<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 11 Sep 2026 12:38:53 +0530</lastBuildDate>
        <atom:link href="https://kannada.asianetnews.com/rss/chikkaballapur" rel="self" type="application/rss+xml"/>
        <item>
            <title><![CDATA[ಇಂಗ್ಲೆಂಡ್‌ನಲ್ಲಿ 2ನೇ ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದ ಕೋಂಡೇನಹಳ್ಳಿಯ ಸುರೇಶ್ ಗಟ್ಟಾಪುರ]]></title>
            <link>https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl</link>
            <guid isPermaLink="true">https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl</guid>
            <pubDate>Thu, 16 Jul 2026 08:14:17 +0530</pubDate>
            <description><![CDATA[&lt;p&gt;ಕೋಂಡೇನಹಳ್ಳಿ ಗ್ರಾಮದ ರೈತ ಕುಟುಂಬದ ಸುರೇಶ್ ಗಟ್ಟಾಪುರ್, ಯುನೈಟೆಡ್ ಕಿಂಗ್&zwnj;ಡಮ್&zwnj;ನ ಸ್ವಿಂಡನ್&zwnj;ನಲ್ಲಿ ನಡೆದ ಬರೋ ಕೌನ್ಸಿಲ್ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ, ಸಾಫ್ಟ್&zwnj;ವೇರ್ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ಅವರ ಪಯಣ ಸ್ಪೂರ್ತಿದಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmccntp2npm97y9k772f7rg,imgname-suresh-gattapur-1784169256790.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ&lt;/strong&gt;: ಜಿಲ್ಲೆಯ ಕೋಂಡೇನಹಳ್ಳಿ ಗ್ರಾಮದ ಸುರೇಶ್ ಗಟ್ಟಾಪುರ್ ಯುಕೆ ಚುನಾವಣೆಯಲ್ಲಿ ಗೆದ್ದಿದ್ದಾರೆ.ಯುನೈಟೆಡ್ ಕಿಂಗ್&zwnj;ಡಮ್&zwnj;ನ ಸ್ವಿಂಡನ್&zwnj;ನಲ್ಲಿ ಸದ್ಯ ವಾಸವಿದ್ದಾರೆ, ಅವರು ಮೇ 7 ರಂದು ನಡೆದ ಬರೋ ಎಲೆಕ್ಷನ್&zwnj;ನಲ್ಲಿ ಗೆಲುವು ಸಾಧಿಸಿದ್ದಾರೆ.&lt;/p&gt;&lt;p&gt;ರೈತಾಪಿ ಕುಟುಂಬದಲ್ಲಿ ಬೆಳೆದ ಸುರೇಶ್&zwnj; ತನ್ನ ಪ್ರಾಥಮಿಕ ಶಾಲೆಯ 1ನೇ ತರಗತಿಯಿಂದ 6ನೇ ತರಗತಿ ವರೆಗೂ ಹಳ್ಳಿಯಲ್ಲಿಯೇ ಮುಗಿಸಿದರು. ಅಲ್ಲಿಂದ 7ನೇ ತರಗತಿಯಿಂದ 10ನೇ ತರಗತಿ ವರೆಗೂ ಮೇಲೂರಿನಲ್ಲಿ ಓದಿದರು. 10ನೇ ತರಗತಿ ವರೆಗೂ ನಾನು ಕನ್ನಡ ಮೀಡಿಯಂನಲ್ಲೇ ಓದಿದ್ದು ವಿಶೇಷ.&lt;/p&gt;&lt;p&gt;ಅನಂತರ ಆಮೇಲೆ ಪಿಯುಸಿಗೆ ಚಿಕ್ಕಬಳ್ಳಾಪುರ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಅಲ್ಲಿಂದ ಸಿಇಟಿಯಲ್ಲಿ ಅರ್ಹತೆ ಪಡೆದು, ಜೆ.ಎಂ.ಐ.ಟಿ ಚಿತ್ರದುರ್ಗದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಮುಗಿಸಿ, ಮೈಸೂರು ಯೂನಿವರ್ಸಿಟಿಯಿಂದ ಪದವಿ ಪೂರ್ಣಗೊಳಿಸಿದರು.&lt;/p&gt;&lt;h2&gt;&lt;strong&gt;2004ರಿಂದ ಸ್ವಿಂಡನ್&zwnj;ನಲ್ಲಿ ವಾಸ&lt;/strong&gt;&lt;/h2&gt;&lt;p&gt;ಅದಾದಮೇಲೆ ಕೆ.ಜಿ.ಎಫ್&zwnj; ನಲ್ಲಿನ ಬಿ.ಇ.ಎಂ.ಎಲ್ 1992 ರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಂತರ, ಸಾಫ್ಟ್&zwnj;ವೇರ್ ಕ್ಷೇತ್ರಕ್ಕೆ ಬರಬೇಕೆಂಬ ಹೆಂಡತಿಯ ಒತ್ತಾಯದ ಮೇರೆಗೆ ಸಾಫ್ಟ್&zwnj;ವೇರ್&zwnj;ಗೆ ಕಾಲಿಟ್ಟರು. ಬಳಿಕ ಸ್ವಿಜರ್ಲ್ಯಾಂಡ್ ಕಂಪನಿಯೊಂದರ ಕಚೇರಿಯು ಶ್ರೀಲಂಕಾದಲ್ಲಿತ್ತು. ಅಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಮಾಡಿ, 2004 ರ ಏಪ್ರಿಲ್&zwnj;ನಲ್ಲಿ ಹೆಂಡತಿ ಮತ್ತು ಮಕ್ಕಳ ಜೊತೆ ಸ್ವಿಂಡನ್ ಗೆ ಕಾಲಿಟ್ಟರು. ಅಂದಿನಿಂದ . ಅವತ್ತಿನಿಂದ ಅದೇ ಅವರ ಮನೆಯಾಗಿ ಅಲ್ಲಿಯೇ ವಾಸವಿದ್ದಾರೆ.&lt;/p&gt;&lt;p&gt;ಈ ಮಧ್ಯೆ 2010 ರಲ್ಲಿ ಅಲ್ಲಿನ ಪ್ರಮುಖ ರಾಜಕೀಯ ಪಕ್ಷ ಕನ್ಸರ್ವೇಟಿವ್ ಸದಸ್ಯತ್ವ ಪಡೆದರು. 2017 ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ಯಾರಿಷ್&zwnj;ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು ಈಗ ಬರೋ ಕೌನ್ಸಿಲ್&zwnj;ಗೆ ಎರಡನೇ ಬಾರಿ ಗೆದ್ದಿದ್ದಾರೆ.&lt;/p&gt;&lt;p&gt;ಅವರು ಕನ್ಸರ್ವೇಟಿವ್ ಪಾರ್ಟಿಯಲ್ಲಿ ಡೆಪ್ಯುಟಿ ಚೇರ್ಮನ್ ಆಗಿ ಕೆಲಸ ಮಾಡಿದ್ದರು. ಆಮೇಲೆ ಬರೋ ಕೌನ್ಸಿಲ್ ಎಲೆಕ್ಷನ್&zwnj;ಗೆ ನಿಂತು, 2022 ರಲ್ಲಿ ಬರೋ ಕೌನ್ಸಿಲ್&zwnj;ಗೆ ಆಯ್ಕೆಯಾದರು. ಈಗ 2026 ರಲ್ಲಿ ಜನರು ಮತ್ತೊಮ್ಮೆ ಗೆಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ರಾಜಕೀಯದ ಬಗ್ಗೆ ಸುರೇಶ್ ಮಾತು&lt;/strong&gt;&lt;/h3&gt;&lt;p&gt;&lsquo;ನನಗೆ ರಾಜಕೀಯದಲ್ಲಿ ಮುಂಚಿನಿಂದಲೂ ತುಂಬಾ ಆಸಕ್ತಿಯಿತ್ತು. ನಮ್ಮ ಭಾರತದಲ್ಲಿದ್ದಾಗ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಜನತಾ ಪಕ್ಷದ ಸ್ಟೂಡೆಂಟ್ ವಿಂಗ್&zwnj;ನಲ್ಲಿ ಕೆಲಸ ಮಾಡಿದ ಅನುಭವವಿತ್ತು. ಆದರೆ ಆಮೇಲೆ ಅದು ಡಿಸ್ಕಂಟಿನ್ಯೂ ಆಯ್ತು. ಈಗ ದೇವರ ಅನುಗ್ರಹದಿಂದ ಯುನೈಟೆಡ್ ಕಿಂಗ್&zwnj;ಡಮ್&zwnj;ಗೆ ಬಂದು ಇಲ್ಲಿ ಕೌನ್ಸಿಲ್ ಎಲೆಕ್ಷನ್&zwnj;ನಲ್ಲಿ ನಿಂತು ಗೆದ್ದಿದ್ದೇವೆ. ನಾನೊಬ್ಬನೇ ಅಲ್ಲ, ಬೇರೆ ಸಾಕಷ್ಟು ಭಾರತೀಯರು ಯುನೈಟೆಡ್ ಕಿಂಗ್&zwnj;ಡಮ್&zwnj;ನಾದ್ಯಂತ ರಾಜಕೀಯದಲ್ಲಿ ಭಾಗವಹಿಸುತ್ತಿದ್ದಾರೆ. ಏಕೆಂದರೆ ನಮ್ಮ ಧ್ವನಿ ಸ್ಥಳೀಯ ಮಟ್ಟದಲ್ಲಿ ಕೇಳಬೇಕಾಗುತ್ತದೆ, ಆ ಕಾರಣದಿಂದ ನಾನು ಪೊಲಿಟಿಕಲ್ ಸಿಸ್ಟಮ್ ಸೇರಿಕೊಂಡೆ&rsquo; ಎನ್ನುವುದು ಸುರೇಶ್&zwnj; ಅವರ ಮಾತು.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl"/>
        </item>
        <item>
            <title><![CDATA[SSLC ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳಿಗೆ ಬೆಳ್ಳಿ ಪೆನ್ ವಿತರಣೆ]]></title>
            <link>https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</link>
            <guid isPermaLink="true">https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</guid>
            <pubDate>Thu, 09 Jul 2026 08:37:29 +0530</pubDate>
            <description><![CDATA[&lt;p&gt;2025-26ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಶಿವ ಜ್ಯೂವರೆಲ್ಸ್ ವತಿಯಿಂದ ಬೆಳ್ಳಿಯ ಪೆನ್ನುಗಳನ್ನು ವಿತರಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2dda7tgqmspdmpepzf2sqp,imgname-silver-pen-1783566346490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ:&lt;/strong&gt; 2025-26 ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಪೂರ್ಣಾಂಕಗಳನ್ನು ಪಡೆದಿರುವ ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.&lt;/p&gt;&lt;h2&gt;&lt;strong&gt;ಶಿವ ಜ್ಯೂವರೆಲ್ಸ್ ಮಾಲೀಕರಿಂದ ಬೆಳ್ಳಿ ಪೆನ್ ವಿತರಣೆ&lt;/strong&gt;&lt;/h2&gt;&lt;p&gt;ನಗರದ ರಾಧಾಕೃಷ್ಣ ಪಾರ್ಟಿ ಹಾಲ್&zwnj;ನಲ್ಲಿ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ 35 ವಿದ್ಯಾರ್ಥಿಗಳಿಗೆ ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯೂವರೆಲ್ಸ್ ಮಾಲೀಕ ಬೆಳ್ಳಿಯ ಪೆನ್ನನ್ನು ನೀಡಿದರು.&lt;/p&gt;&lt;p&gt;ಶಿವ ಜ್ಯೂವರೆಲ್ಸ್ ಮಾಲೀಕ ಮಾತನಾಡಿ, ಬುದ್ದಿವಂತರಾಗಿ, ಜ್ಞಾನವಂತರಾಗಿ, ಕನಡಮ್ಮನ ಸೇವೆ ಮಾಡಿ ನಿಮ್ಮ ಭವಿಷ್ಯವನ್ನು ಸುಂದವಾಗಿಸಿಕೊಳ್ಳಿರೆಂದು ಆಶಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ&lt;/strong&gt;&lt;/p&gt;&lt;p&gt;ಎನ್.ವಿ. ಶ್ರೀನಿವಾಸನ್, ಕಾಗತಿ ವೆಂಕಟರತ್ನಂ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಚಲಪತಿಗೌಡ, ದೇವರ ಮಳ್ಳೂರು ಮಹೇಶ್, ಸ್ವರ್ಣಗೌರಿ, ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಕೆಜಿಎಫ್ ಕವಿಯತ್ರಿ ರಾಧಾ ಡಿ ಪ್ರಕಾಶ್, ರಮಣರೆಡ್ಡಿ, ವೆಂಕಟೇಶಪ್ಪ, ಚೇಳೂರು ರಾಧಾಮಣಿ ಪಾಲ್ಗೊಂಡಿದ್ದರು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಬೆಂಗಳೂರಿನಿಂದ ಕೇವಲ 1 ಗಂಟೆ ದೂರದಲ್ಲಿದೆ 'ಡೇಂಜರಸ್ ಯು-ಟರ್ನ್'; ಶಿವನ ಪಾದ ಸೇರಿದ 30ಕ್ಕೂ ಹೆಚ್ಚು ಜನ]]></title>
            <link>https://kannada.asianetnews.com/karnataka-districts/dangerous-u-turn-chikkaballapura-1-hour-away-from-bengaluru-more-than-30-deaths-sat/articleshow-a6fyw2d</link>
            <guid isPermaLink="true">https://kannada.asianetnews.com/karnataka-districts/dangerous-u-turn-chikkaballapura-1-hour-away-from-bengaluru-more-than-30-deaths-sat/articleshow-a6fyw2d</guid>
            <pubDate>Tue, 08 Sep 2026 13:15:04 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 1 ಗಂಟೆ ದೂರಲದಲ್ಲಿದೆ ಈ ಡೇಂಜರಸ್ ಯೂ-ಟರ್ನ್&zwnj;. ನೀವು ಅಪ್ಪಿ-ತಪ್ಪಿಯೂ ಇಲ್ಲಿ ಮಾತ್ರ ತಿರುವು ತೆಗೆದುಕೊಳ್ಳಬೇಡಿ. ಲಿಂಗಶೆಟ್ಟಿಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 44, ಎರಡು ವರ್ಷಗಳಲ್ಲಿ 30ಕ್ಕೂ ಹೆಚ್ಚು ಸಾವುಗಳಿಗೆ ಸಾಕ್ಷಿಯಾಗಿ 'ಸಾವಿನ ತಾಣ'ವೆನಿಸಿದೆ. ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zzdscvm4dy1wkw9mrw51fh,imgname-chikkamagaluru-road-dangerous-u-turn-1788853282198.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಸೆ.08): ಬೆಂ&lt;/strong&gt;ಗಳೂರಿನಿಂದ ಕೇವಲ 1 ಗಂಟೆ ದೂರದ ಪ್ರಯಾಣದಲ್ಲಿರುವ ಚಿಕ್ಕಮಗಳೂರು&lt;strong&gt; &lt;/strong&gt;ತಾಲೂಕಿನ ಲಿಂಗಶೆಟ್ಟಿಪುರ ಗೇಟ್ ಬಳಿ ಹಾದುಹೋಗುವ ಬೆಂಗಳೂರು-ಹೈದರಾಬಾದ್ &lsquo;ರಾಷ್ಟ್ರೀಯ ಹೆದ್ದಾರಿ 44 ಸಾವಿನ ತಾಣ ಅಥವಾ ಬ್ಲಾಕ್ ಸ್ಪಾಟ್ ಎಂದು ಕುಖ್ಯಾತಿ ಪಡೆದಿದೆ.&lt;/p&gt;&lt;p&gt;ಕಳೆದ ಎರಡು ವರ್ಷಗಳಲ್ಲಿ ಇದೇ ಸ್ಥಳದಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಇಶಾ ಫೌಂಡೇಶನ್​ನಿಂದ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಉತ್ತರ ಭಾರತದ ದಂಪತಿ ಬೈಕ್&zwnj;ನಲ್ಲಿ ತೆರಳುತ್ತಿದ್ದಾಗ ಟ್ರಕ್&zwnj;ಗೆ ಡಿಕ್ಕಿ ಹೊಡೆದು ನಂತರ ದಂಪತಿ ಮೇಲೆ ಟ್ರಕ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿತ್ತು.&lt;/p&gt;&lt;p&gt;ಈ ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಸ್ತೆ ಸುರಕ್ಷತಾ ಕ್ರಮಗಳ ಕೊರತೆಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಯಾವುದೇ ಹಂಪ್&zwnj;ಗಳು, ಸೂಚನಾ ಫಲಕಗಳು ಇಲ್ಲದಿರುವುದು ಪದೇಪದೇ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ದೂರಿದರು.&lt;/p&gt;&lt;h2&gt;&lt;strong&gt;ಡೇಂಜರ್ ಯೂ-ಟರ್ನ್&lt;/strong&gt;&lt;/h2&gt;&lt;p&gt;ಪ್ರತಿಭಟನೆಯ ನಂತರ, ಆರ್&zwnj;ಟಿಓ, ಪಿಡಬ್ಲ್ಯೂಡಿ, ಎನ್&zwnj;ಹೆಚ್&zwnj;ಎಐ ಮತ್ತು ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಯಾಣಿಕರ ಸುರಕ್ಷತೆಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಹೊಸ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. ಇಶಾ ಫೌಂಡೇಶನ್&zwnj;ನಿಂದ ಬೆಂಗಳೂರಿಗೆ ಹಿಂದಿರುಗುವವರು ನೇರವಾಗಿ ಹೆದ್ದಾರಿಗೆ ಪ್ರವೇಶಿಸುವ ಬದಲು, ಎಡಕ್ಕೆ ತಿರುಗಿ ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯು-ಟರ್ನ್ ಮಾಡಿಕೊಂಡು ಬೆಂಗಳೂರಿನತ್ತ ಸಾಗುವಂತೆ ಬ್ಯಾರಿಕೇಡ್&zwnj;ಗಳನ್ನು ಅಳವಡಿಸಲಾಗಿದೆ. ಆದರೆ ಕಾರ್ ಮತ್ತು ವ್ಯಾನ್ ಹಾಗೂ ಬಸ್ ಗಳವರಲ್ಲಿ ಹಲವರು ಸೇಠ್ ದಿನ್ನೆಯ ವರೆಗೂ ಹೋಗದೇ ದೇವಸ್ಥಾನದ ಹೊಸಹಳ್ಳಿ ಗೇಟ್ ಬಳಿಯೇ ಯೂಟರ್ನ್ ತೆಗೆದು ಕೊಳ್ಳುತ್ತಾರೆ.&lt;/p&gt;&lt;p&gt;ಇನ್ನು ಮುಂದುವರೆದು ದ್ವಿಚಕ್ರ ವಾಹನ ಸವಾರರಂತೂ ಲಿಂಗಶೆಟ್ಟಿಪುರ ಗೇಟ್ ಬಳಿ ಹೆದ್ದಾರಿಗೆ ಹಾಕಿರುವ ಬ್ಯಾರಿಕೇಡ್ ಸರಿಸಿ ಹೆದ್ದಾರಿ ದಾಟುತ್ತಾರೆ. ಇನ್ನು ಕೆಲವರು ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯು-ಟರ್ನ್ ಮಾಡಿಕೊಂಡು ಸಾಗಲು 3-4 ಕಿಲೋ ಮೀಟರ್ ಆಗುತ್ತದೆ ಎಂದು ಹೂನೆಗಲ್ ಬಳಿಯ ಬ್ಯಾರಿಕೇಡ್ ನ ಸಂದಿಯಲ್ಲಿಯೇ ಯೋಟರ್ನ ಪಡೆಯುತ್ತಾರೆ.&lt;/p&gt;&lt;h2&gt;&lt;strong&gt;ಜೀವಕ್ಕೆ ಮಾರಕವಾದ ಯೂ-ಟರ್ನ್&lt;/strong&gt;&lt;/h2&gt;&lt;p&gt;ಸೇಠ್ ದಿನ್ನೆ ಬಳಿಯ ಫ್ಲೈಓವರ್ ಕೆಳಗೆ ಯುಟರ್ನ್ ಮಾಡಿಕೊಂಡು ಸಾಗಿದಲ್ಲಿ ಸಾಕಷ್ಟು ಸೇಫ್ಟಿ ಪ್ರಯಾಣವಾಗುತ್ತದೆ. ಆದರೆ ಈ ರೀತಿ ಎಲ್ಲೆಂದರಲ್ಲೇ ಯೂಟರ್ನ್ ತೆಗೆದು ಕೊಳ್ಳುವುದರಿಂದ ಇವರ ಜೀವಕ್ಕೆ ಅಲ್ಲದೇ ಅತ್ತ ಕಡೆಯಿಂದ ಬರುವ ವಾಹನಗಳವರ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಎಂಬುದು ವಾಹನ ಸವಾರರ ದೂರಾಗಿದ್ದು, ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/dangerous-u-turn-chikkaballapura-1-hour-away-from-bengaluru-more-than-30-deaths-sat/articleshow-a6fyw2d"/>
        </item>
        <item>
            <title><![CDATA[Chikkaballapur: ಆಯತೊಲ್ಲಾ ಖಮೇನಿಗೆ ಅಲಿಪುರ ಗ್ರಾಮಸ್ಥರ ಅಂತಿಮ ವಿದಾಯ]]></title>
            <link>https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit</link>
            <guid isPermaLink="true">https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit</guid>
            <pubDate>Sat, 11 Jul 2026 07:54:58 +0530</pubDate>
            <description><![CDATA[&lt;p&gt;ಇರಾನ್&zwnj;ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು. ದಶಕಗಳ ಹಿಂದೆ ಖಮೇನಿ ಈ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ, ಗ್ರಾಮಸ್ಥರು ಅಂತ್ಯಕ್ರಿಯೆಯ ನೇರಪ್ರಸಾರ ವೀಕ್ಷಿಸಿ, ಮೂರು ದಿನಗಳ ಶೋಕಾಚರಣೆ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx7fqctr09defkna0mxad607,imgname-khamenie-1783736546136.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು: &lt;/strong&gt;ಇರಾನ್&zwnj;ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು.&lt;/p&gt;&lt;p&gt;ಗ್ರಾಮದಲ್ಲಿ ಇರುವ ಬಹುತೇಕ ಮುಸ್ಲಿಂ ಸಮುದಾಯದವರು ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿರುವ ಶಿಯಾ ಮುಸ್ಲಿಮರು. 4 ದಶಕಗಳ ಹಿಂದೆ ಖುದ್ದು ಆಯಾತೊಲ್ಲಾ ಅಲಿ ಖಮೇನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದ್ದರಿಂದ ಧಾರ್ಮಿಕ ಗುರು ಖಮೇನಿ ಮೇಲೆ ಎಲ್ಲಿಲ್ಲದ ಪ್ರೀತಿ ತೋರ್ಪಡಿಸುತ್ತಿದ್ದರು.&lt;/p&gt;&lt;p&gt;ಅಮೆರಿಕ ಮತ್ತು ಇಸ್ರೇಲ್ ಫೆ.28ರಂದು ನಡೆಸಿದ ಜಂಟಿ ದಾಳಿಯಲ್ಲಿ ಆಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಾಗ ಇಡೀ ಅಲಿಪುರ ಗ್ರಾಮ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತಲ್ಲದೆ ಸಾವಿರಾರು ಗ್ರಾಮಸ್ಥರು ಗ್ರಾಮದಲ್ಲಿ ಮೌನ ಮೆರವಣಿಗೆ ನಡೆಸಿ, ಸಂತಾಪ ಸೂಚಿಸಿದ್ದರು. ಇಸ್ರೇಲ್ ಹಾಗೂ ಅಮೆರಿಕ ನಾಶವಾಗುತ್ತವೆ ಎಂದು ಶಾಪಹಾಕಿದ್ದರು. ಗ್ರಾಮದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಿದ್ದರು. ಈ ಕಾರಣಕ್ಕೆ ಗ್ರಾಮ ಇಡೀ ದೇಶದ ಗಮನ ಸೆಳೆದಿತ್ತು.&lt;/p&gt;&lt;h2&gt;&lt;strong&gt;ಅಂತ್ಯ ಕ್ರಿಯೆ ನೇರಪ್ರಸಾರ&lt;/strong&gt;&lt;/h2&gt;&lt;p&gt;ಜು. 9ರಂದು ಇರಾನ್ನ ಮಶಾದ್&zwnj;ನಲ್ಲಿ ನಡೆಯಲಿರುವ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ವೀಕ್ಷಿಸಲು ಗ್ರಾಮದ ಅಸ್ತೇನಿ ಮಸೀದಿ ಒಳಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ನೇರಪ್ರಸಾಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1500-2000 ಮಂದಿ ಭಾಗವಹಿಸಿದ್ದರು. ಜೊತೆಗೆ ಪ್ರಾರ್ಥನೆ ಸಲ್ಲಿಸಿ, ತಮ್ಮ ನಾಯಕನಿಗೆ ಭಕ್ತಿ ಭಾವದಿಂದ ಅಂತಿಮ ವಿದಾಯ ಹೇಳಿದರು.&lt;/p&gt;&lt;h3&gt;&lt;strong&gt;20 ಮಂದಿ ಭಾಗಿ&lt;/strong&gt;&lt;/h3&gt;&lt;p&gt;ಇರಾನ್ನ ಮಶಾದ್ ನಗರದಲ್ಲಿ ನಡೆಯಲಿರುವ ಅಂತಿಮ ವಿಧಿ ವಿದಾನಗಳಲ್ಲಿ ನೇರವಾಗಿ ಭಾಗವಹಿಸಲು ಅಲಿಪುರ ಗ್ರಾಮದಿಂದ 20 ಮಂದಿ ತೆರಳಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit"/>
        </item>
        <item>
            <title><![CDATA[Pradeep Eshwar: ಚಪ್ಪಲಿ ಎಸೆತ ಕೇಸ್; ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ವಿರುದ್ಧ ಮತ್ತೊಂದು ದೂರು]]></title>
            <link>https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5</link>
            <guid isPermaLink="true">https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5</guid>
            <pubDate>Tue, 30 Jun 2026 05:47:32 +0530</pubDate>
            <description><![CDATA[&lt;p&gt;ಶಾಸಕ ಪ್ರದೀಪ್ ಈಶ್ವರ ವಿರುದ್ಧ ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಇದೀಗ ಎನ್&zwnj;ಡಿಎ ಮುಖಂಡರು ಸಹ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆದ ಗಲಭೆಗೆ ಪ್ರದೀಪ್ ಈಶ್ವರ್ ಅವರೇ ಕಾರಣ ಎಂದು ಎಸ್&zwnj;ಪಿಗೆ ಎನ್&zwnj;ಡಿಎ ಮುಖಂಡರು ದೂರು ನೀಡಿದ್ದಾರೆ. ಅಷ್ಟಕ್ಕೂ ಕನ್ನಡಭವನದಲ್ಲಿ ನಡೆದಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kway2tgw043jzmma9y7jsr7f,imgname----------------------57--1782778522140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚಿಕ್ಕಬಳ್ಳಾಪುರ (ಜೂ.30): &lt;/strong&gt;ನಾಡಪ್ರಭು ಕೆಂಪೇಗೌಡ ಜಯಂತಿ(Nadaprabhu kempegowda jayanti)ಯಂದು ಶನಿವಾರ ನಗರದ ಕನ್ನಡ ಭವನ(Kannada bhavan)ದಲ್ಲಿ ನಡೆದ ಗಲಭೆಗೆ ಶಾಸಕ ಪ್ರದೀಪ್&zwnj; ಈಶ್ವರ್(MLA Pradeep Eshwar) ಅವರು ಕಾರಣ ಎಂದು ಆರೋಪಿಸಿ ಎನ್&zwnj;ಡಿಎ(NDA) ಮಖಂಡರು ಎಸ್ಪಿಗೆ ದೂರು ನೀಡಿದರು.&lt;/p&gt;&lt;p&gt;ನಗರ ಹೊರವಲಯದ ಎಸ್ಪಿ ಕಚೇರಿ ಬಳಿಗೆ ಸೋಮವಾರ ತೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಎನ್&zwnj;ಡಿಎ ಮುಖಂಡರು ಎಸ್&zwnj;ಪಿ ಕುಶಲ್ ಚೌಕ್ಸೆಗೆ ಲಿಖಿತ ದೂರು ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lt;/strong&gt;ಶಾಸಕ ಪ್ರದೀಪ್ ಈಶ್ವರ್ 'ಮೀಸೆ ತಿರುವಿ, ತೊಡೆ ತಟ್ಟಿ ಪ್ರಚೋದನೆ' ಆರೋಪ: ದೂರು ದಾಖಲಿಸಿದ ಜೆಡಿಎಸ್&lt;/p&gt;&lt;p&gt;ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ಯ ವಿಷಯಗಳಿಗೆ ಚಿಕ್ಕಬಳ್ಳಾಪುರ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲ್ಲಿ ಸೇರಿದ್ದ ಯುವಕರಿಗೆ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂದು ಹಾಗೂ ಪ್ರಚಾರ ಪ್ರಿಯತೆಗಾಗಿ ಸಮುದಾಯದ ಹುಡುಗರನ್ನು ಪ್ರಚೋಚನೆ ಮಾಡಿದ ಪರಿಣಾಮ ಗಲಭೆಗೆ ಸಂಪೂರ್ಣ ಕಾರಣ ಶಾಸಕ ಪ್ರದೀಪ್ ಈಶ್ವರ್ ಅವರೇ ಆಗಿದ್ದಾರೆ. ಈ ಕೂಡಲೇ ಅವರನ್ನು ಮೊದಲನೇ ಆರೋಪಿಯಾಗಿ ಮಾಡುವ ಮೂಲಕ ಕಾನೂನು ಸಮಾಜದಲ್ಲಿ ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತು ಮಾಡಬೇಕೆಂದು ಆಗ್ರಹಿಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5"/>
        </item>
        <item>
            <title><![CDATA[ಕರ್ತವ್ಯದೂರಿನಲ್ಲೇ ಅನಾಥ ಶವವಾದ ಸರ್ಕಾರಿ ಅಧಿಕಾರಿ! ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ!]]></title>
            <link>https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</link>
            <guid isPermaLink="true">https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</guid>
            <pubDate>Fri, 11 Sep 2026 12:38:45 +0530</pubDate>
            <description><![CDATA[&lt;p&gt;ಹಾಸನದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಿದ್ದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣ ಒಬ್ಬರೇ ವಾಸಿಸುತ್ತಿದ್ದ ಅವರ ಸಾವು, ಕಚೇರಿ ಸಿಬ್ಬಂದಿ ಕರೆ ಮಾಡಿದಾಗ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m27mnfzax8ddnmabz9jdswyw,imgname-hassan-govt-officer-death-1789110435817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸೆ.11): ಇ&lt;/strong&gt;ಡೀ ಕುಟುಂಬವು ಚೆನ್ನಾಗಿರಲೆಂದು ಬೆಂಗಳೂರಿನಲ್ಲಿ ಬಿಟ್ಟು ಸರ್ಕಾರಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸವಾಗಿದ್ದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಾಗಿದ್ದ ಮನೆಯಲ್ಲಿ ಅನಾಥವಾಗಿ ಶವವಾಗಿದ್ದಾರೆ. ಜೀವನ ಪೂರ್ತಿ ಕುಟುಂಬ ನೆಮ್ಮದಿಗಾಗಿ ದುಡಿಯುತ್ತಿದ್ದ ಸರ್ಕಾರಿ ಅಧಿಕಾರಿ ತಮ್ಮ ಸಾವಿನ ಕೊನೆಯ ಕ್ಷಣಗಳಲ್ಲಿ ಕುಟುಂಬದ ಒಬ್ಬರೇ ಒಬ್ಬ ಸದಸ್ಯರೂ ಆಸರೆಯೂ ಸಿಗಲಿಲ್ಲ.&lt;/p&gt;&lt;p&gt;ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ (55) ಅವರು ತೀವ್ರ ಹೃದಯಾಘಾತದಿಂದ ಏಕಾಏಕಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಫೋನ್ ರಿಸೀವ್ ಮಾಡದಿದ್ದಾಗ ಬೆಳಕಿಗೆ ಬಂತು ದುರಂತ:&lt;/strong&gt;&lt;/h2&gt;&lt;p&gt;ಡಾ.ವೆಂಕಟೇಶ್ ಅವರು ಎಂದಿನಂತೆ ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿ ತಮ್ಮ ಬಾಡಿಗೆ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಅಗತ್ಯ ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಸಕಲೇಶಪುರದಲ್ಲಿರುವ ಅವರ ಮನೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಡಾ.ವೆಂಕಟೇಶ್ ಅವರು ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪರಿಶೀಲಿಸಿದಾಗ, ಅವರು ರಾತ್ರಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಮೂಲತಃ ಚಿಕ್ಕಬಳ್ಳಾಪುರದವರು:&lt;/strong&gt;&lt;/h2&gt;&lt;p&gt;ಮೃತ ಡಾ.ವೆಂಕಟೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಸಕಲೇಶಪುರ ಪಟ್ಟಣದಲ್ಲಿ ಒಬ್ಬರೇ ವಾಸವಿದ್ದರು.&lt;/p&gt;&lt;h3&gt;ಕಂಬನಿ ಮಿಡಿದ ಸಿಬ್ಬಂದಿ, ರೈತರು:&lt;/h3&gt;&lt;p&gt;ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri"/>
        </item>
        <item>
            <title><![CDATA[25 ವರ್ಷಗಳ ಬಳಿಕ ಬೈರಗಾನಹಳ್ಳಿ ಗ್ರಾಮದಲ್ಲಿ ಸಪ್ಪಲಮ್ಮದೇವಿಯ ಮೆರವಣಿಗೆ; ಹಬ್ಬದ ಸಂಭ್ರಮ]]></title>
            <link>https://kannada.asianetnews.com/karnataka-districts/chikkaballapur-sidlaghatta-sappalammadevi-procession-jatre-in-bairaganahalli-village-after-25-years-mrq/articleshow-i9g71gu</link>
            <guid isPermaLink="true">https://kannada.asianetnews.com/karnataka-districts/chikkaballapur-sidlaghatta-sappalammadevi-procession-jatre-in-bairaganahalli-village-after-25-years-mrq/articleshow-i9g71gu</guid>
            <pubDate>Sat, 29 Aug 2026 10:37:05 +0530</pubDate>
            <description><![CDATA[ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿ ಗ್ರಾಮದಲ್ಲಿ ಸುಮಾರು 25 ವರ್ಷಗಳ ನಂತರ ಸಪ್ಪಲಮ್ಮದೇವಿ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು. ಗ್ರಾಮದ ಯುವಕರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವು, ಊರಿನ ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರನ್ನೂ ಒಗ್ಗೂಡಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m15yesxfe3nk1crmb5nxz0m1,imgname-sappalammadevi-procession-1787979851694.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ:&lt;/strong&gt; ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಬೈರಗಾನಹಳ್ಳಿ ಗ್ರಾಮದಲ್ಲಿ ಬಹಳ ವರ್ಷಗಳ ನಂತರ ಸಪ್ಪಲಮ್ಮದೇವಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸುಮಾರು 25 ವರ್ಷಗಳ ನಂತರ ನಡೆದ ಈ ಮೆರವಣಿಗೆ ಗ್ರಾಮಸ್ಥರ ಪಾಲಿಗೆ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿರದೆ ಹಳೆಯ ನೆನಪುಗಳನ್ನು ಜೀವಂತಗೊಳಿಸಿದ ಅಪರೂಪದ ಕ್ಷಣವಾಗಿತ್ತು.&lt;/p&gt;&lt;h2&gt;&lt;strong&gt;ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ&lt;/strong&gt;&lt;/h2&gt;&lt;p&gt;ಊರಿನ ಹಿರಿಯರು, ಮುಖಂಡರು, ಮಹಿಳೆಯರು, ಮಕ್ಕಳು ಹಾಗೂ ಮುಖ್ಯವಾಗಿ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಮನೆಗಳ ಮುಂದೆ ಹಾಕಿದ ಸುಂದರ ರಂಗೋಲಿ, ಬೀದಿಗಳಲ್ಲಿ ಕಂಗೊಳಿಸಿದ ಮಾವಿನ ತೋರಣ, ಮೊಳಗಿದ ತಮಟೆಯ ಸದ್ದುಬೈರಗಾನಹಳ್ಳಿಯ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.&lt;/p&gt;&lt;h3&gt;&lt;strong&gt;ಊರಿನ ಎಲ್ಲರಿಗೂ ಊಟದ ವ್ಯವಸ್ಥೆ&lt;/strong&gt;&lt;/h3&gt;&lt;p&gt;ಈ ಅದ್ಭುತ ಕಾರ್ಯಕ್ರಮದ ಹಿಂದೆ ನಮ್ಮ ಗ್ರಾಮದ ಯುವಕರ ಶ್ರಮ ಮತ್ತು ಉತ್ಸಾಹ ಬಹಳ ದೊಡ್ಡದು. ವಿಶೇಷವಾಗಿ ಯುವಕರ ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಹಿಸಿದ ಜವಾಬ್ದಾರಿ ನಿಜಕ್ಕೂ ಶ್ಲಾಘನೀಯ ಎಂದು ಗ್ರಾಮದ ಹಿರಿಯ ಮುಖಂಡರು ಅಭಿಪ್ರಾಯಪಟ್ಟರು. ಯುವಕರು ಮನಸ್ಸು ಮಾಡಿದರೆ ಊರಿನಲ್ಲಿ ಎಂತಹ ಒಳ್ಳೆಯ ಬದಲಾವಣೆ ತರಬಹುದು ಎಂಬುದಕ್ಕೆ ಈ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;ವಿಶೇಷ ಚೇತನ ತಂದೆ-ತಾಯಿಗೆ ಧ್ವನಿಯಾದ ಮುದ್ದು ಕಂದಮ್ಮ; ಹೃದಯಸ್ಪರ್ಶಿ ವಿಡಿಯೋ ವೈರಲ್&lt;/strong&gt;&lt;/p&gt;&lt;p&gt;ಊರಿನ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ರತ್ನಮ್ಮನ ಮಗ ಮಧು ಅವರ ಸೇವಾಭಾವನೆ ವಿಶೇಷವಾಗಿ ಪ್ರಶಂಸನೀಯ ಎಂದು ಕೊಂಡಾಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Pradeep Eshwar: ಚಪ್ಪಲಿ ಎಸೆತ ಕೇಸ್; ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ಪ್ರದೀಪ್&zwnj; ಈಶ್ವರ್&zwnj; ವಿರುದ್ಧ ಮತ್ತೊಂದು ದೂರು&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-sidlaghatta-sappalammadevi-procession-jatre-in-bairaganahalli-village-after-25-years-mrq/articleshow-i9g71gu"/>
        </item>
        <item>
            <title><![CDATA[Amandeep Singh Jagade: ಮ್ಯಾರಥಾನಲ್ಲಿ ಓಡುವಾಗಲೇಕುಸಿದು ಕ್ರೀಡಾಪಟು ಸಾವು!]]></title>
            <link>https://kannada.asianetnews.com/karnataka-districts/athlete-amandeep-singh-jagade-dies-after-collapsing-during-marathon-in-nadi-hills-chikkaballapur-rav/articleshow-k8aon28</link>
            <guid isPermaLink="true">https://kannada.asianetnews.com/karnataka-districts/athlete-amandeep-singh-jagade-dies-after-collapsing-during-marathon-in-nadi-hills-chikkaballapur-rav/articleshow-k8aon28</guid>
            <pubDate>Mon, 10 Aug 2026 05:21:54 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿ ನಡೆದ ನಂದಿ ಹಿಲ್ಸ್&zwnj; ಮಾನ್ಸೂನ್ ಮ್ಯಾರಥಾನ್&zwnj;ನಲ್ಲಿ 21 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಪಂಜಾಬ್ ಮೂಲದ 31 ವರ್ಷದ ಅಮನ್ ದೀಪ್ ಸಿಂಗ್ ಜಗಡೆ ಮೃತಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmeespkbe49m9gdyx768k8z,imgname-----------------------2026-08-10t051117.226-1786318907091.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಆ.10): &lt;/strong&gt;ನಂದಿ ಹಿಲ್ಸ್&zwnj; ಮಾನ್ಸೂನ್ ಮ್ಯಾರಥಾನ್&zwnj;(Nandi Hills Monsoon Marathon) ವೇಳೆ 21 ಕಿ.ಮೀ. ಓಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುವೊಬ್ಬರು ಓಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ನಡೆದಿದೆ.&lt;/p&gt;&lt;h2&gt;ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ ಸಾವು&lt;/h2&gt;&lt;p&gt;ಪಂಜಾಬ್ ಮೂಲದ ಅಮನ್ ದೀಪ್ ಸಿಂಗ್ ಜಗಡೆ (31) ಮೃತ ಕ್ರೀಡಾಪಟು. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್&zwnj;ನಲ್ಲಿ ಇರುವ ಖಾಸಗಿ ಕಂಪನಿಯೊಂದರಲ್ಲಿ ಅಮನ್ ದೀಪ್ ಸಿಂಗ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;h3&gt;ಬೆಟ್ಟದ ಅರ್ಧ ಭಾಗಕ್ಕೆ ಬರ್ತಿದ್ದಂತೆ ಕುಸಿದುಬಿದ್ದ ಕ್ರೀಡಾಪಟು ಸಾವು&lt;/h3&gt;&lt;p&gt;ಭಾನುವಾರ ನಂದಿ ಹಿಲ್ಸ್&zwnj; ಮಾನ್ಸೂನ್ ಮ್ಯಾರಥಾನ್&zwnj;ನಲ್ಲಿ 10 ಹಾಗೂ ಕಿ.ಮೀ. ವಿಭಾಗಗಳಲ್ಲಿ ಓಟವನ್ನು ಏರ್ಪಡಿಸಲಾಗಿತ್ತು. 4,500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಪೈಕಿ ಅಮನ್ ದೀಪ್ ಸಿಂಗ್ ಅವರು 21 ಕಿ.ಮೀ ಮ್ಯಾರಥಾನ್&zwnj;ನಲ್ಲಿ ಪಾಲ್ಗೊಂಡಿದ್ದರು. ನಂದಿ ಬೆಟ್ಟದ ಅರ್ಧ ಭಾಗದಷ್ಟು ಓಟವನ್ನು ಪೂರ್ಣಗೊಳಿಸಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/athlete-amandeep-singh-jagade-dies-after-collapsing-during-marathon-in-nadi-hills-chikkaballapur-rav/articleshow-k8aon28"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ರಾತ್ರೋರಾತ್ರಿ 2500 ಕೆಜಿ ದ್ರಾಕ್ಷಿ ಕದ್ದ ಕಳ್ಳರು, ಕಣ್ಣೀರಿಟ್ಟ ರೈತ!]]></title>
            <link>https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz</link>
            <guid isPermaLink="true">https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz</guid>
            <pubDate>Thu, 16 Jul 2026 22:58:40 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರದ ರೈತ ಬಸವರಾಜ್ ಅವರ ತೋಟದಿಂದ ಕಟಾವಿಗೆ ಸಿದ್ಧವಾಗಿದ್ದ 2.5 ಟನ್ 'ರೆಡ್ ಗ್ಲೋಬ್' ದ್ರಾಕ್ಷಿಯನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnzewrwyqky1kyczqe8h04c,imgname-red-globe-1784222806673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜು.16): &lt;/strong&gt;ಕೆಲವೊಮ್ಮೆ ಕೃಷಿಯ ಅತಿ ದೊಡ್ಡ ಸುಗ್ಗಿಯ ಕಥೆಯು ಕೈಗೆ ಬಂದ ಇಳುವರಿಯ ಬಗ್ಗೆ ಇರುವುದಿಲ್ಲ; ಬದಲಿಗೆ, ರೈತನ ಕಣ್ಣೆದುರೇ ರಾತ್ರೋರಾತ್ರಿ ಮಾಯವಾಗುವ ಬೆಳೆಯ ಕಣ್ಣೀರ ಕಥೆಯಾಗಿರುತ್ತದೆ! ಇಂತಹದ್ದೇ ಒಂದು ಸಿನಿಮಾ ಶೈಲಿಯ ಕಳ್ಳತನ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ಘಟಿಸಿದೆ. ಕಟಾವಿಗೆ ಕೇವಲ ಕೆಲವೇ ದಿನಗಳು ಬಾಕಿ ಇರುವಾಗ ದುಷ್ಕರ್ಮಿಗಳು ರೈತನ ತೋಟಕ್ಕೆ ನುಗ್ಗಿ ಸುಮಾರು 2.5 ಟನ್ ತೂಕದ ಅತ್ಯಂತ ದುಬಾರಿ ತಳಿಯ &lsquo;ರೆಡ್ ಗ್ಲೋಬ್&rsquo; (Red Globe) ದ್ರಾಕ್ಷಿಯನ್ನು ಕಳವು ಮಾಡಿದ್ದಾರೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ ಬಸವರಾಜ್, ಖಾಲಿ ಬಳ್ಳಿಗಳನ್ನು ನೋಡುತ್ತಾ ಕಣ್ಣೀರು ಹಾಕುವಂತಾಗಿದೆ.&lt;/p&gt;&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪವಿರುವ ಕೊಲವನಹಳ್ಳಿ ಗ್ರಾಮದ ಎರಡು ಎಕರೆ ವಿಸ್ತೀರ್ಣದ ತೋಟದಲ್ಲಿ ಮಂಗಳವಾರ ತಡರಾತ್ರಿ ಈ ಭಾರೀ ಕಳ್ಳತನ ನಡೆದಿದೆ. ರೈತ ಬಸವರಾಜ್ ನೀಡಿರುವ ಮಾಹಿತಿಯ ಪ್ರಕಾರ, ಕಳ್ಳರು ಪೂರ್ವಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ. ಕತ್ತಲೆಯಲ್ಲಿ ಕೆರೆಯ ಏರಿಯ (Tank Bund) ಪಕ್ಕದಲ್ಲಿ ತಮ್ಮ ವಾಹನವನ್ನು ಪಾರ್ಕ್ ಮಾಡಿದ್ದ ಕಳ್ಳರು, ತೋಟಕ್ಕೆ ನುಗ್ಗಿ ವೇಗವಾಗಿ ದ್ರಾಕ್ಷಿ ಗೊಂಚಲುಗಳನ್ನು ಕತ್ತರಿಸಿ ವಾಹನಕ್ಕೆ ಲೋಡ್ ಮಾಡಿಕೊಂಡು ಸೂರ್ಯೋದಯಕ್ಕೂ ಮುನ್ನವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಕದ್ದೊಯ್ದ ಒಟ್ಟು ದ್ರಾಕ್ಷಿಯ ಮೌಲ್ಯ ಮಾರುಕಟ್ಟೆಯಲ್ಲಿ ಸುಮಾರು 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;'ಈ ಬೆಳೆಯನ್ನು ಬೆಳೆಯಲು ನಾನು ಬರೋಬ್ಬರಿ 15 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದೆ&quot; ಎಂದು ರೈತ ಬಸವರಾಜ್ ಕಣ್ಣೀರು ಹಾಕಿದ್ದಾರೆ. ಸಸಿ, ರಸಗೊಬ್ಬರ, ಕೀಟನಾಶಕಮತ್ತು ಕೂಲಿ ಕಾರ್ಮಿಕರ ವೆಚ್ಚ ಸೇರಿದಂತೆ ಇಷ್ಟು ದೊಡ್ಡ ಮೊತ್ತವನ್ನು ಸಾಲಸೋಲ ಮಾಡಿ ಹೂಡಿದ್ದೆ. ಈ ಬಾರಿ ಸುಮಾರು 30 ಟನ್ ಪ್ರೀಮಿಯಂ ಗುಣಮಟ್ಟದ 'ರೆಡ್ ಗ್ಲೋಬ್' ದ್ರಾಕ್ಷಿ ಇಳುವರಿ ಬರುವ ನಿರೀಕ್ಷೆಯಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ ₹150 ರ ಆಸುಪಾಸಿನಲ್ಲಿ ಬೆಲೆ ಇದ್ದಿದ್ದರಿಂದ, ಇಡೀ ಬೆಳೆಗೆ ಕನಿಷ್ಠ ₹45 ಲಕ್ಷ ಸಿಗುವ ಬೃಹತ್ ಭರವಸೆ ಇತ್ತು. &quot;ಬುಧವಾರ ಬೆಳಗ್ಗೆ ಕಟಾವು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆ, ಆದರೆ ರಾತ್ರೋರಾತ್ರಿ ಬಳ್ಳಿಗಳಲ್ಲಿದ್ದ ದ್ರಾಕ್ಷಿ ಗೊಂಚಲುಗಳನ್ನೇ ಕತ್ತರಿಸಿ ಕಳ್ಳರು ಹೊತ್ತೊಯ್ದಿದ್ದಾರೆ&quot; ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮೂರರಿಂದ ನಾಲ್ಕು ಕಳ್ಳರು ಮೊಬೈಲ್ ಟಾರ್ಚ್ ಅಥವಾ ಮಂದ ಬೆಳಕಿನ ಬ್ಯಾಟರಿಗಳನ್ನು ಬಳಸಿ ಗೊಂಚಲುಗಳನ್ನು ಗುರುತಿಸಿ ಕತ್ತರಿಸಿದ್ದಾರೆ ಎಂದು ಅವರು ಶಂಕಿಸಿದ್ದು, ಈ ಸಂಬಂಧ ನಂದಿ ಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸುಲಭ ತುತ್ತಾಗುತ್ತಿರುವ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳು&lt;/strong&gt;&lt;/h2&gt;&lt;p&gt;ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳು ಕಳ್ಳರಿಗೆ ಅತ್ಯಂತ ಸುಲಭವಾದ ಟಾರ್ಗೆಟ್&zwnj;ಗಳಾಗಿ ಮಾರ್ಪಟ್ಟಿವೆ ಎಂದು ನಯನಹಳ್ಳಿಯ ಹಿರಿಯ ದ್ರಾಕ್ಷಿ ಬೆಳೆಗಾರ ಅಂಜನೇಯ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. &quot;ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಹಳ ವೇಗವಾಗಿ ಕಟಾವು ಮಾಡಬಹುದು. ಕೇವಲ ಒಂದು ಗಂಟೆಯಲ್ಲಿ ಒಂದು ಟನ್ ದ್ರಾಕ್ಷಿಯನ್ನು ಕಟಾವು ಮಾಡಿ ವಾಹನಕ್ಕೆ ತುಂಬಿಸಬಹುದು&quot; ಎಂದು ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಮಾರುಕಟ್ಟೆಗೆ ನಿತ್ಯ ನೂರಾರು ಟನ್ ದ್ರಾಕ್ಷಿ ಸರಬರಾಜಾಗುವುದರಿಂದ, ಕದ್ದ ಮಾಲನ್ನು ಯಾರಿಗೂ ತಿಳಿಯದಂತೆ ಮಾರಾಟ ಮಾಡುವುದು ಕಳ್ಳರಿಗೆ ಸುಲಭವಾಗಿದೆ. ಇದರಿಂದಾಗಿ ಅಸಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕೂಡ ಕಷ್ಟಕರವಾಗುತ್ತಿದೆ.&lt;/p&gt;&lt;h2&gt;&lt;strong&gt;ಚಿಕ್ಕಬಳ್ಳಾಪುರದಲ್ಲಿ ಹೆಚ್ಚುತ್ತಿರುವ &lsquo;ರೆಡ್ ಗ್ಲೋಬ್&rsquo; ತಳಿ ಕ್ರೇಜ್&lt;/strong&gt;&lt;/h2&gt;&lt;p&gt;ತೋಟಗಾರಿಕೆ ಇಲಾಖೆಯ ತಾಂತ್ರಿಕ ಅಧಿಕಾರಿ ರಾಘವೇಂದ್ರ ಅವರು ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 1,900 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಕೃಷಿ ಮಾಡಲಾಗುತ್ತಿದ್ದು, 2,000 ಕ್ಕೂ ಹೆಚ್ಚು ರೈತರು ಇದನ್ನು ನಂಬಿ ಬದುಕುತ್ತಿದ್ದಾರೆ. ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ &lsquo;ಬೆಂಗಳೂರು ಬ್ಲೂ&rsquo; (Bengaluru Blue) ಮತ್ತು &lsquo;ದಿಲ್&zwnj;ಕುಶ್&rsquo; (Dilkush) ತಳಿಗಳು ಪ್ರಾಬಲ್ಯ ಹೊಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆಯಲ್ಲಿರುವ ಭಾರಿ ಬೇಡಿಕೆಯಿಂದಾಗಿ ರೈತರು ಆಕರ್ಷಿತರಾಗಿ &lsquo;ರೆಡ್ ಗ್ಲೋಬ್&rsquo; ತಳಿಯನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಬೆಲೆ ಹೆಚ್ಚಾದಂತೆ ತೋಟಗಳಿಗೆ ಕಳ್ಳರ ಉಪಟಳವೂ ಹೆಚ್ಚಾಗುತ್ತಿದೆ.&lt;/p&gt;&lt;p&gt;ಈ ದ್ರಾಕ್ಷಿ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಂದಿ ಬೆಟ್ಟದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳ್ಳತನಕ್ಕೆ ಮತ್ತು ದ್ರಾಕ್ಷಿ ಸಾಗಣೆಗೆ ಬಳಸಲಾದ ವಾಹನವನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ರಸ್ತೆಗಳು, ಹೆದ್ದಾರಿಗಳು ಹಾಗೂ ಕೆರೆಯ ಏರಿಯ ಸಮೀಪವಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: 'ಮಿನಿ ಇರಾನ್' ಅಲಿಪುರದಿಂದ  ಖಮೇನಿ ಅಂತ್ಯಕ್ರಿಯೆಗೆ ಹೊರಟ 100 ಜನರು!]]></title>
            <link>https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717</link>
            <guid isPermaLink="true">https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717</guid>
            <pubDate>Wed, 08 Jul 2026 06:44:38 +0530</pubDate>
            <description><![CDATA[&lt;p&gt;ಟೆಹ್ರಾನ್&zwnj;ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಿಂದ ಸುಮಾರು 100 ಮಂದಿ ಇರಾನ್&zwnj;ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrk5rz80n56m2xsbegtck1g,imgname-----------------------2026-07-05t130300.426-1783236846567.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಚಿಕ್ಕಬಳ್ಳಾಪುರ (ಜು.8): ಟೆಹ್ರಾನ್&zwnj;ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮ(Alipura village)ದಿಂದ ಸುಮಾರು 100 ಮಂದಿ ಇರಾನ್&zwnj;ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಇವರೆಲ್ಲಾ ಭಾನುವಾರ ಬೆಂಗಳೂರಿನಿಂದ ಮುಂಬೈಗೆ ತೆರಳಿ, ಅಲ್ಲಿಂದ ದುಬೈ ಮೂಲಕ ಟೆಹ್ರಾನ್&zwnj;ಗೆ ತೆರಳಿದ್ದು, ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?&lt;/p&gt;&lt;h2&gt;ಖಮೇನಿಗೂ ಚಿಕ್ಕಬಳ್ಳಾಪುರಕ್ಕೂ ಇರುವ ನಂಟೇನು?&lt;/h2&gt;&lt;p&gt;ಬಹುಸಂಖ್ಯಾತ ಶಿಯಾ ಮುಸ್ಲಿಮರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮವು ಇರಾನ್&zwnj;ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಆಳವಾದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ಜನ ಖಮೇನಿ ಅವರನ್ನು ತಮ್ಮ ಪ್ರಮುಖ ಧರ್ಮಗುರುವೆಂದು ಗೌರವಿಸುತ್ತಾರೆ. ಈ ಚಿಕ್ಕ ಗ್ರಾಮವನ್ನು ''ಮಿನಿ ಇರಾನ್'' ಎಂದೂ ಕರೆಯುತ್ತಾರೆ. 1981-82ರ ವೇಳೆ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು. ಇರಾನ್ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ನಿರ್ಮಿಸಲಾದ ಸಮುದಾಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.&lt;/p&gt;&lt;p&gt;ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್&zwnj;ನ ಮಾಜಿ ಸರ್ವೋಚ್ಛ ನಾಯಕ ಖಮೇನಿ ಹತರಾಗಿದ್ದು, ಶನಿವಾರದಿಂದ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿವೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717"/>
        </item>
        <item>
            <title><![CDATA[ನನಸಾಗುತ್ತಿದೆ ಶಂಕರ್‌ನಾಗ್‌ ಕನಸು, ನಾಲ್ಕು ವರ್ಷದ ಕಾಯುವಿಕೆಯ ಬಳಿಕ ನಂದಿ ಬೆಟ್ಟ ರೋಪ್‌ವೇ ಪ್ರಾಜೆಕ್ಟ್‌ ಕಾಮಗಾರಿ ಶುರು]]></title>
            <link>https://kannada.asianetnews.com/bengaluru-urban/nandi-hills-ropeway-project-construction-begins-bengaluru-updates-san/articleshow-pamv2cs</link>
            <guid isPermaLink="true">https://kannada.asianetnews.com/bengaluru-urban/nandi-hills-ropeway-project-construction-begins-bengaluru-updates-san/articleshow-pamv2cs</guid>
            <pubDate>Tue, 04 Aug 2026 16:05:24 +0530</pubDate>
            <description><![CDATA[ನಟ ಶಂಕರ್&zwnj;ನಾಗ್&zwnj; ಅವರ ಕನಸಿನ ಕೂಸಾದ ನಂದಿ ಬೆಟ್ಟದ ರೋಪ್&zwnj;ವೇ ಯೋಜನೆಗೆ ಚಾಲನೆ ಸಿಕ್ಕಿದ್ದು, ಕೆಳಭಾಗದಲ್ಲಿ ಟರ್ಮಿನಲ್ ನಿರ್ಮಾಣ ಕಾರ್ಯ ಆರಂಭವಾಗಿದೆ. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ಕಾಮಗಾರಿ ಆರಂಭಿಸಲು ಕೇಂದ್ರ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದ್ದು, ಯೋಜನೆ ವಿಳಂಬವಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz65aan19yffnhh09yvxdph7,imgname-nandi-hills-ropeway-1785839561377.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.4): &lt;/strong&gt;ನಟ ಶಂಕರ್&zwnj;ನಾಗ್&zwnj; ಅವರ ಕನಸು, ರಾಜಧಾನಿ ಬೆಂಗಳೂರಿಗರ ನೆಚ್ಚಿನ ವಾರಾಂತ್ಯದ ತಾಣ ನಂದಿ ಬೆಟ್ಟಕ್ಕೆ ರೋಪ್&zwnj;ವೇ (ಕೇಬಲ್ ಕಾರ್) ಅಳವಡಿಸುವ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆ ಘೋಷಣೆಯಾಗಿ ನಾಲ್ಕು ವರ್ಷಗಳ ಬಳಿಕ ಬೆಟ್ಟದ ಕೆಳ ಭಾಗದಲ್ಲಿ ಲೋಯರ್ ಟರ್ಮಿನಲ್ ಪಾಯಿಂಟ್ (LTP) ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬೆಟ್ಟದ ಮೇಲ್ಭಾಗದಲ್ಲಿ ಅಪ್ಪರ್&zwnj; ಟರ್ಮಿನಲ್ ಪಾಯಿಂಟ್ (UTP) ನಿರ್ಮಿಸಲು ಅಗತ್ಯವಿರುವ 5 ಎಕರೆ ಜಮೀನಿಗೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEFCC) ಇನ್ನೂ ಅಂತಿಮ ಒಪ್ಪಿಗೆ (Clearance) ಸಿಗಬೇಕಿದೆ.&lt;/p&gt;&lt;h2&gt;&lt;strong&gt;ಕೆಳ ಭಾಗದಲ್ಲಿ ಶೇ. 20ರಷ್ಟು ಕಾಮಗಾರಿ ಪೂರ್ಣ&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿ, &quot;ನಂದಿ ಬೆಟ್ಟದ ತಪ್ಪಲಿನಲ್ಲಿರುವ ಕಣಿವೆ ಬಸವೇಶ್ವರ ಸ್ವಾಮಿ ದೇವಾಲಯದ ಸಮೀಪದ ಮಡಕು ಹೊಸಹಳ್ಳಿ ಗ್ರಾಮದಲ್ಲಿ ಒಟ್ಟು 7 ಎಕರೆ ಜಮೀನನ್ನು 2025ರಲ್ಲಿ 'ಡೈನಾಮಿಕ್ಸ್ ರೋಪ್&zwnj;ವೇ ಪ್ರೈವೇಟ್ ಲಿಮಿಟೆಡ್' (DRPL) ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಪ್ರಸ್ತುತ ಕೇಬಲ್ ಕಾರ್ ಕಾರ್ಯಾಚರಣೆಗಾಗಿ ಲೋಯರ್ ಟರ್ಮಿನಲ್ ಪಾಯಿಂಟ್&zwnj;ನ ಬೇಸ್ ಸ್ಟೇಷನ್ ನಿರ್ಮಿಸಲಾಗುತ್ತಿದ್ದು, ಸುಮಾರು ಶೇ. 20ರಷ್ಟು ಕಾಮಗಾರಿ ಪೂರ್ಣಗೊಂಡಿದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಟರ್ಮಿನಲ್ ಕಟ್ಟಡದ ಕಾಮಗಾರಿ 2ನೇ ಮಹಡಿಯವರೆಗೆ ಪೂರ್ಣಗೊಂಡಿದ್ದು, ಉಳಿದ ಎರಡು ಉಪಯುಕ್ತ ಕಟ್ಟಡಗಳ ಛಾವಣಿ ಕಾಂಕ್ರೀಟ್ ಕಾರ್ಯ ಹಾಗೂ ಫುಡ್ ಕೋರ್ಟ್ ಕಟ್ಟಡದ ಅಡಿಪಾಯ ಕಾರ್ಯ ಮುಗಿದಿದೆ. ಮಣ್ಣಿನ ಪರೀಕ್ಷೆ, ರಚನಾತ್ಮಕ ವಿನ್ಯಾಸ ಮತ್ತು ರೇಖಾಚಿತ್ರಗಳ (Structural Design) ಸಂಪೂರ್ಣ ಪರಿಶೀಲನೆಯನ್ನು ಧಾರವಾಡದ ಐಐಟಿ (IIT Dharwad) ಸಂಸ್ಥೆಯ ಆರ್&zwnj;ಆಂಡ್&zwnj;ಡಿ ವಿಭಾಗ 3 ತಿಂಗಳುಗಳ ಕಾಲ ಕಟ್ಟುನಿಟ್ಟಾಗಿ ನಡೆಸಿದ ನಂತರವೇ ಭೂಮಿಯನ್ನು ಕಂಪನಿಗೆ ನೀಡಲಾಗಿದೆ. ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಸ್ವತಂತ್ರ ಎಂಜಿನಿಯರ್ ಹಾಗೂ ಭದ್ರತಾ ಎಂಜಿನಿಯರ್&zwnj;ಗಳು ಪರಿಶೀಲಿಸಿ ಹಸಿರು ನಿಶಾನೆ ತೋರಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೈಟೆಕ್ ಸೌಲಭ್ಯಗಳು ಮತ್ತು ಇಟಲಿ ಕಂಪನಿಯಿಂದ ರೋಪ್&zwnj;ವೇ ಬಿಡಿಭಾಗ&lt;/strong&gt;&lt;/h2&gt;&lt;p&gt;ಕೇಬಲ್ ಕಾರ್&zwnj;ಗಾಗಿ ಕೆಳಗಿನ ಟರ್ಮಿನಲ್&zwnj;ನಲ್ಲಿ ಕನಿಷ್ಠ 200 ಕಾರುಗಳು, 150 ದ್ವಿಚಕ್ರ ವಾಹನಗಳು ಹಾಗೂ ಬಸ್&zwnj;ಗಳನ್ನು ಪಾರ್ಕ್ ಮಾಡುವಷ್ಟು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಪ್ರವಾಸಿಗರಿಗೆ ಕಾಯುವ ಕೊಠಡಿ (Waiting Area) ಇರಲಿದೆ. ರೋಪ್&zwnj;ವೇ ಬಿಡಿಭಾಗಗಳನ್ನು ಪೂರೈಸಲು ಪ್ರವಾಸೋದ್ಯಮ ಇಲಾಖೆಯು ಇಟಲಿಯ 'ಲೈಟ್ನರ್' (Leitner-Italy) ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದ ಬಿಡಿಭಾಗಗಳು ರವಾನೆಯಾಗಬೇಕಿತ್ತಾದರೂ, ಅರಣ್ಯ ಇಲಾಖೆಯಿಂದ ಅನುಮತಿ ಸಿಗುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಬಿಡಿಭಾಗಗಳ ಪೂರೈಕೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.&lt;/p&gt;&lt;h2&gt;&lt;strong&gt;ಅಪ್ಪರ್&zwnj; ಟರ್ಮಿನಲ್ ಪಾಯಿಂಟ್: ಅರಣ್ಯ ಇಲಾಖೆ ಅನುಮತಿಗೆ ವೇಟಿಂಗ್&zwnj;&lt;/strong&gt;&lt;/h2&gt;&lt;p&gt;ಬೆಟ್ಟದ ಮೇಲ್ಭಾಗದಲ್ಲಿ ಅಪ್ಪರ್&zwnj; ಟರ್ಮಿನಲ್ ಪಾಯಿಂಟ್ (UTP) ಹಾಗೂ ಕೇಬಲ್ ಕಾರ್ ಸಂಚಾರಕ್ಕೆ ಬೆಂಬಲ ನೀಡುವ 12 ಟವರ್&zwnj;ಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ದಾಖಲೆಗಳನ್ನು ಕೇಂದ್ರ ಸರ್ಕಾರದ 'ಪರಿವೇಶ' (Parivesh) ಪೋರ್ಟಲ್&zwnj;ನಲ್ಲಿ ಅಪ್&zwnj;ಲೋಡ್ ಮಾಡಲಾಗಿದೆ. &quot;ಅರಣ್ಯ ಇಲಾಖೆಯ ಸ್ಪಷ್ಟನೆ ಸಿಗದ ಕಾರಣ ಗ್ರಾಮ ಪಂಚಾಯಿತಿ, ಅಗ್ನಿಶಾಮಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗಳಿಂದ (ASI) ಸಿಗಬೇಕಾದ ನಿರಾಕ್ಷೇಪಣಾ ಪತ್ರಗಳು (NOC) ಕೂಡ ತಡೆಹಿಡಿಯಲ್ಪಟ್ಟಿವೆ,&quot; ಎಂದು ಅಧಿಕಾರಿ ವಿವರಿಸಿದ್ದಾರೆ.&lt;/p&gt;&lt;p&gt;ಈ ಮಧ್ಯೆ, ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಅರಣ್ಯ ಇಲಾಖೆಯ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಸಚಿವರ ಸೂಚನೆಯಂತೆ, ನವದೆಹಲಿಯಲ್ಲಿ ಶೀಘ್ರ ಅನುಮತಿ ಪಡೆಯಲು ಪ್ರತ್ಯೇಕ ಸಮನ್ವಯ ಸಮಿತಿಯೊಂದನ್ನು ರಚಿಸಲಾಗಿದೆ.&lt;/p&gt;&lt;h2&gt;&lt;strong&gt;ಯೋಜನೆಯ ಸಂಪೂರ್ಣ ಹೈಲೈಟ್ಸ್ (Project Snapshot)&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ರೋಪ್&zwnj;ವೇ ಒಟ್ಟು ಉದ್ದ: &lt;/strong&gt;2.94 ಕಿ.ಮೀ.&lt;/li&gt; &lt;li&gt;&lt;strong&gt;ಆರಂಭಿಕ ಅಂದಾಜು ವೆಚ್ಚ: &lt;/strong&gt;₹293.40 ಕೋಟಿ&lt;/li&gt; &lt;li&gt;&lt;strong&gt;ಪ್ರಸ್ತುತ ಪರಿಷ್ಕೃತ ವೆಚ್ಚ: &lt;/strong&gt;₹240.17 ಕೋಟಿ&lt;/li&gt; &lt;li&gt;&lt;strong&gt;ವೆಚ್ಚ ಬದಲಾವಣೆಗೆ ಕಾರಣಗಳು: &lt;/strong&gt;CEN ಸುರಕ್ಷತಾ ಮಾನದಂಡಗಳ ಅಳವಡಿಕೆ, ಅತ್ಯಾಧುನಿಕ ಸೌಲಭ್ಯಗಳ ಸೇರ್ಪಡೆ, ಕಾರಿಡಾರ್ ಭೂಮಿ ಸ್ವಾಧೀನ ಹಾಗೂ ಉನ್ನತ ಮಟ್ಟದ ಪಿಲ್ಲರ್&zwnj;ಗಳ ಬಳಕೆ.&lt;/li&gt; &lt;li&gt;&lt;strong&gt;ಖಾಸಗಿ ಕಂಪನಿಗೆ ವಹಿಸಲಾದ ಕಾರ್ಯಾಚರಣೆ ಅವಧಿ:&lt;/strong&gt; 30 ವರ್ಷಗಳು.&lt;/li&gt; &lt;li&gt;&lt;strong&gt;ಸರ್ಕಾರಕ್ಕೆ ಪಾವತಿಸಬೇಕಾದ ವಾರ್ಷಿಕ ಶುಲ್ಕ: &lt;/strong&gt;ಮೊದಲ ವರ್ಷಕ್ಕೆ ₹1.60 ಕೋಟಿ (ಬಳಿಕ ಪ್ರತಿವರ್ಷ ಶೇ. 5ರಷ್ಟು ಏರಿಕೆ).&lt;/li&gt;&lt;/ul&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/nandi-hills-ropeway-project-construction-begins-bengaluru-updates-san/articleshow-pamv2cs"/>
        </item>
        <item>
            <title><![CDATA[ಎಲ್ಲ ಸಚಿವರು ರಜೆಯಲ್ಲಿದ್ದಾರೆ: Congress ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!]]></title>
            <link>https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</guid>
            <pubDate>Sun, 14 Jun 2026 20:12:48 +0530</pubDate>
            <description><![CDATA[&lt;p&gt;Karnataka Politics: ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ (ಜೂ.14): &lt;/strong&gt;ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಕೇವಲ ನಾಯಕತ್ವ ಬದಲಾಗಿದೆಯೇ ಹೊರತು ಮನಸ್ಥಿತಿ ಬದಲಾಗಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 14 ಮಂತ್ರಿಗಳಾಗಿದ್ದು ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ವಿಧಾನಪರಿಷತ್&zwnj;ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದ ಜನತೆಯ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲದಂತಾಗಿದೆ, ನನಗೆ ಆ ಖಾತೆ ಬೇಕಿಲ್ಲ, ಈ ಖಾತೆ ಬೇಕು, ಈ ಖಾತೆ ಬೇಡ ಬಂಡವಾಳವಿರುವ ಬೇರೆ ಖಾತೆ ಕೊಡಿಯೆಂದು ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಸ್ಥಳೀಯ ರೈತರ ಸಮಸ್ಯೆ, ರಸಗೊಬ್ಬರ, ಬಿತ್ತನೆ ಬೀಜಗಳು ಇತ್ಯಾದಿಗಳು ಬಗ್ಗೆ ವಿಚಾರಿಸ ಬೇಕಾದವರು ಹೈಕಮಾಂಡ್&zwnj; ಭೇಟಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾವಿಗೆ ಬೆಲೆ ಇಲ್ಲದೆ ಬೀದಿಯಲ್ಲಿ ಬಿಸಾಡಿ ಹೋಗುತ್ತಿರುವ ರೈತರ ಕಷ್ಟಗಳಿಗೆ ಸ್ಪಂದಿಸುವವರಾರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.&lt;/p&gt;&lt;p&gt;ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಸೇರಿ ಎಲ್ಲಾ ತಾಲೂಕುಗಳಲ್ಲಿ ಮಾವು ಬೆಳೆಯುತ್ತಾರೆ. ಆದರೆ ಇಲ್ಲಿನ ಮಾವಿಗೆ ಹೆಚ್ಚಿನ ಬೇಡಿಕೆಯಿದ್ದು ಆದರೆ ಬೆಲೆಯಿಲ್ಲದಂತಾಗಿದೆ. ಬೇರೆ ಕಸುಬಿಲ್ಲ, ಬೆಲೆಯಿಲ್ಲ, ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಾವು ಬೆಳೆಗಾರರಿಗೆ 500 ಕೋಟಿ ಪರಿಹಾರ ಕೊಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಪ್ರಿಯಾಂಕ್&zwnj; ಖರ್ಗೆ ವಿರುದ್ಧ ಕಿಡಿ&lt;/strong&gt;&lt;/h2&gt;&lt;p&gt;ಪ್ರಿಯಾಂಕ್ ಖರ್ಗೆಯವರು ಆರ್&zwnj;ಎಸ್&zwnj;ಎಸ್&zwnj;ನ್ನು ನೋಂದಾಯಿಸಬೇಕು ಇಲ್ಲವೇ ನಿಷೇಧ ಮಾಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಅವರಿಗೆ ನಿದ್ದೆ ಬರುವುದಿಲ್ಲ, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಕೆಲಸ ಮಾಡಿದ್ದು ಕಡಿಮೆ. ಆದರೆ ಆರ್ ಎಸ್&zwnj;ಎಸ್ ನಿಂದನೆ ಮಾಡಿದರೆ ಅವರಿಗೆ ಬೆಲೆಯೆಂದು ವರ್ತಿಸುತ್ತಿದ್ದಾರೆ. ಹಳ್ಳಿ ಕಡೆ ಯುಗಾದಿ ಸಂದರ್ಭದಲ್ಲಿ ರಾಮರಸವನ್ನು ತಯಾರಿಸುತ್ತಾರೆ. ಅದನ್ನು ಕುಡಿದರೆ ಎರಡು ದಿನಗಳಾದರೂ ಅದರ ಮತ್ತು ಕಡಿಮೆಯಾಗುತ್ತಿರಲಿಲ್ಲ. ಅದರಂತೆ ಪ್ರಿಯಾಂಕ್ ಖರ್ಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3"/>
        </item>
        <item>
            <title><![CDATA[ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ? ಗುಪ್ತಚರ ವರದಿಯಲ್ಲಿ ಶಾಕಿಂಗ್ ಮಾಹಿತಿ]]></title>
            <link>https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu</link>
            <guid isPermaLink="true">https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu</guid>
            <pubDate>Sat, 04 Jul 2026 08:22:26 +0530</pubDate>
            <description><![CDATA[ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ನಂತರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆಯು ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwngm6v3tx9r7f84s35p1d95,imgname-pradeep-eshwar-1783133510499.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ: &lt;/strong&gt;ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲ ಹಾಗೂ ಅದರ ನಂತರ ಜಿಲ್ಲೆಯ ರಾಜಕೀಯ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿನ್ನೆಲೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿರುವ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಜೂ. 27ರಂದು ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಇರಬಾರದು, ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗೋ ಬ್ಯಾಕ್ ಪ್ರದೀಪ್ ಈಶ್ವರ್ ಎಂದು ಘೋಷಣೆ ಕೂಗುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಪಮಾನ ಮಾಡಿದ್ದರು. ಇದರಿಂದ ಕುಪಿತರಾದ ಶಾಸಕರು ನಂತರ ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಹೊರಗೆ ಬಂದು ತೋಳು ತಟ್ಟಿ ಅಬ್ಬರಿಸಿದ್ದು, ಪ್ರತಿಭಟನಾಕಾರರು ಚಪ್ಪಲಿ ಎಸೆದಿದ್ದು ಭಾರೀ ಸುದ್ದಿಯಾಗಿತ್ತು. ಈ ಅನಿರೀಕ್ಷಿತ ಗಲಾಟೆ ಮತ್ತು ಗದ್ದಲ ಕ್ಷೇತ್ರದಲ್ಲಿ ಅಶಾಂತಿಗೆ ಕಾರಣವಾಗಿತ್ತು. ಮೇಲಾಗಿ ಈ ಘಟನೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ, ದೂರು ಪ್ರತಿದೂರಿಗೆ ಕಾರಣವಾಗಿದೆ.&amp;nbsp;&lt;/p&gt;&lt;h2&gt;&lt;strong&gt;ಕ್ಷೇತ್ರದಲ್ಲಿ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು&lt;/strong&gt;&lt;/h2&gt;&lt;p&gt;ಈ ಬೆಳವಣಿಗೆಗಳ ಬೆನ್ನಲ್ಲೇ ಜುಲೈ 2ರಂದು ರಾಜ್ಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿರುವುದು ಗಮನಾರ್ಹವಾಗಿದೆ.&lt;/p&gt;&lt;h3&gt;&lt;strong&gt;ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು&lt;/strong&gt;&lt;/h3&gt;&lt;p&gt;ಮುನ್ನೆಚ್ಚರಿಕೆ ಕ್ರಮಗಳಿಗೆ ಶಿಫಾರಸು ಸಲ್ಲಿಕೆಯಾಗಿರುವ ಕ್ಷೇತ್ರದ ಅಧ್ಯಯನದ ವರದಿಯಲ್ಲಿ ಶಾಸಕ ಪ್ರದೀಪ್ ಈಶ್ವರ್&zwnj;ಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಅಥವಾ ಗೃಹ ಇಲಾಖೆಯಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Pradeep Eswar: ಪ್ರದೀಪ್&zwnj; ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಬಿಗ್&zwnj; ಟ್ವಿಸ್ಟ್&zwnj;; ಅಚ್ಚರಿ ಮೂಡಿಸಿದ ಮಾಜಿ ಸಿಎಂ ಸಿದ್ದು ನಡೆ!&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu"/>
        </item>
        <item>
            <title><![CDATA[Chikkaballapur: ತೋಟಗಳಲ್ಲಿಯೇ ಸೊರಗುತ್ತಿರುವ ಕೊತ್ತಂಬರಿ ಸೊಪ್ಪು; ರೈತರಿಗೆ ಭಾರೀ ನಷ್ಟ]]></title>
            <link>https://kannada.asianetnews.com/karnataka-districts/chikkaballapur-the-price-of-coriander-has-fallen-sharply-causing-farmers-to-suffer-huge-losses-mrq/articleshow-r5r8svb</link>
            <guid isPermaLink="true">https://kannada.asianetnews.com/karnataka-districts/chikkaballapur-the-price-of-coriander-has-fallen-sharply-causing-farmers-to-suffer-huge-losses-mrq/articleshow-r5r8svb</guid>
            <pubDate>Tue, 01 Sep 2026 05:59:47 +0530</pubDate>
            <description><![CDATA[ಕೊತ್ತಂಬರಿ ಸೊಪ್ಪಿನ ಬೆಲೆ ತೀವ್ರವಾಗಿ ಕುಸಿದಿದ್ದು, ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಮಾರುಕಟ್ಟೆಗೆ ಆವಕ ಹೆಚ್ಚಾದ ಕಾರಣ, ಒಂದು ಕೆಜಿ ಕೊತ್ತಂಬರಿ ಕಟ್ಟು 1 ರಿಂದ 5 ರೂಪಾಯಿಗೆ ಇಳಿದಿದೆ. ಇದರಿಂದ ಸಾಗಾಣಿಕೆ ವೆಚ್ಚವೂ ಸಿಗದೆ, ರೈತರು ಬೆಳೆದ ಬೆಳೆಯನ್ನು ರಸ್ತೆಗೆ ಚೆಲ್ಲುವಂತಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1d5nb3xf9a4d68a745xk1y7,imgname-coriander-1788222286973.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ&lt;/strong&gt;: ಮಾರ್ಕೆಟ್&zwnj;ನಲ್ಲಿ ಕೊತ್ತಂಬರಿ ಸೊಪ್ಪಿನ ದರ ತೀವ್ರವಾಗಿ ಕುಸಿತ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪಿನ ಆವಕ ದಿಢೀರ್ ಹೆಚ್ಚಾದ ಕಾರಣ, ಬೆಲೆಗಳು ಪಾತಾಳಕ್ಕೆ ಇಳಿದಿದ್ದು ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.&lt;/p&gt;&lt;p&gt;ಆಗಸ್ಟ್ 2026ರಲ್ಲಿ ಆರಂಭದ ದಿನಗಳಲ್ಲಿ ಪ್ರತಿ ಒಂದು ಕೆಜಿ ಕೊತ್ತಂಬರಿ ಸೊಪ್ಪಿನ ಕಟ್ಟು50 ರಿಂದ 80 ರುಪಾಯಿಗೆ ಮಾರಾಟವಾಗುತ್ತಿತ್ತು. ಕ್ರಮೇಣ 20-30 ರೂಗೆ ಇಳಿಕೆಯಾಗಿ, ಪ್ರಸ್ತುತ 3 ರಿಂದ 5 ರೂಪಾಯಿಗೆ ಕುಸಿದಿದೆ. ಕೆಲವು ಸಗಟು ಮಾರುಕಟ್ಟೆಗಳಲ್ಲಿ ಒಂದು ಕಟ್ಟು ಕೇವಲ 1 ರುಪಾಯಿಗೂ ಕೇಳುವವರಿಲ್ಲದಂತಾಗಿದೆ.&lt;/p&gt;&lt;p&gt;ಸಾಗಾಣಿಕೆ ವೆಚ್ಚವೂ ಕೈಗೆ ಸಿಗದ ಕಾರಣ ಬೇಸತ್ತ ಚಿಕ್ಕಬಳ್ಳಾಪುರ, ಕೋಲಾರ , ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳ ರೈತರು ತಾವೇ ಬೆಳೆದ ಕೊತ್ತಂಬರಿ ಸೊಪ್ಪನ್ನು ರಸ್ತೆ ಬದಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ. ಇನ್ನೂ ಕೆಲವಡೆ ಕೊತ್ತಂಬರಿ ಸೊಪ್ಪುನ್ನು ಕೀಳದೆ ತೋಟಗಳಲ್ಲಿಯೇ ಸೊರಗುತ್ತಿದೆ.&lt;/p&gt;&lt;h2&gt;&lt;strong&gt;ಮಾರುಕಟ್ಟೆಗೆ ಭಾರೀ ಆವಕ&lt;/strong&gt;&lt;/h2&gt;&lt;p&gt;ಏಕಕಾಲದಲ್ಲಿ ಎಲ್ಲಾ ಭಾಗಗಳಿಂದಲೂ ಮಾರುಕಟ್ಟೆಗೆ ಸರಕು ಹರಿದು ಬಂದಿರುವುದರಿಂದ ವ್ಯಾಪಾರಿಗಳು ಕಡಿಮೆ ಬೆಲೆಗೆ ಬೇಡಿಕೆ ಇಡುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ, ಪುಣೆ, ನಾಗಪುರ,ಗೋವಾ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮದ್ಯಪ್ರದೇಶ ಇತ್ಯಾದಿ ಹೊರ ರಾಜ್ಯಗಳಿಗೆ ಸಾಗಣೆಯಾಗುವ ಪ್ರಮಾಣದಲ್ಲಿ ಏರುಪೇರಾಗಿರುವುದು ಸ್ಥಳೀಯ ಮಾರುಕಟ್ಟೆಯ ಮೇಲೆ ಒತ್ತಡ ಉಂಟುಮಾಡಿದೆ.&lt;/p&gt;&lt;h3&gt;&lt;strong&gt;ಸಾಗಾಣಿಕೆ ವೆಚ್ಚವೂ ಸಿಗುತ್ತಿಲ್ಲ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ತೀವ್ರ ಕುಸಿದಿರುವ ಪರಿಣಾಮ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಎಕರೆ ಕೊತ್ತಂಬರಿ ಸೊಪ್ಪು ಬೆಳೆಯಬೇಕಾದರೆ 40 ಸಾವಿರ ರು. ವೆಚ್ಚ ತಗಲುತ್ತದೆ. ಆಗಸ್ಟ್ ತಿಂಗಳ ಮದ್ಯ ಭಾಗದಲ್ಲಿ ಕೊತ್ತಂಬರಿ 1ಕೆಜಿಯ ಕಟ್ಟು ಕೇವಲ 10-15 ರು.ಗೆ ಮಾರಾಟವಾಗುತ್ತಿದ್ದು, ರೈತರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದೆ. ಈ ಹಿಂದೆ 45 ದಿನಗಳ ಕಾಲಾವಧಿಯಲ್ಲಿ ಕಟಾವಿಗೆ ಬರುವ ಕೊತ್ತಂಬರಿ ಸೊಪ್ಪನ್ನು ಬೆಳೆಯಲಾಗುತ್ತಿತ್ತು. ಇದರೆ ಈಗ ಹೈಬ್ರೀಡ್&zwnj; ತಳಿ ಬೀಜದ ಬಿತ್ತನೆಯಿಂದ ಕೇವಲ 1 ತಿಂಗಳಲ್ಲಿ ಕೊತ್ತಂಬರಿ ಸೊಪ್ಪು ಕಟಾವಿಗೆ ಬರುತ್ತಿರುವ ಕಾರಣ ಹೆಚ್ಚಿನ ರೈತರು ಕೊತ್ತಂಬರಿಯನ್ನು ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ದರ ನೆಲಕಚ್ಚಿದೆ.&lt;/p&gt;&lt;p&gt;ಕಳೆದ 6 ತಿಂಗಳ ಹಿಂದೆ ಇಲ್ಲಿನ ಕೊತ್ತಂಬರಿ ಸೊಪ್ಪು ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ಅಲ್ಲಿಯೂ ಹೆಚ್ಚಿನ ಕೊತ್ತಂಬರಿ ಬೆಳೆದಿರುವ ಕಾರಣ ಇಲ್ಲಿನ ಕೊತ್ತಂಬರಿ ಸೊಪ್ಪನ್ನು ಖರೀದಿ ಮಾಡದೇ ಇರುವುದು ಬೇಡಿಕೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ಇತ್ತೀಚಿಗೆ ಜಿಲ್ಲೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದ ರೈತರು ಅಸಲು ಹಣ ಬಾರದೇ ನಷ್ಟ ಪಡುತ್ತಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಿಗೆ ಬೇಡಿಕೆ ಇಲ್ಲದ ಕಾರಣ ರೈತರು ತೀವ್ರ ನಿರಾಸೆಯಿಂದ ಇದ್ದು ಕೈ ಸಾಲ ಹಾಗೂ ಬ್ಯಾಂಕ್ ಸಾಲ ಹೇಗೆ ತೀರಿಸುವುದು ಎಂಬ ಅತಂಕದಲ್ಲಿ ತೊಡಗಿದ್ದಾರೆ ಎಂದು ಕತ್ತಂಬರಿ ಬೆಳೆದ ಯುವ ರೈತ ಅರೂರಿನ ಗಿರೀಶ್ ತಿಳಿಸಿದ್ದಾರೆ.&lt;/p&gt;&lt;p&gt;ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಕನಿಷ್ಠ ಬೆಂಬಲ ಬೆಲೆ ಹಾಗೂ ನ್ಯಾಯಯುತ ಮಾರುಕಟ್ಟೆ ದರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 44 ವರ್ಷಗಳ ಇತಿಹಾಸವಿರೋ ಕೋನಿಗರಹಳ್ಳಿ ಬ್ರಿಡ್ಜ್ ಕುಸಿತ; ಮರೆಯಾದ ಗುಂಡೂರಾವ್ ಕಾಲದ ಸ್ಮರಣೀಯ ಸೇತುವೆ&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-the-price-of-coriander-has-fallen-sharply-causing-farmers-to-suffer-huge-losses-mrq/articleshow-r5r8svb"/>
        </item>
        <item>
            <title><![CDATA[Gauribidanur: ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹ*ತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ]]></title>
            <link>https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</link>
            <guid isPermaLink="true">https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</guid>
            <pubDate>Fri, 19 Jun 2026 22:53:02 +0530</pubDate>
            <description><![CDATA[&lt;p&gt;Gauribidanur: ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvgcec2beqe7br6h13c49sj0,imgname-hhkh-1781887610955.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.19):&lt;/strong&gt; ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಒಂಟಿಯಾಗಿದ್ದ 60 ವರ್ಷದ ಸುಬ್ಬಮ್ಮ ಎಂಬ ವೃದ್ಧೆಯ ಮೇಲೆ ಕಳ್ಳರು ಅಮಾನುಷವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿವಿಯ ಸಮೇತ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.&lt;/p&gt;&lt;p&gt;ಸುಬ್ಬಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಸದಸ್ಯರು ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅವರ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುಬ್ಬಮ್ಮಜೋರಾಗಿ ಕೂಗಾಡಲು ಆರಂಭಿಸಿದ್ದು, ಕಳ್ಳರ ಕೃತ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಕಳ್ಳರು ಓಲೆಗಳನ್ನು ಕಿತ್ತುಕೊಳ್ಳುವ ವೇಳೆ ವೃದ್ಧೆಯ ಕಿವಿಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಲ್ಲದೆ ವೃದ್ಧೆ ನಿರಂತರವಾಗಿ ಕೂಗಾಡುತ್ತಿದ್ದುದನ್ನು ಕಂಡು ಕೋಪಗೊಂಡ ಕಳ್ಳರು, ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಹಲ್ಲೆಯ ಪರಿಣಾಮ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಯಾರೂ ಇಲ್ಲದ ಕಾರಣ ನೆರವು ಸಿಗಲಿಲ್ಲ. ಮಧ್ಯಾಹ್ನ ಸುಮಾರು 3.30 ರ ವೇಳೆಗೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಸೊಸೆ, ವೃದ್ಧೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;p&gt;ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ತಲೆಗೆ ತೀವ್ರ ಪೆಟ್ಟಾಗಿರುವುದು ಹಾಗೂ ಅಧಿಕ ರಕ್ತಸ್ರಾವವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸುಬ್ಬಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮಸ್ಥರಲ್ಲಿ ಆತಂಕ&lt;/strong&gt;&lt;/h2&gt;&lt;p&gt;ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಬ್ಬಮ್ಮ ಅವರ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8"/>
        </item>
        <item>
            <title><![CDATA[JDS Challenge pradeep eshwar: ''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ, ಸೋತ್ರೆ ನೀವು..?]]></title>
            <link>https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</link>
            <guid isPermaLink="true">https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</guid>
            <pubDate>Sat, 27 Jun 2026 08:28:55 +0530</pubDate>
            <description><![CDATA[&lt;p&gt;&amp;nbsp;ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್&zwnj;ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf5vy7mnwvtzvf2wf51cydvx,imgname-pradeep-eshwar--1--1768649858709.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜೂ.27):&amp;nbsp;&lt;/strong&gt; ಕೇಂದ್ರ ಸಚಿವರಾದ ಹೆಚ್&zwnj;ಡಿ&lt;strong&gt; &lt;/strong&gt;ಕುಮಾರಸ್ವಾಮಿ(HD Kumaraswamy) ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028ಕ್ಕೆ ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ನೀವು ಸೋತರೆ ಕುಮಾರಸ್ವಾಮಿ ಮನೆ ಮುಂದೆ ಸೆಕ್ಯೂರಿಟಿ ಆಗುತ್ತೀರಾ ಎಂದು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್(Shidlaghatta JDS MLA B.N. Ravikumar) ಅವರು ಶಾಸಕ ಪ್ರದೀಪ್ ಈಶ್ವರ್&zwnj;(Pradeep Eshwar)ಗೆ ಬಹಿರಂಗ ಸವಾಲು ಹಾಕಿದ್ದಾರೆ.&amp;nbsp;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೀಪ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆಡಿಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಕುಮಾರಸ್ವಾಮಿ ಅವರು ಕೋರ್ಟ್ ನೀಡಿದ ನೋಟಿಸ್ಸನ್ನಷ್ಟೇ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಹೆಚ್ಚಿನ ಸುದ್ದಿಗಳಿಗೆ ಕ್ಲಿಕ್ ಮಾಡಿ: &lt;/strong&gt;Pradeep Eshwar: 'ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..' ಕೇಂದ್ರ ಸಚಿವ ಹೆಚ್&zwnj;ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!&amp;nbsp;&lt;/p&gt;&lt;p&gt;Bidadi Township: ಇಂದು ಬೈರಮಂಗಲದಲ್ಲಿ ಮಧ್ಯಾಹ್ನತನಕ ಕಾಯ್ತೇನೆ, ಸಿಎಂ ಬರಲಿ: ಎಚ್&zwnj;ಡಿಕೆ&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re"/>
        </item>
        <item>
            <title><![CDATA[7ನೇ ತರಗತಿ ಮಕ್ಕಳಿಗೂ ಅ,ಆ,ಇ,ಈ ಬರುತ್ತಿಲ್ಲ; ಅಕ್ಷರ ಕಲಿಸದ ಶಿಕ್ಷಕರನ್ನ ಸಸ್ಪೆಂಡ್ ಮಾಡಿ-ಪ್ರದೀಪ್ ಈಶ್ವರ್!]]></title>
            <link>https://kannada.asianetnews.com/chikkaballapur/mla-pradeep-eshwar-warns-teachers-notice-and-suspension-over-students-illiteracy-sat/articleshow-u7sqly6</link>
            <guid isPermaLink="true">https://kannada.asianetnews.com/chikkaballapur/mla-pradeep-eshwar-warns-teachers-notice-and-suspension-over-students-illiteracy-sat/articleshow-u7sqly6</guid>
            <pubDate>Fri, 04 Sep 2026 12:52:51 +0530</pubDate>
            <description><![CDATA[ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, 7ನೇ ತರಗತಿ ವಿದ್ಯಾರ್ಥಿಗಳಿಗೆ ಕನಿಷ್ಠ ಅಕ್ಷರಜ್ಞಾನ ಇಲ್ಲದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ, 1 ರಿಂದ 6ನೇ ತರಗತಿವರೆಗೆ ಪಾಠ ಮಾಡಿದ ಶಿಕ್ಷಕರಿಗೆ ನೋಟಿಸ್ ನೀಡಿ, ಬೇಜವಾಬ್ದಾರಿ ತೋರಿದವರನ್ನು ಅಮಾನತುಗೊಳಿಸಲು ಶಿಫಾರಸು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಖಡಕ್ ಸೂಚನೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1nmq98wcjq9vx8s35t25p2j,imgname-pradeep-eshwar-1788506514700.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಸೆ.04): ಚಿ&lt;/strong&gt;ಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕನಿಷ್ಠ ಅಕ್ಷರಜ್ಞಾನವೂ ಇಲ್ಲದಿದ್ದರೆ, ಅಂತಹ ಮಕ್ಕಳಿಗೆ 1 ರಿಂದ 6ನೇ ತರಗತಿವರೆಗೆ ಪಾಠ ಬೋಧನೆ ಮಾಡಿದ ಶಿಕ್ಷಕರಿಗೆ ನೋಟಿಸ್ ಜಾರಿಗೊಳಿಸಿ, ಅಮಾನತಿಗೆ ಶಿಫಾರಸು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅಧಿಕೃತ ಪತ್ರದ ಮೂಲಕ ಖಡಕ್ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಪತ್ರದಲ್ಲಿ ಏನಿದೆ? ಶಾಸಕರ ಪ್ರಮುಖ ನಿರ್ದೇಶನಗಳು:&lt;/strong&gt;&lt;/h2&gt;&lt;p&gt;ಚಿಕ್ಕಬಳ್ಳಾಪುರ ತಾಲ್ಲೂಕಿನ ಶೈಕ್ಷಣಿಕ ಪ್ರಗತಿಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಪ್ರದೀಪ್ ಈಶ್ವರ್, ಬಿಇಒ ಅವರಿಗೆ ಬರೆದಿರುವ ಪತ್ರದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳಿಗೆ ಆದೇಶಿಸಿದ್ದಾರೆ:&lt;/p&gt;&lt;p&gt;&lt;strong&gt;ಅಕ್ಷರಜ್ಞಾನವಿಲ್ಲದ ಮಕ್ಕಳ ಗುರುತಿಸುವಿಕೆ: &lt;/strong&gt;ತಾಲ್ಲೂಕಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ, ಮೂಲಭೂತ ಓದು-ಬರಹ ಅಥವಾ ಅಕ್ಷರಗಳೇ ಬಾರದ ಮಕ್ಕಳನ್ನು ತಕ್ಷಣವೇ ಗುರುತಿಸಬೇಕು.&lt;/p&gt;&lt;p&gt;&lt;strong&gt;ಹಿಂದಿನ ತರಗತಿ ಶಿಕ್ಷಕರಿಗೆ ನೋಟಿಸ್: &lt;/strong&gt;ಮಗು 7ನೇ ತರಗತಿಗೆ ಬಂದರೂ ಅಕ್ಷರಜ್ಞಾನ ಕಲಿಯದಿರಲು ಕಾರಣರಾದ, 1 ರಿಂದ 6ನೇ ತರಗತಿಯವರೆಗೆ ಆ ಮಕ್ಕಳಿಗೆ ಪಾಠ ಬೋಧನೆ ಮಾಡಿದ ಎಲ್ಲಾ ಶಿಕ್ಷಕರಿಗೂ ನಿಯಮಾನುಸಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು.&lt;/p&gt;&lt;p&gt;&lt;strong&gt;ಅಮಾನತಿಗೆ ಶಿಫಾರಸು: &lt;/strong&gt;ಶಿಕ್ಷಕರು ನೀಡುವ ಸಮಜಾಯಿಷಿ (ಲಿಖಿತ ವಿವರಣೆ) ಸಮಂಜಸವಾಗಿರದಿದ್ದರೆ, ಅಂತಹ ಬೇಜವಾಬ್ದಾರಿ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳಿಗೆ ಶಿಫಾರಸು ಮಾಡಿ ತಕ್ಷಣ ವರದಿ ನೀಡಬೇಕು.&lt;/p&gt;&lt;h2&gt;&lt;strong&gt;ಶೈಕ್ಷಣಿಕ ಹೊಣೆಗಾರಿಕೆ ನಿಗದಿಗೆ ಶಾಸಕರ ಆಗ್ರಹ:&lt;/strong&gt;&lt;/h2&gt;&lt;p&gt;ವರ್ಷಪೂರ್ತಿ ಸರ್ಕಾರದಿಂದ ಉತ್ತಮ ವೇತನ ಮತ್ತು ಸವಲತ್ತುಗಳನ್ನು ಪಡೆಯುವ ಶಿಕ್ಷಕರು, ಮಕ್ಕಳಿಗೆ ಕನಿಷ್ಠ ಅಕ್ಷರಜ್ಞಾನವನ್ನೂ ಕಲಿಸದೆ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡುತ್ತಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಮಗು ಪ್ರಾಥಮಿಕ ಹಂತ ದಾಟಿದರೂ ಓದಲು-ಬರೆಯಲು ಬಾರದಿರುವುದಕ್ಕೆ ಸಂಬಂಧಪಟ್ಟ ಬೋಧಕರೇ ನೇರ ಹೊಣೆ ಎಂದು ಶಾಸಕರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಇಲಾಖೆಯಲ್ಲಿ ಸಂಚಲನ:&lt;/strong&gt;&lt;/h2&gt;&lt;p&gt;ಶಾಸಕ ಪ್ರದೀಪ್ ಈಶ್ವರ್ ಅವರ ಈ ದಿಟ್ಟ ನಿರ್ಧಾರವು ಚಿಕ್ಕಬಳ್ಳಾಪುರ ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಸಿಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಬೋಧಕರಲ್ಲಿ ಶಿಸ್ತು ಮತ್ತು ಬದ್ಧತೆ ಮೂಡಿಸಲು ಶಾಸಕರು ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಸಾರ್ವಜನಿಕರು ಹಾಗೂ ಪೋಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/chikkaballapur/mla-pradeep-eshwar-warns-teachers-notice-and-suspension-over-students-illiteracy-sat/articleshow-u7sqly6"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: ಗುತ್ತಿಗೆದಾರರ ನಿರ್ಲಕ್ಷ್ಯ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು!]]></title>
            <link>https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</link>
            <guid isPermaLink="true">https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</guid>
            <pubDate>Wed, 17 Jun 2026 11:18:03 +0530</pubDate>
            <description><![CDATA[&lt;p&gt;ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ, ನಿರ್ಮಾಣ ಹಂತದ ಸರ್ಕಾರಿ ಕಟ್ಟಡದ ನೀರು ತುಂಬಿದ್ದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಈ ದುರ್ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸಾರ್ವಜನಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva11vp03d0t6s97xw0swqxg,imgname-----------------------2026-06-17t110028.705-1781674340032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.17)&lt;/strong&gt;: ತಾಲೂಕಿನ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಒಂದೂವರೆ ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಗುಂಡಿಗೆ ಜಾರಿ ಬಿದ್ದ ಮಗು&lt;/h2&gt;&lt;p&gt;ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿ ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ನೀರು ತುಂಬಿಕೊಂಡಿತ್ತು. ಆಟವಾಡುತ್ತಿದ್ದ ಮಗು ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದೆ.&lt;/p&gt;&lt;h3&gt;ಮಗುವನ್ನ ಕಳೆದುಕೊಂಡ ಕಾರ್ಮಿಕರು ಅಕ್ರಂದನ&lt;/h3&gt;&lt;p&gt;ಇದೇ ಕಟ್ಟಡದಲ್ಲಿ ಕಾರ್ಮಿಕರಾದ ಬೆಂಗಳೂರಿನ ಶ್ರೀರಾಂಪುರ ಮೂಲದ ರಾಜಪಾಲ್&zwnj; ಹಾಗೂ ಶ್ವೇತಾ ದಂಪತಿಯ ಮಗಳಾದ ಪಲ್ಲವಿ ಮೃತಪಟ್ಟ ದುರ್ದೈವಿ. ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಗುವಿನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua"/>
        </item>
        <item>
            <title><![CDATA[ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್  ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?]]></title>
            <link>https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t</link>
            <guid isPermaLink="true">https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t</guid>
            <pubDate>Sun, 12 Jul 2026 06:25:09 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ತಾಯಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಬೆಂಗಳೂರು ಹಾಗೂ ಬಾಗೇಪಲ್ಲಿಯಲ್ಲಿ ಆಧಾರ್, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆ ಅಕ್ರಮವಾಗಿ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx9wykrn7cyhpsjs9f0rgkr9,imgname-----------------------2026-07-12t062126.994-1783817522965.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗೇಪಲ್ಲಿ (ಜು.12):&lt;/strong&gt; ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಆರೋಪದಡಿಯಲ್ಲಿ ಪಾಕಿಸ್ತಾನ ಮೂಲದ ತಾಯಿ ಮತ್ತು ಪುತ್ರನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ(Devaragudipalli) ಪಂಚಾಯಿತಿ ವ್ಯಾಪ್ತಿಯ ದಾಸಯ್ಯಗಾರಿಪಲ್ಲಿ ಗ್ರಾಮ(Dasayyagaripalli)ದಲ್ಲಿದ್ದ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ ಖಾನ್ ಅವರನ್ನು ಬಂಧಿಸಿದ್ದಾರೆ. ಅಯೂಬ್ ಖಾನ್, 1993ರಲ್ಲಿ ದುಬೈನಲ್ಲಿ ಫರ್ಹಾನಾಜ್&zwj;ಳ ಪರಿಚಯವಾಗಿ 2003ರಲ್ಲಿ ಆಕೆಯನ್ನು ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗ ಪಾಕಿಸ್ತಾನದಲ್ಲಿ, ಉಳಿದ ಇಬ್ಬರು ಮಕ್ಕಳು ದುಬೈನಲ್ಲಿ ಹುಟ್ಟಿರುವುದಾಗಿ ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಚಿಕ್ಕಬಳ್ಳಾಪುರ: 'ಮಿನಿ ಇರಾನ್' ಅಲಿಪುರದಿಂದ ಖಮೇನಿ ಅಂತ್ಯಕ್ರಿಯೆಗೆ ಹೊರಟ 100 ಜನರು!&lt;/p&gt;&lt;p&gt;ನಂತರ ತಾಯಿ, ಪುತ್ರ ಭಾರತಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪಡೆದು, ನಂತರ ಬಾಗೇಪಲ್ಲಿಗೆ ಅವುಗಳನ್ನು ವರ್ಗಾಯಿಸಿಕೊಂಡಿದ್ದರು. ನಂತರ ಅಲ್ಲಿ ಪಡಿತರ ಚೀಟಿ ಹಾಗೂ ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t"/>
        </item>
    </channel>
</rss>
