<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 26 Jun 2026 15:20:27 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಹೊಸ ಕಾರಿಗೆ ಮಾದಪ್ಪನ ಪೂಜೆ… ಹಿಂದಿರುಗುವ ದಾರಿಯಲ್ಲೇ ಕಾರು ಪಲ್ಟಿ! ಭಕ್ತರು ಶಾಕ್!]]></title>
            <link>https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg</link>
            <guid isPermaLink="true">https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg</guid>
            <pubDate>Thu, 14 May 2026 10:31:34 +0530</pubDate>
            <description><![CDATA[&lt;p&gt;verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjcfznnf8c2y9x38js9zqpd,imgname-----------------------2026-05-14t100357.592-1778733547189.jpg" type="image/jpeg" height="390" width="690"/>
            <content:encoded><![CDATA[&lt;p&gt;verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ&lt;/p&gt;&lt;img&gt;&lt;p&gt;ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;ಮಂಡ್ಯ ಮೂಲದ ಭಕ್ತರು ಹೊಸ ಕಾರು ಖರೀದಿಸಿದ್ದರು. ಮೊದಲು ಮಾದಪ್ಪನ ಆಶೀರ್ವಾದ ಪಡೆದು ಬಳಿಕ ಕಾರು ಓಡಿಸೋಣ&rdquo; ಅಂತಾ ಚಾಮರಾಜನಗರದ ಮಾದಪ್ಪನ ಬೆಟ್ಟಕ್ಕೆ ಕುಟುಂಬ ಸಮೇತ ಬಂದಿದ್ದರು.&lt;/p&gt;&lt;img&gt;&lt;p&gt;ಹೊಸ ಕಾರೇ ಕ್ಷಣಾರ್ಧದಲ್ಲಿ ರಸ್ತೆಯ ಬದಿಗೆ ಉರುಳಿ ಬಿದ್ದ ದೃಶ್ಯ ನೋಡಿ ಸ್ಥಳೀಯರು ಕೂಡ ಬೆಚ್ಚಿಬಿದ್ದರು. ಕಾರಿನ ಮುಂಭಾಗ ಜಖಂಗೊಂಡಿದ್ದರೂ, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ದೇವರ ದರ್ಶನಕ್ಕೆ ಬಂದಿದ್ದೇವೆ&hellip; ಇದೇ ರೀತಿ ಆಗುತ್ತೆ ಅಂತ ಯಾರು ಊಹಿಸಿದ್ದರು? ಎಂದು ಕುಟುಂಬದವರು ಅಳಲು.&lt;/p&gt;&lt;img&gt;&lt;p&gt;ಒಂದು ಕಡೆ 'ದೇವರ ಕೃಪೆಯಿಂದಲೇ ದೊಡ್ಡ ಅನಾಹುತ ತಪ್ಪಿತು' ಅನ್ನೋ ನೆಮ್ಮದಿ&hellip; ಇನ್ನೊಂದು ಕಡೆ 'ದರ್ಶನಕ್ಕೆ ಬಂದು ಇಂಥ ಅವಘಡ ಯಾಕಾಯಿತು?' ಅನ್ನೋ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.&lt;/p&gt;&lt;p&gt;ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[1000 ಕೋಟಿ ಸಿನಿಮಾಗಳಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಚೇತನ್ ಅಹಿಂಸಾ]]></title>
            <link>https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b</link>
            <guid isPermaLink="true">https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b</guid>
            <pubDate>Wed, 13 May 2026 17:15:52 +0530</pubDate>
            <description><![CDATA[&lt;p&gt;ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್&zwnj; ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jkr11w3f2tnpvsx05cr2c392,imgname-actor-chetan-ahimsa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.13): &lt;/strong&gt;ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್&zwnj; ಹೇಳಿದರು. ಅಂಬೇಡ್ಕರ್&zwnj; ಅವರು ಸಂವಿಧಾನದ ಮೂಲಕ ಸಾಕಾರಗೊಳಿಸಲು ಸಮಸಮಾಜ ಕನಸನ್ನು ಕಂಡರು. ನಾವೆಲ್ಲರೂ ಸಮಸಮಾಜ ಕಟ್ಟಿದಾಗ ಮಾತ್ರ ಅಂಬೇಡ್ಕರ್&zwnj; ಅವರ ಕನಸು ನನಸಾಗಿಸಲು ಸಾಧ್ಯ ಎಂದು ಹೇಳಿದರು.&lt;/p&gt;&lt;p&gt;ಜಾತಿ ತಾರತಮ್ಯ, ಅಸ್ಪೃಶ್ಯತೆ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿದೆ. ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಅದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ದೇಶದಲ್ಲಿ ಕೇವಲ ಕೆಲವರ ಕೈಯಲ್ಲಿ ಸಂಪತ್ತು ಇರದೆ ಆರ್ಥಿಕ ಸಮಾನತೆ ಇರಬೇಕಿದೆ, ಉತ್ತಮ ಸಮಾಜ ಕಟ್ಟಬೇಕು, ಅದು ನಮ್ಮೆಲ್ಲರ ಜವಾಬ್ದಾರಿ, ಅಂಬೇಡ್ಕರ್&zwnj; ಅವರು ಮಾಡಿ ತೋರಿಸಿದ್ದಾರೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಅಂಬೇಡ್ಕರ್&zwnj;, ಕಾನ್ಶಿರಾಂ ಅವರ ವಿಚಾರಗಳನ್ನು ಬಹಳ ಗಟ್ಟಿಯಾಗಿ ರಾಜ್ಯದಲ್ಲಿ ಉಳಿಸಿರುವುದು ಇದೇ ಚಾಮರಾಜನಗರದ ಜನತೆ. ಅಂಬೇಡ್ಕರ್&zwnj; ಅವರ ಸಂವಿಧಾನದಿಂದ ದೇಶಕ್ಕೆ ಒಳ್ಳೆಯದು ಆಗಿದೆ, ಅವರನ್ನು ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿರುವುದು ಬಹಳ ನೋವಿನ ಸಂಗತಿಯಾಗಿದೆ. ಅವರು ಒಂದು ಸಂವಿಧಾನ ಅಲ್ಲ, 100 ದೇಶಗಳ ಸಂವಿಧಾನ ಬರೆಯುವ ಸಾಮಾರ್ಥ್ಯ ಅವರಲ್ಲಿತ್ತು ಎಂದರು.&lt;/p&gt;&lt;h2&gt;&lt;strong&gt;ಸರ್ವರಿಗೂ ಸಮಾನತೆ&lt;/strong&gt;&lt;/h2&gt;&lt;p&gt;ಅಂಬೇಡ್ಕರ್ ಅವರ ಪೋಸ್ಟರ್&zwnj;ಗಳಲ್ಲಿ, ಪ್ರತಿಮೆಗಳಲ್ಲಿ ಅಂಬೇಡ್ಕರ್ ವಾದ ಸಿಗಲ್ಲ. ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದು ಅವರೇ ಹೇಳಿದ್ದಾರೆ. ಅವರ ವಿಚಾರಗಳನ್ನು ಜನರ ಮುಂದೆ ಇಡದಿದ್ದರೆ ಅಂಬೇಡ್ಕರ್ ಅವರನ್ನು ಪ್ರತಿಮೆಗೆ, ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿ&zwnj;ಬಿಡುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗಿಪೆದ್ದಿಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.&lt;/p&gt;&lt;p&gt;ಅಂಬೇಡ್ಕ&zwnj;ರ್ ಅವರು ಬಾಲ್ಯದಲ್ಲಿ ತುಂಬಾ ಕಷ್ಟದಿಂದ ವಿದ್ಯಾಬ್ಯಾಸ ಮಾಡಿದರು, ನಮಗಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಬಡಾವಣೆ ನಿವಾಸಿಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಎಸ್ಪಿ ಮಾಡುವ ಮೂಲಕ ಅವರನ್ನು ಜೀವಂತವಾಗಿಡುವ ಕೆಲಸ ಮಾಡಬೇಕು ಎಂದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b"/>
        </item>
        <item>
            <title><![CDATA[Chamarajanagar: ದಾಳಿ ಮಾಡಿದರೂ ಜಗ್ಗದೆ ಕಿರುಚಿ ಹುಲಿ ಓಡಿಸಿದ ಕುರಿಗಾಹಿ ನೂರಾಳು]]></title>
            <link>https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk</link>
            <guid isPermaLink="true">https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk</guid>
            <pubDate>Mon, 01 Jun 2026 06:06:54 +0530</pubDate>
            <description><![CDATA[ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ನೂರಾಳು ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ಆದರೆ, ಅವರು ಕಿರುಚಿಕೊಂಡಾಗ ಹುಲಿ ಹೆದರಿ ಓಡಿಹೋಗಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt09kef2p4qqmh85f52y2p5w,imgname-tiger-attack--3--1780274018786.jpg" type="image/jpeg" height="390" width="690"/>
            <content:encoded><![CDATA[ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ನೂರಾಳು ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ಆದರೆ, ಅವರು ಕಿರುಚಿಕೊಂಡಾಗ ಹುಲಿ ಹೆದರಿ ಓಡಿಹೋಗಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;img&gt;&lt;p&gt;ಚಾಮರಾಜನಗರ: ಹುಲಿ ದಾಳಿಯಿಂದ ಕುರಿಗಾಹಿಯೊಬ್ಬ ಪವಾಡಸದೃಶ್ಯ ರೀತಿ ಪರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಕುಣಗಳ್ಳಿ ಕಾಲೋನಿಯಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಹುಲಿ ದಾಳಿ ಮಾಡಿದಾಗ ತಕ್ಷಣ ಕುರಿಗಾಹಿ ಕೂಗಾಡಿದ್ದಾನೆ. ಕೂಗಿದ ಸದ್ದಿಗೆ ಚಿರತೆ ಕಾಲ್ಕಿತ್ತಿದೆ. ಇದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರಿಗಾಹಿ ನೂರಾಳು (52) ಪಾರಾದ ವ್ಯಕ್ತಿ. ವಿಷಯ ತಿಳಿದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್&zwnj; ಸೂಚನೆ ಮೇರೆಗೆ ಅರಣ್ಯ ಸಿಬ್ಬಂದಿ ಗಾಯಾಳುವನ್ನು ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.&lt;/p&gt;&lt;img&gt;&lt;p&gt;ನೂರಾಳು ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಹುಲಿಯು ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರು ಗಾಯಗೊಂಡಿದ್ದಾರೆ. ಆದರೂ ಜಗ್ಗದೆ ಅವರು ಕಿರುಚಾಡಿದ್ದಾರೆ. ಇದರಿಂದ ಹುಲಿಯು ಸ್ಥಳದಿಂದ ಓಡಿ ಹೋಗಿದೆ. ಸದ್ಯ ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್&zwnj; ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ದಾಳಿಯನ್ನು ಖಂಡಿಸಿ ಜನರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk"/>
        </item>
        <item>
            <title><![CDATA[ಚಾಮರಾಜನಗರ: ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದವ ಅರೆಸ್ಟ್]]></title>
            <link>https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq</link>
            <guid isPermaLink="true">https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq</guid>
            <pubDate>Wed, 17 Jun 2026 12:02:21 +0530</pubDate>
            <description><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್&zwnj;ರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪ ಹಿನ್ನೆಲೆ ಓರ್ವ ವ್ಯಕ್ತಿಯನ್ನ ಬಂಧಿಸಿದ ಪಲೀಸರು ವಿಚಾರಣೆಗೊಳಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kva370jre14phmv8ydbawnzh,imgname-----------------------2026-06-17t113850.588-1781676606040.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಅಂಬೇಡ್ಕರ್&zwnj;ರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪ ಹಿನ್ನೆಲೆ ಓರ್ವ ವ್ಯಕ್ತಿಯನ್ನ ಬಂಧಿಸಿದ ಪಲೀಸರು ವಿಚಾರಣೆಗೊಳಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಸಣಾಪುರ(Masanapur)ದಲ್ಲಿ ನಡೆದ ಅಂಬೇಡ್ಕರ್ ಭಾವಚಿತ್ರ ಅಪಮಾನ ಪ್ರಕರಣ(Ambedkar portrait insult case)ಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ(Social media)ದಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೊಳ್ಳೇಗಾಲ ತಾಲೂಕಿನ ಮುಡಿಗುಂಡಂ ಗ್ರಾಮದ ಮಂಜುನಾಥ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ಮಸಣಾಪುರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಆದರೆ ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ಮಂಜುನಾಥ್, ಸಮಾಜದಲ್ಲಿ ಅಶಾಂತಿ ಹಾಗೂ ಜಾತಿ ದ್ವೇಷ ಉಂಟು ಮಾಡುವ ರೀತಿಯ ಕಾಮೆಂಟ್ ಮಾಡಿದ್ದ ಎಂದು ಆರೋಪಿಸಲಾಗಿದೆ.&lt;/p&gt;&lt;p&gt;&lsquo;ಇನ್ನು ಮುಂದೇನು ಅಂಬೇಡ್ಕರ್&zwnj;ಗೆ ಚಪ್ಪಲಿ ಹಾಕ ಹಾಕ್ತೇವೆ. ಇದು ನಮ್ಮ ಶಪಥ ಜೈ ಬಸವ ಸೇನೆ&rsquo; ಎಂದು ಕಾಮೆಟ್ ಮಾಡಿದ್ದ ಆರೋಪಿ.&lt;/p&gt;&lt;img&gt;&lt;p&gt;ಆರೋಪಿ ಮಾಡಿದ್ದ ಕಾಮೆಂಟ್ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸಲು ಯತ್ನ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡುವ ಉದ್ದೇಶದಿಂದಲೇ ಈ ರೀತಿಯ ಸಂದೇಶ ಹಾಕಲಾಗಿರುವ ಹಿನ್ನೆಲೆ ಕೊಳ್ಳೇಗಾಲ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮಂಜುನಾಥರನ್ನ ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ಒಳಪಡಿಸಿ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/man-arrested-in-chamarajanagar-for-alleged-derogatory-social-media-comment-on-dr-br-ambedkar-e3nttaq"/>
        </item>
        <item>
            <title><![CDATA[ಬಂಡೀಪುರ ಕಾಡಿನೊಳಗೆ ರೌಡಿಶೀಟರ್ ಬಿಂದಾಸ್ ಗುಂಡು ತುಂಡು ಪಾರ್ಟಿ, ಇಲಾಖೆಯ ಸಿಬ್ಬಂದಿಯೇ ಶಾಮೀಲು?]]></title>
            <link>https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y</link>
            <guid isPermaLink="true">https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y</guid>
            <pubDate>Fri, 05 Jun 2026 14:34:09 +0530</pubDate>
            <description><![CDATA[ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಳ್ಳಬೇಟೆ ತಡೆ ಶಿಬಿರದಲ್ಲಿ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಗ್ಯಾಂಗ್ ಅಕ್ರಮವಾಗಿ ಮದ್ಯ ಹಾಗೂ ಮಾಂಸದ ಪಾರ್ಟಿ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಅರಣ್ಯ ಇಲಾಖೆಯ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಅಧಿಕಾರಿಗಳ ಶಾಮೀಲಾತಿಯ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktbgbrc0jw4sy0pnyvmq4s93,imgname-rowdy-sheeter-liquor-party-in-bandipur-1780650205568.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ&lt;/strong&gt;: ವನ್ಯಜೀವಿಗಳ ಸ್ವರ್ಗ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವನಗಳಲ್ಲೊಂದಾದ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈಗ ತೀವ್ರ ಆತಂಕಕಾರಿ ಮತ್ತು ಮುಜುಗರದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಕಠಿಣ ನಿಯಮಗಳನ್ನು ವಿಧಿಸುವ ಬಂಡೀಪುರ ಕಾನನದೊಳಗೆ ರೌಡಿಶೀಟರ್ ಒಬ್ಬ ತನ್ನ ಗ್ಯಾಂಗ್&zwnj;ನೊಂದಿಗೆ ಬಿಂದಾಸ್ ಆಗಿ 'ಎಣ್ಣೆ ಪಾರ್ಟಿ' ನಡೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅತ್ಯಂತ ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುವ ಕಳ್ಳಬೇಟೆ ತಡೆ ಶಿಬಿರದಲ್ಲೇ (Anti-Poaching Camp) ಈ ಮೋಜುಮಸ್ತಿ ನಡೆದಿರುವುದು ಇಡೀ ಇಲಾಖೆಯ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.&lt;/p&gt;&lt;h2&gt;&lt;strong&gt;ಹುಲಿಕಟ್ಟೆ ಶಿಬಿರದಲ್ಲಿ ಭದ್ರತಾ ಲೋಪ!&lt;/strong&gt;&lt;/h2&gt;&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಹಳೇ ಮೈಸೂರು ಭಾಗದ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಸಂಗಡಿಗರು ಯಾವುದೇ ಭಯವಿಲ್ಲದೆ ಕಾಡಿನ ಪ್ರಾಣಿ ವಲಯದ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಎಲ್ಲಾ ಕಠಿಣ ನಿಯಮಗಳನ್ನು ಗಾಳಿಗೆ ತೂರಿ, ಹುಲಿಕಟ್ಟೆ ಕಳ್ಳಬೇಟೆ ತಡೆ ಶಿಬಿರದ ಆವರಣದಲ್ಲೇ ಮದ್ಯ ಹಾಗೂ ಮಾಂಸದ ಅಡುಗೆ ಸಿದ್ಧಪಡಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ.&lt;/p&gt;&lt;h2&gt;ಕಾಡಿನ ಒಣಸೌದೆಗೂ ಬಿಡದ ಇಲಾಖೆ, ರೌಡಿಗೆ ರೆಡ್ ಕಾರ್ಪೆಟ್ ಯಾತಕ್ಕೆ?&lt;/h2&gt;&lt;p&gt;ಈ ಘಟನೆಯು ಹೊರಬೀಳುತ್ತಿದ್ದಂತೆ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಡಿನ ಅಂಚಿನಲ್ಲಿ ವಾಸಿಸುವ ಬಡ ಜನ, ಆದಿವಾಸಿಗಳು ಕೇವಲ ಒಲೆ ಉರಿಸಲು ಕಾಡಿನಲ್ಲಿ ಬಿದ್ದಿರುವ ಒಣಗಿದ ಸೌದೆಯನ್ನು ತರಲು ಹೋದರೂ ಅವರ ಮೇಲೆ ಕೇಸ್ ದಾಖಲಿಸುವ, ದಂಡ ವಿಧಿಸುವ ಮತ್ತು ಕ್ರೂರವಾಗಿ ನಡೆಸಿಕೊಳ್ಳುವ ಅರಣ್ಯ ಇಲಾಖೆ ಸಿಬ್ಬಂದಿ, ಇಂತಹ ಸಮಾಜವಿರೋಧಿ ಶಕ್ತಿಗಳಿಗೆ ಕಾಡಿನೊಳಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ರೌಡಿಶೀಟರ್ ಒಬ್ಬನಿಗೆ ಕಾಡಿನ ಅತ್ಯಂತ ರಕ್ಷಿತ ವಲಯಕ್ಕೆ ಪ್ರವೇಶ ಸಿಕ್ಕಿದ್ದಾದರೂ ಹೇಗೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.&lt;/p&gt;&lt;h2&gt;ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ: ಪರಿಸರವಾದಿಗಳ ಆಕ್ರೋಶ&lt;/h2&gt;&lt;p&gt;ಕಾಡಿನೊಳಗೆ ಚಿರತೆ, ಹುಲಿ ಮತ್ತು ಆನೆಗಳ ಓಡಾಟವಿರುವ ಜಾಗದಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ರೌಡಿಶೀಟರ್ ಸತೀಶ್ ಪಡೆ ಬೀಡು ಬಿಟ್ಟಿರುವುದರ ಹಿಂದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಆರ್&zwnj;.ಎಫ್&zwnj;.ಒ (RFO) ಮಟ್ಟದ ಸಿಬ್ಬಂದಿಯ ನೇರ ಶಾಮೀಲಾತಿ ಇರುವ ಶಂಕೆ ದಟ್ಟವಾಗಿದೆ. ಇಲಾಖೆಯ ಆಂತರಿಕ ಒಪ್ಪಂದ ಅಥವಾ ಲಂಚದ ಆಮಿಷವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವೇ ಇಲ್ಲ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. ಕಾಡಿನ ಭದ್ರತೆಗೆ ಧಕ್ಕೆ ತಂದು, ವನ್ಯಜೀವಿಗಳ ಜೀವಕ್ಕೆ ಸಂಚಕಾರ ತಂದೊಡ್ಡಿರುವ ಈ ಮೋಜುಮಸ್ತಿಯನ್ನು ಪರಿಸರವಾದಿಗಳು ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;p&gt;ಬಂಡೀಪುರ ಅರಣ್ಯ ಇಲಾಖೆಯ ಇಮೇಜ್&zwnj;ಗೆ ಧಕ್ಕೆ ತಂದಿರುವ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಕಳ್ಳಬೇಟೆ ತಡೆಯಬೇಕಾದ ಶಿಬಿರಗಳೇ ಅಪರಾಧಿಗಳ ಪಾರ್ಟಿ ಅಡ್ಡಾಗಳಾಗಿ ಬದಲಾಗುತ್ತಿರುವುದು ದುರಂತ. ಈ ಭದ್ರತಾ ಲೋಪಕ್ಕೆ ಕಾರಣರಾದ ಆರ್&zwnj;.ಎಫ್&zwnj;.ಒ ಸೇರಿದಂತೆ ಪ್ರಭಾವಿ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣವೇ ಶಿಸ್ತುಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಬಂಡೀಪುರದ ರಕ್ಷಣೆ ಕೇವಲ ಕಾಗದದ ಮೇಲಷ್ಟೇ ಉಳಿಯಲಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಆಹಾರಕ್ಕಾಗಿ ಪ್ಲಾಸ್ಟಿಕ್ ತಿನ್ನುತ್ತಿರುವ ಗಜರಾಜ! ಜಿಂಕೆ, ಕೋತಿ, ಹಸು ಆಯ್ತು ಈಗ ಆನೆ!]]></title>
            <link>https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp</link>
            <guid isPermaLink="true">https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp</guid>
            <pubDate>Tue, 16 Jun 2026 18:59:02 +0530</pubDate>
            <description><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಆಹಾರವಿಲ್ಲದೆ ಆನೆಯೊಂದು ಪ್ಲಾಸ್ಟಿಕ್ ಕಸ ತಿನ್ನುತ್ತಿರುವ ದೃಶ್ಯ ವೈರಲ್ ಆಗಿದೆ. ಪ್ರವಾಸಿಗರ ಬೇಜವಾಬ್ದಾರಿಯಿಂದ ಉಂಟಾದ ಈ ಪ್ಲಾಸ್ಟಿಕ್ ಮಾಲಿನ್ಯವು ವನ್ಯಜೀವಿಗಳ ಜೀವಕ್ಕೆ ಮಾರಕವಾಗಿದ್ದು, ಪರಿಸರ ವ್ಯವಸ್ಥೆಯ ಅವನತಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv89fxxv7zey085tc04c9adk,imgname-mm-hills-elephant-scavenging-plastic-waste-1781616080826.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಜೂ.16): ಕಾ&lt;/strong&gt;ಡಿನ ರಾಜ, ಗಾಂಭೀರ್ಯದ ಸಂಕೇತವಾದ ಆನೆಯೊಂದು (wild elephant) ಅರಣ್ಯದಲ್ಲಿ ಆಹಾರ ಸಿಗದೇ ಮನುಷ್ಯರು ಎಸೆದ ಪ್ಲಾಸ್ಟಿಕ್ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಿರುವ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ. ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ (MM Hills) ಈ ಘಟನೆ ನಡೆದಿದ್ದು, ಇದು ನಮ್ಮ ಪರಿಸರ ವ್ಯವಸ್ಥೆಯ ಅವನತಿಯನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;h2&gt;&lt;strong&gt;ಹಸಿವಿನ ಅನಿವಾರ್ಯತೆ ಮತ್ತು ವಿಷಕಾರಿ ಪ್ಲಾಸ್ಟಿಕ್:&lt;/strong&gt;&lt;/h2&gt;&lt;p&gt;ವನ್ಯಜೀವಿಗಳು ಸಾಮಾನ್ಯವಾಗಿ ಕಾಡಿನಲ್ಲಿ ಸಿಗುವ ಗಿಡಗಂಟಿಗಳು, ಬಿದಿರು ಮತ್ತು ಹಣ್ಣುಗಳನ್ನು ತಿಂದು ಬದುಕುತ್ತವೆ. ಆದರೆ, ಮಾನವನ ಅತಿಕ್ರಮಣ ಮತ್ತು ಕಾಡಿನಂಚಿನಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ (Plastic waste) ಈ ಪ್ರಾಣಿಗಳು ಇಂದು ಕಸದ ತೊಟ್ಟಿಯನ್ನೇ ಅವಲಂಬಿಸುವಂತಾಗಿದೆ. ವೈರಲ್ ಆಗಿರುವ ಈ ಚಿತ್ರದಲ್ಲಿ, ಆನೆಯೊಂದು ಕಸದ ರಾಶಿಯಿಂದ ಪ್ಲಾಸ್ಟಿಕ್ ಚೀಲಗಳನ್ನು ಎತ್ತಿ ತಿನ್ನುತ್ತಿರುವುದನ್ನು ಕಾಣಬಹುದು. ಪ್ಲಾಸ್ಟಿಕ್ ಪ್ರಾಣಿಗಳ ಹೊಟ್ಟೆ ಸೇರಿದರೆ ಅದು ಜೀರ್ಣವಾಗದೆ, ಕರುಳಿನಲ್ಲಿ ಸಿಲುಕಿಕೊಂಡು ಸಾವಿಗೆ ಕಾರಣವಾಗುತ್ತದೆ. ಇದು ಆನೆಗೆ ಮಾತ್ರವಲ್ಲ, ಇಡೀ ವನ್ಯಜೀವಿ ಸಂಕುಲಕ್ಕೇ ಎದುರಾಗಿರುವ ದೊಡ್ಡ ದುರಂತ.&lt;/p&gt;&lt;h2&gt;&lt;strong&gt;ಪ್ರವಾಸಿಗರ ಬೇಜವಾಬ್ದಾರಿ ಮತ್ತು ಪ್ಲಾಸ್ಟಿಕ್ ಮುಕ್ತ ಕಾಡಿನ ಕನಸು:&lt;/strong&gt;&lt;/h2&gt;&lt;p&gt;ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರತಿದಿನ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ದುರದೃಷ್ಟವಶಾತ್, ಅನೇಕರು ತಾವು ತಂದ ಪ್ಲಾಸ್ಟಿಕ್ ಬಾಟಲಿಗಳು, ತಿಂಡಿಯ ಪೊಟ್ಟಣಗಳನ್ನು ಕಾಡಿನ ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಾರೆ. ಇದು ಕ್ರಮೇಣ ಕಸದ ರಾಶಿಯಾಗಿ ಮಾರ್ಪಟ್ಟು, ಕಾಡು ಪ್ರಾಣಿಗಳನ್ನು ಆಕರ್ಷಿಸುತ್ತಿದೆ. ಕಾಡು ಪ್ರಾಣಿಗಳು ಉಪ್ಪಿನ ಅಂಶ ಅಥವಾ ಆಹಾರದ ವಾಸನೆಗೆ ಮಾರುಹೋಗಿ ಪ್ಲಾಸ್ಟಿಕ್ ಸಮೇತ ಕಸವನ್ನು ತಿನ್ನುತ್ತಿವೆ. ನಾವು ಪುಣ್ಯಕ್ಷೇತ್ರಕ್ಕೆ ಹೋಗುವುದು ನಮ್ಮ ಪಾಪಗಳನ್ನು ತೊಳೆದುಕೊಳ್ಳಲು, ಆದರೆ ಅಲ್ಲಿನ ಮೂಕ ಪ್ರಾಣಿಗಳಿಗೆ ಪ್ಲಾಸ್ಟಿಕ್ ತಿನ್ನಿಸುವ ಮೂಲಕ ನಾವು ಮತ್ತಷ್ಟು ಪಾಪದ ಕೆಲಸ ಮಾಡುತ್ತಿದ್ದೇವೆ ಎನ್ನುವುದು ಕಹಿ ಸತ್ಯ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆಯ ಜವಾಬ್ದಾರಿ:&lt;/strong&gt;&lt;/h2&gt;&lt;p&gt;ಆನೆಗಳು ಪ್ಲಾಸ್ಟಿಕ್ ತಿನ್ನಲು ಆರಂಭಿಸಿವೆ ಎಂದರೆ ಅದರ ಅರ್ಥ ಅವುಗಳ ನೈಸರ್ಗಿಕ ವಾಸಸ್ಥಾನದಲ್ಲಿ ಆಹಾರದ ಕೊರತೆ ಎದುರಾಗಿದೆ ಅಥವಾ ಅವುಗಳ ವಾಸಸ್ಥಾನವನ್ನು ನಾವು ಕಸದ ತೊಟ್ಟಿಯನ್ನಾಗಿ ಮಾಡಿದ್ದೇವೆ ಎಂದರ್ಥ. ಅರಣ್ಯ ಇಲಾಖೆಯು ಪ್ಲಾಸ್ಟಿಕ್ ಮುಕ್ತ ಅರಣ್ಯ ಅಭಿಯಾನವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ. ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು ಮಾತ್ರವಲ್ಲದೆ, ಎಸೆಯುವವರಿಗೆ ಭಾರಿ ದಂಡ ವಿಧಿಸಬೇಕಿದೆ.&lt;/p&gt;&lt;p&gt;ಈ ಘಟನೆ ನಮಗೆ ನೀಡುತ್ತಿರುವ ಎಚ್ಚರಿಕೆ ಏನೆಂದರೆ, ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಕಾಡು ಮತ್ತು ಕಾಡುಪ್ರಾಣಿಗಳು ಕೇವಲ ಪುಸ್ತಕಗಳಲ್ಲಿ ಮಾತ್ರ ಉಳಿಯುತ್ತವೆ. ಪ್ರಾಣಿಗಳ ಮನೆಗೆ (ಕಾಡಿಗೆ) ನಾವು ಅತಿಥಿಗಳಾಗಿ ಹೋದಾಗ, ಅಲ್ಲಿನ ನಿಯಮಗಳನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡೋಣ, ಮೂಕ ಪ್ರಾಣಿಗಳ ಜೀವ ಉಳಿಸೋಣ.&lt;/p&gt;&lt;p&gt;&amp;nbsp;&lt;/p&gt;&lt;p&gt;HeartbreakingA wild elephant in Karnataka is seen scavenging through plastic waste for food in MM Hills. Imagine surviving on garbage because humans have turned your habitat into a dumping yard.&amp;nbsp;The tragedy isn't the elephant. The tragedy is what we've done to its home. pic.twitter.com/9idiMxyDK4&lt;/p&gt;&lt;p&gt;&mdash; Harish Upadhya (@harishupadhya) June 16, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/karnataka-elephant-scavenging-plastic-waste-mm-hills-environmental-tragedy-viral/articleshow-gdcznkp"/>
        </item>
        <item>
            <title><![CDATA[ನಿಂತು ಹೋಗಿದ್ದ ಬಂಡೀಪುರ-ನಾಗರಹೊಳೆ ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭಕ್ಕೆ ರಾಜ್ಯ ಸರ್ಕಾರ ಘೋಷಣೆ]]></title>
            <link>https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</link>
            <guid isPermaLink="true">https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6</guid>
            <pubDate>Fri, 26 Jun 2026 15:20:19 +0530</pubDate>
            <description><![CDATA[ಕರ್ನಾಟಕ ಸರ್ಕಾರವು, ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಆರಂಭಿಸಲು ಅನುಮೋದನೆ ನೀಡಿದೆ. ಈ ನಿರ್ಧಾರವು ಪರಿಸರ ಸಂರಕ್ಷಣೆಯೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಸ್ಥಳೀಯ ಆರ್ಥಿಕತೆಗೆ ಚೈತನ್ಯ ನೀಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyqy1v1vekkrwc1j148qahy,imgname-cjjk-1778074453857.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕದ ಹೆಮ್ಮೆಯ ವನ್ಯಜೀವಿ ತಾಣಗಳಾದ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇನ್ಮುಂದೆ ಪ್ರವಾಸಿಗರು ಪೂರ್ಣ ಪ್ರಮಾಣದ ಜಂಗಲ್ ಸಫಾರಿ ಅನುಭವವನ್ನು ಪಡೆಯಬಹುದು. ತಜ್ಞರು ಮತ್ತು ಉನ್ನತಾಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ವರದಿ ಹಾಗೂ ಶಿಫಾರಸುಗಳನ್ನು ಪುರಸ್ಕರಿಸಿರುವ ರಾಜ್ಯ ಸರ್ಕಾರ, ಈ ಎರಡೂ ರಾಷ್ಟ್ರೀಯ ಉದ್ಯಾನವನಗಳಲ್ಲಿ ಪೂರ್ಣ ಪ್ರಮಾಣದ ಸಫಾರಿ ಆರಂಭಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.&lt;/p&gt;&lt;h2&gt;ವೈಜ್ಞಾನಿಕ ಮೌಲ್ಯಮಾಪನ ಮತ್ತು ಸಾಗಣೆ ಸಾಮರ್ಥ್ಯಕ್ಕೆ ಆದ್ಯತೆ&lt;/h2&gt;&lt;p&gt;ಬಂಡೀಪುರ ಮತ್ತು ನಾಗರಹೊಳೆ ಕಾಡುಗಳ ನೈಸರ್ಗಿಕ ಸಮತೋಲನಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ನಿರ್ಧಾರ ತಳೆಯಲಾಗಿದೆ. ತಾಂತ್ರಿಕ ಸಮಿತಿಯು ನಡೆಸಿರುವ ಕಟ್ಟುನಿಟ್ಟಿನ ವೈಜ್ಞಾನಿಕ ಮೌಲ್ಯಮಾಪನ ಹಾಗೂ ಅರಣ್ಯದ &quot;ಸಾಗಣೆ ಸಾಮರ್ಥ್ಯ&quot; (Carrying Capacity) ಆಧರಿಸಿ ಸಫಾರಿಗೆ ಹಸಿರು ನಿಶಾನೆ ನೀಡಲಾಗಿದೆ. ಅಂದರೆ, ಪರಿಸರ ವ್ಯವಸ್ಥೆಯ ಮೇಲಾಗುವ ಪರಿಣಾಮಗಳನ್ನು ಅಳೆದು ತೂಗಿ, ಕೇವಲ ನಿಯಂತ್ರಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಮಾತ್ರ ಜಂಗಲ್ ಸಫಾರಿ ನಡೆಸಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.&lt;/p&gt;&lt;h2&gt;ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಪ್ರವಾಸೋದ್ಯಮದ ಸಮನ್ವಯ&lt;/h2&gt;&lt;p&gt;ಕರ್ನಾಟಕವು ದೇಶದಲ್ಲೇ ಪರಿಸರ ಪ್ರವಾಸೋದ್ಯಮದಲ್ಲಿ (Eco-Tourism) ಮುಂಚೂಣಿಯಲ್ಲಿರುವ ರಾಜ್ಯವಾಗಿದೆ.&lt;/p&gt;&lt;p&gt;&lt;strong&gt;ವನ್ಯಜೀವಿಗಳ ರಕ್ಷಣೆ: &lt;/strong&gt;ಸಫಾರಿ ಆರಂಭಿಸಿದರೂ ವನ್ಯಜೀವಿಗಳ ಮುಕ್ತ ಮುಖಾಮುಖಿ ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನದ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಪರಿಸರ ವ್ಯವಸ್ಥೆಯ ಸಮಗ್ರತೆ: &lt;/strong&gt;ಪ್ರವಾಸೋದ್ಯಮದ ಹೆಸರಿನಲ್ಲಿ ಕಾಡಿನ ಶಾಂತಿ ಕದಡದಂತೆ ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ.&lt;/p&gt;&lt;p&gt;&lt;strong&gt;ಉತ್ತಮ ಪ್ರವಾಸಿ ಅನುಭವ: &lt;/strong&gt;ಪ್ರಕೃತಿ ಪ್ರೇಮಿಗಳಿಗೆ ಪ್ರಕೃತಿಯನ್ನು ಹತ್ತಿರದಿಂದ ವೀಕ್ಷಿಸಲು ಹಾಗೂ ಜೀವವೈವಿಧ್ಯದ ಬಗ್ಗೆ ಅರಿವು ಮೂಡಿಸಲು ಇದು ಪೂರಕವಾಗಲಿದೆ.&lt;/p&gt;&lt;h2&gt;ಸ್ಥಳೀಯ ಉದ್ಯೋಗ ಹಾಗೂ ಆರ್ಥಿಕತೆಗೆ ಬೂಸ್ಟರ್ ಡೋಸ್&lt;/h2&gt;&lt;p&gt;ಸರ್ಕಾರದ ಈ ನಿರ್ಧಾರ ಕೇವಲ ಪ್ರವಾಸಿಗರಿಗಷ್ಟೇ ಅಲ್ಲದೆ, ಸ್ಥಳೀಯ ಜನಸಮುದಾಯಗಳಿಗೂ ಹೊಸ ಆಶಾಕಿರಣ ಮೂಡಿಸಿದೆ. ಜಂಗಲ್ ಸಫಾರಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದರಿಂದ ಸ್ಥಳೀಯರ ಜೀವನೋಪಾಯ ಸುಧಾರಣೆಯಾಗಲಿದೆ. ಗೈಡ್&zwnj;ಗಳು, ಚಾಲಕರು ಮತ್ತು ಅರಣ್ಯ ಅವಲಂಬಿತ ಸಮುದಾಯಗಳಿಗೆ ನೇರ ಹಾಗೂ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆರ್ಥಿಕ ಉತ್ತೇಜನವೂ ಆಗಲಿದ್ದು ಹೋಂಸ್ಟೇ, ಹೋಟೆಲ್ ಉದ್ಯಮ ಹಾಗೂ ಸ್ಥಳೀಯ ಸಾರಿಗೆ ವ್ಯವಸ್ಥೆ ಚುರುಕುಗೊಂಡು ಪ್ರಾದೇಶಿಕ ಆರ್ಥಿಕತೆ ಬಲಗೊಳ್ಳಲಿದೆ.&lt;/p&gt;&lt;p&gt;ಕರ್ನಾಟಕವು ಯಾವಾಗಲೂ ಸುಸ್ಥಿರ ಪ್ರವಾಸೋದ್ಯಮ ಮಾದರಿಯನ್ನು ಪಾಲಿಸಿಕೊಂಡು ಬಂದಿದೆ. ಪರಿಸರ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುವ ಜೊತೆಗೆ, ವನ್ಯಜೀವಿ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ ಮತ್ತು ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ರಾಜ್ಯ ಸರ್ಕಾರದ ಈ ಪ್ರಕೃತಿ ಸ್ನೇಹಿ ಹಾಗೂ ಜನಪರ ನಿರ್ಧಾರವು ಕರ್ನಾಟಕದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಲಿದ್ದು, ಪ್ರಕೃತಿ ಸಂರಕ್ಷಣೆ ಮತ್ತು ಪ್ರಾದೇಶಿಕ ಅಭಿವೃದ್ಧಿ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಆಶಯ ಹೊಂದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-eco-tourism-full-scale-jungle-safari-to-resume-in-bandipur-and-nagarhole-tiger-reserves-gdp/articleshow-h2ogpi6"/>
        </item>
        <item>
            <title><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಮಣಿಸಲು ಹೆಚ್‌ಡಿಕೆ Gen-Z ಮಾಸ್ಟರ್ ಪ್ಲಾನ್! ಮೈತ್ರಿ ಅಭ್ಯರ್ಥಿ ಕವೀಶ್ ಗೌಡ?]]></title>
            <link>https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</link>
            <guid isPermaLink="true">https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s</guid>
            <pubDate>Sat, 20 Jun 2026 14:17:19 +0530</pubDate>
            <description><![CDATA[ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ನಡೆಗೆ ಅಸಮಾಧಾನಗೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, ಅವರಿಗೆ ಸೆಡ್ಡು ಹೊಡೆಯಲು ಹೊಸ ತಂತ್ರ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಯುವ ನಾಯಕ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸಿದ್ಧತೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9prng145w22nbfqvjj5d83w,imgname-hd-kumaraswamy-gt-devegowda-1762774401060.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಸಾಂಸ್ಕೃತಿಕ ನಗರಿ ಮೈಸೂರಿನ ಹೈಪ್ರೊಫೈಲ್ ಕ್ಷೇತ್ರವಾದ ಚಾಮುಂಡೇಶ್ವರಿಯಲ್ಲಿ ಈಗಿನಿಂದಲೇ ರಾಜಕೀಯ ಜಿದ್ದಾಜಿದ್ದಿ ಮತ್ತು ಹೊಸ ತಂತ್ರಗಾರಿಕೆಗಳು ಗರಿಗೆದರಿವೆ. ಜೆಡಿಎಸ್&zwnj;ನಲ್ಲಿ ಭಿನ್ನಮತದ ಮುನ್ಸೂಚನೆ ನೀಡಿರುವ ಹಿರಿಯ ನಾಯಕ ಜಿ.ಟಿ. ದೇವೇಗೌಡ (GTD) ಅವರಿಗೆ ಶಾಕ್ ನೀಡಲು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ 'Gen-Z' (ಯುವ ಪೀಳಿಗೆಯ) ಪ್ಲಾನ್ ರೂಪಿಸಿದ್ದಾರೆ. ಜಿಟಿಡಿ ವಿರುದ್ಧ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಯುವ ನಾಯಕ, ಕಳೆದ ಚುನಾವಣೆಯ ರನ್ನರ್-ಅಪ್ ಕವೀಶ್ ಗೌಡ ಅವರನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ತೆರೆಮರೆಯ ಸ್ಕೆಚ್ ಹಾಕುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಜಿಟಿಡಿ ನಡೆಗೆ ಹೆಚ್&zwnj;ಡಿಕೆ ಕೆಂಡ, ಈ ಬಾರಿ ನನ್ನದೇ ಅಂತಿಮ ತೀರ್ಮಾನ!&lt;/h2&gt;&lt;p&gt;ಕಳೆದ ಕೆಲವು ಸಮಯದಿಂದ ಜೆಡಿಎಸ್ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ. ದೇವೇಗೌಡರ ನಡೆ ಕುಮಾರಸ್ವಾಮಿ ಅವರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. &quot;ಜಿಟಿಡಿ ಈಗಾಗಲೇ ಪಕ್ಷದಿಂದ ಎರಡು ಕಾಲುಗಳನ್ನು ಆಚೆ ಇಟ್ಟಿದ್ದಾರೆ&quot; ಎಂದು ಸಿಟ್ಟು ಹೊರಹಾಕಿರುವ ಹೆಚ್&zwnj;ಡಿಕೆ, ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಹಂತದಲ್ಲೇ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.&lt;/p&gt;&lt;p&gt;ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೆಚ್.ಡಿ. ದೇವೇಗೌಡರಲ್ಲ, ನನ್ನದೇ ಅಂತಿಮ ತೀರ್ಮಾನ. ಮುಂದಿನ ಚುನಾವಣೆಯಲ್ಲಿ ಹೊಸ ಪೀಳಿಗೆಯ, ಸಕ್ರಿಯವಾಗಿರುವ 'Gen-Z' ಯುವಕರಿಗೆ ಟಿಕೆಟ್ ನೀಡಲಾಗುವುದು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ. ಹೆಚ್&zwnj;ಡಿಕೆ ಅವರ ಈ ಆಕ್ರೋಶಭರಿತ ಹೇಳಿಕೆಯ ಬೆನ್ನಲ್ಲೇ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕವೀಶ್ ಗೌಡ ಅವರ ಹೆಸರು ಅತ್ಯಂತ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;ಯಾರು ಈ ಕವೀಶ್ ಗೌಡ?&lt;/h2&gt;&lt;p&gt;ಕವೀಶ್ ಗೌಡ ಮೈಸೂರಿನ ಪ್ರಭಾವಿ ರಾಜಕೀಯ ಮನೆತನದಿಂದ ಬಂದವರು. ಇವರು ಮೈಸೂರು ಭಾಗದ ಕಾಂಗ್ರೆಸ್&zwnj;ನ ಹಿರಿಯ ಹಾಗೂ ಮಾಜಿ ಶಾಸಕ ವಾಸು ಅವರ ಪುತ್ರ. ಆದರೆ, ತಂದೆಯ ಪಕ್ಷದ ಹಾದಿ ಹಿಡಿಯದ ಕವೀಶ್ ಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿ (BJP) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ತಮ್ಮ ಚೊಚ್ಚಲ ಚುನಾವಣೆಯಲ್ಲೇ ಹಿರಿಯ ನಾಯಕ ಜಿ.ಟಿ. ದೇವೇಗೌಡರ ವಿರುದ್ಧ ಭರ್ಜರಿ ಪೈಪೋಟಿ ನೀಡಿ, 50 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಇಡೀ ಮೈಸೂರು ರಾಜಕೀಯ ವಲಯ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು.&lt;/p&gt;&lt;h2&gt;ದಳಪತಿಗಳ ಗಾಳ: ಜಿಟಿಡಿ ಕಾಂಗ್ರೆಸ್&zwnj;ಗೆ ಹೋದರೆ, ಕವೀಶ್ ಜೆಡಿಎಸ್&zwnj;ಗೆ?&lt;/h2&gt;&lt;p&gt;ಕಳೆದ ಚುನಾವಣೆಯಲ್ಲಿ ಸೋತ ಬಳಿಕವೂ ಕವೀಶ್ ಗೌಡ ಕ್ಷೇತ್ರದಲ್ಲಿ ಧೃತಿಗೆಡದೆ ನಿರಂತರವಾಗಿ ಸಕ್ರಿಯರಾಗಿದ್ದಾರೆ. ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ, ಯುವಕರನ್ನು ಸಂಘಟಿಸುತ್ತಾ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವಿ ನೆಟ್&zwnj;ವರ್ಕ್ ಸೃಷ್ಟಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್ ನಾಯಕರು ಈಗ ಕವೀಶ್ ಗೌಡಗೆ ನೇರವಾಗಿಯೇ ಗಾಳ ಹಾಕಿದ್ದಾರೆ.&lt;/p&gt;&lt;p&gt;ರಾಜಕೀಯ ವಲಯದ ಲೆಕ್ಕಾಚಾರಗಳ ಪ್ರಕಾರ, ಒಂದು ವೇಳೆ ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆದು ಅಧಿಕೃತವಾಗಿ ಹಸ್ತ ಪಾಳಯ (ಕಾಂಗ್ರೆಸ್) ಸೇರಿದರೆ, ಕವೀಶ್ ಗೌಡ ಅವರು ಜೆಡಿಎಸ್ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆಗ ಅವರು ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಪ್ರಬಲ ಜಂಟಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲಿದ್ದಾರೆ.&lt;/p&gt;&lt;h2&gt;ವರ್ಕ್ ಔಟ್ ಆಗುತ್ತಾ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್?&lt;/h2&gt;&lt;p&gt;ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರ ವೈಯಕ್ತಿಕ ವರ್ಚಸ್ಸು ಅಪಾರವಾಗಿದೆ. ಅವರನ್ನು ಅವರದ್ದೇ ಕ್ಷೇತ್ರದಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿಯೇ ಹೆಚ್&zwnj;ಡಿಕೆ ಈ ಬಾರಿ 'ವಯಸ್ಸು ಮತ್ತು ಯೌವನ'ದ ಕಾರ್ಡ್ ಪ್ಲೇ ಮಾಡಲು ಹೊರಟಿದ್ದಾರೆ. ಹಿರಿಯ ನಾಯಕನ ವಿರುದ್ಧ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ, ಕ್ಲೀನ್ ಇಮೇಜ್ ಹೊಂದಿರುವ ಹಾಗೂ ಒಕ್ಕಲಿಗ ಸಮುದಾಯದ ಯುವ ನಾಯಕನನ್ನು ತಂದು ನಿಲ್ಲಿಸಿದರೆ ಕ್ಷೇತ್ರವನ್ನು ಮತ್ತೆ ಜೆಡಿಎಸ್ ವಶಕ್ಕೆ ಪಡೆಯಬಹುದು ಎಂಬುದು ದಳಪತಿಗಳ ಲೆಕ್ಕಾಚಾರ.&lt;/p&gt;&lt;p&gt;ಕವೀಶ್ ಗೌಡ ಅವರ ಯುವ ಶಕ್ತಿ ಮತ್ತು ಮೈತ್ರಿಕೂಟದ ಸಾಂಪ್ರದಾಯಿಕ ಮತಗಳು ಸೇರಿದರೆ ಜಿಟಿಡಿಗೆ ಪ್ರಬಲ ಪೆಟ್ಟು ನೀಡಬಹುದು ಎಂಬ ಹೈಟೆಕ್ ಪ್ಲಾನ್ ಚಾಮುಂಡೇಶ್ವರಿ ಅಖಾಡವನ್ನು ಈಗಿನಿಂದಲೇ ಕಾವೇರುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ದಳಪತಿಗಳ ರಾಜಕೀಯ ತಂತ್ರಗಾರಿಕೆ ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/high-profile-shift-in-mysuru-hd-kumaraswamy-plots-gen-z-strategy-in-chamundeshwari-kavish-gowda-replace-gt-devegowda-gdp/articleshow-lbdsx0s"/>
        </item>
        <item>
            <title><![CDATA[ಬಡವರಿಗೆ ಒಳ್ಳೆಯದು ಮಾಡಲು ಪ್ರಧಾನಿ ಮೋದಿ ಬಂದಿಲ್ಲ: ಸಚಿವ ಕೆ.ವೆಂಕಟೇಶ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4</link>
            <guid isPermaLink="true">https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4</guid>
            <pubDate>Sun, 17 May 2026 22:26:31 +0530</pubDate>
            <description><![CDATA[&lt;p&gt;ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j7xtcxhpjjmbh16mn9564scv,imgname-vbv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.17): &lt;/strong&gt;ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು. ಪ್ರಧಾನಿ ಮೋದಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕಿದ್ದಾರೆ. ಈ ರೀತಿ ಬೆಲೆ ಏರಿಸಿದರೇ ಜನರು ಹೇಗೆ ಬದುಕಬೇಕು ಎಂದು ಕಿಡಿಕಾರಿದರು.&lt;/p&gt;&lt;p&gt;ಈಗ ಯುದ್ಧ ಇದೆ ಎನ್ನುತ್ತಿದ್ದಾರೆ. ಈ ಹಿಂದೆ ಬೆಲೆ ಏರಿಸಿದ್ದಾರಲ್ಲ, ಆಗ ಯುದ್ಧ ಎಲ್ಲಿತ್ತು. ಅಚ್ಚೇ ದಿನ್ ಎಂದು ಭಾಷಣ ಮಾಡುತ್ತಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಸುವುದು ಅಚ್ಚೇ ದಿನವೇ. ಜನರಿಗೆ ಹೊರೆ ಹೊರಿಸಲು ಮೋದಿ ಬಂದಿದ್ದಾರೆ ಎಂದರು&zwnj;. ಇದೇ ವೇಳೆ, ಮತಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಮಾತನಾಡಿ, ಮತಪಟ್ಟಿ ಪರಿಷ್ಕರಣೆ ನಡೆಸಲಿ ನಾವು ಯಾರೂ ಬೇಡ ಎನ್ನುವುದಿಲ್ಲ. ಆದರೆ, ವಸ್ತುನಿಷ್ಠವಾಗಿರಲಿ, ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಈ ಬಾರಿ ಕೈ ಬಿಟ್ಟಿದ್ದಾರೆ. ಬರೀ ಒಂದೂವರೆ ಸಾವಿರ ಮತಗಳ ಅಂತರದಿಂದ ಸಾಕಷ್ಟು ಟಿಎಂಸಿ ಅಭ್ಯರ್ಥಿಗಳು ಸೋತಿದ್ದಾರೆ ಎಂದರು.&lt;/p&gt;&lt;p&gt;ಹಿಜಾಬ್ ವಿವಾದ, ಸಮಸ್ಯೆಯನ್ನು ನಾವು ಹುಟ್ಟುಹಾಕಿಲ್ಲ, ಈ ಸಮಸ್ಯೆಯನ್ನು ಆಚೆಗೆ ತಂದಿದ್ದೇ ಬಿಜೆಪಿಯವರು, ಯಾವ ಕಾಲದಿಂದ ಹಿಜಾಬ್ ಇದೆ. ಈಗೇನು ಹೊಸದಾಗಿ ಬಂದಿದೆಯಾ ? ಸಾವಿರಾರು ವರ್ಷಗಳ ಪದ್ಧತಿಯನ್ನು ಬಿಜೆಪಿ ಅವರು ಬದಲಾಯಿಸಿ ಎಂದರೆ ಈಗ ಬದಲಾಯಿಸಲಾಗುತ್ತದೆಯೇ? ಆದಕ್ಕಾಗಿ ನಾವು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದು ಹಾಕಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.&lt;/p&gt;&lt;h2&gt;&lt;strong&gt;ನೀರಿನ ಸಮಸ್ಯೆ ಪರಿಹಾರ ತಡಮಾಡದಿರಿ&lt;/strong&gt;&lt;/h2&gt;&lt;p&gt;ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಕುಡಿಯುವ ನೀರಿನ ಸಂಬಂಧ ಚಾಮರಾಜನಗರ ಪಟ್ಟಣದ ವಿವಿಧ ವಾರ್ಡ್&zwnj;ಗಳಿಗೆ ಶನಿವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಮೊದಲಿಗೆ 1ನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಹೊರಭಾಗದಲ್ಲಿರುವ ಹಂದಿಜೋಗಿ ಕಾಲೋನಿಗೆ ಸಚಿವರು ಭೇಟಿ ನೀಡಿದರು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ನಿವಾಸಿಗಳನ್ನು ವಿಚಾರಿಸಿದರು.&lt;/p&gt;&lt;p&gt;ಬಳಿಕ ಮಾತನಾಡಿ, ಜನರಿಗೆ ಆದ್ಯತೆ ಮೇರೆಗೆ ನೀರು ಒದಗಿಸಬೇಕು. ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್&zwnj; ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.ಇದೇ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.&lt;/p&gt;&lt;p&gt;ಬಳಿಕ ಸೋಮವಾರಪೇಟೆ ಹಾಗೂ ಗಾಳೀಪುರ ಬಡಾವಣೆಗೆ ಆಗಮಿಸಿದ ವೆಂಕಟೇಶ್&zwnj;, ಅಲ್ಲಿಯೂ ನೀರಿನ ಸಮಸ್ಯೆ ಕುರಿತು ಜನರೊಂದಿಗೆ ಮಾತನಾಡಿದರು. ನೀರು 3 ದಿನಗಳಿಗೊಮ್ಮೆ ಸರಬರಾಜು ಆಗುತ್ತಿದೆ. ಹೆಚ್ಚುವರಿ ಬೋರ್&zwnj;ವೆಲ್ ಕೊರೆಸಬೇಕು. ಕಸ ಸಂಗ್ರಹಣೆ ವಾಹನ ವಾರಕ್ಕೊಮ್ಮೆಯಾದರೂ ಬರಬೇಕು. ಚರಂಡಿಗಳು ಸ್ವಚ್ಚತೆಯಿಲ್ಲದೆ ದುರ್ವಸನೆಯಿಂದ ಕೂಡಿವೆ. ಅದನ್ನು ಸರಿಪಡಿಸುವಂತೆ ಬಡಾವಣೆಗೆ ನಿವಾಸಿಗಳು ಸಚಿವರಿಗೆ ಮನವಿ ಮಾಡಿದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4"/>
        </item>
        <item>
            <title><![CDATA[25 ವರ್ಷದ ಬಳಿಕ KSRTC ಬಸ್ ವೇಳಾಪಟ್ಟಿ ದಿಢೀರ್‌ ಬದಲಾವಣೆ: ಗ್ರಾಮಸ್ಥರಿಂದ ಪ್ರತಿಭಟನೆ]]></title>
            <link>https://kannada.asianetnews.com/karnataka-districts/chamarajanagar-hanur-sudden-change-in-ksrtc-bus-schedule-after-25-years-protest-by-villagers-mrq/articleshow-lk7z9xg</link>
            <guid isPermaLink="true">https://kannada.asianetnews.com/karnataka-districts/chamarajanagar-hanur-sudden-change-in-ksrtc-bus-schedule-after-25-years-protest-by-villagers-mrq/articleshow-lk7z9xg</guid>
            <pubDate>Wed, 10 Jun 2026 09:22:04 +0530</pubDate>
            <description><![CDATA[&lt;p&gt;ಕೆಎಸ್&zwnj;ಆರ್&zwnj;ಟಿಸಿ ಬಸ್&zwnj;ನ ವೇಳಾಪಟ್ಟಿಯನ್ನು ಏಕಾಏಕಿ ಬದಲಿಸಿದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 25 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಅನುಕೂಲಕರವಾಗಿದ್ದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktqt8x8nn1pf8vygsqfa8vhn,imgname-ksrtc-1781063251220.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಹನೂರು ತಾಲೂಕಿನ ಮರೂರು, ಅಸ್ತೂರು ಹಾಗೂ ಪೊನ್ನಾಚಿ ಗ್ರಾಮಗಳಿಗೆ ಸಂಚರಿಸುವ ಕೆಎಸ್&zwnj;ಆರ್&zwnj;ಟಿಸಿ ಬಸ್ (KSRTC Bus) ವೇಳಾಪಟ್ಟಿಯನ್ನು ಏಕಾಏಕಿ ಬದಲಾಯಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.&lt;/p&gt;&lt;h2&gt;&lt;strong&gt;25 ವರ್ಷಗಳ ಬಳಿಕ ಸಮಯ ಬದಲಾವಣೆ&lt;/strong&gt;&lt;/h2&gt;&lt;p&gt;ಇಲ್ಲಿಯ ಗ್ರಾಮಸ್ಥರು ಹೇಳುವ ಪ್ರಕಾರ, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸುಮಾರು 25 ವರ್ಷಗಳಿಂದ ಬೆಳಗ್ಗೆ 11ಕ್ಕೆ ಪೊನ್ನಾಚಿಗೆ ಆಗಮಿಸಿ ಸಂಜೆ 3.30ಕ್ಕೆ ಹನೂರಿಗೆ ಹಿಂದಿರುಗುತ್ತಿತ್ತು. ಈ ವೇಳಾಪಟ್ಟಿಯು ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ನಿತ್ಯದ ಕೆಲಸಗಳಿಗೆ ಪಟ್ಟಣಕ್ಕೆ ತೆರಳುವ ಜನರಿಗೆ ಅತ್ಯಂತ ಅನುಕೂಲವಾಗಿತ್ತು.&lt;/p&gt;&lt;h3&gt;&lt;strong&gt;ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ತೊಂದರೆ&lt;/strong&gt;&lt;/h3&gt;&lt;p&gt;ಆದರೆ ಇತ್ತೀಚೆಗೆ ಬಸ್ ಸಂಚಾರದ ಸಮಯವನ್ನು ಏಕಾಏಕಿ ಬೆಳಗ್ಗೆ 9.30ಕ್ಕೆ ಬದಲಾಯಿಸಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ : &lt;/strong&gt;&lt;strong&gt;59 ದಿನಗಳ ಬಳಿಕ ಕೊನೆಗೂ ಹುತ್ತೂರು, ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಂತು; ರೈತರಲ್ಲಿ ಸಂತಸ&lt;/strong&gt;&lt;/p&gt;&lt;p&gt;ಹಳೆಯ ವೇಳಾಪಟ್ಟಿಯೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡದಿದ್ದರೆ ಮುಂದೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಕ್ಕೆ ಸ್ಯಾಟ್&zwnj;ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್&zwnj;ವರ್ಕ್ ಸೌಲಭ್ಯ&lt;/strong&gt;&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-hanur-sudden-change-in-ksrtc-bus-schedule-after-25-years-protest-by-villagers-mrq/articleshow-lk7z9xg"/>
        </item>
        <item>
            <title><![CDATA[ಚಾಮರಾಜನಗರ: ಬಾಲಕನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಸೆರೆ? 15 ದಿನಗಳ ಬಳಿಕ ತಾನೇ ತಾನಾಗಿ ಬೋನಿಗೆ ಬಿದ್ದಿದ್ದು ಹೇಗೆ?]]></title>
            <link>https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug</link>
            <guid isPermaLink="true">https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug</guid>
            <pubDate>Sun, 24 May 2026 10:24:32 +0530</pubDate>
            <description><![CDATA[&lt;p&gt;ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪೋಷಕರ ಮುಂದೆಯೇ ಬಾಲಕನನ್ನು ಎಳೆದೊಯ್ದು ಕೊಂದಿದ್ದ ಚಿರತೆಯು, 15 ದಿನಗಳ ನಿರಂತರ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಆದರೆ, ಸೆರೆಸಿಕ್ಕಿರುವುದು ಅದೇ ನರಭಕ್ಷಕ ಚಿರತೆಯೇ ಎಂಬ ಅನುಮಾನ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksc545wqdpvjpkcxp0scxrkz,imgname-whatsapp-image-2026-05-24-at-9.20.00-am-1779598235543.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.24): &lt;/strong&gt;ಪೋಷಕರ ಮುಂದೆಯೇ ಬಾಲಕನನ್ನ ಎಳೆದೊಯ್ದು ಕೊಂದಿದ್ದ ಚಿರತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕೊನೆಗೂ ಬಲೆಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.&lt;/p&gt;&lt;h2&gt;ಬಾಲಕನನ್ನು ಎಳೆದೊಯ್ದು ಕೊಂದಿತ್ತು&lt;/h2&gt;&lt;p&gt;ಕೆಲವು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೆದುರೇ ಚಿರತೆ ಎಳೆದೊಯ್ದು ಕೊಂದಿತ್ತು.ನಾಗಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಘಟನೆ ಬಳಿಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಆರಂಭಿಸಿತ್ತು.&lt;/p&gt;&lt;h3&gt;15 ದಿನಗಳ ನಿರಂತರ ಕಾರ್ಯಾಚರಣೆ&lt;/h3&gt;&lt;p&gt;ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಆರಂಭದಲ್ಲಿ ಕ್ಯಾಮೆರಾ ಟ್ರ್ಯಾಪ್&zwnj;ಗೆ ಚಿರತೆ ಸೆರೆಯಾಗಿದ್ದರೂ, ಬಳಿಕ ಅದು ಬೋನಿಗೆ ಬೀಳದೆ ಯಶಸ್ವಿಯಾಗಿ ತಪ್ಪಿಸಿಕೊಂಡಿತ್ತು. ಆದರೆ. ಇದೀಗಾ ರಾತ್ರೋರಾತ್ರಿ ಚಿರತೆ ಬೋನಿಗೆ ಬಿದ್ದಿರುವುದು ಸಿಬ್ಬಂದಿಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಅದೇ ಚಿರತೆಯೋ ? ಬೇರೊಂದೋ ಸ್ಥಳಿಯರಿಗೆ ಅನುಮಾನ&lt;/strong&gt;&lt;/p&gt;&lt;p&gt;ಬಾಲಕನ ಮೇಲೆ ದಾಳಿ ನಡೆಸಿದ್ದು ಇದೇ ಚಿರತೆಯೇ? ಬೇರೊಂದೋ? ಎಂಬ ಅನುಮಾನ ಸ್ಥಳೀಯರಲ್ಲಿ ಇನ್ನೂ ಹಾಗೆ ಉಳಿದಿದೆ. ಈ ಚಿರತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇಕೆಗಳ ಮೇಲೂ ದಾಳಿ ನಡೆಸಿತ್ತು ಎಂಬ ಮಾಹಿತಿ ಇದೆ. ಹೀಗಾಗಿ ಇದು ಅದೇ ನರಭಕ್ಷಕ ಚಿರತೆನನಾ ಅಥವಾ ಬೇರೆಯದೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ರಕ್ತದ ಮಾದರಿ ಪರೀಕ್ಷೆಗೆ ಅಧಿಕಾರಿಗಳ ನಿರ್ಧಾರ&lt;/strong&gt;&lt;/p&gt;&lt;p&gt;ಬಾಲಕನನ್ನು ಕೊಂದ ಚಿರತೆ ಇದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಬಂದ ಬಳಿಕವೇ ಅಧಿಕೃತವಾಗಿ ದೃಢಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>chamarajnagar</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ?: ಸಂಕಷ್ಟದಲ್ಲಿ ವೃದ್ಧರು, ಅಂಗವಿಕಲರ ಜೀವನ!]]></title>
            <link>https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx</link>
            <guid isPermaLink="true">https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx</guid>
            <pubDate>Mon, 25 May 2026 18:34:27 +0530</pubDate>
            <description><![CDATA[&lt;p&gt;ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfkrt8zzq1394w84ycnc05y,imgname-chc-1779714255135.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.25):&lt;/strong&gt; ಗ್ಯಾರಂಟಿ ಸರ್ಕಾರದ ಬಳಿ ಮಾಸಾಶನ ನೀಡಲೂ ಹಣ ಇಲ್ವಾ ಅನುಮಾನ ಮೂಡ್ತಿದೆ. ಇದಕ್ಕೆ ಕಾರಣ ಕಳೆದ ಎರಡು ಮೂರು ತಿಂಗಳಿಂದ ಮಾಸಾಶನ ಪಡೆಯಲು ವೃದ್ದರು, ವಿಧವೆಯರು ಅಂಗವಿಕಲರು ದಿನ ನಿತ್ಯ ಅಲೆದಾಡುತ್ತಿದ್ದಾರೆ. ಮಾಸಾಶನ ನಂಬಿಕೊಂಡಿರುವವರ ಪರಿಸ್ಥಿತಿ ಆಯೋಮಯವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ. ನಮ್ಮ ಜೀವನಕ್ಕೆ ಸರ್ಕಾರದ ಮಾಸಾಶನ ಕೂಡ ಆಧಾರವಾಗಿದೆ, ಆದ್ರೆ ಕಳೆದೆರಡು ಮೂರು ತಿಂಗಳಿಂದ ಬಂದಿಲ್ಲ. ಜೀವನ ನಡೆಸುವುದು ಕೂಡ ದುಸ್ತರವಾಗಿದೆ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟಾರೆ 84,136 ವೃದ್ಧರು, 40,272 ವಿಧವೆಯರು, 20,760 ಅಂಗವಿಕಲರು ಹಾಗು 8772 ಮನಸ್ವಿನಿ ಯೋಜನೆಯ ಫಲಾನುಭವಿಗಳಿದ್ದಾರೆ. ಮಾಸಾಶನವನ್ನೆ ನಂಬಿಕೊಂಡ ಅಸಹಾಯಕರ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರವೇ ದುಡ್ಡು ಕೊಡ್ತಿಲ್ಲ, ನಾವೆಲ್ಲಿ ಕೊಡೋಣ ಎಂದು ಅಧಿಕಾರಿಗಳು ಹೇಳ್ತಿದ್ದಾರೆ ಅಂತಾ ವೃದ್ದರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ಬಳಿ ಹಣ ಇಲ್ವಾ?&lt;/strong&gt;&lt;/h2&gt;&lt;p&gt;ಇನ್ನೂ ಪದೇಪದೇ ಬರಬೇಡಿ ಅಂತ ಅಧಿಕಾರಿಗಳು ವೃದ್ದರನ್ನು ಗದರಿಸುತ್ತಾರಂತೆ, ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ? ಎಂಬ ಅನುಮಾನ ಉಂಟಾಗಿದೆ. ಮೂರು ತಿಂಗಳಿಂದ ಪೋಸ್ಟ್ ಆಫೀಸ್, ಬ್ಯಾಂಕ್ಗಳಿಗೆ ಅಲೆಯುತ್ತಿರು ವೃದ್ಧರು, ವಿಧವೆಯರು, ಅಂಗವಿಕಲರು ಪರದಾಟ ಪಡುತ್ತಿದ್ದಾರೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮವೊಂದರಲ್ಲೇ 1500 ಕ್ಕು ಹೆಚ್ಚು ಫಲಾನುಭವಿಗಳಿದ್ದಾರೆ. ಬ್ಯಾಂಕು, ಪೋಸ್ಟ್ ಆಫೀಸ್ಗೆ ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಕಣ್ಣು ಕಾಣೋಲ್ಲ.&lt;/p&gt;&lt;p&gt;ಮತ್ತೆ ಕೆಲವರಿಗೆ ಮಕ್ಕಳೂ ಇಲ್ಲ, ನಡೆದಾಡಲು ದೇಹದಲ್ಲಿ ಶಕ್ತಿ ಇಲ್ಲ ಮಾಸಾಶನವನ್ನೇ ನಂಬಿಕೊಂಡು ಜೀವನ ನಡೆಸ್ತಿರೋ ವೃದ್ಧರ ಪರಿಸ್ಥಿತಿ ಮಾತ್ರ ಯಾರಿಗೂ ಹೇಳತೀರದಾಗಿದೆ. ಒಟ್ನಲ್ಲಿ ಸರ್ಕಾರ ಅಂಗವಿಕಲರು, ವಿಧವೆಯರು ಹಾಗೆಯೆ ವೃದ್ದರಿಗೆ ಹಣ ಕೊಡದ ಹಿನ್ನಲೆ ಪ್ರತಿನಿತ್ಯ ಯಾವಾಗ ಷೆನ್ಷನ್ ಬರುತ್ತೆ ಚಾತಕ ಪಕ್ಷಿಗಳಂತೆ ಕಾದಿದ್ದಾರೆ. ಅಲ್ಲದೇ ಎಷ್ಟೋ ಜನ ವೃದ್ದರು ಕೂಡ ಜೀವನಕ್ಕೆ ಈ ಮಾಸಾಶನ ನಂಬಿಕೊಂಡಿದ್ದು, ಶೀಘ್ರದಲ್ಲೇ ಸರ್ಕಾರ ಹಣ ಬಿಡುಗಡೆ ಮಾಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx"/>
        </item>
        <item>
            <title><![CDATA[ಕಾಂಗ್ರೆಸ್‌ನಲ್ಲಿ ನಿಜವಾದ ಹೈಕಮಾಂಡ್ ಯಾರು? ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr</guid>
            <pubDate>Wed, 27 May 2026 20:27:31 +0530</pubDate>
            <description><![CDATA[&lt;p&gt;ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್&zwnj; ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಳಂದೂರು (ಮೇ.27): &lt;/strong&gt;ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್&zwnj; ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ಜೆಎಸ್&zwnj;ಎಸ್ ಆಶ್ರಮದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ-2026ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.&lt;/p&gt;&lt;p&gt;ಹಿಂದುತ್ವ ಎಂಬುದು ಧರ್ಮವಲ್ಲ ನಮ್ಮ ಸಂಸ್ಕೃತಿ ಹಾಗೂ ನಮ್ಮ ನಾಗರೀಕತೆಯಾಗಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಹಿಂದೂಸ್ಥಾನಿಗಳೇ ಆಗಿದ್ದಾರೆ. ದೇಶದ ಆಸ್ಮಿತೆ ನಾವೆಲ್ಲರೂ ಒಂದೇ ಎಂಬುದೇ ಹಿಂದುತ್ವವಾಗಿದೆ. ಬಂಧುತ್ವ ಎಂದರೆ ದೇಶದಲ್ಲಿ ಹುಟ್ಟಿ ಇಲ್ಲೇ ವಾಸಿಸುವ ಪ್ರತಿ ಜಾತಿ ಧರ್ಮದವರು ವಾಸಿಸುವರು ಇಲ್ಲಿನ ಬಂಧುಗಳಾಗಿದ್ದಾರೆ. ಆದರೆ ಇಲ್ಲಿ ಹುಟ್ಟಿದವರಿಗೆ ಮಾತ್ರ ಇಲ್ಲಿ ಸ್ಥಾನವಿದೆ. ನುಸುಳುಕೋರರನ್ನು ನಾವು ಹೊಗರೆ ಕಳುಹಿಸುತ್ತೇವೆ. ಅವರಿಗೆ ಇಲ್ಲಿರಲು ಅವಕಾಶ ನೀಡದಿರುವುದೇ ಸಿಂಧುತ್ವವಾಗಿದೆ.&lt;/p&gt;&lt;p&gt;ನಮ್ಮ ಪಕ್ಷ ಮುಸ್ಲಿಮರ ವಿರೋಧಿಯಲ್ಲ, ನಾವು ಅವರಿಗೆ ಇದುವರೆವಿಗೂ ಯಾವುದೇ ತೊಂದರೆ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮತಗಳೂ ಬಿಜೆಪಿಗೆ ಬಿದ್ದಿವೆ. ಅವರಿಗೂ ಕೂಡ ಯಾವ ಪಕ್ಷ ರಾಷ್ಟ್ರದ ಪ್ರಗತಿಗೆ, ಇಲ್ಲಿ ವಾಸಿಸುವ ನಾಗರಿಕರ ಪರವಾಗಿ ನಿಂತಿದೆ ಎಂಬುದು ಈಗೀಗ ಅರಿವಾಗುತ್ತಿದೆ. ಬಿಜೆಪಿ ನಡೆಸುವ ಇಂತಹ ಪ್ರಶಿಕ್ಷಣ ಶಿಬಿರಗಳು ಯಾವ ರಾಜಕೀಯ ಪಕ್ಷಗಳು ಮಾಡುವುದಿಲ್ಲ. ಇದೊಂದು ನಮ್ಮ ಸಂಘಟನಾ ಶಕ್ತಿಯಾಗಿದೆ. ಇದನ್ನು ಹೆಚ್ಚು ಮಾಡಿಕೊಂಡು, ನಾವು ಮುಂದಿನ ಎಲ್ಲಾ ಚುನಾವಣೆಗಳಿಗೂ ಈಗಿಂದಲೇ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ಸಿದ್ದರಾಮಯ್ಯ ಹೈಕಮಾಂಡ್&lt;/strong&gt;&lt;/h2&gt;&lt;p&gt;ಕಾಂಗ್ರೆಸ್&zwnj;ನಲ್ಲಿ ಯಾವ ಹೈಕಮಾಂಡ್ ಕೂಡ ಇಲ್ಲ. ಇಲ್ಲಿ ಸಿದ್ದರಾಮಯ್ಯರೇ ಹೈಕಮಾಂಡ್ ಆಗಿದ್ದಾರೆ. ಇವರಿಗೆ ಸಿಎಂ ಕುರ್ಚಿಯಿಂದ ಕೆಳಕ್ಕೆ ಇಳಿಸಿದರೆ ಸರ್ಕಾರ ಬೀಳುತ್ತದೆ. ಈ ವ್ಯಕ್ತಿ 3 ವರ್ಷಗಳ ಅವಧಿಯಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, 4.5 ಲಕ್ಷ ಕೋಟಿ ಸಾಲ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ. ಬಜೆಟ್ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದರು.&lt;/p&gt;&lt;p&gt;ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್&zwnj; ಮಾತನಾಡಿ, ಈ ಶಿಬಿರ ನನಗೂ ಕೂಡ ಅನೇಕ ವಿಷಯಗಳನ್ನು ಕಲಿಸಿದೆ. ವ್ಯಕ್ತಿತ್ವ, ರಾಜಕೀಯ ಚತುರತೆ ರೂಪಿಸಲು ಇಂತಹ ಶಿಬಿರಗಳು ನಮಗೆ ಸಹಕಾರಿಯಾಗಿವೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟಿತ ಹೋರಾಟ ಮಾಡಬೇಕಿದೆ. ದೇಶದಲ್ಲಿ ಪಕ್ಷ ಹೆಚ್ಚು ಸಂಘಟಿತವಾಗಿವೆ. 17 ರಾಜ್ಯಗಳಲ್ಲಿ ನಾವು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ದೇಶದಲ್ಲಿ 1798 ಶಾಸಕರು ನಮ್ಮ ಪಕ್ಷದವರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿಯನ್ನೂ ಕೂಡ ನಾವೇ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr"/>
        </item>
        <item>
            <title><![CDATA[ಪುಲಸಾನಿಒಡ್ಡು ಗ್ರಾಮದಲ್ಲಿ ಅಪರೂಪದ ವೀರರಗುಡಿ ಪತ್ತೆ;  ರಾಜರ ಬೇಟೆಯ ಪರಾಕ್ರಮ ಅನಾವರಣ]]></title>
            <link>https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr</link>
            <guid isPermaLink="true">https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr</guid>
            <pubDate>Thu, 18 Jun 2026 08:45:07 +0530</pubDate>
            <description><![CDATA[&lt;p&gt;ಪುಲಸಾನಿಒಡ್ಡು ಗ್ರಾಮದಲ್ಲಿ ಪುರಾತತ್ವ ಸರ್ವೇಕ್ಷಣೆ ವೇಳೆ ವಿಜಯನಗರ ಶೈಲಿಯ ಅಪರೂಪದ ವೀರರಗುಡಿಯೊಂದು ಪತ್ತೆಯಾಗಿದೆ. ಈ ದೇವಾಲಯವು ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳನ್ನು ಹೊಂದಿದ್ದು, 16-17ನೇ ಶತಮಾನದ ಇತಿಹಾಸ ಮತ್ತು ಅಂದಿನ ರಾಜರ ಬೇಟೆಯ ಪರಾಕ್ರಮವನ್ನು ಅನಾವರಣಗೊಳಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvcbb8pjghrnspjrb6sncyq7,imgname-temple-1781752242898.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕಬಳ್ಳಾಪುರ: &lt;/strong&gt;ಪುರಾತತ್ವ ಇಲಾಖೆಯ ಗ್ರಾಮವಾರು ಸರ್ವೆ ಕಾರ್ಯದ ವೇಳೆ ತಾಲೂಕಿನ ಹಂಪಸಂದ್ರ ಗ್ರಾಪಂಗೆ ಸೇರಿದ ಪುಲಸಾನಿಒಡ್ಡು ಗ್ರಾಮದಲ್ಲಿ ವಿಶೇಷವಾದ ವೀರರಗುಡಿ ಪತ್ತೆಯಾಗಿದೆ. ಇದರ ಶಿಲ್ಪಕಲೆ, ವಾಸ್ತುಶೈಲಿ ಹಾಗೂ ವೀರಗಲ್ಲುಗಳು ವಿಜಯನಗರ ಕಾಲದ ಇತಿಹಾಸವನ್ನು ಅನಾವರಣಗೊಳಿಸುತ್ತಿವೆ. ಇತಿಹಾಸಕಾರರಾದ ಕೆ. ಧನಪಾಲ್ ಹಾಗೂ ತ್ಯಾಗರಾಜ್ ಅವರು ಈ ಸ್ಮಾರಕವನ್ನು ಅಧ್ಯಯನ ನಡೆಸಿ ಮಹತ್ವದ ಮಾಹಿತಿಗಳನ್ನು ಹೊರತಂದಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ವೀರರಗುಡಿಗಳನ್ನು ಕಲ್ಲಿನಿಂದ ನಿರ್ಮಿಸಿದ ಸಣ್ಣ ಮಂಟಪಗಳ ರೂಪದಲ್ಲಿ ಹೊಲಗಳಲ್ಲಿ ಅಥವಾ ಗ್ರಾಮದ ಹೊರಭಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ವೀರರಗುಡಿ ಊರಿನ ಮಧ್ಯದಲ್ಲಿಯೇ ಇರುವುದು ವಿಶೇಷವಾಗಿದೆ.&lt;/p&gt;&lt;p&gt;ಈ ವೀರರಗುಡಿಯ ದೇವಾಲಯ ರಚನೆಯು ವಿಜಯನಗರ ಶೈಲಿಯನ್ನು ಹೊಂದಿದ್ದು, ಮುಂಭಾಗದ ಮಂಟಪದಲ್ಲಿ ವಿಜಯನಗರ ಕಾಲದ ಯಾಳಿ ಶಿಲ್ಪಗಳನ್ನು ಕೆತ್ತಲಾಗಿದೆ. ಅಲ್ಲದೆ, ಸುಂದರ ನರ್ತಕಿಯರ ಎರಡು ಶಿಲ್ಪಗಳೂ ಕಂಡುಬರುತ್ತವೆ. ಈ ನರ್ತಕಿಯರು ನೆರಿಗೆಯ ವಸ್ತ್ರ ಧರಿಸಿದ್ದು, ಒಂದು ಶಿಲ್ಪದಲ್ಲಿ ಸ್ತನಪಟ್ಟಿಕೆಯನ್ನು ಧರಿಸಿರುವಂತೆ ಹಾಗೂ ಇನ್ನೊಂದು ಶಿಲ್ಪದಲ್ಲಿ ಅರೆನಗ್ನವಾಗಿ ಕೆತ್ತಲಾಗಿದೆ. ಈ ಶಿಲ್ಪಗಳು ಭಕ್ತಾದಿಗಳನ್ನು ಸ್ವಾಗತಿಸುವ ರೀತಿಯಲ್ಲಿ ರೂಪುಗೊಂಡಿವೆ.&lt;/p&gt;&lt;h2&gt;&lt;strong&gt;ಸುಮಾರು ಎಂಟು ಸ್ಮಾರಕ ಶಿಲ್ಪಗಳು&lt;/strong&gt;&lt;/h2&gt;&lt;p&gt;ದೇವಾಲಯವು ಗರ್ಭಗುಡಿ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ವಿಶಾಲವಾದ ಗರ್ಭಗುಡಿಯಲ್ಲಿ ಸುಮಾರು ಎಂಟು ಸ್ಮಾರಕ ಶಿಲ್ಪಗಳಿದ್ದು, ಅವೆಲ್ಲವೂ ಬೇಟೆಗೆ ಸಂಬಂಧಿಸಿದ ವೀರಗಲ್ಲುಗಳಾಗಿವೆ. ಒಂದು ಶಿಲ್ಪದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ರಾಜನು ತನ್ನ ನಾಯಿಯೊಂದಿಗೆ ಬೇಟೆಗೆ ತೆರಳಿ ಹುಲಿಯನ್ನು ಬೇಟೆಯಾಡಿದ ದೃಶ್ಯವನ್ನು ಚಿತ್ರಿಸಲಾಗಿದೆ. ಕೆಲವು ಶಿಲ್ಪಗಳಲ್ಲಿ ರಾಜನೊಂದಿಗೆ ಸೇವಕರೂ ಬೇಟೆಗೆ ತೆರಳಿರುವುದನ್ನು ಕಾಣಬಹುದು. ಆ ಕಾಲದಲ್ಲಿ ಈ ಪ್ರದೇಶವನ್ನು ಆಳಿದ ರಾಜರು ಅಥವಾ ವಿಜಯನಗರ ಅರಸರ ಸಾಮಂತರಾಗಿದ್ದ ಪಾಳೇಗಾರರ ವಂಶದವರೇ ಬೇಟೆಗೆ ತೆರಳಿದ್ದರೆಂಬ ಸಾಧ್ಯತೆಯಿದೆ ಎಂದು ಈ ಕುರಿತು ಅಧ್ಯಯನ ನಡೆಸಿದ ಕೆ. ಧನಪಾಲ್ ತಿಳಿಸಿದ್ದಾರೆ.&lt;/p&gt;&lt;p&gt;ಈ ಬೇಟೆಗಳಲ್ಲಿ ಅನೇಕ ವೀರರು ಮಡಿದಿರುವ ಸಾಧ್ಯತೆಯಿದ್ದು, ನಂತರ ಅವರ ಪತ್ನಿಯರು ಸತಿಯಾದಿರಬಹುದೆಂಬ ಊಹೆಯೂ ಇದೆ. ಒಂದು ಶಿಲ್ಪದಲ್ಲಿ ಶಾಸನವಿದ್ದು, ಅದರ ಲಿಪಿಯ ಆಧಾರದ ಮೇಲೆ ಈ ಶಿಲ್ಪಗಳು ಸುಮಾರು 16-17ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಶಾಸನದಲ್ಲಿ ವೀರನ ಹೆಸರು &lsquo;ಎರಕದುರಯ್ಯ&rsquo; ಎಂದು ತಿಳಿದುಬರುವ ಸಾಧ್ಯತೆಯಿದೆ.&lt;/p&gt;&lt;p&gt;ಈಗಿರುವಂತೆ ಆಗಲೂ ಈ ಪ್ರದೇಶವು ದಟ್ಟ ಕಾಡಿನಿಂದ ಕೂಡಿದ್ದು, ಕ್ರೂರ ಪ್ರಾಣಿಗಳ ಉಪಟಳದಿಂದ ಪ್ರಜೆಗಳನ್ನು ರಕ್ಷಿಸಲು ಸ್ವತಃ ರಾಜರೇ ಬೇಟೆಗೆ ತೆರಳಿ ಮಡಿದಿರಬಹುದೆಂಬ ಸಾಧ್ಯತೆಯಿದೆ. ಅಂತಹ ವೀರರಿಗೆ ದೇವರ ಸ್ಥಾನಮಾನ ನೀಡಿ ಈ ದೇವಸ್ಥಾನವನ್ನು ನಿರ್ಮಿಸಿರುವ ಸಾಧ್ಯತೆಯೂ ಇದೆ. ಎಲ್ಲಾ ಶಿಲ್ಪಗಳಲ್ಲಿಯೂ ಕೈಲಾಸದ ಚಿತ್ರಣವಿರುವುದರಿಂದ ಅವರು ಶೈವ ಸಂಪ್ರದಾಯಕ್ಕೆ ಸೇರಿದವರಾಗಿದ್ದರೆಂಬುದು ತಿಳಿದುಬರುತ್ತದೆ.&lt;/p&gt;&lt;h3&gt;&lt;strong&gt;ದೇವಸ್ಥಾನದ ಕುರಿತು ಜಾನಪದ ಕಥೆ&lt;/strong&gt;&lt;/h3&gt;&lt;p&gt;ಈ ಗ್ರಾಮದಲ್ಲಿ ಈ ದೇವಸ್ಥಾನದ ಕುರಿತು ಒಂದು ಜಾನಪದ ಕಥೆಯೂ ಜನಪ್ರಿಯವಾಗಿದೆ. ಹಿಂದೆ ಪುಲಸಾನಿ ಎಂಬ ಮಹಿಳೆ ಇಲ್ಲಿಂದ ಲೇಪಾಕ್ಷಿಗೆ ಬುಟ್ಟಿಯಲ್ಲಿ ಊಟ ತೆಗೆದುಕೊಂಡು ಹೋಗುತ್ತಿದ್ದಳು. ಅಲ್ಲಿಂದ ಹಿಂದಿರುಗುವಾಗ ಈ ಕಲ್ಲುಗಳನ್ನು ಒಂದೊಂದಾಗಿ ತಂದು ಇಲ್ಲಿ ಮಂದಿರವನ್ನು ನಿರ್ಮಿಸಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಾರೆ.&lt;/p&gt;&lt;p&gt;ಈ ಕ್ಷೇತ್ರ ಕಾರ್ಯದಲ್ಲಿ ಗ್ರಾಮಸ್ಥರಾದ ಕಿಶೋರ್, ಚಂದು, ಜಸ್ವಂತ್, ಸೋಮು, ಕುಮಾರ, ಗಂಗಾಧರಪ್ಪ ಹಾಗೂ ನಾರಾಯಣಸ್ವಾಮಿ ಪಾಲ್ಗೊಂಡು ಸಹಕಾರ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chikkaballapur-ancient-rare-veeragudi-temple-discovered-in-pulasanioddu-village-kings-hunting-prowess-unveiled-mrq/articleshow-nuoecrr"/>
        </item>
        <item>
            <title><![CDATA[Karnataka Police: ಈ ಜಿಲ್ಲೆಯ ಪೊಲೀಸರ ಪ್ರಾಮಾಣಿಕತೆಗೆ ಕರ್ನಾಟಕವೇ ಸಲಾಂ ಹೇಳುತ್ತಿದೆ: ಕಾರಣ  ₹3 ಲಕ್ಷ ಹಣ!]]></title>
            <link>https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3</link>
            <guid isPermaLink="true">https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3</guid>
            <pubDate>Sat, 20 Jun 2026 23:03:04 +0530</pubDate>
            <description><![CDATA[&lt;p&gt;Begur Police: ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್&zwnj;ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvk1fb5j7b880bq3sx5zxhjh,imgname-jij-1781976771762.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುಂಡ್ಲುಪೇಟೆ (ಜೂ.20): &lt;/strong&gt;ಇಲ್ಲಿನ ಬೇಗೂರು ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಯ ಬ್ಯಾಗ್&zwnj;ನಲ್ಲಿದ್ದ 3 ಲಕ್ಷ ರು.ವನ್ನು ಆತನ ಪೋಷಕರಿಗೆ ಹಸ್ತಾಂತರಿಸಿ ಬೇಗೂರು ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ.&lt;/p&gt;&lt;p&gt;ಬೆಂಡಗಳ್ಳಿ ಬಳಿಯ ಎಂಆರ್&zwnj;ಪಿಎಲ್&zwnj; ಹೊಸ ಪೆಟ್ರೋಲ್&zwnj; ಬಂಕ್&zwnj; ಬಳಿ ಬರಟಹಳ್ಳಿ ಗ್ರಾಮದ ಯುವಕ, ಖಾಸಗಿ ಫೈನಾನ್ಸ್&zwnj; ಕಂಪನಿಯಲ್ಲಿ ನೌಕರ ಮಂಜುನಾಥ್&zwnj; ಬೈಕ್&zwnj;ನಿಂದ ಬಿದ್ದೋ, ಅಪರಿಚಿತ ವಾಹನ ಡಿಕ್ಕಿ ಹೊಡೆದೋ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಳೆದ ಬುಧವಾರ ಬೆಳಗ್ಗೆ ಬಿದ್ದಿದ್ದ. ಅಪಘಾತದ ವಿಷಯ ತಿಳಿದ ಬೇಗೂರು ಠಾಣೆಯ ಮುಖ್ಯ ಪೇದೆ ದಿವಾಕರ್&zwnj;, ಪುಟ್ಟರಾಜು, ಸ್ಥಳಕ್ಕಾಗಮಿಸಿ ಮೊದಲು ಗಾಯಾಳು ಮಂಜುನಾಥ್&zwnj;ರನ್ನು ಆ್ಯಂಬುಲೆನ್ಸ್&zwnj; ಮೂಲಕ ಗುಂಡ್ಲುಪೇಟೆ ಆಸ್ಪತ್ರೆಗೆ ಕಳುಹಿಸಿದರು.&lt;/p&gt;&lt;p&gt;ಬಳಿಕ ಗಾಯಾಳುವಿನ ವಿಳಾಸ ಪತ್ತೆಗೆ ಬೈಕ್&zwnj;ನಿಂದ ಬಿದ್ದಿದ್ದ ಬ್ಯಾಗ್&zwnj; ನೋಡಿದಾಗ ಬ್ಯಾಗ್&zwnj;ನಲ್ಲಿ 3 ಲಕ್ಷ ಹಣವಿತ್ತು. ಮಂಜುನಾಥ್&zwnj; ಅವರ ವಿಳಾಸ ಪತ್ತೆಯಾದ ಬಳಿಕ ಗಾಯಾಳು ಮಂಜುನಾಥ್&zwnj;ರ ತಂದೆ ತಾಯಿಯನ್ನು ಠಾಣೆಗೆ ಕರೆಸಿ ಬರಟಹಳ್ಳಿ ಗ್ರಾಮದ ಎಎಸ್&zwnj;ಐ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಬ್ಯಾಗ್&zwnj;ನಲ್ಲಿ ದೊರೆತ 3 ಲಕ್ಷ ರು. ಹಣ ಹಾಗೂ ಮೊಬೈಲ್&zwnj; ಅನ್ನು ಹಿಂದಿರುಗಿಸಿ, ಪ್ರಾಮಾಣಿಕತೆ ಮೆರೆದು ಇತರೆ ಅಧಿಕಾರಿಗಳಿಗೂ ಮಾದರಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಪೊಲೀಸರು ಎಂದರೆ ಮೂಗು ಮುರಿಯುವ ಕಾಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಗಾಯಾಳು ಬ್ಯಾಗ್&zwnj;ನಲ್ಲಿದ್ದಷ್ಟು ಹಣ ಹಾಗೂ ಮೊಬೈಲ್&zwnj;ನನ್ನು ಹಿಂದಿರುಗಿಸುವ ಮೂಲಕ ಮುಖ್ಯ ಪೇದೆಗಳಿಬ್ಬರು ಕರ್ತವ್ಯ ಪ್ರೇಮ ಮೆರೆದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಬೈಕ್&zwnj;ನಲ್ಲಿ ಬಿದ್ದು ಗಾಯಗೊಂಡ ಗಾಯಾಳು ಸದ್ಯಕ್ಕೀಗ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/begur-police-returned-rs-3-lakh-to-accident-victim-family-gvd/articleshow-pce7sr3"/>
        </item>
        <item>
            <title><![CDATA[ರಾಜ್ಯಾದ್ಯಂತ ಟ್ರೆಕ್ಕಿಂಗ್ ಬ್ಯಾನ್ ಮಾಡಿದ ಸರ್ಕಾರ; ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆಗೆ ಬಾಲಕ ಬಲಿ ಬೆನ್ನಲ್ಲೇ ಆದೇಶ!]]></title>
            <link>https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim</link>
            <guid isPermaLink="true">https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim</guid>
            <pubDate>Tue, 12 May 2026 17:21:23 +0530</pubDate>
            <description><![CDATA[ಚಾಮರಾಜನಗರದ ಎಂ.ಎಂ. ಹಿಲ್ಸ್ ಬಳಿ ಚಿರತೆ ದಾಳಿಗೆ ಬಾಲಕ ಬಲಿಯಾದ ಘಟನೆಯ ನಂತರ, ರಾಜ್ಯ ಅರಣ್ಯ ಇಲಾಖೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕದಾದ್ಯಂತ ಎಲ್ಲಾ ಚಾರಣ ಪಥಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr9dztfkyh46fqqs4bk1769q,imgname-leopard-kills-child-mm-hills-1778433124851.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಚಾಮರಾಜನಗರ (ಮೇ 12): ರಾ&lt;/strong&gt;ಜ್ಯದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವು ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯ ಎಂ.ಎಂ. ಹಿಲ್ಸ್ (ಮಲೆ ಮಹದೇಶ್ವರ ಬೆಟ್ಟ) ವನ್ಯಜೀವಿ ವಿಭಾಗದ ನಾಗಮಲೆ ಅರಣ್ಯ ಪ್ರದೇಶದಲ್ಲಿ 10 ವರ್ಷದ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ರಾಜ್ಯಾದ್ಯಂತ ಎಲ್ಲಾ ಚಾರಣ ಪಥಗಳನ್ನು (Trekking Routes) ತಕ್ಷಣದಿಂದಲೇ ಸ್ಥಗಿತಗೊಳಿಸಿ ಅಧಿಕೃತ ಸುತ್ತೋಲೆ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ದಿನಾಂಕ 10-05-2026 ರಂದು ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು 10 ವರ್ಷದ ಬಾಲಕನ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿತ್ತು. ಈ ಭೀಕರ ಘಟನೆಯಲ್ಲಿ ಬಾಲಕ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಅರಣ್ಯ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರ ಮತ್ತು ಚಾರಣಿಗರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿತ್ತು.&lt;/p&gt;&lt;h2&gt;&lt;strong&gt;ಸಚಿವ ಈಶ್ವರ ಬಿ ಖಂಡ್ರೆ ಸೂಚನೆ:&lt;/strong&gt;&lt;/h2&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ಅವರು, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಠಾತ್ ಸುತ್ತೋಲೆ ಹೊರಡಿಸಿ, ರಾಜ್ಯದ ಎಲ್ಲಾ ವನ್ಯಜೀವಿ ಸಂಚಾರವಿರುವ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;&lt;strong&gt;ಅರಣ್ಯ ಇಲಾಖೆ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ:&lt;/strong&gt;&lt;/p&gt;&lt;p&gt;&lt;strong&gt;ಚಾರಣ ಸ್ಥಗಿತ: &lt;/strong&gt;ಚಿರತೆ, ಹುಲಿ, ಆನೆ, ಕರಡಿ ಸೇರಿದಂತೆ ವನ್ಯಜೀವಿಗಳ ಸಂಚಾರವಿರುವ ಎಲ್ಲಾ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಸುರಕ್ಷತಾ ಕ್ರಮಗಳು: &lt;/strong&gt;ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಕಡೆಗಳಲ್ಲಿ ಸಾರ್ವಜನಿಕರ ಮತ್ತು ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;p&gt;&lt;strong&gt;SOP ಪಾಲನೆ ಕಡ್ಡಾಯ: &lt;/strong&gt;ಅರಣ್ಯ ಪ್ರದೇಶಗಳಲ್ಲಿ ಚಾರಣ ಚಟುವಟಿಕೆ ನಡೆಸಲು ಈಗಾಗಲೇ ನಿಗದಿಪಡಿಸಲಾಗಿರುವ 'ಪ್ರಮಾಣಿತ ಕಾರ್ಯ ವಿಧಾನ' (SOP) ಅಡಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೆ ಯಾವುದೇ ಚಾರಣಕ್ಕೆ ಅವಕಾಶವಿಲ್ಲ.&lt;/p&gt;&lt;p&gt;&lt;strong&gt;ಮರುಪರಿಶೀಲನೆ:&lt;/strong&gt; ಸಂಬಂಧಪಟ್ಟ ವಿಭಾಗಾಧಿಕಾರಿಗಳು ಅರಣ್ಯ ಪ್ರದೇಶಗಳಲ್ಲಿ ಸುರಕ್ಷತಾ ಸಿದ್ಧತೆಗಳನ್ನು ಮಾಡಿಕೊಂಡು, ಪ್ರಮಾಣಪತ್ರ ಸಲ್ಲಿಸಿದ ನಂತರವಷ್ಟೇ ಚಾರಣ ಪುನರಾರಂಭದ ಬಗ್ಗೆ ನಿರ್ಧರಿಸಲಾಗುವುದು.&lt;/p&gt;&lt;h2&gt;&lt;strong&gt;ಚಾರಣಿಗರಿಗೆ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ಭಾಗದ ಕಾಡುಗಳಿಗೆ ಚಾರಣ ಹೋಗುವ ಯುವಕರು ಮತ್ತು ಚಾರಣಿಗರಿಗೆ ಈ ಆದೇಶ ದೊಡ್ಡ ಹೊಡೆತ ನೀಡಿದೆ. ಆದರೆ, ಪ್ರಾಣಾಪಾಯ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ. ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ, ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳೂ ಸೇರಿದಂತೆ ಎಲ್ಲಾ ವನ್ಯಜೀವಿ ವಿಭಾಗಗಳಿಗೆ ಈ ಆದೇಶ ಅನ್ವಯವಾಗಲಿದೆ.&lt;/p&gt;&lt;p&gt;ಮುಂದಿನ ಆದೇಶದವರೆಗೆ ಯಾವುದೇ ಅರಣ್ಯ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಥವಾ ಈ ಹಿಂದೆ ಅನುಮತಿ ಪಡೆದಿದ್ದರೂ ಚಾರಣ ಮಾಡುವಂತಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ವನ್ಯಜೀವಿಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಜನರು ಈ ನಿರ್ಧಾರಕ್ಕೆ ಸಹಕರಿಸಬೇಕೆಂದು ಕೋರಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim"/>
        </item>
        <item>
            <title><![CDATA[Nagamale Darshan: ಎರಡು ಚಿರತೆಗಳು ಸೆರೆ ಸಿಕ್ಕರೂ ನಾಗಮಲೆ ದರ್ಶನಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ?]]></title>
            <link>https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc</link>
            <guid isPermaLink="true">https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc</guid>
            <pubDate>Tue, 23 Jun 2026 17:39:22 +0530</pubDate>
            <description><![CDATA[&lt;p&gt;Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvt5yf7je94nghd5vdzrk6y2,imgname-nag--1--1782216342770.jpeg" type="image/jpeg" height="390" width="690"/>
            <content:encoded><![CDATA[&lt;p&gt;Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಾಮರಾಜನಗರ (ಜೂ.23): &lt;/strong&gt;ಅದು ಕಾಡೊಳಗಿನ ಪ್ರದೇಶ, ನಿತ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದವರು ನಾಗಮಲೆಗೂ ಹೋಗೋದು ಕೂಡ ಪ್ರತೀತಿ. ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೇದುರೆ ಚಿರತೆ ಎಳೆದೊಯ್ದು ಕೊಂದು ಹಾಕಿತು. ಈ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ಬ್ರೇಕ್ ಹಾಕಿದೆ. ಇನ್ನೂ ಅವಕಾಶ ಕೊಡದ ಹಿನ್ನಲೆ ನಾಗಮಲೆ ದರ್ಶನ ಭಾಗ್ಯ ಯಾವಾಗ ಎಂದು ಭಕ್ತರು ಪ್ರಶ್ನೆ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..&lt;/p&gt;&lt;img&gt;&lt;p&gt;ಅದು ಕೋಟ್ಯಾಂತರ ಭಕ್ತರ ಆರಾಧ್ಯ ದೈವನ ಸನ್ನಿಧಿ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗೆ ಹೋಗಿ ಪೂಜೆ ಮಾಡಿ ಬರೋದು ಪ್ರತೀತಿ. ಬಹಳ ಕಾಲದಿಂದಲೂ ಈ ಪದ್ದತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ. ಆದ್ರೆ ಕಳೆದ ತಿಂಗಳು ಮಾದಪ್ಪನ ಬೆಟ್ಟದಿಂದ ನಾಗಮಲೆಗೆ ದರ್ಶನಕ್ಕೆ ಹೋಗ್ತಿದ್ದ ಬೆಂಗಳೂರು ಮೂಲದ ಪೋಷಕರ ಕಣ್ಣೇದುರೆ ಚಿರತೆ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿತ್ತು. ತದಾನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗಮಲೆ ಹೋಗಲೂ ತಾತ್ಕಾಲಿಕ ಬ್ರೇಕ್ ಹಾಕಿದರು. ಈ ಘಟನೆ ನಡೆದು ಒಂದು ತಿಂಗಳು ಕಳೆದು ಹೋಗಿದೆ.&lt;/p&gt;&lt;img&gt;&lt;p&gt;ಅಲ್ಲದೇ ಮಹದೇಶ್ವರ ಬೆಟ್ಟದ ನಾಗಮಲೆ ಹಾಗೂ ಬಾಲಕನನ್ನು ಕೊಂದ ಸ್ಥಳದಲ್ಲೇ ಎರಡು ಚಿರತೆ ಕೂಡ ಸೆರೆಸಿಕ್ಕಿವೆ. ಆದರೂ ಕೂಡ ಮಾದಪ್ಪನ ಭಕ್ತರಿಗೆ ನಾಗಮಲೆಗೆ ದರ್ಶನಕ್ಕೆ ಹೋಗಲು ಅವಕಾಶ ಕೊಡ್ತಿಲ್ಲ. ಬಂದವರು ಬರಿಗೈಯಲ್ಲಿ ವಾಪಾಸ್ ಆಗುವ ಪರಿಸ್ಥಿತಿಯಿದೆ. ಇನ್ನೂ ನಾಗಮಲೆಗೆ ಪ್ರವೇಶಾವಕಾಶ ಕಲ್ಪಿಸುವ ಬಗ್ಗೆ ಅರಣ್ಯ ಇಲಾಖೆ ಚಂತನೆ ನಡೆಸ್ತಿದೆ. ಈ ಮಧ್ಯೆ ಎರಡು ಚಿರತೆ ಸಿಕ್ಕ ಬಳಿಕವೂ ಇದು ಅರಣ್ಯ ಪ್ರದೇಶವಾದ ಹಿನ್ನಲೆ ಹುಲಿ, ಚಿರತೆ ಸಂಚಾರವಿದೆ. ಮತ್ತೇ ಪ್ರವೇಶಾವಕಾಶ ಕೊಟ್ಟರೆ ಭಕ್ತರಿಗೆ ತೊಂದರೆಯಾಗುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಆದ್ರೆ ಅರಣ್ಯಾಧಿಕಾರಿಗಳು ಕಾವೇರಿ ವನ್ಯಧಾಮ ಹಾಗೂ ಮಲೆ ಮಹದೇಶ್ವರ ವನ್ಯಧಾಮ ಇಬ್ಬರು ಸೇರಿ ನಾಗಮಲೆಗೆ ಪ್ರವೇಶ ಕೊಡುವ ಬಗ್ಗೆ ಹಾಗೂ ಯಾವೆಲ್ಲಾ ಮಾರ್ಗದರ್ಶಿ ಗಳನ್ನು ರೂಪಿಸಬೇಕು ಅನ್ನೋ ಬಗ್ಗೆ ಶೀಘ್ರವೇ ಸಭೆ ನಡೆಸಿ ಅವಕಾಶ ಕೊಡಲಾಗುತ್ತದೆ ಅನ್ನೋ ಉತ್ತರ ಕೊಡ್ತಿದ್ದಾರೆ. ಒಟ್ನಲ್ಲಿ ದೇವರ ದರ್ಶನಕ್ಕೆ ಹೋಗ್ತಿದ್ದ ಬಾಲಕನನ್ನು ಚಿರತೆ ಪೋಷಕರ ಕಣ್ಣೆದುರೇ ಕೊಂದು ಹಾಕಿದ ಬಳಿಕ ಈ ಅರಣ್ಯ ಪ್ರದೇಶದಲ್ಲಿ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಎದುರಾಗಿದೆ. ನಾಗಮಲೆಗೆ ಹೋಗುವ ಭಕ್ತರು ಬಂದು ವಾಪಾಸ್ ಆಗ್ತಿದ್ದು, ಯಾವ ಗೈಡ್ ಲೈನ್ಸ್ ರೂಪಿಸಿ ನಾಗಮಲೆಗೆ ಅವಕಾಶ ಕೊಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/nagamale-darshan-entry-ban-after-leopard-attack-mm-hills-chamarajanagar-gvd-qyny2lc"/>
        </item>
        <item>
            <title><![CDATA[ನಾನು ಯಾವಾಗ ಸಿಎಂ ಆಗುತ್ತೇನೆ ಗೊತ್ತಾ?: ಡಿ.ಕೆ.ಶಿವಕುಮಾರ್ ಉತ್ತರ ಕೇಳಿ ಎಲ್ಲರೂ ಶಾಕ್!]]></title>
            <link>https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm</link>
            <guid isPermaLink="true">https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm</guid>
            <pubDate>Fri, 22 May 2026 00:26:02 +0530</pubDate>
            <description><![CDATA[&lt;p&gt;ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್&zwnj;ಗೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqa2ypn411epexs4cs62qz4,imgname-dk-shivakumar-1778898795221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಳ್ಳೇಗಾಲ (ಮೇ.22):&lt;/strong&gt; ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್&zwnj;ಗೆ ಆಗಮಿಸಿದ ಡಿಸಿಎಂರನ್ನು ಪತ್ರಕರ್ತರು, &lsquo;ನೀವು ಯಾವಾಗ ಸಿಎಂ ಆಗುತ್ತೀರಿ?&rsquo; ಎಂದು ಪ್ರಶ್ನಿಸುತ್ತಿದ್ದಂತೆ &lsquo;ಅದನ್ನು ಕಾಲ ತೀರ್ಮಾನ ಮಾಡುತ್ತದೆ&rsquo;. ಮಾಧ್ಯಮದವರ ಸಹಕಾರವೂ ಅಗತ್ಯ ಎಂದರು.&lt;/p&gt;&lt;p&gt;ಚಾಮರಾಜನಗರ ಐತಿಹಾಸಿಕವಾದಂತಹ ಜಿಲ್ಲೆ. ಧಾರ್ಮಿಕ, ಪ್ರಾಕೃತಿಕ ಸಂಪತ್ತು ಹೊಂದಿರುವ ಕಾವೇರಿ ನದಿ ತೀರದಲ್ಲಿರುವ ಪವಿತ್ರ ಪುಣ್ಯಭೂಮಿಯಾಗಿದೆ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಮಲೆ ಮಹದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸೂರ್ಯ ಮುಳುಗುವ ವೇಳೆಗೆ ಶ್ರೀರಂಗಪಟ್ಟಣ ಆದಿರಂಗ, ಮಧ್ಯರಂಗ ಹಾಗೂ ತಮಿಳುನಾಡಿನಲ್ಲಿರುವ ಅಂತ್ಯರಂಗ ದೇವಾಲಯಗಳಿಗೆ ಭೇಟಿ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದರು.&lt;/p&gt;&lt;p&gt;ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಈ ದೇವಾಲಯದ ಜೀರ್ಣೋದ್ಧಾರ ಕೆಲಸ ಮಾಡಲಾಗಿದೆ. ಇಂದು ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ಪುಣ್ಯಕ್ಷೇತ್ರ ಯಾತ್ರಿಕರಿಗೆ ಪ್ರಸಿದ್ಧವಾಗಿದೆ. ಇದು ಪ್ರಕೃತಿ ಕೊಡುಗೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸಚಿವರಾದ ಕೆ. ವೆಂಕಟೇಶ್ ಸಹ ಸಾಥ್ ನೀಡಿದ್ದಾರೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಜಿಬಿಎ ಚುನಾವಣೆ&lt;/strong&gt;&lt;/h2&gt;&lt;p&gt;ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ವೆಂಕಟೇಶ್, ಹನೂರು ಶಾಸಕ ಎಂ.ಆರ್&zwnj;. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್&zwnj;. ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಆರ್&zwnj;. ನರೇಂದ್ರ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಪುಟ್ಟರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಂಜುನಾಥ್, ಚೇತನ್ ದೊರೆ, ಇಓ ಸುರೇಶ್ ಕುಮಾರ್&zwnj;, ಜಿಲ್ಲಾಧಿಕಾರಿ ಶ್ರೀರೂಪಾ, ಎಸ್ಪಿ ಮುತ್ತುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕರಾಜು ಇನ್ನಿತರಿದ್ದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm"/>
        </item>
    </channel>
</rss>
