<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 17:06:19 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[ಚಿಕ್ಕಮಗಳೂರಿನ ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ; ಹಿಂದೂ ಸಂಘಟನೆ ವಿರುದ್ಧ ಕೇಸ್ ದಾಖಲು]]></title>
            <link>https://kannada.asianetnews.com/karnataka-districts/chikkamagaluru-eid-milad-celebration-at-mes-international-public-school-case-registered-against-hindu-organization-mrq/articleshow-0tp1io1</link>
            <guid isPermaLink="true">https://kannada.asianetnews.com/karnataka-districts/chikkamagaluru-eid-milad-celebration-at-mes-international-public-school-case-registered-against-hindu-organization-mrq/articleshow-0tp1io1</guid>
            <pubDate>Sun, 30 Aug 2026 09:25:31 +0530</pubDate>
            <description><![CDATA[ಚಿಕ್ಕಮಗಳೂರಿನ ಎಂ.ಇ.ಎಸ್. ಇಂಟರ್&zwnj;ನ್ಯಾಷನಲ್ ಪಬ್ಲಿಕ್ ಸ್ಕೂಲ್&zwnj;ನಲ್ಲಿ ಈದ್ ಮಿಲಾದ್ ಆಚರಣೆ ವಿಚಾರವಾಗಿ ಹಿಂದೂ ಪರ ಸಂಘಟನೆಗಳು ಮತ್ತು ಶಾಲಾ ಸಿಬ್ಬಂದಿ ನಡುವೆ ವಿವಾದ ಉಂಟಾಯಿತು. ಈ ಘಟನೆ ಮಾತಿನ ಚಕಮಕಿಗೆ ಕಾರಣವಾಗಿ, ಪ್ರಾಂಶುಪಾಲರ ದೂರಿನ ಮೇರೆಗೆ ಹಲವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m18cwee4z90hhwm7fxzzj8fq,imgname-mes-international-public-school--1788062087620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ನಗರದ ಎ.ಐ.ಟಿ. ವೃತ್ತದ ಬಳಿಯ ಎಂ.ಇ.ಎಸ್. ಇಂಟರ್&zwnj;ನ್ಯಾಷನಲ್ ಪಬ್ಲಿಕ್ ಸ್ಕೂಲ್&zwnj;ನಲ್ಲಿ ಈದ್ ಮಿಲಾದ್ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿ, ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರ ನಡೆದಿದೆ.&lt;/p&gt;&lt;p&gt;ಶಾಲೆಯಲ್ಲಿ ಈದ್ ಮಿಲಾದ್ ಆಚರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳ ಪೋಷಕರು ಶಾಲೆ ಬಳಿ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯ ಕ್ರಮವನ್ನು ನಿಲ್ಲಿಸಲಾಗಿದೆ.&lt;/p&gt;&lt;h2&gt;&lt;strong&gt;ಮಕ್ಕಳಿಗೆ ಜುಬ್ಬಾ ಧರಿಸಿ ಬರುವಂತೆ ಸಂದೇಶ&lt;/strong&gt;&lt;/h2&gt;&lt;p&gt;ಈ ವೇಳೆ ಸಂಘಟನೆಗಳ ಮುಖಂಡರು, ಶಿಕ್ಷಕರು ಹಾಗೂ ಶಾಲಾ ಆಡಳಿತದೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಈದ್ ಮಿಲಾದ್ ಆಚರಣೆಗೆ ಮಕ್ಕಳಿಗೆ ಜುಬ್ಬಾ ಧರಿಸಿ ಬರುವಂತೆ ವಾಟ್ಸ್&zwnj;ಆ್ಯಪ್&zwnj;ನಲ್ಲಿ ಸಂದೇಶ ನೀಡಲಾಗಿದೆ ಎಂದು ಆರೋಪಿಸಿದರು. ಆದರೆ, ಶಾಲಾ ನಿಯಮದಂತೆ ವಿದ್ಯಾರ್ಥಿಗಳು ಕಲರ್ ಡ್ರೆಸ್&zwnj;ನಲ್ಲಿ ಬಂದಿದ್ದರು ಎಂದು ಪ್ರಾಂಶುಪಾಲೆ ಅಕ್ಷತಾ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಪ್ರಾಂಶುಪಾಲೆಯನ್ನು ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಅಕ್ಷತಾ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h3&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h3&gt;&lt;p&gt;BNS 329(4), 352 ಹಾಗೂ 190ರ ಅಡಿಯಲ್ಲಿ ಕೋಟೆ ಪ್ರಸಾದ್, ಬೆಣ್ಣೆ ಕೃಷ್ಣ, ಶಿವಣ್ಣ, ದಿಲೀಪ್ ಶೆಟ್ಟಿ, ಸುನಿಲ್, ರಾಜೇಗೌಡ ಸೇರಿದಂತೆ ಹಲವರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Chikkamgaluru: ಟಿಪ್ಪು ಕಟೌಟ್&zwnj;ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!&lt;/strong&gt;&lt;/p&gt;&lt;h3&gt;&lt;strong&gt;ಸೆ. 4ರಂದು ಮಾಂಸ ಮಾರಾಟ ನಿಷೇಧ&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು: ಸೆ.4 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಡ್ಡಾಯವಾಗಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ಸರ್ಕಾರಿ ಸುತ್ತೋಲೆಯಂತೆ ನಿಷೇದಿಸಲಾಗಿದೆ. ಕೋಳಿ, ಕುರಿ, ಮೀನು ಮಾಂಸ ಮಾರಾಟಗಾರರು ಮತ್ತು ಮಾಂಸಾಹಾರಿ ಹೋಟೆಲ್&zwnj;ಗಳನ್ನು ಈ ದಿನದಂದು ತೆರೆಯಬಾರದು. ತಪ್ಪಿದಲ್ಲಿ ಅಂತಹ ಮಾಂಸ ಮಾರಾಟ ಮಾಡುವವರ ಮತ್ತು ಮಾಂಸಾಹಾರಿ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಪೌರಾಯುಕ್ತ ಬಿ.ಸಿ.ಬಸವರಾಜು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ಈದ್ ಮಿಲಾದ್ ವೇಳೆ ಪ್ಯಾಲೆಸ್ತೇನ್ ಧ್ವಜ ಹಾರಾಟ; ಸುಮೋಟೋ ಕೇಸ್ ದಾಖಲಿಸಿ ಬೆಕ್ಕು ಅರೆಸ್ಟ್ ಮಾಡಿದ ಪೊಲೀಸರು!&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkamagaluru-eid-milad-celebration-at-mes-international-public-school-case-registered-against-hindu-organization-mrq/articleshow-0tp1io1"/>
        </item>
        <item>
            <title><![CDATA[ಟಿಪ್ಪು ಕಟೌಟ್ ವಿವಾದ: ನಾಳೆ 'ಚಿಕ್ಕಮಗಳೂರು ಚಲೋ' ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ!]]></title>
            <link>https://kannada.asianetnews.com/karnataka-districts/tipu-cutout-controversy-chikkamagaluru-chalo-tomorrow-prohibitory-orders-imposed-gkn/articleshow-26q1v8c</link>
            <guid isPermaLink="true">https://kannada.asianetnews.com/karnataka-districts/tipu-cutout-controversy-chikkamagaluru-chalo-tomorrow-prohibitory-orders-imposed-gkn/articleshow-26q1v8c</guid>
            <pubDate>Sun, 30 Aug 2026 20:34:11 +0530</pubDate>
            <description><![CDATA[&lt;p&gt;ಟಿಪ್ಪು ಕಟೌಟ್ ಮೇಲೆ ಪಾಕಿಸ್ತಾನ ಪರ ಹಾಡು ಬಳಸಿದ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ 'ಚಿಕ್ಕಮಗಳೂರು ಚಲೋ'ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ತಹಶೀಲ್ದಾರ್ ನಗರದಾದ್ಯಂತ ಬಿಎನ್&zwnj;ಎಸ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m19k5wxhyf1ggg0xtdk3q98v,imgname-chikkamagaluru-1788102243249.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಕಾಫಿನಾಡು ಚಿಕ್ಕಮಗಳೂರಿನಲ್ಲಿ ಈಗ ಟಿಪ್ಪು ಕಟೌಟ್ ಕಿಡಿ ಹೊತ್ತಿಸಿದೆ. ಟಿಪ್ಪು ಸುಲ್ತಾನ್ ಕಟೌಟ್ ಮುಂದೆ ಪಾಕಿಸ್ತಾನ ಪರವಾದ ಹಾಡನ್ನು ಬಳಸಿದ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ. ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಈಗ ನಗರದಾದ್ಯಂತ ಬಿಗಿ ಕ್ರಮ ಕೈಗೊಂಡಿದೆ.&lt;/p&gt;&lt;h2&gt;&lt;strong&gt;ವಿವಾದದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಒಂದಕ್ಕೆ ಪಾಕಿಸ್ತಾನದ ಪರವಾದ ಹಾಡನ್ನು ಹಿನ್ನೆಲೆಯಾಗಿ ಬಳಸಿ ವಿಡಿಯೋ ಮಾಡಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ದೇಶದ್ರೋಹಿ ಕೃತ್ಯವೆಂದು ಆರೋಪಿಸಿರುವ ಸಂಘಟನೆಗಳು ನಾಳೆ (ಅ. 18) 'ಚಿಕ್ಕಮಗಳೂರು ಚಲೋ' ಮತ್ತು ಬೃಹತ್ 'ತಿರಂಗಾ ಯಾತ್ರೆ'ಗೆ ಕರೆ ನೀಡಿವೆ.&lt;/p&gt;&lt;h2&gt;&lt;strong&gt;ನಿಷೇಧಾಜ್ಞೆ ಜಾರಿ&lt;/strong&gt;&lt;/h2&gt;&lt;p&gt;ಪ್ರತಿಭಟನೆ ಮತ್ತು ಸಭೆಗಳಿಂದ ಶಾಂತಿ ಭಂಗವಾಗುವ ಆತಂಕ ಇರುವುದರಿಂದ ಚಿಕ್ಕಮಗಳೂರು ತಹಶೀಲ್ದಾರ್ ರೇಷ್ಮಾ ಅವರು ನಗರದ ತಾಲೂಕು ಕಚೇರಿ ಆವರಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಸೆಕ್ಷನ್ 163ರ ಅಡಿ ಈ ಆದೇಶ ಹೊರಡಿಸಲಾಗಿದೆ. ಹೀಗಾಗಿ ಯಾವುದೇ ಸಭೆ ಮುಷ್ಕರ ಅಥವಾ ಮೆರವಣಿಗೆ ನಡೆಸುವಂತಿಲ್ಲ.&lt;/p&gt;&lt;p&gt;ರಾಷ್ಟ್ರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಿಕ್ಕಮಗಳೂರು ಚಲೋ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣವನ್ನು ಆಯೋಜಿಸಲಾಗಿತ್ತು. ತಾಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಬೃಹತ್ ತಿರಂಗಾ ಯಾತ್ರೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ಈಗ ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಈ ಕಾರ್ಯಕ್ರಮಗಳು ನಡೆಯುತ್ತವೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಮೂಡಿದೆ. ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/tipu-cutout-controversy-chikkamagaluru-chalo-tomorrow-prohibitory-orders-imposed-gkn/articleshow-26q1v8c"/>
        </item>
        <item>
            <title><![CDATA[Chikkamgaluru: ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!]]></title>
            <link>https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u</link>
            <guid isPermaLink="true">https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u</guid>
            <pubDate>Mon, 24 Aug 2026 16:59:38 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಟಿಪ್ಪು ಸುಲ್ತಾನ್ ಕಟೌಟ್&zwnj;ಗೆ ದೇಶದ್ರೋಹಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಘಟನೆಗೆ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0srez2vfgm4wh7hajtps4wp,imgname-chikkamgaluru-tippu-cutout-1787570912347.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಕೂಲ್ ಸಿಟಿ ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಯುವಕರು, ಕಟೌಟ್ ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಸಾಂಗ್ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಹಿಂಸೆಗೆ ಪ್ರಚೋಧನೆ ನೀಡುವ ಹಾಡು ಬಳಸಿ, ನಾವು ಪಾಕಿಸ್ತಾನದ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು ಎಂಬ ಹಾಡನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಿರೋದು ಈಗ ತೀವ್ರ ಸಂಚಲನ ಸೃಷ್ಠಿಸಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಅದನ್ನ ಹಾಕಿದ್ಯಾರು, ಅದಕ್ಕೆ ಖಾಕಿ ಮಾಡಿದ್ದೇನು ಗೊತ್ತಾ? ಈ&zwnj; ಸ್ಟೋರಿ ನೋಡಿ..&lt;/p&gt;&lt;p&gt;&lt;strong&gt;ಈದ್ ಮಿಲಾದ್ ಪ್ರಚಾರದ ಹಾಡಿನಲ್ಲಿ ಹಿಂಸೆಗೆ ಪ್ರಚೋದಿಸೋ ಹಾಡು ಬಳಕೆ&lt;/strong&gt;&lt;/p&gt;&lt;p&gt;ಬುಧವಾರ ನಾಡಿನೆಲ್ಲೆಡೆ ಈದ್ ಮಿಲಾದ್ ಸಂಭ್ರಮ. ಮುಸ್ಲಿಮರು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈದ್ ಗಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಆದರೆ ಆ ಕಟೌಟ್ ವಿಡಿಯೋ ಮಾಡಿಕೊಂಡು, ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಹಾಡು ಹಾಕಿರುವುದು ತೀವ್ರ ಚರ್ಚೆ ಗ್ರಾಸವಾಗಿ ಸಂಚಲನ ಮೂಡಿಸಿದೆ.&lt;/p&gt;&lt;p&gt;&lt;strong&gt;&lsquo;ನಾವು ಪಾಕಿಸ್ತಾನಿ ಮುಜಾಹಿದೀನ್​ಗಳು, ಈ ಮಣ್ಣಿನ ರಕ್ಷಕರು&rsquo; ಎಂಬ ಹಾಡು&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಕಟೌಟ್ ಗೆ ನಾವು ಪಾಕಿಸ್ತಾನಿ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು, ಪಾಕಿಸ್ತಾನಿ ಸೈನಿಕರು ಎಂಬ ಹಾಡನ್ನ ಹಾಕಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆಯ ಪಿ.ಎಸ್.ಐ. ಧನರಾಜ್ ದೂರು ನೀಡಿದ್ದಾರೆ. ಈ ಸಂಬಂಧ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಚಿಕ್ಕಮಗಳೂರಿನ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಅಪ್ರಾಪ್ತರು ಹಾಗೂ ರೋಷನ್ ಎಂಬುವ ಸೇರಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಾಡು ಹಾಕಿದ್ದು ಏಕೆ? ಹಾಡು ಹಾಕಲು ಯಾರು ಹೇಳಿದ್ದು? ಯಾರು ಹಾಕಿದ್ದು ಎಂಬೆಲ್ಲಾ ಪ್ರಶ್ನೆಗಳನ್ನ ಮುಂದಿಟ್ಟು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;h2&gt;ಚಿಕ್ಕಮಗಳೂರು 'ಪವರ್ ಟಿಪ್ಪು ಬಾಯ್ಸ್&rsquo; ಪೇಜ್ ವಿರುದ್ಧ ಎಫ್​ಐಆರ್&lt;/h2&gt;&lt;p&gt;ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಾಯ್ಮಾ, ಡಿಪಿಒ ಹಾಗೂ ಎಸ್&zwnj;ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 5-6 ವರ್ಷಗಳ ನಿಯಮ, ಪದ್ಧತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ. ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಯಾವುದೇ ಅವಕಾಶವಿಲ್ಲ. ಟಿಪ್ಪು ಕಟೌಟ್ ಅಳತೆ, ಸ್ಥಳ, ಸಮಯ ಹಿಂದಿನ ವರ್ಷಗಳಂತೆಯೇ ಇದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಕಟೌಟ್&zwnj;ಗೆ ಆಕ್ಷೇಪಾರ್ಹ ಹಾಡು ಸೇರಿಸಿ ವಿಡಿಯೋ ವೈರಲ್, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196, 299ರ ಅಡಿ ಎಫ್&zwnj;ಐಆರ್ ದಾಖಲು ಮಾಡಲಾಗಿದೆ. ವಿಡಿಯೋ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್ ಹಾಕಿದವರ ವಿರುದ್ಧ ತನಿಖೆ ನಡೆಸಿದ್ದೇವೆ. ಆರೋಪಿಗಳ ಪತ್ತೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಕಠಿಣ ಕಾನೂನು ಕ್ರಮದ ಎಚ್ಚರಿಕೆ. ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕಟ್ಟಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ಕಾಫಿನಾಡಲ್ಲಿ ಪಾಕ್ ಪ್ರೇಮ: ಈದ್ ವಿವಾದದ ಹಿಂದಿನ ಕಾಣದ ಕೈಗಳು&lt;/h2&gt;&lt;p&gt;ಅಫ್ ಕೋರ್ಸ್, ಕಿಡಿಗೇಡಿಗಳ ಈ ಪಾಕ್ ಪ್ರೇಮದ ಕೃತ್ಯ ರಾಜಕೀಯ ತಿರುವು ಪಡೆದುಕೊಂಡಿದ್ದು ಬಿಜೆಪಿ ಸಮಾಜದ ಶಾಂತಿ ಹಾಳುಮಾಡುವ ಕಿಡಿಗೇಡಿಗಳು ಹಾಗೂ ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದಲ್ಲಿ ಕಾನೂನು ಇದ್ದು, ಗೃಹ ಸಚಿವರು ಇದ್ದರೆ, ದೇಶದ್ರೋಹದ ಕೆಲಸ ಮಾಡಿದವರನ್ನು ಒದ್ದು ಒಳಗೆ ಹಾಕಿ. ನಿಮ್ಮ ತಾಕತ್ತು ತೋರಿಸಿ. ಹಿಂದೂಗಳಿಗೆ ನಿಮ್ಮ ಬಗ್ಗೆ ನಂಬಿಕೆ ಬರಬೇಕು. ಜಾಮೀನು ಪಡೆದು ಅವರು ಹೊರಬರಬಾರದು ಎಂದು ಸವಾಲು ಹಾಕಿದ್ದಾರೆ.&lt;/p&gt;&lt;p&gt;ಇನ್ನು ಸಿ.ಟಿ.ರವಿ, ದೇಶ ದ್ರೋಹಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿದ್ದು ದೇಶದ್ರೋಹಿ ಕೆಲಸ ಮಾಡುವವರನ್ನ ಸಹಿಸಬಾರದು,ಇವರ ಬಾಲ ಕಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿಕಾರಿದ್ದಾರೆ. ಸಂಸದ ಕೋಟಾ, ಗೋಹತ್ಯೆ ತಡೆದವರ ಮೇಲೆಯೇ ಕೇಸ್ ಮಾಡಿದ್ರು, ಪಾಕ್ ಪರ ಘೋಷಣೆ ಕೂಗಿದ್ದನ್ನ ವಿರೋಧಿಸಿದವರ ಮೇಲೆಯೇ ಪ್ರಕರಣ ದಾಖಲಿಸಿದ್ರು. ಭಾರತ ವಿರೋಧಿ ನಿಲುವಿಗೆ ಸರ್ಕಾರವೇ ಬೆಂಬಲ ಕೊಟ್ರೆ ಏನು ಅನ್ನೋ ಚರ್ಚೆ ಆಗಬೇಕಿದ್ದು, ಇದರ ವಿರುದ್ಧ ಬಿಜೆಪಿ ಸೆಡೆದು ನಿಲ್ಲಬೇಕು ಎಂದಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಕಾಫಿನಾಡಲ್ಲಿ ಪಾಕ್ ಪ್ರೇಮಿಗಳ ಪ್ರೇಮ ಅನಾವರಣಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರೇ ಕಟ್ಟಿಕೊಂಡ್ರೋ ಅಥವಾ ಯಾರಾದ್ರು ಕಟ್ಟಿಸದ್ರೋ ಗೊತ್ತಿಲ್ಲ.&zwnj; ಆದರೆ, ಅಪ್ರಾಪ್ತರು ಪ್ಯಾಲಸ್ತೇನ್ ಬಾವುಟವನ್ನ ಬೈಕ್ ಗೆ ಕಟ್ಟಿಕೊಂಡು ಓಡಾಡಿದ್ದರು. ಈಗ ಮತ್ತೆ ಈದ್ ಹಬ್ಬದ ವೇಳೆ ಪಾಕ್ ಪ್ರೇಮಿಗಳು ಮುನ್ನೆಲೆಗೆ ಬಂದಿದ್ದಾರೆ. ಆದರೆ, ತನಿಖೆ ಚುರುಗೊಳಿಸಿರೋ ನಗರ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಪಾಕ್ ಪ್ರೇಮಕ್ಕೆ ಕಾರಣವೇನೆಂಬ ಸತ್ಯ ಹೊರಬರಲಿದೆ. &lt;strong&gt;(ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u"/>
        </item>
        <item>
            <title><![CDATA[ಪೊಲೀಸರಿಗೆ ಹೆದರಿ ಓಡುವಾಗ ಘೋರ ದುರಂತ.. ಅನ್ಯಾಯವಾಗಿ ಪ್ರಾಣಬಿಟ್ಟ ರಮೇಶ್‌]]></title>
            <link>https://kannada.asianetnews.com/karnataka-districts/chikkamagaluru-man-fleeing-police-raid-on-gambling-den-dies-after-slipping-and-hitting-head-on-rock-gkn/articleshow-4nyp0ww</link>
            <guid isPermaLink="true">https://kannada.asianetnews.com/karnataka-districts/chikkamagaluru-man-fleeing-police-raid-on-gambling-den-dies-after-slipping-and-hitting-head-on-rock-gkn/articleshow-4nyp0ww</guid>
            <pubDate>Sat, 29 Aug 2026 18:25:10 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹೆದರಿ ಓಡುತ್ತಿದ್ದ ರಮೇಶ್ ಎಂಬಾತ ಜಾರಿ ಬಿದ್ದು ತಲೆ ಬಂಡೆಗೆ ಒಡೆದು ಮೃತಪಟ್ಟಿದ್ದಾನೆ. ರಾತ್ರಿಯಿಂದ ನಾಪತ್ತೆಯಾಗಿದ್ದ ರಮೇಶ್ ಅವರ ಶವ ಇಂದು ಅರಣ್ಯ ಹಾಗೂ ಕಾಫಿ ತೋಟದ ಪ್ರದೇಶದಲ್ಲಿ ತೀವ್ರ ರಕ್ತಸ್ರಾವವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m16sbz6d6q7t1wjyddvtzhyx,imgname-balehonnuru-police-incident-1788008070349.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು&lt;/strong&gt;: ಪೊಲೀಸರ ದಾಳಿಗೆ ಹೆದರಿ ಓಡುವಾಗ ಜಾರಿ ಬಿದ್ದು ತಲೆ ಬಂಡೆಗೆ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್.ಪುರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ರಮೇಶ್ (35) ಮೃತಪಟ್ಟ ದುರ್ದೈವಿ.&lt;/p&gt;&lt;h2&gt;&lt;strong&gt;ಕಾಫಿ ತೋಟದಲ್ಲಿ ಜೂಜಾಟ&lt;/strong&gt;&lt;/h2&gt;&lt;p&gt;ಎನ್.ಆರ್.ಪುರ ತಾಲೂಕಿನ ಕಡಬಗೆರೆ ಸಮೀಪದ ಕಾಫಿ ತೋಟ ಹಾಗೂ ಬಾಸಾಪುರ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿತ್ತು. ಜೂಜಾಟದ ಅಡ್ಡೆಯ ಮೇಲೆ ಕಳೆದ ರಾತ್ರಿ ಬಾಳೆಹೊನ್ನೂರು ಪೊಲೀಸರು ಹಠಾತ್ ದಾಳಿ ನಡೆಸಿದ್ದರು.&lt;/p&gt;&lt;p&gt;ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಜೂಜಾಟದಲ್ಲಿ ತೊಡಗಿದ್ದ ಗುಂಪು ದಿಕ್ಕಾಪಾಲಾಗಿ ಓಡಲಾರಂಭಿಸಿದೆ. ಸ್ಥಳದಲ್ಲಿದ್ದ 9 ಜನರಲ್ಲಿ ಇಬ್ಬರನ್ನು ವಶಕ್ಕೆ ಪಡೆಯುವಲ್ಲಿ ಬಾಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಪೊಲೀಸರ ಕೈಗೆ ಸಿಗಬಾರದೆಂದು ಹೆದರಿ ಕಾಡಿನಲ್ಲಿ ಓಡುತ್ತಿದ್ದ ರಮೇಶ್, ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಅಲ್ಲೇ ಇದ್ದ ಬಂಡೆಗೆ ಬಲವಾಗಿ ಒಡೆದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಕಳೆದ ರಾತ್ರಿ ರಮೇಶ್ ಮನೆಗೆ ಮರಳದ ಹಿನ್ನೆಲೆಯಲ್ಲಿ ಅವರ ಕುಟುಂಬದವರಲ್ಲಿ ತೀವ್ರ ಆತಂಕ ಮೂಡಿತ್ತು. ಇಂದು ಬೆಳಿಗ್ಗೆ ಕಡಬಗೆರೆ ಸಮೀಪದ ಕಾಫಿ ತೋಟ ಮತ್ತು ಅರಣ್ಯ ಪ್ರದೇಶದಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ, ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟ ಸ್ಥಿತಿಯಲ್ಲಿ ರಮೇಶ್ ಅವರ ಶವ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/chikkamagaluru-man-fleeing-police-raid-on-gambling-den-dies-after-slipping-and-hitting-head-on-rock-gkn/articleshow-4nyp0ww"/>
        </item>
        <item>
            <title><![CDATA[ಭದ್ರಾ ಮೇಲ್ದಂಡೆ ಕಾಮಗಾರಿ| ಒಂದೂವರೆ ಕೋಟಿ ರುಪಾಯಿ ರಸ್ತೆ ಕೇವಲ ಮೂರೇ ತಿಂಗಳಲ್ಲಿ ಹಾಳು!]]></title>
            <link>https://kannada.asianetnews.com/karnataka-districts/chikkamagaluru-one-and-half-crore-road-damaged-within-3-months-poor-quality-alleged-kvn/articleshow-6xgydst</link>
            <guid isPermaLink="true">https://kannada.asianetnews.com/karnataka-districts/chikkamagaluru-one-and-half-crore-road-damaged-within-3-months-poor-quality-alleged-kvn/articleshow-6xgydst</guid>
            <pubDate>Thu, 10 Sep 2026 10:15:27 +0530</pubDate>
            <description><![CDATA[ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ₹1.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಕೇವಲ 3 ತಿಂಗಳಲ್ಲೇ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದು, ಗ್ರಾಮಸ್ಥರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24srj8egzmhyjfnq2r2n7as,imgname-untitled-design--51--1789015116046.jpg" type="image/jpeg" height="390" width="690"/>
            <content:encoded><![CDATA[&lt;p&gt;ನರಸಿಂಹರಾಜಪುರ: ಭದ್ರಾ ಮೇಲ್ದಂಡೆ ಯೋಜನೆಯವರು ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಭದ್ರಾ ಕಾಲೋನಿ- ತಾವರೆ ಘಟ್ಟದ ಸಂಪರ್ಕಿ ಸುವ 1.50 ಕಿ.ಮೀ. ದೂರದ ರಸ್ತೆಗೆ ₹1.50 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಟಾರು ರಸ್ತೆ ಕಳಪೆ ಕಾಮಗಾರಿಯಿಂದ 3 ತಿಂಗಳಲ್ಲೇ ರಸ್ತೆ ಮೇಲ್ಬಾಗದ ಸಣ್ಣ, ಸಣ್ಣ ಜಲ್ಲಿಯೆಲ್ಲಾ ಎದ್ದಿರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಭದ್ರಾ ಕಾಲೋನಿ- ತಾವರೆಘಟ್ಟ ರಸ್ತೆ ಅಭಿವೃದ್ಧಿಗೆ ₹2 ಕೋಟಿ ಮೀಸಲಿಟ್ಟಿದ್ದು ₹1.50 ಕೋಟಿ ಟಾರು ಹಾಕಲು ಹಾಗೂ ಉಳಿದ ₹50 ಲಕ್ಷ ಮೋರಿಗೆ ಮೀಸಲಿಡಲಾಗಿತ್ತು. ಪ್ರಥಮ ಹಂತವಾಗಿ ಈ ರಸ್ತೆಗೆ ₹1.50 ಕೋಟಿ ವೆಚ್ಚದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಟಾರು ಹಾಕಲಾಗಿತ್ತು. ಒಂದೇ ದಿನದಲ್ಲಿ ಒಂದು ಲೇಯರ್ ಟಾರು ಮಾತ್ರ ಹಾಕಿ ಹೋಗಿದ್ದಾರೆ. ಟಾರು ಹಾಕಿದ 3 ದಿನದಲ್ಲೇ ಅಲ್ಲಲ್ಲಿ ಟಾರು ಕಿತ್ತು ಹೋಗಿದೆ. ವಾಹನಗಳ ಓಡಾಟ ಶುರುವಾದ ಮೇಲೆ ರಸ್ತೆ ಮೇಲ್ಬಾಗದ ಸಣ್ಣ ಜಲ್ಲಿಗಳು ಕಿತ್ತು ಹೋಗುತ್ತಾ ಬಂದಿವೆ. 3 ತಿಂಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಲವು ಭಾಗದಲ್ಲಿ ಗುಂಡಿ ಸಹ ಬಿದ್ದಿದೆ.&lt;/p&gt;&lt;h2&gt;&lt;strong&gt;ರಸ್ತೆಯಲ್ಲಿ ಎದ್ದ ಜೆಲ್ಲಿಯಿಂದ ಅಪಘಾತ&lt;/strong&gt;&lt;/h2&gt;&lt;p&gt;ರಸ್ತೆಯಲ್ಲಿ ಬೈಕ್, ಸ್ಕೂಟಿ ಹೋಗುವಾಗ ಚಕ್ರಕ್ಕೆ ಜಲ್ಲಿ ಸಿಕ್ಕಿ ಬೈಕ್ ಪಲ್ಟಿಯಾದ ಘಟನೆ ನಡೆದಿದೆ. ಗ್ರಾಮಸ್ಥರ ಪ್ರಕಾರ ಒಬ್ಬ ಬೈಕ್ ಸವಾರ ಅಪಘಾತದಿಂದ ಆಸ್ಪತ್ರೆಗೆ ಸೇರಿದ್ದು ಆತನಿಗೆ 16 ಹೊಲಿಗೆ ಹಾಕಲಾಗಿತ್ತು. ಇದರಿಂದ ಗಾಬರಿಯಾದ ಜನರು ರಸ್ತೆಯಲ್ಲಿ ಎದ್ದ ಸಣ್ಣ, ಸಣ್ಣ ಜಲ್ಲಿಯನ್ನು ಪೊರಕೆಯಿಂದ, ಹಾರೆಯಿಂದ ತೆಗೆದು ಬದಿಗೆ ಸರಿಸಿ ವಾಹನ ಓಡಿಸುತ್ತಿದ್ದಾರೆ.&lt;/p&gt;&lt;p&gt;ಈ ರಸ್ತೆಗೆ ಟಾರು ಹಾಕಲು ಮೈಸೂರು ಭಾಗದ ಗುತ್ತಿಗೆದಾರರು ಟೆಂಡರ್ ಹಿಡಿದು ತರೀಕೆರೆ ಭಾಗದ ಒಳ ಗುತ್ತಿಗೆ ದಾರರಿಗೆ ವಹಿಸಿಕೊಟ್ಟಿದ್ದರು ಎನ್ನಲಾಗಿದೆ. ಮಳೆಗಾಲ ಸಮೀಸುತ್ತಿದೆ ಎಂಬ ಗಡಿಬಿಡಿಯಿಂದ ಗುತ್ತಿಗೆದಾರರು ಮೇ ಅಂತ್ಯದಲ್ಲಿ ಒಂದೇ ದಿನದಲ್ಲಿ ಕಳಪೆ ಗುಣಮಟ್ಟದಲ್ಲಿ ಒಂದೇ ಲೇಯರ್ ಟಾರು ಹಾಕಿರುವುದು 3 ತಿಂಗಳಲ್ಲೇ ರಸ್ತೆ ಹಾಳಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಈ ಕಳಪೆ ಕಾಮಗಾರಿ&lt;/strong&gt;&lt;/h3&gt;&lt;p&gt;ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವುದರಿಂದ ಉತ್ತಮ ಗುಣಮಟ್ಟದ ರಸ್ತೆಗಳು ಸಹ ಹಾಳಾಗುತ್ತಿದೆ. ರಸ್ತೆ ಎರಡು ಬದಿಯ ಮರಗಳ ಹನಿಗಳು ನಿರಂತರವಾಗಿ ಬೀಳುತ್ತಿರುವುದರಿಂದಲೂ ರಸ್ತೆಗಳು ಗುಂಡಿ ಬೀಳುತ್ತಿದೆ. ₹1.50 ಕೋಟಿ ಖರ್ಚು ಮಾಡಿದ ರಸ್ತೆ ಕೇವಲ 3 ತಿಂಗಳಲ್ಲೇ ಹಾಳಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ₹1.50 ಕೋಟಿಯಲ್ಲಿ 1.50 ಕಿ.ಮೀಟರ್ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕಾಗಿತ್ತು. ಕಳಪೆ ಕಾಮಗಾರಿ ಮಾಡಿದವರ ವಿರುದ್ಧಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.&lt;/p&gt;&lt;p&gt;--&lt;/p&gt;&lt;p&gt;ರಸ್ತೆಯಲ್ಲಿ ಎದ್ದ ಸಣ್ಣ ಜಲ್ಲಿಗಳಿಂದ ಬೈಕ್, ಸ್ಕೂಟಿಯಂತಹ ದ್ವಿಚಕ್ರ ವಾಹನ ಓಡಾಡುವುದು ಕಷ್ಟವಾದ್ದರಿಂದ ಗ್ರಾಮಸ್ಥರು ಹಾಗೂ ಒಬ್ಬ ಅಜ್ಜಿ ಪೊರಕೆಯಿಂದ ರಸ್ತೆಯ ಮೇಲೆ ಎದ್ದ ಸಣ್ಣ,ಸಣ್ಣ ಜಲ್ಲಿಗಳನ್ನು ಗುಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;--ಭದ್ರಾ ಕಾಲೋನಿ- ತಾವರೆಘಟ್ಟ ರಸ್ತೆಯನ್ನು ಒಂದೇ ದಿನದಲ್ಲಿ ಕೆಲಸಗಾರರು ಬಂದು ಕೇವಲ ಒಂದೇ ಲೇಯರ್ ಟಾರು ಹಾಕಿ ಹೋಗಿದ್ದಾರೆ. 3 ದಿನದಲ್ಲೇ ಕಿತ್ತುಹೋಗಿದೆ.ಈ ವರ್ಷ ಮಳೆಗಾಲ ಕಡಿಮೆಯಾಗಿದ್ದರೂ ರಸ್ತೆ ಕಿತ್ತು ಹೋಗಿದೆ. ಈಗಾಗಲೇ ಗ್ರಾಮಸ್ಥರು ಮುತ್ತಿನಕೊಪ್ಪ ನೀರಾವರಿ ಇಲಾಖೆ ಎಂಜಿನಿಯರ್ ಹಾಗೂ ಬಿ.ಆರ್.ಪಿಯ ಎಂಜಿನಿಯರ್ ಗೆ ಮನವಿ ಸಲ್ಲಿಸಿ ಮತ್ತೆ ಟಾರು ರಸ್ತೆ ಮಾಡಿಸುವಂತೆ ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;ಪ್ರಕಾಶ್, ತಾವರೆ ಘಟ್ಟ, ಸ್ಥಳೀಯರು, ಮುತ್ತಿನಕೊಪ್ಪ ಗ್ರಾಮ&lt;/p&gt;]]></content:encoded>
            <category>chikkamagalur</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/chikkamagaluru-one-and-half-crore-road-damaged-within-3-months-poor-quality-alleged-kvn/articleshow-6xgydst"/>
        </item>
        <item>
            <title><![CDATA[Kodagu: ಮಳೆ ಕೊರತೆಯಿಂದ ಕೊಳೆರೋಗದ ಕರಾಳ ಛಾಯೆ; ಆತಂಕದಲ್ಲಿ ಕಾಫಿ ಬೆಳೆಗಾರರು, ಪರಿಹಾರಕ್ಕಾಗಿ ಆಗ್ರಹ]]></title>
            <link>https://kannada.asianetnews.com/gallery/karnataka-districts/coffee-growers-worried-about-rot-disease-immediate-survey-and-compensation-sought-in-kodagu-sns-8m9ak4r</link>
            <guid isPermaLink="true">https://kannada.asianetnews.com/gallery/karnataka-districts/coffee-growers-worried-about-rot-disease-immediate-survey-and-compensation-sought-in-kodagu-sns-8m9ak4r</guid>
            <pubDate>Thu, 03 Sep 2026 15:26:13 +0530</pubDate>
            <description><![CDATA[&lt;p&gt;ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1kaezb7gf18kmc8p01xhvsw,imgname-chikkamagaluru-coffee---4--1788428647783.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕೊಡಗು: ವಾಣಿಜ್ಯ ಬೆಳೆಯಾಗಿರುವ ಕಾಫಿಗೆ ಉತ್ತಮವಾದ ಮಳೆ ಬೇಕು ಎನ್ನುವುದೇನೋ ಸರಿ. ಆದರೆ ಎಲ್ ನಿನೋದಿಂದಾಗಿ ರಾಜ್ಯದಲ್ಲಿ ಅಷ್ಟೇ ಅಲ್ಲ, ಕೊಡಗು ಜಿಲ್ಲೆಯಲ್ಲೂ ಮಳೆಯ ತೀವ್ರ ಕೊರತೆ ಎದುರಾಯಿತು. ಮಳೆ ಅಷ್ಟು ಕೊರತೆ ಆದರೂ ಕೂಡ ಎತ್ತೇಚ್ಛವಾಗಿ ಮಳೆ ಸುರಿದಾಗ ಕಾಫಿಗೆ ಎದುರಾಗುವ ಕೊಳೆರೋಗ ಈ ಬಾರಿಯೂ ಬಾಧಿಸುತ್ತಿದೆ. ಇದು ಕೊಡಗಿನ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.&lt;/p&gt;&lt;img&gt;&lt;p&gt;ಹೌದು ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದೊಳಗೆ 2600 ಮಿಲಿ ಮೀಟರ್ ವರೆಗೆ ಮಳೆ ಸುರಿಯುತಿತ್ತು. ಆದರೂ ಕಾಫಿಗೆ ಅಷ್ಟೊಂದು ಕೊಳೆರೋಗ ಬಾಧಿಸಿರಲಿಲ್ಲ. ಈ ಬಾರಿ ಇದುವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದೇ ಕೇವಲ 1420 ಮಿಲಿ ಮೀಟರ್ ಮಳೆ ಅಷ್ಟೇ. ಅದಾಗಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸುತ್ತಿದೆ. ಅದರಲ್ಲೂ ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿರಾಜಪೇಟೆ ತಾಲ್ಲೂಕಿನ ಕೆಲಭಾಗಗಳಲ್ಲಿ ಕಾಫಿಗೆ ಕೊಳೆರೋಗ ಎದುರಾಗಿದೆ.&lt;/p&gt;&lt;img&gt;&lt;p&gt;ಪ್ರತಿ ವರ್ಷದ ಮಳೆಗಿಂತ ಅರ್ಧದಷ್ಟು ಮಳೆಗೆ ಕಾಫಿ ಕೊಳೆರೋಗ ಬಂದಿರುವುದು ಬೆಳೆಗಾರರಿಗೆ ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಕಾಫಿ ಬೀಜಗಳು ಇನ್ನೂ ಬಲಿಯುವ ಮುನ್ನವೇ ಗಿಡಗಳಲ್ಲಿಯೇ ಕೊಳೆತು ಉದುರಲಾಂಭಿಸಿದೆ. ಬಹುತೇಕ ಗಿಡಗಳಲ್ಲಿ ಕಾಫಿ ಉದುರಿ ಹೋಗಿ ಬರೀ ಗಿಡಗಳಷ್ಟೇ ಉಳಿದಿವೆ. ಇನ್ನು ಕೆಲವು ಗಿಡಗಳಲ್ಲಿ ಎಲೆಗಳ ಸಹಿತ ಉದುರಿ ಹೋಗಿ ಗಿಡಗಳೇ ಒಣಗಿ ಹೋಗುತ್ತಿವೆ. ಶೇಕಡ 40 ರಿಂದ 50 ರಷ್ಟು ಕಾಫಿ ಕಾಯಿಗಳು ಕರಗಿ ಉದುರಿ ಹೋಗಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತೆ ಆಗಿದೆ.&lt;/p&gt;&lt;img&gt;&lt;p&gt;ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಇಂದಿಗೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಇದರಿಂದ ಕಾಫಿ ಕಾಯಿ ಇನ್ನಷ್ಟು ಉದುರಲು ಕಾರಣವಾಗುತ್ತಿದೆ. ಇದೇ ರೀತಿ ಕಾಫಿ ಉದುರಿರುವುದರಿಂದ ಎಕರೆಗೆ 15 ರಿಂದ 20 ಚೀಲ ನಷ್ಟವಾಗುವ ಆತಂಕ ಎದುರಾಗಿದೆ. ಇದೇ ಆದರೆ ಬೆಳೆಗಾರರು ದೊಡ್ಡ ನಷ್ಟ ಅನುಭವಿಸಿ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ ಕಾಫಿ ಗಿಡಗಳೇ ಒಣಗಿ ಹೋಗುತ್ತಿದ್ದು, 15 ರಿಂದ 20 ವರ್ಷಗಳಿಂದ ಬೆಳೆದಿದ್ದ ಗಿಡಗಳು ಒಣಗಿ ಹೋದಲ್ಲಿ ಮತ್ತೆ ಹೊಸದಾಗಿ ಗಿಡನೆಟ್ಟು ಬೆಳೆಯಬೇಕಾದರೆ ಮೂರರಿಂದ ನಾಲ್ಕು ವರ್ಷಗಳೇ ಹಿಡಿಯಲಿವೆ. ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದು ಸರ್ಕಾರಗಳು ಮಾತ್ರ ಯಾವುದೇ ಪರಿಹಾರ ಒದಿಗಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎಂದು ಕಾಫಿ ಬೆಳೆಗಾರ ಎ.ಎಸ್. ಟಾಟು ಮೊಣ್ಣಪ್ಪ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಜೂನ್ ತಿಂಗಳಲ್ಲಿಯೇ ಆರಂಭವಾಗಬೇಕಾಗಿದ್ದ ಮಳೆ, ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಯಿತು. ಇಷ್ಟೊಂದು ತಡವಾಗಿ ಮಳೆ ಆರಂಭವಾಗಿದ್ದರಿಂದಲೋ ಏನೋ ನಂತರ ಸುರಿದ ಮಳೆಯನ್ನು ತಡೆಯಲಾರದೆ ಕಾಫಿ ಕೊಳೆರೋಗ ಬಂದು ಹಾಳಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮತ್ತೊಬ್ಬ ಬೆಳೆಗಾರ ಮಂದ್ರೀರ ಮೋಹನ್ ದಾಸ್ ಆಗ್ರಹಿಸಿದ್ದಾರೆ. (ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/coffee-growers-worried-about-rot-disease-immediate-survey-and-compensation-sought-in-kodagu-sns-8m9ak4r"/>
        </item>
        <item>
            <title><![CDATA[ಕುದುರೆಮುಖದ ಬೆಟ್ಟಗಳಲ್ಲಿ ನೀಲಕುರಿಂಜಿಯ ನೀಲಿ ಲೋಕ..! ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿರುವ ನೀಲಿ ಸುಂದರಿ]]></title>
            <link>https://kannada.asianetnews.com/karnataka-districts/kudremukh-turns-blue-violet-as-rare-neelakurinji-like-flowers-bloom-in-chikkamagaluru-kvn/articleshow-alyic8s</link>
            <guid isPermaLink="true">https://kannada.asianetnews.com/karnataka-districts/kudremukh-turns-blue-violet-as-rare-neelakurinji-like-flowers-bloom-in-chikkamagaluru-kvn/articleshow-alyic8s</guid>
            <pubDate>Mon, 31 Aug 2026 11:19:17 +0530</pubDate>
            <description><![CDATA[ಚಿಕ್ಕಮಗಳೂರಿನ ಕುದುರೆಮುಖದ ಚಾರಣ ಮಾರ್ಗಗಳಲ್ಲಿ ನೀಲಕುರಿಂಜಿಯಂತಹ ಅಪರೂಪದ ನೀಲಿ-ನೇರಳೆ ಹೂವುಗಳು ಅರಳಿವೆ. ಈ ನೈಸರ್ಗಿಕ ಸೌಂದರ್ಯವು ಚಾರಣಿಗರನ್ನು ಮತ್ತು ಪ್ರಕೃತಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಪರಿಸರ ಸಂರಕ್ಷಣೆಯೊಂದಿಗೆ ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಪ್ರವಾಸೋದ್ಯಮ ಇಲಾಖೆ ಒತ್ತು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1b5n6c5sw10ed66b33nxe51,imgname-untitled-design--20--1788155173253.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ನೈಸರ್ಗಿಕ ಸೌಂದರ್ಯಕ್ಕೆ ಮತ್ತೊಂದು ವಿಶೇಷ ಮೆರುಗು ನೀಡುವಂತೆ ಚಿಕ್ಕಮಗಳೂರಿನ ಕುದುರೆಮುಖ ಭಾಗದ ಕೆಲವು ಚಾರಣದ ದಾರಿಗಳಲ್ಲಿ ನೀಲಕುರಿಂಜಿಯಂತಹ ನೀಲಿ&ndash;ನೇರಳೆ ಬಣ್ಣದ ಅಪರೂಪದ ಹೂವುಗಳು ಅರಳಿದ್ದು, ಚಾರಣಪ್ರಿಯರು ಹಾಗೂ ಪ್ರಕೃತಿ ಪ್ರವಾಸಿಗರ ವಿಶೇಷ ಗಮನ ಸೆಳೆಯುತ್ತಿವೆ.&lt;/p&gt;&lt;p&gt;2022-23 ನೇ ಸಾಲಿನಲ್ಲಿ ಕುದುರೆಮುಖದ ಕೆಲವು ಬೆಟ್ಟ ಪ್ರದೇಶಗಳಲ್ಲಿ ಈ ಹೂವುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದರೆ, ಈ ಬಾರಿ ಸೀಮಿತ ಪ್ರಮಾಣದಲ್ಲಿ ಅರಳಿರುವುದು ಕಂಡುಬಂದಿದೆ.&lt;/p&gt;&lt;p&gt;ಹಸಿರು ಬೆಟ್ಟಗಳ ನಡುವೆ ಅಲ್ಲಲ್ಲಿ ಅರಳಿರುವ ನೀಲಿ&ndash;ನೇರಳೆ ಹೂವುಗಳು ಕುದುರೆಮುಖದ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಆಕರ್ಷಣೆ ನೀಡುತ್ತಿವೆ.&lt;/p&gt;&lt;p&gt;ಕುದುರೆಮುಖದ ಚಾರಣ, ಪ್ರಕೃತಿ ವೀಕ್ಷಣೆ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಪ್ರಸಿದ್ಧವಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ವಿವಿಧ ಚಾರಣ ಮಾರ್ಗಗಳಿದ್ದು, ಇಲ್ಲಿನ ಹುಲ್ಲುಗಾವಲು, ಶೋಲಾ ಕಾಡುಗಳು, ಜಲ ಧಾರೆಗಳು ಹಾಗೂ ಸಮೃದ್ಧ ಜೀವವೈವಿಧ್ಯ ಪ್ರವಾಸಿಗರಿಗೆ ವಿಶಿಷ್ಟ ಅನುಭವ ನೀಡುತ್ತವೆ.&lt;/p&gt;&lt;h2&gt;&lt;strong&gt;ನೀಲಕುರಿಂಜಿಯ ನೀಲಿ ಲೋಕ&lt;/strong&gt;&lt;/h2&gt;&lt;p&gt;ಪಶ್ಚಿಮ ಘಟ್ಟಗಳ ಬೆಟ್ಟಗಳನ್ನು ನೀಲಿ&ndash;ನೇರಳೆ ಬಣ್ಣದಲ್ಲಿ ಕಂಗೊಳಿಸುವ ಅಪರೂಪದ ಹೂವುಗಳೆಂದೇ ನೀಲಕುರಿಂಜಿ ಜನಪ್ರಿಯವಾಗಿದೆ. ಹೂವುಗಳ ಅರಳುವಿಕೆ ಪ್ರಕೃತಿಯ ವಿಶಿಷ್ಟ ಎಕಲಾಜಿಕಲ್&zwnj; ಸೈಕಲ್&zwnj;ನ ಭಾಗವಾಗಿದೆ. ಈ ಹೂವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರು ಹೂವುಗಳನ್ನು ಕೀಳದಂತೆ, ಗಿಡಗಳಿಗೆ ಹಾನಿ ಮಾಡದಂತೆ ಹಾಗೂ ಪರಿಸರದ ಸ್ವಚ್ಛತೆ ಕಾಪಾಡುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.&lt;/p&gt;&lt;p&gt;ಕರ್ನಾಟಕ ಪ್ರವಾಸೋದ್ಯಮವೂ ಕುದುರೆಮುಖವನ್ನು ಪ್ರಕೃತಿ ಮತ್ತು ಪರಿಸರ ಆಧಾರಿತ ಪ್ರವಾಸೋದ್ಯಮ ತಾಣವಾಗಿ ಗುರುತಿಸಿದೆ. ಈ ನೈಸರ್ಗಿಕ ವಿದ್ಯಮಾನವನ್ನು ಪ್ರವಾಸೋದ್ಯಮದ ಅವಕಾಶವಾಗಿ ಬಳಸಿಕೊಳ್ಳುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ. ಕುದುರೆಮುಖದಂತಹ ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಚಾರಣ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳು ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ನಿಯಮಗಳು ಮತ್ತು ಅನುಮತಿಗೆ ಅನುಗುಣವಾಗಿಯೇ ನಡೆಯಬೇಕು.&lt;/p&gt;&lt;h3&gt;&lt;strong&gt;ಪ್ರವಾಸಿಗರಿಗೆ ಮಾಹಿತಿ- ಸೌಲಭ್ಯಕ್ಕೆ ಒತ್ತು&lt;/strong&gt;&lt;/h3&gt;&lt;p&gt;ನೀಲಕುರಿಂಜಿಯಂತಹ ಅಪರೂಪದ ಹೂವುಗಳ ಅರಳುವಿಕೆ ಹಾಗೂ ಅವುಗಳ ಪರಿಸರ ಮಹತ್ವದ ಕುರಿತು ಪ್ರವಾಸಿಗರಿಗೆ ಸೂಕ್ತ ಮಾಹಿತಿ ಒದಗಿಸುವುದು, ನೈಸರ್ಗಿಕ ತಾಣಗಳಲ್ಲಿ ಜವಾಬ್ದಾರಿಯುತ ಪ್ರವಾಸೋದ್ಯಮ ಉತ್ತೇಜಿಸುವುದು ಹಾಗೂ ಪ್ರವಾಸಿಗರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.&lt;/p&gt;&lt;p&gt;ಕುದುರೆಮುಖದ ಬೆಟ್ಟಗಳಲ್ಲಿ ಅರಳಿರುವ ನೀಲಕುರಿಂಜಿಯಂತಹ ಹೂವುಗಳು ಕರ್ನಾಟಕದ ಪ್ರಕೃತಿ ಸಂಪತ್ತಿನ ಅಪೂರ್ವ ಸೌಂದರ್ಯ ನಮಗೆ ಪರಿಚಯಿಸುತ್ತವೆ. ಇಂತಹ ನೈಸರ್ಗಿಕ ವಿಶೇಷತೆ ವೀಕ್ಷಿಸಲು ತೆರಳುವ ವೇಳೆ ಪರಿಸರ ಸ್ನೇಹಿ ಪ್ರವಾಸ ಕೈಗೊಳ್ಳಬೇಕು. ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಜೊತೆಗೆ, ಅದರ ಸಂರಕ್ಷಣೆ ಜವಾಬ್ದಾರಿ ಅರಿತುಕೊಳ್ಳಬೇಕು.&lt;/p&gt;&lt;p&gt;- ಕೆ.ಜೆ. ಜಾರ್ಜ್&zwnj;, ಪ್ರವಾಸೋದ್ಯಮ ಸಚಿವ&lt;/p&gt;&lt;p&gt;--ಕುದುರೆಮುಖದಲ್ಲಿ ಈ ಬಾರಿ ಸೀಮಿತ ಪ್ರಮಾಣದಲ್ಲಿ ಕಂಡುಬರುತ್ತಿರುವ ನೀಲಿ&ndash;ನೇರಳೆ ಹೂವುಗಳು ಚಾರಣಪ್ರಿಯರು ಮತ್ತು ಪ್ರಕೃತಿ ಪ್ರವಾಸಿಗರಲ್ಲಿ ವಿಶೇಷ ಆಸಕ್ತಿ ಮೂಡಿಸಿವೆ. ಇಂತಹ ನೈಸರ್ಗಿಕ ವಿದ್ಯಮಾನ ಪರಿಸರಸ್ನೇಹಿ ಪ್ರವಾಸೋದ್ಯಮದೊಂದಿಗೆ ಪರಿಚಯಿಸುವ ಅಗತ್ಯವಿದೆ. ಹೂವುಗಳು ಮತ್ತು ಅವುಗಳ ಆವಾಸಸ್ಥಳಕ್ಕೆ ಯಾವುದೇ ಹಾನಿ ಯಾಗದಂತೆ ಪ್ರವಾಸಿಗರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಸೌಲಭ್ಯ ಒದಗಿಸುವ ಕುರಿತು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.&lt;/p&gt;&lt;p&gt;- ಡಾ. ರಾಮ್&zwnj; ಪ್ರಸಾತ್&zwnj; ಮನೋಹರ್&zwnj;, ಸರ್ಕಾರದ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kudremukh-turns-blue-violet-as-rare-neelakurinji-like-flowers-bloom-in-chikkamagaluru-kvn/articleshow-alyic8s"/>
        </item>
        <item>
            <title><![CDATA[ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ: ಚಿಕ್ಕಮಗಳೂರಿನಲ್ಲಿ ಟಿಪ್ಪರ್ ಹರಿದು ಬೈಕ್ ಸವಾರ ಸಾವು]]></title>
            <link>https://kannada.asianetnews.com/karnataka-districts/chikkamagaluru-accident-bike-rider-dies-after-tipper-runs-over-him-half-helmet-warning-gvd/articleshow-ctyokbu</link>
            <guid isPermaLink="true">https://kannada.asianetnews.com/karnataka-districts/chikkamagaluru-accident-bike-rider-dies-after-tipper-runs-over-him-half-helmet-warning-gvd/articleshow-ctyokbu</guid>
            <pubDate>Sun, 06 Sep 2026 16:12:37 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 55 ವರ್ಷದ ಬೈಕ್ ಸವಾರ ಪಾಂಡುರಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್ ಡಿಕ್ಕಿ ಹೊಡೆದ ಬಳಿಕ ಅದರ ಟೈರ್ ತಲೆಯ ಮೇಲೆ ಹರಿದ ಪರಿಣಾಮ ಪಾಂಡುರಂಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v4zne8ae8jddma8qqknra8,imgname-nk-1788691338696.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಸೆ.06):&lt;/strong&gt; ಹಾಫ್ ಹೆಲ್ಮೆಟ್ ಹಾಕುವವರೇ ಎಚ್ಚರ.. ಎಚ್ಚರ.. ಟಿಪ್ಪರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದ ಹಿರೇಮಗಳೂರಿನಲ್ಲಿ ನಡೆದಿದೆ.&lt;/p&gt;&lt;p&gt;ಮೃತರನ್ನು ಚಿಕ್ಕಮಗಳೂರು ತಾಲೂಕಿನ ಸಗಣಿಪುರ ಗ್ರಾಮದ ಪಾಂಡುರಂಗ (55) ಎಂದು ಗುರುತಿಸಲಾಗಿದೆ. ಬೈಕ್&zwnj;ನಲ್ಲಿ ತೆರಳುತ್ತಿದ್ದ ವೇಳೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಬಳಿಕ ಟಿಪ್ಪರ್&zwnj;ನ ಹಿಂಬದಿಯ ಟೈರ್ ಪಾಂಡುರಂಗ ಅವರ ತಲೆಯ ಮೇಲೆ ಹರಿದಿದೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.&lt;/p&gt;&lt;p&gt;ಪಾಂಡುರಂಗ ಅವರು ಹಾಫ್ ಹೆಲ್ಮೆಟ್ ಧರಿಸಿದ್ದರೆನ್ನಲಾಗಿದ್ದು, ಅಪಘಾತದ ತೀವ್ರತೆಗೆ ತಲೆಗೆ ಗಂಭೀರ ಗಾಯವಾಗಿದೆ. ಫುಲ್ ಫೇಸ್ ಹೆಲ್ಮೆಟ್ ಧರಿಸಿದ್ದರೆ ಅಪಘಾತದ ಪರಿಣಾಮ ಕಡಿಮೆಯಾಗಬಹುದಿತ್ತು ಎಂಬ ಮಾತುಗಳು ಸ್ಥಳದಲ್ಲಿ ಕೇಳಿಬಂದಿವೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಶಾಸಕ ತಮ್ಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಚಿಕ್ಕಮಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹಿರೇಮಗಳೂರಿನಲ್ಲಿ ನಡೆದ ಈ ಅಪಘಾತ ಮತ್ತೊಮ್ಮೆ ದ್ವಿಚಕ್ರ ವಾಹನ ಸವಾರರು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ನೆನಪಿಸಿದೆ.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chikkamagaluru-accident-bike-rider-dies-after-tipper-runs-over-him-half-helmet-warning-gvd/articleshow-ctyokbu"/>
        </item>
        <item>
            <title><![CDATA[ಬರಿದಾದ ಕೆರೆಗೆ ಜೀವಕಳೆ: ಎತ್ತಿನಹೊಳೆ ವ್ಯರ್ಥ ನೀರೇ ಆಸರೆ; ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಎರಡು ಗ್ರಾಮಸ್ಥರು..!]]></title>
            <link>https://kannada.asianetnews.com/karnataka-districts/no-government-help-just-community-spirit-villagers-fill-60-acre-lake-in-chikkamagaluru-kvn/articleshow-cyarhzs</link>
            <guid isPermaLink="true">https://kannada.asianetnews.com/karnataka-districts/no-government-help-just-community-spirit-villagers-fill-60-acre-lake-in-chikkamagaluru-kvn/articleshow-cyarhzs</guid>
            <pubDate>Fri, 28 Aug 2026 14:40:12 +0530</pubDate>
            <description><![CDATA[ಚಿಕ್ಕಮಗಳೂರಿನ ಕಬ್ಬಳಿ-ಗುಣಸಾಗರ ಗ್ರಾಮಸ್ಥರು ಸರ್ಕಾರದ ಸಹಾಯವಿಲ್ಲದೆ, ದೇಣಿಗೆ ಸಂಗ್ರಹಿಸಿ ತಮ್ಮೂರಿನ ಕೆರೆಯನ್ನು ತುಂಬಿಸಿದ್ದಾರೆ. ಸಮಾನ ಮನಸ್ಕ ಯುವಕರ ನೇತೃತ್ವದಲ್ಲಿ, ವೇದಾವತಿ ನದಿಯ ಹೆಚ್ಚುವರಿ ನೀರನ್ನು ಪಂಪ್ ಮಾಡಿ, ಕೇವಲ ₹15 ಲಕ್ಷದಲ್ಲಿ ಈ ಯಶಸ್ವಿ ಯೋಜನೆ ಪೂರ್ಣಗೊಳಿಸಿ ಮಾದರಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13sca5vbgx7gyhy9jmvy2n7,imgname-untitled-design--14--1787907418285.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ&lt;/p&gt;&lt;p&gt;ಚಿಕ್ಕಮಗಳೂರು: ನದಿ, ಹಳ್ಳ, ಕೆರೆ ನೀರಿನ ವಿಚಾರಕ್ಕೆ ರಾಜ್ಯ-ರಾಜ್ಯದ ನಡುವೆ, ಊರು-ಊರಿನ ನಡುವೆ ಜಗಳ, ಗಲಾಟೆ ಸಾಮಾನ್ಯ. ಆದರೆ, ಎರಡು ಗ್ರಾಮಗಳ ಜನರು ಒಗ್ಗೂಡಿ ತಮ್ಮ ಗ್ರಾಮದ ಜೀವನಾಡಿಯಾದ ಕೆರೆಯನ್ನು ದೇಣಿಗೆ ಸಂಗ್ರಹಿಸಿ ತುಂಬಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಸಾಹಸ ಗಾಧೆಗೆ ಚಿಕ್ಕಮಗಳೂರಿನ ಕಬ್ಬಳಿ-ಗುಣಸಾಗರ ಗ್ರಾಮಗಳು ಸಾಕ್ಷಿಯಾಗಿದೆ.&lt;/p&gt;&lt;p&gt;ಹೌದು, ಕಡೂರು ತಾಲೂಕಿನ ಈ ಎರಡೂ ಗ್ರಾಮಕ್ಕೆ ಜೀವನಾಡಿಯಾದ ಕೆರೆಯನ್ನು ತುಂಬಿದಲು ಗ್ರಾಮಸ್ಥರು ಸರ್ಕಾರದ ನೆರವಿಗೂ ಕಾಯದೇ ತಾವೇ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿದ ಪರಿಣಾಮ ಇದೀಗ ಕೆರೆಯಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಯಾಗಿದೆ.&lt;/p&gt;&lt;p&gt;ಮಳೆ ಕೊರತೆಯಿಂದ ಚಿಕ್ಕಮಗಳೂರಿನ ಹಲವು ಗ್ರಾಮದಲ್ಲಿ ಮಳೆಗಾಲದಲ್ಲೂ ಟ್ಯಾಂಕರ್&zwnj; ಮೂಲಕ ಕುಡಿವ ನೀರು ತರುವ ಪರಿಸ್ಥಿತಿ ಇದೆ. ಇದೇ ರೀತಿ ಮಳೆ ಕೊರತೆ ಮುಂದುವರಿದರೆ ಸಾಕಷ್ಟು ತೊಂದರೆ ಆಗಲಿದೆ ಎಂದು ಎಚ್ಚೆತ್ತ ಸಮಾನ ಮನಸ್ಕರು ಗ್ರಾಮಸ್ಥರ ನೆರವಿನೊಂದಿಗೆ ವೇದಾವತಿ ನದಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಪಂಪ್&zwnj; ಮಾಡುವ ಮೂಲಕ ಕೆರೆ ತುಂಬಿಸಿದ್ದಾರೆ.&lt;/p&gt;&lt;p&gt;ಸುಮಾರು 60- 70 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಕಳೆದೊಂದು ವಾರದಿಂದ ನೀರನ್ನು ಪಂಪ್&zwnj; ಮಾಡಲಾಗುತ್ತಿದೆ. ಈಗಾಗಲೇ ಶೇ.40 ರಷ್ಟು ನೀರು ಸಂಗ್ರಹವಾಗಿ ಮುಂದಿನ 15 ದಿನದಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಲಿದೆ.&lt;/p&gt;&lt;h2&gt;&lt;strong&gt;ಎತ್ತಿನಹೊಳೆ ವ್ಯರ್ಥ ನೀರೇ ಆಸರೆ&lt;/strong&gt;&lt;/h2&gt;&lt;p&gt;ಕಬ್ಬಳಿ-ಗುಣಸಾಗರ ಕೆರೆಯಿಂದ ಸುಮಾರು 1 ಕಿ.ಮೀ ದೂರದಲ್ಲಿ ವೇದಾವತಿ ನದಿ ಹರಿಯುತ್ತಿದೆ. ಈ ನದಿಗೆ ಹಳೇಬೀಡು ಕೆರೆ ತುಂಬಿಸುವ ಎತ್ತಿನಹೊಳೆ ಯೋಜನೆ ಹೆಚ್ಚುವರಿ ನೀರು ಹರಿಯುತ್ತಿದೆ. ಈ ಹೆಚ್ಚುವರಿ ನೀರನ್ನು ಪಂಪ್&zwnj; ಮಾಡುವ ಮೂಲಕ ಕಬ್ಬಳಿ-ಗುಣಸಾಗರ ಕೆರೆತುಂಬಿಸಲಾಗುತ್ತಿದೆ.&lt;/p&gt;&lt;h3&gt;&lt;strong&gt;ಯುವ ಸಮಾನ ಮನಸ್ಕರರ ನೇತೃತ್ವ&lt;/strong&gt;&lt;/h3&gt;&lt;p&gt;ಕಬ್ಬಳಿ-ಗುಣಸಾಗರ ಕೆರೆ ತುಂಬಿಸುವ ಯೋಜನೆ ಚಿಂತನೆ ಆರಂಭಗೊಂಡಿದ್ದೇ ಯುವ ನಾಲ್ವರು ಸಮಾನ ಮನಸ್ಕರಿಂದ ಎಂಬುದು ಅಚ್ಚರಿ ಸಂಗತಿ.&lt;/p&gt;&lt;p&gt;ನಾಲ್ವರ ಪೈಕಿ ಒಬ್ಬರು ಮೂರಾರ್ಜಿ ಶಾಲೆಯ ಶಿಕ್ಷಕರು (ಉದಯ್&zwnj; ಕುಮಾರ್&zwnj;), ಮತ್ತೊಬ್ಬರು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್&zwnj; ಎಂಜಿನಿಯರ್&zwnj; (ಮಧು ದೊಡ್ಡಮನೆ), ಇನ್ನೊಬ್ಬರು ಬೆಂಗಳೂರಿನಲ್ಲಿ ಕ್ಯಾಬ್&zwnj; ಓಡಿಸುತ್ತಿರುವವರು (ಕುಮಾರಸ್ವಾಮಿ). ಇವರೆಲ್ಲರಿಗೂ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವವರು ಗ್ರಾಮದಲ್ಲಿಯೇ ಕೃಷಿಕನಾಗಿ ಜೀವನ ಸಾಗಿಸುತ್ತಿರುವ (ಜಿ.ಎಸ್&zwnj;.ಯತೀಶ್&zwnj;) ರೈತ.&lt;/p&gt;&lt;p&gt;ಈ ಎಲ್ಲರೂ ಸ್ಥಳೀಯರೇ. ತಮ್ಮೂರಿನ ಕೆರೆ ತುಂಬಿದರೆ ಕುಡಿವ ನೀರಿನ ಸಮಸ್ಯೆ, ಪಶುಪಕ್ಷಿ, ಜಲಚರಗಳಿಗೆ ಅನುಕೂಲ ವಾಗಲಿದೆ. ಮುಖ್ಯವಾಗಿ ಕೃಷಿ ಜಮೀನಿನ ಕೊಳವೆ ಬಾವಿಗಳ ಅಂತರ್ಜಲ ಮರು ಪೂರ್ಣಗೊಳ್ಳಲಿದೆ ಎಂಬ ಹಿನ್ನೆಲೆಯಲ್ಲಿ ಕೆರೆ ತುಂಬಿಸುವ ಯೋಜನೆ ಶುರು ಮಾಡಿದ್ದರು.&lt;/p&gt;&lt;h3&gt;&lt;strong&gt;ಕೇವಲ ₹15 ಲಕ್ಷ ಯೋಜನೆ ಪೂರ್ಣ&lt;/strong&gt;&lt;/h3&gt;&lt;p&gt;ಸರ್ಕಾರ ಕೋಟ್ಯಾಂತರ ವೆಚ್ಚದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರೂ ಒಂದೇ ಒಂದು ಹನಿ ನೀರು ದೊರೆಯದ ಪರಿಸ್ಥಿತಿ ಇದೆ. ಆದರೆ, ಕಬ್ಬಳಿ-ಗುಣಸಾಗರ ಕೆರೆ ತುಂಬಿಸುವ ಯೋಜನೆ ಕೇವಲ ₹15 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿ ಸಲಾಗಿದೆ. ಜತೆಗೆ, ಕೆರೆಗೆ ಉತ್ತಮ ಪ್ರಮಾಣದ ನೀರು ಹರಿದು ಬರುತ್ತಿದೆ.&lt;/p&gt;&lt;p&gt;ಈ ₹15 ಲಕ್ಷ ವೆಚ್ಚದಲ್ಲಿ ಪ್ಲಾನಿಂಗ್&zwnj;, ಸಿವಿಲ್&zwnj; ಕೆಲಸ, 20 ಅಡಿ ಉದ್ದದ 102 ಪೈಪ್&zwnj;, ನೀರೆತ್ತುವ ಪಂಪ್&zwnj;, ಪ್ರತ್ಯೇಕ ಟ್ರಾನ್ಸ್&zwnj; ಫಾರಂ ಅಳವಡಿಕೆ ಸೇರಿದಂತೆ ಮೊದಲಾದ ಕಾರ್ಯ ಮಾಡಲಾಗಿದೆ.&lt;/p&gt;&lt;h3&gt;--&lt;strong&gt;₹50 ನಿಂದ ದೇಣಿಗೆ ಸಂಗ್ರಹ&lt;/strong&gt;&lt;/h3&gt;&lt;p&gt;ಕಳೆದ ಒಂದು ವರ್ಷದಿಂದ ನಾಗರಾಳು ಕೆರೆ ಗ್ರಾಮಸ್ಥರೇ ಹಣ ಹಾಕಿ ತುಂಬಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಇದೇ ಮಾದರಿಯಲ್ಲಿ ಕಬ್ಬಳಿ-ಗುಣಸಾಗರ ಕೆರೆ ತುಂಬಿಸಲು ಯೋಜನೆ ಹಾಕಿದ ಸಮಾನ ಮನಸ್ಕರು ಗ್ರಾಮಸ್ಥರ ಬಳಿ ಚರ್ಚಿಸಿದರು. ಇದಕ್ಕೆ ಗ್ರಾಮಸ್ಥರು ಸಹಕಾರದ ಭರವಸೆ ನೀಡಿದರು. ಅಲ್ಲಿಂದ ಯೋಜನೆ ಶುರುವಾಯಿತು. ಬಳಿಕ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಲಾಯಿತು. ಅವರ ಶಕ್ತಿಗೆ ಅನುಸಾರ ₹50 ನಿಂದ ₹50 ಸಾವಿರದ ವರೆಗೆ ದೇಣಿಗೆ ನೀಡಿದ್ದಾರೆ. ಆ ಹಣದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ ಎಂದು ಉದಯ್&zwnj; ಕುಮಾರ್&zwnj;, ಯತೀಶ್&zwnj;, ಕುಮಾರಸ್ವಾಮಿ ಹಾಗೂ ಮಧು &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;--&lt;strong&gt;ನಿರ್ವಹಣೆಗೆ ಕೆರೆ ಅಭಿವೃದ್ಧಿ ಸಂಘ ಸ್ಥಾಪನೆ ಚಿಂತನೆ&lt;/strong&gt;&lt;/h3&gt;&lt;p&gt;ಕೆರೆ ತುಂಬಿಸುವ ಯೋಜನೆ ಸಹಕಾರಗೊಂಡಿದೆ. ಆದರೆ, ಅದನ್ನು ನಿರ್ವಹಣೆ ಮಾಡಬೇಕು ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕಿದೆ. ಹಾಗಾಗಿ, ಕೆರೆ ಅಭಿವೃದ್ಧಿ ಸಂಘ ಸ್ಥಾಪನೆ ಮಾಡುವ ಚಿಂತನೆ ಇದೆ. ಜತೆಗೆ, ಹಾಲು ಉತ್ಪಾದಕರ ಒಕ್ಕೂಟದ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಒಕ್ಕೂಟ ರಚನೆ ಮಾಡಿ ರೈತರ ಉತ್ಪನ್ನ ಸಂರಕ್ಷಣೆ ಮಾಡಿ ಬೇಡಿಕೆ ಹೆಚ್ಚಾಗಿರುವ ಸಮಯದಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ರೈತರಿಗೆ ದೊರೆಯುವಂತೆ ಮಾಡ ಬೇಕೆಂಬ ಯೋಜನೆ ಇದೆ ಎಂದು ಸಮಾನಮನಸ್ಕರು ತಿಳಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/no-government-help-just-community-spirit-villagers-fill-60-acre-lake-in-chikkamagaluru-kvn/articleshow-cyarhzs"/>
        </item>
        <item>
            <title><![CDATA[ಪರಿಸರ ಸೂಕ್ಷ್ಮ ವಲಯ ಸಮಸ್ಯೆ: ಅಧಿಸೂಚನೆ ಆಕ್ಷೇಪಣೆ ಸಲ್ಲಿಕೆಗೆ 60 ದಿನಗಳ ಗಡುವು 25ಕ್ಕೆ ಅಂತ್ಯ!]]></title>
            <link>https://kannada.asianetnews.com/karnataka-districts/western-ghats-eco-sensitive-zone-objection-deadline-ends-september-25-and-26-shringeri-villages-affected-kvn/articleshow-dhp7lym</link>
            <guid isPermaLink="true">https://kannada.asianetnews.com/karnataka-districts/western-ghats-eco-sensitive-zone-objection-deadline-ends-september-25-and-26-shringeri-villages-affected-kvn/articleshow-dhp7lym</guid>
            <pubDate>Mon, 07 Sep 2026 10:51:32 +0530</pubDate>
            <description><![CDATA[ಶೃಂಗೇರಿಯ 26 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿರುವ 7ನೇ ಕರಡು ಅಧಿಸೂಚನೆಯು ರೈತರು ಮತ್ತು ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ಅಧಿಸೂಚನೆಯು ಕೃಷಿ, ಅಭಿವೃದ್ಧಿ ಚಟುವಟಿಕೆಗಳಿಗೆ ಮಾರಕವಾಗಲಿದ್ದು, ಜನವಸತಿ ಮತ್ತು ಕೃಷಿ ಭೂಮಿಯನ್ನು ಹೊರಗಿಡುವಂತೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g33k66m2yvxeznkkc6gn8mhy,imgname-cusersragupathi-rddocumentsmy-documentsmy-picsfex8tymveay6ocp-jpg--84-.jpg" type="image/jpeg" height="390" width="690"/>
            <content:encoded><![CDATA[&lt;p&gt;ನೆಮ್ಮಾರ್ ಅಬೂಬಕರ್, ಕನ್ನಡಪ್ರಭ&lt;/p&gt;&lt;p&gt;ಶೃಂಗೇರಿ: ಪರಿಸರ ಸೂಕ್ಷ್ಮ ವಲಯಗಳನ್ನು ಜು. 27 ರಂದು 7 ನೇ ಕರಡು ಅಧಿಸೂಚನೆಯಲ್ಲಿ ಘೋಷಿಸಿದ ಹಿನ್ನೆಯಲ್ಲಿ ಆಕ್ಷೇಪಣೆ ಸಲ್ಲಿಸಲು ನೀಡಿದ್ದ 60 ದಿನಗಳ ಗಡುವು ಸಪ್ಟೆಂಬರ್ 25 ಕ್ಕೆ ಅಂತ್ಯಗೊಳ್ಳಲಿದೆ.&lt;/p&gt;&lt;p&gt;ಜಿಲ್ಲೆಯ ಒಟ್ಟು 137 ಗ್ರಾಮಗಳಲ್ಲಿ ತಾಲೂಕಿನ 26 ಗ್ರಾಮಗಳ ಕೆರೆ ಪಂಚಾಯಿತಿಯ ಮುಡುಬ, ಭಲೆಕಡಿ, ಮಾತೋಳ್ಳಿ,ಶೀರ್ಲು,ಕೆರೆ,ಸುಂಕದ ಮಕ್ಕಿ,ಮರ್ಕಲ್ ಪಂಚಾಯಿತಿಯ ಋಷ್ಯಶೃಂಗಪುರ, ಯಡದಾಳು, ಯಡದಳ್ಳಿ,ನೆಮ್ಮಾರು ಪಂಚಾಯಿತಿಯ ನೆಮ್ಮಾರು,ಕಾಪಿ ಎಸ್ಟೇಟ್, ಮಲ್ನಾಡ್, ಹರೂರು ಗ್ರಾಮಗಳು, ಮೆಣಸೆ ಪಂಚಾಯಿತಿಯ ಗಿಣಕಲ್, ಮಸಿಗೆ, ಬೇಗಾರು ಪಂಚಾಯಿತಿ ನೀಲಂದೂರು, ಅಸನಬಾಳು, ಮೀಗಾ, ಕೂತಗೋಡು ಪಂಚಾಯಿತಿಯ ಕೂಚಗೋಡು, ಕುಂಬರಗೋಡು ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಿದ್ದು ಇವುಗಳಲ್ಲಿ ಬಹುತೇಕ ಮೂಲಭೂತ ಸೌಕರ್ಯ ವಂಚಿತ ಹಳ್ಳಿಗಳು ಕುಗ್ರಾಮಗಳು ಹಾಗೂ ಅರಣ್ಯ ಕಾಯ್ದೆಗಳು,ಕೃಷಿ,ಆರ್ಥಿಕ ಸಮಸ್ಯೆಗಳಿಂದ ನಲುಗಿವೆ.&lt;/p&gt;&lt;h2&gt;&lt;strong&gt;7 ನೇ ಕರಡು ಅಧಿಸೂಚನೆಯಲ್ಲಿ ಘೋಷಣೆಯಿಂದ ರೈತರಿಗೆ ಸಂಕಷ್ಟ&lt;/strong&gt;&lt;/h2&gt;&lt;p&gt;ಈ ಜನರ ಮುಖ್ಯ ವೃತ್ತಿಯಾದ ಕೃಷಿಯಲ್ಲಿ ಅಡಕೆ,ಕಾಫಿ, ಕಾಳು ಮೆಣಸು, ಭತ್ತ, ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಇವರಿಗೆ ಅಡಕೆಗೆ ಬರುತ್ತಿರುವ ರೋಗಗಳಿಂದ ಆಗುತ್ತಿರುವ ತೊಂದರೆ ಒಂದುಕಡೆ, ಕಾಯ್ದೆಗಳು, ಮಾರಕ ಯೋಜನೆಗಳಿಂದ ಆದ ಸಮಸ್ಯೆಗಳಿಂದ ಮುಕ್ತಿಕಾಣದೇ ತೊಳಲಾಟದಲ್ಲಿದ್ದವರಿಗೆ ಪರಿಸರ ಸೂಕ್ಷ್ಮ ವಲಯ ಈ ಅಧಿಸೂಚನೆ ಭದ್ರತೆಯನ್ನೇ ಕಸಿದಿದೆ. ಈ ಮುನ್ನಾ 6 ನೇ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದರೂ ಮತ್ತೆ 7 ನೇ ಅಧಿಸೂಚನೆ ಹೊರಡಿಸಿದೆ.&lt;/p&gt;&lt;p&gt;ಈಗಾಗಲೇ ನಿವಾಸಿಗಳ ಗಮನಕ್ಕೆ ಬಾರದೇ ಸ್ಯಾಟಲೈಟ್ ಸರ್ವೆ ನಡೆದಿದೆ. ಅರಣ್ಯಗಳ ಜೊತೆ ಅಡಕೆ ತೋಟ, ಕೃಷಿ ಜಮೀನುಗಳು, ಜನವಸತಿ ಪ್ರದೇಶಗಳು ಸಹಿತ ಈ ವ್ಯಾಪ್ತಿಗೆ ಸೇರಲ್ಪಟ್ಟಿರುವುದೆ ಬದುಕು ಕಸಿಯುವ ಆತಂಕಕ್ಕೆ ಪ್ರಮುಖ ಕಾರಣ.&lt;/p&gt;&lt;p&gt;ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿದ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆ, ಕೈಗಾರಿಕೆಗಳು, ವಾಣಿಜ್ಯ ಚಟುವಟಿಕೆ, ರೈತರ ತೋಟ, ಗದ್ದೆಗಳಿಗೆ ಗೊಬ್ಬರ, ಔಷಧಿ ಸಿಂಪಡಣೆಗೆ ಕಡಿವಾಣ, ರಸ್ತೆ, ಸೇತುವೆ, ವಿದ್ಯುತ್ ಸಹಿತ ಮೂಲಭೂತ ಅಭಿವೃದ್ಧಿಗಳಿಗೆ ಅಡ್ಡಿಯಾಗಲಿದೆ. ಯಾವುದೇ ಉಷ್ಣ ವಿದ್ಯುತ್ ಯೋಜನೆಗಳಿಗೆ ಅವಕಾಶವಿಲ್ಲ ಎಂಬುದೇ ಜನ ಜೀವನಕ್ಕೆ ಬೀಳುವ ಕೊಡಲಿ ಪೆಟ್ಟು ಎಂಬುದು ಗಮನಾರ್ಹ&lt;/p&gt;&lt;p&gt;ಕೆಂಪು ವರ್ಗದ ಎಲ್ಲಾ ಹೊಸ ಕೈಗಾರಿಕೆಗಳಿಗೆ ನಿಷೇಧ. ಈ ಪ್ರದೇಶಗಳ ಅಭಿವೃದ್ಧಿ ಯೋಜನೆ, ಟೌನ್ ಷಿಪ್, ನಿರ್ಮಾಣ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಬೇಕು. ಮನೆ ನಿರ್ಮಾಣ, ಅಭಿವೃದ್ಧಿಗಳಿಗೂ ಅಡ್ಡಿಯಾಗಲಿದೆ ಎಂಬ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ ಕೇಳಿಬಂದಿದ್ದು ಪ್ರತಿಭಟನೆಗಳು ನಡೆಯುತ್ತಿವೆ. ಇ-ಮೈಲ್ - ಅಂಚೆಪತ್ರಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.&lt;/p&gt;&lt;p&gt;ಗ್ರಾಮ ಪಂಚಾಯಿತಿ ಅವಧಿ ಮುಗಿದಿದ್ದು ಬೋರ್ಡ್ ಇಲ್ಲದ ಕಾರಣ ಪಂಚಾಯಿತಿಗಳಲ್ಲಿ ಯಾವುದೇ ವಿಶೇಷ ಗ್ರಾಮ ಸಭೆ ಗಳಾಗಲೀ, ನಿರ್ಣಯಗಳಾಗಲೀ ಕೈಗೊಂಡಿಲ್ಲ. ಎಲ್ಲೆಡೆ ಸಾರ್ವಜನಿಕ ವಿರೋಧಗಳು ವ್ಯಕ್ತವಾಗುತ್ತಿವೆ.&lt;/p&gt;&lt;p&gt;ಕೇರಳ ಮಾದರಿಯಲ್ಲಿ ಅಧಿಸೂಚನೆ ಪುನರ್ ಪರಿಶೀಲಿಸಬೇಕು. ಜನವಸತಿ ಪ್ರದೇಶ, ಕೃಷಿ ಜಮೀನು ಗಳನ್ನು ಅಧಿಸೂಚನೆಯಿಂದ ಹೊರತು ಪಡಿಸಬೇಕು.ಪಶ್ಚಿಮ ಘಟ್ಟಗಳ ಅತ್ಯಮೂಲ್ಯ ಸಸ್ಯ ಸಂಪತ್ತು, ಪ್ರಾಣಿಪಕ್ಷಿ ಸಂಕುಲಗಳು, ನೆಲ,ಜಲ ಸಂರಕ್ಷಿಸಬೇಕು. ಜೊತೆಗೆ ಮನುಷ್ಯ ಬದುಕು ಬೇಕು. ಪರಿಸರ ಸಂರಕ್ಷಣೆ ಹೆಸರಲ್ಲಿ ಜನರ ಬದುಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಕೂಗು ಪ್ರಬಲವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/western-ghats-eco-sensitive-zone-objection-deadline-ends-september-25-and-26-shringeri-villages-affected-kvn/articleshow-dhp7lym"/>
        </item>
        <item>
            <title><![CDATA[CT Ravi on B Nagendra: 'ಕಟ್ಕೊಂಡವರ ಖಾತೆಗೂ ಹೋಗಿದೆ, ಇಟ್ಕೊಂಡವರ ಖಾತೆಗೂ ಹೋಗಿದೆ: ವಾಲ್ಮೀಕಿ ಹಗರಣ, ಸಿಟಿ ರವಿ ಸ್ಫೋಟಕ ಹೇಳಿಕೆ!]]></title>
            <link>https://kannada.asianetnews.com/politics/ct-ravi-slams-congress-govt-over-valmiki-corporation-scam-and-b-nagendra-resignation-chikkamagaluru/articleshow-e23v6ui</link>
            <guid isPermaLink="true">https://kannada.asianetnews.com/politics/ct-ravi-slams-congress-govt-over-valmiki-corporation-scam-and-b-nagendra-resignation-chikkamagaluru/articleshow-e23v6ui</guid>
            <pubDate>Fri, 28 Aug 2026 16:46:55 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿ.ಟಿ. ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಿಗಮದ ಹಣವು 'ಕಟ್ಟಿಕೊಂಡವರ' ಮತ್ತು 'ಇಟ್ಕೊಂಡವರ' ಇಬ್ಬರ ಖಾತೆಗೂ ಹೋಗಿದೆ ಎಂದು ಆರೋಪಿಸಿರುವ ಅವರು, ಎಸ್&zwnj;ಐಟಿ ತನಿಖೆ ಕೇವಲ ತಿಪ್ಪೆ ಸಾರಿಸುವ ಕೆಲಸ ಮಾಡಿದೆ ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m140x2vr85qb9x75v2j8v3y8,imgname-----------------------2026-08-28t163359.112-1787915307895.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಆ.28): &lt;/strong&gt;ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಕೊನೆಗೂ ಬಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಸಿಟಿ ಪ್ರತಿಕ್ರಿಯಿಸಿದ್ದು, ಇಡಿ ತನಿಖೆಯಲ್ಲಿ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಾಲ್ಮೀಕಿ ನಿಗಮದ ಕೋಟಿ ಕೋಟಿ ಹಣ ಕಟ್ಟಿಕೊಂಡವರ ಖಾತೆಗೂ ಹೋಗಿದೆ, ಇಟ್ಕೊಂಡವರ ಖಾತೆಗೂ ಹೋಗಿದೆ. ಆದರೆ ಯಾರು ಯಾರನ್ನ ಇಟ್ಕೊಂಡಿದ್ದಾರೆಂದು ನನ್ನ ಬಳಿ ಮಾತ್ರ ಕೇಳ್ಬೇಡಿ ಎಂದರು. ಸಿಟಿ ರವಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ಎಸ್&zwnj;ಐಟಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ&lt;/h2&gt;&lt;p&gt;ಇಂದು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕ ಹಗರಣದಲ್ಲಿ 187 ಕೋಟಿ ಹಣ ಕಟ್ಕೊಂಡೋರು-ಇಟ್ಕೋಂಡೋರು ಇಬ್ಬರ ಖಾತೆಗೂ ಹೋಗಿದೆ. ಭ್ರಷ್ಟಾಚಾರ ನಡೆದಿದೆ. ಆದರೆ ಎಸ್&zwnj;ಐಟಿಯವರು ತನಿಖೆ ನೆಪದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರಬಹುದು. ಸಿಐಡಿ ರೀತಿ ಸಿಬಿಐ, ಇಡಿ(ED) ತಿಪ್ಪೆ ಸಾರಿಸುವ ಕೆಲಸ ಮಾಡಲ್ಲ, ಕಡೇವರೆಗೆ ತನಿಖೆ ನಡೆಸಿಯೇ ನಡೆಸುತ್ತಾರೆ. ಇಲ್ಲವಾದರೆ ಈ ರೀತಿ ಲೂಟಿ ಹೊಡೆಯುವವರಿಗೆ ಲೈಸೆನ್ಸ್ ಕೊಟ್ಟಂತಾಗುತ್ತದೆ ಎಂದರು.&lt;/p&gt;&lt;p&gt;&lt;strong&gt;ಭ್ರಷ್ಟರ ಪರ ಕಾಂಗ್ರೆಸ್ ನಾಯಕರ ಸಮರ್ಥನೆ&lt;/strong&gt;&lt;/p&gt;&lt;p&gt;ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿರೋದು ಡೆತ್ ನೋಟ್, ಹಲವು ಖಾತೆಗಳಿಗೆ ಹಣ ಹೋಗಿರುವುದು ಎಲ್ಲವೂ ಕಣ್ಣಿಗೆ ರಾಚುವಂತೆ ನಡೆದಿದ್ದರೂ ಈ ಕಾಂಗ್ರೆಸ್ ಸರ್ಕಾರ ಭ್ರಷ್ಟರನ್ನೇ ಮಂತ್ರಿ ಮಾಡಿ, ಅಪರಾಧ ಪ್ರೂವ್ ಆಗಿಲ್ಲ, ಆರೋಪಿ ಅಷ್ಟೇ ಅಪರಾಧಿ ಅಲ್ಲ ಅಂತಾ ಸಮರ್ಥನೆ ಮಾಡಿಕೊಳ್ಳುತ್ತಾರೆಂದರೆ. ಇದು ಸರ್ಕಾರದ ಭ್ರಷ್ಟಚಾರದ ಪರ ನಿಲುವು ತೋರಿಸುತ್ತದೆ ಎಂದು ಕಿಡಿಕಾರಿದರು.&lt;/p&gt;&lt;p&gt;ಅಧಿಕಾರಿ ಸಾಯುವ ಮುನ್ನ ಡೆತ್ ನೋಟ್ ಬರೆದಿರುವುದೇ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲು. ಇದು ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ಬಿ ನಾಗೇಂದ್ರ ರಾಜೀನಾಮೆ ಕೊಡುವುದರಲ್ಲಿ ಯಾವ ತ್ಯಾಗ ಇಲ್ಲ. ಭ್ರಷ್ಟಾಚಾರ ಮಾಡಿದವರು ರಾಜೀನಾಮೆ ಕೊಡಬೇಕು, ಶಿಕ್ಷೆ ಆಗಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅದು ಪ್ರಕೃತಿ ನಿಯಮ ಎಂದರು.&lt;/p&gt;&lt;h3&gt;ನಾವು ಯಾವತ್ತೂ ಬಡ ದಲಿತರ ಪರ&lt;/h3&gt;&lt;p&gt;ನಾವು ಯಾವತ್ತೂ ಬಡವರು ದಲಿತರ ಪರವೇ ಹೊರತು ಭ್ರಷ್ಟ ದಲಿತರ ಪರ ಅಲ್ಲ ಎಂದ ಸಿಟಿ ರವಿಯವರು, ಆ ಅಮಾಯಕನ ಸಾವಿಗೆ ಕಾರಣವಾದ ಪಾಪಿಗಳಿಗೆ ಶಿಕ್ಷೆ ಆಗಬಾರದು ಎಂದು ಕಾಂಗ್ರೆಸ್ ಭ್ರಷ್ಟ ದಲಿತನ ಪರ ವಕಲತ್ತು ವಹಿಸುತ್ತಿದೆ. ಬಿಜೆಪಿ ಬಡ ದಲಿತನ ಪರ ವಕಲತ್ತು ವಹಿಸುತ್ತಿದೆ. ನಾವು ಪಾದಯಾತ್ರೆ ಹಮ್ಮಿಕೊಂಡಿರುವುದು ಭ್ರಷ್ಟ ದಲಿತನಿಗೆ ಶಿಕ್ಷೆ ಆಗಬೇಕು, ಬಡ ದಲಿತನಿಗೆ ನ್ಯಾಯ ಸಿಗಬೇಕು ಎಂಬುದು ಆಗಿದೆ. ಭ್ರಷ್ಟಾಚಾರ ಮಾಡಿದ್ದಕ್ಕೆ ಮೊದಲೇ ರಾಜೀನಾಮೆ ಕೊಟ್ಟು, ಜೈಲು ಶಿಕ್ಷೆಯೂ ಅನುಭವಿಸಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರೋ ನಾಗೇಂದ್ರನಿಗೆ ಹೊಸ ಮಂತ್ರಿಮಂಡಲದಲ್ಲಿ ಕರೆದುಕೊಂಡು ಹೋಗಿ ಮಂತ್ರಿ ಮಾಡಿದರು. ಆ ಮೂಲಕ ರಾಜ್ಯದ ಜನರಿಗೆ ಸರ್ಕಾರ ತಪ್ಪು ಸಂದೇಶ ನೀಡಿದರು.&lt;/p&gt;&lt;p&gt;ಆತ್ಮ೧ಹತ್ಯೆ ಮಾಡಿಕೊಂಡ ಚಂದ್ರಶೇಖರ್ 'ಹಣ ಹಂಚಿಕೆ ವ್ಯವಹಾರವೆಲ್ಲ ಸಚಿವರ(ಬಿ ನಾಗೇಂದ್ರ) ಅವರ ಮೌಖಿಕ ಸೂಚನೆ ಮೇರೆಗೆ ಎಂಬುದು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇನ್ನೆಂಥ ಸಾಕ್ಷ್ಯ ಬೇಕು? ವಾಲ್ಮೀಕಿ ನಿಗಮದ ಎಲ್ಲಾ ಹಗರಣ ನಡೆದಿರುವುದು ಸಚಿವರ ಮೌಖಿಕ ಸೂಚನೆ ಮೇರೆಗೆ ಎಂಬುದು ಸ್ಪಷ್ಟ. ಇಲ್ಲವಾದರೆ ಎಂ.ಡಿಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬರುತ್ತಿತ್ತು. ಈ ವಿಚಾರವಾಗಿ ನಾನು ಅಂದೇ ಅಪಾದಿಸಿದ್ದೆ, ನೆಕ್ಕುಂಟೆ ನಾಗರಾಜ್ ಮತ್ತು ಸಚಿವರ ಸಂಬಂಧದ ಬಗ್ಗೆ ಅಂದೇ ಹೇಳಿದ್ದೆ. ಅದೀಗ ಇಡಿ ತನಿಖೆಯಲ್ಲಿ ನಿಜವಾಗಿದೆ ಎಂದರು.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/ct-ravi-slams-congress-govt-over-valmiki-corporation-scam-and-b-nagendra-resignation-chikkamagaluru/articleshow-e23v6ui"/>
        </item>
        <item>
            <title><![CDATA[ಅಡಕೆ ರೈತರ ಬದುಕು ಅತಂತ್ರ: ಗುಟ್ಕಾ ನಿಷೇಧದ ಪ್ರಸ್ತಾಪ ಕೈಬಿಡಿ ಎಂದು ಸಿ.ಟಿ.ರವಿ ಆಗ್ರಹ!]]></title>
            <link>https://kannada.asianetnews.com/karnataka-districts/areca-nut-price-crash-c-t-ravi-says-gutka-ban-remark-caused-5000-to-6000-drop-demands-action-kvn/articleshow-gyouuxb</link>
            <guid isPermaLink="true">https://kannada.asianetnews.com/karnataka-districts/areca-nut-price-crash-c-t-ravi-says-gutka-ban-remark-caused-5000-to-6000-drop-demands-action-kvn/articleshow-gyouuxb</guid>
            <pubDate>Sat, 05 Sep 2026 10:40:45 +0530</pubDate>
            <description><![CDATA[ಗುಟ್ಕಾ ನಿಷೇಧದ ಕುರಿತ ಸರ್ಕಾರದ ಹೇಳಿಕೆಯಿಂದ ಅಡಕೆ ಬೆಲೆ ಕುಸಿದಿರುವುದನ್ನು ಖಂಡಿಸಿ ಶಾಸಕ ಸಿ.ಟಿ. ರವಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಈ ಪ್ರಸ್ತಾಪವನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿದರು. ಜೊತೆಗೆ, ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಹಾಗೂ ಸ್ಥಗಿತಗೊಂಡಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m1qz9rrwrbacc8b054yhhpw7,imgname-untitled-design--40--1788584715036.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿಗೆ ಮರಣ ಶಾಸನವಾಗುವ ಗುಟ್ಕಾ ಹಾಗೂ ಅಡಕೆ ನಿಷೇಧ ಪ್ರಸ್ತಾಪವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಆಗ್ರಹಿಸಿದರು.&lt;/p&gt;&lt;p&gt;ಸಖರಾಯಪಟ್ಟಣದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಹಾಗೂ ಜಿಲ್ಲಾ ರೈತ ಮೋರ್ಚಾ ದಿಂದ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ ಅಡಕೆ ಬೆಲೆ ಕ್ವಿಂಟಾಲ್&zwnj;ಗೆ ₹57&ndash;58 ಸಾವಿರ ಇದ್ದಾಗ ₹60&ndash;65 ಸಾವಿರಕ್ಕೆ ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ ಸರ್ಕಾರದ ಗುಟ್ಕಾ ನಿಷೇಧದ ಹೇಳಿಕೆ ಬೆನ್ನಲ್ಲೇ ₹5&ndash;6 ಸಾವಿರದಷ್ಟು ಬೆಲೆ ಕುಸಿದಿದೆ. ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.&lt;/p&gt;&lt;p&gt;ಕೇವಲ ಒಂದು ಹೇಳಿಕೆಯಿಂದ ಲಕ್ಷಾಂತರ ರೈತರ ಬದುಕಿನ ಮೇಲೆ ಪರಿಣಾಮ ಬೀರುವಂತಾಗ ಬಾರದು. ಗುಟ್ಕಾ ಕಂಪನಿಗಳಿಗೆ ಅನುಕೂಲವಾಗುವ ನೀತಿಗಳ ಬದಲಿಗೆ ರೈತರ ಹಿತ ಕಾಪಾಡುವ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಬರಪೀಡಿತ ಘೋಷಣೆಗೆ ಒತ್ತಾಯ:&lt;/strong&gt;&lt;/h2&gt;&lt;p&gt;ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ಎಂದು ಘೋಷಿಸಬೇಕು. ಕಡೂರು ಭಾಗದಲ್ಲಿ ನಿರೀಕ್ಷಿತ ಮಳೆಯಾಗದೆ ಕೆರೆಗಳು ಬತ್ತಿವೆ. ಬೋರ್&zwnj;ವೆಲ್&zwnj;ಗಳು ಬತ್ತುತ್ತಿವೆ, ರಾಗಿ ಬೆಳೆಯಲು ಸಾಧ್ಯವಾಗಿಲ್ಲ. ಜೋಳ, ಸೂರ್ಯ ಕಾಂತಿ ಸೇರಿದಂತೆ ವಿವಿಧ ಬೆಳೆಗಳು ಒಣಗಿವೆ. ಅಡಕೆ ತೋಟಗಳಿಗೂ ನೀರಿನ ಕೊರತೆ ಎದುರಾಗಿದೆ ಎಂದರು.&lt;/p&gt;&lt;p&gt;ಬರಪೀಡಿತ ತಾಲೂಕು ಘೋಷಣೆಗೂ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ತಕ್ಷಣ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಲೋಡ್&zwnj;ಶೆಡ್ಡಿಂಗ್ ಹಾಗೂ ವಿದ್ಯುತ್ ಕೊರತೆಯಿಂದ ರೈತರ ಪಂಪ್&zwnj;ಸೆಟ್&zwnj;ಗಳು ಕಾರ್ಯ ನಿರ್ವಹಿಸದೆ ತೊಂದರೆಯಾಗುತ್ತಿದೆ. ಟ್ರಾನ್ಸ್&zwnj;ಫಾರ್ಮರ್&zwnj;ಗಳಿಗೆ ಹೆಚ್ಚಿನ ಹಣ ಪಾವತಿಸಿ ಕಾಯಬೇಕಾದ ಪರಿಸ್ಥಿತಿಯಿದೆ ಸರ್ಕಾರ ಈ ಸಮಸ್ಯೆ ಪರಿಹರಿಸಬೇಕು ಎಂದರು.&lt;/p&gt;&lt;h3&gt;&lt;strong&gt;₹1,281 ಕೋಟಿ ನೀರಾವರಿ ಯೋಜನೆ ಪೂರ್ಣಗೊಳಿಸಿ&lt;/strong&gt;;&lt;/h3&gt;&lt;p&gt;ತಮ್ಮ ಅವಧಿಯಲ್ಲಿ ಮಂಜೂರಾದ ₹1,281 ಕೋಟಿ ಮೊತ್ತದ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಬೇಕು. ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಷರತ್ತಿನೊಂದಿಗೆ 2022&ndash;23ರಲ್ಲಿ ಯೋಜನೆ ಆರಂಭಿಸಲಾಗಿತ್ತು. ನಿಗದಿಯಂತೆ ಕಾಮಗಾರಿ ನಡೆದಿದ್ದರೆ 2025ರ ವೇಳೆಗೆ ಕೆರೆಗಳಿಗೆ ನೀರು ಹರಿಯಬೇಕಿತ್ತು. ಯೋಜನೆ ಪೂರ್ಣಗೊಂಡರೆ ಅಂತರ್ಜಲ ಮರುಪೂರಣವಾಗುವ ಜತೆಗೆ ಜಾನುವಾರುಗಳಿಗೆ ಕುಡಿವ ನೀರು ಹಾಗೂ ತೋಟಗಳನ್ನು ಉಳಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.&lt;/p&gt;&lt;p&gt;ಯೋಜನೆಗೆ ಈಗಾಗಲೇ ನಾಲ್ಕೂವರೆ ವರ್ಷ ಕಳೆದಿದ್ದು, ಸರ್ಕಾರಕ್ಕೆ ಇನ್ನೂ ಆರು ತಿಂಗಳ ಕಾಲಾವಕಾಶ ನೀಡುತ್ತೇವೆ. ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ವಿವಿಧ ಸರ್ಕಾರಿ ಯೋಜನೆಗಳಡಿ ಫಲಾನುಭವಿಗಳಿಗೆ ಬಾಕಿ ಉಳಿದ ಹಣವನ್ನು ಗೌರಿ&ndash;ಗಣೇಶ ಹಬ್ಬದೊಳಗೆ ಬಿಡುಗಡೆ ಮಾಡಬೇಕು. ಬಡವರು ಹಣಕ್ಕಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಬೇಕು ಎಂದರು.&lt;/p&gt;&lt;p&gt;ಗುಟ್ಕಾ&ndash;ಅಡಕೆ ನಿಷೇಧದ ಪ್ರಸ್ತಾಪ ಕೈಬಿಡುವುದು, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದು ಮತ್ತು ₹1,281 ಕೋಟಿ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.&lt;/p&gt;&lt;p&gt;ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಹಳ್ಳಿ ಮಹೇಶ್, ಬೀಕನಹಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಜಿಲ್ಲಾ ಕಾರ್ಯದರ್ಶಿ ಚಿಕ್ಕದೇವನೂರು ರವಿ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಪಾದಮನೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಂಬಯ್ಯನೂರು ಆನಂದಪ್ಪ, ಗ್ರಾಮಾಂತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಕೇತುಮಾರನಹಳ್ಳಿ ಉಮೇಶ್, ನಗರ ರೈತ ಮೋರ್ಚಾ ಅಧ್ಯಕ್ಷ ನಿಶಾಂತ್, ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಎಸ್.ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಕೊಲ್ಲಾಭೋವಿ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಗೌಡ್ರು, ಮುಖಂಡರಾದ ಪಿಳ್ಳೇನ ಹಳ್ಳಿ ರಮೇಶ್, ಅಣ್ಣಾ ನಾಯ್ಕ, ಲಕ್ಷ್ಮಣ ನಾಯ್ಕ್ ಉಪಸ್ಥಿತರಿದ್ದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/areca-nut-price-crash-c-t-ravi-says-gutka-ban-remark-caused-5000-to-6000-drop-demands-action-kvn/articleshow-gyouuxb"/>
        </item>
        <item>
            <title><![CDATA['ದ್ಹನಿ ಎತ್ತದಿದ್ರೆ ಮೂಲೆಗೆ ಕೂರಿಸ್ತಾರೆ..' ಮಾಜಿ ಸಚಿವೆ ಮೋಟಮ್ಮ ಸಿಎಂ ಡಿಕೆಶಿ ವಿರುದ್ಧ ಗರಂ ಆಗಿದ್ಯಾಕೆ?]]></title>
            <link>https://kannada.asianetnews.com/politics/former-minister-motamma-slams-cm-dk-shivakumar-at-mudigere-women-literary-conference/articleshow-khdn8u1</link>
            <guid isPermaLink="true">https://kannada.asianetnews.com/politics/former-minister-motamma-slams-cm-dk-shivakumar-at-mudigere-women-literary-conference/articleshow-khdn8u1</guid>
            <pubDate>Fri, 04 Sep 2026 16:16:25 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಮನೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1p095eyyrg8jw4ravj59tk8,imgname-former-minister-motamma-1788518634974.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು (ಸೆ.4): ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತೆ ಎಂಬ ನಿರೀಕ್ಷೆಯಿತ್ತು ಆದರೆ ಡಿಕೆಶಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಮಹಿಳೆಯರು ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್ ಮಾಡಲ್ಲ&lt;/h2&gt;&lt;p&gt;ಇಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮೋಟಮ್ಮ ಅವರು, ಮಹಿಳೆಯರು ಗಟ್ಟಿ, ಸಮರ್ಥರು ಅಂತಾ ತೋರಿಸದೇ ಇದ್ರೆ ಮೂಲೆಯಲ್ಲಿ ಕೂರಿಸ್ತಾರೆ. ನಮಗೆ ಅವಕಾಶ ಕೊಡಬೇಕೆಂದು ನೀವೆಲ್ಲ ಒಟ್ಟಾಗಿ ಒಗ್ಗಟ್ಟಾಗಿ ಮಾತನಾಡಬೇಕೆಂದು ನಾನು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಹೇಳಿದ್ದೆ. ಸಚಿವ ಸ್ಥಾನ ನನಗೆ ಅಥವಾ ನಿನಗೆ ಅದು ಆಮೇಲೆ ಮೊದಲು ಮಹಿಳೆಯರಿಗೆ ಸಚಿವ ಸ್ಥಾನ ಬೇಕು ಅಂತಾ ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್&zwnj; ಮಾಡಲ್ಲ ಎಂದರು.&lt;/p&gt;&lt;h3&gt;ಪರೋಕ್ಷವಾಗಿ ಡಿಕೆಶಿ ವಿರುದ್ಧ ಅಸಮಾಧಾನ&lt;/h3&gt;&lt;p&gt;ನಾವು ರಾಜಕಾರಣದಲ್ಲಾದ್ರೂ, ಮನೆಯಲ್ಲಾದ್ರೂ ಗಟ್ಟಿಯಾಗಿ ಮಾತನಾಡದಿದ್ರೆ ಯಾರು ತಾನೇ ಗುರುತಸ್ತಾರೆ? ಮನೆಯಲ್ಲೂ ಹೆಣ್ಣುಮಕ್ಕಳು ಗಟ್ಟಿ ಮಾಡದಿದ್ರೆ ಮಾವ ಗಂಡ ಯಾರೂ ಗುರುತಿಸಲ್ಲ, ಮೂಲೆಗೆ ಕೂರಿಸ್ತಾರೆ. ಹಾಗೆ ರಾಜಕಾರಣದಲ್ಲೂ ಮಹಿಳೆಯರು ತಮ್ಮ ಹಕ್ಕು, ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು. ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-motamma-slams-cm-dk-shivakumar-at-mudigere-women-literary-conference/articleshow-khdn8u1"/>
        </item>
        <item>
            <title><![CDATA[Siddaramaiah: ಅಚ್ಚೇ ದಿನ್ ಎಲ್ಲಿ, 15 ಲಕ್ಷ ಎಲ್ಲಿ? ಬಿಜೆಪಿಗೆ ಸವಾಲೆಸೆದು ತಮ್ಮ ರಾಜೀನಾಮೆ ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ!]]></title>
            <link>https://kannada.asianetnews.com/karnataka-districts/siddaramaiah-vs-bjp-achhe-din-15-lakh-promise-narendra-modi-ct-ravi-resignation-truth-karnataka-political-news-bmk/articleshow-kqovmqp</link>
            <guid isPermaLink="true">https://kannada.asianetnews.com/karnataka-districts/siddaramaiah-vs-bjp-achhe-din-15-lakh-promise-narendra-modi-ct-ravi-resignation-truth-karnataka-political-news-bmk/articleshow-kqovmqp</guid>
            <pubDate>Sat, 05 Sep 2026 16:43:24 +0530</pubDate>
            <description><![CDATA[ಬೀರೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು, ಪ್ರಧಾನಿ ಮೋದಿಯವರ 'ಅಚ್ಚೇ ದಿನ್' ಮತ್ತು 15 ಲಕ್ಷದ ಭರವಸೆಗಳನ್ನು ಪ್ರಶ್ನಿಸಿದ್ದಾರೆ. ಸ್ಥಳೀಯ ಬಿಜೆಪಿ ನಾಯಕ ಸಿ.ಟಿ. ರವಿ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ತಮ್ಮ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆಯ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hm3ax0yht81f6z4j426hv12s,imgname-siddu-1705214116817.JPG" type="image/jpeg" height="390" width="690"/>
            <content:encoded><![CDATA[&lt;p&gt;ಬೀರೂರು (ಚಿಕ್ಕಮಗಳೂರು); ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭಕ್ತ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಮೋದಿ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ?&lt;/strong&gt;&lt;/h2&gt;&lt;p&gt;ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, &quot;ನಾನು ಯಾವುದೋ ಒಂದು ದೇವಸ್ಥಾನಕ್ಕೆ ಹೋದಾಗ ಕೆಲವರು ಮೋದಿ... ಮೋದಿ... ಎಂದು ಘೋಷಣೆ ಕೂಗುತ್ತಿದ್ದರು. ನನಗೆ ಅರ್ಥವಾಗುತ್ತಿಲ್ಲ, ಈ ಮೋದಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ್ದಾರಾ? ಅಥವಾ ಸಂಗೊಳ್ಳಿ ರಾಯಣ್ಣನ ತರ ದೇಶಕ್ಕಾಗಿ ಹೋರಾಟ ನಡೆಸಿದ್ದಾರಾ? ಜನರು ಸುಮ್ಮನೆ ವಿಷಯ ತಿಳಿಯದೆ ಮೋದಿ... ಮೋದಿ... ಎಂದು ಜಪಿಸುತ್ತಿದ್ದಾರೆ&quot; ಎಂದು ಆಕ್ರೋಶ ಹೊರಹಾಕಿದರು. ಮುಂದುವರಿದು ಕೇಂದ್ರ ಸರ್ಕಾರದ ವಚನಭ್ರಷ್ಟತೆಯನ್ನು ನೆನಪಿಸಿದ ಅವರು, &quot;ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ಎಲ್ಲಿ ಹೋಯ್ತು ಆ ಕೆಲಸಗಳು? ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಮಾಡಿದ್ರಾ? ಪ್ರಧಾನಿಯಾಗಿ 12 ವರ್ಷಗಳೇ ಕಳೆದುಹೋದವು. ವಿದೇಶದಲ್ಲಿದ್ದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದಿದ್ದರು, ಯಾರ ಖಾತೆಗಾದರೂ ಒಂದು ರೂಪಾಯಿ ಬಿತ್ತಾ? ಹೀಗಿರುವಾಗ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿಗೆ ಜನ ಏಕೆ ಮತ ಹಾಕಬೇಕು? ಬಿಜೆಪಿ ನಾಯಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ&quot; ಎಂದು ಕಿಡಿಕಾರಿದರು.&lt;/p&gt;&lt;h3&gt;&lt;strong&gt;ಸಿ.ಟಿ. ರವಿಗೆ 'ಲೂಟಿ ರವಿ' ಎಂದು ಕಟು ಟೀಕೆ!&lt;/strong&gt;&lt;/h3&gt;&lt;p&gt;ಇದೇ ವೇಳೆ ಸ್ಥಳೀಯ ನಾಯಕರಾದ ವೈ.ಎಸ್.ವಿ. ದತ್ತಾ ಅವರ ವಿರುದ್ಧ ಗೆದ್ದ ಸಿ.ಟಿ. ರವಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, &quot;ತಮ್ಮಯ್ಯಾ... ಯಾರಯ್ಯಾ ನಿನ್ನ ಮೇಲೆ ಸೋತದ್ದು? ಸಿ.ಟಿ. ರವಿನಾ?&quot; ಎಂದು ಪ್ರಶ್ನಿಸಿದರು. &quot;ಸಿ.ಟಿ. ರವಿ ಮೊನ್ನೆ ಏನೋ ಹೇಳುತ್ತಿದ್ದನಂತೆ. ನಾನು ಆ ಪದವನ್ನು ಬಳಸಲ್ಲ, ಆದರೆ ನಮ್ಮ ಕಡೆಯಲ್ಲಿ ಅವರನ್ನು 'ಲೂಟಿ ರವಿ' ಎಂದು ಕರೆಯುತ್ತಾರೆ. ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆ ನೀಡಲಿಲ್ಲ, ಅದಕ್ಕೇ ನನ್ನ ಸಿಎಂ ಸ್ಥಾನ ಹೋಯ್ತು ಎಂದು ಅವನು ಹೇಳುತ್ತಿದ್ದಾನಂತೆ&quot; ಎಂದು ವ್ಯಂಗ್ಯವಾಡಿದರು.&lt;/p&gt;&lt;h3&gt;&lt;strong&gt;&quot;ಕೊಟ್ಟ ಮಾತು ಉಳಿಸಿಕೊಂಡಿದ್ದು ಸಿದ್ದರಾಮಯ್ಯ ಸರ್ಕಾರ&quot;!&lt;/strong&gt;&lt;/h3&gt;&lt;p&gt;ತಮ್ಮ ಮುಖ್ಯಮಂತ್ರಿ ಸ್ಥಾನದ ರಾಜೀನಾಮೆ ಪ್ರಸಂಗವನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, &quot;ನಾನು ರಾಹುಲ್ ಗಾಂಧಿಯವರಿಗೆ ಮಾತು ಕೊಟ್ಟಿದ್ದೆ. ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದ ತಕ್ಷಣ ರಾಜೀನಾಮೆ ಕೊಟ್ಟೆ. ಆ ಸಮಯದಲ್ಲಿ ಬಹಳ ಜನ ನಾಯಕರು 'ಸರ್, ರಾಜೀನಾಮೆ ನೀಡಬೇಡಿ' ಎಂದು ಮನವಿ ಮಾಡಿದರು. ಆದರೆ ನಾನು ಮಾತು ಕೊಟ್ಟಿದ್ದೇನೆ, ಅದನ್ನು ಉಳಿಸಿಕೊಳ್ಳಬೇಕು ಎಂದು ಸ್ಥಾನ ತ್ಯಾಗ ಮಾಡಿದೆ. ಕರ್ನಾಟಕ ರಾಜಕೀಯದ ಇತಿಹಾಸದಲ್ಲೇ ಕೊಟ್ಟ ಮಾತನ್ನು ಶೇಕಡಾ ನೂರರಷ್ಟು ಉಳಿಸಿಕೊಂಡ ಯಾವುದಾದರೂ ಸರ್ಕಾರ ಇದ್ದರೆ, ಅದು ನಮ್ಮ ಸಿದ್ದರಾಮಯ್ಯ ಸರ್ಕಾರ&quot; ಎಂದು ಹೆಮ್ಮೆಯಿಂದ ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/siddaramaiah-vs-bjp-achhe-din-15-lakh-promise-narendra-modi-ct-ravi-resignation-truth-karnataka-political-news-bmk/articleshow-kqovmqp"/>
        </item>
        <item>
            <title><![CDATA[ಒಂದೇ ತೋಟ, ಎರಡು ಬೆಳೆ, ಡಬಲ್ ಆದಾಯ? ಚಿಕ್ಕಮಗಳೂರು ರೈತರ ಆವಕಾಡೊ ಪ್ರಯೋಗಕ್ಕೆ ಮೋದಿ ಶಹಬ್ಬಾಸ್]]></title>
            <link>https://kannada.asianetnews.com/chikkamagalur/pm-modi-praises-karnataka-chikkamagaluru-farmers-for-growing-avocado-alongside-coffee-suh/articleshow-l7qeiwz</link>
            <guid isPermaLink="true">https://kannada.asianetnews.com/chikkamagalur/pm-modi-praises-karnataka-chikkamagaluru-farmers-for-growing-avocado-alongside-coffee-suh/articleshow-l7qeiwz</guid>
            <pubDate>Tue, 01 Sep 2026 13:24:11 +0530</pubDate>
            <description><![CDATA[&lt;p&gt;ಕಾಫಿ ಬೆಳೆಗೆ ಹೆಸರುವಾಸಿಯಾಗಿರುವ ಕರ್ನಾಟಕದ ಚಿಕ್ಕಮಗಳೂರು ಇದೀಗ ಮತ್ತೊಂದು ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಕಾಫಿ ತೋಟಗಳ ನಡುವೆ ಆವಕಾಡೊ ಬೆಳೆಸಿ ಹೆಚ್ಚುವರಿ ಆದಾಯ ಗಳಿಸುತ್ತಿರುವ ರೈತರ ಹೊಸ ಕೃಷಿ ಪ್ರಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1dyvz6fpsq4vzcy1tj7zf0h,imgname-pm-modi-praises-karnataka-chikkamagaluru-farmers-for-growing-avocado-alongside-coffee-1788248718541.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಫಿ ಬೆಳೆಗೆ ಹೆಸರುವಾಸಿಯಾಗಿರುವ ಕರ್ನಾಟಕದ ಚಿಕ್ಕಮಗಳೂರು ಇದೀಗ ಮತ್ತೊಂದು ಕಾರಣಕ್ಕೆ ದೇಶದ ಗಮನ ಸೆಳೆದಿದೆ. ಕಾಫಿ ತೋಟಗಳ ನಡುವೆ ಆವಕಾಡೊ ಬೆಳೆಸಿ ಹೆಚ್ಚುವರಿ ಆದಾಯ ಗಳಿಸುತ್ತಿರುವ ರೈತರ ಹೊಸ ಕೃಷಿ ಪ್ರಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಆಗಸ್ಟ್ 30ರಂದು ಪ್ರಸಾರವಾದ &lsquo;ಮನ್ ಕಿ ಬಾತ್&rsquo;ನ 137ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ, ದೇಶದ ವಿವಿಧ ಭಾಗಗಳಲ್ಲಿ ರೈತರು ಹೊಸ ಬೆಳೆಗಳು ಮತ್ತು ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುತ್ತಿರುವ ಉದಾಹರಣೆಗಳನ್ನು ಹಂಚಿಕೊಂಡರು. ಈ ವೇಳೆ ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಆವಕಾಡೊ ಬೆಳೆಯುತ್ತಿರುವ ರೈತರ ಪ್ರಯತ್ನವನ್ನು ವಿಶೇಷವಾಗಿ ಪ್ರಸ್ತಾಪಿಸಿದರು.&lt;/p&gt;&lt;h2&gt;ಕಾಫಿ ಜೊತೆಗೆ ಆವಕಾಡೊ, ಕಾಳುಮೆಣಸು&lt;/h2&gt;&lt;p&gt;ಚಿಕ್ಕಮಗಳೂರಿನ ಕೆಲವು ರೈತರು ಈಗಾಗಲೇ ಇರುವ ಕಾಫಿ ತೋಟಗಳಲ್ಲೇ ಆವಕಾಡೊ ಗಿಡಗಳನ್ನು ಬೆಳೆಸುತ್ತಿದ್ದಾರೆ. ಕಾಫಿ ಮತ್ತು ಕಾಳುಮೆಣಸಿನ ಜೊತೆಗೆ ಆವಕಾಡೊ ಬೆಳೆಯುವುದರಿಂದ ಅದೇ ಜಮೀನಿನಿಂದ ಹೆಚ್ಚುವರಿ ಆದಾಯ ಪಡೆಯಲು ಸಾಧ್ಯವಾಗುತ್ತಿದೆ. ಈ ವಿಧಾನವನ್ನು ಕೃಷಿ ಕ್ಷೇತ್ರದಲ್ಲಿ ಇಂಟರ್&zwnj;ಕ್ರಾಪಿಂಗ್ ಎಂದು ಕರೆಯಲಾಗುತ್ತದೆ. ಅಂದರೆ, ಪ್ರತ್ಯೇಕವಾಗಿ ಮತ್ತೊಂದು ಜಮೀನು ಖರೀದಿಸುವ ಅಗತ್ಯವಿಲ್ಲದೆ, ಈಗಾಗಲೇ ಇರುವ ಕಾಫಿ ತೋಟದಲ್ಲೇ ಮತ್ತೊಂದು ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳುವ ಅವಕಾಶ ರೈತರಿಗೆ ಸಿಗುತ್ತಿದೆ.&lt;/p&gt;&lt;h2&gt;ಆವಕಾಡೊಗೆ ಹೆಚ್ಚುತ್ತಿರುವ ಬೇಡಿಕೆ&lt;/h2&gt;&lt;p&gt;ಒಂದು ಕಾಲದಲ್ಲಿ ಭಾರತದಲ್ಲಿ ಹೆಚ್ಚು ಪರಿಚಿತವಾಗಿರದ ಆವಕಾಡೊ ಹಣ್ಣು ಇದೀಗ ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಹೆಲ್ತ್ ಮತ್ತು ಪ್ರೀಮಿಯಂ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದೆ. ಹೋಟೆಲ್&zwnj;, ರೆಸ್ಟೋರೆಂಟ್&zwnj; ಹಾಗೂ ವಿವಿಧ ಆಹಾರ ಪದಾರ್ಥಗಳಲ್ಲಿ ಆವಕಾಡೊ ಬಳಕೆ ಹೆಚ್ಚುತ್ತಿರುವುದು ರೈತರಿಗೂ ಹೊಸ ಮಾರುಕಟ್ಟೆಯ ಅವಕಾಶವನ್ನು ಸೃಷ್ಟಿಸುತ್ತಿದೆ. ನಗರಗಳ ರೆಸ್ಟೋರೆಂಟ್&zwnj;ಗಳಲ್ಲಿ ಕೇಳಿಬರುವ &lsquo;ಆವಕಾಡೊ ಟೋಸ್ಟ್&rsquo;ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಇದೇ ಹಣ್ಣಿನ ಮೂಲಕ ರೈತರು ಆದಾಯ ಗಳಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h2&gt;ಚಿಕ್ಕಮಗಳೂರಿನಲ್ಲಿ ಹೆಚ್ಚಾಗುತ್ತಿದೆ ಆವಕಾಡೊ ಕೃಷಿ&lt;/h2&gt;&lt;p&gt;ಕಾಫಿ, ಕಾಳುಮೆಣಸು ಮತ್ತು ಮಸಾಲೆ ಬೆಳೆಗಳಿಗೆ ಪ್ರಸಿದ್ಧವಾಗಿರುವ ಚಿಕ್ಕಮಗಳೂರಿನ ಹಲವು ಭಾಗಗಳಲ್ಲಿ ಇದೀಗ ಆವಕಾಡೊವನ್ನು ಉಪಬೆಳೆಯಾಗಿ ಬೆಳೆಸುವ ಆಸಕ್ತಿ ಹೆಚ್ಚಾಗಿದೆ. ಕಳಸ, ಬಾಳೆಹೊನ್ನೂರು, ಮೂಡಿಗೆರೆ, ಜಯಪುರ, ಎನ್.ಆರ್. ಪುರ, ಕೊಪ್ಪ ಮತ್ತು ಕಡೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಬೆಳೆಯತ್ತ ರೈತರ ಗಮನ ಹರಿಯುತ್ತಿದೆ ಎಂದು ವರದಿಗಳು ತಿಳಿಸಿವೆ.&lt;/p&gt;&lt;h2&gt;ಒಂದೇ ತೋಟ, ಹಲವು ಆದಾಯದ ಮೂಲ&lt;/h2&gt;&lt;p&gt;ಕಾಫಿ ಮತ್ತು ಕಾಳುಮೆಣಸಿನ ಬೆಲೆಗಳಲ್ಲಿ ಏರಿಳಿತವಾಗುವ ಸಂದರ್ಭದಲ್ಲಿ, ಆವಕಾಡೊವನ್ನು ಮತ್ತೊಂದು ಆದಾಯದ ಮೂಲವಾಗಿ ಬಳಸಿಕೊಳ್ಳುವುದು ರೈತರಿಗೆ ನೆರವಾಗಬಹುದು. ಹೀಗಾಗಿ &lsquo;ಒಂದೇ ತೋಟ, ಹಲವು ಆದಾಯದ ಮೂಲ&rsquo; ಎಂಬ ಮಾದರಿ ಚಿಕ್ಕಮಗಳೂರಿನ ಕೆಲವು ರೈತರಲ್ಲಿ ಜನಪ್ರಿಯವಾಗುತ್ತಿದೆ. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕರ್ನಾಟಕದ ಚಿಕ್ಕಮಗಳೂರು ಮಾತ್ರವಲ್ಲದೆ, ಆಂಧ್ರಪ್ರದೇಶದ ಕಡಪ್ಪದ ವರದರಾಜ್ ಮತ್ತು ತಮಿಳುನಾಡಿನ ಕೊಡೈಕೆನಾಲ್&zwnj;ನ ಚಂದ್ರಶೇಖರನ್ ಅವರ ಆವಕಾಡೊ ಕೃಷಿಯ ಯಶೋಗಾಥೆಯನ್ನೂ ಹಂಚಿಕೊಂಡರು. ಕಾಫಿಗೆ ಹೆಸರಾದ ಚಿಕ್ಕಮಗಳೂರು ಈಗ ಆವಕಾಡೊ ಮೂಲಕವೂ ರೈತರ ಆದಾಯ ಹೆಚ್ಚಿಸುವ ಹೊಸ ಕೃಷಿ ಮಾದರಿಗೆ ಸಾಕ್ಷಿಯಾಗುತ್ತಿದೆ. ಪ್ರಧಾನಿ ಮೋದಿ ಅವರ ಮೆಚ್ಚುಗೆಯ ಬಳಿಕ ಈ ಪ್ರಯೋಗದ ಬಗ್ಗೆ ಮತ್ತಷ್ಟು ಗಮನ ಸೆಳೆಯುವ ಸಾಧ್ಯತೆ ಇದೆ.&lt;/p&gt;]]></content:encoded>
            <category>chikkamagalur</category>
            <dc:creator>Sushma Hegde</dc:creator>
            <atom:link href="https://kannada.asianetnews.com/chikkamagalur/pm-modi-praises-karnataka-chikkamagaluru-farmers-for-growing-avocado-alongside-coffee-suh/articleshow-l7qeiwz"/>
        </item>
        <item>
            <title><![CDATA[Chikkamagaluru: ಕಾಫಿನಾಡಲ್ಲಿ ಗೃಹಜ್ಯೋತಿ ಶಾಕ್: 50 ಸಾವಿರ ಫಲಾನುಭವಿಗಳು ಔಟ್ ?]]></title>
            <link>https://kannada.asianetnews.com/karnataka-districts/gchikkamagaluru-gruha-jyoti-yojana-more-than-50000-people-may-be-deprived-of-free-electricity-facility-mrq/articleshow-o9zm9z0</link>
            <guid isPermaLink="true">https://kannada.asianetnews.com/karnataka-districts/gchikkamagaluru-gruha-jyoti-yojana-more-than-50000-people-may-be-deprived-of-free-electricity-facility-mrq/articleshow-o9zm9z0</guid>
            <pubDate>Wed, 02 Sep 2026 06:47:58 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಪರಿಶೀಲನೆಯಿಂದಾಗಿ, ಸುಮಾರು 50,000ಕ್ಕೂ ಹೆಚ್ಚು ಮಂದಿ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ. ಮನೆ ಬದಲಾವಣೆ, ವಾಣಿಜ್ಯ ಬಳಕೆ, ಮತ್ತು ತಾಂತ್ರಿಕ ದೋಷಗಳಂತಹ ಕಾರಣಗಳಿಂದ ಈ ಅನರ್ಹತೆ ಉಂಟಾಗುತ್ತಿದ್ದು, ದಾಖಲೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1fv0a1dpr856ws0cn948yfj,imgname-gruha-jyoti-1788311775277.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶ್ವನಾಥ ಮಲೇಬೆನ್ನೂರು&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ರಾಜ್ಯಾದ್ಯಂತ ಗೃಹ ಜ್ಯೋತಿ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸಲಾಗುತ್ತಿದ್ದು, ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಸುಮಾರು 50 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ವಿದ್ಯುತ್&zwnj; ಕಟ್&zwnj; ಆಗುವ ಸಾಧ್ಯತೆ ಇದೆ.&lt;/p&gt;&lt;p&gt;ಕಳೆದ ಜುಲೈನಿಂದ ರಾಜ್ಯಾದ್ಯಂತ ಇಂಧನ ಇಲಾಖೆ ಅಧಿಕಾರಿ ಸಿಬ್ಬಂದಿ ಪ್ರತಿ ಮನೆ ಭೇಟಿ ನೀಡಿ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ದಾಖಲಾತಿ ಸಂಗ್ರಹಿಸುವ ಮೂಲಕ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ.&lt;/p&gt;&lt;p&gt;ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೆಸ್ಕಾಂ ಅಧಿಕಾರಿ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ ಅಗತ್ಯ ದಾಖಲಾತಿ ಪಡೆಯ ಲಾಗುತ್ತಿದೆ. ಈ ವೇಳೆ ಗೃಹ ಜ್ಯೋತಿ ಯೋಜನೆ ಅನುಷ್ಠಾನದ ಆರಂಭದಲ್ಲಿ ನೋಂದಣಿ ಮಾಡಿ ಇದೀಗ ಬೇರೆ ಮನೆಗೆ ಹೋದವರು, ಖಾಲಿ ಮನೆ, ವಾಣಿಜ್ಯ ಬಳಕೆ ಸೇರಿದಂತೆ ಸುಮಾರು 20 ರಿಂದ 25 ವಿವಿಧ ಕಾರಣದಿಂದ ಸುಮಾರು 50 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ವಿದ್ಯುತ್&zwnj; ಸೌಲಭ್ಯ ಕಟ್&zwnj; ಆಗುವ ಸಾಧ್ಯತೆ ಇದೆ.&lt;/p&gt;&lt;p&gt;ಚಿಕ್ಕಮಗಳೂರು ಜಿಲ್ಲೆಯಲ್ಲಿ 3.14 ಲಕ್ಷ ಗೃಹ ಬಳಕೆ ಮೀಟರ್&zwnj;ಗಳಿವೆ. ಈ ಪೈಕಿ ಇದುವರೆಗೆ 2.60 ಲಕ್ಷ ಗೃಹ ಬಳಕೆ ಮೀಟರ್&zwnj; ಹೊಂದಿರುವ ಗ್ರಾಹಕರು ತಮ್ಮ ದಾಖಲೆಗಳನ್ನು ಮೆಸ್ಕಾಂ ಸಿಬ್ಬಂದಿ ನೋಡಿವ ಮೂಲಕ ಪರಿಶೀನೆಗೆ ಒಳಪಟ್ಟಿದ್ದಾರೆ.&lt;/p&gt;&lt;p&gt;ಇನ್ನೂ 54,191 ಗ್ರಾಹಕರು ಪರಿಶೀಲನೆ ಆಗಬೇಕಿದೆ. ಶೇ.88 ರಷ್ಟು ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಆ.31ರ ವರೆಗೆ ಇದ್ದ ಸರ್ವೇ ಅವಧಿ ಇದೀಗ ಸೆ.30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಅವಧಿಯಲ್ಲಿ ನೋಂದಣಿ ಮಾಡಿದರೆ ಅರ್ಹರಿಗೆ ಉಚಿತ ವಿದ್ಯುತ್&zwnj; ಸೌಲಭ್ಯ ಮುಂದುವರಿಯಲಿದೆ.&lt;/p&gt;&lt;h2&gt;&lt;strong&gt;17 ಸಾವಿರ ಮನೆ ಬೀಗ ಮತ್ತು ಖಾಲಿ&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ 17,570 ಮನೆಗಳಲ್ಲಿ ಕೆಲವು ಮನೆಗೆ ಬೀಗ ಹಾಕಲಾಗಿದೆ. ಇನ್ನೂ ಕೆಲವು ಮನೆ ಖಾಲಿ ಇರುವುದು ಕಂಡು ಬಂದಿದೆ. ಹೀಗಾಗಿ, ಪರಿಶೀಲನೆಗೆ ಸಾಧ್ಯವಾಗಿಲ್ಲ. ಮೆಸ್ಕಾಂ ಅಧಿಕಾರಿಗಳು 3 ಬಾರಿ ಭೇಟಿ ನೀಡಿ ಪರಿಶೀಲನೆ ಮಾಡಲಿ ದ್ದಾರೆ. ಈ ಅವಧಿಯಲ್ಲಿ ಮನೆ ನಿವಾಸಿಗಳು ಲಭ್ಯವಿದ್ದು, ದಾಖಲಾತಿ ಒದಗಿಸದಿದ್ದರೆ, ಸೌಲಭ್ಯ ಕಟ್&zwnj; ಆಗುವುದು ಬಹುತೇಕ ಖಚಿತ.&lt;/p&gt;&lt;h3&gt;&lt;strong&gt;ಗೃಹ ಬಳಕೆ ವಿದ್ಯುತ್&zwnj; ಶಾಲಾ-ಕಾಲೇಜಿಗೆ ಬಳಕೆ&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರವು ಗೃಹ ಬಳಕೆದಾರರಿಗೆ ಅನುಕೂಲ ಮಾಡಬೇಕೆಂಬ ಕಾರಣಕ್ಕೆ ಮಾಸಿಕ 200 ಯುನಿಟ್&zwnj;ಗಿಂತ ಕಡಿಮೆ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್&zwnj; ಪೂರೈಕೆಗೆ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಈ ಸೌಲಭ್ಯ ದುರ್ಬಳಕೆ ಮಾಡಿದ ಕೆಲವು ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳು ಗೃಹ ಬಳಕೆಯಡಿ ನೋಂದಣಿ ಮಾಡಿಕೊಂಡಿರುವುದು ಇದೀಗ ಪರಿಶೀಲನೆ ವೇಳೆ ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ವೇಳೆ ಮಾಹಿತಿ ದಾಖಲಿಸಲಾಗಿದೆ. ಅಂತಿಮ ವಾಗಿ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಮೆಸ್ಕಾಂ ಹಿರಿಯ ಅಧಿಕಾರಿಗಳು &lsquo;ಕನ್ನಡಪ್ರಭ&rsquo;ಕ್ಕೆ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ದೇವಸ್ಥಾನ, ಮಸೀದಿ, ಚರ್ಚ್&zwnj;ನಲ್ಲಿ ಗೃಹ ಜ್ಯೋತಿ&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್&zwnj; ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಸಹ ಗೃಹ ಜ್ಯೋತಿಯಡಿ ನೋಂದಣಿ ಮಾಡಲಾಗಿದೆ. ಸರ್ಕಾರ ಗೃಹ ಬಳಕೆದಾರರಿಗೆ ಮಾತ್ರ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸ ಲಾಗಿದೆ. ಆದರೆ, ದೇವಸ್ಥಾನ, ಮಸೀದಿ, ಚರ್ಚ್&zwnj;ನಲ್ಲಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.&lt;/p&gt;&lt;p&gt;&lt;strong&gt;ದತ್ತಾಂಶ ದಾಖಲಾತಿ ಸಮಸ್ಯೆ&lt;/strong&gt;&lt;/p&gt;&lt;p&gt;ಇನ್ನೂ ಪರಿಶೀಲನೆ ವೇಳೆ ಹಲವು ತಾಂತ್ರಿಕ ಸಮಸ್ಯೆ ಎದುರಾಗುತ್ತಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ಕಳೆದ 3 ವರ್ಷದಲ್ಲಿ ಯಾವುದಾರರೂ ಒಂದು ತಿಂಗಳು 200 ಯುನಿಟ್&zwnj;ಗಿಂತ ಹೆಚ್ಚಿನ ವಿದ್ಯುತ್&zwnj; ಬಳಕೆಯಾಗಿದ್ದರೂ ಅಂತಹ ಫಲಾನುಭವಿ ಮಾಹಿತಿ ದಾಖಲಿಸುವುದಕ್ಕೆ ಆ್ಯಪ್&zwnj;ನಲ್ಲಿ ಸಾಧ್ಯವಾಗುತ್ತಿಲ್ಲ. ಉಳಿದಂತೆ ಸೋಲಾರ್&zwnj; ವಿದ್ಯುತ್ ಹೊಂದಿರುವವರು. ಈ ಹಿಂದೆ ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆ ವಿದ್ಯುತ್&zwnj; ಮೀಟರ್&zwnj; ಪಡೆದವರು, ಇದೀಗ ಆ್ಯಪ್&zwnj;ನಲ್ಲಿ ನೋಂದಣಿ ಆಗುತ್ತಿಲ್ಲ. ಈ ರೀತಿಯ ಸಮಸ್ಯೆಗಳಿಂದ ಹಲವು ಮಂದಿ ಸೌಲಭ್ಯ ವಂಚಿತರಾಗುವ ಸಾಧ್ಯತೆ ಇದೆ.&lt;/p&gt;&lt;p&gt;ಪರಿಶೀಲನೆ ಬಾಕಿ ಇರುವ ಗ್ರಾಹಕರು ಹತ್ತಿರದ ಮೆಸ್ಕಾಂ ಕಚೇರಿಗೆ ದಾಖಲೆ ಸಹಿತ ಭೇಟಿ ನೀಡಿದರೆ ನೋಂದಣಿ ಮಾಡಿ ಕೊಡಲಾಗುವುದು. ಆ.31ರ ವರೆಗಿನ ನೋಂದಣಿ ಅವಧಿಯನ್ನು ಸರ್ಕಾರ ಸೆ.30ರ ವರೆಗೆ ವಿಸ್ತರಣೆ ಮಾಡಿದೆ.&lt;/p&gt;&lt;p&gt;&lt;strong&gt;ಮಂಜುನಾಥ್&zwnj;, ಅಧೀಕ್ಷಕ ಎಂಜಿನಿಯರ್&zwnj;, ಚಿಕ್ಕಮಗಳೂರು ಮೆಸ್ಕಾಂ&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gchikkamagaluru-gruha-jyoti-yojana-more-than-50000-people-may-be-deprived-of-free-electricity-facility-mrq/articleshow-o9zm9z0"/>
        </item>
        <item>
            <title><![CDATA[ಪೋಷಕರೇ ಎಚ್ಚರ... ಫಿಟ್ ಇಲ್ಲದ ನೂರಾರು ಶಾಲಾ ಬಸ್‌ ಓಡುತ್ತಿವೆ..! ಮಕ್ಕಳ ಜೀವನದೊಂದಿಗೆ ಚೆಲ್ಲಾಟ]]></title>
            <link>https://kannada.asianetnews.com/karnataka-districts/chikkamagaluru-school-bus-shock-100-plus-vehicles-running-without-fitness-certificates-kvn/articleshow-psxgx1k</link>
            <guid isPermaLink="true">https://kannada.asianetnews.com/karnataka-districts/chikkamagaluru-school-bus-shock-100-plus-vehicles-running-without-fitness-certificates-kvn/articleshow-psxgx1k</guid>
            <pubDate>Mon, 07 Sep 2026 11:10:15 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಶಾಲಾ ಬಸ್&zwnj;ಗಳು ಫಿಟ್&zwnj;ನೆಸ್ ಪ್ರಮಾಣಪತ್ರ (ಎಫ್&zwnj;ಸಿ) ಇಲ್ಲದೆ ಸಂಚರಿಸುತ್ತಿದ್ದು, ಮಕ್ಕಳ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ. ಸಾರಿಗೆ ಇಲಾಖೆ ನೋಟಿಸ್ ನೀಡಿದ್ದರೂ, ನಿಯಮ ಉಲ್ಲಂಘಿಸಿ ಈ ವಾಹನಗಳು ಓಡಾಟ ಮುಂದುವರಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1x5z38f7whj3gy41dh9k5dh,imgname-untitled-design--42--1788759477519.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ ವಾರ್ತೆ&lt;/li&gt;&lt;/ul&gt;&lt;p&gt;ಚಿಕ್ಕಮಗಳೂರು: ಶಾಲಾ ಬಸ್&zwnj;ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಫೋಷಕರೇ ಹುಷಾರ್&zwnj;.. ಚಿಕ್ಕಮಗಳೂರು ಜಿಲ್ಲಾದ್ಯಂತ ಬರೋಬ್ಬರಿ ಒಂದು ನೂರಕ್ಕೂ ಅಧಿಕ ಶಾಲಾ ಬಸ್&zwnj;ಗಳು ಎಫ್&zwnj;ಸಿ (ಫಿಟ್&zwnj;ನೆಸ್ ಸರ್ಟಿಫಿಕೇಟ್) ಇಲ್ಲದೇ ಓಡಾಟ ನಡೆಸುತ್ತಿವೆ.&lt;/p&gt;&lt;p&gt;ಹೌದು.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಲವು ಶಾಲೆಗಳು ಮಕ್ಕಳನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಕೊಂಡೊಯ್ಯುವ ಕೆಲಸ ಮಾಡಲಾಗುತ್ತದೆ. ಆದರೆ, ಅಂತಹ ಬಹುತೇಕ ಶಾಲಾ ಬಸ್&zwnj;ಗಳು ಈಗಾಗಲೇ ಎಫ್&zwnj;ಸಿ ಇಲ್ಲದೇ ಸಂಚಾರ ಮಾಡುತ್ತಿವೆ.&lt;/p&gt;&lt;p&gt;ಜಿಲ್ಲೆಯ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಹಾಗೂ ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸುಮಾರು 600ಕ್ಕೂ ಅಧಿಕ ಶಾಲಾ ವಾಹನ (ಬಸ್&zwnj;) ನೋಂದಣಿ ಆಗಿವೆ. ಈ ಪೈಕಿ ಬರೋಬ್ಬರಿ ಒಂದು ನೂರಕ್ಕೂ ಅಧಿಕ ಶಾಲಾ ಬಸ್&zwnj;ಗಳ ಸಂಚಾರ ಅವಧಿ ಮುಕ್ತಾಯಗೊಂಡಿದೆ.&lt;/p&gt;&lt;p&gt;ಸಾರಿಗೆ ಇಲಾಖೆಯಿಂದ ಬಸ್&zwnj;ನ ಫಿಟ್&zwnj;ನೆಸ್&zwnj; ಪರೀಕ್ಷೆ ಮಾಡಿಕೊಂಡು ಓಡಾಟ ಮಾಡಬೇಕಿದೆ. ಆದರೆ, ಶಾಲೆ ಗಳ ಆಡಳಿತ ಮಂಡಳಿ ಎಫ್&zwnj;ಸಿ ಮಾಡಿಸದೇ ವಾಹನಗಳನ್ನು ಪ್ರತಿ ದಿನ ಬಳಸುವ ಮೂಲಕ ಮಕ್ಕಳ ಜೀವನದೊಂದಿಗೆ ಚಲ್ಲಾಟವಾಡುತ್ತಿವೆ.&lt;/p&gt;&lt;p&gt;ಯಾವುದೇ ಪೋಷಕರು ಪ್ರತಿ ಸಲ ಬಸ್ ಚಾಲಕರಿಂದ ಎಫ್&zwnj;ಸಿ ಅಥವಾ ವಾಹನ ಸಂಬಂಧಿ ಇನ್ನಿತರ ಮಾಹಿತಿ ಕೇಳಲಾಗದು. ಅದು ಆಯಾ ಶಾಲೆಗಳ ಆದ್ಯ ಜವಾಬ್ದಾರಿಯಾಗಿದೆ. ಆದರೂ ಪ್ರಸ್ತುತ ವಿವಿಧ ಶಿಕ್ಷಣ ಸಂಸ್ಥೆಗಳ ಬಸ್&zwnj;ಗಳ ಎಫ್&zwnj;ಸಿ ಮುಗಿದು ಹಲವು ತಿಂಗಳುಗಳಾದರೂ ಅದನ್ನು ನವೀಕರಿಸುವ ಗೋಜಿಗೆ ಹೋಗಿಲ್ಲ ಎಂಬುದು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯಾಗಿದೆ.&lt;/p&gt;&lt;h2&gt;&lt;strong&gt;ಬಸ್&zwnj;ಗಳಲ್ಲಿಲ್ಲ ಜಿಪಿಎಸ್:&amp;nbsp;&lt;/strong&gt;&lt;/h2&gt;&lt;p&gt;ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಜಿಪಿಎಸ್ ಮತ್ತು ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ನಿಯಮವಿದೆ. ಆದರೆ, ಜಿಲ್ಲೆಯಲ್ಲಿನಿತ್ಯ ಓಡಾಡುವ ಅದೆಷ್ಟೋ ಶಾಲಾ ವಾಹನಗಳು ಈ ನಿಯಮ ಗಾಳಿಗೆ ತೂರುತ್ತಿವೆ. ಹೀಗಾಗಿ, ಪರವಾನಗಿ ನವೀಕರಣಕ್ಕೆ ಅರ್ಜಿಯನ್ನೇ ಸಲ್ಲಿಸುತ್ತಿಲ್ಲ.&lt;/p&gt;&lt;h3&gt;&lt;strong&gt;ಶಾಲಾ ಆಡಳಿತವೇ ಹೊಣೆ:&amp;nbsp;&lt;/strong&gt;&lt;/h3&gt;&lt;p&gt;ಶಾಲಾ ಬಸ್&zwnj;ಗಳ ಸಂಚಾರಕ್ಕೆ 15 ವರ್ಷ ಮಾತ್ರ ಅವಕಾಶವಿದ್ದು, ನಂತರ ರಸ್ತೆಗೆ ಇಳಿಯಬೇಕಾದರೆ ಅದ ಕ್ಕಾಗಿ ಆ ವಾಹನದ ಫಿಟ್&zwnj;ನೆಸ್ ಪ್ರಮಾಣ ಪತ್ರ ಆರ್&zwnj;ಟಿಒ ಕಚೇರಿಯಿಂದ ಪಡೆಯಬೇಕಾಗುತ್ತದೆ. ಮೊದಲ 15 ವರ್ಷದ ಅವಧಿಯಲ್ಲಿ ಏನಾದರೂ ಹಾಳಾಗಿದ್ದಲ್ಲಿ, ಬಸ್&zwnj;ನಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ, ಫಿಟ್&zwnj; ನೆಸ್ ವೇಳೆ ಪೂರ್ಣ ರಿಪೇರಿ ಮಾಡಿ ಪ್ರಮಾಣ ಪತ್ರ ಪಡೆಯಲಾಗುತ್ತದೆ.&lt;/p&gt;&lt;p&gt;ಆದರೆ, ಆರ್&zwnj;ಟಿಒಗೆ ಅರ್ಜಿ ಸಲ್ಲಿಸದೇ ಎಫ್&zwnj;ಸಿ ಪಡೆಯದೇ ಓಡಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳನ್ನು ಕರೆದೊಯ್ಯುವಾಗ ಬಸ್ ಅಪಘಾತಕ್ಕೀಡಾದರೆ, ಅದರ ಪೂರ್ಣ ಜವಾಬ್ದಾರಿಯನ್ನು ಆಯಾ ಶಾಲಾ ಆಡಳಿತ ಮಂಡಳಿ ಅಥವಾ ಬಸ್ ಮಾಲೀಕರು ಹೊರಬೇಕಾಗುತ್ತದೆ. ಅಪಘಾತ ಪರಿಹಾರ ಸಹ ತುರ್ತಾಗಿ ಕುಟುಂಬಕ್ಕೆ ಸಿಗುವುದಿಲ್ಲ. ಈ ಎಲ್ಲ ಸೂಕ್ಷ್ಮತೆಗಳ ಕಡೆಗೆ ಆಯಾ ಶಾಲೆಗಳು ಗಮನ ಹರಿಸಬೇಕು. ಇಲ್ಲದಿದ್ದರೆ ಸಂಭಾವ್ಯ ಅಪಘಾತಗಳಿಗೆ ಅವುಗಳೇ ಹೊಣೆಯಾಗಲಿವೆ.&lt;/p&gt;&lt;h3&gt;&lt;strong&gt;ನೋಟಿಸ್&zwnj; ನೀಡಿ ಸುಮ್ಮನಾದ ಆರ್&zwnj;ಟಿಒ!&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಗೆ ಬರುವ ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಎನ್&zwnj;.ಆರ್&zwnj;.ಪುರ ಹಾಗೂ ಶೃಂಗೇರಿ ವ್ಯಾಪ್ತಿಯಲ್ಲಿ ಸದ್ಯ 45 ಶಾಲಾ ವಾಹನಗಳಿಗೆ ಎಫ್&zwnj;ಸಿ ಇಲ್ಲ. ಇನ್ನೂ ತರೀಕೆರೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ವ್ಯಾಪ್ತಿಯ ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕಿನ 57 ಶಾಲಾ ವಾಹನಗಳು ಎಫ್&zwnj;ಸಿ ಮುಕ್ತಾಯವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ನೋಟಿಸ್&zwnj; ನೀಡಿ ಸುಮ್ಮನಾಗಿದ್ದು, ಎಫ್&zwnj;ಸಿ ಮುಗಿದ ವಾಹನಗಳ ಓಡಾಟ ತಡೆಯುವ ಗೋಜಿಗೆ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ.----&lt;/p&gt;&lt;p&gt;ಎಫ್&zwnj;ಸಿ ಇಲ್ಲದ ಶಾಲಾ ವಾಹನಗಳಿಗೆ ಈಗಾಗಲೇ ನೋಟಿಸ್&zwnj; ನೀಡಲಾಗಿದೆ. ಜತೆಗೆ, ಶಾಲೆ ನವೀಕರಣಕ್ಕೆ ಅರ್ಜಿ ಹಾಕಿದ ಶಾಲಾಗಳ ವಾಹನಗಳ ಕುರಿತು ಪರಿಶೀಲನೆ ನಡೆಸಿ ಅನುಮತಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ತಿಳಿಸಲಾಗಿದೆ. ಜತೆಗೆ, ತಪಾಸಣೆ ವೇಳೆ ಎಫ್&zwnj; ಸಿ ಇಲ್ಲದ ವಾಹನ ಕಂಡು ಬಂದರೆ ಸೀಜ್&zwnj; ಮಾಡಲಾಗುತ್ತಿದೆ.&lt;/p&gt;&lt;p&gt;- ರಾಕೇಶ್&zwnj;, ಪ್ರಾದೇಶಿಕ ಸಾರಿಗೆ ಅಧಿಕಾರಿ, ಚಿಕ್ಕಮಗಳೂರು ವಿಭಾಗ&lt;/p&gt;]]></content:encoded>
            <category>chikkamagalur</category>
            <dc:creator>Naveen Kodase</dc:creator>
            <atom:link href="https://kannada.asianetnews.com/karnataka-districts/chikkamagaluru-school-bus-shock-100-plus-vehicles-running-without-fitness-certificates-kvn/articleshow-psxgx1k"/>
        </item>
        <item>
            <title><![CDATA[₹2 ಕೋಟಿ ರಸ್ತೆ ಎರಡು ತಿಂಗಳಲ್ಲೇ ಢಮಾರ್! ಪೊರಕೆ ಹಿಡಿದು ಗುಡಿಸಿದಾಗ ಕಿತ್ತುಬಂದ ಡಾಂಬರ್, ಜೆಲ್ಲಿಕಲ್ಲು (video)]]></title>
            <link>https://kannada.asianetnews.com/karnataka-districts/chikkamagaluru-rs-2-crore-road-damaged-in-two-months-tavareghatta-sat/articleshow-t3womms</link>
            <guid isPermaLink="true">https://kannada.asianetnews.com/karnataka-districts/chikkamagaluru-rs-2-crore-road-damaged-in-two-months-tavareghatta-sat/articleshow-t3womms</guid>
            <pubDate>Tue, 08 Sep 2026 12:35:24 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಯು ಕೇವಲ ಎರಡು ತಿಂಗಳಲ್ಲೇ ಕಳಪೆ ಕಾಮಗಾರಿಯಿಂದಾಗಿ ಕಿತ್ತುಬರುತ್ತಿದೆ. ಗ್ರಾಮದ ವೃದ್ಧೆಯೊಬ್ಬರು ಕಸ ಗುಡಿಸುವ ಮೂಲಕ ರಸ್ತೆಯ ಕಳಪೆ ಗುಣಮಟ್ಟವನ್ನು ಬಯಲಿಗೆಳೆದಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1zxavc6g7d296cr0k63fhm4,imgname-chikkamagaluru-road-1788851088774.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಸೆ.08): ಸ&lt;/strong&gt;ರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಕೇವಲ ಎರಡು ತಿಂಗಳಲ್ಲೇ ಕಿತ್ತುಬರುತ್ತಿದೆ ಎಂಬ ಆರೋಪ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ಕೇಳಿಬಂದಿದೆ. ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ರಸ್ತೆ ಇದೀಗ ಗುಣಮಟ್ಟದ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವರೇಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರು 30ರಿಂದ 40 ಮನೆಗಳಿರುವ ಗ್ರಾಮಕ್ಕೆ ಎರಡು ತಿಂಗಳ ಹಿಂದಷ್ಟೇ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇದೀಗ ರಸ್ತೆ ಹಲವು ಕಡೆಗಳಲ್ಲಿ ಕಿತ್ತುಬಂದು, ಡಾಂಬರು ಹಾಗೂ ಜಲ್ಲಿ ಹೊರಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಸ ಗುಡಿಸಿದ ವೃದ್ಧೆ; ಹೊರಬಂದ ಜಲ್ಲಿಕಲ್ಲು&lt;/strong&gt;&lt;/h2&gt;&lt;p&gt;ರಸ್ತೆಯ ಕಳಪೆ ಗುಣಮಟ್ಟವನ್ನು ತೋರಿಸಲು ಗ್ರಾಮದ ವೃದ್ಧೆಯೊಬ್ಬರು ರಸ್ತೆಯ ಮೇಲ್ಭಾಗವನ್ನು ಕಸ ಗುಡಿಸಿದ್ದಾರೆ. ಈ ವೇಳೆ ಡಾಂಬರು ಪದರದ ಕೆಳಭಾಗದಲ್ಲಿದ್ದ ಪುಡಿ ಜಲ್ಲಿ ಹಾಗೂ ಕಲ್ಲಿನ ಗುಡ್ಡೆ ಹೊರಬಂದಿರುವ ದೃಶ್ಯ ಗಮನ ಸೆಳೆದಿದೆ. ₹2 ಕೋಟಿ ವೆಚ್ಚದ ರಸ್ತೆ ಗುಣಮಟ್ಟವನ್ನು ಕಸ ಗುಡಿಸುವ ಮೂಲಕವೇ ತೋರಿಸಿದಂತಾಗಿದೆ ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.&lt;/p&gt;&lt;h2&gt;&lt;strong&gt;ಮಳೆಗಾಲದಲ್ಲೇ ರಸ್ತೆ ನಿರ್ಮಾಣವಾಗಿತ್ತಾ?&lt;/strong&gt;&lt;/h2&gt;&lt;p&gt;ರಸ್ತೆ ಕಾಮಗಾರಿ ನಡೆದ ಸಮಯದ ಬಗ್ಗೆಯೂ ಗ್ರಾಮಸ್ಥರು ಪ್ರಶ್ನೆಗಳನ್ನು ಎತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಮಳೆಗಾಲದ ಅವಧಿಯಲ್ಲೇ ರಸ್ತೆ ನಿರ್ಮಾಣ ಮಾಡಲಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದ್ದು, ಮಳೆಯ ಸಂದರ್ಭದಲ್ಲಿ ಡಾಂಬರೀಕರಣ ನಡೆಸಿದ್ದರೆ ರಸ್ತೆ ಎಷ್ಟು ದಿನ ಬಾಳಿಕೆ ಬರಲಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದವರು ಯಾರು? ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದ ಅಧಿಕಾರಿಗಳು ಯಾರು? ಕಾಮಗಾರಿ ಪೂರ್ಣಗೊಂಡ ನಂತರ ಗುಣಮಟ್ಟದ ಪರೀಕ್ಷೆ ನಡೆಸಲಾಗಿತ್ತೇ? ಎಂಬ ಪ್ರಶ್ನೆಗಳು ಇದೀಗ ಗ್ರಾಮಸ್ಥರಲ್ಲಿ ಮೂಡಿವೆ.&lt;/p&gt;&lt;p&gt;&lt;/p&gt;&lt;h2&gt;&lt;strong&gt;ಕಳಪೆ ಕಾಮಗಾರಿಗೆ ಕ್ರಮಕ್ಕೆ ಆಗ್ರಹ&lt;/strong&gt;&lt;/h2&gt;&lt;p&gt;ಸರ್ಕಾರದ ಹಣದಲ್ಲಿ ನಿರ್ಮಿಸಿದ ರಸ್ತೆ ಕೇವಲ ಎರಡು ತಿಂಗಳಲ್ಲೇ ಹಾಳಾಗುತ್ತಿರುವುದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯಲ್ಲವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ತಾವರೇಘಟ್ಟ ಗ್ರಾಮದ ರಸ್ತೆ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಿ, ಕಾಮಗಾರಿಯ ಗುಣಮಟ್ಟ, ಬಳಸಲಾದ ಸಾಮಗ್ರಿಗಳು ಹಾಗೂ ವೆಚ್ಚದ ಕುರಿತು ಪರಿಶೀಲನೆ ನಡೆಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ₹2 ಕೋಟಿ ವೆಚ್ಚದ ರಸ್ತೆ ಎರಡು ತಿಂಗಳಲ್ಲೇ ಕಿತ್ತುಬರುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಹೊರಬರಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-rs-2-crore-road-damaged-in-two-months-tavareghatta-sat/articleshow-t3womms"/>
        </item>
        <item>
            <title><![CDATA[ಮಲೆನಾಡಿನ ಈ ಹಳ್ಳಿ ಹುಡುಗರಿಗೆ ಮದುವೆಯಾಗಲು ಹೆಣ್ಣು ಸಿಕ್ತಿಲ್ಲ; ಕಾರಣ ಈ ಊರಿಗೆ ರಸ್ತೆಯೇ ಸರಿಯಿಲ್ಲ!]]></title>
            <link>https://kannada.asianetnews.com/gallery/karnataka-districts/chikkamagaluru-road-crisis-bride-refused-over-bad-road-villagers-warn-election-boycott-sat-vf3xgkz</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-road-crisis-bride-refused-over-bad-road-villagers-warn-election-boycott-sat-vf3xgkz</guid>
            <pubDate>Tue, 08 Sep 2026 09:47:32 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಮದುವೆ ಸಂಬಂಧವೊಂದು ಮುರಿದುಬಿದ್ದಿದೆ. ಸುಮಾರು 20 ವರ್ಷಗಳಿಂದ ಡಾಂಬರು ಕಾಣದ ಈ ರಸ್ತೆಗಳಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zk7p98p66pryvr4263fks6,imgname-chikkamagaluru-bad-road-boys-get-no-bride-1788840499496.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹಲವು ಗ್ರಾಮಗಳಲ್ಲಿ ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಮದುವೆ ಸಂಬಂಧವೊಂದು ಮುರಿದುಬಿದ್ದಿದೆ. ಸುಮಾರು 20 ವರ್ಷಗಳಿಂದ ಡಾಂಬರು ಕಾಣದ ಈ ರಸ್ತೆಗಳಿಂದಾಗಿ ಗ್ರಾಮಸ್ಥರು, ಶಾಲಾ ಮಕ್ಕಳು ನಿತ್ಯ ಪರದಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರು: &lsquo;ನಿಮ್ಮೂರಿನಲ್ಲಿ ರಸ್ತೆ ಸರಿ ಇಲ್ಲ, ಹೆಣ್ಣು ಕೊಡಲ್ಲ&rsquo; ಎಂಬ ಮಾತು ಕೇಳಿಬರುವ ಪರಿಸ್ಥಿತಿ ಇದೀಗ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ರಸ್ತೆ ಸಂಪರ್ಕದ ದುಸ್ಥಿತಿಯಿಂದಾಗಿ ಒಂದು ಮದುವೆ ಸಂಬಂಧವೇ ಕಳೆದುಹೋಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಎದುರಾಗಿರುವ ತೀವ್ರ ರಸ್ತೆ ಸಮಸ್ಯೆ ಇದೀಗ ಸಾಮಾಜಿಕ ಸಮಸ್ಯೆಯ ರೂಪವನ್ನೂ ಪಡೆದುಕೊಂಡಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಕಳಸ ತಾಲೂಕಿನ ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿವೆ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಗ್ರಾಮಸ್ಥರ ಸಂಚಾರವೇ ದುಸ್ತರವಾಗಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಗ್ರಾಮಸ್ಥರ ಹೇಳಿಕೆಯ ಪ್ರಕಾರ, ಈ ಭಾಗದ ರಸ್ತೆಗಳ ಸ್ಥಿತಿ ಕಂಡು ಹೊರಗಿನ ಕುಟುಂಬವೊಂದು ವಿವಾಹ ಸಂಬಂಧ ಮುಂದುವರಿಸಲು ಹಿಂದೇಟು ಹಾಕಿದೆ. &lsquo;ರಸ್ತೆ ಸರಿಯಿಲ್ಲದ ಊರಿಗೆ ಹೆಣ್ಣು ಕೊಡುವುದಿಲ್ಲ&rsquo; ಎಂಬ ಮನೋಭಾವ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ವಿವಾಹದಂತಹ ವೈಯಕ್ತಿಕ ಸಂಬಂಧಕ್ಕೂ ಗ್ರಾಮದಲ್ಲಿನ ರಸ್ತೆ ಸಮಸ್ಯೆ ಅಡ್ಡಿಯಾಗುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸ್ಥಳೀಯರ ಪ್ರಕಾರ, ಈ ಗ್ರಾಮಗಳ ರಸ್ತೆಗೆ ಸುಮಾರು 20 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಡಾಂಬರೀಕರಣವಾಗಿತ್ತು. ಅದಾದ ಬಳಿಕ ಸಮರ್ಪಕವಾಗಿ ಟಾರ್ ಕಾಮಗಾರಿ ನಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಕಳೆದ 10 ವರ್ಷಗಳಿಂದ ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಎಡೆಯೂರು, ಮರಸಣಿಗೆ, ಮಾವಿನಕೆರೆ ಹಾಗೂ ಕೆ.ಕೆಳಗೂರು ಭಾಗದಲ್ಲಿ ಸುಮಾರು 450ರಿಂದ 500 ಮನೆಗಳು ಇದ್ದು, ಹೆಚ್ಚಿನ ಕುಟುಂಬಗಳು ಕೂಲಿ ಕೆಲಸ ಸೇರಿದಂತೆ ವಿವಿಧ ಜೀವನೋಪಾಯಗಳ ಮೇಲೆ ಅವಲಂಬಿತವಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ದಿನನಿತ್ಯದ ಅಗತ್ಯ ಸೇವೆಗಳಿಗೂ ತೊಂದರೆ ಎದುರಾಗುತ್ತಿದೆ. ಮಳೆಗಾಲದಲ್ಲಿ ವಾಹನ ಸಂಚಾರ ಮತ್ತಷ್ಟು ಅಪಾಯಕಾರಿಯಾಗುತ್ತದೆ ಎಂಬುದು ಸ್ಥಳೀಯರ ಅಳಲು.&lt;/p&gt;&lt;img&gt;&lt;p&gt;ರಸ್ತೆ ಸಮಸ್ಯೆಯ ಪರಿಣಾಮ ಶಿಕ್ಷಣಕ್ಕೂ ತಟ್ಟಿದೆ ಎನ್ನಲಾಗಿದೆ. ಈ ಭಾಗದಲ್ಲಿ ಸುಮಾರು 70ರಿಂದ 80 ಮಕ್ಕಳು ಶಾಲಾ-ಕಾಲೇಜುಗಳಿಗೆ ತೆರಳಲು ಪ್ರತಿದಿನವೂ ಕಷ್ಟಪಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಸಮರ್ಪಕ ರಸ್ತೆ ಇಲ್ಲದ ಕಾರಣ ಮಳೆಗಾಲದಲ್ಲಿ ವಾಹನ ಸೌಲಭ್ಯ, ಶಾಲಾ-ಕಾಲೇಜಿಗೆ ತೆರಳುವಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಗ್ರಾಮಸ್ಥರ ಪ್ರಕಾರ, ಚುನಾವಣೆ ಬಂದಾಗ ರಸ್ತೆ ಸಮಸ್ಯೆಗೆ ಪರಿಹಾರ ನೀಡುವುದಾಗಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರವಸೆ ನೀಡಿದ್ದರು. ಚುನಾವಣೆ ಗೆದ್ದ ಬಳಿಕ &lsquo;ಹಣ ಮಂಜೂರಾಗಿದೆ&rsquo;, &lsquo;ಸ್ಯಾಂಕ್ಷನ್ ಆಗಿದೆ&rsquo; ಎಂಬ ಮಾತುಗಳನ್ನು ಹೇಳುತ್ತಾ ವರ್ಷಗಳು ಕಳೆದಿವೆ. ಆದರೆ ನೆಲಮಟ್ಟದಲ್ಲಿ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದಾಗಿ ರಾಜಕಾರಣಿಗಳ ಭರವಸೆಗಳ ಬಗ್ಗೆ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ವರ್ಷಗಳಿಂದ ಮನವಿ, ಪ್ರತಿಭಟನೆ ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯದಿರುವುದರಿಂದ ಇದೀಗ ಕಠಿಣ ನಿರ್ಧಾರಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ. &lsquo;ರಸ್ತೆ ಅಭಿವೃದ್ಧಿ ಆಗುವವರೆಗೂ ಚುನಾವಣಾ ಸಂದರ್ಭದಲ್ಲಿ ಮತ ಕೇಳಲು ಬರುವ ರಾಜಕಾರಣಿಗಳನ್ನು ಪ್ರಶ್ನಿಸುತ್ತೇವೆ&rsquo; ಎಂಬ ಸಂದೇಶವನ್ನು ಗ್ರಾಮಸ್ಥರು ನೀಡಿದ್ದಾರೆ. ರಸ್ತೆ ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಂಡು, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-road-crisis-bride-refused-over-bad-road-villagers-warn-election-boycott-sat-vf3xgkz"/>
        </item>
        <item>
            <title><![CDATA[Mysuru: ಯಾವ ಬೀದಿಯೂ ನಿಷೇಧಿತವಲ್ಲ, ಯಾವನ್ ಏನ್ ಮಾಡ್ಕೊಳ್ತಾನೋ ನೋಡ್ತೀವಿ; ಖಾಕಿ ವರ್ಸಸ್ ಖಾದಿ ಸಮರಕ್ಕೆ ಸಿ.ಟಿ. ರವಿ ಎಂಟ್ರಿ!]]></title>
            <link>https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2</link>
            <guid isPermaLink="true">https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2</guid>
            <pubDate>Sun, 13 Sep 2026 17:06:13 +0530</pubDate>
            <description><![CDATA[ಟಿ. ನರಸೀಪುರದಲ್ಲಿ ಹಿಂದೂ ಕಾರ್ಯಕರ್ತರಿಗೆ ಇನ್ಸ್&zwnj;ಪೆಕ್ಟರ್ ಧನಂಜಯ್ ಧಮ್ಕಿ ಹಾಕಿದ್ದಾರೆನ್ನಲಾದ ಪ್ರಕರಣಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಯು ಖಾಕಿ ಧರಿಸಿ ಗೂಂಡಾಗಿರಿ ಮಾಡುತ್ತಿದ್ದು, ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರದ ಮೌನವು 'ನಕಲಿ ಜಾತ್ಯತೀತತೆ'ಯನ್ನು ಸಾಬೀತುಪಡಿಸಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2d8srz34fe3n9n86swa877b,imgname-ct-ravi-1789299319779.jpg" type="image/jpeg" height="390" width="690"/>
            <content:encoded><![CDATA[&lt;p&gt;ಟಿ. ನರಸೀಪುರ ಇನ್ಸ್&zwnj;ಪೆಕ್ಟರ್ ಧನಂಜಯ್ ಅವರು ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕಿದ್ದಾರೆನ್ನಲಾದ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ, ಪೊಲೀಸ್ ಅಧಿಕಾರಿಯ ವರ್ತನೆ ಹಾಗೂ ಸರ್ಕಾರದ ಮೌನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ಸ್&zwnj;ಪೆಕ್ಟರ್ ಧನಂಜಯ್ ಅವರ ಮಾತು ಮತ್ತು ನಡವಳಿಕೆ ಸಂಪೂರ್ಣವಾಗಿ ಅಹಂಕಾರದಿಂದ ಕೂಡಿದ್ದು, ಅವರು ಖಾಕಿ ಸಮವಸ್ತ್ರ ತೊಟ್ಟು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ರೋಷಾವೇಷದಿಂದ ಕಿಡಿಕಾರಿದ್ದಾರೆ.&lt;/p&gt;&lt;h2&gt;&lt;strong&gt;ಸಂವಿಧಾನ ಬಾಹಿರ ನಿಲುವು ಮತ್ತು ಮೆರವಣಿಗೆ ಹಕ್ಕು!&lt;/strong&gt;&lt;/h2&gt;&lt;p&gt;ಪ್ರಕರಣದ ಹಿನ್ನೆಲೆಯನ್ನು ಉಲ್ಲೇಖಿಸಿ ಮಾತನಾಡಿದ ಸಿ.ಟಿ. ರವಿ, &quot;ಈ ಭಾರತ ದೇಶದಲ್ಲಿ ಯಾವುದೇ ಬೀದಿಯೂ ನಿಷೇಧಿತ ಬೀದಿಯಲ್ಲ. ಸಾರ್ವಜನಿಕ ರಸ್ತೆಯಲ್ಲಿ ಮಸೀದಿ ಇದೆ ಎಂಬ ಒಂದೇ ಕಾರಣಕ್ಕೆ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಅಥವಾ ಆ ರೀತಿ ಆದೇಶಿಸುವುದು ನಿಮ್ಮ ಭಯವನ್ನು ತೋರಿಸುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಶೋಭಾಯಾತ್ರೆ ಅಥವಾ ಮೆರವಣಿಗೆಗೆ ತಡೆ ಒಡ್ಡುವುದೇ ಸಂಪೂರ್ಣವಾಗಿ ಸಂವಿಧಾನ ಬಾಹಿರ&quot; ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇನ್ಸ್&zwnj;ಪೆಕ್ಟರ್&zwnj; ದೊಡ್ಡ ದೊಡ್ಡ ಮಾತುಗಳನ್ನಾಡಿ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ, ಆದರೆ ಇಂತಹ ಧಮ್ಕಿಗಳಿಗೆ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತರು ಹೆದರುವುದಿಲ್ಲ. ಈ ರೀತಿ ಬೆದರಿಕೆ ಹಾಕುವ ಅಧಿಕಾರಿಗಳನ್ನು ಕಾನೂನಾತ್ಮಕವಾಗಿ ಹಾಗೂ ಸಾಂಘಿಕವಾಗಿ ಹೇಗೆ ಎದುರಿಸಬೇಕು ಎಂಬುದು ನಮಗೂ ಚೆನ್ನಾಗಿ ಗೊತ್ತಿದೆ ಎಂದು ಎಚ್ಚರಿಸಿದರು.&lt;/p&gt;&lt;h3&gt;&lt;strong&gt;ಖರ್ಗೆ ವಿರುದ್ಧ 'ನಕಲಿ ಜಾತ್ಯತೀತತೆ' ಚಾಟಿ!&lt;/strong&gt;&lt;/h3&gt;&lt;p&gt;ಇದೇ ವೇಳೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ಇನ್ಸ್&zwnj;ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು (Suspension) ಮಾಡಬೇಕು ಎಂದು ಆಗ್ರಹಪೂರ್ವಕವಾಗಿ ಮನವಿ ಮಾಡಿದರು. &quot;ಒಂದು ವೇಳೆ ಈ ಅಧಿಕಾರಿಯನ್ನು ಅಮಾನತು ಮಾಡದಿದ್ದರೆ, ಸರ್ಕಾರ ಮತ್ತು ಸಚಿವರು ಸಂಪೂರ್ಣವಾಗಿ ಪಕ್ಷಪಾತಿಗಳು ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತದೆ. ಇದೇ ರೀತಿಯ ಧಮ್ಕಿಯನ್ನು ಏನಾದರೂ ಅನ್ಯಕೋಮಿನವರಿಗೆ ಅಥವಾ ಅಲ್ಪಸಂಖ್ಯಾತರಿಗೆ ಹಾಕಿದ್ದರೆ, ರಾಜ್ಯದ ಕಾಂಗ್ರೆಸ್ ನಾಯಕರು ಏನೇನೋ ಆಗಿದೆ ಎಂಬಂತೆ ಬಾಯಿ ಬಡ್ಕೊಳ್ಳುತ್ತಿದ್ದರು&quot; ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ಮುಂದುವರಿದು, ಈ ವಿಚಾರದಲ್ಲಿ ಸರ್ಕಾರದ ಮೌನವನ್ನು ಪ್ರಶ್ನಿಸಿದ ಅವರು, &quot;ನಿಮ್ಮ ಈ ಮೌನವೇ ನಿಮ್ಮ ನಕಲಿ ಜಾತ್ಯಾತೀತತೆಯ ವಿರುದ್ಧ ಇರುವ ದೊಡ್ಡ ಅಸ್ತ್ರ. ಈ ಘಟನೆಯಿಂದ ನಿಮ್ಮ ಜಾತ್ಯತೀತತೆ ಸಂಪೂರ್ಣವಾಗಿ ಸತ್ತು ಹೋಗಿದೆ ಎಂಬುದು ಸಾಬೀತಾಗಿದೆ&quot; ಎಂದು ಕುಟುಕಿದರು.&lt;/p&gt;&lt;h3&gt;&lt;strong&gt;ಕಾರ್ಯಕರ್ತರಿಗೆ ಬೆಂಬಲದ ಅಭಯ!&lt;/strong&gt;&lt;/h3&gt;&lt;p&gt;ಟಿ. ನರಸೀಪುರದ ಸ್ಥಳೀಯ ಜನತೆ ಮತ್ತು ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬಿದ ಸಿ.ಟಿ. ರವಿ, &quot;ಸ್ಥಳೀಯ ಸಾರ್ವಜನಿಕರು ಮತ್ತು ನಮ್ಮ ಕಾರ್ಯಕರ್ತರು ಅಪೇಕ್ಷೆ ಪಟ್ಟರೆ, ನಾವೇ ಖುದ್ದಾಗಿ ಟಿ. ನರಸೀಪುರಕ್ಕೆ ಬಂದು ನಿಲ್ಲುತ್ತೇವೆ. ಯಾವ ಅಧಿಕಾರಿ ಏನು ಮಾಡಿಕೊಳ್ಳುತ್ತಾನೋ, ನಾವೂ ನೋಡ್ತೀವಿ&quot; ಎಂದು ಸವಾಲು ಎಸೆದಿದ್ದಾರೆ. ಖಾಕಿ ಅಧಿಕಾರಿಯೋರ್ವನ ಅಹಂಕಾರದ ಮಾತುಗಳು ಹಾಗೂ ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರ ಈ ಕಠಿಣ ಎಚ್ಚರಿಕೆಗಳು ಮೈಸೂರು ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಸರ್ಕಾರವು ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದರ ಮೇಲೆ ಎಲ್ಲರ ಕಣ್ಣ ನೆಟ್ಟಿದೆ.&lt;/p&gt;]]></content:encoded>
            <category>chikkamagalur</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/ct-ravi-t-narasipura-khaki-vs-khadi-police-bjp-clash-inspector-dhananjaya-overnight-protest-ct-ravi-bmk/articleshow-y0uk3r2"/>
        </item>
    </channel>
</rss>
