<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 29 Jun 2026 17:04:01 +0530</lastBuildDate>
        <atom:link href="https://kannada.asianetnews.com/rss/celebrity-interviews" rel="self" type="application/rss+xml"/>
        <item>
            <title><![CDATA[Priya Anand Interview: ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ: ಪ್ರಿಯಾ ಆನಂದ್‌]]></title>
            <link>https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h</link>
            <guid isPermaLink="true">https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h</guid>
            <pubDate>Sat, 27 Jun 2026 17:47:48 +0530</pubDate>
            <description><![CDATA[&lt;p&gt;Priya Anand Interview: 'ಬಲರಾಮನ ದಿನಗಳು' ಚಿತ್ರದ ಬಗ್ಗೆ, ವಿನೋದ್ ಪ್ರಭಾಕರ್ ಜೊತೆಗಿನ ಅನುಭವ, ಪುನೀತ್ ರಾಜ್&zwnj;ಕುಮಾರ್ ನೆನಪುಗಳು ಮತ್ತು ಕನ್ನಡ ಚಿತ್ರರಂಗದ ಕುರಿತು ಪ್ರಿಯಾ ಆನಂದ್ ವಿಶೇಷ ಸಂದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4g3q6ef6g3vvbm8hh8dckc,imgname-ch-1782562544846.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಕನ್ನಡದಲ್ಲಿ ನಿಮಗೆ &lsquo;ಬಲರಾಮನ ದಿನಗಳು&rsquo; 4ನೇ ಚಿತ್ರ. ಹೇಗನಿಸುತ್ತಿದೆ?&lt;/strong&gt;&lt;/p&gt;&lt;p&gt;ತುಂಬಾ ಖುಷಿ ಇದೆ. ಪ್ರತಿ ಚಿತ್ರಕ್ಕೂ ತುಂಬಾ ಗ್ಯಾಪ್&zwnj; ಇದ್ದರೂ ನನ್ನನ್ನು ನೆನಪಿಟ್ಟುಕೊಂಡು ಕನ್ನಡದವರು ಕರೆಯುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನನಗೆ ಸಿಗುತ್ತಿರುವ ದೊಡ್ಡ ಗೌರವ ಅಂತಲೇ ಭಾವಿಸುತ್ತೇನೆ.&lt;/p&gt;&lt;p&gt;&lt;strong&gt;* ನಿಮ್ಮ ಹಿಂದಿನ ಕನ್ನಡ ಚಿತ್ರಗಳ ಬಗ್ಗೆ ಹೇಳುವುದಾದರೆ?&lt;/strong&gt;&lt;/p&gt;&lt;p&gt;ಆರೆಂಜ್&zwnj;, ರಾಜಕುಮಾರ, ಜೇಮ್ಸ್&zwnj;, ಕರಟಕ ದಮನಕ... ಇವು ನನ್ನ ಕನ್ನಡ ಚಿತ್ರಗಳು. ಪುನೀತ್&zwnj; ರಾಜ್&zwnj;ಕುಮಾರ್&zwnj; ಜೊತೆಗೆ ನಟಿಸಿದ್ದು ಮರೆಯಲಾಗದ ನೆನಪು. ಅವರ ಜೊತೆಗೆ ಎರಡು ಚಿತ್ರಗಳಲ್ಲಿ ನಟಿಸಿದ್ದು, &lsquo;ರಾಜಕುಮಾರ&rsquo; ನನ್ನ ಕೆರಿಯರ್&zwnj;ನ ಬ್ಲಾಕ್&zwnj; ಬಾಸ್ಟರ್&zwnj; ಸಿನಿಮಾ.&lt;/p&gt;&lt;p&gt;&lt;strong&gt;* ನಿಮ್ಮ ನೆನಪುಗಳಲ್ಲಿ ಪುನೀತ್&zwnj;ರಾಜ್&zwnj;ಕುಮಾರ್&zwnj; ಹೇಗಿರುತ್ತಾರೆ?&lt;/strong&gt;&lt;/p&gt;&lt;p&gt;ಪುನೀತ್&zwnj; ಅಂದರೆ ನಗು. ಅವರು ನನಗೆ ನಗು ಆಗಿಯೇ ನೆನಪಿನಲ್ಲಿದ್ದಾರೆ. ಅಭಿಮಾನಿಗಳ ಜೊತೆಗೆ ಅವರು ನಡೆದುಕೊಳ್ಳುವ ರೀತಿ, ಯಾರಾದರೂ ಫೋಟೋಗೆ ಬಂದಾಗ ಅವರನ್ನು ಮಾತನಾಡಿಸುವ ವಿಧಾನ, ಕೇರಿಂಗ್&zwnj; ನೇಚರ್&zwnj; ನನಗೆ ಇಷ್ಟ.&lt;/p&gt;&lt;p&gt;&lt;strong&gt;* ಬಲರಾಮನ ದಿನಗಳು ಚಿತ್ರಕ್ಕೆ ನೀವು ಕನೆಕ್ಟ್ ಆಗಿದ್ದು ಹೇಗೆ?&lt;/strong&gt;&lt;/p&gt;&lt;p&gt;ಚಿತ್ರದ ನಾಯಕ ವಿನೋದ್&zwnj; ಪ್ರಭಾಕರ್&zwnj; ಪತ್ನಿ ನಿಶಾ ಅವರು ನನಗೆ ಮೊದಲು ಕಾಲ್&zwnj; ಮಾಡಿದ್ದು. ಆ ನಂತರ ನಿರ್ದೇಶಕ ಕೆ.ಎಂ.ಚೈತನ್ಯ ಬಂದು ಕತೆ ಹೇಳಿದ್ದು.&lt;/p&gt;&lt;p&gt;&lt;strong&gt;* ಕನ್ನಡ ಚಿತ್ರದ ಅವಕಾಶ ಬಂದಿದ್ದರ ಬಗ್ಗೆ, ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಅಂದಾಗ ಏನನಿಸಿತು?&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನಲ್ಲಿ ನಟಿಸುವುದೇ ದೊಡ್ಡ ಅವಕಾಶ ಅಂತಾರೆ. ಆದರೆ, ನನ್ನ ಪಾಲಿಗೆ ಕನ್ನಡವೇ ದೊಡ್ಡ ಅವಕಾಶ. ಹೀಗಾಗಿ ಕನ್ನಡ ಎಂದಾಗ ನನಗೆ ಗ್ರ್ಯಾಂಡ್&zwnj; ವೆಲ್ಕಮ್ ಇದ್ದಂತೆ. ಚೈತನ್ಯ ಅವರ &lsquo;ಆ ದಿನಗಳು&rsquo; ಚಿತ್ರದ ಬಗ್ಗೆ ನನಗೆ ಗೊತ್ತು. ಕಲ್ಟ್&zwnj; ಕ್ಲಾಸಿಕ್&zwnj; ಗ್ಯಾಂಗ್&zwnj;ಸ್ಟರ್&zwnj; ಸಿನಿಮಾ ಮಾಡಿದವರ ಜೊತೆಗೆ ಕೆಲಸ ಅಂದಾಗ ಖುಷಿ ಆಯಿತು.&lt;/p&gt;&lt;p&gt;&lt;strong&gt;* ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?&lt;/strong&gt;&lt;/p&gt;&lt;p&gt;ನನ್ನ ಪಾತ್ರದ ಬಗ್ಗೆ ಹೇಳಿದರೆ ಕತೆ ಹೇಳಿದಂತೆ ಆಗುತ್ತದೆ. ಬಲರಾಮನ ಜೀವನದಲ್ಲಿ ಬರುವ ಬಹು ದೊಡ್ಡ ಪಾತ್ರ ನನ್ನದು.&lt;/p&gt;&lt;p&gt;&lt;strong&gt;* ವಿನೋದ್&zwnj; ಪ್ರಭಾಕರ್&zwnj; ಜೊತೆಗಿನ ನಟನೆ ಅನುಭವ ಹೇಗಿತ್ತು?&lt;/strong&gt;&lt;/p&gt;&lt;p&gt;ಒಳ್ಳೆಯ ವ್ಯಕ್ತಿ ಜೊತೆಗೆ ಸ್ಕ್ರೀನ್&zwnj; ಶೇರ್&zwnj; ಮಾಡಿಕೊಂಡಿದ್ದೇನೆ. ಅವರ ಡೆಡಿಕೇಷನ್&zwnj;ಗೆ ಅವರೇ ಸಾಟಿ. ತುಂಬಾ ಒಳ್ಳೆಯ ಕೋ-ಸ್ಟಾರ್&zwnj;. ನನ್ನ ಇಷ್ಟದ ಸಿನಿಮಾ ತೆಲುಗಿನ &lsquo;ಜಗದೇಕವೀರ ಅತಿಲೋಕ ಸುಂದರಿ&rsquo;. ಈ ಚಿತ್ರದಲ್ಲಿ ನಟಿಸಿದ್ದ ಪ್ರಭಾಕರ್&zwnj; ಅವರು ವಿನೋದ್&zwnj; ತಂದೆ ಅಂತ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯಿತು. ಆ ಸರ್ಪ್ರೈಸ್&zwnj; ಕೂಡ ವಿನೋದ್&zwnj; ಪ್ರಭಾಕರ್&zwnj; ಜೊತೆಗೆ ನಟಿಸುವುದಕ್ಕೆ ಉತ್ಸಾಹ ತುಂಬಿತು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h"/>
        </item>
        <item>
            <title><![CDATA[Vinod Prabhakar Interview: 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?]]></title>
            <link>https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy</link>
            <guid isPermaLink="true">https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy</guid>
            <pubDate>Sat, 27 Jun 2026 17:14:44 +0530</pubDate>
            <description><![CDATA[&lt;p&gt;Vinod Prabhakar: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಪಾತ್ರವಾಗಿಯೇ ಬದುಕಿದ್ದೇನೆ. 'ಸ್ಕ್ರಿಪ್ಟ್&zwnj;ನೇ ಹೀರೋ', 13 ಕೋಟಿ ಬಜೆಟ್ ಸಿನಿಮಾ, 'ಮಾದೇವ' ಯಶಸ್ಸು ಮತ್ತು ನಿರ್ದೇಶನದ ಕನಸಿನ ಬಗ್ಗೆ ವಿನೋದ್ ಪ್ರಭಾಕರ್ ವಿಶೇಷ ಸಂದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4e6kb50pt1wqpg0rqh8j6n,imgname-chc-1782560542052.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜೋಗಿ&lt;/strong&gt;&lt;/h2&gt;&lt;p&gt;&lt;strong&gt;* ಬಲರಾಮನ ದಿನಗಳು ಚಿತ್ರದ ಪಾತ್ರ ಎಷ್ಟು ಎಕ್ಸೈಟಿಂಗ್ ಆಗಿದೆ?&lt;/strong&gt;&lt;/p&gt;&lt;p&gt;ಪ್ರತೀ ಸಿನಿಮಾನೂ ನನಗೆ ಎಕ್ಸೈಟಿಂಗ್ ಅನ್ನಿಸುತ್ತದೆ. ನಾನು ಒಮ್ಮೆಗೆ ಒಂದು ಚಿತ್ರ ಮಾತ್ರ ಒಪ್ಪಿಕೊಳ್ಳುತ್ತೇನೆ. ಆ ಪಾತ್ರಕ್ಕೆ ತಕ್ಕಂತೆ ಸಿದ್ಧನಾಗುತ್ತೇನೆ. ಒಂದಿಷ್ಟು ದಿನ ಆ ಪಾತ್ರವೇ ಆಗಿ ಜೀವಿಸುತ್ತೇನೆ. &lsquo;ಮಾದೇವ&rsquo; ಚಿತ್ರದಲ್ಲಿ ಕೂಡ ಪರಕಾಯ ಪ್ರವೇಶ ಮಾಡಿ ನಟಿಸಿದ್ದಕ್ಕೆ ತುಂಬಾ ಅದ್ಭುತವಾಗಿ ಮೂಡಿಬಂದಿತ್ತು. ಈ ಸಲ ಕೂಡ ಬಲರಾಮ ಪಾತ್ರದಲ್ಲಿ ಜೀವಿಸಿದ್ದೇನೆ. ಇಷ್ಟಾದರೂ ಪ್ರತೀ ಸಿನಿಮಾ ಬರುವಾಗಲೂ ನನಗೆ ಭಯ ಇರುತ್ತದೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಇರುತ್ತದೆ. ಈಗಾಗಲೇ ಸಿನಿಮಾ ನೋಡಿದವರು ಈ ಸಿನಿಮಾದಲ್ಲಿ ವಿನೋದ್&zwnj; ಪ್ರಭಾಕರ್&zwnj; ಕಾಣಿಸಿಲ್ಲ, ಬಲರಾಮನೇ ಕಾಣಿಸಿಕೊಳ್ಳುತ್ತಾನೆ ಅಂತ ಹೇಳಿದ್ದಾರೆ. ಹಾಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ.&lt;/p&gt;&lt;p&gt;&lt;strong&gt;* ಮಾದೇವ ಬಳಿಕ ಬರುತ್ತಿರುವ ಸಿನಿಮಾ ಇದು, ಈ ಸಿನಿಮಾ ಎಷ್ಟು ಭಿನ್ನ?&lt;/strong&gt;&lt;/p&gt;&lt;p&gt;&lsquo;ಮಾದೇವ ಗೆದ್ದಿದ್ದರಿಂದ&rsquo; ಮತ್ತು ಅದರಿಂದ ತುಂಬಾ ಫ್ಯಾಮಿಲಿ ಆಡಿಯೆನ್ಸ್ ನನಗೆ ಕನೆಕ್ಟ್ ಆಗಿದ್ದಾರೆ. 2025ರಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಮೊದಲ ಸಿನಿಮಾ ಅದು. ಅಲ್ಲಿಂದ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಆ ಪ್ರೇಕ್ಷಕರನ್ನು ಬಲರಾಮನ ದಿನಗಳಿಗೂ ಕರೆತರಬೇಕು ಎಂಬ ಜವಾಬ್ದಾರಿ ಇತ್ತು. ಹಾಗಾಗಿ ಇದೊಂದು ಆ್ಯಕ್ಷನ್&zwnj; ಚಿತ್ರ ಆಗಿದ್ದರೂ ಅಂಡರ್&zwnj;ವರ್ಲ್ಡ್&zwnj; ಕತೆಯಾಧರಿತ ಸಿನಿಮಾ ಆಗಿದ್ದರೂ ಎಲ್ಲೂ ರಕ್ತಪಾತವಿಲ್ಲ. ಕೆಟ್ಟ ಪದಬಳಕೆ ಇಲ್ಲ. ಅಶ್ಲೀಲತೆ ಇಲ್ಲ. ಅಂಡರ್&zwnj;ವರ್ಲ್ಡ್&zwnj; ಕತೆಯನ್ನು ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ನಿರ್ದೇಶಕ ಕೆ.ಎಂ. ಚೈತನ್ಯ ನಿಭಾಯಿಸಿದ್ದಾರೆ. ಇದೊಂದು ಕಲ್ಟ್&zwnj; ಕ್ಲಾಸಿಕ್&zwnj; ಸಿನಿಮಾ ಆಗುವ ಭರವಸೆ ಇದೆ.&lt;/p&gt;&lt;p&gt;&lt;strong&gt;* ಈ ಸಿನಿಮಾ ರೂಪುಗೊಂಡ ಬಗೆ ಹೇಗೆ?&lt;/strong&gt;&lt;/p&gt;&lt;p&gt;ನನ್ನ ಕರಿಯರ್&zwnj;ನಲ್ಲೇ ಬಿಗ್ಗೆಸ್ಟ್&zwnj; ಬಜೆಟ್&zwnj; ಸಿನಿಮಾ ಇದು. ಹತ್ತಿರಹತ್ತಿರ 13ರಿಂದ 14 ಕೋಟಿ ರೂಪಾಯಿ ಖರ್ಚಾಗಿದೆ. ಅಂದಹಾಗೆ ಇದು &lsquo;ಮಾದೇವ&rsquo;ಗಿಂತ ಮೊದಲು ರೆಡಿಯಾಗಿದ್ದ ಸಿನಿಮಾ. ಆಗಲೇ ಅವರು ದೊಡ್ಡ ಬಜೆಟ್&zwnj;ನಲ್ಲಿ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ನಾನು ನಿರ್ಮಾಪಕರಿಗೆ ಏಳು ಕೋಟಿ ರೂಪಾಯಿ ದಾಟಬೇಡಿ, ಅಷ್ಟು ಮಾರ್ಕೆಟ್&zwnj; ನನಗಿದೆ ಅಂತ ಹೇಳಿದ್ದೆ. ಆದರೆ ನಿರ್ಮಾಪಕರಾದ ಶ್ರೇಯಸ್&zwnj; ಮತ್ತು ಪದ್ಮಾವತಿ ಅವರು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಅಂತ ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ. ನನ್ನ ಈ ಹಿಂದಿನ &lsquo;ಮಾದೇವ&rsquo; ಸಿನಿಮಾ ಚೆನ್ನಾಗಿ ಆಗಿರುವುದರಿಂದ, ಆ ಸಿನಿಮಾ ಸುಮಾರು 10 ರಿಂದ 11 ಕೋಟಿ ಬಿಸಿನೆಸ್ ಆಗಿರುವುದರಿಂದ ಈ ಸಿನಿಮಾ ಕೂಡ ಶೇ.60ರಷ್ಟು ಸೇಫ್&zwnj; ಆಗಿದೆ.&lt;/p&gt;&lt;p&gt;&lt;strong&gt;* ಮಾದೇವಗಿಂತ ನಂತರ ಈ ಸಿನಿಮಾ ಬಂದಿದ್ದರೆ ಒಪ್ಪಿಕೊಳ್ಳುತ್ತಿದ್ರಾ?&lt;/strong&gt;&lt;/p&gt;&lt;p&gt;ಖಂಡಿತಾ. ಇನ್ನೂ ಧೈರ್ಯ ಬರುತ್ತಿತ್ತು. ಈ ಸಿನಿಮಾ ಇನ್ನಷ್ಟು ಚೆನ್ನಾಗಿ ಮಾಡಬಹುದು ಎಂಬ ಭಾವ ಇರುತ್ತಿತ್ತು. ಅನುಭವದ ಮಾತು ಹೇಳುತ್ತಿದ್ದೆ. ನಾನು &lsquo;ಮಾದೇವ&rsquo; ಚಿತ್ರವನ್ನು 200- 250 ಸಲ ನೋಡಿದ್ದೆ. ಅದರಲ್ಲಿ ಕ್ರಿಯೇಟಿವ್&zwnj; ಹೆಡ್&zwnj; ಆಗಿ ಕೆಲಸ ಮಾಡಿದ್ದೆ. ಪ್ರತೀ ಫ್ರೇಮ್&zwnj;ಗೂ ವರ್ಕ್&zwnj; ಮಾಡಿದ್ದೆವು. ಆದರೆ ಈ ಚಿತ್ರವನ್ನು ನಾನು ಸಲವೂ ಪೂರ್ತಿಯಾಗಿ ನೋಡಿಲ್ಲ. 6 ತಿಂಗಳ ಹಿಂದೆ ಒಮ್ಮೆ ನೋಡಿದ್ದೆನಷ್ಟೇ. ನನಗೆ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಮೇಲೆ ಅಷ್ಟು ನಂಬಿಕೆ. ಅಪಾರ ಗೌರವ.&lt;/p&gt;&lt;p&gt;&lt;strong&gt;* ನಿಮ್ಮ ಕೆಲಸದ ರೀತಿ ಹೇಗಿರುತ್ತದೆ?&lt;/strong&gt;&lt;/p&gt;&lt;p&gt;ಈ ಸಿನಿಮಾ ಅಂತಲ್ಲ, ನಾನು ಪ್ರತೀ ಸಿನಿಮಾಗೂ ಹಾರ್ಡ್ ವರ್ಕ್ ಮಾಡುತ್ತೇನೆ. ಹಗಲು, ರಾತ್ರಿ ಕೆಲಸ ಮಾಡುತ್ತೇನೆ. ಪ್ರತೀ ಡೈಲಾಗ್ ಓದುತ್ತೇನೆ. ರಂಗಭೂಮಿ ಕಲಾವಿದನ ಥರ ಬರುತ್ತೇನೆ. ಎದುರಿನವರು ಏನು ಮಾತನಾಡುತ್ತಾರೆ ಎಂದು ಓದಿ ತಿಳಿದು ಅರ್ಥ ಮಾಡಿಕೊಂಡು ತಯಾರಾಗಿ ಬರುತ್ತೇನೆ. ಜೊತೆಗೆ ಸೆಟ್&zwnj;ನಲ್ಲೂ ರಿಹರ್ಸಲ್ ಮಾಡುತ್ತೇವೆ. ಅಷ್ಟು ಶ್ರಮ ಹಾಕುತ್ತೇನೆ. ಯಾಕೆಂದರೆ ಸಿನಿಮಾ ನನ್ನ ಕುಟುಂಬ.&lt;/p&gt;&lt;p&gt;&lt;strong&gt;* ಉದ್ಯಮದ ಕುರಿತು ಇಷ್ಟೆಲ್ಲಾ ತಿಳುವಳಿಕೆ ಹೇಗೆ ಬಂದಿತು?&lt;/strong&gt;&lt;/p&gt;&lt;p&gt;ತಂದೆಯವರಿಂದ ಬಂದಿದ್ದು. ಅವರು ನಿರ್ಮಾಪಕರ ಪರವಾಗಿ ಕೆಲಸ ಮಾಡುತ್ತಿದ್ದರು. ಅವರು ಅಂತಲ್ಲ, ಆಕಾಲದ ಎಲ್ಲಾ ನಟರೂ ಹಾಗೇ ಇದ್ದರು. ಅಣ್ಣಾವ್ರು, ಶಂಕರ್&zwnj;ನಾಗ್&zwnj;, ವಿಷ್ಣುವರ್ಧನ್&zwnj;, ಅನಂತ್&zwnj;ನಾಗ್&zwnj;, ತೂಗುದೀಪ ಶ್ರೀನಿವಾಸ್&zwnj;, ಸುಧೀರ್, ಮುಸುರಿ, ಸುಂದರಕೃಷ್ಣ ಅರಸ್&zwnj; ಎಲ್ಲರನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಆ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ಅವರೆಲ್ಲರೂ ಇಡೀ ತಂಡವನ್ನು ಕುಟುಂಬದಂತೆ ನೋಡಿಕೊಳ್ಳುತ್ತಿದ್ದರು. ನನಗೂ ನಾನು ಕೆಲಸ ಮಾಡುವ ಚಿತ್ರತಂಡದ ಪ್ರತಿಯೊಬ್ಬರ ಹೆಸರು ಗೊತ್ತಿರುತ್ತದೆ. ಸಿನಿಮಾ ಅನ್ನುವುದು ಫ್ಯಾಮಿಲಿ. ಪ್ರತಿಯೊಬ್ಬರೂ ಅದೇ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಒಳ್ಳೆಯ ಸಿನಿಮಾ ಆಗುವುದು. ಅಲ್ಲದೇ, ನನ್ನ ಕೆಲಸ ಏನು ಅನ್ನುವ ಅರಿವು ನನಗಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ನಿರ್ಮಾಪಕರು ಇವತ್ತು ಒಂದು ಸಿನಿಮಾದಿಂದ ಒಂದು ರೂಪಾಯಿ ಲಾಭ ವಾಪಸ್ ತೆಗೆದುಕೊಂಡು ಹೋದರೂ ಅವರು ಮತ್ತೆ ಸಿನಿಮಾ ಮಾಡುತ್ತಾರೆ. ಅದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ. ಮಾದೇವ ಚಿತ್ರದಿಂದ ಎಷ್ಟೋ ಮಂದಿ ಚಿತ್ರಮಂದಿರ ಮಾಲೀಕರು ಚಿತ್ರಮಂದಿರ ಮತ್ತೆ ತೆರೆಯುವಂತಾಯಿತು ಅಂತ ಹೇಳಿದ್ದಾರೆ. ಆ ಸಂತೋಷಕ್ಕಾಗಿ ನಾನು ದುಡಿಯುತ್ತೇನೆ.&lt;/p&gt;&lt;p&gt;&lt;strong&gt;* ನಿಮ್ಮ ಪಾಲಿಗೆ ಸ್ಕ್ರಿಪ್ಟ್&zwnj; ಏನು?&lt;/strong&gt;&lt;/p&gt;&lt;p&gt;ಸ್ಕ್ರಿಪ್ಟ್&zwnj; ನನಗೆ ಹೀರೋ. ನಟರಿಗೋಸ್ಕರ ಸ್ಕ್ರಿಪ್ಟ್&zwnj; ಅಲ್ಲ, ಸ್ಕ್ರಿಪ್ಟ್&zwnj;ಗಾಗಿ ನಟರು. ಸ್ಕ್ರಿಪ್ಟ್&zwnj; ಏನು ಬೇಡುತ್ತದೆಯೋ ಅದನ್ನು ನಾವು ಕೊಡಬೇಕು. &lsquo;ಮಾದೇವ&rsquo; ಚಿತ್ರದ ಎಡಿಟಿಂಗ್&zwnj;ನಲ್ಲಿ ನಾನೇ ಕೂತಿದ್ದೆ. ಅದರ ಇಂಟರ್&zwnj;ವಲ್&zwnj;ನಲ್ಲಿ ಮಾದೇವ ಪಾತ್ರಕ್ಕೆ ಒಂದೂವರೆ ಪೇಜ್&zwnj; ಡೈಲಾಗ್&zwnj; ಇತ್ತು. ನಾನು ಅದನ್ನು ನೋಡಿ, ಮಾದೇವ ಪಾತ್ರ ಕಡಿಮೆ ಮಾಡಿದಷ್ಟೂ ಆ ಪಾತ್ರಕ್ಕೆ ಒಳ್ಳೆಯದು, ಹಾಗಾಗಿ ತೆಗೆಯಿರಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ತಂದೆಯವರು ನನ್ನನ್ನು ಮೊದಲ ದಿನಗಳಲ್ಲೇ ಎಡಿಟಿಂಗ್ ನೋಡಲು ಕೂರಿಸಿದ್ದರು. ಹಾಗಾಗಿ ಎಡಿಟಿಂಗ್&zwnj; ಮೇಲೆ ನನಗೆ ಪ್ರೀತಿ ಜಾಸ್ತಿ. ಬಲರಾಮನ ದಿನಗಳ ಚಿತ್ರದಲ್ಲಿಯೂ ಹಲವು ಫೈಟ್, ಸೀನ್ ಎಡಿಟ್ ಮಾಡಿಕೊಟ್ಟಿದ್ದೇನೆ. ಹಾಗಾಗಿಯೇ ಚೈತನ್ಯ ಸರ್ ಮೊನ್ನೆ ಸಂದರ್ಶನದಲ್ಲಿ, ವಿನೋದ್&zwnj; ಪ್ರಭಾಕರ್&zwnj; ಒಬ್ಬ ಡೈರೆಕ್ಟರ್&zwnj; ಮೆಟೀರಿಯಲ್ ಅಂತ ಹೇಳಿದರು. &lsquo;ವಿನೋದ್&zwnj; ಅವರು ಅವರ ಪಾತ್ರ ಜಾಸ್ತಿ ಮಾಡಿ ಎಂದು ಕೇಳುವುದಿಲ್ಲ, ಆಕಡೆ ಪಾತ್ರ ಜಾಸ್ತಿ ಮಾಡಿ, ಈ ಡೈಲಾಗ್ ಅವರಿಗೆ ಕೊಡಿ ಸ್ಕ್ರಿಪ್ಟ್&zwnj;ಗೆ ಚೆನ್ನಾಗಿ ಆಗುತ್ತೆ ಅಂತ ಹೇಳುತ್ತಾರೆ. ಅಂಥಾ ಮನಸ್ಥಿತಿ ಇರುವುದು ಬಹಳ ಕಡಿಮೆ&rsquo; ಎಂದು ಹೇಳಿದ್ದಾರೆ. ಹೊಗಳಿದ್ದು ಅವರ ದೊಡ್ಡ ಗುಣ, ಆದರೆ ನನಗೆ ಆ ಥರ ವರ್ಕ್ ಮಾಡುವುದು ಇಷ್ಟ.&lt;/p&gt;&lt;p&gt;&lt;strong&gt;* ನೀವು ನಿರ್ದೇಶಕರಾಗುವ ದಿನ ದೂರವಿಲ್ಲ ಅನ್ನಿಸುತ್ತದೆ..&lt;/strong&gt;&lt;/p&gt;&lt;p&gt;ಸಿನಿಮಾ ಪ್ರೀತಿ ನನ್ನ ರಕ್ತದಲ್ಲಿಯೇ ಬಂದಿದೆ. ತಾಂತ್ರಿಕವಾಗಿ ಕೆಲಸ ಮಾಡುವುದು ನನಗಿಷ್ಟ. ತಂದೆಯವರ ಜೊತೆ ಬಹಳಷ್ಟು ಸಿನಿಮಾಗಳ ಎಡಿಟಿಂಗ್&zwnj; ಕೆಲಸ ತಿಳಿದುಕೊಂಡಿದ್ದೇನೆ.&lt;/p&gt;&lt;p&gt;&lt;strong&gt;* ಹೇಗಿದೆ ಪ್ರತಿಕ್ರಿಯೆ?&lt;/strong&gt;&lt;/p&gt;&lt;p&gt;ಎಲ್ಲಾ ಕಡೆ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಇನ್ನು ಜನ ಸಿನಿಮಾ ನೋಡಿ ನಿರ್ಧಾರ ಮಾಡಬೇಕು. ಈ ಸಲ ಇಂಡಸ್ಟ್ರಿ ಮಂದಿ ಬಹಳ ಸಪೋರ್ಟ್ ಮಾಡುತ್ತಿದ್ದಾರೆ. ಅವರವರ ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ಕುರಿತು ಹಂಚಿಕೊಂಡಿದ್ದಾರೆ. ಶುಭ ಹಾರೈಕೆ ಕಳುಹಿಸಿದ್ದಾರೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆಂಬ ಭರವಸೆ ಇದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy"/>
        </item>
        <item>
            <title><![CDATA[NS Shankar: ಒಂದು ಸಿನಿಮಾ, ಸಾವಿರ ನೆನಪು... ತೆರೆಗೆ ಸರಿದ ನಗಿಸಿದ ನಿರ್ದೇಶಕ ಎನ್‌.ಎಸ್‌.ಶಂಕರ್‌]]></title>
            <link>https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</link>
            <guid isPermaLink="true">https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</guid>
            <pubDate>Mon, 29 Jun 2026 17:03:55 +0530</pubDate>
            <description><![CDATA[&lt;p&gt;NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್&zwnj;.ಎಸ್&zwnj;. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9jdwp812tmpnjsze56h344,imgname-gxg-1782732747464.png" type="image/jpeg" height="390" width="690"/>
            <content:encoded><![CDATA[&lt;p&gt;ಎನ್&zwnj;.ಎಸ್&zwnj;. ಶಂಕರ್&zwnj;.... ಈ ಹೆಸರು ಚಿತ್ರರಂಗದವರ ಪಾಲಿಗೆ &lsquo;ಉಲ್ಟಾ ಪಲ್ಟಾ&rsquo; ಸಿನಿಮಾದ ನಿರ್ದೇಶಕರಾಗಿ, ಪತ್ರಿಕಾ ವಲಯದ ಪಾಲಿಗೆ &lsquo;ಸುದ್ದಿ ಸಂಗಾತಿ&rsquo;ಯಾಗಿ, ಸಾಹಿತ್ಯ ಹಾಗೂ ಚಳವಳಿಗಳ ದೃಷ್ಟಿಯಲ್ಲಿ ಸಾಂಸ್ಕೃತಿಕ ಚಿಂತಕರಾಗಿ ಸದಾ ನೆನಪಿರುತ್ತದೆ. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಪ್ರಗತಿಪರ ಚಳವಳಿಗಳ ಸಂಗಾತಿಯಾಗಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರ &lsquo;ಹುಡುಕಾಟ&rsquo;ವು ನಿಲ್ಲದ ಪಯಣ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಬೆಳೆದಿದ್ದು ಮಂಡ್ಯ ಜಿಲ್ಲೆ, ಓದಿದ್ದು ಮೈಸೂರು, ಪತ್ರಕರ್ತನಾಗಿಸಿದ್ದು ಬೆಂಗಳೂರು, ಸಾಂಸ್ಕೃತಿಕ ಚಿಂತಕ, ಹೋರಾಟಗಾರನ್ನಾಗಿಸಿದ್ದು ಚಳವಳಿಗಳು.&lt;/p&gt;&lt;p&gt;ಮೂಲತಃ ಪತ್ರಕರ್ತರಾಗಿ ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರು ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಮುಂದೆ ಸಾಂಸ್ಕೃತಿಕ ಚಳವಳಿ ಹಾಗೂ ಬಂಡಾಯ ಸಾಹಿತ್ಯದ ತತ್ವಗಳಿಗೆ ಧ್ವನಿಗೂಡಿಸಿದರು. ಇದರ ಜೊತೆಗೆ ಎನ್&zwnj;. ಎಸ್&zwnj;. ಶಂಕರ್&zwnj; ಅವರನ್ನು ತೀವ್ರವಾಗಿ ಸೆಳೆಯುತ್ತಿದ್ದು ಸಿನಿಮಾ. ಹೀಗಾಗಿಯೇ ತಮ್ಮ ಪ್ರಥಮ ಸಿನಿಮಾ ರಮೇಶ್&zwnj; ಅರವಿಂದ್&zwnj; ನಟನೆಯ &lsquo;ಉಲ್ಟಾ ಪಲ್ಟಾ&rsquo; (1997) ಮೂಲಕ ಇಡೀ ಸ್ಯಾಂಡಲ್&zwnj;ವುಡ್ ತಿರುಗಿ ನೋಡುವಂತೆ ಮಾಡಿದ್ದರು. ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಈಗಲೂ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.&lt;/p&gt;&lt;p&gt;ವೈಚಾರಿಕ ಬರಹ ಹಾಗೂ ಚಿಂತನೆಗಳ ಹಿನ್ನೆಲೆಯಿಂದ ಬಂದ ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು ಅವರ ಆತ್ಮೀಯರು ಆಪ್ತವಾಗಿ ಸ್ಮರಿಸಿಕೊಂಡಿದ್ದಾರೆ. &lsquo;ಬರವಣಿಗೆ ಅನ್ನುವುದು ಅಮೃತಕ್ಕೆ ಹಾರುವ ಗರುಡನ ಹಾಗಿರಬೇಕು ಎಂದು ನನ್ನ ಲೇಖನ ಓದಿ ಹೇಳಿದವರು ಎನ್&zwnj;.ಎಸ್&zwnj;. ಶಂಕರ್&zwnj; ಅವರು. ಆದರೆ, ಅವರ ಮಾತು ನನಗೆ ಆಗ ಅರ್ಥ ಆಗಲಿಲ್ಲ. ಇಂದು ಅವರನ್ನು ಕೊನೆಯ ಬಾರಿಗೆ ಕಂಡೆ. &lsquo;ಅಮೃತಕ್ಕೆ ಹಾರುವ ಗರುಡ&rsquo; ಮಾತು ರಿಂಗಣಿಸುತ್ತಿತ್ತು. ರಾತ್ರಿ ಮಲಗಿದವರು ಬೆಳಗ್ಗೆ ಇಲ್ಲ! ಸುಖದ ಸಾವು, ನಿಜ.&lt;/p&gt;&lt;p&gt;ಆದರೆ ಬಾಕಿ ಉಳಿದ ಕನಸುಗಳ ಗತಿಯೇನು? ಕ್ರಾಂತಿಕಾರಿ ವಿಚಾರಧಾರೆಯ ಅವರ ನೊಸಲಿಗೆ ಯಾರೋ ವಿಭೂತಿ ಬಳಿದಿದ್ದರು. ಮತ್ತಾರೋ ಅಕ್ಕಿ ಲೋಟದಲ್ಲಿ ಗಂಧದ ಕಡ್ಡಿ ಹಚ್ಚಿಟ್ಟರು. ಉರಿವ ದೀಪ ಬದಿಯಲ್ಲಿ ಇಟ್ಟವರು ಮತ್ತೊಬ್ಬರು. ಇದನ್ನು ಅಲ್ಲಿಂದ ನೋಡಿ ಶಂಕರ್&zwnj; ತಲೆ ಚಚ್ಚಿಕೊಂಡರೇ? ನಾನು ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು &lsquo;ಅಣ್ಣಾ&rsquo; ಎನ್ನುತ್ತಿದ್ದೆ. ಅವರು &lsquo;ಅಯ್ಯಾ&rsquo; ಎನ್ನುತ್ತಿದ್ದರು. ಅವರೊಂದಿಗೆ ಡಾ.ರಾಜ್&zwnj;ಕುಮಾರ್ ಮನೆಗೆ ಹೋಗಿ ಮಾತನಾಡಿಸಿದ್ದು, ಪಿ.ಲಂಕೇಶ್ ಅವರನ್ನು ಸಂದರ್ಶಿಸಿದ್ದು ಮರೆಯಲಾಗದ ಅನುಭವಗಳು. ಆ ದಿನಗಳ ಗಮ್ಮತ್ತೇ ಗಮ್ಮತ್ತು.&lt;/p&gt;&lt;p&gt;ನನ್ನ ಬಳಿ ಲೂನಾ ಮ್ಯಾಗ್ನಮ್ ಇತ್ತು. ಶಂಕರ್ ಹಿಂದೆ ಕೂರುತ್ತಿದ್ದರು. ನಾವು ಅದರಲ್ಲಿ ಇಡೀ ಬೆಂಗಳೂರು ಸುತ್ತಿದ್ದೇವೆ. ಶಂಕರ್ ಪ್ರತಿಭೆ ಕಂಡು ನಮಗೆಲ್ಲಾ ಅಚ್ಚರಿಯಾಗುತ್ತಿತ್ತು. ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂದು ಲೆಕ್ಕ ಹಾಕುತ್ತಿದ್ದೆವು. ಅದೇನೋ ಒಂದೂ ಕೈಗೂಡುತ್ತಿರಲಿಲ್ಲ. ಶಂಕರ್ ನಮಗೆಲ್ಲ ಆದರ್ಶ ನಾಯಕನಂತಿದ್ದರು. ಗಡ್ಡ ಬಿಟ್ಟು, ಜುಬ್ಬ ತೊಟ್ಟು, ಕತ್ತಿನ ಸುತ್ತ ಶಾಲು ಹಾಕಿಕೊಂಡು, ಎರಡು ಬೆರಳುಗಳ ನಡುವೆ ಸಿಗರೇಟು ಸೇದುತ್ತಾ ಹೋರಾಟಗಾರನಂತಿರುತ್ತಿದ್ದರು. ಅವರ ಮಾತು ಕೇಳುವುದೇ ಒಂದು ರೀತಿಯ ಸೊಗಸು&rsquo; ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಎನ್&zwnj;. ಎಸ್&zwnj;. ಶಂಕರ್&zwnj; ಅವರಿಗೆ ನುಡಿ ನಮನ ಸಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭೆಯೊಂದು ಕಣ್ಮರೆ&lt;/strong&gt;&lt;/h2&gt;&lt;p&gt;&lsquo;ಕನ್ನಡದ ಮಹತ್ವದ ಲೇಖಕ, ಪತ್ರಕರ್ತ, ಸಿನೆಮಾ ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವದ ಎನ್.ಎಸ್. ಶಂಕರ್ ಅವರು ನಮ್ಮ ಕಾಲದ ದೊಡ್ಡ ಪ್ರತಿಭೆಯೊಂದು ಕಣ್ಮರೆಯಾಯಿತು.&rsquo; ಎಂದು ನಿರ್ದೇಶಕಿ ಸುಮನಾ ಕಿತ್ತೂರು ಅವರು ನೆನಪಿಸಿಕೊಂಡಿದ್ದಾರೆ. &lsquo;ಕರ್ನಾಟಕದ ಪ್ರಗತಿಪರ ಚಿಂತಕರು, ಪತ್ರಕರ್ತರು, ಸಾಹಿತಿಗಳು, ಸಿನಿಮಾ ನಿರ್ದೇಶಕರೂ ಆದ ಎನ್.ಎಸ್ ಶಂಕರ್ ಅವರು ನಿನ್ನೆ ಕೋಟಿಗಾನಹಳ್ಳಿ ರಾಮಯ್ಯ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದವರು ಬೆಳಿಗ್ಗೆ ಏಳಲಿಲ್ಲ ಅನ್ನುವ ಸುದ್ದಿ ಕೇಳಿ ಬೇಸರವಾಯ್ತು. ಇತ್ತೀಚೆಗಷ್ಟೇ ಅವರ ಮಡದಿ ತೀರಿಕೊಂಡಿದ್ದರು. ಆ ನೋವಿನಿಂದ ಅವರು ಹೊರಗೆ ಬಂದಿರಲಿಲ್ಲ. ಅವರ &lsquo;ಉಲ್ಟಾ ಪಲ್ಟಾ&rsquo; ಸಿನಿಮಾ ಕನ್ನಡದ ಕೆಲವೇ ಕೆಲವು ಶ್ರೇಷ್ಠ ಕಾಮಿಡಿ ಸಿನಿಮಾಗಳಲ್ಲಿ ಒಂದು&rsquo; ಎಂದು ಮತ್ತೊಬ್ಬ ನಿರ್ದೇಶಕ ಪ್ರಕಾಶ್&zwnj; ರಾಜ್&zwnj; ಮೇಹು ನೆನಪು ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug"/>
        </item>
        <item>
            <title><![CDATA[Excl Interview: ಇದೇನು ಪೋಸ್‌ ಅಲ್ಲ, ರಿಯಲ್‌ ಆಗಿ ರೈತನನ್ನು ಮದುವೆ ಆಗ್ತಿರೋ Amruthadhaare Serial ದಿಯಾ!]]></title>
            <link>https://kannada.asianetnews.com/gallery/tv-talk/amruthadhaare-kannada-serial-diya-real-name-shwetha-gowda-marriage-who-is-suneel-2gbmiyf</link>
            <guid isPermaLink="true">https://kannada.asianetnews.com/gallery/tv-talk/amruthadhaare-kannada-serial-diya-real-name-shwetha-gowda-marriage-who-is-suneel-2gbmiyf</guid>
            <pubDate>Mon, 11 May 2026 09:37:13 +0530</pubDate>
            <description><![CDATA[&lt;p&gt;Amruthadhaare Serial Diya Real Name: ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರಿಗೆ ಈಗ 26 ವರ್ಷ ವಯಸ್ಸು. ಕೆಲವೇ ದಿನಗಳಲ್ಲಿ ಇವರು ಮದುವೆ ಆಗಲಿದ್ದಾರೆ. ಹಾಗಾದರೆ ಹುಡುಗ ಯಾರು? ಎಲ್ಲಿಯವರು? ಯಾವಾಗ ಮದುವೆ ಆಗಲಿದೆ? ಇದು ಅರೇಂಜ್?&zwnj; ಲವ್?&zwnj;&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krak7s8m8fxvxjc140zf7qfr,imgname-new-project---2026-05-11t092902.871-1778472183060.jpg" type="image/jpeg" height="390" width="690"/>
            <content:encoded><![CDATA[&lt;p&gt;Amruthadhaare Serial Diya Real Name: ಅಮೃತಧಾರೆ ಧಾರಾವಾಹಿ ದಿಯಾ ಪಾತ್ರಧಾರಿ ಶ್ವೇತಾ ಗೌಡ ಅವರಿಗೆ ಈಗ 26 ವರ್ಷ ವಯಸ್ಸು. ಕೆಲವೇ ದಿನಗಳಲ್ಲಿ ಇವರು ಮದುವೆ ಆಗಲಿದ್ದಾರೆ. ಹಾಗಾದರೆ ಹುಡುಗ ಯಾರು? ಎಲ್ಲಿಯವರು? ಯಾವಾಗ ಮದುವೆ ಆಗಲಿದೆ? ಇದು ಅರೇಂಜ್?&zwnj; ಲವ್?&zwnj;&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಶ್ವೇತಾ ಗೌಡ ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಜೊತೆಗೆ ಮದುವೆ ಪ್ಲ್ಯಾನ್&zwnj; ಬಗ್ಗೆ ಮಾತನಾಡಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್&zwnj; ಅಂತೆ. ಮನೆಯಲ್ಲಿ ಹುಡುಕಿದ ಹುಡುಗನ ಜೊತೆ ಮದುವೆ ಆಗುತ್ತಿದ್ದಾರೆ.&lt;/p&gt;&lt;img&gt;&lt;p&gt;ಸುನೀಲ್&zwnj; ಕೂಡ ಶ್ವೇತಾ ಗೌಡ ಅವರ ಊರಿನವರು. ಹೀಗಾಗಿ ಇನ್ನಷ್ಟು ಪರಿಚಯ ಇದೆಯಂತೆ. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್&zwnj; ರೆಸ್ಟ್&zwnj; ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್&zwnj; ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್&zwnj; ಆಗಿದೆ.&lt;/p&gt;&lt;img&gt;&lt;p&gt;ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್&zwnj; ಅವರನ್ನು ನೋಡಿದ ಮೇಲೆ ರಿಜೆಕ್ಟ್&zwnj; ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ.&lt;/p&gt;&lt;img&gt;&lt;p&gt;ಶ್ವೇತಾ ಗೌಡ ಅವರು ಮೇ 14ರಂದು ಮದುವೆ ಆಗಲಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಆತ್ಮೀಯರ ಸಾಕ್ಷಿಯಾಗಿ ಮದುವೆ ನಡೆಯಲಿದೆ.&lt;/p&gt;&lt;img&gt;&lt;p&gt;ಸುನೀಲ್&zwnj; ಎಂಬುವವರನ್ನು ಶ್ವೇತಾ ಗೌಡ ಮದುವೆ ಆಗುತ್ತಿದ್ದಾರೆ. ಸುನೀಲ್&zwnj; ಅವರು ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ, ಇವರು ರೈತರ ಕುಟುಂಬದಿಂದ ಬಂದವರು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/amruthadhaare-kannada-serial-diya-real-name-shwetha-gowda-marriage-who-is-suneel-2gbmiyf"/>
        </item>
        <item>
            <title><![CDATA[Exclusive: ಅವಳಿ ಮಕ್ಕಳು ಹುಟ್ಟಿ 3 ತಿಂಗಳು; 1 ತಿಂಗಳ ಡಯೆಟ್‌ನಲ್ಲೇ ಸಣ್ಣಗಾದ ರಾಮಾಚಾರಿ ಸೀರಿಯಲ್‌ ನಟಿ!]]></title>
            <link>https://kannada.asianetnews.com/gallery/tv-talk/ramachari-serial-actress-aishwarya-salimath-weight-loss-diet-and-workout-plan-4zgt7xo</link>
            <guid isPermaLink="true">https://kannada.asianetnews.com/gallery/tv-talk/ramachari-serial-actress-aishwarya-salimath-weight-loss-diet-and-workout-plan-4zgt7xo</guid>
            <pubDate>Sat, 09 May 2026 14:49:23 +0530</pubDate>
            <description><![CDATA[&lt;p&gt;Actress Aishwarya Salimath: ನಟಿ ಐಶ್ವರ್ಯಾ ಸಾಲೀಮಠ ಅವರು ಅವಳಿ ಮಕ್ಕಳ ತಾಯಿಯಾಗಿದ್ದು, ಸದ್ಯ ನಟನೆಯಿಂದ ದೂರ ಇದ್ದಾರೆ. ಈಗ ಇವರು ತೂಕ ಇಳಿಸಿಕೊಂಡಿದ್ದಾರೆ, ಅದು ಹೇಗೆ ಸಾಧ್ಯ ಆಯ್ತು ಎಂದು ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr60g3hv6jm1acdjvj2xd35s,imgname-new-project---2026-05-09t144730.843-1778318315067.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Aishwarya Salimath: ನಟಿ ಐಶ್ವರ್ಯಾ ಸಾಲೀಮಠ ಅವರು ಅವಳಿ ಮಕ್ಕಳ ತಾಯಿಯಾಗಿದ್ದು, ಸದ್ಯ ನಟನೆಯಿಂದ ದೂರ ಇದ್ದಾರೆ. ಈಗ ಇವರು ತೂಕ ಇಳಿಸಿಕೊಂಡಿದ್ದಾರೆ, ಅದು ಹೇಗೆ ಸಾಧ್ಯ ಆಯ್ತು ಎಂದು ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಶ್ವರ್ಯಾ ಸಾಲೀಮಠ ಅವರು ಮಕ್ಕಳಿಗೆ ಜನ್ಮ ಕೊಟ್ಟು ಮೂರು ತಿಂಗಳಾಯ್ತು, ಮಕ್ಕಳಿಗೆ ವಜ್ರ ವೈಢೂರ್ಯ ಎಂದು ಹೆಸರು ಇಟ್ಟಿದ್ದಾರೆ. ಬಾಣಂತನದ ಆರೈಕೆಯಲ್ಲಿರುವ ಅವರೀಗ ಆರೋಗ್ಯಕರ ಆಹಾರ ತಿಂದು ಸಣ್ಣಗಾಗಿದ್ದಾರೆ. ಡಯೆಟ್&zwnj; ಶುರು ಮಾಡಿ, ಒಂದು ತಿಂಗಳಿಗೆ ಒಂದಿಷ್ಟು ತೂಕ ಇಳಿಸಿಕೊಂಡಿದ್ದಾರೆ. &ldquo;ತೂಕ ಇಳಿಸಿಕೊಂಡಿರೋದು ಎಷ್ಟು ಎಂದು ಈಗ ಹೇಳೋದಿಲ್ಲ, ಇನ್ನಷ್ಟು ಸಣ್ಣ ಆಗೋದು ಬಾಕಿ ಇದೆ&rdquo; ಎಂದು ಐಶ್ವರ್ಯಾ ಸಾಲೀಮಠ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಗರ್ಭಿಣಿ, ಬಾಣಂತನ ಎಂದು ಮನೆಯಲ್ಲಿ ಅಮ್ಮ, ಚೆನ್ನಾಗಿ ತಿನ್ನೋಕೆ ಹೇಳಿದ್ದರು. ನಾನು ಹಾಗೆ ತಿಂದು ದಪ್ಪ ಆದೆ. ಗರ್ಭಿಣಿ ಇದ್ದಾಗ 100kg ಕೂಡ ಆಗಿದ್ದೆ. ಈಗ ಮಕ್ಕಳಿಗೆ ಎದೆ ಹಾಲು ಕುಡಿಸುತ್ತಿರೋದರಿಂದ ಒಂದಿಷ್ಟು ಕ್ಯಾಲರಿ ಬರ್ನ್&zwnj; ಕೂಡ ಆಗ್ತಿದೆ ಎಂದು ಐಶ್ವರ್ಯಾ ಹೇಳಿದ್ದಾರೆ. ನಾನು ಮೊದಲು ಜಂಕ್&zwnj; ತಿನ್ನುತ್ತಿದ್ದೆ, ಡಯೆಟ್&zwnj; ಶುರು ಮಾಡುವ ಮೂರು ದಿನದ ಮುಂಚೆ ನನಗೆ ಇಷ್ಟವಾಗಿದ್ದೆಲ್ಲ ತಿಂದಿದ್ದೆ, ಆಮೇಲೆ ಸ್ವೀಟ್&zwnj;, ಕರಿದ ತಿಂಡಿ ತಿನ್ನೋದು ಬೇಡ ಎಂದು ಫಿಕ್ಸ್&zwnj; ಆದೆ. ಹೀಗಾಗಿ ಈಗ ಅಷ್ಟು ಕ್ರೇವಿಂಗ್ಸ್&zwnj; ಆಗ್ತಿಲ್ಲ.&lt;/p&gt;&lt;img&gt;&lt;p&gt;ನಮ್ಮ ಡಯೆಟ್&zwnj;, ವರ್ಕೌಟ್&zwnj; ಚೆನ್ನಾಗಿದ್ದರೆ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನನಗೆ ಈಗ ಮೂಡ್&zwnj; ಸ್ವಿಂಗ್ಸ್&zwnj; ಆಗ್ತಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಮಕ್ಕಳ ಆರೋಗ್ಯಕ್ಕಾಗಿ ನಾನು ಚೆನ್ನಾಗಿ, ಆರೋಗ್ಯಕರವಾಗಿ ತಿನ್ನಬೇಕು ಎಂಬುದು ಗಮನದಲ್ಲಿದೆ ಎನ್ನುತ್ತಾರೆ ಐಶ್ವರ್ಯಾ ಸಾಲೀಮಠ.&lt;/p&gt;&lt;img&gt;&lt;p&gt;ಮಕ್ಕಳನ್ನು ಕೇರ್&zwnj; ಮಾಡೋದರಲ್ಲಿ&zwnj; ಒಂದಿಷ್ಟು ವ್ಯಾಯಾಮ ಆಗ್ತಿದೆ. ಸದ್ಯ ವರ್ಕೌಟ್ ಮಾಡಲಾಗುತ್ತಿಲ್ಲ. ಈಗ ಹುಬ್ಬಳ್ಳಿಯಲ್ಲಿದ್ದು, ಬೆಂಗಳೂರಿಗೆ ಹೋದ್ಮೇಲೆ ವರ್ಕೌಟ್&zwnj; ಮಾಡಬೇಕು ಎಂದುಕೊಂಡಿದ್ದೇನೆ. ವರ್ಕೌಟ್&zwnj; ಮಾಡಿದರೆ ನಾನು ಇನ್ನಷ್ಟು ಸಣ್ಣ ಆಗ್ತೀನಿ ಎಂಬ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಮೊದಲು ಚಪಾತಿ, ಅನ್ನ ಸಾಂಭಾರ್&zwnj; ಎಂದು ತಿನ್ನುತ್ತಿದ್ದೆ, ಪ್ರೋಟೀನ್&zwnj; ತಿನ್ನುತ್ತಿರಲಿಲ್ಲ. ಈಗ ಕಾರ್ಬ್&zwnj; ಕಡಿಮೆ ಮಾಡಿ ಪ್ರೋಟೀನ್&zwnj;, ಪೈಬರ್&zwnj;ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಈಗ ತರಕಾರಿ, ಹಣ್ಣು,ಮೊಟ್ಟೆ, ಪನೀರ್&zwnj;, ಸೊಪ್ಪನ್ನು ಹೆಚ್ಚು ತಿನ್ನುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಜಾಸ್ತಿ ನೀರು ಕುಡಿಯುತ್ತೇನೆ. ಮನೆಯ ಊಟ ತಿಂದು ಸಣ್ಣಗಾಗುತ್ತಿದ್ದೇನೆ ಎಂದಿದ್ದಾರೆ ಐಶ್ವರ್ಯಾ&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/ramachari-serial-actress-aishwarya-salimath-weight-loss-diet-and-workout-plan-4zgt7xo"/>
        </item>
        <item>
            <title><![CDATA[Exclusive Interview: ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ: ಪ್ರಿಯಾ ಸುದೀಪ್]]></title>
            <link>https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw</link>
            <guid isPermaLink="true">https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw</guid>
            <pubDate>Fri, 05 Jun 2026 16:21:56 +0530</pubDate>
            <description><![CDATA[&lt;p&gt;ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಪಾತ್ರದ ಶೇಡ್ಸ್&zwnj; ಅದ್ಭುತವಾಗಿತ್ತು ಎಂದು ಪ್ರಿಯಾ ಸುದೀಪ್ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktbphx7fcw2stkergas4qhc9,imgname-bjbj-1780656698607.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/p&gt;&lt;p&gt;&lt;strong&gt;* ಮ್ಯಾಂಗೋ ಪಚ್ಚ ಕತೆಯನ್ನು ಆರಿಸಿಕೊಳ್ಳಲು, ನಿರ್ಮಾಣ ಮಾಡಲು ಮುಖ್ಯ ಪ್ರೇರಣೆ ಏನು?&lt;/strong&gt;&lt;/p&gt;&lt;p&gt;ನೈಜ ಘಟನೆಗಳನ್ನು ಆಧರಿಸಿದ ಕತೆ ಇದು. ಈ ಕತೆ ನಡೆಯುವ ಕಾಲದ ಮೈಸೂರಿನ ವಾತಾವರಣ ನನ್ನ ಬಾಲ್ಯವನ್ನು ನೆನಪಿಸುತ್ತಿತ್ತು. ಜೊತೆಗೆ ಈ ಕತೆ, ಪಾತ್ರ ಸಂಚಿತ್&zwnj;ಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅದು ಮೊದಲ ಪ್ರೇರಣೆ. ಅಲ್ಲದೇ, ಈ ಕತೆಯನ್ನು ತುಂಬಾ ವಿಭಿನ್ನವಾಗಿ ನಿರೂಪಿಸಿದ್ದಾರೆ. ನಾನಂತೂ ಈ ರೀತಿಯ ಸಿನಿಮಾವನ್ನು ಕನ್ನಡದಲ್ಲಿ ನೋಡಿಲ್ಲ.&lt;/p&gt;&lt;p&gt;&lt;strong&gt;* ನಿರ್ಮಾಪಕಿಯಾಗಿ ನಿಮಗೆ ಈ ಕತೆಯಲ್ಲಿ ಕಂಡ ಪ್ಲಸ್&zwnj;ಪಾಯಿಂಟ್&zwnj; ಏನು?&lt;/strong&gt;&lt;/p&gt;&lt;p&gt;ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಆದರೆ ನಮಗೆ ಈ ಕತೆ ಮತ್ತು ಪಾತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆ ಪಾತ್ರದ ಶೇಡ್ಸ್&zwnj; ಅದ್ಭುತವಾಗಿತ್ತು. ಆ ಪಾತ್ರವೇ ಸಂಚಿತ್&zwnj;ನನ್ನು ಡಿಫರೆಂಟಾಗ್ ಕಾಣಿಸುವಂತಿತ್ತು. ಹಾಗಾಗಿ ನಾವು ಆ ಪಾತ್ರದ ಮೇಲೆ ಭರವಸೆ ಇಟ್ಟೆವು. ಅದೇ ಕಾರಣದಿಂದ ನಾವು ಬೇರೆ ಯಾವುದೇ ಅಂಶಗಳನ್ನು ಸೇರಿಸಿಲ್ಲ. ಬೇಕಿದ್ದರೆ ಸುದೀಪ್&zwnj; ಅವರನ್ನು ಒಂದೆರಡು ಸೀನ್&zwnj;ಗಳಲ್ಲಿ ನಟಿಸಿ ಅಂತ ಕೇಳಬಹುದಿತ್ತು. ಆದರೆ ಕತೆಗೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ನಾವು ಆ ಪ್ರಯತ್ನ ಮಾಡಿಲ್ಲ. ಕತೆಗೆ ಏನು ನ್ಯಾಯ ಸಲ್ಲಬೇಕೋ ಅದು ಸಂದಿದೆ.&lt;/p&gt;&lt;p&gt;&lt;strong&gt;* ನಿರ್ಮಾಪಕಿಯಾಗಿ ಈ ಚಿತ್ರಕ್ಕೆ ನೀವೇನಾದರೂ ಸಲಹೆ, ಸೂಚನೆ ಕೊಟ್ಟಿದ್ದಿದೆಯೇ?&lt;/strong&gt;&lt;/p&gt;&lt;p&gt;ನಿರ್ಮಾಪಕಿಯಾಗಿ ಅಲ್ಲ, ಸುದೀಪ್&zwnj; ಪತ್ನಿಯಾಗಿ, ಅವರ ಅಭಿಮಾನಿಯಾಗಿ ಸಲಹೆ ಕೊಟ್ಟೆ. ಈ ಸಿನಿಮಾದಲ್ಲಿ ಸುದೀಪ್&zwnj; ಅವರಿಗೋಸ್ಕರ ಸಣ್ಣ ಟ್ರಿಬ್ಯೂಟ್ ಕೊಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಹಾಗಾಗಿ ಇಂಟ್ರೊಡಕ್ಷನ್&zwnj; ಸೀನ್&zwnj; ಹೇಗಿದ್ದರೆ ಚೆಂದ ಅಂತ ಐಡಿಯಾ ತಿಳಿಸಿದೆ. ಎಲ್ಲರೂ ಇಷ್ಟ ಪಟ್ಟರು. ಆ ಸೀನ್&zwnj; ಅನ್ನು ಸುದೀಪ್&zwnj; ಅವರ ಎಲ್ಲಾ ಅಭಿಮಾನಿಗಳು ಇಷ್ಟ ಪಡುತ್ತಾರೆ ಅನ್ನುವ ನಂಬಿಕೆ ನನಗಿದೆ.&lt;/p&gt;&lt;p&gt;&lt;strong&gt;* ಸಂಚಿತ್ ಸಂಜೀವ್&zwnj; ತಾಳ್ಮೆಯಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ. ಅವರ ಈ ಪಯಣ ಹೇಗಿತ್ತು?&lt;/strong&gt;&lt;/p&gt;&lt;p&gt;ಅವನು ತುಂಬಾ ಸುಲಭವಾಗಿ ಬಂದಿಲ್ಲ. ಶ್ರಮಪಟ್ಟು ಇಲ್ಲಿಯವರೆಗೂ ಬಂದಿದ್ದಾನೆ. ಓದಿನಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಫೋಟೋಗ್ರಫಿ ಅಂದ್ರೆ ಬಹಳ ಇಷ್ಟವಿತ್ತು. ಪಿಯುಸಿ ಆದ ಮೇಲೆ ಅವನು ಒಂದು ದಿನ ಬಂದು ದೀಪು ಹತ್ತಿರ ಚಿತ್ರರಂಗ ಸೇರುವ ಆಸೆಯನ್ನು ಹೇಳಿದ. ಅವನಿಗೆ ನಿರ್ದೇಶನ ಮಾಡುವ ಆಸೆ ಇತ್ತು. ವಿವರವಾಗಿ ಮಾತನಾಡಿದ ಮೇಲೆ, ಸುದೀಪ್&zwnj; ಅವರು ಅವನಿಗೆ ನ್ಯೂಯಾರ್ಕ್&zwnj;ನಲ್ಲಿ ಫಿಲಂ ಕೋರ್ಸ್&zwnj; ಮಾಡಲು ಕಳುಹಿಸಿದರು. ಅಲ್ಲಿಂದ ಬಂದು ಸುದೀಪ್&zwnj; ನಿರ್ದೇಶನದ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ. ಸುದೀಪ್&zwnj;ರಿಂದ ಬೈಸಿಕೊಂಡ. ಆಗಲೇ ಸ್ಕ್ರೀನ್&zwnj;ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಾನೆ ಎಂಬ ಅಭಿಪ್ರಾಯವನ್ನು ಸಾಕಷ್ಟು ಜನ ಹೇಳಿದರು. ಆಮೇಲೆ &lsquo;ಜಿಮ್ಮಿ&rsquo; ಸ್ಕ್ರಿಪ್ಟ್&zwnj; ಬರೆದ. ಈಗ ಕನ್ನಡಿಗರ ಪ್ರೀತಿಗಾಗಿ ನಿಮ್ಮೆದುರು ಬಂದಿದ್ದಾನೆ. ನಮ್ಮನೆ ಮಗುವನ್ನು ಕನ್ನಡಿಗರು ಅವರ ಮನೆಮಗುವಾಗಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ.&lt;/p&gt;&lt;p&gt;&lt;strong&gt;* ಈ ಕತೆ ಕೇಳಿದಾಗ ಸುದೀಪ್&zwnj; ಅ&zwj;ವರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರಿಗೆ ಕತೆ ಹೇಳುವುದು ತುಂಬಾ ಇರಿಟೇಟ್&zwnj; ಆಗುವ ಪ್ರಕ್ರಿಯೆ. ಕತೆ ಹೇಳುತ್ತಿದ್ದರೆ ಅವರ ಮುಖದಲ್ಲಿ ಯಾವುದೇ ಭಾವನೆಗಳೇ ಇರುವುದಿಲ್ಲ. ಕತೆ ಪೂರ್ತಿಯಾದ ಮೇಲೆ ಯೋಚನೆ ಮಾಡಿ ಹೇಳುತ್ತೇನೆ ಅನ್ನುತ್ತಾರೆ, ಅಷ್ಟೇ. ನಾವೆಲ್ಲಾ ಕತೆ ಕೇಳಿದ ಮೇಲೆ, ಅವರಿಗೆ ಕತೆ ಹೇಳಿಸಿದೆವು. ಕತೆ ಪೂರ್ತಿಯಾಗಿ ಕೇಳಿ, ಸಂಚಿತ್&zwnj; ಬಳಿ ನಿನಗೆ ಇಷ್ಟವಾಯಿತೇ ಎಂದು ಕೇಳಿದರು. ನಾವೆಲ್ಲರೂ ಇಷ್ಟಪಟ್ಟಿದ್ದೆವು. ಹಾಗಾದರೆ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದರು.&lt;/p&gt;&lt;p&gt;&lt;strong&gt;* ಈ ಪಯಣದಲ್ಲಿ ಅವರ ಜೊತೆ ಸಿನಿಮಾ ಕುರಿತು ಚರ್ಚಿಸುತ್ತಿದ್ರಾ?&lt;/strong&gt;&lt;/p&gt;&lt;p&gt;ನಾನು ಚಿತ್ರೀಕರಣಕ್ಕೆ ಹೋಗಿ ಬಂದಾಗೆಲ್ಲಾ ಅವರ ಜೊತೆ ಏನೇನು ನಡೆಯಿತು ಎಲ್ಲವನ್ನೂ ಹೇಳುತ್ತಿದ್ದೆ. ಬಹಳ ಸಲ ಅವರು ಅವರ ಅನುಭವದ ಆಧಾರದ ಮೇಲೆ ತಪ್ಪುಗಳನ್ನು ಕಂಡುಹಿಡಿದು ಹೇಳುತ್ತಿದ್ದರು. ಸಾಕಷ್ಟು ಒಳ್ಳೆಯ ಐಡಿಯಾಗಳನ್ನು ಹೇಳಿದ್ದಾರೆ. ಅದರಿಂದ ನನಗೆ ಸಹಾಯವಾಗಿದೆ. ನಮ್ಮ ತಂಡದಲ್ಲಿ ಬಹುತೇಕ ಯುವ ಪ್ರತಿಭೆಗಳೇ ಇದ್ದಾರೆ. ಅವರಿಗೆಲ್ಲಾ ಸುದೀಪ್&zwnj; ಸೆಟ್&zwnj;ಗೆ ಬರಬೇಕು ಅಂತ ಆಸೆ ಇತ್ತು. ನಾನು ಹೇಳಿದ ಮೇಲೆ, ಕ್ಲೈಮ್ಯಾಕ್ಸ್&zwnj; ಶೂಟಿಂಗ್&zwnj; ಇದ್ದ ದಿನ ಸೆಟ್&zwnj;ಗೆ ಬಂದರು. ಅವರು ಅಲ್ಲಿ ಕೂತಲ್ಲಿ ಕೂರಲ್ಲ. ಸೆಟ್&zwnj; ಪ್ರಾಪರ್ಟಿ ಸರಿ ಮಾಡುವುದು. ಚಿತ್ರೀಕರಣ ನೋಡುವುದು. ಆ ಎರಡು ದಿನ ಸೆಟ್&zwnj; ತುಂಬಾ ಲೈವ್ಲಿಯಾಗಿತ್ತು.&lt;/p&gt;&lt;p&gt;&lt;strong&gt;* ನಿರ್ಮಾಣ ನಿಮಗೆ ಎಷ್ಟು ಸವಾಲಾಗಿತ್ತು?&lt;/strong&gt;&lt;/p&gt;&lt;p&gt;ನನಗೆ ಒಂದು ಒಳ್ಳೆಯ ತಂಡವಿತ್ತು. ಕಾರ್ತಿಕ್&zwnj; ಮತ್ತು ಯೋಗಿ ರಾಜ್&zwnj; ನನಗೆ ಹೆಚ್ಚು ಒತ್ತಡ ಆಗದ ಹಾಗೆ ನೋಡಿಕೊಂಡರು. ಎಲ್ಲವನ್ನೂ ನಾವು ಮಾದಲೇ ಮಾತಾಡಿಕೊಂಡಿರುತ್ತಿದ್ದೆವು. ನಾನು ಚಿತ್ರೀಕರಣಕ್ಕೆ ಹೋಗಿದಿದ್ದರೂ ಆ ದಿನದ ಎಲ್ಲಾ ಮಾಹಿತಿ ನನಗೆ ತಲುಪುತ್ತಿದ್ದವು. ನಿರ್ದೇಶಕ ವಿವೇಕ್&zwnj; ಸೇರಿದಂತೆ ಇಡೀ ತಂಡ ಸೊಗಸಾಗಿ ಕಾರ್ಯನಿರ್ವಹಿಸಿದೆ. ಪ್ರಶಾಂತ್&zwnj; ಹಿರೇಮಠ್&zwnj;, ಭಾವನಾ, ಮಯೂರ್&zwnj; ಪಟೇಲ್&zwnj;, ಉಗ್ರಂ ಮಂಜು ಉತ್ತಮ ಅಭಿನಯ ನೀಡಿದ್ದಾರೆ. ಹಾಗಾಗಿ ಎಲ್ಲವೂ ಸುಲಭವಾಯಿತು.&lt;/p&gt;&lt;p&gt;&lt;strong&gt;* ತೃಪ್ತಿ ಇದೆಯೇ?&lt;/strong&gt;&lt;/p&gt;&lt;p&gt;ಈ ಸಿನಿಮಾ ಮೇಲೆ ಬಹಳ ವಿಶ್ವಾಸ ಇದೆ ನನಗೆ. ಸಿನಿಮಾ ರಿಲೀಸ್&zwnj; ಆಗುತ್ತಿರುವ ಈ ವೇಳೆಯಲ್ಲಿ ಸ್ವಲ್ಪ ನರ್ವಸ್&zwnj; ಆಗಿದ್ದೇನೆ. ಆದರೆ ಸಂಚಿತ್&zwnj;ಗೆ ಈ ಸಿನಿಮಾದಿಂದ ಒಳ್ಳೆಯದಾಗುತ್ತಿದೆ, ಅವನು ಹೊಸ ಪಯಣ ಆರಂಭಿಸುತ್ತಿದ್ದಾನೆ ಎಂಬ ಸಾರ್ಥಕತೆ ಇದೆ.&lt;/p&gt;&lt;h2&gt;&lt;strong&gt;* ಈ ಸಿನಿಮಾದಿಂದ ನೀವು ಕಲಿತ ಪಾಠವೇನು?&lt;/strong&gt;&lt;/h2&gt;&lt;p&gt;1. ಕತೆಯೇ ಸ್ಟಾರ್&zwnj;. ವಿಶಿಷ್ಟ ಕತೆಯನ್ನು ಆರಿಸಬೇಕು ಮತ್ತು ಆ ಕತೆಯನ್ನು ನಂಬಬೇಕು. ವಿಭಿನ್ನ ರೀತಿಯಲ್ಲಿ ಆ ಕತೆ ಹೇಳಬೇಕು.&lt;/p&gt;&lt;p&gt;2. ಸಿನಿಮಾ ಒಂದು ಮ್ಯಾಜಿಕ್&zwnj;. ಎಡಿಟಿಂಗ್&zwnj; ಟೇಬಲ್&zwnj;ನಲ್ಲಿ, ಸಂಗೀತ ಸಂಯೋಜನೆಯಲ್ಲಿ ಸಿನಿಮಾ ಬದಲಾಗುವ ಪ್ರಕ್ರಿಯೆಯನ್ನು ನೋಡಿ ನಾನು ವಿಸ್ಮಿತಳಾಗಿದ್ದೇನೆ. ಈ ಪ್ರಕ್ರಿಯೆ ನನಗೆ ತುಂಬಾ ಖುಷಿ ಕೊಟ್ಟಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Kannadaprabha News</dc:creator>
            <atom:link href="https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw"/>
        </item>
        <item>
            <title><![CDATA[ಹೆರಿಗೆಯಾದ್ಮೇಲೆ ಅದೊಂದು ಟಿಪ್ಸ್‌ ಫಾಲೋ ಮಾಡಿ ಸಣ್ಣಗಾದ ಮನೆದೇವ್ರು ಸೀರಿಯಲ್‌ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ!]]></title>
            <link>https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d</link>
            <guid isPermaLink="true">https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d</guid>
            <pubDate>Sun, 15 Feb 2026 12:08:10 +0530</pubDate>
            <description><![CDATA[&lt;p&gt;ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್&zwnj; ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್&zwnj; ಕೂಡ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khg03r190ek5gpc5y7nccnyd,imgname-new-project--32--1771137261609.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆದೇವ್ರು ಧಾರಾವಾಹಿ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಈಗ ವಿಯಾರಾ ಶರ್ಮ ಎಂಬ ಮುದ್ದಾದ ಮಗುವಿನ ತಾಯಿ ಕೂಡ ಹೌದು. ಸದ್ಯ ವಿದೇಶದಲ್ಲಿರುವ ಅವರು ಮಗುವಿಗೆ ಜನ್ಮ ನೀಡಿದ ಬಳಿಕ ತೂಕ ಇಳಿಸಿಕೊಂಡು, ಫಿಟ್&zwnj; ಆಗಿದ್ದಾರೆ. ಇದರ ಹಿಂದಿನ ಸೀಕ್ರೇಟ್&zwnj; ಕೂಡ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆಗಿ, ಮಗು ಆದಮೇಲೆ ಮಹಿಳೆಯ ದೇಹ ಬದಲಾಗುತ್ತದೆ, ಮಗು ಬೆಳವಣಿಗೆಯಾಗುತ್ತ, ಜವಾಬ್ದಾರಿ ಬಂದಾಗ ತೂಕ ಇಳಿಕೆಯಾಗುತ್ತದೆ. ನಾನು ಮೊದಲೂ ವರ್ಕೌಟ್&zwnj; ಮಾಡುತ್ತಿದ್ದೆ. ಮಗು ಹುಟ್ಟಿ ಆರು ತಿಂಗಳು ಬಳಿಕ ಡಾಕ್ಟರ್&zwnj; ಸಲಹೆ ಮೇರೆಗೆ ವರ್ಕೌಟ್&zwnj; ಮಾಡುತ್ತೇನೆ. ನನ್ನ ತಾಯಿ ಇದ್ದಿದ್ದರಿಂದ ಆರಾಮಾಗಿ ವರ್ಕೌಟ್&zwnj; ಮಾಡಿಕೊಂಡೆ.&lt;/p&gt;&lt;img&gt;&lt;p&gt;ನಾನು ಅಷ್ಟಾಗಿ ಡಯೆಟ್&zwnj; ಮಾಡೋದಿಲ್ಲ, ಮಗುವಿನ ಆರೋಗ್ಯಕ್ಕೋಸ್ಕರ ನಾನು ಕೂಡ ಚೆನ್ನಾಗಿ ತಿನ್ನಬೇಕಿತ್ತು. ಮಗುವಿಗೆ ಎರಡು ವರ್ಷ ಆಗುವವರೆಗೂ ನಾನು ಎದೆ ಹಾಲು ಕುಡಿಸಿದ್ದೇನೆ, ಆಗ ಹಸಿವು ಕೂಡ ಆಗುತ್ತಿತ್ತು, ಹಾಗೆಯೇ ತಿನ್ನುತ್ತಿತ್ತು, ಎದೆಹಾಲು ಕುಡಿಸಿದಾಗ ಕ್ಯಾಲರಿ ಬರ್ನ್&zwnj; ಆಗುತ್ತಿತ್ತು.&lt;/p&gt;&lt;img&gt;&lt;p&gt;ಬಾಣಂತನ ಮಾಡಿಕೊಳ್ಳಲೇಬೇಕು. ಸೋರೆಕಾಯಿ ಪಲ್ಯ, ಸೊಪ್ಪಿನ ಪಲ್ಯ, ಶುಂಠಿ ಕಷಾಯ, ಕಾಫಿ ಕೂಡ ಕುಡಿದಿದ್ದೇನೆ. ಮಗು ಹುಟ್ಟಿ ಮೂರು ತಿಂಗಳ ಕಾಲ ನೀವು ಎಷ್ಟು ನೀಟ್&zwnj; ಆಗಿ ಬಾಣಂತನ ಮಾಡಿಕೊಳ್ತೀರೋ ಅಷ್ಟು ಒಳ್ಳೆಯದು, ಆಗ ತೂಕ ಇಳಿಕೆ ಆಗುವುದು.&lt;/p&gt;&lt;img&gt;&lt;p&gt;ದಪ್ಪ ಆಗ್ತಿದೀನಿ ಎಂದು ಬೇಸರ ಮಾಡಿಕೊಂಡರೆ, ಮತ್ತೆ ದಪ್ಪ ಆಗುತ್ತೇವೆ. ಆ ಚಿಂತೆಯಿಂದ ಇನ್ನಷ್ಟು ದಪ್ಪ ಆಗ್ತೀವಿ. ನಾವು ಯುನಿವರ್ಸ್&zwnj;ಗೆ ಏನು ಕೊಡ್ತೀವೋ, ಯುನಿವರ್ಸ್&zwnj; ಕೂಡ ನಮಗೆ ಅದನ್ನು ಕೊಡುತ್ತದೆ. ಹೈ ಪ್ರೋಟಿನ್&zwnj; ಡಯೆಟ್&zwnj;, ವರ್ಕೌಟ್&zwnj;ನಿಂದಲೇ ಸಣ್ಣ ಆಗಬಹುದು.&lt;/p&gt;&lt;img&gt;&lt;p&gt;ಮೊದಲು ಆಪಲ್&zwnj; ಸೈಡರ್&zwnj; ವಿನೆಗಾರ್&zwnj;, ಜೇನುತುಪ್ಪ ಹಾಕಿಕೊಂಡು ಕುಡಿಯುತ್ತಿದ್ದೇನೆ. ಇದರಿಂದ ಏನೇ ತಿಂದರೂ ಬೇಗ ಜೀರ್ಣಕ್ರಿಯೆ ಆಗುತ್ತದೆ. ಗಟ್&zwnj; ಹೆಲ್ತ್&zwnj; ಚೆನ್ನಾಗಿ ಇಡಲು ಸಹಾಯ ಆಗುವುದು.&lt;/p&gt;&lt;img&gt;&lt;p&gt;ನಿಮ್ಮ ಸಂಗಾತಿ ನಿಮಗೆ ಸಮಯ ಕೊಡಬೇಕು, ಬೆಂಬಲ ಕೊಡಬೇಕು. ಇಲ್ಲ ಅಂದ್ರೆ ಗರ್ಭಿಣಿಗೆ ಕಷ್ಟ ಆಗುವುದು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/manedevru-serial-actress-archana-lakshminarasimhaswamy-weight-loss-diet-workout-9h6c57d"/>
        </item>
        <item>
            <title><![CDATA[Exclusive Interview: ಹಳ್ಳಿ ಕಡೆಗೆ ಹೋದಾಗಲೆಲ್ಲ ಪೊಲಿಟಿಕಲ್‌ ಪವರ್‌ ಬೇಕು ಅನಿಸುತ್ತದೆ: ರಂಗಾಯಣ ರಘು]]></title>
            <link>https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6</link>
            <guid isPermaLink="true">https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6</guid>
            <pubDate>Mon, 15 Jun 2026 16:11:49 +0530</pubDate>
            <description><![CDATA[&lt;p&gt;Exclusive Interview: 400 ಚಿತ್ರಗಳ ಸಂಭ್ರಮದಲ್ಲಿರುವ ಹಿರಿಯ ನಟ ರಂಗಾಯಣ ರಘು ತಮ್ಮ ಸಿನಿಮಾ ಪಯಣ, ರಂಗಭೂಮಿ ಅನುಭವ, ರಾಜಕೀಯ ಪ್ರವೇಶದ ಅವಕಾಶ, ಕೃಷಿ ಜೀವನ ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5dwzb668e5pfc3p5h27y34,imgname-jfik-1781520039270.png" type="image/jpeg" height="390" width="690"/>
            <content:encoded><![CDATA[&lt;p&gt;ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್&zwnj; ಮಾಡಕ್ಕೆ ಬಿಡಲ್ಲ, ಕಟ್&zwnj; ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು ಎಂದು ಸಂದರ್ಶನದಲ್ಲಿ ನಟ ರಂಗಾಯಣ ರಘು ಹೇಳಿದರು.&lt;/p&gt;&lt;p&gt;&lt;strong&gt;ಆರ್.ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;* 400 ಚಿತ್ರಗಳ ಸಂಭ್ರಮದಲ್ಲಿದ್ದೀರಿ, ಹೇಗನಿಸುತ್ತಿದೆ?&lt;/strong&gt;&lt;/p&gt;&lt;p&gt;ಕೆಲಸ ಮಾಡಿಕೊಂಡು ಹೋಗ್ತಾ ಇದ್ದೀನಿ ಅನಿಸುತ್ತದೆ. ನನಗಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಾಕಷ್ಟು ಕಲಾವಿದರ ಇದ್ದಾರೆ.&lt;/p&gt;&lt;p&gt;&lt;strong&gt;* ಈಗ ಸೆಟ್ಟೇರಿರುವ 400ನೇ ಚಿತ್ರದ ಬಗ್ಗೆ ಹೇಳುವುದಾದರೆ?&lt;/strong&gt;&lt;/p&gt;&lt;p&gt;ಚಿತ್ರದ ಹೆಸರು &lsquo;ಹೊಸ ಜೀವನ&rsquo;. ಮೋಹನ್&zwnj; ಕುಮಾರ್&zwnj; ಹನುಮಯ್ಯ ನಿರ್ದೇಶನ, ಜಿ.ಎಸ್&zwnj;. ಸಂಜೀವ್&zwnj; ಪ್ರಸಾದ್&zwnj; ನಿರ್ಮಾಣದ ಚಿತ್ರ. ಸ್ನೇಹ, ಪ್ರೀತಿ, ಜೀವನದ ಹೋರಾಟ ಹಾಗೂ ಮೌಲ್ಯಗಳ ಸುತ್ತಾ ಸಾಗುವ ಕತೆ. ಕತೆ ಕೇಳಿದ ಕೂಡಲೇ ನನ್ನ ಪಾತ್ರ ನನ್ನ ಕಣ್ಣ ಮುಂದೆ ಬಂತು.&lt;/p&gt;&lt;p&gt;&lt;strong&gt;* ನಿಮ್ಮ ಕಲೆಯ ಬೇರು ಶುರುವಾಗಿದ್ದು ಎಲ್ಲಿಂದ?&lt;/strong&gt;&lt;/p&gt;&lt;p&gt;ನಮ್ಮ ಊರು ತುಮಕೂರು ಜಿಲ್ಲೆ, ಪಾವಗಡ ತಾಲಕು, ಕೊತ್ತೂರು ಎನ್ನುವ ಗ್ರಾಮ. ನನ್ನ ತಂದೆ ಚಿಕ್ಕರಂಗಪ್ಪ, ಬಯಲಾಟದ ಕಲಾವಿದರು. ಬಹುಶಃ ನನ್ನ ಕಲೆಯ ಬೇರುಗಳು ಅಲ್ಲಿಂದಲೇ ಬಂದಿರಬೇಕು.&lt;/p&gt;&lt;p&gt;&lt;strong&gt;* ರಂಗಭೂಮಿಯಿಂದ ಸಿನಿಮಾಗೆ ಬಂದಿದ್ದು ಹೇಗೆ?&lt;/strong&gt;&lt;/p&gt;&lt;p&gt;1992ರಲ್ಲಿ ಬಿ.ಸುರೇಶ್&zwnj; ಅವರ ನಿರ್ದೇಶನದ, ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ &lsquo;ಕನಸುಗಿತ್ತಿ&rsquo; ಟೆಲಿಫಿಲಮ್&zwnj; ಮೂಲಕ. ಯೋಗರಾಜ್&zwnj; ಭಟ್&zwnj; ಅವರು ಬರೆದ ಮೊದಲ ಕತೆ ಇದು. ಹಂಸಲೇಖ ನಿರ್ದೇಶನದ &lsquo;ಸುಗ್ಗಿ&rsquo; ನನ್ನ ಮೊದಲ ಚಿತ್ರ ಬಿಡುಗಡೆ ಆಗಲಿಲ್ಲ. &lsquo;ಭೂಮಿ ತಾಯಿ ಚೊಚ್ಚಲ ಮಗ&rsquo;, &lsquo;ಮೇಘ ಬಂತು ಮೇಘ&rsquo;, &lsquo;ಭೂಮಿಗೀತೆ&rsquo;, &lsquo;ಚಂದ್ರೋದಯ&rsquo;, &lsquo;ಸಿಂಗಾರವ್ವ&rsquo;, &lsquo;ಅರಮನೆ&rsquo;, &lsquo;ದುನಿಯಾ&rsquo;, &lsquo;ಮೊದಲಸಲ&rsquo; ಇವು ನನ್ನ ಆರಂಭದ ದಿನಗಳ ಕೆಲ ಚಿತ್ರಗಳು.&lt;/p&gt;&lt;p&gt;&lt;strong&gt;* ಚಿತ್ರರಂಗದಲ್ಲಿ ನಿಮಗೆ ತಿರುವು ಸಿಕ್ಕಿದ್ದು ಎಲ್ಲಿಂದ?&lt;/strong&gt;&lt;/p&gt;&lt;p&gt;ಹೀರೋ ಅಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕೊಟ್ಟ ಮೊದಲ ಚಿತ್ರ &lsquo;ಅರ್ಥ&rsquo;. ಇದು ಬಿ.ಸುರೇಶ್&zwnj; ಅವರಿಗೆ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ರಾಜ್ಯ ಪ್ರಪಶಸ್ತಿ ಬಂದರೆ, ನನಗೆ ಎಸ್&zwnj;ಐಸಿದಿಂದ (ಈಗಿನ ಸೈಮಾ) ಬೆಸ್ಟ್&zwnj; ಆ್ಯಕ್ಟರ್&zwnj; ಪ್ರಶಸ್ತಿ ನೀಡಿತು. ಆ ನಂತರ ಸುದೀಪ್&zwnj; ಅವರ &lsquo;ಧಮ್&zwnj;&rsquo; ಚಿತ್ರದ ಮೂಲಕ ನನಗೆ ತಿರುವು ಸಿಕ್ಕಿತು.&lt;/p&gt;&lt;p&gt;&lt;strong&gt;* ನೀವೇ ಬೇಕು ಅಂತ ಬರೋ ನಿರ್ದೇಶಕರ ಕತೆಗಳು ಹೇಗಿರುತ್ತವೆ?&lt;/strong&gt;&lt;/p&gt;&lt;p&gt;ರಿಮೇಕ್&zwnj; ಅಲ್ಲದ ಊರಿನ, ನೆಲದ ಕತೆಗಳನ್ನು ಮಾಡಿಕೊಳ್ಳುವ ನಿರ್ದೇಶಕರ ನಾನು ಬೇಕು ಅಂದುಕೊಂಡು ಬರುತ್ತಿದ್ದಾರೆ.&lt;/p&gt;&lt;p&gt;&lt;strong&gt;* ಪ್ರೇಕ್ಷಕರು ನಿಮ್ಮ ಯಾವ ಚಿತ್ರಗಳನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ?&lt;/strong&gt;&lt;/p&gt;&lt;p&gt;ಡೈಕ್ಟರ್&zwnj; ಸ್ಪೆಷಲ್&zwnj;, ಶ್ರೀರಾಮ್, ರಂಗ ಎಸ್&zwnj;ಎಸ್&zwnj;ಎಲ್&zwnj;ಸಿ, ದುನಿಯಾ, ಶಾಖಾಹಾರಿ, ಅಜ್ಞಾತವಾಸಿ, ಟಗರು ಪಲ್ಯ, ಮೂರನೇ ಕೃಷ್ಣಪ್ಪ, ಕೃಷ್ಣಂ ಪ್ರಣಯ ಸಂಖಿ, ಮುಂದೆ ಪ್ರೇಮದ ಊರಲ್ಲಿ, ಪಾರ್ಥನ ಪ್ರಪಂಚ, ದೇವಿ ಮಹಾತ್ಮೆ, ಹೊಸ ಜೀವನ ಚಿತ್ರಗಳನ್ನೂ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;* ರಂಗಭೂಮಿಯಿಂದ ಸಿನಿಮಾ ಕಡೆಗೆ ಬಂದಾಗ ಇದ್ದ ಭಾವನೆಗಳೇನು?&lt;/strong&gt;&lt;/p&gt;&lt;p&gt;ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್&zwnj; ಮಾಡಕ್ಕೆ ಬಿಡಲ್ಲ, ಕಟ್&zwnj; ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು. ಸಿನಿಮಾಗಳಿಗೆ ನಾನು ಅಜೆಸ್ಟ್&zwnj; ಆಗಲು 10 ವರ್ಷ ಬೇಕಾಯಿತು.&lt;/p&gt;&lt;p&gt;&lt;strong&gt;* ರೀಲ್ಸ್&zwnj; ಜಮಾನದಲ್ಲಿ ಸಿನಿಮಾ ನಟ-ನಟಿಯರಿಗೆ ರಂಗಭೂಮಿ ಕಲಿಕೆ ಬೇಕಾ?&lt;/strong&gt;&lt;/p&gt;&lt;p&gt;ಖಂಡಿತ ಬೇಕು. ಕನಿಷ್ಠ 5 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದರೆ ಚಿತ್ರರಂಗ ಶ್ರೀಮಂತವಾಗುತ್ತದೆ. ಧೀರ ನಗಡಿ, ಪ್ರಸನ್ನ ಭಾವನೆ, ಗಂಭೀರತೆ... ಇವು ರಂಗಭೂಮಿಯಲ್ಲಿ ಕಲಿಸುತ್ತಾರೆ. ಜಿಮ್&zwnj; ಹೋಗಿ ಬಂದರೆ ಅಂಡರ್&zwnj;ವೇರ್&zwnj; ಕಂಪನಿಗಳಿಗೆ ಮಾಡೆಲ್&zwnj; ಆಗಬಹುದು, ಕಲಾವಿದ ಆಗಕ್ಕೆ ಆಗಲ್ಲ. ಶರೀರ ಮತ್ತು ಶಾರೀರ ಎರಡೂ ಸರಿಯಾಗಿ ರೂಪಿಸುವುದು ರಂಗಭೂಮಿ.&lt;/p&gt;&lt;p&gt;&lt;strong&gt;* ನೀವು ಕಲಾವಿದ ಆಗದೆ ಹೋಗಿದ್ದರೆ?&lt;/strong&gt;&lt;/p&gt;&lt;p&gt;ಕೃಷಿಕ ಆಗುತ್ತಿದ್ದೆ. ಈಗಲೂ ಬಿಡಿದಿ ಬಳಿ ಜಮೀನು ತೆಗೆದುಕೊಂಡಿದ್ದೇನೆ. ಅಲ್ಲಿ ಮರ, ಗಿಡಗಳನ್ನು ಬೆಳೆಸಿದ್ದೇನೆ. ನಾಲ್ಕೈದು ಹಸುಗಳಿವೆ. ಎಲ್ಲೇ ಹೋದರೂ ಒಂದು ಗಿಡ ತರುತ್ತೇನೆ. ಶೂಟಿಂಗ್&zwnj; ಇಲ್ಲದಿದ್ದಾಗ ಇದೇ ಜಮೀನಿನಲ್ಲಿರುತ್ತೇನೆ. ಸೈಕಲಾಜಿ ಆಂಡ್&zwnj; ಥಿಯೇಟರ್&zwnj; ಓದಿರುವ ಮಗಳು ಚುಕ್ಕಿಗೂ ನಟನೆ ಬಗ್ಗೆ ಆಸಕ್ತಿ ಇದೆ. ಇತ್ತೀಚೆಗೆ &lsquo;ರೋಶಮನ್&zwnj;&rsquo; ನಾಟಕದಲ್ಲಿ ನಟಿಸಿದ್ದಳು. ನನ್ನ ಪತ್ನಿ ಮಂಗಳ ರಂಗಭೂಮಿಯಲ್ಲೇ ಇದ್ದಾರೆ.&lt;/p&gt;&lt;p&gt;&lt;strong&gt;* ನೀವು ಮಾಡಲೇಬೇಕಂತಿರೋ ಪಾತ್ರ ಯಾವುದು?&lt;/strong&gt;&lt;/p&gt;&lt;p&gt;ಮಹಾಭಾರತದ ವಿಧುರನ ಪಾತ್ರ. ಇವತ್ತಿಗೂ ಅದು ಪ್ರಸ್ತುತ. ಈ ವಿಧುರನ ಕ್ಯಾರೆಕ್ಟರ್&zwnj; ಮಾಡುವ ಆಸೆ ಇದೆ.&lt;/p&gt;&lt;h2&gt;&lt;strong&gt;* ಸ್ಟಾರ್&zwnj; ಪೋಷಕ ನಟರಾಗಿರುವ ನಿಮಗೆ ರಾಜಕೀಯ ಪಕ್ಷಗಳ ಅಹ್ವಾನ ಬಂದಿರಲಿಲ್ಲವೇ?&lt;/strong&gt;&lt;/h2&gt;&lt;p&gt;ಖಂಡಿತ ಬಂದಿತ್ತು. ಮಧುಗಿರಿಯಿಂದ ಶಾಸಕನಾಗಿ ಸ್ಪರ್ಧಿಸಬೇಕೆಂದು ತಯಾರಿ ಕೂಡ ಮಾಡಿಕೊಂಡಿದ್ದೆ. ಆದರೆ, ರಾಜಕಾರಣಿಗಳ ಬಗ್ಗೆ ಸಾಮಾನ್ಯ ಜನರಿಗೆ ಇರುವ ಅಭಿಪ್ರಾಯ ನೋಡಿ ಅಯ್ಯೋ ಈ ರಾಜಕೀಯ ಯಾಕೆ ಬೇಕು ಅನಿಸುತ್ತದೆ. ಆದರೆ, ನಮ್ಮ ಹಳ್ಳಿಗೆ ಹೋದಾಗ ಅಲ್ಲಿನ ಸಮಸ್ಯೆಗಳು ನೋಡಿದಾಗ ಪೊಲಿಟಿಕಲ್&zwnj; ಪವರ್&zwnj; ಬೇಕು ಅನಿಸುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6"/>
        </item>
        <item>
            <title><![CDATA[Simple Suni Interview: ಈ ಕತೆಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಚಿತ್ರವೇ ಸ್ಫೂರ್ತಿ: ಸಿಂಪಲ್‌ ಸುನಿ]]></title>
            <link>https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6</link>
            <guid isPermaLink="true">https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6</guid>
            <pubDate>Sat, 27 Jun 2026 16:55:39 +0530</pubDate>
            <description><![CDATA[&lt;p&gt;Simple Suni Interview: 'ಮೋಡ ಕವಿದ ವಾತಾವರಣ' ಚಿತ್ರದ ಕಥೆ ಹೇಗೆ ಹುಟ್ಟಿತು? ಶೀಲಂ ಹೀರೋ ಆದದ್ದು ಹೇಗೆ? ದಿಗಂತ್ ಜೊತೆ ಅಂಡರ್&zwnj;ವರ್ಲ್ಡ್ ಸಿನಿಮಾ ಯೋಜನೆ ಏನು? ಸಿಂಪಲ್&zwnj; ಸುನಿ ವಿಶೇಷ ಸಂದರ್ಶನ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4d6td4tj6tk63h3x5g6g5p,imgname-hch-1782559500708.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಈ ಚಿತ್ರದ ಕತೆ ಹುಟ್ಟಿಕೊಂಡ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;ಲಾಕ್&zwnj;ಡೌನ್&zwnj; ಸ್ಥಿತಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲದಿದ್ದಾಗ ಒಂದು ರೆಸಾರ್ಟ್&zwnj;ನಲ್ಲಿ ಶುರುವಾಗಿ ಅದೇ ರೆಸಾರ್ಟ್&zwnj;ನಲ್ಲಿ ಮುಗಿಯುವ ಕತೆ ಅಂತ ಮಾಡಿಕೊಂಡಿದ್ದು. ಕೊನೆಗೆ ಲಾಕ್&zwnj;ಡೌನ್&zwnj; ಮುಗಿದಾಗ ಕತೆಗೆ ಬೇರೆ ಬೇರೆ ತಿರುವುಗಳು ಸೇರಿಕೊಂಡವು.&lt;/p&gt;&lt;p&gt;&lt;strong&gt;* ಇದು ಶೀಲಂಗಾಗಿಯೇ ಮಾಡಿದ ಕತೆನಾ?&lt;/strong&gt;&lt;/p&gt;&lt;p&gt;ಕತೆ ಮಾಡಿಕೊಂಡಾಗ ಹೀರೋ ಯಾರೂ ಅಂತ ಫೈನಲ್&zwnj; ಆಗಿರಲಿಲ್ಲ. ಶೀಲಂ ನನ್ನ ಜೊತೆಗೇ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನಿಗೆ ಕತೆಯನ್ನು ಆಗಾಗ ನರೇಟ್&zwnj; ಮಾಡುತ್ತಿದ್ದೆ. ಹೀಗೆ ರೀಡಿಂಗ್&zwnj; ಕೊಡ್ತಾ ಕೊಡ್ತಾ ಕತೆ ಪೂರ್ತಿ ಆದಮೇಲೆ ಶೀಲಂ ಹೀರೋ ಅಂತ ಆಗಿದ್ದು.&lt;/p&gt;&lt;p&gt;&lt;strong&gt;* ಈ ನಿಮ್ಮ ಚಿತ್ರ ನೋಡುವುದಕ್ಕೆ ಕಾರಣಗಳೇನು?&lt;/strong&gt;&lt;/p&gt;&lt;p&gt;ನನ್ನ ಸಿನಿಮಾ ಜನರನ್ನು ತಲುಪುದಕ್ಕೆ ಸಾಧ್ಯವಾಗುವ ಎಲ್ಲಾ ಅಂಶಗಳು ಇವೆ. ಲೈಟ್&zwnj; ಹಾರ್ಟ್&zwnj; ಟಚ್ಚಿಂಗ್&zwnj; ಕತೆ, ತುಂಬಾ ಸುಂದರವಾಗಿ ಕಾಣುವ ಫೋಟೋಗ್ರಫಿ, ಮನಸ್ಸಿಗೆ ಹಿತವಾಗಿ ಸಂಗೀತ, ಯಾವುದೇ ಗೊಂದಲಗಳಿಲ್ಲದ ಸಂಭಾಷಣೆಗಳು, ಈ ಝನ್&zwnj; ಜೀ ಜನರೇಷನ್&zwnj; ಜೊತೆಗೆ ದೊಡ್ಡವರು ಕೂಡ ನೋಡುವಂತಹ ಸಿನಿಮಾ ಇದು.&lt;/p&gt;&lt;p&gt;&lt;strong&gt;* ಈ ಸಿನಿಮಾ ಕತೆಗೆ ಸ್ಫೂರ್ತಿ ಏನು?&lt;/strong&gt;&lt;/p&gt;&lt;p&gt;ರೆಸಾರ್ಟ್&zwnj;ನಲ್ಲಿ ಮುಗಿಯುವ ಕತೆ ಒಂದು ಕೇಸ್&zwnj; ಸ್ಟಡಿ ಬೇಕು ಅಂದಾಗ ನಮಗೆ ಸಿಕ್ಕ ಒಂದು ಮೆಡಿಕಲ್&zwnj; ಘಟನೆ. ಅದೇನು ಎಂಬುದು ಚಿತ್ರದಲ್ಲಿ ನೋಡಿ. ಜೊತೆಗೆ ಈ ಸಿನಿಮಾ ಕತೆ ಬರೆಯಲು ನನಗೆ &lsquo;ಸಿಂಪಲ್ಲಾಗ್&zwnj; ಒಂದ್&zwnj; ಲವ್ ಸ್ಟೋರಿ&rsquo; ಸಿನಿಮಾ ಸ್ಫೂರ್ತಿ.&lt;/p&gt;&lt;p&gt;&lt;strong&gt;* ನಿರ್ದೇಶಕರಾಗಿ ನಿಮಗೆ ಈ ಕತೆಯಲ್ಲಿ ಥ್ರಿಲ್ಲಿಂಗ್&zwnj; ಅನಿಸಿದ್ದೇನು?&lt;/strong&gt;&lt;/p&gt;&lt;p&gt;ಇಲ್ಲಿ ಯಾರು ವಿಲನ್&zwnj;, ಯಾರ ಆ ನಿಗೂಢ ವ್ಯಕ್ತಿ ಅಂತ ಪ್ರಶ್ನೆ ಬಂದಾಗ ನನಗೆ ಥ್ರಿಲ್&zwnj; ಅನಿಸಿತು. ಮೂರು ಪಾತ್ರಗಳ ನಡುವೆ ಪರಸ್ಪರ ಕ್ರಾಸ್&zwnj; ಕನೆಕ್ಷನ್&zwnj; ಹುಟ್ಟಿಕೊಂಡಾಗ ಕತೆ ಬರೆಯುವುದಕ್ಕೆ ಮತ್ತಷ್ಟು ಉತ್ಸಾಹ ಸಿಕ್ಕಿತು.&lt;/p&gt;&lt;p&gt;&lt;strong&gt;* ನಿಮ್ಮ ಕತೆಯನ್ನು ನೀವು ದೊಡ್ಡ ಪರದೆ ಮೇಲೆ ನೋಡಿದಾಗ?&lt;/strong&gt;&lt;/p&gt;&lt;p&gt;ನನ್ನ ಯಾವುದೇ ಕತೆ ತೆರೆ ಮೇಲೆ ನೋಡಿದಾಗ ಇನ್ನಷ್ಟು ಚೆನ್ನಾಗಿ ಮಾಡಬೇಕು, ಮೊಲಿನಿಂದ ಶೂಟ್&zwnj; ಮಾಡಬೇಕು ಅನಿಸಿದ್ದು ಇದೆ. ಆದರೆ, &lsquo;ಮೋಡ ಕವಿದ ವಾತಾವರಣ&rsquo; ಆ ರೀತಿಯ ಅಭಿಪ್ರಾಯ ಮೂಡಿಸಲಿಲ್ಲ.&lt;/p&gt;&lt;p&gt;&lt;strong&gt;* ತುಂಬಾ ಸ್ಪೀಡಾಗಿ ಸಿನಿಮಾಗಳನ್ನು ಮಾಡುವ ನಿಮ್ಮ ನಿರ್ದೇಶನದ ಗುಟ್ಟೇನು?&lt;/strong&gt;&lt;/p&gt;&lt;p&gt;ಇದಕ್ಕೆ &lsquo;ಆಪರೇಷನ್&zwnj; ಅಲಮೇಲಮ್ಮ&rsquo; ಹಾಗೂ &lsquo;ಚಮಕ್&zwnj;&rsquo; ಚಿತ್ರಗಳು ಕಾರಣ. ಒಂದೇ ವರ್ಷದಲ್ಲಿ ಎರಡು ಸಿನಿಮಾ ಮಾಡಿದ. ಇದಕ್ಕಿಂತ ಮೊದಲು ಬಂದ ಚಿತ್ರಗಳಿಗೆ ಎರಡು- ಮೂರು ವರ್ಷ ಸ್ಪೆಂಡ್&zwnj; ಮಾಡಿದ್ದೇನೆ. ಎಷ್ಟು ವರ್ಷ ಸಿನಿಮಾ ಮಾಡ್ತಿವಿ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಮಾಡ್ತೀವಿ ಅನ್ನೋದು ಮುಖ್ಯ ಅಂತ ಗೊತ್ತಾದ ಮೇಲೆ ಸ್ಪೀಡ್&zwnj; ಹೆಚ್ಚಾಯಿತು.&lt;/p&gt;&lt;p&gt;&lt;strong&gt;* ಆ್ಯಕ್ಷನ್&zwnj;, ಅಂಡರ್&zwnj;ವರ್ಲ್ಡ್&zwnj; ಕತೆಗಳ ಚಿತ್ರಗಳು ಮಾಡುವ ಪ್ಲಾನ್&zwnj; ಇಲ್ಲವೇ?&lt;/strong&gt;&lt;/p&gt;&lt;p&gt;ನಿಜ ಹೇಳಬೇಕು ಅಂದರೆ ಒಬ್ಬ ಭೂಗತ ರೌಡಿ ಬಗ್ಗೆ ಕತೆ ಕೂಡ ಮಾಡಿಕೊಂಡಿದ್ದೆ. ರೌಡಿಗಳಲ್ಲೇ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ವ್ಯಕ್ತಿ. ಆ ಪಾತ್ರವನ್ನು ದಿಗಂತ್&zwnj; ಅವರಿಂದ ಮಾಡಿಸುವ ಯೋಚನೆ ಕೂಡ ಇತ್ತು. ಆ ಕತೆ, ಆ ವ್ಯಕ್ತಿ ಯಾರಂತ ಮುಂದೆ ಹೇಳುತ್ತೇನೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6"/>
        </item>
        <item>
            <title><![CDATA[Amruthadhaare Serial ಮುಗಿತಿದ್ಯಾ? ಎಲ್ಲದಕ್ಕೂ ಅಂತ್ಯ ಎನ್ನೋದಿರುತ್ತೆ: ರಾಜೇಶ್‌ ನಟರಂಗ ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44</link>
            <guid isPermaLink="true">https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44</guid>
            <pubDate>Fri, 20 Mar 2026 11:06:36 +0530</pubDate>
            <description><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್&zwnj; ಪಾತ್ರದಲ್ಲಿ ರಾಜೇಶ್&zwnj; ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್&zwnj; ನಟರಂಗ ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್&zwnj; ಬಗ್ಗೆ ಕೂಡ ಮಾತನಾಡಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km4vkbymsya10menf8fv4wyy,imgname-new-project--11--1773984657363.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್&zwnj; ಪಾತ್ರದಲ್ಲಿ ರಾಜೇಶ್&zwnj; ನಟರಂಗ ಅವರು ಅದ್ಭುತವಾಗಿ ನಟಿಸುತ್ತಿದ್ದಾರೆ. ರಾಜೇಶ್&zwnj; ನಟರಂಗ ಅವರು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;, ಕನ್ನಡಪ್ರಭದ ಯುಗಾದಿ ಹಬ್ಬ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಆ ವೇಳೆ ಸೀರಿಯಲ್&zwnj; ಬಗ್ಗೆ ಕೂಡ ಮಾತನಾಡಿದ್ದಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಗುಪ್ತಗಾಮಿನಿ, ತ್ರಿವೇಣಿ ಸಂಗಮ ಮುಂತಾದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೀರಿ. ಈಗ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ, ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ&lt;/strong&gt;&lt;/p&gt;&lt;p&gt;ಕಲಾವಿದನಿಗೆ ಉಸಿರಾಟದ ಮೂಲಕ ಒಂದೇ ಅಲ್ಲದೆ, ಕಲೆ ಮೂಲಕ ಜೀವಂತವಾಗಿರಬೇಕು ಎನ್ನೋದಿರುತ್ತದೆ. ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ನಟಿಸಿ, ಅದನ್ನು ನಾನು ಅನುಭವಿಸಿದ್ದೀನಿ. ಹಣೆಬರಹವೋ, ನನ್ನ ತಂದೆ-ತಾಯಿ ಅಥವಾ ನಾನು ಮಾಡಿದ ಪುಣ್ಯವೋ ಏನೋ, ಇಂಥ ಪಾತ್ರ ಸಿಕ್ಕಿದೆ.&lt;/p&gt;&lt;img&gt;&lt;p&gt;ನಾವು ಪಾತ್ರಗಳನ್ನು ಹುಡುಕಿಕೊಂಡು ಬರೋದಕ್ಕಿಂತ ಹೆಚ್ಚಾಗಿ, ಪಾತ್ರಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಎಲ್ಲವೂ ಕಾಲ ಕೂಡಿ ಬರಬೇಕು. ನಿರ್ಮಾಪಕರು, ಚಾನೆಲ್&zwnj;, ಕಥೆ ಎಲ್ಲವೂ ಬೇಕಿತ್ತು, ಅವೆಲ್ಲವೂ ಈಗ ಒಟ್ಟಾಗಿ ಕೂಡಿ ಬಂದಿದೆ.&lt;/p&gt;&lt;img&gt;&lt;p&gt;ಧಾರಾವಾಹಿಯಲ್ಲಿ ಟ್ವಿಸ್ಟ್&zwnj; ಬರುತ್ತಲೇ ಇದೆ, ಈ ಹಿಂದೆ ಮನೆಯಲ್ಲಿ ವೈಮನಸ್ಯ, ಜಗಳ, ಮನಸ್ತಾಪ ಎಲ್ಲವೂ ಇತ್ತು, ಈಗ ಈ ಸರ್ಕಲ್&zwnj; ಕಂಪ್ಲೀಟ್&zwnj; ಆಗಬೇಕು, ಈಗ ಮತ್ತೆ ಸಾಮ್ರಾಜ್ಯ ಕಟ್ಟುವ ಕಥೆ ಬರುತ್ತಿದೆ.&lt;/p&gt;&lt;img&gt;&lt;p&gt;ತುಂಬ ಚೆನ್ನಾಗಿ ಬರುತ್ತಿದೆ, ಕೆಲವರಿಗೆ ವಾಸ್ತವ ಅರ್ಥ ಆಗಿದೆ. ನೀವು ಚೆನ್ನಾಗಿ ನಟಿಸ್ತೀರಿ, ಪಾತ್ರಗಳು ಚೆನ್ನಾಗಿ ಬರ್ತಿದೆ, ಮುಂದೆ ಹೀಗೆ ಆಗಬೇಕು ಎಂದು ಹೇಳುತ್ತಾರೆ. ಮುಂದೆ ಏನಾಗುವುದು ಎಂದು ಕೂಡ ಕೇಳುತ್ತಾರೆ. ನನ್ನ ಕೈಯಲ್ಲಿ ಏನೂ ಇಲ್ಲ, ದುಡ್ಡು ಕೊಡ್ತಾರೆ, ನಟಿಸ್ತೀನಿ ಎಂದು ವೀಕ್ಷಕರಿಗೆ ಗೊತ್ತಿದೆ. ಇದರಾಚೆ ಕೂಡ ವೀಕ್ಷಕರ ಆಸೆಯನ್ನು ನಾವು ಡೈರೆಕ್ಟರ್&zwnj; ಬಳಿ ಚರ್ಚೆ ಮಾಡ್ತೀವಿ&lt;/p&gt;&lt;img&gt;&lt;p&gt;&lt;strong&gt;ಮೊಗ್ಗಿನ ಮನಸು ಸಿನಿಮಾದಲ್ಲಿ ಪ್ರೀತಿ ಮಾಡಿದ ಹುಡುಗಿಗೆ ಲೆಕ್ಷರರ್&zwnj; ಬುದ್ಧಿ ಹೇಳುವ ದೃಶ್ಯ ಈಗ ಮತ್ತೆ ಈ ಸೀರಿಯಲ್&zwnj;ನಲ್ಲಿ ಬಂದಿತು..&lt;/strong&gt;&lt;/p&gt;&lt;p&gt;ಹೌದು, ಅಂದು ಈ ದೃಶ್ಯ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿತ್ತು. ಅಫೆಕ್ಷನ್&zwnj;ನ್ನೇ ಪ್ರೀತಿ ಎಂದುಕೊಂಡ ಹುಡುಗಿಗೆ ಲೆಕ್ಚರರ್&zwnj; ಬುದ್ಧಿ ಹೇಳೋದು ಆಗ ಅಷ್ಟು ಪ್ರಚಲಿತದಲ್ಲಿ ಇರಲಿಲ್ಲ. ಇದನ್ನು ಸಿನಿಮಾದಲ್ಲಿ ಹೇಳಿದ್ಮೇಲೆ ದೊಡ್ಡ ಚರ್ಚೆ ಆಗಿತ್ತು. ಈಗ ಮತ್ತೆ ಧಾರಾವಾಹಿಯಲ್ಲಿ ಬಂದಿರೋದು ಖುಷಿ ಕೊಟ್ಟಿದೆ.&lt;/p&gt;&lt;img&gt;&lt;p&gt;&lt;strong&gt;ಇತ್ತೀಚಿನ ಎಪಿಸೋಡ್&zwnj;ಗಳಲ್ಲಂತೂ ಸ್ಟಾಕ್&zwnj; ಮಾರ್ಕೆಟ್&zwnj;, ಬ್ಯುಸಿನೆಸ್&zwnj;, ರಿಲೇಶನ್&zwnj;ಶಿಪ್&zwnj; ಬಗ್ಗೆ ಅದ್ಭುತವಾದ ಸಂಭಾಷಣೆಗಳಿವೆ. ಈ ಮೂಲಕ ನಿಮಗೂ ಕೂಡ ಮಾಹಿತಿ ಸಿಗುತ್ತದೆ&lt;/strong&gt;&lt;/p&gt;&lt;p&gt;&amp;nbsp;ಹೌದು, ನಮಗೆ ಕೂಡ ಒಂದಿಷ್ಟು ವಿಷಯಗಳು ಗೊತ್ತಿರೋದಿಲ್ಲ. ನಾವು ಕೂಡ ದಿನವೂ ಕಲಿಯುತ್ತಿರುತ್ತೇವೆ.&lt;/p&gt;&lt;img&gt;&lt;p&gt;ಅಮೃತಧಾರೆ ಧಾರಾವಾಹಿ ಇರಲಿ, ಬೇರೆ ಏನೇ ಇರಲಿ ಎಲ್ಲದಕ್ಕೂ ಒಂದು ಅಂತ್ಯ ಎನ್ನೋದು ಇದ್ದೇ ಇರುತ್ತದೆ, ಸಹಜ. ನಿರ್ಮಾಪಕರು, ಚಾನೆಲ್&zwnj; ಯಾವಾಗ ಈ ಸೀರಿಯಲ್&zwnj; ನಿಲ್ಲಿಸಬೇಕು ಎಂದುಕೊಳ್ತಾರೋ ಆಗ ಸೀರಿಯಲ್&zwnj; ನಿಲ್ಲುತ್ತದೆ. ಅದರ ಬಗ್ಗೆ ಗಾಸಿಪ್&zwnj; ಮಾಡೋದು ಬೇಡ.&lt;/p&gt;&lt;p&gt;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/will-amruthadhaare-kannada-serial-end-rajesh-nataranga-clarification-elrav44"/>
        </item>
        <item>
            <title><![CDATA[Nabha Natesh: 'ವಜ್ರಕಾಯ' ಬಳಿಕ ಕನ್ನಡಕ್ಕೆ ಯಾಕೆ ಬರಲಿಲ್ಲ? ನಟಿ ನಭಾ ಕೊಟ್ಟ ಉತ್ತರ ಏನು?]]></title>
            <link>https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</link>
            <guid isPermaLink="true">https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</guid>
            <pubDate>Mon, 29 Jun 2026 16:46:02 +0530</pubDate>
            <description><![CDATA[&lt;p&gt;Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್&zwnj;ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9hahqwkht22bcw0q67ddpn,imgname-xgx-1782731589372.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;* ಕೋವಿಡ್&zwnj; ನಂತರ ಸುದೀರ್ಘ ವಿರಾಮ ತಗೊಂಡ್ರಿ. ಏನೆಲ್ಲ ರಿಯಲೈಸೇಶನ್&zwnj; ಆಯ್ತು?&lt;/strong&gt;&lt;/p&gt;&lt;p&gt;ಈ ಬ್ರೇಕ್&zwnj; ನನಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಕಷ್ಟು ಸಮಯ ಕೊಟ್ಟಿತು. ನನ್ನ ಬದುಕಿನ ಉದ್ದೇಶ ಏನು, ನಾನು ಯಾಕಾಗಿ ಹೀಗೆಲ್ಲ ಒದ್ದಾಡುತ್ತಿದ್ದೇನೆ, ಇದಕ್ಕೆಲ್ಲ ಅರ್ಥ ಇದೆಯಾ ಅಂತೆಲ್ಲ ಯೋಚಿಸಿದೆ. ಕೆಲವಕ್ಕೆ ಉತ್ತರ ಸಿಕ್ಕಿತು, ಮತ್ತೆ ಕೆಲವಕ್ಕೆ ಸಿಗಲಿಲ್ಲ. ಒಂದಂತೂ ಅರ್ಥ ಆಯ್ತು. ನನಗೆ ಖುಷಿ ಸಿಗುವುದು ಜನರಿಗೆ ಮನರಂಜನೆ ನೀಡುವುದರಲ್ಲಿ. ಅಭಿನಯವೇ ನನಗೆ ಒಲಿದ ಕಲೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ಅಂದುಕೊಂಡೆ.&lt;/p&gt;&lt;p&gt;&lt;strong&gt;* ಆಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದು ಅಂಥಾ ಸಮರ್ಥ ಸಿನಿಮಾಗಳ?&lt;/strong&gt;&lt;/p&gt;&lt;p&gt;ನಾಗಬಂಧಂ, ಸ್ವಯಂಭೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪಾತ್ರಕ್ಕಿರುವ ಸ್ಕೋಪ್&zwnj; ನೋಡಿ. ನಾಗಬಂಧಂನಲ್ಲಿ ಪಾರ್ವತಿ ಅನ್ನುವ ನನ್ನ ಪಾತ್ರಕ್ಕೆ ಸಾಕಷ್ಟು ಲೇಯರ್&zwnj;ಗಳಿವೆ. ಸ್ವಯಂಭೂ ಸಿನಿಮಾದಲ್ಲೂ ಉತ್ತಮ ಬೆಳವಣಿಗೆ ಇರುವ ಪಾತ್ರ.&lt;/p&gt;&lt;p&gt;&lt;strong&gt;* ಎರಡೂ ಪೌರಾಣಿಕ ಚಿತ್ರಗಳು, ಯಾಕೆ?&lt;/strong&gt;&lt;/p&gt;&lt;p&gt;ಈಗಿನ ಟ್ರೆಂಡ್&zwnj; ಹಾಗಿದೆ. ಈಗ ಜನ ಇಷ್ಟಪಡುತ್ತಿರುವುದು ಪೌರಾಣಿಕ, ಐತಿಹಾಸಿಕ ಕಥೆಗಳನ್ನು. ಅಂಥಾ ಪಾತ್ರ ಸಿಕ್ಕಾಗ ಒಪ್ಪಿಕೊಂಡೆ. ಮೊದಲ ಸಿನಿಮಾ ವಜ್ರಕಾಯದಲ್ಲಿ ನನ್ನ ಪಾತ್ರ ಪಟಾಕಾ ಪಾರ್ವತಿ. ನಾಗಬಂಧಂನಲ್ಲೂ ನನ್ನ ಪಾತ್ರ ಪಾರ್ವತಿ. ಆ ಪಾತ್ರಕ್ಕಿಂತ ಕಂಪ್ಲೀಟ್&zwnj; ವಿರುದ್ಧ ಈ ಪಾರ್ವತಿ. ಆದರೆ ನನ್ನ ಸಿನಿಮಾ ಜರ್ನಿಯಲ್ಲಿ ಆ ಪಾರ್ವತಿಯಿಂದ ಈ ಪಾರ್ವತಿಗೆ ಒಂದು ಫುಲ್&zwnj; ಸರ್ಕಲ್&zwnj; ಆಗಿದೆ.&lt;/p&gt;&lt;p&gt;&lt;strong&gt;* ವಜ್ರಕಾಯ ಸಿನಿಮಾದ ಯಶಸ್ಸಿನ ನಂತರ ಕನ್ನಡ ಇಂಡಸ್ಟ್ರಿ ಕಡೆ ತಿರುಗೂ ನೋಡ್ಲಿಲ್ಲ?&lt;/strong&gt;&lt;/p&gt;&lt;p&gt;ಹಾಗೆಲ್ಲ ಏನಿಲ್ಲ. ಕಲಾವಿದರಿಗೆ ಭಾಷೆಯ ಗಡಿ ಇರೋದಿಲ್ಲ. ನನಗೆ ತೃಪ್ತಿ ನೀಡುವಂಥಾ ಸಿನಿಮಾಗಳು ಸಿಕ್ಕಾಗ ಅದನ್ನು ಭಾಷೆಯ ವಿಚಾರಕ್ಕೆ ತಿರಸ್ಕರಿಸಲಾಗುವುದಿಲ್ಲ.&lt;/p&gt;&lt;p&gt;&lt;strong&gt;* ಪ್ರತಿಯೊಬ್ಬ ನಟಿಯೂ ಇದೇ ಮಾತು ಹೇಳ್ತಾರೆ, ಹೀಗಾದರೆ ಕನ್ನಡದಂಥಾ ಇಂಡಸ್ಟ್ರಿಗೆ ನಾಯಕಿಯರು ಸಿಗೋದು ಹೇಗೆ?&lt;/strong&gt;&lt;/p&gt;&lt;p&gt;ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರೇ ಇರೋದು. ಇಲ್ಲಿ ಯಾವುದಕ್ಕೂ ಕೊರತೆ ಆಗೋದಿಲ್ಲ. ನನ್ನ ಮೊದಲ ಸಿನಿಮಾ &lsquo;ವಜ್ರಕಾಯ&rsquo;ಕ್ಕೆ ಅತ್ಯುತ್ತಮ ಸ್ವಾಗತ ಸಿಕ್ಕಿತು. ಆ ಸಿನಿಮಾದ ನನ್ನ ಪಾತ್ರ ಪಟಾಕಾ ಪಾರ್ವತಿ ಮೂಲಕ ಜನ ಇನ್ನೂ ನನ್ನ ಗುರುತಿಸುತ್ತಾರೆ. ನಂಗೆ ಅತಿಯಾಸೆ. ಬಂದರೆ ಇನ್ನೊಂದು ಬ್ಯಾಂಗರ್&zwnj; ಜೊತೆಗೆ ಬರಬೇಕು. ಕನ್ನಡಿಗರಿಗೆ ಅರೆಬೆಂದ ಊಟ ಕೊಡೋದಕ್ಕೆ ಇಷ್ಟ ಇಲ್ಲ. ಕೊಟ್ರೆ ಮುದ್ದೆ, ನಾಟಿ ಕೋಳಿ ಸಾಂಬಾರ್&zwnj; ಅನ್ನೇ ಬಡಿಸ್ಬೇಕು.&lt;/p&gt;&lt;p&gt;&lt;strong&gt;* ಶೃಂಗೇರಿ ನಿಮ್ಮ ಊರು. ಅಲ್ಲಿಗೆ ಭೇಟಿ?&lt;/strong&gt;&lt;/p&gt;&lt;p&gt;ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ನೋಡಿ ತುಂಬ ಜನ ನಾನು ಆಂಧ್ರದಲ್ಲಿ ಸೆಟಲ್&zwnj; ಆಗಿದ್ದೀನಿ ಅಂದ್ಕೊಂಡಿದ್ದಾರೆ. ಆದರೆ ಬೆಂಗಳೂರು ಮತ್ತು ಶೃಂಗೇರಿಗಳಲ್ಲೇ ನನ್ನ ವಾಸ. ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹೋಗಿ ಬಂದಿದ್ದೆಲ್ಲ ಸೋಷಿಯಲ್&zwnj; ಮೀಡಿಯಾದಲ್ಲಿ ಹಾಕಿಕೊಳ್ಳೋದಿಲ್ಲ. ಕಡ್ಲೆ ಕಾಯಿ ಪರಿಷೆಯಲ್ಲಿ ಮಾಸ್ಕ್&zwnj; ಹಾಕ್ಕೊಂಡು ಓಡಾಡ್ತೀನಿ, ಬೆಂಗಳೂರಲ್ಲಿ ಯಾವ ಉತ್ಸವ ಇದ್ದರೂ ನೀವು ಸೂಕ್ಷ್ಮವಾಗಿ ಹುಡುಕಿದ್ರೆ ನಾನು ಕಂಡೇ ಕಾಣ್ತೀನಿ. ಆದರೆ ಕಣ್ಣು ನೋಡಿ ಪತ್ತೆ ಹಚ್ಚಬೇಕಷ್ಟೇ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7"/>
        </item>
        <item>
            <title><![CDATA[ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview]]></title>
            <link>https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx</link>
            <guid isPermaLink="true">https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx</guid>
            <pubDate>Thu, 12 Mar 2026 13:13:02 +0530</pubDate>
            <description><![CDATA[&lt;p&gt;ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್&zwnj;ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್&zwnj; ಕಾಮೆಂಟ್&zwnj; ಮಾಡಲಾಗ್ತಿದೆಯಂತೆ. ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ದನಿ ಎತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkgfpec68s61a8p4xw37jzjf,imgname-new-project--28--1773301086598.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರಾವಾಹಿಗಳನ್ನು ವೀಕ್ಷಕರು ವೈಯಕ್ತಿಕವಾಗಿ ತಗೊಳ್ಳುವುದು ಈಗಲೂ ಇದೆ. ಸೀರಿಯಲ್&zwnj;ನಲ್ಲಿ ನಡೆಯುವುದೆಲ್ಲ ಸತ್ಯ ಎಂದು ನಂಬಿ, ಹಿಡಿಶಾಪ ಹಾಕುವವರೂ ಇದ್ದಾರೆ. ಈಗ ಕರ್ಣ ಧಾರಾವಾಹಿಯ ಪಾತ್ರಧಾರಿಗಳ ಬಗ್ಗೆ ನೆಗೆಟಿವ್&zwnj; ಕಾಮೆಂಟ್&zwnj; ಮಾಡಲಾಗ್ತಿದೆಯಂತೆ. ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ದನಿ ಎತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕರ್ಣ ಧಾರಾವಾಹಿಯಲ್ಲಿ ಓರ್ವ ಹೀರೋ, ಇಬ್ಬರು ನಾಯಕಿಯರು.&zwnj; ಕಿರಣ್&zwnj; ರಾಜ್&zwnj; ಫ್ಯಾನ್ಸ್&zwnj; ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯಿಲ್ಲ. ಅಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರೋದಿಕ್ಕೆ, ಅವರು ಕಿರುತೆರೆಯಲ್ಲಿ ದೊಡ್ಡ ಸಂಭಾವನೆ ಪಡೆಯುತ್ತಿದ್ದಾರೆ. ಈ ಧಾರಾವಾಹಿಯ ಇಬ್ಬರು ನಟಿಯರು ಈ ಹಿಂದೆ ಹಿಟ್&zwnj; ಧಾರಾವಾಹಿಗಳಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದರು. ಹೀಗಾಗಿ ಇವರಿಬ್ಬರಿಗೂ ಅಭಿಮಾನಿ ಬಳಗ ಇದೆ, ಅಷ್ಟೇ ಅಲ್ಲದೆ ಬಿಗ್&zwnj; ಬಾಸ್&zwnj; ಶೋನಲ್ಲಿ ಭಾಗವಹಿಸಿದ್ದಕ್ಕೆ ಫ್ಯಾನ್ಸ್&zwnj; ಸಂಖ್ಯೆ ಜಾಸ್ತಿ ಆಗಿದೆ.&lt;/p&gt;&lt;img&gt;&lt;p&gt;ಈಗ ಈ ಸೀರಿಯಲ್&zwnj;ನಲ್ಲಿ ಕರ್ಣನ ತಂದೆ ರಮೇಶ್&zwnj; ಪಾತ್ರದಲ್ಲಿ ಟಿ ಎಸ್&zwnj; ನಾಗಾಭರಣ ಅವರು ನಟಿಸುತ್ತಿದ್ದರು. ಈಗ ಇವರ ಬದಲು ನಟ ಅಭಿಜಿತ್&zwnj; ನಟಿಸುತ್ತಿದ್ದಾರೆ. ನಾಗಾಭರಣ ಅವರು ವೈಯಕ್ತಿಕ ಕಾರಣಕ್ಕೆ ಸೀರಿಯಲ್&zwnj;ನಿಂದ ಹೊರಬಂದಿದ್ದು, ಇವರ ಜಾಗಕ್ಕೆ ಹೊಸ ನಟನ ಆಗಮನ ಆಗಿದೆ.&lt;/p&gt;&lt;img&gt;&lt;p&gt;ಅಂದಹಾಗೆ ಅವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ, ಇವರ ಪಾತ್ರಕ್ಕೆ ಒತ್ತು ಕೊಡ್ತಿಲ್ಲ ಎಂಬ ಮಾತು ಕೇಳಿ ಬರುತ್ತಲೇ ಇರುವುದು. ಆ ಮಧ್ಯೆ ಅವರು ಜೋಡಿಯಾಗಿರಲಿ, ಇವರು ಜೋಡಿಯಾಗಿರಲಿ ಎನ್ನುತ್ತಾರೆ. ಕೆಲವೊಮ್ಮೆ ಕಥೆಯನ್ನು, ಕಥೆಯ ಟ್ವಿಸ್ಟ್&zwnj;ನ್ನೋ ಇಷ್ಟಪಡದೆ, ಬಾಯಿಗೆ ಬಂದಹಾಗೆ ಕಾಮೆಂಟ್&zwnj; ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ಪಾತ್ರಧಾರಿಗಳ ನಟನೆ ಬಗ್ಗೆ ಮಾತನಾಡದೆ, ಅವರ ಕ್ಯಾರೆಕ್ಟರ್&zwnj; ಬಗ್ಗೆ ಕೆಟ್ಟದಾಗಿ ಮಾತನಾಡೋದಿದೆ. ಆಗ ಇಡೀ ಧಾರಾವಾಹಿ ಸೆಟ್&zwnj;ನ ವಾತಾವರಣ ಕೂಡ ಹಾಳಾಗೋದಿದೆ.&lt;/p&gt;&lt;img&gt;&lt;p&gt;ನಟ ಕಿರಣ್&zwnj; ರಾಜ್&zwnj; ಈ ಬಗ್ಗೆ ಮಾತನಾಡಿದ್ದು, &ldquo;ಎಲ್ಲ ಕಲಾವಿದರು ಅವರಿಗೆ ಕೊಟ್ಟ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ, ಕೆಲವೊಮ್ಮೆ ಪಾತ್ರ ಬದಲಾವಣೆ ಆಗುವುದು, ಹಾಗೆಂದ ಮಾತ್ರಕ್ಕೆ ಬೇರೆ ಕಲಾವಿದರ ಮನಸ್ಸಿಗೆ ನೋವು ಆಗುವಂತೆ ಕಾಮೆಂಟ್&zwnj; ಮಾಡೋದು ಸರಿ ಅಲ್ಲ. ಇದರಿಂದ ಎಲ್ಲರಿಗೂ ಬೇಸರ ಆಗುವುದು, ಇದರ ಪರಿಣಾಮ ಧಾರಾವಾಹಿ ಮೇಲೆ ಆಗುವುದು, ಸೀರಿಯಲ್&zwnj;ನ್ನು ಸೀರಿಯಲ್&zwnj; ಥರ ತಗೊಳ್ಳಿ&rdquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/actor-kiran-raj-on-negative-comments-on-zee-kannada-karna-serial-character-iqfy8kx"/>
        </item>
        <item>
            <title><![CDATA[ಸಂಸ್ಕಾರ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನ ಸಂಕೀರ್ತನ: ಪದ್ಮಲತಾ ಗುಂಡೂರಾವ್‌]]></title>
            <link>https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq</link>
            <guid isPermaLink="true">https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq</guid>
            <pubDate>Thu, 19 Mar 2026 16:31:46 +0530</pubDate>
            <description><![CDATA[&lt;p&gt;ಟೈಲರಿಂಗ್&zwnj; ಮಾಡುತ್ತಿದ್ದ ನಾನು ಕಾಸ್ಟ್ಯೂಮ್&zwnj; ಡಿಸೈನರ್&zwnj; ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ ಎಂದರು ಪದ್ಮಲತಾ ಗುಂಡೂರಾವ್&zwnj;.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01km2w46n16zqgb03sdwvqjn5a,imgname-hvjvj-1773918100129.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಿಮ್ಮ ಹಿನ್ನೆಲೆ ಏನು?&lt;/strong&gt;ನನ್ನ ಮೂಲ ಹುಣಸೂರು. ಹಿರಿಯ ನಿರ್ದೇಶಕ ದಿ.ಹುಣಸೂರು ಕೃಷ್ಣಮೂರ್ತಿ ಅವರು ನನ್ನ ಪತಿಯ ಸಂಬಂಧಿ. ನನ್ನ ಓದಿಗೆ ಶಿಕ್ಷಕಿ ಉದ್ಯೋಗ ಬಂದರೂ ನಾನು ಅದನ್ನು ಆಯ್ಕೆ ಮಾಡಿಕೊಳ್ಳದೆ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗುವಂತಹ ನಿಟ್ಟಿನಲ್ಲಿ ಉದ್ಯಮ ಆರಂಭಿಸಿದೆ. ಅದೇ ಟ್ರೇಲರ್&zwnj;ರಿಂಗ್. ಐಟಿಐ ಸ್ಥಾಪಿಸಿ ಇಲ್ಲಿವರೆಗೂ 1500ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಟ್ರೇಲರಿಂಗ್ ತರಬೇತಿ ನೀಡಿದ್ದೇನೆ.&lt;/p&gt;&lt;p&gt;&lt;strong&gt;ಸಿನಿಮಾ ನಂಟಿಗೆ ಬಂದಿದ್ದೇಗೆ?&lt;/strong&gt;ಟೈಲರಿಂಗ್&zwnj; ಮಾಡುತ್ತಿದ್ದ ನಾನು ಕಾಸ್ಟ್ಯೂಮ್&zwnj; ಡಿಸೈನರ್&zwnj; ಆದೆ. ವಸ್ತ್ರ ವಿನ್ಯಾಸಕ್ಕೆ ಬಂದವಳು ಮುಂದೆ ನಟನೆಯನ್ನೂ ಮಾಡಿದೆ. ಇಲ್ಲಿವರೆಗೂ ನೂರಾರು ಧಾರಾವಾಹಿಗಳಲ್ಲಿ ನಟಿಸಿದ್ದೇನೆ.&lt;/p&gt;&lt;p&gt;&lt;strong&gt;ನಿಮ್ಮ ನಟನೆಯ ಶುರುವಾಗಿದ್ದು ಎಲ್ಲಿಂದ?&lt;/strong&gt;ಕಳೆದ ಮೂರು ದಶಕಗಳಿಂದ ಕಿರುತೆರೆ, ಸಿನಿಮಾ, ಟಿವಿ ಶೋಗಳ ಮೂಲಕ ಗುರುತಿಸಿಕೊಂಡಿರುವ ಈಗ ನನಗೆ 70 ವರ್ಷ. 1988ರಿಂದ ನಾನು ನಟನೆ ಶುರು ಮಾಡಿದ್ದೇನೆ. ಅಲ್ಲಿಂದ ಇಲ್ಲಿವರೆಗೂ ನಟಿಸಿರುವ ಧಾರಾವಾಹಿಗಳ ಬಗ್ಗೆ ಹೇಳುತ್ತಾ ಹೋದರೆ ಅದೇ ದೊಡ್ಡ ಪಟ್ಟಿಯಾಗುತ್ತದೆ. &lsquo;ಮಾಯಾಮೃಗ&rsquo;, &lsquo;ಚರಣದಾಸಿ&rsquo;, &lsquo;ಕಣ್ಣಾಮುಚ್ಚಾಲೆ&rsquo;, &lsquo;ಬೆಳದಿಂಗಳಾಗಿ ಬಾ&rsquo;, &lsquo;ಶ್ರೀ ರಾಘವೇಂದ್ರ ಮಹಾತ್ಮೆ&rsquo;, &lsquo;ಸೀತಾರಾಮ&rsquo; ಮುಂತಾದವು ತಕ್ಷಣಕ್ಕೆ ಹೇಳಬಹುದು. ಪ್ರಸ್ತುತ ಈಗ &lsquo;ಪವಿತ್ರ ಬಂಧನ&rsquo; ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ.&lt;/p&gt;&lt;p&gt;&lt;strong&gt;&lsquo;ಸಂಕೀರ್ತನ&rsquo; ಸಿನಿಮಾ ಮಾಡಬೇಕು ಅನಿಸಿದ್ದೇಕೆ?&lt;/strong&gt;ನಾನು ಚಿಕ್ಕವಳಿದ್ದಾಗಿನಿಂದಲೂ ದಾಸರ, ಭಕ್ತಿ ವಿಜಯ ಕತೆಗಳನ್ನು ಕೇಳುತ್ತಿದ್ದೆ. ಚಂದಮಾನ ಕತೆಗಳನ್ನು ಓದುತ್ತಿದ್ದೆ. ನಾನೂ ಕೂಡ ಜೀವನದಲ್ಲಿ ಭಕ್ತಿಯನ್ನು ಅಳವಡಿಸಿಕೊಳ್ಳಬೇಕೆಂಬ ಭಾವನೆಯಲ್ಲಿ ಸಿನಿಮಾ ಮಾಡಿದ್ದೇನೆ. 15 ವರ್ಷಗಳ ಹಿಂದೆ ಅಂದುಕೊಂಡ ಯೋಜನೆ ಇದು.&lt;/p&gt;&lt;p&gt;&lt;strong&gt;ಈ ಚಿತ್ರದ ಉದ್ದೇಶ ಏನು?&lt;/strong&gt;ದಾಸರ ಪದಗಳು, ದೇವರ ನಾಮಗಳು, ಕೀರ್ತನೆಗಳ ಮೂಲಕ ಸಮಾಜಕ್ಕೆ ಸಂದೇಶ ನೀಡಬೇಕು. ಅದರ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಚಿತ್ರ ಮಾಡಿದೆ.&lt;/p&gt;&lt;p&gt;&lt;strong&gt;ಸಂಕೀರ್ತನ ಕತೆ ಏನು?&lt;/strong&gt;ವಿಜಯನಗರ ಸಾಮ್ರಾಜ್ಯದಲ್ಲಿದ್ದ ಸಂತರ ಕುರಿತ ಸಿನಿಮಾ. ಅಂದರೆ ಕೃಷ್ಣದೇವರಾಯನ ಕಾಲದಲ್ಲಿ ಅವತರಿಸಿದ್ದ ಯತಿಶ್ರೇಷ್ಟರ, ದಾಸ ಶ್ರೇಷ್ಟರ, ಕವಿಶ್ರೇಷ್ಟರ ಮಹಿಮೆ, ಚರಿತ್ರೆಯನ್ನು ಒಳಗೊಂಡ ಸಿನಿಮಾ ಇದು. ಜೆ.ಎಂ.ಪ್ರಹ್ಲಾದ್&zwnj; ಅವರು ಕತೆ, ಚಿತ್ರಕಥೆ, ಸಂಭಾಷಣೆ ಬಂದಿದ್ದಾರೆ. ಕಲಾ ಗಂಗೋತ್ರಿ ಮಂಜು ನಿರ್ದೇಶಿಸಿದ್ದಾರೆ. ನಾನು ನಟನೆ, ಕಲಾ ನಿರ್ದೇಶನ, ವಸ್ತ್ರ ವಿನ್ಯಾಸದ ಜೊತೆಗೆ ನಿರ್ಮಾಪಕಿ ಕೂಡ. ರಮೇಶ್&zwnj; ಭಟ್&zwnj;, ಶ್ರೀಧರ್&zwnj;, ರಾಮಕೃಷ್ಣ ಸೇರಿದಂತೆ ಸುಮಾರು 200 ಕಲಾವಿದರು ನಟಿಸಿದ್ದಾರೆ. ಸಿದ್ದೇಶ್&zwnj; ಕ್ಯಾಮೆರಾ, ಪ್ರವೀಣ್&zwnj; ಡಿ ರಾವ್&zwnj; ಸಂಗೀತ ಇದೆ. ಅಮೆರಿಕಾದಲ್ಲಿರುವ ನನ್ನ ಪುತ್ರಿ ದಿವ್ಯಾ ಈ ಚಿತ್ರಕ್ಕಾಗಿ ಹಾಡಿರುವುದು ಮತ್ತೊಂದು ವಿಶೇಷ.&lt;/p&gt;&lt;h2&gt;&lt;strong&gt;ಯಾವಾಗ ಸಿನಿಮಾ ಬಿಡುಗಡೆ?&lt;/strong&gt;&lt;/h2&gt;&lt;p&gt;ಏಪ್ರಿಲ್&zwnj; 2ರಂದು ಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ವಿದೇಶಗಳಲ್ಲೂ ಸಿನಿಮಾ ಬಿಡುಗಡೆ ಆಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/padmalatha-gundurao-life-story-actress-costume-designer-gvd/articleshow-m6m74sq"/>
        </item>
        <item>
            <title><![CDATA[ಕೊನೆಗೂ ರಕ್ಷಿತ್‌ ಶೆಟ್ಟಿ ಫೋನ್‌ On‌ ಆಯ್ತು; ಬಂಪರ್‌ ಗುಡ್‌ನ್ಯೂಸ್ ಕೊಟ್ರು! Rakshit Shetty Interview]]></title>
            <link>https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr</link>
            <guid isPermaLink="true">https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr</guid>
            <pubDate>Mon, 16 Feb 2026 12:58:22 +0530</pubDate>
            <description><![CDATA[&lt;p&gt;( ಸಂದರ್ಶನ-ಜೋಗಿ )&lt;/p&gt;&lt;p&gt;Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01khjmssvm8vhpep9myg07h1rq,imgname-new-project--40--1771226064756.jpg" type="image/jpeg" height="390" width="690"/>
            <content:encoded><![CDATA[&lt;p&gt;( ಸಂದರ್ಶನ-ಜೋಗಿ )&lt;/p&gt;&lt;p&gt;Rakshit Shetty: ರಕ್ಷಿತ್ ಶೆಟ್ಟರನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ ಅವರು ಕೆಲಸ ಮಾಡುವ ಶೈಲಿ ಗೊತ್ತು. ಯಾವುದನ್ನೂ ಉಸಿರುಗಟ್ಟಿ ಮಾಡಿ ಮುಗಿಸಬೇಕು, ಹಿಂದಿನ ಸಿನಿಮಾದ ಗೆಲುವಿನ ಮೇಲೆ ಮುಂದಿನ ಸಿನಿಮಾ ಕಟ್ಟಬೇಕು ಅನ್ನುವ ಉದ್ದೇಶ ಇಲ್ಲ.&amp;nbsp;&lt;/p&gt;&lt;img&gt;&lt;p&gt;ರಕ್ಷಿತ್, ಯಾರ ಫೋನಿಗೂ ಸಿಗುತ್ತಿರಲಿಲ್ಲ. ನಾಲ್ಕೈದು ವರ್ಷಗಳಿಂದ ಸದ್ದಿಲ್ಲದೇ ಚಿತ್ರಕತೆಯಲ್ಲಿ ತೊಡಗಿದ್ದರು. ಅವರು ಅಮೆರಿಕಾದಲ್ಲಿದ್ದಾರೆ, ಉಡುಪಿಯಲ್ಲಿದ್ದಾರೆ, ದೇಶ ಸುತ್ತುತ್ತಿದ್ದಾರೆ, ಚಿತ್ರಕತೆ ಬರೆಯುತ್ತಿದ್ದಾರೆ ಮುಂತಾದ ಉಳಿದವರು ಕಂಡಂತೆ ಆಡುತ್ತಿದ್ದ ಮಾತುಗಳಲ್ಲಷ್ಟೇ ರಕ್ಷಿತ್ ಶೆಟ್ಟರ ಜಾಡು ತಿಳಿಯುತ್ತಿತ್ತು.&lt;/p&gt;&lt;p&gt;ಅವರು ಇದ್ದದ್ದೇ ಹಾಗೆ, ಅರ್ಧ ಅಂತರಂಗ, ಅರ್ಧ ಬಹಿರಂಗ. ಮುಂದೇನು ಅಂತ ಗೊತ್ತಿಲ್ಲದವರಂತೆ ಕೆಲಸ ಮಾಡುತ್ತಿದ್ದ ರಕ್ಷಿತ್, ನಾಳೆಗಳನ್ನು ಪ್ಲಾನ್ ಮಾಡುತ್ತಿರಲಿಲ್ಲ. ಇವತ್ತಿನ ಜನಪ್ರಿಯತೆಯ ಮೇಲೆ ನಾಳೆಗಳನ್ನು ಕಟ್ಟುತ್ತಿರಲಿಲ್ಲ. ಮುಗಿಬಿದ್ದು ಸಿನಿಮಾ ಮಾಡುವ ಆತುರ ತೋರಿದವರೂ ಅಲ್ಲ.&lt;/p&gt;&lt;img&gt;&lt;p&gt;ಚಿತ್ರರಂಗಕ್ಕೆ ಅಪರೂಪವಾದ ಅಪೂರ್ವ ಸಂಯಮ ಮತ್ತು ನಿರಾಳ&zwj;ದಲ್ಲಿ ಅವರು ಕೆಲಸ ಮಾಡುವವರು ಅಂತ ಅವರ ಸಿನಿಮಾಗಳ ಅಭಿಮಾನಿಗಳಿಗೂ ಗೊತ್ತಿದೆ. ಅವರೆಲ್ಲರೂ ರಿಚರ್ಡ್ ಆ್ಯಂಟನಿಗೆ ಕಾಯುತ್ತಿರುತ್ತಾರೆ. ಆ ಸಿನಿಮಾ ಯಾವಾಗ ಅಂತ ಕೇಳಲು ನಾವೆಲ್ಲ ತಿಂಗಳಿಗೆ ಒಂದಾದರೂ ಫೋನು ಮಾಡುತ್ತಿದ್ದರೆ, ಅವರ ಫೋನ್ ಸ್ವಿಚಾಫ್ ಆಗಿರುತ್ತಿತ್ತು. ಇವತ್ತು ಅವರ ಫೋನ್ ಸದ್ದುಮಾಡಿತು.&lt;/p&gt;&lt;p&gt;&lsquo;ಸದ್ಯಕ್ಕೆ ಉಡುಪಿಯಲ್ಲಿದ್ದೇನೆ&rsquo; ಅಂದರು ರಕ್ಷಿತ್ ಶೆಟ್ಟಿ. ಅವರ ಧ್ವನಿಯಲ್ಲಿ ನಿರಾಳತೆಯೂ ತೃಪ್ತಿಯೂ ಇದ್ದಂತಿತ್ತು. ಹಿಡಿದದ್ದನ್ನು ಸಾಧಿಸಿದ ಧನ್ಯತೆ ಅದು. ಅವರ ಮಾತಿನಲ್ಲಿಯೂ ಆ ಖುಷಿ ಮತ್ತು ಅಕ್ಕರೆ ಕಾಣಿಸಿತು.&lt;/p&gt;&lt;img&gt;&lt;p&gt;&lsquo;ಐದು ಸಿನಿಮಾಗಳ ಸ್ಕ್ರಿಪ್ಟಿನ ಮೇಲೆ ಕೆಲಸ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ಬಂದಿದೆ. ಅವನ್ನು ಶೂಟ್ ಮಾಡುವುದಷ್ಟೇ ಬಾಕಿ. ಮಾರ್ಚ್ ಕೊನೆಯ ಹೊತ್ತಿಗೆ ಪ್ರೀ-ಪ್ರೊಡಕ್ಷನ್ ಕೆಲಸ ಶುರುಮಾಡುತ್ತೇನೆ. ಅದು ಮುಗಿಯುತ್ತಿದ್ದಂತೆ ಶೂಟಿಂಗ್ ಶುರುವಾಗುತ್ತದೆ. ಮೊದಲು &lsquo;ರಿಚರ್ಡ್ ಆ್ಯಂಟನಿ&rsquo;, ಅದಾದ ನಂತರ &lsquo;ಪುಣ್ಯಕೋಟಿ&rsquo;, ಆಮೇಲೆ ಮೂರು ಸಿನಿಮಾಗಳು. ಬೆನ್ನಿಂದ ಬೆನ್ನಿಗೆ ಐದು ಸಿನಿಮಾಗಳು ಬರುತ್ತಾ ಹೋಗುತ್ತವೆ. ತಂಡ ಸಿದ್ಧವಾಗಿದೆ, ಚಿತ್ರಕತೆಯೂ ಸಿದ್ಧವಾಗಿದೆ&rsquo; ಅಂತ ತನ್ನ ಪ್ಲಾನ್ ತೆರೆದಿಟ್ಟರು ರಕ್ಷಿತ್.&lt;/p&gt;&lt;img&gt;&lt;p&gt;ಅವರ ಪ್ರಕಾರ ಪುಣ್ಯಕೋಟಿಗೆ ಸಿಕ್ಕಾಪಟ್ಟೆ ವಿಎಫ್ಎಕ್ಸ್ ಕೆಲಸಗಳಿವೆ. ಅವು ಸಿದ್ಧವಾದ ನಂತರವೇ ಶೂಟಿಂಗಿಗೆ ಹೋಗಲು ಸಾಧ್ಯ. ರಿಚರ್ಡ್ ಆ್ಯಂಟನಿ ಶುರುವಾಗುವ ಮೊದಲೇ ಪುಣ್ಯಕೋಟಿಯ ತಾಂತ್ರಿಕ ತಂಡ ಕೆಲಸ ಆರಂಭಿಸುತ್ತದೆ. ರಿಚರ್ಡ್ ಆ್ಯಂಟನಿಗೂ ಸಾಕಷ್ಟು ವಿಎಫ್ಎಕ್ಸ್ ಕೆಲಸಗಳು ನಡೆಯಬೇಕಿದೆ. ಆದರೆ ಶೂಟಿಂಗಿಗೆ ಹೋಗುವುದಕ್ಕೆ ಅಡ್ಡಿಯಿಲ್ಲ. ಹೀಗಾಗಿ ತಂಡವನ್ನು ಸಿದ್ಧಮಾಡಿ ಅವರಿಗೆ ಕೆಲಸ ವಹಿಸಿ, ತಾನು ರಿಚರ್ಡ್ ಆ್ಯಂಟನಿ ಚಿತ್ರದಲ್ಲಿ ತೊಡಗಿಕೊಳ್ಳುವುದು ರಕ್ಷಿತ್ ಶೆಟ್ಟರ ಸದ್ಯದ ಪ್ಲಾನು. ರಿಚರ್ಡ್ ಆ್ಯಂಟನಿ ಮುಗಿಯುತ್ತಿದ್ದಂತೆ ಪುಣ್ಯಕೋಟಿಯ ಫೌಂಡೇಶನ್ ಸಿದ್ಧವಾಗಿರುತ್ತದೆ. ಅದರಲ್ಲಿ ತೊಡಗಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;&lsquo;ಪುಣ್ಯಕೋಟಿ ಮತ್ತು ನಂತರ ಬರುವ ಮೂರು ಸಿನಿಮಾಗಳನ್ನು ನಾನೇ ನಿರ್ಮಾಣ ಮಾಡುವುದು ಅಂತ ನಿರ್ಧರಿಸಿದ್ದೇನೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದೇನೆ. ಎಲ್ಲರೂ ನನ್ನ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ ಅನ್ನುವುದು ನನಗೂ ಗೊತ್ತಿದೆ. ಆದರೆ ನಾನು ಕೆಲಸ ಮಾಡುವ ರೀತಿಯೇ ಹಾಗೆ. ನನಗೆ ನನ್ನದೇ ಆದ ಸಾವಧಾನ ಇದೆ. ಅದನ್ನು ಬಿಡುವುದು ನನಗೆ ಸಾಧ್ಯವೇ ಇಲ್ಲ&rsquo; ಅಂತ ರಕ್ಷಿತ್ ಶೆಟ್ಟಿ ಸಿನಿಮಾ ನಿಧಾನವಾಗಿದ್ದು ಯಾಕೆ ಅನ್ನುವುದನ್ನು ಹೇಳುತ್ತಾ ಹೋದರು.&lt;/p&gt;&lt;img&gt;&lt;p&gt;&lsquo;ಬದುಕಿನ ಒಂದು ಮಜಲಿನಿಂದ ಇನ್ನೊಂದಕ್ಕೆ ಹೊರಳಿಕೊಳ್ಳುವ ಸಮಯದಲ್ಲಿ, ಬದಲಾವಣೆಯ ಹೊತ್ತಲ್ಲಿ ನಾನು ನನಗೆ ಬೇಕಾದಷ್ಟು ಸಮಯ ತೆಗೆದುಕೊಂಡೇ ಕೆಲಸ ಮಾಡುತ್ತೇನೆ. ನಾನು ತಕ್ಷಣ ಸಿನಿಮಾ ಮಾಡಿ ತಕ್ಷಣ ಹಣ ಮಾಡುವುದಕ್ಕೆ ಬಂದವನಲ್ಲ. ದುಡ್ಡು ಬೇಕು, ಅದು ನನಗೂ ಗೊತ್ತಿದೆ. ಆದರೆ ಎರಡು ವರ್ಷ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ಇದ್ದು, ನಂತರ ಎರಡು ವರ್ಷದ್ದನ್ನು ದುಡಿಯುವುದು ಸಾಧ್ಯವಾದರೆ ಅದೇ ನನಗೆ ಇಷ್ಟ. ಎಲ್ಲವೂ ಒಮ್ಮೆಗೇ ಆಗಬೇಕು ಅನ್ನುವ ಆಸೆ ನನಗಿಲ್ಲ.&lt;/p&gt;&lt;img&gt;&lt;p&gt;ಇದೆಲ್ಲಾ ಸಿನಿಮಾರಂಗಕ್ಕೆ ಬೇರೆ ಥರ ಅನ್ನಿಸಬಹುದು. ಹೀಗೂ ಇರುತ್ತಾರಾ ಅಂತ ಆಶ್ಚರ್ಯ ಆಗಬಹುದು. ಆದರೆ ನಾನಿರುವುದೇ ಹಾಗೆ, ಬಾಲ್ಯದಿಂದಲೂ ಹೀಗೆಯೇ ಕೆಲಸ ಮಾಡಿಕೊಂಡು ಬಂದವನು. ಬೇರೆ ಥರ ಇರಲಿಕ್ಕೆ ನನ್ನಿಂದ ಸಾಧ್ಯವಿಲ್ಲ. ನಾನು ಬದಲಾಗಲು ಹೊರಟರೆ ನನ್ನತನ ಕಳೆದುಕೊಳ್ಳುತ್ತೇನೆ&rsquo;.&lt;/p&gt;&lt;img&gt;&lt;p&gt;&lsquo;ಮಿಡ್&zwnj;ಲೈಫ್&zwnj;ಗೆ ಬಂದಾಗ ಒಂದು ಬದಲಾವಣೆ ಬೇಕಾಗುತ್ತದೆ. ಆ ಬದಲಾವಣೆ ಸಾಧ್ಯವಾಗಬೇಕಿದ್ದರೆ ಜೀವನದ ಒಂದು ಚಕ್ರ ಮುಗಿಯಬೇಕು. ಅದನ್ನು ಮುಗಿಸಿ ಮತ್ತೊಂದಕ್ಕೆ ಕಾಲಿಡುವವನು ನಾನು. ಅದಕ್ಕೆ ಅದರದ್ದೇ ಆದ ಅವಧಿ, ಸಾವಧಾನ ಎಲ್ಲವೂ ಬೇಕು. ನಾನು ಅದನ್ನೆಲ್ಲ ಇಷ್ಟಪಡುತ್ತಲೇ ಮಾಡುತ್ತೇನೆ&rsquo; ಅಂತ ಹೇಳುತ್ತಿದ್ದ ರಕ್ಷಿತ್ ಶೆಟ್ಟರ ಮಾತಲ್ಲಿ ತಾನು ಅಂದುಕೊಂಡಿದ್ದನ್ನು ಅಂದುಕೊಂಡ ರೀತಿಯಲ್ಲೇ ಮಾಡಿ ಮುಗಿಸಿದ ಸಂತೋಷ ಇತ್ತು. ರಿಚರ್ಡ್ ಆ್ಯಂಟನಿಯ ಪ್ರಯಾಣ ಶುರುವಾಗಿದೆ ಮತ್ತು ಆತನ ಜತೆ ಯಾರಿದ್ದಾರೆ ಅನ್ನುವುದು ಇಷ್ಟರಲ್ಲೇ ಬಯಲಾಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/sandalwood/actor-rakshit-shetty-interview-after-3-years-about-richard-anthony-movie-o94v7rr"/>
        </item>
        <item>
            <title><![CDATA[Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda]]></title>
            <link>https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</link>
            <guid isPermaLink="true">https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</guid>
            <pubDate>Sun, 17 May 2026 15:30:58 +0530</pubDate>
            <description><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtnnm5aqfbwwj85kjszqtre,imgname-new-project---2026-05-17t151730.599-1779011604650.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಎಂಟು ತಿಂಗಳಿನಿಂದ ಅವರು ಡಯೆಟ್&zwnj;, ಫಿಟ್&zwnj;ನೆಸ್&zwnj; ಕಡೆಗೆ ಇನ್ನಷ್ಟು ಗಮನ ಕೊಡುತ್ತಿದ್ದಾರೆ. ಈ ವೇಳೆ ಅವರು 8kg ತೂಕ ಇಳಿಸಿಕೊಂಡಿದ್ದಾರಂತೆ. ಫಿಟ್&zwnj;ನೆಸ್&zwnj;, ವರ್ಕೌಟ್&zwnj;, ಡಯೆಟ್&zwnj;, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;ತಾಯಿಯಾದ್ಮೇಲೆ ದೇಹದಲ್ಲಿ ಒಂದೇ ಅಲ್ಲದೆ, ಮಹಿಳೆಯ ಜೀವನವೇ ಬದಲಾಗುತ್ತದೆ. ಒಂದು ಮಗು ಬಂದರೆ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆಯಾದರೆ, ತಾಯಿಗೆ ಮಾತ್ರ ಅವಳ ಬದುಕೇ ಬದಲಾಗುತ್ತದೆ. ಈಗ ನನಗೆ ಮಗನಿದ್ದು, ನನ್ನ ಪತಿ ಚಂದನ್&zwnj; ಕುಮಾರ್&zwnj;, ಮನೆಯವರು ಸಹಾಯ ಮಾಡೋದರಿಂದ ಮಗು ನೋಡಿಕೊಳ್ಳೋದು ಅಷ್ಟು ಕಷ್ಟ ಆಗುತ್ತಿಲ್ಲ. ಆದರೆ ತಾಯಿಯಾಗಿ ಅವನಿಗೆ ಎಷ್ಟು ಆದ್ಯತೆ ಕೊಡಬೇಕೋ ಅಷ್ಟನ್ನು ನಾನು ಕೊಡ್ತಿದ್ದೀನಿ. ಮಗನ ವಿಚಾರದಲ್ಲಿ ಕೆಲ ವಿಷಯಗಳಿವೆ. ಅವನಿಗೆ ಬೆಳಿಗ್ಗೆ ತಿಂಡಿ ನಾನೇ ಮಾಡಿಸಬೇಕು ಎಂದಿದೆ, ಅದಕ್ಕೆ ನಾನೇ ಇರಬೇಕು. ಉಳಿದ ವಿಷಯಗಳನ್ನು ಮನೆಯವರು ನೋಡಿಕೊಳ್ತಾರೆ.&lt;/p&gt;&lt;img&gt;&lt;p&gt;ಈ ಹಿಂದೆ ನನಗೆ ಕೋಪ ಬರುತ್ತಿರಲಿಲ್ಲ. ಯಾರಾದರೂ ಏನಾದರೂ ಹೇಳಿಕೊಳ್ಳಲಿ? ಏನಾದರೂ ಮಾಡಿಕೊಳ್ಳಲಿ ಎಂದುಕೊಳ್ತಿದ್ದೆ. ಮಗು ಆದ್ಮೇಲೆ ಯಾರು ಏನು ಹೇಳಿದರೂ ಕೂಡ, ಅವರಿಗೆ ಏನಾದರೂ ಹೇಳಿ ಬೇಸರ ಮಾಡೋದು ಬೇಡ, ನನಗೂ ಬೇಸರ ಮಾಡಿಕೊಳ್ಳೋದು ಬೇಡ ಎಂದುಕೊಂಡು ಸುಮ್ಮನಾಗಿರುತ್ತೇನೆ. ಫಂಕ್ಷನ್&zwnj; ಇರಲೀ, ಬೇರೆ ಕೆಲಸ ಇರಲಿ, ಎಲ್ಲೇ ಹೋಗಬೇಕು ಎಂದ್ರೂ ಕೂಡ, ಈ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ,ಆ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ ಎಂದು ಮೊದಲೇ ತಿಳಿಸಿರುತ್ತೇನೆ. ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆದಾಗ, ತಾಯಿ ಆದಾಗ ಮಹಿಳೆಗೆ ಮಾನಸಿಕವಾಗಿ, ದೈಹಿಕವಾಗಿ ಬದಲಾವಣೆ ಆಗುತ್ತದೆ. ಇದನ್ನು ಗಂಡ ಅಥವಾ ಪುರುಷರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಗೆ ಬೆನ್ನು ನೋವು ಬಂತು, ಕಾಲು ನೋವು ಬಂತು ಎಂದಾಗ ಡ್ರಾಮಾ ಮಾಡ್ತಾರೆ ಎಂದು ಪುರುಷರು ಎಂದುಕೊಳ್ಳೋದು ತಪ್ಪು. ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ಬದಲಾಗುತ್ತದೆ ಎಂದು ಪುರುಷರು ಅರ್ಥಮಾಡಿಕೊಳ್ಳಬೇಕು. ನನ್ನ ಮಗನಿಗೆ ನಾನು ಇದನ್ನೆಲ್ಲ ಕಲಿಸುತ್ತೇನೆ, ಇಂದಿನ ಮಹಿಳೆಯರು ಕೂಡ ಮಕ್ಕಳಿಗೆ ಇದನ್ನೆಲ್ಲ ಕಲಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ.&lt;/p&gt;&lt;img&gt;&lt;p&gt;ನನಗೆ ಪ್ರಗ್ನೆನ್ಸಿ ಟೈಮ್&zwnj;ನಲ್ಲಿ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಎಂದು ಅನಿಸಿರಲಿಲ್ಲ. ಮೊದಲೇ ಫಿಟ್&zwnj;ನೆಸ್&zwnj; ಕಡೆಗೆ ಗಮನ ಕೊಟ್ಟಿದ್ದಕ್ಕೆ ಗರ್ಭಿಣಿಯಾದಾಗ, ನಂಗೆ ಬೆನ್ನು ನೋವು, ಕಾಲು ನೋವು ಅಂತ ಬಂದಿರಲಿಲ್ಲ. ಮಗು ಡೆಲಿವರಿಗೆ ಆದ್ಮೇಲೆ ಸಮಸ್ಯೆಯಾದರೂ ಕೂಡ, ಅದಕ್ಕೆ ಬೇಕಾದ ಆರೈಕೆ ಮಾಡಿಕೊಂಡೆ. ಕ್ರೇವಿಂಗ್ಸ್&zwnj; ಬಂದಿದೆ ಎಂದರೆ ನಿಮ್ಮಲ್ಲಿ ಏನಾದರೊಂದು ಕೊರತೆ ಇರುತ್ತದೆ ಎಂದರ್ಥ. ಆಗ ಡಾಕ್ಟರ್&zwnj; ಬಳಿ ಕೇಳಿದಾಗ ಏನು ಸಮಸ್ಯೆ ಆಗಿದೆ ಎಂದು ಗೊತ್ತಾಗುತ್ತದೆ. ಇಂದು ಇಂಟರ್&zwnj;ನೆಟ್&zwnj;ನಲ್ಲಿ ಕೂಡ ಸಾಕಷ್ಟು ಮಾಹಿತಿ ಸಿಗುತ್ತಿದೆ.&lt;/p&gt;&lt;img&gt;&lt;p&gt;ಅನ್ನದ ಜೊತೆಗೆ ತರಕಾರಿ, ಪ್ರೋಟೀನ್&zwnj; ಇರಬೇಕು. ಕೇವಲ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರೋಟೀನ್&zwnj; ಮೊದಲು ತಿಂದು, ಆಮೇಲೆ ತರಕಾರಿ ತಿನ್ನೇಕು, ಇದಾದ ಬಳಿಕ ಅನ್ನ, ಚಪಾತಿ, ರೊಟ್ಟಿ ತಿಂದರೆ ಊಟ ಬ್ಯಾಲೆನ್ಸ್&zwnj; ಆಗುತ್ತದೆ. ಸ್ವೀಟ್&zwnj; ತಿನ್ನಬೇಕು ಎನಿಸಿದಾಗ, ಇದಕ್ಕೆ ಬದಲಾಗಿ ಏನು ತಿನ್ನಬಹುದು ಎಂದು ಯೋಚಿಸಿ. ಹೀಗೆ ಎಣ್ಣೆ ತಿಂಡಿ, ಸ್ವೀಟ್&zwnj; ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲದ ಆಹಾರಗಳನ್ನು ತ್ಯಜಿಸಿ.&lt;/p&gt;&lt;p&gt;ಯಾವಾಗ ಎಷ್ಟು? ಏನು ತಿನ್ನಬೇಕು ಎನ್ನೋದು ಡಯೆಟ್.&zwnj; ಇದನ್ನು ಪಾಲಿಸಬೇಕು.&amp;nbsp;&lt;/p&gt;&lt;img&gt;&lt;p&gt;ವರ್ಕೌಟ್&zwnj; ಮಾಡಬೇಕು ಎಂದು ಏನೇನೋ ಮಾಡಿದರೆ ಪ್ರಯೋಜನ ಇಲ್ಲ. ದಪ್ಪ ಇದ್ದು ಯಾವುದ್ಯಾವುದೋ ವರ್ಕೌಟ್&zwnj; ಮಾಡಿದರೆ, ಆಮೇಲೆ ಮೊಣಕಾಲು ನೋವು ಬರುತ್ತದೆ, ಎಲುಬಿಗೆ ಸಮಸ್ಯೆ ಆಗುತ್ತದೆ. ತಾಯಿಯಾದ್ಮೇಲೆ ಮಹಿಳೆಗೆ ಯಾವ ರೀತಿ ವರ್ಕೌಟ್&zwnj; ಮುಖ್ಯ ಆಗುತ್ತದೆ ಎಂದು ತಿಳಿದುಕೊಳ್ಳಬೇಕು. ಹೀಗಾಗಿ ಡಾಕ್ಟರ್&zwnj; ಸಲಹೆ, ಟ್ರೇನರ್&zwnj; ಸಲಹೆ ಮುಖ್ಯ ಆಗುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www"/>
        </item>
        <item>
            <title><![CDATA[Rachita Ram: ಮದುವೆ, ಪ್ರೀತಿ, ಡೈವೋರ್ಸ್ ಬಗ್ಗೆ ರಚಿತಾ ನೇರ ಮಾತು: 14 ವರ್ಷದ ಸಿನಿ ಪಯಣದ ಅನುಭವ ಹಂಚಿಕೆ]]></title>
            <link>https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6</link>
            <guid isPermaLink="true">https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6</guid>
            <pubDate>Fri, 19 Jun 2026 16:11:41 +0530</pubDate>
            <description><![CDATA[&lt;p&gt;Rachita Ram: ರಕ್ಷಿತಾ, ರಮ್ಯಾ, ರಾಧಿಕಾ ಬಳಿಕ ಸ್ಯಾಂಡಲ್&zwnj;ವುಡ್ ಪ್ರವೇಶಿಸಿದ್ದ &lsquo;ರ&rsquo; ಹೆಸರಿನ ಪ್ರತಿಭಾವಂತ ನಟಿ. ಮೊದಲ ಮೂವರೂ ಒಂದು ದಶಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 14 ವರ್ಷಗಳಾದರೂ ರಚಿತಾ ಓಟ ಮುಂದುವರಿಕೆ. ಈ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfqh6dfy3awfps3y48ca3f7,imgname-bjv-1781865683375.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜೋಗಿ&lt;/strong&gt;&lt;/p&gt;&lt;p&gt;&lt;strong&gt;1. ಈ ಹದಿನಾಲ್ಕು ವರ್ಷಗಳನ್ನು ಮೂರು ಭಾಗ ಮಾಡಿದರೆ, ಪ್ರತಿಯೊಂದು ಭಾಗದ ವಿಶೇಷ ಏನು?&lt;/strong&gt;&lt;/p&gt;&lt;p&gt;ಪ್ರತಿಯೊಂದು ಹಂತದಲ್ಲೂ ತುಂಬ ಏರಿಳಿತ ಕಂಡಿದ್ದೀನಿ, ಸೋಲು ಗೆಲುವು ಜತೆಜತೆಯಾಗಿಯೇ ಬಂದಿದೆ. ಆದರೆ ಅದ್ಯಾವುದೂ ನನ್ನನ್ನು ತುಂಬ ಕಾಡಿಲ್ಲ. ಈಗಲೂ ಹೊಸ ಸಿನಿಮಾ ಒಪ್ಪಿಕೊಂಡಾಗ ಸಣ್ಣ ಅಧೀರತೆ ಕಾಡುತ್ತದೆ. ಇದೇ ಮೊದಲ ಸಿನಿಮಾ ಎಂಬಂತೆ ಅಂಜುತ್ತಾ ಸೆಟ್ಟಿಗೆ ಹೋಗುತ್ತೇನೆ. ಫಸ್ಟ್ ಶಾಟ್ ಒಪ್ಪಿತವಾಗುತ್ತಿದ್ದಂತೆ ಆತ್ಮವಿಶ್ವಾಸ ಮರಳುತ್ತದೆ. ಮೊದಲ ಚಿತ್ರ ಮಾಡುವಾಗ ಇದ್ದ ಮುಗ್ಧತೆ ಈಗಲೂ ನನ್ನಲ್ಲಿ ಉಳಿದಿದೆ ಅಂತ ನನಗೆ ಅನ್ನಿಸುತ್ತೆ. ಅಭಿನಯದ ವಿಚಾರಕ್ಕೆ ಬಂದರೆ ಬೆಳೆದಿದ್ದೀನಿ, ಬೆಳೆಯಲೇ ಬೇಕಲ್ಲ, ಮಿಕ್ಕಂತೆ ಆಗ ಹೇಗಿದ್ದೆನೋ ಹಾಗೆಯೇ ಇದ್ದೇನೆ.&lt;/p&gt;&lt;p&gt;&lt;strong&gt;2. ಹೆಣ್ಮಕ್ಕಳಿಗೆ ಒಳ್ಳೆಯ ಪಾತ್ರ ಸಿಗುವ ಕಾಲ ಇದಲ್ಲ. ನಿಮಗೆ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಕ್ಕವು. ಆದರೆ ಅವೆಲ್ಲ ತಡವಾಗಿ ಬಂದವು ಅನ್ನಿಸುತ್ತಿಲ್ಲವೇ?&lt;/strong&gt;&lt;/p&gt;&lt;p&gt;ನಾನು ಜೀವನವನ್ನು ಬಹಳ ಸಹಜವಾಗಿ ಸ್ವೀಕಾರ ಮಾಡ್ತೀನಿ. ಏನು ಬರುತ್ತದೋ ಅದನ್ನು ಹಾಗೇ ತಗೊಳ್ತೀನಿ, ಒಳ್ಳೆಯದನ್ನು ತೆಗೆದುಕೊಳ್ಳೋಣ. ಕೆಟ್ಟದ್ದನ್ನು ಬಿಡೋಣ ಅನ್ನೋದು ನನ್ನ ಪಾಲಿಸಿ. ತಡವಾಗಿ ಬಂತೇ ಅಂತ ಕೇಳಿಕೊಳ್ಳುವಾಗ, ಬೇಗನೇ ಬಂದಿದ್ದರೆ ಬೇಗನೇ ಮನೆಗೆ ಬಂದುಬಿಡುತ್ತಿದ್ದೆನೇನೋ ಅಂತಲೂ ಅನ್ನಿಸುತ್ತದೆ. ನಾನು ಕನ್ನಡದ ಹುಡುಗಿ, ಬೆಂಗಳೂರು ಹುಡುಗಿ, ಹತ್ತು ವರ್ಷ ಇಲ್ಲಿಯೇ ಕಂಪ್ಲೀಟ್ ಮಾಡಬೇಕು ಅನ್ನಿಸಿತ್ತು. ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಬೇಕು ಅಂತ ಪಣ ತೊಟ್ಟಿದ್ದೆ. ಬೇರೆ ಭಾಷೆಗಳಲ್ಲಿ ಅವಕಾಶ ಬಂದಿಲ್ಲ ಅಂತೇನಲ್ಲ. ಆದರೆ ಹತ್ತು ವರ್ಷ ಪಟ್ಟು ಹಿಡಿದು ಇಲ್ಲೇ ಇರಲು ನಿರ್ಧರಿಸಿದ್ದೆ. ಮಧ್ಯೆ ಒಂದು ಬ್ರೇಕ್ ಸಿಕ್ಕಾಗ, ಮನೆಯಲ್ಲೇ ಕೂತಿದ್ದಾಗ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದೆ.&lt;/p&gt;&lt;p&gt;&lt;strong&gt;3. ಡಿಂಪಲ್ ಕ್ವೀನ್ ಅಂತ ಅಭಿಮಾನಿಗಳು ಕರೆದರು. ನಂತರ ಪ್ರಬುದ್ಧವಾದ ಪಾತ್ರಗಳನ್ನು ಮಾಡ್ತಿದ್ದೀರಿ, ಈಗ ಏನಂತ ಕರೆಸಿಕೊಳ್ಳೋ ಆಸೆಯಿದೆ?&lt;/strong&gt;&lt;/p&gt;&lt;p&gt;ಅತ್ಯುತ್ತಮ ನಟಿ ಅನ್ನಿಸಿಕೊಳ್ಳುವ ಆಸೆ. ಆ ಕಾಲಕ್ಕೆ ಜನ ಪ್ರೀತಿಯಿಂದ ಡಿಂಪಲ್ ಕ್ವೀನ್ ಅಂದರು. ಪ್ರೀತಿಯಿಂದ ಸ್ವೀಕರಿಸಿದೆ. ಪ್ರೇಕ್ಷಕರು ಹೇಗೆ ಕರೆದರೂ ಮೆಚ್ಚಿಕೊಂಡರೂ ನನಗೆ ಇಷ್ಟ. ನೆಗೆಟಿವ್ ಕಾಮೆಂಟುಗಳನ್ನು ಒಪ್ಪಿಕೊಳ್ಳೋ ಈ ಕಾಲದಲ್ಲಿ ಹೊಗಳಿಕೆ ಒಪ್ಪಿಕೊಳ್ಳಲಿಕ್ಕೆ ಯಾಕೆ ಹಿಂಜರಿಯಬೇಕು. ನಾನಿಲ್ಲಿಗೆ ಬಂದಿದ್ದು ಕೆಲಸ ಮಾಡೋದಕ್ಕೆ ಅಷ್ಟೇ. ಅದನ್ನು ಮೆಚ್ಚಿಕೊಂಡು ಅವರು ಕ್ವೀನ್ ಅಂತ ಕರೆದರೆ ಸಂತೋಷ ಆಗುತ್ತೆ. ತಡವಾಗಿ ಬಂದಾಗಲೇ ಎಲ್ಲಕ್ಕೂ ಬೆಲೆ, ಹೆಚ್ಚು ಮಜಾ ಸಿಗುತ್ತೆ. ಕನ್ನಡದಲ್ಲಿ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಮಾಡಿದ್ದೀನಿ. ರಕ್ಷಿತಾ ಮತ್ತು ರಮ್ಯಾರ ನಂತರ ಎಲ್ಲರ ಜತೆಗೂ ವರ್ಕ್ ಮಾಡಿದವಳು ನಾನು.&lt;/p&gt;&lt;p&gt;&lt;strong&gt;4. ಲ್ಯಾಂಡ್ ಲಾರ್ಡ್ ಮತ್ತು ಕೂಲಿ ಚಿತ್ರಗಳಲ್ಲಿ ಮೇಕಪ್ ಇಲ್ಲದೇ ನಟಿಸಿದ್ದು ಹೇಗಿತ್ತು?&lt;/strong&gt;&lt;/p&gt;&lt;p&gt;ತುಂಬಾ ಚಾಲೆಂಜಿಂಗ್. ಕೂಲಿ ಚಿತ್ರದಲ್ಲಿ ಸನ್&zwnj;ಸ್ಕ್ರೀನ್, ಮಾಯಿಶ್ಚರೈಸರ್ ಅಷ್ಟೇ. ಕಾಡಿಗೆ ಹಾಕೋದಕ್ಕೂ ಬಿಡುತ್ತಿರಲಿಲ್ಲ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಟ್ಯಾನ್ ಮೇಕಪ್ ಅಂದರೆ ಬಿಸಿಲಿಗೆ ಸುಟ್ಟಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ. ಗ್ರೇಡಿಂಗ್&zwnj;ನಲ್ಲೂ ಬಹಳ ಡಲ್ ಮಾಡಿದ್ದಾರೆ. ಕೂಲಿಯಲ್ಲಿ ನಾನು ಹೇಗಿದ್ದೇನೋ ಹಾಗೇ ತೋರಿಸಿದ್ದಾರೆ. ಎಷ್ಟೇ ಆದರೂ ಮೇಕಪ್ ಇಲ್ಲದೇ ನಟಿಸೋದು ನಿಜಕ್ಕೂ ಸವಾಲು.&lt;/p&gt;&lt;p&gt;&lt;strong&gt;5. ಕಮರ್ಷಿಯಲ್ ಸಿನಿಮಾಗಳಲ್ಲೇ ನಟಿಸೋದು ನಿಮ್ಮ ಆಯ್ಕೆಯಾಗಿತ್ತಾ?&lt;/strong&gt;&lt;/p&gt;&lt;p&gt;ನೆವರ್. ನನಗೆ ಒಂದೇ ಥರದ ಪಾತ್ರಗಳಲ್ಲಿ ನಟಿಸಿ ಬೇಜಾರಾಗಿತ್ತು. ಯಾಕೆ ಹೊಸ ಥರದ ಪಾತ್ರ ಸಿಗುತ್ತಿಲ್ಲ ಅಂತ ಯೋಚಿಸುತ್ತಿದ್ದೆ. ಒಮ್ಮೊಮ್ಮೆ ಅನ್ನಿಸುತ್ತೆ, ಇಲ್ಲಿ ಒಂಥರ ಈಗೋ ಇದೆ. ಅವರನ್ನೇನು ಕರೆಯೋದು, ಅವರನ್ನು ಯಾಕೆ ಕರೀಬೇಕು ಅಂತೆಲ್ಲ ಅಂದುಕೊಳ್ಳುತ್ತಾರೆ. ಒಂದು ವರ್ಕ್&zwnj;ಶಾಪ್ ಮಾಡಿದರೆ ತಾನೇ ನಾವೇನು ಅಂತ ನಿರ್ದೇಶಕರಿಗೆ ಗೊತ್ತಾಗೋದು, ವೆಟ್ರಿಮಾರನ್ ಸಿನಿಮಾ ಮಾಡೋ ಮೊದಲು ವರ್ಕ್&zwnj;ಶಾಪ್ ಮಾಡ್ತಾರೆ. ಇಲ್ಲಿ ಅಂಥ ಅಭ್ಯಾಸವೇ ಇಲ್ಲ. ಸುಮ್ಮನೆ ಅವರು ಒಪ್ಪೋದಿಲ್ಲ, ಸೂಟ್ ಆಗೋದಿಲ್ಲ ಅಂದು ಬಿಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ವೃತ್ತಿಪರತೆಯೇ ಇಲ್ಲ ಅಂತ ಕೆಲವೊಂದು ಸಲ ಅನ್ನಿಸುತ್ತೆ.&lt;/p&gt;&lt;p&gt;&lt;strong&gt;6. ಪ್ಯಾನ್&zwnj; ಇಂಡಿಯಾ ಬಂದ ನಂತರ ನಟಿಯರಿಗೆ, ಪೋಷಕ ನಟರಿಗೆ ಅವಕಾಶ ವಂಚನೆಯಾಗಿದೆ ಅಲ್ಲವೇ?&lt;/strong&gt;&lt;/p&gt;&lt;p&gt;ನನಗೆ ಈ ಪರಿಕಲ್ಪನೆಯೇ ಅರ್ಥ ಆಗೋಲ್ಲ. ಪಾನ್ ಇಂಡಿಯಾ ಆಗಬೇಕಿದ್ದರೆ ಬೇರೆ ಭಾಷೆಯವರನ್ನೇ ಹಾಕಿಕೊಳ್ಳಬೇಕಾ? ಕನ್ನಡದವರನ್ನೇ ಹಾಕಿಕೊಂಡು ಪ್ಯಾನ್&zwnj; ಇಂಡಿಯಾ ಚಿತ್ರ ಮಾಡೋದಕ್ಕಾಗಲ್ವಾ? ಕಾಂತಾರದ ಥರ ಕನ್ನಡದ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಆಗಬಹುದಲ್ಲ. ಕೂಲಿಯಲ್ಲಿ ನಾನು, ಉಪೇಂದ್ರ ಹಾಗೂ ಎಲ್ಲಾ ಭಾಷೆಯವರೂ ಇದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಎಲ್ಲಾ ದಕ್ಷಿಣ ಭಾರತೀಯ ಭಾಷೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಲೋಕಲ್ ಆಗಿದ್ದೇ ಗ್ಲೋಬಲ್ ಆಗಬೇಕು,&lt;/p&gt;&lt;p&gt;&lt;strong&gt;7. ನೀವು ಸೆಟ್&zwnj;ನಲ್ಲಿ ಹೇಗಿರುತ್ತೀರಿ?&lt;/strong&gt;&lt;/p&gt;&lt;p&gt;ನಾನು ಸಿಂಪಲ್ ಹುಡುಗಿ. ಕ್ಯಾರವಾನ್&zwnj;ನಿಂದ ಹೆಚ್ಚಿನ ಸಮಯ ಹೊರಗೇ ಇರ್ತೀನಿ. ಟೀಮ್ ಚೆನ್ನಾಗಿದ್ದಾಗ ಅವರ ಜತೆ ಮಾತಾಡ್ತಿರೋಣ ಅನ್ನಿಸುತ್ತೆ. ಆರು ಗಂಟೆಗೆ ನಿಗದಿಯಾಗಿರುವ ಶೂಟಿಂಗ್ ಒಂಬತ್ತರ ತನಕ ಮುಂದೆ ಹೋದರೂ ಸಂತೋಷವಾಗಿ ಮಾಡ್ತೀನಿ. ಟೀಮ್ ಹೇಗಿರುತ್ತೆ ಅನ್ನೋದು ಮುಖ್ಯ. ನೀವು ಜಂಭದಿಂದ ಇದ್ದರೆ ನಾನೂ ಹಾಗೇ ಇರ್ತೀನಿ. ಇಲ್ಲದೇ ಹೋದರೆ ನನಗೆ ಎಲ್ಲರ ಜತೆ ಒಡನಾಟ ಇಷ್ಟ.&lt;/p&gt;&lt;p&gt;&lt;strong&gt;8. ವಿಮರ್ಶೆ ಬಂದಾಗ ಹೇಗೆ ತಗೋತೀರಿ?&lt;/strong&gt;&lt;/p&gt;&lt;p&gt;ನೆಗೆಟಿವ್ ಬಂದಾಗಲೂ ತಿದ್ದಿಕೊಳ್ಳೋದು ಇದ್ದಾಗ ತಿದ್ದಿಕೊಳ್ತೀನಿ. ಕೆಟ್ಟದ್ದು ಮಾಡಿದಾಗ ಒಮ್ಮೆ ಯೋಚಿಸ್ತೀನಿ. ಹೌದಲ್ವಾ, ಇದನ್ನು ತಿದ್ದಿಕೊಂಡರೆ ನನಗೇ ಒಳ್ಳೇದಾಗುತ್ತಲ್ಲ ಅನ್ನಿಸಿದಾಗ ತಗೋತೀನಿ. ಆದರೆ ಸಾಮಾನ್ಯವಾಗಿ ಹೊಗಳಿಕೆ ತೆಗಳಿಕೆ ಯಾವುದನ್ನೂ ತುಂಬ ಹಚ್ಚಿಕೊಳ್ಳೋದಿಲ್ಲ.&lt;/p&gt;&lt;p&gt;&lt;strong&gt;9. ಸೋಷಲ್ ಮೀಡಿಯಾದ ಕಾಮೆಂಟಿನಿಂದ ಮೂಡ್ ಆಫ್ ಆಗೋದಿಲ್ವಾ?&lt;/strong&gt;&lt;/p&gt;&lt;p&gt;- ಪ್ರತಿ ತಿಂಗಳೂ ಇಎಂಐ ಕಟ್ಟಬೇಕಾಗಿ ಬಂದಾಗ, ಬ್ಯಾಂಕಿನಿಂದ ದುಡ್ಡು ಹೋದಾಗ ಮೂಡ್ ಆಫ್ ಆಗುತ್ತೆ. ಮಿಕ್ಕಂತೆ ಸಂತೋಷವಾಗಿಯೇ ಇರ್ತೀನಿ.&lt;/p&gt;&lt;p&gt;&lt;strong&gt;10. ಸಿಟ್ಟು ಎಷ್ಟಿದೆ?&lt;/strong&gt;&lt;/p&gt;&lt;p&gt;-ನನಗೆ ಬಹಳ ಬೇಗ ಸಿಟ್ಟು ಬರುತ್ತೆ. ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ. ಸುಳ್ಳು ಹೇಳಿದರೆ, ನಾಟಕ ಮಾಡಿದರೆ ಬಹಳ ಕೋಪ ಬರುತ್ತೆ. ಹೊರಗೆ ಸಿಟ್ಟು ಬಂದಾಗ ಕಿರುಚೋದಿಲ್ಲ, ಸುಮ್ಮನೆ ಎದ್ದು ಬರ್ತೀನಿ. ಅಪ್ಪ ಹೇಳುತ್ತಿರುತ್ತಾರೆ, ದುಷ್ಟರನ್ನು ಕಂಡರೆ ದೂರ ಇರು ಅಂತ. ಎದ್ದು ಬಂದುಬಿಡ್ತೀನಿ. ಒಂದು ಅರ್ಧ ಗಂಟೇಲಿ ಇಳಿದೂ ಹೋಗುತ್ತೆ.&lt;/p&gt;&lt;p&gt;&lt;strong&gt;11. ರಾಷ್ಟ್ರಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದೀರಾ?&lt;/strong&gt;&lt;/p&gt;&lt;p&gt;- ಇಲ್ಲಿಯ ತನಕ ಅಂಥ ಅವಕಾಶ, ಸನ್ನಿವೇಶ ಬಂದಿಲ್ಲ. ಮುಂದೆ ಬರಬಹುದು, ಭಗವಂತ ನನಗೆ ಮೋಸ ಮಾಡೋದಿಲ್ಲ, ಅಂಥ ಒಂದು ಪಾತ್ರ ಬರಬಹುದು. ನಟಿಸೋದಕ್ಕೆ ಅವಕಾಶ ಕೊಟ್ಟ ದೇವರು ಪ್ರಶಸ್ತಿ ಕೊಡದೇ ಇರುತ್ತಾನಾ? ಟೈಮ್ ಬರಲಿ ಅಂತ ಕಾಯುತ್ತೇನೆ. ನನಗೆ ತುಂಬ ಅಭಿಮಾನಿಗಳಿದ್ದಾರೆ. ನಾನು ಯಾವ ಊರಿಗೆ ಹೋದರೂ ಸಂಭ್ರಮಿಸುತ್ತಾರೆ. ಅದೇ ನನ್ನ ಸಂತೋಷ.&lt;/p&gt;&lt;p&gt;&lt;strong&gt;ಅಭಿಮಾನಿಗಳಿಗೆ ಸಂಡೇ ಸಡಗರ&lt;/strong&gt;&lt;/p&gt;&lt;p&gt;ಪ್ರತಿ ಭಾನುವಾರ ಮನೆ ಮುಂದೆ 100-150 ಮಂದಿ ಮನೆ ಮುಂದೆ ಕಾಯುತ್ತಾರೆ. ನಾನು ಅವರನ್ನು ಭೇಟಿ ಮಾಡುತ್ತೀನಿ. ದರ್ಶನ್ ಹೇಳಿಕೊಟ್ಟ ಪಾಠ ಇದು. ಅಭಿಮಾನಿಗಳು ಪ್ರೀತಿಯಿಂದ ಬಂದಾಗ ಭೇಟಿ ಮಾಡಿ, ಒಂದು ಫೋಟೋ ತಗೊಂಡು ಹೋಗ್ತಾರೆ ಅಷ್ಟೇ. ಅವರಿಗೆ ನಿರಾಸೆ ಮಾಡಬಾರದು ಅಂತ ದರ್ಶನ್ ಹೇಳಿದ್ದರು. ನಾನು ಅದನ್ನು ಈಗಲೂ ಪಾಲಿಸುತ್ತಾ ಬಂದಿದ್ದೀನಿ.&lt;/p&gt;&lt;p&gt;&lt;strong&gt;ನನ್ನನ್ನು ಕಾರಿಗೇ ಹತ್ತಿಸುತ್ತಿರಲಿಲ್ಲ&lt;/strong&gt;&lt;/p&gt;&lt;p&gt;ನನಗೆ ಕಾರೆಂದರೆ ಆಕರ್ಷಣೆ. ನಾನು ಬಾಲ್ಯದಲ್ಲಿದ್ದಾಗ ಒಂದು ಘಟನೆ ನಡೆದಿತ್ತು. ನಮ್ಮ ಸಂಬಂಧಿಕರು ನನಗೆ ಕಾರು ಹತ್ತಿಸುತ್ತಿರಲಿಲ್ಲ. ನಮ್ಮ ಹತ್ತಿರವೂ ಕಾರು ಇರಲಿಲ್ಲ. ಕಾರಿಗೆ ಹತ್ತಿಸಿಕೊಂಡರೆ ನಾನು ವಾಂತಿ ಮಾಡ್ಕೋತೀನಿ ಅಂತ ಕಾರಿಗೆ ಹತ್ತೋದಕ್ಕೇ ಬಿಡ್ತಿರಲಿಲ್ಲ. ಹೀಗಾಗಿ ನಾನು ತಗೊಳ್ಳಲೇಬೇಕು ಅಂತ ಹಠ ಬಂತು. ಅಪ್ಪನಿಗೆ ಒತ್ತಾಯ ಮಾಡಿದೆ. ಆಗ ಕಪ್ಪು ಸ್ಯಾಂಟ್ರೋ ಕಾರು ಬಂತು. ಆದರೂ ನನಗೆ ತೃಪ್ತಿ ಆಗಿರಲಿಲ್ಲ. ಆಮೇಲೆ ನಾನೇ ಕಾರು ತಗೊಂಡೆ. ನನಗೆ ಇವತ್ತು ಪ್ರತಿ ಕಾರಲ್ಲೂ ಕೂತರೂ ಹೆಮ್ಮೆ ಅನ್ನಿಸುತ್ತೆ. ಇದು ನನ್ನ ಕಾರು. ನಾನು ತಗೊಂಡಿರೋದು ಅನಿಸುತ್ತೆ. ತುಂಬ ಖುಷಿಯಾಗುತ್ತೆ.&lt;/p&gt;&lt;h2&gt;&lt;strong&gt;ಮದುವೆ ಆಗಲು ಸಕಾರಣಗಳಿಲ್ಲ!&lt;/strong&gt;&lt;/h2&gt;&lt;p&gt;ಕಳೆದ ವರ್ಷದ ನಂತರ ಬಹಳ ಆಸೆಯಿತ್ತು. ಅಮ್ಮ ಅಪ್ಪಂಗೆ ಮುಂದಿನ ವರ್ಷ ಮದುವೆ ಮಾಡಬೇಕು ಅಂತ ಹೇಳಿ ಕುಣೀತಿದ್ದೆ. ಆದರೆ ಬರ್ತಾ ಬರ್ತಾ ಇಮೋಷನ್&zwnj;ಗೆ ಮತ್ತು ರಿಲೇಷನ್&zwnj;ಶಿಪ್&zwnj;ಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ ಅಂತ ಅನ್ನಿಸೋದಕ್ಕೆ ಶುರುವಾಯ್ತು. ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇವತ್ತಿನ ಖುಷಿ, ಇವತ್ತಿಗೆ ಮಾತ್ರ. ಕ್ಷಣ ಕ್ಷಣದ ಬದುಕು ಮುಖ್ಯ ಅಂತ ಎಲ್ಲರಿಗೂ ಅನ್ನಿಸ್ತಿದೆ. ಇವತ್ತು ಚೆನ್ನಾಗಿ ಕುಡಿಯೋಣ, ನಾಳೆಯದು ನಾಳೆಗೆ ಅಂತಾಗಿದೆ. ನಮ್ಮ ಅಪ್ಪ ಅಮ್ಮನ ಸಂಬಂಧದಂತೆ ಏನೇ ಆದರೂ ಜತೆಗಿರಬೇಕು ಅನ್ನೋ ಭಾವನೆ ಕಾಣಿಸ್ತಿಲ್ಲ. ಮಾತು ಮಾತಿಗೆ ಡೈವೋರ್ಸ್ ಅಂತಾಗಿದೆ. ಅಂಥದ್ದಕ್ಕೆ ಯಾಕೆ ಟೈಮ್ ವೇಸ್ಟ್ ಮಾಡಬೇಕು. ಇಬ್ಬರ ಮಧ್ಯೆ ಏನು ನಡೆಯುತ್ತೆ ಅಂತ ಬೇರೆ ಯಾರಿಗೂ ಗೊತ್ತಾಗಲ್ಲ. ಹೇಳೋದಕ್ಕೂ ಆಗಲ್ಲ. ಎಲ್ಲರೂ ತಾಳ್ಮೆ ಕಳ್ಕೊಂಡಿದ್ದಾರೆ. ಸಿನಿಮಾ ನೋಡೋದಕ್ಕೆ ಬಂದಾಗಲೂ ಮೊಬೈಲ್ ನೋಡ್ತಾ ಕೂತ್ಕೋತಾರೆ. ತಾಳ್ಮೆ ಇಲ್ಲದೇ ಹೋದಾಗ ಸಂಬಂಧವನ್ನು ನಿಭಾಯಿಸೋದು ಕಷ್ಟ. ಇದರ ಮಧ್ಯೆ ಈಗೋ, ಸಂಪಾದನೆ, ಅಹಂಕಾರ ಎಲ್ಲ ಬರುತ್ತೆ. ಇದರ ಬಗ್ಗೆ ಇಡೀ ದಿನ ಮಾತಾಡಬಹುದು. ಸದ್ಯಕ್ಕೆ ನಾನು ದೇವರು ಕೊಟ್ಟ ಕೆಲಸವನ್ನು ಮಾಡ್ತಾ ಹೋಗ್ತೀನಿ. ಎಲ್ಲವನ್ನೂ ಅವನಿಗೇ ಬಿಟ್ಟಿದ್ದೀನಿ. ಅಪ್ಪ ಅಮ್ಮನ ಜತೆ ಸಂತೋಷವಾಗಿದ್ದೀನಿ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6"/>
        </item>
        <item>
            <title><![CDATA[ಮದುವೆಯಾದ್ಮೇಲೆ ನಟನೆ ಬಿಟ್ಟಿದ್ದೆ; ಪತಿ ಬೆಂಬಲಕ್ಕೆ ಕೊನೆಗೂ ಮಣಿದೆ: Nandagokula Serial ಪ್ರಿಯಾ Interview]]></title>
            <link>https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x</link>
            <guid isPermaLink="true">https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x</guid>
            <pubDate>Mon, 23 Feb 2026 22:08:37 +0530</pubDate>
            <description><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್&zwnj; ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ರಿಯಲ್&zwnj; ಪತಿ ಬಗ್ಗೆ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj5nnk5htyfzhrckajsewt9z,imgname-new-project--81--1771864509617.jpg" type="image/jpeg" height="390" width="690"/>
            <content:encoded><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ಮಾಧವನ ಪತ್ನಿಯಾಗಿರುವ ಪ್ರಿಯಾ ಈಗ ನಂದಕುಮಾರ್&zwnj; ಮನೆಯ ಖುಷಿಯನ್ನು ಹಾಳು ಮಾಡುತ್ತಿದ್ದಾಳೆ. ಇವಳನ್ನು ನೋಡಿದರೆ ಯಾಕೆ ಈ ಮನೆಗೆ ಬಂದಳು ಎಂದು ವೀಕ್ಷಕರು ಕಿಡಿ ಕಾರುತ್ತಿದ್ದಾರೆ. ಈಗ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ರಿಯಲ್&zwnj; ಪತಿ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ನಾನು ಹಾಗೂ ನನ್ನ ಗಂಡ ಮೊದಲಿನಿಂದಲೂ ಸ್ನೇಹಿತರು. ಕೆಲಸದ ವಿಚಾರಕ್ಕೆ ಅವರು, ನಾನು ಮೀಟ್&zwnj; ಮಾಡಿದೆವು. ಆಗ ಅವರು ನನ್ನ ಮದುವೆ ಆಗ್ತೀಯಾ ಎಂದು ಪ್ರಶ್ನೆ ಮಾಡಿದರು. ನನ್ನ ಜೀವನದ ಏರಿಳಿತವನ್ನು ಅವರು ನೋಡಿದ್ದಾರೆ, ಹೀಗಾಗಿ ನಾನು ಓಕೆ ಎಂದೆ. ನಮ್ಮದು ಲವ್&zwnj; ಮ್ಯಾರೇಜ್.&zwnj; ಆದರೆ ಲವ್&zwnj; ಪ್ರಪೋಸ್&zwnj; ಇರಲಿಲ್ಲ.&lt;/p&gt;&lt;img&gt;&lt;p&gt;ನನ್ನ ಗಂಡನ ಹೆಸರು ಹೇಮಂತ್&zwnj; ಶ್ರೀನಿವಾಸ್.&zwnj; ಈಗ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಾನು ನಟಿಸುವುದು ನನಗಿಂತ ಅವರಿಗೆ ಜಾಸ್ತಿ ಖುಷಿ.&lt;/p&gt;&lt;img&gt;&lt;p&gt;ಅವರಂತೂ ತುಂಬ ಖುಷಿಯಿಂದ ಇದ್ದಾರೆ. ನನ್ನ ಜೊತೆ ಯಾರಾದರೂ ಮಾತನಾಡಿ, ಫೋಟೋ ತಗೊಂಡರೆ ಅವರು ದೂರದಲ್ಲೇ ನಿಂತು ನೋಡಿ ಖುಷಿಪಡ್ತಾರೆ.&lt;/p&gt;&lt;img&gt;&lt;p&gt;ಮದುವೆಯಾದ್ಮೇಲೆ ನಟನೆ ಬೇಡ ಎಂದು ನಾನು ದೂರ ಇದ್ದೆ. ಆದರೆ ನನ್ನ ಗಂಡನೇ ಫೋಸ್ಟ್&zwnj; ಮಾಡಿದ್ರು, ನಿನಗೆ ನಟನೆ ಖುಷಿ ಇದೆ ಎಂದರೆ ಮಾಡು ಎಂದರು. ಹೀಗಾಗಿ ಮತ್ತೆ ನಟನೆಗೆ ಬಂದೆ.&lt;/p&gt;&lt;img&gt;&lt;p&gt;ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೀನಿ. ಅವಕಾಶಗಳು ಇಲ್ಲದಿದ್ದಾಗ ನನ್ನ ಮನೆಯಲ್ಲಿ ಎಲ್ಲರೂ ಸಪೋರ್ಟ್&zwnj; ಮಾಡಿದ್ದಾರೆ, ಪದೇ ಪದೇ ಮೋಟಿವೇಟ್&zwnj; ಮಾಡುತ್ತಿದ್ದರು. ಕಷ್ಟಪಟ್ಟಿದ್ದಕ್ಕೆ ಫಲಿತಾಂಶ ಸಿಗುತ್ತದೆ ಎಂದು ಹೇಳುತ್ತಲೇ ಇದ್ದರು. ಎಲ್ಲೇ ಕರೆದರೂ ಆಡಿಷನ್&zwnj;ನಲ್ಲಿ ಭಾಗವಹಿಸುತ್ತಿದ್ದೆ, ಒಳ್ಳೆಯ ಡೈರೆಕ್ಟರ್&zwnj; ಅಡಿಯಲ್ಲಿ ಕೆಲಸ ಮಾಡಿದ್ದೀನಿ, ಎಷ್ಟೋ ಪ್ರಾಜೆಕ್ಟ್&zwnj;ಗಳು ಕೈತಪ್ಪಿ ಹೋದಾಗ ನನಗೆ ಯಾಕೆ ಹೀಗಾಯ್ತು ಎಂದು ಬೇಸರ ಮಾಡಿಕೊಂಡಿದ್ದೂ ಇದೆ. ಆಗೆಲ್ಲ ಮನೆಯವರು ಮೋಟಿವೇಟ್&zwnj; ಮಾಡುತ್ತಿದ್ದರು.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/nandagokula-kannada-serial-priya-real-name-arpitha-gowda-on-husband-marriage-sih200x"/>
        </item>
        <item>
            <title><![CDATA[ನನ್ನ ಥರ ಯೋಚನೆ ಮಾಡೋರು ಸಿಕ್ಕಿಲ್ಲ ಅಂದ್ರೆ ಮದುವೆ ಬೇಡ ಹೇಳಿದ್ದೆ: Puttakkana Makkalu Serial ಸಂಜನಾ ಬುರ್ಲಿ]]></title>
            <link>https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp</link>
            <guid isPermaLink="true">https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp</guid>
            <pubDate>Tue, 14 Apr 2026 11:40:47 +0530</pubDate>
            <description><![CDATA[&lt;p&gt;Actress Sanjana Burli: ಪುಟ್ಟಕ್ಕನ ಮಕ್ಕಳು, ಶ್ರೀಗಂಧದ ಗುಡಿ ಧಾರಾವಾಹಿ ನಟಿ ಸಂಜನಾ ಬುರ್ಲಿ ಅವರು ಡಾಕ್ಟರ್&zwnj; ಸಮರ್ಥ್&zwnj; ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆ ಸ್ಟೋರಿ, ಹೇಗೆ ಪರಿಚಯ ಆಯ್ತು ಎಂಬುದನ್ನು ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಬಿಚ್ಚಿಟ್ಟಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp59qzsch3y6wxta53x7mhry,imgname-new-project--83--1776146972460.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಸಂಜನಾ ಬುರ್ಲಿ ( Sanjana Burli ) ಹಾಗೂ ಸಮರ್ಥ್&zwnj; ಚೆನ್ನಗಿರಿ ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರದ್ದು ಲವ್?&zwnj; ಅರೇಂಜ್&zwnj; ಮ್ಯಾರೇಜ್&zwnj; ಎಂಬ ಬಗ್ಗೆ ಅನೇಕರಿಗೆ ಡೌಟ್&zwnj; ಇತ್ತು. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.&lt;/p&gt;&lt;h2&gt;ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ&lt;/h2&gt;&lt;p&gt;ನನ್ನ ಫ್ರೆಂಡ್&zwnj; ಮೂಲಕ ಒಂದು ಕಾರ್ಯಕ್ರಮದಲ್ಲಿ ಸಮರ್ಥ್&zwnj; ಪರಿಚಯ ಆಯ್ತು. ನಾವು ನಾರ್ಮಲ್&zwnj; ಆಗಿ ಮಾತನಾಡಿಕೊಂಡಿದ್ದೆವು, ಒಂದು ವರ್ಷ ಆಗಿತ್ತು. ಆಗ ನಮ್ಮಿಬ್ಬರ ಆಲೋಚನೆಗಳು, ಉದ್ದೇಶ ಎಲ್ಲವೂ ಸಮನಾಗಿದೆ ಎಂದು ಅರ್ಥ ಆಯ್ತು. ನಾನು ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ, ಸಮರ್ಥ್&zwnj; ಡಾಕ್ಟರ್.&zwnj; ಹೀಗಾಗಿ ನಾವಿಬ್ಬರೂ ಮೆಡಿಕಲ್&zwnj; ಬಗ್ಗೆ ಹೆಚ್ಚು ಮಾತನಾಡುತ್ತಿದ್ದೆವು. ಇನ್ನು ಮದುವೆ ಆಗೋಣ ಎಂದು ಮನೆಯಲ್ಲಿ ಹೇಳಿದೆವು. ಆಮೇಲೆ ಎರಡೂ ಕುಟುಂಬದವರು ಒಪ್ಪಿ ಮದುವೆ ಮಾಡಿದರು ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;h2&gt;ಮನೆಯಲ್ಲೂ ಹಾಗೆ ಹೇಳಿದ್ದೆ&hellip;&lt;/h2&gt;&lt;p&gt;ನಾನು ಈ ಮದುವೆಯಲ್ಲಿ ಲವ್&zwnj; ಮ್ಯಾರೇಜ್&zwnj; ಅಥವಾ ಅರೇಂಜ್&zwnj; ಮ್ಯಾರೇಜ್&zwnj; ಎಂದು ಹೇಳಲು ಇಷ್ಟಪಡೋದಿಲ್ಲ. ನಾನು ಮೊದಲು ಮದುವೆ ಬಗ್ಗೆ ಯೋಚನೆ ಮಾಡಿರಲಿಲ್ಲ. ನನ್ನ ರೀತಿ ಆಲೋಚನೆಗಳು, ವಿಚಾರಧಾರೆಗಳನ್ನು ಇಟ್ಟುಕೊಳ್ಳುವವರು ತುಂಬ ಅಪರೂಪ, ಈ ರೀತಿ ಹುಡುಗ ಸಿಕ್ಕರೆ ಮದುವೆ ಆಗೋಣ, ಇಲ್ಲ ಅಂದ್ರೆ ಮದುವೆ ಬೇಡ ಎಂದು ಫಿಕ್ಸ್&zwnj; ಆಗದ್ದೆ. ನಮ್ಮ ಮನೆಯಲ್ಲಿ ಹುಡುಗನನ್ನು ನೋಡೋಕೆ ಆರಂಭಿಸಿದ್ದರು. ಆಮೇಲೆ ಅವರಿಗೂ ಕೂಡ ನನ್ನ ಥರ ಆಲೋಚನೆ ಮಾಡೋ ಹುಡುಗ ಸಿಕ್ಕರೆ ಹೇಳಿ ಅಂತಲೇ ಹೇಳಿದ್ದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;p&gt;ಮದುವೆ ಆದಮೇಲೂ ಕೂಡ ನಾನು ನಟನೆ ಮಾಡ್ತೀನಿ, ಸಮರ್ಥ್&zwnj; ಕಡೆಯಿಂದ ನನಗೆ ಯಾವುದೇ ನಿಯಮ ಹಾಕಿಲ್ಲ. ಮದುವೆ ಆಗಿದ್ದೀನಿ ಎನ್ನೋದು ಬಿಟ್ಟರೆ ನಾನು ಯಾವುದರಿಂದಲೂ ದೂರ ಹೋಗಿಲ್ಲ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡುತ್ತಿದ್ದೇನೆ, ಮುಂದೆ ಪಿಎಚ್&zwnj;ಡಿ ಮಾಡೋ ಆಸೆ ಇದೆ, ಯುಪಿಎಸ್&zwnj;ಸಿ ಪರೀಕ್ಷೆ ಬರೆಯುವ ಆಸೆ ಇದೆ ಎಂದು ಸಂಜನಾ ಬುರ್ಲಿ ಹೇಳಿದ್ದಾರೆ.&lt;/p&gt;&lt;h2&gt;ಸಮರ್ಥ್&zwnj; ಕುಟುಂಬಸ್ಥರು ಯಾರು?&lt;/h2&gt;&lt;p&gt;ಸಮರ್ಥ್&zwnj; ಅವರ ತಂದೆ ಕೂಡ ಚೆನ್ನಗಿರಿಯಲ್ಲಿ ಮೆಡಿಕಲ್&zwnj; ಸ್ಟೋರ್ಸ್&zwnj; ಇಟ್ಟುಕೊಂಡಿದ್ದಾರೆ. ನನ್ನ ತಂದೆ-ತಾಯಿ ಕೂಡ ಫಾರ್ಮಸಿ ಬ್ಯಾಕ್&zwnj;ಗ್ರೌಂಡ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮರ್ಥ್&zwnj; ಕೂಡ ಡಾಕ್ಟರ್&zwnj;, ನಾನು ಮೆಡಿಕಲ್&zwnj; ಇಂಜಿನಿಯರಿಂಗ್&zwnj; ಓದಿದ್ದೇನೆ. ಎರಡೂ ಕುಟುಂಬಸ್ಥರ ಬ್ಯಾಕ್&zwnj;ಗ್ರೌಂಡ್&zwnj; ಒಂದೇ ಇದೆ. ಒಟ್ಟಿನಲ್ಲಿ ವಿಧಿ ನಮ್ಮಿಬ್ಬರನ್ನು ಒಟ್ಟಿಗೆ ಕರೆತಂದಿದೆ.&lt;/p&gt;&lt;h2&gt;ಮದುವೆ ಚೆನ್ನಾಗಿ ಆಯ್ತು&lt;/h2&gt;&lt;p&gt;ಪ್ರಕೃತಿ ಮಧ್ಯೆ ಮದುವೆ ಆಗೋ ಆಸೆ ಇತ್ತು. ಹೀಗೆ ಪ್ಲ್ಯಾನ್&zwnj; ಮಾಡಿದ್ದೆವು. ನಮ್ಮ ಕುಟುಂಬಸ್ಥರು, ಬಂಧು ಮಿತ್ರರು ಎಲ್ಲರೂ ಇದ್ದರು. ನಾವು ಮದುವೆಯಲ್ಲಿ ಎಲ್ಲಿಯೂ ಪ್ಲಾಸ್ಟಿಕ್&zwnj; ಬಳಸಿಲ್ಲ. ಪ್ರಾಣಿ ಹಿಂಸೆ ಮಾಡಿ ಸಿಗುವ ಆಹಾರ ನಮಗೆ ಇಷ್ಟ ಇರಲಿಲ್ಲ. ಹೀಗಾಗಿ ರಾಗಿ, ಬಾದಾಮಿಯಿಂದ ಹಾಲು ತಯಾರಿಸಿ, ಅದನ್ನು ಅಡುಗೆಗೆ ಬಳಸಿದ್ದೇವೆ, 98% ವೇಗನ್&zwnj; ಫುಡ್&zwnj; ಇತ್ತು. ನಮ್ಮ ಸೀರೆಯನ್ನು ಕೂಡ ಗಿಡಗಳಿಂದ ತಯಾರಿಸಲಾಗಿತ್ತು, ಎಲ್ಲಿಯೂ ರೇಷ್ಮೆ ಬಳಕೆ ಮಾಡಿಲ್ಲ&lt;/p&gt;&lt;h2&gt;ಖುಷಿಯಾಯ್ತು&lt;/h2&gt;&lt;p&gt;ಮೋಕ್ಷಿತಾ ಪೈ ನನ್ನ ಸ್ನೇಹಿತೆ. ಅವರು ಮದುವೆಗೆ ಬಂದಿದ್ರು. ಭಾಸ್ಕರ್&zwnj; ರಾವ್&zwnj; ಸೇರಿದಂತೆ ಗಂಧದ ಗುಡಿ ಸೀರಿಯಲ್&zwnj; ಟೀಂ, ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟೀಂ ಕೂಡ ಬಂದಿದ್ದು, ಖುಷಿ ತಂದಿದೆ.&lt;/p&gt;&lt;p&gt;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/tv-talk/puttakkana-makkalu-serial-actress-sanjana-burli-samarth-marriage-story/articleshow-uuwr1cp"/>
        </item>
        <item>
            <title><![CDATA[ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತೆ, ಪ್ರಿಯಾ ಪಾತ್ರ ಮಾಡ್ಬೇಡಿ ಅಂದ್ರು: Nanda Gokula Serial ಅರ್ಪಿತಾ ಗೌಡ]]></title>
            <link>https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8</link>
            <guid isPermaLink="true">https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8</guid>
            <pubDate>Mon, 23 Feb 2026 15:52:13 +0530</pubDate>
            <description><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್&zwnj; 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್&zwnj; ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kj4zzdyz9qc3bdhw2qrffy5e,imgname-new-project--79--1771841763295.jpg" type="image/jpeg" height="390" width="690"/>
            <content:encoded><![CDATA[&lt;p&gt;ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್&zwnj; 3 ಮಕ್ಕಳಿಗೂ ಮದುವೆ ಆಗಿದೆ. ಇಬ್ಬರು ಗಂಡು ಮಕ್ಕಳು ನಂದಕುಮಾರ್&zwnj; ವಿರುದ್ಧವಾಗಿ ಮದುವೆಯಾದ್ರೆ, ಮಾಧವ ಮಾತ್ರ ತಂದೆ ಹೇಳಿದಂತೆ ಮದುವೆಯಾದ. ಆದರೆ ನಂದ ಆಯ್ಕೆ ಮಾಡಿದ ಸೊಸೆ ಪ್ರಿಯಾಳಿಂದಲೇ ಇಡೀ ಮನೆಯ ನೆಮ್ಮದಿ ಹಾಳಾಗ್ತಿದೆ. ಪ್ರಿಯಾ ಪಾತ್ರಧಾರಿ ಈ ಬಗ್ಗೆ ಏನಂತಾರೆ?&lt;/p&gt;&lt;img&gt;&lt;p&gt;ನಟಿ ಅರ್ಪಿತಾ ಗೌಡ ಅವರು ಎಷಿಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್&zwnj; ಜೊತೆ ಸೀರಿಯಲ್&zwnj; ಲೋಕದ ಜೊತೆಗೆ ವೈಯಕ್ತಿಕವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಎಲ್ಲಿಯವರು?&lt;/strong&gt;&lt;/p&gt;&lt;p&gt;ನಾನು ಶಿವಮೊಗ್ಗದವಳು, ತಂದೆ-ತಾಯಿಗೆ ಒಬ್ಬಳೇ ಮಗಳು, ತಂದೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಾರೆ, ತಾಯಿ ಫ್ಯಾಷನ್&zwnj; ಡಿಸೈನರ್&zwnj;.&lt;/p&gt;&lt;p&gt;&lt;strong&gt;ಶಿಕ್ಷಣದ ಬಗ್ಗೆ ಹೇಳಿ&lt;/strong&gt;&lt;/p&gt;&lt;p&gt;ಬಿಕಾಂ ಓದಿದ್ದೇನೆ&lt;/p&gt;&lt;img&gt;&lt;p&gt;ರಮ್ಯಾ ಅವರ ನಾಗರಹಾವು ಸಿನಿಮಾದಲ್ಲಿ ನಾಗದೇವತೆ ಪಾತ್ರಕ್ಕೆಂದು ಹುಡುಕಾಟ ಮಾಡುತ್ತಿದ್ದರು. ಆಗ ಒಬ್ಬರು ನಟನೆಯಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದರು. ನನಗೆ ನಟನೆ ಗೊತ್ತಿರಲಿಲ್ಲ, ಆಸಕ್ತಿ ಇರಲಿಲ್ಲ, ಅವಕಾಶ ಸಿಕ್ಕಿತು ಎಂದು ಸಿನಿಮಾ ಮಾಡಿದೆ. ಆಮೇಲೆ ಆಕ್ಟಿಂಗ್&zwnj; ಕೋರ್ಸ್&zwnj; ಮಾಡಿದೆ. ಐದಾರು ಸಿನಿಮಾ ಮಾಡಿದ್ದು, ಸತ್ಯ, ನೂರು ಜನ್ಮಕೂ ಧಾರಾವಾಹಿಯಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಬಂದು ಹದಿನಾಲ್ಕು ವರ್ಷಗಳು ಕಳೆದಿವೆ.&lt;/p&gt;&lt;img&gt;&lt;p&gt;ಆರಂಭದಲ್ಲಿ ನನ್ನ ತುಂಬ ದ್ವೇಷ ಮಾಡಿದ್ರು, ಈಗಲೂ ಮಾಡುತ್ತಿದ್ದಾರೆ. ಇದು ಕ್ಯಾರೆಕ್ಟರ್&zwnj;, ಪಾತ್ರ ಹಾಗೆ ಇರೋದಿಕ್ಕೆ ಅವರನ್ನು ನೋಡಿದ್ರೆ ನಮಗೆ ಸಿಟ್ಟು ಬರುತ್ತಿದೆ ಎಂದು ಕೆಲವರಿಗೆ ಅರ್ಥ ಆಗಿದೆ. ಆದರೂ ಕೂಡ ಪ್ರಿಯಾ ಪಾತ್ರ ಇಷ್ಟ ಇಲ್ಲ, ನೀವು ಈ ಪಾತ್ರ ಮಾಡ್ಬೇಡಿ ಎಂದು ಹೇಳಿದ್ದುಂಟು.&lt;/p&gt;&lt;img&gt;&lt;p&gt;ಪ್ರಿಯಾ ತುಂಬ ಮುಗ್ಧೆ, ಅವಳಿಗೆ ಅತ್ತೆ-ಮಾವ ಎಲ್ಲರನ್ನು ನಾನೇ ಚೆನ್ನಾಗಿ ನೋಡಿಕೊಳ್ಳಬೇಕು, ನನ್ನನ್ನು ಎಲ್ಲರೂ ಇಷ್ಟಪಡಬೇಕು ಎಂಬ ಗುಣ ಇದೆ. ಮುಂದಿನ ದಿನಗಳಲ್ಲಿ ಪ್ರಿಯಾ ಒಳ್ಳೆಯವಳು ಎನ್ನೋದು ಗೊತ್ತಾಗುವುದು.&lt;/p&gt;&lt;img&gt;&lt;p&gt;ಒಳ್ಳೆಯದನ್ನು ತೋರಿಸಲು, ಕೆಲವು ಕೆಟ್ಟದಾಗಿ ಕಾಣುತ್ತದೆ, ಹಾಗೆ ತೋರಿಸಿದರೆ ಚೆನ್ನಾಗಿ ಕಾಣುವುದು. ಈ ಪಾತ್ರ ಮಾಡಬೇಡಿ ಎಂದು ಅನೇಕರು ಹೇಳುತ್ತಿದ್ದಾರೆ, ನಿಮ್ಮನ್ನು ನೋಡಿದ್ರೆ ಸಿಟ್ಟು ಬರುತ್ತದೆ ಎಂದು ಕೆಲವರು ಹೇಳಿದ್ದುಂಟು. ಹೊರಗಡೆ ಹೋದಾಗ ನನಗೆ ಹೊಡೆಯುತ್ತಾರೆ ಎಂದು ಡೈರೆಕ್ಟರ್&zwnj;ಗೆ ತಮಾಷೆ ಮಾಡುತ್ತಿದ್ದೆ. ಅಕ್ಕ-ಪಕ್ಕದವರು ಕೂಡ ಇದು ನಿಜ ಎಂದು ಅಂದುಕೊಂಡಿದ್ದುಂಟು. ಎಲ್ಲರಿಗೂ ನಾನು ವಿವರಣೆ ಮಾಡಿ ಹೇಳೋಕೆ ಆಗೋದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಸೋಶಿಯಲ್&zwnj; ಮೀಡಿಯಾದಲ್ಲಿ ಬರುವ ಕಾಮೆಂಟ್&zwnj;ಗಳನ್ನು ನೋಡಿದರೆ ನಿಮಗೆ ಬೈತಿದ್ದಾರಾ? ಅಥವಾ ಪ್ರಿಯಾಗೆ ಬೈತಿದ್ದಾರಾ ಎಂಬ ಗೊಂದಲ ಆಗಿತ್ತಾ?&lt;/strong&gt;&lt;/p&gt;&lt;p&gt;ಆರಂಭದ ಮೂರು ದಿನ ನಾನು ಬೇಸರ ಮಾಡಿಕೊಂಡಿದ್ದೆ, ಈ ಥರದ ಡೌಟ್&zwnj; ಕೂಡ ಬಂದಿತ್ತು. ನಾನು ಇಷ್ಟು ವರ್ಷಗಳಲ್ಲಿ ನೆಗೆಟಿವ್&zwnj; ಶೇಡ್&zwnj; ಪಾತ್ರಗಳಲ್ಲಿ ನಟಿಸಿಲ್ಲ, ಇದು ನನಗೆ ಹೊಸತು. ಆಮೇಲೆ ನನ್ನ ಪಾತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಎಂದು ಅರ್ಥಮಾಡಿಕೊಂಡೆ. ಕುಟುಂಬ, ಸೀರಿಯಲ್&zwnj; ಟೀಂ ಎಲ್ಲವೂ ನನಗೆ ಬೆಂಬಲ ಕೊಟ್ಟಿದ್ದರಿಂದ, ನಾನು ಖುಷಿಯಿಂದ ಪಾತ್ರ ನಿರ್ವಹಣೆ ಮಾಡುತ್ತಿದ್ದೇನೆ.&lt;/p&gt;&lt;img&gt;&lt;p&gt;ಇಷ್ಟು ವರ್ಷ ಕಷ್ಟಪಟ್ಟಿದ್ದಕ್ಕೆ ಒಳ್ಳೆಯ ಪಾತ್ರ ಸಿಕ್ಕಿದೆ, ಜನರು ಸ್ವೀಕಾರ ಮಾಡಿದ್ದಾರೆ ಎಂಬ ಖುಷಿಯಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳನ್ನು ನಿರ್ವಹಿಸುವ ಆಸೆ ಕೂಡ ಇದೆ.&amp;nbsp;&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/celebrity-interviews/colors-kannada-nanda-gokula-serial-priya-real-name-arpitha-gowda-interview-xiyzeq8"/>
        </item>
        <item>
            <title><![CDATA[Special Interview: ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ, ನಾನು ಸ್ಟ್ರಿಕ್ಟ್: ನಟಿ ನಿಮಿಷಾ ಚಂದ್ರ]]></title>
            <link>https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude</link>
            <guid isPermaLink="true">https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude</guid>
            <pubDate>Mon, 15 Jun 2026 16:36:15 +0530</pubDate>
            <description><![CDATA[&lt;p&gt;Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5fbj5key2rj930dhjgyzb6,imgname-bikb-1781521565875.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ್ದೇನೆ, ಆದರೆ ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ ಎಂದು ನಟಿ ನಿಮಿಷಾ ಚಂದ್ರ ಹೇಳಿದ್ದಾರೆ. ಗ್ಲಾಮರ್ ಪಾತ್ರಗಳು, ನಾಯಕಿಯ ಘನತೆ ಮತ್ತು ಸಿನಿಮಾ ಪಯಣದ ಬಗ್ಗೆ ವಿಶೇಷ ಸಂದರ್ಶನ.&lt;/p&gt;&lt;p&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;&lt;strong&gt;* ಸಿನಿಮಾರಂಗಕ್ಕೆ ಎಂಟ್ರಿ ಹೇಗೆ?&lt;/strong&gt;&lt;/p&gt;&lt;p&gt;ನನ್ನ ತಾತ ಟೆಂಟ್&zwnj; ಸಿನಿಮಾ ನಡೆಸ್ತಿದ್ರು. ವಿತರಣೆಯನ್ನೂ ಮಾಡುತ್ತಿದ್ದರು. ತಂದೆ ಬರಹಗಾರರು. ಕೇಶವಚಂದ್ರ ಅಂತ. ಲಕುಮಿ, ಪುಟ್ಟಗೌರಿ ಮದುವೆ ಆರಂಭದ ಭಾಗ ಸೇರಿ ಒಂದಿಷ್ಟು ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಸ್ಕ್ರಿಪ್ಟ್ ಕೆಲಸ ಮಾಡಿದ್ದಾರೆ. ನಾನು ಬಿ.ಸುರೇಶ್&zwnj; ಅವರ &lsquo;ನಾಕುತಂತಿ&rsquo; ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ದೆ. ಮುಂದೆ ಆನಿಮೇಶನ್&zwnj; ಮತ್ತು ಡಿಜಿಟಲ್&zwnj; ಮೀಡಿಯಾದಲ್ಲಿ ಡಿಗ್ರಿ ಮಾಡಿದೆ. ಈ ವೇಳೆ ಶಾರ್ಟ್ ಫಿಲಂಗಳನ್ನೂ ಮಾಡ್ತಿದ್ವಿ. ಆಗೆಲ್ಲ ನಟನೆಯತ್ತ ನನ್ನ ಒಲವಿರುವುದು ಸ್ಪಷ್ಟವಾಯಿತು. ಇನ್ನೇನು ಆ್ಯಕ್ಟಿಂಗ್&zwnj;ನಲ್ಲಿ ಕೋರ್ಸ್ ಮಾಡಬೇಕು ಅನ್ನುವಾಗ &lsquo;ಗೋಪಿಲೋಲ&rsquo; ಸಿನಿಮಾದ ನಾಯಕಿ ಪಾತ್ರಕ್ಕೆ ಕರೆಬಂತು. &lsquo;ಕನಕರಾಜ&rsquo; ಎರಡನೇ ಚಿತ್ರ.&lt;/p&gt;&lt;p&gt;&lt;strong&gt;* ಅಪ್ಪನಂತೆ ಬರವಣಿಗೆ ಮೇಲೆ ಪ್ರೀತಿ ಇದೆಯಾ?&lt;/strong&gt;&lt;/p&gt;&lt;p&gt;ಇದೆ. ಸದ್ಯ ಕಥೆ ಬರೀತಿದ್ದೇನೆ. ಅಪ್ಪ ಗೈಡ್&zwnj; ಮಾಡ್ತಿದ್ದಾರೆ. ನಿರ್ದೇಶನದಲ್ಲೂ ಆಸಕ್ತಿ ಇದೆ. ಈ ಹಿಂದಿನ ಚಿತ್ರ &lsquo;ಗೋಪಿಲೋಲ&rsquo; ಕ್ಕೆ ಅಸೋಸಿಯೇಟ್&zwnj; ಡೈರೆಕ್ಟರ್&zwnj; ಆಗಿ ಕೆಲಸ ಮಾಡಿದ್ದೆ.&lt;/p&gt;&lt;p&gt;&lt;strong&gt;* ಸಿನಿಮಾರಂಗ ನಾಯಕಿಯರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ?&lt;/strong&gt;&lt;/p&gt;&lt;p&gt;ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ. ಆದರೆ ನಾನು ಆ ವಿಷಯದಲ್ಲಿ ಸ್ಟ್ರಿಕ್ಟ್. ಆ ಥರದ ಕಾಂಪ್ರಮೈಸ್&zwnj; ಇರಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳಿಯೇ ಸ್ಕ್ರಿಪ್ಟ್&zwnj; ಕೈಗೆತ್ತಿಕೊಳ್ಳುತ್ತೇನೆ.&lt;/p&gt;&lt;p&gt;&lt;strong&gt;* ಕಳೆದ ವಾರ ಜಾನ್ವಿ ಕಪೂರ್&zwnj; ಬೋಲ್ಡ್&zwnj;ನೆಸ್&zwnj; ಬಗ್ಗೆ ಚರ್ಚೆ ಆಯ್ತಲ್ಲಾ..&lt;/strong&gt;&lt;/p&gt;&lt;p&gt;ಅವರ ನಡುವೆ ಏನು ಕಮಿಟ್&zwnj;ಮೆಂಟ್&zwnj; ಇತ್ತೋ ಗೊತ್ತಿಲ್ಲ. ಆದರೆ ನಾಯಕಿಯ ವ್ಯಕ್ತಿತ್ವದ ಘನತೆ ಕಾಯಬೇಕು ಅನ್ನುವುದು ನನ್ನ ಅಭಿಪ್ರಾಯ. ನನಗೆ ವ್ಯಕ್ತಿತ್ವ ಇಲ್ಲದ ನಾಯಕಿ ಪಾತ್ರ ಇಷ್ಟವಿಲ್ಲ. ನನ್ನ ಅದೃಷ್ಟಕ್ಕೆ ಈ ಎರಡೂ ಸಿನಿಮಾಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಅಭಿನಯಕ್ಕೆ ಅವಕಾಶ ಇರುವ ನಾಯಕಿ ಪಾತ್ರ ಸಿಕ್ಕಿದೆ.&lt;/p&gt;&lt;h2&gt;&lt;strong&gt;* ಗ್ಲಾಮರಸ್&zwnj;, ಬೋಲ್ಡ್&zwnj; ಪಾತ್ರಗಳಲ್ಲಿ ನಟಿಸ್ತೀರ?&lt;/strong&gt;&lt;/h2&gt;&lt;p&gt;ಕಥೆ ಪೂರಕವಾಗಿದ್ದರೆ, ಒಂದು ಚೌಕಟ್ಟಿನೊಳಗಿದ್ದರೆ ಗ್ಲಾಮರ್&zwnj; ಪಾತ್ರದಲ್ಲಿ ನಟಿಸಲು ಅಡ್ಡಿಯಿಲ್ಲ. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ರೆಡಿ. ಹಾಗೆಂದು ಕನ್ನಡ ನನ್ನ ಭಾಷೆ. ಇದರಲ್ಲೇ ಮುಂದೆ ಹೋಗಬೇಕು ಎಂಬ ತುಡಿತವೂ ಇದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude"/>
        </item>
    </channel>
</rss>
