<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 16 Jul 2026 12:26:11 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[ವಯನಾಡು ರೀತಿ ರಾಜ್ಯದಲ್ಲೂ ಭೂಕುಸಿತದ ಆತಂಕ! ಚಂದ್ರಗಿರಿ ಪರ್ವತದಲ್ಲಿ ಕುಸಿತಿದೆ ಗುಡ್ಡ!]]></title>
            <link>https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize</link>
            <guid isPermaLink="true">https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize</guid>
            <pubDate>Thu, 09 Jul 2026 06:25:20 +0530</pubDate>
            <description><![CDATA[&lt;p&gt;ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್&zwnj; ಪ್ರವೇಶ ನಿಷೇಧಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx25pwxk0c2stbw8d5x31zr4,imgname-----------------------2026-07-09t061723.717-1783558271923.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದ.ಕದಲ್ಲಿ ಭೂ ಕುಸಿತ । ಜನರಲ್ಲಿ ತೀವ್ರ ಆತಂಕ&lt;/p&gt;&lt;p&gt;&lt;strong&gt;ಬೆಂಗಳೂರು (ಜು.9): &lt;/strong&gt;ನೆರೆಯ ಕೇರಳದ ವಯನಾಡಿನಲ್ಲಿ ಗುಡ್ಡ ಕುಸಿದು(Wayanad landslide) ಅನಾಹುತ ಸಂಭವಿಸಿದ ಹಿನ್ನೆಲೆಯಲ್ಲೇ ರಾಜ್ಯದ ಕೆಲವೆಡೆ ಬೆಟ್ಟ ಕುಸಿತವಾಗಿದೆ. ಚಿಕ್ಕಮಗಳೂರಿನ ಚಂದ್ರಗಿರಿ ಪರ್ವತದಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದಾಗಿ ನೇತ್ರಾವತಿ ಪೀಕ್, ದಿಡುಪೆ ಫಾಲ್ಸ್&zwnj; ಪ್ರವೇಶ ನಿಷೇಧಿಸಲಾಗಿದೆ. ಶಿವಮೊಗ್ಗದಲ್ಲಿ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದಿದ್ದು ಒಂದೇ ಕುಟುಂಬದ ಮೂವರು ಪ್ರಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಇನ್ನು ಗುಡ್ಡ ಕುಸಿತದ ಆತಂಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್&zwnj; (ಕಡಮಗುಂಡಿ), ನೇತ್ರಾವತಿ ಪೀಕ್&zwnj;ಗೆ ಜು.9, 10ರಂದು ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ನಗರದ ಕೆಎಸ್&zwj;ಆರ್&zwj;ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿದ್ದು, ತಾತ್ಕಾಲಿಕವಾಗಿ ವಾಹನ ಸಂಚಾರ ಮಾರ್ಪಾಡು ಮಾಡಲಾಗಿದೆ. ಇದಕ್ಕಾಗಿ ರಾಜಾಸೀಟ್&zwnj;ಗೆ ಪ್ರವೇಶ ನಿಷೇಧಿಸಲಾಗಿದೆ.&lt;/p&gt;&lt;p&gt;ಇನ್ನು ವಯನಾಡು ಟನಲ್&zwnj; ಕಂಪನಿಯಿಂದ ಮಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿದೆ. ಕೆತ್ತಿಕಲ್&zwnj;ನಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ತಡೆಗೋಡೆ ನಿರ್ಮಿಸುತ್ತಿರುವ ಡಿಬಿಎಲ್&zwnj; ಕಂಪನಿ ಅವೈಜ್ಞಾನಿಕವಾಗಿ ಮಣ್ಣು ತೆಗೆದಿತ್ತು. ಇದರಿಂದಾಗಿ ರಸ್ತೆಗೆ ಅಪಾರ ಪ್ರಮಾಣದ ಮಣ್ಣುಕಲ್ಲು ಬಿದ್ದಿದೆ. ಇದರಿಂದ ಗುಡ್ಡದ ಮೇಲ್ಭಾಗದ ನಿವಾಸಿಗಳಿಗೆ ಭಾರಿ ಆತಂಕದ ಸ್ಥಿತಿ ಆಗಿದೆ.&lt;/p&gt;&lt;p&gt;ಕರ್ನಾಟಕ-ಮಹಾರಾಷ್ಟ್ರ ಗಡಿಭಾಗಕ್ಕೆ ಸಮೀಪವಿರುವ ಪ್ರವಾಸಿ ತಾಣ ಅಂಬೋಲಿ ಫಾಲ್ಸ್ ಸಮೀಪ ತಡರಾತ್ರಿ ಭಾರಿ ಗುಡ್ಡ ಕುಸಿದು ನಾಲ್ಕು ಬೃಹತ್ ಬಂಡೆಗಳು ರಸ್ತೆಯ ಮೇಲೆ ಉರುಳಿ ಬಿದ್ದಿವೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುಡ್ಡದ ಮೇಲ್ಭಾಗದಿಂದ ಏಕಾಏಕಿ ಬೃಹತ್ ಬಂಡೆಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಬೆಳಗಾವಿ-ಸಿಂಧದುರ್ಗ ನಡುವಿನ ವಾಹನ ಸಂಚಾರವನ್ನು ಮಧ್ಯರಾತ್ರಿಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/landslides-mirror-wayanad-tragedy-in-karnataka-towns-chikkamagaluru-shivamogga-rav/articleshow-0mxrize"/>
        </item>
        <item>
            <title><![CDATA[ಕೆನರಾ ಬ್ಯಾಂಕ್ 8 ಲಕ್ಷ ರೂ. ಬ್ಯಾಂಕ್ ಸಾಲ ಕೇವಲ ₹15 ಸಾವಿರಕ್ಕೆ ಕ್ಲೋಸ್! ಮಾನವೀಯತೆ ಮೆರೆದ ನ್ಯಾಯಾಲಯ]]></title>
            <link>https://kannada.asianetnews.com/karnataka-districts/chikkamagaluru-mega-lok-adalat-humanitarian-court-waives-off-8-lakh-canadara-bank-loan-for-disabled-man/articleshow-0wmktt1</link>
            <guid isPermaLink="true">https://kannada.asianetnews.com/karnataka-districts/chikkamagaluru-mega-lok-adalat-humanitarian-court-waives-off-8-lakh-canadara-bank-loan-for-disabled-man/articleshow-0wmktt1</guid>
            <pubDate>Mon, 13 Jul 2026 16:23:21 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ, ತೀವ್ರ ಸಂಕಷ್ಟದಲ್ಲಿದ್ದ ವಿಕಲಚೇತನ ವ್ಯಕ್ತಿಯೊಬ್ಬರ 8 ಲಕ್ಷ ರೂ. ಸಾಲವನ್ನು ಮೆಗಾ ಲೋಕ ಅದಾಲತ್&zwnj;ನಲ್ಲಿ ಇತ್ಯರ್ಥಪಡಿಸಲಾಗಿದೆ. ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಹೆಗಡೆಯವರ ಮಾನವೀಯ ಮಧ್ಯಸ್ಥಿಕೆಯಿಂದ, ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ ಸಾಲದ ಮೊತ್ತವನ್ನು ಕೇವಲ 15,000 ರೂ.ಗೆ ಇಳಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kxdhe2jknd67xcrkmgs01v04,imgname-chikkamagaluru-loan-judge-order-1783939664467.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜು.13): ಕಾ&lt;/strong&gt;ನೂನು ಎಂದರೆ ಕೇವಲ ನಿಯಮಗಳಲ್ಲ, ಅದರಾಚೆಗೂ ಮಿಡಿಯುವ ಮಾನವೀಯ ಹೃದಯವಿದೆ ಎಂಬುದನ್ನು ಚಿಕ್ಕಮಗಳೂರಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಾಬೀತುಪಡಿಸಿದೆ. ಇತ್ತೀಚೆಗೆ ಆಯೋಜಿಸಲಾಗಿದ್ದ ಮೆಗಾ ಲೋಕ ಅದಾಲತ್&zwnj;ನಲ್ಲಿ ನ್ಯಾಯಾಂಗದ ಪರಮೋಚ್ಚ ಮಾನವೀಯ ನಡೆ ಅನಾವರಣಗೊಂಡಿದ್ದು, ಇಡೀ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ? ಸಂಕಷ್ಟದಲ್ಲಿದ್ದ ವಿಕಲಚೇತನ&lt;/strong&gt;&lt;/h2&gt;&lt;p&gt;ತೀವ್ರ ದೈಹಿಕ ಅಸಮರ್ಥತೆ ಮತ್ತು ತೀವ್ರ ಆರ್ಥಿಕ ಸಂಕಷ್ಟದಿಂದ ತತ್ತರಿಸುತ್ತಿದ್ದ ವಿಕಲಚೇತನ ವ್ಯಕ್ತಿಯೊಬ್ಬರು ಕೆನರಾ ಬ್ಯಾಂಕ್&zwnj;ನಲ್ಲಿ ಸಾಲ ಪಡೆದಿದ್ದರು. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿದ್ದ ಅವರಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಬಡ್ಡಿ ಬೆಳೆಯುತ್ತಾ ಹೋಗಿ ಒಟ್ಟು ಸಾಲದ ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿ ದಾಟಿತ್ತು. ಸಾಲ ವಸೂಲಾತಿಗಾಗಿ ಬ್ಯಾಂಕ್ ನ್ಯಾಯಾಲಯದ ಮೊರೆ ಹೋಗಿತ್ತು. ಇದರಿಂದಾಗಿ ಸಂತ್ರಸ್ತ ಕುಟುಂಬವು ತೀವ್ರ ಕಂಗಾಲಾಗಿತ್ತು.&lt;/p&gt;&lt;h2&gt;&lt;strong&gt;ಸಂತ್ರಸ್ತನ ಬಳಿಗೇ ನಡೆದು ಬಂದ ನ್ಯಾಯಾಧೀಶರು!&lt;/strong&gt;&lt;/h2&gt;&lt;p&gt;ಪ್ರಕರಣದ ಸೂಕ್ಷ್ಮತೆ ಮತ್ತು ಸಾಲಗಾರನ ಕರುಣಾಜನಕ ಪರಿಸ್ಥಿತಿಯನ್ನು ಮನಗಂಡ ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಅವರು ಈ ವಿಷಯದಲ್ಲಿ ವಿಶೇಷ ಆಸಕ್ತಿ ವಹಿಸಿ ಸಾಲಗಾರನ ಬಳಿಗೇ ನ್ಯಾಯಾದಾನ ಮಾಡುವುದಕ್ಕೆ ತೀರ್ಮಾನಿಸಿದರು. ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರು ಹಾಗೂ ಕಾನೂನು ತಂಡದ ಅಧಿಕಾರಿಗಳೊಂದಿಗೆ ನ್ಯಾಯಾಧೀಶರೇ ನೇರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂಭಾಗದ ಕಚೇರಿಗೆ ನಡೆದುಕೊಂಡು ಬಂದರು. ಸಾಲಗಾರನ ಬಳಿಯೇ ನಿಂತು ಸಮಾಲೋಚನೆ ನಡೆಸುವ ಮೂಲಕ ಸರಳತೆ ಮೆರೆದರು.&lt;/p&gt;&lt;h2&gt;&lt;strong&gt;ಕಂಡ 8 ಲಕ್ಷದ ಸಾಲ 15 ಸಾವಿರಕ್ಕೆ ಸುಖಾಂತ್ಯ:&lt;/strong&gt;&lt;/h2&gt;&lt;p&gt;ನ್ಯಾಯಾಧೀಶರ ನೇತೃತ್ವದಲ್ಲಿ ಮಾನವೀಯ ನೆಲೆಯಲ್ಲಿ ನಡೆದ ಈ ಸೌಹಾರ್ದಯುತ ಮಾತುಕತೆಗೆ ಬ್ಯಾಂಕ್ ಅಧಿಕಾರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ವಿಕಲಚೇತನರ ಪರಿಸ್ಥಿತಿಗೆ ಮಿಡಿದ ಅಧಿಕಾರಿಗಳು ಬೃಹತ್ ಮೊತ್ತದ ಸಾಲವನ್ನು ಮನ್ನಾ ಮಾಡಲು ಒಪ್ಪಿಗೆ ಸೂಚಿಸಿದರು. ಅಂತಿಮವಾಗಿ ಇಡೀ ಪ್ರಕರಣವು ಕೇವಲ 15,000 ರೂಪಾಯಿ ಪಾವತಿಗೆ ಇತ್ಯರ್ಥವಾಯಿತು. ಕೇವಲ ಹದಿನೈದು ಸಾವಿರ ರೂಪಾಯಿ ಪಡೆದು 8 ಲಕ್ಷಕ್ಕೂ ಅಧಿಕ ಮೊತ್ತದ ಸಾಲವನ್ನು ಕ್ಲೋಸ್ ಮಾಡುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ಹೊಸ ಬದುಕಿನ ಭರವಸೆ ನೀಡಲಾಯಿತು.&lt;/p&gt;&lt;h2&gt;&lt;strong&gt;ಕಣ್ಣೀರು ಒರೆಸುವ ಮಹಾ ವೇದಿಕೆ 'ಲೋಕ ಅದಾಲತ್'&lt;/strong&gt;&lt;/h2&gt;&lt;p&gt;ಲೋಕ ಅದಾಲತ್ ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳು ಕೇವಲ ನ್ಯಾಯಾಲಯದ ಕೇಸ್&zwnj;ಗಳನ್ನು ಇತ್ಯರ್ಥ ಪಡಿಸುವ ಕೇಂದ್ರಗಳಲ್ಲ, ಬದಲಿಗೆ ಅವು ಸಮಾಜದ ಅತ್ಯಂತ ದುರ್ಬಲ ವರ್ಗದವರ ಕಣ್ಣೀರು ಒರೆಸುವ ಮಾನವೀಯತೆಯ ಮಹಾ ವೇದಿಕೆಯಾಗಬಲ್ಲವು ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆ ಜ್ವಲಂತ ಉದಾಹರಣೆಯಾಗಿದೆ. ನ್ಯಾಯಾಧೀಶರ ಹಾಗೂ ಬ್ಯಾಂಕ್ ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-mega-lok-adalat-humanitarian-court-waives-off-8-lakh-canadara-bank-loan-for-disabled-man/articleshow-0wmktt1"/>
        </item>
        <item>
            <title><![CDATA[ಅಡ್ಡಮತದ ಬಗ್ಗೆ ಬಿವೈವಿಗೆ ಇಂದು ಸತ್ಯಶೋಧ ವರದಿ - ಇಂಥವರೇ ಮಾಡಿದ್ದಾರೆಂದು ಹೇಳಲಾಗದು, ಕೆಲವರ ಮೇಲೆ ಅನುಮಾನ: ಸಿಟಿ ರವಿ]]></title>
            <link>https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb</link>
            <guid isPermaLink="true">https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb</guid>
            <pubDate>Fri, 26 Jun 2026 05:04:04 +0530</pubDate>
            <description><![CDATA[&lt;p&gt;ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನ ಪರಿಷತ್&zwnj; ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ(BJP)ಯಿಂದ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ವರದಿ ಸಿದ್ಧವಾಗಿದ್ದು, ಇಂದು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರಿಗೆ ವರದಿಯನ್ನು ಸಲ್ಲಿಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcx4fyk1p4nrct4gxgmzs4x5,imgname-1-1766209354337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.26): &lt;/strong&gt;ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನ ಪರಿಷತ್&zwnj; ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ(BJP)ಯಿಂದ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ವರದಿ ಸಿದ್ಧವಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್&zwnj; ಸದಸ್ಯ ಡಾ.ಸಿ.ಟಿ.ರವಿ(CT Ravu) ತಿಳಿಸಿದ್ದಾರೆ.&lt;/p&gt;&lt;h2&gt;ಅಡ್ಡ ಮತದಾನ: ಸತ್ಯಶೋಧನಾ ವರದಿಯಲ್ಲೇನಿದೆ?&lt;/h2&gt;&lt;p&gt;ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ಸದಸ್ಯರು ಸಭೆ ನಡೆಸಿ ವರದಿ ಸಿದ್ಧಪಡಿಸಿದ್ದೇವೆ. ಸಮಿತಿಯ ಎಲ್ಲ ಸದಸ್ಯರು ವರದಿಗೆ ಸಹಿ ಮಾಡಿದ್ದು, ಸೀಲ್ಡ್&zwnj; ಕವರ್&zwnj;ನಲ್ಲಿ ವರದಿಯನ್ನು ಭದ್ರಪಡಿಸಲಾಗಿದೆ. ಶುಕ್ರವಾರ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h3&gt;ಅಡ್ಡ ಮತದಾನ ಮಾಡಿದವರು ಯಾರು?&lt;/h3&gt;&lt;p&gt;ರಾಜ್ಯಾಧ್ಯಕ್ಷರಿಗೆ ವರದಿ ನೀಡುವುದಕ್ಕೂ ಮುನ್ನ ಯಾವ ಅಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ, ಯಾರು-ಯಾರು ಅಡ್ಡ ಮತದಾನ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಯಾವ ಕಾರಣಕ್ಕೆ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂಬುದನ್ನು ವಿವರಿಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ಪರಿಷತ್&zwnj; ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ಕೇವಲ ಅನುಮಾನಿಸಬಹುದಾಗಿದೆ ಅಷ್ಟೇ. ಇದು ಗೌಪ್ಯ ಮತದಾನ ಆಗಿರುವುದರಿಂದ ಖಡಾಖಂಡಿತವಾಗಿ ಇವರೇ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಅನುಮಾನಿಸಬಹುದಷ್ಟೇ. ನೇರವಾಗಿ ಆರೋಪಿ ಸ್ಥಾನದಲ್ಲಿ ಯಾರನ್ನೂ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb"/>
        </item>
        <item>
            <title><![CDATA[ಚಾರ್ಮಾಡಿ ಘಾಟಿಯಲ್ಲಿ ಲಘು ಭೂಕುಸಿತ, ದಟ್ಟ ಮಂಜಿನಲ್ಲಿ ರಸ್ತೆ ಸರಿಯಾಗಿ ಕಾಣಿಸದೆ ಪಲ್ಟಿಯಾದ ಕಾರು!]]></title>
            <link>https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd</link>
            <guid isPermaLink="true">https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd</guid>
            <pubDate>Wed, 08 Jul 2026 10:19:56 +0530</pubDate>
            <description><![CDATA[&lt;p&gt;ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwzznbkmcg21pgg0sncxttpc,imgname-charmadi-ghat--7--1783484821108.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಗಾರು ಮಳೆಗೆ ಚಾರ್ಮಾಡಿ ಘಾಟಿಯು ಹಸಿರಿನಿಂದ ಕಂಗೊಳಿಸುತ್ತಿದ್ದು, ಮೈದುಂಬಿ ಹರಿಯುವ ಜಲಪಾತಗಳು ಮತ್ತು ದಟ್ಟ ಮಂಜು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ, ಅಲ್ಲಲ್ಲಿ ಸಂಭವಿಸುತ್ತಿರುವ ಲಘು ಗುಡ್ಡ ಕುಸಿತ ಈ ಮಾರ್ಗದಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.&lt;/p&gt;&lt;img&gt;&lt;p&gt;ಬೆಳ್ತಂಗಡಿ/ಮೂಡಿಗೆರೆ: ಕರಾವಳಿ ಮತ್ತು ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಕೊಂಡಿ, ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73ರ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮುಂಗಾರು ಮಳೆ ಭಾರಿ ಚುರುಕಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ಘಾಟಿ ಪ್ರದೇಶ ಹಸಿರು ಹೊದ್ದು ನಳನಳಿಸುತ್ತಿದ್ದು, ಪ್ರಕೃತಿ ಪ್ರೇಮಿಗಳ ಕಣ್ಮನ ಸೆಳೆಯುತ್ತಿದೆ. ಕಡಿದಾದ 11 ಹೇರ್&zwnj;ಪಿನ್ ತಿರುವುಗಳನ್ನು ಹೊಂದಿರುವ ಈ 25 ಕಿಲೋಮೀಟರ್ ಉದ್ದದ ವನ್ಯ ಪರಿಸರದಲ್ಲಿ ಇದೀಗ ಮಳೆಗಾಲದ ಸೌಂದರ್ಯ ವರ್ಣನಾತೀತವಾಗಿದೆ.&lt;/p&gt;&lt;img&gt;&lt;p&gt;ಈ ಬಾರಿ ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಅಬ್ಬರ ಕಡಿಮೆಯಿದ್ದ ಕಾರಣ ಘಾಟಿಯಾದ್ಯಂತ ಹಸಿರು ಕಂಗೊಳಿಸುತ್ತಿದೆ. ವರ್ಷವಿಡೀ ಸುಂದರವಾಗಿರುವ ಚಾರ್ಮಾಡಿ, ಮಳೆಗಾಲದಲ್ಲಿ ಮತ್ತಷ್ಟು ಆಕರ್ಷಕ ರೂಪ ತಳೆದಿದೆ. ಸದ್ಯ ಘಾಟಿ ವ್ಯಾಪ್ತಿಯಲ್ಲಿ 2 ಬೃಹತ್ ಜಲಪಾತಗಳು, 10 ಸಾಮಾನ್ಯ ಗಾತ್ರದ ಜಲಪಾತಗಳು ಹಾಗೂ 15ಕ್ಕೂ ಹೆಚ್ಚು ಪುಟ್ಟ ಪುಟ್ಟ ಹಳ್ಳ-ತೊರೆಗಳು ಮೈದುಂಬಿ ಧುಮ್ಮಿಕ್ಕುತ್ತಿವೆ. ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹೋದಂತೆಲ್ಲಾ ದಟ್ಟವಾಗಿ ಆವರಿಸುವ ಮಂಜು, ಸದಾ ಸುರಿಯುವ ಜಿಟಿಜಿಟಿ ಮಳೆ ಹಾಗೂ ಸುತ್ತಲಿನ ಕಣಿವೆಗಳ ದೃಶ್ಯ ಪ್ರಯಾಣಿಕರಿಗೆ ಸ್ವರ್ಗದ ಅನುಭೂತಿ ನೀಡುತ್ತಿದೆ.&lt;/p&gt;&lt;img&gt;&lt;p&gt;ಭಾರಿ ಮಳೆಯಿಂದಾಗಿ ಘಾಟಿಯ ಮೇಲ್ಭಾಗದ ನೀರು ರಭಸವಾಗಿ ಹರಿದು ಬರುತ್ತಿದ್ದು, ಗುಡ್ಡದ ಮಣ್ಣು ಸಡಿಲಗೊಂಡು ಚಿಕ್ಕಮಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಲಘು ಪ್ರಮಾಣದ ಗುಡ್ಡ ಕುಸಿತ ಉಂಟಾಗುತ್ತಿದೆ. ಬಿದಿರುತಳ ಸೇರಿದಂತೆ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಮಣ್ಣಿನೊಂದಿಗೆ ಮರ-ಗಿಡಗಳು ರಸ್ತೆಗೆ ಉರುಳಿ ಬಿದ್ದ ಘಟನೆಗಳು ನಡೆದಿವೆ. ಅದೃಷ್ಟವಶಾತ್, ಮಣ್ಣು ರಸ್ತೆಯ ಮುಖ್ಯ ಭಾಗಕ್ಕೆ ಕುಸಿಯದ ಕಾರಣ ಸಂಚಾರಕ್ಕೆ ದೊಡ್ಡ ಮಟ್ಟದ ಅಡಚಣೆಯಾಗಿಲ್ಲ. ಆದರೆ, ಘಾಟಿ ರಸ್ತೆಯ ಚರಂಡಿಗಳಲ್ಲಿ ಮಣ್ಣು ತುಂಬಿಕೊಳ್ಳುತ್ತಿದೆ.&lt;/p&gt;&lt;p&gt;ಮುಂದಿನ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಗುಡ್ಡ ಕುಸಿತ ಹಾಗೂ ಮರಗಳು ಧರೆಗುರುಳುವ ಸಾಧ್ಯತೆ ಹೆಚ್ಚಿರುವುದರಿಂದ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಸಮಾಜಸೇವಕರು ಕಟ್ಟೆಚ್ಚರ ವಹಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಎರಡೂ ವಿಭಾಗಗಳಿಂದ ರಸ್ತೆ ಸಂಚಾರ ಸುಗಮಗೊಳಿಸಲು ಜೆಸಿಬಿ ಯಂತ್ರಗಳು ಹಾಗೂ ಅಗತ್ಯ ಕಾರ್ಮಿಕರನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಹಿಂದೆಂದಿಗಿಂತ ರಸ್ತೆ ಅಗಲಗೊಂಡಿರುವುದು ಹಾಗೂ ತಡೆಗೋಡೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿರುವುದು ಸದ್ಯದ ದೊಡ್ಡ ಸಮಾಧಾನವಾಗಿದೆ.&lt;/p&gt;&lt;img&gt;&lt;p&gt;ಘಾಟಿಯುದ್ದಕ್ಕೂ ಸದಾ ದಟ್ಟವಾದ ಮಂಜು ಕವಿದ ವಾತಾವರಣ ಇರುವುದರಿಂದ ವಾಹನ ಸವಾರರಿಗೆ ಮುಂದಿರುವ ರಸ್ತೆ ಸರಿಯಾಗಿ ಕಾಣಿಸುತ್ತಿಲ್ಲ. ಚಾರ್ಮಾಡಿ ಘಾಟ್&zwnj;ನ ಪ್ರಸಿದ್ಧ &lsquo;ಮಲೆಯ ಮಾರುತ&rsquo; ಪ್ರವಾಸಿ ಮಂದಿರದ ಬಳಿ ರಸ್ತೆ ಸರಿಯಾಗಿ ಕಾಣಿಸದೆ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ವೈದ್ಯಕೀಯ, ಧಾರ್ಮಿಕ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿಂದ, ಚಾಲಕರು ಮುಂಜಾಗ್ರತೆ ವಹಿಸಿ ಅತ್ಯಂತ ನಿಧಾನವಾಗಿ ವಾಹನ ಚಾಲನೆ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.&lt;/p&gt;&lt;h2&gt;ಪ್ರವಾಸಿಗರ ಬೇಜವಾಬ್ದಾರಿತನ&lt;/h2&gt;&lt;p&gt;ತುಂಬಿ ಹರಿಯುತ್ತಿರುವ ಜಲಪಾತಗಳನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಚಾರ್ಮಾಡಿಯತ್ತ ಲಗ್ಗೆ ಇಡುತ್ತಿದ್ದಾರೆ. ಆದರೆ, ಕೆಲವರ ಬೇಜವಾಬ್ದಾರಿಯುತ ವರ್ತನೆ ಇತರ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;img&gt;&lt;p&gt;ಕಿರಿದಾದ ರಸ್ತೆಯ ಮಧ್ಯದಲ್ಲೇ ವಾಹನಗಳನ್ನು ನಿಲ್ಲಿಸಿ ನೃತ್ಯ ಮಾಡುವುದು, ರೀಲ್ಸ್ ಮಾಡುವುದು. ಧೂಮಪಾನ ಹಾಗೂ ಮದ್ಯಪಾನದಂತಹ ಅನಗತ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗಿದೆ. ರಸ್ತೆ ಬದಿಯ ಅಪಾಯಕಾರಿ ಕಲ್ಲು ಬಂಡೆಗಳನ್ನು ಏರುವುದು ಹಾಗೂ ಪ್ರಪಾತದ ತಡೆಗೋಡೆಗಳ ಮೇಲೆ ನಿಂತು ಸೆಲ್ಫಿ ತಗೆದುಕೊಳ್ಳುವ ಸಾಹಸಕ್ಕೆ ಪ್ರವಾಸಿಗರು ಕೈಹಾಕುತ್ತಿದ್ದಾರೆ. ಘಾಟಿ ಪ್ರದೇಶದಲ್ಲಿ ಪೊಲೀಸರ ಗಸ್ತು ನಿರಂತರವಾಗಿದ್ದರೂ, ಪ್ರವಾಸಿಗರ ಈ ಆಟಾಟೋಪಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದಲ್ಲಿ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಘಾಟಿಯ ಸೌಂದರ್ಯವನ್ನು ಚಲಿಸುವ ವಾಹನದಲ್ಲೇ ವೀಕ್ಷಿಸುವುದು ಕ್ಷೇಮ. ಅದನ್ನು ಬಿಟ್ಟು ಹಠ ಹಿಡಿದು ವಾಹನ ನಿಲ್ಲಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಪ್ರಸ್ತುತ ಹವಾಮಾನದ ಹಿನ್ನೆಲೆಯಲ್ಲಿ ಪ್ರಯಾಣಿಕರು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ವಹಿಸುವುದು ಕಡ್ಡಾಯ:&lt;/p&gt;&lt;ul&gt; &lt;li&gt;ಘಾಟಿಯ ಯಾವುದೇ ತಿರುವುಗಳಲ್ಲಿ, ಜಲಪಾತಗಳ ಬಳಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ.&lt;/li&gt; &lt;li&gt;ಮೇಲ್ಭಾಗದಲ್ಲಿ ಹಠಾತ್ ಮಳೆ ಹೆಚ್ಚಾದರೆ ಹಳ್ಳಗಳಲ್ಲಿ ನೀರಿನ ಹರಿವು ಕ್ಷಣಾರ್ಧದಲ್ಲಿ ಹೆಚ್ಚಾಗುವುದರಿಂದ ಪ್ರವಾಸಿಗರು ನೀರಿಗೆ ಇಳಿಯಬಾರದು.&lt;/li&gt; &lt;li&gt;ಇಡೀ ಘಾಟಿ ಪರಿಸರದಲ್ಲಿ ಯಾವುದೇ ಮೊಬೈಲ್ ನೆಟ್&zwnj;ವರ್ಕ್ ಲಭ್ಯವಿರುವುದಿಲ್ಲ. ಆದ್ದರಿಂದ ತುರ್ತು ಸಂದರ್ಭದಲ್ಲಿ ತಕ್ಷಣದ ಸಂಪರ್ಕ ಸಾಧ್ಯವಿರುವುದಿಲ್ಲ, ಜಾಗ್ರತೆ ಇರಲಿ.&lt;/li&gt; &lt;li&gt;ಘಾಟಿಯಲ್ಲಿ ಮಧ್ಯೆ ಯಾವುದೇ ಅಂಗಡಿಗಳಿಲ್ಲದ ಕಾರಣ, ಪ್ರಯಾಣದ ಸಮಯದಲ್ಲಿ ಅಗತ್ಯವಿರುವ ಆಹಾರ ಮತ್ತು ಕುಡಿಯುವ ನೀರನ್ನು ಜೊತೆಯಲ್ಲೇ ಇಟ್ಟುಕೊಳ್ಳುವುದು ಉತ್ತಮ.&lt;/li&gt; &lt;li&gt;ಮಂಜು ಮತ್ತು ಗುಡ್ಡ ಕುಸಿತದ ಭೀತಿ ಇರುವುದರಿಂದ ಆದಷ್ಟು ರಾತ್ರಿಯ ವೇಳೆಯ ಪ್ರಯಾಣವನ್ನು ಸಂಪೂರ್ಣವಾಗಿ ಅವಲಂಬಿಸದಿರುವುದು ಕ್ಷೇಮ. ಅಲ್ಲದೆ ಈ ಕಾಡುಗಳಲ್ಲಿ ಕಾಡಾನೆ, ಚಿರತೆ ಸೇರಿದಂತೆ ವನ್ಯಜೀವಿಗಳ ತಿರುಗಾಟವಿರುವುದರಿಂದ ರಾತ್ರಿ ಸಂಚಾರ ಅಪಾಯಕಾರಿ.&lt;/li&gt;&lt;/ul&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/charmadi-ghat-travel-advisory-landslides-heavy-rain-alert-gdp-4x64grd"/>
        </item>
        <item>
            <title><![CDATA[Kalasa Bridge: ಇಂಜಿನಿಯರ್ ತಪ್ಪಿಗೆ ಜೀವ ಪಣಕ್ಕಿಟ್ಟ ಗ್ರಾಮಸ್ಥರು: ಜಾಗೃತಿ ಮೂಡಿಸುತ್ತಿರುವ ಪಿಎಸ್‌ಐ]]></title>
            <link>https://kannada.asianetnews.com/karnataka-districts/kalasa-bridge-issue-psi-warns-villagers-over-dangerous-footbridge-gvd/articleshow-63eno9g</link>
            <guid isPermaLink="true">https://kannada.asianetnews.com/karnataka-districts/kalasa-bridge-issue-psi-warns-villagers-over-dangerous-footbridge-gvd/articleshow-63eno9g</guid>
            <pubDate>Mon, 06 Jul 2026 20:52:33 +0530</pubDate>
            <description><![CDATA[&lt;p&gt;ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್&zwnj;ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww08vpn14scnfxa049tntf6,imgname-nikn-1783351242453.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜು.06): &lt;/strong&gt;ಸರ್ಕಾರಿ ಹಣ ಖರ್ಚು ಮಾಡಿ ನಿರ್ಮಿಸಿರುವ ಹೊಸ ಸೇತುವೆ ಇದ್ದರೂ, ಅದನ್ನು ಬಳಸದ ಗ್ರಾಮಸ್ಥರು ಜೀವದ ಹಂಗು ತೊರೆದು ಪಕ್ಕದಲ್ಲೇ ನಿರ್ಮಿಸಿಕೊಂಡಿರುವ ತಾತ್ಕಾಲಿಕ ಕಾಲುಸಂಕದ ಮೂಲಕವೇ ಸಂಚಾರ ನಡೆಸುತ್ತಿರುವ ವಿಚಿತ್ರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಎಸ್.ಕೆ. ಮೇಗಲ್-ಕೊನೆಗೂಡು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಸ್ವತಃ ಕಳಸ ಪೊಲೀಸ್ ಠಾಣೆಯ ಪಿಎಸ್&zwnj;ಐ ಕೈಗೊಂಡಿರುವುದು ಗಮನ ಸೆಳೆಯುತ್ತಿದೆ.&lt;/p&gt;&lt;p&gt;&lt;strong&gt;ಸೇತುವೆ ಬಳಸುವುದು ಅಸಾಧ್ಯ&lt;/strong&gt;&lt;/p&gt;&lt;p&gt;ಹೊಸ ಸೇತುವೆಯ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪ. ಸೇತುವೆ ನಿರ್ಮಾಣವಾದರೂ ಎರಡೂ ಬದಿಯ ಸಂಪರ್ಕ ರಸ್ತೆ ಹಾಗೂ ಸೈಡ್&zwnj;ವಾಲ್ ಕಾಮಗಾರಿ ಇನ್ನೂ ಅಪೂರ್ಣವಾಗಿದ್ದು, ಭಾರೀ ಮಳೆಯಿಂದ ರಸ್ತೆ ಸಂಪೂರ್ಣ ಕೆಸರಿನ ಮಯವಾಗಿದೆ. ಮಂಡಿವರೆಗೂ ಕೆಸರು ನಿಂತಿರುವ ಕಾರಣ ಸೇತುವೆ ಬಳಸುವುದು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕುಸಿಯುವ ಅಪಾಯ&lt;/strong&gt;&lt;/p&gt;&lt;p&gt;ಇದರಿಂದ ಬೇಸತ್ತ ಗ್ರಾಮಸ್ಥರು ಹೊಸ ಸೇತುವೆಯ ಪಕ್ಕದಲ್ಲೇ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡು ಅದರ ಮೂಲಕವೇ ಸಂಚಾರ ನಡೆಸುತ್ತಿದ್ದಾರೆ. ಆದರೆ ನಿರಂತರ ಮಳೆಯಿಂದ ಕಾಲುಸಂಕದ ಎರಡೂ ಬದಿಯ ಮಣ್ಣು ಕೊಚ್ಚಿಹೋಗುತ್ತಿದ್ದು, ಯಾವುದೇ ಕ್ಷಣದಲ್ಲಿ ಅದು ಕುಸಿಯುವ ಅಪಾಯ ಎದುರಾಗಿದೆ. ಆದರೂ ಬೇರೆ ದಾರಿ ಇಲ್ಲದ ಕಾರಣ ಜನರು ಅದೇ ಮಾರ್ಗವನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;&lt;strong&gt;ಬಳಸಲು ಸಾಧ್ಯವಿಲ್ಲ&lt;/strong&gt;&lt;/p&gt;&lt;p&gt;ಈ ಅಪಾಯವನ್ನು ಮನಗಂಡ ಕಳಸ ಪಿಎಸ್&zwnj;ಐ ಮಳೆಯ ನಡುವೆಯೇ ಗ್ರಾಮದ ಮನೆ ಮನೆಗೆ ತೆರಳಿ, ಜೀವದ ಹಂಗು ತೊರೆದು ಕಾಲುಸಂಕ ಬಳಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಹೊಸ ಸೇತುವೆಯನ್ನೇ ಬಳಸುವಂತೆ ಮನವರಿಕೆ ಮಾಡಿಕೊಡುತ್ತಿದ್ದರೂ, ಸೇತುವೆಗೆ ಸಮರ್ಪಕ ರಸ್ತೆ ಹಾಗೂ ಉಳಿದ ಕಾಮಗಾರಿ ಪೂರ್ಣಗೊಳ್ಳುವವರೆಗೂ ಅದನ್ನು ಬಳಸಲು ಸಾಧ್ಯವಿಲ್ಲ ಎಂಬುದು ಗ್ರಾಮಸ್ಥರ ವಾದವಾಗಿದೆ.&lt;/p&gt;&lt;h2&gt;&lt;strong&gt;ಅಪಾಯದ ಅಂಚಿನಲ್ಲಿ ಕಾಲುಸಂಕ&lt;/strong&gt;&lt;/h2&gt;&lt;p&gt;ಒಂದೆಡೆ ಇಂಜಿನಿಯರಿಂಗ್ ನಿರ್ಲಕ್ಷ್ಯದಿಂದ ಅರ್ಧಕ್ಕೆ ನಿಂತ ಕಾಮಗಾರಿ, ಮತ್ತೊಂದೆಡೆ ಅಪಾಯದ ಅಂಚಿನಲ್ಲಿರುವ ಕಾಲುಸಂಕ. ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಜನರ ಜೀವವೇ ಪಣಕ್ಕಿಟ್ಟಿರುವ ಈ ಪರಿಸ್ಥಿತಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಗ್ರಾಮಸ್ಥರ ಬೇಡಿಕೆ ಒಂದೇ - ಸೇತುವೆಯ ಉಳಿದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kalasa-bridge-issue-psi-warns-villagers-over-dangerous-footbridge-gvd/articleshow-63eno9g"/>
        </item>
        <item>
            <title><![CDATA[NASA ಜೊತೆ ಕೈಜೋಡಿಸಿದ ಕರ್ನಾಟಕದ ಸ್ಪೇಸ್ ಸ್ಟಾರ್; ಕನ್ನಡ ಮಣ್ಣಿನ ಅಪ್ರತಿಮ ಪ್ರತಿಭೆಯ ಸಾಹಸದ ಕತೆ..!]]></title>
            <link>https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1</link>
            <guid isPermaLink="true">https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1</guid>
            <pubDate>Mon, 06 Jul 2026 15:59:18 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್&zwnj;ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvez147yp9zs19vq65nt975,imgname-awais-ahmed-nasa--6--1783333094535.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನ ಆಲ್ದೂರು ಗ್ರಾಮದ ಅವೈಸ್ ಅಹ್ಮದ್, ತಮ್ಮ 'Pixxel' ಸ್ಟಾರ್ಟ್&zwnj;ಅಪ್ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಇಂಟರ್ನೆಟ್ ಸೌಲಭ್ಯವಿಲ್ಲದ ಹಳ್ಳಿಯಿಂದ ಬಂದು, ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಖಾಸಗಿ ಸಂಸ್ಥೆ ಆಗಿದೆ.&lt;/p&gt;&lt;img&gt;&lt;p&gt;ಕನಸು ಕಾಣಲು ಬಡತನ ಅಡ್ಡಿಯಾಗಬಾರದು, ಗುರಿ ತಲುಪಲು ಅಡೆತಡೆಗಳು ಎದುರಾದಾಗ ಎದೆಗುಂದಬಾರದು ಎನ್ನುವುದಕ್ಕೆ ಚಿಕ್ಕಮಗಳೂರಿನ ಈ ಯುವಕನೇ ಸಾಕ್ಷಿ. ಹಳ್ಳಿಯೊಂದರಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ ಬೆಳೆದ ಯುವಕ ಇಂದು ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರೇ ಅವೈಸ್ ಅಹ್ಮದ್. ಅವರ ನೇತೃತ್ವದ 'Pixxel' ಸಂಸ್ಥೆ ಈಗ ಜಗತ್ತಿನ ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆ 'NASA' ಜೊತೆ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ತಾಲೂಕಿನ ಆಲ್ದೂರು ಎಂಬ ಪುಟ್ಟ ಗ್ರಾಮದವರಾದ ಅವೈಸ್ ಅಹ್ಮದ್ ಪಯಣ ಸುಲಭದ್ದಾಗಿರಲಿಲ್ಲ. ಬಾಲ್ಯದಲ್ಲಿ ಇಂಟರ್ನೆಟ್ ಸಂಪರ್ಕವೂ ಸರಿಯಾಗಿಲ್ಲದ ಹಳ್ಳಿಯಲ್ಲಿ ಬೆಳೆದ ಈ ಹುಡುಗನಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಅಪಾರ ಆಸಕ್ತಿ. ಮಗನ ದೊಡ್ಡ ಕನಸಿಗೆ ಪೋಷಕರು ಬೆನ್ನೆಲುಬಾಗಿ ನಿಂತರು. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಮಗನ ಶಿಕ್ಷಣಕ್ಕಾಗಿ ಸಾಲ ಮಾಡಿದರು, ಮನೆಯಲ್ಲಿದ್ದ ಚಿನ್ನವನ್ನು ಅಡವಿಟ್ಟರು. ಪೋಷಕರ ಈ ತ್ಯಾಗ ಇಂದು ವಿಶ್ವಮಟ್ಟದಲ್ಲಿ ಪ್ರತಿಫಲ ನೀಡಿದೆ.&lt;/p&gt;&lt;img&gt;&lt;p&gt;ಅವೈಸ್ ಅಹ್ಮದ್ ಬಿಟ್ಸ್ ಪಿಲಾನಿ (BITS Pilani) ಸಂಸ್ಥೆಯಲ್ಲಿ ಓದುತ್ತಿದ್ದಾಗಲೇ ಏನಾದರೂ ಹೊಸತು ಮಾಡಬೇಕೆಂಬ ಹಂಬಲ ಹೊಂದಿದ್ದರು. ಈ ಆಲೋಚನೆಯ ಫಲವೇ 'Pixxel'. ವಿದ್ಯಾರ್ಥಿಯಾಗಿದ್ದಾಗಲೇ ಈ ಸ್ಟಾರ್ಟ್&zwnj;ಅಪ್&zwnj;ಗೆ ಚಾಲನೆ ನೀಡಿದ ಅವರು, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಕ್ರಾಂತಿ ಮಾಡಲು ಮುಂದಾದರು. ಇಸ್ರೋ (ISRO) ಸಹಯೋಗದೊಂದಿಗೆ ಬೆಳೆದ ಈ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಅವೈಸ್ ಅಹ್ಮದ್ ಅವರ ಸಾಧನೆಯ ಕಿರೀಟಕ್ಕೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಖಾಸಗಿ ಸ್ಪೇಸ್ ಸ್ಟಾರ್ಟ್&zwnj;ಅಪ್ ಎಂಬ ಹೆಗ್ಗಳಿಕೆಗೆ Pixxel ಪಾತ್ರವಾಗಿದೆ.&lt;/p&gt;&lt;p&gt;ಇದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ವಿಷಯ.&lt;/p&gt;&lt;img&gt;&lt;ul&gt; &lt;li&gt;ಇದುವರೆಗೆ 9 ಅತ್ಯಾಧುನಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.&lt;/li&gt; &lt;li&gt;ಜಾಗತಿಕ ಹೂಡಿಕೆದಾರರಿಂದ ಸುಮಾರು 960 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಈ ಸಂಸ್ಥೆ ಪಡೆದಿದೆ.&lt;/li&gt; &lt;li&gt;ಇಂದು ಈ ಸಂಸ್ಥೆಯಲ್ಲಿ ಜಾಗತಿಕ ಮಟ್ಟದ 275ಕ್ಕೂ ಹೆಚ್ಚು ಪರಿಣಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.&lt;/li&gt;&lt;/ul&gt;&lt;h2&gt;&amp;nbsp;&lt;/h2&gt;&lt;h2&gt;&lt;strong&gt;ಯುವಜನತೆಗೆ ಸ್ಫೂರ್ತಿ&lt;/strong&gt;&lt;/h2&gt;&lt;p&gt;ಗ್ರಾಮೀಣ ಭಾಗದ ಪ್ರತಿಭೆಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಅವೈಸ್ ಅಹ್ಮದ್ ಅವರ ಈ ಪಯಣವೇ ಸಾಕ್ಷಿ. ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದ ಯಶಸ್ವಿ ಉದ್ಯಮಿಯವರೆಗೆ ಅವರ ಈ ಜರ್ನಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.&lt;/p&gt;&lt;img&gt;&lt;p&gt;ತಮ್ಮ ಪೋಷಕರ ತ್ಯಾಗಕ್ಕೆ ವಿಶ್ವಮಟ್ಟದ ಸಾಧನೆಯ ಮೂಲಕ ಗೌರವ ತಂದಿರುವ ಅವೈಸ್ ಅಹ್ಮದ್, ಇಂದು ಕಾಫಿನಾಡು ಚಿಕ್ಕಮಗಳೂರಿನ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿದ್ದಾರೆ. ಅವರ ಈ ಪಯಣ ಇನ್ನೂ ಎತ್ತರಕ್ಕೆ ಬೆಳೆಯಲಿ, ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಿಸಲಿ ಎಂಬುದು ನಮ್ಮ ಆಶಯ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/chikkamagalur/story-about-space-star-awais-ahmed-space-startup-pixxel-bags-nasa-contract-gkn-7unbia1"/>
        </item>
        <item>
            <title><![CDATA[Kadur: ಶತಮಾನದ ಬಳಿಕ ಪೊಲೀಸರ ಬಿಗಿ ಭದ್ರತೆಯಲ್ಲಿ ಹನುಮ ದೇಗುಲ ಪ್ರವೇಶಿಸಿದ ದಲಿತರು]]></title>
            <link>https://kannada.asianetnews.com/karnataka-districts/chikkamagaluru-kadur-dalits-enter-sri-anjaneyaswamy-temple-in-nidaghatta-after-century-under-tight-police-security-mrq/articleshow-86hmz1g</link>
            <guid isPermaLink="true">https://kannada.asianetnews.com/karnataka-districts/chikkamagaluru-kadur-dalits-enter-sri-anjaneyaswamy-temple-in-nidaghatta-after-century-under-tight-police-security-mrq/articleshow-86hmz1g</guid>
            <pubDate>Wed, 01 Jul 2026 08:11:41 +0530</pubDate>
            <description><![CDATA[&lt;p&gt;ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಶತಮಾನದ ನಂತರ ದಲಿತರು ಪ್ರವೇಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ತಾಲೂಕು ಆಡಳಿತ ಮತ್ತು ಪೊಲೀಸ್ ಬಂದೋಬಸ್ತ್&zwnj;ನಲ್ಲಿ, ಮೇಲ್ವರ್ಗದವರ ಸಹಕಾರದೊಂದಿಗೆ ಈ ದೇವಾಲಯ ಪ್ರವೇಶವು ಶಾಂತಿಯುತವಾಗಿ ನಡೆದು, ದಲಿತ ಸಮುದಾಯದ ಶತಮಾನದ ಕನಸು ನನಸಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwdrgd64gsvdn7vpv4qz10pm,imgname-hanuma-temple-1782873339076.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡಿ ಹೊಸ ಇತಿಹಾಸ ನಿರ್ಮಾಣಕ್ಕೆ ನಾಂದಿ ಹಾಡಿದ್ದಕ್ಕೆ ತಾಲೂಕು ಆಡಳಿತ ಸಾಕ್ಷಿಯಾಯಿತು.&lt;/p&gt;&lt;p&gt;ಈ ಸಂಬಂಧ ಮಂಗಳವಾರ ನಿಡಘಟ್ಟ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ನೂರಾರು ದಲಿತ ಕುಟುಂಬಗಳು ಇವೆ. ಆದರೆ ಶತಮಾನ ಸಂದಿದ್ದರೂ ಕೂಡ ದಲಿತರಿಗೆ ದೇವಾಲಯ ಪ್ರವೇಶಿಸುವ ಅವಕಾಶ ನೀಡಿಕೆ ಕನಸಾಗಿತ್ತು. ಆದರೆ ಸಮುದಾಯಕ್ಕೆ ಇದ್ದ ನೋವು ಶ್ರೀ ಆಂಜನೇಯಸ್ವಾಮಿ ದೇವಾಲಯ ಪ್ರವೇಶಿಸುವ ಮೂಲಕ ನಿವಾರಣೆ ಆಗುವ ಮೂಲಕ ಕಟ್ಟಳೆ ಮುರಿದು ದೇವಾಲಯ ಪ್ರವೇಶಿಸಿದ ದಲಿತರ ಶತಮಾನದ ಕನಸು ನನಸಾದಂತಾಗಿದೆ.&lt;/p&gt;&lt;h2&gt;&lt;strong&gt;ತಹಶೀಲ್ದಾರ್&zwnj;ಗೆ ಮನವಿ ಸಲ್ಲಿಕೆ&lt;/strong&gt;&lt;/h2&gt;&lt;p&gt;ಮಂಗಳವಾರ ಬೆಳಿಗ್ಗೆ ನೂರಾರು ದಲಿತರು ತಮ್ಮ ಮುಖಂಡರೊಂದಿಗೆ ನಿಢಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಜಮಾಯಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ನಿಡಘಟ್ಟ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ನೂರಾರು ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೆಲ ದಿನಗಳ ಹಿಂದೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎನ್ನಲಾಗಿದೆ.&lt;/p&gt;&lt;p&gt;ಈ ನಿಟ್ಟಲ್ಲಿ ತರೀಕೆರೆ ಡಿವೈಎಸ್ಪಿ. ತಾಲೂಕು ಆಡಳಿತದಿಂದ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ಕಂದಾಯ ಇಲಾಖೆಯ ಅಧಿಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.&lt;/p&gt;&lt;h3&gt;&lt;strong&gt;ಪೊಲೀಸರ ಬಂದೋಬಸ್ತ್&zwnj;ನಲ್ಲಿ ದೇಗಲು ಪ್ರವೇಶ&lt;/strong&gt;&lt;/h3&gt;&lt;p&gt;ವೃತ್ತ ನಿರೀಕ್ಷಕ ಎಂ.ರಫೀಕ್, ಸಖರಾಯಪಟ್ಟಣದ ಪಿಎಸೈ ಪವನ್, ಸೇರಿದಂತೆ ಗಲಾಟೆಗೆ ಆಸ್ಪದ ನೀಡದಂತೆ ನೂರಾರು ಪೋಲೀಸರ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ತಾಲೂಕು ಆಡಳಿತ ಮತ್ತು ಮೇಲ್ವರ್ಗದ ಸಮುದಾಯಗಳ ಸಮ್ಮುಖದಲ್ಲಿ ನೂರಾರು ದಲಿತರು ದೇವಾಲಯ ಪ್ರವೇಶಿಸಿ ಶ್ರೀ ಸ್ವಾಮಿಯವರಿಗೆ ಪೂಜೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;ದಲಿತ ಮುಖಂಡರಾದ ವೈ.ಟಿ ಗೋವಿಂದಪ್ಪ ರಾಘವೇಂದ್ರ, ಬಾಣೂರು ಸುರೇಶ್, ಕಡೂರಿನ ಪ್ರಮೋದ, ಭಾಣೂರು ನಾಗಣ್ಣ, ವೈಮಲ್ಲಾಪುರದ ತಮ್ಮಯ್ಯ, ಬಾಸೂರು ಪ್ರಸನ್ನ, ಗೋಪಾಲ್, ಜಯಣ್ಣ, ಕೆದಿಗೆರೆ ಚಂದ್ರಪ್ಪ ಮತ್ತಿತರು ಇದ್ದರು.&lt;/p&gt;&lt;p&gt;ಮೇಲ್ವರ್ಗದವರು ಕೂಡ ಯಾವುದೇ ಪ್ರತಿರೋಧ ತೋರಿಸದೆ ಸಹಕರಿಸುವ ಮೂಲಕ ದಲಿತರ ದೇವಾಲಯ ಪ್ರವೇಶವು ಐತಿಹಾಸಿಕವಾಗಿ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಗಮನ ಸೆಳೆದಿದೆ.&lt;/p&gt;&lt;p&gt;ಕಳೆದ 20 ದಿನಗಳ ಹಿಂದೆ ದಲಿತ ಮುಖಂಡರು ನಿಡಘಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಪ್ರವೇಶಕ್ಕೆೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದರು. ಈ ಬಗ್ಗೆ ನಾವು ಪೂರ್ವಬಾವಿ ಸಭೆ ಮಾಡಿಕೊಂಡಿದ್ದೆವು, ಇದಕ್ಕೆ ಮೇಲ್ವರ್ಗದ ಯಾರೂ ಹಸ್ತಕ್ಷೇಪ ಮಾಡಲಿಲ್ಲ. ನೀವುಗಳೇ ಬಂದು ಪ್ರವೇಶಕ್ಕೆ ಅನುವು ಮಾಡಿಕೊಡುವಂತೆ ಕೋರಿದ್ದರು. ಅದರಂತೆ ತಾವು ಹೋಗಿದ್ದು ಸಂವಿಧಾನ ಬದ್ದವಾಗಿ ಎಲ್ಲ ವರ್ಗಗಳು ಸೌಹಾರ್ಧತೆಯಿಂದ ನಡೆದುಕೊಂಡು ಹೋಗುವಂತೆ ತಿಳಿಸಲಾಗಿದೆ.&lt;/p&gt;&lt;p&gt;&lt;strong&gt;ಸಿ.ಎಸ್.ಪೂರ್ಣಿಮಾ ತಹಸೀಲ್ದಾರ್, ಕಡೂರು&lt;/strong&gt;&lt;/p&gt;&lt;p&gt;ಅನೇಕ ವರ್ಷಗಳ ಹೋರಾಟದ ಬಳಿಕ ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಸಿಕ್ಕಿದೆ. ನೀವು ಯಾವುದೇ ಗೊಂದಲಕ್ಕೆ ಆಸ್ಪದ ನೀಡದಂತೆ ಪೂಜೆ ಸಲ್ಲಿಸಬಹುದು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶವು ನನಸಾಗಿದೆ. ಎಲ್ಲ ವರ್ಗಗಳೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಶೂದ್ರ ಶ್ರೀನಿವಾಸ್ ರಾಜ್ಯಾಧ್ಯಕ್ಷ, ಭ್ಲೂ ಆರ್ಮಿ ಸಂಘಟನೆ&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkamagaluru-kadur-dalits-enter-sri-anjaneyaswamy-temple-in-nidaghatta-after-century-under-tight-police-security-mrq/articleshow-86hmz1g"/>
        </item>
        <item>
            <title><![CDATA[ಮಲೆನಾಡಿನಲ್ಲಿ ಭಾರೀ ಮಳೆ ಆರ್ಭಟ; ಚಿಕ್ಕಮಗಳೂರಿನ ಈ ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ತಹಸೀಲ್ದಾರ್!]]></title>
            <link>https://kannada.asianetnews.com/karnataka-districts/chikkamagaluru-kalasa-taluk-primary-school-holiday-announced-western-ghat-heavy-rain/articleshow-bcguktn</link>
            <guid isPermaLink="true">https://kannada.asianetnews.com/karnataka-districts/chikkamagaluru-kalasa-taluk-primary-school-holiday-announced-western-ghat-heavy-rain/articleshow-bcguktn</guid>
            <pubDate>Mon, 06 Jul 2026 19:29:53 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆಗಾಗಿ ಜಿಲ್ಲಾಡಳಿತವು ಜುಲೈ 7 ರಂದು ಪ್ರಾಥಮಿಕ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwexq061yhgxbwyeqwt28hj8,imgname-karnataka-rain-school-holiday-1782912352449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜು.06): ಮ&lt;/strong&gt;ಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಮಹತ್ವದ ನಿರ್ಧಾರ ಕೈಗೊಂಡಿದೆ.&lt;/p&gt;&lt;h2&gt;&lt;strong&gt;ನಾಳೆ ಒಂದು ದಿನ ರಜೆ&lt;/strong&gt;&lt;/h2&gt;&lt;p&gt;ಜುಲೈ 7ರಂದು (ನಾಳೆ) ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಹಾಗೂ 1ನೇ ತರಗತಿಯಿಂದ 7ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ರಜೆ ನೀಡಿ ಕಳಸ ತಹಸಿಲ್ದಾರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ವಹಿಸಲಾಗಿದೆ.&lt;/p&gt;&lt;p&gt;ಪೋಷಕರು ತಮ್ಮ ಮಕ್ಕಳನ್ನು ನದಿ ಹಾಗೂ ಹಳ್ಳಗಳ ಹತ್ತಿರ ಬಿಡದಂತೆ ಮತ್ತು ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಸೂಚಿಸಿದೆ. ಮಳೆ ಹೀಗೆಯೇ ಮುಂದುವರಿದರೆ ರಜೆಯನ್ನು ವಿಸ್ತರಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-kalasa-taluk-primary-school-holiday-announced-western-ghat-heavy-rain/articleshow-bcguktn"/>
        </item>
        <item>
            <title><![CDATA[Chikkamagaluru: ದತ್ತಪೀಠದ ತಪ್ಪಲು ಮಾಣಿಕ್ಯಧಾರಾ ರಸ್ತೆಯಲ್ಲೂ ಅಕ್ರಮ ಗೋರಿ, ಹಸಿರು ಚಾದರ ಪತ್ತೆ! ಹಿಂದೂಗಳ ಆಕ್ರೋಶ]]></title>
            <link>https://kannada.asianetnews.com/gallery/karnataka-districts/chikkamagaluru-dattapeetha-new-controversy-construct-illegal-tombs-at-manikhyadhara-cgnv52i</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-dattapeetha-new-controversy-construct-illegal-tombs-at-manikhyadhara-cgnv52i</guid>
            <pubDate>Mon, 29 Jun 2026 22:06:41 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಮತ್ತೆ ವಿವಾವ ಆರಂಭ. ದತ್ತಪೀಠದಿಂದ ಮಾಣಿಕ್ಯಧಾರಕ್ಕೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆಗ್ರಹಿಸಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwa3actj4eebb1xmth2nhp0q,imgname-manikhyadhara-illegal-tombs--2--1782750458706.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಮತ್ತೆ ವಿವಾವ ಆರಂಭ. ದತ್ತಪೀಠದಿಂದ ಮಾಣಿಕ್ಯಧಾರಕ್ಕೆ ಹೋಗುವ ದಾರಿಯಲ್ಲಿ ಅಕ್ರಮವಾಗಿ ಗೋರಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ನ್ಯಾಯಾಲಯದ ಆದೇಶ ಉಲ್ಲಂಘನೆಯಾಗುತ್ತಿದ್ದು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆಗ್ರಹಿಸಿವೆ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಕಾಫಿನಾಡಿನ ಧಾರ್ಮಿಕ ಕ್ಷೇತ್ರ 'ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ' (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು ಹೊಸ ವಿವಾದ ಮುನ್ನೆಲೆಗೆ ಬಂದಿದೆ. ದತ್ತಪೀಠದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ಯಧಾರಕ್ಕೆ ತೆರಳುವ ಮಾರ್ಗ ಮಧ್ಯೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಿಂದೂ ಸಂಘಟನೆಗಳು ಗಂಭೀರ ಆರೋಪ ಮಾಡಿವೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಹೊಸ ವಿವಾದ?&lt;/strong&gt;&lt;/p&gt;&lt;p&gt;ದತ್ತಪೀಠದಿಂದ ಮಾಣಿಕ್ಯಧಾರಕ್ಕೆ ಹೋಗುವ ದಾರಿಯಲ್ಲಿರುವ ಮರಗಳ ಕೆಳಗೆ ಹಸಿರು ಚಾದರಗಳನ್ನು ಹೊದಿಸಿ, ಅಲ್ಲಿ ಹೊಸದಾಗಿ ಗೋರಿಗಳನ್ನು ನಿರ್ಮಾಣ ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬುದು ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳ ವಾದ. ಈ ಮಾರ್ಗ ಮಧ್ಯೆ ಅನಧಿಕೃತವಾಗಿ ಇಸ್ಲಾಂ ಧರ್ಮದ ಕುರುಹುಗಳನ್ನು ಸೃಷ್ಟಿಸಲಾಗುತ್ತಿದೆ ಮತ್ತು ಹೊಸ ಆಚರಣೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಸಂಘಟನೆಗಳು ದೂರಲಿವೆ.&lt;/p&gt;&lt;img&gt;&lt;p&gt;ಜಿಲ್ಲಾಡಳಿತದ ವಿರುದ್ಧ ಅಸಮಾಧಾನ:&lt;/p&gt;&lt;p&gt;ಈ ಕುರಿತು ಮಾತನಾಡಿರುವ ಬಜರಂಗದಳದ ಮುಖಂಡ ರಘು ಸಕಲೇಶಪುರ, 'ಧಾರ್ಮಿಕ ದತ್ತಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಕಣ್ಣೆದುರೇ ಈ ಅಕ್ರಮಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ ದತ್ತಪೀಠದ ವ್ಯಾಪ್ತಿಯಲ್ಲಿ ಯಾವುದೇ ಹೊಸ ಆಚರಣೆಗಳಿಗೆ ಅಥವಾ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೆ, ಕೋರ್ಟ್ ಆದೇಶವನ್ನು ಇಲ್ಲಿ ಗಾಳಿಗೆ ತೂರಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ನ್ಯಾಯಾಲಯದ ಆದೇಶ ಪಾಲನೆಗೆ ಆಗ್ರಹ:&lt;/strong&gt;&lt;/p&gt;&lt;p&gt;ದತ್ತಪೀಠದ ಉಮೇದುವಾರಿಕೆಗಾಗಿ ಈಗಾಗಲೇ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸುದೀರ್ಘ ಕಾನೂನು ಹೋರಾಟ ನಡೆಯುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಮಾಣಿಕ್ಯಧಾರದ ಹಾದಿಯಲ್ಲಿ ಅನಧಿಕೃತ ಗೋರಿಗಳ ನಿರ್ಮಾಣಕ್ಕೆ ಅವಕಾಶ ನೀಡುವುದು ಶಾಂತಿ ಕದಡುವ ಕೆಲಸವಾಗಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ, ಹಸಿರು ಚಾದರ ಹೊದಿಸಿ ಪೂಜೆ ಮಾಡುತ್ತಿರುವುದನ್ನು ತಡೆಗಟ್ಟಬೇಕು ಮತ್ತು ಅಕ್ರಮ ಗೋರಿಗಳನ್ನು ತೆರವುಗೊಳಿಸಬೇಕು ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ದತ್ತಪೀಠದ ವಿವಾದವು ಕೇವಲ ಪೀಠಕ್ಕೆ ಸೀಮಿತವಾಗದೆ ಈಗ ಮಾಣಿಕ್ಯಧಾರದ ಮಾರ್ಗಕ್ಕೂ ಹಬ್ಬುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-dattapeetha-new-controversy-construct-illegal-tombs-at-manikhyadhara-cgnv52i"/>
        </item>
        <item>
            <title><![CDATA[ಚಿಕ್ಕಮಗಳೂರು: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು, ಆಫ್ರೀಕಾದಲ್ಲಿ ಯುವತಿ ಆರ್ತನಾದ!]]></title>
            <link>https://kannada.asianetnews.com/gallery/karnataka-districts/chikkamagaluru-hakki-pikki-human-trafficking-parents-sell-daughter-for-rs-7-lakh-in-africa-gdp-g4048gf</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-hakki-pikki-human-trafficking-parents-sell-daughter-for-rs-7-lakh-in-africa-gdp-g4048gf</guid>
            <pubDate>Thu, 16 Jul 2026 12:25:29 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ &amp;nbsp;ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್&zwnj;ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾರೆ. ಯುವತಿಯು ವಿಡಿಯೋ ಮೂಲಕ ಸಹಾಯ ಯಾಚಿಸಿದ ನಂತರ, ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಇದೀಗ ಪಾಪಿ ಪೋಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmtmed8heg21gdqcx5ytvyd,imgname-chikkamagaluru-parents-sell-daughter-in-senegal-africa--3--1784184191400.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ &amp;nbsp;ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್&zwnj;ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾರೆ. ಯುವತಿಯು ವಿಡಿಯೋ ಮೂಲಕ ಸಹಾಯ ಯಾಚಿಸಿದ ನಂತರ, ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಇದೀಗ ಪಾಪಿ ಪೋಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು: ಹಣದ ಆಸೆಗಾಗಿ ಹೆತ್ತ ಮಗಳನ್ನೇ ಪೋಷಕರು ವಿದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿರುವ ಅಮಾನುಷ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ವಿದೇಶಕ್ಕೆ ಕರೆದೊಯ್ದು, ಸ್ವಂತ ಮಗಳನ್ನೇ ಜೀವಾಳ ಬಲಿಗೊಟ್ಟ ಪಾಪಿ ಪೋಷಕರ ಕೃತ್ಯ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದ 20 ವರ್ಷದ ಯುವತಿ ನಂದಿತಾಳನ್ನು ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ಸ್ಥಳೀಯರ ಸಹಾಯದಿಂದ ಇದೀಗ ಯಶಸ್ವಿಯಾಗಿ ರಕ್ಷಿಸಲಾಗಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಸಮೀಪವಿರುವ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಮತ್ತು ರಾಜಶೇಖರ್ ಎಂಬ ದಂಪತಿಗೆ ನಂದಿತಾ (20) ಎಂಬ ಮಗಳಿದ್ದಾಳೆ. ಮೂಲ ಬುಡಕಟ್ಟು ಸಮುದಾಯಕ್ಕೆ ಸೇರಿದ ಈ ಕುಟುಂಬವು ಗಿಡಮೂಲಿಕೆ ಮತ್ತು ಸಾಂಪ್ರದಾಯಿಕ ಔಷಧ ವ್ಯಾಪಾರಕ್ಕಾಗಿ ಸುಮಾರು 4 ತಿಂಗಳ ಹಿಂದಷ್ಟೇ ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶಕ್ಕೆ ತೆರಳಿತ್ತು.&lt;/p&gt;&lt;img&gt;&lt;p&gt;ತಮ್ಮೊಂದಿಗೆ ಮಗಳು ನಂದಿತಾಳನ್ನು ಕರೆದೊಯ್ದಿದ್ದ ಪೋಷಕರು, ಕೇವಲ 10 ದಿನಗಳ ಹಿಂದೆ ತೀವ್ರ ಹಣದ ಆಸೆಗೆ ಬಿದ್ದು, ಅಲ್ಲಿನ ವೇಶ್ಯಾವಾಟಿಕೆ ದಂಧೆಕೋರರಿಗೆ ಬರೋಬ್ಬರಿ ₹7 ಲಕ್ಷ ರೂಪಾಯಿಗೆ ಮಗಳನ್ನೇ ಮಾರಾಟ ಮಾಡಿದ್ದರು. ಮಗಳನ್ನು ಮಾರಾಟ ಮಾಡಿದ ಬಳಿಕ ಭಾರತಕ್ಕೆ ಮರಳಿದ್ದ ಈ ಕಟುಕ ಪೋಷಕರು, &quot;ಮಗಳು ಭಾರತಕ್ಕೆ ಮರಳಿದ್ದಾಳೆ, ನಮಗಿಂತ ಮೊದಲೇ ಊರಿಗೆ ಹೋಗಿದ್ದಾಳೆ&quot; ಎಂದು ಸ್ಥಳೀಯರ ಬಳಿ ಸುಳ್ಳು ಕಥೆ ಕಟ್ಟಿ ನಂಬಿಸಲು ಯತ್ನಿಸಿದ್ದರು.&lt;/p&gt;&lt;img&gt;&lt;p&gt;ಮಗಳನ್ನು ದಂಧೆಗೆ ತಳ್ಳಿದ ಬಳಿಕ ಭಾರತಕ್ಕೆ ಮರಳಿದ್ದ ಈ ಪೋಷಕರು, ತಮ್ಮ ಪಾಪದ ಕೃತ್ಯವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದರು. ಯಾರಾದರೂ ಮಗಳ ಬಗ್ಗೆ ವಿಚಾರಿಸಿದರೆ, &quot;ಮಗಳು ಭಾರತಕ್ಕೆ ವಾಪಸ್ ಹೋಗಿದ್ದಾಳೆ&quot; ಎಂದು ಸುಳ್ಳಿನ ಕಥೆ ಕಟ್ಟಿ ಎಲ್ಲರನ್ನೂ ನಂಬಿಸಲು ಯತ್ನಿಸಿದ್ದರು. ವಿದೇಶದಲ್ಲಿ ನರಕಯಾತನೆ ಅನುಭವಿಸುತ್ತಿದ್ದ ನಂದಿತಾ, ಧೈರ್ಯಗೆಡದೆ ಕಷ್ಟಪಟ್ಟು ಸೆನೆಗಲ್&zwnj;ನಿಂದಲೇ ತನಗೆ ಪರಿಚಯವಿದ್ದವರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾಳೆ. ತಂದೆ-ತಾಯಿಯೇ ಹಣಕ್ಕಾಗಿ ತನ್ನನ್ನು ವೇಶ್ಯಾವಾಟಿಕೆಗೆ ಮಾರಾಟ ಮಾಡಿರುವ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಅಷ್ಟೇ ಅಲ್ಲದೆ, ತನಗೆ ಆಗಿರುವ ಅನ್ಯಾಯ ಮತ್ತು ಅಲ್ಲಿ ತಾನು ಅನುಭವಿಸುತ್ತಿರುವ ಚಿತ್ರಹಿಂಸೆಯ ಬಗ್ಗೆ ವಿಡಿಯೋ ಮಾಡಿ ತಾಯ್ನಾಡಿಗೆ ಕಳುಹಿಸಿಕೊಟ್ಟಿದ್ದಾಳೆ. ಈ ವಿಡಿಯೋ ಊರಿನ ಪರಿಚಯಸ್ಥರ ಕೈ ತಲುಪುತ್ತಿದ್ದಂತೆ ಇಡೀ ಹಕ್ಕಿಪಿಕ್ಕಿ ಕಾಲೋನಿಯ ಜನ ದಿಗ್ಭ್ರಮೆಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಯುವತಿಯ ವಿಡಿಯೋ ಮತ್ತು ಸಂದೇಶ ತಲುಪುತ್ತಿದ್ದಂತೆ ಎಚ್ಚೆತ್ತ ಸ್ಥಳೀಯರು ಹಾಗೂ ಸಂಘಟನೆಯವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ (Indian Embassy) ವಿಷಯ ಮುಟ್ಟಿಸಿ, ಸೆನಗಲ್&zwnj;ನ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ನಂದಿತಾಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ತಮ್ಮ ಮಗಳನ್ನು ರಕ್ಷಿಸಿರುವ ವಿಷಯ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಕ್ರಾಂತಿ ಮತ್ತು ರಾಜಶೇಖರ್ ದಂಪತಿ ಸದ್ದಿಲ್ಲದೆ ಊರಿಗೆ ಮರಳಿದ್ದಾರೆ. ಸದ್ಯ ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಂದಿತಾಗೆ ಸೂಕ್ತ ನ್ಯಾಯ ಕೊಡಿಸಬೇಕು ಮತ್ತು ಆಕೆಯನ್ನು ಈ ನರಕಕ್ಕೆ ತಳ್ಳಿದ ಹೆತ್ತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಈ ಸಂಬಂಧ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಮುಖಂಡರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (SP) ಅಧಿಕೃತವಾಗಿ ದೂರು ಪತ್ರ ಸಲ್ಲಿಸಿದ್ದಾರೆ. ಸದ್ಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/chikkamagaluru-hakki-pikki-human-trafficking-parents-sell-daughter-for-rs-7-lakh-in-africa-gdp-g4048gf"/>
        </item>
        <item>
            <title><![CDATA[ಈ ವರ್ಷ ಮೊದಲ ಬಾರಿಗೆ ತುಂಗಾ & ಭದ್ರಾ ನದಿ ನೀರಿನ ಮಟ್ಟದಲ್ಲಿ ಏರಿಕೆ; ಮಲೆನಾಡಿನಲ್ಲಿ ಮಳೆ]]></title>
            <link>https://kannada.asianetnews.com/gallery/karnataka-districts/chikkamagaluru-rain-water-level-of-tunga-and-bhadra-rivers-rises-for-the-first-time-this-year-mrq-i4rlwix</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-rain-water-level-of-tunga-and-bhadra-rivers-rises-for-the-first-time-this-year-mrq-i4rlwix</guid>
            <pubDate>Tue, 30 Jun 2026 08:19:00 +0530</pubDate>
            <description><![CDATA[&lt;p&gt;ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಶೃಂಗೇರಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿಯ ಕ್ರೇನ್ ಒಂದು ನದಿಯಲ್ಲಿ ಮುಳುಗಡೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwb6evzwv0njbvdeah1v1gkm,imgname-river--3--1782787305468.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಶೃಂಗೇರಿಯಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದ್ದು, ಸೇತುವೆ ಕಾಮಗಾರಿಯ ಕ್ರೇನ್ ಒಂದು ನದಿಯಲ್ಲಿ ಮುಳುಗಡೆಯಾಗಿದೆ.&lt;/p&gt;&lt;img&gt;&lt;p&gt;ಕುದುರೆಮುಖ, ಕೆರೆಕಟ್ಟೆ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಈ ವರ್ಷ ಮೊದಲ ಬಾರಿಗೆ ತುಂಗಾ ನದಿ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಿದ್ದನ್ನು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸೋಮವಾರ ಮಧ್ಯಾಹ್ನದಿಂದಲೂ ಕೆರೆಕಟ್ಟೆ ವ್ಯಾಪ್ತಿಯಲ್ಲಿ ಬಿಡದೆ ಮಳೆ ಸುರಿಯುತ್ತಿರುವುದರಿಂದ ರಾತ್ರೋರಾತ್ರಿ ನದಿಯ ಹರಿವು ಹೆಚ್ಚಾಗಿದೆ. ಸದ್ಯ ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಬಳಿ ತುಂಗಾ ನದಿ ನೀರು ಏರಿಕೆಯಾಗಿದೆ. ಮಳೆ ಹೀಗೆ ಮುಂದುವರಿದ್ರೆ ಪ್ರವಾಹದ ಆತಂಕ ಎದುರಾಗಿದೆ.&lt;/p&gt;&lt;img&gt;&lt;p&gt;ಕಳೆದ 3-4 ದಶಕಗಳ ಬಳಿಕ ಜೂನ್ ತಿಂಗಳ ಕೊನೆಯಲ್ಲೂ ಮಲೆನಾಡು ಭಾಗದಲ್ಲಿ ಬಿರುಬಿಸಿಲು ಕಾಣಿಸಿಕೊಂಡಿತ್ತು. ಈ ವೇಳೆಗಾಗಲೇ ತುಂಬಿ ಹರಿಯಬೇಕಿದ್ದ ನದಿಗಳ ಒಡಲು ಸಂಪೂರ್ಣ ಬರಿದಾಗಿತ್ತು. ಆದರೆ ನಿನ್ನೆಯಿಂದ ಸುರಿಯುತ್ತಿರುವ ಸಾಧಾರಣ ಮಳೆಯು ನದಿಯ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಕಳೆದುಹೋಗಿದ್ದ ಮಳೆಯ ಲಕ್ಷಣಗಳು ಮತ್ತೆ ಮರಳಿರುವುದರಿಂದ, ತುಂಗಾ ನದಿ ನೀರನ್ನೇ ನಂಬಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ರೈತರು ಮತ್ತು ಬೆಳೆಗಾರರಲ್ಲಿ ಸದ್ಯ ಸಂತಸ ಮನೆಮಾಡಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ಐದು ತಾಲೂಕುಗಳಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಭದ್ರಾ ನದಿಯ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ನದಿಯ ಅಬ್ಬರಕ್ಕೆ ಸೇತುವೆ ಕಾಮಗಾರಿ ಕೆಲಸಕ್ಕಾಗಿ ನದಿ ದಡದಲ್ಲಿ ನಿಲ್ಲಿಸಲಾಗಿದ್ದ ಕ್ರೇನ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ.&amp;nbsp;&lt;/p&gt;&lt;p&gt;ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಚಾಲಕ ಕ್ರೇನ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದನು. ಆದರೆ, ಕಳಸ ತಾಲೂಕಿನ ಕುದುರೆಮುಖ ಹಾಗೂ ಶೃಂಗೇರಿಯ ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನದಿಂದ ಸುರಿದ ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ದಿಢೀರ್ ಹೆಚ್ಚಳವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯಲಹಂಕದಲ್ಲಿ ಕೊಯಮತ್ತೂರು-ಮುಂಬೈ ಎಕ್ಸ್&zwnj;ಪ್ರೆಸ್&zwnj; ರೈಲು ನಿಲುಗಡೆ; ಮೆಗಾ ರೈಲ್ವೆ ಟರ್ಮಿನಲ್!&lt;/strong&gt;&lt;/p&gt;&lt;img&gt;&lt;p&gt;ಇಷ್ಟು ದಿನ ಮಳೆಗಾಗಿ ಮುಗಿಲು ನೋಡುತ್ತಿದ್ದ ಮಲೆನಾಡಿನ ರೈತರು ಮತ್ತು ಬೆಳೆಗಾರರ ಮೊಗದಲ್ಲಿ ಈ ಮಳೆ ಮಂದಹಾಸ ಮೂಡಿಸಿದೆ. ಅಂತರ್ಜಲ ವೃದ್ಧಿಗೆ ಈ ರೀತಿಯ ಸಾಧಾರಣ ಮಳೆಯೇ ಸೂಕ್ತ ಎಂದು ಬಯಸುತ್ತಿರುವ ಮಲೆನಾಡಿಗರು ಹಾಗೂ ರೈತ ಸಮೂಹ, ಮಳೆ ಹೀಗೆಯೇ ಮುಂದುವರೆಯಲಿ ಎಂದು ಪ್ರಕೃತಿಯಲ್ಲಿ ಬೇಡಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Belagavi: ವಿವಾಹಿತೆ ಜೊತೆ ಪರಾರಿಯಾದ ಯುವಕನ ಮನೆ ಧ್ವಂಸಗೊಳಿಸಿದ ಮಹಿಳೆ ಕುಟುಂಬಸ್ಥರು&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/chikkamagaluru-rain-water-level-of-tunga-and-bhadra-rivers-rises-for-the-first-time-this-year-mrq-i4rlwix"/>
        </item>
        <item>
            <title><![CDATA[School holiday: ಕರ್ನಾಟಕ ಮಳೆ ಆರ್ಭಟ: ಉತ್ತರ ಕನ್ನಡ, ಬೆಳಗಾವಿ ಸೇರಿ ಈ ಜಿಲ್ಲೆಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ]]></title>
            <link>https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim</link>
            <guid isPermaLink="true">https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim</guid>
            <pubDate>Mon, 06 Jul 2026 21:15:30 +0530</pubDate>
            <description><![CDATA[ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ, ಉತ್ತರ ಕನ್ನಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ (ಜುಲೈ 07) ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01je0hg3jv4vysegq8xa7vs33w,imgname-school-holiday.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಮಿತಿಮೀರಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವರುಣನ ರೌದ್ರಾವತಾರ ಮುಂದುವರಿದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ನಾಳೆ (ಜುಲೈ 07) ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 'ರೆಡ್ ಅಲರ್ಟ್' ಘೋಷಣೆಯಾಗಿದ್ದರೆ, ಬೆಳಗಾವಿ ಮತ್ತು ಚಿಕ್ಕಮಗಳೂರಿನಲ್ಲೂ ಮಳೆ ಅಬ್ಬರಿಸುತ್ತಿದೆ.&lt;/p&gt;&lt;h2&gt;&lt;strong&gt;1. ಉತ್ತರ ಕನ್ನಡ: ಐದು ತಾಲೂಕುಗಳಲ್ಲಿ ರಜೆ, ರೆಡ್ ಅಲರ್ಟ್ ಘೋಷಣೆ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಿಸಿದೆ. ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅವರು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ 5 ತಾಲೂಕುಗಳಾದ ಶಿರಸಿ, ಸಿದ್ದಾಪುರ, ಜೋಯಿಡಾ, ದಾಂಡೇಲಿ ಮತ್ತು ಯಲ್ಲಾಪುರ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.&lt;/p&gt;&lt;h2&gt;&lt;strong&gt;2. ಬೆಳಗಾವಿ: ಶಾಲೆಯೊಂದಿಗೆ ಪಿಯು ಕಾಲೇಜುಗಳಿಗೂ ರಜೆ&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಮುಖ ಆದೇಶ ನೀಡಿದ್ದಾರೆ. ಬೆಳಗಾವಿ ತಾಲೂಕು ಮತ್ತು ಖಾನಾಪುರ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಅಂಗನವಾಡಿಗಳು, ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ. ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;3. ಚಿಕ್ಕಮಗಳೂರು: ಕಳಸ ತಾಲೂಕಿನಲ್ಲಿ ರಜೆ&lt;/strong&gt;&lt;/h2&gt;&lt;p&gt;ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಗಾಳಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಳಸ ತಾಲೂಕಿನ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗಳಿಗೆ ನಾಳೆ ರಜೆ ಘೋಷಿಸಿ ತಹಸಿಲ್ದಾರ್ ಆದೇಶಿಸಿದ್ದಾರೆ. ಘಟ್ಟ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಇರುವುದರಿಂದ ಪ್ರವಾಸಿಗರಿಗೂ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಸೂಚನೆ:&lt;/strong&gt;&lt;/h3&gt;&lt;p&gt;ಮಳೆಯ ತೀವ್ರತೆ ಹೆಚ್ಚಿರುವ ಭಾಗಗಳಲ್ಲಿ ಜನರು ಅನಗತ್ಯವಾಗಿ ನದಿ, ಹಳ್ಳ-ಕೊಳ್ಳಗಳು ಮತ್ತು ವಿದ್ಯುತ್ ಕಂಬಗಳ ಹತ್ತಿರ ಹೋಗದಂತೆ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಸೂಚನೆ ನೀಡಿವೆ. ತುರ್ತು ಪರಿಸ್ಥಿತಿ ಎದುರಾದಲ್ಲಿ ಜಿಲ್ಲಾ ಸಹಾಯವಾಣಿ ಕೇಂದ್ರಗಳನ್ನು ಸಂಪರ್ಕಿಸಲು ಕೋರಲಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-heavy-rain-school-holiday-list-uttara-kannada-belagavi-chikkamagaluru/articleshow-itvggim"/>
        </item>
        <item>
            <title><![CDATA[ಅಯ್ಯೋ ದೇವರೇ...! ಇದೇನು ಸರ್ಕಾರಿ ಶಾಲೆಯೋ, ಮದ್ಯದ ಬಾಟಲಿ ಗೋಡನ್ನೋ....!]]></title>
            <link>https://kannada.asianetnews.com/gallery/education/liquor-bottles-collects-huyigere-government-school-in-chikkamagaluru-rav-knp6mdw</link>
            <guid isPermaLink="true">https://kannada.asianetnews.com/gallery/education/liquor-bottles-collects-huyigere-government-school-in-chikkamagaluru-rav-knp6mdw</guid>
            <pubDate>Tue, 07 Jul 2026 11:12:10 +0530</pubDate>
            <description><![CDATA[&lt;p&gt;ಶಾಲೆಯ ಕೊಠಡಿಯನ್ನೇ ಗೋಡಾನ್ ರೀತಿ ಬಳಸಿಕೊಂಡು ಅದರಲ್ಲಿ ಮದ್ಯದ ಬಾಟಲಿಗಳ ರಾಶಿ ರಾಶಿ ಚೀಲಗಳನ್ನ ತುಂಬಿದ ಘಟನೆ ಚಿಕ್ಕಮಗಳೂರು ತಾಲೂಕಿನ &amp;nbsp;ಹುಯಿಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxh4a424041en68sb9rcy40,imgname-----------------------2026-07-07t103425.513-1783402473602.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಾಲೆಯ ಕೊಠಡಿಯನ್ನೇ ಗೋಡಾನ್ ರೀತಿ ಬಳಸಿಕೊಂಡು ಅದರಲ್ಲಿ ಮದ್ಯದ ಬಾಟಲಿಗಳ ರಾಶಿ ರಾಶಿ ಚೀಲಗಳನ್ನ ತುಂಬಿದ ಘಟನೆ ಚಿಕ್ಕಮಗಳೂರು ತಾಲೂಕಿನ &amp;nbsp;ಹುಯಿಗೇರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಲಾ ಕೊಠಡಿ ಖಾಲಿ ಇದೆಯಂದು ಗೋಡಾನ್ ಮಾಡಿಕೊಂಡ ಪಂಚಾಯ್ತಿ, ರಾಶಿ ರಾಶಿ ಮದ್ಯದ ಖಾಲಿಗಳಿರುವ ಚೀಲಗಳನ್ನ ಕೊಠಡಿಯಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಗ್ರಾಮಪಂಚಾಯ್ತಿ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಲೆಯನ್ನ ದೇವಾಲಯಕ್ಕೆ ಹೋಲಿಸಲಾಗುತ್ತೆ. ಆದರೆ ಹುಯಿಗೆರೆ ಪಂಚಾಯ್ತಿಯವರ ಕಣ್ಣಿಗೆ ಹೇಗೆ ಕಾಣಿಸ್ತೋ ಸರ್ಕಾರಿ ಶಾಲೆಯನ್ನೇ ಬಾಟಲಿ ಜೋಡಿಸಿ ಇಡುವ ಗೋಡಾನ್&zwnj; ರೀತಿ ಬಳಸಿಕೊಂಡಿದ್ದಾರೆ. ಅದು 12 ಮಕ್ಕಳಿಗೆ ಪಾಠ ಮಾಡುವ ಕೊಠಡಿಯ ಪಕ್ಕದಲ್ಲೇ ಇದೆ. ಕೊಠಡಿಯ ಒಳ ಒಕ್ಕರೆ ಚೀಲಗಟ್ಟಲೆ ಮದ್ಯದ ಖಾಲಿ ಬಾಟಲಿಗಳನ್ನ ತುಂಬಿಡಲಾಗಿದೆ. ಯಾಕೆ ಯಾವ ಕಾರಣಕ್ಕೆ ಇಲ್ಲಿ ಸಂಗ್ರಹಿಸಲಾಗಿದೆ ಅಂದ್ರೆ ಯಾರ ಬಳಿ ಉತ್ತರವಿಲ್ಲ. ಇದರಿಂದ ಮಕ್ಕಳು ದಿನನಿತ್ಯ ಮದ್ಯದ ವಾಸನೆಯಲ್ಲಿ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.&lt;/p&gt;&lt;img&gt;&lt;p&gt;ಮೂಗು ಮುಚ್ಚಿಕೊಂಡೇ ಮಕ್ಕಳು ದಿನನಿತ್ಯ ಪಾಠ ಕೇಳುತ್ತಾರೆ. ಆಟ ಆಡುವಾಗ, ಓಡಾಡುವಾಗೆಲ್ಲ ಮಕ್ಕಳಿಗೆ ರಾಶಿ ರಾಶಿ ಮದ್ಯದ ಬಾಟಲಿಗಳು ತುಂಬಿರುವ ಚೀಲಗಳು ಕಣ್ಣಿಗೆ ಬಿಳುತ್ತವೆ. ಇದರಿಂದ ಮಕ್ಕಳ ಮನಸಿನಲ್ಲಿ ಏನು ಪರಿಣಾಮ ಬೀರಬಹುದು ಅನ್ನೋ ಪರಿಜ್ಞಾನವೂ ಪಂಚಾಯ್ತಿಯವರಿಗೂ ಇಲ್ಲ, ಶಿಕ್ಷಣ ಇಲಾಖೆಯವರಿಗೂ ಇದ್ದಂತಿಲ್ಲ.&lt;/p&gt;&lt;img&gt;&lt;p&gt;ತೆರೆದ ಕೊಠಡಿಯಲ್ಲೇ ಕಳೆದೊಂದು ವರ್ಷದಿಂದ ಬಾಟಲಿಗಳು ತುಂಬಿರುವುದರಿಂದ, ಬಾಟಲಿ ಒಡೆದು ಗಾಜಿನ ಚೂರುಗಳು ಕೊಠಡಿಯಲ್ಲಿ ಬಿದ್ದಿವೆ. ಮಕ್ಕಳು ಕೊಠಡಿ ಪ್ರವೇಶಿಸಿ ಅನಾಹುತವಾದರೆ ಯಾರು ಹೊಣೆ? ಶಾಲೆ ಕೊಠಡಿಯಲ್ಲಿ ಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಹೀಗಾಗಿ ಮದ್ಯದ ಬಾಟಲಿಗೆ ತೆರವುಗೊಳಿಸುವಂತೆ ಪಂಚಾಯ್ತಿಗೆ ಮನವಿ ಮಾಡಲಾಗಿದೆ.&lt;/p&gt;&lt;img&gt;&lt;p&gt;&amp;nbsp;ಶಿಕ್ಷಣ ಇಲಾಖೆ ಗ್ರಾಮಪಂಚಾಯ್ತಿಗೆ ಮನವಿ ಮಾಡಿದರೂ ಗ್ರಾಮ ಪಂಚಾಯ್ತಿ ಸ್ಪಂದಿಸುತ್ತಿಲ್ಲವೆಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/education/liquor-bottles-collects-huyigere-government-school-in-chikkamagaluru-rav-knp6mdw"/>
        </item>
        <item>
            <title><![CDATA[ಗೃಹಜ್ಯೋತಿ ಸ್ಕೀಂಗೆ ಜಾತಿ, ಪಾನ್‌ ಕಾರ್ಡ್‌ ಕೇಳೋದ್ರಲ್ಲಿ ತಪ್ಪೇನಿದೆ?: ಸಚಿವ ಜಾರ್ಜ್‌]]></title>
            <link>https://kannada.asianetnews.com/karnataka-districts/minister-kj-george-statement-what-is-wrong-asking-for-caste-details-and-pan-cards-for-the-gruha-jyothi-scheme/articleshow-kq88rzo</link>
            <guid isPermaLink="true">https://kannada.asianetnews.com/karnataka-districts/minister-kj-george-statement-what-is-wrong-asking-for-caste-details-and-pan-cards-for-the-gruha-jyothi-scheme/articleshow-kq88rzo</guid>
            <pubDate>Thu, 02 Jul 2026 10:00:17 +0530</pubDate>
            <description><![CDATA[&lt;p&gt;ಗೃಹಜ್ಯೋತಿ ಯೋಜನೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆ ಕೆಲವರಿಂದ ದುರುಪಯೋಗ ಆಗುತ್ತಿದೆ ಹೀಗಾಗಿ ಪರಿಶೀಲನೆ ನಡೆಯುತ್ತಿದೆ. ಜಾತಿ ಪ್ರಮಾಣಪತ್ರ ಪಾನ್ ಕಾರ್ಡ್ ಕೇಳಿದ್ರೆ ತಪ್ಪೇನಿಲ್ಲ ಎಂದು ಸಚಿವ ಕೆಜೆ ಚಾರ್ಜ್ ಸಮರ್ಥಿಸಿಕೊಂಡರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwggt20jpqc5wqkx745ebhxm,imgname----------------------89--1782965930002.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜು.2):&lt;/strong&gt; ರಾಜ್ಯದಲ್ಲಿ ಗೃಹಜ್ಯೋತಿಗೆ ಪರಿಶೀಲನೆ ಆರಂಭವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್&zwnj; ಹೇಳಿದ್ದಾರೆ.&amp;nbsp;&lt;/p&gt;&lt;h2&gt;ಜಾತಿ ಆಧಾರದಲ್ಲಿ ಯೋಜನೆ ನೀಡುತ್ತಿಲ್ಲ:&lt;/h2&gt;&lt;p&gt;ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, &lsquo;ಗೃಹಜ್ಯೋತಿ&rsquo; ಯೋಜನೆಗೆ ಜಾತಿ ಪ್ರಮಾಣ ಪತ್ರ, ಪಾನ್&zwnj; ಕಾರ್ಡ್&zwnj; ಕೇಳುವುದಲ್ಲಿ ತಪ್ಪೇನಿದೆ?. ಶಾಲಾ ದಾಖಲಾತಿ ವೇಳೆ ಜಾತಿ ಬರೆಸುವುದಿಲ್ಲವೇ ಎಂದು ಪ್ರಶ್ನಿಸಿದರು. ಹಾಗಂತ ಜಾತಿ ಆಧಾರದಲ್ಲಿ ಯೋಜನೆ ನೀಡುವುದಿಲ್ಲ. ಯುನಿಟ್&zwnj; ಬಳಕೆ ಆಧಾರದಲ್ಲಿ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.&lt;/p&gt;&lt;h3&gt;ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಜನರಿಗೆ ಉಚಿತ ವಿದ್ಯುತ್&lt;/h3&gt;&lt;p&gt;''ಗೃಹಜ್ಯೋತಿ'' ಯೋಜನೆಯಡಿ ಪ್ರಸ್ತುತ 1.64 ಕೋಟಿ ಜನ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ಬಳಕೆ ಸೇರಿದಂತೆ ಕೆಲವರು ಗೃಹಜ್ಯೋತಿ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ, ಪರಿಶೀಲನೆ ನಡೆಸಲಾಗುತ್ತಿದೆ. ಈ ವೇಳೆ ಜಾತಿ ಪ್ರಮಾಣ ಪತ್ರ ಹಾಗೂ ಪಾನ್&zwnj; ಕಾರ್ಡ್&zwnj;ಗಳನ್ನು ದಾಖಲೆಗಾಗಿ ಪಡೆಯಲಾಗುತ್ತಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/minister-kj-george-statement-what-is-wrong-asking-for-caste-details-and-pan-cards-for-the-gruha-jyothi-scheme/articleshow-kq88rzo"/>
        </item>
        <item>
            <title><![CDATA[ಸರ್ಕಾರದ ವಿರುದ್ಧ ಸಿಡಿದ ಮಡಿವಾಳ ಸಮುದಾಯ; ಎಚ್.ಎಂ. ಗೋಪಿಕೃಷ್ಣಗೆ MLC ಸ್ಥಾನ ಕೊಡುವಂತೆ ಆಗ್ರಹ]]></title>
            <link>https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge</guid>
            <pubDate>Fri, 10 Jul 2026 17:17:59 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ, ತಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರ ಹಂಚಿಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಮಡಿವಾಳ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸಮುದಾಯದ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5xar40sq4rw40arrrwcdcn,imgname-chikkamagaluru-madiwala-press-meet-1783683702911.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ, ತಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಅಧಿಕಾರ ಹಂಚಿಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಮಡಿವಾಳ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಸಮುದಾಯದ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಬೇಕೆಂದು ಆಗ್ರಹಿಸಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು (ಜು.10): 'ಅಹಿಂದ ವರ್ಗಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ' ಎಂದು ಮಡಿವಾಳ ಸಮುದಾಯದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಸಮಯದಲ್ಲಿ ಮತ್ತು ಪಕ್ಷ ಸಂಘಟನೆಯ ವಿವಿಧ ಹಂತಗಳಲ್ಲಿ ಮಡಿವಾಳ ಸಮುದಾಯದ ಜನರು ಸಕ್ರಿಯವಾಗಿ ಶ್ರಮಿಸಿದ್ದಾರೆ. ಪಾದಯಾತ್ರೆ ಹಾಗೂ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರೂ, ಅಧಿಕಾರ ಹಂಚಿಕೆಯ ವಿಷಯಕ್ಕೆ ಬಂದಾಗ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.&lt;/p&gt;&lt;img&gt;&lt;p&gt;&lt;strong&gt;ಕಾಗದಕ್ಕೆ ಸೀಮಿತವಾದ 'ಸಮಪಾಲು-ಸಮಬಾಳು':&lt;/strong&gt;&lt;/p&gt;&lt;p&gt;'ಸರ್ಕಾರ ಹೇಳುವ 'ಎಲ್ಲರಿಗೂ ಸಮಪಾಲು, ಸಮಬಾಳು' ಎಂಬ ನೀತಿ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ವಾಸ್ತವದಲ್ಲಿ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸಣ್ಣ ಸಮುದಾಯಗಳ ನಿಷ್ಠಾವಂತ ನಾಯಕರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಸರ್ಕಾರ ವಿಫಲವಾಗಿದೆ' ಎಂದು ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;&lt;strong&gt;ಎಚ್.ಎಂ. ಗೋಪಿಕೃಷ್ಣಗೆ MLC ಸ್ಥಾನಕ್ಕಾಗಿ ಆಗ್ರಹ:&lt;/strong&gt;&lt;/p&gt;&lt;p&gt;ಮಡಿವಾಳ ಸಮುದಾಯದ ಪ್ರಬಲ ಧ್ವನಿಯಾಗಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಮುಖಂಡ ಎಚ್.ಎಂ. ಗೋಪಿಕೃಷ್ಣ ಅವರಿಗೆ ವಿಧಾನಪರಿಷತ್ ಸದಸ್ಯ (MLC) ಸ್ಥಾನವನ್ನು ನೀಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು. 'ಕಳೆದ ಹದಿನೈದು ವರ್ಷಗಳಿಂದ ತರೀಕೆರೆ ಕ್ಷೇತ್ರದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗೋಪಿಕೃಷ್ಣ ಅವರು ರಾಜ್ಯಾದ್ಯಂತ ಸಮುದಾಯದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಿಷ್ಠೆ ಮತ್ತು ಸೇವೆಯನ್ನು ಪರಿಗಣಿಸಿ ಅವರಿಗೆ ವಿಧಾನಪರಿಷತ್&zwnj;ಗೆ ನಾಮನಿರ್ದೇಶನ ಮಾಡಬೇಕು' ಎಂದು ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ, ಸರ್ಕಾರದ ಇನ್ನುಳಿದ ಅವಧಿಯಲ್ಲಾದರೂ ಹಿಂದುಳಿದ ಮಡಿವಾಳ ಸಮುದಾಯಕ್ಕೆ ನ್ಯಾಯ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಸಮುದಾಯದ ವತಿಯಿಂದ ತೀವ್ರ ಹೋರಾಟ ನಡೆಸುವ ಮುನ್ಸೂಚನೆಯನ್ನು ಮುಖಂಡರು ನೀಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-madivala-community-demands-mlc-seat-for-congress-leader-hm-gopikrishna-oaev6ge"/>
        </item>
        <item>
            <title><![CDATA[ಪೌರ ಕಾರ್ಮಿಕರು, ಆಟೋ ಡ್ರೈವರ್, ಗೃಹಿಣಿಯರ ಖಾತೆಯಲ್ಲಿ 34, 29, 26 ಲಕ್ಷ ಹಣ; ಮತ್ತೊಂದು ಬ್ಯಾಂಕ್ ಹಗರಣ ಬಯಲು!]]></title>
            <link>https://kannada.asianetnews.com/karnataka-districts/chikkamagaluru-bank-account-fraud-poor-people-targeted-dubai-link-money-laundering/articleshow-qu792ff</link>
            <guid isPermaLink="true">https://kannada.asianetnews.com/karnataka-districts/chikkamagaluru-bank-account-fraud-poor-people-targeted-dubai-link-money-laundering/articleshow-qu792ff</guid>
            <pubDate>Tue, 14 Jul 2026 20:43:05 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಬಡ ಕಾರ್ಮಿಕರು, ಗೃಹಿಣಿಯರಿಗೆ ಸಾಲದ ಆಮಿಷವೊಡ್ಡಿ ಅವರ ಬ್ಯಾಂಕ್ ಖಾತೆಗಳನ್ನು ತೆರೆದು ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಅಂತರರಾಷ್ಟ್ರೀಯ ಜಾಲವೊಂದು ಬಯಲಾಗಿದೆ. ದುಬೈ ನಂಟು ಹೊಂದಿರುವ ಈ ಹಗರಣದಲ್ಲಿ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದು, ಪೊಲೀಸರು ಹಲವರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxgjmez21y6f6graesry5rk2,imgname-chikkamagaluru-bank-scam-1784041585634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಜು.14): ಕಾ&lt;/strong&gt;ಫಿನಾಡು ಚಿಕ್ಕಮಗಳೂರಿನಲ್ಲಿ ಬಡವರ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದ ಕೋಟ್ಯಂತರ ರೂಪಾಯಿ ಮಹಾ ಹಗರಣವೊಂದು ಬಯಲಿಗೆ ಬಂದಿದೆ. ದಿನಗೂಲಿ ಮಾಡುವ ಕಾರ್ಮಿಕರು, ಆಟೋ ಡ್ರೈವರ್ಗಳು ಹಾಗೂ ಗೃಹಿಣಿಯರ ಬ್ಯಾಂಕ್ ಖಾತೆಗಳನ್ನೇ ಟಾರ್ಗೆಟ್ ಮಾಡಿರುವ ಸೈಬರ್ ಕಿಡಿಗೇಡಿಗಳು, ಅವರಿಗೆ ಗೊತ್ತಿಲ್ಲದಂತೆ ಕೋಟಿ ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ. ಲೋನ್ ಕೊಡಿಸುವುದಾಗಿ ಮತ್ತು ಹಣದ ಆಸೆ ತೋರಿಸಿ ಆಧಾರ್ ಕಾರ್ಡ್ ಪಡೆದು ಅಧಿಕೃತವಾಗಿಯೇ ಬ್ಯಾಂಕ್ ಅಕೌಂಟ್ ಓಪನ್ ಮಾಡಿಸಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ದುಬೈ ಲಿಂಕ್ ಹೊಂದಿರುವ ಈ ಬೃಹತ್ ಜಾಲದ ಕರಾಳ ಮುಖದ ಕುರಿತು ಒಂದು ವರದಿ ಇಲ್ಲಿದೆ ನೋಡಿ.&lt;/p&gt;&lt;h2&gt;&lt;strong&gt;ಪೌರ ಕಾರ್ಮಿಕನ ಖಾತೆಯಲ್ಲಿ 34 ಲಕ್ಷ ರೂ.&lt;/strong&gt;&lt;/h2&gt;&lt;p&gt;ಗೃಹಿಣಿ ಹೆಸರಲ್ಲಿ 29 ಲಕ್ಷ ರೂಪಾಯಿ, ಆಟೋ ಡ್ರೈವರ್ ಹೆಸರಲ್ಲಿ 26 ಲಕ್ಷ ರೂಪಾಯಿ, ಪೌರ ಕಾರ್ಮಿಕನ ಹೆಸರಲ್ಲಿ 34 ಲಕ್ಷ ರೂಪಾಯಿ. ಇದು ಚಿಕ್ಕಮಗಳೂರಿನಲ್ಲಿ ಬಡವರ ಬ್ಯಾಂಕ್ ಖಾತೆಗಳಲ್ಲಿ ಒಂದೇ ತಿಂಗಳಲ್ಲಿ ನಡೆದಿರುವ ಅಕ್ರಮ ಡಿಜಿಟಲ್ ಕರಾಮತ್ತು. ಏನೂ ಅರಿಯದ ನಿರಪರಾಧಿ ಬಡ ಯುವಕರು ಮತ್ತು ಕಾರ್ಮಿಕರಿಗೆ ಲೋನ್ ಕೊಡಿಸುವ ಆಮಿಷ ಒಡ್ಡಿ, ಕೆಲವೇ ಕೆಲವು ರೂಪಾಯಿಗಳ ಕಮಿಷನ್ ಆಸೆ ತೋರಿಸಿ ಆಧಾರ್ ಕಾರ್ಡ್ಗಳನ್ನು ಸಂಗ್ರಹಿಸಲಾಗಿದೆ. ಬಳಿಕ ಬ್ಯಾಂಕ್ ಸಿಬ್ಬಂದಿಗಳ ನೆರವಿನೊಂದಿಗೆ ಅಧಿಕೃತವಾಗಿಯೇ ಹತ್ತಾರು ಬ್ಯಾಂಕ್ ಖಾತೆಗಳನ್ನು ತೆರೆದು, ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆ್ಯಪ್&zwnj;ಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಣದ ಆಸೆಗೆ ಬಿದ್ದ ಕೆಲ ಯುವಕರು ಒಬ್ಬೊಬ್ಬರೇ 50ಕ್ಕೂ ಹೆಚ್ಚು ಖಾತೆಗಳನ್ನು ಮಾಡಿಸಿಕೊಟ್ಟಿದ್ದು, ಒಂದು ಖಾತೆಯಲ್ಲಿ ಬರೋಬ್ಬರಿ 20 ರಿಂದ 30 ಲಕ್ಷದವರೆಗೆ ವಹಿವಾಟು ನಡೆಸಲಾಗಿದೆ. ಹಗರಣದ ಅಸಲಿ ಕಥೆ ಗೊತ್ತಿಲ್ಲದ ರಾಜ್ಯದ ಸೈಬರ್ ಪೊಲೀಸರು ನೋಟೀಸ್ ಕೊಡುತ್ತಿದ್ದಂತೆ ಬಡ ಖಾತೆದಾರರು ಸದ್ಯ ಕಂಗಾಲಾಗಿದ್ದಾರೆ.&lt;/p&gt;&lt;h2&gt;&lt;strong&gt;ರಾಷ್ಟ್ರ ಮಟ್ಟದ ಹಗರಣ&lt;/strong&gt;&lt;/h2&gt;&lt;p&gt;ಈ ಹಗರಣ ಕೇವಲ ಚಿಕ್ಕಮಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಇಡೀ ಪ್ರಕರಣ ಇಂಟರ್ ಸ್ಟೇಟ್ ಹಾಗೂ ಇಂಟರ್ ನ್ಯಾಷನಲ್ ಲೆವೆಲ್ ತಲುಪಿದೆ. ವಿವಿಧ ರಾಜ್ಯಗಳಲ್ಲಿ ಈ ಖಾತೆಗಳ ಮೂಲಕ ಸೈಬರ್ ವಂಚನೆ ನಡೆದಿದೆ. ಈಗಾಗಲೇ ಬಡವರ ಖಾತೆಗಳ ಲಿಂಕ್ ಹಿಡಿದು ಬರೋಬ್ಬರಿ 6 ರಾಜ್ಯಗಳ ಸೆನ್ ಪೊಲೀಸರು ಚಿಕ್ಕಮಗಳೂರಿನ ಬಡವರ ಮನೆ ಬಾಗಿಲಿಗೆ ಬಂದು ನಿಂತಿದ್ದಾರೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಬಡವರ ಎದೆ ಒಡೆದು ಹೋಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಸಿಬ್ಬಂದಿ ಒಳಗೊಂಡಂತೆ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜಕೀಯ ಮುಖಂಡರ ನಂಟು&lt;/strong&gt;&lt;/h2&gt;&lt;p&gt;ಇನ್ನು ಬಂಧಿತರು ವಿಚಾರಣೆ ವೇಳೆ ನಗರಸಭೆಯ ಜೆಡಿಎಸ್ ಸದಸ್ಯ ಗೋಪಿ ಹೆಸರನ್ನು ಬಾಯಿಬಿಟ್ಟಿರುವುದು ಪ್ರಕರಣಕ್ಕೆ ರಾಜಕೀಯ ಟ್ವಿಸ್ಟ್ ನೀಡಿದೆ. ಈ ಮಹಾ ಹಗರಣದ ಸೂತ್ರಧಾರಿಗಳು ದುಬೈನಲ್ಲಿ ಕುಳಿತು ಇಡೀ ಜಾಲವನ್ನು ಆಪರೇಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ. ಕೆಲವರ ದಿಢೀರ್ ಆದಾಯದ ಮೂಲ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು. ವಿಧಾನಸೌಧದಲ್ಲಿ ಕೂತವರ ಕೈವಾಡದ ಬಗ್ಗೆಯೂ ಅನುಮಾನವಿದ್ದು, ಯಾವುದೇ ಪಕ್ಷದವರಾಗಿದ್ದರೂ ತಪ್ಪಿತಸ್ಥರನ್ನು ಬಿಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಸಿಬಿಐ ಹಾಗೂ ಇಡಿ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಲು ಸಿ.ಟಿ. ರವಿ ಮುಂದಾಗಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ ಆಮಿಷಕ್ಕೆ ಬಲಿಯಾಗಿ ಬ್ಯಾಂಕ್ ಖಾತೆ, ಆಧಾರ್ ಕೊಟ್ಟ ಅಮಾಯಕರು ಈಗ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. ದಿಢೀರ್ ಶ್ರೀಮಂತರಾಗಲು ಹೊರಟ ಸೂತ್ರಧಾರಿಗಳ ಅಂತರರಾಷ್ಟ್ರೀಯ ಜಾಲ ಈಗ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿದ್ದು, ಮುಂದಿನ ತನಿಖೆಯಿಂದಷ್ಟೇ ದುಬೈ ಲಿಂಕ್&zwnj;ನ ಅಸಲಿ ಸತ್ಯ ಹೊರಬರಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-bank-account-fraud-poor-people-targeted-dubai-link-money-laundering/articleshow-qu792ff"/>
        </item>
        <item>
            <title><![CDATA[ಉಳೀತು ಬಡಪಾಯಿ ಜೀವ! ಭಾರೀ ಮಳೆ-ಗಾಳಿಗೆ ಪುಟ್ಟ ಮನೆ ಮೇಲೆಯೇ ಬಿದ್ದ ಬೃಹತ್ ಮರ!]]></title>
            <link>https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b</link>
            <guid isPermaLink="true">https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b</guid>
            <pubDate>Sun, 05 Jul 2026 10:32:16 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ&amp;gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwra50ec7akjd84dky8wx3gv,imgname-----------------------2026-07-05t102602.375-1783227384268.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ&amp;gt;&lt;/p&gt;&lt;img&gt;&lt;p&gt;ಮಲೆನಾಡು ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರಿಸುತ್ತಿದೆ ಇದರ ಪರಿಣಾಮವಾಗಿ ಬೃಹತ್ ಮರಗಳು ಧರೆಗುರುಳುತ್ತಿವೆ. ಕೆಲವು ಮನೆಗಳ ಮೇಲೆಯೇ ಬಿದ್ದು ಸಾವು ನೋವಿನ ಘಟನೆಗಳು ನಡೆದಿವೆ. ಶನಿವಾರವೂ ಕೂಡ ಅಬ್ಬರಿಸಿದ ಮಳೆರಾಯ ರಾತ್ರಿಯಿಡೀ ಮಳೆ ಜೊತೆ ಭೀಕರ ಬಿರುಗಾಳಿ ಆರ್ಭಟ ಮುಂದುವರಿದೆ.&lt;/p&gt;&lt;img&gt;&lt;p&gt;ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಜೋರಾಗಿದ್ದು, ಮರಗಳು ಭೀಕರ ಗಾಳಿಗೆ ನಿಲ್ಲಲಾಗದೆ ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಅನಾಹುತಕಾರಿ ಘಟನೆ ನಡೆದು ಹೋಗಿದೆ.&lt;/p&gt;&lt;img&gt;&lt;p&gt;ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆ, ಗಾಳಿಗೆ ಜನಜೀವನ ಅಸ್ತವ್ಯವಸ್ತಗೊಂಡಿತು. ಕೆಲವು ಮನೆಗಳಿಗೆ ನೀರು ನುಗ್ಗಿದರೆ ಇನ್ನು ಕೋಳೂರು ಗ್ರಾಮದ ಸಿದ್ಧಪ್ಪ ಎಂಬುವವರ ಮನೆಮೇಲೆಯೇ ಮರ ಉರುಳಿಬಿದ್ದಿದ್ದು ಚಿಕ್ಕ ಮನೆ ಸಂಪೂರ್ಣ ಮುರಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.&lt;/p&gt;&lt;img&gt;&lt;p&gt;ಕಳೆದೆರಡು ದಿನಗಳಿಂದ ಮಲೆನಾಡ ಭಾಗದಲ್ಲಿ ಸಾಧಾರಣವಾಗಿದ್ದರೂ ನಿರಂತರ ಮಳೆಯಾಗುತ್ತಿದೆ ಶನಿವಾರ ರಾತ್ರಿಯಿಡೀ ಸುರಿದ ಮಳೆ. ಇದರೊಂದಿಗೆ ಭೀಕರ ಗಾಳಿಯಿಂದಾಗಿ ಮರಳ ಮುರಿದುಬಿಳುತ್ತಿವೆ. ಮಳೆಗಿಂತ ಗಾಳಿಯ ವೇಗ ಜೋರಾಗಿದ್ದು ನಾನಾ ಅವಾಂತರ ಸೃಷ್ಟಿಸಿಸಿದೆ.&lt;/p&gt;&lt;img&gt;&lt;p&gt;ಮನೆ ಮೇಲೆ ಮರ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಮೂಡಿಗೆರೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮನೆ ಪರಿಶೀಲಿಸಿದ್ದಾರೆ. ಇನ್ನು ಮಳೆಯಾಗುವ ಮುನ್ಸೂಚನೆಯಿಂದ ಬೆಟ್ಟ, ಇಳಿಜಾರಿನ ಪ್ರದೇಶ, ಮರಗಳ ಕೆಳಗೆ ಮನೆ ಮಾಡಿರುವ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b"/>
        </item>
        <item>
            <title><![CDATA[Varuna Mitra Helpline: ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?]]></title>
            <link>https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg</link>
            <guid isPermaLink="true">https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg</guid>
            <pubDate>Sat, 27 Jun 2026 09:06:33 +0530</pubDate>
            <description><![CDATA[&lt;ul&gt; &lt;li&gt;ವಿಶ್ವನಾಥ ಮಲೇಬೆನ್ನೂರು&lt;/li&gt;&lt;/ul&gt;&lt;p&gt;ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ &lsquo;ಕೆಎಸ್&zwnj;ಎನ್&zwnj;ಡಿಎಂಸಿ&rsquo;ಯ &lsquo;ವರುಣ ಮಿತ್ರ&rsquo; ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw3j1ncnpc1x0xjth64madqb,imgname----------------------30--1782531020181.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಿಶ್ವನಾಥ ಮಲೇಬೆನ್ನೂರು&lt;/li&gt;&lt;/ul&gt;&lt;p&gt;ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ &lsquo;ಕೆಎಸ್&zwnj;ಎನ್&zwnj;ಡಿಎಂಸಿ&rsquo;ಯ &lsquo;ವರುಣ ಮಿತ್ರ&rsquo; ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ&lt;/p&gt;&lt;img&gt;&lt;p&gt;ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ.&lt;/p&gt;&lt;p&gt;&lt;strong&gt;&lt;sub&gt;ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ&lt;/sub&gt;&lt;/strong&gt;&lt;/p&gt;&lt;p&gt;ಗ್ರಾಪಂ ಮಟ್ಟದಲ್ಲಿ ಅಳವಡಿಸಿದ್ದ ಮಳೆ ಮಾಪನ ಸೆನ್ಸಾರ್&zwnj;ಗಳಿಂದ ಸಂಗ್ರಹವಾಗುವ ದತ್ತಾಂಶ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸುತ್ತಿದ್ದ ಕೆಎಸ್&zwnj;ಎನ್&zwnj;ಡಿಎಂಸಿಯ ವಿಜ್ಞಾನಿಗಳಿಗೆ ಇದೀಗ, ವರುಣ ಮಿತ್ರ ಕೇಂದ್ರದಲ್ಲಿ ದೂರು ಕೇಳುವ ಕೆಲಸ ವಹಿಸಲಾಗಿದೆ. ವರುಣ ಮಿತ್ರ ಕೇಂದ್ರದಲ್ಲಿ ಕಾರ್ಯವರ್ಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ವಿಜ್ಞಾನಿಗಳು ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಕೆಎಸ್&zwnj;ಎನ್&zwnj;ಡಿಎಂಸಿಯಲ್ಲಿ ನಿರ್ಮಾಣಗೊಂಡಿದೆ.&lt;/p&gt;&lt;p&gt;&lt;strong&gt;8 ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ!&lt;/strong&gt;&lt;/p&gt;&lt;p&gt;ಕೆಎಸ್&zwnj;ಎನ್&zwnj;ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿಯ ನೌಕರರು ಪತ್ರ ಬರೆದಿರುವುದು &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ.&lt;/p&gt;&lt;p&gt;&lt;strong&gt;ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣ&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್&zwnj;ಗಳ ಪೈಕಿ 1,044 ಸೆನ್ಸರ್&zwnj; ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್&zwnj; ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್&zwnj; ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿ ನಿರ್ದೇಶಕ ಎಂ.ಎಸ್&zwnj;. ದಿವಾಕರ್&zwnj; &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಕೆಎಸ್&zwnj;ಎನ್&zwnj;ಡಿಎಂಸಿ ಸಿಬ್ಬಂದಿಗೆ ಕಿರುಕುಳ?&lt;/strong&gt;&lt;/p&gt;&lt;p&gt;ಸಂಸ್ಥೆಯ ನೌಕರರಿಗೆ ಪಿಎಫ್&zwnj; ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್&zwnj; ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್&zwnj; ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.&lt;/p&gt;&lt;img&gt;&lt;p&gt;2020ರ ನಂತರ ಕೆಎಸ್&zwnj;ಎನ್&zwnj;ಡಿಎಂಸಿಗೆ ಕಾಯಂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ಐಎಎಸ್&zwnj; ಅಧಿಕಾರಿಗಳನ್ನು ನೇಮಿಸುತ್ತಿದೆ. ನಾಲ್ಕೈದು ತಿಂಗಳಿಗೆ ಈ ಐಎಎಸ್&zwnj; ಅಧಿಕಾರಿಗಳ ಬದಲಾವಣೆಯಿಂದ ಕೆಎಸ್&zwnj;ಎನ್&zwnj;ಡಿಎಂಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಐಎಎಸ್&zwnj; ಅಧಿಕಾರಿಗಳು ಆಡಳಿತಾತ್ಮಕ ಕಾರ್ಯದಲ್ಲಿ ಮಾತ್ರ ಪರಿಣಿತರಾಗಿದ್ದು, ಕೆಎಸ್&zwnj;ಎನ್&zwnj;ಡಿಎಂಸಿಯ ಮೂಲ ಕಾರ್ಯದಲ್ಲಿ ತೊಡಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ.&amp;nbsp;&lt;/p&gt;&lt;p&gt;ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಏಜೆನ್ಸಿ ಮೂಲಕ ಸಿಬ್ಬಂದಿ ನೇಮಿಸಲಾಗಿತ್ತು. ಅವಧಿ ಮುಕ್ತಾಯವಾದರಿಂದ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನೂ ಸಹ ವರುಣ ಮಿತ್ರ ಸಹಾಯವಾಣಿಯಲ್ಲಿ ಹೋಗಿ ಕುಳಿತು ಕರೆ ಸ್ವೀಕಾರ ಮಾಡುತ್ತೇನೆ. ದಿನಕ್ಕೆ ಈಗಲೂ 4 ರಿಂದ 5 ಸಾವಿರ ಕರೆ ಸ್ವೀಕಾರ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ, ವೆಬ್&zwnj;ಸೈಟ್&zwnj;, ಮೊಬೈಲ್&zwnj; ಆ್ಯಪ್&zwnj;ನಲ್ಲಿ ಸಮಗ್ರ ಮಾಹಿತಿ ರೈತರಿಗೆ ದೊರೆಯುತ್ತಿರುವುದರಿಂದ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.&lt;/p&gt;&lt;p&gt;&lt;strong&gt;-ಎಂ.ಎಸ್&zwnj;.ದಿವಾಕರ್&zwnj;, ನಿರ್ದೇಶಕರು, ಕೆಎಸ್&zwnj;ಎನ್&zwnj;ಡಿಎಂಸಿ.&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg"/>
        </item>
        <item>
            <title><![CDATA[NH 169: ತನಿಕೋಡ್‌ನಿಂದ SK ಬಾರ್ಡರ್‌ವರೆಗೆ ಭಾರೀ ವಾಹನಗಳಿಗೆ ನಿಷೇಧ; ಪರ್ಯಾಯ ಮಾರ್ಗ ಹೀಗಿದೆ]]></title>
            <link>https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg</link>
            <guid isPermaLink="true">https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg</guid>
            <pubDate>Thu, 09 Jul 2026 07:33:37 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್&zwnj;ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ನಿಷೇಧಿಸಲಾಗಿದೆ. ಪ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx29gp7d013d97nqj246yz0d,imgname-national-highway--3--1783562262765.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಕಿರು ಸೇತುವೆಗಳು ಶಿಥಿಲಾವಸ್ಥೆಯಲ್ಲಿರುವುದರಿಂದ ಕುಸಿಯುವ ಅಪಾಯ ಎದುರಾಗಿದೆ. ಈ ಹಿನ್ನೆಲೆಯಲ್ಲಿ, 2026ರ ಸೆಪ್ಟೆಂಬರ್ 30ರವರೆಗೆ 12 ಟನ್&zwnj;ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ನಿಷೇಧಿಸಲಾಗಿದೆ. ಪ&lt;/p&gt;&lt;img&gt;&lt;p&gt;ರಾಷ್ಟ್ರೀಯ ಹೆದ್ದಾರಿ 169ರ ಕಿ.ಮೀದಲ್ಲಿನ ಸೇತುವೆಗಳನ್ನು ಪರಿವೀಕ್ಷಣೆ ಮಾಡಿದ್ದು, ಸದರಿ ಕಿರು ಸೇತುವೆಗಳ ಕಲ್ಲುಗಳು ಅಲ್ಲಲ್ಲಿ ಕಿತ್ತು ಬಂದಿರುವುದು, ಕಂಬಗಳು ಭಾಗಶಃ ಹಾನಿಗೊಳಗಾಗಿರೋದು ಕಂಡು ಬಂದಿದ. ಸೇತುವೆ ಸ್ಲಾಬ್ ನ ಬೀಮ್ ಗಳ ಕಾಂಕ್ರೀಟ್ ಅಲ್ಲಲ್ಲಿ ಬಿದ್ದು ಹೋಗಿದ್ದು ಸರಳುಗಳು ಹೊರಚಾಚಿರುವುದು ಮತ್ತು ಸೇತುವೆಗಳ ಕೈಪಿಡಿಗಳು ಬಿದ್ದು ಹೋಗಿರುವುದು ಕಂಡು ಬಂದಿರುತ್ತದೆ.&lt;/p&gt;&lt;img&gt;&lt;p&gt;ಈ ಹೆದ್ದಾರಿ ವಲಯದಲ್ಲಿ ಬರುವ ನಾಲ್ಕು ಕಿರು ಸೇತುವೆಗಳು ತೀರಾ ಶಿಥಿಲಾವಸ್ಥೆಯಲ್ಲಿದ್ದು, ಭಾರಿ ವಾಹನಗಳು ಸಂಚರಿಸಿದರೆ ಕುಸಿಯುವ ಅಪಾಯವಿದೆ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.&lt;/p&gt;&lt;img&gt;&lt;p&gt;ಈ ಹಿನ್ನೆಲೆ ದಿನಾಂಕ 30-09-2026 ರವರೆಗೆ 12 ಟನ್ ಗಿಂತ ಅಧಿಕ ಭಾರದ ಸರಕು ಸಾಗಾಣಿಕೆಯ (ಟಿಪ್ಪರ್, ಲಾರಿ ಮತ್ತು ಕಟ್ಟಡ ನಿರ್ಮಾಣದ ಸಾಮಾಗ್ರಿಗಳು ಮತ್ತು ಇನ್ನಿತರೆ) ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಬದಲಿ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡ್&zwnj;ನಿಂದ ಎಸ್.ಕೆ. ಬಾರ್ಡರ್&zwnj;ವರೆಗೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;img&gt;&lt;p&gt;1. ಚಿಕ್ಕಮಗಳೂರಿನಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು-ಮಾಗುಂಡಿ-ಕಳಸ-ಕುದುರೆಮುಖ-ಎಸ್.ಕೆ.ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;p&gt;2. ನರಸಿಂಹರಾಜಪುರ ಕಡೆಯಿಂದ ಬರುವ ಭಾರಿ ವಾಹನಗಳು ಬಾಳೆಹೊನ್ನೂರು- ಮಾಗುಂಡಿ-ಕಳಸ -ಕುದುರೆಮುಖ-ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;p&gt;3. ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ-ಜಯಪುರ - ಬಾಳೆಹೊನ್ನೂರು- ಮಾಗುಂಡಿ-ಕಳಸ-ಕುದುರೆಮುಖ - ಎಸ್.ಕೆ. ಬಾರ್ಡರ್ ಮಾರ್ಗವಾಗಿ ಸಂಚರಿಸುವುದು.&lt;/p&gt;&lt;img&gt;&lt;p&gt;ಈ ಹೆದ್ದಾರಿಯು ತೀವ್ರ ತಿರುವುಗಳು, ಕಡಿದಾದ ಏರಿ ಹಾಗೂ ಏಕಪಥ (Single Lane) ರಸ್ತೆಯಾಗಿರುವುದರಿಂದ ಮಳೆಗಾಲದಲ್ಲಿ ಸಂಚಾರ ಅತ್ಯಂತ ಅಪಾಯಕಾರಿ. ನಿರಂತರ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ (ಬದಿಗಳ) ಮಣ್ಣು ಕೊಚ್ಚಿ ಹೋಗುತ್ತಿದ್ದು, ಭಾರಿ ವಾಹನಗಳು ಚಲಿಸಿದಾಗ ರಸ್ತೆ ಕುಸಿದು ದೊಡ್ಡ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/chikkamagalur-national-highway-169-heavy-vehicles-banned-from-thanikode-to-sk-border-here-is-the-alternative-route-mrq-w246czg"/>
        </item>
        <item>
            <title><![CDATA[ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಹಲ್ಲೆ, ಕಾಲಲ್ಲಿ ಹಾಕಿ ತುಳಿದ ಪಾಗಲ್ ಪ್ರೇಮಿ!]]></title>
            <link>https://kannada.asianetnews.com/gallery/karnataka-districts/chikkamagaluru-horror-hassan-man-arrested-minor-girl-assaults-for-rejecting-his-love-rav-y6zcx9k</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-horror-hassan-man-arrested-minor-girl-assaults-for-rejecting-his-love-rav-y6zcx9k</guid>
            <pubDate>Sat, 04 Jul 2026 13:25:34 +0530</pubDate>
            <description><![CDATA[&lt;p&gt;Chikkamagaluru shocking incident ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwp1rrdyp380zk4e3ngsew17,imgname-----------------------2026-07-04t132056.456-1783151485374.jpg" type="image/jpeg" height="390" width="690"/>
            <content:encoded><![CDATA[&lt;p&gt;Chikkamagaluru shocking incident ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಘಟನೆ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದವನಾದ ಪಾಗಲ್ ಪ್ರೇಮಿ ಪುನೀತ್ ಎಂಬುವವನೇ ಈ ಕೃತ್ಯ ಎಸಗಿದ ಆರೋಪಿ. ಹಾಸ್ಟೆಲ್&zwnj;ನಲ್ಲಿದ್ದುಕೊಂಡು ಓದುತ್ತಿದ್ದ ಕಡೂರು ಮೂಲದ ಅಪ್ರಾಪ್ತ ಬಾಲಕಿ ಮೇಲೆ ಕಣ್ಣು ಹಾಕಿದ್ದ. ನೀನೇ ನೇನೆ ಮನಸೆಲ್ಲ ನೀನೇ ಅಂತಾ ಅಪ್ರಾಪ್ತ ಬಾಲಕಿಯ ಬೆನ್ನುಬಿದ್ದಿದ್ದ ಪಾಗಲ್ ಪ್ರೇಮಿ ಪುನೀತ್. ಆ ಬಾಲಕಿಯಾದರೋ ವಯಸ್ಕಳಲ್ಲ. ಇವನ ಕಾಟಕ್ಕೆ ಬೇಸತ್ತುಹೋಗಿ ಅಸಹಾಯಕಳಾಗಿದ್ದಳು. ಹಾಸ್ಟೆಲ್&zwnj;ನಿಂದ ಹೊರಬರುವುದು ನಿಲ್ಲಿಸಿದಾಗ &amp;nbsp;ಪ್ರತಿದಿನ ಅಪ್ರಾಪ್ತ ಬಾಲಕಿ ನೋಡಲು ಹಾಸ್ಟೆಲ್ ಬಳಿ ಹೋಗುತ್ತಿದ್ದ ಆಸಾಮಿ ಅಲ್ಲಿಯೂ ಕಿರಿಕ್ ಮಾಡುತ್ತಿದ್ದ. ಇದರಿಂದ ಹಾಸ್ಟೆಲ್ ವಾರ್ಡನ್&zwnj; ಅಪ್ರಾಪ್ತ ಬಾಲಕಿಗೆ ಎಚ್ಚರಿಕೆ ನೀಡಿದ್ದರು.&lt;/p&gt;&lt;img&gt;&lt;p&gt;ಹುಚ್ಚನ ಕಾಟಕ್ಕೆ ಬೇಸತ್ತು ಹಾಸ್ಟೆಲ್ ನಿಂದ ಕೆಲದಿನಗಳ ಊರಿಗೆ ಹೋದ್ರೂ, ಪೋಷಕರ ನಂಬರ್ ಕಲೆಕ್ಟ್ ಮಾಡಿಕೊಂಡು ಅವರಿಗೂ ಬೆದರಿಕೆ ಹಾಕಿದ್ದನಂತೆ ಪಾಗಲ್ ಪ್ರೇಮಿ. ಕುಟುಂಬಸ್ಥರು ಕೂಡ ಪಾಗಲ್ ಪ್ರೇಮಿಯ ಬೆದರಿಕೆಗೆ ದಂಗಾಗಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದ ಎಸ್ಪಿ ಡಿಸಿ ಕಚೇರಿ ಬಳಿಯೇ ಇರುವ ಕ್ರೀಡಾಂಗಣದಲ್ಲಿ ಯುವತಿ ಸಿಕ್ಕಿದ್ದಾಳೆ. ಅಲ್ಲಿಯೂ ಪ್ರೀತಿಸುವಂತೆ ಯುವತಿಗೆ ಧಮ್ಕಿ ಹಾಕಿದ್ದಾನೆ. ಆಗ ಅಪ್ರಾಪ್ತ ಯುವತಿ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಕುಪಿತಗೊಂಡ ಪ್ರೇಮಿ ಹುಚ್ಚನಾಗಿದ್ದಾನೆ. ಏಕಾಏಕಿ ಬಾಲಕಿ ಮೇಲೆ ಎರಗಿ ಮನಬಂದಂತೆ ಥಳಿಸಿದ್ದಾನೆ. ಯುವತಿಯನ್ನ ಕಾಲಲ್ಲಿ ಹಾಕಿ ತುಳಿದಿದ್ದಾನೆ. ಅವನ ಅನಿರಿಕ್ಷಿತ ದಾಳಿಯಿಂದ ಯುವತಿ ಭಯಭೀತಳಾಗಿದ್ದಾಳೆ.&amp;nbsp;&lt;/p&gt;&lt;p&gt;ಬಾಲಕಿ ಮೇಲೆ ಹಲ್ಲೆ ನಡೆಸುವುದು ಕಂಡು ಸುತ್ತಮುತ್ತಲಿನ ಸ್ಥಳೀಯರು ಓಡಿ ಬಂದಿದ್ದಾರೆ. ಜನ ತನ್ನ ಬರುತ್ತಿರುವುದು ಕಂಡು ಪಾಗಲ್ ಪ್ರೇಮಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆರೋಪಿಯನ್ನ ಚೇಸ್ ಮಾಡಿ ಎಸ್&zwnj;ಪಿ ಮನೆ ಮುಂದೆಯೇ ಹಿಡಿದು ಅಕ್ಕ ಪಡೆಗೆ ಕರೆಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/chikkamagaluru-horror-hassan-man-arrested-minor-girl-assaults-for-rejecting-his-love-rav-y6zcx9k"/>
        </item>
    </channel>
</rss>
