<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 16:59:43 +0530</lastBuildDate>
        <atom:link href="https://kannada.asianetnews.com/rss/chikkamagalur" rel="self" type="application/rss+xml"/>
        <item>
            <title><![CDATA[ಚಿಕ್ಕಮಗಳೂರು: ಕಾಫಿನಾಡಿಲ್ಲಿ ಜೋರಾದ ಮಳೆ ಆರ್ಭಟ, ಶೃಂಗೇರಿ ದೇಗುಲ ರಸ್ತೆ ಜಲಾವೃತ]]></title>
            <link>https://kannada.asianetnews.com/karnataka-districts/chikkamagaluru-heavy-rains-bhadra-tunga-floods-kalsa-sringeri-highway-closed-san/articleshow-1v75n1i</link>
            <guid isPermaLink="true">https://kannada.asianetnews.com/karnataka-districts/chikkamagaluru-heavy-rains-bhadra-tunga-floods-kalsa-sringeri-highway-closed-san/articleshow-1v75n1i</guid>
            <pubDate>Sat, 01 Aug 2026 15:00:47 +0530</pubDate>
            <description><![CDATA[&lt;p&gt;ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದಾಗಿ ಕಳಸ-ಕಾರ್ಕಳ ಹೆದ್ದಾರಿ ಬಂದ್ ಆಗಿದ್ದು, ಶೃಂಗೇರಿಯ ದೇಗುಲದ ರಸ್ತೆ ಜಲಾವೃತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyyafb4tgvwe258myz7h7z9b,imgname-chikkamagalur-rain-1785576533146.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಆ.1): &lt;/strong&gt;ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮಿತಿಮೀರಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಕಳಸ, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರಮುಖ ನದಿಗಳಾದ ತುಂಗಾ ಮತ್ತು ಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.&lt;/p&gt;&lt;p&gt;ಕಳಸ ತಾಲೂಕಿನ ಕುದುರೆಮುಖ ಹಾಗೂ ಕಳಸ ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಜಾಂಬಳೆ ಗ್ರಾಮದ ಬಳಿ ಇರುವ ಪ್ರಮುಖ ಸೇತುವೆಯ ಮೇಲೆ ಭದ್ರಾ ನದಿಯ ಪ್ರವಾಹದ ನೀರು ಭಾರಿ ಪ್ರಮಾಣದಲ್ಲಿ ಹರಿಯುತ್ತಿದ್ದು, ಕಳಸ-ಕಾರ್ಕಳ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸೇತುವೆ ಮೇಲೆ 2 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದರೂ ಕೆಲ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಅಪಾಯಕಾರಿ ಸಾಹಸಕ್ಕೆ ಇಳಿಯುತ್ತಿರುವ ದೃಶ್ಯ ಕಂಡುಬಂದಿದೆ.&lt;/p&gt;&lt;h2&gt;&lt;strong&gt;ಶೃಂಗೇರಿ ದೇಗುಲದ ರಸ್ತೆ ಜಲಾವೃತ, ಕೆರೆಕಟ್ಟೆಯಲ್ಲಿ ಪ್ರಳಯ ಸಾದೃಶ ಮಳೆ!&lt;/strong&gt;&lt;/h2&gt;&lt;p&gt;ಶೃಂಗೇರಿ ತಾಲೂಕು ಹಾಗೂ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ತುಂಗಾ ನದಿಯ ಒಳಹರಿವು ಹೆಚ್ಚಾಗಿದೆ. ನದಿಯ ಅಬ್ಬರಕ್ಕೆ ಶೃಂಗೇರಿ ಶ್ರೀ ಶಾರದಾಂಬೆ ದೇಗುಲದ ಪಾರ್ಕಿಂಗ್ ಲಾಟ್&zwnj;ಗೆ ತೆರಳುವ ಪ್ಯಾರಲಲ್ ರಸ್ತೆಯಲ್ಲಿ ಸುಮಾರು 3 ರಿಂದ 4 ಅಡಿ ನೀರು ನಿಂತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.&lt;/p&gt;&lt;h2&gt;&lt;strong&gt;ಮಾಕೋಡಿನಲ್ಲಿ ಕಾಲುಸಂಕ ಮುಳುಗಡೆ, ಜೋಗಿಕುಂಬ್ರಿಯಲ್ಲಿ ಭೂಕುಸಿತ!&lt;/strong&gt;&lt;/h2&gt;&lt;p&gt;ಕುದುರೆಮುಖ ಗುಡ್ಡಗಾಡು ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೋಟ, ಗದ್ದೆ ಹಾಗೂ ರಸ್ತೆಗಳು ಜಲಾವೃತಗೊಂಡಿವೆ. ಕಳಸ ತಾಲೂಕಿನ ಸಂಸೆ ಸಮೀಪದ ಮಾಕೋಡು ಗ್ರಾಮದಲ್ಲಿ ಹರಿಯುವ ನದಿಯ ಅಬ್ಬರಕ್ಕೆ ಕಬ್ಬಿಣದ ಕಾಲುಸಂಕವೇ ಮುಳುಗಡೆಯಾಗಿದೆ. ಜೋಗಿಕುಂಬ್ರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಸುರೇಶ್ ಹಾಗೂ ವೆಂಕಟೇಶ್ ಎಂಬುವರ ಅಡಿಕೆತೋಟಗಳಿಗೆ ಮಣ್ಣು ಜಾರಿಬಿದ್ದಿದೆ. ತೋಟಗಳಲ್ಲಿ ಬರೋಬ್ಬರಿ 2 ಅಡಿ ಎತ್ತರಕ್ಕೆ ನೀರು ನಿಂತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;h2&gt;&lt;strong&gt;ಜಿಲ್ಲಾಡಳಿತದಿಂದ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಮಲೆನಾಡು ಭಾಗದಲ್ಲಿ ಇನ್ನು ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ನದಿ ತೀರದ ನಿವಾಸಿಗಳು, ತಗ್ಗು ಪ್ರದೇಶದಲ್ಲಿ ಇರುವವರು ಹಾಗೂ ವಾಹನ ಸವಾರರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ಅನಗತ್ಯವಾಗಿ ನೀರಿನ ಹರಿವಿನ ಬಳಿ ತೆರಳಬಾರದು ಎಂದು ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ.&lt;/p&gt;]]></content:encoded>
            <category>chikkamagalur</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/chikkamagaluru-heavy-rains-bhadra-tunga-floods-kalsa-sringeri-highway-closed-san/articleshow-1v75n1i"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡಿದ ಇಲಿ; ಚಿಕನ್ ಅಂಗಡಿ ಗಲ್ಲಾಪೆಟ್ಟಿಗೆಯಿಂದ ಹಣ ಕದ್ದೊಯ್ದು ಬಿಲದಲ್ಲಿಟ್ಟ ಮೂಷಿಕ!]]></title>
            <link>https://kannada.asianetnews.com/karnataka-districts/chikkamagaluru-rat-steals-currency-notes-chicken-shop-cash-drawer-nest-ganesh-chaturthi/articleshow-2sg4gvp</link>
            <guid isPermaLink="true">https://kannada.asianetnews.com/karnataka-districts/chikkamagaluru-rat-steals-currency-notes-chicken-shop-cash-drawer-nest-ganesh-chaturthi/articleshow-2sg4gvp</guid>
            <pubDate>Tue, 11 Aug 2026 11:52:13 +0530</pubDate>
            <description><![CDATA[ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದ ಚಿಕನ್ ಅಂಗಡಿಯೊಂದರಲ್ಲಿ, ಗಲ್ಲಾಪೆಟ್ಟಿಗೆಯಿಂದ ನಿರಂತರವಾಗಿ ಹಣ ಕಣ್ಮರೆಯಾಗುತ್ತಿತ್ತು. ಕೊನೆಗೆ ಅಂಗಡಿ ಮಾಲೀಕರು ಪರಿಶೀಲಿಸಿದಾಗ, ಇಲಿಯೊಂದು ನೋಟುಗಳನ್ನು ಕದ್ದು ತನ್ನ ಗೂಡಿನಲ್ಲಿ ಸಂಗ್ರಹಿಸಿಟ್ಟಿದ್ದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzqq4jxhhf1rrgymwa13nxd0,imgname-chikkamagaluru-rat-stole-money-1786428672944.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಆ.11): ಧಾ&lt;/strong&gt;ನ್ಯ, ಕಾಗದ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದು ಗೂಡಿನಲ್ಲಿ ಇಟ್ಟುಕೊಳ್ಳುವ ಇಲಿ ಮಧ್ಯೆ, ಇಲ್ಲೊಂದು ಕಿಲಾಡಿ ಇಲಿ, ಗಲ್ಲಾಪೆಟ್ಟಿಯಲ್ಲಿ ಇದ್ದ ನೋಟುಗಳನ್ನೇ ಕದ್ದು ಗೂಡಿನಲ್ಲಿ ಇಟ್ಟುಕೊಂಡಿದ್ದ ಅಚ್ಚರಿ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದಲ್ಲಿ ಜಂ-ಜಂ ಚಿಕನ್ ಅಂಗಡಿಯಲ್ಲಿ ನಡೆದಿದೆ.&lt;/p&gt;&lt;p&gt;ಕಳೆದ 1 ವಾರದಿಂದ ಅಂಗಡಿ ಮಾಲೀಕ ಸಿದ್ದಿಕ್ ಅವರು ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಿದ್ದ 10, 20 ಹಾಗೂ 50 ರು. ಮುಖಬೆಲೆಯ ನೋಟುಗಳು ಒಂದೊಂದಾಗಿ ಕಾಣೆಯಾಗುತ್ತಿದ್ದವು. ಇದರ ಬಗ್ಗೆ ಮಾಲೀಕರಿಗ ಅನುಮಾನ ಮೂಡಿತ್ತು. ಆದರೆ, ಭಾನುವಾರ ರಾತ್ರಿ ಮಾಲೀಕನೇ ಗಲ್ಲಾಪೆಟ್ಟಿಗೆಯಲ್ಲಿ ಹಣವಿಟ್ಟು ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ಆತ ಅಂಗಡಿ ತೆರೆದು ಗಲ್ಲಾಪೆಟ್ಟಿಗೆ ಗಮನಿಸಿದಾಗ ಹಣ ಮಾಯವಾಗಿತ್ತು. ಈ ವೇಳೆ ಪರಿಶೀಲಿಸಿದಾಗ ಇಲಿ ಓಡಾಡುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಇಡೀ ಅಂಗಡಿಯನ್ನು ಹುಡುಕಾಟ ನಡೆಸಿದಾಗ ಅಂಗಡಿಯ ಹಿಂಭಾಗದಲ್ಲಿ ಇಲಿಯೊಂದು ನೋಟುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.&lt;/p&gt;&lt;h2&gt;&lt;strong&gt;ಒಂದು ವಾರದಲ್ಲಿ 190 ರೂ. ಕದ್ದೊಯ್ದ ಇಲಿ&lt;/strong&gt;&lt;/h2&gt;&lt;p&gt;ಇಲಿ, ಹಣವನ್ನೇ ತನ್ನ ಗೂಡಿನ ನಿರ್ಮಾಣ ಸಾಮಗ್ರಿಯನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 1 ವಾರದಲ್ಲಿ ಒಟ್ಟು 190 ರು. ಮೌಲ್ಯದ ವಿವಿಧ ನೋಟು ಪತ್ತೆಯಾಗಿವೆ.&lt;/p&gt;&lt;p&gt;&lt;strong&gt;ವಜ್ರದುಂಗುರ ಸೇರಿ ₹10 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಇಲಿ&lt;/strong&gt;&lt;/p&gt;&lt;p&gt;ಇತ್ತೀಚಿಗೆ ತುಮಕೂರಿನಲ್ಲಿ ಚಿನ್ನದ ಆಭರಣಗಳ ಅಂಗಡಿಯಲ್ಲಿ ಇಲಿಯೊಂದು ಬರೋಬ್ಬರಿ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿತ್ತು. ಆಭರಣ ಅಂಗಡಿಯಲ್ಲಿ ರಾತ್ರಿ ವೇಳೆ ಎಂಟ್ರಿ ಕೊಡ್ತಿದ್ದ ಇಲಿ ಒಂದು ವಜ್ರದ ಉಂಗುರ ಸೇರಿದಂತೆ 10 ಚಿನ್ನದ ಉಂಗುರಗಳು, 2 ಚಿನ್ನದ ಸರಗಳನ್ನು ಕದ್ದು ತನ್ನ ಗೂಡಿನ ಹತ್ತಿರ ಇಟ್ಟುಕೊಂಡಿತ್ತು. ಇದರಿಂದ ಆಭರಣ ಕಾಣದಾದಾಗ ಸಿಸಿಟಿವಿ ಚೆಕ್ ಮಾಡದ ನಂತರ ಇಲಿಯ ಕಳ್ಳಾಟ ಬಯಲಾಗಿತ್ತು. ಇದೀಗ ಕಾಫಿ ನಾಡಿನಲ್ಲಿ ಹಣದ ಮೇಲೆ ವ್ಯಾಮೋಹ ಬೆಳೆಸಿಕೊಂಡ ಕಿಲಾಡಿ ಇಲಿಯ ಕೈಚಳಕ ಬೆಳಕಿಗೆ ಬಂದಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-rat-steals-currency-notes-chicken-shop-cash-drawer-nest-ganesh-chaturthi/articleshow-2sg4gvp"/>
        </item>
        <item>
            <title><![CDATA[Chikkamgaluru: ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಹಾಡು, ಚಿಕ್ಕಮಗಳೂರಿನಲ್ಲಿ ಪಾಕ್ ಪ್ರೇಮಿಗಳಿಗೆ ಪೊಲೀಸರ ಶಾಕ್!]]></title>
            <link>https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u</link>
            <guid isPermaLink="true">https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u</guid>
            <pubDate>Mon, 24 Aug 2026 16:59:38 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಆಚರಣೆ ವೇಳೆ ಟಿಪ್ಪು ಸುಲ್ತಾನ್ ಕಟೌಟ್&zwnj;ಗೆ ದೇಶದ್ರೋಹಿ ಹಾಡು ಬಳಸಿ ವಿಡಿಯೋ ಹರಿಬಿಟ್ಟ ಪ್ರಕರಣ ಸಂಚಲನ ಸೃಷ್ಟಿಸಿದೆ. ಈ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಏಳು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಘಟನೆಗೆ ತೀವ್ರ ರಾಜಕೀಯ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0srez2vfgm4wh7hajtps4wp,imgname-chikkamgaluru-tippu-cutout-1787570912347.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಕೂಲ್ ಸಿಟಿ ಕಾಫಿನಾಡಲ್ಲಿ ಪಾಕ್ ಪ್ರೇಮಿಗಳು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಈದ್ ಮಿಲಾದ್ ಆಚರಣೆಗೆ ಟಿಪ್ಪು ಸುಲ್ತಾನ್ ಕಟೌಟ್ ಹಾಕಿರುವ ಯುವಕರು, ಕಟೌಟ್ ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಸಾಂಗ್ ಹಾಕಿ ವಿವಾದ ಸೃಷ್ಟಿಸಿದ್ದಾರೆ. ಹಿಂಸೆಗೆ ಪ್ರಚೋಧನೆ ನೀಡುವ ಹಾಡು ಬಳಸಿ, ನಾವು ಪಾಕಿಸ್ತಾನದ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು ಎಂಬ ಹಾಡನ್ನ ಸಾಮಾಜಿಕ ಜಾಲತಾಣದಲ್ಲಿ ಹರಡಿರೋದು ಈಗ ತೀವ್ರ ಸಂಚಲನ ಸೃಷ್ಠಿಸಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಅದನ್ನ ಹಾಕಿದ್ಯಾರು, ಅದಕ್ಕೆ ಖಾಕಿ ಮಾಡಿದ್ದೇನು ಗೊತ್ತಾ? ಈ&zwnj; ಸ್ಟೋರಿ ನೋಡಿ..&lt;/p&gt;&lt;p&gt;&lt;strong&gt;ಈದ್ ಮಿಲಾದ್ ಪ್ರಚಾರದ ಹಾಡಿನಲ್ಲಿ ಹಿಂಸೆಗೆ ಪ್ರಚೋದಿಸೋ ಹಾಡು ಬಳಕೆ&lt;/strong&gt;&lt;/p&gt;&lt;p&gt;ಬುಧವಾರ ನಾಡಿನೆಲ್ಲೆಡೆ ಈದ್ ಮಿಲಾದ್ ಸಂಭ್ರಮ. ಮುಸ್ಲಿಮರು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಕೆಲ ಕಿಡಿಗೇಡಿಗಳು ಸಮಾಜದಲ್ಲಿ ಅಶಾಂತಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈದ್ ಗಾಗಿ ಚಿಕ್ಕಮಗಳೂರು ನಗರದ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಲಾಗಿದೆ. ಆದರೆ ಆ ಕಟೌಟ್ ವಿಡಿಯೋ ಮಾಡಿಕೊಂಡು, ಬ್ಯಾಕ್ ಗ್ರೌಂಡ್ ಗೆ ದೇಶದ್ರೋಹಿ ಹಾಡು ಹಾಕಿರುವುದು ತೀವ್ರ ಚರ್ಚೆ ಗ್ರಾಸವಾಗಿ ಸಂಚಲನ ಮೂಡಿಸಿದೆ.&lt;/p&gt;&lt;p&gt;&lt;strong&gt;&lsquo;ನಾವು ಪಾಕಿಸ್ತಾನಿ ಮುಜಾಹಿದೀನ್​ಗಳು, ಈ ಮಣ್ಣಿನ ರಕ್ಷಕರು&rsquo; ಎಂಬ ಹಾಡು&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಕಟೌಟ್ ಗೆ ನಾವು ಪಾಕಿಸ್ತಾನಿ ಮುಜಾಹಿದೀನ್ ಗಳು, ಈ ಮಣ್ಣಿನ ರಕ್ಷಕರು, ಪಾಕಿಸ್ತಾನಿ ಸೈನಿಕರು ಎಂಬ ಹಾಡನ್ನ ಹಾಕಿ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆಯ ಪಿ.ಎಸ್.ಐ. ಧನರಾಜ್ ದೂರು ನೀಡಿದ್ದಾರೆ. ಈ ಸಂಬಂಧ ಸುಮೋಟೋ ಕೇಸ್ ದಾಖಲಿಸಿಕೊಂಡಿರುವ ಚಿಕ್ಕಮಗಳೂರಿನ ನಗರ ಪೊಲೀಸರು ತನಿಖೆ ಚುರುಕುಗೊಳಿಸಿ ಇಬ್ಬರು ಅಪ್ರಾಪ್ತರು ಹಾಗೂ ರೋಷನ್ ಎಂಬುವ ಸೇರಿ ಒಟ್ಟು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಹಾಡು ಹಾಕಿದ್ದು ಏಕೆ? ಹಾಡು ಹಾಕಲು ಯಾರು ಹೇಳಿದ್ದು? ಯಾರು ಹಾಕಿದ್ದು ಎಂಬೆಲ್ಲಾ ಪ್ರಶ್ನೆಗಳನ್ನ ಮುಂದಿಟ್ಟು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;h2&gt;ಚಿಕ್ಕಮಗಳೂರು 'ಪವರ್ ಟಿಪ್ಪು ಬಾಯ್ಸ್&rsquo; ಪೇಜ್ ವಿರುದ್ಧ ಎಫ್​ಐಆರ್&lt;/h2&gt;&lt;p&gt;ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಾಯ್ಮಾ, ಡಿಪಿಒ ಹಾಗೂ ಎಸ್&zwnj;ಡಿಪಿಒ ಮಟ್ಟದ ಶಾಂತಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಳೆದ 5-6 ವರ್ಷಗಳ ನಿಯಮ, ಪದ್ಧತಿಗಳನ್ನೇ ಪಾಲಿಸಲು ಸೂಚಿಸಲಾಗಿದೆ. ಹೊಸ ಪದ್ಧತಿ ಅಥವಾ ಹೊಸ ಮಾರ್ಗಕ್ಕೆ ಯಾವುದೇ ಅವಕಾಶವಿಲ್ಲ. ಟಿಪ್ಪು ಕಟೌಟ್ ಅಳತೆ, ಸ್ಥಳ, ಸಮಯ ಹಿಂದಿನ ವರ್ಷಗಳಂತೆಯೇ ಇದೆ. ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಕಟೌಟ್&zwnj;ಗೆ ಆಕ್ಷೇಪಾರ್ಹ ಹಾಡು ಸೇರಿಸಿ ವಿಡಿಯೋ ವೈರಲ್, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196, 299ರ ಅಡಿ ಎಫ್&zwnj;ಐಆರ್ ದಾಖಲು ಮಾಡಲಾಗಿದೆ. ವಿಡಿಯೋ ತಯಾರಿಸಿದವರು, ಹಂಚಿಕೊಂಡವರು ಹಾಗೂ ಸ್ಟೇಟಸ್ ಹಾಕಿದವರ ವಿರುದ್ಧ ತನಿಖೆ ನಡೆಸಿದ್ದೇವೆ. ಆರೋಪಿಗಳ ಪತ್ತೆ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ಕಠಿಣ ಕಾನೂನು ಕ್ರಮದ ಎಚ್ಚರಿಕೆ. ಧಾರ್ಮಿಕ ಹಬ್ಬಗಳಿಗೆ ರಾಜಕೀಯ ಅಥವಾ ಕೋಮು ಬಣ್ಣ ಕಟ್ಟಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;h2&gt;ಕಾಫಿನಾಡಲ್ಲಿ ಪಾಕ್ ಪ್ರೇಮ: ಈದ್ ವಿವಾದದ ಹಿಂದಿನ ಕಾಣದ ಕೈಗಳು&lt;/h2&gt;&lt;p&gt;ಅಫ್ ಕೋರ್ಸ್, ಕಿಡಿಗೇಡಿಗಳ ಈ ಪಾಕ್ ಪ್ರೇಮದ ಕೃತ್ಯ ರಾಜಕೀಯ ತಿರುವು ಪಡೆದುಕೊಂಡಿದ್ದು ಬಿಜೆಪಿ ಸಮಾಜದ ಶಾಂತಿ ಹಾಳುಮಾಡುವ ಕಿಡಿಗೇಡಿಗಳು ಹಾಗೂ ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜ್ಯದಲ್ಲಿ ಕಾನೂನು ಇದ್ದು, ಗೃಹ ಸಚಿವರು ಇದ್ದರೆ, ದೇಶದ್ರೋಹದ ಕೆಲಸ ಮಾಡಿದವರನ್ನು ಒದ್ದು ಒಳಗೆ ಹಾಕಿ. ನಿಮ್ಮ ತಾಕತ್ತು ತೋರಿಸಿ. ಹಿಂದೂಗಳಿಗೆ ನಿಮ್ಮ ಬಗ್ಗೆ ನಂಬಿಕೆ ಬರಬೇಕು. ಜಾಮೀನು ಪಡೆದು ಅವರು ಹೊರಬರಬಾರದು ಎಂದು ಸವಾಲು ಹಾಕಿದ್ದಾರೆ.&lt;/p&gt;&lt;p&gt;ಇನ್ನು ಸಿ.ಟಿ.ರವಿ, ದೇಶ ದ್ರೋಹಿಗಳನ್ನ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭಾರತದಲ್ಲಿದ್ದು ದೇಶದ್ರೋಹಿ ಕೆಲಸ ಮಾಡುವವರನ್ನ ಸಹಿಸಬಾರದು,ಇವರ ಬಾಲ ಕಟ್ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿಕಾರಿದ್ದಾರೆ. ಸಂಸದ ಕೋಟಾ, ಗೋಹತ್ಯೆ ತಡೆದವರ ಮೇಲೆಯೇ ಕೇಸ್ ಮಾಡಿದ್ರು, ಪಾಕ್ ಪರ ಘೋಷಣೆ ಕೂಗಿದ್ದನ್ನ ವಿರೋಧಿಸಿದವರ ಮೇಲೆಯೇ ಪ್ರಕರಣ ದಾಖಲಿಸಿದ್ರು. ಭಾರತ ವಿರೋಧಿ ನಿಲುವಿಗೆ ಸರ್ಕಾರವೇ ಬೆಂಬಲ ಕೊಟ್ರೆ ಏನು ಅನ್ನೋ ಚರ್ಚೆ ಆಗಬೇಕಿದ್ದು, ಇದರ ವಿರುದ್ಧ ಬಿಜೆಪಿ ಸೆಡೆದು ನಿಲ್ಲಬೇಕು ಎಂದಿದ್ದಾರೆ.&lt;/p&gt;&lt;p&gt;ಒಟ್ಟಾರೆ, ಕಾಫಿನಾಡಲ್ಲಿ ಪಾಕ್ ಪ್ರೇಮಿಗಳ ಪ್ರೇಮ ಅನಾವರಣಗೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರೇ ಕಟ್ಟಿಕೊಂಡ್ರೋ ಅಥವಾ ಯಾರಾದ್ರು ಕಟ್ಟಿಸದ್ರೋ ಗೊತ್ತಿಲ್ಲ.&zwnj; ಆದರೆ, ಅಪ್ರಾಪ್ತರು ಪ್ಯಾಲಸ್ತೇನ್ ಬಾವುಟವನ್ನ ಬೈಕ್ ಗೆ ಕಟ್ಟಿಕೊಂಡು ಓಡಾಡಿದ್ದರು. ಈಗ ಮತ್ತೆ ಈದ್ ಹಬ್ಬದ ವೇಳೆ ಪಾಕ್ ಪ್ರೇಮಿಗಳು ಮುನ್ನೆಲೆಗೆ ಬಂದಿದ್ದಾರೆ. ಆದರೆ, ತನಿಖೆ ಚುರುಗೊಳಿಸಿರೋ ನಗರ ಪೊಲೀಸರು ಏಳು ಜನರನ್ನ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆ ಬಳಿಕ ಪಾಕ್ ಪ್ರೇಮಕ್ಕೆ ಕಾರಣವೇನೆಂಬ ಸತ್ಯ ಹೊರಬರಲಿದೆ. &lt;strong&gt;(ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು)&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/pakistani-song-played-for-tippu-cutout-police-arrested-7-youths-in-chikkamagaluru-sns/articleshow-3cgl98u"/>
        </item>
        <item>
            <title><![CDATA[Chikkamagaluru: ಬಾಯಿ ಚಪ್ಪರಿಸಿ ಕೇಕ್ ತಿನ್ನುವ ಮುನ್ನ ಹುಷಾರ್! ಕೊಳೆತು, ವಾಸನೆ ಬರ್ತಿದ್ದ ಕೇಕ್ ಮಾರಾಟ, ಗ್ರಾಹಕನ ಆಕ್ರೋಶ]]></title>
            <link>https://kannada.asianetnews.com/karnataka-districts/beware-before-eating-cake-rotten-foul-smelling-cake-sparks-customer-outrage-in-chikkamgaluru-sns/articleshow-6u66nr8</link>
            <guid isPermaLink="true">https://kannada.asianetnews.com/karnataka-districts/beware-before-eating-cake-rotten-foul-smelling-cake-sparks-customer-outrage-in-chikkamgaluru-sns/articleshow-6u66nr8</guid>
            <pubDate>Tue, 18 Aug 2026 09:59:28 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಕಳಸದ ಹೋಟೆಲ್&zwnj;ನಲ್ಲಿ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದರೆ, ನಗರದ ಪ್ರತಿಷ್ಠಿತ ಬೇಕರಿಯೊಂದರಲ್ಲಿ ಅವಧಿ ಮೀರಿದ ಸಾಸ್ ಬಳಸಿ ತಯಾರಿಸಿದ ಕೊಳೆತ ಕೇಕ್ ಪತ್ತೆಯಾಗಿದೆ. ಈ ಘಟನೆಗಳು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09hzabbc12fv4xerdkjjh4b,imgname-chikkamagaluru-cake--1787027237226.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಆಹಾರ ಸುರಕ್ಷತೆ ಬಗ್ಗೆ ರಾಜ್ಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆ ಬದಿ ಹೋಟೆಲ್&zwnj;ಗಳು ಸೇರಿದಂತೆ ಪಂಚತಾರಾ ಹೋಟೆಲ್&zwnj;ಗಳ ಮೇಲೂ ಅಧಿಕಾರಿಗಲು ಪರಿಶೀಲನೆ ನಡೆಸುತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಾಕಿಂಗ್ ಅಂಶಗಳು ಕಂಡು ಬರುತ್ತಿದ್ದು, ಜನರ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಉಂಟು ಮಾಡುತ್ತದೆ ಎಂಬುವುದರ ಬಗ್ಗೆ ಆತಂಕ ಎದುರಾಗುತ್ತಿದೆ. ಇದರ ನಡುವೆಯೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿದೆ.&lt;/p&gt;&lt;h2&gt;ಕಾಫಿನಾಡಲ್ಲಿ ಆಹಾರ ಸಂಚಕಾರ: ಏನಿದು ಕೇಕ್ ರಹಸ್ಯ?&lt;/h2&gt;&lt;p&gt;ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಎರಡು ಆಘಾತಕಾರಿ ಪ್ರಕರಣಗಳ ಪತ್ತೆಯಾಗಿದ್ದು, ಒಂದೆಡೆ ಕಳಸದ ಹೊಟೇಲ್ ನ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಚಿಕ್ಕಮಗಳೂರು ನಗರದ ಪ್ರತಿಷ್ಠಿತ ಬೇಕರಿಯಲ್ಲಿ ಅವಧಿ ಮೀರಿದ ಚಾಕ್ಲೇಟ್ ಸಾಸ್ ಬಳಕೆ ಆಗುತ್ತಿರುವುದು ಕಂಡು ಬಂದಿದೆ.&lt;/p&gt;&lt;p&gt;ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೇಕ್ ಕಾರ್ನರ್ ಬೇಕರಿ ವಿರುದ್ಧ ಗ್ರಾಹಕರು ಆಕ್ರೋಶ ಹೊರಹಾಕಿದ್ದಾರೆ. ಕೇಕ್ ಕಹಿ ಎಂದು ಗ್ರಾಹಕ ಪರೀಕ್ಷಿಸಿದಾಗ ಅವಧಿ ಮೀರಿದ ಸಾಸ್ ಬಳಕೆ ಮಾಡುತ್ತಿರುವುದು ಬಹಿರಂಗಗೊಂಡಿದೆ. ಈ ಬಗ್ಗೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಹಕ, ಇಂತಹ ಕೇಕ್ ಮಕ್ಕಳು ತಿಂದು ಏನಾದರೂ ಹೆಚ್ಚು-ಕಮ್ಮಿ ಆಗಿ ಆಸ್ಪತ್ರೆ ಸೇರಿದರೆ ಜವಾಬ್ದಾರಿ ಯಾರೆಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಮೊನ್ನೆ ಸತ್ತ ಹಲ್ಲಿ, ಇಂದು ಕೊಳೆತ ಕೇಕ್!&lt;/strong&gt;&lt;/h2&gt;&lt;p&gt;ಈ ರೀತಿ ಕೊಳೆತ ಕೇಕ್ ಮಾರಿದರೆ ಜನರ ಆರೋಗ್ಯದ ಕಥೆ ಏನು? ಅವಧಿ ಮುಗಿದು ತಿಂಗಳಾಗಿದೆ ಇಂಥಾ ಸಾಸ್ ಹಾಕಿ ಏಕೆ ಕೇಕ್ ಮಾಡಿದ್ದೀರಾ? ಕೇಕ್ ಕೂಡ ಕೊಳೆತ ವಾಸನೆ ಬರುತ್ತಿದೆ, ಸಾಸ್ ಕಹಿ ಇದೆ. ಕಹಿ ಕೇಕ್ ಗೆ ಹಣ ಕೊಡಲ್ಲ, ಇದನ್ನ ಇಲ್ಲಿಗೆ ಬಿಡಲ್ಲ ಎಂದು ಗ್ರಾಹಕ ಬೇಕರಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಹಕರ ಆಕ್ರೋಶ ಬೆನ್ನಲ್ಲೇ ಸಮಾಜಾಯಿಷಿ ಮುಂದಾದ ಸಿಬ್ಬಂದಿ, ಮಿಸ್ ಆಗಿ ಬಂದಿದೆ ಅಷ್ಟೇ. ಕೇಕ್ ಹಣವನ್ನು ವಾಪಸ್ ಕೊಡ್ತೀವಿ ಎಂದು ಹಾರಿಕೆ ಉತ್ತರವನ್ನು ನೀಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/beware-before-eating-cake-rotten-foul-smelling-cake-sparks-customer-outrage-in-chikkamgaluru-sns/articleshow-6u66nr8"/>
        </item>
        <item>
            <title><![CDATA[ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಕ್ರೂರ ಹಿಂಸೆ: ಕೋಳಿ ರಕ್ತ ಕುಡಿಯುವಂತೆ ಬೆದರಿಕೆ!]]></title>
            <link>https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga</link>
            <guid isPermaLink="true">https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga</guid>
            <pubDate>Mon, 24 Aug 2026 08:31:13 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಭೂತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ದೈವಾರಾಧನೆ ಹೆಸರಿನಲ್ಲಿ ಕೋಳಿ ರಕ್ತ ಕುಡಿಯಲು ಒತ್ತಾಯಿಸಿ ಹಿಂಸಿಸಿದ ವಿಡಿಯೋ ವೈರಲ್ ಆಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ಇದು ತನ್ನ ವಿರುದ್ಧದ ಪಿತೂರಿ ಎಂದು ಆರೋಪಿ ಪಾತ್ರಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc21p7dsn5kvndff0eycgd6,imgname-bungalow-horror-story-1777447524589.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಪ್ಪ (ಚಿಕ್ಕಮಗಳೂರು): &lt;/strong&gt;ಭೂತ, ಪ್ರೇತ ಬಿಡಿಸುವ ನೆಪದಲ್ಲಿ ಯುವತಿಗೆ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಹಾಗೂ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ಸತೀಶ್ ಪಾತ್ರಿ ಎಂಬುವರು ನಿರ್ಮಿಸಿರುವ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದೈವಾರಾಧನೆ ಹಾಗೂ ವಶೀಕರಣದ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.&lt;/p&gt;&lt;p&gt;ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಲಾಗಿದೆ, ರಕ್ತಾಹಾರ ಸ್ವೀಕರಿಸದಿದ್ದರೆ, ಬಾಯಿಯಲ್ಲಿ ಕರ್ಪೂರ ಇಡುವ ಬೆದರಿಕೆ ಹಾಕಲಾಗಿದೆ. ಜೊತೆಗೆ ಇನ್ನಿತರ ಹಿಂಸೆಯನ್ನು ಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಈ ಸಂಬಂಧ ಕರಾವಳಿ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಎನ್&zwnj;ಆರ್&zwnj; ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಹಳೆಯ ವಿಡಿಯೋ-ಪಾತ್ರಿ:&lt;/h2&gt;&lt;p&gt;ವಿಡಿಯೋ ವೈರಲ್ ಆದ ಬೆನ್ನಲ್ಲೇ ಸತೀಶ್&zwnj; ಪಾತ್ರಿ ಪ್ರತಿಕ್ರಿಯಿಸಿದ್ದು, ನಾನು ದರ್ಶನ ಮಾಡಿ ಒಂದೂವರೆ ವರ್ಷಗಳು ಕಳೆದಿವೆ. ಈ ವಿಡಿಯೋ 3 ವರ್ಷಗಳ ಹಳೆಯದ್ದಾಗಿದ್ದು, ದೇಗುಲದ ಹಳೆಯ ಧರ್ಮದರ್ಶಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chikkamagaluru-horror-girl-tortured-in-exorcism-ritual-case-registered-in-koppa-gdp/articleshow-967akga"/>
        </item>
        <item>
            <title><![CDATA[ಸೋಮಾವತಿ ನದಿಗೆ ಉರುಳಿದ ಕಾರು; ಬೆಂಗಳೂರಿನ ಪ್ರವಾಸಿ ದಂಪತಿ ಬದುಕಿದ್ದೇ ದೊಡ್ಡದು..]]></title>
            <link>https://kannada.asianetnews.com/chikkamagalur/a-car-carrying-a-bengaluru-couple-plunged-into-the-somavathi-river-in-kalasa-taluk-of-chikkamagaluru-gkn/articleshow-alzssm7</link>
            <guid isPermaLink="true">https://kannada.asianetnews.com/chikkamagalur/a-car-carrying-a-bengaluru-couple-plunged-into-the-somavathi-river-in-kalasa-taluk-of-chikkamagaluru-gkn/articleshow-alzssm7</guid>
            <pubDate>Sat, 15 Aug 2026 15:50:36 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಕಳಸದಲ್ಲಿ ಸೇತುವೆಗೆ ತಡೆಗೋಡೆ ಇಲ್ಲದ ಕಾರಣ ಬೆಂಗಳೂರು ಮೂಲದ ಪ್ರವಾಸಿ ದಂಪತಿಯ ಕಾರು ಸೋಮಾವತಿ ನದಿಗೆ ಬಿದ್ದು, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನದಿಯಲ್ಲಿದ್ದ ಬೃಹತ್ ಬಂಡೆಯೊಂದು ಕಾರಿಗೆ ಅಡ್ಡ ಸಿಕ್ಕಿದ್ದರಿಂದ ಅದು ನೀರಿನ ರಭಸಕ್ಕೆ ಕೊಚ್ಚಿ ಹೋಗದೆ ಬದುಕುಳಿದಿದ್ದು, ಸ್ಥಳೀಯರು ತಕ್ಷಣವೇ ದಂಪತಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02ewsyap05thyp3rdr4cmca,imgname-soamavati-river-car-accident-1786789128138.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಸೇತುವೆಗೆ ತಡೆಗೋಡೆ ಇಲ್ಲದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಭಸವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದೆ. ಕಾರಿನಲ್ಲಿದ್ದ ಬೆಂಗಳೂರು ಮೂಲದ ಪ್ರವಾಸಿ ದಂಪತಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ಸಂಭವಿಸಿದೆ. ಕಳಸ ತಾಲೂಕಿನ ಗಣಪತಿ ಕಟ್ಟೆ ಬಳಿ ಈ ಅಪಘಾತ ನಡೆದಿದೆ. ದಂಪತಿ ಪ್ರಯಾಣಿಸುತ್ತಿದ್ದ ಕಾರು ನೇರವಾಗಿ ಸೋಮಾವತಿ ನದಿಯ ಮಧ್ಯಕ್ಕೆ ಬಿದ್ದಿದೆ.&lt;/p&gt;&lt;h2&gt;&lt;strong&gt;ಬಂಡೆ ಅಡ್ಡ ಸಿಕ್ಕಿ ಬದುಕುಳಿದ ಜೀವಗಳು&lt;/strong&gt;!&lt;/h2&gt;&lt;p&gt;ಸೋಮಾವತಿ ನದಿಗೆ ನಿರ್ಮಿಸಲಾಗಿರುವ ಸೇತುವೆಗೆ ಯಾವುದೇ ಸುರಕ್ಷತಾ ತಡೆಗೋಡೆ (Retaining Wall) ಇಲ್ಲದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಕಾರು ನಿಯಂತ್ರಣ ತಪ್ಪಿ ನದಿಗೆ ಬೀಳುತ್ತಿದ್ದಂತೆ ನದಿಯ ಮಧ್ಯದಲ್ಲಿದ್ದ ಬೃಹತ್ ಬಂಡೆಯೊಂದು ಅಡ್ಡ ಸಿಕ್ಕಿದೆ. ನದಿಯಲ್ಲಿ ನೀರಿನ ಹರಿವು ರಭಸವಾಗಿದ್ದರೂ ಕಾರು ಈ ಬಂಡೆಯ ಮಧ್ಯೆ ಸಿಲುಕಿಕೊಂಡಿದ್ದರಿಂದ ಕೊಚ್ಚಿ ಹೋಗದೆ ಅಲ್ಲಿಯೇ ನಿಂತಿದೆ. ಒಂದು ವೇಳೆ ಈ ಬಂಡೆ ಅಡ್ಡ ಸಿಗದಿದ್ದರೆ ದಂಪತಿ ಕಾರಿನ ಸಮೇತ ನೀರಿನ ರಭಸಕ್ಕೆ ಕೊಚ್ಚಿ ಹೋಗುವ ಭೀತಿ ಇತ್ತು.&lt;/p&gt;&lt;h2&gt;&lt;strong&gt;ಸ್ಥಳೀಯರಿಂದ ರಕ್ಷಣೆ&lt;/strong&gt;&lt;/h2&gt;&lt;p&gt;ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ. ನದಿಯ ಮಧ್ಯದಲ್ಲಿದ್ದ ಕಾರಿನ ಬಳಿ ತೆರಳಿ ಅದೃಶ್ಯವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ ಬೆಂಗಳೂರು ಮೂಲದ ಪ್ರವಾಸಿ ದಂಪತಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಪಾಯಕಾರಿ ಸೇತುವೆಯ ಕುರಿತು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಜಾಗದಲ್ಲಿ ವರ್ಷಕ್ಕೆ ಕನಿಷ್ಠ 3 ರಿಂದ 4 ಅಪಘಾತಗಳು ಸಂಭವಿಸುತ್ತಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಲವು ಬಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chikkamagalur/a-car-carrying-a-bengaluru-couple-plunged-into-the-somavathi-river-in-kalasa-taluk-of-chikkamagaluru-gkn/articleshow-alzssm7"/>
        </item>
        <item>
            <title><![CDATA[ಚಿಕ್ಕಮಗಳೂರಲ್ಲಿ ಲೋಕಾಯುಕ್ತ ಖೆಡ್ಡಾ; ಲಕ್ಷ ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸರ್ವೆ ಅಧಿಕಾರಿಗಳು]]></title>
            <link>https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s</link>
            <guid isPermaLink="true">https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s</guid>
            <pubDate>Sat, 22 Aug 2026 11:49:49 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಕೃಷಿ ಜಮೀನು ಸರ್ವೆಗೆ ಲಕ್ಷಗಟ್ಟಲೆ ಲಂಚ ಕೇಳಿದ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮತ್ತೊಂದೆಡೆ, ರಸ್ತೆ ಗುಂಡಿಗಳನ್ನು ವಿರೋಧಿಸಿ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0m1prasqmm9rgmhvgp7bmmh,imgname-chikkamagaluru-lokayukta--1787379278169.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಲಕ್ಷ ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಇಬ್ಬರು ಸರ್ವೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸರ್ವೆಯರ್ ದೊರೆರಾಜ್, ರಂಗನಾಥ್ ಅಧಿಕಾರಿಗಳಾಗಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಬಂಧಿತ ಅಧಿಕಾರಿಗಲು ಕೃಷಿ ಜಮೀನಿನ ಸರ್ವೆ ಮಾಡಿ&zwnj; ಸ್ಕೆಚ್ ತಯಾರಿಸಲು 10 ಲಕ್ಷ&zwnj; ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದ ಧರಣೇಶ್ ಅವರ ಕೃಷಿ ಜಮೀನು ಸರ್ವೆಗಾಗಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರ, ಇದರಿಂದ ನೊಂದು ರೈತ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದರಂತೆ.&lt;/p&gt;&lt;p&gt;ಇದರಂತೆ ಮುಂಗಡವಾಗಿ ಎರಡು ಲಕ್ಷ ರೂಪಾಯಿ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಧಿಕಾರಿಗಳು ತಮ್ಮ&zwnj; ಖಾಸಗಿ &zwnj;ಕಚೇರಿಯಲ್ಲಿ&zwnj; ಎರಡು ಲಕ್ಷ ಪಡೆಯುವಾಗ ಬಲೆಗೆ ಬಿದ್ದಿದ್ದು, ಚಿಕ್ಕಮಗಳೂರು ಲೋಕಾಯುಕ್ತ ಡಿ ವೈ ಎಸ್ ಪಿ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಘಟನೆ ಸಂಬಂಧ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;h2&gt;ರಸ್ತೆಯಲ್ಲಿನ ಗುಂಡಿಗಳ ವಿರುದ್ಧ ಬೀದಿಗಿಳಿದ ಬಿಜೆಪಿ&lt;/h2&gt;&lt;p&gt;ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಬಿಜೆಪಿ ನಾಯಕರು, ಆಲ್ದೂರು ಟು ಚಿಕ್ಕಮಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ರಸ್ತೆಯಲ್ಲಿನ ಗುಂಡಿಗೆ ಬಾಳೆಗಿಡ ನೆಟ್ಟು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ಚಿಕ್ಕಮಗಳೂರು-ಆಲ್ದೂರು-ಬಾಳೆಹೊನ್ನೂರು-ಶೃಂಗೇರಿ ಮಾರ್ಗದಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿ ಬಿದ್ದಿರುವ ಕಾರಣ, ರಸ್ತೆ ದುರಸ್ಥಿ ಮಾಡುವಂತೆ 18 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಶೃಂಗೇರಿ ಶಾಸಕ ರಾಜೇಗೌಡ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಳೆಗಾಲದಲ್ಲಿ ಬೇಸಿಗೆ ಬರಲಿ ಅಂತಾರೆ, ಬೇಸಿಗೆಯಲ್ಲಿ ಕೆಲಸ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chikkamagaluru-survey-officials-caught-in-lokayukta-trap-while-accepting-huge-bribes-sns/articleshow-epffm8s"/>
        </item>
        <item>
            <title><![CDATA['ಇದೇ ರೀತಿ ಮಾತು ಮುಂದುವರಿಸಿದ್ರೆ..'   ಮುಲ್ಲಾನ ಬಗ್ಗೆ ಸಿಟಿ ರವಿ ಹೇಳಿಕೆಗೆ ಎಸ್‌ಡಿಪಿಐ ವಾರ್ನಿಂಗ್]]></title>
            <link>https://kannada.asianetnews.com/politics/sdpi-warns-ct-ravi-over-his-statement-on-muslims-at-chikkamagaluru/articleshow-h797uu6</link>
            <guid isPermaLink="true">https://kannada.asianetnews.com/politics/sdpi-warns-ct-ravi-over-his-statement-on-muslims-at-chikkamagaluru/articleshow-h797uu6</guid>
            <pubDate>Tue, 28 Jul 2026 11:24:14 +0530</pubDate>
            <description><![CDATA[&lt;p&gt;'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್&zwnj;ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಎಸ್&zwnj;ಡಿಪಿಐ ಆಕ್ರೋಶ ವ್ಯಕ್ತಪಡಿಸಿದ್ದು, ಸಿಟಿ ರವಿ ಇದೇ ರೀತಿ ಮಾತು ಮುಂದುವರಿಸಿದರೆ ಚಿಕ್ಕಮಗಳೂರಿಗೆ ಕಾಲಿಡಲು ಬಿಡೋಲ್ಲ ಎಂದು ಎಚ್ಚರಿಕೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kykm3g0b2xakc0zc80gtm2m4,imgname-----------------------2026-07-28t111508.303-1785217531915.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರು (ಜು.28): 'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್&zwnj;ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಇದೀಗ ಚಿಕ್ಕಮಗಳೂರಿನಲ್ಲಿ ಹಿಂದೂ-ಮುಸ್ಲಿಂ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಸಿಟಿ ರವಿ ಹೇಳಿಕೆಗೆ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, 'ಇದೇ ರೀತಿ ಮಾತನಾಡುತ್ತಿದ್ದಾರೆ, ಮುಸ್ಲಿಂರೆಲ್ಲ ಒಗ್ಗಟ್ಟಾಗಿ ಚಿಕ್ಕಮಗಳೂರಿಗೆ ಕಾಲಿಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.&lt;/p&gt;&lt;h2&gt;ಸಿಟಿ ರವಿಗೆ ಎಸ್&zwnj;ಡಿಪಿಐ ಎಚ್ಚರಿಕೆ&lt;/h2&gt;&lt;p&gt;ಸಿಟಿ ರವಿ ಹೇಳಿಕೆ ವಿಚಾರವಾಗಿ ಇಂದು ಎಸ್&zwnj;ಡಿಪಿಐ ಮುಖಂಡ ಅತೀಕ್ ಚಿಕ್ಕಮಗಳೂರಿನ ಪ್ರೆಸ್&zwnj; ಕ್ಲಬ್&zwnj;ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ. ಸಿಟಿ ರವಿ ಮಾತೆತ್ತಿದ್ದರೆ ಮುಸ್ಲಿಂರನ್ನ ಎಳೆದು ತರ್ತಾರೆ, ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಇನ್ಮುಂದೆ ನಾವು ದ್ವೇಷ ಭಾಷಣ ಸಹಿಸೋಲ್ಲ. ಭಾಷಣದಲ್ಲಿ ಇದೇ ರೀತಿ ಬಾಯ್ಬಿಡ್ತಿದ್ರೆ ನಾವು ನಿಮ್ಮನ್ನು ಚಿಕ್ಕಮಗಳೂರಿಗೆ ನುಗ್ಗೋಕೆ ಬಿಡೋಲ್ಲ, ಮುಂದೆ ಇಂತಹ ಸನ್ನಿವೇಶ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.&lt;/p&gt;&lt;h3&gt;ಸಿಟಿ ರವಿ ಎದೆ ಸೀಳಿದರೆ ಎಷ್ಟು ಅಕ್ಷರ ಇವೆ?&lt;/h3&gt;&lt;p&gt;ಸಿಟಿ ರವಿ ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ ಅಂತಾರೆ. ಹಾಗಾದ್ರೆ ಸಿಟಿ ರವಿ ಎದೆ ಸೀಳಿದ್ರೆ ಎಷ್ಟು ಇದೆ ಎಂದು ಹೇಳಬೇಕು ಎಂದು ಮುಸ್ಲಿಮ್ ಮುಖಂಡ ಅತೀಕ್ ಪ್ರಶ್ನಿಸಿದರೆ. ಅತೀಕ್ ಮಾತಿಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಬೆಳವಣಿಗೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/sdpi-warns-ct-ravi-over-his-statement-on-muslims-at-chikkamagaluru/articleshow-h797uu6"/>
        </item>
        <item>
            <title><![CDATA[ಕಡೂರಿನಲ್ಲಿ ಹಂದಿ ಬೇಟೆಗಾಗಿ ಹಾಕಿದ್ದ ಲೈನ್ ತುಳಿದು ವ್ಯಕ್ತಿ ಸಾವು.. ಸಾಕ್ಷ್ಯ ನಾಶಕ್ಕೆ ನಡೀತು ಮೈ ನಡುಗಿಸುವ ಕೃತ್ಯ]]></title>
            <link>https://kannada.asianetnews.com/chikkamagalur/man-dies-after-stepping-on-electric-wire-laid-for-wild-boar-hunt-in-chikkamagalurus-kaduru-taluq-gkn/articleshow-kwlv1u7</link>
            <guid isPermaLink="true">https://kannada.asianetnews.com/chikkamagalur/man-dies-after-stepping-on-electric-wire-laid-for-wild-boar-hunt-in-chikkamagalurus-kaduru-taluq-gkn/articleshow-kwlv1u7</guid>
            <pubDate>Mon, 27 Jul 2026 09:37:44 +0530</pubDate>
            <description><![CDATA[&lt;p&gt;ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಕೊಲೆ ಪ್ರಕರಣದ ಮಾದರಿಯಲ್ಲೇ ತಿರುವು ಪಡೆದುಕೊಂಡಿದೆ. ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನೇ ಹೂತು ಹಾಕಿ, ಕೇಸ್ ಮುಚ್ಚಿ ಹಾಕಲು ನಡೆಸಿದ್ದ ಮಾಸ್ಟರ್ ಪ್ಲಾನ್ ಸಿಸಿ ಕ್ಯಾಮೆರಾದ ಒಂದು ದೃಶ್ಯದಿಂದ ವಿಫಲವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kygw0ygg839mhzrmryh1bvfk,imgname-kaduru-boar-hunting-1785125173776.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನು ಗುಟ್ಟಾಗಿ ಹೂತುಹಾಕಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಕಡೂರು ತಾಲೂಕಿನ ಯಗಟಿ ಸಮೀಪದ ದೊಣ್ಣೆಕೋರನಹಳ್ಳಿ ಗ್ರಾಮದ ಕರಿಯಪ್ಪ (52) ಮೃತಪಟ್ಟ ದುರ್ದೈವಿ. ಜಮೀನಿನಲ್ಲಿ ಕಾಡುಹಂದಿಗಳ ಹಾವಳಿ ತಡೆಯಲು ಬೇಟೆಗಾರರು ವಿದ್ಯುತ್ ತಂತಿ ಅಳವಡಿಸಿದ್ದರು. ಈ ವಿದ್ಯುತ್ ಲೈನ್&zwnj;ಗೆ ಅಚಾನಕ್ಕಾಗಿ ಕರಿಯಪ್ಪ ಸಿಲುಕಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಬೇಟೆಗಾರರು ಯಾರಿಗೂ ತಿಳಿಯದಂತೆ ಶವವನ್ನು ಜಮೀನಿನಲ್ಲೇ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ರಹಸ್ಯ ಬಯಲಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಮನೆಗೆ ಹೋದ ಕರಿಯಪ್ಪ ಅವರು ಎಷ್ಟು ಹೊತ್ತಾದರೂ ಮರಳಿ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಮೀಪದ ಜಮೀನಿನ ಬಳಿ ಇದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಕರಿಯಪ್ಪ ಓಡಾಡುತ್ತಿರುವ ದೃಶ್ಯ ಪತ್ತೆಯಾಗಿದೆ. ಅದರ ಬೆನ್ನಲ್ಲೇ ಕೆಲವೇ ಗಂಟೆಗಳ ನಂತರ ಅದೇ ಮಾರ್ಗದಲ್ಲಿ ಮತ್ತೋರ್ವ ವ್ಯಕ್ತಿ ಸಂಶಯಾಸ್ಪದವಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಇಡೀ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ.&lt;/p&gt;&lt;h2&gt;&lt;strong&gt;ಮೂವರು ಆರೋಪಿಗಳ ಬಂಧನ&lt;/strong&gt;&lt;/h2&gt;&lt;p&gt;ಈ ಕೃತ್ಯಕ್ಕೆ ಸಂಬಂಧಿಸಿದಂತೆ ಯಗಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬೇಟೆಗಾರರು ತಂತಿ ಹಾಕಿದ್ದ ಜಾಗದಲ್ಲೇ ಕರಿಯಪ್ಪ ಮೃತಪಟ್ಟಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳು ಶವ ಹೂತು ಹಾಕಿರುವ ಸ್ಥಳಕ್ಕೆ ತರೀಕೆರೆ ಎಸಿ (ಸಹಾಯಕ ಆಯುಕ್ತರು) ಅವರು ಇಂದು ಭೇಟಿ ನೀಡಲಿದ್ದು, ಅವರ ಸಮ್ಮುಖದಲ್ಲಿ ಹೂತಿರುವ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಅಹಿತಕರ ಘಟನೆ ನಡೆಯದಂತೆ ಮತ್ತು ಸಾಕ್ಷ್ಯಗಳಿಗೆ ಧಕ್ಕೆಯಾಗದಂತೆ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chikkamagalur/man-dies-after-stepping-on-electric-wire-laid-for-wild-boar-hunt-in-chikkamagalurus-kaduru-taluq-gkn/articleshow-kwlv1u7"/>
        </item>
        <item>
            <title><![CDATA[Breaking: ಕಾಫಿನಾಡಲ್ಲಿ ಕಾರ್ಮಿಕರ ಸೋಗಿನಲ್ಲಿದ್ದ ಐವರು ಅಕ್ರಮ ಬಾಂಗ್ಲಾದೇಶಿಯರ ಬಂಧನ!]]></title>
            <link>https://kannada.asianetnews.com/karnataka-districts/five-illega-bangladeshi-arested-in-chikkamaggaluru-rav/articleshow-obwys4r</link>
            <guid isPermaLink="true">https://kannada.asianetnews.com/karnataka-districts/five-illega-bangladeshi-arested-in-chikkamaggaluru-rav/articleshow-obwys4r</guid>
            <pubDate>Tue, 04 Aug 2026 13:39:18 +0530</pubDate>
            <description><![CDATA[&lt;p&gt;ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ, ಚಿಕ್ಕಮಗಳೂರಿನ ಮೂಡಿಗೇರೆ ತಾಲೂಕಿನ ಕಾಫಿ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ, ಮಲೆನಾಡಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಹಿಂದೂ ಸಂಘಟನೆಗಳ ಆರೋಪಗಳಿಗೆ ಪುಷ್ಟಿ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz5x10scgkgbr7bpv1nmykzq,imgname-----------------------2026-08-04t133432.003-1785830867756.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಆ.4):&lt;/strong&gt; ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ತಾಲೂಕಿನ ಬಣಕಲ್ ಸಮೀಪದ ತೋಟದಲ್ಲಿ ಕಾರ್ಮಿಕರ ಸೋಗಿನಲ್ಲಿ ಅಡಗಿದ್ದ ಐವರು ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ಕಾಫಿನಾಡು ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆ ಪೊಲೀಸರು ದಾಳಿ ನಡೆಸಿ ಐವರನ್ನ ಬಂಧಿಸಲಾಗಿದ್ದು ಇನ್ನಷ್ಟು ಮಂದಿ ಇರುವ ಶಂಕೆ ಹಿನ್ನೆಲೆ ಬಂಧಿತ ಐವರು ಅಕ್ರಮ ಬಾಂಗ್ಲಾದೇಶಿಯರನ್ನ ತೀವ್ರ ವಿಚಾರಣೆಗೊಳಪಡಿಸಲಿದ್ದಾರೆ. ಸದ್ಯ ಬಂಧಿತರು ಡಿ.ಆರ್. ಪೊಲೀಸ್ ಠಾಣೆಯಲ್ಲಿದ್ದಾರೆ. ಮುಂದಿನ ಕ್ರಮಕ್ಕಾಗಿ ಪೊಲೀಸ್ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಅಕ್ರಮ ಬಾಂಗ್ಲಾದೇಶಿಯರ ಮಾಹಿತಿ ನೀಡಿದವರ ವಿರುದ್ಧವೇ ದೂರು! ಪೊಲೀಸರ ನಡೆ, ಸರ್ಕಾರದ ಓಲೈಕೆ ವಿರುದ್ಧ ಹೈ ಗರಂ&lt;/p&gt;&lt;h2&gt;ಬಿಜೆಪಿ, ಬಜರಂಗದಳ ಆರೋಪ ನಿಜವಾಯ್ತು!&lt;/h2&gt;&lt;p&gt;ಮಲೆನಾಡಿನ ಕಾಫಿ ತೋಟಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ಸಾವಿರಾರು ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ, ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಹಿಂದಿನಿಂದಲೂ ಬಿಜೆಪಿ ಭಜರಂಗದಳ ಕಾರ್ಯಕರ್ತರು ಆರೋಪ ಮಾಡಿದ್ದರು. ಇದೀಗ ಕೇಂದ್ರ ಗುಪ್ತಚರ ಮಾಹಿತಿ ಹಿನ್ನೆಲೆ ಆರೋಪಗಳಿಗೆ ಪುಷ್ಠಿ ನೀಡಿದಂತಾಗಿದೆ. ಪೊಲೀಸರು ಅಲರ್ಟ್ ಆಗಿದ್ದು ಇನ್ನಷ್ಟು ಅಕ್ರಮ ಬಾಂಗ್ಲಾದೇಶಿಯರ ಪತ್ತೆ ಮುಂದಾಗಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಎಸ್&zwnj;ಐಅರ್ ಪ್ರಕ್ರಿಯೆ ಆರಂಭಿಸಿದ ಬಳಿಕ ಸಾವಿರಾರು ಜನರು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಯ್ತು. ಇನ್ನು ಕೆಲವರು ಬಾಂಗ್ಲಾದೇಶಕ್ಕೆ ವಾಪಸ್ ಆಗದೆ ರೈಲುಗಳ ಮೂಲಕ ಬೆಂಗಳೂರು, ಮಂಗಳೂರು ತಲುಪಿ ಅಲ್ಲಿಂದ ಕೊಡಗು, ಮಲೆನಾಡು ಭಾಗಗಳಲ್ಲಿ ಕಾರ್ಮಿಕರ ಸೋಗಿನಲ್ಲಿ ನುಸುಳಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡುತ್ತ ಬಂದಿವೆ. ಬೆಂಗಳೂರಿನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಸರ್ಕಾರ ಅಕ್ರಮ ಬಾಂಗ್ಲಾದೇಶಿಯರನ್ನ ಗಡಿಪಾರು ಮಾಡುವ ಬದಲು ಪತ್ತೆ ಹಚ್ಚಿದವರನ್ನೇ ಬೆದರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಮಲೆನಾಡ ಭಾಗದಲ್ಲಿ ಐವರು ಅಕ್ರಮ ಬಾಂಗ್ಲಾ ಪ್ರಜೆಗಳ ಬಂಧನ ಹಿನ್ನೆಲೆ ಆತಂಕ ಶುರುವಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/five-illega-bangladeshi-arested-in-chikkamaggaluru-rav/articleshow-obwys4r"/>
        </item>
        <item>
            <title><![CDATA[School Holiday Declare: ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಆದೇಶ ಹೊರಡಿಸಿದ 4 ಜಿಲ್ಲೆಗಳ ಜಿಲ್ಲಾಧಿಕಾರಿಗಳು!]]></title>
            <link>https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g</link>
            <guid isPermaLink="true">https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g</guid>
            <pubDate>Sun, 02 Aug 2026 23:10:40 +0530</pubDate>
            <description><![CDATA[ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಹಲವು ಜಿಲ್ಲೆಗಳಲ್ಲಿ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಆಯ್ದ ತಾಲೂಕುಗಳ ಶಾಲೆ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz1rv26za6zwc62ygmsz1c1j,imgname-school-holiday-declare-1785692260575.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ (Karnataka) ಕರಾವಳಿ (Coastal Karnataka) ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆ (Heavy Rain) ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ (Dakshina Kannada) ಮತ್ತು ಚಿಕ್ಕಮಗಳೂರು (Chikkamagaluru) ಶಿವಮೊಗ್ಗ, ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಕೆಲವು ಪ್ರದೇಶಗಳಲ್ಲಿ ಪಿಯುಸಿ (PUC) ಕಾಲೇಜುಗಳಿಗೆ ರಜೆ (School Holiday) ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ರಜೆ&lt;/strong&gt;&lt;/h2&gt;&lt;p&gt;ಭಾರತೀಯ ಹವಾಮಾನ ಇಲಾಖೆ (IMD) ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ (Deputy Commissioner) ದರ್ಶನ್ ಎಚ್.ವಿ. (Darshan H.V.) ಅವರು ಆದೇಶ ಹೊರಡಿಸಿದ್ದಾರೆ. ಮಂಗಳೂರು (Mangaluru) ಉಪವಿಭಾಗದ ಮಂಗಳೂರು, ಉಳ್ಳಾಲ (Ullal), ಮೂಡಬಿದಿರೆ (Moodbidri), ಬಂಟ್ವಾಳ (Bantwal) ಹಾಗೂ ಮುಲ್ಕಿ (Mulki) ತಾಲೂಕುಗಳಲ್ಲಿ ಅಂಗನವಾಡಿಯಿಂದ ಹೈಸ್ಕೂಲ್ (High School) ವರೆಗೆ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ ಪುತ್ತೂರು (Puttur) ಉಪವಿಭಾಗದ ಪುತ್ತೂರು, ಬೆಳ್ತಂಗಡಿ (Belthangady), ಕಡಬ (Kadaba) ಹಾಗೂ ಸುಳ್ಯ (Sulya) ತಾಲೂಕುಗಳಲ್ಲಿ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜು (PUC) ವರೆಗೆ ರಜೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರಿನ ಕೊಪ್ಪ, ಶೃಂಗೇರಿಯಲ್ಲೂ ರಜೆ&lt;/strong&gt;&lt;/h2&gt;&lt;p&gt;ಕಾಫಿನಾಡು (Coffee Land) ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪ (Koppa) ಹಾಗೂ ಶೃಂಗೇರಿ (Sringeri) ತಾಲೂಕುಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ (Primary School) ಮತ್ತು ಪ್ರೌಢಶಾಲೆಗಳಿಗೆ (High School) ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ (Deputy Commissioner) ಭನ್ವರ್ ಸಿಂಗ್ ಮೀನಾ (Bhanwar Singh Meena) ಆದೇಶ ಹೊರಡಿಸಿದ್ದಾರೆ.&lt;/p&gt;&lt;h3&gt;&lt;strong&gt;ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿವು&lt;/strong&gt;&lt;/h3&gt;&lt;p&gt;ನಿರಂತರ ಮಳೆಯ ಪರಿಣಾಮ ತುಂಗಾ ನದಿ (Tunga River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು (Public) ಹಾಗೂ ಪ್ರವಾಸಿಗರು (Tourists) ನದಿ ತೀರಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆಯ (Weather Department) ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಸಾಗರ ತಾಲೂಕಿನ ಶಾಲೆ-ಕಾಲೇಜುಗಳಿಗೆ ರಜೆ&lt;/strong&gt;&lt;/h2&gt;&lt;p&gt;ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ, ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ತಾಲೂಕು ಆಡಳಿತವು ರಜೆ ಘೋಷಿಸಿದೆ.&lt;/p&gt;&lt;p&gt;ಸಾಗರ ತಹಶೀಲ್ದಾರ್ (Tahsildar) ಡಾ. ಪ್ರತಿಭಾ (Dr. Prathibha) ಅವರು ಹೊರಡಿಸಿರುವ ಆದೇಶದಂತೆ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools), ಪ್ರೌಢಶಾಲೆಗಳು (High Schools), ಪದವಿ ಪೂರ್ವ ಕಾಲೇಜುಗಳು (PU Colleges), ಡಿಪ್ಲೊಮಾ ಕಾಲೇಜುಗಳು (Diploma Colleges) ಹಾಗೂ ಐಟಿಐ (ITI) ಕಾಲೇಜುಗಳಿಗೆ ಆಗಸ್ಟ್ 3ರಂದು ರಜೆ ಅನ್ವಯವಾಗಲಿದೆ.&lt;/p&gt;&lt;h2&gt;&lt;strong&gt;ಉತ್ತರ ಕನ್ನಡ ಜಿಲ್ಲೆಯ ಎರಡು ತಾಲೂಕುಗಳಿಗೂ ರಜೆ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲೂ ಸುರಿಯುತ್ತಿರುವ ಭಾರೀ ಮಳೆ (Heavy Rain) ಹಿನ್ನೆಲೆ ಜಿಲ್ಲಾಡಳಿತ (District Administration) ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ (Deputy Commissioner) ಲಕ್ಷ್ಮೀ ಪ್ರಿಯಾ (Lakshmi Priya) ಅವರು ಹೊರಡಿಸಿರುವ ಆದೇಶದಂತೆ ದಾಂಡೇಲಿ (Dandeli) ಹಾಗೂ ಜೋಯಿಡಾ (Joida) ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು (Anganwadi Centres), ಪ್ರಾಥಮಿಕ ಶಾಲೆಗಳು (Primary Schools) ಮತ್ತು ಪ್ರೌಢಶಾಲೆಗಳಿಗೆ (High Schools) ಆಗಸ್ಟ್ 3ರಂದು ರಜೆ ಘೋಷಿಸಲಾಗಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-heavy-rain-shivamogga-mangaluru-chikkamagaluru-uttara-kannada-school-holiday-declare/articleshow-p0ex22g"/>
        </item>
        <item>
            <title><![CDATA[ಹೆಂಗಸರ ನೈಟಿ ತೊಟ್ಟು ಬಂದು ದೇವರ ಹುಂಡಿಗೆ ಕನ್ನ ಹಾಕಿದ ಖದೀಮ! CCTVಯಲ್ಲಿ ಚೋರನ ಕೃತ್ಯ ಸೆರೆ]]></title>
            <link>https://kannada.asianetnews.com/gallery/karnataka-districts/chikkamagalluru-ajjampura-temple-hundi-theft-nighty-thief-cctv-viral-kannada-news-p1y2qku</link>
            <guid isPermaLink="true">https://kannada.asianetnews.com/gallery/karnataka-districts/chikkamagalluru-ajjampura-temple-hundi-theft-nighty-thief-cctv-viral-kannada-news-p1y2qku</guid>
            <pubDate>Sun, 26 Jul 2026 12:15:28 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುತು ಸಿಗಬಾರದೆಂದು ನೈಟಿ ಧರಿಸಿ ಬಂದ ಕಳ್ಳ, ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ಕದ್ದು ಚಿಲ್ಲರೆ ನಾಣ್ಯಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyej7zmh3yt7vm1qy56f72cz,imgname-chikkamagaluru-temple-hundi-theft-1785047809681.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುತು ಸಿಗಬಾರದೆಂದು ನೈಟಿ ಧರಿಸಿ ಬಂದ ಕಳ್ಳ, ಹುಂಡಿಯಲ್ಲಿದ್ದ ನೋಟುಗಳನ್ನು ಮಾತ್ರ ಕದ್ದು ಚಿಲ್ಲರೆ ನಾಣ್ಯಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕಮಗಳೂರು (ಜು.26): ದೇ&lt;/strong&gt;ವಸ್ಥಾನಗಳಲ್ಲಿ ಕಳ್ಳತನ ನಡೆಯುವುದು ಹೊಸದೇನಲ್ಲ. ಆದರೆ, ಪತ್ತೆಯಾಗಬಾರದು ಎಂದು ಕಳ್ಳರು ಹೂಡುವ ತಂತ್ರಗಳು ಮಾತ್ರ ಪೊಲೀಸರಿಗಷ್ಟೇ ಅಲ್ಲದೆ ಸಾರ್ವಜನಿಕರಿಗೂ ಅಚ್ಚರಿ ಮೂಡಿಸುತ್ತವೆ. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂತಹುದೇ ಒಂದು ವಿಚಿತ್ರ ಹಾಗೂ ಕತರ್ ನಾಕ್ ಕಳ್ಳತನ ಘಟನೆ ನಡೆದಿದ್ದು, ಕಳ್ಳನ ನೈಟಿ ಜಿಮಿಕ್ ಕಂಡು ಗ್ರಾಮಸ್ಥರು ಮತ್ತು ಪೊಲೀಸರು ಬೆಚ್ಚಿಬಿದ್ದಿದ್ದಾರೆ!&lt;/p&gt;&lt;img&gt;&lt;p&gt;&lt;strong&gt;ನೈಟಿ ಧರಿಸಿ ಬಂದ ಖದೀಮ!&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಅಜ್ಜಂಪುರ (Ajjampura) ತಾಲೂಕಿನ ಜಲ್ಲದೀಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಪ್ರಸಿದ್ಧ ಶಂಕರಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ (Shankaralingeshwara Swamy Temple) ಮಧ್ಯರಾತ್ರಿ ನುಗ್ಗಿದ ಕಳ್ಳ, ದೇವರ ಹುಂಡಿಗೆ ಕನ್ನ ಹಾಕಿದ್ದಾನೆ. ಆದರೆ, ಇಲ್ಲಿ ವಿಶೇಷ ಏನೆಂದರೆ ತನ್ನ ಗುರುತು ಸಿಗಬಾರದು ಎಂಬ ಕಾರಣಕ್ಕೆ ಈತ ಮಹಿಳೆಯರು ಧರಿಸುವ 'ನೈಟಿ' (Nighty) ತೊಟ್ಟು ಬಂದಿದ್ದನು!&lt;/p&gt;&lt;img&gt;&lt;p&gt;&lt;strong&gt;ನೋಟು ಲಪಟಾಯಿಸಿ, ಚಿಲ್ಲರೆ ಅಲ್ಲೇ ಬಿಟ್ಟ!&lt;/strong&gt;&lt;/p&gt;&lt;p&gt;ಮೊನ್ನೆ ಮಧ್ಯರಾತ್ರಿ ಸುಮಾರು 1:45 ರ ವೇಳೆಗೆ ದೇವಸ್ಥಾನದ ಆವರಣಕ್ಕೆ ನುಗ್ಗಿದ ಈ ಖದೀಮ, ಮೈ ಮೇಲೆಲ್ಲಾ ಹೊದಿಕೆ ಹಾಕ್ಕೊಂಡು ಅತಿ ಚಾಣಾಕ್ಷತನದಿಂದ ಹುಂಡಿಯಲ್ಲಿದ್ದ ಹಣವನ್ನು ಕದ್ದಿದ್ದಾನೆ. ಹುಂಡಿಯಲ್ಲಿದ್ದ ಕಾಗದದ ನೋಟುಗಳನ್ನು ಮಾತ್ರ ಕಳವು ಮಾಡಿ, ಚಿಲ್ಲರೆ ನಾಣ್ಯಗಳನ್ನು (Coins) ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;CCTVಯಲ್ಲಿ ಸೆರೆಯಾಯ್ತು ಕಳ್ಳನ ಕಿಲಾಡಿ ಆಟ!&lt;/strong&gt;&lt;/p&gt;&lt;p&gt;ಕಳ್ಳತನದ ಸಂಪೂರ್ಣ ದೃಶ್ಯಾವಳಿಗಳು ದೇವಸ್ಥಾನದ ಸಿಸಿಟಿವಿ (CCTV Camera) ಕ್ಯಾಮೆರಾದಲ್ಲಿ ಸೆರೆಯಾಗಿವೆ. ನೈಟಿ ಧರಿಸಿ, ಮುಖ ಮುಚ್ಚಿಕೊಂಡು ಹುಂಡಿ ಒಡೆಯುವ ಕಳ್ಳನ ಕೃತ್ಯ ಈಗ ವೈರಲ್ ಆಗಿದೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರು ಹಾಗೂ ಸ್ಥಳೀಯರು ಹುಂಡಿ ಒಡೆದಿರುವುದನ್ನು ನೋಡಿ ತಕ್ಷಣ ಅಜ್ಜಂಪುರ ಪೊಲೀಸ್ ಠಾಣೆಗೆ (Ajjampura Police Station) ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;ಜಲದಿಹಳ್ಳಿ ಗ್ರಾಮಸ್ಥರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಅಜ್ಜಂಪುರ ಪೊಲೀಸರು, ಸಿಸಿಟಿವಿ ಫೂಟೇಜ್ (CCTV Footage) ಆಧರಿಸಿ ಈ ಕತರ್ ನಾಕ್ 'ನೈಟಿ ಕಳ್ಳ'ನ ಪತ್ತೆಗಾಗಿ ಬಲೆ ಬೀಸಿದ್ದಾರೆ. ದೇವರ ಆಸ್ತಿಗೇ ಕನ್ನ ಹಾಕಿದ ಈ ಖದೀಮನ ವಿಚಿತ್ರ ಐಡಿಯಾ ಈಗ ಜಿಲ್ಲಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿ&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagalluru-ajjampura-temple-hundi-theft-nighty-thief-cctv-viral-kannada-news-p1y2qku"/>
        </item>
        <item>
            <title><![CDATA[ಇನ್ನೂ ಎಷ್ಟು ದಿನ ಮಳೆ ಸುರಿಯುತ್ತೆ..? ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?]]></title>
            <link>https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</link>
            <guid isPermaLink="true">https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn</guid>
            <pubDate>Mon, 03 Aug 2026 10:52:13 +0530</pubDate>
            <description><![CDATA[&lt;p&gt;ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರೀ ಮಳೆಯಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತಗೊಂಡಿದ್ದು, ಬಂಟ್ವಾಳದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಾಗೂ ಕಾರ್ಕಳದಲ್ಲಿ ಕಿರು ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz313w30f1gdqv7pkgfgntfd,imgname-rain--1--1785734492255.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು/ಕಾರವಾರ: &lt;/strong&gt;ಕಳೆದ ಕೆಲವು ದಿನಗಳಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇಂದೂ ಕೂಡ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಪ್ರಮುಖ ಜಿಲ್ಲೆಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಇಂದು ಆರೆಂಜ್ ಅಲರ್ಟ್, ನಾಳೆ ಎಲ್ಲೋ ಅಲರ್ಟ್&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ವರದಿಯ ಪ್ರಕಾರ ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಷ್ಟೇ ಅಲ್ಲದೆ, ಮಲೆನಾಡಿನ ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಳಗಾವಿ ಮತ್ತು ಹಾಸನ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ನಾಳೆಯಿಂದ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ಮುನ್ಸೂಚನೆ ಇದೆ.&lt;/p&gt;&lt;h2&gt;&lt;strong&gt;ಶಿರಸಿ-ಹುಬ್ಬಳ್ಳಿ ರಸ್ತೆ ಜಲಾವೃತ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ನಗರದ ಕೋಟೆ ಕೆರೆ ತುಂಬಿ ಹರಿಯುತ್ತಿದ್ದು, ನೀರು ರಸ್ತೆಗೆ ನುಗ್ಗಿದೆ. ಹಲವು ಬಡಾವಣೆಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಇತ್ತ ದಾಂಡೇಲಿಯಲ್ಲಿ ಕಳೆದ 48 ಗಂಟೆಗಳಿಂದ ಸುರಿಯುತ್ತಿರುವ ಮಳೆಗೆ ಮಸಿದಿಗಲ್ಲಿಯ ಯುಸೂಫ್ ಶೇಖ್ ಎಂಬುವವರ ಮನೆ ಕುಸಿದಿದೆ. ಮನೆಯಲ್ಲಿದ್ದ ಇಬ್ಬರು ವೃದ್ಧರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು&lt;/strong&gt;&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟ ಜೋರಾಗಿದೆ. ಎಎಂಆರ್ (AMR) ಡ್ಯಾಂನಿಂದ ನೀರನ್ನು ಹೊರಬಿಡಲಾಗುತ್ತಿದ್ದು, ನೇತ್ರಾವತಿ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದೆ. ಬಂಟ್ವಾಳದ ಅಲಡ್ಕ, ಬೋಗೋಡಿ, ನಂದಾವರ, ಗೂಡಿನಬಳಿ ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಂಪರ್ಕ ಕಡಿತಗೊಳಿಸಿದ ಕಿರು ಸೇತುವೆ&lt;/strong&gt;&lt;/h2&gt;&lt;p&gt;ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿವೆ. ನೀರಿನ ಮಟ್ಟ ಹೆಚ್ಚಾದ ಕಾರಣ ಇಲ್ಲಿನ ಕಿರು ಸೇತುವೆಯೊಂದು ಮುಳುಗಡೆಯಾಗಿದ್ದು, ಸ್ಥಳೀಯ ಗ್ರಾಮಸ್ಥರ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಹೊಳೆ-ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿರುವುದರಿಂದ ನದಿ ಪಾತ್ರದ ಜನರು ಹಾಗೂ ಗುಡ್ಡಗಾಡು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತಗಳು ಸೂಚಿಸಿವೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/shivamogga/rain-alert-in-malenadu-and-karavali-reason-udupi-mangaluru-and-uttar-kannada-gkn/articleshow-rgg1vbn"/>
        </item>
        <item>
            <title><![CDATA[Chikkamagaluru: 'ನಾವು ಅಕ್ಕ-ತಮ್ಮ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ'; ರೈಲಿಗೆ ತಲೆಕೊಟ್ಟ ಯುವಕ-ಯುವತಿ]]></title>
            <link>https://kannada.asianetnews.com/karnataka-districts/we-are-like-siblings-do-not-tarnish-our-relationship-young-man-and-woman-note-before-death-in-chikkamagaluru-sns/articleshow-swn9if5</link>
            <guid isPermaLink="true">https://kannada.asianetnews.com/karnataka-districts/we-are-like-siblings-do-not-tarnish-our-relationship-young-man-and-woman-note-before-death-in-chikkamagaluru-sns/articleshow-swn9if5</guid>
            <pubDate>Thu, 20 Aug 2026 12:20:07 +0530</pubDate>
            <description><![CDATA[ಚಿಕ್ಕಮಗಳೂರಿನ ಕಡೂರು ಬಳಿ ಯುವಕ-ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಅಕ್ಕ-ತಮ್ಮನ ಸಂಬಂಧವನ್ನು ಪ್ರೀತಿ ಎಂದು ತಪ್ಪಾಗಿ ಭಾವಿಸಿದ ಸಂಬಂಧಿಕರ ಚುಚ್ಚುಮಾತಿನಿಂದ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಡೆತ್&zwnj;ನೋಟ್&zwnj;ನಲ್ಲಿ ಬರೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0eyx671t7g2j6g8rhcwjfvn,imgname-chikkamgaluru-brother-and-sister-1787208571105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಜಿಲ್ಲೆಯ ಕಡೂರು ಬಳ ಯುವಕ-ಯುವತಿ ಇಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತರನ್ನು ಕುಣಿಗಲ್&zwnj; ಮೂಲದ ರೋಹಿಣಿ ಹಾಗೂ ಬೆಂಗಳೂರು ಮೂಲದ ನವೀನ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೂ ಮುನ್ನ ಇಬ್ಬರು ಡೆತ್&zwnj;ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h2&gt;ಕಡೂರು ರೈಲು ದುರಂತ: ಯುವಕ-ಯುವತಿ ಆತ್ಮಹತ್ಯೆ, ಡೆತ್&zwnj;ನೋಟ್ ಸತ್ಯ&lt;/h2&gt;&lt;p&gt;ಮೃತರು ಬರೆದಿಟ್ಟಿದ್ದಾರೆ ಎಂಬ ಡೆತ್&zwnj;ನೋಟ್&zwnj;ನಲ್ಲಿ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ ಎಂದು ಮನವಿ ಮಾಡಿದ್ದಾರೆ. ನಾವು ರಕ್ತ ಸಂಬಂಧಿಕರಲ್ಲದಿದ್ದರೂ, ನಮ್ಮ ಸಂಬಂಧಕ್ಕೆ ಕಳಂಕ ಹಚ್ಚಬೇಡಿ ಎಂದ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಮೃತರಿಬ್ಬರು ಅನ್ಯೋನ್ಯವಾಗಿದ್ದನ್ನು ಕಂಡು ಸಂಬಂಧಿಕರು, ಸ್ನೇಹಿತರು ಪ್ರೀತಿ ಎಂದು ಕಥೆ ಕಟ್ಟಿದ್ದ ಆರೋಪ ಕೇಳಿಬಂದಿದೆ. ಅಕ್ಕ-ತಮ್ಮನ ಸಂಬಂಧಕ್ಕೆ ಪ್ರೀತಿ ಎಂಬ ಬಣ್ಣ ನೀಡಿದ್ದರಿಂದ, ಸಂಬಂಧಿಕರ ಚುಚ್ಚು ಮಾತಿನಿಂದ ಮನನೊಂದು ಇಬ್ಬರು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;p&gt;ಇನ್ನು, ಇಬ್ಬರ ಅಂತ್ಯಕ್ರಿಯೆಯನ್ನು ಒಂದೇ ಕಡೆ ಮಾಡುವಂತೆ ಡೆತ್&zwnj;ನೋಟ್&zwnj;ನಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ಎನ್ನಲಾಗಿದ್ದು, ಬೆಳೆದು ಕೈಗೆ ಬಂದಿದ್ದ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥ ಆಕ್ರಂಧನ ಮುಗಿಲು ಮುಟ್ಟಿದೆ. ಘಟನೆ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್&zwnj;ನೋಟ್ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.&lt;/p&gt;&lt;h2&gt;ಡೆತ್&zwnj;ನೋಟ್&zwnj;ನಲ್ಲಿದೆ ಏನಿದೆ?&lt;/h2&gt;&lt;p&gt;'ನಾವು ಇಬ್ಬರು ರಕ್ತಹಂಚಿಕೊಂಡು ಹುಟ್ಟಿಲ್ಲ, ಆದರೆ ನಾವು ಯಾವುದೇ ಬೇಧ ಭಾವ ಇಲ್ಲದೆ ಸಹೋದರ ರೀತಿ ಇದ್ದೇವೆ. ಆದರೆ ನಮಗೆ ಮನೆಯಲ್ಲಿಯೂ ಬೆಂಬಲ ಸಿಗಲಿಲ್ಲ. ನಮ್ಮ ರಿಲೆಷನ್ಶಿಪ್ ನೋಡದರೆ ಯಾರಿಗೂ ಆಗುತ್ತಿರಲಿಲ್ಲ. ಒಟ್ಟಿಗೆ ಬದುಕಲು ಆಗಲಿಲ್ಲ, ಅದಕ್ಕೆ ಒಟ್ಟಿಗೆ ಸಾಯೋದಕ್ಕೆ ನಿರ್ಧಾರ ಮಾಡಿದ್ದೇವೆ. ಇನ್ನ ಮೇಲೆ ಚೆನ್ನಾಗಿರಿ, ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಾವು ಸತ್ತ ಮೇಲೆ ನಮ್ಮನ್ನು ಒಂದೇ ಹತ್ತಿರ ಹಾಗೂ ಪಕ್ಕ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಬೇಕು, ನಮಗೆ ನೆಮ್ಮದಿ ಸಿಗುತ್ತದೆ. ಇದು ನಮ್ಮಿಬ್ಬರ ಮನವಿ' ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/we-are-like-siblings-do-not-tarnish-our-relationship-young-man-and-woman-note-before-death-in-chikkamagaluru-sns/articleshow-swn9if5"/>
        </item>
        <item>
            <title><![CDATA[ಜೀಪಿಗೆ ಬೆಂಕಿ ಹಚ್ಚಿದ ಮುಲ್ಲಾನಿಗೂ ನನ್ನ ಮೇಲೆ ಕೇಸ್‌ ಕೊಟ್ಟವನಿಗೂ ಏನು ಸಂಬಂಧ? ಪೊಲೀಸರು ತನಿಖೆ ಮಾಡಲಿ: ಸಿಟಿ ರವಿ]]></title>
            <link>https://kannada.asianetnews.com/karnataka-districts/ct-ravi-defended-his-controversy-statement-over-delhi-protests-at-chikkamagaluru/articleshow-tdxt56b</link>
            <guid isPermaLink="true">https://kannada.asianetnews.com/karnataka-districts/ct-ravi-defended-his-controversy-statement-over-delhi-protests-at-chikkamagaluru/articleshow-tdxt56b</guid>
            <pubDate>Sun, 26 Jul 2026 13:06:18 +0530</pubDate>
            <description><![CDATA[&lt;p&gt;ನೀಟ್ ಪೇಪರ್ ಲೀಕ್ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್&zwnj;ಸಿ ಸಿ.ಟಿ. ರವಿ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆಗೆ ಬದ್ಧರಾಗಿದ್ದು, ತಾವು ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದವರ ಬಗ್ಗೆ ಮಾತನಾಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyems6f6zzhjpft703ypwn0f,imgname-----------------------2026-07-26t125053.384-1785050470886.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು (ಜು.26):&lt;/strong&gt; ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ದೆಹಲಿಯ ಜಂತರ್&zwnj; ಮಂತರ್&zwnj;ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ಕುರಿತು ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಎಂಎಲ್&zwnj;ಸಿ ಸಿಟಿ ರವಿ ವಿರುದ್ಧ ಪೊಲೀಸರು ಎಫ್&zwnj;ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿ ಪ್ರತಿಕ್ರಿಯಿಸಿರುವ ಸಿಟಿ ರವಿ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು 'ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ' ಎಂದಿದ್ದಾರೆ.&lt;/p&gt;&lt;p&gt;ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೆ ಅವರು ಒತ್ತಾಯಿಸುತ್ತಿದ್ದಾರೆ. ನಾನು ಈ ಅನಕ್ಷರಸ್ಥ ಜನರನ್ನು ಕೇಳಲು ಬಯಸುತ್ತೇನೆ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೂ ಸಿಎಎ ಮತ್ತು ಎನ್&zwnj;ಆರ್&zwnj;ಸಿಗೂ ಏನು ಸಂಬಂಧ? ಸಿಎಎ ಮತ್ತು ಎನ್&zwnj;ಆರ್&zwnj;ಸಿಯನ್ನು ವಿರೋಧಿಸುವ ರಾಷ್ಟ್ರವಿರೋಧಿ ಅಂಶಗಳು ಮತ್ತು 'ತುಕ್ಡೆ ತುಕ್ಡೆ ಗ್ಯಾಂಗ್' ಸದಸ್ಯರು ಈ ಪ್ರತಿಭಟನೆಗಳಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದಾರೆ ಎಂದು ರವಿ ಹೇಳಿದ್ದಾರೆ.&lt;/p&gt;&lt;h2&gt;ಮುಲ್ಲಾನಿಗೂ ನನ್ನ ಮೇಲೆ ಕೇಸ್&zwnj; ಕೊಟ್ಟವನಿಗೂ ಏನು ಸಂಬಂಧ?&lt;/h2&gt;&lt;p&gt;ನನ್ನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ಪೆಟ್ರೋಲ್ ಟ್ಯಾಂಕ್&zwnj;ಗೆ ಕಡ್ಡಿ ಗೀರಲು ಹೋದ ಮುಲ್ಲಾನ ಬಗ್ಗೆ ನಾನು ಮಾತನಾಡಿದ್ದೇನೆ, ಜೀಪಿಗೆ ಬೆಂಕಿ ಹಚ್ಚು ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಸಾವಿರ ಮಾತನಾಡುತ್ತೇನೆ ಎಂದು ವಿಡಿಯೋ ಸಮೇತ ಸಾಕ್ಷಿ ತೋರಿಸಿದ ಸಿಟಿ ರವಿ ಅವರು, ನಾನು ದೇಶ ವಿರೋಧಿ ಮುಲ್ಲಾನ ಬಗ್ಗೆ ಮಾತನಾಡಿದ್ದೇನೆ, ಮುಸ್ಲಿಮರ ಬಗ್ಗೆ ಮಾತನಾಡಿಲ್ಲ. ಮುಸ್ಲಿಮರ ಬಗ್ಗೆ ಒಂದು ಪದವೂ ಮಾತನಾಡಿಲ್ಲ. ನಾಗರೀಕ, ದೇಶಭಕ್ತ, ನೀಟ್ ವಿದ್ಯಾರ್ಥಿಗಳು ಈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡೋಲ್ಲ. ಸಂವಿಧಾನ ಕಾಳಜಿ ಇರೋರು ಇಂಥ ಕೆಲಸ ಮಾಡೋಲ್ಲ. ಅವನ ಎದೆ ಸೀಳಿದರೆ ಮೂರಕ್ಷರ ಇರಲ್ಲ, ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿದವನ ಬಗ್ಗೆ ಮಾತನಾಡಿದರೆ ಕೇಸ್ ಹಾಕ್ತೀರಾ? ಪಹಲ್ಗಾಂ ನಲ್ಲಿ ಕಲ್ಮಾ ಹೇಳದಿದ್ದಕ್ಕೆ ಸಾಯಿಸಿದ್ರಲ್ಲ ಅದಕ್ಕೆ ಏನು ಹೇಳ್ತೀರಾ? ನನ್ನ ಮೇಲೆ ಕೇಸ್&zwnj; ಕೊಟ್ಟಿರೋನಿಗೂ, ಅವನಿಗೂ ಏನು ಸಂಬಂಧ? ಮೊದಲು ಪೊಲೀಸರು ಈ ಬಗ್ಗೆ ತನಿಖೆ ಮಾಡಲಿ. ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ, ಆದರೆ ಜಿಹಾದಿಗಳ ಒಳ್ಳೆಯವರು ಅಂತಾ ನಾನು ಹೇಳೋಲ್ಲ ಎಂದರು.&lt;/p&gt;&lt;h3&gt;ಪೊಲೀಸರ ನಡೆ ವಿರುದ್ಧವೂ ಸಿಟಿ ರವಿ ಕಿಡಿ&lt;/h3&gt;&lt;p&gt;ಅಕ್ರಮ ಬಾಂಗ್ಲಾದೇಶಿಗರ ಬಗ್ಗೆ ದೂರು ಕೊಟ್ರೆ ಸ್ವೀಕರಿಸಲ್ಲ. ಬೇರೆಯವರು ದೂರು ಕೊಟ್ರೆ ಎನ್&zwnj;ಸಿ ಕೊಡೋದು ಕಷ್ಟ. ವಿಪಕ್ಷ ನಾಯಕರು ದೂರು ಕೊಟ್ಟರೆ ದೂರು ದಾಖಲಿಸಲ್ಲ, ನೀವು ಇಡೀ ರಾತ್ರಿ ಡ್ರಾಮಾ ಮಾಡ್ತೀರಿ. ಅವರು ದೂರು ಕೊಟ್ರೆ ತಕ್ಷಣ ದೂರು ದಾಖಲಿಸುತ್ತೀರ? ಪೊಲೀಸ್ ಜೀಪಿಗೆ ಬೆಂಕಿ ಹಚ್ಚುವವನ ಬಗ್ಗೆ ಮಾತನಾಡಿದ್ರೆ ಎಫ್&zwnj;ಐಆರ್ ಮಾಡ್ತೀರಾ? ಕರ್ನಾಟಕ ಪೊಲೀಸರು ಏನು ಸಂದೇಶ ಕೊಡ್ತಿದ್ದಾರೆ ಎಂದು ಸಿಟಿ ರವಿ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಘಟನೆ ಹಿನ್ನೆಲೆ&lt;/strong&gt;&lt;/p&gt;&lt;p&gt;ಚಿಕ್ಕಮಗಳೂರಿನಲ್ಲಿ ಯೂತ್ ಫಾರ್ ನೇಷನ್ ಸಂಘಟನೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, 'ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಸಂಬಂಧವೇನು? ಸಂಪೂರ್ಣವಾಗಿ ಅನಕ್ಷರಸ್ಥನಾದ ಒಬ್ಬ ಮುಲ್ಲಾ ಬಂದು ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾನೆ' ಎಂದು ರವಿ ಹೇಳಿದ್ದಾರೆಂದು ಆರೋಪಿಸಲಾಗಿತ್ತು. ಕೋಮು ವಿಷಯಗಳನ್ನು ನೀಟ್ ವಿವಾದಕ್ಕೆ ಎಳೆದು ತಂದಿದ್ದಕ್ಕಾಗಿ ರವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮುಸ್ಲಿಂ ಫೆಡರೇಶನ್ ಸರ್ಕಾರವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆ ಚಿಕ್ಕಮಗಳೂರಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ನಿರ್ದೇಶನದ ಮೇರೆಗೆ ಚಿಕ್ಕಮಗಳೂರು ಪಟ್ಟಣ ಪೊಲೀಸರು ಸಿಟಿ ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್&zwnj;ಎಸ್) ಸೆಕ್ಷನ್ 353(2) ರ ಅಡಿಯಲ್ಲಿ ಎಫ್&zwnj;ಐಆರ್ ಎಫ್&zwnj;ಐಆರ್ ದಾಖಲಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/ct-ravi-defended-his-controversy-statement-over-delhi-protests-at-chikkamagaluru/articleshow-tdxt56b"/>
        </item>
        <item>
            <title><![CDATA[ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!]]></title>
            <link>https://kannada.asianetnews.com/gallery/karnataka-districts/chikkamagaluru-kalasa-bhadra-river-flood-coffee-arecanut-farm-damage-heavy-rain-karnataka-tya8c0o</link>
            <guid isPermaLink="true">https://kannada.asianetnews.com/gallery/karnataka-districts/chikkamagaluru-kalasa-bhadra-river-flood-coffee-arecanut-farm-damage-heavy-rain-karnataka-tya8c0o</guid>
            <pubDate>Sun, 02 Aug 2026 20:18:21 +0530</pubDate>
            <description><![CDATA[&lt;p&gt;ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿ ಭದ್ರಾ ನದಿ ಪ್ರವಾಹದಿಂದ ರೈತ ಅಶೋಕ್ ಅವರ ಸಂಪೂರ್ಣ ತೋಟ ನಾಶವಾಗಿದೆ. ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಬೆಳೆದಿದ್ದ ಕಾಫಿ, ಅಡಿಕೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮನೆಗೂ ನೀರು ನುಗ್ಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ರೈತನ ಗೋಳು ನೀವೂ ಕೇಳಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1atvk3yd6ht90hygw2vwf5,imgname-chikkamagaluru-farmer-crop-loss-by-rain--6--1785677573731.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿ ಭದ್ರಾ ನದಿ ಪ್ರವಾಹದಿಂದ ರೈತ ಅಶೋಕ್ ಅವರ ಸಂಪೂರ್ಣ ತೋಟ ನಾಶವಾಗಿದೆ. ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಬೆಳೆದಿದ್ದ ಕಾಫಿ, ಅಡಿಕೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮನೆಗೂ ನೀರು ನುಗ್ಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ರೈತನ ಗೋಳು ನೀವೂ ಕೇಳಿ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕಮಗಳೂರು (ಆ.02): &lt;/strong&gt;ಧರ್ಮಸ್ಥಳ ಸಂಘದಲ್ಲಿ (Dharmasthala Sangha) ಲಕ್ಷಾಂತರ ರೂ. ಸಾಲವನ್ನು ಮಾಡಿ, ಹೊಟ್ಟೆಬಟ್ಟೆ ಕಟ್ಟಿ ಮನೆಯ ಮುಂದೆ ತೆಂಗು, ಅಡಿಕೆ, ಕಾಫಿ, ಬಾಳೆ, ಏಲಕ್ಕಿ ಬೆಳೆಯನ್ನು ಬೆಳೆದಿದ್ದೆವು. ಇಷ್ಟು ವರ್ಷಗಳ ಶ್ರಮ ಇನ್ನೇನು ಫಲ ಕೊಡುತ್ತಿದೆ ಎನ್ನುವ ಈ ವರ್ಷದಲ್ಲಿ ಭಾರೀ ಮಳೆಯಿಂದಾಗಿ ಭದ್ರಾ ನದಿ (Bhadra River flood) &amp;nbsp;ಉಕ್ಕಿ ಹರಿದು ಕೇವಲ 2 ಗಂಟೆಗಳಲ್ಲಿ ಎಲ್ಲ ಬೆಳೆ ನಷ್ಟವಾಗಿದೆ. ಲಕ್ಷಾಂತರ ರೂ. ಸಾಲವನ್ನೂ ತೀರಿಸುವ ಒಂದೇ ಒಂದು ಆಸರೆಯೂ ದೂವರಾಗಿದ್ದು, ಬದುಕೇ ದುಸ್ತರವಾಗಿದೆ ಎಂದು ರೈತರು (Chikkamagaluru Farmer) ಗೋಳಾಡುವ ದೃಶ್ಯ ಮಾತ್ರ ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ.&lt;/p&gt;&lt;img&gt;&lt;p&gt;ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa) ತಾಲೂಕಿನ ಸಂಸೆ (Samse) ಸಮೀಪದ ಹೊಸಮಠ (Hosamatha) ಗ್ರಾಮದಲ್ಲಿ ಭಾರೀ ಮಳೆ (Heavy Rain) ಮತ್ತು ಭದ್ರಾ (Bhadra River) ನದಿಯ ಪ್ರವಾಹ (Flood) ರೈತ ಕುಟುಂಬದ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ಭದ್ರಾ ನದಿಯ ನೀರು ಏಕಾಏಕಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಕಾಫಿ (Coffee), ಅಡಿಕೆ (Arecanut), ಬಾಳೆ (Banana) ಹಾಗೂ ಏಲಕ್ಕಿ (Cardamom) ಬೆಳೆಗಳು ಸಂಪೂರ್ಣ ನಾಶವಾಗಿವೆ. ಜೊತೆಗೆ ರೈತನ ಮನೆಗೂ ನೀರು ನುಗ್ಗಿದ್ದು, ದವಸ-ಧಾನ್ಯ ಹಾಗೂ ಮನೆಯೊಳಗಿನ ಸಾಮಗ್ರಿಗಳೂ ನಾಶವಾಗಿವೆ. ಈ ಮೂಲಕ ರೈತನ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಂದಿದೆ.&lt;/p&gt;&lt;img&gt;&lt;p&gt;ಹೊಸಮಠ ಗ್ರಾಮದ ರೈತ ಅಶೋಕ್ (Ashok) ಅವರು ಹಲವು ವರ್ಷಗಳ ಶ್ರಮದಿಂದ ಬೆಳೆಸಿದ್ದ ತೋಟ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಬುಡ ಸಮೇತ ಕಾಫಿ (Coffee) ಮತ್ತು ಅಡಿಕೆ (Arecanut) ಸಸಿಗಳು ನೆಲಕ್ಕುರುಳಿದ್ದು, ಫಸಲಿಗೆ (Harvest) ಬಂದಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ (Agriculture) ಹಾನಿಯಾಗಿರುವುದಾಗಿ ಕುಟುಂಬ ಹೇಳಿಕೊಂಡಿದೆ.&lt;/p&gt;&lt;img&gt;&lt;p&gt;ಧರ್ಮಸ್ಥಳ ಸಂಘದಿಂದ ಸಾಲ ಪಡೆದು ತೋಟ ಅಭಿವೃದ್ಧಿ&lt;/p&gt;&lt;p&gt;ಅಶೋಕ್ ಅವರು ಧರ್ಮಸ್ಥಳ ಸಂಘ (Dharmasthala Sangha)ದಿಂದ ಸಾಲ (Loan) ಪಡೆದು ತೋಟವನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಒಂದೇ ದಿನದ ಪ್ರವಾಹ (Flood) ಅವರ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣಿನ ಪಾಲು ಮಾಡಿದೆ. ತೋಟದ ಈಗಿನ ಸ್ಥಿತಿಯನ್ನು ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟಿದ್ದು, ಬದುಕು ಮತ್ತೆ ಹೇಗೆ ಕಟ್ಟಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ.&amp;nbsp;&lt;/p&gt;&lt;p&gt;ಪ್ರವಾಹದ ನೀರು (Flood Water) ತೋಟಕ್ಕೆ ಮಾತ್ರ ಸೀಮಿತವಾಗದೆ ಮನೆಯೊಳಗೂ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು (Household Items), ಅಗತ್ಯ ಸಾಮಗ್ರಿಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳೂ ಹಾನಿಗೊಳಗಾಗಿವೆ. ಕುಟುಂಬ ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.&lt;/p&gt;&lt;img&gt;&lt;p&gt;ಸ್ಥಳೀಯ ಗ್ರಾಮಸ್ಥರು ಕೂಡ ಸರ್ಕಾರ (Government) ತಕ್ಷಣ ಹಾನಿಯ ಸಮೀಕ್ಷೆ (Survey) ನಡೆಸಿ ಸೂಕ್ತ ಪರಿಹಾರ (Compensation) ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳೆ (Rain) ಮತ್ತು ಪ್ರವಾಹದ (Flood) ಹೊಡೆತಕ್ಕೆ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ಆರ್ಥಿಕ ನೆರವು (Financial Assistance) ನೀಡಬೇಕೆಂದು ಒತ್ತಾಯಿಸಿದ್ದಾರೆ.&lt;/p&gt;&lt;img&gt;&lt;p&gt;ಮಲೆನಾಡು (Malnad) ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ (Heavy Rain) ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರೈತರು ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳೀಯ ಆಡಳಿತ (District Administration) ಕೂಡ ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದೆ.&lt;/p&gt;]]></content:encoded>
            <category>chikkamagalur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkamagaluru-kalasa-bhadra-river-flood-coffee-arecanut-farm-damage-heavy-rain-karnataka-tya8c0o"/>
        </item>
        <item>
            <title><![CDATA[ಚಿಕ್ಕಮಗಳೂರು: ಚಿರತೆ ಹಿಡಿಯಲು ಎಣ್ಣೆ ಕುಡಿದು ಬಂದ ಅರಣ್ಯ ಸಿಬ್ಬಂದಿ, ಗ್ರಾಮಸ್ಥರಿಂದ ಘೇರಾವ್, ಚಿರತೆ ಸೆರೆ!]]></title>
            <link>https://kannada.asianetnews.com/karnataka-districts/leopard-trapped-in-chikkamagaluru-after-villagers-gherao-drunk-forest-staff-gdp/articleshow-u9x2g0w</link>
            <guid isPermaLink="true">https://kannada.asianetnews.com/karnataka-districts/leopard-trapped-in-chikkamagaluru-after-villagers-gherao-drunk-forest-staff-gdp/articleshow-u9x2g0w</guid>
            <pubDate>Fri, 21 Aug 2026 13:29:35 +0530</pubDate>
            <description><![CDATA[ಚಿಕ್ಕಮಗಳೂರಿನ ಅಜ್ಜಂಪುರ ಮತ್ತು ಕಡೂರು ತಾಲೂಕಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯು ಅಂತಿಮವಾಗಿ ಬೋನಿಗೆ ಬಿದ್ದಿದೆ. ಆದರೆ, ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0hn7fz4nv6ykeeez20zctr9,imgname-leopard-trapped-in-chikkamagaluru-1787299086308.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು:&lt;/strong&gt; ಜಿಲ್ಲೆಯ ಅಜ್ಜಂಪುರ ತಾಲೂಕಿನ ತಿಮ್ಮಾಪುರ ಸಮೀಪದ ಗೆಜ್ಜೆಗೊಂಡನಹಳ್ಳಿ ಹಾಗೂ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಓಡಾಡಿಕೊಂಡು ಸಾರ್ವಜನಿಕರಲ್ಲಿ ತೀವ್ರ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಆದರೆ, ಈ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.&lt;/p&gt;&lt;h2&gt;ಮನೆಗಳ ಕಾಂಪೌಂಡ್, ಶಾಲೆಯ ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆ:&lt;/h2&gt;&lt;p&gt;ಹುಲಿಕೆರೆ ಗ್ರಾಮದೊಳಗೆ ರಾಜಾರೋಷವಾಗಿ ಓಡಾಡುತ್ತಿದ್ದ ಈ ಸುಮಾರು ಎರಡು ವರ್ಷದ ಚಿರತೆ, ಮನೆಗಳ ಕಾಂಪೌಂಡ್ ಗೋಡೆಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿತ್ತು. ಗ್ರಾಮದ ಸರ್ಕಾರಿ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲೂ ಚಿರತೆಯ ಸಂಚಾರದ ದೃಶ್ಯಗಳು ಸೆರೆಯಾಗಿದ್ದು, ಇದರಿಂದ ಗ್ರಾಮಸ್ಥರು ಮನೆಗಳಿಂದ ಹೊರಬರಲು ಹೆದರಿ ಆತಂಕದ ವಾತಾವರಣದಲ್ಲಿದ್ದರು. ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ನೂರಾರು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;ಮದ್ಯಪಾನ ಮಾಡಿ ಬಂದ ಸಿಬ್ಬಂದಿ? ಗ್ರಾಮಸ್ಥರ ಘೇರಾವ್:&lt;/h2&gt;&lt;p&gt;ಚಿರತೆ ಸಂಚಾರದ ಬಗ್ಗೆ ತುರ್ತು ಮಾಹಿತಿ ನೀಡಿದರೂ ಅಜ್ಜಂಪುರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತಡವಾಗಿ ಆಗಮಿಸಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಅರಣ್ಯ ಸಿಬ್ಬಂದಿಯನ್ನು ತಡೆದು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೆ, ಸ್ಥಳಕ್ಕೆ ಬಂದಿದ್ದ ಕೆಲವು ಸಿಬ್ಬಂದಿ ಮದ್ಯಪಾನ ಮಾಡಿಕೊಂಡು ಕರ್ತವ್ಯಕ್ಕೆ ಬಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಗ್ರಾಮಸ್ಥರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ವೈದ್ಯಕೀಯ ತಪಾಸಣೆ (ಮೆಡಿಕಲ್ ಟೆಸ್ಟ್) ನಡೆಸಬೇಕೆಂದು ಪಟ್ಟು ಹಿಡಿದರು.&lt;/p&gt;&lt;h2&gt;ಕೊನೆಗೂ ಬೋನಿಗೆ ಬಿದ್ದ ಎರಡು ವರ್ಷದ ಚಿರತೆ:&lt;/h2&gt;&lt;p&gt;ಗ್ರಾಮಸ್ಥರ ತೀವ್ರ ಪ್ರತಿಭಟನೆ ಮತ್ತು ಆಕ್ರೋಶದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ, ತಡರಾತ್ರಿ ಚಿರತೆ ಸಂಚರಿಸುತ್ತಿದ್ದ ಮಾರ್ಗದಲ್ಲಿ ಬೋನ್ ಅಳವಡಿಸಿದರು. ಮುಂಜಾನೆಯ ವೇಳೆಗೆ ಸುಮಾರು ಎರಡು ವರ್ಷದ ಚಿರತೆ ಬೋನಿನೊಳಗೆ ಬಿದ್ದಿದ್ದು, ಅದೃಷ್ಟವಶಾತ್ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.&lt;/p&gt;&lt;p&gt;ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಬೋನಿನಲ್ಲಿದ್ದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದು, ಅದನ್ನು ಸುಕ್ಷೇಮವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ಕ್ರಮ ಕೈಗೊಂಡಿದ್ದಾರೆ. ಆದರೆ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chikkamagalur</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/leopard-trapped-in-chikkamagaluru-after-villagers-gherao-drunk-forest-staff-gdp/articleshow-u9x2g0w"/>
        </item>
        <item>
            <title><![CDATA[ಕರುಣೆ ಇಲ್ಲದ ಅಮ್ಮ.. ಏಳು ತಿಂಗಳ ಹಸುಗೂಸಿನ ಎದುರೇ ಪ್ರಾಣಬಿಟ್ಟಳು..!]]></title>
            <link>https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq</link>
            <guid isPermaLink="true">https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq</guid>
            <pubDate>Sun, 26 Jul 2026 12:10:42 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಪತಿಯ ಅಕ್ರಮ ಸಂಬಂಧ ಮತ್ತು ಮಾನಸಿಕ ಹಿಂಸೆಯಿಂದ ನೊಂದ 24 ವರ್ಷದ ತಾಯಿಯೊಬ್ಬಳು ತನ್ನ ಏಳು ತಿಂಗಳ ಹಸುಗೂಸನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ನೋಡುತ್ತಿದ್ದಂತೆಯೇ ವಿಡಿಯೋ ಕಾಲ್&zwnj;ನಲ್ಲೇ ಬದುಕು ಅಂತ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyejdhe1g801ajm6s6vaz9c4,imgname-mother-died-1785047991745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಏಳು ತಿಂಗಳ ಹಸಿಗೂಸನ್ನು ಬಿಟ್ಟು ತಾಯಿಯೊಬ್ಬಳು ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತಿಯ ಅಕ್ರಮ ಸಂಬಂಧ ಹಾಗೂ ಆತ ನೀಡಿದ ಮಾನಸಿಕ ಹಿಂಸೆಗೆ ಬೇಸತ್ತು ಸಾನಿಕ ಗೌಡ (24) ಎಂಬುವವರು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಸಾನಿಕ ಗೌಡಗೆ ಚಿಕ್ಕಮಗಳೂರು ಮೂಲದ ಶರಣ್ ಗೌಡ ಎಂಬುವವರ ಜೊತೆ ಒಂದು ವರ್ಷ ನಾಲ್ಕು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಇತ್ತೀಚೆಗಷ್ಟೇ ಸಾನಿಕ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಾಣಂತನಕ್ಕಾಗಿ ರಾಯಸಂದ್ರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದ ಸಾನಿಕ, ಅಲ್ಲಿಯೇ ಜೀವನ ಅಂತ್ಯಗೊಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಪತಿಯ ಕ್ರೌರ್ಯಕ್ಕೆ ಬಲಿಯಾದ ಸಾನಿಕ?&lt;/strong&gt;&lt;/h3&gt;&lt;p&gt;ಆರೋಪಿ ಪತಿ ಶರಣ್ ಗೌಡ ಬೇರೆ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅಮಾನವೀಯತೆಯ ಪರಮಾವಧಿ ಎಂಬಂತೆ, ಶರಣ್ ಗೌಡ ತಾನು ಪ್ರಿಯತಮೆ ಜೊತೆ ಮಾತನಾಡುತ್ತಿರುವ ವಿಡಿಯೋ ಮತ್ತು ಆಡಿಯೋ ಕ್ಲಿಪ್&zwnj;ಗಳನ್ನು ಪತ್ನಿ ಸಾನಿಕಳಿಗೆ ಕಳುಹಿಸಿ ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಇದನ್ನು ಕಂಡು ತೀವ್ರ ಮನನೊಂದ ಸಾನಿಕ, ಪತಿಗೆ ವಿಡಿಯೋ ಕಾಲ್ ಮಾಡಿ ಆತ ನೋಡುತ್ತಿರುವಂತೆಯೇ ನೇಣಿಗೆ ಶರಣಾಗಿದ್ದಾರೆ.&lt;/p&gt;&lt;p&gt;ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆಗೆ ಸಾನಿಕ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಸಣ್ಣ ಮಗು ಹಸಿವಿನಿಂದ ಅಳುತ್ತಿದ್ದರೂ ಗಮನಿಸದಷ್ಟು ನೋವಿನಲ್ಲಿದ್ದ ತಾಯಿ, ಕೊನೆಗೆ ಸಾವಿನ ಹಾದಿ ಹಿಡಿದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪರಪ್ಪನ ಅಗ್ರಹಾರ ಪೊಲೀಸರು ಮೃತದೇಹವನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಸಾನಿಕ ಅವರ ಪೋಷಕರು ಪತಿ ಶರಣ್ ಗೌಡ ವಿರುದ್ಧ ಕಿರುಕುಳ ಹಾಗೂ ಆತ್ಮ*ತ್ಯೆಗೆ ಪ್ರೇರಣೆ ನೀಡಿದ ಆರೋಪದಡಿ ದೂರು ನೀಡಿದ್ದಾರೆ. ಮಗುವಿನ ಭವಿಷ್ಯವನ್ನು ಕಿತ್ತುಕೊಂಡ ಪತಿಯ ಅಕ್ರಮ ಸಂಬಂಧದ ವಿಡಿಯೋಗಳೇ ಈಗ ಈ ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ..&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/heartless-mother-dies-in-front-of-her-7-month-old-baby-in-bengaluru-gkn/articleshow-w3olxqq"/>
        </item>
        <item>
            <title><![CDATA[ನಯನಾ ಮೋಟಮ್ಮಗೂ ಬೇಸರ.. ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ ಶಾಸಕಿ..!]]></title>
            <link>https://kannada.asianetnews.com/politics/karnataka-cabinet-expansion-news-congress-mla-nayana-motamma-on-dk-shivakumar-government-gkn/articleshow-wal1m7i</link>
            <guid isPermaLink="true">https://kannada.asianetnews.com/politics/karnataka-cabinet-expansion-news-congress-mla-nayana-motamma-on-dk-shivakumar-government-gkn/articleshow-wal1m7i</guid>
            <pubDate>Tue, 04 Aug 2026 12:52:27 +0530</pubDate>
            <description><![CDATA[ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಅರ್ಹತೆ ಹಾಗೂ ಜಿಲ್ಲಾ ಪ್ರಾತಿನಿಧ್ಯದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿತ್ತು, ಆದರೆ ಅವಕಾಶ ನೀಡದಿರುವುದು ತೀವ್ರ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5tdb321artf2fwnqz3g142,imgname-nayana-motamma-1785828125794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಬುಗಿಲೆದ್ದಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಟೀಂನಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಶಾಸಕಿ ನಯನಾ ಮೋಟಮ್ಮ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಮಹಿಳೆಯರ ಕಡೆಗಣನೆಗೆ ಬೇಸರ&lt;/strong&gt;&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ನಯನಾ ಮೋಟಮ್ಮ, ಖಂಡಿತಾ ಮಹಿಳೆಯರಿಗೆ ಅವಕಾಶ ಕೊಡದ ವಿಚಾರ ನನಗೆ ತೀವ್ರ ಬೇಸರ ತಂದಿದೆ. ಇದು ಪಕ್ಷವು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದು ಹೇಳುವ ಮೂಲಕ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವಕ್ಕೆ ನೇರವಾಗಿಯೇ ಟಾಂಗ್ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಮಹಿಳಾ ಮೀಸಲಾತಿ ಬಿಲ್ ಪ್ರಸ್ತಾಪ&lt;/strong&gt;&lt;/h2&gt;&lt;p&gt;ದೇಶದಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿ ಜಾರಿಗೆ ಬರಬೇಕಿದೆ. ಇಂತಹ ಹಂತದಲ್ಲೇ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಪಕ್ಷ ಇದನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್, ಅಧಿಕಾರ ಹಂಚಿಕೆಯಲ್ಲಿ ಮಹಿಳೆಯರನ್ನು ಮರೆತಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ನಯನಾ&lt;/strong&gt;&lt;/h2&gt;&lt;p&gt;ಇದೇ ವೇಳೆ ತಮಗಿದ್ದ ಸಚಿವ ಸ್ಥಾನದ ಆಕಾಂಕ್ಷೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ ನಯನಾ ಮೋಟಮ್ಮ, ಮೊದಲ ಬಾರಿಗೆ ಗೆದ್ದವರಿಗೆ ಪ್ರಾತಿನಿಧ್ಯ ಕೊಡುತ್ತಾರೆ ಎಂಬ ಮಾತಿತ್ತು. ಶೈಕ್ಷಣಿಕವಾಗಿ ನಾನು ಅರ್ಹತೆ ಹೊಂದಿದ್ದೇನೆ ಮತ್ತು ಜಿಲ್ಲಾ ಪ್ರಾತಿನಿಧ್ಯದ ಅಡಿಯಲ್ಲಿ ನನಗೂ ಅವಕಾಶ ಸಿಗಬೇಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದೇವೆ. ಇದೆಲ್ಲವನ್ನು ಗಮನಿಸಿದಾಗ ನನಗೂ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ನಾನು ಎಲ್ಲ ನಾಯಕರನ್ನೂ ಮಾತನಾಡಿಸಿದ್ದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;ನಿನ್ನೆಯಷ್ಟೇ ಡಿ.ಕೆ.ಶಿವಕುಮಾರ್ ಅವರ ತಂಡಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದೆ. ಈ ತಂಡದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ನಯನಾ ಮೋಟಮ್ಮ ಅವರ ಈ ಹೇಳಿಕೆ ಈಗ ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ್ದು, ಸರ್ಕಾರ ಮತ್ತು ಸಂಘಟನೆಯಲ್ಲಿ ಮಹಿಳಾ ಶಾಸಕಿಯರ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಒಟ್ಟಿನಲ್ಲಿ ಶೈಕ್ಷಣಿಕ ಅರ್ಹತೆ ಮತ್ತು ಜಿಲ್ಲೆಯ ರಾಜಕೀಯ ಪ್ರಾಬಲ್ಯದ ಆಧಾರದ ಮೇಲೆ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದ ನಯನಾ ಮೋಟಮ್ಮ ಅವರಿಗೆ ನಿರಾಸೆಯಾಗಿದ್ದು ಇದು ಮುಂಬರುವ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/politics/karnataka-cabinet-expansion-news-congress-mla-nayana-motamma-on-dk-shivakumar-government-gkn/articleshow-wal1m7i"/>
        </item>
        <item>
            <title><![CDATA[ಹಿಟ್ ಅಂಡ್ ರನ್‌ ಕೇಸ್‌ಗೆ ರೋಚಕ ಟ್ವಿಸ್ಟ್.. ಆಪ್ತಮಿತ್ರನ ಸದ್ದಿಲ್ಲದೇ ಮುಗಿಸಿಬಿಟ್ಟಿದ್ದ ಸ್ನೇಹಿತ..!]]></title>
            <link>https://kannada.asianetnews.com/chikkamagalur/major-twist-in-hit-and-run-case-in-chikkamagaluru-this-is-fight-between-two-friends-for-money-matter-gkn/articleshow-zgp6bfz</link>
            <guid isPermaLink="true">https://kannada.asianetnews.com/chikkamagalur/major-twist-in-hit-and-run-case-in-chikkamagaluru-this-is-fight-between-two-friends-for-money-matter-gkn/articleshow-zgp6bfz</guid>
            <pubDate>Fri, 24 Jul 2026 11:08:39 +0530</pubDate>
            <description><![CDATA[&lt;p&gt;ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9a2cft54t221w160scyecn,imgname-chikkamagaluru-hit-and-run-case-1784871465466.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಮಗಳೂರು: &lt;/strong&gt;ಒಂದೂವರೆ ತಿಂಗಳ ಹಿಂದೆ ನಡೆದ ಆ ಘಟನೆಯನ್ನು ಎಲ್ಲರೂ ಒಂದು ಭೀಕರ ರಸ್ತೆ ಅಪಘಾತ ಎಂದೇ ಭಾವಿಸಿದ್ದರು. ಅಪಘಾತ ನಡೆದ ಜಾಗದಲ್ಲಿ ಪಲ್ಟಿಯಾಗಿದ್ದ ಗೂಡ್ಸ್ ಆಟೋ ಆ ಅನುಮಾನವನ್ನು ಮತ್ತಷ್ಟು ಪುಷ್ಟೀಕರಿಸಿತ್ತು. ಪೊಲೀಸರ ಹದ್ದಿನ ಕಣ್ಣು ಈ ಅಪಘಾತದ ಹಿಂದಿದ್ದ ಕರಾಳ ಕೊಲೆಯ ರಹಸ್ಯವನ್ನು ಬಯಲಿಗೆಳೆದಿದೆ. ಹಣದ ಹಪಾಹಪಿಗೆ ತನ್ನ ಪ್ರಾಣ ಸ್ನೇಹಿತನನ್ನೇ ಕೊಂದು, ಏನೂ ತಿಳಿಯದವನಂತೆ ನಟಿಸುತ್ತಿದ್ದ ಖತರ್ನಾಕ್ ಕಿಲಾಡಿಯೀಗ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಹಾಸನ ನಗರದ ವಿಜಯನಗರ ನಿವಾಸಿಗಳಾಗಿದ್ದ ಯಶವಂತ್ (26) ಮತ್ತು ಸಚಿನ್ ಪರಸ್ಪರ ಸ್ನೇಹಿತರು. ಕಳೆದ ಜೂನ್ 12ರಂದು ಇಬ್ಬರೂ ಬೈಕಿನಲ್ಲಿ ಅಜ್ಜಂಪುರಕ್ಕೆ ತೆರಳಿದ್ದರು. ಅಂದು ರಾತ್ರಿ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಶವಂತ್ ಶವ ಪತ್ತೆಯಾಗಿತ್ತು. ಯಶವಂತ್ ಶವ ಬಿದ್ದಿದ್ದ ಜಾಗದಲ್ಲೇ ಗೂಡ್ಸ್ ಆಟೋವೊಂದು ಪಲ್ಟಿಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಹಾಗೂ ಪೊಲೀಸರು ಆಟೋ ಡಿಕ್ಕಿಯಾಗಿ ಯಶವಂತ್ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ಊಹಿಸಿದ್ದರು. ಇದನ್ನು &lsquo;ಹಿಟ್ ಅಂಡ್ ರನ್&rsquo; ಪ್ರಕರಣವೆಂದೇ ದಾಖಲಿಸಲಾಗಿತ್ತು.&lt;/p&gt;&lt;h2&gt;&lt;strong&gt;ಪೊಲೀಸರಿಗೆ ಸುಳಿವು ನೀಡಿದ ಆ &lsquo;ಒಂದು&rsquo; ಬೈಕ್!&lt;/strong&gt;&lt;/h2&gt;&lt;p&gt;ಮೇಲ್ನೋಟಕ್ಕೆ ಅಪಘಾತದಂತೆ ಕಂಡರೂ ಸಖರಾಯಪಟ್ಟಣ ಪೊಲೀಸರಿಗೆ ಒಂದು ಅನುಮಾನ ಕಾಡುತ್ತಿತ್ತು. ಅದೇನಪ್ಪಾ ಅಂದರೆ ಯಶವಂತ್ ಅಂದು ಸವಾರಿ ಮಾಡುತ್ತಿದ್ದ ಬೈಕ್ ಮಾತ್ರ ಘಟನಾ ಸ್ಥಳದಲ್ಲಿ ಎಲ್ಲೂ ಪತ್ತೆಯಾಗಿರಲಿಲ್ಲ. ಶವ ಸಿಕ್ಕರೂ ಬೈಕ್ ನಾಪತ್ತೆಯಾಗಿದ್ದೇ ತನಿಖೆಯ ದಿಕ್ಕು ಬದಲಿಸಲು ಕಾರಣವಾಯಿತು. ನಿರಂತರ ಒಂದೂವರೆ ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರಿಗೆ, ಗೆಳೆಯ ಸಚಿನ್&zwnj;ನ ಮೇಲೆ ಅನುಮಾನ ವ್ಯಕ್ತವಾಯಿತು.&lt;/p&gt;&lt;p&gt;ಪೊಲೀಸರು ಸಚಿನ್&zwnj;ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ಸತ್ಯ ಹೊರಬಿದ್ದಿದೆ. ಕಾರು ಮಾರಾಟ ಮಾಡಿದ ಹಣದ ವಿಚಾರವಾಗಿ ಯಶವಂತ್ ಮತ್ತು ಸಚಿನ್ ನಡುವೆ ಗಲಾಟೆ ನಡೆದಿತ್ತು. ಜೂನ್ 12ರ ರಾತ್ರಿ ಹಿರೇಗೌಜ ಬಳಿ ಹಣದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ಹೋಗಿದೆ. ಹಳೆಯ ದ್ವೇಷವೂ ಇದ್ದ ಕಾರಣ, ಸಚಿನ್ ತನ್ನ ಸ್ನೇಹಿತ ಯಶವಂತ್&zwnj;ನನ್ನು ಕೊಂದು ಅಲ್ಲಿಂದ ಎಸ್ಕೇಪ್ ಆಗಿದ್ದ.&lt;/p&gt;&lt;p&gt;ಸಚಿನ್ ಕೊಲೆ ಮಾಡಿ ಪರಾರಿಯಾದ ಅದೇ ಜಾಗದಲ್ಲೇ ಗೂಡ್ಸ್ ಆಟೋವೊಂದು ಪಲ್ಟಿಯಾಗಿ ಬಿದ್ದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸಚಿನ್, ತನ್ನ ಗೆಳೆಯ ಆಟೋ ಡಿಕ್ಕಿಯಾಗಿ ಸತ್ತಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದ. ತಾನು ಕೊಲೆ ಮಾಡಿ ಒಂದೂವರೆ ತಿಂಗಳ ಕಾಲ ಯಾವುದೂ ಗೊತ್ತಿಲ್ಲದವನಂತೆ ನಾಟಕವಾಡುತ್ತಿದ್ದ. ಆದರೆ ಸಖರಾಯಪಟ್ಟಣ ಪೊಲೀಸರ ಚಾಣಾಕ್ಷತನದಿಂದ ಸಚಿನ್ ಈಗ ಜೈಲು ಪಾಲಾಗಿದ್ದಾನೆ.&lt;/p&gt;]]></content:encoded>
            <category>chikkamagalur</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chikkamagalur/major-twist-in-hit-and-run-case-in-chikkamagaluru-this-is-fight-between-two-friends-for-money-matter-gkn/articleshow-zgp6bfz"/>
        </item>
    </channel>
</rss>
