<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 07 Apr 2026 22:38:05 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ನೀರಿನ ಸಂಕಷ್ಟ: ಅರಣ್ಯ ಇಲಾಖೆಯಿಂದ ವನ್ಯಜೀವಿಗಳಿಗೆ ಟ್ಯಾಂಕರ್ ನೀರು]]></title>
            <link>https://kannada.asianetnews.com/karnataka-districts/mm-hills-wildlife-water-crisis-tanker-supply-chamarajanagar-gvd/articleshow-1fn6ut2</link>
            <guid isPermaLink="true">https://kannada.asianetnews.com/karnataka-districts/mm-hills-wildlife-water-crisis-tanker-supply-chamarajanagar-gvd/articleshow-1fn6ut2</guid>
            <pubDate>Mon, 06 Apr 2026 23:24:21 +0530</pubDate>
            <description><![CDATA[&lt;p&gt;ಸುಡುವ ಬಿಸಿಲಿಗೆ ಮಲೆ ಮಹದೇಶ್ವರ ಬೆಟ್ಟದ ಕಾಡು ಒಣಗುತ್ತಿದೆ. ನಿಧಾನವಾಗಿ ಜಲಮೂಲಗಳು ಬತ್ತಿ ಹೋಗುತ್ತಿವೆ, ವನ್ಯಜೀವಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಟ್ಯಾಂಕರ್ ನೀರಿನ ಮೊರೆ ಹೋಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knhwm88ad249f31fv9d1qkgz,imgname-jjv-1775495684362.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಏ.06): &lt;/strong&gt;ಸುಡುವ ಬಿಸಿಲಿಗೆ ಮಲೆ ಮಹದೇಶ್ವರ ಬೆಟ್ಟದ ಕಾಡು ಒಣಗುತ್ತಿದೆ. ನಿಧಾನವಾಗಿ ಜಲಮೂಲಗಳು ಬತ್ತಿ ಹೋಗುತ್ತಿವೆ, ವನ್ಯಜೀವಿಗಳ ದಾಹ ನೀಗಿಸಲು ಅರಣ್ಯ ಇಲಾಖೆ ಟ್ಯಾಂಕರ್ ನೀರಿನ ಮೊರೆ ಹೋಗಿದೆ. ಅಲ್ಲದೇ ವನ್ಯಪ್ರಾಣಿಗಳು ಕೂಡ ಈ ನೀರನ್ನು ಕುಡಿದು ದಾಹ ತೀರಿಸಿಕೊಳ್ತಿವೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಹನೂರು ಮತ್ತು ಕೊಳ್ಳೇಗಾಲ ತಾಲೂಕುಗಳಲ್ಲಿ ಅವೃತವಾಗಿರುವ ಮಲೆ ಮಹದೇಶ್ವರ ವನ್ಯಜೀವಿ ಧಾಮ ಕಡಿಮೆ ಮಳೆ ಬೀಳುವ ಅರಣ್ಯ ಪ್ರದೇಶ.&lt;/p&gt;&lt;p&gt;ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಮರದ ಎಲೆಗಳು ಉದುರುತ್ತವೆ. ಹಾಗಾಗಿ, ಇದನ್ನು ಒಣ ಪರ್ಣಪಾತಿ ಕಾಡು ಎಂದು ಕರೆಯಲಾಗುತ್ತದೆ.ಪ್ರಸ್ತುತ ವನ್ಯಜೀವಿಧಾಮದಲ್ಲಿ ಸುಮಾರು 230 ಕೆರೆಗಳಿವೆ. ಆದರೆ, ಬೇಸಿಗೆ ಬೇಗೆ ಜಲಮೂಲಗಳನ್ನು ಬರಿದಾಗಿಸುತ್ತಿವೆ. ಹಲವು ಕೆರೆಗಳಲ್ಲಿ ನೀರಿದೆ. ಇನ್ನುಳಿದ ಕಡೆ ನೀರಿಲ್ಲ. ಬೇಸಿಗೆ ಎದುರಿಸಲು ಸಜ್ಜುಗೊಂಡಿರುವ ಅರಣ್ಯ ಇಲಾಖೆ ಕಾಡಿನೊಳಗೆ ಅಲಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿದೆ. ಅಲ್ಪಸ್ವಲ್ಪ ನೀರು ತೊಟ್ಟಿಗಳಿಗೆ ಸೋಲಾರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.&lt;/p&gt;&lt;p&gt;ಉಳಿದ ತೊಟ್ಟಿಗಳಿಗೆ ಟ್ಯಾಂಕಗರ್ಗಳಲ್ಲಿ ತುಂಬಿಕೊಂಡು ಬಂದು ನೀರು ತುಂಬಿಸಲಾಗುತ್ತಿದೆ ಎಂದು ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ.ಇನ್ನೂ ಮಲೆ ಮಹದೇಶ್ವರ ಬೆಟ್ಟದ ಕಾಡಿನಲ್ಲಿ ನೀರಿನ ಸಮಸ್ಯೆ ಇದೆ. ಮೂರು ಕಡೆ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿಗೆ ಟ್ಯಾಂಕರ್ನಲ್ಲಿ ನೀರು ತುಂಬಲಾಗುತ್ತಿದೆ. ರಾಮಾಪುರದ ವಲಯದ ಕೌದಳ್ಳಿ ಅರಣ್ಯದ ಕೆರೆಯಲ್ಲಿ ನೀರಿದೆ.&lt;/p&gt;&lt;p&gt;ಸಂತೇಖಾನೆ ನರ್ಸರಿ ಬಳಿಯ ತೊಟ್ಟಿ ಮತ್ತು ವಡಕೆರೆಹಳ್ಳದ ಕ್ಯಾಂಪ್ ಬಳಿ ತೊಟ್ಟಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಉಡುತೊರೆ ಹಳ್ಳದ ನೀರು ಹರಿಯವ ಕಾಡು ಪ್ರದೇಶದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ಪಿ.ಜಿ.ಪಾಳ್ಯಕ್ಕೂ ಇಲ್ಲಿನ ನೀರು ಹರಿಯುವುದರಿಂದ ಸಮಸ್ಯೆ ಇಲ್ಲ. ಇಲ್ಲಿ ಎರಡು ಕಡೆ ನಿರ್ಮಾಣ ಮಾಡಿರುವ ತೊಟ್ಟಿಗಳಿಗೆ ಸೋಲಾರ್ ಬಳಸಿ ನೀರು ಸರಬರಾಜು ಮಾಡಲಾಗುತ್ತಿದೆ. ಜಲಾಶಯ ಇರುವುದರಿಂದ ಹೂಗ್ಯಂ ಪ್ರದೇಶದಲ್ಲಿ ನೀರಿನ ಸಮಸ್ಯೆ ಬಂದಿಲ್ಲ. ಕೊಳ್ಳೇಗಾಲದ ಸುತ್ತಮುತ್ತಲಿನ ಕಾಡಿಗೆ ಕಾವೇರಿ ನದಿ ನೀರು ಆಸರೆಯಾಗಿದೆ.&lt;/p&gt;&lt;h2&gt;&lt;strong&gt;ಮಾನವ-ವನ್ಯಜೀವಿ ಸಂಘರ್ಷ ಶುರು&lt;/strong&gt;&lt;/h2&gt;&lt;p&gt;ಉಳಿದಂತೆ ಸಿಎಸ್ಆರ್ ಫಂಡ್ನಿಂದ ಜಲಮೂಲಗಳಿಲ್ಲದ 3 ಕಡೆಗಳಲ್ಲಿ ತೊಟ್ಟಿ ನಿರ್ಮಾಣ ಮಾಡಲಾಗಿದೆ. ವನ್ಯಜೀವಿಗಳ ದಾಹ ತಣಿಸಲು ಟ್ಯಾಂಕರ್ನಿಂದ ನೀರು ಕೊಡಲಾಗುತ್ತಿದೆ. ಒಟ್ನಲ್ಲಿ ಬೇಸಿಗೆಯಲ್ಲಿ ಕಾಡಿನೊಳಗೆ ಆಹಾರ ಮತ್ತು ನೀರಿನ ಅಭಾವ ಉಂಟಾದರೆ ಮಾನವ-ವನ್ಯಜೀವಿ ಸಂಘರ್ಷ ಶುರುವಾಗುತ್ತದೆ. ಅರಣ್ಯದೊಳಗೆ ಆಹಾರ ಮತ್ತು ನೀರಿಗಾಗಿ ಅಲೆದು ನಾಡಿನತ್ತ ಧಾವಿಸುವ ವನ್ಯಜೀವಿಗಳು ಮಾನವರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚು.ಆದ್ರಿಂದ ಅರಣ್ಯಾಧಿಕಾರಿಗಳು ಪ್ರಾಣಿಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸ್ತಿರೋದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mm-hills-wildlife-water-crisis-tanker-supply-chamarajanagar-gvd/articleshow-1fn6ut2"/>
        </item>
        <item>
            <title><![CDATA[ಮಗಳ ವಯಸ್ಸಿನ ಅಪ್ರಾಪ್ತ ಬಾಲಕಿಗೆ ಮಗು ಕರುಣಿಸಿದ ಸುರೇಶ ಅಂಕಲ್; ಆ್ಯಂಬುಲೆನ್ಸ್‌ನಲ್ಲೇ ಹೆಣ್ಣುಮಗು ಜನನ!]]></title>
            <link>https://kannada.asianetnews.com/karnataka-districts/chamarajanagar-minor-girl-delivery-in-ambulance-pocso-case-on-relative-suresh-sat/articleshow-253bx6q</link>
            <guid isPermaLink="true">https://kannada.asianetnews.com/karnataka-districts/chamarajanagar-minor-girl-delivery-in-ambulance-pocso-case-on-relative-suresh-sat/articleshow-253bx6q</guid>
            <pubDate>Sun, 22 Mar 2026 14:49:13 +0530</pubDate>
            <description><![CDATA[&lt;p&gt;ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ, ಹೊಟ್ಟೆನೋವೆಂದು ಆಸ್ಪತ್ರೆಗೆ ಸಾಗಿಸುತ್ತಿದ್ದ 17 ವರ್ಷದ ಬಾಲಕಿ ಆ್ಯಂಬುಲೆನ್ಸ್&zwnj;ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯ ನಂತರ, ತನ್ನ ಸಂಬಂಧಿಕನಾದ 46 ವರ್ಷದ ವ್ಯಕ್ತಿಯೇ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕಿ ಬಾಯ್ಬಿಟ್ಟಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmademdyt6d4rrzhx1ssxyvq,imgname-chamarajanagar-minor-girl-delivery-1774171148734.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮಾ.22): ಜಿ&lt;/strong&gt;ಲ್ಲೆಯ ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದಲ್ಲಿ ಮಾನವೀಯತೆ ಮರೆತ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಆ್ಯಂಬುಲೆನ್ಸ್&zwnj;ನಲ್ಲಿ ಆಸ್ಪತ್ರೆಗೆ ಸಾಗುವ ಮಾರ್ಗಮಧ್ಯೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಯ ಬೆನ್ನಲ್ಲೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 46 ವರ್ಷದ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಈ ಘಟನೆಯಲ್ಲಿ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ದೇಶಿಪುರ ಗ್ರಾಮದ 17 ವರ್ಷದ ಬಾಲಕಿಗೆ ಮೂರು ದಿನಗಳ ಹಿಂದೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಬಾಲಕಿ ಮತ್ತು ಆಕೆಯ ಪೋಷಕರು ಇದು ಸಾಮಾನ್ಯ ಹೊಟ್ಟೆನೋವು ಎಂದು ಭಾವಿಸಿ ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಗರ್ಭಿಣಿ ಇರುವುದನ್ನು ಪತ್ತೆಹಚ್ಚಿ, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು. ವೈದ್ಯರ ಸಲಹೆಯಂತೆ ಬಾಲಕಿಯನ್ನು ಆ್ಯಂಬುಲೆನ್ಸ್&zwnj;ನಲ್ಲಿ ಚಾಮರಾಜನಗರಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡು, ಆ್ಯಂಬುಲೆನ್ಸ್&zwnj;ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ ಮತ್ತು ಮಗು ಚಾಮರಾಜನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಸಂಬಂಧಿಕನಿಂದ ನಂಬಿಕೆ ದ್ರೋಹ:&lt;/strong&gt;&lt;/h2&gt;&lt;p&gt;ಈ ಆಘಾತಕಾರಿ ಘಟನೆಯ ನಂತರ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಎದುರಾದಾಗ, ಬಾಲಕಿ ತನ್ನ ತಂದೆಯ ಮುಂದೆ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ತನ್ನದೇ ಗ್ರಾಮದ ನಿವಾಸಿಯಾಗಿದ್ದು, ಸಂಬಂಧಿಯೂ ಆಗಿರುವ 46 ವರ್ಷದ ಸುರೇಶ್ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಲು ಕಾರಣ ಎಂದು ನಿವೇದಿಸಿಕೊಂಡಿದ್ದಾಳೆ. 17 ವರ್ಷದ ಬಾಲಕಿಯ ಮೇಲೆ ತನ್ನ ಅರ್ಧ ವಯಸ್ಸಿನ ಮಗಳ ಪ್ರಾಯದವಳು ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ಸುರೇಶ್ ಎಸಗಿರುವ ಈ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಪೋಕ್ಸೋ ಅಡಿ ಪ್ರಕರಣ ದಾಖಲು:&lt;/strong&gt;&lt;/h2&gt;&lt;p&gt;ಬಾಲಕಿಯ ಹೇಳಿಕೆಯನ್ನಾಧರಿಸಿ ಆಕೆಯ ತಂದೆ ಕೂಡಲೇ ಬೇಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಸುರೇಶ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ಬಾಲಕಿಯ ಗರ್ಭಧಾರಣೆಯ ವಿಷಯ ಪೋಷಕರಿಗೆ ಇಷ್ಟು ದಿನ ತಿಳಿಯದೆ ಹೋಗಿದ್ದು ಹೇಗೆ ಮತ್ತು ಆರೋಪಿ ಸುರೇಶ್ ಬಾಲಕಿಯ ಮೇಲೆ ಯಾವ ರೀತಿ ಒತ್ತಡ ಹೇರಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಂಬಂಧಿಕರೇ ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಹೆಣ್ಣುಮಕ್ಕಳ ರಕ್ಷಣೆ ಮತ್ತು ಜಾಗೃತಿಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-minor-girl-delivery-in-ambulance-pocso-case-on-relative-suresh-sat/articleshow-253bx6q"/>
        </item>
        <item>
            <title><![CDATA[ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: ತಾನೇ ಬೆಳೆದ ನಾಲ್ಕು ಎಕರೆ ಹೂಕೋಸು ನಾಶಪಡಿಸಿದ ರೈತ!]]></title>
            <link>https://kannada.asianetnews.com/gallery/state/middle-east-war-impact-chamarajanagar-farmer-destroys-4-acres-of-cauliflower-crop-38imegh</link>
            <guid isPermaLink="true">https://kannada.asianetnews.com/gallery/state/middle-east-war-impact-chamarajanagar-farmer-destroys-4-acres-of-cauliflower-crop-38imegh</guid>
            <pubDate>Tue, 31 Mar 2026 10:09:37 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ರೈತರ ಬೆಳೆಗಳಿಗೂ ತಟ್ಟಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಳಿಕೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ನಾಶಪಡಿಸಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn12rh9p8zkbce8jkybkwk67,imgname----------------------9--1774931690806.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ರೈತರ ಬೆಳೆಗಳಿಗೂ ತಟ್ಟಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಇಳಿಕೆ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ನಾಶಪಡಿಸಿದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಬೆವರು ಸುರಿಸಿ, ಹಗಲು ರಾತ್ರಿ ಎನ್ನದೇ ದುಡಿದು ಬೆಳೆದ ಬೆಳೆ ತನ್ನ ಕೈಯಾರೆ ನಾಶಪಡಿಸುವ ದುಸ್ಥಿತಿ ಯಾವ ರೈತರಿಗೂ ಬರಬಾರದು. ಆದರೆ ಇಂಥದ್ದೊಂದು ದುಸ್ಥಿತಿ ಬಂದಿದ್ದು, ಬೆಳೆದ ಬೆಳೆ ಸ್ವತಃ ರೈತನೇ ಟ್ರ್ಯಾಕ್ಟರ್&zwnj; ಏರಿ ನಾಶಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ರೈತ ಬಸವಣ್ಣ ಎಂಬುವವರು ತಾವೇ ಕಷ್ಟಪಟ್ಟು ಬೆಳೆದಿದ್ದ ಸಮೃದ್ಧ ಹೂಕೋಸಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಸಂಪೂರ್ಣ ನಾಶಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಬೆಳೆದಿದ್ದ ಬೆಳೆ ಮಾರುಕಟ್ಟೆಯಲ್ಲಿ ಕೇಳುವವರಿಲ್ಲದೆ ಹೊಲದಲ್ಲೇ ಕೊಳೆಯುವಂತಾಗಿದೆ.&lt;/p&gt;&lt;img&gt;&lt;p&gt;ದೂರದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧಕ್ಕೂ ನಮ್ಮ ಚಾಮರಾಜನಗರದ ರೈತನಿಗೂ ಏನು ಸಂಬಂಧ ಅಂತೀರಾ? ಖಂಡಿತ ಇದೆ. ಯುದ್ಧದ ಎಫೆಕ್ಟ್&zwnj;ನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ನೇರವಾಗಿ ನಮ್ಮ ಡೊಮೆಸ್ಟಿಕ್ ಗ್ಯಾಸ್ ಕೊರತೆಗೆ ಕಾರಣವಾಗಿದೆ. ಗ್ಯಾಸ್ ಸಿಗದೆ ಹೋಟೆಲ್&zwnj;ಗಳು, ಪಿಜಿಗಳು ಮತ್ತು ಹಾಸ್ಟೆಲ್&zwnj;ಗಳಲ್ಲಿ ಮೆನು ಕಡಿತಗೊಳಿಸಲಾಗಿದೆ. ಕೆಲವು ಸಣ್ಣಪುಟ್ಟ ಹೋಟೆಲ್&zwnj;ಗಳು ಮುಚ್ಚಿವೆ ಇದರ ಪರಿಣಾಮವಾಗಿ ತರಕಾರಿಗೆ ಬೇಡಿಕೆ ಸಂಪೂರ್ಣ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.&lt;/p&gt;&lt;img&gt;&lt;p&gt;ರೈತ ಬಸವಣ್ಣ ಸುಮ್ಮನೆ ಈ ಬೆಳೆ ಬೆಳೆದಿರಲಿಲ್ಲ. ಒಂದೆಡೆ ಪಾತಾಳಕ್ಕೆ ಕುಸಿದಿರುವ ಅಂತರ್ಜಲ, ಮತ್ತೊಂದೆಡೆ ಕಾಡು ಹಂದಿಗಳ ಕಾಟ, ಇದರ ನಡುವೆ ಅಸಮರ್ಪಕ ವಿದ್ಯುತ್ ಪೂರೈಕೆಯ ಕಣ್ಣಾಮುಚ್ಚಾಲೆ. ಇಷ್ಟೆಲ್ಲಾ ಸವಾಲುಗಳ ನಡುವೆ ನಿದ್ದೆಗೆಟ್ಟು ನಾಲ್ಕು ಎಕರೆ ಪ್ರದೇಶದಲ್ಲಿ ಹೂಕೋಸು ಬೆಳೆದಿದ್ದರು. ಬೆಳೆಯೂ ಅದ್ಭುತವಾಗಿ ಬಂದಿತ್ತು, ಆದರೆ ಅದೃಷ್ಟ ಮಾತ್ರ ಕೈಕೊಟ್ಟಿದೆ. ಹೂಕೋಸು ಮಾತ್ರವಲ್ಲದೆ ಟೊಮ್ಯಾಟೊ, ಸಣ್ಣ ಈರುಳ್ಳಿ, ಬೀಟ್ ರೂಟ್ ಬೆಳೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮಾರುಕಟ್ಟೆಯಲ್ಲಿ ಕೇಳುವವರಿಲ್ಲದಂತಾಗಿದೆ.&lt;/p&gt;&lt;img&gt;&lt;p&gt;ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ, ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸುವ ಖರ್ಚು ಕೂಡ ಸಿಗದಂತಾಗಿದೆ. ಹೀಗಾಗಿ ರೈತರು ಹೊಲದಲ್ಲೇ ಬೆಳೆಗಳನ್ನು ಬಿಟ್ಟಿದ್ದಾರೆ. ಬಸವಣ್ಣ ಅವರು ಮನನೊಂದು ಟ್ರ್ಯಾಕ್ಟರ್ ಮೂಲಕ ತಾನೇ ಬೆಳೆದ ಬೆಳೆಯನ್ನು ನಾಶಪಡಿಸುವಾಗ ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು.&lt;/p&gt;&lt;img&gt;&lt;p&gt;'ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದೆವು. ಆದರೆ ಈಗ ಕೈಲಿದ್ದ ಕಾಸೂ ಇಲ್ಲ, ಮಾರುಕಟ್ಟೆಯಲ್ಲಿ ಕೇಳೋರೂ ಇಲ್ಲ' ಎಂದು ರೈತ ಬಸವಣ್ಣ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/middle-east-war-impact-chamarajanagar-farmer-destroys-4-acres-of-cauliflower-crop-38imegh"/>
        </item>
        <item>
            <title><![CDATA[ಚಾಮರಾಜನಗರ: ಪ್ರೀತಿಗೆ ಮನೆಯವರ ವಿರೋಧ; ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಆದಿವಾಸಿ ಯುವ ಪ್ರೇಮಿಗಳು!]]></title>
            <link>https://kannada.asianetnews.com/karnataka-districts/chamarajanagar-hanur-ponnachchi-young-lovers-nagendra-and-nadia-died-after-parents-oppose-marriage-sat/articleshow-5okiivg</link>
            <guid isPermaLink="true">https://kannada.asianetnews.com/karnataka-districts/chamarajanagar-hanur-ponnachchi-young-lovers-nagendra-and-nadia-died-after-parents-oppose-marriage-sat/articleshow-5okiivg</guid>
            <pubDate>Thu, 02 Apr 2026 21:14:34 +0530</pubDate>
            <description><![CDATA[ಚಾಮರಾಜನಗರದ ಪೊನ್ನಾಚ್ಚಿ ಗ್ರಾಮದಲ್ಲಿ, ಪೋಷಕರ ವಿರೋಧ ಮತ್ತು ಪೊಲೀಸ್ ದೂರಿನ ಭೀತಿಯಿಂದ ಆದಿವಾಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn7dpgkqm02wfzkp5as299m8,imgname-chamarajanagara-lovers-death-1775144485494.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಏ.02): ಜಿ&lt;/strong&gt;ಲ್ಲೆಯ ಹನೂರು ತಾಲೂಕಿನ ಪೊನ್ನಾಚ್ಚಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಪೊಲೀಸ್ ಕೇಸ್ ಆಗುವ ಭೀತಿಯಿಂದ ಈ ಜೋಡಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಯುವತಿ ಮನೆಯವರು ಇವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಮೃತ ಪ್ರೇಮಿಗಳ ವಿವರ:&lt;/strong&gt;&lt;/h3&gt;&lt;p&gt;ಸಾವಿಗೆ ಶರಣಾದ ಪ್ರೇಮಿಗಳನ್ನು 21 ವರ್ಷದ ನಾಗೇಂದ್ರ ಹಾಗೂ 19 ವರ್ಷದ ನಾದಿಯಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾಗೇಂದ್ರ ಹನೂರು ತಾಲೂಕಿನ ಪೊನ್ನಾಚ್ಚಿ ಗ್ರಾಮದ ನಿವಾಸಿಯಾಗಿದ್ದು, ನಾದಿಯಾ ಪಾಲಾರ್ ಗ್ರಾಮದವಳಾಗಿದ್ದಾಳೆ. ನಾಗೇಂದ್ರ ಮತ್ತು ನಾದಿಯಾ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೇಮಕ್ಕೆ ಎರಡು ಕುಟುಂಬಗಳ ಕಡೆಯಿಂದ ವಿರೋಧವಿತ್ತು. ಮದುವೆಗೆ ಪೋಷಕರು ಒಪ್ಪದ ಕಾರಣ, ನಾಗೇಂದ್ರ ಸುಮಾರು 3 ದಿನಗಳ ಹಿಂದೆ ನಾದಿಯಾಳನ್ನು ತನ್ನ ಪೊನ್ನಾಚ್ಚಿಯಲ್ಲಿರುವ ತಾತನ ಮನೆಗೆ ಕರೆದುಕೊಂಡು ಬಂದಿದ್ದನು.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ಮತ್ತು ಸಾವು:&lt;/strong&gt;&lt;/h2&gt;&lt;p&gt;ಇತ್ತ ಮಗಳು ನಾಪತ್ತೆಯಾಗಿದ್ದಾಳೆಂದು ನಾದಿಯಾಳ ಪೋಷಕರು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಷಯ ನಾಗೇಂದ್ರ ಮತ್ತು ನಾದಿಯಾ ಗಮನಕ್ಕೆ ಬಂದಿದೆ. ಈಗಾಗಲೇ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಈಗ ಪೊಲೀಸ್ ಕೇಸ್ ಕೂಡ ಆಗಿದೆ ಎಂಬ ಭಯ ಅವರನ್ನು ಕಾಡಲಾರಂಭಿಸಿದೆ. ತಮಗೆ ಮನೆಯವರ ಅಥವಾ ಸಮಾಜದ ಬೆಂಬಲ ಸಿಗುವುದಿಲ್ಲ ಎಂದು ಆತಂಕಗೊಂಡ ಪ್ರೇಮಿಗಳು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳಕ್ಕೆ ಪೊಲೀಸರ ಭೇಟಿ:&lt;/strong&gt;&lt;/h3&gt;&lt;p&gt;ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಾಗೇಂದ್ರ ತನ್ನ ತಾತನ ಮನೆಗೆ ಬರುತ್ತಿದ್ದ ನಾದಿಯಾಳನ್ನು ಪ್ರೀತಿಸುತ್ತಿದ್ದನು, ಆಗಾಗ್ಗೆ ನಾದಿಯಾ ಅಜ್ಜಿ ಮನೆಗೆ ಭೇಟಿ ನೀಡುವ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ನಾದಿಯಾ ಪೋಷಕರಿಂದ ಕೊಲೆ ಆರೋಪ:&amp;nbsp;&lt;/strong&gt;&lt;/h2&gt;&lt;p&gt;ಇನ್ನು ನಮ್ಮ ಮಗಳು ನಾದಿಯಾ ಮತ್ತು ಹುಡುಗ ಇಬ್ಬರೂ ಪ್ರೀತಿ ಮಾಡಿದ್ದಕ್ಕೆ ವಿರೋಧ ಇದ್ದದ್ದು ನಿಜ. ಆದರೆ, ಅವರಿಬ್ಬರೂ ಮನೆ ಬಿಟ್ಟು ಹೋಗಿದ್ದರು. ಅಲ್ಲಿಗೆ ಹೋದ ಮೇಲೆ ಜೀವನ ಮಾಡುವುದಕ್ಕಾಗಿ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಇಬ್ಬರೂ ಸತ್ತಿದ್ದಾರೆ. ನಮ್ಮ ಮಗಳು ಆಕೆಯೇ ಆತ್,*ಹತ್ಯೆ ಮಾಡಿಕೊಂಡಿಲ್ಲ. ಅವರಾಗಿಯೇ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಇನ್ನು ಹುಡುಗನನ್ನು ಬಿಟ್ಟರೆ ಕೊಲೆ ಆರೋಪ ಬರುತ್ತದೆಂದು, ಅವನನ್ನೂ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿ ದೊಡ್ಡಮ್ಮ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ ಆದಿವಾಸಿ ಸಮುದಾಯದ ಇಬ್ಬರು ಯುವ ಪ್ರೇಮಿಗಳು ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ. ಒಂದು ವೇಳೆ ಪ್ರೇಮಿಗಳಿಗೆ ವಿರೋಧ ಉಂಟಾಗಿ ಯಾರಾದರೂ ಕೊಲೆ ಮಾಡಿದ್ದಲ್ಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಕೂಡ ಆಗ್ರಹ ಮಾಡಿದ್ದಾರೆ. ಇನ್ನು ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಮೇಲೆ ಸತ್ಯಾಂಶ ಹೊರಬೀಳಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-hanur-ponnachchi-young-lovers-nagendra-and-nadia-died-after-parents-oppose-marriage-sat/articleshow-5okiivg"/>
        </item>
        <item>
            <title><![CDATA[Chamarajanagar: 10 ವರ್ಷದ ಬಾಲಕಿಯನ್ನು ಬಲವಂತದಿಂದ ಹಿಡಿದು ಎದೆ ಮುಟ್ಟಿದ 65ರ ಮುದುಕ]]></title>
            <link>https://kannada.asianetnews.com/karnataka-districts/chamarajanagar-gundlupet-hasaggooli-village-65-year-old-man-misbehave-with-10-year-old-girl-mrq/articleshow-7kv5r9w</link>
            <guid isPermaLink="true">https://kannada.asianetnews.com/karnataka-districts/chamarajanagar-gundlupet-hasaggooli-village-65-year-old-man-misbehave-with-10-year-old-girl-mrq/articleshow-7kv5r9w</guid>
            <pubDate>Tue, 17 Mar 2026 08:06:07 +0530</pubDate>
            <description><![CDATA[ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ 65 ವರ್ಷದ ವೃದ್ಧನೊಬ್ಬ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಬೇಗೂರು ಪೊಲೀಸರು ಆರೋಪಿ ಮಹದೇವಪ್ಪನನ್ನು ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k851g3xzw4ece1qvzp6aqqsz,imgname-mumbai-pocso-case-father-lifetime-jail-nasik-homicide-news-1761105940415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಅರವತ್ತೈದು ವರ್ಷದ ವ್ಯಕ್ತಿ ೧೦ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಪ್ಪಿಗೆ ಜೈಲು ಪಾಲಾದ ಘಟನೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ. ಹಸಗೂಲಿ ಗ್ರಾಮದ ಮಹದೇವಪ್ಪ(65) ಆರೋಪಿ. ಈತ ಅದೇ ಗ್ರಾಮದ 10 ವರ್ಷ ವಯಸ್ಸಿನ ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಎದೆ ಚಿವುಟಿ ಗಾಯಗೊಳಿಸಿದ್ದಾನೆ ಎಂದು ತಾಲೂಕಿನ ಬೇಗೂರು ಪೊಲೀಸ್&zwnj; ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;h2&gt;&lt;strong&gt;ನ್ಯಾಯಾಂಗ ಬಂಧನ&lt;/strong&gt;&lt;/h2&gt;&lt;p&gt;ಲೈಂಗಿಕ ದೌರ್ಜನ್ಯ ನಡೆಸಿದ ಮಹದೇವಪ್ಪನ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್&zwnj;ಎಸ್)&zwnj; ಯು/ಎಸ್-&zwnj;75(2) ರಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸಲು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಂದು ಕಡೆ ಫೈನಾನ್ಸ್&zwnj;ನವರ ಕಾಟ, ಇನ್ನೊಂದು ಕಡೆ 11 ತಿಂಗಳಿಂದ ಸಂಬಳ ಇಲ್ಲ, ಡೆತ್&zwnj;ನೋಟ್ ಬರೆದಿಟ್ಟು ವಾಟರ್&zwnj;ಮನ್ ದುರಂತ ಸಾವು!&lt;/strong&gt;&lt;/p&gt;&lt;h3&gt;&lt;strong&gt;ಬಾಲಕಿಯನ್ನು ಹಿಡಿದು ಎದೆ ಮುಟ್ಟಿದ ಮುದುಕ&lt;/strong&gt;&lt;/h3&gt;&lt;p&gt;ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ ಭಾನುವಾರ ರಜಾ ದಿನವಾದ್ದರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿ ಹಾಗೂ ಆಕೆಯ ಸಹೋದರಿ ಮನೆಯಲ್ಲಿಯೇ ಇದ್ದರು. ತಂದೆ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಭಾನುವಾರ ಮಧ್ಯಾಹ್ನ ಅಂಗಡಿಗೆ ಸೋಪು ತರಲು ಹೋಗಿದ್ದ ಬಾಲಕಿಯನ್ನು ಆರೋಪಿ ಮಹದೇವಪ್ಪ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತ, ಬಾಲಕಿಯ ಹಿಡಿದು ತಬ್ಬಿಕೊಂಡು ಆಕೆಯ ಎದೆಯನ್ನೆಲ್ಲ ಮುಟ್ಟಿ ಚಿವುಟಿದ್ದಾನೆ. ಬಾಲಕಿ ಕಿರುಚಿಕೊಂಡಾಗ ಬಿಟ್ಟಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಬೇಗೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಋತುಚಕ್ರದ ರಜೆ ನೀಡುವ ಅಧಿಸೂಚನೆ; ಶೋಕಾಸ್&zwnj; ನೋಟಿಸ್&zwnj; ನೀಡದಂತೆ ಹೈಕೋರ್ಟ್&zwnj; ಮೌಖಿಕ ಸೂಚನೆ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-gundlupet-hasaggooli-village-65-year-old-man-misbehave-with-10-year-old-girl-mrq/articleshow-7kv5r9w"/>
        </item>
        <item>
            <title><![CDATA[ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ: ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್]]></title>
            <link>https://kannada.asianetnews.com/karnataka-districts/chamarajanagar-police-constable-helps-elderly-women-electricity-gvd/articleshow-bd4to5n</link>
            <guid isPermaLink="true">https://kannada.asianetnews.com/karnataka-districts/chamarajanagar-police-constable-helps-elderly-women-electricity-gvd/articleshow-bd4to5n</guid>
            <pubDate>Mon, 16 Mar 2026 19:44:12 +0530</pubDate>
            <description><![CDATA[&lt;p&gt;ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkvfy5p7mh71wjhkg70n0py2,imgname-bhjjh-1773670438599.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮಾ.16): &lt;/strong&gt;ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸುರಕ್ಷತೆ ಹಾಗೂ ರಕ್ಷಣೆ ನೀಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಆಸರೆ ಕಾರ್ಯಕ್ರಮ ಅನುಷ್ಠಾನಗೊಳಿದೆ. ಈ ಕಾರ್ಯಕ್ರಮಕ್ಕೆ ಮಾಹಿತಿ ಕಲೆ ಹಾಕಲು ಹೋದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕತ್ತಲೆಯಲ್ಲಿ ಬದುಕು ದೂಡುತ್ತಿದ್ದ ಇಬ್ಬರು ಒಂಟಿ ವೃದ್ಧೆಯರಿಗೆ ಬೆಳಕಿನ ಆಸರೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆ ಪೊಲೀಸ್ ಕಾನ್ಸ್ಟೇಬಲ್ ಮಾಡಿದ ಕೆಲಸವಾದರು ಏನು ಈ ಸ್ಟೋರಿ ನೋಡಿ..&lt;/p&gt;&lt;p&gt;ಹಿರಿಯ ನಾಗರಿಕರು ಹಾಗು ಒಂಟಿಯಾಗಿ ಬದುಕುತ್ತಿರುವರಿಗೆ ರಕ್ಷಣೆ, ಕಾಳಜಿ ಹಾಗು ಅಗತ್ಯ ಕಾನೂನು ನೆರವು ನೀಡುವ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ &lsquo;ಆಸರೆ&rsquo; ಯೋಜನೆ ಜಾರಿಗೆ ತಂದಿದೆ. ಇದರ ಅನ್ವಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಹೀಗೆ ಚಾಮರಾಜನಗರ ಪೂರ್ವ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಲು ಹೋದ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಅವರಿಗೆ ಆಲೂರು ಗ್ರಾಮದಲ್ಲಿ ಕಂಡಿದ್ದು ಇಬ್ಬರು ವೃದ್ಧೆಯರ ಅಂಧಕಾರದ ಬದುಕು.&lt;/p&gt;&lt;p&gt;ದನದ ಕೊಟ್ಟಿಗೆಗಳಂತಿರುವ ತಗಡಿನ ಶೆಡ್ಗಳಲ್ಲಿ ಅದರಲ್ಲು ವಿದ್ಯುತ್ ಸಂಪರ್ಕ ಇಲ್ಲದೆ ಕತ್ತಲೆಯ ಕೂಪದಲ್ಲಿ ಬದುಕುತ್ತಿರುವ ಈ ಬಡ ವೃದ್ಧೆಯರ ದುಸ್ಥಿತಿ ಕಂಡ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಮಮ್ಮಲ ಮರುಗಿದ್ದಾರೆ. ಕಳೆದ ಐವತ್ತು ಆರವತ್ತು ವರ್ಷಗಳಿಂದಲು ರಾತ್ರಿ ವೇಳೆ ಸೀಮೆಎಣ್ಣೆ ದೀಪ ಹಾಗು ಮೇಣದ ಬತ್ತಿಯ ಬೆಳಕಿನಲ್ಲೇ ಕಾಲ ಕಳೆಯತ್ತಿದ್ದ ಈ ಇಬ್ಬರು ವೃದ್ಧೆಯರ ಮನೆಗಳಿಗೆ ತಕ್ಷಣವೇ ತಮ್ಮ ಸ್ವಂತ ಹಣದಿಂದ ಈ ವೃದ್ಧೆಯರ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿದ್ದಾರೆ..&lt;/p&gt;&lt;h2&gt;&lt;strong&gt;ಹಿರಿಯ ಜೀವಗಳಿಗೆ ಕಾನೂನು ನೆರವು&lt;/strong&gt;&lt;/h2&gt;&lt;p&gt;ಕೂಲಿ ನಾಲಿ ಮಾಡಿಕೊಂಡು ತಗಡಿನ ಶೆಡ್ಗಳಲ್ಲಿ ರಾತ್ರಿ ವೇಳೆ ಸೀಮೆಎಣ್ಣೆ ಹಾಗು ಮೇಣದ ಬತ್ತಿಯ ಬೆಳಕಿನಲ್ಲೇ ಬದುಕು ಸವೆಸುತ್ತಿದ್ದ ಮಹದೇವಮ್ಮ ಹಾಗು ರಾಜಮ್ಮ ಅವರ ಬದುಕಿಗೆ ವಿದ್ಯುತ್ ಬೆಳಕು ಹರಿಸುವ ಮೂಲಕ ಪೊಲೀಸ್ ಕಾನ್ಸ್ಟೇಬಲ್ ಕುಮಾರಾಸ್ವಾಮಿ ಮಾನವೀಯತೆ ಮೆರೆದಿದ್ದಾರೆ. ಈ ಒಂಟಿ ವೃದ್ಧೆಯರ ಮೊಗದಲ್ಲಿ ಬೆಳಕಿನ ಮಂದಹಾಸ ಮೂಡಿದೆ. ಪೊಲೀಸ್ ಅಂದ್ರೆ ಭಯ ಅಲ್ಲ ಭರವಸೆ ಎಂಬುದಕ್ಕೆ ಅನ್ವರ್ಥವಾಗಿ ಪೊಲೀಸ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಈ ಹಿರಿಯ ಜೀವಗಳಿಗೆ ಕಾನೂನು ನೆರವು ಮಾತ್ರವಲ್ಲದೆ ಮಾನವೀಯತೆ ಸಹಾಯಹಸ್ತ ಚಾಚಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-police-constable-helps-elderly-women-electricity-gvd/articleshow-bd4to5n"/>
        </item>
        <item>
            <title><![CDATA[₹499ಕ್ಕೆ ಡಯಾಲಿಸಿಸ್: ಚಾಮರಾಜನಗರ ರೋಟರಿ ಸೇವೆ ಬಡವರಿಗೆ ವರದಾನ, ಜನರಿಂದ ಪ್ರಶಂಸೆ]]></title>
            <link>https://kannada.asianetnews.com/karnataka-districts/chamarajanagar-rotary-dialysis-centre-low-cost-free-treatment-gvd/articleshow-d5t4xe2</link>
            <guid isPermaLink="true">https://kannada.asianetnews.com/karnataka-districts/chamarajanagar-rotary-dialysis-centre-low-cost-free-treatment-gvd/articleshow-d5t4xe2</guid>
            <pubDate>Sat, 28 Mar 2026 18:35:18 +0530</pubDate>
            <description><![CDATA[&lt;p&gt;ಅಲ್ಲಿನ ಬಡ ಕಿಡ್ನಿ ರೋಗಿಗಳು ಡಯಾಲಿಸಿಸ್ಗಾಗಿ ದುಬಾರಿ ವೆಚ್ಚ ಮಾಡಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಾಕಾಗದೆ ಮೈಸೂರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmt8rm9f38vtrq5z5d3gfxk7,imgname-fhh-1774703104302.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮಾ.28): &lt;/strong&gt;ಅಲ್ಲಿನ ಬಡ ಕಿಡ್ನಿ ರೋಗಿಗಳು ಡಯಾಲಿಸಿಸ್ಗಾಗಿ ದುಬಾರಿ ವೆಚ್ಚ ಮಾಡಬೇಕಿತ್ತು. ಜಿಲ್ಲಾಸ್ಪತ್ರೆಯಲ್ಲಿರುವ ಡಯಾಲಿಸಿಸ್ ಯಂತ್ರಗಳು ಸಾಕಾಗದೆ ಮೈಸೂರು ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಿತ್ತು. ಇದನ್ನು ಮನಗಂಡ ಅಲ್ಲಿನ ರೋಟರಿಸಂಸ್ಥೆ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿ ಬಡರೋಗಿಗಳ ಪಾಲಿಗೆ ವರದಾನಗಿದೆ.&lt;/p&gt;&lt;p&gt;ರೋಟರಿ ಅಂದಾಕ್ಷಣಾ ಪೊಲಿಯೋ ನಿರ್ಮಾಲನೆ, ಉಚಿತ ಕಣ್ಣಿನ ತಪಾಸಣೆಯಂತ ಸೇವಾ ಕಾರ್ಯಗಳು ನಮ್ಮ ಕಣ್ಮುಂದೆ ಬರುತ್ತವೆ. ಹೀಗೆ ಕಳೆದ 56 ವರ್ಷಗಳಿಂದ ಹತ್ತು ಹಲವು ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಚಾಮರಾಜನಗರದ ರೋಟರಿ ಸಂಸ್ಥೆ, ಬಡ ಹಾಗು ಮಧ್ಯಮ ವರ್ಗದ ಕಿಡ್ನಿ ರೋಗಿಗಳಿಗಾಗಿ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದೆ. ಮೈಸೂರು ರೋಟರಿ ಸಂಸ್ಥೆಯ ನೆರವಿನೊಂದಿಗೆ ಒಂದು ಕೋಟಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು ಪ್ರತಿ ತಿಂಗಳು 200 ಕ್ಕು ಹೆಚ್ಚು ಡಯಾಲಿಸಿಸ್ ಮಾಡಲಾಗುತ್ತಿದೆ.&lt;/p&gt;&lt;p&gt;ಬೇರೆ ಬೇರೆ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಲು ಒಂದುವರೆಯಿಂದ ಎರಡು ಸಾವಿರ ರೂಪಾಯಿ ಶುಲ್ಕ ತೆರಬೇಕು. ಆದರೆ ಇಲ್ಲಿ ಕೇವಲ 499 ರೂಪಾಯಿಗೆ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಒಂದು ಬಾರಿ ಡಯಾಲಿಸಿಸ್ ಮಾಡಲು 1200 ರೂಪಾಯಿ ವೆಚ್ಚ ತಗುಲುತ್ತಿದ್ದು ಉಳಿಕೆ ಹಣವನ್ನು ದಾನಿಗಳ ನೆರವಿನಿಂದ ರೋಟರಿ ಸಂಸ್ಥೆಯೇ ಭರಿಸುತ್ತಿದೆ. ಅತಿ ಬಡವರಿಗೆ ಸಂಪೂರ್ಣ ಉಚಿತವಾಗಿ ಡಯಾಲಿಸ್ ಮಾಡಲಾಗುತ್ತಿದೆ. ಪ್ರತಿ ತಿಂಗಳು ವೈದ್ಯಕೀಯ ಉಪಕರಣ, ಸಿಬ್ಬಂದಿ ವೇತನ ಸೇರಿದಂತೆ ಎರಡು ಲಕ್ಷ ರೂಪಾಯಿಗು ಅಧಿಕ ವೆಚ್ಚವಾಗುತ್ತಿದ್ದು ಈ ಹಣವನ್ನು ರೋಟರಿ ಸಂಸ್ಥೆಯೇ ಭರಿಸುತ್ತಿದೆ ಎನ್ನುತ್ತಾರೆ ಈ ಡಯಾಲಿಸಿಸ್ ಕೇಂದ್ರದ ರೂವಾರಿ ಡಾ. ನಾಗಾರ್ಜುನ್.&lt;/p&gt;&lt;h2&gt;&lt;strong&gt;ರೋಗಿಗಳಿಗೆ ವರದಾನ&lt;/strong&gt;&lt;/h2&gt;&lt;p&gt;ಉಚಿತ ಕಣ್ಣಿನ ತಪಾಸಣೆ ಹಾಗು ಶಸ್ತ್ರಚಿಕಿತ್ಸಾ ಶಿಬಿರ, ರಕ್ತದಾನ ಶಿಬಿರ, ಸಿಮ್ಸ್ ಆಸ್ಪತ್ರೆಗೆ ರಕ್ತನಿಧಿ ಕೇಂದ್ರದ ಕೊಡುಗೆ, ಹಲವು ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕಂಪ್ಯೂಟರ್ ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆ ಚಾಮರಾಜನಗರದಲ್ಲಿ ಸ್ಥಾಪಿಸಿರುವ ಡಯಾಲಿಸಿಸ್ ಕೇಂದ್ರ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ವರದಾನವಾಗಿದೆ. ಯಾರಾದರು ತಮ್ಮ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ ಹೀಗೆ ವಿಶೇಷ ಸಂದರ್ಭಗಳಲ್ಲಿ ಹಣ ನೀಡಿದರೆ ಅಂದು ಅವರ ಹೆಸರಿನಲ್ಲಿ ರೋಗಿಗಳಿಗೆ ಉಚಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ.&lt;/p&gt;&lt;p&gt;ಮುಂಬರುವ ದಿನಗಳಲ್ಲಿ ಬಡ ರೋಗಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಸಂಪೂರ್ಣವಾಗಿ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ನೀಡಲು ರೋಟರಿ ಸಂಸ್ಥೆ ಚಿಂತನೆ ನಡೆಸಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಬದಲಾದ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳಿಗೆ ಕಿಡ್ನಿ ಕಾಯಿಲೆ ಎದುರಾಗುತ್ತಿರುವುದರಿಂದ ವಾರಕ್ಕೊಮ್ಮೆ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಸಹ ರೋಟರಿ ಸಂಸ್ಥೆ ನಿರ್ಧರಿಸಿದ್ದು ರೋಟರಿ ಸಂಸ್ಥೆಯ ಈ ಸೇವಾ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-rotary-dialysis-centre-low-cost-free-treatment-gvd/articleshow-d5t4xe2"/>
        </item>
        <item>
            <title><![CDATA[ರಾಜ್ಯದಲ್ಲಿ ಉಪ ಚುನಾವಣೆ ಬಿರುಸು ಬೆನ್ನಲ್ಲೇ ಕೈ ನಾಯಕರು ಕಮಲಕ್ಕೆ]]></title>
            <link>https://kannada.asianetnews.com/politics/amid-intensifying-bypoll-heat-in-karnataka-leaders-from-congress-switch-over-to-bjp/articleshow-fsn9xok</link>
            <guid isPermaLink="true">https://kannada.asianetnews.com/politics/amid-intensifying-bypoll-heat-in-karnataka-leaders-from-congress-switch-over-to-bjp/articleshow-fsn9xok</guid>
            <pubDate>Thu, 26 Mar 2026 04:30:44 +0530</pubDate>
            <description><![CDATA[&lt;p&gt;ತಾಲೂಕಿನ ಕಡುವಿನಕಟ್ಟೆ ಗ್ರಾಮದ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬುಧವಾರ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್&zwnj; ಕುಮಾರ್&zwnj; ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmkkb25hfeezhc24et4y8mdm,imgname-bjp-1774479313073.avif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ : &lt;/strong&gt;ತಾಲೂಕಿನ ಕಡುವಿನಕಟ್ಟೆ ಗ್ರಾಮದ ಅನೇಕ ಕಾಂಗ್ರೆಸ್ ಮುಖಂಡರು ಪಕ್ಷ ತೊರೆದು ಬುಧವಾರ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್&zwnj; ಕುಮಾರ್&zwnj; ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಡುವಿನ ಕಟ್ಟೆ ಹುಂಡಿ (ಕೆ.ಕೆ.ಹುಂಡಿ) ಗ್ರಾಮದ ಮುಖಂಡರಾದ ಪ್ರಕಾಶ್ ಮಂಜು, ದರ್ಶನ್, ನಾಗಣ್ಣ, ಉಮೇಶ್&zwnj; ಅವರಿಗೆ ಪಕ್ಷದ ಶಾಲು ಹಾಕಿ ಸ್ವಾಗತಿಸಿದರು.&lt;/p&gt;&lt;p&gt;ಬಳಿಕ ಮಾತನಾಡಿದ ನಿರಂಜನ್&zwnj; ಕುಮಾರ್&zwnj;, ದೇಶದಲ್ಲಿ ಪ್ರದಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರರಹಿತ ಆಡಳಿತಕ್ಕೆ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅವರ ನಾಯಕತ್ವದ ಬಿಜೆಪಿ ವಿಶ್ವವ್ಯಾಪಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿಯು ಸಹ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬ ಹಂಬಲದೊಂದಿಗೆ ಅನೇಕ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುತ್ತಿದೆ.&lt;/p&gt;&lt;h2&gt;&lt;strong&gt;ಯುವಕರು ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆ&lt;/strong&gt;&lt;/h2&gt;&lt;p&gt;ಕೆಕೆ ಹುಂಡಿ ಗ್ರಾಮದ ಯುವಕರು ಮೋದಿ ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು.ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗ್ರಾಮ, ಹೋಬಳಿ ವ್ಯಾಪ್ತಿಯಲ್ಲಿ ಇನ್ನು ಹೆಚ್ಚು ಮಂದಿಯನ್ನು ಪಕ್ಷಕ್ಕೆ ತತ್ವ ಸಿದ್ಧಾಂತವನ್ನು ಒಪ್ಪಿ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಾಲೂಕಿನ ಪಕ್ಷವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಪ್ರಬಲಗೊಳಿಸೋಣ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರು ಪಣ ತೊಡೋಣ ಎಂದರು.&lt;/p&gt;&lt;h3&gt;&lt;strong&gt;ಕ್ಷೇತ್ರದಲ್ಲಿ ಆಡಳಿತ ಕುಸಿದಿದೆ&lt;/strong&gt;&lt;/h3&gt;&lt;p&gt;ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್&zwnj;. ಮಲ್ಲಿಕಾರ್ಜುನಪ್ಪ ಮಾತನಾಡಿ, ಕ್ಷೇತ್ರದಲ್ಲಿ ಆಡಳಿತ ಕುಸಿದಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳ ನಡೆಯುತ್ತಿಲ್ಲ. ನಗರಸಭೆ 31 ವಾರ್ಡುಗಳಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದೇ ನಿವಾಸಿಗಳು ಪರಿತಪ್ಪಿಸುತ್ತಿದ್ದಾರೆ. ಹಳ್ಳಿಗಳು ಸಹ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್&zwnj;ಗೆ ತಕ್ಕಪಾಠ ಕಲಿಸಲು ಜನರು ಮನಸ್ಸು ಮಾಡಿದ್ದಾರೆ ಎಂದು ತಿಳಿದರು.&lt;/p&gt;&lt;p&gt;ಜಿಪಂ ಮಾಜಿ ಸದಸ್ಯ ಸಿ.ಎನ್&zwnj;. ಬಾಲರಾಜು ಮಾತನಾಡಿ, ಕಾಂಗ್ರೆಸ್ ದುರಾಡಳಿತ ವಿರುದ್ಧ ಜನರು ಬೇಸತ್ತಿದ್ದಾರೆ. ಕಡುವಿನ ಕಟ್ಟೆ ಹುಂಡಿ ಗ್ರಾಮದ ಯುವಕರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ಗ್ರಾಮದ ಬೂತ್&zwnj;ನಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬರಲಿದೆ. ಆ ನಿಟ್ಟಿನಲ್ಲಿ ನಿಮ್ಮ ಕಾರ್ಯಯೋಜನೆಯನ್ನು ನಾವೆಲ್ಲರು ರೂಪಿಸೋಣ. ಇನ್ನು ಅನೇಕರು ಪಕ್ಷಕ್ಕೆ ಬರುವವರಿದ್ದಾರೆ. ಅವರನ್ನು ಸೇರ್ಪಡೆ ಮಾಡಿಕೊಂಡು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.&lt;/p&gt;&lt;p&gt;ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವ ಸ್ವಾಮಿ, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್&zwnj;, ಪಿಎಲ್&zwnj;ಡಿ ಬ್ಯಾಂಕ್ ಉಪಾಧ್ಯಕ್ಷ ನಿಂಗೇಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಕುಮಾರ ಸ್ವಾಮಿ, ಎಸ್. ಬಾಲಸುಬ್ರಮಣ್ಯ, ಮಾಜಿ ಅಧ್ಯಕ್ಷ ರಾಜು, ವಕೀಲ ಹೊಸೂರು ಮಹೇಶ್, ಉಡಿಗಾಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹೆಗ್ಗೋಠಾರ ಮಂಜು, ಶಿವಪುರ ಶಕಿ ಕೇಂದ್ರ ಅಧ್ಯಕ್ಷ ಶಿವರಾಜು ಮೊದಲಾದರು ಇದ್ದರು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/amid-intensifying-bypoll-heat-in-karnataka-leaders-from-congress-switch-over-to-bjp/articleshow-fsn9xok"/>
        </item>
        <item>
            <title><![CDATA[ತಾಯಿ ಸಾವಿನ ನೋವಿನಲ್ಲೂ, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ! ಅಬ್ದುಲ್ ಅಫಾನ್‌ಗೆ ಡಿಡಿಪಿಐ ಮೆಚ್ಚುಗೆ]]></title>
            <link>https://kannada.asianetnews.com/gallery/karnataka-districts/chamarajanagar-sslc-student-abdul-afaan-attends-exam-hours-after-mother-s-funeral-courage-amidst-sat-gfugr5s</link>
            <guid isPermaLink="true">https://kannada.asianetnews.com/gallery/karnataka-districts/chamarajanagar-sslc-student-abdul-afaan-attends-exam-hours-after-mother-s-funeral-courage-amidst-sat-gfugr5s</guid>
            <pubDate>Wed, 18 Mar 2026 14:51:56 +0530</pubDate>
            <description><![CDATA[&lt;p&gt;ಚಾಮರಾಜನಗರದ ವಿದ್ಯಾರ್ಥಿ ಅಬ್ದುಲ್ ಅಫಾನ್, ತಾಯಿ ನಿಧನದ ಅತೀವ ದುಃಖದ ನಡುವೆಯೂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ. ಶಿಕ್ಷಣದ ಮೇಲಿನ ಈತನ ಬದ್ಧತೆ ಮತ್ತು ಧೈರ್ಯವು ಎಲ್ಲರಿಗೂ ಮಾದರಿಯಾಗಿದ್ದು, ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km03nzxwmxwd0ccd9e2y4gtx,imgname-moodabidri-inspector-sandesh-pg-suspended--1--1773825359803.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರದ ವಿದ್ಯಾರ್ಥಿ ಅಬ್ದುಲ್ ಅಫಾನ್, ತಾಯಿ ನಿಧನದ ಅತೀವ ದುಃಖದ ನಡುವೆಯೂ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ. ಶಿಕ್ಷಣದ ಮೇಲಿನ ಈತನ ಬದ್ಧತೆ ಮತ್ತು ಧೈರ್ಯವು ಎಲ್ಲರಿಗೂ ಮಾದರಿಯಾಗಿದ್ದು, ಶಿಕ್ಷಣ ಇಲಾಖೆ ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಚಾಮರಾಜನಗರ: ಹೆ&lt;/strong&gt;ತ್ತ ತಾಯಿಯ ಅಗಲಿಕೆಯ ಅತೀವ ದುಃಖ ಒಂದು ಕಡೆ, ಭವಿಷ್ಯ ರೂಪಿಸುವ ಪರೀಕ್ಷೆಯ ಜವಾಬ್ದಾರಿ ಇನ್ನೊಂದು ಕಡೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಚಾಮರಾಜನಗರದ ವಿದ್ಯಾರ್ಥಿಯೊಬ್ಬ ತೋರಿದ ಧೈರ್ಯ ಮತ್ತು ಶಿಕ್ಷಣದ ಮೇಲಿರುವ ಬದ್ಧತೆ ಈಗ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತೆ ಮಾಡಿದೆ. ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳಲ್ಲಿ ಈ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾನೆ.&lt;/p&gt;&lt;img&gt;&lt;p&gt;ಚಾಮರಾಜನಗರದ ಕ್ರೆಸೆಂಟಾ ಅಕಾಡೆಮಿ ಶಾಲೆಯ ವಿದ್ಯಾರ್ಥಿಯಾಗಿರುವ ಅಬ್ದುಲ್ ಅಫಾನ್ ಈ ಸಾಹಸ ತೋರಿದ ಬಾಲಕ. ಅಫಾನ್ ತಾಯಿ ನೂರ್ ಜಹರಾ ಅವರು ಕಳೆದ ಕೆಲವು ಸಮಯದಿಂದ ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ (ಮಂಗಳವಾರ) ರಾತ್ರಿ ನಿಧನರಾದರು. ಪರೀಕ್ಷೆಯ ತಯಾರಿಯಲ್ಲಿದ್ದ ಮಗನಿಗೆ ತಾಯಿಯ ಸಾವು ಅತಿದೊಡ್ಡ ಆಘಾತ ನೀಡಿತು.&lt;/p&gt;&lt;img&gt;&lt;p&gt;ತಾಯಿಯ ಅಗಲಿಕೆಯಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿತ್ತು. ಇಂದು ಬೆಳ್ಳಂಬೆಳಗ್ಗೆ ತಾಯಿ ನೂರ್ ಜಹರಾ ಅವರ ಅಂತ್ಯಕ್ರಿಯೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತಾಯಿಗೆ ಅಂತಿಮ ನಮನ ಸಲ್ಲಿಸಿ ಕಣ್ಣೀರು ಸುರಿಸುತ್ತಿದ್ದ ಅಫಾನ್, ಆ ದುಃಖದ ನಡುವೆಯೂ ತನ್ನ ಶಿಕ್ಷಣ ಕುಂಠಿತವಾಗಬಾರದು ಎಂದು ನಿರ್ಧರಿಸಿದನು. ಅಂತ್ಯಕ್ರಿಯೆ ಮುಗಿದ ತಕ್ಷಣವೇ ಮನಸ್ಸನ್ನು ಗಟ್ಟಿ ಮಾಡಿಕೊಂಡು ಚಾಮರಾಜನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಹಾಜರಾದನು.&lt;/p&gt;&lt;img&gt;&lt;p&gt;ಪರೀಕ್ಷಾ ಕೊಠಡಿಯೊಳಗೆ ಕುಳಿತಿದ್ದ ಅಫಾನ್ ಕಣ್ಣುಗಳಲ್ಲಿ ಕಣ್ಣೀರು ಜಿನುಗುತ್ತಿದ್ದರೂ, ಕೈಗಳು ಮಾತ್ರ ಪರೀಕ್ಷೆ ಬರೆಯುವುದರಲ್ಲಿ ಮಗ್ನವಾಗಿದ್ದವು. ತಾಯಿಯ ಆಸೆಯಂತೆ ತಾನು ಓದಿ ದೊಡ್ಡವನಾಗಬೇಕು ಎಂಬ ಹಂಬಲ ಆತನಲ್ಲಿ ಎದ್ದು ಕಾಣುತ್ತಿತ್ತು. ವಿದ್ಯಾರ್ಥಿಯ ಈ ಸ್ಥಿತಿಯನ್ನು ಕಂಡು ಸಹಪಾಠಿಗಳು ಹಾಗೂ ಪರೀಕ್ಷಾ ಮೇಲ್ವಿಚಾರಕರು ಕೂಡ ಭಾವುಕರಾದರು.&lt;/p&gt;&lt;img&gt;&lt;p&gt;ಅಬ್ದುಲ್ ಅಫಾನ್ ತೋರಿದ ಈ ಅಸಾಧಾರಣ ಬದ್ಧತೆಗೆ ಶಾಲಾ ಶಿಕ್ಷಕರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ಹಾಗೂ ಶಿಕ್ಷಣಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಾಯಿಯನ್ನು ಕಳೆದುಕೊಂಡ ಆಘಾತದಲ್ಲೂ ಪರೀಕ್ಷೆಗೆ ಹಾಜರಾಗಿರುವುದು ಆತನ ಧೈರ್ಯವನ್ನು ತೋರಿಸುತ್ತದೆ. ಇತರ ವಿದ್ಯಾರ್ಥಿಗಳಿಗೆ ಈತ ಮಾದರಿಯಾಗಿದ್ದಾನೆ' ಎಂದು ಡಿಡಿಪಿಐ ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಪರೀಕ್ಷೆಯ ಒತ್ತಡದ ನಡುವೆ ಇಂತಹ ವೈಯಕ್ತಿಕ ದುರಂತ ಸಂಭವಿಸಿದರೂ ಎದೆಗುಂದದೆ ಪರೀಕ್ಷೆ ಎದುರಿಸಿದ ಅಬ್ದುಲ್ ಅಫಾನ್ ಈಗ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದಾನೆ. ಆತನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chamarajanagar-sslc-student-abdul-afaan-attends-exam-hours-after-mother-s-funeral-courage-amidst-sat-gfugr5s"/>
        </item>
        <item>
            <title><![CDATA[ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/will-karnataka-get-a-new-cm-post-elections-congress-mp-latest-statement-buzz/articleshow-ie4nlne</link>
            <guid isPermaLink="true">https://kannada.asianetnews.com/karnataka-districts/will-karnataka-get-a-new-cm-post-elections-congress-mp-latest-statement-buzz/articleshow-ie4nlne</guid>
            <pubDate>Thu, 19 Mar 2026 07:35:36 +0530</pubDate>
            <description><![CDATA[&lt;p&gt;ಪಂಚ ರಾಜ್ಯ ಚುನಾವಣೆ ಬಳಿಕ ಕರ್ನಾಟಕದಲ್ಲಿ ಅಧಿಕಾರ ಬದಲಾವಣೆ? ಕಾಂಗ್ರೆಸ್ ಸಂಸದ ಹೇಳಿದ್ದೇನು?, ಡಿನ್ನರ್ ಮೀಟಿಂಗ್&zwnj; ಸಾಮಾನ್ಯ ಪ್ರಕ್ರಿಯೆ ಇದರಲ್ಲಿ ರಾಜಕೀಯವಿಲ್ಲ ಎಂದಿರುವ ಸೋನಿಲ್ ಬೋಸ್, ಪಂಚ ರಾಜ್ಯ ಚುನಾವಣೆ ಬಳಿಕ ನಡೆಯುವ ಕೆಲ ಮಹತ್ವದ ನಿರ್ಧಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj02kfe5kz4qaaezvd5hr74z,imgname-siddaramaiah-dk-shivakumar-mallikarjun-kharge-1771676745157.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮಾ.19)&lt;/strong&gt; ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಬ್ಯೂಸಿಯಾಗಿದೆ. ಇದರ ನಡುವೆ ಕರ್ನಾಟಕದ ಅಧಿಕಾರ ಹಂಚಿಕೆ ಕಾವು ತಣ್ಣಗಾಗಿದೆ. ಕಾಂಗ್ರೆಸ್ ಡಿನ್ನರ್ ಮೀಟಿಂಗ್, ಅಧಿಕಾರ ಬದಲಾವಣೆ ಕುರಿತು ಚಾಮರಾಜನಗರ ಸಂಸದ ಸುನಿಲ್ ಬೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರು ಡಿನ್ನರ್ ಮೀಟಿಂಗ್ ಕೊಡುವುದರಲ್ಲಿ ವಿಶೇಷ ರಾಜಕೀಯ ಅರ್ಥವಿಲ್ಲ. ಇದು ಸಾಮಾನ್ಯ ಎಂದಿರುವ ಸೋನಿಲ್ ಬೋಸ್, ರಾಜ್ಯದ ಸಿಎಂ ವಿಚಾರದಲ್ಲೂ ಹೈಕಮಾಂಡ್ ಕೈಹೊಳ್ಳುವ ನಿರ್ಧಾರವೇ ಮುಖ್ಯ ಎಂದಿದ್ದಾರೆ.&lt;/p&gt;&lt;h2&gt;ಪಂಚ ರಾಜ್ಯ ಚುನಾವಣೆ ಬಳಿಕ ನಿರ್ಧಾರ&lt;/h2&gt;&lt;p&gt;ಸದ್ಯ ಕಾಂಗ್ರೆಸ್ ಹೈಕಮಾಂಡ್ ಪಂಚ ರಾಜ್ಯ ಚುನಾವಣೆಯಲ್ಲಿ ತೊಡಗಿಸಿಕೊಂಡಿದೆ. ರಾಹುಲ್ ಗಾಂಧಿ ಪಂಚ ರಾಜ್ಯ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ರಾಹುಲ್ ಗಾಂಧಿ ಶ್ರಮಿಸುತ್ತಿದ್ದಾರೆ. ಪಂಚ ರಾಜ್ಯ ಚುನಾವಣೆ ಬಳಿಕ ಹೈಕಮಾಂಡ್ ಕರ್ನಾಟಕ ವಿಚಾರದಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಅಧಿಕಾರದ ಬಗ್ಗೆ ಸ್ಪಷ್ಟಪಡಿಸಬೇಕಿದೆ ಎಂದಿದ್ದಾರೆ.&lt;/p&gt;&lt;p&gt;ಅಧಿಕಾರ ಬದಲಾವಣೆ ಕುರಿತು ರಾಜ್ಯ ನಾಯಕರಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಅವರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದು ಸುನಿಲ್ ಬೋಸ್ ಹೇಳಿದ್ದಾರೆ. ಕರ್ನಾಟಕ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.&lt;/p&gt;&lt;h2&gt;ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು&lt;/h2&gt;&lt;p&gt;ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವಾಗಲಿದೆ. ಜನರು ಕಾಂಗ್ರೆಸ್ ನಾಯಕತ್ವ, ಕಾಂಗ್ರೆಸ್ ಸರ್ಕಾರ ಬಯಸುತ್ತಿದ್ದಾರೆ. ಕರ್ನಾಟಕದಲ್ಲಿ ಜನ ಭಾರಿ ಬದಲಾವಣೆ ಬಯಸಿ ಅಧಿಕಾರ ತಂದಿದ್ದಾರೆ. ಇಲ್ಲಿನ ಯೋಜನೆಗಳು, ಗ್ಯಾರೆಂಟಿ, ಅಭಿವೃದ್ದಿ ಕೆಲಸಗಳು ಇತರ ರಾಜ್ಯಕ್ಕೂ ಮಾದರಿಯಾಗಿದೆ. ಪಂಚ ರಾಜ್ಯಗಳಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವಾಗಲಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chamarajnagar</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/will-karnataka-get-a-new-cm-post-elections-congress-mp-latest-statement-buzz/articleshow-ie4nlne"/>
        </item>
        <item>
            <title><![CDATA[ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ: ಹೊತ್ತಿ ಉರಿದ ತೆಂಗಿನ ಮರ, ವ್ಯಕ್ತಿ ಸಿಡಿಲಿಗೆ ಬಲಿ, ಆಲಿಕಲ್ಲು ಮಳೆಗೆ ಭಾರಿ ಬೆಳೆ ಹಾನಿ]]></title>
            <link>https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</link>
            <guid isPermaLink="true">https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</guid>
            <pubDate>Wed, 18 Mar 2026 10:23:18 +0530</pubDate>
            <description><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkzh3db8vzk9hdyt39nf4dwa,imgname-coconut-tree-fire-after-lightning-strike-1773805876584.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;img&gt;&lt;p&gt;ರಾಯಚೂರು: ನಿನ್ನೆ ಗುಡುಗು ಮಿಂಚು ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವೊಂದು ಅನಾಹುತಗಳು ಸಂಭವಿಸಿದೆ. ರಾಯಚೂರು ಜಿಲ್ಲೆ ಅರಕೇರಾ ತಾ. ಹಾಳಜಾಡಲದಿನ್ನಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ತೆಂಗಿನ ಮರ ಇದಾಗಿದೆ. ಸಿಡಿಲು ಬಡಿದ ಪರಿಣಾಮ ತೆಂಗಿನಮರ ಸಂಪೂರ್ಣ ಸುಟ್ಟು ಹೋಗಿದ್ದು, ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ: ನಿನ್ನೆ ಸುರಿದ ಆಲಿಕಲ್ಲು ಮಳೆ ಚಾಮರಾಜನಗರದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಬೆಳೆದ ಬೆಳೆ ಕೈಗೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ಮೆಣಸಿನಕಾಯಿ,ಟೊಮ್ಯಾಟೊ, ಕಲ್ಲಂಗಡಿ, ಬಾಳೆ ಸೇರಿ ಹಲವು ಬೆಳೆಗೆ ಹಾನಿಯಾಗಿದೆ. ಚಾಮರಾಜನಗರ ಗ್ರಾಮಾಂತರ ಪ್ರದೇಶದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ,ಕಾಡಳ್ಳಿ,ಸಂತೇಮರಹಳ್ಳಿ, ಬಸವಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೌಟುಂಬಿಕ ಕಲಹ ಎರಡು ಮಕ್ಕಳಾದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಹಾಗು ಜಿಲ್ಲೆಯ ಗಡಿಭಾಗದ ತಾಳವಾಡಿಯಲ್ಲಿ ಕಂಡೂ ಕೇಳರಿಯದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಗ್ರಾಮಗಳ ಬೀದಿಬೀದಿಗಳಲ್ಲಿ ಹಾಗು ಜಮೀನು, ತೋಟಗಳಲ್ಲಿ ಆಲಿಕಲ್ಲು ರಾಶಿರಾಶಿಯಾಗಿ ಬಿದ್ದಿದ್ದು ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದಾರೆ..&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ರಾಜ್ಯದಲ್ಲಿ ಬೇಸಿಗೆ ಮಳೆಗೆ ಮತ್ತೊಂದು ಬಲಿ: ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್&lt;/p&gt;&lt;img&gt;&lt;p&gt;ಬೀದರ್: ಗಡಿ ಜಿಲ್ಲೆ ಬೀದರ್&zwnj;ನಲ್ಲಿಯೂ ಆಕಾಲಿಕ ಮಳೆಗೆ ಜನ ಹೈರಾಣಾಗಿದ್ದಾರೆ.ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸತತ ಎರಡು ಗಂಟೆ ಕಾಲ ಆಲಿಕಲ್ಲು ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ರಾತ್ರಿ ನಿರಂತರ ಮಳೆಯಾಗಿದೆ.ಬೀದರ್ ಜಿಲ್ಲೆಯ ಹುಮನಾಬಾದ್&zwnj;, ಔರಾದ್, ಬಸವಕಲ್ಯಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ &zwnj;ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ&lt;/p&gt;&lt;img&gt;&lt;p&gt;ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ (58) ಮೃತಪಟ್ಟಿದ್ದಾರೆ. ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಅವರು ಕೆಲಸ ಮುಗಿಸಿ ವಾಪಾಸ್ ಬರುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೆಯೇ ಗದಗ ಜಿಲ್ಲೆಯ ರೋಣ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈತರ ಕೈಗೆ ಸಿಕ್ಕ ಪಂಪ್&zwnj;ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್&zwnj;ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680"/>
        </item>
        <item>
            <title><![CDATA[Gundlupet POCSO case: ಹೊಟ್ಟೆ ನೋವೆಂದ ಬಾಲಕಿ: ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ!]]></title>
            <link>https://kannada.asianetnews.com/karnataka-districts/pocso-case-in-gundlupet-minor-girl-complaining-of-stomach-pain-gives-birth-in-ambulance-rav/articleshow-krgkori</link>
            <guid isPermaLink="true">https://kannada.asianetnews.com/karnataka-districts/pocso-case-in-gundlupet-minor-girl-complaining-of-stomach-pain-gives-birth-in-ambulance-rav/articleshow-krgkori</guid>
            <pubDate>Sun, 22 Mar 2026 07:03:37 +0530</pubDate>
            <description><![CDATA[&lt;p&gt;ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದಲ್ಲಿ, ಹೊಟ್ಟೆನೋವಿನಿಂದ ಬಳಲುತ್ತಿದ್ದ 17 ವರ್ಷದ ಬಾಲಕಿಯೊಬ್ಬಳು ಆಸ್ಪತ್ರೆಗೆ ಸಾಗಿಸುವಾಗ ಆ್ಯಂಬುಲೆನ್ಸ್&zwnj;ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆಗೆ ತನ್ನ ಸಂಬಂಧಿ ಸುರೇಶ್ ಕಾರಣ ಎಂದು ಬಾಲಕಿ ಹೇಳಿಕೆ ಆಧರಿಸಿ ಪೋಕ್ಸೋ ಪ್ರಕರಣ ದಾಖಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km9jagbpjzzr2pwr6kpjwdj6,imgname----------------------14--1774142701942.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುಂಡ್ಲುಪೇಟೆ (ಮಾ.22): &lt;/strong&gt;17 ವರ್ಷದ ಬಾಲಕಿಯೊಬ್ಬಳಿಗೆ ಹೊಟ್ಟೆನೋವು ಕಾಣಿಸಿಕೊಂಡು, ಚಾಮರಾಜನಗರ ಸಿಮ್ಸ್&zwnj; ಆಸ್ಪತ್ರೆಗೆ ತೆರಳುವಾಗ ಆ್ಯಂಬುಲೆನ್ಸ್&zwnj;ನಲ್ಲಿಯೇ ಹೆರಿಗೆಯಾಗಿರುವ ಘಟನೆಯು ತಾಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ.&lt;/p&gt;&lt;p&gt;ಆಕೆಯನ್ನು ಗರ್ಭಿಣಿ ಮಾಡಿದ ಆರೋಪದ ಮೇರೆಗೆ ಅಪ್ರಾಪ್ತೆಯ ಸಂಬಂಧಿಯೂ ಆಗಿರುವ ದೇಶಿಪುರ ಗ್ರಾಮದ ಸುರೇಶ್&zwnj; (46) ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.&lt;/p&gt;&lt;h2&gt;ಏನಿದು ಘಟನೆ:&lt;/h2&gt;&lt;p&gt;ದೇಶಿಪುರ ಗ್ರಾಮದ 17 ವರ್ಷದ ಬಾಲಕಿಗೆ 3 ದಿನಗಳ ಹಿಂದೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಆಸ್ಪತ್ರೆಗೆ ತೆರಳಿ ಪರೀಕ್ಷಿಸಿದ್ದಾರೆ. ಬಳಿಕ ಅಲ್ಲಿಂದ ಚಾಮರಾಜನಗರದ ಸಿಮ್ಸ್&zwnj;ಗೆ ತೆರಳಲು ವೈದ್ಯರು ಸೂಚಿಸಿದ್ದಾರೆ. ಈ ವೇಳೆ ಆ್ಯಂಬುಲೆನ್ಸ್&zwnj;ನಲ್ಲಿ ತೆರಳುವಾಗ ಹೆಣ್ಣುಮಗುವಿಗೆ ಜನ್ಮವಿತ್ತಿದ್ದಾಳೆ.&lt;/p&gt;&lt;p&gt;ಇದೇ ವೇಳೆ ಗರ್ಭಿಣಿಯಾಗಲು ಸಂಬಂಧಿಕ ಸುರೇಶ್&zwnj; ಕಾರಣ ಎಂದು ಅಪ್ರಾಪ್ತೆಯು ತನ್ನ ತಂದೆ ಬಳಿ ನಿವೇದಿಸಿಕೊಂಡಿದ್ದಾಳೆ.&lt;/p&gt;&lt;p&gt;ಬಳಿಕ ಅಪ್ರಾಪ್ತೆಯ ತಂದೆ ಬೇಗೂರು ಠಾಣೆಯಲ್ಲಿ ಪ್ರಕರಣ ದೂರು ನೀಡಿದ್ದು, ಸುರೇಶ್&zwnj; ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಇತ್ತೀಚೆಗೆ ಹಸಗೂಲಿ ಗ್ರಾದ ವೃದ್ಧನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೋ ಅಡಿ ಆರೋಪಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pocso-case-in-gundlupet-minor-girl-complaining-of-stomach-pain-gives-birth-in-ambulance-rav/articleshow-krgkori"/>
        </item>
        <item>
            <title><![CDATA[ನೀರಿಗಾಗಿ ಮಕ್ಕಳಿಂದ ಪತ್ರ:  ₹490 ಕೋಟಿ ಕೊಟ್ಟ ಸಿಎಂ!]]></title>
            <link>https://kannada.asianetnews.com/state/childrens-letter-for-water-moves-cm-rs-490-crore-sanctioned-by-siddaramaiah/articleshow-kz1qnk7</link>
            <guid isPermaLink="true">https://kannada.asianetnews.com/state/childrens-letter-for-water-moves-cm-rs-490-crore-sanctioned-by-siddaramaiah/articleshow-kz1qnk7</guid>
            <pubDate>Sun, 08 Mar 2026 07:00:35 +0530</pubDate>
            <description><![CDATA[&lt;p&gt;ತಮ್ಮ ಗ್ರಾಮದಲ್ಲಿನ ನೀರಿನ ತೀವ್ರ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ರಾಜ್ಯ ಬಜೆಟ್&zwnj;ನಲ್ಲಿ ಅನುದಾನ ಘೋಷಿಸಿದ್ದಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk5gtkhz1rf2jg87hc2341bt,imgname-siddaramaiah-1772933172799.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp; ಹನೂರು : &amp;nbsp;&lt;/strong&gt;ತಮ್ಮ ಗ್ರಾಮದಲ್ಲಿನ ನೀರಿನ ತೀವ್ರ ಸಮಸ್ಯೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ರಾಜ್ಯ ಬಜೆಟ್&zwnj;ನಲ್ಲಿ ಅನುದಾನ ಘೋಷಿಸಿದ್ದಕ್ಕೆ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಹನೂರು ಭಾಗದ ನೀರಾವರಿ ಅಭಿವೃದ್ಧಿಗೆ ₹490 ಕೋಟಿ ಅನುದಾನ&lt;/h2&gt;&lt;p&gt;ಶುಕ್ರವಾರ ಸಿದ್ದರಾಮಯ್ಯ ಅವರು ಮಂಡಿಸಿದ 17ನೇ ರಾಜ್ಯ ಬಜೆಟ್&zwnj;ನಲ್ಲಿ ಹನೂರು ಭಾಗದ ನೀರಾವರಿ ಅಭಿವೃದ್ಧಿಗೆ ₹490 ಕೋಟಿ ಅನುದಾನ ಘೋಷಿಸಲಾಗಿದೆ. ಈ ಹಿಂದೆ ಕೆಂಪಯ್ಯನಹಟ್ಟಿ ಗ್ರಾಮದ ಮಕ್ಕಳು, ತಮ್ಮೂರಿನ ನೀರಿನ ಸಮಸ್ಯೆಯನ್ನು ವಿವರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. &lsquo;ನಮ್ಮ ಊರಿನಲ್ಲಿ ನೀರೇ ಇಲ್ಲ. ಸಾವಿರ ಅಡಿ ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ&rsquo; ಎಂದು ಪತ್ರದಲ್ಲಿ ಮಕ್ಕಳು ಸಿಎಂ ಗಮನ ಸೆಳೆದಿದ್ದರು.&lt;/p&gt;&lt;h3&gt;ಕೆರೆ - ಕಟ್ಟೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಬೇಕೆಂದು ಮನವಿ&lt;/h3&gt;&lt;p&gt;ನದಿ ಮೂಲದಿಂದ ಕೆರೆ - ಕಟ್ಟೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದರು. ಇದೀಗ ರಾಜ್ಯ ಬಜೆಟ್&zwnj;ನಲ್ಲಿ ಕಾವೇರಿ ನದಿಯಿಂದ ಕೆರೆ-ಕಟ್ಟೆಗಳನ್ನು ತುಂಬಿಸುವ &lsquo;ಉಡುತೊರೆಹಳ್ಳ ನೀರಾವರಿ ಯೋಜನೆ&rsquo;ಗೆ ₹490 ಕೋಟಿ ಅನುದಾನ ಘೋಷಿಸಲಾಗಿದೆ. ಇದರಿಂದ ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ.&amp;nbsp;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/childrens-letter-for-water-moves-cm-rs-490-crore-sanctioned-by-siddaramaiah/articleshow-kz1qnk7"/>
        </item>
        <item>
            <title><![CDATA[110 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ರೂಪಾಯಿ ಯೋಜನೆ ಸದ್ದಿಲ್ಲದೇ ಆರಂಭ!]]></title>
            <link>https://kannada.asianetnews.com/karnataka-districts/gundlupet-chamarajanagar-rs-475-crore-project-to-fill-110-lakes-and-reservoirs-with-water-has-begun-without-a-hitch-mrq/articleshow-n7ubf2h</link>
            <guid isPermaLink="true">https://kannada.asianetnews.com/karnataka-districts/gundlupet-chamarajanagar-rs-475-crore-project-to-fill-110-lakes-and-reservoirs-with-water-has-begun-without-a-hitch-mrq/articleshow-n7ubf2h</guid>
            <pubDate>Tue, 17 Mar 2026 08:23:53 +0530</pubDate>
            <description><![CDATA[&lt;p&gt;110 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರೆತಿದೆ. ಭೂಮಿ ಪೂಜೆಗೂ ಮುನ್ನವೇ, ನಂಜನಗೂಡು ಬಳಿ ಪೈಪ್&zwnj;ಲೈನ್&zwnj;ಗಾಗಿ ಅಲೈನ್ಮೆಂಟ್&zwnj; ಸರ್ವೆ ಕಾರ್ಯ ಸದ್ದಿಲ್ಲದೆ ಆರಂಭವಾಗಿದೆ. ಈ ₹475 ಕೋಟಿ ಮೊತ್ತದ ಯೋಜನೆ ಇದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwv9yf417h1qkmnhy2e7e31,imgname-chamarajanagra-1773715913188.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಂಗೂಪುರ ಶಿವಕುಮಾರ್&zwnj;&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ: &amp;nbsp;&lt;/strong&gt;ಗುಂಡ್ಲುಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೂರಾಹತ್ತು ಕೆರೆ, ಕಟ್ಟೆಗಳಿಗೆ ಕಬಿನಿ ನದಿ ಮೂಲದಿಂದ ನೀರು ತುಂಬಿಸುವ ಎರಡು ಹಂತದ ಕಾಮಗಾರಿಯಲ್ಲಿ ಮೊದಲ ಹಂತದ ಕಾಮಗಾರಿಗೆ ಭೂಮಿ ಪೂಜೆಗೂ ಮುನ್ನವೇ ಸದ್ದಿಲ್ಲದೇ ಅಲೈನ್ಮೆಂಟ್&zwnj; ಸರ್ವೆ ಆರಂಭವಾಗಿದೆ.&lt;/p&gt;&lt;p&gt;ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿಲ್ಲ/ ತುಂಬಿಸಿದ್ದೀನಿ ವಿಚಾರದಲ್ಲಿ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಬೆಂಬಲಿಗರ ಪರ, ವಿರೋಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅಲೈನ್ಮೆಂಟ್&zwnj; ಸರ್ವೆ ಕಾರ್ಯ ನಂಜನಗೂಡು ಬಳಿಯ ಗಾಂಧಿಗ್ರಾಮದ ಬಳಿಯಿಂದ ಶುರುವಾಗಿದೆ.&lt;/p&gt;&lt;p&gt;ತಾಲೂಕಿನ ನೂರಾಹತ್ತು ಕೆರೆ,ಕಟ್ಟೆಗಳಿಗೆ ಕಬಿನಿ ನದಿಯಿಂದ ಎರಡು ಹಂತದಲ್ಲಿ ನೀರು ತುಂಬಿಸುವ ಯೋಜನೆ 475 ಕೋಟಿ ಅಂದಾಜು ಮೊತ್ತದ ಕಾಮಗಾರಿ ಕಳೆದ ಫೆ.12 ರಂದು ಸ್ಟಾರ್&zwnj; ಬಿಲ್ಡರ್&zwnj; ಕಂಪನಿಗೆ 402 ಕೋಟಿಗೆ ಟೆಂಡರ್&zwnj; ಪಡೆದಿದ್ದಾರೆ. ಅಲ್ಲದೆ ಸ್ಟಾರ್&zwnj; ಕಂಪನಿಗೆ ಕಾವೇರಿ ನೀರಾವರಿ ನಿಗಮ ಕಳೆದ ಫೆ.12 ರಂದು ಕಾಮಗಾರಿ ಆರಂಭಕ್ಕೆ ವರ್ಕ್ ಆರ್ಡರ್&zwnj; ನೀಡಲಾಗಿದೆ. ಗುತ್ತಿಗೆ ಪಡೆದ ಸ್ಟಾರ್&zwnj; ಕಂಪನಿಯು ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದಿಂದ ಗುಂಡ್ಲುಪೇಟೆ ತಾಲೂಕಿನ ಚನ್ನವಡೆಯನಪುರ ತನಕ ಮೊದಲನೇ ಹಂತದ ಅಲೈನ್ಮೆಂಟ್&zwnj; ಸರ್ವೆ ನಡೆಸಿದ್ದಾರೆ.&lt;/p&gt;&lt;p&gt;ಅಲೈನ್ಮೆಂಟ್&zwnj;ನ 2ನೇ ಹಂತದ ಸರ್ವೆ ಕಾರ್ಯ ಕೂಡ ಪ್ರಗತಿಯಲ್ಲಿದೆ. ಅಲೈನ್ಮೆಂಟ್&zwnj; ಸರ್ವೆಯಲ್ಲಿ ಪೈಪ್&zwnj; ಲೈನ್&zwnj; ಸರ್ವೆ ಹಾಗೂ ಪಂಪ್&zwnj; ಹೌಸ್&zwnj; ಜಾಗದ ಸರ್ವೆ ನಡೆಸಲಾಗಿದ್ದು, 2ನೇ ಹಂತ ಅಲೈನ್ಮೆಂಟ್&zwnj; ಸರ್ವೆ ಕೂಡ ಚುರುಕಾಗಿ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಪತ್ರ ವ್ಯವಹಾರ&lt;/strong&gt;&lt;/h2&gt;&lt;p&gt;ಒಂದೆಡೆ ಅಲೈನ್ಮೆಂಟ್&zwnj; ಸರ್ವೆ ಪ್ರಥಮ ಹಂತ ಮುಗಿದು, 2 ನೇ ಹಂತ ಪ್ರಗತಿಯಲ್ಲಿದ್ದರೆ,ಮತ್ತೊಂದೆಡೆ ಗುತ್ತಿಗೆ ಪಡೆದ ಸ್ಟಾರ್&zwnj; ಕಂಪನಿ ಯೋಜನೆಗೆ ತುರ್ತಾಗಿ ಬೇಕಾದ ವಿದ್ಯುತ್&zwnj; ಸಂಪರ್ಕ, ನೀರೆತ್ತುವ ಯಂತ್ರ, ಪೈಪ್&zwnj;ಲೈನ್&zwnj; ಸಂಬಂಧ ಪತ್ರ ವ್ಯವಹಾರ ನಡೆಸುತ್ತಿದೆ.&lt;/p&gt;&lt;p&gt;ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದ ಬಳಿಯ ಕಬಿನಿ ನದಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎರಡು ಹಂತಗಳಲ್ಲಿ ನೂರತ್ತು ಕೆರೆ,ಕಟ್ಟೆಗಳಿಗೆ ತಾಲೂಕಿನಲ್ಲಿ ಕುಡಿಯುವ ನೀರು ಉದ್ದೇಶಕ್ಕಾಗಿ ನೀರನ್ನು ಎತ್ತುವ ಯೋಜನೆ ಎರಡು ಹಂತಗಳಲ್ಲಿ.&lt;/p&gt;&lt;h3&gt;&lt;strong&gt;3 ವರ್ಷ ಕಾಲಾವಧಿ&lt;/strong&gt;&lt;/h3&gt;&lt;p&gt;ನೂರಾಹತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಲು ಮೂರು ವರ್ಷದ ಕಾಲಾವಧಿಯಿದ್ದು, ಕೆಲಸ ಪೂರ್ಣಗೊಂಡ ಪ್ರಮಾಣ ಪತ್ರ ನೀಡಿದ ನಂತರ ಗುತ್ತಿಗೆ ಪಡೆದ ಕಂಪನಿ 5 ವರ್ಷದ ತನಕ ದೋಷ ಹಾಗೂ ನಿರ್ವಹಣೆ ಮಾಡಬೇಕಿದೆ.&lt;/p&gt;&lt;h3&gt;&lt;strong&gt;ಯೋಜನೆ ಹಿನ್ನಲೆ?&lt;/strong&gt;&lt;/h3&gt;&lt;p&gt;ತಾಲೂಕಿನ ನೂರತ್ತು ಕೆರೆ,ಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು ಎಂದು ಕನಸು ಹೊತ್ತು ಈ ಕೆರೆ ನೀರು ತುಂಬಿಸುವ ಯೋಜನೆಗೆ ಕಳೆದ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಸಿ.ಎಸ್. ನಿರಂಜನ್&zwnj; ಕುಮಾರ್&zwnj; ಡಿಪಿಆರ್&zwnj; ಮಾಡಿಸಿದ್ದರು.&lt;/p&gt;&lt;p&gt;ಆದರೆ ನೂರತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರ ಜಸ್ಟೀಸ್&zwnj; ನೀಡಿತ್ತು. ಒಂದೇ ಸಲ ೪೩೦ ಕೋಟಿ ಅನುದಾನ ನೀಡಲು ಆಗುವುದಿಲ್ಲ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿರಲಿಲ್ಲ. ಎರಡು ಹಂತದಲ್ಲಿ ಅನುದಾನ ನೀಡಲು ಹಣಕಾಸು ಇಲಾಖೆ ಹೇಳಿತ್ತು. ಮತ್ತೆ ಪ್ರಸ್ತಾವ ಸಲ್ಲಿಸಿ ಎನ್ನುವ ವೇಳೆಗೆ 2023 ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಬಂದ ಕಾರಣ ಯೋಜನೆಗೆ ಬ್ರೇಕ್&zwnj; ಬಿತ್ತು.&lt;/p&gt;&lt;p&gt;ಇದಾದ ಬಳಿಕ 2023 ರಲ್ಲಿ ಎಚ್.ಎಂ.ಗಣೇಶ್&zwnj; ಪ್ರಸಾದ್&zwnj; ಶಾಸಕರಾದರು. ಅವರದೇ ಪಕ್ಷದ ಸರ್ಕಾರ ಬಂತು. ನೂರತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಫೈಲ್&zwnj; ಹಿಡಿದು ಮತ್ತೆ ಪ್ರಸ್ತಾವ ಸಲ್ಲಿಸಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಲು ಶುರು ಮಾಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗಾಲ್ಫ್&zwnj; ಆಡ್ತಾರೆ, ಡ್ಯೂಟಿ ಮಾಡೋಕೆ ಟೈಂ ಇಲ್ಲ; 9 ತಿಂಗಳು ಕಚೇರಿಗೆ ಬಾರದ ಐಎಎಸ್&zwnj;, ಆರ್ ಅಶೋಕ್ ಗರಂ, ಯಾರು ಆ ಅಧಿಕಾರಿ?&lt;/strong&gt;&lt;/p&gt;&lt;p&gt;2025 ಏ.24 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೂರಾಹತ್ತು ಕೆರೆ,ಕಟ್ಟೆಗಳಿಗೆ ನೀರು ತುಂಬಿಸುವ 475 ಕೋಟಿ ಅಂದಾಜು ಮೊತ್ತದ ಯೋಜನೆಗೆ ಒಪ್ಪಿಗೆ ಸೂಚಿಸಿದ್ದರು.&lt;/p&gt;&lt;p&gt;ಗುಂಡ್ಲುಪೇಟೆ ತಾಲೂಕಿನ ನೂರಾಹತ್ತು ಕೆರೆ, ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಬಿಡುಗಡೆಯಾದ ಬಳಿಕ ಟೆಂಡರ್&zwnj; ಕೂಡ ಆಗಿದೆ. ಕಾಮಗಾರಿ ಅಗ್ರಿಮೆಂಟ್&zwnj; ಕೂಡ ಆಗಿದೆ.ಮುಂದಿನ ತಿಂಗಳಲ್ಲಿ ಮುಖ್ಯಮಂತ್ರಿ,ಉಪ ಮುಖ್ಯಮಂತ್ರಿ ಆಹ್ವಾನಿಸಿ ಭೂಮಿ ಪೂಜೆ ಮಾಡಿಸುತ್ತೇನೆ ಎಂದು ಗುಂಡ್ಲುಪೇಟೆ ಶಾಸಕ -ಎಚ್.ಎಂ.ಗಣೇಶ್&zwnj; ಪ್ರಸಾದ್&zwnj; ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸಿದ್ದರಾಮಯ್ಯ ಅವರದ್ದು ಖಾಲಿ ಚೊಂಬು, ಸಾಲದ ಮೇಲೆ ರೂಪಿಸಿದಬಜೆಟ್&zwnj;: ಸಿಟಿ ರವಿ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gundlupet-chamarajanagar-rs-475-crore-project-to-fill-110-lakes-and-reservoirs-with-water-has-begun-without-a-hitch-mrq/articleshow-n7ubf2h"/>
        </item>
        <item>
            <title><![CDATA[ಪೆಟ್ರೋಲ್ ಖಾಲಿ ಖಾಲಿ, No Stock ಬೋರ್ಡ್ ಹಾಕಿದ ಬಂಕ್; ರಾಜ್ಯಾದ್ಯಂತ ಪವರ್ ಪೆಟ್ರೋಲ್ ಬೆಲೆ ₹2 ಹೆಚ್ಚಳ]]></title>
            <link>https://kannada.asianetnews.com/karnataka-districts/middle-east-war-impact-power-petrol-price-hike-karnataka-and-kollegala-no-stock-board-oil-shortage-sat/articleshow-qii44r3</link>
            <guid isPermaLink="true">https://kannada.asianetnews.com/karnataka-districts/middle-east-war-impact-power-petrol-price-hike-karnataka-and-kollegala-no-stock-board-oil-shortage-sat/articleshow-qii44r3</guid>
            <pubDate>Fri, 20 Mar 2026 19:21:51 +0530</pubDate>
            <description><![CDATA[ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ ಪವರ್ ಪೆಟ್ರೋಲ್ ದರ ಲೀಟರ್&zwnj;ಗೆ 2 ರೂ. ಏರಿಕೆಯಾಗಿದೆ. ಇದರ ನಡುವೆ, ಚಾಮರಾಜನಗರದ ಕೊಳ್ಳೇಗಾಲದಲ್ಲಿ ಪೆಟ್ರೋಲ್ ಅಭಾವದ ವದಂತಿ ಹಬ್ಬಿದ್ದು, ಕೆಲವು ಬಂಕ್&zwnj;ಗಳಲ್ಲಿ 'ನೋ ಸ್ಟಾಕ್' ಬೋರ್ಡ್ ಹಾಕಿರುವುದು ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km5qy1cfcv8p98w80cjfngy3,imgname-petrol-price-hike-and-oil-no-stock--1--1774014367118.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಚಾಮರಾಜನಗರ (ಮಾ.20): ಮ&lt;/strong&gt;ಧ್ಯಪ್ರಾಚ್ಯ ದೇಶಗಳಲ್ಲಿ ತಲೆದೋರಿರುವ ಯುದ್ಧದ ವಾತಾವರಣವು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲು ಆರಂಭಿಸಿದೆ. ಇದರ ನೇರ ಎಫೆಕ್ಟ್ ಈಗ ಕರ್ನಾಟಕದಲ್ಲೂ ಕಂಡುಬರುತ್ತಿದ್ದು, ರಾಜ್ಯದ ಹಲವೆಡೆ ಪೆಟ್ರೋಲ್ ದರ ಏರಿಕೆಯಾಗಿದೆ. ವಿಶೇಷವಾಗಿ 'ಪವರ್ ಪೆಟ್ರೋಲ್' (Power Petrol) ಬೆಲೆಯಲ್ಲಿ 2 ರೂ. ಏರಿಕೆ ಕಂಡುಬಂದಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ. ಮತ್ತೊಂದೆಡೆ ಕೊಳ್ಳೇಗಾಲ ಪೆಟ್ರೋಲ್ ಬಂಕ್&zwnj;ನಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ.&lt;/p&gt;&lt;h2&gt;&lt;strong&gt;ಪವರ್ ಪೆಟ್ರೋಲ್ ದರದಲ್ಲಿ 2 ರೂಪಾಯಿ ಹೆಚ್ಚಳ:&lt;/strong&gt;&lt;/h2&gt;&lt;p&gt;ನಿನ್ನೆ ರಾತ್ರಿಯಿಂದಲೇ ಜಾರಿಗೆ ಬರುವಂತೆ ಪವರ್ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್&zwnj;ಗೆ 2 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿ ಲೀಟರ್&zwnj;ಗೆ 110 ರೂಪಾಯಿ ಇದ್ದ ಪವರ್ ಪೆಟ್ರೋಲ್ ದರ ಈಗ 112 ರೂಪಾಯಿಗೆ ತಲುಪಿದೆ. ಎಚ್.ಪಿ (HP) ಪೆಟ್ರೋಲ್ ಬಂಕ್&zwnj;ಗಳಲ್ಲಿ ಸದ್ಯ ಪವರ್ ಪೆಟ್ರೋಲ್ ಬೆಲೆ ಲೀಟರ್&zwnj;ಗೆ 112.97 ರೂಪಾಯಿ ದಾಖಲಾಗಿದೆ. ಆದರೆ, ಸಮಾಧಾನಕರ ವಿಷಯವೆಂದರೆ ಸಾಮಾನ್ಯ ಪೆಟ್ರೋಲ್ (Normal Petrol) ದರದಲ್ಲಿ ಸದ್ಯಕ್ಕೆ ಯಾವುದೇ ವ್ಯತ್ಯಾಸವಾಗಿಲ್ಲ. ಕೇವಲ ಪ್ರೀಮಿಯಂ ಅಥವಾ ಪವರ್ ಪೆಟ್ರೋಲ್ ಮೇಲೆ ಮಾತ್ರ ಈ ದರ ಏರಿಕೆ ಅನ್ವಯವಾಗಿದೆ.&lt;/p&gt;&lt;h2&gt;&lt;strong&gt;ಕೊಳ್ಳೇಗಾಲದಲ್ಲಿ 'ನೋ ಸ್ಟಾಕ್' ಬೋರ್ಡ್ - ಸವಾರರ ಆತಂಕ:&lt;/strong&gt;&lt;/h2&gt;&lt;p&gt;ದರ ಏರಿಕೆಯ ನಡುವೆಯೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ವದಂತಿ ಹಬ್ಬಿದೆ. ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಎರಡು ಪ್ರಮುಖ ಪೆಟ್ರೋಲ್ ಬಂಕ್&zwnj;ಗಳಲ್ಲಿ 'ನೋ ಸ್ಟಾಕ್' (No Stock) ಬೋರ್ಡ್ ಹಾಕಲಾಗಿದೆ. ತೈಲ ಸಂಗ್ರಹ ಮುಗಿದಿದೆ ಎಂಬ ಕಾರಣ ನೀಡಿ ಬಂಕ್&zwnj;ಗಳನ್ನು ತಾತ್ಕಾಲಿಕವಾಗಿ ಮುಚ್ಚಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;h2&gt;&lt;strong&gt;ಬಂಕ್&zwnj;ಗಳ ಮುಂದೆ ಮುಗಿಬಿದ್ದ ಜನ:&lt;/strong&gt;&lt;/h2&gt;&lt;p&gt;ಕೊಳ್ಳೇಗಾಲದ ಎರಡು ಬಂಕ್&zwnj;ಗಳಲ್ಲಿ ತೈಲ ಖಾಲಿಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ, ಪಟ್ಟಣದ ಇತರ ಪೆಟ್ರೋಲ್ ಬಂಕ್&zwnj;ಗಳ ಮುಂದೆ ವಾಹನ ಸವಾರರು ಮುಗಿಬೀಳುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಸಂಪೂರ್ಣವಾಗಿ ಖಾಲಿಯಾಗಬಹುದು ಎಂಬ ಭಯದಿಂದ ಸವಾರರು ಕ್ಯೂ ನಿಂತು ಇಂಧನ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಟ್ಟಣದಾದ್ಯಂತ ಸಂಚಾರಿ ದಟ್ಟಣೆಯೂ ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಬಂಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಯುದ್ಧದ ಪರಿಣಾಮ ಮತ್ತು ವದಂತಿ:&lt;/strong&gt;&lt;/h2&gt;&lt;p&gt;ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡರೆ ಕಚ್ಚಾ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕ ಜಾಗತಿಕ ಮಟ್ಟದಲ್ಲಿದೆ. ಇದೇ ಕಾರಣಕ್ಕೆ ದರಗಳು ಏರಿಕೆಯಾಗುತ್ತಿವೆ. ಆದರೆ, ಸ್ಥಳೀಯವಾಗಿ ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬುದು ಕೇವಲ ವದಂತಿ ಎಂದು ಕೆಲವು ಮೂಲಗಳು ತಿಳಿಸಿವೆ. ಆದರೂ, ಬಂಕ್&zwnj;ಗಳಲ್ಲಿ ಸ್ಟಾಕ್ ಇಲ್ಲದಿರುವುದು ಮತ್ತು ದರ ಏರಿಕೆಯು ಜನರ ನೆಮ್ಮದಿ ಕೆಡಿಸಿರುವುದಂತೂ ನಿಜ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/middle-east-war-impact-power-petrol-price-hike-karnataka-and-kollegala-no-stock-board-oil-shortage-sat/articleshow-qii44r3"/>
        </item>
        <item>
            <title><![CDATA[ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ]]></title>
            <link>https://kannada.asianetnews.com/chamarajnagar/chamarajanagar-tragedy-woman-run-over-by-truck-after-saree-gets-caught-in-bike-wheel/articleshow-rpvqcea</link>
            <guid isPermaLink="true">https://kannada.asianetnews.com/chamarajnagar/chamarajanagar-tragedy-woman-run-over-by-truck-after-saree-gets-caught-in-bike-wheel/articleshow-rpvqcea</guid>
            <pubDate>Tue, 07 Apr 2026 22:37:59 +0530</pubDate>
            <description><![CDATA[&lt;p&gt;ಸಂಬಂಧಿಕರ ಮನೆಯಿಂದ ಮರಳುವಾಗ ಮಹಿಳೆಗೆ ಮುಳುವಾದ ಸೀರೆ, ಕ್ಷಣಾರ್ಧದಲ್ಲೇ ಹೋಯ್ತು ಪ್ರಾಣ, ಕಾರ್ಯಕ್ರಮ ಮುಗಿಸಿ ಸಂಭ್ರಮದಲ್ಲಿದ್ದ ಮಹಿಳೆಗೆ ಈಕೆಯ ಸೀರೆಯೇ ಪ್ರಾಣಕ್ಕೆ ಕುತ್ತು ತಂದಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knmdxsja3pbvpnnmp94agkcn,imgname-saree-1775580931656.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಏ.07) &lt;/strong&gt;ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಕೆಲ ಎಚ್ಚರಿಕೆಗಳನ್ನು ಪಾಲಿಸಬೇಕು. ಪ್ರಮುಖವಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಅತೀವ ಕಾಳಜಿ ಅತ್ಯಗತ್ಯ. ಟ್ರಾಫಿಕ್ ನಿಯಮ ಪಾಲನೆ ಜೊತೆಗೆ ಕೆಲ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕು. ಹೀಗೆ ಬೈಕ್&zwnj;ನಲ್ಲಿ ತೆರಳುತ್ತಿದ್ದಾಗ ಮಹಿಳೆಯ ಸೀರೆ ಸೆರಗು ಹಿಂಬದಿ ಚಕ್ರಕ್ಕೆ ಸಿಲುಕಿದ ಪರಿಣಾಮ ಮಹಿಳೆ ರಸ್ತೆಗೆ ಬಿದ್ದಿದ್ದಾಳೆ. ಬೈಕ್ ಹಿಂದೆಯೇ ಇದ್ದ ಟ್ರಕ್ ಮಹಿಳೆ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಬಳಿ ನಡೆದಿದೆ.&lt;/p&gt;&lt;p&gt;ಮೃತ ಮಹಿಳೆಯನ್ನು ಶಿವಮ್ಮ ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಗೆ ತೆರಳಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಶಿವಮ್ಮ ತನ್ನ ಸೀರೆ ಸೆರಗಿನ ಕುರಿತು ಹೆಚ್ಚಿನ ಗಮನ ಕೊಟ್ಟಿಲ್ಲ. ಇತ್ತ ಬೈಕ್ ರೈಡ್ ಮಾಡುತ್ತಿದ್ದ ವ್ಯಕ್ತಿ ಕೂಡ ಗಮನಿಸಲಿಲ್ಲ. ಪರಿಣಾಮ ದುರಂತ ನಡೆದು ಹೋಗಿದೆ. ಸೀರೆ ಸೆರೆಗು ಚಕ್ರಕ್ಕೆ ಸಿಲುಕಿದ ಪರಿಣಾಮ ಶಿವಮ್ಮ ಚಲಿಸುತ್ತಿದ್ದ ಬೈಕ್&zwnj;ನಿಂದ ರಸ್ತೆ ಮೇಲೆ ಬಿದ್ದಿದ್ದಾರೆ. ಕ್ಷಣಾರ್ಧದಲ್ಲಿ ಟ್ರಕ್ ಹರಿದಿದಿದೆ. ಬೋಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;ಟಿಪ್ಪರ್ ಕಾರು ನಡುವೆ ಡಿಕ್ಕಿ&lt;/h2&gt;&lt;p&gt;ಇಂದು ಬೆಳಗ್ಗೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಂಗಳ ಮಾರ್ಗದ ಬಸವಪುರ ಬಳಿ ಕಾರು ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಕಾರು ಜಖಂಗೊಂಡಿತ್ತು. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಲೋಡ್ ಹೊತ್ತು ತಮಿಳುನಾಡಿನತ್ತ ಸಾಗುತ್ತಿದ್ದ ಟಿಪ್ಪರ್&zwnj;ಗೆ ವಿರುದ್ದ ದಿಕ್ಕಿನಲ್ಲಿ ಕಾರು ಬಂದು ಅಪಘಾತ ಸಂಭವಿಸಿತ್ತು. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;ಸ್ಥಳದಲ್ಲೇ ತಂದೆ ಮಗಳ ದುರ್ಮರಣ&lt;/h2&gt;&lt;p&gt;ಕಲಬುರಗಿ ನಗರದ ರಿಂಗ್ ರಸ್ತೆಯ ಸೈಯದ್ ಚಿಂಚೋಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ತಂದೆ ಹಾಗೂ ಮಗಳು ಮೃತಪಟ್ಟಿದ್ದಾರೆ. ತಂದೆ ಹಾಗೂ ಮಗಳು ಸಂಚರಿಸುತ್ತಿದ್ದ ಬೈಕ್&zwnj;ಗೆ ಟ್ಯಾಂಕರ್ ಡಿಕ್ಕಿಯಾಗಿ ದುರಂತ ನಡೆದಿದೆ. ಅಪಘಾತದಲ್ಲಿ ತಂದೆ ರಾಜುಕುಮಾರ್ (45) ಮಗಳು ಸುಮಾ (14) ಸ್ಥಳದಲ್ಲೆ ಸಾವು ಕಂಡಿದ್ದಾರೆ. ಬೈಕ್ ಮೇಲೆ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಈ ವೇಳೆ ಬೈಕ್&zwnj;ಗೆ ಸಿಮೆಂಟ್ ಮಿಕ್ಸರ್ ಟ್ಯಾಂಕರ್ ಡಿಕ್ಕಿ ಹೊಡೆದು ಸ್ಥಳದಲ್ಲಿ ಸಾವು ಕಂಡಿದ್ದಾರೆ. ಮೃತರು ನಗರದ ರಾಣೋಜಪೀರ ದರ್ಗಾ ಪ್ರದೇಶದ ನಿವಾಸಿಗಳಾಗಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chamarajnagar</category>
            <dc:creator>Chethan Kumar</dc:creator>
            <atom:link href="https://kannada.asianetnews.com/chamarajnagar/chamarajanagar-tragedy-woman-run-over-by-truck-after-saree-gets-caught-in-bike-wheel/articleshow-rpvqcea"/>
        </item>
        <item>
            <title><![CDATA[ಗುಂಡ್ಲುಪೇಟೆಯಲ್ಲಿ ಕೇರಳಿಗ ಅಳವಡಿಸಿದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ 2 ವರ್ಷದ ಹುಲಿ ಮರಿ ಸಾವು]]></title>
            <link>https://kannada.asianetnews.com/gallery/state/chamarajanagar-tiger-cub-died-by-electric-shock-in-gundlupet-vbgwkkr</link>
            <guid isPermaLink="true">https://kannada.asianetnews.com/gallery/state/chamarajanagar-tiger-cub-died-by-electric-shock-in-gundlupet-vbgwkkr</guid>
            <pubDate>Tue, 17 Mar 2026 08:04:48 +0530</pubDate>
            <description><![CDATA[&lt;p&gt;&lt;strong&gt;tiger cub died by Electric shock: &lt;/strong&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ, ಕೇರಳ ಮೂಲದ ವ್ಯಕ್ತಿಯೊಬ್ಬರು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಎರಡು ವರ್ಷದ ಹುಲಿಯೊಂದು ಸಾವನ್ನಪ್ಪಿದೆ. ಡ್ರೋನ್ ಮೂಲಕ ಪರಿಶೀಲನೆ ನಡೆಸುವಾಗ ಈ ಘಟನೆ ಬೆಳಕಿಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkwsnb7qz129zs108rseq82d,imgname-tiger-died-in-gundlupete--1--1773714189559.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;tiger cub died by Electric shock: &lt;/strong&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ, ಕೇರಳ ಮೂಲದ ವ್ಯಕ್ತಿಯೊಬ್ಬರು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಸಿಲುಕಿ ಎರಡು ವರ್ಷದ ಹುಲಿಯೊಂದು ಸಾವನ್ನಪ್ಪಿದೆ. ಡ್ರೋನ್ ಮೂಲಕ ಪರಿಶೀಲನೆ ನಡೆಸುವಾಗ ಈ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ಚಾಮರಾಜನಗರ: ಅಕ್ರಮ ವಿದ್ಯುತ್ ತಂತಿ&zwnj; ಸ್ಪರ್ಶಿಸಿ ಹುಲಿಯೊಂದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಡಗೂರು ಬಳಿ ನಡೆದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹರ್ಮುಜ್ ಜಲಸಂಧಿಯನ್ನು ಇರಾನ್ ಹಿಡಿತದಿಂದ ಬಿಡಿಸಲು ಚೀನಾಗೆ ಬೆದರಿಸುತ್ತಲೇ ನ್ಯಾಟೋ ರಾಷ್ಟ್ರಗಳ ಸಹಾಯ ಕೇಳಿದ ಟ್ರಂಪ್&lt;/strong&gt;&lt;/p&gt;&lt;img&gt;&lt;p&gt;ಕೇರಳ ಮೂಲದವರು ಜಮೀನಿಗೆ ಅಳವಡಿಸಿದ್ದ ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಎರಡು ವರ್ಷ ವಯಸ್ಸಿನ ಹುಲಿಯೊಂದು ಸಾವನ್ನಪ್ಪಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಡಿಶಾದಲ್ಲಿ ರಣ ಭೀಕರ ಸುಂಟರಗಾಳಿಗೆ ಇಬ್ಬರು ಬಲಿ: 70ಕ್ಕೂ ಹೆಚ್ಚು ಮನೆಗಳಿಗೆ ಹಾನಿ: ವೀಡಿಯೋ ವೈರಲ್&lt;/strong&gt;&lt;/p&gt;&lt;img&gt;&lt;p&gt;ಸ್ಥಳೀಯರ ಜಮೀನನ್ನು ಗುತ್ತಿಗೆ ಪಡೆದಿದ್ದ ಕೇರಳ ಮೂಲದ ಪರಮೇಶ್ ಎಂಬುವವರು ಇಲ್ಲಿ ಜಮೀನಿಗೆ ಅಕ್ರಮವಾಗಿ ವಿದ್ಯುತ್ ಬೇಲಿ ಹಾಕಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&amp;nbsp;&lt;/strong&gt;&lt;/p&gt;&lt;p&gt;ಬಾರಾಮತಿ ಕ್ಷೇತ್ರದ ಉಪ ಚುನಾವಣೆ: ಅತ್ತಿಗೆ ಸುನೇತ್ರಾ ಪವಾರ್ ವಿರುದ್ಧ NCP ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದ ಸುಪ್ರಿಯಾ ಸುಳೆ&lt;/p&gt;&lt;img&gt;&lt;p&gt;ಈ ಭಾಗದಲ್ಲಿ ಹುಲಿ, ಚಿರತೆ ಸಂಚಾರ ಹೆಚ್ಚಿರುವ ಹಿನ್ನೆಲೆ, ಅಧಿಕಾರಿಗಳು ಥರ್ಮಲ್ ಡ್ರೋನ್ ಹಾರಿಸುವಾಗ ಇಲ್ಲಿ ಹುಲಿ ಸತ್ತು ಬಿದ್ದಿರೋದು ಗಮನಕ್ಕೆ ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ&lt;/strong&gt;&lt;strong&gt;: RSS ಸಂಘಟನೆಗೆ ನಿರ್ಬಂಧ ಹೇರಿ, ಆಸ್ತಿ ಜಪ್ತಿ ಮಾಡಿ: ಅಮೆರಿಕ ಧಾರ್ಮಿಕ ಸ್ವಾತಂತ್ರ್ಯ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು&lt;/strong&gt;&lt;/p&gt;&lt;img&gt;&lt;p&gt;ಈ ಹಿಂದೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷಪ್ರಾಶನಕ್ಕೆ ಒಳಗಾಗಿ 6 ಹುಲಿಗಳು ಸಾವನ್ನಪ್ಪಿದ್ದವು. ಹಾಗೆಯೇ ಬಿಆರ್ ಟಿ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಉರುಳಿಗೆ ಸಿಲುಕಿಒಂದು ಹುಲಿ ಸಾವನ್ನಪ್ಪಿತ್ತು. ಇದೀಗ ಗುಂಡ್ಲುಪೇಟೆ ಭಾಗದಲ್ಲಿ ಈಗ ಮತ್ತೊಂದು ಹುಲಿ ಸಾವನ್ನಪ್ಪಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಲ್&zwnj;ಪಿಜಿ ಸಿಲಿಂಡ&zwnj;ರ್ ಬೇಕಿದ್ರೆ ಕೆವೈಸಿ ನೀಡುವುದು ಕಡ್ಡಾಯ: ಇಲ್ಲಿದೆ ಕೆವೈಸಿ ಪ್ರಕ್ರಿಯೆಯ ಡಿಟೇಲ್&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/chamarajanagar-tiger-cub-died-by-electric-shock-in-gundlupet-vbgwkkr"/>
        </item>
        <item>
            <title><![CDATA[ಚಾಮರಾಜನಗರ: ಬಿ‌ಆರ್‌ಟಿಯ ಹಲವು ಕಡೆಗಳಲ್ಲಿ ಭಾರಿ ಬೆಂಕಿ: ಧಗಧಗನೇ ಹೊತ್ತಿ ಉರಿಯುತ್ತಿರುವ ಹುಲಿ ಸಂರಕ್ಷಿತ ಪ್ರದೇಶ]]></title>
            <link>https://kannada.asianetnews.com/gallery/state/massive-fire-breaks-out-at-several-places-of-brt-tiger-reserve-is-burning-in-flames-vcqigtg</link>
            <guid isPermaLink="true">https://kannada.asianetnews.com/gallery/state/massive-fire-breaks-out-at-several-places-of-brt-tiger-reserve-is-burning-in-flames-vcqigtg</guid>
            <pubDate>Thu, 26 Mar 2026 19:37:31 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಬಿಆರ್&zwnj;ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಇದು ಕಿಡಿಗೇಡಿಗಳ ಕೃತ್ಯವಿರಬಹುದೆಂದು ಶಂಕಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmn763yskpp6acmw4hmjmyzk,imgname-fire-in-brt-hill--3--1774533677017.jpg" type="image/jpeg" height="390" width="690"/>
            <content:encoded><![CDATA[ಚಾಮರಾಜನಗರ ಜಿಲ್ಲೆಯ ಬಿಆರ್&zwnj;ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಇದು ಕಿಡಿಗೇಡಿಗಳ ಕೃತ್ಯವಿರಬಹುದೆಂದು ಶಂಕಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.&lt;img&gt;&lt;p&gt;ಕೆಲ ದಿನಗಳ ಹಿಂದಷ್ಟೇ ಚಿಕ್ಕಮಗಳೂರಿನ ಕುದುರೆಮುಖದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ಈ ಘಟನೆ ಮಾಸುವ ಮೊದಲೇ ಈಗ ಚಾಮರಾಜನಗರ ಜಿಲ್ಲೆಯಲ್ಲಿ ಬರುವ ಪ್ರಸಿದ್ಧ ಹುಲಿರಕ್ಷಿತಾರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.&lt;/p&gt;&lt;img&gt;&lt;p&gt;ಬೆಂಕಿ ಕೆನ್ನಾಲಿಗೆ ಆಕಾಶಕ್ಕೆ ಏರಿದ್ದು, ಬಿಸಿಲಿನ ಧಗೆಗೆ ಬೆಂಕಿಇನ್ನಷ್ಟು ತೀವ್ರಗೊಂಡು ಉರಿಯುತ್ತಿದ್ದು, ದಟ್ಟವಾದ ಕಪ್ಪು ಹೊಗೆ ಹಾಗೂ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಬೆಂಕಿ ಹೊತ್ತಿ ಉರಿಯುತ್ತಿರುವ ದೃಶ್ಯ ಘಟನಾ ಸ್ಥಳದಿಂದ ಬಂದ ವೀಡಿಯೋ ಫೋಟೋಗಳಲ್ಲಿ ಕಾಣಿಸುತ್ತಿದ್ದು ಭೀತಿ ಹುಟ್ಟಿಸಿದೆ.&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ಬಿ&zwnj;ಆರ್&zwnj;ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ(ಬಿಳಿಗಿರಿರಂಗನಾಥ ಟೆಂಪಲ್ ಟೈಗರ್ ರಿಸರ್ವರ್) ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಹೊತ್ತಿ ಉರಿಯುತ್ತಿದೆ. ಬೈಲೂರು ವಲಯ ಹಾಗು ಕೊಳ್ಳೇಗಾಲ ವನ್ಯಜೀವಿ ವಲಯದ ಹತ್ತಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ಇದು ಕಿಡಿಗೇಡಿಗಳ ಕೃತ್ಯವಿರಬಹುದೇ ಎಂಬ ಅನುಮಾನ ಮೂಡಿದೆ.&lt;/p&gt;&lt;img&gt;&lt;p&gt;ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಕಾಡು ಧಗಧಗನೇ ಹೊತ್ತಿ ಉರಿಯುತ್ತಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, ದೃಶ್ಯಾವಳಿಗಳನ್ನು ಗಮನಿಸಿದರೆ ಕೇವಲ ಅರಣ್ಯ ಸಿಬ್ಬಂದಿಯಿಂದ ಈ ಬೆಂಕಿಯನ್ನು ನಂದಿಸುವುದಕ್ಕೆ ಸಾಧ್ಯವಿಲ್ಲದಂತೆ ಕಾಣುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.&lt;/p&gt;&lt;img&gt;&lt;p&gt;ಬಿಳಿಗಿರಿರಂಗನಾಥ ಟೆಂಪಲ್ ಟೈಗರ್ ರಿಸರ್ವರ್ ಆಗಿದ್ದು, ಇದು ಹುಲಿಗಳು, ಆನೆಗಳು, ಗೌರ್&zwnj;ಗಳು, ಕರಡಿಗಳು ಮತ್ತು 250 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಅಲ್ಲದೇ ಇಲ್ಲಿ ಸೋಲಿಗ ಬುಡಕಟ್ಟು ಜನಾಂಗದವರು ಸೇರಿದಂತೆ ಹಲವು ಸಮುದಾಯಗಳ ಜನ ವಾಸ ಮಾಡುತ್ತಾರೆ.&lt;/p&gt;]]></content:encoded>
            <category>chamarajnagar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/massive-fire-breaks-out-at-several-places-of-brt-tiger-reserve-is-burning-in-flames-vcqigtg"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದ ಯುಗಾದಿ ಜಾತ್ರೆಗೆ ತಮಿಳಿನಲ್ಲಿ ಸ್ವಾಗತ ಕಮಾನು ಹಾಕಿದ ಪ್ರಾಧಿಕಾರ; ಕನ್ನಡಕ್ಕೆ ಭಾರೀ ಅವಮಾನ!]]></title>
            <link>https://kannada.asianetnews.com/karnataka-districts/chamarajanagar-male-mahadeshwara-hills-tamil-welcome-board-controversy-ugadi-jatra-kannada-activists-sparks-sat/articleshow-vzgozr7</link>
            <guid isPermaLink="true">https://kannada.asianetnews.com/karnataka-districts/chamarajanagar-male-mahadeshwara-hills-tamil-welcome-board-controversy-ugadi-jatra-kannada-activists-sparks-sat/articleshow-vzgozr7</guid>
            <pubDate>Wed, 18 Mar 2026 18:51:18 +0530</pubDate>
            <description><![CDATA[ಚಾಮರಾಜನಗರದ ಪ್ರಸಿದ್ಧ ಮಲೆ ಮಾದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರೆಗೆ ಅಳವಡಿಸಲಾದ ಸ್ವಾಗತ ಕಮಾನು ಸಂಪೂರ್ಣವಾಗಿ ತಮಿಳಿನಲ್ಲಿರುವುದು ಭಾಷಾ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km0hmzgxj282tsmjqjf73egb,imgname-chamarajanagar-mm-hills-tamil-board-1773840006683.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮಾ.18): ದ&lt;/strong&gt;ಕ್ಷಿಣ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮಲೆ ಮಾದೇಶ್ವರ ಬೆಟ್ಟದಲ್ಲಿ ಈಗ ಭಾಷಾ ವಿವಾದವೊಂದು ಭುಗಿಲೆದ್ದಿದೆ. ಶ್ರೀ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಯುಗಾದಿ ಜಾತ್ರೆಯ ಪ್ರಯೋಗವಾಗಿ ಅಳವಡಿಸಿರುವ ಸ್ವಾಗತ ಕಮಾನು (Banner) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕದ ನೆಲದಲ್ಲಿ ಕನ್ನಡವನ್ನು ಕಡೆಗಣಿಸಿ, ಕೇವಲ ತಮಿಳು ಭಾಷೆಯಲ್ಲಿ ಬ್ಯಾನರ್ ಅಳವಡಿಸಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:&lt;/strong&gt;&lt;/h2&gt;&lt;p&gt;ಈ ಕುರಿತು ಕಾರ್ತಿಕ್ ವೆಂಕಟೇಶ್ (@VKkarthik169) ಎಂಬುವವರು ಎಕ್ಸ್ (ಟ್ವಿಟ್ಟರ್) ನಲ್ಲಿ ಫೋಟೋ ಸಮೇತ ಪೋಸ್ಟ್ ಮಾಡಿದ್ದು, ಪ್ರಾಧಿಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. 'ಇದೇನು ಕರ್ನಾಟಕವೋ ಅಥವಾ ತಮಿಳುನಾಡೋ? ನಾಚಿಕೆಯಾಗಬೇಕು ನಿಮಗೆ, ಈ ಬ್ಯಾನರ್ ಅನ್ನು ಈ ಕೂಡಲೇ ಕಿತ್ತೊಗೆಯಿರಿ' ಎಂದು ಆಕ್ರೋಶ ಹೊರಹಾಕಿದ್ದಾರೆ. ಒಂದು ಕಡೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಭಾಷಣ ಮಾಡುತ್ತಾರೆ, ಆದರೆ ಅವರೇ ಅಧ್ಯಕ್ಷರಾಗಿರುವ ಪ್ರಾಧಿಕಾರದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ದುರಂತ ಎಂದು ಅವರು ಕಿಡಿಕಾರಿದ್ದಾರೆ.&lt;/p&gt;&lt;p&gt;ಶ್ರೀ ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡವನ್ನು ಬಿಟ್ಟು ತಮಿಳಿನಲ್ಲಿ ಬ್ಯಾನರನ್ನು ಹಾಕಿರುವುದು ಇದು ಎಷ್ಟರ ಮಟ್ಟಿಗೆ ಸರಿ..????ಇದೇನು ಕರ್ನಾಟಕ ನ ಅಥವಾ ತಮಿಳುನಾಡ ನಾಚಿಕೆಯಾಗ್ಬೇಕು ನಿಮಗೆ ಈ ಬ್ಯಾನರ್ ನ ಈ ಕೂಡಲೇ ಕಿತ್ತೊಗೆಯಿರಿ ಒಂದು ಕಡೆ ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ&hellip; pic.twitter.com/BhyFxzozFm&lt;/p&gt;&lt;p&gt;&mdash; ಕಾರ್ತಿಕ್ ವೆಂಕಟೇಶ್ l K@RTH!K Venkatesh (@VKkarthik169) March 18, 2026&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಬ್ಯಾನರ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಕರ್ನಾಟಕ ಸರ್ಕಾರದಿಂದ ಯುಗಾದಿ ಜಾತ್ರಾ ಮಹೋತ್ಸವ-2026ರ ಅಂಗವಾಗಿ ಈ ಸ್ವಾಗತ ಕಮಾನನ್ನು ಅಳವಡಿಸಲಾಗಿದೆ. ಇದರಲ್ಲಿ 'ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಮಹದೇಶ್ವರ ಬೆಟ್ಟ-571490, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ. ಯುಗಾದಿ ಜಾತ್ರಾ ಮಹೋತ್ಸವ - 2026 ಎಲ್ಲರಿಗೂ ಸ್ವಾಗತ' ಎಂದು ಸಂಪೂರ್ಣವಾಗಿ ತಮಿಳಿನಲ್ಲಿ ಬರೆಯಲಾಗಿದೆ. ಗಡಿ ಭಾಗದ ಜಿಲ್ಲೆಯಾದ್ದರಿಂದ ತಮಿಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಕಾರಣಕ್ಕೆ ತಮಿಳು ಬಳಸುವುದು ತಪ್ಪಲ್ಲ, ಆದರೆ ಕನ್ನಡವನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ.&lt;/p&gt;&lt;h2&gt;&lt;strong&gt;ಜನಪ್ರತಿನಿಧಿಗಳ ಮೌನಕ್ಕೆ ಪ್ರಶ್ನೆ:&lt;/strong&gt;&lt;/h2&gt;&lt;p&gt;ಈ ವಿವಾದಾತ್ಮಕ ಬ್ಯಾನರ್ ಅಳವಡಿಕೆಯಾಗಿದ್ದರೂ ಹನೂರು ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 'ಇವರಿಗೆ ಕಣ್ಣು ಕಾಣುತ್ತಿಲ್ಲವೇ? ಅಥವಾ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕನ್ನಡದ ಅಸ್ಮಿತೆಯನ್ನು ಬಲಿ ಕೊಡುತ್ತಿದ್ದಾರೆಯೇ?' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದ್ದಿವೆ.&lt;/p&gt;&lt;h2&gt;&lt;strong&gt;ಪ್ರಾಧಿಕಾರದ ವಿರುದ್ಧ ಕ್ರಮಕ್ಕೆ ಆಗ್ರಹ:&lt;/strong&gt;&lt;/h2&gt;&lt;p&gt;ಮಲೆ ಮಾದೇಶ್ವರ ಬೆಟ್ಟದ ಪ್ರಾಧಿಕಾರವು ಕೂಡಲೇ ಈ ಬ್ಯಾನರ್ ಅನ್ನು ತೆರವುಗೊಳಿಸಿ, ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವ ಬ್ಯಾನರ್&zwnj;ಗಳನ್ನು ಅಳವಡಿಸಬೇಕು. ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರವೊಂದರಲ್ಲಿ ಕನ್ನಡಕ್ಕೆ ಈ ರೀತಿಯ ಅವಮಾನವಾಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ. ಈ ಘಟನೆ ಜಿಲ್ಲಾಡಳಿತ ಮತ್ತು ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-male-mahadeshwara-hills-tamil-welcome-board-controversy-ugadi-jatra-kannada-activists-sparks-sat/articleshow-vzgozr7"/>
        </item>
        <item>
            <title><![CDATA[ಬೆಂಗಳೂರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಗುಂಡ್ಲುಪೇಟೆ ಕಾಡಿನಲ್ಲಿ ಭೀಕರ ಹತ್ಯೆ]]></title>
            <link>https://kannada.asianetnews.com/karnataka-districts/chamarajanagar-gundlupet-youth-nanjundaswamy-murder-case-bengaluru-employee-sat/articleshow-wrav8qp</link>
            <guid isPermaLink="true">https://kannada.asianetnews.com/karnataka-districts/chamarajanagar-gundlupet-youth-nanjundaswamy-murder-case-bengaluru-employee-sat/articleshow-wrav8qp</guid>
            <pubDate>Wed, 11 Mar 2026 22:28:24 +0530</pubDate>
            <description><![CDATA[&lt;p&gt;ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಮೂಕಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬ ಯುವಕನನ್ನು ಕುತ್ತಿಗೆ ಕುಯ್ದು ಭೀಕರವಾಗಿ ಹತ್ಯೆ ಮಾಡಲಾಗಿದೆ. ದೊಡ್ಡಕೆರೆ ಏರಿ ಬಳಿ ಶವ ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkexbm8w1rycjjtqvgj3r3ys,imgname-chamarajanagar-crime-news-1773248303387.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮಾ.11): ಗ&lt;/strong&gt;ಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಹತ್ಯೆಯೊಂದು ಬೆಳಕಿಗೆ ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕುತ್ತಿಗೆ ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದು, ಈ ಘಟನೆ ಇಡೀ ಪಟ್ಟಣವನ್ನು ಬೆಚ್ಚಿಬೀಳಿಸಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಗುಂಡ್ಲುಪೇಟೆ ಪಟ್ಟಣದ ಅಮಾನಿಕೆರೆ (ದೊಡ್ಡಕೆರೆ) ಏರಿ ಮಾರ್ಗದಲ್ಲಿ ಇಂದು ಯುವಕನ ಶವವೊಂದು ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಹಂತಕರು ಯುವಕನ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕುಯ್ದು ಪರಾರಿಯಾಗಿದ್ದಾರೆ. ಮೃತ ಯುವಕನನ್ನು ತಾಲೂಕಿನ ಮೂಕಹಳ್ಳಿ ಗ್ರಾಮದ ನಂಜುಂಡಸ್ವಾಮಿ (24) ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ:&lt;/strong&gt;&lt;/h3&gt;&lt;p&gt;ಹತ್ಯೆಯಾದ ನಂಜುಂಡಸ್ವಾಮಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಊರಿಗೆ ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಹುತ್ತಗಟ್ಟಿವೆ. ಶವ ಬಿದ್ದಿದ್ದ ಸ್ಥಳದ ಸಮೀಪದಲ್ಲೇ ನಂಜುಂಡಸ್ವಾಮಿ ಅವರ ಬೈಕ್ ಕೂಡ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ನಂಜುಂಡಸ್ವಾಮಿ ಅವರ ಶವ ಬಿದ್ದಿದ್ದ ರೀತಿ ಮತ್ತು ಕುತ್ತಿಗೆಗೆ ಬಿದ್ದಿರುವ ಗಾಯಗಳನ್ನು ನೋಡಿದರೆ, ಇದು ಪೂರ್ವನಿಯೋಜಿತ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಯಾರೋ ಆತ್ಮೀಯರೇ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆಯೇ ಅಥವಾ ಬೇರೆನಾದರೂ ದ್ವೇಷವಿತ್ತೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯಬೇಕಿದೆ. ಜನನಿಬಿಡ ಪ್ರದೇಶವಾದ ಕೆರೆಯ ಏರಿ ಮಾರ್ಗದಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;h3&gt;&lt;strong&gt;ಪೊಲೀಸರ ಭೇಟಿ ಮತ್ತು ತನಿಖೆ:&lt;/strong&gt;&lt;/h3&gt;&lt;p&gt;ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿದ್ದ ಕುರುಹುಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂತಕರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಯುವಕನ ಅಕಾಲಿಕ ಮರಣದಿಂದ ಮೂಕಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಹಂತಕರನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-gundlupet-youth-nanjundaswamy-murder-case-bengaluru-employee-sat/articleshow-wrav8qp"/>
        </item>
    </channel>
</rss>
