<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 27 Aug 2026 11:04:26 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[Hanuru: ಚಾಮರಾಜನಗರ ಎನ್‌ಕೌಂಟರ್‌ ಪ್ರಕರಣಕ್ಕೆ ತಮಿಳುನಾಡು ಸಿಎಂ ವಿಜಯ್‌ ಎಂಟ್ರಿ; ಕೇಸ್‌ಗೆ ಬಿಗ್‌ ಟ್ವಿಸ್ಟ್‌!]]></title>
            <link>https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui</link>
            <guid isPermaLink="true">https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui</guid>
            <pubDate>Sun, 16 Aug 2026 22:22:47 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಈ ಘಟನೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪ್ರತಿಕ್ರಿಯಿಸಿದ್ದು, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯು ಪ್ರಕರಣಕ್ಕೆ ರಾಜಕೀಯ ಆಯಾಮವನ್ನು ನೀಡಿದ್ದು, ಕರ್ನಾಟಕ ಮತ್ತು ತಮಿಳುನಾಡು ನಡುವೆ ಗಮನ ಸೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3865gnbqvwfp2xze4ncb5zm,imgname-5-1755842790059.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಮೂವರು ವ್ಯಕ್ತಿಗಳ ಸಾವಿನ ಪ್ರಕರಣ ಇದೀಗ ರಾಜ್ಯ ಗಡಿ ದಾಟಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಆಗಸ್ಟ್&zwnj; 15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದು, ಈ ಪ್ರಕರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್&zwnj; ಕೂಡ ಪ್ರತಿಕ್ರಿಯಿಸಿದ್ದಾರೆ. ಘಟನೆ ಕುರಿತು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ನಿಷ್ಪಕ್ಷಪಾತ ಮತ್ತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದೂ ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವರದಿಗಳು ಹೇಳೋದೇನು?&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯ ಹನೂರು ಭಾಗದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಅಕ್ರಮ ಬೇಟೆ ನಡೆಸುತ್ತಿದ್ದರೆಂದು ಆರೋಪಿಸಲಾದ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಘಟನೆ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ನ್ಯಾಯಕ್ಕಾಗಿ ಪ್ರತಿಭಟನೆ ಕೂಡ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;ನರವಿಗಾಗಿ ಒತ್ತಾಯ!&lt;/strong&gt;&lt;/h3&gt;&lt;p&gt;ಮೃತರನ್ನು ಆಂಥೋನಿ ಸ್ಯಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಈ ಮೂವರು ತಮಿಳು ಸಮುದಾಯಕ್ಕೆ ಸೇರಿದವರು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್&zwnj; ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಸಾವನ್ನು ನೋವಿನ ಹಾಗೂ ಹೃದಯವಿದ್ರಾವಕ ಘಟನೆ ಎಂದು ಬಣ್ಣಿಸಿರುವ ಅವರು, ಮೃತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವನ್ನು ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಮಹತ್ವ ಪಡೆದ ಪ್ರಕರಣ!&lt;/strong&gt;&lt;/h3&gt;&lt;p&gt;ಘಟನೆ ಬಗ್ಗೆ ವಿಜಯ್&zwnj; ಅವರ ಹೇಳಿಕೆ ಹೊರಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಮಹತ್ವ ತಂದಿದೆ. ಅವರು ಕೇವಲ ಸಂತಾಪ ಸೂಚಿಸುವುದಕ್ಕೆ ಸೀಮಿತವಾಗದೆ, ಘಟನೆಯ ಕುರಿತು ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರಿಂದ ಆಕ್ರೋಶ!&lt;/strong&gt;&lt;/h3&gt;&lt;p&gt;ಇದಕ್ಕೂ ಮುನ್ನ, ಮೃತರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ರೀತಿಯ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಮತ್ತು ಗುಂಡು ಹಾರಿಸಿದ ಅರಣ್ಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಪ್ರಕರಣ ದಾಖಲಿಸಿದ ಪೊಲೀಸ್&zwnj;ರು!&lt;/strong&gt;&lt;/h3&gt;&lt;p&gt;ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ಮೃತ ವ್ಯಕ್ತಿಯ ಪತ್ನಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಅರಣ್ಯ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ. ಇತ್ತ ಅರಣ್ಯ ಇಲಾಖೆ ಪರವಾಗಿ, ಘಟನೆ ಗುಂಡಿನ ಚಕಮಕಿಯ ಸಂದರ್ಭದಲ್ಲಿ ಸಂಭವಿಸಿದೆ ಎಂಬ ವಿವರಣೆ ನೀಡಲಾಗಿದೆ. ಆದರೆ ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರು ಈ ವಿವರಣೆಯನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಎನ್&zwnj;ಕೌಂಟರ್&zwnj; ನಡೆದ ಪರಿಸ್ಥಿತಿ, ಗುಂಡಿನ ದಾಳಿ ಹೇಗೆ ನಡೆಯಿತು, ಅರಣ್ಯ ಸಿಬ್ಬಂದಿಯ ಕ್ರಮ ಕಾನೂನುಬದ್ಧವಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಪ್ರಮುಖವಾಗಿವೆ.&lt;/p&gt;&lt;h3&gt;&lt;strong&gt;ಕಾರ್ಯಾಚರಣೆ ನಿರಂತರ!&lt;/strong&gt;&lt;/h3&gt;&lt;p&gt;ಚಾಮರಾಜನಗರದ ಕಾವೇರಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಪ್ರಮುಖ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಅಕ್ರಮ ಬೇಟೆ ತಡೆಯಲು ಅರಣ್ಯ ಇಲಾಖೆ ಗಸ್ತು ಮತ್ತು ಆಂಟಿ-ಪೋಚಿಂಗ್&zwnj; ಕಾರ್ಯಾಚರಣೆಗಳನ್ನು ನಡೆಸುತ್ತದೆ. ಈ ನಡುವೆ ತಮಿಳುನಾಡು ಮುಖ್ಯಮಂತ್ರಿಯ ಪ್ರವೇಶದಿಂದ ಪ್ರಕರಣಕ್ಕೆ ಹೊಸ ರಾಜಕೀಯ ಮತ್ತು ಆಡಳಿತಾತ್ಮಕ ಆಯಾಮವೂ ಸಿಕ್ಕಿದೆ. ಕರ್ನಾಟಕ&ndash;ತಮಿಳುನಾಡು ಗಡಿ ಪ್ರದೇಶಕ್ಕೆ ಸಂಬಂಧಿಸಿದ ಘಟನೆ ಆಗಿರುವುದರಿಂದ ಎರಡೂ ರಾಜ್ಯಗಳ ಗಮನ ಈಗ ಪ್ರಕರಣದತ್ತ ನೆಟ್ಟಿದೆ. ಒಟ್ಟಿನಲ್ಲಿ, ಮೂವರ ಸಾವಿನ ಕುರಿತು ಸತ್ಯಾಂಶ ಏನು ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ. ಅರಣ್ಯ ಇಲಾಖೆಯ ಹೇಳಿಕೆ, ಕುಟುಂಬಸ್ಥರ ಆರೋಪ ಮತ್ತು ಪೊಲೀಸರ ತನಿಖೆಯ ನಡುವೆ ಸತ್ಯ ಹೊರಬರಬೇಕಾಗಿದೆ. **ತಮಿಳುನಾಡು ಸಿಎಂ ವಿಜಯ್&zwnj; ಅವರ ಉನ್ನತ ಮಟ್ಟದ ತನಿಖೆಯ ಬೇಡಿಕೆ ಪ್ರಕರಣಕ್ಕೆ ಯಾವ ತಿರುವು ನೀಡಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>chamarajnagar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/3-tamils-shot-dead-in-karnataka-tamilnadu-cm-vijay-thalapathy-condemns-bmk/articleshow-2iofyui"/>
        </item>
        <item>
            <title><![CDATA[Chamarajnagar: ಸರ್ಕಾರಿ ಆಸ್ಪತ್ರೆಯ ಕಮೋಡ್‌ನಲ್ಲಿ ತುರುಕಿದ ಸ್ಥಿತಿಯಲ್ಲಿ ಮಗು ಪತ್ತೆ]]></title>
            <link>https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</link>
            <guid isPermaLink="true">https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g</guid>
            <pubDate>Thu, 20 Aug 2026 09:51:51 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಕಮೋಡ್&zwnj;ನಲ್ಲಿ ಮೃತ ಶಿಶುವೊಂದು ಪತ್ತೆಯಾಗಿದೆ. ಸ್ವಚ್ಛತಾ ಸಿಬ್ಬಂದಿ ಇದನ್ನು ಗಮನಿಸಿ ವೈದ್ಯರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0epadaqjkmy1fe3deynkwey,imgname-hospital-toilet-1787199567191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮಕ್ಕಳು ಬೇಕೆಂದು ಜನರು ದೇವರ ಮೊರೆ, ವೈದ್ಯರ ಬಳಿ ಅಲೆಯುವುದನ್ನು ನೋಡಿದ್ದೇವೆ. ಆದರೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವೊಂದು ಶೌಚಾಲಯದ ಕಮೋಡ್&zwnj; ಒಳಗೆ ತುರುಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗುವನ್ನು ತಾಯಿಯೇ ಹಾಕಿದರೋ ಅಥವಾ ಬೇರೆಯಾರಾದರೂ ತುರುಕಿದ್ದಾರೋ ಎಂಬುದು ತಿಳಿಯಬೇಕಿದೆ.&lt;/p&gt;&lt;h2&gt;&lt;strong&gt;ಮೃತಪಟ್ಟ ಸ್ಥಿತಿಯಲ್ಲಿ ಮಗು ಪತ್ತೆ&lt;/strong&gt;&lt;/h2&gt;&lt;p&gt;ಬುಧವಾರ ಬೆಳಗ್ಗೆ ಶೌಚಾಲಯದ ಸ್ವಚ್ಛತೆಗೆ ತೆರಳಿದ್ದ ಸಿಬ್ಬಂದಿಗೆ ಕಮೋಡ್&zwnj; ಒಳಗೆ ಮೃತಪಟ್ಟ ಸ್ಥಿತಿಯಲ್ಲಿ ಮಗು ಸಿಕ್ಕಿದೆ. ಕೂಡಲೇ ಅದನ್ನು ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ್&zwnj; ಅವರ ಗಮನಕ್ಕೆ ತಂದಿದ್ದಾರೆ. ಇದರಿಂದ ಎಚ್ಚೆತ್ತ ವೈದ್ಯರು, ಕೂಡಲೇ ಗುಂಡ್ಲುಪೇಟೆ ಪೊಲೀಸರ ಗಮನಕ್ಕೆ ತಂದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೀಸಾ ಮುಗಿದ್ರೂ ಬಾಗೇಪಲ್ಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಪಾಕ್ ತಾಯಿ-ಮಗ ಬಂಧನ! ಆಧಾರ್, ವೋಟರ್ ಐಡಿ ಪಡೆದಿದ್ದು ಹೇಗೆ?&lt;/strong&gt;&lt;/p&gt;&lt;p&gt;&lt;strong&gt;ಪೊಲೀಸರಿಂದ ತನಿಖೆ ಆರಂಭ&lt;/strong&gt;&lt;/p&gt;&lt;p&gt;ಘಟನೆ ಸಂಬಂಧ ಗುಂಡ್ಲುಪೇಟೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಗುವನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ಮುಂದುವರೆಸಿದ್ದಾರೆ. ಮಗುವನ್ನು ಕೊಂದು ಬಿಸಾಡಿದರೋ ಅಥವಾ ತುರುಕಿದ ಬಳಿಕ ಮೃತಪಟ್ಟಿದೆಯೋ ಎಂಬುದು ಬಯಲಿಗೆ ಬರಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Hanur Encounter Case: ಕಳ್ಳಬೇಟೆ ತಡೆ ಶಿಬಿರಕ್ಕೆ ಜಿಲೆಟಿನ್&zwnj; ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajnagar-dead-new-born-baby-found-in-commode-of-gundlupete-government-hospital-mrq/articleshow-3l6uw1g"/>
        </item>
        <item>
            <title><![CDATA[ಹನೂರು: ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾಯ್ತು, ಈಗ ಕಾಡಿನ ಸೌರ ಬೇಲಿ ಕಿತ್ತೆಸೆದ ದುಷ್ಕರ್ಮಿಗಳು; ಕಾಡು ಪ್ರಾಣಿಗಳು ಹಳ್ಳಿಗೆ ನುಗ್ಗುವ ಆತಂಕ]]></title>
            <link>https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</link>
            <guid isPermaLink="true">https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa</guid>
            <pubDate>Sun, 23 Aug 2026 06:14:34 +0530</pubDate>
            <description><![CDATA[&lt;p&gt;ಹನೂರಿನಲ್ಲಿ ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದ್ದು, ತೋಮಿಯಾರ್&zwnj; ಪಾಳ್ಯ ಬಳಿ ಅರಣ್ಯ ಇಲಾಖೆಯ ಸೋಲಾರ್ ತಂತಿ ಬೇಲಿ ಮತ್ತು ಗೇಟ್&zwnj;ಗಳನ್ನು ಧ್ವಂಸಗೊಳಿಸಿದ್ದಾರೆ. ವನ್ಯಮೃಗಗಳನ್ನು ನಾಡಿಗೆ ಬರುವಂತೆ ಮಾಡಿ, ಸ್ಥಳಕ್ಕೆ ಆಗಮಿಸುವ ಅರಣ್ಯ ಸಿಬ್ಬಂದಿ ಮೇಲೆ ದಾಳಿಗೆ ಸಂಚು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0p0vqrs0b99pmep5wt72b1z,imgname-----------------------2026-08-23t060801.824-1787445501721.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹನೂರು (ಆ.23)&lt;/strong&gt;: ತಾಲೂಕಿನ ಹೊಳೆಮುರಿದಟ್ಟಿಯಲ್ಲಿ ಆ.15ರಂದು ನಡೆದ ಎನ್&zwnj;ಕೌಂಟರ್&zwnj; ಪ್ರಕರಣದ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮುಂದುವರಿದಿದೆ. ಶೂಟೌಟ್&zwnj; ಮಾರನೆಯ ದಿನ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಕಿಡಿಗೇಡಿಗಳು, ತಮ್ಮ ಕೃತ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.&lt;/p&gt;&lt;p&gt;ಶುಕ್ರವಾರ ಹನೂರು ತಾಲೂಕಿನ ತೋಮಿಯಾರ್&zwnj; ಪಾಳ್ಯ, ಕಾರಯ್ಯನಬೆಟ್ಟ ಮತ್ತು ಬೇಟೆಗಾರನ ಗುಡ್ಡ ಬಳಿ ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್&zwnj; ತಂತಿ ಬೇಲಿ, ಕಂಬಗಳು, ಗೇಟ್&zwnj;ಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡಿರುವ ಘಟನೆ ನಡೆದಿದೆ. ಇದರ ಪರಿಣಾಮವಾಗಿ ಕಾಡು ಪ್ರಾಣಿಗಳ ನಾಡು ಪ್ರವೇಶದ ಆತಂಕ ಹೆಚ್ಚಾಗಿದೆ. ಈ ಮೂಲಕ ಗ್ರಾಮಗಳಿಗೆ ಬರುವ ಅರಣ್ಯ ಸಿಬ್ಬಂದಿ ಮೇಲೆ ದಾಳಿ ನಡೆಸುವ ಭಾರಿ ಹುನ್ನಾರ ಇದಾಗಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ತೋಮಿಯಾರ್&zwnj; ಪಾಳ್ಯ ಡಿ-ಲೈನ್&zwnj;ನಲ್ಲಿ ಅಳವಡಿಸಿದ್ದ ಸೋಲಾರ್&zwnj; ಫೆನ್ಸಿಂಗ್&zwnj; ವ್ಯವಸ್ಥೆ, ಸ್ವಿಚ್&zwnj; ಬೋರ್ಡ್&zwnj;, ಗೇಟ್&zwnj;, ತಂತಿ ಬೇಲಿಗಳು, ಕಂಬಗಳನ್ನು ಮುರಿದು ಹಾಕಲಾಗಿದೆ. ಇದರಿಂದಾಗಿ ಕಾಡು ಮತ್ತು ನಾಡಿನ ನಡುವಿನ ರಕ್ಷಣಾ ಗೋಡೆ ಕಳಚಿ ಬಿದ್ದಂತಾಗಿದೆ.&lt;/p&gt;&lt;h2&gt;ದುಷ್ಕರ್ಮಿಗಳು ಹನೂರು ಸೌರ ಬೇಲಿ ನಾಶ ಮಾಡಿದ್ದು ಏಕೆ?:&lt;/h2&gt;&lt;p&gt;ಶೂಟೌಟ್&zwnj; ಬಳಿಕ ನಡೆದ ಪ್ರತಿಭಟನೆಗಳಿಂದಾಗಿ ತೋಮಿಯಾರ್&zwnj; ಪಾಳ್ಯ, ಶಾಗ್ಯ ವಲಯದಲ್ಲಿನ ಅರಣ್ಯ ಕಚೇರಿಗೆ ಅರಣ್ಯ ಸಿಬ್ಬಂದಿ ಹೋಗಲು ಹಿಂಜರಿಯುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಕಿಡಿಗೇಡಿಗಳು ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಹೋಗಿ, ದುಷ್ಕೃತ್ಯ ಎಸಗಿದ್ದಾರೆ. ಇದು ಕೇವಲ ಆಸ್ತಿ ನಾಶವಷ್ಟೇ ಅಲ್ಲ ಎಂದು ಹೆಸರೇಳಲು ಇಚ್ಛಿಸದ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡುವ ಸಂಚು?&lt;/h3&gt;&lt;p&gt;ಶೂಟೌಟ್&zwnj; ಘಟನೆ ಬಳಿಕ ಹನೂರಿನಲ್ಲಿ ಎಲ್ಲ ಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ನಡುವೆ ಈ ಭಾಗದಲ್ಲಿ ಸರಿಯಾಗಿ ಮಳೆಯಾಗದೆ, ಕಾಡಿನಲ್ಲಿ ಪ್ರಾಣಿಗಳ ಆಹಾರ ಮತ್ತು ನೀರಿಗೆ ಕೊರತೆಯಿದೆ. ಇದನ್ನೇ ಉಪಯೋಗಿಸಿಕೊಂಡಿರುವ ದುಷ್ಕರ್ಮಿಗಳು, ವನ್ಯಮೃಗಗಳು ನಾಡಿನತ್ತ ಬರುವಂತೆ ಮಾಡಲು ರಕ್ಷಣಾ ಗೋಡೆಗಳನ್ನು ಹಾಳುಗೆಡವಿದ್ದಾರೆ. ಪರಿಣಾಮ ಕಾಡಾನೆ ಸೇರಿದಂತೆ ವನ್ಯಮೃಗಗಳು ಗ್ರಾಮಗಳತ್ತ ಬಂದಾಗ ಅನಿವಾರ್ಯವಾಗಿ ಸಿಬ್ಬಂದಿ ಸ್ಥಳಕ್ಕೆ ಬರುವ ಪರಿಸ್ಥಿತಿ ಉದ್ಭವಿಸುತ್ತದೆ. ಹೀಗೆ ಬಂದ ಸಿಬ್ಬಂದಿ ಮೇಲೆ ದಾಳಿ ಮಾಡುವ ದೊಡ್ಡ ಸಂಚು ಇದರಲ್ಲಿ ಅಡಗಿರುವ ಶಂಕೆಯಿದೆ ಎಂದು ಹೆಸರೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.&lt;/p&gt;&lt;p&gt;ತೋಮಿಯಾರ್&zwnj;ಪಾಳ್ಯದ ಫೆನ್ಸಿಂಗ್&zwnj; ನಾಶವು ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಹೊಸ ತಲೆನೋವಾಗಿ ಪರಿಣಮಿಸಿದ್ದು, ಜನರನ್ನು ಹತೋಟಿಗೆ ತೆಗೆದುಕೊಳ್ಳುವ ಜೊತೆಗೆ ಪ್ರಾಣಿಗಳ ಚಲನವಲನಗಳ ಮೇಲೂ ಹದ್ದಿನ ಕಣ್ಣಿರಿಸಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-encounter-case-miscreants-uproot-solar-fence-in-hanur-forest-fear-of-wild-animals-attack-rav/articleshow-58mq5pa"/>
        </item>
        <item>
            <title><![CDATA[ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಮೊದಲ ಬಸ್; ಮಿಣ್ಯಂ ಗ್ರಾಪಂನ ಕೊಪ್ಪಕ್ಕೆ ಬಂತು KSRTC]]></title>
            <link>https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m</link>
            <guid isPermaLink="true">https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m</guid>
            <pubDate>Tue, 04 Aug 2026 09:36:31 +0530</pubDate>
            <description><![CDATA[ಹನೂರು ತಾಲೂಕಿನ ಕೊಪ್ಪ ಗ್ರಾಮಕ್ಕೆ ಗ್ರಾಮಸ್ಥರು ಹಾಗೂ ರೈತ ಸಂಘದ ಮನವಿಯ ಮೇರೆಗೆ ಮೊದಲ ಬಾರಿಗೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಆರಂಭವಾಗಿದೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5f0swt6cpzqhxnqpfxre94,imgname-chamarajanagar-bus-1785816180634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಗ್ರಾಮ ಉದಯವಾದಾಗಿನಿಂದ ಇದುವರೆಗೂ ನಮ್ಮ ಗ್ರಾಮಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಇರಲಿಲ್ಲ. ಇದೀಗ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಬಸ್ ಸಂಚಾರ ಪ್ರಾರಂಭ ಮಾಡಿರುವುದಕ್ಕೆ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ಅಧ್ಯಕ್ಷ ನಾಗರಾಜು ಅವರು ಕೆಎಸ್&zwnj;ಆರ್&zwnj;ಟಿಸಿ ನಿಗಮದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 80 ವರ್ಷ ಪೂರ್ಣಗೊಳ್ಳುತ್ತಿದೆ. ಆದರೆ ಮಿಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಪ್ಪ ಗ್ರಾಮಕ್ಕೆ ಇದುವರೆಗೂ ಕೆಎಸ್&zwnj;ಆರ್&zwnj;ಟಿಸಿ ಬಸ್ ಸಂಚಾರ ಇರಲಿಲ್ಲ. ಬರುವ ಬಸ್&zwnj;ಗಳು ಮುಖ್ಯರಸ್ತೆಯಲ್ಲಿಯೇ ಹೋಗುತ್ತಿದ್ದವು. ಇದರಿಂದ ನಮ್ಮ ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ನಡೆದುಕೊಂಡೇ ಗ್ರಾಮಕ್ಕೆ ವಾಪಸ್ ಬರಬೇಕಾಗಿತ್ತು.&lt;/p&gt;&lt;h2&gt;&lt;strong&gt;ಗ್ರಾಮಕ್ಕೆ ಬಸ್ ಸಂಚಾರ&lt;/strong&gt;&lt;/h2&gt;&lt;p&gt;ಈ ಸಂಬಂಧ ಕೆಎಸ್&zwnj;ಆರ್&zwnj;ಟಿಸಿ ಕೊಳ್ಳೇಗಾಲ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಗ್ರಾಮಕ್ಕೆ ಬಸ್ ಸಂಚಾರ ಪ್ರಾರಂಭಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;p&gt;ನಮ್ಮ ಗ್ರಾಮಕ್ಕೆ ಕೆಎಸ್&zwnj;ಆರ್&zwnj;ಟಿಸಿ ಬಸ್ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ಕಷ್ಟ ತಪ್ಪಿದೆ. ನಿಗದಿತ ಸಮಯಕ್ಕೆ ಶಾಲಾ-ಕಾಲೇಜಿಗೆ ಹೋಗಲು ಅನುಕೂಲವಾಗಿದೆ. ಇದರಿಂದ ಸಮಯವೂ ಸಹ ಉಳಿತಾಯವಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Udupi: ಕಾರ್ಕಳ ತಾಲೂಕಿ ಪುಟ್ಟ ಗ್ರಾಮದಲ್ಲಿ ಪತ್ತೆಯಾಯ್ತು 400 ವರ್ಷಗಳ ಹಿಂದಿನ ರಹಸ್ಯ&lt;/strong&gt;&lt;/p&gt;&lt;p&gt;ಕೊಪ್ಪ ಗ್ರಾಮದಿಂದ ನೂತನ ಬಸ್ ಸಂಚಾರ ಪ್ರಾರಂಭವಾದ್ದರಿಂದ ಗ್ರಾಮಸ್ಥರು ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ಗೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.&lt;/p&gt;&lt;p&gt;ಇದೇ ವೇಳೆ ಕಿಸಾನ್ ಸಂಘದ ಗ್ರಾಮ ಘಟಕದ ಕಾರ್ಯದರ್ಶಿ ನಾಗೇಶ್, ಸದಸ್ಯರಾದ ನಾಗರಾಜು, ಮುರುಗೇಶ್, ಮುನಿಯಪ್ಪ, ಸಣ್ಣಸಿದ್ದ, ಮಾದೇವ, ಭದ್ರ, ವೆಂಕಟೇಶ್, ಬಸವರಾಜು, ಮಾದೇಶ್, ಮಾರೇಗೌಡ ಹಾಜರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬೆಂಗಳೂರಿನ ಎರಡು ಪ್ರಮುಖ ರಸ್ತೆಯಲ್ಲಿ ಮೊದಲ ಬಾರಿಗೆ 'ಫೈರ್ ಹೈಡ್ರೆಂಟ್&rsquo; ವ್ಯವಸ್ಥೆ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-hanur-the-first-ksrtc-bus-came-to-koppa-village-under-minyam-gram-panchayat-mrq/articleshow-a8x7b9m"/>
        </item>
        <item>
            <title><![CDATA[Hanur Encounter Case: ಕಳ್ಳಬೇಟೆ ತಡೆ  ಶಿಬಿರಕ್ಕೆ ಜಿಲೆಟಿನ್‌ ಇಟ್ಟು ಸ್ಫೋಟಿಸಿದ್ದು ಹಳ್ಳಿಯ ಮುಗ್ಧ ಜನರೇ, ವಿಧ್ವಂಸಕ ಶಕ್ತಿಗಳೇ?]]></title>
            <link>https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz</link>
            <guid isPermaLink="true">https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz</guid>
            <pubDate>Thu, 20 Aug 2026 05:29:44 +0530</pubDate>
            <description><![CDATA[&lt;p&gt;ಚಾಮರಾಜನಗರದ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ನಡೆದ ಪ್ರತೀಕಾರದ ದಾಳಿಗಳು, ರಾಜಕೀಯ ಸ್ವರೂಪ ಹಾಗೂ ಕಳ್ಳಬೇಟೆಯ ಹಿಂದಿರುವ ಜಾಲವು ಅರಣ್ಯ ಸಂರಕ್ಷಣೆಯ ಗಂಭೀರ ಸವಾಲು ತೆರೆದಿಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿನೋದ್ ಕುಮಾರ್ ಬಿ. ನಾಯ್ಕ್&lt;/strong&gt;&lt;/p&gt;&lt;p&gt;ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ವಿಶೇಷ ಯೋಜನೆಗಳ ಸಂಪಾದಕ&lt;/p&gt;&lt;p&gt;--&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ(Cauvery Wildlife Sanctuary)ದಲ್ಲಿ ಆಗಸ್ಟ್ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದರು. ಈ ಘಟನೆ ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಕೂಡ ಎಂದೂ ನಡೆಸದ ಕಾರ್ಯಾಚರಣೆಗಿಂತ ದೊಡ್ಡದಾಗಿದೆ ಎನ್ನುವ ಕಾರಣಕ್ಕೆ ಬಹಳ ವಿವಾದಕ್ಕೀಡಾಗಿದೆ. ಅರಣ್ಯ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಳ್ಳ ಬೇಟೆಗಾರರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಆದರೆ, ಒಂದೇ ಘಟನೆಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದು ಸಹ ಇದೇ ಮೊದಲು. ಈ ಘಟನೆಯ ಅಗಾಧತೆಯೇ ಇದೀಗ ಅರಣ್ಯ ಸಂರಕ್ಷಣೆಯ ಅನೇಕ ಸವಾಲುಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ.&lt;/p&gt;&lt;p&gt;ಈ ಘಟನೆ ಬಳಿಕ ಸ್ಥಳೀಯರು ನಡೆಸಿದ ಪ್ರತೀಕಾರದ ದಾಳಿಯಲ್ಲಿ ಅರಣ್ಯ ಇಲಾಖೆಯ ಕಚೇರಿ, ವಾಹನಗಳು ಧ್ವಂಸಗೊಂಡಿದ್ದು ಮಾತ್ರವಲ್ಲ, ದಟ್ಟ ಕಾಡೊಳಗೆ ನಿರ್ಮಿಸಲಾಗಿದ್ದ ಕಳ್ಳ ಬೇಟೆ ತಡೆ ಶಿಬಿರಗಳನ್ನು ಜಿಲೆಟಿನ್ ಇಟ್ಟು ಸ್ಫೋಟಿಸಿದ ಸುದ್ದಿಗಳು ಬರುತ್ತಿವೆ. ಮೂವರ ಸಾವಿಗೆ ಪ್ರತೀಕಾರವಾಗಿ ಜಿಲೆಟಿನ್ನಂತಹ ಅಪಾಯಕಾರಿ ಸ್ಫೋಟಕಗಳನ್ನು ಬಳಸಿ ಕ್ಯಾಂಪುಗಳನ್ನು ಧ್ವಂಸ ಮಾಡುತ್ತಾರೆ ಎಂದರೆ, ಅವರು ಖಂಡಿತವಾಗಿಯೂ ಮುಗ್ಧ ಹಳ್ಳಿಗರಲ್ಲ. ಹಳ್ಳಿಗರ ಹೆಸರಿನಲ್ಲಿ ವಿಧ್ವಂಸಕ ಶಕ್ತಿಗಳು ಸಕ್ರಿಯವಾಗಿವೆ ಎನಿಸುತ್ತದೆ. ಇವುಗಳ ನಡುವೆಯೇ ಈ ಎಲ್ಲ ಘಟನೆಗಳು ರಾಜಕೀಯ ಸ್ವರೂಪ ಪಡೆದುಕೊಂಡು ಇಡೀ ಪ್ರಕರಣವನ್ನು ಗೋಜಲು ಮಾಡಿಬಿಟ್ಟಿವೆ.&lt;/p&gt;&lt;h2&gt;ಅತಿ ಹೆಚ್ಚು ಕಳ್ಳಬೇಟೆ ನಡೆವ ಕಾಡು&lt;/h2&gt;&lt;p&gt;ಹನೂರು ಗುಂಡಿನ ಚಕಮಕಿ ಪ್ರಕರಣವನ್ನು ಖಂಡಿತವಾಗಿಯೂ ನಾವು ರಾಜಕೀಯ ದೃಷ್ಟಿಕೋನದಿಂದ ನೋಡಲೇಬಾರದು. ಚಾಮರಾಜನಗರ ಅತಿ ಹಿಂದುಳಿದ ಜಿಲ್ಲೆ. ಅಲ್ಲಿನ ಭೌಗೋಳಿಕ ಪ್ರದೇಶದ ಪೈಕಿ ಶೇ.80ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಈ ಕಾಡಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಬಂಡೀಪುರ ಹೊರತುಪಡಿಸಿ ಬಿಆರ್ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಸಿವೆ. ಈ ಭಾಗಗಳು ಎಲ್ಲ ರೀತಿಯ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹೀಗಿರುವಾಗ ನಾವು ಇಡೀ ಘಟನೆಯನ್ನು ತಾಂತ್ರಿಕ ಅಂದರೆ ಟೆಕ್ನಿಕಲ್ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು.&lt;/p&gt;&lt;p&gt;ಈ ಭಾಗದಲ್ಲಿ ಅತಿ ಹೆಚ್ಚು ಕಳ್ಳ ಬೇಟೆ ನಡೆಯುತ್ತದೆ. ಇದಕ್ಕೆ ಕಾರಣವೇನು..? ಇಲ್ಲಿನ ಜನರನ್ನು ಪಕ್ಕದ ತಮಿಳುನಾಡಿನ ಶ್ರೀಮಂತ ಜಮೀನ್ದಾರರು ಕೂಲಿಗಳಂತೆ ನಡೆಸಿಕೊಳ್ಳುತ್ತಾರೆ. ತಮಿಳುನಾಡಿನ ಕಾಡಿನಲ್ಲಿ ದನ ಮೇಯಿಸಲು ಹೈಕೋರ್ಟ್ ನಿರ್ಬಂಧಿಸಿದ ನಂತರ ಕರ್ನಾಟಕದ ಗಡಿಭಾಗದಲ್ಲಿರುವ ಬಡಜನರಿಗೆ ಲಕ್ಷಾಂತರ ರುಪಾಯಿ ಸಾಲ ಕೊಟ್ಟು, ಅದನ್ನು ತೀರಿಸಲು ಅವರ ಸಾವಿರಾರು &ldquo;ಬರಗೂರು&rdquo; ತಳಿಯ ದನಗಳನ್ನು ಕರ್ನಾಟಕದ ಕಾಡಿನಲ್ಲಿ ಮೇಯಿಸಿ ಎಂದು ಕೊಟ್ಟುಬಿಡುತ್ತಾರೆ. ತಮಿಳುನಾಡಿನ ಹಸು, ಕರ್ನಾಟಕದ ಕಾಡಿನ ಸಸ್ಯ ಸಂಪತ್ತು, ಅದನ್ನು ತಡೆಯಲು ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡರೆ ಅವರ ವಿರುದ್ಧ ಸುಳ್ಳು ಎಸ್ಸಿ/ಎಸ್ಟಿ ದೌರ್ಜನ್ಯದ ಕೇಸುಗಳನ್ನು ಹಾಕಿಸಿ ದುರ್ಬಲರನ್ನಾಗಿ ಮಾಡುತ್ತಾರೆ. ಅದಕ್ಕೂ ಜಗ್ಗದಿದ್ದರೆ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಹಾಕಿ ಅರಣ್ಯಾಧಿಕಾರಿಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತದೆ. ಅಷ್ಟೇ ಅಲ್ಲ, ಅಕ್ರಮವಾಗಿ ಬೇಟೆಯಾಡಿ ಜಿಂಕೆ ಮಾಂಸವನ್ನು ನೆರೆಯ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡುತ್ತಾರೆ. ಈಗಲೂ ಕರ್ನಾಟಕದಲ್ಲಿ ಸಿಗುವ ಹುಲಿ ಉಗುರು ಅಥವಾ ಚರ್ಮದ ಜಪ್ತಿ ಪ್ರಕರಣಗಳನ್ನು ಜಾಲಾಡಿದಾಗ ಅದರ ಎಳೆ ಚಾಮರಾಜನಗರ ಜಿಲ್ಲೆಯ ಕಾಡಿಗೆ ಲಿಂಕ್ ಇರುವುದನ್ನು ತೋರಿಸುತ್ತದೆ.&lt;/p&gt;&lt;h3&gt;ಜಾಗೃತಿ ಎಂಬುದೇ ಇಲ್ಲಿ ಮರೀಚಿಕೆ&lt;/h3&gt;&lt;p&gt;ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣ ಇರಬಹುದು, 5 ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆ ಇರಬಹುದು, ಹುಲಿಯ ದೇಹವನ್ನು ತುಂಡು ತುಂಡು ಮಾಡಿ ಬಿಸಾಡಿದ್ದ ಪ್ರಕರಣ ಇರಬಹುದು, ಇವೆಲ್ಲವೂ ಈ ಪ್ರದೇಶದಲ್ಲಿ ಅದೆಷ್ಟು ಜನಜಾಗೃತಿಯ ಅವಶ್ಯಕತೆ ಇದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅರಣ್ಯ ಇಲಾಖೆಯಿಂದ ಹಿಡಿದು ಜಿಲ್ಲಾಡಳಿತದ ತನಕ ಯಾರೂ ಸಹ ಕಾಡಂಚಿನ ಮತ್ತು ಕಾಡೊಳಗಿನ ಗ್ರಾಮಗಳ ಜನರಲ್ಲಿ ಎಲ್ಲ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಯಾವುದೇ ಕೆಲಸ ಮಾಡಿಲ್ಲ. ಇಲ್ಲಿನ ಜನರನ್ನು ತಲುಪುವ ಕೆಲಸಗಳನ್ನು ಸರ್ಕಾರಗಳು ಸಹ ಮಾಡಿಲ್ಲ. ಕರ್ನಾಟಕದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಆ ಪ್ರದೇಶದ ಸಮಸ್ಯೆಗಳ ನೈಜತೆಯ ಅರಿವಿಲ್ಲದೇ ಮಾತನಾಡಿರುವುದು ಹಾಸ್ಯಾಸ್ಪದ.&lt;/p&gt;&lt;p&gt;ಹನೂರು ಗುಂಡಿನ ಚಕಮಕಿಯ ಘಟನೆಯ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಅದರ ವರದಿಯಿಂದ ನಿಜಾಂಶ ಹೊರಗೆ ಬರುತ್ತದೆ. ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದೆಯಾ...? ಅಥವಾ ಸತ್ತವರೆಲ್ಲರೂ ಕಳ್ಳಬೇಟೆಗೆ ಬಂದಿದ್ದವರೇ ಎನ್ನುವುದು ಗೊತ್ತಾಗಲಿದೆ. ಆದರೆ, ನಂತರದ ಘಟನೆಗಳನ್ನು ನೋಡಿದಾಗ ಸ್ಥಳೀಯ ಜನರು ಮತ್ತು ಅರಣ್ಯಾಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಕಳ್ಳ ಬೇಟೆಗಾರರು ಮತ್ತು ಅವರನ್ನು ಪ್ರೋತ್ಸಾಹಿಸುವ ಜಾಲ ಬಹಳ ಸಕ್ರಿಯವಾದ ಹಾಗೆ ಕಾಣಿಸುತ್ತಿದೆ. ಮತ ರಾಜಕಾರಣವನ್ನೇ ಉಸಿರನ್ನಾಗಿಸಿಕೊಂಡಿರುವ ಜನಪ್ರತಿನಿಧಿಗಳು ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟು, ಪೈಪೋಟಿಗೆ ಬಿದ್ದವರಂತೆ ಅರಣ್ಯ ಸಿಬ್ಬಂದಿ ಮೇಲೆ ಆರೋಪಗಳನ್ನು ಮಾಡಿ ಅರಣ್ಯ ಪಡೆಯ ನೈತಿಕ ಸ್ಥೈರ್ಯವನ್ನೇ ಕುಂದಿಸಿಬಿಟ್ಟಿದ್ದಾರೆ.&lt;/p&gt;&lt;p&gt;ಕಾನೂನು ಜಾರಿಗೊಳಿಸುವ ಪಡೆಗಳಿಂದಲೂ ತಪ್ಪುಗಳು ಆಗಬಹುದು. ಆದರೆ, ಅವುಗಳನ್ನು ದುರ್ಬಲ ಮಾಡುವ ಪ್ರವೃತ್ತಿ ಬಹಳ ಕೆಟ್ಟದ್ದು, ವನ್ಯಜೀವಿಗಳ ದಾಳಿ, ಕುಟುಂಬದಿಂದ ದೂರವುಳಿದು ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಮಾಡುವ ಕೆಲಸಕ್ಕೆ ಜನರಿಂದಲೂ ಬೈಗುಳ ಕೇಳುವಾಗ ಅವರ ಮನಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳೋಣ. ಉಳಿದೆಲ್ಲ ಖಾಕಿ ಪಡೆಗಳಿಗಿಂತಲೂ ಅರಣ್ಯ ಪಡೆ ಅತಿ ಹೆಚ್ಚು ಶತ್ರುಗಳನ್ನು ತನ್ನ ಸುತ್ತ ಹೊಂದಿದೆ. ಜನಪ್ರತಿನಿಧಿಗಳು, ಕಾಡಂಚಿನ ಜನರು ಹೀಗೆ ಎಲ್ಲರೂ ಅರಣ್ಯ ಇಲಾಖೆಯ ದ್ವೇಷಿಗಳೇ. ಆದರೆ, ಅವರ ಸೇವೆಯಿಂದ, ತ್ಯಾಗದಿಂದ ಲಾಭ ಪಡೆವ ನಾಗರಿಕ ಸಮಾಜ ಎಂದಿಗೂ ಅವರಿಗೆ ಕೃತಜ್ಞತೆಯನ್ನು ತೋರಿಸದಿರುವುದು ದುರಂತ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/hanur-encounter-case-was-the-anti-poaching-camp-blown-up-using-gelatin-sticks-by-innocent-villagers-rav/articleshow-da25xcz"/>
        </item>
        <item>
            <title><![CDATA[ಚಾಮರಾಜನಗರ ಶೂಟೌಟ್‌: ಅರಣ್ಯಾಧಿಕಾರಿ ವಿರುದ್ಧFIR.. ಪ್ರಕರಣದ ಸತ್ಯ ಬಿಚ್ಚಿಟ್ಟ ಐಜಿಪಿ ಬೋರಲಿಂಗಯ್ಯ..!]]></title>
            <link>https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev</link>
            <guid isPermaLink="true">https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev</guid>
            <pubDate>Sat, 15 Aug 2026 21:58:14 +0530</pubDate>
            <description><![CDATA[&lt;p&gt;ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತರು ಕಳೆದುಹೋದ ಹಸುಗಳನ್ನು ಹುಡುಕಲು ಹೋಗಿದ್ದರು ಎಂದು ಕುಟುಂಬಸ್ಥರು ದೂರು ನೀಡಿದ್ದರೆ ಅವರು ಪ್ರಾಣಿ ಬೇಟೆಗೆ ಬಂದು ನಮ್ಮ ಮೇಲೆಯೇ ಮೊದಲು ದಾಳಿ ನಡೆಸಿದ್ದರೆಂದು ಅರಣ್ಯ ಸಿಬ್ಬಂದಿ ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0340tbn63zdxvb30y1fm2hs,imgname-chamrajnagar-fir-1786811279733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಜಿಲ್ಲೆಯ ಹನೂರು ತಾಲೂಕಿನ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ (Chamarajanagar Encounter) ಸಂಬಂಧಿಸಿದಂತೆ ಕೊನೆಗೂ ಎಫ್&zwnj;ಐಆರ್ ದಾಖಲಾಗಿದೆ. ಪ್ರಾಣಿ ಬೇಟೆಗೆ ಬಂದಿದ್ದಾರೆ ಎಂದು ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಮೃತಪಟ್ಟಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೃತ ಆಂಟೋಣಿಸಾಮಿ ಅವರ ಪತ್ನಿ ಲೂರ್ದಾಮೇರಿ ನೀಡಿದ ದೂರಿನ ಆಧಾರದ ಮೇಲೆ ಚಾಮರಾಜನಗರದ ಹನೂರು ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಹಾಗೂ ಚಾಮರಾಜನಗರ ಎಸ್ಪಿ ಮುತ್ತುರಾಜು ಅವರ ಸಮ್ಮುಖದಲ್ಲಿ ಹನೂರು ವಿಭಾಗದ ಅರಣ್ಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿಸಿ ಬಿಎನ್&zwnj;ಎಸ್ 103(1) (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;&lt;strong&gt;ದೂರಿನಲ್ಲೇನಿದೆ?&lt;/strong&gt;&lt;/h2&gt;&lt;p&gt;ನಾವು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆಗಸ್ಟ್ 14ರಂದು ನಮ್ಮ ಹಸುಗಳು ಕಾಡಿಗೆ ಮೇಯಲು ಹೋಗಿದ್ದವು ಆದರೆ ವಾಪಸ್ ಬಂದಿರಲಿಲ್ಲ. ಹಸುಗಳನ್ನು ಹುಡುಕಿಕೊಂಡು ಹೋಗಲು ನನ್ನ ಪತಿ ಆಂಟೋಣಿಸಾಮಿ, ತಮ್ಮ ಕುಮಾರ್, ಮೈದುನ ಪೀಟರ್ ಹಾಗೂ ದೊಡ್ಡಪ್ಪನ ಮಗ ಜೋಸೆಫ್ ಕಾಡಿಗೆ ತೆರಳಿದ್ದರು. ಮರಿಯಮಂಗಲ ಗ್ರಾಮದಿಂದ ಸುಮಾರು 4 ಕಿಲೋಮೀಟರ್ ದೂರದ ಕಾಡಿನಲ್ಲಿ ಇವರು ವಿಶ್ರಾಂತಿ ಪಡೆಯುತ್ತಾ ಮಲಗಿದ್ದಾಗ, ಬೆಳಗಿನ ಜಾವ 3 ರಿಂದ 5 ಗಂಟೆಯ ಸುಮಾರಿಗೆ ಅರಣ್ಯ ಅಧಿಕಾರಿಗಳು ಇದ್ದಕ್ಕಿದ್ದಂತೆ ಶೂಟ್ ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಜೋಸೆಫ್ ಅಲ್ಲಿಂದ ತಪ್ಪಿಸಿಕೊಂಡು ಬಂದು ಘಟನೆಯನ್ನು ತಿಳಿಸಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಲೂರ್ದಾಮೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಅಧಿಕಾರಿಗಳ ವಾದವೇನು?&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಅರಣ್ಯ ಇಲಾಖೆಯ ಸಿಬ್ಬಂದಿ ಬೇರೆಯದೇ ವಾದ ಮಂಡಿಸಿದ್ದಾರೆ. ನಾಲ್ವರು ವ್ಯಕ್ತಿಗಳು ಪ್ರಾಣಿ ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದರು. ಈ ವೇಳೆ ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಮೊದಲು ಫೈರಿಂಗ್ ಮಾಡಿದ್ದಾರೆ. ಜೀವ ರಕ್ಷಣೆಗಾಗಿ ನಾವು ಮರು ಗುಂಡಿನ ದಾಳಿ (Retaliatory Firing) ನಡೆಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಘಟನಾ ಸ್ಥಳದಲ್ಲಿ ಒಂದು ನಾಡಬಂದೂಕು ಹಾಗೂ ಎರಡು ಬ್ಯಾಗ್&zwnj;ನಷ್ಟು ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿದೆ.&lt;/p&gt;&lt;h2&gt;&lt;strong&gt;ಅಸಲಿಗೆ ಆಗಿದ್ದೇನು?&lt;/strong&gt;&lt;/h2&gt;&lt;p&gt;ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಕಾವೇರಿ ವನ್ಯಧಾಮದ ಕರಡಿ ಕಲ್ಲು ಒಡ್ಡು ಬಳಿ ಈ ಘಟನೆ ನಡೆದಿದೆ. ಫೈರಿಂಗ್&zwnj;ನಿಂದ ಮೂವರು ಮೃತಪಟ್ಟಿದ್ದು, ಒಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳ ಜೀವ ಉಳಿಸಲು ಕೊಳ್ಳೇಗಾಲ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಮೂವರು ಮೃತಪಟ್ಟಿದ್ದರಿಂದ ಆಂಟೋಣಿಸಾಮಿ, ಜಾನ್ ಪೀಟರ್ ಹಾಗೂ ಸೆಬಾಸ್ಟಿಯನ್ ಕುಮಾರ್ ಅವರ ಮೃತದೇಹಗಳನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ.&lt;/p&gt;&lt;p&gt;ನಾಲ್ವರು ಬೇಟೆಯಾಡಲು ಅರಣ್ಯಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬೇಟೆಗೆ ಬಂದವರು ಅರಣ್ಯ ಸಿಬ್ಬಂದಿ ಮೇಲೆ ಫೈರಿಂಗ್ ಮಾಡಿದ್ದಾರೆ. ಅದಕ್ಕೆ ನಾವು ಫೈರಿಂಗ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಸತ್ಯಾಸತ್ಯತೆ ಹೊರತರುವ ಕೆಲಸವಾಗುತ್ತದೆ. ನಾಡಬಂದೂಕು ಕೂಡ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಎರಡು ಬ್ಯಾಗ್ ಮಾಂಸ ಸಿಕ್ಕಿದೆ ಅಂತಾ ಹೇಳಿದ್ದಾರೆ. ಸತ್ತವರ ವಿರುದ್ಧ ಪ್ರಕರಣಗಳಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆದ ನಂತರ ಗೊತ್ತಾಗುತ್ತದೆ. ಅರಣ್ಯ ಬಾರ್ಡರ್ ಗೂ ಹಾಗೂ ಘಟನೆ ನಡೆದಿರುವ ಸ್ಥಳಕ್ಕೆ ದೂರವಿದೆ. ಈಗ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ. ಅರಣ್ಯಧಿಕಾರಿಗಳು ಯಾವುದೇ ದೂರನ್ನ ನೀಡಿಲ್ಲ. ಅವರು ಸಹ ದೂರನ್ನು ಕೊಡಬಹುದು. ಎರಡೂ ಕಡೆಯ ವಾದಗಳಿದ್ದು, ಸಂಪೂರ್ಣ ತನಿಖೆಯ ಬಳಿಕವೇ ಸತ್ಯಾಸತ್ಯತೆ ಹೊರಬರಬೇಕಿದೆ. ಮೃತರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳಿವೆಯೇ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chamarajnagar/chamarajanagar-shootout-murder-case-registered-against-forest-department-officials-after-three-killed-gkn/articleshow-ea3l5ev"/>
        </item>
        <item>
            <title><![CDATA[Chamarajanagara: ಹನೂರು ಶೂಟೌಟ್ ಕೇಸ್‌ಗೆ ಬಿಗ್‌ಟ್ವಿಸ್ಟ್; ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ, ಸತ್ಯ ಬಿಚ್ಚಿಟ್ಟ ಎಸಿಎಫ್ ಮರಿಸ್ವಾಮಿ]]></title>
            <link>https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57</link>
            <guid isPermaLink="true">https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57</guid>
            <pubDate>Tue, 18 Aug 2026 15:32:22 +0530</pubDate>
            <description><![CDATA[ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ಎಸಿಎಫ್ ಮರಿಸ್ವಾಮಿ ಹೇಳಿಕೆ ನೀಡಿದ್ದು, ಮೃತಪಟ್ಟವರು ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು ಎಂದಿದ್ದಾರೆ. ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದು, ಘಟನಾ ಸ್ಥಳದಲ್ಲಿ 34 ಕೆಜಿ ಮಾಂಸ ಕೂಡ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0a4aq8nt5px1jhqjbxzyqpe,imgname-chamarajanagara-acf-mariswamy-1787046485269.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಡೆದ ಶೂಟೌಟ್&zwnj;ನಲ್ಲಿ ಮೂವರು ಮೃತಪಟ್ಟ ಘಟನೆಯ ಕುರಿತಂತೆ ಇದೇ ಮೊದಲ ಬಾರಿಗೆ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದ್ದು, ವರದಿ ಬಂದ ಬಳಿಕ ಕಾನೂನಿ ಅನ್ವಯ ಕ್ರಮಕೈಗೊಳ್ಳುವ ಭರವಸೆಯನ್ನು ಅರಣ್ಯ ಸಚಿವರು ನೀಡಿದ್ದಾರೆ.&lt;/p&gt;&lt;h2&gt;ಕಾವೇರಿ ಶೂಟೌಟ್ ರಹಸ್ಯ: ಎಸಿಎಫ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!&lt;/h2&gt;&lt;p&gt;ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ ಎಸಿಎಫ್ ಮರಿಸ್ವಾಮಿ, ಅರಣ್ಯಕ್ಕೆ ಬಂದಿದ್ದವರು ಬೇಟೆಗಾರರು. ದನ ಮೇಯಿಸಲು ಅಥವಾ ಹುಡುಕಲು ಅವರು ಕಾಡಿಗೆ ಎಂಟ್ರಿ ಕೊಟ್ಟಿರಲಿಲ್ಲ. ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು. ಹಸುಗಳನ್ನು ಹುಡುಕಲು ಗನ್ ಯಾಕೆ ತರುತ್ತಾರೆ? ಒಂದು ವೇಳೆ ಹಸು ಹುಡುಕಲು ಹೋಗುವುದಿದ್ದರೆ ಸ್ಥಳೀಯ ಅರಣ್ಯಾಧಿಕಾರಿ ಅಥವಾ ಸಿಬ್ಬಂದಿಗೆ ಮಾಹಿತಿ ಕೊಡಬೇಕಿತ್ತು. 8 ರಿಂದ 10 ಕಿಲೋ ಮೀಟರ್ ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಅವರು ಸತ್ತ 75 ಮೀಟರ್ ದೂರದಲ್ಲಿ ಎರಡು ಬ್ಯಾಗ್ ನಲ್ಲಿ ಮಾಂಸ ಸಿಕ್ಕಿದೆ. 34.25 ಕೆಜಿ ಮಾಂಸ ಪತ್ತೆಯಾಗಿದೆ. ಕ್ಲೀಯರ್ ಆಗಿ ಬೇಟೆಯಾಡುವ ಸಲುವಾಗಿಯೇ ಅರಣ್ಯಕ್ಕೆ ಹೋಗಿದ್ದಾರೆ. ಸತ್ತವರ ಮೂವರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಆದರೆ ತಲೆಮರೆಸಿಕೊಂಡಿರುವ ಮಹಿಮಾ ದಾಸ್ ವಿರುದ್ಧ ಒಂದು ಕೇಸ್ ಇದೆ. ಕಾವೇರಿ ವನ್ಯಧಾಮದಲ್ಲಿ ಪಿಷಿಂಗ್ ಸಂಬಂಧ ಕೇಸ್ ಇದೆ ಎಂದು ಹೇಳಿದರು.&lt;/p&gt;&lt;h2&gt;ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ&lt;/h2&gt;&lt;p&gt;ಪ್ರತಿದಿನ ಕೂಡ ಅರಣ್ಯ ಸಿಬ್ಬಂದಿ ಗಸ್ತಿಗೆ ಹೋಗುವ ವೇಳೆ ಗನ್ ತೆಗೆದುಕೊಂಡು ಹೋಗುತ್ತಾರೆ. ನಮ್ಮವರು ಫೈರ್ ಮಾಡದಿದ್ದರೆ ಅವರ ಸ್ಥಿತಿಯಲ್ಲಿ ನಮ್ಮವರು ಇರುತ್ತಿದ್ದರು. ಆತ್ಮರಕ್ಷಣೆಗಾಗಿ ಫೈರ್ ಮಾಡಿದ್ದಾರೆ. ನಮ್ಮವರಿಗೆ ಯಾವುದೇ ಗಾಯ ಆಗಿಲ್ಲ. ಸತ್ತವರು ಕೂಡ ಗುಂಡು ಹಾರಿಸಿದ್ದರು, ಅದು ಮಿಸ್ ಫೈರ್ ಆಗಿದೆ. ಮೂರು ಜನರನ್ನು ಶೂಟ್ ಮಾಡಿದ್ದು ಒಬ್ಬನೇ ಅರಣ್ಯ ಸಿಬ್ಬಂದಿ, ಇನ್ನುಳಿದ ಇಬ್ಬರು ಆತನ ಜೊತೆಯಲ್ಲಿದ್ದರು. ಒಟ್ಟಾರೆ 12 ಸಿಬ್ಬಂದಿ ಈ ಕಾರ್ಯಾಚರಣೆ ವೇಳೆ ಭಾಗಿಯಾಗಿದ್ದರು. ಸಿಬ್ಬಂದಿ ಹಗಲು ರಾತ್ರಿ ಕಷ್ಟ ಪಡೊದೆ ಅರಣ್ಯ ಹಾಗೂ ದೇಶದ ಸಂಪತ್ತು ಕಾಯಲು ಎಂದು ಎಸಿಎಫ್ ವಿವರಿಸಿದ್ದಾರೆ.&lt;/p&gt;&lt;h2&gt;ಬೇಟೆಗೆ ಬೇಕಾದ ಎಲ್ಲಾ ವಸ್ತುಗಳಿದ್ದವು!&lt;/h2&gt;&lt;p&gt;ಇದೇ ವೇಳೆ ಹೊಸ ಚಪ್ಪಲಿ ಸಿಕ್ಕ ವಿಚಾರವಾಗಿ ಸ್ಪಷ್ಟನೆ ನೀಡಿರುವ ಎಸಿಎಫ್, ಹೊಸ ಚಪ್ಪಲಿಯಲ್ಲಿ ಯಾವ ಸಾಕ್ಷಿ ಸಿಗುತ್ತದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತಗೊಂಡು ಹೋಗಿ ಇಟ್ಟಿಲ್ಲ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜೊತೆ ಚಪ್ಪಲಿ ಸಿಕ್ಕಿದೆ. ಅದು ಕೂಡ ಪಾರಾಗನ್ ಚಪ್ಪಲಿ. ಕಿತ್ತೊದ್ರೆ ಇರಲಿ ಅಂತಾ ತಂದು ಇಟ್ಟುಕೊಂಡಿರಬಹುದು. ಬ್ಯಾಗ್ ನಲ್ಲಿ ದಿನಸಿ ಪದಾರ್ಥ, ಟಾರ್ಚ್ ಸೇರಿದಂತೆ ಬೇಟೆಯಾಡಲು ಬೇಕಾದ ಸಲಕರಣೆಗಳಿದ್ದವು. ಸ್ಥಳದಲ್ಲಿ ಸಿಕ್ಕ ಮಾಂಸ ಯಾವ ಪ್ರಾಣಿಯದು ಪತ್ತೆ ಹಚ್ಚಲೂ ಲ್ಯಾಬ್ ಗೆ ಕಳಿಸಲಾಗಿದೆ. ವರದಿ ಬಂದ ಈ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.&lt;/p&gt;&lt;p&gt;&lt;/p&gt;&lt;h2&gt;ಅರಣ್ಯ ನಾಶ ಮಾಡುವವರ ಸದೆಬಡಿಯುವ ಕೆಲಸ ಆಗ್ಬೇಕು!&lt;/h2&gt;&lt;p&gt;ಕಳ್ಳಬೇಟೆ ತಡೆ ಶಿಬಿರ ಧ್ವಂಸ ಬಗ್ಗೆ ದೂರು, ವಾಪಾಸ್ ಪಡೆಯುವಂತೆ ಸ್ಥಳೀಯರ ಒತ್ತಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರದ ಆಸ್ತಿ ಪಾಸ್ತಿ ನಾಶ ಮಾಡಿದವರ ವಿರುದ್ಧ ಏನ್ ಕ್ರಮ ಕೈಗೊಳ್ತಾರೋ ಆ ಕೆಲಸ ಮಾಡ್ತಿದ್ದೇವೆ. ಯಾರೂ ಹಾನಿ ಮಾಡಿದ್ದಾರೆ ಅವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಕಾನೂನು ಪ್ರಕಾರ ಕ್ರಮ, ಯಾವುದೇ ಸಮಸ್ಯೆ ತಂದೊಡ್ಡುವ ಕೆಲಸ ಮಾಡ್ತಿಲ್ಲ. ಯಾರೂ ಅರಣ್ಯ ನಾಶ ಮಾಡ್ತಾರೆ, ಅಂತಹವರ ಸದೆಬಡಿಯುವ ಕೆಲಸ ಕೂಡ ಆಗಬೇಕು ಎಂಬ ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>chamarajnagar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagara-hanur-shootout-case-new-pair-of-slippers-found-at-the-scene-acf-mariswamy-reveals-the-truth-sns/articleshow-ef6av57"/>
        </item>
        <item>
            <title><![CDATA[ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ]]></title>
            <link>https://kannada.asianetnews.com/karnataka-districts/nagarahole-where-tigers-elephants-and-humans-face-a-growing-conflict-gvd-videoshow-fwzcamg</link>
            <guid isPermaLink="true">https://kannada.asianetnews.com/karnataka-districts/nagarahole-where-tigers-elephants-and-humans-face-a-growing-conflict-gvd-videoshow-fwzcamg</guid>
            <pubDate>Sat, 15 Aug 2026 16:16:13 +0530</pubDate>
            <description><![CDATA[&lt;p&gt;ನಾಗರಹೊಳೆ ಅಂದ್ರೆ ಹುಲಿ, ಹುಲಿ ಅಂದ್ರೆ ನಾರಹೊಳೆ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕಾಡು ನಾಗರಹೊಳೆ. ನಾಗರಹೊಳೆ ಹುಲಿಗಳ ಜೊತೆಗೆ ದಸರಾ ಆನೆಗಳ ಮೂಲಕವು ಬಹಳ ಫೇಮಸ್.&lt;/p&gt;]]></description>
            <media:content url="https://geo.dailymotion.com/player/x1tbu.html?video=xaxxkoe" medium="video" height="768" width="1024"/>
            <content:encoded><![CDATA[&lt;p&gt;ನಾಗರಹೊಳೆ ಅಂದ್ರೆ ಹುಲಿ, ಹುಲಿ ಅಂದ್ರೆ ನಾರಹೊಳೆ. ಇಡೀ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕಾಡು ನಾಗರಹೊಳೆ. ನಾಗರಹೊಳೆ ಹುಲಿಗಳ ಜೊತೆಗೆ ದಸರಾ ಆನೆಗಳ ಮೂಲಕವು ಬಹಳ ಫೇಮಸ್. ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ಬಹುತೇಕ ಎಲ್ಲ ಆನೆಗಳು ಬರೋದು ಈ ಹುಲಿ ಸಂರಕ್ಷಿತಾ ಆನೆ ಶಿಬಿರಗಳಿಂದ. ಶತಮಾನಗಳಿಂದ ನಾಗರಹೊಳೆ ಆನೆ ಮತ್ತು ಹುಲಿಗಳಿಗೆ ಹೆಸರುವಾಸಿ. ನಾನಾ ಕಾರಣಗಳಿಂದ ವಿಶ್ವವಿಖ್ಯಾತವಾಗಿರುವ ನಾಗರಹೊಳೆ ಇದೀಗ ವಿಪರೀತ ಎನ್ನುವಷ್ಟು ಮಾನವ-ವನ್ಯಜೀವಿ ಸಂಘರ್ಷ ಎದುರಿಸುತ್ತಿದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ-ಹುಲಿಗಳ ಒಡಾಟ ಸಿಕ್ಕಾಪಟ್ಟೆ ಹೆಚ್ಚಳಗೊಂಡಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/nagarahole-where-tigers-elephants-and-humans-face-a-growing-conflict-gvd-videoshow-fwzcamg"/>
        </item>
        <item>
            <title><![CDATA[ಹನೂರು ಶೂಟೌಟ್‌ನಲ್ಲಿ ಪರಾರಿಯಾಗಿದ್ದ 4ನೇ ಆರೋಪಿ ದಾಸ್ ಪ್ರತ್ಯಕ್ಷ; ಕೇಸಿಗೆ ಟ್ವಿಸ್ಟ್ ನೀಡಿದ ವಿಡಿಯೋ ಹೇಳಿಕೆ!]]></title>
            <link>https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q</link>
            <guid isPermaLink="true">https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q</guid>
            <pubDate>Wed, 19 Aug 2026 08:04:20 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಶೂಟೌಟ್&zwnj;ನಿಂದ ಪರಾರಿಯಾಗಿದ್ದ ಮಹಿಮಾದಾಸ್, ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಅರಣ್ಯ ಇಲಾಖೆಯವರು ಗುಂಡು ಹಾರಿಸಿದಾಗ ಭಯದಿಂದ ಓಡಿಹೋದೆ ಎಂದು ಹೇಳಿಕೊಂಡಿದ್ದು, ಪೊಲೀಸರ ರಕ್ಷಣೆ ಕೋರಿದ್ದಾನೆ. ಈ ಹೇಳಿಕೆಯು ಪ್ರಕರಣದ ತನಿಖೆಗೆ ಹೊಸ ತಿರುವು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0bxfnftnj0k850qjk9c4krj,imgname-hanur-shootout-case-4th-accused-video-1787106416122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಆ.19): ಚಾ&lt;/strong&gt;ಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಆ.15ರಂದು ನಡೆದ ಶೂಟೌಟ್&zwnj; ವೇಳೆ ಪರಾರಿಯಾಗಿ ಬದುಕುಳಿದ ಮರಿಯಮಂಗಲ ಗ್ರಾಮದ ಮಹಿಮಾದಾಸ್ ಈಗ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.&lt;/p&gt;&lt;p&gt;ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಮಹಿಮಾದಾಸ್&zwnj;, ಶೂಟೌಟ್ ವೇಳೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದರ ಮಧ್ಯೆಯೇ ಆತ ಅಜ್ಞಾತಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಘಟನೆ ಬಗ್ಗೆ ವಿವರಿಸಿದ್ದಾನೆ.&lt;/p&gt;&lt;h2&gt;&lt;strong&gt;ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು&lt;/strong&gt;&lt;/h2&gt;&lt;p&gt;&lsquo;ನಾನು ಬೆಟ್ಟದಿಂದ ಕೆಳಗಿಳಿದು ಬಂದಿದ್ದೆ. ಆಗ ಅರಣ್ಯ ಇಲಾಖೆಯ ಸಿಬ್ಬಂದಿ ಬಂದರು. ಅವರು ಬಂದ ತಕ್ಷಣ ಶೂಟ್&zwnj; ಮಾಡಿದರು, ನನಗೆ ಭಯವಾಯ್ತು, ಓಡಿ ಹೋದೆ. ಆಗ ಸಮಯ ಸರಿ ಸುಮಾರು ಬೆಳಗಿನ ಜಾವ 5.20 ಆಗಿತ್ತು. ಭಯದಿಂದ ನಾನು ಅಲ್ಲಿಂದ ಓಡಿ ಬಿಟ್ಟೆ. 5 ನಿಮಿಷ ಆದ ಮೇಲೆ ಯಾವುದೇ ಶಬ್ದ ಇರಲಿಲ್ಲ. ಆದರೆ, ನನಗೆ ಹುಷಾರಿರಲಿಲ್ಲ. ಹೀಗಾಗಿ, ಅಲ್ಲಿಂದ ಓಡಿ ಮನೆಗೆ ಬಂದೆ. ಬಳಿಕ, ಮನೆಯವರು ನನ್ನನ್ನು ಆಸ್ಪತ್ರೆಗೆ ಸೇರಿಸಿದರು. ಈಗ ಅರಣ್ಯ ಇಲಾಖೆಯವರು ಎಲ್ಲಾ ಕಡೆ ನನ್ನನ್ನು ಹುಡುಕುತ್ತಿದ್ದಾರೆ. ನನಗೆ ಭಯವಾಗುತ್ತಿದೆ. ಹೀಗಾಗಿ, ಪೊಲೀಸರೇ, ನನ್ನನ್ನು ನೀವೇ ನೋಡಿಕೊಳ್ಳಬೇಕು&rsquo; ಎಂದು ವಿಡಿಯೋದಲ್ಲಿ ಹೇಳಿದ್ದಾನೆ.&lt;/p&gt;&lt;p&gt;ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಮಹಿಮಾದಾಸ್ ಹೇಳಿಕೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-hanur-shootout-4th-accused-mahimadas-releases-viral-video-from-hiding-appeals-to-police/articleshow-hvbzr7q"/>
        </item>
        <item>
            <title><![CDATA[ಬರದ ಮಧ್ಯೆಯೂ ರಾಜ್ಯದ ಹಲವೆಡೆ ಭಾರೀ ಮಳೆ: ಕಣ್ಮನ ಸೆಳೆದ ಹೊಗೇನಲ್‌ ಜಲಪಾತ!]]></title>
            <link>https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</link>
            <guid isPermaLink="true">https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n</guid>
            <pubDate>Wed, 05 Aug 2026 05:29:20 +0530</pubDate>
            <description><![CDATA[&lt;p&gt;ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7k3sxapnx47sc2vamewk44,imgname-----------------------2026-08-05t051946.874-1785887582122.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5)&lt;/strong&gt;: ರಾಜ್ಯದ ಹಲವೆಡೆ ಬರಗಾಲದ ಮಧ್ಯೆಯೂ ಕೆಲವಡೆ ಮುಂಗಾರು ಆರ್ಭಟ ಮುಂದುವರೆದಿದ್ದು, ಮಂಗಳವಾರ ಉಡುಪಿಯಲ್ಲಿ ಹೆಚ್ಚು ಮಳೆ ಸುರಿದಿದೆ. ದಾವಣಗೆರೆಯಲ್ಲಿ ಮಳೆಗೆ 2 ಮನೆಗಳಿಗೆ ಹಾನಿಯಾಗಿದ್ದು, ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಈ ಮಧ್ಯೆ ಕಬಿನಿ ಜಲಾಶಯದಿಂದ 27 ಸಾವಿರ ಕ್ಯುಸೆಕ್&zwnj; ನೀರು ಬಿಡುಗಡೆ ಮಾಡಲಾಗಿದೆ.&lt;/p&gt;&lt;p&gt;ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದ್ದು, ಕುಂದಾಪುರ ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಕೊರ್ಗಿ ಗ್ರಾಮದ ಮನೆವೊಂದಕ್ಕೆ ಹಾನಿಯಾಗಿ ₹80,000 ನಷ್ಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 104.40 ಮಿ.ಮೀ. ಮಳೆ ದಾಖಲಾಗಿದೆ.&lt;/p&gt;&lt;p&gt;ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸಣ್ಣದಾಗಿ ಬರುತ್ತಿದ್ದ ಮಳೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ಭರ್ಜರಿಯಾಗಿ ಸುರಿದಿದೆ. ಚನ್ನಗಿರಿ ತಾಲೂಕಿನ ಹೊಸಕೆರೆ ಮತ್ತು ಕೊರಟಿಕೆರೆ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಸಮವಾಗಿವೆ.&lt;/p&gt;&lt;h2&gt;ಕಣ್ಮನ ಸೆಳೆದ ಹೊಗೇನಲ್&zwnj; ಜಲಪಾತ:&lt;/h2&gt;&lt;p&gt;ಕಬಿನಿ ಜಲಾಶಯದಿಂದ ಮಂಗಳವಾರ 25,000 ಕ್ಯುಸೆಕ್&zwnj; ನೀರು ಕಾವೇರಿ ನದಿಗೆ ಬಿಡುಗಡೆಗೊಳಿಸಲಾಯಿತು. ಇದರ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಜಲಪಾತವು ರುದ್ರ ರಮಣೀಯವಾಗಿ ಹರಿದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲ್ಪಡುವ ಈ ಜಲಪಾತವು ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದಾಗಿ ಬತ್ತಿ ಹೋಗುವ ಹಂತಕ್ಕೆ ತಲುಪಿತ್ತು.&lt;/p&gt;&lt;p&gt;ಇದೀಗ ಮತ್ತೆ ತನ್ನ ಮೂಲ ಸೌಂದರ್ಯವನ್ನು ಪಡೆದುಕೊಂಡಿದ್ದು, ದೋಣಿ ವಿಹಾರ, ಜಲಪಾತದ ಸಮೀಪದಲ್ಲಿ ಸ್ನಾನ, ಫೋಟೋ ಶೂಟ್&zwnj; ಮತ್ತು ಪ್ರಕೃತಿ ಸೊಬಗನ್ನು ಸವಿಯಲು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದೆ.&lt;/p&gt;&lt;p&gt;ರೈತರಿಗೆ ಬಿತ್ತನೆಗೆ ಇದು ಅನುಕೂಲವಾಗಿದ್ದು, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ಬೆಳೆಯಲು ಮಳೆ ಪೂರಕವಾಗಿದೆ. ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶಾಲೆ-ಕಾಲೇಜು, ಕಚೇರಿಗಳು ಬಿಡುವ ವೇಳೆಯಲ್ಲಿ ಮಳೆ ಬರುತ್ತಿದ್ದ ಕಾರಣ ಮನೆಗೆ ತೆರಳಲು ಜನರು ಪರದಾಡಿದರು. ರಸ್ತೆಯಲ್ಲಿ ಅಲ್ಲಲ್ಲಿ ನೀರು ನಿಂತ್ತಿದ್ದರಿಂದ ವಾಹನ ಸವಾರರಿಗೆ ದಾರಿ ಕಾಣದಂತಾಗಿತ್ತು. ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳು ತೊಂದರೆ ಅನುಭವಿಸಿದರು.&lt;/p&gt;&lt;h3&gt;ಸಂಚಾರ ಸ್ಥಗಿತ:&lt;/h3&gt;&lt;p&gt;ಕೊಡಗು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದ್ದು, ಮಡಿಕೇರಿ ರಸ್ತೆಗೆ ಅಡ್ಡಲಾಗಿ ಮರಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವು ಮಾಡಿದರು. ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ಸರಾಸರಿ 8.90 ಮಿ.ಮೀ. ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 7147 ಕ್ಯುಸೆಕ್ ನೀರಿನ ಒಳಹರಿವು ಇದ್ದು, 6291 ಕ್ಯುಸೆಕ್ ಹೊರ ಹರಿವು ಕಂಡುಬಂತು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/karnataka-weather-forecast-heavy-rain-in-many-places-including-udupi-dakshina-kannada-rav/articleshow-knen12n"/>
        </item>
        <item>
            <title><![CDATA[ಹನೂರು ಎನ್‌ಕೌಂಟರ್ ಸೇಡು: ಕಾಡಿಗೆ ಬೆಂಕಿ ಹಚ್ಚಿ, ಶಿಬಿರಗಳನ್ನೇ ಸ್ಫೋಟಿಸಿದ ಕಳ್ಳಬೇಟೆಗಾರರು; ಅರಣ್ಯ ಇಲಾಖೆಗೆ ಆತಂಕ!]]></title>
            <link>https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh</link>
            <guid isPermaLink="true">https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh</guid>
            <pubDate>Thu, 20 Aug 2026 10:47:52 +0530</pubDate>
            <description><![CDATA[&lt;p&gt;ಹನೂರು ಎನ್&zwnj;ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0es94yrx47frkxekdyeh7mk,imgname-chamarajanagara-forest-1787202671576.jpg" type="image/jpeg" height="390" width="690"/>
            <content:encoded><![CDATA[&lt;p&gt;ಹನೂರು ಎನ್&zwnj;ಕೌಂಟರ್ ಬಳಿಕ, ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಜಿಲೆಟಿನ್ ಬಳಸಿ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸುತ್ತಿದ್ದು, 10 ಎಕರೆ ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಈ ಕೇಸಿನ ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಬರಬಹುದು.&lt;/p&gt;&lt;img&gt;&lt;p&gt;ಚಾಮರಾಜನಗರ: ಹನೂರು ತಾಲೂಕಿನ ಅರಣ್ಯದಲ್ಲಿ ನಡೆದ ಎನ್&zwnj;ಕೌಂಟರ್ ಬೆನ್ನಲ್ಲೇ ಭುಗಿಲೆದ್ದಿರುವ ಕಿಚ್ಚು ಈಗ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಕಾವೇರಿ ವನ್ಯಧಾಮ ಮಾತ್ರವಲ್ಲದೆ, ಇದೀಗ ಮಲೆ ಮಹದೇಶ್ವರ (MM Hills) ವನ್ಯಧಾಮಕ್ಕೂ ಕಿಡಿಗೇಡಿಗಳ ಅಟ್ಟಹಾಸ ವ್ಯಾಪಿಸಿದೆ. ಅರಣ್ಯ ರಕ್ಷಣಾ ಶಿಬಿರಗಳನ್ನು ಜಿಲೆಟಿನ್, ಡೈನಾಮೈಟ್ ಬಳಸಿ ಸ್ಫೋಟಿಸುತ್ತಿರುವುದು ಹಾಗೂ ಕಾಡಿಗೆ ಬೆಂಕಿ ಹಚ್ಚುತ್ತಿರುವ ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ಅಖಾಡಕ್ಕಿಳಿಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;&lt;strong&gt;ಶಿಲುವೆಪುರ ಅರಣ್ಯದಲ್ಲಿ 10 ಎಕರೆ ಕಾಡಿಗೆ ಬೆಂಕಿ!&lt;/strong&gt;&lt;/p&gt;&lt;p&gt;ಕೊಳ್ಳೇಗಾಲ ತಾಲೂಕಿನ ಶಿಲುವೆಪುರ ಅರಣ್ಯ ವ್ಯಾಪ್ತಿಗೆ ನುಗ್ಗಿರುವ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚಿದ್ದು, ಸುಮಾರು 10 ಎಕರೆಗೂ ಹೆಚ್ಚು ಅರಣ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಇದರ ಜೊತೆಗೆ ಜಾಗೇರಿ ಬಳಿಯಿದ್ದ ಕಳ್ಳಬೇಟೆ ತಡೆ ಶಿಬಿರವನ್ನೂ ಧ್ವಂಸಗೊಳಿಸಲಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ದುಷ್ಕೃತ್ಯದ ವಿಡಿಯೋಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿದ್ದು, ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಜಿಲೆಟಿನ್, ಡೈನಾಮೈಟ್ ಬ್ಲಾಸ್ಟ್: ಸ್ಥಳಕ್ಕೆ 'ಆ್ಯಂಟಿ ನಕ್ಸಲ್ ಫೋರ್ಸ್' ಭೇಟಿ ಸಾಧ್ಯತೆ&lt;/strong&gt;&lt;/p&gt;&lt;p&gt;ಅರಣ್ಯದ ಒಳಗಿರುವ ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಫೋಟಿಸಲು ದುಷ್ಕರ್ಮಿಗಳು ಮಾರಕ ಜಿಲೆಟಿನ್ ಮತ್ತು ಡೈನಾಮೈಟ್ ಕಡ್ಡಿಗಳನ್ನು ಬಳಸಿರುವುದು ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ.&lt;/p&gt;&lt;p&gt;ದಟ್ಟ ಅರಣ್ಯದಲ್ಲಿ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪೊಲೀಸರ ಜೊತೆಗೆ ಆ್ಯಂಟಿ ನಕ್ಸಲ್ ಫೋರ್ಸ್ (ANF) ತಂಡವು ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.&lt;/p&gt;&lt;p&gt;ಸ್ಫೋಟಕಗಳು ಇವರಿಗೆ ಎಲ್ಲಿಂದ ಪೂರೈಕೆಯಾಗುತ್ತಿವೆ? ಇದರ ಹಿಂದೆ ನಕ್ಸಲ್ ಅಥವಾ ಸಂಘಟಿತ ಕಳ್ಳಬೇಟೆ ಜಾಲಗಳ ಕೈವಾಡವಿದೆಯೇ ಎಂಬ ಆಯಾಮದಲ್ಲೂ ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;8 ಶಿಬಿರಗಳು, 3 ವಸತಿ ಗೃಹ, ಜೀಪ್ ಧ್ವಂಸ: ACF ಮರಿಸ್ವಾಮಿ ಹೇಳಿಕೆ&lt;/strong&gt;&lt;/p&gt;&lt;p&gt;ಘಟನೆಯ ಕುರಿತು ಕಾವೇರಿ ವನ್ಯಧಾಮದ ಎಸಿಎಫ್ (ACF) ಮರಿಸ್ವಾಮಿ ಅವರು ಮಾಹಿತಿ ನೀಡಿ, &quot;ವನ್ಯಧಾಮದಲ್ಲಿ ಒಟ್ಟು 28 ಕಳ್ಳಬೇಟೆ ತಡೆ ಶಿಬಿರಗಳಿದ್ದು, ಈ ಪೈಕಿ 8 ಶಿಬಿರಗಳನ್ನು ಜಿಲೆಟಿನ್ ಮತ್ತು ಡೈನಾಮೈಟ್ ಬಳಸಿ ತೀವ್ರವಾಗಿ ಹಾನಿಗೊಳಿಸಲಾಗಿದೆ. 3 ಸಿಬ್ಬಂದಿ ವಸತಿ ಗೃಹ, ಸೋಲಾರ್ ಫೆನ್ಸಿಂಗ್, ಬ್ಯಾಟರಿಗಳು ಹಾಗೂ ಒಂದು ಇಲಾಖಾ ಜೀಪ್ ಅನ್ನು ನಾಶಮಾಡಲಾಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;'ನಾವು ರೈತರ ಮೇಲೆ ಯಾವುದೇ ಆರೋಪ ಮಾಡುತ್ತಿಲ್ಲ. ಆದರೆ ಅಕ್ರಮ ಕಳ್ಳಬೇಟೆಯಲ್ಲಿ ತೊಡಗಿರುವ ದುಷ್ಕರ್ಮಿಗಳೇ ದ್ವೇಷದಿಂದ ಇಂತಹ ಕೃತ್ಯ ಎಸಗಿದ್ದಾರೆ. ಕಾಡಿನಲ್ಲಿ ಹಲವು ಕಾಲುದಾರಿಗಳಿದ್ದು, ರಾತ್ರಿ ವೇಳೆ ನುಗ್ಗಿ ಸ್ಫೋಟಿಸುತ್ತಿದ್ದಾರೆ. ಈ ಶಿಬಿರಗಳ ನಾಶದಿಂದ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಯುವುದು ಕಷ್ಟವಾಗಲಿದ್ದು, ಅರಣ್ಯ ರಕ್ಷಣೆಗೆ ಭಾರೀ ಹಿನ್ನಡೆಯಾಗಲಿದೆ. ದಾಳಿಗಳ ಬಗ್ಗೆ ಮಾಹಿತಿ ಇದ್ದರೆ ಸಾರ್ವಜನಿಕರು ಇಲಾಖೆಗೆ ತಿಳಿಸಬೇಕು' ಕಾವೇರಿ ವನ್ಯಧಾಮ ಎಸಿಎಫ್ ಮರಿಸ್ವಾಮಿ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;&lt;strong&gt;ತನಿಖೆ ತೀವ್ರ, ಅರಣ್ಯದಲ್ಲಿ ಹೈ ಅಲರ್ಟ್&lt;/strong&gt;&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಮಾಪುರ ಮತ್ತು ಹನೂರು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅರಣ್ಯದ ಒಳಗಿರುವ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಕಾಡು ನಾಶ ಮತ್ತು ಸ್ಫೋಟದಲ್ಲಿ ಭಾಗಿಯಾದ ಕಿಡಿಗೇಡಿಗಳ ಹೆಡೆಮುರಿ ಕಟ್ಟಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ಆರಂಭಿಸಿವೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/chamarajanagar-hanur-encounter-revenge-mm-hills-cauvery-sanctuary-blast-anf-investigation-forest-fire-ktmb7sh"/>
        </item>
        <item>
            <title><![CDATA[ಚಾಮರಾಜನಗರ ಎನ್‌ಕೌಂಟರ್: ಅವರು ಬೇಟೆಗಾರರಲ್ಲ ರೈತರು, ಕಾರಣ ತಿಳಿಯದೆ ಮೃತದೇಹ ಸ್ವೀಕರಿಸಲ್ಲ! ಮಾವಂದಿರ ಸಾವಿಗೆ ಸಂಬಂಧಿ ಕಣ್ಣೀರು]]></title>
            <link>https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24</link>
            <guid isPermaLink="true">https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24</guid>
            <pubDate>Sat, 15 Aug 2026 12:32:12 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್&zwnj;ಕೌಂಟರ್&zwnj;ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖೆಯು ಇವರನ್ನು ಬೇಟೆಗಾರರೆಂದು ಹೇಳಿದರೆ, ಮೃತರ ಕುಟುಂಬಸ್ಥರು ಇವರು ಅಮಾಯಕ ರೈತರೆಂದು ವಾದಿಸುತ್ತಿದ್ದಾರೆ. ಈ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಸಂಬಂಧಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022xx4ry37h4h20nmen6mwm,imgname-chamarajanagar-forest-encounter--2--1786776581272.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು:&lt;/strong&gt; ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ನಡೆದಿದ್ದ ಮೂವರ ಎನ್&zwnj;ಕೌಂಟರ್ ಪ್ರಕರಣ ಇದೀಗ ತೀವ್ರ ಚರ್ಚೆ ಹಾಗೂ ಗ್ರಾಮಸ್ಥರು ಮತ್ತು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಸಿಬ್ಬಂದಿ ಯಾಕೆ ಮತ್ತು ಯಾವ ಆಧಾರದ ಮೇಲೆ ಶೂಟೌಟ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುವ ವರೆಗೂ ನಾವು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಮೃತರ ಸಂಬಂಧಿ ವಿಜಯ್ ಆಂಥೋನಿ ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಖಡಕ್ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದೇ ಈ ಭೀಕರ ಸುದ್ದಿ ತಿಳಿದು ಮೈಸೂರಿಗೆ ಧಾವಿಸಿರುವ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.&lt;/p&gt;&lt;h2&gt;ನಮ್ಮವರು ಬೇಟೆಗಾರರಲ್ಲ, ರೈತರು: ಮೃತರ ಸಂಬಂಧಿ ವಿಜಯ್ ಆಂಥೋನಿ ಆಕ್ರೋಶ&lt;/h2&gt;&lt;p&gt;ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತದೇಹಗಳನ್ನು ವೀಕ್ಷಿಸಲು ಬಂದ ಮೃತರ ನಿಕಟ ಸಂಬಂಧಿ ವಿಜಯ್ ಆಂಥೋನಿ ಮಾಧ್ಯಮಗಳೊಂದಿಗೆ ಮಾತನಾಡಿ ಅರಣ್ಯ ಇಲಾಖೆಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.&lt;/p&gt;&lt;p&gt;&quot;ಮೃತಪಟ್ಟ ಮೂವರೂ (ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್) ನನಗೆ ಸ್ವಂತ ಮಾವಂದಿರು. ಅವರ್ಯಾರೂ ಬೇಟೆಗಾರರಲ್ಲ. ಎಲ್ಲರೂ ಕೃಷಿ ಮಾಡಿಕೊಂಡು, ಹಸು-ಎಮ್ಮೆಗಳನ್ನು ಸಾಕಿಕೊಂಡಿದ್ದ ಸಾಧಾರಣ ರೈತರು. ದನಕರುಗಳು ಕಾಡಿಗೆ ಮೇಯಲು ಹೋದಾಗ, ಅವು ರಾತ್ರಿಯಾದರೂ ಮನೆಗೆ ಬರದಿದ್ದರೆ ಹುಡುಕಿಕೊಂಡು ಹೋಗುವುದು ನಮಗೆ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಇವರ ಮೇಲೆ ಗುಂಡು ಹಾರಿಸಿದ್ದಾರೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ನೇರವಾಗಿ ಜೀವ ತೆಗೆಯುವಂತೆ ಶೂಟ್ ಮಾಡುವ ಅಗತ್ಯ ಏನಿತ್ತು? ಗುಂಡು ಹೊಡೆಯುವಾಗ ಕನಿಷ್ಠ ಕಾಲಿನ ಕೆಳಭಾಗಕ್ಕಾದರೂ ಹೊಡೆದು ಬಂಧಿಸಬಹುದಿತ್ತಲ್ಲವೇ? ನಮ್ಮವರು ಫೈರಿಂಗ್ ಮಾಡಿದ್ದಾರೆ ಎಂದು ಇಲಾಖೆ ಹೇಳುತ್ತಿದೆಯಲ್ಲ, ಹಾಗಾದರೆ ಯಾವ ಅರಣ್ಯ ಸಿಬ್ಬಂದಿಗೆ ಗುಂಡು ತಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ!&lt;/p&gt;&lt;p&gt;ಮೂವರಿಗೂ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಶುಭ ದಿನದಂದೇ ನಮಗೆ ಈ ದುಃಖದ ಸುದ್ದಿ ತಲುಪಿಸಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಇಲಾಖೆಗೆ ಅನುಮತಿ ಕೊಟ್ಟವರು ಯಾರು? ನಮಗೆ ಈ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗಬೇಕು. ಶೂಟೌಟ್&zwnj;ಗೆ ಸೂಕ್ತ ಕಾರಣ ಮತ್ತು ಸ್ಪಷ್ಟನೆ ಸಿಗುವವರೆಗೂ ನಾವು ಮೃತದೇಹಗಳನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ&lt;/p&gt;&lt;h2&gt;ಘಟನೆಯ ಹಿನ್ನೆಲೆ: ಅರಣ್ಯ ಇಲಾಖೆಯ ವಾದ&lt;/h2&gt;&lt;p&gt;ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಬೇಟೆಗೆ ಶಂಕಿತ ಬೇಟೆಗಾರರ ತಂಡ ಎಂಟ್ರಿ ಕೊಟ್ಟಿದೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಈ ವೇಳೆ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿದೆ.&lt;/p&gt;&lt;p&gt;ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ದಾಳಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದ್ದು, ಗಾಯಗೊಂಡ ಅರಣ್ಯ ಸಿಬ್ಬಂದಿಯೊಬ್ಬರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಭುಗಿಲೆದ್ದ ಸಾರ್ವಜನಿಕ ಆಕ್ರೋಶ &ndash; ಬಿಗಿ ಪೊಲೀಸ್ ಬಂದೋಬಸ್ತ್&lt;/h2&gt;&lt;p&gt;ಇತ್ತ ಎನ್&zwnj;ಕೌಂಟರ್ ವಿಷಯ ತಿಳಿಯುತ್ತಿದ್ದಂತೆಯೇ ಶಾಗ್ಯ ಗ್ರಾಮದಲ್ಲಿ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಕಟ್ಟಿ, ಜೀವಂತವಾಗಿ ಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಉಪವಲಯ ಅರಣ್ಯಾಧಿಕಾರಿಗಳ (DRFO) ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳು, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಧ್ವಂಸಗೊಳಿಸಲಾಗಿದೆ. ಪ್ರಸ್ತುತ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರ ಹಾಗೂ ಶಾಗ್ಯ ಅರಣ್ಯ ಕಚೇರಿಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಂದೋಬಸ್ತ್&zwnj; ಅನ್ನು ಬಿಗಿಗೊಳಿಸಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chamarajanagar-forest-encounter-relatives-refuse-to-accept-bodies-demand-justice-over-poaching-firing-gdp/articleshow-l5shx24"/>
        </item>
        <item>
            <title><![CDATA[Chamarajanagara: ಅರಣ್ಯ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ಮೂವರು ವನ್ಯಜೀವಿ ಬೇಟೆಗಾರರ ಎನ್ಕೌಂಟರ್]]></title>
            <link>https://kannada.asianetnews.com/karnataka-districts/chamarajanagar-major-operation-by-forest-department-officials-three-wildlife-poachers-killed-in-an-encounter-sns/articleshow-lmnkogn</link>
            <guid isPermaLink="true">https://kannada.asianetnews.com/karnataka-districts/chamarajanagar-major-operation-by-forest-department-officials-three-wildlife-poachers-killed-in-an-encounter-sns/articleshow-lmnkogn</guid>
            <pubDate>Sat, 15 Aug 2026 11:49:31 +0530</pubDate>
            <description><![CDATA[&lt;p&gt;ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ವನ್ಯಜೀವಿ ಬೇಟೆಗೆ ಬಂದಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎನ್&zwnj;ಕೌಂಟರ್ ಮಾಡಿದ್ದಾರೆ. ಆದರೆ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವಿರುದ್ಧ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0215rsh46gf3jv96bzb7js0,imgname-chamarajnagar-shootout--1786774741809.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ವನ್ಯಜೀವಿಗಳ ಬೇಟೆಗೆ ಕಾಡಿಗೆ ಎಂಟ್ರಿ ಕೊಟ್ಟಿದ್ದ ಆರೋಪದ ಮೇರೆಗೆ ಮೂವರು ಬೇಟೆಗಾರರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಎನ್&zwnj;ಕೌಂಟರ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಶಾಗ್ಯ ಅರಣ್ಯ ಪ್ರದೇಶದಲ್ಲಿ ನಡೆದಿದೆ.&lt;/p&gt;&lt;p&gt;ಮೃತರನ್ನು ಅಂತೊಣಿಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಳ್ಳೇಗಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು, ಘಟನೆಯಲ್ಲಿ ಗಾಯಗೊಂಡಿದ್ದ ಓರ್ವ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಕೊಡಿಸಲಾಗಿದೆ. ಘಟನೆಯಲ್ಲಿ ಆರೋಪಿಗಳೊಂದಿಗಿದ್ದ ಮತ್ತೋರ್ವ ಎಸ್ಕೇಪ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;p&gt;ಇಂದು ಬೆಳಗ್ಗಿನ ಜಾವ ಶೂಟೌಟ್ ನಡೆಸಲಾಗಿದ್ದು, ಖಚಿತ ಮಾಹಿತಿ ಮೇರೆಗೆ ಎಂಟ್ರಿ ಕೊಟ್ಟಿದ್ದ ಅರಣ್ಯ ಸಿಬ್ಬಂದಿ ಮೇಲೆ ಆರೋಪಿಗಳು ಏಕಾಏಕಿ ಗುಂಡು ಹಾರಿಸಲು ಮುಂದಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬೇಟೆಗಾರರ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದು, ಈ ಚಕಮಕಿಯಲ್ಲಿ ಮೂವರು ಬೇಟೆಗಾರರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಇನ್ನು, ಕಾರ್ಯಾಚರಣೆಯ ಸಂದರ್ಭದಲ್ಲಿ ಒಂದು ನಾಡ ಬಂದೂಕು, ಒಂದು ಜಿಂಕೆ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಅವಕಾಶಕ್ಕೆ ಪಡೆದುಕೊಂಡಿದ್ದಾರೆ. ಮೃತಪಟ್ಟ ಮೂವವರ ಶವ ಮರಣೋತ್ತರ ಪರೀಕ್ಷೆಗೆ ಕೊಳ್ಳೇಗಾಲ ಆಸ್ಪತ್ರೆಯಿಂದ ಮೈಸೂರು ಕೆ ಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.&lt;/p&gt;&lt;p&gt;ಆಸ್ಪತ್ರೆ ಬಳಿ ಆಗಮಿಸಿದ ಮೃತರ ಸಂಬಂಧಿಗಳು ಅರಣ್ಯ ಸಿಬ್ಬಂದಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಮೃತ ಪಟ್ಟ ಮೂವರು ನಮ್ಮ ಸಂಬಂಧಿಕರು. ಆದರೆ ಅವರಿಗೆ ಏಕೆ ಶೂಟ್ ಮಾಡಿದ್ದಾರೆ ಎಂಬುದೇ ಈವರೆಗೆ ಗೊತ್ತಿಲ್ಲ. ನಮ್ಮವರು ದನ ಮೇಯಿಸಲು ಹೋದಾಗ ಗುಂಡು ಹಾರಿಸಲಾಗಿದೆ&zwnj; ಎನ್ನುತ್ತಾರೆ. ಒಂದು ವೇಳೆ ನಮ್ಮವರ ಬಳಿ ಆಯುಧ ಇದ್ದರೂ ಇವರನ್ನ ಎನ್ಕೌಂಟರ್ ಮಾಡುವ ಅಗತ್ಯ ಏನಿತ್ತು? ನಮಗೆ ಪ್ರಕರಣದಲ್ಲಿ ನ್ಯಾಯ ಬೇಕು&zwnj;. ನಮ್ಮವರಿಂದ ಯಾರಿಗೆ ಯಾವ ಅರಣ್ಯ ಅಧಿಕಾರಿಗೆ ಫೈರ್ ಆಗಿದೆ ಎಂಬುದನ್ನ ತೋರಿಸಬೇಕು. ನಮಗೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವೆಲ್ಲ ಮೈಸೂರಿನಲ್ಲಿದ್ದೇವೆ&zwnj;. ನಮಗೆ ಬೆಳಗ್ಗೆ ವಿಚಾರ ಗೊತ್ತಾಗಿ ಇಲ್ಲಿಗೆ ಬಂದಿದ್ದೇವೆ&zwnj;.ಮೃತ ಮೂವರಿಗೆ ಮದುವೆಯಾಗಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಮೂವರನ್ನ ಕೊಲಲ್ಲು ಹಕ್ಕು ಕೊಟ್ಟವರು ಯಾರು? ಮೂವರು ಮೇಲೆ ಹಳೇ ಪ್ರಕರಣಗಳು ಇರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಬೇಟೆಗೆ ಹೋಗಿದ್ದರು ಎಂಬುದು ನಮಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.&lt;/p&gt;&lt;h2&gt;ಹುತಾತ್ಮ ಪೊಲೀಸರಿಗೆ ಗೌರವಪೂರ್ವಕ ನಮನ&lt;/h2&gt;&lt;p&gt;ಹನೂರು ತಾಲೂಕಿನ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ತಂಡದ ದಾಳಿಗೆ ಬಲಿಯಾದ ಹುತಾತ್ಮ ಪೊಲೀಸರಿಗೆ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಸ್ಮರಿಸಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. 1992ರ ಆಗಸ್ಟ್ 14ರಂದು ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲೇ, ವೀರಪ್ಪನ್&zwnj;ನನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಬೂದಿಕೆರೆ ಅರಣ್ಯ ಪ್ರದೇಶದ ಬಳಿ ವೀರಪ್ಪನ್ ತಂಡ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಅಂದಿನ ಪಿಎಸ್&zwnj;ಐ ಟಿ ಹರಿಕೃಷ್ಣ, ಎಎಸ್&zwnj;ಐ ಸೋಮಪ್ಪ ಎಸ್, ಬೆನಗೊಂಡ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಸಿಎಂ ಕಾಳಪ್ಪ, ಸುಂದರ್, ಕೆ.ಎಂ. ಅಪ್ಪಚ್ಚು ಸೇರಿದಂತೆ ಆರು ಮಂದಿ ಪೊಲೀಸರು ಹುತಾತ್ಮರಾಗಿದ್ದರು.ಹುತಾತ್ಮ ಪೊಲೀಸರ ಸ್ಮರಣಾರ್ಥ ಬೂದಿಕೆರೆ ಅರಣ್ಯ ಪ್ರದೇಶದ ಬಳಿ ನಿರ್ಮಿಸಿರುವ ಸ್ಮಾರಕಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಕರ್ತವ್ಯ ನಿರ್ವಹಿಸುವ ವೇಳೆ ಪ್ರಾಣತ್ಯಾಗ ಮಾಡಿದ ಪೊಲೀಸರ ಸೇವೆ ಹಾಗೂ ತ್ಯಾಗವನ್ನು ಸ್ಮರಿಸಲಾಯಿತು.&lt;/p&gt;]]></content:encoded>
            <category>chamarajnagar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagar-major-operation-by-forest-department-officials-three-wildlife-poachers-killed-in-an-encounter-sns/articleshow-lmnkogn"/>
        </item>
        <item>
            <title><![CDATA[ಹನೂರಿನಲ್ಲಿ 'ಟೈಗರ್ ಆಫ್ ಜಸ್ಟೀಸ್' ಸಂಘಟನೆ ಸಕ್ರಿಯ: ಎಲ್‌ಟಿಟಿಇ, 'ಮಿನಿ ವೀರಪ್ಪನ್' ಬಂಧನಕ್ಕೆ ವಿಶೇಷ ತಂಡ!]]></title>
            <link>https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy</link>
            <guid isPermaLink="true">https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy</guid>
            <pubDate>Thu, 27 Aug 2026 11:04:21 +0530</pubDate>
            <description><![CDATA[&lt;p&gt;ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್&zwnj;ಕೌಂಟರ್ ಬಳಿಕ, 'ಟೈಗರ್ ಆಫ್ ಜಸ್ಟೀಸ್' ಎಂಬ ಸಂಘಟನೆಯ ಹೆಸರು ಕೇಳಿಬಂದಿದ್ದು, ಇದರ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ. ವೀರಪ್ಪನ್&zwnj; ಬೆಂಬಲಿಗರು ಮತ್ತು ತಮಿಳು ತೀವ್ರಗಾಮಿ ಸಂಘಟನೆಗಳ ಕೈವಾಡದ ಶಂಕೆ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾ ಚಟುವಟಿಕೆಗಳನ್ನು ಪರಿಶೀಲಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0es9k1c8ddw4ve5h017d3kn,imgname-chamarajanagara-forest--2--1787202685996.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ಚಾಮರಾಜನಗರ (ಆ.27): ಚಾ&lt;/strong&gt;ಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಆಗಸ್ಟ್&zwnj; 15ರಂದು ನಡೆದ ಎನ್&zwnj;ಕೌಂಟರ್ ಪ್ರಕರಣದ ಬಳಿಕ ಕಾಡಂಚಿನ ಗ್ರಾಮಗಳಲ್ಲಿ &lsquo;ಟೈಗರ್ ಆಫ್ ಜಸ್ಟೀಸ್&rsquo; ಎಂಬ ಸಂಘಟನೆ ಹೆಸರು ಕೇಳಿಬಂದಿದ್ದು, ಅದರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್&zwnj; ವರಿಷ್ಠಾಧಿಕಾರಿ ಮುತ್ತುರಾಜು ತಿಳಿಸಿದ್ದಾರೆ.&lt;/p&gt;&lt;p&gt;ಶೂಟೌಟ್&zwnj;ಗೆ ಪ್ರತೀಕಾರವಾಗಿ ಕಳ್ಳಬೇಟೆ ತಡೆ ಶಿಬಿರ, ವಸತಿಗೃಹಗಳ ಧ್ವಂಸ, ಜಿಲೆಟಿನ್&zwnj;ನಿಂದ ಸ್ಫೋಟ ನಡೆಸಿರುವುದರ ಹಿಂದೆ ತಮಿಳುನಾಡಿನ ಕೆಲವು ತೀವ್ರಗಾಮಿ ಸಂಘಟನೆ ಹಾಗೂ ವೀರಪ್ಪನ್ ಬೆಂಬಲಿಗರ ಕುಮ್ಮಕ್ಕು ಇರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.&lt;/p&gt;&lt;p&gt;ಜಿಲ್ಲಾ ಸೋಷಿಯಲ್&zwnj; ಮೀಡಿಯಾ ಮಾನಿಟರ್ ಸೆಲ್&zwnj;ನಿಂದ ಎನ್&zwnj;ಕೌಂಟರ್ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಪ್ರಚೋದನಾಕಾರಿ ಹೇಳಿಕೆ, ಪರ-ವಿರೋಧ ಹೇಳಿಕೆ ಹಾಗೂ ಸುಳ್ಳು ಸುದ್ದಿ ಹರಡುವಿಕೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.&lt;/p&gt;&lt;h2&gt;&lt;strong&gt;ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ&lt;/strong&gt;&lt;/h2&gt;&lt;p&gt;&lsquo;ಟೈಗರ್ ಆಫ್ ಜಸ್ಟೀಸ್&rsquo; ಸಂಘಟನೆಯಿಂದ &lsquo;ಮೈ ವಿಲೇಜ್&zwnj; ಗ್ರೂಪ್&zwnj;&rsquo;ನಲ್ಲಿ ಪ್ರಕಟವಾಗಿರುವ &lsquo;ತಮಿಳರು ಎಂಬ ಕಾರಣಕ್ಕೆ ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಈ ಭಾಗದಲ್ಲಿ ಮೂಲಭೂತ ಸೌಕರ್ಯ ನೀಡದೆ ವಂಚನೆ ಮಾಡಲಾಗುತ್ತಿದೆ&rsquo; ಎಂಬಿತ್ಯಾದಿ ಹೇಳಿಕೆಗಳು, ಸಂಘಟನೆಯ ಸಂದೇಶ, ಪ್ರಚೋದನೆ ನೀಡಲಾಗುತ್ತಿರುವ ವಿಚಾರ, ಈ ಸಂಬಂಧ ಬೇರೆ, ಬೇರೆ ಗ್ರೂಪ್&zwnj;ಗಳ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪ, ಈ ಎಲ್ಲವನ್ನೂ ಪರಿಶೀಲಿಸಲಾಗುತ್ತಿದೆ. ಪ್ರಚೋದನೆ ಕಂಡು ಬಂದರೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.&lt;/p&gt;&lt;h3&gt;&lt;strong&gt;ಗೋವಿಂದನ ಬಂಧನಕ್ಕೆ ತಂಡ ರಚನೆ:&lt;/strong&gt;&lt;/h3&gt;&lt;p&gt;ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ಪ್ರಿಯಾ ಎಂಬುವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಿನಿ ವೀರಪ್ಪನ್&zwnj; ಖ್ಯಾತಿಯ ಗಂಗನದೊಡ್ಡಿ ಗೋವಿಂದನ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ ಆತ ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಕಾವೇರಿ ವನ್ಯಧಾಮದ ತನಿಖಾ ವರದಿ ಇಂದು ಅಥವಾ ನಾಳೆ ಸಲ್ಲಿಕೆ:&lt;/strong&gt;&lt;/h2&gt;&lt;p&gt;ಕಾವೇರಿ ವನ್ಯಧಾಮದಲ್ಲಿ ಆ.15ರಂದು ನಡೆದ ಶೂಟೌಟ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ಗುರುವಾರ ಅಥವಾ ಶುಕ್ರವಾರ ಸಲ್ಲಿಕೆ ಮಾಡಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶ್ರೀರೂಪ ತಿಳಿಸಿದ್ದಾರೆ.&lt;/p&gt;&lt;p&gt;ಚಾಮರಾಜನಗರ ಎಸಿ ದಿನೇಶ್ ಕುಮಾರ್ ಮೀನಾರನ್ನು ತನಿಖಾಧಿಕಾರಿಯಾಗಿ ನೇಮಿಸಿ, 7 ದಿನದೊಳಗೆ ತನಿಖಾ ವರದಿ ಕೊಡಲು ಸೂಚಿಸಲಾಗಿತ್ತು. ಸಮಗ್ರ ಮಾಹಿತಿ ಕಲೆ ಹಾಕುವ ಹಿನ್ನೆಲೆಯಲ್ಲಿ ನಾಲ್ಕೈದು ದಿನಗಳ ಹೆಚ್ಚುವರಿ ಕಾಲಾವಕಾಶವನ್ನು ತನಿಖಾಧಿಕಾರಿ ಕೇಳಿದ್ದರು. ಇದೀಗ ತನಿಖೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಅಥವಾ ಶುಕ್ರವಾರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagar-cauvery-wildlife-sanctuary-encounter-tiger-of-justice-mini-veerappan-govinda-sp-muthuraju/articleshow-mur2yxy"/>
        </item>
        <item>
            <title><![CDATA[Chamarajanagara: ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನ; ಮೂವರ ಬಂಧನ]]></title>
            <link>https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v</link>
            <guid isPermaLink="true">https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v</guid>
            <pubDate>Wed, 12 Aug 2026 18:44:51 +0530</pubDate>
            <description><![CDATA[&lt;p&gt;ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv1a24q2s8ccfxb29f23v25,imgname-chamarajanagar-tiger-1786540001431.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಹುಲಿಯ ಹಲ್ಲುಗಳು ಹಾಗೂ ಉಗುರನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ವನ್ಯಜೀವಿ ಅಂಗಾಂಗಗಳು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನ&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ-948ರ ಹರದನಹಳ್ಳಿ ಗ್ರಾಮದ ಕೆರೆ ಸಮೀಪ ಆ.11ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ, ಬಂಡೀಪುರ-ನಾಗರಹೊಳೆ ಹಾಗೂ ಜಿ.ಎಸ್ ಬೆಟ್ಟ ವಲಯದ ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಬಂಧಿತರನ್ನು ಹೊಸಪೋಡು ಗ್ರಾಮದ ಮಹದೇವ ಬಿನ್ ಜಡಿಯ, ಮಾವತ್ತೂರು ಗ್ರಾಮದ ರಮೇಶ ಬಿನ್ ಆಲುವಯ್ಯ ಹಾಗೂ ವಡೆಯರಪಾಳ್ಯ ಗ್ರಾಮದ ಮಣಿ ಬಿನ್ ರಾಮು ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.&lt;/p&gt;&lt;h2&gt;ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ&lt;/h2&gt;&lt;p&gt;ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಹುಲಿ ಹಲ್ಲುಗಳು ಹಾಗೂ ಉಗುರನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶದಲ್ಲಿರಿಸಲಾಗಿದೆ.&lt;/p&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವರ್ ಅವರ ನಿರ್ದೇಶನದ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಎಂ, ಜಿ.ಎಸ್.ಬೆಟ್ಟ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ ಎಂ, ಕಾರ್ತಿಕ್ ಯಾದವ್, ಶ್ರೀಕಾಂತ್ ಹಾಗೂ ಜಿ.ಎಸ್ ಬೆಟ್ಟ ವಲಯದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ವರದಿ: ಪುಟ್ಟರಾಜು ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>chamarajnagar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v"/>
        </item>
        <item>
            <title><![CDATA[ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದಿದ್ದ ಒಂದೂವರೆ ಎಕರೆ ಬೆಳ್ಳುಳ್ಳಿ ಕದ್ದ ಕಳ್ಳರು; ರೈತ ಕಣ್ಣೀರು]]></title>
            <link>https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5</link>
            <guid isPermaLink="true">https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5</guid>
            <pubDate>Tue, 04 Aug 2026 09:50:06 +0530</pubDate>
            <description><![CDATA[ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಬೆಳೆದಿದ್ದ ಕಟಾವಿಗೆ ಸಿದ್ಧವಾಗಿದ್ದ ಬೆಳ್ಳುಳ್ಳಿ ಬೆಳೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಘಟನೆಯಿಂದಾಗಿ ರೈತ ಸಿದ್ದರಾಜು ಅವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಕಳ್ಳರನ್ನು ಪತ್ತೆ ಹಚ್ಚುವಂತೆ ಇತರ ರೈತರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5fw9sv2yyy9w5v78gyz0w1,imgname-chamarajanagar--1785817081659.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ : &lt;/strong&gt;ಕೃಷಿ ಜಮೀನಿನಲ್ಲಿ ಮೋಟರ್&zwnj;, ಕೇಬಲ್&zwnj; ಕಳ್ಳತನ ನಡೆಯುವುದು ನೋಡಿದ್ದೆವು. ಕೇಳಿದ್ದೆವು. ಆದರೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದ ರೈತರೊಬ್ಬರು ಮಳೆ ಇಲ್ಲದೆ, ಬರದ ನಡುವೆ ಬೆಳದು ಕಟಾವಿಗೆ ಬಂದಿದ್ದ ಬೆಳ್ಳುಳ್ಳಿಯನ್ನೇ ಕಳವು ಮಾಡಿರುವ ಆಘಾತಕಾರಿ ಪ್ರಸಂಗವೊಂದು ಗುಂಡ್ಲುಪೇಟೆ ತಾಲೂಕಿನ ಭೀಮನಬೀಡುವಿನಲ್ಲಿ ನಡೆದಿದೆ.&amp;nbsp;&lt;/p&gt;&lt;p&gt;ಕಟಾವಿಗೆ ಬಂದ ಬೆಳ್ಳುಳ್ಳಿಯನ್ನೇ ಕಳ್ಳತನ ಮಾಡಿದ ಪ್ರಸಂಗ ನಡೆದಿದೆ. ಗ್ರಾಮದ ರೈತ ಸಿದ್ದರಾಜುಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಟಾವಿಗೆ ಬಂದ ಬೆಳ್ಳುಳ್ಳಿ ಫಸಲನ್ನೇ ಭಾನುವಾರ ರಾತ್ರಿ ಐದಾರು ಕ್ವಿಂಟಲ್&zwnj;ನಷ್ಟು ಕದ್ದು ಪರಾರಿಯಾಗಿದ್ದಾರೆ.&amp;nbsp;&lt;/p&gt;&lt;h2&gt;&lt;strong&gt;ರೈತನಿಂದ ದೂರು ದಾಖಲು&lt;/strong&gt;&lt;/h2&gt;&lt;p&gt;ರೈತ ಸಿದ್ದರಾಜು ಕಷ್ಟ ಪಟ್ಟು ಬೆಳೆದು ಇನ್ನೇನೋ ಕಟಾವಿಗೆ ಬಂದು ರೈತನ ಕಿಸೆಗೆ ಹಣ ಸೇರುವ ಸಮಯದಲ್ಲಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ ಎಂದು ರೈತ ಅವಲತ್ತು ಕೊಂಡಿದ್ದಾನೆ. ರೈತ ಕಷ್ಟ ಪಟ್ಟು ಬೆಳೆದ ಫಸಲನ್ನು ರಾತ್ರೋ ರಾತ್ರಿ ಬೆಳ್ಳುಳ್ಳಿ ಫಸಲನ್ನು ಕಿತ್ತುಕೊಂಡು ಪರಾರಿಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಕಳ್ಳರ ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಂಡೀಪುರ ಸಫಾರಿ ದರ ಬಹುತೇಕ ಡಬಲ್! ಸೆಪ್ಟೆಂಬರ್ 1ರಿಂದ ಜಾರಿಗೆ: ಕ್ಯಾಮೆರಾಗೂ ಭಾರೀ ಶುಲ್ಕ, ಇಲ್ಲಿದೆ ಹೊಸ ದರಪಟ್ಟಿ!&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸ್ವಾತಂತ್ರ್ಯ ನಂತರ ಗ್ರಾಮಕ್ಕೆ ಮೊದಲ ಬಸ್; ಮಿಣ್ಯಂ ಗ್ರಾಪಂನ ಕೊಪ್ಪಕ್ಕೆ ಬಂತು KSRTC&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-thieves-steal-one-and-half-acres-of-garlic-that-was-grown-with-great-difficulty-even-during-drought-mrq/articleshow-one4ly5"/>
        </item>
        <item>
            <title><![CDATA[ಚಾಮರಾಜನಗರ ಎನ್‌ಕೌಂಟರ್ ಕೇಸ್‌ಗೆ ಬಿಗ್ ಟ್ವಿಸ್ಟ್! ಬರೋಬ್ಬರಿ 30 ಕೆಜಿ ಮಾಂಸ ಪತ್ತೆ..!]]></title>
            <link>https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr</link>
            <guid isPermaLink="true">https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr</guid>
            <pubDate>Sun, 16 Aug 2026 21:30:52 +0530</pubDate>
            <description><![CDATA[&lt;p&gt;ಚಾಮರಾಜನಗರ ಶೂಟೌಟ್&zwnj; ಕೇಸ್&zwnj;ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅರಣ್ಯಾಧಿಕಾರಿಗಳು ಇವತ್ತು ಮತ್ತೊಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ಇರುವ ವಿಚಾರಗಳು ಪ್ರಕರಣಕ್ಕೆ ಮೇಜರ್ ತಿರುವು ನೀಡುವ ಸಾಧ್ಯತೆಗಳು ದಟ್ಟವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05mtv7e6b8rseg0w8v87m8w,imgname-chamarajanagara-1786896018669.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆಗಾರರ ಮೇಲಿನ ಗುಂಡಿನ ದಾಳಿ (Encounter) ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಇಂದು ಎರಡನೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಘಟನಾ ಸ್ಥಳದಲ್ಲಿ ವನ್ಯಜೀವಿ ಮಾಂಸ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ತನಿಖಾಧಿಕಾರಿಗಳಿಂದ ಸ್ಥಳ ಪರಿಶೀಲನೆ&lt;/strong&gt;&lt;/h2&gt;&lt;p&gt;ಗುಂಡಿನ ದಾಳಿ ನಡೆದ ಬೆನ್ನಲ್ಲೇ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೊಳ್ಳೇಗಾಲ ಉಪವಿಭಾಗಾಧಿಕಾರಿ ದಿನೇಶ್&zwnj;ಕುಮಾರ್ ಮೀನಾ (IAS) ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಅದರಂತೆ ದಿನೇಶ್&zwnj;ಕುಮಾರ್ ಮೀನಾ ಅವರು ಆಗಸ್ಟ್ 15 ಮತ್ತು 16 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ತನಿಖೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ತನಿಖಾಧಿಕಾರಿಗಳು ಕೋರಿದ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನಾ ಸ್ಥಳದಲ್ಲಿ ಸಿಕ್ಕಿದ್ದೇನು?&lt;/strong&gt;&lt;/h2&gt;&lt;p&gt;ಕೂಂಬಿಂಗ್ ಕಾರ್ಯಾಚರಣೆ ವೇಳೆ ಅರಣ್ಯ ಸಿಬ್ಬಂದಿಗೆ ಘಟನಾ ಸ್ಥಳದಲ್ಲಿ ಕಳ್ಳಬೇಟೆಗಾರರು ಬಿಟ್ಟು ಹೋಗಿದ್ದ ಎನ್ನಲಾದ ಹಲವು ವಸ್ತುಗಳು ಲಭ್ಯವಾಗಿವೆ. ಎರಡು ಚೀಲಗಳಲ್ಲಿ ತುಂಬಿದ್ದ ಅಂದಾಜು 20 ರಿಂದ 30 ಕೆಜಿ ತೂಕದ ವನ್ಯಜೀವಿ ಮಾಂಸ ಪತ್ತೆಯಾಗಿದೆ. ನಾಲ್ಕು ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, ಎರಡು ಲೀಟರ್&zwnj;ನ ಪ್ಲಾಸ್ಟಿಕ್ ಬಾಟಲಿಯಲ್ಲಿ ಕಾಲು ಲೀಟರ್ ನೀರು ಪತ್ತೆಯಾಗಿದೆ. ವಶಪಡಿಸಿಕೊಂಡ ಮಾಂಸವನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು ಯಾವ ಪ್ರಾಣಿಯ ಮಾಂಸ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆ ಆಸ್ತಿಪಾಸ್ತಿ ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಎನ್&zwnj;ಕೌಂಟರ್ ಘಟನೆ ನಡೆದ ನಂತರ ಅರಣ್ಯ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೆಲವು ದುಷ್ಕರ್ಮಿಗಳು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳ ಮೇಲೆ ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಏಳು ಕಳ್ಳಬೇಟೆ ತಡೆ ಶಿಬಿರಗಳು (Anti-Poaching Camps) ಮತ್ತು ಒಂಬತ್ತು ವಸತಿಗೃಹಗಳಿಗೆ ಹಾನಿ ಮಾಡಲಾಗಿದೆ. ವಸತಿಗೃಹಗಳಲ್ಲಿದ್ದ ಪೀಠೋಪಕರಣಗಳು ಮತ್ತು ಸಾಮಾನು ಸರಂಜಾಮುಗಳನ್ನು ಪುಡಿಪುಡಿ ಮಾಡಲಾಗಿದೆ. ಇಲಾಖೆಗೆ ಸೇರಿದ ಒಂದು ಜೀಪ್ (ನಾಲ್ಕು ಚಕ್ರದ ವಾಹನ) ಹಾಗೂ ಸಿಬ್ಬಂದಿಯ ನಾಲ್ಕು ದ್ವಿಚಕ್ರ ವಾಹನಗಳನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ದೂರು ದಾಖಲು&lt;/strong&gt;&lt;/h2&gt;&lt;p&gt;ದುಷ್ಕರ್ಮಿಗಳ ಈ ಕೃತ್ಯದಿಂದ ಸರ್ಕಾರಕ್ಕೆ ಮತ್ತು ಇಲಾಖಾ ಸಿಬ್ಬಂದಿಗೆ ಅಪಾರ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಎಸಿಎಫ್ ಮರಿಸ್ವಾಮಿ ಅವರು ಈ ಕುರಿತು ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆಯಾಗಿ ಕಾವೇರಿ ವನ್ಯಧಾಮದಲ್ಲಿ ನಡೆದ ಈ ಎನ್&zwnj;ಕೌಂಟರ್ ಮತ್ತು ನಂತರ ನಡೆದ ವಿಧ್ವಂಸಕ ಕೃತ್ಯಗಳು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.&lt;/p&gt;&lt;h2&gt;&lt;strong&gt;ಪತ್ರಿಕಾ ಪ್ರಕಟಣೆ&lt;/strong&gt;&lt;/h2&gt;&lt;p&gt;&lt;strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ವಲಯದಲ್ಲಿ ದಾಖಲಾದ ವನ್ಯಜೀವಿ ಅಪರಾಧ ವರದಿ ಸಂಖ್ಯೆ: 01/2026-27 ದಿನಾಂಕ: 15.08.2026 ರ ಪ್ರಕರಣಕ್ಕೆ ಸಂಬಂಧಿಸಿದಂತೆ&lt;/strong&gt;&lt;/p&gt;&lt;p&gt;&lt;strong&gt;ಪತ್ರಿಕಾ ಪ್ರಕಟಣೆ - 02 ದಿನಾಂಕ: 16.08.2026&lt;/strong&gt;&lt;/p&gt;&lt;p&gt;&lt;strong&gt;ದಿನಾಂಕ: 15.08.2026 ರಂದು ಕಾವೇರಿ ವನ್ಯಜೀವಿ ವಿಭಾಗದ ಹನೂರು ವನ್ಯಜೀವಿ ಉಪವಿಭಾಗ ವ್ಯಾಪ್ತಿಯ ಹನೂರು ವನ್ಯಜೀವಿ ವಲಯದಲ್ಲಿ ನಡೆದ ಕಳ್ಳಬೇಟೆ ಕಾರ್ಯಾಚರಣೆಯ ಪ್ರಕರಣದಲ್ಲಿ ಗುಂಡಿನ ದಾಳಿ ನಡೆದಿರುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ, ಚಾಮರಾಜನಗರ ಜಿಲ್ಲೆ, ಚಾಮರಾಜನಗರ ಇವರು ಶ್ರೀ ದಿನೇಶಕುಮಾರ್ ಮೀನಾ, ಭಾ.ಆ.ಸೇ., ಉಪವಿಭಾಗಾಧಿಕಾರಿಗಳು, ಕೊಳ್ಳೇಗಾಲ ಉಪವಿಭಾಗ, ಕೊಳ್ಳೇಗಾಲ ಇವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿರುತ್ತಾರೆ.&lt;/strong&gt;&lt;/p&gt;&lt;p&gt;&lt;strong&gt;ಅದರಂತೆ, ಸದರಿ ಉಪವಿಭಾಗಾಧಿಕಾರಿಗಳು ದಿನಾಂಕ: 15.08.2026 ರಂದು ಘಟನಾ ಸ್ಥಳಕ್ಕೆ ತನಿಖೆಯ ಸಲುವಾಗಿ ತೆರಳಿದ್ದು, ಸದರಿ ದಿನದಂದು ತನಿಖೆಯು ಪೂರ್ಣವಾಗಿರುವುದಿಲ್ಲ. ಆದುದರಿಂದ ದಿನಾಂಕ: 16.08.2026 ರಂದು ತನಿಖೆಯು ಮುಂದುವರೆದಿರುತ್ತದೆ. ಅದರ ಭಾಗವಾಗಿ ಉಪ ವಿಭಾಗಾಧಿಕಾರಿಗಳ ಸಮಕ್ಷಮ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಜರಾಗಿ ತನಿಖಾಧಿಕಾರಿಗಳು ಕೋರಿರುವ ಮಾಹಿತಿಯನ್ನು ಒದಗಿಸಿರುತ್ತಾರೆ.&lt;/strong&gt;&lt;/p&gt;&lt;p&gt;&lt;strong&gt;ಮುಂದುವರೆದು, ದಿನಾಂಕ: 15.08.2026 ರಂದು ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಇಲಾಖಾ ಸಿಬ್ಬಂದಿಗಳಿಗೆ 02 ಚೀಲಗಳಲ್ಲಿ ಯಾವುದೋ ವನ್ಯಪ್ರಾಣಿಯ ಮಾಂಸ ತುಂಬಿರುವುದು ಕಂಡುಬಂದಿದ್ದು, ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸದರಿ ಮಾಂಸವನ್ನು ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿಯೇ ಸಂರಕ್ಷಿಸಿರುತ್ತಾರೆ ಹಾಗೂ ದಿನಾಂಕ: 16.08.2026 ರ ಪೂರ್ವಾಹ್ನ ಉಪವಿಭಾಗಾಧಿಕಾರಿಗಳು ಘಟನಾ ಸ್ಥಳದಲ್ಲಿ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಸಮಕ್ಷಮ ಇಲಾಖಾ ಸಿಬ್ಬಂದಿಗಳು ಘಟನಾ ಸ್ಥಳದಲ್ಲಿದ್ದ 04 ಜೊತೆ ಪ್ಯಾರಾಗಾನ್ ಹವಾಯ್ ಚಪ್ಪಲಿಗಳು, 02 ಲೀಟರ್ ನೀಲಿ ಕ್ಯಾಪ್ ಹೊಂದಿರುವ ಮರಿಂಡಾ ಪ್ಲಾಸ್ಟಿಕ್ ಬಾಟಲಿನಲ್ಲಿ ಅಂದಾಜು &frac14; ಲೀಟರ್ ನೀರು ಮತ್ತು 02 ಚೀಲಗಳಲ್ಲಿ ತುಂಬಿದ ಅಂದಾಜು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ಸರ್ಕಾರದ ಪರವಾಗಿ ಅಮಾನತುಪಡಿಸಿ ವಶಪಡಿಸಿಕೊಳ್ಳಲಾಗಿರುತ್ತದೆ. ಸದರಿ ವಶಪಡಿಸಿಕೊಳ್ಳಲಾದ ವನ್ಯಪ್ರಾಣಿ ಮಾಂಸದ ಪರೀಕ್ಷೆಯನ್ನು ದಿನಾಂಕ: 16.08.2026 ರ ಅಪರಾಹ್ನ ನಡೆಸಲಾಗಿರುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ಅಲ್ಲದೇ, ಸದರಿ ಘಟನೆ ನಡೆದ ತರುವಾಯ ಕೆಲವು ದುಷ್ಕರ್ಮಿಗಳು 07 ಕಳ್ಳಬೇಟೆ ತಡೆ ಶಿಬಿರಗಳು, 09 ವಸತಿಗೃಹಗಳಿಗೆ ಹಾನಿ ಮಾಡಿದ್ದು, ಸದರಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಹಾಗೂ ಸಾಮಾನು ಸರಂಜಾಮುಗಳನ್ನು ಮತ್ತು 01 ಸಂಖ್ಯೆ ನಾಲ್ಕು ಚಕ್ರದ ಇಲಾಖಾ ವಾಹನ ಹಾಗೂ ಸಿಬ್ಬಂದಿಗಳ 04 ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿರುತ್ತಾರೆ. ಇದರಿಂದ ಸರ್ಕಾರಕ್ಕೆ ಹಾಗೂ ಇಲಾಖಾ ಸಿಬ್ಬಂದಿಗಳಿಗೆ ಅಪಾರ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಈ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಕೆಲವು ಪ್ರಕರಣಗಳಿಗೆ ದೂರನ್ನು ನೀಡಲಾಗಿರುತ್ತದೆ.&lt;/strong&gt;&lt;/p&gt;&lt;p&gt;&lt;strong&gt;ಸಹಿ/-&lt;/strong&gt;&lt;/p&gt;&lt;p&gt;&lt;strong&gt;ಉಪ ಅರಣ್ಯ ಸಂರಕ್ಷಣಾಧಿಕಾರಿ,&lt;/strong&gt;&lt;/p&gt;&lt;p&gt;&lt;strong&gt;ಕಾವೇರಿ ವನ್ಯಜೀವಿ ವಿಭಾಗ,&lt;/strong&gt;&lt;/p&gt;&lt;p&gt;&lt;strong&gt;ಕೊಳ್ಳೇಗಾಲ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/chamarajnagar/chamarajanagar-major-twist-in-cauvery-wildlife-sanctuary-encounter-case-30-kg-meat-found-gkn/articleshow-otomqlr"/>
        </item>
        <item>
            <title><![CDATA[ಚಾಮರಾಜನಗರದಲ್ಲಿ 3 ಬೇಟೆಗಾರರ ಎನ್‌ಕೌಂಟರ್‌, ಇವರನ್ನ ಕೊಲ್ಲಲು ಅರಣ್ಯ ಸಿಬ್ಬಂದಿಗೆ ಹಕ್ಕು ಕೊಟ್ಟದ್ಯಾರು? ಜನರ ಆಕ್ರೋಶ]]></title>
            <link>https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9</link>
            <guid isPermaLink="true">https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9</guid>
            <pubDate>Sat, 15 Aug 2026 12:11:39 +0530</pubDate>
            <description><![CDATA[ಚಾಮರಾಜನಗರದ ಕಾವೇರಿ ವನ್ಯಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದ್ದಾರೆ. ಇದು ಆತ್ಮರಕ್ಷಣೆಗಾಗಿ ನಡೆಸಿದ ದಾಳಿ ಎಂದು ಅರಣ್ಯ ಇಲಾಖೆ ಹೇಳಿದರೆ, ಇದು ನಕಲಿ ಎನ್&zwnj;ಕೌಂಟರ್ ಎಂದು ಸ್ಥಳೀಯರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮಕ್ಕೆ ಒಳಪಡುವ ಶಾಗ್ಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗಿನ ಜಾವ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಮೂವರು ಶಂಕಿತ ಬೇಟೆಗಾರರನ್ನು ಅರಣ್ಯ ಸಿಬ್ಬಂದಿಯ ಎನ್&zwnj;ಕೌಂಟರ್&zwnj; ಮಾಡಿದ್ದಾರೆ. ಬಲಿಯಾದವರನ್ನು ಅಂತೊಣಿಸ್ವಾಮಿ, ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;ನಡೆದಿದ್ದೇನು?&lt;/h2&gt;&lt;p&gt;ಲಭ್ಯವಿರುವ ಮಾಹಿತಿಯ ಪ್ರಕಾರ, ವನ್ಯಜೀವಿಗಳ ಬೇಟೆಗೆ ಕಾಡಿಗೆ ಎಂಟ್ರಿ ಕೊಟ್ಟಿದ್ದ ಬೇಟೆಗಾರರ ಕುರಿತು ಅರಣ್ಯ ಸಿಬ್ಬಂದಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅರಣ್ಯ ಸಿಬ್ಬಂದಿಯನ್ನು ಕಂಡ ಬೇಟೆಗಾರರು ಏಕಾಏಕಿ ಅವರ ಮೇಲೆಯೇ ಗುಂಡು ಹಾರಿಸಲು ಮುಂದಾಗಿದ್ದಾರೆನ್ನಲಾಗಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಸ್ವಯಂ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ನಡೆಸಿದ ಪ್ರತ್ಯುತ್ತರದ ಗುಂಡಿನ ದಾಳಿಯಲ್ಲಿ ಮೂವರು ಬೇಟೆಗಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯ ವೇಳೆ ಮತ್ತೊಬ್ಬ ಬೇಟೆಗಾರ ಪರಾರಿಯಾಗಿದ್ದು, ಘಟನಾ ಸ್ಥಳದಿಂದ ಒಂದು ನಾಡಬಂದೂಕು ಹಾಗೂ ಒಂದು ಜಿಂಕೆಯ ಮೃತದೇಹವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಗುಂಡಿನ ಕಾಳಗದಲ್ಲಿ ಅರಣ್ಯ ಸಿಬ್ಬಂದಿಯೊಬ್ಬರಿಗೂ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ಸ್ಥಳೀಯರ ಆಕ್ರೋಶ &ndash; ಕಚೇರಿ ಧ್ವಂಸ&lt;/h2&gt;&lt;p&gt;ಈ ಎನ್&zwnj;ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆಯೇ ಕಾವೇರಿ ವನ್ಯಧಾಮ ವ್ಯಾಪ್ತಿಯ ಶಾಗ್ಯ ಗ್ರಾಮದ ಸ್ಥಳೀಯರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯಾಧಿಕಾರಿಗಳು ಸುಳ್ಳು ಕಥೆ ಸೃಷ್ಟಿಸುತ್ತಿದ್ದಾರೆ, ಇವರನ್ನು ಜೀವಂತವಾಗಿ ಸೆರೆಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;&lt;p&gt;ಆಕ್ರೋಶಗೊಂಡ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳ ಕಚೇರಿ (DRFO Office) ಮೇಲೆ ದಾಳಿ ನಡೆಸಿ, ಕಚೇರಿಯಲ್ಲಿದ್ದ ಪೀಠೋಪಕರಣಗಳು, ಬೈಕ್ ಹಾಗೂ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸಗೊಳಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;h2&gt;ನಮಗೆ ನ್ಯಾಯ ಬೇಕು, ಮೃತರ ಸಂಬಂಧಿಕರ ಕಣ್ಣೀರು&lt;/h2&gt;&lt;p&gt;ಇತ್ತ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಆಸ್ಪತ್ರೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿಷಯ ತಿಳಿದ ಮೃತರ ಸಂಬಂಧಿಕರು ಮೈಸೂರಿನ ಕೆ.ಆರ್. ಆಸ್ಪತ್ರೆಯ ಬಳಿ ಜಮಾಯಿಸಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತರ ಸಂಬಂಧಿ ವಿಜಯ ಎಂಬುವವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&quot;ಮೃತಪಟ್ಟ ಮೂವರೂ ನಮ್ಮ ಹತ್ತಿರದ ಸಂಬಂಧಿಗಳು. ಬೆಳಗ್ಗೆಯಷ್ಟೇ ನಮಗೆ ಈ ವಿಚಾರ ತಿಳಿದು ಮೈಸೂರಿಗೆ ಬಂದಿದ್ದೇವೆ. ಅವರು ದನ ಮೇಯಿಸಲು ಹೋದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ ಎನ್ನಲಾಗುತ್ತಿದೆ. ಒಂದು ವೇಳೆ ಅವರ ಬಳಿ ಆಯುಧವೇ ಇದ್ದರೂ, ಅವರನ್ನು ನೇರವಾಗಿ ಎನ್&zwnj;ಕೌಂಟರ್ ಮಾಡುವ ಅಗತ್ಯವೇನಿತ್ತು? ಮೂವರಿಗೂ ಮದುವೆಯಾಗಿ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಇವರನ್ನು ಕೊಲ್ಲಲು ಅರಣ್ಯ ಸಿಬ್ಬಂದಿಗೆ ಹಕ್ಕು ಕೊಟ್ಟವರು ಯಾರು? ನಮ್ಮವರಿಂದ ಯಾವ ಅರಣ್ಯ ಅಧಿಕಾರಿಗೆ ಫೈರ್ ಆಗಿದೆ ಎಂಬುದನ್ನು ಇಲಾಖೆ ತೋರಿಸಲಿ. ಅವರ ಮೇಲೆ ಹಳೆಯ ಪ್ರಕರಣಗಳಿದ್ದವು ಅಥವಾ ಅವರು ಬೇಟೆಗೆ ಹೋಗಿದ್ದರು ಎಂಬ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಈ ಪ್ರಕರಣದಲ್ಲಿ ನಮಗೆ ಸಂಪೂರ್ಣ ನ್ಯಾಯ ಸಿಗಬೇಕು.&quot; ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಸದ್ಯ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರದ ಬಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದ್ದು, ಶಾಗ್ಯ ಅರಣ್ಯ ಕಚೇರಿ ವ್ಯಾಪ್ತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/chamarajanagar-forest-encounter-suspected-poachers-killed-cauvery-wildlife-sanctuary-public-outrage-demand-justice-gdp/articleshow-q365yg9"/>
        </item>
        <item>
            <title><![CDATA[ಹನೂರು ಎನ್ಕೌಂಟರ್‌ಗೆ ಅರಣ್ಯ ಸಿಬ್ಬಂದಿ ‘ಜಿಂಕೆ ಮಾಂಸ’ ಸಾಕ್ಷ್ಯ; ತ.ನಾಡು ವಿಪಕ್ಷಗಳ ಆಕ್ರೋಶ]]></title>
            <link>https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc</link>
            <guid isPermaLink="true">https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc</guid>
            <pubDate>Mon, 17 Aug 2026 05:41:03 +0530</pubDate>
            <description><![CDATA[ಕಾವೇರಿ ವನ್ಯಜೀವಿ ವಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ತನಿಖೆ ಆರಂಭವಾಗಿದೆ. ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲವೆಂದು ಸಾಬೀತುಪಡಿಸಲು, ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಪಡಿಸಿಕೊಂಡ ಸುಮಾರು 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ತನಿಖಾಧಿಕಾರಿಗಳ ಮುಂದೆ ಸಾಕ್ಷಿಯಾಗಿ ಇರಿಸಿದೆ. ಈ ಘಟನೆಯಿಂದ ಉದ್ರಿಕ್ತರಾದ ಜನರು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ಸಂಬಂಧ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ. ಈ ಮೂಲಕ ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನಿಸಿದೆ.&lt;/p&gt;&lt;p&gt;ಕೊಳ್ಳೇಗಾಲದ ಉಪವಿಭಾಗಧಿಕಾರಿ ದಿನೇಶ್&zwnj; ಕುಮಾರ್&zwnj; ಮೀನಾ ಅವರಿಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಎನ್&zwnj;ಕೌಂಟರ್&zwnj; ನಡೆದ ಕಾವೇರಿ ವನ್ಯಜೀವಿ ವಿಭಾಗದ ಶಾಗ್ಯ ಅರಣ್ಯ ಪ್ರದೇಶ, ಹನೂರಿನ ಅರಣ್ಯ ಕಚೇರಿ, ಕಳ್ಳಬೇಟೆ ನಿಗಾ ಶಿಬಿರಗಳಿಗೆ ದಿನೇಶ್&zwnj; ಭೇಟಿ ನೀಡಿದ್ದರು ಎಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಎನ್&zwnj;ಕೌಂಟರ್&zwnj; ಕಾರ್ಯಾಚರಣೆ ವೇಳೆ ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿರುವ 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ದಿನೇಶ್&zwnj; ಅವರ ಮುಂದೆ ಹಾಜರು ಪಡಿಸಿದ್ದಾರೆ. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರಗಳನ್ನು ಹಾಜರು ಪಡಿಸಿದ್ದೇವೆ. ವಶಪಡಿಸಿಕೊಂಡ ಮಾಂಸದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಅಪಾರ ನಷ್ಟ:&lt;/strong&gt;&lt;/h2&gt;&lt;p&gt;ಈ ನಡುವೆ ಇದು ನಕಲಿ ಎನ್&zwnj;ಕೌಂಟರ್&zwnj; ಎಂದು ಆರೋಪಿಸಿದ ಉದ್ರಿಕ್ತ ಜನರು 7 ಕಳ್ಳಬೇಟೆ ತಡೆ ಶಿಬಿರಗಳು ಮತ್ತು 9 ವಸತಿ ಗೃಹಗಳಿಗೆ ಹಾನಿ ಮಾಡಿದ್ದಾರೆ. ಪೀಠೋಪಕರಣ, ಸಾಮಾನುಗಳನ್ನು ಧ್ವಂಸಗೊಳಿಸಿದ್ದಾರೆ. ಜೊತೆಗೆ 1 ಇಲಾಖಾ ನಾಲ್ಕು ಚಕ್ರದ ವಾಹನ ಮತ್ತು 4 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಅಪಾರ ನಷ್ಟವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;7 ದಿನದಲ್ಲಿ ವರದಿ ಸಲ್ಲಿಕೆ&lt;/strong&gt;&lt;/h3&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿಗೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿದ್ದಾರೆ. ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.&zwnj; ಈಗಾಗಲೇ ತನಿಖೆ ಆರಂಭವಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದೇನೆ.&zwnj; ಗುಂಡೇಟಿಗೆ ಬಲಿ ಆದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ಕೊಳ್ಳೇಗಾಲ ಉಪ ವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ತನಿಖಾ ಟೀಂಗೆ ಏನು ಹಸ್ತಾಂತರ?&lt;/strong&gt;&lt;/h3&gt;&lt;p&gt;- 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ&lt;/p&gt;&lt;p&gt;- ಬೇಟೆಗಾರರು ಬಳಸಿದ್ದಾರೆ ಎನ್ನಲಾದ ಗನ್&zwnj;, 4 ಪ್ಯಾರಾಗನ್ ಚಪ್ಪಲಿ&lt;/p&gt;&lt;p&gt;- 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರ&lt;/p&gt;&lt;p&gt;- ವಶಪಡಿಸಿಕೊಂಡ ಮಾಂಸ ಶೀಘ್ರ ಪರೀಕ್ಷೆಗೆ ರವಾನೆಗೆ ನಿರ್ಧಾರ&lt;/p&gt;&lt;p&gt;- ಇದು ನಕಲಿ ಎನ್&zwnj;ಕೌಂಟರ್&zwnj; ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನ&lt;/p&gt;&lt;p&gt;&lt;strong&gt;ಅರಣ್ಯ ಇಲಾಖೆ ಜೀಪ್&zwnj; ಧ್ವಂಸಕ್ಕೆ ಯತ್ನಿಸಿದವರ ಮೇಲೆ ಕೇಸ್&zwnj;&lt;/strong&gt;&lt;/p&gt;&lt;p&gt;ಹನೂರು (ಚಾಮರಾಜನಗರ): ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಜೀಪನ್ನು ಧ್ವಂಸ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಐವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್ ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಜೀಪ್&zwnj; ಚಾಲಕ ಅರುಣ್ ಕುಮಾರ್ ಅವರು ರಾಮಪುರ ಪೊಲೀಸ್&zwnj; ಠಾಣೆಯಲ್ಲಿ ದೂರು ನೀಡಿದ್ದಾರೆ. ಆ.15ರ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ನಾಲ್ವರು ಎರಡು ಬೈಕ್&zwnj;ಗಳಲ್ಲಿ ಬಂದು ಜೀಪ್&zwnj;ಗೆ ಅಡ್ಡ ನಿಲ್ಲಿಸಿ ಜೀಪ್ ಮೇಲೆ ಕಲ್ಲು ಎಸೆದಿದ್ದಾರೆ. ನೀವು ಈ ಕಡೆ ಬಂದರೆ ನಿಮ್ಮನ್ನು ಜೀಪ್ ಸಮೇತ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಹನೂರಿನಲ್ಲಿ ನಡೆದಿದ್ದು 3 ತಮಿಳಿರ ಹತ್ಯೆ: ತ.ನಾಡು ವಿಪಕ್ಷಗಳ ಆಕ್ರೋಶ&lt;/strong&gt;&lt;/h3&gt;&lt;p&gt;ಚೆನ್ನೈ: ಚಾಮರಾಜನಗರದ ಹನೂರಿನಲ್ಲಿ ಅರಣ್ಯಾಧಿಕಾರಿಗಳ ಗುಂಡಿಗೆ 3 ಮಂದಿ ಬಲಿಯಾದ ಪ್ರಕರಣಕ್ಕೆ ತಮಿಳುನಾಡಿನ ರಾಜಕೀಯ ಪಕ್ಷಗಳು ಭಾಷೆ ಮತ್ತು ಪ್ರಾದೇಶಿಕ ಬಣ್ಣ ಕಟ್ಟಿ ಹೊಸ ಕಲಹಕ್ಕೆ ನಾಂದಿ ಹಾಡುವ ಯತ್ನ ಮಾಡಿವೆ. ಈ ಮೂಲಕ ಕರ್ನಾಟಕದ ಜೊತೆಗೆ ಕಾವೇರಿ, ಮೇಕೆದಾಟು ಬಳಿಕ ಮತ್ತೊಂದು ಸಂಘರ್ಷಕ್ಕೆ ಮುಂದಾಗಿವೆ.&lt;/p&gt;&lt;p&gt;ಭಾಷೆ ಬಣ್ಣ: ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರನ್ನು ತಮಿಳರು ಎಂದು ಗುರುತಿಸಿರುವ ತಮಿಳುನಾಡಿನ ವಿಪಕ್ಷಗಳಾದ ಡಿಎಂಕೆ ಮತ್ತು ಪಿಎಂಕೆ, ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕೆಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.&lt;/p&gt;&lt;p&gt;ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್&zwnj;, &lsquo;ಮೂವರು ತಮಿಳರ ಹತ್ಯೆ ಘಟನೆ ಕ್ರೂರ ಮತ್ತು ಆಘಾತಕಾರಿ. ಇದರ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಗುಂಡು ಹಾರಿಸಿದ ಅರಣ್ಯಾಧಿಕಾರಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಅಂತೆಯೇ, ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು&rsquo; ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಅತ್ತ ಸಿಬಿಐ ತನಿಖೆಗೆ ಆಗ್ರಹಿಸಿರುವ ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್&zwnj;, ಆ ಮೂವರು ಬೇಟೆಗಾರರು ಎಂಬುದು ಸುಳ್ಳು ಎಂದಿದ್ದಾರೆ. ಜತೆಗೆ, ಸಿಎಂ ವಿಜಯ್&zwnj; ಮಧ್ಯಪ್ರವೇಶಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ 1 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagara-hanur-investigation-begins-into-three-deaths-in-a-gunfight-at-cauvery-wildlife-division-mrq/articleshow-rtz3csc"/>
        </item>
        <item>
            <title><![CDATA[ಅರಣ್ಯ ಸಿಬ್ಬಂದಿ ಗುಂಡಿಗೆ 3 ಬೇಟೆಗಾರರು ಬಲಿ ಪ್ರಕರಣ; ಶವ ಏಕೆ ಮೈಸೂರಿಗೆ ತಂದರು? ಸಂಸದರ ಸಂಶಯದ ಪ್ರಶ್ನೆಗೆ ಉತ್ತರ ಇಲ್ಲ!]]></title>
            <link>https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</link>
            <guid isPermaLink="true">https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo</guid>
            <pubDate>Sun, 16 Aug 2026 06:59:43 +0530</pubDate>
            <description><![CDATA[ಚಾಮರಾಜನಗರ ಸಂಸದ ಸುನಿಲ್ ಬೋಸ್, ಎನ್&zwnj;ಕೌಂಟರ್&zwnj; ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಎನ್&zwnj;ಕೌಂಟರ್&zwnj; ನಂತರ ಶವಗಳನ್ನು ಮೈಸೂರಿಗೆ ಏಕೆ ತರಲಾಯಿತು ಎಂದು ಪ್ರಶ್ನಿಸಿರುವ ಅವರು, ಅರಣ್ಯಾಧಿಕಾರಿಗಳ ಹೇಳಿಕೆ ಮಾತ್ರವಲ್ಲದೆ, ಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m022e0t80nfb4pg9mh1hpxr4,imgname-chamarajanagar-forest-encounter--1--1786776060744.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೈಸೂರು (ಆ.16): ಎನ್&zwnj;ಕೌಂಟರ್&zwnj; ಆದ ಮೇಲೆ ಮೈಸೂರಿಗೆ ಶವಗಳನ್ನ ಯಾಕೆ ತಂದರು. ಇದು ಬಹುದೊಡ್ಡ ಅನುಮಾನ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ಯಾರಿಂದಲೂ ನಮಗೆ ಸಮರ್ಪಕ ಉತ್ತರ &zwnj;ಸಿಗುತ್ತಿಲ್ಲ. ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಎಂದು ಚಾಮರಾಜನಗರ ಸಂಸದ ಸುನಿಲ್ ಬೋಸ್ ಹೇಳಿದರು.&lt;/p&gt;&lt;h2&gt;ಅರಣ್ಯಾಧಿಕಾರಿಗಳು ಹೇಳೋದೇನು?&lt;/h2&gt;&lt;p&gt;ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್&zwnj;ಕೌಂಟರ್&zwnj; ಆದವರು ಬೇಟೆಯಾಡಿ ಬೇಟೆಯ ಮಾಂಸ ಹಂಚಿಕೊಳ್ಳುತ್ತಿದ್ದರು. ಆಗ ಅರಣ್ಯ ಅಧಿಕಾರಿಗಳು ಅವರನ್ನ ನೋಡಿ ಶರಣಾಗುವಂತೆ ಹೇಳಿದ್ದಾರೆ. ಅವರು ಅಧಿಕಾರಿಗಳು ಮೇಲೆ ಫೈರ್ ಮಾಡಿದ್ದಾರೆ. ಅದಕ್ಕೆ ಅಧಿಕಾರಿಗಳು ಎನ್ಕೌಂಟರ್ ಮಾಡಿದ್ದಾರೆ. ಇದು ಅರಣ್ಯ ಅಧಿಕಾರಿಗಳು ನಮಗೆ ಹೇಳುತ್ತಿರುವ ಮಾಹಿತಿ ಎಂದರು.&lt;/p&gt;&lt;p&gt;ಒಂದು ಕಡೆಯ ಮಾಹಿತಿಯನ್ನು ನಂಬಲು ನಾನು ಸಿದ್ಧನಿಲ್ಲ. ಇನ್ನೊಂದು ಕಡೆಯ ಮಾಹಿತಿ ಏನು ಎಂಬುದು ನಮಗೆ ಬೇಕಿದೆ. ಎನ್&zwnj;ಕೌಂಟರ್ ಬಳಿಕ ಮೈಸೂರಿಗೆ ಏಕೆ ಶವ ತಂದರು. ಇದಕ್ಕೆ ಉತ್ತರ ಬೇಕಿದೆ. ಆ ಮಾಹಿತಿಯನ್ನ ಸ್ಥಳಕ್ಕೆ ಹೋಗಿ ಪಡೆಯುತ್ತೇನೆ. ಸಂಸದರು ತಿಳಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/why-the-bodies-were-brought-to-mysuru-after-three-killed-in-forest-encounter-mp-sunil-bose-questions-rav/articleshow-t1c9zuo"/>
        </item>
    </channel>
</rss>
