<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 17 May 2026 21:28:29 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[ಸಿಲಿಕಾನ್‌ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರು ಕಸದ ಶುಲ್ಕವೇ ದುಬಾರಿ; ಯಾಕಿಷ್ಟು ಹೆಚ್ಚು?]]></title>
            <link>https://kannada.asianetnews.com/karnataka-districts/chikkamagaluru-garbage-charges-are-more-expensive-than-silicon-city-bengaluru-mrq/articleshow-1dgw33i</link>
            <guid isPermaLink="true">https://kannada.asianetnews.com/karnataka-districts/chikkamagaluru-garbage-charges-are-more-expensive-than-silicon-city-bengaluru-mrq/articleshow-1dgw33i</guid>
            <pubDate>Wed, 13 May 2026 10:25:29 +0530</pubDate>
            <description><![CDATA[ಸಿಲಿಕಾನ್ ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ದುಬಾರಿಯಾಗಿದ್ದು, ನಗರ ಸಭೆಯು ದುಬಾರಿ ಶುಲ್ಕ ವಿಧಿಸುತ್ತಿದೆ. ಆದರೆ, ಹಳೆಯ ವಾಹನಗಳಿಂದಾಗಿ ಪ್ರತಿದಿನ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ, ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jbgm7q69f95feeb3m5shaq2t,imgname-garbage-truck.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶ್ವನಾಥ ಮಲೇಬೆನ್ನೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಸಿಲಿಕಾನ್&zwnj; ಸಿಟಿ ಬೆಂಗಳೂರಿಗಿಂತ ಚಿಕ್ಕಮಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ದುಬಾರಿಯಾಗಿದ್ದು, ಮನೆ, ಹೋಟೆಲ್&zwnj;, ರೆಸ್ಟೋರೆಂಟ್&zwnj;, ಆಸ್ಪತ್ರೆ, ಶಾಲಾ-ಕಾಲೇಜು, ಕಲ್ಯಾಣ ಮಂಟಪ, ಬ್ಯೂಟಿ ಪಾರ್ಲರ್&zwnj; ಸೇರಿದಂತೆ ಎಲ್ಲ ಕಟ್ಟಡಗಳಿಂದ ನಗರ ಸಭೆಯು ಮಾಸಿಕ 50 ರು. ನಿಂದ ಬರೋಬ್ಬರಿ 6,500 ರು. ವಸೂಲಿ ಮಾಡುತ್ತಿದೆ.&lt;/p&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ 600 ಚದರಡಿ ವರೆಗೆ ಮನೆಗೆ ಕೇವಲ ಮಾಸಿಕ ಕೇವಲ 10 ರು. ಶುಲ್ಕ ಸಂಗ್ರಹಿಸಲಾಗುತ್ತಿದೆ. ಆದರೆ, ಚಿಕ್ಕಮಗಳೂರು ನಗರದಲ್ಲಿ ಬರೋಬ್ಬರಿ 50 ರು. ಶುಲ್ಕ ವಸೂಲಿಗೆ ಮಾಡಲಾಗುತ್ತಿದೆ. ಅವೈಜ್ಞಾನಿಕವಾಗಿ ಸಣ್ಣ ಮನೆಗೂ 50 ರು. ದೊಡ್ಡ ದೊಡ್ಡ ವಸತಿ ಕಟ್ಟಡಕ್ಕೂ ಕೇವಲ 50 ರು. ದರ ನಿಗದಿಪಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.&lt;/p&gt;&lt;p&gt;ಚಿಕ್ಕಮಗಳೂರಿನ ನಗರ ಸಭೆಯು ವಿಧಿಸುತ್ತಿರುವ ಶುಲ್ಕವನ್ನು ಸಾರ್ವಜನಿಕರು ಪಾವತಿ ಮಾಡಿದರೂ ಮನೆ ಮನೆಗೆ ಪ್ರತಿ ದಿನ ಕಸ ಸಂಗ್ರಹಿಸುವ ವಾಹನ ಹೋಗಿ ತ್ಯಾಜ್ಯ ಸಂಗ್ರಹಿಸುವ ಕೆಲಸ ಮಾಡುತ್ತಿಲ್ಲ. ಹೀಗಾಗಿ, ನಗರದ ಖಾಲಿ ನಿವೇಶನಗಳಲ್ಲಿ, ಮೈದಾನಗಳಲ್ಲಿ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ಕಸ ರಾಶಿಗಳು ಬಿದ್ದಿರುವುದನ್ನು ಕಾಣಬಹುದಾಗಿದೆ.&lt;/p&gt;&lt;h2&gt;&lt;strong&gt;ಖಾಸಗಿ ಸಂಸ್ಥೆ ವಿಧಿಸಿದ ಶುಲ್ಕವನ್ನೇ ವಸೂಲಿ&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರಿನಲ್ಲಿ ಈ ಹಿಂದೆ ನಿರ್ಮಲ ಭಾರತಿ ಎಂಬ ಸಂಸ್ಥೆಯು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಂಡಿತ್ತು. ಆ ಸಂಸ್ಥೆಯು ಶುಲ್ಕವನ್ನು ನಿಗದಿ ಪಡಿಸಿಕೊಂಡು ವಸೂಲಿ ಮಾಡುತ್ತಿತ್ತು. ಆ ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆ ಸಾಕಷ್ಟು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ಜನವರಿಯಿಂದ ನಗರ ಸಭೆಯಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ತೀರ್ಮಾನಿಸಲಾಗಿದೆ. ಈ ವೇಳೆ ಈ ಹಿಂದೆ ಖಾಸಗಿ ಸಂಸ್ಥೆಯು ನಿಗದಿ ಪಡಿಸಿ ವಸೂಲಿ ಮಾಡುತ್ತಿದ್ದ ದರವನ್ನೇ ವಸೂಲಿ ಮಾಡುವುದಕ್ಕೆ ನಗರ ಸಭೆಯ ಸದಸ್ಯರ ತೀರ್ಮಾನ ಮಾಡಿಕೊಂಡಿದ್ದಾರೆ. ನಗರ ಸಭೆಯು ವಾರ್ಷಿಕ 2 ರಿಂದ 2.5 ಕೋಟಿ ರು, ನಷ್ಟು ಕಸ ಶುಲ್ಕದಿಂದ ಆದಾಯ ಸಂಗ್ರಹಿಸಲಾಗುತ್ತಿದೆ.&lt;/p&gt;&lt;h3&gt;&lt;strong&gt;ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಆಟೋ ಟಿಪ್ಪರ್&lt;/strong&gt;&lt;/h3&gt;&lt;p&gt;ನಗರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮಾಡಲು 28 ಅಟೋ ಟಿಪ್ಪರ್ ಗಳನ್ನು ಬಳಕೆ ಮಾಡಲಾಗುತ್ತಿದೆ. ಆದರೆ ಬಾರಿ ಹಳೆಯದಾದ ಈ ಆಟೋ ಟಿಪ್ಪರ್ ಗಳು ಎಷ್ಟೇ ರಿಪೇರಿ ಮಾಡಿಸಿದರು ಕಸ ಸಂಗ್ರಹಣೆಗೆ ಹೋದಾಗ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ.&lt;/p&gt;&lt;p&gt;ಹೀಗೆ ಆಟೋ ಟಿಪ್ಪರ್ಗಳು ಕೆಟ್ಟು ನಿಲ್ಲುತ್ತಿರುವುದರಿಂದಾಗಿ ಪ್ರತಿ ಮನೆ, ಅಂಗಡಿ, ಹೋಟೆಲ್ ಗಳು ಸೇರಿದಂತೆ ಎಲ್ಲೆಡೆಯಿಂದ ಪ್ರತಿದಿನ ಕಸ ಸಂಗ್ರಹಣೆ ಮಾಡುವುದು ಪೌರಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಕಸ ತುಂಬಿಕೊಂಡು ಬರುವಾಗ ಆಟೋ ಟಿಪ್ಪರ್ ಕೆಟ್ಟು ನಿಂತಿತು ಎಂದರೆ ಒಂದು ಆಟೋ ಟಿಪ್ಪರ್&zwnj;ನಿಂದ ಇನ್ನೊಂದು ಆಟೋ ಟಿಪ್ಪರ್&zwnj;ಗೆ ಕಸವನ್ನು ವರ್ಗಾವಣೆ ಮಾಡಲು ಪೌರಕಾರ್ಮಿಕರು ಹರಸಾಹಸ ಪಡಬೇಕಿದೆ. ಇದೇ ಕಾರಣದಿಂದಾಗಿ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ಇದೀಗ ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹ ಮಾಡುತ್ತಿಲ್ಲ.&lt;/p&gt;&lt;h3&gt;&lt;strong&gt;ಚಿಕ್ಕಮಗಳೂರು ನಗರ ಸಭೆಯ ಕಸ ಶುಲ್ಕದ ಪಟ್ಟಿ&lt;/strong&gt;&lt;/h3&gt;&lt;p&gt;(ಮಾಸಿಕ ರು) ಮನೆ: 50 ರು.&lt;/p&gt;&lt;p&gt;ಪ್ರಾವಿಜನ್ ಸ್ಟೋರ್&zwnj; : 80 ರಿಂದ 100 ರು.&lt;/p&gt;&lt;p&gt;ಕಟಿಂಗ್ ಶಾಪ್&zwnj;: 100 ರಿಂದ 200&lt;/p&gt;&lt;p&gt;ಬ್ಯೂಟಿ ಪಾರ್ಲರ್: 300ರು.ನಿಂದ 1000 ರು.&lt;/p&gt;&lt;p&gt;ಬೇಕರಿ: 500 ರು.ನಿಂದ 4,000 ರು.&lt;/p&gt;&lt;p&gt;ಹೋಟೆಲ್&zwnj;, ಬಾರ್ ಅಂಡ್ ರೆಸ್ಟೋರೆಂಟ್&zwnj;: 500ರು.ನಿಂದ 3000 ರು.&lt;/p&gt;&lt;p&gt;ಬಟ್ಟೆ ಅಂಗಡಿ: 300ರು.ನಿಂದ 1000 ರು.&lt;/p&gt;&lt;p&gt;ಚಿಕನ್&zwnj; ಶಾಪ್&zwnj;: 400ರು.ನಿಂದ 1200 ರು.&lt;/p&gt;&lt;p&gt;ಮಟನ್&zwnj; ಶಾಪ್&zwnj;: 500 ರು.&lt;/p&gt;&lt;p&gt;ಹಣ್ಣಿನ ಅಂಗಡಿ: 300 ರು.&lt;/p&gt;&lt;p&gt;ಜ್ಯೂಸ್&zwnj; ಶಾಪ್&zwnj;: 300ರು.ನಿಂದ 800 ರು.&lt;/p&gt;&lt;p&gt;ಶಾಲೆ: 500ರು.ನಿಂದ 3,500 ರು.&lt;/p&gt;&lt;p&gt;ಛತ್ರ : 1000ರು.ನಿಂದ 1,500 ರು.&lt;/p&gt;&lt;p&gt;ವಾಹನ ಶೋ ರೂಂ:1000ರು.ನಿಂದ 3000 ರು.&lt;/p&gt;&lt;p&gt;ಬ್ಯಾಂಕ್&zwnj;: 500 ರು.&lt;/p&gt;&lt;p&gt;ಆಸ್ಪತ್ರೆ: 200ರು.ನಿಂದ 4000 ರು.&lt;/p&gt;&lt;p&gt;ಖಾಸಗಿ ಪಿಜಿಗೆ : 200 ರು.&lt;/p&gt;&lt;p&gt;ಹಾಸ್ಟಲ್&zwnj;ಗೆ: 3000 ರು.&lt;/p&gt;&lt;p&gt;ಮಾರ್ಟ್&zwnj;: 1500ರು.ನಿಂದ 5000 ರು.&lt;/p&gt;&lt;p&gt;ಬಸ್&zwnj; ಡಿಪೋ: 6500 ರು.&lt;/p&gt;&lt;p&gt;ಬಸ್&zwnj; ಸ್ಟ್ಯಾಂಡ್&zwnj;: 5000 ರು.&lt;/p&gt;&lt;p&gt;ಘನತ್ಯಾಜ್ಯ ನಿಯಮದಲ್ಲಿ ಕನಿಷ್ಠ 15 ರು.ನಿಂದ 100 ರು. ವರೆಗೆ ವಸೂಲಿ ಮಾಡುವುದಕ್ಕೆ ಅವಕಾಶವಿದೆ. ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಎಲ್ಲ ಮನೆಯಿಂದ ಮಾಸಿಕ 50 ರು. ಸಂಗ್ರಹಿಸುವುದಕ್ಕೆ ತೀರ್ಮಾನ ಮಾಡಲಾಗಿದೆ. ಅದರಂತೆ ಸಂಗ್ರಹಿಸಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಹೇಳುತ್ತಾರೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkamagaluru-garbage-charges-are-more-expensive-than-silicon-city-bengaluru-mrq/articleshow-1dgw33i"/>
        </item>
        <item>
            <title><![CDATA[ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾ ಕಳ್ಳತನ, ಅರಣ್ಯ ಇಲಾಖೆಗೆ ಹೊಡೆತ]]></title>
            <link>https://kannada.asianetnews.com/state/camera-installed-for-tiger-census-stolen-in-muttodi-forest-major-blow-to-forest-department-rav/articleshow-7fum4t7</link>
            <guid isPermaLink="true">https://kannada.asianetnews.com/state/camera-installed-for-tiger-census-stolen-in-muttodi-forest-major-blow-to-forest-department-rav/articleshow-7fum4t7</guid>
            <pubDate>Sat, 09 May 2026 12:54:46 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯದಲ್ಲಿ ಹುಲಿ ಗಣನೆಗೆ ಅಳವಡಿಸಿದ್ದ ಕ್ಯಾಮೆರಾಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯು ಅರಣ್ಯ ಇಲಾಖೆಯ ಕಾರ್ಯವೈಖರಿ ಮತ್ತು ಕಾಡುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr5swz5wzbsy77wgqfr8asmc,imgname-----------------------2026-05-09t125239.911-1778311396540.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು&zwnj;ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮೇ.9):&lt;/strong&gt; ಮುತ್ತೋಡಿ ಅಭಯಾರಣ್ಯದಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಹುಲಿ ಗಣನೆ ಕ್ಯಾಮೆರಾಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ನಡೆದಿದೆ.&zwnj;ನಾಡು ಮುಗೀತು.. ಕಾಡಲ್ಲೂ ಕಳ್ಳರ ಕಾಟ ಸ್ಪಾರ್ಟ್ ಆಯ್ತು ಎನ್ನುವ ಪ್ರಶ್ನೆ ಮೂಡಿಸಿದೆ. ಇದರ ಜೊತೆಗೆ &zwnj; ಈ ಘಟನೆ ಅರಣ್ಯ ಇಲಾಖೆಯ ಕಾರ್ಯಚಟುವಟಿಕೆಗಳ ಮೇಲೆ ಮಾತ್ರವಲ್ಲ, ಕಾಡುಪ್ರಾಣಿಗಳ ಸುರಕ್ಷತೆ ಮೇಲೂ ಪ್ರಶ್ನೆ ಎತ್ತಿದೆ.&lt;/p&gt;&lt;h2&gt;ಅರಣ್ಯಾಧಿಕಾರಿಗಳಿಂದ&zwnj; ದೂರು :&lt;/h2&gt;&lt;p&gt;ಮುತ್ತೋಡಿ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕ್ಯಾಮೆರಾಗಳು ಮೇ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಮೇ 5ರಂದು ಈ ಕ್ಯಾಮೆರಾಗಳು ಅಳವಡಿಸಿದ್ದ ಸ್ಥಳದಿಂದ ನಾಪತ್ತೆಯಾಗಿವೆ. ಈ ಕ್ಯಾಮೆರಾಗಳ ಒಟ್ಟು ಮೌಲ್ಯ 40,000 ಆಗಿದೆ.ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಮಾಹಿತಿ ನೀಡಿದ್ದು, ಕಾರ್ಯಾಚರಣೆ ವೇಳೆ ಅರಣ್ಯ ಪಾಲಕ ನಂದೀಶ್ ಅವರೊಂದಿಗೆ ಗಸ್ತಿನ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಈ ಕಳ್ಳತನ ಪ್ರಕರಣವು ತಕ್ಷಣವೇ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಅರಣ್ಯ ಇಲಾಖೆ ಹುಲಿ ಗಣನೆ ಕಾರ್ಯಾಚರಣೆಗೆ ಈ ಕ್ಯಾಮೆರಾಗಳನ್ನು ಕಡ್ಡಾಯ ಅನುಮತಿಯೊಂದಿಗೆ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದರೂ, ಕಳ್ಳರು ಕ್ಯಾಮೆರಾಗಳನ್ನು ಹೊತ್ತೊಯ್ದಿರುವುದು ಭದ್ರತೆಯ ವ್ಯತ್ಯಯವನ್ನೂ ತೋರಿಸುತ್ತದೆ.&lt;/p&gt;&lt;h3&gt;ಕಾಡು ಪ್ರಾಣಿಗಳ ಸಂರಕ್ಷಣೆಯ ಪ್ರಶ್ನೆ ಉದ್ಬವ :&lt;/h3&gt;&lt;p&gt;ಈ ಘಟನೆ ಕಾಡುಪ್ರಾಣಿಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಯ ನಿರಂತರ ಪರಿಶೀಲನೆಗೆ ತಡೆಯಾಗಿದೆ.ಸ್ಥಳೀಯ ವಾಸಿಗಳಿಗೆ ಈ ಕಳ್ಳತನವು ಆತಂಕದ ವಿಷಯವಾಗಿದೆ. ಕಾಡುಪ್ರಾಣಿ ಬೇಟೆಗಾರರು ಮತ್ತು ಮರಗಳ್ಳರು ಈ ಕಳ್ಳತನಕ್ಕೆ ಸಂಬಂಧ ಹೊಂದಿರುವ ಶಂಕೆಯಡಿಯಲ್ಲಿ ಪರಿಶೀಲನೆ ನಡೆಯುತ್ತಿದೆ. ತಕ್ಷಣದ ತನಿಖೆಯಲ್ಲಿ ಕಳ್ಳರು ಅನುಮತಿರಹಿತವಾಗಿ ಅಭಯಾರಣ್ಯಕ್ಕೆ ಪ್ರವೇಶ ಪಡೆದಿರುವ ಸಾಧ್ಯತೆಯೂ ಇದೆ.&lt;/p&gt;&lt;p&gt;ಅರಣ್ಯ ಇಲಾಖೆ ಈಗ ಕಾಡುಪ್ರಾಣಿಗಳ ನಿರೀಕ್ಷಿತ ಕಾರ್ಯಚಟುವಟಿಕೆಗಳನ್ನು ಕಾಪಾಡಲು ಮತ್ತು ಕಳ್ಳತನ ಪ್ರಕರಣವನ್ನು ಪತ್ತೆಮಾಡಲು ತ್ವರಿತ ಕ್ರಮ ಕೈಗೊಂಡಿದೆ. ಹುಲಿ ಗಣನೆ ಕಾರ್ಯಾಚರಣೆ ಮತ್ತು ಕಾಡು ಪ್ರಾಣಿಗಳ ಮೇಲಿನ ಅಧ್ಯಯನದ ಸುತ್ತಲೂ ಸಾರ್ವಜನಿಕರು ಮತ್ತು ಪರಿಸರ ಸಂರಕ್ಷಕರಲ್ಲಿ ಆತಂಕ ವ್ಯಕ್ತವಾಗಿದೆ.ಈ ಕಳ್ಳತನ ಘಟನೆ ಮುತ್ತೋಡಿ ಅಭಯಾರಣ್ಯದ ಭದ್ರತೆ, ಕಾಡುಪ್ರಾಣಿಗಳ ಮೇಲಿನ ನಿಗಾವಳಿ ಮತ್ತು ಅರಣ್ಯ ಇಲಾಖೆ ಕಾರ್ಯಕ್ಷಮತೆ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/camera-installed-for-tiger-census-stolen-in-muttodi-forest-major-blow-to-forest-department-rav/articleshow-7fum4t7"/>
        </item>
        <item>
            <title><![CDATA[ಮಳೆ ನಡುವೆ ಮಧ್ಯರಾತ್ರಿ ಕೇಳಿದ ಭಾರೀ ಸದ್ದು… ಹೊರಗೆ ಬಂದು ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್!]]></title>
            <link>https://kannada.asianetnews.com/karnataka-districts/chikkamagaluru-heavy-sound-heard-at-midnight-kalasa-villegers-shocked-as-they-walk-outside-rav/articleshow-8ed1s1t</link>
            <guid isPermaLink="true">https://kannada.asianetnews.com/karnataka-districts/chikkamagaluru-heavy-sound-heard-at-midnight-kalasa-villegers-shocked-as-they-walk-outside-rav/articleshow-8ed1s1t</guid>
            <pubDate>Tue, 12 May 2026 07:57:06 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಬೃಹತ್ ಮರವೊಂದು ಮನೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ವನಜಾಕ್ಷಿ ಎಂಬುವವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ. ಆದರೆ, ಮನೆ ಕಳೆದುಕೊಂಡು ಕುಟುಂಬ ಬೀದಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krcznwyma6aww3mkstgzmyze,imgname-----------------------2026-05-12t074112.472-1778552337364.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಲ್ಮಕ್ಕಿ ಹಿನಾರಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆ ಒಂದು ಕುಟುಂಬದ ಬದುಕನ್ನೇ ಕ್ಷಣಾರ್ಧದಲ್ಲಿ ಬೀದಿಗೆ ತಂದಿದೆ.&lt;/p&gt;&lt;p&gt;ಮಳೆ ಜೋರಾಗುತ್ತಿದ್ದಂತೆ ಗ್ರಾಮಸ್ಥರು ಮನೆಯೊಳಗೆ ಮಲಗಿದ್ದರು.ಈ ವೇಳೆ ಏಕಾಏಕಿ ಕೇಳಿಬಂದ ಭಾರೀ ಸದ್ದು ಇಡೀ ಊರನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಜನರು ಹೊರಗೆ ಓಡಿ ಬಂದಾಗ ಕಂಡ ದೃಶ್ಯ ನಿಜಕ್ಕೂ ಆತಂಕಕಾರಿ ಆಗಿತ್ತು.&lt;/p&gt;&lt;h2&gt;ಬೃಹತ್ ಮರ ಬಿದ್ದರೂ ಬದುಕುಳಿದರು!&lt;/h2&gt;&lt;p&gt;ಗ್ರಾಮದ ವನಜಾಕ್ಷಿ ಅವರ ಮನೆಯ ಮೇಲಕ್ಕೆ ಬೃಹತ್ ಗಾತ್ರದ ಮರವೇ ಉರುಳಿ ಬಿದ್ದಿತ್ತು. ಮರ ಬಿದ್ದ ರಭಸಕ್ಕೆ ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದೆ. ಮನೆಯ ಒಳಭಾಗದ ಸಾಮಗ್ರಿಗಳಿಗೂ ಭಾರೀ ಹಾನಿಯಾಗಿದೆ.&lt;/p&gt;&lt;p&gt;ಘಟನೆ ವೇಳೆ ಕುಟುಂಬಸ್ಥರು ಮನೆಯೊಳಗೇ ಇದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಕ್ಷಣಾರ್ಧದಲ್ಲಿ ಮನೆ ಹಾನಿಗೊಳಗಾದ ಪರಿಣಾಮ ಕುಟುಂಬ ಬೀದಿಗೆ ಬರುವಂತಾಗಿದೆ.&lt;/p&gt;&lt;p&gt;ಭಾರೀ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಕುಟುಂಬಕ್ಕೆ ನೆರವಾದರು. ನಂತರ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.&lt;/p&gt;&lt;h3&gt;ಅಪಾಯದ ಸ್ಥಿತಿಯಲ್ಲಿವೆ ಇನ್ನು ಅನೇಕ ಮರಗಳು&lt;/h3&gt;&lt;p&gt;ಇತ್ತೀಚಿನ ನಿರಂತರ ಮಳೆಯಿಂದಾಗಿ ಪ್ರದೇಶದ ಅನೇಕ ಮರಗಳು ಅಪಾಯಕರ ಸ್ಥಿತಿಯಲ್ಲಿ ನಿಂತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣ ತೆರವುಗೊಳಿಸಿ, ಹಾನಿಗೊಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/chikkamagaluru-heavy-sound-heard-at-midnight-kalasa-villegers-shocked-as-they-walk-outside-rav/articleshow-8ed1s1t"/>
        </item>
        <item>
            <title><![CDATA[ಮೂಡಿಗೆರೆಯಲ್ಲಿ ರಾತ್ರೋರಾತ್ರಿ ಮಾಯವಾದ ಜೋಡೆತ್ತು! ಬೇಸಾಯದ  ಎತ್ತುಗಳನ್ನು ಹುಡುಕಿಕೊಡಿ, ಪೊಲೀಸರ ಮೊರೆ ಹೋದ ರೈತ]]></title>
            <link>https://kannada.asianetnews.com/karnataka-districts/cattle-theft-in-chikkamagaluru-farmer-loses-pair-of-oxen-in-mudigere-village-gdp/articleshow-9ffeytk</link>
            <guid isPermaLink="true">https://kannada.asianetnews.com/karnataka-districts/cattle-theft-in-chikkamagaluru-farmer-loses-pair-of-oxen-in-mudigere-village-gdp/articleshow-9ffeytk</guid>
            <pubDate>Sat, 09 May 2026 14:04:28 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಪ್ಲಿ ಗ್ರಾಮದಲ್ಲಿ ರೈತರೊಬ್ಬರು ಸಾಕಿದ್ದ ಜೋಡೆತ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. 15 ವರ್ಷಗಳಿಂದ ಬೇಸಾಯಕ್ಕೆ ಆಧಾರವಾಗಿದ್ದ ಎತ್ತುಗಳನ್ನು ಕಳೆದುಕೊಂಡು ರೈತ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಗೋಹತ್ಯೆಗಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr5xtgq2b31rcyh34gx1dghd,imgname-chikkamagaluru-farmer-loses-pair-of-oxen-1778315510498.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸುಗಳ ಕಳ್ಳತನ ಪ್ರಕರಣ ಮತ್ತೆ ಜನರಿಗೆ ತಲೆನೋವಾಗಿದೆ. ಗದ್ದೆಯನ್ನು ಉಳುಮೆ ಮಾಡಲು ಪ್ರೀತಿಯಿಂದ ಸಾಕಿದ್ದ ಎತ್ತು, ಹೋರಿಗಳನ್ನು ಕಳ್ಳರು ಕಳ್ಳತನ ಮಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಇದೇ ರೀತಿ ಮೂಡಿಗೆರೆ ತಾಲೂಕಿನ ಸಂಪ್ಲಿ ಗ್ರಾಮದಲ್ಲಿ ರೈತನ ಜೋಡೆತ್ತುಗಳನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದ ಘಟನೆ ಆತಂಕ ಮೂಡಿಸಿದೆ. ಬೇಸಾಯದ ಅವಿಭಾಜ್ಯ ಅಂಗವಾಗಿದ್ದ ಎತ್ತುಗಳನ್ನು ಕಳೆದುಕೊಂಡ ರೈತ ಕುಟುಂಬ ಈಗ ಸಂಕಷ್ಟಗೆ ಸಿಲುಕಿದೆ.&lt;/p&gt;&lt;h2&gt;ತಡರಾತ್ರಿ ಕಳ್ಳರ ಕೈಚಳಕ&lt;/h2&gt;&lt;p&gt;ಸಂಪ್ಲಿ ಗ್ರಾಮದ ನಿವಾಸಿ ರೈತ ಚಿನ್ನೇಗೌಡರಿಗೆ ಸೇರಿದ ಎರಡು ಜೋಡೆತ್ತುಗಳನ್ನು ಮನೆಯಿಂದ ಪಕ್ಕದಲ್ಲಿರುವ ಸ್ಥಳದಲ್ಲಿ ಕಟ್ಟಲಾಗಿತ್ತು. ಕೊಟ್ಟಿಗೆ ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದ ಹಿನ್ನೆಲೆ, ತಾತ್ಕಾಲಿಕವಾಗಿ ಹೊರಗೆ ಕಟ್ಟಿದ್ದ ಈ ಎತ್ತುಗಳನ್ನು ದುಷ್ಕರ್ಮಿಗಳು ತಡರಾತ್ರಿ ಕದ್ದೊಯ್ದಿದ್ದಾರೆ. ರಾತ್ರಿ ಸುಮಾರು 11 ಗಂಟೆಯಿಂದ ಬೆಳಗ್ಗೆ 5 ಗಂಟೆಯೊಳಗೆ ಈ ಕಳ್ಳತನ ನಡೆದಿರುವುದಾಗಿ ಅಂದಾಜಿಸಲಾಗಿದೆ.&lt;/p&gt;&lt;p&gt;ಕಳ್ಳರು ಎತ್ತುಗಳನ್ನು ಹಗ್ಗ ಸಮೇತವಾಗಿ ತೆಗೆದುಕೊಂಡು ಹೋಗಿದ್ದು, ಸುಮಾರು 15 ವರ್ಷಗಳಿಂದ ಸಾಕಿಕೊಂಡು ಬಂದ ಈ ಎತ್ತುಗಳು ರೈತನಿಗೆ ಬೇಸಾಯದ ಪ್ರಮುಖ ಆಧಾರವಾಗಿದ್ದವು, ಅವುಗಳನ್ನು ಕಳೆದುಕೊಂಡಿರುವುದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಕುಟುಂಬದ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;h2&gt;ಗೋಹತ್ಯೆಗಾಗಿ ದನ ಕಳ್ಳತನ ಶಂಕೆ&lt;/h2&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಗ್ರಾಮದಲ್ಲಿ ದನಗಳ್ಳರ ಹಾವಳಿ ಹೆಚ್ಚುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದು, ಕೆಲವರು ಗೋಹತ್ಯೆಗಾಗಿ ದನ ಕಳ್ಳತನ ನಡೆಯುತ್ತಿದೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ.&lt;/p&gt;&lt;p&gt;ಗ್ರಾಮದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ದನ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕೆಂದು ರೈತರು ಹಾಗೂ ಗ್ರಾಮಸ್ಥರು ಪೊಲೀಸರನ್ನು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cattle-theft-in-chikkamagaluru-farmer-loses-pair-of-oxen-in-mudigere-village-gdp/articleshow-9ffeytk"/>
        </item>
        <item>
            <title><![CDATA[ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ದೇಶ ಸುಭದ್ರ: ಛಲವಾದಿ ನಾರಾಯಣಸ್ವಾಮಿ]]></title>
            <link>https://kannada.asianetnews.com/karnataka-districts/chalavadi-narayanaswamy-on-caste-system-congress-rss-gvd/articleshow-alxger8</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-on-caste-system-congress-rss-gvd/articleshow-alxger8</guid>
            <pubDate>Sun, 17 May 2026 21:28:24 +0530</pubDate>
            <description><![CDATA[&lt;p&gt;ದೇಶದಲ್ಲಿ ಜಾತಿ ವ್ಯವಸ್ಥೆ ಇಲ್ಲವಾದರೆ ಕಾಂಗ್ರೆಸ್&zwnj; ಬದುಕುವುದಿಲ್ಲ ಎಂದು ವಿಧಾನಪರಿಷತ್&zwnj;ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ದೇಶದಲ್ಲಿ ಆರ್&zwnj;ಎಸ್&zwnj;ಎಸ್&zwnj; ಪ್ರಬಲವಾದರೆ ಜಾತಿ ವ್ಯವಸ್ಥೆ ಇರುವುದಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮೇ.17): &lt;/strong&gt;ದೇಶದಲ್ಲಿ ಜಾತಿ ವ್ಯವಸ್ಥೆ ಇಲ್ಲವಾದರೆ ಕಾಂಗ್ರೆಸ್&zwnj; ಬದುಕುವುದಿಲ್ಲ ಎಂದು ವಿಧಾನಪರಿಷತ್&zwnj;ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ದೇಶದಲ್ಲಿ ಆರ್&zwnj;ಎಸ್&zwnj;ಎಸ್&zwnj; ಪ್ರಬಲವಾದರೆ ಜಾತಿ ವ್ಯವಸ್ಥೆ ಇರುವುದಿಲ್ಲ ಎಂಬ ಕಾರಣಕ್ಕೆ ದಲಿತರಿಗೆ ಮತ್ತು ದಲಿತ ಸಂಘಟನೆಗಳಿಗೆ ಆರ್&zwnj;ಎಸ್&zwnj;ಎಸ್&zwnj; ಬಗ್ಗೆ ತಪ್ಪು ಭಾವನೆ ಮೂಡಿಸಿ ಸಂಘದಿಂದ ದೂರವಿಡುವ ಕೆಲಸ ಕಾಂಗ್ರೆಸ್&zwnj; ಮಾಡುತ್ತಿದೆ ಎಂದು ದೂರಿದರು.&lt;/p&gt;&lt;p&gt;ಆರ್&zwnj;ಎಸ್&zwnj;ಎಸ್&zwnj;ನಲ್ಲಿ ಎಂದಿಗೂ ಜಾತಿ ಕೇಳುವುದಿಲ್ಲ. ಆರ್&zwnj;ಎಸ್&zwnj;ಎಸ್&zwnj;ಗೆ ಜಾತೀಯತೆ ನಿರ್ಮೂಲನೆ ಆಗಬೇಕೆಂದು ಶ್ರಮಿಸುತ್ತಿದೆ. ಜಾತಿ ವ್ಯವಸ್ಥೆ ನಿರ್ಮೂಲನೆಯಾದರೆ ದೇಶ ಸುಭದ್ರವಾಗಲಿದೆ. ಈ ಕಾರಣದಿಂದ ಎಲ್ಲರೂ ಒಗ್ಗಟ್ಟಾಗಬೇಕಿದೆ. ಇಲ್ಲವಾದರೆ, ದಲಿತರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಸಿದರು. ಬಿಜೆಪಿಯಲ್ಲಿ ಗರ್ಭಗುಡಿ ಇದೆ. ದಲಿತರು ಹೋದರೆ, ಅಲ್ಲಿಗೆ ಬಿಡುವುದಿಲ್ಲ ಎಂಬ ತಪ್ಪು ಕಲ್ಪನೆ ಮೂಡಿಸುವ ಪ್ರಯತ್ನ ಕಾಂಗ್ರೆಸ್&zwnj; ಇಂದಿಗೂ ಮಾಡುತ್ತಿದೆ.&lt;/p&gt;&lt;p&gt;ವಾಸ್ತವಾಗಿ ಬಿಜೆಪಿಯಲ್ಲಿ ಗರ್ಭಗುಡಿ ಎಂಬುದೇ ಇಲ್ಲ. ರಾಜಕೀಯ ವೇದಿಕೆಗಳು ಇರುವುದು ಜಾತಿ ಭೇದ ಮಾಡುವುದಕ್ಕೆ ಅಲ್ಲ. ಯಾರು ವಂಚಿತರು, ಶೋಷಿತರಿದ್ದಾರೋ ಅವರಿಗೆ ಭವಿಷ್ಯ ರೂಪಿಸುವ ಕೆಲಸ ರಾಜಕೀಯ ಪಕ್ಷಗಳು ಮಾಡಬೇಕು. ಇಂದಿನ ರಾಜಕೀಯ ಪಕ್ಷಗಳು ಈ ಕೆಲಸ ಮಾಡುತ್ತಿಲ್ಲ ಎಂದರು. ಸಿ.ಟಿ.ರವಿ ಅವರು ಡಾ.ಬಿ.ಆರ್&zwnj;.ಅಂಬೇಡ್ಕರ್&zwnj; ಹೆಸರಿನಲ್ಲಿ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಒಳ್ಳೆಯ ಕೆಲಸಗಳನ್ನು ಮಾಡಿದಾಗ ರಾಜಕೀಯವಾಗಿ ಟೀಕೆ, ಪ್ರಶ್ನೆ ಮಾಡುವುದು ಸಹಜ. ಆದರೆ, ಈ ಬಗ್ಗೆ ಅಲೋಚನೆ ಮಾಡದೇ ನಿಮ್ಮ ಕೆಲಸ ಮುಂದುವರಿಸಿ. ಒಂದು ದಿನ ನಿಮ್ಮ ಕೆಲಸ ಟೀಕೆ ಮಾಡಿದವರಿಗೆ ಉತ್ತರ ನೀಡಲಿವೆ ಎಂದರು.&lt;/p&gt;&lt;p&gt;ಎಲ್ಲರ ಹಿತ ಬಯಸುವುದೇ ಧರ್ಮ ಎಂದು ಬಿಜೆಪಿ ಭಾವಿಸಿದೆ. ಈ ಮೂಲಕ ದೇಶ ಕಟ್ಟುವ, ರಕ್ಷಣೆ ಕೆಲಸ ಮಾಡುತ್ತಿದ್ದೇವೆ. ಈ ದೇಶ ಕಾಪಾಡಬೇಕೆಂದರೆ ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಅತಿ ಮುಖ್ಯ ಎಂದು ಹೇಳಿದರು. ವಿಧಾನಪರಿಷತ್&zwnj; ಸದಸ್ಯ ಡಾ.ಸಿ.ಟಿ.ರವಿ ಮಾತನಾಡಿ, ಸಿದ್ದಾಂತಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇನೆ. ಅದು ಸಹ ದೇಶ ಮೊದಲು, ಹಿಂದುತ್ವ, ಸಮಾಜದ ಕಟ್ಟಕಡೆ ಮನುಷ್ಯನಿಗೆ ನೆರವಾಗುವುದು ಎಂಬ ಸಿದ್ದಾಂತವಾಗಿದೆ. ಈ ಹಿನ್ನೆಲೆಯಲ್ಲಿ ಭೀಮೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಬರೀ ರಾಜಕಾರಣ ಮಾಡುವುದು ಸುಲಭದ ಕೆಲಸ. ಸಮಾಜವನ್ನು ಒಡೆದು ರಾಜಕಾರಣ ಮಾಡಿಕೊಂಡು ಬಂದವರೇ ಹೆಚ್ಚು. ಈ ತತ್ವದ ಮೇಲೆ ನಂಬಿಕೆ ಇಲ್ಲ. ಸಮಾಜವನ್ನು ಒಗ್ಗೂಡಿಸುವ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದರು. ಸಂವಿಧಾನ ದೇಶದ ಆತ್ಮ. ಅದನ್ನು ಬಿಟ್ಟು ದೇಶಕಟ್ಟುವುದಕ್ಕೆ ಸಾಧ್ಯವಿಲ್ಲ. ಸಂವಿಧಾನದಿಂದ ವ್ಯವಸ್ಥೆಯಲ್ಲಿ ಪರಿವರ್ತನೆ ಆಗಿದೆ. ಆದರೆ, ಸಮಾಜ ಪರಿವರ್ತನೆ ಆದಾಗ ಮಾತ್ರ ಸದೃಢ ಸಮಾಜದಿಂದ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ ಎನ್ನುವ ತತ್ವದ ಆಧರಿಸಿ ಹಲವಾರು ವರ್ಷದಿಂದ ಬಸವ, ಕನಕದಾಸ, ಸರ್ವಜ್ಞ, ಅಂಬೇಡ್ಕರ್&zwnj; ಜಯಂತಿಯನ್ನು ಜಾತಿಯಿಂದ ಹೊರತಾಗಿ ಮಾಡುತ್ತಿದ್ದೇವೆ.&lt;/p&gt;&lt;p&gt;ಕುವೆಂಪು, ಬಸವಣ್ಣ, ಅಂಬೇಡ್ಕರ್&zwnj;, ವಿವೇಕಾನಂದ ಕೇವಲ ಜಾತಿಗಾಗಿ ಬದುಕಿದವರಲ್ಲ. ಅವರ ಉಪದೇಶಗಳು, ಬದುಕಿನ ರೀತಿ ಜಾತಿ ಸಂಕೋಲೆ ಮೀರಿದ್ದಾಗಿತ್ತು. ಹೀಗಾಗಿ ಮನೆ ಮತ್ತು ಮನಗಳಲ್ಲಿ ಬದಲಾವಣೆ ತರಬೇಕೆಂಬ ಹಿನ್ನೆಲೆಯಲ್ಲಿ ಈ ಬಾರಿ ಅಂಬೇಡ್ಕರ್&zwnj; ಅವರ 135ನೇ ಜಯಂತಿಯನ್ನು 135 ಮನೆಗಳಲ್ಲಿ ಆಚರಣೆ ಮಾಡಬೇಕೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಬಸವಣ್ಣ ವಚನ ಪಾಲನೆಗಿಂತ ಶ್ರೇಷ್ಠ ಧರ್ಮ ಆಚರಣೆ ಇಲ್ಲ&lt;/strong&gt;&lt;/h2&gt;&lt;p&gt;ಧರ್ಮವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೊಡ್ಡ ಗ್ರಂಥಗಳು ಬೇಕಿಲ್ಲ. ಬಸವಣ್ಣನವರ &lsquo;ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ&rsquo; ಈ ಒಂದು ವಚನವನ್ನು ಬದುಕಿನಲ್ಲಿ ಪಾಲನೆ ಮಾಡಿದರೆ ಇದಕ್ಕಿಂತ ಶೇಷ್ಠ ಧಾರ್ಮಿಕ ಆಚರಣೆ ಬೇರೆಯಾವುದೂ ಇಲ್ಲ. ಭಾರತೀಯ ಪರಂಪರೆಯಲ್ಲಿ ಧಾರ್ಮಿಕ ಆಚರಣೆ ಎಂದರೆ, ಶಿವದಾರ, ಜನಿವಾರ, ಉಡುದಾರಕ್ಕೆ, ವಿಭೂತಿ, ಕುಂಕುಮಕ್ಕೆ ಸೀಮಿತವಾಗಿಲ್ಲ ಎಂದು ಸಿ.ಟಿ.ರವಿ ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-on-caste-system-congress-rss-gvd/articleshow-alxger8"/>
        </item>
        <item>
            <title><![CDATA[Photos: ದಲಿತ ಸ್ವಾಮೀಜಿಗಳ ಪಾದಪೂಜೆ ಮಾಡಿದ ಸಿಟಿ ರವಿ]]></title>
            <link>https://kannada.asianetnews.com/gallery/state/ct-ravi-performs-pada-puja-for-dalit-seers-at-chikkamagaluru-bhimotsava-d420krv</link>
            <guid isPermaLink="true">https://kannada.asianetnews.com/gallery/state/ct-ravi-performs-pada-puja-for-dalit-seers-at-chikkamagaluru-bhimotsava-d420krv</guid>
            <pubDate>Sat, 16 May 2026 12:02:08 +0530</pubDate>
            <description><![CDATA[&lt;p&gt;ಕ್ಷೇತ್ರದಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಯಲ್ಲಿ ನಡೆದ ಅಪೂರ್ವ 'ಭೀಮೋತ್ಸವ' ಅಭಿಯಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ನಿವಾಸದಲ್ಲಿ ಭಕ್ತಿಪೂರ್ವಕ ತೆರೆ ಬಿದ್ದಿದೆ. ಈ ಐತಿಹಾಸಿಕ ಸಮಾರೋಪ ಸಮಾರಂಭದ ವಿಶೇಷ ಕ್ಷಣಗಳ ಫೋಟೋ ಝಲಕ್ ಇಲ್ಲಿದೆ:&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqpkjkv86mcw2e9aj94zvxv,imgname-4-1778911922811.png" type="image/jpeg" height="390" width="690"/>
            <content:encoded><![CDATA[&lt;p&gt;ಕ್ಷೇತ್ರದಾದ್ಯಂತ ಕಳೆದ ಒಂದೂವರೆ ತಿಂಗಳಿನಿಂದ ಮನೆ ಮನೆಯಲ್ಲಿ ನಡೆದ ಅಪೂರ್ವ 'ಭೀಮೋತ್ಸವ' ಅಭಿಯಾನಕ್ಕೆ ಬಿಜೆಪಿ ಮುಖಂಡ ಸಿ.ಟಿ.ರವಿ ಅವರ ನಿವಾಸದಲ್ಲಿ ಭಕ್ತಿಪೂರ್ವಕ ತೆರೆ ಬಿದ್ದಿದೆ. ಈ ಐತಿಹಾಸಿಕ ಸಮಾರೋಪ ಸಮಾರಂಭದ ವಿಶೇಷ ಕ್ಷಣಗಳ ಫೋಟೋ ಝಲಕ್ ಇಲ್ಲಿದೆ:&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿರುವ ಸಿ.ಟಿ.ರವಿ ನಿವಾಸದಲ್ಲಿ ಭೀಮೋತ್ಸವ ಸಮಾರೋಪ ಸಮಾರಂಭ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 400ಕ್ಕೂ ಅಧಿಕ ಜನರು ಭಾಗಿಯಾಗಿ ಗಮನ ಸೆಳೆದರು.&lt;/p&gt;&lt;img&gt;&lt;p&gt;ತಮ್ಮ ನಿವಾಸದಲ್ಲೇ ದಲಿತ ಸ್ವಾಮೀಜಿಗಳಾದ ಶಿವಶಂಕರ ಶಿವಯೋಗಿ, ಬಸವ ನಾಗಿದೇವ ಹಾಗೂ ಕುಂಬಾರ ಗುಂಡಯ್ಯ ಶ್ರೀಗಳಿಗೆ ಸಿ.ಟಿ.ರವಿ ಪಾದಪೂಜೆ ನೆರವೇರಿಸಿದರು. ಈ ದೃಶ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯ್ತು.&lt;/p&gt;&lt;img&gt;&lt;p&gt;ಕಳೆದ ಒಂದೂವರೆ ತಿಂಗಳಿನಿಂದ ಕ್ಷೇತ್ರದ ವಿವಿಧ ಭಾಗಗಳಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಸಮಾರೋಪವೇ ಈ ವಿಶೇಷ ಕಾರ್ಯಕ್ರಮ.&lt;/p&gt;&lt;img&gt;&lt;p&gt;ಭೀಮೋತ್ಸವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಮುಖಂಡ ಚಲವಾದಿ ನಾರಾಯಣ ಸ್ವಾಮಿ ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು.&lt;/p&gt;&lt;img&gt;&lt;p&gt;ಇಂದು ಬಸವನಹಳ್ಳಿ ನಿವಾಸದಲ್ಲಿ ಕಾರ್ಯಕ್ರಮದ ವಿಚಾರ ತಿಳಿದು ಕಾರ್ಯಕರ್ತರು, ಭಕ್ತರು ಸೇರಿ ಸುಮಾರು 400ಕ್ಕೂ ಹೆಚ್ಚು ಜನರು ಭಾಗಿಯಾದರು. ಸಿ.ಟಿ.ರವಿ ನಿವಾಸದ ಅಂಗಳದಲ್ಲಿ ನಡೆದ ಭೀಮೋತ್ಸವದ ಅದ್ದೂರಿಯಾಗಿ ನಡೆಯಿತು.&lt;/p&gt;&lt;img&gt;&lt;p&gt;ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ನಿಮಿತ್ತ ಕಳೆದ ಒಂದೂವರೆ ತಿಂಗಳಿನಿಂದ ಚಿಕ್ಕಮಗಳೂರು ನಗರ ಸೇರಿದಂತೆ ಕ್ಷೇತ್ರದಾದ್ಯಂತ ಬಿಜೆಪಿ ಕಾರ್ಯಕರ್ತರ ಮನೆ ಮನೆಯಲ್ಲಿ ಭೀಮೋತ್ಸವ ಹಮ್ಮಿಕೊಳ್ಳುವ ಮೂಲಕ ಸಿಟಿ ರವಿ ದಲಿತರು ನಮ್ಮವರೇ ಎಂಬ ಮಹತ್ವದ ಸಂದೇಶ ಸಾರಿದರು.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/ct-ravi-performs-pada-puja-for-dalit-seers-at-chikkamagaluru-bhimotsava-d420krv"/>
        </item>
        <item>
            <title><![CDATA[ಕಡ್ಡಾಯ ಮತದಾನ ಜಾರಿಯಾದರೆ ಮಾತ್ರ ವ್ಯವಸ್ಥೆ ಬದಲಾಗುತ್ತದೆ: ಮುಖ್ಯಮಂತ್ರಿ ಚಂದ್ರು ಸಲಹೆ]]></title>
            <link>https://kannada.asianetnews.com/karnataka-districts/mukhyamantri-chandru-on-mandatory-voting-election-reforms-gvd/articleshow-e8chvn1</link>
            <guid isPermaLink="true">https://kannada.asianetnews.com/karnataka-districts/mukhyamantri-chandru-on-mandatory-voting-election-reforms-gvd/articleshow-e8chvn1</guid>
            <pubDate>Tue, 12 May 2026 21:56:27 +0530</pubDate>
            <description><![CDATA[&lt;p&gt;ಚುನಾವಣೆಗಳನ್ನು ರಾಜಕೀಯ ಪಕ್ಷಗಳ ಬದಲಿಗೆ ಸರ್ಕಾರವೇ ನಡೆಸುವುದು ಸೇರಿದಂತೆ ಪ್ರಮುಖ ಸುಧಾರಣೆಗಳನ್ನು ಮಾಡಿದಾಗ ಮಾತ್ರ ವ್ಯವಸ್ಥೆ ಸರಿ ಪಡಿಸುವುದಕ್ಕೆ ಸಾಧ್ಯ ಎಂದು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hnfjgt6438va3fyg38dyrptp,imgname-Mukhyamantri-Chandru-1706698500292.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮೇ.12):&lt;/strong&gt; ಕಡ್ಡಾಯ ಮತದಾನ, ಚುನಾವಣೆಗಳನ್ನು ರಾಜಕೀಯ ಪಕ್ಷಗಳ ಬದಲಿಗೆ ಸರ್ಕಾರವೇ ನಡೆಸುವುದು ಸೇರಿದಂತೆ ಪ್ರಮುಖ ಸುಧಾರಣೆಗಳನ್ನು ಮಾಡಿದಾಗ ಮಾತ್ರ ವ್ಯವಸ್ಥೆ ಸರಿ ಪಡಿಸುವುದಕ್ಕೆ ಸಾಧ್ಯ ಎಂದು ಹಿರಿಯ ಕಲಾವಿದ, ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು. ಡಾ.ಬಿ,ಆರ್&zwnj;.ಅಂಬೇಡ್ಕರ್&zwnj; ಸಂವಿಧಾನದ ಆಶಯಗಳು ಇಂದಿಗೂ ಈಡೇರಿಲ್ಲ. ಸಂವಿಧಾನದ ವಿರುದ್ಧ ನಡೆಯುತ್ತಿದ್ದೇವೆ. ಪ್ರಜೆಗಳನ್ನು ಗುಲಾಮರಾಗಿ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆ ಸುಧಾರಣೆ ಆಗಬೇಕಾದರೆ, ಕಡ್ಡಾಯ ಮತದಾನ ವ್ಯವಸ್ಥೆ ಜಾರಿಗೊಳಿಸಬೇಕು.&lt;/p&gt;&lt;p&gt;ಜತೆಗೆ, ಐದು ವರ್ಷಕ್ಕೆ ಆಯ್ಕೆ ಮಾಡಿದ ಜನಪ್ರತಿನಿಧಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ, ಆ ಜನಪ್ರತಿನಿದಿಯನ್ನು ಕೆಳಗೆ ಇಳಿಸುವ ವ್ಯವಸ್ಥೆ ಇರಬೇಕು. ಮುಖ್ಯವಾಗಿ ಸದ್ಯ ರಾಜಕೀಯ ಪಕ್ಷಗಳು ನಡೆಸುತ್ತಿರುವ ಚುನಾವಣೆಯನ್ನು ಸರ್ಕಾರವೇ ನಡೆಸಬೇಕು. ಅಭ್ಯರ್ಥಿಯಿಂದ ನಿಗದಿತ ಪ್ರಮಾಣದಷ್ಟು ಹಣ ಪಡೆದು, ಪ್ರಚಾರ ಕಾರ್ಯವನ್ನು ಸರ್ಕಾರವೇ ಮಾಡಬೇಕು. ಹಣ, ಮದ್ಯ ಹಂಚಿಕೆ ಮಾಡುವುದಕ್ಕೆ ಅವಕಾಶ ನೀಡಬಾರದು. ಅಭ್ಯರ್ಥಿಗಳ ಪಟ್ಟಿ ಹಾಗೂ ಅಭ್ಯರ್ಥಿಯ ಸ್ವ ವಿವರವನ್ನು ಪ್ರಚಾರ ಮಾಡಬೇಕು. ಆಗ ಜನರು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;1985ರಷ್ಟು ಜನತಾ ಪಕ್ಷದಿಂದ ಗೌರಿಬಿದನೂರಿನಿಂದ ಶಾಸಕನಾಗಿ ಆಯ್ಕೆ ಆಗಿದ್ದೆ, ಪಕ್ಷ ನೀಡಿದ ನಾಲ್ಕ ಲಕ್ಷ ರು, ವೆಚ್ಚ ಮಾಡಿ ಚುನಾವಣೆ ಮಾಡಲಾಗಿತ್ತು. ಆದರೀಗ ಚುನಾವಣೆ ಮಾಡುವುದಕ್ಕೆ ಬರೋಬ್ಬರಿ 40 ಕೋಟಿ ರು.ನಿಂದ 50 ಕೋಟಿ ರು. ಬೇಕಿದೆ. ಅಷ್ಟೇ ಅಲ್ಲ, ಧರ್ಮ, ಜಾತಿ ಆಧಾರಿತವಾಗಿ ಚುನಾವಣೆಗಳು ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷ ಆಗಿದ್ದು, ಕುಟುಂಬ ರಾಜಕಾರಣ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ವ್ಯವಸ್ಥೆ ಬದಲಾಗಬೇಕಾದರೆ, ಮತದಾರರು ದಂಗೆ ಏಳಬೇಕು. ಯುವಕರು ಮತದಾನ ಮಾಡುವಾಗ ದೇಶದ ಹಿತದೃಷ್ಟಿ ಇಟ್ಟುಕೊಂಡು ಮತದಾನ ಮಾಡಬೇಕು. ಆತ್ಮಸಾಕ್ಷಿಗೆ ಮತ ಹಾಕಬೇಕು ಎಂದರು. ಮೈಸೂರು ದಾರಿ ಫೌಂಡೇಷನ್ ಕಾರ್ಯದರ್ಶಿ ತಗಡೂರು ವೀರೇಶ್&zwnj;ಕುಮಾರ್ ಮಾತನಾಡಿ, ಡಾ.ಬಿ.ಆರ್&zwnj;.ಅಂಬೇಡ್ಕರ್&zwnj; ನೀಡಿದ ಸಂವಿಧಾನ ದೇಶದಲ್ಲಿ ಇಂದಿಗೂ ಜಾರಿಗೆ ಬಂದಂತೆ ಅನಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳು ಆಗಬೇಕಾದ ಪ್ರಜೆಗಳು ಗುಲಾಮರಾಗಿದ್ದು, ಕುಟುಂಬ ರಾಜಕಾರಣ ನಡೆಯುತ್ತಿದೆ. ಯುವಕರು ರಾಜಕಾರಣಕ್ಕೆ ಬರಬಾರದು ಎನ್ನುವಷ್ಟು ಕ್ಷೇತ್ರ ಕಲುಷಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಸರ್ಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಪೈಕಿ ಜನರಿಗೆ ಅತ್ಯಂತ ಅಗತ್ಯವಿರುವ ಶಿಕ್ಷಣ ಮತ್ತು ಆರೋಗ್ಯದ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯ ಎಂದರು. ದಾರಿ ಫೌಂಡೇಷನ್ ಜಿಲ್ಲಾ ಸಂಚಾಲಕ ಡಾ.ಕೆ.ಸುಂದರಗೌಡ ಮಾತನಾಡಿದರು. ಶ್ರೀ ಶಾರದ ಸ್ಕೂಲ್ ಆಫ್ ಲಾ ಪ್ರಭಾರ ಪ್ರಾಂಶುಪಾಲ ಎಸ್.ಕುಮಾರ್, ಕಾಲೇಜು ಕಾರ್ಯದರ್ಶಿ ಜಿ.ಆರ್.ಶ್ರವಣ್, ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್&zwnj;ಕುಮಾರ್, ಮೈಸೂರು ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ ಹಾಜರಿದ್ದರು.&lt;/p&gt;&lt;h2&gt;&lt;strong&gt;ಶೇ.70ರಷ್ಟು ರಾಜಕಾರಣಗಳು ಮೆಡಿಕಲ್&zwnj; ಕಾಲೇಜುಗಳ ಮಾಲೀಕರು&lt;/strong&gt;&lt;/h2&gt;&lt;p&gt;ರಾಜ್ಯದ ವಿಧಾನಸಭೆಗೆ ಆಯ್ಕೆಯಾಗುವ ಶೇ.70 ರಷ್ಟು ರಾಜಕಾರಣಗಳು ಖಾಸಗಿ ಮೆಡಿಕಲ್&zwnj; ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ನೀಡದೇ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಪಿತೂರಿ ಮಾಡಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಶಿಕ್ಷಕರು ಉಪನ್ಯಾಸಕರನ್ನು ನೇಮಕಾತಿ ಮಾಡದಂತೆ ಒತ್ತಡ ಹಾಕುವ ವ್ಯವಸ್ಥೆ ಇದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mukhyamantri-chandru-on-mandatory-voting-election-reforms-gvd/articleshow-e8chvn1"/>
        </item>
        <item>
            <title><![CDATA[ಚಿಕ್ಕಮಗಳೂರು: ₹1 ಕೋಟಿ ಮೌಲ್ಯದ 'ಎರಡು ತಲೆ ಹಾವು' ಮಾರಾಟಕ್ಕೆ ಯತ್ನ; ಐವರು ಖದೀಮರು ಅರಣ್ಯ ದಳದ ಬಲೆಗೆ!]]></title>
            <link>https://kannada.asianetnews.com/gallery/karnataka-districts/chikkamagaluru-five-arrested-for-attempting-to-sell-two-headed-snake-worth-rs-1-crore-sat-egoz252</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-five-arrested-for-attempting-to-sell-two-headed-snake-worth-rs-1-crore-sat-egoz252</guid>
            <pubDate>Tue, 12 May 2026 15:53:29 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ 1 ಕೋಟಿ ರೂ. ಮೌಲ್ಯದ ಅಪರೂಪದ ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಸಿಐಡಿ ಅರಣ್ಯ ದಳ ಭೇದಿಸಿದೆ. ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿದ ಪೊಲೀಸರು, ಆಂಧ್ರಪ್ರದೇಶ ಮೂಲದವರೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krdtt8pkg3ctc9z5535vdkr2,imgname-chikkamagaluru-two-headed-snake-1778580792019.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ 1 ಕೋಟಿ ರೂ. ಮೌಲ್ಯದ ಅಪರೂಪದ ಎರಡು ತಲೆ ಹಾವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಸಿಐಡಿ ಅರಣ್ಯ ದಳ ಭೇದಿಸಿದೆ. ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿದ ಪೊಲೀಸರು, ಆಂಧ್ರಪ್ರದೇಶ ಮೂಲದವರೂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ವನ್ಯಜೀವಿ ಮಾರಾಟಕ್ಕೆ ಮುಂದಾಗಿದ್ದ ಜಾಲವನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಭೇದಿಸಿದ್ದಾರೆ. ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಪರೂಪದ 'ಎರಡು ತಲೆ ಹಾವು' (Red Sand Boa) ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದ ವಾಜಪೇಯಿ ಲೇಔಟ್ ಬಡಾವಣೆಯಲ್ಲಿ ಈ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿ, ಹಾವನ್ನು ಕೈಬದಲಾಯಿಸುವ ವೇಳೆ ಆರೋಪಿಗಳನ್ನು ರೆಡ್&zwnj;ಹ್ಯಾಂಡ್ ಆಗಿ ಹಿಡಿದಿದ್ದಾರೆ.&lt;/p&gt;&lt;img&gt;&lt;p&gt;ಈ ಪ್ರಕರಣದಲ್ಲಿ ಅಂತರರಾಜ್ಯ ಸಂಪರ್ಕ ಹೊಂದಿರುವ ಐವರನ್ನು ಬಂಧಿಸಲಾಗಿದೆ:&lt;/p&gt;&lt;p&gt;ವಂಶಿಕೃಷ್ಣ (ಆಂಧ್ರಪ್ರದೇಶ ಮೂಲದವನು)&lt;/p&gt;&lt;p&gt;ಆರೀಫ್ ಬಾಷಾ (ಆಂಧ್ರಪ್ರದೇಶ ಮೂಲದವನು)&lt;/p&gt;&lt;p&gt;ಯತೀಶ್ (ಶಿವಮೊಗ್ಗ ಜಿಲ್ಲೆ - ಈತನನ್ನೇ ಪ್ರಕರಣದ ಕಿಂಗ್&zwnj;ಪಿನ್ ಎನ್ನಲಾಗಿದೆ)&lt;/p&gt;&lt;p&gt;ಷಫಿ (ತುಮಕೂರು ಮೂಲದವನು)&lt;/p&gt;&lt;p&gt;ಆರೀಫ್ ಬಾಷಾ (ತುಮಕೂರು ಮೂಲದವನು)&lt;/p&gt;&lt;img&gt;&lt;p&gt;ಇನ್ನು ಈ ಪ್ರಕರಣ ಬೇಧಿಸಿದ ನಂತರ ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ಸ್ವಿಫ್ಟ್ ಕಾರು, ಒಂದು ವ್ಯಾಗನರ್ ಕಾರು ಹಾಗೂ ಐದು ಮೊಬೈಲ್ ಫೋನ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಪರೂಪದ ಹಾವನ್ನು ಚಿತ್ರದುರ್ಗ ಜಿಲ್ಲೆಯ ಚನ್ನಗಿರಿ ಭಾಗದಲ್ಲಿ ಸೆರೆಹಿಡಿಯಲಾಗಿತ್ತು. ಅಲ್ಲಿಂದ ಚಿಕ್ಕಮಗಳೂರಿಗೆ ತಂದು, ಆಂಧ್ರಪ್ರದೇಶದ ಏಜೆಂಟರ ಮೂಲಕ ವಿದೇಶಕ್ಕೆ ಕೋಟಿಗಟ್ಟಲೆ ಹಣಕ್ಕೆ ಕಳ್ಳಸಾಗಣೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಈ ಹಾವಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಔಷಧೀಯ ಉದ್ದೇಶ ಹಾಗೂ ವಾಮಾಚಾರದ ನಂಬಿಕೆಗಳಿಗಾಗಿ ಇದನ್ನು ಬಳಸಲಾಗುತ್ತದೆ ಎಂಬ ವದಂತಿಗಳೇ ಈ ಅಕ್ರಮ ವ್ಯವಹಾರಕ್ಕೆ ಕಾರಣ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಎರಡು ತಲೆ ಹಾವು (ಮಣ್ಣು ಮುಕ್ಕುವ ಹಾವು) ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಜೀವಿಯಾಗಿದೆ. ಇದರ ಮಾರಾಟ ಅಥವಾ ಸಾಗಾಟ ಶಿಕ್ಷಾರ್ಹ ಅಪರಾಧ. ಸದ್ಯ ಸಿಐಡಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಜಾಲದ ಹಿಂದೆ ಇನ್ನೂ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;&lt;strong&gt;ಅರಣ್ಯ ಇಲಾಖೆ ಮನವಿ: '&lt;/strong&gt;ವನ್ಯಜೀವಿಗಳ ಅಕ್ರಮ ವ್ಯಾಪಾರ ಪ್ರಕೃತಿಯ ಸಮತೋಲನಕ್ಕೆ ಧಕ್ಕೆ ತರುತ್ತದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ &zwnj;ನ್ಯೂಸ್&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-five-arrested-for-attempting-to-sell-two-headed-snake-worth-rs-1-crore-sat-egoz252"/>
        </item>
        <item>
            <title><![CDATA[ಚಿಕ್ಕಮಗಳೂರು ಸೈಬರ್ ವಂಚನೆ: ಮೊಬೈಲ್‌ಗೆ Apk ಫೈಲ್ ಬಂದಿಲ್ಲ, OTP ಇಲ್ಲ; ಆದ್ರೂ ಖಾತೆಯಿಂದ ₹18 ಲಕ್ಷ ಮಾಯ!]]></title>
            <link>https://kannada.asianetnews.com/karnataka-districts/chikkamagaluru-cyber-crime-rs-18-lakh-fraud-without-otp-and-any-apk-link/articleshow-koa6rzg</link>
            <guid isPermaLink="true">https://kannada.asianetnews.com/karnataka-districts/chikkamagaluru-cyber-crime-rs-18-lakh-fraud-without-otp-and-any-apk-link/articleshow-koa6rzg</guid>
            <pubDate>Fri, 08 May 2026 21:21:58 +0530</pubDate>
            <description><![CDATA[&lt;p&gt;ಕಾಫಿನಾಡು ಚಿಕ್ಕಮಗಳೂರಿನಲ್ಲಿ&zwnj; ಸೈಬರ್ ಕ್ರೈಂ ಹೆಚ್ಚಳ&zwnj;, ಜನವರಿಯಿಂದ ಇಲ್ಲಿತನಕ 29 ಪ್ರಕರಣ ದಾಖಲು. OTP ಇಲ್ಲ, APK ಲಿಂಕ್ ಇಲ್ಲ&hellip; ಖಾತೆಯಿಂದ 18.24 ಲಕ್ಷ ರೂ. ಮಾಯ ಆಗಿದ್ದು ಹೇಗೆ? ಇಲ್ಲಿದೆ ನೋಡಿ ವಿಶೇಷ ವರದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr44ftt0ccg5g12hp1w8ykvm,imgname-gemini-generated-image-h3y8c1h3y8c1h3y8--1--1778255391551.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು&zwnj; ಕಿರಣ್, ಏಷ್ಯಾನೆಟ್ ಸುವರ್ಣ &zwnj;ನ್ಯೂಸ್&amp;nbsp;&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮೇ 08) : &lt;/strong&gt;ಸೈಬರ್ ಕ್ರಿಮಿಗಳ ಅಟ್ಟಹಾಸಕ್ಕೆ ಕಾಫಿನಾಡ ಜನತೆ ಬೆಚ್ಚಿಬಿದ್ದಿದ್ದು, ಇದೀಗ ಚಿಕ್ಕಮಗಳೂರು ನಗರದ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಗೆ ಯಾವುದೇ ಆಪ್&zwnj;ನ ಲಿಂಕ್ ಬಂದಿಲ್ಲ, ಒಟಿಪಿಯೂ ಬಂದಿಲ್ಲ. ಆದರೂ ಹಂತ ಹಂತವಾಗಿ 18 ಲಕ್ಷ ರೂ. ಬ್ಯಾಂಕ್ ಖ್ಯಾತೆಯಿಂದ ಮಂಗಮಾಯಾಗಿದೆ. ಇಲ್ಲಿದೆ ನೋಡಿ ಸೈಬರ್ ವಂಚಕರ ಹೊಸ ವರಸೆ.&lt;/p&gt;&lt;p&gt;ರಾಷ್ಟ್ರದ ಪ್ರಮುಖ ಬ್ಯಾಂಕ್&zwnj;ಗಳಲ್ಲಿ ಒಂದಾಗಿರುವ ಐ.ಡಿ.ಎಫ್&zwnj;.ಸಿ. ಫಸ್ಟ್ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 18.24 ಲಕ್ಷ ರೂಪಾಯಿ ಹಣ ವಂಚಕರು ವರ್ಗಾವಣೆ ಮಾಡಿಕೊಂಡಿರುವುದು ಬ್ಯಾಂಕ್ ಪರಿಶೀಲನೆ ವೇಳೆ ಪತ್ತೆಯಾಗಿದೆ. ಮಹಿಳೆಯ ಖಾತೆಯಿಂದ ಮಾರ್ಚ್ 4ರಿಂದ ಏಪ್ರಿಲ್ 21ರವರೆಗೆ ವಿವಿಧ ದಿನಾಂಕಗಳಲ್ಲಿ ಹಣ ಕಡಿತವಾಗಿದೆ. ಈ ಮಹಿಳೆಯ ಖಾತೆಯಿಂದ ಹಲವು ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಎಂದು ಶಂಕಿಸಲಾಗಿದೆ. ವಿಶೇಷವೆಂದರೆ, ಹಣ ವರ್ಗಾವಣೆ ನಡೆದಿದ್ದರೂ ಮೊಬೈಲ್&zwnj;ಗೆ ಯಾವುದೇ OTP, ಅಲರ್ಟ್ ಸಂದೇಶ ಅಥವಾ ಅನುಮಾನಾಸ್ಪದ APK ಲಿಂಕ್ ಬಂದಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಖಾತೆಯಿಂದ ಹಣ ಕಣ್ಮರೆ ಆತಂಕ :&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಸೈಬರ್ ವಂಚಕರು OTP ಪಡೆದು ಅಥವಾ ನಕಲಿ ಲಿಂಕ್&zwnj;ಗಳನ್ನು ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ, ಯಾವುದೇ ರೀತಿಯ ಎಚ್ಚರಿಕೆ ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣ ಕಣ್ಮರೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗಲೇ ವಂಚನೆ ನಡೆದಿರುವುದು ಮಹಿಳೆಗೆ ತಿಳಿದಿದೆ. ಈ ಸಂಬಂಧ ಮಹಿಳೆ ಚಿಕ್ಕಮಗಳೂರು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸುವಂತೆ ಹಾಗೂ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಣ ವರ್ಗಾವಣೆಯಾದ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದು, ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳು ಮತ್ತು ಡಿಜಿಟಲ್ ವಾಲೆಟ್&zwnj;ಗಳ ಮೂಲಕ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ಜಿಲ್ಲೆಯಲ್ಲಿ ಸೈಬರ್ ವಂಚನೆ ಹೆಚ್ಚಳ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 29 ವಿವಿಧ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ಸುಮಾರು 4 ರಿಂದ 5 ಕೋಟಿ ರೂಪಾಯಿವರೆಗೆ ಹಣ ಕಳೆದುಕೊಂಡಿರುವುದಾಗಿ ತಿಳಿದುಬಂದಿದೆ. ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹಣ ದ್ವಿಗುಣಗೊಳಿಸುವ ಆಮಿಷ, ಆನ್&zwnj;ಲೈನ್ ಹೂಡಿಕೆ ವಂಚನೆ, ನಕಲಿ ಲಿಂಕ್&zwnj;ಗಳು, ಬ್ಯಾಂಕ್ KYC ಅಪ್ಡೇಟ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳೇ ಹೆಚ್ಚಾಗಿವೆ. ಈವರೆಗೆ ದಾಖಲಾಗಿರುವ 29 ಪ್ರಕರಣಗಳಲ್ಲಿ 6 ಪ್ರಕರಣಗಳನ್ನು ಮಾತ್ರ ಪೊಲೀಸರು ಭೇದಿಸಿದ್ದು, ಉಳಿದ ಪ್ರಕರಣಗಳ ತನಿಖೆ ಮುಂದುವರೆದಿದೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಸೈಬರ್ ಠಾಣೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಪರಿಚಿತ ಕರೆಗಳು, ಹೂಡಿಕೆ ಆಮಿಷಗಳು, ಬ್ಯಾಂಕ್ ಮಾಹಿತಿ ಕೇಳುವ ಸಂದೇಶಗಳು ಹಾಗೂ ಅನುಮಾನಾಸ್ಪದ ಲಿಂಕ್&zwnj;ಗಳ ಬಗ್ಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ವ್ಯವಹಾರ ಕಂಡುಬಂದರೆ ತಕ್ಷಣ ಬ್ಯಾಂಕ್ ಮತ್ತು ಸೈಬರ್ ಸಹಾಯವಾಣಿ 1930ಕ್ಕೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-cyber-crime-rs-18-lakh-fraud-without-otp-and-any-apk-link/articleshow-koa6rzg"/>
        </item>
        <item>
            <title><![CDATA[ರಾಜ್ಯದಲ್ಲಿ ವರುಣನ ಅಬ್ಬರ: ಧಾರವಾಡ, ಬೆಳಗಾವಿ, ಮಲೆನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ! ಎಲ್ಲೆಲ್ಲಿ ಎಷ್ಟು? ವಿವರ ನೋಡಿ]]></title>
            <link>https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1</link>
            <guid isPermaLink="true">https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1</guid>
            <pubDate>Tue, 12 May 2026 22:29:11 +0530</pubDate>
            <description><![CDATA[&lt;p&gt;ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಧಾರವಾಡ, ಬೆಳಗಾವಿ, ಮತ್ತು ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ಎಷ್ಟು ಮಳೆಯಾಗಿದೆ ವಿರ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krehex85a05kq26aw93yw8fb,imgname-screenshot-2026-05-12-211856-1778604537093.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಧಾರವಾಡ, ಬೆಳಗಾವಿ, ಮತ್ತು ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ಎಷ್ಟು ಮಳೆಯಾಗಿದೆ ವಿರ ನೋಡಿ..&lt;/p&gt;&lt;img&gt;&lt;p&gt;ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಮಂಗಳವಾರ ಸಂಜೆ ಧಾರವಾಡ, ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಧಾರವಾಡ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಆದರೆ, ಬಿರುಗಾಳಿಯ ರಭಸಕ್ಕೆ ನಗರದ ಹಲವೆಡೆ ಮರಗಳು ಉರುಳಿ ಬಿದ್ದಿವೆ.&amp;nbsp;&lt;/p&gt;&lt;p&gt;ಮುಖ್ಯವಾಗಿ ಉಪ್ಪಿನ ಬೆಟಗೇರಿ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಮರವನ್ನು ತೆರವುಗೊಳಿಸಿದರು. ಹವಾಮಾನ ಇಲಾಖೆಯ ವರದಿಯ ಪ್ರಕಾರ ಧಾರವಾಡದಲ್ಲಿ 15 ಮಿ.ಮೀ ಮಳೆಯಾಗಿದೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿತ್ತು. ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದವು. ವಾಹನ ಸವಾರರು ಮಳೆ ನೀರಿನಲ್ಲೇ ಸಂಚರಿಸಲು ಹರಸಾಹಸ ಪಟ್ಟರು.&lt;/p&gt;&lt;img&gt;&lt;p&gt;ಇನ್ನು ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಭಯಾನಕ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಗಿಡಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕಚ್ಚಿವೆ. ಈ ಭಯಾನಕ ದೃಶ್ಯಗಳು ಸ್ಥಳೀಯರ ಮೊಬೈಲ್&zwnj;ನಲ್ಲಿ ಸೆರೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ಪಟ್ಟಣದಲ್ಲಿ ತಡರಾತ್ರಿವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮತ್ತು ಆಲ್ದೂರು ಸುತ್ತಮುತ್ತ ಭಾರಿ ಗಾಳಿ-ಸಿಡಿಲಿನ ಜೊತೆ ಮಳೆ ಸುರಿದಿದೆ. ನಿನ್ನೆಯಷ್ಟೇ ಜಿಲ್ಲೆಯ ಹಲವೆಡೆ ಮಳೆಯಿಂದ ಅನಾಹುತಗಳು ಸಂಭವಿಸಿದ್ದವು, ಇಂದು ಕೂಡ ಅದೇ ಆರ್ಭಟ ಮುಂದುವರಿದಿದೆ. ಬಿರುಗಾಳಿಯ ಜೊತೆ ಮಳೆ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ ರಾಜ್ಯದ ವಿವಿಧೆಡೆ ದಾಖಲಾದ ಮಳೆಯ ವಿವರ ಇಲ್ಲಿದೆ (ಮೇ 12, ರಾತ್ರಿ 9:30ರವರೆಗೆ):&lt;/p&gt;&lt;ul&gt; &lt;li&gt;ಧಾರವಾಡ: 15.0 ಮಿ.ಮೀ&lt;/li&gt; &lt;li&gt;ಸಿರ್ಸಿ (ಉತ್ತರ ಕನ್ನಡ): 11.5 ಮಿ.ಮೀ&lt;/li&gt; &lt;li&gt;ಆಗುಂಬೆ (ಶಿವಮೊಗ್ಗ): 8.0 ಮಿ.ಮೀ&lt;/li&gt; &lt;li&gt;ಗದಗ: 3.2 ಮಿ.ಮೀ&lt;/li&gt; &lt;li&gt;ಮುದಿಗೆರೆ (ಚಿಕ್ಕಮಗಳೂರು): 4.0 ಮಿ.ಮೀ&lt;/li&gt; &lt;li&gt;ಮಂಗಳೂರು: 1.0 ಮಿ.ಮೀ&lt;/li&gt;&lt;/ul&gt;&lt;img&gt;&lt;p&gt;ಬೆಳಗಾವಿ, ಚಿತ್ರದುರ್ಗ ಮತ್ತು ಕಲಬುರಗಿಯಲ್ಲಿ ಸಂಜೆ ವೇಳೆ ಗುಡುಗು ಸಹಿತ ಮೋಡಗಳು (CB clouds) ಕಂಡುಬಂದಿದ್ದು, ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಾರೆಯಾಗಿ ವರುಣನ ಆಗಮನ ಬಿಸಿಲಿನಿಂದ ಮುಕ್ತಿ ನೀಡಿದ್ದರೂ, ಅನಿರೀಕ್ಷಿತ ಬಿರುಗಾಳಿ ಜನರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ರಾಜ್ಯದಲ್ಲಿ 8 ಜಿಲ್ಲೆಗೆ ಆರೆಂಟ್ ಅಲರ್ಟ್; ಮುಂದಿನ 5 ದಿನ ಈ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಮುನ್ಸೂಚನೆ!&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1"/>
        </item>
        <item>
            <title><![CDATA[ಶೃಂಗೇರಿ ಕ್ಷೇತ್ರದ ಮತ ಡಕಾಯಿತಿಯನ್ನು ಸಿಎಂ ಸಿದ್ದರಾಮಯ್ಯ ಸಾಬೀತುಪಡಿಸಲಿ: ಸಿ.ಟಿ.ರವಿ ಸವಾಲು]]></title>
            <link>https://kannada.asianetnews.com/karnataka-districts/ct-ravi-challenges-siddaramaiah-on-vote-theft-allegation-gvd/articleshow-qw3ghtv</link>
            <guid isPermaLink="true">https://kannada.asianetnews.com/karnataka-districts/ct-ravi-challenges-siddaramaiah-on-vote-theft-allegation-gvd/articleshow-qw3ghtv</guid>
            <pubDate>Sun, 10 May 2026 00:26:15 +0530</pubDate>
            <description><![CDATA[&lt;p&gt;ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಆ ಆರೋಪಗಳಿಗೆ ಪುರಾವೆಗಳಿದ್ದರೆ ಸಾಬೀತುಪಡಿಸಲಿ ಎಂದು ಸಿ.ಟಿ.ರವಿ ಸವಾಲು ಹಾಕಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6n1r2yb9cj970w34ptevx1b,imgname-ct-ravi-1759495588811.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮೇ.10):&lt;/strong&gt; ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಆದರೆ ಆ ಆರೋಪಗಳಿಗೆ ಪುರಾವೆಗಳಿದ್ದರೆ ಸಾಬೀತುಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಮತ ಡಕಾಯಿತಿ ಮಾಡಿದರು ಅವರ ಮೇಲೆ ಕಠಿಣ ಶಿಕ್ಷೆ ಆಗಲಿ. ಅದನ್ನು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯರಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ. ಅದನ್ನು ಬಿಟ್ಟು ಸುಮ್ಮನೆ ಮಾತನಾಡಿದರೆ ಸರಿಯಲ್ಲ ಎಂದರು&zwnj;. ಒಂದು ವೇಳೆ ಮತ ಡಕಾಯತಿ ನಡೆದಿದ್ದರೆ ನಾನು ಸಹಿಸುವುದಿಲ್ಲ.&zwnj; ಅವರು ಯಾವುದೇ ಪಕ್ಷದವರಾಗಿರಲಿ. ಮತ ಡಕಾಯತಿ ನಡೆದಿದೆ ಎಂದಾದರೆ ಚುನಾವಣಾ ಆಯೋಗದ ಮುಂದೆ ಇಲ್ಲವೆ ನ್ಯಾಯಾಲಯದ ಎದುರು ಸಾಬೀತುಪಡಿಸಿ. ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;2023ರ ಚುನಾವಣೆ ಫಲಿತಾಂಶ ಹಾಗೂ 2026ರಲ್ಲಿ ನಡೆದ ಮರುಮತ ಎಣಿಕೆ ಫಲಿತಾಂಶಗಳು ವೈರುಧ್ಯವಾಗಿವೆ. ಇದರಲ್ಲಿ ಒಂದು ಸತ್ಯವಾಗಿರಲು ಸಾಧ್ಯ. ಈ ಸತ್ಯಾಸತ್ಯತೆ ಬಗ್ಗೆ ಹೇಳುವ ಅಧಿಕಾರ ನನಗಿಲ್ಲ.&zwnj; ಸಿಎಂ ಬಳಿ ದಾಖಲೆಗಳಿದ್ದರೆ ನ್ಯಾಯಾಲಯದ ಎದುರು ಇಡಲಿ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ನ್ಯಾಯಾಲಯಕ್ಕೆ ದಾಖಲೆ ಕೊಡಿ ಎಂದು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಅಂಚೆ ಮತ ಟ್ಯಾಂಪರಿಂಗ್&zwnj;&lt;/strong&gt;&lt;/h2&gt;&lt;p&gt;ಚುನಾವಣಾ ಆಯೋಗ ಮತ್ತು ಆಯೋಗದ ಅಧಿಕಾರಿಗಳು ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತ ಮರು ಎಣಿಕೆಯಲ್ಲಿ ಟ್ಯಾಂಪರಿಂಗ್&zwnj; ಮಾಡಿ ತಮ್ಮ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್&zwnj;.ಉಗ್ರಪ್ಪ ಆರೋಪಿಸಿದ್ದಾರೆ. ಕುತಂತ್ರ ಮತ್ತು ಷಡ್ಯಂತ್ರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಳ್ಳುವ ಕೆಲಸ ಮಾಡಲಾಗಿದೆ ಎಂದರು. ಕಳೆದ 2023ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇತ್ತು. ಚುನಾವಣೆ ಸಂದರ್ಭದಲ್ಲಿ ಯಾವುದೇ ಲೋಪ ಉಂಟಾದರೆ, ಆಯೋಗಕ್ಕೆ ದೂರು ನೀಡಬೇಕಾಗಿತ್ತು.&lt;/p&gt;&lt;p&gt;ಆದರೆ, ಯಾವುದೇ ದೂರು ನೀಡಿಲ್ಲ. ಜತೆಗೆ, ಅಂಚೆ ಮತ ಎಣಿಕೆ ಸಂದರ್ಭದಲ್ಲಿ ಬಿಜೆಪಿ, ಕಾಂಗ್ರೆಸ್&zwnj;, ಜೆಡಿಎಸ್&zwnj; ಸೇರಿದಂತೆ ಎಲ್ಲ ಚುನಾವಣಾ ಅಭ್ಯರ್ಥಿಗಳು ಮತ ಎಣಿಕೆ ಸರಿಯಾಗಿದೆ ಎಂದು ಒಪ್ಪಿ ಸಹಿ ಮಾಡಿದ್ದಾರೆ. ಆಗ ಯಾಕೆ ಡಬ್ಬಲ್&zwnj; ಎಂಟ್ರಿ ಕಾಣಿಸಲಿಲ್ಲ? ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ. ಮತ ಎಣಿಕೆ ನಂತರ ಮತ ಪತ್ರ ಹಾಗೂ ಇವಿಎಂಗಳನ್ನು ಸೀಲ್&zwnj; ಮಾಡಿ ಚುನಾವಣಾ ಆಯೋಗ ತನ್ನ ಭದ್ರತೆಯಲ್ಲಿ ಸಂರಕ್ಷಣೆ ಮಾಡಿಕೊಳ್ಳುತ್ತದೆ. ಹಾಗಾದರೆ, 2023ರಲ್ಲಿ ಸಿಂಧು ಆಗಿದ್ದ ಮತಗಳು ಮರು ಎಣಿಕೆಯಲ್ಲಿ ಹೇಗೆ ಅಸಿಂಧು ಆಗಿವೆ. ಇದರಲ್ಲ ಸ್ಪಷ್ಟವಾಗಿ ಅಂಚೆ ಮತ ಪತ್ರ ಟ್ಯಾಂಪರಿಂಗ್&zwnj; ಆಗಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ct-ravi-challenges-siddaramaiah-on-vote-theft-allegation-gvd/articleshow-qw3ghtv"/>
        </item>
        <item>
            <title><![CDATA[ಬಾಳೆಹೊನ್ನೂರಿನ ಮಸೀದಿಕೆರೆಯಲ್ಲಿ ಕಡಿದ ಸ್ಥಿತಿಯಲ್ಲಿ ಹಸುವಿನ ತಲೆ ಪತ್ತೆ! ಗೋ ಕಳ್ಳರ ಕೃತ್ಯವೇ? ಹಿಂದೂ ಸಂಘಟನೆಗಳನ್ನು ಬೆದರಿಸುವ ತಂತ್ರವೇ?]]></title>
            <link>https://kannada.asianetnews.com/karnataka-districts/cow-s-head-found-severed-near-mosque-in-balehonnur-chikkamagaluru-rav/articleshow-rzz07dl</link>
            <guid isPermaLink="true">https://kannada.asianetnews.com/karnataka-districts/cow-s-head-found-severed-near-mosque-in-balehonnur-chikkamagaluru-rav/articleshow-rzz07dl</guid>
            <pubDate>Thu, 14 May 2026 06:31:50 +0530</pubDate>
            <description><![CDATA[&lt;p&gt;ಬಾಳೆಹೊನ್ನೂರಿನ ಮಸೀದಿಕೆರೆ ಬಳಿ ಮುಖ್ಯರಸ್ತೆಯಲ್ಲಿ ಕಡಿದ ಸ್ಥಿತಿಯಲ್ಲಿದ್ದ ಹಸುವಿನ ತಲೆ ಪತ್ತೆಯಾಗಿದೆ. ಈ ಕೃತ್ಯವು ಗೋ ಕಳ್ಳರದ್ದಾಗಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಹಿಂದೂ ಸಂಘಟನೆಗಳು&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krhzneyt43wacj48tkhsdkrb,imgname-----------------------2026-05-14t062435.789-1778720095194.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಸೀದಿಕೆರೆಯ ಎಂಎಸ್&zwnj;ಐಲ್ ಮದ್ಯದ ಅಂಗಡಿ ಬಳಿ ಪತ್ತೆ ।ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ&lt;/p&gt;&lt;p&gt;, &lt;strong&gt;ಬಾಳೆಹೊನ್ನೂರು (ಮೇ.14) &lt;/strong&gt;ಮಸೀದಿಕೆರೆಯಿಂದ ರಂಭಾಪುರಿ ಪೀಠಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಬುಧವಾರ ಕಡಿದ ಸ್ಥಿತಿಯಲ್ಲಿರುವ ಹಸುವಿನ ತಲೆ ಪತ್ತೆಯಾಗಿದೆ.&lt;/p&gt;&lt;p&gt;ಬುಧವಾರ ಬೆಳಿಗ್ಗೆ ಮಸೀದಿಕೆರೆಯ ಎಂಎಸ್&zwnj;ಐಲ್ ಮದ್ಯದ ಅಂಗಡಿ ಮುಂಭಾಗದಲ್ಲಿ ಬುಧವಾರ ಬೆಳಗ್ಗೆ ಕಡಿದ ಸ್ಥಿತಿಯಲ್ಲಿರುವ ಹಸುವಿನ ತಲೆ ಮುಖ್ಯರಸ್ತೆ ಮೇಲೆ ಬಿದ್ದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಹಸುವಿನ ಕಡಿದ ತಲೆ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.&lt;/p&gt;&lt;h2&gt;ಪ್ರಕರಣ ದಾಖಲು&lt;/h2&gt;&lt;p&gt;ಯಾರೋ ಕಿಡಿಗೇಡಿಗಳು ಮಾಂಸಕ್ಕಾಗಿ ಹಸು ಕಡಿದು ತಲೆಯನ್ನು ಮುಖ್ಯರಸ್ತೆಯಲ್ಲಿ ಎಸೆದು ಹೋಗಿರುವ ಶಂಕೆಯಿದೆ. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಪಿಎಸ್&zwnj;ಐ ಅಂಬರೀಷ್ ತಿಳಿಸಿದ್ದಾರೆ. ಘಟನೆ ಕುರಿತು ಬಾಳೆಹೊನ್ನೂರು ಠಾಣೆ ಯಲ್ಲಿ ಪಿಎಸ್&zwnj;ಐ ಅಂಬರೀಷ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;p&gt;ಕಳೆದ 2ವಾರಗಳಲ್ಲಿ ಬಾಳೆಹೊನ್ನೂರು ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಸಾಕಿದ್ದ ಗೋವುಗಳು ಮೇಯಲು ಬಿಟ್ಟ ಬಳಿಕ ಮನೆಗೆ ಬಾರದೆ ಇದ್ದು, ಗೋ ಕಳ್ಳರ ಕೃತ್ಯವೇ ಎಂದು ಮಾಲೀಕರು ಶಂಕಿಸಿದ್ದಾರೆ. \B\B&lt;/p&gt;&lt;h2&gt;ಆರೋಪಿಗಳ ಪತ್ತೆಗೆ ಒತ್ತಾಯ:&lt;/h2&gt;&lt;p&gt;ಬಾಳೆಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನ ಮಿತಿ ಮೀರಿದ್ದು, ಪೊಲೀಸ್ ಇಲಾಖೆ ಕಣ್ತಪ್ಪಿಸಿ ಗೋ ಹಂತಕರು ನಿರಂತರವಾಗಿ ಗೋ ಸಾಗಾಟ, ಹತ್ಯೆಯಲ್ಲಿ ತೊಡಗಿದ್ದಾರೆ. ಮಸೀದಿಕೆರೆಯಲ್ಲಿ ಗೋವಿನ ತಲೆ ಪತ್ತೆ ಯಾಗಿರುವುದು ಉದ್ದೇಶಿತ ಕೃತ್ಯ ಎಂದು ಕಾಮಧೇನು ಗೋ ಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಹೇಳಿದ್ದಾರೆ.&lt;/p&gt;&lt;h3&gt;ಪೊಲೀಸರ ವಿರುದ್ಧ ಗಂಭೀರ ಆರೋಪ&lt;/h3&gt;&lt;p&gt;ಅಕ್ರಮ ಗೋ ಸಾಗಾಟ, ಗೋ ಹತ್ಯೆ ಘಟನೆಗಳ ವಿರುದ್ಧ ನಿರಂತರ ಹೋರಾಟ ನಡೆಸುವ ಹಿಂದೂ ಸಂಘಟನೆಯ ಕಾರ್ಯ ಕರ್ತರನ್ನು ಬೆದರಿಸುವ ತಂತ್ರವಾಗಿ ಗೋವಿನ ತಲೆ ಕಡಿದು ಮುಖ್ಯರಸ್ತೆ ಬಳಿ ಇರಿಸಿರುವ ಶಂಕೆ ವ್ಯಕ್ತವಾಗಿದೆ. ಬಾಳೆ ಹೊನ್ನೂರು ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಗೋ ಸಾಗಾಟ ಮಾಡುತ್ತಿರುವ ಕುರಿತು ಹಲವು ಸಾರ್ವಜನಿಕರು ದೂರಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮವಹಿಸುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸಾರ್ವಜನಿಕರಿಗೆ ನಿರಂತರವಾಗಿ ಸಿಗುವ ಗೋ ಕಳ್ಳರು ಪೊಲೀಸರ ಕೈಗೆ ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.&lt;/p&gt;&lt;p&gt;ಮುಂದೊಂದು ದಿನ ಚಿಕ್ಕಮಗಳೂರು ಜಿಲ್ಲೆ ಬಾಂಗ್ಲಾ ದೇಶ, ಪಶ್ಚಿಮ ಬಂಗಾಳದಂತೆ ಮಾರ್ಪಾಡು ಆಗುವುದರಲ್ಲಿ ಸಂಶಯವಿಲ್ಲ. ಸಂಘಟನೆ ಕಾರ್ಯಕರ್ತರನ್ನು ಗುರಿಯಾಗಿಸಿ ಕೃತ್ಯ ನಡೆದಿದ್ದು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/cow-s-head-found-severed-near-mosque-in-balehonnur-chikkamagaluru-rav/articleshow-rzz07dl"/>
        </item>
        <item>
            <title><![CDATA[ಶೃಂಗೇರಿ ಅಂಚೆ ಮತ ಮರುಎಣಿಕೆ: ಬಿಜೆಪಿ ಏಜೆಂಟರಿಂದಲೇ ಹೊಸ ಟ್ವಿಸ್ಟ್]]></title>
            <link>https://kannada.asianetnews.com/gallery/karnataka-districts/chikkamagaluru-sringeri-recount-controversy-bjp-agent-bs-satish-press-release-sat-tr6v96z</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-sringeri-recount-controversy-bjp-agent-bs-satish-press-release-sat-tr6v96z</guid>
            <pubDate>Mon, 11 May 2026 14:00:12 +0530</pubDate>
            <description><![CDATA[&lt;p&gt;ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕರಣವು ಹೊಸ ತಿರುವು ಪಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಏಜೆಂಟ್&zwnj;ಗಳೇ ಈಗ ಮರುಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯಗೊಂಡಿರುವುದರ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krb20dtgpg9gbp84as31yks7,imgname-whatsapp-image-2026-05-11-at-12.36.12-pm--1--1778487670608.jpeg" type="image/jpeg" height="390" width="690"/>
            <content:encoded><![CDATA[&lt;p&gt;ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕರಣವು ಹೊಸ ತಿರುವು ಪಡೆದಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದ ಏಜೆಂಟ್&zwnj;ಗಳೇ ಈಗ ಮರುಎಣಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಂದು ಮಾನ್ಯವಾಗಿದ್ದ ಮತ ಈಗ ಅಮಾನ್ಯಗೊಂಡಿರುವುದರ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆಯು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಈ ಪ್ರಕರಣಕ್ಕೆ ಹೊಸದೊಂದು 'ಟ್ವಿಸ್ಟ್' ಸಿಕ್ಕಿದೆ. 2023ರ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಚುನಾವಣಾ ಏಜೆಂಟ್&zwnj;ಗಳೇ ಈಗ ಮರುಎಣಿಕೆ ಪ್ರಕ್ರಿಯೆಯ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;img&gt;&lt;p&gt;ಬಿಜೆಪಿ ಪಕ್ಷದ ಅಂದಿನ ಚುನಾವಣಾ ಏಜೆಂಟ್ ಹಾಗೂ ಹಾಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್. ಸತೀಶ್ ಅವರು ಬಹಿರಂಗ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡುವ ಮೂಲಕ ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ. '2023ರಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿತ್ತು. ನಾವು ದಾಖಲಿಸಿಕೊಂಡ ಸಂಖ್ಯೆ ಮತ್ತು ಅಧಿಕಾರಿಗಳು ಎಣಿಕೆ ಮಾಡಿದ ಸಂಖ್ಯೆ ಎರಡೂ ಒಂದೇ ಆಗಿತ್ತು. ಎಲ್ಲಾ ಏಜೆಂಟ್&zwnj;ಗಳ ಸಹಿ ಪಡೆದ ನಂತರವೇ ಅಂದು ಫಲಿತಾಂಶ ಘೋಷಣೆಯಾಗಿತ್ತು' ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;2023ರ ಫಲಿತಾಂಶದ ಪ್ರಕಾರ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ 689 ಅಂಚೆ ಮತಗಳು ಲಭಿಸಿದ್ದವು. ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 562 ಮತಗಳು ಬಂದಿದ್ದವು ಮತ್ತು 279 ಮತಗಳು ಅಂದೇ ತಿರಸ್ಕೃತಗೊಂಡಿದ್ದವು. ಆದರೆ, 2026ರ ಮರುಎಣಿಕೆಯಲ್ಲಿ 257 ಮತಗಳು ಅಮಾನ್ಯಗೊಂಡಿವೆ.&lt;/p&gt;&lt;img&gt;&lt;p&gt;ಇದರಲ್ಲಿ ಗಮನಾರ್ಹ ಅಂಶವೆಂದರೆ, ರದ್ದಾದ 257 ಮತಗಳಲ್ಲಿ 255 ಮತಗಳು ಕಾಂಗ್ರೆಸ್ ಅಭ್ಯರ್ಥಿಯದ್ದೇ ಆಗಿದೆ! 'ಅಂದು ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿದ್ದು ಹೇಗೆ?' ಎನ್ನುವುದು ಬಿಜೆಪಿ ಏಜೆಂಟ್&zwnj;ಗಳನ್ನೇ ಕಾಡುತ್ತಿರುವ ಯಕ್ಷಪ್ರಶ್ನೆ.&lt;/p&gt;&lt;img&gt;&lt;p&gt;ಮರುಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಏಜೆಂಟ್&zwnj;ಗಳು ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ ಅಥವಾ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಸುಳ್ಳು ಅಪಪ್ರಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಸತೀಶ್ ಮತ್ತು ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಾವು ನಿರಪರಾಧಿಗಳು ಮತ್ತು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಎಂದು ತೋರಿಸಲು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ್ದಾರೆ.&lt;/p&gt;&lt;img&gt;&lt;p&gt;'ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸವಾಗುತ್ತಿದೆ. ಈ ಇಡೀ ಮರುಎಣಿಕೆ ಪ್ರಕ್ರಿಯೆಯಲ್ಲಿ ಏನೋ ನಡೆದಿದೆ ಎಂಬ ಸಂಶಯ ನಮಗೂ ಇದೆ' ಎಂದು ಹೇಳಿರುವ ಸತೀಶ್, ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಮರುಎಣಿಕೆಯ ನಂತರ ಜೀವರಾಜ್ ಅವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ, ಅಂದಿನ ಬಿಜೆಪಿ ಏಜೆಂಟ್&zwnj;ಗಳ ಈ ಹೇಳಿಕೆಗಳು ಪ್ರಕರಣಕ್ಕೆ ತಿರುವು ನೀಡಿವೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-sringeri-recount-controversy-bjp-agent-bs-satish-press-release-sat-tr6v96z"/>
        </item>
        <item>
            <title><![CDATA[ಶೃಂಗೇರಿ ಕ್ಷೇತ್ರದಲ್ಲಿ ಅಂಚೆ‌ ಮತ ಮರು ಎಣಿಕೆ ವಿವಾದ: ಆಣೆ-ಪ್ರಮಾಣ-ಪ್ರಾರ್ಥನೆ ರಾಜಕೀಯ ಶುರು]]></title>
            <link>https://kannada.asianetnews.com/karnataka-districts/sringeri-postal-vote-recount-bjp-congress-controversy-gvd/articleshow-x98a0ez</link>
            <guid isPermaLink="true">https://kannada.asianetnews.com/karnataka-districts/sringeri-postal-vote-recount-bjp-congress-controversy-gvd/articleshow-x98a0ez</guid>
            <pubDate>Fri, 08 May 2026 17:39:30 +0530</pubDate>
            <description><![CDATA[&lt;p&gt;ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು&zwnj; ಎಣಿಕೆಯಲ್ಲಿ ಮೂರು ವರ್ಷಗಳ ಬಳಿಕ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ ಬಳಿಕ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಆಣೆ-ಪ್ರಮಾಣ-ಪ್ರಾರ್ಥನೆಯ ರಾಜಕೀಯ ಜನ್ಮ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3qvwy4dsgrbqxsn220zzk6,imgname-xgg-1778242155460.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು &zwnj;&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮೇ.08): &lt;/strong&gt;ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು&zwnj; ಎಣಿಕೆಯಲ್ಲಿ ಮೂರು ವರ್ಷಗಳ ಬಳಿಕ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ ಬಳಿಕ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಆಣೆ-ಪ್ರಮಾಣ-ಪ್ರಾರ್ಥನೆಯ ರಾಜಕೀಯ ಜನ್ಮ ಪಡೆದಿದೆ. 2023ರ ಸಾರ್ವತ್ರಿಕ ಚುನಾವಣೆ ಫಲಿತಾಂಶದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.&lt;/p&gt;&lt;p&gt;2026ರ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ 52 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಈಗ 2023ರಲ್ಲಿ ಬಿಜೆಪಿ ಪಕ್ಷದಿಂದ&zwnj; ಚುನಾವಣಾ ಮತ ಎಣಿಕೆ ಕೇಂದ್ರದ ಏಜೆಂಟ್ ಆಗಿದ್ದ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್&zwnj; ಅದ್ದಡ ಕೊಪ್ಪ ತಾಲೂಕಿನ ವೀರಭದ್ರಸ್ವಾಮಿ ಹಾಗೂ ಗಬ್ಬಾನೆ ಬೂತರಾಯನ ದೇಗುಲದಲ್ಲಿ ಪ್ರಮಾಣ ಮಾಡಿದ್ದು 2023ರ ಮತ ಎಣಿಕೆ ಸರಳ ಹಾಗೂ ಪಾರದರ್ಶಕವಾಗಿ ನಡೆದಿದೆ ಎಂದು ನಮಗೆ ಅನ್ನಿಸಿದೆ ಎಂದು ದೇವರ ಮುಂದೆ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಅಂದು ರಾಮಸ್ವಾಮಿ ಶೆಟ್ಟಿಗದ್ದೆ ಇವಿಎಂ ಕೌಂಟ್ ನೋಡಿಕೊಳ್ಳುತ್ತಿದ್ದರೆ, ಸತೀಶ್ ಅದ್ದಡ ಅಂಚೆ ಮತಗಳ ಎಣಿಕೆ ನೋಡಿಕೊಳ್ಳುತ್ತಿದ್ದರು. ಇಂದು ಇಬ್ಬರು ದೇವಸ್ಥಾನದಲ್ಲಿ ಮತ ಎಣಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೀವರಾಜ್ ಗೆಲ್ಲುತ್ತಿದ್ದಂತೆ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷ ವಿರೋಧಿ ಕೆಲಸ ಮಾಡಿದವರಿಗೆ ಯಾವಾಗ ಗೇಟ್ ಪಾಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದರು. ರಾಮಸ್ವಾಮಿ ಹಾಗೂ ಸತೀಶ್ ಕಾಂಗ್ರೆಸ್ ಜೊತೆ ಕೈ ಸೇರಿಸಿ ಬಿಜೆಪಿ ಸೋಲಿಗೆ ಕಾರಣರಾಗಿದ್ದರು ಎಂದು ಆರೋಪಿಸಿದ್ದರು.&lt;/p&gt;&lt;h2&gt;&lt;strong&gt;ದೇವರೇ ನೋಡಿಕೊಳ್ಳಲಿ&lt;/strong&gt;&lt;/h2&gt;&lt;p&gt;ಆ ಕಾರಣಕ್ಕಾಗಿ ಇಂದು ರಾಮಸ್ವಾಮಿ ಹಾಗೂ ಸತೀಶ್ ದೇವರ ಮುಂದೆ ಪ್ರಮಾಣ ಮಾಡಿ ನಾವು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಮತ ಎಣಿಕೆ ಪಾರದರ್ಶಕವಾಗಿತ್ತು. ನಮ್ಮ ವಿರುದ್ಧ ಅಪಪ್ರಚಾರ ಮಾಡುವವರಿಗೆ ದೇವರೇ ನೋಡಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ನಾಳೆ ಕೊಪ್ಪದ ವೀರಭದ್ರಸ್ವಾಮಿ ದೇಗುಲದಲ್ಲಿ ಅಂಚೆ ಮತದ ಕಳ್ಳತನದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sringeri-postal-vote-recount-bjp-congress-controversy-gvd/articleshow-x98a0ez"/>
        </item>
        <item>
            <title><![CDATA[ಶಾರದಾಂಬೆ To ಧರ್ಮಸ್ಥಳಕ್ಕೆ ಶಿಫ್ಟ್: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೋರಾಯ್ತು ಆಣೆ-ಪ್ರಮಾಣ!]]></title>
            <link>https://kannada.asianetnews.com/karnataka-districts/sringeri-postal-vote-recount-controversy-rajegowda-gvd/articleshow-yucbq7t</link>
            <guid isPermaLink="true">https://kannada.asianetnews.com/karnataka-districts/sringeri-postal-vote-recount-controversy-rajegowda-gvd/articleshow-yucbq7t</guid>
            <pubDate>Sat, 09 May 2026 18:28:10 +0530</pubDate>
            <description><![CDATA[&lt;p&gt;ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6d1s2nn66dk406thvqgwbb,imgname-chj-1778331477077.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು&zwnj; ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮೇ.09): &lt;/strong&gt;ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಬಳಿಕ ಶಾರದಾಂಬೆ ನೆಲದಲ್ಲಿ ಆಣೆ-ಪ್ರಮಾಣದ ರಾಜಕೀಯ ಜೋರಾಗಿದೆ. ಇತ್ತ ಮತಚೋರಿ ಆಗಿದ್ರೆ ನೀನೇ ಶಿಕ್ಷೆ ಕೊಡು ಅಂತ ಮಾಜಿ ಶಾಸಕ ರಾಜೇಗೌಡ ದೇವಾಲಯ ಸುತ್ತುತ್ತಾ ಕೋರ್ಟ್ ಮೊರೆ ಹೋಗಿದ್ರೆ ಇತ್ತ ಬಿಜೆಪಿ ನೀವೇ ದೇವರ ಬಳಿ ಕೇಳ್ಕೊಂಡಿದ್ರಿ ಇಂದು ಅದೇ ಆಗಿದೆ ಅಂತಿದೆ. ಆದ್ರೆ, 2023ರಲ್ಲಿ ಮಾನ್ಯ ಆಗಿದ್ದ 225ರಲ್ಲಿ ಮತಗಳು 2026ರ ಮರುಎಣಿಕೆಯಲ್ಲಿ ಹೇಗೆ ಅಮಾನ್ಯವಾದವೂ ಅನ್ನೋದು ಎರಡೂ ಪಕ್ಷದ ಕಾರ್ಯಕರ್ತರಲ್ಲೂ ಮಿಲಿಯನ್&zwnj; ಡಾಲರ್ ಪ್ರಶ್ನೆ ಮೂಡಿಸಿದೆ. ಈ ಮಧ್ಯೆ ಇಬ್ಬರು ಬಿಜೆಪಿ ಕಾರ್ಯಕರ್ತರ ನಡೆ ಕ್ಷೇತ್ರದ ಜನರಲ್ಲಿ ನಾನಾ ಪ್ರಶ್ನೆ ಮೂಡಿಸಿದೆ.&lt;/p&gt;&lt;p&gt;ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಬಳಿಕ ಬಿಜೆಪಿ ಗೆಲುವು ಸಾಧಿಸಿದ್ದು ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ವೇಳೆ 201 ಮತಗಳ ಅಂತರದಿಂದ ಕೈ ಅಭ್ಯರ್ಥಿ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದು, 2026ರ ಮರು ಎಣಿಕೆಯಲ್ಲಿ 52 ಮತಗಳ ಅಂತರದಿಂದ ಅದೇ ರಾಜೇಗೌಡ ಸೋಲುಂಡಿದ್ದರು. ಇದೀಗ, ಮತಚೋರಿ ಆರೋಪ ಮಾಡಿದ್ದ ಮಾಜಿ ಶಾಸಕ ರಾಜೇಗೌಡ ಹಾಗೂ ಕೈ ಕಾರ್ಯಕರ್ತರು ಮತಚೋರಿ ಮಾಡಿದವರ ವಿರುದ್ಧ ದೇವರ ಮೊರೆ ಹೋಗಿದ್ದಾರೆ. ಇಂದು ಕೊಪ್ಪ ತಾಲೂಕಿನ ವೀರಭದ್ರ ಸ್ವಾಮಿ ದೇವಾಲಯದ ಹಾಗೂ ಗಬ್ಬಾನೆ ಭೂತರಾಯ ದೇಗುಲದಲ್ಲಿ ನೂರಾರು ಕಾರ್ಯಕರ್ತರ ಜೊತೆ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಸಂಕಲ್ಪ ಮಾಡಿದ್ದು ಮತಚೋರಿ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಸಂಕಲ್ಪ ಮಾಡಿಕೊಂಡಿದ್ದಾರೆ.&lt;/p&gt;&lt;p&gt;ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಮತಚೋರಿ ಮಾಡಿದ್ದರು ಕೂಡ ಅವರಿಗೆ ತಕ್ಕ ಶಿಕ್ಷೆ ಆಗಲಿ ಎಂದು ಬೇಡಿಕೊಂಡಿದ್ದಾರೆ. ವೀರಭದ್ರ ಸ್ವಾಮಿ ಹಾಗೂ ಭೂತರಾಯನ ದೇಗುಲದ ಬಳಿಕ ಒಂದು ಚರ್ಚ್ ಹಾಗೂ ಒಂದು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಈಗಾಗಲೇ ಅಂಚೆ ಮತ ಮರು ಎಣಿಕೆ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ರಾಜೇಗೌಡ ಒಂದೆಡೆ ಕಾನೂನು ಮುಖಾಂತರವೂ ಹೋರಾಟ ಮಾಡುತ್ತಿದ್ದು ಮತ್ತೊಂದೆಡೆ ದೇವರ ಮೊರೆ ಹೋಗಿದ್ದಾರೆ. 2023 ರಲ್ಲಿ ಮಾನ್ಯವಾಗಿದ್ದ 255 ಮತಗಳು 2026ರಲ್ಲಿ ಹೇಗೆ ಅಮಾನ್ಯವಾದವೂ ಎಂದು ಪ್ರಶ್ನಿಸಿದ್ದಾರೆ. ಇದು ವೋಟ್ ಚೋರಿ ಅಲ್ಲದೆ ಮತ್ತೇನೂ ಅಲ್ಲ ಎಂದು ಆರೋಪಿಸಿರೋ ರಾಜೇಗೌಡ ದೇವರು- ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.&lt;/p&gt;&lt;h2&gt;&lt;strong&gt;ಚರ್ಚೆಗೆ ಗ್ರಾಸ&lt;/strong&gt;&lt;/h2&gt;&lt;p&gt;ಈ ಮಧ್ಯೆ 2023ರ ಮತ ಎಣಿಕೆ ವೇಳೆ ಬಿಜೆಪಿಯ ಏಜೆಂಟ್ ಆಗಿದ್ದ ರಾಮಸ್ವಾಮಿ ಹಾಗೂ ಸತೀಶ್ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು. ಅಂದು ಯಾವುದೇ ಲೋಪ ಆಗಿರದ&zwnj; ಸಾಧ್ಯತೆ ಇದೆ ಎಂದು ಅದೇ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಸತೀಶ್ ಅದ್ದಡ ನಿನ್ನೆ ವೀರಭದ್ರ ಸ್ವಾಮಿ ದೇಗುಲದಲ್ಲಿ ಪ್ರಮಾಣ ಮಾಡಿದ್ದ ಇಬ್ಬರು ಇಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲಕ್ಕೂ ಭೇಟಿ ನೀಡಿ, 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪಾರದರ್ಶಕವಾಗಿತ್ತು ಎಂದು ಧರ್ಮಸ್ಥಳದಲ್ಲೂ ಕೂಡ ಪ್ರಮಾಣ ಮಾಡಿದ್ದಾರೆ. ಅತ್ತ ಕಾಂಗ್ರೆಸ್ ಕಾರ್ಯಕರ್ತರ ಆರೋಪ, ಇತ್ತ ಬಿಜೆಪಿ ಬೂತ್ ಏಜೆಂಟ್ ಗಳ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಒಟ್ಟಾರೆ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದ ಇತ್ತ ಶೃಂಗೇರಿ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದರೆ, ಅತ್ತ ಮರು ಎಣಿಕೆಯಲ್ಲಿ 255 ಮತ ಅಮಾನ್ಯವಾಗಿ ರಾಷ್ಟ್ರಮಟ್ಟದ ಗಮನವನ್ನೂ ಸೆಳೆದಿದ್ದರೆ, ಮೂರು ವರ್ಷ ಶಾಸಕರಾಗಿ ಅಧಿಕಾರ ಕಳೆದುಕೊಂಡ ಮಾಜಿ ಶಾಸಕ ರಾಜೇಗೌಡ ನ್ಯಾಯಕ್ಕಾಗಿ ದೇವಾಲಯ-ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಅಂತಿಮವಾಗಿ ಸತ್ಯ ಏನೆಂಬುದು ನಿಷ್ಪಕ್ಷಪಾತವಾದ ತನಿಕೆಯಿಂದ ಹೊರಬರಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/sringeri-postal-vote-recount-controversy-rajegowda-gvd/articleshow-yucbq7t"/>
        </item>
        <item>
            <title><![CDATA[ಕಾಣೆಯಾಗಿದ್ದ 1.5 ವರ್ಷದ ಮಗು, ಇಡೀ ರಾತ್ರಿ ಕತ್ತಲು, ಮಳೆಗೆ ಹಳ್ಳದಲ್ಲೇ ಕೂತಿದ್ದ ಕಂದನ ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?]]></title>
            <link>https://kannada.asianetnews.com/karnataka-districts/rescue-of-1-5-year-old-child-trapped-in-ditches-overnight-at-kottigehar-chikkamagaluru-rav/articleshow-zht6fw8</link>
            <guid isPermaLink="true">https://kannada.asianetnews.com/karnataka-districts/rescue-of-1-5-year-old-child-trapped-in-ditches-overnight-at-kottigehar-chikkamagaluru-rav/articleshow-zht6fw8</guid>
            <pubDate>Sat, 09 May 2026 07:04:30 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಎಸ್ಟೇಟೊಂದರಲ್ಲಿ ಕಾಣೆಯಾಗಿದ್ದ ಒಂದೂವರೆ ವರ್ಷದ ಮಗುವನ್ನು ಪೊಲೀಸರು 12 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಪತ್ತೆಹಚ್ಚಿದ್ದಾರೆ. ಡ್ರೋನ್&zwnj; ಹಾಗೂ ಶ್ವಾನ ದಳ ಬಳಸಿ ನಡೆಸಿದ ಶೋಧದಲ್ಲಿ, ಮಗು ಮನೆಯ ಸಮೀಪದ ಹಳ್ಳದಲ್ಲಿ ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr55y4zwf47029p8yp61n6xy,imgname-----------------------2026-05-09t065133.151-1778290463740.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಚಿಕ್ಕಮಗಳೂರಿನ ಎಸ್ಟೇಟಲ್ಲಿ ಕಾಣೆ ಆಗಿದ್ದ ಮಗು&lt;/li&gt; &lt;li&gt;ಮಗುವಿಗಾಗಿ 12 ಗಂಟೆ ಹುಡುಕಾಟಿದ ಪೊಲೀಸರು&lt;/li&gt;&lt;/ul&gt;&lt;p&gt;&lt;strong&gt;ಕೊಟ್ಟಿಗೆಹಾರ (ಚಿಕ್ಕಮಗಳೂರು): &lt;/strong&gt;ಸತತ 12 ಗಂಟೆ ಕಾಲ ಏಕಾಂಗಿಯಾಗಿ ಕಡು ಕತ್ತಲೆ, ಮಳೆಯಲ್ಲಿ ಇಡೀ ರಾತ್ರಿ ಕಳೆದ ಒಂದೂವರೆ ವರ್ಷದ ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಮಾಡಿ ಸಂರಕ್ಷಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆ ವ್ಯಾಪ್ತಿ ನಡೆದಿದೆ.&lt;/p&gt;&lt;p&gt;ಮಧ್ಯಪ್ರದೇಶದ ಭೋಪಾಲ್ ಮೂಲದ ಗೋನು ಹಾಗೂ ಸೋನಾ ದಂಪತಿ ಮೂರು ದಿನಗಳ ಹಿಂದೆ ಕೆಲಸಕ್ಕಾಗಿ ಕೆಳಗೂರು ಟೀ ಎಸ್ಟೇಟ್&zwnj;ಗೆ ಬಂದಿದ್ದರು. ಇವರ ಮಗ ಒಂದೂವರೆ ವರ್ಷದ ಶಿವಂ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಕಾಣೆಯಾಗಿದ್ದನು. ಹುಡುಕಾಟ ನಡೆಸಿದ ಫೋಷಕರು ಬಾಳೂರು ಪೊಲೀಸ್&zwnj; ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು, ಎಸ್ಟೇಟ್&zwnj; ಸಿಬ್ಬಂದಿ, ಪೋಷಕರು ಗುರುವಾರ ತಡ ರಾತ್ರಿ ವರೆಗೆ ಹುಡುಕಾಟ ನಡೆಸಿದ್ದರು. ಆದರೂ ಮಗು ಪತ್ತೆಯಾಗಿರಲಿಲ್ಲ.&lt;/p&gt;&lt;p&gt;ಶುಕ್ರವಾರ ಬೆಳಗ್ಗೆ ಡಾಗ್&zwnj; ಸ್ಕ್ವಾಡ್&zwnj; ಹಾಗೂ ಥರ್ಮಲ್&zwnj; ಡ್ರೋನ್&zwnj; ಬಳಸಿ ಕಾರ್ಯಾಚರಣೆ ಮುಂದುವರಿಸಲಾಯಿತು. ಈ ವೇಳೆ ಮನೆಯಿಂದ ಸುಮಾರು 350 ಮೀಟರ್&zwnj; ದೂರದಲ್ಲಿ ಇರುವ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ಮಗುವನ್ನು ಫೋಷಕರಿಗೆ ನೀಡಲಾಗಿದೆ. ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್ ನೇತೃತ್ವದಲ್ಲಿ ತೀವ್ರ ಶೋಧ ನಡೆಸಿ, ಸುಮಾರು 12 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕಾಣೆಯಾಗಿದ್ದ ಶಿವಂನನ್ನು ಪೊಲೀಸರು ಸುರಕ್ಷಿತವಾಗಿ ಪತ್ತೆ ಹಚ್ಚಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.&lt;/p&gt;&lt;p&gt;ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕ ರಾಜಶೇಖರ್, ದೂರು ಬಂದ ತಕ್ಷಣ ಹುಡುಕಾಟ ಆರಂಭಿಸಲಾಯಿತು. ಆದರೂ ಮಗು ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರಿಸಲಾಯಿತು. ಫೋಷಕರು ವಾಸವಿದ್ದ, ಮನೆಯಿಂದ ಕೇವಲ 350 ಮೀ. ದೂರದ ಸುಮಾರು 9 ಅಡಿ ಹಳ್ಳದಲ್ಲಿ ಮಗು ಪತ್ತೆಯಾಗಿದೆ. ರಾತ್ರಿ ಇಡೀ ಮಗು ಏಕಾಂಗಿಯಾಗಿ ಹಳ್ಳದಲ್ಲಿತ್ತು. ಸುಮಾರು 150ಕ್ಕೂ ಅಧಿಕ ಸಿಬ್ಬಂದಿ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು ಎಂದು ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rescue-of-1-5-year-old-child-trapped-in-ditches-overnight-at-kottigehar-chikkamagaluru-rav/articleshow-zht6fw8"/>
        </item>
    </channel>
</rss>
