<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 15 Sep 2026 20:26:54 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಹನೂರು ಹಿಂಸಾಚಾರ ಬಗ್ಗೆ ನಕ್ಸಲ್‌ ನಿಗ್ರಹ ದಳ ತನಿಖೆ?ತನಿಖಾ ಅಖಾಡಕ್ಕೆ NIA ಪ್ರವೇಶ?]]></title>
            <link>https://kannada.asianetnews.com/state/chamarajanagar-shootout-case-that-took-place-at-the-cauvery-wildlife-sanctuary-in-hanur-has-taken-a-new-turn-mrq/articleshow-1dzy7ye</link>
            <guid isPermaLink="true">https://kannada.asianetnews.com/state/chamarajanagar-shootout-case-that-took-place-at-the-cauvery-wildlife-sanctuary-in-hanur-has-taken-a-new-turn-mrq/articleshow-1dzy7ye</guid>
            <pubDate>Mon, 31 Aug 2026 05:49:48 +0530</pubDate>
            <description><![CDATA[ಹನೂರಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್&zwnj; ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಗುಂಡಿನ ದಾಳಿಯ ನಂತರ ಜಿಲೆಟಿನ್&zwnj; ಬಳಸಿ ಅರಣ್ಯ ಇಲಾಖೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಕೃತ್ಯದ ಹಿಂದೆ ನಕ್ಸಲ್ ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಸಿಐಡಿ ತನಿಖೆಯ ಬಳಿಕ ಪ್ರಕರಣವನ್ನು ನಕ್ಸಲ್&zwnj; ನಿಗ್ರಹ ಪಡೆ (ಎಎನ್&zwnj;ಎಫ್&zwnj;) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್&zwnj;ಐಎ) ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p0vqrs0b99pmep5wt72b1z,imgname-----------------------2026-08-23t060801.824-1787445501721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜಿ. ದೇವರಾಜು ನಾಯ್ಡು&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ:&lt;/strong&gt; ಆ.15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್&zwnj; ಪ್ರಕರಣ ಹೊಸ ಸ್ವರೂಪ ಪಡೆದಿದೆ. ಗುಂಡಿನ ದಾಳಿ ತರುವಾಯ ಕಿಡಿಗೇಡಿಗಳು ಜಿಲೆಟಿನ್&zwnj; ಕಡ್ಡಿ, ಡೈನಮೈಟ್&zwnj; ಬಳಸಿ ಅರಣ್ಯ ಇಲಾಖೆ ಕಚೇರಿಗಳು, ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಘಟನೆಯನ್ನು ನಕ್ಸಲ್&zwnj; ನಿಗ್ರಹ ಪಡೆ (ಎಎನ್&zwnj;ಎಫ್&zwnj;) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್&zwnj;ಐಎ) ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಜಿಲೆಟಿನ್&zwnj; ಕಡ್ಡಿ ಹೇಗೆ ಬಂತು, ಯಾರು ಈ ಕೃತ್ಯದ ಹಿಂದಿದ್ದಾರೆಂಬ ಮಾಹಿತಿ ಕುರಿತು ಕೇಂದ್ರ ತನಿಖಾ ಪಡೆ ಈಗಾಗಲೇ ಹಲವು ಮಾಹಿತಿಯನ್ನು ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಆ.15ರ ಗುಂಡಿನ ದಾಳಿ ಬಳಿಕ ಹನೂರು ತಾಲೂಕಿನ ಶಾಗ್ಯ ಅರಣ್ಯ ವ್ಯಾಪ್ತಿಯ ಹಲವು ಶಿಬಿರಗಳ ಮೇಲೆ ಕಿಡಿಗೇಡಿಗಳು ಜಿಲೆಟಿನ್&zwnj; ಕಡ್ಡಿ, ಡೈನಮೈಟ್&zwnj; ಇಟ್ಟು ಸ್ಫೋಟಗೊಳಿಸಿದ್ದರು. ಜೊತೆಗೆ ವನ್ಯಮೃಗಗಳು ಕಾಡು ತೊರೆದು, ನಾಡಿನತ್ತ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್&zwnj; ಬೇಲಿ, ಕಂಬಗಳು, ಗೇಟ್&zwnj;ಗಳನ್ನು ಹಾಳುಗೆಡವಿದ್ದರು. ಈ ಮೂಲಕ ಅನಿವಾರ್ಯವಾಗಿ ಗ್ರಾಮಗಳಿಗೆ ಬರುವ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಶಂಕೆಯನ್ನು ಅರಣ್ಯ ಇಲಾಖೆ ಮೂಲಗಳು ಕಳವಳ ವ್ಯಕ್ತಪಡಿಸಿತ್ತು.&lt;/p&gt;&lt;h2&gt;&lt;strong&gt;ಎಎನ್&zwnj;ಎಫ್&zwnj;ಗೆ ಮರುಜೀವ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ನಕ್ಸಲ್&zwnj; ಚಟುವಟಿಕೆಗಳು ನಿಷ್ಕ್ರಿಯಗೊಂಡ ಬಳಿಕ ರಾಜ್ಯ ಸರ್ಕಾರವು ನಕ್ಸಲ್&zwnj; ನಿಗ್ರಹ ಪಡೆಯನ್ನು ನಿಷ್ಕ್ರಿಯಗೊಳಿಸಿತ್ತು. ಈಗ ಹನೂರು ಘಟನೆ ಹಿಂದೆ ನಕ್ಸಲ್&zwnj; ಪರ ಒಲವುಳ್ಳ ಹಲವು ಸಂಘಟನೆಗಳ ಪಾತ್ರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಎನ್&zwnj;ಎಫ್&zwnj; ಪಡೆಯನ್ನು ಮತ್ತೆ ಸಕ್ರಿಯಗೊಳಿಸಿ ತನಿಖೆ ಹೊಣೆ ಹೊರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.&lt;/p&gt;&lt;p&gt;ಸ್ಫೋಟಕ್ಕೆ ಜಿಲೆಟಿನ್&zwnj; ಕಡ್ಡಿಗಳು ಹೇಗೆ ಸಿಕ್ಕವು, ಕ್ಯಾಂಪ್&zwnj;ಗೆ ತಂದು ಧ್ವಂಸಗೊಳಿಸಿದ್ದು ಯಾರು ಎಂಬುದರ ಕುರಿತು ಇಂಚಿಂಚೂ ಮಾಹಿತಿ ಕಲೆ ಹಾಕಲು ಸಿಐಡಿ ಬಳಿಕ ಎಎನ್&zwnj;ಎಫ್&zwnj; ಕಾರ್ಯಪ್ರವೃತ್ತವಾಗಲಿದೆ. ಅರಣ್ಯ ಪ್ರದೇಶವು ಕೇಂದ್ರದ ಅಧೀನಕ್ಕೂ ಒಳಪಟ್ಟಿರುವ ಕಾರಣ ಸಿಐಡಿ ತನಿಖೆ ಬಳಿಕ ಎನ್&zwnj;ಐಎ ತನ್ನ ತೆಕ್ಕೆಗೆ ತೆಗೆದುಕೊಂಡು ರಾಷ್ಟ್ರ ವಿರೋಧಿ ಕೃತ್ಯಗಳು ಇದರಲ್ಲಿ ಅಡಗಿವೆಯೇ ಎಂಬುದನ್ನು ತನಿಖೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ತನಿಖೆ ಪ್ರಗತಿ&lt;/strong&gt;&lt;/h3&gt;&lt;p&gt;ಈ ಮಧ್ಯೆ ತನಿಖೆಯ ಹೊಣೆ ಹೊತ್ತಿರುವ ಸಿಐಡಿ, ವಿವಿಧ ಆಯಾಮಗಳಲ್ಲಿ ಪ್ರಕರಣದ ಮಾಹಿತಿ ಅರಸುತ್ತಿದೆ. ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಸಿಐಡಿ ಅಧಿಕಾರಿಗಳು ಅಖಾಡದಲ್ಲಿದ್ದಾರೆ. ಮೃತರ ಮನೆಗಳಿಗೆ ತೆರಳಿ ವಿಚಾರಣೆ, ಆ.15ರಂದು ಗುಂಡಿನ ಚಕಮಕಿಯಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಮಹಿಮಾದಾಸ್&zwnj;ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಾರದಲ್ಲಿ ಸಿಐಡಿ ತನಿಖೆ ಮುಕ್ತಾಯಗೊಳ್ಳಬಹುದು ಎನ್ನಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/chamarajanagar-shootout-case-that-took-place-at-the-cauvery-wildlife-sanctuary-in-hanur-has-taken-a-new-turn-mrq/articleshow-1dzy7ye"/>
        </item>
        <item>
            <title><![CDATA[ಭೀಕರ ಬರಗಾಲದ ನಡುವೆಯೂ ತುಂಬಿ ತುಳುಕುತ್ತಿರುವ ರಾಮನಗುಡ್ಡ ಜಲಾಶಯ; 20 ಕೋಟಿ ವೆಚ್ಚದ ಯೋಜನೆಯನ್ನು 2.5 ಕೋಟಿಯಲ್ಲಿ ಮುಗಿಸಿದ ಶಾಸಕ!]]></title>
            <link>https://kannada.asianetnews.com/karnataka-districts/chamarajanagar-ramanagudda-reservoir-overflowing-despite-severe-drought-mla-mr-manjunath-project-sns/articleshow-1we5a9u</link>
            <guid isPermaLink="true">https://kannada.asianetnews.com/karnataka-districts/chamarajanagar-ramanagudda-reservoir-overflowing-despite-severe-drought-mla-mr-manjunath-project-sns/articleshow-1we5a9u</guid>
            <pubDate>Sun, 06 Sep 2026 10:47:23 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯಲ್ಲಿ ತೀವ್ರ ಬರಗಾಲದ ನಡುವೆಯೂ, ಶಾಸಕ ಎಂ.ಆರ್ ಮಂಜುನಾಥ್ ಅವರ ರಾಜಕೀಯ ಇಚ್ಛಾಶಕ್ತಿಯಿಂದ ರಾಮನಗುಡ್ಡ ಜಲಾಶಯಕ್ಕೆ ಕಾವೇರಿ ನೀರು ಹರಿಸಲಾಗಿದೆ. ಈ ಯೋಜನೆಯಿಂದಾಗಿ ಜಲಾಶಯ ತುಂಬಿ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿಗೆ ಅನುಕೂಲವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1tj1pdbe77s9wfzqnhcq4kc,imgname-chamarajanagara-ramanagudda-reservoir---4--1788671482283.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ರಾಜಕೀಯ ಇಚ್ಛಾಶಕ್ತಿ ಇದ್ದರೆ ಎಂತೆಂತಹ ಜನೋಪಯೋಗಿ ಕೆಲಸ ಮಾಡಬಹುದು ಎಂಬುದಕ್ಕೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನಲ್ಲಿ ತುಂಬಿ ತುಳುಕುತ್ತಿರುವ ರಾಮನಗುಡ್ಡ ಜಲಾಶಯ ಸಾಕ್ಷಿಯಾಗಿದೆ. ಭೀಕರ ಬರಗಾಲದ ನಡುವೆಯೂ ಈ ಜಲಾಶಯ ತುಂಬಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಗಳು ನಳನಳಿಸುತ್ತಿವೆ.&lt;/p&gt;&lt;h2&gt;ರಾಮನಗುಡ್ಡ ಜಲಾಶಯ: ಬರಗಾಲದಲ್ಲಿ ಚಾಮರಾಜನಗರದ ಜಲಸಂಜೀವಿನಿ&lt;/h2&gt;&lt;p&gt;ಈಗ ಎಲ್ಲೆಡೆ ಬರ, ಈ ನಡುವೆಯು ಕಾವೇರಿ ನದಿಯಲ್ಲಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಈ ಬರಗಾಲದಲ್ಲಿ ವ್ಯವಸಾಯ ಮಾಡುವುದಿರಲಿ ಕುಡಿಯುವ ನೀರಿಗು ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ದುಸ್ಥಿತಿಯಲ್ಲು ಆ ಜಲಾಶಯ ತುಂಬಿ ತುಳುಕುತ್ತಿದೆ. ಜಲಾಶಯ ಹಾಗು ಜಲಾಶಯಕ್ಕೆ ನೀರು ಹರಿದು ಬರುವ ಕಾಲವೆಯ ಎರಡೂ ಬದಿಗಳಲ್ಲಿ ಒಂದು ಕಿಲೋಮೀಟರ್ ಉದ್ದಕ್ಕೂ ಅಂತರ್ಜಲ ಮಟ್ಟ ವೃದ್ಧಿಸಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;40 ವರ್ಷದ ಹಿಂದೆ ನಿರ್ಮಾಣವಾಗಿದ್ದ ಜಲಾಶಯ&lt;/h2&gt;&lt;p&gt;ಹೌದು, ನಾವೀಗ ಹೇಳಲು ಹೊರಟಿರೋದು ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ರಾಮನಗುಡ್ಡ ಜಲಾಶಯದ ಬಗ್ಗೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ತಮಿಳುನಾಡಿಗೆ ಹನೂರು ತಾಲೂಕಿನ ಮೂಲಕವೇ ಕಾವೇರಿ ಹರಿದು ಹೋದರು, ಇಲ್ಲಿನ ಜನರಿಗೆ ಮಾತ್ರ ಕಾವೇರಿ ನೀರಿನ ಪ್ರಯೋಜನ ಸಿಗದಂತಾಗಿತ್ತು. ಹನೂರು ಸಮೀಪ ನಲವತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಾಮನ ಗುಡ್ಡ ಜಲಾಶಯ ಮಳೆ ಇಲ್ಲದ ಕಾರಣ ನೀರಿಲ್ಲದೆ ಬಣಗುಡುತ್ತಿತ್ತು.&lt;/p&gt;&lt;h2&gt;ಯೋಜನೆಗೆ ಹೊಸ ರೂಪ ಕೊಟ್ಟ ಶಾಸಕ&lt;/h2&gt;&lt;p&gt;ಇಲ್ಲಿಗೆ ಕಾವೇರಿ ನದಿಯಿಂದ 2016ರಲ್ಲೇ 20 ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆ ಸಿದ್ದಪಡಿಸಲಾಗಿತ್ತು. ಆದರೆ ಆರ್ಥಿಕ ಹೊರೆಯ ಕಾರಣ ಈ ಯೋಜನೆ ನೆನಗುದಿಗೆ ಬಿದ್ದಿತ್ತು. ಆದರೆ ಸ್ವತಃ ಸಿವಿಲ್ ಇಂಜಿನಿಯರ್ ಪದವೀಧರರಾಗಿರುವ ಹನೂರು ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ಈ ಯೋಜನೆಗೆ ಬೇರಯದೆ ಸ್ವರೂಪ ನೀಡುವ ಮೂಲಕ ರಾಮನ ಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಕಾರ್ಯ ಮಾಡಿದ್ದಾರೆ. ಕೊಳ್ಳೇಗಾಲ ತಾಲೋಕು ಸರಗೂರು ಬಳಿ ಹರಿಯುವ ಕಾವೇರಿ ನದಿಯಿಂದ ಹನೂರು ತಾಲೋಕಿನ ಬೂದಬಾಳು ಗ್ರಾಮದವರೆಗೆ ಎರಡೂವರೆ ಕೋಟಿ ವೆಚ್ಚದಲ್ಲಿ ಪೈಪ್ಲೈನ್ ಮೂಲಕ ಕಾವೇರಿ ನೀರು ತಂದು ಬಳಿಕ ಬೂದಬಾಳು ಗ್ರಾಮದಿಂದ ನೈಸರ್ಗಿಕವಾಗಿ ಇರುವ ದೊಡ್ಡಹಳ್ಳದ ಮೂಲಕ ನೀರು ಹರಿಸಿ ರಾಮನ ಗುಡ್ಡ ಜಲಾಶಯ ತುಂಬಿಸುವ ಯೋಜನೆ ಸಾಕಾರಗೊಳಿಸುವಲ್ಲಿ ಶಾಸಕ ಮಂಜುನಾಥ್ ಯಶಸ್ವಿಯಾಗಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲವೃದ್ಧಿ&lt;/h2&gt;&lt;p&gt;80 ಎಕರೆ ವಿಸ್ತೀರ್ಣದ ರಾಮನಗುಡ್ಡ ಜಲಾಶಯ ಸುಮಾರು 980 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಬೂದಬಾಳು ಗ್ರಾಮದಿಂದ ರಾಮನಗುಡ್ಡದವರೆಗೆ ಇರುವ ದೊಡ್ಡ ಹಳ್ಳದ ಮಾರ್ಗದಲ್ಲಿ 27 ಚೆಕ್ ಡ್ಯಾಂಗಳಿವೆ. ದೊಡ್ಡ ಹಳ್ಳದ ಮೂಲಕ ಕಾವೇರಿ ನೀರು ಹರಿಯುವುದರಿಂದ ಚೆಕ್ ಡ್ಯಾಂಗಳು ತುಂಬಿ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಹಲವಾರು ಹಳ್ಳಿಗಳಿಗೆ ಕೃಷಿ ಹಾಗು ಜನಜಾನುವಾರುಗಳಿಗೆ ನೀರಿನ ಬವಣೆ ತಪ್ಪಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.&lt;/p&gt;&lt;h2&gt;ಬರಗಾಲದಲ್ಲೂ ಬರಪೂರ ನೀರು!&lt;/h2&gt;&lt;p&gt;ಜಲಾಶಯ ತುಂಬಿ ಕೋಡಿ ಬೀಳುವ ಹಂತದಲ್ಲಿದ್ದು ಕೋಡಿ ಬೀಳುವ ನೀರು ಮಣಗಳ್ಳಿ, ಬಂಡಳ್ಳಿ, ಶ್ಯಾಗ್ಯ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲು ಸಹ ಹತ್ತಾರು ಗ್ರಾಮಗಳ ನೀರಿನ ಬವಣೆ ನೀಗುವ ನಿರೀಕ್ಷೆ ಇದೆ. ಒಟ್ಟಾರೆಇಲ್ಲಿ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿ ಕೆಲಸ ಮಾಡಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ತಮ್ಮ ಇತಿಮಿತಿಯಲ್ಲಿ ಜನರ ಬದುಕು ಹಸನುಗೊಳ್ಳುವ ಕೆಲಸ ಕಾರ್ಯ ಮಾಡಬಹುದು ಎಂಬುದಕ್ಕೆ ಬರಗಾಲದಲ್ಲು ತುಂಬಿ ತುಳುಕುತ್ತಿರುವ ರಾಮನಗುಡ್ಡ ಜಲಾಶಯ ಜ್ವಲಂತ ನಿದರ್ಶನವಾಗಿದೆ. (ವರದಿ: ಪುಟ್ಟರಾಜು ಆರ್&zwnj;ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ)&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>chamarajnagar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagar-ramanagudda-reservoir-overflowing-despite-severe-drought-mla-mr-manjunath-project-sns/articleshow-1we5a9u"/>
        </item>
        <item>
            <title><![CDATA[Hanuru: ಚಾಮರಾಜನಗರ ಎನ್‌ಕೌಂಟರ್‌ ಪ್ರಕರಣಕ್ಕೆ ತಮಿಳುನಾಡು ಸಿಎಂ ವಿಜಯ್‌ ಎಂಟ್ರಿ; ಕೇಸ್‌ಗೆ ಬಿಗ್‌ ಟ್ವಿಸ್ಟ್‌!]]></title>
            <link>https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui</link>
            <guid isPermaLink="true">https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui</guid>
            <pubDate>Sun, 16 Aug 2026 22:22:47 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪ್ರತಿಕ್ರಿಯಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯು ಪ್ರಕರಣಕ್ಕೆ ರಾಜಕೀಯ ಆಯಾಮವನ್ನು ನೀಡಿದ್ದು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಮನ ಸೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3865gnbqvwfp2xze4ncb5zm,imgname-5-1755842790059.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಮೂವರು ವ್ಯಕ್ತಿಗಳ ಸಾವಿನ ಪ್ರಕರಣ ಇದೀಗ ರಾಜ್ಯ ಗಡಿ ದಾಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಆಗಸ್ಟ್&zwnj; 15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್&zwnj; ಕೂಡ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿಷ್ಪಕ್ಷಪಾತ ಮತ್ತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದೂ ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವರದಿಗಳು ಹೇಳೋದೇನು?&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯ ಹನೂರು ಭಾಗದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಅಕ್ರಮ ಬೇಟೆ ನಡೆಸುತ್ತಿದ್ದರೆಂದು ಆರೋಪಿಸಲಾದ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಘಟನೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ಕೂಡ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;ನರವಿಗಾಗಿ ಒತ್ತಾಯ!&lt;/strong&gt;&lt;/h3&gt;&lt;p&gt;ಮೃತರನ್ನು ಆಂಥೋನಿ ಸ್ಯಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ ಮೂವರು ತಮಿಳು ಸಮುದಾಯಕ್ಕೆ ಸೇರಿದವರು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್&zwnj; ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಸಾವನ್ನು ನೋವಿನ ಹಾಗೂ ಹೃದಯವಿದ್ರಾವಕ ಘಟನೆ ಎಂದು ಬಣ್ಣಿಸಿರುವ ಅವರು, ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಮಹತ್ವ ಪಡೆದ ಪ್ರಕರಣ!&lt;/strong&gt;&lt;/h3&gt;&lt;p&gt;ಘಟನೆ ಬಗ್ಗೆ ವಿಜಯ್&zwnj; ಅವರ ಹೇಳಿಕೆ ಹೊರಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ. ಅವರು ಕೇವಲ ಸಂತಾಪ ಸೂಚಿಸುವುದಕ್ಕೆ ಸೀಮಿತವಾಗದೆ, ಘಟನೆಯ ಕುರಿತು ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರಿಂದ ಆಕ್ರೋಶ!&lt;/strong&gt;&lt;/h3&gt;&lt;p&gt;ಇದಕ್ಕೂ ಮುನ್ನ, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ರೀತಿಯ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಮತ್ತು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಪ್ರಕರಣ ದಾಖಲಿಸಿದ ಪೊಲೀಸ್&zwnj;ರು!&lt;/strong&gt;&lt;/h3&gt;&lt;p&gt;ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ಮೃತ ವ್ಯಕ್ತಿಯ ಪತ್ನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. ಇತ್ತ ಅರಣ್ಯ ಇಲಾಖೆ ಪರವಾಗಿ, ಘಟನೆ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಸಂಭವಿಸಿದೆ ಎಂಬ ವಿವರಣೆ ನೀಡಲಾಗಿದೆ. ಆದರೆ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಈ ವಿವರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಎನ್&zwnj;ಕೌಂಟರ್&zwnj; ನಡೆದ ಪರಿಸ್ಥಿತಿ, ಗುಂಡಿನ ದಾಳಿ ಹೇಗೆ ನಡೆಯಿತು, ಅರಣ್ಯ ಸಿಬ್ಬಂದಿಯ ಕ್ರಮ ಕಾನೂನುಬದ್ಧವಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಪ್ರಮುಖವಾಗಿವೆ.&lt;/p&gt;&lt;h3&gt;&lt;strong&gt;ಕಾರ್ಯಾಚರಣೆ ನಿರಂತರ!&lt;/strong&gt;&lt;/h3&gt;&lt;p&gt;ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಪ್ರಮುಖ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಅಕ್ರಮ ಬೇಟೆ ತಡೆಯಲು ಅರಣ್ಯ ಇಲಾಖೆ ಗಸ್ತು ಮತ್ತು ಆಂಟಿ-ಪೋಚಿಂಗ್&zwnj; ಕಾರ್ಯಾಚರಣೆಗಳನ್ನು ನಡೆಸುತ್ತದೆ. ಈ ನಡುವೆ ತಮಿಳುನಾಡು ಮುಖ್ಯಮಂತ್ರಿಯ ಪ್ರವೇಶದಿಂದ ಪ್ರಕರಣಕ್ಕೆ ಹೊಸ ರಾಜಕೀಯ ಮತ್ತು ಆಡಳಿತಾತ್ಮಕ ಆಯಾಮವೂ ಸಿಕ್ಕಿದೆ. ಕರ್ನಾಟಕ&ndash;ತಮಿಳುನಾಡು ಗಡಿ ಪ್ರದೇಶಕ್ಕೆ ಸಂಬಂಧಿಸಿದ ಘಟನೆ ಆಗಿರುವುದರಿಂದ ಎರಡೂ ರಾಜ್ಯಗಳ ಗಮನ ಈಗ ಪ್ರಕರಣದತ್ತ ನೆಟ್ಟಿದೆ. ಒಟ್ಟಿನಲ್ಲಿ, ಮೂವರ ಸಾವಿನ ಕುರಿತು ಸತ್ಯಾಂಶ ಏನು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಅರಣ್ಯ ಇಲಾಖೆಯ ಹೇಳಿಕೆ, ಕುಟುಂಬಸ್ಥರ ಆರೋಪ ಮತ್ತು ಪೊಲೀಸರ ತನಿಖೆಯ ನಡುವೆ ಸತ್ಯ ಹೊರಬರಬೇಕಾಗಿದೆ. **ತಮಿಳುನಾಡು ಸಿಎಂ ವಿಜಯ್&zwnj; ಅವರ ಉನ್ನತ ಮಟ್ಟದ ತನಿಖೆಯ ಬೇಡಿಕೆ ಪ್ರಕರಣಕ್ಕೆ ಯಾವ ತಿರುವು ನೀಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>chamarajnagar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui"/>
        </item>
        <item>
            <title><![CDATA[Chamarajnagar: ಸರ್ಕಾರಿ ಆಸ್ಪತ್ರೆಯ ಕಮೋಡ್‌ನಲ್ಲಿ ತುರುಕಿದ ಸ್ಥಿತಿಯಲ್ಲಿ ಮಗು ಪತ್ತೆ]]></title>
            <link>https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</link>
            <guid isPermaLink="true">https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</guid>
            <pubDate>Thu, 20 Aug 2026 09:51:51 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಕಮೋಡ್&zwnj;ನಲ್ಲಿ ಮೃತ ಶಿಶುವೊಂದು ಪತ್ತೆಯಾಗಿದೆ. ಸ್ವಚ್ಛತಾ ಸಿಬ್ಬಂದಿ ಇದನ್ನು ಗಮನಿಸಿ ವೈದ್ಯರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0epadaqjkmy1fe3deynkwey,imgname-hospital-toilet-1787199567191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮಕ್ಕಳು ಬೇಕೆಂದು ಜನರು ದೇವರ ಮೊರೆ, ವೈದ್ಯರ ಬಳಿ ಅಲೆಯುವುದನ್ನು ನೋಡಿದ್ದೇವೆ. ಆದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವೊಂದು ಶೌಚಾಲಯದ ಕಮೋಡ್&zwnj; ಒಳಗೆ ತುರುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವನ್ನು ತಾಯಿಯೇ ಹಾಕಿದರೋ ಅಥವಾ ಬೇರೆಯಾರಾದರೂ ತುರುಕಿದ್ದಾರೋ ಎಂಬುದು ತಿಳಿಯಬೇಕಿದೆ.&lt;/p&gt;&lt;h2&gt;&lt;strong&gt;ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆ&lt;/strong&gt;&lt;/h2&gt;&lt;p&gt;ಬುಧವಾರ ಬೆಳಗ್ಗೆ ಶೌಚಾಲಯದ ಸ್ವಚ್ಛತೆಗೆ ತೆರಳಿದ್ದ ಸಿಬ್ಬಂದಿಗೆ ಕಮೋಡ್&zwnj; ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಮಗು ಸಿಕ್ಕಿದೆ. ಕೂಡಲೇ ಅದನ್ನು ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್&zwnj; ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ವೈದ್ಯರು, ಕೂಡಲೇ ಗುಂಡ್ಲುಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್ ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?&lt;/strong&gt;&lt;/p&gt;&lt;p&gt;&lt;strong&gt;ಪೊಲೀಸರಿಂದ ತನಿಖೆ ಆರಂಭ&lt;/strong&gt;&lt;/p&gt;&lt;p&gt;ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಮಗುವನ್ನು ಕೊಂದು ಬಿಸಾಡಿದರೋ ಅಥವಾ ತುರುಕಿದ ಬಳಿಕ ಮೃತಪಟ್ಟಿದೆಯೋ ಎಂಬುದು ಬಯಲಿಗೆ ಬರಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Hanur Encounter Case: ಕಳ್ಳಬೇಟೆ ತಡೆ ಶಿಬಿರಕ್ಕೆ ಜಿಲೆಟಿನ್&zwnj; ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g"/>
        </item>
        <item>
            <title><![CDATA[ಗುಂಡ್ಲುಪೇಟೆಯಲ್ಲಿ ದೇಶದ ಮೊದಲ ಎಐ ಮೈಕ್ರೋಡೇಟಾ ಕೇಂದ್ರ: ಹೊಸ ಶಕೆ ಆರಂಭ Chamarajanagar]]></title>
            <link>https://kannada.asianetnews.com/karnataka-districts/chamarajanagar-gundlupet-cinifion-has-set-up-the-india-s-first-taluk-level-ai-microdata-center-mrq/articleshow-583qo85</link>
            <guid isPermaLink="true">https://kannada.asianetnews.com/karnataka-districts/chamarajanagar-gundlupet-cinifion-has-set-up-the-india-s-first-taluk-level-ai-microdata-center-mrq/articleshow-583qo85</guid>
            <pubDate>Thu, 03 Sep 2026 08:57:57 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ, ಸಿನಿಫಿಯಾನ್ ಸಂಸ್ಥೆಯು ದೇಶದ ಮೊದಲ ತಾಲೂಕು ಮಟ್ಟದ ಎಐ ಮೈಕ್ರೋಡೇಟಾ ಕೇಂದ್ರವನ್ನು ಸೆಪ್ಟೆಂಬರ್ 5 ರಂದು ಉದ್ಘಾಟಿಸಲಿದೆ. ಕೇಂದ್ರ ಸರ್ಕಾರದ 'ನಮ್ಮ ಡೇಟಾ, ನಮ್ಮ ದೇಶದಲ್ಲಿ' ಕಾಯ್ದೆಯಡಿ ಸ್ಥಾಪನೆಯಾಗುತ್ತಿರುವ ಈ ಕೇಂದ್ರವು ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯ ಡೇಟಾ ಒದಗಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1jmgz9ykqfgrszv5ym26q97,imgname-chamarajanagara-gundlupet--1788405644605.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ದೇಶದಲ್ಲೇ ಪ್ರಪ್ರಥಮ ಬಾರಿಗೆ ತಾಲೂಕು ಮಟ್ಟದಲ್ಲಿ ಸಿನಿಫಿಯಾನ್ ಸಂಸ್ಥೆಯಿಂದ ಸೆ.5ರಂದು ಜಿಲ್ಲೆಯಲ್ಲಿ ಮೊದಲ ಎಐ ಮೈಕ್ರೋಡೇಟಾ ಕೇಂದ್ರದ ಉದ್ಘಾಟನೆಯು ಗುಂಡ್ಲುಪೇಟೆ ಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿಧಿ ಹೇಳಿದರು.&lt;/p&gt;&lt;p&gt;ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2022-23 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿರುವ (ಡಿಪಿಇಪಿ ಆಕ್ಟ್) ನಮ್ಮ ದೇಶದ ಡೇಟಾ, ನಮ್ಮ ದೇಶದಲ್ಲಿ ಇರಬೇಕು. ಕಾಯ್ದೆಯಡಿ ಎಐ ಮೈಕ್ರೋಡೇಟಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.&lt;/p&gt;&lt;h2&gt;&lt;strong&gt;ಕೃಷಿ, ಕೈಗಾರಿಕೆ ಡೇಟಾ ಸೌಲಭ್ಯ&lt;/strong&gt;&lt;/h2&gt;&lt;p&gt;ಆಧಾರ್, ಗೂಗಲ್ ಬೇರೆದೇಶದಲ್ಲಿ ಸೇವ್&zwnj;ಆಗುತ್ತಿದ್ದವು. ಈಗ ನಮ್ಮಲ್ಲೇ ಸಾಪ್ಟ್ವೇರ್ ಕಂಪನಿ ಆರಂಭಿಸಿರುವುದರಿಂದ ಕೃಷಿ, ಕೈಗಾರಿಕೆ ಸೇರಿದಂತೆ ಇತರೇ ಕಂಪನಿಗಳಿಗೆ ಬೇಕಾದ ಡೇಟಾ ಇಲ್ಲೇ ಸಿಗುತ್ತದೆ, ಜಿಲ್ಲೆಯ ಪ್ರತಿಷ್ಠಿತ ಕಂಪನಿಗಳು ತಮಗೆ ಬೇಕಾದ ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಮೈಸೂರು ರಸ್ತೆಯಲ್ಲಿ ಆರಂಭಿಸಿರುವ ಎಐ ಮೈಕ್ರೋಡೇಟಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 10ಕ್ಕೆ ನಡೆಯಲಿದ್ದು, ಸಿನಿಫಿಯಾನ್ ಸಂಸ್ಥೆ ಸಂಸ್ಥಾಪಕ ಸದಸ್ಯ ಬಾಂಬೆಐಐಟಿ ಪ್ರಾದ್ಯಾಪಕಡಾ.ಮಂಜುನಾಥ್, ಕೃಷ್ಣ ಬಿಲ್ಡ್ಎಸ್ಟೇಟ್&zwnj; ಅಡ್ವಾನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಬಾಯ್, ಕೃಷ್ಣ ಅಡ್ವಾನ್ಸ್&zwnj; ಕಂಪನಿ ಸಿಇಒ ಕೋಲ್ ಶೈಶವ್, ಬಾಂಬೆಐಐಟಿ ಸಿಡಿಒ ಡಾ.ಕುಶಾಲ್ ಪೋಪ್ಲಿ ಭಾಗವಹಿಸುವರು ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಪರೇಷನ್&zwnj; ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ&lt;/strong&gt;&lt;/p&gt;&lt;p&gt;ಗುಂಡ್ಲುಪೇಟೆ ಪಟ್ಟಣದಲ್ಲಿ ಮೊದಲ ಬಾರಿಗೆ ಎಐ ಮೈಕ್ರೋಡೇಟಾ ಕೇಂದ್ರಕ್ಕೆ ಚಾಲನೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಹನೂರು ಸೇರಿದಂತೆ ಉಳಿದ ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ. ಅಂದು ನಡೆಯುವ ಕಂಪನಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಉದ್ಯಮಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಎಐ ಮೈಕ್ರೋಡೇಟಾ ಕೇಂದ್ರದ ನಿರ್ದೇಶಕ ಜಿ.ಆರ್.ದೊರೆಸ್ವಾಮಿ ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-gundlupet-cinifion-has-set-up-the-india-s-first-taluk-level-ai-microdata-center-mrq/articleshow-583qo85"/>
        </item>
        <item>
            <title><![CDATA[ಹನೂರು: ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾಯ್ತು, ಈಗ ಕಾಡಿನ ಸೌರ ಬೇಲಿ ಕಿತ್ತೆಸೆದ ದುಷ್ಕರ್ಮಿಗಳು; ಕಾಡು ಪ್ರಾಣಿಗಳು ಹಳ್ಳಿಗೆ ನುಗ್ಗುವ ಆತಂಕ]]></title>
            <link>https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</link>
            <guid isPermaLink="true">https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</guid>
            <pubDate>Sun, 23 Aug 2026 06:14:34 +0530</pubDate>
            <description><![CDATA[&lt;p&gt;ಹನೂರಿನಲ್ಲಿ ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ತೋಮಿಯಾರ್&zwnj; ಪಾಳ್ಯ ಬಳಿ ಅರಣ್ಯ ಇಲಾಖೆಯ ಸೋಲಾರ್ ತಂತಿ ಬೇಲಿ ಮತ್ತು ಗೇಟ್&zwnj;ಗಳನ್ನು ಧ್ವಂಸಗೊಳಿಸಿದ್ದಾರೆ. ವನ್ಯಮೃಗಗಳನ್ನು ನಾಡಿಗೆ ಬರುವಂತೆ ಮಾಡಿ, ಸ್ಥಳಕ್ಕೆ ಆಗಮಿಸುವ ಅರಣ್ಯ ಸಿಬ್ಬಂದಿ ಮೇಲೆ ದಾಳಿಗೆ ಸಂಚು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p0vqrs0b99pmep5wt72b1z,imgname-----------------------2026-08-23t060801.824-1787445501721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹನೂರು (ಆ.23)&lt;/strong&gt;: ತಾಲೂಕಿನ ಹೊಳೆಮುರಿದಟ್ಟಿಯಲ್ಲಿ ಆ.15ರಂದು ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಶೂಟೌಟ್&zwnj; ಮಾರನೆಯ ದಿನ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ತಮ್ಮ ಕೃತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.&lt;/p&gt;&lt;p&gt;ಶುಕ್ರವಾರ ಹನೂರು ತಾಲೂಕಿನ ತೋಮಿಯಾರ್&zwnj; ಪಾಳ್ಯ, ಕಾರಯ್ಯನಬೆಟ್ಟ ಮತ್ತು ಬೇಟೆಗಾರನ ಗುಡ್ಡ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್&zwnj; ತಂತಿ ಬೇಲಿ, ಕಂಬಗಳು, ಗೇಟ್&zwnj;ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಕಾಡು ಪ್ರಾಣಿಗಳ ನಾಡು ಪ್ರವೇಶದ ಆತಂಕ ಹೆಚ್ಚಾಗಿದೆ. ಈ ಮೂಲಕ ಗ್ರಾಮಗಳಿಗೆ ಬರುವ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸುವ ಭಾರಿ ಹುನ್ನಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ತೋಮಿಯಾರ್&zwnj; ಪಾಳ್ಯ ಡಿ-ಲೈನ್&zwnj;ನಲ್ಲಿ ಅಳವಡಿಸಿದ್ದ ಸೋಲಾರ್&zwnj; ಫೆನ್ಸಿಂಗ್&zwnj; ವ್ಯವಸ್ಥೆ, ಸ್ವಿಚ್&zwnj; ಬೋರ್ಡ್&zwnj;, ಗೇಟ್&zwnj;, ತಂತಿ ಬೇಲಿಗಳು, ಕಂಬಗಳನ್ನು ಮುರಿದು ಹಾಕಲಾಗಿದೆ. ಇದರಿಂದಾಗಿ ಕಾಡು ಮತ್ತು ನಾಡಿನ ನಡುವಿನ ರಕ್ಷಣಾ ಗೋಡೆ ಕಳಚಿ ಬಿದ್ದಂತಾಗಿದೆ.&lt;/p&gt;&lt;h2&gt;ದುಷ್ಕರ್ಮಿಗಳು ಹನೂರು ಸೌರ ಬೇಲಿ ನಾಶ ಮಾಡಿದ್ದು ಏಕೆ?:&lt;/h2&gt;&lt;p&gt;ಶೂಟೌಟ್&zwnj; ಬಳಿಕ ನಡೆದ ಪ್ರತಿಭಟನೆಗಳಿಂದಾಗಿ ತೋಮಿಯಾರ್&zwnj; ಪಾಳ್ಯ, ಶಾಗ್ಯ ವಲಯದಲ್ಲಿನ ಅರಣ್ಯ ಕಚೇರಿಗೆ ಅರಣ್ಯ ಸಿಬ್ಬಂದಿ ಹೋಗಲು ಹಿಂಜರಿಯುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕಿಡಿಗೇಡಿಗಳು ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಹೋಗಿ, ದುಷ್ಕೃತ್ಯ ಎಸಗಿದ್ದಾರೆ. ಇದು ಕೇವಲ ಆಸ್ತಿ ನಾಶವಷ್ಟೇ ಅಲ್ಲ ಎಂದು ಹೆಸರೇಳಲು ಇಚ್ಛಿಸದ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡುವ ಸಂಚು?&lt;/h3&gt;&lt;p&gt;ಶೂಟೌಟ್&zwnj; ಘಟನೆ ಬಳಿಕ ಹನೂರಿನಲ್ಲಿ ಎಲ್ಲ ಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ನಡುವೆ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೆ, ಕಾಡಿನಲ್ಲಿ ಪ್ರಾಣಿಗಳ ಆಹಾರ ಮತ್ತು ನೀರಿಗೆ ಕೊರತೆಯಿದೆ. ಇದನ್ನೇ ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು, ವನ್ಯಮೃಗಗಳು ನಾಡಿನತ್ತ ಬರುವಂತೆ ಮಾಡಲು ರಕ್ಷಣಾ ಗೋಡೆಗಳನ್ನು ಹಾಳುಗೆಡವಿದ್ದಾರೆ. ಪರಿಣಾಮ ಕಾಡಾನೆ ಸೇರಿದಂತೆ ವನ್ಯಮೃಗಗಳು ಗ್ರಾಮಗಳತ್ತ ಬಂದಾಗ ಅನಿವಾರ್ಯವಾಗಿ ಸಿಬ್ಬಂದಿ ಸ್ಥಳಕ್ಕೆ ಬರುವ ಪರಿಸ್ಥಿತಿ ಉದ್ಭವಿಸುತ್ತದೆ. ಹೀಗೆ ಬಂದ ಸಿಬ್ಬಂದಿ ಮೇಲೆ ದಾಳಿ ಮಾಡುವ ದೊಡ್ಡ ಸಂಚು ಇದರಲ್ಲಿ ಅಡಗಿರುವ ಶಂಕೆಯಿದೆ ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.&lt;/p&gt;&lt;p&gt;ತೋಮಿಯಾರ್&zwnj;ಪಾಳ್ಯದ ಫೆನ್ಸಿಂಗ್&zwnj; ನಾಶವು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಜನರನ್ನು ಹತೋಟಿಗೆ ತೆಗೆದುಕೊಳ್ಳುವ ಜೊತೆಗೆ ಪ್ರಾಣಿಗಳ ಚಲನವಲನಗಳ ಮೇಲೂ ಹದ್ದಿನ ಕಣ್ಣಿರಿಸಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa"/>
        </item>
        <item>
            <title><![CDATA[Health Department: ಆಹಾರ ಇಲಾಖೆ ಸರ್ಜಿಕಲ್ ಸ್ಟ್ರೈಕ್; ನೈರ್ಮಲ್ಯ ಕೊರತೆ, ಕಲಬೆರಕೆ ಹಿನ್ನೆಲೆ ಖ್ಯಾತ ಹೋಟೆಲ್‌ಗಳು ಸೀಲ್‌ಡೌನ್!]]></title>
            <link>https://kannada.asianetnews.com/karnataka-districts/chamarajanagar-food-department-raid-hotels-sealed-food-adulteration-hygiene-expired-food-ut-khader-bmk/articleshow-9mohpw5</link>
            <guid isPermaLink="true">https://kannada.asianetnews.com/karnataka-districts/chamarajanagar-food-department-raid-hotels-sealed-food-adulteration-hygiene-expired-food-ut-khader-bmk/articleshow-9mohpw5</guid>
            <pubDate>Mon, 07 Sep 2026 22:11:15 +0530</pubDate>
            <description><![CDATA[&lt;p&gt;ಹೆಚ್ಚುತ್ತಿರುವ ಆಹಾರ ಕಲಬೆರಕೆ ದೂರುಗಳ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಹೋಟೆಲ್&zwnj;ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ, ಅವಧಿ ಮೀರಿದ ಪದಾರ್ಥಗಳು, ಕೃತಕ ಬಣ್ಣಗಳ ಬಳಕೆ ಮತ್ತು ಕಳಪೆ ನೈರ್ಮಲ್ಯ ಕಂಡುಬಂದಿದ್ದರಿಂದ ಖ್ಯಾತ ಹೋಟೆಲ್&zwnj;ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ybmakjkq9f4nggtn4gjqqj,imgname-chamarajnagar--1788798970482.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಡಿನಾಡು ಚಾಮರಾಜನಗರದಲ್ಲಿ ದಿನದಿಂದ ದಿನಕ್ಕೆ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಉದ್ಯಮ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಲಾಭದಾಸೆಗೆ ಬಿದ್ದ ಕೆಲ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ನೈರ್ಮಲ್ಯವನ್ನು ಗಾಳಿಗೆ ತೂರಿ, ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಈ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಅವರು ಫುಲ್ ಅಲರ್ಟ್ ಆಗಿದ್ದು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಸಚಿವರ ಸೂಚನೆಯ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಡಳಿತ ರಂಗಕ್ಕಿಳಿದಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮರೋಪಾದಿ ದಾಳಿಗಳು ಆರಂಭವಾಗಿವೆ.&lt;/p&gt;&lt;h2&gt;&lt;strong&gt;ಅವಧಿ ಮೀರಿದ ವಸ್ತುಗಳು ಹಾಗೂ ನೈರ್ಮಲ್ಯದ ಅಭಾವ!&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಹೋಟೆಲ್&zwnj;ಗಳು ಹಾಗೂ ರೆಸ್ಟೋರೆಂಟ್&zwnj;ಗಳಲ್ಲಿ ಬಾಹ್ಯ ಸೌಂದರ್ಯಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಆಹಾರದ ಗುಣಮಟ್ಟ ಮತ್ತು ಅಡುಗೆಮನೆಯ ಸ್ವಚ್ಛತೆಗೆ ನೀಡುತ್ತಿಲ್ಲ ಎಂಬುದು ಬಯಲಾಗಿದೆ. ಚಾಮರಾಜನಗರದ ಪ್ರಮುಖ ಭಾಗಗಳಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಸಮ್ಮುಖದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿದಾಗ ಕಂಗೆಡಿಸುವ ಸತ್ಯಗಳು ಬೆಳಕಿಗೆ ಬಂದಿವೆ. ಆಹಾರ ತಯಾರಿಕೆಯಲ್ಲಿ ನಿಷೇಧಿತ ಹಾಗೂ ಹಾನಿಕಾರಕ ಕೃತಕ ಬಣ್ಣಗಳ ಬಳಕೆ, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ನೀಡುತ್ತಿದ್ದುದು ಪತ್ತೆಯಾಗಿದೆ.&lt;/p&gt;&lt;h3&gt;&lt;strong&gt;ಈ ಹೋಟೆಲ್&zwnj;ಗಳಿಗೆ ತಾತ್ಕಾಲಿಕ ಸೀಲ್&zwnj;ಡೌನ್!&lt;/strong&gt;&lt;/h3&gt;&lt;p&gt;ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ ಎದ್ದು ಕಾಣುತ್ತಿದ್ದ ಹಿನ್ನೆಲೆಯಲ್ಲಿ, ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಎರಡು ಪ್ರಮುಖ ಹೋಟೆಲ್&zwnj;ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಜಿಲ್ಲಾಧಿಕಾರಿ ಶ್ರೀರೂಪಾ ಅವರು ಸ್ಥಳದಲ್ಲೇ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;&lt;strong&gt;ಉಡುಪಿ ಗ್ರಾಂಡ್ ರೆಸ್ಟೋರೆಂಟ್&lt;/strong&gt;; ಈ ಹೋಟೆಲ್&zwnj;ನಲ್ಲಿ ಅಡುಗೆಮನೆಯ ನೈರ್ಮಲ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಜೊತೆಗೆ ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣಗಳ ಅತಿಯಾದ ಬಳಕೆ ಹಾಗೂ ಗಡುವು ಮುಗಿದ (Expired) ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿರುವುದು ಕಂಡುಬಂದಿದೆ.&lt;/p&gt;&lt;p&gt;&lt;strong&gt;ಹೋಟೆಲ್ ಮಕಾವ್;&lt;/strong&gt; ಈ ಪ್ರಸಿದ್ಧ ಹೋಟೆಲ್&zwnj;ನಲ್ಲಿ ಗ್ರಾಹಕರಿಗೆ ತಾಜಾ ಇಲ್ಲದ, ಕೊಳೆತ ಮಾಂಸ ಮತ್ತು ಗುಣಮಟ್ಟವಿಲ್ಲದ ಕೆಟ್ಟ ಮಶ್ರೂಮ್ (ಣಬೆ) ಬಳಸಿ ಅಡುಗೆ ಮಾಡುತ್ತಿದ್ದುದು ತಪಾಸಣೆ ವೇಳೆ ಧೃಡಪಟ್ಟಿದೆ. ಸಾರ್ವಜನಿಕರ ಆರೋಗ್ಯಕ್ಕೆ ನೇರ ಅಪಾಯವನ್ನುಂಟು ಮಾಡುತ್ತಿದ್ದ ಈ ಎರಡೂ ಹೋಟೆಲ್&zwnj;ಗಳ ಪರವಾನಗಿಯನ್ನು ಪ್ರಶ್ನಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಬಂದ್ ಮಾಡಲು ಆದೇಶಿಸಲಾಗಿದೆ.&lt;/p&gt;&lt;h3&gt;&lt;strong&gt;ಬೇಕರಿ, ಕೈಗಾರಿಕಾ ಪ್ರದೇಶಗಳ ಮೇಲೆಯೂ ಕಣ್ಣು!&lt;/strong&gt;&lt;/h3&gt;&lt;p&gt;ಜಿಲ್ಲಾಧಿಕಾರಿ ಶ್ರೀರೂಪಾ ಅವರ ಕಾರ್ಯಾಚರಣೆ ಕೇವಲ ಹೋಟೆಲ್&zwnj;ಗಳಿಗೆ ಮಾತ್ರ ಸೀಮಿತವಾಗಲಿಲ್ಲ. ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ (Kanes) ಹಾಗೂ ಕಲರ್ ಟೋನ್ (Color Tone) ಉದ್ಯಮ ಸಂಸ್ಥೆಗಳಿಗೆ ಭೇಟಿ ನೀಡಿ, ಅಲ್ಲಿನ ಕ್ಯಾಂಟೀನ್ ಮತ್ತು ಆಹಾರದ ಗುಣಮಟ್ಟವನ್ನು ಪರಿಶೀಲಿಸಲಾಯಿತು. ಇದರ ಜೊತೆಗೆ ರಸ್ತೆಬದಿಯ ಬೇಕರಿಗಳು ಹಾಗೂ ಸಣ್ಣಪುಟ್ಟ ಉಪಹಾರ ಗೃಹಗಳಿಗೂ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಕಡೆಯೂ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿದರು.&lt;/p&gt;&lt;h3&gt;&lt;strong&gt;ಜಿಲ್ಲಾಡಳಿತದ ಖಡಕ್ ಎಚ್ಚರಿಕೆ!&lt;/strong&gt;&lt;/h3&gt;&lt;p&gt;ಆಹಾರದಲ್ಲಿ ಕಲಬೆರಕೆ ಮಾಡುವುದು, ಕೃತಕ ಬಣ್ಣಗಳನ್ನು ಬಳಸುವುದು ಹಾಗೂ ಹಳೆಯ ಮಾಂಸವನ್ನು ಬಳಸುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಯಾವುದೇ ಹೋಟೆಲ್, ರೆಸ್ಟೋರೆಂಟ್ ಅಥವಾ ಬೇಕರಿ ಮಾಲೀಕರನ್ನು ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿಯೂ ಈ ತಪಾಸಣೆ ಮುಂದುವರಿಯಲಿದ್ದು, ನಿಯಮ ಮೀರಿದರೆ ಶಾಶ್ವತವಾಗಿ ಲೈಸೆನ್ಸ್ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಜಿಲ್ಲಾಧಿಕಾರಿಗಳ ಈ ದಿಢೀರ್ ಆ್ಯಕ್ಷನ್&zwnj;ಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/chamarajanagar-food-department-raid-hotels-sealed-food-adulteration-hygiene-expired-food-ut-khader-bmk/articleshow-9mohpw5"/>
        </item>
        <item>
            <title><![CDATA[ಬಂಡೀಪುರ, ನಾಗರಹೊಳೆ ಸಫಾರಿ ದರ ಭಾರೀ ಏರಿಕೆ.. ಇದು ಪ್ರವಾಸೋದ್ಯಮಕ್ಕೇ ದೊಡ್ಡ ಹೊಡೆತ..!]]></title>
            <link>https://kannada.asianetnews.com/karnataka-districts/bandipur-and-nagarahole-safari-prices-hiked-check-new-rates-gkn/articleshow-bcpk7ra</link>
            <guid isPermaLink="true">https://kannada.asianetnews.com/karnataka-districts/bandipur-and-nagarahole-safari-prices-hiked-check-new-rates-gkn/articleshow-bcpk7ra</guid>
            <pubDate>Mon, 31 Aug 2026 20:42:00 +0530</pubDate>
            <description><![CDATA[&lt;p&gt;ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇಂದಿನಿಂದ ಸಫಾರಿ ದರ ಭಾರಿ ಏರಿಕೆಯಾಗಿದೆ. ವಯಸ್ಕರ ಟಿಕೆಟ್ 1,000 ರೂ.ಗೆ ಹಾಗೂ ಜೀಪ್ ಸಫಾರಿ ದರ 1,500 ರೂ.ಗೆ ಏರಿಕೆಯಾಗಿದ್ದು, ಪ್ರವಾಸಿಗರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1c603vha67zt9rks1dfbaqx,imgname-bandipur-and-nagarhole-1788189085551.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ನೀವು ಈ ವಾರಾಂತ್ಯದಲ್ಲಿ ಬಂಡೀಪುರ ಅಥವಾ ನಾಗರಹೊಳೆ ಕಾಡಿನ ಸೌಂದರ್ಯ ಸವಿಯಲು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮ್ಮ ಜೇಬಿನಲ್ಲಿ ಸ್ವಲ್ಪ ಹೆಚ್ಚು ಹಣವಿಟ್ಟುಕೊಳ್ಳುವುದು ಒಳಿತು. ಏಕೆಂದರೆ ಇಂದಿನಿಂದ (ಸೆಪ್ಟೆಂಬರ್ 1) ಅನ್ವಯವಾಗುವಂತೆ ಈ ಎರಡೂ ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ದರವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ.&lt;/p&gt;&lt;h2&gt;&lt;strong&gt;ದರ ಏರಿಕೆ ಎಷ್ಟು?&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯ ಹೊಸ ಆದೇಶದಂತೆ ಸಫಾರಿ ಟಿಕೆಟ್ ದರಗಳು ಈ ಕೆಳಗಿನಂತಿವೆ. ಈ ಮೊದಲು ವಯಸ್ಕರಿಗೆ (Bus Safari) 650 ರೂಪಾಯಿ ಇತ್ತು, ಈಗ ಅದನ್ನು 1,000 ರೂಪಾಯಿಗೆ ಏರಿಸಲಾಗಿದೆ. ಮಕ್ಕಳಿಗೆ (12 ವರ್ಷದೊಳಗಿನವರು) 350 ರೂಪಾಯಿ ಇದ್ದ ದರ ಈಗ 500 ರೂಪಾಯಿ ಆಗಿದೆ. ಜೀಪ್ ಸಫಾರಿ ಪ್ರಿಯರಿಗೆ ಇದು ದೊಡ್ಡ ಹೊಡೆತ ನೀಡಲಾಗಿದೆ. ಈ ಹಿಂದೆ ಇದ್ದ 750 ರೂಪಾಯಿ ದರವನ್ನು ನೇರವಾಗಿ 1,500 ರೂಪಾಯಿಗೆ (ಬೊಲೆರೋ/ಕ್ಯಾಂಟರ್ ಇತ್ಯಾದಿ) ಏರಿಕೆ ಮಾಡಲಾಗಿದೆ. ಮಕ್ಕಳಿಗೆ 750 ರೂಪಾಯಿ ನಿಗದಿಪಡಿಸಲಾಗಿದೆ.&lt;/p&gt;&lt;p&gt;ಬಂಡೀಪುರ ಮತ್ತು ನಾಗರಹೊಳೆ ಎರಡೂ ಕೂಡ ವಿಶ್ವವಿಖ್ಯಾತ ಹುಲಿ ಸಂರಕ್ಷಿತ ಪ್ರದೇಶಗಳು. ಇಲ್ಲಿ ಹುಲಿ, ಚಿರತೆ ಹಾಗೂ ಆನೆಗಳ ದರ್ಶನ ಪಡೆಯಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈಗಿನ ದರ ಏರಿಕೆಯು ಪ್ರವಾಸಿಗರಲ್ಲಿ ಅಸಮಾಧಾನ ಮೂಡಿಸಿದೆ. ವಿಶೇಷವಾಗಿ ಕುಟುಂಬ ಸಮೇತ ಬರುವ ಮಧ್ಯಮ ವರ್ಗದ ಪ್ರವಾಸಿಗರಿಗೆ ಈ ದರ ಏರಿಕೆಯು ಬಿಸಿ ತುಪ್ಪವಾಗಿ ಪರಿಣಮಿಸಿದೆ.&lt;/p&gt;&lt;p&gt;ಕರ್ನಾಟಕದ ಹೆಮ್ಮೆಯ ಈ ಕಾಡುಗಳು ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಬರುತ್ತವೆ. ಭಾರತದಲ್ಲಿ ಅತಿ ಹೆಚ್ಚು ಹುಲಿಗಳಿರುವ ಪ್ರದೇಶಗಳಲ್ಲಿ ಇವು ಕೂಡ ಸೇರಿವೆ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ನಿರ್ವಹಣೆಯ ವೆಚ್ಚವನ್ನು ಸರಿದೂಗಿಸಲು ಈ ದರ ಏರಿಕೆ ಮಾಡಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ. ಏಕಾಏಕಿ ದರ ದುಪ್ಪಟ್ಟು ಮಾಡಿರುವುದು ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/bandipur-and-nagarahole-safari-prices-hiked-check-new-rates-gkn/articleshow-bcpk7ra"/>
        </item>
        <item>
            <title><![CDATA[Kadave hunting: ನೀರು ಕುಡಿಯಲು ಹೋಗಿದ್ದ ಕಡವೆ ಮೂರು ತುಂಡಾಯ್ತು; ಕಾವೇರಿ ವನ್ಯಧಾಮದಲ್ಲಿ ಮತ್ತೆ ಬೇಟೆಗಾರರ ಅಟ್ಟಹಾಸ!]]></title>
            <link>https://kannada.asianetnews.com/karnataka-districts/poachers-killed-a-sambar-deer-in-the-mm-hills-wildlife-sanctuary-chamarajanaga/articleshow-c1eby1y</link>
            <guid isPermaLink="true">https://kannada.asianetnews.com/karnataka-districts/poachers-killed-a-sambar-deer-in-the-mm-hills-wildlife-sanctuary-chamarajanaga/articleshow-c1eby1y</guid>
            <pubDate>Thu, 03 Sep 2026 12:45:52 +0530</pubDate>
            <description><![CDATA[&lt;p&gt;ಮಲೆ ಮಹದೇಶ್ವರ ವನ್ಯಧಾಮದ ಹನೂರು ವಲಯದಲ್ಲಿ, ನೀರು ಕುಡಿಯಲು ಬಂದ ಕಡವೆಯನ್ನು ಬೇಟೆಗಾರರು ನಾಡಬಂದೂಕಿನಿಂದ ಗುಂಡಿಕ್ಕಿ ಕೊಂದಿದ್ದಾರೆ. ಕಡವೆಯ ಮಾಂಸವನ್ನು ಮೂರು ತುಂಡು ಮಾಡಿ ಸಾಗಿಸಲು ಯತ್ನಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ, ಬೇಟೆಗಾರರು ಪರಾರಿ, ಪತ್ತೆಗೆ ಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1k1z7485pmnzzhwjncg6vyw,imgname-mm-hills-wildlife-sanctuary--3--1788419742856.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರ(ಸೆ.3): ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಆ. 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ಇದೀಗ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಬೇಟೆಗಾರರ ಕ್ರೌರ್ಯಕ್ಕೆ ಕಡವೆ ಬಲಿಯಾದ ಘಟನೆ ನಡೆದಿದೆ.&lt;/p&gt;&lt;h2&gt;ಕಡವೆಯನ್ನ ಮೂರು ತುಂಡು ಮಾಡಿ ಪರಾರಿ!&lt;/h2&gt;&lt;p&gt;ಹನೂರು ವಲಯದ ಉಡುತೊರೆಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನೀರು ಕುಡಿಯಲು ಬಂದಿದ್ದ ವೇಳೆಯೇ ಕಡವೆಯ ಮೇಲೆ ನಾಡಬಂದೂಕು ಬಳಸಿ ದಾಳಿ ಮಾಡಿರುವ ಬೇಟೆಗಾರರು, ಕಡವೆಯನ್ನ ಕೊಂದು ಮೂರು ತುಂಡು ಮಾಡಿ ಚೀಲದಲ್ಲಿ ತುಂಬಿ ಸಾಗಾಟ ನಡೆಸಲು ಯತ್ನಿಸಿದ್ದಾರೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಸಿಬ್ಬಂದಿ ಬೇಟೆಗಾರರ ಮೇಲೆ ದಾಳಿ ನಡೆಸಿದ್ದಾರೆ.&lt;/p&gt;&lt;h3&gt;ಕಡವೆ ಮಾಂಸದ ಚೀಲ ಬಿಟ್ಟು ಬೇಟೆಗಾರರು ಪರಾರಿ&lt;/h3&gt;&lt;p&gt;ಅರಣ್ಯ ಸಿಬ್ಬಂದಿ ದಾಳಿಗೆ ಹೆದರಿ ಕಡವೆ ಮಾಂಸದ ಚೀಲವನ್ನು ಅಲ್ಲಿಯೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಕಡವೆ ಬೇಟೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿರುವ ಅರಣ್ಯ ಸಿಬ್ಬಂದಿ ಪರಾರಿಯಾಗಿರುವ ಬೇಟೆಗಾರರ ಪತ್ತೆಗೆ ಮುಂದಾಗಿದ್ದಾರೆ.&lt;/p&gt;&lt;p&gt;ಪದೇಪದೆ ವನ್ಯಜೀವಿಗಳನ್ನ ಅಕ್ರಮವಾಗಿ ಬೇಟೆಯಾಡಲಾಗುತ್ತಿದೆ. ವನ್ಯಜೀವಿಗಳ ಬೇಟೆಯಾಡಿ ನೆರೆ ರಾಜ್ಯಗಳಿಗೆ ಮಾಂಸ ಸಾಗಿಸಲಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಿ ವನ್ಯಜೀವಿಗಳನ್ನ ಸಂರಕ್ಷಿಸುವಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/poachers-killed-a-sambar-deer-in-the-mm-hills-wildlife-sanctuary-chamarajanaga/articleshow-c1eby1y"/>
        </item>
        <item>
            <title><![CDATA[Hanur Encounter Case: ಕಳ್ಳಬೇಟೆ ತಡೆ  ಶಿಬಿರಕ್ಕೆ ಜಿಲೆಟಿನ್‌ ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?]]></title>
            <link>https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz</link>
            <guid isPermaLink="true">https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz</guid>
            <pubDate>Thu, 20 Aug 2026 05:29:44 +0530</pubDate>
            <description><![CDATA[&lt;p&gt;ಚಾಮರಾಜನಗರದ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ನಡೆದ ಪ್ರತೀಕಾರದ ದಾಳಿಗಳು, ರಾಜಕೀಯ ಸ್ವರೂಪ ಹಾಗೂ ಕಳ್ಳಬೇಟೆಯ ಹಿಂದಿರುವ ಜಾಲವು ಅರಣ್ಯ ಸಂರಕ್ಷಣೆಯ ಗಂಭೀರ ಸವಾಲು ತೆರೆದಿಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿನೋದ್ ಕುಮಾರ್ ಬಿ. ನಾಯ್ಕ್&lt;/strong&gt;&lt;/p&gt;&lt;p&gt;ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ವಿಶೇಷ ಯೋಜನೆಗಳ ಸಂಪಾದಕ&lt;/p&gt;&lt;p&gt;--&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ(Cauvery Wildlife Sanctuary)ದಲ್ಲಿ ಆಗಸ್ಟ್ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದರು. ಈ ಘಟನೆ ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಕೂಡ ಎಂದೂ ನಡೆಸದ ಕಾರ್ಯಾಚರಣೆಗಿಂತ ದೊಡ್ಡದಾಗಿದೆ ಎನ್ನುವ ಕಾರಣಕ್ಕೆ ಬಹಳ ವಿವಾದಕ್ಕೀಡಾಗಿದೆ. ಅರಣ್ಯ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಳ್ಳ ಬೇಟೆಗಾರರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಆದರೆ, ಒಂದೇ ಘಟನೆಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದು ಸಹ ಇದೇ ಮೊದಲು. ಈ ಘಟನೆಯ ಅಗಾಧತೆಯೇ ಇದೀಗ ಅರಣ್ಯ ಸಂರಕ್ಷಣೆಯ ಅನೇಕ ಸವಾಲುಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ.&lt;/p&gt;&lt;p&gt;ಈ ಘಟನೆ ಬಳಿಕ ಸ್ಥಳೀಯರು ನಡೆಸಿದ ಪ್ರತೀಕಾರದ ದಾಳಿಯಲ್ಲಿ ಅರಣ್ಯ ಇಲಾಖೆಯ ಕಚೇರಿ, ವಾಹನಗಳು ಧ್ವಂಸಗೊಂಡಿದ್ದು ಮಾತ್ರವಲ್ಲ, ದಟ್ಟ ಕಾಡೊಳಗೆ ನಿರ್ಮಿಸಲಾಗಿದ್ದ ಕಳ್ಳ ಬೇಟೆ ತಡೆ ಶಿಬಿರಗಳನ್ನು ಜಿಲೆಟಿನ್ ಇಟ್ಟು ಸ್ಫೋಟಿಸಿದ ಸುದ್ದಿಗಳು ಬರುತ್ತಿವೆ. ಮೂವರ ಸಾವಿಗೆ ಪ್ರತೀಕಾರವಾಗಿ ಜಿಲೆಟಿನ್ನಂತಹ ಅಪಾಯಕಾರಿ ಸ್ಫೋಟಕಗಳನ್ನು ಬಳಸಿ ಕ್ಯಾಂಪುಗಳನ್ನು ಧ್ವಂಸ ಮಾಡುತ್ತಾರೆ ಎಂದರೆ, ಅವರು ಖಂಡಿತವಾಗಿಯೂ ಮುಗ್ಧ ಹಳ್ಳಿಗರಲ್ಲ. ಹಳ್ಳಿಗರ ಹೆಸರಿನಲ್ಲಿ ವಿಧ್ವಂಸಕ ಶಕ್ತಿಗಳು ಸಕ್ರಿಯವಾಗಿವೆ ಎನಿಸುತ್ತದೆ. ಇವುಗಳ ನಡುವೆಯೇ ಈ ಎಲ್ಲ ಘಟನೆಗಳು ರಾಜಕೀಯ ಸ್ವರೂಪ ಪಡೆದುಕೊಂಡು ಇಡೀ ಪ್ರಕರಣವನ್ನು ಗೋಜಲು ಮಾಡಿಬಿಟ್ಟಿವೆ.&lt;/p&gt;&lt;h2&gt;ಅತಿ ಹೆಚ್ಚು ಕಳ್ಳಬೇಟೆ ನಡೆವ ಕಾಡು&lt;/h2&gt;&lt;p&gt;ಹನೂರು ಗುಂಡಿನ ಚಕಮಕಿ ಪ್ರಕರಣವನ್ನು ಖಂಡಿತವಾಗಿಯೂ ನಾವು ರಾಜಕೀಯ ದೃಷ್ಟಿಕೋನದಿಂದ ನೋಡಲೇಬಾರದು. ಚಾಮರಾಜನಗರ ಅತಿ ಹಿಂದುಳಿದ ಜಿಲ್ಲೆ. ಅಲ್ಲಿನ ಭೌಗೋಳಿಕ ಪ್ರದೇಶದ ಪೈಕಿ ಶೇ.80ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಈ ಕಾಡಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಬಂಡೀಪುರ ಹೊರತುಪಡಿಸಿ ಬಿಆರ್ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಸಿವೆ. ಈ ಭಾಗಗಳು ಎಲ್ಲ ರೀತಿಯ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹೀಗಿರುವಾಗ ನಾವು ಇಡೀ ಘಟನೆಯನ್ನು ತಾಂತ್ರಿಕ ಅಂದರೆ ಟೆಕ್ನಿಕಲ್ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು.&lt;/p&gt;&lt;p&gt;ಈ ಭಾಗದಲ್ಲಿ ಅತಿ ಹೆಚ್ಚು ಕಳ್ಳ ಬೇಟೆ ನಡೆಯುತ್ತದೆ. ಇದಕ್ಕೆ ಕಾರಣವೇನು..? ಇಲ್ಲಿನ ಜನರನ್ನು ಪಕ್ಕದ ತಮಿಳುನಾಡಿನ ಶ್ರೀಮಂತ ಜಮೀನ್ದಾರರು ಕೂಲಿಗಳಂತೆ ನಡೆಸಿಕೊಳ್ಳುತ್ತಾರೆ. ತಮಿಳುನಾಡಿನ ಕಾಡಿನಲ್ಲಿ ದನ ಮೇಯಿಸಲು ಹೈಕೋರ್ಟ್ ನಿರ್ಬಂಧಿಸಿದ ನಂತರ ಕರ್ನಾಟಕದ ಗಡಿಭಾಗದಲ್ಲಿರುವ ಬಡಜನರಿಗೆ ಲಕ್ಷಾಂತರ ರುಪಾಯಿ ಸಾಲ ಕೊಟ್ಟು, ಅದನ್ನು ತೀರಿಸಲು ಅವರ ಸಾವಿರಾರು &ldquo;ಬರಗೂರು&rdquo; ತಳಿಯ ದನಗಳನ್ನು ಕರ್ನಾಟಕದ ಕಾಡಿನಲ್ಲಿ ಮೇಯಿಸಿ ಎಂದು ಕೊಟ್ಟುಬಿಡುತ್ತಾರೆ. ತಮಿಳುನಾಡಿನ ಹಸು, ಕರ್ನಾಟಕದ ಕಾಡಿನ ಸಸ್ಯ ಸಂಪತ್ತು, ಅದನ್ನು ತಡೆಯಲು ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡರೆ ಅವರ ವಿರುದ್ಧ ಸುಳ್ಳು ಎಸ್ಸಿ/ಎಸ್ಟಿ ದೌರ್ಜನ್ಯದ ಕೇಸುಗಳನ್ನು ಹಾಕಿಸಿ ದುರ್ಬಲರನ್ನಾಗಿ ಮಾಡುತ್ತಾರೆ. ಅದಕ್ಕೂ ಜಗ್ಗದಿದ್ದರೆ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಹಾಕಿ ಅರಣ್ಯಾಧಿಕಾರಿಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತದೆ. ಅಷ್ಟೇ ಅಲ್ಲ, ಅಕ್ರಮವಾಗಿ ಬೇಟೆಯಾಡಿ ಜಿಂಕೆ ಮಾಂಸವನ್ನು ನೆರೆಯ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡುತ್ತಾರೆ. ಈಗಲೂ ಕರ್ನಾಟಕದಲ್ಲಿ ಸಿಗುವ ಹುಲಿ ಉಗುರು ಅಥವಾ ಚರ್ಮದ ಜಪ್ತಿ ಪ್ರಕರಣಗಳನ್ನು ಜಾಲಾಡಿದಾಗ ಅದರ ಎಳೆ ಚಾಮರಾಜನಗರ ಜಿಲ್ಲೆಯ ಕಾಡಿಗೆ ಲಿಂಕ್ ಇರುವುದನ್ನು ತೋರಿಸುತ್ತದೆ.&lt;/p&gt;&lt;h3&gt;ಜಾಗೃತಿ ಎಂಬುದೇ ಇಲ್ಲಿ ಮರೀಚಿಕೆ&lt;/h3&gt;&lt;p&gt;ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣ ಇರಬಹುದು, 5 ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆ ಇರಬಹುದು, ಹುಲಿಯ ದೇಹವನ್ನು ತುಂಡು ತುಂಡು ಮಾಡಿ ಬಿಸಾಡಿದ್ದ ಪ್ರಕರಣ ಇರಬಹುದು, ಇವೆಲ್ಲವೂ ಈ ಪ್ರದೇಶದಲ್ಲಿ ಅದೆಷ್ಟು ಜನಜಾಗೃತಿಯ ಅವಶ್ಯಕತೆ ಇದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅರಣ್ಯ ಇಲಾಖೆಯಿಂದ ಹಿಡಿದು ಜಿಲ್ಲಾಡಳಿತದ ತನಕ ಯಾರೂ ಸಹ ಕಾಡಂಚಿನ ಮತ್ತು ಕಾಡೊಳಗಿನ ಗ್ರಾಮಗಳ ಜನರಲ್ಲಿ ಎಲ್ಲ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಯಾವುದೇ ಕೆಲಸ ಮಾಡಿಲ್ಲ. ಇಲ್ಲಿನ ಜನರನ್ನು ತಲುಪುವ ಕೆಲಸಗಳನ್ನು ಸರ್ಕಾರಗಳು ಸಹ ಮಾಡಿಲ್ಲ. ಕರ್ನಾಟಕದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಆ ಪ್ರದೇಶದ ಸಮಸ್ಯೆಗಳ ನೈಜತೆಯ ಅರಿವಿಲ್ಲದೇ ಮಾತನಾಡಿರುವುದು ಹಾಸ್ಯಾಸ್ಪದ.&lt;/p&gt;&lt;p&gt;ಹನೂರು ಗುಂಡಿನ ಚಕಮಕಿಯ ಘಟನೆಯ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಅದರ ವರದಿಯಿಂದ ನಿಜಾಂಶ ಹೊರಗೆ ಬರುತ್ತದೆ. ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದೆಯಾ...? ಅಥವಾ ಸತ್ತವರೆಲ್ಲರೂ ಕಳ್ಳಬೇಟೆಗೆ ಬಂದಿದ್ದವರೇ ಎನ್ನುವುದು ಗೊತ್ತಾಗಲಿದೆ. ಆದರೆ, ನಂತರದ ಘಟನೆಗಳನ್ನು ನೋಡಿದಾಗ ಸ್ಥಳೀಯ ಜನರು ಮತ್ತು ಅರಣ್ಯಾಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಕಳ್ಳ ಬೇಟೆಗಾರರು ಮತ್ತು ಅವರನ್ನು ಪ್ರೋತ್ಸಾಹಿಸುವ ಜಾಲ ಬಹಳ ಸಕ್ರಿಯವಾದ ಹಾಗೆ ಕಾಣಿಸುತ್ತಿದೆ. ಮತ ರಾಜಕಾರಣವನ್ನೇ ಉಸಿರನ್ನಾಗಿಸಿಕೊಂಡಿರುವ ಜನಪ್ರತಿನಿಧಿಗಳು ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟು, ಪೈಪೋಟಿಗೆ ಬಿದ್ದವರಂತೆ ಅರಣ್ಯ ಸಿಬ್ಬಂದಿ ಮೇಲೆ ಆರೋಪಗಳನ್ನು ಮಾಡಿ ಅರಣ್ಯ ಪಡೆಯ ನೈತಿಕ ಸ್ಥೈರ್ಯವನ್ನೇ ಕುಂದಿಸಿಬಿಟ್ಟಿದ್ದಾರೆ.&lt;/p&gt;&lt;p&gt;ಕಾನೂನು ಜಾರಿಗೊಳಿಸುವ ಪಡೆಗಳಿಂದಲೂ ತಪ್ಪುಗಳು ಆಗಬಹುದು. ಆದರೆ, ಅವುಗಳನ್ನು ದುರ್ಬಲ ಮಾಡುವ ಪ್ರವೃತ್ತಿ ಬಹಳ ಕೆಟ್ಟದ್ದು, ವನ್ಯಜೀವಿಗಳ ದಾಳಿ, ಕುಟುಂಬದಿಂದ ದೂರವುಳಿದು ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಮಾಡುವ ಕೆಲಸಕ್ಕೆ ಜನರಿಂದಲೂ ಬೈಗುಳ ಕೇಳುವಾಗ ಅವರ ಮನಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳೋಣ. ಉಳಿದೆಲ್ಲ ಖಾಕಿ ಪಡೆಗಳಿಗಿಂತಲೂ ಅರಣ್ಯ ಪಡೆ ಅತಿ ಹೆಚ್ಚು ಶತ್ರುಗಳನ್ನು ತನ್ನ ಸುತ್ತ ಹೊಂದಿದೆ. ಜನಪ್ರತಿನಿಧಿಗಳು, ಕಾಡಂಚಿನ ಜನರು ಹೀಗೆ ಎಲ್ಲರೂ ಅರಣ್ಯ ಇಲಾಖೆಯ ದ್ವೇಷಿಗಳೇ. ಆದರೆ, ಅವರ ಸೇವೆಯಿಂದ, ತ್ಯಾಗದಿಂದ ಲಾಭ ಪಡೆವ ನಾಗರಿಕ ಸಮಾಜ ಎಂದಿಗೂ ಅವರಿಗೆ ಕೃತಜ್ಞತೆಯನ್ನು ತೋರಿಸದಿರುವುದು ದುರಂತ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz"/>
        </item>
        <item>
            <title><![CDATA[ಚಾಮರಾಜನಗರ ಶೂಟೌಟ್‌: ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!]]></title>
            <link>https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev</link>
            <guid isPermaLink="true">https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev</guid>
            <pubDate>Sat, 15 Aug 2026 21:58:14 +0530</pubDate>
            <description><![CDATA[&lt;p&gt;ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತರು ಕಳೆದುಹೋದ ಹಸುಗಳನ್ನು ಹುಡುಕಲು ಹೋಗಿದ್ದರು ಎಂದು ಕುಟುಂಬಸ್ಥರು ದೂರು ನೀಡಿದ್ದರೆ ಅವರು ಪ್ರಾಣಿ ಬೇಟೆಗೆ ಬಂದು ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರೆಂದು ಅರಣ್ಯ ಸಿಬ್ಬಂದಿ ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0340tbn63zdxvb30y1fm2hs,imgname-chamrajnagar-fir-1786811279733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಜಿಲ್ಲೆಯ ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ (Chamarajanagar Encounter) ಸಂಬಂಧಿಸಿದಂತೆ ಕೊನೆಗೂ ಎಫ್&zwnj;ಐಆರ್ ದಾಖಲಾಗಿದೆ. ಪ್ರಾಣಿ ಬೇಟೆಗೆ ಬಂದಿದ್ದಾರೆ ಎಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಆಂಟೋಣಿಸಾಮಿ ಅವರ ಪತ್ನಿ ಲೂರ್ದಾಮೇರಿ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಚಾಮರಾಜನಗರ ಎಸ್ಪಿ ಮುತ್ತುರಾಜು ಅವರ ಸಮ್ಮುಖದಲ್ಲಿ ಹನೂರು ವಿಭಾಗದ ಅರಣ್ಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿಸಿ ಬಿಎನ್&zwnj;ಎಸ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;&lt;strong&gt;ದೂರಿನಲ್ಲೇನಿದೆ?&lt;/strong&gt;&lt;/h2&gt;&lt;p&gt;ನಾವು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆಗಸ್ಟ್ 14ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು ಆದರೆ ವಾಪಸ್ ಬಂದಿರಲಿಲ್ಲ. ಹಸುಗಳನ್ನು ಹುಡುಕಿಕೊಂಡು ಹೋಗಲು ನನ್ನ ಪತಿ ಆಂಟೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್ ಹಾಗೂ ದೊಡ್ಡಪ್ಪನ ಮಗ ಜೋಸೆಫ್ ಕಾಡಿಗೆ ತೆರಳಿದ್ದರು. ಮರಿಯಮಂಗಲ ಗ್ರಾಮದಿಂದ ಸುಮಾರು 4 ಕಿಲೋಮೀಟರ್ ದೂರದ ಕಾಡಿನಲ್ಲಿ ಇವರು ವಿಶ್ರಾಂತಿ ಪಡೆಯುತ್ತಾ ಮಲಗಿದ್ದಾಗ, ಬೆಳಗಿನ ಜಾವ 3 ರಿಂದ 5 ಗಂಟೆಯ ಸುಮಾರಿಗೆ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಜೋಸೆಫ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಘಟನೆಯನ್ನು ತಿಳಿಸಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಅಧಿಕಾರಿಗಳ ವಾದವೇನು?&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಅರಣ್ಯ ಇಲಾಖೆಯ ಸಿಬ್ಬಂದಿ ಬೇರೆಯದೇ ವಾದ ಮಂಡಿಸಿದ್ದಾರೆ. ನಾಲ್ವರು ವ್ಯಕ್ತಿಗಳು ಪ್ರಾಣಿ ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದರು. ಈ ವೇಳೆ ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಮೊದಲು ಫೈರಿಂಗ್ ಮಾಡಿದ್ದಾರೆ. ಜೀವ ರಕ್ಷಣೆಗಾಗಿ ನಾವು ಮರು ಗುಂಡಿನ ದಾಳಿ (Retaliatory Firing) ನಡೆಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ಒಂದು ನಾಡಬಂದೂಕು ಹಾಗೂ ಎರಡು ಬ್ಯಾಗ್&zwnj;ನಷ್ಟು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ.&lt;/p&gt;&lt;h2&gt;&lt;strong&gt;ಅಸಲಿಗೆ ಆಗಿದ್ದೇನು?&lt;/strong&gt;&lt;/h2&gt;&lt;p&gt;ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಕಾವೇರಿ ವನ್ಯಧಾಮದ ಕರಡಿ ಕಲ್ಲು ಒಡ್ಡು ಬಳಿ ಈ ಘಟನೆ ನಡೆದಿದೆ. ಫೈರಿಂಗ್&zwnj;ನಿಂದ ಮೂವರು ಮೃತಪಟ್ಟಿದ್ದು, ಒಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳ ಜೀವ ಉಳಿಸಲು ಕೊಳ್ಳೇಗಾಲ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಮೂವರು ಮೃತಪಟ್ಟಿದ್ದರಿಂದ ಆಂಟೋಣಿಸಾಮಿ, ಜಾನ್ ಪೀಟರ್ ಹಾಗೂ ಸೆಬಾಸ್ಟಿಯನ್ ಕುಮಾರ್ ಅವರ ಮೃತದೇಹಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;p&gt;ನಾಲ್ವರು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಫೈರಿಂಗ್ ಮಾಡಿದ್ದಾರೆ. ಅದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಸತ್ಯಾಸತ್ಯತೆ ಹೊರತರುವ ಕೆಲಸವಾಗುತ್ತದೆ. ನಾಡಬಂದೂಕು ಕೂಡ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್ ಮಾಂಸ ಸಿಕ್ಕಿದೆ ಅಂತಾ ಹೇಳಿದ್ದಾರೆ. ಸತ್ತವರ ವಿರುದ್ಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಗೊತ್ತಾಗುತ್ತದೆ. ಅರಣ್ಯ ಬಾರ್ಡರ್ ಗೂ ಹಾಗೂ ಘಟನೆ ನಡೆದಿರುವ ಸ್ಥಳಕ್ಕೆ ದೂರವಿದೆ. ಈಗ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಅರಣ್ಯಧಿಕಾರಿಗಳು ಯಾವುದೇ ದೂರನ್ನ ನೀಡಿಲ್ಲ. ಅವರು ಸಹ ದೂರನ್ನು ಕೊಡಬಹುದು. ಎರಡೂ ಕಡೆಯ ವಾದಗಳಿದ್ದು, ಸಂಪೂರ್ಣ ತನಿಖೆಯ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕಿದೆ. ಮೃತರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳಿವೆಯೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev"/>
        </item>
        <item>
            <title><![CDATA[Chamarajanagara: ಹನೂರು ಶೂಟೌಟ್ ಕೇಸ್‌ಗೆ ಬಿಗ್‌ಟ್ವಿಸ್ಟ್; ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ, ಸತ್ಯ ಬಿಚ್ಚಿಟ್ಟ ಎಸಿಎಫ್ ಮರಿಸ್ವಾಮಿ]]></title>
            <link>https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57</link>
            <guid isPermaLink="true">https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57</guid>
            <pubDate>Tue, 18 Aug 2026 15:32:22 +0530</pubDate>
            <description><![CDATA[ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ಎಸಿಎಫ್ ಮರಿಸ್ವಾಮಿ ಹೇಳಿಕೆ ನೀಡಿದ್ದು, ಮೃತಪಟ್ಟವರು ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು ಎಂದಿದ್ದಾರೆ. ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದು, ಘಟನಾ ಸ್ಥಳದಲ್ಲಿ 34 ಕೆಜಿ ಮಾಂಸ ಕೂಡ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a4aq8nt5px1jhqjbxzyqpe,imgname-chamarajanagara-acf-mariswamy-1787046485269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಶೂಟೌಟ್&zwnj;ನಲ್ಲಿ ಮೂವರು ಮೃತಪಟ್ಟ ಘಟನೆಯ ಕುರಿತಂತೆ ಇದೇ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದ್ದು, ವರದಿ ಬಂದ ಬಳಿಕ ಕಾನೂನಿ ಅನ್ವಯ ಕ್ರಮಕೈಗೊಳ್ಳುವ ಭರವಸೆಯನ್ನು ಅರಣ್ಯ ಸಚಿವರು ನೀಡಿದ್ದಾರೆ.&lt;/p&gt;&lt;h2&gt;ಕಾವೇರಿ ಶೂಟೌಟ್ ರಹಸ್ಯ: ಎಸಿಎಫ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!&lt;/h2&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ ಎಸಿಎಫ್ ಮರಿಸ್ವಾಮಿ, ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು. ದನ ಮೇಯಿಸಲು ಅಥವಾ ಹುಡುಕಲು ಅವರು ಕಾಡಿಗೆ ಎಂಟ್ರಿ ಕೊಟ್ಟಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು. ಹಸುಗಳನ್ನು ಹುಡುಕಲು ಗನ್ ಯಾಕೆ ತರುತ್ತಾರೆ? ಒಂದು ವೇಳೆ ಹಸು ಹುಡುಕಲು ಹೋಗುವುದಿದ್ದರೆ ಸ್ಥಳೀಯ ಅರಣ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಮಾಹಿತಿ ಕೊಡಬೇಕಿತ್ತು. 8 ರಿಂದ 10 ಕಿಲೋ ಮೀಟರ್ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರು ಸತ್ತ 75 ಮೀಟರ್ ದೂರದಲ್ಲಿ ಎರಡು ಬ್ಯಾಗ್ ನಲ್ಲಿ ಮಾಂಸ ಸಿಕ್ಕಿದೆ. 34.25 ಕೆಜಿ ಮಾಂಸ ಪತ್ತೆಯಾಗಿದೆ. ಕ್ಲೀಯರ್ ಆಗಿ ಬೇಟೆಯಾಡುವ ಸಲುವಾಗಿಯೇ ಅರಣ್ಯಕ್ಕೆ ಹೋಗಿದ್ದಾರೆ. ಸತ್ತವರ ಮೂವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಆದರೆ ತಲೆಮರೆಸಿಕೊಂಡಿರುವ ಮಹಿಮಾ ದಾಸ್ ವಿರುದ್ಧ ಒಂದು ಕೇಸ್ ಇದೆ. ಕಾವೇರಿ ವನ್ಯಧಾಮದಲ್ಲಿ ಪಿಷಿಂಗ್ ಸಂಬಂಧ ಕೇಸ್ ಇದೆ ಎಂದು ಹೇಳಿದರು.&lt;/p&gt;&lt;h2&gt;ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ&lt;/h2&gt;&lt;p&gt;ಪ್ರತಿದಿನ ಕೂಡ ಅರಣ್ಯ ಸಿಬ್ಬಂದಿ ಗಸ್ತಿಗೆ ಹೋಗುವ ವೇಳೆ ಗನ್ ತೆಗೆದುಕೊಂಡು ಹೋಗುತ್ತಾರೆ. ನಮ್ಮವರು ಫೈರ್ ಮಾಡದಿದ್ದರೆ ಅವರ ಸ್ಥಿತಿಯಲ್ಲಿ ನಮ್ಮವರು ಇರುತ್ತಿದ್ದರು. ಆತ್ಮರಕ್ಷಣೆಗಾಗಿ ಫೈರ್ ಮಾಡಿದ್ದಾರೆ. ನಮ್ಮವರಿಗೆ ಯಾವುದೇ ಗಾಯ ಆಗಿಲ್ಲ. ಸತ್ತವರು ಕೂಡ ಗುಂಡು ಹಾರಿಸಿದ್ದರು, ಅದು ಮಿಸ್ ಫೈರ್ ಆಗಿದೆ. ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ, ಇನ್ನುಳಿದ ಇಬ್ಬರು ಆತನ ಜೊತೆಯಲ್ಲಿದ್ದರು. ಒಟ್ಟಾರೆ 12 ಸಿಬ್ಬಂದಿ ಈ ಕಾರ್ಯಾಚರಣೆ ವೇಳೆ ಭಾಗಿಯಾಗಿದ್ದರು. ಸಿಬ್ಬಂದಿ ಹಗಲು ರಾತ್ರಿ ಕಷ್ಟ ಪಡೊದೆ ಅರಣ್ಯ ಹಾಗೂ ದೇಶದ ಸಂಪತ್ತು ಕಾಯಲು ಎಂದು ಎಸಿಎಫ್ ವಿವರಿಸಿದ್ದಾರೆ.&lt;/p&gt;&lt;h2&gt;ಬೇಟೆಗೆ ಬೇಕಾದ ಎಲ್ಲಾ ವಸ್ತುಗಳಿದ್ದವು!&lt;/h2&gt;&lt;p&gt;ಇದೇ ವೇಳೆ ಹೊಸ ಚಪ್ಪಲಿ ಸಿಕ್ಕ ವಿಚಾರವಾಗಿ ಸ್ಪಷ್ಟನೆ ನೀಡಿರುವ ಎಸಿಎಫ್, ಹೊಸ ಚಪ್ಪಲಿಯಲ್ಲಿ ಯಾವ ಸಾಕ್ಷಿ ಸಿಗುತ್ತದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ. ಅದು ಕೂಡ ಪಾರಾಗನ್ ಚಪ್ಪಲಿ. ಕಿತ್ತೊದ್ರೆ ಇರಲಿ ಅಂತಾ ತಂದು ಇಟ್ಟುಕೊಂಡಿರಬಹುದು. ಬ್ಯಾಗ್ ನಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು. ಸ್ಥಳದಲ್ಲಿ ಸಿಕ್ಕ ಮಾಂಸ ಯಾವ ಪ್ರಾಣಿಯದು ಪತ್ತೆ ಹಚ್ಚಲೂ ಲ್ಯಾಬ್ ಗೆ ಕಳಿಸಲಾಗಿದೆ. ವರದಿ ಬಂದ ಈ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.&lt;/p&gt;&lt;p&gt;&lt;/p&gt;&lt;h2&gt;ಅರಣ್ಯ ನಾಶ ಮಾಡುವವರ ಸದೆಬಡಿಯುವ ಕೆಲಸ ಆಗ್ಬೇಕು!&lt;/h2&gt;&lt;p&gt;ಕಳ್ಳಬೇಟೆ ತಡೆ ಶಿಬಿರ ಧ್ವಂಸ ಬಗ್ಗೆ ದೂರು, ವಾಪಾಸ್ ಪಡೆಯುವಂತೆ ಸ್ಥಳೀಯರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರದ ಆಸ್ತಿ ಪಾಸ್ತಿ ನಾಶ ಮಾಡಿದವರ ವಿರುದ್ಧ ಏನ್ ಕ್ರಮ ಕೈಗೊಳ್ತಾರೋ ಆ ಕೆಲಸ ಮಾಡ್ತಿದ್ದೇವೆ. ಯಾರೂ ಹಾನಿ ಮಾಡಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಕಾನೂನು ಪ್ರಕಾರ ಕ್ರಮ, ಯಾವುದೇ ಸಮಸ್ಯೆ ತಂದೊಡ್ಡುವ ಕೆಲಸ ಮಾಡ್ತಿಲ್ಲ. ಯಾರೂ ಅರಣ್ಯ ನಾಶ ಮಾಡ್ತಾರೆ, ಅಂತಹವರ ಸದೆಬಡಿಯುವ ಕೆಲಸ ಕೂಡ ಆಗಬೇಕು ಎಂಬ ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>chamarajnagar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57"/>
        </item>
        <item>
            <title><![CDATA[ಹನೂರು ಶೂಟೌಟ್‌ನಲ್ಲಿ ಪರಾರಿಯಾಗಿದ್ದ 4ನೇ ಆರೋಪಿ ದಾಸ್ ಪ್ರತ್ಯಕ್ಷ; ಕೇಸಿಗೆ ಟ್ವಿಸ್ಟ್ ನೀಡಿದ ವಿಡಿಯೋ ಹೇಳಿಕೆ!]]></title>
            <link>https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q</link>
            <guid isPermaLink="true">https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q</guid>
            <pubDate>Wed, 19 Aug 2026 08:04:20 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್&zwnj;ನಿಂದ ಪರಾರಿಯಾಗಿದ್ದ ಮಹಿಮಾದಾಸ್, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅರಣ್ಯ ಇಲಾಖೆಯವರು ಗುಂಡು ಹಾರಿಸಿದಾಗ ಭಯದಿಂದ ಓಡಿಹೋದೆ ಎಂದು ಹೇಳಿಕೊಂಡಿದ್ದು, ಪೊಲೀಸರ ರಕ್ಷಣೆ ಕೋರಿದ್ದಾನೆ. ಈ ಹೇಳಿಕೆಯು ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0bxfnftnj0k850qjk9c4krj,imgname-hanur-shootout-case-4th-accused-video-1787106416122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಆ.19): ಚಾ&lt;/strong&gt;ಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆ.15ರಂದು ನಡೆದ ಶೂಟೌಟ್&zwnj; ವೇಳೆ ಪರಾರಿಯಾಗಿ ಬದುಕುಳಿದ ಮರಿಯಮಂಗಲ ಗ್ರಾಮದ ಮಹಿಮಾದಾಸ್ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.&lt;/p&gt;&lt;p&gt;ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮಹಿಮಾದಾಸ್&zwnj;, ಶೂಟೌಟ್ ವೇಳೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದರ ಮಧ್ಯೆಯೇ ಆತ ಅಜ್ಞಾತಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.&lt;/p&gt;&lt;h2&gt;&lt;strong&gt;ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು&lt;/strong&gt;&lt;/h2&gt;&lt;p&gt;&lsquo;ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಬಂದರು. ಅವರು ಬಂದ ತಕ್ಷಣ ಶೂಟ್&zwnj; ಮಾಡಿದರು, ನನಗೆ ಭಯವಾಯ್ತು, ಓಡಿ ಹೋದೆ. ಆಗ ಸಮಯ ಸರಿ ಸುಮಾರು ಬೆಳಗಿನ ಜಾವ 5.20 ಆಗಿತ್ತು. ಭಯದಿಂದ ನಾನು ಅಲ್ಲಿಂದ ಓಡಿ ಬಿಟ್ಟೆ. 5 ನಿಮಿಷ ಆದ ಮೇಲೆ ಯಾವುದೇ ಶಬ್ದ ಇರಲಿಲ್ಲ. ಆದರೆ, ನನಗೆ ಹುಷಾರಿರಲಿಲ್ಲ. ಹೀಗಾಗಿ, ಅಲ್ಲಿಂದ ಓಡಿ ಮನೆಗೆ ಬಂದೆ. ಬಳಿಕ, ಮನೆಯವರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಈಗ ಅರಣ್ಯ ಇಲಾಖೆಯವರು ಎಲ್ಲಾ ಕಡೆ ನನ್ನನ್ನು ಹುಡುಕುತ್ತಿದ್ದಾರೆ. ನನಗೆ ಭಯವಾಗುತ್ತಿದೆ. ಹೀಗಾಗಿ, ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು&rsquo; ಎಂದು ವಿಡಿಯೋದಲ್ಲಿ ಹೇಳಿದ್ದಾನೆ.&lt;/p&gt;&lt;p&gt;ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಮಹಿಮಾದಾಸ್ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q"/>
        </item>
        <item>
            <title><![CDATA[ಹನೂರು ಎನ್‌ಕೌಂಟರ್ ಸೇಡು: ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು; ಅರಣ್ಯ ಇಲಾಖೆಗೆ ಆತಂಕ!]]></title>
            <link>https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh</link>
            <guid isPermaLink="true">https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh</guid>
            <pubDate>Thu, 20 Aug 2026 10:47:52 +0530</pubDate>
            <description><![CDATA[&lt;p&gt;ಹನೂರು ಎನ್&zwnj;ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0es94yrx47frkxekdyeh7mk,imgname-chamarajanagara-forest-1787202671576.jpg" type="image/jpeg" height="390" width="690"/>
            <content:encoded><![CDATA[&lt;p&gt;ಹನೂರು ಎನ್&zwnj;ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.&lt;/p&gt;&lt;img&gt;&lt;p&gt;ಚಾಮರಾಜನಗರ: ಹನೂರು ತಾಲೂಕಿನ ಅರಣ್ಯದಲ್ಲಿ ನಡೆದ ಎನ್&zwnj;ಕೌಂಟರ್ ಬೆನ್ನಲ್ಲೇ ಭುಗಿಲೆದ್ದಿರುವ ಕಿಚ್ಚು ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಕಾವೇರಿ ವನ್ಯಧಾಮ ಮಾತ್ರವಲ್ಲದೆ, ಇದೀಗ ಮಲೆ ಮಹದೇಶ್ವರ (MM Hills) ವನ್ಯಧಾಮಕ್ಕೂ ಕಿಡಿಗೇಡಿಗಳ ಅಟ್ಟಹಾಸ ವ್ಯಾಪಿಸಿದೆ. ಅರಣ್ಯ ರಕ್ಷಣಾ ಶಿಬಿರಗಳನ್ನು ಜಿಲೆಟಿನ್, ಡೈನಾಮೈಟ್ ಬಳಸಿ ಸ್ಫೋಟಿಸುತ್ತಿರುವುದು ಹಾಗೂ ಕಾಡಿಗೆ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಅಖಾಡಕ್ಕಿಳಿಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಶಿಲುವೆಪುರ ಅರಣ್ಯದಲ್ಲಿ 10 ಎಕರೆ ಕಾಡಿಗೆ ಬೆಂಕಿ!&lt;/strong&gt;&lt;/p&gt;&lt;p&gt;ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿರುವ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ಜಾಗೇರಿ ಬಳಿಯಿದ್ದ ಕಳ್ಳಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ದುಷ್ಕೃತ್ಯದ ವಿಡಿಯೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದು, ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಜಿಲೆಟಿನ್, ಡೈನಾಮೈಟ್ ಬ್ಲಾಸ್ಟ್: ಸ್ಥಳಕ್ಕೆ 'ಆ್ಯಂಟಿ ನಕ್ಸಲ್ ಫೋರ್ಸ್' ಭೇಟಿ ಸಾಧ್ಯತೆ&lt;/strong&gt;&lt;/p&gt;&lt;p&gt;ಅರಣ್ಯದ ಒಳಗಿರುವ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸಲು ದುಷ್ಕರ್ಮಿಗಳು ಮಾರಕ ಜಿಲೆಟಿನ್ ಮತ್ತು ಡೈನಾಮೈಟ್ ಕಡ್ಡಿಗಳನ್ನು ಬಳಸಿರುವುದು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ.&lt;/p&gt;&lt;p&gt;ದಟ್ಟ ಅರಣ್ಯದಲ್ಲಿ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರ ಜೊತೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ತಂಡವು ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.&lt;/p&gt;&lt;p&gt;ಸ್ಫೋಟಕಗಳು ಇವರಿಗೆ ಎಲ್ಲಿಂದ ಪೂರೈಕೆಯಾಗುತ್ತಿವೆ? ಇದರ ಹಿಂದೆ ನಕ್ಸಲ್ ಅಥವಾ ಸಂಘಟಿತ ಕಳ್ಳಬೇಟೆ ಜಾಲಗಳ ಕೈವಾಡವಿದೆಯೇ ಎಂಬ ಆಯಾಮದಲ್ಲೂ ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;8 ಶಿಬಿರಗಳು, 3 ವಸತಿ ಗೃಹ, ಜೀಪ್ ಧ್ವಂಸ: ACF ಮರಿಸ್ವಾಮಿ ಹೇಳಿಕೆ&lt;/strong&gt;&lt;/p&gt;&lt;p&gt;ಘಟನೆಯ ಕುರಿತು ಕಾವೇರಿ ವನ್ಯಧಾಮದ ಎಸಿಎಫ್ (ACF) ಮರಿಸ್ವಾಮಿ ಅವರು ಮಾಹಿತಿ ನೀಡಿ, &quot;ವನ್ಯಧಾಮದಲ್ಲಿ ಒಟ್ಟು 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಈ ಪೈಕಿ 8 ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಾಮೈಟ್ ಬಳಸಿ ತೀವ್ರವಾಗಿ ಹಾನಿಗೊಳಿಸಲಾಗಿದೆ. 3 ಸಿಬ್ಬಂದಿ ವಸತಿ ಗೃಹ, ಸೋಲಾರ್ ಫೆನ್ಸಿಂಗ್, ಬ್ಯಾಟರಿಗಳು ಹಾಗೂ ಒಂದು ಇಲಾಖಾ ಜೀಪ್ ಅನ್ನು ನಾಶಮಾಡಲಾಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;'ನಾವು ರೈತರ ಮೇಲೆ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ಅಕ್ರಮ ಕಳ್ಳಬೇಟೆಯಲ್ಲಿ ತೊಡಗಿರುವ ದುಷ್ಕರ್ಮಿಗಳೇ ದ್ವೇಷದಿಂದ ಇಂತಹ ಕೃತ್ಯ ಎಸಗಿದ್ದಾರೆ. ಕಾಡಿನಲ್ಲಿ ಹಲವು ಕಾಲುದಾರಿಗಳಿದ್ದು, ರಾತ್ರಿ ವೇಳೆ ನುಗ್ಗಿ ಸ್ಫೋಟಿಸುತ್ತಿದ್ದಾರೆ. ಈ ಶಿಬಿರಗಳ ನಾಶದಿಂದ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಯುವುದು ಕಷ್ಟವಾಗಲಿದ್ದು, ಅರಣ್ಯ ರಕ್ಷಣೆಗೆ ಭಾರೀ ಹಿನ್ನಡೆಯಾಗಲಿದೆ. ದಾಳಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಇಲಾಖೆಗೆ ತಿಳಿಸಬೇಕು' ಕಾವೇರಿ ವನ್ಯಧಾಮ ಎಸಿಎಫ್ ಮರಿಸ್ವಾಮಿ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;&lt;strong&gt;ತನಿಖೆ ತೀವ್ರ, ಅರಣ್ಯದಲ್ಲಿ ಹೈ ಅಲರ್ಟ್&lt;/strong&gt;&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಮಾಪುರ ಮತ್ತು ಹನೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅರಣ್ಯದ ಒಳಗಿರುವ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕಾಡು ನಾಶ ಮತ್ತು ಸ್ಫೋಟದಲ್ಲಿ ಭಾಗಿಯಾದ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ಆರಂಭಿಸಿವೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh"/>
        </item>
        <item>
            <title><![CDATA[ಹನೂರಿನಲ್ಲಿ 'ಟೈಗರ್ ಆಫ್ ಜಸ್ಟೀಸ್' ಸಂಘಟನೆ ಸಕ್ರಿಯ: ಎಲ್‌ಟಿಟಿಇ, 'ಮಿನಿ ವೀರಪ್ಪನ್' ಬಂಧನಕ್ಕೆ ವಿಶೇಷ ತಂಡ!]]></title>
            <link>https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy</link>
            <guid isPermaLink="true">https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy</guid>
            <pubDate>Thu, 27 Aug 2026 11:04:21 +0530</pubDate>
            <description><![CDATA[&lt;p&gt;ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್&zwnj;ಕೌಂಟರ್ ಬಳಿಕ, 'ಟೈಗರ್ ಆಫ್ ಜಸ್ಟೀಸ್' ಎಂಬ ಸಂಘಟನೆಯ ಹೆಸರು ಕೇಳಿಬಂದಿದ್ದು, ಇದರ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ವೀರಪ್ಪನ್&zwnj; ಬೆಂಬಲಿಗರು ಮತ್ತು ತಮಿಳು ತೀವ್ರಗಾಮಿ ಸಂಘಟನೆಗಳ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0es9k1c8ddw4ve5h017d3kn,imgname-chamarajanagara-forest--2--1787202685996.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ಚಾಮರಾಜನಗರ (ಆ.27): ಚಾ&lt;/strong&gt;ಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಆಗಸ್ಟ್&zwnj; 15ರಂದು ನಡೆದ ಎನ್&zwnj;ಕೌಂಟರ್ ಪ್ರಕರಣದ ಬಳಿಕ ಕಾಡಂಚಿನ ಗ್ರಾಮಗಳಲ್ಲಿ &lsquo;ಟೈಗರ್ ಆಫ್ ಜಸ್ಟೀಸ್&rsquo; ಎಂಬ ಸಂಘಟನೆ ಹೆಸರು ಕೇಳಿಬಂದಿದ್ದು, ಅದರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಮುತ್ತುರಾಜು ತಿಳಿಸಿದ್ದಾರೆ.&lt;/p&gt;&lt;p&gt;ಶೂಟೌಟ್&zwnj;ಗೆ ಪ್ರತೀಕಾರವಾಗಿ ಕಳ್ಳಬೇಟೆ ತಡೆ ಶಿಬಿರ, ವಸತಿಗೃಹಗಳ ಧ್ವಂಸ, ಜಿಲೆಟಿನ್&zwnj;ನಿಂದ ಸ್ಫೋಟ ನಡೆಸಿರುವುದರ ಹಿಂದೆ ತಮಿಳುನಾಡಿನ ಕೆಲವು ತೀವ್ರಗಾಮಿ ಸಂಘಟನೆ ಹಾಗೂ ವೀರಪ್ಪನ್ ಬೆಂಬಲಿಗರ ಕುಮ್ಮಕ್ಕು ಇರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.&lt;/p&gt;&lt;p&gt;ಜಿಲ್ಲಾ ಸೋಷಿಯಲ್&zwnj; ಮೀಡಿಯಾ ಮಾನಿಟರ್ ಸೆಲ್&zwnj;ನಿಂದ ಎನ್&zwnj;ಕೌಂಟರ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪ್ರಚೋದನಾಕಾರಿ ಹೇಳಿಕೆ, ಪರ-ವಿರೋಧ ಹೇಳಿಕೆ ಹಾಗೂ ಸುಳ್ಳು ಸುದ್ದಿ ಹರಡುವಿಕೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.&lt;/p&gt;&lt;h2&gt;&lt;strong&gt;ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ&lt;/strong&gt;&lt;/h2&gt;&lt;p&gt;&lsquo;ಟೈಗರ್ ಆಫ್ ಜಸ್ಟೀಸ್&rsquo; ಸಂಘಟನೆಯಿಂದ &lsquo;ಮೈ ವಿಲೇಜ್&zwnj; ಗ್ರೂಪ್&zwnj;&rsquo;ನಲ್ಲಿ ಪ್ರಕಟವಾಗಿರುವ &lsquo;ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಈ ಭಾಗದಲ್ಲಿ ಮೂಲಭೂತ ಸೌಕರ್ಯ ನೀಡದೆ ವಂಚನೆ ಮಾಡಲಾಗುತ್ತಿದೆ&rsquo; ಎಂಬಿತ್ಯಾದಿ ಹೇಳಿಕೆಗಳು, ಸಂಘಟನೆಯ ಸಂದೇಶ, ಪ್ರಚೋದನೆ ನೀಡಲಾಗುತ್ತಿರುವ ವಿಚಾರ, ಈ ಸಂಬಂಧ ಬೇರೆ, ಬೇರೆ ಗ್ರೂಪ್&zwnj;ಗಳ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ, ಈ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಪ್ರಚೋದನೆ ಕಂಡು ಬಂದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.&lt;/p&gt;&lt;h3&gt;&lt;strong&gt;ಗೋವಿಂದನ ಬಂಧನಕ್ಕೆ ತಂಡ ರಚನೆ:&lt;/strong&gt;&lt;/h3&gt;&lt;p&gt;ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಪ್ರಿಯಾ ಎಂಬುವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಿನಿ ವೀರಪ್ಪನ್&zwnj; ಖ್ಯಾತಿಯ ಗಂಗನದೊಡ್ಡಿ ಗೋವಿಂದನ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ಆತ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಾವೇರಿ ವನ್ಯಧಾಮದ ತನಿಖಾ ವರದಿ ಇಂದು ಅಥವಾ ನಾಳೆ ಸಲ್ಲಿಕೆ:&lt;/strong&gt;&lt;/h2&gt;&lt;p&gt;ಕಾವೇರಿ ವನ್ಯಧಾಮದಲ್ಲಿ ಆ.15ರಂದು ನಡೆದ ಶೂಟೌಟ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಗುರುವಾರ ಅಥವಾ ಶುಕ್ರವಾರ ಸಲ್ಲಿಕೆ ಮಾಡಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.&lt;/p&gt;&lt;p&gt;ಚಾಮರಾಜನಗರ ಎಸಿ ದಿನೇಶ್ ಕುಮಾರ್ ಮೀನಾರನ್ನು ತನಿಖಾಧಿಕಾರಿಯಾಗಿ ನೇಮಿಸಿ, 7 ದಿನದೊಳಗೆ ತನಿಖಾ ವರದಿ ಕೊಡಲು ಸೂಚಿಸಲಾಗಿತ್ತು. ಸಮಗ್ರ ಮಾಹಿತಿ ಕಲೆ ಹಾಕುವ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ತನಿಖಾಧಿಕಾರಿ ಕೇಳಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಅಥವಾ ಶುಕ್ರವಾರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy"/>
        </item>
        <item>
            <title><![CDATA[ಚಾಮರಾಜನಗರ ಎನ್‌ಕೌಂಟರ್ ಕೇಸ್‌ಗೆ ಬಿಗ್ ಟ್ವಿಸ್ಟ್! ಬರೋಬ್ಬರಿ 30 ಕೆಜಿ ಮಾಂಸ ಪತ್ತೆ..!]]></title>
            <link>https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr</link>
            <guid isPermaLink="true">https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr</guid>
            <pubDate>Sun, 16 Aug 2026 21:30:52 +0530</pubDate>
            <description><![CDATA[&lt;p&gt;ಚಾಮರಾಜನಗರ ಶೂಟೌಟ್&zwnj; ಕೇಸ್&zwnj;ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅರಣ್ಯಾಧಿಕಾರಿಗಳು ಇವತ್ತು ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಇರುವ ವಿಚಾರಗಳು ಪ್ರಕರಣಕ್ಕೆ ಮೇಜರ್ ತಿರುವು ನೀಡುವ ಸಾಧ್ಯತೆಗಳು ದಟ್ಟವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05mtv7e6b8rseg0w8v87m8w,imgname-chamarajanagara-1786896018669.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆಗಾರರ ಮೇಲಿನ ಗುಂಡಿನ ದಾಳಿ (Encounter) ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಇಂದು ಎರಡನೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಘಟನಾ ಸ್ಥಳದಲ್ಲಿ ವನ್ಯಜೀವಿ ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ತನಿಖಾಧಿಕಾರಿಗಳಿಂದ ಸ್ಥಳ ಪರಿಶೀಲನೆ&lt;/strong&gt;&lt;/h2&gt;&lt;p&gt;ಗುಂಡಿನ ದಾಳಿ ನಡೆದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್&zwnj;ಕುಮಾರ್ ಮೀನಾ (IAS) ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಅದರಂತೆ ದಿನೇಶ್&zwnj;ಕುಮಾರ್ ಮೀನಾ ಅವರು ಆಗಸ್ಟ್ 15 ಮತ್ತು 16 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ತನಿಖೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ತನಿಖಾಧಿಕಾರಿಗಳು ಕೋರಿದ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನಾ ಸ್ಥಳದಲ್ಲಿ ಸಿಕ್ಕಿದ್ದೇನು?&lt;/strong&gt;&lt;/h2&gt;&lt;p&gt;ಕೂಂಬಿಂಗ್ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಗೆ ಘಟನಾ ಸ್ಥಳದಲ್ಲಿ ಕಳ್ಳಬೇಟೆಗಾರರು ಬಿಟ್ಟು ಹೋಗಿದ್ದ ಎನ್ನಲಾದ ಹಲವು ವಸ್ತುಗಳು ಲಭ್ಯವಾಗಿವೆ. ಎರಡು ಚೀಲಗಳಲ್ಲಿ ತುಂಬಿದ್ದ ಅಂದಾಜು 20 ರಿಂದ 30 ಕೆಜಿ ತೂಕದ ವನ್ಯಜೀವಿ ಮಾಂಸ ಪತ್ತೆಯಾಗಿದೆ. ನಾಲ್ಕು ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, ಎರಡು ಲೀಟರ್&zwnj;ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಾಲು ಲೀಟರ್ ನೀರು ಪತ್ತೆಯಾಗಿದೆ. ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಯಾವ ಪ್ರಾಣಿಯ ಮಾಂಸ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆ ಆಸ್ತಿಪಾಸ್ತಿ ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಎನ್&zwnj;ಕೌಂಟರ್ ಘಟನೆ ನಡೆದ ನಂತರ ಅರಣ್ಯ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೆಲವು ದುಷ್ಕರ್ಮಿಗಳು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಏಳು ಕಳ್ಳಬೇಟೆ ತಡೆ ಶಿಬಿರಗಳು (Anti-Poaching Camps) ಮತ್ತು ಒಂಬತ್ತು ವಸತಿಗೃಹಗಳಿಗೆ ಹಾನಿ ಮಾಡಲಾಗಿದೆ. ವಸತಿಗೃಹಗಳಲ್ಲಿದ್ದ ಪೀಠೋಪಕರಣಗಳು ಮತ್ತು ಸಾಮಾನು ಸರಂಜಾಮುಗಳನ್ನು ಪುಡಿಪುಡಿ ಮಾಡಲಾಗಿದೆ. ಇಲಾಖೆಗೆ ಸೇರಿದ ಒಂದು ಜೀಪ್ (ನಾಲ್ಕು ಚಕ್ರದ ವಾಹನ) ಹಾಗೂ ಸಿಬ್ಬಂದಿಯ ನಾಲ್ಕು ದ್ವಿಚಕ್ರ ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ದಾಖಲು&lt;/strong&gt;&lt;/h2&gt;&lt;p&gt;ದುಷ್ಕರ್ಮಿಗಳ ಈ ಕೃತ್ಯದಿಂದ ಸರ್ಕಾರಕ್ಕೆ ಮತ್ತು ಇಲಾಖಾ ಸಿಬ್ಬಂದಿಗೆ ಅಪಾರ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಎಸಿಎಫ್ ಮರಿಸ್ವಾಮಿ ಅವರು ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆಯಾಗಿ ಕಾವೇರಿ ವನ್ಯಧಾಮದಲ್ಲಿ ನಡೆದ ಈ ಎನ್&zwnj;ಕೌಂಟರ್ ಮತ್ತು ನಂತರ ನಡೆದ ವಿಧ್ವಂಸಕ ಕೃತ್ಯಗಳು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;&lt;strong&gt;ಪತ್ರಿಕಾ ಪ್ರಕಟಣೆ&lt;/strong&gt;&lt;/h2&gt;&lt;p&gt;&lt;strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ದಾಖಲಾದ ವನ್ಯಜೀವಿ ಅಪರಾಧ ವರದಿ ಸಂಖ್ಯೆ: 01/2026-27 ದಿನಾಂಕ: 15.08.2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ&lt;/strong&gt;&lt;/p&gt;&lt;p&gt;&lt;strong&gt;ಪತ್ರಿಕಾ ಪ್ರಕಟಣೆ - 02 ದಿನಾಂಕ: 16.08.2026&lt;/strong&gt;&lt;/p&gt;&lt;p&gt;&lt;strong&gt;ದಿನಾಂಕ: 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆ ಕಾರ್ಯಾಚರಣೆಯ ಪ್ರಕರಣದಲ್ಲಿ ಗುಂಡಿನ ದಾಳಿ ನಡೆದಿರುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರು ಶ್ರೀ ದಿನೇಶಕುಮಾರ್ ಮೀನಾ, ಭಾ.ಆ.ಸೇ., ಉಪವಿಭಾಗಾಧಿಕಾರಿಗಳು, ಕೊಳ್ಳೇಗಾಲ ಉಪವಿಭಾಗ, ಕೊಳ್ಳೇಗಾಲ ಇವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿರುತ್ತಾರೆ.&lt;/strong&gt;&lt;/p&gt;&lt;p&gt;&lt;strong&gt;ಅದರಂತೆ, ಸದರಿ ಉಪವಿಭಾಗಾಧಿಕಾರಿಗಳು ದಿನಾಂಕ: 15.08.2026 ರಂದು ಘಟನಾ ಸ್ಥಳಕ್ಕೆ ತನಿಖೆಯ ಸಲುವಾಗಿ ತೆರಳಿದ್ದು, ಸದರಿ ದಿನದಂದು ತನಿಖೆಯು ಪೂರ್ಣವಾಗಿರುವುದಿಲ್ಲ. ಆದುದರಿಂದ ದಿನಾಂಕ: 16.08.2026 ರಂದು ತನಿಖೆಯು ಮುಂದುವರೆದಿರುತ್ತದೆ. ಅದರ ಭಾಗವಾಗಿ ಉಪ ವಿಭಾಗಾಧಿಕಾರಿಗಳ ಸಮಕ್ಷಮ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಜರಾಗಿ ತನಿಖಾಧಿಕಾರಿಗಳು ಕೋರಿರುವ ಮಾಹಿತಿಯನ್ನು ಒದಗಿಸಿರುತ್ತಾರೆ.&lt;/strong&gt;&lt;/p&gt;&lt;p&gt;&lt;strong&gt;ಮುಂದುವರೆದು, ದಿನಾಂಕ: 15.08.2026 ರಂದು ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳಿಗೆ 02 ಚೀಲಗಳಲ್ಲಿ ಯಾವುದೋ ವನ್ಯಪ್ರಾಣಿಯ ಮಾಂಸ ತುಂಬಿರುವುದು ಕಂಡುಬಂದಿದ್ದು, ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸದರಿ ಮಾಂಸವನ್ನು ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿಯೇ ಸಂರಕ್ಷಿಸಿರುತ್ತಾರೆ ಹಾಗೂ ದಿನಾಂಕ: 16.08.2026 ರ ಪೂರ್ವಾಹ್ನ ಉಪವಿಭಾಗಾಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಸಮಕ್ಷಮ ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದ 04 ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, 02 ಲೀಟರ್ ನೀಲಿ ಕ್ಯಾಪ್ ಹೊಂದಿರುವ ಮರಿಂಡಾ ಪ್ಲಾಸ್ಟಿಕ್ ಬಾಟಲಿನಲ್ಲಿ ಅಂದಾಜು &frac14; ಲೀಟರ್ ನೀರು ಮತ್ತು 02 ಚೀಲಗಳಲ್ಲಿ ತುಂಬಿದ ಅಂದಾಜು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ಸರ್ಕಾರದ ಪರವಾಗಿ ಅಮಾನತುಪಡಿಸಿ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ವಶಪಡಿಸಿಕೊಳ್ಳಲಾದ ವನ್ಯಪ್ರಾಣಿ ಮಾಂಸದ ಪರೀಕ್ಷೆಯನ್ನು ದಿನಾಂಕ: 16.08.2026 ರ ಅಪರಾಹ್ನ ನಡೆಸಲಾಗಿರುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ಅಲ್ಲದೇ, ಸದರಿ ಘಟನೆ ನಡೆದ ತರುವಾಯ ಕೆಲವು ದುಷ್ಕರ್ಮಿಗಳು 07 ಕಳ್ಳಬೇಟೆ ತಡೆ ಶಿಬಿರಗಳು, 09 ವಸತಿಗೃಹಗಳಿಗೆ ಹಾನಿ ಮಾಡಿದ್ದು, ಸದರಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಹಾಗೂ ಸಾಮಾನು ಸರಂಜಾಮುಗಳನ್ನು ಮತ್ತು 01 ಸಂಖ್ಯೆ ನಾಲ್ಕು ಚಕ್ರದ ಇಲಾಖಾ ವಾಹನ ಹಾಗೂ ಸಿಬ್ಬಂದಿಗಳ 04 ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿರುತ್ತಾರೆ. ಇದರಿಂದ ಸರ್ಕಾರಕ್ಕೆ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಅಪಾರ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಈ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳಿಗೆ ದೂರನ್ನು ನೀಡಲಾಗಿರುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ಸಹಿ/-&lt;/strong&gt;&lt;/p&gt;&lt;p&gt;&lt;strong&gt;ಉಪ ಅರಣ್ಯ ಸಂರಕ್ಷಣಾಧಿಕಾರಿ,&lt;/strong&gt;&lt;/p&gt;&lt;p&gt;&lt;strong&gt;ಕಾವೇರಿ ವನ್ಯಜೀವಿ ವಿಭಾಗ,&lt;/strong&gt;&lt;/p&gt;&lt;p&gt;&lt;strong&gt;ಕೊಳ್ಳೇಗಾಲ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr"/>
        </item>
        <item>
            <title><![CDATA[ಹಿಮವದ್ ಗೋಪಾಲಸ್ವಾಮಿ ದೇವರ ದರ್ಶನಕ್ಕೆ ಬಂದ ನಟ ಚಿಕ್ಕಣ್ಣ-ಪಾವನಾ: ಅಲ್ಲೇ ಸಿಕ್ತು ಸಿಹಿ ಸುದ್ದಿ!]]></title>
            <link>https://kannada.asianetnews.com/sandalwood/kannada-comedy-actor-chikkanna-and-pavana-visit-himavad-gopalaswamy-betta-lakshmiputra-release-date-announced-gvd/articleshow-p5gtgbp</link>
            <guid isPermaLink="true">https://kannada.asianetnews.com/sandalwood/kannada-comedy-actor-chikkanna-and-pavana-visit-himavad-gopalaswamy-betta-lakshmiputra-release-date-announced-gvd/articleshow-p5gtgbp</guid>
            <pubDate>Tue, 01 Sep 2026 15:29:06 +0530</pubDate>
            <description><![CDATA[&lt;p&gt;ಹಾಸ್ಯ ನಟ ಚಿಕ್ಕಣ್ಣ ಪತ್ನಿ ಪಾವನಾ ಜೊತೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ &lsquo;ಲಕ್ಷ್ಮೀಪುತ್ರ&rsquo; ಸಿನಿಮಾ ನವೆಂಬರ್ 27ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1e6g816qgc6y7c7fzmjctjr,imgname-nkn-1788256722982.png" type="image/jpeg" height="390" width="690"/>
            <content:encoded><![CDATA[&lt;p&gt;ಹಾಸ್ಯ ನಟನಾಗಿ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಇದೀಗ ತಮ್ಮ ವೈವಾಹಿಕ ಜೀವನದ ಸಂಭ್ರಮದ ನಡುವೆ ಪತ್ನಿ ಪಾವನಾ ಅವರೊಂದಿಗೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕ್ಕೆ ಗೆಳೆಯರೊಂದಿಗೆ ಆಗಮಿಸಿದ ದಂಪತಿ, ಗೋಪಾಲಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.&lt;/p&gt;&lt;p&gt;ಚಿಕ್ಕಣ್ಣ ಮತ್ತು ಪಾವನಾ ದಂಪತಿಯನ್ನು ದೇವಸ್ಥಾನದ ಅರ್ಚಕರು ಆತ್ಮೀಯವಾಗಿ ಬರಮಾಡಿಕೊಂಡರು. ಶಲ್ಯ ಹಾಗೂ ಹೂವಿನ ಹಾರ ಹಾಕಿ ಗೌರವಿಸಿದ ಅರ್ಚಕರು, ಬಾಲ ಗೋಪಾಲ ಮೂರ್ತಿಯನ್ನು ದಂಪತಿಯ ಕೈಗೆ ನೀಡಿ ವಿಶೇಷ ಪೂಜೆ ನೆರವೇರಿಸಿದರು.&lt;/p&gt;&lt;p&gt;ಪೂಜೆ ಬಳಿಕ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದ ಚಿಕ್ಕಣ್ಣ-ಪಾವನಾ, ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಹಸಿರು ಸೌಂದರ್ಯ ಮತ್ತು ಸದಾ ಮಂಜಿನಿಂದ ಕಂಗೊಳಿಸುವ ಪ್ರಕೃತಿಯನ್ನು ಕಣ್ತುಂಬಿಕೊಂಡರು. ಇದೇ ವೇಳೆ ನೆಚ್ಚಿನ ನಟನನ್ನು ಕಂಡ ಸಾರ್ವಜನಿಕರು ಹಾಗೂ ಭಕ್ತರು ಅವರೊಂದಿಗೆ ಸೆಲ್ಫಿ ಮತ್ತು ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು.&lt;/p&gt;&lt;h2&gt;&lt;strong&gt;ನಾಯಕನಾಗಿ ಚಿಕ್ಕಣ್ಣನ ಮತ್ತೊಂದು ಸಿನಿಮಾ ರೆಡಿ!&lt;/strong&gt;&lt;/h2&gt;&lt;p&gt;ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಚಿಕ್ಕಣ್ಣ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಲಕ್ಷ್ಮೀಪುತ್ರ' ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ, 'ಉಪಾಧ್ಯಕ್ಷ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಯಶಸ್ಸು ಕಂಡಿದ್ದರು. ಇದೀಗ ನಾಯಕನಾಗಿ ತಮ್ಮ ಎರಡನೇ ಹೆಜ್ಜೆ ಇಡುತ್ತಿದ್ದಾರೆ.&lt;/p&gt;&lt;p&gt;ಚಿತ್ರದ ಬಿಡುಗಡೆ ದಿನಾಂಕವನ್ನು ಸ್ವತಃ ಚಿಕ್ಕಣ್ಣ ಘೋಷಿಸಿದ್ದು, ನವೆಂಬರ್ 27ರಂದು 'ಲಕ್ಷ್ಮೀಪುತ್ರ' ರಾಜ್ಯಾದ್ಯಂತ ತೆರೆಕಾಣಲಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಲ್ಲೇ ತಮ್ಮ ಸಿನಿಮಾ ಬಿಡುಗಡೆಯಾಗುತ್ತಿರುವುದಕ್ಕೆ ಚಿಕ್ಕಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&quot;ನನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿ ಗಣೇಶೋತ್ಸವ ಮತ್ತು ರಾಜ್ಯೋತ್ಸವದ ವೇದಿಕೆಗಳೇ ನನ್ನ ಬದುಕಿಗೆ ಆಸರೆಯಾಗಿದ್ದವು. ಅದೇ ತಿಂಗಳಲ್ಲಿ ನನ್ನ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿಶೇಷ. ಪ್ರೇಕ್ಷಕರು ಎಂದಿನಂತೆ ಪ್ರೀತಿ, ಪ್ರೋತ್ಸಾಹ ನೀಡಿ ಚಿತ್ರವನ್ನು ಹರಸಬೇಕು&quot; ಎಂದು ಚಿಕ್ಕಣ್ಣ ಮನವಿ ಮಾಡಿದ್ದಾರೆ. ಹೀಗಾಗಿ ಒಂದು ಕಡೆ ಪತ್ನಿ ಪಾವನಾ ಜೊತೆ ದೇವರ ದರ್ಶನ, ಮತ್ತೊಂದೆಡೆ ನಾಯಕನಾಗಿ ಹೊಸ ಸಿನಿಮಾದ ಬಿಡುಗಡೆ ಸಿದ್ಧತೆ-ಚಿಕ್ಕಣ್ಣ ಪಾಲಿಗೆ ಸದ್ಯ ಸಂಭ್ರಮದ ಸಮಯವೇ ಸರಿ!&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-comedy-actor-chikkanna-and-pavana-visit-himavad-gopalaswamy-betta-lakshmiputra-release-date-announced-gvd/articleshow-p5gtgbp"/>
        </item>
        <item>
            <title><![CDATA[ಹನೂರು ಎನ್ಕೌಂಟರ್‌ಗೆ ಅರಣ್ಯ ಸಿಬ್ಬಂದಿ ‘ಜಿಂಕೆ ಮಾಂಸ’ ಸಾಕ್ಷ್ಯ; ತ.ನಾಡು ವಿಪಕ್ಷಗಳ ಆಕ್ರೋಶ]]></title>
            <link>https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc</link>
            <guid isPermaLink="true">https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc</guid>
            <pubDate>Mon, 17 Aug 2026 05:41:03 +0530</pubDate>
            <description><![CDATA[ಕಾವೇರಿ ವನ್ಯಜೀವಿ ವಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ತನಿಖೆ ಆರಂಭವಾಗಿದೆ. ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲವೆಂದು ಸಾಬೀತುಪಡಿಸಲು, ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಪಡಿಸಿಕೊಂಡ ಸುಮಾರು 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ತನಿಖಾಧಿಕಾರಿಗಳ ಮುಂದೆ ಸಾಕ್ಷಿಯಾಗಿ ಇರಿಸಿದೆ. ಈ ಘಟನೆಯಿಂದ ಉದ್ರಿಕ್ತರಾದ ಜನರು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ಸಂಬಂಧ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ. ಈ ಮೂಲಕ ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನಿಸಿದೆ.&lt;/p&gt;&lt;p&gt;ಕೊಳ್ಳೇಗಾಲದ ಉಪವಿಭಾಗಧಿಕಾರಿ ದಿನೇಶ್&zwnj; ಕುಮಾರ್&zwnj; ಮೀನಾ ಅವರಿಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಎನ್&zwnj;ಕೌಂಟರ್&zwnj; ನಡೆದ ಕಾವೇರಿ ವನ್ಯಜೀವಿ ವಿಭಾಗದ ಶಾಗ್ಯ ಅರಣ್ಯ ಪ್ರದೇಶ, ಹನೂರಿನ ಅರಣ್ಯ ಕಚೇರಿ, ಕಳ್ಳಬೇಟೆ ನಿಗಾ ಶಿಬಿರಗಳಿಗೆ ದಿನೇಶ್&zwnj; ಭೇಟಿ ನೀಡಿದ್ದರು ಎಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಎನ್&zwnj;ಕೌಂಟರ್&zwnj; ಕಾರ್ಯಾಚರಣೆ ವೇಳೆ ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿರುವ 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ದಿನೇಶ್&zwnj; ಅವರ ಮುಂದೆ ಹಾಜರು ಪಡಿಸಿದ್ದಾರೆ. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರಗಳನ್ನು ಹಾಜರು ಪಡಿಸಿದ್ದೇವೆ. ವಶಪಡಿಸಿಕೊಂಡ ಮಾಂಸದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಅಪಾರ ನಷ್ಟ:&lt;/strong&gt;&lt;/h2&gt;&lt;p&gt;ಈ ನಡುವೆ ಇದು ನಕಲಿ ಎನ್&zwnj;ಕೌಂಟರ್&zwnj; ಎಂದು ಆರೋಪಿಸಿದ ಉದ್ರಿಕ್ತ ಜನರು 7 ಕಳ್ಳಬೇಟೆ ತಡೆ ಶಿಬಿರಗಳು ಮತ್ತು 9 ವಸತಿ ಗೃಹಗಳಿಗೆ ಹಾನಿ ಮಾಡಿದ್ದಾರೆ. ಪೀಠೋಪಕರಣ, ಸಾಮಾನುಗಳನ್ನು ಧ್ವಂಸಗೊಳಿಸಿದ್ದಾರೆ. ಜೊತೆಗೆ 1 ಇಲಾಖಾ ನಾಲ್ಕು ಚಕ್ರದ ವಾಹನ ಮತ್ತು 4 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಅಪಾರ ನಷ್ಟವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;7 ದಿನದಲ್ಲಿ ವರದಿ ಸಲ್ಲಿಕೆ&lt;/strong&gt;&lt;/h3&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿಗೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿದ್ದಾರೆ. ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.&zwnj; ಈಗಾಗಲೇ ತನಿಖೆ ಆರಂಭವಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದೇನೆ.&zwnj; ಗುಂಡೇಟಿಗೆ ಬಲಿ ಆದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ಕೊಳ್ಳೇಗಾಲ ಉಪ ವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತನಿಖಾ ಟೀಂಗೆ ಏನು ಹಸ್ತಾಂತರ?&lt;/strong&gt;&lt;/h3&gt;&lt;p&gt;- 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ&lt;/p&gt;&lt;p&gt;- ಬೇಟೆಗಾರರು ಬಳಸಿದ್ದಾರೆ ಎನ್ನಲಾದ ಗನ್&zwnj;, 4 ಪ್ಯಾರಾಗನ್ ಚಪ್ಪಲಿ&lt;/p&gt;&lt;p&gt;- 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರ&lt;/p&gt;&lt;p&gt;- ವಶಪಡಿಸಿಕೊಂಡ ಮಾಂಸ ಶೀಘ್ರ ಪರೀಕ್ಷೆಗೆ ರವಾನೆಗೆ ನಿರ್ಧಾರ&lt;/p&gt;&lt;p&gt;- ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನ&lt;/p&gt;&lt;p&gt;&lt;strong&gt;ಅರಣ್ಯ ಇಲಾಖೆ ಜೀಪ್&zwnj; ಧ್ವಂಸಕ್ಕೆ ಯತ್ನಿಸಿದವರ ಮೇಲೆ ಕೇಸ್&zwnj;&lt;/strong&gt;&lt;/p&gt;&lt;p&gt;ಹನೂರು (ಚಾಮರಾಜನಗರ): ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಜೀಪನ್ನು ಧ್ವಂಸ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಐವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್ ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಜೀಪ್&zwnj; ಚಾಲಕ ಅರುಣ್ ಕುಮಾರ್ ಅವರು ರಾಮಪುರ ಪೊಲೀಸ್&zwnj; ಠಾಣೆಯಲ್ಲಿ ದೂರು ನೀಡಿದ್ದಾರೆ. ಆ.15ರ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ನಾಲ್ವರು ಎರಡು ಬೈಕ್&zwnj;ಗಳಲ್ಲಿ ಬಂದು ಜೀಪ್&zwnj;ಗೆ ಅಡ್ಡ ನಿಲ್ಲಿಸಿ ಜೀಪ್ ಮೇಲೆ ಕಲ್ಲು ಎಸೆದಿದ್ದಾರೆ. ನೀವು ಈ ಕಡೆ ಬಂದರೆ ನಿಮ್ಮನ್ನು ಜೀಪ್ ಸಮೇತ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಹನೂರಿನಲ್ಲಿ ನಡೆದಿದ್ದು 3 ತಮಿಳಿರ ಹತ್ಯೆ: ತ.ನಾಡು ವಿಪಕ್ಷಗಳ ಆಕ್ರೋಶ&lt;/strong&gt;&lt;/h3&gt;&lt;p&gt;ಚೆನ್ನೈ: ಚಾಮರಾಜನಗರದ ಹನೂರಿನಲ್ಲಿ ಅರಣ್ಯಾಧಿಕಾರಿಗಳ ಗುಂಡಿಗೆ 3 ಮಂದಿ ಬಲಿಯಾದ ಪ್ರಕರಣಕ್ಕೆ ತಮಿಳುನಾಡಿನ ರಾಜಕೀಯ ಪಕ್ಷಗಳು ಭಾಷೆ ಮತ್ತು ಪ್ರಾದೇಶಿಕ ಬಣ್ಣ ಕಟ್ಟಿ ಹೊಸ ಕಲಹಕ್ಕೆ ನಾಂದಿ ಹಾಡುವ ಯತ್ನ ಮಾಡಿವೆ. ಈ ಮೂಲಕ ಕರ್ನಾಟಕದ ಜೊತೆಗೆ ಕಾವೇರಿ, ಮೇಕೆದಾಟು ಬಳಿಕ ಮತ್ತೊಂದು ಸಂಘರ್ಷಕ್ಕೆ ಮುಂದಾಗಿವೆ.&lt;/p&gt;&lt;p&gt;ಭಾಷೆ ಬಣ್ಣ: ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರನ್ನು ತಮಿಳರು ಎಂದು ಗುರುತಿಸಿರುವ ತಮಿಳುನಾಡಿನ ವಿಪಕ್ಷಗಳಾದ ಡಿಎಂಕೆ ಮತ್ತು ಪಿಎಂಕೆ, ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕೆಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.&lt;/p&gt;&lt;p&gt;ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್&zwnj;, &lsquo;ಮೂವರು ತಮಿಳರ ಹತ್ಯೆ ಘಟನೆ ಕ್ರೂರ ಮತ್ತು ಆಘಾತಕಾರಿ. ಇದರ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಗುಂಡು ಹಾರಿಸಿದ ಅರಣ್ಯಾಧಿಕಾರಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಅಂತೆಯೇ, ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು&rsquo; ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಅತ್ತ ಸಿಬಿಐ ತನಿಖೆಗೆ ಆಗ್ರಹಿಸಿರುವ ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್&zwnj;, ಆ ಮೂವರು ಬೇಟೆಗಾರರು ಎಂಬುದು ಸುಳ್ಳು ಎಂದಿದ್ದಾರೆ. ಜತೆಗೆ, ಸಿಎಂ ವಿಜಯ್&zwnj; ಮಧ್ಯಪ್ರವೇಶಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ 1 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc"/>
        </item>
        <item>
            <title><![CDATA[ಅರಣ್ಯ ಸಿಬ್ಬಂದಿ ಗುಂಡಿಗೆ 3 ಬೇಟೆಗಾರರು ಬಲಿ ಪ್ರಕರಣ; ಶವ ಏಕೆ ಮೈಸೂರಿಗೆ ತಂದರು? ಸಂಸದರ ಸಂಶಯದ ಪ್ರಶ್ನೆಗೆ ಉತ್ತರ ಇಲ್ಲ!]]></title>
            <link>https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</link>
            <guid isPermaLink="true">https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</guid>
            <pubDate>Sun, 16 Aug 2026 06:59:43 +0530</pubDate>
            <description><![CDATA[ಚಾಮರಾಜನಗರ ಸಂಸದ ಸುನಿಲ್ ಬೋಸ್, ಎನ್&zwnj;ಕೌಂಟರ್&zwnj; ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್&zwnj;ಕೌಂಟರ್&zwnj; ನಂತರ ಶವಗಳನ್ನು ಮೈಸೂರಿಗೆ ಏಕೆ ತರಲಾಯಿತು ಎಂದು ಪ್ರಶ್ನಿಸಿರುವ ಅವರು, ಅರಣ್ಯಾಧಿಕಾರಿಗಳ ಹೇಳಿಕೆ ಮಾತ್ರವಲ್ಲದೆ, ಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಆ.16): ಎನ್&zwnj;ಕೌಂಟರ್&zwnj; ಆದ ಮೇಲೆ ಮೈಸೂರಿಗೆ ಶವಗಳನ್ನ ಯಾಕೆ ತಂದರು. ಇದು ಬಹುದೊಡ್ಡ ಅನುಮಾನ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ಯಾರಿಂದಲೂ ನಮಗೆ ಸಮರ್ಪಕ ಉತ್ತರ &zwnj;ಸಿಗುತ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಎಂದು ಚಾಮರಾಜನಗರ ಸಂಸದ ಸುನಿಲ್ ಬೋಸ್ ಹೇಳಿದರು.&lt;/p&gt;&lt;h2&gt;ಅರಣ್ಯಾಧಿಕಾರಿಗಳು ಹೇಳೋದೇನು?&lt;/h2&gt;&lt;p&gt;ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್&zwnj;ಕೌಂಟರ್&zwnj; ಆದವರು ಬೇಟೆಯಾಡಿ ಬೇಟೆಯ ಮಾಂಸ ಹಂಚಿಕೊಳ್ಳುತ್ತಿದ್ದರು. ಆಗ ಅರಣ್ಯ ಅಧಿಕಾರಿಗಳು ಅವರನ್ನ ನೋಡಿ ಶರಣಾಗುವಂತೆ ಹೇಳಿದ್ದಾರೆ. ಅವರು ಅಧಿಕಾರಿಗಳು ಮೇಲೆ ಫೈರ್ ಮಾಡಿದ್ದಾರೆ. ಅದಕ್ಕೆ ಅಧಿಕಾರಿಗಳು ಎನ್ಕೌಂಟರ್ ಮಾಡಿದ್ದಾರೆ. ಇದು ಅರಣ್ಯ ಅಧಿಕಾರಿಗಳು ನಮಗೆ ಹೇಳುತ್ತಿರುವ ಮಾಹಿತಿ ಎಂದರು.&lt;/p&gt;&lt;p&gt;ಒಂದು ಕಡೆಯ ಮಾಹಿತಿಯನ್ನು ನಂಬಲು ನಾನು ಸಿದ್ಧನಿಲ್ಲ. ಇನ್ನೊಂದು ಕಡೆಯ ಮಾಹಿತಿ ಏನು ಎಂಬುದು ನಮಗೆ ಬೇಕಿದೆ. ಎನ್&zwnj;ಕೌಂಟರ್ ಬಳಿಕ ಮೈಸೂರಿಗೆ ಏಕೆ ಶವ ತಂದರು. ಇದಕ್ಕೆ ಉತ್ತರ ಬೇಕಿದೆ. ಆ ಮಾಹಿತಿಯನ್ನ ಸ್ಥಳಕ್ಕೆ ಹೋಗಿ ಪಡೆಯುತ್ತೇನೆ. ಸಂಸದರು ತಿಳಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo"/>
        </item>
        <item>
            <title><![CDATA[Water Crisis: ಅನ್ನವಿದೆ, ಬೇಯಿಸಲು ನೀರಿಲ್ಲ! ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಶಾಲಾ ಮಕ್ಕಳು!]]></title>
            <link>https://kannada.asianetnews.com/karnataka-districts/hanur-chamarajanagar-school-students-protest-water-shortage-midday-meal-empty-pots-bmk/articleshow-w5g6303</link>
            <guid isPermaLink="true">https://kannada.asianetnews.com/karnataka-districts/hanur-chamarajanagar-school-students-protest-water-shortage-midday-meal-empty-pots-bmk/articleshow-w5g6303</guid>
            <pubDate>Tue, 15 Sep 2026 20:26:48 +0530</pubDate>
            <description><![CDATA[&lt;p&gt;ಬಿಸಿಯೂಟ ತಯಾರಿಸಲು ನೀರಿಲ್ಲದ ಕಾರಣ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2js2v16z4zmjwvhhd2qfeax,imgname-chamarajanagara-water-crisis-1789484166182.jpg" type="image/jpeg" height="390" width="690"/>
            <content:encoded><![CDATA[&lt;p&gt;ಹನೂರು (ಚಾಮರಾಜನಗರ): ಶಾಲಾ ಆವರಣದಲ್ಲಿ ಪಾಠ ಕೇಳಿ, ಪುಸ್ತಕಗಳನ್ನು ಹಿಡಿದು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಎಳೆಯ ಮಕ್ಕಳು, ಇಂದು ಕೈಯಲ್ಲಿ ಖಾಲಿ ಬಿಂದಿಗೆ ಹಾಗೂ ನೀರಿನ ಬಾಟಲಿಗಳನ್ನು ಹಿಡಿದು ರಸ್ತೆಗಿಳಿದು ಹೋರಾಟ ನಡೆಸಿದ ದಯನೀಯ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯವಾದ ನೀರಿನ ಕೊರತೆಯಿಂದಾಗಿ ಬಿಸಿಯೂಟವೂ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನ್ನವಿದ್ದರೂ ಅಡುಗೆಗೆ ನೀರಿಲ್ಲ!&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ನೀಗಿಸಲು ಮತ್ತು ಶಾಲಾ ಹಾಜರಾತಿ ಹೆಚ್ಚಿಸಲು ಬಿಸಿಯೂಟ ಯೋಜನೆಯಡಿ ಸಪ್ಲೈ ಮಾಡುತ್ತಿರುವ ಆಹಾರ ಧಾನ್ಯಗಳು, ಬೇಳೆ-ಕಾಳುಗಳು ಹಾಗೂ ರೇಷನ್ ಸಾಮಗ್ರಿಗಳು ಶಾಲೆಗೆ ಸರಿಯಾಗಿ ಪೂರೈಕೆಯಾಗುತ್ತಿವೆ. ಆದರೆ, ಈ ಆಹಾರ ಧಾನ್ಯಗಳನ್ನು ತೊಳೆಯಲು ಮತ್ತು ಅಡುಗೆ ತಯಾರಿಸಲು ಅಗತ್ಯವಿರುವ ಒಂದೇ ಒಂದು ಬಿಂದಿಗೆ ಶುದ್ಧ ನೀರು ಶಾಲೆಯಲ್ಲಿ ಲಭ್ಯವಿಲ್ಲ! ಪರಿಣಾಮವಾಗಿ, ಮಕ್ಕಳು ಮಧ್ಯಾಹ್ನದ ಹೊತ್ತಿಗೆ ಹಸಿವಿನಿಂದ ಕಂಗಾಲಾಗುವಂತಾಗಿದೆ. ದಿನವಿಡೀ ತರಗತಿಯಲ್ಲಿ ಕುಳಿತು ವ್ಯಾಸಂಗ ಮಾಡುವ ಮಕ್ಕಳಿಗೆ ಮಧ್ಯಾಹ್ನ ಸೌಟು-ಪಾತ್ರೆಗಳ ಶಬ್ದ ಕೇಳಬೇಕಿತ್ತೇ ವಿನಃ, ಅಡುಗೆ ಕೋಣೆಯಲ್ಲಿ ಖಾಲಿ ಪಾತ್ರೆಗಳು ಇರುವುದನ್ನು ಕಂಡು ಮಕ್ಕಳು ಆಕ್ರೋಶಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಖಾಲಿ ಬಿಂದಿಗೆ, ಬಾಟಲ್ ಹಿಡಿದು ಪ್ರತಿಭಟನೆ!&lt;/strong&gt;&lt;/h3&gt;&lt;p&gt;ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಕುಡಿಯುವ ನೀರು ಪೂರೈಕೆ ಮಂಡಳಿಯ ಬೇಜವಾಬ್ದಾರಿತನದಿಂದ ಬೇಸತ್ತ ಸೆಂಟ್ ಆಂಥೋನಿ ಶಾಲೆಯ ನೂರಾರು ವಿದ್ಯಾರ್ಥಿಗಳು, ತಮ್ಮ ಶಾಲಾ ಸಮಸ್ತ್ರದಲ್ಲೇ ಕೈಯಲ್ಲಿ ಖಾಲಿ ಬಿಂದಿಗೆಗಳು ಮತ್ತು ಖಾಲಿ ನೀರಿನ ಬಾಟಲಿಗಳನ್ನು ಹಿಡಿದು ರಸ್ತೆಗೆ ಬಂದು ನಿಂತಿದ್ದಾರೆ. &quot;ನಮಗೆ ನೀರು ಬೇಕು, ಅಡುಗೆ ಮಾಡಲು ನೀರು ಕೊಡಿ&quot; ಎಂದು ಘೋಷಣೆಗಳನ್ನು ಕೂಗುತ್ತಾ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದರು. ಪುಟ್ಟ ಮಗು ಒಂದೊಂದು ಖಾಲಿ ಬಿಂದಿಗೆಯನ್ನು ಹಿಡಿದು ನಿಂತಿದ್ದ ದೃಶ್ಯವು ಸ್ಥಳೀಯ ಹಿತೈಷಿಗಳು ಹಾಗೂ ಸಾರ್ವಜನಿಕರ ಮನಕಲಕುವಂತಿತ್ತು.&lt;/p&gt;&lt;h3&gt;&lt;strong&gt;ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ!&lt;/strong&gt;&lt;/h3&gt;&lt;p&gt;ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಈ ಕುರಿತು ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಕುಡಿಯುವ ನೀರಿನ ಪೈಪ್&zwnj;ಲೈನ್ ಹಾಗೂ ಬೋರ್&zwnj;ವೆಲ್ ಪಂಪ್&zwnj;ಗಳ ದುರಸ್ತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. &quot;ಪ್ರತಿದಿನ ನಾವು ಬಿಸಿಯೂಟಕ್ಕಾಗಿ ಕಾಯುತ್ತೇವೆ, ಆದರೆ ನೀರಿನ ಕೊರತೆಯಿಂದಾಗಿ ಅಡುಗೆಯವರು ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಮನೆಯಿಂದ ತರುವ ಅಲ್ಪಸ್ವಲ್ಪ ನೀರು ಕುಡಿಯಲು ಮಾತ್ರ ಸಾಲುತ್ತದೆ. ಮಧ್ಯಾಹ್ನ ಊಟವಿಲ್ಲದೆ ನಾವು ತರಗತಿಯಲ್ಲಿ ಕುಳಿತುಕೊಳ್ಳುವುದು ಹೇಗೆ?&quot; ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳಿಗೆ ಎಚ್ಚರಿಕೆ!&lt;/strong&gt;&lt;/h3&gt;&lt;p&gt;ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯತಿ (ಗ್ರಾ.ಪಂ) ಅಧಿಕಾರಿಗಳು ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಶಾಲಾ ಮಕ್ಕಳು ಬೀದಿಗೆ ಬಂದು ಪ್ರತಿಭಟನೆ ನಡೆಸುವ ಹಂತಕ್ಕೆ ತಲುಪಿದ್ದರೂ ಸಹ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣಕ್ಕೆ ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಸೆಂಟ್ ಆಂಥೋನಿ ಶಾಲೆಗೆ ತಕ್ಷಣದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಜೊತೆಗೂಡಿ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/hanur-chamarajanagar-school-students-protest-water-shortage-midday-meal-empty-pots-bmk/articleshow-w5g6303"/>
        </item>
    </channel>
</rss>
