<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 28 Aug 2026 20:48:56 +0530</lastBuildDate>
        <atom:link href="https://kannada.asianetnews.com/rss/celebrity-interviews" rel="self" type="application/rss+xml"/>
        <item>
            <title><![CDATA[NS Shankar: ಒಂದು ಸಿನಿಮಾ, ಸಾವಿರ ನೆನಪು... ತೆರೆಗೆ ಸರಿದ ನಗಿಸಿದ ನಿರ್ದೇಶಕ ಎನ್‌.ಎಸ್‌.ಶಂಕರ್‌]]></title>
            <link>https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</link>
            <guid isPermaLink="true">https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</guid>
            <pubDate>Mon, 29 Jun 2026 17:03:55 +0530</pubDate>
            <description><![CDATA[&lt;p&gt;NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್&zwnj;.ಎಸ್&zwnj;. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9jdwp812tmpnjsze56h344,imgname-gxg-1782732747464.png" type="image/jpeg" height="390" width="690"/>
            <content:encoded><![CDATA[&lt;p&gt;ಎನ್&zwnj;.ಎಸ್&zwnj;. ಶಂಕರ್&zwnj;.... ಈ ಹೆಸರು ಚಿತ್ರರಂಗದವರ ಪಾಲಿಗೆ &lsquo;ಉಲ್ಟಾ ಪಲ್ಟಾ&rsquo; ಸಿನಿಮಾದ ನಿರ್ದೇಶಕರಾಗಿ, ಪತ್ರಿಕಾ ವಲಯದ ಪಾಲಿಗೆ &lsquo;ಸುದ್ದಿ ಸಂಗಾತಿ&rsquo;ಯಾಗಿ, ಸಾಹಿತ್ಯ ಹಾಗೂ ಚಳವಳಿಗಳ ದೃಷ್ಟಿಯಲ್ಲಿ ಸಾಂಸ್ಕೃತಿಕ ಚಿಂತಕರಾಗಿ ಸದಾ ನೆನಪಿರುತ್ತದೆ. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಪ್ರಗತಿಪರ ಚಳವಳಿಗಳ ಸಂಗಾತಿಯಾಗಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರ &lsquo;ಹುಡುಕಾಟ&rsquo;ವು ನಿಲ್ಲದ ಪಯಣ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಬೆಳೆದಿದ್ದು ಮಂಡ್ಯ ಜಿಲ್ಲೆ, ಓದಿದ್ದು ಮೈಸೂರು, ಪತ್ರಕರ್ತನಾಗಿಸಿದ್ದು ಬೆಂಗಳೂರು, ಸಾಂಸ್ಕೃತಿಕ ಚಿಂತಕ, ಹೋರಾಟಗಾರನ್ನಾಗಿಸಿದ್ದು ಚಳವಳಿಗಳು.&lt;/p&gt;&lt;p&gt;ಮೂಲತಃ ಪತ್ರಕರ್ತರಾಗಿ ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರು ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಮುಂದೆ ಸಾಂಸ್ಕೃತಿಕ ಚಳವಳಿ ಹಾಗೂ ಬಂಡಾಯ ಸಾಹಿತ್ಯದ ತತ್ವಗಳಿಗೆ ಧ್ವನಿಗೂಡಿಸಿದರು. ಇದರ ಜೊತೆಗೆ ಎನ್&zwnj;. ಎಸ್&zwnj;. ಶಂಕರ್&zwnj; ಅವರನ್ನು ತೀವ್ರವಾಗಿ ಸೆಳೆಯುತ್ತಿದ್ದು ಸಿನಿಮಾ. ಹೀಗಾಗಿಯೇ ತಮ್ಮ ಪ್ರಥಮ ಸಿನಿಮಾ ರಮೇಶ್&zwnj; ಅರವಿಂದ್&zwnj; ನಟನೆಯ &lsquo;ಉಲ್ಟಾ ಪಲ್ಟಾ&rsquo; (1997) ಮೂಲಕ ಇಡೀ ಸ್ಯಾಂಡಲ್&zwnj;ವುಡ್ ತಿರುಗಿ ನೋಡುವಂತೆ ಮಾಡಿದ್ದರು. ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಈಗಲೂ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.&lt;/p&gt;&lt;p&gt;ವೈಚಾರಿಕ ಬರಹ ಹಾಗೂ ಚಿಂತನೆಗಳ ಹಿನ್ನೆಲೆಯಿಂದ ಬಂದ ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು ಅವರ ಆತ್ಮೀಯರು ಆಪ್ತವಾಗಿ ಸ್ಮರಿಸಿಕೊಂಡಿದ್ದಾರೆ. &lsquo;ಬರವಣಿಗೆ ಅನ್ನುವುದು ಅಮೃತಕ್ಕೆ ಹಾರುವ ಗರುಡನ ಹಾಗಿರಬೇಕು ಎಂದು ನನ್ನ ಲೇಖನ ಓದಿ ಹೇಳಿದವರು ಎನ್&zwnj;.ಎಸ್&zwnj;. ಶಂಕರ್&zwnj; ಅವರು. ಆದರೆ, ಅವರ ಮಾತು ನನಗೆ ಆಗ ಅರ್ಥ ಆಗಲಿಲ್ಲ. ಇಂದು ಅವರನ್ನು ಕೊನೆಯ ಬಾರಿಗೆ ಕಂಡೆ. &lsquo;ಅಮೃತಕ್ಕೆ ಹಾರುವ ಗರುಡ&rsquo; ಮಾತು ರಿಂಗಣಿಸುತ್ತಿತ್ತು. ರಾತ್ರಿ ಮಲಗಿದವರು ಬೆಳಗ್ಗೆ ಇಲ್ಲ! ಸುಖದ ಸಾವು, ನಿಜ.&lt;/p&gt;&lt;p&gt;ಆದರೆ ಬಾಕಿ ಉಳಿದ ಕನಸುಗಳ ಗತಿಯೇನು? ಕ್ರಾಂತಿಕಾರಿ ವಿಚಾರಧಾರೆಯ ಅವರ ನೊಸಲಿಗೆ ಯಾರೋ ವಿಭೂತಿ ಬಳಿದಿದ್ದರು. ಮತ್ತಾರೋ ಅಕ್ಕಿ ಲೋಟದಲ್ಲಿ ಗಂಧದ ಕಡ್ಡಿ ಹಚ್ಚಿಟ್ಟರು. ಉರಿವ ದೀಪ ಬದಿಯಲ್ಲಿ ಇಟ್ಟವರು ಮತ್ತೊಬ್ಬರು. ಇದನ್ನು ಅಲ್ಲಿಂದ ನೋಡಿ ಶಂಕರ್&zwnj; ತಲೆ ಚಚ್ಚಿಕೊಂಡರೇ? ನಾನು ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು &lsquo;ಅಣ್ಣಾ&rsquo; ಎನ್ನುತ್ತಿದ್ದೆ. ಅವರು &lsquo;ಅಯ್ಯಾ&rsquo; ಎನ್ನುತ್ತಿದ್ದರು. ಅವರೊಂದಿಗೆ ಡಾ.ರಾಜ್&zwnj;ಕುಮಾರ್ ಮನೆಗೆ ಹೋಗಿ ಮಾತನಾಡಿಸಿದ್ದು, ಪಿ.ಲಂಕೇಶ್ ಅವರನ್ನು ಸಂದರ್ಶಿಸಿದ್ದು ಮರೆಯಲಾಗದ ಅನುಭವಗಳು. ಆ ದಿನಗಳ ಗಮ್ಮತ್ತೇ ಗಮ್ಮತ್ತು.&lt;/p&gt;&lt;p&gt;ನನ್ನ ಬಳಿ ಲೂನಾ ಮ್ಯಾಗ್ನಮ್ ಇತ್ತು. ಶಂಕರ್ ಹಿಂದೆ ಕೂರುತ್ತಿದ್ದರು. ನಾವು ಅದರಲ್ಲಿ ಇಡೀ ಬೆಂಗಳೂರು ಸುತ್ತಿದ್ದೇವೆ. ಶಂಕರ್ ಪ್ರತಿಭೆ ಕಂಡು ನಮಗೆಲ್ಲಾ ಅಚ್ಚರಿಯಾಗುತ್ತಿತ್ತು. ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂದು ಲೆಕ್ಕ ಹಾಕುತ್ತಿದ್ದೆವು. ಅದೇನೋ ಒಂದೂ ಕೈಗೂಡುತ್ತಿರಲಿಲ್ಲ. ಶಂಕರ್ ನಮಗೆಲ್ಲ ಆದರ್ಶ ನಾಯಕನಂತಿದ್ದರು. ಗಡ್ಡ ಬಿಟ್ಟು, ಜುಬ್ಬ ತೊಟ್ಟು, ಕತ್ತಿನ ಸುತ್ತ ಶಾಲು ಹಾಕಿಕೊಂಡು, ಎರಡು ಬೆರಳುಗಳ ನಡುವೆ ಸಿಗರೇಟು ಸೇದುತ್ತಾ ಹೋರಾಟಗಾರನಂತಿರುತ್ತಿದ್ದರು. ಅವರ ಮಾತು ಕೇಳುವುದೇ ಒಂದು ರೀತಿಯ ಸೊಗಸು&rsquo; ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಎನ್&zwnj;. ಎಸ್&zwnj;. ಶಂಕರ್&zwnj; ಅವರಿಗೆ ನುಡಿ ನಮನ ಸಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭೆಯೊಂದು ಕಣ್ಮರೆ&lt;/strong&gt;&lt;/h2&gt;&lt;p&gt;&lsquo;ಕನ್ನಡದ ಮಹತ್ವದ ಲೇಖಕ, ಪತ್ರಕರ್ತ, ಸಿನೆಮಾ ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವದ ಎನ್.ಎಸ್. ಶಂಕರ್ ಅವರು ನಮ್ಮ ಕಾಲದ ದೊಡ್ಡ ಪ್ರತಿಭೆಯೊಂದು ಕಣ್ಮರೆಯಾಯಿತು.&rsquo; ಎಂದು ನಿರ್ದೇಶಕಿ ಸುಮನಾ ಕಿತ್ತೂರು ಅವರು ನೆನಪಿಸಿಕೊಂಡಿದ್ದಾರೆ. &lsquo;ಕರ್ನಾಟಕದ ಪ್ರಗತಿಪರ ಚಿಂತಕರು, ಪತ್ರಕರ್ತರು, ಸಾಹಿತಿಗಳು, ಸಿನಿಮಾ ನಿರ್ದೇಶಕರೂ ಆದ ಎನ್.ಎಸ್ ಶಂಕರ್ ಅವರು ನಿನ್ನೆ ಕೋಟಿಗಾನಹಳ್ಳಿ ರಾಮಯ್ಯ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದವರು ಬೆಳಿಗ್ಗೆ ಏಳಲಿಲ್ಲ ಅನ್ನುವ ಸುದ್ದಿ ಕೇಳಿ ಬೇಸರವಾಯ್ತು. ಇತ್ತೀಚೆಗಷ್ಟೇ ಅವರ ಮಡದಿ ತೀರಿಕೊಂಡಿದ್ದರು. ಆ ನೋವಿನಿಂದ ಅವರು ಹೊರಗೆ ಬಂದಿರಲಿಲ್ಲ. ಅವರ &lsquo;ಉಲ್ಟಾ ಪಲ್ಟಾ&rsquo; ಸಿನಿಮಾ ಕನ್ನಡದ ಕೆಲವೇ ಕೆಲವು ಶ್ರೇಷ್ಠ ಕಾಮಿಡಿ ಸಿನಿಮಾಗಳಲ್ಲಿ ಒಂದು&rsquo; ಎಂದು ಮತ್ತೊಬ್ಬ ನಿರ್ದೇಶಕ ಪ್ರಕಾಶ್&zwnj; ರಾಜ್&zwnj; ಮೇಹು ನೆನಪು ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug"/>
        </item>
        <item>
            <title><![CDATA[ವರ್ಷಕ್ಕೆ 6 ತಿಂಗಳು ಕೆಲಸವಿಲ್ಲ, ಆ್ಯಂಕರಿಂಗ್‌ ಖುಷಿ ಕೊಡಲಿಲ್ಲ: ಅನುಪಮಾ ಗೌಡ ವಿಶೇಷ ಸಂದರ್ಶನ]]></title>
            <link>https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</link>
            <guid isPermaLink="true">https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo</guid>
            <pubDate>Wed, 19 Aug 2026 23:47:07 +0530</pubDate>
            <description><![CDATA[&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು ಎಂದು ಅನುಪಮಾ ಗೌಡ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0dhd72gvzpt5x7ns7k0mpy0,imgname-jvj-1787160861776.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಿರೂಪಣೆಯಿಂದ ದೂರವಾಗಬೇಕೆಂಬ ನಿರ್ಧಾರಕ್ಕೆ ಕಾರಣ ಏನು?&lt;/strong&gt;&lt;/p&gt;&lt;p&gt;ನಾನು ಹೋಸ್ಟ್&zwnj; ಮಾಡುತ್ತಿದ್ದ ಶೋ ನನಗೇ ವೈಯಕ್ತಿಕವಾಗಿ ಖುಷಿ ಕೊಡುತ್ತಿರಲಿಲ್ಲ. ಪ್ರೀತಿಯಿಂದ ಮಾಡಬೇಕಾದ ಕೆಲಸವನ್ನು ಉದ್ಯೋಗ ಅನ್ನೋ ರೀತಿಯಲ್ಲಿ ಮಾಡುತ್ತಿದ್ದೇನೆ ಅನಿಸಿತು. ಮನಸ್ಸಿಗೆ ತೃಪ್ತಿ ಕೊಡದ ಕೆಲಸ ಬೇಡವೆನಿಸಿ ಈ ನಿರ್ಧಾರ ತೆಗೆದುಕೊಂಡೆ.&lt;/p&gt;&lt;p&gt;&lt;strong&gt;* ಆ್ಯಂಕರಿಂಗ್&zwnj;ಗೆ ವಿದಾಯ ಹೇಳಲು ಬೇರೆ ಕಾರಣಗಳಿವೆ ಅಂತಿದ್ದಾರಲ್ಲ?&lt;/strong&gt;&lt;/p&gt;&lt;p&gt;ಅದೆಲ್ಲವೂ ಸುಳ್ಳು. ನಾನು ಮಾಡುತ್ತಿದ್ದ ಕೆಲಸ ನಾನೇ ಎಂಜಾಯ್&zwnj; ಮಾಡಕ್ಕೆ ಆಗುತ್ತಿಲ್ಲ, ಇದರ ಜೊತೆಗೆ ವರ್ಷದಲ್ಲಿ ನಾನು ಎರಡೇ ಶೋ ಮಾಡುತ್ತಿದ್ದೆ. ಈ ಎರಡೂ ಶೋಗಳಿಂದ ವರ್ಷದಲ್ಲಿ 6 ತಿಂಗಳು ಕೆಲಸ, ಉಳಿದ 6 ತಿಂಗಳು ಖಾಲಿ ಕೂರಬೇಕಿತ್ತು. ಹಾಗಾಗಿ ಬೇರೆ ಏನಾದರು ಸ್ವಂತವಾಗಿ ಮಾಡೋ ಯೋಚನೆಯಿಂದ ನಿರೂಪಣೆ ಬಿಟ್ಟಿದ್ದು.&lt;/p&gt;&lt;p&gt;&lt;strong&gt;* ನಿಮ್ಮ ಮತ್ತು ಕಲರ್ಸ್&zwnj; ವಾಹಿನಿಯ ನಂಟು ಹಳೆಯದು. ಬೇರೆ ಶೋಗಳು ನಿಮಗೆ ಕೊಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಮಾಡಲಾರೆ. ಯಾಕೆಂದರೆ ಅವರಿಗೂ ವಾಹಿನಿಯಲ್ಲಿ ಶೋಗಳು ಅಪ್ರೂವ್&zwnj; ಆಗುತ್ತಿರಲಿಲ್ಲ. ಬಂದ ಶೋಗಳನ್ನು ನನಗೆ ಕೊಡುತ್ತಿದ್ದರು. 9 ಶೋಗಳಿಗೆ ಹೋಸ್ಟ್&zwnj; ಆಗಿದ್ದೇನೆ. ಇದಕ್ಕಿಂತ ಇನ್ನೇನು ಬೇಕು!?&lt;/p&gt;&lt;p&gt;&lt;strong&gt;* ನಿರೂಪಣೆ ಜೊತೆಗೆ ಖಾಲಿ ಇರುವಾಗ ಬೇರೆ ಕೆಲಸಗಳನ್ನೂ ಮಾಡಬಹುದಿತ್ತಲ್ಲ?&lt;/strong&gt;&lt;/p&gt;&lt;p&gt;ಎರಡು ದೋಣಿಯ ಪ್ರಯಾಣ ಅಭ್ಯಾಸ ಇಲ್ಲ. ಸಿನಿಮಾ ಅಂದರೆ ಸಿನಿಮಾ, ನಿರೂಪಣೆ ಅಂದ್ರೆ ನಿರೂಪಣೆ ಮಾತ್ರ. ಆ್ಯಂಕರಿಂಗ್&zwnj; ಜೊತೆಗೆ ಖಾಲಿ ಇರೋ ಆರು ತಿಂಗಳಲ್ಲಿ ಏನಂತ ಮಾಡಲಿ. ಎಂಟು ವರ್ಷ ಆ್ಯಂಕರಿಂಗ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ಸ್ವಂತವಾಗಿ ಏನಾದರು ಮಾಡಬೇಕು ಅಂದ್ರಿ, ಏನು?&lt;/strong&gt;&lt;/p&gt;&lt;p&gt;ಸದ್ಯಕ್ಕೆ ಒಂದು ಸಿನಿಮಾ ಶೂಟಿಂಗ್&zwnj; ಮುಗಿಸಿದ್ದೇನೆ. ಒಂದು ವೆಬ್&zwnj; ಸರಣಿ ಆಗಿದೆ. ನಾನೇ ಒಂದು ಕಿರು ಚಿತ್ರ ನಿರ್ದೇಶಿಸಿದ್ದು, ಈಗ ಅದರ ಎಡಿಟಿಂಗ್&zwnj; ನಡೆಯುತ್ತಿದ್ದೆ. &lsquo;ಪ್ರೆಸ್ಟೀಜ್&zwnj;&rsquo; ಎಂಬುದು ಆ ಕಿರುಚಿತ್ರದ ಹೆಸರು. ಕಲಾವಿದರ ಕೆರಿಯರ್&zwnj; ಯಾವಾಗ ಶುರುವಾಗುತ್ತೆ, ಯಾವಾಗ ನಿಂತೋಗುತ್ತೆ, ಮತ್ತೆ ಯಾವಾಗ ಓಪನ್&zwnj; ಆಗುತ್ತೆ ಅಂತ ಗೊತ್ತಿರಲ್ಲ.&lt;/p&gt;&lt;p&gt;&lt;strong&gt;* &lsquo;ಆ ಕರಾಳ ರಾತ್ರಿ&rsquo; ಚಿತ್ರದ ನಂತರ ನಿಮಗೆ ಸಿನಿಮಾಗಳು ಅವಕಾಶಗಳು ಬರಲಿಲ್ಲವೇ?&lt;/strong&gt;&lt;/p&gt;&lt;p&gt;ಬಂದಿದ್ದವು. ಆದರೆ, ಎಲ್ಲಾ ಪಾತ್ರಗಳಲ್ಲೂ ಅದೇ &lsquo;ಆ ಕರಾಳ ರಾತ್ರಿ&rsquo; ಚಿತ್ರದ ನೆರಳು. ಒಂದೇ ರೀತಿಯ ಪಾತ್ರದ 10 ಸಿನಿಮಾ ಮಾಡೋದಕ್ಕಿಂತ ಒಂದು ಸಿನಿಮಾ ಮಾಡಬೇಕು ಅನ್ನೋ ನಿಲುವು ನನ್ನದು. ಹಾಗೆ ಬಂದಿದ್ದೆಲ್ಲ ಒಪ್ಪಿಕೊಂಡಿದ್ದರೆ ಕನಿಷ್ಠ 15 ಸಿನಿಮಾಗಳಲ್ಲಿ ನಟಿಸುತ್ತಿದ್ದೆ.&lt;/p&gt;&lt;p&gt;&lt;strong&gt;* ಹೌದು, ಈಗ ನಿಮ್ಮ ಆದಾಯ ಏನು?&lt;/strong&gt;&lt;/p&gt;&lt;p&gt;ಇಲ್ಲಿಯವರೆಗೂ ನಿರೂಪಣೆಯಿಂದ ಬರುತ್ತಿತ್ತು. ಈಗ ಮೊದಲಿಗಿಂತ ಸೋಷಿಯಲ್&zwnj; ಮೀಡಿಯಾ ಸ್ಟ್ರಾಂಗ್&zwnj; ಆಗಿದೆ. ಇನ್&zwnj;ಸ್ಟಗ್ರಾಮ್&zwnj; ಕೋಲಾಬರೇಷನ್&zwnj;, ಪ್ರಚಾರಗಳಿಂದ ಆದಾಯ ಬರುತ್ತಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/anupama-gowda-opens-up-on-anchoring-films-web-series-and-her-new-journey-gvd/articleshow-4ysypwo"/>
        </item>
        <item>
            <title><![CDATA[ಮೊದಲ ಭಾಗಕ್ಕಿಂತ ‘ಅಯೋಗ್ಯ 2’ ಹೇಗಿರಲಿದೆ? ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದೇನು?]]></title>
            <link>https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd</link>
            <guid isPermaLink="true">https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd</guid>
            <pubDate>Fri, 07 Aug 2026 18:16:26 +0530</pubDate>
            <description><![CDATA[&lt;p&gt;Ayogya 2: ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ &lsquo;ಅಯೋಗ್ಯ 2&rsquo; ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze44qgtfmgk3dgnjmrar7mz,imgname-m-m-1786106764826.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದು ಇಂದಿಗೂ ಅದರ ಹಾಸ್ಯ, ಹಾಡುಗಳು ಹಾಗೂ ಪಾತ್ರಗಳನ್ನು ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಅದೇ ಲೋಕಕ್ಕೆ &lsquo;ಅಯೋಗ್ಯ 2&rsquo; ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಮರಳುತ್ತಿದ್ದಾರೆ. ಮೊದಲ ಭಾಗದ ಯಶಸ್ಸಿನ ಬಳಿಕ ತಕ್ಷಣವೇ ಸೀಕ್ವೆಲ್ ಮಾಡುವ ಬದಲು ಇಷ್ಟು ವರ್ಷ ಕಾಯಲು ಕಾರಣವೇನು?&lt;/p&gt;&lt;p&gt;ಮೊದಲ ಸಿನಿಮಾದ ಹಿಟ್ ಫಾರ್ಮುಲಾವನ್ನು ಎರಡನೇ ಭಾಗದಲ್ಲೂ ಮುಂದುವರಿಸಲಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ನಿರ್ದೇಶಕರು ಉತ್ತರಿಸಿದ್ದಾರೆ. ಎಂ. ಮುನೇಗೌಡ ಅವರು ಎಸ್&zwnj;ವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ &lsquo;ಅಯೋಗ್ಯ 2&rsquo;ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿದೆ.&lt;/p&gt;&lt;p&gt;&lt;strong&gt;ಸೀಕ್ವೆಲ್ ತಡವಾಗಿದ್ದೇಕೆ?&lt;/strong&gt;&lt;/p&gt;&lt;p&gt;ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ &lsquo;ಅಯೋಗ್ಯ 2&rsquo; ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ. &ldquo;ಒಂದು ಸಿನಿಮಾ ಬ್ಲಾಕ್&zwnj;ಬಸ್ಟರ್ ಆದಾಗ ಅದರ ಸೀಕ್ವೆಲ್ ಮಾಡಬೇಕು ಎಂಬ ಆಲೋಚನೆ ಸಹಜವಾಗಿಯೇ ಬರುತ್ತದೆ. ಆದರೆ &lsquo;ಅಯೋಗ್ಯ&rsquo; ಸಿನಿಮಾ ಟೀವಿಯಲ್ಲಿ ಪ್ರಸಾರವಾಗುತ್ತಲೇ ಇತ್ತು. ಅದರ ಹಾಡುಗಳ ಬಗ್ಗೆಯೂ ಜನ ಮಾತನಾಡುತ್ತಿದ್ದರು. ಹಾಗಾಗಿ ಮೊದಲ ಸಿನಿಮಾದ ಯಶಸ್ಸಿನ ನೆನಪು ಸ್ವಲ್ಪ ತಣ್ಣಗಾಗಲಿ ಎಂದು ಕಾಯಲು ನಿರ್ಧರಿಸಿದೆ. ಪ್ರೇಕ್ಷಕರು ಮೊದಲ ಭಾಗದಿಂದ ಸ್ವಲ್ಪ ದೂರ ಸರಿದ ನಂತರ ಎರಡನೇ ಭಾಗ ಬಂದರೆ ಅದರ ಬಗ್ಗೆ ಹೊಸ ಕುತೂಹಲ ಮೂಡುತ್ತದೆ. ಇಲ್ಲದಿದ್ದರೆ, ಪ್ರೇಕ್ಷಕರು ಎರಡೂ ಸಿನಿಮಾಗಳನ್ನು ಹೋಲಿಸುತ್ತಲೇ ಇರುತ್ತಾರೆ. ಸೀಕ್ವೆಲ್ ಅನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು,&rdquo; ಎಂದು ಮಹೇಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ&rsquo; ಹಿಟ್ ಆಗಿದ್ದರಿಂದ ನಿರೀಕ್ಷೆಯೂ ಡಬಲ್&lt;/strong&gt;&lt;/p&gt;&lt;p&gt;ಮೊದಲ ಭಾಗ ದೊಡ್ಡ ಯಶಸ್ಸು ಕಂಡಿದ್ದರಿಂದ ಎರಡನೇ ಭಾಗದ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೂಕ್ತ ನಿರ್ಮಾಪಕರಿಗಾಗಿ ಕೂಡ ಸಮಯ ತೆಗೆದುಕೊಂಡಿದ್ದಾಗಿ ನಿರ್ದೇಶಕರು ಹೇಳಿದ್ದಾರೆ. &ldquo;ಮೊದಲ ಸಿನಿಮಾ ಹಿಟ್ ಆದಾಗ ಸೀಕ್ವೆಲ್ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಆ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ನಿರ್ಮಾಪಕರ ಅಗತ್ಯವಿತ್ತು. ಮುನೇಗೌಡ ಅವರನ್ನು ಭೇಟಿಯಾಗುವವರೆಗೆ ಸ್ವಲ್ಪ ಸಮಯ ಹಿಡಿಯಿತು,&rdquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ ಭಾಗದ ಆತ್ಮ ಬದಲಾಗಲ್ಲ; ಮನರಂಜನೆ ಮಾತ್ರ ಇನ್ನಷ್ಟು!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾದ ಪ್ರಮುಖ ಆಕರ್ಷಣೆ ಅದರ ಹಾಸ್ಯ, ಭಾವನೆ ಮತ್ತು ಸಂಗೀತ. ಹೀಗಾಗಿ ಎರಡನೇ ಭಾಗದಲ್ಲಿ ಆ ಅಂಶಗಳನ್ನು ಬದಲಿಸುವ ಬದಲು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದೇವೆ ಎಂದು ಮಹೇಶ್ ಕುಮಾರ್ ತಿಳಿಸಿದ್ದಾರೆ. &ldquo;ಮನರಂಜನೆ &lsquo;ಅಯೋಗ್ಯ&rsquo; ಸಿನಿಮಾದ ದೊಡ್ಡ ಶಕ್ತಿಗಳಲ್ಲೊಂದು. ಚಿತ್ರದ ಹಾಡುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದವು. ಇದು ಮುಂದುವರಿದ ಕಥೆಯಾಗಿರುವುದರಿಂದ ಆ ಅಂಶಗಳನ್ನು ಉಳಿಸಿಕೊಂಡು ಮತ್ತಷ್ಟು ದೊಡ್ಡದಾಗಿ ತೋರಿಸಲು ಬಯಸಿದ್ದೇವೆ. ಅರ್ಜುನ್ ಜನ್ಯ ಕೂಡ ಅದ್ಭುತ ಆಲ್ಬಂ ನೀಡಿದ್ದಾರೆ. ಈ ಬಾರಿ ಪ್ರೇಕ್ಷಕರು ಇನ್ನಷ್ಟು ಮನರಂಜನೆಯನ್ನು ನಿರೀಕ್ಷಿಸಬಹುದು,&rdquo; ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಹಳ್ಳಿ ಅದೇ, ಜನರ ಜೀವನ ಬದಲಾಗಿಲ್ಲ!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo;ದ ಯಶಸ್ಸಿನಲ್ಲಿ ಅದರ ಗ್ರಾಮೀಣ ವಾತಾವರಣವೂ ಪ್ರಮುಖ ಪಾತ್ರ ವಹಿಸಿತ್ತು. ಸೀಕ್ವೆಲ್&zwnj;ನಲ್ಲೂ ಅದೇ ಹಳ್ಳಿ ಸೊಗಡನ್ನು ಉಳಿಸಿಕೊಳ್ಳಲಾಗಿದೆ. &ldquo;ಪಂಚಾಯಿತಿ ಕಟ್ಟೆಗಳು ಇನ್ನೂ ಇವೆ. ಹಳ್ಳಿ ರಾಜಕೀಯವೂ ಇದೆ. ವ್ಯತ್ಯಾಸವೆಂದರೆ ಈಗ ಜನರು ಹೆಚ್ಚು ಕಾರುಗಳಲ್ಲಿ ಓಡಾಡುತ್ತಾರೆ. ಆದರೆ ಜನರ ಸ್ವಭಾವದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ಬಂದಿದ್ದರೂ, ಚಿತ್ರದ ಕೆಲವು ಭಾಗಗಳಲ್ಲಿ ಮಣ್ಣಿನ ರಸ್ತೆಗಳನ್ನೇ ಮರುಸೃಷ್ಟಿಸಿದ್ದೇವೆ. ಹಳೆಯ ಕಾಲದ ಆ ಸೊಗಡು ಪ್ರೇಕ್ಷಕರಿಗೆ ಸಿಗಬೇಕು ಎಂಬ ಉದ್ದೇಶ,&rdquo; ಎಂದು ಮಹೇಶ್ ಹೇಳಿದ್ದಾರೆ.ಅದರ ಜೊತೆಗೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.&lt;/p&gt;&lt;p&gt;&lt;strong&gt;ಹಳೆಯ ತಂಡ ಮರಳಿದ್ದು ದೊಡ್ಡ ಪ್ಲಸ್&lt;/strong&gt;&lt;/p&gt;&lt;p&gt;ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ಗಿರಿ ಶಿವಣ್ಣ ಹಾಗೂ ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಮೊದಲ ಭಾಗದ ಪ್ರಮುಖ ಕಲಾವಿದರು ಮತ್ತೆ &lsquo;ಅಯೋಗ್ಯ 2&rsquo;ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಹೊಸ ಕಲಾವಿದರೂ ತಂಡವನ್ನು ಸೇರಿಕೊಂಡಿದ್ದಾರೆ. &ldquo;ಮೂಲ ತಾರಾಗಣ ಮತ್ತೆ ಬಂದಾಗಲೇ ನನ್ನ ಅರ್ಧ ಕೆಲಸ ಮುಗಿದಂತಾಯಿತು. ಅವರಿಗೆ &lsquo;ಅಯೋಗ್ಯ&rsquo; ಜಗತ್ತು ಈಗಾಗಲೇ ಪರಿಚಯವಿತ್ತು. ಹೀಗಾಗಿ ನಾನು ಮನಸ್ಸಿನಲ್ಲಿಟ್ಟುಕೊಂಡಿದ್ದ ರೀತಿಯಲ್ಲಿ ಕಥೆಯನ್ನು ತೆರೆಗೆ ತರಲು ಅದು ಸಾಕಷ್ಟು ಸಹಾಯ ಮಾಡಿತು,&rdquo; ಎಂದು ನಿರ್ದೇಶಕರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo; ಹಾಡುಗಳು ಹಳೆಯದನ್ನು ನಕಲು ಮಾಡಲ್ಲ&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾದ ಹಾಡುಗಳು ಸೂಪರ್&zwnj;ಹಿಟ್ ಆಗಿದ್ದರಿಂದ ಎರಡನೇ ಭಾಗದ ಸಂಗೀತದ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮೊದಲ ಭಾಗದ ಹಾಡುಗಳ ಯಶಸ್ಸನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ ಮಹೇಶ್. &ldquo;ಅರ್ಜುನ್ ಜನ್ಯ ಅವರೊಂದಿಗೆ ಮಾತನಾಡುವಾಗ ಅವರು ಒಂದು ಮಾತು ಹೇಳಿದರು. &lsquo;ಮುಂಗಾರು ಮಳೆ&rsquo; ಸಿನಿಮಾದ ಸಂಗೀತವನ್ನು &lsquo;ಗಾಳಿಪಟ&rsquo;ದಲ್ಲಿ ಮತ್ತೆ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ಯಶಸ್ವಿ ಆಲ್ಬಂಗೂ ತನ್ನದೇ ಆದ ಗುರುತು ಇರುತ್ತದೆ ಎಂದರು. ಅದೇ ರೀತಿ &lsquo;ಅಯೋಗ್ಯ 2&rsquo;ಗೂ ತನ್ನದೇ ಆದ ಸಂಗೀತದ ಗುರುತು ಇರಬೇಕು ಎಂಬ ಪ್ರಯತ್ನ ನಮ್ಮದಾಗಿತ್ತು. ಹಳೆಯ ಹಾಡುಗಳನ್ನು ಮತ್ತೆ ಸೃಷ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ,&rdquo; ಎಂದು ಮಹೇಶ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಹಳ್ಳಿ ಕಥೆಯಲ್ಲಿ ಕಮರ್ಷಿಯಲ್ ಸಿನಿಮಾದ ಎಲ್ಲ ಅಂಶಗಳೂ ಇವೆ&lt;/strong&gt;&lt;/p&gt;&lt;p&gt;ಗ್ರಾಮೀಣ ಹಿನ್ನೆಲೆಯ ಕಥೆಗಳು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಳ್ಳಲು ಸೂಕ್ತವಾಗಿವೆ ಎಂಬುದು ನಿರ್ದೇಶಕರ ಅಭಿಪ್ರಾಯ.&ldquo;&lsquo;ಅಯೋಗ್ಯ 2&rsquo;ನಲ್ಲಿ ಮನರಂಜನೆ, ಭಾವನೆ, ಆ್ಯಕ್ಷನ್ ಹಾಗೂ ಕಾಮಿಡಿ ಎಲ್ಲಕ್ಕೂ ಜಾಗವಿದೆ. ಸಂಪೂರ್ಣ ಕಮರ್ಷಿಯಲ್ ಎಂಟರ್&zwnj;ಟೈನರ್&zwnj;ನಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೋ, ಆ ಎಲ್ಲ ಅಂಶಗಳನ್ನು ಈ ಕಥೆಯಲ್ಲೇ ಸೇರಿಸಬಹುದು,&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ &lsquo;ಅಯೋಗ್ಯ&rsquo; ನೋಡಿರಲಿಲ್ಲ; ಆದರೂ ಸೀಕ್ವೆಲ್ ನಿರ್ಮಿಸಲು ಮುಂದಾದರು!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo; ನಿರ್ಮಾಪಕ ಮುನೇಗೌಡ ಅವರ ಕಥೆಯೂ ಸ್ವಲ್ಪ ವಿಭಿನ್ನ. ಮಹೇಶ್ ಕುಮಾರ್ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದಾಗ, ಅವರು ಮೊದಲ &lsquo;ಅಯೋಗ್ಯ&rsquo; ಸಿನಿಮಾವನ್ನೇ ನೋಡಿರಲಿಲ್ಲವಂತೆ! &ldquo;&lsquo;ಅಯೋಗ್ಯ&rsquo; ಸಿನಿಮಾದ ಹಾಡುಗಳು ಸೂಪರ್&zwnj;ಹಿಟ್ ಆಗಿದ್ದರಿಂದ ಅವುಗಳ ಬಗ್ಗೆ ನನಗೆ ಗೊತ್ತಿತ್ತು. ಆದರೆ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ಆರಂಭವಾದ ನಂತರವೇ ನಾನು ಮೊದಲ ಸಿನಿಮಾ ನೋಡಿದೆ. ಅದರ ಹಾಸ್ಯ ಮತ್ತು ಮನರಂಜನೆ ನನಗೆ ಬಹಳ ಇಷ್ಟವಾಯಿತು. ಒಳ್ಳೆಯ ಕಥೆ ಸಹಜವಾಗಿಯೇ ಒಳ್ಳೆಯ ಮನರಂಜನಾ ಸಿನಿಮಾವಾಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಬ್ಯಾನರ್&zwnj;ನಡಿ ನಾನು ನಿರ್ಮಿಸಲು ಬಯಸುವ ಸಿನಿಮಾಗಳೂ ಇದೇ ರೀತಿಯದ್ದಾಗಿರಬೇಕು,&rdquo; ಎಂದು ಮುನೇಗೌಡ ಹೇಳಿದ್ದಾರೆ.&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ಪರಂಪರೆಯೂ ಸೀಕ್ವೆಲ್ ನಿರ್ಮಿಸಲು ತಮ್ಮಲ್ಲಿ ವಿಶ್ವಾಸ ಮೂಡಿಸಿತು ಎಂದು ಅವರು ಹೇಳಿದ್ದಾರೆ. &ldquo;ಪ್ರೇಕ್ಷಕರು ನಿರೀಕ್ಷಿಸುವ ಎಲ್ಲ ಅಂಶಗಳೂ &lsquo;ಅಯೋಗ್ಯ 2&rsquo;ನಲ್ಲಿವೆ ಎಂಬ ವಿಶ್ವಾಸ ನನಗಿದೆ. ಕಾಮಿಡಿ ಎಂದಿಗೂ ಹಳೆಯದಾಗುವುದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಜನರನ್ನು ನಗಿಸುವ ಸಿನಿಮಾಗಳನ್ನು ಪ್ರೇಕ್ಷಕರು ಸ್ವೀಕರಿಸುತ್ತಲೇ ಬಂದಿದ್ದಾರೆ. &lsquo;ಅಯೋಗ್ಯ 2&rsquo; ಕೂಡ ಆ ಪರಂಪರೆಯನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ,&rdquo; ಎಂದಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಫ್ರಾಂಚೈಸಿ ಮುಂದುವರಿಯುತ್ತಾ?&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ 2&rsquo;ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲೆ ಈ ಸರಣಿಯನ್ನು ಮುಂದುವರಿಸುವ ಆಸೆಯನ್ನೂ ನಿರ್ಮಾಪಕ ಮುನೇಗೌಡ ವ್ಯಕ್ತಪಡಿಸಿದ್ದಾರೆ.&ldquo;ಪ್ರೇಕ್ಷಕರು ಬೆಂಬಲಿಸುತ್ತಿರುವವರೆಗೆ ನಮ್ಮ ಬ್ಯಾನರ್&zwnj;ನಡಿ &lsquo;ಅಯೋಗ್ಯ&rsquo; ಫ್ರಾಂಚೈಸಿಯನ್ನು ಮುಂದುವರಿಸಲು ನನಗೆ ಇಷ್ಟವಿದೆ,&rdquo; ಎಂದು ಅವರು ಹೇಳಿದ್ದಾರೆ. ಹೀಗಾಗಿ ಎಂಟು ವರ್ಷಗಳ ಬಳಿಕ ಬರುತ್ತಿರುವ &lsquo;ಅಯೋಗ್ಯ 2&rsquo; ಕೇವಲ ಸೀಕ್ವೆಲ್ ಆಗಿ ಉಳಿಯುತ್ತದೆಯೇ ಅಥವಾ ಕನ್ನಡದಲ್ಲಿ ಮತ್ತೊಂದು ಜನಪ್ರಿಯ ಫ್ರಾಂಚೈಸಿಗೆ ನಾಂದಿ ಹಾಡುತ್ತದೆಯೇ ಎಂಬುದು ಸಿನಿಮಾ ಬಿಡುಗಡೆಯ ಬಳಿಕವಷ್ಟೇ ಗೊತ್ತಾಗಲಿದೆ. ಆದರೆ ನಿರ್ದೇಶಕ ಮಹೇಶ್ ಕುಮಾರ್ ಮಾತುಗಳನ್ನು ಕೇಳಿದರೆ, ಈ ಬಾರಿ &lsquo;ಅಯೋಗ್ಯ&rsquo;ಗಿಂತ ಮನರಂಜನೆ ಇನ್ನಷ್ಟು ಜೋರಾಗಲಿದೆ ಎಂಬುದಂತೂ ಸ್ಪಷ್ಟ!&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd"/>
        </item>
        <item>
            <title><![CDATA[Exclusive: ಸುಂದರ್‌ ರಾಜ್‌ 75ಕ್ಕೆ 250: ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ]]></title>
            <link>https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</link>
            <guid isPermaLink="true">https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</guid>
            <pubDate>Fri, 14 Aug 2026 16:35:40 +0530</pubDate>
            <description><![CDATA[&lt;p&gt;ಸುಂದರ್&zwnj; ರಾಜ್&zwnj; ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್&zwnj; ಭಾರದ್ವಾಜ್&zwnj; ನಿರ್ದೇಶನದ, ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ಕಥೆ ಆಧರಿಸಿದ &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್&zwnj; ರಾಜ್&zwnj; ನಟನೆಯ 250ನೇ ಸಿನಿಮಾ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzzz5cvm8r84dntxtvmmqkbp,imgname-jjb-1786705523572.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;- ನಿಮಗೀಗ 75 ವರ್ಷ. ಚಾರ್ಜ್&zwnj;ಶೀಟ್&zwnj; ನಿಮ್ಮ 250ನೇ ಸಿನಿಮಾ. ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಂಡರೆ?&lt;/strong&gt;&lt;/p&gt;&lt;p&gt;ಖುಷಿಯೇ ಇದೆ. ಬೇರೆ ಯಾವುದೇ ರಂಗದಲ್ಲಿ 60ಕ್ಕೆ ನಿವೃತ್ತಿ ಅಂತಿರುತ್ತೆ. ಭಾರತೀಯ ಚಿತ್ರರಂಗದಲ್ಲಿ ಕಲಾವಿದರಿಗೆ ವಯಸ್ಸಿನ ಮಿತಿಯೇ ಇಲ್ಲ. ಸೆಲ್ಯುಲಾಯ್ಡ್&zwnj;ನಿಂದ ಡಿಜಿಟಲ್&zwnj;, ಎಐ ವರೆಗಿನ ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಇಷ್ಟು ಕಾಲ ಬದುಕಿ ಉಳಿಯಲು ಸಾಧ್ಯವಾದದ್ದೂ ದೈವೀ ಕೃಪೆ. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ &lsquo;ಕಾಡು&rsquo;, &lsquo;ಚೋಮನ ದುಡಿ&rsquo;, &lsquo;ತಬ್ಬಲಿಯು ನೀನಾದೆ ಮಗನೇ&rsquo;, &lsquo;ಒಂದಾನೊಂದು ಕಾಲದಲ್ಲಿ&rsquo;, &lsquo;ಅನ್ವೇಷಣೆ&rsquo;ವರೆಗೆ ನನಗೆ ಬಂದಿದ್ದೆಲ್ಲ ಕ್ಲಾಸಿಕ್&zwnj; ಚಿತ್ರಗಳು. ಆಗ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರಗಳಿದ್ದವು. ಬರುಬರುತ್ತ ಸಿನಿಮಾ ಕಮರ್ಷಿಯಲ್&zwnj; ಆಗಿ ಬೇರೆ ಆಯಾಮ ಪಡೆಯಿತು. ಮನರಂಜನೆಯೇ ಮುಖ್ಯವಾಯಿತು. ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ಒಂದೊಳ್ಳೆ ಅನುಭವ.&lt;/p&gt;&lt;p&gt;&lt;strong&gt;- ನಿಮ್ಮ 250ನೇ ಸಿನಿಮಾ ಚಾರ್ಜ್&zwnj;ಶೀಟ್&zwnj; ಬಗ್ಗೆ ಹೇಳಿ.&lt;/strong&gt;&lt;/p&gt;&lt;p&gt;ಇದು ನನಗೆ ಬಯಸದೇ ಬಂದ ಭಾಗ್ಯ. ನಮ್ಮ ಏರಿಯಾದಲ್ಲೇ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಮಗಳು ಗಗನಸಖಿ. ಬೆಂಗಳೂರಿಂದ ಸಿಂಗಾಪೂರ್&zwnj;ಗೆ ಹೋಗಿ ಬರುವಾಗ ಕಾಣೆಯಾಗುತ್ತಾಳೆ. ಅವಳ ತಂದೆ ಇಂಜಿನಿಯರ್&zwnj;. ಅವರು ಗಾಬರಿಬಿದ್ದು ಕಂಪ್ಲೇಟ್&zwnj; ಕೊಟ್ಟರೆ ಪೊಲೀಸ್&zwnj; ಸ್ಟೇಶನ್&zwnj;ನಲ್ಲಿ ಉಡಾಫೆಯ ಉತ್ತರ ಬರುತ್ತದೆ. ಆದರೆ ಇನ್ನೊಬ್ಬ ಪೊಲೀಸ್&zwnj; ಅಧಿಕಾರಿ ಪರಿಸ್ಥಿತಿ ಅರಿತು ಈ ಕೇಸ್&zwnj; ಹಿಂದೆ ಬೀಳುತ್ತಾನೆ. ಅಲ್ಲಿಗೆ ಈ ಸಿನಿಮಾ ಪೊಲೀಸ್&zwnj; ಡಿಪಾರ್ಟ್&zwnj;ಮೆಂಟ್&zwnj;ನ ವಾಸ್ತವ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ. ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ತನ್ನ ಅನುಭವದ ಘಟನೆಗೆ ಕಥೆಯ ರೂಪ ಕೊಟ್ಟಿದ್ದಾರೆ.&lt;/p&gt;&lt;p&gt;&lt;strong&gt;- ನಿಮಗೆ ಈ ಪಾತ್ರ ಹೇಗೆ ಕನೆಕ್ಟ್&zwnj; ಆಯ್ತು?&lt;/strong&gt;&lt;/p&gt;&lt;p&gt;ಚಿತ್ರತಂಡ ಈ ಪಾತ್ರಕ್ಕೆ ನನ್ನ ಆರಿಸಿದ್ದಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಆದರೆ ಕತೆಯನ್ನು ನನಗೆ ಹೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಬಿಟ್ಟೆ. ನನ್ನ ಒಳಗೂ ಒಬ್ಬ ಅಪ್ಪ ಇದ್ದಾನೆ. ಮಗಳನ್ನು ಬಹಳ ಪ್ರೀತಿಸುವ ಅಪ್ಪ. ಹೀಗಾಗಿ ತಂದೆಯ ಪಾತ್ರಕ್ಕೆ ಕನೆಕ್ಟ್&zwnj; ಆಗುವುದು ಸುಲಭವಾಯಿತು. ರಾಮಣ್ಣ ಅಂತ ನನ್ನ ಪಾತ್ರದ ಹೆಸರು.&lt;/p&gt;&lt;p&gt;&lt;strong&gt;- ವೆಂಕಟ್&zwnj; ಭಾರದ್ವಾಜ್&zwnj; ಅವರ ಕೆಲಸದ ಬಗ್ಗೆ?&lt;/strong&gt;&lt;/p&gt;&lt;p&gt;ಬದುಕಿನಲ್ಲಿ ನಾನು ಮೊದಲ ಬಾರಿ ಶೂಟಿಂಗ್&zwnj; ನೋಡಿದ ಸಿನಿಮಾ ಸಿ.ವಿ ಶಿವಶಂಕರ್&zwnj; ನಿರ್ದೇಶನದ &lsquo;ಮನೆ ಕಟ್ಟಿ ನೋಡು&rsquo;. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂಬ ಹಾಡು ನಮ್ಮೆಲ್ಲ ಕನ್ನಡಿಗರ ಮನಸ್ಸಿನ ಮಾತಾಗಿತ್ತು. &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾದಲ್ಲಿ ವೆಂಕಟ್&zwnj; ಅವರ ಕೆಲಸ, ಅವರು ಕಥೆಯನ್ನು ನಿರೂಪಿಸುವ ರೀತಿ ನೋಡಿ ಸಿ.ವಿ. ಶಿವಶಂಕರ್&zwnj; ನೆನಪು ಬಂತು. ಚಿತ್ರದಲ್ಲಿ ಯುವ ಕಲಾವಿದರು ಎನರ್ಜಿಟಿಕ್&zwnj; ಆಗಿ ನಟಿಸಿದ್ದಾರೆ. ಎಸ್&zwnj;.ಕೆ ಉಮೇಶ್&zwnj; ಅವರು ಉತ್ತಮ ಸಾಥ್&zwnj; ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಫುಲ್&zwnj; ಮೀಲ್ಸ್&zwnj; ಸಿಕ್ಕಿದೆ.&lt;/p&gt;&lt;p&gt;&lt;strong&gt;- ಸ್ವಾತಂತ್ರ್ಯೋತ್ಸವದ ಸಂದರ್ಭ ಸಿನಿಮಾ ಬರ್ತಿದೆ. ಸ್ಪರ್ಧೆಯೊಡ್ಡುವಂಥಾ ಬೇರೆ ಚಿತ್ರಗಳಿಲ್ಲ.&lt;/strong&gt;&lt;/p&gt;&lt;p&gt;ಅದು ನಮ್ಮ ಸುದೈವ. ಇದು ಥಿಯೇಟರ್&zwnj;ನಲ್ಲೇ ನೋಡುವಂಥಾ ಕಥಾನಕ. ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್&zwnj; ಶೋ ಕೊಡುವ ಬಗ್ಗೆ ನನಗೆ ಬಹಳ ನೋವಿದೆ. ಕೇಳಿದರೆ ಸರ್&zwnj; ನಮ್ಗೂ ಥಿಯೇಟರ್&zwnj; ನಡೆಸಬೇಕಲ್ವಾ ಅಂತಾರೆ. ಜನ ಬರುವ ಸಂಜೆ ಶೋಗಳಿಗೆ ಅನ್ಯ ಭಾಷೆ ಸಿನಿಮಾಗಳನ್ನು ಹಾಕಿರುತ್ತಾರೆ. ಇದು 60ರ ದಶಕದಿಂದಲೇ ಇರುವ ಸಮಸ್ಯೆ. ಇರಲಿ, ನಮ್ಮ ಸಿನಿಮಾಕ್ಕೆ ಸ್ವಾತಂತ್ರ್ಯೋತ್ಸವಕ್ಕಿಂತ ಒಂದು ದಿನ ಮೊದಲೇ ಸ್ವಾತಂತ್ರ್ಯ ಸಿಗುತ್ತಿದೆ. ಈ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಿದೆ.&lt;/p&gt;&lt;p&gt;&lt;strong&gt;ಕನ್ನಡಪ್ರಭದಲ್ಲಿ 6 ತಿಂಗಳು ಕೆಲಸ ಮಾಡಿದ್ದೀನಿ&lt;/strong&gt;&lt;/p&gt;&lt;p&gt;&lsquo;ಒಂಟಿಧ್ವನಿ&rsquo; ಅನ್ನುವ ಸಿನಿಮಾಕ್ಕೆ ಆರಂಭದಲ್ಲಿ ನಾನು ನಾಯಕನಾಗುವುದು ಅಂತಿತ್ತು. ಅದು ಪತ್ರಕರ್ತನ ಪಾತ್ರ. ಆ ಪಾತ್ರದ ಆಳ ಅರಿಯಬೇಕು ಅಂತ ಸುಮಾರು 6 ತಿಂಗಳ ಕಾಲ ಕನ್ನಡಪ್ರಭದಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದೆ. ಆದರೆ ಮುಂದೆ ಒಂಟಿಧ್ವನಿ ಸಿನಿಮಾದ ಪತ್ರಕರ್ತನ ಪಾತ್ರದಲ್ಲಿ ಅಂಬರೀಶ್&zwnj; ನಟಿಸಿದರು. ನಾನು ಮತ್ತೊಂದು ಪಾತ್ರದಲ್ಲಿ ನಟಿಸಿದೆ. ಆದರೆ ಕನ್ನಡಪ್ರಭದಲ್ಲಿ ಕೆಲಸ ಮಾಡಿದ ಅನುಭವ ಸದಾ ನೆನಪಿನಲ್ಲಿ ಉಳಿಯುವಂಥಾದ್ದು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde"/>
        </item>
        <item>
            <title><![CDATA[50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು: ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ]]></title>
            <link>https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9</link>
            <guid isPermaLink="true">https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9</guid>
            <pubDate>Mon, 03 Aug 2026 19:35:19 +0530</pubDate>
            <description><![CDATA[&lt;p&gt;Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz3z28z90vhkzzya4p5et0ez,imgname-bkb-1785765897193.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಶೇಷ ಮೈಲಿಗಲ್ಲಿನ ಸಂದರ್ಭದಲ್ಲಿ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬದುಕಿನಲ್ಲಿ ಸಿನಿಮಾ ಎಂದಿಗೂ ಯೋಜನೆಯ ಭಾಗವಾಗಿರಲಿಲ್ಲ, ಆದರೆ ಅದೇ ತಮ್ಮ ಜೀವನವನ್ನೇ ಬದಲಿಸಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;50 ಸಿನಿಮಾಗಳು... ಆದರೆ ಇದು ಪ್ಲ್ಯಾನ್ ಆಗಿರಲಿಲ್ಲ!&lt;/strong&gt;&lt;/p&gt;&lt;p&gt;50 ಸಿನಿಮಾಗಳನ್ನು ಪೂರೈಸುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. &quot;ಸಿನಿಮಾ ನನ್ನ ಜೀವನದ ಗುರಿಯಾಗಿರಲಿಲ್ಲ. ಮಿಸ್ ಕೊಲ್ಕತ್ತಾ ಪ್ರಶಸ್ತಿ ಗೆದ್ದ ಬಳಿಕ ಅಭಿನಯದ ಅವಕಾಶಗಳು ಬಂದವು. ಒಂದೊಂದೇ ಅವಕಾಶವನ್ನು ಒಪ್ಪಿಕೊಳ್ಳುತ್ತಾ ಬಂದೆ. ಯಾವಾಗ 50 ಸಿನಿಮಾಗಳ ಹಂತ ತಲುಪಿದೆ ಎಂಬುದೇ ಗೊತ್ತಾಗಲಿಲ್ಲ&quot; ಎಂದು ಅವರು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ, ಸಿನಿಮಾ ತಮ್ಮ ಬದುಕಿಗೆ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ ಅವರು, &quot;ಸಿನಿಮಾದಿಂದಲೇ ನಾನು ಉಪೇಂದ್ರ ಅವರನ್ನು ಭೇಟಿಯಾದೆ. ಬೆಂಗಳೂರಿನ ಸೊಸೆಯಾದೆ. ನನ್ನ ಜೀವನದ ದಿಕ್ಕನ್ನೇ ಸಿನಿಮಾ ಬದಲಿಸಿತು. ಎಲ್ಲವೂ ವಿಧಿಯ ಆಟ&quot; ಎಂದು ಭಾವುಕರಾದರು.&lt;/p&gt;&lt;p&gt;&lt;strong&gt;ಮದುವೆಯಾದ ಬಳಿಕ ನಟನೆಯೇ ನಿಲ್ಲುತ್ತದೆ ಎಂಬ ಭಾವನೆ ಇತ್ತು&lt;/strong&gt;&lt;/p&gt;&lt;p&gt;ಮದುವೆಯಾದ ನಂತರ ನಟಿಯಾಗಿ ಮುಂದುವರಿಯುವುದಿಲ್ಲ ಎಂದು ತಾವು ಅಂದುಕೊಂಡಿದ್ದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. &quot;2003ರ ಸಮಯದಲ್ಲಿ ಮದುವೆಯಾದ ನಾಯಕಿಯರಿಗೆ ಅವಕಾಶಗಳು ತುಂಬಾ ಕಡಿಮೆ ಇರುತ್ತಿದ್ದವು. ಅವರು ಸಿನಿಮಾ ಬಿಡುತ್ತಾರೆ ಅಥವಾ ನಿರ್ಮಾಣ, ಕಾಸ್ಟ್ಯೂಮ್ ವಿಭಾಗದ ಕಡೆ ಹೋಗುತ್ತಾರೆ ಎನ್ನುವ ಅಭಿಪ್ರಾಯವಿತ್ತು. ಸಮಾಜವೂ ಬೇರೆ ರೀತಿಯಲ್ಲಿ ನೋಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆಯರಿಗೆ ಉತ್ತಮ ಹಾಗೂ ಬಲಿಷ್ಠ ಪಾತ್ರಗಳು ಸಿಗುತ್ತಿವೆ. ಸಿನಿಮಾಗಳಲ್ಲೂ, ಓಟಿಟಿಯಲ್ಲೂ ಮಹಿಳಾ ಕೇಂದ್ರಿತ ಕಥೆಗಳು ಹೆಚ್ಚಾಗಿವೆ. ನನಗೆ ಬರುತ್ತಿರುವ ಕಥೆಗಳ ಬಗ್ಗೆ ತುಂಬಾ ಸಂತೋಷವಾಗಿದೆ&quot; ಎಂದು ಹೇಳಿದರು.&lt;/p&gt;&lt;p&gt;&lt;strong&gt;'ಡಿಟೆಕ್ಟಿವ್ ತೀಕ್ಷ್ಣ' ಪಾತ್ರದಲ್ಲಿ ಬುದ್ಧಿವಂತಿಕೆಯೇ ಹೀರೋ&lt;/strong&gt;&lt;/p&gt;&lt;p&gt;ನಿರ್ದೇಶಕ ತ್ರಿವಿಕ್ರಮ್ ರಘು ನಿರ್ದೇಶಿಸಿರುವ 'ಡಿಟೆಕ್ಟಿವ್ ತೀಕ್ಷ್ಣ' ಚಿತ್ರದಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ಖಾಸಗಿ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿದ ಅವರು, &quot;ಇದು ದೈಹಿಕ ಸಾಹಸಕ್ಕಿಂತ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಪಾತ್ರ. ಮಕ್ಕಳಿಗೆ ಸೂಪರ್ ಹೀರೋ ಕಥೆಗಳು ಸಾಕಷ್ಟಿವೆ. ಆದರೆ ಅವರಲ್ಲಿ ಯೋಚಿಸುವ ಗುಣವನ್ನು ಬೆಳೆಸುವ ಕಥೆಗಳ ಭಾಗವಾಗಬೇಕು ಎಂಬ ಆಸೆ ನನಗಿದೆ. 'ಡಿಟೆಕ್ಟಿವ್ ತೀಕ್ಷ್ಣ' ಅದೇ ರೀತಿಯ ಸಿನಿಮಾ. ನಮ್ಮ ಮೆದುಳೇ ನಮ್ಮ ದೊಡ್ಡ ಶಕ್ತಿ ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ&quot; ಎಂದರು.&lt;/p&gt;&lt;p&gt;&lt;strong&gt;ಶೆರ್ಲಾಕ್ ಹೋಮ್ಸ್ ಸ್ಪೂರ್ತಿ... ನ್ಯಾನ್ಸಿ ಡ್ರೂ ನೆನಪು!&lt;/strong&gt;&lt;/p&gt;&lt;p&gt;ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಗಿ ತಿಳಿಸಿದ ಪ್ರಿಯಾಂಕಾ, &quot;ನಿಜ ಜೀವನದ ಖಾಸಗಿ ಡಿಟೆಕ್ಟಿವ್&zwnj;ಗಳ ಕೆಲಸದ ಬಗ್ಗೆ ಅಧ್ಯಯನ ಮಾಡಿದೆ. ಪೊಲೀಸರ ವ್ಯಾಪ್ತಿಗೆ ಬಾರದ ಅನೇಕ ಪ್ರಕರಣಗಳನ್ನು ಅವರು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ತಿಳಿದುಕೊಂಡೆ. ನಿರ್ದೇಶಕರು ಶೆರ್ಲಾಕ್ ಹೋಮ್ಸ್ ಮಾದರಿಯ ಸ್ಟೈಲಿಶ್ ಡಿಟೆಕ್ಟಿವ್ ಪಾತ್ರವನ್ನು ಕಲ್ಪಿಸಿದ್ದರು. ಬಾಲ್ಯದಲ್ಲಿ ನಾನು ನ್ಯಾನ್ಸಿ ಡ್ರೂ ಕಾದಂಬರಿಗಳನ್ನು ಓದುತ್ತಿದ್ದೆ. ಒಗಟು ಬಿಡಿಸುವ ಕಥೆಗಳು ನನಗೆ ತುಂಬಾ ಇಷ್ಟ. ಅದೇ ಅನುಭವವನ್ನು ಈ ಪಾತ್ರದಲ್ಲಿ ಅನುಭವಿಸಿದೆ&quot; ಎಂದು ಹೇಳಿದರು.&lt;/p&gt;&lt;p&gt;&lt;strong&gt;ಮುಂದಿನ ವರ್ಷ ನಿರ್ದೇಶಕಿಯಾಗುವ ಕನಸು&lt;/strong&gt;&lt;/p&gt;&lt;p&gt;ನಟನೆ ಜೊತೆಗೆ ಚಿತ್ರರಂಗದ ಮತ್ತೊಂದು ಜವಾಬ್ದಾರಿಗೂ ಸಿದ್ಧವಾಗುತ್ತಿರುವ ಪ್ರಿಯಾಂಕಾ, ಮುಂದಿನ ವರ್ಷ ನಿರ್ದೇಶನಕ್ಕೆ ಕಾಲಿಡುವ ಇಂಗಿತ ನೀಡಿದ್ದಾರೆ. &quot;ಸಿನಿಮಾ ನಿರ್ಮಾಣದ ಪ್ರತಿಯೊಂದು ವಿಭಾಗವನ್ನೂ ಕಲಿಯುತ್ತಿದ್ದೇನೆ. ಮುಂದಿನ ವರ್ಷ ನಿರ್ದೇಶನ ಮಾಡಬೇಕು ಎಂಬ ಆಸೆ ಇದೆ. ಜೊತೆಗೆ ನನ್ನ ಪುತ್ರ ಆಯುಷ್ ಅವರ ಸಿನಿ ಎಂಟ್ರಿಗೆ ಕೂಡ ಸಿದ್ಧತೆ ನಡೆಸುತ್ತಿದ್ದೇನೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;'ಡಿಟೆಕ್ಟಿವ್ ತೀಕ್ಷ್ಣ'ವನ್ನು ನಿರ್ಮಾಪಕರಿಗೆ ಅರ್ಪಣೆ&lt;/strong&gt;&lt;/p&gt;&lt;p&gt;ಚಿತ್ರದ ಬಿಡುಗಡೆಯ ಸಂಭ್ರಮದ ನಡುವೆಯೇ ನಿರ್ಮಾಪಕರಲ್ಲಿ ಒಬ್ಬರಾದ ಗುತಾ ಮುನಿ ಪ್ರಸನ್ನ ಅವರ ನಿಧನ ಚಿತ್ರತಂಡಕ್ಕೆ ನೋವುಂಟು ಮಾಡಿದೆ. &quot;ಪ್ರಸನ್ನ ಅವರಿಗೆ ಈ ಸಿನಿಮಾ ಬಗ್ಗೆ ಅಪಾರ ಪ್ರೀತಿ ಇತ್ತು. ಅವರು ಈ ಸಿನಿಮಾಗಾಗಿ ತುಂಬಾ ಶ್ರಮಿಸಿದ್ದರು. 'ಡಿಟೆಕ್ಟಿವ್ ತೀಕ್ಷ್ಣ' ಚಿತ್ರವನ್ನು ಅವರಿಗೆ ಅರ್ಪಿಸುತ್ತೇನೆ. ಈ ಸಿನಿಮಾ ಬಿಡುಗಡೆಯ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ&quot; ಎಂದು ಪ್ರಿಯಾಂಕಾ ಭಾವುಕರಾಗಿ ಹೇಳಿದರು.&lt;/p&gt;&lt;h2&gt;&lt;strong&gt;ಆಗಸ್ಟ್ 7ರಂದು ತೆರೆಗೆ 'ಡಿಟೆಕ್ಟಿವ್ ತೀಕ್ಷ್ಣ'&lt;/strong&gt;&lt;/h2&gt;&lt;p&gt;ತ್ರಿವಿಕ್ರಮ್ ರಘು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಸಿಡ್ಲಿಂಗು ಶ್ರೀಧರ್, ಅರುಣ್ ಬಾಲರಾಜ್, ವಿನ್ಸೆಂಟ್ ಡಯಾಸ್, ರೋಬೋ ಗಣೇಶ್ ಹಾಗೂ ಶಶಿಧರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಪದಪಲ್ಲಿ ರೋಹಿತ್ ಸಂಗೀತ ನೀಡಿದ್ದು, ಮನು ದಾಸಪ್ಪ ಛಾಯಾಗ್ರಹಣ ಮಾಡಿದ್ದಾರೆ. ಬುದ್ಧಿವಂತಿಕೆಯೇ ನಿಜವಾದ ಶಕ್ತಿ ಎಂಬ ಸಂದೇಶದೊಂದಿಗೆ ಮೂಡಿಬಂದಿರುವ 'ಡಿಟೆಕ್ಟಿವ್ ತೀಕ್ಷ್ಣ' ಸಿನಿಮಾ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9"/>
        </item>
        <item>
            <title><![CDATA[ರಾಜ್‌ಕುಮಾರ್ ಮೊಮ್ಮಗಳು ಎಂಬ ಟ್ಯಾಗ್... ‘ನನಗೆ ಅನುಕೂಲವಾಗಿಲ್ಲ’ ಎಂದ ಧನ್ಯಾ ರಾಮ್‌ಕುಮಾರ್!]]></title>
            <link>https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a</link>
            <guid isPermaLink="true">https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a</guid>
            <pubDate>Sun, 23 Aug 2026 21:06:09 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್&zwnj;ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0qm6adwfbkrrc4gpqnbtzas,imgname-vhcv-1787499325884.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು, ನಟಿ ಧನ್ಯಾ ರಾಮ್&zwnj;ಕುಮಾರ್ ಇದೀಗ ಕನ್ನಡ ಸಿನಿಮಾವನ್ನು ಮೀರಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ Film Expo India 2026ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದಕ್ಕೆ ಧನ್ಯಾ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ತಮ್ಮ ತಾತ ಡಾ. ರಾಜ್&zwnj;ಕುಮಾರ್ ಅಭಿನಯದ ಐಕಾನಿಕ್ ಸಿನಿಮಾ &lsquo;ಕವಿರತ್ನ ಕಾಳಿದಾಸ&rsquo; ಪ್ರದರ್ಶನಗೊಳ್ಳುತ್ತಿರುವುದು ಈ ಅವಕಾಶವನ್ನು ಧನ್ಯಾ ಅವರಿಗೆ ಮತ್ತಷ್ಟು ವಿಶೇಷವಾಗಿಸಿದೆ.&lt;/p&gt;&lt;p&gt;&lt;strong&gt;&lsquo;ತಾತನ ಕವಿರತ್ನ ಕಾಳಿದಾಸ ಪ್ರದರ್ಶನವಾಗಲಿದೆ ಎಂದಾಗ ತಕ್ಷಣ ಒಪ್ಪಿಕೊಂಡೆ!&rsquo;&lt;/strong&gt;&lt;/p&gt;&lt;p&gt;Film Expo India 2026ರಲ್ಲಿ ಭಾಗವಹಿಸುವ ಆಹ್ವಾನ ಬಂದಾಗ ಯಾವುದೇ ಯೋಚನೆಯಿಲ್ಲದೆ ಒಪ್ಪಿಕೊಂಡೆ ಎಂದು ಧನ್ಯಾ ಹೇಳಿದ್ದಾರೆ. &ldquo;ಇದು ತಕ್ಷಣ &lsquo;ಹೌದು&rsquo; ಎಂದ ಅವಕಾಶ. ಅದಕ್ಕಿಂತ ಮುಖ್ಯವಾಗಿ, ಎಕ್ಸ್&zwnj;ಪೋದಲ್ಲಿ ತಾತನ &lsquo;ಕವಿರತ್ನ ಕಾಳಿದಾಸ&rsquo; ಸಿನಿಮಾ ಪ್ರದರ್ಶನವಾಗಲಿದೆ ಎಂದು ತಿಳಿದಾಗ ಈ ಅವಕಾಶ ಇನ್ನಷ್ಟು ವಿಶೇಷ ಎನಿಸಿತು&rdquo; ಎಂದು ಧನ್ಯಾ ಹೇಳಿದ್ದಾರೆ. ವಿವಿಧ ಭಾಷೆಗಳ ಚಿತ್ರರಂಗ, ಕಲಾವಿದರು ಹಾಗೂ ಸಿನಿಮಾಗಳು ಒಂದೇ ವೇದಿಕೆಯಲ್ಲಿ ಸೇರುವುದರಿಂದ ಬೇರೆ ಬೇರೆ ರೀತಿಯ ಸಿನಿಮಾಗಳನ್ನು ಅರ್ಥಮಾಡಿಕೊಳ್ಳಲು ಮತ್ತು ವಿಭಿನ್ನ ಚಿಂತನೆಗಳಿರುವವರೊಂದಿಗೆ ಸಂವಾದ ನಡೆಸಲು ಇದು ಉತ್ತಮ ಅವಕಾಶ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕನ್ನಡ ಸಿನಿಮಾವನ್ನು ಮೀರಿ ನನ್ನನ್ನು ಪರಿಚಯಿಸಿಕೊಳ್ಳಬೇಕು&rsquo;&lt;/strong&gt;&lt;/p&gt;&lt;p&gt;ಧನ್ಯಾ ರಾಮ್&zwnj;ಕುಮಾರ್ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಸದಾ ಹೊಸ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಸಿನಿಮಾ ಎಂಬುದು ಕೇವಲ ನಟನೆಗೆ ಸೀಮಿತವಲ್ಲ, ಅದರಾಚೆಗೂ ಸಾಕಷ್ಟು ಕಲಿಯಬೇಕಿದೆ ಎಂಬುದು ಅವರ ನಿಲುವು. ಈ ಹಿಂದೆ ಪುದುಚೇರಿಯ ಅದಿಶಕ್ತಿ ಲ್ಯಾಬೋರೇಟರಿ ಫಾರ್ ಥಿಯೇಟರ್ ಆರ್ಟ್ ರಿಸರ್ಚ್ನಲ್ಲಿ ತರಬೇತಿ ಪಡೆದಿರುವ ಧನ್ಯಾ, ಅಲ್ಲಿನ ಅನುಭವ ತಮ್ಮ ನಟನೆಯ ಮೇಲಿನ ದೃಷ್ಟಿಕೋನವನ್ನೇ ಬದಲಿಸಿತು ಎಂದು ಹೇಳಿದ್ದಾರೆ.&lt;/p&gt;&lt;p&gt;&ldquo;ನನ್ನ ಕಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ನಾನು ಸದಾ ಪ್ರಯತ್ನಿಸುತ್ತೇನೆ. ಅಲ್ಲಿ ಉಸಿರಾಟದ ಅಭ್ಯಾಸಗಳು ನಟನೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಲಿತೆ. ಜೀವನ ಮತ್ತು ಸಿನಿಮಾದ ಬಗ್ಗೆ ನನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದು ಆಗ ಅರ್ಥವಾಯಿತು&rdquo; ಎಂದು ಅವರು ಹೇಳಿದ್ದಾರೆ. ಇದೇ ಕಾರಣಕ್ಕೆ Film Expo India ತಮ್ಮನ್ನು ಕನ್ನಡ ಸಿನಿಮಾದ ಗಡಿಯಾಚೆಗೆ ಹೊಸ ಪ್ರೇಕ್ಷಕರಿಗೆ ಪರಿಚಯಿಸಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂಬ ವಿಶ್ವಾಸವನ್ನು ಧನ್ಯಾ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸ್ಟಾರ್ ಕಿಡ್ ಎಂಬ ಟ್ಯಾಗ್ ನನಗೆ ಅನುಕೂಲವಾಗಿಲ್ಲ&rsquo;&lt;/strong&gt;&lt;/p&gt;&lt;p&gt;ಡಾ. ರಾಜ್&zwnj;ಕುಮಾರ್ ಅವರ ಮೊಮ್ಮಗಳು ಎಂಬ ದೊಡ್ಡ ಹಿನ್ನೆಲೆ ಧನ್ಯಾ ಅವರಿಗಿದೆ. ಆದರೆ ಇದೇ ಕುಟುಂಬದ ಪರಂಪರೆ ಕೆಲವೊಮ್ಮೆ ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗಿರುವಂತೆ ಅನಿಸಿದೆ ಎಂದು ಅವರು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;&ldquo;ನಾನು ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಬಯಸುತ್ತೇನೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎಂಬುದನ್ನು ನಾನು ನಂಬುತ್ತೇನೆ. ಆದರೆ ರಾಜ್&zwnj;ಕುಮಾರ್ ಕುಟುಂಬದ ಪರಂಪರೆ ನನ್ನ ಕುಟುಂಬದ ಪುರುಷರಿಗೆ ಹೆಚ್ಚು ಅನುಕೂಲವಾಗಿದೆ ಎಂದು ನನಗೆ ಅನಿಸುತ್ತದೆ. ನನಗೆ ಅವರಷ್ಟು ಅವಕಾಶಗಳು ಸಿಕ್ಕಿಲ್ಲ&rdquo; ಎಂದು ಧನ್ಯಾ ಹೇಳಿದ್ದಾರೆ. ತಾವು ಆಯ್ಕೆ ಮಾಡಿಕೊಂಡ ಸಿನಿಮಾಗಳ ಬಗ್ಗೆ ಇನ್ನಷ್ಟು ಎಚ್ಚರಿಕೆ ವಹಿಸಬೇಕಿತ್ತು ಎಂಬ ಅರಿವು ಇದ್ದರೂ, ಅವಕಾಶ ಸಿಕ್ಕಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡುವುದರಲ್ಲಿ ಎಂದಿಗೂ ಹಿಂದೆ ಸರಿದಿಲ್ಲ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಬದಲಿಸಿ&rsquo;&lt;/strong&gt;&lt;/p&gt;&lt;p&gt;ತಮ್ಮ ಕುಟುಂಬದ ಹಿನ್ನೆಲೆಯಿಂದಾಗಿ ಚಿತ್ರರಂಗದಲ್ಲಿ ತಮ್ಮ ಬಗ್ಗೆ ಕೆಲವು ಪೂರ್ವಗ್ರಹಗಳಿವೆ ಎಂಬ ಬೇಸರವನ್ನೂ ಧನ್ಯಾ ವ್ಯಕ್ತಪಡಿಸಿದ್ದಾರೆ. &ldquo;ನಾನು ನನ್ನ ತಾತ ಮತ್ತು ಮಾವಂದಿರ ಪರಂಪರೆಯಿಂದ ಬಂದಿದ್ದೇನೆ. ಆದರೆ ಅದರೊಂದಿಗೆ ಯಾವುದೇ ಅಹಂಕಾರ, ಹಮ್ಮು-ಬಿಮ್ಮು ಅಥವಾ ಅನಗತ್ಯ ನಿರೀಕ್ಷೆಗಳನ್ನು ಹೊತ್ತುಕೊಂಡು ಬಂದಿಲ್ಲ. ಸೆಟ್&zwnj;ನಲ್ಲಿ ನಾನು ಡಿವಾ ರೀತಿಯಲ್ಲಿ ವರ್ತಿಸುವುದಿಲ್ಲ. ನನ್ನ ತಾಯಿ ನನ್ನ ಜೊತೆ ಬಂದರೆ ಅದರಲ್ಲಿ ತಪ್ಪೇನು?&rdquo; ಎಂದು ಅವರು ಪ್ರಶ್ನಿಸಿದ್ದಾರೆ. ಸೆಟ್&zwnj;ನಲ್ಲಿ ಎಷ್ಟು ಗಂಟೆಗಳಾದರೂ ಕೆಲಸ ಮಾಡಲು ಸಿದ್ಧವಿದ್ದು, ತಮ್ಮ ಪಾತ್ರಕ್ಕೆ ಅಗತ್ಯವಿರುವ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿರುವ ಧನ್ಯಾ, ತಮ್ಮ ಬಗ್ಗೆ ಇರುವ ಆಧಾರರಹಿತ ಕಲ್ಪನೆಗಳನ್ನು ಚಿತ್ರರಂಗ ಬದಿಗಿಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ತಾತನ ಅಭಿಮಾನಿಗಳು ಕನ್ನಡ ಸಿನಿಮಾದ ಸುವರ್ಣಯುಗವನ್ನು ನೆನಪಿಸಿಕೊಳ್ಳುತ್ತಾರೆ&rsquo;&lt;/strong&gt;&lt;/p&gt;&lt;p&gt;ಡಾ. ರಾಜ್&zwnj;ಕುಮಾರ್ ಅವರ ಅಭಿಮಾನಿಗಳು ಇಂದಿಗೂ ಅವರ ಸಿನಿಮಾಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ, ಆ ಕಾಲದ ಕನ್ನಡ ಚಿತ್ರರಂಗದ ಸುವರ್ಣಯುಗವನ್ನೂ ಮೆಲುಕು ಹಾಕುತ್ತಾರೆ ಎಂದು ಧನ್ಯಾ ಹೇಳಿದ್ದಾರೆ. ಆ ಕಾಲದ ನಿರ್ದೇಶಕರು ಹಾಗೂ ನಟರು ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ತಮ್ಮ ಅಜ್ಜಿ ಕಾದಂಬರಿಗಳನ್ನು ಓದುವ ಹವ್ಯಾಸ ಹೊಂದಿದ್ದರು. ಯಾವುದಾದರೂ ಕಥೆ ಇಷ್ಟವಾದರೆ ಅದನ್ನು ತಾತನೊಂದಿಗೆ ಹಂಚಿಕೊಳ್ಳುತ್ತಿದ್ದರು. ಆ ಕಥೆ ಸಿನಿಮಾವಾಗುವ ಸಾಧ್ಯತೆ ಇದ್ದರೆ ಅದನ್ನು ಪರದೆಗೆ ತರುವ ಕೆಲಸ ನಡೆಯುತ್ತಿತ್ತು ಎಂದು ಧನ್ಯಾ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಪ್ರೇಕ್ಷಕರನ್ನು ಹೇಗೆ ಗೆಲ್ಲಬೇಕು ಎಂಬುದನ್ನು ಕೆಲವರು ಅರಿತಿದ್ದಾರೆ...&rsquo;&lt;/strong&gt;&lt;/h2&gt;&lt;p&gt;ಇಂದಿನ ಚಿತ್ರರಂಗದ ಬಗ್ಗೆ ಮಾತನಾಡಿದ ಧನ್ಯಾ, ಕೆಲವು ನಿರ್ದೇಶಕರು ಪ್ರೇಕ್ಷಕರನ್ನು ಹೇಗೆ ಸೆಳೆಯಬೇಕು ಎಂಬುದನ್ನು ಅದ್ಭುತವಾಗಿ ಅರ್ಥಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಆ ಸೂತ್ರವನ್ನು ಹುಡುಕುವ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ತಮ್ಮ ಪಾಲಿಗೆ ಪ್ರೇಕ್ಷಕರ ನಿರೀಕ್ಷೆಗಳನ್ನು ಮೊದಲೇ ಊಹಿಸುವುದಕ್ಕಿಂತ, ತಲೆ ತಗ್ಗಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಮುಖ್ಯ ಎಂಬುದನ್ನು ಕಲಿತಿರುವುದಾಗಿ ಧನ್ಯಾ ಹೇಳಿದ್ದಾರೆ.&lt;/p&gt;&lt;p&gt;&ldquo;ಯಾವುದನ್ನೂ ನಿರೀಕ್ಷಿಸದೆ ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಉಳಿದದ್ದೆಲ್ಲ ಪ್ರೇಕ್ಷಕರ ಕೈಯಲ್ಲಿದೆ&rdquo; ಎಂಬ ಧನ್ಯಾ ಅವರ ಮಾತು, ತಮ್ಮ ವೃತ್ತಿಜೀವನದ ಬಗ್ಗೆ ಅವರಿರುವ ಸ್ಪಷ್ಟ ನಿಲುವನ್ನು ತೋರಿಸುತ್ತದೆ. ಒಟ್ಟಿನಲ್ಲಿ, ರಾಜ್&zwnj;ಕುಮಾರ್ ಕುಟುಂಬದ ಪರಂಪರೆಯ ನೆರಳಿನಿಂದ ಹೊರಬಂದು ಧನ್ಯಾ ರಾಮ್&zwnj;ಕುಮಾರ್ ತಮ್ಮದೇ ಆದ ನಟಿಯಾಗಿ ಗುರುತಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಕನ್ನಡ ಸಿನಿಮಾದಾಚೆಗೂ ತಮ್ಮ ಪ್ರತಿಭೆಯನ್ನು ಪರಿಚಯಿಸಿಕೊಳ್ಳುವ ಪ್ರಯತ್ನದಲ್ಲಿರುವ ಧನ್ಯಾ ಅವರ ಮುಂದಿನ ಹೆಜ್ಜೆಗಳ ಮೇಲೆ ಇದೀಗ ಸಿನಿಪ್ರಿಯರ ಕುತೂಹಲ ಹೆಚ್ಚಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/dhanya-ramkumar-opens-up-on-rajkumar-legacy-and-the-star-kid-tag-gvd/articleshow-csrwc9a"/>
        </item>
        <item>
            <title><![CDATA[Exclusive Interview: ಕನ್ನಡದ ಮೊಟ್ಟ ಮೊದಲ ಜೆನ್‌ ಜೀ ಸಿನಿಮಾ ಬುಲ್ಲಿ: ಭುವನ್‌ ಪೊನ್ನಣ್ಣ ಸಂದರ್ಶನ]]></title>
            <link>https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis</link>
            <guid isPermaLink="true">https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis</guid>
            <pubDate>Fri, 31 Jul 2026 16:19:36 +0530</pubDate>
            <description><![CDATA[&lt;p&gt;ಭುವನ್&zwnj; ಪೊನ್ನಣ್ಣ ಮೂರು ವರ್ಷಗಳ ಬ್ರೇಕ್&zwnj; ಬಳಿಕ &lsquo;ಬುಲ್ಲಿ&rsquo; ಸಿನಿಮಾ ಮಾಡುತ್ತಿದ್ದಾರೆ. ಸಮೃದ್ಧ್&zwnj; ಸ್ಟುಡಿಯೋಸ್&zwnj; ಮತ್ತು ಭುವನಂ ಎಂಟರ್&zwnj;ಟೇನ್&zwnj;ಮೆಂಟ್&zwnj; ನಿರ್ಮಿಸುತ್ತಿರುವ ಈ ಸಿನಿಮಾವನ್ನು ಅನೂಪ್&zwnj; ಆ್ಯಂಟನಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಭುವನ್&zwnj; ಮಾತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvwnkddqmqgg57hpjsramjt,imgname-ch-1785494949293.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;- ಬುಲ್ಲಿ ಸಿನಿಮಾದ ನಿಮ್ಮ ಪಾತ್ರ ಹೇಗಿದೆ?&lt;/strong&gt;&lt;/p&gt;&lt;p&gt;ನಾನು ಇಲ್ಲಿಯವರೆಗೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದವನಲ್ಲ. ಮೊದಲ ಶಾಟ್&zwnj;ನಲ್ಲಿ ನಾನು, ಊರ್ವಶಿ ಹಾಗೂ ಓಂಶಿವಪ್ರಕಾಶ್&zwnj; ಅವರ ಕಾಂಬಿನೇಶನ್&zwnj; ಇತ್ತು. ಓಂ ಶಿವಪ್ರಕಾಶ್&zwnj; ಅವರದು ಬಡ್ಡಿ ವ್ಯಾಪಾರಿ ಪಾತ್ರ. ಊರ್ವಶಿ ಮತ್ತು ನಾನು ಅವರಿಂದ ಬಡ್ಡಿಗೆ ಹಣ ತಗೊಂಡು ವಾಪಾಸ್&zwnj; ಕೊಡದೇ ನಾಟಕ ಮಾಡುವ ಕೆಳಮಧ್ಯಮ ವರ್ಗದ ಅಮ್ಮ, ಮಗ. ಆ ಸೀನ್&zwnj;ನಲ್ಲಿ ಓಂ ಶಿವಪ್ರಕಾಶ್&zwnj; &lsquo;ನೀವಿಬ್ಬರೂ ಅಮ್ಮ ಮಗ ಬೆಂಗಳೂರು ಬಿಟ್ಟು ತೊಲಗಿ.. ಥೂ&rsquo; ಅಂತಾರೆ. ಮುಂದಿನ ಡೈಲಾಗ್&zwnj; ಬೇರೇನೋ ಇತ್ತು. ಆದರೆ ಊರ್ವಶಿ ಅವರು, &lsquo;ಆಯ್ತಣ್ಣ, ನಾವು ಮೈಸೂರಿಗೆ ಹೋಗ್ತೀವಿ, ಅಲ್ಲಿ ನನ್ನ ತಂಗಿ ಮನೆ ಇದೆ&rsquo; ಅಂದುಬಿಟ್ಟರು. ನಾನು ಥಂಡಾ ಆದೆ. ಅಲ್ಲಿ ಏನು ಡೈಲಾಗ್&zwnj; ಹೇಳಬೇಕೋ ಗೊತ್ತಾಗಲಿಲ್ಲ. ನನ್ನ ಸ್ಥಿತಿ ನೋಡಿದ ನಿರ್ದೇಶಕರು ವಿವರಿಸಲು ಬಂದರು. ಆಗ ಊರ್ವಶಿ ಅವರು ಪಕ್ಕಕ್ಕೆ ಕರೆದು ಕೂರಿಸಿಕೊಂಡು, &lsquo;ಭುವ, ನೋಡು ನೀನು ಕಾಮಿಡಿ ಮಾಡಬೇಡ. ನಿನ್ನ ಪಾತ್ರವಷ್ಟೇ ಕಾಮಿಡಿ, ನೀನು ಕಾಮಿಡಿ ಅಲ್ಲ. ನೀನು ಕಾಮಿಡಿ ಮಾಡಲಿಕ್ಕೆ ಹೋದರೆ ಜನ ನಗಲ್ಲ, ನೀನು ಹೇಗಿದ್ದೀಯೋ ಹಾಗೇ ಇರು, ಕಾಮಿಡಿಯನ್ನು ಪಾತ್ರವೇ ಮಾಡುತ್ತಾ ಹೋಗುತ್ತದೆ. ನಾನು ಹೇಳಿದ್ದಕ್ಕೆ ನೀನು ರಿಯಲ್&zwnj; ಲೈಫ್&zwnj;ನಲ್ಲಿ ಪ್ರತಿಕ್ರಿಯೆ ಕೊಡುವ ರೀತಿ ಕೌಂಟರ್&zwnj; ಕೊಡಬೇಕು&rsquo; ಎಂದರು. ಚಿತ್ರದುದ್ದಕ್ಕೂ ಅವರ ಸಲಹೆಯನ್ನು ಪಾಲಿಸಿದ್ದೇನೆ.&lt;/p&gt;&lt;p&gt;&lt;strong&gt;- ಬುಲ್ಲಿ ಪಾತ್ರಕ್ಕೆ ತೂಕ ಇಳಿಸಿಕೊಂಡಿರಾ?&lt;/strong&gt;&lt;/p&gt;&lt;p&gt;ಮದುವೆ ಆದಮೇಲೆ ಹೆಂಡತಿ ಕೊಡುವ ಟೆನ್ಶನ್&zwnj;ಗೆ ಹುಡುಗರ ತೂಕ ಇಳಿಯದೇ ಇರುತ್ತಾ.. ಈ ಪಾತ್ರಕ್ಕೆ ಮತ್ತೂ ನಾಲ್ಕೈದು ಕೆಜಿ ಇಳಿಸಿದ್ದೀನಿ. ಇದು ಈ ಕಾಲದ ಜೆನ್&zwnj; ಜೀ ಹುಡುಗನ ಪಾತ್ರ. ಆತನಿಗೆ ಗೊತ್ತು ಗುರಿ ಇರುವುದಿಲ್ಲ. ಅವನ ನಿಜ ಹೆಸರು ಬಲರಾಮ. ಪೋಕರಿ ಕೆಲಸಗಳಿಂದ ಬುಲ್ಲಿ ಅಂತ ಫೇಮಸ್&zwnj; ಆಗಿರುತ್ತಾನೆ. ಈ ಪಾತ್ರಕ್ಕಾಗಿ ಜೆನ್&zwnj; ಜೀ ಹುಡುಗರು ಹೇಗೆ ಯೋಚನೆ ಮಾಡ್ತಾರೆ, ಅವರ ಬಾಡಿ ಮ್ಯಾನರಿಸಂ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಪುಣೆಯ ಎಫ್&zwnj;ಟಿಐಐ ವರ್ಕ್&zwnj;ಶಾಪ್&zwnj;ನಲ್ಲಿ ಮೂರು ವಾರ ಅವರ ಜೊತೆಗೆ ಕಳೆದಿದ್ದೆ. ನಮಗೆಲ್ಲ ಟೀಚರ್&zwnj; ಅಂದರೆ ಭಯ ಭಕ್ತಿ ಇರುತ್ತದೆ. ಆದರೆ ಜೆನ್&zwnj; ಜೀ ಹುಡುಗರಿಗೆ ಫ್ರೆಂಡ್&zwnj;ಗೂ, ಗುರುವಿಗೂ ವ್ಯತ್ಯಾಸವೇ ಗೊತ್ತಿಲ್ಲ. ಟೀಚರ್&zwnj; ಹೆಸರು ಹಿಡಿದು ಫ್ರೆಂಡ್ಸ್&zwnj; ಬಳಿ ಮಾತನಾಡುವಂತೆ ಮಾತನಾಡುತ್ತಿರುತ್ತಾರೆ. ವಿಚಿತ್ರ ವೇಷ ಭೂಷಣ, ಚಂಚಲ ಮನಸ್ಸು, ಇವತ್ತು ಒಬ್ಬರ ಜೊತೆ ಡೇಟಿಂಗ್&zwnj; ಮಾಡುತ್ತಾರೆ. ಮರುದಿನ ಅದರ ಬಗ್ಗೆ ಗೊತ್ತೇ ಇಲ್ಲದ ಹಾಗಿರುತ್ತಾರೆ. ಇಂಥದ್ದನ್ನೆಲ್ಲ ಪಾತ್ರದಲ್ಲಿ ತಂದಿದ್ದೇನೆ.&lt;/p&gt;&lt;p&gt;&lt;strong&gt;- ಊರ್ವಶಿ ಮಗಳು ತೇಜಾ ಅವರ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/p&gt;&lt;p&gt;ಅಮ್ಮನ ಹಾಗೇ ಬಹಳ ಸರಳ ಹುಡುಗಿ ತೇಜಾ. ಅವರಿಗೆ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ಅಮ್ಮನ ಪರಂಪರೆಯನ್ನು ಮುಂದುವರಿಸುವ ಹುಮ್ಮಸ್ಸು ಇದೆ. ಅವರ ಜೊತೆಗಿನ ಶೂಟಿಂಗ್&zwnj; ಇನ್ನಷ್ಟೇ ಶುರುವಾಗಬೇಕಿದೆ.&lt;/p&gt;&lt;p&gt;&lt;strong&gt;- ಮೂರು ವರ್ಷದ ಅಜ್ಞಾತವಾಸದ ಬಳಿಕ ಮತ್ತೆ ಬರುತ್ತಿದ್ದೀರಿ, ಹೇಗಿದೆ ಅನುಭವ?&lt;/strong&gt;&lt;/p&gt;&lt;p&gt;ಮೂರು ವರ್ಷ ಬಹಳ ಮೌಲ್ಯಯುತವಾಗಿ ಕಳೆದಿದ್ದೇನೆ. ಮಗಳ ಬೆಳವಣಿಗೆಯನ್ನು ಆಸ್ಥೆಯಿಂದ ಗಮನಿಸಿದ್ದೇನೆ. ಬರವಣಿಗೆಯ ಕೆಲಸ ಮಾಡಿದ್ದೇನೆ. ಫ್ಯಾಮಿಲಿ ಲೈಫ್&zwnj;ನ ರುಚಿ ಉಂಡಿದ್ದೇನೆ. ಈ ಮೂರು ವರ್ಷಗಳಲ್ಲಿ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಹೆಚ್ಚಿನ ಬೆಳವಣಿಗೆ ಏನೂ ಆದಂತಿಲ್ಲ. ನಮ್ಮ ಚಿತ್ರರಂಗದವರು ಇನ್ನೂ ಮುಂಗಾರು ಮಳೆ ಸಿನಿಮಾ ಬಂದ ಕಾಲದ ಪ್ರೇಕ್ಷಕರನ್ನೇ ಮನಸ್ಸಲ್ಲಿ ಇಟ್ಟು ಸಿನಿಮಾ ಮಾಡುತ್ತಿದ್ದಾರೆ. ಬದಲಾದ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ಗಮನವೇ ಇಲ್ಲ. ನಾವು ಈ ಕಾಲದ ಪ್ರೇಕ್ಷಕರ ಅಭಿರುಚಿ ಬಗ್ಗೆ ಸರ್ವೆ ಮಾಡಿದ್ದೇವೆ. ಅವರ ಟೇಸ್ಟ್&zwnj;ಗೆ ತಕ್ಕಂಥಾ ಸಿನಿಮಾ ಮಾಡಿದ್ದೇವೆ. ಬುಲ್ಲಿ ಕನ್ನಡದ ಮೊಟ್ಟ ಮೊದಲ ಜೆನ್&zwnj; ಜೀ ಸಿನಿಮಾ. ಇದರಲ್ಲಿ ಜೆನ್&zwnj; ಜೀ ಮಗ ಮತ್ತು ಅವನ ರೀತಿಗೆ ಹೊಂದಿಕೊಂಡ ಈ ಕಾಲದ ಅಮ್ಮನ ಕಥೆ ಇದೆ. ಮಾನ ಮರ್ಯಾದೆಗೆ ಅಂಜಿ ಬದುಕುವುದಕ್ಕಿಂತ ನಾವಿರುವ ಹಾಗೇ ಸಮಾಜದೆದುರು ತೆರೆದುಕೊಂಡು ನಿರಾಳವಾಗಿ ಬದುಕುವುದು ಒಳ್ಳೆಯದು ಅನ್ನುವುದನ್ನು ಸಿನಿಮಾ ಮನದಟ್ಟು ಮಾಡಿಸುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis"/>
        </item>
        <item>
            <title><![CDATA[Exclusive: ಕರಾವಳಿಯ ಮಹಾಬಲ ಪಾತ್ರ ನನಗೆ ಬಲ ತುಂಬಿದೆ: ನಟ ಮಿತ್ರ ಸಂದರ್ಶನ]]></title>
            <link>https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</link>
            <guid isPermaLink="true">https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7</guid>
            <pubDate>Sun, 16 Aug 2026 23:34:16 +0530</pubDate>
            <description><![CDATA[&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ ಎಂದು ಸಂದರ್ಶನದಲ್ಲಿ ನಟ ಮಿತ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m05st0mxcxyefsv0ftqgw3p8,imgname-bj-1786901234333.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;* ಈಗ ಮತ್ತೆ ಬೇಡಿಕೆಯ ನಟರಾಗುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಅದಕ್ಕೆ ಕಾರಣ &lsquo;ಕರಾವಳಿ&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಮಹಾಬಲ ಪಾತ್ರ ನನ್ನ ಜೀವನಕ್ಕೆ ಮತ್ತೆ ಬಲ ತುಂಬಿದೆ. ಈ ಚಿತ್ರಕ್ಕೆ ನಾನು ಎರಡು ವರ್ಷ ಮೀಸಲಿಟ್ಟಿದ್ದೆ. ಸಿನಿಮಾ ನೋಡಿದ ಎಲ್ಲರಿಗೂ ಮಹಾಬಲನ ಪಾತ್ರ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;* ಬೇಡಿಕೆಯಲ್ಲಿದ್ದ ನಟ ನೀವು, ಯಾಕೆ ಅವಕಾಶಗಳಿಲ್ಲದೆ ಹೋಗಿದ್ದು?&lt;/strong&gt;&lt;/p&gt;&lt;p&gt;&lsquo;ರಾಗ&rsquo; ಮತ್ತು &lsquo;ಪರಸಂಗ&rsquo; ಸಿನಿಮಾಗಳಿಂದ. ಯಾಕೆಂದರೆ &lsquo;ರಾಗ&rsquo; ಸಿನಿಮಾ ನಂತರ ನನ್ನ ಎಲ್ಲರು ನಿರ್ಮಾಪಕ, ಹೀರೋ ಅಂದುಕೊಂಡರು. ಹೀಗಾಗಿ ನನಗೆ ಪಾತ್ರಗಳು ಬರಲೇ ಇಲ್ಲ. ಎಂಟು ವರ್ಷ ಖಾಲಿ ಕೂರಬೇಕಾಯಿತು.&lt;/p&gt;&lt;p&gt;&lt;strong&gt;* ನಿಮ್ಮ ಈ ಅಜ್ಞಾತ ವಾಸವನ್ನು ಮುಕ್ತ ಮಾಡಿದ್ದು ಕರಾವಳಿ ಚಿತ್ರನಾ?&lt;/strong&gt;&lt;/p&gt;&lt;p&gt;&lsquo;ಕರಾವಳಿ&rsquo;ಗೂ ಮುನ್ನ ಬಂದಿದ್ದು ಸಂತೋಷ್ ಆನಂದ್ ರಾಮ್ ನಿರ್ದೇಶನದ, ಜಗ್ಗೇಶ್&zwnj; ನಟನೆಯ &lsquo;ರಾಘವೇಂದ್ರ ಸ್ಟೋರ್ಸ್&zwnj;&rsquo; ಸಿನಿಮಾ. ಈ ಚಿತ್ರದಲ್ಲಿ ನಾನು ಮಾಡಿದ ಕೋಕಿಲ ಪಾತ್ರ ತುಂಬಾ ಚೆನ್ನಾಗಿತ್ತು. ಆದರೆ, ಸಿನಿಮಾ ಕಮರ್ಷಿಯಲ್ಲಾಗಿ ವರ್ಕ್&zwnj; ಆಗಲಿಲ್ಲ. ಹೀಗಾಗಿ ನನ್ನ ಪಾತ್ರವೂ ಯಾರಿಗೂ ಗೊತ್ತಾಗಲಿಲ್ಲ.&lt;/p&gt;&lt;p&gt;&lt;strong&gt;* ಕರಾವಳಿ ಚಿತ್ರದ ನಂತರ ಬಂದ ಚಿತ್ರಗಳೆಷ್ಟು?&lt;/strong&gt;&lt;/p&gt;&lt;p&gt;ಈ ಸಿನಿಮಾ ಲುಕ್ಕಿನ ನಂತರ ಲ್ಯಾಂಡ್&zwnj; ಲಾರ್ಡ್&zwnj;, ಮಿ.ಜಾಕ್&zwnj;, ಲಕ್ಷ್ಮೀಪುತ್ರ, ಕರಳೆ ಹಾಗೂ ಮಹಾನ್&zwnj; ಚಿತ್ರಗಳು. ಈ ಚಿತ್ರಗಳಲ್ಲಿ ಶಿವಯ್ಯ, ಮಂಡೇಲ ಹೀಗೆ ಬೇರೆ ಬೇರೆ ಪಾತ್ರಗಳಲ್ಲಿ ನಟಿಸಿದ್ದೇನೆ.&lt;/p&gt;&lt;h2&gt;&lt;strong&gt;* ಮುಂದಿನ ಸಿನಿಮಾಗಳು?&lt;/strong&gt;&lt;/h2&gt;&lt;p&gt;ಆಗಲೇ ಹೇಳಿದಂತೆ &lsquo;ಮಿ.ಜಾಕ್&zwnj;&rsquo;, &lsquo;ಲಕ್ಷ್ಮೀಪುತ್ರ&rsquo;, &lsquo;ಕರಳೆ&rsquo; ಚಿತ್ರಗಳ ಶೂಟಿಂಗ್&zwnj; ಮುಗಿಸಿದ್ದೇನೆ. ಬೇರೆ ಹೊಸ ಸಿನಿಮಾಗಳಿಗೆ ಕಾಯುತ್ತಿದ್ದೇನೆ. ಯಾವುದೇ ರೀತಿಯ ಪಾತ್ರಗಳು ಬಂದರೆ ಮಾಡುತ್ತೇನೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/karavali-changed-everything-for-actor-mithra-heres-what-he-says-gvd/articleshow-egx2ds7"/>
        </item>
        <item>
            <title><![CDATA[Exclusive Interview: ಅಮ್ಮನ ಸಿನಿಮಾ ಸೆಟ್‌ನಲ್ಲೇ ನನ್ನ ಕನಸು ಹುಟ್ಟಿತು: ಇಶಾ ಲಂಕೇಶ್]]></title>
            <link>https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2</link>
            <guid isPermaLink="true">https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2</guid>
            <pubDate>Fri, 10 Jul 2026 16:35:03 +0530</pubDate>
            <description><![CDATA[&lt;p&gt;ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್&zwnj; ಲಿಟರೇಚರ್&zwnj; ಆಂಡ್&zwnj; ಪರ್ಫಾರ್ಮೆನ್ಸ್&zwnj; ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್&zwnj; ಇದು ಎಂದು ಸಂದರ್ಶನದಲ್ಲಿ ಇಶಾ ಲಂಕೇಶ್&zwnj; ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5v6hbt9mj9bx17nd39gwxv,imgname-vj-1783681467770.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಟಿಯಾಗಬೇಕೆಂಬ ಯೋಚನೆ ಬಂದಿದ್ದು ಯಾವಾಗ?&lt;/strong&gt;&lt;/p&gt;&lt;p&gt;ಚಿಕ್ಕ ವಯಸ್ಸಿನಿಂದಲೂ ಅಮ್ಮನ ಜೊತೆಗೆ ಸಿನಿಮಾ ಶೂಟಿಂಗ್&zwnj;ಗೆ ಹೋಗುತ್ತಿದ್ದೆ. ಮುಂದೆ ಅವರಿಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಸಹಾಯ ಕೂಡ ಮಾಡಲು ಶುರು ಮಾಡಿದೆ. ಸಿನಿಮಾ ವಾತಾವರಣದಲ್ಲೇ ಬೆಳೆದ ನನಗೆ ಸಹಜವಾಗಿ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.&lt;/p&gt;&lt;p&gt;&lt;strong&gt;* ನಿಮ್ಮ ನಟನೆಯ ಕನಸು ಮೊದಲು ಹಂಚಿಕೊಂಡಿದ್ದು ಯಾರ ಬಳಿ?&lt;/strong&gt;&lt;/p&gt;&lt;p&gt;ನನ್ನ ತಾಯಿ ಬಳಿಯೇ ಹೇಳಿಕೊಂಡಿದ್ದು. ಆದರೆ, ನಾನು ನಟನಾ ಕ್ಷೇತ್ರದಲ್ಲಿದ್ದರಿಂದ ಅವರಿಗೆ ನಾನು ಹೇಳೋದಕ್ಕಿಂತ ಅವರೇ ತಿಳಿದುಕೊಂಡು ಸಪೋರ್ಟ್&zwnj; ಮಾಡಿದರು. ಆದರೆ, ಯಾವತ್ತೂ ನೀನು ಇದೇ ಮಾಡು, ಸಿನಿಮಾಗೇ ಹೋಗು ಅಂತ ಮಾತ್ರ ಒತ್ತಾಯ ಮಾಡಿಲ್ಲ.&lt;/p&gt;&lt;p&gt;&lt;strong&gt;* ತಾಯಿ ಜೊತೆಗೆ ಕಲಿತ ಸಿನಿಮಾ ವಿಷಯಗಳೇನು?&lt;/strong&gt;&lt;/p&gt;&lt;p&gt;ನಾನು ಅವರ ಜೊತೆಗೆ ಹೆಚ್ಚಾಗಿ ಕತೆ ಓದುವುದು, ಸ್ಕ್ರಿಫ್ಟ್&zwnj;, ಡೈಲಾಗ್&zwnj; ಕೇಳುವುದನ್ನು ಮಾಡುತ್ತಿದ್ದೆ. ಜೊತೆಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಕೆಲಸ ಮಾಡಿದ್ದು.&lt;/p&gt;&lt;p&gt;&lt;strong&gt;* ನೀವು ನಟನೆಗೆ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೀರಿ?&lt;/strong&gt;&lt;/p&gt;&lt;p&gt;ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್&zwnj; ಲಿಟರೇಚರ್&zwnj; ಆಂಡ್&zwnj; ಪರ್ಫಾರ್ಮೆನ್ಸ್&zwnj; ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್&zwnj; ಇದು. ಅಲ್ಲಿ ಡ್ರಾಮಾಗಳಲ್ಲಿ ನಟಿಸಿದ್ದೇನೆ. ಯುಕೆಯಲ್ಲಿ ಆಕ್ಟಿಂಗ್&zwnj; ಕೋರ್ಸ್&zwnj; ಮಾಡಿಕೊಂಡು ಬಂದ ಮೇಲೆ ಜಾಹೀರಾತುಗಳಿಗೆ ಆಡಿಷನ್&zwnj; ಕೊಡುತ್ತಿದ್ದೆ. ಇದರ ನಡುವೆ ನಟ ಪ್ರಕಾಶ್&zwnj; ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್&zwnj;ನಲ್ಲಿ ಆ್ಯಕ್ಟಿಂಗ್&zwnj;ಗೆ ಪೂರಕವಾಗಿ ಸೈಕೋ ಫಿಜಿಕಲ್&zwnj; ಕೋರ್ಸ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ನಿಮ್ಮ ಮೊದಲ ಚಿತ್ರದ ಕತೆ ಯಾವ ರೀತಿ ಇದೆ?&lt;/strong&gt;&lt;/p&gt;&lt;p&gt;ಈಗಾಗಲೇ ಪೂರ್ತಿ ಕತೆ ಕೇಳಿದ್ದೇನೆ. ತುಂಬಾ ಫ್ರೆಶ್&zwnj; ಆಗಿದೆ. ಲವ್&zwnj; ಮತ್ತು ಅಡ್ವೆಂಚರ್&zwnj; ಸ್ಟೋರಿ. ಸ್ಟ್ರಾಂಗ್&zwnj; ಹಾಗೂ ಇಂಡಿಫೆಂಡೆಂಟ್ ವುಮನ್&zwnj; ಪಾತ್ರ ನನ್ನದು. ಈಗ ಬರುತ್ತಿರುವ ಕತೆಗಳಿಗಿಂತ ಬೇರೆ ರೀತಿ ಇದೆ.&lt;/p&gt;&lt;p&gt;&lt;strong&gt;* ಪ್ರೀತಮ್ ಗುಬ್ಬಿ ಅವರ ನಿರ್ದೇಶನದಲ್ಲೇ ನಿಮ್ಮ ಮೊದಲ ಚಿತ್ರವಾಗಲು ಕಾರಣ?&lt;/strong&gt;&lt;/p&gt;&lt;p&gt;ಅವರು ಬಂದು ಕೇಳಿದ್ದಲ್ಲ, ನಾನೇ ಆಡಿಷನ್&zwnj; ಕೊಟ್ಟಿದ್ದು. ಅವರು ಕತೆ ಹೇಳಿದ ರೀತಿ, &lsquo;ನಿಮಗೆ ಆಸಕ್ತಿ ಇದ್ದರೆ ನೋಡಿ&rsquo; ಎಂದು ಹೇಳಿ ಅವರು ಕೊಟ್ಟ ಫ್ರೀಡಮ್&zwnj;. ಇದೆಲ್ಲವೂ ನನಗೆ ಇಷ್ಟವಾಯಿತು.&lt;/p&gt;&lt;p&gt;&lt;strong&gt;* ನೀವು ಥಿಯೇಟರ್&zwnj;ನಲ್ಲಿ ಇತ್ತೀಚೆಗೆ ನೋಡಿದ ಸಿನಿಮಾಗಳು ಯಾವುವು?&lt;/strong&gt;&lt;/p&gt;&lt;p&gt;ರಕ್ಷಿತ್&zwnj; ಶೆಟ್ಟಿ ಅವರ &lsquo;ಸಪ್ತ ಸಾಗರದಾಚೆ ಎಲ್ಲೋ&rsquo; ಹಾಗೂ ರಾಜ್&zwnj; ಬಿ ಶೆಟ್ಟಿ ಅವರ &lsquo;ಸು ಫ್ರಮ್&zwnj; ಸೋ&rsquo; ಸಿನಿಮಾಗಳನ್ನು ನೋಡಿದ್ದೇನೆ. ಈ ಎರಡೂ ನನ್ನ ಮೆಚ್ಚಿನ ಸಿನಿಮಾಗಳೇ.&lt;/p&gt;&lt;p&gt;&lt;strong&gt;* ನಿಮ್ಮ ತಾಯಿ ಅವರ ಸಿನಿಮಾಗಳನ್ನು ನೋಡಿದ್ದೀರಾ?&lt;/strong&gt;&lt;/p&gt;&lt;p&gt;ಎಲ್ಲಾ ಸಿನಿಮಾಗಳನ್ನು ಅಮ್ಮನಿಗೆ ಬೋರ್&zwnj; ಆಗುಷ್ಟು ಸಲ ನಾನು ನೋಡಿದ್ದೇನೆ. ನನಗೆ ಈ ಪೈಕಿ ಹೆಚ್ಚು ಇಷ್ಟ ಆಗಿದ್ದು &lsquo;ಅವ್ವ&rsquo; ಹಾಗೂ &lsquo;ದೇವೀರಿ&rsquo; ಚಿತ್ರಗಳು.&lt;/p&gt;&lt;p&gt;&lt;strong&gt;* ಈಗ ಗೌರಿ ಲಂಕೇಶ್&zwnj; ಅವರು ಇದ್ದಿದ್ದರೆ?&lt;/strong&gt;&lt;/p&gt;&lt;p&gt;ತುಂಬಾ ಖುಷಿ ಆಗುತ್ತಿದ್ದರು. ಅವರು ತೀರಿಕೊಂಡಾಗ ನನಗೆ 13 ವರ್ಷ. ನಾನು ಆರ್ಟ್&zwnj; ಫೀಲ್ಡ್&zwnj;ಗೆ ಹೋಗುತ್ತೇನೆ ಅಂತ ಅವರಿಗೆ ಗೊತ್ತಿತ್ತು.&lt;/p&gt;&lt;p&gt;&lt;strong&gt;* ನೀವು ಸಾಹಿತ್ಯದ ವಿದ್ಯಾರ್ಥಿ ಅಲ್ವ, ಯಾರ ಸಾಹಿತ್ಯ ನಿಮಗೆ ಹೆಚ್ಚು ಇಷ್ಟ?&lt;/strong&gt;&lt;/p&gt;&lt;p&gt;ನಮ್ಮ ತಾತ ಲಂಕೇಶ್&zwnj; ಅವರ &lsquo;ಕಲ್ಲು ಕರಗುವ ಸಮಯ&rsquo; ನನಗೆ ತುಂಬಾ ಇಷ್ಟ. ಮೊದಲಿನಿಂದಲೂ ಕುವೆಂಪು ಅವರ ಸಾಹಿತ್ಯ ಓದುತ್ತಿದ್ದೆ. ಆ ನಂತರ ಅರುಂಧತಿ ರಾಯ್&zwnj; ಹಾಗೂ ಅಮಿತ್&zwnj; ಚೌಧರಿ ಬರಹಗಳು ಇಷ್ಟ ಆಗುತ್ತಾ ಬಂದವು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2"/>
        </item>
        <item>
            <title><![CDATA[Special Interview: ಮದರ್‌ ಪ್ರಾಮಿಸ್‌ ಮರುಶೋಧಿಸಿಕೊಳ್ಳುವ ಯತ್ನ: ಡಾಲಿ ಧನಂಜಯ]]></title>
            <link>https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm</link>
            <guid isPermaLink="true">https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm</guid>
            <pubDate>Fri, 10 Jul 2026 16:20:05 +0530</pubDate>
            <description><![CDATA[&lt;p&gt;ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ, ಪೂರ್ಣಚಂದ್ರ ಮೈಸೂರು ನಿರ್ದೇಶನದ &lsquo;ಮದರ್ ಪ್ರಾಮಿಸ್&rsquo; ಸಿನಿಮಾ ಇಂದು ಬಿಡುಗಡೆ. ಈ ನಿಮಿತ್ತ ಅಂತರಂಗದ ಮಾತು ಆಡಿದ ನಟ. ತಮ್ಮನ್ನು ತಾವು ಮರುಶೋಧಿಸಿಕೊಳ್ಳುವ ಯತ್ನವೇ &lsquo;ಮದರ್&zwnj; ಪ್ರಾಮಿಸ್&rsquo; ಎಂದ ಡಾಲಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5tafe256xb6cnq2j6q3005,imgname-jvj-1783680548290.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;p&gt;&lt;strong&gt;* ಮದರ್ ಪ್ರಾಮಿಸ್ ಚಿತ್ರದ ಸತ್ವ ಏನು? ಆತ್ಮ ಏನು?&lt;/strong&gt;&lt;/p&gt;&lt;p&gt;ನಗುವೇ ಈ ಚಿತ್ರದ ಆತ್ಮ. ನಿರ್ದೇಶಕ ಪೂರ್ಣ ಬೆಂಗಳೂರಿನಲ್ಲಿ ಅವರು ನೋಡಿರುವ ಪಾತ್ರಗಳನ್ನು ಇಟ್ಟುಕೊಂಡು ಒಂದು ವಿಡಂಬನಾತ್ಮಕವಾಗಿ ಕತೆ ಹೇಳಿದ್ದಾರೆ. ಸಿನಿಮಾ ಪೂರ್ತಿ ನಗುವಿದೆ. ಹೊಸತನವಿದೆ. ಇದೊಂದು ಗ್ಯಾಂಗ್&zwnj;ಸ್ಟರ್&zwnj; ಕಾಮಿಡಿ. ಆದರೆ ಕ್ಲೈಮ್ಯಾಕ್ಸ್&zwnj;ನಲ್ಲಿ ಎಲ್ಲಾ ವಿಚಾರವೂ ಅನಾವರಣಗೊಂಡಾಗ, ಆ ಗ್ಯಾಂಗ್&zwnj;ಸ್ಟರ್&zwnj;ಗಳೆಲ್ಲಾ ಮಕ್ಕಳ ಥರ ಅನ್ನಿಸುತ್ತಾರೆ. ನಗುವೇ ತುಂಬಿರುವ ಒಂದು ಕತೆಯ ಅಂತ್ಯದಲ್ಲಿ ಸೊಗಸಾದ ಹೊ&zwj;ಳಹು ಇದೆ. ಅದು ಈ ಸಿನಿಮಾದ ಬೆರಗು.&lt;/p&gt;&lt;p&gt;&lt;strong&gt;* ನಿಮ್ಮ ಪಾತ್ರದ ವೈಶಿಷ್ಟ್ಯವೇನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ನನ್ನ ಪಾತ್ರ ಒಂದು ಟ್ರ್ಯಾಕ್&zwnj; ಅಷ್ಟೇ. ಈ ಸಿನಿಮಾ ಬೇರೆಲ್ಲಾ ಪಾತ್ರಗಳ ಕತೆ. ಹಾಗೆ ನೋಡಿದರೆ ಅವರೆಲ್ಲರೂ ನಗಿಸಿದರೆ ನನ್ನದೊಂದು ಗಂಭೀರ ಪಾತ್ರ. ಗಂಭೀರವಾಗಿರುತ್ತೇನೆ. ಅಮ್ಮ ಕೊಡಿಸಿ ಸ್ಪೆಂಡ್ಲರ್&zwnj; ಬೈಕಿನ ಸುತ್ತಾ ಈ ಕತೆ ಸಾಗುತ್ತದೆ. ಈ ಪಾತ್ರ ನೀನು ಮಾಡಿದರೆ ಮಾತ್ರ, ನಾನು ಸಿನಿಮಾ ಮಾಡುತ್ತೇನೆ ಅಂತ ಪೂರ್ಣ ಹೇಳಿದ್ದ. ಅದಕ್ಕಾಗಿ ಮತ್ತು ಆ ಪಾತ್ರಕ್ಕಾಗಿ ಒಪ್ಪಿದೆ. ಆ ಪಾತ್ರದಲ್ಲೊಂದು ಕದಡುವ ಮೌನವಿದೆ.&lt;/p&gt;&lt;p&gt;&lt;strong&gt;* ಈ ಸಿನಿಮಾ ನಿರ್ಮಾಣ ಯಾಕೆ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾವು ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಸೋಲು, ಗೆಲುವು ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾದ ಪ್ರಯತ್ನ ಇರಬೇಕು. ಪ್ರಾಮಾಣಿಕವಾಗಿ ಕತೆ ಹೇಳಬೇಕು. ಈ ಪ್ರಾಮಾಣಿಕತೆ ಸ್ಕ್ರಿಪ್ಟ್&zwnj;ನಲ್ಲಿ ಕಾಣಬೇಕು. ನನಗೆ ಈ ಸಿನಿಮಾದ ಸ್ಕ್ರಿಪ್ಟ್&zwnj; ಓದುವಾಗಲೇ ಮಜಾ ಬಂದಿತ್ತು. ಯಾವ ಸ್ಕ್ರಿಪ್ಟ್&zwnj;ನಲ್ಲಿಯೇ ಮಜಾ ಕೊಡುತ್ತದೆಯೋ ಆ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ಈ ಸಿನಿಮಾ ನಂಬಿಕೆ ಉಂಟು ಮಾಡಿತ್ತು.&lt;/p&gt;&lt;p&gt;&lt;strong&gt;* ಪ್ರಮೋಷನ್&zwnj; ವಿಚಾರದಲ್ಲಿಯೂ ಬೇರೆ ದಾರಿ ಹಿಡಿದಿದ್ದೀರಿ. ಯಾಕೆ?&lt;/strong&gt;&lt;/p&gt;&lt;p&gt;ಯಾವುದೂ ಕೆಲಸ ಮಾಡದೇ ಇದ್ದಾಗ ನಮ್ಮನ್ನು ನಾವು ಮರುಶೋಧಿಸಿಕೊಳ್ಳಬೇಕು. ಹೊಸ ದಾರಿ ಹಿಡಿಯಬೇಕು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೀಗೆ ಎಲ್ಲರೂ ಅವರನ್ನು ಅವರು ಮರುಶೋಧಿಸಿಕೊಳ್ಳುತ್ತಿರಬೇಕು. ಈ ಸಿನಿಮಾ ಒಂದು ಭಿನ್ನ ಪ್ರಯತ್ನ. ಎಂಟರ್&zwnj;ಟೇನರ್&zwnj;. ಇದನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೂ ಭಿನ್ನ ದಾರಿ ಹಿಡಿಯುವ ಆಲೋಚನೆ ಮಾಡಿದೆವು. ಸೋಷಿಯಲ್&zwnj; ಮೀಡಿಯಾದಲ್ಲಿ ಎಂಟರ್&zwnj;ಟೇನಿಂಗ್&zwnj; ಕಂಟೆಂಟ್&zwnj; ಮಾಡಿದೆವು. ಅದು ಅನಿವಾರ್ಯವಾಗಿತ್ತು. ಯಾಕೆಂದರೆ ನಾವು ಸಿನಿಮಾ ಕುರಿತು ಜಾಸ್ತಿ ಮಾತನಾಡಿದಷ್ಟೂ ವಿಚಾರ ತೆಳುವಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಬುದ್ಧಿವಂತ. ನಾವು ಅಪ್ರಾಮಾಣಿಕವಾಗಿ ಪ್ರಚಾರ ಮಾಡಿದಷ್ಟೂ ಅವನು ಹಿಂದೆ ಸರಿಯುತ್ತಾನೆ. ಹಾಗಾಗಬಾರದು ಎಂಬ ಕಾರಣಕ್ಕೆ ಸೋಮವಾರದಿಂದಲೇ ನೇರವಾಗಿ ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮಂಗಳೂರಲ್ಲಿ ಶುರುವಾಗಿದ್ದು, ಶಿವಮೊಗ್ಗ, ಮೈಸೂರು, ಬೆಂಗಳೂರು ಹೀಗೆ ಬೇರೆ ಬೇರೆ ಕಡೆಯ ಪ್ರೇಕ್ಷಕರಿಗೆ ತಲುಪಿ ಎಲ್ಲಾ ಕಡೆಯಿಂದ ಮೆಚ್ಚುಗೆ ಬರುತ್ತಿದೆ. ಸಂತೋಷ ಮತ್ತು ಕೃತಜ್ಞತೆ.&lt;/p&gt;&lt;p&gt;&lt;strong&gt;* ನೇರ ಪ್ರೇಕ್ಷಕರಿಗೆ ಸಿನಿಮಾ ತೋರಿಸುವ ನಿರ್ಧಾರ ತೆಗೆದುಕೊಂಡ ಕಾರಣ?&lt;/strong&gt;&lt;/p&gt;&lt;p&gt;ವಿಶ್ವಾಸ ಇದ್ದಾಗ ಆ ನಿರ್ಧಾರ ತಗೋಬಹುದು. ಯಾಕೆಂದರೆ ಒಬ್ಬ ಪ್ರೇಕ್ಷಕ ಇನ್ನೊಬ್ಬ ಪ್ರೇಕ್ಷನಿಗೆ ಹೇಳಿದರೆ ಮಾತ್ರ ಆತ ನಂಬುತ್ತಾನೆ. ಬೇರೆ ಯಾರು ಹೇಳಿದರೂ ನಂಬುತ್ತಿಲ್ಲ. ಅಂಥಾ ಸ್ಥಿತಿಗೆ ಚಿತ್ರರಂಗ ಬಂದಿದೆ. ಹಾಗಾಗಿ ನೇರ ಪ್ರೇಕ್ಷಕರಿಗೆ ತೋರಿಸಿದೆವು. ಮಂಗಳೂರಿನಲ್ಲಿ 400+ ಸೀಟ್ ಇದ್ದ ಚಿತ್ರಮಂದಿರಲ್ಲಿ ಪ್ರದರ್ಶನವಿತ್ತು. ಜನ ಬರುತ್ತಾರಾ ಎಂಬ ಭಯವಿತ್ತು. ಜನ ಬಂದರು. ತುಂಬಾ ಒಳ್ಳೆಯ ರೀತಿಯಲ್ಲಿ ಮೆಚ್ಚಿಕೊಂಡರು. ಅವರೇ ಬೇರೆ ಬೇರೆ ಭಾಗದ ಪ್ರೇಕ್ಷಕರಿಗೆ ತಿಳಿಸಿದರು. ಹಾಗಾಗಿಯೇ ನಮ್ಮ 21+ ಪ್ರೀಮಿಯರ್ ಶೋಗಳು ಬಹುತೇಕ ಫುಲ್&zwnj; ಆಗಿದ್ದು.&lt;/p&gt;&lt;p&gt;&lt;strong&gt;* ನಟನೆ, ನಿರ್ಮಾಣ ಎರಡೂ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ, ಎಷ್ಟು ಸುಲಭ?&lt;/strong&gt;&lt;/p&gt;&lt;p&gt;ಗೀತ ಸಾಹಿತಿ ಕೂಡ. 3 ಹಾಡು ಬರೆದಿದ್ದೇನೆ. ಸಿನಿಮಾ ಮಾಡುವುದಕ್ಕೆಂದೇ ಇಲ್ಲಿ ಬಂದವನು. ನಟನೆ, ನಿರ್ಮಾಣ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಶ್ರಮ ಹಾಕುತ್ತೇನೆ. ಇನ್ನು ಹಾಡು ಬರೆಯುವುದು ನನ್ನ ಆತ್ಮತೃಪ್ತಿಗೆ, ನನ್ನ ಖುಷಿಗೆ.&lt;/p&gt;&lt;p&gt;&lt;strong&gt;* ಈ ಸಿನಿಮಾದ ನಿಮ್ಮ ಕಲಿಕೆ ಏನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕರು ಜೆನ್&zwnj; ಜೀಗಳು. ಅವರ ಆಲೋಚನಾ ವಿಧಾನ, ಕೆಲಸದ ವೇಗ ಎಲ್ಲವೂ ತಿಳಿದು ಬೆರಗಾಗಿದ್ದೇನೆ. ಹೊಸ ನೀರಿನ ಜೊತೆ ಹರಿದು ನಾನೂ ಹೊಸತಾಗುವ ಪ್ರಯತ್ನವಿದು.&lt;/p&gt;&lt;p&gt;&lt;strong&gt;* ನಿಮ್ಮ ಹಾಡು ಕೇಳಿದರೆ ಬರ್ತಾ ಬರ್ತಾ ಹೆಚ್ಚು ಫಿಲಾಸಫಿಕಲ್ ಆಗುತ್ತಿದ್ದೀರಿ..&lt;/strong&gt;&lt;/p&gt;&lt;p&gt;ವಯಸ್ಸಾಗುತ್ತಾ ಹಾಗಾಗುವುದು ಸಹಜವಲ್ಲವೇ. ನಮ್ಮದೂ ಒಂದು ಜವಾಬ್ದಾರಿ ಇರುತ್ತದೆಯಲ್ಲವೇ. ಏನೋ ಹೇಳಬೇಕು ಅನ್ನಿಸುತ್ತಿರುತ್ತದೆ. ಅದನ್ನು ಹಾಡಿನ ಮೂಲಕ ಹೇಳುತ್ತೇನೆ. ಯಾರಿಗಾದರೂ ತಲುಪಿದರೆ ಅಷ್ಟರ ಮಟ್ಟಿಗೆ ಸಾರ್ಥಕ ಭಾವ. ಈ ಸಿನಿಮಾದ ಕ್ಲ್ಯೈಮ್ಯಾಕ್ಸ್&zwnj; ಕೂಡ ಈ ಕಾಲಕ್ಕೆ ಬೇಕಾದ ಒಂದು ಹೊಳಹು.&lt;/p&gt;&lt;p&gt;&lt;strong&gt;* ಬರವಣಿಗೆ, ನಿರ್ದೇಶನ ಆಸೆ ಇದೆಯೇ?&lt;/strong&gt;&lt;/p&gt;&lt;p&gt;ಖಂಡಿತಾ ಇದೆ. ಆದರೆ ಆ ಜವಾಬ್ದಾರಿ ದೊಡ್ಡದು. ಅದಕ್ಕಾಗಿ ತಯಾರಾಗಬೇಕು.&lt;/p&gt;&lt;p&gt;&lt;strong&gt;* ಮುಂದಿನ ದಾರಿ?&lt;/strong&gt;&lt;/p&gt;&lt;p&gt;ನಟನೆ, ನಿರ್ಮಾಣದ ಅಣ್ಣ ಫ್ರಂ ಮೆಕ್ಸಿಕೋ ಮತ್ತು ಹೆಗ್ಗಣ ಮುದ್ದು ಸಿದ್ಧವಿದೆ. ಬಿಡುಗಡೆಗೆ ಸಿದ್ಧವಾಗಬೇಕು. 666 ಡ್ರೀಮ್ ಥಿಯೇಟರ್&zwnj; ಇನ್ನೂ 20 ದಿನಗಳ ಶೂಟಿಂಗ್&zwnj; ಇದೆ. ಹಲಗಲಿ ಶೇ.50 ಚಿತ್ರೀಕರಣವಾಗಿದೆ. ಜಿಂಗೋ ಚಿತ್ರೀಕರಣ ಶುರುವಾಗಬೇಕಿದೆ. ದಾರಿ ಇನ್ನೂ ದೂರವಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm"/>
        </item>
        <item>
            <title><![CDATA[ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ: ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!]]></title>
            <link>https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr</link>
            <guid isPermaLink="true">https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr</guid>
            <pubDate>Wed, 26 Aug 2026 20:18:02 +0530</pubDate>
            <description><![CDATA[&lt;p&gt;Kannada Seriel Actor Karthik Jayaram &lsquo;ಜೆಕೆ&rsquo; ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, &lsquo;ಅಶ್ವಿನಿ ನಕ್ಷತ್ರ&rsquo;ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0z7wxtg2rdy9wckzfa8qfbf,imgname-vvjv-1787754870608.png" type="image/jpeg" height="390" width="690"/>
            <content:encoded><![CDATA[&lt;p&gt;ಕಿರುತೆರೆಯ ಜನಪ್ರಿಯ ನಟ ಹಾಗೂ &lsquo;ಜೆಕೆ&rsquo; ಎಂದೇ ಖ್ಯಾತರಾಗಿರುವ ಕಾರ್ತಿಕ್&zwnj; ಜಯರಾಮ್, ತಮ್ಮ ಸಿನಿ-ಕಿರುತೆರೆ ಪಯಣದ ಆರಂಭದ ದಿನಗಳ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್&zwnj; ಬಳಿಕ ಕಾರ್ಪೊರೇಟ್&zwnj; ಜಗತ್ತಿನಲ್ಲಿ ಉತ್ತಮ ಉದ್ಯೋಗದಲ್ಲಿದ್ದ ತಾವು, ಆರಂಭದಲ್ಲಿ ಜನಪ್ರಿಯ ಕನ್ನಡ ಧಾರಾವಾಹಿ &lsquo;ಅಶ್ವಿನಿ ನಕ್ಷತ್ರ&rsquo;ದಲ್ಲಿ ನಾಯಕನಾಗಿ ನಟಿಸುವ ಅವಕಾಶವನ್ನೇ ತಿರಸ್ಕರಿಸಲು ಯೋಚಿಸಿದ್ದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ರ್ಯಾಪಿಡ್&zwnj; ರಶ್ಮಿ ಅವರ ಪಾಡ್&zwnj;ಕಾಸ್ಟ್&zwnj;ನಲ್ಲಿ ಮಾತನಾಡಿದ ಕಾರ್ತಿಕ್&zwnj; ಜಯರಾಮ್, ಕಾರ್ಪೊರೇಟ್&zwnj; ಕೆಲಸದ ಜೊತೆಗೆ &lsquo;ಅಶ್ವಿನಿ ನಕ್ಷತ್ರ&rsquo; ಧಾರಾವಾಹಿಯ ಚಿತ್ರೀಕರಣವನ್ನೂ ಹೇಗೆ ನಿಭಾಯಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ. ತಮ್ಮಲ್ಲಿದ್ದ ನಟನಾ ಸಾಮರ್ಥ್ಯವನ್ನು ಮೊದಲು ಗುರುತಿಸಿದ್ದು ತಮ್ಮ ಕಂಪನಿಯ HR ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ನೀವು ಫೇಮಸ್&zwnj; ಆಗ್ತೀರಾ, ಕೆಲಸ ಬಿಟ್ಟುಬಿಡಿ ಎಂದಿದ್ದರು!&rsquo;&lt;/strong&gt;&lt;/p&gt;&lt;p&gt;&lsquo;ಅಶ್ವಿನಿ ನಕ್ಷತ್ರ&rsquo; ಚಿತ್ರೀಕರಣವನ್ನು ಹಗಲಿನಲ್ಲಿ ಮುಗಿಸಿಕೊಂಡು, ರಾತ್ರಿ ಕಾರ್ಪೊರೇಟ್&zwnj; ಕೆಲಸ ಮಾಡುತ್ತಿದ್ದೆ. ಆಗ ನನ್ನ HR, ನಾನು ಮುಂದೆ ಫೇಮಸ್&zwnj; ಆಗುತ್ತೇನೆ ಎಂದು ಹೇಳಿ, ಕೆಲಸ ಬಿಟ್ಟು ನಟನೆಯಲ್ಲಿ ಮುಂದುವರಿಯುವಂತೆ ಸಲಹೆ ನೀಡಿದ್ದರು. ಆದರೆ ಅದೇ ಸಮಯದಲ್ಲಿ ಉದ್ಯೋಗದಲ್ಲೂ ನಾನು ಉತ್ತಮವಾಗಿ ಮಾಡುತ್ತಿದ್ದೆ ಎಂದು ಕಾರ್ತಿಕ್&zwnj; ಜಯರಾಮ್&zwnj; ಹೇಳಿದ್ದಾರೆ.&lt;/p&gt;&lt;p&gt;ಆದರೆ ಆರಂಭದಲ್ಲಿ ಧಾರಾವಾಹಿಯ ಆಫರ್&zwnj; ಸ್ವೀಕರಿಸಲು ಕಾರ್ತಿಕ್&zwnj; ಸಿದ್ಧರಿರಲಿಲ್ಲವಂತೆ. ಕಾರ್ಪೊರೇಟ್&zwnj; ಕ್ಷೇತ್ರದಲ್ಲಿ ಉತ್ತಮ ಸಂಬಳದ ಜೊತೆಗೆ ಸ್ಥಿರವಾದ 9ರಿಂದ 5ರ ಕೆಲಸ, ವಾರಾಂತ್ಯ ರಜೆ ಎಲ್ಲವೂ ಇದ್ದಾಗ ನಟನೆಯತ್ತ ಯಾಕೆ ಹೋಗಬೇಕು ಎಂಬ ಯೋಚನೆ ಅವರಲ್ಲಿತ್ತು.&lt;/p&gt;&lt;p&gt;&lt;strong&gt;&lsquo;ಕಾರ್ಪೊರೇಟ್&zwnj;ನಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು!&rsquo;&lt;/strong&gt;&lt;/p&gt;&lt;p&gt;ತಮ್ಮ ಆರಂಭಿಕ ಮನಸ್ಥಿತಿಯನ್ನು ನೆನಪಿಸಿಕೊಂಡ ಕಾರ್ತಿಕ್&zwnj;, ಮೊದಲು &lsquo;ಅಶ್ವಿನಿ ನಕ್ಷತ್ರ&rsquo; ಬೇಡ ಎಂದು ಹೇಳಲು ಪ್ರಯತ್ನಿಸಿದ್ದೆ. ನನಗೆ ಅದನ್ನು ಮಾಡಲು ಆಸಕ್ತಿಯೇ ಇರಲಿಲ್ಲ. ಕಾರ್ಪೊರೇಟ್&zwnj; ಕ್ಷೇತ್ರದಲ್ಲಿ ನಾನು ಚೆನ್ನಾಗಿ ಸಂಪಾದಿಸುತ್ತಿದ್ದೆ. ಹಾಗಿದ್ದಾಗ ಈ ಅವಕಾಶ ಯಾಕೆ ಬೇಕು ಎನಿಸಿತ್ತು. ನನಗೆ 9ರಿಂದ 5ರ ಕೆಲಸ, ವಾರಾಂತ್ಯದಲ್ಲಿ ರಜೆ ಇತ್ತು ಎಂದು ಹೇಳಿದ್ದಾರೆ. ಆದರೆ ಮುಂದೆ ಇದೇ ಧಾರಾವಾಹಿ ತಮ್ಮ ಜೀವನದ ದಿಕ್ಕನ್ನೇ ಬದಲಿಸಿತು ಎಂದು ಕಾರ್ತಿಕ್&zwnj; ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕು ಅನ್ನೋದು ಬಾಲ್ಯದ ಕನಸಾಗಿತ್ತು!&rsquo;&lt;/strong&gt;&lt;/p&gt;&lt;p&gt;ಕಾರ್ತಿಕ್&zwnj; ಜಯರಾಮ್&zwnj; ಬಾಲ್ಯದಿಂದಲೂ ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕೆಂದು ಕನಸು ಕಂಡಿದ್ದರಂತೆ. ಎಂಜಿನಿಯರಿಂಗ್&zwnj; ಶಿಕ್ಷಣದ ಬಳಿಕ ಕಾರ್ಪೊರೇಟ್&zwnj; ವೃತ್ತಿಯಲ್ಲೂ ತಮ್ಮದೇ ಆದ ನೆಲೆ ಕಂಡುಕೊಂಡಿದ್ದರು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ಅವರ ವೃತ್ತಿಜೀವನಕ್ಕೆ ನಿರೀಕ್ಷೆಯೇ ಇಲ್ಲದ ತಿರುವು ನೀಡಿತು.&lt;/p&gt;&lt;p&gt;ಸಿವಿಲ್&zwnj; ಎಂಜಿನಿಯರ್&zwnj; ಆಗುವುದು ನನ್ನ ಬಾಲ್ಯದ ಕನಸಾಗಿತ್ತು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ನನಗೆ ಸಿಕ್ಕ ಒಂದು ಅದ್ಭುತ ಅವಕಾಶವಾಗಿತ್ತು ಎಂದು ಅವರು ಹೇಳಿದ್ದಾರೆ. ಆ ಕಾಲದಲ್ಲಿ ಕಿರುತೆರೆಯಲ್ಲಿ ಪುರುಷ ನಟರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸುವುದು ಅಪರೂಪವಾಗಿತ್ತು. ಬಹುತೇಕ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದವು. ಆದರೆ &lsquo;ಅಶ್ವಿನಿ ನಕ್ಷತ್ರ&rsquo; ಕಾರ್ತಿಕ್&zwnj; ಜಯರಾಮ್&zwnj;ಗೆ ದೊಡ್ಡ ಮಟ್ಟದ ಗುರುತನ್ನು ತಂದುಕೊಟ್ಟಿತು.&lt;/p&gt;&lt;p&gt;&lt;strong&gt;&lsquo;ಫೇಮ್&zwnj; ಯಾವತ್ತೂ ಶಾಶ್ವತ ಅಲ್ಲ ಎಂದು ನನಗೆ ಗೊತ್ತಿತ್ತು!&rsquo;&lt;/strong&gt;&lt;/p&gt;&lt;p&gt;ಕಿರುತೆರೆಯಿಂದ ಸಿಕ್ಕ ಜನಪ್ರಿಯತೆಯ ಬಗ್ಗೆಯೂ ಕಾರ್ತಿಕ್&zwnj; ಜಯರಾಮ್&zwnj; ಮುಕ್ತವಾಗಿ ಮಾತನಾಡಿದ್ದಾರೆ. ಖ್ಯಾತಿ ಎಷ್ಟೇ ದೊಡ್ಡದಾಗಿದ್ದರೂ ಅದು ಶಾಶ್ವತವಲ್ಲ ಎಂಬ ನಂಬಿಕೆ ತಮ್ಮಲ್ಲಿತ್ತು ಎಂದು ಹೇಳಿದ್ದಾರೆ. ಫೇಮ್&zwnj; ಅದ್ಭುತವಾಗಿತ್ತು. ಆದರೆ ಖ್ಯಾತಿ ತಾತ್ಕಾಲಿಕ ಎಂಬ ಭಾವನೆ ನನಗೆ ಯಾವಾಗಲೂ ಇತ್ತು. ಜೀವನದ ಹಲವು ಹಂತಗಳನ್ನು ದಾಟಿದಾಗ ಈ ವಿಚಾರ ಅರ್ಥವಾಗುತ್ತದೆ ಎಂದು ಕಾರ್ತಿಕ್&zwnj; ಹೇಳಿದ್ದಾರೆ. ಎಂಜಿನಿಯರಿಂಗ್&zwnj; ಮತ್ತು ಕಾರ್ಪೊರೇಟ್&zwnj; ವೃತ್ತಿಯ ಸಮಯದಲ್ಲಿ ತಾವು ಕಟ್ಟಿಕೊಂಡಿದ್ದ ಅನುಭವ ಹಾಗೂ ಆರ್ಥಿಕ ನೆಲೆ, ನಂತರ ನಟನೆಯಲ್ಲಿ ರಿಸ್ಕ್&zwnj; ತೆಗೆದುಕೊಳ್ಳಲು ಆತ್ಮವಿಶ್ವಾಸ ನೀಡಿತು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನನ್ನ ಫೌಂಡೇಶನ್&zwnj; ಆಗಲೇ ಸಿದ್ಧವಾಗಿತ್ತು!&rsquo;&lt;/strong&gt;&lt;/h2&gt;&lt;p&gt;ಎಂಜಿನಿಯರಿಂಗ್&zwnj; ದಿನಗಳಲ್ಲೇ ನಾನು ನನ್ನ ಫೌಂಡೇಶನ್&zwnj; ಕಟ್ಟಿಕೊಂಡಿದ್ದೆ. ಹೀಗಾಗಿ ಮುಂದೆ ನಟನೆಯಲ್ಲಿ ರಿಸ್ಕ್&zwnj; ತೆಗೆದುಕೊಳ್ಳಲು ನಾನು ಸಿದ್ಧನಾಗಿದ್ದೆ ಎಂದು ಕಾರ್ತಿಕ್&zwnj; ಜಯರಾಮ್&zwnj; ಹೇಳಿದ್ದಾರೆ. ಒಟ್ಟಿನಲ್ಲಿ, ಸಿವಿಲ್&zwnj; ಎಂಜಿನಿಯರ್&zwnj; ಆಗಬೇಕೆಂಬ ಕನಸಿನಿಂದ ಕಾರ್ಪೊರೇಟ್&zwnj; ಉದ್ಯೋಗದವರೆಗೆ ಸಾಗಿದ್ದ ಕಾರ್ತಿಕ್&zwnj; ಜಯರಾಮ್&zwnj; ಅವರನ್ನು &lsquo;ಅಶ್ವಿನಿ ನಕ್ಷತ್ರ&rsquo; ಕಿರುತೆರೆಯ ಜನಪ್ರಿಯ ನಟನನ್ನಾಗಿ ರೂಪಿಸಿತು. ಆರಂಭದಲ್ಲಿ ಬೇಡವೆಂದುಕೊಂಡಿದ್ದ ಅದೇ ಧಾರಾವಾಹಿ ಮುಂದೆ ಅವರ ವೃತ್ತಿಜೀವನದ ಬಹುದೊಡ್ಡ ತಿರುವಾಗಿ ಪರಿಣಮಿಸಿದ್ದು, ಒಂದು ಅವಕಾಶ ಜೀವನದ ದಿಕ್ಕನ್ನೇ ಹೇಗೆ ಬದಲಿಸಬಹುದು ಎಂಬುದಕ್ಕೆ ಜೆಕೆ ಅವರ ಪಯಣ ಉತ್ತಮ ಉದಾಹರಣೆಯಾಗಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/kannada-seriel-actor-karthik-jayaram-reveals-how-ashwini-nakshatra-changed-his-career-forever-gvd/articleshow-getgknr"/>
        </item>
        <item>
            <title><![CDATA[Nabha Natesh: 'ವಜ್ರಕಾಯ' ಬಳಿಕ ಕನ್ನಡಕ್ಕೆ ಯಾಕೆ ಬರಲಿಲ್ಲ? ನಟಿ ನಭಾ ಕೊಟ್ಟ ಉತ್ತರ ಏನು?]]></title>
            <link>https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</link>
            <guid isPermaLink="true">https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</guid>
            <pubDate>Mon, 29 Jun 2026 16:46:02 +0530</pubDate>
            <description><![CDATA[&lt;p&gt;Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್&zwnj;ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9hahqwkht22bcw0q67ddpn,imgname-xgx-1782731589372.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;* ಕೋವಿಡ್&zwnj; ನಂತರ ಸುದೀರ್ಘ ವಿರಾಮ ತಗೊಂಡ್ರಿ. ಏನೆಲ್ಲ ರಿಯಲೈಸೇಶನ್&zwnj; ಆಯ್ತು?&lt;/strong&gt;&lt;/p&gt;&lt;p&gt;ಈ ಬ್ರೇಕ್&zwnj; ನನಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಕಷ್ಟು ಸಮಯ ಕೊಟ್ಟಿತು. ನನ್ನ ಬದುಕಿನ ಉದ್ದೇಶ ಏನು, ನಾನು ಯಾಕಾಗಿ ಹೀಗೆಲ್ಲ ಒದ್ದಾಡುತ್ತಿದ್ದೇನೆ, ಇದಕ್ಕೆಲ್ಲ ಅರ್ಥ ಇದೆಯಾ ಅಂತೆಲ್ಲ ಯೋಚಿಸಿದೆ. ಕೆಲವಕ್ಕೆ ಉತ್ತರ ಸಿಕ್ಕಿತು, ಮತ್ತೆ ಕೆಲವಕ್ಕೆ ಸಿಗಲಿಲ್ಲ. ಒಂದಂತೂ ಅರ್ಥ ಆಯ್ತು. ನನಗೆ ಖುಷಿ ಸಿಗುವುದು ಜನರಿಗೆ ಮನರಂಜನೆ ನೀಡುವುದರಲ್ಲಿ. ಅಭಿನಯವೇ ನನಗೆ ಒಲಿದ ಕಲೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ಅಂದುಕೊಂಡೆ.&lt;/p&gt;&lt;p&gt;&lt;strong&gt;* ಆಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದು ಅಂಥಾ ಸಮರ್ಥ ಸಿನಿಮಾಗಳ?&lt;/strong&gt;&lt;/p&gt;&lt;p&gt;ನಾಗಬಂಧಂ, ಸ್ವಯಂಭೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪಾತ್ರಕ್ಕಿರುವ ಸ್ಕೋಪ್&zwnj; ನೋಡಿ. ನಾಗಬಂಧಂನಲ್ಲಿ ಪಾರ್ವತಿ ಅನ್ನುವ ನನ್ನ ಪಾತ್ರಕ್ಕೆ ಸಾಕಷ್ಟು ಲೇಯರ್&zwnj;ಗಳಿವೆ. ಸ್ವಯಂಭೂ ಸಿನಿಮಾದಲ್ಲೂ ಉತ್ತಮ ಬೆಳವಣಿಗೆ ಇರುವ ಪಾತ್ರ.&lt;/p&gt;&lt;p&gt;&lt;strong&gt;* ಎರಡೂ ಪೌರಾಣಿಕ ಚಿತ್ರಗಳು, ಯಾಕೆ?&lt;/strong&gt;&lt;/p&gt;&lt;p&gt;ಈಗಿನ ಟ್ರೆಂಡ್&zwnj; ಹಾಗಿದೆ. ಈಗ ಜನ ಇಷ್ಟಪಡುತ್ತಿರುವುದು ಪೌರಾಣಿಕ, ಐತಿಹಾಸಿಕ ಕಥೆಗಳನ್ನು. ಅಂಥಾ ಪಾತ್ರ ಸಿಕ್ಕಾಗ ಒಪ್ಪಿಕೊಂಡೆ. ಮೊದಲ ಸಿನಿಮಾ ವಜ್ರಕಾಯದಲ್ಲಿ ನನ್ನ ಪಾತ್ರ ಪಟಾಕಾ ಪಾರ್ವತಿ. ನಾಗಬಂಧಂನಲ್ಲೂ ನನ್ನ ಪಾತ್ರ ಪಾರ್ವತಿ. ಆ ಪಾತ್ರಕ್ಕಿಂತ ಕಂಪ್ಲೀಟ್&zwnj; ವಿರುದ್ಧ ಈ ಪಾರ್ವತಿ. ಆದರೆ ನನ್ನ ಸಿನಿಮಾ ಜರ್ನಿಯಲ್ಲಿ ಆ ಪಾರ್ವತಿಯಿಂದ ಈ ಪಾರ್ವತಿಗೆ ಒಂದು ಫುಲ್&zwnj; ಸರ್ಕಲ್&zwnj; ಆಗಿದೆ.&lt;/p&gt;&lt;p&gt;&lt;strong&gt;* ವಜ್ರಕಾಯ ಸಿನಿಮಾದ ಯಶಸ್ಸಿನ ನಂತರ ಕನ್ನಡ ಇಂಡಸ್ಟ್ರಿ ಕಡೆ ತಿರುಗೂ ನೋಡ್ಲಿಲ್ಲ?&lt;/strong&gt;&lt;/p&gt;&lt;p&gt;ಹಾಗೆಲ್ಲ ಏನಿಲ್ಲ. ಕಲಾವಿದರಿಗೆ ಭಾಷೆಯ ಗಡಿ ಇರೋದಿಲ್ಲ. ನನಗೆ ತೃಪ್ತಿ ನೀಡುವಂಥಾ ಸಿನಿಮಾಗಳು ಸಿಕ್ಕಾಗ ಅದನ್ನು ಭಾಷೆಯ ವಿಚಾರಕ್ಕೆ ತಿರಸ್ಕರಿಸಲಾಗುವುದಿಲ್ಲ.&lt;/p&gt;&lt;p&gt;&lt;strong&gt;* ಪ್ರತಿಯೊಬ್ಬ ನಟಿಯೂ ಇದೇ ಮಾತು ಹೇಳ್ತಾರೆ, ಹೀಗಾದರೆ ಕನ್ನಡದಂಥಾ ಇಂಡಸ್ಟ್ರಿಗೆ ನಾಯಕಿಯರು ಸಿಗೋದು ಹೇಗೆ?&lt;/strong&gt;&lt;/p&gt;&lt;p&gt;ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರೇ ಇರೋದು. ಇಲ್ಲಿ ಯಾವುದಕ್ಕೂ ಕೊರತೆ ಆಗೋದಿಲ್ಲ. ನನ್ನ ಮೊದಲ ಸಿನಿಮಾ &lsquo;ವಜ್ರಕಾಯ&rsquo;ಕ್ಕೆ ಅತ್ಯುತ್ತಮ ಸ್ವಾಗತ ಸಿಕ್ಕಿತು. ಆ ಸಿನಿಮಾದ ನನ್ನ ಪಾತ್ರ ಪಟಾಕಾ ಪಾರ್ವತಿ ಮೂಲಕ ಜನ ಇನ್ನೂ ನನ್ನ ಗುರುತಿಸುತ್ತಾರೆ. ನಂಗೆ ಅತಿಯಾಸೆ. ಬಂದರೆ ಇನ್ನೊಂದು ಬ್ಯಾಂಗರ್&zwnj; ಜೊತೆಗೆ ಬರಬೇಕು. ಕನ್ನಡಿಗರಿಗೆ ಅರೆಬೆಂದ ಊಟ ಕೊಡೋದಕ್ಕೆ ಇಷ್ಟ ಇಲ್ಲ. ಕೊಟ್ರೆ ಮುದ್ದೆ, ನಾಟಿ ಕೋಳಿ ಸಾಂಬಾರ್&zwnj; ಅನ್ನೇ ಬಡಿಸ್ಬೇಕು.&lt;/p&gt;&lt;p&gt;&lt;strong&gt;* ಶೃಂಗೇರಿ ನಿಮ್ಮ ಊರು. ಅಲ್ಲಿಗೆ ಭೇಟಿ?&lt;/strong&gt;&lt;/p&gt;&lt;p&gt;ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ನೋಡಿ ತುಂಬ ಜನ ನಾನು ಆಂಧ್ರದಲ್ಲಿ ಸೆಟಲ್&zwnj; ಆಗಿದ್ದೀನಿ ಅಂದ್ಕೊಂಡಿದ್ದಾರೆ. ಆದರೆ ಬೆಂಗಳೂರು ಮತ್ತು ಶೃಂಗೇರಿಗಳಲ್ಲೇ ನನ್ನ ವಾಸ. ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹೋಗಿ ಬಂದಿದ್ದೆಲ್ಲ ಸೋಷಿಯಲ್&zwnj; ಮೀಡಿಯಾದಲ್ಲಿ ಹಾಕಿಕೊಳ್ಳೋದಿಲ್ಲ. ಕಡ್ಲೆ ಕಾಯಿ ಪರಿಷೆಯಲ್ಲಿ ಮಾಸ್ಕ್&zwnj; ಹಾಕ್ಕೊಂಡು ಓಡಾಡ್ತೀನಿ, ಬೆಂಗಳೂರಲ್ಲಿ ಯಾವ ಉತ್ಸವ ಇದ್ದರೂ ನೀವು ಸೂಕ್ಷ್ಮವಾಗಿ ಹುಡುಕಿದ್ರೆ ನಾನು ಕಂಡೇ ಕಾಣ್ತೀನಿ. ಆದರೆ ಕಣ್ಣು ನೋಡಿ ಪತ್ತೆ ಹಚ್ಚಬೇಕಷ್ಟೇ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7"/>
        </item>
        <item>
            <title><![CDATA[Exclusive Interview: ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು: ಸತೀಶ್ ನೀನಾಸಂ ಸಂದರ್ಶನ]]></title>
            <link>https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q</link>
            <guid isPermaLink="true">https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q</guid>
            <pubDate>Thu, 06 Aug 2026 23:55:33 +0530</pubDate>
            <description><![CDATA[&lt;p&gt;ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzc1qy2adzwx72y9nasva05h,imgname-vh-1786037139530.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜ್&lt;/strong&gt;&lt;/h2&gt;&lt;p&gt;&lt;strong&gt;* ಅಯೋಗ್ಯ 2 ಟ್ರೇಲರ್ ಬಿಡುಗಡೆಯಾಗಿಲ್ಲ, ಏನು ಕಾರಣ?&lt;/strong&gt;&lt;/p&gt;&lt;p&gt;ಅದಕ್ಕೆ ಎರಡು ಕಾರಣವಿದೆ. ಮೊದಲನೆಯದಾಗಿ, ಹಾಡುಗಳಿಂದಲೇ ಜನರನ್ನು ಸೆಳೆಯಬೇಕು ಎಂಬ ಯೋಜನೆ ಮತ್ತು ಯೋಚನೆ ತಂಡಕ್ಕಿತ್ತು. ಮತ್ತೊಂದೆಡೆ, ಈಗಾಗಲೇ ಮೊದಲ ಭಾಗ ಸೂಪರ್ ಹಿಟ್ ಆಗಿರುವುದರಿಂದ, ಪ್ರೇಕ್ಷಕರಿಗೆ ಅದೇ ಟ್ರೇಲರ್ ಇದ್ದಂತೆ. ಮೊದಲ ಭಾಗದಂತೆ, ಎರಡನೇ ಭಾಗದ ಹಾಡುಗಳೂ ಜನರ ಮನ ಗೆದ್ದಿವೆ. ಚಿತ್ರದಲ್ಲಿ ಸಾಕಷ್ಟು ಅಚ್ಚರಿಯ ಅಂಶಗಳಿವೆ. ಪ್ರತಿಯೊಂದನ್ನೂ ಟ್ರೇಲರ್&zwnj;ನಲ್ಲೇ ತೋರಿಸುವ ಬದಲು, ನೇರವಾಗಿ ಚಿತ್ರಮಂದಿರಗಳಲ್ಲೇ ಪ್ರೇಕ್ಷಕರಿಗೆ ಆ ಅಚ್ಚರಿ ದಾಟಿಸೋಣ ಎಂದು ಇಡೀ ತಂಡ ತೀರ್ಮಾನಿಸಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ನಗದೇ ಹೊರಗೆ ಹೋಗುವುದಿಲ್ಲ.&lt;/p&gt;&lt;p&gt;&lt;strong&gt;* ಚಿತ್ರರಂಗ ಕಷ್ಟದಲ್ಲಿರುವ ಹೊತ್ತು, ನೀವೆಷ್ಟು ಸೇಫು?&lt;/strong&gt;&lt;/p&gt;&lt;p&gt;ಉತ್ತಮ ಬೆಲೆಗೆ ಬಿಸಿನೆಸ್ ಆಗಿರುವುದೇ ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ. ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಸೇಲ್ ಆಯ್ತು. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದೆ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕಿಗೂ ಭಾರಿ ಡಿಮ್ಯಾಂಡ್ ಇದೆ. ನನ್ನ ಸಿನಿಮಾಗಳಲ್ಲಿಯೇ ಅತ್ಯುತ್ತಮ ಬಿಸಿನೆಸ್ ಈ ಸಿನಿಮಾಗೆ ಆಗಿದೆ.&lt;/p&gt;&lt;p&gt;&lt;strong&gt;* ಅಯೋಗ್ಯ 2 ವಿಶೇಷತೆ ಏನು?&lt;/strong&gt;&lt;/p&gt;&lt;p&gt;ಒಂದು ಯಶಸ್ವಿ ಸಿನಿಮಾದ ಮುಂದುವರಿದ ಭಾಗ ಅನ್ನೋದೇ ಮೊದಲ ವಿಶೇಷತೆ. ಮೊದಲ ಭಾಗದಲ್ಲಿ ಕೇವಲ ಒಂದು ಮತದಿಂದ ನಾಯಕ ಹೇಗೆ ಗೆದ್ದ ಎಂಬಲ್ಲಿಗೆ ಕತೆ ಮುಕ್ತಾಯಗೊಳಿಸಿದ್ದೆವು. ಈಗ ಈ ಎರಡನೇ ಭಾಗದಲ್ಲಿ ನಾಯಕ ಗೆದ್ದ ನಂತರದ ಆಟಗಳು, ವಿರೋಧಿ ಬಣ ನೀಡುವ ಕಾಟಗಳು ಮತ್ತು ಪಂಚಾಯ್ತಿಯಲ್ಲಿ ಅಯೋಗ್ಯನ ಹಾವಳಿ ಹೇಗೆಲ್ಲ ಇರುತ್ತದೆ ಎಂಬುದನ್ನು ನೋಡಬಹುದು. ಉತ್ತಮ ಕತೆಯ ಜೊತೆ ಆಕರ್ಷಕ ಮನರಂಜನೆ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ನನ್ನ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಪ್ರೇಕ್ಷಕರಿಗೆ ಖುಷಿಕೊಡಲಿದೆ. ಪ್ರತಿಯೊಂದು ಪಾತ್ರಕ್ಕೂ ಸೂಕ್ತ ತೂಕವಿದೆ. ಗುಣಮಟ್ಟದಲ್ಲಿ ಈ ಸಲ ಮತ್ತಷ್ಟು ಜೋರಾಗಿ ಬರುತ್ತಿದ್ದೇವೆ.&lt;/p&gt;&lt;p&gt;&lt;strong&gt;* ಮೊದಲ ಭಾಗಕ್ಕೂ ಈ ಭಾಗಕ್ಕೂ ಏನಾದರೂ ವ್ಯತ್ಯಾಸವಿದೆಯೇ?&lt;/strong&gt;&lt;/p&gt;&lt;p&gt;ಮೊದಲ ಭಾಗದ ನಾಯಕನಿಗೂ ಈ ಹೊಸ ಅಯೋಗ್ಯನಿಗೂ ಹಾವ-ಭಾವದಿಂದ ಹಿಡಿದು, ಕಾಸ್ಟ್ಯೂಮ್, ಡೈಲಾಗ್ ಡೆಲಿವರಿಯವರೆಗೆ ಸಾಕಷ್ಟು ವ್ಯತ್ಯಾಸವಿದೆ. ಮುಖ್ಯವಾಗಿ ಆತನ ಆಟಿಟ್ಯೂಡ್ ಮತ್ತು ಮೆಚ್ಯೂರಿಟಿ ಲೆವೆಲ್&zwnj;ನಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಈ ಸಲ ನಾನು ಹೆಚ್ಚು ಗಮನ ಕೊಟ್ಟಿದ್ದೇನೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ.&lt;/p&gt;&lt;p&gt;&lt;strong&gt;* ಕಥೆಯ ವಾತಾವರಣ ಅಥವಾ ಹಳ್ಳಿಯ ಹಿನ್ನೆಲೆಯಲ್ಲಿ ಏನಾದರೂ ಬದಲಾವಣೆಗಳಿವೆಯೇ?&lt;/strong&gt;&lt;/p&gt;&lt;p&gt;ಹಳ್ಳಿಗಳು ಬದಲಾಗುವುದಿಲ್ಲ, ಆದರೆ ಹಳ್ಳಿಯ ಜನರು ಬದಲಾಗುತ್ತಾರೆ. ಮೊದಲ ಭಾಗದಲ್ಲಿದ್ದ ಅದೇ ಹಳ್ಳಿಯೇ ಇಲ್ಲೂ ಇದೆ. ಆದರೆ ಜನ ಮತ್ತು ವಾತಾವರಣ ಬದಲಾಗಿದೆ. ಅಂದು ಸಿನಿಮಾ ನೋಡಿದ್ದ ಪ್ರೇಕ್ಷಕರು ಈಗ ನಾನಾ ಬಗೆಯಲ್ಲಿ ಬದಲಾಗಿರುತ್ತಾರೆ, ಅವರಿಗೆ ಈ ಸಿನಿಮಾ ನೆನಪಿನ ಬುತ್ತಿ ತೆರೆದಂತೆ ಅನಿಸಿದರೆ, ಹೊಸ ಪ್ರೇಕ್ಷಕರಿಗೆ ಡಬಲ್ ಮನರಂಜನೆ.&lt;/p&gt;&lt;p&gt;&lt;strong&gt;* ಹೊಸ ಅಯೋಗ್ಯನ ಮೇಲೆ ನಿಮ್ಮ ಭರವಸೆ ಏನು?&lt;/strong&gt;&lt;/p&gt;&lt;p&gt;ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ. ಅದಕ್ಕಿಂತ ದುಪ್ಪಟ್ಟು ಮನರಂಜನೆ ಈ ಅಯೋಗ್ಯ 2ನಲ್ಲಿದೆ ಎಂಬ ಭರವಸೆ ನಮ್ಮಿಡೀ ತಂಡದಲ್ಲಿದೆ. ಮೊದಲನೇ ಭಾಗದ ಗೆಲುವು ಪ್ರೇಕ್ಷಕರು ನಮಗೆ ನೀಡಿದ ಕೊಡುಗೆಯಾದರೆ, ಈ ಎರಡನೇ ಭಾಗ ನಾವು ಅವರಿಗಾಗಿ ನೀಡುತ್ತಿರುವ ಉಡುಗೊರೆ. ಇದು ಎಲ್ಲರೂ ಚಿತ್ರಮಂದಿರಗಳಲ್ಲೇ ಕುಳಿತು ಸಂಭ್ರಮಿಸಬೇಕಾದ ಸಿನಿಮಾ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q"/>
        </item>
        <item>
            <title><![CDATA[ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ: ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!]]></title>
            <link>https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</link>
            <guid isPermaLink="true">https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</guid>
            <pubDate>Fri, 07 Aug 2026 18:32:56 +0530</pubDate>
            <description><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze51ephmzd140sgj78bw9x9,imgname-n-n-1786107706065.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಕನ್ನಡ ಸಿನಿಪ್ರೇಕ್ಷಕರಿಗೆ ಸಿಕ್ಕ ಮರೆಯಲಾಗದ ಮನರಂಜನೆಯ ಅನುಭವ. ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ. ಆದರೆ ಈ ಬಾರಿ ಚಿತ್ರತಂಡದ ಪ್ರಚಾರದ ಸ್ಟ್ರಾಟಜಿ ಮಾತ್ರ ಕೊಂಚ ವಿಭಿನ್ನ.&lt;/p&gt;&lt;p&gt;ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್, ಟ್ರೇಲರ್, ಕೌಂಟ್&zwnj;ಡೌನ್ ಪ್ರಚಾರ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲಾಗುತ್ತದೆ. ಆದರೆ &lsquo;ಅಯೋಗ್ಯ 2&rsquo; ತಂಡ ಮಾತ್ರ ಟ್ರೇಲರ್ ಬಿಡುಗಡೆ ಮಾಡದೆ, ಹಾಡುಗಳ ಮೂಲಕವೇ ಸಿನಿಮಾದತ್ತ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿರುವ ಕಾರಣ ಅವುಗಳನ್ನು ಟ್ರೇಲರ್&zwnj;ನಲ್ಲೇ ಬಿಟ್ಟುಕೊಡದೆ, ಚಿತ್ರಮಂದಿರದಲ್ಲೇ ಪ್ರೇಕ್ಷಕರು ಅನುಭವಿಸಲಿ ಎಂಬುದು ತಂಡದ ನಿರ್ಧಾರ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ&rsquo;ವೇ &lsquo;ಅಯೋಗ್ಯ 2&rsquo;ಗೆ ಟ್ರೇಲರ್!&lt;/strong&gt;&lt;/p&gt;&lt;p&gt;ಟ್ರೇಲರ್ ಇಲ್ಲದಿರುವುದು ಯಾವುದೇ ರಿಸ್ಕ್ ಅಲ್ಲ, ಬದಲಿಗೆ ಮೊದಲ ಸಿನಿಮಾದ ಯಶಸ್ಸಿನ ಮೇಲೆ ಇಟ್ಟಿರುವ ನಂಬಿಕೆ ಎನ್ನುತ್ತಾರೆ ಸತೀಶ್ ನೀನಾಸಂ. &ldquo;&lsquo;ಅಯೋಗ್ಯ&rsquo; ಸಿನಿಮಾದಲ್ಲಿ ಹಾಡುಗಳೇ ಚಿತ್ರದ ಬಗ್ಗೆ ಮಾತನಾಡಿದ್ದವು. ಈ ಬಾರಿಯೂ ಹಾಡುಗಳು ಜನರನ್ನು ತಲುಪಿವೆ. ಇದು ಸೀಕ್ವೆಲ್ ಆಗಿರುವುದರಿಂದ, ಮೊದಲ &lsquo;ಅಯೋಗ್ಯ&rsquo; ಸಿನಿಮಾವೇ ಮುಂದಿನ ಭಾಗಕ್ಕೆ ಟ್ರೇಲರ್ ಇದ್ದಂತೆ ಎಂದು ನಾವು ಭಾವಿಸಿದ್ದೇವೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿವೆ.&lt;/p&gt;&lt;p&gt;ಅವುಗಳನ್ನು ಟ್ರೇಲರ್ ಮೂಲಕ ತೋರಿಸುವ ಬದಲು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೇರವಾಗಿ ಅನುಭವಿಸಬೇಕು ಎಂಬುದು ನಮ್ಮ ಉದ್ದೇಶ,&rdquo; ಎಂದು ಸತೀಶ್ ಹೇಳಿದ್ದಾರೆ.ಮಹೇಶ್ ಕುಮಾರ್ ನಿರ್ದೇಶನದ &lsquo;ಅಯೋಗ್ಯ 2&rsquo; ಅನ್ನು ಮುನೇಗೌಡ ನಿರ್ಮಿಸುತ್ತಿದ್ದಾರೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಮೊದಲ ಭಾಗದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ಸೀಕ್ವೆಲ್ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಒಂದು ಮತದಿಂದ ಗೆದ್ದ ಸಿದ್ದೇಗೌಡನ ಮುಂದಿನ ಕಥೆ!&lt;/strong&gt;&lt;/p&gt;&lt;p&gt;ಮೊದಲ ಭಾಗದಲ್ಲಿ ಸಿದ್ದೇಗೌಡ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಗೆಲ್ಲುತ್ತಾನೆ. ಅಲ್ಲಿಂದಲೇ &lsquo;ಅಯೋಗ್ಯ 2&rsquo; ಕಥೆ ಆರಂಭವಾಗುತ್ತದೆ. &ldquo;ಸಿದ್ದೇಗೌಡ ಕೇವಲ ಒಂದು ಮತದಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅಲ್ಲಿಂದ ಸೀಕ್ವೆಲ್ ಶುರುವಾಗುತ್ತದೆ. ಜವಾಬ್ದಾರಿ ಸಿಕ್ಕ ಬಳಿಕ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ? ಹಳ್ಳಿಯನ್ನು ಹೇಗೆ ಕಾಪಾಡುತ್ತಾನೆ? ನಾಯಕತ್ವದ ಜೊತೆಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಎಂಬುದೇ ಚಿತ್ರದ ಮುಂದಿನ ಕಥೆ. ಮೊದಲ &lsquo;ಅಯೋಗ್ಯ&rsquo;ದಲ್ಲಿ ಪ್ರೇಕ್ಷಕರು ಇಷ್ಟಪಟ್ಟ ಹಾಸ್ಯ ಮತ್ತು ಮನರಂಜನೆಯನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಥೆ ಮಾತ್ರ ಮುಂದೆ ಸಾಗಿದೆ,&rdquo; ಎಂದು ಸತೀಶ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ ಸಿನಿಮಾ ಹಿಟ್ ಆಯ್ತು ಅಂತ ಸೀಕ್ವೆಲ್ ಮಾಡಿಲ್ಲ&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ನಂತರ ಸೀಕ್ವೆಲ್ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎನ್ನುವ ಸತೀಶ್, ಈ ಸಿನಿಮಾವನ್ನು ಕೇವಲ ಮೊದಲ ಭಾಗದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &ldquo;&lsquo;ಅಯೋಗ್ಯ&rsquo; ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಕನ್ನಡ ಪ್ರೇಕ್ಷಕರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಮಹೇಶ್ ಕುಮಾರ್ ಅವರು ಮಂಡ್ಯ ಭಾಗದ ಹಳ್ಳಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಮನರಂಜನೆಯ ಕಥೆ ಹೇಳಿದ್ದರು. ಈ ಬಾರಿ ಕೂಡ ಗ್ರಾಮೀಣ ವಾತಾವರಣವಿದೆ. ಆದರೆ ವಿಷಯದ ವ್ಯಾಪ್ತಿ ದೊಡ್ಡದಾಗಿದೆ. ಕರ್ನಾಟಕದ ಯಾವುದೇ ಹಳ್ಳಿಯ ಜನರಿಗೂ ಕನೆಕ್ಟ್ ಆಗುವಂತಹ ಕಥೆ ಇದು,&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಅಪ್&zwnj;ಗ್ರೇಡ್!&lt;/strong&gt;&lt;/p&gt;&lt;p&gt;ಮೊದಲ ಹಾಗೂ ಎರಡನೇ ಭಾಗದ ನಡುವಿನ ವರ್ಷಗಳು ಚಿತ್ರತಂಡಕ್ಕೂ ಸಾಕಷ್ಟು ಅನುಭವ ನೀಡಿವೆ ಎಂಬುದು ಸತೀಶ್ ಅಭಿಪ್ರಾಯ. &ldquo;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಒಂದು ಅಪ್&zwnj;ಗ್ರೇಡ್ ಆಗಿದೆ. ಬರವಣಿಗೆಯಿಂದ ಹಿಡಿದು ತಾಂತ್ರಿಕ ಗುಣಮಟ್ಟ, ಕಲಾವಿದರ ಅಭಿನಯ ಹಾಗೂ ಪಾತ್ರಗಳವರೆಗೆ ಎಲ್ಲದರಲ್ಲೂ ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನಾನೂ ಒಬ್ಬ ನಟನಾಗಿ ಬದಲಾಗಿದ್ದೇನೆ. ಈಗ ಪಾತ್ರದ ಅಟಿಟ್ಯೂಡ್, ಸ್ಟೈಲ್, ಬಾಡಿ ಲ್ಯಾಂಗ್ವೇಜ್&zwnj;ನಂತಹ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಗಮನ ಕೊಡುತ್ತೇನೆ. ಅದೇ ಸಮಯದಲ್ಲಿ ಸಿನಿಮಾದ ಕಮರ್ಷಿಯಲ್ ಫ್ಲೇವರ್ ಕೂಡ ಉಳಿಯುವಂತೆ ನೋಡಿಕೊಂಡಿದ್ದೇವೆ,&rdquo; ಎಂದು ಸತೀಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬಿಡುಗಡೆಗೂ ಮುನ್ನವೇ ಬಿಸಿನೆಸ್&zwnj;ಗೆ ಉತ್ತಮ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. &ldquo;ನಿರ್ಮಾಪಕರು ಸಿನಿಮಾದ ಬಗ್ಗೆ ಸಂತೋಷವಾಗಿದ್ದಾರೆ. ಡಿಸ್ಟ್ರಿಬ್ಯೂಷನ್, ಸ್ಯಾಟಲೈಟ್ ಹಾಗೂ ಆಡಿಯೋ ಬಿಸಿನೆಸ್&zwnj;ನಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಪ್ರೀತ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾವನ್ನು ವಿತರಿಸುತ್ತಿರುವುದಕ್ಕೂ ನನಗೆ ಖುಷಿಯಿದೆ,&rdquo; ಎಂದು ಸತೀಶ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo;ನಲ್ಲಿ ನಟಿಸಲು ರಚಿತಾಗೆ ಯಾವುದೇ ಗೊಂದಲವಿರಲಿಲ್ಲ!&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ಬಳಿಕ &lsquo;ಅಯೋಗ್ಯ 2&rsquo;ನಲ್ಲಿ ಮತ್ತೆ ನಟಿಸುವ ಅವಕಾಶ ಬಂದಾಗ ರಚಿತಾ ರಾಮ್ ಕೂಡ ಯಾವುದೇ ಯೋಚನೆ ಮಾಡಲಿಲ್ಲವಂತೆ. &ldquo;&lsquo;ಅಯೋಗ್ಯ&rsquo; ಮತ್ತು &lsquo;ಅಯೋಗ್ಯ 2&rsquo; ನಾನು ನಟಿಸಿರುವ ಸಿನಿಮಾಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಚಿತ್ರಗಳ ಸಾಲಿನಲ್ಲಿ ಬರುತ್ತವೆ. ನಮ್ಮ ನಿಜವಾದ ವಿಐಪಿಗಳಾದ ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಈಗ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುವ ಹಂತಕ್ಕೆ ನಾವು ಬಂದಿದ್ದೇವೆ. ಆದರೆ &lsquo;ಅಯೋಗ್ಯ 2&rsquo; ನೋಡಲು ಬರುವ ಪ್ರತಿಯೊಬ್ಬರೂ ಖುಷಿಯಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನನಗಿದೆ,&rdquo; ಎಂದು ರಚಿತಾ ರಾಮ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ದೊಡ್ಡ ತಾರಾಬಳಗದ ಸಾಥ್&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo;ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಳರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಕೊಟ್ಟಿದ್ದಕ್ಕೆ ಈ ಬಾರಿ ಪ್ರೇಕ್ಷಕರಿಗೆ ಏನಾದರೂ ಕೊಡಬೇಕು!&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾ ಸಿದ್ದೇಗೌಡನ ಪಾತ್ರದ ಮೂಲಕ ಸತೀಶ್ ನೀನಾಸಂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಹೀಗಾಗಿ ಸೀಕ್ವೆಲ್ ಬಗ್ಗೆ ಮಾತನಾಡುವಾಗಲೂ ನಟ ಆ ಸಿನಿಮಾದ ಯಶಸ್ಸಿನ ಹಿಂದಿರುವ ಪ್ರೇಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. &ldquo;&lsquo;ಅಯೋಗ್ಯ&rsquo; ಪ್ರೇಕ್ಷಕರು ನಮಗೆ ಕೊಟ್ಟ ಉಡುಗೊರೆ. ಈ ಬಾರಿ ನಾವು ಅವರಿಗೆ ಏನಾದರೂ ಮರಳಿ ಕೊಡಬೇಕು ಎಂಬ ಆಶಯವಿದೆ,&rdquo; ಎಂದು ಸತೀಶ್ ನೀನಾಸಂ ಹೇಳಿದ್ದಾರೆ.&lt;/p&gt;&lt;p&gt;ಹೀಗಾಗಿ ಟ್ರೇಲರ್ ಇಲ್ಲದೆ, ಹಾಡುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ &lsquo;ಅಯೋಗ್ಯ 2&rsquo;, ಮೊದಲ ಭಾಗದ ಸೊಗಡನ್ನು ಉಳಿಸಿಕೊಂಡೇ ಕಥೆ, ತಾಂತ್ರಿಕತೆ, ಪಾತ್ರಗಳು ಹಾಗೂ ಮನರಂಜನೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕಿದೆ. ಸತೀಶ್ ಮಾತಿನಂತೆ ಸಿನಿಮಾದಲ್ಲಿರುವ ಸರ್ಪ್ರೈಸ್&zwnj;ಗಳು ಪ್ರೇಕ್ಷಕರಿಗೆ ಥಿಯೇಟರ್&zwnj;ನಲ್ಲಿ ಯಾವ ರೀತಿಯ ಅನುಭವ ನೀಡಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8"/>
        </item>
        <item>
            <title><![CDATA['ನಾನು ಈಗಷ್ಟೇ ಶುರು ಮಾಡಿದ್ದೇನೆ': 10 ವರ್ಷಗಳ ಸಿನಿ ಜರ್ನಿ ಬಗ್ಗೆ ಆಶಿಕಾ ರಂಗನಾಥ್‌ ಮಾತು]]></title>
            <link>https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v</link>
            <guid isPermaLink="true">https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v</guid>
            <pubDate>Fri, 28 Aug 2026 20:01:24 +0530</pubDate>
            <description><![CDATA[&lt;p&gt;ಚಿತ್ರರಂಗದಲ್ಲಿ 10 ವರ್ಷ ಪೂರೈಸಿರುವ ಆಶಿಕಾ ರಂಗನಾಥ್&zwnj;, ತಮ್ಮ ಸಿನಿ ಜರ್ನಿ, ಸಿನಿಮಾ ಆಯ್ಕೆ, ವರ್ಕ್&zwnj;-ಲೈಫ್&zwnj; ಬ್ಯಾಲೆನ್ಸ್&zwnj; ಮತ್ತು ಹೊಸ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj; ಇಮೇಜ್&zwnj;ನಿಂದ ಹೊರಬಂದು ಆ್ಯಕ್ಷನ್&zwnj;, ಪೀರಿಯಡ್&zwnj; ಡ್ರಾಮಾ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14cfpxjymakv1x4t69hvfhx,imgname-bjb-1787927452594.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗದಲ್ಲಿ ಒಂದು ದಶಕ ಪೂರೈಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಪ್ರತಿ ಕ್ಷಣವೂ ಬದಲಾಗುವ ಸಿನಿಮಾ ಜಗತ್ತಿನಲ್ಲಿ ಹತ್ತು ವರ್ಷಗಳ ಕಾಲ ತನ್ನದೇ ಆದ ಛಾಪು ಮೂಡಿಸಿಕೊಂಡು ಸಾಗಿರುವುದು ದೊಡ್ಡ ಸಾಧನೆಯೇ ಸರಿ. ಆದರೆ ನಟಿ ಆಶಿಕಾ ರಂಗನಾಥ್&zwnj; ಪಾಲಿಗೆ ಈ ಪ್ರಯಾಣ ಯಾವುದೇ ಪೂರ್ವನಿರ್ಧರಿತ ಪ್ಲ್ಯಾನ್&zwnj;ನಂತೆ ಇರಲಿಲ್ಲ. ಒಂದೊಂದು ಸಿನಿಮಾ, ಒಂದೊಂದು ಅನುಭವದ ಮೂಲಕ ಅವರ ಸಿನಿ ಜರ್ನಿ ರೂಪುಗೊಂಡಿದೆ.&lt;/p&gt;&lt;p&gt;ಕನ್ನಡದ ಜೊತೆಗೆ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲೂ ಕೆಲಸ ಮಾಡಿರುವ ಆಶಿಕಾ, ತಮ್ಮ ಹತ್ತು ವರ್ಷಗಳ ಪಯಣದ ಕುರಿತು ಮಾತನಾಡಿದ್ದಾರೆ. ಸ್ಪರ್ಧೆ ಹೆಚ್ಚಾಗಿರುವ ಇಂದಿನ ಚಿತ್ರರಂಗದಲ್ಲಿ ಒಂದು ಪಾತ್ರ ಅಥವಾ ನಟನೆಯೇ ರಾತ್ರೋರಾತ್ರಿ ವೈರಲ್ ಆಗಬಹುದು. ಅಷ್ಟೇ ವೇಗದಲ್ಲಿ ಜನರ ಗಮನದಿಂದ ಮರೆಯಾಗಲೂಬಹುದು. ಇಂತಹ ಪರಿಸ್ಥಿತಿಯಲ್ಲೂ ಇಷ್ಟು ವರ್ಷಗಳ ಕಾಲ ಉಳಿದುಕೊಂಡು, ತಮ್ಮ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾಯುವಂತಾಗಿರುವುದು ಖುಷಿ ನೀಡುತ್ತದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಹತ್ತು ವರ್ಷ ಕಳೆದರೂ ಇನ್ನೂ ಸಾಕಷ್ಟು ಕಲಿಯಬೇಕಿದೆ&rsquo;&lt;/strong&gt;&lt;/p&gt;&lt;p&gt;ತಮ್ಮ ವೃತ್ತಿಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡ ಆಶಿಕಾ, ಆಗ ತಾವು ತುಂಬಾ ನಾಚಿಕೆ ಸ್ವಭಾವದವರಾಗಿದ್ದೆ ಎಂದು ಹೇಳಿದ್ದಾರೆ. ಆದರೆ ಬೇರೆ ಬೇರೆ ಭಾಷೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ತಮ್ಮನ್ನು ಕಂಫರ್ಟ್&zwnj; ಝೋನ್&zwnj;ನಿಂದ ಹೊರಗೆ ತಂದು ವ್ಯಕ್ತಿಯಾಗಿ ಸಾಕಷ್ಟು ಬದಲಾಯಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಒಂದು ಕಾಲದಲ್ಲಿ ತುಂಬಾ ಶೈ ಆಗಿದ್ದ ತಾವು, ಇಂದು ವೇದಿಕೆ ಮೇಲೆ ನಿಂತು ಸಾಕಷ್ಟು ಜನರ ಮುಂದೆ ಮಾತನಾಡುವುದು, ಬೇರೆ ಭಾಷೆಯಲ್ಲಿ ಸಂವಹನ ನಡೆಸುವುದು ಹಾಗೂ ಪ್ರತಿದಿನ ವಿಭಿನ್ನ ಜನರನ್ನು ಭೇಟಿ ಮಾಡುವುದು ಸಾಧ್ಯವಾಗಿದೆ. ಈ ಪಯಣ ತಮ್ಮ ವ್ಯಕ್ತಿತ್ವವನ್ನೇ ಸಾಕಷ್ಟು ಬದಲಿಸಿದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಪ್ರತಿ ಸಿನಿಮಾಗೂ ಒಂದೊಂದು ಅನುಭವ.. ಯಾವುದೇ ಫಾರ್ಮುಲಾ ಇಲ್ಲ&rsquo;&lt;/strong&gt;&lt;/p&gt;&lt;p&gt;ಹತ್ತು ವರ್ಷಗಳ ಅನುಭವದ ಬಳಿಕ ಇದೀಗ ಸಿನಿಮಾ ಆಯ್ಕೆ ಮಾಡುವ ವಿಚಾರದಲ್ಲಿ ಹೆಚ್ಚು ಚ್ಯೂಸಿಯಾಗಿರುವ ಆಶಿಕಾ, ಚಿತ್ರಗಳನ್ನು ಆಯ್ಕೆ ಮಾಡಲು ಯಾವುದೇ ನಿರ್ದಿಷ್ಟ ಫಾರ್ಮುಲಾ ಇಲ್ಲ ಎಂದು ಹೇಳಿದ್ದಾರೆ. ಒಂದು ಸಿನಿಮಾದ ಕಥೆ ಕೇಳುವಾಗ ಅಥವಾ ನಿರ್ದೇಶಕರನ್ನು ಭೇಟಿಯಾದಾಗ ಆ ಪ್ರಾಜೆಕ್ಟ್&zwnj; ಬಗ್ಗೆ ಎಕ್ಸೈಟ್&zwnj;ಮೆಂಟ್&zwnj; ಮೂಡಿದರೆ, ಅಂತಹ ಸಿನಿಮಾದ ಭಾಗವಾಗಬೇಕು ಎಂಬ ಆಸಕ್ತಿ ತಮಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಅದರ ಜೊತೆಗೆ ಸಿನಿಮಾ ಅವಕಾಶಗಳಲ್ಲಿ ಟೈಮಿಂಗ್ ಮತ್ತು ಅದೃಷ್ಟ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ಅಭಿಪ್ರಾಯವನ್ನು ಆಶಿಕಾ ವ್ಯಕ್ತಪಡಿಸಿದ್ದಾರೆ. ನೂರು ಸಿನಿಮಾಗಳಿದ್ದರೆ ಎಲ್ಲವೂ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಬಹುಶಃ 20 ಸಿನಿಮಾಗಳು ಮಾತ್ರ ನಮ್ಮ ಬಳಿ ಬರಬಹುದು. ಆ 20ರಲ್ಲಿ ನಮಗೆ ಅತ್ಯುತ್ತಮವಾದುದನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸಿನಿಮಾ ಹೊರಗಿನ ನನ್ನ ಜೀವನವೇ ನನ್ನನ್ನು ಗ್ರೌಂಡ್&zwnj; ಆಗಿರಿಸಿದೆ&rsquo;&lt;/strong&gt;&lt;/p&gt;&lt;p&gt;ಚಿತ್ರರಂಗದ ಒತ್ತಡಗಳ ನಡುವೆ ತಮ್ಮನ್ನು ತಾವು ಸಮತೋಲನದಲ್ಲಿಟ್ಟುಕೊಳ್ಳಲು ಕುಟುಂಬ ಹಾಗೂ ಸ್ನೇಹಿತರ ಜೊತೆಗಿನ ಸಮಯ ಬಹಳ ಮುಖ್ಯವಾಗಿದೆ ಎಂದು ಆಶಿಕಾ ಹೇಳಿದ್ದಾರೆ. ಚಿತ್ರರಂಗದ ಹೊರಗೂ ತಮ್ಮದೇ ಆದ ಜೀವನ ಇರಬೇಕು ಎಂಬುದು ತಮ್ಮ ನಿಲುವು. ಕೆಲಸಕ್ಕೆ ಹೋಗಿ ವಾಪಸ್ ಬಂದ ನಂತರ ಆ ಸಮಯವನ್ನು ತಮ್ಮ ಜೀವನಕ್ಕಾಗಿ ಮೀಸಲಿಡಲು ಇಷ್ಟಪಡುತ್ತೇನೆ. ಈ ವರ್ಕ್-ಲೈಫ್ ಬ್ಯಾಲೆನ್ಸ್&zwnj; ಯಾವಾಗಲೂ ತಮ್ಮನ್ನು ನೆಲದ ಮೇಲೆಯೇ ಇರುವಂತೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಮಹಿಳಾ ಕೇಂದ್ರಿತ ಸಿನಿಮಾಗಳತ್ತ ಚಿತ್ರರಂಗ ಸಾಗುತ್ತಿದೆ&rsquo;&lt;/strong&gt;&lt;/p&gt;&lt;p&gt;ಸಿನಿಮಾಗಳಲ್ಲಿ ಮಹಿಳೆಯರ ಪಾತ್ರ ಮತ್ತು ಪ್ರಾತಿನಿಧ್ಯದ ಕುರಿತು ಮಾತನಾಡಿದ ಆಶಿಕಾ, ಕಲಾವಿದರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಒಂದು ದೃಶ್ಯ, ಪಾತ್ರ ಅಥವಾ ಡೈಲಾಗ್&zwnj; ತಮ್ಮ ವೈಯಕ್ತಿಕ ಆಲೋಚನೆಗಳಿಗೆ ಅಥವಾ ಪಾತ್ರದ ಕುರಿತ ತಮ್ಮ ದೃಷ್ಟಿಕೋನಕ್ಕೆ ಹೊಂದಿಕೆಯಾಗದಿದ್ದರೆ, ಅದನ್ನು ಮಾಡಲು ಇಷ್ಟವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಹಕ್ಕು ಪ್ರತಿಯೊಬ್ಬ ಕಲಾವಿದರಿಗೂ ಇದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಪಾತ್ರಗಳು ಮತ್ತು ದೃಶ್ಯಗಳಲ್ಲಿ ಬದಲಾವಣೆಗಳು ಆಗಬಹುದು. ಆದರೂ ಒಟ್ಟಾರೆಯಾಗಿ ಚಿತ್ರರಂಗ ಹೆಚ್ಚು ಆಲೋಚನಾಶೀಲವಾದ ಪ್ರಾತಿನಿಧ್ಯದತ್ತ ಸಾಗುತ್ತಿದೆ. ಅದರಲ್ಲೂ ಮಹಿಳಾ ಪ್ರಧಾನ ಕಮರ್ಷಿಯಲ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಆಶಿಕಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj; ಇಮೇಜ್&zwnj;ನಿಂದ ಹೊರಬರಬೇಕು&rsquo;&lt;/strong&gt;&lt;/h2&gt;&lt;p&gt;ಹತ್ತು ವರ್ಷಗಳ ಸಿನಿ ಪಯಣದ ಬಳಿಕವೂ ತಮ್ಮೊಳಗಿನ ನಟಿಯನ್ನು ಸಂಪೂರ್ಣವಾಗಿ ಅನ್ವೇಷಿಸಿಲ್ಲ ಎಂಬ ಭಾವನೆ ಆಶಿಕಾ ಅವರಲ್ಲಿದೆ. ಒಂದು ಪಾತ್ರದ ಕ್ಯಾರೆಕ್ಟರೈಸೇಶನ್&zwnj;ನಲ್ಲಿ ತಾವು ಬಹುಶಃ ಶೇ.10ರಿಂದ 20ರಷ್ಟನ್ನಷ್ಟೇ ಅನ್ವೇಷಿಸಿದ್ದೇನೆ. ಅದನ್ನು ತಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಬೇಕು. ಅಂತಹ ವಿಭಿನ್ನ ಪಾತ್ರಗಳು ತಮ್ಮಿಗಾಗಿ ಬರೆಯಲ್ಪಡಲಿ ಎಂಬ ಆಶಯವಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮುಂದೆ ಕೇವಲ ಪರಿಚಿತವಾಗಿರುವ &lsquo;ಗಲ್&zwnj;-ನೆಕ್ಸ್ಟ್&zwnj;-ಡೋರ್&zwnj;&rsquo; ರೀತಿಯ ಪಾತ್ರಗಳಿಗೆ ಸೀಮಿತವಾಗದೆ, ಆ್ಯಕ್ಷನ್&zwnj;, ಪೀರಿಯಡ್&zwnj; ಡ್ರಾಮಾ ಹಾಗೂ ಮಹಿಳೆಯರೇ ಕೇಂದ್ರದಲ್ಲಿರುವ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎಂದು ಆಶಿಕಾ ಹೇಳಿದ್ದಾರೆ.&lt;/p&gt;&lt;p&gt;&lsquo;ನಾನು ಈಗಷ್ಟೇ ಶುರು ಮಾಡಿದ್ದೇನೆ ಅನಿಸುತ್ತಿದೆ. ಇನ್ನೂ ಸಾಕಷ್ಟು ನನ್ನಿಂದ ಅನ್ವೇಷಿಸಬೇಕಿದೆ&rsquo; ಎಂಬ ಆಶಿಕಾ ರಂಗನಾಥ್&zwnj; ಅವರ ಮಾತುಗಳು, ಹತ್ತು ವರ್ಷಗಳ ಅನುಭವದ ನಂತರವೂ ಅವರಲ್ಲಿರುವ ಕಲಿಯುವ ಹಂಬಲ ಮತ್ತು ಹೊಸ ಪಾತ್ರಗಳ ಹುಡುಕಾಟವನ್ನು ಸ್ಪಷ್ಟವಾಗಿ ತೋರಿಸುತ್ತವೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kannada-actress-ashika-ranganath-completes-10-years-in-cinema-eyes-more-challenging-roles-gvd/articleshow-qmveu8v"/>
        </item>
        <item>
            <title><![CDATA[Exclusive: ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್‌ ಇಷ್ಟ ಆಗಿದೆ: ಪ್ರಿಯಾಂಕ ಉಪೇಂದ್ರ ಸಂದರ್ಶನ]]></title>
            <link>https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7</link>
            <guid isPermaLink="true">https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7</guid>
            <pubDate>Thu, 06 Aug 2026 22:13:59 +0530</pubDate>
            <description><![CDATA[&lt;p&gt;&lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ ಎಂದು ಸಂದರ್ಶನದಲ್ಲಿ ಪ್ರಿಯಾಂಕ ಉಪೇಂದ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbza65wzh19c5zq43tg47fw,imgname-jb-1786034591932.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಮತ್ತೊಮ್ಮೆ ನಾಯಕಿ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಇದು ಪತ್ತೇದಾರಿ ಜಾನರ್&zwnj; ಸಿನಿಮಾ. ನನಗೆ ತುಂಬಾ ಥ್ರಿಲ್&zwnj; ಕೊಟ್ಟಿರುವ ಹೊಸ ರೀತಿ ಎನಿಸಿರುವ ಸಿನಿಮಾ. ಈ ರೀತಿಯ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಯಾಗುತ್ತದೆ.&lt;/p&gt;&lt;p&gt;&lt;strong&gt;* ಈ ರೀತಿಯ ಸಿನಿಮಾಗಳನ್ನು ಈಗ ನೋಡುತ್ತಾರೆಯೇ?&lt;/strong&gt;&lt;/p&gt;&lt;p&gt;ಖಂಡಿತ ನೋಡುತ್ತಾರೆ. ಪತ್ತೆದಾರಿ ಕತೆಗಳೇ ರೋಚಕವಾಗಿರುತ್ತವೆ. ಅಂಥಾ ಕತೆಗಳು ತೆರೆ ಮೇಲೆ ಬಂದರೆ ನೋಡದಿರಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಸಿನಿಮಾ.&lt;/p&gt;&lt;p&gt;&lt;strong&gt;* ಯಾವ ರೀತಿ ಈ ಚಿತ್ರವನ್ನು ರೂಪಿಸಲಾಗಿದೆ?&lt;/strong&gt;&lt;/p&gt;&lt;p&gt;ಆ್ಯಕ್ಷನ್&zwnj; ಹಾಗೂ ಪತ್ತೆದಾರಿಕೆ ಎರಡೂ ಅಂಶಗಳನ್ನು ಒಳಗೊಂಡ ಸಿನಿಮಾ. ಮೊದಲ ಭಾಗದ ಕತೆ ನನ್ನ ಪಾತ್ರದ ಮೇಲೆ ಸಾಗಿದರೆ, ದ್ವಿಯಾರ್ಧ ಕತೆ ಆ್ಯಕ್ಷನ್&zwnj; ಮೇಲೆ ಸಾಗುತ್ತದೆ.&lt;/p&gt;&lt;p&gt;&lt;strong&gt;* ನಿಮಗೆ ಈ ಕತೆ ಇಷ್ಟ ಆಗಲು ಕಾರಣ ಏನು?&lt;/strong&gt;&lt;/p&gt;&lt;p&gt;ಇದು ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಅಲ್ಲದೆ ಡಿಟೆಕ್ಟಿವ್&zwnj; ಜಾನರ್&zwnj; ಸಿನಿಮಾಗಳು ಕೂಡ ಕನ್ನಡದಲ್ಲಿ ಅಪರೂಪ. ಈ ಕಾರಣಗಳಿಗೆ ನನಗೆ &lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ಇಷ್ಟ ಮತ್ತು ವಿಶೇಷವಾದ ಸಿನಿಮಾ ಆಗಿದೆ.&lt;/p&gt;&lt;p&gt;&lt;strong&gt;* ಈ ಚಿತ್ರವನ್ನು ಉಪೇಂದ್ರ ಅವರು ನೋಡಿದ್ದಾರೆಯೇ?&lt;/strong&gt;&lt;/p&gt;&lt;p&gt;ನೋಡಿ ಮೆಚ್ಚಿಕೊಂಡಿದ್ದಾರೆ. ಅವರಿಗೆ ಚಿತ್ರದಲ್ಲಿ ನಾನು ಮಾಡಿರುವ ಆ್ಯಕ್ಷನ್&zwnj; ಸನ್ನಿವೇಶಗಳು ತುಂಬಾ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;* ನಿಮಗೆ ಈ ಚಿತ್ರದಲ್ಲಿ ಸವಾಲು ಎನಿಸಿದ್ದೇನು? ಕತೆಯ ಸಾಲು ಏನು?&lt;/strong&gt;&lt;/p&gt;&lt;p&gt;ನಮ್ಮ ನಿರ್ದೇಶಕ ರಘು ತುಂಬಾ ತಯಾರಿ ಮಾಡಿಕೊಂಡು ಈ ಚಿತ್ರ ಮಾಡಿದ್ದರಿಂದ ನನಗೆ ಶೂಟಿಂಗ್&zwnj;ನಲ್ಲಿ ಯಾವುದೇ ಸವಾಲು ಎದುರಾಗಲಿಲ್ಲ. ವಿದ್ಯಾವಂತೆ ಅಲ್ಲದ ಹೆಣ್ಣೊಬ್ಬಳು ಡಿಟೆಕ್ಟಿವ್&zwnj; ಆದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ.&lt;/p&gt;&lt;p&gt;&lt;strong&gt;* ನಿಮಗೆ ನಾಯಕಿ ಪ್ರಧಾನ ಸಿನಿಮಾಗಳೇ ಹೆಚ್ಚು ಬರುತ್ತಿವೆಯಲ್ಲ?&lt;/strong&gt;&lt;/p&gt;&lt;p&gt;ಅದಕ್ಕೆ ನಿರ್ದೇಶಕರಿಗೆ ಥಾಂಕ್ಸ್&zwnj; ಹೇಳಬೇಕು. &lsquo;ಮಮ್ಮಿ&rsquo;, &lsquo;ಸೆಕೆಂಡ್&zwnj; ಹಾಫ್&zwnj;&rsquo;, &lsquo;ದೇವಕಿ&rsquo;, &lsquo;ಉಗ್ರಾವತಾರ&rsquo;. ಈಗ &lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ಹೀಗೆ ಎಲ್ಲವೂ ಮಹಿಳಾ ಪಾತ್ರದ ಸುತ್ತನೇ ಇರೋ ಸಿನಿಮಾಗಳಾದರೂ ಕತೆಗಳು ಬೇರೆ ಬೇರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7"/>
        </item>
        <item>
            <title><![CDATA[ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾ ಕನಸಿನ ಹಿಂದೆ ಓಡಿದ ತಾರುಷ್: 'ಜಾಲಿ' ಮೂಲಕ ಹೊಸ ಹೆಜ್ಜೆ]]></title>
            <link>https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy</link>
            <guid isPermaLink="true">https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy</guid>
            <pubDate>Fri, 31 Jul 2026 19:48:40 +0530</pubDate>
            <description><![CDATA[&lt;p&gt;Jolly Kannada Movie: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyw8mg5xk99ns7s3qm2jgn10,imgname-ch-1785507496125.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು. ಇದೇ ವಿಚಾರವನ್ನು 'ಜಾಲಿ' ಚಿತ್ರದ ಮೂಲಕ ನಿರ್ದೇಶಕರಾಗಿ ಹಾಗೂ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ತಾರುಷ್&zwnj; ಹಂಚಿಕೊಂಡಿದ್ದಾರೆ. ಇತ್ತೀಚೆಗೆ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಅವರು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿರುವ ತಾರುಷ್&zwnj;, ಸಿನಿಮಾ ಮಾಡುವುದು ಒಂದು ಸವಾಲಾದರೆ, ಅದನ್ನು ಚಿತ್ರಮಂದಿರಕ್ಕೆ ತಲುಪಿಸುವುದು ಮತ್ತೊಂದು ದೊಡ್ಡ ಹೋರಾಟ ಎಂದು ಹೇಳಿದ್ದಾರೆ.&lt;/p&gt;&lt;p&gt;ಜುಲೈ 31ರಂದು ಬಿಡುಗಡೆಯಾಗುತ್ತಿರುವ 'ಜಾಲಿ' ಚಿತ್ರದ ಮೂಲಕ ತಾರುಷ್&zwnj; ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಅವರು ಸಿನಿಮಾದ ನಾಯಕನಾಗಿರುವುದರ ಜೊತೆಗೆ ಕಥೆ ಬರೆದಿದ್ದಾರೆ, ಸಂಕಲನ ಮಾಡಿದ್ದಾರೆ ಹಾಗೂ ಹಾಡಿನ ಸಾಹಿತ್ಯವನ್ನೂ ರಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ತಾರುಷ್&zwnj;, &quot;ಈ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಪರಿಸ್ಥಿತಿ ಹಾಗೆ ಮಾಡಿಸಿತು. ಈ ಹಿಂದೆ ನಾನು ಭಾಗಿಯಾಗಿದ್ದ ಕೆಲವು ಸಿನಿಮಾಗಳು ಬಿಡುಗಡೆಯಾಗಲೇ ಇಲ್ಲ. ಆ ಅನುಭವದಿಂದಲೇ 'ಜಾಲಿ' ಹುಟ್ಟಿತು. ಸಿನಿಮಾ ಮಾಡುವುದು ಒಂದು ಯುದ್ಧವಾಗಿದ್ದರೆ, ಅದನ್ನು ಥಿಯೇಟರ್&zwnj;ಗೆ ತರುವುದು ಮತ್ತೊಂದು ಯುದ್ಧ. ಈಗ ಆ ಹಂತವನ್ನು ದಾಟಿದ್ದೇವೆ. ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರದ್ದು,&quot; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಸಂಬಂಧಗಳ ಕಥೆ ಹೇಳುವ 'ಜಾಲಿ'&lt;/strong&gt;&lt;/p&gt;&lt;p&gt;ತಾರುಷ್&zwnj; ನಿರ್ದೇಶನದ 'ಜಾಲಿ' ಚಿತ್ರವನ್ನು ಟಿಬಿವೈ ಕ್ರಿಯೇಷನ್ಸ್ ಮತ್ತು ಶ್ರೀ ಅಧಿಶಿವ ಕ್ರಿಯೇಷನ್ಸ್ ಬ್ಯಾನರ್&zwnj;ನಲ್ಲಿ ಬ್ರಿಜ್ ಯಾದವ್ ಹಾಗೂ ನಾಗವೇಣಿ ಎನ್ ನಿರ್ಮಿಸಿದ್ದಾರೆ. ಪ್ರೀತಿ, ಕಾಮಿಡಿ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಸಂಬಂಧಗಳ ಕುರಿತಾದ ಕಥೆಯನ್ನು ಹೊಂದಿದೆ. ಚಿತ್ರದ ಬಗ್ಗೆ ಮಾತನಾಡಿದ ತಾರುಷ್&zwnj;, &quot;ಇಂದಿನ ದಿನಗಳಲ್ಲಿ ಸಣ್ಣ ತಪ್ಪು ತಿಳುವಳಿಕೆಯೇ ಸಂಬಂಧಗಳಲ್ಲಿ ದೂರವನ್ನು ಸೃಷ್ಟಿಸುತ್ತದೆ. ಸ್ನೇಹಿತರಾಗಲಿ, ಕುಟುಂಬವಾಗಲಿ, ಪ್ರೀತಿಯ ಸಂಬಂಧವಾಗಲಿ-ತಾಳ್ಮೆ ಕಳೆದುಕೊಂಡಾಗ ನಾವು ನಮ್ಮವರನ್ನೇ ಕಳೆದುಕೊಳ್ಳುತ್ತೇವೆ. 'ಜಾಲಿ' ಕಥೆಯ ಮೂಲ ಇದೇ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ರಂಗಭೂಮಿಯೇ ನನ್ನ ಮೊದಲ ಪಾಠಶಾಲೆ&lt;/strong&gt;&lt;/p&gt;&lt;p&gt;ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ತಾರುಷ್&zwnj;, ರಂಗಭೂಮಿ ತಮ್ಮ ಜೀವನದ ದೊಡ್ಡ ಪ್ರಭಾವ ಎಂದು ಹೇಳಿದ್ದಾರೆ. &quot;ರಂಗಭೂಮಿಯೇ ನನ್ನ ಅಡಿಪಾಯ. ಅದು ಶಿಸ್ತು ಕಲಿಸುತ್ತದೆ. ಇರುವುದರಲ್ಲೇ ಉತ್ತಮ ಪ್ರದರ್ಶನ ನೀಡುವುದನ್ನು ಕಲಿಸುತ್ತದೆ. 'ಕಸದಿಂದ ರಸ' ಎಂಬುದೇ ರಂಗಭೂಮಿಯ ಶಕ್ತಿ. ಆದರೆ ರಂಗಭೂಮಿ ಮಾತ್ರ ಭವಿಷ್ಯ ಕಟ್ಟಲು ಸಾಕಾಗುವುದಿಲ್ಲ,&quot; ಎಂದಿದ್ದಾರೆ.&lt;/p&gt;&lt;p&gt;ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ತಾರುಷ್&zwnj;, ಡಾ.ರಾಜ್&zwnj;ಕುಮಾರ್ ಅವರ ಸಿನಿಮಾಗಳನ್ನು ನೋಡಿ ಅವರ ದೃಶ್ಯಗಳನ್ನು ಅನುಕರಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ. &quot;ನಂತರ ಒಂದು ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಹಾಡಿಗೆ ಪ್ರದರ್ಶನ ನೀಡಿದ್ದೆ. ಆಗ ಸಿಕ್ಕ ಶಿಳ್ಳೆ, ಚಪ್ಪಾಳೆಗಳು ನನ್ನ ಮನಸ್ಸಿನಲ್ಲಿ ಉಳಿದುಕೊಂಡವು. ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ?&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾದತ್ತ ಹೆಜ್ಜೆ&lt;/strong&gt;&lt;/p&gt;&lt;p&gt;ಸಿನಿಮಾಗೆ ಬರುವ ಮುನ್ನ ತಾರುಷ್&zwnj; ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮನಸ್ಸು ಮಾತ್ರ ಯಾವಾಗಲೂ ಸಿನಿಮಾದಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ. &quot;ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ನನ್ನ ಮನಸ್ಸು ಕಥೆ ಬರೆಯುತ್ತಿತ್ತು. ಸಿನಿಮಾ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನನ್ನ ಕೆಲಸದ ಸಂಸ್ಥೆಗೆ ನ್ಯಾಯ ಮಾಡುತ್ತಿಲ್ಲ ಎಂಬ ಭಾವನೆ ಬಂತು. ಆಗ ಕೆಲಸ ಬಿಟ್ಟು ನಿರ್ದೇಶಕನಾಗುವ ಕನಸಿನ ಹಿಂದೆ ಹೋಗಲು ನಿರ್ಧರಿಸಿದೆ,&quot; ಎಂದಿದ್ದಾರೆ. ತಮ್ಮ ಕನಸಿಗೆ ತಾಯಿ ನೀಡಿದ ಬೆಂಬಲವೇ ದೊಡ್ಡ ಶಕ್ತಿ ಎಂದು ಹೇಳಿರುವ ತಾರುಷ್&zwnj;, ತಂದೆಯನ್ನು ಒಪ್ಪಿಸುವಲ್ಲಿಯೂ ತಾಯಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೊಸಬರ ಸಿನಿಮಾಗಳಿಗೂ ಅವಕಾಶ ನೀಡಿ&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ತಾರುಷ್&zwnj;, ಪ್ರೇಕ್ಷಕರಲ್ಲಿ ವಿಶ್ವಾಸ ಮೂಡಿಸುವ ಮನವಿ ಮಾಡಿದ್ದಾರೆ. &quot;ಮನೆಯಲ್ಲೇ ಪೂಜಾ ಕೋಣೆ ಇದ್ದರೂ ಜನ ದೇವಸ್ಥಾನಕ್ಕೆ ಹೋಗುತ್ತಾರೆ. ಅದೇ ರೀತಿ ಮನೆಯಲ್ಲೇ ಸಿನಿಮಾ ನೋಡಬಹುದಾದರೂ ಥಿಯೇಟರ್ ಅನುಭವಕ್ಕಾಗಿ ಜನ ಬರುತ್ತಾರೆ. ಒಂದು-ಎರಡು ಸಿನಿಮಾಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂದು ಚಿತ್ರಮಂದಿರಗಳ ಮೇಲಿನ ನಂಬಿಕೆ ಕಳೆದುಕೊಳ್ಳಬೇಡಿ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;'ಜಾಲಿ' ಚಿತ್ರದ ಮುಖ್ಯ ಉದ್ದೇಶ ಮನರಂಜನೆ ನೀಡುವುದು ಎಂದು ಹೇಳಿರುವ ತಾರುಷ್&zwnj;, &quot;ನಾವು ಪ್ರೇಕ್ಷಕರಿಗೆ ಯಾವುದೇ ಸಂದೇಶ ಬೋಧಿಸಲು ಬಂದಿಲ್ಲ. ಪ್ರೀತಿ, ಸಂಬಂಧ ಮತ್ತು ಭಾವನೆಗಳ ಮೂಲಕ ಸಾಗುವ ಮನರಂಜನಾತ್ಮಕ ಕಥೆ ಇದು,&quot; ಎಂದಿದ್ದಾರೆ. ಚಿತ್ರದಲ್ಲಿ ಡಾ. ಪುನೀತ್ ರಾಜ್&zwnj;ಕುಮಾರ್ ಅವರ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಗೌರವ ಸಲ್ಲಿಸುವ ಅಂಶವೂ ಇದೆ ಎಂದು ತಾರುಷ್&zwnj; ತಿಳಿಸಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕರಿಗೆ ಮನವಿ ಮಾಡಿರುವ ಅವರು, &quot;ಕೆಜಿಎಫ್, ಕಾಂತಾರ, ಸಪ್ತ ಸಾಗರದಾಚೆ ಎಲ್ಲೋ ರೀತಿಯ ಸಿನಿಮಾಗಳನ್ನು ಬೆಂಬಲಿಸಿದವರು ಹೊಸಬರ ಪ್ರಯತ್ನಗಳಿಗೂ ಅವಕಾಶ ನೀಡಿ. ಪ್ರತಿಯೊಬ್ಬ ನಿರ್ದೇಶಕನೂ ಎಲ್ಲೋ ಒಂದು ಕಡೆ ಆರಂಭಿಸುತ್ತಾನೆ. ಮೊದಲು ನಮ್ಮ ಸಿನಿಮಾ ನೋಡಿ, ನಂತರ ನಿಮ್ಮ ತೀರ್ಪು ನೀಡಿ,&quot; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy"/>
        </item>
        <item>
            <title><![CDATA[ಸ್ಟಾರ್‌ಡಮ್‌, ಟಾಕ್ಸಿಕ್‌, ರಾವಣನ ಪಾತ್ರ... ರಾಕಿಂಗ್ ಸ್ಟಾರ್ ಯಶ್‌ ಬಿಚ್ಚಿಟ್ಟ ಸೀಕ್ರೆಟ್‌ಗಳು!]]></title>
            <link>https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</link>
            <guid isPermaLink="true">https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9</guid>
            <pubDate>Mon, 17 Aug 2026 16:05:20 +0530</pubDate>
            <description><![CDATA[&lt;p&gt;Rocking Star Yash: ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m07k2fkh608y2gmj6dgqmdmz,imgname-vhjv-1786961280624.png" type="image/jpeg" height="390" width="690"/>
            <content:encoded><![CDATA[&lt;p&gt;ಖಾಸಗಿ ವಾಹಿನಿ ಇಂಡಿಯಾ ಟಿವಿಯಲ್ಲಿ ರಜತ್ ಶರ್ಮಾ ನಡೆಸಿಕೊಡುವ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿ ರಾಕಿಂಗ್&zwnj; ಸ್ಟಾರ್&zwnj; ಯಶ್ ಭಾಗವಹಿಸಿದ್ದಾರೆ. ದೇಶದ ಅತ್ಯಂತ ಪ್ರಸಿದ್ಧ ಈ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಯಶ್&zwnj; ಆಗಿದ್ದಾರೆ. ಹಿಂದಿ ಭಾಷೆಯಲ್ಲಿ ನಡೆದ ಅವರ ಕುತೂಹಲಕರ ಸಂದರ್ಶನದ ಆಯ್ದಭಾಗ ಇಲ್ಲಿದೆ.&lt;/p&gt;&lt;p&gt;&lt;strong&gt;* ಯಶ್ ತುಂಬಾ ಮೊಂಡು ಎಂಬ ಆರೋಪವಿದೆ. ನೀವು ಯಾರ ಮಾತನ್ನೂ ಕೇಳದೆ ನಿಮ್ಮಿಷ್ಟದಂತೆ ಇರುತ್ತೀರಾ?&lt;/strong&gt;&lt;/p&gt;&lt;p&gt;ಇದರಲ್ಲಿ ತಪ್ಪೇನಿದೆ ಸರ್? ಇರುವುದು ಒಂದೇ ಜೀವನ. ನಾವು ಏನಾಗಬೇಕೆಂದು ಬಯಸುತ್ತೇವೆಯೋ, ಏನನ್ನು ಸಾಧಿಸಬೇಕೋ ಅದನ್ನು ಮಾಡಬೇಕು. ಅದನ್ನು ಮೊಂಡುತನ ಎನ್ನುವುದಾದರೆ ಪ್ರತಿಯೊಬ್ಬರೂ ಒಳ್ಳೆಯ ವಿಷಯಗಳಿಗೆ ಮೊಂಡುತನ ಹೊಂದಿರಬೇಕು.&lt;/p&gt;&lt;p&gt;&lt;strong&gt;* ಬಾಲ್ಯದಲ್ಲಿ ನೀವು ಮೊಂಡುತನ ಮಾಡಿದಾಗ ತಂದೆಯಿಂದ ಏಟು ಬೀಳುತ್ತಿತ್ತಂತೆ?&lt;/strong&gt;&lt;/p&gt;&lt;p&gt;ಹೌದು, ತುಂಬಾ ಹೊಡೆಯುತ್ತಿದ್ದರು. ನಾನು ಬಾಲ್ಯದಲ್ಲಿ ಅಷ್ಟು ಚೇಷ್ಟೆ ಮಾಡುತ್ತಿದ್ದೆ. ನನ್ನ ತಂಗಿ ಈಗಲೂ ಹೇಳುತ್ತಾಳೆ, &lsquo;ನೀನು ನಟನಾಗಿ ಎಲ್ಲರೂ ನಿನಗೆ ಇಷ್ಟೊಂದು ಗೌರವ ಕೊಡುತ್ತಿದ್ದಾರೆ, ಆದರೆ ಚಿಕ್ಕವನಿದ್ದಾಗ ನಿನ್ನನ್ನು ನೋಡಿದವರು ಇವನು ಜೀವನದಲ್ಲಿ ಏನೂ ಉದ್ದಾರ ಆಗಲ್ಲ ಎನ್ನುತ್ತಿದ್ದರು&rsquo; ಎಂದು. ಆದರೆ ಜೀವನದಲ್ಲಿ ಕಲಿತ ಆ ಪಾಠಗಳು ನನ್ನನ್ನು ದೊಡ್ಡ ಯುದ್ಧಗಳಿಗೆ ಸಿದ್ಧಪಡಿಸಿದವು ಎಂದೆನಿಸುತ್ತದೆ.&lt;/p&gt;&lt;p&gt;&lt;strong&gt;* ತಂದೆ ನಿಮ್ಮನ್ನು ಫ್ಯಾನ್&zwnj;ಗೆ ತಲೆಕೆಳಗಾಗಿ ನೇತುಹಾಕಿ ಫ್ಯಾನ್ ಆನ್ ಮಾಡಿದ್ದರಂತೆ? ನಿಮ್ಮ ಸ್ನೇಹಿತರು ತಂದೆಯನ್ನು &lsquo;ಟೈಗರ್&rsquo; ಎನ್ನುತ್ತಿದ್ದರಂತೆ?&lt;/strong&gt;&lt;/p&gt;&lt;p&gt;ಹೌದು. ನಾನು ಶಾಲೆಯಿಂದ 10 ನಿಮಿಷ ತಡವಾಗಿ ಬಂದರೂ ಪೊಲೀಸ್ ಗಾಡಿಯಂತೆ ವಾಹನ ತಂದು ಹುಡುಕುತ್ತಿದ್ದರು. ನನ್ನ ಸ್ನೇಹಿತರು &lsquo;ಬೇಗ ಮನೆಗೆ ಹೋಗು, ನಿಮ್ಮಪ್ಪ ಬಂದುಬಿಡುತ್ತಾರೆ&rsquo; ಎಂದು ಓಡಿಹೋಗುತ್ತಿದ್ದರು. ಕಾಲೇಜು ದಿನಗಳಲ್ಲೂ ಅವರು ಎಲ್ಲರ ಮುಂದೆ ಹೊಡೆಯುತ್ತಿದ್ದರು. ಕೊನೆಗೆ ಒಂದು ದಿನ ನಾನು ಅವರ ಮುಂದೆ ಕೆಳಗೆ ಬಿದ್ದು ನಾಟಕ ಮಾಡಿದೆ, ಅಂದಿನಿಂದ ಹೊಡೆಯುವುದನ್ನು ಬಿಟ್ಟರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ನಿರ್ದೇಶಕರೋ, ನಿರ್ಮಾಪಕರೋ ಅಲ್ಲ ಎಂಬ ಕೊರಗು ಇತ್ತಾ?&lt;/strong&gt;&lt;/p&gt;&lt;p&gt;ಎಂದಿಗೂ ಇಲ್ಲ ಸರ್. ನನ್ನ ಹೆತ್ತವರು ನನಗೆ ಕಲಿಸಿದ ಮುಖ್ಯ ಪಾಠ, &lsquo;ಯಾರ ಮೇಲೂ ಅವಲಂಬಿತನಾಗಿ ಬದುಕಬೇಡ, ನಿನ್ನ ಕೆಲಸವನ್ನು ನೀನೇ ಮಾಡು, ಯಾರ ಮುಂದೆಯೂ ತಲೆತಗ್ಗಿಸಬೇಡ&rsquo; ಎಂಬುದು. ಪ್ರತಿಯೊಬ್ಬ ಮಗುವಿಗೂ ಅವರ ತಂದೆಯೇ ಹೀರೋ. ನಮ್ಮ ತಂದೆ-ತಾಯಿ ಹೆಚ್ಚು ಹಣ ಗಳಿಸದೇ ಇರಬಹುದು, ಆಸ್ತಿ ಮಾಡದೇ ಇರಬಹುದು. ಆದರೆ ನಮ್ಮನ್ನೇ ತಮ್ಮ ಆಸ್ತಿ ಎಂದು ನಂಬಿ ಬೆಳೆಸಿದರು.&lt;/p&gt;&lt;p&gt;&lt;strong&gt;* ನಿಮ್ಮ ತಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದರು. ಆರಂಭದಲ್ಲಿ ದಿನಕ್ಕೆ ₹14 ದುಡಿಯುತ್ತಿದ್ದ ದಿನಗಳಿದ್ದವು...&lt;/strong&gt;&lt;/p&gt;&lt;p&gt;ನಾನು ಓದುವಾಗ ನಮ್ಮ ತಂದೆ ಬಡವರು ಎಂಬ ಭಾವನೆ ನನಗೆ ಬರಲು ಅವರು ಬಿಡಲೇ ಇಲ್ಲ. ಕಾಲೇಜಿಗೆ ಬಂದಾಗ ಎಲ್ಲರ ಬಳಿ ಬೈಕ್, ಹೊಸ ಬಟ್ಟೆ ಇರುತ್ತಿತ್ತು. ನನ್ನ ಬಳಿ ತಂದೆಯ ಹಳೆಯ ಸ್ಕೂಟರ್ ಇತ್ತು. ನಮ್ಮ ಮನಸ್ಥಿತಿ ಮತ್ತು ದುಡಿಮೆಯಿಂದ ಗೌರವ ಸಿಗುತ್ತದೆಯೇ ಹೊರತು ಹೊರಗಿನ ಆಡಂಬರದಿಂದಲ್ಲ ಎಂದು ನನಗೆ ಬಹಳ ಬೇಗ ಅರ್ಥವಾಯಿತು.&lt;/p&gt;&lt;p&gt;&lt;strong&gt;* ನೀವು ಅತ್ಯುತ್ತಮ ಡ್ಯಾನ್ಸರ್ ಆಗಿದ್ದಿರಿ, ಹುಡುಗಿಯರೆಲ್ಲ ನಿಮ್ಮ ಡ್ಯಾನ್ಸ್&zwnj;ಗೆ ಫಿದಾ ಆಗಿದ್ದರು...&lt;/strong&gt;&lt;/p&gt;&lt;p&gt;ಹೌದು, ನನಗೆ ಡ್ಯಾನ್ಸ್ ಎಂದರೆ ಪ್ರಾಣ. ಶಾಲೆಯಲ್ಲಿ ಶಿಕ್ಷಕರು ನನ್ನನ್ನು &lsquo;ಹೀರೋ&rsquo; ಎಂದೇ ಕರೆಯುತ್ತಿದ್ದರು. ನಾನೂ ಸಹ ಹುಟ್ಟಿನಿಂದಲೇ ಹೀರೋ ಎಂದು ನಂಬಿಬಿಟ್ಟಿದ್ದೆ. ಒಮ್ಮೆ ವೀರಪ್ಪನ್ ಹಾವಳಿ ಇದ್ದಾಗ, &lsquo;ನನಗೆ ರಜೆ ಕೊಡಿ, ನಾನೇ ಹೋಗಿ ವೀರಪ್ಪನ್ ಹಿಡಿದು ತರುತ್ತೇನೆ&rsquo; ಎಂದು ಶಾಲೆಯಲ್ಲಿ ಡೈಲಾಗ್ ಹೊಡೆದಿದ್ದೆ. 7ನೇ ತರಗತಿಯವರೆಗೂ ಟೀಚರ್&zwnj;ಗಳು &lsquo;ಏನೋ, ವೀರಪ್ಪನ್ ಹಿಡಕೊಂಡು ಬಂದ್ಯಾ?&rsquo; ಎಂದು ಕಾಲೆಳೆಯುತ್ತಿದ್ದರು.&lt;/p&gt;&lt;p&gt;&lt;strong&gt;* ಚಿತ್ರರಂಗದಲ್ಲಿ ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದವರ ಕುಟುಂಬದ ಹಿನ್ನೆಲೆ ಇರುವ ನಟರಿಗೆ ಆರಂಭದಲ್ಲಿ ಬೆಂಬಲ ಸಿಗುತ್ತದೆ. ನಿಮ್ಮಂತಹ ಹೊರಗಿನವರಿಗೆ ಕಷ್ಟ ಅನಿಸಲಿಲ್ಲವೇ?&lt;/strong&gt;&lt;/p&gt;&lt;p&gt;ಹಿನ್ನೆಲೆ ಇರಲಿ, ಬಿಡಲಿ, ಕೊನೆಗೆ ನಿರ್ಧರಿಸುವುದು ಪ್ರೇಕ್ಷಕರೇ. ಸ್ಟಾರ್ ಮಕ್ಕಳಿಗೂ ಅವರದೇ ಆದ ತಂದೆಯ ಹೆಸರಿನ ದೊಡ್ಡ ಹೊರೆ ಇರುತ್ತದೆ. ಆದರೆ ನಮ್ಮಂತಹವರಿಗೆ ಆ ಮೊದಲ ಮೆಟ್ಟಿಲು ಹುಡುಕುವುದೇ ಕಷ್ಟ. ಒಮ್ಮೆ ಮೆಟ್ಟಿಲು ಸಿಕ್ಕ ಮೇಲೆ ಹತ್ತುವುದು ನಮ್ಮ ಕೈಯಲ್ಲಿದೆ. ನನ್ನನ್ನು ನಾನೇ ಬೆಳೆಸಿಕೊಂಡಿದ್ದಕ್ಕಿಂತ ಜನರ ಪ್ರೀತಿಯೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಅಲ್ಲು ಅರವಿಂದ್ ಒಮ್ಮೆ ಹೇಳಿದ್ದರು, &lsquo;ಕೆಜಿಎಫ್&zwnj;ಗಿಂತ ಮೊದಲು ಯಶ್ ಏನಾಗಿದ್ದರು? ಸಿನಿಮಾ ಮಾಡುವುದು ನಿರ್ಮಾಪಕ, ಅದರ ಲಾಭ ನಟನಿಗೆ ಸಿಗುತ್ತದೆ&rsquo; ಎಂದು... ನಿಜ ಸರ್, ಸಿನಿಮಾದಲ್ಲಿ ನೂರಾರು ಜನರು ಕೆಲಸ ಮಾಡುತ್ತಾರೆ. ಆದರೆ ಆ ಎಲ್ಲರ ಶ್ರಮ ನಟನ ಮೂಲಕ ಪರದೆಯ ಮೇಲೆ ಬರುತ್ತದೆ. ನಟ ಅದನ್ನು ಸರಿಯಾಗಿ ಹೊರಹಾಕದಿದ್ದರೆ ಸಿನಿಮಾ ಓಡುವುದಿಲ್ಲ. ಜಗತ್ತಿನ ಇತಿಹಾಸದಲ್ಲೇ ನಟರಿಗೆ ಹೆಚ್ಚು ಮನ್ನಣೆ ಸಿಗುತ್ತದೆ, ಏಕೆಂದರೆ ಕ್ಯಾಮೆರಾ ಎದುರು ನಿಂತು ಆ ಭಾವನೆಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿ ನಟನ ಮೇಲಿರುತ್ತದೆ. ಪ್ರೇಕ್ಷಕರು ಎಂದಿಗೂ ತಪ್ಪಾಗುವುದಿಲ್ಲ.&lt;/p&gt;&lt;p&gt;&lt;strong&gt;* ದಕ್ಷಿಣದ ರಾಮ್ ಚರಣ್, ಜೂ. ಎನ್&zwnj;ಟಿಆರ್, ಮಹೇಶ್ ಬಾಬು ದೊಡ್ಡ ಕುಟುಂಬದಿಂದ ಬಂದರೂ ನಿಮ್ಮಂತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಇಲ್ಲ ಸರ್, ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಈ &lsquo;ಪ್ಯಾನ್ ಇಂಡಿಯಾ&rsquo;, &lsquo;ಸ್ಟಾರ್ಡಮ್&rsquo; ಎಂಬುದೆಲ್ಲ ಶಾಶ್ವತವಲ್ಲ. ಈ ಶುಕ್ರವಾರ ನೀವು ಸೂಪರ್ ಸ್ಟಾರ್ ಆಗಿರಬಹುದು, ಮುಂದಿನ ಶುಕ್ರವಾರ ಏನೂ ಇಲ್ಲದಂತಾಗಬಹುದು. ಯಾರು ಮುಂದು, ಯಾರು ಹಿಂದು ಎನ್ನುವುದಕ್ಕಿಂತ ಜನರ ಮನಸ್ಸಿನಲ್ಲಿ ಎಷ್ಟು ಕಾಲ ನೆಲೆಸುತ್ತೇವೆ ಎಂಬುದು ಮುಖ್ಯ.&lt;/p&gt;&lt;p&gt;&lt;strong&gt;* ಇಲ್ಲಿಯವರೆಗೆ ಬರಲು ನೀವು ನಾಟಕ ರಂಗದಲ್ಲಿ ನೆಲ ಒರೆಸಿದ್ದೀರಿ, ಚಹಾ ಕೊಟ್ಟಿದ್ದೀರಿ...&lt;/strong&gt;&lt;/p&gt;&lt;p&gt;ಅದನ್ನೆಲ್ಲಾ ಸಾಮಾನ್ಯವಾಗಿ ಜನ ಸ್ಟ್ರಗಲ್ ಎಂದು ಕರೆಯುತ್ತಾರೆ. ಆದರೆ ನನಗೆ ಅದು ಕಷ್ಟ ಎನಿಸಲಿಲ್ಲ. ಆ ಕೆಲಸದಲ್ಲೂ ನಾನು ಖುಷಿ ಕಂಡುಕೊಂಡಿದ್ದೆ. ಕಸ ಗುಡಿಸುವುದರಲ್ಲೂ ಖುಷಿ ಇರಬಹುದು, ದೊಡ್ಡ ಅವಾರ್ಡ್ ತಗೊಂಡಾಗಲೂ ಖುಷಿ ಇಲ್ಲದಿರಬಹುದು. ಮನಸ್ಥಿತಿ ಮುಖ್ಯ.&lt;/p&gt;&lt;p&gt;&lt;strong&gt;* ನಿಮ್ಮಲ್ಲಿ ಆರಂಭದಿಂದಲೂ ಹೀರೋ ಎಂಬ ಇಗೋ ಇತ್ತು?&lt;/strong&gt;&lt;/p&gt;&lt;p&gt;ಅದನ್ನು ನೀವು ಇಗೋ ಅಂದರೆ ಇಗೋ, ನನ್ನ ಮಟ್ಟಿಗೆ ಅದು ಆತ್ಮಗೌರವ, ಸೆಲ್ಫ್ ರೆಸ್ಪೆಕ್ಟ್. 17ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೋದಾಗ, &lsquo;ನೀನಿನ್ನೂ ಚಿಕ್ಕವನು ಸುಮ್ಮನಿರು&rsquo; ಎನ್ನುತ್ತಿದ್ದರು. ನಾನು ಹೇಳುವ ಮಾತಿಗೆ ವಯಸ್ಸಿನ ಹಂಗಿಲ್ಲದೆ ಬೆಲೆ ಸಿಗಬೇಕೆಂದೇ ನಾನು ಗಡ್ಡ ಬಿಡಲು ಶುರುಮಾಡಿದೆ.&lt;/p&gt;&lt;p&gt;&lt;strong&gt;* ರಾತ್ರೋರಾತ್ರಿ ಇಷ್ಟು ದೊಡ್ಡ ಸೂಪರ್ ಸ್ಟಾರ್ ಆದಾಗ ನಿಮ್ಮ ಶಾಲಾ-ಕಾಲೇಜು ಸ್ನೇಹಿತರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಕರ್ನಾಟಕದಲ್ಲಿ ನನಗೆ ಸಿಕ್ಕ ಗೆಲುವು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಒಂದೊಂದೇ ಹೆಜ್ಜೆ ಇಟ್ಟು, ಹಲವು ಹಿಟ್ ಸಿನಿಮಾಗಳ ನಂತರ &lsquo;ಕೆಜಿಎಫ್&rsquo; ಸಾಧ್ಯವಾಯಿತು. ನಮ್ಮ ಚಿತ್ರರಂಗವನ್ನು ಯಾರಾದರೂ ಕಡೆಗಣಿಸಿದರೆ ನನಗೆ ಬೇಸರವಾಗುತ್ತಿತ್ತು. ಅದಕ್ಕೇ ಇಡೀ ತಂಡವನ್ನು ಒಪ್ಪಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋದೆವು. ದೇಶದ ಜನರು ನನ್ನನ್ನು ಒಪ್ಪಿಕೊಂಡರು. ಕರ್ನಾಟಕದ ಜನರಿಗೆ ನನ್ನ ಬೆಳವಣಿಗೆ ತಮ್ಮದೇ ಮನೆಯ ಮಗನ ಗೆಲುವು ಎನಿಸುತ್ತದೆ.&lt;/p&gt;&lt;p&gt;&lt;strong&gt;* ನೀವು ಅಹಂಕಾರಿಯಂತೆ, ಟಿವಿ ಸೀರಿಯಲ್&zwnj;ನಲ್ಲಿರುವಾಗಲೇ 7 ಸಿನಿಮಾಗಳ ಆಫರ್ ಬಂದಾಗ, &lsquo;ನನಗೆ ಮೊದಲು ಸ್ಕ್ರಿಪ್ಟ್ ಕೊಡಿ&rsquo; ಎಂದು ಕೇಳಿ ಸಿನಿಮಾಗಳನ್ನೇ ಕಳೆದುಕೊಂಡಿರಂತೆ?&lt;/strong&gt;&lt;/p&gt;&lt;p&gt;ಹೌದು, ಟಿವಿ ನಟ ಸ್ಕ್ರಿಪ್ಟ್ ಕೇಳಬಾರದು ಎಂಬ ನಿಯಮ ಎಲ್ಲಿದೆ? ನಾನು ಮಾಡುವ ಪಾತ್ರ ನನಗೆ ಇಷ್ಟವಾಗಬೇಕು, ನಾನು ಪ್ರಾಮಾಣಿಕವಾಗಿರಬೇಕು. ಅದಕ್ಕಾಗಿ ಸ್ಕ್ರಿಪ್ಟ್ ಕೇಳಿದೆ. ಆ 7 ಸಿನಿಮಾಗಳು ಕೈತಪ್ಪಿದರೂ ನನಗೆ ಬೇಸರವಿಲ್ಲ.&lt;/p&gt;&lt;p&gt;&lt;strong&gt;* ಈಗ ನೀವು ಒಂದು ಚಿತ್ರಕ್ಕೆ ₹50 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತೀರಾ?&lt;/strong&gt;&lt;/p&gt;&lt;p&gt;ಅದಕ್ಕೂ ಜಾಸ್ತಿ. ನಮ್ಮ ಮೌಲ್ಯಕ್ಕೆ ತಕ್ಕಂತೆ ಸಂಭಾವನೆ ಸಿಗುತ್ತದೆ. ನಾನು ಕೇವಲ ನಟನಾಗಿ ಹಣ ಪಡೆಯುವುದಿಲ್ಲ. ಕೆಜಿಎಫ್&zwnj;ಗಿಂತ ಮುಂಚಿನಿಂದಲೂ ನಿರ್ಮಾಪಕರ ಜೊತೆ ಪಾಲುದಾರನಾಗಿ ರಿಸ್ಕ್ ತೆಗೆದುಕೊಳ್ಳುತ್ತೇನೆ. ಸಿನಿಮಾ ಹಣ ಗಳಿಸಿದರೆ ನನಗೂ ಪಾಲು, ಸೋತರೆ ನಷ್ಟದಲ್ಲೂ ಪಾಲು.&lt;/p&gt;&lt;p&gt;&lt;strong&gt;* ನೀವು ಶಾರುಖ್ ಖಾನ್ ಅವರ ಬಹುದೊಡ್ಡ ಅಭಿಮಾನಿ. ಆದರೆ &lsquo;ಜೀರೋ&rsquo; ಚಿತ್ರದ ಎದುರೇ &lsquo;ಕೆಜಿಎಫ್&rsquo; ಬಿಡುಗಡೆ ಮಾಡಿ ಕ್ಲ್ಯಾಶ್ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾನು ಶಾರುಖ್ ಸರ್ ಅವರ ಬಹುದೊಡ್ಡ ಫ್ಯಾನ್. ಪ್ಯಾನ್ ಇಂಡಿಯಾ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬರುವಾಗ ಕ್ಲ್ಯಾಶ್ ಅನಿವಾರ್ಯ. ಅವರ ಚಿತ್ರ ದೊಡ್ಡದಾಗಿತ್ತು, ನಮ್ಮದು ಚಿಕ್ಕದಾಗಿತ್ತು. ಅದಕ್ಕೆ ಬಿಡುಗಡೆ ಮಾಡಿದೆವು. ನಮ್ಮ ಸಿನಿಮಾ ಚೆನ್ನಾಗಿ ಓಡಿತು ಎಂದ ಮಾತ್ರಕ್ಕೆ ನಾನು ಶಾರುಖ್ ಸರ್&zwnj;ಗಿಂತ ದೊಡ್ಡವನಾಗುವುದಿಲ್ಲ. ನಾನು ನಮ್ಮ ಹಿರಿಯರಿಗಿಂತ ದೊಡ್ಡವನು ಅಂದುಕೊಂಡ ಕ್ಷಣ ನನ್ನ ಅಂಗಡಿ ಬಂದ್ ಆಗುತ್ತದೆ.&lt;/p&gt;&lt;p&gt;&lt;strong&gt;* ಅಮೀರ್ ಖಾನ್ ಕೂಡ &lsquo;ಕೆಜಿಎಫ್ 2&rsquo; ನೋಡಿ ಹೆದರಿ ತಮ್ಮ ಚಿತ್ರದ ರಿಲೀಸ್ ಡೇಟ್ ಮುಂದೂಡಿದರು ಎನ್ನುತ್ತಾರೆ?&lt;/strong&gt;&lt;/p&gt;&lt;p&gt;ಯಾರೂ ಯಾರಿಗೂ ಹೆದರುವುದಿಲ್ಲ ಸರ್. ಅವರವರ ಸಿನಿಮಾಗಳ ಅನುಕೂಲಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;* ನಿಮ್ಮ ಹೊಸ ಚಿತ್ರ &lsquo;ಟಾಕ್ಸಿಕ್&rsquo; ರಿಲೀಸ್ ಡೇಟ್ ಮುಂದೂಡಿದಾಗ ಯಶ್ ಕೂಡ ಹೆದರಿದರು ಎಂಬ ಮಾತಿದೆ?&lt;/strong&gt;&lt;/p&gt;&lt;p&gt;ನನ್ನ ಬಳಿ ಕಳೆದುಕೊಳ್ಳಲು ಏನೂ ಇಲ್ಲದಿರುವಾಗ ನನಗೆ ಭಯ ಏಕೆ ಸರ್? 100-200 ಕೋಟಿ ಕಡಿಮೆ ಬಂದರೆ ನನಗೇನೂ ಆಗುವುದಿಲ್ಲ. ನಾನು ಜನರಿಗೆ ನೀಡಿದ ಭರವಸೆಗೆ ತಕ್ಕಂತೆ ಸಿನಿಮಾ ಬರಬೇಕು. ಚಿತ್ರಕ್ಕೆ ಹೆಚ್ಚಿನ ಸಮಯ ಬೇಕು ಎನಿಸಿದಾಗ ಮುಂದೂಡಿದೆವು. ಕೇವಲ ಇಮೇಜ್ ಉಳಿಸಿಕೊಳ್ಳಲು ಹಠ ಹಿಡಿದು ರಿಲೀಸ್ ಮಾಡಿದ್ದರೆ ಅದು ಅಹಂಕಾರವಾಗುತ್ತಿತ್ತು.&lt;/p&gt;&lt;p&gt;&lt;strong&gt;* ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ &lsquo;ಯಶ್ ಮಿಸ್ಟರ್ ಶೋ ಆಫ್&rsquo; ಎಂದಾಗ ನಿಮ್ಮ ಅಭಿಮಾನಿಗಳು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದರು...&lt;/strong&gt;&lt;/p&gt;&lt;p&gt;ಅವರು ಆಗಷ್ಟೇ ಚಿತ್ರರಂಗಕ್ಕೆ ಬಂದ ಹೊಸಬರಾಗಿದ್ದರು. ಕೆಲವು ಶೋಗಳಲ್ಲಿ ವಿವಾದ ಹುಟ್ಟುಹಾಕಲೆಂದೇ ಆಯ್ಕೆಗಳನ್ನು ಕೊಟ್ಟು ಪ್ರಶ್ನೆ ಕೇಳುತ್ತಾರೆ. ಬಹುಶಃ ಅವರಿಗೆ ನನ್ನ ಹೆಸರು ಸೂಕ್ತ ಎನಿಸಿರಬಹುದು. ಅದರಿಂದ ಹಲವು ನಿರ್ದೇಶಕರಿಗೆ ಬೇಸರವಾಗಿತ್ತು. ಆದರೆ ನನಗೆ ಬೇಸರವಾಗಲಿಲ್ಲ. ಯಾರಾದರೂ ನನ್ನ ಬಗ್ಗೆ ಅಭಿಪ್ರಾಯ ಹೇಳುವ ಹಕ್ಕಿದೆ. ಆದರೆ ಬೇರೆಯವರ ಅಭಿಪ್ರಾಯ ನನ್ನ ವ್ಯಕ್ತಿತ್ವವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಹೆಸರಿನಲ್ಲಿ ಬೇರೆ ಕಲಾವಿದರನ್ನು ನಿಂದಿಸುವವರು ನನ್ನ ನಿಜವಾದ ಅಭಿಮಾನಿಗಳೇ ಅಲ್ಲ.&lt;/p&gt;&lt;p&gt;* &lsquo;ನಾನು ಪೋಷಕರ ಜೊತೆ ಕುಳಿತು ನೋಡಲಾಗದ ದೃಶ್ಯಗಳಲ್ಲಿ ನಟಿಸುವುದಿಲ್ಲ&rsquo; ಎಂದಿದ್ದ ನೀವು, ಈಗ &lsquo;ಟಾಕ್ಸಿಕ್&rsquo;ನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದೀರಾ?&lt;/p&gt;&lt;p&gt;ಮನುಷ್ಯ ಕಾಲಕ್ಕೆ ತಕ್ಕಂತೆ ಬದಲಾಗುತ್ತಾನೆ. ಕಲೆಯು ಸಮಾಜಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಬೇಕು. ಈ ಚಿತ್ರದ ಟ್ಯಾಗ್ಲೈನ್ &lsquo;ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್&rsquo;. ಇದು ಮಕ್ಕಳಿಗಲ್ಲ ಎಂದು ನಾವೇ ಸ್ಪಷ್ಟಪಡಿಸಿದ್ದೇವೆ. ಮಹಿಳಾ ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಮಹಿಳೆಯರ ಆಸೆ ಮತ್ತು ಕಲ್ಪನೆಗಳನ್ನು ಧೈರ್ಯವಾಗಿ ಚಿತ್ರಿಸಿದ್ದಾರೆ. ಕಥೆಯ ಅಗತ್ಯಕ್ಕೆ ತಕ್ಕಂತೆ ಆ ದೃಶ್ಯಗಳಿವೆ.&lt;/p&gt;&lt;p&gt;&lt;strong&gt;* ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ 14 ಮಿಲಿಯನ್ ಫಾಲೋವರ್ಸ್ ಇದ್ದರೂ ನೀವು ಕೇವಲ ಒಬ್ಬರನ್ನು (ಪತ್ನಿ ರಾಧಿಕಾ ಪಂಡಿತ್) ಮಾತ್ರ ಫಾಲೋ ಮಾಡುತ್ತೀರಾ?&lt;/strong&gt;&lt;/p&gt;&lt;p&gt;ಹೌದು, ರಾಧಿಕಾ ನನ್ನ ಜೀವನದ ಏಕೈಕ ಆಪ್ತ ಗೆಳತಿ. ಸೀರಿಯಲ್ ದಿನಗಳಿಂದ ನಾವಿಬ್ಬರೂ ಏನೂ ಇಲ್ಲದ ಕಾಲದಿಂದ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಬದುಕಿನ ಆಧಾರಸ್ತಂಭ ಅವರು.&lt;/p&gt;&lt;p&gt;&lt;strong&gt;* ₹4000 ಕೋಟಿ ಬಜೆಟ್&zwnj;ನ &lsquo;ರಾಮಾಯಣ&rsquo; ಚಿತ್ರದಲ್ಲಿ ನೀವೇಕೆ ರಾಮನ ಬದಲಿಗೆ ರಾವಣನ ಪಾತ್ರ ಆಯ್ದುಕೊಂಡಿರಿ?&lt;/strong&gt;&lt;/p&gt;&lt;p&gt;ಶ್ರೀರಾಮನ ಧರ್ಮ ಮತ್ತು ಒಳ್ಳೆಯತನದ ತೀವ್ರತೆಯನ್ನು ತೋರಿಸಲು ಅಷ್ಟೇ ಪ್ರಬಲವಾದ, ಭಯಂಕರವಾದ ರಾವಣನ ಪಾತ್ರ ಬೇಕು. ಆ ಪಾತ್ರವನ್ನು ನನಗಿಂತ ಚೆನ್ನಾಗಿ ಯಾರೂ ಮಾಡಲು ಸಾಧ್ಯವಿಲ್ಲ ಎಂಬ ನಂಬಿಕೆಯಿದೆ. ರಣಬೀರ್ ಕಪೂರ್ ರಾಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಜಾಗತಿಕ ಮಟ್ಟದ ಸಂಗೀತ ನೀಡುತ್ತಿದ್ದಾರೆ.&lt;/p&gt;&lt;p&gt;&lt;strong&gt;* ದಳಪತಿ ವಿಜಯ್ ಅವರಂತೆ ನೀವೂ ರಾಜಕೀಯಕ್ಕೆ ಬಂದು ಮುಖ್ಯಮಂತ್ರಿಯಾಗುವ ಆಸಕ್ತಿ ಇದೆಯೇ?&lt;/strong&gt;&lt;/p&gt;&lt;p&gt;ಸದ್ಯಕ್ಕೆ ನಟನಾಗಿ ಈ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ದೊಡ್ಡ ಜವಾಬ್ದಾರಿಯಿದೆ. ಆದರೆ ರಾಜಕೀಯ ಎಂದರೆ ಸಾರ್ವಜನಿಕ ಸೇವೆ, ಭವಿಷ್ಯದಲ್ಲಿ ಅಂತಹ ಅಗತ್ಯ ಬಂದರೆ ನೋಡೋಣ. ಸದ್ಯಕ್ಕಂತೂ ರಾಜಕೀಯದ ಯಾವುದೇ ಯೋಚನೆಗಳಿಲ್ಲ.&lt;/p&gt;&lt;p&gt;&lt;strong&gt;* ನೀವು ದೊಡ್ಡ ಸ್ಟಾರ್ ಆದಾಗ ನಿಮ್ಮ ತಂದೆಯ ಮೊದಲ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಅವರು ಯಾವಾಗಲೂ ಸಪೋರ್ಟಿವ್. ಆದರೆ ಈಗಲೂ ನಾನು ಚೇಷ್ಟೆ ಮಾಡುತ್ತೇನೆ, ಅವರು ನನ್ನನ್ನು ಯಾರಾದರೂ ಯಾಮಾರಿಸಬಹುದು ಎಂದು ಕಮೆಂಟ್ ಮಾಡುತ್ತಿರುತ್ತಾರೆ. ಅದು ಭಾರತೀಯ ಪೋಷಕರ ಪ್ರೀತಿ, &lsquo;ಜಾಸ್ತಿ ಹಾರಬೇಡ, ನೆಲದಲ್ಲೇ ಇರು&rsquo; ಅಂತ ಹೇಳುವ ರೀತಿ.&lt;/p&gt;&lt;p&gt;&lt;strong&gt;* ನಿಮ್ಮ ಸಂಬಂಧಿಕರು ಕೆಲವರು &lsquo;ಇವನಿಗೆ ಊಟ ಇರಲಿಲ್ಲ ನಾವೇ ಹಾಕಿದ್ದು, 5 ದಿನ ಸ್ನಾನ ಮಾಡುತ್ತಿರಲಿಲ್ಲ ನಾವೇ ಮಾಡಿಸಿದ್ದು&rsquo; ಅಂತೆಲ್ಲ ಹೇಳಿದ್ದಾರಂತೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿ ದೊಡ್ಡವನಾದಾಗ ಹಲವರು ಬಂದು &lsquo;ನಾನು ಹಾಗೆ ಮಾಡಿದೆ, ಹೀಗೆ ಮಾಡಿದೆ&rsquo; ಎನ್ನುತ್ತಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದಾಗಲೂ ನಾನು ಸ್ಟೈಲ್ ಬಿಟ್ಟಿರಲಿಲ್ಲ, ಸ್ನಾನವಂತೂ ಪ್ರತಿದಿನ ಮಾಡುತ್ತಿದ್ದೆ. ಯಾರಾದರೂ ನೆರವಾಗಿದ್ದರೆ ಎಲ್ಲರಿಗೂ ಧನ್ಯವಾದ.&lt;/p&gt;&lt;p&gt;&lt;strong&gt;* 700 ಅಭಿಮಾನಿಗಳಿಗೆ ಪ್ರತ್ಯೇಕವಾಗಿ ನಿಂತು ಫೋಟೋ ಕೊಟ್ಟಿರಂತೆ?&lt;/strong&gt;&lt;/p&gt;&lt;p&gt;ಗ್ರೂಪ್ ಫೋಟೋ ತೆಗೆದರೆ ಅವರ ನೆನಪು ಉಳಿಯಲ್ಲ. ವೈಯಕ್ತಿಕವಾಗಿ ಫೋಟೋ ಕೊಟ್ಟರೆ ಅವರಿಗೆ ಲೈಫ್&zwnj;ಟೈಮ್ ಮೆಮೊರಿ. ಅವರ ಸಮಯಕ್ಕೂ ಬೆಲೆಯಿದೆ.&lt;/p&gt;&lt;p&gt;&lt;strong&gt;* ನೀವು ಸ್ಟಾರ್ ಆದ ಮೇಲೂ ನಿಮ್ಮ ತಂದೆ ಬಸ್ ಡ್ರೈವಿಂಗ್ ಕೆಲಸ ಮುಂದುವರಿಸಿದ್ದರು...&lt;/strong&gt;&lt;/p&gt;&lt;p&gt;ಹೌದು ಸರ್. ಮಗ ಆಡಿ ಕಾರಿನಲ್ಲಿ ತಿರುಗಾಡುತ್ತಾನೆ, ಅಪ್ಪ ಬಸ್ ಓಡಿಸುತ್ತಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ನಾನು ಅವರಿಗೆ ದುಬಾರಿ ಕಾರು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಅವರು &lsquo;ನನಗೆ ಯಶ್ ತಂದೆ ಅಂತ ಸಿಗುವ ಗೌರವಕ್ಕಿಂತ, ನನ್ನ ಕಾಯಕಕ್ಕೆ ನನ್ನ ಸಹೋದ್ಯೋಗಿಗಳು ಕೊಡುವ ಗೌರವವೇ ನನಗೆ ಮುಖ್ಯ&rsquo; ಎಂದು ಹೆಮ್ಮೆಯಿಂದ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;strong&gt;* ಮಕ್ಕಳು ಟಾಕ್ಸಿಕ್ ಚಿತ್ರದಿಂದ ಏನು ಕಲಿಯುತ್ತಾರೆ?&lt;/strong&gt;&lt;/p&gt;&lt;p&gt;ಏನು ಮಾಡಬಾರದು ಎಂಬುದನ್ನು ಕಲಿಯುತ್ತಾರೆ. ಇದು ಮಕ್ಕಳಿಗಾಗಿ ಮಾಡಿದ ಚಿತ್ರವಲ್ಲ.&lt;/p&gt;&lt;h2&gt;&lt;strong&gt;* ಸಂಜಯ್ ದತ್ ಜೊತೆ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/h2&gt;&lt;p&gt;ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವರ ಆರೋಗ್ಯ ಸರಿಯಿರಲಿಲ್ಲ. ಅಷ್ಟು ಧೂಳಿನಲ್ಲಿ ನಾವು ಬಾಡಿ ಡಬಲ್ ಬಳಸೋಣ ಎಂದರೂ ಅವರು ಒಪ್ಪಲಿಲ್ಲ. &lsquo;ನನ್ನ ಕಾಯಕಕ್ಕೆ ಅಗೌರವ ಮಾಡಬೇಡಿ&rsquo; ಎಂದು ಸ್ವತಃ ಬಂದು ಅದ್ಭುತವಾಗಿ ನಟಿಸಿದರು. ಅವರ ಬದ್ಧತೆ ಅಸಾಧಾರಣ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/yash-opens-up-about-his-struggles-stardom-toxic-and-ravana-role-gvd/articleshow-x63gme9"/>
        </item>
        <item>
            <title><![CDATA[ಶಾಂತಿ ಕ್ರಾಂತಿ ರೀ-ರಿಲೀಸ್, ‘ಮುಧೋಳ್’ ಸಿನಿಮಾ, ನಿರ್ಮಾಪಕರ ಪ್ರಶ್ನೆ: ವಿಕ್ರಮ್ ರವಿಚಂದ್ರನ್ ಓಪನ್ ಟಾಕ್]]></title>
            <link>https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y</link>
            <guid isPermaLink="true">https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y</guid>
            <pubDate>Thu, 06 Aug 2026 22:49:07 +0530</pubDate>
            <description><![CDATA[&lt;p&gt;ಈ ವರ್ಷ ಸೆಪ್ಟೆಂಬರ್&zwnj; 19 ಬಂದರೆ &lsquo;ಶಾಂತಿ ಕ್ರಾಂತಿ&rsquo; ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ ಎಂದರು ವಿಕ್ರಮ್ ರವಿಚಂದ್ರನ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzc0p8fmt9a38vqevn9tqmsg,imgname-kk-1786036036084.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;* ರವಿಚಂದ್ರನ್&zwnj; ಅವರ ಶಾಂತಿಕ್ರಾಂತಿ ರೀ ರಿಲೀಸ್ ಪ್ಲಾನ್&zwnj; ಏನು?&lt;/strong&gt;&lt;/p&gt;&lt;p&gt;ಚಿತ್ರ ಮರುಬಿಡುಗಡೆ ಮಾತುಕತೆ ನಡೆಯುತ್ತಿದೆ. ಆ ಪ್ರಕ್ರಿಯೆ, ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜೊತೆಗೆ ಸಿನಿಮಾದ ನೆಗೆಟಿವ್&zwnj; ರೀಲ್&zwnj; ಚೆಕ್&zwnj; ಮಾಡಬೇಕು, ಸಿನಿಮಾಕ್ಕೆ ಸಂಬಂಧಿಸಿದವರ ಜೊತೆಗೆ ಮಾತುಕತೆ ಆಗಬೇಕು. ಇನ್ನೊಂದು ಹತ್ತು ದಿನದಲ್ಲಿ ಮರು ಬಿಡುಗಡೆ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಸಾಧ್ಯತೆ ಇಲ್ಲ ಅಂದರೆ ಆಗಲ್ಲ ಅಂತ ನೇರವಾಗಿ ಜನರಿಗೆ ಹೇಳ್ತೀವಿ.&lt;/p&gt;&lt;p&gt;&lt;strong&gt;* ಇದ್ದಕ್ಕಿದ್ದ ಹಾಗೆ ಶಾಂತಿಕ್ರಾಂತಿ ಬಗ್ಗೆ ಅಲೆ ಎದ್ದಿದ್ದು ಯಾಕೆ?&lt;/strong&gt;&lt;/p&gt;&lt;p&gt;ಈ ವರ್ಷ ಸೆಪ್ಟೆಂಬರ್&zwnj; 19 ಬಂದರೆ &lsquo;ಶಾಂತಿ ಕ್ರಾಂತಿ&rsquo; ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ. ಆದರೆ ಅದಕ್ಕೂ ಹೆಚ್ಚೇ ಬಜೆಟ್&zwnj; ಇತ್ತು ಅಂತ ತಂದೆಯವರು ಹೇಳುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಸೋಷಿಯಲ್&zwnj; ಮೀಡಿಯಾ ತೆಗೆದರೆ ಬರೀ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಮಾಡಿ ಅನ್ನುವ ಪೋಸ್ಟ್&zwnj;ಗಳೇ ಕಣ್ಣಿಗೆ ಬೀಳುತ್ತಿವೆ. ಅಪ್ಪನೂ ರೀರಿಲೀಸ್&zwnj; ಚಾನ್ಸ್&zwnj; ಇದೆಯಾ ನೋಡು ಅಂದಿದ್ದಾರೆ. ಅದು ಜನರ ಪ್ರೀತಿ. ಆ ಪ್ರೀತಿ ಬಗ್ಗೆ ಯೋಚಿಸುತ್ತೇನೆಯೇ ಹೊರತು ಹಿಟ್&zwnj; ಫ್ಲಾಪ್&zwnj; ಬಗ್ಗೆ ತಲೆ ಕೆಡಿಸಿಕೊಳಲ್ಲ.&lt;/p&gt;&lt;p&gt;&lt;strong&gt;* ಆರು ತಿಂಗಳ ಹಿಂದೆ ಸೋಷಲ್&zwnj; ಮೀಡಿಯಾದಿಂದ ಔಟ್ ಆದ್ರಿ. ಸಡನ್ನಾಗಿ ಮತ್ತೆ ಕಾಣಿಸಿಕೊಂಡು ಮುಧೋಳ್&zwnj; ಸಿನಿಮಾ ಬಗ್ಗೆ ಮಾತಾಡಿದ್ರಿ. ಈ ಆರು ತಿಂಗಳಲ್ಲಿ ಏನಾಗಿತ್ತು?&lt;/strong&gt;&lt;/p&gt;&lt;p&gt;ಮುಧೋಳ್ ಸಿನಿಮಾವನ್ನು ಈ ವರ್ಷ ಜನವರಿಗೆ ಬಿಡುಗಡೆ ಮಾಡುವ ಪ್ಲಾನ್&zwnj; ಇತ್ತು. ಆದರೆ ಸಿನಿಮಾದ ಔಟ್&zwnj;ಪುಟ್&zwnj; ನಾವಂದುಕೊಂಡ ಹಾಗೆ ಬರಲಿಲ್ಲ. ರೀ ವರ್ಕ್&zwnj; ಮಾಡಬೇಕಿತ್ತು. ಹಾಗೆಂದು ನಾವೇನು ದೊಡ್ಡ ಬಜೆಟ್&zwnj; ಸಿನಿಮಾ ಮಾಡ್ತಿಲ್ಲ. ಆದರೆ ಮಾಡುವ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮುಂದಿಡಬೇಕು, ನಾವು ಅಂದುಕೊಂಡಿರುವ ಹಾಗೆಯೇ ಮಾಡಬೇಕು ಅನ್ನುವುದಿತ್ತು. ಸೋಷಿಯಲ್&zwnj; ಮೀಡಿಯಾದಲ್ಲಿದ್ದರೆ ಜನ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಅವರಿಗೆ ಉತ್ತರ ರೂಪದಲ್ಲಿ ಸಿನಿಮಾ ಅಪ್&zwnj;ಡೇಟ್&zwnj; ಅನ್ನೇ ಕೊಡೋಣ ಅಂದುಕೊಂಡು ಹೊರಬಂದೆ.&lt;/p&gt;&lt;p&gt;&lt;strong&gt;* ವಿಜಯ್&zwnj; ಟಾಟಾ ನಿಮಗೀಗ ಸಾಥ್&zwnj; ನೀಡುತ್ತಿದ್ದಾರಲ್ವಾ?&lt;/strong&gt;&lt;/p&gt;&lt;p&gt;ಅವರು ಕಳೆದ ವರ್ಷವೇ ನಮ್ಮ ಟೀಂಗೆ ಬಂದರು. ಅವರು ಪ್ರೊಡ್ಯೂಸರ್ಸ್ ಅನ್ನುವುದಕ್ಕಿಂತಲೂ ನಮ್ಮ ಕುಟುಂಬದ ಸದಸ್ಯರ ಹಾಗಿದ್ದಾರೆ. ಮುಧೋಳ್&zwnj; ಕಂಟೆಂಟ್&zwnj; ನೋಡಿ ಇಷ್ಟಪಟ್ಟರು. ದುಡ್ಡು ಮಾಡಬೇಕು ಅನ್ನೋದಕ್ಕಿಂತಲೂ ಒಂದೊಳ್ಳೆ ಸಿನಿಮಾ ಮಾಡುವ ಹಂಬಲ ಇತ್ತು. ಅವರ ಸಹಕಾರದಿಂದ ಮುಧೋಳ್&zwnj; ರಿಲೀಸ್&zwnj; ಪ್ರಕ್ರಿಯೆ ಸರಾಗವಾಗಿದೆ.&lt;/p&gt;&lt;p&gt;&lt;strong&gt;* ರವಿಚಂದ್ರನ್&zwnj; ಅವರಂಥಾ ನಟನ ಮಗನ ಸಿನಿಮಾಕ್ಕೇ ಪ್ರೊಡ್ಯೂಸರ್ಸ್&zwnj; ಸಿಗುತ್ತಿಲ್ಲವಾ?&lt;/strong&gt;&lt;/p&gt;&lt;p&gt;ಅದು ನಿರ್ಮಾಪಕರ ತಪ್ಪಲ್ಲ. ನನ್ನ ಪ್ರತಿಭೆ ಏನು ಅಂತ ಜಗತ್ತಿಗೆ ಪರಿಚಯವಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಗ ನಿರ್ಮಾಪಕರು ತಾನೇ ತಾನಾಗಿ ಬಂದು ಸಿನಿಮಾ ಮಾಡುತ್ತಾರೆ. ಅವರಿಗೂ ತಮ್ಮ ಬಂಡವಾಳ ವಾಪಸ್&zwnj; ಬರುವ ವಿಶ್ವಾಸ ಬರಬೇಕಲ್ವ, ನಾವೂ ಸ್ಪಂದಿಸಬೇಕು. ಒಳ್ಳೆ ಕತೆ ಸಿಗಬೇಕು. ಇವತ್ತು ಇರುವ ಟ್ರೆಂಡ್&zwnj;ಗೆ ರೆವೆನ್ಯೂ ತಂದುಕೊಡುವಷ್ಟು ನಾವೂ ಬೆಳೆದಿರಬೇಕು. ಮುಧೋಳ್&zwnj; ನನ್ನ ನಟನೆಯ ಮತ್ತೊಂದು ಸಿನಿಮಾ. ಇದನ್ನು ನೋಡಿ ಚೆನ್ನಾಗಿ ಆ್ಯಕ್ಟ್&zwnj; ಮಾಡಿದ ಹುಡುಗ ಅಂತ ಪ್ರೇಕ್ಷಕ ಹೇಳಿದರೂ ನನಗೆ ತೃಪ್ತಿ.&lt;/p&gt;&lt;p&gt;&lt;strong&gt;* ಯಾವಾಗ ಮುಧೋಳ್&zwnj; ರಿಲೀಸ್&zwnj;?&lt;/strong&gt;&lt;/p&gt;&lt;p&gt;ಶೂಟಿಂಗ್&zwnj; ಮುಗಿದಿದೆ. ಪೋಸ್ಟ್&zwnj; ಪ್ರೊಡಕ್ಷನ್&zwnj; ನಡೆಯುತ್ತಿದೆ. ಈ ವರ್ಷ ಅಕ್ಟೋಬರ್&zwnj; 15 ನಂತರ ಡಿಸೆಂಬರ್&zwnj;ಗೂ ಮೊದಲು ಬರ್ತೀವಿ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y"/>
        </item>
        <item>
            <title><![CDATA[ಅಪ್ಪನ ಸಿನಿಮಾ ಸಂಪರ್ಕ ಬಳಸಲಿಲ್ಲ: ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ವಿಯಾರಾ ವೃದ್ಧಿ]]></title>
            <link>https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx</link>
            <guid isPermaLink="true">https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx</guid>
            <pubDate>Fri, 28 Aug 2026 20:48:50 +0530</pubDate>
            <description><![CDATA[&lt;p&gt;ಕನ್ನಡ ಚಿತ್ರರಂಗಕ್ಕೆ ಹೊಸ ಹೆಜ್ಜೆ ಇಡುತ್ತಿರುವ ವಿಯಾರಾ ವೃದ್ಧಿ, ತಮ್ಮ ತಂದೆಯ ಸಿನಿಮಾ ಸಂಪರ್ಕ ಬಳಸದೆ ಸ್ವಂತ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. &lsquo;ಕೌಂತೇಯ&rsquo; ಮತ್ತು &lsquo;ಯುವರ್ಸ್ ಸಿನ್ಸಿಯರ್ಲಿ ರಾಮ್&rsquo; ಸಿನಿಮಾಗಳ ಬಗ್ಗೆ ಹಾಗೂ ವಿಭಿನ್ನ ಪಾತ್ರಗಳ ಕನಸಿನ ಕುರಿತು ನಟಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14f6gnek9zcgvw1djytzvgs,imgname-mbk-1787930297006.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಎಂಬ ಆಸೆ ಇದ್ದರೂ, ಅದಕ್ಕಾಗಿ ಶಾರ್ಟ್&zwnj;ಕಟ್&zwnj; ಹುಡುಕದೆ ತಮ್ಮದೇ ಆದ ದಾರಿಯಲ್ಲಿ ಸಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿರುವ ನಟಿ ವಿಯಾರಾ ವೃದ್ಧಿ, ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಎಂಬಿಎ ಅಂತಿಮ ವರ್ಷದ ವ್ಯಾಸಂಗದಲ್ಲಿದ್ದಾಗಲೇ ಸಿನಿಮಾದ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದಿದ್ದು, ಇದೀಗ ಒಂದೊಂದೇ ಹೆಜ್ಜೆ ಇಡುತ್ತಾ ತಮ್ಮದೇ ಆದ ಗುರುತನ್ನು ಮೂಡಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ.&lt;/p&gt;&lt;p&gt;ವಿಯಾರಾ ಅವರ ಸಿನಿ ಪಯಣ ಈಗಾಗಲೇ ಎರಡು ಪ್ರಮುಖ ಸಿನಿಮಾಗಳೊಂದಿಗೆ ಆರಂಭವಾಗಿದೆ. ವಿಕ್ಯಾತ್&zwnj; ನಿರ್ದೇಶನದ, ಗಣೇಶ್&zwnj; ಹಾಗೂ ರಮೇಶ್&zwnj; ಅರವಿಂದ್&zwnj; ಅಭಿನಯದ &lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾದಲ್ಲಿ ಅವರು ಅಭಿನಯಿಸಿದ್ದು, ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದೆ. ಇದರ ಜೊತೆಗೆ ಅವರ ಮೊದಲ ಸಿನಿಮಾ ಆಗಿ ತೆರೆಗೆ ಬರುವ ಸಾಧ್ಯತೆ ಇರುವ &lsquo;ಕೌಂತೇಯ&rsquo; ಚಿತ್ರದಲ್ಲೂ ವಿಯಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;&lt;strong&gt;&lsquo;ಕೌಂತೇಯ&rsquo;ನಲ್ಲಿ ವಿಯಾರಾ.. ಕೊಲೆ ರಹಸ್ಯದ ಸುತ್ತ ಕಥೆ&lt;/strong&gt;&lt;/p&gt;&lt;p&gt;&lsquo;ಕುಂಭರಾಶಿ&rsquo; ಖ್ಯಾತಿಯ ಬಿ.ಕೆ. ಚಂದ್ರಹಾಸ್&zwnj; ನಿರ್ದೇಶನದ &lsquo;ಕೌಂತೇಯ&rsquo; ಒಂದು ಎಮೋಷನಲ್&zwnj; ಕ್ರೈಂ ಥ್ರಿಲ್ಲರ್&zwnj;. ಕೊಲೆ ರಹಸ್ಯದ ಸುತ್ತ ಕಥೆ ಸಾಗಲಿದ್ದು, ನಿವೃತ್ತಿಯ ಅಂಚಿನಲ್ಲಿರುವ ಸಬ್&zwnj; ಇನ್&zwnj;ಸ್ಪೆಕ್ಟರ್&zwnj; ಪಾತ್ರದಲ್ಲಿ ಅಚ್ಯುತ್&zwnj; ಕುಮಾರ್&zwnj; ಕಾಣಿಸಿಕೊಂಡಿದ್ದಾರೆ. ಮನು ರಂಜನ್&zwnj; ರವಿಚಂದ್ರನ್&zwnj; ನೆಗೆಟಿವ್&zwnj; ಶೇಡ್&zwnj; ಇರುವ ಪಾತ್ರದಲ್ಲಿ ನಟಿಸಿದ್ದು, ಅವರ ಜೋಡಿಯಾಗಿ ವಿಯಾರಾ ಅಭಿನಯಿಸಿದ್ದಾರೆ.&lt;/p&gt;&lt;p&gt;ಪ್ರಿಯಾಂಕಾ ತಿಮ್ಮೇಶ್&zwnj; ಎಸಿಪಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಿಗ್&zwnj;ಬಾಸ್&zwnj; ಖ್ಯಾತಿಯ ನೀತು ಪೊಲೀಸ್&zwnj; ಅಧಿಕಾರಿಯ ಪಾತ್ರದಲ್ಲಿದ್ದಾರೆ. ರಾಘವೇಂದ್ರ ಸಂಗೀತ ಸಂಯೋಜಿಸಿರುವ ಈ ಸಿನಿಮಾಗಾಗಿ ಎರಡು ಹಾಡುಗಳನ್ನು ಸಿದ್ಧಪಡಿಸಲಾಗಿದೆ.&lt;/p&gt;&lt;p&gt;&lt;strong&gt;ಸಿನಿಮಾ ಹಿನ್ನೆಲೆಯ ಕುಟುಂಬ.. ಆದ್ರೆ ಅಪ್ಪನ ಸಂಪರ್ಕ ಬಳಸಿಕೊಳ್ಳಲಿಲ್ಲ!&lt;/strong&gt;&lt;/p&gt;&lt;p&gt;ವಿಯಾರಾ ವೃದ್ಧಿ ಅವರಿಗೆ ಸಿನಿಮಾ ಹೊಸದೇನಲ್ಲ. ಅವರ ತಂದೆ ರಾಜಶೇಖರ್&zwnj; ಸಿ. ಅವರು ವಿಮರ್ಶಕರ ಮೆಚ್ಚುಗೆ ಪಡೆದಿದ್ದ &lsquo;ನಮ್ ಏರಿಯಾಲ್ ಒಂದಿನಾ&rsquo; ಸಿನಿಮಾವನ್ನು ನಿರ್ಮಿಸಿದ್ದರು. ಹೀಗಾಗಿ ಚಿತ್ರರಂಗದಲ್ಲಿ ಅವಕಾಶ ಪಡೆಯಲು ಕುಟುಂಬದ ಸಂಪರ್ಕಗಳನ್ನು ಬಳಸಿಕೊಳ್ಳಬಹುದಾಗಿದ್ದರೂ, ವಿಯಾರಾ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ತಮ್ಮ ತಂದೆ ಐದು ವರ್ಷಗಳ ಹಿಂದೆ ನಿಧನರಾಗಿದ್ದು, ಅವರ ಯಾವುದೇ ಸಂಪರ್ಕಗಳನ್ನು ಬಳಸಿಕೊಂಡು ಚಿತ್ರರಂಗಕ್ಕೆ ಬಂದಿಲ್ಲ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;p&gt;ನನ್ನ ತಂದೆ ಐದು ವರ್ಷಗಳ ಹಿಂದೆ ನಿಧನರಾದರು. ಚಿತ್ರರಂಗಕ್ಕೆ ಬರಲು ಅವರ ಯಾವುದೇ ಸಂಪರ್ಕಗಳನ್ನು ನಾನು ಬಳಸಿಕೊಂಡಿಲ್ಲ. ಅಷ್ಟೇ ಅಲ್ಲ, ನನ್ನ ತಂದೆ &lsquo;ನಮ್ ಏರಿಯಾಲ್ ಒಂದಿನಾ&rsquo; ಸಿನಿಮಾ ನಿರ್ಮಿಸಿದ್ದರು ಎಂಬ ವಿಷಯವನ್ನು ನಾನು ಹೇಳುವವರೆಗೂ ಬಹುತೇಕರಿಗೆ ಗೊತ್ತೇ ಇರುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ನನ್ನದೇ ಆದ ಮೊದಲ ಅಧ್ಯಾಯವನ್ನು ಬರೆಯಬೇಕು ಎಂದು ನಾನು ನಿರ್ಧರಿಸಿದ್ದೇನೆ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾ ಬದಲಿಸಿದ ದೃಷ್ಟಿಕೋನ&lt;/strong&gt;&lt;/p&gt;&lt;p&gt;ಚಿಕ್ಕಂದಿನಿಂದಲೇ ಸಿನಿಮಾಗಳ ವಾತಾವರಣದಲ್ಲಿ ಬೆಳೆದಿರುವ ವಿಯಾರಾ, ಸಿನಿಮಾ ಸೆಟ್&zwnj;ಗಳಿಗೆ ಭೇಟಿ ನೀಡುವುದನ್ನು ಇಷ್ಟಪಡುತ್ತಿದ್ದರಂತೆ. ಆದರೆ ನಿಜವಾದ ನಟನೆಯ ಅನುಭವ ಏನು ಎಂಬುದನ್ನು ಅರಿಯಲು &lsquo;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸಿನಿಮಾ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಯುವರ್ಸ್&zwnj; ಸಿನ್ಸಿಯರ್ಲಿ ರಾಮ್&zwnj;&rsquo; ಸೆಟ್&zwnj;ನಲ್ಲಿ ಕೆಲಸ ಮಾಡುವಾಗ ನಾನು ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ಕಂಡುಕೊಂಡೆ. ಗಣೇಶ್&zwnj; ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಕೂಡ ನನಗೆ ವಿಶೇಷ ಅನುಭವವಾಗಿತ್ತು ಎಂದು ವಿಯಾರಾ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾನು ಯಾವಾಗಲೂ ಕನ್ನಡ ಹುಡುಗಿಯಾಗಿ ಗುರುತಿಸಿಕೊಳ್ಳಬೇಕು&rsquo;&lt;/strong&gt;&lt;/p&gt;&lt;p&gt;ವಿಯಾರಾಗೆ ಈಗಾಗಲೇ ಬೇರೆ ಭಾಷೆಗಳ ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ. ಮುಂದಿನ ಸಿನಿಮಾಗಳ ಕುರಿತು ಚರ್ಚೆಗಳೂ ನಡೆಯುತ್ತಿವೆ. ಆದರೆ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲೇ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕು ಎಂಬುದು ಅವರ ಗುರಿ.&lt;/p&gt;&lt;p&gt;ನಾನು ಎಲ್ಲಿಗೆ ಹೋದರೂ, ಯಾವ ಸಿನಿಮಾದಲ್ಲಿ ನಟಿಸಿದರೂ ನನ್ನನ್ನು ಯಾವಾಗಲೂ ಕನ್ನಡ ಹುಡುಗಿಯಾಗಿ ಗುರುತಿಸಬೇಕು ಎಂಬುದು ನನ್ನ ಆಸೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲೇ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಬೇಕು. ಮುಂದಿನ ಸಿನಿಮಾಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸಾಕಷ್ಟು ನಿರೀಕ್ಷೆಗಳೂ ಇವೆ. ಆದರೆ ಒಂದೊಂದೇ ಹೆಜ್ಜೆ ಇಡುತ್ತಾ ಮುಂದೆ ಸಾಗಲು ನಾನು ಬಯಸುತ್ತೇನೆ ಎಂದು ವಿಯಾರಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;ನಟನೆಯಲ್ಲಿ ನನಗೆ ಇಷ್ಟವಾಗೋದೇ ಬೇರೆ ಬೇರೆ ಜೀವನಗಳನ್ನು ಅನುಭವಿಸುವುದು&rsquo;&lt;/strong&gt;&lt;/h2&gt;&lt;p&gt;ವಿಯಾರಾ ಅವರನ್ನು ನಟನೆಯತ್ತ ಸೆಳೆಯುತ್ತಿರುವ ಪ್ರಮುಖ ಕಾರಣವೆಂದರೆ, ತಮ್ಮ ನಿಜ ಜೀವನದಲ್ಲಿ ಅನುಭವಿಸಲು ಸಾಧ್ಯವಾಗದ ವಿಭಿನ್ನ ಬದುಕುಗಳನ್ನು ಪಾತ್ರಗಳ ಮೂಲಕ ಅನುಭವಿಸುವ ಅವಕಾಶ.&lt;/p&gt;&lt;p&gt;ನಟಿಯಾಗಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುವ ಮೂಲಕ, ನಿಜ ಜೀವನದಲ್ಲಿ ನಾನು ಅನುಭವಿಸದಂತಹ ಹಲವು ಬದುಕುಗಳನ್ನು ಅನುಭವಿಸಬಹುದು. ವಿಭಿನ್ನ ಜನರನ್ನು ಅರ್ಥಮಾಡಿಕೊಳ್ಳಬಹುದು. ಅವರ ಜೀವನಶೈಲಿ, ಆಲೋಚಿಸುವ ರೀತಿ ಎಲ್ಲವನ್ನೂ ತಿಳಿದುಕೊಳ್ಳಬಹುದು. ಆ ಪಾತ್ರಗಳ ಮೂಲಕ ನನ್ನನ್ನೇ ನಾನು ಮತ್ತೊಂದು ರೀತಿಯಲ್ಲಿ ನೋಡಿಕೊಳ್ಳುವ ಅವಕಾಶ ಸಿಗುತ್ತದೆ. ಅದೇ ನನಗೆ ನಟನೆಯಲ್ಲಿ ಇಷ್ಟವಾಗುವ ವಿಷಯ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಇನ್ನು ಮುಂದಿನ ಸಿನಿಮಾಗಳಲ್ಲಿ ತಮ್ಮ ಮುಖ್ಯ ಗುರಿ ಸ್ಟಾರ್&zwnj; ಆಗುವುದಕ್ಕಿಂತ ನಟನೆಯ ಕಲೆಯನ್ನು ಕಲಿಯುವುದು, ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುವುದು ಹಾಗೂ ತಾವು ಯಾವ ರೀತಿಯ ನಟಿಯಾಗಬೇಕು ಎಂಬುದನ್ನು ಕಂಡುಕೊಳ್ಳುವುದು ಎಂದು ವಿಯಾರಾ ತಿಳಿಸಿದ್ದಾರೆ.&lt;/p&gt;&lt;p&gt;ಮುಂದಿನ ಕೆಲವು ಸಿನಿಮಾಗಳು ನನಗೆ ನಟನೆಯ ಕಲೆಯನ್ನು ಕಲಿಯುವ, ವಿಭಿನ್ನ ಪಾತ್ರಗಳನ್ನು ಪ್ರಯತ್ನಿಸುವ ಹಾಗೂ ನಾನು ಯಾವ ರೀತಿಯ ನಟಿಯಾಗಬೇಕು ಎಂಬುದನ್ನು ಕಂಡುಕೊಳ್ಳುವ ಪಯಣವಾಗಿರಲಿದೆ ಎಂದು ಹೇಳುವ ಮೂಲಕ ವಿಯಾರಾ ತಮ್ಮ ಸಿನಿ ಜರ್ನಿಯ ಮುಂದಿನ ಹೆಜ್ಜೆಯ ಸುಳಿವು ನೀಡಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kountheya-yours-sincerely-ram-kannada-movie-actress-viyara-vruddhi-on-finding-her-path-in-cinema-gvd/articleshow-xq7kpqx"/>
        </item>
    </channel>
</rss>
