<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 18 Sep 2026 09:00:14 +0530</lastBuildDate>
        <atom:link href="https://kannada.asianetnews.com/rss/celebrity-interviews" rel="self" type="application/rss+xml"/>
        <item>
            <title><![CDATA[ಎಲ್ಲಾ ವರ್ಗದ ಪ್ರೇಕ್ಷಕರನ್ನು ತಟ್ಟುವ ಸಿನಿಮಾ ಅಮೆರಿಕಾ ಅಮೆರಿಕಾ: ನಾಗತಿಹಳ್ಳಿ ಚಂದ್ರಶೇಖರ್‌ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-director-nagathihalli-chandrashekhar-on-america-america-2-gen-z-ai-and-modern-relationships-gvd/articleshow-21xka7c</link>
            <guid isPermaLink="true">https://kannada.asianetnews.com/celebrity-interviews/kannada-director-nagathihalli-chandrashekhar-on-america-america-2-gen-z-ai-and-modern-relationships-gvd/articleshow-21xka7c</guid>
            <pubDate>Fri, 11 Sep 2026 08:45:17 +0530</pubDate>
            <description><![CDATA[&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾ 1997ರ &lsquo;ಅಮೆರಿಕಾ ಅಮೆರಿಕಾ&rsquo; ಚಿತ್ರದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿದ್ದಲ್ಲ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ವಿದೇಶದ ಬದುಕಿನ ಕುರಿತು ಅವರು ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m262tvq1cbgnn925ykngjbw5,imgname-kbkj-1789058182881.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಅಮೆರಿಕಾ ಅಮೆರಿಕಾ ಮೊದಲ ಭಾಗ ಸಕ್ಸಸ್&zwnj; ಆಗಿದ್ದಕ್ಕೆ ಪಾರ್ಟ್&zwnj; 2 ಮಾಡಿದ್ದಾ?&lt;/strong&gt;&lt;/p&gt;&lt;p&gt;ಮೊದಲಿನ ಭಾಗದ ಸಕ್ಸಸ್&zwnj;ಗೇ ಮಾಡಬೇಕು ಅಂತಿದ್ರೆ 30 ವರ್ಷ ಕಾಯುತ್ತಿರಲಿಲ್ಲ. ಕಾಡುವ ಮತ್ತು ಯೋಚಿಸುವಂತಹ ಒಂದು ಕತೆ ಸಿಕ್ಕಿತು. ಅದು &lsquo;ಅಮೆರಿಕಾ ಅಮೆರಿಕಾ&rsquo; ಶೀರ್ಷಿಕೆಗೆ ತುಂಬಾ ಹೊಂದಾಣಿಕೆ ಆಗುತ್ತಿತ್ತು. ಕತೆ ಮತ್ತು ಟೈಟಲ್&zwnj; ಎರಡೂ ಕೂಡಿ ಬಂದಿದ್ದರಿಂದ &lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾ ಆಯಿತು.&lt;/p&gt;&lt;p&gt;&lt;strong&gt;* ಈಗ ಕಾದಂಬರಿಯನ್ನು ಸಿನಿಮಾ ಮಾಡೋದು, ಅದನ್ನು ನೋಡುಗರಿಗೆ ಒಪ್ಪಿಸೋದು ಸವಾಲು ಅಲ್ಲವೇ?&lt;/strong&gt;&lt;/p&gt;&lt;p&gt;ಇದು ಸಹನಾ ವಿಜಯ್&zwnj; ಕುಮಾರ್&zwnj; ಅವರು ಬರೆದಿರುವ &lsquo;ಕ್ಷಮೆ&rsquo; ಕಾದಂಬರಿ ಆಧಾರಿತ ಚಿತ್ರ. ನನಗೆ ಕಾದಂಬರಿಯನ್ನು ಸಿನಿಮಾಗೆ ಅಳವಡಿಸುವ ಸವಾಲುಗಿಂತ &lsquo;ಇದು ನಿನ್ನಿಂದ ಸಿನಿಮಾ ಮಾಡಲು ಸಾಧ್ಯವೇ, ಇದು ಆಗುತ್ತಾ, ನೋಡು&rsquo; ಹಿತೈಷಿಗಳು ಕೊಟ್ಟ ಎಚ್ಚರಿಕೆಗಳೇ ನನಗೆ ಸವಾಲಾಗಿದ್ದವು.&lt;/p&gt;&lt;p&gt;&lt;strong&gt;* ಹೊರದೇಶಗಳು ಈಗ ಬಹುತೇಕರಿಗೆ ಅಪರಿಚಿತವಲ್ಲದ ಹೊತ್ತಿನಲ್ಲಿ &lsquo;ಅಮೆರಿಕಾ ಅಮೆರಿಕಾ 2&rsquo; ಕತೆ ಹೇಗೆ ಪ್ರಸ್ತುತ?&lt;/strong&gt;&lt;/p&gt;&lt;p&gt;ಆ ಕಾರಣಕ್ಕೆ ಮೊದಲ ಭಾಗದಲ್ಲಿ ಮಾಡಿದ್ದನ್ನು ಇಲ್ಲಿ ಮಾಡಕ್ಕೆ ಹೋಗಿಲ್ಲ. ಆಗ ಅಮೆರಿಕಾದ ಆಕರ್ಷಣಿಯ ಸ್ಥಳಗಳನ್ನು ದರ್ಶನ ಮಾಡಿಸಿದ್ದೆ. ಈಗ ಸಿಯಾಟಲ್&zwnj;, ಚಾರಿತ್ರಿಕ ನಗರ, ಸಾಫ್ಟ್&zwnj;ವೇರ್&zwnj;, ದುಡಿಯುವ ಮಹಿಳೆ, ತಂದೆ, ತಾಯಿ, ಸಂಬಂಧಗಳು, ಪ್ರೀತಿ- ಪ್ರೇಮ, ಸಂಸಾರದ ತಲ್ಲಣಗಳು... ಇತ್ಯಾದಿಗಳ ಜೊತೆಗೆ ಅಮೆರಿಕಾದ ಕತೆ ಹೇಳಿದ್ದೇನೆ. ಇದು ನುಡಿ ಎನ್ನುವ ಕನ್ನಡದ ಸಾಫ್ಟ್&zwnj;ವೇರ್&zwnj; ಹೆಣ್ಣು ಮಗಳ ಕತೆಯಾದರೂ ಭಾರತದ ಬಹುತೇಕ ದುಡಿಯುವ ಹೆಣ್ಣುಮಕ್ಕಳ ಬದುಕು ಹೀಗೆಯೇ ಇದೆ. ಅವರೆಲ್ಲರನ್ನು ಇಲ್ಲಿನ ನುಡಿ ಪಾತ್ರಧಾರಿ ಸಾಂಕೇತಿಕವಾಗಿ ಬಿಂಬಿಸುತ್ತಾಳೆ.&lt;/p&gt;&lt;p&gt;&lt;strong&gt;* ಮೊದಲ ಭಾಗದ ನೆನಪಿನಲ್ಲಿರುವ ಬರುವ ಪ್ರೇಕ್ಷಕರಿಗೆ ಏನು ಹೇಳುತ್ತೀರಿ?&lt;/strong&gt;&lt;/p&gt;&lt;p&gt;ಹಾಗೆಯೇ ಬನ್ನಿ. ಬಂದ ಮೇಲೆ &lsquo;ಅಮೆರಿಕಾ ಅಮೆರಿಕಾ 2&rsquo; ನಿಮಗೆ ಹೊಸ ಸ್ವಾದ, ಹೊಸ ಅನುಭವ ನೀಡುತ್ತದೆ. ಹಳೆಯದನ್ನು ಮರೆಯಬೇಕು ಅಂತ ನಾನು ಬಯಸಲ್ಲ. ಈ ಚಿತ್ರದ ಟ್ಯಾಗ್&zwnj; ಲೈನ್&zwnj; &lsquo;ಹಳೆಯ ಕಥೆಗಳಿಂದ್ಲೆ ಹೊಸ ಕಥೆಗಳು ಹುಟ್ಟೋದು..&rsquo; ಅಂತಿರೋದು ಅದೇ ಕಾರಣಕ್ಕೆ. 30 ವರ್ಷಗಳ ಹಿಂದಿನ ಭೂಮಿಕ, ಈಗಿನ ನುಡಿ ಪಾತ್ರ, ತ್ರಿಕೋನ ಪ್ರೇಮ ಕತೆ, ಮೈಸೂರು- ಸಿಯಾಟಲ್&zwnj; ನಡುವಿನ ಪ್ರಯಾಣ... ಈ ಎಲ್ಲವೂ ಹೊಸ ಅನುಭವ ನೀಡುತ್ತವೆ.&lt;/p&gt;&lt;p&gt;&lt;strong&gt;* ಈಗಿನ ಜನರೇಷನ್&zwnj;ಗೆ ಈ ಸಿನಿಮಾ ಹೇಗೆ ಕನೆಕ್ಟ್&zwnj; ಆಗಬಹುದು?&lt;/strong&gt;&lt;/p&gt;&lt;p&gt;ಈಗಿನ ಜನರೇಷನ್&zwnj; ಅಂದರೆ ಜೆನ್&zwnj; ಝೀಗಳು. ಪ್ರಶ್ನೆ ಮತ್ತು ಪ್ರತಿಭಟನೆ ಮಾಡುವ ಮನೋಭಾವದ ಈ ಜನರೇಷನ್&zwnj; ಬಗ್ಗೆ ನನಗೆ ಗೌರವ ಮತ್ತು ಪ್ರೀತಿ ಇದೆ. ಚಿತ್ರದಲ್ಲಿ ಮಧ್ಯ ವಯಸ್ಸಿನ ತಂದೆ, ಜಗತ್ತನ್ನು ಕುತೂಹಲದಿಂದ ನೋಡುವ ಪ್ರತಿಯೊಂದನ್ನು ಪ್ರಶ್ನಿಸುವ ಪುಟ್ಟ ಮಗು, ತಾಳ್ಮೆ ಇಲ್ಲದೆ ಯುವ ಮನಸ್ಸುಗಳು, ಎಐ ತಂತ್ರಜ್ಞಾನ, ದುಡಿಮೆಯ ಅನಿವಾರ್ಯತೆ.... ಹೀಗೆ ಎಲ್ಲವೂ ಈ ಚಿತ್ರದಲ್ಲಿದೆ. ನಾನು ಒಟ್ಟಾರೆ ಪ್ರೇಕ್ಷಕರನ್ನು ಅಡ್ರೆಸ್&zwnj; ಮಾಡಿ ಮಾಡಿರುವ ಸಿನಿಮಾ ಇದು.&lt;/p&gt;&lt;p&gt;&lt;strong&gt;* ಎಲ್ಲವೂ ಗೊತ್ತು ಎನ್ನುವ ಜನರೇಷನ್&zwnj; ಇದು. ಇಂಥವರ ನಡುವೆ ಕತೆ ಹೇಳುವುದು ಎಷ್ಟು ಸವಾಲು?&lt;/strong&gt;&lt;/p&gt;&lt;p&gt;ತುಂಬಾ ತುಂಬಾ ಸವಾಲು. ಯಾಕೆಂದರೆ ಕೌತುಕತೆ ಹೋಗಿದೆ. ಗೊತ್ತಿದೆ ಅಂದರೆ ನನಗೇನು ಹೇಳಬೇಡಿ ಎನ್ನುವ ಅರ್ಥ. ಆದರೆ, ನಾವುಗಳು ತಾಳ್ಮೆ ಕಳೆದುಕೊಳ್ಳುವುದೇ ಹೇಳಬೇಕಿದೆ. ಬುದ್ಧಿವಾದ, ಸಂದೇಶ ಏನೇ ಇದ್ದರೂ ತುಂಬಾ ಆಪ್ತವಾಗಿ ಬಹುಬೇಗ ಅರ್ಥವಾಗುವಂತೆ ಹೇಳಬೇಕಿದೆ. ಆ ರೀತಿ ದೃಶ್ಯಗಳು ಈ ಚಿತ್ರದಲ್ಲಿ ತುಂಬಾ ಇವೆ.&lt;/p&gt;&lt;p&gt;&lt;strong&gt;* ಈ ಚಿತ್ರಕ್ಕೆ ನಿರೂಪ್&zwnj; ಭಂಡಾರಿ, ಪೃಥ್ವಿ ಅಂಬರ್&zwnj;, ಶಾನ್ವಿ ಶ್ರೀವಾಸ್ತವ್&zwnj; ಆಯ್ಕೆ ಹೇಗೆ?&lt;/strong&gt;&lt;/p&gt;&lt;p&gt;ತುಂಬಾ ಜನರ ಆಡಿಷನ್&zwnj;, ಸಂದರ್ಶನ ಮಾಡಿದ ನಂತರ ಕೊನೆಗೆ ಸಿಕ್ಕ ಕಲಾವಿದರು ಇವರು. ನನ್ನೊಳಗಿನ ಟಿಪಿಕಲ್&zwnj; ಟೀಚರ್&zwnj; ವ್ಯಕ್ತಿತ್ವವೇ ಈ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದೆ. ತುಂಬಾ ಇಂಟಲಿಜೆಂಟ್&zwnj; ಹಾಗೂ ಸೂಕ್ಷ್ಮಗ್ರಾಹಿಗಳಾಗಿದ್ದರಿಂದ ಇವರು ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-director-nagathihalli-chandrashekhar-on-america-america-2-gen-z-ai-and-modern-relationships-gvd/articleshow-21xka7c"/>
        </item>
        <item>
            <title><![CDATA[ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ ವಿಶೇಷ ಸಂದರ್ಶನ]]></title>
            <link>https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</link>
            <guid isPermaLink="true">https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</guid>
            <pubDate>Wed, 19 Aug 2026 23:47:07 +0530</pubDate>
            <description><![CDATA[&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dhd72gvzpt5x7ns7k0mpy0,imgname-jvj-1787160861776.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?&lt;/strong&gt;&lt;/p&gt;&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.&lt;/p&gt;&lt;p&gt;&lt;strong&gt;* ಆ್ಯಂಕರಿಂಗ್&zwnj;ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?&lt;/strong&gt;&lt;/p&gt;&lt;p&gt;ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್&zwnj; ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.&lt;/p&gt;&lt;p&gt;&lt;strong&gt;* ನಿಮ್ಮ ಮತ್ತು ಕಲರ್ಸ್&zwnj; ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್&zwnj; ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್&zwnj; ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?&lt;/p&gt;&lt;p&gt;&lt;strong&gt;* ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್&zwnj; ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್&zwnj; ಮುಗಿಸಿದ್ದೇನೆ. ಒಂದು ವೆಬ್&zwnj; ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್&zwnj; ನಡೆಯುತ್ತಿದ್ದೆ. &lsquo;ಪ್ರೆಸ್ಟೀಜ್&zwnj;&rsquo; ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್&zwnj; ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್&zwnj; ಆಗುತ್ತೆ ಅಂತ ಗೊತ್ತಿರಲ್ಲ.&lt;/p&gt;&lt;p&gt;&lt;strong&gt;* &lsquo;ಆ ಕರಾಳ ರಾತ್ರಿ&rsquo; ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?&lt;/strong&gt;&lt;/p&gt;&lt;p&gt;ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ &lsquo;ಆ ಕರಾಳ ರಾತ್ರಿ&rsquo; ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.&lt;/p&gt;&lt;p&gt;&lt;strong&gt;* ಹೌದು, ಈಗ ನಿಮ್ಮ ಆದಾಯ ಏನು?&lt;/strong&gt;&lt;/p&gt;&lt;p&gt;ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಆಗಿದೆ. ಇನ್&zwnj;ಸ್ಟಗ್ರಾಮ್&zwnj; ಕೋಲಾಬರೇಷನ್&zwnj;, ಪ್ರಚಾರಗಳಿಂದ ಆದಾಯ ಬರುತ್ತಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo"/>
        </item>
        <item>
            <title><![CDATA[ನಾನು ಕಾಯುತ್ತಿರುವ ಯಶಸ್ಸು 'ಕಾಮನ್‌ ಮ್ಯಾನ್‌'ನಿಂದ ಸಿಗಲಿದೆ: ಗೌರಿಶಂಕರ್ ಸಂದರ್ಶನ]]></title>
            <link>https://kannada.asianetnews.com/celebrity-interviews/common-man-kannada-movie-actor-gaurishankar-interview-opens-up-about-his-cm-role-gvd/articleshow-52gz11c</link>
            <guid isPermaLink="true">https://kannada.asianetnews.com/celebrity-interviews/common-man-kannada-movie-actor-gaurishankar-interview-opens-up-about-his-cm-role-gvd/articleshow-52gz11c</guid>
            <pubDate>Fri, 18 Sep 2026 09:00:09 +0530</pubDate>
            <description><![CDATA[&lt;p&gt;&lsquo;ಕಾಮನ್ ಮ್ಯಾನ್&rsquo; ಸಿನಿಮಾದಲ್ಲಿ ವಕೀಲನಿಂದ ಮುಖ್ಯಮಂತ್ರಿಯಾಗುವ ಪಾತ್ರದಲ್ಲಿ ನಟಿಸಿರುವ ಗೌರಿಶಂಕರ್, ಸಿನಿಮಾ ಮೇಲಿನ ನಿರೀಕ್ಷೆ, &lsquo;ಕೆರೆಬೇಟೆ&rsquo; ಬಳಿಕದ ಪಯಣ, ಕಮರ್ಷಿಯಲ್ ಸಕ್ಸಸ್ ಹಾಗೂ ಎರಡು ದಶಕಗಳ ಚಿತ್ರರಂಗದ ಹೋರಾಟದ ಬಗ್ಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r309jnrpamt0h0jmspy3ew,imgname-kbk-1789662340693.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;* &lsquo;ಕೆರೆಬೇಟೆ&rsquo; ನಂತರ ಬಹಳ ಸಮಯದ ಬಳಿಕ &lsquo;ಕಾಮನ್ ಮ್ಯಾನ್&rsquo; ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣವೇನು?&lt;/strong&gt;&lt;/p&gt;&lt;p&gt;ಒಬ್ಬ ಕಲಾವಿದನಿಗೆ ಕಥೆಯ ಜೊತೆಗೆ ನಿರ್ಮಾಣ ಸಂಸ್ಥೆ, ನಿರ್ದೇಶಕರು ಮತ್ತು ಇಡೀ ತಂಡದ ವಿಷನ್ ಬಹಳ ಮುಖ್ಯವಾಗುತ್ತದೆ. ನಿರ್ಮಾಪಕ ಎನ್. ನರಸಿಂಹಮೂರ್ತಿಯವರು ಕಥೆಯ ಒಂದು ಮುಖ್ಯ ಎಳೆ ಹೇಳಿದ ನಂತರ, ದೊಡ್ಡ ರೈಟಿಂಗ್ ಟೀಮ್ ಮತ್ತು ನಿರ್ದೇಶಕರು ಸೇರಿ ಅತ್ಯುತ್ತಮ ಚಿತ್ರಕಥೆ ಸಿದ್ಧಪಡಿಸಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಕಥೆ ಕೇಳುತ್ತಿದ್ದಂತೆ ನನಗೆ ತುಂಬಾ ಕನೆಕ್ಟ್ ಆಯ್ತು. ನನ್ನ ಕುಟುಂಬದಲ್ಲಿ ಎಲ್ಲರೂ ವಕೀಲರು. ರೈತಾಪಿ ಕುಟುಂಬದಿಂದ ಬಂದವರು ಸುಲಭವಾಗಿ ಓದಲು ಆಯ್ಕೆ ಮಾಡಿಕೊಳ್ಳುವುದು ಎಲ್&zwnj;ಎಲ್&zwnj;ಬಿ. ಈ ಚಿತ್ರದ ನಾಯಕ ಕೂಡ ಅಡ್ವೊಕೇಟ್. ಆಮೇಲೆ ಮುಖ್ಯಮಂತ್ರಿ. ಹಾಗಾಗಿ ಈ ಕಥೆ, ಪಾತ್ರ ನನ್ನ ಮನಸ್ಸಿಗೆ ತೀರ ಹತ್ತಿರವಾಯಿತು.&lt;/p&gt;&lt;p&gt;&lt;strong&gt;* &lsquo;ಕಾಮನ್ ಮ್ಯಾನ್&rsquo; ಚಿತ್ರ ಯಾವ ಜಾನರ್&zwnj;ಗೆ ಸೇರುತ್ತದೆ? ಪ್ರೇಕ್ಷಕರಿಗೆ ಇದು ಎಂಥ ಅನುಭವ ನೀಡಲಿದೆ?&lt;/strong&gt;&lt;/p&gt;&lt;p&gt;ಇದು ಸಂಪೂರ್ಣವಾಗಿ 2 ಗಂಟೆ 20 ನಿಮಿಷಗಳ ಪಕ್ಕಾ ಎಂಟರ್&zwnj;ಟೈನ್&zwnj;ಮೆಂಟ್ ಸಿನಿಮಾ. ಎಲ್ಲೂ ಬೋರ್ ಹೊಡೆಸಲ್ಲ. ಇದೊಂದು ಮೃಷ್ಟಾನ್ನ ಭೋಜನ ಅಲ್ಲದಿರಬಹುದು, ಆದರೆ ದೇಹಕ್ಕೆ ಹಿತ ನೀಡುವ ಆರೋಗ್ಯಕರ &lsquo;ಮಜ್ಜಿಗೆ ಅನ್ನ&rsquo;ದಂತಹ ಸಿನಿಮಾ. ಸಾಯಿಪ್ರಕಾಶ್ ಅವರಂತಹ ಅನುಭವಿ ನಿರ್ದೇಶಕರು ತುಂಬಾ ಅಚ್ಚುಕಟ್ಟಾಗಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅವರದ್ದು ಅಪ್ರತಿಮ ಅನುಭವ ಮತ್ತು ಅದ್ಭುತ ಜಡ್ಜ್&zwnj;ಮೆಂಟ್. ಅದೇ ರೀತಿ ನಿರ್ಮಾಪಕರು ಉತ್ತಮ ರೀತಿಯಲ್ಲಿ ಸಿನಿಮಾ ಮಾಡಿದ್ದಾರೆ.&lt;/p&gt;&lt;p&gt;&lt;strong&gt;* ಒಬ್ಬ ಕಾಮನ್ ಮ್ಯಾನ್ ಮುಖ್ಯಮಂತ್ರಿಯಾಗುವ ಪಾತ್ರ ಇದೆಯಂತೆ. ಈ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?&lt;/strong&gt;&lt;/p&gt;&lt;p&gt;ಹೌದು, ಆರಂಭದಲ್ಲಿ &lsquo;ನಾನೇ ಸಿಎಂ&rsquo; ಅಂತೆಲ್ಲ ಟೈಟಲ್ ಯೋಚನೆ ಇತ್ತು. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಸಿಎಂ ಆಗ್ತಾನೆ ಅಂದಾಗ ಸಾರ್ವಜನಿಕರಿಗೆ ತಕ್ಷಣ ರಿಲೇಟ್ ಆಗಬೇಕು ಎಂಬ ಕಾರಣಕ್ಕೆ &lsquo;ಕಾಮನ್ ಮ್ಯಾನ್&rsquo; ಅಂತ ಇಟ್ಟೆವು. ಈ ಪಾತ್ರದಲ್ಲಿ ನಟನೆ ಬಹಳ ಸವಾಲಾಗಿತ್ತು. ಒಬ್ಬ ವಕೀಲನಾಗಿ ಹುಮ್ಮಸ್ಸು ತೋರಬೇಕು. ಅದೇ ವ್ಯಕ್ತಿ ಸಿಎಂ ಆದಾಗ ಗಾಂಭೀರ್ಯ ಇರಬೇಕು. ಗತ್ತು ಇರಬೇಕು, ದೌಲತ್ತು ಇರಬಾರದು. ಅದೆಲ್ಲಾ ಯೋಚಿಸಿ ಯಾವುದೇ ವರ್ಕ್&zwnj;ಶಾಪ್ ಮಾಡದೆ ನಾನೇ ಸ್ವತಃ ಬಾಡಿ ಲ್ಯಾಂಗ್ವೇಜ್ ಮತ್ತು ಲುಕ್ ಮೇಲೆ ಸಾಕಷ್ಟು ಅಭ್ಯಾಸ ಮಾಡಿ ಈ ಪಾತ್ರ ಮಾಡಿದ್ದೇನೆ.&lt;/p&gt;&lt;p&gt;&lt;strong&gt;* &lsquo;ಕೆರೆಬೇಟೆ&rsquo; ನಿಮಗೆ ವಿಮರ್ಶಾತ್ಮಕವಾಗಿ ದೊಡ್ಡ ಹೆಸರು ತಂದುಕೊಟ್ಟಿತು. ಆದರೆ ಈ ಸಿನಿಮಾದಿಂದ ನಿಮ್ಮ ನಿರೀಕ್ಷೆಯೇನು?&lt;/strong&gt;&lt;/p&gt;&lt;p&gt;&lsquo;ಕೆರೆಬೇಟೆ&rsquo; ನನಗೆ ಹೆಸರು ತಂದುಕೊಟ್ಟಿದ್ದು ನಿಜ, ಆದರೆ ಕಮರ್ಷಿಯಲ್ ಆಗಿ ದೊಡ್ಡ ಹಣ ಮಾಡಲಿಲ್ಲ. ಚಿತ್ರರಂಗದಲ್ಲಿ ಕಮರ್ಷಿಯಲ್ ಸಕ್ಸಸ್ ಬಹಳ ಮುಖ್ಯ. ಈ ಚಿತ್ರದಲ್ಲಿ ಆ ಎಲ್ಲಾ ಕಮರ್ಷಿಯಲ್ ಅಂಶಗಳೂ ಇವೆ. ಆಕರ್ಷಕ ಹಾಡುಗಳು, ಮಾಸ್ ಎಲಿಮೆಂಟ್ಸ್ ಇವೆ. ಈ ಸಿನಿಮಾ ಗೆದ್ದರೆ ನಾನು ಒಬ್ಬ ಮಾಸ್ ಮತ್ತು ಕಮರ್ಷಿಯಲ್ ಹೀರೋ ಆಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಬಲ್ಲೆ ಎಂಬ ನಂಬಿಕೆಯಿದೆ.&lt;/p&gt;&lt;p&gt;&lt;strong&gt;* ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಟೇಕ್ಅವೇ ಏನು?&lt;/strong&gt;&lt;/p&gt;&lt;p&gt;ಇವತ್ತಿನ ಸಮಾಜದಲ್ಲಿ ಜನಸಾಮಾನ್ಯರ ದಿನನಿತ್ಯದ ಬದುಕಿನ ಪ್ರತಿ ಹಂತದಲ್ಲೂ ರಾಜಕೀಯ ಬೆರೆತುಹೋಗಿದೆ. ಆಡಳಿತ, ಕಾನೂನು, ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಒಬ್ಬ ಸಾಮಾನ್ಯ ಮನುಷ್ಯನಿಗೆ ಅರ್ಥವಾಗುವ ಭಾಷೆಯಲ್ಲೇ ಸಿನಿಮಾದಲ್ಲಿ ಹೇಳಲಾಗಿದೆ. ಭ್ರಷ್ಟಾಚಾರವನ್ನು ಹೇಗೆ ಕಿತ್ತೊಗೆಯಬಹುದು ಎಂಬುದನ್ನು ಮನರಂಜನೆಯ ಜೊತೆಗೆ ಅರ್ಥಪೂರ್ಣವಾಗಿ ಚರ್ಚಿಸಲಾಗಿದೆ.&lt;/p&gt;&lt;h2&gt;&lt;strong&gt;* ಈ ಪಯಣ ಹೇಗಿದೆ?&lt;/strong&gt;&lt;/h2&gt;&lt;p&gt;&lsquo;ಜೋಕಾಲಿ&rsquo;, &lsquo;ರಾಜಹಂಸ&rsquo;, &lsquo;ಕೆರೆಬೇಟೆ&rsquo; ಹೀಗೆ ಏಳುಬೀಳುಗಳನ್ನು ಕಂಡಿದ್ದೇನೆ. ಈ ಸೋಲುಗಳೇ ನನಗೆ ಬದುಕನ್ನು ಮತ್ತು ಧೈರ್ಯವನ್ನು ಕಲಿಸಿವೆ. ಚಿತ್ರರಂಗದಲ್ಲಿ ಯಾರೂ ಸುಲಭವಾಗಿ ಅವಕಾಶ ಕೊಡಲ್ಲ, ಅವಕಾಶ ಸಿಕ್ಕಾಗ ಪೂರ್ತಿಯಾಗಿ ಕೊಟ್ಟುಕೊಳ್ಳಬೇಕು. ನನ್ನದು ಎರಡು ದಶಕಗಳ ಹೋರಾಟ. ಕನ್ನಡಿಗರು ನನ್ನನ್ನು ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವ ಸಂದರ್ಭ ಈ ಸಿನಿಮಾದಲ್ಲಿ ಒದಗಲಿ ಎಂಬುದೇ ನನ್ನ ಆಶಯ. ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆ. ಈ ಸಿನಿಮಾ ಜನರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/common-man-kannada-movie-actor-gaurishankar-interview-opens-up-about-his-cm-role-gvd/articleshow-52gz11c"/>
        </item>
        <item>
            <title><![CDATA[ರಂಗಭೂಮಿ ಕಲಾವಿದರ ಬದುಕಿನಿಂದ ಹುಟ್ಟಿದ 'ಟಾಸ್': ಅರ್ಜುನ್ ಕಾಪಿಕಾಡ್ ಜೊತೆ ವಿಶೇಷ ಸಂದರ್ಶನ]]></title>
            <link>https://kannada.asianetnews.com/celebrity-interviews/toss-kannada-movie-arjun-kapikad-talks-about-emotions-comedy-interview-and-action-gvd/articleshow-9a7bd5a</link>
            <guid isPermaLink="true">https://kannada.asianetnews.com/celebrity-interviews/toss-kannada-movie-arjun-kapikad-talks-about-emotions-comedy-interview-and-action-gvd/articleshow-9a7bd5a</guid>
            <pubDate>Fri, 18 Sep 2026 08:45:23 +0530</pubDate>
            <description><![CDATA[&lt;p&gt;&lsquo;ಟಾಸ್&rsquo; ಕನ್ನಡ ಸಿನಿಮಾದ ಕಥೆ, ಅಪ್ಪ-ಮಗನ ಬಾಂಧವ್ಯ, ರಂಗಭೂಮಿ ಹಿನ್ನೆಲೆ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಬೆಂಬಲದ ಬಗ್ಗೆ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್ ಮಾತನಾಡಿದ್ದಾರೆ. ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗುವ ವಿಶ್ವಾಸವನ್ನೂ ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r2abcfy6baqa4zzjcwwk97,imgname-bkb-1789661621647.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;* &lsquo;ಟಾಸ್&rsquo; ಕಥೆಯ ಎಳೆ ಹೊಳೆದದ್ದು ಹೇಗೆ ಮತ್ತು ಇದು ನಿಮಗೆ ಯಾಕೆ ಆಪ್ತವೆನಿಸಿತು?&lt;/strong&gt;&lt;/p&gt;&lt;p&gt;ಈ ಕಥೆಯ ಮೂಲ ನಮ್ಮ ಮನೆಯಲ್ಲೇ ಇದೆ. ನಮ್ಮ ತಂದೆಯವರು ರಂಗಭೂಮಿ ಕಲಾವಿದರಾಗಿ ಸುದೀರ್ಘ ವರ್ಷಗಳಿಂದ ಬದುಕನ್ನು ಕಟ್ಟಿಕೊಂಡು ಬಂದವರು. ಅವರ ಬದುಕಿನ ಅನುಭವಗಳನ್ನು ಮತ್ತು ನಾನು ನೋಡಿದ, ಒಡನಾಡಿದ ಜೀವನವನ್ನು ಆಧಾರವಾಗಿಟ್ಟುಕೊಂಡು, ಅದಕ್ಕೆ ಸಿನಿಮಾ ವ್ಯಾಕರಣಕ್ಕೆ ತಕ್ಕಂತೆ ಕಾಮಿಡಿ, ಎಮೋಷನ್ಸ್ ಮತ್ತು ಬದುಕಿನ ಮೌಲ್ಯಗಳನ್ನು ಹದವಾಗಿ ಬೆರೆಸಿ ಈ ಕಥೆ ಸಿದ್ಧಪಡಿಸಿದ್ದೇವೆ. ಮುಖ್ಯವಾಗಿ ಅಪ್ಪ-ಮಗನ ನಡುವಿನ ಸಂಬಂಧ ಹಾಗೂ ಕಲಾವಿದರ ಬದುಕಿನ ಹಿನ್ನೆಲೆಯನ್ನು ಪರಿಚಯಿಸಲಾಗಿದೆ. ರಂಗಭೂಮಿಯ ಹಿನ್ನೆಲೆ ನನಗೂ ರಕ್ತಗತವಾಗಿ ಬಂದಿರುವುದರಿಂದ ಈ ಕಥೆಯನ್ನು ಹೇಳುವುದು ತುಂಬಾ ಸುಲಭ ಮತ್ತು ಆಪ್ತವಾಯಿತು.&lt;/p&gt;&lt;p&gt;&lt;strong&gt;* ಕನ್ನಡಕ್ಕೆ ದೊಡ್ಡದಾಗಿ ಹೆಜ್ಜೆ ಇಡುತ್ತಿದ್ದೀರಿ. ದೊಡ್ಡ ಮಟ್ಟದ ಮಾರುಕಟ್ಟೆಗೆ ಬರುವಾಗ ಭಯ ಅಥವಾ ಆತಂಕ ಇತ್ತಾ?&lt;/strong&gt;&lt;/p&gt;&lt;p&gt;ಒಳ್ಳೆಯ ಕಥೆಯನ್ನು ಪ್ರಾಮಾಣಿಕವಾಗಿ ಕಟ್ಟಿ ಜನರಿಗೆ ತಲುಪಿಸಿದರೆ, ಕೊನೆಗೆ ಪ್ರೇಕ್ಷಕರು ಅದ್ಭುತ ಸಿನಿಮಾವನ್ನೇ ನೋಡಲು ಬಯಸುತ್ತಾರೆ ಎಂಬ ಧೈರ್ಯ ನನಗಿತ್ತು. ಆದರೆ ಕನ್ನಡದಂತಹ ದೊಡ್ಡ ಮಾರುಕಟ್ಟೆಗೆ ರೀಚ್ ಆಗಲು ಒಂದು ಬಲಿಷ್ಠ ಬ್ಯಾನರ್ ಅಗತ್ಯವಿತ್ತು. ಆ ಸಮಯದಲ್ಲಿ ದೇವರ ದಯೆಯಿಂದ ಗೋಲ್ಡನ್ ಸ್ಟಾರ್ ಗಣೇಶ್ ಸರ್ ನಮ್ಮ ಬೆಂಬಲಕ್ಕೆ ನಿಂತು, ತಮ್ಮ ಬ್ಯಾನರ್ ಮೂಲಕ ನಮ್ಮ ಬೆನ್ನಿಗೆ ನಿಂತರು. ಗಣೇಶ್ ಸರ್ ಅವರಂತಹ ದೊಡ್ಡ ಸೆಲೆಬ್ರಿಟಿಯ ಬೆಂಬಲ ಸಿಕ್ಕಿದ್ದು ನಮಗೆ ಆನೆಬಲ ತಂದುಕೊಟ್ಟಿತು. ಮಂಗಳೂರು ಪ್ರೀಮಿಯರ್ ಮತ್ತು ಶಿವಮೊಗ್ಗದ ಶೋಗಳಲ್ಲಿ ಜನ ನೀಡಿದ ಭರ್ಜರಿ ರೆಸ್ಪಾನ್ಸ್, ಶಿಳ್ಳೆ-ಚಪ್ಪಾಳೆಗಳು ನಮ್ಮ ಧೈರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.&lt;/p&gt;&lt;p&gt;&lt;strong&gt;* ದೊಡ್ಡ ಸ್ಕೇಲ್, ನಿರ್ದೇಶನ ಮತ್ತು ನಟನೆ ಎಲ್ಲವನ್ನೂ ಒಟ್ಟಿಗೆ ನಿಭಾಯಿಸುವುದು ಸುಲಭವಾಗಿತ್ತೇ?&lt;/strong&gt;&lt;/p&gt;&lt;p&gt;ಖಂಡಿತವಾಗಿಯೂ ಇದು ಸುಲಭದ ಕೆಲಸವಲ್ಲ. ಆದರೆ ಚಿತ್ರತಂಡದ ಶ್ರಮ ಮತ್ತು ವ್ಯವಸ್ಥಿತ ಪ್ಲಾನಿಂಗ್ ಇದನ್ನು ಸುಲಭವಾಗಿಸಿತು. ಶೂಟಿಂಗ್ ಆರಂಭಕ್ಕೂ ಮುನ್ನವೇ ನಾವು ಇಡೀ ಸಿನಿಮಾವನ್ನು &lsquo;ಮಾಕ್ ಶೂಟ್&rsquo; ಮಾಡಿಕೊಂಡಿದ್ದೆವು. ಪ್ರತಿ ಶಾಟ್ ಹೇಗಿರಬೇಕು, ಆರ್ಟಿಸ್ಟ್&zwnj;ಗಳ ಪರ್ಫಾರ್ಮೆನ್ಸ್ ಹೇಗಿರಬೇಕು, ಎಡಿಟ್ ಪ್ಯಾಟರ್ನ್ ಹೇಗಿರಬೇಕು ಎಂಬುದು ಮೊದಲೇ ನಿಖರವಾಗಿ ಗೊತ್ತಿತ್ತು. ಹಾಗಾಗಿ ಸೆಟ್&zwnj;ಗೆ ಹೋದಾಗ ಕೇವಲ ನಟನೆಯ ಕಡೆಗೆ ಹೆಚ್ಚು ಗಮನಹರಿಸಲು ಸಾಧ್ಯವಾಯಿತು. ಪೂರ್ವಸಿದ್ಧತೆ ಚೆನ್ನಾಗಿದ್ದ ಕಾರಣ ಯಾವುದೇ ಗೊಂದಲವಿಲ್ಲದೆ ಶೆಡ್ಯೂಲ್ ಪ್ರಕಾರ ಶೂಟಿಂಗ್ ಮುಗಿಯಿತು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ದೇವದಾಸ್ ಕಾಪಿಕಾಡ್ ಅವರೊಂದಿಗೆ ಸ್ಕ್ರಿಪ್ಟ್ ಚರ್ಚೆ ಹೇಗಿತ್ತು?&lt;/strong&gt;&lt;/p&gt;&lt;p&gt;ಅವರೊಂದಿಗೆ ಬ್ರೈನ್&zwnj;ಸ್ಟಾರ್ಮಿಂಗ್ ಮತ್ತು ಡಿಸ್ಕಷನ್ ಮಾಡುವುದು ಯಾವಾಗಲೂ ಉತ್ತಮ ಅನುಭವ. ಒಂದು ಸೀನ್ ಅನ್ನು ಹೇಗೆ ಎಲಿವೇಟ್ ಮಾಡಬೇಕು, ಸ್ಕ್ರೀನ್&zwnj;ಪ್ಲೇಯಲ್ಲಿ ಭಾವನೆಗಳನ್ನು ಹೇಗೆ ಕಟ್ಟಿಕೊಡಬೇಕು ಎಂಬುದನ್ನು ಸದಾ ಚರ್ಚಿಸುತ್ತಿದ್ದೆವು. ಅಪ್ಪ-ಮಗನ ಸಂಬಂಧದ ಜತೆಗೆ ಕ್ರಿಯೇಟಿವ್ ಆಗಿ ಇಬ್ಬರ ನಡುವೆ ಅದ್ಭುತ ಹೊಂದಾಣಿಕೆ ಇತ್ತು.&lt;/p&gt;&lt;p&gt;&lt;strong&gt;* ನಿಮ್ಮ ಚಿತ್ರರಂಗದ ಪಯಣವನ್ನು ಹಿಂತಿರುಗಿ ನೋಡಿದಾಗ ಏನನ್ನಿಸುತ್ತದೆ?&lt;/strong&gt;&lt;/p&gt;&lt;p&gt;ಚಿತ್ರರಂಗ ಅಂದಮೇಲೆ ಏಳುಬೀಳುಗಳು ಸಹಜ. ಕ್ರಿಯೇಟಿವ್ ಫೀಲ್ಡ್&zwnj;ನಲ್ಲಿ ಕೆಲವೊಮ್ಮೆ ನಾವು ಅಂದುಕೊಂಡ ಐಡಿಯಾಗಳು ವರ್ಕ್ ಆಗುತ್ತವೆ, ಕೆಲವೊಮ್ಮೆ ಆಗಲ್ಲ. ಆದರೆ ಪ್ರತಿಯೊಂದು ಹೆಜ್ಜೆಯಲ್ಲೂ ಕಲಿಕೆ ನಿರಂತರವಾಗಿರುತ್ತದೆ. ನಾವು ಪ್ರಾಮಾಣಿಕವಾಗಿ ಶ್ರಮಪಟ್ಟು ಸಿನಿಮಾ ಮಾಡಿದ್ದೇವೆ. ಮಾನವೀಯ ಭಾವನೆಗಳು ಎಲ್ಲರಿಗೂ ಒಂದೇ. ಹಾಗಾಗಿ ಇಡೀ ಕರ್ನಾಟಕದ ಪ್ರೇಕ್ಷಕರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ ಎಂಬ ಭರವಸೆಯಿದೆ.&lt;/p&gt;&lt;h2&gt;&lt;strong&gt;* ಈ ಸಿನಿಮಾ ಯಾಕೆ ನೋಡಬೇಕು?&lt;/strong&gt;&lt;/h2&gt;&lt;p&gt;ಅಪ್ಪ, ಮಗನ ಬಾಂಧವ್ಯ ಈ ಚಿತ್ರದ ಹೈಲೈಟ್. ಈ ಸಿನಿಮಾ ನೋಡಲು ಬಂದವರು ಹೊಟ್ಟೆ ತುಂಬಾ ನಗಬಹುದು, ಕೆಲವೊಮ್ಮೆ ಅಳಬಹುದು, ಕೌಟುಂಬಿಕ ಭಾವನಾತ್ಮಕ ದೃಶ್ಯಗಳನ್ನು ನೋಡಬಹುದು, ಜೊತೆಗೆ ಆ್ಯಕ್ಷನ್ ಕೂಡ ಎಂಜಾಯ್ ಮಾಡಬಹುದು. ಕನ್ನಡಕ್ಕೆ ಬರಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಇದೇ ಸರಿಯಾದ ಅವಕಾಶ ಅನ್ನಿಸಿತು. ಪ್ರೇಕ್ಷಕರು ಬಂದು ಒಮ್ಮೆ ಈ ಸಿನಿಮಾ ನೋಡಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/toss-kannada-movie-arjun-kapikad-talks-about-emotions-comedy-interview-and-action-gvd/articleshow-9a7bd5a"/>
        </item>
        <item>
            <title><![CDATA[ಕ್ಯಾನ್ಸರ್ ರಿಸರ್ಚ್‌ನಿಂದ ಕಿರುತೆರೆಗೆ ಎಂಟ್ರಿ: ಇಲ್ಲಿದೆ ‘ವಸುದೇವ ಕುಟುಂಬ’ದ ಭಾವನಾ ಪಾಟೀಲ್‌ರ ಕಥೆ!]]></title>
            <link>https://kannada.asianetnews.com/tv-talk/vasudeva-kutumba-actress-bhavana-patil-opens-up-on-her-acting-journey-balancing-kannada-and-telugu-tv-gvd/articleshow-bk6v0yt</link>
            <guid isPermaLink="true">https://kannada.asianetnews.com/tv-talk/vasudeva-kutumba-actress-bhavana-patil-opens-up-on-her-acting-journey-balancing-kannada-and-telugu-tv-gvd/articleshow-bk6v0yt</guid>
            <pubDate>Tue, 01 Sep 2026 08:30:29 +0530</pubDate>
            <description><![CDATA[&lt;p&gt;&lsquo;ವಸುದೇವ ಕುಟುಂಬ&rsquo; ಧಾರಾವಾಹಿಯಲ್ಲಿ ಸ್ವಾತಿ ಪಾತ್ರದ ಮೂಲಕ ಜನಪ್ರಿಯರಾಗಿರುವ ನಟಿ ಭಾವನಾ ಪಾಟೀಲ್ ತಮ್ಮ ವಿಭಿನ್ನ ನಟನಾ ಪಯಣದ ಬಗ್ಗೆ ಮಾತನಾಡಿದ್ದಾರೆ. ಮೈಕ್ರೋಬಯಾಲಜಿಯಲ್ಲಿ ಮಾಸ್ಟರ್ಸ್ ಮಾಡಿ ಕ್ಯಾನ್ಸರ್ ರಿಸರ್ಚ್&zwnj;ನಲ್ಲಿ ಕೆಲಸ ಮಾಡಿದ್ದ ಭಾವನಾ, ತಂದೆಯ ಪ್ರೋತ್ಸಾಹದಿಂದ ನಟನೆಗೆ ಕಾಲಿಟ್ಟರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1cb458ckscsgdr62k6eex31,imgname-bjb-1788194460940.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ವಸುದೇವ ಕುಟುಂಬ&rsquo; ಧಾರಾವಾಹಿಯಲ್ಲಿ ಸ್ವಾತಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ನಟಿ ಭಾವನಾ ಪಾಟೀಲ್, ಸದ್ಯ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಎರಡು ಭಾಷೆಗಳ ಧಾರಾವಾಹಿಗಳ ಶೂಟಿಂಗ್, ನಿರಂತರ ಪ್ರಯಾಣದ ನಡುವೆಯೂ ತಾವು ಇಷ್ಟಪಡುವ ಕೆಲಸ ಮಾಡುತ್ತಿದ್ದೇನೆ ಎಂಬ ಖುಷಿಯೇ ಎಲ್ಲವನ್ನೂ ನಿಭಾಯಿಸಲು ಶಕ್ತಿ ನೀಡುತ್ತಿದೆ ಎಂದು ನಟಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ &lsquo;ವಸುದೇವ ಕುಟುಂಬ&rsquo; ಧಾರಾವಾಹಿಯಲ್ಲಿನ ತಮ್ಮ ಪಾತ್ರ, ಈ ಅವಕಾಶ ಸಿಕ್ಕ ರೀತಿಯಲ್ಲಿನ ಅನಿರೀಕ್ಷಿತ ತಿರುವು, ಸ್ವಾತಿ ಪಾತ್ರದೊಂದಿಗೆ ತಮ್ಮ ಸಾಮ್ಯತೆ, ಎರಡು ಭಾಷೆಗಳ ಕಿರುತೆರೆಯನ್ನು ಬ್ಯಾಲೆನ್ಸ್ ಮಾಡುತ್ತಿರುವ ರೀತಿ ಹಾಗೂ ಮೈಕ್ರೋಬಯಾಲಜಿಯಿಂದ ನಟನೆಗೆ ಬಂದ ವಿಭಿನ್ನ ಪಯಣದ ಬಗ್ಗೆ ಭಾವನಾ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;ಕೇವಲ ಒಂದು ವಾರದಲ್ಲಿ ಸಿಕ್ಕಿತ್ತು &lsquo;ವಸುದೇವ ಕುಟುಂಬ&rsquo; ಅವಕಾಶ!&lt;/strong&gt;&lt;/p&gt;&lt;p&gt;&lsquo;ವಸುದೇವ ಕುಟುಂಬ&rsquo; ಧಾರಾವಾಹಿಗೆ ತಾವು ಎಂಟ್ರಿ ಕೊಟ್ಟಿದ್ದು ಸಂಪೂರ್ಣ ಅನಿರೀಕ್ಷಿತವಾಗಿತ್ತು ಎಂದು ಭಾವನಾ ಹೇಳಿದ್ದಾರೆ. ಎಲ್ಲವೂ ತುಂಬಾ ಅಚಾನಕ್ ಆಗಿ ನಡೆಯಿತು. ಪ್ರೊಮೋ ಶೂಟ್&zwnj;ಗೆ ಕೇವಲ ಒಂದು ವಾರ ಮೊದಲು ನನಗೆ ಈ ಧಾರಾವಾಹಿಯ ಆಫರ್ ಬಂದಿತ್ತು. ಆಗ ನಾನು ಈಗಾಗಲೇ ತೆಲುಗಿನ ಒಂದು ಸೀರಿಯಲ್&zwnj;ಗೆ ಕಮಿಟ್ ಆಗಿದ್ದೆ. ಹೀಗಾಗಿ ಇಷ್ಟು ಬೇಗ ಮತ್ತೊಂದು ಪ್ರಾಜೆಕ್ಟ್ ಮಾಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಕನ್ನಡ ಚಿತ್ರರಂಗ ಅಥವಾ ಕಿರುತೆರೆಯಲ್ಲಿ ತಮ್ಮ ಪಯಣ ಆರಂಭಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಹೀಗಾಗಿ ಈ ಅವಕಾಶ ಬಂದಾಗ ಕೈಬಿಡಲು ಮನಸ್ಸಾಗಲಿಲ್ಲ ಎಂದು ಭಾವನಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಕಥೆಯೇ ನನ್ನನ್ನು ಸ್ವಾತಿಯತ್ತ ಸೆಳೆಯಿತು&lt;/strong&gt;&lt;/p&gt;&lt;p&gt;&lsquo;ವಸುದೇವ ಕುಟುಂಬ&rsquo; ಕಥೆಯಲ್ಲಿ ಕುಟುಂಬದ ನಡುವಿನ ಭಾವನಾತ್ಮಕ ಸಂಬಂಧಗಳು ಮತ್ತು ಮನುಷ್ಯರ ನಡುವಿನ ಬಾಂಧವ್ಯವನ್ನು ತೋರಿಸಿರುವ ರೀತಿ ತಮ್ಮನ್ನು ಹೆಚ್ಚು ಆಕರ್ಷಿಸಿತು ಎಂದು ನಟಿ ಹೇಳಿದ್ದಾರೆ. ಕುಟುಂಬದ ಭಾವನಾತ್ಮಕ ಬಂಧ ಹಾಗೂ ಸಂಬಂಧಗಳನ್ನು ತೋರಿಸಿರುವ ರೀತಿ ನನಗೆ ತುಂಬಾ ಇಷ್ಟವಾಯಿತು. ಇದು ಹೃದಯಸ್ಪರ್ಶಿ ಕಥೆ. ಕಥೆಯನ್ನು ಕೇಳಿದ ಕೂಡಲೇ ನನಗೆ ಅದರೊಂದಿಗೆ ಕನೆಕ್ಟ್ ಆಯಿತು ಎಂದು ಭಾವನಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ತಂದೆಯನ್ನು ಕಳೆದುಕೊಂಡ ಬಳಿಕ ಕುಟುಂಬದ ಜವಾಬ್ದಾರಿ ಹೊರುವ ಸ್ವಾತಿ&lt;/strong&gt;&lt;/p&gt;&lt;p&gt;ತಮ್ಮ ಸ್ವಾತಿ ಪಾತ್ರದ ಬಗ್ಗೆ ಮಾತನಾಡಿದ ಭಾವನಾ, ತಂದೆಯ ನಿಧನದ ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರುವ ಹುಡುಗಿಯೇ ಸ್ವಾತಿ ಎಂದು ವಿವರಿಸಿದ್ದಾರೆ. ಸ್ವಾತಿ ಯಾವಾಗಲೂ ತನ್ನ ಕುಟುಂಬವನ್ನೇ ತನಗಿಂತ ಮುಂದೆ ಇಡುತ್ತಾಳೆ. ತಂದೆಯನ್ನು ಕಳೆದುಕೊಂಡ ಬಳಿಕ ಮನೆಯ ಆಧಾರಸ್ತಂಭವಾಗಿ ನಿಂತು, ಪ್ರತಿಯೊಂದು ಜವಾಬ್ದಾರಿಯನ್ನೂ ಧೈರ್ಯ ಮತ್ತು ಗೌರವದಿಂದ ನಿಭಾಯಿಸುತ್ತಾಳೆ. ಅವಳು ಪ್ರಾಮಾಣಿಕಳು, ನ್ಯಾಯದ ಪರ ನಿಲ್ಲುವವಳು ಹಾಗೂ ತನ್ನ ಸಂಬಂಧಗಳಿಗೆ ತುಂಬಾ ಬೆಲೆ ಕೊಡುತ್ತಾಳೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸ್ವಾತಿಯಲ್ಲಿ ನನ್ನನ್ನೇ ನೋಡಿಕೊಳ್ಳುತ್ತೇನೆ&rsquo;&lt;/strong&gt;&lt;/p&gt;&lt;p&gt;ಸ್ವಾತಿ ಪಾತ್ರದೊಂದಿಗೆ ತಮ್ಮ ವೈಯಕ್ತಿಕ ಸ್ವಭಾವದಲ್ಲೂ ಹಲವು ಸಾಮ್ಯತೆಗಳಿವೆ ಎಂದು ಭಾವನಾ ಹೇಳಿದ್ದಾರೆ. ಸ್ವಾತಿಯೊಂದಿಗೆ ನಾನು ಹಲವು ರೀತಿಯಲ್ಲಿ ಕನೆಕ್ಟ್ ಆಗುತ್ತೇನೆ. ಅವಳಂತೆ ನಾನೂ ಕುಟುಂಬದ ಪರವಾಗಿ ನಿಲ್ಲಬೇಕು ಮತ್ತು ಸರಿಯಾದದ್ದನ್ನೇ ಮಾಡಬೇಕು ಎಂದು ನಂಬುವವಳು. ಅದಕ್ಕಾಗಿಯೇ ಈ ಪಾತ್ರದೊಂದಿಗೆ ಆರಂಭದಿಂದಲೇ ಭಾವನಾತ್ಮಕವಾಗಿ ಕನೆಕ್ಟ್ ಆಗಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅನುಭವಿಗಳ ನಡುವೆ ನಾನಿನ್ನೂ ಒಂದು ಮೊಗ್ಗು!&rsquo;&lt;/strong&gt;&lt;/p&gt;&lt;p&gt;ಧಾರಾವಾಹಿಯಲ್ಲಿ ಸಾಕಷ್ಟು ಅನುಭವಿ ಕಲಾವಿದರೊಂದಿಗೆ ನಟಿಸುತ್ತಿರುವುದಕ್ಕೆ ಭಾವನಾ ಖುಷಿ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಅನುಭವಿ ಕಲಾವಿದರ ನಡುವೆ ನಾನು ಇನ್ನೂ ಒಂದು ಮೊಗ್ಗಿನಂತಿದ್ದೇನೆ. ಪ್ರತಿದಿನ ಸೆಟ್&zwnj;ನಲ್ಲಿ ನನಗೆ ಹೊಸದನ್ನು ಕಲಿಯುವ ಅವಕಾಶ ಸಿಗುತ್ತಿದೆ. ಅವರ ಅಭಿನಯವನ್ನು ನೋಡುವುದು, ಅವರೊಂದಿಗೆ ಮಾತನಾಡುವುದು ನನ್ನ ನಟನೆಯನ್ನೂ ಬೆಳೆಸುತ್ತಿದೆ. ಇಂತಹ ಪ್ರತಿಭಾವಂತ ತಂಡದ ಭಾಗವಾಗಿರುವುದಕ್ಕೆ ನಿಜಕ್ಕೂ ಅದೃಷ್ಟಶಾಲಿ ಎನಿಸುತ್ತದೆ ಎಂದು ನಟಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಕನ್ನಡ-ತೆಲುಗು ಧಾರಾವಾಹಿ.. ಶೆಡ್ಯೂಲ್ ಸಖತ್ ಟೈಟ್!&lt;/strong&gt;&lt;/p&gt;&lt;p&gt;ಸದ್ಯ ಒಂದೇ ಸಮಯದಲ್ಲಿ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಭಾವನಾ, ಎರಡು ಶೋಗಳನ್ನು ಬ್ಯಾಲೆನ್ಸ್ ಮಾಡುವುದು ಸುಲಭದ ಕೆಲಸವಲ್ಲ ಎಂದು ಒಪ್ಪಿಕೊಂಡಿದ್ದಾರೆ. ನನಗೆ ಇದು ಸಂಪೂರ್ಣ ಹೊಸ ಅನುಭವ. ಎರಡೂ ಧಾರಾವಾಹಿಗಳಿಗಾಗಿ ನಿರಂತರವಾಗಿ ಪ್ರಯಾಣ ಮಾಡುತ್ತಾ ಶೂಟಿಂಗ್&zwnj;ನಲ್ಲಿ ಬ್ಯುಸಿಯಾಗಿರುವುದರಿಂದ ವೈಯಕ್ತಿಕ ಸಮಯವೇ ಸಿಗುತ್ತಿಲ್ಲ. ಶೆಡ್ಯೂಲ್ ತುಂಬಾ ಹೆಕ್ಟಿಕ್ ಆಗಿದೆ. ಆದರೆ ನಾನು ನಿಜವಾಗಿಯೂ ಪ್ರೀತಿಸುವ ಕೆಲಸವನ್ನೇ ಮಾಡುತ್ತಿದ್ದೇನೆ ಎಂದು ನನಗೆ ನಾನೇ ನೆನಪಿಸಿಕೊಳ್ಳುತ್ತೇನೆ. ಅದೇ ಕಾರಣಕ್ಕೆ ಈ ಎಲ್ಲಾ ಕಷ್ಟವೂ ಸಾರ್ಥಕ ಎನಿಸುತ್ತದೆ ಎಂದು ಭಾವನಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೈಕ್ರೋಬಯಾಲಜಿ ಓದಿ ಕ್ಯಾನ್ಸರ್ ರಿಸರ್ಚ್&zwnj;ನಲ್ಲಿ ಕೆಲಸ!&lt;/strong&gt;&lt;/p&gt;&lt;p&gt;ಭಾವನಾ ಅವರ ನಟನಾ ಪಯಣದ ಮತ್ತೊಂದು ವಿಶೇಷತೆ ಎಂದರೆ, ಅವರು ನೇರವಾಗಿ ಮನರಂಜನಾ ಕ್ಷೇತ್ರಕ್ಕೆ ಬಂದವರಲ್ಲ. ನಟಿಯಾಗುವ ಮುನ್ನ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ನಾನು ಮೈಕ್ರೋಬಯಾಲಜಿಯಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ಕ್ಯಾನ್ಸರ್ ಸಂಶೋಧನೆಗೆ ಸಂಬಂಧಿಸಿದ ಕ್ಲಿನಿಕಲ್ ರಿಸರ್ಚ್&zwnj;ನಲ್ಲೂ ಕೆಲಸ ಮಾಡಿದ್ದೇನೆ. ನಟನೆ ನನ್ನ ಮೂಲ ಪ್ಲಾನ್ ಆಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಬಾಲ್ಯದಲ್ಲೇ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರಿಂದ ಕ್ಯಾಮೆರಾ ಅವರಿಗೆ ಹೊಸದೇನಲ್ಲ. ಆದರೆ ನಂತರ ಸಾಮಾಜಿಕ ಜಾಲತಾಣದ ಮೂಲಕ ಸಿಕ್ಕ ಆಡಿಷನ್ ಅವಕಾಶವೇ ಅವರ ಜೀವನದ ದಿಕ್ಕನ್ನೇ ಬದಲಿಸಿತು.&lt;/p&gt;&lt;p&gt;&lt;strong&gt;&lsquo;ನನ್ನನ್ನು ನಂಬಿದ್ದು ಅಪ್ಪ&rsquo;&lt;/strong&gt;&lt;/p&gt;&lt;p&gt;ತಮ್ಮ ನಟನಾ ಪಯಣದಲ್ಲಿ ತಂದೆಯ ಪಾತ್ರ ಬಹಳ ದೊಡ್ಡದು ಎಂದು ಭಾವನಾ ಹೇಳಿದ್ದಾರೆ. ಬಾಲ್ಯದಲ್ಲಿ ಕೆಲವು ಶೋಗಳನ್ನು ಮಾಡಿದ್ದರಿಂದ ಕ್ಯಾಮೆರಾ ನನಗೆ ಹೊಸದಾಗಿರಲಿಲ್ಲ. ನಂತರ ಸೋಷಿಯಲ್ ಮೀಡಿಯಾ ಮೂಲಕ ಆಡಿಷನ್ ಅವಕಾಶವೊಂದು ಸಿಕ್ಕಾಗ, ಅದನ್ನು ಪ್ರಯತ್ನಿಸುವಂತೆ ನನ್ನ ತಂದೆ ಪ್ರೋತ್ಸಾಹಿಸಿದರು. ನನ್ನನ್ನು ತೆರೆ ಮೇಲೆ ನೋಡಬೇಕು ಎಂಬುದು ಅವರ ಕನಸಾಗಿತ್ತು. ಅವರು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ನಾನು ನಂಬಿ ಆಡಿಷನ್&zwnj;ಗೆ ಹೋದೆ. ಇಂದು ನಟನೆ ನನ್ನ ವೃತ್ತಿಯಾಗಿದೆ ಎಂದು ಭಾವನಾ ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನದೇ ಒಂದು ಗುರುತು ಮೂಡಿಸಬೇಕು&rsquo;&lt;/strong&gt;&lt;/h2&gt;&lt;p&gt;ಮುಂದಿನ ದಿನಗಳಲ್ಲಿ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ವಿಭಿನ್ನ ಗುರುತು ಮೂಡಿಸುವುದು ಭಾವನಾ ಅವರ ಗುರಿಯಾಗಿದೆ. ನನ್ನ ಪಯಣ ಈಗಷ್ಟೇ ಆರಂಭವಾಗಿದೆ. ಕಲಿಯುವುದು ಇನ್ನೂ ಸಾಕಷ್ಟಿದೆ. ಅರ್ಥಪೂರ್ಣ ಪಾತ್ರಗಳು ಮತ್ತು ಉತ್ತಮ ಅಭಿನಯದ ಮೂಲಕ ಇಂಡಸ್ಟ್ರಿಯಲ್ಲಿ ನನ್ನದೇ ಆದ ಒಂದು ಸ್ಥಾನವನ್ನು ನಿರ್ಮಿಸಿಕೊಳ್ಳಬೇಕು. ಪ್ರೇಕ್ಷಕರ ಪ್ರೀತಿ ಮತ್ತು ನಂಬಿಕೆಯನ್ನು ಗಳಿಸಬೇಕು. ನಾನು ನಿರ್ವಹಿಸುವ ಪಾತ್ರಗಳ ಮೂಲಕ ಜನರು ನನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದೇ ನನ್ನ ದೊಡ್ಡ ಆಸೆ ಎಂದು ಭಾವನಾ ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮೈಕ್ರೋಬಯಾಲಜಿಯಿಂದ ಆರಂಭವಾಗಿ ಕ್ಲಿನಿಕಲ್ ರಿಸರ್ಚ್&zwnj;ವರೆಗೆ ಸಾಗಿದ್ದ ಭಾವನಾ ಅವರ ಬದುಕು, ಅಲ್ಲಿಂದ ಕನ್ನಡ ಮತ್ತು ತೆಲುಗು ಕಿರುತೆರೆಯತ್ತ ತಿರುಗಿದೆ. ಇಂದು ಎರಡು ಭಾಷೆಗಳ ಧಾರಾವಾಹಿಗಳನ್ನು ಬ್ಯಾಲೆನ್ಸ್ ಮಾಡುತ್ತಾ, &lsquo;ಸ್ವಾತಿ&rsquo; ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಳ್ಳುತ್ತಿರುವುದು ಅವರ ವಿಭಿನ್ನ ಪಯಣಕ್ಕೆ ಮತ್ತೊಂದು ಅಧ್ಯಾಯ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/vasudeva-kutumba-actress-bhavana-patil-opens-up-on-her-acting-journey-balancing-kannada-and-telugu-tv-gvd/articleshow-bk6v0yt"/>
        </item>
        <item>
            <title><![CDATA[Exclusive: ಸುಂದರ್‌ ರಾಜ್‌ 75ಕ್ಕೆ 250: ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ]]></title>
            <link>https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</link>
            <guid isPermaLink="true">https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</guid>
            <pubDate>Fri, 14 Aug 2026 16:35:40 +0530</pubDate>
            <description><![CDATA[&lt;p&gt;ಸುಂದರ್&zwnj; ರಾಜ್&zwnj; ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್&zwnj; ಭಾರದ್ವಾಜ್&zwnj; ನಿರ್ದೇಶನದ, ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ಕಥೆ ಆಧರಿಸಿದ &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್&zwnj; ರಾಜ್&zwnj; ನಟನೆಯ 250ನೇ ಸಿನಿಮಾ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzz5cvm8r84dntxtvmmqkbp,imgname-jjb-1786705523572.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;- ನಿಮಗೀಗ 75 ವರ್ಷ. ಚಾರ್ಜ್&zwnj;ಶೀಟ್&zwnj; ನಿಮ್ಮ 250ನೇ ಸಿನಿಮಾ. ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಂಡರೆ?&lt;/strong&gt;&lt;/p&gt;&lt;p&gt;ಖುಷಿಯೇ ಇದೆ. ಬೇರೆ ಯಾವುದೇ ರಂಗದಲ್ಲಿ 60ಕ್ಕೆ ನಿವೃತ್ತಿ ಅಂತಿರುತ್ತೆ. ಭಾರತೀಯ ಚಿತ್ರರಂಗದಲ್ಲಿ ಕಲಾವಿದರಿಗೆ ವಯಸ್ಸಿನ ಮಿತಿಯೇ ಇಲ್ಲ. ಸೆಲ್ಯುಲಾಯ್ಡ್&zwnj;ನಿಂದ ಡಿಜಿಟಲ್&zwnj;, ಎಐ ವರೆಗಿನ ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಇಷ್ಟು ಕಾಲ ಬದುಕಿ ಉಳಿಯಲು ಸಾಧ್ಯವಾದದ್ದೂ ದೈವೀ ಕೃಪೆ. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ &lsquo;ಕಾಡು&rsquo;, &lsquo;ಚೋಮನ ದುಡಿ&rsquo;, &lsquo;ತಬ್ಬಲಿಯು ನೀನಾದೆ ಮಗನೇ&rsquo;, &lsquo;ಒಂದಾನೊಂದು ಕಾಲದಲ್ಲಿ&rsquo;, &lsquo;ಅನ್ವೇಷಣೆ&rsquo;ವರೆಗೆ ನನಗೆ ಬಂದಿದ್ದೆಲ್ಲ ಕ್ಲಾಸಿಕ್&zwnj; ಚಿತ್ರಗಳು. ಆಗ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರಗಳಿದ್ದವು. ಬರುಬರುತ್ತ ಸಿನಿಮಾ ಕಮರ್ಷಿಯಲ್&zwnj; ಆಗಿ ಬೇರೆ ಆಯಾಮ ಪಡೆಯಿತು. ಮನರಂಜನೆಯೇ ಮುಖ್ಯವಾಯಿತು. ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ಒಂದೊಳ್ಳೆ ಅನುಭವ.&lt;/p&gt;&lt;p&gt;&lt;strong&gt;- ನಿಮ್ಮ 250ನೇ ಸಿನಿಮಾ ಚಾರ್ಜ್&zwnj;ಶೀಟ್&zwnj; ಬಗ್ಗೆ ಹೇಳಿ.&lt;/strong&gt;&lt;/p&gt;&lt;p&gt;ಇದು ನನಗೆ ಬಯಸದೇ ಬಂದ ಭಾಗ್ಯ. ನಮ್ಮ ಏರಿಯಾದಲ್ಲೇ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಮಗಳು ಗಗನಸಖಿ. ಬೆಂಗಳೂರಿಂದ ಸಿಂಗಾಪೂರ್&zwnj;ಗೆ ಹೋಗಿ ಬರುವಾಗ ಕಾಣೆಯಾಗುತ್ತಾಳೆ. ಅವಳ ತಂದೆ ಇಂಜಿನಿಯರ್&zwnj;. ಅವರು ಗಾಬರಿಬಿದ್ದು ಕಂಪ್ಲೇಟ್&zwnj; ಕೊಟ್ಟರೆ ಪೊಲೀಸ್&zwnj; ಸ್ಟೇಶನ್&zwnj;ನಲ್ಲಿ ಉಡಾಫೆಯ ಉತ್ತರ ಬರುತ್ತದೆ. ಆದರೆ ಇನ್ನೊಬ್ಬ ಪೊಲೀಸ್&zwnj; ಅಧಿಕಾರಿ ಪರಿಸ್ಥಿತಿ ಅರಿತು ಈ ಕೇಸ್&zwnj; ಹಿಂದೆ ಬೀಳುತ್ತಾನೆ. ಅಲ್ಲಿಗೆ ಈ ಸಿನಿಮಾ ಪೊಲೀಸ್&zwnj; ಡಿಪಾರ್ಟ್&zwnj;ಮೆಂಟ್&zwnj;ನ ವಾಸ್ತವ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ. ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ತನ್ನ ಅನುಭವದ ಘಟನೆಗೆ ಕಥೆಯ ರೂಪ ಕೊಟ್ಟಿದ್ದಾರೆ.&lt;/p&gt;&lt;p&gt;&lt;strong&gt;- ನಿಮಗೆ ಈ ಪಾತ್ರ ಹೇಗೆ ಕನೆಕ್ಟ್&zwnj; ಆಯ್ತು?&lt;/strong&gt;&lt;/p&gt;&lt;p&gt;ಚಿತ್ರತಂಡ ಈ ಪಾತ್ರಕ್ಕೆ ನನ್ನ ಆರಿಸಿದ್ದಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಆದರೆ ಕತೆಯನ್ನು ನನಗೆ ಹೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಬಿಟ್ಟೆ. ನನ್ನ ಒಳಗೂ ಒಬ್ಬ ಅಪ್ಪ ಇದ್ದಾನೆ. ಮಗಳನ್ನು ಬಹಳ ಪ್ರೀತಿಸುವ ಅಪ್ಪ. ಹೀಗಾಗಿ ತಂದೆಯ ಪಾತ್ರಕ್ಕೆ ಕನೆಕ್ಟ್&zwnj; ಆಗುವುದು ಸುಲಭವಾಯಿತು. ರಾಮಣ್ಣ ಅಂತ ನನ್ನ ಪಾತ್ರದ ಹೆಸರು.&lt;/p&gt;&lt;p&gt;&lt;strong&gt;- ವೆಂಕಟ್&zwnj; ಭಾರದ್ವಾಜ್&zwnj; ಅವರ ಕೆಲಸದ ಬಗ್ಗೆ?&lt;/strong&gt;&lt;/p&gt;&lt;p&gt;ಬದುಕಿನಲ್ಲಿ ನಾನು ಮೊದಲ ಬಾರಿ ಶೂಟಿಂಗ್&zwnj; ನೋಡಿದ ಸಿನಿಮಾ ಸಿ.ವಿ ಶಿವಶಂಕರ್&zwnj; ನಿರ್ದೇಶನದ &lsquo;ಮನೆ ಕಟ್ಟಿ ನೋಡು&rsquo;. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂಬ ಹಾಡು ನಮ್ಮೆಲ್ಲ ಕನ್ನಡಿಗರ ಮನಸ್ಸಿನ ಮಾತಾಗಿತ್ತು. &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾದಲ್ಲಿ ವೆಂಕಟ್&zwnj; ಅವರ ಕೆಲಸ, ಅವರು ಕಥೆಯನ್ನು ನಿರೂಪಿಸುವ ರೀತಿ ನೋಡಿ ಸಿ.ವಿ. ಶಿವಶಂಕರ್&zwnj; ನೆನಪು ಬಂತು. ಚಿತ್ರದಲ್ಲಿ ಯುವ ಕಲಾವಿದರು ಎನರ್ಜಿಟಿಕ್&zwnj; ಆಗಿ ನಟಿಸಿದ್ದಾರೆ. ಎಸ್&zwnj;.ಕೆ ಉಮೇಶ್&zwnj; ಅವರು ಉತ್ತಮ ಸಾಥ್&zwnj; ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಫುಲ್&zwnj; ಮೀಲ್ಸ್&zwnj; ಸಿಕ್ಕಿದೆ.&lt;/p&gt;&lt;p&gt;&lt;strong&gt;- ಸ್ವಾತಂತ್ರ್ಯೋತ್ಸವದ ಸಂದರ್ಭ ಸಿನಿಮಾ ಬರ್ತಿದೆ. ಸ್ಪರ್ಧೆಯೊಡ್ಡುವಂಥಾ ಬೇರೆ ಚಿತ್ರಗಳಿಲ್ಲ.&lt;/strong&gt;&lt;/p&gt;&lt;p&gt;ಅದು ನಮ್ಮ ಸುದೈವ. ಇದು ಥಿಯೇಟರ್&zwnj;ನಲ್ಲೇ ನೋಡುವಂಥಾ ಕಥಾನಕ. ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್&zwnj; ಶೋ ಕೊಡುವ ಬಗ್ಗೆ ನನಗೆ ಬಹಳ ನೋವಿದೆ. ಕೇಳಿದರೆ ಸರ್&zwnj; ನಮ್ಗೂ ಥಿಯೇಟರ್&zwnj; ನಡೆಸಬೇಕಲ್ವಾ ಅಂತಾರೆ. ಜನ ಬರುವ ಸಂಜೆ ಶೋಗಳಿಗೆ ಅನ್ಯ ಭಾಷೆ ಸಿನಿಮಾಗಳನ್ನು ಹಾಕಿರುತ್ತಾರೆ. ಇದು 60ರ ದಶಕದಿಂದಲೇ ಇರುವ ಸಮಸ್ಯೆ. ಇರಲಿ, ನಮ್ಮ ಸಿನಿಮಾಕ್ಕೆ ಸ್ವಾತಂತ್ರ್ಯೋತ್ಸವಕ್ಕಿಂತ ಒಂದು ದಿನ ಮೊದಲೇ ಸ್ವಾತಂತ್ರ್ಯ ಸಿಗುತ್ತಿದೆ. ಈ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಿದೆ.&lt;/p&gt;&lt;p&gt;&lt;strong&gt;ಕನ್ನಡಪ್ರಭದಲ್ಲಿ 6 ತಿಂಗಳು ಕೆಲಸ ಮಾಡಿದ್ದೀನಿ&lt;/strong&gt;&lt;/p&gt;&lt;p&gt;&lsquo;ಒಂಟಿಧ್ವನಿ&rsquo; ಅನ್ನುವ ಸಿನಿಮಾಕ್ಕೆ ಆರಂಭದಲ್ಲಿ ನಾನು ನಾಯಕನಾಗುವುದು ಅಂತಿತ್ತು. ಅದು ಪತ್ರಕರ್ತನ ಪಾತ್ರ. ಆ ಪಾತ್ರದ ಆಳ ಅರಿಯಬೇಕು ಅಂತ ಸುಮಾರು 6 ತಿಂಗಳ ಕಾಲ ಕನ್ನಡಪ್ರಭದಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದೆ. ಆದರೆ ಮುಂದೆ ಒಂಟಿಧ್ವನಿ ಸಿನಿಮಾದ ಪತ್ರಕರ್ತನ ಪಾತ್ರದಲ್ಲಿ ಅಂಬರೀಶ್&zwnj; ನಟಿಸಿದರು. ನಾನು ಮತ್ತೊಂದು ಪಾತ್ರದಲ್ಲಿ ನಟಿಸಿದೆ. ಆದರೆ ಕನ್ನಡಪ್ರಭದಲ್ಲಿ ಕೆಲಸ ಮಾಡಿದ ಅನುಭವ ಸದಾ ನೆನಪಿನಲ್ಲಿ ಉಳಿಯುವಂಥಾದ್ದು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde"/>
        </item>
        <item>
            <title><![CDATA[ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?]]></title>
            <link>https://kannada.asianetnews.com/celebrity-interviews/sandalwood-actor-vinay-rajkumar-and-monisha-open-up-about-vijay-kumars-city-lights-movie-gvd/articleshow-cneph82</link>
            <guid isPermaLink="true">https://kannada.asianetnews.com/celebrity-interviews/sandalwood-actor-vinay-rajkumar-and-monisha-open-up-about-vijay-kumars-city-lights-movie-gvd/articleshow-cneph82</guid>
            <pubDate>Thu, 17 Sep 2026 18:12:54 +0530</pubDate>
            <description><![CDATA[&lt;p&gt;ವಿನಯ್ ರಾಜ್&zwnj;ಕುಮಾರ್ ಮತ್ತು ಮೋನಿಷಾ ವಿಜಯ್ ಕುಮಾರ್ ಅಭಿನಯದ &lsquo;ಸಿಟಿ ಲೈಟ್ಸ್&rsquo; ಸಿನಿಮಾ ಬೆಂಗಳೂರಿನ ಮತ್ತೊಂದು ಮುಖವನ್ನು ತೆರೆದಿಡಲಿದೆ. ಸಿನಿಮಾ ಕುರಿತು ಇಬ್ಬರೂ ಹಂಚಿಕೊಂಡ ಅನುಭವ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2qp5r1eqgzyryf7a27fmdth,imgname-nknk-1789648887854.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದ ಮತ್ತೊಂದು ಮುಖವನ್ನು ತೆರೆದಿಡುವ &lsquo;ಸಿಟಿ ಲೈಟ್ಸ್&rsquo; ಸಿನಿಮಾ ಕುರಿತು ವಿನಯ್ ರಾಜ್&zwnj;ಕುಮಾರ್ ಮತ್ತು ಚೊಚ್ಚಲ ನಟಿ ಮೋನಿಷಾ ವಿಜಯ್ ಕುಮಾರ್ ಜೊತೆ ಮಾತುಕತೆ. ಪಾತ್ರಕ್ಕಾಗಿ ತಮ್ಮೊಳಗಿನ ಪೂರ್ವಗ್ರಹಗಳನ್ನು ಬದಿಗಿಟ್ಟು, ಮೆಜೆಸ್ಟಿಕ್ ಹಾಗೂ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣುವ ನೈಜ ಬದುಕಿನಿಂದ ಭಾವನೆಗಳನ್ನು ಗ್ರಹಿಸಿಕೊಂಡ ಅನುಭವವನ್ನು ಇಬ್ಬರೂ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ನಿರ್ದೇಶಕ ವಿಜಯ್ ಕುಮಾರ್ ಅವರ &lsquo;ಸಿಟಿ ಲೈಟ್ಸ್&rsquo; ಸಿನಿಮಾ ವಿನಯ್ ರಾಜ್&zwnj;ಕುಮಾರ್ ಮತ್ತು ಚೊಚ್ಚಲ ನಟಿ ಮೋನಿಷಾ ವಿಜಯ್ ಕುಮಾರ್ ಅವರಿಗೆ ಸುಲಭದ ಪ್ರಯಾಣವಾಗಿರಲಿಲ್ಲ. ಬೆಂಗಳೂರಿನ ಹೊಳೆಯುವ ಮುಖಕ್ಕಿಂತ ನಗರದ ಮತ್ತೊಂದು, ಹೆಚ್ಚು ಕಠಿಣವಾದ ವಾಸ್ತವವನ್ನು ಸಿನಿಮಾ ತೆರೆದಿಡುತ್ತದೆ. ಅಲಂಕೃತ ಸೆಟ್&zwnj;ಗಳ ಬದಲು, ಸಾಮಾನ್ಯವಾಗಿ ಯಾರ ಕಣ್ಣಿಗೂ ಬೀಳದ ನಗರದ ಮೂಲೆ-ಮೂಲೆಗಳ ನೈಜ ಬದುಕನ್ನು ಚಿತ್ರ ಹಿಡಿದಿಡುತ್ತದೆ.&lt;/p&gt;&lt;p&gt;ಈ ಸಿನಿಮಾ ಇಬ್ಬರೂ ನಟರಿಗೆ ತಮ್ಮ ಸಹಜ ಅಭಿನಯ, ಸುತ್ತಲಿನ ಬದುಕನ್ನು ಗಮನಿಸುವ ಗುಣ ಮತ್ತು ಕೃತಕತೆಯನ್ನು ಬದಿಗಿಟ್ಟು ಪಾತ್ರದಲ್ಲಿ ಬೆರೆಯುವ ಸಾಮರ್ಥ್ಯದ ಪರೀಕ್ಷೆಯಾಯಿತು. ವಿನಯ್ ರಾಜ್&zwnj;ಕುಮಾರ್ ಅವರಂತೂ ಈ ಸಿನಿಮಾದ ಮೂಲಕ ಬೆಂಗಳೂರನ್ನು ಸಂಪೂರ್ಣ ಹೊಸ ದೃಷ್ಟಿಕೋನದಲ್ಲಿ ನೋಡುವುದನ್ನು ಕಲಿತಿದ್ದಾರಂತೆ.&lt;/p&gt;&lt;p&gt;ವಿಜಯ್ ಸರ್ ಜೀವನದಲ್ಲಿ ಸಾಕಷ್ಟು ವಿಷಯಗಳನ್ನು ನೋಡಿದ್ದಾರೆ. ಅವರು ತಮ್ಮ ಜೀವನದಲ್ಲಿ ನಡೆದ ಹಲವು ನೈಜ ಘಟನೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ತೀವ್ರ ಪರಿಸ್ಥಿತಿಗಳಲ್ಲಿ ಜನರು ನಿಜವಾಗಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ವಿವರಿಸಿದರು. ನಿಜ ಹೇಳಬೇಕೆಂದರೆ, ಅವರ ಸ್ಕ್ರಿಪ್ಟ್&zwnj;ನಲ್ಲೇ ಎಲ್ಲವನ್ನೂ ಅಷ್ಟು ಚೆನ್ನಾಗಿ ಬರೆದಿದ್ದರು. ನೀವು ಒಂದು ದೃಶ್ಯವನ್ನು ಓದಿದ ತಕ್ಷಣ ಅದಕ್ಕೆ ಬೇಕಾದ ಉತ್ತರಗಳು ಸಿಗುತ್ತವೆ ಎಂದು ವಿನಯ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಭಾವನೆಗಳು ಎಲ್ಲರಿಗೂ ಒಂದೇ&rsquo;&lt;/strong&gt;&lt;/p&gt;&lt;p&gt;ಸಾಮಾನ್ಯ ವ್ಯಕ್ತಿಯ ಪಾತ್ರಕ್ಕೆ ಹೊಂದಿಕೊಳ್ಳುವುದು ಕೇವಲ ದೈಹಿಕ ರೂಪ ಬದಲಿಸಿಕೊಳ್ಳುವುದಲ್ಲ. ಬದಲಿಗೆ ಎಲ್ಲರಲ್ಲೂ ಇರುವ ಮೂಲಭೂತ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ವಿನಯ್ ಹೇಳುತ್ತಾರೆ.&lt;/p&gt;&lt;p&gt;ಹೊರನೋಟದಲ್ಲಿ ನಾನು ಹೇಗೇ ಕಾಣಿಸಿಕೊಳ್ಳಬಹುದು. ಆದರೆ ಒಳಗಿರುವ ಮಾನವೀಯ ಭಾವನೆಗಳು ಎಲ್ಲರಿಗೂ ಒಂದೇ. ಒಬ್ಬ ವ್ಯಕ್ತಿ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಅಥವಾ ದುಃಖವನ್ನು ಅನುಭವಿಸುವ ರೀತಿ ಬದಲಾಗಬಹುದು. ನನ್ನ ನೋವು ಇನ್ನೊಬ್ಬರ ನೋವಿಗಿಂತ ವಿಭಿನ್ನವಾಗಿ ಕಾಣಿಸಬಹುದು. ಆದರೆ ನೋವು ಅನ್ನೋದು ನೋವೇ. ಆ ಮೂಲ ಸತ್ಯವನ್ನು ನೀವು ಅರ್ಥಮಾಡಿಕೊಂಡಾಗ ಪ್ರೇಕ್ಷಕರು ಸಹಜವಾಗಿಯೇ ಪಾತ್ರದೊಂದಿಗೆ ಕನೆಕ್ಟ್ ಆಗುತ್ತಾರೆ ಎಂದು ವಿನಯ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ತಂದೆಯ ಸಿನಿಮಾದಲ್ಲೇ ಮೋನಿಷಾ ಎಂಟ್ರಿ&lt;/strong&gt;&lt;/p&gt;&lt;p&gt;ನಿರ್ದೇಶಕ ವಿಜಯ್ ಕುಮಾರ್ ಅವರ ಪುತ್ರಿ ಮೋನಿಷಾ ವಿಜಯ್ ಕುಮಾರ್ ಇದೇ ಸಿನಿಮಾದ ಮೂಲಕ ನಾಯಕಿಯಾಗಿ ಸ್ಯಾಂಡಲ್&zwnj;ವುಡ್&zwnj;ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆದರೆ ತಂದೆಯ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಯಾವುದೇ ಸುಲಭ ದಾರಿ ಇರಲಿಲ್ಲ ಎನ್ನುತ್ತಾರೆ ಮೋನಿಷಾ.&lt;/p&gt;&lt;p&gt;ನಾನು ಅವರ ಮಗಳು ಎಂಬ ಕಾರಣಕ್ಕೆ ಅವರು ನನ್ನನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ಆದರೆ ಈ ಪಾತ್ರವನ್ನು ನಾನು ನಿಭಾಯಿಸಬಲ್ಲೆ ಎಂಬ ನಂಬಿಕೆಯೂ ಅವರಿಗಿತ್ತು. ಅದಕ್ಕಿಂತ ಮುಖ್ಯವಾಗಿ, ಅವರು ಮೊದಲ ದಿನವೇ ನನಗೆ ಒಂದು ವಿಷಯ ಸ್ಪಷ್ಟವಾಗಿ ಹೇಳಿದ್ದರು. &lsquo;ನೀನು ಸಂಪೂರ್ಣವಾಗಿ ನಿನ್ನನ್ನು ಈ ಪಾತ್ರಕ್ಕೆ ಅರ್ಪಿಸಿಕೊಳ್ಳಬೇಕು. ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಈ ಪಾತ್ರವನ್ನು ಮಾಡಲು ಸಾಧ್ಯ&rsquo; ಎಂದು ಹೇಳಿದರು. ಅವರ ಪ್ರೀತಿ ಮತ್ತು ನಂಬಿಕೆಯೊಂದಿಗೆ ನನಗೆ ಈ ಪಾತ್ರ ನೀಡಿದರು ಎಂದು ಮೋನಿಷಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೆಜೆಸ್ಟಿಕ್&zwnj;ನಲ್ಲಿ ನೈಜ ಬದುಕನ್ನು ಕಂಡ ಮೋನಿಷಾ&lt;/strong&gt;&lt;/p&gt;&lt;p&gt;ನಗರದ ಅಂಚಿನಲ್ಲಿ ಬದುಕುವ, ಆರ್ಥಿಕವಾಗಿ ಹಿಂದುಳಿದ ಯುವತಿಯ ಪಾತ್ರವನ್ನು ನಿರ್ವಹಿಸುವುದು ಮೋನಿಷಾಗೆ ತಮ್ಮ ಕಂಫರ್ಟ್ ಝೋನ್&zwnj;ನಿಂದ ಸಾಕಷ್ಟು ಹೊರಬರುವಂತೆ ಮಾಡಿತಂತೆ. ನಾವು ಚಿಕ್ಕವರಿದ್ದಾಗಲೇ ಅಪ್ಪ ನಮಗೆ ಫ್ಯಾನ್ಸಿ ಶಾಲೆಗಳಲ್ಲಿ ಓದಿಸದೆ, ಸಾಮಾನ್ಯ ನೆರೆಹೊರೆಯ ಶಾಲೆಗಳಿಗೆ ಕಳುಹಿಸುತ್ತಿದ್ದರು. ಸಮಾಜದ ವಿವಿಧ ವರ್ಗಗಳ ಜನರ ನಡುವೆ ನಾವು ಬೆಳೆದುಬರಬೇಕು ಎಂಬುದು ಅವರ ಉದ್ದೇಶವಾಗಿತ್ತು ಎಂದು ಮೋನಿಷಾ ಹೇಳಿದ್ದಾರೆ. ಪಾತ್ರವನ್ನು ಅರ್ಥಮಾಡಿಕೊಳ್ಳಲು ಅವರು ನೈಜ ಬದುಕನ್ನು ಹತ್ತಿರದಿಂದ ಗಮನಿಸಿದ್ದಾರೆ.&lt;/p&gt;&lt;p&gt;ನಾನು ಮೆಜೆಸ್ಟಿಕ್&zwnj;ಗೆ ಹೋದಾಗ ಕೆಲವು ಹುಡುಗಿಯರು ಯಾವುದೇ ಗುರಿಯಿಲ್ಲದೆ, ಅಸಹಾಯಕ ಸ್ಥಿತಿಯಲ್ಲಿ ಅಲೆದಾಡುವುದನ್ನು ನೋಡಿದೆ. ಆಗ ಅಪ್ಪ, &lsquo;ನಿನ್ನ ಪಾತ್ರ ಬದುಕುವ ಜಗತ್ತು ಇದೇ. ನೀನು ಅವರನ್ನು ಅನುಕರಿಸುವ ಅಗತ್ಯವಿಲ್ಲ. ಅವರನ್ನು ಗಮನಿಸು, ಅವರ ವಾಸ್ತವವನ್ನು ಅರ್ಥಮಾಡಿಕೋ&rsquo; ಎಂದು ಹೇಳಿದರು. ಅದು ಪಾತ್ರವನ್ನು ಅರ್ಥಮಾಡಿಕೊಳ್ಳಲು ನನಗೆ ಬೇಕಾದ ಮೂಲಭೂತ ನೆಲೆಯನ್ನು ನೀಡಿತು ಎಂದು ಅವರು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಸೆಟ್&zwnj;ನಲ್ಲಿ ವಾದವಲ್ಲ, ಆರೋಗ್ಯಕರ ಚರ್ಚೆ&lt;/strong&gt;&lt;/p&gt;&lt;p&gt;ನಟ ಹಾಗೂ ನಿರ್ದೇಶಕರಾಗಿ ವಿಜಯ್ ಕುಮಾರ್ ಅವರೊಂದಿಗೆ ಕೆಲಸ ಮಾಡುವಾಗ ಸೆಟ್&zwnj;ನಲ್ಲಿ ಭಿನ್ನಾಭಿಪ್ರಾಯಗಳಿಗಿಂತ ಚರ್ಚೆಗಳೇ ಹೆಚ್ಚಾಗಿದ್ದವು ಎಂದು ವಿನಯ್ ಹೇಳಿದ್ದಾರೆ. ಸೆಟ್&zwnj;ನಲ್ಲಿ ನಮ್ಮ ನಡುವೆ ದೊಡ್ಡ ವಾದಗಳೇನೂ ನಡೆಯುತ್ತಿರಲಿಲ್ಲ. ಯಾವಾಗಲೂ ಆರೋಗ್ಯಕರ ಚರ್ಚೆಗಳೇ ನಡೆಯುತ್ತಿದ್ದವು. ದೃಶ್ಯ ಚೆನ್ನಾಗಿ ಮೂಡಿಬರಬೇಕು ಎಂಬುದು ನಮ್ಮೆಲ್ಲರ ಉದ್ದೇಶವಾಗಿತ್ತು. ವಿಜಯ್ ಸರ್ ಈ ಕಥೆಯೊಂದಿಗೆ ಆರಂಭದಿಂದ ಕೊನೆಯವರೆಗೂ ಬದುಕಿದ್ದಾರೆ. ಆದರೆ ನಟನಾಗಿ ನಾನು ನನ್ನ ಪಾತ್ರದೊಂದಿಗೆ ಮಾತ್ರ ಪ್ರಯಾಣಿಸುತ್ತೇನೆ. ಹಾಗಾಗಿ ಅವರ ದೃಷ್ಟಿಕೋನವೇ ಇಲ್ಲಿ ಅತ್ಯಂತ ಮುಖ್ಯವಾಗಿತ್ತು ಎಂದು ವಿನಯ್ ಹೇಳಿದ್ದಾರೆ.&lt;/p&gt;&lt;p&gt;ಸೆಟ್&zwnj;ನಲ್ಲಿ ಸಿಕ್ಕ ಸ್ವಾತಂತ್ರ್ಯವೇ ತಮ್ಮ ಅಭಿನಯಕ್ಕೆ ಮತ್ತಷ್ಟು ಸಹಾಯ ಮಾಡಿತು ಎಂದು ಮೋನಿಷಾ ಕೂಡ ಹೇಳಿದ್ದಾರೆ. ಅಪ್ಪ ಎಂದಿಗೂ &lsquo;ಇದನ್ನೇ ಹೀಗೆ ಮಾಡಬೇಕು&rsquo; ಎಂದು ನನಗೆ ಹೇಳುತ್ತಿರಲಿಲ್ಲ. &lsquo;ಇದು ಪರಿಸ್ಥಿತಿ, ನಿನಗೆ ಹೇಗೆ ಬೇಕೋ ಹಾಗೆ ಮಾಡು. ನಾನು ಕ್ಯಾಮೆರಾ ಕಟ್ ಮಾಡುವುದಿಲ್ಲ&rsquo; ಎಂದು ಹೇಳುತ್ತಿದ್ದರು. ಆ ಸ್ವಾತಂತ್ರ್ಯದಿಂದ ನಾವು ಸಾಕಷ್ಟು ಇಂಪ್ರೊವೈಸ್ ಮಾಡಲು ಸಾಧ್ಯವಾಯಿತು ಎಂದು ಮೋನಿಷಾ ಹೇಳಿದ್ದಾರೆ. ಅಲ್ಲದೆ, ಆರಂಭದ ಹಂತದಲ್ಲಿದ್ದಾಗ ತಮ್ಮೊಂದಿಗೆ ವಿನಯ್ ಇದ್ದದ್ದು ದೊಡ್ಡ ಬೆಂಬಲವಾಗಿತ್ತು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ನಾವಿಬ್ಬರೂ ಕೆಲವು ರೀತಿಯಲ್ಲಿ ಒಂದೇ ರೀತಿಯ ಹಿನ್ನೆಲೆಯಿಂದ ಬಂದಿರುವುದರಿಂದ, ನನಗೆ ಯಾವುದಾದರೂ ಅನುಮಾನ ಅಥವಾ ಆತ್ಮವಿಶ್ವಾಸದ ಕೊರತೆ ಬಂದಾಗ ವಿನಯ್ ಬಳಿ ಹೋಗಿ ಕೇಳುತ್ತಿದ್ದೆ. ಅವರು ತಮ್ಮ ಆರಂಭದ ದಿನಗಳಲ್ಲಿ ಇಂತಹ ಸಂದರ್ಭಗಳನ್ನು ಹೇಗೆ ನಿಭಾಯಿಸಿದ್ದರು ಎಂಬುದನ್ನು ಹೇಳುತ್ತಿದ್ದರು ಎಂದು ಮೋನಿಷಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಸಿಟಿ ಲೈಟ್ಸ್&rsquo; ಬಳಿಕ ಬೆಂಗಳೂರು ಬದಲಾಗುತ್ತೆ!&lt;/strong&gt;&lt;/h2&gt;&lt;p&gt;ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ &lsquo;ಸಿಟಿ ಲೈಟ್ಸ್&rsquo; ಬೆಂಗಳೂರಿನ ರಾತ್ರಿ ಬದುಕನ್ನು ನೋಡುವ ಪ್ರೇಕ್ಷಕರ ದೃಷ್ಟಿಕೋನವನ್ನೇ ಬದಲಿಸಲಿದೆ ಎಂಬ ವಿಶ್ವಾಸವನ್ನು ವಿನಯ್ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ನೋಡಿದ ನಂತರ ನೀವು ಬೆಂಗಳೂರನ್ನು ಹೊಸ ದೃಷ್ಟಿಕೋನದಲ್ಲಿ ನೋಡುತ್ತೀರಿ. ವರ್ಷಗಳಿಂದ ನಿಮಗೆ ಪರಿಚಯವಿರುವ ಅದೇ ರಸ್ತೆಯಲ್ಲಿ ನೀವು ನಡೆದುಕೊಂಡು ಹೋಗಬಹುದು. ಆದರೆ ಈ ಸಿನಿಮಾ ನೋಡಿದ ಬಳಿಕ, ಈ ಹಿಂದೆ ಗಮನಿಸದೇ ಹೋಗಿದ್ದ ಹಲವು ವಿಷಯಗಳು ನಿಮ್ಮ ಕಣ್ಣಿಗೆ ಬೀಳಲು ಶುರುವಾಗುತ್ತವೆ ಎಂದು ವಿನಯ್ ರಾಜ್&zwnj;ಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ಇನ್ನು &lsquo;ದುನಿಯಾ ಟಾಕೀಸ್&rsquo; ಮತ್ತು &lsquo;ಯಂತ್ರೋದ್ಧಾರಕ&rsquo; ಬ್ಯಾನರ್&zwnj;ಗಳ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಮ್ ಆರ್ಯ ನಿರ್ಮಿಸಿರುವ &lsquo;ಸಿಟಿ ಲೈಟ್ಸ್&rsquo; ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಿಸುತ್ತಿದೆ. ವಿಜಯ್ ಕುಮಾರ್ ಅವರೇ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚರಣ್ ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಮತ್ತು ಮಾಸ್ತಿ ಸಂಭಾಷಣೆ ಚಿತ್ರಕ್ಕಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sandalwood-actor-vinay-rajkumar-and-monisha-open-up-about-vijay-kumars-city-lights-movie-gvd/articleshow-cneph82"/>
        </item>
        <item>
            <title><![CDATA[ರಾಜ್‌ಕುಮಾರ್ ಮೊಮ್ಮಗಳು ಎಂಬ ಟ್ಯಾಗ್... ‘ನನಗೆ ಅನುಕೂಲವಾಗಿಲ್ಲ’ ಎಂದ ಧನ್ಯಾ ರಾಮ್‌ಕುಮಾರ್!]]></title>
            <link>https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a</link>
            <guid isPermaLink="true">https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a</guid>
            <pubDate>Sun, 23 Aug 2026 21:06:09 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್&zwnj;ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qm6adwfbkrrc4gpqnbtzas,imgname-vhcv-1787499325884.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್&zwnj;ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ Film Expo India 2026ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದಕ್ಕೆ ಧನ್ಯಾ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಮ್ಮ ತಾತ ಡಾ. ರಾಜ್&zwnj;ಕುಮಾರ್ ಅಭಿನಯದ ಐಕಾನಿಕ್ ಸಿನಿಮಾ &lsquo;ಕವಿರತ್ನ ಕಾಳಿದಾಸ&rsquo; ಪ್ರದರ್ಶನಗೊಳ್ಳುತ್ತಿರುವುದು ಈ ಅವಕಾಶವನ್ನು ಧನ್ಯಾ ಅವರಿಗೆ ಮತ್ತಷ್ಟು ವಿಶೇಷವಾಗಿಸಿದೆ.&lt;/p&gt;&lt;p&gt;&lt;strong&gt;&lsquo;ತಾತನ ಕವಿರತ್ನ ಕಾಳಿದಾಸ ಪ್ರದರ್ಶನವಾಗಲಿದೆ ಎಂದಾಗ ತಕ್ಷಣ ಒಪ್ಪಿಕೊಂಡೆ!&rsquo;&lt;/strong&gt;&lt;/p&gt;&lt;p&gt;Film Expo India 2026ರಲ್ಲಿ ಭಾಗವಹಿಸುವ ಆಹ್ವಾನ ಬಂದಾಗ ಯಾವುದೇ ಯೋಚನೆಯಿಲ್ಲದೆ ಒಪ್ಪಿಕೊಂಡೆ ಎಂದು ಧನ್ಯಾ ಹೇಳಿದ್ದಾರೆ. &ldquo;ಇದು ತಕ್ಷಣ &lsquo;ಹೌದು&rsquo; ಎಂದ ಅವಕಾಶ. ಅದಕ್ಕಿಂತ ಮುಖ್ಯವಾಗಿ, ಎಕ್ಸ್&zwnj;ಪೋದಲ್ಲಿ ತಾತನ &lsquo;ಕವಿರತ್ನ ಕಾಳಿದಾಸ&rsquo; ಸಿನಿಮಾ ಪ್ರದರ್ಶನವಾಗಲಿದೆ ಎಂದು ತಿಳಿದಾಗ ಈ ಅವಕಾಶ ಇನ್ನಷ್ಟು ವಿಶೇಷ ಎನಿಸಿತು&rdquo; ಎಂದು ಧನ್ಯಾ ಹೇಳಿದ್ದಾರೆ. ವಿವಿಧ ಭಾಷೆಗಳ ಚಿತ್ರರಂಗ, ಕಲಾವಿದರು ಹಾಗೂ ಸಿನಿಮಾಗಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿಭಿನ್ನ ಚಿಂತನೆಗಳಿರುವವರೊಂದಿಗೆ ಸಂವಾದ ನಡೆಸಲು ಇದು ಉತ್ತಮ ಅವಕಾಶ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕನ್ನಡ ಸಿನಿಮಾವನ್ನು ಮೀರಿ ನನ್ನನ್ನು ಪರಿಚಯಿಸಿಕೊಳ್ಳಬೇಕು&rsquo;&lt;/strong&gt;&lt;/p&gt;&lt;p&gt;ಧನ್ಯಾ ರಾಮ್&zwnj;ಕುಮಾರ್ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಸದಾ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಸಿನಿಮಾ ಎಂಬುದು ಕೇವಲ ನಟನೆಗೆ ಸೀಮಿತವಲ್ಲ, ಅದರಾಚೆಗೂ ಸಾಕಷ್ಟು ಕಲಿಯಬೇಕಿದೆ ಎಂಬುದು ಅವರ ನಿಲುವು. ಈ ಹಿಂದೆ ಪುದುಚೇರಿಯ ಅದಿಶಕ್ತಿ ಲ್ಯಾಬೋರೇಟರಿ ಫಾರ್ ಥಿಯೇಟರ್ ಆರ್ಟ್ ರಿಸರ್ಚ್ನಲ್ಲಿ ತರಬೇತಿ ಪಡೆದಿರುವ ಧನ್ಯಾ, ಅಲ್ಲಿನ ಅನುಭವ ತಮ್ಮ ನಟನೆಯ ಮೇಲಿನ ದೃಷ್ಟಿಕೋನವನ್ನೇ ಬದಲಿಸಿತು ಎಂದು ಹೇಳಿದ್ದಾರೆ.&lt;/p&gt;&lt;p&gt;&ldquo;ನನ್ನ ಕಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತೇನೆ. ಅಲ್ಲಿ ಉಸಿರಾಟದ ಅಭ್ಯಾಸಗಳು ನಟನೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಲಿತೆ. ಜೀವನ ಮತ್ತು ಸಿನಿಮಾದ ಬಗ್ಗೆ ನನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಆಗ ಅರ್ಥವಾಯಿತು&rdquo; ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ Film Expo India ತಮ್ಮನ್ನು ಕನ್ನಡ ಸಿನಿಮಾದ ಗಡಿಯಾಚೆಗೆ ಹೊಸ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂಬ ವಿಶ್ವಾಸವನ್ನು ಧನ್ಯಾ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸ್ಟಾರ್ ಕಿಡ್ ಎಂಬ ಟ್ಯಾಗ್ ನನಗೆ ಅನುಕೂಲವಾಗಿಲ್ಲ&rsquo;&lt;/strong&gt;&lt;/p&gt;&lt;p&gt;ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು ಎಂಬ ದೊಡ್ಡ ಹಿನ್ನೆಲೆ ಧನ್ಯಾ ಅವರಿಗಿದೆ. ಆದರೆ ಇದೇ ಕುಟುಂಬದ ಪರಂಪರೆ ಕೆಲವೊಮ್ಮೆ ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗಿರುವಂತೆ ಅನಿಸಿದೆ ಎಂದು ಅವರು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;&ldquo;ನಾನು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಬಯಸುತ್ತೇನೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದನ್ನು ನಾನು ನಂಬುತ್ತೇನೆ. ಆದರೆ ರಾಜ್&zwnj;ಕುಮಾರ್ ಕುಟುಂಬದ ಪರಂಪರೆ ನನ್ನ ಕುಟುಂಬದ ಪುರುಷರಿಗೆ ಹೆಚ್ಚು ಅನುಕೂಲವಾಗಿದೆ ಎಂದು ನನಗೆ ಅನಿಸುತ್ತದೆ. ನನಗೆ ಅವರಷ್ಟು ಅವಕಾಶಗಳು ಸಿಕ್ಕಿಲ್ಲ&rdquo; ಎಂದು ಧನ್ಯಾ ಹೇಳಿದ್ದಾರೆ. ತಾವು ಆಯ್ಕೆ ಮಾಡಿಕೊಂಡ ಸಿನಿಮಾಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂಬ ಅರಿವು ಇದ್ದರೂ, ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ಎಂದಿಗೂ ಹಿಂದೆ ಸರಿದಿಲ್ಲ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಬದಲಿಸಿ&rsquo;&lt;/strong&gt;&lt;/p&gt;&lt;p&gt;ತಮ್ಮ ಕುಟುಂಬದ ಹಿನ್ನೆಲೆಯಿಂದಾಗಿ ಚಿತ್ರರಂಗದಲ್ಲಿ ತಮ್ಮ ಬಗ್ಗೆ ಕೆಲವು ಪೂರ್ವಗ್ರಹಗಳಿವೆ ಎಂಬ ಬೇಸರವನ್ನೂ ಧನ್ಯಾ ವ್ಯಕ್ತಪಡಿಸಿದ್ದಾರೆ. &ldquo;ನಾನು ನನ್ನ ತಾತ ಮತ್ತು ಮಾವಂದಿರ ಪರಂಪರೆಯಿಂದ ಬಂದಿದ್ದೇನೆ. ಆದರೆ ಅದರೊಂದಿಗೆ ಯಾವುದೇ ಅಹಂಕಾರ, ಹಮ್ಮು-ಬಿಮ್ಮು ಅಥವಾ ಅನಗತ್ಯ ನಿರೀಕ್ಷೆಗಳನ್ನು ಹೊತ್ತುಕೊಂಡು ಬಂದಿಲ್ಲ. ಸೆಟ್&zwnj;ನಲ್ಲಿ ನಾನು ಡಿವಾ ರೀತಿಯಲ್ಲಿ ವರ್ತಿಸುವುದಿಲ್ಲ. ನನ್ನ ತಾಯಿ ನನ್ನ ಜೊತೆ ಬಂದರೆ ಅದರಲ್ಲಿ ತಪ್ಪೇನು?&rdquo; ಎಂದು ಅವರು ಪ್ರಶ್ನಿಸಿದ್ದಾರೆ. ಸೆಟ್&zwnj;ನಲ್ಲಿ ಎಷ್ಟು ಗಂಟೆಗಳಾದರೂ ಕೆಲಸ ಮಾಡಲು ಸಿದ್ಧವಿದ್ದು, ತಮ್ಮ ಪಾತ್ರಕ್ಕೆ ಅಗತ್ಯವಿರುವ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿರುವ ಧನ್ಯಾ, ತಮ್ಮ ಬಗ್ಗೆ ಇರುವ ಆಧಾರರಹಿತ ಕಲ್ಪನೆಗಳನ್ನು ಚಿತ್ರರಂಗ ಬದಿಗಿಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ತಾತನ ಅಭಿಮಾನಿಗಳು ಕನ್ನಡ ಸಿನಿಮಾದ ಸುವರ್ಣಯುಗವನ್ನು ನೆನಪಿಸಿಕೊಳ್ಳುತ್ತಾರೆ&rsquo;&lt;/strong&gt;&lt;/p&gt;&lt;p&gt;ಡಾ. ರಾಜ್&zwnj;ಕುಮಾರ್ ಅವರ ಅಭಿಮಾನಿಗಳು ಇಂದಿಗೂ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಆ ಕಾಲದ ಕನ್ನಡ ಚಿತ್ರರಂಗದ ಸುವರ್ಣಯುಗವನ್ನೂ ಮೆಲುಕು ಹಾಕುತ್ತಾರೆ ಎಂದು ಧನ್ಯಾ ಹೇಳಿದ್ದಾರೆ. ಆ ಕಾಲದ ನಿರ್ದೇಶಕರು ಹಾಗೂ ನಟರು ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ತಮ್ಮ ಅಜ್ಜಿ ಕಾದಂಬರಿಗಳನ್ನು ಓದುವ ಹವ್ಯಾಸ ಹೊಂದಿದ್ದರು. ಯಾವುದಾದರೂ ಕಥೆ ಇಷ್ಟವಾದರೆ ಅದನ್ನು ತಾತನೊಂದಿಗೆ ಹಂಚಿಕೊಳ್ಳುತ್ತಿದ್ದರು. ಆ ಕಥೆ ಸಿನಿಮಾವಾಗುವ ಸಾಧ್ಯತೆ ಇದ್ದರೆ ಅದನ್ನು ಪರದೆಗೆ ತರುವ ಕೆಲಸ ನಡೆಯುತ್ತಿತ್ತು ಎಂದು ಧನ್ಯಾ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಪ್ರೇಕ್ಷಕರನ್ನು ಹೇಗೆ ಗೆಲ್ಲಬೇಕು ಎಂಬುದನ್ನು ಕೆಲವರು ಅರಿತಿದ್ದಾರೆ...&rsquo;&lt;/strong&gt;&lt;/h2&gt;&lt;p&gt;ಇಂದಿನ ಚಿತ್ರರಂಗದ ಬಗ್ಗೆ ಮಾತನಾಡಿದ ಧನ್ಯಾ, ಕೆಲವು ನಿರ್ದೇಶಕರು ಪ್ರೇಕ್ಷಕರನ್ನು ಹೇಗೆ ಸೆಳೆಯಬೇಕು ಎಂಬುದನ್ನು ಅದ್ಭುತವಾಗಿ ಅರ್ಥಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಆ ಸೂತ್ರವನ್ನು ಹುಡುಕುವ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ತಮ್ಮ ಪಾಲಿಗೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮೊದಲೇ ಊಹಿಸುವುದಕ್ಕಿಂತ, ತಲೆ ತಗ್ಗಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ ಎಂಬುದನ್ನು ಕಲಿತಿರುವುದಾಗಿ ಧನ್ಯಾ ಹೇಳಿದ್ದಾರೆ.&lt;/p&gt;&lt;p&gt;&ldquo;ಯಾವುದನ್ನೂ ನಿರೀಕ್ಷಿಸದೆ ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಉಳಿದದ್ದೆಲ್ಲ ಪ್ರೇಕ್ಷಕರ ಕೈಯಲ್ಲಿದೆ&rdquo; ಎಂಬ ಧನ್ಯಾ ಅವರ ಮಾತು, ತಮ್ಮ ವೃತ್ತಿಜೀವನದ ಬಗ್ಗೆ ಅವರಿರುವ ಸ್ಪಷ್ಟ ನಿಲುವನ್ನು ತೋರಿಸುತ್ತದೆ. ಒಟ್ಟಿನಲ್ಲಿ, ರಾಜ್&zwnj;ಕುಮಾರ್ ಕುಟುಂಬದ ಪರಂಪರೆಯ ನೆರಳಿನಿಂದ ಹೊರಬಂದು ಧನ್ಯಾ ರಾಮ್&zwnj;ಕುಮಾರ್ ತಮ್ಮದೇ ಆದ ನಟಿಯಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಕನ್ನಡ ಸಿನಿಮಾದಾಚೆಗೂ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳುವ ಪ್ರಯತ್ನದಲ್ಲಿರುವ ಧನ್ಯಾ ಅವರ ಮುಂದಿನ ಹೆಜ್ಜೆಗಳ ಮೇಲೆ ಇದೀಗ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a"/>
        </item>
        <item>
            <title><![CDATA[Exclusive: ಕರಾವಳಿಯ ಮಹಾಬಲ ಪಾತ್ರ ನನಗೆ ಬಲ ತುಂಬಿದೆ: ನಟ ಮಿತ್ರ ಸಂದರ್ಶನ]]></title>
            <link>https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</link>
            <guid isPermaLink="true">https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</guid>
            <pubDate>Sun, 16 Aug 2026 23:34:16 +0530</pubDate>
            <description><![CDATA[&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05st0mxcxyefsv0ftqgw3p8,imgname-bj-1786901234333.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;* ಈಗ ಮತ್ತೆ ಬೇಡಿಕೆಯ ನಟರಾಗುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಅದಕ್ಕೆ ಕಾರಣ &lsquo;ಕರಾವಳಿ&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಮಹಾಬಲ ಪಾತ್ರ ನನ್ನ ಜೀವನಕ್ಕೆ ಮತ್ತೆ ಬಲ ತುಂಬಿದೆ. ಈ ಚಿತ್ರಕ್ಕೆ ನಾನು ಎರಡು ವರ್ಷ ಮೀಸಲಿಟ್ಟಿದ್ದೆ. ಸಿನಿಮಾ ನೋಡಿದ ಎಲ್ಲರಿಗೂ ಮಹಾಬಲನ ಪಾತ್ರ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;* ಬೇಡಿಕೆಯಲ್ಲಿದ್ದ ನಟ ನೀವು, ಯಾಕೆ ಅವಕಾಶಗಳಿಲ್ಲದೆ ಹೋಗಿದ್ದು?&lt;/strong&gt;&lt;/p&gt;&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ. ಎಂಟು ವರ್ಷ ಖಾಲಿ ಕೂರಬೇಕಾಯಿತು.&lt;/p&gt;&lt;p&gt;&lt;strong&gt;* ನಿಮ್ಮ ಈ ಅಜ್ಞಾತ ವಾಸವನ್ನು ಮುಕ್ತ ಮಾಡಿದ್ದು ಕರಾವಳಿ ಚಿತ್ರನಾ?&lt;/strong&gt;&lt;/p&gt;&lt;p&gt;&lsquo;ಕರಾವಳಿ&rsquo;ಗೂ ಮುನ್ನ ಬಂದಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್&zwnj; ನಟನೆಯ &lsquo;ರಾಘವೇಂದ್ರ ಸ್ಟೋರ್ಸ್&zwnj;&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಕೋಕಿಲ ಪಾತ್ರ ತುಂಬಾ ಚೆನ್ನಾಗಿತ್ತು. ಆದರೆ, ಸಿನಿಮಾ ಕಮರ್ಷಿಯಲ್ಲಾಗಿ ವರ್ಕ್&zwnj; ಆಗಲಿಲ್ಲ. ಹೀಗಾಗಿ ನನ್ನ ಪಾತ್ರವೂ ಯಾರಿಗೂ ಗೊತ್ತಾಗಲಿಲ್ಲ.&lt;/p&gt;&lt;p&gt;&lt;strong&gt;* ಕರಾವಳಿ ಚಿತ್ರದ ನಂತರ ಬಂದ ಚಿತ್ರಗಳೆಷ್ಟು?&lt;/strong&gt;&lt;/p&gt;&lt;p&gt;ಈ ಸಿನಿಮಾ ಲುಕ್ಕಿನ ನಂತರ ಲ್ಯಾಂಡ್&zwnj; ಲಾರ್ಡ್&zwnj;, ಮಿ.ಜಾಕ್&zwnj;, ಲಕ್ಷ್ಮೀಪುತ್ರ, ಕರಳೆ ಹಾಗೂ ಮಹಾನ್&zwnj; ಚಿತ್ರಗಳು. ಈ ಚಿತ್ರಗಳಲ್ಲಿ ಶಿವಯ್ಯ, ಮಂಡೇಲ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದೇನೆ.&lt;/p&gt;&lt;h2&gt;&lt;strong&gt;* ಮುಂದಿನ ಸಿನಿಮಾಗಳು?&lt;/strong&gt;&lt;/h2&gt;&lt;p&gt;ಆಗಲೇ ಹೇಳಿದಂತೆ &lsquo;ಮಿ.ಜಾಕ್&zwnj;&rsquo;, &lsquo;ಲಕ್ಷ್ಮೀಪುತ್ರ&rsquo;, &lsquo;ಕರಳೆ&rsquo; ಚಿತ್ರಗಳ ಶೂಟಿಂಗ್&zwnj; ಮುಗಿಸಿದ್ದೇನೆ. ಬೇರೆ ಹೊಸ ಸಿನಿಮಾಗಳಿಗೆ ಕಾಯುತ್ತಿದ್ದೇನೆ. ಯಾವುದೇ ರೀತಿಯ ಪಾತ್ರಗಳು ಬಂದರೆ ಮಾಡುತ್ತೇನೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7"/>
        </item>
        <item>
            <title><![CDATA[ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ: ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!]]></title>
            <link>https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr</link>
            <guid isPermaLink="true">https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr</guid>
            <pubDate>Wed, 26 Aug 2026 20:18:02 +0530</pubDate>
            <description><![CDATA[&lt;p&gt;Kannada Seriel Actor Karthik Jayaram &lsquo;ಜೆಕೆ&rsquo; ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, &lsquo;ಅಶ್ವಿನಿ ನಕ್ಷತ್ರ&rsquo;ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0z7wxtg2rdy9wckzfa8qfbf,imgname-vvjv-1787754870608.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಜನಪ್ರಿಯ ನಟ ಹಾಗೂ &lsquo;ಜೆಕೆ&rsquo; ಎಂದೇ ಖ್ಯಾತರಾಗಿರುವ ಕಾರ್ತಿಕ್&zwnj; ಜಯರಾಮ್, ತಮ್ಮ ಸಿನಿ-ಕಿರುತೆರೆ ಪಯಣದ ಆರಂಭದ ದಿನಗಳ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್&zwnj; ಬಳಿಕ ಕಾರ್ಪೊರೇಟ್&zwnj; ಜಗತ್ತಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದ ತಾವು, ಆರಂಭದಲ್ಲಿ ಜನಪ್ರಿಯ ಕನ್ನಡ ಧಾರಾವಾಹಿ &lsquo;ಅಶ್ವಿನಿ ನಕ್ಷತ್ರ&rsquo;ದಲ್ಲಿ ನಾಯಕನಾಗಿ ನಟಿಸುವ ಅವಕಾಶವನ್ನೇ ತಿರಸ್ಕರಿಸಲು ಯೋಚಿಸಿದ್ದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ರ್ಯಾಪಿಡ್&zwnj; ರಶ್ಮಿ ಅವರ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ ಕಾರ್ತಿಕ್&zwnj; ಜಯರಾಮ್, ಕಾರ್ಪೊರೇಟ್&zwnj; ಕೆಲಸದ ಜೊತೆಗೆ &lsquo;ಅಶ್ವಿನಿ ನಕ್ಷತ್ರ&rsquo; ಧಾರಾವಾಹಿಯ ಚಿತ್ರೀಕರಣವನ್ನೂ ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ತಮ್ಮಲ್ಲಿದ್ದ ನಟನಾ ಸಾಮರ್ಥ್ಯವನ್ನು ಮೊದಲು ಗುರುತಿಸಿದ್ದು ತಮ್ಮ ಕಂಪನಿಯ HR ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನೀವು ಫೇಮಸ್&zwnj; ಆಗ್ತೀರಾ, ಕೆಲಸ ಬಿಟ್ಟುಬಿಡಿ ಎಂದಿದ್ದರು!&rsquo;&lt;/strong&gt;&lt;/p&gt;&lt;p&gt;&lsquo;ಅಶ್ವಿನಿ ನಕ್ಷತ್ರ&rsquo; ಚಿತ್ರೀಕರಣವನ್ನು ಹಗಲಿನಲ್ಲಿ ಮುಗಿಸಿಕೊಂಡು, ರಾತ್ರಿ ಕಾರ್ಪೊರೇಟ್&zwnj; ಕೆಲಸ ಮಾಡುತ್ತಿದ್ದೆ. ಆಗ ನನ್ನ HR, ನಾನು ಮುಂದೆ ಫೇಮಸ್&zwnj; ಆಗುತ್ತೇನೆ ಎಂದು ಹೇಳಿ, ಕೆಲಸ ಬಿಟ್ಟು ನಟನೆಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದ್ದರು. ಆದರೆ ಅದೇ ಸಮಯದಲ್ಲಿ ಉದ್ಯೋಗದಲ್ಲೂ ನಾನು ಉತ್ತಮವಾಗಿ ಮಾಡುತ್ತಿದ್ದೆ ಎಂದು ಕಾರ್ತಿಕ್&zwnj; ಜಯರಾಮ್&zwnj; ಹೇಳಿದ್ದಾರೆ.&lt;/p&gt;&lt;p&gt;ಆದರೆ ಆರಂಭದಲ್ಲಿ ಧಾರಾವಾಹಿಯ ಆಫರ್&zwnj; ಸ್ವೀಕರಿಸಲು ಕಾರ್ತಿಕ್&zwnj; ಸಿದ್ಧರಿರಲಿಲ್ಲವಂತೆ. ಕಾರ್ಪೊರೇಟ್&zwnj; ಕ್ಷೇತ್ರದಲ್ಲಿ ಉತ್ತಮ ಸಂಬಳದ ಜೊತೆಗೆ ಸ್ಥಿರವಾದ 9ರಿಂದ 5ರ ಕೆಲಸ, ವಾರಾಂತ್ಯ ರಜೆ ಎಲ್ಲವೂ ಇದ್ದಾಗ ನಟನೆಯತ್ತ ಯಾಕೆ ಹೋಗಬೇಕು ಎಂಬ ಯೋಚನೆ ಅವರಲ್ಲಿತ್ತು.&lt;/p&gt;&lt;p&gt;&lt;strong&gt;&lsquo;ಕಾರ್ಪೊರೇಟ್&zwnj;ನಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು!&rsquo;&lt;/strong&gt;&lt;/p&gt;&lt;p&gt;ತಮ್ಮ ಆರಂಭಿಕ ಮನಸ್ಥಿತಿಯನ್ನು ನೆನಪಿಸಿಕೊಂಡ ಕಾರ್ತಿಕ್&zwnj;, ಮೊದಲು &lsquo;ಅಶ್ವಿನಿ ನಕ್ಷತ್ರ&rsquo; ಬೇಡ ಎಂದು ಹೇಳಲು ಪ್ರಯತ್ನಿಸಿದ್ದೆ. ನನಗೆ ಅದನ್ನು ಮಾಡಲು ಆಸಕ್ತಿಯೇ ಇರಲಿಲ್ಲ. ಕಾರ್ಪೊರೇಟ್&zwnj; ಕ್ಷೇತ್ರದಲ್ಲಿ ನಾನು ಚೆನ್ನಾಗಿ ಸಂಪಾದಿಸುತ್ತಿದ್ದೆ. ಹಾಗಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು. ನನಗೆ 9ರಿಂದ 5ರ ಕೆಲಸ, ವಾರಾಂತ್ಯದಲ್ಲಿ ರಜೆ ಇತ್ತು ಎಂದು ಹೇಳಿದ್ದಾರೆ. ಆದರೆ ಮುಂದೆ ಇದೇ ಧಾರಾವಾಹಿ ತಮ್ಮ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಕಾರ್ತಿಕ್&zwnj; ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕು ಅನ್ನೋದು ಬಾಲ್ಯದ ಕನಸಾಗಿತ್ತು!&rsquo;&lt;/strong&gt;&lt;/p&gt;&lt;p&gt;ಕಾರ್ತಿಕ್&zwnj; ಜಯರಾಮ್&zwnj; ಬಾಲ್ಯದಿಂದಲೂ ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕೆಂದು ಕನಸು ಕಂಡಿದ್ದರಂತೆ. ಎಂಜಿನಿಯರಿಂಗ್&zwnj; ಶಿಕ್ಷಣದ ಬಳಿಕ ಕಾರ್ಪೊರೇಟ್&zwnj; ವೃತ್ತಿಯಲ್ಲೂ ತಮ್ಮದೇ ಆದ ನೆಲೆ ಕಂಡುಕೊಂಡಿದ್ದರು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ಅವರ ವೃತ್ತಿಜೀವನಕ್ಕೆ ನಿರೀಕ್ಷೆಯೇ ಇಲ್ಲದ ತಿರುವು ನೀಡಿತು.&lt;/p&gt;&lt;p&gt;ಸಿವಿಲ್&zwnj; ಎಂಜಿನಿಯರ್&zwnj; ಆಗುವುದು ನನ್ನ ಬಾಲ್ಯದ ಕನಸಾಗಿತ್ತು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ನನಗೆ ಸಿಕ್ಕ ಒಂದು ಅದ್ಭುತ ಅವಕಾಶವಾಗಿತ್ತು ಎಂದು ಅವರು ಹೇಳಿದ್ದಾರೆ. ಆ ಕಾಲದಲ್ಲಿ ಕಿರುತೆರೆಯಲ್ಲಿ ಪುರುಷ ನಟರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸುವುದು ಅಪರೂಪವಾಗಿತ್ತು. ಬಹುತೇಕ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದವು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ಕಾರ್ತಿಕ್&zwnj; ಜಯರಾಮ್&zwnj;ಗೆ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟಿತು.&lt;/p&gt;&lt;p&gt;&lt;strong&gt;&lsquo;ಫೇಮ್&zwnj; ಯಾವತ್ತೂ ಶಾಶ್ವತ ಅಲ್ಲ ಎಂದು ನನಗೆ ಗೊತ್ತಿತ್ತು!&rsquo;&lt;/strong&gt;&lt;/p&gt;&lt;p&gt;ಕಿರುತೆರೆಯಿಂದ ಸಿಕ್ಕ ಜನಪ್ರಿಯತೆಯ ಬಗ್ಗೆಯೂ ಕಾರ್ತಿಕ್&zwnj; ಜಯರಾಮ್&zwnj; ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತಿ ಎಷ್ಟೇ ದೊಡ್ಡದಾಗಿದ್ದರೂ ಅದು ಶಾಶ್ವತವಲ್ಲ ಎಂಬ ನಂಬಿಕೆ ತಮ್ಮಲ್ಲಿತ್ತು ಎಂದು ಹೇಳಿದ್ದಾರೆ. ಫೇಮ್&zwnj; ಅದ್ಭುತವಾಗಿತ್ತು. ಆದರೆ ಖ್ಯಾತಿ ತಾತ್ಕಾಲಿಕ ಎಂಬ ಭಾವನೆ ನನಗೆ ಯಾವಾಗಲೂ ಇತ್ತು. ಜೀವನದ ಹಲವು ಹಂತಗಳನ್ನು ದಾಟಿದಾಗ ಈ ವಿಚಾರ ಅರ್ಥವಾಗುತ್ತದೆ ಎಂದು ಕಾರ್ತಿಕ್&zwnj; ಹೇಳಿದ್ದಾರೆ. ಎಂಜಿನಿಯರಿಂಗ್&zwnj; ಮತ್ತು ಕಾರ್ಪೊರೇಟ್&zwnj; ವೃತ್ತಿಯ ಸಮಯದಲ್ಲಿ ತಾವು ಕಟ್ಟಿಕೊಂಡಿದ್ದ ಅನುಭವ ಹಾಗೂ ಆರ್ಥಿಕ ನೆಲೆ, ನಂತರ ನಟನೆಯಲ್ಲಿ ರಿಸ್ಕ್&zwnj; ತೆಗೆದುಕೊಳ್ಳಲು ಆತ್ಮವಿಶ್ವಾಸ ನೀಡಿತು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನ ಫೌಂಡೇಶನ್&zwnj; ಆಗಲೇ ಸಿದ್ಧವಾಗಿತ್ತು!&rsquo;&lt;/strong&gt;&lt;/h2&gt;&lt;p&gt;ಎಂಜಿನಿಯರಿಂಗ್&zwnj; ದಿನಗಳಲ್ಲೇ ನಾನು ನನ್ನ ಫೌಂಡೇಶನ್&zwnj; ಕಟ್ಟಿಕೊಂಡಿದ್ದೆ. ಹೀಗಾಗಿ ಮುಂದೆ ನಟನೆಯಲ್ಲಿ ರಿಸ್ಕ್&zwnj; ತೆಗೆದುಕೊಳ್ಳಲು ನಾನು ಸಿದ್ಧನಾಗಿದ್ದೆ ಎಂದು ಕಾರ್ತಿಕ್&zwnj; ಜಯರಾಮ್&zwnj; ಹೇಳಿದ್ದಾರೆ. ಒಟ್ಟಿನಲ್ಲಿ, ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕೆಂಬ ಕನಸಿನಿಂದ ಕಾರ್ಪೊರೇಟ್&zwnj; ಉದ್ಯೋಗದವರೆಗೆ ಸಾಗಿದ್ದ ಕಾರ್ತಿಕ್&zwnj; ಜಯರಾಮ್&zwnj; ಅವರನ್ನು &lsquo;ಅಶ್ವಿನಿ ನಕ್ಷತ್ರ&rsquo; ಕಿರುತೆರೆಯ ಜನಪ್ರಿಯ ನಟನನ್ನಾಗಿ ರೂಪಿಸಿತು. ಆರಂಭದಲ್ಲಿ ಬೇಡವೆಂದುಕೊಂಡಿದ್ದ ಅದೇ ಧಾರಾವಾಹಿ ಮುಂದೆ ಅವರ ವೃತ್ತಿಜೀವನದ ಬಹುದೊಡ್ಡ ತಿರುವಾಗಿ ಪರಿಣಮಿಸಿದ್ದು, ಒಂದು ಅವಕಾಶ ಜೀವನದ ದಿಕ್ಕನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಜೆಕೆ ಅವರ ಪಯಣ ಉತ್ತಮ ಉದಾಹರಣೆಯಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr"/>
        </item>
        <item>
            <title><![CDATA['ಅಮೆರಿಕಾ ಅಮೆರಿಕಾ'ದ ಲೆಗಸಿಯ ಭಾರ ನನ್ನ ಮೇಲಿರಲಿಲ್ಲ: ನಟ ಪೃಥ್ವಿ ಅಂಬಾರ್ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-actor-pruthvi-ambaar-talks-america-america-2-nirup-bhandari-shanvi-srivastava-and-modern-love-gvd/articleshow-gpr1ien</link>
            <guid isPermaLink="true">https://kannada.asianetnews.com/celebrity-interviews/kannada-actor-pruthvi-ambaar-talks-america-america-2-nirup-bhandari-shanvi-srivastava-and-modern-love-gvd/articleshow-gpr1ien</guid>
            <pubDate>Thu, 10 Sep 2026 20:39:57 +0530</pubDate>
            <description><![CDATA[&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಕುರಿತು ಪೃಥ್ವಿ ಅಂಬಾರ್ ಮಾತು: ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಜೊತೆಗಿನ ಕೆಮಿಸ್ಟ್ರಿ, ಪ್ರೇಕ್ಷಕರನ್ನು ಸಿನಿಮಾ ಇಷ್ಟಪಡುವಂತೆ ಲಾಬಿ ಮಾಡಲು ಸಾಧ್ಯವಿಲ್ಲ ಎನ್ನುವ ತಮ್ಮ ನಂಬಿಕೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡ ನಟ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25x627sr3t8xwa6v3pkep5z,imgname-vjv-1789052258552.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ದಿಯಾ&rsquo; ಸಿನಿಮಾ ನಟ ಪೃಥ್ವಿ ಅಂಬಾರ್ ಅವರಿಗೆ ಈವರೆಗಿನ ಹೆಸರು ಮತ್ತು ಖ್ಯಾತಿಯನ್ನು ತಂದುಕೊಟ್ಟ ಸಿನಿಮಾ. ಆ ಸಿನಿಮಾದ ನಂತರ ಪ್ರೇಕ್ಷಕರು ಅವರನ್ನು ಪ್ರೇಮಕಥೆಗಳ ನಟನಾಗಿ ಗುರುತಿಸತೊಡಗಿದರು. ಹೀಗಾಗಿ ಅದೇ ರೀತಿಯ ರೊಮ್ಯಾಂಟಿಕ್ ಸಿನಿಮಾಗಳಲ್ಲೇ ಮುಂದುವರಿಯಬಹುದಾಗಿದ್ದರೂ, ಪೃಥ್ವಿ ಆ ಹಾದಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಬದಲಾಗಿ ವಿಭಿನ್ನ ರೀತಿಯ ಸಿನಿಮಾಗಳು ಮತ್ತು ಪಾತ್ರಗಳನ್ನು ಮಾಡುತ್ತಾ ತಮ್ಮದೇ ಆದ ದಾರಿಯಲ್ಲಿ ಸಾಗಿದರು. &lsquo;ದಿಯಾ&rsquo;ದ ನೆರಳು ಮಾತ್ರ ಅವರ ಹಿಂದಿನಿಂದ ಮುಂದುವರಿಯುತ್ತಲೇ ಇತ್ತು.&lt;/p&gt;&lt;p&gt;ಇದೀಗ ಮತ್ತೊಂದು ಪ್ರೇಮಕಥೆಯೊಂದಿಗೆ ಪೃಥ್ವಿ ಅಂಬಾರ್ ವಾಪಸಾಗಿದ್ದಾರೆ. ಆದರೆ ಈ ಬಾರಿ ಸಿನಿಮಾಗೆ ವಿಭಿನ್ನ ರೀತಿಯ ಲೆಗಸಿ ಇದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ &lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದಲ್ಲಿ ಪೃಥ್ವಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರೊಂದಿಗೆ ಶಾನ್ವಿ ಶ್ರೀವಾಸ್ತವ ಮತ್ತು ನಿರೂಪ್ ಭಂಡಾರಿ ನಟಿಸಿದ್ದಾರೆ. ಈ ಸಿನಿಮಾ ಇದೇ ವಾರ ವಿಶ್ವಾದ್ಯಂತ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಸಹನಾ ವಿಜಯಕುಮಾರ್ ಅವರ ಕಾದಂಬರಿಯನ್ನು ಆಧರಿಸಿರುವ ಈ ಸಿನಿಮಾ ಪ್ರೀತಿ, ಕುಟುಂಬ ಮತ್ತು ಉತ್ತಮ ಭವಿಷ್ಯಕ್ಕಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳುವ ಜನರ ಬದುಕಿನ ಕಥೆಯನ್ನು ಒಳಗೊಂಡಿದೆ.&lt;/p&gt;&lt;p&gt;&lt;strong&gt;&lsquo;ದಿಯಾ&rsquo; ಹ್ಯಾಂಗೋವರ್&zwnj;ನಿಂದ ಹೊರಬರಲು ಈ ಸಿನಿಮಾ ಸಹಾಯ ಮಾಡುತ್ತಾ?&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಮೂಲಕ ಪೃಥ್ವಿ ಅಂಬಾರ್ &lsquo;ದಿಯಾ&rsquo; ಸಿನಿಮಾದ ಪ್ರಭಾವದಿಂದ ಹೊರಬರಲು ಸಾಧ್ಯವಾಗುತ್ತದೆಯೇ ಎಂಬುದು ಸಹಜವಾಗಿಯೇ ಎದುರಾಗುವ ಪ್ರಶ್ನೆ. &lsquo;ದಿಯಾ&rsquo; ನಂತರ ನಾನು ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಯಾವುದೂ &lsquo;ಡಿಯಾ&rsquo;ವನ್ನು ಮೀರಿಸುವ ಅಥವಾ ಅದರ ಮೇಲೆ ತನ್ನ ಛಾಯೆ ಬೀರುವ ಪ್ರಯತ್ನ ಮಾಡಿಲ್ಲ. ಮುಂದೆಯೂ ಹಾಗೆ ಆಗುತ್ತದೆಯೇ ಎಂಬುದು ನನಗೆ ಗೊತ್ತಿಲ್ಲ. ಏಕೆಂದರೆ ಆ ಸಿನಿಮಾ ಅಷ್ಟು ಹೃದಯಪೂರ್ವಕವಾಗಿ ನಿರ್ಮಾಣವಾಗಿತ್ತು. ಈಗ &lsquo;ಅಮೆರಿಕಾ ಅಮೆರಿಕಾ 2&rsquo; ಎಂಬ ಮತ್ತೊಂದು ಸಿನಿಮಾದಲ್ಲಿ ಅದೇ ರೀತಿಯ ಭಾವನಾತ್ಮಕ ಥೀಮ್ ಇದೆ.&lt;/p&gt;&lt;p&gt;ಇದು &lsquo;ದಿಯಾ&rsquo; ಹ್ಯಾಂಗೋವರ್&zwnj;ನಿಂದ ನನ್ನನ್ನು ಹೊರತರಬಹುದೇ? ಖಂಡಿತವಾಗಿಯೂ &lsquo;ಅಮೆರಿಕಾ ಅಮೆರಿಕಾ 2&rsquo;ನಲ್ಲಿ ಆ ಆಳವಿದೆ ಎಂದು ನನಗೆ ಅನಿಸುತ್ತದೆ. ಅದೂ ಕೂಡ ಪ್ರೇಮಕಥೆಗಳನ್ನು ಅದ್ಭುತವಾಗಿ ಕಟ್ಟಿಕೊಟ್ಟಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ಬರುತ್ತಿದೆ. ಹೀಗಾಗಿ ಈ ಸಿನಿಮಾ ಖಂಡಿತವಾಗಿಯೂ ವಿಭಿನ್ನವಾಗಿ ನಿಲ್ಲುತ್ತದೆ. ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಲು ನಾನು ಕಾಯುತ್ತಿದ್ದೇನೆ ಎನ್ನುತ್ತಾರೆ ಪೃಥ್ವಿ.&lt;/p&gt;&lt;p&gt;ಕೆಲವು ಸಮಯ ಪ್ರೇಮಕಥೆಗಳಿಂದ ದೂರ ಉಳಿದಿದ್ದರೂ, ಪ್ರೇಕ್ಷಕರು ಅವರನ್ನು ಆ ಜಾನರ್&zwnj;ನೊಂದಿಗೆ ಗುರುತಿಸುವುದನ್ನು ಮುಂದುವರಿಸಿದ್ದಾರೆ. ಆದರೆ ಅದನ್ನು ಅವರು ಸಮಸ್ಯೆಯಾಗಿ ನೋಡುವುದಿಲ್ಲ. ಅದೇ ಸಮಯದಲ್ಲಿ, ಒಂದೇ ರೀತಿಯ ಪಾತ್ರಗಳನ್ನು ಮತ್ತೆ ಮತ್ತೆ ಮಾಡಲು ಕೂಡ ಪೃಥ್ವಿಗೆ ಆಸಕ್ತಿಯಿಲ್ಲ.&lt;/p&gt;&lt;p&gt;ಜನರು ನನ್ನನ್ನು ಪ್ರೇಮಕಥೆಗಳ ಸಿನಿಮಾಗಳೊಂದಿಗೆ ಕನೆಕ್ಟ್ ಮಾಡುತ್ತಾರೆ. ಅದು ನನಗೆ ತುಂಬಾ ಚೆನ್ನಾಗಿ ವರ್ಕ್ ಆಗಿದೆ. ಈಗ &lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರವನ್ನು ಚಿತ್ರಮಂದಿರದಲ್ಲಿ ಪ್ರೇಕ್ಷಕರು ನೋಡಿದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ. ಆದರೆ ನಾನು ನನ್ನನ್ನೇ ಮತ್ತೆ ಮತ್ತೆ ರಿಪೀಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ನಟನಾಗಿ ವಿಭಿನ್ನ ರೀತಿಯ ಪಾತ್ರಗಳು ಮತ್ತು ಕಥೆಗಳ ಮೂಲಕ ಸಾಗಬೇಕು ಎಂಬುದು ನನ್ನ ಆಸೆ. ಅದು ನನಗೆ ಬಹಳ ಮುಖ್ಯ ಎಂದು ಅವರು ಹೇಳುತ್ತಾರೆ.&lt;/p&gt;&lt;p&gt;&lt;strong&gt;&lsquo;ದಿಯಾ&rsquo; ರೀತಿಯ ತ್ಯಾಗದ ಕಥೆಯೇ?&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದಲ್ಲೂ &lsquo;ದಿಯಾ&rsquo;ದಂತೆಯೇ ಭಾವನಾತ್ಮಕ ತಿರುವು, ಅದರಲ್ಲೂ ತ್ಯಾಗದ ಅಂಶವಿದೆಯೇ ಎಂಬ ಪ್ರಶ್ನೆಗೆ ಪೃಥ್ವಿ ಉತ್ತರಿಸಲು ನಿರಾಕರಿಸಿದ್ದಾರೆ. ಅದನ್ನು ನಾನು ಬಹಿರಂಗಪಡಿಸಲು ಸಾಧ್ಯವಿಲ್ಲ. ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕು. ಇಲ್ಲಿ ಪ್ರಶ್ನೆ ಯಾರ ತ್ಯಾಗ ಮತ್ತು ಆ ತ್ಯಾಗ ಕಥೆಯಲ್ಲಿ ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆಯೂ ಇದೆ. ಆ ಅನುಭವವನ್ನು ನಾನು ಪ್ರೇಕ್ಷಕರಿಂದ ಕಸಿದುಕೊಳ್ಳಲು ಬಯಸುವುದಿಲ್ಲ ಎನ್ನುತ್ತಾರೆ ಪೃಥ್ವಿ.&lt;/p&gt;&lt;p&gt;&lt;strong&gt;ವಿದೇಶಕ್ಕೆ ಹೋದವರ ಬದುಕಿನ ಕಥೆಯೂ ಇದೆ&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾ ಕುಟುಂಬ, ಸಂಬಂಧಗಳು ಮತ್ತು ಉತ್ತಮ ಭವಿಷ್ಯಕ್ಕಾಗಿ ತಾಯ್ನಾಡು ತೊರೆದು ವಿದೇಶಕ್ಕೆ ತೆರಳುವ ಜನರ ಬದುಕಿನ ಮೇಲೂ ಬೆಳಕು ಚೆಲ್ಲುತ್ತದೆ. ಈ ಅಂಶದೊಂದಿಗೆ ತಮ್ಮ ವೈಯಕ್ತಿಕ ಅನುಭವಗಳಿಗೂ ಸಾಮ್ಯವಿದೆ ಎಂದು ಪೃಥ್ವಿ ಹೇಳುತ್ತಾರೆ. ಕಾದಂಬರಿಯಲ್ಲಿ ಸಣ್ಣ ಸಣ್ಣ ವಿವರಗಳಿರುತ್ತವೆ. ಅದನ್ನು ತುಂಬಾ ಆಳವಾಗಿ ಬರೆಯಲಾಗಿರುತ್ತದೆ. ಈ ಸಿನಿಮಾದಲ್ಲೂ ಕುಟುಂಬದ ಮೌಲ್ಯಗಳಿವೆ. ಶಾನ್ವಿ, ನಿರೂಪ್ ಅಥವಾ ನನ್ನ ಪಾತ್ರವಾಗಿರಲಿ, ಪ್ರತಿಯೊಬ್ಬ ನಟನ ಪಾತ್ರಕ್ಕೂ ತನ್ನದೇ ಆದ ಜಾಗವಿದೆ. ಪ್ರೇಕ್ಷಕರ ಒಂದು ವರ್ಗ ಖಂಡಿತವಾಗಿಯೂ ಆ ಪಾತ್ರಗಳೊಂದಿಗೆ ಕನೆಕ್ಟ್ ಆಗಬಹುದು.&lt;/p&gt;&lt;p&gt;ಸಿನಿಮಾ ಒಂದು ಮೆಚ್ಯೂರ್ ಪ್ಲಾಟ್ ಹೊಂದಿದ್ದು, ಎನ್&zwnj;ಆರ್&zwnj;ಐ ಜೀವನದ ಬಗ್ಗೆಯೂ ಮಾತನಾಡುತ್ತದೆ. ಜನರು ವಿದೇಶಕ್ಕೆ ಹೋಗುತ್ತಾರೆ, ತಮ್ಮ ಮನೆ-ಕುಟುಂಬವನ್ನು ಬಿಟ್ಟು ಕೆಲಸ ಆರಂಭಿಸುತ್ತಾರೆ. ನನ್ನ ಸ್ನೇಹಿತರಲ್ಲೂ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ವಿದೇಶಕ್ಕೆ ಹೋದವರಿದ್ದಾರೆ. ಅಲ್ಲಿ ಒಂದು ತ್ಯಾಗವಿರುತ್ತದೆ. ಅವರಿಗೂ ಜೀವನದೊಂದಿಗೆ ತಮ್ಮದೇ ಆದ ಹೋರಾಟವಿದೆ. ಒಂದು ರೀತಿಯ ಏಕಾಂತವೂ ಇರುತ್ತದೆ. ಆದರೆ ವಿಧಿ ಅವರನ್ನು ಅಲ್ಲಿಗೆ ಕರೆದೊಯ್ಯುತ್ತದೆ. ತಮ್ಮ ಮನೆಯನ್ನು ಹಿಂದೆ ಬಿಟ್ಟು, ಅಲ್ಲಿ ಒಂದು ಆರಾಮದಾಯಕ ಜೀವನವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಪೃಥ್ವಿ ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;ಶೂಟಿಂಗ್ ಮುಗಿಯುವವರೆಗೂ ಚಿತ್ರದ ಟೈಟಲ್ ಗೊತ್ತಿರಲಿಲ್ಲ!&lt;/strong&gt;&lt;/p&gt;&lt;p&gt;ಕುತೂಹಲಕಾರಿ ಸಂಗತಿಯೆಂದರೆ, ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯುವವರೆಗೂ ಈ ಚಿತ್ರಕ್ಕೆ &lsquo;ಅಮೆರಿಕಾ ಅಮೆರಿಕಾ 2&rsquo; ಎಂಬ ಶೀರ್ಷಿಕೆ ಇಡಲಾಗುತ್ತದೆ ಎಂಬುದು ಪೃಥ್ವಿ ಅಂಬಾರ್ ಅವರಿಗೆ ತಿಳಿದಿರಲಿಲ್ಲ. ಮೂಲ &lsquo;ಅಮೆರಿಕಾ ಅಮೆರಿಕಾ&rsquo; ಸಿನಿಮಾವನ್ನು ಚಿಕ್ಕಂದಿನಿಂದಲೇ ನೋಡಿದ್ದ ಪೃಥ್ವಿ, ಚಿತ್ರದ ಶೀರ್ಷಿಕೆ ಮೊದಲೇ ಗೊತ್ತಿದ್ದರೆ ಅನಗತ್ಯ ಒತ್ತಡ ಎದುರಾಗಬಹುದಿತ್ತು ಎಂದು ಹೇಳುತ್ತಾರೆ.&lt;/p&gt;&lt;p&gt;ನಾಗತಿಹಳ್ಳಿ ಸರ್ ಈ ಸಿನಿಮಾಗೆ &lsquo;ಅಮೆರಿಕಾ ಅಮೆರಿಕಾ 2&rsquo; ಎಂದು ಟೈಟಲ್ ಇಡುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಅದೃಷ್ಟವಶಾತ್ ಕೊನೆಯವರೆಗೂ ನನಗೆ ಟೈಟಲ್ ಗೊತ್ತಿರಲಿಲ್ಲ. ಹೀಗಾಗಿ ಇದು &lsquo;ಅಮೆರಿಕಾ ಅಮೆರಿಕಾ 2&rsquo; ಆಗಲಿದೆ ಎಂಬ ಭಾರವನ್ನು ನಾನು ಹೊತ್ತುಕೊಳ್ಳಲಿಲ್ಲ. ಹಿಂದಿನ &lsquo;ಅಮೆರಿಕಾ ಅಮೆರಿಕಾ&rsquo; ಸಿನಿಮಾ ಖಂಡಿತವಾಗಿಯೂ ಒಂದು ವರದಾನ. ನಾನು ಚಿಕ್ಕವನಿದ್ದಾಗ ಆ ಸಿನಿಮಾ ನೋಡಿದ್ದೆ.&lt;/p&gt;&lt;p&gt;ಅದು ಒಂದು ಲೆಗಸಿ ಹೊಂದಿರುವ, ದೊಡ್ಡ ಹಿಟ್ ಆಗಿದ್ದ ಸಿನಿಮಾ. ಆ ಹೆಸರನ್ನು ಹೊತ್ತುಕೊಂಡು ಬರುವುದು ಒಂದು ರೀತಿಯಲ್ಲಿ ಅನುಕೂಲ. ಆದರೆ ಅದೇ ಸಮಯದಲ್ಲಿ ಅದು ದೊಡ್ಡ ಜವಾಬ್ದಾರಿಯೂ ಹೌದು. ಇಂದಿನ ಭಾಷೆಯಲ್ಲಿ ಹೇಳುವುದಾದರೆ, ಅದು ಕೇವಲ ಸಿನಿಮಾವಲ್ಲ, ಒಂದು ಭಾವನೆ. &lsquo;ಅಮೆರಿಕಾ ಅಮೆರಿಕಾ&rsquo; ಹಲವು ನೆನಪುಗಳ ಮೂಲಕ ಜನರ ಮನಸ್ಸಿನಲ್ಲಿ ಉಳಿದಿದೆ. ಹೀಗಾಗಿ &lsquo;ಅಮೆರಿಕಾ ಅಮೆರಿಕಾ 2&rsquo; ಮೇಲೆ ಸಹಜವಾಗಿಯೇ ನಿರೀಕ್ಷೆಗಳಿರುತ್ತವೆ ಎಂದು ಪೃಥ್ವಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಒಂದು ಶಾಲೆಯ ಅನುಭವ!&lt;/strong&gt;&lt;/p&gt;&lt;p&gt;ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡಿರುವುದು ತಮ್ಮ ಪಾಲಿಗೆ ವಿಭಿನ್ನ ರೀತಿಯ ಕಲಿಕೆಯ ಅನುಭವ ಎಂದು ಪೃಥ್ವಿ ಹೇಳಿದ್ದಾರೆ. ಅವರು ಚಿತ್ರರಂಗದಲ್ಲಿ ಇಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ, ಅವರಲ್ಲಿ ಒಂದು ರೀತಿಯ ಸ್ಯಾಚುರೇಶನ್ ಬಂದಿದೆ ಎಂದು ನನಗೆ ಎಂದಿಗೂ ಅನಿಸಲಿಲ್ಲ. ಇಂದಿಗೂ ಅವರು ಉತ್ಸಾಹಭರಿತರಾಗಿದ್ದಾರೆ, ಎನರ್ಜಿಟಿಕ್ ಆಗಿದ್ದಾರೆ ಮತ್ತು ಮುಂದಿನ ಶಾಟ್ ಹೇಗಿರಬೇಕು ಎಂಬ ಕುತೂಹಲ ಅವರಲ್ಲಿದೆ.&lt;/p&gt;&lt;p&gt;ಅವರ ಸಿನಿಮಾ ಮಾಡುವ ವಿಧಾನ ನನಗೆ ದೊಡ್ಡ ಕಲಿಕೆಯ ಅನುಭವವಾಗಿತ್ತು. ಒಂದು ರೀತಿಯಲ್ಲಿ ಅದು ಶಾಲೆಯ ವಾತಾವರಣದಂತಿತ್ತು. ನಾವೆಲ್ಲರೂ ಅವರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದೆವು. ಒಂದು ದೃಶ್ಯ ಶೂಟ್ ಮಾಡಿದ ನಂತರ ಅವರು ನಮ್ಮನ್ನು ಮೆಚ್ಚುತ್ತಾರಾ ಎಂದು ಕಾಯುತ್ತಿದ್ದೆವು. ಅವರು &lsquo;ಗುಡ್&rsquo; ಎಂದಾಗಲೆಲ್ಲ ನಮಗೆ ತುಂಬಾ ಖುಷಿಯಾಗುತ್ತಿತ್ತು. ನಾವು ಪ್ರತಿಯೊಂದು ದೃಶ್ಯಕ್ಕೂ ನಮ್ಮ ಹೃದಯವನ್ನೇ ಕೊಟ್ಟಿದ್ದೆವು ಎಂದು ಪೃಥ್ವಿ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಇತ್ತೀಚೆಗೆ ತಾವೇ ನಿರ್ದೇಶನಕ್ಕೂ ಕಾಲಿಟ್ಟಿರುವುದರಿಂದ ಈ ಕಲಿಕೆಯ ಅನುಭವ ಪೃಥ್ವಿಗೆ ಮತ್ತಷ್ಟು ಅರ್ಥಪೂರ್ಣವಾಗಿದೆ. ಹಲವು ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವದ ಬಳಿಕ ಇದೀಗ ಕ್ಯಾಮೆರಾದ ಹಿಂದಿನಿಂದಲೂ ಸಿನಿಮಾವನ್ನು ನೋಡುವ ಅವಕಾಶ ಅವರಿಗೆ ಸಿಕ್ಕಿದೆ.&lt;/p&gt;&lt;p&gt;ನಾನು ಕೆಲಸ ಮಾಡಿದ ಪ್ರತಿಯೊಬ್ಬ ನಿರ್ದೇಶಕರಿಂದಲೂ ಒಂದೊಂದು ಪಾಠ ಕಲಿತಿದ್ದೇನೆ. ಈಗ ನಿರ್ದೇಶಕನಾಗಿ ಸಿನಿಮಾವನ್ನು ಮತ್ತೊಂದು ದೃಷ್ಟಿಕೋನದಿಂದ ನೋಡುತ್ತಿದ್ದೇನೆ ಎನ್ನುತ್ತಾರೆ ಪೃಥ್ವಿ. ಅವರ ಪ್ರಕಾರ, ನಟನೆ ಮತ್ತು ನಿರ್ದೇಶನ ಸಿನಿಮಾದಲ್ಲಿ ಪರಸ್ಪರ ಸ್ಪರ್ಧಿಸುವ ಎರಡು ವಿಭಿನ್ನ ವಿಭಾಗಗಳಲ್ಲ. ಬದಲಾಗಿ ಅವು ಒಂದಕ್ಕೊಂದು ಪೂರಕ.&lt;/p&gt;&lt;p&gt;ಒಂದು ಇನ್ನೊಂದಕ್ಕೆ ಮಾಹಿತಿ ನೀಡುತ್ತದೆ. ಒಂದು ದೃಶ್ಯ ಯಾಕೆ ಚೆನ್ನಾಗಿ ಕೆಲಸ ಮಾಡುತ್ತದೆ, ಒಬ್ಬ ನಟ ಅದನ್ನು ಹೇಗೆ ಅಪ್ರೋಚ್ ಮಾಡುತ್ತಾನೆ ಮತ್ತು ನಿರ್ದೇಶಕನ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಎರಡೂ ವಿಭಾಗಗಳು ಮತ್ತೊಂದು ದೃಷ್ಟಿಕೋನವನ್ನು ನೀಡುತ್ತವೆ ಎಂದು ಅವರು ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;ನಿರೂಪ್ ಮತ್ತು ಶಾನ್ವಿ ಜೊತೆಗಿನ ಕೆಮಿಸ್ಟ್ರಿ ಹೇಗಿತ್ತು?&lt;/strong&gt;&lt;/p&gt;&lt;p&gt;ಶಾನ್ವಿ ಶ್ರೀವಾಸ್ತವ ಮತ್ತು ನಿರೂಪ್ ಭಂಡಾರಿ ಜೊತೆಗಿನ ಕೆಲಸದ ಅನುಭವದ ಬಗ್ಗೆಯೂ ಪೃಥ್ವಿ ಮಾತನಾಡಿದ್ದಾರೆ. ನಟರ ನಡುವಿನ ಕೆಮಿಸ್ಟ್ರಿಯನ್ನು ಸ್ಪರ್ಧೆಯ ಮೂಲಕ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದು ಅವರ ನಿಲುವು. ನನ್ನ ಪ್ರಕಾರ ನಟನೆ ಎಂದರೆ ಕೊಡು-ಕೊಳ್ಳುವಿಕೆ. ಸ್ಪರ್ಧೆ ಬಂದರೆ ನಾವು ಅಗತ್ಯಕ್ಕಿಂತ ಹೆಚ್ಚು ಮಾಡಲು ಪ್ರಯತ್ನಿಸಬಹುದು. ನಾನು ಅದನ್ನು ನಂಬುವುದಿಲ್ಲ.&lt;/p&gt;&lt;p&gt;ನಿರೂಪ್ ಮತ್ತು ನಾನು ಒಂದೇ ಕರಾವಳಿ ಭಾಗದವರು. ಆದರೆ ನಾವು ಮೊದಲ ಬಾರಿಗೆ ಭೇಟಿಯಾಗಿದ್ದು ಅಮೆರಿಕಾದಲ್ಲಿ ಶೂಟಿಂಗ್ ಮಾಡುವಾಗ. ನಾವು ಜೀವನದ ಬಗ್ಗೆ ಸಾಕಷ್ಟು ಮಾತನಾಡಿದೆವು ಮತ್ತು ಬಹಳ ಬೇಗ ಕನೆಕ್ಟ್ ಆದೆವು. ಶಾನ್ವಿ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಅವರ ಮಟ್ಟಕ್ಕೆ ಸರಿಸಮನಾಗಿ ಅಭಿನಯಿಸುವುದು ನನಗೆ ಸವಾಲಾಗಿತ್ತು. ಅದೇ ಆನ್&zwnj;ಸ್ಕ್ರೀನ್ ಕೆಮಿಸ್ಟ್ರಿಯನ್ನು ಚೆನ್ನಾಗಿ ಕೆಲಸ ಮಾಡುವಂತೆ ಮಾಡುತ್ತದೆ ಎಂದು ಪೃಥ್ವಿ ಹೇಳಿದ್ದಾರೆ.&lt;/p&gt;&lt;p&gt;ಚಿತ್ರದಲ್ಲಿ ಯಾರಿಗೆ ಹೆಚ್ಚು ಸ್ಕ್ರೀನ್&zwnj;ಸ್ಪೇಸ್ ಸಿಗುತ್ತದೆ ಎಂಬ ವಿಚಾರವೂ ತಮ್ಮ ಮನಸ್ಸಿನಲ್ಲಿ ಇರಲಿಲ್ಲ ಎನ್ನುತ್ತಾರೆ ಅವರು. ನಾನು ಎಂದಿಗೂ ಆ ರೀತಿಯಲ್ಲಿ ಯೋಚಿಸಿಲ್ಲ. ಸಿನಿಮಾ ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗುತ್ತಿದ್ದರೆ, ನನಗೆ ಕಡಿಮೆ ಸ್ಕ್ರೀನ್ ಟೈಮ್ ಸಿಕ್ಕರೂ ಯಾವುದೇ ಸಮಸ್ಯೆಯಿಲ್ಲ. ಕೊನೆಗೂ ಎಲ್ಲವೂ ಕಥೆಯ ಬಗ್ಗೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.&lt;/p&gt;&lt;p&gt;&lt;strong&gt;&lsquo;ಪ್ರೀತಿ ಬದಲಾಗಿಲ್ಲ, ಜನರು ಬದಲಾಗಿದ್ದಾರೆ&rsquo;&lt;/strong&gt;&lt;/p&gt;&lt;p&gt;ಪ್ರೀತಿಯ ವಿಚಾರಕ್ಕೆ ಬಂದಾಗ, ಕಾಲ ಬದಲಾದರೂ ಪ್ರೀತಿ ಎಂಬ ಭಾವನೆ ಬದಲಾಗಿಲ್ಲ ಎಂಬುದು ಪೃಥ್ವಿ ಅಂಬಾರ್ ಅವರ ಅಭಿಪ್ರಾಯ. ಪ್ರೀತಿ ಸಾರ್ವತ್ರಿಕವಾದದ್ದು. ಆ ಭಾವನೆಯನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಟ್ರೆಂಡ್ ಬದಲಾಗಬಹುದು, ವ್ಯಕ್ತಿತ್ವಗಳು ಬದಲಾಗಬಹುದು, ಪರಿಸ್ಥಿತಿಗಳು ಬದಲಾಗಬಹುದು. ಆದರೆ ಪ್ರೀತಿ ಎಂದರೆ ಪ್ರೀತಿಯೇ. ಇಲ್ಲಿ ಸರಿ ಅಥವಾ ತಪ್ಪು ಎಂಬುದೂ ಇಲ್ಲ. ಪ್ರೇಕ್ಷಕರು ಯಾರದೋ ಒಂದು ಬದಿಯನ್ನು ತೆಗೆದುಕೊಳ್ಳಬಹುದು. ಅದು ಅವರ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. &lsquo;ದಿಯಾ&rsquo; ಸಿನಿಮಾದಲ್ಲೂ ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯವಿತ್ತು ಎನ್ನುತ್ತಾರೆ ಪೃಥ್ವಿ.&lt;/p&gt;&lt;p&gt;&lt;strong&gt;&lsquo;ಸಿನಿಮಾ ಇಷ್ಟಪಡುವಂತೆ ಲಾಬಿ ಮಾಡಲು ಸಾಧ್ಯವಿಲ್ಲ&rsquo;&lt;/strong&gt;&lt;/p&gt;&lt;p&gt;&lsquo;ದಿಯಾ&rsquo;ದಿಂದ &lsquo;ಅಮೆರಿಕಾ ಅಮೆರಿಕಾ 2&rsquo;ವರೆಗಿನ ಪ್ರಯಾಣ ಪೃಥ್ವಿ ಸಿನಿಮಾಗಳನ್ನು ನೋಡುವ ರೀತಿಯನ್ನು ಬದಲಿಸಿದೆ. ಆದರೆ ತಮ್ಮ ಮೇಲಿನ ನಿರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎನ್ನುತ್ತಾರೆ ಅವರು. ನಿರ್ದೇಶನಕ್ಕೆ ಕಾಲಿಟ್ಟಿರುವುದು ಅದೇ ಸಿನಿಮಾವನ್ನು ಮತ್ತೊಂದು ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ.&lt;/p&gt;&lt;p&gt;ನನ್ನ ಪ್ರಕಾರ ಪ್ರಾಮಾಣಿಕತೆ ಬಹಳ ಮುಖ್ಯ. ನಿಮ್ಮ ಕಥೆ ಮತ್ತು ಪ್ರಾಜೆಕ್ಟ್&zwnj;ನ ಹಿಂದಿರುವ ನಿಮ್ಮ ಉದ್ದೇಶ ಶುದ್ಧವಾಗಿರಬೇಕು. ಪ್ರೇಕ್ಷಕರು ಅದನ್ನು ಗಮನಿಸುತ್ತಾರೆ. ನೀವು ಕೂಡ ಒಬ್ಬ ಪ್ರೇಕ್ಷಕರೇ. ಹೀಗಾಗಿ ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳಲು ಪ್ರತ್ಯೇಕವಾಗಿ ಅಧ್ಯಯನ ಮಾಡುವ ಅಗತ್ಯವಿಲ್ಲ. ನೀವು ನಿಮ್ಮ ಕೆಲಸದಲ್ಲಿ ಪ್ರಾಮಾಣಿಕವಾಗಿರಬೇಕು ಎನ್ನುತ್ತಾರೆ ಪೃಥ್ವಿ.&lt;/p&gt;&lt;h2&gt;&lt;strong&gt;ಪ್ರೇಕ್ಷಕರ ಮೇಲೆ ಹಾಕುವುದಕ್ಕೂ ಅವರು ಸಿದ್ಧರಿಲ್ಲ.&lt;/strong&gt;&lt;/h2&gt;&lt;p&gt;ನನ್ನ ಸಿನಿಮಾ ಕೆಲಸ ಮಾಡದಿದ್ದರೆ ನಾನು ಪ್ರೇಕ್ಷಕರನ್ನು ದೂಷಿಸುವುದಿಲ್ಲ. ಅವರ ತಲೆಗೆ ಗನ್ ಇಟ್ಟು &lsquo;ನನ್ನ ಸಿನಿಮಾ ನೋಡಿ&rsquo; ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾವೊಂದು ಕಲೆಯಾಗಿ ಸುಂದರವಾಗಿರುವುದೇ ಇದರಿಂದ ಜನರನ್ನು ಸಿನಿಮಾ ಇಷ್ಟಪಡುವಂತೆ ನೀವು ಲಾಬಿ ಮಾಡಲು ಸಾಧ್ಯವಿಲ್ಲ. ಪ್ರೇಕ್ಷಕರು ಒಂದು ಸಿನಿಮಾವನ್ನು ಇಷ್ಟಪಟ್ಟರೆ, ಅದು ಚಿತ್ರಮಂದಿರದಲ್ಲಿರಲಿ ಅಥವಾ ಒಟಿಟಿಯಲ್ಲಿರಲಿ, ಆ ಸಿನಿಮಾಗೆ ಸಿಗಬೇಕಾದ ಕ್ರೆಡಿಟ್ ಸಿಗುತ್ತದೆ. ನಾನು ಇನ್ನೂ ಒಳ್ಳೆಯ ಸಿನಿಮಾಗಳನ್ನು ಮಾಡಲು ಮತ್ತು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ಕಾಯುತ್ತಿದ್ದೇನೆ ಎಂದು ಪೃಥ್ವಿ ಹೇಳಿದ್ದಾರೆ.&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಮೂಲಕ ಪೃಥ್ವಿ ಅಂಬಾರ್ ಮತ್ತೊಮ್ಮೆ ಪ್ರೇಕ್ಷಕರಿಗೆ ಹತ್ತಿರವಾದ ಭಾವನಾತ್ಮಕ ಜಗತ್ತಿಗೆ ಮರಳಿದ್ದಾರೆ. ಆದರೆ ಈ ಬಾರಿ ಅವರೊಂದಿಗೆ ಪ್ರೇಮಕಥೆಗಳನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿರುವ ಮತ್ತೊಂದು ತಲೆಮಾರಿನ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಇದ್ದಾರೆ. ಇನ್ನು ಪೃಥ್ವಿ ಅವರ ಮಾತಿನಲ್ಲೇ ಹೇಳುವುದಾದರೆ, ನಾಗತಿಹಳ್ಳಿ ಸರ್ &lsquo;ಅಮೆರಿಕಾ ಅಮೆರಿಕಾ&rsquo;ದ ವೈಬ್ ಮತ್ತು ಭಾವನೆಯನ್ನು ಉಳಿಸಿಕೊಂಡಿದ್ದಾರೆ. ಆದರೆ ಕಥೆ ಮಾತ್ರ ವಿಭಿನ್ನವಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actor-pruthvi-ambaar-talks-america-america-2-nirup-bhandari-shanvi-srivastava-and-modern-love-gvd/articleshow-gpr1ien"/>
        </item>
        <item>
            <title><![CDATA[ಹೀರೋಯಿನ್ ಆಗಿ ಕಾಣಿಸಿಕೊಳ್ಳುವುದಲ್ಲ, ಪಾತ್ರಕ್ಕೆ ಬೆಲೆ ಬೇಕು: ನಟಿ ಶಾನ್ವಿ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</link>
            <guid isPermaLink="true">https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb</guid>
            <pubDate>Sun, 06 Sep 2026 17:28:16 +0530</pubDate>
            <description><![CDATA[&lt;p&gt;ನಟಿ ಶಾನ್ವಿ ಶ್ರೀವಾಸ್ತವ ತಮ್ಮ ಹತ್ತು ವರ್ಷಗಳ ಸಿನಿ ಪಯಣ, ಸಿನಿಮಾ ಆಯ್ಕೆ ಮತ್ತು &lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದ ಅನುಭವದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುವುದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v93fr077m708rw5gzpvhw6,imgname-jbkjb-1788695658240.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕ ಕಳೆದಿದೆ ನಟಿ ಶಾನ್ವಿ ಶ್ರೀವಾಸ್ತವ ಅವರಿಗೆ. ಈ ಹತ್ತು ವರ್ಷಗಳಲ್ಲಿ ಸಿನಿಮಾ ಬದಲಾಗಿದೆ, ಚಿತ್ರರಂಗದ ಆದ್ಯತೆಗಳು ಬದಲಾಗಿವೆ, ಅದರೊಂದಿಗೆ ತಮ್ಮ ಆಲೋಚನೆಗಳೂ ಬದಲಾಗಿವೆ ಎನ್ನುತ್ತಾರೆ ಶಾನ್ವಿ. &lsquo;ಚಂದ್ರಲೇಖಾ&rsquo; ಮೂಲಕ ಸಿನಿರಂಗಕ್ಕೆ ಪರಿಚಯವಾದ ಅವರು ಬಳಿಕ &lsquo;ಮಾಸ್ಟರ್&zwnj;ಪೀಸ್&rsquo;, &lsquo;ಅವನೇ ಶ್ರೀಮನ್ನಾರಾಯಣ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಇದೀಗ ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ &lsquo;ಅಮೆರಿಕಾ ಅಮೆರಿಕಾ 2&rsquo; ಮೂಲಕ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಹತ್ತು ವರ್ಷಗಳ ಸಿನಿ ಪಯಣವನ್ನು Cinema Express ಜೊತೆ ಮೆಲುಕು ಹಾಕಿರುವ ಶಾನ್ವಿ, ಪರದೆಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ, ತಾನು ಮಾಡುವ ಕೆಲಸಕ್ಕೆ ಸಿಗುವ ಮೌಲ್ಯವೇ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಂಡಿರುವುದಾಗಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;&lsquo;ನಾನು ಮಾತ್ರ ಬದಲಾಗಿಲ್ಲ, ಸುತ್ತಲಿನ ಎಲ್ಲವೂ ಬದಲಾಗಿದೆ&rsquo;&lt;/strong&gt;&lt;/p&gt;&lt;p&gt;ನನ್ನನ್ನು ಹೊರತುಪಡಿಸಿ ನನ್ನ ಸುತ್ತಲಿನ ಬಹುತೇಕ ಎಲ್ಲವೂ ಬದಲಾಗಿದೆ. ಅದೂ ಒಳ್ಳೆಯ ರೀತಿಯಲ್ಲಿ. ಇದರೊಂದಿಗೆ ಸಿನಿಮಾಗಳನ್ನು ನೋಡುವ ಮತ್ತು ಕೆಲಸ ಆಯ್ಕೆ ಮಾಡುವ ನನ್ನ ದೃಷ್ಟಿಕೋನವೂ ಬದಲಾಗಿದೆ ಎನ್ನುತ್ತಾರೆ ಶಾನ್ವಿ. ವೃತ್ತಿಜೀವನದ ಆರಂಭದಲ್ಲಿ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಾ ಇರಬೇಕು ಎಂಬ ಉತ್ಸಾಹ ಅವರಲ್ಲಿತ್ತು. ಆದರೆ ಕಾಲ ಕಳೆದಂತೆ ಕೇವಲ ಬ್ಯುಸಿಯಾಗಿರಲು ಸಿನಿಮಾ ಮಾಡುವುದು ಸರಿಯಲ್ಲ ಎಂಬ ಅರಿವು ಮೂಡಿತು.&lt;/p&gt;&lt;p&gt;ಒಂದು ಹಂತದಲ್ಲಿ ಹಣ ಸಂಪಾದನೆಗಾಗಿ ಸಿನಿಮಾಗಳನ್ನು ಮಾಡುತ್ತಾ, ಸದಾ ಸರ್ವೈವಲ್ ಮೋಡ್&zwnj;ನಲ್ಲಿ ಇರಲು ನನಗೆ ಇಷ್ಟವಿಲ್ಲ ಎಂಬ ಭಾವನೆ ಬಂತು. ನನ್ನ ಮಧ್ಯಮ ವರ್ಗದ ಮನಸ್ಥಿತಿಯೇ ನನ್ನನ್ನು ಉಳಿಸಿತು. ವೃತ್ತಿಜೀವನದ ಆರಂಭದಲ್ಲಿ ನನಗಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡೆ. ನಂತರ ನನಗೆ ಇಷ್ಟವಾಗುವ ಸ್ಕ್ರಿಪ್ಟ್&zwnj;ಗಳನ್ನು ಆಯ್ಕೆ ಮಾಡಿಕೊಳ್ಳುವ ಹಾದಿಗೆ ಬಂದೆ. ಇದಕ್ಕೆ ಸಮಯ ಬೇಕಾಗುತ್ತದೆ. ನನ್ನ ಕಡೆಯಿಂದಲೂ, ತಂಡದ ಕಡೆಯಿಂದಲೂ ಸಾಕಷ್ಟು ರಿಜೆಕ್ಷನ್ ಎದುರಿಸಬೇಕಾಗುತ್ತದೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕಾಣಿಸಿಕೊಳ್ಳುವುದಕ್ಕಿಂತ ಮೌಲ್ಯ ಸಿಗುವುದು ಮುಖ್ಯ&rsquo;&lt;/strong&gt;&lt;/p&gt;&lt;p&gt;ಚಿತ್ರರಂಗದಲ್ಲಿ ಸದಾ ಕಾಣಿಸಿಕೊಳ್ಳುವುದು ಮುಖ್ಯ ಎನ್ನುವ ಮಾತಿದೆ. ಆದರೆ ಶಾನ್ವಿ ಅವರ ಪ್ರಕಾರ ಕೇವಲ ಗೋಚರತೆಯ ಹಿಂದೆ ಓಡುವುದಕ್ಕಿಂತ, ತಮಗೆ ಸೂಕ್ತವಾದ ಪಾತ್ರಕ್ಕಾಗಿ ಕಾಯುವುದು ಹೆಚ್ಚು ಮುಖ್ಯ.&lt;/p&gt;&lt;p&gt;ನಾವು ಸಿನಿಮಾಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳಬೇಕು. ಜನರು ಹೇಳುವಂತೆ &lsquo;Out of sight, out of mind&rsquo; ಎನ್ನುವುದು ನಿಜ. ಆದರೆ ಒಂದು ಸಿನಿಮಾದಲ್ಲಿ ಇದ್ದರೂ ನಮ್ಮನ್ನು ಮೌಲ್ಯಯುತವಾಗಿ ಕಾಣದಿದ್ದರೆ ಅದರಿಂದ ಏನು ಪ್ರಯೋಜನ? ಒಂದು ಹಂತದಲ್ಲಿ ನಿಮ್ಮನ್ನು ನಿಜವಾಗಿಯೂ ಮೌಲ್ಯಯುತವಾಗಿ ಕಾಣುವ ಸಿನಿಮಾ ಬರುತ್ತದೆ. ನನಗೆ &lsquo;ಅಮೆರಿಕಾ ಅಮೆರಿಕಾ 2&rsquo; ಅಂಥ ಸಿನಿಮಾ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಿರ್ದೇಶಕರೇ ಹೀರೋ ಆಗಲಿ, ನಾನು ನಟಿಯಾಗಿ ಇರಲು ಬಯಸುತ್ತೇನೆ&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾವನ್ನು ಒಪ್ಪಿಕೊಳ್ಳಲು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗಿನ ಕೆಲಸವೂ ಪ್ರಮುಖ ಕಾರಣ ಎನ್ನುವ ಶಾನ್ವಿ, ನಿರ್ದೇಶಕ ಪ್ರಧಾನ ಸಿನಿಮಾಗಳಲ್ಲಿ ಕೆಲಸ ಮಾಡುವ ಸ್ವಾತಂತ್ರ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ರೀತಿಯ ಇನ್ನೂ ಹತ್ತು ಸ್ಕ್ರಿಪ್ಟ್&zwnj;ಗಳಿಗೆ ಸಹಿ ಹಾಕಲು ನಾನು ಸಿದ್ಧ. ನಿರ್ದೇಶಕ ಮತ್ತು ಸ್ಕ್ರಿಪ್ಟ್&zwnj;ಗಳೇ ಹೀರೋ ಆಗಿರಲಿ. ನಾನು ಕೇವಲ ನಟಿಯಾಗಿ ಇರಲು ಬಯಸುತ್ತೇನೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ನನಗೆ ಒಂದು ರೀತಿಯ ಸುರಕ್ಷಿತ ನೆಟ್ ಇದ್ದಂತೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಹೀರೋಯಿನ್&zwnj;ಗೆ ಕೇಂದ್ರದಲ್ಲಿರಬೇಕೆಂದೇನಿಲ್ಲ, ಆದರೆ ಸಮಾನ ಪ್ರಾಮುಖ್ಯ ಬೇಕು&rsquo;&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo;ರಲ್ಲಿ ಶಾನ್ವಿ ಅವರ ಪಾತ್ರ ಲವ್ ಟ್ರಯಾಂಗಲ್&zwnj;ನ ಭಾಗವಾಗಿದ್ದರೂ, ಇದು ಸಾಮಾನ್ಯ ಪ್ರೇಮಕಥೆಯಲ್ಲ ಎನ್ನುತ್ತಾರೆ ಅವರು. ತಮ್ಮ ಪಾತ್ರಕ್ಕೆ ನೀಡಿರುವ ಭಾವನಾತ್ಮಕ ಆಳವೇ ಸಿನಿಮಾವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ನಾನು ಹುಡುಕುತ್ತಿದ್ದ ವಿಷಯವೇ ಇದು. ಕಥೆಯ ಕೇಂದ್ರಬಿಂದುವಾಗಿರದೇ ಇದ್ದರೂ, ಪಾತ್ರಕ್ಕೆ ಸಮಾನವಾದ ಪ್ರಾಮುಖ್ಯ ಇರಬೇಕು ಎಂಬುದು ನನ್ನ ಬಯಕೆ. ಶೇ.90ರಷ್ಟು ನಾಯಕಿಯರು ಇಂಥ ಜಾಗಕ್ಕಾಗಿ ಹೋರಾಡುತ್ತಿದ್ದಾರೆ. ಅಂತಹ ಅವಕಾಶ ಸಿಕ್ಕಾಗ ನಾವು ಅದನ್ನು ಹಿಡಿದುಕೊಳ್ಳುತ್ತೇವೆ. ನನಗೆ ಅವಕಾಶ ಸಿಕ್ಕು ನಾನು ಅದನ್ನು ತೆಗೆದುಕೊಳ್ಳದಿದ್ದರೆ, ಅದು ನನ್ನದೇ ನಷ್ಟ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಇದು ಕೇವಲ ಪ್ರೇಮಕಥೆಯಲ್ಲ, ಸಂಪೂರ್ಣ ಮಹಿಳೆಯ ಕಥೆ&rsquo;&lt;/strong&gt;&lt;/p&gt;&lt;p&gt;ಸಿನಿಮಾ ಕೇವಲ ಪ್ರೀತಿ ಮತ್ತು ಸಂಬಂಧಗಳ ಸುತ್ತ ಸುತ್ತುವುದಿಲ್ಲ. ಮಹಿಳೆಯೊಬ್ಬಳು ತನ್ನ ಜೀವನದಲ್ಲಿ ಎದುರಿಸುವ ಹಲವು ಸಂಬಂಧಗಳು, ಜವಾಬ್ದಾರಿಗಳು ಮತ್ತು ತನ್ನನ್ನು ತಾನು ಹುಡುಕಿಕೊಳ್ಳುವ ಪಯಣವನ್ನೂ ಸಿನಿಮಾ ಹೇಳುತ್ತದೆ ಎನ್ನುವುದು ಶಾನ್ವಿ ಮಾತು. ಈ ಸಿನಿಮಾ ಒಬ್ಬ ಸಂಪೂರ್ಣ ಮಹಿಳೆಯನ್ನು ಪ್ರತಿನಿಧಿಸುತ್ತದೆ. ಮಹಿಳೆಯರು ಪ್ರೀತಿಯನ್ನು ಕಂಡುಕೊಳ್ಳುತ್ತಾರಾ? ಖಂಡಿತ. ಆದರೆ ಅದಕ್ಕಿಂತ ಮೊದಲು ನೀವು ನಿಮ್ಮನ್ನು ನೀವು ಕಂಡುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಈ ಸಿನಿಮಾದಲ್ಲಿ ನನ್ನ ಲುಕ್ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ&rsquo;&lt;/strong&gt;&lt;/p&gt;&lt;p&gt;ಸಿನಿಮಾದಲ್ಲಿ ತಮ್ಮ ಪಾತ್ರದ ಜೊತೆಗೆ ತಮ್ಮ ನೋಟ ಮತ್ತು ಅಭಿನಯದ ವಿಚಾರದಲ್ಲೂ ಸಾಕಷ್ಟು ಸ್ವಾತಂತ್ರ್ಯ ಸಿಕ್ಕಿತು ಎನ್ನುತ್ತಾರೆ ಶಾನ್ವಿ. ಮಹಿಳಾ ನಟಿಯಾಗಿದ್ದಾಗ ಎಲ್ಲವೂ ಅಚ್ಚುಕಟ್ಟಾಗಿ, ಪರಿಪೂರ್ಣವಾಗಿ ಕಾಣಬೇಕು ಎಂಬ ನಿರೀಕ್ಷೆ ಇರುತ್ತದೆ. ಮುಖದ ಮೇಲೆ ಸಣ್ಣ ಮೊಡವೆ ಇದ್ದರೂ ಅದನ್ನು ದೊಡ್ಡ ವಿಚಾರವಾಗಿ ನೋಡಲಾಗುತ್ತದೆ. ಆದರೆ ಈ ಸಿನಿಮಾದಲ್ಲಿ ನಾನು ಸಂಪೂರ್ಣ ಕೇರ್&zwnj;ಫ್ರೀ ಆಗಿದ್ದೆ. ನಿಜವಾಗಿಯೂ ಆ ಪಾತ್ರವನ್ನು ಬದುಕಿದ್ದೇನೆ ಎಂದು ಅವರು ಹೇಳಿದ್ದಾರೆ.&lt;img&gt;&lt;/p&gt;&lt;p&gt;&lt;strong&gt;&lsquo;ನಿರೂಪ್ ಮತ್ತು ಪೃಥ್ವಿ ನನ್ನ ಶಕ್ತಿಯ ಕಂಬಗಳು&rsquo;&lt;/strong&gt;&lt;/p&gt;&lt;p&gt;ಸಹನಟರಾದ ನಿರೂಪ್ ಭಂಡಾರಿ ಮತ್ತು ಪೃಥ್ವಿ ಅಂಬಾರ್ ಅವರೊಂದಿಗಿನ ಕೆಲಸವೂ ಸಿನಿಮಾದ ಅನುಭವವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ಶಾನ್ವಿ ಹೇಳಿದ್ದಾರೆ. ನನ್ನ ಸಹನಟರು ನನ್ನ ಶಕ್ತಿಯ ಕಂಬಗಳಾಗಿದ್ದರು. ಅವರು ನನಗೆ ನೀಡಿದ ಸ್ಪೇಸ್ ಮತ್ತು ಸ್ವಾತಂತ್ರ್ಯ, ಪ್ರತಿಯೊಂದು ಶಾಟ್&zwnj;ನ ನಂತರ ನಾವು ನಡೆಸುತ್ತಿದ್ದ ಚರ್ಚೆಗಳು ಸಾಕಷ್ಟು ವ್ಯತ್ಯಾಸ ತಂದವು. ನಮ್ಮ ಈ ಸಹಕಾರ ತೆರೆಮೇಲೂ ಕಾಣಿಸುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;&lsquo;ಭಾವನೆಗಳನ್ನು ನುಗ್ಗಿಸದೆ ಕಟ್ಟಿಕೊಡುವ ನಿರ್ದೇಶಕರು ಬಹಳ ಕಡಿಮೆ&rsquo;&lt;/strong&gt;&lt;/p&gt;&lt;p&gt;ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಬಗ್ಗೆ ಮಾತನಾಡಿದ ಶಾನ್ವಿ, ಭಾವನೆಗಳನ್ನು ಆತುರಪಡಿಸದೆ ಸಹಜವಾಗಿ ತೆರೆಗೆ ತರುವ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡಿದ್ದಾರೆ. ತೆರೆಯ ಮೇಲೆ ಭಾವನೆಗಳನ್ನು ಸಮರ್ಥವಾಗಿ ಕಟ್ಟಿಕೊಡಬಲ್ಲ ನಿರ್ದೇಶಕರು ಬಹಳ ಕಡಿಮೆ. ಅವರು ಭಾವನೆಗಳನ್ನು ಆತುರದಲ್ಲಿ ತೋರಿಸುವುದಿಲ್ಲ. ಹೀಗಾಗಿ ಕುಟುಂಬ ಪ್ರೇಕ್ಷಕರು ಸಿನಿಮಾದೊಂದಿಗೆ ಸುಲಭವಾಗಿ ಕನೆಕ್ಟ್ ಆಗುತ್ತಾರೆ ಎಂದು ಶಾನ್ವಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಇದು ಕಂಬ್ಯಾಕ್&zwnj;ಗಾಗಿ ಲೆಕ್ಕ ಹಾಕಿ ಮಾಡಿದ ಸಿನಿಮಾ ಅಲ್ಲ&rsquo;&lt;/strong&gt;&lt;/h2&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ತಮ್ಮ ಲೆಕ್ಕಾಚಾರದ ಕಂಬ್ಯಾಕ್ ಸಿನಿಮಾ ಅಲ್ಲ ಎನ್ನುವುದು ಶಾನ್ವಿ ಅವರ ಸ್ಪಷ್ಟನೆ. ಸರಿಯಾದ ಸಮಯದಲ್ಲಿ, ಸರಿಯಾದ ಕಥೆ ಮತ್ತು ಸರಿಯಾದ ತಂಡದೊಂದಿಗೆ ಸಿನಿಮಾ ಸಿಕ್ಕಿದೆ ಎಂಬ ಭಾವನೆ ಅವರದು. ಸಿನಿಮಾದಲ್ಲಿ ಸರಿ ಅಥವಾ ತಪ್ಪು ಎಂಬುದಿಲ್ಲ. ಪ್ರೇಕ್ಷಕರ ಭಾವನೆಗಳನ್ನು ಮುಟ್ಟುವ ಸಿನಿಮಾ ಯಾವಾಗಲೂ ಸರಿಯಾದ ಸಿನಿಮಾವೇ. ಅದು ಪ್ರತಿಯೊಬ್ಬ ವ್ಯಕ್ತಿಯ ಅನುಭವ ಮತ್ತು ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ ಎಂದು ಶಾನ್ವಿ ಶ್ರೀವಾಸ್ತವ ಹೇಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹತ್ತು ವರ್ಷಗಳ ಸಿನಿ ಪಯಣದ ಬಳಿಕ ಕೇವಲ ಕಾಣಿಸಿಕೊಳ್ಳುವುದಕ್ಕಾಗಿ ಸಿನಿಮಾ ಮಾಡುವ ಬದಲು, ತಮ್ಮ ಪಾತ್ರಕ್ಕೆ ಮೌಲ್ಯ ಸಿಗುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ನಿಲುವಿಗೆ ಶಾನ್ವಿ ಬಂದಿದ್ದಾರೆ. &lsquo;ಅಮೆರಿಕಾ ಅಮೆರಿಕಾ 2&rsquo; ಈ ಹೊಸ ಹಂತದ ಪಯಣದಲ್ಲಿ ಅವರಿಗೆ ಎಷ್ಟರ ಮಟ್ಟಿಗೆ ವಿಶೇಷವಾಗಲಿದೆ ಎಂಬುದನ್ನು ಸೆಪ್ಟೆಂಬರ್ 11ರಂದು ಸಿನಿಮಾ ತೆರೆಕಂಡ ಬಳಿಕ ನೋಡಬೇಕಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-shanvi-srivastava-opens-up-about-her-role-in-america-america-2-interview-gvd/articleshow-ki9c5cb"/>
        </item>
        <item>
            <title><![CDATA[ಹೊಸ ದೃಷ್ಟಿಕೋನದಲ್ಲಿ BGM ಇಲ್ಲದ ಹಾರರ್: ‘ವಿಡಿಯೋ’ ಜೊತೆ ಬಂದ ನಿರ್ದೇಶಕ ಶ್ರೀನಿಧಿ]]></title>
            <link>https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347</link>
            <guid isPermaLink="true">https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347</guid>
            <pubDate>Sun, 06 Sep 2026 16:52:47 +0530</pubDate>
            <description><![CDATA[&lt;p&gt;&lsquo;ಬ್ಲಿಂಕ್&rsquo; ಮತ್ತು &lsquo;ಜೆರಾಕ್ಸ್&rsquo; ಬಳಿಕ ನಿರ್ದೇಶಕ ಶ್ರೀನಿಧಿ ಬೆಂಗಳೂರು &lsquo;ವಿಡಿಯೋ&rsquo; ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಫೌಂಡ್ ಫುಟೇಜ್ ಹಾರರ್ ಜಾನರ್&zwnj;ನಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ 7ರಿಂದ 12 ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v78z0p8ak0xzc286reqtdq,imgname-bb-1788693740566.png" type="image/jpeg" height="390" width="690"/>
            <content:encoded><![CDATA[&lt;p&gt;ಸೇಫ್ ಗೇಮ್ ಆಡುವುದು ನಿರ್ದೇಶಕ ಶ್ರೀನಿಧಿ ಬೆಂಗಳೂರಿಗೆ ಎಂದಿಗೂ ಇಷ್ಟವಿಲ್ಲ. &lsquo;ಬ್ಲಿಂಕ್&rsquo; ಸಿನಿಮಾದ ಸೈನ್ಸ್ ಫಿಕ್ಷನ್&zwnj;ನಿಂದ ಹಿಡಿದು ನಾಗಭೂಷಣ ಅಭಿನಯದ ಫ್ಯಾಂಟಸಿ ಕಾಮಿಡಿ &lsquo;ಜೆರಾಕ್ಸ್&rsquo;ವರೆಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ಅವರು, ಇದೀಗ ತಮ್ಮ ಮೂರನೇ ಚಿತ್ರ &lsquo;ವಿಡಿಯೋ&rsquo; ಮೂಲಕ ಮತ್ತೊಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಬಾರಿ ಅವರ ಆಯ್ಕೆ &lsquo;ಫೌಂಡ್ ಫುಟೇಜ್&rsquo; ಹಾರರ್.&lt;/p&gt;&lt;p&gt;ಸೆಪ್ಟೆಂಬರ್ 11ರಂದು ತೆರೆಗೆ ಬರಲಿರುವ &lsquo;ವಿಡಿಯೋ&rsquo; ಸಿನಿಮಾ ನಟ ದೀಕ್ಷಿತ್ ಶೆಟ್ಟಿ ಅವರ ಸ್ವಂತ ಬ್ಯಾನರ್ &lsquo;ಧೀ ಸಿನಿಮಾಸ್&rsquo; ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವೂ ಹೌದು. ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಪಾತ್ರಗಳನ್ನು ಸೆರೆಹಿಡಿಯಲು ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದ್ದು, ಸಾಂಪ್ರದಾಯಿಕ ಹಿನ್ನೆಲೆ ಸಂಗೀತವಿಲ್ಲದೇ ನೈಜ ವಾತಾವರಣದ ಶಬ್ದಗಳ ಮೂಲಕವೇ ಭಯದ ಅನುಭವ ಕಟ್ಟಿಕೊಡಲಾಗಿದೆ.&lt;/p&gt;&lt;p&gt;&lt;strong&gt;&lsquo;ಹೊಸದೇನಾದರೂ ಮಾಡಬೇಕು ಎಂಬ ಹಂಬಲವಿತ್ತು&rsquo;&lt;/strong&gt;&lt;/p&gt;&lt;p&gt;ತಮ್ಮ ಪ್ರಯೋಗದ ಬಗ್ಗೆ Cinema Express ಜೊತೆ ಮಾತನಾಡಿರುವ ಶ್ರೀನಿಧಿ, ನಾನು ಯಾವಾಗಲೂ ವಿಭಿನ್ನವಾಗಿ ಏನಾದರೂ ಪ್ರಯತ್ನಿಸಬೇಕು ಎಂದುಕೊಳ್ಳುತ್ತಿದ್ದೆ. &lsquo;ಬ್ಲಿಂಕ್&rsquo; ನಂತರವೇ &lsquo;ವಿಡಿಯೋ&rsquo; ಕಥೆ ನನ್ನ ಬಳಿ ಸಿದ್ಧವಾಗಿತ್ತು. &lsquo;ಜೆರಾಕ್ಸ್&rsquo; ಅನ್ನು ಒಟಿಟಿ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದೆ. ನಾವು ಸ್ನೇಹಿತರು ಸೇರಿ ಸಿನಿಮಾ ಮಾಡಿದಾಗ ಜನರು ತಮ್ಮ ಸಮಯವನ್ನು ನಮ್ಮ ಸಿನಿಮಾಗೆ ಯಾಕೆ ಕೊಡಬೇಕು ಎಂದು ಚರ್ಚಿಸುತ್ತಿದ್ದೆವು.&lt;/p&gt;&lt;p&gt;ಪ್ರೇಮಕಥೆಗಳು ಮತ್ತು ಈಗಾಗಲೇ ಸಾಕಷ್ಟು ಬಾರಿ ಹೇಳಿರುವ ಕಥೆಗಳು ನಿರಂತರವಾಗಿ ಬರುತ್ತಿವೆ. ನಾವೂ ಅದೇ ಹಾದಿಯಲ್ಲಿ ಹೋದರೆ ಆ ಜನಸಂದಣಿಯಲ್ಲಿ ನಮ್ಮ ಸಿನಿಮಾ ಕಳೆದುಹೋಗಬಹುದು. ಹೀಗಾಗಿ ಹೊಸ ಪ್ರಕಾರವನ್ನು ಪ್ರಯತ್ನಿಸಬೇಕು ಎಂದುಕೊಂಡೆ. ಜನರು ಸಿನಿಮಾವನ್ನು ಟೀಕಿಸಿದರೂ ಪರವಾಗಿಲ್ಲ, ಕನಿಷ್ಠ ಅದರ ಬಗ್ಗೆ ಮಾತನಾಡುವಂತಿರಬೇಕು. ಅಪರೂಪದ ಜಾನರ್&zwnj;ನಲ್ಲಿ ಪ್ರಯತ್ನಿಸುವುದರಿಂದ ನಮ್ಮದೇ ಆದ ಗುರುತು ಸಿಗಬಹುದು ಎಂಬ ನಂಬಿಕೆ ನನ್ನದು ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಫೌಂಡ್ ಫುಟೇಜ್&rsquo; ಆಯ್ಕೆ ಯಾಕೆ?&lt;/strong&gt;&lt;/p&gt;&lt;p&gt;ಈ ಹುಡುಕಾಟವೇ ಶ್ರೀನಿಧಿ ಅವರನ್ನು &lsquo;ಫೌಂಡ್ ಫುಟೇಜ್&rsquo; ಮಾದರಿಯ ಹಾರರ್&zwnj;ನತ್ತ ಕರೆದೊಯ್ದಿದೆ. ಕಡಿಮೆ ಬಜೆಟ್&zwnj;ನಲ್ಲೂ ಸಿನಿಮಾದ ನೈಜತೆಯನ್ನು ಉಳಿಸಿಕೊಳ್ಳಲು ಈ ಮಾದರಿ ಸಹಕಾರಿಯಾಯಿತು. ಆದರೆ ಆರಂಭದಲ್ಲಿ &lsquo;ವಿಡಿಯೋ&rsquo; ಇನ್ನಷ್ಟು ವಿಭಿನ್ನ ರೀತಿಯಲ್ಲೇ ಇರಬೇಕೆಂದು ಅವರು ಬರೆದಿದ್ದರಂತೆ.&lt;/p&gt;&lt;p&gt;ಮೊದಲಿಗೆ ನಾನು ಸಂಭಾಷಣೆ ಅಥವಾ ಪಾತ್ರಗಳ ವಿವರಗಳಿಲ್ಲದೆ ಕೇವಲ ಘಟನೆಗಳನ್ನು ಮಾತ್ರ ಬರೆದಿದ್ದೆ. ಶೂಟಿಂಗ್ ಸೆಟ್&zwnj;ನಲ್ಲೇ ಎಲ್ಲವನ್ನೂ ವರ್ಕ್&zwnj;ಶಾಪ್ ಮಾಡಿ, ಕಲಾವಿದರಿಂದ ಸಹಜವಾದ ಅಭಿನಯ ಹೊರತರಬಹುದು ಎಂದುಕೊಂಡಿದ್ದೆ. ಆದರೆ ಪ್ರಯತ್ನಿಸಿದಾಗ ನಟರಿಗೆ ಗೊಂದಲವಾಯಿತು. ಹೀಗಾಗಿ ನೈಜ ಅಭಿನಯಕ್ಕೆ ಹತ್ತಿರವಾಗಿರುವ ಶೈಲಿಯನ್ನು ಅಳವಡಿಸಿಕೊಂಡೆ. ಒಬ್ಬರ ಮಾತಿನ ಮೇಲೆ ಮತ್ತೊಬ್ಬರು ಮಾತನಾಡುವುದು, ಸ್ನೇಹಿತರು ನಿಜ ಜೀವನದಲ್ಲಿ ಹೇಗೆ ಮಾತನಾಡುತ್ತಾರೋ ಅದೇ ರೀತಿಯ ಸಂಭಾಷಣೆ ಇರಲಿ ಎಂದು ನಿರ್ಧರಿಸಿದೆ ಎಂದು ಶ್ರೀನಿಧಿ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಮೊದಲು &lsquo;ಟಾರ್ಲೆ ಬಾಯ್ಸ್&rsquo; ಆಗಿದ್ದ ಪಾತ್ರಗಳು&lt;/strong&gt;&lt;/p&gt;&lt;p&gt;ಸಿನಿಮಾದ ಪಾತ್ರಗಳು ಆರಂಭದಲ್ಲಿ ಮೂವರು ಬ್ಲಾಗರ್&zwnj;ಗಳಾಗಿದ್ದರು. ನಿರ್ದೇಶಕರು ಅವರನ್ನು &lsquo;ಟಾರ್ಲೆ ಬಾಯ್ಸ್&rsquo; ಎಂದು ಕರೆಯುತ್ತಿದ್ದರು. ನಂತರ ತಂಡವನ್ನು ವಿಸ್ತರಿಸಿ ಮತ್ತಿಬ್ಬರು ಕಲಾವಿದರನ್ನು ಸೇರಿಸಲಾಯಿತು. &lsquo;ವಿಡಿಯೋ&rsquo;ದ ಮೊದಲ ಭಾಗದಲ್ಲಿ ಹಾಸ್ಯ ಮತ್ತು ಹಗುರವಾದ ಮನರಂಜನೆಯ ಅಂಶಗಳಿದ್ದು, ನಂತರ ಕಥೆ ನಿಧಾನವಾಗಿ ಹಾರರ್ ಜಾನರ್&zwnj;ಗೆ ತಿರುಗುತ್ತದೆ. ಪ್ರೇಕ್ಷಕರನ್ನು ಮೊದಲು ಪಾತ್ರಗಳೊಂದಿಗೆ ಕನೆಕ್ಟ್ ಮಾಡಿಸಿ, ಬಳಿಕ ಅವರನ್ನೇ ಭಯದ ವಾತಾವರಣದೊಳಗೆ ಕರೆದೊಯ್ಯುವುದು ನಿರ್ದೇಶಕರ ಉದ್ದೇಶವಾಗಿದೆ.&lt;/p&gt;&lt;p&gt;&lt;strong&gt;ನಿಜ ಜೀವನದ ಅನುಭವದಿಂದ ಹುಟ್ಟಿದ ಭಯ&lt;/strong&gt;&lt;/p&gt;&lt;p&gt;ಜನರಿಗೆ ಯಾವ ಸಂದರ್ಭಗಳಲ್ಲಿ ಭಯ ಮೂಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಶ್ರೀನಿಧಿ ಹಲವು ಫೌಂಡ್-ಫುಟೇಜ್ ವಿಡಿಯೋಗಳು ಹಾಗೂ ಹಾರರ್ ಅನುಭವಗಳನ್ನು ಗಮನಿಸಿದ್ದಾರೆ. ಈ ವೇಳೆ ತಮ್ಮದೇ ಒಂದು ಅನುಭವ ಅವರಿಗೆ &lsquo;ವಿಡಿಯೋ&rsquo; ಸಿನಿಮಾದ ಭಯದ ಜಗತ್ತಿಗೆ ಪ್ರಮುಖ ಸುಳಿವಾಗಿದೆ.&lt;/p&gt;&lt;p&gt;ನಾನು ಆಂಧ್ರಪ್ರದೇಶಕ್ಕೆ ಸಂಬಂಧಿಕರೊಬ್ಬರನ್ನು ಭೇಟಿಯಾಗಲು ಹೋಗಿದ್ದೆ. ಒಂದು ರಾತ್ರಿ ಸುಮಾರು ಮಧ್ಯರಾತ್ರಿ ವೇಳೆಗೆ ಹಳ್ಳಿಯೊಂದರಲ್ಲಿ ಇದ್ದೆ. ಆಗ ಒಂದು ರೀತಿಯ ಭಯ ನನ್ನನ್ನು ಆವರಿಸಿತು. ಆ ಜಾಗ ನಮಗೆ ಅಪರಿಚಿತವಾಗಿದ್ದಾಗಲೇ ಭಯ ಹೆಚ್ಚಾಗುತ್ತದೆ ಎಂಬುದು ನನಗೆ ಅರ್ಥವಾಯಿತು.&lt;/p&gt;&lt;p&gt;ಆ ಜಾಗ ಹೇಗಿದೆ, ಅಲ್ಲಿನ ವಾತಾವರಣ ಹೇಗಿದೆ, ನಮ್ಮ ಸುತ್ತಮುತ್ತ ಇರುವ ಜನರು ಯಾರು ಎಂಬುದು ಗೊತ್ತಿಲ್ಲದಿರುವುದು ನಮ್ಮೊಳಗೆ ಒಂದು ರೀತಿಯ ಆತಂಕ ಹುಟ್ಟಿಸುತ್ತದೆ. &lsquo;ವಿಡಿಯೋ&rsquo; ಸಿನಿಮಾ ಮಾಡುವಾಗ ಈ ಆಲೋಚನೆ ನನಗೆ ಬಹಳ ಮುಖ್ಯವಾಗಿತ್ತು ಎಂದು ಶ್ರೀನಿಧಿ ಹೇಳಿದ್ದಾರೆ.&lt;/p&gt;&lt;p&gt;ಕನ್ನಡ ಸಿನಿಮಾಗಳಿಂದಲೂ ಅವರು ಸ್ಫೂರ್ತಿ ಪಡೆದಿದ್ದಾರೆ. &lsquo;ಆಪ್ತಮಿತ್ರ&rsquo; ಸಿನಿಮಾದಲ್ಲಿ ಕನ್ನಡದವರಲ್ಲದ ಆತ್ಮದ ಪರಿಕಲ್ಪನೆ ಕೂಡ ಭಾಷೆ ಮತ್ತು ಅಪರಿಚಿತತೆಯೇ ಹೇಗೆ ಭಯವನ್ನು ಹೆಚ್ಚಿಸಬಹುದು ಎಂಬ ಆಲೋಚನೆ ಮೂಡಿಸಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಬ್ಲಾಗ್&rsquo; ಆಗಿದ್ದ ಸಿನಿಮಾ &lsquo;ವಿಡಿಯೋ&rsquo; ಆದ ಕಥೆ&lt;/strong&gt;&lt;/p&gt;&lt;p&gt;ಸಿನಿಮಾಕ್ಕೆ ಆರಂಭದಲ್ಲಿ &lsquo;ಬ್ಲಾಗ್&rsquo; ಎಂಬ ಶೀರ್ಷಿಕೆ ಇಡಲಾಗಿತ್ತು. ಕಥೆಯಲ್ಲಿರುವ ಎಲ್ಲಾ ಪಾತ್ರಗಳೂ ಬ್ಲಾಗರ್&zwnj;ಗಳಾಗಿದ್ದು, ಅವರ ಜೀವನವೇ ಕಥೆಯೊಂದಿಗೆ ಬೆಸೆದುಕೊಂಡಿರುವ ಕಾರಣ ಈ ಹೆಸರನ್ನು ಆಯ್ಕೆ ಮಾಡಲಾಗಿತ್ತು.&lt;/p&gt;&lt;p&gt;ಆದರೆ ನನ್ನ ಸ್ನೇಹಿತರು ಮಾತ್ರವಲ್ಲದೆ ನನ್ನ ತಾಯಿಗೂ &lsquo;ಬ್ಲಾಗ್&rsquo; ಎನ್ನುವುದು ಉಚ್ಚರಿಸಲು ಸ್ವಲ್ಪ ಕಷ್ಟವಾಗುತ್ತಿತ್ತು. ಹೀಗಾಗಿ &lsquo;ವಿಡಿಯೋ&rsquo; ಎಂಬ ಹೆಸರು ಹೆಚ್ಚು ಸರಳ ಮತ್ತು ನೇರ ಎನಿಸಿತು. ಈ ಪಾತ್ರಗಳು ಕ್ಯಾಮೆರಾಗಳ ಮೂಲಕವೇ ತಮ್ಮ ಬದುಕನ್ನು ನೋಡುತ್ತಾರೆ. ವಿಡಿಯೋ, ಕ್ಯಾಮೆರಾ ಮತ್ತು ವೈರಲ್ ಆಗುವ ಸಾಧ್ಯತೆ ಅವರ ಕಥೆಯ ಭಾಗವಾಗಿದೆ. ಹೀಗಾಗಿ &lsquo;ವಿಡಿಯೋ&rsquo; ಸೂಕ್ತ ಎನಿಸಿತು ಎಂದು ನಿರ್ದೇಶಕರು ಹೇಳಿದ್ದಾರೆ.&lt;/p&gt;&lt;p&gt;ಸಿನಿಮಾದ ದೃಶ್ಯಗಳಿಗೆ ಅನುಗುಣವಾಗಿ ಏಳುರಿಂದ 12 ಆ್ಯಕ್ಷನ್ ಕ್ಯಾಮೆರಾಗಳನ್ನು ಬಳಸಲಾಗಿದೆ. ಕ್ಯಾಮೆರಾಗಳನ್ನು ಕೇವಲ ತಾಂತ್ರಿಕ ಅಂಶವಾಗಿ ನೋಡಲಿಲ್ಲ. ಕಥೆ ಬರೆಯುವಾಗಲೇ ಯಾವ ದೃಶ್ಯವನ್ನು ಮುಖ್ಯ ಕ್ಯಾಮೆರಾದಿಂದ ತೋರಿಸಬೇಕು, ಯಾವ ಕ್ಷಣವನ್ನು ಮತ್ತೊಂದು ಕ್ಯಾಮೆರಾ ಆ್ಯಂಗಲ್&zwnj;ನಿಂದ ಸೆರೆಹಿಡಿಯಬೇಕು ಎಂಬುದನ್ನು ನಿರ್ಧರಿಸುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನೋ ಕಂಟ್ರಿ ಫಾರ್ ಓಲ್ಡ್ ಮೆನ್&rsquo; ಸ್ಫೂರ್ತಿ&lt;/strong&gt;&lt;/p&gt;&lt;p&gt;&lsquo;ವಿಡಿಯೋ&rsquo; ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಸಾಂಪ್ರದಾಯಿಕ ಹಿನ್ನೆಲೆ ಸಂಗೀತದ ಕೊರತೆ. ಹಾರರ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಭಯ ಹೆಚ್ಚಿಸಲು ಬಳಸುವ BGM ಬದಲು, ನೈಜ ವಾತಾವರಣದ ಶಬ್ದಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ.&lt;/p&gt;&lt;p&gt;&lsquo;ನೋ ಕಂಟ್ರಿ ಫಾರ್ ಓಲ್ಡ್ ಮೆನ್&rsquo; ಸಿನಿಮಾದಲ್ಲಿ ನಿರಂತರವಾಗಿ ಸಂಗೀತದ ಮೇಲೆ ಅವಲಂಬಿತವಾಗದೇ ಆ್ಯಂಬಿಯನ್ಸ್ ಮತ್ತು ಸೈಲೆನ್ಸ್ ಬಳಸಿರುವುದು ನನಗೆ ಇಷ್ಟವಾಯಿತು. &lsquo;ವಿಡಿಯೋ&rsquo;ದಲ್ಲೂ ಅದೇ ರೀತಿಯ ಅನುಭವ ನೀಡಲು ಪ್ರಯತ್ನಿಸಿದ್ದೇನೆ. ಪ್ರೇಕ್ಷಕರು ಯಾವ ಭಾವನೆ ಅನುಭವಿಸಬೇಕು ಎಂದು BGM ಹೇಳದೇ ಇದ್ದಾಗ, ಸಣ್ಣದೊಂದು ಶಬ್ದ ಕೂಡ ಬಹಳ ಮುಖ್ಯವಾಗುತ್ತದೆ ಎಂದು ಶ್ರೀನಿಧಿ ಹೇಳಿದ್ದಾರೆ. ಚಿತ್ರಕ್ಕೆ ಎಂ.ಎಸ್. ಪ್ರಸನ್ನ ಕುಮಾರ್ ಸಂಗೀತ ನೀಡಿದ್ದು, ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ಭಿನ್ನವಾದ ಸಂಗೀತ ಶೈಲಿಯನ್ನು ಪ್ರಯತ್ನಿಸಲಾಗಿದೆ.&lt;/p&gt;&lt;p&gt;&lt;strong&gt;ಪ್ರಯೋಗದ ಜೊತೆ ಕಮರ್ಷಿಯಲ್ ಅಂಶವೂ ಬೇಕಿತ್ತು&lt;/strong&gt;&lt;/p&gt;&lt;p&gt;ಹೊಸ ಪ್ರಯೋಗ ಮಾಡುವ ಉತ್ಸಾಹದ ನಡುವೆಯೂ ಸಿನಿಮಾ ಸಾಮಾನ್ಯ ಪ್ರೇಕ್ಷಕರಿಗೆ ದೂರವಾಗಬಾರದು ಎಂಬ ಎಚ್ಚರಿಕೆಯನ್ನು ಶ್ರೀನಿಧಿ ವಹಿಸಿದ್ದಾರೆ. &lsquo;ಬ್ಲಿಂಕ್&rsquo; ನಂತರ ಒಂದು ವಿಚಾರ ನನ್ನನ್ನು ಕಾಡುತ್ತಿತ್ತು. ಸಿನಿಮಾ ಸಾಮಾನ್ಯ ಪ್ರೇಕ್ಷಕರೊಂದಿಗೆ ಸಾಕಷ್ಟು ಕನೆಕ್ಟ್ ಆಗಲಿಲ್ಲ ಎಂಬ ಭಾವನೆ ಇತ್ತು. ಫೌಂಡ್ ಫುಟೇಜ್ ಸಿನಿಮಾಗಳಲ್ಲಿ ಕಲಾವಿದರು ತಮ್ಮಂತೆಯೇ ಸಹಜವಾಗಿ ನಟಿಸಿದಾಗ ಅದು ಚೆನ್ನಾಗಿ ಕೆಲಸ ಮಾಡುತ್ತದೆ. ಆದರೆ ಇದೇ ವೇಳೆ ಕಮರ್ಷಿಯಲ್ ಅಂಶವೂ ಇರಬೇಕು ಎಂದು ಬಯಸಿದ್ದೆ. ಈ ಫಾರ್ಮ್ಯಾಟ್ ಪ್ರೇಕ್ಷಕರಿಗೆ ಅಡ್ಡಿಯಾಗಬಾರದು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಥಿಯೇಟರ್ ಅನುಭವಕ್ಕೆ &lsquo;ವಿಡಿಯೋ&rsquo; ಸಿದ್ಧ&lt;/strong&gt;&lt;/p&gt;&lt;p&gt;&lsquo;ವಿಡಿಯೋ&rsquo; ಸಿನಿಮಾದಲ್ಲಿ ಭರತ, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ., ಪ್ರಿಯಾ ಜೆ. ಆಚಾರ್ ಹಾಗೂ ನಾಲ್ಮೆ ನಾಚಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭರತ, ಜೀವನ್ ಮತ್ತು ತೇಜಸ್ ಅವರು ಶ್ರೀನಿಧಿ ಅವರ ರಂಗಭೂಮಿ ದಿನಗಳಿಂದಲೂ ಅವರೊಂದಿಗೆ ಕೆಲಸ ಮಾಡಿರುವ ಕಲಾವಿದರು.&lt;/p&gt;&lt;p&gt;ಪ್ರಿಯಾ ಬಳಿಕ ತಂಡ ಸೇರಿಕೊಂಡರೆ, ನಟಿ ಉಷಾ ಭಂಡಾರಿ ಅವರ ಪುತ್ರಿ ನಾಲ್ಮೆ ಅವರನ್ನು ದೀಕ್ಷಿತ್ ಶೆಟ್ಟಿ ತಂಡಕ್ಕೆ ಪರಿಚಯಿಸಿದ್ದಾರೆ. ಪಾತ್ರಗಳ ನಡುವಿನ ಬಾಂಧವ್ಯ ಸಹಜವಾಗಿ ಮೂಡಿಬರಲು ಕಲಾವಿದರಿಗೆ ವರ್ಕ್&zwnj;ಶಾಪ್ ನಡೆಸಲಾಗಿದ್ದು, ಬ್ಲಾಗಿಂಗ್ ಬಗ್ಗೆ ತರಬೇತಿಯನ್ನೂ ನೀಡಲಾಗಿದೆ. ತಂಡದ ಎಲ್ಲರೂ ಸಾಕಷ್ಟು ಸಮಯ ಒಟ್ಟಿಗೆ ಕಳೆದು, ಹಲವು ಕಡೆ ಪ್ರಯಾಣ ಮಾಡಿ ತಮ್ಮ ನಡುವಿನ ಕೆಮಿಸ್ಟ್ರಿಯನ್ನು ಬೆಳೆಸಿಕೊಂಡಿದ್ದಾರೆ. ಚಿತ್ರಕ್ಕೆ ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಸಂಜೀವ್ ಜಗದ್ಗಾರ್ ಸಂಕಲನ ನಿರ್ವಹಿಸಿದ್ದಾರೆ.&lt;/p&gt;&lt;h2&gt;&lt;strong&gt;ದೀಕ್ಷಿತ್ ಶೆಟ್ಟಿ ನಿರ್ಮಾಪಕರಾದ ಕಥೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಶ್ರೀನಿಧಿ ಅವರು ಸಿನಿಮಾಕ್ಕಾಗಿ ಕ್ರೌಡ್&zwnj;ಫಂಡಿಂಗ್ ಮಾಡುವ ಉದ್ದೇಶದಿಂದ ದೀಕ್ಷಿತ್ ಶೆಟ್ಟಿ ಅವರನ್ನು ಸಂಪರ್ಕಿಸಿದ್ದರು. ಆದರೆ ಕಥೆ ಮತ್ತು ಪ್ರಯೋಗದ ಮೇಲಿನ ನಂಬಿಕೆಯಿಂದ ದೀಕ್ಷಿತ್ ನಿರ್ಮಾಪಕರಾಗಿಯೇ ಚಿತ್ರತಂಡಕ್ಕೆ ಸೇರಿಕೊಂಡರು. ನನ್ನ ಮೇಲಿನ ಅವರ ಉತ್ಸಾಹವನ್ನು ದೀಕ್ಷಿತ್ ಅರ್ಥಮಾಡಿಕೊಂಡರು. ನಿರ್ಮಾಪಕರು ಸ್ಕ್ರಿಪ್ಟ್ ಆಯ್ಕೆ ಮಾಡುತ್ತಾರೆ ಎನ್ನುವುದಕ್ಕಿಂತ, ಕೆಲವೊಮ್ಮೆ ಸ್ಕ್ರಿಪ್ಟ್&zwnj;ಗಳೇ ತಮ್ಮ ನಿರ್ಮಾಪಕರನ್ನು ಆಯ್ಕೆ ಮಾಡಿಕೊಳ್ಳುತ್ತವೆ ಎಂಬ ನಂಬಿಕೆ ನನಗಿದೆ ಎಂದು ಶ್ರೀನಿಧಿ ಹೇಳಿದ್ದಾರೆ.&lt;/p&gt;&lt;p&gt;ಶೂಟಿಂಗ್ ಬಳಿಕ ಸಿನಿಮಾದ ಕೆಲವು ಹಾಸ್ಯ ಸನ್ನಿವೇಶಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಹಾಗೂ ಹಾರರ್ ಇನ್ನಷ್ಟು ಪರಿಣಾಮಕಾರಿಯಾಗಬೇಕು ಎಂದು ತಂಡಕ್ಕೆ ಅನಿಸಿದಾಗ ಮೂರು ದಿನಗಳ ಕಾಲ ರೀಶೂಟ್ ಕೂಡ ನಡೆಸಲಾಯಿತು. ಶ್ರೀನಿಧಿ ಕೆಲವು ದೃಶ್ಯಗಳನ್ನು ಮರುಬರೆಯುವ ಮೂಲಕ ಕಥೆಯನ್ನು ಮರುಜೋಡಿಸಿದ್ದು, ದೀಕ್ಷಿತ್ ಈ ಪ್ರಕ್ರಿಯೆಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈಗಾಗಲೇ ಸಿನಿಮಾದ ಪೇಯ್ಡ್ ಪ್ರೀಮಿಯರ್ ನಡೆದಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಯನ್ನು ಚಿತ್ರತಂಡ ಗಮನಿಸಿದೆ. ವಿಶೇಷವಾಗಿ ಮೊದಲಾರ್ಧದ ಬಗ್ಗೆ ಶ್ರೀನಿಧಿಗೆ ಕುತೂಹಲವಿತ್ತಂತೆ.&lt;/p&gt;&lt;p&gt;ಎರಡನೇ ಭಾಗದ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ ಕಥೆ ಮತ್ತು ಪಾತ್ರಗಳನ್ನು ಕಟ್ಟಿಕೊಡಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಪ್ರೇಕ್ಷಕರು ಆ ಪಾತ್ರಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳದಿದ್ದರೆ ನಂತರ ಬರುವ ಹಾರರ್ ಪರಿಣಾಮಕಾರಿಯಾಗುವುದಿಲ್ಲ. ಅದೃಷ್ಟವಶಾತ್ ಪ್ರೇಕ್ಷಕರು ಕಥೆಯೊಂದಿಗೆ ಸಾಗಿದರು. ಈ ಮೂಲಕ ಸಂಗೀತ ಮತ್ತು ಇತರ ಅಂಶಗಳ ಮೇಲೂ ಇನ್ನಷ್ಟು ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು &lsquo;ಬ್ಲಿಂಕ್&rsquo;, &lsquo;ಜೆರಾಕ್ಸ್&rsquo; ಬಳಿಕ ಶ್ರೀನಿಧಿ ಬೆಂಗಳೂರು ಮತ್ತೊಮ್ಮೆ ಸಾಮಾನ್ಯ ಹಾದಿಯಿಂದ ಹೊರಗೆ ಹೆಜ್ಜೆ ಇಟ್ಟಿದ್ದಾರೆ. ಈ ಬಾರಿ ಕ್ಯಾಮೆರಾದ ಕಣ್ಣಿನ ಮೂಲಕವೇ ಪ್ರೇಕ್ಷಕರಿಗೆ ಭಯದ ಅನುಭವ ನೀಡಲು ಹೊರಟಿದ್ದಾರೆ. ಇದೊಂದು ಹೊಸ ಅನುಭವ. ಹಾರರ್ ಅನ್ನು ಹೊಸ ದೃಷ್ಟಿಕೋನದಿಂದ ತೋರಿಸುವ ಪ್ರಯತ್ನ. ಈ ಸಿನಿಮಾವನ್ನು ಥಿಯೇಟರ್&zwnj;ನಲ್ಲೇ ಅನುಭವಿಸಬೇಕು ಎಂದು ಶ್ರೀನಿಧಿ ಬೆಂಗಳೂರು ಮಾತು ಮುಗಿಸಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sandalwood-director-srinidhi-bengaluru-video-movie-promises-a-new-found-footage-horror-experience-gvd/articleshow-p1vk347"/>
        </item>
        <item>
            <title><![CDATA[ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ: ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!]]></title>
            <link>https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</link>
            <guid isPermaLink="true">https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</guid>
            <pubDate>Fri, 07 Aug 2026 18:32:56 +0530</pubDate>
            <description><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze51ephmzd140sgj78bw9x9,imgname-n-n-1786107706065.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಕನ್ನಡ ಸಿನಿಪ್ರೇಕ್ಷಕರಿಗೆ ಸಿಕ್ಕ ಮರೆಯಲಾಗದ ಮನರಂಜನೆಯ ಅನುಭವ. ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ. ಆದರೆ ಈ ಬಾರಿ ಚಿತ್ರತಂಡದ ಪ್ರಚಾರದ ಸ್ಟ್ರಾಟಜಿ ಮಾತ್ರ ಕೊಂಚ ವಿಭಿನ್ನ.&lt;/p&gt;&lt;p&gt;ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್, ಟ್ರೇಲರ್, ಕೌಂಟ್&zwnj;ಡೌನ್ ಪ್ರಚಾರ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲಾಗುತ್ತದೆ. ಆದರೆ &lsquo;ಅಯೋಗ್ಯ 2&rsquo; ತಂಡ ಮಾತ್ರ ಟ್ರೇಲರ್ ಬಿಡುಗಡೆ ಮಾಡದೆ, ಹಾಡುಗಳ ಮೂಲಕವೇ ಸಿನಿಮಾದತ್ತ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿರುವ ಕಾರಣ ಅವುಗಳನ್ನು ಟ್ರೇಲರ್&zwnj;ನಲ್ಲೇ ಬಿಟ್ಟುಕೊಡದೆ, ಚಿತ್ರಮಂದಿರದಲ್ಲೇ ಪ್ರೇಕ್ಷಕರು ಅನುಭವಿಸಲಿ ಎಂಬುದು ತಂಡದ ನಿರ್ಧಾರ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ&rsquo;ವೇ &lsquo;ಅಯೋಗ್ಯ 2&rsquo;ಗೆ ಟ್ರೇಲರ್!&lt;/strong&gt;&lt;/p&gt;&lt;p&gt;ಟ್ರೇಲರ್ ಇಲ್ಲದಿರುವುದು ಯಾವುದೇ ರಿಸ್ಕ್ ಅಲ್ಲ, ಬದಲಿಗೆ ಮೊದಲ ಸಿನಿಮಾದ ಯಶಸ್ಸಿನ ಮೇಲೆ ಇಟ್ಟಿರುವ ನಂಬಿಕೆ ಎನ್ನುತ್ತಾರೆ ಸತೀಶ್ ನೀನಾಸಂ. &ldquo;&lsquo;ಅಯೋಗ್ಯ&rsquo; ಸಿನಿಮಾದಲ್ಲಿ ಹಾಡುಗಳೇ ಚಿತ್ರದ ಬಗ್ಗೆ ಮಾತನಾಡಿದ್ದವು. ಈ ಬಾರಿಯೂ ಹಾಡುಗಳು ಜನರನ್ನು ತಲುಪಿವೆ. ಇದು ಸೀಕ್ವೆಲ್ ಆಗಿರುವುದರಿಂದ, ಮೊದಲ &lsquo;ಅಯೋಗ್ಯ&rsquo; ಸಿನಿಮಾವೇ ಮುಂದಿನ ಭಾಗಕ್ಕೆ ಟ್ರೇಲರ್ ಇದ್ದಂತೆ ಎಂದು ನಾವು ಭಾವಿಸಿದ್ದೇವೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿವೆ.&lt;/p&gt;&lt;p&gt;ಅವುಗಳನ್ನು ಟ್ರೇಲರ್ ಮೂಲಕ ತೋರಿಸುವ ಬದಲು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೇರವಾಗಿ ಅನುಭವಿಸಬೇಕು ಎಂಬುದು ನಮ್ಮ ಉದ್ದೇಶ,&rdquo; ಎಂದು ಸತೀಶ್ ಹೇಳಿದ್ದಾರೆ.ಮಹೇಶ್ ಕುಮಾರ್ ನಿರ್ದೇಶನದ &lsquo;ಅಯೋಗ್ಯ 2&rsquo; ಅನ್ನು ಮುನೇಗೌಡ ನಿರ್ಮಿಸುತ್ತಿದ್ದಾರೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಮೊದಲ ಭಾಗದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ಸೀಕ್ವೆಲ್ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಒಂದು ಮತದಿಂದ ಗೆದ್ದ ಸಿದ್ದೇಗೌಡನ ಮುಂದಿನ ಕಥೆ!&lt;/strong&gt;&lt;/p&gt;&lt;p&gt;ಮೊದಲ ಭಾಗದಲ್ಲಿ ಸಿದ್ದೇಗೌಡ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಗೆಲ್ಲುತ್ತಾನೆ. ಅಲ್ಲಿಂದಲೇ &lsquo;ಅಯೋಗ್ಯ 2&rsquo; ಕಥೆ ಆರಂಭವಾಗುತ್ತದೆ. &ldquo;ಸಿದ್ದೇಗೌಡ ಕೇವಲ ಒಂದು ಮತದಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅಲ್ಲಿಂದ ಸೀಕ್ವೆಲ್ ಶುರುವಾಗುತ್ತದೆ. ಜವಾಬ್ದಾರಿ ಸಿಕ್ಕ ಬಳಿಕ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ? ಹಳ್ಳಿಯನ್ನು ಹೇಗೆ ಕಾಪಾಡುತ್ತಾನೆ? ನಾಯಕತ್ವದ ಜೊತೆಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಎಂಬುದೇ ಚಿತ್ರದ ಮುಂದಿನ ಕಥೆ. ಮೊದಲ &lsquo;ಅಯೋಗ್ಯ&rsquo;ದಲ್ಲಿ ಪ್ರೇಕ್ಷಕರು ಇಷ್ಟಪಟ್ಟ ಹಾಸ್ಯ ಮತ್ತು ಮನರಂಜನೆಯನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಥೆ ಮಾತ್ರ ಮುಂದೆ ಸಾಗಿದೆ,&rdquo; ಎಂದು ಸತೀಶ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ ಸಿನಿಮಾ ಹಿಟ್ ಆಯ್ತು ಅಂತ ಸೀಕ್ವೆಲ್ ಮಾಡಿಲ್ಲ&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ನಂತರ ಸೀಕ್ವೆಲ್ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎನ್ನುವ ಸತೀಶ್, ಈ ಸಿನಿಮಾವನ್ನು ಕೇವಲ ಮೊದಲ ಭಾಗದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &ldquo;&lsquo;ಅಯೋಗ್ಯ&rsquo; ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಕನ್ನಡ ಪ್ರೇಕ್ಷಕರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಮಹೇಶ್ ಕುಮಾರ್ ಅವರು ಮಂಡ್ಯ ಭಾಗದ ಹಳ್ಳಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಮನರಂಜನೆಯ ಕಥೆ ಹೇಳಿದ್ದರು. ಈ ಬಾರಿ ಕೂಡ ಗ್ರಾಮೀಣ ವಾತಾವರಣವಿದೆ. ಆದರೆ ವಿಷಯದ ವ್ಯಾಪ್ತಿ ದೊಡ್ಡದಾಗಿದೆ. ಕರ್ನಾಟಕದ ಯಾವುದೇ ಹಳ್ಳಿಯ ಜನರಿಗೂ ಕನೆಕ್ಟ್ ಆಗುವಂತಹ ಕಥೆ ಇದು,&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಅಪ್&zwnj;ಗ್ರೇಡ್!&lt;/strong&gt;&lt;/p&gt;&lt;p&gt;ಮೊದಲ ಹಾಗೂ ಎರಡನೇ ಭಾಗದ ನಡುವಿನ ವರ್ಷಗಳು ಚಿತ್ರತಂಡಕ್ಕೂ ಸಾಕಷ್ಟು ಅನುಭವ ನೀಡಿವೆ ಎಂಬುದು ಸತೀಶ್ ಅಭಿಪ್ರಾಯ. &ldquo;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಒಂದು ಅಪ್&zwnj;ಗ್ರೇಡ್ ಆಗಿದೆ. ಬರವಣಿಗೆಯಿಂದ ಹಿಡಿದು ತಾಂತ್ರಿಕ ಗುಣಮಟ್ಟ, ಕಲಾವಿದರ ಅಭಿನಯ ಹಾಗೂ ಪಾತ್ರಗಳವರೆಗೆ ಎಲ್ಲದರಲ್ಲೂ ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನಾನೂ ಒಬ್ಬ ನಟನಾಗಿ ಬದಲಾಗಿದ್ದೇನೆ. ಈಗ ಪಾತ್ರದ ಅಟಿಟ್ಯೂಡ್, ಸ್ಟೈಲ್, ಬಾಡಿ ಲ್ಯಾಂಗ್ವೇಜ್&zwnj;ನಂತಹ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಗಮನ ಕೊಡುತ್ತೇನೆ. ಅದೇ ಸಮಯದಲ್ಲಿ ಸಿನಿಮಾದ ಕಮರ್ಷಿಯಲ್ ಫ್ಲೇವರ್ ಕೂಡ ಉಳಿಯುವಂತೆ ನೋಡಿಕೊಂಡಿದ್ದೇವೆ,&rdquo; ಎಂದು ಸತೀಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬಿಡುಗಡೆಗೂ ಮುನ್ನವೇ ಬಿಸಿನೆಸ್&zwnj;ಗೆ ಉತ್ತಮ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. &ldquo;ನಿರ್ಮಾಪಕರು ಸಿನಿಮಾದ ಬಗ್ಗೆ ಸಂತೋಷವಾಗಿದ್ದಾರೆ. ಡಿಸ್ಟ್ರಿಬ್ಯೂಷನ್, ಸ್ಯಾಟಲೈಟ್ ಹಾಗೂ ಆಡಿಯೋ ಬಿಸಿನೆಸ್&zwnj;ನಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಪ್ರೀತ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾವನ್ನು ವಿತರಿಸುತ್ತಿರುವುದಕ್ಕೂ ನನಗೆ ಖುಷಿಯಿದೆ,&rdquo; ಎಂದು ಸತೀಶ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo;ನಲ್ಲಿ ನಟಿಸಲು ರಚಿತಾಗೆ ಯಾವುದೇ ಗೊಂದಲವಿರಲಿಲ್ಲ!&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ಬಳಿಕ &lsquo;ಅಯೋಗ್ಯ 2&rsquo;ನಲ್ಲಿ ಮತ್ತೆ ನಟಿಸುವ ಅವಕಾಶ ಬಂದಾಗ ರಚಿತಾ ರಾಮ್ ಕೂಡ ಯಾವುದೇ ಯೋಚನೆ ಮಾಡಲಿಲ್ಲವಂತೆ. &ldquo;&lsquo;ಅಯೋಗ್ಯ&rsquo; ಮತ್ತು &lsquo;ಅಯೋಗ್ಯ 2&rsquo; ನಾನು ನಟಿಸಿರುವ ಸಿನಿಮಾಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಚಿತ್ರಗಳ ಸಾಲಿನಲ್ಲಿ ಬರುತ್ತವೆ. ನಮ್ಮ ನಿಜವಾದ ವಿಐಪಿಗಳಾದ ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಈಗ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುವ ಹಂತಕ್ಕೆ ನಾವು ಬಂದಿದ್ದೇವೆ. ಆದರೆ &lsquo;ಅಯೋಗ್ಯ 2&rsquo; ನೋಡಲು ಬರುವ ಪ್ರತಿಯೊಬ್ಬರೂ ಖುಷಿಯಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನನಗಿದೆ,&rdquo; ಎಂದು ರಚಿತಾ ರಾಮ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ದೊಡ್ಡ ತಾರಾಬಳಗದ ಸಾಥ್&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo;ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಳರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಕೊಟ್ಟಿದ್ದಕ್ಕೆ ಈ ಬಾರಿ ಪ್ರೇಕ್ಷಕರಿಗೆ ಏನಾದರೂ ಕೊಡಬೇಕು!&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾ ಸಿದ್ದೇಗೌಡನ ಪಾತ್ರದ ಮೂಲಕ ಸತೀಶ್ ನೀನಾಸಂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಹೀಗಾಗಿ ಸೀಕ್ವೆಲ್ ಬಗ್ಗೆ ಮಾತನಾಡುವಾಗಲೂ ನಟ ಆ ಸಿನಿಮಾದ ಯಶಸ್ಸಿನ ಹಿಂದಿರುವ ಪ್ರೇಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. &ldquo;&lsquo;ಅಯೋಗ್ಯ&rsquo; ಪ್ರೇಕ್ಷಕರು ನಮಗೆ ಕೊಟ್ಟ ಉಡುಗೊರೆ. ಈ ಬಾರಿ ನಾವು ಅವರಿಗೆ ಏನಾದರೂ ಮರಳಿ ಕೊಡಬೇಕು ಎಂಬ ಆಶಯವಿದೆ,&rdquo; ಎಂದು ಸತೀಶ್ ನೀನಾಸಂ ಹೇಳಿದ್ದಾರೆ.&lt;/p&gt;&lt;p&gt;ಹೀಗಾಗಿ ಟ್ರೇಲರ್ ಇಲ್ಲದೆ, ಹಾಡುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ &lsquo;ಅಯೋಗ್ಯ 2&rsquo;, ಮೊದಲ ಭಾಗದ ಸೊಗಡನ್ನು ಉಳಿಸಿಕೊಂಡೇ ಕಥೆ, ತಾಂತ್ರಿಕತೆ, ಪಾತ್ರಗಳು ಹಾಗೂ ಮನರಂಜನೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕಿದೆ. ಸತೀಶ್ ಮಾತಿನಂತೆ ಸಿನಿಮಾದಲ್ಲಿರುವ ಸರ್ಪ್ರೈಸ್&zwnj;ಗಳು ಪ್ರೇಕ್ಷಕರಿಗೆ ಥಿಯೇಟರ್&zwnj;ನಲ್ಲಿ ಯಾವ ರೀತಿಯ ಅನುಭವ ನೀಡಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8"/>
        </item>
        <item>
            <title><![CDATA['ನಾನು ಈಗಷ್ಟೇ ಶುರು ಮಾಡಿದ್ದೇನೆ': 10 ವರ್ಷಗಳ ಸಿನಿ ಜರ್ನಿ ಬಗ್ಗೆ ಆಶಿಕಾ ರಂಗನಾಥ್‌ ಮಾತು]]></title>
            <link>https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v</link>
            <guid isPermaLink="true">https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v</guid>
            <pubDate>Fri, 28 Aug 2026 20:01:24 +0530</pubDate>
            <description><![CDATA[&lt;p&gt;ಚಿತ್ರರಂಗದಲ್ಲಿ 10 ವರ್ಷ ಪೂರೈಸಿರುವ ಆಶಿಕಾ ರಂಗನಾಥ್&zwnj;, ತಮ್ಮ ಸಿನಿ ಜರ್ನಿ, ಸಿನಿಮಾ ಆಯ್ಕೆ, ವರ್ಕ್&zwnj;-ಲೈಫ್&zwnj; ಬ್ಯಾಲೆನ್ಸ್&zwnj; ಮತ್ತು ಹೊಸ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj; ಇಮೇಜ್&zwnj;ನಿಂದ ಹೊರಬಂದು ಆ್ಯಕ್ಷನ್&zwnj;, ಪೀರಿಯಡ್&zwnj; ಡ್ರಾಮಾ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14cfpxjymakv1x4t69hvfhx,imgname-bjb-1787927452594.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗದಲ್ಲಿ ಒಂದು ದಶಕ ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರತಿ ಕ್ಷಣವೂ ಬದಲಾಗುವ ಸಿನಿಮಾ ಜಗತ್ತಿನಲ್ಲಿ ಹತ್ತು ವರ್ಷಗಳ ಕಾಲ ತನ್ನದೇ ಆದ ಛಾಪು ಮೂಡಿಸಿಕೊಂಡು ಸಾಗಿರುವುದು ದೊಡ್ಡ ಸಾಧನೆಯೇ ಸರಿ. ಆದರೆ ನಟಿ ಆಶಿಕಾ ರಂಗನಾಥ್&zwnj; ಪಾಲಿಗೆ ಈ ಪ್ರಯಾಣ ಯಾವುದೇ ಪೂರ್ವನಿರ್ಧರಿತ ಪ್ಲ್ಯಾನ್&zwnj;ನಂತೆ ಇರಲಿಲ್ಲ. ಒಂದೊಂದು ಸಿನಿಮಾ, ಒಂದೊಂದು ಅನುಭವದ ಮೂಲಕ ಅವರ ಸಿನಿ ಜರ್ನಿ ರೂಪುಗೊಂಡಿದೆ.&lt;/p&gt;&lt;p&gt;ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಆಶಿಕಾ, ತಮ್ಮ ಹತ್ತು ವರ್ಷಗಳ ಪಯಣದ ಕುರಿತು ಮಾತನಾಡಿದ್ದಾರೆ. ಸ್ಪರ್ಧೆ ಹೆಚ್ಚಾಗಿರುವ ಇಂದಿನ ಚಿತ್ರರಂಗದಲ್ಲಿ ಒಂದು ಪಾತ್ರ ಅಥವಾ ನಟನೆಯೇ ರಾತ್ರೋರಾತ್ರಿ ವೈರಲ್ ಆಗಬಹುದು. ಅಷ್ಟೇ ವೇಗದಲ್ಲಿ ಜನರ ಗಮನದಿಂದ ಮರೆಯಾಗಲೂಬಹುದು. ಇಂತಹ ಪರಿಸ್ಥಿತಿಯಲ್ಲೂ ಇಷ್ಟು ವರ್ಷಗಳ ಕಾಲ ಉಳಿದುಕೊಂಡು, ತಮ್ಮ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾಯುವಂತಾಗಿರುವುದು ಖುಷಿ ನೀಡುತ್ತದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಹತ್ತು ವರ್ಷ ಕಳೆದರೂ ಇನ್ನೂ ಸಾಕಷ್ಟು ಕಲಿಯಬೇಕಿದೆ&rsquo;&lt;/strong&gt;&lt;/p&gt;&lt;p&gt;ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಆಶಿಕಾ, ಆಗ ತಾವು ತುಂಬಾ ನಾಚಿಕೆ ಸ್ವಭಾವದವರಾಗಿದ್ದೆ ಎಂದು ಹೇಳಿದ್ದಾರೆ. ಆದರೆ ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ತಮ್ಮನ್ನು ಕಂಫರ್ಟ್&zwnj; ಝೋನ್&zwnj;ನಿಂದ ಹೊರಗೆ ತಂದು ವ್ಯಕ್ತಿಯಾಗಿ ಸಾಕಷ್ಟು ಬದಲಾಯಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಒಂದು ಕಾಲದಲ್ಲಿ ತುಂಬಾ ಶೈ ಆಗಿದ್ದ ತಾವು, ಇಂದು ವೇದಿಕೆ ಮೇಲೆ ನಿಂತು ಸಾಕಷ್ಟು ಜನರ ಮುಂದೆ ಮಾತನಾಡುವುದು, ಬೇರೆ ಭಾಷೆಯಲ್ಲಿ ಸಂವಹನ ನಡೆಸುವುದು ಹಾಗೂ ಪ್ರತಿದಿನ ವಿಭಿನ್ನ ಜನರನ್ನು ಭೇಟಿ ಮಾಡುವುದು ಸಾಧ್ಯವಾಗಿದೆ. ಈ ಪಯಣ ತಮ್ಮ ವ್ಯಕ್ತಿತ್ವವನ್ನೇ ಸಾಕಷ್ಟು ಬದಲಿಸಿದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಪ್ರತಿ ಸಿನಿಮಾಗೂ ಒಂದೊಂದು ಅನುಭವ.. ಯಾವುದೇ ಫಾರ್ಮುಲಾ ಇಲ್ಲ&rsquo;&lt;/strong&gt;&lt;/p&gt;&lt;p&gt;ಹತ್ತು ವರ್ಷಗಳ ಅನುಭವದ ಬಳಿಕ ಇದೀಗ ಸಿನಿಮಾ ಆಯ್ಕೆ ಮಾಡುವ ವಿಚಾರದಲ್ಲಿ ಹೆಚ್ಚು ಚ್ಯೂಸಿಯಾಗಿರುವ ಆಶಿಕಾ, ಚಿತ್ರಗಳನ್ನು ಆಯ್ಕೆ ಮಾಡಲು ಯಾವುದೇ ನಿರ್ದಿಷ್ಟ ಫಾರ್ಮುಲಾ ಇಲ್ಲ ಎಂದು ಹೇಳಿದ್ದಾರೆ. ಒಂದು ಸಿನಿಮಾದ ಕಥೆ ಕೇಳುವಾಗ ಅಥವಾ ನಿರ್ದೇಶಕರನ್ನು ಭೇಟಿಯಾದಾಗ ಆ ಪ್ರಾಜೆಕ್ಟ್&zwnj; ಬಗ್ಗೆ ಎಕ್ಸೈಟ್&zwnj;ಮೆಂಟ್&zwnj; ಮೂಡಿದರೆ, ಅಂತಹ ಸಿನಿಮಾದ ಭಾಗವಾಗಬೇಕು ಎಂಬ ಆಸಕ್ತಿ ತಮಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಅದರ ಜೊತೆಗೆ ಸಿನಿಮಾ ಅವಕಾಶಗಳಲ್ಲಿ ಟೈಮಿಂಗ್ ಮತ್ತು ಅದೃಷ್ಟ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಆಶಿಕಾ ವ್ಯಕ್ತಪಡಿಸಿದ್ದಾರೆ. ನೂರು ಸಿನಿಮಾಗಳಿದ್ದರೆ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಬಹುಶಃ 20 ಸಿನಿಮಾಗಳು ಮಾತ್ರ ನಮ್ಮ ಬಳಿ ಬರಬಹುದು. ಆ 20ರಲ್ಲಿ ನಮಗೆ ಅತ್ಯುತ್ತಮವಾದುದನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಿನಿಮಾ ಹೊರಗಿನ ನನ್ನ ಜೀವನವೇ ನನ್ನನ್ನು ಗ್ರೌಂಡ್&zwnj; ಆಗಿರಿಸಿದೆ&rsquo;&lt;/strong&gt;&lt;/p&gt;&lt;p&gt;ಚಿತ್ರರಂಗದ ಒತ್ತಡಗಳ ನಡುವೆ ತಮ್ಮನ್ನು ತಾವು ಸಮತೋಲನದಲ್ಲಿಟ್ಟುಕೊಳ್ಳಲು ಕುಟುಂಬ ಹಾಗೂ ಸ್ನೇಹಿತರ ಜೊತೆಗಿನ ಸಮಯ ಬಹಳ ಮುಖ್ಯವಾಗಿದೆ ಎಂದು ಆಶಿಕಾ ಹೇಳಿದ್ದಾರೆ. ಚಿತ್ರರಂಗದ ಹೊರಗೂ ತಮ್ಮದೇ ಆದ ಜೀವನ ಇರಬೇಕು ಎಂಬುದು ತಮ್ಮ ನಿಲುವು. ಕೆಲಸಕ್ಕೆ ಹೋಗಿ ವಾಪಸ್ ಬಂದ ನಂತರ ಆ ಸಮಯವನ್ನು ತಮ್ಮ ಜೀವನಕ್ಕಾಗಿ ಮೀಸಲಿಡಲು ಇಷ್ಟಪಡುತ್ತೇನೆ. ಈ ವರ್ಕ್-ಲೈಫ್ ಬ್ಯಾಲೆನ್ಸ್&zwnj; ಯಾವಾಗಲೂ ತಮ್ಮನ್ನು ನೆಲದ ಮೇಲೆಯೇ ಇರುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಮಹಿಳಾ ಕೇಂದ್ರಿತ ಸಿನಿಮಾಗಳತ್ತ ಚಿತ್ರರಂಗ ಸಾಗುತ್ತಿದೆ&rsquo;&lt;/strong&gt;&lt;/p&gt;&lt;p&gt;ಸಿನಿಮಾಗಳಲ್ಲಿ ಮಹಿಳೆಯರ ಪಾತ್ರ ಮತ್ತು ಪ್ರಾತಿನಿಧ್ಯದ ಕುರಿತು ಮಾತನಾಡಿದ ಆಶಿಕಾ, ಕಲಾವಿದರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಒಂದು ದೃಶ್ಯ, ಪಾತ್ರ ಅಥವಾ ಡೈಲಾಗ್&zwnj; ತಮ್ಮ ವೈಯಕ್ತಿಕ ಆಲೋಚನೆಗಳಿಗೆ ಅಥವಾ ಪಾತ್ರದ ಕುರಿತ ತಮ್ಮ ದೃಷ್ಟಿಕೋನಕ್ಕೆ ಹೊಂದಿಕೆಯಾಗದಿದ್ದರೆ, ಅದನ್ನು ಮಾಡಲು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಹಕ್ಕು ಪ್ರತಿಯೊಬ್ಬ ಕಲಾವಿದರಿಗೂ ಇದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಪಾತ್ರಗಳು ಮತ್ತು ದೃಶ್ಯಗಳಲ್ಲಿ ಬದಲಾವಣೆಗಳು ಆಗಬಹುದು. ಆದರೂ ಒಟ್ಟಾರೆಯಾಗಿ ಚಿತ್ರರಂಗ ಹೆಚ್ಚು ಆಲೋಚನಾಶೀಲವಾದ ಪ್ರಾತಿನಿಧ್ಯದತ್ತ ಸಾಗುತ್ತಿದೆ. ಅದರಲ್ಲೂ ಮಹಿಳಾ ಪ್ರಧಾನ ಕಮರ್ಷಿಯಲ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಆಶಿಕಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj; ಇಮೇಜ್&zwnj;ನಿಂದ ಹೊರಬರಬೇಕು&rsquo;&lt;/strong&gt;&lt;/h2&gt;&lt;p&gt;ಹತ್ತು ವರ್ಷಗಳ ಸಿನಿ ಪಯಣದ ಬಳಿಕವೂ ತಮ್ಮೊಳಗಿನ ನಟಿಯನ್ನು ಸಂಪೂರ್ಣವಾಗಿ ಅನ್ವೇಷಿಸಿಲ್ಲ ಎಂಬ ಭಾವನೆ ಆಶಿಕಾ ಅವರಲ್ಲಿದೆ. ಒಂದು ಪಾತ್ರದ ಕ್ಯಾರೆಕ್ಟರೈಸೇಶನ್&zwnj;ನಲ್ಲಿ ತಾವು ಬಹುಶಃ ಶೇ.10ರಿಂದ 20ರಷ್ಟನ್ನಷ್ಟೇ ಅನ್ವೇಷಿಸಿದ್ದೇನೆ. ಅದನ್ನು ತಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಬೇಕು. ಅಂತಹ ವಿಭಿನ್ನ ಪಾತ್ರಗಳು ತಮ್ಮಿಗಾಗಿ ಬರೆಯಲ್ಪಡಲಿ ಎಂಬ ಆಶಯವಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮುಂದೆ ಕೇವಲ ಪರಿಚಿತವಾಗಿರುವ &lsquo;ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj;&rsquo; ರೀತಿಯ ಪಾತ್ರಗಳಿಗೆ ಸೀಮಿತವಾಗದೆ, ಆ್ಯಕ್ಷನ್&zwnj;, ಪೀರಿಯಡ್&zwnj; ಡ್ರಾಮಾ ಹಾಗೂ ಮಹಿಳೆಯರೇ ಕೇಂದ್ರದಲ್ಲಿರುವ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lsquo;ನಾನು ಈಗಷ್ಟೇ ಶುರು ಮಾಡಿದ್ದೇನೆ ಅನಿಸುತ್ತಿದೆ. ಇನ್ನೂ ಸಾಕಷ್ಟು ನನ್ನಿಂದ ಅನ್ವೇಷಿಸಬೇಕಿದೆ&rsquo; ಎಂಬ ಆಶಿಕಾ ರಂಗನಾಥ್&zwnj; ಅವರ ಮಾತುಗಳು, ಹತ್ತು ವರ್ಷಗಳ ಅನುಭವದ ನಂತರವೂ ಅವರಲ್ಲಿರುವ ಕಲಿಯುವ ಹಂಬಲ ಮತ್ತು ಹೊಸ ಪಾತ್ರಗಳ ಹುಡುಕಾಟವನ್ನು ಸ್ಪಷ್ಟವಾಗಿ ತೋರಿಸುತ್ತವೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v"/>
        </item>
        <item>
            <title><![CDATA['ನಾನು ಡಿಜಿಟಲ್ ಜಗತ್ತಿನ ಅನಲಾಗ್ ವ್ಯಕ್ತಿ': ಅಮೆರಿಕಾ ಅಮೆರಿಕಾ 2 ಕುರಿತು ನಿರೂಪ್ ಭಂಡಾರಿ ಸಂದರ್ಶನ]]></title>
            <link>https://kannada.asianetnews.com/celebrity-interviews/kannada-actor-nirup-bhandari-on-america-america-2-it-is-a-spiritual-sequel-not-a-continuation-gvd/articleshow-rdf7g2k</link>
            <guid isPermaLink="true">https://kannada.asianetnews.com/celebrity-interviews/kannada-actor-nirup-bhandari-on-america-america-2-it-is-a-spiritual-sequel-not-a-continuation-gvd/articleshow-rdf7g2k</guid>
            <pubDate>Thu, 10 Sep 2026 20:12:17 +0530</pubDate>
            <description><![CDATA[&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಬಿಡುಗಡೆಗೂ ಮುನ್ನ ನಟ ನಿರೂಪ್ ಭಂಡಾರಿ ಮಾತು: &lsquo;ರಂಗಿತರಂಗ&rsquo;ದ ದಿನಗಳಿಂದ ಇಂದಿನ ಆಧುನಿಕ ಪ್ರೇಮ ಸಂಬಂಧಗಳವರೆಗೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ನಟ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25w9477qwr0tt5ppzztsxrh,imgname-jb-1789051310311.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ನಿರೂಪ್ ಭಂಡಾರಿಗೆ ಸಿನಿಮಾ ಹೊಸದೇನಲ್ಲ. ಅವರ ಪಾಲಿಗೆ ಸಿನಿಮಾ ಎಂಬುದು ಸಹೋದರ ಅನೂಪ್ ಭಂಡಾರಿ ಅವರೊಂದಿಗೆ ಮನೆಯಲ್ಲೇ ಆರಂಭವಾದ ಚರ್ಚೆಗಳಿಂದ ಬೆಳೆದ ಆಸಕ್ತಿ. &lsquo;ರಂಗಿತರಂಗ&rsquo; ಸಿನಿಮಾ ಇವರಿಬ್ಬರನ್ನೂ ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡುವ ಮುನ್ನವೇ, ಅವರ ಕನಸು ಸರಳವಾಗಿತ್ತು. ಒಳ್ಳೆಯ ಕಥೆ ಹೇಳಬೇಕು, ಆ ಕಥೆಯನ್ನು ಪ್ರೇಕ್ಷಕರ ಮುಂದೆ ತಲುಪಿಸಬೇಕು ಮತ್ತು ಜನರನ್ನು ಚಿತ್ರಮಂದಿರಕ್ಕೆ ಕರೆತರಬೇಕು.&lt;/p&gt;&lt;p&gt;ಅನೂಪ್ ಒಬ್ಬ ಅದ್ಭುತ ನಿರ್ದೇಶಕ ಎಂಬುದು ನನಗೆ ಗೊತ್ತಿತ್ತು. ಅವರು ಆ ಹಂತಕ್ಕೆ ತಲುಪಬೇಕು ಎಂಬುದು ನನ್ನ ಆಸೆಯಾಗಿತ್ತು. ಅಮೆರಿಕಾದಲ್ಲಿರುವ ಮೇಡಂ ಟುಸ್ಸಾಡ್ಸ್&zwnj;ಗೆ ಭೇಟಿ ನೀಡಿದ್ದಾಗ ಅಲ್ಲಿ ಆಸ್ಕರ್ ಪ್ರಶಸ್ತಿಯ ಪ್ರತಿಕೃತಿ ಇತ್ತು. ಅದನ್ನು ಖರೀದಿಸಿ ಅನೂಪ್&zwnj;ಗೆ ಉಡುಗೊರೆಯಾಗಿ ನೀಡಿದ್ದೆ. ಅದು ಅನೂಪ್&zwnj;ಗಾಗಿ ನಾನು ಕಂಡ ಕನಸು. ಅದೇ ಸಮಯದಲ್ಲಿ ನಾನೂ ಒಬ್ಬ ನಟನಾಗಬೇಕು ಎಂಬ ಆಸೆ ಹೊಂದಿದ್ದೆ ಎಂದು ನಿರೂಪ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಅನೂಪ್ ಮತ್ತು ನಿರೂಪ್ ವರ್ಷಗಳ ಕಾಲ ಸಿನಿಮಾಗಳು ಹಾಗೂ ಸ್ಕ್ರಿಪ್ಟ್&zwnj;ಗಳ ಬಗ್ಗೆ ಚರ್ಚಿಸುತ್ತಿದ್ದರು. ಅನೂಪ್ ನಿರ್ದೇಶಿಸಿದ್ದ ಕಿರುಚಿತ್ರಗಳಲ್ಲೂ ನಿರೂಪ್ ಅಭಿನಯಿಸಿದ್ದರು. ನಾವು ಸಿನಿಮಾ ಆರಂಭಿಸಿದಾಗ ನಮ್ಮ ಉದ್ದೇಶ ಒಂದೇ ಆಗಿತ್ತು. ಒಳ್ಳೆಯ ಕಥೆ ಹೇಳಬೇಕು ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಂತಹ ಸಿನಿಮಾಗಳನ್ನು ಮಾಡಬೇಕು ಎನ್ನುತ್ತಾರೆ ನಿರೂಪ್.&lt;/p&gt;&lt;p&gt;&lt;strong&gt;&lsquo;ರಂಗಿತರಂಗ&rsquo; ಬಿಡುಗಡೆಗೂ ಮುನ್ನ ಏನಾಗಿತ್ತು?&lt;/strong&gt;&lt;/p&gt;&lt;p&gt;&lsquo;ರಂಗಿತರಂಗ&rsquo; ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಾಗ ಈ ಕನಸು ನಿಜವಾಗುತ್ತದೆಯೇ ಎಂಬ ಅನುಮಾನಗಳೂ ಎದುರಾಗಿದ್ದವು. ನಾವು ಸಿನಿಮಾಕ್ಕೆ ಖರ್ಚು ಮಾಡಿದ ಹಣದಲ್ಲಿ ಪೋಸ್ಟರ್&zwnj;ಗಳಿಗೆ ಖರ್ಚಾದ ಹಣ ವಾಪಸ್ ಬಂದರೂ ಸಾಕು ಎಂದು ಕೆಲವರು ಹೇಳಿದ್ದರು. ಸಿನಿಮಾವನ್ನು ಕಡಿತಗೊಳಿಸುವಂತೆ ಕೂಡ ಸಲಹೆ ನೀಡಿದ್ದರು ಎಂದು ನಿರೂಪ್ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಆದರೆ ಅನೂಪ್ ಭಂಡಾರಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆರಂಭದಲ್ಲಿ ಸೀಮಿತ ಪ್ರದರ್ಶನ ಕಂಡ &lsquo;ರಂಗಿತರಂಗ&rsquo; ನಂತರ ಕರ್ನಾಟಕದ ಗಡಿಯನ್ನು ದಾಟಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಿತು. ಬಳಿಕ ನಿರೂಪ್ ಅವರು ಅನೂಪ್ ನಿರ್ದೇಶನದ &lsquo;ರಾಜರಥ&rsquo; ಚಿತ್ರದಲ್ಲಿ ಮತ್ತೆ ಕಾಣಿಸಿಕೊಂಡರು. ನಂತರ &lsquo;ವಿಕ್ರಾಂತ್ ರೋಣ&rsquo; ಮೂಲಕವೂ ಗಮನ ಸೆಳೆದರು.&lt;/p&gt;&lt;p&gt;&lt;strong&gt;10 ವರ್ಷಗಳ ವೃತ್ತಿಜೀವನದಲ್ಲಿ ಕೇವಲ ಐದು ಸಿನಿಮಾಗಳು!&lt;/strong&gt;&lt;/p&gt;&lt;p&gt;ಚಿತ್ರರಂಗಕ್ಕೆ ಕಾಲಿಟ್ಟು ಹತ್ತು ವರ್ಷಗಳಾಗಿದ್ದರೂ ನಿರೂಪ್ ಭಂಡಾರಿ ನಟಿಸಿರುವ ಸಿನಿಮಾಗಳ ಸಂಖ್ಯೆ ಕೇವಲ ಐದು. ಇದಕ್ಕೆ ತಮ್ಮ ಐಟಿ ಹಿನ್ನೆಲೆಯನ್ನೂ ಅವರು ಕಾರಣವಾಗಿ ಹೇಳುತ್ತಾರೆ. ಐಟಿ ಕ್ಷೇತ್ರದಿಂದ ಬಂದವನಾಗಿರುವುದರಿಂದ ಅಲ್ಲಿ ಒಂದು ನಿರ್ದಿಷ್ಟ ವ್ಯವಸ್ಥೆ ಇರುತ್ತದೆ. ಆದರೆ ಚಿತ್ರರಂಗದಲ್ಲಿ ಕೆಲವೊಮ್ಮೆ ಒಂದು ಸಿನಿಮಾ ಪೂರ್ಣಗೊಂಡು ಚಿತ್ರಮಂದಿರಕ್ಕೆ ಬರುವುದಕ್ಕೆ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಹತ್ತು ವರ್ಷಗಳಲ್ಲಿ ನಾನು ಕೇವಲ ಐದು ಸಿನಿಮಾಗಳನ್ನು ಮಾಡಿದ್ದೇನೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನನ್ನ ಸಹೋದರನೊಂದಿಗಿನ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್&zwnj;ಗಳನ್ನು ಒಟ್ಟಿಗೆ ಮಾಡುತ್ತಿದ್ದೇನೆ. ನನ್ನ ವೃತ್ತಿಜೀವನದ ಉತ್ತಮ ಹಂತದಲ್ಲಿದ್ದೇನೆ ಎನ್ನುತ್ತಾರೆ ಅವರು.&lt;/p&gt;&lt;p&gt;&lt;strong&gt;&lsquo;ಅಮೆರಿಕಾ ಅಮೆರಿಕಾ 2&rsquo; ಬಗ್ಗೆ ನಿರೂಪ್ ಹೇಳಿದ್ದೇನು?&lt;/strong&gt;&lt;/p&gt;&lt;p&gt;ನಿರೂಪ್ ಅವರ ಹೊಸ ಸಿನಿಮಾ &lsquo;ಅಮೆರಿಕಾ ಅಮೆರಿಕಾ 2&rsquo;. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡಿರುವ ಅನುಭವವನ್ನು ಅವರು ವಿಶೇಷವಾಗಿ ಹಂಚಿಕೊಂಡಿದ್ದಾರೆ. &lsquo;ವಿಕ್ರಾಂತ್ ರೋಣ&rsquo; ಚಿತ್ರದಲ್ಲಿನ ನಿರೂಪ್ ಅವರ ಅಭಿನಯವನ್ನು ಗಮನಿಸಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರು &lsquo;ಅಮೆರಿಕಾ ಅಮೆರಿಕಾ 2&rsquo;ಗಾಗಿ ಅವರನ್ನು ಸಂಪರ್ಕಿಸಿದ್ದರು.&lt;/p&gt;&lt;p&gt;ನಾಗತಿಹಳ್ಳಿ ಸರ್ ಕರೆ ಮಾಡಿ &lsquo;ಅಮೆರಿಕಾ ಅಮೆರಿಕಾ 2&rsquo; ಮಾಡುತ್ತಿರುವುದಾಗಿ ಹೇಳಿದಾಗ, ನಟನಾಗಿ ಮಾತ್ರವಲ್ಲ, ಪ್ರೇಕ್ಷಕನಾಗಿಯೂ ನನಗೆ ತುಂಬಾ ಖುಷಿಯಾಯಿತು. ಅವರ ಸಿನಿಮಾ ಮಾಡುವ ಶೈಲಿ ಮತ್ತು ಅಭಿರುಚಿ ನನಗೆ ಗೊತ್ತಿದೆ. ಹೀಗಾಗಿ ಅವರ ಮನಸ್ಸಿನಲ್ಲಿ ಖಂಡಿತವಾಗಿಯೂ ಏನಾದರೂ ಆಸಕ್ತಿದಾಯಕ ವಿಚಾರವಿರಬೇಕು ಎಂದು ಅನಿಸಿತು.&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ&rsquo; ಸಿನಿಮಾದ ಯಶಸ್ಸನ್ನು ಬಳಸಿಕೊಳ್ಳಬೇಕು ಎಂಬ ಉದ್ದೇಶ ಮಾತ್ರ ಇದ್ದಿದ್ದರೆ ಅವರು ಈ ಸಿನಿಮಾವನ್ನು ಬಹಳ ಹಿಂದೆಯೇ ಮಾಡಬಹುದಿತ್ತು. ಆದರೆ ಅವರು ಹಲವು ವರ್ಷಗಳ ಕಾಲ ಕಾದಿದ್ದಾರೆ ಎಂದು ನಿರೂಪ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮುಂದುವರಿದ ಕಥೆಯಲ್ಲ!&lt;/strong&gt;&lt;/p&gt;&lt;p&gt;ಸೆಪ್ಟೆಂಬರ್ 11ರಂದು ತೆರೆಗೆ ಬರುತ್ತಿರುವ &lsquo;ಅಮೆರಿಕಾ ಅಮೆರಿಕಾ 2&rsquo; ಬಗ್ಗೆ ಮಾತನಾಡಿರುವ ನಿರೂಪ್, ಇದು 1997ರಲ್ಲಿ ಬಿಡುಗಡೆಯಾದ &lsquo;ಅಮೆರಿಕಾ ಅಮೆರಿಕಾ&rsquo; ಚಿತ್ರದ ನೇರ ಮುಂದುವರಿದ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದು ಮೂಲ ಚಿತ್ರದ &lsquo;ಸ್ಪಿರಿಚುವಲ್ ಸೀಕ್ವೆಲ್&rsquo;.&lt;/strong&gt;&lt;/p&gt;&lt;p&gt;1990ರ ದಶಕದ &lsquo;ಅಮೆರಿಕಾ ಅಮೆರಿಕಾ&rsquo; ಸಿನಿಮಾ ಸಂಬಂಧಗಳು ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿನ ಸವಾಲುಗಳ ಬಗ್ಗೆ ಮಾತನಾಡಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈಗ &lsquo;ಐ ಲವ್ ಯೂ&rsquo; ಎಂದು ಹೇಳಲು ಒಂದು ಮೆಸೇಜ್ ಕಳುಹಿಸಿದರೆ ಸಾಕು. ನಾಗತಿಹಳ್ಳಿ ಸರ್ ಇಂದಿನ ಕಾಲಘಟ್ಟದ ಪ್ರೇಮವನ್ನು ಆ ಹಿನ್ನೆಲೆಯಲ್ಲಿ ನೋಡಲು ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ನಿರೂಪ್.&lt;/p&gt;&lt;p&gt;&lt;strong&gt;ತ್ರಿಕೋನ ಪ್ರೇಮಕಥೆಯಲ್ಲಿ ನಿರೂಪ್&lt;/strong&gt;&lt;/p&gt;&lt;p&gt;&lsquo;ಅಮೆರಿಕಾ ಅಮೆರಿಕಾ 2&rsquo; ಚಿತ್ರದಲ್ಲಿ ನಿರೂಪ್ &lsquo;ನಿನಾದ್&rsquo; ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ತ್ರಿಕೋನ ಪ್ರೇಮಕಥೆ ನಿರೂಪ್ ಅವರ ವೃತ್ತಿಜೀವನದಲ್ಲೇ ವಿಭಿನ್ನ ಅನುಭವವಂತೆ. ನಾನು ಯಾವಾಗಲೂ ಸಿನಿಮಾವನ್ನು ಪ್ರೇಕ್ಷಕರ ದೃಷ್ಟಿಕೋನದಿಂದ ನೋಡುತ್ತೇನೆ. ನಟನಾಗಿ ನನಗೆ ಇದುವರೆಗೆ ಮಾಡಿರದಂತಹ ಪಾತ್ರಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ.&lt;/p&gt;&lt;p&gt;ತ್ರಿಕೋನ ಪ್ರೇಮಕಥೆ ನನಗೆ ಮೊದಲ ಅನುಭವ ಎಂದು ಅವರು ಹೇಳಿದ್ದಾರೆ. ಇಂದಿನ ಯುವಜನರ ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ ಎಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಪರಿಪೂರ್ಣ ಜೀವನ ಬೇಕು. ಆದರೆ ಅದನ್ನು ತಕ್ಷಣವೇ ಪಡೆಯಬೇಕು ಎಂಬ ಆಸೆ. ಅದಕ್ಕಾಗಿ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ ಎಂದು ಇಂದಿನ ಸಂಬಂಧಗಳ ಸ್ವಭಾವದ ಬಗ್ಗೆ ನಿರೂಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ಡಿಜಿಟಲ್ ಜಗತ್ತಿನ ಅನಲಾಗ್ ವ್ಯಕ್ತಿ&rsquo;&lt;/strong&gt;&lt;/p&gt;&lt;p&gt;ತಮ್ಮ ವೈಯಕ್ತಿಕ ಪ್ರೇಮದ ದೃಷ್ಟಿಕೋನ ಹೇಗಿದೆ ಎಂಬ ಪ್ರಶ್ನೆಗೆ ನಿರೂಪ್ ನಗುತ್ತಲೇ ಉತ್ತರಿಸಿದ್ದಾರೆ. ನಾನು ಯಾವಾಗಲೂ ಹೇಳುತ್ತೇನೆ. ನಾನು ಡಿಜಿಟಲ್ ಜಗತ್ತಿನ ಅನಲಾಗ್ ವ್ಯಕ್ತಿ. ನಾನು ತುಂಬಾ ಹಳೆಯ ಮನಸ್ಸಿನವನು ಎನ್ನುತ್ತಾರೆ ಅವರು. ತಮ್ಮ ಪಾತ್ರಗಳ ವಿಚಾರದಲ್ಲೂ ಇದೇ ರೀತಿಯ ಕಾಳಜಿ ವಹಿಸುವುದಾಗಿ ನಿರೂಪ್ ಹೇಳಿದ್ದಾರೆ. ನಾನು ಮಾಡುವ ಪ್ರತಿಯೊಂದು ಪಾತ್ರಕ್ಕೂ ಕೆಲವು ರೀತಿಯ ತಯಾರಿ ಬೇಕು. ಪ್ರೇಕ್ಷಕರು ಪರದೆಯ ಮೇಲೆ ನೋಡುತ್ತಿರುವ ವ್ಯಕ್ತಿ ತಮಗೆ ಪರಿಚಿತನಂತೆ ಅನಿಸಿದರೆ, ಅದೇ ನಮಗೆ ಸಿಕ್ಕ ಗೆಲುವು ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಕೆಲಸ ಮಾಡಿದ ಅನುಭವ&lt;/strong&gt;&lt;/p&gt;&lt;p&gt;ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದ ಶೈಲಿಯ ಬಗ್ಗೆಯೂ ನಿರೂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ನಟನ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ. ಭಾವನೆಗಳು ಮತ್ತು ಪಾತ್ರದ ವರ್ತನೆಯ ಬಗ್ಗೆ ಚರ್ಚಿಸುತ್ತಾರೆ. ನನಗೆ ಇದೇ ಸರಿಯಾದ ಸಿನಿಮಾ ಮಾಡುವ ವಿಧಾನ ಎಂದು ಅನಿಸುತ್ತದೆ ಎನ್ನುತ್ತಾರೆ ನಿರೂಪ್. ಚಿತ್ರದ ಸಹನಟರಾದ ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಅವರೊಂದಿಗಿನ ಕೆಲಸದ ಅನುಭವವೂ ಉತ್ತಮವಾಗಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಪೃಥ್ವಿ ಮತ್ತು ನಾನು ಮೊದಲ ದಿನದಿಂದಲೇ ಚೆನ್ನಾಗಿ ಹೊಂದಿಕೊಂಡೆವು. ಈಗ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ಶಾನ್ವಿ ಅವರನ್ನು ನಾನು ಮೊದಲೇ ತಿಳಿದಿದ್ದೆ. ಇಬ್ಬರೂ ಉತ್ತಮ ಕಲಾವಿದರು ಮತ್ತು ತಮ್ಮ ಕೆಲಸದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ನಟನೆ ಎಂದರೆ ಕೊಡು-ಕೊಳ್ಳುವಿಕೆ. ಅಭಿನಯ ಸರಿಯಾದ ರೀತಿಯಲ್ಲಿ ಮೂಡಿಬಂದಾಗ ಆ ಎನರ್ಜಿ ಮತ್ತೊಂದು ಹಂತಕ್ಕೆ ಹೋಗುತ್ತದೆ ಎಂದು ನಿರೂಪ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನ ಸಿನಿಮಾ ನಿರ್ಧಾರಗಳಲ್ಲಿ ಅನೂಪ್ ಹಸ್ತಕ್ಷೇಪ ಮಾಡುವುದಿಲ್ಲ&rsquo;&lt;/strong&gt;&lt;/p&gt;&lt;p&gt;&lsquo;ರಂಗಿತರಂಗ&rsquo; ಮೂಲಕ ಸಹೋದರ ಅನೂಪ್ ಭಂಡಾರಿ ಅವರೊಂದಿಗೆ ಚಿತ್ರರಂಗಕ್ಕೆ ಬಂದ ಕಾರಣ, ತಮ್ಮ ಸಿನಿಮಾ ಆಯ್ಕೆಗಳಲ್ಲಿ ಅನೂಪ್ ಅವರ ಪಾತ್ರವಿದೆ ಎಂಬ ಮಾತುಗಳ ಬಗ್ಗೆ ನಿರೂಪ್ ಸ್ಪಷ್ಟನೆ ನೀಡಿದ್ದಾರೆ. ನಾನು ಅನೂಪ್ ಜೊತೆ ಸಿನಿಮಾದ ಬಗ್ಗೆ ಚರ್ಚಿಸುತ್ತೇನೆ. ಅವರ ಮಾರ್ಗದರ್ಶನ ಪಡೆಯುತ್ತೇನೆ. ನನ್ನ ಕೆಲಸದ ಬಗ್ಗೆ ಅವರಿಗೆ ವಿವರಿಸುತ್ತೇನೆ. ಆದರೆ ನನ್ನ ಕೆಲಸವನ್ನು ಅನೂಪ್ ಕೂಡ ಪರದೆಯ ಮೇಲೆ ನೋಡಿದ ನಂತರವೇ ನೋಡುತ್ತಾರೆ.&lt;/p&gt;&lt;p&gt;ನಾನು &lsquo;ರಂಗಿತರಂಗ&rsquo; ಮೂಲಕ ಆರಂಭಿಸಿದ್ದೇನೆ ಎಂಬ ಕಾರಣಕ್ಕೆ ನಾನು ಮಾಡುವ ಎಲ್ಲದರಲ್ಲೂ ಅನೂಪ್ ಅವರ ಪಾತ್ರವಿದೆ ಎಂಬ ತಪ್ಪು ಕಲ್ಪನೆಯಿದೆ. ನಾನು ಒಂದು ನಿರ್ದಿಷ್ಟ ನಟನಾ ಶಾಲೆಯಿಂದ ಬಂದಿದ್ದೇನೆ ಮತ್ತು ಕೆಲವು ತತ್ವಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ನಿರೂಪ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸಿನಿಮಾ ಸಮಾಜವನ್ನು ಬದಲಿಸಬಹುದೇ?&lt;/strong&gt;&lt;/h2&gt;&lt;p&gt;ಇಂದಿನ ಕಾಲದಲ್ಲಿ ಸಿನಿಮಾಗಳು ನೇರವಾಗಿ ಜನರನ್ನು ಬದಲಾಯಿಸುತ್ತವೆ ಎಂಬ ನಂಬಿಕೆ ನಿರೂಪ್ ಅವರಿಗೆ ಅಷ್ಟಾಗಿ ಇಲ್ಲ. ಆದರೆ ಸಿನಿಮಾ ಒಂದು ಚರ್ಚೆಗೆ ನಾಂದಿ ಹಾಡಬಹುದು ಎಂಬ ವಿಶ್ವಾಸ ಅವರಿಗಿದೆ. ಡಾ. ರಾಜ್&zwnj;ಕುಮಾರ್ ಅವರ ಸಿನಿಮಾಗಳ ವಿಚಾರದಲ್ಲಿ ಇದಕ್ಕೆ ಅಪವಾದಗಳಿವೆ. &lsquo;ಬಂಗಾರದ ಮನುಷ್ಯ&rsquo;ದಂತಹ ಸಿನಿಮಾಗಳು ಅದಕ್ಕೆ ಉತ್ತಮ ಉದಾಹರಣೆ. ಇಂದಿನ ಕಾಲದಲ್ಲಿ ಸಿನಿಮಾಗಳು ಜನರನ್ನು ಬದಲಾಯಿಸುತ್ತವೆಯೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಸಿನಿಮಾ ಚರ್ಚೆಯನ್ನು ಹುಟ್ಟುಹಾಕಲು ಸಾಧ್ಯವಾದರೆ, ಅದೇ ದೊಡ್ಡ ಮೌಲ್ಯ ಎನ್ನುತ್ತಾರೆ ಅವರು.&lt;/p&gt;&lt;p&gt;ಇನ್ನು &lsquo;ಅಮೆರಿಕಾ ಅಮೆರಿಕಾ 2&rsquo; ಕೂಡ ಪ್ರೇಕ್ಷಕರ ನಡುವೆ ಅಂತಹ ಒಂದು ಚರ್ಚೆಯನ್ನು ಮತ್ತೆ ಹುಟ್ಟುಹಾಕುತ್ತದೆ ಎಂಬ ಭರವಸೆ ಇದೆ ಎಂದು ನಿರೂಪ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 11ರಂದು &lsquo;ಅಮೆರಿಕಾ ಅಮೆರಿಕಾ 2&rsquo; ತೆರೆಗೆ ಬರಲಿದ್ದು, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಅಭಿನಯಿಸಿರುವ ಈ ಸಿನಿಮಾ ಇಂದಿನ ಕಾಲಘಟ್ಟದ ಪ್ರೀತಿ, ಸಂಬಂಧಗಳು ಮತ್ತು ಅವುಗಳಲ್ಲಿನ ಬದಲಾವಣೆಗಳನ್ನು ಹೇಗೆ ತೆರೆಗೆ ತರುತ್ತದೆ ಎಂಬ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actor-nirup-bhandari-on-america-america-2-it-is-a-spiritual-sequel-not-a-continuation-gvd/articleshow-rdf7g2k"/>
        </item>
        <item>
            <title><![CDATA['ಫಿಲ್ಮ್‌ಮೇಕಿಂಗ್ ಅನ್ನೋದು ರಿಸ್ಕ್': ಕನ್ನಡ ಚಿತ್ರರಂಗದ ಬಗ್ಗೆ ನಟಿ ಶ್ರುತಿ ಹರಿಹರನ್ ಯಾಕೆ ಹೀಗಂದ್ರು]]></title>
            <link>https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</link>
            <guid isPermaLink="true">https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs</guid>
            <pubDate>Sun, 06 Sep 2026 18:44:33 +0530</pubDate>
            <description><![CDATA[&lt;p&gt;ನಟಿ ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdnhn6tve93d1d984mac80,imgname-vjv-1788700444326.png" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಕೆಲ ವರ್ಷಗಳಿಂದ ತುಸು ಸೈಲೆಂಟ್ ಆಗಿದ್ದ ನಟಿ ಶ್ರುತಿ ಹರಿಹರನ್ ಇದೀಗ ವಿಭಿನ್ನ ಸಿನಿಮಾಗಳ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. &lsquo;ಮುಧೋಳ್&rsquo;, &lsquo;ಚೀತಾ&rsquo; ಹಾಗೂ &lsquo;NH66&rsquo; ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿದ್ದು, ಈ ಚಿತ್ರಗಳು ಶ್ರುತಿಯನ್ನು ಈ ಹಿಂದೆ ನೋಡಿರದ ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ಪರಿಚಯಿಸುವ ನಿರೀಕ್ಷೆಯಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಸಾಂಪ್ರದಾಯಿಕ ನಾಯಕಿ ಪಾತ್ರಗಳಿಗೆ ಸೀಮಿತವಾಗಿದ್ದ ಶ್ರುತಿಗೆ ಇದೀಗ ಸಿಗುತ್ತಿರುವ ಪಾತ್ರಗಳಲ್ಲಿ ಹೆಚ್ಚು ವೈವಿಧ್ಯತೆ ಮತ್ತು ತೂಕವಿದೆ. ತಮ್ಮ ಈ ಹೊಸ ಹಂತದ ಸಿನಿಮಾ ಪಯಣ, ಎನ್ಸೆಂಬಲ್ ಸಿನಿಮಾಗಳಲ್ಲಿ ಕೆಲಸ ಮಾಡುವ ಖುಷಿ, ಚಿತ್ರಗಳ ಥಿಯೇಟ್ರಿಕಲ್ ಭವಿಷ್ಯ ಹಾಗೂ ತಾವು ನಂಬಿರುವ ಸಿನಿಮಾಗಳನ್ನು ಮಾಡುವ ಅಗತ್ಯದ ಬಗ್ಗೆ ಶ್ರುತಿ ಹರಿಹರನ್ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಿಭಿನ್ನ ರೀತಿಯ ಪಾತ್ರಗಳು ನನ್ನತ್ತ ಬರಬೇಕು ಎಂಬ ಆಸೆ ಯಾವಾಗಲೂ ಇತ್ತು&rsquo;&lt;/strong&gt;&lt;/p&gt;&lt;p&gt;ಕಳೆದ ಎರಡು ವರ್ಷಗಳಿಂದ ನನ್ನ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ ಅನ್ನೋದು ನಿಜಕ್ಕೂ ಆಶ್ಚರ್ಯಕರ. ಆದರೆ ಕಳೆದ ಎರಡೂವರೆ-ಮೂರು ವರ್ಷಗಳಲ್ಲಿ ನಾನು ಕೆಲಸ ಮಾಡಿರುವ ಸಿನಿಮಾಗಳ ಪೈಕಿ ಬಹುತೇಕ ಚಿತ್ರಗಳು ಈ ವರ್ಷ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಶ್ರುತಿ ಹೇಳುತ್ತಾರೆ. ಆ ಸಿನಿಮಾಗಳೆಲ್ಲವೂ ವಿಭಿನ್ನವಾಗಿವೆ. ಅವುಗಳಲ್ಲಿ ನಾನು ಸಾಮಾನ್ಯ ಅರ್ಥದಲ್ಲಿ ನಾಯಕಿಯ ಪಾತ್ರ ಮಾಡದೇ ಇರಬಹುದು.&lt;/p&gt;&lt;p&gt;ಆದರೆ ಆ ಪಾತ್ರಗಳಲ್ಲಿ ಸಾಕಷ್ಟು ತೂಕವಿದೆ, ನನ್ನನ್ನು ಸವಾಲಿಗೆ ಒಡ್ಡುವಂತಹ ಪಾತ್ರಗಳಾಗಿವೆ. ಇಂಥ ವಿಭಿನ್ನ ಕೆಲಸಗಳು ನನ್ನತ್ತ ಬರಬೇಕು ಎಂಬ ಆಸೆ ನನಗೆ ಯಾವಾಗಲೂ ಇತ್ತು ಎನ್ನುತ್ತಾರೆ. ನನಗೆ ಯಾವಾಗ ಅವಕಾಶ ಸಿಕ್ಕರೂ ಅದನ್ನು ಕೈಬಿಡಲು ಇಷ್ಟವಾಗುವುದಿಲ್ಲ. &lsquo;ವಾವ್, ಇದು ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ&rsquo; ಎಂದುಕೊಂಡು ಆ ಅವಕಾಶವನ್ನು ಸ್ವೀಕರಿಸುತ್ತೇನೆ ಎಂದು ತಮ್ಮ ಪಾತ್ರಗಳ ಆಯ್ಕೆಯ ಬಗ್ಗೆ ಅವರು ಹೇಳುತ್ತಾರೆ.&lt;/p&gt;&lt;p&gt;ಉದಾಹರಣೆಗೆ, ಶ್ರುತಿ ನಟಿಸಿರುವ &lsquo;ಮುಧೋಳ್&rsquo; ಒಂದು ಎನ್ಸೆಂಬಲ್ ಸಿನಿಮಾ. ಒಂದೇ ಚಿತ್ರದಲ್ಲಿ ಹಲವು ಕಲಾವಿದರು ಇರುವ ಇಂತಹ ಸಿನಿಮಾಗಳಲ್ಲಿ ಕೆಲಸ ಮಾಡುವುದನ್ನು ಅವರು ವಿಶೇಷವಾಗಿ ಇಷ್ಟಪಡುತ್ತಾರೆ. ಸೆಟ್&zwnj;ನಲ್ಲಿ ಸಾಕಷ್ಟು ಕಲಾವಿದರು ಇದ್ದಾಗ ಸುತ್ತಮುತ್ತ ತುಂಬಾ ಮಾತುಕತೆ, ಎನರ್ಜಿ ಇರುತ್ತದೆ. ಸಿನಿಮಾದಲ್ಲಿ ನಮ್ಮದೇ ಆದ ಜಾಗವನ್ನು ಹುಡುಕಿಕೊಳ್ಳಬೇಕಾಗುತ್ತದೆ. ಅದು ಬಹುತೇಕ ಸಂದರ್ಭಗಳಲ್ಲಿ ನನ್ನಿಂದ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಿಸುವಂತೆ ಮಾಡುತ್ತದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;&lt;strong&gt;&lsquo;ಮನರಂಜನೆಯಾಚೆ ಕಲೆಗಿರುವ ಶಕ್ತಿ ಅಪಾರ&rsquo;&lt;/strong&gt;&lt;/p&gt;&lt;p&gt;ಶ್ರುತಿ ಹರಿಹರನ್&zwnj;ಗೆ ಸಿನಿಮಾದಲ್ಲಿ ಮಹಿಳೆಯರ ಪ್ರಾತಿನಿಧ್ಯವೂ ಅಷ್ಟೇ ಮುಖ್ಯ. ಕೇವಲ ಮನರಂಜನೆ ಎಂಬ ಕಾರಣಕ್ಕೆ ಪರದೆಯ ಮೇಲೆ ಮಹಿಳೆಯರನ್ನು ಹೇಗೆ ಬೇಕಾದರೂ ತೋರಿಸುವುದನ್ನು ಒಪ್ಪಿಕೊಳ್ಳಬಾರದು ಎಂಬುದು ಅವರ ಅಭಿಪ್ರಾಯ.&lt;/p&gt;&lt;p&gt;ಬರಹಗಾರರನ್ನು ಪ್ರಶ್ನಿಸುವುದು, ಪುರುಷರ ದೃಷ್ಟಿಕೋನವನ್ನು ಪ್ರಶ್ನಿಸುವುದು ಬಹಳ ಮುಖ್ಯ. ನಿಮ್ಮ ಲೈಂಗಿಕತೆಯನ್ನು ಸಂಭ್ರಮಿಸುವುದೇ ತಪ್ಪು ಎಂದು ನಾನು ಹೇಳುವುದಿಲ್ಲ. ಖಂಡಿತವಾಗಿಯೂ ಅಲ್ಲ. ಆದರೆ ಒಂದು ಹಂತದಲ್ಲಿ ಯಾವುದಾದರೂ ವಿಚಾರ ಮಹಿಳೆಯರನ್ನು ಕೀಳಾಗಿ ತೋರಿಸುತ್ತಿದೆಯೇ, ಅಥವಾ ಒಬ್ಬ ಮಹಿಳೆ ನಿಮ್ಮನ್ನು ಆ ದೃಶ್ಯದಲ್ಲಿ ನೋಡಿಕೊಂಡು ಮುಜುಗರಪಡಬಹುದೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ಶ್ರುತಿ ಹೇಳುತ್ತಾರೆ.&lt;/p&gt;&lt;p&gt;ಕಲೆಗೆ ಅಪಾರ ಶಕ್ತಿಯಿದೆ. ಫಿಲ್ಮ್&zwnj;ಮೇಕರ್&zwnj;ಗಳು ಮತ್ತು ನಟ-ನಟಿಯರಾದ ನಾವು ಮನರಂಜನೆ ನೀಡುತ್ತಲೇ ಒಂದು ಮುಖ್ಯವಾದ ವಿಚಾರವನ್ನು ಹೇಳುವ ಶಕ್ತಿಯನ್ನು ಹೊಂದಿದ್ದೇವೆ. ಮನರಂಜನೆಯೂ ಅಷ್ಟೇ ಮುಖ್ಯ. ಆದರೆ ನಮ್ಮ ಕೆಲಸದಿಂದ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗಬಹುದು ಎಂಬುದನ್ನೂ ನಾವು ಅರ್ಥಮಾಡಿಕೊಳ್ಳಬೇಕು ಎಂದು ಅವರು ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;&lsquo;ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು; ಇಲ್ಲವೇ ಸಿನಿಮಾ ಮಾಡುತ್ತಲೇ ಇರಬಹುದು&rsquo;&lt;/strong&gt;&lt;/p&gt;&lt;p&gt;ಇತ್ತೀಚೆಗೆ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿದ್ದರೂ ಅವುಗಳಿಗೆ ಥಿಯೇಟರ್&zwnj;ನಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿರುವ ಕುರಿತು ಕೇಳಿದಾಗ, ಶ್ರುತಿ ಕೂಡ ಇದಕ್ಕೆ ಸುಲಭವಾದ ಉತ್ತರ ಇಲ್ಲ ಎನ್ನುತ್ತಾರೆ. ಇದು ಯಾಕೆ ಆಗುತ್ತಿದೆ ಎಂದು ನಾವೆಲ್ಲರೂ ಯೋಚಿಸಿದ್ದೇವೆ. ಪ್ರೇಕ್ಷಕರು ಥಿಯೇಟರ್&zwnj;ಗೆ ಬರುತ್ತಿಲ್ಲ ಎಂದು ಹೇಳುತ್ತೇವೆ. ಆದರೆ ಮತ್ತೊಂದು ಕಡೆ, ಪ್ರೇಕ್ಷಕರು ಥಿಯೇಟರ್&zwnj;ಗೆ ಬರುವಷ್ಟು ಉತ್ತಮ ಸಿನಿಮಾಗಳನ್ನು ನಾವು ಮಾಡುತ್ತಿದ್ದೇವೆಯೇ ಎಂಬ ಪ್ರಶ್ನೆಯೂ ಇದೆ. ಇದು ಮೊದಲು ಕೋಳಿ ಬಂದಿತೋ, ಮೊಟ್ಟೆ ಬಂದಿತೋ ಎಂಬಂತಾಗಿದೆ ಎಂದು ಅವರು ಹೇಳುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ತಮ್ಮ ನಿಲುವು ಮಾತ್ರ ಸ್ಪಷ್ಟವಾಗಿದೆ ಎನ್ನುತ್ತಾರೆ ಶ್ರುತಿ.&lt;/p&gt;&lt;p&gt;ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಫಿಲ್ಮ್&zwnj;ಮೇಕಿಂಗ್ ದೊಡ್ಡ ರಿಸ್ಕ್ ಆಗಿಬಿಟ್ಟಿದೆ. ಆದರೂ ಆ ರಿಸ್ಕ್ ತೆಗೆದುಕೊಂಡು ಸಿನಿಮಾಗಳನ್ನು ಮಾಡುತ್ತಿರುವವರು ಈಗಲೂ ಇದ್ದಾರೆ. ನಾವು ಒಬ್ಬರನ್ನೊಬ್ಬರು ದೂಷಿಸುತ್ತಾ ಕೂರಬಹುದು. ಇಲ್ಲವೇ ನಮ್ಮದೇ ಆದ ರೀತಿಯಲ್ಲಿ ನಾವು ನಂಬಿರುವ, ಉತ್ತಮ ಬರಹ ಹೊಂದಿರುವ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಬಹುದು ಎಂದು ಶ್ರುತಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಒಂದು ಸಿನಿಮಾ ಎರಡು ಗಂಟೆಯ ಕೆಲಸವಲ್ಲ; ಅದರ ಹಿಂದೆ ವರ್ಷಗಳ ಶ್ರಮವಿರುತ್ತದೆ&rsquo;&lt;/strong&gt;&lt;/h2&gt;&lt;p&gt;ಸಿನಿಮಾ ಕ್ಷೇತ್ರದ ಬಗ್ಗೆ ಪ್ರೇಕ್ಷಕರು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದ ಒಂದು ವಿಚಾರವಿದೆ ಎಂದರೆ, ಪರದೆಯ ಮೇಲೆ ಕಾಣಿಸುವ ಎರಡು ಗಂಟೆಗಳ ಹಿಂದೆ ಇರುವ ಅಪಾರ ಪರಿಶ್ರಮ ಎನ್ನುತ್ತಾರೆ ಶ್ರುತಿ. ಒಂದು ಸಿನಿಮಾ ಎರಡರಿಂದ ಎರಡೂವರೆ ಗಂಟೆಗಳ ಮನರಂಜನೆಯಾಗಿರಬಹುದು. ಆದರೆ ಆ ಸಿನಿಮಾದ ಹಿಂದೆ ಹಲವಾರು ಜನರ ವರ್ಷಗಳ ಪರಿಶ್ರಮ ಇರುತ್ತದೆ. ಯಾವುದಾದರೂ ಸಿನಿಮಾವನ್ನು ತಕ್ಷಣವೇ ತಿರಸ್ಕರಿಸುವುದು ಸುಲಭ.&lt;/p&gt;&lt;p&gt;ಆದರೆ ಕನಿಷ್ಠ ಒಂದು ಅವಕಾಶ ನೀಡುವುದು ಮುಖ್ಯ. ಥಿಯೇಟರ್&zwnj;ಗೆ ಬಂದು ಸಿನಿಮಾವನ್ನು ನೋಡಿ, ಅದಕ್ಕೆ ಸ್ವಲ್ಪ ಸಮಯ ಕೊಡಿ ಎಂದು ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ. ಇನ್ನು ವಿಭಿನ್ನ ಪಾತ್ರಗಳ ಮೂಲಕ ಮತ್ತೆ ತೆರೆಮೇಲೆ ಬರಲು ಸಜ್ಜಾಗಿರುವ ಶ್ರುತಿ ಹರಿಹರನ್ ಅವರ ಮಾತುಗಳಲ್ಲಿ, ಸಿನಿಮಾ ಎನ್ನುವುದು ಕೇವಲ ಮನರಂಜನೆಯಲ್ಲ; ಅದು ರಿಸ್ಕ್, ಪರಿಶ್ರಮ ಮತ್ತು ನಂಬಿಕೆಯ ಫಲ ಎಂಬ ಸಂದೇಶವೂ ಸ್ಪಷ್ಟವಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kannada-actress-sruthi-hariharan-on-sandalwood-cinema-theatrical-releases-risk-interview-gvd/articleshow-rz1p9gs"/>
        </item>
        <item>
            <title><![CDATA[ಸ್ಟಾರ್‌ಡಮ್‌, ಟಾಕ್ಸಿಕ್‌, ರಾವಣನ ಪಾತ್ರ... ರಾಕಿಂಗ್ ಸ್ಟಾರ್ ಯಶ್‌ ಬಿಚ್ಚಿಟ್ಟ ಸೀಕ್ರೆಟ್‌ಗಳು!]]></title>
            <link>https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</link>
            <guid isPermaLink="true">https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</guid>
            <pubDate>Mon, 17 Aug 2026 16:05:20 +0530</pubDate>
            <description><![CDATA[&lt;p&gt;Rocking Star Yash: ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07k2fkh608y2gmj6dgqmdmz,imgname-vhjv-1786961280624.png" type="image/jpeg" height="390" width="690"/>
            <content:encoded><![CDATA[&lt;p&gt;ಖಾಸಗಿ ವಾಹಿನಿ ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿ ರಾಕಿಂಗ್&zwnj; ಸ್ಟಾರ್&zwnj; ಯಶ್ ಭಾಗವಹಿಸಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;&lt;p&gt;&lt;strong&gt;* ಯಶ್ ತುಂಬಾ ಮೊಂಡು ಎಂಬ ಆರೋಪವಿದೆ. ನೀವು ಯಾರ ಮಾತನ್ನೂ ಕೇಳದೆ ನಿಮ್ಮಿಷ್ಟದಂತೆ ಇರುತ್ತೀರಾ?&lt;/strong&gt;&lt;/p&gt;&lt;p&gt;ಇದರಲ್ಲಿ ತಪ್ಪೇನಿದೆ ಸರ್? ಇರುವುದು ಒಂದೇ ಜೀವನ. ನಾವು ಏನಾಗಬೇಕೆಂದು ಬಯಸುತ್ತೇವೆಯೋ, ಏನನ್ನು ಸಾಧಿಸಬೇಕೋ ಅದನ್ನು ಮಾಡಬೇಕು. ಅದನ್ನು ಮೊಂಡುತನ ಎನ್ನುವುದಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಷಯಗಳಿಗೆ ಮೊಂಡುತನ ಹೊಂದಿರಬೇಕು.&lt;/p&gt;&lt;p&gt;&lt;strong&gt;* ಬಾಲ್ಯದಲ್ಲಿ ನೀವು ಮೊಂಡುತನ ಮಾಡಿದಾಗ ತಂದೆಯಿಂದ ಏಟು ಬೀಳುತ್ತಿತ್ತಂತೆ?&lt;/strong&gt;&lt;/p&gt;&lt;p&gt;ಹೌದು, ತುಂಬಾ ಹೊಡೆಯುತ್ತಿದ್ದರು. ನಾನು ಬಾಲ್ಯದಲ್ಲಿ ಅಷ್ಟು ಚೇಷ್ಟೆ ಮಾಡುತ್ತಿದ್ದೆ. ನನ್ನ ತಂಗಿ ಈಗಲೂ ಹೇಳುತ್ತಾಳೆ, &lsquo;ನೀನು ನಟನಾಗಿ ಎಲ್ಲರೂ ನಿನಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆ, ಆದರೆ ಚಿಕ್ಕವನಿದ್ದಾಗ ನಿನ್ನನ್ನು ನೋಡಿದವರು ಇವನು ಜೀವನದಲ್ಲಿ ಏನೂ ಉದ್ದಾರ ಆಗಲ್ಲ ಎನ್ನುತ್ತಿದ್ದರು&rsquo; ಎಂದು. ಆದರೆ ಜೀವನದಲ್ಲಿ ಕಲಿತ ಆ ಪಾಠಗಳು ನನ್ನನ್ನು ದೊಡ್ಡ ಯುದ್ಧಗಳಿಗೆ ಸಿದ್ಧಪಡಿಸಿದವು ಎಂದೆನಿಸುತ್ತದೆ.&lt;/p&gt;&lt;p&gt;&lt;strong&gt;* ತಂದೆ ನಿಮ್ಮನ್ನು ಫ್ಯಾನ್&zwnj;ಗೆ ತಲೆಕೆಳಗಾಗಿ ನೇತುಹಾಕಿ ಫ್ಯಾನ್ ಆನ್ ಮಾಡಿದ್ದರಂತೆ? ನಿಮ್ಮ ಸ್ನೇಹಿತರು ತಂದೆಯನ್ನು &lsquo;ಟೈಗರ್&rsquo; ಎನ್ನುತ್ತಿದ್ದರಂತೆ?&lt;/strong&gt;&lt;/p&gt;&lt;p&gt;ಹೌದು. ನಾನು ಶಾಲೆಯಿಂದ 10 ನಿಮಿಷ ತಡವಾಗಿ ಬಂದರೂ ಪೊಲೀಸ್ ಗಾಡಿಯಂತೆ ವಾಹನ ತಂದು ಹುಡುಕುತ್ತಿದ್ದರು. ನನ್ನ ಸ್ನೇಹಿತರು &lsquo;ಬೇಗ ಮನೆಗೆ ಹೋಗು, ನಿಮ್ಮಪ್ಪ ಬಂದುಬಿಡುತ್ತಾರೆ&rsquo; ಎಂದು ಓಡಿಹೋಗುತ್ತಿದ್ದರು. ಕಾಲೇಜು ದಿನಗಳಲ್ಲೂ ಅವರು ಎಲ್ಲರ ಮುಂದೆ ಹೊಡೆಯುತ್ತಿದ್ದರು. ಕೊನೆಗೆ ಒಂದು ದಿನ ನಾನು ಅವರ ಮುಂದೆ ಕೆಳಗೆ ಬಿದ್ದು ನಾಟಕ ಮಾಡಿದೆ, ಅಂದಿನಿಂದ ಹೊಡೆಯುವುದನ್ನು ಬಿಟ್ಟರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ನಿರ್ದೇಶಕರೋ, ನಿರ್ಮಾಪಕರೋ ಅಲ್ಲ ಎಂಬ ಕೊರಗು ಇತ್ತಾ?&lt;/strong&gt;&lt;/p&gt;&lt;p&gt;ಎಂದಿಗೂ ಇಲ್ಲ ಸರ್. ನನ್ನ ಹೆತ್ತವರು ನನಗೆ ಕಲಿಸಿದ ಮುಖ್ಯ ಪಾಠ, &lsquo;ಯಾರ ಮೇಲೂ ಅವಲಂಬಿತನಾಗಿ ಬದುಕಬೇಡ, ನಿನ್ನ ಕೆಲಸವನ್ನು ನೀನೇ ಮಾಡು, ಯಾರ ಮುಂದೆಯೂ ತಲೆತಗ್ಗಿಸಬೇಡ&rsquo; ಎಂಬುದು. ಪ್ರತಿಯೊಬ್ಬ ಮಗುವಿಗೂ ಅವರ ತಂದೆಯೇ ಹೀರೋ. ನಮ್ಮ ತಂದೆ-ತಾಯಿ ಹೆಚ್ಚು ಹಣ ಗಳಿಸದೇ ಇರಬಹುದು, ಆಸ್ತಿ ಮಾಡದೇ ಇರಬಹುದು. ಆದರೆ ನಮ್ಮನ್ನೇ ತಮ್ಮ ಆಸ್ತಿ ಎಂದು ನಂಬಿ ಬೆಳೆಸಿದರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಆರಂಭದಲ್ಲಿ ದಿನಕ್ಕೆ ₹14 ದುಡಿಯುತ್ತಿದ್ದ ದಿನಗಳಿದ್ದವು...&lt;/strong&gt;&lt;/p&gt;&lt;p&gt;ನಾನು ಓದುವಾಗ ನಮ್ಮ ತಂದೆ ಬಡವರು ಎಂಬ ಭಾವನೆ ನನಗೆ ಬರಲು ಅವರು ಬಿಡಲೇ ಇಲ್ಲ. ಕಾಲೇಜಿಗೆ ಬಂದಾಗ ಎಲ್ಲರ ಬಳಿ ಬೈಕ್, ಹೊಸ ಬಟ್ಟೆ ಇರುತ್ತಿತ್ತು. ನನ್ನ ಬಳಿ ತಂದೆಯ ಹಳೆಯ ಸ್ಕೂಟರ್ ಇತ್ತು. ನಮ್ಮ ಮನಸ್ಥಿತಿ ಮತ್ತು ದುಡಿಮೆಯಿಂದ ಗೌರವ ಸಿಗುತ್ತದೆಯೇ ಹೊರತು ಹೊರಗಿನ ಆಡಂಬರದಿಂದಲ್ಲ ಎಂದು ನನಗೆ ಬಹಳ ಬೇಗ ಅರ್ಥವಾಯಿತು.&lt;/p&gt;&lt;p&gt;&lt;strong&gt;* ನೀವು ಅತ್ಯುತ್ತಮ ಡ್ಯಾನ್ಸರ್ ಆಗಿದ್ದಿರಿ, ಹುಡುಗಿಯರೆಲ್ಲ ನಿಮ್ಮ ಡ್ಯಾನ್ಸ್&zwnj;ಗೆ ಫಿದಾ ಆಗಿದ್ದರು...&lt;/strong&gt;&lt;/p&gt;&lt;p&gt;ಹೌದು, ನನಗೆ ಡ್ಯಾನ್ಸ್ ಎಂದರೆ ಪ್ರಾಣ. ಶಾಲೆಯಲ್ಲಿ ಶಿಕ್ಷಕರು ನನ್ನನ್ನು &lsquo;ಹೀರೋ&rsquo; ಎಂದೇ ಕರೆಯುತ್ತಿದ್ದರು. ನಾನೂ ಸಹ ಹುಟ್ಟಿನಿಂದಲೇ ಹೀರೋ ಎಂದು ನಂಬಿಬಿಟ್ಟಿದ್ದೆ. ಒಮ್ಮೆ ವೀರಪ್ಪನ್ ಹಾವಳಿ ಇದ್ದಾಗ, &lsquo;ನನಗೆ ರಜೆ ಕೊಡಿ, ನಾನೇ ಹೋಗಿ ವೀರಪ್ಪನ್ ಹಿಡಿದು ತರುತ್ತೇನೆ&rsquo; ಎಂದು ಶಾಲೆಯಲ್ಲಿ ಡೈಲಾಗ್ ಹೊಡೆದಿದ್ದೆ. 7ನೇ ತರಗತಿಯವರೆಗೂ ಟೀಚರ್&zwnj;ಗಳು &lsquo;ಏನೋ, ವೀರಪ್ಪನ್ ಹಿಡಕೊಂಡು ಬಂದ್ಯಾ?&rsquo; ಎಂದು ಕಾಲೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;* ಚಿತ್ರರಂಗದಲ್ಲಿ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದವರ ಕುಟುಂಬದ ಹಿನ್ನೆಲೆ ಇರುವ ನಟರಿಗೆ ಆರಂಭದಲ್ಲಿ ಬೆಂಬಲ ಸಿಗುತ್ತದೆ. ನಿಮ್ಮಂತಹ ಹೊರಗಿನವರಿಗೆ ಕಷ್ಟ ಅನಿಸಲಿಲ್ಲವೇ?&lt;/strong&gt;&lt;/p&gt;&lt;p&gt;ಹಿನ್ನೆಲೆ ಇರಲಿ, ಬಿಡಲಿ, ಕೊನೆಗೆ ನಿರ್ಧರಿಸುವುದು ಪ್ರೇಕ್ಷಕರೇ. ಸ್ಟಾರ್ ಮಕ್ಕಳಿಗೂ ಅವರದೇ ಆದ ತಂದೆಯ ಹೆಸರಿನ ದೊಡ್ಡ ಹೊರೆ ಇರುತ್ತದೆ. ಆದರೆ ನಮ್ಮಂತಹವರಿಗೆ ಆ ಮೊದಲ ಮೆಟ್ಟಿಲು ಹುಡುಕುವುದೇ ಕಷ್ಟ. ಒಮ್ಮೆ ಮೆಟ್ಟಿಲು ಸಿಕ್ಕ ಮೇಲೆ ಹತ್ತುವುದು ನಮ್ಮ ಕೈಯಲ್ಲಿದೆ. ನನ್ನನ್ನು ನಾನೇ ಬೆಳೆಸಿಕೊಂಡಿದ್ದಕ್ಕಿಂತ ಜನರ ಪ್ರೀತಿಯೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಅಲ್ಲು ಅರವಿಂದ್ ಒಮ್ಮೆ ಹೇಳಿದ್ದರು, &lsquo;ಕೆಜಿಎಫ್&zwnj;ಗಿಂತ ಮೊದಲು ಯಶ್ ಏನಾಗಿದ್ದರು? ಸಿನಿಮಾ ಮಾಡುವುದು ನಿರ್ಮಾಪಕ, ಅದರ ಲಾಭ ನಟನಿಗೆ ಸಿಗುತ್ತದೆ&rsquo; ಎಂದು... ನಿಜ ಸರ್, ಸಿನಿಮಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲರ ಶ್ರಮ ನಟನ ಮೂಲಕ ಪರದೆಯ ಮೇಲೆ ಬರುತ್ತದೆ. ನಟ ಅದನ್ನು ಸರಿಯಾಗಿ ಹೊರಹಾಕದಿದ್ದರೆ ಸಿನಿಮಾ ಓಡುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತದೆ, ಏಕೆಂದರೆ ಕ್ಯಾಮೆರಾ ಎದುರು ನಿಂತು ಆ ಭಾವನೆಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಟನ ಮೇಲಿರುತ್ತದೆ. ಪ್ರೇಕ್ಷಕರು ಎಂದಿಗೂ ತಪ್ಪಾಗುವುದಿಲ್ಲ.&lt;/p&gt;&lt;p&gt;&lt;strong&gt;* ದಕ್ಷಿಣದ ರಾಮ್ ಚರಣ್, ಜೂ. ಎನ್&zwnj;ಟಿಆರ್, ಮಹೇಶ್ ಬಾಬು ದೊಡ್ಡ ಕುಟುಂಬದಿಂದ ಬಂದರೂ ನಿಮ್ಮಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಇಲ್ಲ ಸರ್, ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಈ &lsquo;ಪ್ಯಾನ್ ಇಂಡಿಯಾ&rsquo;, &lsquo;ಸ್ಟಾರ್ಡಮ್&rsquo; ಎಂಬುದೆಲ್ಲ ಶಾಶ್ವತವಲ್ಲ. ಈ ಶುಕ್ರವಾರ ನೀವು ಸೂಪರ್ ಸ್ಟಾರ್ ಆಗಿರಬಹುದು, ಮುಂದಿನ ಶುಕ್ರವಾರ ಏನೂ ಇಲ್ಲದಂತಾಗಬಹುದು. ಯಾರು ಮುಂದು, ಯಾರು ಹಿಂದು ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ನೆಲೆಸುತ್ತೇವೆ ಎಂಬುದು ಮುಖ್ಯ.&lt;/p&gt;&lt;p&gt;&lt;strong&gt;* ಇಲ್ಲಿಯವರೆಗೆ ಬರಲು ನೀವು ನಾಟಕ ರಂಗದಲ್ಲಿ ನೆಲ ಒರೆಸಿದ್ದೀರಿ, ಚಹಾ ಕೊಟ್ಟಿದ್ದೀರಿ...&lt;/strong&gt;&lt;/p&gt;&lt;p&gt;ಅದನ್ನೆಲ್ಲಾ ಸಾಮಾನ್ಯವಾಗಿ ಜನ ಸ್ಟ್ರಗಲ್ ಎಂದು ಕರೆಯುತ್ತಾರೆ. ಆದರೆ ನನಗೆ ಅದು ಕಷ್ಟ ಎನಿಸಲಿಲ್ಲ. ಆ ಕೆಲಸದಲ್ಲೂ ನಾನು ಖುಷಿ ಕಂಡುಕೊಂಡಿದ್ದೆ. ಕಸ ಗುಡಿಸುವುದರಲ್ಲೂ ಖುಷಿ ಇರಬಹುದು, ದೊಡ್ಡ ಅವಾರ್ಡ್ ತಗೊಂಡಾಗಲೂ ಖುಷಿ ಇಲ್ಲದಿರಬಹುದು. ಮನಸ್ಥಿತಿ ಮುಖ್ಯ.&lt;/p&gt;&lt;p&gt;&lt;strong&gt;* ನಿಮ್ಮಲ್ಲಿ ಆರಂಭದಿಂದಲೂ ಹೀರೋ ಎಂಬ ಇಗೋ ಇತ್ತು?&lt;/strong&gt;&lt;/p&gt;&lt;p&gt;ಅದನ್ನು ನೀವು ಇಗೋ ಅಂದರೆ ಇಗೋ, ನನ್ನ ಮಟ್ಟಿಗೆ ಅದು ಆತ್ಮಗೌರವ, ಸೆಲ್ಫ್ ರೆಸ್ಪೆಕ್ಟ್. 17ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೋದಾಗ, &lsquo;ನೀನಿನ್ನೂ ಚಿಕ್ಕವನು ಸುಮ್ಮನಿರು&rsquo; ಎನ್ನುತ್ತಿದ್ದರು. ನಾನು ಹೇಳುವ ಮಾತಿಗೆ ವಯಸ್ಸಿನ ಹಂಗಿಲ್ಲದೆ ಬೆಲೆ ಸಿಗಬೇಕೆಂದೇ ನಾನು ಗಡ್ಡ ಬಿಡಲು ಶುರುಮಾಡಿದೆ.&lt;/p&gt;&lt;p&gt;&lt;strong&gt;* ರಾತ್ರೋರಾತ್ರಿ ಇಷ್ಟು ದೊಡ್ಡ ಸೂಪರ್ ಸ್ಟಾರ್ ಆದಾಗ ನಿಮ್ಮ ಶಾಲಾ-ಕಾಲೇಜು ಸ್ನೇಹಿತರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ನನಗೆ ಸಿಕ್ಕ ಗೆಲುವು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳ ನಂತರ &lsquo;ಕೆಜಿಎಫ್&rsquo; ಸಾಧ್ಯವಾಯಿತು. ನಮ್ಮ ಚಿತ್ರರಂಗವನ್ನು ಯಾರಾದರೂ ಕಡೆಗಣಿಸಿದರೆ ನನಗೆ ಬೇಸರವಾಗುತ್ತಿತ್ತು. ಅದಕ್ಕೇ ಇಡೀ ತಂಡವನ್ನು ಒಪ್ಪಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋದೆವು. ದೇಶದ ಜನರು ನನ್ನನ್ನು ಒಪ್ಪಿಕೊಂಡರು. ಕರ್ನಾಟಕದ ಜನರಿಗೆ ನನ್ನ ಬೆಳವಣಿಗೆ ತಮ್ಮದೇ ಮನೆಯ ಮಗನ ಗೆಲುವು ಎನಿಸುತ್ತದೆ.&lt;/p&gt;&lt;p&gt;&lt;strong&gt;* ನೀವು ಅಹಂಕಾರಿಯಂತೆ, ಟಿವಿ ಸೀರಿಯಲ್&zwnj;ನಲ್ಲಿರುವಾಗಲೇ 7 ಸಿನಿಮಾಗಳ ಆಫರ್ ಬಂದಾಗ, &lsquo;ನನಗೆ ಮೊದಲು ಸ್ಕ್ರಿಪ್ಟ್ ಕೊಡಿ&rsquo; ಎಂದು ಕೇಳಿ ಸಿನಿಮಾಗಳನ್ನೇ ಕಳೆದುಕೊಂಡಿರಂತೆ?&lt;/strong&gt;&lt;/p&gt;&lt;p&gt;ಹೌದು, ಟಿವಿ ನಟ ಸ್ಕ್ರಿಪ್ಟ್ ಕೇಳಬಾರದು ಎಂಬ ನಿಯಮ ಎಲ್ಲಿದೆ? ನಾನು ಮಾಡುವ ಪಾತ್ರ ನನಗೆ ಇಷ್ಟವಾಗಬೇಕು, ನಾನು ಪ್ರಾಮಾಣಿಕವಾಗಿರಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೇಳಿದೆ. ಆ 7 ಸಿನಿಮಾಗಳು ಕೈತಪ್ಪಿದರೂ ನನಗೆ ಬೇಸರವಿಲ್ಲ.&lt;/p&gt;&lt;p&gt;&lt;strong&gt;* ಈಗ ನೀವು ಒಂದು ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತೀರಾ?&lt;/strong&gt;&lt;/p&gt;&lt;p&gt;ಅದಕ್ಕೂ ಜಾಸ್ತಿ. ನಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ನಾನು ಕೇವಲ ನಟನಾಗಿ ಹಣ ಪಡೆಯುವುದಿಲ್ಲ. ಕೆಜಿಎಫ್&zwnj;ಗಿಂತ ಮುಂಚಿನಿಂದಲೂ ನಿರ್ಮಾಪಕರ ಜೊತೆ ಪಾಲುದಾರನಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಸಿನಿಮಾ ಹಣ ಗಳಿಸಿದರೆ ನನಗೂ ಪಾಲು, ಸೋತರೆ ನಷ್ಟದಲ್ಲೂ ಪಾಲು.&lt;/p&gt;&lt;p&gt;&lt;strong&gt;* ನೀವು ಶಾರುಖ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಆದರೆ &lsquo;ಜೀರೋ&rsquo; ಚಿತ್ರದ ಎದುರೇ &lsquo;ಕೆಜಿಎಫ್&rsquo; ಬಿಡುಗಡೆ ಮಾಡಿ ಕ್ಲ್ಯಾಶ್ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾನು ಶಾರುಖ್ ಸರ್ ಅವರ ಬಹುದೊಡ್ಡ ಫ್ಯಾನ್. ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬರುವಾಗ ಕ್ಲ್ಯಾಶ್ ಅನಿವಾರ್ಯ. ಅವರ ಚಿತ್ರ ದೊಡ್ಡದಾಗಿತ್ತು, ನಮ್ಮದು ಚಿಕ್ಕದಾಗಿತ್ತು. ಅದಕ್ಕೆ ಬಿಡುಗಡೆ ಮಾಡಿದೆವು. ನಮ್ಮ ಸಿನಿಮಾ ಚೆನ್ನಾಗಿ ಓಡಿತು ಎಂದ ಮಾತ್ರಕ್ಕೆ ನಾನು ಶಾರುಖ್ ಸರ್&zwnj;ಗಿಂತ ದೊಡ್ಡವನಾಗುವುದಿಲ್ಲ. ನಾನು ನಮ್ಮ ಹಿರಿಯರಿಗಿಂತ ದೊಡ್ಡವನು ಅಂದುಕೊಂಡ ಕ್ಷಣ ನನ್ನ ಅಂಗಡಿ ಬಂದ್ ಆಗುತ್ತದೆ.&lt;/p&gt;&lt;p&gt;&lt;strong&gt;* ಅಮೀರ್ ಖಾನ್ ಕೂಡ &lsquo;ಕೆಜಿಎಫ್ 2&rsquo; ನೋಡಿ ಹೆದರಿ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಿದರು ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಯಾರೂ ಯಾರಿಗೂ ಹೆದರುವುದಿಲ್ಲ ಸರ್. ಅವರವರ ಸಿನಿಮಾಗಳ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;* ನಿಮ್ಮ ಹೊಸ ಚಿತ್ರ &lsquo;ಟಾಕ್ಸಿಕ್&rsquo; ರಿಲೀಸ್ ಡೇಟ್ ಮುಂದೂಡಿದಾಗ ಯಶ್ ಕೂಡ ಹೆದರಿದರು ಎಂಬ ಮಾತಿದೆ?&lt;/strong&gt;&lt;/p&gt;&lt;p&gt;ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನನಗೆ ಭಯ ಏಕೆ ಸರ್? 100-200 ಕೋಟಿ ಕಡಿಮೆ ಬಂದರೆ ನನಗೇನೂ ಆಗುವುದಿಲ್ಲ. ನಾನು ಜನರಿಗೆ ನೀಡಿದ ಭರವಸೆಗೆ ತಕ್ಕಂತೆ ಸಿನಿಮಾ ಬರಬೇಕು. ಚಿತ್ರಕ್ಕೆ ಹೆಚ್ಚಿನ ಸಮಯ ಬೇಕು ಎನಿಸಿದಾಗ ಮುಂದೂಡಿದೆವು. ಕೇವಲ ಇಮೇಜ್ ಉಳಿಸಿಕೊಳ್ಳಲು ಹಠ ಹಿಡಿದು ರಿಲೀಸ್ ಮಾಡಿದ್ದರೆ ಅದು ಅಹಂಕಾರವಾಗುತ್ತಿತ್ತು.&lt;/p&gt;&lt;p&gt;&lt;strong&gt;* ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ &lsquo;ಯಶ್ ಮಿಸ್ಟರ್ ಶೋ ಆಫ್&rsquo; ಎಂದಾಗ ನಿಮ್ಮ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು...&lt;/strong&gt;&lt;/p&gt;&lt;p&gt;ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದ ಹೊಸಬರಾಗಿದ್ದರು. ಕೆಲವು ಶೋಗಳಲ್ಲಿ ವಿವಾದ ಹುಟ್ಟುಹಾಕಲೆಂದೇ ಆಯ್ಕೆಗಳನ್ನು ಕೊಟ್ಟು ಪ್ರಶ್ನೆ ಕೇಳುತ್ತಾರೆ. ಬಹುಶಃ ಅವರಿಗೆ ನನ್ನ ಹೆಸರು ಸೂಕ್ತ ಎನಿಸಿರಬಹುದು. ಅದರಿಂದ ಹಲವು ನಿರ್ದೇಶಕರಿಗೆ ಬೇಸರವಾಗಿತ್ತು. ಆದರೆ ನನಗೆ ಬೇಸರವಾಗಲಿಲ್ಲ. ಯಾರಾದರೂ ನನ್ನ ಬಗ್ಗೆ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಬೇರೆಯವರ ಅಭಿಪ್ರಾಯ ನನ್ನ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಹೆಸರಿನಲ್ಲಿ ಬೇರೆ ಕಲಾವಿದರನ್ನು ನಿಂದಿಸುವವರು ನನ್ನ ನಿಜವಾದ ಅಭಿಮಾನಿಗಳೇ ಅಲ್ಲ.&lt;/p&gt;&lt;p&gt;* &lsquo;ನಾನು ಪೋಷಕರ ಜೊತೆ ಕುಳಿತು ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ&rsquo; ಎಂದಿದ್ದ ನೀವು, ಈಗ &lsquo;ಟಾಕ್ಸಿಕ್&rsquo;ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಾ?&lt;/p&gt;&lt;p&gt;ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ಕಲೆಯು ಸಮಾಜಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಈ ಚಿತ್ರದ ಟ್ಯಾಗ್ಲೈನ್ &lsquo;ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್&rsquo;. ಇದು ಮಕ್ಕಳಿಗಲ್ಲ ಎಂದು ನಾವೇ ಸ್ಪಷ್ಟಪಡಿಸಿದ್ದೇವೆ. ಮಹಿಳಾ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಮಹಿಳೆಯರ ಆಸೆ ಮತ್ತು ಕಲ್ಪನೆಗಳನ್ನು ಧೈರ್ಯವಾಗಿ ಚಿತ್ರಿಸಿದ್ದಾರೆ. ಕಥೆಯ ಅಗತ್ಯಕ್ಕೆ ತಕ್ಕಂತೆ ಆ ದೃಶ್ಯಗಳಿವೆ.&lt;/p&gt;&lt;p&gt;&lt;strong&gt;* ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ನೀವು ಕೇವಲ ಒಬ್ಬರನ್ನು (ಪತ್ನಿ ರಾಧಿಕಾ ಪಂಡಿತ್) ಮಾತ್ರ ಫಾಲೋ ಮಾಡುತ್ತೀರಾ?&lt;/strong&gt;&lt;/p&gt;&lt;p&gt;ಹೌದು, ರಾಧಿಕಾ ನನ್ನ ಜೀವನದ ಏಕೈಕ ಆಪ್ತ ಗೆಳತಿ. ಸೀರಿಯಲ್ ದಿನಗಳಿಂದ ನಾವಿಬ್ಬರೂ ಏನೂ ಇಲ್ಲದ ಕಾಲದಿಂದ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಬದುಕಿನ ಆಧಾರಸ್ತಂಭ ಅವರು.&lt;/p&gt;&lt;p&gt;&lt;strong&gt;* ₹4000 ಕೋಟಿ ಬಜೆಟ್&zwnj;ನ &lsquo;ರಾಮಾಯಣ&rsquo; ಚಿತ್ರದಲ್ಲಿ ನೀವೇಕೆ ರಾಮನ ಬದಲಿಗೆ ರಾವಣನ ಪಾತ್ರ ಆಯ್ದುಕೊಂಡಿರಿ?&lt;/strong&gt;&lt;/p&gt;&lt;p&gt;ಶ್ರೀರಾಮನ ಧರ್ಮ ಮತ್ತು ಒಳ್ಳೆಯತನದ ತೀವ್ರತೆಯನ್ನು ತೋರಿಸಲು ಅಷ್ಟೇ ಪ್ರಬಲವಾದ, ಭಯಂಕರವಾದ ರಾವಣನ ಪಾತ್ರ ಬೇಕು. ಆ ಪಾತ್ರವನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಜಾಗತಿಕ ಮಟ್ಟದ ಸಂಗೀತ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;* ದಳಪತಿ ವಿಜಯ್ ಅವರಂತೆ ನೀವೂ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸಕ್ತಿ ಇದೆಯೇ?&lt;/strong&gt;&lt;/p&gt;&lt;p&gt;ಸದ್ಯಕ್ಕೆ ನಟನಾಗಿ ಈ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿಯಿದೆ. ಆದರೆ ರಾಜಕೀಯ ಎಂದರೆ ಸಾರ್ವಜನಿಕ ಸೇವೆ, ಭವಿಷ್ಯದಲ್ಲಿ ಅಂತಹ ಅಗತ್ಯ ಬಂದರೆ ನೋಡೋಣ. ಸದ್ಯಕ್ಕಂತೂ ರಾಜಕೀಯದ ಯಾವುದೇ ಯೋಚನೆಗಳಿಲ್ಲ.&lt;/p&gt;&lt;p&gt;&lt;strong&gt;* ನೀವು ದೊಡ್ಡ ಸ್ಟಾರ್ ಆದಾಗ ನಿಮ್ಮ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಅವರು ಯಾವಾಗಲೂ ಸಪೋರ್ಟಿವ್. ಆದರೆ ಈಗಲೂ ನಾನು ಚೇಷ್ಟೆ ಮಾಡುತ್ತೇನೆ, ಅವರು ನನ್ನನ್ನು ಯಾರಾದರೂ ಯಾಮಾರಿಸಬಹುದು ಎಂದು ಕಮೆಂಟ್ ಮಾಡುತ್ತಿರುತ್ತಾರೆ. ಅದು ಭಾರತೀಯ ಪೋಷಕರ ಪ್ರೀತಿ, &lsquo;ಜಾಸ್ತಿ ಹಾರಬೇಡ, ನೆಲದಲ್ಲೇ ಇರು&rsquo; ಅಂತ ಹೇಳುವ ರೀತಿ.&lt;/p&gt;&lt;p&gt;&lt;strong&gt;* ನಿಮ್ಮ ಸಂಬಂಧಿಕರು ಕೆಲವರು &lsquo;ಇವನಿಗೆ ಊಟ ಇರಲಿಲ್ಲ ನಾವೇ ಹಾಕಿದ್ದು, 5 ದಿನ ಸ್ನಾನ ಮಾಡುತ್ತಿರಲಿಲ್ಲ ನಾವೇ ಮಾಡಿಸಿದ್ದು&rsquo; ಅಂತೆಲ್ಲ ಹೇಳಿದ್ದಾರಂತೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿ ದೊಡ್ಡವನಾದಾಗ ಹಲವರು ಬಂದು &lsquo;ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ&rsquo; ಎನ್ನುತ್ತಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗಲೂ ನಾನು ಸ್ಟೈಲ್ ಬಿಟ್ಟಿರಲಿಲ್ಲ, ಸ್ನಾನವಂತೂ ಪ್ರತಿದಿನ ಮಾಡುತ್ತಿದ್ದೆ. ಯಾರಾದರೂ ನೆರವಾಗಿದ್ದರೆ ಎಲ್ಲರಿಗೂ ಧನ್ಯವಾದ.&lt;/p&gt;&lt;p&gt;&lt;strong&gt;* 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ನಿಂತು ಫೋಟೋ ಕೊಟ್ಟಿರಂತೆ?&lt;/strong&gt;&lt;/p&gt;&lt;p&gt;ಗ್ರೂಪ್ ಫೋಟೋ ತೆಗೆದರೆ ಅವರ ನೆನಪು ಉಳಿಯಲ್ಲ. ವೈಯಕ್ತಿಕವಾಗಿ ಫೋಟೋ ಕೊಟ್ಟರೆ ಅವರಿಗೆ ಲೈಫ್&zwnj;ಟೈಮ್ ಮೆಮೊರಿ. ಅವರ ಸಮಯಕ್ಕೂ ಬೆಲೆಯಿದೆ.&lt;/p&gt;&lt;p&gt;&lt;strong&gt;* ನೀವು ಸ್ಟಾರ್ ಆದ ಮೇಲೂ ನಿಮ್ಮ ತಂದೆ ಬಸ್ ಡ್ರೈವಿಂಗ್ ಕೆಲಸ ಮುಂದುವರಿಸಿದ್ದರು...&lt;/strong&gt;&lt;/p&gt;&lt;p&gt;ಹೌದು ಸರ್. ಮಗ ಆಡಿ ಕಾರಿನಲ್ಲಿ ತಿರುಗಾಡುತ್ತಾನೆ, ಅಪ್ಪ ಬಸ್ ಓಡಿಸುತ್ತಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಅವರಿಗೆ ದುಬಾರಿ ಕಾರು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಅವರು &lsquo;ನನಗೆ ಯಶ್ ತಂದೆ ಅಂತ ಸಿಗುವ ಗೌರವಕ್ಕಿಂತ, ನನ್ನ ಕಾಯಕಕ್ಕೆ ನನ್ನ ಸಹೋದ್ಯೋಗಿಗಳು ಕೊಡುವ ಗೌರವವೇ ನನಗೆ ಮುಖ್ಯ&rsquo; ಎಂದು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;strong&gt;* ಮಕ್ಕಳು ಟಾಕ್ಸಿಕ್ ಚಿತ್ರದಿಂದ ಏನು ಕಲಿಯುತ್ತಾರೆ?&lt;/strong&gt;&lt;/p&gt;&lt;p&gt;ಏನು ಮಾಡಬಾರದು ಎಂಬುದನ್ನು ಕಲಿಯುತ್ತಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರವಲ್ಲ.&lt;/p&gt;&lt;h2&gt;&lt;strong&gt;* ಸಂಜಯ್ ದತ್ ಜೊತೆ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/h2&gt;&lt;p&gt;ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರ ಆರೋಗ್ಯ ಸರಿಯಿರಲಿಲ್ಲ. ಅಷ್ಟು ಧೂಳಿನಲ್ಲಿ ನಾವು ಬಾಡಿ ಡಬಲ್ ಬಳಸೋಣ ಎಂದರೂ ಅವರು ಒಪ್ಪಲಿಲ್ಲ. &lsquo;ನನ್ನ ಕಾಯಕಕ್ಕೆ ಅಗೌರವ ಮಾಡಬೇಡಿ&rsquo; ಎಂದು ಸ್ವತಃ ಬಂದು ಅದ್ಭುತವಾಗಿ ನಟಿಸಿದರು. ಅವರ ಬದ್ಧತೆ ಅಸಾಧಾರಣ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9"/>
        </item>
        <item>
            <title><![CDATA[ಅಪ್ಪನ ಸಿನಿಮಾ ಸಂಪರ್ಕ ಬಳಸಲಿಲ್ಲ: ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ವಿಯಾರಾ ವೃದ್ಧಿ]]></title>
            <link>https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx</link>
            <guid isPermaLink="true">https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx</guid>
            <pubDate>Fri, 28 Aug 2026 20:48:50 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗಕ್ಕೆ ಹೊಸ ಹೆಜ್ಜೆ ಇಡುತ್ತಿರುವ ವಿಯಾರಾ ವೃದ್ಧಿ, ತಮ್ಮ ತಂದೆಯ ಸಿನಿಮಾ ಸಂಪರ್ಕ ಬಳಸದೆ ಸ್ವಂತ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. &lsquo;ಕೌಂತೇಯ&rsquo; ಮತ್ತು &lsquo;ಯುವರ್ಸ್ ಸಿನ್ಸಿಯರ್ಲಿ ರಾಮ್&rsquo; ಸಿನಿಮಾಗಳ ಬಗ್ಗೆ ಹಾಗೂ ವಿಭಿನ್ನ ಪಾತ್ರಗಳ ಕನಸಿನ ಕುರಿತು ನಟಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14f6gnek9zcgvw1djytzvgs,imgname-mbk-1787930297006.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂಬ ಆಸೆ ಇದ್ದರೂ, ಅದಕ್ಕಾಗಿ ಶಾರ್ಟ್&zwnj;ಕಟ್&zwnj; ಹುಡುಕದೆ ತಮ್ಮದೇ ಆದ ದಾರಿಯಲ್ಲಿ ಸಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿರುವ ನಟಿ ವಿಯಾರಾ ವೃದ್ಧಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಎಂಬಿಎ ಅಂತಿಮ ವರ್ಷದ ವ್ಯಾಸಂಗದಲ್ಲಿದ್ದಾಗಲೇ ಸಿನಿಮಾದ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದು, ಇದೀಗ ಒಂದೊಂದೇ ಹೆಜ್ಜೆ ಇಡುತ್ತಾ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.&lt;/p&gt;&lt;p&gt;ವಿಯಾರಾ ಅವರ ಸಿನಿ ಪಯಣ ಈಗಾಗಲೇ ಎರಡು ಪ್ರಮುಖ ಸಿನಿಮಾಗಳೊಂದಿಗೆ ಆರಂಭವಾಗಿದೆ. ವಿಕ್ಯಾತ್&zwnj; ನಿರ್ದೇಶನದ, ಗಣೇಶ್&zwnj; ಹಾಗೂ ರಮೇಶ್&zwnj; ಅರವಿಂದ್&zwnj; ಅಭಿನಯದ &lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾದಲ್ಲಿ ಅವರು ಅಭಿನಯಿಸಿದ್ದು, ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಇದರ ಜೊತೆಗೆ ಅವರ ಮೊದಲ ಸಿನಿಮಾ ಆಗಿ ತೆರೆಗೆ ಬರುವ ಸಾಧ್ಯತೆ ಇರುವ &lsquo;ಕೌಂತೇಯ&rsquo; ಚಿತ್ರದಲ್ಲೂ ವಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕೌಂತೇಯ&rsquo;ನಲ್ಲಿ ವಿಯಾರಾ.. ಕೊಲೆ ರಹಸ್ಯದ ಸುತ್ತ ಕಥೆ&lt;/strong&gt;&lt;/p&gt;&lt;p&gt;&lsquo;ಕುಂಭರಾಶಿ&rsquo; ಖ್ಯಾತಿಯ ಬಿ.ಕೆ. ಚಂದ್ರಹಾಸ್&zwnj; ನಿರ್ದೇಶನದ &lsquo;ಕೌಂತೇಯ&rsquo; ಒಂದು ಎಮೋಷನಲ್&zwnj; ಕ್ರೈಂ ಥ್ರಿಲ್ಲರ್&zwnj;. ಕೊಲೆ ರಹಸ್ಯದ ಸುತ್ತ ಕಥೆ ಸಾಗಲಿದ್ದು, ನಿವೃತ್ತಿಯ ಅಂಚಿನಲ್ಲಿರುವ ಸಬ್&zwnj; ಇನ್&zwnj;ಸ್ಪೆಕ್ಟರ್&zwnj; ಪಾತ್ರದಲ್ಲಿ ಅಚ್ಯುತ್&zwnj; ಕುಮಾರ್&zwnj; ಕಾಣಿಸಿಕೊಂಡಿದ್ದಾರೆ. ಮನು ರಂಜನ್&zwnj; ರವಿಚಂದ್ರನ್&zwnj; ನೆಗೆಟಿವ್&zwnj; ಶೇಡ್&zwnj; ಇರುವ ಪಾತ್ರದಲ್ಲಿ ನಟಿಸಿದ್ದು, ಅವರ ಜೋಡಿಯಾಗಿ ವಿಯಾರಾ ಅಭಿನಯಿಸಿದ್ದಾರೆ.&lt;/p&gt;&lt;p&gt;ಪ್ರಿಯಾಂಕಾ ತಿಮ್ಮೇಶ್&zwnj; ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಿಗ್&zwnj;ಬಾಸ್&zwnj; ಖ್ಯಾತಿಯ ನೀತು ಪೊಲೀಸ್&zwnj; ಅಧಿಕಾರಿಯ ಪಾತ್ರದಲ್ಲಿದ್ದಾರೆ. ರಾಘವೇಂದ್ರ ಸಂಗೀತ ಸಂಯೋಜಿಸಿರುವ ಈ ಸಿನಿಮಾಗಾಗಿ ಎರಡು ಹಾಡುಗಳನ್ನು ಸಿದ್ಧಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಸಿನಿಮಾ ಹಿನ್ನೆಲೆಯ ಕುಟುಂಬ.. ಆದ್ರೆ ಅಪ್ಪನ ಸಂಪರ್ಕ ಬಳಸಿಕೊಳ್ಳಲಿಲ್ಲ!&lt;/strong&gt;&lt;/p&gt;&lt;p&gt;ವಿಯಾರಾ ವೃದ್ಧಿ ಅವರಿಗೆ ಸಿನಿಮಾ ಹೊಸದೇನಲ್ಲ. ಅವರ ತಂದೆ ರಾಜಶೇಖರ್&zwnj; ಸಿ. ಅವರು ವಿಮರ್ಶಕರ ಮೆಚ್ಚುಗೆ ಪಡೆದಿದ್ದ &lsquo;ನಮ್ ಏರಿಯಾಲ್ ಒಂದಿನಾ&rsquo; ಸಿನಿಮಾವನ್ನು ನಿರ್ಮಿಸಿದ್ದರು. ಹೀಗಾಗಿ ಚಿತ್ರರಂಗದಲ್ಲಿ ಅವಕಾಶ ಪಡೆಯಲು ಕುಟುಂಬದ ಸಂಪರ್ಕಗಳನ್ನು ಬಳಸಿಕೊಳ್ಳಬಹುದಾಗಿದ್ದರೂ, ವಿಯಾರಾ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ತಮ್ಮ ತಂದೆ ಐದು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಯಾವುದೇ ಸಂಪರ್ಕಗಳನ್ನು ಬಳಸಿಕೊಂಡು ಚಿತ್ರರಂಗಕ್ಕೆ ಬಂದಿಲ್ಲ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;p&gt;ನನ್ನ ತಂದೆ ಐದು ವರ್ಷಗಳ ಹಿಂದೆ ನಿಧನರಾದರು. ಚಿತ್ರರಂಗಕ್ಕೆ ಬರಲು ಅವರ ಯಾವುದೇ ಸಂಪರ್ಕಗಳನ್ನು ನಾನು ಬಳಸಿಕೊಂಡಿಲ್ಲ. ಅಷ್ಟೇ ಅಲ್ಲ, ನನ್ನ ತಂದೆ &lsquo;ನಮ್ ಏರಿಯಾಲ್ ಒಂದಿನಾ&rsquo; ಸಿನಿಮಾ ನಿರ್ಮಿಸಿದ್ದರು ಎಂಬ ವಿಷಯವನ್ನು ನಾನು ಹೇಳುವವರೆಗೂ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ನನ್ನದೇ ಆದ ಮೊದಲ ಅಧ್ಯಾಯವನ್ನು ಬರೆಯಬೇಕು ಎಂದು ನಾನು ನಿರ್ಧರಿಸಿದ್ದೇನೆ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾ ಬದಲಿಸಿದ ದೃಷ್ಟಿಕೋನ&lt;/strong&gt;&lt;/p&gt;&lt;p&gt;ಚಿಕ್ಕಂದಿನಿಂದಲೇ ಸಿನಿಮಾಗಳ ವಾತಾವರಣದಲ್ಲಿ ಬೆಳೆದಿರುವ ವಿಯಾರಾ, ಸಿನಿಮಾ ಸೆಟ್&zwnj;ಗಳಿಗೆ ಭೇಟಿ ನೀಡುವುದನ್ನು ಇಷ್ಟಪಡುತ್ತಿದ್ದರಂತೆ. ಆದರೆ ನಿಜವಾದ ನಟನೆಯ ಅನುಭವ ಏನು ಎಂಬುದನ್ನು ಅರಿಯಲು &lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸೆಟ್&zwnj;ನಲ್ಲಿ ಕೆಲಸ ಮಾಡುವಾಗ ನಾನು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಕಂಡುಕೊಂಡೆ. ಗಣೇಶ್&zwnj; ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಕೂಡ ನನಗೆ ವಿಶೇಷ ಅನುಭವವಾಗಿತ್ತು ಎಂದು ವಿಯಾರಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ಯಾವಾಗಲೂ ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳಬೇಕು&rsquo;&lt;/strong&gt;&lt;/p&gt;&lt;p&gt;ವಿಯಾರಾಗೆ ಈಗಾಗಲೇ ಬೇರೆ ಭಾಷೆಗಳ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ. ಮುಂದಿನ ಸಿನಿಮಾಗಳ ಕುರಿತು ಚರ್ಚೆಗಳೂ ನಡೆಯುತ್ತಿವೆ. ಆದರೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲೇ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕು ಎಂಬುದು ಅವರ ಗುರಿ.&lt;/p&gt;&lt;p&gt;ನಾನು ಎಲ್ಲಿಗೆ ಹೋದರೂ, ಯಾವ ಸಿನಿಮಾದಲ್ಲಿ ನಟಿಸಿದರೂ ನನ್ನನ್ನು ಯಾವಾಗಲೂ ಕನ್ನಡ ಹುಡುಗಿಯಾಗಿ ಗುರುತಿಸಬೇಕು ಎಂಬುದು ನನ್ನ ಆಸೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲೇ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕು. ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಾಕಷ್ಟು ನಿರೀಕ್ಷೆಗಳೂ ಇವೆ. ಆದರೆ ಒಂದೊಂದೇ ಹೆಜ್ಜೆ ಇಡುತ್ತಾ ಮುಂದೆ ಸಾಗಲು ನಾನು ಬಯಸುತ್ತೇನೆ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನಟನೆಯಲ್ಲಿ ನನಗೆ ಇಷ್ಟವಾಗೋದೇ ಬೇರೆ ಬೇರೆ ಜೀವನಗಳನ್ನು ಅನುಭವಿಸುವುದು&rsquo;&lt;/strong&gt;&lt;/h2&gt;&lt;p&gt;ವಿಯಾರಾ ಅವರನ್ನು ನಟನೆಯತ್ತ ಸೆಳೆಯುತ್ತಿರುವ ಪ್ರಮುಖ ಕಾರಣವೆಂದರೆ, ತಮ್ಮ ನಿಜ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದ ವಿಭಿನ್ನ ಬದುಕುಗಳನ್ನು ಪಾತ್ರಗಳ ಮೂಲಕ ಅನುಭವಿಸುವ ಅವಕಾಶ.&lt;/p&gt;&lt;p&gt;ನಟಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುವ ಮೂಲಕ, ನಿಜ ಜೀವನದಲ್ಲಿ ನಾನು ಅನುಭವಿಸದಂತಹ ಹಲವು ಬದುಕುಗಳನ್ನು ಅನುಭವಿಸಬಹುದು. ವಿಭಿನ್ನ ಜನರನ್ನು ಅರ್ಥಮಾಡಿಕೊಳ್ಳಬಹುದು. ಅವರ ಜೀವನಶೈಲಿ, ಆಲೋಚಿಸುವ ರೀತಿ ಎಲ್ಲವನ್ನೂ ತಿಳಿದುಕೊಳ್ಳಬಹುದು. ಆ ಪಾತ್ರಗಳ ಮೂಲಕ ನನ್ನನ್ನೇ ನಾನು ಮತ್ತೊಂದು ರೀತಿಯಲ್ಲಿ ನೋಡಿಕೊಳ್ಳುವ ಅವಕಾಶ ಸಿಗುತ್ತದೆ. ಅದೇ ನನಗೆ ನಟನೆಯಲ್ಲಿ ಇಷ್ಟವಾಗುವ ವಿಷಯ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮುಂದಿನ ಸಿನಿಮಾಗಳಲ್ಲಿ ತಮ್ಮ ಮುಖ್ಯ ಗುರಿ ಸ್ಟಾರ್&zwnj; ಆಗುವುದಕ್ಕಿಂತ ನಟನೆಯ ಕಲೆಯನ್ನು ಕಲಿಯುವುದು, ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುವುದು ಹಾಗೂ ತಾವು ಯಾವ ರೀತಿಯ ನಟಿಯಾಗಬೇಕು ಎಂಬುದನ್ನು ಕಂಡುಕೊಳ್ಳುವುದು ಎಂದು ವಿಯಾರಾ ತಿಳಿಸಿದ್ದಾರೆ.&lt;/p&gt;&lt;p&gt;ಮುಂದಿನ ಕೆಲವು ಸಿನಿಮಾಗಳು ನನಗೆ ನಟನೆಯ ಕಲೆಯನ್ನು ಕಲಿಯುವ, ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುವ ಹಾಗೂ ನಾನು ಯಾವ ರೀತಿಯ ನಟಿಯಾಗಬೇಕು ಎಂಬುದನ್ನು ಕಂಡುಕೊಳ್ಳುವ ಪಯಣವಾಗಿರಲಿದೆ ಎಂದು ಹೇಳುವ ಮೂಲಕ ವಿಯಾರಾ ತಮ್ಮ ಸಿನಿ ಜರ್ನಿಯ ಮುಂದಿನ ಹೆಜ್ಜೆಯ ಸುಳಿವು ನೀಡಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx"/>
        </item>
        <item>
            <title><![CDATA[ಮಗಳಿಗೇ ಬೈದು, ಸಿಟ್ಟಾದೆ! 'ಸಿಟಿ ಲೈಟ್ಸ್' ಸೆಟ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ದುನಿಯಾ ವಿಜಯ್]]></title>
            <link>https://kannada.asianetnews.com/celebrity-interviews/sandalwood-movie-city-lights-duniya-vijay-talks-about-vinay-rajkumar-and-monisha-gvd/articleshow-zggy0g3</link>
            <guid isPermaLink="true">https://kannada.asianetnews.com/celebrity-interviews/sandalwood-movie-city-lights-duniya-vijay-talks-about-vinay-rajkumar-and-monisha-gvd/articleshow-zggy0g3</guid>
            <pubDate>Fri, 18 Sep 2026 08:30:39 +0530</pubDate>
            <description><![CDATA[&lt;p&gt;&lsquo;ಸಿಟಿ ಲೈಟ್ಸ್&rsquo; ಸಿನಿಮಾದ ಕಥೆ, ರಿಯಲ್ ಘಟನೆ, ವಿನಯ್ ರಾಜ್&zwnj;ಕುಮಾರ್-ಮೋನಿಷಾ ಜೋಡಿ ಹಾಗೂ ಮಗಳ ನಟನೆ ಬಗ್ಗೆ ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ಸಿನಿಮಾ ಕುರಿತ ವಿಶೇಷ ಸಂದರ್ಶನ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2r1hw1mjw6menhgg7sndfxv,imgname-nknk-1789660819508.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಎರಡು ಚಿತ್ರಗಳಲ್ಲಿ ನಿರ್ದೇಶಕರಾಗಿ ಗೆದ್ದವರು. ಈಗ ಹ್ಯಾಟ್ರಿಕ್&zwnj; ಡೈರೆಕ್ಟರ್&zwnj; ಆಗಲು ಹೊರಟಿದ್ದೀರಿ?&lt;/strong&gt;&lt;/p&gt;&lt;p&gt;ಅದು ಪ್ರೇಕ್ಷಕರಿಗೆ ಬಿಟ್ಟ ವಿಚಾರ. ಸಿನಿಮಾ ನೋಡಿ ಪ್ರೇಕ್ಷಕರು ಏನು ಹೇಳಿದರೂ ಸ್ವೀಕರಿಸುತ್ತೇನೆ. &lsquo;ಸಲಗ&rsquo; ಹಾಗೂ &lsquo;ಭೀಮ&rsquo; ಚಿತ್ರಗಳನ್ನೂ ಇದೇ ನಂಬಿಕೆಯಲ್ಲಿ ನಿರ್ದೇಶಿಸಿದ್ದೆ. ಪ್ರೇಕ್ಷಕರು ಕೈ ಹಿಡಿದರು. &lsquo;ಸಿಟಿ ಲೈಟ್ಸ್&zwnj;&rsquo; ಕೈ ಹಿಡಿದು ಹ್ಯಾಟ್ರಿಕ್&zwnj; ಡೈರೆಕ್ಟರ್&zwnj; ಮಾಡೋದು ಕೂಡ ಈಗ ಪ್ರೇಕ್ಷಕರಿಗೆ ಬಿಟ್ಟಿದ್ದೇನೆ.&lt;/p&gt;&lt;p&gt;&lt;strong&gt;* ಪ್ರೇಕ್ಷಕರು ನಿಮ್ಮ ಕೈ ಹಿಡಿಯುತ್ತಾರೆಂಬ ಗ್ಯಾರಂಟಿಗಳು &lsquo;ಸಿಟಿ ಲೈಟ್ಸ್&zwnj;&rsquo; ಚಿತ್ರದಲ್ಲಿ ಏನಿವೆ?&lt;/strong&gt;&lt;/p&gt;&lt;p&gt;ಗ್ಯಾರಂಟಿ ಎನ್ನುವುದಕ್ಕಿಂತ ನಾನು ವಾಸ್ತವಗಳನ್ನು ಈ ಚಿತ್ರದ ಮೂಲಕ ಹೇಳಿದ್ದೇನೆ. ಅಂದರೆ ಸೂಕ್ಷ್ಮವಾದ ಎರಡು ವಿಚಾರಗಳು ಈ ಚಿತ್ರದಲ್ಲಿವೆ. ಅದು ಹೆಣ್ಣು ಮಕ್ಕಳ ಪರವಾಗಿರುವ ವಿಚಾರಗಳು. ಹೀಗಾಗಿ &lsquo;ಸಿಟಿ ಲೈಟ್ಸ್&zwnj;&rsquo; ಅನ್ನೋದು ಬದುಕಿನ ವಾಸ್ತವಗಳನ್ನು ಹೇಳುವ ಬೆಳಕು.&lt;/p&gt;&lt;p&gt;&lt;strong&gt;* ಈ ಚಿತ್ರ ನೋಡಿದ ಮೇಲೆ ಪ್ರೇಕ್ಷಕರಲ್ಲಿ ಹುಟ್ಟಿಕೊಳ್ಳುವ ಯೋಚನೆ ಏನು?&lt;/strong&gt;&lt;/p&gt;&lt;p&gt;ಬದುಕಿನ ಪಯಣದಲ್ಲಿ ಹುಷಾರಾಗಿ ಇರಬೇಕು ಎನ್ನುವ ಎಚ್ಚರಿಕೆಯ ಆಲೋಚನೆ ಹುಟ್ಟಿಸುತ್ತದೆ. ಅದರಲ್ಲೂ ಗುರುತು, ಪರಿಚಯ ಇಲ್ಲದ ಬೆಂಗಳೂರಿನಂತಹ ಮಹಾನಗರಗಳಿಗೆ ಬಂದ ಮೇಲೆ ಲೈಫು ಹೇಗಿರುತ್ತದೆ ಎಂಬುದನ್ನು ತೋರಿಸಿದ್ದೇನೆ. ಆದರೆ, ಹೇಗೆ ನಡೆದುಕೊಳ್ಳಬೇಕು ಅಂತ ಹೇಳುವಷ್ಟು ದೊಡ್ಡವನಲ್ಲ.&lt;/p&gt;&lt;p&gt;&lt;strong&gt;* ಈ ಚಿತ್ರದ ಕತೆ ಹೊಳೆದಿದ್ದೇಗೆ?&lt;/strong&gt;&lt;/p&gt;&lt;p&gt;ನನಗೆ ಒಂದು ರಿಯಲ್&zwnj; ಘಟನೆ ಗೊತ್ತಾಯಿತು. ಅದರ ಬಗ್ಗೆ ವಿಚಾರ ಮಾಡುತ್ತಾ, ಯೋಚನೆ ಮಾಡುತ್ತಾ, ಮಾಹಿತಿ ಸಂಗ್ರಹಿಸಲು ಹೊರಟಾಗ &lsquo;ಸಿಟಿ ಲೈಟ್ಸ್&zwnj;&rsquo; ಕತೆ ಹುಟ್ಟಿಕೊಂಡಿತು. ಆ ಘಟನೆಯನ್ನು ಚಿತ್ರದಲ್ಲಿ ತೋರಿಸಿದ್ದೇನೆ. ಅದೇನು ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.&lt;/p&gt;&lt;p&gt;&lt;strong&gt;* ಕ್ರೈಮು, ಅಪರಾಧ, ರಕ್ತದ ಚಿತ್ರಣಗಳ ಮೂಲಕ ಸಂದೇಶ ಕೊಟ್ಟ ಬದಲಾವಣೆ ತರಲು ಸಾಧ್ಯವೆ?&lt;/strong&gt;&lt;/p&gt;&lt;p&gt;ಗೊತ್ತಿಲ್ಲ. ಆದರೆ, ನನ್ನ ಹಿಂದಿನ ಎರಡು ಚಿತ್ರಗಳಾದ &lsquo;ಸಲಗ&rsquo; ಹಾಗೂ &lsquo;ಭೀಮ&rsquo; ಚಿತ್ರಗಳಲ್ಲಿ ಇದು ವರ್ಕ್&zwnj; ಆಗಿತ್ತು. ಅದನ್ನೇ ಇಲ್ಲಿ ಟ್ರೈ ಮಾಡಿದ್ದೇನೆ. ಸಿನಿಮಾ ನೋಡಿದ ಮೇಲೆ ಜನರು &lsquo;ಚಿತ್ರದಲ್ಲಿ ಹೇಳಿರುವುದು ಸತ್ಯ&rsquo; ಅಂತ ಅಂದುಕೊಂಡರೆ ಅದೇ ದೊಡ್ಡ ಬದಲಾವಣೆ.&lt;/p&gt;&lt;p&gt;&lt;strong&gt;* &lsquo;ಸಿಟಿ ಲೈಟ್ಸ್&zwnj;&rsquo; ಕತೆ ಮಾಡುವಾಗಲೇ ಚಿತ್ರಕ್ಕೆ ಮೋನಿಷಾ, ವಿನಯ್&zwnj; ರಾಜ್&zwnj;ಕುಮಾರ್&zwnj; ಜೋಡಿ ಅಂದುಕೊಂಡಿದ್ರಾ?&lt;/strong&gt;&lt;/p&gt;&lt;p&gt;ಇಲ್ಲ. ಮೊದಲು ಕತೆ ಬರೆದುಕೊಂಡಿದ್ದೆ. ಈ ಕತೆಗೆ ವಿನಯ್&zwnj; ಹೀರೋ ಆಗಿ ಬಂದ ಮೇಲೆ ಕತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದೆ. ಅದರ ಗ್ರಾಫ್&zwnj; ಚೇಂಜ್&zwnj; ಆಯಿತು. ವಿನಯ್&zwnj;ಗೆ ನಾಯಕಿಯಾಗಿ ಮೋನಿಷಾ ಸೂಕ್ತ ಅನಿಸಿತು. ಹೀಗಾಗಿ ಕತೆಯ ನಂತರವೇ ನಾಯಕ, ನಾಯಕಿ ಆಯ್ಕೆ ಆಗಿದ್ದು.&lt;/p&gt;&lt;p&gt;&lt;strong&gt;* ಚಿತ್ರದ ನಾಯಕಿ ಮೋನಿಷಾ ಪಾಲಿಗೆ ನೀವು ತಂದೆ ಮತ್ತು ನಿರ್ದೇಶಕ. ಸೆಟ್&zwnj;ನಲ್ಲಿ ಹೆಚ್ಚು ಕೆಲಸ ಮಾಡಿದ್ದು ತಂದೆಯ ಮನಸ್ಸಾ, ನಿರ್ದೇಶಕನ ಮನಸ್ಸಾ?&lt;/strong&gt;&lt;/p&gt;&lt;p&gt;ನಿರ್ದೇಶಕನ ಮನಸ್ಸು. ಯಾಕೆಂದರೆ ನಾನು ಬರೆದುಕೊಂಡಿರುವ ಕತೆ ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಬರಬೇಕು ಎಂದರೆ ತಂದೆಯಾಗಿ ಯೋಚನೆ ಮಾಡಿದರೆ ಆಗಲ್ಲ. ನಿರ್ದೇಶಕನಾಗಿರಬೇಕು. ಸಿಟ್ಟು, ಕೋಪ, ಬೈದಿದ್ದು ಎಲ್ಲವೂ ಆಗಾಗ ನಡೆಯುತ್ತಿತ್ತು. ಅದು ಪ್ರೀತಿಯಿಂದ.&lt;/p&gt;&lt;p&gt;&lt;strong&gt;* ತಂದೆಯಾಗಿ ನಿಮ್ಮ ಮಗಳ ಪಾತ್ರ ಪೋಷನೆ, ನಟನೆ ನೋಡಿದಾಗ ಏನಿಸಿತು?&lt;/strong&gt;&lt;/p&gt;&lt;p&gt;ನಾನೇ ಭಾವಕನಾಗುತ್ತಿದ್ದೆ. ಕಣ್ಣಲ್ಲಿ ನೀರು ತುಂಬಿಕೊಂಡಿದ್ದೆ. ಯಾಕೆಂದರೆ ಆ ಪಾತ್ರವನ್ನು ನಾನು ಆ ರೀತಿ ರೂಪಿಸಿದ್ದೆ. &lsquo;ನನ್ನ ಮಗಳಂತೆಯೇ ಎಷ್ಟೊಂದು ನೊಂದ ಹೆಣ್ಣು ಮಕ್ಕಳು ಇರಬಹುದಲ್ಲಾ&rsquo; ಅಂತ ನೆನಪಿಸಿಕೊಂಡು ಭಾವುಕನಾಗಿದ್ದೇನೆ. ಇದರ ಜೊತೆಗೆ ಶ್ರದ್ಧೆ, ಪ್ರಾಮಾಣಿಕತೆ, ಸತ್ಯದ ದಾರಿಯಲ್ಲಿದ್ದರೆ ನನ್ನ ಮಗಳು ನಟಿಯಾಗಿ ಎಲ್ಲಿ ಬೇಕಾದರೂ ಯಶಸ್ಸು ಕಾಣುತ್ತಾಳೆ ಅನಿಸಿತು.&lt;/p&gt;&lt;p&gt;&lt;strong&gt;* ತೆರೆ ಮೇಲೆ ವಿನಯ್&zwnj; ರಾಜ್&zwnj;ಕುಮಾರ್&zwnj; ಹಾಗೂ ಮೋನಿಷಾ ಜೋಡಿ ಹೇಗಿದೆ?&lt;/strong&gt;&lt;/p&gt;&lt;p&gt;ತುಂಬಾ ಮುದ್ದಾಗಿ ಕಾಣುತ್ತಾರೆ. ಸಿನಿಮಾ ನೋಡುವವರಿಗೆ ಈ ಇಬ್ಬರು ಹೀರೋ, ಹೀರೋಯಿನ್&zwnj; ಎನ್ನುವುದಕ್ಕಿಂತ ಅವರ ಮನೆ ಮಕ್ಕಳಂತೆ ಕಾಣುತ್ತಾರೆ.&lt;/p&gt;&lt;p&gt;&lt;strong&gt;* ನಿಮ್ಮಿಂದ ಒಂದು ಸ್ವಚ್ಚವಾದ ಪ್ರೀತಿ- ಪ್ರೇಮ, ಸಾಂಸರಿಕ ಕತೆಯ ಚಿತ್ರ ನಿರೀಕ್ಷೆ ಮಾಡಬಹುದೇ?&lt;/strong&gt;&lt;/p&gt;&lt;p&gt;&lsquo;ಸಿಟಿ ಲೈಟ್ಸ್&zwnj;&rsquo; ಪಾರ್ಟ್&zwnj; 2ನಲ್ಲಿ ಮಾಡಬಹುದು. ಯುವ ಪ್ರೇಮಿಗಳ ಸಂಸಾರ, ಅವರ ಒದ್ದಾಟಗಳು, ಆಮಾಯಕತನಗಳನ್ನ ಸುತ್ತಾ ಕತೆ ರೂಪಿಸಬಹುದು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sandalwood-movie-city-lights-duniya-vijay-talks-about-vinay-rajkumar-and-monisha-gvd/articleshow-zggy0g3"/>
        </item>
    </channel>
</rss>
