<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 27 Jun 2026 08:36:05 +0530</lastBuildDate>
        <atom:link href="https://kannada.asianetnews.com/rss/chikkaballapur" rel="self" type="application/rss+xml"/>
        <item>
            <title><![CDATA[ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!]]></title>
            <link>https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2</link>
            <guid isPermaLink="true">https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2</guid>
            <pubDate>Mon, 08 Jun 2026 18:04:25 +0530</pubDate>
            <description><![CDATA[ಚಿಕ್ಕಬಳ್ಳಾಪುರದಲ್ಲಿ ಗಂಡನ ಮನೆಯವರ ಕಿರುಕುಳದಿಂದ ನವವಿವಾಹಿತೆ ಪುಷ್ಪಾ ಕೊಲೆಯಾಗಿದ್ದಾಳೆ. ಕಳ್ಳತನದ ನಾಟಕವಾಡಿದ ಅತ್ತೆ, ನಾದಿನಿ ಸೇರಿದಂತೆ ಆರೋಪಿಗಳನ್ನು ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xadbpxq" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜೂ.8): &lt;/strong&gt;ಗಂಡನ ಮನೆಯವರ ಕಿರುಕುಳಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಅತ್ತೆ ಮತ್ತು ನಾದಿನಿ ನೀಡುತ್ತಿದ್ದ ಹಿಂಸೆ ತಾಳಲಾರದೆ ಪುಷ್ಪಾ ಎಂಬಾಕೆ ತವರು ಮನೆ ಸೇರಿದ್ದಳು. ಗಂಡ ಬೇರೆ ಮನೆ ಮಾಡುವುದಾಗಿ ಭರವಸೆ ನೀಡಿ ಆಕೆಯನ್ನು ಕರೆತಂದು, ಹೊಸ ಮನೆಗೂ ಬದಲಾಗಿದ್ದ. ಆದರೆ, ಮಗ ದೂರಾಗಲು ಸೊಸೆಯೇ ಕಾರಣ ಎಂದು ರೊಚ್ಚಿಗೆದ್ದ ಅತ್ತೆ, ನಾದಿನಿ ಮತ್ತು ಅಜ್ಜಿ ಸೇರಿ ಪುಷ್ಪಾಳ ಕೊಲೆಗೆ ಸ್ಕೆಚ್ ಹಾಕಿದ್ದರು.&lt;/p&gt;&lt;p&gt;&lt;strong&gt;ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ 6 ಜನರ ಭೀಕರ ಹ*ತ್ಯೆ!&lt;/strong&gt;&lt;/p&gt;&lt;p&gt;ಯಾರಿಗೂ ಅನುಮಾನ ಬಾರದಂತೆ ಕುಟುಂಬಸ್ಥರು ಕೇರಳದ ದೇವಸ್ಥಾನಕ್ಕೆ ತೆರಳಿದ್ದರು. ಅತ್ತೆಯ ಸ್ಕೆಚ್ ಪ್ರಕಾರ, ಸಂಬಂಧಿಕರು ಸೇರಿ ಮನೆಯಲ್ಲಿದ್ದ ಪುಷ್ಪಾಳ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ಇದೊಂದು ಕಳ್ಳತನಕ್ಕಾಗಿ ನಡೆದ ಹತ್ಯೆ (ರಾಬರಿ ಮರ್ಡರ್) ಎಂದು ಬಿಂಬಿಸಲು ನಾಟಕವಾಡಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ತೆರೆದ ಬಾಗಿಲು ಹಾಗೂ ಮೃತರ ಕತ್ತಿನ ಗಾಯಗಳು ಪ್ರಮುಖ ಕ್ಲೂ ನೀಡಿದ್ದವು. ಕಥೆ ಕಟ್ಟಿದ ಆರೋಪಿಗಳ ನಾಟಕವನ್ನು ಪತ್ತೆಹಚ್ಚಿದ ಪೊಲೀಸರು, ಅತ್ತೆ, ನಾದಿನಿ ಸೇರಿದಂತೆ ಪ್ರಮುಖ ಕಿರಾತಕರನ್ನು ಜೈಲಿಗಟ್ಟಿದ್ದಾರೆ.&amp;nbsp;&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2"/>
        </item>
        <item>
            <title><![CDATA[ಡಿಕೆಶಿ ಕೇವಲ ಕೀಲುಗೊಂಬೆ, ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದಾರೆ: ಆರ್.ಅಶೋಕ್ ವ್ಯಂಗ್ಯ]]></title>
            <link>https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f</link>
            <guid isPermaLink="true">https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f</guid>
            <pubDate>Fri, 05 Jun 2026 18:24:18 +0530</pubDate>
            <description><![CDATA[&lt;p&gt;ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp4xerh5y19pdx33ap2rabfz,imgname-----------------------2026-04-14t080426.123-1776134087205.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ (ಜೂ.05):&lt;/strong&gt; ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿ ಹೊಸಮುಖಗಳಿಗೆ ಅವಕಾಶವಿಲ್ಲ. ಇರುವುದೆಲ್ಲ ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.&lt;/p&gt;&lt;p&gt;ತಾಲೂಕಿನ ಕೈವಾರದ ರೆಸಾರ್ಟ್&zwnj;ನಲ್ಲಿ 2 ದಿನಗಳಿಂದ ಹಮ್ಮಿಕೊಂಡಿದ್ದ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ -2026 ಕಾರ್ಯಾಗಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವಿವಿಧ ತಾಲೂಕುಗಳ ನಗರ, ಗ್ರಾಮಾಂತರ, ಎಸ್&zwnj;ಸಿ, ಎಸ್&zwnj;ಟಿ, ರೈತ ಮೋರ್ಚಾ, ಹಿಂದುಳಿದ ಮೋರ್ಚಾಗಳ ವಿವಿಧ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.&lt;/p&gt;&lt;p&gt;ಈಗ ರಚನೆಯಾಗಿರುವ ಸರ್ಕಾರದಲ್ಲಿ ಯಾವುದೇ ಹೊಸತನವಿಲ್ಲ. ಅದೇ ಹಳೆಯ ಲಾರಿಯಾಗಿದ್ದು ಕೇವಲ ನಂಬರ್ ಪ್ಲೇಟ್ ಬದಲಾಗಿದೆ. ಯಾವುದೇ ಅಭಿವೃದ್ಧಿ ಈಗಿನ ಹೊಸ ಮುಖ್ಯಮಂತ್ರಿಗಳಿಂದ ಸಾಧ್ಯವಿಲ್ಲ, ಏಕೆಂದರೆ ಅದೇ ನುಂಗಣ್ಣನವರು, ಅದೇ ಭಷ್ಟಾಚಾರ, ಅದೇ ಲೂಟಿಕೋರರ ಸರ್ಕಾರವಾಗಿದೆ. ಶೇ.50 ರಷ್ಟು ಮಹಿಳೆಯರಿರುವ ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿಲ್ಲವೆಂದರು,&lt;/p&gt;&lt;p&gt;ಬೋಗಸ್&zwnj; ಗ್ಯಾರಂಟಿಗಳು: ಹೊಸದಾಗಿ ಗ್ಯಾರಂಟಿ ಘೋಷಣೆ ಮಾಡಿದ್ದು ಹಳೆ ಗ್ಯಾರಂಟಿಗಳನ್ನು ಸರಿಯಾಗಿ ನೀಡಲು ಸಾಧ್ಯವಾಗಿಲ್ಲ, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 5 ಸಾವಿರ ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ 700 ಕೋಟಿ, ರೇಷನ್ ಕಾರ್ಡ್&zwnj;ಗಳನ್ನು ರದ್ದುಗೊಳಿಸುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಸರ್ಕಾರ ಅಧಿಕಾರವನ್ನು ನಡೆಸಲು ಸಶಕ್ತವಾಗಿಲ್ಲ. ಗ್ಯಾರಂಟಿಗೆ ನಾಮ ಹಾಕುವ ಸರ್ಕಾರ ಇದಾಗಿದೆ. ಹೊಸ ಗ್ಯಾರಂಟಿಗಳು ಕೇವಲ ಬೋಗಸ್ ಗ್ಯಾರಂಟಿಗಳಾಗುತ್ತವೆ ಎಂದರು.&lt;/p&gt;&lt;h2&gt;&lt;strong&gt;ಹೋರಾಟದ ಫಲ&lt;/strong&gt;&lt;/h2&gt;&lt;p&gt;ಹೈಕಮಾಂಡ್ ಅಣತಿಗೆ ತಕ್ಕಂತೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕೇವಲ ರಾಜ್ಯದಿಂದ ಹಣವನ್ನು ಪಡೆಯಲು ಮಾತ್ರ ಡಿಕೆ ಶಿವಕುಮಾರ್&zwnj;ರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು. ನಾವು ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ನಾವು ನಡೆಸಿದ ಹೋರಾಟದ ಫಲವಾಗಿ ನಾಗೇಂದ್ರ ಜೈಲು ಪಾಲಾದರು, ಮುಡಾ ಹಗರಣದಲ್ಲಿ 14 ನಿವೇಶನಗಳು ವಾಪಸು ಪಡೆಯಲಾಯಿತು, ಮೈಸೂರಿನ ಸಿಲ್ಕ್ ಕಾರ್ಖಾನೆ ಮರುಉತ್ಪಾದನೆಗೆ ಸಹಕಾರವಾಯಿತು ಇವೆಲ್ಲವೂ ನಮ್ಮ ಹೋರಾಟದ ಫಲವಾಗಿದೆ. ನಮ್ಮ ಹೋರಾಟ ಫಲವೇ 2028 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f"/>
        </item>
        <item>
            <title><![CDATA[ಕೋಲಾರ, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಗಳ ನೀರಿನ ದಾಹ ನೀಗಿಸಿ: ಹೊಸ ಸಿಎಂಗೆ ಬಸವರಾಜ ಬೊಮ್ಮಾಯಿ ಆಗ್ರಹ]]></title>
            <link>https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn</link>
            <guid isPermaLink="true">https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn</guid>
            <pubDate>Sun, 31 May 2026 18:51:14 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ನೀರಿನ ದಾಹ ನೀಗಿಸಲು ಹೊಸ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು, ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜಲ ಕಾಯ್ದೆ ಬದಲಾವಣೆ ಅಗತ್ಯದ ಕುರಿತು ಅವರು ಮಾತನಾಡಿದ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz343r9n60qqxzvgktzt9qa,imgname-basavaraj-bommai-chikkaballapura-1780233670409.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ 31)&lt;/strong&gt;: ಚಿಕ್ಕಬಳ್ಳಾಪುರ ಮತ್ತು ಕೋಲಾರ ಬರ ಪೀಡಿತ ಜಿಲ್ಲೆಗಳಿಗೆ ಹೊಸ ಮುಖ್ಯಮಂತ್ರಿಗಳು ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರು, ನೆಲ, ಜನರ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.&lt;/p&gt;&lt;p&gt;ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಣ್ಣು ಬಹಳ ಶ್ರೇಷ್ಠವಾಗಿರುವಂಥದ್ದು ಇಲ್ಲಿಯ ರೈತರ ಬೆವರಿನ ಹನಿ ಭೂಮಿಗೆ ಬಿದ್ದರೆ ಭೂಮಿ ತಾಯಿ ಒಳ್ಳೆಯ ಬೆಳೆ ಕೊಡುತ್ತಾಳೆ ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ತರಕಾರಿ, ಹಣ್ಣು, ರೇಷ್ಮೆ, ಕೊಡುವ ಕೆಲಸ ಈ ಜಿಲ್ಲೆಗಳು ಮಾಡುತ್ತಿದ್ದವು. ಇಲ್ಲಿ ಐದು ನದಿಗಳಿದ್ದರೂ ಬತ್ತಿ ಹೋಗಿವೆ. ಪಶ್ಚಿಮ ಘಟ್ಟದಿಂದ ಹರಿದು ಬರುವಜೀವಸೆಲೆ ನಿಂತು ಹೋಗಿದೆ. ಪಶ್ಚಿಮ ಘಟ್ಟದಲ್ಲಿ ನೀರಿನ ಸೆಲೆಯನ್ನು ಉಳಿಸುವ ಪಯತ್ನ ಮಾಡದ ಕಾರಣ ಇದೆಲ್ಲ ಆಗಿದೆ ಎಂದರು.&lt;/p&gt;&lt;h2&gt;&lt;strong&gt;ಎತ್ತಿನಹೊಳೆ ಯೋಜನೆ&lt;/strong&gt;&lt;/h2&gt;&lt;p&gt;ನಾನು ನೀರಾವರಿ ಸಚಿವನಿದ್ದಾಗ ಕೋಲಾರದ ಪತಕರ್ತರು ಇಲ್ಲಿ ಫ್ಲೋರೈಡ್ ಯುಕ್ತ ನೀರಿದೆ ಅದನ್ನು ಬಂದು ನೋಡಿ ಎಂದು ಹೇಳಿದರು. ನಾನು ಬಂದು ನೋಡಿ ತಾಂತ್ರಿಕ ತಜ್ಞರೊಡನೆ ಮಾತನಾಡಿದೆ. ಅಂತಾರಾಜ್ಯ ವಿವಾದ ಇಲ್ಲದಂತೆ ಎತ್ತಿನ ಹೊಳೆ ಯೋಜನೆಯನ್ನು ಮಾಡಿದೆ. ಅದಕ್ಕೂ ಮೊದಲು ನೇತ್ರಾವತಿ ತಿರುವು ಯೋಜನೆ ಪ್ರಸ್ತಾಪ ಇತ್ತು. ಅದರಿಂದ ಸುಮಾರು 11 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತಿತ್ತು. ಹೀಗಾಗಿ ಅದು ಸಾಧ್ಯವಿಲ್ಲವಾಯಿತು. ನನ್ನ ಉದ್ದೇಶ ಪೈಪ್&zwnj; ಲೈನ್ ಮೂಲಕ ನೀರು ತಂದಿದ್ದರೆ ಹತ್ತು ಟಿಎಂಸಿ ನೀರು ಎರಡೂ ಜಿಲ್ಲೆಗೆ ಕೊಡಬಹುದಿತ್ತು. ಯಾರಿಗೆ ತಾಂತ್ರಿಕ ಜ್ಞಾನ ಇಲ್ಲವೋ ಅವರು ಅಲ್ಲಿ ನೀರೇ ಇಲ್ಲ ಎಂದು ಅಭಿಪ್ರಾಯ ಸೃಷ್ಟಿಸಿದರು. ಅದಕ್ಕಾಗಿ ಎರಡು ವರ್ಷ ಹಾಳಾಯಿತು. ಆ ನಂತರ ಕಾಲುವೆ ಮೂಲಕ. ನೀರು ತರುವ ಪ್ರಯತ್ನ ನಡೆದಿದೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಎತ್ತಿನಹೊಳೆ ಲಿಫ್ಟ್ ಮೂಲಕ ನೀರು ತರುವ ಕಾರ್ಯ ಮಾಡಿದ್ದೇವು ಅವರು ಅದಕ್ಕೆ ಬಟನ್ ಹೊಡೆಯುವ ಮೂಲಕ ಆರಂಭಿಸಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಜಲ ಕಾಯ್ದೆ ಬದಲಾಗಬೇಕು&lt;/strong&gt;&lt;/h2&gt;&lt;p&gt;ಬರ ಪೀಡಿತ ಜಿಲ್ಲೆಗಳಿಗೆ ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರಿನ ವಿಚಾರ, ಜನರ ವಿಚಾರದಲ್ಲಿ ನೆಲದ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಒಂದು ಸಮಯ ಕಳೆದರೆ ಅದರ ದೂರಗಾಮಿಯ ಪರಿಣಾಮವಾಗುತ್ತದೆ. ಒಂದು ಸಮಯ ಕಳೆದರು ಅದರ ವೆಚ್ಚ ಒಂದು ಸಾವಿರ ಕೋಟಿ&zwnj; ಇದ್ದದ್ದು ಹತ್ತು ಪಟ್ಟು ಹೆಚ್ಚಾಗುತ್ತದೆ. ಒಂದು ಅಂತಾರಾಜ್ಯ ಜಲ ವಿವಾದ ಐವತ್ತು ವರ್ಷವಾದರೂ ಮುಗಿದಿಲ್ಲ. ಅದಕ್ಕೆ ನಾನು ಸಂಸತ್ತಿನಲ್ಲಿ ಅಂತಾರಾಜ್ಯ ಜಲವಿವಾದ ಕಾಯಿದೆ ಸಂಪೂರ್ಣ ಬದಲಾವಣೆ ಮಾಡಬೇಕು. ನದಿ ಅಭಿವೃದ್ಧಿ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಹೇಳಿದ್ದೇನೆ. ಪ್ರಧಾನ ಮಂತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನ್ಯಾಯಮಂಡಳಿಗಳಲ್ಲಿ ವರ್ಷಾನುಗಟ್ಟಲೇ ಬಿದ್ದಿರುವ ಪ್ರಕರಣಗಳನು ಕಾನೂನು ಬದಲಾವಣೆ ಮಾಡಲು ಉತ್ಸುಕರಾಗಿದ್ದಾರೆ. ಅದು ಕಾನೂನು ಬದಲಾದರೆ ಬಹಳಷ್ಟು ಬದಲಾವಣೆಯಾಗುತ್ತದೆ ಎಂದರು.&lt;/p&gt;&lt;h3&gt;&lt;strong&gt;ಪತ್ರಕರ್ತರದ್ದು ಜವಾಬ್ದಾರಿ&lt;/strong&gt;&lt;/h3&gt;&lt;p&gt;ಇದು ನಮ್ಮ ಬದುಕಿನ ಪಶ್ನೆ. ಪತ್ರಕರ್ತರು ಇದಕ್ಕೆ ಬಹಳಷ್ಟು ಬೆಂಬಲ ಕೊಟ್ಟಿದ್ದರು. ಮುಂದೆಯೂ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಚಿಕ್ಕಬಳ್ಳಾಪುರ ಪತ್ರಕರ್ತರು ಇದರ ಬಗ್ಗೆ ಹೆಚ್ಚಿನ ಬೆಂಬಲ ಕೊಡಬೇಕು. ಇಡ್ಲಿ ದೋಸೆಗಿಂತ ಪ್ರತಿಯೊಬ್ಬರ ಮನೆಗೆ ಅನ್ನ ಕೊಡುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳಬೇಕು. ಪತಕರ್ತರೊಂದಿಗಿನ ನಮ್ಮ ಸಂಬಂಧ ಯಾವಾಗಲೂ ಉತ್ತಮವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಪತ್ರಿಕೆಗಳಿಗೆ 4 ಪುಟಗಳ ಜಾಹೀರಾತು ನೀಡಲು ಆದೇಶ ಮಾಡಿದೆ. ಅದೇ ರೀತಿ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಜಾಹೀರಾತು ನೀಡಲು ಆದೇಶ ಮಾಡಿದೆ. ಎಲ್ಲ ಸಮುದಾಯಗಳ ಧ್ವನಿಗಳು ಬೆಳಕಿಗೆ ಬರಬೇಕು. ಕೇವಲ ಶಹರದ ಸುದ್ದಿಯನ್ನು ಮಾಡದೇ ಎಲ್ಲ ವರ್ಗದ ಧ್ವನಿಯಾಗಿ ಕೆಲಸ ಮಾಡಬೇಕು. ಉತ್ತಮ ಕೆಲಸ ಮಾಡುತ್ತಿದ್ದೀರಿ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿರುವುದು ಬಹಳ ಸಂತೋಷವಾಗಿದೆ. ಸಂಸದ ಡಾ. ಸುಧಾಕರ್ ಅವರು ಬಂದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಯಾಗಿದೆ. ಮೆಡಿಕಲ್ ಕಾಲೇಜು, ಕನ್ನಡ ಭವನ ತರಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn"/>
        </item>
        <item>
            <title><![CDATA[ಚಪ್ಪಲಿ ಬಿಟ್ಟು ಬಂದ್ರೆ ಮಾತ್ರ ಚಿಕಿತ್ಸೆ?  ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಿತ್ರ ನಿಯಮ]]></title>
            <link>https://kannada.asianetnews.com/karnataka-districts/treatment-only-if-the-slippers-are-broken-a-strange-rule-of-shivapur-primary-health-center-chikkaballapur-mrq/articleshow-7fcczdq</link>
            <guid isPermaLink="true">https://kannada.asianetnews.com/karnataka-districts/treatment-only-if-the-slippers-are-broken-a-strange-rule-of-shivapur-primary-health-center-chikkaballapur-mrq/articleshow-7fcczdq</guid>
            <pubDate>Sat, 04 Apr 2026 07:53:56 +0530</pubDate>
            <description><![CDATA[&lt;p&gt;ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಪ್ಪಲಿ ಧರಿಸಿ ಬರುವ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ವೈದ್ಯರೇ ಈ ನಿಯಮವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಬರಿಗಾಲಿನಲ್ಲಿ ನಡೆಯುವುದರಿಂದ ಸೋಂಕಿನ ಅಪಾಯ ಹೆಚ್ಚಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knb4rx4562zta35c9xmaqyk4,imgname-shivapur-hospital-1775269344389.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ: &lt;/strong&gt;ಚೇಳೂರು ತಾಲೂಕಿನ ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಪಾದರಕ್ಷೆ ಧರಿಸಲು ನಿರಾಕರಿಸಲಾಗುತ್ತಿದ್ದು, ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಸಿಬ್ಬಂದಿ ಮಾತ್ರವಲ್ಲದೆ, ಅಲ್ಲಿನ ವೈದ್ಯರೇ ಈ ವಿಚಿತ್ರ ನಿಯಮಕ್ಕೆ ಸಮ್ಮತಿ ಸೂಚಿಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಕಳೆದ ಹಲವು ದಿನಗಳಿಂದ ಶಿವಪುರ ಆಸ್ಪತ್ರೆಗೆ ಬರುವ ಬಡ ರೋಗಿಗಳು ಮತ್ತು ವೃದ್ಧರನ್ನು ಸಿಬ್ಬಂದಿ ಅಡ್ಡಗಟ್ಟುತ್ತಿದ್ದಾರೆ. ಚಪ್ಪಲಿ ಧರಿಸಿ ಆಸ್ಪತ್ರೆಯೊಳಗೆ ಬರಬಾರದು, ಹೊರಗೇ ಬಿಟ್ಟು ಬರಬೇಕು ಎಂದು ಸಾರ್ವಜನಿಕರನ್ನು ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ರೋಗಿಗಳು ಚಪ್ಪಲಿ ಬಿಚ್ಚಲು ನಿರಾಕರಿಸಿದರೆ ಅಥವಾ ತರ್ಕ ಮಾಡಿದರೆ, ಅವರಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡಲಾಗುತ್ತಿದೆ ಅಥವಾ ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.&lt;/p&gt;&lt;h2&gt;&lt;strong&gt;ವೈದ್ಯರ ನಡೆಯೂ ನಿಗೂಢ&lt;/strong&gt;&lt;/h2&gt;&lt;p&gt;ಈ ಕುರಿತು ಸಾರ್ವಜನಿಕರು ಆಸ್ಪತ್ರೆಯ ವೈದ್ಯರಾದ ಸುಜಿತ್ ರೆಡ್ಡಿ ಅವರಿಗೆ ದೂರು ನೀಡಿದರೂ ಸಹ, ಅವರು ರೋಗಿಗಳ ಪರ ನಿಲ್ಲುವ ಬದಲು ಸಿಬ್ಬಂದಿಯ ನಿಯಮವನ್ನೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ಸಿಬ್ಬಂದಿ ಬಿಟ್ಟು ಬೇರೆ ಯಾರೂ ಚಪ್ಪಲಿ ಹಾಕುವಂತಿಲ್ಲ, ನೀವೂ ಹಾಗೆಯೇ ಮಾಡಿ ಎಂಬ ಹಾರಿಕೆಯ ಉತ್ತರಗಳನ್ನು ನೀಡಿ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ.&lt;/p&gt;&lt;h3&gt;&lt;strong&gt;ಸೋಂಕಿನ ಆತಂಕ&lt;/strong&gt;&lt;/h3&gt;&lt;p&gt;ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನೆಲದ ಮೇಲೆ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಹರಡುವಿಕೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳನ್ನು ಬರಿಗಾಲಿನಲ್ಲಿ ನಡೆಸುವುದರಿಂದ ಹೊಸ ಹೊಸ ಸೋಂಕುಗಳು ತಗುಲುವ ಅಪಾಯವಿದೆ. ಸ್ವಚ್ಛತೆಯ ನೆಪ ಹೇಳುವ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಮಾತ್ರ ಶೂ ಹಾಗೂ ಚಪ್ಪಲಿ ಧರಿಸಿ ಓಡಾಡುತ್ತಿರುವುದು ಸಾರ್ವಜನಿಕರಲ್ಲಿ ತಾರತಮ್ಯದ ಭಾವನೆ ಮೂಡಿಸಿದೆ.&lt;/p&gt;&lt;p&gt;&lt;strong&gt;ಕ್ರಮಕ್ಕೆ ಆಗ್ರಹ&lt;/strong&gt;&lt;/p&gt;&lt;p&gt;ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡಲೇ ಶಿವಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೋಗಿಗಳಿಗೆ ತೊಂದರೆ ನೀಡುತ್ತಿರುವ ಸಿಬ್ಬಂದಿ ಹಾಗೂ ಇದಕ್ಕೆ ಸಾಥ್ ನೀಡುತ್ತಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಗೌರವಯುತ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಪಾದರಕ್ಷೆ ನಿರ್ಬಂಧಿಸಿರುವುದು ಸರಿಯಲ್ಲ. ಈ ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಪಂ ಸಿಇಒ ಡಾ.ನವೀನ್ ಭಟ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Davanagere Bypoll 2026: ನಾವೊಬ್ಬರೇ ಅಲ್ಲ ಮೋದಿನೂ ಸಾಲಗಾರ ಎಂದ ಡಿಸಿಎಂ; ₹15 ಲಕ್ಷದ ಭರವಸೆ ಏನಾಯ್ತು? ಡಿಕೆಶಿ ಪ್ರಶ್ನೆ&lt;/strong&gt;&lt;/p&gt;&lt;p&gt;ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರು ಪಾದರಕ್ಷೆ ಧರಿಸುತ್ತಾರೆ, ಆದರೆ ರೋಗಿಗಳು ಮಾತ್ರ ಬರಿಗಾಲಿನಲ್ಲಿ ಬರಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಇದರಿಂದ ಸೋಂಕು ಹರಡುವ ಭೀತಿಯಿದೆ. ಸಾರ್ವಜನಿಕರಿಗೆ ತಾರತಮ್ಯ ಮಾಡದೆ, ಎಲ್ಲರಿಗೂ ಸಮಾನವಾಗಿ ಪಾದರಕ್ಷೆ ಧರಿಸಿ ಒಳಗೆ ಬರಲು ಅವಕಾಶ ನೀಡಬೇಕು ಸ್ಥಳೀಯರು ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಧುಗಿರಿ ಬೆಟ್ಟದಲ್ಲಿ ನೀಳ ದೇಹ, ಮೊನಚಾದ ತಲೆಯುಳ್ಳ 'ನಾಗಾರ್ಜುನ ಸಾಗರ ರೇಸರ್' ಹಾವು ಪತ್ತೆ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಜನರು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಕಂಟೈನರ್ ಒಳಗಡೆ ಅಮಾನವೀಯ ರೀತಿಯಲ್ಲಿ ತುಂಬಿಸಲಾಗಿದ್ದ 20 ಜಾನುವಾರುಗಳು ಪತ್ತೆಯಾಗಿವೆ.#Hassan #Kerala https://t.co/0oRF2hPnEH&lt;/p&gt;&lt;p&gt;&mdash; Asianet Suvarna News (@AsianetNewsSN) April 4, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/treatment-only-if-the-slippers-are-broken-a-strange-rule-of-shivapur-primary-health-center-chikkaballapur-mrq/articleshow-7fcczdq"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಬಾಗೇಪಲ್ಲಿ ಹೆದ್ದಾರಿಯಲ್ಲಿ ಥಾರ್, ಆಟೋ, ಕಂಟೇನರ್ ನಡುವೆ ಸರಣಿ ಅಫಘಾತ: ಐವರು ದುರ್ಮರಣ, ಮೂವರ ಸ್ಥಿತಿ ಗಂಭೀರ!]]></title>
            <link>https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht</link>
            <guid isPermaLink="true">https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht</guid>
            <pubDate>Sun, 31 May 2026 16:58:28 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್, ಆಟೋ ಮತ್ತು ಕಂಟೈನರ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಟೋ ಕಂಟೈನರ್&zwnj;ಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyw6enqcjjvr5pf6ww32g0c,imgname-1-1780226407095.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್, ಆಟೋ ಮತ್ತು ಕಂಟೈನರ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಟೋ ಕಂಟೈನರ್&zwnj;ಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದೆ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ 31): ರಾ&lt;/strong&gt;ಷ್ಟ್ರೀಯ ಹೆದ್ದಾರಿಯಲ್ಲಿ &amp;nbsp;(Chikkaballapura National Highway) ವೇಗವಾಗಿ ಬಂದ ಥಾರ್ ಕಾರು, ಆಟೋ ಮತ್ತು ಕಂಟೈನರ್ ನಡುವೆ ನಡೆದ ಸರಣಿ ಅಪಘಾತದಲ್ಲಿ (Thar, Auto and container horrific series of accidents) ಐವರು ಸ್ಥಳದಲ್ಲೇ ಮೃತಪಟ್ಟಿರುವ (five spot dead) ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಈ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ (Bagepalli) ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಪ್ಯಾಸೆಂಜರ್ ಆಟೋ ಚಾಲಕ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದಂತೆ ಐವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯಲ್ಲಿ ನಡೆದಿದ್ದೇನು?&lt;/strong&gt;&lt;/p&gt;&lt;p&gt;ಪೆರೇಸಂದ್ರದಿಂದ ಬಾಗೇಪಲ್ಲಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋಗೆ, ಹಿಂಬದಿಯಿಂದ ಅತಿ ವೇಗವಾಗಿ ಬಂದ 'ಮಹೀಂದ್ರಾ ಥಾರ್' ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಆಟೋ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ (ಅಥವಾ ನಿಂತಿದ್ದ ಎನ್ನಲಾದ) ಬೃಹತ್ ಕಂಟೈನರ್ ವಾಹನದ ಹಿಂಭಾಗಕ್ಕೆ ಅಪ್ಪಳಿಸಿದೆ. ಎರಡು ಬಲಿಷ್ಠ ವಾಹನಗಳ ನಡುವೆ ಸಿಲುಕಿದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಬ್ಬಿಣದ ಉಂಡೆಯಂತಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸ್ಥಳದಲ್ಲೇ ಐವರ ಸಾವು:&lt;/strong&gt;&lt;/p&gt;&lt;p&gt;ಅಪಘಾತದ ಸಮಯದಲ್ಲಿ ಆಟೋದಲ್ಲಿ ಚಾಲಕ ಸೇರಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಆಟೋದಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ದೇಹಗಳು ಆಟೋದೊಳಗೆ ಸಿಲುಕಿಕೊಂಡಿದ್ದು, ನೋಡುಗರ ಕಣ್ಣಾಲಿಗಳು ಒದ್ದೆಯಾಗುವಂತಿತ್ತು. ಸದ್ಯಕ್ಕೆ ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.&lt;/p&gt;&lt;img&gt;&lt;p&gt;&lt;strong&gt;ಮೂವರ ಸ್ಥಿತಿ ಗಂಭೀರ:&lt;/strong&gt;&lt;/p&gt;&lt;p&gt;ಆಟೋದಲ್ಲಿದ್ದ ಉಳಿದ ಮೂವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಥಾರ್ ಕಾರಿನ ಚಾಲಕನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಪೊಲೀಸರ ಭೇಟಿ:&lt;/strong&gt;&lt;/p&gt;&lt;p&gt;ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಥಾರ್ ಕಾರಿನ ಅತಿ ವೇಗವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ರೇನ್ ಸಹಾಯದಿಂದ ನಜ್ಜುಗುಜ್ಜಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht"/>
        </item>
        <item>
            <title><![CDATA[ಎತ್ತಿನಹೊಳೆ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿ: ಸಂಸದ ಡಾ.ಕೆ.ಸುಧಾಕರ್‌ ಒತ್ತಾಯ]]></title>
            <link>https://kannada.asianetnews.com/karnataka-districts/kc-valley-hn-valley-project-water-supply-dr-k-sudhakar-demand-gvd/articleshow-b268gmk</link>
            <guid isPermaLink="true">https://kannada.asianetnews.com/karnataka-districts/kc-valley-hn-valley-project-water-supply-dr-k-sudhakar-demand-gvd/articleshow-b268gmk</guid>
            <pubDate>Fri, 27 Mar 2026 23:22:47 +0530</pubDate>
            <description><![CDATA[&lt;p&gt;ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎಚ್&zwnj;.ಎನ್&zwnj;.ವ್ಯಾಲಿ ಯೋಜನೆಗಳಲ್ಲಿ, ಮೂರು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್&zwnj; ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmr3q8ktp4mr3mse4s09cv5m,imgname-vjvj-1774630707834.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮಾ.27): &lt;/strong&gt;ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಕೆ.ಸಿ.ವ್ಯಾಲಿ ಮತ್ತು ಎಚ್&zwnj;.ಎನ್&zwnj;.ವ್ಯಾಲಿ ಯೋಜನೆಗಳಲ್ಲಿ, ಮೂರು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಪೂರೈಸಲು ಕ್ರಮ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್&zwnj; ಆಗ್ರಹಿಸಿದರು. ಲೋಕಸಭೆಯಲ್ಲಿ ಶುಕ್ರವಾರ ಶೂನ್ಯವೇಳೆಯಲ್ಲಿ ಕನ್ನಡದಲ್ಲೇ ವಿಷಯ ಪ್ರಸ್ತಾಪಿಸಿದರು.&lt;/p&gt;&lt;p&gt;ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಸೇರಿದಂತೆ ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲು ನಾನು 2007 ರಿಂದಲೂ ಪ್ರಯತ್ನ ಮಾಡುತ್ತಿದ್ದೇನೆ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಭಾಗಕ್ಕೆ ಕೆ.ಸಿ.ವ್ಯಾಲಿ ಮತ್ತು ಎಚ್&zwnj;.ಎನ್&zwnj;.ವ್ಯಾಲಿ ಯೋಜನೆಗಳಲ್ಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡಿದ ನೀರನ್ನು ಹರಿಸುವ ಯೋಜನೆಯನ್ನು ಬಜೆಟ್&zwnj;ನಲ್ಲಿ ಘೋಷಣೆ ಮಾಡಲಾಗಿತ್ತು.&lt;/p&gt;&lt;h2&gt;&lt;strong&gt;ಆರೋಗ್ಯದ ಮೇಲೆ ದುಷ್ಪರಿಣಾಮ&lt;/strong&gt;&lt;/h2&gt;&lt;p&gt;ಕಾಂಗ್ರೆಸ್&zwnj; ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಅನೇಕ ಉತ್ತಮ ಯೋಜನೆಗಳನ್ನು ರದ್ದು ಮಾಡಿದೆ. ಅದೇ ರೀತಿ ಮೂರನೇ ಹಂತದ ಸಂಸ್ಕರಣೆಯ ಯೋಜನೆಯನ್ನು ಕೂಡ ರದ್ದು ಮಾಡಿದೆ ಎಂದರು. ಬಯಲುಸೀಮೆಗೆ ಈಗಾಗಲೇ ಪೂರೈಕೆಯಾಗುತ್ತಿರುವ ದ್ವಿತೀಯ ಹಂತದ ಸಂಸ್ಕರಣೆಯ ನೀರನ್ನು ಕೆಲವು ಸಂಸ್ಥೆಗಳು ಪರೀಕ್ಷೆ ಮಾಡಿದ್ದು, ಎರಡು ಹಂತದಲ್ಲಿ ಸಂಸ್ಕರಿಸಿದ ನೀರು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿ ನೀಡಿವೆ.&lt;/p&gt;&lt;p&gt;ತ್ಯಾಜ್ಯ ನೀರನ್ನು ಮೂರು ಹಂತಗಳಲ್ಲೇ ಸಂಸ್ಕರಣೆ ಮಾಡಿ ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಈಗಾಗಲೇ ತಿಳಿಸಲಾಗಿದೆ. ಮೊದಲಿಗೆ ಈ ನಿಯಮವನ್ನು ಕರ್ನಾಟಕ ಸರ್ಕಾರ ಅನುಷ್ಠಾನ ಮಾಡಬೇಕಿದೆ. ಜೊತೆಗೆ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಶಾಶ್ವತ ನೀರಾವರಿ ಕಲ್ಪಿಸಲು ಕೃಷ್ಣ ನದಿಯಿಂದ ಕನಿಷ್ಠ 15 ಟಿಎಂಸಿ ನೀರನ್ನು ತಂದು ಬಯಲುಸೀಮೆಗೆ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/kc-valley-hn-valley-project-water-supply-dr-k-sudhakar-demand-gvd/articleshow-b268gmk"/>
        </item>
        <item>
            <title><![CDATA[Chikkaballapur baby murder case: ಅನ್ಯಕೋಮಿನವನ ಜತೆ ಮದುವೆ; ಮೊಮ್ಮಗಳ 40 ದಿನದ ಶಿಶುವನ್ನೇ ಕತ್ತು ಹಿಸುಕಿ ಕೊಂದ ಅಜ್ಜಿ!]]></title>
            <link>https://kannada.asianetnews.com/state/chikkaballapura-grandmother-arrested-for-killing-40-day-old-grandson-over-inter-faith-marriage/articleshow-b3g0dsa</link>
            <guid isPermaLink="true">https://kannada.asianetnews.com/state/chikkaballapura-grandmother-arrested-for-killing-40-day-old-grandson-over-inter-faith-marriage/articleshow-b3g0dsa</guid>
            <pubDate>Thu, 12 Mar 2026 07:00:58 +0530</pubDate>
            <description><![CDATA[ಚಿಕ್ಕಬಳ್ಳಾಪುರದಲ್ಲಿ ಅನ್ಯಕೋಮಿನ ಯುವಕನನ್ನು ಮದುವೆಯಾದ ಮೊಮ್ಮಗಳ 40 ದಿನದ ಹಸುಗೂಸನ್ನು ಅಜ್ಜಿಯೇ ಕತ್ತು ಹಿಸುಕಿ ಕೊಂದಿದ್ದಾಳೆ. ಉಸಿರಾಟದ ಸಮಸ್ಯೆಯಿಂದ ಮಗು ಸತ್ತಿದೆ ಎಂದು ನಾಟಕವಾಡಿದ್ದರೂ, ಎಫ್&zwnj;ಎಸ್&zwnj;ಎಲ್ ವರದಿಯಿಂದ ಕೊಲೆ ರಹಸ್ಯ ಬಯಲಾಗಿದ್ದು, ಪೊಲೀಸರು ಆರೋಪಿ ಅಜ್ಜಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkft8h1vx8t8jech2tasedj4,imgname-----------------------2026-03-12t065310.308-1773278610491.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮಾ.12):&lt;/strong&gt; ಅನ್ಯಕೋಮಿನ ಯುವಕನ ಜತೆ ಮೊಮ್ಮಗಳು ವಿವಾಹ ಆಗಿದ್ದಕ್ಕೆ ಕೋಪಗೊಂಡ ಅಜ್ಜಿ, ಮೊಮ್ಮಗಳ 40 ದಿನದ ಹಸುಗೂಸನ್ನು ಕತ್ತು ಹಿಸುಕಿ ಹತ್ಯೆಗೈದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಚೇಳೂರು ಠಾಣೆ ಪೊಲೀಸರು ವೃದ್ಧೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಚೇಳೂರು ಪಟ್ಟಣದಲ್ಲಿ 2025ರ ಡಿ.24ರಂದು ಘಟನೆ ನಡೆದಿದ್ದು, ಎಫ್​​ಎಸ್​ಎಲ್​ ವರದಿಯಲ್ಲಿ ಮಗುವಿನ ಕೊಲೆ ರಹಸ್ಯ ಬಯಲಾಗಿದೆ.&lt;/p&gt;&lt;p&gt;&lt;strong&gt;ಏನಿದು ಘಟನೆ:&lt;/strong&gt;&lt;/p&gt;&lt;p&gt;ಡಿ. 24ರಂದು ಚೇಳೂರು ಪಟ್ಟಣದಲ್ಲಿ ಮೆಹಬೂಬಿ ಮನೆಯಲ್ಲಿ ಈಕೆಯ ಮೊಮ್ಮಗಳ 40 ದಿನದ ಗಂಡು ಮಗು ಸಾವನ್ನಪ್ಪಿತ್ತು. ಉಸಿರಾಟದ ಸಮಸ್ಯೆಯಿಂದ ಮಗು ಮೃತಪಟ್ಟಿದೆ ಎಂದು ಅಜ್ಜಿ ಮಣ್ಣು ಮಾಡಿಸಿದ್ದಳು. ಆದರೆ ಅಜ್ಜಿಯ ಮೇಲೆ ಅನುಮಾನಗೊಂಡ ಮೊಮ್ಮಗಳು, ಅಂದೇ ಚೇಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಮೇರೆಗೆ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಎಫ್​ಎಸ್​ಎಲ್&zwnj;ಗೆ ಕಳುಹಿಸಲಾಗಿತ್ತು. ಮಾ.10ರಂದು ಎಫ್​ಎಸ್​ಎಲ್​ ವರದಿ ಬಂದಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಂದಿರುವುದಾಗಿ ತಿಳಿಸಲಾಗಿದೆ. ಹೀಗಾಗಿ ಮಗುವಿನ ಅಜ್ಜಿಯೇ ಕೊಲೆ ಮಾಡಿರುವುದು ಬಯಲಾಗಿದ್ದು, ಮೆಹಬೂಬಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.&lt;/p&gt;&lt;p&gt;ಅಜ್ಜಿಯ ಮೊಮ್ಮಗಳು ಅನ್ಯಧರ್ಮದ ಯುವಕನೊಂದಿಗೆ ಪ್ರೇಮ ವಿವಾಹವಾಗಿದ್ದು, ಬಾಣಂತನಕ್ಕೆ ಅಜ್ಜಿಯ ಮನೆಗೆ ಬಂದಿದ್ದಳು. ಅಜ್ಜಿಗೆ ವಿವಾಹ ಇಷ್ಟವಿರಲಿಲ್ಲ. ಮಗುವನ್ನು ನೋಡಿಕೊಳ್ಳಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾಳೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chikkaballapura-grandmother-arrested-for-killing-40-day-old-grandson-over-inter-faith-marriage/articleshow-b3g0dsa"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: ಗಂಡು ದೆವ್ವದ ಕಾಟಕ್ಕೆ ಬೇಸತ್ತು ವಿಚಿತ್ರವಾಗಿ ವರ್ತಿಸಿ ಸಾವು ಕಂಡ ಮಹಿಳೆ!]]></title>
            <link>https://kannada.asianetnews.com/state/chikkaballapur-woman-death-strange-behavior-ghost-fear-superstition-case-details-san/articleshow-k35octl</link>
            <guid isPermaLink="true">https://kannada.asianetnews.com/state/chikkaballapur-woman-death-strange-behavior-ghost-fear-superstition-case-details-san/articleshow-k35octl</guid>
            <pubDate>Thu, 26 Mar 2026 22:13:42 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ತಾಲೂಕಿನ ತೌಡನಹಳ್ಳಿಯಲ್ಲಿ, ದೆವ್ವ ಕಾಡುತ್ತಿದೆ ಎಂಬ ಮಾನಸಿಕ ಭೀತಿಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕುಟುಂಬಸ್ಥರು ವೈದ್ಯಕೀಯ ಚಿಕಿತ್ಸೆಯ ಬದಲು ಮಂತ್ರವಾದಿಗಳ ಮೊರೆ ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmng9gnxhdw3sb9xfqe7xkf7,imgname-chikkaballapur-women-ghost-fear-death-1774543225533.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮಾ.26): &lt;/strong&gt;ತಾಲೂಕಿನ ತೌಡನಹಳ್ಳಿ ಗ್ರಾಮದಲ್ಲಿ ಮೂಢನಂಬಿಕೆ ಮತ್ತು ಮಾನಸಿಕ ಭೀತಿಯಿಂದಾಗಿ ಮಹಿಳೆಯೊಬ್ಬರು ವಿಚಿತ್ರವಾಗಿ ವರ್ತಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ಸೋತೇನಹಳ್ಳಿಯವರಾದ ಮಂಜುಳಾ (36), ತೌಡನಹಳ್ಳಿಯ ರಮೇಶ್ ಎಂಬುವವರನ್ನು ಮದುವೆಯಾಗಿ 16 ವರ್ಷಗಳಾಗಿದ್ದವು. ದಂಪತಿಗಳ ನಡುವೆ ಯಾವುದೇ ಕಲಹವಿರಲಿಲ್ಲ. ಆದರೆ ಇತ್ತೀಚೆಗೆ ತವರು ಮನೆಯಲ್ಲಿ ನಡೆದ ಮಾವನ ತಿಥಿ ಕಾರ್ಯದಲ್ಲಿ ಭಾಗವಹಿಸಿ ಬಂದ ನಂತರ ಮಂಜುಳಾ ಅವರ ವರ್ತನೆಯಲ್ಲಿ ತೀವ್ರ ಬದಲಾವಣೆ ಕಂಡುಬಂದಿತ್ತು.&lt;/p&gt;&lt;h2&gt;&lt;strong&gt;ವಿಚಿತ್ರ ವರ್ತನೆ ಮತ್ತು ದೆವ್ವದ ಭೀತಿ&lt;/strong&gt;&lt;/h2&gt;&lt;p&gt;ಮನೆಯಲ್ಲಿ ಕುಳಿತರೂ, ನಿಂತರೂ ಯಾರೋ ಒಬ್ಬರು ತನ್ನ ಕಣ್ಣೆದುರೇ ಬಂದು ಕಾಟ ಕೊಡುತ್ತಿದ್ದಾರೆ ಎಂಬ ಭ್ರಮೆಗೆ ಮಂಜುಳಾ ಒಳಗಾಗಿದ್ದರು. &quot;ಗಂಡು ದೆವ್ವವೊಂದು ನನಗೆ ಕೊಡಬಾರದ ಕಾಟ ಕೊಡುತ್ತಿದೆ, ದೊಡ್ಡಬಳ್ಳಾಪುರದ ಸುನಿಲ್ ಎಂಬುವವರ ದೃಶ್ಯ ಕಣ್ಣ ಮುಂದೆ ಬರುತ್ತಿದೆ&quot; ಎಂದು ಹೇಳುತ್ತಾ ಅತೀವವಾಗಿ ಚಡಪಡಿಸುತ್ತಿದ್ದರು. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಭಯ ಅವರನ್ನು ಪೀಡಿಸುತ್ತಿತ್ತು.&lt;/p&gt;&lt;h2&gt;&lt;strong&gt;ಮಂತ್ರವಾದಿಗಳ ಮೊರೆ ಹೋದ ಕುಟುಂಬ&lt;/strong&gt;&lt;/h2&gt;&lt;p&gt;ಮಂಜುಳಾ ಅವರ ಈ ಸ್ಥಿತಿಯನ್ನು ಕಂಡು ಗಾಬರಿಗೊಂಡ ಪತಿ ರಮೇಶ್, ಕೆಲಸ ಕಾರ್ಯಗಳನ್ನು ಬಿಟ್ಟು ಕಳೆದ ಒಂದು ವಾರದಿಂದ ದೇವಸ್ಥಾನ ಮತ್ತು ಮಂತ್ರವಾದಿಗಳ ಬಳಿ ಅಲೆದಾಡಿದ್ದಾರೆ. ಮೇಲೂರಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದು, ಮಂತ್ರವಾದಿಯೊಬ್ಬರ ಬಳಿ ತಾಯತವನ್ನೂ ಕಟ್ಟಿಸಿದ್ದರು. ವೈದ್ಯರ ಬಳಿ ತೋರಿಸಿದರೂ ಯಾವುದೇ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಮನೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.&lt;/p&gt;&lt;p&gt;ಮಗಳ ಸಾವಿನ ಸುದ್ದಿ ತಿಳಿದ ಮಂಜುಳಾ ತಾಯಿ ಗಂಗಮ್ಮ, &quot;ನಮಗೆ ಈ ವಿಷಯವನ್ನೇ ಮುಚ್ಚಿಡಲಾಗಿತ್ತು, ಮಗಳು ಸತ್ತ ನಂತರ ನಮಗೆ ತಿಳಿಸಿದ್ದಾರೆ&quot; ಎಂದು ಪತಿ ರಮೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಂಜುಳಾ ಅವರಿಗೆ ಕಾಡಿದ್ದು ದೆವ್ವವೋ ಅಥವಾ ಮಾನಸಿಕ ಭ್ರಮೆಯೋ ಎಂಬುದು ನಿಗೂಢವಾಗಿದ್ದರೂ, ಅವರನ್ನು ಮಂತ್ರವಾದಿಗಳ ಬಳಿ ಕರೆದೊಯ್ಯುವ ಬದಲು ಮನೋರೋಗ ತಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಬಹುಶಃ ಅವರು ಬದುಕುಳಿಯುತ್ತಿದ್ದರೇನೋ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಸ್ತುತ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/state/chikkaballapur-woman-death-strange-behavior-ghost-fear-superstition-case-details-san/articleshow-k35octl"/>
        </item>
        <item>
            <title><![CDATA[ಎಲ್ಲ ಸಚಿವರು ರಜೆಯಲ್ಲಿದ್ದಾರೆ: Congress ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!]]></title>
            <link>https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</guid>
            <pubDate>Sun, 14 Jun 2026 20:12:48 +0530</pubDate>
            <description><![CDATA[&lt;p&gt;Karnataka Politics: ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ (ಜೂ.14): &lt;/strong&gt;ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಕೇವಲ ನಾಯಕತ್ವ ಬದಲಾಗಿದೆಯೇ ಹೊರತು ಮನಸ್ಥಿತಿ ಬದಲಾಗಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 14 ಮಂತ್ರಿಗಳಾಗಿದ್ದು ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ವಿಧಾನಪರಿಷತ್&zwnj;ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದ ಜನತೆಯ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲದಂತಾಗಿದೆ, ನನಗೆ ಆ ಖಾತೆ ಬೇಕಿಲ್ಲ, ಈ ಖಾತೆ ಬೇಕು, ಈ ಖಾತೆ ಬೇಡ ಬಂಡವಾಳವಿರುವ ಬೇರೆ ಖಾತೆ ಕೊಡಿಯೆಂದು ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಸ್ಥಳೀಯ ರೈತರ ಸಮಸ್ಯೆ, ರಸಗೊಬ್ಬರ, ಬಿತ್ತನೆ ಬೀಜಗಳು ಇತ್ಯಾದಿಗಳು ಬಗ್ಗೆ ವಿಚಾರಿಸ ಬೇಕಾದವರು ಹೈಕಮಾಂಡ್&zwnj; ಭೇಟಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾವಿಗೆ ಬೆಲೆ ಇಲ್ಲದೆ ಬೀದಿಯಲ್ಲಿ ಬಿಸಾಡಿ ಹೋಗುತ್ತಿರುವ ರೈತರ ಕಷ್ಟಗಳಿಗೆ ಸ್ಪಂದಿಸುವವರಾರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.&lt;/p&gt;&lt;p&gt;ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಸೇರಿ ಎಲ್ಲಾ ತಾಲೂಕುಗಳಲ್ಲಿ ಮಾವು ಬೆಳೆಯುತ್ತಾರೆ. ಆದರೆ ಇಲ್ಲಿನ ಮಾವಿಗೆ ಹೆಚ್ಚಿನ ಬೇಡಿಕೆಯಿದ್ದು ಆದರೆ ಬೆಲೆಯಿಲ್ಲದಂತಾಗಿದೆ. ಬೇರೆ ಕಸುಬಿಲ್ಲ, ಬೆಲೆಯಿಲ್ಲ, ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಾವು ಬೆಳೆಗಾರರಿಗೆ 500 ಕೋಟಿ ಪರಿಹಾರ ಕೊಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಪ್ರಿಯಾಂಕ್&zwnj; ಖರ್ಗೆ ವಿರುದ್ಧ ಕಿಡಿ&lt;/strong&gt;&lt;/h2&gt;&lt;p&gt;ಪ್ರಿಯಾಂಕ್ ಖರ್ಗೆಯವರು ಆರ್&zwnj;ಎಸ್&zwnj;ಎಸ್&zwnj;ನ್ನು ನೋಂದಾಯಿಸಬೇಕು ಇಲ್ಲವೇ ನಿಷೇಧ ಮಾಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಅವರಿಗೆ ನಿದ್ದೆ ಬರುವುದಿಲ್ಲ, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಕೆಲಸ ಮಾಡಿದ್ದು ಕಡಿಮೆ. ಆದರೆ ಆರ್ ಎಸ್&zwnj;ಎಸ್ ನಿಂದನೆ ಮಾಡಿದರೆ ಅವರಿಗೆ ಬೆಲೆಯೆಂದು ವರ್ತಿಸುತ್ತಿದ್ದಾರೆ. ಹಳ್ಳಿ ಕಡೆ ಯುಗಾದಿ ಸಂದರ್ಭದಲ್ಲಿ ರಾಮರಸವನ್ನು ತಯಾರಿಸುತ್ತಾರೆ. ಅದನ್ನು ಕುಡಿದರೆ ಎರಡು ದಿನಗಳಾದರೂ ಅದರ ಮತ್ತು ಕಡಿಮೆಯಾಗುತ್ತಿರಲಿಲ್ಲ. ಅದರಂತೆ ಪ್ರಿಯಾಂಕ್ ಖರ್ಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3"/>
        </item>
        <item>
            <title><![CDATA[ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಜನಿವಾರಕ್ಕೆ ಕತ್ತರಿ;  ವಾರದ ಹಿಂದೆ ಉಪನಯನ ಆದವಗೆ ಅಪಮಾನ]]></title>
            <link>https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu</link>
            <guid isPermaLink="true">https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu</guid>
            <pubDate>Sun, 26 Apr 2026 05:36:39 +0530</pubDate>
            <description><![CDATA[ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ, ವಿದ್ಯಾರ್ಥಿ ಸುಪ್ರೀತ್&zwnj;ನ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಸರಿಯಾಗಿ ಪರೀಕ್ಷೆ ಬರೆಯಲು ವಿಫಲನಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hts77efat0nvg9g7jrme46xg,imgname-cet-exam-1712390912489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ:&lt;/strong&gt; ಬೆಂಗಳೂರಿನ ಬಳಿಕ ಈಗ ಚಿಕ್ಕಬಳ್ಳಾಪುರ ತಾಲೂಕಿನ ಖಾಸಗಿ ಕಾಲೇಜೊಂದರಲ್ಲಿಯೂ ಸಿಇಟಿ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಬೆಂಗಳೂರಿನ ಖಾಸಗಿ ಕಾಲೇಜೊಂದರ ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗುರುವಾರ ಪರೀಕ್ಷೆಗೆ ಹಾಜರಾದ ಕೆಲ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಲು ಸೂಚಿಸಿದ ಘಟನೆ ನಡೆದಿದ್ದು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ನಡುವೆಯೇ, ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಕಾಲೇಜಿನಲ್ಲಿ ಗುರುವಾರ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಎಸೆದಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್&zwnj; ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ವಿದ್ಯಾರ್ಥಿ, ಆತನ ತಾಯಿ ಮತ್ತು ಬ್ರಾಹ್ಮಣ ಸಮುದಾಯದ ಮುಖಂಡರು ಮುಂದಾಗಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಚಿಂತಾಮಣಿಯ ವಿದ್ಯಾರ್ಥಿ ಸುಪ್ರೀತ್&zwnj; ಕೆ.ಆರ್., ಏಪ್ರಿಲ್&zwnj; 23ರ ಗುರುವಾರದಂದು ಸಿಇಟಿ ಬರೆಯಲು ನಾಗಾರ್ಜುನ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್&zwnj;ಗೆ ಆತನ ತಾಯಿ ವಾಣಿ, ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು.&lt;/p&gt;&lt;h2&gt;&lt;strong&gt;ಗ್ರೇಸ್&zwnj; ಅಂಕ ನೀಡಿ ಸಹಾಯ ಮಾಡಲಿ&lt;/strong&gt;&lt;/h2&gt;&lt;p&gt;ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ವಾಣಿ, ಜನಿವಾರ ಕತ್ತರಿಸಿದ್ದರಿಂದ ತಮ್ಮ ಪುತ್ರ ವಿಚಲಿತನಾಗಿದ್ದು, ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ, ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ, ಇಲ್ಲವೇ ಗ್ರೇಸ್&zwnj; ಅಂಕ ನೀಡಿ ಸಹಾಯ ಮಾಡಲಿ ಎಂದು ಮನವಿ ಮಾಡಿದ್ದಾರೆ.&lt;/p&gt;&lt;p&gt;ಸುಪ್ರೀತ್ ಮಾತನಾಡಿ, ನಾನೇ ತೆಗೆದು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರೂ ಅಧಿಕಾರಿಗಳು ಕೇಳಲಿಲ್ಲ. ಜನಿವಾರ ತೆಗೆಯುವುದಕ್ಕೂ ಅವಕಾಶ ನೀಡಲಿಲ್ಲ. ಕತ್ತರಿಯಿಂದ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಹಾಕಿದರು. ಪರೀಕ್ಷೆ ಮುಗಿದ ಮೇಲೆ ಕಸದ ಬುಟ್ಟಿಯಲ್ಲಿ ಜನಿವಾರ ಹುಡುಕಾಡಿ ತೆಗೆದುಕೊಂದು ಬಂದೆ. ನನ್ನ ತಂದೆ ಮೃತಪಟ್ಟು ಒಂದು ವರ್ಷ ಆಗಿದೆ. 8 ದಿನಗಳ ಹಿಂದೆ ನನಗೆ ಉಪನಯನವಾಗಿತ್ತು. ಜನಿವಾರ ಕತ್ತರಿಸಿದ ಕಾರಣ ಒತ್ತಡಕ್ಕೆ ಒಳಗಾಗಿ ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ. ದ್ವಿತೀಯ ಪಿಯುನಲ್ಲಿ ಪಿಸಿಎಂಬಿ ವಿಷಯದಲ್ಲಿ ಶೇ.90ರಷ್ಟು ಅಂಕ ತೆಗೆದಿದ್ದೇನೆ. ನಮಗೆ ಮೊದಲೇ ಈ ಬಗ್ಗೆ ಹೇಳಿರಲಿಲ್ಲ. ನಿಯಮಾವಳಿಯಲ್ಲೂ ಜನಿವಾರ ಹಾಕಿಕೊಂಡು ಬರಬಾರದು ಅಂತ ಹೇಳಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಇಂತಹ ಅವಮಾನ ತಪ್ಪಿಸಲು ಕಾಯ್ದೆ ತನ್ನಿ&lt;/strong&gt;&lt;/h3&gt;&lt;p&gt;ಬ್ರಾಹ್ಮಣರ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳು ಮುಂದೆ ಪರಮ ಪವಿತ್ರವಾದ ಮಂಗಳಸೂತ್ರಕ್ಕೂ ಕೈ ಹಾಕುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇಪದೇ ಇಂತಹ ತಪ್ಪುಗಳಾಗುತ್ತಿದ್ದು, ಸರ್ಕಾರ ಅವಮಾನ ಎದುರಿಸುವಂತಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ಬ್ರಾಹ್ಮಣ ಸಮುದಾಯಕ್ಕೆ ಶಾಶ್ವತ ಪರಿಹಾರ ನೀಡಬೇಕು.&lt;/p&gt;&lt;p&gt;ಡಾ.ಶಂಕರ್&zwnj; ಗುಹ ದ್ವಾರಕಾನಾಥ್&zwnj;, ಕೆಪಿಸಿಸಿ ಕಾರ್ಯಾಧ್ಯಕ್ಷ&lt;/p&gt;&lt;p&gt;--&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu"/>
        </item>
        <item>
            <title><![CDATA[Gauribidanur: ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹ*ತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ]]></title>
            <link>https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</link>
            <guid isPermaLink="true">https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</guid>
            <pubDate>Fri, 19 Jun 2026 22:53:02 +0530</pubDate>
            <description><![CDATA[&lt;p&gt;Gauribidanur: ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvgcec2beqe7br6h13c49sj0,imgname-hhkh-1781887610955.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.19):&lt;/strong&gt; ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಒಂಟಿಯಾಗಿದ್ದ 60 ವರ್ಷದ ಸುಬ್ಬಮ್ಮ ಎಂಬ ವೃದ್ಧೆಯ ಮೇಲೆ ಕಳ್ಳರು ಅಮಾನುಷವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿವಿಯ ಸಮೇತ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.&lt;/p&gt;&lt;p&gt;ಸುಬ್ಬಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಸದಸ್ಯರು ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅವರ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುಬ್ಬಮ್ಮಜೋರಾಗಿ ಕೂಗಾಡಲು ಆರಂಭಿಸಿದ್ದು, ಕಳ್ಳರ ಕೃತ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಕಳ್ಳರು ಓಲೆಗಳನ್ನು ಕಿತ್ತುಕೊಳ್ಳುವ ವೇಳೆ ವೃದ್ಧೆಯ ಕಿವಿಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಲ್ಲದೆ ವೃದ್ಧೆ ನಿರಂತರವಾಗಿ ಕೂಗಾಡುತ್ತಿದ್ದುದನ್ನು ಕಂಡು ಕೋಪಗೊಂಡ ಕಳ್ಳರು, ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಹಲ್ಲೆಯ ಪರಿಣಾಮ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಯಾರೂ ಇಲ್ಲದ ಕಾರಣ ನೆರವು ಸಿಗಲಿಲ್ಲ. ಮಧ್ಯಾಹ್ನ ಸುಮಾರು 3.30 ರ ವೇಳೆಗೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಸೊಸೆ, ವೃದ್ಧೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;p&gt;ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ತಲೆಗೆ ತೀವ್ರ ಪೆಟ್ಟಾಗಿರುವುದು ಹಾಗೂ ಅಧಿಕ ರಕ್ತಸ್ರಾವವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸುಬ್ಬಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮಸ್ಥರಲ್ಲಿ ಆತಂಕ&lt;/strong&gt;&lt;/h2&gt;&lt;p&gt;ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಬ್ಬಮ್ಮ ಅವರ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8"/>
        </item>
        <item>
            <title><![CDATA[JDS Challenge pradeep eshwar: ''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ, ಸೋತ್ರೆ ನೀವು..?]]></title>
            <link>https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</link>
            <guid isPermaLink="true">https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</guid>
            <pubDate>Sat, 27 Jun 2026 08:28:55 +0530</pubDate>
            <description><![CDATA[&lt;p&gt;&amp;nbsp;ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್&zwnj;ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf5vy7mnwvtzvf2wf51cydvx,imgname-pradeep-eshwar--1--1768649858709.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜೂ.27):&amp;nbsp;&lt;/strong&gt; ಕೇಂದ್ರ ಸಚಿವರಾದ ಹೆಚ್&zwnj;ಡಿ&lt;strong&gt; &lt;/strong&gt;ಕುಮಾರಸ್ವಾಮಿ(HD Kumaraswamy) ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028ಕ್ಕೆ ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ನೀವು ಸೋತರೆ ಕುಮಾರಸ್ವಾಮಿ ಮನೆ ಮುಂದೆ ಸೆಕ್ಯೂರಿಟಿ ಆಗುತ್ತೀರಾ ಎಂದು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್(Shidlaghatta JDS MLA B.N. Ravikumar) ಅವರು ಶಾಸಕ ಪ್ರದೀಪ್ ಈಶ್ವರ್&zwnj;(Pradeep Eshwar)ಗೆ ಬಹಿರಂಗ ಸವಾಲು ಹಾಕಿದ್ದಾರೆ.&amp;nbsp;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೀಪ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆಡಿಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಕುಮಾರಸ್ವಾಮಿ ಅವರು ಕೋರ್ಟ್ ನೀಡಿದ ನೋಟಿಸ್ಸನ್ನಷ್ಟೇ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಹೆಚ್ಚಿನ ಸುದ್ದಿಗಳಿಗೆ ಕ್ಲಿಕ್ ಮಾಡಿ: &lt;/strong&gt;Pradeep Eshwar: 'ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..' ಕೇಂದ್ರ ಸಚಿವ ಹೆಚ್&zwnj;ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!&amp;nbsp;&lt;/p&gt;&lt;p&gt;Bidadi Township: ಇಂದು ಬೈರಮಂಗಲದಲ್ಲಿ ಮಧ್ಯಾಹ್ನತನಕ ಕಾಯ್ತೇನೆ, ಸಿಎಂ ಬರಲಿ: ಎಚ್&zwnj;ಡಿಕೆ&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: ಗುತ್ತಿಗೆದಾರರ ನಿರ್ಲಕ್ಷ್ಯ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು!]]></title>
            <link>https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</link>
            <guid isPermaLink="true">https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</guid>
            <pubDate>Wed, 17 Jun 2026 11:18:03 +0530</pubDate>
            <description><![CDATA[&lt;p&gt;ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ, ನಿರ್ಮಾಣ ಹಂತದ ಸರ್ಕಾರಿ ಕಟ್ಟಡದ ನೀರು ತುಂಬಿದ್ದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಈ ದುರ್ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸಾರ್ವಜನಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva11vp03d0t6s97xw0swqxg,imgname-----------------------2026-06-17t110028.705-1781674340032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.17)&lt;/strong&gt;: ತಾಲೂಕಿನ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಒಂದೂವರೆ ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಗುಂಡಿಗೆ ಜಾರಿ ಬಿದ್ದ ಮಗು&lt;/h2&gt;&lt;p&gt;ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿ ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ನೀರು ತುಂಬಿಕೊಂಡಿತ್ತು. ಆಟವಾಡುತ್ತಿದ್ದ ಮಗು ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದೆ.&lt;/p&gt;&lt;h3&gt;ಮಗುವನ್ನ ಕಳೆದುಕೊಂಡ ಕಾರ್ಮಿಕರು ಅಕ್ರಂದನ&lt;/h3&gt;&lt;p&gt;ಇದೇ ಕಟ್ಟಡದಲ್ಲಿ ಕಾರ್ಮಿಕರಾದ ಬೆಂಗಳೂರಿನ ಶ್ರೀರಾಂಪುರ ಮೂಲದ ರಾಜಪಾಲ್&zwnj; ಹಾಗೂ ಶ್ವೇತಾ ದಂಪತಿಯ ಮಗಳಾದ ಪಲ್ಲವಿ ಮೃತಪಟ್ಟ ದುರ್ದೈವಿ. ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಗುವಿನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua"/>
        </item>
        <item>
            <title><![CDATA[ಮಹಿಳೆಯರಿಗೆ ಸ್ವಾವಲಂಬನೆ ನೀಡುವುದೇ ದೊಡ್ಡ ಗ್ಯಾರಂಟಿ: ಸಂಸದ ಡಾ.ಕೆ.ಸುಧಾಕರ್]]></title>
            <link>https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683</link>
            <guid isPermaLink="true">https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683</guid>
            <pubDate>Wed, 13 May 2026 17:25:55 +0530</pubDate>
            <description><![CDATA[&lt;p&gt;ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7axzwm7141zgd44efb65qtb,imgname-dr-k-sudhakakr-1760229847687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ.13):&lt;/strong&gt; ಇಂದು ಎಲ್ಲೆಡೆ ಗ್ಯಾರಂಟಿಗಳ ಬಗ್ಗೆಯೇ ಮಾತು. ಆದರೆ ನನ್ನ ಪ್ರಕಾರ, ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ನಗರ ಹೊರವಲಯ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜಿಲ್ಲೆಯ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದರನ್ನು ಭೇಟಿ ಮಾಡಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ ಅವರು ಮಾತನಾಡಿದರು.&lt;/p&gt;&lt;p&gt;'ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು' ಈ ಬ್ರ&zwj;್ಯಾಂಡ್ ಅಡಿಯಲ್ಲಿ ನಮ್ಮ ಜಿಲ್ಲೆಯ ವಿಶಿಷ್ಟ ದೇಸಿ ತಿಂಡಿಗಳಾದ ಚಿಂತಾಮಣಿಯ ಖಾರದ ಕಡಲೆಕಾಯಿ ಬೀಜ, ಪೆರೇಸಂದ್ರದ ಗರಿಗರಿಯಾದ ಚಕ್ಕುಲಿ, ಕೋಡುಬಳೆ ಮತ್ತು ನಿಪ್ಪಟ್ಟುಗಳು, ಆರೋಗ್ಯದಾಯಕವಾದ ರಾಗಿ ಲಾಡು, ಬೆಲ್ಲದ ಕೊಬ್ಬರಿ ಮಿಠಾಯಿ. ಹೀಗೆ ಅನೇಕ ಸ್ವಾದಿಷ್ಟ ತಿನಿಸುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಪ್ಯಾಕ್ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;p&gt;ಅಕ್ಕ ತಂಡದ ಸಹೋದರಿಯರ ಮುಖದಲ್ಲಿ ಅಪ್ರತಿಮ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅವರು ಪ್ರೀತಿಯಿಂದ ತಯಾರಿಸಿರುವ ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು ಎಂಬ ಉತ್ಪನ್ನಗಳ ಬ್ರ&zwj;್ಯಾಂಡಿಂಗ್ ಮತ್ತು ಗುಣಮಟ್ಟವನ್ನು ಕಂಡು ಅಚ್ಚರಿ ಮತ್ತು ಸಂತೋಷ ಎರಡೂ ಆಯಿತು. ದಿನನಿತ್ಯದ ಸ್ನ್ಯಾಕ್ಸ್ ಗಾಗಿ, ಹಬ್ಬ-ಹರಿದಿನಗಳಲ್ಲಿ ಅಥವಾ ಅತಿಥಿಗಳಿಗೆ ನೀಡುವ ಉಡುಗೊರೆಗಳಲ್ಲಿ ಇಂತಹ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ ಈ ಮಹಿಳಾ ಸಂಘಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗಲಿದೆ ಎಂದು ಸಂಸದರು ತಿಳಿಸಿದರು. ಈ ವೇಳೆ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು. ಸಾರ್ವಜನಿಕರು ಇದ್ದರು.&lt;/p&gt;&lt;h2&gt;&lt;strong&gt;ವೋಕಲ್ ಫಾರ್ ಲೋಕಲ್ ಕರೆ ಪ್ರೋತ್ಸಾಹಿಸೋಣ&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿ ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್&zwnj;ಆರ್&zwnj; ಎಲ್&zwnj;ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕ್ರಿಯಾಶೀಲರಾಗಿ ಇಂತಹ ಅದ್ಭುತ ಕೆಲಸ ಮಾಡುತ್ತಿರುವ ಎಲ್ಲಾ ಸಾಧಕ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಸಾಧನೆ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಸಂಸದ ಸುಧಾಕರ್&zwnj; ಹಾರೈಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683"/>
        </item>
        <item>
            <title><![CDATA[ರಾತ್ರಿ ಗಸ್ತಿನಲ್ಲಿದ್ದ PSI ನಾಗಮ್ಮ, ಚಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ, ಧಮ್ಕಿ]]></title>
            <link>https://kannada.asianetnews.com/karnataka-districts/chikkaballapur-chintamani-miscreants-attempt-to-attack-psi-nagamma-driver-while-on-night-patrol-mrq/articleshow-wwuz9gg</link>
            <guid isPermaLink="true">https://kannada.asianetnews.com/karnataka-districts/chikkaballapur-chintamani-miscreants-attempt-to-attack-psi-nagamma-driver-while-on-night-patrol-mrq/articleshow-wwuz9gg</guid>
            <pubDate>Tue, 07 Apr 2026 08:31:25 +0530</pubDate>
            <description><![CDATA[&lt;p&gt;ಚಿಂತಾಮಣಿ ತಾಲೂಕಿನ ಚಿನ್ನಸಂದ್ರದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಮಹಿಳಾ ಪಿಎಸ್&zwnj;ಐ ನಾಗಮ್ಮ ಮತ್ತು ಚಾಲಕ ವೇಣುಗೋಪಾಲ್ ಮೇಲೆ ಪುಂಡರ ಗುಂಪೊಂದು ಧಮ್ಕಿ ಹಾಕಿದೆ. ಹೋಟೆಲ್ ಮುಚ್ಚುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knjy08svgzp6662brx2rntzh,imgname-chintamani--1775530681147.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ:&lt;/strong&gt; ಕರ್ತವ್ಯನಿರತ ಮಹಿಳಾ ಪಿಎಸ್&zwnj;ಐ ಮತ್ತು ವಾಹನ ಚಾಲಕನ ಮೇಲೆ ಪುಂಡರ ಗುಂಪೊಂದು ಧಮ್ಕಿ ಹಾಕಿರುವ ಘಟನೆ ಚಿಂತಾಮಣಿ ತಾಲೂಕಿನ &amp;nbsp;ಚಿನ್ನಸಂದ್ರದಲ್ಲಿ ನಡೆದಿದೆ.&lt;/p&gt;&lt;p&gt;ತಾಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಪಿಎಸ್&zwnj;ಐ ನಾಗಮ್ಮ ಹಾಗೂ ಚಾಲಕ ವೇಣುಗೋಪಾಲ್ ಏಪ್ರಿಲ್ ೩ರ ರಾತ್ರಿ ಗಸ್ತಿನಲ್ಲಿದ್ದರು. ರಾತ್ರಿ 12:40ರ ಸಮಯದಲ್ಲೂ ಜಮ್ ಜಮ್ ಹೋಟೆಲ್ ತೆರೆದಿದ್ದನ್ನು ಗಮನಿಸಿದ ಕಾನೂನಿನ ನಿಯಮದಂತೆ ಹೋಟೆಲ್ ಮುಚ್ಚುವಂತೆ ಮಾಲೀಕ ಶಾಹಿದ್ ಖಾನ್&zwnj;ಗೆ ಸೂಚಿಸಿದರೆ ಅಲ್ಲೇ ಇದ್ದ ತಾಲೂಕಿನ ಆಲಂಬಗಿರಿಯ ನಾಗೇಂದ್ರ, ನವೀನ್, ನರೇಂದ್ರ ಯಲಹಂಕದ ಪುನೀತ್ ಯಾದವ್ ಧಮ್ಕಿ ಹಾಕಿರುವುದಲ್ಲದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಹಲ್ಲೆ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ 6 ಮಂದಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚಪ್ಪಲಿ ಬಿಟ್ಟು ಬಂದ್ರೆ ಮಾತ್ರ ಚಿಕಿತ್ಸೆ? ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಿತ್ರ ನಿಯಮ&lt;/strong&gt;&lt;/p&gt;&lt;p&gt;ಚಾಲಕ ವೇಣುಗೋಪಾಲ್ ಮೇಲೆ ಹಲ್ಲೆ:&lt;/p&gt;&lt;p&gt;ದುಷ್ಕರ್ಮಿಗಳು ಚಾಲಕ ವೇಣುಗೋಪಾಲ್ ತೀವ್ರ ವಾಗ್ವಾದ ಮಾಡುತ್ತಿದ್ದನ್ನು ಕಂಡು ಪಿಎಸ್&zwnj;ಐ ನಾಗಮ್ಮ ತಮ್ಮ ಮೊಬೈಲ್&zwnj;ನಲ್ಲಿ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾದಾಗ, ನಾಗೇಂದ್ರ ಎಂಬಾತ ಮೊಬೈಲ್ ಕಿತ್ತುಕೊಂಡು ಅವರನ್ನು ಕೈಗಳಿಂದ ತಳ್ಳಿ ಧಮ್ಕಿ ಹಾಕಿದ್ದಾನೆ. ಉಳಿದ ಐವರು ಸಹಾ ಚಾಲಕ ವೇಣುಗೋಪಾಲ್ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚಿಕ್ಕಬಳ್ಳಾಪುರ: ಗಂಡು ದೆವ್ವದ ಕಾಟಕ್ಕೆ ಬೇಸತ್ತು ವಿಚಿತ್ರವಾಗಿ ವರ್ತಿಸಿ ಸಾವು ಕಂಡ ಮಹಿಳೆ!&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-chintamani-miscreants-attempt-to-attack-psi-nagamma-driver-while-on-night-patrol-mrq/articleshow-wwuz9gg"/>
        </item>
        <item>
            <title><![CDATA[ಲವ್ ಮ್ಯಾರೇಜ್ ಮಾಡಿಕೊಂಡ ಮಗಳು, 3 ವರ್ಷಕ್ಕೆ ಮಸಣ ಸೇರಿದಳು: ಅಳಿಯನ ಕೃತ್ಯ ಬಿಚ್ಚಿಟ್ಟ ಮಾವ!]]></title>
            <link>https://kannada.asianetnews.com/karnataka-districts/chikkaballapur-young-woman-varalakshmi-dies-suspiciously-after-3-years-of-love-marriage-sat/articleshow-wx4im20</link>
            <guid isPermaLink="true">https://kannada.asianetnews.com/karnataka-districts/chikkaballapur-young-woman-varalakshmi-dies-suspiciously-after-3-years-of-love-marriage-sat/articleshow-wx4im20</guid>
            <pubDate>Tue, 10 Mar 2026 18:10:32 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ, ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ವರಲಕ್ಷ್ಮಿ ಎಂಬ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಇದು ಆತ್ಮ*ಹತ್ಯೆಯಲ್ಲ, ಎಂದಿರುವ ಯುವತಿಯ ಅಪ್ಪ, ಅಳಿಯನ ಬಗ್ಗೆ ಸ್ಪೋಟಕವೊಂದನ್ನು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkbw3s8abybb3vkr2qznf0h8,imgname-chikkaballapura-young-women-varalakshmi-1773146334474.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮಾ.10): ಪ್ರೀ&lt;/strong&gt;ತಿಸಿ ಮದುವೆಯಾಗಿ ನೂರು ಕಾಲ ಸುಖವಾಗಿ ಬಾಳಬೇಕಿದ್ದ ಆ ಯುವತಿಯ ಬಾಳು, ಮದುವೆಯಾದ ಮೂರೇ ವರ್ಷಕ್ಕೆ ಮಸಣ ಸೇರಿದೆ. ಮಹಿಳಾ ದಿನಾಚರಣೆಯಂದೇ ಸಂಭವಿಸಿರುವ ಈ ಘಟನೆ, ಇದೀಗ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪೋಷಕರ ವಿರೋಧವನ್ನೂ ಲೆಕ್ಕಿಸದೆ ಹಸೆಮಣೆ ಏರಿದ್ದ ವರಲಕ್ಷ್ಮಿ (25) ಎಂಬಾಕೆ ಗುಡಿಬಂಡೆಯ ಪಾಪಿನಾಯಕನಹಳ್ಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಮೃತ ವರಲಕ್ಷ್ಮಿ ಮತ್ತು ಆರ್. ಚೊಕ್ಕನಹಳ್ಳಿಯ ಗಂಗರಾಜು ಎಂಬುವವರು ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ ವಿರೋಧದ ನಡುವೆಯೂ ತಮ್ಮ ಪ್ರೀತಿ ಗೆಲ್ಲಬೇಕೆಂದು ಇಬ್ಬರೂ ಮದುವೆಯಾಗಿದ್ದರು. ಮೊದಮೊದಲು ಅನ್ಯೋನ್ಯವಾಗಿದ್ದ ದಂಪತಿಯ ಬದುಕಿನಲ್ಲಿ ವರದಕ್ಷಿಣೆ ಎಂಬ ಕರಾಳ ನೆರಳು ಬೀರಿತ್ತು. ವರಲಕ್ಷ್ಮಿ ಮೇಲೆ ಪದೇ ಪದೇ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಗಂಗರಾಜು, ಆಕೆಯನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದನು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಆತ್ಮ*ಹತ್ಯೆಯೋ? ಕೊಲೆಯೋ?:&lt;/strong&gt;&lt;/h2&gt;&lt;p&gt;ನಿನ್ನೆ ರಾತ್ರಿ ಗಂಡನ ಮನೆಯಲ್ಲಿ ವರಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಗಂಡನ ಮನೆಯವರು ಇದು ಆತ್ಮ*ಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದರೂ, ಮೃತಳ ಕುಟುಂಬಸ್ಥರು ಇದನ್ನು ಬಲವಾಗಿ ನಿರಾಕರಿಸಿದ್ದಾರೆ. 'ನಮ್ಮ ಮಗಳನ್ನು ವರದಕ್ಷಿಣೆಗಾಗಿ ಕಿರುಕುಳ ನೀಡಿ ಗಂಡನೇ ಕೊಲೆ ಮಾಡಿದ್ದಾನೆ' ಎಂದು ಪೋಷಕರು ಆರೋಪಿಸುತ್ತಿದ್ದು, ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ನಡೆಗೆ ಆಕ್ರೋಶ:&lt;/strong&gt;&lt;/h2&gt;&lt;p&gt;ಈ ಪ್ರಕರಣದಲ್ಲಿ ಪೇರೇಸಂದ್ರ ಪೊಲೀಸ್ ಠಾಣೆಯ ಪೊಲೀಸರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಶವವನ್ನು ಕುಟುಂಬಸ್ಥರಿಗೆ ತೋರಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಸಂಬಂಧಿಕರು, ಪೊಲೀಸರು ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಆರೋಪಿ ಗಂಗರಾಜು ಹಾಗೂ ಆತನ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಮೃತಳ ಕುಟುಂಬಸ್ಥರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.&lt;/p&gt;&lt;h2&gt;&lt;strong&gt;ನ್ಯಾಯಕ್ಕಾಗಿ ಆಗ್ರಹ:&lt;/strong&gt;&lt;/h2&gt;&lt;p&gt;ಪ್ರೀತಿಯ ನಂಬಿಕೆಯನ್ನು ಹೊತ್ತು ಮದುವೆಯಾದ ಯುವತಿಯ ಸಾವು, ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ವರದಕ್ಷಿಣೆ ಪಿಡುಗಿನ ಭೀಕರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪೋಷಕರ ವಿರೋಧದ ನಡುವೆಯೂ ಬದುಕು ಕಟ್ಟಿಕೊಳ್ಳಲು ಹೋದ ಯುವತಿಯೊಬ್ಬಳು ಇಂತಹ ದುರಂತ ಅಂತ್ಯ ಕಂಡಿರುವುದು ಮನಕಲಕುವಂತಿದೆ. ಪೊಲೀಸರು ಈ ಪ್ರಕರಣದಲ್ಲಿ ಸತ್ಯಾಸತ್ಯತೆಯನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkaballapur-young-woman-varalakshmi-dies-suspiciously-after-3-years-of-love-marriage-sat/articleshow-wx4im20"/>
        </item>
        <item>
            <title><![CDATA[ಸಹಕಾರ ಕ್ಷೇತ್ರ ರೈತರ ಬದುಕಿನ ಜೀವನಾಡಿಯಾಗಿದ್ದು, ಭ್ರಷ್ಟಾಚಾರಿಗಳು ನುಸುಳಬಾರದು: ಡಾ.ಕೆ.ಸುಧಾಕರ್]]></title>
            <link>https://kannada.asianetnews.com/karnataka-districts/dr-k-sudhakar-cooperative-sector-farmers-dairy-development-modi-vision-gvd/articleshow-wzpnx5g</link>
            <guid isPermaLink="true">https://kannada.asianetnews.com/karnataka-districts/dr-k-sudhakar-cooperative-sector-farmers-dairy-development-modi-vision-gvd/articleshow-wzpnx5g</guid>
            <pubDate>Mon, 13 Apr 2026 20:12:48 +0530</pubDate>
            <description><![CDATA[&lt;p&gt;ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7axzwm7141zgd44efb65qtb,imgname-dr-k-sudhakakr-1760229847687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಏ.13): &lt;/strong&gt;ಸಹಕಾರ ಕ್ಷೇತ್ರ ರೈತರ ಬದುಕಿನ ಜೀವನಾಡಿ. ಅಲ್ಲಿ ಭ್ರಷ್ಟಾಚಾರಿಗಳ ನುಸುಳುವಿಕೆ ಆಗಬಾರದು. ಪಾರದರ್ಶಕತೆ ಇರಬೇಕು. ಆಗಲೇ ಸಹಕಾರಿ ಕ್ಷೇತ್ರ ಉಳಿಯಲು ಸಾಧ್ಯ. ಹೈನುಗಾರಿಕೆ ರೈತನ ಪ್ರಬಲ ಅಸ್ತ್ರವಾಗಿದೆ. ಕೃಷಿಯಿಂದಲೇ ಜೀವನ ಸಾಗಿಸುವ ರೈತರು ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.&lt;/p&gt;&lt;p&gt;ನಗರದ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಚಿಮುಲ್&zwnj;ನಿಂದ ಪೆರೆಸಂದ್ರ ಕ್ಷೇತ್ರದ ಹಾಲು ಉತ್ಪಾದಕ ಸಹಕಾರ ಸಂಘಗಳ ಪರಿಮಾಣ ಮತ್ತು ಗುಣಮಟ್ಟ ಹೆಚ್ಚಿಸಲು ಪ್ರಾದೇಶಿಕ ಸಭೆ ಮತ್ತು ವಿವಿಧ ಸೌಲಭ್ಯಗಳ ವಿತರಣೆ ಹಾಗೂ ನೂತನ ನಿರ್ದೆಶಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೋಲಾರದಿಂದ ಚಿಕ್ಕಬಳ್ಳಾಪುರ ವಿಭಜನೆಯಾಗಿ 17 ವರ್ಷ ಕಳೆದರೂ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಗೊಂಡಿಲ್ಲದರ ಬಗ್ಗೆ ಅಸಮಾಧಾನ ಇತ್ತು. ಬೇರೆ ಜಿಲ್ಲೆಯಲ್ಲಿ ಹೋಗಿ ನಮ್ಮ ವ್ಯವಸ್ಥೆ ವ್ಯವಹಾರ ನಡೆಸುವುದು ಕಷ್ಟವಾಗುತ್ತದೆ.&lt;/p&gt;&lt;h2&gt;&lt;strong&gt;ಒಳ್ಳೆ ಪ್ರಾಮಾಣಿಕ ವ್ಯಕ್ತಿ&lt;/strong&gt;&lt;/h2&gt;&lt;p&gt;ಪ್ರತ್ಯೇಕ ಮಾಡಿಕೊಡಿ ಎಂದು ಇಂದಿನ ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮನವಿ ಮಾಡಿದಾಗ ನಡೆದ ಪ್ರಯತ್ನವೇ ಇಂದು ಪ್ರತ್ಯೇಕ ಮೆಘಾ ಡೈರಿ. ಚಿಮುಲ್&zwnj;ಗೆ ಮೊದಲ ಚುನಾವಣೆ ನಡೆದು, ಪ್ರಥಮ ಚಿಮುಲ್ ನಿರ್ದೇಶಕರಾಗಿ ಉತ್ತಮ ಸಹಕಾರಿ ಕೆ.ವಿ.ನಾಗರಾಜ್ ಆಯ್ಕೆಯಾಗಿ, ಒಳ್ಳೆ ಪ್ರಾಮಾಣಿಕ ವ್ಯಕ್ತಿಯಾದ ಮಂಜುನಾಥರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಸ್ತುವಾರಿ ಸಚಿವರ ಹಸ್ತಕ್ಷೇಪ ಕಡಿಮೆಯಾಗುತ್ತದೆಂಬ ನಂಬಿಕೆ ನಮಗೆ ಉಂಟಾಗಿದೆ ಎಂದು ಹೇಳಿದರು.&lt;/p&gt;&lt;p&gt;ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಚಿಮುಲ್ ನೂತನವಾಗಿ ಆಯ್ಕೆಯಾಗಿರುವ ಕೆ.ವಿ.ನಾಗಾರಾಜ್ ಅವರಿಗೆ ಹೋಬಳಿ ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅದ್ಯಕ್ಷರು ಸನ್ಮಾನಿಸಿದರು. ಇದೇ ವೇಳೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳಿಗೆ ಅನುದಾನ ಹಾಗೂ ಸಂಘಗಳ ಕಚೇರಿ ಉನ್ನತೀಕರಣಕ್ಕೆ ಕಂಪ್ಯೂಟರ್, ಯುಪಿಎಸ್ ಲ್ಯಾಬ್ ಸಲಕರಣೆಗಳ ವಿತರಣೆ ಮಾಡಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಚಿಮುಲ್ ವ್ಯೆವಸ್ಥಾಪಕ ನಿರ್ಧೇಶಕ ಡಾ.ಎ.ಸಿ. ಶ್ರೀನಿವಾಸ ಗೌಡ, ವ್ಯವಸ್ಥಾಪಕ ಎಂ.ಶ್ರೀನಿವಾಸರೆಡ್ಡಿ, ಒಕ್ಕೂಟ ಶಿಬಿರ ವ್ಯೆವಸ್ಥಾಪಕ ಮನೋರಂಜನ್ ರೆಡ್ಡಿ, ಚಿಮುಲ್ ವಿಶೇಷ ಅಧಿಕಾರಿಗಳಾದ ಡಿ.ಮಂಜುನಾಥ, ಕೆ.ಎನ್.ಸದಾಶಿವ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ಮುಖಂಡರಾದ ಕೆ.ಅರ್.ರೆಡ್ಡಿ, ಚಿಕ್ಕಗೆರಿಗರೆಡ್ಡಿ, ಅಣಕನಗೊಂದಿ ರಂಗಪ್ಪ, ಆವಲಗುರ್ಕಿ ರಾಜಣ್ಣ, ಪ್ರೇಮಕುಮಾರಿ, ಅವಲಕೊಂಡರಾಯಪ್ಪ, ಚೆನ್ನಕೇಶವರೆಡ್ಡಿ, ನಾರಾಯಣಸ್ವಾಮಿ, ಮತ್ತಿತರರು ಇದ್ದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dr-k-sudhakar-cooperative-sector-farmers-dairy-development-modi-vision-gvd/articleshow-wzpnx5g"/>
        </item>
        <item>
            <title><![CDATA[ವಿಶೇಷ ಚೇತನ ತಂದೆ-ತಾಯಿಗೆ ಧ್ವನಿಯಾದ ಮುದ್ದು ಕಂದಮ್ಮ;  ಹೃದಯಸ್ಪರ್ಶಿ ವಿಡಿಯೋ ವೈರಲ್]]></title>
            <link>https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0</link>
            <guid isPermaLink="true">https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0</guid>
            <pubDate>Tue, 28 Apr 2026 12:20:49 +0530</pubDate>
            <description><![CDATA[ಚಿಕ್ಕಬಳ್ಳಾಪುರದ ಆದಿಯೋಗಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ವಿಶೇಷ ಚೇತನ ದಂಪತಿಯನ್ನು ಭೇಟಿಯಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಆ ಪೋಷಕರಿಗೆ ಅವರ ಪುಟ್ಟ ಮಗಳು ಲಿಪ್ಸಾ ಧ್ವನಿಯಾಗಿ, ಅವರ ಪರವಾಗಿ ಮಾತನಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9d0j8p668wd336p1w5gndz,imgname-viral-video--3--1777358358806.jpg" type="image/jpeg" height="390" width="690"/>
            <content:encoded><![CDATA[ಚಿಕ್ಕಬಳ್ಳಾಪುರದ ಆದಿಯೋಗಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ವಿಶೇಷ ಚೇತನ ದಂಪತಿಯನ್ನು ಭೇಟಿಯಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಆ ಪೋಷಕರಿಗೆ ಅವರ ಪುಟ್ಟ ಮಗಳು ಲಿಪ್ಸಾ ಧ್ವನಿಯಾಗಿ, ಅವರ ಪರವಾಗಿ ಮಾತನಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;img&gt;&lt;p&gt;ಕಳೆದ 24 ಗಂಟೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುದ್ದ ಮಗುವೊಂದು ತನ್ನ ತಂದೆ-ತಾಯಿಗೆ ಧ್ವನಿಯಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೆಚ್ಚುಗೆ ಸೂಚಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಇಂದು ಪ್ರವಾಸಿ ತಾಣ, ಬ್ಯೂಸಿ ರೋಡ್&zwnj;ಗಳಲ್ಲಿ ನಿಮಗೆ ಸ್ಟ್ರೀಟ್ ಫೋಟೋಗ್ರಾಫರ್ ಸಿಗುತ್ತಾರೆ. ಪ್ರವಾಸಿಗರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿ ಅನುಮತಿ ಪಡೆದುಕೊಂಡು ಫೋಟೋ ಕ್ಲಿಕ್ಕಿಸುತ್ತಾರೆ. ನಂತರ ತಮ್ಮ ಸೋಶಿಯಲ್ ಮೀಡಿಯಾ ಪೇಜ್&zwnj;ಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು ಹೆಚ್ಚೆಚ್ಚು ವೈರಲ್ ಆಗುತ್ತಿರುತ್ತವೆ.&lt;/p&gt;&lt;img&gt;&lt;p&gt;ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಎಂಬಲ್ಲಿ ಆದಿ ಯೋಗಿ ಪ್ರತಿಮೆ ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಸ್ಟ್ರೀಟ್ ಫೋಟೋಗ್ರಾಫರ್, ವಿಶೇಷ ಕುಟುಂಬವನ್ನು ಭೇಟಿಯಾಗಿ ಮಾತನಾಡಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಬಂದ ದಂಪತಿಯನ್ನು ಮಾತನಾಡಿಸಲು ಹೋದಾಗ ಅವರಿಗೆ ಕಿವಿ ಕೇಳಿಸಲ್ಲ ಮತ್ತು ಮಾತು ಬರಲ್ಲ ಎಂದು ಗೊತ್ತಾಗಿದೆ. ಆದ್ರೆ ಈ ವಿಶೇಷ ಚೇತನ ದಂಪತಿಗೆ ಅವರ ಮಗಳು ಧ್ವನಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಫೋಟೋಗ್ರಾಫರ್ ಬರುತ್ತಿದ್ದಂತೆ ತಮಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಮಗಳೊಂದಿಗೆ ಮಾತನಾಡುವಂತೆ ಸನ್ನೆ ಮಾಡುತ್ತಾರೆ. ಫೋಟೋಗ್ರಾಫರ್ ಪುಟ್ಟ ಹುಡುಗಿ ಜೊತೆ ಮಾತು ಆರಂಭಿಸುತ್ತಾರೆ. ನನ್ನ ಹೆಸರು ಲಿಪ್ಸಾ, ಓಡಿಶಾದವಳು. ಮೊದಲ ಬಾರಿಗೆ ಬೆಂಗಳೂರಿಗೆ ರಜಾದಿನಗಳನ್ನು ಕಳೆಯಲು ಬಂದಿದ್ದೇವೆ. ಮೂರ್ನಾಲ್ಕು ದಿನಗಳಿಂದ ಇಲ್ಲಿದ್ದು, ಹಾಗಾಗಿ ಕನ್ನಡ ಭಾಷೆ ಬರಲ್ಲ. ತಾಯಿ ಗೃಹಿಣಿ ಮತ್ತು ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ ಎಂದು ಹೇಳುತ್ತಾಳೆ.&lt;/p&gt;&lt;img&gt;&lt;p&gt;ಈ ವಿಡಿಯೋ ನೋಡಿದ ನೆಟ್ಟಿಗರು, ಮಕ್ಕಳಲ್ಲಿ ಸಂಸ್ಕಾರ ತುಂಬಲು ನಿಮಗೆ ಧ್ವನಿ ಬೇಕೆಂತೇನಿಲ್ಲ ಎಂಬುದಕ್ಕೆ ಇದುವೇ ಉದಾಹರಣೆ. ಪೋಷಕರು ಸಂವಹನ ನಡೆಸಲು ಸಂಪೂರ್ಣವಾಗಿ ಮಗಳ ಮೇಲೆ ಅವಲಂಬಿತಳಾಗಿದ್ದಾರೆ ಎಂದು ತಿಳಿಯುತ್ತದೆ. ಇಲ್ಲಿ ಎಲ್ಲರೂ ಒಬ್ಬರ ಮೇಲೆ ಪ್ರೀತಿಯ ಕಾಳಜಿ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;Family from Odisha. On a visit to Bengaluru. Parents and two kids....Parents can't speak nor hear well...The daughter becomes the voice.When you see things like these, you know a caring family is the best thing one could ask for. pic.twitter.com/STrfTkxyAm&lt;/p&gt;&lt;p&gt;&mdash; Karthik Reddy (@bykarthikreddy) April 27, 2026&lt;/p&gt;]]></content:encoded>
            <category>chikkaballapur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0"/>
        </item>
        <item>
            <title><![CDATA[ಉಸ್ತುವಾರಿ ಸಚಿವರೆ ನಿಮ್ಮ  ಮುಖವಾಡ ಕಳಚುತ್ತೇನೆ: ಸಂಸದ ಡಾ.ಕೆ.ಸುಧಾಕರ್ ಎಚ್ಚರಿಕೆ]]></title>
            <link>https://kannada.asianetnews.com/karnataka-districts/dr-k-sudhakar-vs-mc-sudhakar-land-issue-allegations-chikkaballapur-gvd/articleshow-xyk9lo9</link>
            <guid isPermaLink="true">https://kannada.asianetnews.com/karnataka-districts/dr-k-sudhakar-vs-mc-sudhakar-land-issue-allegations-chikkaballapur-gvd/articleshow-xyk9lo9</guid>
            <pubDate>Mon, 13 Apr 2026 18:50:07 +0530</pubDate>
            <description><![CDATA[&lt;p&gt;ಎಲ್ಲ ದಾಖಲೆಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕ ಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್&zwnj;ಗೆ ಎಚ್ಚರಿಕೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gb0sggk4ezf1v3w1shhnf3cz,imgname-dr-k-sudhakar.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಏ.13):&lt;/strong&gt; ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮಾಡುತ್ತಿರುವ ಪ್ರಮುಖ ಕೆಲಸವೆಂದರೆ ಫಲವತ್ತಾದ ಜಮೀನಗಳನ್ನು ಕಿತ್ತುಕೊಂಡು ರೈತರ ಹೊಟ್ಟೆ ಮೇಲೆ ಒಡೆಯುವುದು. ಸಚಿವರು ಬೇನಾಮಿ ಹೆಸರಲ್ಲಿ ಏನು ಮಾಡಿದ್ದಾರೆ. ಎಲ್ಲ ದಾಖಲೆಯೂ ನನ್ನ ಬಳಿ ಇದೆ. ನನಗೆ ಸವಾಲು ಹಾಕ ಬೇಡಿ. ನಿಮ್ಮ ಮುಖವಾಡ ಕಳಚುವ ಕೆಲಸ ಸದ್ಯದಲ್ಲೇ ಮಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್&zwnj;ಗೆ ಎಚ್ಚರಿಕೆ ನೀಡಿದರು.&lt;/p&gt;&lt;p&gt;ನಗರದ ಸಂಸದರ ಗೃಹ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಅವರೇನು ಕೆಲಸ ಮಾಡಿದ್ದಾರೆ. ನಾನು ಏನು ಕೆಲಸ ಮಾಡಿದ್ದೇನೆ ಎಂದು ಹೇಳುತ್ತೇನೆ. ಅವರು ಜಿಲ್ಲಾ ಉಸ್ತುವಾರಿ ಸಚಿವರು ಆದಾಗಿನಿಂದ ನೂರಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿರುವ ಭೂಮಿಯನ್ನು ಕಿತ್ತುಕೊಂಡು ಅವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಬೇನಾಮಿಗಳ ಹೆಸರಲ್ಲಿ ಚಿಂತಾಮಣಿಯಲ್ಲಿ ನೋಂದಣಿ ಮಾಡಿಸುತ್ತಿರುವುದು ಎಲ್ಲವೂ ಗೊತ್ತಿದೆ. ಶೀಘ್ರದಲ್ಲೇ ಅವರ ಮುಖವಾಡ ಕಳಚುವ ಕೆಲಸ ಮಾಡುತ್ತೇನೆ ಎಂದರು.&lt;/p&gt;&lt;p&gt;ಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯದಲ್ಲಿ ಚಿಮುಲ್ ನಿರ್ದೇಶಕ ಹುಜುಗೂರು ರಾಮಯ್ಯನವರು ಆರೋಪ ಮಾಡಿದ್ದಾರೆ. ಅದರೆ ನಾನು ಆಗ ವಿದೇಶದಲ್ಲಿದ್ದೆ. ನಾನು ಆಗ ಚಿಕ್ಕಬಳ್ಳಾಪುರದಲ್ಲಿ ಇದ್ದಿದ್ದರೆ ಮರಳುಕುಂಟೆ ಕೃಷ್ಣಮೂರ್ತಿಯವರು ಸೋಲುತ್ತಿರಲಿಲ್ಲ. ನಾನು ಅಂತಹ ಅಡ್ಜೆಸ್ಟ್&zwnj;ಮೆಂಟ್ ರಾಜಕಾರಣ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ನನಗೆ ಬಂದಿಲ್ಲ. ಯಾರೋ ಒತ್ತಡ ಹಾಕಿದ್ದಾರೆ. ಹೀಗಾಗಿ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಭಾಗವಹಿಸುವಂತೆ ಮನವಿ&lt;/strong&gt;&lt;/h2&gt;&lt;p&gt;ಆದಿಚುಂಚನಗಿರಿಯಲ್ಲಿ ಏಪ್ರಿಲ್ 15 ರಂದು ಬೆಳಗ್ಗೆ 10 ಗಂಟೆಗೆ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವ ಬೈರವೈಕ್ಯ ದೇಗುಲ ಉದ್ಘಾಟನಾ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷರಾದ ಎ.ಗಜೇಂದ್ರ, ಬಿಜೆಪಿ ಜಿಲ್ಲಾ ಮುಖಂಡರಾದ ಆವುಲಕೊಂಡರಾಯಪ್ಪ, ಮುನಿಕೃಷ್ಣಪ್ಪ, ತೇಜೆಂದ್ರಬಾಪು, ಪ್ರಭಾಕರರೆಡ್ಡಿ, ಲೀಲಾವತಿ ಶ್ರೀನಿವಾಸ್, ಬಾಲಕುಂಟಹಳ್ಳಿ ಗಂಗಾಧರಪ್ಪ, ನಾರಾಯಣಸ್ವಾಮಿ, ಅನು ಅನಂದ್, ಮೊಬೈಲ್ ಬಾಬು, ರಾಮಣ್ಣ ಮತ್ತಿತರರು ಇದ್ದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dr-k-sudhakar-vs-mc-sudhakar-land-issue-allegations-chikkaballapur-gvd/articleshow-xyk9lo9"/>
        </item>
    </channel>
</rss>
