<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 27 Jun 2026 09:11:21 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[Chikkamagaluru: ಪೊಲೀಸ್ ವಿಚಾರಣೆ, ತಾಯಿಗೆ ಸಂದೇಶ, ನಂತರ ಆತ್ಮ*ಹ*ತ್ಯೆ: ಚಂದನ್ ಸಾವಿಗೆ ಕಾರಣವೇನು?]]></title>
            <link>https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr</link>
            <guid isPermaLink="true">https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr</guid>
            <pubDate>Mon, 22 Jun 2026 18:08:29 +0530</pubDate>
            <description><![CDATA[&lt;p&gt;Breaking News Karnataka: &amp;nbsp;ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು &amp;nbsp;ಗ್ರಾಮದಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvqndepwrehbtp7pnesm5a2n,imgname-vjj-1782131899100.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.22): &lt;/strong&gt;ಪೊಲೀಸ್ ವಿಚಾರಣೆಯ ನಂತರ ಯುವಕನೊಬ್ಬ ಆತ್ಮ*ಹ*ತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. 20 ವರ್ಷದ ಚಂದನ್ ಮೃತ ದುರ್ದೈವಿ. ಮಾಹಿತಿಯ ಪ್ರಕಾರ, ಕುಡ್ಲೂರು ಗ್ರಾಮದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣದ ತನಿಖೆ ನಡೆಸುತ್ತಿದ್ದ ಬೀರೂರು ಪೊಲೀಸರು, ಆಕೆಯ ಮೊಬೈಲ್&zwnj;ನಲ್ಲಿ ಚಂದನ್&zwnj;ನ ಸಂಪರ್ಕ ವಿವರಗಳು ಮತ್ತು ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚಿದ್ದರು.&lt;/p&gt;&lt;p&gt;ಈ ಹಿನ್ನೆಲೆ ಚಂದನ್&zwnj;ನನ್ನು ವಿಚಾರಣೆಗೆ ಕರೆಸಿ ಹಲವು ಬಾರಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ನಿನ್ನೆ ಸಹ ವಿಚಾರಣೆಗೆ ಹಾಜರಾಗಿದ್ದ ಚಂದನ್&zwnj;ನನ್ನು ಬಳಿಕ ಪೊಲೀಸರು ಮನೆಗೆ ಕಳುಹಿಸಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ತೆರಳಿದ ಯುವಕ ಆತ್ಮ*ಹ*ತ್ಯೆಗೆ ಶರಣಾಗಿರುವುದು ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ.&lt;/p&gt;&lt;p&gt;ಸ್ಥಳೀಯರ ಪ್ರಕಾರ, ಯುವತಿ ಮನೆ ಬಿಟ್ಟು ಹೋಗಿದ್ದ ಪ್ರಕರಣಕ್ಕೆ ಚಂದನ್ ಕಾರಣ ಎನ್ನುವ ರೀತಿಯಲ್ಲಿ ಕೆಲವರು ಮಾತನಾಡುತ್ತಿದ್ದುದು ಆತನ ಮನಸ್ಸಿನ ಮೇಲೆ ಪರಿಣಾಮ ಬೀರಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆತ್ಮ*ಹ*ತ್ಯೆಗೆ ಮುನ್ನ ಚಂದನ್ ತನ್ನ ತಾಯಿಗೆ ಸಂದೇಶವೊಂದನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಆದರೆ ಚಂದನ್ ಆತ್ಮ*ಹ*ತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸ್ ವಿಚಾರಣೆಯ ಒತ್ತಡವೇ ಕಾರಣವೋ, ಅಥವಾ ಬೇರೆ ಯಾವುದೇ ವೈಯಕ್ತಿಕ ಕಾರಣಗಳಿವೆಯೋ ಎಂಬುದು ತನಿಖೆಯಿಂದಲೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಯುವಕನ ಸಾವಿನ ಹಿಂದಿನ ನಿಜವಾದ ಕಾರಣ ಏನು ಎಂಬುದು ತನಿಖೆ ಪೂರ್ಣಗೊಂಡ ಬಳಿಕವೇ ಬಹಿರಂಗವಾಗಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/chikkamagaluru-youth-death-case-under-investigation-gvd/articleshow-0x9g0qr"/>
        </item>
        <item>
            <title><![CDATA[ಪ್ರವಾಸಿ ತಾಣ ಮುಳ್ಳಯ್ಯನಗಿರಿಯಲ್ಲಿ ಅಕ್ರಮ ರಸ್ತೆ ನಿರ್ಮಾಣ; ಗುಡ್ಡದ ಮಣ್ಣು ಅಕ್ರಮ ಸಾಗಾಣೆಗೆ ಪರಿಸರವಾದಿಗಳ ಆಕ್ರೋಶ!]]></title>
            <link>https://kannada.asianetnews.com/karnataka-districts/karnataka-tourism-spot-mullayanagiri-illegal-road-construction-soil-mining-chikkamagaluru-sat/articleshow-2x27lao</link>
            <guid isPermaLink="true">https://kannada.asianetnews.com/karnataka-districts/karnataka-tourism-spot-mullayanagiri-illegal-road-construction-soil-mining-chikkamagaluru-sat/articleshow-2x27lao</guid>
            <pubDate>Mon, 08 Jun 2026 14:15:26 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ, ಅಕ್ರಮವಾಗಿ ರಸ್ತೆ ನಿರ್ಮಿಸಿ ಮಣ್ಣು ಮತ್ತು ಅದಿರು ಸಾಗಿಸಲಾಗುತ್ತಿದೆ. ಈ ಚಟುವಟಿಕೆಗಳಿಂದ ಭೂಕುಸಿತದ ಅಪಾಯ ಹೆಚ್ಚಾಗಿದ್ದು, ಪರಿಸರವಾದಿಗಳು ಅಧಿಕಾರಿಗಳ ನಿಷ್ಕ್ರಿಯತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktk6aqbsbcer19q08ec34g9q,imgname-mullayanagiri-illegal-soil-mining-1780908121464.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಜೂ.08): ರಾ&lt;/strong&gt;ಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿ&zwnj;ನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ ಮಣ್ಣು, ಅದಿರು ಸಾಗಾಣೆ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಅರಣ್ಯೇತರ ಚಟುಚಟಿಕೆ:&lt;/strong&gt;&lt;/h3&gt;&lt;p&gt;ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಸೇರಿದ ಮುಳ್ಳಯ್ಯನಗಿರಿ-ಬಾಬಾಬುಡನ್ ಗಿರಿ ಶ್ರೇಣಿ ಪ್ರದೇಶದಲ್ಲಿ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳನ್ನು ಬಳಸಿ ಹೊಸ ರಸ್ತೆಗಳ ನಿರ್ಮಾಣ ನಡೆಯುತ್ತಿದೆ ಎನ್ನಲಾಗಿದೆ. ಶೋಲಾ ಕಾಡುಗಳು ಹಾಗೂ ಹುಲ್ಲುಗಾವಲು ಪ್ರದೇಶಗಳನ್ನು ಬಗೆದು ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಿಂದ ಪರಿಸರ ವ್ಯವಸ್ಥೆಗೆ ಗಂಭೀರ ಹಾನಿಯಾಗುವ ಸಾಧ್ಯತೆಯಿದೆ ಎಂದು ಪರಿಸರ ಹೋರಾಟಗಾರರು ಎಚ್ಚರಿಸಿದ್ದಾರೆ.ಸ್ಥಳೀಯರಾದ ವಿಜಯಮಾರ್ ಮಾತಾಡಿ ಕೆಲವು ಪ್ರದೇಶಗಳಲ್ಲಿ ಗುಡ್ಡಗಳನ್ನು ಬಗೆದು ಮಣ್ಣು ಮತ್ತು ಅದಿರು ಸಾಗಾಣೆ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಚಟುವಟಿಕೆಗಳು ರೆಸಾರ್ಟ್&zwnj;ಗಳು, ಹೋಮ್&zwnj;ಸ್ಟೇಗಳು ಹಾಗೂ ಇತರ ಪ್ರವಾಸೋದ್ಯಮ ಸಂಬಂಧಿತ ನಿರ್ಮಾಣಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಡೆಯುತ್ತಿವೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಪರಿಸರ ಸಂರಕ್ಷಣಾ ನಿಯಮಗಳ ಉಲ್ಲಂಘನೆ :&lt;/strong&gt;&lt;/h2&gt;&lt;p&gt;ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆಗೆ ಸಿಗಲೇ ಇಲ್ಲ, ಪರಿಸರವಾದಿ ವಿರೇಶ್ ಮಾತಾಡಿ ಪ್ರಕಾರ, ಈ ಪ್ರದೇಶವು ಪ್ರಸ್ತಾಪಿತ ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ವ್ಯಾಪ್ತಿಯಲ್ಲಿದ್ದು, ಇಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಆದರೂ ಭಾರೀ ಯಂತ್ರಗಳ ಬಳಕೆಯಿಂದ ರಸ್ತೆ ನಿರ್ಮಾಣ ನಡೆಯುತ್ತಿರುವುದು ಪರಿಸರ ಸಂರಕ್ಷಣಾ ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಆರೋಪಿಸಿದ್ದಾರೆ.&lt;/p&gt;&lt;p&gt;ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸುವ ಅಪಾಯ ಹೆಚ್ಚಾಗಿದೆ. ಮೃದುವಾದ ಮಣ್ಣಿನ ಪ್ರದೇಶಗಳಲ್ಲಿ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳ ಕಾರ್ಯಾಚರಣೆ ಭೂಸ್ಥಿರತೆಗೆ ಧಕ್ಕೆ ತರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ, ಅಕ್ರಮ ರಸ್ತೆ ನಿರ್ಮಾಣ, ಮಣ್ಣು ಮತ್ತು ಅದಿರು ಸಾಗಾಣೆ ಕುರಿತು ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.&lt;/p&gt;&lt;p&gt;ಪರಿಸರ ಸೂಕ್ಷ್ಮ ವಲಯದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸಂಬಂಧಿತ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಎಂದು ಅವರು ಕಿಡಿಕಾರಿದ್ದಾರೆ.ಅಕ್ರಮ ರಸ್ತೆ ನಿರ್ಮಾಣ ಹಾಗೂ ಗುಡ್ಡ ಬಗೆಯುವಿಕೆಯನ್ನು ತಕ್ಷಣವೇ ನಿಲ್ಲಿಸಬೇಕು. ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಂತ್ರಗಳನ್ನು ವಶಕ್ಕೆ ಪಡೆದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಇತರೆ ಪರಿಸರ ಕಾನೂನುಗಳಡಿ ಪ್ರಕರಣ ದಾಖಲಿಸಬೇಕು ಎಂದು ಪರಿಸರ ಸಂಘಟನೆಗಳು ಒತ್ತಾಯಿಸಿವೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-tourism-spot-mullayanagiri-illegal-road-construction-soil-mining-chikkamagaluru-sat/articleshow-2x27lao"/>
        </item>
        <item>
            <title><![CDATA[ಅಡ್ಡಮತದ ಬಗ್ಗೆ ಬಿವೈವಿಗೆ ಇಂದು ಸತ್ಯಶೋಧ ವರದಿ - ಇಂಥವರೇ ಮಾಡಿದ್ದಾರೆಂದು ಹೇಳಲಾಗದು, ಕೆಲವರ ಮೇಲೆ ಅನುಮಾನ: ಸಿಟಿ ರವಿ]]></title>
            <link>https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb</link>
            <guid isPermaLink="true">https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb</guid>
            <pubDate>Fri, 26 Jun 2026 05:04:04 +0530</pubDate>
            <description><![CDATA[&lt;p&gt;ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನ ಪರಿಷತ್&zwnj; ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ(BJP)ಯಿಂದ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ವರದಿ ಸಿದ್ಧವಾಗಿದ್ದು, ಇಂದು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರಿಗೆ ವರದಿಯನ್ನು ಸಲ್ಲಿಕೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcx4fyk1p4nrct4gxgmzs4x5,imgname-1-1766209354337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.26): &lt;/strong&gt;ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನ ಪರಿಷತ್&zwnj; ಚುನಾವಣೆಯಲ್ಲಿ ನಡೆದ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ(BJP)ಯಿಂದ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ವರದಿ ಸಿದ್ಧವಾಗಿದ್ದು, ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra) ಅವರಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ವಿಧಾನ ಪರಿಷತ್&zwnj; ಸದಸ್ಯ ಡಾ.ಸಿ.ಟಿ.ರವಿ(CT Ravu) ತಿಳಿಸಿದ್ದಾರೆ.&lt;/p&gt;&lt;h2&gt;ಅಡ್ಡ ಮತದಾನ: ಸತ್ಯಶೋಧನಾ ವರದಿಯಲ್ಲೇನಿದೆ?&lt;/h2&gt;&lt;p&gt;ಚಿಕ್ಕಮಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಸತ್ಯಶೋಧನಾ ಸಮಿತಿಯ ಸದಸ್ಯರು ಸಭೆ ನಡೆಸಿ ವರದಿ ಸಿದ್ಧಪಡಿಸಿದ್ದೇವೆ. ಸಮಿತಿಯ ಎಲ್ಲ ಸದಸ್ಯರು ವರದಿಗೆ ಸಹಿ ಮಾಡಿದ್ದು, ಸೀಲ್ಡ್&zwnj; ಕವರ್&zwnj;ನಲ್ಲಿ ವರದಿಯನ್ನು ಭದ್ರಪಡಿಸಲಾಗಿದೆ. ಶುಕ್ರವಾರ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h3&gt;ಅಡ್ಡ ಮತದಾನ ಮಾಡಿದವರು ಯಾರು?&lt;/h3&gt;&lt;p&gt;ರಾಜ್ಯಾಧ್ಯಕ್ಷರಿಗೆ ವರದಿ ನೀಡುವುದಕ್ಕೂ ಮುನ್ನ ಯಾವ ಅಂಶಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ, ಯಾರು-ಯಾರು ಅಡ್ಡ ಮತದಾನ ಮಾಡಿರಬಹುದು ಎಂದು ಅನುಮಾನಿಸಲಾಗಿದೆ. ಯಾವ ಕಾರಣಕ್ಕೆ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ ಎಂಬುದನ್ನು ವಿವರಿಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ಪರಿಷತ್&zwnj; ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಯಾರು ಎಂಬುದನ್ನು ಕೇವಲ ಅನುಮಾನಿಸಬಹುದಾಗಿದೆ ಅಷ್ಟೇ. ಇದು ಗೌಪ್ಯ ಮತದಾನ ಆಗಿರುವುದರಿಂದ ಖಡಾಖಂಡಿತವಾಗಿ ಇವರೇ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಸಾಂದರ್ಭಿಕ ಸಾಕ್ಷಿಗಳ ಆಧಾರದಲ್ಲಿ ಅನುಮಾನಿಸಬಹುದಷ್ಟೇ. ನೇರವಾಗಿ ಆರೋಪಿ ಸ್ಥಾನದಲ್ಲಿ ಯಾರನ್ನೂ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ct-ravi-reacts-about-fact-finding-committee-report-on-bjp-cross-voters-rav/articleshow-3sdv7zb"/>
        </item>
        <item>
            <title><![CDATA[RSS ಬಿಟ್ಟು ಪ್ರಿಯಾಂಕ್‌ ಖರ್ಗೆ ಖಾತೆ ನಿರ್ವಹಿಸಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ]]></title>
            <link>https://kannada.asianetnews.com/karnataka-districts/mp-kota-srinivas-poojary-slams-priyank-kharge-over-rss-gvd/articleshow-5hw083g</link>
            <guid isPermaLink="true">https://kannada.asianetnews.com/karnataka-districts/mp-kota-srinivas-poojary-slams-priyank-kharge-over-rss-gvd/articleshow-5hw083g</guid>
            <pubDate>Wed, 17 Jun 2026 22:52:54 +0530</pubDate>
            <description><![CDATA[&lt;p&gt;RSS: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktq95da0mmh5ra2z772vw5ba,imgname-----------------------2026-06-10t041604.798-1781045310784.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.17): &lt;/strong&gt;ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್&zwnj;ಎಸ್&zwnj;ಎಸ್&zwnj;) ವಿಚಾರವನ್ನು ಬಿಟ್ಟು, ಕೊಟ್ಟಿರುವ ಗೃಹ ಖಾತೆಯನ್ನು ಸಮರ್ಥವಾಗಿ ನಡೆಸಿದರೆ ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದ ಕೋಟ ಶ್ರೀನಿವಾಸ್&zwnj; ಪೂಜಾರಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಐಡಿ, ಸಿಆರ್&zwnj;ಪಿಎಫ್&zwnj;, ಗೃಹ ರಕ್ಷಕ ದಳ, ಸಂಚಾರಿ ಪೊಲೀಸ್&zwnj;, ಸೇರಿದಂತೆ ಸುಮಾರು ಆರೇಳು ವಿಭಾಗ ಹೊಂದಿರುವ ಗೃಹ ಇಲಾಖೆಯ ದೊಡ್ಡ ಜವಾಬ್ದಾರಿಯನ್ನು ಪ್ರಿಯಾಂಕ್&zwnj; ಖರ್ಗೆ ಹೊಂದಿದ್ದಾರೆ ಎಂದರು.&lt;/p&gt;&lt;p&gt;ಶಾಲಾ-ಕಾಲೇಜುಗಳ ಬಳಿಕ ಅಕ್ರಮವಾಗಿ ಮಾದಕ ವಸ್ತು ಮಾರಾಟ ತಡೆಯುವ ಹಾಗೂ ನಾಡಿನ ಶಾಂತಿ ಸುವ್ಯವಸ್ಥೆ ಕಾಪಾಡುವುದರೊಂದಿಗೆ 6.5 ಕೋಟಿ ಜನರಿಗೆ ಹಿತ ಕಾಯುವ ದೊಡ್ಡ ಜವಾಬ್ದಾರಿ ಹೊಂದಿರುವ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ, ಅದನೆಲ್ಲಾ ಬಿಟ್ಟು ಪ್ರಿಯಾಂಕ್&zwnj; ಖರ್ಗೆ ಆರ್&zwnj;ಎಸ್&zwnj;ಎಸ್&zwnj; ಹಿಂದೆ ಬಿದ್ದಿದ್ದಾರೆ. ಬೇಕಿದ್ದರೆ, ಪ್ರಿಯಾಂಕ್&zwnj; ಖರ್ಗೆ ಅವರು ಆರ್&zwnj;ಎಸ್&zwnj;ಎಸ್&zwnj; ಶಾಖೆಗೆ ಆಗಮಿಸಿ ನೋಡಬಹುದು. ಆರ್&zwnj;ಎಸ್&zwnj;ಎಸ್&zwnj; ದೇಶ ಕಟ್ಟುವ, ರಾಷ್ಟ್ರ ಭಕ್ತಿಯ ವಿಚಾರಗಳನ್ನು ಯುವಕರಿಗೆ ಕೊಡುವ ಕೆಲಸ ಮಾಡುತ್ತಿದೆ. ಆರ್&zwnj;ಎಸ್&zwnj;ಎಸ್&zwnj; ರಾಷ್ಟ್ರ ಭಕ್ತಿ ಸಂಸ್ಥೆಯಾಗಿದೆ. ಆ ಸಂಸ್ಥೆಯ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಬದಲು ಕೊಟ್ಟಿರುವ ಖಾತೆಯನ್ನು ಚನ್ನಾಗಿ ನಡೆಸಿದರೆ ಜನರಿಗೆ ನೆಮ್ಮದಿ ಸಿಗಲಿದೆ ಎಂದರು.&lt;/p&gt;&lt;p&gt;ಮಾಜಿ ರಾಷ್ಟ್ರಪತಿ ಶಂಕರ್&zwnj; ದಯಾಳ್&zwnj; ಶರ್ಮಾ, ಡಾ.ಬಿ.ಆರ್&zwnj;.ಅಂಬೇಡ್ಕರ್&zwnj;, ಮಹಾತ್ಮ ಗಾಂಧಿ ಅವರು ಆರ್&zwnj;ಎಸ್&zwnj;ಎಸ್&zwnj; ಶಾಖೆಗೆ ಭೇಟಿ ನೀಡಿ, ರಾಷ್ಟ್ರ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರಿಗಿಂತ ದೊಡ್ಡವರು ಯಾರೂ ಇಲ್ಲ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್&zwnj; ಹಾಗೂ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಅವರಿಗೆ ಆರ್&zwnj;ಎಸ್&zwnj;ಎಸ್&zwnj; ಕುರಿತು ತಮಗೆ ಇರುವ ವೈಯಕ್ತಿಕ ಆತಂಕಗಳಿದ್ದರೆ, ಅದನ್ನು ನಿವಾರಣೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.&lt;/p&gt;&lt;p&gt;ಆರ್&zwnj;ಎಸ್&zwnj;ಎಸ್&zwnj; ಸಂಸ್ಥೆಗೆ ಈಗಾಗಲೇ ಒಂದು ಶತಮಾನವಾಗಿದೆ. ಈಗ ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಆರ್&zwnj;ಎಸ್&zwnj;ಎಸ್&zwnj; ಮುಖ್ಯಸ್ಥ ಮೋಹನ್&zwnj; ಭಾಗವತ್&zwnj; ಅವರಿಗೆ ನೇರವಾಗಿ ಪತ್ರ ಬರೆದು ಸಂಘದ ನೋಂದಣಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಬಗ್ಗೆ ಮೋಹನ್&zwnj; ಭಾಗವತ್&zwnj; ಉತ್ತರ ನೀಡಲಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಪ್ರಧಾನಿ ಮೋದಿಯಿಂದ ಐತಿಹಾಸಿಕ ಮೈಲಿಗಲ್ಲು&lt;/strong&gt;&lt;/h2&gt;&lt;p&gt;ಮಾಜಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಚುನಾಯಿತ ಪ್ರಧಾನ ಮಂತ್ರಿಯಾಗಿ 4398 ದಿನಗಳ ಕಾಲ ಆಡಳಿತ ನಡೆಸಿ ದೇಶದ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಪ್ರಧಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಈಗ ನರೇಂದ್ರ ಮೋದಿಯವರು 4399 ದಿನ ಪೂರೈಸುವ ಮೂಲಕ ನೆಹರೂ ದಾಖಲೆ ಮುರಿದು ಐತಿಹಾಸಿಕ ಮೈಲಿಗಲ್ಲಾಗಿಸಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mp-kota-srinivas-poojary-slams-priyank-kharge-over-rss-gvd/articleshow-5hw083g"/>
        </item>
        <item>
            <title><![CDATA[ಚಿಕ್ಕಮಗಳೂರು: ಆಶ್ರಮ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯ, ತಡರಾತ್ರಿ ಗಲಾಟೆಗೆ ಹೆದರಿ ಓಡಿಹೋದ 4 ಪುಟ್ಟ ಮಕ್ಕಳು!]]></title>
            <link>https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t</link>
            <guid isPermaLink="true">https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t</guid>
            <pubDate>Tue, 23 Jun 2026 10:01:04 +0530</pubDate>
            <description><![CDATA[ಚಿಕ್ಕಮಗಳೂರು ತಾಲೂಕಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ, ಹಾಸ್ಟೆಲ್ ಗಲಾಟೆಯಿಂದ ಭಯಭೀತರಾದ ನಾಲ್ವರು ಮಕ್ಕಳು ತಡರಾತ್ರಿ ಪಲಾಯನ ಮಾಡಲು ಯತ್ನಿಸಿದ್ದಾರೆ. ಸುಮಾರು 2 ಕಿ.ಮೀ ನಡೆದ ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಮರಳಿ ಶಾಲೆಗೆ ಒಪ್ಪಿಸಿದ್ದು, ಈ ಘಟನೆಯು ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವನ್ನು ಬಯಲು ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvsbt0qr9117ebpvq5cgn9vs,imgname-chikkamagaluru-ashram-school-incident-1782188933880.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಜಿಲ್ಲೆಯ ತಾಲೂಕಿನ ತುಡುಕೂರು ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಎದ್ದು ಕಾಣುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯ ಆವರಣದಲ್ಲಿ ಪುಟ್ಟ ಮಕ್ಕಳು ತಡರಾತ್ರಿ ಎಸ್ಕೇಪ್ ಆಗಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.&lt;/p&gt;&lt;h2&gt;ತಡರಾತ್ರಿ ನಡೆದಿದ್ದೇನು?&lt;/h2&gt;&lt;p&gt;ಮೂಲಗಳ ಪ್ರಕಾರ, ನಿನ್ನೆ ತಡರಾತ್ರಿ ವಸತಿ ಶಾಲೆಯ ಹಾಸ್ಟೆಲ್&zwnj;ನಲ್ಲಿ ಮಕ್ಕಳ ನಡುವೆ ಸಣ್ಣದಾಗಿ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಈ ಗಲಾಟೆಯಿಂದ ತೀವ್ರವಾಗಿ ಭಯಗೊಂಡ ಉತ್ತರ ಕರ್ನಾಟಕ ಮೂಲದ ನಾಲ್ವರು ಪುಟ್ಟ ಮಕ್ಕಳು, ಆಶ್ರಮದಲ್ಲಿ ತಮಗೇನಾಗುತ್ತದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ವಾರ್ಡನ್ ಹಾಗೂ ಅಲ್ಲಿನ ಸಿಬ್ಬಂದಿ ಮಕ್ಕಳ ನಡುವಿನ ಗಲಾಟೆಯನ್ನು ಶಾಂತಗೊಳಿಸುವಲ್ಲಿ ಅಥವಾ ಮಕ್ಕಳಿಗೆ ಧೈರ್ಯ ತುಂಬುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರ ಪರಿಣಾಮವಾಗಿ, ಭಯಭೀತರಾದ ಮಕ್ಕಳು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಮನೆಗೆ ಸೇರಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.&lt;/p&gt;&lt;h2&gt;ಮುಂಜಾನೆ ರಸ್ತೆ ಹಿಡಿದ ಪುಟ್ಟ ಮಕ್ಕಳು&lt;/h2&gt;&lt;p&gt;ಭಯದ ನೆರಳಿನಲ್ಲೇ ರಾತ್ರಿ ಕಳೆದ ಮಕ್ಕಳು, ಇಂದು ಬೆಳ್ಳಂಬೆಳಗ್ಗೆಯೇ ಯಾರಿಗೂ ತಿಳಿಯದಂತೆ ವಸತಿ ಶಾಲೆಯಿಂದ ಹೊರಬಂದಿದ್ದಾರೆ. ಆಶ್ರಮದಿಂದ ನೇರವಾಗಿ ಚಿಕ್ಕಮಗಳೂರು ನಗರದ ಕಡೆಗೆ ಹೋಗುವ ರಸ್ತೆಯನ್ನು ಹಿಡಿದು ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗಿನ ಚಳಿಯನ್ನೂ ಲೆಕ್ಕಿಸದೆ ಈ ಪುಟ್ಟ ಕಂದಮ್ಮಗಳು ವಸತಿ ಶಾಲೆಯಿಂದ ಸುಮಾರು 2 ಕಿಲೋಮೀಟರ್&zwnj;ನಷ್ಟು ದೂರದವರೆಗೆ ನಡೆದುಕೊಂಡೇ ಬಂದಿದ್ದಾರೆ.&lt;/p&gt;&lt;h2&gt;ರಕ್ಷಿಸಿದ ಸ್ಥಳೀಯರು ಮತ್ತು ಗ್ರಾಮಸ್ಥರು&lt;/h2&gt;&lt;p&gt;ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ತುಡುಕೂರು ಭಾಗದ ಸ್ಥಳೀಯ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಮಕ್ಕಳನ್ನು ತಡೆದು ಪ್ರೀತಿಯಿಂದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಕ್ಕಳು ರಾತ್ರಿ ನಡೆದ ಗಲಾಟೆ ಮತ್ತು ತಮಗಾದ ಭಯದ ಬಗ್ಗೆ ಗ್ರಾಮಸ್ಥರ ಮುಂದೆ ತೋಡಿಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗ್ರಾಮಸ್ಥರು, ಮಕ್ಕಳಿಗೆ ಧೈರ್ಯ ತುಂಬಿ ಸಮಾಧಾನಪಡಿಸಿದ್ದಾರೆ. ತದನಂತರ ಅತ್ಯಂತ ಜವಾಬ್ದಾರಿಯಿಂದ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಅದೇ ವಸತಿ ಶಾಲೆಗೆ ಕರೆತಂದು ಒಪ್ಪಿಸಿದ್ದಾರೆ.&lt;/p&gt;&lt;h2&gt;ಬಯಲಾಯ್ತು ಅಧಿಕಾರಿಗಳ, ವಾರ್ಡನ್ ನಿರ್ಲಕ್ಷ್ಯ&lt;/h2&gt;&lt;p&gt;ಈ ಘಟನೆಯಿಂದಾಗಿ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ವಸತಿ ಶಾಲೆಯ ಆಡಳಿತ ಮಂಡಳಿ, ವಾರ್ಡನ್ ಹಾಗೂ ಕಾವಲು ಕಾಯುವ ಸಿಬ್ಬಂದಿಯ ಬೇಜವಾಬ್ದಾರಿತನ ಸಂಪೂರ್ಣವಾಗಿ ಬಯಲಾಗಿದೆ. ರಾತ್ರಿ ಮಕ್ಕಳ ನಡುವೆ ಗಲಾಟೆಯಾಗುತ್ತಿದ್ದರೂ ವಾರ್ಡನ್ ಎಲ್ಲಿ ಹೋಗಿದ್ದರು? ಮುಂಜಾನೆ ನಾಲ್ಕು ಜನ ಪುಟ್ಟ ಮಕ್ಕಳು ಗೇಟ್ ದಾಟಿ ಅಷ್ಟು ದೂರ ಹೋದರೂ ಸಿಬ್ಬಂದಿಯ ಗಮನಕ್ಕೆ ಬರಲಿಲ್ಲವೇ? ಒಂದು ವೇಳೆ ಮಕ್ಕಳಿಗೆ ರಸ್ತೆಯಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ? ಎಂಬ ಹತ್ತಾರು ಪ್ರಶ್ನೆಗಳು ಈಗ ಸಾರ್ವಜನಿಕರನ್ನು ಕಾಡುತ್ತಿವೆ. ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದ ವಾರ್ಡನ್ ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-4-hostel-kids-escape-after-midnight-clash-staff-negligence-blamed-gdp/articleshow-690le0t"/>
        </item>
        <item>
            <title><![CDATA[ಎಷ್ಟು ಕಾಲ ದರ್ಪ ತೋರಿಸ್ತಾರೋ ನೋಡೋಣ: ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿ ಎಂದ ಸಿಟಿ ರವಿ]]></title>
            <link>https://kannada.asianetnews.com/politics/bjp-mlc-ct-ravi-slams-congress-and-left-parties-at-chikkamagaluru-rav/articleshow-7gtnrqg</link>
            <guid isPermaLink="true">https://kannada.asianetnews.com/politics/bjp-mlc-ct-ravi-slams-congress-and-left-parties-at-chikkamagaluru-rav/articleshow-7gtnrqg</guid>
            <pubDate>Tue, 16 Jun 2026 09:39:19 +0530</pubDate>
            <description><![CDATA[&lt;p&gt;ಬಳ್ಳಾರಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಭಯೋತ್ಪಾದಕರಿಗೆ ಬಿರಿಯಾನಿ ಹಾಕುವ ಸರ್ಕಾರ ಈಗಿಲ್ಲ, ಅವರನ್ನು ಮಟ್ಟ ಹಾಕುವ ಸರ್ಕಾರವಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆ 'ಮಿನಿ ಸರ್ವಾಧಿಕಾರಿ' ಎಂದು ಕರೆದಿದ್ದೇಕೆ ಸಿಟಿ ರವಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktb629dz1cjt1z1sgfv8bnh4,imgname-----------------------2026-06-05t113041.631-1780639409599.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜೂ.16):&lt;/strong&gt; ಭಯೋತ್ಪಾದಕ(Terrorists)ರಿಗೆ ಬಿರಿಯಾನಿ ಕೊಟ್ಟು ಸಾಕುವ ಸರ್ಕಾರ ಈಗಿಲ್ಲ. ಭಯೋತ್ಪಾದಕರನ್ನು ಸಂಪೂರ್ಣ ಮಟ್ಟಹಾಕುವ ಸರ್ಕಾರ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಚಿಕ್ಕಮಗಳೂರಿನ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಹೇಳಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಯೋತ್ಪಾದಕರಿಗೆ ಇಲ್ಲಿ ಉಳಿಗಾಲವಿಲ್ಲ. ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆದದ್ದು ಕಾಂಗ್ರೆಸ್ಸು. ಅವರು ನಕ್ಸಲರನ್ನು ಬೆಂಬಲಿಸುತ್ತಿದ್ದರು. ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಡೆ ನಕ್ಸಲ್ ತುಕಡೆ ಗ್ಯಾಂಗ್ ಬೇರೆ ಸಿದ್ಧಾಂತದ ಮೂಲಕ ರೂಪಾಂತರಗೊಂಡು ಜೀವಂತವಿದೆ ಎಂದು ತಿಳಿಸಿದರು.&lt;/p&gt;&lt;h2&gt;ಎಸ್&zwnj;ಐಆರ್ ಮೂಲಕ ಅಕ್ರಮ ಮತದಾರರು ಬೇಟೆ&lt;/h2&gt;&lt;p&gt;ಎಸ್ಐಆರ್(SIR) ಮೂಲಕ ಮತದಾರರ ಪಟ್ಟಿಯಲ್ಲಿನ ಅಕ್ರಮ ಮತದಾರರನ್ನು ತೆಗೆದುಹಾಕುವ ಕೆಲಸವಾಗುತ್ತಿದೆ. ವಿರೋಧಿಸುವವರು ದೇಶದ್ರೋಹಿಗಳು. ತುಕಡೆ ಗ್ಯಾಂಗ್&zwnj;ಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದು, ಭಾರತ ಸರ್ಕಾರ ತುಕಡೆ ಗ್ಯಾಂಗ್&zwnj;ಗಳನ್ನು ಸಮರ್ಥವಾಗಿ ಎದುರಿಸಲಿದೆ. ನಕ್ಸಲ್ ಮುಕ್ತ ಭಾರತ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದತ್ತ ಸಾಗಿದೆ. ನಾವು ಬರೀ ಹೇಳುವುದಲ್ಲ. ಪೂರಕ ದಾಖಲೆಗಳು, ಪ್ರಗತಿಯ ಅಂಶಗಳೇ ತಿಳಿಸುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತ ಆರ್ಥಿಕ ಸುಸ್ಥಿತಿಗೆ ತಲುಪಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.&lt;/p&gt;&lt;h3&gt;ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ:&lt;/h3&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನು ಅಲ್ಲ. ಪಕ್ಷದ ನಾಯಕರು ಅವರನ್ನೇ ಮುಂದುವರಿಸಬಹುದು ಅಥವಾ ಬೇರೆಯವರನ್ನಾದರೂ ಮಾಡಬಹುದು ಅದು ಗೊತ್ತಿಲ್ಲ. ಯಾರೇ ಅಧ್ಯಕ್ಷರಾದರೂ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಪ್ರಿಯಾಂಕ್ ಮಿನಿ ಸರ್ವಾಧಿಕಾರಿ:&lt;/p&gt;&lt;p&gt;ಆರ್&zwnj;ಎಸ್&zwnj;ಎಸ್ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿಯಾಗಿದ್ದಾನೆ. ಈ ಸರ್ವಾಧಿಕಾರಿ ಎಷ್ಟು ಕಾಲ ಅಧಿಕಾರ ದರ್ಪ ತೋರಿಸ್ತಾರೆ ನೋಡೋಣ. ತುರ್ತು ಪರಿಸ್ಥಿತಿಗೆ ನಾವು ಹೆದರಿಲ್ಲ. ಇನ್ನು ಇವರಿಗೆ ನಾವು ಹೆದರುತ್ತೇವಾ? ಎಂದು ಪ್ರಶ್ನಿಸಿದರಲ್ಲದೆ, ತುರ್ತು ಪರಿಸ್ಥಿತಿ ಹಾಕಿದವರು ಅಧಿಕಾರ ಕಳೆದುಕೊಳ್ಳುವಂತಾಯಿತು. ಆ ಸರ್ವಾಧಿಕಾರಿಯೇ ಬಹಳ ದಿನ ಉಳಿಯಲಿಲ್ಲ ಎಂದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-mlc-ct-ravi-slams-congress-and-left-parties-at-chikkamagaluru-rav/articleshow-7gtnrqg"/>
        </item>
        <item>
            <title><![CDATA[ಲಂಚದ ಹಣದೊಂದಿಗೆ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಸರ್ವೇಯರ್; ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಹೈಡ್ರಾಮಾ!]]></title>
            <link>https://kannada.asianetnews.com/karnataka-districts/lokayukta-trap-in-mudigere-govt-surveyor-suma-caught-red-handed-taking-bribe-sat/articleshow-gdo2ar8</link>
            <guid isPermaLink="true">https://kannada.asianetnews.com/karnataka-districts/lokayukta-trap-in-mudigere-govt-surveyor-suma-caught-red-handed-taking-bribe-sat/articleshow-gdo2ar8</guid>
            <pubDate>Wed, 10 Jun 2026 20:21:56 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಜಮೀನಿನ ಸರ್ವೆ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸರ್ಕಾರಿ ಸರ್ವೇಯರ್ ಸುಮಾ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ದೂರುದಾರ ಮಂಜುನಾಥ್ ಅವರಿಂದ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kts09d72va0k51f9k6b084rb,imgname-chikkamagaluru-lokayukta-raid-1781103113442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.10): ಸ&lt;/strong&gt;ರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರದ ಜಾಲ ಎಷ್ಟರಮಟ್ಟಿಗೆ ಹಬ್ಬಿದೆ ಎಂಬುದಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿನ ಸರ್ವೆ ಸ್ಕೆಚ್ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸರ್ಕಾರಿ ಸರ್ವೇಯರ್ ಸುಮಾ ಅವರು ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.&lt;/p&gt;&lt;h3&gt;ಘಟನೆಯ ವಿವರ:&lt;/h3&gt;&lt;p&gt;ಮೂಡಿಗೆರೆ ಪಟ್ಟಣದ ಎ.ಡಿ.ಎಲ್.ಆರ್. (ADLR) ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ಸುಮಾ, ದೇವವೃಂದ ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮಂಜುನಾಥ್ ಅವರು ತಮ್ಮ ಜಮೀನಿನ ಸರ್ವೆ ನಡೆಸಿ, ಸ್ಕೆಚ್ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸುಮಾ ಅವರು 20 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದರು.&lt;/p&gt;&lt;h2&gt;&lt;strong&gt;15 ಸಾವಿರ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅರೆಸ್ಟ್:&lt;/strong&gt;&lt;/h2&gt;&lt;p&gt;ಲಂಚ ನೀಡಲು ಇಷ್ಟವಿಲ್ಲದ ಮಂಜುನಾಥ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಜುನಾಥ್ ಅವರಿಂದ ಮೊದಲ ಕಂತಿನ ರೂಪದಲ್ಲಿ 15 ಸಾವಿರ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದಾಗ, ಸಂಚು ರೂಪಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಸುಮಾ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಹಣವನ್ನು ವಶಪಡಿಸಿಕೊಂಡ ಅಧಿಕಾರಿಗಳು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಲೋಕಾಯುಕ್ತ ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಲೋಕಾಯುಕ್ತ ಡಿವೈಎಸ್.ಪಿ ತಿರುಮಲೇಶ್ ಅವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ. ಎ.ಡಿ.ಎಲ್.ಆರ್. ಕಚೇರಿಯಲ್ಲೇ ಹಣ ಪಡೆಯುವಾಗ ಸಿಕ್ಕಿಬಿದ್ದಿರುವುದು ಅಲ್ಲಿನ ಉಳಿದ ಸಿಬ್ಬಂದಿಗಳಲ್ಲಿ ನಡುಕ ಹುಟ್ಟಿಸಿದೆ. ಸದ್ಯ ಸುಮಾ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/lokayukta-trap-in-mudigere-govt-surveyor-suma-caught-red-handed-taking-bribe-sat/articleshow-gdo2ar8"/>
        </item>
        <item>
            <title><![CDATA[ಧರ್ಮಸ್ಥಳ ಕೇಸ್‌ನ ತನಿಖಾಧಿಕಾರಿ ಎಸ್‌ಪಿ ಸೈಮನ್ ಕಾರು  ಚಾರ್ಮಾಡಿ ಘಾಟ್‌ನಲ್ಲಿ ಪಲ್ಟಿ: ತನಿಖೆಯಲ್ಲೊಂದು ತಿರುವು?]]></title>
            <link>https://kannada.asianetnews.com/karnataka-districts/dharmasthala-case-sit-officer-ca-simon-car-overturns-at-charmadi-ghat-4-injured-sat/articleshow-iuwxbxl</link>
            <guid isPermaLink="true">https://kannada.asianetnews.com/karnataka-districts/dharmasthala-case-sit-officer-ca-simon-car-overturns-at-charmadi-ghat-4-injured-sat/articleshow-iuwxbxl</guid>
            <pubDate>Tue, 16 Jun 2026 17:05:35 +0530</pubDate>
            <description><![CDATA[ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್&zwnj;ಐಟಿ ತಂಡದ ಕಾರು ಚಾರ್ಮಾಡಿ ಘಾಟ್&zwnj;ನಲ್ಲಿ ಅಪಘಾತಕ್ಕೀಡಾಗಿದೆ. ಎಸ್&zwnj;ಪಿ ಸಿ.ಎ. ಸೈಮನ್ ಸೇರಿದಂತೆ ನಾಲ್ವರು ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾಗಿದ್ದು, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv83chgnkv9k8893wftt3m1b,imgname-sit-officer-ca-simon-car-overturns-1781609678357.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ (ಜೂ.16): ದ&lt;/strong&gt;ಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್&zwnj;ನಲ್ಲಿ (Charmadi Ghat) ಮಂಗಳವಾರ ಮಹತ್ವದ ತನಿಖಾ ತಂಡವೊಂದರ ಕಾರು ಭೀಕರ ಅಪಘಾತಕ್ಕೆ ಈಡಾಗಿದೆ. ಧರ್ಮಸ್ಥಳದ ವಿವಾದಾತ್ಮಕ 'ಬುರುಡೆ ಪ್ರಕರಣ'ದ (Dharmasthala Burude Case) ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದ (SIT) ಎಸ್&zwnj;ಪಿ ಸಿ.ಎ. ಸೈಮನ್ ಮತ್ತು ಅವರ ತಂಡ ಪ್ರಯಾಣಿಸುತ್ತಿದ್ದ ಇನೋವಾ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಧರ್ಮಸ್ಥಳ ಬುರುಡೆ ಪ್ರಕರಣದ ತನಿಖಾಧಿಕಾರಿಯಾಗಿರುವ ಚಿಕ್ಕಮಗಳೂರು ಎಸ್&zwnj;ಪಿ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿಯಾಗಲು ಎಸ್&zwnj;ಐಟಿ ಎಸ್&zwnj;ಪಿ ಸಿ.ಎ. ಸೈಮನ್ ಅವರು ಮಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಲು ಅಧಿಕಾರಿಗಳ ತಂಡ ಪ್ರಯಾಣಿಸುತ್ತಿತ್ತು. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ತಲುಪಿದಾಗ, ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು ರಸ್ತೆಯಲ್ಲೇ ಪಲ್ಟಿಯಾಗಿದೆ.&lt;/p&gt;&lt;h2&gt;&lt;strong&gt;ಗಾಯಾಳುಗಳ ವಿವರ:&lt;/strong&gt;&lt;/h2&gt;&lt;p&gt;ಅಪಘಾತದ ಸಮಯದಲ್ಲಿ ಕಾರಿನಲ್ಲಿ ಎಸ್&zwnj;ಪಿ ಸಿ.ಎ. ಸೈಮನ್, ಇನ್ಸ್&zwnj;ಪೆಕ್ಟರ್ ಕುಸುಮಾಧರ್, ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿ ಇದ್ದರು. ಕಾರು ಪಲ್ಟಿಯಾದ ಪರಿಣಾಮವಾಗಿ ಎಸ್&zwnj;ಪಿ ಸೈಮನ್ ಮತ್ತು ಇನ್ಸ್&zwnj;ಪೆಕ್ಟರ್ ಕುಸುಮಾಧರ್ ಸೇರಿದಂತೆ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ತೀವ್ರವಾಗಿ ಜಖಂಗೊಂಡಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಠಾಣೆಗೆ ಭೇಟಿ:&lt;/strong&gt;&lt;/h2&gt;&lt;p&gt;ಅಪಘಾತ ಸಂಭವಿಸಿದ ಬಳಿಕ ಎಸ್&zwnj;ಪಿ ಸಿ.ಎ. ಸೈಮನ್ ಮತ್ತು ಅವರ ತಂಡ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಪಘಾತದ ಕುರಿತು ದೂರು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಮತ್ತು ಬುರುಡೆ ಪ್ರಕರಣದ ಹಿನ್ನೆಲೆಯಲ್ಲಿ ಈ ಎಸ್&zwnj;ಐಟಿ ತಂಡವು ಬಹಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ತನಿಖೆಯ ಭಾಗವಾಗಿ ನಡೆಸುತ್ತಿದ್ದ ಈ ಪ್ರಯಾಣದಲ್ಲಿ ಅಪಘಾತ ಸಂಭವಿಸಿರುವುದು ಜನರಲ್ಲಿ ಆತಂಕ ಮೂಡಿಸಿತ್ತಾದರೂ, ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dharmasthala-case-sit-officer-ca-simon-car-overturns-at-charmadi-ghat-4-injured-sat/articleshow-iuwxbxl"/>
        </item>
        <item>
            <title><![CDATA[Chikkamagaluru: ಹಣ ನೀಡಲಿಲ್ಲವೆಂದು ಪೋಷಕರೊಂದಿಗೆ ಜಗಳ: ಆಕ್ರೋಶದಿಂದ ಮನೆ ಬಿಟ್ಟ ಯುವಕ ಶವವಾಗಿ ಪತ್ತೆ]]></title>
            <link>https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87</link>
            <guid isPermaLink="true">https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87</guid>
            <pubDate>Mon, 15 Jun 2026 21:01:43 +0530</pubDate>
            <description><![CDATA[&lt;p&gt;Chikkamagaluru News: ಚಿಕ್ಕಮಗಳೂರು ಜಿಲ್ಲೆಯ ಬನ್ನೂರು ಗ್ರಾಮದಲ್ಲಿ ಹಣದ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ 27 ವರ್ಷದ ಯುವಕ ಪ್ರದೀಪ್ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5yc3kj9nb37bkkfq3pfme2,imgname-bkb-1781537312370.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.15): &lt;/strong&gt;ಹಣಕ್ಕಾಗಿ ಪೋಷಕರೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಯುವಕನೊಬ್ಬ ಕೆರೆಗೆ ಹಾರಿ ಆತ್ಮ*ಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು 27 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರದೀಪ್ ಪೋಷಕರ ಬಳಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ದುಡಿದು ಸಂಪಾದಿಸುವಂತೆ ಸಲಹೆ ನೀಡಿದ ಪೋಷಕರು ಹಣ ನೀಡಲು ನಿರಾಕರಿಸಿದ್ದರು.&lt;/p&gt;&lt;p&gt;ಇದರ ನಡುವೆಯೇ, ಸಂಘದಿಂದ ಸಾಲ ಮಾಡಿಕೊಡುವಂತೆ ಪ್ರದೀಪ್ ಒತ್ತಾಯಿಸಿದ್ದು, ಅದಕ್ಕೂ ಪೋಷಕರು ಒಪ್ಪದ ಹಿನ್ನೆಲೆಯಲ್ಲಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳದ ಬಳಿಕ ಆಕ್ರೋಶದಿಂದ ಮನೆಯಿಂದ ಹೊರನಡೆದಿದ್ದ ಪ್ರದೀಪ್, ಬಳಿಕ ನಾಪತ್ತೆಯಾಗಿದ್ದ.&lt;/p&gt;&lt;h2&gt;&lt;strong&gt;ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ನಂತರ ಗ್ರಾಮದ ಸಮೀಪದ ಕಾಫಿ ತೋಟದ ಕೆರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯ ಈಜುಗಾರರ ನೆರವಿನಿಂದ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/chikkamagaluru-youth-su-icide-after-fight-with-parents-over-money-gvd/articleshow-m3kgb87"/>
        </item>
        <item>
            <title><![CDATA[Chikkamagaluru: ನಡುರಸ್ತೆಯಲ್ಲೇ ತಲ್ವಾರ್‌ನಿಂದ ಕೇಕ್ ಕಟ್! ವೈರಲ್ ವಿಡಿಯೋ ಬೆನ್ನಲ್ಲೇ ಯುವಕನ ವಿರುದ್ಧ FIR]]></title>
            <link>https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7</guid>
            <pubDate>Fri, 19 Jun 2026 13:16:45 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfdcgtbdjqf8d20025t30qp,imgname----------------------17--1781855044427.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯಾ? ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಪುಡಿರೌಡಿಗಳು ಪುಂಡರನ್ನ ಹದ್ದುಬಸ್ತಿನಲ್ಲಿಡುತ್ತಾರೆ ಎಂಬ ಭರವಸೆಯಿಂದ ರಾಜ್ಯದ ಜನರು ಕಾದಿರುವಾಗಲೇ ಮತ್ತೊಂದು ಪುಂಡರ ಕೃತ್ಯ ನಡೆದುಹೋಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಿಕ್ಕಮಗಳೂರು ನಗರದ ಹೊರಹೊಲಯದ ವಾಜಪೇಯಿ ಲೇಔಟ್&zwnj;ನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರ್&zwnj;ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿರುವ ಘಟನೆ ಬೆಳಕಿಗೆ ಬಂದಿದೆ.&amp;nbsp;&lt;/p&gt;&lt;img&gt;&lt;p&gt;ಮಹಮ್ಮದ್ ಸಮೀರ್ ಎಂಬ 20 ವರ್ಷದ ಯುವಕ ಕಾರಿನಿಂದ ರೌಡಿ ಸ್ಟೈಲ್&zwnj;ನಲ್ಲಿ ಕೆಳಗಿಳಿದಿದ್ದಾನೆ. ಕಾರಿನಿಂದ ಇಳಿಯುವಾಗ ಕೈಯಲ್ಲಿ ಸುಮಾರು ಎರಡೂವರೆ ಅಡಿ ಉದ್ದದ ಲಾಂಗ್&zwnj; ಹಿಡಿದಿರುವುದು ವಿಡಿಯೋದಲ್ಲಿದೆ. ಕಾರಿನ ಬಾನೆಟ್ ಮೇಲೆ ಇಟ್ಟಿದ್ದ 5 ಕೆಜಿಗೂ ಹೆಚ್ಚು ತೂಕದ ಬೃಹತ್ ಕೇಕ್ ಕತ್ತರಿಸಿದ್ದಾನೆ.&lt;/p&gt;&lt;img&gt;&lt;p&gt;ಈ ವೇಳೆ ಸುಮಾರು 10ಕ್ಕೂ ಹೆಚ್ಚು ಸ್ನೇಹಿತರು ಜೊತೆಗೆ ಇದ್ದಾರೆ. ನಡುರಾತ್ರಿ ಈ ಹುಟ್ಟುಹಬ್ಬದ ನೆಪದಲ್ಲಿ ಹುಚ್ಚಾಟ ಬೇಕಿತ್ತೆ? ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಪಬ್ಲಿಕ್ ಸ್ಥಳದಲ್ಲಿ ತಲ್ವಾರ್ ಪ್ರದರ್ಶಿಸುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸಿದ ಹಾಗೂ ಶಾಂತಿ ಭಂಗ ಮಾಡಿದ ಆರೋಪ ಕೇಳಿಬಂದಿದೆ.&lt;/p&gt;&lt;img&gt;&lt;p&gt;ವೈರಲ್ ವಿಡಿಯೋ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿ ತನಿಖೆ ಚುರುಕುಗೊಳಿಸಿದ್ದು, ಸಾರ್ವಜನಿಕ ವಲಯದಲ್ಲಿ ಲಾಂಗ್ ಹಿಡಿದು ತಿರುಗಾಡಿದ ಹಾಗೂ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮಹಮ್ಮದ್ ಸಮೀರ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್&zwnj; ದಾಖಲಿಸಲಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/chikkamagaluru-youth-book-fir-after-cutting-birthday-cake-with-swaord-on-public-road-video-viral-mm42zq7"/>
        </item>
        <item>
            <title><![CDATA[ಡಿಕೆಶಿ ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ: ಸಿಎಂ ಪರ ಆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ!]]></title>
            <link>https://kannada.asianetnews.com/gallery/karnataka-districts/cm-dk-shivakumar-special-prayer-held-at-chikkamagaluru-dargah-gvd-n78hxzf</link>
            <guid isPermaLink="true">https://kannada.asianetnews.com/gallery/karnataka-districts/cm-dk-shivakumar-special-prayer-held-at-chikkamagaluru-dargah-gvd-n78hxzf</guid>
            <pubDate>Mon, 08 Jun 2026 17:27:52 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktkhbjr0d6mfjqd2qb3km24a,imgname-1-1780919683840.png" type="image/jpeg" height="390" width="690"/>
            <content:encoded><![CDATA[&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.&lt;/p&gt;&lt;img&gt;&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಜೂ.08): &lt;/strong&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರದೇಶ್ ಕಾಂಗ್ರೆಸ್ ಕಿಸಾನ್ ಘಟಕದ ಸಂಚಾಲಕ ಸಿ ಎನ್ . ಅಕ್ಮಲ್ ನೇತೃತ್ವದಲ್ಲಿ ನಡೆದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಡಿಕೆ ಶಿವಕುಮಾರ್ ಅವರು ರಾಜ್ಯದಲ್ಲಿ ಇನ್ನು ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ ಎಂದು ಮುಸ್ಲಿಂ ಮುಖಂಡರು ಪ್ರಾರ್ಥನೆ ಸಲ್ಲಿಸಿದರು.&lt;/p&gt;&lt;img&gt;&lt;p&gt;ಪ್ರಾರ್ಥನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೇಶ ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯ ಸಂಚಾಲಕ ಅಕ್ಮಲ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ನಿರ್ವಹಿಸುವ ಅವಧಿಯಲ್ಲಿ ಯಾವುದೇ ರೀತಿಯ ಅಡೆತಡೆಗಳು ಎದುರಾಗದಂತೆ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಯಶಸ್ವಿಯಾಗಿ ನಡೆಯುವಂತೆ ಪ್ರಾರ್ಥಿಸಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ. ರಾಜ್ಯದ ಜನತೆಗೆ ಕಲ್ಯಾಣವಾಗಲಿ. ಅವರು ಸಂಪೂರ್ಣ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ನಡೆಸುವಂತಾಗಲಿ ಎಂದು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ಚರ್ಚೆಗಳು ಮತ್ತು ಊಹಾಪೋಹಗಳು ಕೇಳಿಬರುತ್ತಿವೆ. ಈ ಹಿನ್ನೆಲೆದಲ್ಲಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿ ಜನಪರ ಆಡಳಿತ ನೀಡಬೇಕು ಎಂಬ ಆಶಯವನ್ನು ಪ್ರಾರ್ಥನೆಯ ಮೂಲಕ ವ್ಯಕ್ತಪಡಿಸಲಾಗಿದೆ ಎಂದು ಅಕ್ಮಲ್ ಹೇಳಿದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅಕ್ಮಲ್, ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ನಾಯಕರನ್ನು ಎಂದಿಗೂ ಮೂಲೆಗುಂಪು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಜಮೀರ್ ಅಹಮದ್ ಖಾನ್ ಅವರಿಗೂ ಪಕ್ಷವು ಅನೇಕ ಜವಾಬ್ದಾರಿಗಳನ್ನು ಮತ್ತು ಸ್ಥಾನಮಾನಗಳನ್ನು ನೀಡಿದೆ. ಆದ್ದರಿಂದ ಪಕ್ಷದ ಬಗ್ಗೆ ಅವರಿಗೆ ಕೃತಜ್ಞತೆ ಇರಬೇಕು&rdquo; ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ರಾಜಕೀಯ ಹೋರಾಟ ನಡೆಸುವುದು ಸರಿಯಲ್ಲ ಎಂದು ಅಕ್ಮಲ್ ಅಭಿಪ್ರಾಯಪಟ್ಟರು. ರಾಜಕಾರಣದಲ್ಲಿ ಧರ್ಮವನ್ನು ತರುವುದು ನಾಚಿಕೆಗೇಡಿನ ಸಂಗತಿ. ಯಾವುದೇ ಹೋರಾಟ ಅಥವಾ ಪ್ರತಿಭಟನೆ ಧರ್ಮದ ಆಧಾರದ ಮೇಲೆ ನಡೆಯಬಾರದು. ಅದು ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಜಮೀರ್ ಪರವಾಗಿ ನಡೆಯುತ್ತಿರುವ ಕೆಲವು ಪ್ರತಿಭಟನೆಗಳ ಕುರಿತು ಪರೋಕ್ಷವಾಗಿ ಟೀಕಿಸಿದ ಅವರು, ಮುಸ್ಲಿಂ ಸಮುದಾಯದ ಅನೇಕ ಸಮಸ್ಯೆಗಳ ಸಂದರ್ಭದಲ್ಲಿ ಜಮೀರ್ ಅಹಮದ್ ಖಾನ್ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಆರೋಪವನ್ನೂ ಮಾಡಿದರು.ಈ ವೇಳೆ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಕಾಂಗ್ರೆಸ್ ಮುಸ್ಲಿಂ ಮುಖಂಡರನ್ನು ಸ್ಮರಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/cm-dk-shivakumar-special-prayer-held-at-chikkamagaluru-dargah-gvd-n78hxzf"/>
        </item>
        <item>
            <title><![CDATA[ರಾತ್ರಿ 2 ಗಂಟೆಗೆ ಹಾಸ್ಟೆಲ್‌ ನುಗ್ಗಿದವನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಹುಡುಗಿಯರು]]></title>
            <link>https://kannada.asianetnews.com/karnataka-districts/chikkamagaluru-government-medical-college-hostel-girls-catch-intruder-at-2-am-and-hand-him-over-to-police-mrq/articleshow-npnms9p</link>
            <guid isPermaLink="true">https://kannada.asianetnews.com/karnataka-districts/chikkamagaluru-government-medical-college-hostel-girls-catch-intruder-at-2-am-and-hand-him-over-to-police-mrq/articleshow-npnms9p</guid>
            <pubDate>Thu, 11 Jun 2026 09:53:44 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್&zwnj;ಗೆ ಮಧ್ಯರಾತ್ರಿ ನುಗ್ಗಿದ್ದ ಯುವಕನನ್ನು ವಿದ್ಯಾರ್ಥಿನಿಯರೇ ಧೈರ್ಯದಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನದ ಉದ್ದೇಶದಿಂದ ಬಂದಿದ್ದ ಆರೋಪಿ ಈ ಹಿಂದೆಯೂ ಇದೇ ರೀತಿ ಮಾಡಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದ್ದು, ಈ ಘಟನೆಯು ಹಾಸ್ಟೆಲ್ ಭದ್ರತೆಯ ಬಗ್ಗೆ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kttep2hth3cke01tttb0t6mg,imgname-hostel-1781151763001.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು&lt;/strong&gt;: ಮಧ್ಯರಾತ್ರಿ ಹುಡುಗಿಯರ ಹಾಸ್ಟಲ್&zwnj;ಗೆ ನುಗ್ಗಿದ ಯುವಕನ್ನು ಹಾಸ್ಟಲ್&zwnj; ಹುಡುಗಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರು ಹೊರ ವಲಯದ ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್&zwnj;ನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ರಾಕೇಶ್ (30) ಬಂಧಿತ ಆರೋಪಿ.&lt;/p&gt;&lt;h2&gt;&lt;strong&gt;112ಕ್ಕೆ ಕರೆ ಮಾಡಿದ ಯುವತಿಯರು&lt;/strong&gt;&lt;/h2&gt;&lt;p&gt;ಕಳೆದ ಭಾನುವಾರ ತಡರಾತ್ರಿ 2.30ರ ಸುಮಾರಿಗೆ ನಗರದ ಹೊರ ವಲಯದ ಸರ್ಕಾರಿ ಮೆಡಿಕಲ್&zwnj; ಕಾಲೇಜಿನ ಹಾಸ್ಟಲ್&zwnj;ಗೆ ಅಪರಿಚಿತ ಯುವಕ ನುಗ್ಗಿದ್ದಾನೆ. ಹಾಸ್ಟಲ್&zwnj; ಹುಡುಗಿಯರು ಆ ಯುವಕನ್ನು ಹಿಡಿದು 112ಗೆ ಕೆರೆ ಮಾಡಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್&zwnj; ಠಾಣೆಗೆ ಒಪ್ಪಿಸಿದ್ದಾರೆ.&lt;/p&gt;&lt;p&gt;ಆರೋಪಿ ರಾಕೇಶ್ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ. ವಿದ್ಯಾರ್ಥಿನಿಯರ ಕೈಯಿಂದ ತಪ್ಪಿಸಿಕೊಳ್ಳಲು ಆರೋಪಿ ಯತ್ನಿಸಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಲು ಹೋಗಿದ್ದೆ ಎಂದು ರಾಕೇಶ್ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆಯೂ ಆರೋಪಿ ರಾಕೇಶ್ ಹಾಸ್ಟೆಲ್&zwnj;ಗೆ ನುಗ್ಗಿದ್ದ. ಮತ್ತೊಮ್ಮೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.&lt;/p&gt;&lt;p&gt;ಈ ಕುರಿತು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಡೀನ್&zwnj; ಡಾ. ಹರೀಶ್, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್&zwnj; ಠಾಣೆಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಎಫ್&zwnj;ಐಆರ್&zwnj; ದಾಖಲಿಸಲಾಗಿದೆ.&lt;/p&gt;&lt;h3&gt;&lt;strong&gt;ಪದೇ ಪದೇ ಇದೇ ಮಾದರಿಯ ಘಟನೆಗಳು&lt;/strong&gt;&lt;/h3&gt;&lt;p&gt;ವಿದ್ಯಾರ್ಥಿನಿಯರು ವಸತಿ ಪಡೆದಿರುವ ಮೆಡಿಕಲ್ ಕಾಲೇಜಿನ ಈ ಹಾಸ್ಟೆಲ್&zwnj;ನಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಇದೇ ಮಾದರಿ ಘಟನೆಗಳು ನಡೆದಿದ್ದವು. ಹೀಗಿದ್ದರೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ. ಇದೀಗ ಮೆಡಿಕಲ್&zwnj; ಕಾಲೇಜು ಹಾಸ್ಟೆಲ್ ಭದ್ರತೆ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkamagaluru-government-medical-college-hostel-girls-catch-intruder-at-2-am-and-hand-him-over-to-police-mrq/articleshow-npnms9p"/>
        </item>
        <item>
            <title><![CDATA[ಹುಬ್ಬಳ್ಳಿ-ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ, 5 ಜಿಲ್ಲೆಯ ಪ್ರವಾಸಿಗರಿಗೆ ಇದೊಂದು ಆಫರ್!]]></title>
            <link>https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</link>
            <guid isPermaLink="true">https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm</guid>
            <pubDate>Wed, 17 Jun 2026 12:01:04 +0530</pubDate>
            <description><![CDATA[ನೈಋತ್ಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 20 ಮತ್ತು 21 ರಂದು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಪ್ರವಾಸಿಗರಿಗೆ ಅನುಕೂಲಕರವಾದ ವೇಳಾಪಟ್ಟಿಯನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khp601b9hctbmkhxep8fe8wz,imgname-indian-railway--2--1771344758121.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಧಾರವಾಡ: &lt;/strong&gt;ಹುಬ್ಬಳ್ಳಿ ಮತ್ತು ಪ್ರವಾಸಿ ತಾಣಗಳಿರುವ ಚಿಕ್ಕಮಗಳೂರು ನಡುವೆ ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ವಾರಾಂತ್ಯದ ದಿನಗಳಲ್ಲಿ ಪ್ರಯಾಣಿಕರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಹಾಗೂ ರೈಲುಗಳಲ್ಲಿನ ಹೆಚ್ಚುವರಿ ಜನದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಜೂನ್ 20 ಮತ್ತು 21 ರಂದು ಈ ಎರಡೂ ನಗರಗಳ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ರೈಲು ಉತ್ತರ ಮತ್ತು ಮಧ್ಯ ಕರ್ನಾಟಕದ ಒಟ್ಟು 5 ಜಿಲ್ಲೆಗಳ ಮೂಲಕ ಹಾದುಹೋಗಲಿದ್ದು, ಮಾನ್ಸೂನ್ ಪ್ರಕೃತಿ ಸವಿಯಲು ಇದೊಂದು ಆಫರ್ ನೀಡಿದಂತಿದೆ. ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾದ ಈ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.&lt;/p&gt;&lt;h2&gt;ರೈಲಿನ ವೇಳಾಪಟ್ಟಿ ಮತ್ತು ಸಂಚಾರದ ವಿವರ&lt;/h2&gt;&lt;p&gt;ಈ ವಿಶೇಷ ರೈಲನ್ನು ಜೂನ್ 20 (ಶನಿವಾರ) ಮತ್ತು ಜೂನ್ 21 (ಭಾನುವಾರ) ರಂದು ಒಟ್ಟು ಎರಡು ಟ್ರಿಪ್&zwnj;ಗಳ ಕಾಲ ಓಡಿಸಲಾಗುತ್ತಿದೆ.&lt;/p&gt;&lt;p&gt;ಹುಬ್ಬಳ್ಳಿ - ಚಿಕ್ಕಮಗಳೂರು ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07341): ಜೂನ್ 20 ಮತ್ತು 21 ರಂದು ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಟು, ಅದೇ ದಿನ ಬೆಳಗ್ಗೆ 11:15 ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.&lt;/p&gt;&lt;p&gt;ಚಿಕ್ಕಮಗಳೂರು - ಹುಬ್ಬಳ್ಳಿ ವಿಶೇಷ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 07342): ಜೂನ್ 20 ಮತ್ತು 21 ರಂದು ಚಿಕ್ಕಮಗಳೂರಿನಿಂದ ಸಂಜೆ 5:30 ಕ್ಕೆ ಹೊರಟು, ಅದೇ ದಿನ ರಾತ್ರಿ 11:20 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ತಲುಪಲಿದೆ.&lt;/p&gt;&lt;h2&gt;ಎಲ್ಲೆಲ್ಲಿ ನಿಲುಗಡೆ ಇರಲಿದೆ? (ಮಾರ್ಗ ಮತ್ತು ನಿಲ್ದಾಣಗಳು)&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಮಾರ್ಗಮಧ್ಯೆ ಪ್ರಮುಖ ನಗರಗಳು ಸೇರಿದಂತೆ ಒಟ್ಟು 15 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;ಪ್ರಮುಖ ನಿಲುಗಡೆಗಳು: ಕುಂದಗೋಳ, ಸಂಶಿ (ಸೌಂಶಿ), ಯಳವಿಗಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು(ಚಿತ್ರದುರ್ಗ), ರಾಮಗಿರಿ, ಅಜ್ಜಂಪುರ, ಬೀರೂರು, ಕಡೂರು, ಬಿಸ್ಲೆಹಳ್ಳಿ, ಸಖರಾಯಪಟ್ಟಣ ಹಾಗೂ ಕಣಿವೆಹಳ್ಳಿ.&lt;/p&gt;&lt;h2&gt;ಬೋಗಿಗಳ ವಿವರ&amp;nbsp;&lt;/h2&gt;&lt;p&gt;ಈ ವಿಶೇಷ ರೈಲು ಒಟ್ಟು 10 ಬೋಗಿಗಳನ್ನು (Coaches) ಒಳಗೊಂಡಿರುತ್ತದೆ. ಸಾಮಾನ್ಯ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೋಗಿಗಳನ್ನು ವಿನ್ಯಾಸಗೊಳಿಸಲಾಗಿದೆ:&lt;/p&gt;&lt;ul&gt; &lt;li&gt;1 ಸ್ಲೀಪರ್ ಕ್ಲಾಸ್ ಬೋಗಿ (Sleeper Class)&lt;/li&gt; &lt;li&gt;7 ಸಾಮಾನ್ಯ ದರ್ಜೆ ಬೋಗಿಗಳು (General Coach)&lt;/li&gt; &lt;li&gt;2 ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್ ವ್ಯಾನ್ ಹಾಗೂ ದಿವ್ಯಾಂಗರ ವಿಶೇಷ ಕಂಪಾರ್ಟ್&zwnj;ಮೆಂಟ್ ಬೋಗಿಗಳು.&lt;/li&gt;&lt;/ul&gt;&lt;h2&gt;ಪ್ರವಾಸಿಗರಿಗೆ &amp;nbsp;ಸೂಕ್ತ ಸಮಯದ ಪ್ಲಾನಿಂಗ್!&lt;/h2&gt;&lt;p&gt;ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ವೇಳಾಪಟ್ಟಿಯನ್ನು ಪ್ರವಾಸಿಗರಿಗೆ ಅತ್ಯಂತ ಅನುಕೂಲವಾಗುವ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ.&lt;/p&gt;&lt;p&gt;ರೈಲು ಬೆಳಗ್ಗೆ 11:15ಕ್ಕೆ ಚಿಕ್ಕಮಗಳೂರು ತಲುಪುವುದರಿಂದ, ಪ್ರವಾಸಿಗರು ಆರಾಮವಾಗಿ &amp;nbsp;ಮಧ್ಯಾಹ್ನದ ವೇಳೆಗೆ ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್&zwnj;ಗಿರಿ ಮುಂತಾದ ಕಡೆ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಸಾಕಷ್ಟು ಸಮಯ ಸಿಗುತ್ತದೆ.&lt;/p&gt;&lt;p&gt;ಇನ್ನು ಹಿಂದಿರುಗುವಾಗ ಭಾನುವಾರ ಸಂಜೆ 5:30ಕ್ಕೆ ರೈಲು ಇರುವುದರಿಂದ, ವೀಕೆಂಡ್&zwnj;ನಲ್ಲಿ ಇಡೀ ದಿನ ಸುತ್ತಾಡಿ, ಯಾವುದೇ ಆತುರವಿಲ್ಲದೇ ಆರಾಮವಾಗಿ ರೈಲು ಹತ್ತಿ ರಾತ್ರಿಯೊಳಗೆ ಹುಬ್ಬಳ್ಳಿಗೆ ತಲುಪಬಹುದಾಗಿದೆ. ಸಾರ್ವಜನಿಕರು ಹಾಗೂ ಪ್ರಕೃತಿ ಪ್ರೇಮಿಗಳು ಈ ವಿಶೇಷ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಕೋರಿದೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-announces-special-train-between-hubballi-and-chikkamagaluru-june-20-and-21st-gdp/articleshow-oxm5glm"/>
        </item>
        <item>
            <title><![CDATA[Chikkamagaluru: ಸಚಿವ ಜಾರ್ಜ್‌ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳ ಓಡಾಟ!]]></title>
            <link>https://kannada.asianetnews.com/gallery/karnataka-districts/unknown-gunmen-enter-minister-kj-georges-coffee-estate-at-chikkamagaluru-rav-pa8k6f3</link>
            <guid isPermaLink="true">https://kannada.asianetnews.com/gallery/karnataka-districts/unknown-gunmen-enter-minister-kj-georges-coffee-estate-at-chikkamagaluru-rav-pa8k6f3</guid>
            <pubDate>Thu, 25 Jun 2026 05:49:22 +0530</pubDate>
            <description><![CDATA[&lt;p&gt;ಕಾಫಿನಾಡಲ್ಲಿ ಮತ್ತೆ ಬಂದೂಕುಧಾರಿಗಳ ಓಡಾಟ ಸದ್ದು ಮಾಡಿದೆ. ಸಚಿವ ಕೆಜೆ ಜಾರ್ಜ್ ಅವರ ಕಾಫಿ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳು ಹೆಗಲ ಮೇಲೆ ಗನ್ ಹೊತ್ತು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣ ಸಂಬಂಧ ಮಲ್ಲಂದೂರು ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvy1cy6sy2r44tz0h3mdgatd,imgname-----------------------2026-06-25t053225.445-1782345791705.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಫಿನಾಡಲ್ಲಿ ಮತ್ತೆ ಬಂದೂಕುಧಾರಿಗಳ ಓಡಾಟ ಸದ್ದು ಮಾಡಿದೆ. ಸಚಿವ ಕೆಜೆ ಜಾರ್ಜ್ ಅವರ ಕಾಫಿ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳು ಹೆಗಲ ಮೇಲೆ ಗನ್ ಹೊತ್ತು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣ ಸಂಬಂಧ ಮಲ್ಲಂದೂರು ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಕಾಫಿ ನಾಡು ಚಿಕ್ಕಮಗಳೂರಿನ ಮಲ್ಲಂದೂರು ಸಮೀಪದ ಸಚಿವ ಕೆ.ಜೆ.ಜಾರ್ಜ್(KJ George) ಒಡೆತನದ ಏಳುನೂರುಖಾನ್ ಕಾಫಿ ತೋಟಕ್ಕೆ ಮಾರಕಾಸ್ತ್ರ ಹಾಗೂ ಬಂದೂಕುಧಾರಿಗಳ ತಂಡ ಅಕ್ರಮವಾಗಿ ಓಡಾಟ ನಡೆಸುತ್ತಿರುವುದು ಕಂಡು ಬಂದಿದ್ದು, ಈ ಪೈಕಿ ಮೂವರನ್ನು ಮಲ್ಲಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಪುಟ್ಟಸ್ವಾಮಿ, ಗಿರೀಶ್, ರಮೇಶ್ ವಶಕ್ಕೆ ಪಡೆದಿದ್ದು, ಇನ್ನೂ ಇಬ್ಬರು ಪರಾರಿಯಾಗಿದ್ದಾರೆ. ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಶಿಕಾರಿಗೆ ತೆರಳಿದ್ದರು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಮುತ್ತೋಡಿ ವನ್ಯಜೀವಿ ಅಭಯಾರಣ್ಯದ ತಪ್ಪಲಿಗೆ ಹೊಂದಿಕೊಂಡಿರುವ ಈ ಕಾಫಿ ಎಸ್ಟೇಟ್&zwnj;ನಲ್ಲಿ ಕಳೆದ ಒಂದು ವಾರದಲ್ಲಿ ಮೂರು ದಿನ ಓಡಾಟ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಜೂ.17, ಜೂ.21 ಹಾಗೂ ಜೂ.22ರ ಮಧ್ಯರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಓಡಾಡಿರುವುದು ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಹೆಗಲಿಗೆ ಬಂದೂಕು ಹಾಗೂ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೃಶ್ಯಗಳು ತೋಟದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು.&lt;/p&gt;&lt;img&gt;&lt;p&gt;ಅಪರಿಚಿತರ ಈ ಅಕ್ರಮ ಪ್ರವೇಶ ಮತ್ತು ಚಲನವಲನಗಳು ತೋಟದ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಲ್ಲಿ ತೀವ್ರ ಆತಂಕ ಮೂಡಿಸಿತ್ತು. ​ಈ ಬಗ್ಗೆ ಎಸ್ಟೇಟ್&zwnj;ನ ಹಿರಿಯ ವ್ಯವಸ್ಥಾಪಕಿ ದಿವ್ಯಾ, ಮಲ್ಲಂದೂರು ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/unknown-gunmen-enter-minister-kj-georges-coffee-estate-at-chikkamagaluru-rav-pa8k6f3"/>
        </item>
        <item>
            <title><![CDATA[18 ರಸ್ತೆ ದುರಸ್ತಿ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ: ಕೋಟಾ ಶ್ರೀನಿವಾಸ್‌ ಪೂಜಾರಿ]]></title>
            <link>https://kannada.asianetnews.com/karnataka-districts/rs-119-crore-released-for-repair-and-development-of-udupi-chikkamagaluru-18-roads-mp-kota-srinivas-poojary-mrq/articleshow-q66135i</link>
            <guid isPermaLink="true">https://kannada.asianetnews.com/karnataka-districts/rs-119-crore-released-for-repair-and-development-of-udupi-chikkamagaluru-18-roads-mp-kota-srinivas-poojary-mrq/articleshow-q66135i</guid>
            <pubDate>Thu, 11 Jun 2026 07:36:52 +0530</pubDate>
            <description><![CDATA[ಕೇಂದ್ರದ ಸಿಆರ್&zwnj;ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ಅನುದಾನವು ಬಾಳೆಹೊನ್ನೂರು-ಶೃಂಗೇರಿ, ಕೊಪ್ಪ-ಶೃಂಗೇರಿ, ಮತ್ತು ಮುಳ್ಳಯ್ಯನಗಿರಿ ರಸ್ತೆ ಸೇರಿದಂತೆ ಕ್ಷೇತ್ರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆಯಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktt6sjnhvc2vd1jjwc6zfzj1,imgname-kota-shrnivas-poojari-1781143489201.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಕೇಂದ್ರದ ಸಿಆರ್&zwnj;ಐಎಫ್ ನಿಧಿಯಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ 18 ರಸ್ತೆಗಳ ಅಭಿವೃದ್ಧಿಗೆ ₹119 ಕೋಟಿ ಬಿಡುಗಡೆ ಯಾಗಿರುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;18 ಲೋಕೋಪಯೋಗಿ ರಸ್ತೆಗಳಿಗೆ ಅಭಿವೃದ್ಧಿ&lt;/strong&gt;&lt;/h2&gt;&lt;p&gt;ಬಾಳೆಹೊನ್ನೂರು - ಶೃಂಗೇರಿ ರಸ್ತೆ, ಕೊಪ್ಪ- ಶೃಂಗೇರಿ ಸೇರಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ 18 ಲೋಕೋಪಯೋಗಿ ರಸ್ತೆಗಳಿಗೆ ಅಭಿವೃದ್ಧಿ ಕಾಮಗಾರಿಗೆ ಈ ಹಣ ನೀಡಲಾಗಿದೆ. ಬಾಳೆಹೊನ್ನೂರು - ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹50 ಕೋಟಿ ಕೊಪ್ಪ-ಜಯಪುರ-ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹6 ಕೋಟಿ, ಕುಂದಾಪುರ-ಬೈಂದೂರು-ವಿರಾಜಪೇಟೆ ರಸ್ತೆಗೆ ₹6 ಕೋಟಿ, ಉಡುಪಿ-ಹಿರಿಯಡ್ಕ-ಕಾರ್ಕಳ-ಸುಬ್ರಹ್ಮಣ್ಯ ರಸ್ತೆಗೆ ₹6 ಕೋಟಿ, ಬ್ರಹ್ಮಾವರ-ಜನ್ನಾಡಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ, ಬಾರ್ಕೂರು ರಸ್ತೆ ಅಭಿವೃದ್ಧಿಗೆ ₹10 ಕೋಟಿ, ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಶಿರೂರು-ಕೊಕ್ಕರ್ಣೆ-ಸಂತೆಕಟ್ಟೆ ರಸ್ತೆಗೆ ₹3 ಕೋಟಿ, ಹಳೆ ಎಂಬಿಸಿ ರಸ್ತೆಗೆ ₹1.60 ಕೋಟಿ, ಆರೂರು-ಮಣ್ಣಿನ ಜಡ್ಡು-ಕೊಕ್ಕರ್ಣೆ ರಸ್ತೆಗೆ ₹1.40 ಕೋಟಿ, ತೀರ್ಥಹಳ್ಳಿಯಿಂದ ಕುಂದಾಪುರ ರಸ್ತೆಗೆ ₹2 ಕೋಟಿ, ಹೆಬ್ರಿ ತಾಲೂಕಿನ ಮುನಿಯಾಲು- ಕಬ್ಬಿನಾಲೆ ರಸ್ತೆ, ಅತ್ರಾಡಿ-ಮಂಗಳೂರು(ಕಾರ್ಕಳ ತಾಲ್ಲೂಕು), ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎಮ್ಡಿಆರ್ ರಸ್ತೆಗೆ ತಲಾ ₹1 ಕೋಟಿ, ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಕುಂಟಾಡಿ-ಹಳೆಕಟ್ಟೆ-ಕೆಮ್ಮಣ್ಣು ಎನ್ ಡಿಆರ್ ರಸ್ತೆಗೆ ₹1 ಕೋಟಿ, ನಾರಾವಿ-ಮಂಗಳೂರು (ಕಾರ್ಕಳ ತಾಲೂಕು) ರಸ್ತೆಗೆ 1 ಕೋಟಿ ರು, ಕಡೂರು ತಾಲೂಕಿನ ಬೇಗೂರು ಗೇಟ್&zwnj;ನಿಂದ-ಅರೇಹಳ್ಳಿ ಮೂಲಕ ಮಚ್ಚೇರಿ ರಸ್ತೆಗೆ ₹6 ಕೋಟಿ, ಚಿಕ್ಕಮಗಳೂರು ತಾಲೂಕಿನ ಸೀತಾಳಯ್ಯನ ಗಿರಿ-ಮುಳ್ಳಯ್ಯನಗಿರಿ ರಸ್ತೆಗೆ ₹6 ಕೋಟಿ, ಮೂಡಿಗೆರೆ ತಾಲೂಕಿನ ರಾಜ್ಯ ಹೆದ್ದಾರಿ 106ರ ಬಾಳೂರು ಹ್ಯಾಂಡ್ ಪೋಸ್ಟ್ರಿಂದ ಕಳಸ ರಸ್ತೆಗೆ ₹6 ಕೋಟಿ, ತರೀಕೆರೆ ತಾಲೂಕಿನ ರಾಜ್ಯ ಹೆದ್ದಾರಿ 57ರ ಬಾಗಲಕೋಟೆ ಬಿಳಿಗಿರಿರಂಗನ ಬೆಟ್ಟ ರಸ್ತೆ ಅಭಿವೃದ್ಧಿಗೆ ₹6 ಕೋಟಿ ಬಿಡುಗಡೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rs-119-crore-released-for-repair-and-development-of-udupi-chikkamagaluru-18-roads-mp-kota-srinivas-poojary-mrq/articleshow-q66135i"/>
        </item>
        <item>
            <title><![CDATA[Varuna Mitra Helpline: ವರುಣ ಮಿತ್ರ ಸಹಾಯವಾಣಿಗೆ ರೈತರ ಕರೆಗಳು ಏಕೆ ಕಡಿಮೆಯಾದವು? ಕೆಎಸ್‌ಎನ್‌ಡಿಎಂಸಿ ನೀಡಿದ ಅಸಲಿ ಕಾರಣ ಏನು?]]></title>
            <link>https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg</link>
            <guid isPermaLink="true">https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg</guid>
            <pubDate>Sat, 27 Jun 2026 09:06:33 +0530</pubDate>
            <description><![CDATA[&lt;ul&gt; &lt;li&gt;ವಿಶ್ವನಾಥ ಮಲೇಬೆನ್ನೂರು&lt;/li&gt;&lt;/ul&gt;&lt;p&gt;ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ &lsquo;ಕೆಎಸ್&zwnj;ಎನ್&zwnj;ಡಿಎಂಸಿ&rsquo;ಯ &lsquo;ವರುಣ ಮಿತ್ರ&rsquo; ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw3j1ncnpc1x0xjth64madqb,imgname----------------------30--1782531020181.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಿಶ್ವನಾಥ ಮಲೇಬೆನ್ನೂರು&lt;/li&gt;&lt;/ul&gt;&lt;p&gt;ಮಳೆ ಕೊರತೆ, ಬರ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪದಂತಹ ಕೆಟ್ಟಸ್ಥಿತಿಯಲ್ಲಿ ರೈತರಿಗೆ, ಜನ ಸಾಮಾನ್ಯರಿಗೆ ಅಗತ್ಯ ಸಲಹೆ-ಸೂಚನೆ, ನೆರವು ನೀಡುತ್ತಿದ್ದ &lsquo;ಕೆಎಸ್&zwnj;ಎನ್&zwnj;ಡಿಎಂಸಿ&rsquo;ಯ &lsquo;ವರುಣ ಮಿತ್ರ&rsquo; ಸಹಾಯವಾಣಿ ಕೇಂದ್ರದಲ್ಲಿ ಇದೀಗ ರೈತರ ಕರೆ ಸ್ವೀಕಾರ ಮಾಡುವವರೇ ಇಲ್ಲವಾಗಿದೆ&lt;/p&gt;&lt;img&gt;&lt;p&gt;ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಳೆ ಮುನ್ಸೂಚನೆ, ಪ್ರತಿ 15 ನಿಮಿಷಕ್ಕೆ ಮಳೆ ಮಾಪನ ಅಂಕಿ-ಅಂಶ ಸಂಗ್ರಹಣೆ, ವಿಪತ್ತು ನಿರ್ವಹಣೆಯಲ್ಲಿ ತಾಂತ್ರಿಕ ವಿಶ್ಲೇಷಣೆ, ವಿವರಣೆ ಹಾಗೂ ತಾಂತ್ರಿಕ ವರದಿ ಸಿದ್ಧಪಡಿಸುವಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇದೀಗ ನಿರ್ಲಕ್ಷ್ಯಕ್ಕೀಡಾಗಿದೆ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ವರುಣ ಮಿತ್ರ ಕೇಂದ್ರದ ಕಾರ್ಯದ ಬಗ್ಗೆ ಪ್ರಧಾನಿ ಸಹ ಈ ಹಿಂದೆ ಶ್ಲಾಘಿಸಿದ್ದರು. 2011-12ರಲ್ಲಿ ಆರಂಭಗೊಂಡ ವರುಣ ಮಿತ್ರ ಸಹಾಯವಾಣಿ ಸೇವೆ ಈವರೆಗೆ ಬರೋಬ್ಬರಿ 1.70 ಕೋಟಿ ಗೂ ಅಧಿಕ ಕೆರೆ ಬಂದಿವೆ. 2023ರಲ್ಲಿ ಅತಿ ಹೆಚ್ಚು 22.49 ಲಕ್ಷ ಕರೆ ಸ್ವೀಕರವಾಗಿದ್ದು, 2024ರಲ್ಲಿ 17 ಲಕ್ಷಕ್ಕೆ ಇಳಿಕೆಯಾಗಿದ್ದು, 2025ರಲ್ಲಿ 11.59 ಲಕ್ಷಕ್ಕೆ ಕುಸಿದಿದೆ. ಪ್ರಸಕ್ತ 2026ರ ಮೇ ಅಂತ್ಯದ ವರೆಗೆ 2.38 ಲಕ್ಷ ಕೆರೆ ಮಾತ್ರ ಸ್ವೀಕಾರವಾಗಿವೆ.&lt;/p&gt;&lt;p&gt;&lt;strong&gt;&lt;sub&gt;ವಿಜ್ಞಾನಿಗಳಿಗೆ ಕರೆ ಸ್ವೀಕರಿಸುವ ಹೊಣೆ&lt;/sub&gt;&lt;/strong&gt;&lt;/p&gt;&lt;p&gt;ಗ್ರಾಪಂ ಮಟ್ಟದಲ್ಲಿ ಅಳವಡಿಸಿದ್ದ ಮಳೆ ಮಾಪನ ಸೆನ್ಸಾರ್&zwnj;ಗಳಿಂದ ಸಂಗ್ರಹವಾಗುವ ದತ್ತಾಂಶ ವಿಶ್ಲೇಷಣೆ ಮಾಡಿ ವರದಿ ಸಿದ್ಧಪಡಿಸುತ್ತಿದ್ದ ಕೆಎಸ್&zwnj;ಎನ್&zwnj;ಡಿಎಂಸಿಯ ವಿಜ್ಞಾನಿಗಳಿಗೆ ಇದೀಗ, ವರುಣ ಮಿತ್ರ ಕೇಂದ್ರದಲ್ಲಿ ದೂರು ಕೇಳುವ ಕೆಲಸ ವಹಿಸಲಾಗಿದೆ. ವರುಣ ಮಿತ್ರ ಕೇಂದ್ರದಲ್ಲಿ ಕಾರ್ಯವರ್ಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದ ಬಳಿಕ ವಿಜ್ಞಾನಿಗಳು ಈ ಕೆಲಸ ಮಾಡಬೇಕಾದ ಪರಿಸ್ಥಿತಿ ಕೆಎಸ್&zwnj;ಎನ್&zwnj;ಡಿಎಂಸಿಯಲ್ಲಿ ನಿರ್ಮಾಣಗೊಂಡಿದೆ.&lt;/p&gt;&lt;p&gt;&lt;strong&gt;8 ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ!&lt;/strong&gt;&lt;/p&gt;&lt;p&gt;ಕೆಎಸ್&zwnj;ಎನ್&zwnj;ಡಿಎಂಸಿ ಕಚೇರಿಯಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿಸಿಲ್ಲ. ವೇತನ ಬಗ್ಗೆ ಪ್ರಶ್ನಿಸಿದಾಗ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂದು ಸಂಸ್ಥೆಯ ನಿರ್ದೇಶಕರು ಸಬೂಬು ಹೇಳಲಾಗುತ್ತಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿಯ ನೌಕರರು ಪತ್ರ ಬರೆದಿರುವುದು &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ.&lt;/p&gt;&lt;p&gt;&lt;strong&gt;ಒಂದು ತಿಂಗಳಲ್ಲಿ ಮಳೆ ಮಾಪನ ದುರಸ್ತಿ ಪೂರ್ಣ&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಗ್ರಾಪಂ ಮಟ್ಟದಲ್ಲಿರುವ ಮಳೆ ಮಾಪನ ಸೆನ್ಸರ್&zwnj;ಗಳ ಪೈಕಿ 1,044 ಸೆನ್ಸರ್&zwnj; ದುರಸ್ತಿಗೆ ಈಗಾಗಲೇ ಕ್ರಮ ವಹಿಸಲಾಗಿದ್ದು, 452 ದುರಸ್ತಿ ಪೂರ್ಣಗೊಂಡಿದೆ. ಒಂದು ತಿಂಗಳಲ್ಲಿ ಎಲ್ಲ ಸೆನ್ಸರ್&zwnj; ದುರಸ್ತಿ ಪೂರ್ಣವಾಗಲಿದೆ. ಉಳಿದಂತೆ 1950 ಹೊಸ ಸೆನ್ಸರ್&zwnj; ಅಳವಡಿಕೆಗೆ ಕ್ರಮವಹಿಸಲಾಗಿದೆ ಎಂದು ಕೆಎಸ್&zwnj;ಎನ್&zwnj;ಡಿಎಂಸಿ ನಿರ್ದೇಶಕ ಎಂ.ಎಸ್&zwnj;. ದಿವಾಕರ್&zwnj; &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಕೆಎಸ್&zwnj;ಎನ್&zwnj;ಡಿಎಂಸಿ ಸಿಬ್ಬಂದಿಗೆ ಕಿರುಕುಳ?&lt;/strong&gt;&lt;/p&gt;&lt;p&gt;ಸಂಸ್ಥೆಯ ನೌಕರರಿಗೆ ಪಿಎಫ್&zwnj; ಕಡಿತಗೊಳಿಸದೇ ವೇತನ ನೀಡಲಾಗುತ್ತಿದೆ. ಹಾಲಿ ನಿರ್ದೇಶಕರ ನಿರ್ವಹಿಸಬೇಕಾದ ಇ- ಆಫೀಸ್&zwnj; ಅನ್ನು ಕೇಂದ್ರದ ಆಡಳಿತಾಧಿಕಾರಿಯೇ ನಿರ್ವಹಿಸುತ್ತಿದ್ದು, ನಿರ್ದೇಶಕರ ಪರವಾಗಿ ಆಡಳಿತಾಧಿಕಾರಿಯೇ ಟಿಪ್ಪಣಿ ಬರೆಯುತ್ತಿದ್ದಾರೆ. ಆಡಳಿತಾಧಿಕಾರಿ ವಿನಾಕಾರಣ ನೌಕರರಿಗೆ ನೋಟಿಸ್&zwnj; ನೀಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನು ಸಹ ನೌಕರರು ಮಾಡಿದ್ದಾರೆ.&lt;/p&gt;&lt;img&gt;&lt;p&gt;2020ರ ನಂತರ ಕೆಎಸ್&zwnj;ಎನ್&zwnj;ಡಿಎಂಸಿಗೆ ಕಾಯಂ ನಿರ್ದೇಶಕರನ್ನು ನೇಮಕ ಮಾಡದೇ ಸರ್ಕಾರ ಐಎಎಸ್&zwnj; ಅಧಿಕಾರಿಗಳನ್ನು ನೇಮಿಸುತ್ತಿದೆ. ನಾಲ್ಕೈದು ತಿಂಗಳಿಗೆ ಈ ಐಎಎಸ್&zwnj; ಅಧಿಕಾರಿಗಳ ಬದಲಾವಣೆಯಿಂದ ಕೆಎಸ್&zwnj;ಎನ್&zwnj;ಡಿಎಂಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಐಎಎಸ್&zwnj; ಅಧಿಕಾರಿಗಳು ಆಡಳಿತಾತ್ಮಕ ಕಾರ್ಯದಲ್ಲಿ ಮಾತ್ರ ಪರಿಣಿತರಾಗಿದ್ದು, ಕೆಎಸ್&zwnj;ಎನ್&zwnj;ಡಿಎಂಸಿಯ ಮೂಲ ಕಾರ್ಯದಲ್ಲಿ ತೊಡಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸಹ ಕೇಳಿ ಬಂದಿವೆ.&amp;nbsp;&lt;/p&gt;&lt;p&gt;ವರುಣ ಮಿತ್ರ ಸಹಾಯವಾಣಿ ಕೇಂದ್ರಕ್ಕೆ ಏಜೆನ್ಸಿ ಮೂಲಕ ಸಿಬ್ಬಂದಿ ನೇಮಿಸಲಾಗಿತ್ತು. ಅವಧಿ ಮುಕ್ತಾಯವಾದರಿಂದ ಇತರೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾನೂ ಸಹ ವರುಣ ಮಿತ್ರ ಸಹಾಯವಾಣಿಯಲ್ಲಿ ಹೋಗಿ ಕುಳಿತು ಕರೆ ಸ್ವೀಕಾರ ಮಾಡುತ್ತೇನೆ. ದಿನಕ್ಕೆ ಈಗಲೂ 4 ರಿಂದ 5 ಸಾವಿರ ಕರೆ ಸ್ವೀಕಾರ ಮಾಡಲಾಗುತ್ತಿದೆ. ಈ ಬಾರಿ ಮಳೆ ಕೊರತೆ, ವೆಬ್&zwnj;ಸೈಟ್&zwnj;, ಮೊಬೈಲ್&zwnj; ಆ್ಯಪ್&zwnj;ನಲ್ಲಿ ಸಮಗ್ರ ಮಾಹಿತಿ ರೈತರಿಗೆ ದೊರೆಯುತ್ತಿರುವುದರಿಂದ ಸಹಾಯವಾಣಿಗೆ ಕರೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ.&lt;/p&gt;&lt;p&gt;&lt;strong&gt;-ಎಂ.ಎಸ್&zwnj;.ದಿವಾಕರ್&zwnj;, ನಿರ್ದೇಶಕರು, ಕೆಎಸ್&zwnj;ಎನ್&zwnj;ಡಿಎಂಸಿ.&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/ksndmc-director-reveals-why-varuna-mitra-helpline-call-volume-has-reduced-rav-tyuy9lg"/>
        </item>
        <item>
            <title><![CDATA['ಅವನಿಗೆ ಗೋ ಬ್ಯಾಕ್ ಅಂತಿದ್ದೆ..' ಬಸವ ತಾಲಿಬಾನ್‌ಗಳೆಂಬ ಹೇಳಿಕೆಗೆ ಕನ್ಹೇರಿ ಸ್ವಾಮೀಜಿ ವಿರುದ್ಧ ಬಾಣೂರು ಚನ್ನಪ್ಪ ಕಿಡಿ!]]></title>
            <link>https://kannada.asianetnews.com/gallery/karnataka-districts/banur-channappa-slams-kanneri-swamiji-who-came-to-chikkamagaluru-rav-ux6n9lb</link>
            <guid isPermaLink="true">https://kannada.asianetnews.com/gallery/karnataka-districts/banur-channappa-slams-kanneri-swamiji-who-came-to-chikkamagaluru-rav-ux6n9lb</guid>
            <pubDate>Thu, 25 Jun 2026 12:32:48 +0530</pubDate>
            <description><![CDATA[&lt;p&gt;ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvyrt18gqw18qe8vtxb2jgch,imgname-----------------------2026-06-25t120352.289-1782370338064.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.&lt;/p&gt;&lt;img&gt;&lt;p&gt;ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಚಿಕ್ಕಮಗಳೂರಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದ ವೇಳೆ ನಿವೃತ್ತ ಉಪನ್ಯಾಸಕ ಬಾಣೂರು ಚನ್ನಪ್ಪ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;&lt;strong&gt;ಅವನಿಗೆ 'ಗೋ ಬ್ಯಾಕ್' ಹೇಳ್ತಿದ್ದೆ ನನಗೆ ಸಿಗಲಿಲ್ಲ&lt;/strong&gt;&lt;/p&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ ಬಾಣೂರು ಚನ್ನಪ್ಪ, ಅವನಿಗೆ ಗೋ ಬ್ಯಾಕ್ ಅಂತ ಹೇಳಿದ್ದೆ. ಆದರೆ ಆತ ನನಗೆ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಸವಣ್ಣನ ಅನುಯಾಯಿಗಳ ನಡುವೆ ಬರಲು ಅವನಿಗೆ ಅಧಿಕಾರವಿಲ್ಲ ಎಂದು ಕಿಡಿಕಾರಿದ ಅವರು, 'ವಿಶ್ವಗುರು ಬಸವಣ್ಣನ ಅನುಯಾಯಿಗಳು ಇರುವ ಈ ನೆಲಕ್ಕೆ ಬಂದು ಧರ್ಮದ ವಿರುದ್ಧ ಅಪಪ್ರಚಾರ ಮಾಡುವ ಹಕ್ಕು ಯಾರಿಗೂ ಇಲ್ಲ. ಲಿಂಗಧಾರಿಗಳನ್ನು ದಾರಿ ತಪ್ಪಿಸಲು ಆತ ಇಲ್ಲಿಗೆ ಬಂದಿದ್ದಾನೆ' ಎಂದು ಆರೋಪಿಸಿದರು.&lt;/p&gt;&lt;img&gt;&lt;p&gt;ಕನ್ನೇರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ ಚನ್ನಪ್ಪ, 'ಯಾವುದೋ ಸಂಘಟನೆಗೆ ಆತ ಗುಲಾಮನಾಗಿದ್ದಾನೆ. ಕೋಟಿ ಕೋಟಿ ರೂಪಾಯಿ ನೀಡಿ ಅವನನ್ನು ಬುಕ್ ಮಾಡಿದ್ದಾರೆ. ನಮ್ಮ ಗುರುಗಳನ್ನು ಅವಮಾನಿಸಲು ಇವನ್ಯಾರು? ಬಸವ ಅನುಯಾಯಿಗಳನ್ನ ತಾಲಿಬಾನ್&zwnj;ಗಳೆನ್ನುವ ಮೂಲಕ ಬಸವಣ್ಣ ಹಾಗೂ ಅವರ ಅನುಯಾಯಿಗಳಿಗೆ ಅವಮಾನ ಮಾಡಿದ್ದಾನೆ. ವಿಶ್ವಗುರು ಬಸವಣ್ಣನ ತತ್ವಗಳನ್ನು ಅನುಸರಿಸುವವರನ್ನು ತಾಲಿಬಾನ್ ಎಂದು ಕರೆಯುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಖಾವಿ ತೊಟ್ಟ ಬಾಯಲ್ಲಿ ಇಂತಹ ಮಾತು ಬರಬಾರದು&lt;/strong&gt;&lt;/p&gt;&lt;p&gt;ಖಾವಿ ಧರಿಸಿದವರ ಬಾಯಿಂದ ಇಂತಹ ಕೆಟ್ಟ ಪದಗಳು ಬರಬಾರದು. ಸಮಾಜವನ್ನು ಒಡೆಯುವ ಬದಲು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು. ವಿಶೇಷ ಕೃಷಿ ಜಾಗೃತಿ ಕಾರ್ಯಕ್ರಮದ ಹಿನ್ನೆಲೆ ಕುವೆಂಪು ಕಲಾಮಂದಿರದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.&lt;/p&gt;&lt;img&gt;&lt;p&gt;ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಜೂನ್ 28ರಂದು ಆಯೋಜಿಸಲು ಉದ್ದೇಶಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ, ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟಿಸಿ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಉತ್ತರ ಕರ್ನಾಟಕದ ವಿವಿಧೆಡೆ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಆಯೋಜಿಸಿ, ಲಿಂಗಾಯತ ಮಠಾಧೀಶರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಸಾಂವಿಧಾನಿಕ ಪದ ಬಳಸಿ ತೇಜೋವಧೆ ಮಾಡಿದ್ದಾರೆ. ಸುಪ್ರೀಂಕೋರ್ಟ್ ಛೀಮಾರಿ ಹಾಕಿದರೂ, ಬಾಯಿ ಚಪಲತೆಯಿಂದ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ಇದರಿಂದ ಬಸವ ಭಕ್ತರಿಗೆ ನೋವಾಗಿದೆ. ಈಗ ಮತ್ತೆ ಬಸವಕಲ್ಯಾಣದಲ್ಲಿ ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಅನುಮತಿ ನೀಡಬಾರದು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/banur-channappa-slams-kanneri-swamiji-who-came-to-chikkamagaluru-rav-ux6n9lb"/>
        </item>
        <item>
            <title><![CDATA[3 ದಶಕಗಳ ಬಳಿಕ ಮೊದಲ ಬಾರಿಗೆ ಬರಿದಾದ ಭದ್ರೆಯ ಒಡಲು;  ಬರದ ಛಾಯೆ,  ಸ್ಥಳೀಯರಲ್ಲಿ ಆತಂಕ]]></title>
            <link>https://kannada.asianetnews.com/gallery/karnataka-districts/chikkamagaluru-for-first-time-in-30-years-bhadra-river-has-completely-dried-up-riverbed-has-become-like-a-ground-mrq-v4zd5gt</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-for-first-time-in-30-years-bhadra-river-has-completely-dried-up-riverbed-has-become-like-a-ground-mrq-v4zd5gt</guid>
            <pubDate>Sun, 21 Jun 2026 12:50:39 +0530</pubDate>
            <description><![CDATA[ಸುಮಾರು 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನದಿ ಪಾತ್ರವು ಮೈದಾನದಂತಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ತುಂಬಿ ಹರಿಯಬೇಕಿದ್ದ ನದಿಯಲ್ಲಿ ಯುವಕರು ವಾಲಿಬಾಲ್ ಆಡುತ್ತಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvmgfdmkjghqyd7g2550p58t,imgname-bhadra-river--1--1782026057363.jpg" type="image/jpeg" height="390" width="690"/>
            <content:encoded><![CDATA[ಸುಮಾರು 30 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನದಿ ಪಾತ್ರವು ಮೈದಾನದಂತಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ತುಂಬಿ ಹರಿಯಬೇಕಿದ್ದ ನದಿಯಲ್ಲಿ ಯುವಕರು ವಾಲಿಬಾಲ್ ಆಡುತ್ತಿದ್ದು, ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.&lt;img&gt;&lt;p&gt;ಬರೋಬ್ಬರಿ 30 ವರ್ಷಗಳ ಬಳಿಕ ಭದ್ರಾನದಿ ಖಾಲಿಯಾಗಿದ್ದು, ಸ್ಥಳೀಯರು ನದಿತೀರದ ಪ್ರದೇಶದಲ್ಲಿ ವಾಲಿಬಾಲ್ ಆಡುತ್ತಿದ್ದಾರೆ. ಸಾಮಾನ್ಯವಾಗಿ ಈ ವೇಳೆಗಾಗಲೇ ಮುಂಗಾರು ಮಳೆಯಿಂದ ಭದ್ರಾ ನದಿ ತುಂಬಿ ಹರಿಯಲು ಆರಂಭಿಸುತ್ತಿತ್ತು. ಜೂನ್ ತಿಂಗಳ ಮೂರನೇ ವಾರಕ್ಕೂ ಕಾಲಿಟ್ರೂ ನದಿಯಲ್ಲಿನ ನೀರಿನ ಪ್ರಮಾಣ ಇಳಿಮುಖವಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;30 ವರ್ಷಗಳ ಬಳಿಕ ನದಿಯ ಕೆಳಭಾಗದ ಕಲ್ಲು-ಬಂಡೆಗಳನ್ನು ಕಾಣುತ್ತಿದ್ದೇವೆ ಎಂದು ಸ್ಥಳೀಯರು ಅಚ್ಚರಿ ಜೊತೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ನದಿಗೆ ಕಾಲಿಡಲು ಭಯ ಪಡುತ್ತಿದ್ದ ಜಾಗದಲ್ಲಿಂದು ಯುವಕರು ವಾಲಿಬಾಲ್ ಆಡುತ್ತಿದ್ದಾರೆ. ಮುಂಗಾರು ಕೊರತೆಯಿಂದ ನೀರಿಲ್ಲದೆ ಕ್ರಿಕೆಟ್ ಮೈದಾನದಂತೆ ನದಿ ಪ್ರದೇಶ ಕಾಣಿಸುತ್ತಿದೆ.&lt;/p&gt;&lt;img&gt;&lt;p&gt;ಬಾಳೆಹೊನ್ನೂರು ಬಳಿಯ ಸೇತುವೆ ಬಳಿ ನೀರಿನ ಮಟ್ಟ ಸಂಪೂರ್ಣ ಕುಸಿತವಾಗಿದ್ದು, ಜೂನ್ ತಿಂಗಳಲ್ಲಿ ಪ್ರವಾಹದ ಹಂತಕ್ಕೆ ತಲುಪುತ್ತಿದ್ದ ನದಿಯಲ್ಲಿಂದು ಬರದ ಛಾಯೆ ಆವರಿಸಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ನೀರು ಸಂಪೂರ್ಣ ಬತ್ತಿ ಹೋಗುವ ಭೀತಿ ಎದುರಾಗಿದೆ.&lt;/p&gt;&lt;img&gt;&lt;p&gt;ಈ ಬಾರಿಗೆ ಮೇ 29ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿತ್ತಾದರೂ, ಜೂ.4ಕ್ಕೆ ಅಧಿಕೃತವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿತ್ತು. ಬಳಿಕದಲ್ಲಿ ಕರಾವಳಿ ಕರ್ನಾಟದ ಮೂಲಕ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಆದರೆ ಮಳೆಗಾಲ ಆರಂಭದಲ್ಲೇ ಮುಂಗಾರು ದುರ್ಬಲಗೊಂಡಿತ್ತು.&lt;/p&gt;&lt;img&gt;&lt;p&gt;ಈ ಬಾರಿ ಪೂರ್ವಮುಂಗಾರು ಮಳೆ ರಾಜ್ಯದಲ್ಲಿ ಅಬ್ಬರಿಸಿತ್ತು. ಆದ್ರೆ ಮುಂಗಾರುಮಳೆ ಮಾತ್ರ ದಿನದಿಂದ ದಿನಕ್ಕೆ ಕಾಣೆಯಾಗುತ್ತದೆ. ಮಳೆಯ ಕೊರತೆಯಿಂದ ಬಿತ್ತನೆ ಪ್ರಮಾಣವೂ ರಾಜ್ಯದಲ್ಲಿ ಇಳಿಕೆಯಾಗಿದೆ. ದಕ್ಷಿಣ ಕನ್ನಡ ಸೇರಿದಂತೆ ಉತ್ತರ ಒಳನಾಡು ಪ್ರದೇಶದಲ್ಲಿ ಬೇಸಿಗೆ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/chikkamagaluru-for-first-time-in-30-years-bhadra-river-has-completely-dried-up-riverbed-has-become-like-a-ground-mrq-v4zd5gt"/>
        </item>
        <item>
            <title><![CDATA[Injured Tiger: ಉರುಳಿಗೆ ಸಿಲುಕಿ ನರಳುತ್ತಿರುವ ಹುಲಿ: ಮುಳ್ಳಯ್ಯನಗಿರಿ ತಪ್ಪಲಿನ ಗ್ರಾಮಗಳಲ್ಲಿ ಆತಂಕ!]]></title>
            <link>https://kannada.asianetnews.com/karnataka-districts/injured-tiger-trapped-in-snare-near-mullayanagiri-chikkamagaluru-gvd/articleshow-y3w5z0m</link>
            <guid isPermaLink="true">https://kannada.asianetnews.com/karnataka-districts/injured-tiger-trapped-in-snare-near-mullayanagiri-chikkamagaluru-gvd/articleshow-y3w5z0m</guid>
            <pubDate>Sat, 13 Jun 2026 17:59:57 +0530</pubDate>
            <description><![CDATA[&lt;p&gt;Chikkamagaluru: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿದ ಗಾಯಗೊಂಡ ಹುಲಿ ಕಳೆದ ನಾಲ್ಕು ದಿನಗಳಿಂದ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0f9sgbmm5desym89z66hkz,imgname-hjh-1781353735690.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಜೂ.13): &lt;/strong&gt;ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಏಳುನೂರ್ ಖಾನ್ ಎಸ್ಟೇಟ್ ಸಮೀಪ ಉರುಳಿಗೆ ಸಿಲುಕಿರುವ ಹುಲಿಯೊಂದು ಕಳೆದ ನಾಲ್ಕೈದು ದಿನಗಳಿಂದ ಗಾಯಗೊಂಡ ಸ್ಥಿತಿಯಲ್ಲೇ ಸಂಚರಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.&lt;/p&gt;&lt;p&gt;&lt;strong&gt;ನೋವಿನ ನಡುವೆ ಆಹಾರಕ್ಕಾಗಿ ಸಂಚರಿಸುತ್ತಿರುವ ಹುಲಿ: &lt;/strong&gt;ಹುಲಿಯ ಸೊಂಟದ ಭಾಗಕ್ಕೆ ಉರುಳು ಸಿಲುಕಿದ್ದು, ಅದೇ ನೇತಾಡುತ್ತಿರುವ ಸ್ಥಿತಿಯಲ್ಲಿ ಪ್ರಾಣಿ ಓಡಾಡುತ್ತಿರುವುದು ಕಂಡುಬಂದಿದೆ. ತೀವ್ರ ನೋವಿನ ನಡುವೆಯೂ ಆಹಾರಕ್ಕಾಗಿ ಅರಣ್ಯ ಹಾಗೂ ತೋಟದ ಸುತ್ತಮುತ್ತ ಸಂಚರಿಸುತ್ತಿರುವ ಹುಲಿ, ಜಿಂಕೆ ಹಾಗೂ ಕಡವೆಯನ್ನು ಬೇಟೆಯಾಡಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಕೆಲವು ಪ್ರಾಣಿಗಳ ಕಳೆಬರಹಗಳು ಪತ್ತೆಯಾಗಿರುವುದರಿಂದ ಹುಲಿಯ ಚಟುವಟಿಕೆ ಮುಂದುವರಿದಿರುವುದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಸಚಿವ ಜಾರ್ಜ್ ತೋಟದ ಸಮೀಪ ನಡೆದಿರುವ ಘಟನೆ&lt;/strong&gt;&lt;/h2&gt;&lt;p&gt;ಈ ಘಟನೆ ಸಚಿವ ಕೆ.ಜೆ. ಜಾರ್ಜ್ ಒಡೆತನಕ್ಕೆ ಸಂಬಂಧಿಸಿದ ಏಳುನೂರ್ ಖಾನ್ ಎಸ್ಟೇಟ್ ಸಮೀಪದ ಪ್ರದೇಶದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರು ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಇದರಿಂದ ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಗಾಯಗೊಂಡ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.&lt;/p&gt;&lt;p&gt;ಹುಲಿ ಸಂಚರಿಸುವ ಮಾರ್ಗಗಳಲ್ಲಿ ಕ್ಯಾಮೆರಾ ಟ್ರ್ಯಾಪ್&zwnj;ಗಳನ್ನು ಅಳವಡಿಸಲಾಗಿದ್ದು, ಅದರ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಪಶುವೈದ್ಯರು ಹಾಗೂ ವಿಶೇಷ ಅರಣ್ಯ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಹುಲಿಗೆ ಉರುಳು ಹೇಗೆ ಸಿಲುಕಿತು ಮತ್ತು ಅದನ್ನು ಯಾರು ಹಾಕಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. ಅಕ್ರಮ ಬೇಟೆಗಾಗಿ ಉರುಳು ಹಾಕಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಹುಲಿ ಕಂಡುಬಂದ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಹಾಗೂ ಪ್ರವಾಸಿಗರು ಮುಳ್ಳಯ್ಯನಗಿರಿ ಸುತ್ತಮುತ್ತ ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಪಂಡರವಳ್ಳಿ ಸಮೀಪ ಹುಲಿ ಪ್ರತ್ಯಕ್ಷವಾಗಿ ಕಾರ್ಮಿಕರ ಮೇಲೆ ಎರಗಿ ಓರ್ವ ಮಹಿಳೆಯನ್ನು ಬಲಿಪಡೆದಿತ್ತು. ಅಂದು ತಕ್ಷಣ ಕಾರ್ಯಪೂರಿತರಾದ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದು, ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಘಟನೆ ನಡೆದು ಐದಾರು ವರ್ಷಗಳ ಬಳಿಕ ಅದೇ ಪ್ರದೇಶದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿರುವುದು, ಜನರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/injured-tiger-trapped-in-snare-near-mullayanagiri-chikkamagaluru-gvd/articleshow-y3w5z0m"/>
        </item>
        <item>
            <title><![CDATA[Chikkamagaluru: ವಿವಾಹಿತ ಮಹಿಳೆಗಾಗಿ ಇಬ್ಬರ ಯುವಕರ ನಡುವೆ ಜಗಳ; ಮಚ್ಚಿನೇಟಿಗೆ ತುಂಡಾಯ್ತು ಮುಂಗೈ!]]></title>
            <link>https://kannada.asianetnews.com/karnataka-districts/chikkamagaluru-two-men-fight-over-married-woman-severed-hand-case/articleshow-zczdvdo</link>
            <guid isPermaLink="true">https://kannada.asianetnews.com/karnataka-districts/chikkamagaluru-two-men-fight-over-married-woman-severed-hand-case/articleshow-zczdvdo</guid>
            <pubDate>Wed, 24 Jun 2026 14:59:05 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಅಡಿಗೆಬೈಲು ಗ್ರಾಮದಲ್ಲಿ ವಿವಾಹಿತ ಮಹಿಳೆಯ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಲಾಂಗ್&zwnj;ನಿಂದ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿಯ ಹಸ್ತ ಸಂಪೂರ್ಣವಾಗಿ ತುಂಡಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwf5ggz1zkwqxkmefbma0v1,imgname-chikkamagaluru-fight-1782293119519.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜೂ.24): ಕಾ&lt;/strong&gt;ಫಿನಾಡಿನಲ್ಲಿ ವಿವಾಹಿತ ಮಹಿಳೆಯೊಬ್ಬಳ ವಿಚಾರಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಅಂತ್ಯಗೊಂಡಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಮಹಿಳೆಗಾಗಿ ನಡೆದ ಈ ಜಗಳದಲ್ಲಿ ವ್ಯಕ್ತಿಯೊಬ್ಬನ ಹಸ್ತವು ಸಂಪೂರ್ಣವಾಗಿ ತುಂಡಾಗಿ ಬಿದ್ದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಗಂಡನಿಂದ ದೂರವಾಗಿ ನೆಲೆಸಿದ್ದ ನಾಗರತ್ನ ಎಂಬ ಮಹಿಳೆಯ ವಿಚಾರದಲ್ಲಿ ಶೇಷಗಿರಿ (40) ಹಾಗೂ ಅರುಣ್ (35) ಎಂಬುವರ ನಡುವೆ ಕಳೆದ ಕೆಲವು ದಿನಗಳಿಂದ ಮನಸ್ತಾಪವಿತ್ತು ಎನ್ನಲಾಗಿದೆ. ಈ ವಿಚಾರವು ವಿಕೋಪಕ್ಕೆ ತಿರುಗಿ, ಶೇಷಗಿರಿಯು ಅರುಣ್ ಮೇಲೆ ಲಾಂಗ್&zwnj;ನಿಂದ (ಮಚ್ಚು) ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಜೀವ ಉಳಿಸಿಕೊಳ್ಳಲು ಅರುಣ್ ತನ್ನ ಕೈಯನ್ನು ಅಡ್ಡ ಕೊಟ್ಟಿದ್ದಾನೆ. ಈ ದಾಳಿಯಿಂದಾಗಿ ಅರುಣ್ ಅವರ ಹಸ್ತವು ಮಣಿಕಟ್ಟಿನಿಂದ ಸಂಪೂರ್ಣವಾಗಿ ಕಟ್ ಆಗಿ ನೆಲಕ್ಕೆ ಬಿದ್ದಿದೆ.&lt;/p&gt;&lt;h2&gt;&lt;strong&gt;ರಕ್ತದ ಮಡುವಿನಲ್ಲಿ ಕಿರುಚಾಟ:&lt;/strong&gt;&lt;/h2&gt;&lt;p&gt;ದಾಳಿಯ ತೀವ್ರತೆಗೆ ಅರುಣ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾರೆ. ಸ್ಥಳೀಯರು ತಕ್ಷಣವೇ ಅವರನ್ನು ಗಮನಿಸಿ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹಸ್ತವನ್ನು ಮರುಜೋಡಿಸುವ ಸಾಧ್ಯತೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ಭೇಟಿ:&lt;/strong&gt;&lt;/h3&gt;&lt;p&gt;ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶೇಷಗಿರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರೀತಿ ಅಥವಾ ಅಕ್ರಮ ಸಂಬಂಧದ ಕಿಚ್ಚು ಹೇಗೆ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅಡಿಗೆಬೈಲು ಗ್ರಾಮದಲ್ಲಿ ಈ ಘಟನೆಯಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-two-men-fight-over-married-woman-severed-hand-case/articleshow-zczdvdo"/>
        </item>
    </channel>
</rss>
