವೇಶದ ಸಂದರ್ಭದಲ್ಲಿ ಅನಾವರಣಗೊಂಡವು.&lt;/p&gt;&lt;p&gt;ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಸಾರುವ ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ-ಮ್ಯಾಸಬೇಡ ಸಮುದಾಯಗಳ ಸಾಂಸ್ಕೃತಿಕ ಆಚರಣೆಯನ್ನು ಮೇಳೈಸುವ ಕೋಲಾಟ ಸೇರಿದಂತೆ ಹಲವು ಕಲಾ ತಂಡಗಳ ಜತೆಗೆ ಕಂಸಾಳೆ, ಉರಿಮೆ, ತಮಟೆ, ಗೊರವರ ಕುಣಿತ, ನಂದಿಕೋಲು, ವೀರಗಾಸೆ, ವಿವಿಧ ಜಾನಪದ ನೃತ್ಯಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ತಂಪನೆಯ ಸಮಯದಲ್ಲಿ ನಗುಮೊಗದೊಂದಿಗೆ ಮದುಮಗನಂತೆ ಕಂಗೊಳಿಸುತ್ತಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ತೆರೆದ ವಾಹನದಲ್ಲಿ ಎಲ್ಲರತ್ತ ಕೈಬೀಸಿ ನಗುಮುಖದಲ್ಲಿ ಸಾಗುತ್ತಿದ್ದರು.&lt;/p&gt;&lt;p&gt;ಪ್ರವಾಸಿ ಮಂದಿರದ ಬಳಿ ಅಭಿಮಾನಿಗಳು ಬೃಹದಾಕಾರದ ಸೇಬು ಹಾರ ಹಾಕಿದರೆ, ಅಂಬೇಡ್ಕರ್ ಪ್ರತಿಮೆ ಬಳಿ ಮಾದಿಗ ಸಮುದಾಯದ ಮುಖಂಡರು ತಮ್ಮ ಸಾಂಸ್ಕೃತಿಕ ಪರಿಕರವಾದ ಹಲಗೆಯನ್ನೇ ಪೋಣಿಸಿ ಹಾರ ಮಾಡಿ ಯಡಿಯೂರಪ್ಪ ಅವರಿಗೆ ಹಾಕಿದ್ದು ವಿಶೇಷವಾಗಿ ಕಂಡಿತು.&lt;/p&gt;&lt;p&gt;ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಸಿ.ಟಿ.ರವಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಸೇರಿ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.&lt;/p&gt;&lt;p&gt;ಆರು ಗಂಟೆಗೆ ಆರಂಭವಾದ ಮೆರವಣಿಗೆ ಮದಕರಿನಾಯಕ ಪ್ರತಿಮೆ ಬಳಿ ಬಂದಾಗ ವೇಳೆ ಎಂಟು ಗಂಟೆಯಾಗಿತ್ತು. ಸರಿ ಸುಮಾರು ಎರಡು ತಾಸು ಮೆರವಣಿಗೆ ನಡೆಯಿತು. ನಂತರ ಯಡಿಯೂರಪ್ಪ ಅವರು ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.&lt;/p&gt;&lt;p&gt;ನಾನು, ಅನಂತ್&zwnj; ರಾಜ್ಯ ಸುತ್ತಿದ್ದಕ್ಕೆ ಅಧಿಕಾರ&lt;/p&gt;&lt;p&gt;ಅಭಿಮಾನೋತ್ಸವಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರಿ, ಕಾರ್ಯಕ್ರಮ ಮಾಡುತ್ತಿದ್ದಾರೆ. ಸೈಕಲ್&zwnj;ನಲ್ಲಿ ನಾನು, ಅನಂತಕುಮಾರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆವು. ಇದೆಲ್ಲದರ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2028ರ ಚುನಾವಣೆಗೆ ಅಭಿನಂದನೋತ್ಸವ ರಣಕಹಳೆಯಾಗುತ್ತದೆಯಾ ಎಂಬುದನ್ನು ಕಾದು ನೋಡೋಣ.&lt;/p&gt;&lt;p&gt;&lt;strong&gt;-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ&lt;/strong&gt;&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chitradurga-welcomes-bs-yediyurappa-with-grand-event-for-abhimanotsava-rav/articleshow-mfr3gas"/>
        </item>
        <item>
            <title><![CDATA[BS Yadiyurapa: ‘ಅಭಿಮಾನೋತ್ಸವ: ಬಿಎಸ್‌ವೈ ಕೊಡುಗೆಗಳ ‘ಸ್ತಬ್ಧಚಿತ್ರ’]]></title>
            <link>https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm</link>
            <guid isPermaLink="true">https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm</guid>
            <pubDate>Fri, 08 May 2026 06:43:43 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಅಂಗವಾಗಿ ಚಿತ್ರದುರ್ಗದಲ್ಲಿ 'ಯಡಿಯೂರಪ್ಪ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಅವರ ಜನಪ್ರಿಯ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr2javrwxvz819a24h3yqgj5,imgname-----------------------2026-05-08t063653.313-1778202799900.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ: &lt;/strong&gt;ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ &lsquo;ಯಡಿಯೂರಪ್ಪ ಅಭಿಮಾನೋತ್ಸವ&rsquo; ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಲಿದ್ದು, ಅದ್ದೂರಿ ಮೆರವಣಿಗೆ ಮೂಲಕ ಅವರನ್ನು ನಗರಕ್ಕೆ ಕರೆತರಲಾಗುವುದು. ಮೆರವಣಿಗೆಯಲ್ಲಿ ಬಿಎಸ್&zwnj;ವೈ ಕೊಡುಗೆಗಳ &lsquo;ಸ್ತಬ್ಧಚಿತ್ರ&rsquo;ಗಳು ಪ್ರಮುಖ ಆಕರ್ಷಣೆಯಾಗಲಿವೆ.&lt;/p&gt;&lt;p&gt;ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಚಿತ್ರದುರ್ಗದಲ್ಲಿ &lsquo;ಯಡಿಯೂರಪ್ಪ ಅಭಿಮಾನೋತ್ಸವ&rsquo; ಆಯೋಜಿಸಲಾಗಿದ್ದು, ರೈತನಾಯಕನ ಸ್ವಾಗತಕ್ಕೆ ಕೋಟೆನಗರಿ, ಚಿತ್ರದುರ್ಗ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ.&lt;/p&gt;&lt;p&gt;ಅಭಿಮಾನೋತ್ಸವದ ಮುನ್ನಾದಿನ, ಶುಕ್ರವಾರ ಸಂಜೆ 4 ಗಂಟೆಗೆ ಅವರು ನಗರ ಪ್ರವೇಶಿಸಲಿದ್ದು, ಅವರು ಚಿತ್ರದುರ್ಗ ಪ್ರವೇಶಿಸುವ ಕ್ಷಣಗಳನ್ನು ಸಾರ್ಥಕಗೊಳಿಸುವ ಸಂಬಂಧ ಸಾಂಸ್ಕೃತಿಕ ಲೋಕವನ್ನೇ ಸೃಷ್ಠಿಸಲಾಗುತ್ತಿದೆ. ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ.&lt;/p&gt;&lt;p&gt;ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಸಾಗುವ ಮೆರವಣಿಗೆಯಲ್ಲಿ ಯಡಿಯೂರಪ್ಪನವರನ್ನು ಪುಷ್ಪಾಲಂಕೃತ ಸಾರೋಟ್&zwnj;ನಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆ ತರಲಾಗುವುದು.&lt;/p&gt;&lt;p&gt;2000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ &lsquo;ನಾರಿ ಶಕ್ತಿ ವಂದನ್&zwnj;ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜನಪದ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.&lt;/p&gt;&lt;h2&gt;ಅಂಬಾಸಿಡರ್&zwnj; ಕಾರು ಪ್ರಮುಖ ಆಕರ್ಷಣೆ:&lt;/h2&gt;&lt;p&gt;ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್&zwnj; ಕಾರು ಸಿಕೆಆರ್&zwnj; 45) ಸಹ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ವಿಶೇಷ ಮೆರಗು ನೀಡಲು ಹಾಗೂ ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್&zwnj; ವಿತರಣೆ, ಕೃಷಿ ಬಜೆಟ್&zwnj; ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ.&lt;/p&gt;&lt;p&gt;ಮೆರವಣಿಗೆಯಲ್ಲಿ ಆರು ಎಲ್&zwj;ಇಡಿಗಳು ಇರಲಿದ್ದು, ಒಂದೊಂದರಲ್ಲಿ ಯಡಿಯೂರಪ್ಪನವರ ಬಾಲ್ಯದಿಂದ ಹಿಡಿದು ವಿಧಾನಸೌಧದವರೆಗೂ ಅವರ ಜೀವನ ಚರಿತ್ರೆಯನ್ನು ಪ್ರಸ್ತುತ ಪಡಿಸಲಾಗುವುದು. ಯಡಿಯೂರಪ್ಪ ಅವರ ಸಾಧನೆಯ ಹಾದಿಯನ್ನು ಈ ಸ್ತಬ್ಧಚಿತ್ರಗಳ ಮೂಲಕ ತೆರೆದಿಡಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ.&lt;/p&gt;&lt;p&gt;ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಸೈಕಲ್ ವಿತರಣೆ, ಕೃಷಿ ಬಜೆಟ್ ಮೊದಲಾದವುಗಳ ಪ್ರದರ್ಶನದ ಸ್ತಬ್ದ ಚಿತ್ರಗಳು ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಜ್ಜಾಗಲಿವೆ.&lt;/p&gt;&lt;p&gt;ರಾಜ್ಯದ ವಿವಿಧೆಡೆಗಳಿಂದ ಪೂಜಾ ಕುಣಿತ, ಪಟ ಕುಣಿತ, ಕೋಲಾಟ, ಗಾರುಡಿ ಗೊಂಬೆ, ಚಿಟ್ಟೆಮೇಳ, ಮಹಿಳಾ ವೀರಗಾಸೆ, ಮಹಿಳಾ ತಮಟೆ, ವೀರಗಾಸೆ, ಗೊರವರ ಕುಣಿತ, ಬೇಡರವೇಷ, ಹಗಲು ವೇಷ, ಡೊಳ್ಳು ಕುಣಿತ, ಕಂಸಾಳೆ, ಕೊಂಬು ಕಹಳೆ, ಲಂಬಾಣಿ ನೃತ್ಯ, ಕೀಲು ಕುದುರೆ, ರಾಜರಾಣಿ, ಉಗ್ರನರಸಿಂಹ, ಮಹಿಷಾಸುರ ಜೋಕರ್, ನಂಧಿ ಧ್ವಜ, ವೀರಭದ್ರ ಕುಣಿತ, ನಗಾರಿ, ಸೋಮನ ಕುಣಿತ, ಚಂಡೆವಾದನ, ರಂಗ ಕುಣಿತ, ಗೋರುಕಾನ ನೃತ್ಯ ಸೇರಿದಂತೆ 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ.&lt;/p&gt;&lt;p&gt;ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/abhimanotsava-tableaux-to-showcase-bs-yediyurappa-s-life-long-contributions-rav/articleshow-p360rkm"/>
        </item>
        <item>
            <title><![CDATA[SSLC Results 2026: ಸಾರಿಗೆ ಸಂಪರ್ಕವೇ ಇಲ್ಲದ ಕುಗ್ರಾಮದ ಕೂಲಿಕಾರರ ಮಗಳಿಗೆ SSLC ಶೇ.96.96 ಅಂಕ]]></title>
            <link>https://kannada.asianetnews.com/karnataka-districts/molakalmuru-laborer-s-daughter-krishnaveni-sslc-scored-97-percents-rav/articleshow-r3b29sz</link>
            <guid isPermaLink="true">https://kannada.asianetnews.com/karnataka-districts/molakalmuru-laborer-s-daughter-krishnaveni-sslc-scored-97-percents-rav/articleshow-r3b29sz</guid>
            <pubDate>Fri, 24 Apr 2026 04:38:13 +0530</pubDate>
            <description><![CDATA[&lt;p&gt;ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸಾರಿಗೆ ಸಂಪರ್ಕವೇ ಇಲ್ಲದ ಮಲ್ಲೆ ಹರವು ಗ್ರಾಮದ ಕೂಲಿಕಾರರ ಮಗಳು ಓ.ಕೃಷ್ಣವೇಣಿ, ಎಸ್ಸೆಸ್ಸೆಲ್ಸಿ 625ಕ್ಕೆ 606 ಅಂಕ ಗಳಿಸಿ ಮಹತ್ತರ ಸಾಧನೆ. &amp;nbsp;ಬಾಂಡ್ರವಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಈ ಸಾಧನೆಗೈದು ಇತರರಿಗೆ ಸ್ಫೂರ್ತಿಯಾಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpy9b7bm0r5ec69zqpnxpnw0,imgname-untitled-design--8--1776985415028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೊಳಕಾಲ್ಮೂರು (ಏ.24): &lt;/strong&gt;ಸಾರಿಗೆ ಸಂಪರ್ಕವೇ ಇಲ್ಲದ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಗಡಿ ಗ್ರಾಮ ಬಾಂಡ್ರವಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೂಲಿಕಾರರ ಮಗಳು ಓ.ಕೃಷ್ಣವೇಣಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 606 ಅಂಕ (ಶೇ.96.96) ಗಳಿಸುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾಳೆ.&amp;nbsp;&lt;/p&gt;&lt;p&gt;ಆಧುನಿಕ ಪ್ರಪಂಚದಿಂದ ದೂರ ಉಳಿದಿರುವ ಮೂಲ ಸೌಲಭ್ಯಗಳೇ ಇಲ್ಲದ ಮಲ್ಲೆ ಹರವು ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದ ಪರಿಣಾಮ ಸಾರಿಗೆ ಸಂಪರ್ಕವೇ ಇಲ್ಲದ ಬಾಂಡ್ರಾವಿ ಸರ್ಕಾರಿ ಪ್ರೌಢಶಾಲೆಗೆ ಕೃಷ್ಣವೇಣಿ ದಾಖಲಾಗಿದ್ದಳು. ಮಾವನ ಮನೆಯಲ್ಲಿದ್ದುಕೊಂಡು ಪೋಷಕರ ಕಷ್ಟ ಅರಿತು ಅಧ್ಯಯನ ಮಾಡಿದ್ದಾಳೆ.&lt;/p&gt;&lt;p&gt;ಸ್ವತಂತ್ರ ಸಿಕ್ಕು 7 ದಶಕ ಕಳೆದರೂ ಮಲ್ಲೆ ಹರವು ಗ್ರಾಮಕ್ಕೆ ಸಾರಿಗೆ ಸಂಪರ್ಕವಿಲ್ಲ. ಸುತ್ತಲೂ ಗುಡ್ಡಗಾಡು ಆವರಿಸಿರುವ ಕಾಲು ದಾರಿಯಲ್ಲಿ ನಡೆದು ಮುಖ್ಯರಸ್ತೆಗೆ ಬಂದು ಸಿಕ್ಕ ವಾಹನಗಳನ್ನು ಹಿಡಿದು ಬಾಂಡ್ರವಿ ಗ್ರಾಮಕ್ಕೆ ಬರಬೇಕಿದೆ. ಕೂಲಿ ಕೆಲಸದಿಂದಲೇ ಜೀವನ ನಡೆಸುವ ತಂದೆ ಒಬಕಾಸ್ವಾಮಿ, ತಾಯಿ ಪಾಪಮ್ಮ ಅವರು ತಮ್ಮ ಮಗಳ ವಿದ್ಯಾಭ್ಯಾಸಕ್ಕೆ ಹೆಗಲಾಗಿದ್ದಾರೆ. ಮಲ್ಲೆ ಹರವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಕರಡಿ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇಂಥ ಗ್ರಾಮದ ವಿದ್ಯಾರ್ಥಿನಿ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/molakalmuru-laborer-s-daughter-krishnaveni-sslc-scored-97-percents-rav/articleshow-r3b29sz"/>
        </item>
        <item>
            <title><![CDATA[ಮಿನಿ ದಸರಾ ರೀತಿ ಇಂದು ಬಿಎಸ್‌ವೈ ಪುರಪ್ರವೇಶ! ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್‌ವೈ ಅಭಿಮಾನೋತ್ಸವ’]]></title>
            <link>https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4</link>
            <guid isPermaLink="true">https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4</guid>
            <pubDate>Fri, 08 May 2026 06:33:19 +0530</pubDate>
            <description><![CDATA[&lt;p&gt;ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸವಿನೆನಪಿಗಾಗಿ ಚಿತ್ರದುರ್ಗದಲ್ಲಿ 'ಬಿಎಸ್&zwnj;ವೈ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು, ರೈತರು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ &amp;nbsp;ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jygastagxbc4xtqssbmztxdg,imgname-----------------------2025-06-24t121237.239-1750747375952.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚಿತ್ರದುರ್ಗ:&lt;/strong&gt; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಶನಿವಾರ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಿರುವ &lsquo;ಬಿಎಸ್&zwnj;ವೈ ಅಭಿಮಾನೋತ್ಸವ&rsquo;ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರೈತ ನಾಯಕನ ಅದ್ಧೂರಿ ಸ್ವಾಗತಕ್ಕೆ ಕೋಟೆ ನಗರಿ ಸಜ್ಜಾಗಿದೆ.&lt;/p&gt;&lt;p&gt;ಶುಕ್ರವಾರ ಸಂಜೆ 4 ಗಂಟೆಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಬಳಿಕ, ಯಡಿಯೂರಪ್ಪ ಅವರನ್ನು ಪುಷ್ಪಾಲಂಕೃತ ಸಾರೋಟಿನಲ್ಲಿ ಕುಳ್ಳಿರಿಸಿ, ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು.&lt;/p&gt;&lt;p&gt;&lsquo;ಮಿನಿ ದಸರಾ&rsquo; ರೀತಿ ಸಾಗಲಿರುವ ಈ ಮೆರವಣಿಗೆಯಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ &lsquo;ನಾರಿ ಶಕ್ತಿ ವಂದನ್&zwnj;ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳು ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್&zwnj; ವಿತರಣೆ, ಕೃಷಿ ಬಜೆಟ್&zwnj; ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.&lt;/p&gt;&lt;p&gt;ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್&zwnj; ಕಾರು ಸಿಕೆಆರ್&zwnj; 45) ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.&lt;/p&gt;&lt;p&gt;ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ. ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡುತ್ತಿವೆ. ನಗರದ ತುಂಬೆಲ್ಲಾ ಯಡಿಯೂರಪ್ಪ ಅವರನ್ನು ಸ್ವಾಗತಿಸುವ, ಅಭಿನಂದಿಸುವ ಕಟೌಟ್&zwnj;ಗಳು ರಾರಾಜಿಸುತ್ತಿವೆ.&lt;/p&gt;&lt;p&gt;&lt;strong&gt;10 ಲಕ್ಷ ಜನರ ಸಮ್ಮುಖ ನಾಳೆ ಅಭಿಮಾನೋತ್ಸವ&lt;/strong&gt;&lt;/p&gt;&lt;p&gt;ಶನಿವಾರ ಮಧ್ಯಾಹ್ನ ನಡೆಯಲಿರುವ ಅಭಿಮಾನೋತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಉದ್ಘಾಟಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ಮಠಾಧೀಶರು, 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಕಾರ್ಯಕ್ರಮಕ್ಕಾಗಿ ಬೃಹತ್&zwnj; ವೇದಿಕೆ ನಿರ್ಮಿಸಲಾಗಿದೆ. ಈ ವೇಳೆ, &lsquo;ಕೆಂದಾವರೆ-ಕಮಲದಲ್ಲಿ ಅರಳಿದ ಹೂ&rsquo; ಹಾಗೂ &lsquo;ಸದನದಲ್ಲಿ ಶಿಕಾರಿ&rsquo; ಎಂಬ ಎರಡು ಅಭಿನಂದನಾ ಗ್ರಂಥಗಳನ್ನು ಬಿಡುಗಡೆಗೊಳಿಸಲಾಗುವುದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mini-dasar-style-entry-bs-yediyurappa-to-arrive-in-chitradurga-today-for-abhimanotsava-rav/articleshow-rekdnl4"/>
        </item>
        <item>
            <title><![CDATA[ಸಚಿವ ಡಿ. ಸುಧಾಕರ್ ನಿಧನ: ಹಿರಿಯೂರು ಶಾಸಕ, ಜನಪರ ನಾಯಕನ ರಾಜಕೀಯ ಜೀವನಕ್ಕೆ ಸ್ಪೂರ್ತಿಯೇ ಚಿಕ್ಕಪ್ಪ!]]></title>
            <link>https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526</link>
            <guid isPermaLink="true">https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526</guid>
            <pubDate>Sun, 10 May 2026 09:14:54 +0530</pubDate>
            <description><![CDATA[ಕರ್ನಾಟಕದ ಸಾಂಖ್ಯಿಕ ಮತ್ತು ಯೋಜನಾ ಸಚಿವ ಡಿ. ಸುಧಾಕರ್ ಅವರು ಅನಾರೋಗ್ಯದಿಂದಾಗಿ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಿರಿಯೂರು ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 'ಬಡವರ ಬಂಧು' ಎಂದೇ ಜನಪ್ರಿಯರಾಗಿದ್ದರು ಮತ್ತು ಸಹಕಾರ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr7zhpd5fvvjm2nq8g0nyp49,imgname-mla-d-sudhakar-1778384427429.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕರ್ನಾಟಕ ರಾಜ್ಯದ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿದ್ದ ಡಿ. ಸುಧಾಕರ್ ಅವರು ಭಾನುವಾರ ಬೆಳಗಿನ ಜಾವ 3.15 ಗಂಟೆಗೆ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆರೋಗ್ಯದಲ್ಲಿ ತೀವ್ರ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಡಿ. ಸುಧಾಕರ್ ಅವರ ನಿಧನದಿಂದ ರಾಜ್ಯ ರಾಜಕೀಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಜನಪರ ನಾಯಕನಾಗಿ ಗುರುತಿಸಿಕೊಂಡಿದ್ದ ಅವರು ಬಡವರ ಪರ ಕಾಳಜಿ ವಹಿಸಿದ ರಾಜಕಾರಣಿಯಾಗಿ ಹೆಸರುವಾಸಿಯಾಗಿದ್ದರು. ಹಿರಿಯೂರು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.&lt;/p&gt;&lt;h2&gt;ರಾಜಕೀಯಕ್ಕೆ ಚಿಕ್ಕಪ್ಪನೇ ಪ್ರೇರಣೆ&lt;/h2&gt;&lt;p&gt;1961ರ ಮಾರ್ಚ್ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಜನಿಸಿದ ಸುಧಾಕರ್ ಅವರು ತಮ್ಮ ಪ್ರಾಥಮಿಕ ಹಾಗೂ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣವನ್ನು ಚಿತ್ರದುರ್ಗದಲ್ಲೇ ಪೂರ್ಣಗೊಳಿಸಿದರು. ನಂತರ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದರು. ಪದವಿ ಶಿಕ್ಷಣದ ನಂತರ ಅವರು ವ್ಯವಹಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಕಟ್ಟಿಕೊಂಡರು. ಅವರ ರಾಜಕೀಯ ಪ್ರವೇಶಕ್ಕೆ ಕುಟುಂಬ ಹಿನ್ನೆಲೆ ಪ್ರಮುಖ ಕಾರಣವಾಗಿತ್ತು. ಅವರ ಚಿಕ್ಕಪ್ಪ ಎನ್. ಜಯಣ್ಣ ಅವರು ಚಳ್ಳಕೆರೆ ಕ್ಷೇತ್ರದ ಶಾಸಕರಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸುಧಾಕರ್ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಚಿಕ್ಕಪ್ಪನ ರಾಜಕೀಯ ಉಸ್ತುವಾರಿಯನ್ನು ಡಿ.ಸುಧಾಕರ್ ವಹಿಸಿಕೊಂಡಿದ್ದರು.&lt;/p&gt;&lt;h2&gt;ರಾಜಕೀಯ ಜೀವನದ ಬೆಳವಣಿಗೆ&lt;/h2&gt;&lt;p&gt;ಡಿ. ಸುಧಾಕರ್ ಅವರು 2004ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಳ್ಳಕೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗುತ್ತಿದ್ದಂತೆ ಅವರು ಸಾಮಾನ್ಯ ಕ್ಷೇತ್ರವಾದ ಹಿರಿಯೂರು ಕಡೆಗೆ ತನ್ನ ರಾಜಕೀಯ ಸ್ಥಾನವನ್ನು ಬದಲಿಸಿದರು. 2008ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಬಿಎಸ್&zwnj;. ಯಡಿಯೂರಪ್ಪ ಅವರ ಸರ್ಕಾರಕ್ಕೆ ಬೆಂಬಲ ನೀಡಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದರು.&lt;/p&gt;&lt;p&gt;2013ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿ ಆಯ್ಕೆಯಾದ ಅವರು, 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು. ಆದರೆ 2023ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಸಿಎಂ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡರು.&lt;/p&gt;&lt;h2&gt;ಸಹಕಾರ ಕ್ಷೇತ್ರದಲ್ಲಿ ಸಾಧನೆ&lt;/h2&gt;&lt;p&gt;ರಾಜಕೀಯದ ಜೊತೆಗೆ ಸಹಕಾರ ಕ್ಷೇತ್ರದಲ್ಲೂ ಅವರು ಮಹತ್ವದ ಪಾತ್ರ ವಹಿಸಿದ್ದರು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಸಹಕಾರ ಸಂಘಗಳ ಮೂಲಕ ಸಾವಿರಾರು ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು.&lt;/p&gt;&lt;h2&gt;ಜನಪ್ರಿಯ ನಾಯಕ&lt;/h2&gt;&lt;p&gt;ಚಳ್ಳಕೆರೆ ಹಾಗೂ ಹಿರಿಯೂರು ಕ್ಷೇತ್ರಗಳಲ್ಲಿ ಜೈನ ಸಮುದಾಯದ ಮತದಾರರ ಸಂಖ್ಯೆ ಅತಿ ಕಡಿಮೆ ಇದ್ದರೂ, ಇತರ ಸಮುದಾಯಗಳ ವಿಶ್ವಾಸವನ್ನು ಗಳಿಸುವ ಮೂಲಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಡವರ ನೆರವಿಗೆ ಸದಾ ಸಿದ್ಧರಾಗಿದ್ದ ಕಾರಣ ಅವರಿಗೆ &quot;ಬಡವರ ಬಂಧು&quot; ಎಂಬ ಹೆಸರೂ ದೊರಕಿತ್ತು.&lt;/p&gt;&lt;p&gt;ಡಿ. ಸುಧಾಕರ್ ಅವರು ಶ್ರೀಮತಿ ಹರ್ಷಿಣಿ ಅವರೊಂದಿಗೆ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದು, ಅವರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ಈಗ ತಮ್ಮ 65ನೇ ವರ್ಷದಲ್ಲಿ ಕುಟುಂಬವನ್ನು ಅಗಲಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Gowthami K</dc:creator>
            <atom:link href="https://kannada.asianetnews.com/politics/senior-karnataka-minister-d-sudhakar-passes-away-early-life-and-education-and-political-journey-gdp/articleshow-sgq8526"/>
        </item>
        <item>
            <title><![CDATA[Darshan Thoogudeepa: ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಏನಾಯ್ತು? Exclusive!]]></title>
            <link>https://kannada.asianetnews.com/sandalwood/chitradurga-renukaswamy-case-darshan-thoogudeepa-bail-supreme-court-decision/articleshow-uaeoafu</link>
            <guid isPermaLink="true">https://kannada.asianetnews.com/sandalwood/chitradurga-renukaswamy-case-darshan-thoogudeepa-bail-supreme-court-decision/articleshow-uaeoafu</guid>
            <pubDate>Mon, 04 May 2026 11:30:54 +0530</pubDate>
            <description><![CDATA[&lt;p&gt;Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಅವರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸುಪ್ರೀಂಕೋರ್ಟ್&zwnj;ನಲ್ಲಿ ವಿಚಾರಣೆಗೆಯಾಗಿದೆ. ಜಾಮೀನಿಗೋಸ್ಕರ ದರ್ಶನ್&zwnj; ಅವರು ಕೋರ್ಟ್&zwnj;ಗೆ ಅನೇಕ ಕಾರಣಗಳನ್ನು ಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟ್&zwnj;ನಲ್ಲಿ ಅರ್ಜಿ ವಿಚಾರಣೆ ಆಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqrrxyfswrhwzh94e7msz5pk,imgname-new-project---2026-05-04t112428.845-1777874172409.jpg" type="image/jpeg" height="390" width="690"/>
            <content:encoded><![CDATA[&lt;p&gt;2025ರ ಆಗಸ್ಟ್ 14ರಂದು ಚಿತ್ರದುರ್ಗ ರೇಣುಕಾಸ್ವಾಮಿ ಅವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್&zwnj; ಹಾಗೂ ಇತರ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್&zwnj; ನೀಡಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಜಾಮೀನನ್ನು ರದ್ದುಗೊಳಿಸಿತ್ತು. ಆದರೆ ವಿಚಾರಣೆ ಮುಗಿದಿಲ್ಲ, ದರ್ಶನ್&zwnj;ಗೆ ರಿಲೀಫ್&zwnj; ಇಲ್ಲದಂತಾಗಿದೆ. ಈಗ ಎಂಟು ತಿಂಗಳು ಕಳೆದರೂ ಕೂಡ ಸಾಕ್ಷಿಗಳ ವಿಚಾರಣೆ ಆಗಿಲ್ಲ. ಹೀಗಾಗಿ ದರ್ಶನ್&zwnj; ಅವರಿಗೆ ಜಾಮೀನು ಸಿಗಬೇಕು ಎಂದು ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್&zwnj;ಗೆ ಹೊಸ ರಿಟ್ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;ಎಂಟು ತಿಂಗಳಾದರೂ ವಿಚಾರಣೆ ಮುಗಿದಿಲ್ಲ&lt;/h2&gt;&lt;p&gt;ಎಂಟು ತಿಂಗಳು ಕಳೆದರೂ ಕೂಡ ಈ ಸಾಕ್ಷಿಗಳ ವಿಚಾರಣೆ ಮುಕ್ತಾಯವಾಗಿಲ್ಲ. 273 ಸಾಕ್ಷಿಗಳ ಪೈಕಿ ಕೇವಲ 15 ಸಾಕ್ಷಿಗಳ ವಿಚಾರಣೆಯಷ್ಟೇ ಆಗಿದೆ. ಇದೇ ರೀತಿಯಾದರೆ ವಿಚಾರಣೆ ಮುಗಿಯಲು ಅನೇಕ ವರ್ಷಗಳೇ ಬೇಕು. &amp;nbsp;ದರ್ಶನ್&zwnj;ಗೆ ಜಾಮೀನು ಮಂಜೂರು ಮಾಡಿ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿ ಪರ್ದೀವಾಲ ನೇತೃತ್ವದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಲಿದೆ.&lt;/p&gt;&lt;h2&gt;ಸುಪ್ರೀಂ ಕೋರ್ಟ್&zwnj;ನಲ್ಲಿ ಏನು ವಿಚಾರಣೆ ಆಯ್ತು?&lt;/h2&gt;&lt;p&gt;ಕನಿಷ್ಟ ಸೌಲಭ್ಯಗಳೂ ದರ್ಶನ್​ಗೆ ಸಿಗ್ತಿಲ್ಲ, ಕ್ವಾರೆಂಟೇನ್​ ಸೆಲ್​ನಲ್ಲಿ ಇಡಲಾಗಿದೆ... ಕನಿಷ್ಟ ಸೌಲಭ್ಯಗಳ ಕುರಿತು ಕೋರ್ಟ್​ಗೆ ಹೋದ್ರೆ, ಸುಪ್ರೀ ಕೋರ್ಟ್​​ನಲ್ಲಿ ಆದೇಶ ಆಗಿದೆ ಎಂದು ಸೆಷನ್ಸ್ ಕೋರ್ಟ್​​ ಹೇಳಿದೆ ಎಂದು ದರ್ಶನ್​ ಪರ ವಕೀಲರಿಂದ ವಾದ ಮಂಡನೆಯಾಗಿದೆ.&lt;/p&gt;&lt;p&gt;ಸೆಷನ್ಸ್​ ಕೋರ್ಟ್​ನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್, &ldquo;ಎಷ್ಟು ಸಾಕ್ಷಿಗಳ ವಿಚಾರಣೆ ಈವರೆಗೆ ನಡೆದಿದೆ..? ... ಎಷ್ಟು ಸಾಕ್ಷಿಗಳನ್ನು ವಿಚಾರಣೆಗಾಗಿ ಪ್ರಾಸಿಕ್ಯೂಷನ್​​ ಸೂಚಿಸಿದೆ.? ... ಟ್ರಯಲ್​ ಮುಗಿಯಲು ಎಷ್ಟು ದಿನ ಬೇಕಾಗುತ್ತದೆ..? ದರ್ಶನ್​ಗೆ ಕನಿಷ್ಟ ಸೌಲಭ್ಯ ನೀಡಲಾಗುತಿದೆಯೇ.? ಇಲ್ಲವೆ? ಎಂದು ಒಂದು ವಾರದಲ್ಲಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್​​ ಸೂಚನೆ ನೀಡಿದೆ. ಸೆಷನ್ಸ್​​ ಕೋರ್ಟ್​​ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ವರದಿ ಸಲ್ಲಿಕೆ ಬಳಿಕ ಮುಂದಿನ ವಿಚಾರಣೆ ದಿನಾಂಕ ನೀಡುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್​​ ಹೇಳಿದೆ.&lt;/p&gt;&lt;p&gt;&amp;nbsp;&lt;/p&gt;&lt;h2&gt;ಜಾಮೀನಿಗೆ ದರ್ಶನ್ ನೀಡಿರುವ ಕಾರಣಗಳೇನು..?&lt;/h2&gt;&lt;ul&gt; &lt;li&gt;ಪ್ರಕರಣದ ಟ್ರಯಲ್ ತೀರಾ ನಿಧಾನಗತಿಯಲ್ಲಿ ನಡೆಯುತ್ತಿದೆ&lt;/li&gt; &lt;li&gt;7ತಿಂಗಳ ವಿಚಾರಣೆಯಲ್ಲಿ ಕೇವಲ 10ಸಾಕ್ಷಿಗಳ ವಿಚಾರಣೆ ಮಾತ್ರ ಮುಗಿದೆ&lt;/li&gt; &lt;li&gt;262ಸಾಕ್ಷಿಗಳಿದ್ದು ಇದೇ ರೀತಿ ವಿಚಾರಣೆ ನಡೆದರೆ ಸಾಕಷ್ಡು ಸಮಯ ತೆಗೆದುಕೊಳ್ಳಲಿದೆ&lt;/li&gt; &lt;li&gt;ಜೈಲು ನಿಯಮಗಳಿಗೆ ವಿರುದ್ಧವಾಗಿ ಕ್ವಾರಟೈಂನ್ ಸೆಲ್ ನಲ್ಲಿ ಇಡಲಾಗಿದೆ&lt;/li&gt; &lt;li&gt;ಬೇರೆ ವಿಚಾರಣಾಧೀನ ಖೈದಿಗಳಿಗೆ ಸಿಗುವ ಕನಿಷ್ಠ ಸೌಲಭ್ಯಗಳೂ ಸಿಗ್ತಿಲ್ಲ&lt;/li&gt; &lt;li&gt;ಕುಟುಂಬಸ್ಥರಿಂದ ಕನಿಷ್ಟ ಸೌಲಭ್ಯ ಪಡೆಯಲೂ ಅವಕಾಶ ನೀಡ್ತಿಲ್ಲ&lt;/li&gt; &lt;li&gt;ಕುಟುಂಬಸ್ಥರ ಜೊತೆ ಮಾತುಕತೆಗೂ ಅವಕಾಶ ನೀಡಿಲ್ಲ&lt;/li&gt; &lt;li&gt;ಮಾತುಕತೆ ವೇಳೆ ಬ್ಯಾರಿಕೇಡ್ ಗಳು ಇದ್ದು ಆಪ್ತವಾಗಿ ಮಾತಾಡಲು ಸಾಧ್ಯವಾಗುತ್ತಿಲ್ಲ&lt;/li&gt; &lt;li&gt;ಜೈಲು ಮ್ಯಾನುವಲ್ ಪ್ರಕಾರವೇ ವೈಯೊ ಆಹಾರ ಪಡೆಯಲು ಅವಕಾಶ ನೀಡ್ತಿಲ್ಲ&lt;/li&gt; &lt;li&gt;ಬೇರೆ ವಿಚಾರಣಾಧೀನ ಖೈದಿಗಳಿಗೆ ಸಿಗುವ ಸೌಲಭ್ಯಗಳೂ ಸಿಗ್ತಿಲ್ಲ&lt;/li&gt; &lt;li&gt;ನಾನು ನಿರಪರಾಧಿಯಾಗಿದ್ದು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ&lt;/li&gt; &lt;li&gt;ತಾನು ತಪ್ಪಿತಸ್ಥ ಅನ್ನೋದಕ್ಕೆ ಸಾಕ್ಷಿಗಳು ಇಲ್ಲ&lt;/li&gt; &lt;li&gt;ಜೈಲಿನಲ್ಲಿ ತನಗೆ ಭದ್ರತೆಯ ಭಯ ಕಾಡ್ತಿದೆಯಂತೆ&lt;/li&gt; &lt;li&gt;ಸಹಖೈದಿಗಳಿಂದ ಬೆದರಿಕೆ, ನಿಂದನೆಗೆ ಒಳಗಾಗ್ತಿದ್ದಾರಂತೆ ದರ್ಶನ್&lt;/li&gt; &lt;li&gt;ತಾನೊಬ್ಬ ನಟ ಆಗಿರೋದ್ರಿಂದ ತನ್ನ ಟಾರ್ಗೆಟ್ ಮಾಡಲಾಗಿದೆ&lt;/li&gt; &lt;li&gt;ತಾನೂ ಜೈಲಿಗೆ ಬಂದಿದ್ದರಿಂದ ಮೂರು ಸಿನಿಮಾ ಪ್ರಾಜೆಕ್ಟ್ ಕೈತಪ್ಪಿವೆ&lt;/li&gt; &lt;li&gt;ಕೆವಿನ್ ಪ್ರೊಡಕ್ಷನ್ ಜೊತೆ 6ಕೋಟಿ ರೂ. ಪ್ರಾಜೆಕ್ಟ್ ಕಳೆದುಕೊಳ್ಳುವಂತಾಗಿದೆ&lt;/li&gt; &lt;li&gt;ದೀರ್ಘಕಾಲ ಜೈಲಿನಲ್ಲಿ ಇರೋದ್ರಿಂದ ನಟನೆಯ ಅವಕಾಶ ಕಳೆದುಕೊಳ್ಳುವಂತಾಗಿದೆ&lt;/li&gt; &lt;li&gt;ದೀರ್ಘಕಾಲ ಪ್ರತ್ಯೇಕವಾಗಿ ಇರಿಸುವುದು ಮಾನಸಿಕ ಮಾನಸಿಕ ಆಘಾತಕ್ಕೆ ಕಾರಣವಾಗಲಿದೆ&lt;/li&gt; &lt;li&gt;ಫಿಸಿಯೋಥೆರಫಿ ಅಗತ್ಯ ಎಂದು ವೈದ್ಯರ ಸಲಹೆ ನೀಡಿದ್ದರೂ ಸಿಗ್ತಿಲ್ಲ&lt;/li&gt; &lt;li&gt;ಕೇವಲ&zwnj;2-3ಬಾರಿ ಮಾತ್ರ ಫಿಸಿಯೋಥೆರಫಿ ಮಾಡಿಸಲಾಗಿದೆ ಅಷ್ಟೆ&lt;/li&gt; &lt;li&gt;ಆರೋಗ್ಯದ ದೃಷ್ಟಿಯಿಂದ ನೆಲದ ಮೇಲೆ&zwnj; ಕೂರಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ&lt;/li&gt; &lt;li&gt;ವಿಚಾರಣೆ ನಿಧಾನಗತಿಯಿಂದ&zwnj; ನಡೆಯುತ್ತಿರೋದ್ರಿಂದ&zwnj; ಸಿನಿಮಾ ವೃತ್ತಿಗೆ ಸಮಸ್ಯೆ ಆಗಿದೆ&lt;/li&gt;&lt;/ul&gt;&lt;p&gt;&amp;nbsp;&lt;/p&gt;]]></content:encoded>
            <category>chitradurga</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/chitradurga-renukaswamy-case-darshan-thoogudeepa-bail-supreme-court-decision/articleshow-uaeoafu"/>
        </item>
        <item>
            <title><![CDATA[BSY old Ambassador car: ಬಿಎಸ್‌ವೈ ಅಭಿಮಾನೋತ್ಸವ, ಪ್ರಮುಖ ಆಕರ್ಷಣೆ ಆಗಿರುವ ಅಂಬಾಸಿಡರ್ ಕಾರಿನ ಹಿಂದಿನ ಕಥೆಯೇನು?]]></title>
            <link>https://kannada.asianetnews.com/state/bsy-abhimanotsavathe-story-behind-the-ambassador-car-that-is-a-major-attraction-rav/articleshow-wd966fx</link>
            <guid isPermaLink="true">https://kannada.asianetnews.com/state/bsy-abhimanotsavathe-story-behind-the-ambassador-car-that-is-a-major-attraction-rav/articleshow-wd966fx</guid>
            <pubDate>Sat, 09 May 2026 11:33:22 +0530</pubDate>
            <description><![CDATA[ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದಲ್ಲಿ, ಅವರ ರಾಜಕೀಯ ಜೀವನದ ಆರಂಭದಲ್ಲಿ ಬಳಸಿದ CKR 45 ನಂಬರಿನ ಅಂಬಾಸಿಡರ್ ಕಾರು ಪ್ರಮುಖ ಆಕರ್ಷಣೆಯಾಗಿದೆ. ಈ ಕಾರು ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪನವರಷ್ಟೇ ಪ್ರಮುಖ ಪಾತ್ರ ವಹಿಸಿದೆ ಎಂದು ಬಿ.ವೈ. ವಿಜಯೇಂದ್ರ ಸ್ಮರಿಸಿಕೊಂಡರು.]]></description>
            <media:content url="https://static.asianetnews.com/images/w-1280,h-720,format-jpg,imgid-01kr5n7sjmhc8c06y609dmdpt2,imgname-----------------------2026-05-09t113110.990-1778306508372.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿತ್ರದುರ್ಗ (ಮೇ.9): &lt;/strong&gt;ಜಿಲ್ಲೆಯಲ್ಲಿ ಶನಿವಾರ ನಡೆಯಲಿರುವ ಬಿಎಸ್ ವೈ ಅಭಿಮಾನೋತ್ಸವಕ್ಕೆ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಸೂತ್ರಪಾಲನೆಗೆ ಸಂಘಟಕರು ಮುಂದಾಗಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜಾರಿಗೊಳಿಸಿದ ಯೋಜನೆಗಳಿಗೆ ಸ್ತಬ್ಧಚಿತ್ರಗಳ ಸ್ವರೂಪ ನೀಡಿದ್ದರೆ ರಾಜಕೀಯ ಆರಂಭದ ದಿನಗಳಲ್ಲಿ ಅವರು ಬಳಸಿದ್ದ ಅಂಬಾಸಿಡರ್ ಕಾರನ್ನು ಕಾರ್ಯಕ್ರಮ ನಡೆಯವ ಪ್ರದೇಶಕ್ಕೆ ತಂದು ಜನರನ್ನು ಆಕರ್ಷಿಸಲಾಗುತ್ತಿದೆ.&lt;/p&gt;&lt;p&gt;ಬಿ.ಎಸ್.ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ ಸಿಕೆಆರ್ 45 ನಂಬರಿನ ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ಬಗ್ಗೆ ಮಾಹಿತಿ ನೀಡಿದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ.ವಿಜಯೇಂದ್ರ ಈ ಕಾರನ್ನು ರಾಜ್ಯದ ಜನ ಈಗಲೂ ನೆನಪಿನಲ್ಲಿ ಇಟ್ಟುಕೊಡಿದ್ದಾರೆ ಎಂದರು.&lt;/p&gt;&lt;p&gt;ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ರೈತನಾಯಕ ಎಂದು ಜನ ಗುರುತಿಸುತ್ತಾರೆ, ಪ್ರೀತಿಸುತ್ತಾರೆ. ಯಡಿಯೂರಪ್ಪ ಅವರ ಮೇಲೆ ನಾಡಿನ ಜನ ಯಾವ ರೀತಿಯ ಪ್ರೀತಿ ಮತ್ತು ಅಭಿಮಾನ ತೋರುತ್ತಾರೋ ಅದೇ ಸಿಕೆಆರ್ 45 ನಂಬರಿನ ಕಾರಿಗೂ ಜನ ಪ್ರೀತಿ ತೋರುತ್ತಾರೆ. ಆ ಕಾಲದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಪಕ್ಷದ ಸಂಘಟನೆ ಬಲಪಡಿಸಲು ಬಿಎಸ್&zwj;ವೈ ಸಾಕಷ್ಟು ಶ್ರಮಿಸಿದರು. ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿದೆಯೊ ಈ ಕಾರಿನ ಪಾತ್ರವೂ ಅಷ್ಟೇ ಇತ್ತು ಎಂದರು.&lt;/p&gt;&lt;p&gt;ಬಿಎಸ್&zwj;ವೈ ಅವರೊಂದಿಗೆ ಅನಂತ ಕುಮಾರ್, ಡಿ.ಎಚ್.ಶಂಕರಮೂರ್ತಿ ಅವರು ಇದೇ ಕಾರಿನಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಆ ದಿನಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚಿದ್ದವು. ಯಡಿಯೂರಪ್ಪ ಇದೇ ಕಾರನ್ನು ಸದಾ ಬಳಸುತ್ತಿದ್ದರು. ಅವರ ಪ್ರವಾಸಕ್ಕೆ ಶಕ್ತಿ ತುಂಬಿದ್ದು ಈ ಕಾರು ಎಂದರು.&lt;/p&gt;&lt;p&gt;ಶಂಕರ್ ಎಂಬುವರು ಹತ್ತಾರು ವರ್ಷ ಚಾಲಕರಾಗಿದ್ದರು. ಮಂಜಣ್ಣ ಎಂಬ ಮತ್ತೊಬ್ಬರು ಚಾಲಕರಾಗಿದ್ದರು. ಅವರು ನಮ್ಮ ಕುಟುಂಬ ಸದಸ್ಯರಂತೆ ಹದಿನೈದು ವರ್ಷ ಕಾರು ಓಡಿಸಿದ್ದಾರೆ. ಒಮ್ಮೆ ಮಾತ್ರ ಕಾರು ಅಡಿಮೇಲಾಗಿದ್ದು ಮತ್ತೆ ಯಾವುದೇ ಅವಘಡ ಸಂಭವಿಸಿಲ್ಲ. ಸುರಕ್ಷಿತವಾಗಿ ಇಡೀ ರಾಜ್ಯದಲ್ಲಿ ಬಿಎಸ್ ವೈ ಅವರನ್ನು ಈ ಕಾರು ಸುತ್ತಾಡಿಸಿದೆ ಎಂದರು.&lt;/p&gt;&lt;p&gt;ಅಭಿಮಾನೋತ್ಸವದಲ್ಲಿ ಈ ಕಾರು ಪ್ರಮುಖ ಆಕರ್ಷಣೆಯಾಗಿದ್ದು ಎಲ್ಲರೂ ಬಂದು ಕಾರಿನ ಬಳಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>chitradurga</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bsy-abhimanotsavathe-story-behind-the-ambassador-car-that-is-a-major-attraction-rav/articleshow-wd966fx"/>
        </item>
    </channel>
</rss>
