<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 05 Jun 2026 14:34:15 +0530</lastBuildDate>
        <atom:link href="https://kannada.asianetnews.com/rss/chamarajnagar" rel="self" type="application/rss+xml"/>
        <item>
            <title><![CDATA[ಚಾಮರಾಜನಗರ: ಸಲೂನ್‌ಗೆ ಬಂದ ಮಂಗಕ್ಕೆ ಹೇರ್‌ ಕಟ್ ಮಾಡಿಸಿದ ಕ್ಷೌರಿಕ!]]></title>
            <link>https://kannada.asianetnews.com/karnataka-districts/chamarajanagar-barber-gives-haircut-to-monkey-that-walked-into-salon-rav/articleshow-0ng3k3m</link>
            <guid isPermaLink="true">https://kannada.asianetnews.com/karnataka-districts/chamarajanagar-barber-gives-haircut-to-monkey-that-walked-into-salon-rav/articleshow-0ng3k3m</guid>
            <pubDate>Sat, 09 May 2026 07:18:38 +0530</pubDate>
            <description><![CDATA[ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಸಲೂನ್&zwnj; ಒಂದಕ್ಕೆ ನಿತ್ಯ ಭೇಟಿ ನೀಡುತ್ತಿದ್ದ ಕೋತಿಗೆ, ಅದರ ಮಾಲೀಕ ದೇವರಾಜ್ ತಮಾಷೆಗಾಗಿ ಹೇರ್&zwnj; ಸ್ಟೈಲ್ ಮಾಡಿದ್ದಾರೆ. ಮನುಷ್ಯರಂತೆ ತಲೆಬಗ್ಗಿಸಿ ಕುಳಿತು ಕೋತಿ ಸಹಕರಿಸಿದ್ದು, ಈ ಅಪರೂಪದ ಘಟನೆಯನ್ನು ಗ್ರಾಹಕರೊಬ್ಬರು ವೀಡಿಯೋ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr56eg5jzpnzvf2wz48pn8pc,imgname-----------------------2026-05-09t071229.412-1778290999474.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಚಾಮರಾಜನಗರ (ಮೇ.9) &lt;/strong&gt;ಚೇಷ್ಟೆಗೆ ಹೆಸರಾಗಿರುವ ಕೋತಿಗಳು ಒಮ್ಮೊಮ್ಮೆ ತಮ್ಮ ವಿಶೇಷ ವರ್ತನೆಗಳಿಂದ ಎಲ್ಲರ ಗಮನ ಸೆಳೆಯುತ್ತವೆ. ಜೊತೆಗೆ, ನೋಡುಗರ&zwnj;&zwnj; ಮೊಗದಲ್ಲಿ ನಗುವನ್ನು ಉಕ್ಕಿಸುತ್ತವೆ. ಅದರಂತೆ, ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಕೋತಿಗೆ ಹೇರ್&zwnj; ಸ್ಟೈಲ್ ಮಾಡಿದ ಅಪರೂಪದ ಘಟನೆ ನಡೆದಿದೆ.&lt;/p&gt;&lt;p&gt;ಗ್ರಾಮದ ದೇವು ಸಲೂನ್ ಎಂಬಲ್ಲಿಗೆ ಕೋತಿಯೊಂದು ದಿನವೂ ಬಂದು ಹೋಗುತ್ತಿತ್ತು.&zwnj; ಕನ್ನಡಿ&zwnj; ನೋಡುತ್ತಾ ಕುಳಿತುಕೊಳ್ಳುತ್ತಿತ್ತು.&zwnj; ಇದನ್ನು ಗಮನಿಸಿದ ಸಲೂನ್ ಮಾಲೀಕ ದೇವರಾಜ್&zwnj; ಗದರಿಸಿದರೂ&zwnj; ಕೋತಿ ಸಲೂನ್ ಬಿಟ್ಟು ಹೋಗುತ್ತಿರಲಿಲ್ಲ.&lt;/p&gt;&lt;p&gt;ಗುರುವಾರದಂದು ಸಲೂನ್&zwnj;ಗೆ ಬಂದ ಮಂಗನನ್ನು ಕಂಡ ದೇವರಾಜ್ ಮೊದಲು ತಲೆ ಬಾಚಿದ್ದಾರೆ. ಪ್ರೀತಿಯಿಂದ ತಲೆ ಬಾಚಿದ್ದನ್ನು ಗಮನಿಸಿದ ಕೋತಿ ಮನುಷ್ಯರಂತೆ ತಲೆ ಬಗ್ಗಿಸಿ ಕುಳಿತಿದೆ.&zwnj; ನಂತರ ಹೇರ್&zwnj; ಸ್ಟೈಲ್ ಮಾಡಿದ್ದು, ಅಲ್ಲಿಯೇ ಇದ್ದ ಗ್ರಾಹಕರೊಬ್ಬರು ವಿಡಿಯೋ ಸೆರೆ ಹಿಡಿದಿದ್ದಾರೆ.&lt;/p&gt;&lt;p&gt;ಈ ಕುರಿತು ದೇವರಾಜು ಮಾತನಾಡಿ, ಗುಂಪೊಂದರಲ್ಲಿ ಇದ್ದ ಈ ಮಂಗ ದಿನನಿತ್ಯ ಸಲೂನ್ ಬಳಿ ಬರುತ್ತಿತ್ತು. ಎಷ್ಟೇ ಗದರಿಸಿದರೂ ನನ್ನ ಕೆಲಸ ಮುಗಿಯುವವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ತಮಾಷೆಗಾಗಿ ತಲೆ ಬಾಚಿದೆ, ಕೋತಿ ತಲೆ ಬಗ್ಗಿಸಿ ಕುಳಿತು ಮತ್ತಷ್ಟು ತಲೆ ಬಾಚುವಂತೆ ಕೇಳಿಕೊಳ್ಳುವಂತೆ ವರ್ತಿಸಿದಾಗ ಹೇರ್&zwnj;ಸ್ಟೈಲ್ ಮಾಡಿದೆ ಎಂದರು.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/chamarajanagar-barber-gives-haircut-to-monkey-that-walked-into-salon-rav/articleshow-0ng3k3m"/>
        </item>
        <item>
            <title><![CDATA[ಮೈ ಮೇಲೆ ಕತ್ತಿಯಿಂದ ಹೊಡೆದುಕೊಂಡು ರಕ್ತತರ್ಪಣೆ: ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?]]></title>
            <link>https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr</link>
            <guid isPermaLink="true">https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr</guid>
            <pubDate>Mon, 11 May 2026 17:39:11 +0530</pubDate>
            <description><![CDATA[&lt;p&gt;ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbf1gyc2v6e51qp13fhfz4f,imgname-bj-1778501338060.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.11):&lt;/strong&gt; ಅದೊಂದು ವಿಶಿಷ್ಟ ಹಬ್ಬ. ಮೈ ಮೇಲೆ ಹರಿತವಾದ ಕತ್ತಿಗಳಿಂದ ಹೊಡೆದುಕೊಂಡು ರಕ್ತತರ್ಪಣೆ ಮಾಡುವ ಆ ಹಬ್ಬದಲ್ಲಿನ ಆಚರಣೆ ನೋಡಿದರೆ ಮೈ ಜುಂ ಎನ್ನುತ್ತದೆ. ಅಷ್ಟಕ್ಕೂ ಅದು ಯಾವ ಹಬ್ಬ? ಎಲ್ಲಿ ನಡೀತು? ಈ ಸ್ಟೋರಿ ನೋಡಿ. ಚಾಮರಾಜನಗರದ ರಾಮಸಮುದ್ರದಲ್ಲಿ 28 ವರ್ಷಗಳ ಬಳಿಕ ಮೊದಲ ಬಾರಿಗೆ ಚೌಡೇಶ್ವರಿ ದೇವಿಯ 47 ನೇ ವರ್ಷದ ವರ್ದಂತೋತ್ಸವ ಹಾಗು ವಿಶಿಷ್ಟ ರೀತಿಯ ಕತ್ತಿ ಹಬ್ಬ ಆಚರಿಸಲಾಯ್ತು.&lt;/p&gt;&lt;p&gt;ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ರಾಮಲಿಂಗೇಶ್ವರ ಹಾಗು ಚೌಡೇಶ್ಚರಿ ಅಮ್ಮನವರಿಗೆ ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು. ರಾಕ್ಷಸರನ್ನು ಸಂಹಾರ ಮಾಡಿದ ಉಗ್ರ ಸ್ವರೂಪಿ ಚೌಡೇಶ್ವರಿ ದೇವಿಗೆ ರಕ್ತತರ್ಪಣೆ ಮಾಡಿ ಶಾಂತಗೊಳಿಸುವ ದ್ಯೋತಕವಾಗಿ ದೇವಾಂಗ ಸಮುದಾಯ ಈ ಹಬ್ಬ ಆಚರಿಸಿಕೊಂಡು ಬರುತ್ತಿದೆ. ನಾಲ್ಕು ದಿನಗಳ ಕಾಲ ಚೌಡೇಶ್ವರಿ ದೇವಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕೈಂಕರ್ಯಗಳೊಂದಿಗೆ ನಡೆದ ಹಬ್ಬದಲ್ಲಿ ಅಲಗು ಸೇವೆ ಪ್ರಮುಖವಾಗಿದೆ.&lt;/p&gt;&lt;p&gt;ಕತ್ತಿಹಬ್ಬದ ದಿನದಂದು ಬಿಳಿ ಕುದುರೆ ಮೇಲೆ ದೇವಿಯ ಕಳಶ ಇಟ್ಟು ಮೆರವಣಿಗೆ ಮಾಡಿ ನೂರಾರು ಮಂದಿ ಹರಿತವಾದ ಕತ್ತಿಗಳಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುತ್ತಾ ರಕ್ತ ಬರುವಂತೆ ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ. ಕೆಲವರು ಖಡ್ಗಗಳ ಮೇಲೆ ಕುತ್ತಿಗೆ ಇಟ್ಟು ಅವರ ದೇಹದ ಮೇಲೆ ಇನ್ನಿತರರು ನಿಂತು ಕತ್ತಿಗಳಿಂದ ಹೊಡೆದುಕೊಳ್ಳುತ್ತಾರೆ. ಈ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.&lt;/p&gt;&lt;p&gt;ಕತ್ತಿ ಹಬ್ಬ ಆಚರಣೆಗೆ ಪೌರಾಣಿಕ ಹಿನ್ನಲೆಯು ಇದೆ. ದೇವಾನುದೇವತೆಗಳಿಗೆ ವಸ್ತ್ರ ತಯಾರು ಮಾಡುತ್ತಿದ್ದ ದೇವಾಂಗ ದೇವಲ ಮಹರ್ಷಿಯನ್ನು ಕೊಲ್ಲಲು ದೈತ್ಯ ರಾಕ್ಷಸರು ಮುಂದಾಗಿದ್ದಾಗ ಪಾರ್ವತಿ ದೇವಿ ಚೌಡೇಶ್ವರಿಯ ಅವತಾರವೆತ್ತಿ ರಾಕ್ಷಸರನ್ನು ಸಂಹಾರ ಮಾಡಿದಳು, ಬಳಿಕ ಉಗ್ರಸ್ವರೂಪಿಯಾಗಿದ್ದ ಚೌಡೇಶ್ವರಿಯ ಮುಂದೆ ದೇವಲ ಮಹರ್ಷಿ ಖಡ್ಗದಿಂದ ತನ್ನ ಮೈಲೆ ಮೇಲೆ ಹೊಡೆದುಕೊಂಡು ರಕ್ತ ತರ್ಪಣೆ ಮಾಡಿ ದೇವಿಯನ್ನು ಶಾಂತಗೊಳಿಸಿದರು ಎಂಬ ನಂಬಿಕೆ ಇದೆ. ಇದರ ದ್ಯೋತಕವಾಗಿ ಇಂದಿಗು ಕತ್ತಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ತಮಿಳುನಾಡು-ಆಂಧ್ರದಿಂದಲೂ ಭಕ್ತರು&lt;/strong&gt;&lt;/h2&gt;&lt;p&gt;ತೀರ ಅಪರೂಪ ಎನಿಸಿದ ಈ ಕತ್ತಿ ಹಬ್ಬದಲ್ಲಿ ರಾಜ್ಯವಷ್ಟೇ ಅಲ್ಲ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡು ತಮ್ಮ ಕುಲದೇವತೆ ಚೌಡೇಶ್ವರಿ ದೇವಿಗೆ ಅಲಗುಸೇವೆ ಸಲ್ಲಿಸಿದರು. ಅಲಗುಸೇವೆ ಮೇಲ್ನೋಟಕ್ಕೆ ಹಿಂಸೆಯ ಆಚರಣೆಯಂತೆ ಕಂಡರೂ ಇದು ಹಿಂಸೆಯ ಪ್ರತೀಕವಲ್ಲ, ಬದಲಿಗೆ ಅರ್ಪಣಾ ಮನೋಭಾವದಿಂದ ದೇವಿಗೆ ಸಲ್ಲಿಸುವ ಸೇವೆ ಎಂಬುದು ಇಲ್ಲಿನ ಭಕ್ತರ ಪ್ರತಿಪಾದನೆಯಾಗಿದೆ. ಹಬ್ಬದ ಪ್ರಯುಕ್ತ ದೇವಾಂಗ ಕುಲಬಾಂಧವರ ಕತ್ತಿ ಹಬ್ಬ ( ಅಲಗು ಸೇವೆ) ಮೆರೆವಣಿಗೆಯನ್ನು ರಾಮಸಮುದ್ರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಸಲಾಯಿತು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/festivals/chamarajanagar-kathi-habba-chaudeshwari-alagu-seve-gvd/articleshow-2th0pyr"/>
        </item>
        <item>
            <title><![CDATA[ಹೊಸ ಕಾರಿಗೆ ಮಾದಪ್ಪನ ಪೂಜೆ… ಹಿಂದಿರುಗುವ ದಾರಿಯಲ್ಲೇ ಕಾರು ಪಲ್ಟಿ! ಭಕ್ತರು ಶಾಕ್!]]></title>
            <link>https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg</link>
            <guid isPermaLink="true">https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg</guid>
            <pubDate>Thu, 14 May 2026 10:31:34 +0530</pubDate>
            <description><![CDATA[&lt;p&gt;verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjcfznnf8c2y9x38js9zqpd,imgname-----------------------2026-05-14t100357.592-1778733547189.jpg" type="image/jpeg" height="390" width="690"/>
            <content:encoded><![CDATA[&lt;p&gt;verturns while returning from Mahadeshwara temple ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ&lt;/p&gt;&lt;img&gt;&lt;p&gt;ಹೊಸ ಕಾರು ಖರೀದಿಸಿದ ಖುಷಿ&hellip; ದೇವರ ದರ್ಶನ ಮಾಡಿಕೊಂಡು ಶುಭಾರಂಭ ಮಾಡೋಣ ಅನ್ನೋ ಭಕ್ತಿ&hellip; ಆದರೆ ಮನೆಗೆ ಹಿಂದಿರುಗುವ ದಾರಿಯಲ್ಲೇ ನಡೆದ ಘಟನೆ ನೋಡಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;ಮಂಡ್ಯ ಮೂಲದ ಭಕ್ತರು ಹೊಸ ಕಾರು ಖರೀದಿಸಿದ್ದರು. ಮೊದಲು ಮಾದಪ್ಪನ ಆಶೀರ್ವಾದ ಪಡೆದು ಬಳಿಕ ಕಾರು ಓಡಿಸೋಣ&rdquo; ಅಂತಾ ಚಾಮರಾಜನಗರದ ಮಾದಪ್ಪನ ಬೆಟ್ಟಕ್ಕೆ ಕುಟುಂಬ ಸಮೇತ ಬಂದಿದ್ದರು.&lt;/p&gt;&lt;img&gt;&lt;p&gt;ಹೊಸ ಕಾರೇ ಕ್ಷಣಾರ್ಧದಲ್ಲಿ ರಸ್ತೆಯ ಬದಿಗೆ ಉರುಳಿ ಬಿದ್ದ ದೃಶ್ಯ ನೋಡಿ ಸ್ಥಳೀಯರು ಕೂಡ ಬೆಚ್ಚಿಬಿದ್ದರು. ಕಾರಿನ ಮುಂಭಾಗ ಜಖಂಗೊಂಡಿದ್ದರೂ, ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ದೇವರ ದರ್ಶನಕ್ಕೆ ಬಂದಿದ್ದೇವೆ&hellip; ಇದೇ ರೀತಿ ಆಗುತ್ತೆ ಅಂತ ಯಾರು ಊಹಿಸಿದ್ದರು? ಎಂದು ಕುಟುಂಬದವರು ಅಳಲು.&lt;/p&gt;&lt;img&gt;&lt;p&gt;ಒಂದು ಕಡೆ 'ದೇವರ ಕೃಪೆಯಿಂದಲೇ ದೊಡ್ಡ ಅನಾಹುತ ತಪ್ಪಿತು' ಅನ್ನೋ ನೆಮ್ಮದಿ&hellip; ಇನ್ನೊಂದು ಕಡೆ 'ದರ್ಶನಕ್ಕೆ ಬಂದು ಇಂಥ ಅವಘಡ ಯಾಕಾಯಿತು?' ಅನ್ನೋ ಪ್ರಶ್ನೆ ಭಕ್ತರನ್ನು ಕಾಡುತ್ತಿದೆ.&lt;/p&gt;&lt;p&gt;ಘಟನೆ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/car-overturns-while-returning-from-mahadeshwara-temple-rav-3bti9cg"/>
        </item>
        <item>
            <title><![CDATA[1000 ಕೋಟಿ ಸಿನಿಮಾಗಳಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ: ಚೇತನ್ ಅಹಿಂಸಾ]]></title>
            <link>https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b</link>
            <guid isPermaLink="true">https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b</guid>
            <pubDate>Wed, 13 May 2026 17:15:52 +0530</pubDate>
            <description><![CDATA[&lt;p&gt;ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್&zwnj; ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jkr11w3f2tnpvsx05cr2c392,imgname-actor-chetan-ahimsa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.13): &lt;/strong&gt;ಮಂಗಳ ಗ್ರಹಕ್ಕೆ ಹೋಗಿ ಬಂದರೆ, ₹100ರಿಂದ ₹1000 ಕೋಟಿ ಸಿನೆಮಾಗಳನ್ನು ಮಾಡಿದರೆ ಉತ್ತಮ ಸಮಾಜ(ದೇಶದ ಅಭಿವೃದ್ಧಿ) ಸಾಧ್ಯವಿಲ್ಲ ಎಂದು ಅಹಿಂಸಾ ಚೇತನ್&zwnj; ಹೇಳಿದರು. ಅಂಬೇಡ್ಕರ್&zwnj; ಅವರು ಸಂವಿಧಾನದ ಮೂಲಕ ಸಾಕಾರಗೊಳಿಸಲು ಸಮಸಮಾಜ ಕನಸನ್ನು ಕಂಡರು. ನಾವೆಲ್ಲರೂ ಸಮಸಮಾಜ ಕಟ್ಟಿದಾಗ ಮಾತ್ರ ಅಂಬೇಡ್ಕರ್&zwnj; ಅವರ ಕನಸು ನನಸಾಗಿಸಲು ಸಾಧ್ಯ ಎಂದು ಹೇಳಿದರು.&lt;/p&gt;&lt;p&gt;ಜಾತಿ ತಾರತಮ್ಯ, ಅಸ್ಪೃಶ್ಯತೆ ಇಂದಿಗೂ ಅಲ್ಲಲ್ಲಿ ಕಂಡು ಬರುತ್ತಿದೆ. ಸಮಸಮಾಜದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಅದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ದೇಶದಲ್ಲಿ ಕೇವಲ ಕೆಲವರ ಕೈಯಲ್ಲಿ ಸಂಪತ್ತು ಇರದೆ ಆರ್ಥಿಕ ಸಮಾನತೆ ಇರಬೇಕಿದೆ, ಉತ್ತಮ ಸಮಾಜ ಕಟ್ಟಬೇಕು, ಅದು ನಮ್ಮೆಲ್ಲರ ಜವಾಬ್ದಾರಿ, ಅಂಬೇಡ್ಕರ್&zwnj; ಅವರು ಮಾಡಿ ತೋರಿಸಿದ್ದಾರೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಅಂಬೇಡ್ಕರ್&zwnj;, ಕಾನ್ಶಿರಾಂ ಅವರ ವಿಚಾರಗಳನ್ನು ಬಹಳ ಗಟ್ಟಿಯಾಗಿ ರಾಜ್ಯದಲ್ಲಿ ಉಳಿಸಿರುವುದು ಇದೇ ಚಾಮರಾಜನಗರದ ಜನತೆ. ಅಂಬೇಡ್ಕರ್&zwnj; ಅವರ ಸಂವಿಧಾನದಿಂದ ದೇಶಕ್ಕೆ ಒಳ್ಳೆಯದು ಆಗಿದೆ, ಅವರನ್ನು ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿರುವುದು ಬಹಳ ನೋವಿನ ಸಂಗತಿಯಾಗಿದೆ. ಅವರು ಒಂದು ಸಂವಿಧಾನ ಅಲ್ಲ, 100 ದೇಶಗಳ ಸಂವಿಧಾನ ಬರೆಯುವ ಸಾಮಾರ್ಥ್ಯ ಅವರಲ್ಲಿತ್ತು ಎಂದರು.&lt;/p&gt;&lt;h2&gt;&lt;strong&gt;ಸರ್ವರಿಗೂ ಸಮಾನತೆ&lt;/strong&gt;&lt;/h2&gt;&lt;p&gt;ಅಂಬೇಡ್ಕರ್ ಅವರ ಪೋಸ್ಟರ್&zwnj;ಗಳಲ್ಲಿ, ಪ್ರತಿಮೆಗಳಲ್ಲಿ ಅಂಬೇಡ್ಕರ್ ವಾದ ಸಿಗಲ್ಲ. ನನ್ನನ್ನು ಪೂಜಿಸಬೇಡಿ, ನನ್ನನ್ನು ಓದಿ ಎಂದು ಅವರೇ ಹೇಳಿದ್ದಾರೆ. ಅವರ ವಿಚಾರಗಳನ್ನು ಜನರ ಮುಂದೆ ಇಡದಿದ್ದರೆ ಅಂಬೇಡ್ಕರ್ ಅವರನ್ನು ಪ್ರತಿಮೆಗೆ, ಸಂವಿಧಾನ ಶಿಲ್ಪಿಗೆ ಸೀಮಿತ ಮಾಡಿ&zwnj;ಬಿಡುತ್ತಾರೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗಿಪೆದ್ದಿಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದಲ್ಲಿ ಸರ್ವರಿಗೂ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.&lt;/p&gt;&lt;p&gt;ಅಂಬೇಡ್ಕ&zwnj;ರ್ ಅವರು ಬಾಲ್ಯದಲ್ಲಿ ತುಂಬಾ ಕಷ್ಟದಿಂದ ವಿದ್ಯಾಬ್ಯಾಸ ಮಾಡಿದರು, ನಮಗಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಅಂಬೇಡ್ಕರ್ ಬಡಾವಣೆ ನಿವಾಸಿಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್, ಎಸ್ಪಿ ಮಾಡುವ ಮೂಲಕ ಅವರನ್ನು ಜೀವಂತವಾಗಿಡುವ ಕೆಲಸ ಮಾಡಬೇಕು ಎಂದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chetan-ahimsa-on-ambedkar-equality-and-social-justice-gvd/articleshow-cbsne5b"/>
        </item>
        <item>
            <title><![CDATA[Chamarajanagar: ದಾಳಿ ಮಾಡಿದರೂ ಜಗ್ಗದೆ ಕಿರುಚಿ ಹುಲಿ ಓಡಿಸಿದ ಕುರಿಗಾಹಿ ನೂರಾಳು]]></title>
            <link>https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk</link>
            <guid isPermaLink="true">https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk</guid>
            <pubDate>Mon, 01 Jun 2026 06:06:54 +0530</pubDate>
            <description><![CDATA[ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ನೂರಾಳು ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ಆದರೆ, ಅವರು ಕಿರುಚಿಕೊಂಡಾಗ ಹುಲಿ ಹೆದರಿ ಓಡಿಹೋಗಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt09kef2p4qqmh85f52y2p5w,imgname-tiger-attack--3--1780274018786.jpg" type="image/jpeg" height="390" width="690"/>
            <content:encoded><![CDATA[ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಳಿ ಕುರಿ ಮೇಯಿಸುತ್ತಿದ್ದ ನೂರಾಳು ಎಂಬುವರ ಮೇಲೆ ಹುಲಿ ದಾಳಿ ಮಾಡಿದೆ. ಆದರೆ, ಅವರು ಕಿರುಚಿಕೊಂಡಾಗ ಹುಲಿ ಹೆದರಿ ಓಡಿಹೋಗಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;img&gt;&lt;p&gt;ಚಾಮರಾಜನಗರ: ಹುಲಿ ದಾಳಿಯಿಂದ ಕುರಿಗಾಹಿಯೊಬ್ಬ ಪವಾಡಸದೃಶ್ಯ ರೀತಿ ಪರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಕುಣಗಳ್ಳಿ ಕಾಲೋನಿಯಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಹುಲಿ ದಾಳಿ ಮಾಡಿದಾಗ ತಕ್ಷಣ ಕುರಿಗಾಹಿ ಕೂಗಾಡಿದ್ದಾನೆ. ಕೂಗಿದ ಸದ್ದಿಗೆ ಚಿರತೆ ಕಾಲ್ಕಿತ್ತಿದೆ. ಇದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುರಿಗಾಹಿ ನೂರಾಳು (52) ಪಾರಾದ ವ್ಯಕ್ತಿ. ವಿಷಯ ತಿಳಿದು ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್&zwnj; ಸೂಚನೆ ಮೇರೆಗೆ ಅರಣ್ಯ ಸಿಬ್ಬಂದಿ ಗಾಯಾಳುವನ್ನು ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.&lt;/p&gt;&lt;img&gt;&lt;p&gt;ನೂರಾಳು ಅವರು ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಹುಲಿಯು ಅವರ ಮೇಲೆ ದಾಳಿ ಮಾಡಿದೆ. ಈ ವೇಳೆ ಅವರು ಗಾಯಗೊಂಡಿದ್ದಾರೆ. ಆದರೂ ಜಗ್ಗದೆ ಅವರು ಕಿರುಚಾಡಿದ್ದಾರೆ. ಇದರಿಂದ ಹುಲಿಯು ಸ್ಥಳದಿಂದ ಓಡಿ ಹೋಗಿದೆ. ಸದ್ಯ ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್&zwnj; ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ದಾಳಿಯನ್ನು ಖಂಡಿಸಿ ಜನರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/bandipur-tiger-reserve-in-chamarajanagar-despite-being-attacked-he-screamed-and-chased-away-tiger-without-flinching-mrq-dgxy1wk"/>
        </item>
        <item>
            <title><![CDATA[ಕನ್ನಡಪ್ರಭ- ಸುವರ್ಣನ್ಯೂಸ್‌ ವನ್ಯಜೀವಿ ಸಂರಕ್ಷಣಾ ಅಭಿಯಾನ: ಮಲೆ ಮಹದೇಶ್ವರ ಕಾಡಲ್ಲಿ ರಾಯಭಾರಿ ಗಣೇಶ್!]]></title>
            <link>https://kannada.asianetnews.com/karnataka-districts/golden-star-ganesh-wildlife-conservation-campaign-karnataka-gvd-videoshow-dks30gv</link>
            <guid isPermaLink="true">https://kannada.asianetnews.com/karnataka-districts/golden-star-ganesh-wildlife-conservation-campaign-karnataka-gvd-videoshow-dks30gv</guid>
            <pubDate>Wed, 06 May 2026 20:28:54 +0530</pubDate>
            <description><![CDATA[&lt;p&gt;ಮಾನವ - ವನ್ಯಜೀವಿಗಳ ಸಹಬಾಳ್ವೆಗೆ ಕೈ ಜೋಡಿಸೋಣ. ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸೋಣ ಎಂದರು. ಜೊತೆಗೆ ಕಾಡಿನ ಜನರೊಂದಿಗೆ ಮಾತುಕತೆ ನಡೆಸಿದ್ದು, ಸಂದೇಶವನ್ನು ನಟ ಗಣೇಶ್ ಕೊಟ್ಟಿದ್ದಾರೆ.&lt;/p&gt;]]></description>
            <media:content url="https://geo.dailymotion.com/player/x1tbu.html?video=xa8aur2" medium="video" height="768" width="1024"/>
            <content:encoded><![CDATA[&lt;p&gt;ಕನ್ನಡಪ್ರಭ-ಏಷ್ಯಾನೆಟ್&zwnj; ಸುವರ್ಣ ನ್ಯೂಸ್ ಸಂಸ್ಥೆಗಳು ಅರಣ್ಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿರುವ &lsquo;ವನ್ಯಜೀವಿ ಸಂರಕ್ಷಣಾ ಅಭಿಯಾನ&rsquo;ದ 5ನೇ ಆವೃತ್ತಿಗೆ ನಟ ಗೋಲ್ಡನ್&zwnj; ಸ್ಟಾರ್&zwnj; ಗಣೇಶ್&zwnj; ರಾಯಭಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಗಣೇಶ್, ಮಲೆ ಮಹದೇಶ್ವರ ವನ್ಯಧಾಮಕ್ಕೆ ಅರಣ್ಯಾಧಿಕಾರಿಗಳ ಜೊತೆ ಭೇಟಿ ನೀಡಿದರು. ಜೊತೆಗೆ ಕಾಡಿನಿಂದ ನಾಡು ಎನ್ನುವುದು ಕೇವಲ ಘೋಷಣೆ ಆಗಿಯೇ ಉಳಿಯಬಾರದು. ಮಾನವ - ವನ್ಯಜೀವಿಗಳ ಸಹಬಾಳ್ವೆಗೆ ಕೈ ಜೋಡಿಸೋಣ. ಜನತೆಯಲ್ಲಿ ಕಾನೂನು ಜಾಗೃತಿ ಮೂಡಿಸೋಣ ಎಂದರು. ಜೊತೆಗೆ ಕಾಡಿನ ಜನರೊಂದಿಗೆ ಮಾತುಕತೆ ನಡೆಸಿದ್ದು, ಸಂದೇಶವನ್ನು ನಟ ಗಣೇಶ್ ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/golden-star-ganesh-wildlife-conservation-campaign-karnataka-gvd-videoshow-dks30gv"/>
        </item>
        <item>
            <title><![CDATA[ಬಂಡೀಪುರ ಕಾಡಿನೊಳಗೆ ರೌಡಿಶೀಟರ್ ಬಿಂದಾಸ್ ಗುಂಡು ತುಂಡು ಪಾರ್ಟಿ, ಇಲಾಖೆಯ ಸಿಬ್ಬಂದಿಯೇ ಶಾಮೀಲು?]]></title>
            <link>https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y</link>
            <guid isPermaLink="true">https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y</guid>
            <pubDate>Fri, 05 Jun 2026 14:34:09 +0530</pubDate>
            <description><![CDATA[ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಳ್ಳಬೇಟೆ ತಡೆ ಶಿಬಿರದಲ್ಲಿ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಗ್ಯಾಂಗ್ ಅಕ್ರಮವಾಗಿ ಮದ್ಯ ಹಾಗೂ ಮಾಂಸದ ಪಾರ್ಟಿ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಅರಣ್ಯ ಇಲಾಖೆಯ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದ್ದು, ಅಧಿಕಾರಿಗಳ ಶಾಮೀಲಾತಿಯ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಾರ್ವಜನಿಕರು ಮತ್ತು ಪರಿಸರವಾದಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktbgbrc0jw4sy0pnyvmq4s93,imgname-rowdy-sheeter-liquor-party-in-bandipur-1780650205568.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ&lt;/strong&gt;: ವನ್ಯಜೀವಿಗಳ ಸ್ವರ್ಗ, ದೇಶದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವನಗಳಲ್ಲೊಂದಾದ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಈಗ ತೀವ್ರ ಆತಂಕಕಾರಿ ಮತ್ತು ಮುಜುಗರದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಕಠಿಣ ನಿಯಮಗಳನ್ನು ವಿಧಿಸುವ ಬಂಡೀಪುರ ಕಾನನದೊಳಗೆ ರೌಡಿಶೀಟರ್ ಒಬ್ಬ ತನ್ನ ಗ್ಯಾಂಗ್&zwnj;ನೊಂದಿಗೆ ಬಿಂದಾಸ್ ಆಗಿ 'ಎಣ್ಣೆ ಪಾರ್ಟಿ' ನಡೆಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆಯ ಅತ್ಯಂತ ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುವ ಕಳ್ಳಬೇಟೆ ತಡೆ ಶಿಬಿರದಲ್ಲೇ (Anti-Poaching Camp) ಈ ಮೋಜುಮಸ್ತಿ ನಡೆದಿರುವುದು ಇಡೀ ಇಲಾಖೆಯ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಿದೆ.&lt;/p&gt;&lt;h2&gt;&lt;strong&gt;ಹುಲಿಕಟ್ಟೆ ಶಿಬಿರದಲ್ಲಿ ಭದ್ರತಾ ಲೋಪ!&lt;/strong&gt;&lt;/h2&gt;&lt;p&gt;ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಮದ್ದೂರು ವಲಯದ ಹುಲಿಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಹಳೇ ಮೈಸೂರು ಭಾಗದ ಕುಖ್ಯಾತ ರೌಡಿಶೀಟರ್ ಸತೀಶ್ ಮತ್ತು ಆತನ ಸಂಗಡಿಗರು ಯಾವುದೇ ಭಯವಿಲ್ಲದೆ ಕಾಡಿನ ಪ್ರಾಣಿ ವಲಯದ ಅತ್ಯಂತ ಸೂಕ್ಷ್ಮ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಎಲ್ಲಾ ಕಠಿಣ ನಿಯಮಗಳನ್ನು ಗಾಳಿಗೆ ತೂರಿ, ಹುಲಿಕಟ್ಟೆ ಕಳ್ಳಬೇಟೆ ತಡೆ ಶಿಬಿರದ ಆವರಣದಲ್ಲೇ ಮದ್ಯ ಹಾಗೂ ಮಾಂಸದ ಅಡುಗೆ ಸಿದ್ಧಪಡಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ.&lt;/p&gt;&lt;h2&gt;ಕಾಡಿನ ಒಣಸೌದೆಗೂ ಬಿಡದ ಇಲಾಖೆ, ರೌಡಿಗೆ ರೆಡ್ ಕಾರ್ಪೆಟ್ ಯಾತಕ್ಕೆ?&lt;/h2&gt;&lt;p&gt;ಈ ಘಟನೆಯು ಹೊರಬೀಳುತ್ತಿದ್ದಂತೆ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಡಿನ ಅಂಚಿನಲ್ಲಿ ವಾಸಿಸುವ ಬಡ ಜನ, ಆದಿವಾಸಿಗಳು ಕೇವಲ ಒಲೆ ಉರಿಸಲು ಕಾಡಿನಲ್ಲಿ ಬಿದ್ದಿರುವ ಒಣಗಿದ ಸೌದೆಯನ್ನು ತರಲು ಹೋದರೂ ಅವರ ಮೇಲೆ ಕೇಸ್ ದಾಖಲಿಸುವ, ದಂಡ ವಿಧಿಸುವ ಮತ್ತು ಕ್ರೂರವಾಗಿ ನಡೆಸಿಕೊಳ್ಳುವ ಅರಣ್ಯ ಇಲಾಖೆ ಸಿಬ್ಬಂದಿ, ಇಂತಹ ಸಮಾಜವಿರೋಧಿ ಶಕ್ತಿಗಳಿಗೆ ಕಾಡಿನೊಳಗೆ ರೆಡ್ ಕಾರ್ಪೆಟ್ ಹಾಸಿ ಬರಮಾಡಿಕೊಂಡಿದ್ದು ಏಕೆ? ಎಂಬ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಅಪರಾಧ ಹಿನ್ನೆಲೆಯುಳ್ಳ ರೌಡಿಶೀಟರ್ ಒಬ್ಬನಿಗೆ ಕಾಡಿನ ಅತ್ಯಂತ ರಕ್ಷಿತ ವಲಯಕ್ಕೆ ಪ್ರವೇಶ ಸಿಕ್ಕಿದ್ದಾದರೂ ಹೇಗೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.&lt;/p&gt;&lt;h2&gt;ಅಧಿಕಾರಿಗಳೇ ಶಾಮೀಲಾಗಿರುವ ಶಂಕೆ: ಪರಿಸರವಾದಿಗಳ ಆಕ್ರೋಶ&lt;/h2&gt;&lt;p&gt;ಕಾಡಿನೊಳಗೆ ಚಿರತೆ, ಹುಲಿ ಮತ್ತು ಆನೆಗಳ ಓಡಾಟವಿರುವ ಜಾಗದಲ್ಲಿ ಮದ್ಯದ ಬಾಟಲಿಗಳನ್ನು ಹಿಡಿದು ರೌಡಿಶೀಟರ್ ಸತೀಶ್ ಪಡೆ ಬೀಡು ಬಿಟ್ಟಿರುವುದರ ಹಿಂದೆ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಆರ್&zwnj;.ಎಫ್&zwnj;.ಒ (RFO) ಮಟ್ಟದ ಸಿಬ್ಬಂದಿಯ ನೇರ ಶಾಮೀಲಾತಿ ಇರುವ ಶಂಕೆ ದಟ್ಟವಾಗಿದೆ. ಇಲಾಖೆಯ ಆಂತರಿಕ ಒಪ್ಪಂದ ಅಥವಾ ಲಂಚದ ಆಮಿಷವಿಲ್ಲದೆ ಇಂತಹ ಕೃತ್ಯ ನಡೆಯಲು ಸಾಧ್ಯವೇ ಇಲ್ಲ ಎಂದು ಪರಿಸರ ಪ್ರೇಮಿಗಳು ದೂರಿದ್ದಾರೆ. ಕಾಡಿನ ಭದ್ರತೆಗೆ ಧಕ್ಕೆ ತಂದು, ವನ್ಯಜೀವಿಗಳ ಜೀವಕ್ಕೆ ಸಂಚಕಾರ ತಂದೊಡ್ಡಿರುವ ಈ ಮೋಜುಮಸ್ತಿಯನ್ನು ಪರಿಸರವಾದಿಗಳು ತೀವ್ರವಾಗಿ ಖಂಡಿಸಿದ್ದಾರೆ.&lt;/p&gt;&lt;p&gt;ಬಂಡೀಪುರ ಅರಣ್ಯ ಇಲಾಖೆಯ ಇಮೇಜ್&zwnj;ಗೆ ಧಕ್ಕೆ ತಂದಿರುವ ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಕಳ್ಳಬೇಟೆ ತಡೆಯಬೇಕಾದ ಶಿಬಿರಗಳೇ ಅಪರಾಧಿಗಳ ಪಾರ್ಟಿ ಅಡ್ಡಾಗಳಾಗಿ ಬದಲಾಗುತ್ತಿರುವುದು ದುರಂತ. ಈ ಭದ್ರತಾ ಲೋಪಕ್ಕೆ ಕಾರಣರಾದ ಆರ್&zwnj;.ಎಫ್&zwnj;.ಒ ಸೇರಿದಂತೆ ಪ್ರಭಾವಿ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣವೇ ಶಿಸ್ತುಕ್ರಮ ಜರುಗಿಸದಿದ್ದರೆ ಮುಂಬರುವ ದಿನಗಳಲ್ಲಿ ಬಂಡೀಪುರದ ರಕ್ಷಣೆ ಕೇವಲ ಕಾಗದದ ಮೇಲಷ್ಟೇ ಉಳಿಯಲಿದೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bandipur-tiger-reserve-security-breach-rowdy-sheeter-and-gang-breach-bandipur-core-zone-for-a-rowdy-liquor-party-gdp/articleshow-e4gbs6y"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿ, ಕುಟುಂಬದೊಂದಿಗೆ ನಾಗಮಲೆಯತ್ತ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಬಾಲಕ ಬಲಿ!]]></title>
            <link>https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz</link>
            <guid isPermaLink="true">https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz</guid>
            <pubDate>Sun, 10 May 2026 12:11:53 +0530</pubDate>
            <description><![CDATA[ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪಾದಯಾತ್ರೆಗೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಎಳೆದೊಯ್ದಿದ್ದು, ಬಳಿಕ ಅರಣ್ಯ ಪ್ರದೇಶದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಪಾದಯಾತ್ರಿಗಳ ಸುರಕ್ಷತೆಯ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr89sdqjww62ghpxymyp41nw,imgname-leopard-attack-male-mahadeshwara-hills-1778395166450.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ:&lt;/strong&gt; ಜಿಲ್ಲೆಯಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ಮಲೆ ಮಹದೇಶ್ವರ ಬೆಟ್ಟದ ಸಮೀಪ ಪಾದಯಾತ್ರೆ ಹೋಗುತ್ತಿದ್ದ ಬಾಲಕನನ್ನು ಚಿರತೆ ಎಳೆದೊಯ್ದು ಕೊಂದಿರುವ ದುರ್ಘಟನೆ ನಡೆದಿದೆ. ಬೆಂಗಳೂರಿನ ಲಗ್ಗೆರೆ ಮೂಲದ ಬಾಲಕ ಹರ್ಷಿತ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಪಾದಯಾತ್ರೆ ನಡೆಸುತ್ತಿದ್ದನು. ಕುಟುಂಬದ ಸುಮಾರು 10 ಮಂದಿ ಒಟ್ಟಾಗಿ ತೆರಳುತ್ತಿದ್ದ ವೇಳೆ, ನಾಗಮಲೆ ಮಾರ್ಗದ ಇಂಡಿಗನತ್ತ ಸಮೀಪ ಚಿರತೆ ಬಾಲಕನನ್ನು ಕಚ್ಚಿ ಎಳೆದೊಯ್ದಿದಿದೆ.&lt;/p&gt;&lt;h2&gt;ಕಣ್ಣೆದುರೇ ಎಳೆದೊಯ್ದ ಚಿರತೆ&lt;/h2&gt;&lt;p&gt;ಪಾದಯಾತ್ರೆಯ ಮಧ್ಯದಲ್ಲೇ ಹಠಾತ್&zwnj;ವಾಗಿ ದಾಳಿ ನಡೆಸಿದ ಚಿರತೆ, ಬಾಲಕನನ್ನು ಕುಟುಂಬಸ್ಥರ ಕಣ್ಣೆದುರೇ ಎಳೆದೊಯ್ದಿದೆ. ಈ ದೃಶ್ಯ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಕಿರುಚಾಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡರು.&lt;/p&gt;&lt;h2&gt;ಅಪಾಯಕರ ಮಾರ್ಗ, ಹೆಚ್ಚುತ್ತಿರುವ ಆತಂಕ&lt;/h2&gt;&lt;p&gt;ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ, ಬಾಲಕನ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ನಾಗಮಲೆ ಮಾರ್ಗವು Male Mahadeshwara Hills ಭಾಗವಾಗಿದ್ದು, ಮಹದೇಶ್ವರನ 77 ಮಲೆಗಳಲ್ಲಿ ಒಂದಾಗಿದೆ. ಈ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಈ ಮಾರ್ಗದಲ್ಲಿ ಈ ಹಿಂದೆ ಕೂಡ ಇಂತಹ ದುರ್ಘಟನೆಗಳು ನಡೆದಿದ್ದು, ಪಾದಯಾತ್ರೆಗೆ ತೆರಳುವ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿತ್ತು.&lt;/p&gt;&lt;h2&gt;ಭಕ್ತರ ಸುರಕ್ಷತೆ ಬಗ್ಗೆ ಪ್ರಶ್ನೆಗಳು&lt;/h2&gt;&lt;p&gt;ಇಂತಹ ಘಟನೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಕಾಡುಪ್ರಾಣಿಗಳ ಚಲನವಲನ ಹೆಚ್ಚಿರುವುದರಿಂದ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/leopard-kills-boy-during-pilgrimage-near-male-mahadeshwara-hills-in-karnataka-gdp/articleshow-isfyxlz"/>
        </item>
        <item>
            <title><![CDATA[ಕಣ್ಣ ಮುಂದೆ ಮಗುವನ್ನು ಚಿರತೆ ಕೊಂದಿತು, ಮಲೆ ಮಹದೇಶ್ವರದಲ್ಲಿ ಮಗನ ಕಳ್ಕೊಂಡ ತಾಯಿ ಆಕ್ರಂದನ]]></title>
            <link>https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5</link>
            <guid isPermaLink="true">https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5</guid>
            <pubDate>Sun, 10 May 2026 22:48:52 +0530</pubDate>
            <description><![CDATA[&lt;p&gt;ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr9dztfkyh46fqqs4bk1769q,imgname-leopard-kills-child-mm-hills-1778433124851.png" type="image/jpeg" height="390" width="690"/>
            <content:encoded><![CDATA[&lt;p&gt;ತಾಯಿ ಜೊತೆ ಮಲೆ ಮಹದೇಶ್ವರನ ಬೆಟ್ಟಕ್ಕೆ ಹೋಗಿದ್ದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾದ ಘಟನೆ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ನನ್ನ ಮಗುವನ್ನು ಕಣ್ಣ ಮುಂದೆ ಚಿರತೆ ಎತ್ತಿಕೊಂಡು ಹೋಗಿ ಕೊಂದಿತು ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ತಾಯಿ ಜೊತೆ ದೇವರ ದರ್ಶನಕ್ಕಾಗಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಬಾಲಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದೆ. ತಾಯಿ ಮುಂದೆ ಮಗನ ಎತ್ತಿಕೊಂಡು ಹೋದ ಚಿರತೆ ಕೊಂದು ಹಾಕಿದೆ. ಸುರೇಶ್ ಹಾಗೂ ಪವಿತ್ರ ದಂಪತಿಯ ಪುತ್ರ ಹರ್ಷಿತ್ ಗೌಡ ದುರಂತ ಅಂತ್ಯ ಕಂಡ ಬಾಲಕನ. ಇದೀಗ ಬಾಲಕನ ಮೃತದೇಹ ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸ ತಲುಪಿದೆ.&lt;/p&gt;&lt;img&gt;&lt;p&gt;ಇಂದು ಬೆಳಗ್ಗೆ 7.30 ಸುಮಾರಿಗೆ ಚಿರತೆ ದಾಳಿ ನಡೆಸಿದೆ. ಘಟನೆ ಕುರಿತು ಮೃತ ಬಾಲಕನ ತಂದೆ ಸುರೇಶ್ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದೇವರ ದರ್ಶನಕ್ಕೆ ಹೋಗಿದ್ದ ಮಗ ಶವವಾಗಿ ಬಂದಿದ್ದಾನೆ. ನನ್ನ ಮಗನ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ತಂದೆ ಸುರೇಶ್ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದ ಹೀಗಾಗಿದೆ. ನಾನು ಬೆಂಗಳೂರಿನಿಂದ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಿಚಾರಿಸುವವರೆಗೂ ನಮ್ಮ ಮನೆಯವರಿಗೆ ಮಾಹಿತಿ ನೀಡಿಲ್ಲ. ನಾನು ಮಧ್ಯಾಹ್ನ 2.30ಕ್ಕೆ ಹೋಗಿ ವಿಚಾರಿಸಿದಾಗ ಮೃತದೇಹ ತಂದು ಕೊಟ್ಟರು. ಇನ್ನು ಮುಂದೆಯಾದ್ರೂ ಅರಣ್ಯ ಇಲಾಖೆಯವರು ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲಿ ಎಂದು ಸುರೇಶ್ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ನನ್ನ ಕಣ್ಣ ಮುಂದೆಯೇ ನನ್ನ ಮಗುವನ್ನು ಚಿರತೆ ಎತ್ತಿಕೊಂಡು ಹೊಯ್ತು. ನಾವು ಬೆದರಿಸಿದ್ರು ಮಗುವನ್ನು ಹೊತ್ತೊಯ್ದು ಕೊಂದು ಹಾಕಿದೆ. ನನ್ನ ಮಗ ನನ್ನ ಕಣ್ಮುಂದೆಯೇ ಸತ್ತು ಹೋಗಿದ್ದಾನೆ ಎಂದು ಹರ್ಷಿತ್ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.&lt;/p&gt;&lt;img&gt;&lt;p&gt;ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸರಿಯಾದ ಭದ್ರತೆ ಕೈಗೊಂಡಿಲ್ಲ. ಹುಲಿ, ಚಿರತೆ ಇದೆ ಅಂತ ಒಂದು ಎಚ್ಚರಿಕೆ ಬೋರ್ಡ್ ಕೂಡ ಹಾಕಿಲ್ಲ. ನಮಗೆ ಮೊದಲೇ ಗೊತ್ತಿದ್ರೆ ಅಲ್ಲಿ ಹೋಗ್ತಾನೆ ಇರಲಿಲ್ಲ ಎಂದು ಮೃತ ಬಾಲಕನ ತಾಯಿ ಪವಿತ್ರ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;ಹುಲಿ ಚಿರತೆ ಇದೆ ಗೊತ್ತಿದ್ದರೆ ಹೋಗ್ತಾನೆ ಇರಲಿಲ್ಲ&lt;/h2&gt;]]></content:encoded>
            <category>chamarajnagar</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/mother-breaks-down-after-leopard-kills-her-child-in-male-mahadeshwara-hills-iuxh2y5"/>
        </item>
        <item>
            <title><![CDATA[ಬಡವರಿಗೆ ಒಳ್ಳೆಯದು ಮಾಡಲು ಪ್ರಧಾನಿ ಮೋದಿ ಬಂದಿಲ್ಲ: ಸಚಿವ ಕೆ.ವೆಂಕಟೇಶ್ ವಾಗ್ದಾಳಿ]]></title>
            <link>https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4</link>
            <guid isPermaLink="true">https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4</guid>
            <pubDate>Sun, 17 May 2026 22:26:31 +0530</pubDate>
            <description><![CDATA[&lt;p&gt;ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j7xtcxhpjjmbh16mn9564scv,imgname-vbv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.17): &lt;/strong&gt;ಬಡವರಿಗೆ ಒಳ್ಳೆಯದು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಂದಿಲ್ಲ. ಬಡವರ ರಕ್ತ ಹೀರಿ ಸರ್ಕಾರ ಹಣ ಮಾಡುವಂತೆ ಕಾಣುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಇಂಧನ ಬೆಲೆ ಏರಿಕೆ ವಿರುದ್ಧ ಅಸಮಾಧಾನ ಹೊರಹಾಕಿದರು. ಪ್ರಧಾನಿ ಮೋದಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಹೊರೆ ಹಾಕಿದ್ದಾರೆ. ಈ ರೀತಿ ಬೆಲೆ ಏರಿಸಿದರೇ ಜನರು ಹೇಗೆ ಬದುಕಬೇಕು ಎಂದು ಕಿಡಿಕಾರಿದರು.&lt;/p&gt;&lt;p&gt;ಈಗ ಯುದ್ಧ ಇದೆ ಎನ್ನುತ್ತಿದ್ದಾರೆ. ಈ ಹಿಂದೆ ಬೆಲೆ ಏರಿಸಿದ್ದಾರಲ್ಲ, ಆಗ ಯುದ್ಧ ಎಲ್ಲಿತ್ತು. ಅಚ್ಚೇ ದಿನ್ ಎಂದು ಭಾಷಣ ಮಾಡುತ್ತಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಸುವುದು ಅಚ್ಚೇ ದಿನವೇ. ಜನರಿಗೆ ಹೊರೆ ಹೊರಿಸಲು ಮೋದಿ ಬಂದಿದ್ದಾರೆ ಎಂದರು&zwnj;. ಇದೇ ವೇಳೆ, ಮತಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಮಾತನಾಡಿ, ಮತಪಟ್ಟಿ ಪರಿಷ್ಕರಣೆ ನಡೆಸಲಿ ನಾವು ಯಾರೂ ಬೇಡ ಎನ್ನುವುದಿಲ್ಲ. ಆದರೆ, ವಸ್ತುನಿಷ್ಠವಾಗಿರಲಿ, ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮತದಾರರನ್ನು ಈ ಬಾರಿ ಕೈ ಬಿಟ್ಟಿದ್ದಾರೆ. ಬರೀ ಒಂದೂವರೆ ಸಾವಿರ ಮತಗಳ ಅಂತರದಿಂದ ಸಾಕಷ್ಟು ಟಿಎಂಸಿ ಅಭ್ಯರ್ಥಿಗಳು ಸೋತಿದ್ದಾರೆ ಎಂದರು.&lt;/p&gt;&lt;p&gt;ಹಿಜಾಬ್ ವಿವಾದ, ಸಮಸ್ಯೆಯನ್ನು ನಾವು ಹುಟ್ಟುಹಾಕಿಲ್ಲ, ಈ ಸಮಸ್ಯೆಯನ್ನು ಆಚೆಗೆ ತಂದಿದ್ದೇ ಬಿಜೆಪಿಯವರು, ಯಾವ ಕಾಲದಿಂದ ಹಿಜಾಬ್ ಇದೆ. ಈಗೇನು ಹೊಸದಾಗಿ ಬಂದಿದೆಯಾ ? ಸಾವಿರಾರು ವರ್ಷಗಳ ಪದ್ಧತಿಯನ್ನು ಬಿಜೆಪಿ ಅವರು ಬದಲಾಯಿಸಿ ಎಂದರೆ ಈಗ ಬದಲಾಯಿಸಲಾಗುತ್ತದೆಯೇ? ಆದಕ್ಕಾಗಿ ನಾವು ಹಿಜಾಬ್ ಮೇಲಿನ ನಿಷೇಧವನ್ನು ತೆಗೆದು ಹಾಕಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.&lt;/p&gt;&lt;h2&gt;&lt;strong&gt;ನೀರಿನ ಸಮಸ್ಯೆ ಪರಿಹಾರ ತಡಮಾಡದಿರಿ&lt;/strong&gt;&lt;/h2&gt;&lt;p&gt;ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ಕುಡಿಯುವ ನೀರಿನ ಸಂಬಂಧ ಚಾಮರಾಜನಗರ ಪಟ್ಟಣದ ವಿವಿಧ ವಾರ್ಡ್&zwnj;ಗಳಿಗೆ ಶನಿವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಮೊದಲಿಗೆ 1ನೇ ವಾರ್ಡಿನ ಸೋಮವಾರಪೇಟೆ ಬಡಾವಣೆಯ ಹೊರಭಾಗದಲ್ಲಿರುವ ಹಂದಿಜೋಗಿ ಕಾಲೋನಿಗೆ ಸಚಿವರು ಭೇಟಿ ನೀಡಿದರು. ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ, ಏನಾದರೂ ಸಮಸ್ಯೆ ಇದೆಯೇ ಎಂದು ನಿವಾಸಿಗಳನ್ನು ವಿಚಾರಿಸಿದರು.&lt;/p&gt;&lt;p&gt;ಬಳಿಕ ಮಾತನಾಡಿ, ಜನರಿಗೆ ಆದ್ಯತೆ ಮೇರೆಗೆ ನೀರು ಒದಗಿಸಬೇಕು. ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಟ್ಯಾಂಕರ್&zwnj; ಮೂಲಕ ಸಮರ್ಪಕವಾಗಿ ನೀರು ಪೂರೈಕೆ ಮಾಡುವಂತೆ ಸ್ಥಳದಲ್ಲಿಯೇ ಇದ್ದ ನಗರಸಭೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.ಇದೇ ವೇಳೆ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಸ್ಪಂದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.&lt;/p&gt;&lt;p&gt;ಬಳಿಕ ಸೋಮವಾರಪೇಟೆ ಹಾಗೂ ಗಾಳೀಪುರ ಬಡಾವಣೆಗೆ ಆಗಮಿಸಿದ ವೆಂಕಟೇಶ್&zwnj;, ಅಲ್ಲಿಯೂ ನೀರಿನ ಸಮಸ್ಯೆ ಕುರಿತು ಜನರೊಂದಿಗೆ ಮಾತನಾಡಿದರು. ನೀರು 3 ದಿನಗಳಿಗೊಮ್ಮೆ ಸರಬರಾಜು ಆಗುತ್ತಿದೆ. ಹೆಚ್ಚುವರಿ ಬೋರ್&zwnj;ವೆಲ್ ಕೊರೆಸಬೇಕು. ಕಸ ಸಂಗ್ರಹಣೆ ವಾಹನ ವಾರಕ್ಕೊಮ್ಮೆಯಾದರೂ ಬರಬೇಕು. ಚರಂಡಿಗಳು ಸ್ವಚ್ಚತೆಯಿಲ್ಲದೆ ದುರ್ವಸನೆಯಿಂದ ಕೂಡಿವೆ. ಅದನ್ನು ಸರಿಪಡಿಸುವಂತೆ ಬಡಾವಣೆಗೆ ನಿವಾಸಿಗಳು ಸಚಿವರಿಗೆ ಮನವಿ ಮಾಡಿದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-k-venkatesh-comments-on-modi-price-rise-hijab-gvd/articleshow-lg9cfh4"/>
        </item>
        <item>
            <title><![CDATA[ಚಾಮರಾಜನಗರ: ಬಾಲಕನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಸೆರೆ? 15 ದಿನಗಳ ಬಳಿಕ ತಾನೇ ತಾನಾಗಿ ಬೋನಿಗೆ ಬಿದ್ದಿದ್ದು ಹೇಗೆ?]]></title>
            <link>https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug</link>
            <guid isPermaLink="true">https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug</guid>
            <pubDate>Sun, 24 May 2026 10:24:32 +0530</pubDate>
            <description><![CDATA[&lt;p&gt;ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಬಳಿ ಪೋಷಕರ ಮುಂದೆಯೇ ಬಾಲಕನನ್ನು ಎಳೆದೊಯ್ದು ಕೊಂದಿದ್ದ ಚಿರತೆಯು, 15 ದಿನಗಳ ನಿರಂತರ ಕಾರ್ಯಾಚರಣೆಯ ನಂತರ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಆದರೆ, ಸೆರೆಸಿಕ್ಕಿರುವುದು ಅದೇ ನರಭಕ್ಷಕ ಚಿರತೆಯೇ ಎಂಬ ಅನುಮಾನ ಮೂಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksc545wqdpvjpkcxp0scxrkz,imgname-whatsapp-image-2026-05-24-at-9.20.00-am-1779598235543.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ (ಮೇ.24): &lt;/strong&gt;ಪೋಷಕರ ಮುಂದೆಯೇ ಬಾಲಕನನ್ನ ಎಳೆದೊಯ್ದು ಕೊಂದಿದ್ದ ಚಿರತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕೊನೆಗೂ ಬಲೆಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.&lt;/p&gt;&lt;h2&gt;ಬಾಲಕನನ್ನು ಎಳೆದೊಯ್ದು ಕೊಂದಿತ್ತು&lt;/h2&gt;&lt;p&gt;ಕೆಲವು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೆದುರೇ ಚಿರತೆ ಎಳೆದೊಯ್ದು ಕೊಂದಿತ್ತು.ನಾಗಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಘಟನೆ ಬಳಿಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಆರಂಭಿಸಿತ್ತು.&lt;/p&gt;&lt;h3&gt;15 ದಿನಗಳ ನಿರಂತರ ಕಾರ್ಯಾಚರಣೆ&lt;/h3&gt;&lt;p&gt;ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಆರಂಭದಲ್ಲಿ ಕ್ಯಾಮೆರಾ ಟ್ರ್ಯಾಪ್&zwnj;ಗೆ ಚಿರತೆ ಸೆರೆಯಾಗಿದ್ದರೂ, ಬಳಿಕ ಅದು ಬೋನಿಗೆ ಬೀಳದೆ ಯಶಸ್ವಿಯಾಗಿ ತಪ್ಪಿಸಿಕೊಂಡಿತ್ತು. ಆದರೆ. ಇದೀಗಾ ರಾತ್ರೋರಾತ್ರಿ ಚಿರತೆ ಬೋನಿಗೆ ಬಿದ್ದಿರುವುದು ಸಿಬ್ಬಂದಿಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ಅದೇ ಚಿರತೆಯೋ ? ಬೇರೊಂದೋ ಸ್ಥಳಿಯರಿಗೆ ಅನುಮಾನ&lt;/strong&gt;&lt;/p&gt;&lt;p&gt;ಬಾಲಕನ ಮೇಲೆ ದಾಳಿ ನಡೆಸಿದ್ದು ಇದೇ ಚಿರತೆಯೇ? ಬೇರೊಂದೋ? ಎಂಬ ಅನುಮಾನ ಸ್ಥಳೀಯರಲ್ಲಿ ಇನ್ನೂ ಹಾಗೆ ಉಳಿದಿದೆ. ಈ ಚಿರತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇಕೆಗಳ ಮೇಲೂ ದಾಳಿ ನಡೆಸಿತ್ತು ಎಂಬ ಮಾಹಿತಿ ಇದೆ. ಹೀಗಾಗಿ ಇದು ಅದೇ ನರಭಕ್ಷಕ ಚಿರತೆನನಾ ಅಥವಾ ಬೇರೆಯದೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&lt;strong&gt;ರಕ್ತದ ಮಾದರಿ ಪರೀಕ್ಷೆಗೆ ಅಧಿಕಾರಿಗಳ ನಿರ್ಧಾರ&lt;/strong&gt;&lt;/p&gt;&lt;p&gt;ಬಾಲಕನನ್ನು ಕೊಂದ ಚಿರತೆ ಇದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಬಂದ ಬಳಿಕವೇ ಅಧಿಕೃತವಾಗಿ ದೃಢಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/leopard-that-killed-boy-caught-after-15-days-in-chamarajanagar/articleshow-lo4mgug"/>
        </item>
        <item>
            <title><![CDATA[BREAKING: ಬೆಂಗಳೂರು ಸೇರಿದಂತೆ ರಾಜ್ಯದ 6 ಜಿಲ್ಲೆಗಳಿಗೆ ಮುಂದಿನ 3 ಗಂಟೆ 'ಯಲ್ಲೋ ಅಲರ್ಟ್'; ಹಾಸನಕ್ಕೆ ಆರೆಂಜ್ ಅಲರ್ಟ್]]></title>
            <link>https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</link>
            <guid isPermaLink="true">https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4</guid>
            <pubDate>Mon, 25 May 2026 18:03:58 +0530</pubDate>
            <description><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzxjj84544nkh17j6s99v9v,imgname-karnataka-rain-alert-1779187665156.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮಹತ್ವದ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆಯಾಗಲಿದ್ದು, ಹಾಸನಕ್ಕೆ 'ಆರೆಂಜ್ ಅಲರ್ಟ್' ಮತ್ತು ಇತರೆ 6 ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಿಸಲಾಗಿದೆ.&lt;img&gt;&lt;p&gt;ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ಹವಾಮಾನ ಇಲಾಖೆಯು ಮಹತ್ವದ ಮುನ್ಸೂಚನೆಯೊಂದನ್ನು ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಲಿದ್ದು, ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರು ನಗರದಲ್ಲಿ ಮುಂದಿನ 3 ಗಂಟೆಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, 'ಯಲ್ಲೋ ಅಲರ್ಟ್' (Yellow Alert) ಘೋಷಿಸಲಾಗಿದೆ. ಕಚೇರಿ ಮುಗಿಸಿ ಮನೆಗೆ ಮರಳುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರು ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಕೇವಲ ಸಾಧಾರಣ ಮಳೆಯಷ್ಟೇ ಅಲ್ಲದೆ, ಗಂಟೆಗೆ ಭಾರಿ ವೇಗದಲ್ಲಿ ಬೀಸಲಿರುವ ಸುಂಟರಗಾಳಿ ಹಾಗೂ ಗುಡುಗು-ಮಿಂಚಿನ ಸಹಿತ ವರುಣ ಆರ್ಭಟಿಸಲಿದ್ದಾನೆ. ಹೀಗಾಗಿ ಸಾರ್ವಜನಿಕರು ಮರಗಳ ಕೆಳಗೆ ಹಾಗೂ ದುರ್ಬಲ ಕಟ್ಟಡಗಳ ಬಳಿ ಆಶ್ರಯ ಪಡೆಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.&lt;/p&gt;&lt;img&gt;&lt;p&gt;ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಅತ್ಯಂತ ಹೆಚ್ಚಾಗಿರಲಿದ್ದು, ಹವಾಮಾನ ಇಲಾಖೆಯು ಹಾಸನಕ್ಕೆ ಕಟ್ಟುನಿಟ್ಟಿನ 'ಆರೆಂಜ್ ಅಲರ್ಟ್' (Orange Alert) ಜಾರಿಗೊಳಿಸಿದೆ. ಇಲ್ಲಿ ಅತಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ನಗರದ ಜೊತೆಗೆ ರಾಜ್ಯದ ಪ್ರಮುಖ ಜಿಲ್ಲೆಗಳಾದ ವಿಜಯಪುರ, ಯಾದಗಿರಿ, ರಾಮನಗರ, ಚಾಮರಾಜನಗರ ಹಾಗೂ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಗಳಿಗೂ ಮುಂದಿನ 3 ಗಂಟೆಗಳ ಕಾಲ 'ಯಲ್ಲೋ ಅಲರ್ಟ್' ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲೂ ದಿಢೀರ್ ಮಳೆ ಸುರಿಯುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಮುಂದಿನ 3 ಗಂಟೆಗಳ ಅವಧಿ ಅತ್ಯಂತ ನಿರ್ಣಾಯಕವಾಗಿದ್ದು, ಆಯಾ ಜಿಲ್ಲಾಡಳಿತಗಳು ಮತ್ತು ವಿಪತ್ತು ನಿರ್ವಹಣಾ ತಂಡಗಳು ಅಲರ್ಟ್ ಆಗಿವೆ. ತಗ್ಗು ಪ್ರದೇಶದ ಜನರಿಗೆ ಮತ್ತು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಕೋರಿದೆ.&lt;/p&gt;]]></content:encoded>
            <category>chamarajnagar</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-rain-alert-bengaluru-yellow-alert-hassan-orange-alert-weather-update-san-lzi7va4"/>
        </item>
        <item>
            <title><![CDATA[ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ?: ಸಂಕಷ್ಟದಲ್ಲಿ ವೃದ್ಧರು, ಅಂಗವಿಕಲರ ಜೀವನ!]]></title>
            <link>https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx</link>
            <guid isPermaLink="true">https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx</guid>
            <pubDate>Mon, 25 May 2026 18:34:27 +0530</pubDate>
            <description><![CDATA[&lt;p&gt;ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfkrt8zzq1394w84ycnc05y,imgname-chc-1779714255135.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.25):&lt;/strong&gt; ಗ್ಯಾರಂಟಿ ಸರ್ಕಾರದ ಬಳಿ ಮಾಸಾಶನ ನೀಡಲೂ ಹಣ ಇಲ್ವಾ ಅನುಮಾನ ಮೂಡ್ತಿದೆ. ಇದಕ್ಕೆ ಕಾರಣ ಕಳೆದ ಎರಡು ಮೂರು ತಿಂಗಳಿಂದ ಮಾಸಾಶನ ಪಡೆಯಲು ವೃದ್ದರು, ವಿಧವೆಯರು ಅಂಗವಿಕಲರು ದಿನ ನಿತ್ಯ ಅಲೆದಾಡುತ್ತಿದ್ದಾರೆ. ಮಾಸಾಶನ ನಂಬಿಕೊಂಡಿರುವವರ ಪರಿಸ್ಥಿತಿ ಆಯೋಮಯವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ಕಳೆದ ಎರಡು ಮೂರು ತಿಂಗಳಿಂದ ವೃದ್ದರು, ವಿಧವೆಯರು ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಮಾಸಾಶನ ಬಿಡುಗಡೆ ಆಗಿಲ್ಲ. ಈ ಹಿನ್ನಲೆ ಮಾಸಾಶನಕ್ಕಾಗಿ ದಿನನಿತ್ಯ ಕೂಡ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ವೃದ್ದರು ಅಲೆದಾಡುವಂತಾಗಿದೆ. ನಮ್ಮ ಜೀವನಕ್ಕೆ ಸರ್ಕಾರದ ಮಾಸಾಶನ ಕೂಡ ಆಧಾರವಾಗಿದೆ, ಆದ್ರೆ ಕಳೆದೆರಡು ಮೂರು ತಿಂಗಳಿಂದ ಬಂದಿಲ್ಲ. ಜೀವನ ನಡೆಸುವುದು ಕೂಡ ದುಸ್ತರವಾಗಿದೆ.&lt;/p&gt;&lt;p&gt;ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟಾರೆ 84,136 ವೃದ್ಧರು, 40,272 ವಿಧವೆಯರು, 20,760 ಅಂಗವಿಕಲರು ಹಾಗು 8772 ಮನಸ್ವಿನಿ ಯೋಜನೆಯ ಫಲಾನುಭವಿಗಳಿದ್ದಾರೆ. ಮಾಸಾಶನವನ್ನೆ ನಂಬಿಕೊಂಡ ಅಸಹಾಯಕರ ಪರಿಸ್ಥಿತಿ ಅಯೋಮಯವಾಗಿದೆ. ಸರ್ಕಾರವೇ ದುಡ್ಡು ಕೊಡ್ತಿಲ್ಲ, ನಾವೆಲ್ಲಿ ಕೊಡೋಣ ಎಂದು ಅಧಿಕಾರಿಗಳು ಹೇಳ್ತಿದ್ದಾರೆ ಅಂತಾ ವೃದ್ದರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ಬಳಿ ಹಣ ಇಲ್ವಾ?&lt;/strong&gt;&lt;/h2&gt;&lt;p&gt;ಇನ್ನೂ ಪದೇಪದೇ ಬರಬೇಡಿ ಅಂತ ಅಧಿಕಾರಿಗಳು ವೃದ್ದರನ್ನು ಗದರಿಸುತ್ತಾರಂತೆ, ಮಾಸಾಶನ ನೀಡಲೂ ಸರ್ಕಾರದ ಬಳಿ ಹಣ ಇಲ್ವಾ? ಎಂಬ ಅನುಮಾನ ಉಂಟಾಗಿದೆ. ಮೂರು ತಿಂಗಳಿಂದ ಪೋಸ್ಟ್ ಆಫೀಸ್, ಬ್ಯಾಂಕ್ಗಳಿಗೆ ಅಲೆಯುತ್ತಿರು ವೃದ್ಧರು, ವಿಧವೆಯರು, ಅಂಗವಿಕಲರು ಪರದಾಟ ಪಡುತ್ತಿದ್ದಾರೆ. ಚಾಮರಾಜನಗರ ತಾಲೂಕು ಉಮ್ಮತ್ತೂರು ಗ್ರಾಮವೊಂದರಲ್ಲೇ 1500 ಕ್ಕು ಹೆಚ್ಚು ಫಲಾನುಭವಿಗಳಿದ್ದಾರೆ. ಬ್ಯಾಂಕು, ಪೋಸ್ಟ್ ಆಫೀಸ್ಗೆ ನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಕಣ್ಣು ಕಾಣೋಲ್ಲ.&lt;/p&gt;&lt;p&gt;ಮತ್ತೆ ಕೆಲವರಿಗೆ ಮಕ್ಕಳೂ ಇಲ್ಲ, ನಡೆದಾಡಲು ದೇಹದಲ್ಲಿ ಶಕ್ತಿ ಇಲ್ಲ ಮಾಸಾಶನವನ್ನೇ ನಂಬಿಕೊಂಡು ಜೀವನ ನಡೆಸ್ತಿರೋ ವೃದ್ಧರ ಪರಿಸ್ಥಿತಿ ಮಾತ್ರ ಯಾರಿಗೂ ಹೇಳತೀರದಾಗಿದೆ. ಒಟ್ನಲ್ಲಿ ಸರ್ಕಾರ ಅಂಗವಿಕಲರು, ವಿಧವೆಯರು ಹಾಗೆಯೆ ವೃದ್ದರಿಗೆ ಹಣ ಕೊಡದ ಹಿನ್ನಲೆ ಪ್ರತಿನಿತ್ಯ ಯಾವಾಗ ಷೆನ್ಷನ್ ಬರುತ್ತೆ ಚಾತಕ ಪಕ್ಷಿಗಳಂತೆ ಕಾದಿದ್ದಾರೆ. ಅಲ್ಲದೇ ಎಷ್ಟೋ ಜನ ವೃದ್ದರು ಕೂಡ ಜೀವನಕ್ಕೆ ಈ ಮಾಸಾಶನ ನಂಬಿಕೊಂಡಿದ್ದು, ಶೀಘ್ರದಲ್ಲೇ ಸರ್ಕಾರ ಹಣ ಬಿಡುಗಡೆ ಮಾಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-pension-delay-beneficiaries-problem-gvd/articleshow-m96neyx"/>
        </item>
        <item>
            <title><![CDATA[ಕಾಂಗ್ರೆಸ್‌ನಲ್ಲಿ ನಿಜವಾದ ಹೈಕಮಾಂಡ್ ಯಾರು? ಛಲವಾದಿ ನಾರಾಯಣಸ್ವಾಮಿ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr</link>
            <guid isPermaLink="true">https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr</guid>
            <pubDate>Wed, 27 May 2026 20:27:31 +0530</pubDate>
            <description><![CDATA[&lt;p&gt;ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್&zwnj; ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jys744hbksbz6vnjh0se6zz4,imgname-ssvfv-1751045509674.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಳಂದೂರು (ಮೇ.27): &lt;/strong&gt;ಹಿಂದುತ್ವ, ಬಂಧುತ್ವ ಹಾಗೂ ಸಿಂಧುತ್ವ ಇವು ಬಿಜೆಪಿ ಪಕ್ಷದ ಮೂಲಮಂತ್ರಗಳಾಗಿವೆ. ಸರ್ವರನ್ನು ಜೊತೆಗೆ ಕರೆದೊಯ್ಯುವುದೇ ಪಕ್ಷದ ಮಂತ್ರವಾಗಿದೆ ಎಂದು ವಿಧಾನ ಪರಿಷತ್&zwnj; ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ಜೆಎಸ್&zwnj;ಎಸ್ ಆಶ್ರಮದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ-2026ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.&lt;/p&gt;&lt;p&gt;ಹಿಂದುತ್ವ ಎಂಬುದು ಧರ್ಮವಲ್ಲ ನಮ್ಮ ಸಂಸ್ಕೃತಿ ಹಾಗೂ ನಮ್ಮ ನಾಗರೀಕತೆಯಾಗಿದೆ. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಹಿಂದೂಸ್ಥಾನಿಗಳೇ ಆಗಿದ್ದಾರೆ. ದೇಶದ ಆಸ್ಮಿತೆ ನಾವೆಲ್ಲರೂ ಒಂದೇ ಎಂಬುದೇ ಹಿಂದುತ್ವವಾಗಿದೆ. ಬಂಧುತ್ವ ಎಂದರೆ ದೇಶದಲ್ಲಿ ಹುಟ್ಟಿ ಇಲ್ಲೇ ವಾಸಿಸುವ ಪ್ರತಿ ಜಾತಿ ಧರ್ಮದವರು ವಾಸಿಸುವರು ಇಲ್ಲಿನ ಬಂಧುಗಳಾಗಿದ್ದಾರೆ. ಆದರೆ ಇಲ್ಲಿ ಹುಟ್ಟಿದವರಿಗೆ ಮಾತ್ರ ಇಲ್ಲಿ ಸ್ಥಾನವಿದೆ. ನುಸುಳುಕೋರರನ್ನು ನಾವು ಹೊಗರೆ ಕಳುಹಿಸುತ್ತೇವೆ. ಅವರಿಗೆ ಇಲ್ಲಿರಲು ಅವಕಾಶ ನೀಡದಿರುವುದೇ ಸಿಂಧುತ್ವವಾಗಿದೆ.&lt;/p&gt;&lt;p&gt;ನಮ್ಮ ಪಕ್ಷ ಮುಸ್ಲಿಮರ ವಿರೋಧಿಯಲ್ಲ, ನಾವು ಅವರಿಗೆ ಇದುವರೆವಿಗೂ ಯಾವುದೇ ತೊಂದರೆ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಮತಗಳೂ ಬಿಜೆಪಿಗೆ ಬಿದ್ದಿವೆ. ಅವರಿಗೂ ಕೂಡ ಯಾವ ಪಕ್ಷ ರಾಷ್ಟ್ರದ ಪ್ರಗತಿಗೆ, ಇಲ್ಲಿ ವಾಸಿಸುವ ನಾಗರಿಕರ ಪರವಾಗಿ ನಿಂತಿದೆ ಎಂಬುದು ಈಗೀಗ ಅರಿವಾಗುತ್ತಿದೆ. ಬಿಜೆಪಿ ನಡೆಸುವ ಇಂತಹ ಪ್ರಶಿಕ್ಷಣ ಶಿಬಿರಗಳು ಯಾವ ರಾಜಕೀಯ ಪಕ್ಷಗಳು ಮಾಡುವುದಿಲ್ಲ. ಇದೊಂದು ನಮ್ಮ ಸಂಘಟನಾ ಶಕ್ತಿಯಾಗಿದೆ. ಇದನ್ನು ಹೆಚ್ಚು ಮಾಡಿಕೊಂಡು, ನಾವು ಮುಂದಿನ ಎಲ್ಲಾ ಚುನಾವಣೆಗಳಿಗೂ ಈಗಿಂದಲೇ ಸಜ್ಜುಗೊಳ್ಳಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ಸಿದ್ದರಾಮಯ್ಯ ಹೈಕಮಾಂಡ್&lt;/strong&gt;&lt;/h2&gt;&lt;p&gt;ಕಾಂಗ್ರೆಸ್&zwnj;ನಲ್ಲಿ ಯಾವ ಹೈಕಮಾಂಡ್ ಕೂಡ ಇಲ್ಲ. ಇಲ್ಲಿ ಸಿದ್ದರಾಮಯ್ಯರೇ ಹೈಕಮಾಂಡ್ ಆಗಿದ್ದಾರೆ. ಇವರಿಗೆ ಸಿಎಂ ಕುರ್ಚಿಯಿಂದ ಕೆಳಕ್ಕೆ ಇಳಿಸಿದರೆ ಸರ್ಕಾರ ಬೀಳುತ್ತದೆ. ಈ ವ್ಯಕ್ತಿ 3 ವರ್ಷಗಳ ಅವಧಿಯಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, 4.5 ಲಕ್ಷ ಕೋಟಿ ಸಾಲ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ. ಬಜೆಟ್ ಚಾಂಪಿಯನ್ ಎನಿಸಿಕೊಳ್ಳುವ ಸಿದ್ದರಾಮಯ್ಯ ಇದಕ್ಕೆ ಉತ್ತರಿಸಬೇಕು ಎಂದರು.&lt;/p&gt;&lt;p&gt;ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್&zwnj; ಮಾತನಾಡಿ, ಈ ಶಿಬಿರ ನನಗೂ ಕೂಡ ಅನೇಕ ವಿಷಯಗಳನ್ನು ಕಲಿಸಿದೆ. ವ್ಯಕ್ತಿತ್ವ, ರಾಜಕೀಯ ಚತುರತೆ ರೂಪಿಸಲು ಇಂತಹ ಶಿಬಿರಗಳು ನಮಗೆ ಸಹಕಾರಿಯಾಗಿವೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಸಂಘಟಿತ ಹೋರಾಟ ಮಾಡಬೇಕಿದೆ. ದೇಶದಲ್ಲಿ ಪಕ್ಷ ಹೆಚ್ಚು ಸಂಘಟಿತವಾಗಿವೆ. 17 ರಾಜ್ಯಗಳಲ್ಲಿ ನಾವು ಅಧಿಕಾರದ ಚುಕ್ಕಾಣಿ ಹಿಡಿದಿದ್ದೇವೆ. ದೇಶದಲ್ಲಿ 1798 ಶಾಸಕರು ನಮ್ಮ ಪಕ್ಷದವರೇ ಆಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಅಧಿಕಾರ ಚುಕ್ಕಾಣಿಯನ್ನೂ ಕೂಡ ನಾವೇ ಹಿಡಿಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chalavadi-narayanaswamy-slams-on-siddaramaiah-at-chamarajanagar-gvd/articleshow-n57fxnr"/>
        </item>
        <item>
            <title><![CDATA[ರಾಜ್ಯಾದ್ಯಂತ ಟ್ರೆಕ್ಕಿಂಗ್ ಬ್ಯಾನ್ ಮಾಡಿದ ಸರ್ಕಾರ; ಮಲೆಮಹದೇಶ್ವರ ಬೆಟ್ಟದಲ್ಲಿ ಚಿರತೆಗೆ ಬಾಲಕ ಬಲಿ ಬೆನ್ನಲ್ಲೇ ಆದೇಶ!]]></title>
            <link>https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim</link>
            <guid isPermaLink="true">https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim</guid>
            <pubDate>Tue, 12 May 2026 17:21:23 +0530</pubDate>
            <description><![CDATA[ಚಾಮರಾಜನಗರದ ಎಂ.ಎಂ. ಹಿಲ್ಸ್ ಬಳಿ ಚಿರತೆ ದಾಳಿಗೆ ಬಾಲಕ ಬಲಿಯಾದ ಘಟನೆಯ ನಂತರ, ರಾಜ್ಯ ಅರಣ್ಯ ಇಲಾಖೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕದಾದ್ಯಂತ ಎಲ್ಲಾ ಚಾರಣ ಪಥಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr9dztfkyh46fqqs4bk1769q,imgname-leopard-kills-child-mm-hills-1778433124851.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಚಾಮರಾಜನಗರ (ಮೇ 12): ರಾ&lt;/strong&gt;ಜ್ಯದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವು ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲೆಯ ಎಂ.ಎಂ. ಹಿಲ್ಸ್ (ಮಲೆ ಮಹದೇಶ್ವರ ಬೆಟ್ಟ) ವನ್ಯಜೀವಿ ವಿಭಾಗದ ನಾಗಮಲೆ ಅರಣ್ಯ ಪ್ರದೇಶದಲ್ಲಿ 10 ವರ್ಷದ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾದ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ರಾಜ್ಯಾದ್ಯಂತ ಎಲ್ಲಾ ಚಾರಣ ಪಥಗಳನ್ನು (Trekking Routes) ತಕ್ಷಣದಿಂದಲೇ ಸ್ಥಗಿತಗೊಳಿಸಿ ಅಧಿಕೃತ ಸುತ್ತೋಲೆ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ದಿನಾಂಕ 10-05-2026 ರಂದು ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು 10 ವರ್ಷದ ಬಾಲಕನ ಮೇಲೆ ಅನಿರೀಕ್ಷಿತವಾಗಿ ದಾಳಿ ಮಾಡಿತ್ತು. ಈ ಭೀಕರ ಘಟನೆಯಲ್ಲಿ ಬಾಲಕ ಮೃತಪಟ್ಟಿದ್ದು, ಸ್ಥಳೀಯರಲ್ಲಿ ಹಾಗೂ ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಅರಣ್ಯ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರ ಮತ್ತು ಚಾರಣಿಗರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿತ್ತು.&lt;/p&gt;&lt;h2&gt;&lt;strong&gt;ಸಚಿವ ಈಶ್ವರ ಬಿ ಖಂಡ್ರೆ ಸೂಚನೆ:&lt;/strong&gt;&lt;/h2&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ ಖಂಡ್ರೆ ಅವರು, ಸಾರ್ವಜನಿಕರ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಹಠಾತ್ ಸುತ್ತೋಲೆ ಹೊರಡಿಸಿ, ರಾಜ್ಯದ ಎಲ್ಲಾ ವನ್ಯಜೀವಿ ಸಂಚಾರವಿರುವ ಪ್ರದೇಶಗಳಲ್ಲಿ ಚಟುವಟಿಕೆಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ.&lt;/p&gt;&lt;h2&gt;&lt;strong&gt;ಅರಣ್ಯ ಇಲಾಖೆಯ ಸುತ್ತೋಲೆಯಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;&lt;strong&gt;ಅರಣ್ಯ ಇಲಾಖೆ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ:&lt;/strong&gt;&lt;/p&gt;&lt;p&gt;&lt;strong&gt;ಚಾರಣ ಸ್ಥಗಿತ: &lt;/strong&gt;ಚಿರತೆ, ಹುಲಿ, ಆನೆ, ಕರಡಿ ಸೇರಿದಂತೆ ವನ್ಯಜೀವಿಗಳ ಸಂಚಾರವಿರುವ ಎಲ್ಲಾ ಚಾರಣ ಪಥ ಮತ್ತು ಸಂಚಾರ ಪಥಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಸುರಕ್ಷತಾ ಕ್ರಮಗಳು: &lt;/strong&gt;ಮಾನವ-ವನ್ಯಜೀವಿ ಸಂಘರ್ಷ ಸಂಭವಿಸಿರುವ ಕಡೆಗಳಲ್ಲಿ ಸಾರ್ವಜನಿಕರ ಮತ್ತು ಚಾರಣಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;p&gt;&lt;strong&gt;SOP ಪಾಲನೆ ಕಡ್ಡಾಯ: &lt;/strong&gt;ಅರಣ್ಯ ಪ್ರದೇಶಗಳಲ್ಲಿ ಚಾರಣ ಚಟುವಟಿಕೆ ನಡೆಸಲು ಈಗಾಗಲೇ ನಿಗದಿಪಡಿಸಲಾಗಿರುವ 'ಪ್ರಮಾಣಿತ ಕಾರ್ಯ ವಿಧಾನ' (SOP) ಅಡಿಯಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೆ ಯಾವುದೇ ಚಾರಣಕ್ಕೆ ಅವಕಾಶವಿಲ್ಲ.&lt;/p&gt;&lt;p&gt;&lt;strong&gt;ಮರುಪರಿಶೀಲನೆ:&lt;/strong&gt; ಸಂಬಂಧಪಟ್ಟ ವಿಭಾಗಾಧಿಕಾರಿಗಳು ಅರಣ್ಯ ಪ್ರದೇಶಗಳಲ್ಲಿ ಸುರಕ್ಷತಾ ಸಿದ್ಧತೆಗಳನ್ನು ಮಾಡಿಕೊಂಡು, ಪ್ರಮಾಣಪತ್ರ ಸಲ್ಲಿಸಿದ ನಂತರವಷ್ಟೇ ಚಾರಣ ಪುನರಾರಂಭದ ಬಗ್ಗೆ ನಿರ್ಧರಿಸಲಾಗುವುದು.&lt;/p&gt;&lt;h2&gt;&lt;strong&gt;ಚಾರಣಿಗರಿಗೆ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಕರ್ನಾಟಕದ ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ಭಾಗದ ಕಾಡುಗಳಿಗೆ ಚಾರಣ ಹೋಗುವ ಯುವಕರು ಮತ್ತು ಚಾರಣಿಗರಿಗೆ ಈ ಆದೇಶ ದೊಡ್ಡ ಹೊಡೆತ ನೀಡಿದೆ. ಆದರೆ, ಪ್ರಾಣಾಪಾಯ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ. ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ, ಭದ್ರಾ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳೂ ಸೇರಿದಂತೆ ಎಲ್ಲಾ ವನ್ಯಜೀವಿ ವಿಭಾಗಗಳಿಗೆ ಈ ಆದೇಶ ಅನ್ವಯವಾಗಲಿದೆ.&lt;/p&gt;&lt;p&gt;ಮುಂದಿನ ಆದೇಶದವರೆಗೆ ಯಾವುದೇ ಅರಣ್ಯ ಪ್ರದೇಶಗಳಲ್ಲಿ ಅನಧಿಕೃತವಾಗಿ ಅಥವಾ ಈ ಹಿಂದೆ ಅನುಮತಿ ಪಡೆದಿದ್ದರೂ ಚಾರಣ ಮಾಡುವಂತಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ವನ್ಯಜೀವಿಗಳ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಜನರು ಈ ನಿರ್ಧಾರಕ್ಕೆ ಸಹಕರಿಸಬೇಕೆಂದು ಕೋರಲಾಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-forest-department-bans-trekking-after-leopard-attack-nagamale-forest-news-sat/articleshow-pfgswim"/>
        </item>
        <item>
            <title><![CDATA[ತಾಯಿ ಕಣ್ಮರೆ: ಬಂಡೀಪುರದಲ್ಲಿ ಅನಾಥ ಹುಲಿ ಮರಿಗಳ ಅದ್ಭುತ ಬದುಕಿನ ರೋಚಕ ಕಥೆ ಇಲ್ಲಿದೆ!]]></title>
            <link>https://kannada.asianetnews.com/karnataka-districts/bandipur-tiger-cubs-survival-without-mother-forest-department-gvd/articleshow-q1sr1zu</link>
            <guid isPermaLink="true">https://kannada.asianetnews.com/karnataka-districts/bandipur-tiger-cubs-survival-without-mother-forest-department-gvd/articleshow-q1sr1zu</guid>
            <pubDate>Wed, 06 May 2026 19:05:50 +0530</pubDate>
            <description><![CDATA[&lt;p&gt;ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyqy1v1vekkrwc1j148qahy,imgname-cjjk-1778074453857.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.06): &lt;/strong&gt;ಅದು ನಾಲ್ಕು ಮರಿಗಳನ್ನು ಹೊಂದಿದ್ದ ತಾಯಿ ಹುಲಿ. ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಂದು ದಿನ ಮರಿಗಳನ್ನು ಬಿಟ್ಟು ಕಣ್ಮರೆ ಆಯ್ತು. ತಾಯಿ ಇಲ್ಲದೆ ಅನಾಥವಾದ ನಾಲ್ಕುಹುಲಿ ಮರಿಗಳನ್ನು ಅರಣ್ಯ ಇಲಾಖೆಯಿಂದ ಯಾವುದೇ ಹಸ್ತಕ್ಷೇಪ ಮಾಡದೆ ಸ್ವಾಭಾವಿಕವಾಗಿ ಸಂರಕ್ಷಿಸಿ, ಸ್ವತಂತ್ರವಾಗಿ ಬದುಕುವಂತೆ ಮಾಡಿರುವ ಯಶೋಗಾಥೆ ಇಲ್ಲಿದೆ.&lt;/p&gt;&lt;p&gt;ಬಂಡೀಪುರ... ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ತಾಣ. ಪ್ರಸ್ತುತ 200ಕ್ಕು ಹೆಚ್ಚು ಹುಲಿಗಳಿರುವ ಈ ಅರಣ್ಯದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷ ಇಲ್ಲಿನ ಸಫಾರಿ ವಲಯದಲ್ಲಿ ತಾಯಿ ಹುಲಿಯೊಂದು ತನ್ನ ನಾಲ್ಕು ಮರಿಗಳೊಂದಿಗೆ ಸ್ವಚ್ಚಂದವಾಗಿ ವಿಹರಿಸುತ್ತಿರುವ ಚೇತೋಹಾರಿ ದೃಶ್ಯ ಕಂಡು ಬಂದಿತ್ತು. ಆದರೆ ಕೆಲ ದಿನಗಳ ನಂತರ ತಾಯಿ ಹುಲಿ ಕುಂಟುತ್ತಿರುವ ಸ್ಥಿತಿಯಲ್ಲಿ ಕಂಡು ಬಂದು ಆತಂಕ ಮೂಡಿಸಿತ್ತು.&lt;/p&gt;&lt;p&gt;ಅದಾದ ಕೆಲ ದಿನಗಳ ನಂತರ ತಾಯಿ ಹುಲಿ ಇದ್ದಕ್ಕಿದ್ದಂತೆ ಕಣ್ಮರೆ ಆಗಿ ಅದರ ನಾಲ್ಕು ಮರಿಗಳು ಅನಾಥವಾದವು. ಒಂದೆಡೆ ತಾಯಿಯ ಎದೆ ಹಾಲೂ ಇಲ್ಲ ಇನ್ನೊಂದೆಡೆ ಬೇಟೆ ಆಡುವ ಕಲೆಯನ್ನು ಸಂಪೂರ್ಣವಾಗಿ ಅರಿಯದ ಈ ಕಂದಮ್ಮಗಳು ಅಕ್ಷರಶಃ ತಬ್ಬಲಿಗಳಾಗಿದ್ದವು. ಈ ವೇಳೆ ಅರಣ್ಯ ಇಲಾಖೆ &zwnj;&zwnj;ಮರಿಹುಲಿಗಳನ್ನು ಸೆರೆ ಹಿಡಿದು ಮೃಗಾಲಯಕ್ಕೋ ಅಥವಾ ಪುನರ್ವಸತಿ ಕೇಂದ್ರಕ್ಕೋ ಸ್ಥಳಾಂತರ ಮಾಡಿದ್ದರೆ ನಾಲ್ಕೂ ಮರಿ ಹುಲಿಗಳು ಬದುಕಿ ಉಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು.&lt;/p&gt;&lt;p&gt;ಈ ನಾಲ್ಕು ಮರಿ ಹುಲಿಗಳನ್ನು ಉಳಿಸುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಗಟ್ಟಿ ನಿರ್ಧಾರ ಮಾಡಿದ ಬಂಡೀಪುರ ಅರಣ್ಯಾಧಿಕಾರಿಗಳು ನಾಲ್ಕೂ ಮರಿಹುಲಿಗಳನ್ನು ಅವುಗಳು ಇರುವ ಸ್ಥಳದಲ್ಲಿಯೇ ಸಂರಕ್ಷಣೆ ಮಾಡಲು ತೀರ್ಮಾನಿಸಿದರು. ಈ ಮರಿಗಳು ಇರುವ ಪ್ರದೇಶದಲ್ಲಿ ಸಫಾರಿ ಸ್ಥಗಿತಗೊಳಿಸಿದರು. ನಿರಂತರ ಎಂಟು ತಿಂಗಳ ಕಾಲ ಪ್ರತಿದಿನ ಕ್ಯಾಮೆರಾ ಟ್ರ್ಯಾಪ್ ಹಾಗು ಥರ್ಮಲ್ ಡ್ರೋನ್ ಮೂಲಕ ಮರಿಹುಲಿಗಳ ಚಲನ ವಲನಗಳ ಬಗ್ಗೆ ಗಮನ ಕೇಂದ್ರೀಕರಿಸಿದರು.&lt;/p&gt;&lt;h2&gt;&lt;strong&gt;ಬೇಟೆಯಾಡುವ ಕಲೆ ಕರಗತ&lt;/strong&gt;&lt;/h2&gt;&lt;p&gt;ಬೇರೆ ಹುಲಿಗಳು ಹಾಗು ಚಿರತೆಗಳಿಂದ ಮರಿ ಹುಲಿಗಳಿಗೆ ಅಪಾಯವಾಗದಂತೆ ಸೀಮಿತ ಸಂಖ್ಯೆಯ ಅರಣ್ಯ ಸಿಬ್ಬಂದಿಯಿಂದ ನಿಗಾ ವಹಿಸಲಾಯ್ತು. ಮರಿ ಹುಲಿಗಳು ನಿಧಾನವಾಗಿ ಬೇಟೆಯಾಡುವ ಕಲೆ ಕರಗತ ಮಾಡಿಕೊಂಡವು. ತಮ್ಮ ಆಹಾರವನ್ನು ತಾವೇ ಹುಡುಕಿಕೊಂಡು ಇದೀಗ ಸ್ವತಂತ್ರವಾಗಿ ಬದುಕುವ ಮಟ್ಟಕ್ಕೆ ಬೆಳೆದಿವೆ. ಒಂದು ಹುಲಿ ಈಗಾಗಲೇ ಬೇರ್ಪಟ್ಟಿದ್ದು ಉಳಿದ ಮೂರು ಹುಲಿಗಳು ತಮ್ಮದೆ ಆದ ಟೆರಿಟೆರಿ ಗುರ್ತಿಸಿಕೊಳುವ ಮಟ್ಟಕ್ಕೆ ಬೆಳೆದುನಿಂತಿವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಫ್ರಭಾಕರನ್ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ತಾಯಿ ಹುಲಿ ಅನಾರೋಗ್ಯದಿಂದ ಅಥವಾ ಬೇರೆ ಹುಲಿಯೊಂದಿಗೆ ಕಾದಾಟದಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇದೇನೆ ಇರಲಿ ತಾಯಿ ಇಲ್ಲದೆ ಅನಾಥವಾಗಿದ್ದ ಮರಿಹುಲಿಗಳಿಗೆ ಹೊರಗಿನಿಂದ ಯಾವುದೇ ಆಹಾರ ನೀಡದೆ, ಹೆಚ್ವು ಹಸ್ತಕ್ಷೇಪ ಮಾಡದೆ ಸ್ವಾಭಾವಿಕ ರೀತಿಯಲ್ಲೇ ಸಂರಕ್ಷಿಸಿರುವುದು ದೇಶದಲ್ಲೇ ಮಾದರಿ ಎನಿಸಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bandipur-tiger-cubs-survival-without-mother-forest-department-gvd/articleshow-q1sr1zu"/>
        </item>
        <item>
            <title><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!]]></title>
            <link>https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n</link>
            <guid isPermaLink="true">https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n</guid>
            <pubDate>Sun, 10 May 2026 15:55:43 +0530</pubDate>
            <description><![CDATA[ಮಲೆ ಮಹದೇಶ್ವರ ಬೆಟ್ಟದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ದುರ್ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr8ppq903cpjp9911w2vdw4w,imgname-leopard-attack-in-mm-hills--1--1778408709408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಗೆ ಬಾಲಕ ಬಲಿಯಾದ ದುರ್ಘಟನೆ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಬಳಿಕ ಮೃತ ಬಾಲಕನ ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ದುರ್ಘಟನೆ ನಡೆಯಲು ಅರಣ್ಯ ಇಲಾಖೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಅರಣ್ಯ ಇಲಾಖೆಯ ನಿರ್ಲಕ್ಷ್ಯ ಆರೋಪ&lt;/h2&gt;&lt;p&gt;ನಾಗಮಲೆಗೆ ತೆರಳುವ ಪಾದಯಾತ್ರಿಗಳಿಗೆ ಅರಣ್ಯ ಇಲಾಖೆ ತಲಾ ₹200 ಶುಲ್ಕವನ್ನು ನಿಗದಿ ಮಾಡಿದೆ. ಈ ಶುಲ್ಕವನ್ನು ಪಾವತಿಸುವ ಭಕ್ತರಿಗೆ ಅರಣ್ಯ ಸಿಬ್ಬಂದಿ ಸುರಕ್ಷತೆ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂಬ ನಿಯಮವಿದೆ. ಆದರೆ, ನಿಯಮಬಾಹಿರವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಜೊತೆಗೆ ಪಾದಯಾತ್ರಿಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಒದಗಿಸದೇ, &amp;nbsp;ಜೊತೆಯಲ್ಲಿ ಯಾವುದೇ ಸಿಬ್ಬಂದಿಗಳು ಕೂಡ ಇರದೆ. ಪ್ರಾಣಿಗಳಿವೆ ಎಚ್ಚರಿಕೆ ಇಂದಿರಿ ಎಂಬ ನಾಮಫಲಕವನ್ನೂ ಹಾಕದೆ. ಕನಿಷ್ಠ ಕಾಡು ಪ್ರಾಣಿಗಳ ಸಂಚಾರದ ಬಗ್ಗೆ ಮಾಹಿತಿಯನ್ನೂ ನೀಡದೆ ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಮತ್ತು ಜೊತೆಯಲ್ಲಿದ್ದವರು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ಸುರಕ್ಷತಾ ಕ್ರಮಗಳ ಕೊರತೆ&lt;/h2&gt;&lt;p&gt;ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಹೋಗುವ ಮಾರ್ಗವು ದಟ್ಟ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಇಂತಹ ಅಪಾಯಕರ ಮಾರ್ಗದಲ್ಲಿ ಪಾದಯಾತ್ರೆ ಮಾಡುವ ಭಕ್ತರಿಗೆ ಸೂಕ್ತ ಭದ್ರತೆ ಕಲ್ಪಿಸುವುದು ಅತ್ಯವಶ್ಯಕವಾಗಿದ್ದರೂ, ಅದು ಸರಿಯಾಗಿ ಜಾರಿಯಾಗಿಲ್ಲ ಎಂಬುದು ಈ ಘಟನೆ ನಂತರ ಬಹಿರಂಗವಾಗಿದೆ.&lt;/p&gt;&lt;h2&gt;ಶಾಸಕ ಮಂಜುನಾಥ್ ಪ್ರತಿಕ್ರಿಯೆ&lt;/h2&gt;&lt;p&gt;ಈ ದುರ್ಘಟನೆ ಕುರಿತು ಹನೂರು ಕ್ಷೇತ್ರದ ಶಾಸಕ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಬಾಲಕನ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಬೆಳಗಿನ ವೇಳೆಯಲ್ಲಿ ಕಾಡುಪ್ರಾಣಿಗಳ ಸಂಚಾರ ಹೆಚ್ಚು ಇರುತ್ತದೆ. ನಡೆಯಬಾರದ ಘಟನೆ ನಡೆದಿದೆ. ಭಕ್ತರ ಸುರಕ್ಷತೆ ನಮ್ಮ ಆದ್ಯತೆ ಎಂದು ತಿಳಿಸಿದರು.&lt;/p&gt;&lt;p&gt;ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಿದ ಶಾಸಕ ಮಂಜುನಾಥ್, ಪಾದಯಾತ್ರೆ ಮಾಡುವ ಭಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ನಾಗಮಲೆಗೆ ಸುರಕ್ಷಿತ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.&lt;/p&gt;&lt;p&gt;ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪ್ರಾಧಿಕಾರದ ವತಿಯಿಂದ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ. ಈ ಬಗ್ಗೆ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.&lt;/p&gt;&lt;p&gt;ಮಲೆ ಮಹದೇಶ್ವರ ಬೆಟ್ಟ ಹಾಗೂ ನಾಗಮಲೆ ಪ್ರದೇಶಗಳಿಗೆ ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮಾಡುತ್ತಿದ್ದು, ಇಂತಹ ಘಟನೆಗಳು ಅವರಲ್ಲಿ ಭೀತಿ ಹುಟ್ಟಿಸಿವೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>chamarajnagar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/leopard-attack-in-male-mahadeshwara-hills-boy-death-sparks-outrage-forest-department-faces-negligence-allegations-gdp/articleshow-rl48v6n"/>
        </item>
        <item>
            <title><![CDATA[ನಾನು ಯಾವಾಗ ಸಿಎಂ ಆಗುತ್ತೇನೆ ಗೊತ್ತಾ?: ಡಿ.ಕೆ.ಶಿವಕುಮಾರ್ ಉತ್ತರ ಕೇಳಿ ಎಲ್ಲರೂ ಶಾಕ್!]]></title>
            <link>https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm</link>
            <guid isPermaLink="true">https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm</guid>
            <pubDate>Fri, 22 May 2026 00:26:02 +0530</pubDate>
            <description><![CDATA[&lt;p&gt;ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್&zwnj;ಗೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqa2ypn411epexs4cs62qz4,imgname-dk-shivakumar-1778898795221.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಳ್ಳೇಗಾಲ (ಮೇ.22):&lt;/strong&gt; ಕಾಲ, ಸರಿಯಾದ ಸಮಯ ನಾನು ಯಾವಾಗ ಸಿಎಂ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಮಧ್ಯರಂಗ ದೇಗುಲ ಉದ್ಘಾಟನೆ ನಿಮಿತ್ತ ಹೆಲಿಪ್ಯಾಡ್&zwnj;ಗೆ ಆಗಮಿಸಿದ ಡಿಸಿಎಂರನ್ನು ಪತ್ರಕರ್ತರು, &lsquo;ನೀವು ಯಾವಾಗ ಸಿಎಂ ಆಗುತ್ತೀರಿ?&rsquo; ಎಂದು ಪ್ರಶ್ನಿಸುತ್ತಿದ್ದಂತೆ &lsquo;ಅದನ್ನು ಕಾಲ ತೀರ್ಮಾನ ಮಾಡುತ್ತದೆ&rsquo;. ಮಾಧ್ಯಮದವರ ಸಹಕಾರವೂ ಅಗತ್ಯ ಎಂದರು.&lt;/p&gt;&lt;p&gt;ಚಾಮರಾಜನಗರ ಐತಿಹಾಸಿಕವಾದಂತಹ ಜಿಲ್ಲೆ. ಧಾರ್ಮಿಕ, ಪ್ರಾಕೃತಿಕ ಸಂಪತ್ತು ಹೊಂದಿರುವ ಕಾವೇರಿ ನದಿ ತೀರದಲ್ಲಿರುವ ಪವಿತ್ರ ಪುಣ್ಯಭೂಮಿಯಾಗಿದೆ. ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಮಲೆ ಮಹದೇಶ್ವರ, ಮಧ್ಯರಂಗ, ಸಿದ್ದಪ್ಪಾಜಿ, ಗೋಪಾಲಸ್ವಾಮಿ ಪುಣ್ಯಕ್ಷೇತ್ರಗಳಿಗೆ ಬಂದು ಜನ ನೆಮ್ಮದಿ ಕಂಡುಕೊಳ್ಳುತ್ತಾರೆ. ಬೆಳಗ್ಗೆಯಿಂದ ಸೂರ್ಯ ಮುಳುಗುವ ವೇಳೆಗೆ ಶ್ರೀರಂಗಪಟ್ಟಣ ಆದಿರಂಗ, ಮಧ್ಯರಂಗ ಹಾಗೂ ತಮಿಳುನಾಡಿನಲ್ಲಿರುವ ಅಂತ್ಯರಂಗ ದೇವಾಲಯಗಳಿಗೆ ಭೇಟಿ ನೀಡುವ ಪದ್ಧತಿ ನಡೆದುಕೊಂಡು ಬಂದಿದೆ ಎಂದರು.&lt;/p&gt;&lt;p&gt;ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಈ ದೇವಾಲಯದ ಜೀರ್ಣೋದ್ಧಾರ ಕೆಲಸ ಮಾಡಲಾಗಿದೆ. ಇಂದು ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ಪುಣ್ಯಕ್ಷೇತ್ರ ಯಾತ್ರಿಕರಿಗೆ ಪ್ರಸಿದ್ಧವಾಗಿದೆ. ಇದು ಪ್ರಕೃತಿ ಕೊಡುಗೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಸಚಿವರಾದ ಕೆ. ವೆಂಕಟೇಶ್ ಸಹ ಸಾಥ್ ನೀಡಿದ್ದಾರೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಜಿಬಿಎ ಚುನಾವಣೆ&lt;/strong&gt;&lt;/h2&gt;&lt;p&gt;ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆ ಮಾಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಉಸ್ತುವಾರಿ ಸಚಿವ ವೆಂಕಟೇಶ್, ಹನೂರು ಶಾಸಕ ಎಂ.ಆರ್&zwnj;. ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್&zwnj;. ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾಜಿ ಶಾಸಕ ಆರ್&zwnj;. ನರೇಂದ್ರ, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಪುಟ್ಟರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಂಜುನಾಥ್, ಚೇತನ್ ದೊರೆ, ಇಓ ಸುರೇಶ್ ಕುಮಾರ್&zwnj;, ಜಿಲ್ಲಾಧಿಕಾರಿ ಶ್ರೀರೂಪಾ, ಎಸ್ಪಿ ಮುತ್ತುರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಚಿಕ್ಕರಾಜು ಇನ್ನಿತರಿದ್ದರು.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/dk-shivakumar-on-chief-minister-post-time-will-decide-gvd/articleshow-t46s3vm"/>
        </item>
        <item>
            <title><![CDATA[ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆ, ಕಾಡ್ಗಿಚ್ಚಿನ ಆತಂಕ ದೂರ: ಪ್ರವಾಸಿಗರ ಕಣ್ಣಿಗಂತೂ ಹಸಿರಿನ ಸಿಂಚನ]]></title>
            <link>https://kannada.asianetnews.com/karnataka-districts/bandipur-forest-green-after-rain-no-fire-threat-kannada-news-gvd/articleshow-t8dnmir</link>
            <guid isPermaLink="true">https://kannada.asianetnews.com/karnataka-districts/bandipur-forest-green-after-rain-no-fire-threat-kannada-news-gvd/articleshow-t8dnmir</guid>
            <pubDate>Sat, 02 May 2026 17:41:41 +0530</pubDate>
            <description><![CDATA[&lt;p&gt;ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqm9kmww6c533q01cmxb8mcf,imgname-c-1777723888540.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/p&gt;&lt;p&gt;&lt;strong&gt;ಚಾಮರಾಜನಗರ (ಮೇ.02): &lt;/strong&gt;ಬಂಡೀಪುರದಲ್ಲಿ ಈ ವರ್ಷ ಬೆಂಕಿ ಬೀಳುವ ಆತಂಕ ದೂರವಾಗಿದೆ. ಅರಣ್ಯ ಸಿಬ್ಬಂದಿಯ ನಿರಂತರ ಕಾರ್ಯಾಚರಣೆ ಜೊತೆಗೆ ವರುಣ ಕೂಡ ಸಾಥ್ ನೀಡಿದ್ದು, ಇದೀಗ ಬಂಡೀಪುರದಲ್ಲಿ ಹಸಿರು ಚಿಗುರೊಡೆಯುತ್ತಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಇಲ್ಲಿ ಎತ್ತ ನೋಡಿದರು ಹಸಿರು ಬೆಟ್ಟ ಗುಡ್ಡಗಳ ಸಾಲು ಕಣ್ಣು ಹಾಯಿಸಿದಷ್ಟು ಹಸಿರು ಕಾನನ, ವನ್ಯಜೀವಿಗಳ ಸ್ವಚ್ಚಂದ ಓಡಾಟ ನೋಡುವುದೇ ಮನಸ್ಸಿಗೆ ಆನಂದ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ಬಿಸಿಲಿನ ಬೇಗೆ ಇಂದ ತತ್ತರಿಸಿ ಬಂಡಿಪುರ ಕಾಡು ಇನ್ನೇನು ಒಣಗಲಾರಂಭಿಸಿತು ಅನ್ನೊ ಅಷ್ಟರಲ್ಲಿ ಮಳೆರಾಯನ ಆಗಮನದಿಂದಾಗಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹುಲಿ ಚಿರತೆ ಆನೆ ಜಿಂಕೆ, ಕಡವೆ, ಕರಡಿ ಸೇರಿದಂತೆ ಅಸಂಖ್ಯಾತ ಪ್ರಾಣಿ ಪಕ್ಷಿಗಳ ತಾಣವಾಗಿರುವ ಬಂಡೀಪುರ ಹುಲಿಸಂರಕ್ಷಿತ ಪ್ರದೇಶ 1080 ಚದುರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಈ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸವಾಲು.&lt;/p&gt;&lt;p&gt;ಆಕಸ್ಮಿಕವಾಗಿ ಅಷ್ಟೇ ಅಲ್ಲದೆ ಕಿಡಿಗೇಡಿಗಳು ಬೆಂಕಿ ಹಚ್ಚುವ ಸಾಧ್ಯತೆಗಳು ಇರುವುದರಿಂದ ಬಿರು ಬೇಸಿಗೆಯಲ್ಲಿ ಒಮ್ಮೆ ಬೆಂಕಿ ಬಿದ್ದರೆ ಸಾಕು ನೂರಾರು ಎಕರೆ ಅರಣ್ಯಪ್ರದೇಶ ಸುಟ್ಟು ಭಸ್ಮವಾಗಿಬಿಡುತ್ತದೆ. ಹಾಗಾಗಿ ಇಡೀ ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾರೆ ಇಲ್ಲಿನ ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ. ಈ ಬಾರಿ ಕಾಡಂಚಿನ 475 ಮಂದಿಯನ್ನು ಫೈರ್ ವಾಚರ್ಸ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೆಂಕಿ ಹರಡದಂತೆ 2800 ಕಿಲೋಮೀಟರ್ ಬೆಂಕಿ ರೇಖೆ ನಿರ್ಮಾಣ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಯಶಸ್ವಿ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಥರ್ಮಲ್ ಡ್ರೋನ್, ಇ ಗಸ್ತು ಹಾಗು ವಾಚ್ ಟವರ್ಗಳ ಮೂಲಕ ದಿನದ 24 ಗಂಟೆಯು ನಿರಂತರವಾಗಿ ನಿಗಾ ವಹಿಸಲಾಗಿದೆ. ಆ ಮೂಲಕ ಈ ಕಾಡಿಗೆ ಬೆಂಕಿ ಬೀಳದಂತೆ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ. ಈ ಬಾರಿ ಅರಣ್ಯ ಸಿಬ್ಬಂದಿ ಶ್ರಮಕ್ಕೆ ವರುಣನು ಕೂಡ ಸಾಥ್ ನೀಡಿದ್ದಾನೆ. ಏಪ್ರಿಲ್ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಮಳೆಯಾಗಿ ಗಿಡಮರಗಳು ಚಿಗುರೊಡೆಯುತ್ತಿವೆ. ನಿಧಾನವಾಗಿ ಹಸಿರು ಆವರಿಸುತ್ತಿದ್ದು ಇದಕ್ಕೆ ಪೂರಕವಾಗಿ ನಿನ್ನೆ ಮೊನ್ನೆ ಬಿದ್ದ ಮಳೆಯು ಮತ್ತಷ್ಟು ಜೀವಕಳೆ ತಂದಿದೆ.&lt;/p&gt;&lt;p&gt;ಬಿಸಿಲ ಬೇಗೆಯಿಂದ ತತ್ತರಿಸಿದ್ದ ಪ್ರಾಣಿ ಪಕ್ಷಿಗಳು ಮಳೆಯಲ್ಲಿ ಮಿಂದೇಳುತ್ತಿವೆ. ಬಂಡೀಪುರದಲ್ಲಿ 13 ವಲಯಗಳಿದ್ದು 284 ಕೆರೆಕಟ್ಟೆಗಳಿವೆ. ಇತ್ತೀಚೆಗೆ ಬಿದ್ದ ಮಳೆ ಕೆರೆಗಳು ಬತ್ತಿಹೋಗದೆ ಇರುವುದಕ್ಕೆ ಸಹಕಾರಿಯಾಗಿದೆ. ಬೋರ್ಗಳಿಗೆ ಸೋಲಾರ್ ಮೋಟಾರ್ ಅಳವಡಿಸಿ 40 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗುತ್ತಿದೆ. ಅರಣ್ಯ ಸಿಬ್ಬಂದಿಯ ಪರಿಶ್ರಮ ಹಾಗು ವರುಣನ ಕೃಪೆಯಿಂದಾಗಿ ಬೆಂಕಿ ಬೀಳುವ ಆತಂಕ ದೂರವಾಗಿದೆ.ರಣಬಿಸಿಲಿನ ಪರಿಣಾಮ ಒಣಗಿದ್ದ ಈ ಅರಣ್ಯದಲ್ಲೀಗ ಮರಗಿಡಗಳು ಚಿಗುರೊಡೆಯುತ್ತಿದ್ದು ಹಸಿರು ಆವರಿಸತೊಡಗಿದೆ.&lt;/p&gt;]]></content:encoded>
            <category>chamarajnagar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bandipur-forest-green-after-rain-no-fire-threat-kannada-news-gvd/articleshow-t8dnmir"/>
        </item>
        <item>
            <title><![CDATA[ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು]]></title>
            <link>https://kannada.asianetnews.com/gallery/karnataka-districts/chamarajanagar-accident-pregnant-woman-and-driver-killed-in-lorry-car-crash-v2l54w4</link>
            <guid isPermaLink="true">https://kannada.asianetnews.com/gallery/karnataka-districts/chamarajanagar-accident-pregnant-woman-and-driver-killed-in-lorry-car-crash-v2l54w4</guid>
            <pubDate>Sun, 03 May 2026 09:23:50 +0530</pubDate>
            <description><![CDATA[&lt;p&gt;ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು, ಘಟನೆಯಲ್ಲಿ 9 ವರ್ಷದ ಬಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಇಂದು ಬೆಳಗ್ಗೆ ನಡೆದ ಘಟನೆಗೆ ಆತಂಕ ತರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqnzada1x42yggx9jfmh3yfg,imgname-chamarajanagar-accident-1777780208961.png" type="image/jpeg" height="390" width="690"/>
            <content:encoded><![CDATA[&lt;p&gt;ಚಾಮರಾಜನಗರದಲ್ಲಿ ಲಾರಿ- ಕಾರು ಭೀಕರ ಅಪಘಾತ, ಗರ್ಭಿಣಿ ಹಾಗೂ ಚಾಲಕ ಸಾವು, ಘಟನೆಯಲ್ಲಿ 9 ವರ್ಷದ ಬಾಲಕ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ಇಂದು ಬೆಳಗ್ಗೆ ನಡೆದ ಘಟನೆಗೆ ಆತಂಕ ತರಿಸಿದೆ.&lt;/p&gt;&lt;img&gt;&lt;p&gt;ಚಾಮರಾಜನಗರ ಜನ ಮಳೆ, ಬೆಳೆ ಕುರಿತು ಲೆಕ್ಕಾಚಾರದಲ್ಲಿರುವಾಗಲೇ ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಬೆಚ್ಚಿ ಬಿದ್ದಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ-ಕೇರಳ ರಸ್ತೆಯ ಮದ್ದಯ್ಯನಹುಂಡಿ ಬಳಿ ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿದೆ.&lt;/p&gt;&lt;img&gt;&lt;p&gt;ಕೇರಳದಿಂದ ಚಾಮರಾಜನಗರದತ್ತ ಆಗಮಿಸುತ್ತಿದ್ದ ಕಾರಿಗೆ ಕೇರಳದತ್ತ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದೆ. ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಕಾರಿನಲ್ಲಿದ್ದ ಗರ್ಭಿಣಿ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.&lt;/p&gt;&lt;img&gt;&lt;p&gt;ಅತೀ ವೇಗದ ಚಾಲನೆಯೇ ಅಪಘಾತ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಅತೀ ವೇಗದ ಕಾರಣ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಲಾರಿಗೆ ಡಿಕ್ಕಿಯಾದ ರಭಸಕ್ಕೆ ಕಾರು ರಸ್ತೆಯಿಂದ ಇಳಿಜಾರು ಪ್ರದೇಶದಲ್ಲಿ ಬಿದ್ದಿದೆ. ತಕ್ಷಣವೇ ಸ್ಛಳೀಯರು ನೆರವಿಗೆ ಧಾವಿಸಿದ್ದಾರೆ.&lt;/p&gt;&lt;img&gt;&lt;p&gt;ಗುಂಡ್ಲುಪೇಟೆ-ಕೇರಳ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ ಕಾರಣ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಮದ್ದಯ್ಯನಹುಂಡಿ ಬಳಿಕ ಘಟನೆ ಸಂಭವಿಸಿದೆ. ಲಾರಿ ರಸ್ತೆಯ ಅಡ್ಡಲಾಗಿ ನಿಂತಿದ್ದರೆ, ಕಾರು ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿತ್ತು.&lt;/p&gt;&lt;h2&gt;ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್&lt;/h2&gt;]]></content:encoded>
            <category>chamarajnagar</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/karnataka-districts/chamarajanagar-accident-pregnant-woman-and-driver-killed-in-lorry-car-crash-v2l54w4"/>
        </item>
    </channel>
</rss>
