<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 16 Jul 2026 22:58:47 +0530</lastBuildDate>
        <atom:link href="https://kannada.asianetnews.com/rss/chikkaballapur" rel="self" type="application/rss+xml"/>
        <item>
            <title><![CDATA[ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!]]></title>
            <link>https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2</link>
            <guid isPermaLink="true">https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2</guid>
            <pubDate>Mon, 08 Jun 2026 18:04:25 +0530</pubDate>
            <description><![CDATA[ಚಿಕ್ಕಬಳ್ಳಾಪುರದಲ್ಲಿ ಗಂಡನ ಮನೆಯವರ ಕಿರುಕುಳದಿಂದ ನವವಿವಾಹಿತೆ ಪುಷ್ಪಾ ಕೊಲೆಯಾಗಿದ್ದಾಳೆ. ಕಳ್ಳತನದ ನಾಟಕವಾಡಿದ ಅತ್ತೆ, ನಾದಿನಿ ಸೇರಿದಂತೆ ಆರೋಪಿಗಳನ್ನು ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ.]]></description>
            <media:content url="https://geo.dailymotion.com/player/x1tbu.html?video=xadbpxq" medium="video" height="768" width="1024"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜೂ.8): &lt;/strong&gt;ಗಂಡನ ಮನೆಯವರ ಕಿರುಕುಳಕ್ಕೆ ಮತ್ತೊಂದು ಅಮಾಯಕ ಜೀವ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮದುವೆಯಾಗಿ ಮೂರೇ ತಿಂಗಳಿಗೆ ಅತ್ತೆ ಮತ್ತು ನಾದಿನಿ ನೀಡುತ್ತಿದ್ದ ಹಿಂಸೆ ತಾಳಲಾರದೆ ಪುಷ್ಪಾ ಎಂಬಾಕೆ ತವರು ಮನೆ ಸೇರಿದ್ದಳು. ಗಂಡ ಬೇರೆ ಮನೆ ಮಾಡುವುದಾಗಿ ಭರವಸೆ ನೀಡಿ ಆಕೆಯನ್ನು ಕರೆತಂದು, ಹೊಸ ಮನೆಗೂ ಬದಲಾಗಿದ್ದ. ಆದರೆ, ಮಗ ದೂರಾಗಲು ಸೊಸೆಯೇ ಕಾರಣ ಎಂದು ರೊಚ್ಚಿಗೆದ್ದ ಅತ್ತೆ, ನಾದಿನಿ ಮತ್ತು ಅಜ್ಜಿ ಸೇರಿ ಪುಷ್ಪಾಳ ಕೊಲೆಗೆ ಸ್ಕೆಚ್ ಹಾಕಿದ್ದರು.&lt;/p&gt;&lt;p&gt;&lt;strong&gt;ಭೀಮಾತೀರದಲ್ಲಿ ರಕ್ತದೋಕುಳಿ: ವಿಜಯಪುರದಲ್ಲಿ ಆಸ್ತಿ ವಿವಾದಕ್ಕೆ 6 ಜನರ ಭೀಕರ ಹ*ತ್ಯೆ!&lt;/strong&gt;&lt;/p&gt;&lt;p&gt;ಯಾರಿಗೂ ಅನುಮಾನ ಬಾರದಂತೆ ಕುಟುಂಬಸ್ಥರು ಕೇರಳದ ದೇವಸ್ಥಾನಕ್ಕೆ ತೆರಳಿದ್ದರು. ಅತ್ತೆಯ ಸ್ಕೆಚ್ ಪ್ರಕಾರ, ಸಂಬಂಧಿಕರು ಸೇರಿ ಮನೆಯಲ್ಲಿದ್ದ ಪುಷ್ಪಾಳ ಕತ್ತು ಕೊಯ್ದು ಕೊಲೆ ಮಾಡಿದ್ದರು. ಬಳಿಕ ಇದೊಂದು ಕಳ್ಳತನಕ್ಕಾಗಿ ನಡೆದ ಹತ್ಯೆ (ರಾಬರಿ ಮರ್ಡರ್) ಎಂದು ಬಿಂಬಿಸಲು ನಾಟಕವಾಡಿದ್ದರು. ಆದರೆ, ಪೊಲೀಸರ ತನಿಖೆ ವೇಳೆ ತೆರೆದ ಬಾಗಿಲು ಹಾಗೂ ಮೃತರ ಕತ್ತಿನ ಗಾಯಗಳು ಪ್ರಮುಖ ಕ್ಲೂ ನೀಡಿದ್ದವು. ಕಥೆ ಕಟ್ಟಿದ ಆರೋಪಿಗಳ ನಾಟಕವನ್ನು ಪತ್ತೆಹಚ್ಚಿದ ಪೊಲೀಸರು, ಅತ್ತೆ, ನಾದಿನಿ ಸೇರಿದಂತೆ ಪ್ರಮುಖ ಕಿರಾತಕರನ್ನು ಜೈಲಿಗಟ್ಟಿದ್ದಾರೆ.&amp;nbsp;&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/chikkaballapur-mother-in-law-arrested-for-pre-planned-murder-of-daughter-in-law-san-videoshow-1cnzwv2"/>
        </item>
        <item>
            <title><![CDATA[ಇಂಗ್ಲೆಂಡ್‌ನಲ್ಲಿ 2ನೇ ಬಾರಿ ಕೌನ್ಸಿಲರ್ ಆಗಿ ಆಯ್ಕೆಯಾದ ಕೋಂಡೇನಹಳ್ಳಿಯ ಸುರೇಶ್ ಗಟ್ಟಾಪುರ]]></title>
            <link>https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl</link>
            <guid isPermaLink="true">https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl</guid>
            <pubDate>Thu, 16 Jul 2026 08:14:17 +0530</pubDate>
            <description><![CDATA[&lt;p&gt;ಕೋಂಡೇನಹಳ್ಳಿ ಗ್ರಾಮದ ರೈತ ಕುಟುಂಬದ ಸುರೇಶ್ ಗಟ್ಟಾಪುರ್, ಯುನೈಟೆಡ್ ಕಿಂಗ್&zwnj;ಡಮ್&zwnj;ನ ಸ್ವಿಂಡನ್&zwnj;ನಲ್ಲಿ ನಡೆದ ಬರೋ ಕೌನ್ಸಿಲ್ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ, ಸಾಫ್ಟ್&zwnj;ವೇರ್ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ಅವರ ಪಯಣ ಸ್ಪೂರ್ತಿದಾಯಕವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmccntp2npm97y9k772f7rg,imgname-suresh-gattapur-1784169256790.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ&lt;/strong&gt;: ಜಿಲ್ಲೆಯ ಕೋಂಡೇನಹಳ್ಳಿ ಗ್ರಾಮದ ಸುರೇಶ್ ಗಟ್ಟಾಪುರ್ ಯುಕೆ ಚುನಾವಣೆಯಲ್ಲಿ ಗೆದ್ದಿದ್ದಾರೆ.ಯುನೈಟೆಡ್ ಕಿಂಗ್&zwnj;ಡಮ್&zwnj;ನ ಸ್ವಿಂಡನ್&zwnj;ನಲ್ಲಿ ಸದ್ಯ ವಾಸವಿದ್ದಾರೆ, ಅವರು ಮೇ 7 ರಂದು ನಡೆದ ಬರೋ ಎಲೆಕ್ಷನ್&zwnj;ನಲ್ಲಿ ಗೆಲುವು ಸಾಧಿಸಿದ್ದಾರೆ.&lt;/p&gt;&lt;p&gt;ರೈತಾಪಿ ಕುಟುಂಬದಲ್ಲಿ ಬೆಳೆದ ಸುರೇಶ್&zwnj; ತನ್ನ ಪ್ರಾಥಮಿಕ ಶಾಲೆಯ 1ನೇ ತರಗತಿಯಿಂದ 6ನೇ ತರಗತಿ ವರೆಗೂ ಹಳ್ಳಿಯಲ್ಲಿಯೇ ಮುಗಿಸಿದರು. ಅಲ್ಲಿಂದ 7ನೇ ತರಗತಿಯಿಂದ 10ನೇ ತರಗತಿ ವರೆಗೂ ಮೇಲೂರಿನಲ್ಲಿ ಓದಿದರು. 10ನೇ ತರಗತಿ ವರೆಗೂ ನಾನು ಕನ್ನಡ ಮೀಡಿಯಂನಲ್ಲೇ ಓದಿದ್ದು ವಿಶೇಷ.&lt;/p&gt;&lt;p&gt;ಅನಂತರ ಆಮೇಲೆ ಪಿಯುಸಿಗೆ ಚಿಕ್ಕಬಳ್ಳಾಪುರ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದರು. ಅಲ್ಲಿಂದ ಸಿಇಟಿಯಲ್ಲಿ ಅರ್ಹತೆ ಪಡೆದು, ಜೆ.ಎಂ.ಐ.ಟಿ ಚಿತ್ರದುರ್ಗದಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಮುಗಿಸಿ, ಮೈಸೂರು ಯೂನಿವರ್ಸಿಟಿಯಿಂದ ಪದವಿ ಪೂರ್ಣಗೊಳಿಸಿದರು.&lt;/p&gt;&lt;h2&gt;&lt;strong&gt;2004ರಿಂದ ಸ್ವಿಂಡನ್&zwnj;ನಲ್ಲಿ ವಾಸ&lt;/strong&gt;&lt;/h2&gt;&lt;p&gt;ಅದಾದಮೇಲೆ ಕೆ.ಜಿ.ಎಫ್&zwnj; ನಲ್ಲಿನ ಬಿ.ಇ.ಎಂ.ಎಲ್ 1992 ರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದ ನಂತರ, ಸಾಫ್ಟ್&zwnj;ವೇರ್ ಕ್ಷೇತ್ರಕ್ಕೆ ಬರಬೇಕೆಂಬ ಹೆಂಡತಿಯ ಒತ್ತಾಯದ ಮೇರೆಗೆ ಸಾಫ್ಟ್&zwnj;ವೇರ್&zwnj;ಗೆ ಕಾಲಿಟ್ಟರು. ಬಳಿಕ ಸ್ವಿಜರ್ಲ್ಯಾಂಡ್ ಕಂಪನಿಯೊಂದರ ಕಚೇರಿಯು ಶ್ರೀಲಂಕಾದಲ್ಲಿತ್ತು. ಅಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಮಾಡಿ, 2004 ರ ಏಪ್ರಿಲ್&zwnj;ನಲ್ಲಿ ಹೆಂಡತಿ ಮತ್ತು ಮಕ್ಕಳ ಜೊತೆ ಸ್ವಿಂಡನ್ ಗೆ ಕಾಲಿಟ್ಟರು. ಅಂದಿನಿಂದ . ಅವತ್ತಿನಿಂದ ಅದೇ ಅವರ ಮನೆಯಾಗಿ ಅಲ್ಲಿಯೇ ವಾಸವಿದ್ದಾರೆ.&lt;/p&gt;&lt;p&gt;ಈ ಮಧ್ಯೆ 2010 ರಲ್ಲಿ ಅಲ್ಲಿನ ಪ್ರಮುಖ ರಾಜಕೀಯ ಪಕ್ಷ ಕನ್ಸರ್ವೇಟಿವ್ ಸದಸ್ಯತ್ವ ಪಡೆದರು. 2017 ರಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ಯಾರಿಷ್&zwnj;ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು ಈಗ ಬರೋ ಕೌನ್ಸಿಲ್&zwnj;ಗೆ ಎರಡನೇ ಬಾರಿ ಗೆದ್ದಿದ್ದಾರೆ.&lt;/p&gt;&lt;p&gt;ಅವರು ಕನ್ಸರ್ವೇಟಿವ್ ಪಾರ್ಟಿಯಲ್ಲಿ ಡೆಪ್ಯುಟಿ ಚೇರ್ಮನ್ ಆಗಿ ಕೆಲಸ ಮಾಡಿದ್ದರು. ಆಮೇಲೆ ಬರೋ ಕೌನ್ಸಿಲ್ ಎಲೆಕ್ಷನ್&zwnj;ಗೆ ನಿಂತು, 2022 ರಲ್ಲಿ ಬರೋ ಕೌನ್ಸಿಲ್&zwnj;ಗೆ ಆಯ್ಕೆಯಾದರು. ಈಗ 2026 ರಲ್ಲಿ ಜನರು ಮತ್ತೊಮ್ಮೆ ಗೆಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ರಾಜಕೀಯದ ಬಗ್ಗೆ ಸುರೇಶ್ ಮಾತು&lt;/strong&gt;&lt;/h3&gt;&lt;p&gt;&lsquo;ನನಗೆ ರಾಜಕೀಯದಲ್ಲಿ ಮುಂಚಿನಿಂದಲೂ ತುಂಬಾ ಆಸಕ್ತಿಯಿತ್ತು. ನಮ್ಮ ಭಾರತದಲ್ಲಿದ್ದಾಗ ಇಂಜಿನಿಯರಿಂಗ್ ಓದುವ ಸಮಯದಲ್ಲಿ ಜನತಾ ಪಕ್ಷದ ಸ್ಟೂಡೆಂಟ್ ವಿಂಗ್&zwnj;ನಲ್ಲಿ ಕೆಲಸ ಮಾಡಿದ ಅನುಭವವಿತ್ತು. ಆದರೆ ಆಮೇಲೆ ಅದು ಡಿಸ್ಕಂಟಿನ್ಯೂ ಆಯ್ತು. ಈಗ ದೇವರ ಅನುಗ್ರಹದಿಂದ ಯುನೈಟೆಡ್ ಕಿಂಗ್&zwnj;ಡಮ್&zwnj;ಗೆ ಬಂದು ಇಲ್ಲಿ ಕೌನ್ಸಿಲ್ ಎಲೆಕ್ಷನ್&zwnj;ನಲ್ಲಿ ನಿಂತು ಗೆದ್ದಿದ್ದೇವೆ. ನಾನೊಬ್ಬನೇ ಅಲ್ಲ, ಬೇರೆ ಸಾಕಷ್ಟು ಭಾರತೀಯರು ಯುನೈಟೆಡ್ ಕಿಂಗ್&zwnj;ಡಮ್&zwnj;ನಾದ್ಯಂತ ರಾಜಕೀಯದಲ್ಲಿ ಭಾಗವಹಿಸುತ್ತಿದ್ದಾರೆ. ಏಕೆಂದರೆ ನಮ್ಮ ಧ್ವನಿ ಸ್ಥಳೀಯ ಮಟ್ಟದಲ್ಲಿ ಕೇಳಬೇಕಾಗುತ್ತದೆ, ಆ ಕಾರಣದಿಂದ ನಾನು ಪೊಲಿಟಿಕಲ್ ಸಿಸ್ಟಮ್ ಸೇರಿಕೊಂಡೆ&rsquo; ಎನ್ನುವುದು ಸುರೇಶ್&zwnj; ಅವರ ಮಾತು.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-suresh-gattapur-of-kondenahalli-elected-as-a-councillor-for-the-2nd-time-in-swindon-england-mrq/articleshow-37fwkzl"/>
        </item>
        <item>
            <title><![CDATA[SSLC ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳಿಗೆ ಬೆಳ್ಳಿ ಪೆನ್ ವಿತರಣೆ]]></title>
            <link>https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</link>
            <guid isPermaLink="true">https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw</guid>
            <pubDate>Thu, 09 Jul 2026 08:37:29 +0530</pubDate>
            <description><![CDATA[&lt;p&gt;2025-26ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ 35 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಶಿವ ಜ್ಯೂವರೆಲ್ಸ್ ವತಿಯಿಂದ ಬೆಳ್ಳಿಯ ಪೆನ್ನುಗಳನ್ನು ವಿತರಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2dda7tgqmspdmpepzf2sqp,imgname-silver-pen-1783566346490.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ:&lt;/strong&gt; 2025-26 ನೇ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಪೂರ್ಣಾಂಕಗಳನ್ನು ಪಡೆದಿರುವ ತಾಲೂಕಿನ ಸಾಧಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು.&lt;/p&gt;&lt;h2&gt;&lt;strong&gt;ಶಿವ ಜ್ಯೂವರೆಲ್ಸ್ ಮಾಲೀಕರಿಂದ ಬೆಳ್ಳಿ ಪೆನ್ ವಿತರಣೆ&lt;/strong&gt;&lt;/h2&gt;&lt;p&gt;ನಗರದ ರಾಧಾಕೃಷ್ಣ ಪಾರ್ಟಿ ಹಾಲ್&zwnj;ನಲ್ಲಿ ಆಯೋಜಿಸಿದ್ದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರದಲ್ಲಿ 35 ವಿದ್ಯಾರ್ಥಿಗಳಿಗೆ ನಗರದ ಆಜಾದ್ ಚೌಕದಲ್ಲಿರುವ ಶಿವ ಜ್ಯೂವರೆಲ್ಸ್ ಮಾಲೀಕ ಬೆಳ್ಳಿಯ ಪೆನ್ನನ್ನು ನೀಡಿದರು.&lt;/p&gt;&lt;p&gt;ಶಿವ ಜ್ಯೂವರೆಲ್ಸ್ ಮಾಲೀಕ ಮಾತನಾಡಿ, ಬುದ್ದಿವಂತರಾಗಿ, ಜ್ಞಾನವಂತರಾಗಿ, ಕನಡಮ್ಮನ ಸೇವೆ ಮಾಡಿ ನಿಮ್ಮ ಭವಿಷ್ಯವನ್ನು ಸುಂದವಾಗಿಸಿಕೊಳ್ಳಿರೆಂದು ಆಶಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮುಂಡಗೋಡನಿಂದ ಹುಬ್ಬಳ್ಳಿ, ಗದಗ, ಕೊಪ್ಪಳ ಮಾರ್ಗವಾಗಿ ರಾಯಚೂರು ನಗರಕ್ಕೆ ನೇರ ಬಸ್ ಆರಂಭ&lt;/strong&gt;&lt;/p&gt;&lt;p&gt;ಎನ್.ವಿ. ಶ್ರೀನಿವಾಸನ್, ಕಾಗತಿ ವೆಂಕಟರತ್ನಂ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಚಲಪತಿಗೌಡ, ದೇವರ ಮಳ್ಳೂರು ಮಹೇಶ್, ಸ್ವರ್ಣಗೌರಿ, ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್, ಕೆಜಿಎಫ್ ಕವಿಯತ್ರಿ ರಾಧಾ ಡಿ ಪ್ರಕಾಶ್, ರಮಣರೆಡ್ಡಿ, ವೆಂಕಟೇಶಪ್ಪ, ಚೇಳೂರು ರಾಧಾಮಣಿ ಪಾಲ್ಗೊಂಡಿದ್ದರು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Mysuru: ಸರಗೂರು ಅಂಚೆ ಕಚೇರಿಯಲ್ಲಿ 1.3 ಕೋಟಿ ರೂಪಾಯಿ ಮಾಯ; CBIನಿಂದ ಇಬ್ಬರ ಬಂಧನ&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/silver-pens-distributed-to-35-students-who-scored-125-out-of-125-in-sslc-kannada-chintamani-chikkaballapur-mrq/articleshow-3dn6drw"/>
        </item>
        <item>
            <title><![CDATA[ಡಿಕೆಶಿ ಕೇವಲ ಕೀಲುಗೊಂಬೆ, ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದಾರೆ: ಆರ್.ಅಶೋಕ್ ವ್ಯಂಗ್ಯ]]></title>
            <link>https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f</link>
            <guid isPermaLink="true">https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f</guid>
            <pubDate>Fri, 05 Jun 2026 18:24:18 +0530</pubDate>
            <description><![CDATA[&lt;p&gt;ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp4xerh5y19pdx33ap2rabfz,imgname-----------------------2026-04-14t080426.123-1776134087205.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ (ಜೂ.05):&lt;/strong&gt; ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಮಂತ್ರಿ ಮಂಡಲದಲ್ಲಿ ಹೊಸಮುಖಗಳಿಗೆ ಅವಕಾಶವಿಲ್ಲ. ಇರುವುದೆಲ್ಲ ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಬೆಂಬಲಿಗರು ಮಾತ್ರ ಆಗಿದ್ದು ಡಿಕೆಶಿ ಕೇವಲ ಕೀಲುಗೊಂಬೆಯಾಗಿದ್ದು ಸಿದ್ಧರಾಮಯ್ಯ ಮತ್ತು ಹೈಕಮಾಂಡ್ ಹೇಳಿದಂತೆ ನಡೆಯಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದರು.&lt;/p&gt;&lt;p&gt;ತಾಲೂಕಿನ ಕೈವಾರದ ರೆಸಾರ್ಟ್&zwnj;ನಲ್ಲಿ 2 ದಿನಗಳಿಂದ ಹಮ್ಮಿಕೊಂಡಿದ್ದ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ -2026 ಕಾರ್ಯಾಗಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ವಿವಿಧ ತಾಲೂಕುಗಳ ನಗರ, ಗ್ರಾಮಾಂತರ, ಎಸ್&zwnj;ಸಿ, ಎಸ್&zwnj;ಟಿ, ರೈತ ಮೋರ್ಚಾ, ಹಿಂದುಳಿದ ಮೋರ್ಚಾಗಳ ವಿವಿಧ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.&lt;/p&gt;&lt;p&gt;ಈಗ ರಚನೆಯಾಗಿರುವ ಸರ್ಕಾರದಲ್ಲಿ ಯಾವುದೇ ಹೊಸತನವಿಲ್ಲ. ಅದೇ ಹಳೆಯ ಲಾರಿಯಾಗಿದ್ದು ಕೇವಲ ನಂಬರ್ ಪ್ಲೇಟ್ ಬದಲಾಗಿದೆ. ಯಾವುದೇ ಅಭಿವೃದ್ಧಿ ಈಗಿನ ಹೊಸ ಮುಖ್ಯಮಂತ್ರಿಗಳಿಂದ ಸಾಧ್ಯವಿಲ್ಲ, ಏಕೆಂದರೆ ಅದೇ ನುಂಗಣ್ಣನವರು, ಅದೇ ಭಷ್ಟಾಚಾರ, ಅದೇ ಲೂಟಿಕೋರರ ಸರ್ಕಾರವಾಗಿದೆ. ಶೇ.50 ರಷ್ಟು ಮಹಿಳೆಯರಿರುವ ರಾಜ್ಯದಲ್ಲಿ ಒಬ್ಬ ಮಹಿಳೆಗೆ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಲು ಸಾಧ್ಯವಾಗಿಲ್ಲವೆಂದರು,&lt;/p&gt;&lt;p&gt;ಬೋಗಸ್&zwnj; ಗ್ಯಾರಂಟಿಗಳು: ಹೊಸದಾಗಿ ಗ್ಯಾರಂಟಿ ಘೋಷಣೆ ಮಾಡಿದ್ದು ಹಳೆ ಗ್ಯಾರಂಟಿಗಳನ್ನು ಸರಿಯಾಗಿ ನೀಡಲು ಸಾಧ್ಯವಾಗಿಲ್ಲ, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 5 ಸಾವಿರ ಕೋಟಿ, ಅನ್ನಭಾಗ್ಯ ಯೋಜನೆಯಲ್ಲಿ 700 ಕೋಟಿ, ರೇಷನ್ ಕಾರ್ಡ್&zwnj;ಗಳನ್ನು ರದ್ದುಗೊಳಿಸುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದು ಮುಂದಿನ ದಿನಗಳಲ್ಲಿ ಈ ಸರ್ಕಾರ ಅಧಿಕಾರವನ್ನು ನಡೆಸಲು ಸಶಕ್ತವಾಗಿಲ್ಲ. ಗ್ಯಾರಂಟಿಗೆ ನಾಮ ಹಾಕುವ ಸರ್ಕಾರ ಇದಾಗಿದೆ. ಹೊಸ ಗ್ಯಾರಂಟಿಗಳು ಕೇವಲ ಬೋಗಸ್ ಗ್ಯಾರಂಟಿಗಳಾಗುತ್ತವೆ ಎಂದರು.&lt;/p&gt;&lt;h2&gt;&lt;strong&gt;ಹೋರಾಟದ ಫಲ&lt;/strong&gt;&lt;/h2&gt;&lt;p&gt;ಹೈಕಮಾಂಡ್ ಅಣತಿಗೆ ತಕ್ಕಂತೆ ಡಿಕೆಶಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕೇವಲ ರಾಜ್ಯದಿಂದ ಹಣವನ್ನು ಪಡೆಯಲು ಮಾತ್ರ ಡಿಕೆ ಶಿವಕುಮಾರ್&zwnj;ರನ್ನು ಮುಖ್ಯಮಂತ್ರಿ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು. ನಾವು ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ನಾವು ನಡೆಸಿದ ಹೋರಾಟದ ಫಲವಾಗಿ ನಾಗೇಂದ್ರ ಜೈಲು ಪಾಲಾದರು, ಮುಡಾ ಹಗರಣದಲ್ಲಿ 14 ನಿವೇಶನಗಳು ವಾಪಸು ಪಡೆಯಲಾಯಿತು, ಮೈಸೂರಿನ ಸಿಲ್ಕ್ ಕಾರ್ಖಾನೆ ಮರುಉತ್ಪಾದನೆಗೆ ಸಹಕಾರವಾಯಿತು ಇವೆಲ್ಲವೂ ನಮ್ಮ ಹೋರಾಟದ ಫಲವಾಗಿದೆ. ನಮ್ಮ ಹೋರಾಟ ಫಲವೇ 2028 ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/r-ashok-slams-dk-shivakumar-karnataka-cabinet-gvd/articleshow-3mn9r8f"/>
        </item>
        <item>
            <title><![CDATA[ಕೋಲಾರ, ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆಗಳ ನೀರಿನ ದಾಹ ನೀಗಿಸಿ: ಹೊಸ ಸಿಎಂಗೆ ಬಸವರಾಜ ಬೊಮ್ಮಾಯಿ ಆಗ್ರಹ]]></title>
            <link>https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn</link>
            <guid isPermaLink="true">https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn</guid>
            <pubDate>Sun, 31 May 2026 18:51:14 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ನೀರಿನ ದಾಹ ನೀಗಿಸಲು ಹೊಸ ಮುಖ್ಯಮಂತ್ರಿಗಳು ಕ್ರಮ ವಹಿಸಬೇಕು, ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಜಲ ಕಾಯ್ದೆ ಬದಲಾವಣೆ ಅಗತ್ಯದ ಕುರಿತು ಅವರು ಮಾತನಾಡಿದ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksz343r9n60qqxzvgktzt9qa,imgname-basavaraj-bommai-chikkaballapura-1780233670409.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ 31)&lt;/strong&gt;: ಚಿಕ್ಕಬಳ್ಳಾಪುರ ಮತ್ತು ಕೋಲಾರ ಬರ ಪೀಡಿತ ಜಿಲ್ಲೆಗಳಿಗೆ ಹೊಸ ಮುಖ್ಯಮಂತ್ರಿಗಳು ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರು, ನೆಲ, ಜನರ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.&lt;/p&gt;&lt;p&gt;ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದರು. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಣ್ಣು ಬಹಳ ಶ್ರೇಷ್ಠವಾಗಿರುವಂಥದ್ದು ಇಲ್ಲಿಯ ರೈತರ ಬೆವರಿನ ಹನಿ ಭೂಮಿಗೆ ಬಿದ್ದರೆ ಭೂಮಿ ತಾಯಿ ಒಳ್ಳೆಯ ಬೆಳೆ ಕೊಡುತ್ತಾಳೆ ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ತರಕಾರಿ, ಹಣ್ಣು, ರೇಷ್ಮೆ, ಕೊಡುವ ಕೆಲಸ ಈ ಜಿಲ್ಲೆಗಳು ಮಾಡುತ್ತಿದ್ದವು. ಇಲ್ಲಿ ಐದು ನದಿಗಳಿದ್ದರೂ ಬತ್ತಿ ಹೋಗಿವೆ. ಪಶ್ಚಿಮ ಘಟ್ಟದಿಂದ ಹರಿದು ಬರುವಜೀವಸೆಲೆ ನಿಂತು ಹೋಗಿದೆ. ಪಶ್ಚಿಮ ಘಟ್ಟದಲ್ಲಿ ನೀರಿನ ಸೆಲೆಯನ್ನು ಉಳಿಸುವ ಪಯತ್ನ ಮಾಡದ ಕಾರಣ ಇದೆಲ್ಲ ಆಗಿದೆ ಎಂದರು.&lt;/p&gt;&lt;h2&gt;&lt;strong&gt;ಎತ್ತಿನಹೊಳೆ ಯೋಜನೆ&lt;/strong&gt;&lt;/h2&gt;&lt;p&gt;ನಾನು ನೀರಾವರಿ ಸಚಿವನಿದ್ದಾಗ ಕೋಲಾರದ ಪತಕರ್ತರು ಇಲ್ಲಿ ಫ್ಲೋರೈಡ್ ಯುಕ್ತ ನೀರಿದೆ ಅದನ್ನು ಬಂದು ನೋಡಿ ಎಂದು ಹೇಳಿದರು. ನಾನು ಬಂದು ನೋಡಿ ತಾಂತ್ರಿಕ ತಜ್ಞರೊಡನೆ ಮಾತನಾಡಿದೆ. ಅಂತಾರಾಜ್ಯ ವಿವಾದ ಇಲ್ಲದಂತೆ ಎತ್ತಿನ ಹೊಳೆ ಯೋಜನೆಯನ್ನು ಮಾಡಿದೆ. ಅದಕ್ಕೂ ಮೊದಲು ನೇತ್ರಾವತಿ ತಿರುವು ಯೋಜನೆ ಪ್ರಸ್ತಾಪ ಇತ್ತು. ಅದರಿಂದ ಸುಮಾರು 11 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತಿತ್ತು. ಹೀಗಾಗಿ ಅದು ಸಾಧ್ಯವಿಲ್ಲವಾಯಿತು. ನನ್ನ ಉದ್ದೇಶ ಪೈಪ್&zwnj; ಲೈನ್ ಮೂಲಕ ನೀರು ತಂದಿದ್ದರೆ ಹತ್ತು ಟಿಎಂಸಿ ನೀರು ಎರಡೂ ಜಿಲ್ಲೆಗೆ ಕೊಡಬಹುದಿತ್ತು. ಯಾರಿಗೆ ತಾಂತ್ರಿಕ ಜ್ಞಾನ ಇಲ್ಲವೋ ಅವರು ಅಲ್ಲಿ ನೀರೇ ಇಲ್ಲ ಎಂದು ಅಭಿಪ್ರಾಯ ಸೃಷ್ಟಿಸಿದರು. ಅದಕ್ಕಾಗಿ ಎರಡು ವರ್ಷ ಹಾಳಾಯಿತು. ಆ ನಂತರ ಕಾಲುವೆ ಮೂಲಕ. ನೀರು ತರುವ ಪ್ರಯತ್ನ ನಡೆದಿದೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ನಾವು ಎತ್ತಿನಹೊಳೆ ಲಿಫ್ಟ್ ಮೂಲಕ ನೀರು ತರುವ ಕಾರ್ಯ ಮಾಡಿದ್ದೇವು ಅವರು ಅದಕ್ಕೆ ಬಟನ್ ಹೊಡೆಯುವ ಮೂಲಕ ಆರಂಭಿಸಿದ್ದಾರೆ ಎಂದರು.&lt;/p&gt;&lt;h2&gt;&lt;strong&gt;ಜಲ ಕಾಯ್ದೆ ಬದಲಾಗಬೇಕು&lt;/strong&gt;&lt;/h2&gt;&lt;p&gt;ಬರ ಪೀಡಿತ ಜಿಲ್ಲೆಗಳಿಗೆ ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರಿನ ವಿಚಾರ, ಜನರ ವಿಚಾರದಲ್ಲಿ ನೆಲದ ವಿಚಾರದಲ್ಲಿ ನಾವು ರಾಜಕಾರಣ ಮಾಡುವುದಿಲ್ಲ. ಒಂದು ಸಮಯ ಕಳೆದರೆ ಅದರ ದೂರಗಾಮಿಯ ಪರಿಣಾಮವಾಗುತ್ತದೆ. ಒಂದು ಸಮಯ ಕಳೆದರು ಅದರ ವೆಚ್ಚ ಒಂದು ಸಾವಿರ ಕೋಟಿ&zwnj; ಇದ್ದದ್ದು ಹತ್ತು ಪಟ್ಟು ಹೆಚ್ಚಾಗುತ್ತದೆ. ಒಂದು ಅಂತಾರಾಜ್ಯ ಜಲ ವಿವಾದ ಐವತ್ತು ವರ್ಷವಾದರೂ ಮುಗಿದಿಲ್ಲ. ಅದಕ್ಕೆ ನಾನು ಸಂಸತ್ತಿನಲ್ಲಿ ಅಂತಾರಾಜ್ಯ ಜಲವಿವಾದ ಕಾಯಿದೆ ಸಂಪೂರ್ಣ ಬದಲಾವಣೆ ಮಾಡಬೇಕು. ನದಿ ಅಭಿವೃದ್ಧಿ ನಿಟ್ಟಿನಲ್ಲಿ ಬದಲಾವಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಹೇಳಿದ್ದೇನೆ. ಪ್ರಧಾನ ಮಂತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನ್ಯಾಯಮಂಡಳಿಗಳಲ್ಲಿ ವರ್ಷಾನುಗಟ್ಟಲೇ ಬಿದ್ದಿರುವ ಪ್ರಕರಣಗಳನು ಕಾನೂನು ಬದಲಾವಣೆ ಮಾಡಲು ಉತ್ಸುಕರಾಗಿದ್ದಾರೆ. ಅದು ಕಾನೂನು ಬದಲಾದರೆ ಬಹಳಷ್ಟು ಬದಲಾವಣೆಯಾಗುತ್ತದೆ ಎಂದರು.&lt;/p&gt;&lt;h3&gt;&lt;strong&gt;ಪತ್ರಕರ್ತರದ್ದು ಜವಾಬ್ದಾರಿ&lt;/strong&gt;&lt;/h3&gt;&lt;p&gt;ಇದು ನಮ್ಮ ಬದುಕಿನ ಪಶ್ನೆ. ಪತ್ರಕರ್ತರು ಇದಕ್ಕೆ ಬಹಳಷ್ಟು ಬೆಂಬಲ ಕೊಟ್ಟಿದ್ದರು. ಮುಂದೆಯೂ ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಚಿಕ್ಕಬಳ್ಳಾಪುರ ಪತ್ರಕರ್ತರು ಇದರ ಬಗ್ಗೆ ಹೆಚ್ಚಿನ ಬೆಂಬಲ ಕೊಡಬೇಕು. ಇಡ್ಲಿ ದೋಸೆಗಿಂತ ಪ್ರತಿಯೊಬ್ಬರ ಮನೆಗೆ ಅನ್ನ ಕೊಡುವ ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳಬೇಕು. ಪತಕರ್ತರೊಂದಿಗಿನ ನಮ್ಮ ಸಂಬಂಧ ಯಾವಾಗಲೂ ಉತ್ತಮವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಪತ್ರಿಕೆಗಳಿಗೆ 4 ಪುಟಗಳ ಜಾಹೀರಾತು ನೀಡಲು ಆದೇಶ ಮಾಡಿದೆ. ಅದೇ ರೀತಿ ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಜಾಹೀರಾತು ನೀಡಲು ಆದೇಶ ಮಾಡಿದೆ. ಎಲ್ಲ ಸಮುದಾಯಗಳ ಧ್ವನಿಗಳು ಬೆಳಕಿಗೆ ಬರಬೇಕು. ಕೇವಲ ಶಹರದ ಸುದ್ದಿಯನ್ನು ಮಾಡದೇ ಎಲ್ಲ ವರ್ಗದ ಧ್ವನಿಯಾಗಿ ಕೆಲಸ ಮಾಡಬೇಕು. ಉತ್ತಮ ಕೆಲಸ ಮಾಡುತ್ತಿದ್ದೀರಿ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿರುವುದು ಬಹಳ ಸಂತೋಷವಾಗಿದೆ. ಸಂಸದ ಡಾ. ಸುಧಾಕರ್ ಅವರು ಬಂದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಯಾಗಿದೆ. ಮೆಡಿಕಲ್ ಕಾಲೇಜು, ಕನ್ನಡ ಭವನ ತರಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/basavaraj-bommai-urges-cm-dk-shivakumar-to-resolve-water-crisis-chikkaballapur-kolar-yettinahole-sat/articleshow-6unvnxn"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಬಾಗೇಪಲ್ಲಿ ಹೆದ್ದಾರಿಯಲ್ಲಿ ಥಾರ್, ಆಟೋ, ಕಂಟೇನರ್ ನಡುವೆ ಸರಣಿ ಅಫಘಾತ: ಐವರು ದುರ್ಮರಣ, ಮೂವರ ಸ್ಥಿತಿ ಗಂಭೀರ!]]></title>
            <link>https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht</link>
            <guid isPermaLink="true">https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht</guid>
            <pubDate>Sun, 31 May 2026 16:58:28 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್, ಆಟೋ ಮತ್ತು ಕಂಟೈನರ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಟೋ ಕಂಟೈನರ್&zwnj;ಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksyw6enqcjjvr5pf6ww32g0c,imgname-1-1780226407095.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಥಾರ್, ಆಟೋ ಮತ್ತು ಕಂಟೈನರ್ ನಡುವೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿವೇಗದ ಥಾರ್ ಕಾರು ಡಿಕ್ಕಿ ಹೊಡೆದ ಪರಿಣಾಮ, ಆಟೋ ಕಂಟೈನರ್&zwnj;ಗೆ ಅಪ್ಪಳಿಸಿ ಸಂಪೂರ್ಣ ನಜ್ಜುಗುಜ್ಜಾಗಿದೆ.&lt;/p&gt;&lt;img&gt;&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ 31): ರಾ&lt;/strong&gt;ಷ್ಟ್ರೀಯ ಹೆದ್ದಾರಿಯಲ್ಲಿ &amp;nbsp;(Chikkaballapura National Highway) ವೇಗವಾಗಿ ಬಂದ ಥಾರ್ ಕಾರು, ಆಟೋ ಮತ್ತು ಕಂಟೈನರ್ ನಡುವೆ ನಡೆದ ಸರಣಿ ಅಪಘಾತದಲ್ಲಿ (Thar, Auto and container horrific series of accidents) ಐವರು ಸ್ಥಳದಲ್ಲೇ ಮೃತಪಟ್ಟಿರುವ (five spot dead) ಅತ್ಯಂತ ದುರದೃಷ್ಟಕರ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಈ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ (Bagepalli) ಸಮೀಪ ಭಾನುವಾರ ಮಧ್ಯಾಹ್ನ ನಡೆದಿದೆ. ಪ್ಯಾಸೆಂಜರ್ ಆಟೋ ಚಾಲಕ ಹಾಗೂ ನಾಲ್ವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದಂತೆ ಐವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯಲ್ಲಿ ನಡೆದಿದ್ದೇನು?&lt;/strong&gt;&lt;/p&gt;&lt;p&gt;ಪೆರೇಸಂದ್ರದಿಂದ ಬಾಗೇಪಲ್ಲಿ ಕಡೆಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಆಟೋಗೆ, ಹಿಂಬದಿಯಿಂದ ಅತಿ ವೇಗವಾಗಿ ಬಂದ 'ಮಹೀಂದ್ರಾ ಥಾರ್' ಕಾರು ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಆಟೋ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ (ಅಥವಾ ನಿಂತಿದ್ದ ಎನ್ನಲಾದ) ಬೃಹತ್ ಕಂಟೈನರ್ ವಾಹನದ ಹಿಂಭಾಗಕ್ಕೆ ಅಪ್ಪಳಿಸಿದೆ. ಎರಡು ಬಲಿಷ್ಠ ವಾಹನಗಳ ನಡುವೆ ಸಿಲುಕಿದ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಬ್ಬಿಣದ ಉಂಡೆಯಂತಾಗಿದೆ.&lt;/p&gt;&lt;img&gt;&lt;p&gt;&lt;strong&gt;ಸ್ಥಳದಲ್ಲೇ ಐವರ ಸಾವು:&lt;/strong&gt;&lt;/p&gt;&lt;p&gt;ಅಪಘಾತದ ಸಮಯದಲ್ಲಿ ಆಟೋದಲ್ಲಿ ಚಾಲಕ ಸೇರಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಆಟೋದಲ್ಲಿದ್ದ ಐವರು ಪ್ರಯಾಣಿಕರು ಗಂಭೀರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ದೇಹಗಳು ಆಟೋದೊಳಗೆ ಸಿಲುಕಿಕೊಂಡಿದ್ದು, ನೋಡುಗರ ಕಣ್ಣಾಲಿಗಳು ಒದ್ದೆಯಾಗುವಂತಿತ್ತು. ಸದ್ಯಕ್ಕೆ ಮೃತರ ಗುರುತು ಇನ್ನು ಪತ್ತೆಯಾಗಿಲ್ಲ.&lt;/p&gt;&lt;img&gt;&lt;p&gt;&lt;strong&gt;ಮೂವರ ಸ್ಥಿತಿ ಗಂಭೀರ:&lt;/strong&gt;&lt;/p&gt;&lt;p&gt;ಆಟೋದಲ್ಲಿದ್ದ ಉಳಿದ ಮೂವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ, ಥಾರ್ ಕಾರಿನ ಚಾಲಕನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಪೊಲೀಸರ ಭೇಟಿ:&lt;/strong&gt;&lt;/p&gt;&lt;p&gt;ಘಟನಾ ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಥಾರ್ ಕಾರಿನ ಅತಿ ವೇಗವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕ್ರೇನ್ ಸಹಾಯದಿಂದ ನಜ್ಜುಗುಜ್ಜಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chikkaballapura-bagepalli-serial-accident-mahindra-thar-passenger-auto-truck-container-many-dead-sat-a2mosht"/>
        </item>
        <item>
            <title><![CDATA[Chikkaballapur: ಆಯತೊಲ್ಲಾ ಖಮೇನಿಗೆ ಅಲಿಪುರ ಗ್ರಾಮಸ್ಥರ ಅಂತಿಮ ವಿದಾಯ]]></title>
            <link>https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit</link>
            <guid isPermaLink="true">https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit</guid>
            <pubDate>Sat, 11 Jul 2026 07:54:58 +0530</pubDate>
            <description><![CDATA[&lt;p&gt;ಇರಾನ್&zwnj;ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು. ದಶಕಗಳ ಹಿಂದೆ ಖಮೇನಿ ಈ ಗ್ರಾಮಕ್ಕೆ ಭೇಟಿ ನೀಡಿದ್ದರಿಂದ, ಗ್ರಾಮಸ್ಥರು ಅಂತ್ಯಕ್ರಿಯೆಯ ನೇರಪ್ರಸಾರ ವೀಕ್ಷಿಸಿ, ಮೂರು ದಿನಗಳ ಶೋಕಾಚರಣೆ ನಡೆಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx7fqctr09defkna0mxad607,imgname-khamenie-1783736546136.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು: &lt;/strong&gt;ಇರಾನ್&zwnj;ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಗೆ ತಾಲೂಕಿನ ಅಲಿಪುರ ಗ್ರಾಮದ ಶಿಯಾ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಂತಿಮ ವಿದಾಯ ಹೇಳಿದರು.&lt;/p&gt;&lt;p&gt;ಗ್ರಾಮದಲ್ಲಿ ಇರುವ ಬಹುತೇಕ ಮುಸ್ಲಿಂ ಸಮುದಾಯದವರು ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧ ಹೊಂದಿರುವ ಶಿಯಾ ಮುಸ್ಲಿಮರು. 4 ದಶಕಗಳ ಹಿಂದೆ ಖುದ್ದು ಆಯಾತೊಲ್ಲಾ ಅಲಿ ಖಮೇನಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದ್ದರಿಂದ ಧಾರ್ಮಿಕ ಗುರು ಖಮೇನಿ ಮೇಲೆ ಎಲ್ಲಿಲ್ಲದ ಪ್ರೀತಿ ತೋರ್ಪಡಿಸುತ್ತಿದ್ದರು.&lt;/p&gt;&lt;p&gt;ಅಮೆರಿಕ ಮತ್ತು ಇಸ್ರೇಲ್ ಫೆ.28ರಂದು ನಡೆಸಿದ ಜಂಟಿ ದಾಳಿಯಲ್ಲಿ ಆಯಾತೊಲ್ಲಾ ಅಲಿ ಖಮೇನಿ ಮೃತಪಟ್ಟಾಗ ಇಡೀ ಅಲಿಪುರ ಗ್ರಾಮ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತಲ್ಲದೆ ಸಾವಿರಾರು ಗ್ರಾಮಸ್ಥರು ಗ್ರಾಮದಲ್ಲಿ ಮೌನ ಮೆರವಣಿಗೆ ನಡೆಸಿ, ಸಂತಾಪ ಸೂಚಿಸಿದ್ದರು. ಇಸ್ರೇಲ್ ಹಾಗೂ ಅಮೆರಿಕ ನಾಶವಾಗುತ್ತವೆ ಎಂದು ಶಾಪಹಾಕಿದ್ದರು. ಗ್ರಾಮದಲ್ಲಿ ಮೂರು ದಿನ ಶೋಕಾಚರಣೆ ಘೋಷಿಸಿದ್ದರು. ಈ ಕಾರಣಕ್ಕೆ ಗ್ರಾಮ ಇಡೀ ದೇಶದ ಗಮನ ಸೆಳೆದಿತ್ತು.&lt;/p&gt;&lt;h2&gt;&lt;strong&gt;ಅಂತ್ಯ ಕ್ರಿಯೆ ನೇರಪ್ರಸಾರ&lt;/strong&gt;&lt;/h2&gt;&lt;p&gt;ಜು. 9ರಂದು ಇರಾನ್ನ ಮಶಾದ್&zwnj;ನಲ್ಲಿ ನಡೆಯಲಿರುವ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ವೀಕ್ಷಿಸಲು ಗ್ರಾಮದ ಅಸ್ತೇನಿ ಮಸೀದಿ ಒಳಾಂಗಣದಲ್ಲಿ ಬೃಹತ್ ಎಲ್ಇಡಿ ಪರದೆಗಳನ್ನು ಅಳವಡಿಸಿ ನೇರಪ್ರಸಾಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 1500-2000 ಮಂದಿ ಭಾಗವಹಿಸಿದ್ದರು. ಜೊತೆಗೆ ಪ್ರಾರ್ಥನೆ ಸಲ್ಲಿಸಿ, ತಮ್ಮ ನಾಯಕನಿಗೆ ಭಕ್ತಿ ಭಾವದಿಂದ ಅಂತಿಮ ವಿದಾಯ ಹೇಳಿದರು.&lt;/p&gt;&lt;h3&gt;&lt;strong&gt;20 ಮಂದಿ ಭಾಗಿ&lt;/strong&gt;&lt;/h3&gt;&lt;p&gt;ಇರಾನ್ನ ಮಶಾದ್ ನಗರದಲ್ಲಿ ನಡೆಯಲಿರುವ ಅಂತಿಮ ವಿಧಿ ವಿದಾನಗಳಲ್ಲಿ ನೇರವಾಗಿ ಭಾಗವಹಿಸಲು ಅಲಿಪುರ ಗ್ರಾಮದಿಂದ 20 ಮಂದಿ ತೆರಳಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-alipur-villagers-bid-final-farewell-to-ayatollah-khamenei-mrq/articleshow-a7amtit"/>
        </item>
        <item>
            <title><![CDATA[Pradeep Eshwar: ಚಪ್ಪಲಿ ಎಸೆತ ಕೇಸ್; ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ವಿರುದ್ಧ ಮತ್ತೊಂದು ದೂರು]]></title>
            <link>https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5</link>
            <guid isPermaLink="true">https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5</guid>
            <pubDate>Tue, 30 Jun 2026 05:47:32 +0530</pubDate>
            <description><![CDATA[&lt;p&gt;ಶಾಸಕ ಪ್ರದೀಪ್ ಈಶ್ವರ ವಿರುದ್ಧ ಜೆಡಿಎಸ್ ದೂರು ನೀಡಿದ ಬೆನ್ನಲ್ಲೇ ಇದೀಗ ಎನ್&zwnj;ಡಿಎ ಮುಖಂಡರು ಸಹ ಚಿಕ್ಕಬಳ್ಳಾಪುರ ಕನ್ನಡ ಭವನದಲ್ಲಿ ನಡೆದ ಗಲಭೆಗೆ ಪ್ರದೀಪ್ ಈಶ್ವರ್ ಅವರೇ ಕಾರಣ ಎಂದು ಎಸ್&zwnj;ಪಿಗೆ ಎನ್&zwnj;ಡಿಎ ಮುಖಂಡರು ದೂರು ನೀಡಿದ್ದಾರೆ. ಅಷ್ಟಕ್ಕೂ ಕನ್ನಡಭವನದಲ್ಲಿ ನಡೆದಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kway2tgw043jzmma9y7jsr7f,imgname----------------------57--1782778522140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚಿಕ್ಕಬಳ್ಳಾಪುರ (ಜೂ.30): &lt;/strong&gt;ನಾಡಪ್ರಭು ಕೆಂಪೇಗೌಡ ಜಯಂತಿ(Nadaprabhu kempegowda jayanti)ಯಂದು ಶನಿವಾರ ನಗರದ ಕನ್ನಡ ಭವನ(Kannada bhavan)ದಲ್ಲಿ ನಡೆದ ಗಲಭೆಗೆ ಶಾಸಕ ಪ್ರದೀಪ್&zwnj; ಈಶ್ವರ್(MLA Pradeep Eshwar) ಅವರು ಕಾರಣ ಎಂದು ಆರೋಪಿಸಿ ಎನ್&zwnj;ಡಿಎ(NDA) ಮಖಂಡರು ಎಸ್ಪಿಗೆ ದೂರು ನೀಡಿದರು.&lt;/p&gt;&lt;p&gt;ನಗರ ಹೊರವಲಯದ ಎಸ್ಪಿ ಕಚೇರಿ ಬಳಿಗೆ ಸೋಮವಾರ ತೆರಳಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ನೇತೃತ್ವದಲ್ಲಿ ಎನ್&zwnj;ಡಿಎ ಮುಖಂಡರು ಎಸ್&zwnj;ಪಿ ಕುಶಲ್ ಚೌಕ್ಸೆಗೆ ಲಿಖಿತ ದೂರು ನೀಡಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; &lt;/strong&gt;ಶಾಸಕ ಪ್ರದೀಪ್ ಈಶ್ವರ್ 'ಮೀಸೆ ತಿರುವಿ, ತೊಡೆ ತಟ್ಟಿ ಪ್ರಚೋದನೆ' ಆರೋಪ: ದೂರು ದಾಖಲಿಸಿದ ಜೆಡಿಎಸ್&lt;/p&gt;&lt;p&gt;ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ಶನಿವಾರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ಯ ವಿಷಯಗಳಿಗೆ ಚಿಕ್ಕಬಳ್ಳಾಪುರ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಲ್ಲಿ ಸೇರಿದ್ದ ಯುವಕರಿಗೆ ಕಾರ್ಯಕ್ರಮವನ್ನು ವಿಫಲಗೊಳಿಸಬೇಕು ಎಂದು ಹಾಗೂ ಪ್ರಚಾರ ಪ್ರಿಯತೆಗಾಗಿ ಸಮುದಾಯದ ಹುಡುಗರನ್ನು ಪ್ರಚೋಚನೆ ಮಾಡಿದ ಪರಿಣಾಮ ಗಲಭೆಗೆ ಸಂಪೂರ್ಣ ಕಾರಣ ಶಾಸಕ ಪ್ರದೀಪ್ ಈಶ್ವರ್ ಅವರೇ ಆಗಿದ್ದಾರೆ. ಈ ಕೂಡಲೇ ಅವರನ್ನು ಮೊದಲನೇ ಆರೋಪಿಯಾಗಿ ಮಾಡುವ ಮೂಲಕ ಕಾನೂನು ಸಮಾಜದಲ್ಲಿ ಎಲ್ಲರಿಗೂ ಒಂದೇ ಎಂಬುದನ್ನು ಸಾಬೀತು ಮಾಡಬೇಕೆಂದು ಆಗ್ರಹಿಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/nda-leaders-file-complaint-with-sp-against-mla-pradeep-easwar-for-incident-during-chikkaballapur-kempegowda-jayanti-rav/articleshow-amo70g5"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ರಾತ್ರೋರಾತ್ರಿ 2500 ಕೆಜಿ ದ್ರಾಕ್ಷಿ ಕದ್ದ ಕಳ್ಳರು, ಕಣ್ಣೀರಿಟ್ಟ ರೈತ!]]></title>
            <link>https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz</link>
            <guid isPermaLink="true">https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz</guid>
            <pubDate>Thu, 16 Jul 2026 22:58:40 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರದ ರೈತ ಬಸವರಾಜ್ ಅವರ ತೋಟದಿಂದ ಕಟಾವಿಗೆ ಸಿದ್ಧವಾಗಿದ್ದ 2.5 ಟನ್ 'ರೆಡ್ ಗ್ಲೋಬ್' ದ್ರಾಕ್ಷಿಯನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಣ್ಣೀರು ಹಾಕುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxnzewrwyqky1kyczqe8h04c,imgname-red-globe-1784222806673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜು.16): &lt;/strong&gt;ಕೆಲವೊಮ್ಮೆ ಕೃಷಿಯ ಅತಿ ದೊಡ್ಡ ಸುಗ್ಗಿಯ ಕಥೆಯು ಕೈಗೆ ಬಂದ ಇಳುವರಿಯ ಬಗ್ಗೆ ಇರುವುದಿಲ್ಲ; ಬದಲಿಗೆ, ರೈತನ ಕಣ್ಣೆದುರೇ ರಾತ್ರೋರಾತ್ರಿ ಮಾಯವಾಗುವ ಬೆಳೆಯ ಕಣ್ಣೀರ ಕಥೆಯಾಗಿರುತ್ತದೆ! ಇಂತಹದ್ದೇ ಒಂದು ಸಿನಿಮಾ ಶೈಲಿಯ ಕಳ್ಳತನ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ಘಟಿಸಿದೆ. ಕಟಾವಿಗೆ ಕೇವಲ ಕೆಲವೇ ದಿನಗಳು ಬಾಕಿ ಇರುವಾಗ ದುಷ್ಕರ್ಮಿಗಳು ರೈತನ ತೋಟಕ್ಕೆ ನುಗ್ಗಿ ಸುಮಾರು 2.5 ಟನ್ ತೂಕದ ಅತ್ಯಂತ ದುಬಾರಿ ತಳಿಯ &lsquo;ರೆಡ್ ಗ್ಲೋಬ್&rsquo; (Red Globe) ದ್ರಾಕ್ಷಿಯನ್ನು ಕಳವು ಮಾಡಿದ್ದಾರೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ ಬಸವರಾಜ್, ಖಾಲಿ ಬಳ್ಳಿಗಳನ್ನು ನೋಡುತ್ತಾ ಕಣ್ಣೀರು ಹಾಕುವಂತಾಗಿದೆ.&lt;/p&gt;&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ಸಮೀಪವಿರುವ ಕೊಲವನಹಳ್ಳಿ ಗ್ರಾಮದ ಎರಡು ಎಕರೆ ವಿಸ್ತೀರ್ಣದ ತೋಟದಲ್ಲಿ ಮಂಗಳವಾರ ತಡರಾತ್ರಿ ಈ ಭಾರೀ ಕಳ್ಳತನ ನಡೆದಿದೆ. ರೈತ ಬಸವರಾಜ್ ನೀಡಿರುವ ಮಾಹಿತಿಯ ಪ್ರಕಾರ, ಕಳ್ಳರು ಪೂರ್ವಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆ. ಕತ್ತಲೆಯಲ್ಲಿ ಕೆರೆಯ ಏರಿಯ (Tank Bund) ಪಕ್ಕದಲ್ಲಿ ತಮ್ಮ ವಾಹನವನ್ನು ಪಾರ್ಕ್ ಮಾಡಿದ್ದ ಕಳ್ಳರು, ತೋಟಕ್ಕೆ ನುಗ್ಗಿ ವೇಗವಾಗಿ ದ್ರಾಕ್ಷಿ ಗೊಂಚಲುಗಳನ್ನು ಕತ್ತರಿಸಿ ವಾಹನಕ್ಕೆ ಲೋಡ್ ಮಾಡಿಕೊಂಡು ಸೂರ್ಯೋದಯಕ್ಕೂ ಮುನ್ನವೇ ಸ್ಥಳದಿಂದ ಪರಾರಿಯಾಗಿದ್ದಾರೆ. ಕದ್ದೊಯ್ದ ಒಟ್ಟು ದ್ರಾಕ್ಷಿಯ ಮೌಲ್ಯ ಮಾರುಕಟ್ಟೆಯಲ್ಲಿ ಸುಮಾರು 3 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;'ಈ ಬೆಳೆಯನ್ನು ಬೆಳೆಯಲು ನಾನು ಬರೋಬ್ಬರಿ 15 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದೆ&quot; ಎಂದು ರೈತ ಬಸವರಾಜ್ ಕಣ್ಣೀರು ಹಾಕಿದ್ದಾರೆ. ಸಸಿ, ರಸಗೊಬ್ಬರ, ಕೀಟನಾಶಕಮತ್ತು ಕೂಲಿ ಕಾರ್ಮಿಕರ ವೆಚ್ಚ ಸೇರಿದಂತೆ ಇಷ್ಟು ದೊಡ್ಡ ಮೊತ್ತವನ್ನು ಸಾಲಸೋಲ ಮಾಡಿ ಹೂಡಿದ್ದೆ. ಈ ಬಾರಿ ಸುಮಾರು 30 ಟನ್ ಪ್ರೀಮಿಯಂ ಗುಣಮಟ್ಟದ 'ರೆಡ್ ಗ್ಲೋಬ್' ದ್ರಾಕ್ಷಿ ಇಳುವರಿ ಬರುವ ನಿರೀಕ್ಷೆಯಿತ್ತು. ಮಾರುಕಟ್ಟೆಯಲ್ಲಿ ಕೆಜಿಗೆ ₹150 ರ ಆಸುಪಾಸಿನಲ್ಲಿ ಬೆಲೆ ಇದ್ದಿದ್ದರಿಂದ, ಇಡೀ ಬೆಳೆಗೆ ಕನಿಷ್ಠ ₹45 ಲಕ್ಷ ಸಿಗುವ ಬೃಹತ್ ಭರವಸೆ ಇತ್ತು. &quot;ಬುಧವಾರ ಬೆಳಗ್ಗೆ ಕಟಾವು ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೆ, ಆದರೆ ರಾತ್ರೋರಾತ್ರಿ ಬಳ್ಳಿಗಳಲ್ಲಿದ್ದ ದ್ರಾಕ್ಷಿ ಗೊಂಚಲುಗಳನ್ನೇ ಕತ್ತರಿಸಿ ಕಳ್ಳರು ಹೊತ್ತೊಯ್ದಿದ್ದಾರೆ&quot; ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮೂರರಿಂದ ನಾಲ್ಕು ಕಳ್ಳರು ಮೊಬೈಲ್ ಟಾರ್ಚ್ ಅಥವಾ ಮಂದ ಬೆಳಕಿನ ಬ್ಯಾಟರಿಗಳನ್ನು ಬಳಸಿ ಗೊಂಚಲುಗಳನ್ನು ಗುರುತಿಸಿ ಕತ್ತರಿಸಿದ್ದಾರೆ ಎಂದು ಅವರು ಶಂಕಿಸಿದ್ದು, ಈ ಸಂಬಂಧ ನಂದಿ ಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಸುಲಭ ತುತ್ತಾಗುತ್ತಿರುವ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗಳು&lt;/strong&gt;&lt;/h2&gt;&lt;p&gt;ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳು ಕಳ್ಳರಿಗೆ ಅತ್ಯಂತ ಸುಲಭವಾದ ಟಾರ್ಗೆಟ್&zwnj;ಗಳಾಗಿ ಮಾರ್ಪಟ್ಟಿವೆ ಎಂದು ನಯನಹಳ್ಳಿಯ ಹಿರಿಯ ದ್ರಾಕ್ಷಿ ಬೆಳೆಗಾರ ಅಂಜನೇಯ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ. &quot;ದ್ರಾಕ್ಷಿ ಮತ್ತು ದಾಳಿಂಬೆಯನ್ನು ಬಹಳ ವೇಗವಾಗಿ ಕಟಾವು ಮಾಡಬಹುದು. ಕೇವಲ ಒಂದು ಗಂಟೆಯಲ್ಲಿ ಒಂದು ಟನ್ ದ್ರಾಕ್ಷಿಯನ್ನು ಕಟಾವು ಮಾಡಿ ವಾಹನಕ್ಕೆ ತುಂಬಿಸಬಹುದು&quot; ಎಂದು ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಮಾರುಕಟ್ಟೆಗೆ ನಿತ್ಯ ನೂರಾರು ಟನ್ ದ್ರಾಕ್ಷಿ ಸರಬರಾಜಾಗುವುದರಿಂದ, ಕದ್ದ ಮಾಲನ್ನು ಯಾರಿಗೂ ತಿಳಿಯದಂತೆ ಮಾರಾಟ ಮಾಡುವುದು ಕಳ್ಳರಿಗೆ ಸುಲಭವಾಗಿದೆ. ಇದರಿಂದಾಗಿ ಅಸಲಿ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕೂಡ ಕಷ್ಟಕರವಾಗುತ್ತಿದೆ.&lt;/p&gt;&lt;h2&gt;&lt;strong&gt;ಚಿಕ್ಕಬಳ್ಳಾಪುರದಲ್ಲಿ ಹೆಚ್ಚುತ್ತಿರುವ &lsquo;ರೆಡ್ ಗ್ಲೋಬ್&rsquo; ತಳಿ ಕ್ರೇಜ್&lt;/strong&gt;&lt;/h2&gt;&lt;p&gt;ತೋಟಗಾರಿಕೆ ಇಲಾಖೆಯ ತಾಂತ್ರಿಕ ಅಧಿಕಾರಿ ರಾಘವೇಂದ್ರ ಅವರು ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 1,900 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಕೃಷಿ ಮಾಡಲಾಗುತ್ತಿದ್ದು, 2,000 ಕ್ಕೂ ಹೆಚ್ಚು ರೈತರು ಇದನ್ನು ನಂಬಿ ಬದುಕುತ್ತಿದ್ದಾರೆ. ಈ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ &lsquo;ಬೆಂಗಳೂರು ಬ್ಲೂ&rsquo; (Bengaluru Blue) ಮತ್ತು &lsquo;ದಿಲ್&zwnj;ಕುಶ್&rsquo; (Dilkush) ತಳಿಗಳು ಪ್ರಾಬಲ್ಯ ಹೊಂದಿದ್ದರೂ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆಯಲ್ಲಿರುವ ಭಾರಿ ಬೇಡಿಕೆಯಿಂದಾಗಿ ರೈತರು ಆಕರ್ಷಿತರಾಗಿ &lsquo;ರೆಡ್ ಗ್ಲೋಬ್&rsquo; ತಳಿಯನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ತೋರುತ್ತಿದ್ದಾರೆ. ಆದರೆ ಬೆಲೆ ಹೆಚ್ಚಾದಂತೆ ತೋಟಗಳಿಗೆ ಕಳ್ಳರ ಉಪಟಳವೂ ಹೆಚ್ಚಾಗುತ್ತಿದೆ.&lt;/p&gt;&lt;p&gt;ಈ ದ್ರಾಕ್ಷಿ ದರೋಡೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಂದಿ ಬೆಟ್ಟದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಳ್ಳತನಕ್ಕೆ ಮತ್ತು ದ್ರಾಕ್ಷಿ ಸಾಗಣೆಗೆ ಬಳಸಲಾದ ವಾಹನವನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ರಸ್ತೆಗಳು, ಹೆದ್ದಾರಿಗಳು ಹಾಗೂ ಕೆರೆಯ ಏರಿಯ ಸಮೀಪವಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>chikkaballapur</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-rural/red-globe-grapes-stolen-chikkaballapura-nandi-hills-farmer-loss-san/articleshow-o1fdvnz"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: 'ಮಿನಿ ಇರಾನ್' ಅಲಿಪುರದಿಂದ  ಖಮೇನಿ ಅಂತ್ಯಕ್ರಿಯೆಗೆ ಹೊರಟ 100 ಜನರು!]]></title>
            <link>https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717</link>
            <guid isPermaLink="true">https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717</guid>
            <pubDate>Wed, 08 Jul 2026 06:44:38 +0530</pubDate>
            <description><![CDATA[&lt;p&gt;ಟೆಹ್ರಾನ್&zwnj;ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಿಂದ ಸುಮಾರು 100 ಮಂದಿ ಇರಾನ್&zwnj;ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwrk5rz80n56m2xsbegtck1g,imgname-----------------------2026-07-05t130300.426-1783236846567.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಚಿಕ್ಕಬಳ್ಳಾಪುರ (ಜು.8): ಟೆಹ್ರಾನ್&zwnj;ನಲ್ಲಿ ನಡೆದ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮ(Alipura village)ದಿಂದ ಸುಮಾರು 100 ಮಂದಿ ಇರಾನ್&zwnj;ಗೆ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಇವರೆಲ್ಲಾ ಭಾನುವಾರ ಬೆಂಗಳೂರಿನಿಂದ ಮುಂಬೈಗೆ ತೆರಳಿ, ಅಲ್ಲಿಂದ ದುಬೈ ಮೂಲಕ ಟೆಹ್ರಾನ್&zwnj;ಗೆ ತೆರಳಿದ್ದು, ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?&lt;/p&gt;&lt;h2&gt;ಖಮೇನಿಗೂ ಚಿಕ್ಕಬಳ್ಳಾಪುರಕ್ಕೂ ಇರುವ ನಂಟೇನು?&lt;/h2&gt;&lt;p&gt;ಬಹುಸಂಖ್ಯಾತ ಶಿಯಾ ಮುಸ್ಲಿಮರನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಗ್ರಾಮವು ಇರಾನ್&zwnj;ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರೊಂದಿಗೆ ಆಳವಾದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಇಲ್ಲಿನ ಜನ ಖಮೇನಿ ಅವರನ್ನು ತಮ್ಮ ಪ್ರಮುಖ ಧರ್ಮಗುರುವೆಂದು ಗೌರವಿಸುತ್ತಾರೆ. ಈ ಚಿಕ್ಕ ಗ್ರಾಮವನ್ನು ''ಮಿನಿ ಇರಾನ್'' ಎಂದೂ ಕರೆಯುತ್ತಾರೆ. 1981-82ರ ವೇಳೆ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು. ಇರಾನ್ ಸರ್ಕಾರಿ ಸಂಸ್ಥೆಗಳ ಸಹಾಯದಿಂದ ನಿರ್ಮಿಸಲಾದ ಸಮುದಾಯ ಆಸ್ಪತ್ರೆಯನ್ನು ಉದ್ಘಾಟಿಸಿದ್ದರು.&lt;/p&gt;&lt;p&gt;ಫೆಬ್ರವರಿ 28ರಂದು ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇರಾನ್&zwnj;ನ ಮಾಜಿ ಸರ್ವೋಚ್ಛ ನಾಯಕ ಖಮೇನಿ ಹತರಾಗಿದ್ದು, ಶನಿವಾರದಿಂದ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆರಂಭವಾಗಿವೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/100-people-traveled-from-alipura-in-chikkaballapur-for-khomeinis-funeral-rav/articleshow-oq1y717"/>
        </item>
        <item>
            <title><![CDATA[ಎಲ್ಲ ಸಚಿವರು ರಜೆಯಲ್ಲಿದ್ದಾರೆ: Congress ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ!]]></title>
            <link>https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3</guid>
            <pubDate>Sun, 14 Jun 2026 20:12:48 +0530</pubDate>
            <description><![CDATA[&lt;p&gt;Karnataka Politics: ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಂತಾಮಣಿ (ಜೂ.14): &lt;/strong&gt;ಲೂಟಿಗಾಗಿ ಸರ್ಕಾರ ರಚನೆಯಾಗಿದೆ. ಕೇವಲ ನಾಯಕತ್ವ ಬದಲಾಗಿದೆಯೇ ಹೊರತು ಮನಸ್ಥಿತಿ ಬದಲಾಗಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 14 ಮಂತ್ರಿಗಳಾಗಿದ್ದು ಖಾತೆಗಾಗಿ ಸೋನಿಯಾ ಗಾಂಧಿ ಮನೆಯ ಬಾಗಿಲು ಬಳಿ ನಿಂತಿದ್ದು ಎಲ್ಲ ಸಚಿವರು ರಜೆಯ ಮೇಲೆ ಹೊರಟಿದ್ದಾರೆ ಎಂದು ವಿಧಾನಪರಿಷತ್&zwnj;ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದ ಜನತೆಯ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲದಂತಾಗಿದೆ, ನನಗೆ ಆ ಖಾತೆ ಬೇಕಿಲ್ಲ, ಈ ಖಾತೆ ಬೇಕು, ಈ ಖಾತೆ ಬೇಡ ಬಂಡವಾಳವಿರುವ ಬೇರೆ ಖಾತೆ ಕೊಡಿಯೆಂದು ದುಂಬಾಲು ಬಿದ್ದಿದ್ದಾರೆ ಎಂದು ದೂರಿದರು.&lt;/p&gt;&lt;p&gt;ಸ್ಥಳೀಯ ರೈತರ ಸಮಸ್ಯೆ, ರಸಗೊಬ್ಬರ, ಬಿತ್ತನೆ ಬೀಜಗಳು ಇತ್ಯಾದಿಗಳು ಬಗ್ಗೆ ವಿಚಾರಿಸ ಬೇಕಾದವರು ಹೈಕಮಾಂಡ್&zwnj; ಭೇಟಿಗಾಗಿ ದೆಹಲಿಯಲ್ಲಿ ಮೊಕ್ಕಾಂ ಹೂಡಿದ್ದಾರೆ. ಮಾವಿಗೆ ಬೆಲೆ ಇಲ್ಲದೆ ಬೀದಿಯಲ್ಲಿ ಬಿಸಾಡಿ ಹೋಗುತ್ತಿರುವ ರೈತರ ಕಷ್ಟಗಳಿಗೆ ಸ್ಪಂದಿಸುವವರಾರು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.&lt;/p&gt;&lt;p&gt;ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಸೇರಿ ಎಲ್ಲಾ ತಾಲೂಕುಗಳಲ್ಲಿ ಮಾವು ಬೆಳೆಯುತ್ತಾರೆ. ಆದರೆ ಇಲ್ಲಿನ ಮಾವಿಗೆ ಹೆಚ್ಚಿನ ಬೇಡಿಕೆಯಿದ್ದು ಆದರೆ ಬೆಲೆಯಿಲ್ಲದಂತಾಗಿದೆ. ಬೇರೆ ಕಸುಬಿಲ್ಲ, ಬೆಲೆಯಿಲ್ಲ, ನಷ್ಟವನ್ನು ಅನುಭವಿಸುತ್ತಿದ್ದಾರೆ. ಮಾವು ಬೆಳೆಗಾರರಿಗೆ 500 ಕೋಟಿ ಪರಿಹಾರ ಕೊಡಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದರು.&lt;/p&gt;&lt;h2&gt;&lt;strong&gt;ಪ್ರಿಯಾಂಕ್&zwnj; ಖರ್ಗೆ ವಿರುದ್ಧ ಕಿಡಿ&lt;/strong&gt;&lt;/h2&gt;&lt;p&gt;ಪ್ರಿಯಾಂಕ್ ಖರ್ಗೆಯವರು ಆರ್&zwnj;ಎಸ್&zwnj;ಎಸ್&zwnj;ನ್ನು ನೋಂದಾಯಿಸಬೇಕು ಇಲ್ಲವೇ ನಿಷೇಧ ಮಾಡುವುದಾಗಿ ಹೇಳಿರುವ ಕುರಿತ ಪ್ರಶ್ನೆಗೆ ಅವರಿಗೆ ನಿದ್ದೆ ಬರುವುದಿಲ್ಲ, ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಕೆಲಸ ಮಾಡಿದ್ದು ಕಡಿಮೆ. ಆದರೆ ಆರ್ ಎಸ್&zwnj;ಎಸ್ ನಿಂದನೆ ಮಾಡಿದರೆ ಅವರಿಗೆ ಬೆಲೆಯೆಂದು ವರ್ತಿಸುತ್ತಿದ್ದಾರೆ. ಹಳ್ಳಿ ಕಡೆ ಯುಗಾದಿ ಸಂದರ್ಭದಲ್ಲಿ ರಾಮರಸವನ್ನು ತಯಾರಿಸುತ್ತಾರೆ. ಅದನ್ನು ಕುಡಿದರೆ ಎರಡು ದಿನಗಳಾದರೂ ಅದರ ಮತ್ತು ಕಡಿಮೆಯಾಗುತ್ತಿರಲಿಲ್ಲ. ಅದರಂತೆ ಪ್ರಿಯಾಂಕ್ ಖರ್ಗೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-congress-government-ministers-delhi-gvd/articleshow-pv9zah3"/>
        </item>
        <item>
            <title><![CDATA[ಚಿಕ್ಕಬಳ್ಳಾಪುರದ ವಿದ್ಯಾರ್ಥಿ ಜನಿವಾರಕ್ಕೆ ಕತ್ತರಿ;  ವಾರದ ಹಿಂದೆ ಉಪನಯನ ಆದವಗೆ ಅಪಮಾನ]]></title>
            <link>https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu</link>
            <guid isPermaLink="true">https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu</guid>
            <pubDate>Sun, 26 Apr 2026 05:36:39 +0530</pubDate>
            <description><![CDATA[ಚಿಕ್ಕಬಳ್ಳಾಪುರದ ನಾಗಾರ್ಜುನ ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷೆಯ ವೇಳೆ, ವಿದ್ಯಾರ್ಥಿ ಸುಪ್ರೀತ್&zwnj;ನ ಜನಿವಾರವನ್ನು ಪರೀಕ್ಷಾ ಸಿಬ್ಬಂದಿ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿ ಸರಿಯಾಗಿ ಪರೀಕ್ಷೆ ಬರೆಯಲು ವಿಫಲನಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hts77efat0nvg9g7jrme46xg,imgname-cet-exam-1712390912489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ:&lt;/strong&gt; ಬೆಂಗಳೂರಿನ ಬಳಿಕ ಈಗ ಚಿಕ್ಕಬಳ್ಳಾಪುರ ತಾಲೂಕಿನ ಖಾಸಗಿ ಕಾಲೇಜೊಂದರಲ್ಲಿಯೂ ಸಿಇಟಿ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಬೆಂಗಳೂರಿನ ಖಾಸಗಿ ಕಾಲೇಜೊಂದರ ಸಿಇಟಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ಗುರುವಾರ ಪರೀಕ್ಷೆಗೆ ಹಾಜರಾದ ಕೆಲ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಲು ಸೂಚಿಸಿದ ಘಟನೆ ನಡೆದಿದ್ದು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರ ನಡುವೆಯೇ, ಚಿಕ್ಕಬಳ್ಳಾಪುರ ತಾಲೂಕಿನ ನಾಗಾರ್ಜುನ ಕಾಲೇಜಿನಲ್ಲಿ ಗುರುವಾರ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಎಸೆದಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್&zwnj; ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲು ವಿದ್ಯಾರ್ಥಿ, ಆತನ ತಾಯಿ ಮತ್ತು ಬ್ರಾಹ್ಮಣ ಸಮುದಾಯದ ಮುಖಂಡರು ಮುಂದಾಗಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಚಿಂತಾಮಣಿಯ ವಿದ್ಯಾರ್ಥಿ ಸುಪ್ರೀತ್&zwnj; ಕೆ.ಆರ್., ಏಪ್ರಿಲ್&zwnj; 23ರ ಗುರುವಾರದಂದು ಸಿಇಟಿ ಬರೆಯಲು ನಾಗಾರ್ಜುನ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬಂದಾಗ ಜನಿವಾರ ಕತ್ತರಿಸಲಾಗಿದೆ. ತಂದೆ ಇಲ್ಲದ ಸುಪ್ರೀತ್&zwnj;ಗೆ ಆತನ ತಾಯಿ ವಾಣಿ, ಕಳೆದ 1 ವಾರದ ಹಿಂದೆಯಷ್ಟೇ ಸಂಬಂಧಿಕರ ಸಮ್ಮುಖದಲ್ಲಿ ಉಪನಯನ ಕಾಯಕ್ರಮ ಮಾಡಿಸಿ ಜನಿವಾರ ಹಾಕಿಸಿದ್ದರು.&lt;/p&gt;&lt;h2&gt;&lt;strong&gt;ಗ್ರೇಸ್&zwnj; ಅಂಕ ನೀಡಿ ಸಹಾಯ ಮಾಡಲಿ&lt;/strong&gt;&lt;/h2&gt;&lt;p&gt;ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ವಾಣಿ, ಜನಿವಾರ ಕತ್ತರಿಸಿದ್ದರಿಂದ ತಮ್ಮ ಪುತ್ರ ವಿಚಲಿತನಾಗಿದ್ದು, ಸರಿಯಾಗಿ ಪರೀಕ್ಷೆ ಬರೆದಿಲ್ಲ. ಹೀಗಾಗಿ, ಮಗನಿಗೆ ಮರು ಪರೀಕ್ಷೆಯಾದರೂ ಮಾಡಲಿ, ಇಲ್ಲವೇ ಗ್ರೇಸ್&zwnj; ಅಂಕ ನೀಡಿ ಸಹಾಯ ಮಾಡಲಿ ಎಂದು ಮನವಿ ಮಾಡಿದ್ದಾರೆ.&lt;/p&gt;&lt;p&gt;ಸುಪ್ರೀತ್ ಮಾತನಾಡಿ, ನಾನೇ ತೆಗೆದು ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರೂ ಅಧಿಕಾರಿಗಳು ಕೇಳಲಿಲ್ಲ. ಜನಿವಾರ ತೆಗೆಯುವುದಕ್ಕೂ ಅವಕಾಶ ನೀಡಲಿಲ್ಲ. ಕತ್ತರಿಯಿಂದ ಜನಿವಾರ ಕತ್ತರಿಸಿ, ಕಸದ ಬುಟ್ಟಿಗೆ ಹಾಕಿದರು. ಪರೀಕ್ಷೆ ಮುಗಿದ ಮೇಲೆ ಕಸದ ಬುಟ್ಟಿಯಲ್ಲಿ ಜನಿವಾರ ಹುಡುಕಾಡಿ ತೆಗೆದುಕೊಂದು ಬಂದೆ. ನನ್ನ ತಂದೆ ಮೃತಪಟ್ಟು ಒಂದು ವರ್ಷ ಆಗಿದೆ. 8 ದಿನಗಳ ಹಿಂದೆ ನನಗೆ ಉಪನಯನವಾಗಿತ್ತು. ಜನಿವಾರ ಕತ್ತರಿಸಿದ ಕಾರಣ ಒತ್ತಡಕ್ಕೆ ಒಳಗಾಗಿ ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ. ದ್ವಿತೀಯ ಪಿಯುನಲ್ಲಿ ಪಿಸಿಎಂಬಿ ವಿಷಯದಲ್ಲಿ ಶೇ.90ರಷ್ಟು ಅಂಕ ತೆಗೆದಿದ್ದೇನೆ. ನಮಗೆ ಮೊದಲೇ ಈ ಬಗ್ಗೆ ಹೇಳಿರಲಿಲ್ಲ. ನಿಯಮಾವಳಿಯಲ್ಲೂ ಜನಿವಾರ ಹಾಕಿಕೊಂಡು ಬರಬಾರದು ಅಂತ ಹೇಳಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಇಂತಹ ಅವಮಾನ ತಪ್ಪಿಸಲು ಕಾಯ್ದೆ ತನ್ನಿ&lt;/strong&gt;&lt;/h3&gt;&lt;p&gt;ಬ್ರಾಹ್ಮಣರ ಜನಿವಾರಕ್ಕೆ ಕೈ ಹಾಕಿದ ಅಧಿಕಾರಿಗಳು ಮುಂದೆ ಪರಮ ಪವಿತ್ರವಾದ ಮಂಗಳಸೂತ್ರಕ್ಕೂ ಕೈ ಹಾಕುವುದಿಲ್ಲ ಎಂಬುದಕ್ಕೆ ಯಾವ ಗ್ಯಾರಂಟಿ? ಅಧಿಕಾರಿಗಳ ನಿರ್ಲಕ್ಷ್ಯದಿಂದ ಪದೇಪದೇ ಇಂತಹ ತಪ್ಪುಗಳಾಗುತ್ತಿದ್ದು, ಸರ್ಕಾರ ಅವಮಾನ ಎದುರಿಸುವಂತಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ ಬ್ರಾಹ್ಮಣ ಸಮುದಾಯಕ್ಕೆ ಶಾಶ್ವತ ಪರಿಹಾರ ನೀಡಬೇಕು.&lt;/p&gt;&lt;p&gt;ಡಾ.ಶಂಕರ್&zwnj; ಗುಹ ದ್ವಾರಕಾನಾಥ್&zwnj;, ಕೆಪಿಸಿಸಿ ಕಾರ್ಯಾಧ್ಯಕ್ಷ&lt;/p&gt;&lt;p&gt;--&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/examination-center-staff-cut-off-student-s-janiwara-from-chikkaballapur-mrq/articleshow-pvqp2vu"/>
        </item>
        <item>
            <title><![CDATA[ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಜೀವಭಯ? ಗುಪ್ತಚರ ವರದಿಯಲ್ಲಿ ಶಾಕಿಂಗ್ ಮಾಹಿತಿ]]></title>
            <link>https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu</link>
            <guid isPermaLink="true">https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu</guid>
            <pubDate>Sat, 04 Jul 2026 08:22:26 +0530</pubDate>
            <description><![CDATA[ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲದ ನಂತರ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಗುಪ್ತಚರ ಇಲಾಖೆಯು ಅವರಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwngm6v3tx9r7f84s35p1d95,imgname-pradeep-eshwar-1783133510499.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ: &lt;/strong&gt;ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನಡೆದ ಗದ್ದಲ ಹಾಗೂ ಅದರ ನಂತರ ಜಿಲ್ಲೆಯ ರಾಜಕೀಯ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಹಿನ್ನೆಲೆ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಜೀವಭಯದ ಆತಂಕ ಎದುರಾಗಿರುವ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸುವ ಅಗತ್ಯವಿದೆ ಎಂದು ರಾಜ್ಯ ಗುಪ್ತಚರ ಇಲಾಖೆ ಗೃಹ ಇಲಾಖೆಗೆ ವರದಿ ಸಲ್ಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಜೂ. 27ರಂದು ಸರ್ಕಾರದ ವತಿಯಿಂದ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಇರಬಾರದು, ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗೋ ಬ್ಯಾಕ್ ಪ್ರದೀಪ್ ಈಶ್ವರ್ ಎಂದು ಘೋಷಣೆ ಕೂಗುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಪಮಾನ ಮಾಡಿದ್ದರು. ಇದರಿಂದ ಕುಪಿತರಾದ ಶಾಸಕರು ನಂತರ ಕಾರ್ಯಕ್ರಮ ಮುಗಿಸಿ ಹೊರ ಬಂದಾಗ ಹೊರಗೆ ಬಂದು ತೋಳು ತಟ್ಟಿ ಅಬ್ಬರಿಸಿದ್ದು, ಪ್ರತಿಭಟನಾಕಾರರು ಚಪ್ಪಲಿ ಎಸೆದಿದ್ದು ಭಾರೀ ಸುದ್ದಿಯಾಗಿತ್ತು. ಈ ಅನಿರೀಕ್ಷಿತ ಗಲಾಟೆ ಮತ್ತು ಗದ್ದಲ ಕ್ಷೇತ್ರದಲ್ಲಿ ಅಶಾಂತಿಗೆ ಕಾರಣವಾಗಿತ್ತು. ಮೇಲಾಗಿ ಈ ಘಟನೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮುಖಂಡರ ನಡುವೆ ಆರೋಪ-ಪ್ರತ್ಯಾರೋಪ, ದೂರು ಪ್ರತಿದೂರಿಗೆ ಕಾರಣವಾಗಿದೆ.&amp;nbsp;&lt;/p&gt;&lt;h2&gt;&lt;strong&gt;ಕ್ಷೇತ್ರದಲ್ಲಿ ಮಾಹಿತಿ ಕಲೆ ಹಾಕಿರುವ ಅಧಿಕಾರಿಗಳು&lt;/strong&gt;&lt;/h2&gt;&lt;p&gt;ಈ ಬೆಳವಣಿಗೆಗಳ ಬೆನ್ನಲ್ಲೇ ಜುಲೈ 2ರಂದು ರಾಜ್ಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಚಿಕ್ಕಬಳ್ಳಾಪುರ ಜಿಲ್ಲೆಗೆ ಭೇಟಿ ನೀಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿರುವುದು ಗಮನಾರ್ಹವಾಗಿದೆ.&lt;/p&gt;&lt;h3&gt;&lt;strong&gt;ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು&lt;/strong&gt;&lt;/h3&gt;&lt;p&gt;ಮುನ್ನೆಚ್ಚರಿಕೆ ಕ್ರಮಗಳಿಗೆ ಶಿಫಾರಸು ಸಲ್ಲಿಕೆಯಾಗಿರುವ ಕ್ಷೇತ್ರದ ಅಧ್ಯಯನದ ವರದಿಯಲ್ಲಿ ಶಾಸಕ ಪ್ರದೀಪ್ ಈಶ್ವರ್&zwnj;ಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸುವುದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಅಥವಾ ಗೃಹ ಇಲಾಖೆಯಿಂದ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Pradeep Eswar: ಪ್ರದೀಪ್&zwnj; ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಬಿಗ್&zwnj; ಟ್ವಿಸ್ಟ್&zwnj;; ಅಚ್ಚರಿ ಮೂಡಿಸಿದ ಮಾಜಿ ಸಿಎಂ ಸಿದ್ದು ನಡೆ!&lt;/strong&gt;&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-mla-pradeep-eshwar-fears-for-his-life-shocking-information-in-intelligence-report-mrq/articleshow-qingwyu"/>
        </item>
        <item>
            <title><![CDATA[Gauribidanur: ಹಾಡಹಗಲೇ ಮನೆಗೆ ನುಗ್ಗಿ ವೃದ್ಧೆ ಹ*ತ್ಯೆ: ಕಿವಿ ಸಮೇತ ಓಲೆ ಕಿತ್ತು ಪರಾರಿ]]></title>
            <link>https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</link>
            <guid isPermaLink="true">https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8</guid>
            <pubDate>Fri, 19 Jun 2026 22:53:02 +0530</pubDate>
            <description><![CDATA[&lt;p&gt;Gauribidanur: ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvgcec2beqe7br6h13c49sj0,imgname-hhkh-1781887610955.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.19):&lt;/strong&gt; ತಾಲೂಕಿನ ತೊಂಡೆಬಾವಿ ಹೋಬಳಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ದರೋಡೆ ಹಾಗೂ ಹಲ್ಲೆ ಪ್ರಕರಣವೊಂದು ವೃದ್ಧೆಯ ಸಾವಿನಲ್ಲಿ ಅಂತ್ಯಗೊಂಡಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಒಂಟಿಯಾಗಿದ್ದ 60 ವರ್ಷದ ಸುಬ್ಬಮ್ಮ ಎಂಬ ವೃದ್ಧೆಯ ಮೇಲೆ ಕಳ್ಳರು ಅಮಾನುಷವಾಗಿ ಹಲ್ಲೆ ನಡೆಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಿವಿಯ ಸಮೇತ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಮೃತಪಟ್ಟಿದ್ದಾರೆ.&lt;/p&gt;&lt;p&gt;ಸುಬ್ಬಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬದ ಸದಸ್ಯರು ಜಮೀನಿನ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿದ್ದಾರೆ. ಅವರ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸುಬ್ಬಮ್ಮಜೋರಾಗಿ ಕೂಗಾಡಲು ಆರಂಭಿಸಿದ್ದು, ಕಳ್ಳರ ಕೃತ್ಯಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆತಂಕಗೊಂಡ ಆರೋಪಿಗಳು ಓಲೆಗಳನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಕಳ್ಳರು ಓಲೆಗಳನ್ನು ಕಿತ್ತುಕೊಳ್ಳುವ ವೇಳೆ ವೃದ್ಧೆಯ ಕಿವಿಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ರಕ್ತಸ್ರಾವ ಉಂಟಾಗಿದೆ. ಅಲ್ಲದೆ ವೃದ್ಧೆ ನಿರಂತರವಾಗಿ ಕೂಗಾಡುತ್ತಿದ್ದುದನ್ನು ಕಂಡು ಕೋಪಗೊಂಡ ಕಳ್ಳರು, ತಲೆಗೆ ಬಲವಾದ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಹಲ್ಲೆಯ ಪರಿಣಾಮ ವೃದ್ಧೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಯಾರೂ ಇಲ್ಲದ ಕಾರಣ ನೆರವು ಸಿಗಲಿಲ್ಲ. ಮಧ್ಯಾಹ್ನ ಸುಮಾರು 3.30 ರ ವೇಳೆಗೆ ಜಮೀನಿನ ಕೆಲಸ ಮುಗಿಸಿ ಮನೆಗೆ ಬಂದ ಸೊಸೆ, ವೃದ್ಧೆ ರಕ್ತಸ್ರಾವದಿಂದ ಒದ್ದಾಡುತ್ತಿರುವುದನ್ನು ಕಂಡು ಆತಂಕಗೊಂಡಿದ್ದಾರೆ. ಕೂಡಲೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;p&gt;ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ತಲೆಗೆ ತೀವ್ರ ಪೆಟ್ಟಾಗಿರುವುದು ಹಾಗೂ ಅಧಿಕ ರಕ್ತಸ್ರಾವವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಮುಂದುವರಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಸುಬ್ಬಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಗ್ರಾಮಸ್ಥರಲ್ಲಿ ಆತಂಕ&lt;/strong&gt;&lt;/h2&gt;&lt;p&gt;ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ದರೋಡೆ ನಡೆಸಿರುವ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಬ್ಬಮ್ಮ ಅವರ ದುರ್ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಸವನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/gauribidanur-robbery-case-old-woman-killed-for-gold-earrings-gvd/articleshow-s32m8v8"/>
        </item>
        <item>
            <title><![CDATA[JDS Challenge pradeep eshwar: ''2028ರಲ್ಲಿ ನೀವು ಗೆದ್ರೆ ನಿಮ್ಮ ಮನೆ ವಾಚ್‌ಮ್ಯಾನ್ ಆಗ್ತೀನಿ, ಸೋತ್ರೆ ನೀವು..?]]></title>
            <link>https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</link>
            <guid isPermaLink="true">https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re</guid>
            <pubDate>Sat, 27 Jun 2026 08:28:55 +0530</pubDate>
            <description><![CDATA[&lt;p&gt;&amp;nbsp;ಹೆಚ್.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್&zwnj;ಗೆ, ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್ ಬಹಿರಂಗ ಸವಾಲು. 2028ರ ಚುನಾವಣೆಯಲ್ಲಿ ನೀವು ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ಸೋತರೆ ನೀವು ಕುಮಾರಸ್ವಾಮಿ ಮನೆ ಸೆಕ್ಯೂರಿಟಿ ಆಗಬೇಕು ಎಂದು ಸವಾಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf5vy7mnwvtzvf2wf51cydvx,imgname-pradeep-eshwar--1--1768649858709.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಜೂ.27):&amp;nbsp;&lt;/strong&gt; ಕೇಂದ್ರ ಸಚಿವರಾದ ಹೆಚ್&zwnj;ಡಿ&lt;strong&gt; &lt;/strong&gt;ಕುಮಾರಸ್ವಾಮಿ(HD Kumaraswamy) ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡುವ ನೀವು 2028ಕ್ಕೆ ಗೆದ್ದರೆ ನಾನು ನಿಮ್ಮ ಮನೆ ವಾಚ್&zwnj;ಮನ್ ಆಗುತ್ತೇನೆ, ನೀವು ಸೋತರೆ ಕುಮಾರಸ್ವಾಮಿ ಮನೆ ಮುಂದೆ ಸೆಕ್ಯೂರಿಟಿ ಆಗುತ್ತೀರಾ ಎಂದು ಎಂದು ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್(Shidlaghatta JDS MLA B.N. Ravikumar) ಅವರು ಶಾಸಕ ಪ್ರದೀಪ್ ಈಶ್ವರ್&zwnj;(Pradeep Eshwar)ಗೆ ಬಹಿರಂಗ ಸವಾಲು ಹಾಕಿದ್ದಾರೆ.&amp;nbsp;&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರದೀಪ್ ಅವರೇ ನೀವು ಶಾಸಕರಾಗಿದ್ದು ಕೇವಲ ಕಾಂಗ್ರೆಸ್ ಮತಗಳಿಂದ ಅಲ್ಲ. ಜೆಡಿಎಸ್ ಮತಗಳಿಂದ ಎಂಬುದನ್ನು ಮರೆಯಬೇಡಿ, ಶಾಸಕರಾಗುವ ಮೊದಲು ನಿಮ್ಮ ಆಸ್ತಿ ಎಷ್ಟಿತ್ತು. ಈಗ ಎಷ್ಟು ಇದೆ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಕುಮಾರಸ್ವಾಮಿ ಅವರು ಕೋರ್ಟ್ ನೀಡಿದ ನೋಟಿಸ್ಸನ್ನಷ್ಟೇ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;ಹೆಚ್ಚಿನ ಸುದ್ದಿಗಳಿಗೆ ಕ್ಲಿಕ್ ಮಾಡಿ: &lt;/strong&gt;Pradeep Eshwar: 'ತಾಕತ್ತಿದ್ದರೆ ನನ್ನ ಮೇಲೆ ಐಟಿ, ಇಡಿ ದಾಳಿ ಮಾಡಿಸಿ..' ಕೇಂದ್ರ ಸಚಿವ ಹೆಚ್&zwnj;ಡಿಕೆಗೆ ಪ್ರದೀಪ್ ಈಶ್ವರ್ ಸವಾಲು!&amp;nbsp;&lt;/p&gt;&lt;p&gt;Bidadi Township: ಇಂದು ಬೈರಮಂಗಲದಲ್ಲಿ ಮಧ್ಯಾಹ್ನತನಕ ಕಾಯ್ತೇನೆ, ಸಿಎಂ ಬರಲಿ: ಎಚ್&zwnj;ಡಿಕೆ&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-politics-jds-mla-bn-ravikumar-challenges-mla-pradeep-eshwar-rav/articleshow-u43u5re"/>
        </item>
        <item>
            <title><![CDATA[ಚಿಕ್ಕಬಳ್ಳಾಪುರ: ಗುತ್ತಿಗೆದಾರರ ನಿರ್ಲಕ್ಷ್ಯ, ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು!]]></title>
            <link>https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</link>
            <guid isPermaLink="true">https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua</guid>
            <pubDate>Wed, 17 Jun 2026 11:18:03 +0530</pubDate>
            <description><![CDATA[&lt;p&gt;ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ, ನಿರ್ಮಾಣ ಹಂತದ ಸರ್ಕಾರಿ ಕಟ್ಟಡದ ನೀರು ತುಂಬಿದ್ದ ಗುಂಡಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಈ ದುರ್ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ, ಸಾರ್ವಜನಿಕರು ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva11vp03d0t6s97xw0swqxg,imgname-----------------------2026-06-17t110028.705-1781674340032.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌರಿಬಿದನೂರು (ಜೂ.17)&lt;/strong&gt;: ತಾಲೂಕಿನ ಹಿರೇಬಿದನೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂಭಾಗದಲ್ಲಿ ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ನೀರು ತುಂಬಿದ್ದ ಗುಂಡಿಯಲ್ಲಿ ಒಂದೂವರೆ ವರ್ಷದ ಮಗುವೊಂದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಗುಂಡಿಗೆ ಜಾರಿ ಬಿದ್ದ ಮಗು&lt;/h2&gt;&lt;p&gt;ಕಾಮಗಾರಿ ಸ್ಥಳದಲ್ಲಿ ಲಿಫ್ಟ್ ನಿರ್ಮಾಣಕ್ಕಾಗಿ ಅಗಲವಾದ ಗುಂಡಿ ತೋಡಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ನೀರು ತುಂಬಿಕೊಂಡಿತ್ತು. ಆಟವಾಡುತ್ತಿದ್ದ ಮಗು ನೀರು ತುಂಬಿದ್ದ ಗುಂಡಿಗೆ ಜಾರಿ ಬಿದ್ದ ಪರಿಣಾಮ ಮೃತಪಟ್ಟಿದೆ.&lt;/p&gt;&lt;h3&gt;ಮಗುವನ್ನ ಕಳೆದುಕೊಂಡ ಕಾರ್ಮಿಕರು ಅಕ್ರಂದನ&lt;/h3&gt;&lt;p&gt;ಇದೇ ಕಟ್ಟಡದಲ್ಲಿ ಕಾರ್ಮಿಕರಾದ ಬೆಂಗಳೂರಿನ ಶ್ರೀರಾಂಪುರ ಮೂಲದ ರಾಜಪಾಲ್&zwnj; ಹಾಗೂ ಶ್ವೇತಾ ದಂಪತಿಯ ಮಗಳಾದ ಪಲ್ಲವಿ ಮೃತಪಟ್ಟ ದುರ್ದೈವಿ. ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿ ಮುಂಭಾಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಗುವಿನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/toddler-dies-after-falling-into-elevator-pit-construction-building-in-chikkamagaluru-rav/articleshow-vqcgbua"/>
        </item>
        <item>
            <title><![CDATA[ಮಹಿಳೆಯರಿಗೆ ಸ್ವಾವಲಂಬನೆ ನೀಡುವುದೇ ದೊಡ್ಡ ಗ್ಯಾರಂಟಿ: ಸಂಸದ ಡಾ.ಕೆ.ಸುಧಾಕರ್]]></title>
            <link>https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683</link>
            <guid isPermaLink="true">https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683</guid>
            <pubDate>Wed, 13 May 2026 17:25:55 +0530</pubDate>
            <description><![CDATA[&lt;p&gt;ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k7axzwm7141zgd44efb65qtb,imgname-dr-k-sudhakakr-1760229847687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ (ಮೇ.13):&lt;/strong&gt; ಇಂದು ಎಲ್ಲೆಡೆ ಗ್ಯಾರಂಟಿಗಳ ಬಗ್ಗೆಯೇ ಮಾತು. ಆದರೆ ನನ್ನ ಪ್ರಕಾರ, ಒಬ್ಬ ಮಹಿಳೆಗೆ ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಶಕ್ತಿ ನೀಡುವುದು ಮತ್ತು ಆಕೆಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವುದೇ ನಾವು ನೀಡಬಹುದಾದ ಅತ್ಯಂತ ದೊಡ್ಡ ಮತ್ತು ಶಾಶ್ವತವಾದ ಗ್ಯಾರಂಟಿ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು. ನಗರ ಹೊರವಲಯ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಜಿಲ್ಲೆಯ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಸಂಸದರನ್ನು ಭೇಟಿ ಮಾಡಿ ಅಕ್ಕ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಂತರ ಅವರು ಮಾತನಾಡಿದರು.&lt;/p&gt;&lt;p&gt;'ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು' ಈ ಬ್ರ&zwj;್ಯಾಂಡ್ ಅಡಿಯಲ್ಲಿ ನಮ್ಮ ಜಿಲ್ಲೆಯ ವಿಶಿಷ್ಟ ದೇಸಿ ತಿಂಡಿಗಳಾದ ಚಿಂತಾಮಣಿಯ ಖಾರದ ಕಡಲೆಕಾಯಿ ಬೀಜ, ಪೆರೇಸಂದ್ರದ ಗರಿಗರಿಯಾದ ಚಕ್ಕುಲಿ, ಕೋಡುಬಳೆ ಮತ್ತು ನಿಪ್ಪಟ್ಟುಗಳು, ಆರೋಗ್ಯದಾಯಕವಾದ ರಾಗಿ ಲಾಡು, ಬೆಲ್ಲದ ಕೊಬ್ಬರಿ ಮಿಠಾಯಿ. ಹೀಗೆ ಅನೇಕ ಸ್ವಾದಿಷ್ಟ ತಿನಿಸುಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಪ್ಯಾಕ್ ಮಾಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.&lt;/p&gt;&lt;p&gt;ಅಕ್ಕ ತಂಡದ ಸಹೋದರಿಯರ ಮುಖದಲ್ಲಿ ಅಪ್ರತಿಮ ಆತ್ಮವಿಶ್ವಾಸ ಎದ್ದು ಕಾಣುತ್ತಿದೆ. ಅವರು ಪ್ರೀತಿಯಿಂದ ತಯಾರಿಸಿರುವ ಅಕ್ಕ ಮಾಡಿದ ಅಕ್ಕರೆಯ ತಿನಿಸುಗಳು ಎಂಬ ಉತ್ಪನ್ನಗಳ ಬ್ರ&zwj;್ಯಾಂಡಿಂಗ್ ಮತ್ತು ಗುಣಮಟ್ಟವನ್ನು ಕಂಡು ಅಚ್ಚರಿ ಮತ್ತು ಸಂತೋಷ ಎರಡೂ ಆಯಿತು. ದಿನನಿತ್ಯದ ಸ್ನ್ಯಾಕ್ಸ್ ಗಾಗಿ, ಹಬ್ಬ-ಹರಿದಿನಗಳಲ್ಲಿ ಅಥವಾ ಅತಿಥಿಗಳಿಗೆ ನೀಡುವ ಉಡುಗೊರೆಗಳಲ್ಲಿ ಇಂತಹ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡುವುದರಿಂದ ಈ ಮಹಿಳಾ ಸಂಘಗಳಿಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಗಲಿದೆ ಎಂದು ಸಂಸದರು ತಿಳಿಸಿದರು. ಈ ವೇಳೆ ಸಂಜೀವಿನಿ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು. ಸಾರ್ವಜನಿಕರು ಇದ್ದರು.&lt;/p&gt;&lt;h2&gt;&lt;strong&gt;ವೋಕಲ್ ಫಾರ್ ಲೋಕಲ್ ಕರೆ ಪ್ರೋತ್ಸಾಹಿಸೋಣ&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿ ಅವರು ನೀಡಿರುವ ವೋಕಲ್ ಫಾರ್ ಲೋಕಲ್ ಕರೆಯಂತೆ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸೋಣ. ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಎನ್&zwnj;ಆರ್&zwnj; ಎಲ್&zwnj;ಎಂ-ಅಜೀವಿಕಾ ಯೋಜನೆಯಡಿ ತರಬೇತಿ ಪಡೆದು, ಇಂದು ಉದ್ಯಮಿಗಳಾಗಿ ಬೆಳೆಯುತ್ತಿರುವ ಈ ಸೋದರಿಯರ ಬೆನ್ನಿಗೆ ನಾವೆಲ್ಲರೂ ನಿಲ್ಲೋಣ. ಇವರ ಈ ಪರಿಶ್ರಮಕ್ಕೆ ಮಾರುಕಟ್ಟೆ ಕಲ್ಪಿಸಿಕೊಡಲು ಕೈಜೋಡಿಸೋಣ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ಕ್ರಿಯಾಶೀಲರಾಗಿ ಇಂತಹ ಅದ್ಭುತ ಕೆಲಸ ಮಾಡುತ್ತಿರುವ ಎಲ್ಲಾ ಸಾಧಕ ಮಹಿಳೆಯರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಈ ಸಾಧನೆ ಇಡೀ ಸಮಾಜಕ್ಕೆ ಸ್ಫೂರ್ತಿಯಾಗಲಿ ಎಂದು ಸಂಸದ ಸುಧಾಕರ್&zwnj; ಹಾರೈಸಿದರು.&lt;/p&gt;]]></content:encoded>
            <category>chikkaballapur</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dr-k-sudhakar-women-self-help-groups-akka-snacks-vocal-gvd/articleshow-vqr2683"/>
        </item>
        <item>
            <title><![CDATA[ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್  ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?]]></title>
            <link>https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t</link>
            <guid isPermaLink="true">https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t</guid>
            <pubDate>Sun, 12 Jul 2026 06:25:09 +0530</pubDate>
            <description><![CDATA[&lt;p&gt;ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ತಾಯಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಬೆಂಗಳೂರು ಹಾಗೂ ಬಾಗೇಪಲ್ಲಿಯಲ್ಲಿ ಆಧಾರ್, ಪಡಿತರ ಚೀಟಿ ಸೇರಿದಂತೆ ಹಲವು ದಾಖಲೆ ಅಕ್ರಮವಾಗಿ ಪಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx9wykrn7cyhpsjs9f0rgkr9,imgname-----------------------2026-07-12t062126.994-1783817522965.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗೇಪಲ್ಲಿ (ಜು.12):&lt;/strong&gt; ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಆರೋಪದಡಿಯಲ್ಲಿ ಪಾಕಿಸ್ತಾನ ಮೂಲದ ತಾಯಿ ಮತ್ತು ಪುತ್ರನನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮ(Devaragudipalli) ಪಂಚಾಯಿತಿ ವ್ಯಾಪ್ತಿಯ ದಾಸಯ್ಯಗಾರಿಪಲ್ಲಿ ಗ್ರಾಮ(Dasayyagaripalli)ದಲ್ಲಿದ್ದ ಫರ್ಹಾನಾಜ್ ಮತ್ತು ಆಕೆಯ ಮಗ ಮೊಹಮ್ಮದ್ ಫರ್ದೀನ್ ಖಾನ್ ಅವರನ್ನು ಬಂಧಿಸಿದ್ದಾರೆ. ಅಯೂಬ್ ಖಾನ್, 1993ರಲ್ಲಿ ದುಬೈನಲ್ಲಿ ಫರ್ಹಾನಾಜ್&zwj;ಳ ಪರಿಚಯವಾಗಿ 2003ರಲ್ಲಿ ಆಕೆಯನ್ನು ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗ ಪಾಕಿಸ್ತಾನದಲ್ಲಿ, ಉಳಿದ ಇಬ್ಬರು ಮಕ್ಕಳು ದುಬೈನಲ್ಲಿ ಹುಟ್ಟಿರುವುದಾಗಿ ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಚಿಕ್ಕಬಳ್ಳಾಪುರ: 'ಮಿನಿ ಇರಾನ್' ಅಲಿಪುರದಿಂದ ಖಮೇನಿ ಅಂತ್ಯಕ್ರಿಯೆಗೆ ಹೊರಟ 100 ಜನರು!&lt;/p&gt;&lt;p&gt;ನಂತರ ತಾಯಿ, ಪುತ್ರ ಭಾರತಕ್ಕೆ ಬಂದಿದ್ದು, ಬೆಂಗಳೂರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪಡೆದು, ನಂತರ ಬಾಗೇಪಲ್ಲಿಗೆ ಅವುಗಳನ್ನು ವರ್ಗಾಯಿಸಿಕೊಂಡಿದ್ದರು. ನಂತರ ಅಲ್ಲಿ ಪಡಿತರ ಚೀಟಿ ಹಾಗೂ ಮತದಾರರ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;]]></content:encoded>
            <category>chikkaballapur</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pak-woman-son-arrested-by-bagepalli-police-for-visa-overstay-their-aadhaar-voter-ids-under-probe-rav/articleshow-wkv3t0t"/>
        </item>
        <item>
            <title><![CDATA[ವಿಶೇಷ ಚೇತನ ತಂದೆ-ತಾಯಿಗೆ ಧ್ವನಿಯಾದ ಮುದ್ದು ಕಂದಮ್ಮ;  ಹೃದಯಸ್ಪರ್ಶಿ ವಿಡಿಯೋ ವೈರಲ್]]></title>
            <link>https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0</link>
            <guid isPermaLink="true">https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0</guid>
            <pubDate>Tue, 28 Apr 2026 12:20:49 +0530</pubDate>
            <description><![CDATA[ಚಿಕ್ಕಬಳ್ಳಾಪುರದ ಆದಿಯೋಗಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ವಿಶೇಷ ಚೇತನ ದಂಪತಿಯನ್ನು ಭೇಟಿಯಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಆ ಪೋಷಕರಿಗೆ ಅವರ ಪುಟ್ಟ ಮಗಳು ಲಿಪ್ಸಾ ಧ್ವನಿಯಾಗಿ, ಅವರ ಪರವಾಗಿ ಮಾತನಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9d0j8p668wd336p1w5gndz,imgname-viral-video--3--1777358358806.jpg" type="image/jpeg" height="390" width="690"/>
            <content:encoded><![CDATA[ಚಿಕ್ಕಬಳ್ಳಾಪುರದ ಆದಿಯೋಗಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಒಬ್ಬರು ವಿಶೇಷ ಚೇತನ ದಂಪತಿಯನ್ನು ಭೇಟಿಯಾಗುತ್ತಾರೆ. ಕಿವಿ ಕೇಳದ, ಮಾತು ಬಾರದ ಆ ಪೋಷಕರಿಗೆ ಅವರ ಪುಟ್ಟ ಮಗಳು ಲಿಪ್ಸಾ ಧ್ವನಿಯಾಗಿ, ಅವರ ಪರವಾಗಿ ಮಾತನಾಡುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;img&gt;&lt;p&gt;ಕಳೆದ 24 ಗಂಟೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುದ್ದ ಮಗುವೊಂದು ತನ್ನ ತಂದೆ-ತಾಯಿಗೆ ಧ್ವನಿಯಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೆಚ್ಚುಗೆ ಸೂಚಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಇಂದು ಪ್ರವಾಸಿ ತಾಣ, ಬ್ಯೂಸಿ ರೋಡ್&zwnj;ಗಳಲ್ಲಿ ನಿಮಗೆ ಸ್ಟ್ರೀಟ್ ಫೋಟೋಗ್ರಾಫರ್ ಸಿಗುತ್ತಾರೆ. ಪ್ರವಾಸಿಗರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಿ ಅನುಮತಿ ಪಡೆದುಕೊಂಡು ಫೋಟೋ ಕ್ಲಿಕ್ಕಿಸುತ್ತಾರೆ. ನಂತರ ತಮ್ಮ ಸೋಶಿಯಲ್ ಮೀಡಿಯಾ ಪೇಜ್&zwnj;ಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ವಿಡಿಯೋಗಳು ಹೆಚ್ಚೆಚ್ಚು ವೈರಲ್ ಆಗುತ್ತಿರುತ್ತವೆ.&lt;/p&gt;&lt;img&gt;&lt;p&gt;ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಎಂಬಲ್ಲಿ ಆದಿ ಯೋಗಿ ಪ್ರತಿಮೆ ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿಯ ಸ್ಟ್ರೀಟ್ ಫೋಟೋಗ್ರಾಫರ್, ವಿಶೇಷ ಕುಟುಂಬವನ್ನು ಭೇಟಿಯಾಗಿ ಮಾತನಾಡಿದ್ದಾರೆ. ಇಬ್ಬರು ಮಕ್ಕಳೊಂದಿಗೆ ಬಂದ ದಂಪತಿಯನ್ನು ಮಾತನಾಡಿಸಲು ಹೋದಾಗ ಅವರಿಗೆ ಕಿವಿ ಕೇಳಿಸಲ್ಲ ಮತ್ತು ಮಾತು ಬರಲ್ಲ ಎಂದು ಗೊತ್ತಾಗಿದೆ. ಆದ್ರೆ ಈ ವಿಶೇಷ ಚೇತನ ದಂಪತಿಗೆ ಅವರ ಮಗಳು ಧ್ವನಿಯಾಗಿದ್ದಾರೆ.&lt;/p&gt;&lt;img&gt;&lt;p&gt;ಫೋಟೋಗ್ರಾಫರ್ ಬರುತ್ತಿದ್ದಂತೆ ತಮಗೆ ಮಾತು ಬರಲ್ಲ, ಕಿವಿ ಕೇಳಲ್ಲ. ಮಗಳೊಂದಿಗೆ ಮಾತನಾಡುವಂತೆ ಸನ್ನೆ ಮಾಡುತ್ತಾರೆ. ಫೋಟೋಗ್ರಾಫರ್ ಪುಟ್ಟ ಹುಡುಗಿ ಜೊತೆ ಮಾತು ಆರಂಭಿಸುತ್ತಾರೆ. ನನ್ನ ಹೆಸರು ಲಿಪ್ಸಾ, ಓಡಿಶಾದವಳು. ಮೊದಲ ಬಾರಿಗೆ ಬೆಂಗಳೂರಿಗೆ ರಜಾದಿನಗಳನ್ನು ಕಳೆಯಲು ಬಂದಿದ್ದೇವೆ. ಮೂರ್ನಾಲ್ಕು ದಿನಗಳಿಂದ ಇಲ್ಲಿದ್ದು, ಹಾಗಾಗಿ ಕನ್ನಡ ಭಾಷೆ ಬರಲ್ಲ. ತಾಯಿ ಗೃಹಿಣಿ ಮತ್ತು ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ ಎಂದು ಹೇಳುತ್ತಾಳೆ.&lt;/p&gt;&lt;img&gt;&lt;p&gt;ಈ ವಿಡಿಯೋ ನೋಡಿದ ನೆಟ್ಟಿಗರು, ಮಕ್ಕಳಲ್ಲಿ ಸಂಸ್ಕಾರ ತುಂಬಲು ನಿಮಗೆ ಧ್ವನಿ ಬೇಕೆಂತೇನಿಲ್ಲ ಎಂಬುದಕ್ಕೆ ಇದುವೇ ಉದಾಹರಣೆ. ಪೋಷಕರು ಸಂವಹನ ನಡೆಸಲು ಸಂಪೂರ್ಣವಾಗಿ ಮಗಳ ಮೇಲೆ ಅವಲಂಬಿತಳಾಗಿದ್ದಾರೆ ಎಂದು ತಿಳಿಯುತ್ತದೆ. ಇಲ್ಲಿ ಎಲ್ಲರೂ ಒಬ್ಬರ ಮೇಲೆ ಪ್ರೀತಿಯ ಕಾಳಜಿ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;Family from Odisha. On a visit to Bengaluru. Parents and two kids....Parents can't speak nor hear well...The daughter becomes the voice.When you see things like these, you know a caring family is the best thing one could ask for. pic.twitter.com/STrfTkxyAm&lt;/p&gt;&lt;p&gt;&mdash; Karthik Reddy (@bykarthikreddy) April 27, 2026&lt;/p&gt;]]></content:encoded>
            <category>chikkaballapur</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/a-daughter-who-became-a-voice-for-her-deaf-and-speechless-parents-street-photographers-video-viral-mrq-x0gxtk0"/>
        </item>
    </channel>
</rss>
