<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 06 Apr 2026 16:53:58 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[ಬಸ್ಸಿನ ಮೇಲೆ ಡಿ-ಗ್ಯಾಂಗ್ ಕ್ರೇಜ್: ಚಿಕ್ಕಮಗಳೂರಿನಲ್ಲಿ ದೇಶದ್ರೋಹಿಯನ್ನು ಹೀರೋ ರೀತಿ ಬಿಂಬಿಸಿದ ಬಸ್ ಜಪ್ತಿ!]]></title>
            <link>https://kannada.asianetnews.com/gallery/karnataka-districts/chikkamagaluru-police-seize-bus-featuring-dawood-ibrahim-posters-d-gang-stickers-san-0gg5kf1</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-police-seize-bus-featuring-dawood-ibrahim-posters-d-gang-stickers-san-0gg5kf1</guid>
            <pubDate>Thu, 26 Mar 2026 16:49:43 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ, ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ವೈಭವೀಕರಿಸುವ ಚಿತ್ರ ಮತ್ತು ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದಿವೆ. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmmxm75zfvmsp1r77hjynb49,imgname-chikkamagaluru-dawood-bus--6--1774523653311.png" type="image/jpeg" height="390" width="690"/>
            <content:encoded><![CDATA[ಚಿಕ್ಕಮಗಳೂರಿನಲ್ಲಿ, ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ವೈಭವೀಕರಿಸುವ ಚಿತ್ರ ಮತ್ತು ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದಿವೆ. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.&lt;img&gt;&lt;p&gt;ಚಿಕ್ಕಮಗಳೂರಿನಲ್ಲಿ ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂ ಚಿತ್ರವಿರುವ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ಹೀರೊ ರೀತಿ ಬಿಂಬಿಸುವ ಚಿತ್ರ ಹಾಗೂ ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಚಿಕ್ಕಮಗಳೂರಿನ ಎನ್.ಎಂ.ಸಿ. (NMC) ಸರ್ಕಲ್&zwnj;ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;ಬಸ್ಸಿನ ಮೇಲೆ &lsquo;ಲೈವ್ ಬೈ ಎ ಗನ್, ಡೈ ಬೈ ಎ ಗನ್&rsquo; (Live by a gun, Die by a gun) ಎಂಬ ಪ್ರಚೋದನಾಕಾರಿ ಸ್ಟಿಕರ್ ಅಂಟಿಸಲಾಗಿತ್ತು. ಅಲ್ಲದೆ &lsquo;ಕ್ರೈಮ್ ಲಾರ್ಡ್ ಕ್ರಾನಿಕಲ್ಸ್&rsquo; ಹಾಗೂ &lsquo;ದಾವುದ್ ದಿ ರಿಯಲ್ ಡಾನ್&rsquo; ಎಂಬ ಬರಹಗಳು ಕಂಡುಬಂದಿವೆ.&lt;/p&gt;&lt;img&gt;&lt;p&gt;ಬಸ್ಸಿನ ಹಿಂಭಾಗದಲ್ಲಿ &lsquo;ಡಿ ಗ್ಯಾಂಗ್ ಆಫ್ ಮುಂಬೈ&rsquo; (D-Gang of Mumbai) ಎಂದು ಬರೆಯಲಾಗಿದ್ದು, &lsquo;ಬಾಂಬೆ ಅಂಡರ್ ವರ್ಲ್ಡ್ ದಾವುದ್ ರಿಯಲ್ ಡಾನ್&rsquo; ಎಂದು ಪೇಂಟ್ ಮಾಡಿಸುವ ಮೂಲಕ ದೇಶದ್ರೋಹಿ ಚಟುವಟಿಕೆಯ ಡಾನ್&zwnj;ನನ್ನು ವೈಭವೀಕರಿಸಲಾಗಿತ್ತು.&lt;/p&gt;&lt;img&gt;&lt;p&gt;ಬಸ್ಸಿನ ಮೇಲೆ ದಾವುದ್&zwnj;ನನ್ನು ಹೀರೋನಂತೆ ಬಿಂಬಿಸಿರುವುದನ್ನು ಕಂಡ ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟಿಸಿದ ಬೆನ್ನಲ್ಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ವಶಕ್ಕೆ ಪಡೆದು ಠಾಣೆಯತ್ತ ಕೊಂಡೊಯ್ದಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಈ ವಿವಾದಿತ ಬಸ್ಸನ್ನು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಬಸ್ ಮಾಲೀಕರು ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.&lt;/p&gt;]]></content:encoded>
            <category>chikkamagalur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/karnataka-districts/chikkamagaluru-police-seize-bus-featuring-dawood-ibrahim-posters-d-gang-stickers-san-0gg5kf1"/>
        </item>
        <item>
            <title><![CDATA[ತಂದೆಯ ಸಾವಿನ ದುಃಖದಲ್ಲೂ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಬರೆದ ವಿದ್ಯಾರ್ಥಿ!]]></title>
            <link>https://kannada.asianetnews.com/karnataka-districts/student-sits-for-sslc-maths-exam-hours-after-father-s-death-at-biruru-chikkamagaluru-rav/articleshow-0uydgan</link>
            <guid isPermaLink="true">https://kannada.asianetnews.com/karnataka-districts/student-sits-for-sslc-maths-exam-hours-after-father-s-death-at-biruru-chikkamagaluru-rav/articleshow-0uydgan</guid>
            <pubDate>Sun, 29 Mar 2026 11:39:17 +0530</pubDate>
            <description><![CDATA[ಬೀರೂರು ತಾಲೂಕಿನ ಬುಕ್ಕಸಾಗರ ಗ್ರಾಮದ ವಿದ್ಯಾರ್ಥಿ ಭರತ್, ತಂದೆಯ ಅಕಾಲಿಕ ಮರಣದ ದುಃಖದ ನಡುವೆಯೂ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯನ್ನು ಬರೆದಿದ್ದಾನೆ. ಶನಿವಾರ ಬೆಳಿಗ್ಗೆ ಗಣಿತ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmw31m9skym7zd2agqy5ksby,imgname----------------------83--1774764216633.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀರೂರು(ಮಾ.29):&lt;/strong&gt; ತಂದೆಯ ಅಕಾಲಿಕ ಸಾವಿನ ನೋವಿನಲ್ಲೂ ಪುತ್ರ ಭರತ್ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯನ್ನು ಬರೆದ ಮನಮಿಡಿಯುವ ಘಟನೆ ಶನಿವಾರ ತಾಲ್ಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಬುಕ್ಕಸಾಗರ ಗ್ರಾಮದ ಕೂಲಿ ಕಾರ್ಮಿಕ ನವೀನ್ ಅನಾರೋಗ್ಯದಿಂದ ಶುಕ್ರವಾರ ಸಂಜೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಭರತ್ ಇಡೀ ರಾತ್ರಿ ದುಃಖಿಸಿದ್ದಾನೆ. ಆ ನೋವಿನಲ್ಲೇ ಶನಿವಾರ ಬೆಳಿಗ್ಗೆ ಗಣಿತ ವಿಷಯದ ಪರೀಕ್ಷೆ ಬರೆದು, ಮಧ್ಯಾಹ್ನದ ನಂತರ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾನೆ.&lt;/p&gt;&lt;p&gt;ಬೀರೂರು ಶೈಕ್ಷಣಿಕ ವಲಯದ ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಬಿಸಲೇಹಳ್ಳಿ&zwnj; ಗ್ರಾಮದ ಬಾಬು ನರೇಂದ್ರ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ. ಸಖರಾಯಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈಗಾಗಲೇ ಮೂರು ವಿಷಯಗಳ ಪರೀಕ್ಷೆಯನ್ನು ಬರೆದಿದ್ದು. ನಾಲ್ಕನೇ ವಿಷಯದ ಪರೀಕ್ಷೆಯನ್ನು ಬರೆಯುವ ಸಿದ್ಧತೆಯಲ್ಲಿದ್ದ ಭರತ್ ಗೆ ತಂದೆಯ ಸಾವು ತೀವ್ರ ಆಘಾತ ಉಂಟು ಮಾಡಿದೆ.ವಿಷಯ ತಿಳಿದ ಶಾಲಾ ಶಿಕ್ಷಕರು, ಶಾಲೆಯ ಎಸ್ಡಿಎಂಸಿ ಸದಸ್ಯರು, ಸ್ಥಳೀಯ ಗ್ರಾಪಂ ಮಾಜಿ&zwnj; ಅಧ್ಯಕ್ಷ ನಾಗರಾಜ್ ಶನಿವಾರ ಬೆಳಿಗ್ಗೆ ವಿದ್ಯಾರ್ಥಿಯ ಮನೆಗೆ ಹೋಗಿ, ವಿದ್ಯಾರ್ಥಿಗೆ ಸಮಾಧಾನ ಹೇಳಿ, ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬಿದ್ದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/student-sits-for-sslc-maths-exam-hours-after-father-s-death-at-biruru-chikkamagaluru-rav/articleshow-0uydgan"/>
        </item>
        <item>
            <title><![CDATA[ಮಲೆನಾಡಿನಲ್ಲೀಗ ಕಾಫಿ ಹೂವುಗಳ ಘಮಲು: ಭೂಮಿಗೆ ಇಳಿದ ನಕ್ಷತ್ರಪುಂಜದಂತೆ ಕಂಗೊಳಿಸುತ್ತಿದೆ ಕಾಫಿನಾಡು]]></title>
            <link>https://kannada.asianetnews.com/state/karnataka-tourism-chikkmagaluru-coffee-blossom-season-beauty-malenadu-tourism-sat/articleshow-0y7c7sx</link>
            <guid isPermaLink="true">https://kannada.asianetnews.com/state/karnataka-tourism-chikkmagaluru-coffee-blossom-season-beauty-malenadu-tourism-sat/articleshow-0y7c7sx</guid>
            <pubDate>Sun, 29 Mar 2026 14:49:08 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಕಾಫಿ ಗಿಡಗಳು ಬಿಳಿ ಹೂವುಗಳಿಂದ ಕಂಗೊಳಿಸುತ್ತಿವೆ. ಹಾಲಿನ ನೊರೆಯಂತೆ ಕಾಣುವ ಈ ಹೂವುಗಳು ಇಡೀ ಮಲೆನಾಡಿಗೆ ಹೊಸ ಸೌಂದರ್ಯ ಮತ್ತು ಸುಗಂಧವನ್ನು ತಂದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ದೃಶ್ಯ ವೈಭವವು ರೈತರಿಗೆ ಉತ್ತಮ ಫಸಲಿನ ಭರವಸೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmwdg9nhct5nj5tb2vf3b5f2,imgname-chikkamagaluru-coffee-flower--1--1774775183025.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮಾ.29): ಹ&lt;/strong&gt;ಚ್ಚ ಹಸಿರಿನ ಪರ್ವತ ಶ್ರೇಣಿಗಳು, ಮಂಜಿನ ಮುಸುಕು, ಸುರಿಯುವ ಜರಿಗಳಿಗೆ ಹೆಸರಾದ ಕಾಫಿನಾಡು ಚಿಕ್ಕಮಗಳೂರು ಈಗ ಹೊಸ ಅವತಾರ ತಾಳಿದೆ. ಇಡೀ ಮಲೆನಾಡು ಬಿಳಿ ಬಣ್ಣದ ಚಾದರ ಹೊದ್ದಂತೆ ಕಾಣುತ್ತಿದ್ದು, ಎತ್ತ ನೋಡಿದರೂ ಕಾಫಿ ಹೂವುಗಳ ಸುಗಂಧ ಮೈಮನ ತಣಿಸುತ್ತಿದೆ. ಇತ್ತೀಚೆಗೆ ಸುರಿದ ಹದವಾದ ಮಳೆಯ ಸಿಂಚನಕ್ಕೆ ಕಾಫಿ ಗಿಡಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿವೆ.&lt;/p&gt;&lt;h3&gt;&lt;strong&gt;ಹಾಲಿನ ನೊರೆಯಂತೆ ಕಂಗೊಳಿಸುತ್ತಿರುವ ತೋಟಗಳು:&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಮಲೆನಾಡಿನ ಅರೇಬಿಕಾ ಮತ್ತು ರೊಬೊಸ್ಟಾ ತೋಟಗಳಲ್ಲಿ ಕಾಫಿ ಗಿಡಗಳು ಹಾಲಿನ ನೊರೆಯಂತೆ ಬಿಳಿ ಹೂವುಗಳನ್ನು ಹೊತ್ತು ನಿಂತಿವೆ. ಸಾಮಾನ್ಯವಾಗಿ ಬೇಸಿಗೆಯ ಆರಂಭದಲ್ಲಿ ಸುರಿಯುವ 'ಕಾಫಿ ಹೂವಿನ ಮಳೆ' (Blossom Showers) ಈ ಅದ್ಭುತಕ್ಕೆ ಕಾರಣವಾಗಿದೆ. ಮಳೆಯ ಹನಿಗಳು ಕಾಫಿ ಗಿಡದ ಮೊಗ್ಗುಗಳನ್ನು ಸ್ಪರ್ಶಿಸುತ್ತಿದ್ದಂತೆ, ಕೆಲವೇ ದಿನಗಳಲ್ಲಿ ತೋಟಗಳೆಲ್ಲಾ ಬಿಳಿಯಾಗಿ ಮಾರ್ಪಟ್ಟಿವೆ. ಈ ದೃಶ್ಯವು ರಸ್ತೆಯ ಇಕ್ಕೆಲಗಳಲ್ಲಿ ಸಾಗುವ ದಾರಿಹೋಕರು ಮತ್ತು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.&lt;/p&gt;&lt;h2&gt;&lt;strong&gt;ಮಂತ್ರಮುಗ್ಧವಾಗಿಸುವ ಸುಗಂಧ ಮತ್ತು ಜೀವಕಳೆ:&lt;/strong&gt;&lt;/h2&gt;&lt;p&gt;ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕಾಫಿ ತೋಟಗಳಲ್ಲಿ ಅರಳಿರುವ ಈ ಹೂವುಗಳು ಕೇವಲ ದೃಶ್ಯ ವೈಭವವನ್ನಷ್ಟೇ ಅಲ್ಲದೆ, ವಿಶಿಷ್ಟವಾದ ಸುಗಂಧವನ್ನೂ ಬೀರಲಾರಂಭಿಸಿವೆ. ಈ ಹೂವುಗಳ ಮಕರಂದವನ್ನು ಹೀರುತ್ತಿರುವ ಜೇನುನೊಣಗಳು ಮತ್ತು ದುಂಬಿಗಳ ಸಾಲು ಪರಿಸರಕ್ಕೆ ಹೊಸ ಜೀವಕಳೆ ತುಂಬಿವೆ. ಕಾಫಿ ಹೂವಿನ ಪರಿಮಳವು ಮಲ್ಲಿಗೆಯ ಸುಗಂಧದಷ್ಟೇ ತೀವ್ರವಾಗಿದ್ದು, ಇಡೀ ಪ್ರದೇಶವನ್ನೇ ಒಂದು ನೈಸರ್ಗಿಕ ಪರ್ಫ್ಯೂಮ್ ಶಾಪ್&zwnj;ನಂತೆ ಮಾಡಿದೆ.&lt;/p&gt;&lt;h2&gt;&lt;strong&gt;ಮೊಗ್ಗಿನ ಜಡೆಯಂತೆ ಕಾಣುವ ಕಾಫಿ ಗಿಡಗಳು:&lt;/strong&gt;&lt;/h2&gt;&lt;p&gt;ಕಳೆದ ವರ್ಷದ ಹವಾಮಾನ ಬದಲಾವಣೆ ಮತ್ತು ಅಕಾಲಿಕ ಮಳೆಯ ಪ್ರಭಾವದಿಂದ ಈ ಬಾರಿ ಕಾಫಿ ಹೂವುಗಳು ನಿರೀಕ್ಷೆಗಿಂತ ಸ್ವಲ್ಪ ಬೇಗನೇ ಅರಳಿದ್ದು, ಗಿಡಗಳ ಮೇಲೆ ಮೊಗ್ಗಿನ ಜಡೆಯಂತೆ ಸಾಲು ಸಾಲಾಗಿ ಕಾಣಿಸುತ್ತಿವೆ. ಮಂಜಿನ ಹನಿಗಳ ನಡುವೆ ಮಿನುಗುವ ಈ ಹೂವಿನ ದಳಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಮತ್ತಷ್ಟು ಹೊಳಪನ್ನು ಪಡೆದುಕೊಳ್ಳುತ್ತವೆ. ಪ್ರವಾಸಿಗರಿಗೆ ಕಾಫಿನಾಡಿನ ಈ ಸೌಂದರ್ಯವು ಒಂದು ಮರೆಯಲಾಗದ ಸುಂದರ ಅನುಭವವನ್ನು ನೀಡುತ್ತಿದೆ.&lt;/p&gt;&lt;h3&gt;&lt;strong&gt;ಪ್ರವಾಸಿಗರ ಪಾಲಿಗೆ ಸ್ವರ್ಗ:&lt;/strong&gt;&lt;/h3&gt;&lt;p&gt;ಸದ್ಯ ಚಿಕ್ಕಮಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ದಾರಿಯುದ್ದಕ್ಕೂ ಸಿಗುವ ಕಾಫಿ ತೋಟಗಳ ಮುಂದೆ ನಿಂತು ಫೋಟೋಗಳನ್ನು ತೆಗೆದುಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ. ತಣ್ಣನೆಯ ಗಾಳಿಯೊಂದಿಗೆ ಬೆರೆತಿರುವ ಈ ಹೂವುಗಳ ಪರಿಮಳವು ಜನರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಕೃಷಿಕರ ಪಾಲಿಗೆ ಈ ಹೂವುಗಳು ಸಮೃದ್ಧ ಫಸಲಿನ ಸಂಕೇತವಾದರೆ, ಪ್ರಕೃತಿ ಪ್ರೇಮಿಗಳಿಗೆ ಇದು ಕಾಣದ ಲೋಕದ ಸೌಂದರ್ಯದಂತೆ ಭಾಸವಾಗುತ್ತಿದೆ.&lt;/p&gt;&lt;p&gt;ನೀವು ಕೂಡ ಪ್ರಕೃತಿಯ ಈ ಅಪೂರ್ವ ಅನಾವರಣವನ್ನು ಕಣ್ಣುತುಂಬಿಕೊಳ್ಳಬೇಕೆಂದರೆ ಈಗಲೇ ಕಾಫಿನಾಡಿನತ್ತ ಪಯಣ ಬೆಳೆಸಬಹುದು. ಆದರೆ ನೆನಪಿರಲಿ, ಕಾಫಿ ಹೂವುಗಳ ಆಯಸ್ಸು ಕೇವಲ ಕೆಲವು ದಿನಗಳು ಮಾತ್ರ! ಆ ಸುಂದರ ಘಮಲು ಮಾಸುವ ಮುನ್ನವೇ ಮಲೆನಾಡಿನ ಸೊಬಗನ್ನು ಸವಿಯಿರಿ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-tourism-chikkmagaluru-coffee-blossom-season-beauty-malenadu-tourism-sat/articleshow-0y7c7sx"/>
        </item>
        <item>
            <title><![CDATA[ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ನಾಗಾಲ್ಯಾಂಡ್ ಯುವತಿ ದುರಂತ ಅಂತ್ಯ, ಡೈರಿಯಲ್ಲಿ ಮಹತ್ವದ ಸುಳಿವು]]></title>
            <link>https://kannada.asianetnews.com/karnataka-districts/suspicious-death-of-nagaland-woman-at-chikkamagaluru-resort-sparks-investigation/articleshow-39qqp6b</link>
            <guid isPermaLink="true">https://kannada.asianetnews.com/karnataka-districts/suspicious-death-of-nagaland-woman-at-chikkamagaluru-resort-sparks-investigation/articleshow-39qqp6b</guid>
            <pubDate>Wed, 25 Mar 2026 07:25:06 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ರೆಸಾರ್ಟ್&zwnj;ನಲ್ಲಿ ನಾಗಾಲ್ಯಾಂಡ್ ಯುವತಿ ದುರಂತ ಅಂತ್ಯ, ಡೈರಿಯಲ್ಲಿ ಮಹತ್ವದ ಸುಳಿವು ಸಿಕ್ಕಿದೆ. ರೆಸಾರ್ಟ್&zwnj;ನಲ್ಲಿ ಕೆಲಸಕ್ಕಿದ್ದ ಯುವತಿಗೆ ಇಬ್ಬರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmhb0evahaxbyp9ej7sa5h3g,imgname-chikkamagaluru-resort-death-case-1774403468138.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.25) &lt;/strong&gt;ನಾಗಾಲ್ಯಾಂಡ್ ಮೂಲದ ಯುವತಿ ಕಾಫಿನಾಡು ಎಂದೇ ಗುರುತಿಸಿಕೊಂಡಿರುವ ಚಿಕ್ಕಮಗಳೂರಿನಲ್ಲಿ ದುರಂತ ಅಂತ್ಯಕಂಡಿದ್ದಾರೆ. ನಾಗಾಲ್ಯಾಂಡ್&zwnj;ನಿಂದ ಬಂದು ಚಿಕ್ಕಮಗಳೂರಿನ ಗ್ಲೋಬಲ್ ವಿಲೇಜ್ ರೆಸಾರ್ಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಲಿನ್ಸುಲಾ ಆತ್ಮ**ತ್ಯೆಗೆ ಶರಣಾಗಿದ್ದಾರೆ. 22 ವರ್ಷದ ಲಿನ್ಸುಲಾಗೆ ಇಬ್ಬರು ಕಿರಕುಳ ನೀಡಿರುವ ಆರೋಪ ಕೇಳಿಬಂದಿದೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ತೀವ್ರಗೊಂಡ ಕಾರಣ ಯುವತಿ ಬದುಕು ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ಲಿನ್ಸುಲಾ ಡೈರಿಯಲ್ಲಿ ಇಬ್ಬರ ಹೆಸರು ಉಲ್ಲೇಖ&lt;/h2&gt;&lt;p&gt;ಲಿನ್ಸುಲಾ ರೆಸಾರ್ಟ್&zwnj;ನಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಇಬ್ಬರು ಯುವಕರಾದ ರಾಜೇಶ್ ಹಾಗೂ ತೇಜಸ್ ಲಿನ್ಸುಲಾಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಲಿನ್ಸುಲಾ ತಮ್ಮ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ. 22 ವರ್ಷದ ಲಿನ್ಸುಲಾ ಹಿಂದೆ ಸುತ್ತುತ್ತಿದ್ದ ಈ ಇಬ್ಬರು ಪ್ರೀತಿ, ಪ್ರೇಮದ ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದರು. ಈ ಕುರಿತು ಲಿನ್ಸುಲಾ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಗ್ಲೋಬಲ್ ವಿಲೇಜ್ ರೆಸಾರ್ಟ್&zwnj;ನಲ್ಲಿ ತಾವು ಕೆಲಸ ಮಾಡುತ್ತಾ ಅನುಭವಿಸಿರುವ ನೋವುಗಳ ಬಗ್ಗೆಯೂ ಡೈರಿಯಲ್ಲಿ ಬರೆದುಕೊಂಡಿದ್ದಾರೆ. ಊರು ಬಿಟ್ಟು ಬೇರೆ ರಾಜ್ಯಕ್ಕೆ ಬಂದು ಕೆಲಸ ಮಾಡಿ ಜೀವನ ಕಟ್ಟಿಕೊಳ್ಳುವ ಕನಸು ಹೊತ್ತಿದ್ದರೆ, ಇಲ್ಲಿ ಆಗುತ್ತಿರುವ ಕಿರುಕುಳ ತೀವ್ರಗೊಳ್ಳುತ್ತಿದೆ ಎಂದು ಡೈರಿಯಲ್ಲಿ ಬರೆದಿದ್ದಾರೆ ಎನ್ನಲಾಗುತ್ತಿದೆ.&lt;/p&gt;&lt;p&gt;ಕುಟುಂಬ ನಿರ್ವಹಣೆ, ಪೋಷಕರ ಆರೈಕೆ, ಅವರ ಆರೋಗ್ಯ ಸೇರಿದಂತೆ ಹಲವು ಜವಾಬ್ದಾರಿಗಳು ಲಿನ್ಸುಲಾ ಮೇಲಿತ್ತು. ಹೀಗಾಗಿ ಕಿರಿಕುಳ ನೀಡುತ್ತಿದ್ದರೂ ಸಹಿಸಿಕೊಂಡು ಕೆಲಸ ಮಾಡುತ್ತಿದ್ದರು. ತಿಂಗಳ ವೇತನದಲ್ಲಿ ಹಲವು ಜವಾಬ್ದಾರಿ ನಿರ್ವಹಿಸಬೇಕಿದ್ದ ಕಾರಣ ಉದ್ಯೋಗ, ವೇತನ ಕುರಿತು ಆತಂಕಗೊಂಡಿದ್ದರು. ಹೀಗಾಗಿ ಯುವಕರ ಕಿರುಕುಳದ ನಡುವೆ ಕೆಲಸ ಮುಂದುವರಿಸಿದ್ದರು. ಆದರೆ ಅತೀಯಾದ ಕಿರುಕುಳದಿಂದ ಬದುಕು ಅಂತ್ಯಗೊಳಿಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿದೆ.&lt;/p&gt;&lt;h2&gt;ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲು&lt;/h2&gt;&lt;p&gt;ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ನಾಗಲ್ಯಾಂಡ್&zwnj;ನ ಲಶಿಲಾ ಇಂಚುಗರ್ ಎಂಬುವವರು ಬಸವನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಡೈರಿ ವಶಪಡಿಸಿಕೊಂಡಿದ್ದಾರೆ. ನಾಗಾಲ್ಯಾಂಡ್&zwnj;ನ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chikkamagalur</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/suspicious-death-of-nagaland-woman-at-chikkamagaluru-resort-sparks-investigation/articleshow-39qqp6b"/>
        </item>
        <item>
            <title><![CDATA[ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ 'ವಿದ್ಯಾ ಕಾಫಿ' ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ!]]></title>
            <link>https://kannada.asianetnews.com/karnataka-districts/chikkamagaluru-aldur-vidya-coffee-shyam-prasad-builds-govt-hospital-kannada-news-sat/articleshow-4spp086</link>
            <guid isPermaLink="true">https://kannada.asianetnews.com/karnataka-districts/chikkamagaluru-aldur-vidya-coffee-shyam-prasad-builds-govt-hospital-kannada-news-sat/articleshow-4spp086</guid>
            <pubDate>Tue, 31 Mar 2026 18:50:39 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ 'ವಿದ್ಯಾ ಕಾಫಿ' ಎಂಬ ಖಾಸಗಿ ಸಂಸ್ಥೆಯು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಮುಂದಾಗಿದೆ. ಸಂಸ್ಥೆಯು ಕೇವಲ ಎಂಟು ತಿಂಗಳಲ್ಲಿ ಆಸ್ಪತ್ರೆ ನಿರ್ಮಿಸುವುದಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn20b8gfqrhq0774rz679wvj,imgname-chikkamagaluru-alduru-hospital-1774962713102.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು&zwnj; ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮಾ.31): ಸಾ&lt;/strong&gt;ಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಸರ್ಕಾರ ಮತ್ತು ಜನಪ್ರತಿನಿಧಿಗಳೇ ಬೆರಗಾಗುವಂತಹ ಕೆಲಸಕ್ಕೆ ಕೈಹಾಕಿದೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು 'ವಿದ್ಯಾ ಕಾಫಿ' ಸಂಸ್ಥೆ ಮುಂದೆ ಬಂದಿದ್ದು, ಇಂದು ನೂತನ ಕಟ್ಟಡಕ್ಕೆ ಅದ್ದೂರಿಯಾಗಿ ಭೂಮಿ ಪೂಜೆ ನೆರವೇರಿಸಲಾಗಿದೆ.&lt;/p&gt;&lt;h3&gt;&lt;strong&gt;ಮಾದರಿಯಾದ ವಿದ್ಯಾ ಕಾಫಿ ಸಂಸ್ಥೆ:&lt;/strong&gt;&lt;/h3&gt;&lt;p&gt;ಆಲ್ದೂರು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಕಾಮಗಾರಿಗೆ 'ವಿದ್ಯಾ ಕಾಫಿ ಮತ್ತು ಹರ್ಬ್ ಪ್ರೈವೆಟ್ ಲಿಮಿಟೆಡ್' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಶ್ಯಾಮ್ ಪ್ರಸಾದ್ ಹಾಗೂ ಅವರ ಪತ್ನಿ ವೀಣಾ ಶ್ಯಾಮ್ ಪ್ರಸಾದ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಉಪಸ್ಥಿತರಿದ್ದು, ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.&lt;/p&gt;&lt;h3&gt;&lt;strong&gt;ಕೂಲಿ ಕಾರ್ಮಿಕರಿಗೆ ವರದಾನ:&lt;/strong&gt;&lt;/h3&gt;&lt;p&gt;ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶ್ಯಾಮ್ ಪ್ರಸಾದ್ ಅವರು, 'ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಬಡ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿದ್ದಾರೆ. ಅವರಿಗೆ ತುರ್ತು ಸಂದರ್ಭದಲ್ಲಿ ಗುಣಮಟ್ಟದ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಒದಗಿಸುವುದೇ ನಮ್ಮ ಗುರಿಯಾಗಿದೆ' ಎಂದು ತಿಳಿಸಿದರು. ಆಲ್ದೂರಿನ ಜನರ ಸಹಕಾರ ಮತ್ತು ಶಾಸಕಿಯರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;8 ತಿಂಗಳಲ್ಲಿ ಆಸ್ಪತ್ರೆ ಸಿದ್ಧ:&lt;/strong&gt;&lt;/h2&gt;&lt;p&gt;ಈ ಆಸ್ಪತ್ರೆ ನಿರ್ಮಾಣಕ್ಕೆ ಕೇವಲ ಎಂಟು ತಿಂಗಳ ಗಡುವು ವಿಧಿಸಿಕೊಳ್ಳಲಾಗಿದೆ. ಮುಂದಿನ ಸಂಕ್ರಾಂತಿ ಹಬ್ಬದ ವೇಳೆಗೆ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ವಿಶೇಷವೆಂದರೆ, ಆಸ್ಪತ್ರೆಯನ್ನು ಕೇವಲ ನಿರ್ಮಿಸಿ ಕೊಡುವುದು ಮಾತ್ರವಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನು ಕೂಡ ಸಂಸ್ಥೆಯೇ ವಹಿಸಿಕೊಳ್ಳಲಿದೆ. ವಿದ್ಯಾ ಕಾಫಿ ಸಂಸ್ಥೆಯು ಈಗಾಗಲೇ ಚಿಕ್ಕಮಗಳೂರಿನ ಹಿರೇಮಂಗಳೂರು ಮತ್ತು ಬೇಲೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟು ಜನೋಪಕಾರಿ ಕೆಲಸ ಮಾಡಿದೆ.&lt;/p&gt;&lt;h3&gt;&lt;strong&gt;ಜಾಗತಿಕ ಮಟ್ಟದಲ್ಲಿ ವಿದ್ಯಾ ಕಾಫಿ:&lt;/strong&gt;&lt;/h3&gt;&lt;p&gt;ವಿದ್ಯಾ ಕಾಫಿ ಸಂಸ್ಥೆಯು ಇನ್&zwnj;ಸ್ಟಂಟ್ ಕಾಫಿ ಮತ್ತು ಗಿಡಮೂಲಿಕೆಯುಕ್ತ ಕಾಫಿ ಸಂಶೋಧನೆಯಲ್ಲಿ ತೊಡಗಿದ್ದು, ತನ್ನ ಉತ್ಪನ್ನಗಳನ್ನು ಅಮೆರಿಕ, ಯುರೋಪ್ ಮತ್ತು ಗಲ್ಫ್ ದೇಶಗಳಿಗೆ ರಫ್ತು ಮಾಡುತ್ತಿದೆ. ಈ ಸಂಸ್ಥೆಯ ಮೂಲಕ ನೂರಾರು ಜನರಿಗೆ ಉದ್ಯೋಗಾವಕಾಶ ದೊರೆತಿದೆ. ತಾವು ಗಳಿಸಿದ ಲಾಭದ ಒಂದು ಪಾಲನ್ನು ಸಮಾಜದ ಆರೋಗ್ಯ ಸುಧಾರಣೆಗೆ ಬಳಸುತ್ತಿರುವುದು ಆಲ್ದೂರು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;h3&gt;&lt;strong&gt;ಗಣ್ಯರಿಂದ ಅಭಿನಂದನೆ:&lt;/strong&gt;&lt;/h3&gt;&lt;p&gt;ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಆಸ್ಪತ್ರೆಯ ಅವಶ್ಯಕತೆಯನ್ನು ಶ್ಯಾಮ್ ಪ್ರಸಾದ್ ಅವರ ಗಮನಕ್ಕೆ ತಂದು ಅದನ್ನು ಸಾಕಾರಗೊಳಿಸಲು ಶ್ರಮಿಸಿದ ಜೋಸೆಫ್, ಭಾನುಪ್ರಕಾಶ್ ಮತ್ತು ತಂಡವನ್ನು ಅಭಿನಂದಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಶ್ವತ್ ಮತ್ತು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ ಅವರು ಈ ಸುಸಜ್ಜಿತ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಆಗಲಿರುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಶ್ಯಾಮ್ ಪ್ರಸಾದ್ ಕುಟುಂಬದವರನ್ನು ವಿವಿಧ ಸಂಘಟನೆಗಳು ಮತ್ತು ಮಸೀದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಇಂತಹ ಖಾಸಗಿ ಸಂಸ್ಥೆಗಳು ಕೈಜೋಡಿಸಿದರೆ ಗ್ರಾಮಗಳ ಚಿತ್ರಣವೇ ಬದಲಾಗುವುದರಲ್ಲಿ ಸಂಶಯವಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-aldur-vidya-coffee-shyam-prasad-builds-govt-hospital-kannada-news-sat/articleshow-4spp086"/>
        </item>
        <item>
            <title><![CDATA['ಖರ್ಚಿಗೆ ಏನಾದ್ರೂ ಕೊಟ್ರೆ ಜಾಸ್ತಿ ಬರೀತೀನಿ!' ಕಾಡಾನೆ ದಾಳಿ ಪರಿಹಾರಕ್ಕೆ ರೈತನ ಬಳಿಯೇ ಲಂಚ ಕೇಳಿದ ಅರಣ್ಯ ಅಧಿಕಾರಿ!]]></title>
            <link>https://kannada.asianetnews.com/karnataka-districts/chikkamagaluru-drfo-veerabhadra-nayak-demands-bribe-from-farmer-for-elephant-compensation-sat/articleshow-7a4p36e</link>
            <guid isPermaLink="true">https://kannada.asianetnews.com/karnataka-districts/chikkamagaluru-drfo-veerabhadra-nayak-demands-bribe-from-farmer-for-elephant-compensation-sat/articleshow-7a4p36e</guid>
            <pubDate>Wed, 01 Apr 2026 18:18:39 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಕಾಡಾನೆಗಳಿಂದ ಅಡಿಕೆ ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸಲು ಬಂದ ಅರಣ್ಯ ಇಲಾಖೆ ಅಧಿಕಾರಿ, ಹೆಚ್ಚಿನ ಪರಿಹಾರ ಕೊಡಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ರೈತ ಲಂಚ ನೀಡಲು ನಿರಾಕರಿಸಿದಾಗ, ಕಡಿಮೆ ಪರಿಹಾರಕ್ಕೆ ವರದಿ ಸಲ್ಲಿಸುವುದಾಗಿ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn4h9679ka5r2wh4b6hk3kr8,imgname-chikkamagaluru-forest-officer--1--1775047579881.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.01): ಕಾ&lt;/strong&gt;ಫಿನಾಡು ಚಿಕ್ಕಮಗಳೂರಿನಲ್ಲಿ ಒಂದೆಡೆ ಕಾಡಾನೆಗಳ ಹಾವಳಿಯಿಂದ ರೈತರು ಹೈರಾಣಾಗಿದ್ದರೆ, ಮತ್ತೊಂದೆಡೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಲಂಚಕ್ಕಾಗಿ ಪೀಡಿಸುತ್ತಿರುವ ದಂಧೆ ಬಯಲಾಗಿದೆ. 'ನೀವು ಖರ್ಚಿಗೆ ಏನಾದರೂ ಕೊಟ್ಟರೆ ನಾನು ಜಾಸ್ತಿ ಬರೀತೀನಿ, ಇಲ್ಲಾಂದ್ರೆ ಅಷ್ಟೇ ಬರೀತೀನಿ' ಎಂದು ರೈತನ ಮುಖಕ್ಕೆ ಹೊಡೆದಂತೆ ಲಂಚ ಕೇಳಿದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ತಾಲೂಕಿನ ಕಣತಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಕಣತಿ ಗ್ರಾಮದ ರೈತರೊಬ್ಬರ ಜಮೀನಿಗೆ ನುಗ್ಗಿದ್ದ ಕಾಡಾನೆಗಳು ಸುಮಾರು 65 ಅಡಿಕೆ ಮರಗಳನ್ನು ಧ್ವಂಸಗೊಳಿಸಿದ್ದವು. ವರ್ಷಗಟ್ಟಲೆ ಸಾಕಿ ಸಲಹಿದ್ದ ಮರಗಳು ಕಣ್ಣೆದುರೇ ನಾಶವಾಗಿರುವುದನ್ನು ಕಂಡು ಕಂಗಾಲಾಗಿದ್ದ ರೈತ, ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮೊರೆ ಹೋಗಿದ್ದರು. ನಿಯಮದಂತೆ ಸ್ಥಳ ಪರಿಶೀಲನೆಗೆ ಬಂದಿದ್ದ ಚಿಕ್ಕಮಗಳೂರು ಅರಣ್ಯ ವಿಭಾಗದ ಕಣತಿ ಬೀಟ್&zwnj;ನ ಡಿ.ಆರ್.ಎಫ್.ಓ (DRFO) ವೀರಭದ್ರ ನಾಯಕ್ ಅವರು ರೈತನಿಗೆ ಸಹಾಯ ಮಾಡುವ ಬದಲು ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಲಂಚ ಕೇಳಿದ ವಿಲಕ್ಷಣ ರೀತಿ:&lt;/strong&gt;&lt;/h2&gt;&lt;p&gt;ಸರ್ಕಾರದಿಂದ ಬರಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲು ಅಧಿಕಾರಿ ಬಳಸಿದ ತಂತ್ರ ರೈತರನ್ನು ಕೆರಳಿಸಿದೆ. 'ಖರ್ಚಿಗೆ ಏನಾದ್ರೂ ಕೊಡ್ತೀನಿ ಅಂದ್ರೆ ಜಾಸ್ತಿ ಬರೀತೀನಿ... ಅಲ್ಲಾ... ಈಗ ಕೊಡಬೇಕು... ಕೊಟ್ಟರೆ ಜಾಸ್ತಿ ಬರೀತೀನಿ. ಇಲ್ಲ ಅಂದ್ರೆ 65 ಅಡಿಕೆ ಮರ ಎಂದೇ ಬರೀತೀನಿ' ಎಂದು ವೀರಭದ್ರ ನಾಯಕ್ ಬಹಿರಂಗವಾಗಿಯೇ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅಂದರೆ, ರೈತ ಲಂಚ ನೀಡಿದರೆ ನಷ್ಟದ ಪ್ರಮಾಣವನ್ನು ಹೆಚ್ಚು ಮಾಡಿ ತೋರಿಸಿ ಹೆಚ್ಚಿನ ಪರಿಹಾರ ಕೊಡಿಸುವುದಾಗಿ, ಇಲ್ಲವಾದರೆ ನಿಖರವಾದ ಲೆಕ್ಕವನ್ನೇ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಹತ್ತು ಸೆಕೆಂಡ್ ಕಾಯ್ದ ಅಧಿಕಾರಿ:&lt;/strong&gt;&lt;/h3&gt;&lt;p&gt;ವಿಶೇಷವೆಂದರೆ, ಲಂಚ ಕೊಡುತ್ತಾರಾ ಅಥವಾ ಒಪ್ಪಿಕೊಳ್ಳುತ್ತಾರಾ ಎಂದು ಅಧಿಕಾರಿ ವೀರಭದ್ರ ನಾಯಕ್ ಸುಮಾರು 10 ಸೆಕೆಂಡ್&zwnj;ಗಳ ಕಾಲ ರೈತನ ಮುಖವನ್ನೇ ನೋಡುತ್ತಾ ಕಾಯುತ್ತಾ ನಿಂತಿದ್ದಾರೆ. ರೈತನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದಾಗ, ಕೋಪಗೊಂಡ ಅಧಿಕಾರಿ ವರದಿಯಲ್ಲಿ '65 ಅಡಿಕೆ ಮರ ನಾಶ' ಎಂದು ಮಾತ್ರ ದಾಖಲಿಸಿದ್ದಾರೆ. ಈ ಇಡೀ ಸಂಭಾಷಣೆಯ ದೃಶ್ಯಗಳನ್ನು ಅಲ್ಲಿಯೇ ಇದ್ದವರು ಚಿತ್ರೀಕರಿಸಿದ್ದು, ಈಗ ಅರಣ್ಯ ಇಲಾಖೆಯ ಭ್ರಷ್ಟ ಮುಖವಾಡ ಬಯಲಾಗಿದೆ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಇಲ್ಲಿ ಕ್ಲಿಕ್ ಮಾಡಿ&lt;/strong&gt;&lt;strong&gt;:&amp;nbsp;&lt;/strong&gt;&lt;/p&gt;&lt;h3&gt;&lt;strong&gt;ರೈತರ ಆಕ್ರೋಶ:&lt;/strong&gt;&lt;/h3&gt;&lt;p&gt;ಕಾಡಾನೆ ಹಾವಳಿಯಿಂದ ಈಗಾಗಲೇ ಜೀವನೋಪಾಯ ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತರಿಗೆ ಸಾಂತ್ವನ ಹೇಳಬೇಕಾದ ಅಧಿಕಾರಿಗಳು, ಹೀಗೆ ಹಗಲು ದರೋಡೆಗೆ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. 'ಒಂದೆಡೆ ಆನೆಗಳಿಂದ ಪ್ರಾಣ ಮತ್ತು ಬೆಳೆ ಉಳಿಸಿಕೊಳ್ಳಲು ನಾವು ಹೋರಾಡುತ್ತಿದ್ದರೆ, ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಇವರು ನಮಗೆ ಬಂದ ಪರಿಹಾರದಲ್ಲೂ ಪಾಲು ಕೇಳುತ್ತಿದ್ದಾರೆ' ಎಂದು ಕಣತಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ಕೂಡಲೇ ಭ್ರಷ್ಟ ಅಧಿಕಾರಿ ವೀರಭದ್ರ ನಾಯಕ್ ಅವರನ್ನು ಅಮಾನತ್ತುಗೊಳಿಸಬೇಕು ಮತ್ತು ಇಲಾಖೆಯು ರೈತರಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಘಟನೆಯ ಬಗ್ಗೆ ಮೇಲಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-drfo-veerabhadra-nayak-demands-bribe-from-farmer-for-elephant-compensation-sat/articleshow-7a4p36e"/>
        </item>
        <item>
            <title><![CDATA[ಮದುವೆ ಸಂಭ್ರಮದಲ್ಲಿ ಸೂತಕದ ಛಾಯೆ; ಚಿಕ್ಕಮಗಳೂರಿನ ಭದ್ರಾ ನದಿಯಲ್ಲಿ ಮುಳುಗಿ ಗದಗ ಮೂಲದ ಯುವಕ ಸಾವು!]]></title>
            <link>https://kannada.asianetnews.com/karnataka-districts/chikkamagaluru-nr-pura-gadag-youth-drowns-in-bhadra-river-sat/articleshow-7vgkfdm</link>
            <guid isPermaLink="true">https://kannada.asianetnews.com/karnataka-districts/chikkamagaluru-nr-pura-gadag-youth-drowns-in-bhadra-river-sat/articleshow-7vgkfdm</guid>
            <pubDate>Mon, 06 Apr 2026 16:53:52 +0530</pubDate>
            <description><![CDATA[ಗೆಳೆಯನ ಮದುವೆಗೆಂದು ಗದಗದಿಂದ ಚಿಕ್ಕಮಗಳೂರಿಗೆ ಬಂದಿದ್ದ ಯುವಕನೊಬ್ಬ, ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದು ಜಲಸಮಾಧಿಯಾಗಿದ್ದಾನೆ. ಎನ್.ಆರ್. ಪುರ ತಾಲೂಕಿನ ಬನ್ನೂರು ಬಳಿ ನಡೆದ ಈ ದುರ್ಘಟನೆಯಿಂದ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knh8gf2yef38famxh6bba5xs,imgname-chikkamagaluru-accident-1775474588766.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಏ.06): ಕಾ&lt;/strong&gt;ಫಿನಾಡು ಚಿಕ್ಕಮಗಳೂರಿನಲ್ಲಿ ಒಂದು ಕಡೆ ಮದುವೆಯ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ಅದೇ ಸಂಭ್ರಮಕ್ಕೆ ಬಂದಿದ್ದ ಯುವಕನೊಬ್ಬ ಜಲಸಮಾಧಿಯಾದ ದಾರುಣ ಘಟನೆ ಸಂಭವಿಸಿದೆ. ಸ್ನೇಹಿತನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವಕನೊಬ್ಬ ಭದ್ರಾ ನದಿಯ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾನೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಮೃತ ಯುವಕನನ್ನು ಗದಗ ಜಿಲ್ಲೆಯ ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬನ್ನೂರು ಗ್ರಾಮದ ಸಮೀಪವಿರುವ ಭದ್ರಾ ನದಿಯಲ್ಲಿ ಈ ದುರ್ಘಟನೆ ನಡೆದಿದೆ. ಅಭಿಷೇಕ್ ತನ್ನ ಸ್ನೇಹಿತನ ಮದುವೆ ಸಮಾರಂಭಕ್ಕಾಗಿ ಗದಗದಿಂದ ಚಿಕ್ಕಮಗಳೂರಿಗೆ ಬಂದಿದ್ದನು. ಮದುವೆಗೆ ಬಂದಿದ್ದ ಸ್ನೇಹಿತರ ತಂಡ ಬನ್ನೂರು ಸಮೀಪದ 'ಭದ್ರಾ ರೆಸಾರ್ಟ್'ನಲ್ಲಿ ತಂಗಿತ್ತು.&lt;/p&gt;&lt;h3&gt;&lt;strong&gt;ನದಿಯಲ್ಲಿ ನಾಪತ್ತೆಯಾಗಿದ್ದ ಅಭಿಷೇಕ್:&lt;/strong&gt;&lt;/h3&gt;&lt;p&gt;ಶನಿವಾರ ಸಂಜೆ ವೇಳೆ ಅಭಿಷೇಕ್ ಮತ್ತು ಆತನ ಸ್ನೇಹಿತರು ರೆಸಾರ್ಟ್ ಸಮೀಪದ ಭದ್ರಾ ನದಿಯ ಬಳಿ ತೆರಳಿದ್ದರು. ಈ ವೇಳೆ ನದಿಯಲ್ಲಿ ಸ್ನಾನಕ್ಕಿಳಿದಾಗ ಅಥವಾ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ತಕ್ಷಣವೇ ಆತನಿಗಾಗಿ ಸ್ನೇಹಿತರು ಹುಡುಕಾಟ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೂಡಲೇ ಈ ಬಗ್ಗೆ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು.&lt;/p&gt;&lt;h2&gt;&lt;strong&gt;ಸ್ಥಗಿತಗೊಂಡಿದ್ದ ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಮಾಹಿತಿ ತಿಳಿಯುತ್ತಿದ್ದಂತೆಯೇ ಬಾಳೆಹೊನ್ನೂರು ಪೊಲೀಸರು ಹಾಗೂ ಸ್ಥಳೀಯ ಈಜುಗಾರರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಆದರೆ, ಕತ್ತಲೆಯಾದ ಕಾರಣ ಮತ್ತು ನದಿಯ ನೀರಿನ ಹರಿವು ಹೆಚ್ಚಿದ್ದರಿಂದ ಶನಿವಾರ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಭಾನುವಾರ ಬೆಳಿಗ್ಗೆಯಿಂದಲೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಈಜು ತಜ್ಞರು ಜಂಟಿಯಾಗಿ ಬೃಹತ್ ಶೋಧ ಕಾರ್ಯವನ್ನು ಮುಂದುವರಿಸಿದರು.&lt;/p&gt;&lt;h3&gt;&lt;strong&gt;ಪತ್ತೆಯಾದ ಮೃತದೇಹ:&lt;/strong&gt;&lt;/h3&gt;&lt;p&gt;ತೀವ್ರ ಹುಡುಕಾಟದ ನಂತರ ಇಂದು (ಭಾನುವಾರ) ಅಭಿಷೇಕ್&zwnj;ನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಮಗನ ಸಾವಿನ ಸುದ್ದಿ ಕೇಳಿ ಗದಗದಲ್ಲಿರುವ ಆತನ ಕುಟುಂಬಸ್ಥರು ಮತ್ತು ಮದುವೆ ಮನೆಯಲ್ಲಿದ್ದ ಸ್ನೇಹಿತರು ಕಣ್ಣೀರು ಹಾಕುತ್ತಿದ್ದಾರೆ. ಸಂತೋಷದಿಂದ ಮದುವೆಗೆ ಬಂದಿದ್ದ ಯುವಕ ಹೆಣವಾಗಿ ಮರಳುತ್ತಿರುವುದು ಎಲ್ಲರನ್ನೂ ಕಂಗೆಡಿಸಿದೆ.&lt;/p&gt;&lt;h3&gt;&lt;strong&gt;ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು:&lt;/strong&gt;&lt;/h3&gt;&lt;p&gt;ಈ ಘಟನೆಗೆ ಸಂಬಂಧಿಸಿದಂತೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರವಾಸಿಗರು ಅಥವಾ ಅಪರಿಚಿತ ಸ್ಥಳಗಳಿಗೆ ಭೇಟಿ ನೀಡುವವರು ನದಿಗಳ ಆಳ ತಿಳಿಯದೆ ನೀರಿಗಿಳಿಯಬಾರದು ಎಂದು ಪೊಲೀಸರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರಿನ ಸುಂದರ ಪ್ರಕೃತಿಯ ನಡುವೆ ನಡೆದ ಈ ದುರಂತ ಘಟನೆ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-nr-pura-gadag-youth-drowns-in-bhadra-river-sat/articleshow-7vgkfdm"/>
        </item>
        <item>
            <title><![CDATA[ಸಿದ್ದರಾಮಯ್ಯ ಸರ್ಕಾರದಿಂದ ಟ್ಯಾಕ್ಸ್ ಟೆರರಿಸಂ:  ಬಸವರಾಜ ಬೊಮ್ಮಾಯಿ ಗಂಭೀರ ಆರೋಪ]]></title>
            <link>https://kannada.asianetnews.com/politics/tax-terrorism-by-siddaramaiah-govt-basavaraj-bommai-slams-bbmp-aggressive-tax-recovery-rav/articleshow-auy5996</link>
            <guid isPermaLink="true">https://kannada.asianetnews.com/politics/tax-terrorism-by-siddaramaiah-govt-basavaraj-bommai-slams-bbmp-aggressive-tax-recovery-rav/articleshow-auy5996</guid>
            <pubDate>Wed, 01 Apr 2026 10:34:56 +0530</pubDate>
            <description><![CDATA[&lt;p&gt;ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದ್ದು, ₹60000 ಕೋಟಿ ಹೊಸ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಉಪ ಚುನಾವಣೆ ಬಳಿಕ ಕಾಂಗ್ರೆಸ್&zwnj;ನ ಅಧಃಪತನ ಆರಂಭವಾಗಲಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwn7fcbr42yhmfjrcwvt4y9,imgname-siddaramaiah-1773709540747.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ (ಏ.1)&lt;/strong&gt;: ಸಿದ್ದರಾಮ:ಯ್ಯ 2ನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ತೆರಿಗೆ ಭಯೋತ್ಪಾದನೆ ಶುರುವಾಗಿದ್ದು, ಮದ್ಯ, ಹಾಲು, ವಿದ್ಯುತ್&zwnj; ಬೆಲೆಗಳನ್ನು ಹೆಚ್ಚಳ ಮಾಡುವುದ ಜತೆಗೆ ಭೂ ಕಂದಾಯ, ಮೋಟಾರು ವಾಹನಗಳ ಮೇಲಿನ ತೆರಿಗೆ ಹೆಚ್ಚಿಸಲಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.&lt;/p&gt;&lt;p&gt;ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 3 ವರ್ಷಗಳಲ್ಲಿ ₹60000 ಕೋಟಿಯಷ್ಟು ಹೊಸ ತೆರಿಗೆಯನ್ನು ಸಿದ್ದರಾಮಯ್ಯ ಸರ್ಕಾರ ಜನರ ಮೇಲೆ ಹೇರಿದ್ದು, ಇದು ಒಂದು ರೀತಿ ಟ್ಯಾಕ್ಸ್ ಟೆರರಿಸಂ ಆಗಿದೆ. ₹5 ಲಕ್ಷ ಕೋಟಿ ಹೊಸ ಸಾಲ ಮಾಡುವ ಮೂಲಕ ದಾಖಲೆ ಸಾಲದ ಸಾಧನೆ ಸಹ ಮಾಡಿದೆ ಎಂದರು.&lt;/p&gt;&lt;p&gt;ರಾಜ್ಯದ ಯಾವುದೇ ಜಮೀನು ನೋಂದಣಿಯಾದರೆ ಬೆಂಗಳೂರಿಗೆ ಭ್ರಷ್ಟಾಚಾರದ ಹಣ ಬರಬೇಕಿದೆ ಎಂದು ಪಿಡಬ್ಲ್ಯುಡಿ, ಅಬಕಾರಿ ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಭೂ ಪರಿವರ್ತನೆಯಲ್ಲೂ ಇಂತಿಷ್ಟು ಅಂತಾ ಲಂಚ ನಿಗದಿಯಾಗಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಅನ್ನಭಾಗ್ಯ ಅಕ್ಕಿ ಕಡಿಮೆ ಹಂಚಿಕೆಯಾದಷ್ಟೂ ರಾಜ್ಯ ಸರ್ಕಾರ ಸಂತೋಷಪಡುತ್ತದೆಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದವರೇ ಹೇಳುತ್ತಿದ್ದಾರೆ ಎಂದು ದೂರಿದರು.&lt;/p&gt;&lt;p&gt;ತಹಸೀಲ್ದಾರ್&zwnj; ಕಚೇರಿ, ಸಚಿವರ ಕಚೇರಿ, ಸಿಎಂ ಕಚೇರಿಯಿಂದಲೂ ಭ್ರಷ್ಟಾಚಾರ ಆರಂಭವಾಗಿದೆ. ವರ್ಗಾವಣೆ ದಂಧೆ ಕೈಗಾರಿಕೆಯಂತಾಗಿದ್ದು, ರಾಜ್ಯ ಸರ್ಕಾರದ ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರದ ಆರೋಪ ಮುಚ್ಚಿಕೊಳ್ಳಲು ಕಾಂಗ್ರೆಸ್ ಕೇಂದ್ರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ದುರಾಡಳಿತ ಮನೆ ಮನೆಗೂ ತಲುಪಿದ್ದು, ರಾಜ್ಯದ ಜನತೆ ಈಗ ಬದಲಾವಣೆಯನ್ನು ಬಯಸಿದ್ದಾರೆ ಎಂದು ತಿಳಿಸಿದರು.&lt;/p&gt;&lt;h2&gt;ಉಪ ಚುನಾವಣೆ ಬಳಿಕ ಕಾಂಗ್ರೆಸ್ ಅಧಃಪತನ:&lt;/h2&gt;&lt;p&gt;ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್&zwnj;ನ ಅಧಃಪತನದ ಮೊದಲನೆಯ ಹೆಜ್ಜೆಯಾಗಲಿದೆ. ಅದಕ್ಕೆ ದಾವಣಗೆರೆ, ಬಾಗಲಕೋಟೆ ಜನ ಆಶೀರ್ವಾದ ಮಾಡುವ ವಿಶ್ವಾಸ ಇದೆ. ಬಿಜೆಪಿ ಒಗ್ಗಟಿನಿಂದ ಕೆಲಸ ಮಾಡುತ್ತಿದ್ದು, ಈ ದುಷ್ಟ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ನಾವ್ಯಾರೂ ವಿರಮಿಸುವುದಿಲ್ಲ. ಅದಕ್ಕಾಗಿ ಜನರು ಸಹ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.&lt;/p&gt;&lt;h3&gt;ನಕ್ಸಲಿಸಂ ಮುಕ್ತಕ್ಕೆ ಮೋದಿ, ಶಾ ಕಾರಣ:&lt;/h3&gt;&lt;p&gt;ದೇಶದಲ್ಲಿ ನಕ್ಸಲಿಸಂ ಅನ್ನು ಪರಿಣಾಮಕಾರಿಯಾಗಿ ಬೇರು ಸಮೇತವಾಗಿ ತೆಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರಮಿಸಿದ್ದಾರೆ. ಈ ಇಬ್ಬರ ಶ್ರಮದಿಂದ ರೆಡ್ ಕಾರಿಡಾರ್ ಅನ್ನುವುದು ಸಂಪೂರ್ಣ ಅಳಿಸಿ ಹೋಗಿದೆ. ಸುಮಾರು 4 ಸಾವಿರಕ್ಕಿಂತ ಹೆಚ್ಚು ನಕ್ಸಲರು ಶರಣಾಗಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.&lt;/p&gt;]]></content:encoded>
            <category>chikkamagalur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/tax-terrorism-by-siddaramaiah-govt-basavaraj-bommai-slams-bbmp-aggressive-tax-recovery-rav/articleshow-auy5996"/>
        </item>
        <item>
            <title><![CDATA[ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು!]]></title>
            <link>https://kannada.asianetnews.com/karnataka-districts/chikkamagaluru-kadur-banana-plantation-destroyed-by-miscreants-farmer-chandrappa-sat/articleshow-bwgqs0n</link>
            <guid isPermaLink="true">https://kannada.asianetnews.com/karnataka-districts/chikkamagaluru-kadur-banana-plantation-destroyed-by-miscreants-farmer-chandrappa-sat/articleshow-bwgqs0n</guid>
            <pubDate>Tue, 31 Mar 2026 18:29:48 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತ ಚಂದ್ರಪ್ಪ ಅವರು ಬೆಳೆದಿದ್ದ 1500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ. ಸುಮಾರು 15 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ, ಈ ದುಷ್ಕೃತ್ಯದಿಂದ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn1zm15gbx2cg6m0c478ypm5,imgname-chikkamagaluru-banana-plants-1774961951919.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.31): ಸಾ&lt;/strong&gt;ಲಸೋಲ ಮಾಡಿ, ಮಗುವಿನಂತೆ ಸಾಕಿ ಬೆಳೆಸಿದ್ದ ಬಾಳೆಯ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಅಮಾನವೀಯ ಕೃತ್ಯಕ್ಕೆ ರೈತನೊಬ್ಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ ಇಂತಹದೊಂದು ಘೋರ ಘಟನೆ ನಡೆದಿದ್ದು, ಸುಮಾರು 2 ಎಕರೆಯಲ್ಲಿದ್ದ 1,500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವವರು ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದರು. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು 1500 ಬಾಳೆ ಗಿಡಗಳನ್ನು ಪೋಷಿಸಿದ್ದರು. ಶ್ರಾವಣ ಮಾಸದ ಹಬ್ಬಗಳ ಸಂದರ್ಭದಲ್ಲಿ ಬಾಳೆಯನ್ನು ಮಾರುಕಟ್ಟೆಗೆ ತಂದು ಲಾಭ ಪಡೆಯಬೇಕೆಂಬ ದೊಡ್ಡ ಕನಸನ್ನು ಚಂದ್ರಪ್ಪ ಹೊಂದಿದ್ದರು. ನಿನ್ನೆ ಸಂಜೆಯವರೆಗೂ ಸಮೃದ್ಧವಾಗಿ ಬೆಳೆದು ನಿಂತಿದ್ದ ಬಾಳೆ ತೋಟ, ಇಂದು ಬೆಳಗಾಗುವಷ್ಟರಲ್ಲಿ ಸ್ಮಶಾನದಂತಾಗಿದೆ.&lt;/p&gt;&lt;h2&gt;&lt;strong&gt;15 ಲಕ್ಷ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದ ರೈತ:&lt;/strong&gt;&lt;/h2&gt;&lt;p&gt;ಬಾಳೆ ಗಿಡಗಳು ಈಗಾಗಲೇ ಗೊನೆಯೊಡೆದು ಸಮೃದ್ಧವಾಗಿ ಬೆಳೆಯುತ್ತಿದ್ದವು. ಈ ಬೆಳೆಯಿಂದ ಸುಮಾರು 10 ರಿಂದ 15 ಲಕ್ಷ ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿ ರೈತ ಚಂದ್ರಪ್ಪ ಇದ್ದರು. ಆದರೆ, ಕಿಡಿಗೇಡಿಗಳು 1500 ಗಿಡಗಳಲ್ಲಿ ಒಂದೇ ಒಂದು ಗಿಡವನ್ನೂ ಬಿಡದಂತೆ ಬುಡಕ್ಕೇ ಕತ್ತರಿಸಿ ಹಾಕಿ ವಿಕೃತಿ ಮೆರೆದಿದ್ದಾರೆ. ಇಡೀ ತೋಟದಲ್ಲಿ ಬಾಳೆ ಗಿಡಗಳು ನೆಲಕ್ಕುರುಳಿ ಬಿದ್ದಿರುವ ದೃಶ್ಯವನ್ನು ಕಂಡು ಅನ್ನದಾತ ಚಂದ್ರಪ್ಪ ಸ್ಥಳದಲ್ಲೇ ಕುಳಿತು ಗೋಳಾಡಿದ್ದಾರೆ.&lt;/p&gt;&lt;h3&gt;&lt;strong&gt;ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲು:&lt;/strong&gt;&lt;/h3&gt;&lt;p&gt;ತನ್ನ ಕಷ್ಟದ ಬೆಳೆ ನಾಶವಾಗಿರುವುದನ್ನು ಕಂಡು ಕಂಗಾಲಾಗಿರುವ ರೈತ ಚಂದ್ರಪ್ಪ, ಕೂಡಲೇ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಯಾರ ಜೊತೆಗಿನ ವೈಷಮ್ಯ ಅಥವಾ ಇನ್ಯಾವುದೇ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಣ್ಣೆದುರೇ ಮಗುವಿನಂತೆ ಬೆಳೆಸಿದ ಬೆಳೆ ನಾಶವಾಗಿರುವುದು ರೈತನ ಕುಟುಂಬವನ್ನು ಆಘಾತಕ್ಕೆ ತಳ್ಳಿದೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರ ಆಕ್ರೋಶ:&lt;/strong&gt;&lt;/h3&gt;&lt;p&gt;ಕಿಡಿಗೇಡಿಗಳ ಈ ದುಷ್ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ರೈತರು ಕಷ್ಟಪಟ್ಟು ಬೆಳೆ ಬೆಳೆದರೆ ಅದನ್ನು ನಾಶಪಡಿಸುವ ಇಂತಹ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಈಗ ದಿಕ್ಕೇ ತೋಚದಂತಾಗಿದೆ. ಸರ್ಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಸ್ಪಂದಿಸಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ, ರೈತನ ಬದುಕಿನ ಜೊತೆ ಚೆಲ್ಲಾಟವಾಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಾನೂನಿನ ಅಡಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-kadur-banana-plantation-destroyed-by-miscreants-farmer-chandrappa-sat/articleshow-bwgqs0n"/>
        </item>
        <item>
            <title><![CDATA[ಕಾಫಿನಾಡಲ್ಲಿ ವೃದ್ಧನ ಡಿಜಿಟಲ್ ಅರೆಸ್ಟ್: ಜೀವಮಾನವಿಡೀ ದುಡಿದ ₹48 ಲಕ್ಷಕ್ಕೆ ಪಂಗನಾಮ ಹಾಕಿದ ಸೈಬರ್ ವಂಚಕರು!]]></title>
            <link>https://kannada.asianetnews.com/karnataka-districts/chikkamagaluru-old-man-digital-arrest-rs-48-lakh-fraud-to-lokeshappa-sat/articleshow-dh8xyfr</link>
            <guid isPermaLink="true">https://kannada.asianetnews.com/karnataka-districts/chikkamagaluru-old-man-digital-arrest-rs-48-lakh-fraud-to-lokeshappa-sat/articleshow-dh8xyfr</guid>
            <pubDate>Fri, 27 Mar 2026 15:55:21 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಸಿಬಿಐ ಅಧಿಕಾರಿಗಳೆಂದು ನಂಬಿಸಿ, 71 ವರ್ಷದ ವೃದ್ಧರೊಬ್ಬರನ್ನು ಮಾನಸಿಕವಾಗಿ ಬಂಧಿಸಿ, ಅವರಿಂದ 48.50 ಲಕ್ಷ ರೂಪಾಯಿಗಳನ್ನು ವಂಚಕರು ದೋಚಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmqd6a4bfbttmmkfy6dj1m9w,imgname-chikkamagaluru-cyber-fraud-1774607083659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮಾ.27): ರಾ&lt;/strong&gt;ಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಇದೀಗ &lsquo;ಡಿಜಿಟಲ್ ಅರೆಸ್ಟ್&rsquo; ಎಂಬ ಹೊಸ ತಂತ್ರದ ಮೂಲಕ ವಂಚಕರು ಮತ್ತೊಮ್ಮೆ ದೊಡ್ಡ ಮಟ್ಟದ ಮೋಸ ನಡೆಸಿರುವ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;h3&gt;&lt;strong&gt;ಸಿಬಿಐ ಅಧಿಕಾರಿ ಎಂದು ಹೇಳಿ ವಂಚನೆ:&lt;/strong&gt;&lt;/h3&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ ನಿವಾಸಿ 71 ವರ್ಷದ ಎ.ಆರ್. ಲೋಕೇಶಪ್ಪ ಅವರು ಈ ಬಗ್ಗೆ ದೂರು ನೀಡಿದ್ದಾರೆ. ಮಾರ್ಚ್ 15ರ ಬೆಳಿಗ್ಗೆ ಇವರ ಮೊಬೈಲ್&zwnj;ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ.ವೃದ್ದನಿಗೆ 'ನೀವು ನರೇಶ್ ಗೋಯೆಲ್ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ' ಎಂದು ಹೇಳಿ ಭಯ ಹುಟ್ಟಿಸಿದ್ದಾನೆ. ಬಳಿಕ ಇನ್ನೂ ಹಲವಾರು ಸಂಖ್ಯೆಯಿಂದ ಕರೆ ಮಾಡಿ, ಲೋಕೇಶಪ್ಪ ಅವರಿಗೆ ಮನೋಭಾವದ ಒತ್ತಡ ತಂದಿದ್ದಾರೆ.ವಂಚಕರು 'ನೀವು ಒಂದು ಕೊಠಡಿಯಿಂದ ಹೊರಗೆ ಬರಬಾರದು, ಯಾರೊಂದಿಗೂ ಮಾತನಾಡಬಾರದು' ಎಂದು ಸೂಚನೆ ನೀಡಿ, ಮಾನಸಿಕವಾಗಿ ಒಂಟಿಯಾಗುವಂತೆ ಮಾಡಿ ವಂಚಿಸಿದ್ದಾರೆ.&lt;/p&gt;&lt;h3&gt;&lt;strong&gt;ತನಿಖೆ ನಡೆಯುವ ತನಕ ಹಣ ವರ್ಗಾವಣೆ ಮಾಡುವಂತೆ ಒತ್ತಡ:&lt;/strong&gt;&lt;/h3&gt;&lt;p&gt;ಪರಿಶೀಲನೆ ಮುಗಿಯುವವರೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕು&rsquo; ಎಂದು ನಂಬಿಸಲಾಗಿದೆ. ಸರ್ಕಾರದ ಸಂಸ್ಥೆಯ ಹೆಸರನ್ನು ಬಳಸಿಕೊಂಡು ವಿಶ್ವಾಸ ಮೂಡಿಸುವ ಮೂಲಕ ವಂಚನೆ ನಡೆದಿದೆ.ಈ ಮಾತುಗಳನ್ನು ನಂಬಿದ ಲೋಕೇಶಪ್ಪ ಅವರು ಹಂತ ಹಂತವಾಗಿ ಒಟ್ಟು 48 ಲಕ್ಷ 50 ಸಾವಿರ ರೂಪಾಯಿಯನ್ನು ವಂಚಕರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ನಂತರ ಅನುಮಾನ ಬಂದು ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ, ತಾವು &lsquo;ಡಿಜಿಟಲ್ ಅರೆಸ್ಟ್&rsquo; ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ.ಪ್ರಸ್ತುತ, ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರ ಎಚ್ಚರಿಕೆ:&lt;/strong&gt;&lt;/h2&gt;&lt;ul&gt; &lt;li&gt;ಯಾವುದೇ ಸರ್ಕಾರಿ ಅಧಿಕಾರಿ ಫೋನ್ ಮೂಲಕ ಹಣ ವರ್ಗಾವಣೆ ಕೇಳುವುದಿಲ್ಲ.&lt;/li&gt; &lt;li&gt;ಅಪರಿಚಿತ ಕರೆಗಳಿಗೆ ವೈಯಕ್ತಿಕ ಅಥವಾ ಬ್ಯಾಂಕ್ ಮಾಹಿತಿಯನ್ನು ನೀಡಬಾರದು.&lt;/li&gt; &lt;li&gt;ಬೆದರಿಕೆ ಅಥವಾ ತುರ್ತು ಒತ್ತಡ ತರುವ ಕರೆಗಳನ್ನು ನಂಬಬಾರದು.&lt;/li&gt; &lt;li&gt;ಸಂಶಯಾಸ್ಪದ ಕರೆ ಬಂದರೆ ತಕ್ಷಣವೇ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬೇಕು.&lt;/li&gt; &lt;li&gt;ಇಂತಹ ಸೈಬರ್ ಮೋಸಗಳಿಂದ ತಪ್ಪಿಸಿಕೊಳ್ಳಲು ಜಾಗ್ರತೆ ಅತ್ಯಗತ್ಯ ಎಂದು ಪೊಲೀಸರು ಮನವಿ ಮಾಡಿದ್ದಾರೆ.&lt;/li&gt;&lt;/ul&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-old-man-digital-arrest-rs-48-lakh-fraud-to-lokeshappa-sat/articleshow-dh8xyfr"/>
        </item>
        <item>
            <title><![CDATA[ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆ: ಸಿ.ಟಿ.ರವಿ ವಿಶ್ವಾಸ]]></title>
            <link>https://kannada.asianetnews.com/politics/ct-ravi-slams-congress-bypoll-anger-votes-bjp-gvd/articleshow-gnt9gxz</link>
            <guid isPermaLink="true">https://kannada.asianetnews.com/politics/ct-ravi-slams-congress-bypoll-anger-votes-bjp-gvd/articleshow-gnt9gxz</guid>
            <pubDate>Sun, 29 Mar 2026 21:48:39 +0530</pubDate>
            <description><![CDATA[&lt;p&gt;ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್&zwnj; ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcx4fyk1p4nrct4gxgmzs4x5,imgname-1-1766209354337.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.29):&lt;/strong&gt; ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್&zwnj; ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟಿತರಾಗಿ ಕೆಲಸ ಮಾಡುತ್ತಿದ್ದೇವೆ. ಉಭಯ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ದಾವಣಗೆರೆಯಲ್ಲಿ ಬಂಡಾಯ ಕಾಂಗ್ರೆಸ್&zwnj; ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಿರುವುದು ಅನಿರೀಕ್ಷಿತವಲ್ಲ.&lt;/p&gt;&lt;p&gt;ಬಿಜೆಪಿಗೂ ಅಲ್ಲಿ ಸಾಂಪ್ರದಾಯಿಕ ಮತ ಬ್ಯಾಂಕ್&zwnj; ಇದೆ. ಉಪ ಚುನಾವಣೆಗಳಲ್ಲಿ ಸರ್ಕಾರವೇ ಬಂದು ಕುಳಿತು ಪ್ರಚಾರ ಮಾಡುವುದು, ಇಲ್ಲದ ಆಶ್ವಾಸನೆಗಳನ್ನು ನೀಡುವುದು ಸಾಮಾನ್ಯ ಎಂದರು. ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ. ಉಪಚುನಾವಣೆ ಫಲಿತಾಂಶದಿಂದ ಸರ್ಕಾರದ ಮೇಲೆ ತಕ್ಷಣದ ಪರಿಣಾಮ ಉಂಟಾಗುವುದಿಲ್ಲ. ಆದರೆ, ಜನಾಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.&lt;/p&gt;&lt;p&gt;ಜನರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಅಕ್ರಮಗಳಿಂದ ಬೇಸತ್ತಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹತ್ತು ರು. ಕಡಿಮೆಗೊಳಿಸಿದೆ. ಅದನ್ನು ಜನ ಸಂತೋಷ ಪಟ್ಟರೆ, ಕಾಂಗ್ರೆಸ್ ಸಂಕಟ ಪಡುತ್ತಿದೆ. ಭಾರತದ ಶೇ.90 ರಷ್ಟು ಪೆಟ್ರೋಲ್ ವಿದೇಶಗಳಿಂದಲೇ ಬರಬೇಕು. ಎಲ್ಲ ದೇಶಗಳಿಗೂ ಯುದ್ಧದ ಬಿಸಿ ತಟ್ಟಿದೆ, ಪೆಟ್ರೋಲ್ ಬೆಲೆ ಏರುತ್ತಿದೆ. ಆದರೆ, ನಮ್ಮ ಜನರಿಗೆ ಸಮಸ್ಯೆಉಂಟಾಗಬಾರದು ಎಂದು ಮೋದಿ ಸರ್ಕಾರೇತರಿಗೆ ಇಳಿಸಿದೆ.&lt;/p&gt;&lt;h2&gt;&lt;strong&gt;ದಿವಾಳಿತನಕ್ಕೆ ಸಾಕ್ಷಿ&lt;/strong&gt;&lt;/h2&gt;&lt;p&gt;ಸರ್ಕಾರಕ್ಕೆ ಕೊರತೆಯಾದರೂ ಪರವಾಗಿಲ್ಲ ಎನ್ನುವುದು ಬಿಜೆಪಿಯ ಧೋರಣೆ. ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದರು. ಇನ್ನೂ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ದಕ್ಷಿಣ ಚೌಬೀಸ್ ಪರಗಣದ ಚುನಾವಣಾ ಜವಾಬ್ದಾರಿಯನ್ನೂ ಪಕ್ಷ ನೀಡಿದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಡಾ. ರವಿ ಸಿ.ಟಿ ಹೇಳಿದರು.&lt;/p&gt;]]></content:encoded>
            <category>chikkamagalur</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/ct-ravi-slams-congress-bypoll-anger-votes-bjp-gvd/articleshow-gnt9gxz"/>
        </item>
        <item>
            <title><![CDATA[ಚಿಕ್ಕಮಗಳೂರು: ಚಲಿಸುತ್ತಿದ್ದಾಗಲೇ ಕಳಚಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಚಕ್ರ!]]></title>
            <link>https://kannada.asianetnews.com/chikkamagalur/ksrtc-bus-wheel-detaches-running-chikkamagaluru-balehonnur-incident-update-san/articleshow-gs263az</link>
            <guid isPermaLink="true">https://kannada.asianetnews.com/chikkamagalur/ksrtc-bus-wheel-detaches-running-chikkamagaluru-balehonnur-incident-update-san/articleshow-gs263az</guid>
            <pubDate>Thu, 26 Mar 2026 17:47:52 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ, ಚಲಿಸುತ್ತಿದ್ದ ಕೆಎಸ್&zwnj;ಆರ್&zwnj;ಟಿಸಿ ಬಸ್ಸಿನ ಹಿಂಬದಿ ಚಕ್ರವು ಕಳಚಿ ಬಿದ್ದಿದೆ. ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದ್ದು, ಬಸ್ಸಿನ ಕಳಪೆ ನಿರ್ವಹಣೆ ಮತ್ತು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmn0t3vbr304pdxdw3rv2pj8,imgname-chikkamagaluru-ksrtc-bus-1774526992235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.26): &lt;/strong&gt;ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಕೆಎಸ್&zwnj;ಆರ್&zwnj;ಟಿಸಿ (KSRTC) ಬಸ್ಸಿನ ನಿರ್ವಹಣಾ ವೈಫಲ್ಯಕ್ಕೆ ಸಾಕ್ಷಿಯಾದ ಭೀಕರ ಘಟನೆಯೊಂದು ನಡೆದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇಗುಲದ ಬಳಿ ಸರ್ಕಾರಿ ಬಸ್ಸೊಂದು ಪ್ರಯಾಣಿಕರಿಂದ ತುಂಬಿ ಚಲಿಸುತ್ತಿದ್ದಾಗಲೇ ಅದರ ಹಿಂಭಾಗದ ಚಕ್ರವು ಇದ್ದಕ್ಕಿದ್ದಂತೆ ಕಳಚಿ ರಸ್ತೆಗೆ ಬಿದ್ದಿದೆ. ಬಸ್ ಚಲನೆಯಲ್ಲಿದ್ದಾಗಲೇ ಈ ತಾಂತ್ರಿಕ ದೋಷ ಸಂಭವಿಸಿದ್ದರಿಂದ ಚಾಲಕ ತಕ್ಷಣವೇ ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಬಸ್ಸಿನಲ್ಲಿದ್ದ ಹತ್ತಾರು ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಕ್ರೋಶ&lt;/strong&gt;&lt;/h2&gt;&lt;p&gt;ರಸ್ತೆ ಮಧ್ಯೆಯೇ ಚಕ್ರ ಕಳಚಿ ಬಿದ್ದ ಈ ದೃಶ್ಯ ಕಂಡು ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. &quot;ಹಳೆಯ ಬಸ್ಸುಗಳ ಓಡಾಟ ಮತ್ತು ಸರಿಯಾದ ನಿರ್ವಹಣೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣ&quot; ಎಂದು ಪ್ರಯಾಣಿಕರು ದೂರಿದ್ದಾರೆ. ಬಸ್ಸಿನ ಸಾಮರ್ಥ್ಯ ಮತ್ತು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸ್ಥಳದಲ್ಲಿದ್ದವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.&lt;/p&gt;&lt;p&gt;ಘಟನೆ ನಡೆದ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಾರಿಗೆ ಇಲಾಖೆಯು ಇನ್ನು ಮುಂದೆ ಬಸ್ಸುಗಳ ತಾಂತ್ರಿಕ ತಪಾಸಣೆಗೆ ಆದ್ಯತೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chikkamagalur</category>
            <dc:creator>Santosh Naik</dc:creator>
            <atom:link href="https://kannada.asianetnews.com/chikkamagalur/ksrtc-bus-wheel-detaches-running-chikkamagaluru-balehonnur-incident-update-san/articleshow-gs263az"/>
        </item>
        <item>
            <title><![CDATA[ಕಾಫಿನಾಡಲ್ಲಿ ಬೈಕ್ ಕಳ್ಳರ 'ಎಕ್ಸ್‌ಚೇಂಜ್ ಆಫರ್': ಹಳೇ ಬೈಕ್ ಬಿಟ್ಟು ಹೊಸ ಗಾಡಿ ಹೊತ್ತೊಯ್ದ ಖದೀಮರು; ವಿಡಿಯೋ ವೈರಲ್!]]></title>
            <link>https://kannada.asianetnews.com/karnataka-districts/chikkamagaluru-bike-theft-exchange-offer-thieves-leave-old-bike-take-new-one-cctv-news-sat/articleshow-gww27su</link>
            <guid isPermaLink="true">https://kannada.asianetnews.com/karnataka-districts/chikkamagaluru-bike-theft-exchange-offer-thieves-leave-old-bike-take-new-one-cctv-news-sat/articleshow-gww27su</guid>
            <pubDate>Fri, 03 Apr 2026 19:19:28 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ, ಕಳ್ಳರು ವ್ಯಕ್ತಿಯೊಬ್ಬರ ಹೊಸ ಬೈಕನ್ನು ಕದ್ದು, ಬದಲಿಗೆ ತಮ್ಮ ಹಳೆಯ ಬೈಕನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ವಿಚಿತ್ರ &lsquo;ಎಕ್ಸ್&zwnj;ಚೇಂಜ್ ಆಫರ್&rsquo; ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಸವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn9rw5ghznc13mff5dy0a8g9,imgname-chikkamagaluru-bike-theft-1775223313935.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಏ.03): ಸಾ&lt;/strong&gt;ಮಾನ್ಯವಾಗಿ ಕಳ್ಳರು ಬೈಕ್ ಕಳ್ಳತನ ಮಾಡಿದರೆ ಸಾಕು ಎಂದು ಓಡಿಹೋಗುತ್ತಾರೆ. ಆದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಿಲಾಡಿ ಕಳ್ಳರು ಒಂದು ಹೆಜ್ಜೆ ಮುಂದೆ ಹೋಗಿ ವಿಭಿನ್ನವಾಗಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದಾರೆ. ಬೈಕ್ ಕಳೆದುಕೊಂಡ ಮಾಲೀಕರು ಅಯ್ಯೋ ಬೈಕ್ ಹೋಯ್ತಲ್ಲಾ ಎಂದು ಅತಿಯಾಗಿ ಬೇಜಾರು ಮಾಡಿಕೊಳ್ಳಬಾರದು ಎಂಬ &lsquo;ಉದಾರ ಮನಸ್ಸಿನಿಂದ&rsquo; ತಾವೇ ಒಂದು ಹಳೆಯ ಬೈಕನ್ನು ಅಲ್ಲೇ ಬಿಟ್ಟು, ಮಾಲೀಕರ ಹೊಸ ಬೈಕನ್ನು ಎಗರಿಸಿದ್ದಾರೆ!&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ನಗರದ ಉಪ್ಪಳ್ಳಿ ನಿವಾಸಿಯಾದ ಇಸ್ಮಾಯಿಲ್ ಎಂಬುವವರು ಈ &lsquo;ಎಕ್ಸ್&zwnj;ಚೇಂಜ್ ಆಫರ್&rsquo; ಕಳ್ಳತನಕ್ಕೆ ಬಲಿಯಾದ ವ್ಯಕ್ತಿ. ಇಸ್ಮಾಯಿಲ್ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯಿಂದಲೇ ಅವರಿಗೆ ಒಂದು ಉತ್ತಮ ಸ್ಥಿತಿಯ ಬೈಕನ್ನು ನೀಡಲಾಗಿತ್ತು. ಪ್ರತಿದಿನದಂತೆ ಇಸ್ಮಾಯಿಲ್ ಅವರು ಕೆಲಸ ಮುಗಿಸಿ ರಾತ್ರಿ ತಮ್ಮ ಮನೆಯ ಮುಂದೆ ಬೈಕನ್ನು ಸುರಕ್ಷಿತವಾಗಿ ನಿಲ್ಲಿಸಿದ್ದರು. ಆದರೆ ತಡರಾತ್ರಿ ಬಂದ ಕಳ್ಳರು ಅಲ್ಲಿ ಸಿನಿಮೀಯ ಶೈಲಿಯಲ್ಲಿ ಕೈಚಳಕ ತೋರಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಳ್ಳರ &lsquo;ಸಿನಿಮೀಯ&rsquo; ಕೈಚಳಕ:&lt;/strong&gt;&lt;/h2&gt;&lt;p&gt;ಈ ಖದೀಮರು ತಾವು ಬಂದಿದ್ದ ಅತ್ಯಂತ ಹಳೆಯ ಮತ್ತು ಶೇಷಾವಸ್ಥೆಯಲ್ಲಿದ್ದ ಬೈಕನ್ನು ಇಸ್ಮಾಯಿಲ್ ಅವರ ಮನೆಯ ಮುಂದೆಯೇ ಬಿಟ್ಟಿದ್ದಾರೆ. ಬದಲಾಗಿ ಇಸ್ಮಾಯಿಲ್ ಅವರ ಕಂಪನಿಯ ಹೊಸ ಬೈಕನ್ನು ಹಾರಿಸಿಕೊಂಡು ಹೋಗಿದ್ದಾರೆ. ಕಳ್ಳರ ಈ ವಿಚಿತ್ರ ತಂತ್ರ ಕಂಡು ಜನರಲ್ಲಿ ಕುತೂಹಲ ಮೂಡಿಸಿದೆಯಾದರೂ, ಮನೆ ಮುಂದೆ ಬೈಕ್ ನಿಲ್ಲಿಸುವವರಿಗೆ ಆತಂಕ ಶುರುವಾಗಿದೆ. ಬೈಕ್ ಕೊಟ್ಟು ಬೈಕ್ ಪಡೆಯುವ ಈ &lsquo;ಬಾರ್ಟರ್ ಸಿಸ್ಟಮ್&rsquo; ಕಳ್ಳತನ ಸದ್ಯ ಚಿಕ್ಕಮಗಳೂರಿನಲ್ಲಿ ಹಾಟ್ ಟಾಪಿಕ್ ಆಗಿದೆ.&lt;/p&gt;&lt;h3&gt;&lt;strong&gt;ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ:&lt;/strong&gt;&lt;/h3&gt;&lt;p&gt;ಈ ವಿಚಿತ್ರ ಕಳ್ಳತನದ ದೃಶ್ಯಗಳು ಸಮೀಪದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ವಿಡಿಯೋದಲ್ಲಿ ಕಳ್ಳರು ಯಾವುದೇ ಭಯವಿಲ್ಲದೆ, ಅತ್ಯಂತ ನಿಧಾನವಾಗಿ ಮತ್ತು ಸಮಾಧಾನವಾಗಿ ಪರಿಸ್ಥಿತಿಯನ್ನು ಗಮನಿಸಿ ಈ ಕೃತ್ಯ ಎಸಗಿರುವುದು ಗೋಚರಿಸುತ್ತದೆ. ಬೈಕ್ ಕಳ್ಳರು ಎಷ್ಟು ಸಮಯ ತೆಗೆದುಕೊಂಡು ಈ ಕಾರ್ಯಾಚರಣೆ ಮಾಡಿದ್ದಾರೆ ಎನ್ನುವುದೇ ಆಶ್ಚರ್ಯಕರವಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h3&gt;&lt;p&gt;ಈ ಘಟನೆ ಕುರಿತು ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಈ &lsquo;ಎಕ್ಸ್&zwnj;ಚೇಂಜ್ ಆಫರ್&rsquo; ಕೊಟ್ಟು ಪರಾರಿಯಾಗಿರುವ ಖದೀಮರಿಗಾಗಿ ಜಾಲ ಬೀಸಿದ್ದಾರೆ. ಒಟ್ಟಿನಲ್ಲಿ ಕಳ್ಳರ ಈ ಹೊಸ ಐಡಿಯಾ ನೋಡಿ ಪೊಲೀಸರೇ ಬೆರಗಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-bike-theft-exchange-offer-thieves-leave-old-bike-take-new-one-cctv-news-sat/articleshow-gww27su"/>
        </item>
        <item>
            <title><![CDATA[ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಅಲ್ಲಿ ತನಕ ಕುರಿಮೇಯಿಸಿಕೊಂಡಿರು ಎಂದಿದ್ದಕ್ಕೆ ಯುವಕ ಸಾವಿಗೆ ಶರಣು!]]></title>
            <link>https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8</link>
            <guid isPermaLink="true">https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8</guid>
            <pubDate>Sat, 04 Apr 2026 10:22:27 +0530</pubDate>
            <description><![CDATA[&lt;p&gt;ಮದುವೆಯಾಗುತ್ತಿಲ್ಲವೆಂದು ಮನನೊಂದು ಚಿಕ್ಕಮಗಳೂರಿನಲ್ಲಿ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ಕಬ್ಬನ್ ಪಾರ್ಕ್&zwnj;ನಲ್ಲಿ ವೈಯಕ್ತಿಕ ಕಾರಣಗಳಿಂದ ಕಾರ್ಮಿಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಎರಡೂ ಘಟನೆಗಳ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knbd0zhfcbvrbwcfaepn46zx,imgname-shepherd-1775277997615.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಮದುವೆ ವಯಸ್ಸಿಗೆ ಬಂದಿದ್ದರೂ ಕೂಡ ಮದುವೆಯಾಗುತ್ತಿಲ್ಲ ಎಂದು ಮಾನಸಿಕವಾಗಿ ಜಿಗುಪ್ಸೆಗೊಂಡ ಕುರಿಗಾಹಿ ಯುವಕನೋರ್ವ ಮದ್ಯ ಸೇವಿಸಿ ತೆಂಗಿನ ಮರಕ್ಕೆ ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೂಲತಃ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ಕುರಿಗಾಹಿ ಯುವಕ ಕುಮಾರ (26)ಮೃತಪಟ್ಟ ದುರ್ದೈವಿ. ತಾಲೂಕಿನ ಬಾಸೂರು ಸಮೀಪದ ಬೋರಗಾನಹಳ್ಳಿ ಗ್ರಾಮದ ಪರಮೇಶ್ವರಪ್ಪ ಅವರ ತೋಟದಲ್ಲಿ ಕುರಿಗಳ ಮಂದೆಯನ್ನು ಬಿಟ್ಟುಕೊಂಡಿದ್ದನ್ನು. ಇತ್ತೀಚೆಗೆ ರಾಮನವಮಿ ಪ್ರಯುಕ್ತ ಹಬ್ಬಕ್ಕೆಂದು ಊರಿಗೆ ತೆರಳಿದ್ದು ಮನೆಯಲ್ಲಿ ಮದುವೆ ಮಾಡಿಕೊಡುವಂತೆ ಪೋಷಕರಿಗೆ ಒತ್ತಾಯಿಸಿದ್ದನು ಎನ್ನಲಾಗಿದೆ.&lt;/p&gt;&lt;h2&gt;ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ&lt;/h2&gt;&lt;p&gt;ಮನೆಯ ಇಬ್ಬರು ಸಹೋದರರಿಗೆ ಮದುವೆಯಾದ ಬಳಿಕ ನಿನಗೆ ಮದುವೆ ಮಾಡಲಾಗುತ್ತದೆ. ಅಲ್ಲಿಯ ತನಕ ಕುರಿ ಮೇಯಿಸಿಕೊಂಡು ಇರುವಂತೆ ತಿಳಿಹೇಳಿದ್ದಾರೆ. ಮದುವೆ ವಿಚಾರದಲ್ಲಿ ಮಾನಸಿಕವಾಗಿ &zwnj;ಜಿಗುಪ್ಸೆಗೊಂಡು ಮಗನು ನೇಣಿಗೆ ಶರಣಾಗಿರುವುದಾಗಿ ಮೃತನ ತಂದೆ ಬೋಜರಾಜ ದೂರು ನೀಡಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ವಿಜಯಪುರದಲ್ಲೂ ಮದುವೆಯಾಗದ್ದಕ್ಕೆ ಕುರಿಗಾಹಿ ಸಾವು!&lt;/h2&gt;&lt;p&gt;ವಿಜಯಪುರ ಜಿಲ್ಲೆಯಲ್ಲಿ ಮನಸ್ಸು ಕಲಕುವಂತಹ ದುರ್ಘಟನೆ ಸಂಭವಿಸಿದೆ. ಮದುವೆಗೆ ಹೆಣ್ಣು ಸಿಗದೇ ನಿರಾಶೆಗೊಂಡ ಕುರಿಗಾಹಿ ಯುವಕನೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ&ndash;2 ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಮೃತ ಯುವಕನನ್ನು ಶಂಕರ ತಳವಾರ (25) ಎಂದು ಗುರುತಿಸಲಾಗಿದೆ. ಆತ ಸ್ಥಳೀಯವಾಗಿ ಕೃಷಿ ಕೆಲಸಗಳ ಜೊತೆಗೆ ಕುರಿಗಾಹಿಯಾಗಿ ಜೀವನ ನಡೆಸುತ್ತಿದ್ದನು. ಕುಟುಂಬದ ಆಧಾರವಾಗಿದ್ದ ಶಂಕರನ ಜೀವನದಲ್ಲಿ ಮದುವೆ ವಿಚಾರವೇ ದೊಡ್ಡ ಸಂಕಟವಾಗಿ ಪರಿಣಮಿಸಿತ್ತು.&lt;/p&gt;&lt;p&gt;ಮಾಹಿತಿಯ ಪ್ರಕಾರ, ಸುಮಾರು ಎರಡು ವರ್ಷಗಳ ಹಿಂದೆ ಶಂಕರನ ಮದುವೆ ನಿಶ್ಚಯವಾಗಿತ್ತು. ಆದರೆ ಕೆಲವು ಕಾರಣಗಳಿಂದ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಇದಾದ ಬಳಿಕ ಕುಟುಂಬದವರು ಹಾಗೂ ಬಂಧುಗಳು ಎಷ್ಟೇ ಪ್ರಯತ್ನಪಟ್ಟರೂ ಶಂಕರನಿಗೆ ಮದುವೆಗಾಗಿ ಸೂಕ್ತವಾದ ವಧು ಸಿಗಲಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಈ ವಿಚಾರದಿಂದ ಶಂಕರ ಮನಸ್ಸಿನಲ್ಲಿ ತೀವ್ರ ಬೇಸರ ಮತ್ತು ನಿರಾಶೆ ಮೂಡಿದ್ದು, ದಿನೇದಿನೇ ಆತ ಮಾನಸಿಕವಾಗಿ ಕುಗ್ಗುತ್ತಿದ್ದನು ಎನ್ನಲಾಗಿದೆ. ಮದುವೆ ವಿಚಾರದಲ್ಲಿ ಎದುರಾದ ನಿರಾಸೆಯಿಂದ ಮನನೊಂದು, ಕೊನೆಗೆ ಆತ ತನ್ನ ಜಮೀನಿನಲ್ಲಿರುವ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿದ್ದಾನೆ.&lt;/p&gt;&lt;h2&gt;ಕಬ್ಬನ್ ಪಾರ್ಕ್&zwnj;ನಲ್ಲಿ ಕಾರ್ಮಿಕ ಆತ್ಮ*ಹತ್ಯೆ&lt;/h2&gt;&lt;p&gt;ಬೆಂಗಳೂರು: ಕಬ್ಬನ್ ಪಾರ್ಕ್&zwnj; ಆವರಣದ ಮರಕ್ಕೆ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮ*ಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸುರೇಶ್ (35) ಮೃತ ದುರ್ದೈವಿ. ಕಬ್ಬನ್ ಪಾರ್ಕ್&zwnj; ಆವರಣದ ಮರದಲ್ಲಿ ಅಪರಿಚಿತ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಪೊಲೀಸರಿಗೆ ವಾಯು ವಿಹಾರಿಗಳು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಮೃತದೇಹವನ್ನು ಮರದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಬಳಿಕ ಆತನ ಪೂರ್ವಾಪರ ಪರಿಶೀಲಿಸಿದಾಗ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೂಲಿ ಅರಸಿಕೊಂಡು ನಗರಕ್ಕೆ ಬಂದಿದ್ದ ಸುರೇಶ್, ಎಸ್&zwnj;.ಪಿ. ರಸ್ತೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ಸಮಸ್ಯೆಗಳಿಂದ ಜಿಗುಪ್ಸೆಗೊಂಡು ಆತ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-tragedy-26-year-old-shepherd-dies-by-suicide-over-marriage-related-distress-gdp/articleshow-iasofq8"/>
        </item>
        <item>
            <title><![CDATA[ಕಾಫಿನಾಡು ಅಪ್ರಾಪ್ತರ ಪ್ರೇಮಕ್ಕೆ ಲವ್ ಜಿಹಾದ್ ಬಣ್ಣ; ಹಿಂದೂ ಧರ್ಮದ ಪಿಯು ಹುಡುಗಿ-ಅನ್ಯಕೋಮಿನ ಎಸ್ಸೆಸ್ಸೆಲ್ಸಿ ಹುಡುಗ]]></title>
            <link>https://kannada.asianetnews.com/karnataka-districts/chikkamagaluru-mudigere-minor-s-love-jihad-allegation-pocso-case-assault-fir-sat/articleshow-kp2yt34</link>
            <guid isPermaLink="true">https://kannada.asianetnews.com/karnataka-districts/chikkamagaluru-mudigere-minor-s-love-jihad-allegation-pocso-case-assault-fir-sat/articleshow-kp2yt34</guid>
            <pubDate>Tue, 24 Mar 2026 12:07:59 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವು 'ಲವ್ ಜಿಹಾದ್' ಆರೋಪ, ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳ ಸಮರವಾಗಿ ಮಾರ್ಪಟ್ಟಿದೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmf8t8vnm4khfxkjnw485j9q,imgname-chikkamagaluru-love-jihad-case-1774334059381.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಮಾ.24): ಕಾ&lt;/strong&gt;ಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಕೇವಲ ಪ್ರೇಮ ಪ್ರಕರಣವಾಗಿ ಉಳಿಯದೆ, 'ಲವ್ ಜಿಹಾದ್' ಆರೋಪ, ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳ ಸಮರವಾಗಿ ಮಾರ್ಪಟ್ಟಿದೆ.&lt;/p&gt;&lt;p&gt;ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದಲ್ಲಿ ಅಪ್ರಾಪ್ತ ಯುವಕ-ಯುವತಿಯ ನಡುವಿನ ಪ್ರೀತಿಯ ವಿಚಾರವು ಉದ್ವಿಗ್ನತೆಗೆ ಕಾರಣವಾಗಿ, ಎರಡು ವಿಭಿನ್ನ ಪ್ರಕರಣಗಳು ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದ ನಿವಾಸಿಗಳಾದ ಇಬ್ಬರು ಅಪ್ರಾಪ್ತರಾಗಿದ್ದಾರೆ&zwnj;.&lt;/p&gt;&lt;h2&gt;&lt;strong&gt;ಪಿಯು ಹುಡುಗಿ-ಎಸ್ಸೆಸ್ಸೆಲ್ಸಿ ಹುಡುಗ&lt;/strong&gt;&lt;/h2&gt;&lt;p&gt;ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿಂದೂ ಮುದಾಯದ ಹುಡುಗಿ ಮತ್ತು ಎಸ್ ಎಸ್ ಎಲ್ ಸಿ ಓದುತ್ತಿರುವ ಮುಸ್ಲಿಂ ಸಮುದಾಯದ ಹುಡುಗ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ವಿಚಾರ ಹೊರಬಿದ್ದ ನಂತರ, 'ಲವ್ ಜಿಹಾದ್' ಆರೋಪದಡಿ ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಅಪ್ರಾಪ್ತ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್&lt;/strong&gt;&lt;/h2&gt;&lt;p&gt;ಹಲ್ಲೆಗೆ ಒಳಗಾದ ಅಪ್ರಾಪ್ತ ಯುವಕ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ.&lt;/p&gt;&lt;h2&gt;&lt;strong&gt;ಫೋಕ್ಸೋ ಕೇಸ್ ದಾಖಲು&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಹುಡುಗಿಯ ತಂದೆಯೂ ಕೂಡ ಅಪ್ರಾಪ್ತ ಮುಸ್ಲಿಂ ಯುವಕನ ವಿರುದ್ಧ ದೂರು ನೀಡಿದ್ದು, ಅದರ ಆಧಾರದಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಅಪ್ರಾಪ್ತರ ನಡುವಿನ ಸಂಬಂಧವಾಗಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರತೆಯನ್ನು ಪಡೆದಿದೆ.ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಾವಲು ಹೆಚ್ಚಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಇಬ್ಬರೂ ಅಪ್ರಾಪ್ತರಾಗಿರುವುದರಿಂದ, ಕಾನೂನು ಪ್ರಕಾರ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಹಲ್ಲೆ ಆರೋಪ ಮತ್ತು ಪೋಕ್ಸೋ ಪ್ರಕರಣ ಎರಡರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-mudigere-minor-s-love-jihad-allegation-pocso-case-assault-fir-sat/articleshow-kp2yt34"/>
        </item>
        <item>
            <title><![CDATA[ರಾಜ್ಯದ ಜನತೆಗೆ ಅಲರ್ಟ್: ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಎಚ್ಚರಿಕೆ!]]></title>
            <link>https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</link>
            <guid isPermaLink="true">https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc</guid>
            <pubDate>Tue, 24 Mar 2026 20:43:56 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmc4fptfwz060wyzsnqeqzh5,imgname-rain-1774228855631.jpg" type="image/jpeg" height="390" width="690"/>
            <content:encoded><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.&lt;img&gt;&lt;p&gt;ಕರ್ನಾಟಕದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದೆ.&lt;/p&gt;&lt;img&gt;&lt;p&gt;ರಾಜ್ಯದ ಆರು ಪ್ರಮುಖ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು 'ಯೆಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಕರಾವಳಿ ಮತ್ತು ಮಲೆನಾಡು ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಿರಲಿದೆ.&lt;/p&gt;&lt;img&gt;&lt;p&gt;ಈ ಜಿಲ್ಲೆಗಳಲ್ಲಿ ಕೇವಲ ಮಳೆ ಮಾತ್ರವಲ್ಲದೆ, ಜೋರಾದ ಗಾಳಿಯೊಂದಿಗೆ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗವು ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ಮಳೆಯ ಸಮಯದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ಓಡಾಡಬಾರದು. ವಿಶೇಷವಾಗಿ ಮಿಂಚಿನ ಸಂದರ್ಭದಲ್ಲಿ ಮರಗಳ ಕೆಳಗೆ ಆಶ್ರಯ ಪಡೆಯಬಾರದು ಮತ್ತು ವಿದ್ಯುತ್ ಕಂಬಗಳು ಅಥವಾ ತಂತಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಹವಾಮಾನ ಬದಲಾವಣೆಯ ಈ ಸಂದರ್ಭದಲ್ಲಿ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;p&gt;&lt;/p&gt;]]></content:encoded>
            <category>chikkamagalur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/state/karnataka-weather-update-heavy-rain-yellow-alert-next-3-hours-imd-warning-san-ls23skc"/>
        </item>
        <item>
            <title><![CDATA[10 ಅಡಿ ಆಳದಲ್ಲಿ ಗೋಧಿಯ 70 ಮೂಟೆ ಹೂತಿಟ್ಟ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಿನ್ಸಿಪಾಲ್]]></title>
            <link>https://kannada.asianetnews.com/gallery/karnataka-districts/chikkamagaluru-principal-of-kittur-rani-chennamma-residential-school-buried-70-bags-of-wheat-10-feet-deep-mrq-qawg5fn</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-principal-of-kittur-rani-chennamma-residential-school-buried-70-bags-of-wheat-10-feet-deep-mrq-qawg5fn</guid>
            <pubDate>Thu, 02 Apr 2026 12:52:52 +0530</pubDate>
            <description><![CDATA[&lt;p&gt;ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6geygwz5j3gps7ahdmrbf9,imgname-hostel-wheat--1--1775113828892.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು, ಸುಮಾರು 70 ಗೋಧಿ ಮೂಟೆಗಳನ್ನು ಶಾಲಾ ಆವರಣದಲ್ಲಿ 10 ಅಡಿ ಆಳದಲ್ಲಿ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಜೆಸಿಬಿ ಮೂಲಕ ಭೂಮಿ ಅಗೆದಾಗ ಮೂಟೆಗಳು ಸಿಕ್ಕಿವೆ.&lt;/p&gt;&lt;img&gt;&lt;p&gt;ವಸತಿ ಶಾಲೆಯ ಪ್ರಾಂಶುಪಾಲರೊಬ್ಬರು 10 ಅಡಿ ಆಳದಲ್ಲಿ ಸುಮಾರು ಗೋಧಿಯ 70 ಮೂಟೆ ಹೂತಿಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಗೋಧಿ ಮೂಟೆಗಳನ್ನು ಹೂಳಲಾಗಿದೆ.&lt;/p&gt;&lt;img&gt;&lt;p&gt;ಇಂದು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿದಾಗ 10 ಅಡಿ ಆಳದಲ್ಲಿ ಗೋಧಿ ಮೂಟೆಗಳು ಪತ್ತೆಯಾಗಿವೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹರೀಶ್ ಎಂಬವರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ವರ್ಷದ ಹಿಂದೆ ಗೋಧಿ ಮೂಟೆಗಳನ್ನು ಹೂಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ಪ್ರಾಂಶುಪಾಲ ಹರೀಶ್ ಯಾಕೆ ಗೋಧಿ ಮೂಟೆಗಳನ್ನು ಹೂತರು ಎಂಬುದಕ್ಕೆ ನಿಖರ ಉತ್ತರ ಲಭ್ಯವಾಗಿಲ್ಲ. ರಹಸ್ಯವಾಗಿ ಸಂಗ್ರಹಿಸಿದ್ದ ಗೋಧಿ ಮೂಟೆ ಮಾರಾಟವಾಗದ ಹಿನ್ನೆಲೆ ಅಂತಿಮವಾಗಿ ಹೂತಿರಬಹುದು ಎಂಬ ಅನುಮಾನಗಳು ಮೂಡಿವೆ.&lt;/p&gt;&lt;img&gt;&lt;p&gt;ವಸತಿ ಶಾಲೆಯ ಸಿಬ್ಬಂದಿ ಗೋಧಿ ಹಾಳಾಗಿದ್ದರಿಂದ ಹೂಳಲಾಗಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು ವೇಳೆ ಗೋಧಿ ಹಾಳಾಗಿದ್ರೆ ಸರ್ಕಾರಕ್ಕೆ ಹಿಂದಿರುಗಿಸಬೇಕಿತ್ತು. ಸೇವನೆಗೆ ಯೋಗ್ಯವಲ್ಲದ ಗೋಧಿ ಆಗಿದ್ರೆ ಆಹಾರ ಇಲಾಖೆ ಸಿಬ್ಬಂದಿ ಗಮನಕ್ಕೆ ತರಬೇಕಿತ್ತು. ಆದ್ರೆ ಈ ಯಾವ ಪ್ರಕ್ರಿಯೆ ನಡೆಯದೇ ಗೋಧಿ ಹೂತಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ&lt;/strong&gt;&lt;/p&gt;&lt;img&gt;&lt;p&gt;ಸಾರ್ವಜನಿಕರ ದೂರಿನಡಿ ಅಧಿಕಾರಿಗಳು ಭೂಮಿ ಅಗೆದಾಗ ಅಪಾರ ಪ್ರಮಾಣದ ಗೋಧಿ ಮೂಟೆಗಳು ಪತ್ತೆಯಾಗಿವೆ. 2025ರ ಬೇಸಿಗೆ ಸಂದರ್ಭದಲ್ಲಿ ಗೋಧಿ ಹೂತಿರುವ ಅನುಮಾನ ಮೂಡಿದ್ದು, ವಸತಿ ಶಾಲೆಯ ಮಕ್ಕಳಿಗೆ ಸರಿಯಾಗಿ ಆಹಾರ ವಿತರಣೆ ಮಾಡಿಲ್ಲವಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂಬಂಧ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಖರ್ಚಿಗೆ ಒಂದಿಷ್ಟು ಕೊಡಿ? ನಾಚಿಕೆ ಬಿಟ್ಟು ರೈತನ ಬಳಿ ಲಂಚ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ&lt;/strong&gt;&lt;/p&gt;]]></content:encoded>
            <category>chikkamagalur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/chikkamagaluru-principal-of-kittur-rani-chennamma-residential-school-buried-70-bags-of-wheat-10-feet-deep-mrq-qawg5fn"/>
        </item>
        <item>
            <title><![CDATA[ಚಿಕ್ಕಮಗಳೂರು ಸಂತೆಯಲ್ಲಿ ನಿಂತು ಮತಾಂತರ: ಕಿರಾತಕರನ್ನ ಹಿಡಿದು ಬುದ್ಧಿ ಕಲಿಸಿದ ಹಿಂದೂ ಕಾರ್ಯಕರ್ತರು!]]></title>
            <link>https://kannada.asianetnews.com/karnataka-districts/chikkamagaluru-hosapete-religious-conversion-attempt-market-hindu-activist-omni-chase-sat/articleshow-qb1gwlh</link>
            <guid isPermaLink="true">https://kannada.asianetnews.com/karnataka-districts/chikkamagaluru-hosapete-religious-conversion-attempt-market-hindu-activist-omni-chase-sat/articleshow-qb1gwlh</guid>
            <pubDate>Tue, 31 Mar 2026 21:23:40 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ವಾರದ ಸಂತೆಯಲ್ಲಿ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಿಡಿದಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು 10 ಕಿ.ಮೀ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn2990ec4yapwqap3ffxngj3,imgname-chikkamagaluru-conversion-1774972076492.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.31): ಕಾ&lt;/strong&gt;ಫಿನಾಡು ಚಿಕ್ಕಮಗಳೂರಿನಲ್ಲಿ ಮತಾಂತರದ ಭೂತ ಮತ್ತೆ ದರ್ಶನ ನೀಡಿದೆ. ವಾರದ ಸಂತೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. ಈ ವೇಳೆ ನಡೆದ ಸಿನಿಮೀಯ ಮಾದರಿಯ ಚೇಸ್ ಈಗ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ವಾರದ ಸಂತೆಯಲ್ಲಿ ಮತಾಂತರದ ಜಾಲ:&lt;/strong&gt;&lt;/h2&gt;&lt;p&gt;ಹೊಸಪೇಟೆ ಗ್ರಾಮದಲ್ಲಿ ಇಂದು ವಾರದ ಸಂತೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಮೂಲದ ಇಬ್ಬರು ವ್ಯಕ್ತಿಗಳು ಓಮ್ನಿ ವ್ಯಾನ್&zwnj;ನಲ್ಲಿ ಗ್ರಾಮಕ್ಕೆ ಆಗಮಿಸಿದ್ದರು. ಸಂತೆಗೆ ಬಂದಿದ್ದ ಜನರಿಗೆ 'ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ' ಎಂಬ ಮುಖಪುಟದ ಪುಸ್ತಕಗಳನ್ನು ಹಂಚುತ್ತಾ, ಹಿಂದೂ ಧರ್ಮದಿಂದ ಮತಾಂತರಗೊಳ್ಳುವಂತೆ ಪ್ರೇರೇಪಿಸುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಸ್ಥಳೀಯರ ಆಕ್ರೋಶ ಮತ್ತು ಪ್ರಶ್ನೆ:&lt;/strong&gt;&lt;/h2&gt;&lt;p&gt;ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ಓರ್ವ ಯುವಕ ಹಾಗೂ ಮತ್ತೊಬ್ಬ ಮಧ್ಯವಯಸ್ಕನನ್ನು ಸೆರೆಹಿಡಿದ ಕಾರ್ಯಕರ್ತರು, 'ನೀವು ಹಿಂದೂ ಧರ್ಮದವರಾಗಿದ್ದುಕೊಂಡು ಮತಾಂತರಗೊಂಡಿದ್ದೀರಾ? ಈಗ ಬೇರೆಯವರನ್ನು ಏಕೆ ಮತಾಂತರ ಮಾಡುತ್ತಿದ್ದೀರಾ? ಬನ್ನಿ, ನೀವು ಕೂಡ ಮರಳಿ ಹಿಂದೂ ಧರ್ಮಕ್ಕೆ ಸೇರಿಕೊಳ್ಳಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಎರಡೂ ತಂಡಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.&lt;/p&gt;&lt;h2&gt;&lt;strong&gt;10 ಕಿಲೋ ಮೀಟರ್ ಸಿನಿಮೀಯ ಚೇಸ್:&lt;/strong&gt;&lt;/h2&gt;&lt;p&gt;ಕಾರ್ಯಕರ್ತರ ಪ್ರಶ್ನೆಗಳಿಗೆ ಗಾಬರಿಗೊಂಡ ಮತಾಂತರ ತಂಡದ ಇಬ್ಬರು, ತಮ್ಮ ಓಮ್ನಿ ವ್ಯಾನ್ ಹತ್ತಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಅತ್ಯಂತ ವೇಗವಾಗಿ ವ್ಯಾನ್ ಚಲಾಯಿಸಿಕೊಂಡು ತಪ್ಪಿಸಿಕೊಳ್ಳಲು ಮುಂದಾದಾಗ, ಹಿಂದೂ ಕಾರ್ಯಕರ್ತರು ತಮ್ಮ ಬೈಕ್&zwnj;ಗಳಲ್ಲಿ ಅವರನ್ನು ಚೇಸ್ ಮಾಡಲು ಶುರು ಮಾಡಿದ್ದಾರೆ. ಹೊಸಪೇಟೆ ಗ್ರಾಮದಿಂದ ಸುಮಾರು 10 ಕಿಲೋ ಮೀಟರ್ ದೂರದವರೆಗೆ ಈ ಸಿನಿಮೀಯ ಮಾದರಿಯ ಚೇಸ್ ನಡೆದಿದೆ. ಕೊನೆಗೆ ಕೈಮರ ಚೆಕ್ ಪೋಸ್ಟ್ ಬಳಿ ಓಮ್ನಿ ವ್ಯಾನ್ ಅನ್ನು ಅಡ್ಡಗಟ್ಟಿದ ಕಾರ್ಯಕರ್ತರು, ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ವಶಕ್ಕೆ ಆರೋಪಿಗಳು:&lt;/strong&gt;&lt;/h2&gt;&lt;p&gt;ಚೇಸ್ ಮಾಡಿ ಹಿಡಿದ ಇಬ್ಬರನ್ನು ಕಾರ್ಯಕರ್ತರು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. &quot;ಭದ್ರಾವತಿಯಿಂದ ಹೊಸಪೇಟೆ ಗ್ರಾಮಕ್ಕೆ ಬರುವ ಮಾರ್ಗ ಮಧ್ಯದ ಎಲ್ಲಾ ಹಳ್ಳಿಗಳಲ್ಲೂ ಇವರು ಮತಾಂತರಕ್ಕೆ ಪ್ರೇರೇಪಿಸಿರುವ ಸಾಧ್ಯತೆ ಇದೆ&quot; ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಓಮ್ನಿ ವ್ಯಾನ್ ಹಾಗೂ ಮತಾಂತರಕ್ಕೆ ಬಳಸುತ್ತಿದ್ದ ಪುಸ್ತಕಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.&lt;/p&gt;&lt;p&gt;ಈ ಘಟನೆಯು ಜಿಲ್ಲೆಯಲ್ಲಿ ಮತಾಂತರದ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-hosapete-religious-conversion-attempt-market-hindu-activist-omni-chase-sat/articleshow-qb1gwlh"/>
        </item>
        <item>
            <title><![CDATA[ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಆತ್ಮ*ಹತ್ಯೆ; ಸಾವಿಗೂ ಮುನ್ನ 25 ನಿಮಿಷ ವಿಡಿಯೋ ವೈರಲ್!]]></title>
            <link>https://kannada.asianetnews.com/karnataka-districts/chikkamagaluru-tarikere-cooperative-secretary-usha-death-video-death-note-sat/articleshow-to65nh6</link>
            <guid isPermaLink="true">https://kannada.asianetnews.com/karnataka-districts/chikkamagaluru-tarikere-cooperative-secretary-usha-death-video-death-note-sat/articleshow-to65nh6</guid>
            <pubDate>Fri, 27 Mar 2026 17:56:38 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಉಷಾ ಎಂಬುವವರು ಹೊಸ ಕಮಿಟಿಯ ಕಿರುಕುಳಕ್ಕೆ ಬೇಸತ್ತು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 25 ನಿಮಿಷದ ವಿಡಿಯೋ ಹಾಗೂ ಡೆತ್ ನೋಟ್ ಬರೆದಿಟ್ಟಿದ್ದು, ಇದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmqm3st620wb3wcr7qh70zbb,imgname-chikkamagaluru-lady-death-1774614341446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: (ಮಾ27): ರಾ&lt;/strong&gt;ಜ್ಯದಲ್ಲಿ ಆಡಳಿತ ವ್ಯವಸ್ಥೆಯ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ. ಹಳೆಯ ದಾಖಲೆಗಳ ಹೆಸರಿನಲ್ಲಿ ನೀಡಲಾದ ಮಾನಸಿಕ ಹಿಂಸೆ ತಾಳಲಾರದೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಆತ್ಮ*ಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;&lt;strong&gt;ದುರ್ದೈವಿ ಉಷಾ (45) ಸಾವು:&lt;/strong&gt;&lt;/p&gt;&lt;p&gt;ಹೆಚ್.ಮಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2010ರಿಂದಲೂ ನಿಷ್ಠೆಯಿಂದ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಉಷಾ (45) ಎಂಬುವವರೇ ಸಾವನ್ನಪ್ಪಿದ ದುರ್ದೈವಿ. ಸುಮಾರು 14 ವರ್ಷಗಳಿಂದ ಸಂಘದ ಏಳಿಗೆಗಾಗಿ ಶ್ರಮಿಸಿದ್ದ ಉಷಾ, ಈಗ ಡೆತ್ ನೋಟ್ ಹಾಗೂ ಸುದೀರ್ಘ ವಿಡಿಯೋ ರೆಕಾರ್ಡ್ ಮಾಡಿ ಸಾವಿಗೆ ಶರಣಾಗುವ ಮೂಲಕ ಇಡೀ ಗ್ರಾಮವನ್ನೇ ಸ್ಮಶಾನ ಮೌನವಾಗಿಸಿದ್ದಾರೆ.&lt;/p&gt;&lt;h3&gt;&lt;strong&gt;25 ನಿಮಿಷದ ವಿಡಿಯೋ ಹಾಗೂ 3 ಪುಟದ ಡೆತ್ ನೋಟ್:&lt;/strong&gt;&lt;/h3&gt;&lt;p&gt;ಆತ್ಮಹತ್ಯೆಗೂ ಮುನ್ನ ಉಷಾ ಅವರು ಸುಮಾರು 25 ನಿಮಿಷಗಳ ಕಾಲ ಸುದೀರ್ಘ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಇದರಲ್ಲಿ ತಾವು ಅನುಭವಿಸಿದ ನೋವು ಮತ್ತು ಕಿರುಕುಳವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, 3 ಪುಟಗಳ ಡೆತ್ ನೋಟ್ ಬರೆದಿಟ್ಟಿರುವ ಅವರು, ಅದರಲ್ಲಿ &lsquo;ಬಸವಣ್ಣ ಕ್ಷಮಿಸಪ್ಪಾ&rsquo; ಎಂದು ಬರೆಯುವ ಮೂಲಕ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಕಿರುಕುಳದ ಆರೋಪವೇನು?&lt;/strong&gt;&lt;/h2&gt;&lt;p&gt;ಉಷಾ ಅವರ ಸಾವಿಗೆ ಸಂಘದ ಹೊಸ ಕಮಿಟಿಯ ಸದಸ್ಯರೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಲು ಉತ್ಪಾದಕರ ಸಂಘಕ್ಕೆ ಹೊಸ ಕಮಿಟಿ ಬಂದ ಮೇಲೆ, ಅವರು ಉಷಾ ಅವರಿಗೆ ಹಳೆಯ ಲೆಕ್ಕಪತ್ರ ಹಾಗೂ ದಾಖಲೆಗಳ ಹೆಸರಿನಲ್ಲಿ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. 2020ರಲ್ಲಿ ಮಾಡಿದ ಕೆಲಸಕ್ಕೆ ಈಗ ಬಿಲ್ ಕೇಳುತ್ತಿದ್ದಾರೆ, ಇಷ್ಟು ವರ್ಷಗಳ ಹಳೆಯ ದಾಖಲೆಗಳನ್ನು ಎಲ್ಲಿಂದ ತರಲಿ ಎಂದು ಉಷಾ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ. 'ಸಂಘದ ಹಣ ದುರುಪಯೋಗ ಮಾಡಿದ್ದೀರಾ ಎಂದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ದಂಡ ಕಟ್ಟಿ ಅಂದಿದ್ದರೆ ನಾನು ಕಟ್ಟುತ್ತಿದ್ದೆ. ಆದರೆ ಕೋರ್ಟು, ಪೊಲೀಸ್ ಅಂತ ಹೆದರಿಸಿದ್ದೀರಾ. ನೀವು ಒಂದು ಅವಕಾಶ ನೀಡಿದ್ದರೆ ನನ್ನ ಮಗಳು ಇಂದು ತಬ್ಬಲಿ ಆಗುತ್ತಿರಲಿಲ್ಲ' ಎಂದು ಉಷಾ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಗಳ ಭವಿಷ್ಯದ ಬಗ್ಗೆ ಆತಂಕ:&lt;/strong&gt;&lt;/h2&gt;&lt;p&gt;ಪತ್ರದಲ್ಲಿ ಉಷಾ ಅವರು ಕೇವಲ ಕಿರುಕುಳದ ಬಗ್ಗೆ ಮಾತ್ರವಲ್ಲದೆ, ತಮ್ಮ ಮಗಳ ಓದು, ಭವಿಷ್ಯ, ಮನೆಯ ಸಾಮಾನುಗಳು ಹಾಗೂ ಒಡವೆಗಳ ಬಗ್ಗೆಯೂ ಸುದೀರ್ಘವಾಗಿ ಬರೆದಿದ್ದಾರೆ. ಇಡೀ ಊರೇ ತನ್ನನ್ನು ಅವಮಾನಿಸುವಂತೆ ಮಾಡಲಾಗಿದೆ ಮತ್ತು ಊರಿನ ಕೆಲವು ಯುವಕರ ಚುಚ್ಚು ಮಾತುಗಳಿಂದ ಮನಸ್ಸಿಗೆ ತೀವ್ರವಾಗಿ ಘಾಸಿಯಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;&lt;strong&gt;9 ಜನರ ವಿರುದ್ಧ ಪ್ರಕರಣ ದಾಖಲು:&lt;/strong&gt;&lt;/h3&gt;&lt;p&gt;ಉಷಾ ಅವರ ಪತಿ ರಮೇಶ್ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ 9 ಮಂದಿ ಆರೋಪಿಗಳು ಗ್ರಾಮ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ದಕ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಮಹಿಳೆಯೊಬ್ಬರು ಇಂತಹ ಸ್ಥಿತಿಗೆ ಬಂದು ತಲುಪಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-tarikere-cooperative-secretary-usha-death-video-death-note-sat/articleshow-to65nh6"/>
        </item>
        <item>
            <title><![CDATA[ಮೂಡಿಗೆರೆ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಅಪ್ಪ-ಅಮ್ಮನ ಕುಮ್ಮಕ್ಕಿನಿಂದ ಹಿಂದೂ ಯುವತಿ ಮತಾಂತರಕ್ಕೆ ಅಪ್ರಾಪ್ತನ ಯತ್ನ!]]></title>
            <link>https://kannada.asianetnews.com/karnataka-districts/chikkamagaluru-mudigere-love-jihad-case-get-big-twist-minor-boy-pocso-case-updates-sat/articleshow-uw1pls0</link>
            <guid isPermaLink="true">https://kannada.asianetnews.com/karnataka-districts/chikkamagaluru-mudigere-love-jihad-case-get-big-twist-minor-boy-pocso-case-updates-sat/articleshow-uw1pls0</guid>
            <pubDate>Tue, 24 Mar 2026 19:32:04 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಲವ್ ಜಿಹಾದ್ ಆರೋಪದ ಪ್ರಕರಣವು ಹೊಸ ತಿರುವು ಪಡೆದಿದೆ. ಹಲ್ಲೆಗೊಳಗಾದ ಅಪ್ರಾಪ್ತ ಬಾಲಕನ ವಿರುದ್ಧವೇ ಬಾಲಕಿಯ ಪೋಷಕರು ದೂರು ನೀಡಿದ್ದು, ಮತಾಂತರಕ್ಕೆ ಒತ್ತಾಯ, ಅಶ್ಲೀಲ ಫೋಟೋ ಬಳಸಿ ಬ್ಲ್ಯಾಕ್&zwnj;ಮೇಲ್ ಮತ್ತು ಕೊಲೆ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmg2cf05csynn1zj2qqm94v5,imgname-chikkamagaluru-mudigere-love-jihad-case-1774360869892.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಮಾ.24): ಜಿ&lt;/strong&gt;ಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಸಂಚಲನ ಮೂಡಿಸಿದ್ದ ಪಿಯುಸಿ ಹುಡುಗಿ-ಎಸ್ಸೆಸ್ಸೆಲ್ಸಿ ಹುಡುಗನ ಲವ್ ಜಿಹಾದ್ ಆರೋಪದ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ. ಈವರೆಗೆ ಕೇವಲ ಹಲ್ಲೆ ಪ್ರಕರಣ ಎಂದು ಬಿಂಬಿತವಾಗಿದ್ದ ಘಟನೆಯಲ್ಲಿ, ಈಗ ಅಪ್ರಾಪ್ತ ವಿದ್ಯಾರ್ಥಿಯ ವಿರುದ್ಧವೇ ಗಂಭೀರ ಆರೋಪಗಳು ಕೇಳಿಬಂದಿದ್ದು, ಪೊಲೀಸರು ಪೋಕ್ಸೋ (POCSO) ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ ಮತ್ತು ಸ್ಫೋಟಕ ಆರೋಪಗಳು&lt;/strong&gt;&lt;/h3&gt;&lt;p&gt;ಮೂಡಿಗೆರೆಯ ಈ ಪ್ರಕರಣದಲ್ಲಿ ಹಲ್ಲೆಗೊಳಗಾದ ಅಪ್ರಾಪ್ತ ಬಾಲಕನ ವಿರುದ್ಧವೇ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ಬಾಲಕಿಯು ನೀಡಿದ ಮಾಹಿತಿಯ ಆಧಾರದ ಮೇಲೆ ಈ ದೂರು ದಾಖಲಾಗಿದ್ದು, ಹಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ.&lt;/p&gt;&lt;p&gt;&lt;strong&gt;ಮತಾಂತರಕ್ಕೆ ಒತ್ತಾಯ:&lt;/strong&gt; ಬಾಲಕಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಾಲಕ ಒತ್ತಾಯಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಅಶ್ಲೀಲ ಫೋಟೋಗಳ ಬಳಕೆ:&lt;/strong&gt; ಮತಾಂತರಗೊಂಡು ಮದುವೆಯಾಗದಿದ್ದರೆ ಬಾಲಕಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಕೊಲೆ ಬೆದರಿಕೆ:&lt;/strong&gt; ಒಂದು ವೇಳೆ ಮತಾಂತರಕ್ಕೆ ಒಪ್ಪದಿದ್ದರೆ ಬಾಲಕಿಯ ಪೋಷಕರನ್ನೇ ಕೊಲೆ ಮಾಡುವುದಾಗಿ ಬಾಲಕ ಬೆದರಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;&lt;strong&gt;ಪೋಷಕರಿಗೆ ವಿಷಯ ತಿಳಿಸಲು ಹೆದರಿದ್ದ ಬಾಲಕಿ&lt;/strong&gt;&lt;/h2&gt;&lt;p&gt;ತನ್ನ ಹೆತ್ತವರ ಪ್ರಾಣಕ್ಕೆ ಅಪಾಯ ಬರಬಹುದು ಎಂಬ ಭೀತಿಯಿಂದ ಬಾಲಕಿ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. &lsquo;ಅಪ್ರಾಪ್ತ ಬಾಲಕ ಹಾಗೂ ಆತನ ಪೋಷಕರು ಹೇಳಿದಂತೆ ಕೇಳದಿದ್ದರೆ ನನ್ನ ತಂದೆ-ತಾಯಿಯನ್ನು ಸಾಯಿಸುತ್ತಾರೆ&rsquo; ಎಂದು ಬಾಲಕಿ ತೀವ್ರವಾಗಿ ಹೆದರಿದ್ದಳು ಎಂದು ತಿಳಿದುಬಂದಿದೆ.&lt;/p&gt;&lt;h3&gt;&lt;strong&gt;ದೂರು ಮತ್ತು ಪ್ರತಿ-ದೂರು ದಾಖಲು&lt;/strong&gt;&lt;/h3&gt;&lt;p&gt;ಈ ಪ್ರಕರಣವು ಈಗ ದೂರು ಮತ್ತು ಪ್ರತಿ-ದೂರುಗಳ ಸಮರವಾಗಿ ಮಾರ್ಪಟ್ಟಿದೆ:&lt;/p&gt;&lt;p&gt;&lt;strong&gt;ಹಿಂದೂ ಕಾರ್ಯಕರ್ತರ ವಿರುದ್ಧ ದೂರು: &lt;/strong&gt;ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಆರು ಮಂದಿ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಬಾಲಕ ಮತ್ತು ಆತನ ಪೋಷಕರ ವಿರುದ್ಧ ದೂರು: &lt;/strong&gt;ಬಾಲಕಿಯ ಪೋಷಕರು ನೀಡಿದ ದೂರಿನನ್ವಯ, ಅಪ್ರಾಪ್ತ ಬಾಲಕನ ಮೇಲೆ ಪೋಕ್ಸೋ (POCSO) ಹಾಗೂ ಐಟಿ ಆಕ್ಟ್ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಬಾಲಕನ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನ ಪೋಷಕರ ವಿರುದ್ಧವೂ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಇಲಾಖೆ ಹೇಳುವುದೇನು?&lt;/strong&gt;&lt;/h2&gt;&lt;p&gt;ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿರುವ ಚಿಕ್ಕಮಗಳೂರು ಎಸ್ಪಿ ಜಿತೇಂದ್ರ ದಯಾಮ ಅವರು ಪ್ರತಿಕ್ರಿಯಿಸಿದ್ದು, 'ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯಿಂದಲೂ ದೂರುಗಳು ದಾಖಲಾಗಿವೆ. ಪ್ರಕರಣದ ಬಗ್ಗೆ ತೀವ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲಾಗುತ್ತಿದೆ. ಸತ್ಯಾಸತ್ಯತೆಯನ್ನು ಶೀಘ್ರವೇ ಹೊರಹಾಕಲಾಗುವುದು' ಎಂದು ತಿಳಿಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಸ್ತುತ ತನಿಖೆ ಚುರುಕುಗೊಂಡಿದ್ದು, ಈ ಬೆಳವಣಿಗೆಯಿಂದಾಗಿ ಮಲೆನಾಡು ಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-mudigere-love-jihad-case-get-big-twist-minor-boy-pocso-case-updates-sat/articleshow-uw1pls0"/>
        </item>
    </channel>
</rss>
