<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 05 Aug 2026 05:29:27 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಮಳೆಗಾಗಿ ನೂರಾರು ರೈತರು ಮಲೆ ಮಾದಪ್ಪನ ಮೊರೆ: ದೇವರು ಭಕ್ತರ ಕಣ್ಣೀರಿಗೆ ಸ್ಪಂದಿಸುತ್ತಾನಾ?]]></title>
            <link>https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</link>
            <guid isPermaLink="true">https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</guid>
            <pubDate>Sat, 04 Jul 2026 23:11:39 +0530</pubDate>
            <description><![CDATA[&lt;p&gt;Chamarajanagar: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwq25qms70js7yq2vdncxxka,imgname-2-1783185464985.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.04):&lt;/strong&gt; ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ. ಬರ ಜಿಲ್ಲೆ ಅಂತಾ ಘೋಷಿಸುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ. ಈ ನಡುವೆ ರೈತರು ಹಾಗೂ ಭಕ್ತರು ಮಲೆ ಮಾದಪ್ಪನ ಮೊರೆ ಹೋಗ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ರಾಜ್ಯದಲ್ಲಿ ವ್ಯಾಪಕ ಮಳೆ ಕೊರತೆಯಾಗಿದೆ. ಈಗಾಗಲೇ ಜಲಾಶಯಗಳು ಕೂಡ ಖಾಲಿಯಾಗ್ತಿವೆ. ಗಡಿ ಜಿಲ್ಲೆ ಚಾಮರಾಜಗರದಲ್ಲೂ ಕೂಡ ಮಳೆ ಕೊರತೆಯಿಂದ ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶದ ಭೂಮಿಯನ್ನು ವ್ಯವಸಾಯ ಮಾಡದೆ ಖಾಲಿ ಬಿಟ್ಟಿದ್ದಾರೆ. ಅಲ್ಲದೇ 70 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.&lt;img&gt;&lt;/p&gt;&lt;p&gt;ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ. ರೈತರಿಂದಲೂ ಕೂಡ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಗುಂಡ್ಲುಪೇಟೆ, ಹನೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಕುಡಿಯುವ ನೀರಿಗೂ ಕೂಡ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಬರ ಜಿಲ್ಲೆ ಅಂತಾ ಘೋಷಿಸುವಂತೆ ಸರ್ಕಾರಕ್ಕೆ ರೈತರಿಂದ ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಇನ್ನೂ ಗಡಿ ಜಿಲ್ಲೆಯ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದಿಂದ ಬಸ್ಸಿನ ಮೂಲಕ ನೂರಾರು ರೈತರು ಮಲೆ ಮಹದೇಶ್ವರನ ದರ್ಶನಕ್ಕೆ ಹೋಗಿದ್ದಾರೆ. ಅಲ್ಲದೇ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಉರುಳು ಸೇವೆ ಮಾಡುವುದಲ್ಲದೇ ವಿಶೇಷ ಪೂಜೆ, ಅರ್ಚನೆ ಸಲ್ಲಿಸಲಿದ್ದಾರೆ. ಇಷ್ಟಾರ್ಥ ಈಡೇರಿಸುವ ಮಾದಪ್ಪ ರೈತರ ಕಷ್ಟ ಆಲಿಸಿ ಮಳೆ ಸುರಿಸುತ್ತಾನೆಂಬುದು ರೈತರ ನಂಬಿಕೆ.&lt;/p&gt;&lt;p&gt;ಒಟ್ನಲ್ಲಿ ಎಪ್ಪತ್ತೇಳು ಮಲೆಗಳ ಒಡೆಯ ಮುದ್ದು ಮಾಯ್ಕಾರ ಮಾದಪ್ಪನ ಸನ್ನಿಧಿಗೆ ರೈತರು ಹೊರಟಿದ್ದು, ಮಾದಪ್ಪನ ಬೆಟ್ಟದಲ್ಲಿ ಉಘೇ ಉಘೇ ಝೇಂಕಾರ ಕೇಳಿ ಬರಲಿದೆ. ಕೇಳಿದ್ದನ್ನು ಈಡೇರಿಸುವ ಮಾದಪ್ಪ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಿ ಮಳೆ ಸುರಿಸುತ್ತಾನಾ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc"/>
        </item>
        <item>
            <title><![CDATA[leopard Vs Porcupine: ಮುಳ್ಳಹಂದಿ ಜೊತೆ ಕಾದಾಟಕ್ಕಿಳಿದು ಜೀವ ಕಳಕೊಂಡ ಚಿರತೆ!]]></title>
            <link>https://kannada.asianetnews.com/gallery/karnataka-districts/chamarajanagar-leopard-dies-after-clashing-with-a-porcupine-3og24g4</link>
            <guid isPermaLink="true">https://kannada.asianetnews.com/gallery/karnataka-districts/chamarajanagar-leopard-dies-after-clashing-with-a-porcupine-3og24g4</guid>
            <pubDate>Sun, 02 Aug 2026 10:20:56 +0530</pubDate>
            <description><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz0bq0e0mh32deywjb3zyfce,imgname-----------------------2026-08-02t095747.467-1785644941760.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಎರಡು ಮೂರು ವರ್ಷ ಪ್ರಾಯದ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;img&gt;&lt;p&gt;ಚಿರತೆ ಸುಮಾರು ಎರಡರಿಂದ ಮೂರು ವರ್ಷದ್ದಾಗಿದೆ. ಆಗಾಗ ಗುಂಡ್ಲುಪೇಟೆ ಪಟ್ಟಣದ ಶ್ರೀರಾಮಗುಡ್ಡದ ಬಳಿ ಸಂಚರಿಸುತ್ತಿತ್ತು. ಹೀಗೆ ಸಂಚರಿಸುವ ವೇಳೆಯೇ ಮುಳ್ಳುಹಂದಿ ಬೇಟೆಯಾಡಲು ಮುಂದಾಗಿ ಪ್ರಾಣವೇ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&amp;nbsp;&lt;/p&gt;&lt;p&gt;ಇದಕ್ಕೆ ಇಂಬು ಕೊಡುವಂತೆ ಚಿರತೆ ಕಳೇಬರ ಪತ್ತೆಯಾದ ಸ್ಥಳದಲ್ಲಿ ಮುಳ್ಳುಹಂದಿಯ ಮುಳ್ಳುಗಳು ಪತ್ತೆಯಾಗಿವೆ. ಮುಳ್ಳುಹಂದಿಯನ್ನು ಬೇಟೆಯಾಡಲು ಯತ್ನಿಸಿರುವ ಸಾಧ್ಯತೆ ಇದೆ. ಈ ವೇಳೆ ಮುಳ್ಳುಹಂದಿಯೊಂದಿಗೆ ಕಾದಾಟ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಚೇತರಿಸಿಕೊಳ್ಳಲಾಗದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.&lt;/p&gt;&lt;img&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶಿಲನೆ ನಡೆಸಿದ್ದಾರೆ. ಸದ್ಯ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಅಂಗಾಂಗ ಮಾದರಿ ಪರೀಕ್ಷೆಗೆ ಎಫ್&zwnj;ಎಸ್&zwnj;ಎಲ್&zwnj;ಗೆ ರವಾನಿಸಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/chamarajanagar-leopard-dies-after-clashing-with-a-porcupine-3og24g4"/>
        </item>
        <item>
            <title><![CDATA[Hyena: ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ! ಗ್ರಾಮದಲ್ಲಿ ಆತಂಕ, ರಾತ್ರಿ ಸಂಚಾರಕ್ಕೆ ಡವಡವ!]]></title>
            <link>https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug</link>
            <guid isPermaLink="true">https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug</guid>
            <pubDate>Sat, 04 Jul 2026 11:15:58 +0530</pubDate>
            <description><![CDATA[&lt;p&gt;Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwns9amaspej3jmvhc6wf4gr,imgname-----------------------2026-07-04t105240.156-1783142591114.jpg" type="image/jpeg" height="390" width="690"/>
            <content:encoded><![CDATA[&lt;p&gt;Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಾಮರಾಜನಗರ(ಜು.4): ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;img&gt;&lt;p&gt;ಬಂಡೀಪುರ ಅರಣ್ಯ ವ್ಯಾಪ್ತಿಯ ಕಾರೇಮಾಳ ಗ್ರಾಮದಲ್ಲಿ ಇದೇ ಮೊದಲಸಲ ರಾತ್ರಿ ವೇಳೆ ಹೈನಾ ಹಲವರ ಕಣ್ಣೀಗೆ ಬಿದ್ದಿದೆ. ಸ್ಥಳೀಯರು ರಸ್ತೆಮಾರ್ಗವಾಗಿ ಸಂಚರಿಸುವಾಗ ಕಾಡಿನಲ್ಲಿ ಹೈನಾ ಓಡಾಟ ಕಂಡು ಬೆಚ್ಚಿಬಿದ್ದಿದ್ದಾರೆ. ಹೈನಾ ಸಂಚರಿಸುತ್ತಿರುವ ದೃಶ್ಯ ಮೊಬೈಲ್&zwnj;ನಲ್ಲಿ ವಿಡಿಯೋ ರೆಕಾರ್ಡ್&zwnj; ಮಾಡಿದ್ದರಿಂದ ಇದೀಗ ಸೊಷಿಯಲ್ ಮೀಡಿಯಾದಲ್ಲಿ ಹೈನಾ ಸಂಚರಿಸುವ ವಿಡಿಯೋ ವೈರಲ್ ಆಗಿದೆ.&lt;/p&gt;&lt;p&gt;ರಸ್ತೆಗಳ ಮೇಲೆ ರಾತ್ರಿ ಸಂಚರಿಸಲು ಭಯವಾಗುತ್ತಿದೆ. ಈಗಾಗಲೇ ಕಾಡಾನೆ, ಹುಲಿ ಚಿರತೆಗಳ ದಾಳಿಯ ಭಯದಲ್ಲಿರುವ ಸ್ಥಳೀಯ ಗ್ರಾಮಸ್ಥರಿಗೆ ಇದೀಗ ಹೊಸದೊಂದು ಅತಿ ಭಯಂಕರವಾಗಿ ದಾಳಿ ಮಾಡು ಹೈನಾ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ. ಹೈನಾ ಸಂಚರಿಸುವ ವಿಡಿಯೋ ಗ್ರಾಮಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚುತ್ತಿರುವುದನ್ನ ತೋರಿಸಿದೆ.&lt;/p&gt;&lt;img&gt;&lt;p&gt;ಗ್ರಾಮದ ಸಮೀಪವೇ ಹೈನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚು ಹಿನ್ನೆಲೆ ಹೊರಗಡೆ ಓಡಾಡದಂತೆ, ರಾತ್ರಿ ವೇಳೆ ಸಂಚರಿಸದಮತೆ ಎಚ್ಚರಿಕೆ ನೀಡಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug"/>
        </item>
        <item>
            <title><![CDATA[ಕಾವೇರಿ ಕೊಳ್ಳದಲ್ಲಿ ವರುಣನ ಆರ್ಭಟ: ಕಬಿನಿ ಭರ್ತಿ, ಹಾರಂಗಿ ಜಲಾಶಯದಿಂದ ಭಾರಿ ನೀರು ತಮಿಳುನಾಡಿಗೆ ಬಿಡುಗಡೆ!]]></title>
            <link>https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</link>
            <guid isPermaLink="true">https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv</guid>
            <pubDate>Sat, 01 Aug 2026 16:43:27 +0530</pubDate>
            <description><![CDATA[ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಬಿನಿ, ಕೆಆರ್&zwnj;ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಈಗಾಗಲೇ ಭರ್ತಿಯಾಗಿರುವ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಇದು ಕಾವೇರಿ ವಿವಾದದ ತೀವ್ರತೆಯನ್ನು ಕಡಿಮೆ ಮಾಡುವ ನಿರೀಕ್ಷೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyyfpfbj9xmgwztj0rh7gphj,imgname-kabini-1785582009713.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಕಿಚ್ಚು ಹೊತ್ತಿಕೊಂಡಿರುವ ಬೆನ್ನಲ್ಲೇ, ವರುಣ ದೇವ ರಾಜ್ಯದ ರೈತರಿಗೆ ಭಾರಿ ಸಿಹಿ ಸುದ್ದಿ ನೀಡಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರಮುಖ ಜಲಾಶಯಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮೈಸೂರು ಜಿಲ್ಲೆಯ ಹೆಮ್ಮೆಯ ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ತಮಿಳುನಾಡಿನತ್ತ ಕಾವೇರಿ ನೀರು ಈ ಜಲಾಶಯದಿಂದ ಹರಿಯಲಾರಂಭಿಸಿದೆ. ಇದು ಸದ್ಯದ ಕಾವೇರಿ ವಿವಾದದ ತೀವ್ರತೆಯನ್ನು ಕೊಂಚ ತಣ್ಣಗಾಗಿಸುವ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಭರ್ತಿಯಾದ ಕಬಿನಿ ಜಲಾಶಯ: ನದಿಗೆ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ&lt;/h2&gt;&lt;p&gt;ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿರುವ ಕಬಿನಿ ಜಲಾಶಯದ ಜಲಾನಯನ ಪ್ರದೇಶ ಹಾಗೂ ಕೇರಳದ ವಯನಾಡು ಭಾಗದಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡಿದೆ. ಪ್ರಸ್ತುತ ಅಣೆಕಟ್ಟೆಗೆ 15,500 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದೆ.&lt;/p&gt;&lt;p&gt;ಒಟ್ಟು 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 18 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಜಲಾಶಯದ 4 ಕ್ರಸ್ಟ್ ಗೇಟ್&zwnj;ಗಳ ಮೂಲಕ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸುತ್ತಿದ್ದಾರೆ. ಈ ನೀರು ಕಪಿಲಾ ನದಿಯ ಮೂಲಕ ತಮಿಳುನಾಡಿನತ್ತ &amp;nbsp;ಹರಿದು ಹೋಗಲಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಬಿನಿ ಜಲಾಶಯದ ಅಧಿಕಾರಿಗಳು ನದಿ ಪಾತ್ರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ಘೋಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;ಮಂಡ್ಯದ ಕೆಆರ್&zwnj;ಎಸ್ ಜಲಾಶಯದಲ್ಲೂ ಒಳಹರಿವು ಭಾರಿ ಏರಿಕೆ&lt;/h2&gt;&lt;p&gt;ಕಾವೇರಿ ಗಲಾಟೆಯ ನಡುವೆಯೇ ಮಂಡ್ಯ ಭಾಗದ ರೈತರಿಗೂ ವರುಣ ಮುನಿಸು ಬಿಟ್ಟು ಹರಸಿದ್ದಾನೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (KRS) ಡ್ಯಾಂಗೆ ಬರುವ ಒಳಹರಿವು 13,522 ಕ್ಯೂಸೆಕ್&zwnj;ಗೆ ಏರಿಕೆಯಾಗಿದೆ.&lt;/p&gt;&lt;p&gt;ಗರಿಷ್ಠ 124.80 ಅಡಿ ಸಾಮರ್ಥ್ಯ ಹೊಂದಿರುವ ಕೆಆರ್&zwnj;ಎಸ್ ಡ್ಯಾಂನ ನೀರಿನ ಮಟ್ಟ ಸದ್ಯ 94.40 ಅಡಿಗೆ ತಲುಪಿದೆ. ಇನ್ನು 49.452 ಟಿಎಂಸಿ ಒಟ್ಟು ಸಂಗ್ರಹ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಪ್ರಸ್ತುತ 18.733 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯಕ್ಕೆ ಡ್ಯಾಂನಿಂದ ಕೇವಲ 1,565 ಕ್ಯೂಸೆಕ್ ನೀರನ್ನು ಮಾತ್ರ ಹೊರಹರಿಸಲಾಗುತ್ತಿದ್ದು, ಒಳಹರಿವು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಜಿಗಿಯಲಿದೆ.&lt;/p&gt;&lt;h2&gt;ಕೊಡಗಿನ ಹಾರಂಗಿ ಜಲಾಶಯದಲ್ಲೂ ಹೆಚ್ಚಿದ ಜಲವೈಭವ&lt;/h2&gt;&lt;p&gt;ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಾರಂಗಿ ಜಲಾಶಯ ಕೂಡ ಭರ್ತಿಯಾಗಿದೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, &amp;nbsp;ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಹಾರಂಗಿ ಯಡವನಾಡು ಸೋಮವಾರಪೇಟೆ ಸಂಪರ್ಕ ರಸ್ತೆ ಬಂದ್ ಆಗಿದೆ. &amp;nbsp;ಮೂರು ಅಡಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹಾರಂಗಿ ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. &amp;nbsp;ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು (8.5 ಟಿಎಂಸಿ ಸಾಮರ್ಥ್ಯ), ಇಂದಿನ ಇತ್ತೀಚಿನ ವರದಿಯ ಪ್ರಕಾರ ನೀರಿನ ಮಟ್ಟ 2857.83 ಅಡಿಗಳಿಗೆ (8.104 ಟಿಎಂಸಿ) ತಲುಪಿದೆ. ಜಲಾಶಯಕ್ಕೆ ಸದ್ಯ 9,896 ಕ್ಯೂಸೆಕ್ ನೀರು ಒಳಹರಿವಾಗಿ ಬರುತ್ತಿದ್ದು, ಅಷ್ಟೇ ವೇಗವಾಗಿ ಅಂದರೆ 10,058 ಕ್ಯೂಸೆಕ್ ನೀರನ್ನು ಹೊರಹರಿವಿನ ಮೂಲಕ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಸಂಗ್ರಹವು ಕರ್ನಾಟಕದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಪ್ರಕೃತಿಯೇ ಕಾವೇರಿ ಸಂಕಷ್ಟಕ್ಕೆ ಸದ್ಯಕ್ಕೆ ಪರಿಹಾರ ನೀಡುತ್ತಿರುವಂತೆ ಭಾಸವಾಗುತ್ತಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-rains-cauvery-basin-brims-kabini-releases-10000-cusecs-to-tamil-nadu-gdp/articleshow-5n5udbv"/>
        </item>
        <item>
            <title><![CDATA[ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು: ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ]]></title>
            <link>https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh</link>
            <guid isPermaLink="true">https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh</guid>
            <pubDate>Wed, 15 Jul 2026 18:12:28 +0530</pubDate>
            <description><![CDATA[&lt;p&gt;Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjw9h93pe4yvpnx5653jdgx,imgname-ch--3--1784118822179.jpeg" type="image/jpeg" height="390" width="690"/>
            <content:encoded><![CDATA[&lt;p&gt;Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..&lt;/p&gt;&lt;img&gt;&lt;p&gt;&lt;strong&gt;ಚಾಮರಾಜನಗರ (ಜು.15): &lt;/strong&gt;ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ ಹಾಗೂ ತಮಿಳುನಾಡಿಗೆ ಹರಿದು ಹೋಗುವ ನೀರು ತಡೆಯಿರಿ ಅಂತಾ ಗ್ರಾಮಸ್ಥರು, ರೈತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಕೂಡ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಚಂದಾ ಎತ್ತಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..&lt;/p&gt;&lt;img&gt;&lt;p&gt;ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೊರತೆ ನಡುವೆಯೂ ಕೂಡ ಹನೂರು ಭಾಗದ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಚೆಕ್ ಡ್ಯಾಂಗಳು ತುಂಬಿತ್ತು. ಆದ್ರೆ ಚೆಕ್ ಡ್ಯಾಂಗಳ ಹೂಳೆತ್ತದ ಹಿನ್ನಲೆ ನೀರೆಲ್ಲ ಪಾಲಾರ್ ಹಳ್ಳಕ್ಕೆ ಹರಿದು ಕಾವೇರಿ ಮೂಲಕ ತಮಿಳುನಾಡು ಸೇರಿದೆ. ಆದ್ರೆ ಇದೀಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ, ಕೊಳವೆ ಬಾವಿಗಳು ಕೂಡ ನಿಂತು ಹೋಗಿವೆ.&lt;/p&gt;&lt;img&gt;&lt;p&gt;ಅಧಿಕಾರಿಗಳು ಸ್ಪಂದಿಸದೆ ಹಿನ್ನಲೆ ತಾವೇ ಚಂದಾ ಎತ್ತಿ ಹೂಳೆತ್ತಿ, ಚೆಕ್ ಡ್ಯಾಂ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದ್ದಾರೆ. ಸಂದನಪಾಳ್ಯ ಸಮೀಪದ ಚಾರ್ಲಿಸ್ ಸರ್ವೇರ್ ಡ್ಯಾಂ ಅನ್ನೂ 15 ವರ್ಷಗಳ ಹಿಂದೆ ಸ್ಥಳೀಯರೆ ನಿರ್ಮಿಸಿಕೊಂಡಿದ್ದರು. ಮಾರ್ಟಳ್ಳಿ ಬೆಟ್ಟಗುಡ್ಡದಲ್ಲಿ ಸುರಿಯುವ ಮಳೆ ನೀರು ಪಣಂಕೋಬೆ ಡ್ಯಾಂ ಮೂಲಕ ಹರಿದು ಮಾರ್ಟಳ್ಳಿ, ಸಂದನಪಾಳ್ಯ, ನಾಲ್ ರೋಡ್ ಮೂಲಕ ಹರಿದು ಹೋಗಿ ಪಾಲಾರ್ ಹಳ್ಳದ ಮೂಲಕ ಕಾವೇರಿ ನದಿ ಸೇರುತ್ತಿತ್ತು.&lt;/p&gt;&lt;img&gt;&lt;p&gt;ಆ ಮೂಲಕ ಲೆಕ್ಕಕ್ಕೆ ಸಿಗದ ನೀರು ತಮಿಳುನಾಡು ಪಾಲಾಗ್ತಿದೆ ಅಂತಾ ರೈತರು ಆರೋಪ ಮಾಡ್ತಿದ್ದಾರೆ. ಇನ್ನೂ ಬಹಳ ವರ್ಷಗಳ ಹಿಂದೆಯೇ ಪಣಂಕೋಬೆ ಬಳಿ ಚೆಕ್ ಡ್ಯಾಂ ನಿರ್ಮಿಸುವ ಪ್ರಸ್ತಾಪವಿತ್ತು. ಆದ್ರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆ ಕೈ ಬಿಡಲಾಗಿತ್ತು. ಆ ಯೋಜನೆಗೆ ಮರುಜೀವ ನೀಡುವಂತೆ ರೈತರು ಹಾಗೂ ಸ್ಥಳೀಯ 15 ಕ್ಕೂ ಹೆಚ್ಚು ಗ್ರಾಮದ ಜನರು ಅಧಿಕಾರಿಗಳನ್ನು ಒತ್ತಾಯಿಸಿದರು ಕೂಡ ಪ್ರಯೋಜನವಾಗಿಲ್ಲ.&lt;/p&gt;&lt;img&gt;&lt;p&gt;ಈ ಹಿನ್ನಲೆ ಮಳೆಯ ನೀರು ಬಂದ್ರು ಚೆಕ್ ಡ್ಯಾಂ ನಲ್ಲಿ ನೀರು ನಿಲ್ಲುತ್ತಿಲ್ಲ ಅಂತಾ ಅರಿತ ರೈತರು ಸರ್ಕಾರದ ಅನುದಾನಕ್ಕೆ ಕಾಯದೆ ತಾವೇ ಸ್ವಂತ ಹಣ ಸಂಗ್ರಹಿಸಿ ಚೆಕ್ ಡ್ಯಾಂ ಹೂಳೆತ್ತುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಹನೂರಿನ ಬಿಜೆಪಿ ಮುಖಂಡರು ಕೂಡ ಕೈ ಜೋಡಿಸಿದ್ದೇವೆ ಅಂತಿದ್ದಾರೆ. ಒಟ್ನಲ್ಲಿ ಮಾರ್ಟಳ್ಳಿ ಭಾಗದಲ್ಲಿ ಬೀಳುವ ಮಳೆಯ ನೀರಿನಿಂದ ಭರ್ತಿಯಾಗಿದ್ದ ಚೆಕ್ ಡ್ಯಾಂ ನೀರು ಕೇವಲ 15 ದಿನಕ್ಕೆ ಹರಿದು ತಮಿಳುನಾಡು ಪಾಲಾಗಿದೆ. ಅಧಿಕಾರಿಗಳು ಹಾಗೂ ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಹೂಳೆತ್ತಲೂ ಮುಂದಾಗಿರುವುದು ಮಾತ್ರ ಮಾದರಿ ನಡೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh"/>
        </item>
        <item>
            <title><![CDATA[ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಮೊದಲ ಬಸ್; ಮಿಣ್ಯಂ ಗ್ರಾಪಂನ ಕೊಪ್ಪಕ್ಕೆ ಬಂತು KSRTC]]></title>
            <link>https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m</link>
            <guid isPermaLink="true">https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m</guid>
            <pubDate>Tue, 04 Aug 2026 09:36:31 +0530</pubDate>
            <description><![CDATA[ಹನೂರು ತಾಲೂಕಿನ ಕೊಪ್ಪ ಗ್ರಾಮಕ್ಕೆ ಗ್ರಾಮಸ್ಥರು ಹಾಗೂ ರೈತ ಸಂಘದ ಮನವಿಯ ಮೇರೆಗೆ ಮೊದಲ ಬಾರಿಗೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5f0swt6cpzqhxnqpfxre94,imgname-chamarajanagar-bus-1785816180634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಗ್ರಾಮ ಉದಯವಾದಾಗಿನಿಂದ ಇದುವರೆಗೂ ನಮ್ಮ ಗ್ರಾಮಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಬಸ್ ಸಂಚಾರ ಪ್ರಾರಂಭ ಮಾಡಿರುವುದಕ್ಕೆ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಅವರು ಕೆಎಸ್&zwnj;ಆರ್&zwnj;ಟಿಸಿ ನಿಗಮದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 80 ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ ಮಿಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಪ್ಪ ಗ್ರಾಮಕ್ಕೆ ಇದುವರೆಗೂ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಇರಲಿಲ್ಲ. ಬರುವ ಬಸ್&zwnj;ಗಳು ಮುಖ್ಯರಸ್ತೆಯಲ್ಲಿಯೇ ಹೋಗುತ್ತಿದ್ದವು. ಇದರಿಂದ ನಮ್ಮ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ನಡೆದುಕೊಂಡೇ ಗ್ರಾಮಕ್ಕೆ ವಾಪಸ್ ಬರಬೇಕಾಗಿತ್ತು.&lt;/p&gt;&lt;h2&gt;&lt;strong&gt;ಗ್ರಾಮಕ್ಕೆ ಬಸ್ ಸಂಚಾರ&lt;/strong&gt;&lt;/h2&gt;&lt;p&gt;ಈ ಸಂಬಂಧ ಕೆಎಸ್&zwnj;ಆರ್&zwnj;ಟಿಸಿ ಕೊಳ್ಳೇಗಾಲ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;p&gt;ನಮ್ಮ ಗ್ರಾಮಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಕಷ್ಟ ತಪ್ಪಿದೆ. ನಿಗದಿತ ಸಮಯಕ್ಕೆ ಶಾಲಾ-ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ಇದರಿಂದ ಸಮಯವೂ ಸಹ ಉಳಿತಾಯವಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Udupi: ಕಾರ್ಕಳ ತಾಲೂಕಿ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ&lt;/strong&gt;&lt;/p&gt;&lt;p&gt;ಕೊಪ್ಪ ಗ್ರಾಮದಿಂದ ನೂತನ ಬಸ್ ಸಂಚಾರ ಪ್ರಾರಂಭವಾದ್ದರಿಂದ ಗ್ರಾಮಸ್ಥರು ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.&lt;/p&gt;&lt;p&gt;ಇದೇ ವೇಳೆ ಕಿಸಾನ್ ಸಂಘದ ಗ್ರಾಮ ಘಟಕದ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ನಾಗರಾಜು, ಮುರುಗೇಶ್, ಮುನಿಯಪ್ಪ, ಸಣ್ಣಸಿದ್ದ, ಮಾದೇವ, ಭದ್ರ, ವೆಂಕಟೇಶ್, ಬಸವರಾಜು, ಮಾದೇಶ್, ಮಾರೇಗೌಡ ಹಾಜರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬೆಂಗಳೂರಿನ ಎರಡು ಪ್ರಮುಖ ರಸ್ತೆಯಲ್ಲಿ ಮೊದಲ ಬಾರಿಗೆ 'ಫೈರ್ ಹೈಡ್ರೆಂಟ್&rsquo; ವ್ಯವಸ್ಥೆ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m"/>
        </item>
        <item>
            <title><![CDATA[ಆಷಾಢದ ವಿರಹ ಮರೆಸಿದ ನವದಂಪತಿಗಳ ಜಾತ್ರೆ: ಚಾಮರಾಜನಗರದಲ್ಲಿ ಶ್ರೀ ಚಾಮರಾಜೇಶ್ವರ ರಥೋತ್ಸವದ ವೈಭವ!]]></title>
            <link>https://kannada.asianetnews.com/karnataka-districts/chamarajeshwara-rathotsava-karnatakas-unique-fair-for-newly-married-couples-gvd/articleshow-cz5d4df</link>
            <guid isPermaLink="true">https://kannada.asianetnews.com/karnataka-districts/chamarajeshwara-rathotsava-karnatakas-unique-fair-for-newly-married-couples-gvd/articleshow-cz5d4df</guid>
            <pubDate>Wed, 29 Jul 2026 16:48:18 +0530</pubDate>
            <description><![CDATA[&lt;p&gt;Chamarajeshwara Rathotsava: ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kypsgwr766tag7fnrr5294f4,imgname-gfyufgu-1785323877127.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.29): &lt;/strong&gt;ಆಷಾಢ ಮಾಸ, ಶೂನ್ಯ ಮಾಸವಾಗಿ ಶುಭ ಕಾರ್ಯಗಳಿಗೆ ನಿಷಿದ್ಧ. ಅದರೆ ಆ ನಗರದಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲೇ ಒಂದು ವಿಶಿಷ್ಟ ರಥೋತ್ಸವ ನಡೆಯುತ್ತೆ. ಅದು ಕೇವಲ ರಥೋತ್ಸವಲ್ಲ, ಅಲ್ಲಿ ಸಾವಿರಾರು ನವಜೋಡಿಗಳು ಸೇರಿ ಸಂಭ್ರಮಿಸುವ ವೈಶಿಷ್ಟ್ಯ ಇದೆ. ನವದಂಪತಿಗಳ ಜಾತ್ರೆ ಎಂದೇ ಖ್ಯಾತಿಯಾದ ಆ ರಥೋತ್ಸವವಾದರು ಯಾವುದು, ಅದು ಎಲ್ಲಿ ನಡೆಯುತ್ತೆ, ಅಲ್ಲಿನ ವೈಶಿಷ್ಟವಾದರು ಏನು?&lt;/p&gt;&lt;p&gt;ಗಡಿ ಜಿಲ್ಲೆ ಚಾಮರಾಜನಗರದ ಇತಿಹಾಸಪ್ರಸಿದ್ದ ಶ್ರೀ ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಇಂದು ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ಅದ್ಧೂರಿಯಾಗಿ ಜರುಗಿತು. ಬೆಳಿಗ್ಗೆ 11 ರಿಂದ 11.37 ರವರೆಗೆ ಸಲ್ಲುವ ಶುಭ ಕನ್ಯಾ ಲಗ್ನದಲ್ಲಿ ಚಾಮರಾಜೇಶ್ವರನ ರಥಾರೋಹಣ ಕಾರ್ಯಕ್ರಮ ಅತ್ಯಂತ ಭಕ್ತಿಯಿಂದ ನೆರವೇರಿತು. ಭಕ್ತರ ಜಯಘೋಷಗಳ ನಡುವೆ ಪೂರ್ವಹ್ನ 11.50 ಕ್ಕೆ ಸರಿಯಾಗಿ ಚಾಮರಾಜೇಶ್ವರನ ತೇರು ರಥದ ಬೀದಿಗೆ ಬಿಜಂಗೈಸಿತು. ಮುಖ್ಯ ರಥದೊಂದಿಗೆ ಗಣಪತಿ, ಚಾಮುಂಡೇಶ್ವರಿ ಹಾಗು ಕೆಂಪನಂಜಾಂಬ ರಥಗಳು ಸಾಗಿದವು.&lt;/p&gt;&lt;p&gt;ಇನ್ನು ಈ ರಥೋತ್ಸವದ ಪ್ರಮುಖ ಆಕರ್ಷಣೆಯೆಂದರೆ, ದೇವರ ರಥಕ್ಕೆ ಅಭಿಮುಖವಾಗಿ ಚಲಿಸಿದ ಮೈಸೂರು ಮಹಾರಾಜರ ಪ್ರತಿಮೆ ಹೊತ್ತ ಚಿಕ್ಕ ರಥ! ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ್ ಅವರು ಜನಿಸಿದ ನೆನಪಿಗಾಗಿ ಈ ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಿಸಿದ್ದರು ಎಂಬುದು ಇಲ್ಲಿನ ಇತಿಹಾಸ. ಇನ್ನು ಈ ಜಾತ್ರೆಗೆ ಮತ್ತೊಂದು ವಿಶೇಷ ಹೆಸರಿದೆ, ಅದೇ 'ನವದಂಪತಿಗಳ ಜಾತ್ರೆ. ಸಾವಿರಾರು ನವಜೋಡಿಗಳು ಪಾಲ್ಗೊಂಡು ಚಾಮರಾಜೇಶ್ವರನಿಗೆ ಹಣ್ಣು ಧವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸುದರು.&lt;/p&gt;&lt;p&gt;ಚಾಮರಾಜೇಶ್ವರ ರಥೋತ್ಸವ ನವದಂಪತಿಗಳ ಜಾತ್ರೆಯು ಹೌದು. ಆಷಾಡ ಮಾಸದಲ್ಲಿ ನಡೆಯುವ ಈ ರಥೋತ್ಸವ ಸಹಜವಾಗಿಯೇ ವಿಶೇಷತೆಯಿಂದ ಕೂಡಿದೆ. ಜೇಷ್ಠ ಮಾಸದ ತನಕ ವಿವಾಹ ಮಹೋತ್ಸವಗಳ ಸಡಗರ ಮುಗಿದು ಆಷಾಡ ಮಾಸದ ನೆಪದಲ್ಲಿ ಒಂದು ತಿಂಗಳ ಕಾಲ ತಾತ್ಕಾಲಿಕವಾಗಿ ಅಗಲಿರಬೇಕಾದ ನವವಿವಾಹಿತರ ಈ ರಥೋತ್ಸವದ ದಿನ ಒಂದಡೆ ಸೇರಿ ಚಾಮರಾಜೇಶ್ವರನಿಗೆ ಹಣ್ಣುಧವನ ಎಸೆದು ನಮಿಸುತ್ತಾರೆ. ತಮ್ಮ ದಾಂಪತ್ಯ ಜೀವನ ಸುಖವಾಗಿರಲೆಂದು ಪ್ರಾರ್ಥಿಸುತ್ತಾರೆ. ನವದಂಪತಿಗಳು ಸಂಪ್ರದಾಯದ ಪ್ರಕಾರ ಒಂದು ತಿಂಗಳ ಕಾಲ ಅಗಲಿರಬೇಕು. ಇಬ್ಬರು ಒಟ್ಟಾಗಿ ಬೆರೆಯುವಂತಿಲ್ಲ.&lt;/p&gt;&lt;p&gt;ಈ ಅವಧಿಯಲ್ಲಿ ಅವರ ವಿರಹ ವೇದನೆ ಅನುಭವಿಸಿದವರಿಗೆ ಗೊತ್ತು. ಆದರೆ ಆಷಾಡ ಮಾಸದಲ್ಲು ನವಜೋಡಿಗಳು ಒಂದಡೆ ಸೇರಲು ಚಾಮರಾಜೇಶ್ವರ ರಥೋತ್ಸವ ಒಂದು ಸುವರ್ಣಾವಕಾಶ ಕಲ್ಪಿಸುತ್ತದೆ. ಜಾತ್ರೆಯ ನೆಪದಲ್ಲಿ ಒಂದಾದ ನವಜೋಡಿಗಳು, ಕೈಕೈ ಹಿಡಿದು ಓಡಾಡುತ್ತಾ, ತಮಗೆ ಇಷ್ಟಬಂದ ತಿಂಡಿ ತಿನಿಸುಗಳನ್ನು ಮೆಲ್ಲುತ್ತಾ, ವಿರಹದ ನೋವನ್ನು ಮರೆತು ಸಂತಸದ ಕಡಲಲ್ಲಿ ತೇಲಿದರು ಚಾಮರಾಜೇಶ್ವರ ರಥೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ತೇರಿಗೆ ಹಣ್ಣು ಧವನ ಎಸೆದು ಹರಕೆ ಹೊತ್ತರೆ ನವದಂಪತಿಗಳಿಗೆ ಸಂತಾನ ಭಾಗ್ಯ , ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ.&lt;/p&gt;&lt;p&gt;ನವದಂಪತಿಗಳ ಜಾತ್ರೆ ಎಂದೆ ಖ್ಯಾತಿಯಾಗಿರುವ ಚಾಮರಾಜೇಶ್ವರ ರಥೋತ್ಸವದಲ್ಲಿ ಸಾವಿರಾರು ನವವಿವಾಹಿತರು ಬಂದು ಸೇರಿದ್ದರು. ಎಲ್ಲಿ ನೋಡಿದರು ನವದಂಪತಿಗಳದ್ದೇ ಕಲರವ. ದೇವರಿಗೆ ಒಟ್ಟಾಗಿ ಸೇರಿ ಹಣ್ಣು ಧವನ ಎಸೆದು ನಮಿಸುವುದು. ಕೈಕೈ ಹಿಡಿದು ಸುತ್ತಾಡುವ ದೃಶ್ಯ ಸಾಮಾನ್ಯವಾಗಿತ್ತು. ನವ ದಂಪತಿಗಳು. ಲಕ್ಷಾಂತರ ಭಕ್ತರ ನಂಬಿಕೆ, ಶತಮಾನಗಳ ಇತಿಹಾಸ ಮತ್ತು ವಿಶಿಷ್ಟ ಸಂಪ್ರದಾಯಗಳ ಸಂಗಮವಾಗಿರುವ ಚಾಮರಾಜೇಶ್ವರ ರಥೋತ್ಸವ ಮತ್ತೊಮ್ಮೆ ಚಾಮರಾಜನಗರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿತು. ಒಟ್ಟಾರೆ ಚಾಮರಾಜೇಶ್ವರನ ತೇರು ಧಾರ್ಮಿಕ ಆಚರಣೆ ಮತ್ತು ನವದಂಪತಿಗಳ ಭಾವನಾತ್ಮಕ ಸಂಗಮಕ್ಕೆ ಸಾಕ್ಷಿಯಾಯ್ತು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajeshwara-rathotsava-karnatakas-unique-fair-for-newly-married-couples-gvd/articleshow-cz5d4df"/>
        </item>
        <item>
            <title><![CDATA[ಕಲ್ಲುಗಳ ಪ್ರಪಾತವಾದ ಪ್ರಸಿದ್ಧ ಜಲಪಾತ: ಧುಮ್ಮಿಕ್ಕುತ್ತಿದ್ದ ಭರಚುಕ್ಕಿಯಲ್ಲಿ ಈ ಬಾರಿ ಒಂದು ನೀರಿನ ಗೆರೆಯೂ ಇಲ್ಲ!]]></title>
            <link>https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw</link>
            <guid isPermaLink="true">https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw</guid>
            <pubDate>Sun, 26 Jul 2026 15:52:39 +0530</pubDate>
            <description><![CDATA[ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ, ಚಾಮರಾಜನಗರದ ಪ್ರಸಿದ್ಧ ಭರಚುಕ್ಕಿ ಜಲಪಾತವು ಮಳೆಗಾಲದಲ್ಲೂ ಸಂಪೂರ್ಣವಾಗಿ ಬತ್ತಿ ಹೋಗಿದೆ. ಸದಾ ಭೋರ್ಗರೆಯುತ್ತಿದ್ದ ಜಲಪಾತದ ಜಾಗದಲ್ಲಿ ಈಗ ಕೇವಲ ಬಂಡೆಗಳು ಕಾಣಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyexej68adm9y6p0yxkfa2cy,imgname-chamarajanagara-bharachukki-falls-1785059559624.jpg" type="image/jpeg" height="390" width="690"/>
            <content:encoded><![CDATA[ಕಾವೇರಿ ಕೊಳ್ಳದಲ್ಲಿ ಮಳೆ ಕೊರತೆಯಿಂದಾಗಿ, ಚಾಮರಾಜನಗರದ ಪ್ರಸಿದ್ಧ ಭರಚುಕ್ಕಿ ಜಲಪಾತವು ಮಳೆಗಾಲದಲ್ಲೂ ಸಂಪೂರ್ಣವಾಗಿ ಬತ್ತಿ ಹೋಗಿದೆ. ಸದಾ ಭೋರ್ಗರೆಯುತ್ತಿದ್ದ ಜಲಪಾತದ ಜಾಗದಲ್ಲಿ ಈಗ ಕೇವಲ ಬಂಡೆಗಳು ಕಾಣಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ತೀವ್ರವಾಗಿ ಕುಸಿದಿದೆ.&lt;img&gt;&lt;p&gt;ಚಾಮರಾಜನಗರ (ಜು.26)): ರಾಜ್ಯದ ಗಡಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಭರಚುಕ್ಕಿ ಜಲಪಾತ (Bharachukki Waterfall) ಮಳೆಗಾಲ ಬಂತೆಂದರೆ ಸಾಕು ಮೈದುಂಬಿ ಹರಿಯುವುದು ವಾಡಿಕೆ. ಆದರೆ, ಹೇಳಿ ಕೇಳಿ ಇದು ಮಳೆಗಾಲವಾದರೂ (Monsoon season), ಈ ಬಾರಿ ಭರಚುಕ್ಕಿಯಲ್ಲಿ ಒಂದು ನೀರಿನ ಗೆರೆಯೂ ಕಾಣಿಸುತ್ತಿಲ್ಲ.&lt;/p&gt;&lt;img&gt;&lt;p&gt;ಕಾವೇರಿ ಕೊಳ್ಳದಲ್ಲಿ (Cauvery basin) ಎದುರಾಗಿರುವ ಮಳೆಯ ಕೊರತೆಯಿಂದಾಗಿ, ಸದಾ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದ ಭರಚುಕ್ಕಿ ಜಲಪಾತ ಇದೀಗ ಸಂಪೂರ್ಣವಾಗಿ ಬಣಬಣ ಎನ್ನುತ್ತಿದೆ.&lt;/p&gt;&lt;img&gt;&lt;p&gt;ಮಾಯವಾದ ಜಲಧಾರೆ, ಕೇವಲ ಬಂಡೆಗಳ ದರ್ಶನ!&lt;/p&gt;&lt;p&gt;ಸಾಮಾನ್ಯವಾಗಿ 220 ಅಡಿ ಎತ್ತರದಿಂದ ಭೋರ್ಗರೆಯುತ್ತಾ, ವಿಶಾಲವಾಗಿ ಕವಲು ಕವಲಾಗಿ ಧುಮ್ಮಿಕ್ಕುತ್ತಿದ್ದ ಕಾವೇರಿ (River Cauvery) ನದಿಯ ಜಲಧಾರೆಗಳು ಈಗ ಸಂಪೂರ್ಣವಾಗಿ ಮಾಯವಾಗಿವೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ಬೆಟ್ಟಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದರೂ, ಜಲಪಾತದಲ್ಲಿ ಮಾತ್ರ ನೀರಿಲ್ಲದೆ ಕೇವಲ ಬಂಡೆಗಳ ದರ್ಶನ (Bare rocks) ಆಗುತ್ತಿದೆ.&lt;/p&gt;&lt;img&gt;&lt;p&gt;ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ ಭಾರಿ ಜಲಪಾತ ಈಗ ಕೇವಲ ಒಂದು ಸಣ್ಣ ಜರಿಯಂತೆ (Small stream) ಹರಿಯುತ್ತಿದೆ. ನದಿಯಲ್ಲಿ ನೀರಿನ ಹರಿವು (Water flow) ತೀರಾ ಕಡಿಮೆಯಾಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;img&gt;&lt;p&gt;ಈ ಬಾರಿ ಭರಚುಕ್ಕಿ ಫಾಲ್ಸ್&zwnj;ನಲ್ಲಿ ನೀರಿಲ್ಲದ ಕಾರಣ ಜಲಪಾತದ ಸೌಂದರ್ಯ ಮಾಸಿದ್ದು, ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲೂ (Tourist footfall) ಭಾರಿ ಇಳಿಕೆ ಕಂಡುಬಂದಿದೆ. ಸ್ಥಳೀಯ ವ್ಯಾಪಾರಸ್ಥರ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಿದೆ.&lt;/p&gt;&lt;img&gt;&lt;p&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದರೆ (Heavy rainfall) ಮಾತ್ರ ಜಲಪಾತ ಮತ್ತೆ ಜೀವಕಳೆ ಪಡೆಯಲಿದೆ. ಮುಂದಿನ ದಿನಗಳಲ್ಲಾದರೂ ವರುಣ ಕೃಪೆ ತೋರಿ, ಭರಚುಕ್ಕಿ ಮತ್ತೆ ಮೈದುಂಬಿ ಹರಿಯಲಿ ಎಂಬುದೇ ಪ್ರಕೃತಿ ಪ್ರೇಮಿಗಳ ಆಶಯವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/bharachukki-waterfall-dry-due-to-lack-of-rain-in-cauvery-basintourists-disappointed-geia6gw"/>
        </item>
        <item>
            <title><![CDATA[ಗುಂಡ್ಲುಪೇಟೆ ಭೂಗರ್ಭದಲ್ಲಿ ಅಪರೂಪದ ಖನಿಜ ಪತ್ತೆ; ಸುಮಾರು 11.48 ದಶಲಕ್ಷ ಟನ್ ಅದಿರು ಲಭ್ಯ]]></title>
            <link>https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki</link>
            <guid isPermaLink="true">https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki</guid>
            <pubDate>Mon, 06 Jul 2026 05:07:41 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ನಡೆಸಿದ ಸಮೀಕ್ಷೆಯಲ್ಲಿ ಅಪರೂಪದ ಭೂಮಿಯ ಮೂಲಧಾತುಗಳು (REE) ಮತ್ತು ಯಟ್ರಿಯಮ್ ಖನಿಜ ನಿಕ್ಷೇಪಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಸುಮಾರು 11.48 ದಶಲಕ್ಷ ಟನ್ ಅದಿರು ಲಭ್ಯವಿದ್ದು, ಮೊಬೈಲ್, ಕಂಪ್ಯೂಟರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಈ ಖನಿಜಗಳು ಅತ್ಯಗತ್ಯವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwta8wahpkwyqzv8m4gzdbs0,imgname-gundlupete-1783294619985.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮೊಬೈಲ್&zwnj;, ಕಂಪ್ಯೂಟರ್&zwnj;, ವಾಹನದ ಬ್ಯಾಟರಿ ಸೇರಿದಂತೆ ತಂತ್ರಜ್ಞಾನದ ಅಗತ್ಯಗಳಿಗೆ ಬೇಕಿರುವ ಅಪರೂಪದ ಖನಿಜ ಸಂಪತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ತಾಲೂಕಿನ ಮಲ್ಲಯ್ಯನಪುರ, ವಿಜಯಪುರ, ಕೂತನೂರು, ಮನುಗನಹಳ್ಳಿ ಸುತ್ತಮುತ್ತ ಅಪರೂಪದ ವಿರಳ ಭೂಮಿಯ ಮೂಲ ಧಾತುಗಳು (ರೇರ್&zwnj; ಅರ್ಥ್&zwnj; ಎಲಿಮೆಂಟ್ಸ್&zwnj;) ಮತ್ತು ಯಟ್ರಿಯಮ್/ಥೋರಿಯಮ್ ಖನಿಜ ನಿಕ್ಷೇಪ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ (ಜಿಎಸ್&zwnj;ಐ) ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.&lt;/p&gt;&lt;p&gt;ಜಿಎಸ್&zwnj;ಐ ವರದಿಯಲ್ಲಿ 2.85 ಚದರ ಕಿ.ಮೀಟರ್&zwnj;ನ 750 ಎಕರೆಯಲ್ಲಿ ಅತಿ ಅಪರೂಪದ ಖನಿಜ ಸಂಪತ್ತು ಗೋಚರವಾಗಿದ್ದು, 20 ಎಕರೆಯಷ್ಟು ಥೋರಿಯಂ ಇರುವುದು ತಿಳಿದುಬಂದಿದ್ದು, ಕೋರ್&zwnj; ಮಿನರಲ್ ಝೋನ್ ಎಂದು ಘೋಷಣೆಯಾಗುವ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಜಿಎಸ್&zwnj;ಐ ನಡೆಸಿದ ಸಾಮಾನ್ಯ ಪರಿಶೋಧನೆ ಜಿ-೨ ಪ್ರಕಾರ ಗುಂಡ್ಲುಪೇಟೆ ಬಳಿ ಆರ್&zwnj;ಇಇ ಮತ್ತು ಯಟ್ರಿಯಮ್ ಬ್ಲಾಕ್ ಒಟ್ಟು 314.21 ಹೆಕ್ಟೇರ್ ಪ್ರದೇಶ ಒಳಗೊಂಡಿದೆ.ಈ ಪ್ರದೇಶವನ್ನು ಗಣಿಗಾರಿಕೆ ಗುತ್ತಿಗೆಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಎಷ್ಟು ಖನಿಜವಿದೆ?&lt;/strong&gt;&lt;/h2&gt;&lt;p&gt;ಜಿಎಸ್&zwnj;ಐ ವರದಿಯ ಪ್ರಕಾರ ಈ ಬ್ಲಾಕ್&zwnj;ನಲ್ಲಿ ಎರಡು ಪ್ರಮುಖ ಖನಿಜಗಳಲ್ಲಿ ಆರ್&zwnj;ಇಇ ಅದಿರು ಶೇ.0.25 ಕಟ್-ಆಫ್&zwnj;ನಲ್ಲಿ 11.48 ಮಿಲಿಯನ್ ಟನ್ ಅದಿರು ಇದೆ. ಇದರಿಂದ ಅಂದಾಜು 55,276 ಟನ್ ಶುದ್ಧ ಆರ್&zwnj;ಇಇ ಲೋಹ ಸಿಗಬಹುದಾಗಿದೆ. ಉತ್ತಮ ಗುಣಮಟ್ಟದ ಶೇ. 0.50 ಕಟ್-ಆಫ್&zwnj;ನಲ್ಲಿ 6.35 ಮಿಲಿಯನ್ ಟನ್ ಅದಿರಿದೆ.&lt;/p&gt;&lt;p&gt;40,261 ಟನ್ ಲೋಹ ಲಭ್ಯದಲ್ಲಿ ಯಟ್ರಿಯಮ್ 100 ಪಿಪಿಎಂ ಕಟ್-ಆಫ್&zwnj;ನಲ್ಲಿ 7.18 ಮಿಲಿಯನ್ ಟನ್ ಅದಿರು ಇದ್ದು,1020 ಟನ್ ಶುದ್ಧ ಯಟ್ರಿಯಮ್ ಲೋಹ ಪಡೆಯುವ ಅಂದಾಜಿದೆ.ಒಟ್ಟು 44 ಬೋರ್&zwnj;ವೆಲ್&zwnj;ಗಳನ್ನು ಕೊರೆದು 6979.45 ಮೀಟರ್ ಪರಿಶೀಲನೆ ನಡೆಸಲಾಗಿದೆ. ಜೊತೆಗೆ 40 ಕಂದಕಗಳನ್ನು ತೋಡಿ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಈ ವಿಶೇಷ ಖನಿಜದ ಪ್ರಾಮುಖ್ಯತೆ ಏನು?&lt;/strong&gt;&lt;/h3&gt;&lt;p&gt;ಮೊಬೈಲ್,ಕಂಪ್ಯೂಟರ್,ಎಲೆಕ್ಟ್ರಿಕ್ ವಾಹನದ ಬ್ಯಾಟರಿ, ಗಾಳಿ ವಿದ್ಯುತ್ ಟರ್ಬೈನ್,ರಕ್ಷಣಾ ಉಪಕರಣಗಳು ಮತ್ತು ಉನ್ನತ ತಂತ್ರಜ್ಞಾನ ಉದ್ಯಮಗಳಿಗೆ ಆರ್&zwnj;ಇಇ ಮತ್ತು ಯಟ್ರಿಯಮ್ ಅತ್ಯಗತ್ಯ. ದೇಶದಲ್ಲಿ ಈ ಖನಿಜಗಳ ಆಮದು ಹೆಚ್ಚಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ನಿಕ್ಷೇಪವು ಕಾರ್ಯ ತಂತ್ರಾತ್ಮಕವಾಗಿ ಮಹತ್ವ ಪಡೆದಿದೆ.&lt;/p&gt;&lt;h3&gt;&lt;strong&gt;ಸಂಪರ್ಕ ಮತ್ತು ಭೂ ಸ್ವರೂಪ&lt;/strong&gt;&lt;/h3&gt;&lt;p&gt;ಈ ಬ್ಲಾಕ್ ಬೆಂಗಳೂರಿನಿಂದ 199 ಕಿಮೀ ನೈಋತ್ಯಕ್ಕೆ, ಮೈಸೂರಿನಿಂದ 61 ಕಿಮೀ ದಕ್ಷಿಣಕ್ಕೆ ಇದೆ. ಎನ್&zwnj;ಎಚ್-212 ಮತ್ತು ಎನ್&zwnj;ಎಚ್&zwnj;-766 ರಾಷ್ಟ್ರೀಯ ಹೆದ್ದಾರಿಗಳು ಹತ್ತಿರದಲ್ಲಿವೆ. ಹತ್ತಿರದ ರೈಲು ನಿಲ್ದಾಣ ಚಾಮರಾಜನಗರ 35 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ 850 ಮೀಟರ್&zwnj; ಎತ್ತರದಲ್ಲಿದೆ.&lt;/p&gt;&lt;p&gt;ಈ ಪ್ರದೇಶವು ಸಮತಟ್ಟಾದ ಮತ್ತು ಲಘುವಾಗಿ ಉಬ್ಬು-ತಗ್ಗುಗಳನ್ನು ಹೊಂದಿದೆ. ವಾರ್ಷಿಕ ಸರಾಸರಿ ಮಳೆ 669 ಮಿಮೀ ಮತ್ತು ಉಷ್ಣತೆ 23.7&deg;C ಇದೆ. ಈ ಪ್ರದೇಶದಲ್ಲಿ 6 ದೊಡ್ಡ ಕಾರ್ಬೊನಾಟೈಟ್ ಬಂಡೆಗಳ ಪಟ್ಟಿಗಳಿದ್ದು, ಅಲ್ಲಿಂದಲೇ ಈ ಖನಿಜಗಳು ದೊರೆತಿವೆ ಎಂದು ಜಿಎಸ್&zwnj;ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಗಣಿಗಾರಿಕೆಗೆ ಅನುಮತಿ ದೊರೆತಲ್ಲಿ ಜಿಲ್ಲೆಗೆ ಉದ್ಯೋಗ ಮತ್ತು ಕಂದಾಯದ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಂತೂ ಇದ್ದೇ ಇದೆ.&lt;/p&gt;&lt;p&gt;ಗುಂಡ್ಲುಪೇಟೆ (ವಿಜಯಪುರ), ಮಲ್ಲಯ್ಯನಪುರ, ಕೂತನೂರು ಬಳಿ ಜಿ-೪ ಸರ್ವೇಯನ್ನು ಭಾರತೀಯ ಭೂ ವೈಜ್ಞಾನಿಕ ಇಲಾಖೆ ನಡೆಸಿದೆ. ಕೆಲ ಮಾದರಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಸಿದೆ. ಜಿಎಸ್&zwnj;ಐ ಭಾರತ ಸರ್ಕಾರಕ್ಕೆ ವರದಿ ನೀಡಿದೆ ಎಂದು ಹಿರಿಯ ಭೂ ವಿಜ್ಞಾನಿ ರಾಜೇಶ್ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki"/>
        </item>
        <item>
            <title><![CDATA[ಬರದ ಮಧ್ಯೆಯೂ ರಾಜ್ಯದ ಹಲವೆಡೆ ಭಾರೀ ಮಳೆ: ಕಣ್ಮನ ಸೆಳೆದ ಹೊಗೇನಲ್‌ ಜಲಪಾತ!]]></title>
            <link>https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</link>
            <guid isPermaLink="true">https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</guid>
            <pubDate>Wed, 05 Aug 2026 05:29:20 +0530</pubDate>
            <description><![CDATA[&lt;p&gt;ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7k3sxapnx47sc2vamewk44,imgname-----------------------2026-08-05t051946.874-1785887582122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5)&lt;/strong&gt;: ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೊರ್ಗಿ ಗ್ರಾಮದ ಮನೆವೊಂದಕ್ಕೆ ಹಾನಿಯಾಗಿ ₹80,000 ನಷ್ಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 104.40 ಮಿ.ಮೀ. ಮಳೆ ದಾಖಲಾಗಿದೆ.&lt;/p&gt;&lt;p&gt;ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸಣ್ಣದಾಗಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿಯಾಗಿ ಸುರಿದಿದೆ. ಚನ್ನಗಿರಿ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಸಮವಾಗಿವೆ.&lt;/p&gt;&lt;h2&gt;ಕಣ್ಮನ ಸೆಳೆದ ಹೊಗೇನಲ್&zwnj; ಜಲಪಾತ:&lt;/h2&gt;&lt;p&gt;ಕಬಿನಿ ಜಲಾಶಯದಿಂದ ಮಂಗಳವಾರ 25,000 ಕ್ಯುಸೆಕ್&zwnj; ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ರುದ್ರ ರಮಣೀಯವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ಈ ಜಲಪಾತವು ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು.&lt;/p&gt;&lt;p&gt;ಇದೀಗ ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡಿದ್ದು, ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ಶೂಟ್&zwnj; ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.&lt;/p&gt;&lt;p&gt;ರೈತರಿಗೆ ಬಿತ್ತನೆಗೆ ಇದು ಅನುಕೂಲವಾಗಿದ್ದು, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲು ಮಳೆ ಪೂರಕವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆ-ಕಾಲೇಜು, ಕಚೇರಿಗಳು ಬಿಡುವ ವೇಳೆಯಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಗೆ ತೆರಳಲು ಜನರು ಪರದಾಡಿದರು. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ್ತಿದ್ದರಿಂದ ವಾಹನ ಸವಾರರಿಗೆ ದಾರಿ ಕಾಣದಂತಾಗಿತ್ತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.&lt;/p&gt;&lt;h3&gt;ಸಂಚಾರ ಸ್ಥಗಿತ:&lt;/h3&gt;&lt;p&gt;ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 8.90 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 7147 ಕ್ಯುಸೆಕ್ ನೀರಿನ ಒಳಹರಿವು ಇದ್ದು, 6291 ಕ್ಯುಸೆಕ್ ಹೊರ ಹರಿವು ಕಂಡುಬಂತು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n"/>
        </item>
        <item>
            <title><![CDATA['ಬೇಲ್‌ ಕೊಡದಿದ್ದರೆ ಬದುಕೋಕೆ ಬಿಡಲ್ಲ..' ಚಾಮರಾಜನಗರ ಜಡ್ಜ್‌ಗೆ ಜೀವ ಬೆದರಿಕೆ!]]></title>
            <link>https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1</link>
            <guid isPermaLink="true">https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1</guid>
            <pubDate>Sat, 11 Jul 2026 06:30:02 +0530</pubDate>
            <description><![CDATA[ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಪ್ರಕರಣವೊಂದರ ಆರೋಪಿಗೆ ಜಾಮೀನು ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂಟರ್ನೆಟ್&zwnj; ಕರೆ ಮೂಲಕ ಎಚ್ಚರಿಕೆ ನೀಡಿರುವ ಅಪರಿಚಿತ ವ್ಯಕ್ತಿ, ಜಾಮೀನು ನಿರಾಕರಿಸಿದರೆ ಮುಂದಿನ ಟಾರ್ಗೆಟ್ ನೀವೇ ಎಂದು ಹೇಳಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx7apej4gwhc24ksdc4g11fs,imgname-----------------------2026-07-11t061341.459-1783731272260.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜು.11): &lt;/strong&gt;ನ್ಯಾಯಾಲಯಕ್ಕೆ ಹುಸಿ ಬಾಂಬ್&zwnj; ಬೆದರಿಕೆ ಸಂದೇಶಗಳ ಹಾವಳಿ ಹೆಚ್ಚಾಗಿರುವ ನಡುವೆಯೇ, ಈಗ ಕಿಡಿಗೇಡಿಗಳು ನೇರವಾಗಿ ಜಿಲ್ಲಾ ಕೋರ್ಟ್&zwnj;ನ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.&lt;/p&gt;&lt;h2&gt;ಬೇಲ್ ಕೊಡದಿದ್ರೆ NEXT ಟಾರ್ಗೆಟ್ ನೀನೇ!&lt;/h2&gt;&lt;p&gt;ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಂತೆ ನೇರವಾಗಿ ನ್ಯಾಯಾಧೀಶರಿಗೆ ಫೋನ್&zwnj; ಕರೆ ಮಾಡಿ ಎಚ್ಚರಿಸಿರುವ ಘಟನೆ ಚಾಮರಾಜನಗರದಲ್ಲಿ ಶುಕ್ರವಾರ ನಡೆದಿದೆ. ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗಲೇ ಬೆದರಿಕೆ ಕರೆ ಬಂದಿದೆ. ಅನಾಮಧೇಯ ವ್ಯಕ್ತಿಯೋರ್ವ 41000697200 ಸಂಖ್ಯೆಯಿಂದ ನ್ಯಾಯಾಧೀಶರ ಮೊಬೈಲ್&zwnj;ಗೆ ಇಂಟರ್ನೆಟ್&zwnj; ಕರೆ ಮಾಡಿದ್ದಾನೆ. ಅದರಲ್ಲಿ &lsquo;ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬೇಕು&rsquo; ಎಂದು ಒತ್ತಾಯಿಸಿದ್ದು, &lsquo;ಒಂದು ವೇಳೆ ಜಾಮೀನು ತಿರಸ್ಕರಿಸಿದರೆ ಮುಂದಿನ ಟಾರ್ಗೆಟ್&zwnj; ನೀನೇ. ನಿನ್ನನ್ನು ಬದುಕಲು ಬಿಡಲ್ಲ&rsquo; ಎಂದು ಜೀವ ಬೆದರಿಕೆ ಹಾಕಿದ್ದಾನೆ.&lt;/p&gt;&lt;h3&gt;ಎಫ್&zwnj;ಐಆರ್ ದಾಖಲು&lt;/h3&gt;&lt;p&gt;ಜಡ್ಜ್&zwnj;ಗೆ ನೇರವಾಗಿ ಬೆದರಿಕೆ ಹಾಕಿರುವುದು ಆತಂಕ ಮೂಡಿಸುವಂತದ್ದು. ಸದ್ಯ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಡ್ಜ್&zwnj;ಗೆ ಹೆಚ್ಚಿನ ಪೊಲೀಸರು ಭದ್ರತೆ ಒದಗಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1"/>
        </item>
        <item>
            <title><![CDATA[ಸರ್ವರ್ ಸಮಸ್ಯೆ, ಒಟಿಪಿ ವಿಳಂಬ: ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ]]></title>
            <link>https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</link>
            <guid isPermaLink="true">https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</guid>
            <pubDate>Fri, 10 Jul 2026 19:46:07 +0530</pubDate>
            <description><![CDATA[&lt;p&gt;Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx663tnhc7y7py0kd6fm3rns,imgname-ch-1783692913329.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಜು.10): &lt;/strong&gt;ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಪಾರದರ್ಶಕ ಮತ್ತು ಸಮಯ ಉಳಿತಾಯದ ಉದ್ದೇಶದಿಂದ ತಂದ ಈ ಯೋಜನೆ ಈಗ ತಾಂತ್ರಿಕ ದೋಷಗಳ ಗೂಡಾಗಿದೆ. ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ. ಈ ಕುರಿತು ಒಂದು ವರದಿ ನೋಡಿ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಜಾರಿಗೊಳಿಸಲಾಗಿರುವ ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಕಾಗದರಹಿತ ನೋಂದಣಿ ವ್ಯವಸ್ಥೆ ಸಾರ್ವಜನಿಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ತಿ ಮಾರಾಟ-ಖರೀದಿ ನೋಂದಣಿ, ಸೇಲ್ ಡೀಡ್, ಮಾರ್ಟ್ಗೇಜ್ ಸೇರಿದಂತೆ ಪ್ರಮುಖ ನೊಂದಣಿ ಪ್ರಕ್ರಿಯೆಗಳಿಗೆ ಕಾವೇರಿ 2.0 ಪೋರ್ಟಲ್ ಬಳಸಲಾಗುತ್ತಿದ್ದು, ಇದು ಪದೇ ಪದೇ ಕೈಕೊಡುತ್ತಿದೆ. ಈ ಮೊದಲು ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತಿದ್ದ ನೋಂದಣಿ ಕಾರ್ಯಕ್ಕೆ ಈಗ ಮೂರ್ನಾಲ್ಕು ಗಂಟೆಗಳು, ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಮುಖ್ಯವಾಗಿ ನೋಂದಣಿ ಶುಲ್ಕ ಪಾವತಿಸಲು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಲು ಸಕಾಲಕ್ಕೆ ಒಟಿಪಿ (OTP) ಬರುವುದೇ ಇಲ್ಲ. ಇದರ ಜೊತೆಗೆ ಸರ್ವರ್ ಡೌನ್ ಸಮಸ್ಯೆ ಸಾಮಾನ್ಯವಾಗಿದೆ. ಇನ್ನು ವಯಸ್ಸಾದವರ ಪಾಡಂತು ಹೇಳತೀರದಾಗಿದೆ. ನೊಂದಣಿ ಪ್ರಕ್ರಯೆಗೆ ಮೂರು ಬಾರಿ ತಂಬ್ (Thumb) ನೀಡಬೇಕಾದ ನಿಯಮವಿದ್ದು, ಬಯೋಮೆಟ್ರಿಕ್ ಸರಿಯಾಗಿ ಮ್ಯಾಚ್ ಆಗದೆ ವೃದ್ಧರು ಇಡೀ ದಿನ ಕಚೇರಿಯಲ್ಲೇ ಕೂರುವಂತಾಗಿದೆ. ಸರ್ಕಾರ ಪರಿಸರಸ್ನೇಹಿ ಅಂತ ಹೇಳಿ ಈ ಕಾಗದರಹಿತ ವ್ಯವಸ್ಥೆ ತಂದಿದ್ದೇನೋ ಸರಿ.&lt;/p&gt;&lt;p&gt;ಆದರೆ ತಾಂತ್ರಿಕವಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಾವೇರಿ 2.0 ಸರ್ವರ್ ಯಾವಾಗಲೂ ಡೌನ್ ಇರುತ್ತೆ, ಒಟಿಪಿ ಬರೋದೇ ಇಲ್ಲ. ದಿನವಿಡೀ ಖರೀದಿದಾರರು, ಮಾರಾಟಗಾರರು ಕೆಲಸ ಬಿಟ್ಟು ಇಲ್ಲೇ ಕಾಯ್ಬೇಕು. ಕಾಗದ ಇದ್ದಾಗಲೇ ಕೆಲಸ ಬೇಗ ಆಗ್ತಿತ್ತು ಎನ್ನುತ್ತಾರೆ. ಇಷ್ಟೆಲ್ಲಾ ತಾಂತ್ರಿಕ ಅಡಚಣೆಗಳಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರೂ, ನೋಂದಣಿ ಅಧಿಕಾರಿಗಳ ಸಮರ್ಥನೆ ಮಾತ್ರ ಬೇರೆಯದೇ ಆಗಿದೆ. ಈ ಹೊಸ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಯಾವುದೇ ವ್ಯತ್ಯಾಸವಾಗಿಲ್ಲ&lt;/strong&gt;&lt;/h2&gt;&lt;p&gt;ಈ ಹಿಂದಿನ ನೋಂದಣಿ ಅಂಕಿಅಂಶಗಳಿಗೂ ಮತ್ತು ಇಂದಿನ ಅಂಕಿಅಂಶಗಳಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಪರಿಸರಸ್ನೇಹಿ ಹಾಗು ಪಾರದರ್ಶಕತೆಯ ಹೆಸರಿನಲ್ಲಿ ತಂದ ತಂತ್ರಜ್ಞಾನ ಸರಿಯಾದ ಸಿದ್ಧತೆ ಇಲ್ಲದ ಕಾರಣ ಜನರಿಗೆ ಪಜೀತಿಯಾಗಿ ಪರಿಣಮಿಸಿದೆ. ಅಧಿಕಾರಿಗಳು ಕೇವಲ ಅಂಕಿಅಂಶಗಳ ಸಮರ್ಥನೆ ಮಾಡಿಕೊಳ್ಳುವುದನ್ನು ತಾಂತ್ರಿಕ ತೊಂದರೆಗಳ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3"/>
        </item>
        <item>
            <title><![CDATA[ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಒಂದೂವರೆ ಎಕರೆ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಣ್ಣೀರು]]></title>
            <link>https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5</link>
            <guid isPermaLink="true">https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5</guid>
            <pubDate>Tue, 04 Aug 2026 09:50:06 +0530</pubDate>
            <description><![CDATA[ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಬೆಳೆದಿದ್ದ ಕಟಾವಿಗೆ ಸಿದ್ಧವಾಗಿದ್ದ ಬೆಳ್ಳುಳ್ಳಿ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯಿಂದಾಗಿ ರೈತ ಸಿದ್ದರಾಜು ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಕಳ್ಳರನ್ನು ಪತ್ತೆ ಹಚ್ಚುವಂತೆ ಇತರ ರೈತರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5fw9sv2yyy9w5v78gyz0w1,imgname-chamarajanagar--1785817081659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ : &lt;/strong&gt;ಕೃಷಿ ಜಮೀನಿನಲ್ಲಿ ಮೋಟರ್&zwnj;, ಕೇಬಲ್&zwnj; ಕಳ್ಳತನ ನಡೆಯುವುದು ನೋಡಿದ್ದೆವು. ಕೇಳಿದ್ದೆವು. ಆದರೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಮಳೆ ಇಲ್ಲದೆ, ಬರದ ನಡುವೆ ಬೆಳದು ಕಟಾವಿಗೆ ಬಂದಿದ್ದ ಬೆಳ್ಳುಳ್ಳಿಯನ್ನೇ ಕಳವು ಮಾಡಿರುವ ಆಘಾತಕಾರಿ ಪ್ರಸಂಗವೊಂದು ಗುಂಡ್ಲುಪೇಟೆ ತಾಲೂಕಿನ ಭೀಮನಬೀಡುವಿನಲ್ಲಿ ನಡೆದಿದೆ.&amp;nbsp;&lt;/p&gt;&lt;p&gt;ಕಟಾವಿಗೆ ಬಂದ ಬೆಳ್ಳುಳ್ಳಿಯನ್ನೇ ಕಳ್ಳತನ ಮಾಡಿದ ಪ್ರಸಂಗ ನಡೆದಿದೆ. ಗ್ರಾಮದ ರೈತ ಸಿದ್ದರಾಜುಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಟಾವಿಗೆ ಬಂದ ಬೆಳ್ಳುಳ್ಳಿ ಫಸಲನ್ನೇ ಭಾನುವಾರ ರಾತ್ರಿ ಐದಾರು ಕ್ವಿಂಟಲ್&zwnj;ನಷ್ಟು ಕದ್ದು ಪರಾರಿಯಾಗಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ರೈತನಿಂದ ದೂರು ದಾಖಲು&lt;/strong&gt;&lt;/h2&gt;&lt;p&gt;ರೈತ ಸಿದ್ದರಾಜು ಕಷ್ಟ ಪಟ್ಟು ಬೆಳೆದು ಇನ್ನೇನೋ ಕಟಾವಿಗೆ ಬಂದು ರೈತನ ಕಿಸೆಗೆ ಹಣ ಸೇರುವ ಸಮಯದಲ್ಲಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ ಎಂದು ರೈತ ಅವಲತ್ತು ಕೊಂಡಿದ್ದಾನೆ. ರೈತ ಕಷ್ಟ ಪಟ್ಟು ಬೆಳೆದ ಫಸಲನ್ನು ರಾತ್ರೋ ರಾತ್ರಿ ಬೆಳ್ಳುಳ್ಳಿ ಫಸಲನ್ನು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಂಡೀಪುರ ಸಫಾರಿ ದರ ಬಹುತೇಕ ಡಬಲ್! ಸೆಪ್ಟೆಂಬರ್ 1ರಿಂದ ಜಾರಿಗೆ: ಕ್ಯಾಮೆರಾಗೂ ಭಾರೀ ಶುಲ್ಕ, ಇಲ್ಲಿದೆ ಹೊಸ ದರಪಟ್ಟಿ!&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಮೊದಲ ಬಸ್; ಮಿಣ್ಯಂ ಗ್ರಾಪಂನ ಕೊಪ್ಪಕ್ಕೆ ಬಂತು KSRTC&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5"/>
        </item>
        <item>
            <title><![CDATA[ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆ: ಫಾರ್ಮ್ ಪ್ಲಾಟ್ ಹೆಸರಲ್ಲಿ ಅಕ್ರಮ ಮಿನಿ ಟೌನ್‌ಶಿಪ್!]]></title>
            <link>https://kannada.asianetnews.com/gallery/karnataka-districts/real-estate-mafia-bypasses-bandipur-resort-ban-converts-farmland-into-mini-township-gdp-otfury0</link>
            <guid isPermaLink="true">https://kannada.asianetnews.com/gallery/karnataka-districts/real-estate-mafia-bypasses-bandipur-resort-ban-converts-farmland-into-mini-township-gdp-otfury0</guid>
            <pubDate>Mon, 27 Jul 2026 10:08:37 +0530</pubDate>
            <description><![CDATA[&lt;p&gt;ವರದಿ: ರಂಗೂಪುರ ಶಿವಕುಮಾರ್&zwnj;&lt;/p&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಅಂಚಿನಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಅಕ್ರಮವಾಗಿ 'ಫಾರ್ಮ್ ಫ್ಲಾಟ್'ಗಳಾಗಿ ಪರಿವರ್ತಿಸಿ ಮಿನಿ ಟೌನ್&zwnj;ಶಿಪ್ ನಿರ್ಮಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kygx5anzd7fjgzzrctneq55x,imgname-bandipur-1785126365886.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ರಂಗೂಪುರ ಶಿವಕುಮಾರ್&zwnj;&lt;/p&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಅಂಚಿನಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಅಕ್ರಮವಾಗಿ 'ಫಾರ್ಮ್ ಫ್ಲಾಟ್'ಗಳಾಗಿ ಪರಿವರ್ತಿಸಿ ಮಿನಿ ಟೌನ್&zwnj;ಶಿಪ್ ನಿರ್ಮಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಂಚಿನಲ್ಲಿ ರೆಸಾರ್ಟ್&zwnj;, ಹೋಂ ಸ್ಟೇಗಳಿಗೆ ನಿರ್ಬಂಧ ಹೆಚ್ಚಾದ ಕಾರಣ ರಿಯಲ್&zwnj; ಎಸ್ಟೇಟ್&zwnj; ಉದ್ಯಮಿಗಳು ಇದೀಗ ಕೃಷಿ ಜಮೀನನ್ನೇ ತುಂಡು ಭೂಮಿಯಾಗಿ ಪರಿವರ್ತಿಸಿ ಫಾರ್ಮ್&zwnj; ಫ್ಲಾಟ್&zwnj; ಹೆಸರಲ್ಲಿ ಮಿನಿ ಟೌನ್&zwnj;ಶಿಪ್&zwnj; ಮಾದರಿಗೆ ಮುಂದಾಗಿದ್ದಾರೆ.&lt;/p&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ ಬಡಾವಣೆ ಮಾದರಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದ ಸರ್ವೇ ಸಂಖ್ಯೆ. 21, 41, 65, 66, 68ರ ಜಮೀನಿನಲ್ಲಿ ೮೫ ಪೋಡಿಯನ್ನು ಕೆ.ವಿ.ಪ್ರಸಾದ್&zwnj; ಮತ್ತವರ ಕುಟುಂಬ ಮಾಡಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೆ.ವಿ.ಪ್ರಸಾದ್&zwnj; ಕುಟುಂಬದ ಹೆಸರಿನಲ್ಲಿರುವ ಕೃಷಿ ಜಮೀನಿನಲ್ಲಿ ಪ್ರಾದೇಶಿಕ ಆಯುಕ್ತರು ಅಧ್ಯಕ್ಷರಾಗಿರುವ ಟಾಸ್ಕ್&zwnj; ಪೋರ್ಸ್&zwnj; ಸಮಿತಿಯಲ್ಲಿ ಅನುಮತಿ ಪಡೆಯದೇ ಬಂಡೀಪುರ ಅರಣ್ಯ ಇಲಾಖೆಯ ಮೂಗಿನಡಿಯೇ ಕಾಂಕ್ರೀಟ್&zwnj; ರಸ್ತೆ, ಸೋಲಾರ್&zwnj; ಫೆನ್ಸ್&zwnj;, ಅಡ್ಡರಸ್ತೆ ನಿರ್ಮಿಸಿ ಬಡಾವಣೆ ಮಾದರಿಯಲ್ಲಿ ಕಾಮಗಾರಿ ನಡೆಯುತ್ತಿದೆ.&lt;/p&gt;&lt;p&gt;ಕುಂದಕೆರೆ ವಲಯ ಅರಣ್ಯಾಧಿಕಾರಿ, &lsquo;ಕೃಷಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ವಾಣಿಜ್ಯ ಉದ್ದೇಶದ ಮಾದರಿಯಲ್ಲಿ ಕಾಮಗಾರಿ ನಡೆಯುತ್ತಿದೆ, ನಿಲ್ಲಿಸಿ&rsquo; ಎಂದು ನೋಟೀಸ್&zwnj; ನೀಡಿದ್ದರು. ಇದಾದ ಬಳಿಕ ಉಪ ವಿಭಾಗಾಧಿಕಾರಿಗೂ ಪತ್ರ ಬರೆದಿದ್ದಾರೆ. ಆನಂತರವೂ ಕಾಮಗಾರಿ ನಡೆಯುತ್ತಿದ್ದು, ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೂ ಪತ್ರ ಬರೆದು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆದರೂ ಕಾಮಗಾರಿ ನಡೆಯುತ್ತಿದೆ ಎಂದು ಪರಿಸರವಾದಿಗಳು ದೂರಿದ್ದಾರೆ.&lt;/p&gt;&lt;img&gt;&lt;p&gt;ಬಂಡೀಪುರ ಪ್ರದೇಶದಂಚಿನಲ್ಲಿ ರೆಸಾರ್ಟ್&zwnj;, ಹೋಂ ಸ್ಟೇ ಹಾಗೂ ವಾಣಿಜ್ಯ ಉದ್ದೇಶಕ್ಕೆ ಅನುಮತಿ ನೀಡುತ್ತಿಲ್ಲ. ಇದನ್ನು ಗಮನಿಸಿದ ರಿಯಲ್&zwnj; ಎಸ್ಟೇಟ್&zwnj; ಉದ್ಯಮಿಗಳು ಕೃಷಿ ಭೂಮಿಯನ್ನು ತುಂಡು ಹೆಸರಿನಲ್ಲಿ ಪೋಡಿ ಮಾಡಿಸಿ ಫಾರ್ಮ್&zwnj; ಫ್ಲಾಟ್&zwnj; ನಿರ್ಮಿಸಲು ಮುಂದಾಗಿದ್ದಾರೆ. ಪರಿಸರ ಸೂಕ್ಷ್ಮ ವಲಯವಾದ ಮಂಗಲ ಗ್ರಾಮದಲ್ಲಿ ಲೇಔಟ್&zwnj; ಮಾದರಿಯಲ್ಲಿ ಫಾರ್ಮ್&zwnj; ಫ್ಲಾಟ್&zwnj; ನಿರ್ಮಿಸಿದರೆ ವನ್ಯಜೀವಿಗಳಿಗೆ ತೊಂದರೆ ಆಗುತ್ತದೆ.&lt;/p&gt;&lt;p&gt;ಕೃಷಿ ಭೂಮಿ 5 ಗುಂಟೆ ತನಕ ಖರೀದಿಗೆ ಅವಕಾಶವಿಲ್ಲ. ಆದರೆ ಕೃಷಿ ಭೂಮಿಯಲ್ಲಿ 7 ಗುಂಟೆಯಿಂದ 12, 13 ಗುಂಟೆ ತನಕ ಒಂದೇ ಭೂಮಿಯಲ್ಲಿ ಜಂಟಿ ಮಾಡುತ್ತಾರೆ. ಆಗ ಜಂಟಿಯಾದ ಬಳಿಕ ಮನೆ ನಿರ್ಮಿಸಲು ಅವಕಾಶವಿದೆ. ಆದರೆ ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶವಾದ ಕಾರಣ ಅನುಮತಿ ಬೇಕೇ ಬೇಕು. ಆದರೂ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬಡಾವಣೆ ಮಾಡಲು ಹೊರಟಿದ್ದಾರೆ.&lt;/p&gt;&lt;img&gt;&lt;p&gt;ಪರಿಸರ ಸೂಕ್ಷ್ಮ ವಲಯದಂಚಿನ ಗ್ರಾಮಗಳಲ್ಲಿ ಕನಿಷ್ಟ ಒಂದು ಎಕರೆ ಭೂಮಿ ಖರೀದಿಗೆ ಅವಕಾಶ ನೀಡಬಾರದು ಹಾಗೂ ಜಂಟಿ ಖಾತೆಗೂ ಭೂಮಿ ತುಂಡು ಮಾಡಲು ಜಿಲ್ಲಾಡಳಿತ ಬಿಡಬಾರದು. ಕಾಡಂಚಿನ ಪ್ರದೇಶದಲ್ಲಿ ಲೇಔಟ್&zwnj;ಗೆ ಅಡಿಪಾಯ ಹಾಕಿರುವುದು ಸರಿಯಲ್ಲ. ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.&lt;/p&gt;&lt;p&gt;-ಪ್ರಕಾಶ್&zwnj; ಕಬ್ಬಹಳ್ಳಿ, ರೈತ ಸಂಘದ ಮುಖಂಡ.&lt;/p&gt;&lt;p&gt;ಬಂಡೀಪುರ ಕುಂದಕೆರೆ ವಲಯದಲ್ಲಿ ಲೇಔಟ್&zwnj; ಮಾದರಿ ಕಾಮಗಾರಿ ನಡೆಯುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು. ಜಿಲ್ಲಾಧಿಕಾರಿಗೆ ಈ ಬಗ್ಗೆ ತುರ್ತು ಕ್ರಮಕ್ಕೆ ಮನವಿ ಮಾಡಲಾಗುವುದು.&lt;/p&gt;&lt;p&gt;- ಎಲ್.ನಂದೀಶ್&zwnj;, ಡಿಸಿಎಫ್&zwnj;, ಬಂಡೀಪುರ&lt;/p&gt;&lt;img&gt;&lt;p&gt;2012ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ಜಕ್ಕಹಳ್ಳಿ ಗ್ರಾಮದ ಸರ್ವೆ ಸಂಖ್ಯೆ. 55, 56, 110ರಲ್ಲಿ ಪುಣೆ ಮೂಲದ ಎನ್&zwnj;ಎಸ್&zwnj;ಬಿ ವೈಲ್ಡ್&zwnj; ಹಂಟ್&zwnj; ಹೆಸರಿನಲ್ಲಿ ಲೇಔಟ್&zwnj; ಮಾಡಲು ಮುಂದಾಗಿದ್ದಾಗ ಅಂದಿನ ಎಪಿಸಿ ಸಿಎಫ್&zwnj; ಹೊಸಮಠ್&zwnj; ಬಡಾವಣೆಗೆ ಅವಕಾಶ ಕೊಟ್ಟಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಇಲಾಖೆ ಕಾಮಗಾರಿ ಆರಂಭವಾದಾಗಲೇ ತಡೆಯೊಡ್ಡುವ ಕೆಲಸ ಮಾಡಬಹುದಿತ್ತು. ತಡವಾಗಿಯಾದರೂ ಲೇಔಟ್&zwnj; ನಡೆಸುವವರಿಗೆ ನೋಟಿಸ್&zwnj; ನೀಡಿದೆ. ಇನ್ನಾದರೂ ಇಂಥ ಕ್ರಮ ವಾಣಿಜ್ಯ ಉದ್ದೇಶದ ಚಟುವಟಿಕೆಗಳಿಗೆ ಮುಂದಾಗಲಿ ಎಂದು ಜನರ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/real-estate-mafia-bypasses-bandipur-resort-ban-converts-farmland-into-mini-township-gdp-otfury0"/>
        </item>
        <item>
            <title><![CDATA[ರೈಲ್ವೆ ಅಂಡರ್ ಪಾಸ್‌ಗಾಗಿ ಹಕ್ಕೊತ್ತಾಯ: ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!]]></title>
            <link>https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t</link>
            <guid isPermaLink="true">https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t</guid>
            <pubDate>Mon, 06 Jul 2026 19:33:07 +0530</pubDate>
            <description><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvvjxk8tv2avhe5ry2rn7ek,imgname-vjvj-1783346329192.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.06): &lt;/strong&gt;ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿ ವಿರೋಧ ವ್ಯಕ್ತಪಡಿಸಿದರೂ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಕಾಮಗಾರಿ ಆರಂಭಿಸಲಾಗಿದೆ. ಅಷ್ಟಕ್ಕು ಗ್ರಾಮಸ್ಥರ ವಿರೋಧಕ್ಕೆ ಕಾರಣವೇನು ಅವರ ಒತ್ತಾಯವೇನು ಈ ಸ್ಟೋರಿ ನೋಡಿ.&lt;/p&gt;&lt;p&gt;ಹೌದು, ಚಾಮರಾಜನಗರ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ಸೃಷ್ಟಿಯಾಗಿದೆ. ಈ ರಸ್ತೆಯ ನಡುವೆ ಇರುವ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಸುತ್ತಮುತ್ತಲ ಗ್ರಾಮಸ್ಥರ ವಿರೋಧದ ನಡುವೆಯು ಭಾರೀ ಪೋಲಿಸ್ ಬಂದೋ ಬಸ್ತ್ನೊಂದಿಗೆ ಆರಂಭಿಸಲಾಯಿತು. ಆದರೆ ಸರ್ಕಾರದ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದ ಪಣ್ಯದಹುಂಡಿ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮೈಸೂರು-ಚಾಮರಾಜನಗರ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಗ್ರಾಮಸ್ಥರ ಮುಖ್ಯ ಬೇಡಿಕೆ ಏನೆಂದರೆ, ಇಲ್ಲಿ ಮೊದಲು ಅಂಡರ್ ಪಾಸ್ (Underpass) ನಿರ್ಮಿಸಬೇಕು, ಆನಂತರವಷ್ಟೇ ಮೇಲ್ಸೇತುವೆ ಕಾಮಗಾರಿ ಆರಂಭಿಸಬೇಕು ಎಂಬುದು. ಒಂದು ವೇಳೆ ಅಂಡರ್ ಪಾಸ್ ನಿರ್ಮಾಣ ಮಾಡದೇ ಕೇವಲ ಮೇಲ್ಸೇತುವೆ ನಿರ್ಮಿಸಿದರೆ, ಪಣ್ಯದಹುಂಡಿ, ದಾಸನೂರು, ತೊರವಳ್ಳಿ, ಹೊಮ್ಮ, ಪಿ.ಮರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಗ್ರಾಮಗಳಿಗೆ ಇರುವ ಪ್ರಮುಖ ಸಂಪರ್ಕವೇ ಕಡಿತಗೊಳ್ಳುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ, ಪಕ್ಕದ ಬೇರೆ ಬೇರೆ ಗ್ರಾಮಗಳಿಗೆ ಹೋಗಬೇಕಾದರೂ ಜನರು 5 ರಿಂದ 6 ಕಿಲೋಮೀಟರ್ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂದು ಗ್ರಾಮಸ್ಥರ ಅಳಲಾಗಿದೆ..&lt;/p&gt;&lt;p&gt;ಗ್ರಾಮಸ್ಥರ ಆಕ್ರೋಶ ಕೇವಲ ರಸ್ತೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಅಧಿಕಾರಿಗಳು ಭಾರೀ ತಾರತಮ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೈಲ್ವೆ ಮೇಲ್ಸೇತುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಪಕ್ಕದಲ್ಲೇ ಇರುವ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಒಂದು ಗುಂಟೆ ಜಮೀನಿಗೆ 7 ಲಕ್ಷ ರೂಪಾಯಿ ನಿಗದಿಪಡಿಸಿದ್ದರೆ, ಇಲ್ಲಿ ರೈತರ ಜಮೀನಿಗೆ ಕೇವಲ 1 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ತಾರತಮ್ಯ ನೀತಿಯನ್ನು ಖಂಡಿಸಿರುವ ಗ್ರಾಮಸ್ಥರು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ..&lt;/p&gt;&lt;p&gt;ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೂ, ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮದ ಸಂಪರ್ಕವನ್ನೇ ಕಡಿತಗೊಳಿಸಲು ಹೊರಟಿರುವ ಅಧಿಕಾರಿಗಳ ವಿರುದ್ದ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ತಾರತಮ್ಮ ನೀತಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದ್ದು ಹೋರಾಟ ತೀವ್ರಗೊಳಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t"/>
        </item>
        <item>
            <title><![CDATA[ಸಿನಿಮಾ ಚಿತ್ರೀಕರಣದ ಫೇವರಿಟ್ ಸ್ಥಳ ಇಂದು ಶಿಥಿಲ: ವೆಸ್ಲಿ ಸೇತುವೆಯ ದುಸ್ಥಿತಿ ನೋಡಿ]]></title>
            <link>https://kannada.asianetnews.com/karnataka-districts/historic-wesley-bridge-on-river-kaveri-crumbles-amid-neglect-gvd/articleshow-rcfyptu</link>
            <guid isPermaLink="true">https://kannada.asianetnews.com/karnataka-districts/historic-wesley-bridge-on-river-kaveri-crumbles-amid-neglect-gvd/articleshow-rcfyptu</guid>
            <pubDate>Sun, 02 Aug 2026 22:32:43 +0530</pubDate>
            <description><![CDATA[&lt;p&gt;Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz1ptg9jqwcwbsek48w0tzst,imgname-vjj-1785690145074.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಆ.02): &lt;/strong&gt;ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ. ಹೌದು, ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಇತಿಹಾಸ ಪ್ರಸಿದ್ಧ 'ವೆಸ್ಲಿ ಸೇತುವೆ' ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಇತಿಹಾಸದ ಹೆಗ್ಗುರುತಾಗಿ, ಅದೆಷ್ಟೋ ಸಿನಿಮಾಗಳು ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಈ ಪಾರಂಪರಿಕ ಸೇತುವೆ ಕಣ್ಣೆದುರೇ ಉರುಳಿ ಬೀಳುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ..&lt;/p&gt;&lt;p&gt;ಇತಿಹಾಸ ಪ್ರಸಿದ್ಧ ಭರಚುಕ್ಕಿ ಜಲಪಾತ ಹಾಗೂ ಶಿವನಸಮುದ್ರದ ಸಮೂಹ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾವೇರಿ ಒಡಲಿನ ಹೆಮ್ಮೆಯ ಕೊಂಡಿ ಈ ವೆಸ್ಲಿ ಸೇತುವೆ. ಬ್ರಿಟಿಷ್ ರಾಯಭಾರಿ ವೆಸ್ಲಿಯ ನೆನಪಿನಲ್ಲಿ 1818ರಲ್ಲಿ ನಿರ್ಮಾಣವಾದ ಈ ಪಾರಂಪರಿಕ ಸೇತುವೆ, ಹಿಂದಿನ ಕಾಲದ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಾಣವಾಗಿ ಶತಮಾನಗಳ ಕಾಲ ಗಟ್ಟಿಯಾಗಿ ನಿಂತಿದ್ದ ಈ ಸೇತುವೆ, ಇಂದು ಸೂಕ್ತ ನಿರ್ವಹಣೆ ಇಲ್ಲದೆ ನಲುಗಿ ಹೋಗಿದೆ. ಇದರ ಕಲ್ಲಿನ ಕಂಬಗಳು ಒಂದೊಂದಾಗಿ ಉರುಳಿ ಬೀಳುತ್ತಿದ್ದು, ಇತಿಹಾಸದ ಪುಟ ಸೇರುವ ಭೀತಿ ಎದುರಾಗಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಈ ಸೇತುವೆ ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಇದರ ಮೇಲೆ ನಿಂತು ಕಾವೇರಿಯ ವಿಹಂಗಮ ನೋಟವನ್ನು ಸವಿಯುವುದೇ ಒಂದು ರೋಮಾಂಚನ. ಅಷ್ಟೇ ಯಾಕೆ, ಸ್ಯಾಂಡಲ್ವುಡ್ನ ಅದೆಷ್ಟೋ ಸೂಪರ್ ಹಿಟ್ ಸಿನಿಮಾ ಹಾಡುಗಳ ಚಿತ್ರೀಕರಣಕ್ಕೂ ಈ ವೆಸ್ಲಿ ಸೇತುವೆ ಸುಂದರ ಬ್ಯಾಕ್ಡ್ರಾಪ್ ಆಗಿತ್ತು. ಆದರೆ, ಇಂತಹ ಪ್ರೇಕ್ಷಣೀಯ ಸ್ಥಳಕ್ಕೀಗ ಗ್ರಹಣ ಹಿಡಿದಿದೆ. ಕಳೆದ 2017 ರಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕುಸಿದಿದ್ದ ಭಾಗವನ್ನು ದುರಸ್ತಿ ಮಾಡಲಾಗಿತ್ತಾದರೂ, ಕಳೆದ ವರ್ಷ ಉಳಿದ ಭಾಗಗಳು ಸಹ ಧರಾಶಾಹಿಯಾಗಿವೆ.&lt;/p&gt;&lt;p&gt;ಸಾರ್ವಜನಿಕರ ಹಾಗು ವಾಹನಗಳ ಓಡಾಟಕ್ಕೆ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗಿದೆಯಾದರೂ, ಈ ಪಾರಂಪರಿಕ ತಾಣವನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ವೆಸ್ಲಿ ಸೇತುವೆ ಕೇವಲ ಇತಿಹಾಸದ ಪುಸ್ತಕಗಳಿಗಷ್ಟೇ ಸೀಮಿತವಾಗಬೇಕಾಗುತ್ತದೆ. ಇತಿಹಾಸ ಪ್ರಸಿದ್ಧ ಸೇತುವೆಯ ಸಂರಕ್ಷಣೆಗೆ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ತೀವ್ರ ಒತ್ತಾಯವಾಗಿದೆ.&lt;/p&gt;&lt;p&gt;ಸಂಚಾರಕ್ಕೆ ಪರ್ಯಾಯವಾಗಿ ಹೊಸ ಸೇತುವೆ ಏನೋ ಇದೆ ನಿಜ. ಆದರೆ ಎಲ್ಲರ ಕಣ್ಣೆದುರೇ ನಶಿಸಿ ಹೋಗುತ್ತಿರುವ ಈ ಐತಿಹಾಸಿಕ ವೆಸ್ಲಿ ಸೇತುವೆಯನ್ನು ನೋಡಿದರೆ ಸಂಕಟವಾಗುತ್ತದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ಇದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮರುನಿರ್ಮಾಣ ಮಾಡಬೇಕು. ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಸಲುವಾಗಿಯಾದರೂ ಇದನ್ನು ಕನಿಷ್ಠ ವೀಕ್ಷಣೆಗೆ ಯೋಗ್ಯವಾಗುವಂತೆ ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/historic-wesley-bridge-on-river-kaveri-crumbles-amid-neglect-gvd/articleshow-rcfyptu"/>
        </item>
        <item>
            <title><![CDATA[Chamarajanagar: ರೈತರ ಬೆಳೆ ಒಣಗುತ್ತಿದೆ, ವನ್ಯಜೀವಿಗಳಿಗೆ ನೀರಿಲ್ಲ: ಇಲ್ಲಿದೆ ಉಡುತೊರೆಹಳ್ಳದ ನೋವಿನ ಕಥೆ]]></title>
            <link>https://kannada.asianetnews.com/karnataka-districts/udu-thorehalla-reservoir-water-crisis-news-at-chamarajanagar-gvd/articleshow-sqwgiqh</link>
            <guid isPermaLink="true">https://kannada.asianetnews.com/karnataka-districts/udu-thorehalla-reservoir-water-crisis-news-at-chamarajanagar-gvd/articleshow-sqwgiqh</guid>
            <pubDate>Sat, 25 Jul 2026 21:19:00 +0530</pubDate>
            <description><![CDATA[&lt;p&gt;Chamarajanagar: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ,ಆಗಾಗಿದೆ ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kycytzaq594mseg4r4fxryqa,imgname-c-1784993906007.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.25): &lt;/strong&gt;ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ, ಆಗಾಗಿದೆ. ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ. ಆದ್ರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಡವಟ್ಟಿನಿಂದ ನೀರು ಡೆಡ್ ಸ್ಟೋರೆಜ್ ಹಂತ ತಲುಪಿದೆ.ಜನರು ಹಾಗೂ ಪ್ರಾಣಿಗಳಿಗೆ ಕುಡಿಯುವ ನೀರಿಗೂ ಅಭಾವ ಎದುರಾಗಿದೆ ಅಂತಾ ಅನ್ನದಾತರು ಆಕ್ರೋಶ ಹೊರಹಾಕ್ತಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.&lt;/p&gt;&lt;p&gt;ಹೌದು ಇದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಸಮೀಪವಿರುವ ಉಡುತೊರೆಹಳ್ಳ ಜಲಾಶಯ.ಈ ಜಲಾಶಯ ಕಟ್ಟಿ ಎರಡು ದಶಕ ಕಳೆದರು ಕೂಡ ಬರಿದಾದ ನಿದರ್ಶನವಿಲ್ಲ. ಆದ್ರೆ ಈ ಬಾರಿ ಶಾಸಕ ಮಂಜುನಾಥ್ ಹಾಗೂ ನೀರಾವರಿ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಈ ಭಾಗದ ರೈತರಿಗೆ ನೀರಿನ ಕೊರತೆಯುಂಟಾಗಲೂ ಕಾರಣವಾಗಿದೆ.ಈ ಜಲಾಶಯದ ಮೂಲಕ ಮಾರ್ಟಳ್ಳಿ ಭಾಗದ ಹಳ್ಳಗಳಿಗೆ ನೀರು ಹರಿಸಲಾಗಿದೆ.&lt;/p&gt;&lt;p&gt;ಈ ಉಡುತೊರೆಹಳ್ಳ ಜಲಾಶಯದ ಮೂಲಕ ಹರಿದ ನೀರು ಅತ್ತ ಮಾರ್ಟಳ್ಳಿ ಭಾಗದ ಜನರಿಗೂ ಕೂಡ ಸಿಕ್ಕಿಲ್ಲ,ಇತ್ತ ಅಜ್ಜೀಪುರ ಸೇರಿದಂತೆ ಸುತ್ತಮುತ್ತಲಿನ 20 ಕ್ಕೂ ಹೆಚ್ಚು ಗ್ರಾಮದ ಜನರಿಗೆ ಕೂಡ ನೀರಿನ ಅಭಾವವುಂಟಾಗಿದೆ. ಉಡುತೊರೆಹಳ್ಳ ಜಲಾಶಯ 0.678 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಲ್ಲದೇ ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿ ಈ ಜಲಾಶಯ ಇರುವುದರಿಂದ ಬರೀ ಜನರಿಗಷ್ಟೇ ಅಲ್ಲದೇ ಕಾಡುಪ್ರಾಣಿಗಳಿಗೂ ಕೂಡ ಆಧಾರವಾಗಿತ್ತು. ಆದ್ರೆ ಇದೀಗಾ ವನ್ಯಜೀವಿಗಳಿಗೂ ಕೂಡ ನೀರಿನ ಅಭಾವ ಸೃಷ್ಟಿಸಿದ್ದಾರೆ. ಸ್ಥಳೀಯ ಮುಖಂಡ ನಿಶಾಂತ್ ಆರೋಪಿಸಿದ್ದಾರೆ..&lt;/p&gt;&lt;p&gt;ಇನ್ನೂ ಉಡುತೊರೆಹಳ್ಳ ಜಲಾಶಯದ ನೀರಿನ ಮಟ್ಟ ಇಳಿಕೆಯಾದ ಹಿನ್ನಲೆ ನೀರು ಕುಡಿಯಲು ಹೋಗಿದ್ದ ಒಂದು ಕಾಡಾನೆ ಹಾಗೂ ಕಾಡೆಮ್ಮೆ ಜಲಾಶಯದ ಹೂಳಿನಲ್ಲಿ ಸಿಲುಕಿ ಮೃತಪಟ್ಟಿದ್ದವು. ಈ ಹಿನ್ನಲೆ ಜಲಾಶಯದ ನೀರಿನ ಮಟ್ಟ ಕಡಿಮೆಯಾದ ಹಿನ್ನಲೆ ಹೂಳೆತ್ತುವ ಕೆಲಸವಾದರೂ ಮಾಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಕೈಲಾಗದಿದ್ರೆ ರೈತರಿಗೆ ಹೂಳೆತ್ತಲೂ ಅವಕಾಶ ಕೊಡಿಯೆಂದಿದ್ದಾರೆ. ಹೂಳೆತ್ತುವ ಬಗ್ಗೆ ಅರಣ್ಯ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಈಗಾಗಲೇ ನಾವು ಹಿರಿಯ ಅಧಿಕಾರಿಗಳಿಗೆ ಹೂಳೆತ್ತುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.&lt;/p&gt;&lt;p&gt;ಹಿರಿಯ ಅಧಿಕಾರಿಗಳ ಅನುಮತಿ ಬಳಿಕ ನೀರಾವರಿ ಇಲಾಖೆಯಿಂದ ಉಡುತೊರೆಹಳ್ಳ ಜಲಾಶಯದ ಹೂಳೆತ್ತುವ ಕೆಲಸ ಮಾಡ್ತೀವಿ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ. ಮಲೆಮಹದೇಶ್ವರ ವನ್ಯಧಾಮದ ಡಿಸಿಎಫ್ ಭಾಸ್ಕರ್ ತಿಳಿಸಿದ್ದಾರೆ. ಒಟ್ನಲ್ಲಿ ಉಡುತೊರೆಹಳ್ಳ ಜಲಾಶಯ ಒಂದು ಬಾರಿಯೂ ಕೂಡ ಬರಿದಾಗಿರಲಿಲ್ಲ. ಮಾರ್ಟಳ್ಳಿ ಭಾಗದ ಜನರ ಒತ್ತಾಯಕ್ಕೆ ಮಣಿದು ಜಲಾಶಯದಿಂದ ನೀರು ಹರಿಸಿದ್ದರು. ಬಿಡುಗಡೆ ಮಾಡಿದ ನೀರು ಆ ಭಾಗದ ರೈತರಿಗೂ ಇಲ್ಲ ಈ ಭಾಗದ ರೈತರಿಗೂ ಇಲ್ಲದೇ ಬೆಳೆಗಳು ಒಣಗ್ತಿವೆ, ಇತ್ತ ವನ್ಯಜೀವಿಗಳಿಗೂ ಕೂಡ ನೀರಿಲ್ಲದಂತಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/udu-thorehalla-reservoir-water-crisis-news-at-chamarajanagar-gvd/articleshow-sqwgiqh"/>
        </item>
        <item>
            <title><![CDATA[ಬೆಂಗಳೂರಿನ ಹತ್ತಿರವೇ ಇದೆ ಭಾರತದ 'Flower Pot of India', 202 ಕಿಮೀ ಪ್ರಯಾಣ ಮಾಡಿದರೆ ಸಾಕು!]]></title>
            <link>https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo</link>
            <guid isPermaLink="true">https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo</guid>
            <pubDate>Sun, 12 Jul 2026 12:42:12 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 202 ಕಿಮೀ ದೂರದಲ್ಲಿರುವ ಈ ಪೇಟೆ, ಸೂರ್ಯಕಾಂತಿ ಮತ್ತು ಚೆಂಡು ಹೂಗಳ ಅದ್ಭುತ ಹೊಲಗಳಿಂದ 'ಭಾರತದ ಹೂವಿನ ಕುಂಡ' ಎಂದು ಪ್ರಸಿದ್ಧಿ ಪಡೆದಿರುವ ಪ್ರಕೃತಿ ಸೊಬಗಿನ ಪ್ರವಾಸಿ ತಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxaj1w8razsdh4tnqtxnxyva,imgname-flower-pot-of-india-1783839650072.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕೇವಲ 202 ಕಿಮೀ ದೂರದಲ್ಲಿರುವ ಈ ಪೇಟೆ, ಸೂರ್ಯಕಾಂತಿ ಮತ್ತು ಚೆಂಡು ಹೂಗಳ ಅದ್ಭುತ ಹೊಲಗಳಿಂದ 'ಭಾರತದ ಹೂವಿನ ಕುಂಡ' ಎಂದು ಪ್ರಸಿದ್ಧಿ ಪಡೆದಿರುವ ಪ್ರಕೃತಿ ಸೊಬಗಿನ ಪ್ರವಾಸಿ ತಾಣವಾಗಿದೆ.&lt;/p&gt;&lt;img&gt;&lt;p&gt;ಚಿನ್ನದ ಬಣ್ಣದ ಸೂರ್ಯಕಾಂತಿ ಹೂಗಳು, ಕಂಗೊಳಿಸುವ ಚೆಂಡು ಹೂಗಳ ಹೊಲಗಳು, ಪರಿಮಳ ಬೀರುವ ಗುಲಾಬಿ ತೋಟಗಳು... ಇಂತಹ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬೇಕಾದರೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಭೇಟಿ ನೀಡಲೇಬೇಕು. ಇದೇ ಕಾರಣಕ್ಕೆ ಈ ಪಟ್ಟಣವನ್ನು &lsquo;ಭಾರತದ ಹೂವಿನ ಕುಂಡ&rsquo;(Flower Pot of India) ಎಂದು ಕರೆಯಲಾಗುತ್ತದೆ.&lt;/p&gt;&lt;p&gt;ಮೈಸೂರು&ndash;ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡ್ಲುಪೇಟೆ, ಊಟಿ, ವಯನಾಡು ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳುವ ಪ್ರವಾಸಿಗರ ಪ್ರಮುಖ ತಂಗುದಾಣವಾಗಿದೆ. ಆದರೆ ಹಲವರು ಈ ಪಟ್ಟಣವನ್ನು ದಾಟಿ ಹೋಗುತ್ತಾರೆ. ಇಲ್ಲಿನ ಹೂವಿನ ತೋಟಗಳ ಸೌಂದರ್ಯವನ್ನು ನೋಡಿದವರು ಮಾತ್ರ ಇದು ಕರ್ನಾಟಕದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದೆಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆಯ ಪ್ರಮುಖ ಆಕರ್ಷಣೆ ಎಂದರೆ ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿರುವ **ಸೂರ್ಯಕಾಂತಿ, ಚೆಂಡು ಹೂ, ಗುಲಾಬಿ ಹಾಗೂ ವಿವಿಧ ಕಾಲೋಚಿತ ಹೂಗಳ ತೋಟಗಳು**. ವಿಶೇಷವಾಗಿ **ಜೂನ್&zwnj;ನಿಂದ ಆಗಸ್ಟ್&zwnj;ವರೆಗೆ** ಹೂಗಳು ಸಂಪೂರ್ಣವಾಗಿ ಅರಳುವ ಸಮಯದಲ್ಲಿ ಇಡೀ ಗ್ರಾಮಾಂತರ ಪ್ರದೇಶವೇ ಬಣ್ಣಗಳ ಹಾಸಿನಂತೆ ಕಂಗೊಳಿಸುತ್ತದೆ. ಈ ಸಮಯದಲ್ಲಿ ಛಾಯಾಗ್ರಾಹಕರು, ಪ್ರಕೃತಿ ಪ್ರಿಯರು ಹಾಗೂ ರಸ್ತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭೇಟಿ ನೀಡುತ್ತಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆಯ ಹೂವಿನ ತೋಟಗಳು ಕರ್ನಾಟಕದ ಅತ್ಯಂತ **ಇನ್&zwnj;ಸ್ಟಾಗ್ರಾಂ-ಯೋಗ್ಯ ಸ್ಥಳಗಳಲ್ಲಿ** ಒಂದೆಂದು ಗುರುತಿಸಿಕೊಂಡಿವೆ. ಅನೇಕ ರೈತರು ಸಣ್ಣ ಪ್ರವೇಶ ಶುಲ್ಕ ಪಡೆದು ತಮ್ಮ ತೋಟಗಳಿಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಾರೆ. ಹೂಗಳ ಮಧ್ಯೆ ನಡೆಯುತ್ತಾ ಅದ್ಭುತ ಫೋಟೋಗಳನ್ನು ಸೆರೆಹಿಡಿಯಲು ಇದು ಸೂಕ್ತ ತಾಣವಾಗಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಛಾಯಾಗ್ರಹಣಕ್ಕೆ ಅತ್ಯುತ್ತಮ ಬೆಳಕು ದೊರೆಯುತ್ತದೆ.&lt;/p&gt;&lt;p&gt;ಮೈಸೂರಿನಿಂದ ಸುಮಾರು 0 ಕಿ.ಮೀ. &amp;nbsp;ಹಾಗೂ ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಗುಂಡ್ಲುಪೇಟೆ, ಕರ್ನಾಟಕವನ್ನು ಊಟಿ ಮತ್ತು ವಯನಾಡಿಗೆ ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿದೆ. ಹೀಗಾಗಿ ವೀಕೆಂಡ್ ಟ್ರಿಪ್ ಅಥವಾ ಲಾಂಗ್ ಡ್ರೈವ್ ಯೋಜಿಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.&lt;/p&gt;&lt;img&gt;&lt;p&gt;ಹೂವಿನ ಸೌಂದರ್ಯದ ಜೊತೆಗೆ ಇಲ್ಲಿಂದ ಕೆಲವೇ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೂಡ ಇದೆ. ಹೀಗಾಗಿ ಒಂದೇ ಪ್ರವಾಸದಲ್ಲಿ ಹೂಗಳ ಲೋಕವನ್ನೂ, ಕಾಡಿನ ವನ್ಯಜೀವಿಗಳನ್ನೂ ಸವಿಯುವ ಅವಕಾಶ ಸಿಗುತ್ತದೆ. ಸೆಪ್ಟೆಂಬರ್&zwnj;ನಿಂದ ಮಾರ್ಚ್&zwnj;ವರೆಗಿನ ಅವಧಿ ಬಂಡೀಪುರ ಸಫಾರಿಗೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ನಗರದ ಗದ್ದಲದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲವು ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಗುಂಡ್ಲುಪೇಟೆ ಅತ್ಯುತ್ತಮ ಆಯ್ಕೆಯಾಗಿದೆ. ಬಣ್ಣಬಣ್ಣದ ಹೂಗಳ ಹೊಲಗಳು, ಆಹ್ಲಾದಕರ ವಾತಾವರಣ, ಸುಂದರ ರಸ್ತೆ ಪ್ರಯಾಣ ಹಾಗೂ ಹತ್ತಿರದಲ್ಲೇ ಇರುವ ಕಾಡಿನ ಸೊಬಗು ಈ ಪಟ್ಟಣವನ್ನು ಕರ್ನಾಟಕದ ಅತ್ಯಂತ ಕಡಿಮೆ ಪರಿಚಿತವಾಗಿದ್ದರೂ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿಸಿದೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆ, ಭಾರತದ ಹೂವಿನ ಕುಂಡ, Flower Pot of India, ಚಾಮರಾಜನಗರ, ಸೂರ್ಯಕಾಂತಿ ಹೂ ತೋಟ, ಚೆಂಡು ಹೂ ಬೆಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಊಟಿ ರಸ್ತೆ ಪ್ರವಾಸ, ವಯನಾಡ್ ಟ್ರಿಪ್, ಕರ್ನಾಟಕ ಪ್ರವಾಸಿ ತಾಣಗಳು, Instagram worthy places Karnataka, Weekend Trip Karnataka&lt;/p&gt;]]></content:encoded>
            <category>chamarajnagar</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo"/>
        </item>
        <item>
            <title><![CDATA[ಬಂಡೀಪುರ ಸಫಾರಿ ದರ ಬಹುತೇಕ ಡಬಲ್! ಸೆಪ್ಟೆಂಬರ್ 1ರಿಂದ ಜಾರಿಗೆ: ಕ್ಯಾಮೆರಾಗೂ ಭಾರೀ ಶುಲ್ಕ, ಇಲ್ಲಿದೆ ಹೊಸ ದರಪಟ್ಟಿ!]]></title>
            <link>https://kannada.asianetnews.com/state/karnataka-tiger-reserve-forest-bandipur-jungle-safari-price-hike-september-1-revised-rates-list/articleshow-xihksxu</link>
            <guid isPermaLink="true">https://kannada.asianetnews.com/state/karnataka-tiger-reserve-forest-bandipur-jungle-safari-price-hike-september-1-revised-rates-list/articleshow-xihksxu</guid>
            <pubDate>Mon, 27 Jul 2026 12:25:08 +0530</pubDate>
            <description><![CDATA[&lt;p&gt;ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ಇಲಾಖೆಯು ಸಫಾರಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವ ಈ ಪರಿಷ್ಕೃತ ದರಗಳ ಪ್ರಕಾರ, ಬಸ್ ಮತ್ತು ಜೀಪ್ ಸಫಾರಿ ಶುಲ್ಕಗಳು ಬಹುತೇಕ ದುಪ್ಪಟ್ಟಾಗಲಿವೆ. &amp;nbsp;ಸಂಪೂರ್ಣ ದರಪಟ್ಟಿಯ ವಿವರ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyh5p2e2hgveyqt3aat230rs,imgname-bandipur-national-park-jungle-safari-rates-hike-1785135303106.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜು.27): ವಿ&lt;/strong&gt;ಶ್ವಪ್ರಸಿದ್ಧ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ (Bandipur National Park) ತೆರಳುವ ಪ್ರವಾಸಿಗರಿಗೆ (Tourists) ಹಾಗೂ ವನ್ಯಜೀವಿ ಪ್ರಿಯರಿಗೆ ಅರಣ್ಯ ಇಲಾಖೆ (Forest Department) ದೊಡ್ಡ ಶಾಕ್ ನೀಡಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬರುವಂತೆ ಬಂಡೀಪುರ ಜಂಗಲ್ ಸಫಾರಿ (Bandipura Jungle Safari) ದರಗಳನ್ನು ಬಹುತೇಕ ದುಪ್ಪಟ್ಟು (Double Price Hike) ಮಾಡಲಾಗಿದೆ.&lt;/p&gt;&lt;p&gt;ಬಸ್ ಸಫಾರಿ, ಜೀಪ್ ಸಫಾರಿ, ಕ್ಯಾಮೆರಾ ಬಳಕೆ ಶುಲ್ಕ ಹಾಗೂ ಖಾಸಗಿ ವಾಹನಗಳ ಪ್ರವೇಶ ಶುಲ್ಕದಲ್ಲೂ ಭಾರೀ ಏರಿಕೆ ಮಾಡಲಾಗಿದ್ದು, ಅರಣ್ಯ ಇಲಾಖೆಯು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ನೂತನ ಪರಿಷ್ಕೃತ ದರಗಳಲ್ಲಿ ನೇಚರ್ ಗೈಡ್ (Nature Guide) ಶುಲ್ಕವೂ ಒಳಗೊಂಡಿರಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಬಸ್ ಮತ್ತು ಜೀಪ್ ಸಫಾರಿ ದರ ಏರಿಕೆ:&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯ ಬಸ್ ಸಫಾರಿಗೆ (Bus Safari) ಪ್ರಸ್ತುತ ಇದ್ದ ₹650 ವಯಸ್ಕರ ಟಿಕೆಟ್ ದರವನ್ನು ಸೆಪ್ಟೆಂಬರ್ 1ರಿಂದ ₹1,000 ಕ್ಕೆ ಏರಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಇದ್ದ ₹350 ದರವನ್ನು ₹500 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಜೀಪ್ ಸಫಾರಿ (Jeep Safari) ಪ್ರಿಯರಿಗೆ ಭಾರೀ ಜೇಬು ಖಾಲಿಯಾಗಲಿದ್ದು, ವಯಸ್ಕರ ದರವನ್ನು ₹750 ರಿಂದ ನೇರವಾಗಿ ₹1,500 ಕ್ಕೆ (ಶೇ. 100 ರಷ್ಟು ಏರಿಕೆ) ಹೆಚ್ಚಿಸಲಾಗಿದೆ. ಮಕ್ಕಳಿಗೆ ಜೀಪ್ ಸಫಾರಿಗೆ ₹750 ದರ ನಿಗದಿಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಬಂಡೀಪುರ ಸಫಾರಿ ಪರಿಷ್ಕೃತ ದರಗಳ ಪಟ್ಟಿ:&lt;/strong&gt;&lt;/h2&gt;&lt;p&gt;ಸಫಾರಿ / ಸೇವೆಯ ವಿವರ ಹಳೆಯ ದರ ಪರಿಷ್ಕೃತ ಹೊಸ ದರ&amp;nbsp;&lt;/p&gt;&lt;ul&gt; &lt;li&gt;ಬಸ್ ಸಫಾರಿ - ವಯಸ್ಕರು (Adults) ₹ 650 ₹ 1,000&lt;/li&gt; &lt;li&gt;ಬಸ್ ಸಫಾರಿ - ಮಕ್ಕಳು (&amp;lt;12 ವರ್ಷ) ₹ 350 ₹ 500&lt;/li&gt; &lt;li&gt;ಜೀಪ್ ಸಫಾರಿ - ವಯಸ್ಕರು (Adults) ₹ 750 ₹ 1,500&lt;/li&gt; &lt;li&gt;ಜೀಪ್ ಸಫಾರಿ - ಮಕ್ಕಳು (Children) - ₹ 750&lt;/li&gt; &lt;li&gt;ಖಾಸಗಿ ಜೀಪ್ ಪ್ರವೇಶ ಶುಲ್ಕ - ₹ 2,500&lt;/li&gt; &lt;li&gt;ಲಘು ವಾಣಿಜ್ಯ ವಾಹನ (LCV Entry) - ₹ 3,500&lt;/li&gt; &lt;li&gt;ಬೋಟ್ ಪ್ರವೇಶ ಶುಲ್ಕ (Boat Entry) - ₹ 3,500&lt;/li&gt; &lt;li&gt;ಸ್ವಂತ ವಾಹನ ಪ್ರವೇಶ - ವಯಸ್ಕರು - ₹ 600&lt;/li&gt; &lt;li&gt;ಸ್ವಂತ ವಾಹನ ಪ್ರವೇಶ - ಮಕ್ಕಳು - ₹ 300&lt;/li&gt;&lt;/ul&gt;&lt;h2&gt;&lt;strong&gt;ಡಿಎಸ್&zwnj;ಎಲ್&zwnj;ಆರ್&zwnj; ಕ್ಯಾಮೆರಾಗಳಿಗೆ (DSLR Camera) ಹೊಸ ನಿಯಮ:&lt;/strong&gt;&lt;/h2&gt;&lt;p&gt;ವನ್ಯಜೀವಿ ಛಾಯಾಗ್ರಾಹಕರಿಗೆ (Wildlife Photographers) ಕ್ಯಾಮೆರಾ ಬಳಕೆಗೆ ಹೊಸ ಶುಲ್ಕ ನಿಯಮ ತರಲಾಗಿದೆ. 200 ಮಿ.ಮೀ (200mm Lens) ವರೆಗಿನ ಲೆನ್ಸ್ ಹೊಂದಿರುವ ಕ್ಯಾಮೆರಾಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಆದರೆ, 200 ಮಿ.ಮೀ ಗಿಂತ ಹೆಚ್ಚಿನ ಝೂಮ್ ಲೆನ್ಸ್ (Zoom Lens) ಹೊಂದಿರುವ ಕ್ಯಾಮೆರಾಗಳಿಗೆ ₹1,500 ಜೊತೆಗೆ ಶೇ.18 ಜಿಎಸ್&zwnj;ಟಿ (18% GST) ಪಾವತಿಸುವುದು ಕಡ್ಡಾಯವಾಗಿದೆ.&lt;/p&gt;&lt;p&gt;ಅನುಮತಿ ಪಡೆದ ನಿರ್ದಿಷ್ಟ ಪ್ರದೇಶಗಳಿಗೆ ಸ್ವಂತ ಜೀಪ್ (Private Jeep), ಲಘು ವಾಣಿಜ್ಯ ವಾಹನ (LCV) ಅಥವಾ ಬೋಟ್&zwnj;ಗಳ (Boat) ಮೂಲಕ ತೆರಳುವವರಿಗೂ ಹೊಸ ಪ್ರವೇಶ ದರ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ ಬಂಡೀಪುರ ಪ್ರವಾಸ ಕೈಗೊಳ್ಳುವವರು ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ಯೋಜಿಸುವುದು ಒಳಿತು.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-tiger-reserve-forest-bandipur-jungle-safari-price-hike-september-1-revised-rates-list/articleshow-xihksxu"/>
        </item>
        <item>
            <title><![CDATA[ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ]]></title>
            <link>https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</link>
            <guid isPermaLink="true">https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</guid>
            <pubDate>Sat, 04 Jul 2026 22:53:01 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ, ಮನೆಯ ಬಾಗಿಲ ಬಳಿ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ ಮತ್ತು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwq2bsjmh1frb1zbn2421651,imgname-cheetah-attacks-1783185663572.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಮನೆಯ ಬಾಗಿಲಲ್ಲೇ ಕುಳಿತಿದ್ದ ಅಜ್ಜಿ ಮತ್ತು ಐದು ವರ್ಷದ ಪುಟ್ಟ ಮಗುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದ ನಿವಾಸಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಚಿರತೆ ದಾಳಿಯಿಂದ ಗಾಯಗೊಂಡವರು. ಶಿವಮ್ಮ ಅವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಶಿವಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಅಜ್ಜಿಯ ಚೀರಾಟ ಕೇಳಿ ಮಗು ಹರ್ಷಿತಾ ಏನಾಯಿತೆಂದು ನೋಡಲು ಓಡಿ ಬಂದಿದ್ದಾಳೆ.&lt;/p&gt;&lt;h3&gt;&lt;strong&gt;ಅಡಗಿ ಕುಳಿತು ಮಗುವಿನ ಮೇಲೆ ದಾಳಿ&lt;/strong&gt;&lt;/h3&gt;&lt;p&gt;ಶಿವಮ್ಮ ಕಿರುಚಿಕೊಂಡಾಗ ಚಿರತೆಯು ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಅಜ್ಜಿಯನ್ನು ನೋಡಲು ಬಂದ ಪುಟ್ಟ ಮಗು ಹರ್ಷಿತಾಳನ್ನು ಕಂಡೊಡನೆ ಚಿರತೆ ಮಗುವಿನ ಮೇಲೂ ಎರಗಿದೆ. ಶಿವಮ್ಮ ಮತ್ತು ಮಗುವಿನ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಲಾಠಿ, ಕಲ್ಲುಗಳೊಂದಿಗೆ ಓಡಿ ಬಂದಿದ್ದಾರೆ. ಜನರನ್ನು ಕಂಡ ಚಿರತೆ ಅಲ್ಲಿಂದ ಕಾಲ್ಕಿತ್ತು ಕಾಡಿನತ್ತ ಪಲಾಯನ ಮಾಡಿದೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ&lt;/strong&gt;&lt;/h3&gt;&lt;p&gt;ಗಾಯಗೊಂಡ ಅಜ್ಜಿ ಮತ್ತು ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲಲ್ಲೇ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಟ್ಟೆಗೆರೆ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಭಾಗದಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ದಾಳಿ ಮಾಡಿದ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6"/>
        </item>
    </channel>
</rss>
