<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 15 Jul 2026 18:12:33 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಮಳೆಗಾಗಿ ನೂರಾರು ರೈತರು ಮಲೆ ಮಾದಪ್ಪನ ಮೊರೆ: ದೇವರು ಭಕ್ತರ ಕಣ್ಣೀರಿಗೆ ಸ್ಪಂದಿಸುತ್ತಾನಾ?]]></title>
            <link>https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</link>
            <guid isPermaLink="true">https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</guid>
            <pubDate>Sat, 04 Jul 2026 23:11:39 +0530</pubDate>
            <description><![CDATA[&lt;p&gt;Chamarajanagar: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwq25qms70js7yq2vdncxxka,imgname-2-1783185464985.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.04):&lt;/strong&gt; ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ. ಬರ ಜಿಲ್ಲೆ ಅಂತಾ ಘೋಷಿಸುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ. ಈ ನಡುವೆ ರೈತರು ಹಾಗೂ ಭಕ್ತರು ಮಲೆ ಮಾದಪ್ಪನ ಮೊರೆ ಹೋಗ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ರಾಜ್ಯದಲ್ಲಿ ವ್ಯಾಪಕ ಮಳೆ ಕೊರತೆಯಾಗಿದೆ. ಈಗಾಗಲೇ ಜಲಾಶಯಗಳು ಕೂಡ ಖಾಲಿಯಾಗ್ತಿವೆ. ಗಡಿ ಜಿಲ್ಲೆ ಚಾಮರಾಜಗರದಲ್ಲೂ ಕೂಡ ಮಳೆ ಕೊರತೆಯಿಂದ ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶದ ಭೂಮಿಯನ್ನು ವ್ಯವಸಾಯ ಮಾಡದೆ ಖಾಲಿ ಬಿಟ್ಟಿದ್ದಾರೆ. ಅಲ್ಲದೇ 70 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.&lt;img&gt;&lt;/p&gt;&lt;p&gt;ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ. ರೈತರಿಂದಲೂ ಕೂಡ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಗುಂಡ್ಲುಪೇಟೆ, ಹನೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಕುಡಿಯುವ ನೀರಿಗೂ ಕೂಡ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಬರ ಜಿಲ್ಲೆ ಅಂತಾ ಘೋಷಿಸುವಂತೆ ಸರ್ಕಾರಕ್ಕೆ ರೈತರಿಂದ ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಇನ್ನೂ ಗಡಿ ಜಿಲ್ಲೆಯ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದಿಂದ ಬಸ್ಸಿನ ಮೂಲಕ ನೂರಾರು ರೈತರು ಮಲೆ ಮಹದೇಶ್ವರನ ದರ್ಶನಕ್ಕೆ ಹೋಗಿದ್ದಾರೆ. ಅಲ್ಲದೇ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಉರುಳು ಸೇವೆ ಮಾಡುವುದಲ್ಲದೇ ವಿಶೇಷ ಪೂಜೆ, ಅರ್ಚನೆ ಸಲ್ಲಿಸಲಿದ್ದಾರೆ. ಇಷ್ಟಾರ್ಥ ಈಡೇರಿಸುವ ಮಾದಪ್ಪ ರೈತರ ಕಷ್ಟ ಆಲಿಸಿ ಮಳೆ ಸುರಿಸುತ್ತಾನೆಂಬುದು ರೈತರ ನಂಬಿಕೆ.&lt;/p&gt;&lt;p&gt;ಒಟ್ನಲ್ಲಿ ಎಪ್ಪತ್ತೇಳು ಮಲೆಗಳ ಒಡೆಯ ಮುದ್ದು ಮಾಯ್ಕಾರ ಮಾದಪ್ಪನ ಸನ್ನಿಧಿಗೆ ರೈತರು ಹೊರಟಿದ್ದು, ಮಾದಪ್ಪನ ಬೆಟ್ಟದಲ್ಲಿ ಉಘೇ ಉಘೇ ಝೇಂಕಾರ ಕೇಳಿ ಬರಲಿದೆ. ಕೇಳಿದ್ದನ್ನು ಈಡೇರಿಸುವ ಮಾದಪ್ಪ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಿ ಮಳೆ ಸುರಿಸುತ್ತಾನಾ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc"/>
        </item>
        <item>
            <title><![CDATA[Hyena: ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ! ಗ್ರಾಮದಲ್ಲಿ ಆತಂಕ, ರಾತ್ರಿ ಸಂಚಾರಕ್ಕೆ ಡವಡವ!]]></title>
            <link>https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug</link>
            <guid isPermaLink="true">https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug</guid>
            <pubDate>Sat, 04 Jul 2026 11:15:58 +0530</pubDate>
            <description><![CDATA[&lt;p&gt;Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwns9amaspej3jmvhc6wf4gr,imgname-----------------------2026-07-04t105240.156-1783142591114.jpg" type="image/jpeg" height="390" width="690"/>
            <content:encoded><![CDATA[&lt;p&gt;Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಾಮರಾಜನಗರ(ಜು.4): ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;img&gt;&lt;p&gt;ಬಂಡೀಪುರ ಅರಣ್ಯ ವ್ಯಾಪ್ತಿಯ ಕಾರೇಮಾಳ ಗ್ರಾಮದಲ್ಲಿ ಇದೇ ಮೊದಲಸಲ ರಾತ್ರಿ ವೇಳೆ ಹೈನಾ ಹಲವರ ಕಣ್ಣೀಗೆ ಬಿದ್ದಿದೆ. ಸ್ಥಳೀಯರು ರಸ್ತೆಮಾರ್ಗವಾಗಿ ಸಂಚರಿಸುವಾಗ ಕಾಡಿನಲ್ಲಿ ಹೈನಾ ಓಡಾಟ ಕಂಡು ಬೆಚ್ಚಿಬಿದ್ದಿದ್ದಾರೆ. ಹೈನಾ ಸಂಚರಿಸುತ್ತಿರುವ ದೃಶ್ಯ ಮೊಬೈಲ್&zwnj;ನಲ್ಲಿ ವಿಡಿಯೋ ರೆಕಾರ್ಡ್&zwnj; ಮಾಡಿದ್ದರಿಂದ ಇದೀಗ ಸೊಷಿಯಲ್ ಮೀಡಿಯಾದಲ್ಲಿ ಹೈನಾ ಸಂಚರಿಸುವ ವಿಡಿಯೋ ವೈರಲ್ ಆಗಿದೆ.&lt;/p&gt;&lt;p&gt;ರಸ್ತೆಗಳ ಮೇಲೆ ರಾತ್ರಿ ಸಂಚರಿಸಲು ಭಯವಾಗುತ್ತಿದೆ. ಈಗಾಗಲೇ ಕಾಡಾನೆ, ಹುಲಿ ಚಿರತೆಗಳ ದಾಳಿಯ ಭಯದಲ್ಲಿರುವ ಸ್ಥಳೀಯ ಗ್ರಾಮಸ್ಥರಿಗೆ ಇದೀಗ ಹೊಸದೊಂದು ಅತಿ ಭಯಂಕರವಾಗಿ ದಾಳಿ ಮಾಡು ಹೈನಾ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ. ಹೈನಾ ಸಂಚರಿಸುವ ವಿಡಿಯೋ ಗ್ರಾಮಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚುತ್ತಿರುವುದನ್ನ ತೋರಿಸಿದೆ.&lt;/p&gt;&lt;img&gt;&lt;p&gt;ಗ್ರಾಮದ ಸಮೀಪವೇ ಹೈನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚು ಹಿನ್ನೆಲೆ ಹೊರಗಡೆ ಓಡಾಡದಂತೆ, ರಾತ್ರಿ ವೇಳೆ ಸಂಚರಿಸದಮತೆ ಎಚ್ಚರಿಕೆ ನೀಡಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/rare-hyena-spotted-in-chamarajanaga-s-karemala-village-residents-on-alert-4bah3ug"/>
        </item>
        <item>
            <title><![CDATA[ಈ ಜಿಲ್ಲೆಯಲ್ಲಿ ಮಕ್ಕಳ ಕೊರತೆ: ಇದೇ ವರ್ಷವೇ 11 ಸರ್ಕಾರಿ ಶಾಲೆಗಳಿಗೆ ಬೀಗ!]]></title>
            <link>https://kannada.asianetnews.com/education/chamarajanagar-11-government-schools-closed-zero-admissions-gvd/articleshow-8sange6</link>
            <guid isPermaLink="true">https://kannada.asianetnews.com/education/chamarajanagar-11-government-schools-closed-zero-admissions-gvd/articleshow-8sange6</guid>
            <pubDate>Thu, 02 Jul 2026 18:33:15 +0530</pubDate>
            <description><![CDATA[&lt;p&gt;ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. ಈ ವರ್ಷ 11 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwhesqezn3pekjh468q7a666,imgname-hffh-1782997376479.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಜು.02): &lt;/strong&gt;ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುವ ಸ್ಥಿತಿಗೆ ತಲುಪಿವೆ. ಈ ವರ್ಷ 11 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿಯಿಂದ ಬೀಗ ಹಾಕಿವೆ. ಖಾಸಗಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 811 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ 11 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದೇ ಮಗುವೂ ದಾಖಲಾತಿಯಾಗದ ಕಾರಣ ಈ ಹನ್ನೊಂದು ಶಾಲೆಗಳನ್ನು ಮುಚ್ಚಲಾಗಿದೆ. ಕಳೆದ ವರ್ಷ 50,800 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯಾಗಿದ್ದರೆ, ಈ ವರ್ಷ ಅದು 46,130ಕ್ಕೆ ಇಳಿದಿದೆ. ಅಂದರೆ ನಾಲ್ಕು ಸಾವಿರಕ್ಕೂ ಹೆಚ್ಚು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ.&lt;/p&gt;&lt;p&gt;ಸರ್ಕಾರಿ ಮಾತ್ರವಲ್ಲ, ಖಾಸಗಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಕುಸಿತವಾಗಿದೆ. ಕಳೆದ ವರ್ಷ ಒಟ್ಟಾರೆ 1.10 ಲಕ್ಷ ಮಕ್ಕಳು ಶಾಲೆಗಳಲ್ಲಿ ದಾಖಲಾಗಿದ್ದರೆ, ಈ ವರ್ಷ ಅದು 99 ಸಾವಿರಕ್ಕೆ ಇಳಿದಿದೆ. ಅಂದರೆ ಸುಮಾರು 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಡಿತವಾಗಿದೆ ಗ್ರಾಮೀಣ ಭಾಗಗಳಲ್ಲಿ ಒಂದನೇ ತರಗತಿಗೆ ಮಕ್ಕಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಜನನ ಪ್ರಮಾಣ ಕುಸಿತ, ನಗರ ವಲಸೆ ಹಾಗೂ &lsquo;ಒಂದೇ ಮಗು ಸಾಕು&rsquo; ಎಂಬ ಪೋಷಕರ ಮನೋಭಾವ ಇದಕ್ಕೆ ಪ್ರಮುಖ ಕಾರಣವೆಂದು ಡಿಡಿಪಿಐ ಚಂದ್ರಕಾಂತ ಪಾಟೀಲ್ ಹೇಳುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಜನನ ಪ್ರಮಾಣವೂ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದೆ.&lt;/p&gt;&lt;p&gt;2016: 12.23&lt;/p&gt;&lt;p&gt;2017: 11.91&lt;/p&gt;&lt;p&gt;2018: 11.51&lt;/p&gt;&lt;p&gt;2019: 11.12&lt;/p&gt;&lt;p&gt;2020: 10.92&lt;/p&gt;&lt;p&gt;2021: 10.52&lt;/p&gt;&lt;p&gt;2022: 10.33&lt;/p&gt;&lt;p&gt;2023: 10.28&lt;/p&gt;&lt;p&gt;2024: 9.93&lt;/p&gt;&lt;h2&gt;&lt;strong&gt;ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಈ ಅಂಕಿಅಂಶಗಳು ಜನನ ಪ್ರಮಾಣ ನಿರಂತರವಾಗಿ ಕುಸಿಯುತ್ತಿರುವುದನ್ನು ಸ್ಪಷ್ಟಪಡಿಸುತ್ತವೆ. ಮುಂದಿನ ದಿನಗಳಲ್ಲಿ ಜನನ ಪ್ರಮಾಣದಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಗಳು ಇದೆ. ಮಕ್ಕಳ ಕೊರತೆ ಈಗ ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಾಗಿರದೆ, ಗ್ರಾಮೀಣ ಜನಸಂಖ್ಯೆ ಮತ್ತು ಸಾಮಾಜಿಕ ಬದಲಾವಣೆಯ ಸೂಚಕವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಗಂಭೀರವಾಗುವ ಸಾದ್ಯತೆಯು ಇದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/education/chamarajanagar-11-government-schools-closed-zero-admissions-gvd/articleshow-8sange6"/>
        </item>
        <item>
            <title><![CDATA[ತಮಿಳುನಾಡಿಗೆ ಹರಿಯುತ್ತಿದ್ದ ನೀರು ತಡೆಯಲು ಗ್ರಾಮಸ್ಥರೇ ಮುಂದಾದರು: ಚಾಮರಾಜನಗರದಲ್ಲಿ ಅನನ್ಯ ಪ್ರಯತ್ನ]]></title>
            <link>https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh</link>
            <guid isPermaLink="true">https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh</guid>
            <pubDate>Wed, 15 Jul 2026 18:12:28 +0530</pubDate>
            <description><![CDATA[&lt;p&gt;Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjw9h93pe4yvpnx5653jdgx,imgname-ch--3--1784118822179.jpeg" type="image/jpeg" height="390" width="690"/>
            <content:encoded><![CDATA[&lt;p&gt;Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..&lt;/p&gt;&lt;img&gt;&lt;p&gt;&lt;strong&gt;ಚಾಮರಾಜನಗರ (ಜು.15): &lt;/strong&gt;ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ ಹಾಗೂ ತಮಿಳುನಾಡಿಗೆ ಹರಿದು ಹೋಗುವ ನೀರು ತಡೆಯಿರಿ ಅಂತಾ ಗ್ರಾಮಸ್ಥರು, ರೈತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಕೂಡ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಚಂದಾ ಎತ್ತಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..&lt;/p&gt;&lt;img&gt;&lt;p&gt;ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೊರತೆ ನಡುವೆಯೂ ಕೂಡ ಹನೂರು ಭಾಗದ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಚೆಕ್ ಡ್ಯಾಂಗಳು ತುಂಬಿತ್ತು. ಆದ್ರೆ ಚೆಕ್ ಡ್ಯಾಂಗಳ ಹೂಳೆತ್ತದ ಹಿನ್ನಲೆ ನೀರೆಲ್ಲ ಪಾಲಾರ್ ಹಳ್ಳಕ್ಕೆ ಹರಿದು ಕಾವೇರಿ ಮೂಲಕ ತಮಿಳುನಾಡು ಸೇರಿದೆ. ಆದ್ರೆ ಇದೀಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ, ಕೊಳವೆ ಬಾವಿಗಳು ಕೂಡ ನಿಂತು ಹೋಗಿವೆ.&lt;/p&gt;&lt;img&gt;&lt;p&gt;ಅಧಿಕಾರಿಗಳು ಸ್ಪಂದಿಸದೆ ಹಿನ್ನಲೆ ತಾವೇ ಚಂದಾ ಎತ್ತಿ ಹೂಳೆತ್ತಿ, ಚೆಕ್ ಡ್ಯಾಂ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದ್ದಾರೆ. ಸಂದನಪಾಳ್ಯ ಸಮೀಪದ ಚಾರ್ಲಿಸ್ ಸರ್ವೇರ್ ಡ್ಯಾಂ ಅನ್ನೂ 15 ವರ್ಷಗಳ ಹಿಂದೆ ಸ್ಥಳೀಯರೆ ನಿರ್ಮಿಸಿಕೊಂಡಿದ್ದರು. ಮಾರ್ಟಳ್ಳಿ ಬೆಟ್ಟಗುಡ್ಡದಲ್ಲಿ ಸುರಿಯುವ ಮಳೆ ನೀರು ಪಣಂಕೋಬೆ ಡ್ಯಾಂ ಮೂಲಕ ಹರಿದು ಮಾರ್ಟಳ್ಳಿ, ಸಂದನಪಾಳ್ಯ, ನಾಲ್ ರೋಡ್ ಮೂಲಕ ಹರಿದು ಹೋಗಿ ಪಾಲಾರ್ ಹಳ್ಳದ ಮೂಲಕ ಕಾವೇರಿ ನದಿ ಸೇರುತ್ತಿತ್ತು.&lt;/p&gt;&lt;img&gt;&lt;p&gt;ಆ ಮೂಲಕ ಲೆಕ್ಕಕ್ಕೆ ಸಿಗದ ನೀರು ತಮಿಳುನಾಡು ಪಾಲಾಗ್ತಿದೆ ಅಂತಾ ರೈತರು ಆರೋಪ ಮಾಡ್ತಿದ್ದಾರೆ. ಇನ್ನೂ ಬಹಳ ವರ್ಷಗಳ ಹಿಂದೆಯೇ ಪಣಂಕೋಬೆ ಬಳಿ ಚೆಕ್ ಡ್ಯಾಂ ನಿರ್ಮಿಸುವ ಪ್ರಸ್ತಾಪವಿತ್ತು. ಆದ್ರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆ ಕೈ ಬಿಡಲಾಗಿತ್ತು. ಆ ಯೋಜನೆಗೆ ಮರುಜೀವ ನೀಡುವಂತೆ ರೈತರು ಹಾಗೂ ಸ್ಥಳೀಯ 15 ಕ್ಕೂ ಹೆಚ್ಚು ಗ್ರಾಮದ ಜನರು ಅಧಿಕಾರಿಗಳನ್ನು ಒತ್ತಾಯಿಸಿದರು ಕೂಡ ಪ್ರಯೋಜನವಾಗಿಲ್ಲ.&lt;/p&gt;&lt;img&gt;&lt;p&gt;ಈ ಹಿನ್ನಲೆ ಮಳೆಯ ನೀರು ಬಂದ್ರು ಚೆಕ್ ಡ್ಯಾಂ ನಲ್ಲಿ ನೀರು ನಿಲ್ಲುತ್ತಿಲ್ಲ ಅಂತಾ ಅರಿತ ರೈತರು ಸರ್ಕಾರದ ಅನುದಾನಕ್ಕೆ ಕಾಯದೆ ತಾವೇ ಸ್ವಂತ ಹಣ ಸಂಗ್ರಹಿಸಿ ಚೆಕ್ ಡ್ಯಾಂ ಹೂಳೆತ್ತುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಹನೂರಿನ ಬಿಜೆಪಿ ಮುಖಂಡರು ಕೂಡ ಕೈ ಜೋಡಿಸಿದ್ದೇವೆ ಅಂತಿದ್ದಾರೆ. ಒಟ್ನಲ್ಲಿ ಮಾರ್ಟಳ್ಳಿ ಭಾಗದಲ್ಲಿ ಬೀಳುವ ಮಳೆಯ ನೀರಿನಿಂದ ಭರ್ತಿಯಾಗಿದ್ದ ಚೆಕ್ ಡ್ಯಾಂ ನೀರು ಕೇವಲ 15 ದಿನಕ್ಕೆ ಹರಿದು ತಮಿಳುನಾಡು ಪಾಲಾಗಿದೆ. ಅಧಿಕಾರಿಗಳು ಹಾಗೂ ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಹೂಳೆತ್ತಲೂ ಮುಂದಾಗಿರುವುದು ಮಾತ್ರ ಮಾದರಿ ನಡೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/chamarajanagar-villagers-desilt-check-dam-water-crisis-gvd-9f2xgmh"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಚಾಮರಾಜನಗರ: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದವ ಅರೆಸ್ಟ್]]></title>
            <link>https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq</link>
            <guid isPermaLink="true">https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq</guid>
            <pubDate>Wed, 17 Jun 2026 12:02:21 +0530</pubDate>
            <description><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್&zwnj;ರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪ ಹಿನ್ನೆಲೆ ಓರ್ವ ವ್ಯಕ್ತಿಯನ್ನ ಬಂಧಿಸಿದ ಪಲೀಸರು ವಿಚಾರಣೆಗೊಳಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva370jre14phmv8ydbawnzh,imgname-----------------------2026-06-17t113850.588-1781676606040.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್&zwnj;ರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪ ಹಿನ್ನೆಲೆ ಓರ್ವ ವ್ಯಕ್ತಿಯನ್ನ ಬಂಧಿಸಿದ ಪಲೀಸರು ವಿಚಾರಣೆಗೊಳಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಸಣಾಪುರ(Masanapur)ದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರ ಅಪಮಾನ ಪ್ರಕರಣ(Ambedkar portrait insult case)ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ(Social media)ದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ ಮಂಜುನಾಥ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ಮಸಣಾಪುರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಆದರೆ ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಮಂಜುನಾಥ್, ಸಮಾಜದಲ್ಲಿ ಅಶಾಂತಿ ಹಾಗೂ ಜಾತಿ ದ್ವೇಷ ಉಂಟು ಮಾಡುವ ರೀತಿಯ ಕಾಮೆಂಟ್ ಮಾಡಿದ್ದ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;&lsquo;ಇನ್ನು ಮುಂದೇನು ಅಂಬೇಡ್ಕರ್&zwnj;ಗೆ ಚಪ್ಪಲಿ ಹಾಕ ಹಾಕ್ತೇವೆ. ಇದು ನಮ್ಮ ಶಪಥ ಜೈ ಬಸವ ಸೇನೆ&rsquo; ಎಂದು ಕಾಮೆಟ್ ಮಾಡಿದ್ದ ಆರೋಪಿ.&lt;/p&gt;&lt;img&gt;&lt;p&gt;ಆರೋಪಿ ಮಾಡಿದ್ದ ಕಾಮೆಂಟ್ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸಲು ಯತ್ನ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದಲೇ ಈ ರೀತಿಯ ಸಂದೇಶ ಹಾಕಲಾಗಿರುವ ಹಿನ್ನೆಲೆ ಕೊಳ್ಳೇಗಾಲ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥರನ್ನ ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ಒಳಪಡಿಸಿ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದ ಬಳಿ KSRTC ಬಸ್ ಪಲ್ಟಿ, ಅಸಲಿ ಕಾರಣ ಬಿಚ್ಚಿಟ್ಟ ಎಸ್‌ಪಿ; 44 ಪ್ರಯಾಣಿಕರ ಪೈಕಿ ಇಬ್ಬರ ಸಾವು!]]></title>
            <link>https://kannada.asianetnews.com/karnataka-districts/chamarajanagara-ksrtc-bus-accident-male-mahadeshwara-hill-near-madhuvanahalli-two-dead/articleshow-evtgq04</link>
            <guid isPermaLink="true">https://kannada.asianetnews.com/karnataka-districts/chamarajanagara-ksrtc-bus-accident-male-mahadeshwara-hill-near-madhuvanahalli-two-dead/articleshow-evtgq04</guid>
            <pubDate>Mon, 29 Jun 2026 23:00:27 +0530</pubDate>
            <description><![CDATA[ಮಲೆ ಮಹದೇಶ್ವರ ಬೆಟ್ಟದಿಂದ ಹಿಂದಿರುಗುತ್ತಿದ್ದ ಕೆಎಸ್&zwnj;ಆರ್&zwnj;ಟಿಸಿ ಬಸ್ ಚಾಮರಾಜನಗರದ ಮಧುವನಹಳ್ಳಿ ಬಳಿ ಪಲ್ಟಿಯಾಗಿ ಇಬ್ಬರು ಮೃತಪಟ್ಟು, 42 ಮಂದಿ ಗಾಯಗೊಂಡಿದ್ದಾರೆ. ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯೇ ಈ ಭೀಕರ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwa6s8b2h4zf93parbkgghmy,imgname-mm-hills-ksrtc-bus-accident-1782754091362.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜೂ.29): ಮ&lt;/strong&gt;ಲೆ ಮಹದೇಶ್ವರ ಬೆಟ್ಟದ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರ ಪಾಲಿಗೆ ಸಾವಿನ ಬಸ್ ಆಗಿ ಪರಿಣಮಿಸಿದ ಕೆಎಸ್&zwnj;ಆರ್&zwnj;ಟಿಸಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ಮಧುವನಹಳ್ಳಿ ಬಳಿ ನಡೆದಿದೆ. ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ:&lt;/strong&gt;&lt;/h2&gt;&lt;p&gt;ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್&zwnj;ನಲ್ಲಿ ಒಟ್ಟು 44 ಪ್ರಯಾಣಿಕರಿದ್ದರು. ಮಧುವನಹಳ್ಳಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ಸೈನ್ ಬೋರ್ಡ್&zwnj;ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟೈಯರ್ ಬ್ಲಾಸ್ಟ್ ಆಗಿ ಬಸ್ ರಸ್ತೆಯ ಬದಿಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಬಸ್ ಅಲ್ಲಿದ್ದ ಬೇವಿನ ಮರಕ್ಕೆ ತಗುಲಿ ನಿಂತಿದೆ, ಇಲ್ಲದಿದ್ದರೆ ಸಾವು-ನೋವಿನ ಪ್ರಮಾಣ ಇನ್ನು ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮೃತರು ಮತ್ತು ಗಾಯಾಳುಗಳು:&lt;/strong&gt;&lt;/h2&gt;&lt;p&gt;ಈ ಅಪಘಾತದಲ್ಲಿ ಕೊಳ್ಳೇಗಾಲ ಪಟ್ಟಣದ ಪುಟ್ಟನಂಜಮ್ಮ ಹಾಗೂ ಕುದೇರು ಗ್ರಾಮದ ಮಹೇಶ್ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ 42 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಈ ಪೈಕಿ 21 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ 21 ಜನರಿಗೆ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಬ್ಯುಲೆನ್ಸ್ ಕೊರತೆ ಎದುರಾದಾಗ ಸ್ಥಳೀಯ ವಾಹನ ಚಾಲಕರು ಖಾಸಗಿ ಕಾರುಗಳಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ಎಸ್ಪಿ ಮುತ್ತುರಾಜ್ ಹೇಳಿಕೆ:&lt;/strong&gt;&lt;/h2&gt;&lt;p&gt;ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಾಮರಾಜನಗರ ಎಸ್&zwnj;ಪಿ ಮುತ್ತುರಾಜ್ ಅವರು ಮಾಹಿತಿ ನೀಡಿ, 'ಮೇಲ್ನೋಟಕ್ಕೆ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸೈನ್ ಬೋರ್ಡ್&zwnj;ಗೆ ಡಿಕ್ಕಿ ಹೊಡೆದ ನಂತರ ಟೈಯರ್ ಸ್ಫೋಟಗೊಂಡಿದೆ. ಜಿಲ್ಲೆಯ 'ಬ್ಲಾಕ್ ಸ್ಪಾಟ್' (ಅಪಘಾತ ವಲಯ) ಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಈಗಾಗಲೇ ರಿವ್ಯೂ ಮಾಡಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ' ಎಂದಿದ್ದಾರೆ.&lt;/p&gt;&lt;p&gt;ಪ್ರಯಾಣಿಕರೊಬ್ಬರು ಮಾತನಾಡಿ, 'ಬೆಟ್ಟದಿಂದ ಕೆಳಗೆ ಬರುವಾಗಲೇ ಚಾಲಕ ಬಸ್ಸನ್ನು ಅತ್ಯಂತ ವೇಗವಾಗಿ ಚಲಾಯಿಸುತ್ತಿದ್ದ, ಆಗಲೇ ಒಂದು ಬಾರಿ ಅಪಘಾತದಿಂದ ಬಚಾವ್ ಆಗಿದ್ದೆವು. ಆದರೆ ಚಾಲಕನ ಅಜಾಗರೂಕತೆ ಈಗ ಇಬ್ಬರ ಪ್ರಾಣ ಬಲಿಪಡೆದಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chamarajanagara-ksrtc-bus-accident-male-mahadeshwara-hill-near-madhuvanahalli-two-dead/articleshow-evtgq04"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಆಹಾರಕ್ಕಾಗಿ ಪ್ಲಾಸ್ಟಿಕ್ ತಿನ್ನುತ್ತಿರುವ ಗಜರಾಜ! ಜಿಂಕೆ, ಕೋತಿ, ಹಸು ಆಯ್ತು ಈಗ ಆನೆ!]]></title>
            <link>https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp</link>
            <guid isPermaLink="true">https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp</guid>
            <pubDate>Tue, 16 Jun 2026 18:59:02 +0530</pubDate>
            <description><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಆಹಾರವಿಲ್ಲದೆ ಆನೆಯೊಂದು ಪ್ಲಾಸ್ಟಿಕ್ ಕಸ ತಿನ್ನುತ್ತಿರುವ ದೃಶ್ಯ ವೈರಲ್ ಆಗಿದೆ. ಪ್ರವಾಸಿಗರ ಬೇಜವಾಬ್ದಾರಿಯಿಂದ ಉಂಟಾದ ಈ ಪ್ಲಾಸ್ಟಿಕ್ ಮಾಲಿನ್ಯವು ವನ್ಯಜೀವಿಗಳ ಜೀವಕ್ಕೆ ಮಾರಕವಾಗಿದ್ದು, ಪರಿಸರ ವ್ಯವಸ್ಥೆಯ ಅವನತಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv89fxxv7zey085tc04c9adk,imgname-mm-hills-elephant-scavenging-plastic-waste-1781616080826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜೂ.16): ಕಾ&lt;/strong&gt;ಡಿನ ರಾಜ, ಗಾಂಭೀರ್ಯದ ಸಂಕೇತವಾದ ಆನೆಯೊಂದು (wild elephant) ಅರಣ್ಯದಲ್ಲಿ ಆಹಾರ ಸಿಗದೇ ಮನುಷ್ಯರು ಎಸೆದ ಪ್ಲಾಸ್ಟಿಕ್ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ (MM Hills) ಈ ಘಟನೆ ನಡೆದಿದ್ದು, ಇದು ನಮ್ಮ ಪರಿಸರ ವ್ಯವಸ್ಥೆಯ ಅವನತಿಯನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;h2&gt;&lt;strong&gt;ಹಸಿವಿನ ಅನಿವಾರ್ಯತೆ ಮತ್ತು ವಿಷಕಾರಿ ಪ್ಲಾಸ್ಟಿಕ್:&lt;/strong&gt;&lt;/h2&gt;&lt;p&gt;ವನ್ಯಜೀವಿಗಳು ಸಾಮಾನ್ಯವಾಗಿ ಕಾಡಿನಲ್ಲಿ ಸಿಗುವ ಗಿಡಗಂಟಿಗಳು, ಬಿದಿರು ಮತ್ತು ಹಣ್ಣುಗಳನ್ನು ತಿಂದು ಬದುಕುತ್ತವೆ. ಆದರೆ, ಮಾನವನ ಅತಿಕ್ರಮಣ ಮತ್ತು ಕಾಡಿನಂಚಿನಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ (Plastic waste) ಈ ಪ್ರಾಣಿಗಳು ಇಂದು ಕಸದ ತೊಟ್ಟಿಯನ್ನೇ ಅವಲಂಬಿಸುವಂತಾಗಿದೆ. ವೈರಲ್ ಆಗಿರುವ ಈ ಚಿತ್ರದಲ್ಲಿ, ಆನೆಯೊಂದು ಕಸದ ರಾಶಿಯಿಂದ ಪ್ಲಾಸ್ಟಿಕ್ ಚೀಲಗಳನ್ನು ಎತ್ತಿ ತಿನ್ನುತ್ತಿರುವುದನ್ನು ಕಾಣಬಹುದು. ಪ್ಲಾಸ್ಟಿಕ್ ಪ್ರಾಣಿಗಳ ಹೊಟ್ಟೆ ಸೇರಿದರೆ ಅದು ಜೀರ್ಣವಾಗದೆ, ಕರುಳಿನಲ್ಲಿ ಸಿಲುಕಿಕೊಂಡು ಸಾವಿಗೆ ಕಾರಣವಾಗುತ್ತದೆ. ಇದು ಆನೆಗೆ ಮಾತ್ರವಲ್ಲ, ಇಡೀ ವನ್ಯಜೀವಿ ಸಂಕುಲಕ್ಕೇ ಎದುರಾಗಿರುವ ದೊಡ್ಡ ದುರಂತ.&lt;/p&gt;&lt;h2&gt;&lt;strong&gt;ಪ್ರವಾಸಿಗರ ಬೇಜವಾಬ್ದಾರಿ ಮತ್ತು ಪ್ಲಾಸ್ಟಿಕ್ ಮುಕ್ತ ಕಾಡಿನ ಕನಸು:&lt;/strong&gt;&lt;/h2&gt;&lt;p&gt;ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ದುರದೃಷ್ಟವಶಾತ್, ಅನೇಕರು ತಾವು ತಂದ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಯ ಪೊಟ್ಟಣಗಳನ್ನು ಕಾಡಿನ ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಾರೆ. ಇದು ಕ್ರಮೇಣ ಕಸದ ರಾಶಿಯಾಗಿ ಮಾರ್ಪಟ್ಟು, ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತಿದೆ. ಕಾಡು ಪ್ರಾಣಿಗಳು ಉಪ್ಪಿನ ಅಂಶ ಅಥವಾ ಆಹಾರದ ವಾಸನೆಗೆ ಮಾರುಹೋಗಿ ಪ್ಲಾಸ್ಟಿಕ್ ಸಮೇತ ಕಸವನ್ನು ತಿನ್ನುತ್ತಿವೆ. ನಾವು ಪುಣ್ಯಕ್ಷೇತ್ರಕ್ಕೆ ಹೋಗುವುದು ನಮ್ಮ ಪಾಪಗಳನ್ನು ತೊಳೆದುಕೊಳ್ಳಲು, ಆದರೆ ಅಲ್ಲಿನ ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ತಿನ್ನಿಸುವ ಮೂಲಕ ನಾವು ಮತ್ತಷ್ಟು ಪಾಪದ ಕೆಲಸ ಮಾಡುತ್ತಿದ್ದೇವೆ ಎನ್ನುವುದು ಕಹಿ ಸತ್ಯ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆಯ ಜವಾಬ್ದಾರಿ:&lt;/strong&gt;&lt;/h2&gt;&lt;p&gt;ಆನೆಗಳು ಪ್ಲಾಸ್ಟಿಕ್ ತಿನ್ನಲು ಆರಂಭಿಸಿವೆ ಎಂದರೆ ಅದರ ಅರ್ಥ ಅವುಗಳ ನೈಸರ್ಗಿಕ ವಾಸಸ್ಥಾನದಲ್ಲಿ ಆಹಾರದ ಕೊರತೆ ಎದುರಾಗಿದೆ ಅಥವಾ ಅವುಗಳ ವಾಸಸ್ಥಾನವನ್ನು ನಾವು ಕಸದ ತೊಟ್ಟಿಯನ್ನಾಗಿ ಮಾಡಿದ್ದೇವೆ ಎಂದರ್ಥ. ಅರಣ್ಯ ಇಲಾಖೆಯು ಪ್ಲಾಸ್ಟಿಕ್ ಮುಕ್ತ ಅರಣ್ಯ ಅಭಿಯಾನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು ಮಾತ್ರವಲ್ಲದೆ, ಎಸೆಯುವವರಿಗೆ ಭಾರಿ ದಂಡ ವಿಧಿಸಬೇಕಿದೆ.&lt;/p&gt;&lt;p&gt;ಈ ಘಟನೆ ನಮಗೆ ನೀಡುತ್ತಿರುವ ಎಚ್ಚರಿಕೆ ಏನೆಂದರೆ, ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕಾಡು ಮತ್ತು ಕಾಡುಪ್ರಾಣಿಗಳು ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿಯುತ್ತವೆ. ಪ್ರಾಣಿಗಳ ಮನೆಗೆ (ಕಾಡಿಗೆ) ನಾವು ಅತಿಥಿಗಳಾಗಿ ಹೋದಾಗ, ಅಲ್ಲಿನ ನಿಯಮಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡೋಣ, ಮೂಕ ಪ್ರಾಣಿಗಳ ಜೀವ ಉಳಿಸೋಣ.&lt;/p&gt;&lt;p&gt;&amp;nbsp;&lt;/p&gt;&lt;p&gt;HeartbreakingA wild elephant in Karnataka is seen scavenging through plastic waste for food in MM Hills. Imagine surviving on garbage because humans have turned your habitat into a dumping yard.&amp;nbsp;The tragedy isn't the elephant. The tragedy is what we've done to its home. pic.twitter.com/9idiMxyDK4&lt;/p&gt;&lt;p&gt;&mdash; Harish Upadhya (@harishupadhya) June 16, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp"/>
        </item>
        <item>
            <title><![CDATA[ಗುಂಡ್ಲುಪೇಟೆ ಭೂಗರ್ಭದಲ್ಲಿ ಅಪರೂಪದ ಖನಿಜ ಪತ್ತೆ; ಸುಮಾರು 11.48 ದಶಲಕ್ಷ ಟನ್ ಅದಿರು ಲಭ್ಯ]]></title>
            <link>https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki</link>
            <guid isPermaLink="true">https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki</guid>
            <pubDate>Mon, 06 Jul 2026 05:07:41 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (GSI) ನಡೆಸಿದ ಸಮೀಕ್ಷೆಯಲ್ಲಿ ಅಪರೂಪದ ಭೂಮಿಯ ಮೂಲಧಾತುಗಳು (REE) ಮತ್ತು ಯಟ್ರಿಯಮ್ ಖನಿಜ ನಿಕ್ಷೇಪಗಳು ಪತ್ತೆಯಾಗಿವೆ. ಈ ಪ್ರದೇಶದಲ್ಲಿ ಸುಮಾರು 11.48 ದಶಲಕ್ಷ ಟನ್ ಅದಿರು ಲಭ್ಯವಿದ್ದು, ಮೊಬೈಲ್, ಕಂಪ್ಯೂಟರ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕೆಗೆ ಈ ಖನಿಜಗಳು ಅತ್ಯಗತ್ಯವಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwta8wahpkwyqzv8m4gzdbs0,imgname-gundlupete-1783294619985.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮೊಬೈಲ್&zwnj;, ಕಂಪ್ಯೂಟರ್&zwnj;, ವಾಹನದ ಬ್ಯಾಟರಿ ಸೇರಿದಂತೆ ತಂತ್ರಜ್ಞಾನದ ಅಗತ್ಯಗಳಿಗೆ ಬೇಕಿರುವ ಅಪರೂಪದ ಖನಿಜ ಸಂಪತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ತಾಲೂಕಿನ ಮಲ್ಲಯ್ಯನಪುರ, ವಿಜಯಪುರ, ಕೂತನೂರು, ಮನುಗನಹಳ್ಳಿ ಸುತ್ತಮುತ್ತ ಅಪರೂಪದ ವಿರಳ ಭೂಮಿಯ ಮೂಲ ಧಾತುಗಳು (ರೇರ್&zwnj; ಅರ್ಥ್&zwnj; ಎಲಿಮೆಂಟ್ಸ್&zwnj;) ಮತ್ತು ಯಟ್ರಿಯಮ್/ಥೋರಿಯಮ್ ಖನಿಜ ನಿಕ್ಷೇಪ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ (ಜಿಎಸ್&zwnj;ಐ) ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.&lt;/p&gt;&lt;p&gt;ಜಿಎಸ್&zwnj;ಐ ವರದಿಯಲ್ಲಿ 2.85 ಚದರ ಕಿ.ಮೀಟರ್&zwnj;ನ 750 ಎಕರೆಯಲ್ಲಿ ಅತಿ ಅಪರೂಪದ ಖನಿಜ ಸಂಪತ್ತು ಗೋಚರವಾಗಿದ್ದು, 20 ಎಕರೆಯಷ್ಟು ಥೋರಿಯಂ ಇರುವುದು ತಿಳಿದುಬಂದಿದ್ದು, ಕೋರ್&zwnj; ಮಿನರಲ್ ಝೋನ್ ಎಂದು ಘೋಷಣೆಯಾಗುವ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಜಿಎಸ್&zwnj;ಐ ನಡೆಸಿದ ಸಾಮಾನ್ಯ ಪರಿಶೋಧನೆ ಜಿ-೨ ಪ್ರಕಾರ ಗುಂಡ್ಲುಪೇಟೆ ಬಳಿ ಆರ್&zwnj;ಇಇ ಮತ್ತು ಯಟ್ರಿಯಮ್ ಬ್ಲಾಕ್ ಒಟ್ಟು 314.21 ಹೆಕ್ಟೇರ್ ಪ್ರದೇಶ ಒಳಗೊಂಡಿದೆ.ಈ ಪ್ರದೇಶವನ್ನು ಗಣಿಗಾರಿಕೆ ಗುತ್ತಿಗೆಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಎಷ್ಟು ಖನಿಜವಿದೆ?&lt;/strong&gt;&lt;/h2&gt;&lt;p&gt;ಜಿಎಸ್&zwnj;ಐ ವರದಿಯ ಪ್ರಕಾರ ಈ ಬ್ಲಾಕ್&zwnj;ನಲ್ಲಿ ಎರಡು ಪ್ರಮುಖ ಖನಿಜಗಳಲ್ಲಿ ಆರ್&zwnj;ಇಇ ಅದಿರು ಶೇ.0.25 ಕಟ್-ಆಫ್&zwnj;ನಲ್ಲಿ 11.48 ಮಿಲಿಯನ್ ಟನ್ ಅದಿರು ಇದೆ. ಇದರಿಂದ ಅಂದಾಜು 55,276 ಟನ್ ಶುದ್ಧ ಆರ್&zwnj;ಇಇ ಲೋಹ ಸಿಗಬಹುದಾಗಿದೆ. ಉತ್ತಮ ಗುಣಮಟ್ಟದ ಶೇ. 0.50 ಕಟ್-ಆಫ್&zwnj;ನಲ್ಲಿ 6.35 ಮಿಲಿಯನ್ ಟನ್ ಅದಿರಿದೆ.&lt;/p&gt;&lt;p&gt;40,261 ಟನ್ ಲೋಹ ಲಭ್ಯದಲ್ಲಿ ಯಟ್ರಿಯಮ್ 100 ಪಿಪಿಎಂ ಕಟ್-ಆಫ್&zwnj;ನಲ್ಲಿ 7.18 ಮಿಲಿಯನ್ ಟನ್ ಅದಿರು ಇದ್ದು,1020 ಟನ್ ಶುದ್ಧ ಯಟ್ರಿಯಮ್ ಲೋಹ ಪಡೆಯುವ ಅಂದಾಜಿದೆ.ಒಟ್ಟು 44 ಬೋರ್&zwnj;ವೆಲ್&zwnj;ಗಳನ್ನು ಕೊರೆದು 6979.45 ಮೀಟರ್ ಪರಿಶೀಲನೆ ನಡೆಸಲಾಗಿದೆ. ಜೊತೆಗೆ 40 ಕಂದಕಗಳನ್ನು ತೋಡಿ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಈ ವಿಶೇಷ ಖನಿಜದ ಪ್ರಾಮುಖ್ಯತೆ ಏನು?&lt;/strong&gt;&lt;/h3&gt;&lt;p&gt;ಮೊಬೈಲ್,ಕಂಪ್ಯೂಟರ್,ಎಲೆಕ್ಟ್ರಿಕ್ ವಾಹನದ ಬ್ಯಾಟರಿ, ಗಾಳಿ ವಿದ್ಯುತ್ ಟರ್ಬೈನ್,ರಕ್ಷಣಾ ಉಪಕರಣಗಳು ಮತ್ತು ಉನ್ನತ ತಂತ್ರಜ್ಞಾನ ಉದ್ಯಮಗಳಿಗೆ ಆರ್&zwnj;ಇಇ ಮತ್ತು ಯಟ್ರಿಯಮ್ ಅತ್ಯಗತ್ಯ. ದೇಶದಲ್ಲಿ ಈ ಖನಿಜಗಳ ಆಮದು ಹೆಚ್ಚಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ನಿಕ್ಷೇಪವು ಕಾರ್ಯ ತಂತ್ರಾತ್ಮಕವಾಗಿ ಮಹತ್ವ ಪಡೆದಿದೆ.&lt;/p&gt;&lt;h3&gt;&lt;strong&gt;ಸಂಪರ್ಕ ಮತ್ತು ಭೂ ಸ್ವರೂಪ&lt;/strong&gt;&lt;/h3&gt;&lt;p&gt;ಈ ಬ್ಲಾಕ್ ಬೆಂಗಳೂರಿನಿಂದ 199 ಕಿಮೀ ನೈಋತ್ಯಕ್ಕೆ, ಮೈಸೂರಿನಿಂದ 61 ಕಿಮೀ ದಕ್ಷಿಣಕ್ಕೆ ಇದೆ. ಎನ್&zwnj;ಎಚ್-212 ಮತ್ತು ಎನ್&zwnj;ಎಚ್&zwnj;-766 ರಾಷ್ಟ್ರೀಯ ಹೆದ್ದಾರಿಗಳು ಹತ್ತಿರದಲ್ಲಿವೆ. ಹತ್ತಿರದ ರೈಲು ನಿಲ್ದಾಣ ಚಾಮರಾಜನಗರ 35 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ 850 ಮೀಟರ್&zwnj; ಎತ್ತರದಲ್ಲಿದೆ.&lt;/p&gt;&lt;p&gt;ಈ ಪ್ರದೇಶವು ಸಮತಟ್ಟಾದ ಮತ್ತು ಲಘುವಾಗಿ ಉಬ್ಬು-ತಗ್ಗುಗಳನ್ನು ಹೊಂದಿದೆ. ವಾರ್ಷಿಕ ಸರಾಸರಿ ಮಳೆ 669 ಮಿಮೀ ಮತ್ತು ಉಷ್ಣತೆ 23.7&deg;C ಇದೆ. ಈ ಪ್ರದೇಶದಲ್ಲಿ 6 ದೊಡ್ಡ ಕಾರ್ಬೊನಾಟೈಟ್ ಬಂಡೆಗಳ ಪಟ್ಟಿಗಳಿದ್ದು, ಅಲ್ಲಿಂದಲೇ ಈ ಖನಿಜಗಳು ದೊರೆತಿವೆ ಎಂದು ಜಿಎಸ್&zwnj;ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗುತ್ತಿದೆ.&lt;/p&gt;&lt;p&gt;ಗಣಿಗಾರಿಕೆಗೆ ಅನುಮತಿ ದೊರೆತಲ್ಲಿ ಜಿಲ್ಲೆಗೆ ಉದ್ಯೋಗ ಮತ್ತು ಕಂದಾಯದ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಂತೂ ಇದ್ದೇ ಇದೆ.&lt;/p&gt;&lt;p&gt;ಗುಂಡ್ಲುಪೇಟೆ (ವಿಜಯಪುರ), ಮಲ್ಲಯ್ಯನಪುರ, ಕೂತನೂರು ಬಳಿ ಜಿ-೪ ಸರ್ವೇಯನ್ನು ಭಾರತೀಯ ಭೂ ವೈಜ್ಞಾನಿಕ ಇಲಾಖೆ ನಡೆಸಿದೆ. ಕೆಲ ಮಾದರಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಸಿದೆ. ಜಿಎಸ್&zwnj;ಐ ಭಾರತ ಸರ್ಕಾರಕ್ಕೆ ವರದಿ ನೀಡಿದೆ ಎಂದು ಹಿರಿಯ ಭೂ ವಿಜ್ಞಾನಿ ರಾಜೇಶ್ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-discovered-rare-earth-elements-ree-and-yttrium-mineral-deposits-in-gundlupet-taluk-gst-survey-mrq/articleshow-gsnnqki"/>
        </item>
        <item>
            <title><![CDATA[ನಿಂತು ಹೋಗಿದ್ದ ಬಂಡೀಪುರ-ನಾಗರಹೊಳೆ ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ರಾಜ್ಯ ಸರ್ಕಾರ ಘೋಷಣೆ]]></title>
            <link>https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</link>
            <guid isPermaLink="true">https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</guid>
            <pubDate>Fri, 26 Jun 2026 15:20:19 +0530</pubDate>
            <description><![CDATA[ಕರ್ನಾಟಕ ಸರ್ಕಾರವು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಆರಂಭಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವು ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyqy1v1vekkrwc1j148qahy,imgname-cjjk-1778074453857.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕದ ಹೆಮ್ಮೆಯ ವನ್ಯಜೀವಿ ತಾಣಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇನ್ಮುಂದೆ ಪ್ರವಾಸಿಗರು ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಅನುಭವವನ್ನು ಪಡೆಯಬಹುದು. ತಜ್ಞರು ಮತ್ತು ಉನ್ನತಾಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ವರದಿ ಹಾಗೂ ಶಿಫಾರಸುಗಳನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಈ ಎರಡೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪೂರ್ಣ ಪ್ರಮಾಣದ ಸಫಾರಿ ಆರಂಭಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.&lt;/p&gt;&lt;h2&gt;ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯಕ್ಕೆ ಆದ್ಯತೆ&lt;/h2&gt;&lt;p&gt;ಬಂಡೀಪುರ ಮತ್ತು ನಾಗರಹೊಳೆ ಕಾಡುಗಳ ನೈಸರ್ಗಿಕ ಸಮತೋಲನಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ನಿರ್ಧಾರ ತಳೆಯಲಾಗಿದೆ. ತಾಂತ್ರಿಕ ಸಮಿತಿಯು ನಡೆಸಿರುವ ಕಟ್ಟುನಿಟ್ಟಿನ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಅರಣ್ಯದ &quot;ಸಾಗಣೆ ಸಾಮರ್ಥ್ಯ&quot; (Carrying Capacity) ಆಧರಿಸಿ ಸಫಾರಿಗೆ ಹಸಿರು ನಿಶಾನೆ ನೀಡಲಾಗಿದೆ. ಅಂದರೆ, ಪರಿಸರ ವ್ಯವಸ್ಥೆಯ ಮೇಲಾಗುವ ಪರಿಣಾಮಗಳನ್ನು ಅಳೆದು ತೂಗಿ, ಕೇವಲ ನಿಯಂತ್ರಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಮಾತ್ರ ಜಂಗಲ್ ಸಫಾರಿ ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.&lt;/p&gt;&lt;h2&gt;ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮದ ಸಮನ್ವಯ&lt;/h2&gt;&lt;p&gt;ಕರ್ನಾಟಕವು ದೇಶದಲ್ಲೇ ಪರಿಸರ ಪ್ರವಾಸೋದ್ಯಮದಲ್ಲಿ (Eco-Tourism) ಮುಂಚೂಣಿಯಲ್ಲಿರುವ ರಾಜ್ಯವಾಗಿದೆ.&lt;/p&gt;&lt;p&gt;&lt;strong&gt;ವನ್ಯಜೀವಿಗಳ ರಕ್ಷಣೆ: &lt;/strong&gt;ಸಫಾರಿ ಆರಂಭಿಸಿದರೂ ವನ್ಯಜೀವಿಗಳ ಮುಕ್ತ ಮುಖಾಮುಖಿ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನದ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಪರಿಸರ ವ್ಯವಸ್ಥೆಯ ಸಮಗ್ರತೆ: &lt;/strong&gt;ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನ ಶಾಂತಿ ಕದಡದಂತೆ ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.&lt;/p&gt;&lt;p&gt;&lt;strong&gt;ಉತ್ತಮ ಪ್ರವಾಸಿ ಅನುಭವ: &lt;/strong&gt;ಪ್ರಕೃತಿ ಪ್ರೇಮಿಗಳಿಗೆ ಪ್ರಕೃತಿಯನ್ನು ಹತ್ತಿರದಿಂದ ವೀಕ್ಷಿಸಲು ಹಾಗೂ ಜೀವವೈವಿಧ್ಯದ ಬಗ್ಗೆ ಅರಿವು ಮೂಡಿಸಲು ಇದು ಪೂರಕವಾಗಲಿದೆ.&lt;/p&gt;&lt;h2&gt;ಸ್ಥಳೀಯ ಉದ್ಯೋಗ ಹಾಗೂ ಆರ್ಥಿಕತೆಗೆ ಬೂಸ್ಟರ್ ಡೋಸ್&lt;/h2&gt;&lt;p&gt;ಸರ್ಕಾರದ ಈ ನಿರ್ಧಾರ ಕೇವಲ ಪ್ರವಾಸಿಗರಿಗಷ್ಟೇ ಅಲ್ಲದೆ, ಸ್ಥಳೀಯ ಜನಸಮುದಾಯಗಳಿಗೂ ಹೊಸ ಆಶಾಕಿರಣ ಮೂಡಿಸಿದೆ. ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದರಿಂದ ಸ್ಥಳೀಯರ ಜೀವನೋಪಾಯ ಸುಧಾರಣೆಯಾಗಲಿದೆ. ಗೈಡ್&zwnj;ಗಳು, ಚಾಲಕರು ಮತ್ತು ಅರಣ್ಯ ಅವಲಂಬಿತ ಸಮುದಾಯಗಳಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆರ್ಥಿಕ ಉತ್ತೇಜನವೂ ಆಗಲಿದ್ದು ಹೋಂಸ್ಟೇ, ಹೋಟೆಲ್ ಉದ್ಯಮ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ ಚುರುಕುಗೊಂಡು ಪ್ರಾದೇಶಿಕ ಆರ್ಥಿಕತೆ ಬಲಗೊಳ್ಳಲಿದೆ.&lt;/p&gt;&lt;p&gt;ಕರ್ನಾಟಕವು ಯಾವಾಗಲೂ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಪಾಲಿಸಿಕೊಂಡು ಬಂದಿದೆ. ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವ ಜೊತೆಗೆ, ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರದ ಈ ಪ್ರಕೃತಿ ಸ್ನೇಹಿ ಹಾಗೂ ಜನಪರ ನಿರ್ಧಾರವು ಕರ್ನಾಟಕದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ಪ್ರಾದೇಶಿಕ ಅಭಿವೃದ್ಧಿ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಆಶಯ ಹೊಂದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6"/>
        </item>
        <item>
            <title><![CDATA[Monsoon Failure: ಚಾಮರಾಜನಗರದಲ್ಲಿ ಏನಾಗುತ್ತಿದೆ? 70 ಸಾವಿರ ಹೆಕ್ಟೇರ್ ಭೂಮಿ ಇನ್ನೂ ಖಾಲಿ!]]></title>
            <link>https://kannada.asianetnews.com/karnataka-districts/rain-deficit-pushes-chamarajanagar-farmers-into-crisis-gvd/articleshow-hofcfr7</link>
            <guid isPermaLink="true">https://kannada.asianetnews.com/karnataka-districts/rain-deficit-pushes-chamarajanagar-farmers-into-crisis-gvd/articleshow-hofcfr7</guid>
            <pubDate>Tue, 30 Jun 2026 19:25:55 +0530</pubDate>
            <description><![CDATA[&lt;p&gt;Monsoon Failure: ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwcctxy7kww0a6jscmch8xhz,imgname-xggf-1782827546567.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಜೂ.30): &lt;/strong&gt;ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಪೂರ್ವ ಮುಂಗಾರು ಹಾಗೂ ನೈಋತ್ಯ ಮುಂಗಾರು ಎರಡೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಖಾಲಿ ಬಿದ್ದಿದೆ. ಇನ್ನೊಂದೆಡೆ ಮಳೆ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ರೈತರು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸುತ್ತಿರುವ ಆತಂಕಕಾರಿ ಸ್ಥಿತಿಯ ಕುರಿತಾದ ಒಂದು ವರದಿ ಇಲ್ಲಿದೆ.&lt;/p&gt;&lt;p&gt;ಹೌದು... ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಗುತ್ತಿದ್ದಂತೆ ಹಸಿರಿನಿಂದ ಕಂಗೊಳಿಸಬೇಕಿದ್ದ ಚಾಮರಾಜನಗರ ಜಿಲ್ಲೆಯ ಕೃಷಿ ಭೂಮಿ ಈ ಬಾರಿ ಬಿಸಿಲಿನ ಝಳಕ್ಕೆ ಒಣಗಿ ಬಿರುಕು ಬಿಡುತ್ತಿದೆ. ಮಳೆಯ ನಿರೀಕ್ಷೆಯಲ್ಲಿ ರೈತರು ಭೂಮಿ ಉಳುಮೆ ಮಾಡಿ, ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಆರಂಭದಲ್ಲಿ ಸುರಿದ ಅಲ್ಪಸ್ವಲ್ಪ ಮಳೆಯನ್ನು ನಂಬಿ ಕೆಲ ರೈತರು ಜೋಳ, ರಾಗಿ, ಸೂರ್ಯಕಾಂತಿ, ಅಲಸಂದೆ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದರು.&lt;/p&gt;&lt;p&gt;ಆದರೆ ಬಳಿಕ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆ ಕೊರತೆಯ ಪರಿಣಾಮ ಕೇವಲ ಬೆಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಂತರ್ಜಲ ಮಟ್ಟವೂ ತೀವ್ರವಾಗಿ ಕುಸಿದಿದೆ. ಕೃಷಿ ಪಂಪ್ಸೆಟ್ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೆಲವೆಡೆ ಸಂಪೂರ್ಣವಾಗಿ ನೀರು ನಿಂತಿದೆ. ಕೆರೆ-ಕಟ್ಟೆಗಳು ನೀರಿಲ್ಲದೆ ಬರಿದಾಗುತ್ತಿವೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದ್ದು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಒಂದು ಕಡೆ ಬೆಳೆ ಉಳಿಸಿಕೊಳ್ಳುವ ಚಿಂತೆ, ಮತ್ತೊಂದು ಕಡೆ ಜಾನುವಾರುಗಳ ಪೋಷಣೆಯ ಆತಂಕ ರೈತರನ್ನು ಕಂಗೆಡಿಸಿದೆ ಎಂದು ರೈತ ನಾಗರಾಜು ಅಳಲು ತೊಡಿಕೊಂಡಿದ್ದಾರೆ.&lt;/p&gt;&lt;p&gt;ಜಿಲ್ಲೆಯ ಬಿತ್ತನೆ ಅಂಕಿ-ಅಂಶಗಳು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತವೆ. ಈ ವೇಳೆಗೆ ಜಿಲ್ಲೆಯಲ್ಲಿ ಸುಮಾರು 95 ಸಾವಿರ 779 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಕೊರತೆಯಿಂದ ಕೇವಲ 25 ಸಾವಿರ 951 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶ ಇನ್ನೂ ಖಾಲಿ ಬಿದ್ದಿದೆ. ರೈತರು ಮಳೆಯ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.&lt;/p&gt;&lt;h2&gt;&lt;strong&gt;ಭಾರೀ ಹಾನಿಯಾಗುವ ಸಾಧ್ಯತೆ&lt;/strong&gt;&lt;/h2&gt;&lt;p&gt;ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ಭಾನುಪ್ರಕಾಶ್ ತಿಳಿಸಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಮುಂದಿನ ಒಂದು ವಾರದೊಳಗೆ ಉತ್ತಮ ಮಳೆಯಾಗದಿದ್ದರೆ ಈಗಾಗಲೇ ಬಿತ್ತನೆಯಾಗಿರುವ ಬೆಳೆಗಳಿಗೂ ಭಾರೀ ಹಾನಿಯಾಗುವ ಸಾಧ್ಯತೆ ಇದೆ. ಮಳೆ ತಡವಾಗಿ ಬಂದರೂ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಕೂಡಲೇ ಚಾಮರಾಜನಗರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಬೇಕು. ಜೊತೆಗೆ ಮೇವು ಬ್ಯಾಂಕ್ ತೆರೆಯುವುದು, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/rain-deficit-pushes-chamarajanagar-farmers-into-crisis-gvd/articleshow-hofcfr7"/>
        </item>
        <item>
            <title><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಮಣಿಸಲು ಹೆಚ್‌ಡಿಕೆ Gen-Z ಮಾಸ್ಟರ್ ಪ್ಲಾನ್! ಮೈತ್ರಿ ಅಭ್ಯರ್ಥಿ ಕವೀಶ್ ಗೌಡ?]]></title>
            <link>https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</link>
            <guid isPermaLink="true">https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</guid>
            <pubDate>Sat, 20 Jun 2026 14:17:19 +0530</pubDate>
            <description><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ನಡೆಗೆ ಅಸಮಾಧಾನಗೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, ಅವರಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಯುವ ನಾಯಕ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9prng145w22nbfqvjj5d83w,imgname-hd-kumaraswamy-gt-devegowda-1762774401060.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನ ಹೈಪ್ರೊಫೈಲ್ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಈಗಿನಿಂದಲೇ ರಾಜಕೀಯ ಜಿದ್ದಾಜಿದ್ದಿ ಮತ್ತು ಹೊಸ ತಂತ್ರಗಾರಿಕೆಗಳು ಗರಿಗೆದರಿವೆ. ಜೆಡಿಎಸ್&zwnj;ನಲ್ಲಿ ಭಿನ್ನಮತದ ಮುನ್ಸೂಚನೆ ನೀಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ (GTD) ಅವರಿಗೆ ಶಾಕ್ ನೀಡಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ 'Gen-Z' (ಯುವ ಪೀಳಿಗೆಯ) ಪ್ಲಾನ್ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಯುವ ನಾಯಕ, ಕಳೆದ ಚುನಾವಣೆಯ ರನ್ನರ್-ಅಪ್ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸ್ಕೆಚ್ ಹಾಕುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಜಿಟಿಡಿ ನಡೆಗೆ ಹೆಚ್&zwnj;ಡಿಕೆ ಕೆಂಡ, ಈ ಬಾರಿ ನನ್ನದೇ ಅಂತಿಮ ತೀರ್ಮಾನ!&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಜೆಡಿಎಸ್ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ. ದೇವೇಗೌಡರ ನಡೆ ಕುಮಾರಸ್ವಾಮಿ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. &quot;ಜಿಟಿಡಿ ಈಗಾಗಲೇ ಪಕ್ಷದಿಂದ ಎರಡು ಕಾಲುಗಳನ್ನು ಆಚೆ ಇಟ್ಟಿದ್ದಾರೆ&quot; ಎಂದು ಸಿಟ್ಟು ಹೊರಹಾಕಿರುವ ಹೆಚ್&zwnj;ಡಿಕೆ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಹಂತದಲ್ಲೇ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್.ಡಿ. ದೇವೇಗೌಡರಲ್ಲ, ನನ್ನದೇ ಅಂತಿಮ ತೀರ್ಮಾನ. ಮುಂದಿನ ಚುನಾವಣೆಯಲ್ಲಿ ಹೊಸ ಪೀಳಿಗೆಯ, ಸಕ್ರಿಯವಾಗಿರುವ 'Gen-Z' ಯುವಕರಿಗೆ ಟಿಕೆಟ್ ನೀಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. ಹೆಚ್&zwnj;ಡಿಕೆ ಅವರ ಈ ಆಕ್ರೋಶಭರಿತ ಹೇಳಿಕೆಯ ಬೆನ್ನಲ್ಲೇ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕವೀಶ್ ಗೌಡ ಅವರ ಹೆಸರು ಅತ್ಯಂತ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;ಯಾರು ಈ ಕವೀಶ್ ಗೌಡ?&lt;/h2&gt;&lt;p&gt;ಕವೀಶ್ ಗೌಡ ಮೈಸೂರಿನ ಪ್ರಭಾವಿ ರಾಜಕೀಯ ಮನೆತನದಿಂದ ಬಂದವರು. ಇವರು ಮೈಸೂರು ಭಾಗದ ಕಾಂಗ್ರೆಸ್&zwnj;ನ ಹಿರಿಯ ಹಾಗೂ ಮಾಜಿ ಶಾಸಕ ವಾಸು ಅವರ ಪುತ್ರ. ಆದರೆ, ತಂದೆಯ ಪಕ್ಷದ ಹಾದಿ ಹಿಡಿಯದ ಕವೀಶ್ ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಹಿರಿಯ ನಾಯಕ ಜಿ.ಟಿ. ದೇವೇಗೌಡರ ವಿರುದ್ಧ ಭರ್ಜರಿ ಪೈಪೋಟಿ ನೀಡಿ, 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಇಡೀ ಮೈಸೂರು ರಾಜಕೀಯ ವಲಯ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು.&lt;/p&gt;&lt;h2&gt;ದಳಪತಿಗಳ ಗಾಳ: ಜಿಟಿಡಿ ಕಾಂಗ್ರೆಸ್&zwnj;ಗೆ ಹೋದರೆ, ಕವೀಶ್ ಜೆಡಿಎಸ್&zwnj;ಗೆ?&lt;/h2&gt;&lt;p&gt;ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕವೀಶ್ ಗೌಡ ಕ್ಷೇತ್ರದಲ್ಲಿ ಧೃತಿಗೆಡದೆ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಯುವಕರನ್ನು ಸಂಘಟಿಸುತ್ತಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವಿ ನೆಟ್&zwnj;ವರ್ಕ್ ಸೃಷ್ಟಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ನಾಯಕರು ಈಗ ಕವೀಶ್ ಗೌಡಗೆ ನೇರವಾಗಿಯೇ ಗಾಳ ಹಾಕಿದ್ದಾರೆ.&lt;/p&gt;&lt;p&gt;ರಾಜಕೀಯ ವಲಯದ ಲೆಕ್ಕಾಚಾರಗಳ ಪ್ರಕಾರ, ಒಂದು ವೇಳೆ ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆದು ಅಧಿಕೃತವಾಗಿ ಹಸ್ತ ಪಾಳಯ (ಕಾಂಗ್ರೆಸ್) ಸೇರಿದರೆ, ಕವೀಶ್ ಗೌಡ ಅವರು ಜೆಡಿಎಸ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಗ ಅವರು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಪ್ರಬಲ ಜಂಟಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ.&lt;/p&gt;&lt;h2&gt;ವರ್ಕ್ ಔಟ್ ಆಗುತ್ತಾ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್?&lt;/h2&gt;&lt;p&gt;ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವೈಯಕ್ತಿಕ ವರ್ಚಸ್ಸು ಅಪಾರವಾಗಿದೆ. ಅವರನ್ನು ಅವರದ್ದೇ ಕ್ಷೇತ್ರದಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಹೆಚ್&zwnj;ಡಿಕೆ ಈ ಬಾರಿ 'ವಯಸ್ಸು ಮತ್ತು ಯೌವನ'ದ ಕಾರ್ಡ್ ಪ್ಲೇ ಮಾಡಲು ಹೊರಟಿದ್ದಾರೆ. ಹಿರಿಯ ನಾಯಕನ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಕ್ಲೀನ್ ಇಮೇಜ್ ಹೊಂದಿರುವ ಹಾಗೂ ಒಕ್ಕಲಿಗ ಸಮುದಾಯದ ಯುವ ನಾಯಕನನ್ನು ತಂದು ನಿಲ್ಲಿಸಿದರೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ಪಡೆಯಬಹುದು ಎಂಬುದು ದಳಪತಿಗಳ ಲೆಕ್ಕಾಚಾರ.&lt;/p&gt;&lt;p&gt;ಕವೀಶ್ ಗೌಡ ಅವರ ಯುವ ಶಕ್ತಿ ಮತ್ತು ಮೈತ್ರಿಕೂಟದ ಸಾಂಪ್ರದಾಯಿಕ ಮತಗಳು ಸೇರಿದರೆ ಜಿಟಿಡಿಗೆ ಪ್ರಬಲ ಪೆಟ್ಟು ನೀಡಬಹುದು ಎಂಬ ಹೈಟೆಕ್ ಪ್ಲಾನ್ ಚಾಮುಂಡೇಶ್ವರಿ ಅಖಾಡವನ್ನು ಈಗಿನಿಂದಲೇ ಕಾವೇರುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ದಳಪತಿಗಳ ರಾಜಕೀಯ ತಂತ್ರಗಾರಿಕೆ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s"/>
        </item>
        <item>
            <title><![CDATA['ಬೇಲ್‌ ಕೊಡದಿದ್ದರೆ ಬದುಕೋಕೆ ಬಿಡಲ್ಲ..' ಚಾಮರಾಜನಗರ ಜಡ್ಜ್‌ಗೆ ಜೀವ ಬೆದರಿಕೆ!]]></title>
            <link>https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1</link>
            <guid isPermaLink="true">https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1</guid>
            <pubDate>Sat, 11 Jul 2026 06:30:02 +0530</pubDate>
            <description><![CDATA[ಚಾಮರಾಜನಗರ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಪ್ರಕರಣವೊಂದರ ಆರೋಪಿಗೆ ಜಾಮೀನು ನೀಡುವಂತೆ ಒತ್ತಾಯಿಸಿ ಕೊಲೆ ಬೆದರಿಕೆ ಹಾಕಲಾಗಿದೆ. ಇಂಟರ್ನೆಟ್&zwnj; ಕರೆ ಮೂಲಕ ಎಚ್ಚರಿಕೆ ನೀಡಿರುವ ಅಪರಿಚಿತ ವ್ಯಕ್ತಿ, ಜಾಮೀನು ನಿರಾಕರಿಸಿದರೆ ಮುಂದಿನ ಟಾರ್ಗೆಟ್ ನೀವೇ ಎಂದು ಹೇಳಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx7apej4gwhc24ksdc4g11fs,imgname-----------------------2026-07-11t061341.459-1783731272260.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜು.11): &lt;/strong&gt;ನ್ಯಾಯಾಲಯಕ್ಕೆ ಹುಸಿ ಬಾಂಬ್&zwnj; ಬೆದರಿಕೆ ಸಂದೇಶಗಳ ಹಾವಳಿ ಹೆಚ್ಚಾಗಿರುವ ನಡುವೆಯೇ, ಈಗ ಕಿಡಿಗೇಡಿಗಳು ನೇರವಾಗಿ ಜಿಲ್ಲಾ ಕೋರ್ಟ್&zwnj;ನ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ.&lt;/p&gt;&lt;h2&gt;ಬೇಲ್ ಕೊಡದಿದ್ರೆ NEXT ಟಾರ್ಗೆಟ್ ನೀನೇ!&lt;/h2&gt;&lt;p&gt;ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಂತೆ ನೇರವಾಗಿ ನ್ಯಾಯಾಧೀಶರಿಗೆ ಫೋನ್&zwnj; ಕರೆ ಮಾಡಿ ಎಚ್ಚರಿಸಿರುವ ಘಟನೆ ಚಾಮರಾಜನಗರದಲ್ಲಿ ಶುಕ್ರವಾರ ನಡೆದಿದೆ. ಶುಕ್ರವಾರ ಬೆಳಗ್ಗೆ ನ್ಯಾಯಾಲಯದ ಕಲಾಪ ನಡೆಯುತ್ತಿರುವಾಗಲೇ ಬೆದರಿಕೆ ಕರೆ ಬಂದಿದೆ. ಅನಾಮಧೇಯ ವ್ಯಕ್ತಿಯೋರ್ವ 41000697200 ಸಂಖ್ಯೆಯಿಂದ ನ್ಯಾಯಾಧೀಶರ ಮೊಬೈಲ್&zwnj;ಗೆ ಇಂಟರ್ನೆಟ್&zwnj; ಕರೆ ಮಾಡಿದ್ದಾನೆ. ಅದರಲ್ಲಿ &lsquo;ಅಪರಾಧ ಸಂಖ್ಯೆ 144/2026 ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಬೇಕು&rsquo; ಎಂದು ಒತ್ತಾಯಿಸಿದ್ದು, &lsquo;ಒಂದು ವೇಳೆ ಜಾಮೀನು ತಿರಸ್ಕರಿಸಿದರೆ ಮುಂದಿನ ಟಾರ್ಗೆಟ್&zwnj; ನೀನೇ. ನಿನ್ನನ್ನು ಬದುಕಲು ಬಿಡಲ್ಲ&rsquo; ಎಂದು ಜೀವ ಬೆದರಿಕೆ ಹಾಕಿದ್ದಾನೆ.&lt;/p&gt;&lt;h3&gt;ಎಫ್&zwnj;ಐಆರ್ ದಾಖಲು&lt;/h3&gt;&lt;p&gt;ಜಡ್ಜ್&zwnj;ಗೆ ನೇರವಾಗಿ ಬೆದರಿಕೆ ಹಾಕಿರುವುದು ಆತಂಕ ಮೂಡಿಸುವಂತದ್ದು. ಸದ್ಯ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಡ್ಜ್&zwnj;ಗೆ ಹೆಚ್ಚಿನ ಪೊಲೀಸರು ಭದ್ರತೆ ಒದಗಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-district-court-judge-receives-death-threat-to-grant-bail-to-accused-in-criminal-case-fir-rav/articleshow-lzkdvx1"/>
        </item>
        <item>
            <title><![CDATA[ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ;  ರಾಜರ ಬೇಟೆಯ ಪರಾಕ್ರಮ ಅನಾವರಣ]]></title>
            <link>https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr</link>
            <guid isPermaLink="true">https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr</guid>
            <pubDate>Thu, 18 Jun 2026 08:45:07 +0530</pubDate>
            <description><![CDATA[&lt;p&gt;ಪುಲಸಾನಿಒಡ್ಡು ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣೆ ವೇಳೆ ವಿಜಯನಗರ ಶೈಲಿಯ ಅಪರೂಪದ ವೀರರಗುಡಿಯೊಂದು ಪತ್ತೆಯಾಗಿದೆ. ಈ ದೇವಾಲಯವು ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳನ್ನು ಹೊಂದಿದ್ದು, 16-17ನೇ ಶತಮಾನದ ಇತಿಹಾಸ ಮತ್ತು ಅಂದಿನ ರಾಜರ ಬೇಟೆಯ ಪರಾಕ್ರಮವನ್ನು ಅನಾವರಣಗೊಳಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcbb8pjghrnspjrb6sncyq7,imgname-temple-1781752242898.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ: &lt;/strong&gt;ಪುರಾತತ್ವ ಇಲಾಖೆಯ ಗ್ರಾಮವಾರು ಸರ್ವೆ ಕಾರ್ಯದ ವೇಳೆ ತಾಲೂಕಿನ ಹಂಪಸಂದ್ರ ಗ್ರಾಪಂಗೆ ಸೇರಿದ ಪುಲಸಾನಿಒಡ್ಡು ಗ್ರಾಮದಲ್ಲಿ ವಿಶೇಷವಾದ ವೀರರಗುಡಿ ಪತ್ತೆಯಾಗಿದೆ. ಇದರ ಶಿಲ್ಪಕಲೆ, ವಾಸ್ತುಶೈಲಿ ಹಾಗೂ ವೀರಗಲ್ಲುಗಳು ವಿಜಯನಗರ ಕಾಲದ ಇತಿಹಾಸವನ್ನು ಅನಾವರಣಗೊಳಿಸುತ್ತಿವೆ. ಇತಿಹಾಸಕಾರರಾದ ಕೆ. ಧನಪಾಲ್ ಹಾಗೂ ತ್ಯಾಗರಾಜ್ ಅವರು ಈ ಸ್ಮಾರಕವನ್ನು ಅಧ್ಯಯನ ನಡೆಸಿ ಮಹತ್ವದ ಮಾಹಿತಿಗಳನ್ನು ಹೊರತಂದಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ವೀರರಗುಡಿಗಳನ್ನು ಕಲ್ಲಿನಿಂದ ನಿರ್ಮಿಸಿದ ಸಣ್ಣ ಮಂಟಪಗಳ ರೂಪದಲ್ಲಿ ಹೊಲಗಳಲ್ಲಿ ಅಥವಾ ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ವೀರರಗುಡಿ ಊರಿನ ಮಧ್ಯದಲ್ಲಿಯೇ ಇರುವುದು ವಿಶೇಷವಾಗಿದೆ.&lt;/p&gt;&lt;p&gt;ಈ ವೀರರಗುಡಿಯ ದೇವಾಲಯ ರಚನೆಯು ವಿಜಯನಗರ ಶೈಲಿಯನ್ನು ಹೊಂದಿದ್ದು, ಮುಂಭಾಗದ ಮಂಟಪದಲ್ಲಿ ವಿಜಯನಗರ ಕಾಲದ ಯಾಳಿ ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ, ಸುಂದರ ನರ್ತಕಿಯರ ಎರಡು ಶಿಲ್ಪಗಳೂ ಕಂಡುಬರುತ್ತವೆ. ಈ ನರ್ತಕಿಯರು ನೆರಿಗೆಯ ವಸ್ತ್ರ ಧರಿಸಿದ್ದು, ಒಂದು ಶಿಲ್ಪದಲ್ಲಿ ಸ್ತನಪಟ್ಟಿಕೆಯನ್ನು ಧರಿಸಿರುವಂತೆ ಹಾಗೂ ಇನ್ನೊಂದು ಶಿಲ್ಪದಲ್ಲಿ ಅರೆನಗ್ನವಾಗಿ ಕೆತ್ತಲಾಗಿದೆ. ಈ ಶಿಲ್ಪಗಳು ಭಕ್ತಾದಿಗಳನ್ನು ಸ್ವಾಗತಿಸುವ ರೀತಿಯಲ್ಲಿ ರೂಪುಗೊಂಡಿವೆ.&lt;/p&gt;&lt;h2&gt;&lt;strong&gt;ಸುಮಾರು ಎಂಟು ಸ್ಮಾರಕ ಶಿಲ್ಪಗಳು&lt;/strong&gt;&lt;/h2&gt;&lt;p&gt;ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ವಿಶಾಲವಾದ ಗರ್ಭಗುಡಿಯಲ್ಲಿ ಸುಮಾರು ಎಂಟು ಸ್ಮಾರಕ ಶಿಲ್ಪಗಳಿದ್ದು, ಅವೆಲ್ಲವೂ ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳಾಗಿವೆ. ಒಂದು ಶಿಲ್ಪದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜನು ತನ್ನ ನಾಯಿಯೊಂದಿಗೆ ಬೇಟೆಗೆ ತೆರಳಿ ಹುಲಿಯನ್ನು ಬೇಟೆಯಾಡಿದ ದೃಶ್ಯವನ್ನು ಚಿತ್ರಿಸಲಾಗಿದೆ. ಕೆಲವು ಶಿಲ್ಪಗಳಲ್ಲಿ ರಾಜನೊಂದಿಗೆ ಸೇವಕರೂ ಬೇಟೆಗೆ ತೆರಳಿರುವುದನ್ನು ಕಾಣಬಹುದು. ಆ ಕಾಲದಲ್ಲಿ ಈ ಪ್ರದೇಶವನ್ನು ಆಳಿದ ರಾಜರು ಅಥವಾ ವಿಜಯನಗರ ಅರಸರ ಸಾಮಂತರಾಗಿದ್ದ ಪಾಳೇಗಾರರ ವಂಶದವರೇ ಬೇಟೆಗೆ ತೆರಳಿದ್ದರೆಂಬ ಸಾಧ್ಯತೆಯಿದೆ ಎಂದು ಈ ಕುರಿತು ಅಧ್ಯಯನ ನಡೆಸಿದ ಕೆ. ಧನಪಾಲ್ ತಿಳಿಸಿದ್ದಾರೆ.&lt;/p&gt;&lt;p&gt;ಈ ಬೇಟೆಗಳಲ್ಲಿ ಅನೇಕ ವೀರರು ಮಡಿದಿರುವ ಸಾಧ್ಯತೆಯಿದ್ದು, ನಂತರ ಅವರ ಪತ್ನಿಯರು ಸತಿಯಾದಿರಬಹುದೆಂಬ ಊಹೆಯೂ ಇದೆ. ಒಂದು ಶಿಲ್ಪದಲ್ಲಿ ಶಾಸನವಿದ್ದು, ಅದರ ಲಿಪಿಯ ಆಧಾರದ ಮೇಲೆ ಈ ಶಿಲ್ಪಗಳು ಸುಮಾರು 16-17ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ ವೀರನ ಹೆಸರು &lsquo;ಎರಕದುರಯ್ಯ&rsquo; ಎಂದು ತಿಳಿದುಬರುವ ಸಾಧ್ಯತೆಯಿದೆ.&lt;/p&gt;&lt;p&gt;ಈಗಿರುವಂತೆ ಆಗಲೂ ಈ ಪ್ರದೇಶವು ದಟ್ಟ ಕಾಡಿನಿಂದ ಕೂಡಿದ್ದು, ಕ್ರೂರ ಪ್ರಾಣಿಗಳ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ಸ್ವತಃ ರಾಜರೇ ಬೇಟೆಗೆ ತೆರಳಿ ಮಡಿದಿರಬಹುದೆಂಬ ಸಾಧ್ಯತೆಯಿದೆ. ಅಂತಹ ವೀರರಿಗೆ ದೇವರ ಸ್ಥಾನಮಾನ ನೀಡಿ ಈ ದೇವಸ್ಥಾನವನ್ನು ನಿರ್ಮಿಸಿರುವ ಸಾಧ್ಯತೆಯೂ ಇದೆ. ಎಲ್ಲಾ ಶಿಲ್ಪಗಳಲ್ಲಿಯೂ ಕೈಲಾಸದ ಚಿತ್ರಣವಿರುವುದರಿಂದ ಅವರು ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆಂಬುದು ತಿಳಿದುಬರುತ್ತದೆ.&lt;/p&gt;&lt;h3&gt;&lt;strong&gt;ದೇವಸ್ಥಾನದ ಕುರಿತು ಜಾನಪದ ಕಥೆ&lt;/strong&gt;&lt;/h3&gt;&lt;p&gt;ಈ ಗ್ರಾಮದಲ್ಲಿ ಈ ದೇವಸ್ಥಾನದ ಕುರಿತು ಒಂದು ಜಾನಪದ ಕಥೆಯೂ ಜನಪ್ರಿಯವಾಗಿದೆ. ಹಿಂದೆ ಪುಲಸಾನಿ ಎಂಬ ಮಹಿಳೆ ಇಲ್ಲಿಂದ ಲೇಪಾಕ್ಷಿಗೆ ಬುಟ್ಟಿಯಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದಳು. ಅಲ್ಲಿಂದ ಹಿಂದಿರುಗುವಾಗ ಈ ಕಲ್ಲುಗಳನ್ನು ಒಂದೊಂದಾಗಿ ತಂದು ಇಲ್ಲಿ ಮಂದಿರವನ್ನು ನಿರ್ಮಿಸಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಾರೆ.&lt;/p&gt;&lt;p&gt;ಈ ಕ್ಷೇತ್ರ ಕಾರ್ಯದಲ್ಲಿ ಗ್ರಾಮಸ್ಥರಾದ ಕಿಶೋರ್, ಚಂದು, ಜಸ್ವಂತ್, ಸೋಮು, ಕುಮಾರ, ಗಂಗಾಧರಪ್ಪ ಹಾಗೂ ನಾರಾಯಣಸ್ವಾಮಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr"/>
        </item>
        <item>
            <title><![CDATA[ಸರ್ವರ್ ಸಮಸ್ಯೆ, ಒಟಿಪಿ ವಿಳಂಬ: ಕಾಗದರಹಿತ ನೋಂದಣಿ ವ್ಯವಸ್ಥೆಗೆ ಸಾರ್ವಜನಿಕರ ಅಸಮಾಧಾನ]]></title>
            <link>https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</link>
            <guid isPermaLink="true">https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3</guid>
            <pubDate>Fri, 10 Jul 2026 19:46:07 +0530</pubDate>
            <description><![CDATA[&lt;p&gt;Paperless Registration: ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx663tnhc7y7py0kd6fm3rns,imgname-ch-1783692913329.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಜು.10): &lt;/strong&gt;ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಆರೂ ನೋಂದಣಿ ಕಚೇರಿಗಳಲ್ಲಿ ಏಪ್ರಿಲ್ 30 ರಿಂದ ಕಾಗದರಹಿತ (Paperless) ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೆ ಪಾರದರ್ಶಕ ಮತ್ತು ಸಮಯ ಉಳಿತಾಯದ ಉದ್ದೇಶದಿಂದ ತಂದ ಈ ಯೋಜನೆ ಈಗ ತಾಂತ್ರಿಕ ದೋಷಗಳ ಗೂಡಾಗಿದೆ. ಸಾರ್ವಜನಿಕರು ಕೆಲಸ ಕಾರ್ಯ ಬಿಟ್ಟು ಕಚೇರಿಗಳ ಮುಂದೆ ದಿನಗಟ್ಟಲೆ ಕಾಯುವಂತಾಗಿದೆ. ಈ ಕುರಿತು ಒಂದು ವರದಿ ನೋಡಿ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಜಾರಿಗೊಳಿಸಲಾಗಿರುವ ಆಧಾರ್ ಆಧಾರಿತ ಇ-ಸೈನ್ ಮತ್ತು ಡಿಜಿಟಲ್ ಸಹಿಯ ಕಾಗದರಹಿತ ನೋಂದಣಿ ವ್ಯವಸ್ಥೆ ಸಾರ್ವಜನಿಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ತಿ ಮಾರಾಟ-ಖರೀದಿ ನೋಂದಣಿ, ಸೇಲ್ ಡೀಡ್, ಮಾರ್ಟ್ಗೇಜ್ ಸೇರಿದಂತೆ ಪ್ರಮುಖ ನೊಂದಣಿ ಪ್ರಕ್ರಿಯೆಗಳಿಗೆ ಕಾವೇರಿ 2.0 ಪೋರ್ಟಲ್ ಬಳಸಲಾಗುತ್ತಿದ್ದು, ಇದು ಪದೇ ಪದೇ ಕೈಕೊಡುತ್ತಿದೆ. ಈ ಮೊದಲು ಕೇವಲ ಒಂದು ಗಂಟೆಯಲ್ಲಿ ಮುಗಿಯುತ್ತಿದ್ದ ನೋಂದಣಿ ಕಾರ್ಯಕ್ಕೆ ಈಗ ಮೂರ್ನಾಲ್ಕು ಗಂಟೆಗಳು, ಕೆಲವೊಮ್ಮೆ ಮೂರ್ನಾಲ್ಕು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಮುಖ್ಯವಾಗಿ ನೋಂದಣಿ ಶುಲ್ಕ ಪಾವತಿಸಲು ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಲು ಸಕಾಲಕ್ಕೆ ಒಟಿಪಿ (OTP) ಬರುವುದೇ ಇಲ್ಲ. ಇದರ ಜೊತೆಗೆ ಸರ್ವರ್ ಡೌನ್ ಸಮಸ್ಯೆ ಸಾಮಾನ್ಯವಾಗಿದೆ. ಇನ್ನು ವಯಸ್ಸಾದವರ ಪಾಡಂತು ಹೇಳತೀರದಾಗಿದೆ. ನೊಂದಣಿ ಪ್ರಕ್ರಯೆಗೆ ಮೂರು ಬಾರಿ ತಂಬ್ (Thumb) ನೀಡಬೇಕಾದ ನಿಯಮವಿದ್ದು, ಬಯೋಮೆಟ್ರಿಕ್ ಸರಿಯಾಗಿ ಮ್ಯಾಚ್ ಆಗದೆ ವೃದ್ಧರು ಇಡೀ ದಿನ ಕಚೇರಿಯಲ್ಲೇ ಕೂರುವಂತಾಗಿದೆ. ಸರ್ಕಾರ ಪರಿಸರಸ್ನೇಹಿ ಅಂತ ಹೇಳಿ ಈ ಕಾಗದರಹಿತ ವ್ಯವಸ್ಥೆ ತಂದಿದ್ದೇನೋ ಸರಿ.&lt;/p&gt;&lt;p&gt;ಆದರೆ ತಾಂತ್ರಿಕವಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಕಾವೇರಿ 2.0 ಸರ್ವರ್ ಯಾವಾಗಲೂ ಡೌನ್ ಇರುತ್ತೆ, ಒಟಿಪಿ ಬರೋದೇ ಇಲ್ಲ. ದಿನವಿಡೀ ಖರೀದಿದಾರರು, ಮಾರಾಟಗಾರರು ಕೆಲಸ ಬಿಟ್ಟು ಇಲ್ಲೇ ಕಾಯ್ಬೇಕು. ಕಾಗದ ಇದ್ದಾಗಲೇ ಕೆಲಸ ಬೇಗ ಆಗ್ತಿತ್ತು ಎನ್ನುತ್ತಾರೆ. ಇಷ್ಟೆಲ್ಲಾ ತಾಂತ್ರಿಕ ಅಡಚಣೆಗಳಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರೂ, ನೋಂದಣಿ ಅಧಿಕಾರಿಗಳ ಸಮರ್ಥನೆ ಮಾತ್ರ ಬೇರೆಯದೇ ಆಗಿದೆ. ಈ ಹೊಸ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.&lt;/p&gt;&lt;h2&gt;&lt;strong&gt;ಯಾವುದೇ ವ್ಯತ್ಯಾಸವಾಗಿಲ್ಲ&lt;/strong&gt;&lt;/h2&gt;&lt;p&gt;ಈ ಹಿಂದಿನ ನೋಂದಣಿ ಅಂಕಿಅಂಶಗಳಿಗೂ ಮತ್ತು ಇಂದಿನ ಅಂಕಿಅಂಶಗಳಿಗೂ ಯಾವುದೇ ವ್ಯತ್ಯಾಸವಾಗಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಪರಿಸರಸ್ನೇಹಿ ಹಾಗು ಪಾರದರ್ಶಕತೆಯ ಹೆಸರಿನಲ್ಲಿ ತಂದ ತಂತ್ರಜ್ಞಾನ ಸರಿಯಾದ ಸಿದ್ಧತೆ ಇಲ್ಲದ ಕಾರಣ ಜನರಿಗೆ ಪಜೀತಿಯಾಗಿ ಪರಿಣಮಿಸಿದೆ. ಅಧಿಕಾರಿಗಳು ಕೇವಲ ಅಂಕಿಅಂಶಗಳ ಸಮರ್ಥನೆ ಮಾಡಿಕೊಳ್ಳುವುದನ್ನು ತಾಂತ್ರಿಕ ತೊಂದರೆಗಳ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-paperless-registration-system-kaveri-2-0-problem-gvd/articleshow-oks6fn3"/>
        </item>
        <item>
            <title><![CDATA[Karnataka Police: ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ: ಕಾರಣ  ₹3 ಲಕ್ಷ ಹಣ!]]></title>
            <link>https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3</link>
            <guid isPermaLink="true">https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3</guid>
            <pubDate>Sat, 20 Jun 2026 23:03:04 +0530</pubDate>
            <description><![CDATA[&lt;p&gt;Begur Police: ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್&zwnj;ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvk1fb5j7b880bq3sx5zxhjh,imgname-jij-1781976771762.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುಂಡ್ಲುಪೇಟೆ (ಜೂ.20): &lt;/strong&gt;ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್&zwnj;ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.&lt;/p&gt;&lt;p&gt;ಬೆಂಡಗಳ್ಳಿ ಬಳಿಯ ಎಂಆರ್&zwnj;ಪಿಎಲ್&zwnj; ಹೊಸ ಪೆಟ್ರೋಲ್&zwnj; ಬಂಕ್&zwnj; ಬಳಿ ಬರಟಹಳ್ಳಿ ಗ್ರಾಮದ ಯುವಕ, ಖಾಸಗಿ ಫೈನಾನ್ಸ್&zwnj; ಕಂಪನಿಯಲ್ಲಿ ನೌಕರ ಮಂಜುನಾಥ್&zwnj; ಬೈಕ್&zwnj;ನಿಂದ ಬಿದ್ದೋ, ಅಪರಿಚಿತ ವಾಹನ ಡಿಕ್ಕಿ ಹೊಡೆದೋ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದ ಬುಧವಾರ ಬೆಳಗ್ಗೆ ಬಿದ್ದಿದ್ದ. ಅಪಘಾತದ ವಿಷಯ ತಿಳಿದ ಬೇಗೂರು ಠಾಣೆಯ ಮುಖ್ಯ ಪೇದೆ ದಿವಾಕರ್&zwnj;, ಪುಟ್ಟರಾಜು, ಸ್ಥಳಕ್ಕಾಗಮಿಸಿ ಮೊದಲು ಗಾಯಾಳು ಮಂಜುನಾಥ್&zwnj;ರನ್ನು ಆ್ಯಂಬುಲೆನ್ಸ್&zwnj; ಮೂಲಕ ಗುಂಡ್ಲುಪೇಟೆ ಆಸ್ಪತ್ರೆಗೆ ಕಳುಹಿಸಿದರು.&lt;/p&gt;&lt;p&gt;ಬಳಿಕ ಗಾಯಾಳುವಿನ ವಿಳಾಸ ಪತ್ತೆಗೆ ಬೈಕ್&zwnj;ನಿಂದ ಬಿದ್ದಿದ್ದ ಬ್ಯಾಗ್&zwnj; ನೋಡಿದಾಗ ಬ್ಯಾಗ್&zwnj;ನಲ್ಲಿ 3 ಲಕ್ಷ ಹಣವಿತ್ತು. ಮಂಜುನಾಥ್&zwnj; ಅವರ ವಿಳಾಸ ಪತ್ತೆಯಾದ ಬಳಿಕ ಗಾಯಾಳು ಮಂಜುನಾಥ್&zwnj;ರ ತಂದೆ ತಾಯಿಯನ್ನು ಠಾಣೆಗೆ ಕರೆಸಿ ಬರಟಹಳ್ಳಿ ಗ್ರಾಮದ ಎಎಸ್&zwnj;ಐ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬ್ಯಾಗ್&zwnj;ನಲ್ಲಿ ದೊರೆತ 3 ಲಕ್ಷ ರು. ಹಣ ಹಾಗೂ ಮೊಬೈಲ್&zwnj; ಅನ್ನು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದು ಇತರೆ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಪೊಲೀಸರು ಎಂದರೆ ಮೂಗು ಮುರಿಯುವ ಕಾಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳು ಬ್ಯಾಗ್&zwnj;ನಲ್ಲಿದ್ದಷ್ಟು ಹಣ ಹಾಗೂ ಮೊಬೈಲ್&zwnj;ನನ್ನು ಹಿಂದಿರುಗಿಸುವ ಮೂಲಕ ಮುಖ್ಯ ಪೇದೆಗಳಿಬ್ಬರು ಕರ್ತವ್ಯ ಪ್ರೇಮ ಮೆರೆದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಬೈಕ್&zwnj;ನಲ್ಲಿ ಬಿದ್ದು ಗಾಯಗೊಂಡ ಗಾಯಾಳು ಸದ್ಯಕ್ಕೀಗ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3"/>
        </item>
        <item>
            <title><![CDATA[Nagamale Darshan: ಎರಡು ಚಿರತೆಗಳು ಸೆರೆ ಸಿಕ್ಕರೂ ನಾಗಮಲೆ ದರ್ಶನಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ?]]></title>
            <link>https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc</link>
            <guid isPermaLink="true">https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc</guid>
            <pubDate>Tue, 23 Jun 2026 17:39:22 +0530</pubDate>
            <description><![CDATA[&lt;p&gt;Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt5yf7je94nghd5vdzrk6y2,imgname-nag--1--1782216342770.jpeg" type="image/jpeg" height="390" width="690"/>
            <content:encoded><![CDATA[&lt;p&gt;Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಾಮರಾಜನಗರ (ಜೂ.23): &lt;/strong&gt;ಅದು ಕಾಡೊಳಗಿನ ಪ್ರದೇಶ, ನಿತ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದವರು ನಾಗಮಲೆಗೂ ಹೋಗೋದು ಕೂಡ ಪ್ರತೀತಿ. ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೇದುರೆ ಚಿರತೆ ಎಳೆದೊಯ್ದು ಕೊಂದು ಹಾಕಿತು. ಈ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ಬ್ರೇಕ್ ಹಾಕಿದೆ. ಇನ್ನೂ ಅವಕಾಶ ಕೊಡದ ಹಿನ್ನಲೆ ನಾಗಮಲೆ ದರ್ಶನ ಭಾಗ್ಯ ಯಾವಾಗ ಎಂದು ಭಕ್ತರು ಪ್ರಶ್ನೆ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..&lt;/p&gt;&lt;img&gt;&lt;p&gt;ಅದು ಕೋಟ್ಯಾಂತರ ಭಕ್ತರ ಆರಾಧ್ಯ ದೈವನ ಸನ್ನಿಧಿ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗೆ ಹೋಗಿ ಪೂಜೆ ಮಾಡಿ ಬರೋದು ಪ್ರತೀತಿ. ಬಹಳ ಕಾಲದಿಂದಲೂ ಈ ಪದ್ದತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ. ಆದ್ರೆ ಕಳೆದ ತಿಂಗಳು ಮಾದಪ್ಪನ ಬೆಟ್ಟದಿಂದ ನಾಗಮಲೆಗೆ ದರ್ಶನಕ್ಕೆ ಹೋಗ್ತಿದ್ದ ಬೆಂಗಳೂರು ಮೂಲದ ಪೋಷಕರ ಕಣ್ಣೇದುರೆ ಚಿರತೆ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿತ್ತು. ತದಾನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗಮಲೆ ಹೋಗಲೂ ತಾತ್ಕಾಲಿಕ ಬ್ರೇಕ್ ಹಾಕಿದರು. ಈ ಘಟನೆ ನಡೆದು ಒಂದು ತಿಂಗಳು ಕಳೆದು ಹೋಗಿದೆ.&lt;/p&gt;&lt;img&gt;&lt;p&gt;ಅಲ್ಲದೇ ಮಹದೇಶ್ವರ ಬೆಟ್ಟದ ನಾಗಮಲೆ ಹಾಗೂ ಬಾಲಕನನ್ನು ಕೊಂದ ಸ್ಥಳದಲ್ಲೇ ಎರಡು ಚಿರತೆ ಕೂಡ ಸೆರೆಸಿಕ್ಕಿವೆ. ಆದರೂ ಕೂಡ ಮಾದಪ್ಪನ ಭಕ್ತರಿಗೆ ನಾಗಮಲೆಗೆ ದರ್ಶನಕ್ಕೆ ಹೋಗಲು ಅವಕಾಶ ಕೊಡ್ತಿಲ್ಲ. ಬಂದವರು ಬರಿಗೈಯಲ್ಲಿ ವಾಪಾಸ್ ಆಗುವ ಪರಿಸ್ಥಿತಿಯಿದೆ. ಇನ್ನೂ ನಾಗಮಲೆಗೆ ಪ್ರವೇಶಾವಕಾಶ ಕಲ್ಪಿಸುವ ಬಗ್ಗೆ ಅರಣ್ಯ ಇಲಾಖೆ ಚಂತನೆ ನಡೆಸ್ತಿದೆ. ಈ ಮಧ್ಯೆ ಎರಡು ಚಿರತೆ ಸಿಕ್ಕ ಬಳಿಕವೂ ಇದು ಅರಣ್ಯ ಪ್ರದೇಶವಾದ ಹಿನ್ನಲೆ ಹುಲಿ, ಚಿರತೆ ಸಂಚಾರವಿದೆ. ಮತ್ತೇ ಪ್ರವೇಶಾವಕಾಶ ಕೊಟ್ಟರೆ ಭಕ್ತರಿಗೆ ತೊಂದರೆಯಾಗುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆದ್ರೆ ಅರಣ್ಯಾಧಿಕಾರಿಗಳು ಕಾವೇರಿ ವನ್ಯಧಾಮ ಹಾಗೂ ಮಲೆ ಮಹದೇಶ್ವರ ವನ್ಯಧಾಮ ಇಬ್ಬರು ಸೇರಿ ನಾಗಮಲೆಗೆ ಪ್ರವೇಶ ಕೊಡುವ ಬಗ್ಗೆ ಹಾಗೂ ಯಾವೆಲ್ಲಾ ಮಾರ್ಗದರ್ಶಿ ಗಳನ್ನು ರೂಪಿಸಬೇಕು ಅನ್ನೋ ಬಗ್ಗೆ ಶೀಘ್ರವೇ ಸಭೆ ನಡೆಸಿ ಅವಕಾಶ ಕೊಡಲಾಗುತ್ತದೆ ಅನ್ನೋ ಉತ್ತರ ಕೊಡ್ತಿದ್ದಾರೆ. ಒಟ್ನಲ್ಲಿ ದೇವರ ದರ್ಶನಕ್ಕೆ ಹೋಗ್ತಿದ್ದ ಬಾಲಕನನ್ನು ಚಿರತೆ ಪೋಷಕರ ಕಣ್ಣೆದುರೇ ಕೊಂದು ಹಾಕಿದ ಬಳಿಕ ಈ ಅರಣ್ಯ ಪ್ರದೇಶದಲ್ಲಿ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಎದುರಾಗಿದೆ. ನಾಗಮಲೆಗೆ ಹೋಗುವ ಭಕ್ತರು ಬಂದು ವಾಪಾಸ್ ಆಗ್ತಿದ್ದು, ಯಾವ ಗೈಡ್ ಲೈನ್ಸ್ ರೂಪಿಸಿ ನಾಗಮಲೆಗೆ ಅವಕಾಶ ಕೊಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc"/>
        </item>
        <item>
            <title><![CDATA[ರೈಲ್ವೆ ಅಂಡರ್ ಪಾಸ್‌ಗಾಗಿ ಹಕ್ಕೊತ್ತಾಯ: ರೈತರು ಹಾಗೂ ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ!]]></title>
            <link>https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t</link>
            <guid isPermaLink="true">https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t</guid>
            <pubDate>Mon, 06 Jul 2026 19:33:07 +0530</pubDate>
            <description><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvvjxk8tv2avhe5ry2rn7ek,imgname-vjvj-1783346329192.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.06): &lt;/strong&gt;ಚಾಮರಾಜನಗರ ಜಿಲ್ಲೆಯ ಪಣ್ಯದಹುಂಡಿ ಬಳಿ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿವಾದಕ್ಕೆ ಗುರಿಯಾಗಿದೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿ ವಿರೋಧ ವ್ಯಕ್ತಪಡಿಸಿದರೂ ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಕಾಮಗಾರಿ ಆರಂಭಿಸಲಾಗಿದೆ. ಅಷ್ಟಕ್ಕು ಗ್ರಾಮಸ್ಥರ ವಿರೋಧಕ್ಕೆ ಕಾರಣವೇನು ಅವರ ಒತ್ತಾಯವೇನು ಈ ಸ್ಟೋರಿ ನೋಡಿ.&lt;/p&gt;&lt;p&gt;ಹೌದು, ಚಾಮರಾಜನಗರ-ಮೈಸೂರು ರಾಜ್ಯ ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಗ್ರಾಮದಲ್ಲಿ ಭಾರೀ ಹೈಡ್ರಾಮವೇ ಸೃಷ್ಟಿಯಾಗಿದೆ. ಈ ರಸ್ತೆಯ ನಡುವೆ ಇರುವ ರೈಲು ಮಾರ್ಗದ ಮೇಲೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಸುತ್ತಮುತ್ತಲ ಗ್ರಾಮಸ್ಥರ ವಿರೋಧದ ನಡುವೆಯು ಭಾರೀ ಪೋಲಿಸ್ ಬಂದೋ ಬಸ್ತ್ನೊಂದಿಗೆ ಆರಂಭಿಸಲಾಯಿತು. ಆದರೆ ಸರ್ಕಾರದ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಾಮಗಾರಿ ಆರಂಭವಾಗುತ್ತಿದ್ದಂತೆ ರೊಚ್ಚಿಗೆದ್ದ ಪಣ್ಯದಹುಂಡಿ ಹಾಗೂ ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಮೈಸೂರು-ಚಾಮರಾಜನಗರ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.&lt;/p&gt;&lt;p&gt;ಗ್ರಾಮಸ್ಥರ ಮುಖ್ಯ ಬೇಡಿಕೆ ಏನೆಂದರೆ, ಇಲ್ಲಿ ಮೊದಲು ಅಂಡರ್ ಪಾಸ್ (Underpass) ನಿರ್ಮಿಸಬೇಕು, ಆನಂತರವಷ್ಟೇ ಮೇಲ್ಸೇತುವೆ ಕಾಮಗಾರಿ ಆರಂಭಿಸಬೇಕು ಎಂಬುದು. ಒಂದು ವೇಳೆ ಅಂಡರ್ ಪಾಸ್ ನಿರ್ಮಾಣ ಮಾಡದೇ ಕೇವಲ ಮೇಲ್ಸೇತುವೆ ನಿರ್ಮಿಸಿದರೆ, ಪಣ್ಯದಹುಂಡಿ, ದಾಸನೂರು, ತೊರವಳ್ಳಿ, ಹೊಮ್ಮ, ಪಿ.ಮರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಗ್ರಾಮಗಳಿಗೆ ಇರುವ ಪ್ರಮುಖ ಸಂಪರ್ಕವೇ ಕಡಿತಗೊಳ್ಳುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ, ಪಕ್ಕದ ಬೇರೆ ಬೇರೆ ಗ್ರಾಮಗಳಿಗೆ ಹೋಗಬೇಕಾದರೂ ಜನರು 5 ರಿಂದ 6 ಕಿಲೋಮೀಟರ್ ಸುತ್ತಿ ಬಳಸಿ ಹೋಗಬೇಕಾಗುತ್ತದೆ ಎಂದು ಗ್ರಾಮಸ್ಥರ ಅಳಲಾಗಿದೆ..&lt;/p&gt;&lt;p&gt;ಗ್ರಾಮಸ್ಥರ ಆಕ್ರೋಶ ಕೇವಲ ರಸ್ತೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿಲ್ಲ. ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಅಧಿಕಾರಿಗಳು ಭಾರೀ ತಾರತಮ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರೈಲ್ವೆ ಮೇಲ್ಸೇತುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಪಕ್ಕದಲ್ಲೇ ಇರುವ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಒಂದು ಗುಂಟೆ ಜಮೀನಿಗೆ 7 ಲಕ್ಷ ರೂಪಾಯಿ ನಿಗದಿಪಡಿಸಿದ್ದರೆ, ಇಲ್ಲಿ ರೈತರ ಜಮೀನಿಗೆ ಕೇವಲ 1 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ತಾರತಮ್ಯ ನೀತಿಯನ್ನು ಖಂಡಿಸಿರುವ ಗ್ರಾಮಸ್ಥರು, ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ..&lt;/p&gt;&lt;p&gt;ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದರೂ, ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಗ್ರಾಮದ ಸಂಪರ್ಕವನ್ನೇ ಕಡಿತಗೊಳಿಸಲು ಹೊರಟಿರುವ ಅಧಿಕಾರಿಗಳ ವಿರುದ್ದ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ತಾರತಮ್ಮ ನೀತಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದ್ದು ಹೋರಾಟ ತೀವ್ರಗೊಳಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-villagers-protest-on-railway-bridge-gvd/articleshow-r6euf1t"/>
        </item>
        <item>
            <title><![CDATA[ಬೆಂಗಳೂರಿನ ಹತ್ತಿರವೇ ಇದೆ ಭಾರತದ 'Flower Pot of India', 202 ಕಿಮೀ ಪ್ರಯಾಣ ಮಾಡಿದರೆ ಸಾಕು!]]></title>
            <link>https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo</link>
            <guid isPermaLink="true">https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo</guid>
            <pubDate>Sun, 12 Jul 2026 12:42:12 +0530</pubDate>
            <description><![CDATA[&lt;p&gt;ಬೆಂಗಳೂರಿನಿಂದ ಕೇವಲ 202 ಕಿಮೀ ದೂರದಲ್ಲಿರುವ ಈ ಪೇಟೆ, ಸೂರ್ಯಕಾಂತಿ ಮತ್ತು ಚೆಂಡು ಹೂಗಳ ಅದ್ಭುತ ಹೊಲಗಳಿಂದ 'ಭಾರತದ ಹೂವಿನ ಕುಂಡ' ಎಂದು ಪ್ರಸಿದ್ಧಿ ಪಡೆದಿರುವ ಪ್ರಕೃತಿ ಸೊಬಗಿನ ಪ್ರವಾಸಿ ತಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxaj1w8razsdh4tnqtxnxyva,imgname-flower-pot-of-india-1783839650072.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಿಂದ ಕೇವಲ 202 ಕಿಮೀ ದೂರದಲ್ಲಿರುವ ಈ ಪೇಟೆ, ಸೂರ್ಯಕಾಂತಿ ಮತ್ತು ಚೆಂಡು ಹೂಗಳ ಅದ್ಭುತ ಹೊಲಗಳಿಂದ 'ಭಾರತದ ಹೂವಿನ ಕುಂಡ' ಎಂದು ಪ್ರಸಿದ್ಧಿ ಪಡೆದಿರುವ ಪ್ರಕೃತಿ ಸೊಬಗಿನ ಪ್ರವಾಸಿ ತಾಣವಾಗಿದೆ.&lt;/p&gt;&lt;img&gt;&lt;p&gt;ಚಿನ್ನದ ಬಣ್ಣದ ಸೂರ್ಯಕಾಂತಿ ಹೂಗಳು, ಕಂಗೊಳಿಸುವ ಚೆಂಡು ಹೂಗಳ ಹೊಲಗಳು, ಪರಿಮಳ ಬೀರುವ ಗುಲಾಬಿ ತೋಟಗಳು... ಇಂತಹ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬೇಕಾದರೆ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಭೇಟಿ ನೀಡಲೇಬೇಕು. ಇದೇ ಕಾರಣಕ್ಕೆ ಈ ಪಟ್ಟಣವನ್ನು &lsquo;ಭಾರತದ ಹೂವಿನ ಕುಂಡ&rsquo;(Flower Pot of India) ಎಂದು ಕರೆಯಲಾಗುತ್ತದೆ.&lt;/p&gt;&lt;p&gt;ಮೈಸೂರು&ndash;ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡ್ಲುಪೇಟೆ, ಊಟಿ, ವಯನಾಡು ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳುವ ಪ್ರವಾಸಿಗರ ಪ್ರಮುಖ ತಂಗುದಾಣವಾಗಿದೆ. ಆದರೆ ಹಲವರು ಈ ಪಟ್ಟಣವನ್ನು ದಾಟಿ ಹೋಗುತ್ತಾರೆ. ಇಲ್ಲಿನ ಹೂವಿನ ತೋಟಗಳ ಸೌಂದರ್ಯವನ್ನು ನೋಡಿದವರು ಮಾತ್ರ ಇದು ಕರ್ನಾಟಕದ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದೆಂದು ಹೇಳುತ್ತಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆಯ ಪ್ರಮುಖ ಆಕರ್ಷಣೆ ಎಂದರೆ ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿರುವ **ಸೂರ್ಯಕಾಂತಿ, ಚೆಂಡು ಹೂ, ಗುಲಾಬಿ ಹಾಗೂ ವಿವಿಧ ಕಾಲೋಚಿತ ಹೂಗಳ ತೋಟಗಳು**. ವಿಶೇಷವಾಗಿ **ಜೂನ್&zwnj;ನಿಂದ ಆಗಸ್ಟ್&zwnj;ವರೆಗೆ** ಹೂಗಳು ಸಂಪೂರ್ಣವಾಗಿ ಅರಳುವ ಸಮಯದಲ್ಲಿ ಇಡೀ ಗ್ರಾಮಾಂತರ ಪ್ರದೇಶವೇ ಬಣ್ಣಗಳ ಹಾಸಿನಂತೆ ಕಂಗೊಳಿಸುತ್ತದೆ. ಈ ಸಮಯದಲ್ಲಿ ಛಾಯಾಗ್ರಾಹಕರು, ಪ್ರಕೃತಿ ಪ್ರಿಯರು ಹಾಗೂ ರಸ್ತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಭೇಟಿ ನೀಡುತ್ತಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆಯ ಹೂವಿನ ತೋಟಗಳು ಕರ್ನಾಟಕದ ಅತ್ಯಂತ **ಇನ್&zwnj;ಸ್ಟಾಗ್ರಾಂ-ಯೋಗ್ಯ ಸ್ಥಳಗಳಲ್ಲಿ** ಒಂದೆಂದು ಗುರುತಿಸಿಕೊಂಡಿವೆ. ಅನೇಕ ರೈತರು ಸಣ್ಣ ಪ್ರವೇಶ ಶುಲ್ಕ ಪಡೆದು ತಮ್ಮ ತೋಟಗಳಿಗೆ ಪ್ರವಾಸಿಗರಿಗೆ ಅವಕಾಶ ನೀಡುತ್ತಾರೆ. ಹೂಗಳ ಮಧ್ಯೆ ನಡೆಯುತ್ತಾ ಅದ್ಭುತ ಫೋಟೋಗಳನ್ನು ಸೆರೆಹಿಡಿಯಲು ಇದು ಸೂಕ್ತ ತಾಣವಾಗಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಛಾಯಾಗ್ರಹಣಕ್ಕೆ ಅತ್ಯುತ್ತಮ ಬೆಳಕು ದೊರೆಯುತ್ತದೆ.&lt;/p&gt;&lt;p&gt;ಮೈಸೂರಿನಿಂದ ಸುಮಾರು 0 ಕಿ.ಮೀ. &amp;nbsp;ಹಾಗೂ ಬೆಂಗಳೂರಿನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಗುಂಡ್ಲುಪೇಟೆ, ಕರ್ನಾಟಕವನ್ನು ಊಟಿ ಮತ್ತು ವಯನಾಡಿಗೆ ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿದೆ. ಹೀಗಾಗಿ ವೀಕೆಂಡ್ ಟ್ರಿಪ್ ಅಥವಾ ಲಾಂಗ್ ಡ್ರೈವ್ ಯೋಜಿಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ.&lt;/p&gt;&lt;img&gt;&lt;p&gt;ಹೂವಿನ ಸೌಂದರ್ಯದ ಜೊತೆಗೆ ಇಲ್ಲಿಂದ ಕೆಲವೇ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೂಡ ಇದೆ. ಹೀಗಾಗಿ ಒಂದೇ ಪ್ರವಾಸದಲ್ಲಿ ಹೂಗಳ ಲೋಕವನ್ನೂ, ಕಾಡಿನ ವನ್ಯಜೀವಿಗಳನ್ನೂ ಸವಿಯುವ ಅವಕಾಶ ಸಿಗುತ್ತದೆ. ಸೆಪ್ಟೆಂಬರ್&zwnj;ನಿಂದ ಮಾರ್ಚ್&zwnj;ವರೆಗಿನ ಅವಧಿ ಬಂಡೀಪುರ ಸಫಾರಿಗೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;p&gt;ನಗರದ ಗದ್ದಲದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲವು ಕ್ಷಣಗಳನ್ನು ಕಳೆಯಲು ಬಯಸುವವರಿಗೆ ಗುಂಡ್ಲುಪೇಟೆ ಅತ್ಯುತ್ತಮ ಆಯ್ಕೆಯಾಗಿದೆ. ಬಣ್ಣಬಣ್ಣದ ಹೂಗಳ ಹೊಲಗಳು, ಆಹ್ಲಾದಕರ ವಾತಾವರಣ, ಸುಂದರ ರಸ್ತೆ ಪ್ರಯಾಣ ಹಾಗೂ ಹತ್ತಿರದಲ್ಲೇ ಇರುವ ಕಾಡಿನ ಸೊಬಗು ಈ ಪಟ್ಟಣವನ್ನು ಕರ್ನಾಟಕದ ಅತ್ಯಂತ ಕಡಿಮೆ ಪರಿಚಿತವಾಗಿದ್ದರೂ ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿಸಿದೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆ, ಭಾರತದ ಹೂವಿನ ಕುಂಡ, Flower Pot of India, ಚಾಮರಾಜನಗರ, ಸೂರ್ಯಕಾಂತಿ ಹೂ ತೋಟ, ಚೆಂಡು ಹೂ ಬೆಳೆ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಊಟಿ ರಸ್ತೆ ಪ್ರವಾಸ, ವಯನಾಡ್ ಟ್ರಿಪ್, ಕರ್ನಾಟಕ ಪ್ರವಾಸಿ ತಾಣಗಳು, Instagram worthy places Karnataka, Weekend Trip Karnataka&lt;/p&gt;]]></content:encoded>
            <category>chamarajnagar</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/chamarajnagar/bengaluru-202-km-karnataka-town-is-called-the-flower-pot-of-india-suh-tck8llo"/>
        </item>
        <item>
            <title><![CDATA[ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ]]></title>
            <link>https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</link>
            <guid isPermaLink="true">https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</guid>
            <pubDate>Sat, 04 Jul 2026 22:53:01 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ, ಮನೆಯ ಬಾಗಿಲ ಬಳಿ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ ಮತ್ತು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwq2bsjmh1frb1zbn2421651,imgname-cheetah-attacks-1783185663572.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಮನೆಯ ಬಾಗಿಲಲ್ಲೇ ಕುಳಿತಿದ್ದ ಅಜ್ಜಿ ಮತ್ತು ಐದು ವರ್ಷದ ಪುಟ್ಟ ಮಗುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದ ನಿವಾಸಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಚಿರತೆ ದಾಳಿಯಿಂದ ಗಾಯಗೊಂಡವರು. ಶಿವಮ್ಮ ಅವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಶಿವಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಅಜ್ಜಿಯ ಚೀರಾಟ ಕೇಳಿ ಮಗು ಹರ್ಷಿತಾ ಏನಾಯಿತೆಂದು ನೋಡಲು ಓಡಿ ಬಂದಿದ್ದಾಳೆ.&lt;/p&gt;&lt;h3&gt;&lt;strong&gt;ಅಡಗಿ ಕುಳಿತು ಮಗುವಿನ ಮೇಲೆ ದಾಳಿ&lt;/strong&gt;&lt;/h3&gt;&lt;p&gt;ಶಿವಮ್ಮ ಕಿರುಚಿಕೊಂಡಾಗ ಚಿರತೆಯು ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಅಜ್ಜಿಯನ್ನು ನೋಡಲು ಬಂದ ಪುಟ್ಟ ಮಗು ಹರ್ಷಿತಾಳನ್ನು ಕಂಡೊಡನೆ ಚಿರತೆ ಮಗುವಿನ ಮೇಲೂ ಎರಗಿದೆ. ಶಿವಮ್ಮ ಮತ್ತು ಮಗುವಿನ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಲಾಠಿ, ಕಲ್ಲುಗಳೊಂದಿಗೆ ಓಡಿ ಬಂದಿದ್ದಾರೆ. ಜನರನ್ನು ಕಂಡ ಚಿರತೆ ಅಲ್ಲಿಂದ ಕಾಲ್ಕಿತ್ತು ಕಾಡಿನತ್ತ ಪಲಾಯನ ಮಾಡಿದೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ&lt;/strong&gt;&lt;/h3&gt;&lt;p&gt;ಗಾಯಗೊಂಡ ಅಜ್ಜಿ ಮತ್ತು ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲಲ್ಲೇ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಟ್ಟೆಗೆರೆ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಭಾಗದಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ದಾಳಿ ಮಾಡಿದ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6"/>
        </item>
    </channel>
</rss>
