<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 07 Aug 2026 18:33:02 +0530</lastBuildDate>
        <atom:link href="https://kannada.asianetnews.com/rss/celebrity-interviews" rel="self" type="application/rss+xml"/>
        <item>
            <title><![CDATA[Priya Anand Interview: ನನಗೆ ಬಾಲಿವುಡ್‌ಗಿಂತ ಕನ್ನಡ ಚಿತ್ರವೇ ದೊಡ್ಡ ಅವಕಾಶ: ಪ್ರಿಯಾ ಆನಂದ್‌]]></title>
            <link>https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h</link>
            <guid isPermaLink="true">https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h</guid>
            <pubDate>Sat, 27 Jun 2026 17:47:48 +0530</pubDate>
            <description><![CDATA[&lt;p&gt;Priya Anand Interview: 'ಬಲರಾಮನ ದಿನಗಳು' ಚಿತ್ರದ ಬಗ್ಗೆ, ವಿನೋದ್ ಪ್ರಭಾಕರ್ ಜೊತೆಗಿನ ಅನುಭವ, ಪುನೀತ್ ರಾಜ್&zwnj;ಕುಮಾರ್ ನೆನಪುಗಳು ಮತ್ತು ಕನ್ನಡ ಚಿತ್ರರಂಗದ ಕುರಿತು ಪ್ರಿಯಾ ಆನಂದ್ ವಿಶೇಷ ಸಂದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4g3q6ef6g3vvbm8hh8dckc,imgname-ch-1782562544846.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಕನ್ನಡದಲ್ಲಿ ನಿಮಗೆ &lsquo;ಬಲರಾಮನ ದಿನಗಳು&rsquo; 4ನೇ ಚಿತ್ರ. ಹೇಗನಿಸುತ್ತಿದೆ?&lt;/strong&gt;&lt;/p&gt;&lt;p&gt;ತುಂಬಾ ಖುಷಿ ಇದೆ. ಪ್ರತಿ ಚಿತ್ರಕ್ಕೂ ತುಂಬಾ ಗ್ಯಾಪ್&zwnj; ಇದ್ದರೂ ನನ್ನನ್ನು ನೆನಪಿಟ್ಟುಕೊಂಡು ಕನ್ನಡದವರು ಕರೆಯುತ್ತಿದ್ದಾರೆ. ಕನ್ನಡ ಚಿತ್ರರಂಗದಿಂದ ನನಗೆ ಸಿಗುತ್ತಿರುವ ದೊಡ್ಡ ಗೌರವ ಅಂತಲೇ ಭಾವಿಸುತ್ತೇನೆ.&lt;/p&gt;&lt;p&gt;&lt;strong&gt;* ನಿಮ್ಮ ಹಿಂದಿನ ಕನ್ನಡ ಚಿತ್ರಗಳ ಬಗ್ಗೆ ಹೇಳುವುದಾದರೆ?&lt;/strong&gt;&lt;/p&gt;&lt;p&gt;ಆರೆಂಜ್&zwnj;, ರಾಜಕುಮಾರ, ಜೇಮ್ಸ್&zwnj;, ಕರಟಕ ದಮನಕ... ಇವು ನನ್ನ ಕನ್ನಡ ಚಿತ್ರಗಳು. ಪುನೀತ್&zwnj; ರಾಜ್&zwnj;ಕುಮಾರ್&zwnj; ಜೊತೆಗೆ ನಟಿಸಿದ್ದು ಮರೆಯಲಾಗದ ನೆನಪು. ಅವರ ಜೊತೆಗೆ ಎರಡು ಚಿತ್ರಗಳಲ್ಲಿ ನಟಿಸಿದ್ದು, &lsquo;ರಾಜಕುಮಾರ&rsquo; ನನ್ನ ಕೆರಿಯರ್&zwnj;ನ ಬ್ಲಾಕ್&zwnj; ಬಾಸ್ಟರ್&zwnj; ಸಿನಿಮಾ.&lt;/p&gt;&lt;p&gt;&lt;strong&gt;* ನಿಮ್ಮ ನೆನಪುಗಳಲ್ಲಿ ಪುನೀತ್&zwnj;ರಾಜ್&zwnj;ಕುಮಾರ್&zwnj; ಹೇಗಿರುತ್ತಾರೆ?&lt;/strong&gt;&lt;/p&gt;&lt;p&gt;ಪುನೀತ್&zwnj; ಅಂದರೆ ನಗು. ಅವರು ನನಗೆ ನಗು ಆಗಿಯೇ ನೆನಪಿನಲ್ಲಿದ್ದಾರೆ. ಅಭಿಮಾನಿಗಳ ಜೊತೆಗೆ ಅವರು ನಡೆದುಕೊಳ್ಳುವ ರೀತಿ, ಯಾರಾದರೂ ಫೋಟೋಗೆ ಬಂದಾಗ ಅವರನ್ನು ಮಾತನಾಡಿಸುವ ವಿಧಾನ, ಕೇರಿಂಗ್&zwnj; ನೇಚರ್&zwnj; ನನಗೆ ಇಷ್ಟ.&lt;/p&gt;&lt;p&gt;&lt;strong&gt;* ಬಲರಾಮನ ದಿನಗಳು ಚಿತ್ರಕ್ಕೆ ನೀವು ಕನೆಕ್ಟ್ ಆಗಿದ್ದು ಹೇಗೆ?&lt;/strong&gt;&lt;/p&gt;&lt;p&gt;ಚಿತ್ರದ ನಾಯಕ ವಿನೋದ್&zwnj; ಪ್ರಭಾಕರ್&zwnj; ಪತ್ನಿ ನಿಶಾ ಅವರು ನನಗೆ ಮೊದಲು ಕಾಲ್&zwnj; ಮಾಡಿದ್ದು. ಆ ನಂತರ ನಿರ್ದೇಶಕ ಕೆ.ಎಂ.ಚೈತನ್ಯ ಬಂದು ಕತೆ ಹೇಳಿದ್ದು.&lt;/p&gt;&lt;p&gt;&lt;strong&gt;* ಕನ್ನಡ ಚಿತ್ರದ ಅವಕಾಶ ಬಂದಿದ್ದರ ಬಗ್ಗೆ, ಕೆ.ಎಂ. ಚೈತನ್ಯ ನಿರ್ದೇಶನದಲ್ಲಿ ಅಂದಾಗ ಏನನಿಸಿತು?&lt;/strong&gt;&lt;/p&gt;&lt;p&gt;ಬಾಲಿವುಡ್&zwnj;ನಲ್ಲಿ ನಟಿಸುವುದೇ ದೊಡ್ಡ ಅವಕಾಶ ಅಂತಾರೆ. ಆದರೆ, ನನ್ನ ಪಾಲಿಗೆ ಕನ್ನಡವೇ ದೊಡ್ಡ ಅವಕಾಶ. ಹೀಗಾಗಿ ಕನ್ನಡ ಎಂದಾಗ ನನಗೆ ಗ್ರ್ಯಾಂಡ್&zwnj; ವೆಲ್ಕಮ್ ಇದ್ದಂತೆ. ಚೈತನ್ಯ ಅವರ &lsquo;ಆ ದಿನಗಳು&rsquo; ಚಿತ್ರದ ಬಗ್ಗೆ ನನಗೆ ಗೊತ್ತು. ಕಲ್ಟ್&zwnj; ಕ್ಲಾಸಿಕ್&zwnj; ಗ್ಯಾಂಗ್&zwnj;ಸ್ಟರ್&zwnj; ಸಿನಿಮಾ ಮಾಡಿದವರ ಜೊತೆಗೆ ಕೆಲಸ ಅಂದಾಗ ಖುಷಿ ಆಯಿತು.&lt;/p&gt;&lt;p&gt;&lt;strong&gt;* ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?&lt;/strong&gt;&lt;/p&gt;&lt;p&gt;ನನ್ನ ಪಾತ್ರದ ಬಗ್ಗೆ ಹೇಳಿದರೆ ಕತೆ ಹೇಳಿದಂತೆ ಆಗುತ್ತದೆ. ಬಲರಾಮನ ಜೀವನದಲ್ಲಿ ಬರುವ ಬಹು ದೊಡ್ಡ ಪಾತ್ರ ನನ್ನದು.&lt;/p&gt;&lt;p&gt;&lt;strong&gt;* ವಿನೋದ್&zwnj; ಪ್ರಭಾಕರ್&zwnj; ಜೊತೆಗಿನ ನಟನೆ ಅನುಭವ ಹೇಗಿತ್ತು?&lt;/strong&gt;&lt;/p&gt;&lt;p&gt;ಒಳ್ಳೆಯ ವ್ಯಕ್ತಿ ಜೊತೆಗೆ ಸ್ಕ್ರೀನ್&zwnj; ಶೇರ್&zwnj; ಮಾಡಿಕೊಂಡಿದ್ದೇನೆ. ಅವರ ಡೆಡಿಕೇಷನ್&zwnj;ಗೆ ಅವರೇ ಸಾಟಿ. ತುಂಬಾ ಒಳ್ಳೆಯ ಕೋ-ಸ್ಟಾರ್&zwnj;. ನನ್ನ ಇಷ್ಟದ ಸಿನಿಮಾ ತೆಲುಗಿನ &lsquo;ಜಗದೇಕವೀರ ಅತಿಲೋಕ ಸುಂದರಿ&rsquo;. ಈ ಚಿತ್ರದಲ್ಲಿ ನಟಿಸಿದ್ದ ಪ್ರಭಾಕರ್&zwnj; ಅವರು ವಿನೋದ್&zwnj; ತಂದೆ ಅಂತ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯಿತು. ಆ ಸರ್ಪ್ರೈಸ್&zwnj; ಕೂಡ ವಿನೋದ್&zwnj; ಪ್ರಭಾಕರ್&zwnj; ಜೊತೆಗೆ ನಟಿಸುವುದಕ್ಕೆ ಉತ್ಸಾಹ ತುಂಬಿತು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/balaramana-dinagalu-actress-priya-anand-special-interview-gvd/articleshow-19q4c3h"/>
        </item>
        <item>
            <title><![CDATA[Vinod Prabhakar Interview: 'ಸ್ಕ್ರಿಪ್ಟ್‌ಗಾಗಿ ನಟರು'... ವಿನೋದ್ ಪ್ರಭಾಕರ್ ಮಾತಿನ ಮರ್ಮವೇನು?]]></title>
            <link>https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy</link>
            <guid isPermaLink="true">https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy</guid>
            <pubDate>Sat, 27 Jun 2026 17:14:44 +0530</pubDate>
            <description><![CDATA[&lt;p&gt;Vinod Prabhakar: 'ಬಲರಾಮನ ದಿನಗಳು' ಚಿತ್ರಕ್ಕಾಗಿ ಪಾತ್ರವಾಗಿಯೇ ಬದುಕಿದ್ದೇನೆ. 'ಸ್ಕ್ರಿಪ್ಟ್&zwnj;ನೇ ಹೀರೋ', 13 ಕೋಟಿ ಬಜೆಟ್ ಸಿನಿಮಾ, 'ಮಾದೇವ' ಯಶಸ್ಸು ಮತ್ತು ನಿರ್ದೇಶನದ ಕನಸಿನ ಬಗ್ಗೆ ವಿನೋದ್ ಪ್ರಭಾಕರ್ ವಿಶೇಷ ಸಂದರ್ಶನ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4e6kb50pt1wqpg0rqh8j6n,imgname-chc-1782560542052.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಜೋಗಿ&lt;/strong&gt;&lt;/h2&gt;&lt;p&gt;&lt;strong&gt;* ಬಲರಾಮನ ದಿನಗಳು ಚಿತ್ರದ ಪಾತ್ರ ಎಷ್ಟು ಎಕ್ಸೈಟಿಂಗ್ ಆಗಿದೆ?&lt;/strong&gt;&lt;/p&gt;&lt;p&gt;ಪ್ರತೀ ಸಿನಿಮಾನೂ ನನಗೆ ಎಕ್ಸೈಟಿಂಗ್ ಅನ್ನಿಸುತ್ತದೆ. ನಾನು ಒಮ್ಮೆಗೆ ಒಂದು ಚಿತ್ರ ಮಾತ್ರ ಒಪ್ಪಿಕೊಳ್ಳುತ್ತೇನೆ. ಆ ಪಾತ್ರಕ್ಕೆ ತಕ್ಕಂತೆ ಸಿದ್ಧನಾಗುತ್ತೇನೆ. ಒಂದಿಷ್ಟು ದಿನ ಆ ಪಾತ್ರವೇ ಆಗಿ ಜೀವಿಸುತ್ತೇನೆ. &lsquo;ಮಾದೇವ&rsquo; ಚಿತ್ರದಲ್ಲಿ ಕೂಡ ಪರಕಾಯ ಪ್ರವೇಶ ಮಾಡಿ ನಟಿಸಿದ್ದಕ್ಕೆ ತುಂಬಾ ಅದ್ಭುತವಾಗಿ ಮೂಡಿಬಂದಿತ್ತು. ಈ ಸಲ ಕೂಡ ಬಲರಾಮ ಪಾತ್ರದಲ್ಲಿ ಜೀವಿಸಿದ್ದೇನೆ. ಇಷ್ಟಾದರೂ ಪ್ರತೀ ಸಿನಿಮಾ ಬರುವಾಗಲೂ ನನಗೆ ಭಯ ಇರುತ್ತದೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಇರುತ್ತದೆ. ಈಗಾಗಲೇ ಸಿನಿಮಾ ನೋಡಿದವರು ಈ ಸಿನಿಮಾದಲ್ಲಿ ವಿನೋದ್&zwnj; ಪ್ರಭಾಕರ್&zwnj; ಕಾಣಿಸಿಲ್ಲ, ಬಲರಾಮನೇ ಕಾಣಿಸಿಕೊಳ್ಳುತ್ತಾನೆ ಅಂತ ಹೇಳಿದ್ದಾರೆ. ಹಾಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇನೆ.&lt;/p&gt;&lt;p&gt;&lt;strong&gt;* ಮಾದೇವ ಬಳಿಕ ಬರುತ್ತಿರುವ ಸಿನಿಮಾ ಇದು, ಈ ಸಿನಿಮಾ ಎಷ್ಟು ಭಿನ್ನ?&lt;/strong&gt;&lt;/p&gt;&lt;p&gt;&lsquo;ಮಾದೇವ ಗೆದ್ದಿದ್ದರಿಂದ&rsquo; ಮತ್ತು ಅದರಿಂದ ತುಂಬಾ ಫ್ಯಾಮಿಲಿ ಆಡಿಯೆನ್ಸ್ ನನಗೆ ಕನೆಕ್ಟ್ ಆಗಿದ್ದಾರೆ. 2025ರಲ್ಲಿ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಮೊದಲ ಸಿನಿಮಾ ಅದು. ಅಲ್ಲಿಂದ ನನಗೆ ಜವಾಬ್ದಾರಿ ಹೆಚ್ಚಾಗಿದೆ. ಆ ಪ್ರೇಕ್ಷಕರನ್ನು ಬಲರಾಮನ ದಿನಗಳಿಗೂ ಕರೆತರಬೇಕು ಎಂಬ ಜವಾಬ್ದಾರಿ ಇತ್ತು. ಹಾಗಾಗಿ ಇದೊಂದು ಆ್ಯಕ್ಷನ್&zwnj; ಚಿತ್ರ ಆಗಿದ್ದರೂ ಅಂಡರ್&zwnj;ವರ್ಲ್ಡ್&zwnj; ಕತೆಯಾಧರಿತ ಸಿನಿಮಾ ಆಗಿದ್ದರೂ ಎಲ್ಲೂ ರಕ್ತಪಾತವಿಲ್ಲ. ಕೆಟ್ಟ ಪದಬಳಕೆ ಇಲ್ಲ. ಅಶ್ಲೀಲತೆ ಇಲ್ಲ. ಅಂಡರ್&zwnj;ವರ್ಲ್ಡ್&zwnj; ಕತೆಯನ್ನು ಸೂಕ್ಷ್ಮವಾಗಿ, ಜವಾಬ್ದಾರಿಯುತವಾಗಿ ನಿರ್ದೇಶಕ ಕೆ.ಎಂ. ಚೈತನ್ಯ ನಿಭಾಯಿಸಿದ್ದಾರೆ. ಇದೊಂದು ಕಲ್ಟ್&zwnj; ಕ್ಲಾಸಿಕ್&zwnj; ಸಿನಿಮಾ ಆಗುವ ಭರವಸೆ ಇದೆ.&lt;/p&gt;&lt;p&gt;&lt;strong&gt;* ಈ ಸಿನಿಮಾ ರೂಪುಗೊಂಡ ಬಗೆ ಹೇಗೆ?&lt;/strong&gt;&lt;/p&gt;&lt;p&gt;ನನ್ನ ಕರಿಯರ್&zwnj;ನಲ್ಲೇ ಬಿಗ್ಗೆಸ್ಟ್&zwnj; ಬಜೆಟ್&zwnj; ಸಿನಿಮಾ ಇದು. ಹತ್ತಿರಹತ್ತಿರ 13ರಿಂದ 14 ಕೋಟಿ ರೂಪಾಯಿ ಖರ್ಚಾಗಿದೆ. ಅಂದಹಾಗೆ ಇದು &lsquo;ಮಾದೇವ&rsquo;ಗಿಂತ ಮೊದಲು ರೆಡಿಯಾಗಿದ್ದ ಸಿನಿಮಾ. ಆಗಲೇ ಅವರು ದೊಡ್ಡ ಬಜೆಟ್&zwnj;ನಲ್ಲಿ ಮಾಡುತ್ತೇನೆ ಅಂತ ಹೇಳಿದ್ದರು. ಆದರೆ ನಾನು ನಿರ್ಮಾಪಕರಿಗೆ ಏಳು ಕೋಟಿ ರೂಪಾಯಿ ದಾಟಬೇಡಿ, ಅಷ್ಟು ಮಾರ್ಕೆಟ್&zwnj; ನನಗಿದೆ ಅಂತ ಹೇಳಿದ್ದೆ. ಆದರೆ ನಿರ್ಮಾಪಕರಾದ ಶ್ರೇಯಸ್&zwnj; ಮತ್ತು ಪದ್ಮಾವತಿ ಅವರು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ ಅಂತ ಅದ್ದೂರಿಯಾಗಿ ಸಿನಿಮಾ ಮಾಡಿದ್ದಾರೆ. ನನ್ನ ಈ ಹಿಂದಿನ &lsquo;ಮಾದೇವ&rsquo; ಸಿನಿಮಾ ಚೆನ್ನಾಗಿ ಆಗಿರುವುದರಿಂದ, ಆ ಸಿನಿಮಾ ಸುಮಾರು 10 ರಿಂದ 11 ಕೋಟಿ ಬಿಸಿನೆಸ್ ಆಗಿರುವುದರಿಂದ ಈ ಸಿನಿಮಾ ಕೂಡ ಶೇ.60ರಷ್ಟು ಸೇಫ್&zwnj; ಆಗಿದೆ.&lt;/p&gt;&lt;p&gt;&lt;strong&gt;* ಮಾದೇವಗಿಂತ ನಂತರ ಈ ಸಿನಿಮಾ ಬಂದಿದ್ದರೆ ಒಪ್ಪಿಕೊಳ್ಳುತ್ತಿದ್ರಾ?&lt;/strong&gt;&lt;/p&gt;&lt;p&gt;ಖಂಡಿತಾ. ಇನ್ನೂ ಧೈರ್ಯ ಬರುತ್ತಿತ್ತು. ಈ ಸಿನಿಮಾ ಇನ್ನಷ್ಟು ಚೆನ್ನಾಗಿ ಮಾಡಬಹುದು ಎಂಬ ಭಾವ ಇರುತ್ತಿತ್ತು. ಅನುಭವದ ಮಾತು ಹೇಳುತ್ತಿದ್ದೆ. ನಾನು &lsquo;ಮಾದೇವ&rsquo; ಚಿತ್ರವನ್ನು 200- 250 ಸಲ ನೋಡಿದ್ದೆ. ಅದರಲ್ಲಿ ಕ್ರಿಯೇಟಿವ್&zwnj; ಹೆಡ್&zwnj; ಆಗಿ ಕೆಲಸ ಮಾಡಿದ್ದೆ. ಪ್ರತೀ ಫ್ರೇಮ್&zwnj;ಗೂ ವರ್ಕ್&zwnj; ಮಾಡಿದ್ದೆವು. ಆದರೆ ಈ ಚಿತ್ರವನ್ನು ನಾನು ಸಲವೂ ಪೂರ್ತಿಯಾಗಿ ನೋಡಿಲ್ಲ. 6 ತಿಂಗಳ ಹಿಂದೆ ಒಮ್ಮೆ ನೋಡಿದ್ದೆನಷ್ಟೇ. ನನಗೆ ನಿರ್ದೇಶಕ ಕೆ.ಎಂ. ಚೈತನ್ಯ ಅವರ ಮೇಲೆ ಅಷ್ಟು ನಂಬಿಕೆ. ಅಪಾರ ಗೌರವ.&lt;/p&gt;&lt;p&gt;&lt;strong&gt;* ನಿಮ್ಮ ಕೆಲಸದ ರೀತಿ ಹೇಗಿರುತ್ತದೆ?&lt;/strong&gt;&lt;/p&gt;&lt;p&gt;ಈ ಸಿನಿಮಾ ಅಂತಲ್ಲ, ನಾನು ಪ್ರತೀ ಸಿನಿಮಾಗೂ ಹಾರ್ಡ್ ವರ್ಕ್ ಮಾಡುತ್ತೇನೆ. ಹಗಲು, ರಾತ್ರಿ ಕೆಲಸ ಮಾಡುತ್ತೇನೆ. ಪ್ರತೀ ಡೈಲಾಗ್ ಓದುತ್ತೇನೆ. ರಂಗಭೂಮಿ ಕಲಾವಿದನ ಥರ ಬರುತ್ತೇನೆ. ಎದುರಿನವರು ಏನು ಮಾತನಾಡುತ್ತಾರೆ ಎಂದು ಓದಿ ತಿಳಿದು ಅರ್ಥ ಮಾಡಿಕೊಂಡು ತಯಾರಾಗಿ ಬರುತ್ತೇನೆ. ಜೊತೆಗೆ ಸೆಟ್&zwnj;ನಲ್ಲೂ ರಿಹರ್ಸಲ್ ಮಾಡುತ್ತೇವೆ. ಅಷ್ಟು ಶ್ರಮ ಹಾಕುತ್ತೇನೆ. ಯಾಕೆಂದರೆ ಸಿನಿಮಾ ನನ್ನ ಕುಟುಂಬ.&lt;/p&gt;&lt;p&gt;&lt;strong&gt;* ಉದ್ಯಮದ ಕುರಿತು ಇಷ್ಟೆಲ್ಲಾ ತಿಳುವಳಿಕೆ ಹೇಗೆ ಬಂದಿತು?&lt;/strong&gt;&lt;/p&gt;&lt;p&gt;ತಂದೆಯವರಿಂದ ಬಂದಿದ್ದು. ಅವರು ನಿರ್ಮಾಪಕರ ಪರವಾಗಿ ಕೆಲಸ ಮಾಡುತ್ತಿದ್ದರು. ಅವರು ಅಂತಲ್ಲ, ಆಕಾಲದ ಎಲ್ಲಾ ನಟರೂ ಹಾಗೇ ಇದ್ದರು. ಅಣ್ಣಾವ್ರು, ಶಂಕರ್&zwnj;ನಾಗ್&zwnj;, ವಿಷ್ಣುವರ್ಧನ್&zwnj;, ಅನಂತ್&zwnj;ನಾಗ್&zwnj;, ತೂಗುದೀಪ ಶ್ರೀನಿವಾಸ್&zwnj;, ಸುಧೀರ್, ಮುಸುರಿ, ಸುಂದರಕೃಷ್ಣ ಅರಸ್&zwnj; ಎಲ್ಲರನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಆ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ. ಅವರೆಲ್ಲರೂ ಇಡೀ ತಂಡವನ್ನು ಕುಟುಂಬದಂತೆ ನೋಡಿಕೊಳ್ಳುತ್ತಿದ್ದರು. ನನಗೂ ನಾನು ಕೆಲಸ ಮಾಡುವ ಚಿತ್ರತಂಡದ ಪ್ರತಿಯೊಬ್ಬರ ಹೆಸರು ಗೊತ್ತಿರುತ್ತದೆ. ಸಿನಿಮಾ ಅನ್ನುವುದು ಫ್ಯಾಮಿಲಿ. ಪ್ರತಿಯೊಬ್ಬರೂ ಅದೇ ಭಾವನೆಯಿಂದ ಕೆಲಸ ಮಾಡಿದರೆ ಮಾತ್ರ ಒಳ್ಳೆಯ ಸಿನಿಮಾ ಆಗುವುದು. ಅಲ್ಲದೇ, ನನ್ನ ಕೆಲಸ ಏನು ಅನ್ನುವ ಅರಿವು ನನಗಿದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ನಿರ್ಮಾಪಕರು ಇವತ್ತು ಒಂದು ಸಿನಿಮಾದಿಂದ ಒಂದು ರೂಪಾಯಿ ಲಾಭ ವಾಪಸ್ ತೆಗೆದುಕೊಂಡು ಹೋದರೂ ಅವರು ಮತ್ತೆ ಸಿನಿಮಾ ಮಾಡುತ್ತಾರೆ. ಅದರಿಂದ ಸಿನಿಮಾ ರಂಗಕ್ಕೆ ಒಳ್ಳೆಯದಾಗುತ್ತದೆ. ಮಾದೇವ ಚಿತ್ರದಿಂದ ಎಷ್ಟೋ ಮಂದಿ ಚಿತ್ರಮಂದಿರ ಮಾಲೀಕರು ಚಿತ್ರಮಂದಿರ ಮತ್ತೆ ತೆರೆಯುವಂತಾಯಿತು ಅಂತ ಹೇಳಿದ್ದಾರೆ. ಆ ಸಂತೋಷಕ್ಕಾಗಿ ನಾನು ದುಡಿಯುತ್ತೇನೆ.&lt;/p&gt;&lt;p&gt;&lt;strong&gt;* ನಿಮ್ಮ ಪಾಲಿಗೆ ಸ್ಕ್ರಿಪ್ಟ್&zwnj; ಏನು?&lt;/strong&gt;&lt;/p&gt;&lt;p&gt;ಸ್ಕ್ರಿಪ್ಟ್&zwnj; ನನಗೆ ಹೀರೋ. ನಟರಿಗೋಸ್ಕರ ಸ್ಕ್ರಿಪ್ಟ್&zwnj; ಅಲ್ಲ, ಸ್ಕ್ರಿಪ್ಟ್&zwnj;ಗಾಗಿ ನಟರು. ಸ್ಕ್ರಿಪ್ಟ್&zwnj; ಏನು ಬೇಡುತ್ತದೆಯೋ ಅದನ್ನು ನಾವು ಕೊಡಬೇಕು. &lsquo;ಮಾದೇವ&rsquo; ಚಿತ್ರದ ಎಡಿಟಿಂಗ್&zwnj;ನಲ್ಲಿ ನಾನೇ ಕೂತಿದ್ದೆ. ಅದರ ಇಂಟರ್&zwnj;ವಲ್&zwnj;ನಲ್ಲಿ ಮಾದೇವ ಪಾತ್ರಕ್ಕೆ ಒಂದೂವರೆ ಪೇಜ್&zwnj; ಡೈಲಾಗ್&zwnj; ಇತ್ತು. ನಾನು ಅದನ್ನು ನೋಡಿ, ಮಾದೇವ ಪಾತ್ರ ಕಡಿಮೆ ಮಾಡಿದಷ್ಟೂ ಆ ಪಾತ್ರಕ್ಕೆ ಒಳ್ಳೆಯದು, ಹಾಗಾಗಿ ತೆಗೆಯಿರಿ ಎಂದು ನಿರ್ದೇಶಕರಿಗೆ ಹೇಳಿದ್ದೆ. ತಂದೆಯವರು ನನ್ನನ್ನು ಮೊದಲ ದಿನಗಳಲ್ಲೇ ಎಡಿಟಿಂಗ್ ನೋಡಲು ಕೂರಿಸಿದ್ದರು. ಹಾಗಾಗಿ ಎಡಿಟಿಂಗ್&zwnj; ಮೇಲೆ ನನಗೆ ಪ್ರೀತಿ ಜಾಸ್ತಿ. ಬಲರಾಮನ ದಿನಗಳ ಚಿತ್ರದಲ್ಲಿಯೂ ಹಲವು ಫೈಟ್, ಸೀನ್ ಎಡಿಟ್ ಮಾಡಿಕೊಟ್ಟಿದ್ದೇನೆ. ಹಾಗಾಗಿಯೇ ಚೈತನ್ಯ ಸರ್ ಮೊನ್ನೆ ಸಂದರ್ಶನದಲ್ಲಿ, ವಿನೋದ್&zwnj; ಪ್ರಭಾಕರ್&zwnj; ಒಬ್ಬ ಡೈರೆಕ್ಟರ್&zwnj; ಮೆಟೀರಿಯಲ್ ಅಂತ ಹೇಳಿದರು. &lsquo;ವಿನೋದ್&zwnj; ಅವರು ಅವರ ಪಾತ್ರ ಜಾಸ್ತಿ ಮಾಡಿ ಎಂದು ಕೇಳುವುದಿಲ್ಲ, ಆಕಡೆ ಪಾತ್ರ ಜಾಸ್ತಿ ಮಾಡಿ, ಈ ಡೈಲಾಗ್ ಅವರಿಗೆ ಕೊಡಿ ಸ್ಕ್ರಿಪ್ಟ್&zwnj;ಗೆ ಚೆನ್ನಾಗಿ ಆಗುತ್ತೆ ಅಂತ ಹೇಳುತ್ತಾರೆ. ಅಂಥಾ ಮನಸ್ಥಿತಿ ಇರುವುದು ಬಹಳ ಕಡಿಮೆ&rsquo; ಎಂದು ಹೇಳಿದ್ದಾರೆ. ಹೊಗಳಿದ್ದು ಅವರ ದೊಡ್ಡ ಗುಣ, ಆದರೆ ನನಗೆ ಆ ಥರ ವರ್ಕ್ ಮಾಡುವುದು ಇಷ್ಟ.&lt;/p&gt;&lt;p&gt;&lt;strong&gt;* ನೀವು ನಿರ್ದೇಶಕರಾಗುವ ದಿನ ದೂರವಿಲ್ಲ ಅನ್ನಿಸುತ್ತದೆ..&lt;/strong&gt;&lt;/p&gt;&lt;p&gt;ಸಿನಿಮಾ ಪ್ರೀತಿ ನನ್ನ ರಕ್ತದಲ್ಲಿಯೇ ಬಂದಿದೆ. ತಾಂತ್ರಿಕವಾಗಿ ಕೆಲಸ ಮಾಡುವುದು ನನಗಿಷ್ಟ. ತಂದೆಯವರ ಜೊತೆ ಬಹಳಷ್ಟು ಸಿನಿಮಾಗಳ ಎಡಿಟಿಂಗ್&zwnj; ಕೆಲಸ ತಿಳಿದುಕೊಂಡಿದ್ದೇನೆ.&lt;/p&gt;&lt;p&gt;&lt;strong&gt;* ಹೇಗಿದೆ ಪ್ರತಿಕ್ರಿಯೆ?&lt;/strong&gt;&lt;/p&gt;&lt;p&gt;ಎಲ್ಲಾ ಕಡೆ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಇನ್ನು ಜನ ಸಿನಿಮಾ ನೋಡಿ ನಿರ್ಧಾರ ಮಾಡಬೇಕು. ಈ ಸಲ ಇಂಡಸ್ಟ್ರಿ ಮಂದಿ ಬಹಳ ಸಪೋರ್ಟ್ ಮಾಡುತ್ತಿದ್ದಾರೆ. ಅವರವರ ಸೋಷಿಯಲ್ ಮೀಡಿಯಾಗಳಲ್ಲಿ ಸಿನಿಮಾ ಕುರಿತು ಹಂಚಿಕೊಂಡಿದ್ದಾರೆ. ಶುಭ ಹಾರೈಕೆ ಕಳುಹಿಸಿದ್ದಾರೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆಂಬ ಭರವಸೆ ಇದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/balaramana-dinagalu-hero-vinod-prabhakar-special-interview-gvd/articleshow-1vt42wy"/>
        </item>
        <item>
            <title><![CDATA[NS Shankar: ಒಂದು ಸಿನಿಮಾ, ಸಾವಿರ ನೆನಪು... ತೆರೆಗೆ ಸರಿದ ನಗಿಸಿದ ನಿರ್ದೇಶಕ ಎನ್‌.ಎಸ್‌.ಶಂಕರ್‌]]></title>
            <link>https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</link>
            <guid isPermaLink="true">https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug</guid>
            <pubDate>Mon, 29 Jun 2026 17:03:55 +0530</pubDate>
            <description><![CDATA[&lt;p&gt;NS Shankar: 'ಉಲ್ಟಾ ಪಲ್ಟಾ' ಚಿತ್ರದ ನಿರ್ದೇಶಕ, ಹಿರಿಯ ಪತ್ರಕರ್ತ, ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಎನ್&zwnj;.ಎಸ್&zwnj;. ಶಂಕರ್ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಗಣ್ಯರು ಭಾವಪೂರ್ಣ ನಮನ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9jdwp812tmpnjsze56h344,imgname-gxg-1782732747464.png" type="image/jpeg" height="390" width="690"/>
            <content:encoded><![CDATA[&lt;p&gt;ಎನ್&zwnj;.ಎಸ್&zwnj;. ಶಂಕರ್&zwnj;.... ಈ ಹೆಸರು ಚಿತ್ರರಂಗದವರ ಪಾಲಿಗೆ &lsquo;ಉಲ್ಟಾ ಪಲ್ಟಾ&rsquo; ಸಿನಿಮಾದ ನಿರ್ದೇಶಕರಾಗಿ, ಪತ್ರಿಕಾ ವಲಯದ ಪಾಲಿಗೆ &lsquo;ಸುದ್ದಿ ಸಂಗಾತಿ&rsquo;ಯಾಗಿ, ಸಾಹಿತ್ಯ ಹಾಗೂ ಚಳವಳಿಗಳ ದೃಷ್ಟಿಯಲ್ಲಿ ಸಾಂಸ್ಕೃತಿಕ ಚಿಂತಕರಾಗಿ ಸದಾ ನೆನಪಿರುತ್ತದೆ. ಪತ್ರಿಕೋದ್ಯಮ, ಸಾಹಿತ್ಯ, ಸಿನಿಮಾ, ಪ್ರಗತಿಪರ ಚಳವಳಿಗಳ ಸಂಗಾತಿಯಾಗಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರ &lsquo;ಹುಡುಕಾಟ&rsquo;ವು ನಿಲ್ಲದ ಪಯಣ. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಬೆಳೆದಿದ್ದು ಮಂಡ್ಯ ಜಿಲ್ಲೆ, ಓದಿದ್ದು ಮೈಸೂರು, ಪತ್ರಕರ್ತನಾಗಿಸಿದ್ದು ಬೆಂಗಳೂರು, ಸಾಂಸ್ಕೃತಿಕ ಚಿಂತಕ, ಹೋರಾಟಗಾರನ್ನಾಗಿಸಿದ್ದು ಚಳವಳಿಗಳು.&lt;/p&gt;&lt;p&gt;ಮೂಲತಃ ಪತ್ರಕರ್ತರಾಗಿ ಲಂಕೇಶ್ ಪತ್ರಿಕೆಯ ಒಡನಾಟದಲ್ಲಿ ಬೆಳೆದು ತೀಕ್ಷ್ಣ ಬರಹಗಳ ಮೂಲಕ ಗುರುತಿಸಿಕೊಂಡಿದ್ದ ಎನ್&zwnj;.ಎಸ್&zwnj;. ಶಂಕರ್&zwnj; ಅವರು ಪತ್ರಿಕೋದ್ಯಮಕ್ಕೆ ಸೀಮಿತವಾಗದೆ ಮುಂದೆ ಸಾಂಸ್ಕೃತಿಕ ಚಳವಳಿ ಹಾಗೂ ಬಂಡಾಯ ಸಾಹಿತ್ಯದ ತತ್ವಗಳಿಗೆ ಧ್ವನಿಗೂಡಿಸಿದರು. ಇದರ ಜೊತೆಗೆ ಎನ್&zwnj;. ಎಸ್&zwnj;. ಶಂಕರ್&zwnj; ಅವರನ್ನು ತೀವ್ರವಾಗಿ ಸೆಳೆಯುತ್ತಿದ್ದು ಸಿನಿಮಾ. ಹೀಗಾಗಿಯೇ ತಮ್ಮ ಪ್ರಥಮ ಸಿನಿಮಾ ರಮೇಶ್&zwnj; ಅರವಿಂದ್&zwnj; ನಟನೆಯ &lsquo;ಉಲ್ಟಾ ಪಲ್ಟಾ&rsquo; (1997) ಮೂಲಕ ಇಡೀ ಸ್ಯಾಂಡಲ್&zwnj;ವುಡ್ ತಿರುಗಿ ನೋಡುವಂತೆ ಮಾಡಿದ್ದರು. ಈ ಹಾಸ್ಯ ಪ್ರಧಾನ ಚಿತ್ರ ಕನ್ನಡ ಸಿನೆಮಾ ಇತಿಹಾಸದಲ್ಲಿ ಈಗಲೂ ಒಂದು ವಿಶಿಷ್ಟ ಮೈಲಿಗಲ್ಲಾಗಿ ಉಳಿದಿದೆ.&lt;/p&gt;&lt;p&gt;ವೈಚಾರಿಕ ಬರಹ ಹಾಗೂ ಚಿಂತನೆಗಳ ಹಿನ್ನೆಲೆಯಿಂದ ಬಂದ ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು ಅವರ ಆತ್ಮೀಯರು ಆಪ್ತವಾಗಿ ಸ್ಮರಿಸಿಕೊಂಡಿದ್ದಾರೆ. &lsquo;ಬರವಣಿಗೆ ಅನ್ನುವುದು ಅಮೃತಕ್ಕೆ ಹಾರುವ ಗರುಡನ ಹಾಗಿರಬೇಕು ಎಂದು ನನ್ನ ಲೇಖನ ಓದಿ ಹೇಳಿದವರು ಎನ್&zwnj;.ಎಸ್&zwnj;. ಶಂಕರ್&zwnj; ಅವರು. ಆದರೆ, ಅವರ ಮಾತು ನನಗೆ ಆಗ ಅರ್ಥ ಆಗಲಿಲ್ಲ. ಇಂದು ಅವರನ್ನು ಕೊನೆಯ ಬಾರಿಗೆ ಕಂಡೆ. &lsquo;ಅಮೃತಕ್ಕೆ ಹಾರುವ ಗರುಡ&rsquo; ಮಾತು ರಿಂಗಣಿಸುತ್ತಿತ್ತು. ರಾತ್ರಿ ಮಲಗಿದವರು ಬೆಳಗ್ಗೆ ಇಲ್ಲ! ಸುಖದ ಸಾವು, ನಿಜ.&lt;/p&gt;&lt;p&gt;ಆದರೆ ಬಾಕಿ ಉಳಿದ ಕನಸುಗಳ ಗತಿಯೇನು? ಕ್ರಾಂತಿಕಾರಿ ವಿಚಾರಧಾರೆಯ ಅವರ ನೊಸಲಿಗೆ ಯಾರೋ ವಿಭೂತಿ ಬಳಿದಿದ್ದರು. ಮತ್ತಾರೋ ಅಕ್ಕಿ ಲೋಟದಲ್ಲಿ ಗಂಧದ ಕಡ್ಡಿ ಹಚ್ಚಿಟ್ಟರು. ಉರಿವ ದೀಪ ಬದಿಯಲ್ಲಿ ಇಟ್ಟವರು ಮತ್ತೊಬ್ಬರು. ಇದನ್ನು ಅಲ್ಲಿಂದ ನೋಡಿ ಶಂಕರ್&zwnj; ತಲೆ ಚಚ್ಚಿಕೊಂಡರೇ? ನಾನು ಎನ್&zwnj;.ಎಸ್&zwnj;.ಶಂಕರ್&zwnj; ಅವರನ್ನು &lsquo;ಅಣ್ಣಾ&rsquo; ಎನ್ನುತ್ತಿದ್ದೆ. ಅವರು &lsquo;ಅಯ್ಯಾ&rsquo; ಎನ್ನುತ್ತಿದ್ದರು. ಅವರೊಂದಿಗೆ ಡಾ.ರಾಜ್&zwnj;ಕುಮಾರ್ ಮನೆಗೆ ಹೋಗಿ ಮಾತನಾಡಿಸಿದ್ದು, ಪಿ.ಲಂಕೇಶ್ ಅವರನ್ನು ಸಂದರ್ಶಿಸಿದ್ದು ಮರೆಯಲಾಗದ ಅನುಭವಗಳು. ಆ ದಿನಗಳ ಗಮ್ಮತ್ತೇ ಗಮ್ಮತ್ತು.&lt;/p&gt;&lt;p&gt;ನನ್ನ ಬಳಿ ಲೂನಾ ಮ್ಯಾಗ್ನಮ್ ಇತ್ತು. ಶಂಕರ್ ಹಿಂದೆ ಕೂರುತ್ತಿದ್ದರು. ನಾವು ಅದರಲ್ಲಿ ಇಡೀ ಬೆಂಗಳೂರು ಸುತ್ತಿದ್ದೇವೆ. ಶಂಕರ್ ಪ್ರತಿಭೆ ಕಂಡು ನಮಗೆಲ್ಲಾ ಅಚ್ಚರಿಯಾಗುತ್ತಿತ್ತು. ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂದು ಲೆಕ್ಕ ಹಾಕುತ್ತಿದ್ದೆವು. ಅದೇನೋ ಒಂದೂ ಕೈಗೂಡುತ್ತಿರಲಿಲ್ಲ. ಶಂಕರ್ ನಮಗೆಲ್ಲ ಆದರ್ಶ ನಾಯಕನಂತಿದ್ದರು. ಗಡ್ಡ ಬಿಟ್ಟು, ಜುಬ್ಬ ತೊಟ್ಟು, ಕತ್ತಿನ ಸುತ್ತ ಶಾಲು ಹಾಕಿಕೊಂಡು, ಎರಡು ಬೆರಳುಗಳ ನಡುವೆ ಸಿಗರೇಟು ಸೇದುತ್ತಾ ಹೋರಾಟಗಾರನಂತಿರುತ್ತಿದ್ದರು. ಅವರ ಮಾತು ಕೇಳುವುದೇ ಒಂದು ರೀತಿಯ ಸೊಗಸು&rsquo; ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಅವರು ಎನ್&zwnj;. ಎಸ್&zwnj;. ಶಂಕರ್&zwnj; ಅವರಿಗೆ ನುಡಿ ನಮನ ಸಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭೆಯೊಂದು ಕಣ್ಮರೆ&lt;/strong&gt;&lt;/h2&gt;&lt;p&gt;&lsquo;ಕನ್ನಡದ ಮಹತ್ವದ ಲೇಖಕ, ಪತ್ರಕರ್ತ, ಸಿನೆಮಾ ನಿರ್ದೇಶಕ ಹೀಗೆ ಬಹುಮುಖ ವ್ಯಕ್ತಿತ್ವದ ಎನ್.ಎಸ್. ಶಂಕರ್ ಅವರು ನಮ್ಮ ಕಾಲದ ದೊಡ್ಡ ಪ್ರತಿಭೆಯೊಂದು ಕಣ್ಮರೆಯಾಯಿತು.&rsquo; ಎಂದು ನಿರ್ದೇಶಕಿ ಸುಮನಾ ಕಿತ್ತೂರು ಅವರು ನೆನಪಿಸಿಕೊಂಡಿದ್ದಾರೆ. &lsquo;ಕರ್ನಾಟಕದ ಪ್ರಗತಿಪರ ಚಿಂತಕರು, ಪತ್ರಕರ್ತರು, ಸಾಹಿತಿಗಳು, ಸಿನಿಮಾ ನಿರ್ದೇಶಕರೂ ಆದ ಎನ್.ಎಸ್ ಶಂಕರ್ ಅವರು ನಿನ್ನೆ ಕೋಟಿಗಾನಹಳ್ಳಿ ರಾಮಯ್ಯ ಅವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಬಂದು ಮಲಗಿದವರು ಬೆಳಿಗ್ಗೆ ಏಳಲಿಲ್ಲ ಅನ್ನುವ ಸುದ್ದಿ ಕೇಳಿ ಬೇಸರವಾಯ್ತು. ಇತ್ತೀಚೆಗಷ್ಟೇ ಅವರ ಮಡದಿ ತೀರಿಕೊಂಡಿದ್ದರು. ಆ ನೋವಿನಿಂದ ಅವರು ಹೊರಗೆ ಬಂದಿರಲಿಲ್ಲ. ಅವರ &lsquo;ಉಲ್ಟಾ ಪಲ್ಟಾ&rsquo; ಸಿನಿಮಾ ಕನ್ನಡದ ಕೆಲವೇ ಕೆಲವು ಶ್ರೇಷ್ಠ ಕಾಮಿಡಿ ಸಿನಿಮಾಗಳಲ್ಲಿ ಒಂದು&rsquo; ಎಂದು ಮತ್ತೊಬ್ಬ ನಿರ್ದೇಶಕ ಪ್ರಕಾಶ್&zwnj; ರಾಜ್&zwnj; ಮೇಹು ನೆನಪು ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/director-of-ulta-palta-cinema-fame-ns-shankar-is-no-more-gvd/articleshow-206htug"/>
        </item>
        <item>
            <title><![CDATA[Exclusive Interview: ನಮ್ಮನೆ ಮಗುವಿಗೆ ನಿಮ್ಮೆಲ್ಲರ ಪ್ರೀತಿ ಸಿಗಲಿ: ಪ್ರಿಯಾ ಸುದೀಪ್]]></title>
            <link>https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw</link>
            <guid isPermaLink="true">https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw</guid>
            <pubDate>Fri, 05 Jun 2026 16:21:56 +0530</pubDate>
            <description><![CDATA[&lt;p&gt;ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಪಾತ್ರದ ಶೇಡ್ಸ್&zwnj; ಅದ್ಭುತವಾಗಿತ್ತು ಎಂದು ಪ್ರಿಯಾ ಸುದೀಪ್ ಸಂದರ್ಶನದಲ್ಲಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktbphx7fcw2stkergas4qhc9,imgname-bjbj-1780656698607.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/p&gt;&lt;p&gt;&lt;strong&gt;* ಮ್ಯಾಂಗೋ ಪಚ್ಚ ಕತೆಯನ್ನು ಆರಿಸಿಕೊಳ್ಳಲು, ನಿರ್ಮಾಣ ಮಾಡಲು ಮುಖ್ಯ ಪ್ರೇರಣೆ ಏನು?&lt;/strong&gt;&lt;/p&gt;&lt;p&gt;ನೈಜ ಘಟನೆಗಳನ್ನು ಆಧರಿಸಿದ ಕತೆ ಇದು. ಈ ಕತೆ ನಡೆಯುವ ಕಾಲದ ಮೈಸೂರಿನ ವಾತಾವರಣ ನನ್ನ ಬಾಲ್ಯವನ್ನು ನೆನಪಿಸುತ್ತಿತ್ತು. ಜೊತೆಗೆ ಈ ಕತೆ, ಪಾತ್ರ ಸಂಚಿತ್&zwnj;ಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತಿತ್ತು. ಅದು ಮೊದಲ ಪ್ರೇರಣೆ. ಅಲ್ಲದೇ, ಈ ಕತೆಯನ್ನು ತುಂಬಾ ವಿಭಿನ್ನವಾಗಿ ನಿರೂಪಿಸಿದ್ದಾರೆ. ನಾನಂತೂ ಈ ರೀತಿಯ ಸಿನಿಮಾವನ್ನು ಕನ್ನಡದಲ್ಲಿ ನೋಡಿಲ್ಲ.&lt;/p&gt;&lt;p&gt;&lt;strong&gt;* ನಿರ್ಮಾಪಕಿಯಾಗಿ ನಿಮಗೆ ಈ ಕತೆಯಲ್ಲಿ ಕಂಡ ಪ್ಲಸ್&zwnj;ಪಾಯಿಂಟ್&zwnj; ಏನು?&lt;/strong&gt;&lt;/p&gt;&lt;p&gt;ಪಾತ್ರ ಚಿತ್ರಣ. ಸಾಮಾನ್ಯವಾಗಿ ಒಬ್ಬ ನಾಯಕ ನಟನನ್ನು ಪರಿಚಯಿಸುವಾಗ ದೊಡ್ಡ ಪ್ರಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಆದರೆ ನಮಗೆ ಈ ಕತೆ ಮತ್ತು ಪಾತ್ರದ ಮೇಲೆ ಅಪಾರ ನಂಬಿಕೆ ಇತ್ತು. ಆ ಪಾತ್ರದ ಶೇಡ್ಸ್&zwnj; ಅದ್ಭುತವಾಗಿತ್ತು. ಆ ಪಾತ್ರವೇ ಸಂಚಿತ್&zwnj;ನನ್ನು ಡಿಫರೆಂಟಾಗ್ ಕಾಣಿಸುವಂತಿತ್ತು. ಹಾಗಾಗಿ ನಾವು ಆ ಪಾತ್ರದ ಮೇಲೆ ಭರವಸೆ ಇಟ್ಟೆವು. ಅದೇ ಕಾರಣದಿಂದ ನಾವು ಬೇರೆ ಯಾವುದೇ ಅಂಶಗಳನ್ನು ಸೇರಿಸಿಲ್ಲ. ಬೇಕಿದ್ದರೆ ಸುದೀಪ್&zwnj; ಅವರನ್ನು ಒಂದೆರಡು ಸೀನ್&zwnj;ಗಳಲ್ಲಿ ನಟಿಸಿ ಅಂತ ಕೇಳಬಹುದಿತ್ತು. ಆದರೆ ಕತೆಗೆ ಸರಿ ಹೊಂದುವುದಿಲ್ಲ ಎಂಬ ಕಾರಣಕ್ಕೆ ನಾವು ಆ ಪ್ರಯತ್ನ ಮಾಡಿಲ್ಲ. ಕತೆಗೆ ಏನು ನ್ಯಾಯ ಸಲ್ಲಬೇಕೋ ಅದು ಸಂದಿದೆ.&lt;/p&gt;&lt;p&gt;&lt;strong&gt;* ನಿರ್ಮಾಪಕಿಯಾಗಿ ಈ ಚಿತ್ರಕ್ಕೆ ನೀವೇನಾದರೂ ಸಲಹೆ, ಸೂಚನೆ ಕೊಟ್ಟಿದ್ದಿದೆಯೇ?&lt;/strong&gt;&lt;/p&gt;&lt;p&gt;ನಿರ್ಮಾಪಕಿಯಾಗಿ ಅಲ್ಲ, ಸುದೀಪ್&zwnj; ಪತ್ನಿಯಾಗಿ, ಅವರ ಅಭಿಮಾನಿಯಾಗಿ ಸಲಹೆ ಕೊಟ್ಟೆ. ಈ ಸಿನಿಮಾದಲ್ಲಿ ಸುದೀಪ್&zwnj; ಅವರಿಗೋಸ್ಕರ ಸಣ್ಣ ಟ್ರಿಬ್ಯೂಟ್ ಕೊಡಬೇಕು ಅನ್ನುವುದು ನನ್ನ ಆಸೆಯಾಗಿತ್ತು. ಹಾಗಾಗಿ ಇಂಟ್ರೊಡಕ್ಷನ್&zwnj; ಸೀನ್&zwnj; ಹೇಗಿದ್ದರೆ ಚೆಂದ ಅಂತ ಐಡಿಯಾ ತಿಳಿಸಿದೆ. ಎಲ್ಲರೂ ಇಷ್ಟ ಪಟ್ಟರು. ಆ ಸೀನ್&zwnj; ಅನ್ನು ಸುದೀಪ್&zwnj; ಅವರ ಎಲ್ಲಾ ಅಭಿಮಾನಿಗಳು ಇಷ್ಟ ಪಡುತ್ತಾರೆ ಅನ್ನುವ ನಂಬಿಕೆ ನನಗಿದೆ.&lt;/p&gt;&lt;p&gt;&lt;strong&gt;* ಸಂಚಿತ್ ಸಂಜೀವ್&zwnj; ತಾಳ್ಮೆಯಿಂದ ಕಾಯುತ್ತಿದ್ದ ಸಮಯ ಈಗ ಬಂದಿದೆ. ಅವರ ಈ ಪಯಣ ಹೇಗಿತ್ತು?&lt;/strong&gt;&lt;/p&gt;&lt;p&gt;ಅವನು ತುಂಬಾ ಸುಲಭವಾಗಿ ಬಂದಿಲ್ಲ. ಶ್ರಮಪಟ್ಟು ಇಲ್ಲಿಯವರೆಗೂ ಬಂದಿದ್ದಾನೆ. ಓದಿನಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಫೋಟೋಗ್ರಫಿ ಅಂದ್ರೆ ಬಹಳ ಇಷ್ಟವಿತ್ತು. ಪಿಯುಸಿ ಆದ ಮೇಲೆ ಅವನು ಒಂದು ದಿನ ಬಂದು ದೀಪು ಹತ್ತಿರ ಚಿತ್ರರಂಗ ಸೇರುವ ಆಸೆಯನ್ನು ಹೇಳಿದ. ಅವನಿಗೆ ನಿರ್ದೇಶನ ಮಾಡುವ ಆಸೆ ಇತ್ತು. ವಿವರವಾಗಿ ಮಾತನಾಡಿದ ಮೇಲೆ, ಸುದೀಪ್&zwnj; ಅವರು ಅವನಿಗೆ ನ್ಯೂಯಾರ್ಕ್&zwnj;ನಲ್ಲಿ ಫಿಲಂ ಕೋರ್ಸ್&zwnj; ಮಾಡಲು ಕಳುಹಿಸಿದರು. ಅಲ್ಲಿಂದ ಬಂದು ಸುದೀಪ್&zwnj; ನಿರ್ದೇಶನದ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ. ಸುದೀಪ್&zwnj;ರಿಂದ ಬೈಸಿಕೊಂಡ. ಆಗಲೇ ಸ್ಕ್ರೀನ್&zwnj;ನಲ್ಲಿ ಬಹಳ ಚೆನ್ನಾಗಿ ಕಾಣಿಸುತ್ತಾನೆ ಎಂಬ ಅಭಿಪ್ರಾಯವನ್ನು ಸಾಕಷ್ಟು ಜನ ಹೇಳಿದರು. ಆಮೇಲೆ &lsquo;ಜಿಮ್ಮಿ&rsquo; ಸ್ಕ್ರಿಪ್ಟ್&zwnj; ಬರೆದ. ಈಗ ಕನ್ನಡಿಗರ ಪ್ರೀತಿಗಾಗಿ ನಿಮ್ಮೆದುರು ಬಂದಿದ್ದಾನೆ. ನಮ್ಮನೆ ಮಗುವನ್ನು ಕನ್ನಡಿಗರು ಅವರ ಮನೆಮಗುವಾಗಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ.&lt;/p&gt;&lt;p&gt;&lt;strong&gt;* ಈ ಕತೆ ಕೇಳಿದಾಗ ಸುದೀಪ್&zwnj; ಅ&zwj;ವರ ಪ್ರತಿಕ್ರಿಯೆ ಹೇಗಿತ್ತು?&lt;/strong&gt;&lt;/p&gt;&lt;p&gt;ಸುದೀಪ್&zwnj; ಅವರಿಗೆ ಕತೆ ಹೇಳುವುದು ತುಂಬಾ ಇರಿಟೇಟ್&zwnj; ಆಗುವ ಪ್ರಕ್ರಿಯೆ. ಕತೆ ಹೇಳುತ್ತಿದ್ದರೆ ಅವರ ಮುಖದಲ್ಲಿ ಯಾವುದೇ ಭಾವನೆಗಳೇ ಇರುವುದಿಲ್ಲ. ಕತೆ ಪೂರ್ತಿಯಾದ ಮೇಲೆ ಯೋಚನೆ ಮಾಡಿ ಹೇಳುತ್ತೇನೆ ಅನ್ನುತ್ತಾರೆ, ಅಷ್ಟೇ. ನಾವೆಲ್ಲಾ ಕತೆ ಕೇಳಿದ ಮೇಲೆ, ಅವರಿಗೆ ಕತೆ ಹೇಳಿಸಿದೆವು. ಕತೆ ಪೂರ್ತಿಯಾಗಿ ಕೇಳಿ, ಸಂಚಿತ್&zwnj; ಬಳಿ ನಿನಗೆ ಇಷ್ಟವಾಯಿತೇ ಎಂದು ಕೇಳಿದರು. ನಾವೆಲ್ಲರೂ ಇಷ್ಟಪಟ್ಟಿದ್ದೆವು. ಹಾಗಾದರೆ ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂದರು.&lt;/p&gt;&lt;p&gt;&lt;strong&gt;* ಈ ಪಯಣದಲ್ಲಿ ಅವರ ಜೊತೆ ಸಿನಿಮಾ ಕುರಿತು ಚರ್ಚಿಸುತ್ತಿದ್ರಾ?&lt;/strong&gt;&lt;/p&gt;&lt;p&gt;ನಾನು ಚಿತ್ರೀಕರಣಕ್ಕೆ ಹೋಗಿ ಬಂದಾಗೆಲ್ಲಾ ಅವರ ಜೊತೆ ಏನೇನು ನಡೆಯಿತು ಎಲ್ಲವನ್ನೂ ಹೇಳುತ್ತಿದ್ದೆ. ಬಹಳ ಸಲ ಅವರು ಅವರ ಅನುಭವದ ಆಧಾರದ ಮೇಲೆ ತಪ್ಪುಗಳನ್ನು ಕಂಡುಹಿಡಿದು ಹೇಳುತ್ತಿದ್ದರು. ಸಾಕಷ್ಟು ಒಳ್ಳೆಯ ಐಡಿಯಾಗಳನ್ನು ಹೇಳಿದ್ದಾರೆ. ಅದರಿಂದ ನನಗೆ ಸಹಾಯವಾಗಿದೆ. ನಮ್ಮ ತಂಡದಲ್ಲಿ ಬಹುತೇಕ ಯುವ ಪ್ರತಿಭೆಗಳೇ ಇದ್ದಾರೆ. ಅವರಿಗೆಲ್ಲಾ ಸುದೀಪ್&zwnj; ಸೆಟ್&zwnj;ಗೆ ಬರಬೇಕು ಅಂತ ಆಸೆ ಇತ್ತು. ನಾನು ಹೇಳಿದ ಮೇಲೆ, ಕ್ಲೈಮ್ಯಾಕ್ಸ್&zwnj; ಶೂಟಿಂಗ್&zwnj; ಇದ್ದ ದಿನ ಸೆಟ್&zwnj;ಗೆ ಬಂದರು. ಅವರು ಅಲ್ಲಿ ಕೂತಲ್ಲಿ ಕೂರಲ್ಲ. ಸೆಟ್&zwnj; ಪ್ರಾಪರ್ಟಿ ಸರಿ ಮಾಡುವುದು. ಚಿತ್ರೀಕರಣ ನೋಡುವುದು. ಆ ಎರಡು ದಿನ ಸೆಟ್&zwnj; ತುಂಬಾ ಲೈವ್ಲಿಯಾಗಿತ್ತು.&lt;/p&gt;&lt;p&gt;&lt;strong&gt;* ನಿರ್ಮಾಣ ನಿಮಗೆ ಎಷ್ಟು ಸವಾಲಾಗಿತ್ತು?&lt;/strong&gt;&lt;/p&gt;&lt;p&gt;ನನಗೆ ಒಂದು ಒಳ್ಳೆಯ ತಂಡವಿತ್ತು. ಕಾರ್ತಿಕ್&zwnj; ಮತ್ತು ಯೋಗಿ ರಾಜ್&zwnj; ನನಗೆ ಹೆಚ್ಚು ಒತ್ತಡ ಆಗದ ಹಾಗೆ ನೋಡಿಕೊಂಡರು. ಎಲ್ಲವನ್ನೂ ನಾವು ಮಾದಲೇ ಮಾತಾಡಿಕೊಂಡಿರುತ್ತಿದ್ದೆವು. ನಾನು ಚಿತ್ರೀಕರಣಕ್ಕೆ ಹೋಗಿದಿದ್ದರೂ ಆ ದಿನದ ಎಲ್ಲಾ ಮಾಹಿತಿ ನನಗೆ ತಲುಪುತ್ತಿದ್ದವು. ನಿರ್ದೇಶಕ ವಿವೇಕ್&zwnj; ಸೇರಿದಂತೆ ಇಡೀ ತಂಡ ಸೊಗಸಾಗಿ ಕಾರ್ಯನಿರ್ವಹಿಸಿದೆ. ಪ್ರಶಾಂತ್&zwnj; ಹಿರೇಮಠ್&zwnj;, ಭಾವನಾ, ಮಯೂರ್&zwnj; ಪಟೇಲ್&zwnj;, ಉಗ್ರಂ ಮಂಜು ಉತ್ತಮ ಅಭಿನಯ ನೀಡಿದ್ದಾರೆ. ಹಾಗಾಗಿ ಎಲ್ಲವೂ ಸುಲಭವಾಯಿತು.&lt;/p&gt;&lt;p&gt;&lt;strong&gt;* ತೃಪ್ತಿ ಇದೆಯೇ?&lt;/strong&gt;&lt;/p&gt;&lt;p&gt;ಈ ಸಿನಿಮಾ ಮೇಲೆ ಬಹಳ ವಿಶ್ವಾಸ ಇದೆ ನನಗೆ. ಸಿನಿಮಾ ರಿಲೀಸ್&zwnj; ಆಗುತ್ತಿರುವ ಈ ವೇಳೆಯಲ್ಲಿ ಸ್ವಲ್ಪ ನರ್ವಸ್&zwnj; ಆಗಿದ್ದೇನೆ. ಆದರೆ ಸಂಚಿತ್&zwnj;ಗೆ ಈ ಸಿನಿಮಾದಿಂದ ಒಳ್ಳೆಯದಾಗುತ್ತಿದೆ, ಅವನು ಹೊಸ ಪಯಣ ಆರಂಭಿಸುತ್ತಿದ್ದಾನೆ ಎಂಬ ಸಾರ್ಥಕತೆ ಇದೆ.&lt;/p&gt;&lt;h2&gt;&lt;strong&gt;* ಈ ಸಿನಿಮಾದಿಂದ ನೀವು ಕಲಿತ ಪಾಠವೇನು?&lt;/strong&gt;&lt;/h2&gt;&lt;p&gt;1. ಕತೆಯೇ ಸ್ಟಾರ್&zwnj;. ವಿಶಿಷ್ಟ ಕತೆಯನ್ನು ಆರಿಸಬೇಕು ಮತ್ತು ಆ ಕತೆಯನ್ನು ನಂಬಬೇಕು. ವಿಭಿನ್ನ ರೀತಿಯಲ್ಲಿ ಆ ಕತೆ ಹೇಳಬೇಕು.&lt;/p&gt;&lt;p&gt;2. ಸಿನಿಮಾ ಒಂದು ಮ್ಯಾಜಿಕ್&zwnj;. ಎಡಿಟಿಂಗ್&zwnj; ಟೇಬಲ್&zwnj;ನಲ್ಲಿ, ಸಂಗೀತ ಸಂಯೋಜನೆಯಲ್ಲಿ ಸಿನಿಮಾ ಬದಲಾಗುವ ಪ್ರಕ್ರಿಯೆಯನ್ನು ನೋಡಿ ನಾನು ವಿಸ್ಮಿತಳಾಗಿದ್ದೇನೆ. ಈ ಪ್ರಕ್ರಿಯೆ ನನಗೆ ತುಂಬಾ ಖುಷಿ ಕೊಟ್ಟಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Kannadaprabha News</dc:creator>
            <atom:link href="https://kannada.asianetnews.com/celebrity-interviews/mango-pachcha-priya-sudeep-interview-sanchith-sanjeev-gvd/articleshow-6qqglrw"/>
        </item>
        <item>
            <title><![CDATA[ಮೊದಲ ಭಾಗಕ್ಕಿಂತ ‘ಅಯೋಗ್ಯ 2’ ಹೇಗಿರಲಿದೆ? ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದೇನು?]]></title>
            <link>https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd</link>
            <guid isPermaLink="true">https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd</guid>
            <pubDate>Fri, 07 Aug 2026 18:16:26 +0530</pubDate>
            <description><![CDATA[&lt;p&gt;Ayogya 2: ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ &lsquo;ಅಯೋಗ್ಯ 2&rsquo; ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze44qgtfmgk3dgnjmrar7mz,imgname-m-m-1786106764826.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದಿದ್ದು ಇಂದಿಗೂ ಅದರ ಹಾಸ್ಯ, ಹಾಡುಗಳು ಹಾಗೂ ಪಾತ್ರಗಳನ್ನು ಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಅದೇ ಲೋಕಕ್ಕೆ &lsquo;ಅಯೋಗ್ಯ 2&rsquo; ಮೂಲಕ ನಿರ್ದೇಶಕ ಮಹೇಶ್ ಕುಮಾರ್ ಮರಳುತ್ತಿದ್ದಾರೆ. ಮೊದಲ ಭಾಗದ ಯಶಸ್ಸಿನ ಬಳಿಕ ತಕ್ಷಣವೇ ಸೀಕ್ವೆಲ್ ಮಾಡುವ ಬದಲು ಇಷ್ಟು ವರ್ಷ ಕಾಯಲು ಕಾರಣವೇನು?&lt;/p&gt;&lt;p&gt;ಮೊದಲ ಸಿನಿಮಾದ ಹಿಟ್ ಫಾರ್ಮುಲಾವನ್ನು ಎರಡನೇ ಭಾಗದಲ್ಲೂ ಮುಂದುವರಿಸಲಾಗಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ನಿರ್ದೇಶಕರು ಉತ್ತರಿಸಿದ್ದಾರೆ. ಎಂ. ಮುನೇಗೌಡ ಅವರು ಎಸ್&zwnj;ವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ &lsquo;ಅಯೋಗ್ಯ 2&rsquo;ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಮತ್ತೊಮ್ಮೆ ಒಂದಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಸಂಭಾಷಣೆ, ವಿಶ್ವಜಿತ್ ರಾವ್ ಛಾಯಾಗ್ರಹಣ ಹಾಗೂ ಸುರೇಶ್ ಅರುಮುಗಂ ಸಂಕಲನ ಚಿತ್ರಕ್ಕಿದೆ.&lt;/p&gt;&lt;p&gt;&lt;strong&gt;ಸೀಕ್ವೆಲ್ ತಡವಾಗಿದ್ದೇಕೆ?&lt;/strong&gt;&lt;/p&gt;&lt;p&gt;ಸೀಕ್ವೆಲ್ ಬಗ್ಗೆ ಯೋಚನೆ ಮೊದಲ ಸಿನಿಮಾದ ಯಶಸ್ಸಿನ ನಂತರವೇ ಬಂದಿತ್ತು ಎನ್ನುವ ಮಹೇಶ್ ಕುಮಾರ್, ಉದ್ದೇಶಪೂರ್ವಕವಾಗಿಯೇ &lsquo;ಅಯೋಗ್ಯ 2&rsquo; ಅನ್ನು ತಡ ಮಾಡಿದ್ದಾಗಿ ಹೇಳಿದ್ದಾರೆ. &ldquo;ಒಂದು ಸಿನಿಮಾ ಬ್ಲಾಕ್&zwnj;ಬಸ್ಟರ್ ಆದಾಗ ಅದರ ಸೀಕ್ವೆಲ್ ಮಾಡಬೇಕು ಎಂಬ ಆಲೋಚನೆ ಸಹಜವಾಗಿಯೇ ಬರುತ್ತದೆ. ಆದರೆ &lsquo;ಅಯೋಗ್ಯ&rsquo; ಸಿನಿಮಾ ಟೀವಿಯಲ್ಲಿ ಪ್ರಸಾರವಾಗುತ್ತಲೇ ಇತ್ತು. ಅದರ ಹಾಡುಗಳ ಬಗ್ಗೆಯೂ ಜನ ಮಾತನಾಡುತ್ತಿದ್ದರು. ಹಾಗಾಗಿ ಮೊದಲ ಸಿನಿಮಾದ ಯಶಸ್ಸಿನ ನೆನಪು ಸ್ವಲ್ಪ ತಣ್ಣಗಾಗಲಿ ಎಂದು ಕಾಯಲು ನಿರ್ಧರಿಸಿದೆ. ಪ್ರೇಕ್ಷಕರು ಮೊದಲ ಭಾಗದಿಂದ ಸ್ವಲ್ಪ ದೂರ ಸರಿದ ನಂತರ ಎರಡನೇ ಭಾಗ ಬಂದರೆ ಅದರ ಬಗ್ಗೆ ಹೊಸ ಕುತೂಹಲ ಮೂಡುತ್ತದೆ. ಇಲ್ಲದಿದ್ದರೆ, ಪ್ರೇಕ್ಷಕರು ಎರಡೂ ಸಿನಿಮಾಗಳನ್ನು ಹೋಲಿಸುತ್ತಲೇ ಇರುತ್ತಾರೆ. ಸೀಕ್ವೆಲ್ ಅನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು,&rdquo; ಎಂದು ಮಹೇಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ&rsquo; ಹಿಟ್ ಆಗಿದ್ದರಿಂದ ನಿರೀಕ್ಷೆಯೂ ಡಬಲ್&lt;/strong&gt;&lt;/p&gt;&lt;p&gt;ಮೊದಲ ಭಾಗ ದೊಡ್ಡ ಯಶಸ್ಸು ಕಂಡಿದ್ದರಿಂದ ಎರಡನೇ ಭಾಗದ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೂಕ್ತ ನಿರ್ಮಾಪಕರಿಗಾಗಿ ಕೂಡ ಸಮಯ ತೆಗೆದುಕೊಂಡಿದ್ದಾಗಿ ನಿರ್ದೇಶಕರು ಹೇಳಿದ್ದಾರೆ. &ldquo;ಮೊದಲ ಸಿನಿಮಾ ಹಿಟ್ ಆದಾಗ ಸೀಕ್ವೆಲ್ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಆ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳುವ ನಿರ್ಮಾಪಕರ ಅಗತ್ಯವಿತ್ತು. ಮುನೇಗೌಡ ಅವರನ್ನು ಭೇಟಿಯಾಗುವವರೆಗೆ ಸ್ವಲ್ಪ ಸಮಯ ಹಿಡಿಯಿತು,&rdquo; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ ಭಾಗದ ಆತ್ಮ ಬದಲಾಗಲ್ಲ; ಮನರಂಜನೆ ಮಾತ್ರ ಇನ್ನಷ್ಟು!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾದ ಪ್ರಮುಖ ಆಕರ್ಷಣೆ ಅದರ ಹಾಸ್ಯ, ಭಾವನೆ ಮತ್ತು ಸಂಗೀತ. ಹೀಗಾಗಿ ಎರಡನೇ ಭಾಗದಲ್ಲಿ ಆ ಅಂಶಗಳನ್ನು ಬದಲಿಸುವ ಬದಲು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ನೀಡಲು ಪ್ರಯತ್ನಿಸಿದ್ದೇವೆ ಎಂದು ಮಹೇಶ್ ಕುಮಾರ್ ತಿಳಿಸಿದ್ದಾರೆ. &ldquo;ಮನರಂಜನೆ &lsquo;ಅಯೋಗ್ಯ&rsquo; ಸಿನಿಮಾದ ದೊಡ್ಡ ಶಕ್ತಿಗಳಲ್ಲೊಂದು. ಚಿತ್ರದ ಹಾಡುಗಳು ಪ್ರೇಕ್ಷಕರನ್ನು ತಲುಪುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದ್ದವು. ಇದು ಮುಂದುವರಿದ ಕಥೆಯಾಗಿರುವುದರಿಂದ ಆ ಅಂಶಗಳನ್ನು ಉಳಿಸಿಕೊಂಡು ಮತ್ತಷ್ಟು ದೊಡ್ಡದಾಗಿ ತೋರಿಸಲು ಬಯಸಿದ್ದೇವೆ. ಅರ್ಜುನ್ ಜನ್ಯ ಕೂಡ ಅದ್ಭುತ ಆಲ್ಬಂ ನೀಡಿದ್ದಾರೆ. ಈ ಬಾರಿ ಪ್ರೇಕ್ಷಕರು ಇನ್ನಷ್ಟು ಮನರಂಜನೆಯನ್ನು ನಿರೀಕ್ಷಿಸಬಹುದು,&rdquo; ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಹಳ್ಳಿ ಅದೇ, ಜನರ ಜೀವನ ಬದಲಾಗಿಲ್ಲ!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo;ದ ಯಶಸ್ಸಿನಲ್ಲಿ ಅದರ ಗ್ರಾಮೀಣ ವಾತಾವರಣವೂ ಪ್ರಮುಖ ಪಾತ್ರ ವಹಿಸಿತ್ತು. ಸೀಕ್ವೆಲ್&zwnj;ನಲ್ಲೂ ಅದೇ ಹಳ್ಳಿ ಸೊಗಡನ್ನು ಉಳಿಸಿಕೊಳ್ಳಲಾಗಿದೆ. &ldquo;ಪಂಚಾಯಿತಿ ಕಟ್ಟೆಗಳು ಇನ್ನೂ ಇವೆ. ಹಳ್ಳಿ ರಾಜಕೀಯವೂ ಇದೆ. ವ್ಯತ್ಯಾಸವೆಂದರೆ ಈಗ ಜನರು ಹೆಚ್ಚು ಕಾರುಗಳಲ್ಲಿ ಓಡಾಡುತ್ತಾರೆ. ಆದರೆ ಜನರ ಸ್ವಭಾವದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳು ಬಂದಿದ್ದರೂ, ಚಿತ್ರದ ಕೆಲವು ಭಾಗಗಳಲ್ಲಿ ಮಣ್ಣಿನ ರಸ್ತೆಗಳನ್ನೇ ಮರುಸೃಷ್ಟಿಸಿದ್ದೇವೆ. ಹಳೆಯ ಕಾಲದ ಆ ಸೊಗಡು ಪ್ರೇಕ್ಷಕರಿಗೆ ಸಿಗಬೇಕು ಎಂಬ ಉದ್ದೇಶ,&rdquo; ಎಂದು ಮಹೇಶ್ ಹೇಳಿದ್ದಾರೆ.ಅದರ ಜೊತೆಗೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಹಲವು ಅಂಶಗಳನ್ನು ಒಳಗೊಂಡಿದೆ ಎಂಬ ಭರವಸೆಯನ್ನೂ ಅವರು ನೀಡಿದ್ದಾರೆ.&lt;/p&gt;&lt;p&gt;&lt;strong&gt;ಹಳೆಯ ತಂಡ ಮರಳಿದ್ದು ದೊಡ್ಡ ಪ್ಲಸ್&lt;/strong&gt;&lt;/p&gt;&lt;p&gt;ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ಗಿರಿ ಶಿವಣ್ಣ ಹಾಗೂ ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಮೊದಲ ಭಾಗದ ಪ್ರಮುಖ ಕಲಾವಿದರು ಮತ್ತೆ &lsquo;ಅಯೋಗ್ಯ 2&rsquo;ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ಹೊಸ ಕಲಾವಿದರೂ ತಂಡವನ್ನು ಸೇರಿಕೊಂಡಿದ್ದಾರೆ. &ldquo;ಮೂಲ ತಾರಾಗಣ ಮತ್ತೆ ಬಂದಾಗಲೇ ನನ್ನ ಅರ್ಧ ಕೆಲಸ ಮುಗಿದಂತಾಯಿತು. ಅವರಿಗೆ &lsquo;ಅಯೋಗ್ಯ&rsquo; ಜಗತ್ತು ಈಗಾಗಲೇ ಪರಿಚಯವಿತ್ತು. ಹೀಗಾಗಿ ನಾನು ಮನಸ್ಸಿನಲ್ಲಿಟ್ಟುಕೊಂಡಿದ್ದ ರೀತಿಯಲ್ಲಿ ಕಥೆಯನ್ನು ತೆರೆಗೆ ತರಲು ಅದು ಸಾಕಷ್ಟು ಸಹಾಯ ಮಾಡಿತು,&rdquo; ಎಂದು ನಿರ್ದೇಶಕರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo; ಹಾಡುಗಳು ಹಳೆಯದನ್ನು ನಕಲು ಮಾಡಲ್ಲ&lt;/strong&gt;&lt;/p&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾದ ಹಾಡುಗಳು ಸೂಪರ್&zwnj;ಹಿಟ್ ಆಗಿದ್ದರಿಂದ ಎರಡನೇ ಭಾಗದ ಸಂಗೀತದ ಮೇಲೂ ನಿರೀಕ್ಷೆ ಹೆಚ್ಚಾಗಿದೆ. ಆದರೆ ಮೊದಲ ಭಾಗದ ಹಾಡುಗಳ ಯಶಸ್ಸನ್ನು ಮರುಸೃಷ್ಟಿಸುವ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ ಮಹೇಶ್. &ldquo;ಅರ್ಜುನ್ ಜನ್ಯ ಅವರೊಂದಿಗೆ ಮಾತನಾಡುವಾಗ ಅವರು ಒಂದು ಮಾತು ಹೇಳಿದರು. &lsquo;ಮುಂಗಾರು ಮಳೆ&rsquo; ಸಿನಿಮಾದ ಸಂಗೀತವನ್ನು &lsquo;ಗಾಳಿಪಟ&rsquo;ದಲ್ಲಿ ಮತ್ತೆ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಯೊಂದು ಯಶಸ್ವಿ ಆಲ್ಬಂಗೂ ತನ್ನದೇ ಆದ ಗುರುತು ಇರುತ್ತದೆ ಎಂದರು. ಅದೇ ರೀತಿ &lsquo;ಅಯೋಗ್ಯ 2&rsquo;ಗೂ ತನ್ನದೇ ಆದ ಸಂಗೀತದ ಗುರುತು ಇರಬೇಕು ಎಂಬ ಪ್ರಯತ್ನ ನಮ್ಮದಾಗಿತ್ತು. ಹಳೆಯ ಹಾಡುಗಳನ್ನು ಮತ್ತೆ ಸೃಷ್ಟಿಸುವುದು ನಮ್ಮ ಉದ್ದೇಶವಾಗಿರಲಿಲ್ಲ,&rdquo; ಎಂದು ಮಹೇಶ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಹಳ್ಳಿ ಕಥೆಯಲ್ಲಿ ಕಮರ್ಷಿಯಲ್ ಸಿನಿಮಾದ ಎಲ್ಲ ಅಂಶಗಳೂ ಇವೆ&lt;/strong&gt;&lt;/p&gt;&lt;p&gt;ಗ್ರಾಮೀಣ ಹಿನ್ನೆಲೆಯ ಕಥೆಗಳು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಳ್ಳಲು ಸೂಕ್ತವಾಗಿವೆ ಎಂಬುದು ನಿರ್ದೇಶಕರ ಅಭಿಪ್ರಾಯ.&ldquo;&lsquo;ಅಯೋಗ್ಯ 2&rsquo;ನಲ್ಲಿ ಮನರಂಜನೆ, ಭಾವನೆ, ಆ್ಯಕ್ಷನ್ ಹಾಗೂ ಕಾಮಿಡಿ ಎಲ್ಲಕ್ಕೂ ಜಾಗವಿದೆ. ಸಂಪೂರ್ಣ ಕಮರ್ಷಿಯಲ್ ಎಂಟರ್&zwnj;ಟೈನರ್&zwnj;ನಲ್ಲಿ ಪ್ರೇಕ್ಷಕರು ಏನನ್ನು ನಿರೀಕ್ಷಿಸುತ್ತಾರೋ, ಆ ಎಲ್ಲ ಅಂಶಗಳನ್ನು ಈ ಕಥೆಯಲ್ಲೇ ಸೇರಿಸಬಹುದು,&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ &lsquo;ಅಯೋಗ್ಯ&rsquo; ನೋಡಿರಲಿಲ್ಲ; ಆದರೂ ಸೀಕ್ವೆಲ್ ನಿರ್ಮಿಸಲು ಮುಂದಾದರು!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo; ನಿರ್ಮಾಪಕ ಮುನೇಗೌಡ ಅವರ ಕಥೆಯೂ ಸ್ವಲ್ಪ ವಿಭಿನ್ನ. ಮಹೇಶ್ ಕುಮಾರ್ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ನಡೆಸಿದಾಗ, ಅವರು ಮೊದಲ &lsquo;ಅಯೋಗ್ಯ&rsquo; ಸಿನಿಮಾವನ್ನೇ ನೋಡಿರಲಿಲ್ಲವಂತೆ! &ldquo;&lsquo;ಅಯೋಗ್ಯ&rsquo; ಸಿನಿಮಾದ ಹಾಡುಗಳು ಸೂಪರ್&zwnj;ಹಿಟ್ ಆಗಿದ್ದರಿಂದ ಅವುಗಳ ಬಗ್ಗೆ ನನಗೆ ಗೊತ್ತಿತ್ತು. ಆದರೆ ಸೀಕ್ವೆಲ್ ನಿರ್ಮಿಸುವ ಬಗ್ಗೆ ಮಾತುಕತೆ ಆರಂಭವಾದ ನಂತರವೇ ನಾನು ಮೊದಲ ಸಿನಿಮಾ ನೋಡಿದೆ. ಅದರ ಹಾಸ್ಯ ಮತ್ತು ಮನರಂಜನೆ ನನಗೆ ಬಹಳ ಇಷ್ಟವಾಯಿತು. ಒಳ್ಳೆಯ ಕಥೆ ಸಹಜವಾಗಿಯೇ ಒಳ್ಳೆಯ ಮನರಂಜನಾ ಸಿನಿಮಾವಾಗುತ್ತದೆ ಎಂಬ ನಂಬಿಕೆ ನನಗಿದೆ. ನನ್ನ ಬ್ಯಾನರ್&zwnj;ನಡಿ ನಾನು ನಿರ್ಮಿಸಲು ಬಯಸುವ ಸಿನಿಮಾಗಳೂ ಇದೇ ರೀತಿಯದ್ದಾಗಿರಬೇಕು,&rdquo; ಎಂದು ಮುನೇಗೌಡ ಹೇಳಿದ್ದಾರೆ.&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ಪರಂಪರೆಯೂ ಸೀಕ್ವೆಲ್ ನಿರ್ಮಿಸಲು ತಮ್ಮಲ್ಲಿ ವಿಶ್ವಾಸ ಮೂಡಿಸಿತು ಎಂದು ಅವರು ಹೇಳಿದ್ದಾರೆ. &ldquo;ಪ್ರೇಕ್ಷಕರು ನಿರೀಕ್ಷಿಸುವ ಎಲ್ಲ ಅಂಶಗಳೂ &lsquo;ಅಯೋಗ್ಯ 2&rsquo;ನಲ್ಲಿವೆ ಎಂಬ ವಿಶ್ವಾಸ ನನಗಿದೆ. ಕಾಮಿಡಿ ಎಂದಿಗೂ ಹಳೆಯದಾಗುವುದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಜನರನ್ನು ನಗಿಸುವ ಸಿನಿಮಾಗಳನ್ನು ಪ್ರೇಕ್ಷಕರು ಸ್ವೀಕರಿಸುತ್ತಲೇ ಬಂದಿದ್ದಾರೆ. &lsquo;ಅಯೋಗ್ಯ 2&rsquo; ಕೂಡ ಆ ಪರಂಪರೆಯನ್ನು ಮುಂದುವರಿಸುತ್ತದೆ ಎಂಬ ನಂಬಿಕೆ ಇದೆ,&rdquo; ಎಂದಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಫ್ರಾಂಚೈಸಿ ಮುಂದುವರಿಯುತ್ತಾ?&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ 2&rsquo;ಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಮೇಲೆ ಈ ಸರಣಿಯನ್ನು ಮುಂದುವರಿಸುವ ಆಸೆಯನ್ನೂ ನಿರ್ಮಾಪಕ ಮುನೇಗೌಡ ವ್ಯಕ್ತಪಡಿಸಿದ್ದಾರೆ.&ldquo;ಪ್ರೇಕ್ಷಕರು ಬೆಂಬಲಿಸುತ್ತಿರುವವರೆಗೆ ನಮ್ಮ ಬ್ಯಾನರ್&zwnj;ನಡಿ &lsquo;ಅಯೋಗ್ಯ&rsquo; ಫ್ರಾಂಚೈಸಿಯನ್ನು ಮುಂದುವರಿಸಲು ನನಗೆ ಇಷ್ಟವಿದೆ,&rdquo; ಎಂದು ಅವರು ಹೇಳಿದ್ದಾರೆ. ಹೀಗಾಗಿ ಎಂಟು ವರ್ಷಗಳ ಬಳಿಕ ಬರುತ್ತಿರುವ &lsquo;ಅಯೋಗ್ಯ 2&rsquo; ಕೇವಲ ಸೀಕ್ವೆಲ್ ಆಗಿ ಉಳಿಯುತ್ತದೆಯೇ ಅಥವಾ ಕನ್ನಡದಲ್ಲಿ ಮತ್ತೊಂದು ಜನಪ್ರಿಯ ಫ್ರಾಂಚೈಸಿಗೆ ನಾಂದಿ ಹಾಡುತ್ತದೆಯೇ ಎಂಬುದು ಸಿನಿಮಾ ಬಿಡುಗಡೆಯ ಬಳಿಕವಷ್ಟೇ ಗೊತ್ತಾಗಲಿದೆ. ಆದರೆ ನಿರ್ದೇಶಕ ಮಹೇಶ್ ಕುಮಾರ್ ಮಾತುಗಳನ್ನು ಕೇಳಿದರೆ, ಈ ಬಾರಿ &lsquo;ಅಯೋಗ್ಯ&rsquo;ಗಿಂತ ಮನರಂಜನೆ ಇನ್ನಷ್ಟು ಜೋರಾಗಲಿದೆ ಎಂಬುದಂತೂ ಸ್ಪಷ್ಟ!&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/ayogya-2-will-have-even-more-entertainment-says-director-mahesh-kumar-gvd/articleshow-8n5savd"/>
        </item>
        <item>
            <title><![CDATA[Exclusive Interview: ಹಳ್ಳಿ ಕಡೆಗೆ ಹೋದಾಗಲೆಲ್ಲ ಪೊಲಿಟಿಕಲ್‌ ಪವರ್‌ ಬೇಕು ಅನಿಸುತ್ತದೆ: ರಂಗಾಯಣ ರಘು]]></title>
            <link>https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6</link>
            <guid isPermaLink="true">https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6</guid>
            <pubDate>Mon, 15 Jun 2026 16:11:49 +0530</pubDate>
            <description><![CDATA[&lt;p&gt;Exclusive Interview: 400 ಚಿತ್ರಗಳ ಸಂಭ್ರಮದಲ್ಲಿರುವ ಹಿರಿಯ ನಟ ರಂಗಾಯಣ ರಘು ತಮ್ಮ ಸಿನಿಮಾ ಪಯಣ, ರಂಗಭೂಮಿ ಅನುಭವ, ರಾಜಕೀಯ ಪ್ರವೇಶದ ಅವಕಾಶ, ಕೃಷಿ ಜೀವನ ಮತ್ತು ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5dwzb668e5pfc3p5h27y34,imgname-jfik-1781520039270.png" type="image/jpeg" height="390" width="690"/>
            <content:encoded><![CDATA[&lt;p&gt;ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್&zwnj; ಮಾಡಕ್ಕೆ ಬಿಡಲ್ಲ, ಕಟ್&zwnj; ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು ಎಂದು ಸಂದರ್ಶನದಲ್ಲಿ ನಟ ರಂಗಾಯಣ ರಘು ಹೇಳಿದರು.&lt;/p&gt;&lt;p&gt;&lt;strong&gt;ಆರ್.ಕೇಶವಮೂರ್ತಿ&lt;/strong&gt;&lt;/p&gt;&lt;p&gt;&lt;strong&gt;* 400 ಚಿತ್ರಗಳ ಸಂಭ್ರಮದಲ್ಲಿದ್ದೀರಿ, ಹೇಗನಿಸುತ್ತಿದೆ?&lt;/strong&gt;&lt;/p&gt;&lt;p&gt;ಕೆಲಸ ಮಾಡಿಕೊಂಡು ಹೋಗ್ತಾ ಇದ್ದೀನಿ ಅನಿಸುತ್ತದೆ. ನನಗಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಸಾಕಷ್ಟು ಕಲಾವಿದರ ಇದ್ದಾರೆ.&lt;/p&gt;&lt;p&gt;&lt;strong&gt;* ಈಗ ಸೆಟ್ಟೇರಿರುವ 400ನೇ ಚಿತ್ರದ ಬಗ್ಗೆ ಹೇಳುವುದಾದರೆ?&lt;/strong&gt;&lt;/p&gt;&lt;p&gt;ಚಿತ್ರದ ಹೆಸರು &lsquo;ಹೊಸ ಜೀವನ&rsquo;. ಮೋಹನ್&zwnj; ಕುಮಾರ್&zwnj; ಹನುಮಯ್ಯ ನಿರ್ದೇಶನ, ಜಿ.ಎಸ್&zwnj;. ಸಂಜೀವ್&zwnj; ಪ್ರಸಾದ್&zwnj; ನಿರ್ಮಾಣದ ಚಿತ್ರ. ಸ್ನೇಹ, ಪ್ರೀತಿ, ಜೀವನದ ಹೋರಾಟ ಹಾಗೂ ಮೌಲ್ಯಗಳ ಸುತ್ತಾ ಸಾಗುವ ಕತೆ. ಕತೆ ಕೇಳಿದ ಕೂಡಲೇ ನನ್ನ ಪಾತ್ರ ನನ್ನ ಕಣ್ಣ ಮುಂದೆ ಬಂತು.&lt;/p&gt;&lt;p&gt;&lt;strong&gt;* ನಿಮ್ಮ ಕಲೆಯ ಬೇರು ಶುರುವಾಗಿದ್ದು ಎಲ್ಲಿಂದ?&lt;/strong&gt;&lt;/p&gt;&lt;p&gt;ನಮ್ಮ ಊರು ತುಮಕೂರು ಜಿಲ್ಲೆ, ಪಾವಗಡ ತಾಲಕು, ಕೊತ್ತೂರು ಎನ್ನುವ ಗ್ರಾಮ. ನನ್ನ ತಂದೆ ಚಿಕ್ಕರಂಗಪ್ಪ, ಬಯಲಾಟದ ಕಲಾವಿದರು. ಬಹುಶಃ ನನ್ನ ಕಲೆಯ ಬೇರುಗಳು ಅಲ್ಲಿಂದಲೇ ಬಂದಿರಬೇಕು.&lt;/p&gt;&lt;p&gt;&lt;strong&gt;* ರಂಗಭೂಮಿಯಿಂದ ಸಿನಿಮಾಗೆ ಬಂದಿದ್ದು ಹೇಗೆ?&lt;/strong&gt;&lt;/p&gt;&lt;p&gt;1992ರಲ್ಲಿ ಬಿ.ಸುರೇಶ್&zwnj; ಅವರ ನಿರ್ದೇಶನದ, ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ &lsquo;ಕನಸುಗಿತ್ತಿ&rsquo; ಟೆಲಿಫಿಲಮ್&zwnj; ಮೂಲಕ. ಯೋಗರಾಜ್&zwnj; ಭಟ್&zwnj; ಅವರು ಬರೆದ ಮೊದಲ ಕತೆ ಇದು. ಹಂಸಲೇಖ ನಿರ್ದೇಶನದ &lsquo;ಸುಗ್ಗಿ&rsquo; ನನ್ನ ಮೊದಲ ಚಿತ್ರ ಬಿಡುಗಡೆ ಆಗಲಿಲ್ಲ. &lsquo;ಭೂಮಿ ತಾಯಿ ಚೊಚ್ಚಲ ಮಗ&rsquo;, &lsquo;ಮೇಘ ಬಂತು ಮೇಘ&rsquo;, &lsquo;ಭೂಮಿಗೀತೆ&rsquo;, &lsquo;ಚಂದ್ರೋದಯ&rsquo;, &lsquo;ಸಿಂಗಾರವ್ವ&rsquo;, &lsquo;ಅರಮನೆ&rsquo;, &lsquo;ದುನಿಯಾ&rsquo;, &lsquo;ಮೊದಲಸಲ&rsquo; ಇವು ನನ್ನ ಆರಂಭದ ದಿನಗಳ ಕೆಲ ಚಿತ್ರಗಳು.&lt;/p&gt;&lt;p&gt;&lt;strong&gt;* ಚಿತ್ರರಂಗದಲ್ಲಿ ನಿಮಗೆ ತಿರುವು ಸಿಕ್ಕಿದ್ದು ಎಲ್ಲಿಂದ?&lt;/strong&gt;&lt;/p&gt;&lt;p&gt;ಹೀರೋ ಅಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕೊಟ್ಟ ಮೊದಲ ಚಿತ್ರ &lsquo;ಅರ್ಥ&rsquo;. ಇದು ಬಿ.ಸುರೇಶ್&zwnj; ಅವರಿಗೆ ಮೊದಲ ನಿರ್ದೇಶನದ ಚಿತ್ರ. ಈ ಚಿತ್ರಕ್ಕೆ ರಾಜ್ಯ ಪ್ರಪಶಸ್ತಿ ಬಂದರೆ, ನನಗೆ ಎಸ್&zwnj;ಐಸಿದಿಂದ (ಈಗಿನ ಸೈಮಾ) ಬೆಸ್ಟ್&zwnj; ಆ್ಯಕ್ಟರ್&zwnj; ಪ್ರಶಸ್ತಿ ನೀಡಿತು. ಆ ನಂತರ ಸುದೀಪ್&zwnj; ಅವರ &lsquo;ಧಮ್&zwnj;&rsquo; ಚಿತ್ರದ ಮೂಲಕ ನನಗೆ ತಿರುವು ಸಿಕ್ಕಿತು.&lt;/p&gt;&lt;p&gt;&lt;strong&gt;* ನೀವೇ ಬೇಕು ಅಂತ ಬರೋ ನಿರ್ದೇಶಕರ ಕತೆಗಳು ಹೇಗಿರುತ್ತವೆ?&lt;/strong&gt;&lt;/p&gt;&lt;p&gt;ರಿಮೇಕ್&zwnj; ಅಲ್ಲದ ಊರಿನ, ನೆಲದ ಕತೆಗಳನ್ನು ಮಾಡಿಕೊಳ್ಳುವ ನಿರ್ದೇಶಕರ ನಾನು ಬೇಕು ಅಂದುಕೊಂಡು ಬರುತ್ತಿದ್ದಾರೆ.&lt;/p&gt;&lt;p&gt;&lt;strong&gt;* ಪ್ರೇಕ್ಷಕರು ನಿಮ್ಮ ಯಾವ ಚಿತ್ರಗಳನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ?&lt;/strong&gt;&lt;/p&gt;&lt;p&gt;ಡೈಕ್ಟರ್&zwnj; ಸ್ಪೆಷಲ್&zwnj;, ಶ್ರೀರಾಮ್, ರಂಗ ಎಸ್&zwnj;ಎಸ್&zwnj;ಎಲ್&zwnj;ಸಿ, ದುನಿಯಾ, ಶಾಖಾಹಾರಿ, ಅಜ್ಞಾತವಾಸಿ, ಟಗರು ಪಲ್ಯ, ಮೂರನೇ ಕೃಷ್ಣಪ್ಪ, ಕೃಷ್ಣಂ ಪ್ರಣಯ ಸಂಖಿ, ಮುಂದೆ ಪ್ರೇಮದ ಊರಲ್ಲಿ, ಪಾರ್ಥನ ಪ್ರಪಂಚ, ದೇವಿ ಮಹಾತ್ಮೆ, ಹೊಸ ಜೀವನ ಚಿತ್ರಗಳನ್ನೂ ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;&lt;strong&gt;* ರಂಗಭೂಮಿಯಿಂದ ಸಿನಿಮಾ ಕಡೆಗೆ ಬಂದಾಗ ಇದ್ದ ಭಾವನೆಗಳೇನು?&lt;/strong&gt;&lt;/p&gt;&lt;p&gt;ಅಯ್ಯೋ ಈ ಸಿನಿಮಾ ಸಾಹವಾಸ ಬೇಡ, ಆ್ಯಕ್ಟ್&zwnj; ಮಾಡಕ್ಕೆ ಬಿಡಲ್ಲ, ಕಟ್&zwnj; ಅಂತೇಳ್ತಾರೆ, ಸುಮ್ಮನೆ ನಿಂತ್ಕೊಂಡಿರ್ಬೇಕು ಅಂತಾರೆ... ಇಂಥ ಭಾವನೆಗಳಿದ್ದವು. ಸಿನಿಮಾಗಳಿಗೆ ನಾನು ಅಜೆಸ್ಟ್&zwnj; ಆಗಲು 10 ವರ್ಷ ಬೇಕಾಯಿತು.&lt;/p&gt;&lt;p&gt;&lt;strong&gt;* ರೀಲ್ಸ್&zwnj; ಜಮಾನದಲ್ಲಿ ಸಿನಿಮಾ ನಟ-ನಟಿಯರಿಗೆ ರಂಗಭೂಮಿ ಕಲಿಕೆ ಬೇಕಾ?&lt;/strong&gt;&lt;/p&gt;&lt;p&gt;ಖಂಡಿತ ಬೇಕು. ಕನಿಷ್ಠ 5 ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿದರೆ ಚಿತ್ರರಂಗ ಶ್ರೀಮಂತವಾಗುತ್ತದೆ. ಧೀರ ನಗಡಿ, ಪ್ರಸನ್ನ ಭಾವನೆ, ಗಂಭೀರತೆ... ಇವು ರಂಗಭೂಮಿಯಲ್ಲಿ ಕಲಿಸುತ್ತಾರೆ. ಜಿಮ್&zwnj; ಹೋಗಿ ಬಂದರೆ ಅಂಡರ್&zwnj;ವೇರ್&zwnj; ಕಂಪನಿಗಳಿಗೆ ಮಾಡೆಲ್&zwnj; ಆಗಬಹುದು, ಕಲಾವಿದ ಆಗಕ್ಕೆ ಆಗಲ್ಲ. ಶರೀರ ಮತ್ತು ಶಾರೀರ ಎರಡೂ ಸರಿಯಾಗಿ ರೂಪಿಸುವುದು ರಂಗಭೂಮಿ.&lt;/p&gt;&lt;p&gt;&lt;strong&gt;* ನೀವು ಕಲಾವಿದ ಆಗದೆ ಹೋಗಿದ್ದರೆ?&lt;/strong&gt;&lt;/p&gt;&lt;p&gt;ಕೃಷಿಕ ಆಗುತ್ತಿದ್ದೆ. ಈಗಲೂ ಬಿಡಿದಿ ಬಳಿ ಜಮೀನು ತೆಗೆದುಕೊಂಡಿದ್ದೇನೆ. ಅಲ್ಲಿ ಮರ, ಗಿಡಗಳನ್ನು ಬೆಳೆಸಿದ್ದೇನೆ. ನಾಲ್ಕೈದು ಹಸುಗಳಿವೆ. ಎಲ್ಲೇ ಹೋದರೂ ಒಂದು ಗಿಡ ತರುತ್ತೇನೆ. ಶೂಟಿಂಗ್&zwnj; ಇಲ್ಲದಿದ್ದಾಗ ಇದೇ ಜಮೀನಿನಲ್ಲಿರುತ್ತೇನೆ. ಸೈಕಲಾಜಿ ಆಂಡ್&zwnj; ಥಿಯೇಟರ್&zwnj; ಓದಿರುವ ಮಗಳು ಚುಕ್ಕಿಗೂ ನಟನೆ ಬಗ್ಗೆ ಆಸಕ್ತಿ ಇದೆ. ಇತ್ತೀಚೆಗೆ &lsquo;ರೋಶಮನ್&zwnj;&rsquo; ನಾಟಕದಲ್ಲಿ ನಟಿಸಿದ್ದಳು. ನನ್ನ ಪತ್ನಿ ಮಂಗಳ ರಂಗಭೂಮಿಯಲ್ಲೇ ಇದ್ದಾರೆ.&lt;/p&gt;&lt;p&gt;&lt;strong&gt;* ನೀವು ಮಾಡಲೇಬೇಕಂತಿರೋ ಪಾತ್ರ ಯಾವುದು?&lt;/strong&gt;&lt;/p&gt;&lt;p&gt;ಮಹಾಭಾರತದ ವಿಧುರನ ಪಾತ್ರ. ಇವತ್ತಿಗೂ ಅದು ಪ್ರಸ್ತುತ. ಈ ವಿಧುರನ ಕ್ಯಾರೆಕ್ಟರ್&zwnj; ಮಾಡುವ ಆಸೆ ಇದೆ.&lt;/p&gt;&lt;h2&gt;&lt;strong&gt;* ಸ್ಟಾರ್&zwnj; ಪೋಷಕ ನಟರಾಗಿರುವ ನಿಮಗೆ ರಾಜಕೀಯ ಪಕ್ಷಗಳ ಅಹ್ವಾನ ಬಂದಿರಲಿಲ್ಲವೇ?&lt;/strong&gt;&lt;/h2&gt;&lt;p&gt;ಖಂಡಿತ ಬಂದಿತ್ತು. ಮಧುಗಿರಿಯಿಂದ ಶಾಸಕನಾಗಿ ಸ್ಪರ್ಧಿಸಬೇಕೆಂದು ತಯಾರಿ ಕೂಡ ಮಾಡಿಕೊಂಡಿದ್ದೆ. ಆದರೆ, ರಾಜಕಾರಣಿಗಳ ಬಗ್ಗೆ ಸಾಮಾನ್ಯ ಜನರಿಗೆ ಇರುವ ಅಭಿಪ್ರಾಯ ನೋಡಿ ಅಯ್ಯೋ ಈ ರಾಜಕೀಯ ಯಾಕೆ ಬೇಕು ಅನಿಸುತ್ತದೆ. ಆದರೆ, ನಮ್ಮ ಹಳ್ಳಿಗೆ ಹೋದಾಗ ಅಲ್ಲಿನ ಸಮಸ್ಯೆಗಳು ನೋಡಿದಾಗ ಪೊಲಿಟಿಕಲ್&zwnj; ಪವರ್&zwnj; ಬೇಕು ಅನಿಸುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/rangayana-raghu-400-movies-political-entry-theatre-to-cinema-journey-interview-gvd/articleshow-atssut6"/>
        </item>
        <item>
            <title><![CDATA[50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಕುರಿತು ಪ್ರಿಯಾಂಕಾ ಉಪೇಂದ್ರ ಮನದಾಳದ ಮಾತು: ನಿರ್ದೇಶನದ ಕನಸು ಬಿಚ್ಚಿಟ್ಟ ನಟಿ]]></title>
            <link>https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9</link>
            <guid isPermaLink="true">https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9</guid>
            <pubDate>Mon, 03 Aug 2026 19:35:19 +0530</pubDate>
            <description><![CDATA[&lt;p&gt;Detective Teekshana: ನಟಿ ಪ್ರಿಯಾಂಕಾ ಉಪೇಂದ್ರ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz3z28z90vhkzzya4p5et0ez,imgname-bkb-1785765897193.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ 50ನೇ ಸಿನಿಮಾ 'ಡಿಟೆಕ್ಟಿವ್ ತೀಕ್ಷ್ಣ' ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ವಿಶೇಷ ಮೈಲಿಗಲ್ಲಿನ ಸಂದರ್ಭದಲ್ಲಿ ತಮ್ಮ ಸಿನಿ ಪಯಣ, ಮಹಿಳಾ ಪಾತ್ರಗಳ ಬದಲಾವಣೆ, ಹೊಸ ಸಿನಿಮಾದ ವಿಶೇಷತೆ ಹಾಗೂ ಮುಂದಿನ ನಿರ್ದೇಶನದ ಕನಸಿನ ಬಗ್ಗೆ ಪ್ರಿಯಾಂಕಾ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಬದುಕಿನಲ್ಲಿ ಸಿನಿಮಾ ಎಂದಿಗೂ ಯೋಜನೆಯ ಭಾಗವಾಗಿರಲಿಲ್ಲ, ಆದರೆ ಅದೇ ತಮ್ಮ ಜೀವನವನ್ನೇ ಬದಲಿಸಿತು ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;50 ಸಿನಿಮಾಗಳು... ಆದರೆ ಇದು ಪ್ಲ್ಯಾನ್ ಆಗಿರಲಿಲ್ಲ!&lt;/strong&gt;&lt;/p&gt;&lt;p&gt;50 ಸಿನಿಮಾಗಳನ್ನು ಪೂರೈಸುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. &quot;ಸಿನಿಮಾ ನನ್ನ ಜೀವನದ ಗುರಿಯಾಗಿರಲಿಲ್ಲ. ಮಿಸ್ ಕೊಲ್ಕತ್ತಾ ಪ್ರಶಸ್ತಿ ಗೆದ್ದ ಬಳಿಕ ಅಭಿನಯದ ಅವಕಾಶಗಳು ಬಂದವು. ಒಂದೊಂದೇ ಅವಕಾಶವನ್ನು ಒಪ್ಪಿಕೊಳ್ಳುತ್ತಾ ಬಂದೆ. ಯಾವಾಗ 50 ಸಿನಿಮಾಗಳ ಹಂತ ತಲುಪಿದೆ ಎಂಬುದೇ ಗೊತ್ತಾಗಲಿಲ್ಲ&quot; ಎಂದು ಅವರು ನೆನಪಿಸಿಕೊಂಡಿದ್ದಾರೆ. ಇದೇ ವೇಳೆ, ಸಿನಿಮಾ ತಮ್ಮ ಬದುಕಿಗೆ ಎಲ್ಲವನ್ನೂ ಕೊಟ್ಟಿದೆ ಎಂದು ಹೇಳಿದ ಅವರು, &quot;ಸಿನಿಮಾದಿಂದಲೇ ನಾನು ಉಪೇಂದ್ರ ಅವರನ್ನು ಭೇಟಿಯಾದೆ. ಬೆಂಗಳೂರಿನ ಸೊಸೆಯಾದೆ. ನನ್ನ ಜೀವನದ ದಿಕ್ಕನ್ನೇ ಸಿನಿಮಾ ಬದಲಿಸಿತು. ಎಲ್ಲವೂ ವಿಧಿಯ ಆಟ&quot; ಎಂದು ಭಾವುಕರಾದರು.&lt;/p&gt;&lt;p&gt;&lt;strong&gt;ಮದುವೆಯಾದ ಬಳಿಕ ನಟನೆಯೇ ನಿಲ್ಲುತ್ತದೆ ಎಂಬ ಭಾವನೆ ಇತ್ತು&lt;/strong&gt;&lt;/p&gt;&lt;p&gt;ಮದುವೆಯಾದ ನಂತರ ನಟಿಯಾಗಿ ಮುಂದುವರಿಯುವುದಿಲ್ಲ ಎಂದು ತಾವು ಅಂದುಕೊಂಡಿದ್ದೆ ಎಂದು ಪ್ರಿಯಾಂಕಾ ಹೇಳಿದ್ದಾರೆ. &quot;2003ರ ಸಮಯದಲ್ಲಿ ಮದುವೆಯಾದ ನಾಯಕಿಯರಿಗೆ ಅವಕಾಶಗಳು ತುಂಬಾ ಕಡಿಮೆ ಇರುತ್ತಿದ್ದವು. ಅವರು ಸಿನಿಮಾ ಬಿಡುತ್ತಾರೆ ಅಥವಾ ನಿರ್ಮಾಣ, ಕಾಸ್ಟ್ಯೂಮ್ ವಿಭಾಗದ ಕಡೆ ಹೋಗುತ್ತಾರೆ ಎನ್ನುವ ಅಭಿಪ್ರಾಯವಿತ್ತು. ಸಮಾಜವೂ ಬೇರೆ ರೀತಿಯಲ್ಲಿ ನೋಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಹಿಳೆಯರಿಗೆ ಉತ್ತಮ ಹಾಗೂ ಬಲಿಷ್ಠ ಪಾತ್ರಗಳು ಸಿಗುತ್ತಿವೆ. ಸಿನಿಮಾಗಳಲ್ಲೂ, ಓಟಿಟಿಯಲ್ಲೂ ಮಹಿಳಾ ಕೇಂದ್ರಿತ ಕಥೆಗಳು ಹೆಚ್ಚಾಗಿವೆ. ನನಗೆ ಬರುತ್ತಿರುವ ಕಥೆಗಳ ಬಗ್ಗೆ ತುಂಬಾ ಸಂತೋಷವಾಗಿದೆ&quot; ಎಂದು ಹೇಳಿದರು.&lt;/p&gt;&lt;p&gt;&lt;strong&gt;'ಡಿಟೆಕ್ಟಿವ್ ತೀಕ್ಷ್ಣ' ಪಾತ್ರದಲ್ಲಿ ಬುದ್ಧಿವಂತಿಕೆಯೇ ಹೀರೋ&lt;/strong&gt;&lt;/p&gt;&lt;p&gt;ನಿರ್ದೇಶಕ ತ್ರಿವಿಕ್ರಮ್ ರಘು ನಿರ್ದೇಶಿಸಿರುವ 'ಡಿಟೆಕ್ಟಿವ್ ತೀಕ್ಷ್ಣ' ಚಿತ್ರದಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ಖಾಸಗಿ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಬಗ್ಗೆ ಮಾತನಾಡಿದ ಅವರು, &quot;ಇದು ದೈಹಿಕ ಸಾಹಸಕ್ಕಿಂತ ಬುದ್ಧಿವಂತಿಕೆಗೆ ಹೆಚ್ಚಿನ ಮಹತ್ವ ನೀಡುವ ಪಾತ್ರ. ಮಕ್ಕಳಿಗೆ ಸೂಪರ್ ಹೀರೋ ಕಥೆಗಳು ಸಾಕಷ್ಟಿವೆ. ಆದರೆ ಅವರಲ್ಲಿ ಯೋಚಿಸುವ ಗುಣವನ್ನು ಬೆಳೆಸುವ ಕಥೆಗಳ ಭಾಗವಾಗಬೇಕು ಎಂಬ ಆಸೆ ನನಗಿದೆ. 'ಡಿಟೆಕ್ಟಿವ್ ತೀಕ್ಷ್ಣ' ಅದೇ ರೀತಿಯ ಸಿನಿಮಾ. ನಮ್ಮ ಮೆದುಳೇ ನಮ್ಮ ದೊಡ್ಡ ಶಕ್ತಿ ಎಂಬ ಸಂದೇಶವನ್ನು ಈ ಸಿನಿಮಾ ನೀಡುತ್ತದೆ&quot; ಎಂದರು.&lt;/p&gt;&lt;p&gt;&lt;strong&gt;ಶೆರ್ಲಾಕ್ ಹೋಮ್ಸ್ ಸ್ಪೂರ್ತಿ... ನ್ಯಾನ್ಸಿ ಡ್ರೂ ನೆನಪು!&lt;/strong&gt;&lt;/p&gt;&lt;p&gt;ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಗಿ ತಿಳಿಸಿದ ಪ್ರಿಯಾಂಕಾ, &quot;ನಿಜ ಜೀವನದ ಖಾಸಗಿ ಡಿಟೆಕ್ಟಿವ್&zwnj;ಗಳ ಕೆಲಸದ ಬಗ್ಗೆ ಅಧ್ಯಯನ ಮಾಡಿದೆ. ಪೊಲೀಸರ ವ್ಯಾಪ್ತಿಗೆ ಬಾರದ ಅನೇಕ ಪ್ರಕರಣಗಳನ್ನು ಅವರು ಹೇಗೆ ಬಗೆಹರಿಸುತ್ತಾರೆ ಎಂಬುದನ್ನು ತಿಳಿದುಕೊಂಡೆ. ನಿರ್ದೇಶಕರು ಶೆರ್ಲಾಕ್ ಹೋಮ್ಸ್ ಮಾದರಿಯ ಸ್ಟೈಲಿಶ್ ಡಿಟೆಕ್ಟಿವ್ ಪಾತ್ರವನ್ನು ಕಲ್ಪಿಸಿದ್ದರು. ಬಾಲ್ಯದಲ್ಲಿ ನಾನು ನ್ಯಾನ್ಸಿ ಡ್ರೂ ಕಾದಂಬರಿಗಳನ್ನು ಓದುತ್ತಿದ್ದೆ. ಒಗಟು ಬಿಡಿಸುವ ಕಥೆಗಳು ನನಗೆ ತುಂಬಾ ಇಷ್ಟ. ಅದೇ ಅನುಭವವನ್ನು ಈ ಪಾತ್ರದಲ್ಲಿ ಅನುಭವಿಸಿದೆ&quot; ಎಂದು ಹೇಳಿದರು.&lt;/p&gt;&lt;p&gt;&lt;strong&gt;ಮುಂದಿನ ವರ್ಷ ನಿರ್ದೇಶಕಿಯಾಗುವ ಕನಸು&lt;/strong&gt;&lt;/p&gt;&lt;p&gt;ನಟನೆ ಜೊತೆಗೆ ಚಿತ್ರರಂಗದ ಮತ್ತೊಂದು ಜವಾಬ್ದಾರಿಗೂ ಸಿದ್ಧವಾಗುತ್ತಿರುವ ಪ್ರಿಯಾಂಕಾ, ಮುಂದಿನ ವರ್ಷ ನಿರ್ದೇಶನಕ್ಕೆ ಕಾಲಿಡುವ ಇಂಗಿತ ನೀಡಿದ್ದಾರೆ. &quot;ಸಿನಿಮಾ ನಿರ್ಮಾಣದ ಪ್ರತಿಯೊಂದು ವಿಭಾಗವನ್ನೂ ಕಲಿಯುತ್ತಿದ್ದೇನೆ. ಮುಂದಿನ ವರ್ಷ ನಿರ್ದೇಶನ ಮಾಡಬೇಕು ಎಂಬ ಆಸೆ ಇದೆ. ಜೊತೆಗೆ ನನ್ನ ಪುತ್ರ ಆಯುಷ್ ಅವರ ಸಿನಿ ಎಂಟ್ರಿಗೆ ಕೂಡ ಸಿದ್ಧತೆ ನಡೆಸುತ್ತಿದ್ದೇನೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;'ಡಿಟೆಕ್ಟಿವ್ ತೀಕ್ಷ್ಣ'ವನ್ನು ನಿರ್ಮಾಪಕರಿಗೆ ಅರ್ಪಣೆ&lt;/strong&gt;&lt;/p&gt;&lt;p&gt;ಚಿತ್ರದ ಬಿಡುಗಡೆಯ ಸಂಭ್ರಮದ ನಡುವೆಯೇ ನಿರ್ಮಾಪಕರಲ್ಲಿ ಒಬ್ಬರಾದ ಗುತಾ ಮುನಿ ಪ್ರಸನ್ನ ಅವರ ನಿಧನ ಚಿತ್ರತಂಡಕ್ಕೆ ನೋವುಂಟು ಮಾಡಿದೆ. &quot;ಪ್ರಸನ್ನ ಅವರಿಗೆ ಈ ಸಿನಿಮಾ ಬಗ್ಗೆ ಅಪಾರ ಪ್ರೀತಿ ಇತ್ತು. ಅವರು ಈ ಸಿನಿಮಾಗಾಗಿ ತುಂಬಾ ಶ್ರಮಿಸಿದ್ದರು. 'ಡಿಟೆಕ್ಟಿವ್ ತೀಕ್ಷ್ಣ' ಚಿತ್ರವನ್ನು ಅವರಿಗೆ ಅರ್ಪಿಸುತ್ತೇನೆ. ಈ ಸಿನಿಮಾ ಬಿಡುಗಡೆಯ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ&quot; ಎಂದು ಪ್ರಿಯಾಂಕಾ ಭಾವುಕರಾಗಿ ಹೇಳಿದರು.&lt;/p&gt;&lt;h2&gt;&lt;strong&gt;ಆಗಸ್ಟ್ 7ರಂದು ತೆರೆಗೆ 'ಡಿಟೆಕ್ಟಿವ್ ತೀಕ್ಷ್ಣ'&lt;/strong&gt;&lt;/h2&gt;&lt;p&gt;ತ್ರಿವಿಕ್ರಮ್ ರಘು ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಸಿಡ್ಲಿಂಗು ಶ್ರೀಧರ್, ಅರುಣ್ ಬಾಲರಾಜ್, ವಿನ್ಸೆಂಟ್ ಡಯಾಸ್, ರೋಬೋ ಗಣೇಶ್ ಹಾಗೂ ಶಶಿಧರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಚಿತ್ರಕ್ಕೆ ಪದಪಲ್ಲಿ ರೋಹಿತ್ ಸಂಗೀತ ನೀಡಿದ್ದು, ಮನು ದಾಸಪ್ಪ ಛಾಯಾಗ್ರಹಣ ಮಾಡಿದ್ದಾರೆ. ಬುದ್ಧಿವಂತಿಕೆಯೇ ನಿಜವಾದ ಶಕ್ತಿ ಎಂಬ ಸಂದೇಶದೊಂದಿಗೆ ಮೂಡಿಬಂದಿರುವ 'ಡಿಟೆಕ್ಟಿವ್ ತೀಕ್ಷ್ಣ' ಸಿನಿಮಾ ಆಗಸ್ಟ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/priyanka-upendra-reflects-on-her-50th-film-detective-teekshana-gvd/articleshow-cntayh9"/>
        </item>
        <item>
            <title><![CDATA[Exclusive Interview: ಕನ್ನಡದ ಮೊಟ್ಟ ಮೊದಲ ಜೆನ್‌ ಜೀ ಸಿನಿಮಾ ಬುಲ್ಲಿ: ಭುವನ್‌ ಪೊನ್ನಣ್ಣ ಸಂದರ್ಶನ]]></title>
            <link>https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis</link>
            <guid isPermaLink="true">https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis</guid>
            <pubDate>Fri, 31 Jul 2026 16:19:36 +0530</pubDate>
            <description><![CDATA[&lt;p&gt;ಭುವನ್&zwnj; ಪೊನ್ನಣ್ಣ ಮೂರು ವರ್ಷಗಳ ಬ್ರೇಕ್&zwnj; ಬಳಿಕ &lsquo;ಬುಲ್ಲಿ&rsquo; ಸಿನಿಮಾ ಮಾಡುತ್ತಿದ್ದಾರೆ. ಸಮೃದ್ಧ್&zwnj; ಸ್ಟುಡಿಯೋಸ್&zwnj; ಮತ್ತು ಭುವನಂ ಎಂಟರ್&zwnj;ಟೇನ್&zwnj;ಮೆಂಟ್&zwnj; ನಿರ್ಮಿಸುತ್ತಿರುವ ಈ ಸಿನಿಮಾವನ್ನು ಅನೂಪ್&zwnj; ಆ್ಯಂಟನಿ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ಬಗ್ಗೆ ಭುವನ್&zwnj; ಮಾತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyvwnkddqmqgg57hpjsramjt,imgname-ch-1785494949293.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;- ಬುಲ್ಲಿ ಸಿನಿಮಾದ ನಿಮ್ಮ ಪಾತ್ರ ಹೇಗಿದೆ?&lt;/strong&gt;&lt;/p&gt;&lt;p&gt;ನಾನು ಇಲ್ಲಿಯವರೆಗೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದವನಲ್ಲ. ಮೊದಲ ಶಾಟ್&zwnj;ನಲ್ಲಿ ನಾನು, ಊರ್ವಶಿ ಹಾಗೂ ಓಂಶಿವಪ್ರಕಾಶ್&zwnj; ಅವರ ಕಾಂಬಿನೇಶನ್&zwnj; ಇತ್ತು. ಓಂ ಶಿವಪ್ರಕಾಶ್&zwnj; ಅವರದು ಬಡ್ಡಿ ವ್ಯಾಪಾರಿ ಪಾತ್ರ. ಊರ್ವಶಿ ಮತ್ತು ನಾನು ಅವರಿಂದ ಬಡ್ಡಿಗೆ ಹಣ ತಗೊಂಡು ವಾಪಾಸ್&zwnj; ಕೊಡದೇ ನಾಟಕ ಮಾಡುವ ಕೆಳಮಧ್ಯಮ ವರ್ಗದ ಅಮ್ಮ, ಮಗ. ಆ ಸೀನ್&zwnj;ನಲ್ಲಿ ಓಂ ಶಿವಪ್ರಕಾಶ್&zwnj; &lsquo;ನೀವಿಬ್ಬರೂ ಅಮ್ಮ ಮಗ ಬೆಂಗಳೂರು ಬಿಟ್ಟು ತೊಲಗಿ.. ಥೂ&rsquo; ಅಂತಾರೆ. ಮುಂದಿನ ಡೈಲಾಗ್&zwnj; ಬೇರೇನೋ ಇತ್ತು. ಆದರೆ ಊರ್ವಶಿ ಅವರು, &lsquo;ಆಯ್ತಣ್ಣ, ನಾವು ಮೈಸೂರಿಗೆ ಹೋಗ್ತೀವಿ, ಅಲ್ಲಿ ನನ್ನ ತಂಗಿ ಮನೆ ಇದೆ&rsquo; ಅಂದುಬಿಟ್ಟರು. ನಾನು ಥಂಡಾ ಆದೆ. ಅಲ್ಲಿ ಏನು ಡೈಲಾಗ್&zwnj; ಹೇಳಬೇಕೋ ಗೊತ್ತಾಗಲಿಲ್ಲ. ನನ್ನ ಸ್ಥಿತಿ ನೋಡಿದ ನಿರ್ದೇಶಕರು ವಿವರಿಸಲು ಬಂದರು. ಆಗ ಊರ್ವಶಿ ಅವರು ಪಕ್ಕಕ್ಕೆ ಕರೆದು ಕೂರಿಸಿಕೊಂಡು, &lsquo;ಭುವ, ನೋಡು ನೀನು ಕಾಮಿಡಿ ಮಾಡಬೇಡ. ನಿನ್ನ ಪಾತ್ರವಷ್ಟೇ ಕಾಮಿಡಿ, ನೀನು ಕಾಮಿಡಿ ಅಲ್ಲ. ನೀನು ಕಾಮಿಡಿ ಮಾಡಲಿಕ್ಕೆ ಹೋದರೆ ಜನ ನಗಲ್ಲ, ನೀನು ಹೇಗಿದ್ದೀಯೋ ಹಾಗೇ ಇರು, ಕಾಮಿಡಿಯನ್ನು ಪಾತ್ರವೇ ಮಾಡುತ್ತಾ ಹೋಗುತ್ತದೆ. ನಾನು ಹೇಳಿದ್ದಕ್ಕೆ ನೀನು ರಿಯಲ್&zwnj; ಲೈಫ್&zwnj;ನಲ್ಲಿ ಪ್ರತಿಕ್ರಿಯೆ ಕೊಡುವ ರೀತಿ ಕೌಂಟರ್&zwnj; ಕೊಡಬೇಕು&rsquo; ಎಂದರು. ಚಿತ್ರದುದ್ದಕ್ಕೂ ಅವರ ಸಲಹೆಯನ್ನು ಪಾಲಿಸಿದ್ದೇನೆ.&lt;/p&gt;&lt;p&gt;&lt;strong&gt;- ಬುಲ್ಲಿ ಪಾತ್ರಕ್ಕೆ ತೂಕ ಇಳಿಸಿಕೊಂಡಿರಾ?&lt;/strong&gt;&lt;/p&gt;&lt;p&gt;ಮದುವೆ ಆದಮೇಲೆ ಹೆಂಡತಿ ಕೊಡುವ ಟೆನ್ಶನ್&zwnj;ಗೆ ಹುಡುಗರ ತೂಕ ಇಳಿಯದೇ ಇರುತ್ತಾ.. ಈ ಪಾತ್ರಕ್ಕೆ ಮತ್ತೂ ನಾಲ್ಕೈದು ಕೆಜಿ ಇಳಿಸಿದ್ದೀನಿ. ಇದು ಈ ಕಾಲದ ಜೆನ್&zwnj; ಜೀ ಹುಡುಗನ ಪಾತ್ರ. ಆತನಿಗೆ ಗೊತ್ತು ಗುರಿ ಇರುವುದಿಲ್ಲ. ಅವನ ನಿಜ ಹೆಸರು ಬಲರಾಮ. ಪೋಕರಿ ಕೆಲಸಗಳಿಂದ ಬುಲ್ಲಿ ಅಂತ ಫೇಮಸ್&zwnj; ಆಗಿರುತ್ತಾನೆ. ಈ ಪಾತ್ರಕ್ಕಾಗಿ ಜೆನ್&zwnj; ಜೀ ಹುಡುಗರು ಹೇಗೆ ಯೋಚನೆ ಮಾಡ್ತಾರೆ, ಅವರ ಬಾಡಿ ಮ್ಯಾನರಿಸಂ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಪುಣೆಯ ಎಫ್&zwnj;ಟಿಐಐ ವರ್ಕ್&zwnj;ಶಾಪ್&zwnj;ನಲ್ಲಿ ಮೂರು ವಾರ ಅವರ ಜೊತೆಗೆ ಕಳೆದಿದ್ದೆ. ನಮಗೆಲ್ಲ ಟೀಚರ್&zwnj; ಅಂದರೆ ಭಯ ಭಕ್ತಿ ಇರುತ್ತದೆ. ಆದರೆ ಜೆನ್&zwnj; ಜೀ ಹುಡುಗರಿಗೆ ಫ್ರೆಂಡ್&zwnj;ಗೂ, ಗುರುವಿಗೂ ವ್ಯತ್ಯಾಸವೇ ಗೊತ್ತಿಲ್ಲ. ಟೀಚರ್&zwnj; ಹೆಸರು ಹಿಡಿದು ಫ್ರೆಂಡ್ಸ್&zwnj; ಬಳಿ ಮಾತನಾಡುವಂತೆ ಮಾತನಾಡುತ್ತಿರುತ್ತಾರೆ. ವಿಚಿತ್ರ ವೇಷ ಭೂಷಣ, ಚಂಚಲ ಮನಸ್ಸು, ಇವತ್ತು ಒಬ್ಬರ ಜೊತೆ ಡೇಟಿಂಗ್&zwnj; ಮಾಡುತ್ತಾರೆ. ಮರುದಿನ ಅದರ ಬಗ್ಗೆ ಗೊತ್ತೇ ಇಲ್ಲದ ಹಾಗಿರುತ್ತಾರೆ. ಇಂಥದ್ದನ್ನೆಲ್ಲ ಪಾತ್ರದಲ್ಲಿ ತಂದಿದ್ದೇನೆ.&lt;/p&gt;&lt;p&gt;&lt;strong&gt;- ಊರ್ವಶಿ ಮಗಳು ತೇಜಾ ಅವರ ನಟಿಸಿದ ಅನುಭವ ಹೇಗಿತ್ತು?&lt;/strong&gt;&lt;/p&gt;&lt;p&gt;ಅಮ್ಮನ ಹಾಗೇ ಬಹಳ ಸರಳ ಹುಡುಗಿ ತೇಜಾ. ಅವರಿಗೆ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ಅಮ್ಮನ ಪರಂಪರೆಯನ್ನು ಮುಂದುವರಿಸುವ ಹುಮ್ಮಸ್ಸು ಇದೆ. ಅವರ ಜೊತೆಗಿನ ಶೂಟಿಂಗ್&zwnj; ಇನ್ನಷ್ಟೇ ಶುರುವಾಗಬೇಕಿದೆ.&lt;/p&gt;&lt;p&gt;&lt;strong&gt;- ಮೂರು ವರ್ಷದ ಅಜ್ಞಾತವಾಸದ ಬಳಿಕ ಮತ್ತೆ ಬರುತ್ತಿದ್ದೀರಿ, ಹೇಗಿದೆ ಅನುಭವ?&lt;/strong&gt;&lt;/p&gt;&lt;p&gt;ಮೂರು ವರ್ಷ ಬಹಳ ಮೌಲ್ಯಯುತವಾಗಿ ಕಳೆದಿದ್ದೇನೆ. ಮಗಳ ಬೆಳವಣಿಗೆಯನ್ನು ಆಸ್ಥೆಯಿಂದ ಗಮನಿಸಿದ್ದೇನೆ. ಬರವಣಿಗೆಯ ಕೆಲಸ ಮಾಡಿದ್ದೇನೆ. ಫ್ಯಾಮಿಲಿ ಲೈಫ್&zwnj;ನ ರುಚಿ ಉಂಡಿದ್ದೇನೆ. ಈ ಮೂರು ವರ್ಷಗಳಲ್ಲಿ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಹೆಚ್ಚಿನ ಬೆಳವಣಿಗೆ ಏನೂ ಆದಂತಿಲ್ಲ. ನಮ್ಮ ಚಿತ್ರರಂಗದವರು ಇನ್ನೂ ಮುಂಗಾರು ಮಳೆ ಸಿನಿಮಾ ಬಂದ ಕಾಲದ ಪ್ರೇಕ್ಷಕರನ್ನೇ ಮನಸ್ಸಲ್ಲಿ ಇಟ್ಟು ಸಿನಿಮಾ ಮಾಡುತ್ತಿದ್ದಾರೆ. ಬದಲಾದ ಪ್ರೇಕ್ಷಕರ ಮನಸ್ಥಿತಿ ಬಗ್ಗೆ ಗಮನವೇ ಇಲ್ಲ. ನಾವು ಈ ಕಾಲದ ಪ್ರೇಕ್ಷಕರ ಅಭಿರುಚಿ ಬಗ್ಗೆ ಸರ್ವೆ ಮಾಡಿದ್ದೇವೆ. ಅವರ ಟೇಸ್ಟ್&zwnj;ಗೆ ತಕ್ಕಂಥಾ ಸಿನಿಮಾ ಮಾಡಿದ್ದೇವೆ. ಬುಲ್ಲಿ ಕನ್ನಡದ ಮೊಟ್ಟ ಮೊದಲ ಜೆನ್&zwnj; ಜೀ ಸಿನಿಮಾ. ಇದರಲ್ಲಿ ಜೆನ್&zwnj; ಜೀ ಮಗ ಮತ್ತು ಅವನ ರೀತಿಗೆ ಹೊಂದಿಕೊಂಡ ಈ ಕಾಲದ ಅಮ್ಮನ ಕಥೆ ಇದೆ. ಮಾನ ಮರ್ಯಾದೆಗೆ ಅಂಜಿ ಬದುಕುವುದಕ್ಕಿಂತ ನಾವಿರುವ ಹಾಗೇ ಸಮಾಜದೆದುರು ತೆರೆದುಕೊಂಡು ನಿರಾಳವಾಗಿ ಬದುಕುವುದು ಒಳ್ಳೆಯದು ಅನ್ನುವುದನ್ನು ಸಿನಿಮಾ ಮನದಟ್ಟು ಮಾಡಿಸುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/bhuvan-ponnanna-interview-returns-after-three-years-with-bulli-gvd/articleshow-dbrthis"/>
        </item>
        <item>
            <title><![CDATA[Simple Suni Interview: ಈ ಕತೆಗೆ ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ ಚಿತ್ರವೇ ಸ್ಫೂರ್ತಿ: ಸಿಂಪಲ್‌ ಸುನಿ]]></title>
            <link>https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6</link>
            <guid isPermaLink="true">https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6</guid>
            <pubDate>Sat, 27 Jun 2026 16:55:39 +0530</pubDate>
            <description><![CDATA[&lt;p&gt;Simple Suni Interview: 'ಮೋಡ ಕವಿದ ವಾತಾವರಣ' ಚಿತ್ರದ ಕಥೆ ಹೇಗೆ ಹುಟ್ಟಿತು? ಶೀಲಂ ಹೀರೋ ಆದದ್ದು ಹೇಗೆ? ದಿಗಂತ್ ಜೊತೆ ಅಂಡರ್&zwnj;ವರ್ಲ್ಡ್ ಸಿನಿಮಾ ಯೋಜನೆ ಏನು? ಸಿಂಪಲ್&zwnj; ಸುನಿ ವಿಶೇಷ ಸಂದರ್ಶನ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4d6td4tj6tk63h3x5g6g5p,imgname-hch-1782559500708.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಈ ಚಿತ್ರದ ಕತೆ ಹುಟ್ಟಿಕೊಂಡ ಹಿನ್ನೆಲೆ ಏನು?&lt;/strong&gt;&lt;/p&gt;&lt;p&gt;ಲಾಕ್&zwnj;ಡೌನ್&zwnj; ಸ್ಥಿತಿ ಎಷ್ಟು ದಿನ ಇರುತ್ತೋ ಗೊತ್ತಿಲ್ಲದಿದ್ದಾಗ ಒಂದು ರೆಸಾರ್ಟ್&zwnj;ನಲ್ಲಿ ಶುರುವಾಗಿ ಅದೇ ರೆಸಾರ್ಟ್&zwnj;ನಲ್ಲಿ ಮುಗಿಯುವ ಕತೆ ಅಂತ ಮಾಡಿಕೊಂಡಿದ್ದು. ಕೊನೆಗೆ ಲಾಕ್&zwnj;ಡೌನ್&zwnj; ಮುಗಿದಾಗ ಕತೆಗೆ ಬೇರೆ ಬೇರೆ ತಿರುವುಗಳು ಸೇರಿಕೊಂಡವು.&lt;/p&gt;&lt;p&gt;&lt;strong&gt;* ಇದು ಶೀಲಂಗಾಗಿಯೇ ಮಾಡಿದ ಕತೆನಾ?&lt;/strong&gt;&lt;/p&gt;&lt;p&gt;ಕತೆ ಮಾಡಿಕೊಂಡಾಗ ಹೀರೋ ಯಾರೂ ಅಂತ ಫೈನಲ್&zwnj; ಆಗಿರಲಿಲ್ಲ. ಶೀಲಂ ನನ್ನ ಜೊತೆಗೇ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನಿಗೆ ಕತೆಯನ್ನು ಆಗಾಗ ನರೇಟ್&zwnj; ಮಾಡುತ್ತಿದ್ದೆ. ಹೀಗೆ ರೀಡಿಂಗ್&zwnj; ಕೊಡ್ತಾ ಕೊಡ್ತಾ ಕತೆ ಪೂರ್ತಿ ಆದಮೇಲೆ ಶೀಲಂ ಹೀರೋ ಅಂತ ಆಗಿದ್ದು.&lt;/p&gt;&lt;p&gt;&lt;strong&gt;* ಈ ನಿಮ್ಮ ಚಿತ್ರ ನೋಡುವುದಕ್ಕೆ ಕಾರಣಗಳೇನು?&lt;/strong&gt;&lt;/p&gt;&lt;p&gt;ನನ್ನ ಸಿನಿಮಾ ಜನರನ್ನು ತಲುಪುದಕ್ಕೆ ಸಾಧ್ಯವಾಗುವ ಎಲ್ಲಾ ಅಂಶಗಳು ಇವೆ. ಲೈಟ್&zwnj; ಹಾರ್ಟ್&zwnj; ಟಚ್ಚಿಂಗ್&zwnj; ಕತೆ, ತುಂಬಾ ಸುಂದರವಾಗಿ ಕಾಣುವ ಫೋಟೋಗ್ರಫಿ, ಮನಸ್ಸಿಗೆ ಹಿತವಾಗಿ ಸಂಗೀತ, ಯಾವುದೇ ಗೊಂದಲಗಳಿಲ್ಲದ ಸಂಭಾಷಣೆಗಳು, ಈ ಝನ್&zwnj; ಜೀ ಜನರೇಷನ್&zwnj; ಜೊತೆಗೆ ದೊಡ್ಡವರು ಕೂಡ ನೋಡುವಂತಹ ಸಿನಿಮಾ ಇದು.&lt;/p&gt;&lt;p&gt;&lt;strong&gt;* ಈ ಸಿನಿಮಾ ಕತೆಗೆ ಸ್ಫೂರ್ತಿ ಏನು?&lt;/strong&gt;&lt;/p&gt;&lt;p&gt;ರೆಸಾರ್ಟ್&zwnj;ನಲ್ಲಿ ಮುಗಿಯುವ ಕತೆ ಒಂದು ಕೇಸ್&zwnj; ಸ್ಟಡಿ ಬೇಕು ಅಂದಾಗ ನಮಗೆ ಸಿಕ್ಕ ಒಂದು ಮೆಡಿಕಲ್&zwnj; ಘಟನೆ. ಅದೇನು ಎಂಬುದು ಚಿತ್ರದಲ್ಲಿ ನೋಡಿ. ಜೊತೆಗೆ ಈ ಸಿನಿಮಾ ಕತೆ ಬರೆಯಲು ನನಗೆ &lsquo;ಸಿಂಪಲ್ಲಾಗ್&zwnj; ಒಂದ್&zwnj; ಲವ್ ಸ್ಟೋರಿ&rsquo; ಸಿನಿಮಾ ಸ್ಫೂರ್ತಿ.&lt;/p&gt;&lt;p&gt;&lt;strong&gt;* ನಿರ್ದೇಶಕರಾಗಿ ನಿಮಗೆ ಈ ಕತೆಯಲ್ಲಿ ಥ್ರಿಲ್ಲಿಂಗ್&zwnj; ಅನಿಸಿದ್ದೇನು?&lt;/strong&gt;&lt;/p&gt;&lt;p&gt;ಇಲ್ಲಿ ಯಾರು ವಿಲನ್&zwnj;, ಯಾರ ಆ ನಿಗೂಢ ವ್ಯಕ್ತಿ ಅಂತ ಪ್ರಶ್ನೆ ಬಂದಾಗ ನನಗೆ ಥ್ರಿಲ್&zwnj; ಅನಿಸಿತು. ಮೂರು ಪಾತ್ರಗಳ ನಡುವೆ ಪರಸ್ಪರ ಕ್ರಾಸ್&zwnj; ಕನೆಕ್ಷನ್&zwnj; ಹುಟ್ಟಿಕೊಂಡಾಗ ಕತೆ ಬರೆಯುವುದಕ್ಕೆ ಮತ್ತಷ್ಟು ಉತ್ಸಾಹ ಸಿಕ್ಕಿತು.&lt;/p&gt;&lt;p&gt;&lt;strong&gt;* ನಿಮ್ಮ ಕತೆಯನ್ನು ನೀವು ದೊಡ್ಡ ಪರದೆ ಮೇಲೆ ನೋಡಿದಾಗ?&lt;/strong&gt;&lt;/p&gt;&lt;p&gt;ನನ್ನ ಯಾವುದೇ ಕತೆ ತೆರೆ ಮೇಲೆ ನೋಡಿದಾಗ ಇನ್ನಷ್ಟು ಚೆನ್ನಾಗಿ ಮಾಡಬೇಕು, ಮೊಲಿನಿಂದ ಶೂಟ್&zwnj; ಮಾಡಬೇಕು ಅನಿಸಿದ್ದು ಇದೆ. ಆದರೆ, &lsquo;ಮೋಡ ಕವಿದ ವಾತಾವರಣ&rsquo; ಆ ರೀತಿಯ ಅಭಿಪ್ರಾಯ ಮೂಡಿಸಲಿಲ್ಲ.&lt;/p&gt;&lt;p&gt;&lt;strong&gt;* ತುಂಬಾ ಸ್ಪೀಡಾಗಿ ಸಿನಿಮಾಗಳನ್ನು ಮಾಡುವ ನಿಮ್ಮ ನಿರ್ದೇಶನದ ಗುಟ್ಟೇನು?&lt;/strong&gt;&lt;/p&gt;&lt;p&gt;ಇದಕ್ಕೆ &lsquo;ಆಪರೇಷನ್&zwnj; ಅಲಮೇಲಮ್ಮ&rsquo; ಹಾಗೂ &lsquo;ಚಮಕ್&zwnj;&rsquo; ಚಿತ್ರಗಳು ಕಾರಣ. ಒಂದೇ ವರ್ಷದಲ್ಲಿ ಎರಡು ಸಿನಿಮಾ ಮಾಡಿದ. ಇದಕ್ಕಿಂತ ಮೊದಲು ಬಂದ ಚಿತ್ರಗಳಿಗೆ ಎರಡು- ಮೂರು ವರ್ಷ ಸ್ಪೆಂಡ್&zwnj; ಮಾಡಿದ್ದೇನೆ. ಎಷ್ಟು ವರ್ಷ ಸಿನಿಮಾ ಮಾಡ್ತಿವಿ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಮಾಡ್ತೀವಿ ಅನ್ನೋದು ಮುಖ್ಯ ಅಂತ ಗೊತ್ತಾದ ಮೇಲೆ ಸ್ಪೀಡ್&zwnj; ಹೆಚ್ಚಾಯಿತು.&lt;/p&gt;&lt;p&gt;&lt;strong&gt;* ಆ್ಯಕ್ಷನ್&zwnj;, ಅಂಡರ್&zwnj;ವರ್ಲ್ಡ್&zwnj; ಕತೆಗಳ ಚಿತ್ರಗಳು ಮಾಡುವ ಪ್ಲಾನ್&zwnj; ಇಲ್ಲವೇ?&lt;/strong&gt;&lt;/p&gt;&lt;p&gt;ನಿಜ ಹೇಳಬೇಕು ಅಂದರೆ ಒಬ್ಬ ಭೂಗತ ರೌಡಿ ಬಗ್ಗೆ ಕತೆ ಕೂಡ ಮಾಡಿಕೊಂಡಿದ್ದೆ. ರೌಡಿಗಳಲ್ಲೇ ಅತ್ಯಂತ ಸುಂದರವಾಗಿ ಕಾಣುತ್ತಿದ್ದ ವ್ಯಕ್ತಿ. ಆ ಪಾತ್ರವನ್ನು ದಿಗಂತ್&zwnj; ಅವರಿಂದ ಮಾಡಿಸುವ ಯೋಚನೆ ಕೂಡ ಇತ್ತು. ಆ ಕತೆ, ಆ ವ್ಯಕ್ತಿ ಯಾರಂತ ಮುಂದೆ ಹೇಳುತ್ತೇನೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/director-simple-suni-special-interview-moda-kavida-vatavrana-movie/articleshow-e02mgf6"/>
        </item>
        <item>
            <title><![CDATA[Exclusive Interview: ಅಮ್ಮನ ಸಿನಿಮಾ ಸೆಟ್‌ನಲ್ಲೇ ನನ್ನ ಕನಸು ಹುಟ್ಟಿತು: ಇಶಾ ಲಂಕೇಶ್]]></title>
            <link>https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2</link>
            <guid isPermaLink="true">https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2</guid>
            <pubDate>Fri, 10 Jul 2026 16:35:03 +0530</pubDate>
            <description><![CDATA[&lt;p&gt;ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್&zwnj; ಲಿಟರೇಚರ್&zwnj; ಆಂಡ್&zwnj; ಪರ್ಫಾರ್ಮೆನ್ಸ್&zwnj; ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್&zwnj; ಇದು ಎಂದು ಸಂದರ್ಶನದಲ್ಲಿ ಇಶಾ ಲಂಕೇಶ್&zwnj; ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5v6hbt9mj9bx17nd39gwxv,imgname-vj-1783681467770.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ನಟಿಯಾಗಬೇಕೆಂಬ ಯೋಚನೆ ಬಂದಿದ್ದು ಯಾವಾಗ?&lt;/strong&gt;&lt;/p&gt;&lt;p&gt;ಚಿಕ್ಕ ವಯಸ್ಸಿನಿಂದಲೂ ಅಮ್ಮನ ಜೊತೆಗೆ ಸಿನಿಮಾ ಶೂಟಿಂಗ್&zwnj;ಗೆ ಹೋಗುತ್ತಿದ್ದೆ. ಮುಂದೆ ಅವರಿಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಸಹಾಯ ಕೂಡ ಮಾಡಲು ಶುರು ಮಾಡಿದೆ. ಸಿನಿಮಾ ವಾತಾವರಣದಲ್ಲೇ ಬೆಳೆದ ನನಗೆ ಸಹಜವಾಗಿ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.&lt;/p&gt;&lt;p&gt;&lt;strong&gt;* ನಿಮ್ಮ ನಟನೆಯ ಕನಸು ಮೊದಲು ಹಂಚಿಕೊಂಡಿದ್ದು ಯಾರ ಬಳಿ?&lt;/strong&gt;&lt;/p&gt;&lt;p&gt;ನನ್ನ ತಾಯಿ ಬಳಿಯೇ ಹೇಳಿಕೊಂಡಿದ್ದು. ಆದರೆ, ನಾನು ನಟನಾ ಕ್ಷೇತ್ರದಲ್ಲಿದ್ದರಿಂದ ಅವರಿಗೆ ನಾನು ಹೇಳೋದಕ್ಕಿಂತ ಅವರೇ ತಿಳಿದುಕೊಂಡು ಸಪೋರ್ಟ್&zwnj; ಮಾಡಿದರು. ಆದರೆ, ಯಾವತ್ತೂ ನೀನು ಇದೇ ಮಾಡು, ಸಿನಿಮಾಗೇ ಹೋಗು ಅಂತ ಮಾತ್ರ ಒತ್ತಾಯ ಮಾಡಿಲ್ಲ.&lt;/p&gt;&lt;p&gt;&lt;strong&gt;* ತಾಯಿ ಜೊತೆಗೆ ಕಲಿತ ಸಿನಿಮಾ ವಿಷಯಗಳೇನು?&lt;/strong&gt;&lt;/p&gt;&lt;p&gt;ನಾನು ಅವರ ಜೊತೆಗೆ ಹೆಚ್ಚಾಗಿ ಕತೆ ಓದುವುದು, ಸ್ಕ್ರಿಫ್ಟ್&zwnj;, ಡೈಲಾಗ್&zwnj; ಕೇಳುವುದನ್ನು ಮಾಡುತ್ತಿದ್ದೆ. ಜೊತೆಗೆ ಆರ್ಟ್&zwnj; ಡಿಪಾರ್ಟ್&zwnj;ಮೆಂಟ್&zwnj;ನಲ್ಲಿ ಕೆಲಸ ಮಾಡಿದ್ದು.&lt;/p&gt;&lt;p&gt;&lt;strong&gt;* ನೀವು ನಟನೆಗೆ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೀರಿ?&lt;/strong&gt;&lt;/p&gt;&lt;p&gt;ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್&zwnj; ಲಿಟರೇಚರ್&zwnj; ಆಂಡ್&zwnj; ಪರ್ಫಾರ್ಮೆನ್ಸ್&zwnj; ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್&zwnj; ಇದು. ಅಲ್ಲಿ ಡ್ರಾಮಾಗಳಲ್ಲಿ ನಟಿಸಿದ್ದೇನೆ. ಯುಕೆಯಲ್ಲಿ ಆಕ್ಟಿಂಗ್&zwnj; ಕೋರ್ಸ್&zwnj; ಮಾಡಿಕೊಂಡು ಬಂದ ಮೇಲೆ ಜಾಹೀರಾತುಗಳಿಗೆ ಆಡಿಷನ್&zwnj; ಕೊಡುತ್ತಿದ್ದೆ. ಇದರ ನಡುವೆ ನಟ ಪ್ರಕಾಶ್&zwnj; ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್&zwnj;ನಲ್ಲಿ ಆ್ಯಕ್ಟಿಂಗ್&zwnj;ಗೆ ಪೂರಕವಾಗಿ ಸೈಕೋ ಫಿಜಿಕಲ್&zwnj; ಕೋರ್ಸ್&zwnj; ಮಾಡಿದ್ದೇನೆ.&lt;/p&gt;&lt;p&gt;&lt;strong&gt;* ನಿಮ್ಮ ಮೊದಲ ಚಿತ್ರದ ಕತೆ ಯಾವ ರೀತಿ ಇದೆ?&lt;/strong&gt;&lt;/p&gt;&lt;p&gt;ಈಗಾಗಲೇ ಪೂರ್ತಿ ಕತೆ ಕೇಳಿದ್ದೇನೆ. ತುಂಬಾ ಫ್ರೆಶ್&zwnj; ಆಗಿದೆ. ಲವ್&zwnj; ಮತ್ತು ಅಡ್ವೆಂಚರ್&zwnj; ಸ್ಟೋರಿ. ಸ್ಟ್ರಾಂಗ್&zwnj; ಹಾಗೂ ಇಂಡಿಫೆಂಡೆಂಟ್ ವುಮನ್&zwnj; ಪಾತ್ರ ನನ್ನದು. ಈಗ ಬರುತ್ತಿರುವ ಕತೆಗಳಿಗಿಂತ ಬೇರೆ ರೀತಿ ಇದೆ.&lt;/p&gt;&lt;p&gt;&lt;strong&gt;* ಪ್ರೀತಮ್ ಗುಬ್ಬಿ ಅವರ ನಿರ್ದೇಶನದಲ್ಲೇ ನಿಮ್ಮ ಮೊದಲ ಚಿತ್ರವಾಗಲು ಕಾರಣ?&lt;/strong&gt;&lt;/p&gt;&lt;p&gt;ಅವರು ಬಂದು ಕೇಳಿದ್ದಲ್ಲ, ನಾನೇ ಆಡಿಷನ್&zwnj; ಕೊಟ್ಟಿದ್ದು. ಅವರು ಕತೆ ಹೇಳಿದ ರೀತಿ, &lsquo;ನಿಮಗೆ ಆಸಕ್ತಿ ಇದ್ದರೆ ನೋಡಿ&rsquo; ಎಂದು ಹೇಳಿ ಅವರು ಕೊಟ್ಟ ಫ್ರೀಡಮ್&zwnj;. ಇದೆಲ್ಲವೂ ನನಗೆ ಇಷ್ಟವಾಯಿತು.&lt;/p&gt;&lt;p&gt;&lt;strong&gt;* ನೀವು ಥಿಯೇಟರ್&zwnj;ನಲ್ಲಿ ಇತ್ತೀಚೆಗೆ ನೋಡಿದ ಸಿನಿಮಾಗಳು ಯಾವುವು?&lt;/strong&gt;&lt;/p&gt;&lt;p&gt;ರಕ್ಷಿತ್&zwnj; ಶೆಟ್ಟಿ ಅವರ &lsquo;ಸಪ್ತ ಸಾಗರದಾಚೆ ಎಲ್ಲೋ&rsquo; ಹಾಗೂ ರಾಜ್&zwnj; ಬಿ ಶೆಟ್ಟಿ ಅವರ &lsquo;ಸು ಫ್ರಮ್&zwnj; ಸೋ&rsquo; ಸಿನಿಮಾಗಳನ್ನು ನೋಡಿದ್ದೇನೆ. ಈ ಎರಡೂ ನನ್ನ ಮೆಚ್ಚಿನ ಸಿನಿಮಾಗಳೇ.&lt;/p&gt;&lt;p&gt;&lt;strong&gt;* ನಿಮ್ಮ ತಾಯಿ ಅವರ ಸಿನಿಮಾಗಳನ್ನು ನೋಡಿದ್ದೀರಾ?&lt;/strong&gt;&lt;/p&gt;&lt;p&gt;ಎಲ್ಲಾ ಸಿನಿಮಾಗಳನ್ನು ಅಮ್ಮನಿಗೆ ಬೋರ್&zwnj; ಆಗುಷ್ಟು ಸಲ ನಾನು ನೋಡಿದ್ದೇನೆ. ನನಗೆ ಈ ಪೈಕಿ ಹೆಚ್ಚು ಇಷ್ಟ ಆಗಿದ್ದು &lsquo;ಅವ್ವ&rsquo; ಹಾಗೂ &lsquo;ದೇವೀರಿ&rsquo; ಚಿತ್ರಗಳು.&lt;/p&gt;&lt;p&gt;&lt;strong&gt;* ಈಗ ಗೌರಿ ಲಂಕೇಶ್&zwnj; ಅವರು ಇದ್ದಿದ್ದರೆ?&lt;/strong&gt;&lt;/p&gt;&lt;p&gt;ತುಂಬಾ ಖುಷಿ ಆಗುತ್ತಿದ್ದರು. ಅವರು ತೀರಿಕೊಂಡಾಗ ನನಗೆ 13 ವರ್ಷ. ನಾನು ಆರ್ಟ್&zwnj; ಫೀಲ್ಡ್&zwnj;ಗೆ ಹೋಗುತ್ತೇನೆ ಅಂತ ಅವರಿಗೆ ಗೊತ್ತಿತ್ತು.&lt;/p&gt;&lt;p&gt;&lt;strong&gt;* ನೀವು ಸಾಹಿತ್ಯದ ವಿದ್ಯಾರ್ಥಿ ಅಲ್ವ, ಯಾರ ಸಾಹಿತ್ಯ ನಿಮಗೆ ಹೆಚ್ಚು ಇಷ್ಟ?&lt;/strong&gt;&lt;/p&gt;&lt;p&gt;ನಮ್ಮ ತಾತ ಲಂಕೇಶ್&zwnj; ಅವರ &lsquo;ಕಲ್ಲು ಕರಗುವ ಸಮಯ&rsquo; ನನಗೆ ತುಂಬಾ ಇಷ್ಟ. ಮೊದಲಿನಿಂದಲೂ ಕುವೆಂಪು ಅವರ ಸಾಹಿತ್ಯ ಓದುತ್ತಿದ್ದೆ. ಆ ನಂತರ ಅರುಂಧತಿ ರಾಯ್&zwnj; ಹಾಗೂ ಅಮಿತ್&zwnj; ಚೌಧರಿ ಬರಹಗಳು ಇಷ್ಟ ಆಗುತ್ತಾ ಬಂದವು.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/kavitha-lankesh-daughter-esha-lankesh-exclusive-interview-gvd/articleshow-f1gnyf2"/>
        </item>
        <item>
            <title><![CDATA[Special Interview: ಮದರ್‌ ಪ್ರಾಮಿಸ್‌ ಮರುಶೋಧಿಸಿಕೊಳ್ಳುವ ಯತ್ನ: ಡಾಲಿ ಧನಂಜಯ]]></title>
            <link>https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm</link>
            <guid isPermaLink="true">https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm</guid>
            <pubDate>Fri, 10 Jul 2026 16:20:05 +0530</pubDate>
            <description><![CDATA[&lt;p&gt;ಡಾಲಿ ಧನಂಜಯ ನಟಿಸಿ, ನಿರ್ಮಿಸಿರುವ, ಪೂರ್ಣಚಂದ್ರ ಮೈಸೂರು ನಿರ್ದೇಶನದ &lsquo;ಮದರ್ ಪ್ರಾಮಿಸ್&rsquo; ಸಿನಿಮಾ ಇಂದು ಬಿಡುಗಡೆ. ಈ ನಿಮಿತ್ತ ಅಂತರಂಗದ ಮಾತು ಆಡಿದ ನಟ. ತಮ್ಮನ್ನು ತಾವು ಮರುಶೋಧಿಸಿಕೊಳ್ಳುವ ಯತ್ನವೇ &lsquo;ಮದರ್&zwnj; ಪ್ರಾಮಿಸ್&rsquo; ಎಂದ ಡಾಲಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5tafe256xb6cnq2j6q3005,imgname-jvj-1783680548290.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;p&gt;&lt;strong&gt;* ಮದರ್ ಪ್ರಾಮಿಸ್ ಚಿತ್ರದ ಸತ್ವ ಏನು? ಆತ್ಮ ಏನು?&lt;/strong&gt;&lt;/p&gt;&lt;p&gt;ನಗುವೇ ಈ ಚಿತ್ರದ ಆತ್ಮ. ನಿರ್ದೇಶಕ ಪೂರ್ಣ ಬೆಂಗಳೂರಿನಲ್ಲಿ ಅವರು ನೋಡಿರುವ ಪಾತ್ರಗಳನ್ನು ಇಟ್ಟುಕೊಂಡು ಒಂದು ವಿಡಂಬನಾತ್ಮಕವಾಗಿ ಕತೆ ಹೇಳಿದ್ದಾರೆ. ಸಿನಿಮಾ ಪೂರ್ತಿ ನಗುವಿದೆ. ಹೊಸತನವಿದೆ. ಇದೊಂದು ಗ್ಯಾಂಗ್&zwnj;ಸ್ಟರ್&zwnj; ಕಾಮಿಡಿ. ಆದರೆ ಕ್ಲೈಮ್ಯಾಕ್ಸ್&zwnj;ನಲ್ಲಿ ಎಲ್ಲಾ ವಿಚಾರವೂ ಅನಾವರಣಗೊಂಡಾಗ, ಆ ಗ್ಯಾಂಗ್&zwnj;ಸ್ಟರ್&zwnj;ಗಳೆಲ್ಲಾ ಮಕ್ಕಳ ಥರ ಅನ್ನಿಸುತ್ತಾರೆ. ನಗುವೇ ತುಂಬಿರುವ ಒಂದು ಕತೆಯ ಅಂತ್ಯದಲ್ಲಿ ಸೊಗಸಾದ ಹೊ&zwj;ಳಹು ಇದೆ. ಅದು ಈ ಸಿನಿಮಾದ ಬೆರಗು.&lt;/p&gt;&lt;p&gt;&lt;strong&gt;* ನಿಮ್ಮ ಪಾತ್ರದ ವೈಶಿಷ್ಟ್ಯವೇನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ನನ್ನ ಪಾತ್ರ ಒಂದು ಟ್ರ್ಯಾಕ್&zwnj; ಅಷ್ಟೇ. ಈ ಸಿನಿಮಾ ಬೇರೆಲ್ಲಾ ಪಾತ್ರಗಳ ಕತೆ. ಹಾಗೆ ನೋಡಿದರೆ ಅವರೆಲ್ಲರೂ ನಗಿಸಿದರೆ ನನ್ನದೊಂದು ಗಂಭೀರ ಪಾತ್ರ. ಗಂಭೀರವಾಗಿರುತ್ತೇನೆ. ಅಮ್ಮ ಕೊಡಿಸಿ ಸ್ಪೆಂಡ್ಲರ್&zwnj; ಬೈಕಿನ ಸುತ್ತಾ ಈ ಕತೆ ಸಾಗುತ್ತದೆ. ಈ ಪಾತ್ರ ನೀನು ಮಾಡಿದರೆ ಮಾತ್ರ, ನಾನು ಸಿನಿಮಾ ಮಾಡುತ್ತೇನೆ ಅಂತ ಪೂರ್ಣ ಹೇಳಿದ್ದ. ಅದಕ್ಕಾಗಿ ಮತ್ತು ಆ ಪಾತ್ರಕ್ಕಾಗಿ ಒಪ್ಪಿದೆ. ಆ ಪಾತ್ರದಲ್ಲೊಂದು ಕದಡುವ ಮೌನವಿದೆ.&lt;/p&gt;&lt;p&gt;&lt;strong&gt;* ಈ ಸಿನಿಮಾ ನಿರ್ಮಾಣ ಯಾಕೆ ಮಾಡಿದಿರಿ?&lt;/strong&gt;&lt;/p&gt;&lt;p&gt;ನಾವು ನಿರಂತರವಾಗಿ ಸಿನಿಮಾ ಮಾಡುತ್ತಿರಬೇಕು. ಸೋಲು, ಗೆಲುವು ಬೇರೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕವಾದ ಪ್ರಯತ್ನ ಇರಬೇಕು. ಪ್ರಾಮಾಣಿಕವಾಗಿ ಕತೆ ಹೇಳಬೇಕು. ಈ ಪ್ರಾಮಾಣಿಕತೆ ಸ್ಕ್ರಿಪ್ಟ್&zwnj;ನಲ್ಲಿ ಕಾಣಬೇಕು. ನನಗೆ ಈ ಸಿನಿಮಾದ ಸ್ಕ್ರಿಪ್ಟ್&zwnj; ಓದುವಾಗಲೇ ಮಜಾ ಬಂದಿತ್ತು. ಯಾವ ಸ್ಕ್ರಿಪ್ಟ್&zwnj;ನಲ್ಲಿಯೇ ಮಜಾ ಕೊಡುತ್ತದೆಯೋ ಆ ಸಿನಿಮಾ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ಈ ಸಿನಿಮಾ ನಂಬಿಕೆ ಉಂಟು ಮಾಡಿತ್ತು.&lt;/p&gt;&lt;p&gt;&lt;strong&gt;* ಪ್ರಮೋಷನ್&zwnj; ವಿಚಾರದಲ್ಲಿಯೂ ಬೇರೆ ದಾರಿ ಹಿಡಿದಿದ್ದೀರಿ. ಯಾಕೆ?&lt;/strong&gt;&lt;/p&gt;&lt;p&gt;ಯಾವುದೂ ಕೆಲಸ ಮಾಡದೇ ಇದ್ದಾಗ ನಮ್ಮನ್ನು ನಾವು ಮರುಶೋಧಿಸಿಕೊಳ್ಳಬೇಕು. ಹೊಸ ದಾರಿ ಹಿಡಿಯಬೇಕು. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೀಗೆ ಎಲ್ಲರೂ ಅವರನ್ನು ಅವರು ಮರುಶೋಧಿಸಿಕೊಳ್ಳುತ್ತಿರಬೇಕು. ಈ ಸಿನಿಮಾ ಒಂದು ಭಿನ್ನ ಪ್ರಯತ್ನ. ಎಂಟರ್&zwnj;ಟೇನರ್&zwnj;. ಇದನ್ನು ಪ್ರೇಕ್ಷಕರಿಗೆ ತಲುಪಿಸುವುದಕ್ಕೂ ಭಿನ್ನ ದಾರಿ ಹಿಡಿಯುವ ಆಲೋಚನೆ ಮಾಡಿದೆವು. ಸೋಷಿಯಲ್&zwnj; ಮೀಡಿಯಾದಲ್ಲಿ ಎಂಟರ್&zwnj;ಟೇನಿಂಗ್&zwnj; ಕಂಟೆಂಟ್&zwnj; ಮಾಡಿದೆವು. ಅದು ಅನಿವಾರ್ಯವಾಗಿತ್ತು. ಯಾಕೆಂದರೆ ನಾವು ಸಿನಿಮಾ ಕುರಿತು ಜಾಸ್ತಿ ಮಾತನಾಡಿದಷ್ಟೂ ವಿಚಾರ ತೆಳುವಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಬುದ್ಧಿವಂತ. ನಾವು ಅಪ್ರಾಮಾಣಿಕವಾಗಿ ಪ್ರಚಾರ ಮಾಡಿದಷ್ಟೂ ಅವನು ಹಿಂದೆ ಸರಿಯುತ್ತಾನೆ. ಹಾಗಾಗಬಾರದು ಎಂಬ ಕಾರಣಕ್ಕೆ ಸೋಮವಾರದಿಂದಲೇ ನೇರವಾಗಿ ಪ್ರೇಕ್ಷಕರಿಗೆ ತೋರಿಸಿದ್ದೇವೆ. ಮಂಗಳೂರಲ್ಲಿ ಶುರುವಾಗಿದ್ದು, ಶಿವಮೊಗ್ಗ, ಮೈಸೂರು, ಬೆಂಗಳೂರು ಹೀಗೆ ಬೇರೆ ಬೇರೆ ಕಡೆಯ ಪ್ರೇಕ್ಷಕರಿಗೆ ತಲುಪಿ ಎಲ್ಲಾ ಕಡೆಯಿಂದ ಮೆಚ್ಚುಗೆ ಬರುತ್ತಿದೆ. ಸಂತೋಷ ಮತ್ತು ಕೃತಜ್ಞತೆ.&lt;/p&gt;&lt;p&gt;&lt;strong&gt;* ನೇರ ಪ್ರೇಕ್ಷಕರಿಗೆ ಸಿನಿಮಾ ತೋರಿಸುವ ನಿರ್ಧಾರ ತೆಗೆದುಕೊಂಡ ಕಾರಣ?&lt;/strong&gt;&lt;/p&gt;&lt;p&gt;ವಿಶ್ವಾಸ ಇದ್ದಾಗ ಆ ನಿರ್ಧಾರ ತಗೋಬಹುದು. ಯಾಕೆಂದರೆ ಒಬ್ಬ ಪ್ರೇಕ್ಷಕ ಇನ್ನೊಬ್ಬ ಪ್ರೇಕ್ಷನಿಗೆ ಹೇಳಿದರೆ ಮಾತ್ರ ಆತ ನಂಬುತ್ತಾನೆ. ಬೇರೆ ಯಾರು ಹೇಳಿದರೂ ನಂಬುತ್ತಿಲ್ಲ. ಅಂಥಾ ಸ್ಥಿತಿಗೆ ಚಿತ್ರರಂಗ ಬಂದಿದೆ. ಹಾಗಾಗಿ ನೇರ ಪ್ರೇಕ್ಷಕರಿಗೆ ತೋರಿಸಿದೆವು. ಮಂಗಳೂರಿನಲ್ಲಿ 400+ ಸೀಟ್ ಇದ್ದ ಚಿತ್ರಮಂದಿರಲ್ಲಿ ಪ್ರದರ್ಶನವಿತ್ತು. ಜನ ಬರುತ್ತಾರಾ ಎಂಬ ಭಯವಿತ್ತು. ಜನ ಬಂದರು. ತುಂಬಾ ಒಳ್ಳೆಯ ರೀತಿಯಲ್ಲಿ ಮೆಚ್ಚಿಕೊಂಡರು. ಅವರೇ ಬೇರೆ ಬೇರೆ ಭಾಗದ ಪ್ರೇಕ್ಷಕರಿಗೆ ತಿಳಿಸಿದರು. ಹಾಗಾಗಿಯೇ ನಮ್ಮ 21+ ಪ್ರೀಮಿಯರ್ ಶೋಗಳು ಬಹುತೇಕ ಫುಲ್&zwnj; ಆಗಿದ್ದು.&lt;/p&gt;&lt;p&gt;&lt;strong&gt;* ನಟನೆ, ನಿರ್ಮಾಣ ಎರಡೂ ಪಾತ್ರ ನಿಭಾಯಿಸುವುದು ಎಷ್ಟು ಕಷ್ಟ, ಎಷ್ಟು ಸುಲಭ?&lt;/strong&gt;&lt;/p&gt;&lt;p&gt;ಗೀತ ಸಾಹಿತಿ ಕೂಡ. 3 ಹಾಡು ಬರೆದಿದ್ದೇನೆ. ಸಿನಿಮಾ ಮಾಡುವುದಕ್ಕೆಂದೇ ಇಲ್ಲಿ ಬಂದವನು. ನಟನೆ, ನಿರ್ಮಾಣ ನಿಭಾಯಿಸುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಶ್ರಮ ಹಾಕುತ್ತೇನೆ. ಇನ್ನು ಹಾಡು ಬರೆಯುವುದು ನನ್ನ ಆತ್ಮತೃಪ್ತಿಗೆ, ನನ್ನ ಖುಷಿಗೆ.&lt;/p&gt;&lt;p&gt;&lt;strong&gt;* ಈ ಸಿನಿಮಾದ ನಿಮ್ಮ ಕಲಿಕೆ ಏನು?&lt;/strong&gt;&lt;/p&gt;&lt;p&gt;ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕರು ಜೆನ್&zwnj; ಜೀಗಳು. ಅವರ ಆಲೋಚನಾ ವಿಧಾನ, ಕೆಲಸದ ವೇಗ ಎಲ್ಲವೂ ತಿಳಿದು ಬೆರಗಾಗಿದ್ದೇನೆ. ಹೊಸ ನೀರಿನ ಜೊತೆ ಹರಿದು ನಾನೂ ಹೊಸತಾಗುವ ಪ್ರಯತ್ನವಿದು.&lt;/p&gt;&lt;p&gt;&lt;strong&gt;* ನಿಮ್ಮ ಹಾಡು ಕೇಳಿದರೆ ಬರ್ತಾ ಬರ್ತಾ ಹೆಚ್ಚು ಫಿಲಾಸಫಿಕಲ್ ಆಗುತ್ತಿದ್ದೀರಿ..&lt;/strong&gt;&lt;/p&gt;&lt;p&gt;ವಯಸ್ಸಾಗುತ್ತಾ ಹಾಗಾಗುವುದು ಸಹಜವಲ್ಲವೇ. ನಮ್ಮದೂ ಒಂದು ಜವಾಬ್ದಾರಿ ಇರುತ್ತದೆಯಲ್ಲವೇ. ಏನೋ ಹೇಳಬೇಕು ಅನ್ನಿಸುತ್ತಿರುತ್ತದೆ. ಅದನ್ನು ಹಾಡಿನ ಮೂಲಕ ಹೇಳುತ್ತೇನೆ. ಯಾರಿಗಾದರೂ ತಲುಪಿದರೆ ಅಷ್ಟರ ಮಟ್ಟಿಗೆ ಸಾರ್ಥಕ ಭಾವ. ಈ ಸಿನಿಮಾದ ಕ್ಲ್ಯೈಮ್ಯಾಕ್ಸ್&zwnj; ಕೂಡ ಈ ಕಾಲಕ್ಕೆ ಬೇಕಾದ ಒಂದು ಹೊಳಹು.&lt;/p&gt;&lt;p&gt;&lt;strong&gt;* ಬರವಣಿಗೆ, ನಿರ್ದೇಶನ ಆಸೆ ಇದೆಯೇ?&lt;/strong&gt;&lt;/p&gt;&lt;p&gt;ಖಂಡಿತಾ ಇದೆ. ಆದರೆ ಆ ಜವಾಬ್ದಾರಿ ದೊಡ್ಡದು. ಅದಕ್ಕಾಗಿ ತಯಾರಾಗಬೇಕು.&lt;/p&gt;&lt;p&gt;&lt;strong&gt;* ಮುಂದಿನ ದಾರಿ?&lt;/strong&gt;&lt;/p&gt;&lt;p&gt;ನಟನೆ, ನಿರ್ಮಾಣದ ಅಣ್ಣ ಫ್ರಂ ಮೆಕ್ಸಿಕೋ ಮತ್ತು ಹೆಗ್ಗಣ ಮುದ್ದು ಸಿದ್ಧವಿದೆ. ಬಿಡುಗಡೆಗೆ ಸಿದ್ಧವಾಗಬೇಕು. 666 ಡ್ರೀಮ್ ಥಿಯೇಟರ್&zwnj; ಇನ್ನೂ 20 ದಿನಗಳ ಶೂಟಿಂಗ್&zwnj; ಇದೆ. ಹಲಗಲಿ ಶೇ.50 ಚಿತ್ರೀಕರಣವಾಗಿದೆ. ಜಿಂಗೋ ಚಿತ್ರೀಕರಣ ಶುರುವಾಗಬೇಕಿದೆ. ದಾರಿ ಇನ್ನೂ ದೂರವಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/mother-promise-kannada-movie-daali-dhananjaya-special-interview-gvd/articleshow-f38u0gm"/>
        </item>
        <item>
            <title><![CDATA[Nabha Natesh: 'ವಜ್ರಕಾಯ' ಬಳಿಕ ಕನ್ನಡಕ್ಕೆ ಯಾಕೆ ಬರಲಿಲ್ಲ? ನಟಿ ನಭಾ ಕೊಟ್ಟ ಉತ್ತರ ಏನು?]]></title>
            <link>https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</link>
            <guid isPermaLink="true">https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7</guid>
            <pubDate>Mon, 29 Jun 2026 16:46:02 +0530</pubDate>
            <description><![CDATA[&lt;p&gt;Vajrakaya ಖ್ಯಾತಿಯ ನಭಾ ನಟೇಶ್ ಕೋವಿಡ್ ಬಳಿಕದ ಜೀವನ, ಕನ್ನಡ ಸಿನಿಮಾಗಳಿಗೆ ಕಮ್&zwnj;ಬ್ಯಾಕ್, ನಾಗಬಂಧಂ, ಸ್ವಯಂಭೂ ಹಾಗೂ ಶೃಂಗೇರಿಯೊಂದಿಗಿನ ನಂಟಿನ ಬಗ್ಗೆ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9hahqwkht22bcw0q67ddpn,imgname-xgx-1782731589372.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;* ಕೋವಿಡ್&zwnj; ನಂತರ ಸುದೀರ್ಘ ವಿರಾಮ ತಗೊಂಡ್ರಿ. ಏನೆಲ್ಲ ರಿಯಲೈಸೇಶನ್&zwnj; ಆಯ್ತು?&lt;/strong&gt;&lt;/p&gt;&lt;p&gt;ಈ ಬ್ರೇಕ್&zwnj; ನನಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಸಾಕಷ್ಟು ಸಮಯ ಕೊಟ್ಟಿತು. ನನ್ನ ಬದುಕಿನ ಉದ್ದೇಶ ಏನು, ನಾನು ಯಾಕಾಗಿ ಹೀಗೆಲ್ಲ ಒದ್ದಾಡುತ್ತಿದ್ದೇನೆ, ಇದಕ್ಕೆಲ್ಲ ಅರ್ಥ ಇದೆಯಾ ಅಂತೆಲ್ಲ ಯೋಚಿಸಿದೆ. ಕೆಲವಕ್ಕೆ ಉತ್ತರ ಸಿಕ್ಕಿತು, ಮತ್ತೆ ಕೆಲವಕ್ಕೆ ಸಿಗಲಿಲ್ಲ. ಒಂದಂತೂ ಅರ್ಥ ಆಯ್ತು. ನನಗೆ ಖುಷಿ ಸಿಗುವುದು ಜನರಿಗೆ ಮನರಂಜನೆ ನೀಡುವುದರಲ್ಲಿ. ಅಭಿನಯವೇ ನನಗೆ ಒಲಿದ ಕಲೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಂತ ಅಂದುಕೊಂಡೆ.&lt;/p&gt;&lt;p&gt;&lt;strong&gt;* ಆಮೇಲೆ ನೀವು ಆಯ್ಕೆ ಮಾಡಿಕೊಂಡಿದ್ದು ಅಂಥಾ ಸಮರ್ಥ ಸಿನಿಮಾಗಳ?&lt;/strong&gt;&lt;/p&gt;&lt;p&gt;ನಾಗಬಂಧಂ, ಸ್ವಯಂಭೂ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ನನ್ನ ಪಾತ್ರಕ್ಕಿರುವ ಸ್ಕೋಪ್&zwnj; ನೋಡಿ. ನಾಗಬಂಧಂನಲ್ಲಿ ಪಾರ್ವತಿ ಅನ್ನುವ ನನ್ನ ಪಾತ್ರಕ್ಕೆ ಸಾಕಷ್ಟು ಲೇಯರ್&zwnj;ಗಳಿವೆ. ಸ್ವಯಂಭೂ ಸಿನಿಮಾದಲ್ಲೂ ಉತ್ತಮ ಬೆಳವಣಿಗೆ ಇರುವ ಪಾತ್ರ.&lt;/p&gt;&lt;p&gt;&lt;strong&gt;* ಎರಡೂ ಪೌರಾಣಿಕ ಚಿತ್ರಗಳು, ಯಾಕೆ?&lt;/strong&gt;&lt;/p&gt;&lt;p&gt;ಈಗಿನ ಟ್ರೆಂಡ್&zwnj; ಹಾಗಿದೆ. ಈಗ ಜನ ಇಷ್ಟಪಡುತ್ತಿರುವುದು ಪೌರಾಣಿಕ, ಐತಿಹಾಸಿಕ ಕಥೆಗಳನ್ನು. ಅಂಥಾ ಪಾತ್ರ ಸಿಕ್ಕಾಗ ಒಪ್ಪಿಕೊಂಡೆ. ಮೊದಲ ಸಿನಿಮಾ ವಜ್ರಕಾಯದಲ್ಲಿ ನನ್ನ ಪಾತ್ರ ಪಟಾಕಾ ಪಾರ್ವತಿ. ನಾಗಬಂಧಂನಲ್ಲೂ ನನ್ನ ಪಾತ್ರ ಪಾರ್ವತಿ. ಆ ಪಾತ್ರಕ್ಕಿಂತ ಕಂಪ್ಲೀಟ್&zwnj; ವಿರುದ್ಧ ಈ ಪಾರ್ವತಿ. ಆದರೆ ನನ್ನ ಸಿನಿಮಾ ಜರ್ನಿಯಲ್ಲಿ ಆ ಪಾರ್ವತಿಯಿಂದ ಈ ಪಾರ್ವತಿಗೆ ಒಂದು ಫುಲ್&zwnj; ಸರ್ಕಲ್&zwnj; ಆಗಿದೆ.&lt;/p&gt;&lt;p&gt;&lt;strong&gt;* ವಜ್ರಕಾಯ ಸಿನಿಮಾದ ಯಶಸ್ಸಿನ ನಂತರ ಕನ್ನಡ ಇಂಡಸ್ಟ್ರಿ ಕಡೆ ತಿರುಗೂ ನೋಡ್ಲಿಲ್ಲ?&lt;/strong&gt;&lt;/p&gt;&lt;p&gt;ಹಾಗೆಲ್ಲ ಏನಿಲ್ಲ. ಕಲಾವಿದರಿಗೆ ಭಾಷೆಯ ಗಡಿ ಇರೋದಿಲ್ಲ. ನನಗೆ ತೃಪ್ತಿ ನೀಡುವಂಥಾ ಸಿನಿಮಾಗಳು ಸಿಕ್ಕಾಗ ಅದನ್ನು ಭಾಷೆಯ ವಿಚಾರಕ್ಕೆ ತಿರಸ್ಕರಿಸಲಾಗುವುದಿಲ್ಲ.&lt;/p&gt;&lt;p&gt;&lt;strong&gt;* ಪ್ರತಿಯೊಬ್ಬ ನಟಿಯೂ ಇದೇ ಮಾತು ಹೇಳ್ತಾರೆ, ಹೀಗಾದರೆ ಕನ್ನಡದಂಥಾ ಇಂಡಸ್ಟ್ರಿಗೆ ನಾಯಕಿಯರು ಸಿಗೋದು ಹೇಗೆ?&lt;/strong&gt;&lt;/p&gt;&lt;p&gt;ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ದಿಗ್ಗಜರೇ ಇರೋದು. ಇಲ್ಲಿ ಯಾವುದಕ್ಕೂ ಕೊರತೆ ಆಗೋದಿಲ್ಲ. ನನ್ನ ಮೊದಲ ಸಿನಿಮಾ &lsquo;ವಜ್ರಕಾಯ&rsquo;ಕ್ಕೆ ಅತ್ಯುತ್ತಮ ಸ್ವಾಗತ ಸಿಕ್ಕಿತು. ಆ ಸಿನಿಮಾದ ನನ್ನ ಪಾತ್ರ ಪಟಾಕಾ ಪಾರ್ವತಿ ಮೂಲಕ ಜನ ಇನ್ನೂ ನನ್ನ ಗುರುತಿಸುತ್ತಾರೆ. ನಂಗೆ ಅತಿಯಾಸೆ. ಬಂದರೆ ಇನ್ನೊಂದು ಬ್ಯಾಂಗರ್&zwnj; ಜೊತೆಗೆ ಬರಬೇಕು. ಕನ್ನಡಿಗರಿಗೆ ಅರೆಬೆಂದ ಊಟ ಕೊಡೋದಕ್ಕೆ ಇಷ್ಟ ಇಲ್ಲ. ಕೊಟ್ರೆ ಮುದ್ದೆ, ನಾಟಿ ಕೋಳಿ ಸಾಂಬಾರ್&zwnj; ಅನ್ನೇ ಬಡಿಸ್ಬೇಕು.&lt;/p&gt;&lt;p&gt;&lt;strong&gt;* ಶೃಂಗೇರಿ ನಿಮ್ಮ ಊರು. ಅಲ್ಲಿಗೆ ಭೇಟಿ?&lt;/strong&gt;&lt;/p&gt;&lt;p&gt;ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿರುವುದು ನೋಡಿ ತುಂಬ ಜನ ನಾನು ಆಂಧ್ರದಲ್ಲಿ ಸೆಟಲ್&zwnj; ಆಗಿದ್ದೀನಿ ಅಂದ್ಕೊಂಡಿದ್ದಾರೆ. ಆದರೆ ಬೆಂಗಳೂರು ಮತ್ತು ಶೃಂಗೇರಿಗಳಲ್ಲೇ ನನ್ನ ವಾಸ. ಖಾಸಗಿತನಕ್ಕೆ ಹೆಚ್ಚು ಒತ್ತು ಕೊಡುವ ಕಾರಣ ಹೋಗಿ ಬಂದಿದ್ದೆಲ್ಲ ಸೋಷಿಯಲ್&zwnj; ಮೀಡಿಯಾದಲ್ಲಿ ಹಾಕಿಕೊಳ್ಳೋದಿಲ್ಲ. ಕಡ್ಲೆ ಕಾಯಿ ಪರಿಷೆಯಲ್ಲಿ ಮಾಸ್ಕ್&zwnj; ಹಾಕ್ಕೊಂಡು ಓಡಾಡ್ತೀನಿ, ಬೆಂಗಳೂರಲ್ಲಿ ಯಾವ ಉತ್ಸವ ಇದ್ದರೂ ನೀವು ಸೂಕ್ಷ್ಮವಾಗಿ ಹುಡುಕಿದ್ರೆ ನಾನು ಕಂಡೇ ಕಾಣ್ತೀನಿ. ಆದರೆ ಕಣ್ಣು ನೋಡಿ ಪತ್ತೆ ಹಚ್ಚಬೇಕಷ್ಟೇ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/vajrakaya-actress-nabha-natesh-interview-nagabandham-movie-gvd/articleshow-gg7acs7"/>
        </item>
        <item>
            <title><![CDATA[Exclusive Interview: ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು: ಸತೀಶ್ ನೀನಾಸಂ ಸಂದರ್ಶನ]]></title>
            <link>https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q</link>
            <guid isPermaLink="true">https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q</guid>
            <pubDate>Thu, 06 Aug 2026 23:55:33 +0530</pubDate>
            <description><![CDATA[&lt;p&gt;ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzc1qy2adzwx72y9nasva05h,imgname-vh-1786037139530.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜ್&lt;/strong&gt;&lt;/h2&gt;&lt;p&gt;&lt;strong&gt;* ಅಯೋಗ್ಯ 2 ಟ್ರೇಲರ್ ಬಿಡುಗಡೆಯಾಗಿಲ್ಲ, ಏನು ಕಾರಣ?&lt;/strong&gt;&lt;/p&gt;&lt;p&gt;ಅದಕ್ಕೆ ಎರಡು ಕಾರಣವಿದೆ. ಮೊದಲನೆಯದಾಗಿ, ಹಾಡುಗಳಿಂದಲೇ ಜನರನ್ನು ಸೆಳೆಯಬೇಕು ಎಂಬ ಯೋಜನೆ ಮತ್ತು ಯೋಚನೆ ತಂಡಕ್ಕಿತ್ತು. ಮತ್ತೊಂದೆಡೆ, ಈಗಾಗಲೇ ಮೊದಲ ಭಾಗ ಸೂಪರ್ ಹಿಟ್ ಆಗಿರುವುದರಿಂದ, ಪ್ರೇಕ್ಷಕರಿಗೆ ಅದೇ ಟ್ರೇಲರ್ ಇದ್ದಂತೆ. ಮೊದಲ ಭಾಗದಂತೆ, ಎರಡನೇ ಭಾಗದ ಹಾಡುಗಳೂ ಜನರ ಮನ ಗೆದ್ದಿವೆ. ಚಿತ್ರದಲ್ಲಿ ಸಾಕಷ್ಟು ಅಚ್ಚರಿಯ ಅಂಶಗಳಿವೆ. ಪ್ರತಿಯೊಂದನ್ನೂ ಟ್ರೇಲರ್&zwnj;ನಲ್ಲೇ ತೋರಿಸುವ ಬದಲು, ನೇರವಾಗಿ ಚಿತ್ರಮಂದಿರಗಳಲ್ಲೇ ಪ್ರೇಕ್ಷಕರಿಗೆ ಆ ಅಚ್ಚರಿ ದಾಟಿಸೋಣ ಎಂದು ಇಡೀ ತಂಡ ತೀರ್ಮಾನಿಸಿದೆ. ಈ ಸಿನಿಮಾದ ವಿಶೇಷತೆ ಏನೆಂದರೆ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರು ನಗದೇ ಹೊರಗೆ ಹೋಗುವುದಿಲ್ಲ.&lt;/p&gt;&lt;p&gt;&lt;strong&gt;* ಚಿತ್ರರಂಗ ಕಷ್ಟದಲ್ಲಿರುವ ಹೊತ್ತು, ನೀವೆಷ್ಟು ಸೇಫು?&lt;/strong&gt;&lt;/p&gt;&lt;p&gt;ಉತ್ತಮ ಬೆಲೆಗೆ ಬಿಸಿನೆಸ್ ಆಗಿರುವುದೇ ಈ ಚಿತ್ರದ ಜನಪ್ರಿಯತೆಗೆ ಸಾಕ್ಷಿ. ಆಡಿಯೋ ರೈಟ್ಸ್ ಒಳ್ಳೆ ಬೆಲೆಗೆ ಸೇಲ್ ಆಯ್ತು. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದೆ. ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕಿಗೂ ಭಾರಿ ಡಿಮ್ಯಾಂಡ್ ಇದೆ. ನನ್ನ ಸಿನಿಮಾಗಳಲ್ಲಿಯೇ ಅತ್ಯುತ್ತಮ ಬಿಸಿನೆಸ್ ಈ ಸಿನಿಮಾಗೆ ಆಗಿದೆ.&lt;/p&gt;&lt;p&gt;&lt;strong&gt;* ಅಯೋಗ್ಯ 2 ವಿಶೇಷತೆ ಏನು?&lt;/strong&gt;&lt;/p&gt;&lt;p&gt;ಒಂದು ಯಶಸ್ವಿ ಸಿನಿಮಾದ ಮುಂದುವರಿದ ಭಾಗ ಅನ್ನೋದೇ ಮೊದಲ ವಿಶೇಷತೆ. ಮೊದಲ ಭಾಗದಲ್ಲಿ ಕೇವಲ ಒಂದು ಮತದಿಂದ ನಾಯಕ ಹೇಗೆ ಗೆದ್ದ ಎಂಬಲ್ಲಿಗೆ ಕತೆ ಮುಕ್ತಾಯಗೊಳಿಸಿದ್ದೆವು. ಈಗ ಈ ಎರಡನೇ ಭಾಗದಲ್ಲಿ ನಾಯಕ ಗೆದ್ದ ನಂತರದ ಆಟಗಳು, ವಿರೋಧಿ ಬಣ ನೀಡುವ ಕಾಟಗಳು ಮತ್ತು ಪಂಚಾಯ್ತಿಯಲ್ಲಿ ಅಯೋಗ್ಯನ ಹಾವಳಿ ಹೇಗೆಲ್ಲ ಇರುತ್ತದೆ ಎಂಬುದನ್ನು ನೋಡಬಹುದು. ಉತ್ತಮ ಕತೆಯ ಜೊತೆ ಆಕರ್ಷಕ ಮನರಂಜನೆ ಕೊಟ್ಟಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್. ನನ್ನ ಹಾಗೂ ರಚಿತಾ ರಾಮ್ ಕಾಂಬಿನೇಷನ್ ಪ್ರೇಕ್ಷಕರಿಗೆ ಖುಷಿಕೊಡಲಿದೆ. ಪ್ರತಿಯೊಂದು ಪಾತ್ರಕ್ಕೂ ಸೂಕ್ತ ತೂಕವಿದೆ. ಗುಣಮಟ್ಟದಲ್ಲಿ ಈ ಸಲ ಮತ್ತಷ್ಟು ಜೋರಾಗಿ ಬರುತ್ತಿದ್ದೇವೆ.&lt;/p&gt;&lt;p&gt;&lt;strong&gt;* ಮೊದಲ ಭಾಗಕ್ಕೂ ಈ ಭಾಗಕ್ಕೂ ಏನಾದರೂ ವ್ಯತ್ಯಾಸವಿದೆಯೇ?&lt;/strong&gt;&lt;/p&gt;&lt;p&gt;ಮೊದಲ ಭಾಗದ ನಾಯಕನಿಗೂ ಈ ಹೊಸ ಅಯೋಗ್ಯನಿಗೂ ಹಾವ-ಭಾವದಿಂದ ಹಿಡಿದು, ಕಾಸ್ಟ್ಯೂಮ್, ಡೈಲಾಗ್ ಡೆಲಿವರಿಯವರೆಗೆ ಸಾಕಷ್ಟು ವ್ಯತ್ಯಾಸವಿದೆ. ಮುಖ್ಯವಾಗಿ ಆತನ ಆಟಿಟ್ಯೂಡ್ ಮತ್ತು ಮೆಚ್ಯೂರಿಟಿ ಲೆವೆಲ್&zwnj;ನಲ್ಲಿ ದೊಡ್ಡ ಬದಲಾವಣೆ ಕಾಣಬಹುದು. ಈ ಸಲ ನಾನು ಹೆಚ್ಚು ಗಮನ ಕೊಟ್ಟಿದ್ದೇನೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ.&lt;/p&gt;&lt;p&gt;&lt;strong&gt;* ಕಥೆಯ ವಾತಾವರಣ ಅಥವಾ ಹಳ್ಳಿಯ ಹಿನ್ನೆಲೆಯಲ್ಲಿ ಏನಾದರೂ ಬದಲಾವಣೆಗಳಿವೆಯೇ?&lt;/strong&gt;&lt;/p&gt;&lt;p&gt;ಹಳ್ಳಿಗಳು ಬದಲಾಗುವುದಿಲ್ಲ, ಆದರೆ ಹಳ್ಳಿಯ ಜನರು ಬದಲಾಗುತ್ತಾರೆ. ಮೊದಲ ಭಾಗದಲ್ಲಿದ್ದ ಅದೇ ಹಳ್ಳಿಯೇ ಇಲ್ಲೂ ಇದೆ. ಆದರೆ ಜನ ಮತ್ತು ವಾತಾವರಣ ಬದಲಾಗಿದೆ. ಅಂದು ಸಿನಿಮಾ ನೋಡಿದ್ದ ಪ್ರೇಕ್ಷಕರು ಈಗ ನಾನಾ ಬಗೆಯಲ್ಲಿ ಬದಲಾಗಿರುತ್ತಾರೆ, ಅವರಿಗೆ ಈ ಸಿನಿಮಾ ನೆನಪಿನ ಬುತ್ತಿ ತೆರೆದಂತೆ ಅನಿಸಿದರೆ, ಹೊಸ ಪ್ರೇಕ್ಷಕರಿಗೆ ಡಬಲ್ ಮನರಂಜನೆ.&lt;/p&gt;&lt;p&gt;&lt;strong&gt;* ಹೊಸ ಅಯೋಗ್ಯನ ಮೇಲೆ ನಿಮ್ಮ ಭರವಸೆ ಏನು?&lt;/strong&gt;&lt;/p&gt;&lt;p&gt;ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ. ಅದಕ್ಕಿಂತ ದುಪ್ಪಟ್ಟು ಮನರಂಜನೆ ಈ ಅಯೋಗ್ಯ 2ನಲ್ಲಿದೆ ಎಂಬ ಭರವಸೆ ನಮ್ಮಿಡೀ ತಂಡದಲ್ಲಿದೆ. ಮೊದಲನೇ ಭಾಗದ ಗೆಲುವು ಪ್ರೇಕ್ಷಕರು ನಮಗೆ ನೀಡಿದ ಕೊಡುಗೆಯಾದರೆ, ಈ ಎರಡನೇ ಭಾಗ ನಾವು ಅವರಿಗಾಗಿ ನೀಡುತ್ತಿರುವ ಉಡುಗೊರೆ. ಇದು ಎಲ್ಲರೂ ಚಿತ್ರಮಂದಿರಗಳಲ್ಲೇ ಕುಳಿತು ಸಂಭ್ರಮಿಸಬೇಕಾದ ಸಿನಿಮಾ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/ayogya-2-promises-double-entertainment-says-sathish-ninasam-gvd/articleshow-p7ty03q"/>
        </item>
        <item>
            <title><![CDATA[ಟ್ರೇಲರ್ ಇಲ್ಲ, ಆದರೆ ಸರ್ಪ್ರೈಸ್‌ಗೆ ಬರವಿಲ್ಲ: ‘ಅಯೋಗ್ಯ 2’ ಬಗ್ಗೆ ಸತೀಶ್ ನೀನಾಸಂ ಮಾತು!]]></title>
            <link>https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</link>
            <guid isPermaLink="true">https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8</guid>
            <pubDate>Fri, 07 Aug 2026 18:32:56 +0530</pubDate>
            <description><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kze51ephmzd140sgj78bw9x9,imgname-n-n-1786107706065.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಯೋಗ್ಯ&rsquo; ಸಿನಿಮಾ ಕನ್ನಡ ಸಿನಿಪ್ರೇಕ್ಷಕರಿಗೆ ಸಿಕ್ಕ ಮರೆಯಲಾಗದ ಮನರಂಜನೆಯ ಅನುಭವ. ಹಾಸ್ಯ, ಹಳ್ಳಿ ಸೊಗಡು, ಹಾಡುಗಳು ಹಾಗೂ ಸಿದ್ದೇಗೌಡನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಸಿನಿಮಾ ಇದೀಗ ಎಂಟು ವರ್ಷಗಳ ಬಳಿಕ &lsquo;ಅಯೋಗ್ಯ 2&rsquo; ರೂಪದಲ್ಲಿ ತೆರೆಗೆ ಬಂದಿದೆ. ಆದರೆ ಈ ಬಾರಿ ಚಿತ್ರತಂಡದ ಪ್ರಚಾರದ ಸ್ಟ್ರಾಟಜಿ ಮಾತ್ರ ಕೊಂಚ ವಿಭಿನ್ನ.&lt;/p&gt;&lt;p&gt;ಸಾಮಾನ್ಯವಾಗಿ ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್, ಟ್ರೇಲರ್, ಕೌಂಟ್&zwnj;ಡೌನ್ ಪ್ರಚಾರ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರೇಕ್ಷಕರ ಗಮನ ಸೆಳೆಯಲಾಗುತ್ತದೆ. ಆದರೆ &lsquo;ಅಯೋಗ್ಯ 2&rsquo; ತಂಡ ಮಾತ್ರ ಟ್ರೇಲರ್ ಬಿಡುಗಡೆ ಮಾಡದೆ, ಹಾಡುಗಳ ಮೂಲಕವೇ ಸಿನಿಮಾದತ್ತ ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿರುವ ಕಾರಣ ಅವುಗಳನ್ನು ಟ್ರೇಲರ್&zwnj;ನಲ್ಲೇ ಬಿಟ್ಟುಕೊಡದೆ, ಚಿತ್ರಮಂದಿರದಲ್ಲೇ ಪ್ರೇಕ್ಷಕರು ಅನುಭವಿಸಲಿ ಎಂಬುದು ತಂಡದ ನಿರ್ಧಾರ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ&rsquo;ವೇ &lsquo;ಅಯೋಗ್ಯ 2&rsquo;ಗೆ ಟ್ರೇಲರ್!&lt;/strong&gt;&lt;/p&gt;&lt;p&gt;ಟ್ರೇಲರ್ ಇಲ್ಲದಿರುವುದು ಯಾವುದೇ ರಿಸ್ಕ್ ಅಲ್ಲ, ಬದಲಿಗೆ ಮೊದಲ ಸಿನಿಮಾದ ಯಶಸ್ಸಿನ ಮೇಲೆ ಇಟ್ಟಿರುವ ನಂಬಿಕೆ ಎನ್ನುತ್ತಾರೆ ಸತೀಶ್ ನೀನಾಸಂ. &ldquo;&lsquo;ಅಯೋಗ್ಯ&rsquo; ಸಿನಿಮಾದಲ್ಲಿ ಹಾಡುಗಳೇ ಚಿತ್ರದ ಬಗ್ಗೆ ಮಾತನಾಡಿದ್ದವು. ಈ ಬಾರಿಯೂ ಹಾಡುಗಳು ಜನರನ್ನು ತಲುಪಿವೆ. ಇದು ಸೀಕ್ವೆಲ್ ಆಗಿರುವುದರಿಂದ, ಮೊದಲ &lsquo;ಅಯೋಗ್ಯ&rsquo; ಸಿನಿಮಾವೇ ಮುಂದಿನ ಭಾಗಕ್ಕೆ ಟ್ರೇಲರ್ ಇದ್ದಂತೆ ಎಂದು ನಾವು ಭಾವಿಸಿದ್ದೇವೆ. ಸಿನಿಮಾದಲ್ಲಿ ಸಾಕಷ್ಟು ಸರ್ಪ್ರೈಸ್&zwnj;ಗಳಿವೆ.&lt;/p&gt;&lt;p&gt;ಅವುಗಳನ್ನು ಟ್ರೇಲರ್ ಮೂಲಕ ತೋರಿಸುವ ಬದಲು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ನೇರವಾಗಿ ಅನುಭವಿಸಬೇಕು ಎಂಬುದು ನಮ್ಮ ಉದ್ದೇಶ,&rdquo; ಎಂದು ಸತೀಶ್ ಹೇಳಿದ್ದಾರೆ.ಮಹೇಶ್ ಕುಮಾರ್ ನಿರ್ದೇಶನದ &lsquo;ಅಯೋಗ್ಯ 2&rsquo; ಅನ್ನು ಮುನೇಗೌಡ ನಿರ್ಮಿಸುತ್ತಿದ್ದಾರೆ. ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಮೊದಲ ಭಾಗದ ಕಥೆ ಎಲ್ಲಿಗೆ ನಿಂತಿತ್ತೋ, ಅಲ್ಲಿಂದಲೇ ಸೀಕ್ವೆಲ್ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಒಂದು ಮತದಿಂದ ಗೆದ್ದ ಸಿದ್ದೇಗೌಡನ ಮುಂದಿನ ಕಥೆ!&lt;/strong&gt;&lt;/p&gt;&lt;p&gt;ಮೊದಲ ಭಾಗದಲ್ಲಿ ಸಿದ್ದೇಗೌಡ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಗೆಲ್ಲುತ್ತಾನೆ. ಅಲ್ಲಿಂದಲೇ &lsquo;ಅಯೋಗ್ಯ 2&rsquo; ಕಥೆ ಆರಂಭವಾಗುತ್ತದೆ. &ldquo;ಸಿದ್ದೇಗೌಡ ಕೇವಲ ಒಂದು ಮತದಿಂದ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುತ್ತಾನೆ. ಅಲ್ಲಿಂದ ಸೀಕ್ವೆಲ್ ಶುರುವಾಗುತ್ತದೆ. ಜವಾಬ್ದಾರಿ ಸಿಕ್ಕ ಬಳಿಕ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ? ಹಳ್ಳಿಯನ್ನು ಹೇಗೆ ಕಾಪಾಡುತ್ತಾನೆ? ನಾಯಕತ್ವದ ಜೊತೆಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಎದುರಿಸುತ್ತಾನೆ? ಎಂಬುದೇ ಚಿತ್ರದ ಮುಂದಿನ ಕಥೆ. ಮೊದಲ &lsquo;ಅಯೋಗ್ಯ&rsquo;ದಲ್ಲಿ ಪ್ರೇಕ್ಷಕರು ಇಷ್ಟಪಟ್ಟ ಹಾಸ್ಯ ಮತ್ತು ಮನರಂಜನೆಯನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಥೆ ಮಾತ್ರ ಮುಂದೆ ಸಾಗಿದೆ,&rdquo; ಎಂದು ಸತೀಶ್ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಮೊದಲ ಸಿನಿಮಾ ಹಿಟ್ ಆಯ್ತು ಅಂತ ಸೀಕ್ವೆಲ್ ಮಾಡಿಲ್ಲ&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ನಂತರ ಸೀಕ್ವೆಲ್ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎನ್ನುವ ಸತೀಶ್, ಈ ಸಿನಿಮಾವನ್ನು ಕೇವಲ ಮೊದಲ ಭಾಗದ ಯಶಸ್ಸನ್ನು ಬಳಸಿಕೊಳ್ಳಲು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &ldquo;&lsquo;ಅಯೋಗ್ಯ&rsquo; ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಕನ್ನಡ ಪ್ರೇಕ್ಷಕರಿಗೆ ಸಲ್ಲಬೇಕು. ಅವರು ತೋರಿಸಿದ ಪ್ರೀತಿಗೆ ನಾವು ಸದಾ ಋಣಿಯಾಗಿರುತ್ತೇವೆ. ಮಹೇಶ್ ಕುಮಾರ್ ಅವರು ಮಂಡ್ಯ ಭಾಗದ ಹಳ್ಳಿಯೊಂದನ್ನು ಹಿನ್ನೆಲೆಯಾಗಿಟ್ಟುಕೊಂಡು ಮನರಂಜನೆಯ ಕಥೆ ಹೇಳಿದ್ದರು. ಈ ಬಾರಿ ಕೂಡ ಗ್ರಾಮೀಣ ವಾತಾವರಣವಿದೆ. ಆದರೆ ವಿಷಯದ ವ್ಯಾಪ್ತಿ ದೊಡ್ಡದಾಗಿದೆ. ಕರ್ನಾಟಕದ ಯಾವುದೇ ಹಳ್ಳಿಯ ಜನರಿಗೂ ಕನೆಕ್ಟ್ ಆಗುವಂತಹ ಕಥೆ ಇದು,&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಅಪ್&zwnj;ಗ್ರೇಡ್!&lt;/strong&gt;&lt;/p&gt;&lt;p&gt;ಮೊದಲ ಹಾಗೂ ಎರಡನೇ ಭಾಗದ ನಡುವಿನ ವರ್ಷಗಳು ಚಿತ್ರತಂಡಕ್ಕೂ ಸಾಕಷ್ಟು ಅನುಭವ ನೀಡಿವೆ ಎಂಬುದು ಸತೀಶ್ ಅಭಿಪ್ರಾಯ. &ldquo;&lsquo;ಅಯೋಗ್ಯ 2&rsquo; ಎಲ್ಲದರಲ್ಲೂ ಒಂದು ಅಪ್&zwnj;ಗ್ರೇಡ್ ಆಗಿದೆ. ಬರವಣಿಗೆಯಿಂದ ಹಿಡಿದು ತಾಂತ್ರಿಕ ಗುಣಮಟ್ಟ, ಕಲಾವಿದರ ಅಭಿನಯ ಹಾಗೂ ಪಾತ್ರಗಳವರೆಗೆ ಎಲ್ಲದರಲ್ಲೂ ನಾವು ಒಂದು ಹೆಜ್ಜೆ ಮುಂದೆ ಬಂದಿದ್ದೇವೆ. ನಾನೂ ಒಬ್ಬ ನಟನಾಗಿ ಬದಲಾಗಿದ್ದೇನೆ. ಈಗ ಪಾತ್ರದ ಅಟಿಟ್ಯೂಡ್, ಸ್ಟೈಲ್, ಬಾಡಿ ಲ್ಯಾಂಗ್ವೇಜ್&zwnj;ನಂತಹ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಗಮನ ಕೊಡುತ್ತೇನೆ. ಅದೇ ಸಮಯದಲ್ಲಿ ಸಿನಿಮಾದ ಕಮರ್ಷಿಯಲ್ ಫ್ಲೇವರ್ ಕೂಡ ಉಳಿಯುವಂತೆ ನೋಡಿಕೊಂಡಿದ್ದೇವೆ,&rdquo; ಎಂದು ಸತೀಶ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಬಿಡುಗಡೆಗೂ ಮುನ್ನವೇ ಬಿಸಿನೆಸ್&zwnj;ಗೆ ಉತ್ತಮ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಸಿನಿಮಾ ಬಿಡುಗಡೆಗೂ ಮುನ್ನ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. &ldquo;ನಿರ್ಮಾಪಕರು ಸಿನಿಮಾದ ಬಗ್ಗೆ ಸಂತೋಷವಾಗಿದ್ದಾರೆ. ಡಿಸ್ಟ್ರಿಬ್ಯೂಷನ್, ಸ್ಯಾಟಲೈಟ್ ಹಾಗೂ ಆಡಿಯೋ ಬಿಸಿನೆಸ್&zwnj;ನಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸುಪ್ರೀತ್ ಅವರು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಸಿನಿಮಾವನ್ನು ವಿತರಿಸುತ್ತಿರುವುದಕ್ಕೂ ನನಗೆ ಖುಷಿಯಿದೆ,&rdquo; ಎಂದು ಸತೀಶ್ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo;ನಲ್ಲಿ ನಟಿಸಲು ರಚಿತಾಗೆ ಯಾವುದೇ ಗೊಂದಲವಿರಲಿಲ್ಲ!&lt;/strong&gt;&lt;/p&gt;&lt;p&gt;ಮೊದಲ ಭಾಗದ ಯಶಸ್ಸಿನ ಬಳಿಕ &lsquo;ಅಯೋಗ್ಯ 2&rsquo;ನಲ್ಲಿ ಮತ್ತೆ ನಟಿಸುವ ಅವಕಾಶ ಬಂದಾಗ ರಚಿತಾ ರಾಮ್ ಕೂಡ ಯಾವುದೇ ಯೋಚನೆ ಮಾಡಲಿಲ್ಲವಂತೆ. &ldquo;&lsquo;ಅಯೋಗ್ಯ&rsquo; ಮತ್ತು &lsquo;ಅಯೋಗ್ಯ 2&rsquo; ನಾನು ನಟಿಸಿರುವ ಸಿನಿಮಾಗಳಲ್ಲಿ ನನಗೆ ಹೆಚ್ಚು ಇಷ್ಟವಾದ ಚಿತ್ರಗಳ ಸಾಲಿನಲ್ಲಿ ಬರುತ್ತವೆ. ನಮ್ಮ ನಿಜವಾದ ವಿಐಪಿಗಳಾದ ಪ್ರೇಕ್ಷಕರೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಈಗ ಕನ್ನಡ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುವ ಹಂತಕ್ಕೆ ನಾವು ಬಂದಿದ್ದೇವೆ. ಆದರೆ &lsquo;ಅಯೋಗ್ಯ 2&rsquo; ನೋಡಲು ಬರುವ ಪ್ರತಿಯೊಬ್ಬರೂ ಖುಷಿಯಾಗಿ ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನನಗಿದೆ,&rdquo; ಎಂದು ರಚಿತಾ ರಾಮ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ದೊಡ್ಡ ತಾರಾಬಳಗದ ಸಾಥ್&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo;ನಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧುಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಅರುಣಾ ಬಾಳರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಕೊಟ್ಟಿದ್ದಕ್ಕೆ ಈ ಬಾರಿ ಪ್ರೇಕ್ಷಕರಿಗೆ ಏನಾದರೂ ಕೊಡಬೇಕು!&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ&rsquo; ಸಿನಿಮಾ ಸಿದ್ದೇಗೌಡನ ಪಾತ್ರದ ಮೂಲಕ ಸತೀಶ್ ನೀನಾಸಂ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಹೀಗಾಗಿ ಸೀಕ್ವೆಲ್ ಬಗ್ಗೆ ಮಾತನಾಡುವಾಗಲೂ ನಟ ಆ ಸಿನಿಮಾದ ಯಶಸ್ಸಿನ ಹಿಂದಿರುವ ಪ್ರೇಕ್ಷಕರನ್ನು ನೆನಪಿಸಿಕೊಳ್ಳುತ್ತಾರೆ. &ldquo;&lsquo;ಅಯೋಗ್ಯ&rsquo; ಪ್ರೇಕ್ಷಕರು ನಮಗೆ ಕೊಟ್ಟ ಉಡುಗೊರೆ. ಈ ಬಾರಿ ನಾವು ಅವರಿಗೆ ಏನಾದರೂ ಮರಳಿ ಕೊಡಬೇಕು ಎಂಬ ಆಶಯವಿದೆ,&rdquo; ಎಂದು ಸತೀಶ್ ನೀನಾಸಂ ಹೇಳಿದ್ದಾರೆ.&lt;/p&gt;&lt;p&gt;ಹೀಗಾಗಿ ಟ್ರೇಲರ್ ಇಲ್ಲದೆ, ಹಾಡುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ &lsquo;ಅಯೋಗ್ಯ 2&rsquo;, ಮೊದಲ ಭಾಗದ ಸೊಗಡನ್ನು ಉಳಿಸಿಕೊಂಡೇ ಕಥೆ, ತಾಂತ್ರಿಕತೆ, ಪಾತ್ರಗಳು ಹಾಗೂ ಮನರಂಜನೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕಿದೆ. ಸತೀಶ್ ಮಾತಿನಂತೆ ಸಿನಿಮಾದಲ್ಲಿರುವ ಸರ್ಪ್ರೈಸ್&zwnj;ಗಳು ಪ್ರೇಕ್ಷಕರಿಗೆ ಥಿಯೇಟರ್&zwnj;ನಲ್ಲಿ ಯಾವ ರೀತಿಯ ಅನುಭವ ನೀಡಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/why-does-ayogya-2-have-no-trailer-sathish-ninasam-reveals-the-reason-gvd/articleshow-pkecgn8"/>
        </item>
        <item>
            <title><![CDATA[Exclu Interview: ಮಗು ಆದ್ಮೇಲೆ ತೂಕ ಇಳಿಸ್ಕೊಂಡು ಮತ್ತೆ ಮೊದಲಿನಂತಾದ Lakshmi Baramma Serial Kavitha Gowda]]></title>
            <link>https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</link>
            <guid isPermaLink="true">https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www</guid>
            <pubDate>Sun, 17 May 2026 15:30:58 +0530</pubDate>
            <description><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krtnnm5aqfbwwj85kjszqtre,imgname-new-project---2026-05-17t151730.599-1779011604650.jpg" type="image/jpeg" height="390" width="690"/>
            <content:encoded><![CDATA[&lt;p&gt;Actress Kavitha Gowda: ಲಕ್ಷ್ಮೀ ಬಾರಮ್ಮ, ವಿದ್ಯಾ ವಿನಾಯಕ ಧಾರಾವಾಹಿ ನಟಿ ಕವಿತಾ ಗೌಡ, ತಾಯ್ತನದ ಖುಷಿಯಲ್ಲಿದ್ದಾನೆ. ಮನೆಗೆ ಮುದ್ದಾದ ಮಗ ಬಂದಿದಾನೆ, ಇದರ ಜೊತೆಗೆ ಫಿಟ್&zwnj;ನೆಸ್&zwnj; ಕಾಪಾಡಿಕೊಳ್ಳುವತ್ತ ಗಮನ ಕೊಡುತ್ತಿದ್ದಾರೆ. ಈ ಬಗ್ಗೆ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj; ಡಿಜಿಟಲ್ ಜೊತೆ ಮಾತನಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದ ಎಂಟು ತಿಂಗಳಿನಿಂದ ಅವರು ಡಯೆಟ್&zwnj;, ಫಿಟ್&zwnj;ನೆಸ್&zwnj; ಕಡೆಗೆ ಇನ್ನಷ್ಟು ಗಮನ ಕೊಡುತ್ತಿದ್ದಾರೆ. ಈ ವೇಳೆ ಅವರು 8kg ತೂಕ ಇಳಿಸಿಕೊಂಡಿದ್ದಾರಂತೆ. ಫಿಟ್&zwnj;ನೆಸ್&zwnj;, ವರ್ಕೌಟ್&zwnj;, ಡಯೆಟ್&zwnj;, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;ತಾಯಿಯಾದ್ಮೇಲೆ ದೇಹದಲ್ಲಿ ಒಂದೇ ಅಲ್ಲದೆ, ಮಹಿಳೆಯ ಜೀವನವೇ ಬದಲಾಗುತ್ತದೆ. ಒಂದು ಮಗು ಬಂದರೆ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆಯಾದರೆ, ತಾಯಿಗೆ ಮಾತ್ರ ಅವಳ ಬದುಕೇ ಬದಲಾಗುತ್ತದೆ. ಈಗ ನನಗೆ ಮಗನಿದ್ದು, ನನ್ನ ಪತಿ ಚಂದನ್&zwnj; ಕುಮಾರ್&zwnj;, ಮನೆಯವರು ಸಹಾಯ ಮಾಡೋದರಿಂದ ಮಗು ನೋಡಿಕೊಳ್ಳೋದು ಅಷ್ಟು ಕಷ್ಟ ಆಗುತ್ತಿಲ್ಲ. ಆದರೆ ತಾಯಿಯಾಗಿ ಅವನಿಗೆ ಎಷ್ಟು ಆದ್ಯತೆ ಕೊಡಬೇಕೋ ಅಷ್ಟನ್ನು ನಾನು ಕೊಡ್ತಿದ್ದೀನಿ. ಮಗನ ವಿಚಾರದಲ್ಲಿ ಕೆಲ ವಿಷಯಗಳಿವೆ. ಅವನಿಗೆ ಬೆಳಿಗ್ಗೆ ತಿಂಡಿ ನಾನೇ ಮಾಡಿಸಬೇಕು ಎಂದಿದೆ, ಅದಕ್ಕೆ ನಾನೇ ಇರಬೇಕು. ಉಳಿದ ವಿಷಯಗಳನ್ನು ಮನೆಯವರು ನೋಡಿಕೊಳ್ತಾರೆ.&lt;/p&gt;&lt;img&gt;&lt;p&gt;ಈ ಹಿಂದೆ ನನಗೆ ಕೋಪ ಬರುತ್ತಿರಲಿಲ್ಲ. ಯಾರಾದರೂ ಏನಾದರೂ ಹೇಳಿಕೊಳ್ಳಲಿ? ಏನಾದರೂ ಮಾಡಿಕೊಳ್ಳಲಿ ಎಂದುಕೊಳ್ತಿದ್ದೆ. ಮಗು ಆದ್ಮೇಲೆ ಯಾರು ಏನು ಹೇಳಿದರೂ ಕೂಡ, ಅವರಿಗೆ ಏನಾದರೂ ಹೇಳಿ ಬೇಸರ ಮಾಡೋದು ಬೇಡ, ನನಗೂ ಬೇಸರ ಮಾಡಿಕೊಳ್ಳೋದು ಬೇಡ ಎಂದುಕೊಂಡು ಸುಮ್ಮನಾಗಿರುತ್ತೇನೆ. ಫಂಕ್ಷನ್&zwnj; ಇರಲೀ, ಬೇರೆ ಕೆಲಸ ಇರಲಿ, ಎಲ್ಲೇ ಹೋಗಬೇಕು ಎಂದ್ರೂ ಕೂಡ, ಈ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ,ಆ ಟೈಮ್&zwnj;ನಲ್ಲಿ ಬರೋಕೆ ಆಗೋದಿಲ್ಲ ಎಂದು ಮೊದಲೇ ತಿಳಿಸಿರುತ್ತೇನೆ. ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಪ್ರಗ್ನೆಂಟ್&zwnj; ಆದಾಗ, ತಾಯಿ ಆದಾಗ ಮಹಿಳೆಗೆ ಮಾನಸಿಕವಾಗಿ, ದೈಹಿಕವಾಗಿ ಬದಲಾವಣೆ ಆಗುತ್ತದೆ. ಇದನ್ನು ಗಂಡ ಅಥವಾ ಪುರುಷರು ಅರ್ಥ ಮಾಡಿಕೊಳ್ಳಬೇಕು. ಮಹಿಳೆಗೆ ಬೆನ್ನು ನೋವು ಬಂತು, ಕಾಲು ನೋವು ಬಂತು ಎಂದಾಗ ಡ್ರಾಮಾ ಮಾಡ್ತಾರೆ ಎಂದು ಪುರುಷರು ಎಂದುಕೊಳ್ಳೋದು ತಪ್ಪು. ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಸ್ಥಿತಿ ಬದಲಾಗುತ್ತದೆ ಎಂದು ಪುರುಷರು ಅರ್ಥಮಾಡಿಕೊಳ್ಳಬೇಕು. ನನ್ನ ಮಗನಿಗೆ ನಾನು ಇದನ್ನೆಲ್ಲ ಕಲಿಸುತ್ತೇನೆ, ಇಂದಿನ ಮಹಿಳೆಯರು ಕೂಡ ಮಕ್ಕಳಿಗೆ ಇದನ್ನೆಲ್ಲ ಕಲಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ.&lt;/p&gt;&lt;img&gt;&lt;p&gt;ನನಗೆ ಪ್ರಗ್ನೆನ್ಸಿ ಟೈಮ್&zwnj;ನಲ್ಲಿ ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಎಂದು ಅನಿಸಿರಲಿಲ್ಲ. ಮೊದಲೇ ಫಿಟ್&zwnj;ನೆಸ್&zwnj; ಕಡೆಗೆ ಗಮನ ಕೊಟ್ಟಿದ್ದಕ್ಕೆ ಗರ್ಭಿಣಿಯಾದಾಗ, ನಂಗೆ ಬೆನ್ನು ನೋವು, ಕಾಲು ನೋವು ಅಂತ ಬಂದಿರಲಿಲ್ಲ. ಮಗು ಡೆಲಿವರಿಗೆ ಆದ್ಮೇಲೆ ಸಮಸ್ಯೆಯಾದರೂ ಕೂಡ, ಅದಕ್ಕೆ ಬೇಕಾದ ಆರೈಕೆ ಮಾಡಿಕೊಂಡೆ. ಕ್ರೇವಿಂಗ್ಸ್&zwnj; ಬಂದಿದೆ ಎಂದರೆ ನಿಮ್ಮಲ್ಲಿ ಏನಾದರೊಂದು ಕೊರತೆ ಇರುತ್ತದೆ ಎಂದರ್ಥ. ಆಗ ಡಾಕ್ಟರ್&zwnj; ಬಳಿ ಕೇಳಿದಾಗ ಏನು ಸಮಸ್ಯೆ ಆಗಿದೆ ಎಂದು ಗೊತ್ತಾಗುತ್ತದೆ. ಇಂದು ಇಂಟರ್&zwnj;ನೆಟ್&zwnj;ನಲ್ಲಿ ಕೂಡ ಸಾಕಷ್ಟು ಮಾಹಿತಿ ಸಿಗುತ್ತಿದೆ.&lt;/p&gt;&lt;img&gt;&lt;p&gt;ಅನ್ನದ ಜೊತೆಗೆ ತರಕಾರಿ, ಪ್ರೋಟೀನ್&zwnj; ಇರಬೇಕು. ಕೇವಲ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರೋಟೀನ್&zwnj; ಮೊದಲು ತಿಂದು, ಆಮೇಲೆ ತರಕಾರಿ ತಿನ್ನೇಕು, ಇದಾದ ಬಳಿಕ ಅನ್ನ, ಚಪಾತಿ, ರೊಟ್ಟಿ ತಿಂದರೆ ಊಟ ಬ್ಯಾಲೆನ್ಸ್&zwnj; ಆಗುತ್ತದೆ. ಸ್ವೀಟ್&zwnj; ತಿನ್ನಬೇಕು ಎನಿಸಿದಾಗ, ಇದಕ್ಕೆ ಬದಲಾಗಿ ಏನು ತಿನ್ನಬಹುದು ಎಂದು ಯೋಚಿಸಿ. ಹೀಗೆ ಎಣ್ಣೆ ತಿಂಡಿ, ಸ್ವೀಟ್&zwnj; ಅಥವಾ ಆರೋಗ್ಯಕ್ಕೆ ಒಳ್ಳೆಯದಲ್ಲದ ಆಹಾರಗಳನ್ನು ತ್ಯಜಿಸಿ.&lt;/p&gt;&lt;p&gt;ಯಾವಾಗ ಎಷ್ಟು? ಏನು ತಿನ್ನಬೇಕು ಎನ್ನೋದು ಡಯೆಟ್.&zwnj; ಇದನ್ನು ಪಾಲಿಸಬೇಕು.&amp;nbsp;&lt;/p&gt;&lt;img&gt;&lt;p&gt;ವರ್ಕೌಟ್&zwnj; ಮಾಡಬೇಕು ಎಂದು ಏನೇನೋ ಮಾಡಿದರೆ ಪ್ರಯೋಜನ ಇಲ್ಲ. ದಪ್ಪ ಇದ್ದು ಯಾವುದ್ಯಾವುದೋ ವರ್ಕೌಟ್&zwnj; ಮಾಡಿದರೆ, ಆಮೇಲೆ ಮೊಣಕಾಲು ನೋವು ಬರುತ್ತದೆ, ಎಲುಬಿಗೆ ಸಮಸ್ಯೆ ಆಗುತ್ತದೆ. ತಾಯಿಯಾದ್ಮೇಲೆ ಮಹಿಳೆಗೆ ಯಾವ ರೀತಿ ವರ್ಕೌಟ್&zwnj; ಮುಖ್ಯ ಆಗುತ್ತದೆ ಎಂದು ತಿಳಿದುಕೊಳ್ಳಬೇಕು. ಹೀಗಾಗಿ ಡಾಕ್ಟರ್&zwnj; ಸಲಹೆ, ಟ್ರೇನರ್&zwnj; ಸಲಹೆ ಮುಖ್ಯ ಆಗುತ್ತದೆ.&lt;/p&gt;]]></content:encoded>
            <category>celebrity-interviews</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/lakshmi-baramma-serial-kavitha-gowda-weight-loss-journey-after-baby-birth-qew3www"/>
        </item>
        <item>
            <title><![CDATA[Exclusive: ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್‌ ಇಷ್ಟ ಆಗಿದೆ: ಪ್ರಿಯಾಂಕ ಉಪೇಂದ್ರ ಸಂದರ್ಶನ]]></title>
            <link>https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7</link>
            <guid isPermaLink="true">https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7</guid>
            <pubDate>Thu, 06 Aug 2026 22:13:59 +0530</pubDate>
            <description><![CDATA[&lt;p&gt;&lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ ಎಂದು ಸಂದರ್ಶನದಲ್ಲಿ ಪ್ರಿಯಾಂಕ ಉಪೇಂದ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzbza65wzh19c5zq43tg47fw,imgname-jb-1786034591932.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;&lt;strong&gt;* ಮತ್ತೊಮ್ಮೆ ನಾಯಕಿ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದೀರಿ?&lt;/strong&gt;&lt;/p&gt;&lt;p&gt;ಇದು ಪತ್ತೇದಾರಿ ಜಾನರ್&zwnj; ಸಿನಿಮಾ. ನನಗೆ ತುಂಬಾ ಥ್ರಿಲ್&zwnj; ಕೊಟ್ಟಿರುವ ಹೊಸ ರೀತಿ ಎನಿಸಿರುವ ಸಿನಿಮಾ. ಈ ರೀತಿಯ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಯಾಗುತ್ತದೆ.&lt;/p&gt;&lt;p&gt;&lt;strong&gt;* ಈ ರೀತಿಯ ಸಿನಿಮಾಗಳನ್ನು ಈಗ ನೋಡುತ್ತಾರೆಯೇ?&lt;/strong&gt;&lt;/p&gt;&lt;p&gt;ಖಂಡಿತ ನೋಡುತ್ತಾರೆ. ಪತ್ತೆದಾರಿ ಕತೆಗಳೇ ರೋಚಕವಾಗಿರುತ್ತವೆ. ಅಂಥಾ ಕತೆಗಳು ತೆರೆ ಮೇಲೆ ಬಂದರೆ ನೋಡದಿರಲು ಸಾಧ್ಯವಿಲ್ಲ. ನನ್ನ ಪ್ರಕಾರ ಇದು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಸಿನಿಮಾ.&lt;/p&gt;&lt;p&gt;&lt;strong&gt;* ಯಾವ ರೀತಿ ಈ ಚಿತ್ರವನ್ನು ರೂಪಿಸಲಾಗಿದೆ?&lt;/strong&gt;&lt;/p&gt;&lt;p&gt;ಆ್ಯಕ್ಷನ್&zwnj; ಹಾಗೂ ಪತ್ತೆದಾರಿಕೆ ಎರಡೂ ಅಂಶಗಳನ್ನು ಒಳಗೊಂಡ ಸಿನಿಮಾ. ಮೊದಲ ಭಾಗದ ಕತೆ ನನ್ನ ಪಾತ್ರದ ಮೇಲೆ ಸಾಗಿದರೆ, ದ್ವಿಯಾರ್ಧ ಕತೆ ಆ್ಯಕ್ಷನ್&zwnj; ಮೇಲೆ ಸಾಗುತ್ತದೆ.&lt;/p&gt;&lt;p&gt;&lt;strong&gt;* ನಿಮಗೆ ಈ ಕತೆ ಇಷ್ಟ ಆಗಲು ಕಾರಣ ಏನು?&lt;/strong&gt;&lt;/p&gt;&lt;p&gt;ಇದು ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ. ಅಲ್ಲದೆ ಡಿಟೆಕ್ಟಿವ್&zwnj; ಜಾನರ್&zwnj; ಸಿನಿಮಾಗಳು ಕೂಡ ಕನ್ನಡದಲ್ಲಿ ಅಪರೂಪ. ಈ ಕಾರಣಗಳಿಗೆ ನನಗೆ &lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ಇಷ್ಟ ಮತ್ತು ವಿಶೇಷವಾದ ಸಿನಿಮಾ ಆಗಿದೆ.&lt;/p&gt;&lt;p&gt;&lt;strong&gt;* ಈ ಚಿತ್ರವನ್ನು ಉಪೇಂದ್ರ ಅವರು ನೋಡಿದ್ದಾರೆಯೇ?&lt;/strong&gt;&lt;/p&gt;&lt;p&gt;ನೋಡಿ ಮೆಚ್ಚಿಕೊಂಡಿದ್ದಾರೆ. ಅವರಿಗೆ ಚಿತ್ರದಲ್ಲಿ ನಾನು ಮಾಡಿರುವ ಆ್ಯಕ್ಷನ್&zwnj; ಸನ್ನಿವೇಶಗಳು ತುಂಬಾ ಇಷ್ಟವಾಗಿದೆ.&lt;/p&gt;&lt;p&gt;&lt;strong&gt;* ನಿಮಗೆ ಈ ಚಿತ್ರದಲ್ಲಿ ಸವಾಲು ಎನಿಸಿದ್ದೇನು? ಕತೆಯ ಸಾಲು ಏನು?&lt;/strong&gt;&lt;/p&gt;&lt;p&gt;ನಮ್ಮ ನಿರ್ದೇಶಕ ರಘು ತುಂಬಾ ತಯಾರಿ ಮಾಡಿಕೊಂಡು ಈ ಚಿತ್ರ ಮಾಡಿದ್ದರಿಂದ ನನಗೆ ಶೂಟಿಂಗ್&zwnj;ನಲ್ಲಿ ಯಾವುದೇ ಸವಾಲು ಎದುರಾಗಲಿಲ್ಲ. ವಿದ್ಯಾವಂತೆ ಅಲ್ಲದ ಹೆಣ್ಣೊಬ್ಬಳು ಡಿಟೆಕ್ಟಿವ್&zwnj; ಆದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ.&lt;/p&gt;&lt;p&gt;&lt;strong&gt;* ನಿಮಗೆ ನಾಯಕಿ ಪ್ರಧಾನ ಸಿನಿಮಾಗಳೇ ಹೆಚ್ಚು ಬರುತ್ತಿವೆಯಲ್ಲ?&lt;/strong&gt;&lt;/p&gt;&lt;p&gt;ಅದಕ್ಕೆ ನಿರ್ದೇಶಕರಿಗೆ ಥಾಂಕ್ಸ್&zwnj; ಹೇಳಬೇಕು. &lsquo;ಮಮ್ಮಿ&rsquo;, &lsquo;ಸೆಕೆಂಡ್&zwnj; ಹಾಫ್&zwnj;&rsquo;, &lsquo;ದೇವಕಿ&rsquo;, &lsquo;ಉಗ್ರಾವತಾರ&rsquo;. ಈಗ &lsquo;ಡಿಟೆಕ್ಟಿವ್&zwnj; ತೀಕ್ಷ್ಣ&rsquo; ಹೀಗೆ ಎಲ್ಲವೂ ಮಹಿಳಾ ಪಾತ್ರದ ಸುತ್ತನೇ ಇರೋ ಸಿನಿಮಾಗಳಾದರೂ ಕತೆಗಳು ಬೇರೆ ಬೇರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/upendra-loved-my-action-scenes-in-detective-theekshana-priyanka-upendra-gvd/articleshow-qwis4o7"/>
        </item>
        <item>
            <title><![CDATA[Rachita Ram: ಮದುವೆ, ಪ್ರೀತಿ, ಡೈವೋರ್ಸ್ ಬಗ್ಗೆ ರಚಿತಾ ನೇರ ಮಾತು: 14 ವರ್ಷದ ಸಿನಿ ಪಯಣದ ಅನುಭವ ಹಂಚಿಕೆ]]></title>
            <link>https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6</link>
            <guid isPermaLink="true">https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6</guid>
            <pubDate>Fri, 19 Jun 2026 16:11:41 +0530</pubDate>
            <description><![CDATA[&lt;p&gt;Rachita Ram: ರಕ್ಷಿತಾ, ರಮ್ಯಾ, ರಾಧಿಕಾ ಬಳಿಕ ಸ್ಯಾಂಡಲ್&zwnj;ವುಡ್ ಪ್ರವೇಶಿಸಿದ್ದ &lsquo;ರ&rsquo; ಹೆಸರಿನ ಪ್ರತಿಭಾವಂತ ನಟಿ. ಮೊದಲ ಮೂವರೂ ಒಂದು ದಶಕ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. 14 ವರ್ಷಗಳಾದರೂ ರಚಿತಾ ಓಟ ಮುಂದುವರಿಕೆ. ಈ ಹಿನ್ನೆಲೆಯಲ್ಲಿ ಅವರ ಜತೆ ಮಾತುಕತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvfqh6dfy3awfps3y48ca3f7,imgname-bjv-1781865683375.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಜೋಗಿ&lt;/strong&gt;&lt;/p&gt;&lt;p&gt;&lt;strong&gt;1. ಈ ಹದಿನಾಲ್ಕು ವರ್ಷಗಳನ್ನು ಮೂರು ಭಾಗ ಮಾಡಿದರೆ, ಪ್ರತಿಯೊಂದು ಭಾಗದ ವಿಶೇಷ ಏನು?&lt;/strong&gt;&lt;/p&gt;&lt;p&gt;ಪ್ರತಿಯೊಂದು ಹಂತದಲ್ಲೂ ತುಂಬ ಏರಿಳಿತ ಕಂಡಿದ್ದೀನಿ, ಸೋಲು ಗೆಲುವು ಜತೆಜತೆಯಾಗಿಯೇ ಬಂದಿದೆ. ಆದರೆ ಅದ್ಯಾವುದೂ ನನ್ನನ್ನು ತುಂಬ ಕಾಡಿಲ್ಲ. ಈಗಲೂ ಹೊಸ ಸಿನಿಮಾ ಒಪ್ಪಿಕೊಂಡಾಗ ಸಣ್ಣ ಅಧೀರತೆ ಕಾಡುತ್ತದೆ. ಇದೇ ಮೊದಲ ಸಿನಿಮಾ ಎಂಬಂತೆ ಅಂಜುತ್ತಾ ಸೆಟ್ಟಿಗೆ ಹೋಗುತ್ತೇನೆ. ಫಸ್ಟ್ ಶಾಟ್ ಒಪ್ಪಿತವಾಗುತ್ತಿದ್ದಂತೆ ಆತ್ಮವಿಶ್ವಾಸ ಮರಳುತ್ತದೆ. ಮೊದಲ ಚಿತ್ರ ಮಾಡುವಾಗ ಇದ್ದ ಮುಗ್ಧತೆ ಈಗಲೂ ನನ್ನಲ್ಲಿ ಉಳಿದಿದೆ ಅಂತ ನನಗೆ ಅನ್ನಿಸುತ್ತೆ. ಅಭಿನಯದ ವಿಚಾರಕ್ಕೆ ಬಂದರೆ ಬೆಳೆದಿದ್ದೀನಿ, ಬೆಳೆಯಲೇ ಬೇಕಲ್ಲ, ಮಿಕ್ಕಂತೆ ಆಗ ಹೇಗಿದ್ದೆನೋ ಹಾಗೆಯೇ ಇದ್ದೇನೆ.&lt;/p&gt;&lt;p&gt;&lt;strong&gt;2. ಹೆಣ್ಮಕ್ಕಳಿಗೆ ಒಳ್ಳೆಯ ಪಾತ್ರ ಸಿಗುವ ಕಾಲ ಇದಲ್ಲ. ನಿಮಗೆ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಕ್ಕವು. ಆದರೆ ಅವೆಲ್ಲ ತಡವಾಗಿ ಬಂದವು ಅನ್ನಿಸುತ್ತಿಲ್ಲವೇ?&lt;/strong&gt;&lt;/p&gt;&lt;p&gt;ನಾನು ಜೀವನವನ್ನು ಬಹಳ ಸಹಜವಾಗಿ ಸ್ವೀಕಾರ ಮಾಡ್ತೀನಿ. ಏನು ಬರುತ್ತದೋ ಅದನ್ನು ಹಾಗೇ ತಗೊಳ್ತೀನಿ, ಒಳ್ಳೆಯದನ್ನು ತೆಗೆದುಕೊಳ್ಳೋಣ. ಕೆಟ್ಟದ್ದನ್ನು ಬಿಡೋಣ ಅನ್ನೋದು ನನ್ನ ಪಾಲಿಸಿ. ತಡವಾಗಿ ಬಂತೇ ಅಂತ ಕೇಳಿಕೊಳ್ಳುವಾಗ, ಬೇಗನೇ ಬಂದಿದ್ದರೆ ಬೇಗನೇ ಮನೆಗೆ ಬಂದುಬಿಡುತ್ತಿದ್ದೆನೇನೋ ಅಂತಲೂ ಅನ್ನಿಸುತ್ತದೆ. ನಾನು ಕನ್ನಡದ ಹುಡುಗಿ, ಬೆಂಗಳೂರು ಹುಡುಗಿ, ಹತ್ತು ವರ್ಷ ಇಲ್ಲಿಯೇ ಕಂಪ್ಲೀಟ್ ಮಾಡಬೇಕು ಅನ್ನಿಸಿತ್ತು. ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಬೇಕು ಅಂತ ಪಣ ತೊಟ್ಟಿದ್ದೆ. ಬೇರೆ ಭಾಷೆಗಳಲ್ಲಿ ಅವಕಾಶ ಬಂದಿಲ್ಲ ಅಂತೇನಲ್ಲ. ಆದರೆ ಹತ್ತು ವರ್ಷ ಪಟ್ಟು ಹಿಡಿದು ಇಲ್ಲೇ ಇರಲು ನಿರ್ಧರಿಸಿದ್ದೆ. ಮಧ್ಯೆ ಒಂದು ಬ್ರೇಕ್ ಸಿಕ್ಕಾಗ, ಮನೆಯಲ್ಲೇ ಕೂತಿದ್ದಾಗ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದೆ.&lt;/p&gt;&lt;p&gt;&lt;strong&gt;3. ಡಿಂಪಲ್ ಕ್ವೀನ್ ಅಂತ ಅಭಿಮಾನಿಗಳು ಕರೆದರು. ನಂತರ ಪ್ರಬುದ್ಧವಾದ ಪಾತ್ರಗಳನ್ನು ಮಾಡ್ತಿದ್ದೀರಿ, ಈಗ ಏನಂತ ಕರೆಸಿಕೊಳ್ಳೋ ಆಸೆಯಿದೆ?&lt;/strong&gt;&lt;/p&gt;&lt;p&gt;ಅತ್ಯುತ್ತಮ ನಟಿ ಅನ್ನಿಸಿಕೊಳ್ಳುವ ಆಸೆ. ಆ ಕಾಲಕ್ಕೆ ಜನ ಪ್ರೀತಿಯಿಂದ ಡಿಂಪಲ್ ಕ್ವೀನ್ ಅಂದರು. ಪ್ರೀತಿಯಿಂದ ಸ್ವೀಕರಿಸಿದೆ. ಪ್ರೇಕ್ಷಕರು ಹೇಗೆ ಕರೆದರೂ ಮೆಚ್ಚಿಕೊಂಡರೂ ನನಗೆ ಇಷ್ಟ. ನೆಗೆಟಿವ್ ಕಾಮೆಂಟುಗಳನ್ನು ಒಪ್ಪಿಕೊಳ್ಳೋ ಈ ಕಾಲದಲ್ಲಿ ಹೊಗಳಿಕೆ ಒಪ್ಪಿಕೊಳ್ಳಲಿಕ್ಕೆ ಯಾಕೆ ಹಿಂಜರಿಯಬೇಕು. ನಾನಿಲ್ಲಿಗೆ ಬಂದಿದ್ದು ಕೆಲಸ ಮಾಡೋದಕ್ಕೆ ಅಷ್ಟೇ. ಅದನ್ನು ಮೆಚ್ಚಿಕೊಂಡು ಅವರು ಕ್ವೀನ್ ಅಂತ ಕರೆದರೆ ಸಂತೋಷ ಆಗುತ್ತೆ. ತಡವಾಗಿ ಬಂದಾಗಲೇ ಎಲ್ಲಕ್ಕೂ ಬೆಲೆ, ಹೆಚ್ಚು ಮಜಾ ಸಿಗುತ್ತೆ. ಕನ್ನಡದಲ್ಲಿ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಮಾಡಿದ್ದೀನಿ. ರಕ್ಷಿತಾ ಮತ್ತು ರಮ್ಯಾರ ನಂತರ ಎಲ್ಲರ ಜತೆಗೂ ವರ್ಕ್ ಮಾಡಿದವಳು ನಾನು.&lt;/p&gt;&lt;p&gt;&lt;strong&gt;4. ಲ್ಯಾಂಡ್ ಲಾರ್ಡ್ ಮತ್ತು ಕೂಲಿ ಚಿತ್ರಗಳಲ್ಲಿ ಮೇಕಪ್ ಇಲ್ಲದೇ ನಟಿಸಿದ್ದು ಹೇಗಿತ್ತು?&lt;/strong&gt;&lt;/p&gt;&lt;p&gt;ತುಂಬಾ ಚಾಲೆಂಜಿಂಗ್. ಕೂಲಿ ಚಿತ್ರದಲ್ಲಿ ಸನ್&zwnj;ಸ್ಕ್ರೀನ್, ಮಾಯಿಶ್ಚರೈಸರ್ ಅಷ್ಟೇ. ಕಾಡಿಗೆ ಹಾಕೋದಕ್ಕೂ ಬಿಡುತ್ತಿರಲಿಲ್ಲ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಟ್ಯಾನ್ ಮೇಕಪ್ ಅಂದರೆ ಬಿಸಿಲಿಗೆ ಸುಟ್ಟಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ. ಗ್ರೇಡಿಂಗ್&zwnj;ನಲ್ಲೂ ಬಹಳ ಡಲ್ ಮಾಡಿದ್ದಾರೆ. ಕೂಲಿಯಲ್ಲಿ ನಾನು ಹೇಗಿದ್ದೇನೋ ಹಾಗೇ ತೋರಿಸಿದ್ದಾರೆ. ಎಷ್ಟೇ ಆದರೂ ಮೇಕಪ್ ಇಲ್ಲದೇ ನಟಿಸೋದು ನಿಜಕ್ಕೂ ಸವಾಲು.&lt;/p&gt;&lt;p&gt;&lt;strong&gt;5. ಕಮರ್ಷಿಯಲ್ ಸಿನಿಮಾಗಳಲ್ಲೇ ನಟಿಸೋದು ನಿಮ್ಮ ಆಯ್ಕೆಯಾಗಿತ್ತಾ?&lt;/strong&gt;&lt;/p&gt;&lt;p&gt;ನೆವರ್. ನನಗೆ ಒಂದೇ ಥರದ ಪಾತ್ರಗಳಲ್ಲಿ ನಟಿಸಿ ಬೇಜಾರಾಗಿತ್ತು. ಯಾಕೆ ಹೊಸ ಥರದ ಪಾತ್ರ ಸಿಗುತ್ತಿಲ್ಲ ಅಂತ ಯೋಚಿಸುತ್ತಿದ್ದೆ. ಒಮ್ಮೊಮ್ಮೆ ಅನ್ನಿಸುತ್ತೆ, ಇಲ್ಲಿ ಒಂಥರ ಈಗೋ ಇದೆ. ಅವರನ್ನೇನು ಕರೆಯೋದು, ಅವರನ್ನು ಯಾಕೆ ಕರೀಬೇಕು ಅಂತೆಲ್ಲ ಅಂದುಕೊಳ್ಳುತ್ತಾರೆ. ಒಂದು ವರ್ಕ್&zwnj;ಶಾಪ್ ಮಾಡಿದರೆ ತಾನೇ ನಾವೇನು ಅಂತ ನಿರ್ದೇಶಕರಿಗೆ ಗೊತ್ತಾಗೋದು, ವೆಟ್ರಿಮಾರನ್ ಸಿನಿಮಾ ಮಾಡೋ ಮೊದಲು ವರ್ಕ್&zwnj;ಶಾಪ್ ಮಾಡ್ತಾರೆ. ಇಲ್ಲಿ ಅಂಥ ಅಭ್ಯಾಸವೇ ಇಲ್ಲ. ಸುಮ್ಮನೆ ಅವರು ಒಪ್ಪೋದಿಲ್ಲ, ಸೂಟ್ ಆಗೋದಿಲ್ಲ ಅಂದು ಬಿಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ವೃತ್ತಿಪರತೆಯೇ ಇಲ್ಲ ಅಂತ ಕೆಲವೊಂದು ಸಲ ಅನ್ನಿಸುತ್ತೆ.&lt;/p&gt;&lt;p&gt;&lt;strong&gt;6. ಪ್ಯಾನ್&zwnj; ಇಂಡಿಯಾ ಬಂದ ನಂತರ ನಟಿಯರಿಗೆ, ಪೋಷಕ ನಟರಿಗೆ ಅವಕಾಶ ವಂಚನೆಯಾಗಿದೆ ಅಲ್ಲವೇ?&lt;/strong&gt;&lt;/p&gt;&lt;p&gt;ನನಗೆ ಈ ಪರಿಕಲ್ಪನೆಯೇ ಅರ್ಥ ಆಗೋಲ್ಲ. ಪಾನ್ ಇಂಡಿಯಾ ಆಗಬೇಕಿದ್ದರೆ ಬೇರೆ ಭಾಷೆಯವರನ್ನೇ ಹಾಕಿಕೊಳ್ಳಬೇಕಾ? ಕನ್ನಡದವರನ್ನೇ ಹಾಕಿಕೊಂಡು ಪ್ಯಾನ್&zwnj; ಇಂಡಿಯಾ ಚಿತ್ರ ಮಾಡೋದಕ್ಕಾಗಲ್ವಾ? ಕಾಂತಾರದ ಥರ ಕನ್ನಡದ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಆಗಬಹುದಲ್ಲ. ಕೂಲಿಯಲ್ಲಿ ನಾನು, ಉಪೇಂದ್ರ ಹಾಗೂ ಎಲ್ಲಾ ಭಾಷೆಯವರೂ ಇದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಎಲ್ಲಾ ದಕ್ಷಿಣ ಭಾರತೀಯ ಭಾಷೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಲೋಕಲ್ ಆಗಿದ್ದೇ ಗ್ಲೋಬಲ್ ಆಗಬೇಕು,&lt;/p&gt;&lt;p&gt;&lt;strong&gt;7. ನೀವು ಸೆಟ್&zwnj;ನಲ್ಲಿ ಹೇಗಿರುತ್ತೀರಿ?&lt;/strong&gt;&lt;/p&gt;&lt;p&gt;ನಾನು ಸಿಂಪಲ್ ಹುಡುಗಿ. ಕ್ಯಾರವಾನ್&zwnj;ನಿಂದ ಹೆಚ್ಚಿನ ಸಮಯ ಹೊರಗೇ ಇರ್ತೀನಿ. ಟೀಮ್ ಚೆನ್ನಾಗಿದ್ದಾಗ ಅವರ ಜತೆ ಮಾತಾಡ್ತಿರೋಣ ಅನ್ನಿಸುತ್ತೆ. ಆರು ಗಂಟೆಗೆ ನಿಗದಿಯಾಗಿರುವ ಶೂಟಿಂಗ್ ಒಂಬತ್ತರ ತನಕ ಮುಂದೆ ಹೋದರೂ ಸಂತೋಷವಾಗಿ ಮಾಡ್ತೀನಿ. ಟೀಮ್ ಹೇಗಿರುತ್ತೆ ಅನ್ನೋದು ಮುಖ್ಯ. ನೀವು ಜಂಭದಿಂದ ಇದ್ದರೆ ನಾನೂ ಹಾಗೇ ಇರ್ತೀನಿ. ಇಲ್ಲದೇ ಹೋದರೆ ನನಗೆ ಎಲ್ಲರ ಜತೆ ಒಡನಾಟ ಇಷ್ಟ.&lt;/p&gt;&lt;p&gt;&lt;strong&gt;8. ವಿಮರ್ಶೆ ಬಂದಾಗ ಹೇಗೆ ತಗೋತೀರಿ?&lt;/strong&gt;&lt;/p&gt;&lt;p&gt;ನೆಗೆಟಿವ್ ಬಂದಾಗಲೂ ತಿದ್ದಿಕೊಳ್ಳೋದು ಇದ್ದಾಗ ತಿದ್ದಿಕೊಳ್ತೀನಿ. ಕೆಟ್ಟದ್ದು ಮಾಡಿದಾಗ ಒಮ್ಮೆ ಯೋಚಿಸ್ತೀನಿ. ಹೌದಲ್ವಾ, ಇದನ್ನು ತಿದ್ದಿಕೊಂಡರೆ ನನಗೇ ಒಳ್ಳೇದಾಗುತ್ತಲ್ಲ ಅನ್ನಿಸಿದಾಗ ತಗೋತೀನಿ. ಆದರೆ ಸಾಮಾನ್ಯವಾಗಿ ಹೊಗಳಿಕೆ ತೆಗಳಿಕೆ ಯಾವುದನ್ನೂ ತುಂಬ ಹಚ್ಚಿಕೊಳ್ಳೋದಿಲ್ಲ.&lt;/p&gt;&lt;p&gt;&lt;strong&gt;9. ಸೋಷಲ್ ಮೀಡಿಯಾದ ಕಾಮೆಂಟಿನಿಂದ ಮೂಡ್ ಆಫ್ ಆಗೋದಿಲ್ವಾ?&lt;/strong&gt;&lt;/p&gt;&lt;p&gt;- ಪ್ರತಿ ತಿಂಗಳೂ ಇಎಂಐ ಕಟ್ಟಬೇಕಾಗಿ ಬಂದಾಗ, ಬ್ಯಾಂಕಿನಿಂದ ದುಡ್ಡು ಹೋದಾಗ ಮೂಡ್ ಆಫ್ ಆಗುತ್ತೆ. ಮಿಕ್ಕಂತೆ ಸಂತೋಷವಾಗಿಯೇ ಇರ್ತೀನಿ.&lt;/p&gt;&lt;p&gt;&lt;strong&gt;10. ಸಿಟ್ಟು ಎಷ್ಟಿದೆ?&lt;/strong&gt;&lt;/p&gt;&lt;p&gt;-ನನಗೆ ಬಹಳ ಬೇಗ ಸಿಟ್ಟು ಬರುತ್ತೆ. ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ. ಸುಳ್ಳು ಹೇಳಿದರೆ, ನಾಟಕ ಮಾಡಿದರೆ ಬಹಳ ಕೋಪ ಬರುತ್ತೆ. ಹೊರಗೆ ಸಿಟ್ಟು ಬಂದಾಗ ಕಿರುಚೋದಿಲ್ಲ, ಸುಮ್ಮನೆ ಎದ್ದು ಬರ್ತೀನಿ. ಅಪ್ಪ ಹೇಳುತ್ತಿರುತ್ತಾರೆ, ದುಷ್ಟರನ್ನು ಕಂಡರೆ ದೂರ ಇರು ಅಂತ. ಎದ್ದು ಬಂದುಬಿಡ್ತೀನಿ. ಒಂದು ಅರ್ಧ ಗಂಟೇಲಿ ಇಳಿದೂ ಹೋಗುತ್ತೆ.&lt;/p&gt;&lt;p&gt;&lt;strong&gt;11. ರಾಷ್ಟ್ರಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದೀರಾ?&lt;/strong&gt;&lt;/p&gt;&lt;p&gt;- ಇಲ್ಲಿಯ ತನಕ ಅಂಥ ಅವಕಾಶ, ಸನ್ನಿವೇಶ ಬಂದಿಲ್ಲ. ಮುಂದೆ ಬರಬಹುದು, ಭಗವಂತ ನನಗೆ ಮೋಸ ಮಾಡೋದಿಲ್ಲ, ಅಂಥ ಒಂದು ಪಾತ್ರ ಬರಬಹುದು. ನಟಿಸೋದಕ್ಕೆ ಅವಕಾಶ ಕೊಟ್ಟ ದೇವರು ಪ್ರಶಸ್ತಿ ಕೊಡದೇ ಇರುತ್ತಾನಾ? ಟೈಮ್ ಬರಲಿ ಅಂತ ಕಾಯುತ್ತೇನೆ. ನನಗೆ ತುಂಬ ಅಭಿಮಾನಿಗಳಿದ್ದಾರೆ. ನಾನು ಯಾವ ಊರಿಗೆ ಹೋದರೂ ಸಂಭ್ರಮಿಸುತ್ತಾರೆ. ಅದೇ ನನ್ನ ಸಂತೋಷ.&lt;/p&gt;&lt;p&gt;&lt;strong&gt;ಅಭಿಮಾನಿಗಳಿಗೆ ಸಂಡೇ ಸಡಗರ&lt;/strong&gt;&lt;/p&gt;&lt;p&gt;ಪ್ರತಿ ಭಾನುವಾರ ಮನೆ ಮುಂದೆ 100-150 ಮಂದಿ ಮನೆ ಮುಂದೆ ಕಾಯುತ್ತಾರೆ. ನಾನು ಅವರನ್ನು ಭೇಟಿ ಮಾಡುತ್ತೀನಿ. ದರ್ಶನ್ ಹೇಳಿಕೊಟ್ಟ ಪಾಠ ಇದು. ಅಭಿಮಾನಿಗಳು ಪ್ರೀತಿಯಿಂದ ಬಂದಾಗ ಭೇಟಿ ಮಾಡಿ, ಒಂದು ಫೋಟೋ ತಗೊಂಡು ಹೋಗ್ತಾರೆ ಅಷ್ಟೇ. ಅವರಿಗೆ ನಿರಾಸೆ ಮಾಡಬಾರದು ಅಂತ ದರ್ಶನ್ ಹೇಳಿದ್ದರು. ನಾನು ಅದನ್ನು ಈಗಲೂ ಪಾಲಿಸುತ್ತಾ ಬಂದಿದ್ದೀನಿ.&lt;/p&gt;&lt;p&gt;&lt;strong&gt;ನನ್ನನ್ನು ಕಾರಿಗೇ ಹತ್ತಿಸುತ್ತಿರಲಿಲ್ಲ&lt;/strong&gt;&lt;/p&gt;&lt;p&gt;ನನಗೆ ಕಾರೆಂದರೆ ಆಕರ್ಷಣೆ. ನಾನು ಬಾಲ್ಯದಲ್ಲಿದ್ದಾಗ ಒಂದು ಘಟನೆ ನಡೆದಿತ್ತು. ನಮ್ಮ ಸಂಬಂಧಿಕರು ನನಗೆ ಕಾರು ಹತ್ತಿಸುತ್ತಿರಲಿಲ್ಲ. ನಮ್ಮ ಹತ್ತಿರವೂ ಕಾರು ಇರಲಿಲ್ಲ. ಕಾರಿಗೆ ಹತ್ತಿಸಿಕೊಂಡರೆ ನಾನು ವಾಂತಿ ಮಾಡ್ಕೋತೀನಿ ಅಂತ ಕಾರಿಗೆ ಹತ್ತೋದಕ್ಕೇ ಬಿಡ್ತಿರಲಿಲ್ಲ. ಹೀಗಾಗಿ ನಾನು ತಗೊಳ್ಳಲೇಬೇಕು ಅಂತ ಹಠ ಬಂತು. ಅಪ್ಪನಿಗೆ ಒತ್ತಾಯ ಮಾಡಿದೆ. ಆಗ ಕಪ್ಪು ಸ್ಯಾಂಟ್ರೋ ಕಾರು ಬಂತು. ಆದರೂ ನನಗೆ ತೃಪ್ತಿ ಆಗಿರಲಿಲ್ಲ. ಆಮೇಲೆ ನಾನೇ ಕಾರು ತಗೊಂಡೆ. ನನಗೆ ಇವತ್ತು ಪ್ರತಿ ಕಾರಲ್ಲೂ ಕೂತರೂ ಹೆಮ್ಮೆ ಅನ್ನಿಸುತ್ತೆ. ಇದು ನನ್ನ ಕಾರು. ನಾನು ತಗೊಂಡಿರೋದು ಅನಿಸುತ್ತೆ. ತುಂಬ ಖುಷಿಯಾಗುತ್ತೆ.&lt;/p&gt;&lt;h2&gt;&lt;strong&gt;ಮದುವೆ ಆಗಲು ಸಕಾರಣಗಳಿಲ್ಲ!&lt;/strong&gt;&lt;/h2&gt;&lt;p&gt;ಕಳೆದ ವರ್ಷದ ನಂತರ ಬಹಳ ಆಸೆಯಿತ್ತು. ಅಮ್ಮ ಅಪ್ಪಂಗೆ ಮುಂದಿನ ವರ್ಷ ಮದುವೆ ಮಾಡಬೇಕು ಅಂತ ಹೇಳಿ ಕುಣೀತಿದ್ದೆ. ಆದರೆ ಬರ್ತಾ ಬರ್ತಾ ಇಮೋಷನ್&zwnj;ಗೆ ಮತ್ತು ರಿಲೇಷನ್&zwnj;ಶಿಪ್&zwnj;ಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ ಅಂತ ಅನ್ನಿಸೋದಕ್ಕೆ ಶುರುವಾಯ್ತು. ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇವತ್ತಿನ ಖುಷಿ, ಇವತ್ತಿಗೆ ಮಾತ್ರ. ಕ್ಷಣ ಕ್ಷಣದ ಬದುಕು ಮುಖ್ಯ ಅಂತ ಎಲ್ಲರಿಗೂ ಅನ್ನಿಸ್ತಿದೆ. ಇವತ್ತು ಚೆನ್ನಾಗಿ ಕುಡಿಯೋಣ, ನಾಳೆಯದು ನಾಳೆಗೆ ಅಂತಾಗಿದೆ. ನಮ್ಮ ಅಪ್ಪ ಅಮ್ಮನ ಸಂಬಂಧದಂತೆ ಏನೇ ಆದರೂ ಜತೆಗಿರಬೇಕು ಅನ್ನೋ ಭಾವನೆ ಕಾಣಿಸ್ತಿಲ್ಲ. ಮಾತು ಮಾತಿಗೆ ಡೈವೋರ್ಸ್ ಅಂತಾಗಿದೆ. ಅಂಥದ್ದಕ್ಕೆ ಯಾಕೆ ಟೈಮ್ ವೇಸ್ಟ್ ಮಾಡಬೇಕು. ಇಬ್ಬರ ಮಧ್ಯೆ ಏನು ನಡೆಯುತ್ತೆ ಅಂತ ಬೇರೆ ಯಾರಿಗೂ ಗೊತ್ತಾಗಲ್ಲ. ಹೇಳೋದಕ್ಕೂ ಆಗಲ್ಲ. ಎಲ್ಲರೂ ತಾಳ್ಮೆ ಕಳ್ಕೊಂಡಿದ್ದಾರೆ. ಸಿನಿಮಾ ನೋಡೋದಕ್ಕೆ ಬಂದಾಗಲೂ ಮೊಬೈಲ್ ನೋಡ್ತಾ ಕೂತ್ಕೋತಾರೆ. ತಾಳ್ಮೆ ಇಲ್ಲದೇ ಹೋದಾಗ ಸಂಬಂಧವನ್ನು ನಿಭಾಯಿಸೋದು ಕಷ್ಟ. ಇದರ ಮಧ್ಯೆ ಈಗೋ, ಸಂಪಾದನೆ, ಅಹಂಕಾರ ಎಲ್ಲ ಬರುತ್ತೆ. ಇದರ ಬಗ್ಗೆ ಇಡೀ ದಿನ ಮಾತಾಡಬಹುದು. ಸದ್ಯಕ್ಕೆ ನಾನು ದೇವರು ಕೊಟ್ಟ ಕೆಲಸವನ್ನು ಮಾಡ್ತಾ ಹೋಗ್ತೀನಿ. ಎಲ್ಲವನ್ನೂ ಅವನಿಗೇ ಬಿಟ್ಟಿದ್ದೀನಿ. ಅಪ್ಪ ಅಮ್ಮನ ಜತೆ ಸಂತೋಷವಾಗಿದ್ದೀನಿ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/actress-rachita-ram-interview-marriage-career-and-national-award-gvd/articleshow-reksvs6"/>
        </item>
        <item>
            <title><![CDATA[ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾ ಕನಸಿನ ಹಿಂದೆ ಓಡಿದ ತಾರುಷ್: 'ಜಾಲಿ' ಮೂಲಕ ಹೊಸ ಹೆಜ್ಜೆ]]></title>
            <link>https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy</link>
            <guid isPermaLink="true">https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy</guid>
            <pubDate>Fri, 31 Jul 2026 19:48:40 +0530</pubDate>
            <description><![CDATA[&lt;p&gt;Jolly Kannada Movie: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyw8mg5xk99ns7s3qm2jgn10,imgname-ch-1785507496125.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು. ಇದೇ ವಿಚಾರವನ್ನು 'ಜಾಲಿ' ಚಿತ್ರದ ಮೂಲಕ ನಿರ್ದೇಶಕರಾಗಿ ಹಾಗೂ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ತಾರುಷ್&zwnj; ಹಂಚಿಕೊಂಡಿದ್ದಾರೆ. ಇತ್ತೀಚೆಗೆ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಅವರು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿರುವ ತಾರುಷ್&zwnj;, ಸಿನಿಮಾ ಮಾಡುವುದು ಒಂದು ಸವಾಲಾದರೆ, ಅದನ್ನು ಚಿತ್ರಮಂದಿರಕ್ಕೆ ತಲುಪಿಸುವುದು ಮತ್ತೊಂದು ದೊಡ್ಡ ಹೋರಾಟ ಎಂದು ಹೇಳಿದ್ದಾರೆ.&lt;/p&gt;&lt;p&gt;ಜುಲೈ 31ರಂದು ಬಿಡುಗಡೆಯಾಗುತ್ತಿರುವ 'ಜಾಲಿ' ಚಿತ್ರದ ಮೂಲಕ ತಾರುಷ್&zwnj; ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಅವರು ಸಿನಿಮಾದ ನಾಯಕನಾಗಿರುವುದರ ಜೊತೆಗೆ ಕಥೆ ಬರೆದಿದ್ದಾರೆ, ಸಂಕಲನ ಮಾಡಿದ್ದಾರೆ ಹಾಗೂ ಹಾಡಿನ ಸಾಹಿತ್ಯವನ್ನೂ ರಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ತಾರುಷ್&zwnj;, &quot;ಈ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಪರಿಸ್ಥಿತಿ ಹಾಗೆ ಮಾಡಿಸಿತು. ಈ ಹಿಂದೆ ನಾನು ಭಾಗಿಯಾಗಿದ್ದ ಕೆಲವು ಸಿನಿಮಾಗಳು ಬಿಡುಗಡೆಯಾಗಲೇ ಇಲ್ಲ. ಆ ಅನುಭವದಿಂದಲೇ 'ಜಾಲಿ' ಹುಟ್ಟಿತು. ಸಿನಿಮಾ ಮಾಡುವುದು ಒಂದು ಯುದ್ಧವಾಗಿದ್ದರೆ, ಅದನ್ನು ಥಿಯೇಟರ್&zwnj;ಗೆ ತರುವುದು ಮತ್ತೊಂದು ಯುದ್ಧ. ಈಗ ಆ ಹಂತವನ್ನು ದಾಟಿದ್ದೇವೆ. ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರದ್ದು,&quot; ಎಂದಿದ್ದಾರೆ.&lt;/p&gt;&lt;p&gt;&lt;strong&gt;ಸಂಬಂಧಗಳ ಕಥೆ ಹೇಳುವ 'ಜಾಲಿ'&lt;/strong&gt;&lt;/p&gt;&lt;p&gt;ತಾರುಷ್&zwnj; ನಿರ್ದೇಶನದ 'ಜಾಲಿ' ಚಿತ್ರವನ್ನು ಟಿಬಿವೈ ಕ್ರಿಯೇಷನ್ಸ್ ಮತ್ತು ಶ್ರೀ ಅಧಿಶಿವ ಕ್ರಿಯೇಷನ್ಸ್ ಬ್ಯಾನರ್&zwnj;ನಲ್ಲಿ ಬ್ರಿಜ್ ಯಾದವ್ ಹಾಗೂ ನಾಗವೇಣಿ ಎನ್ ನಿರ್ಮಿಸಿದ್ದಾರೆ. ಪ್ರೀತಿ, ಕಾಮಿಡಿ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಸಂಬಂಧಗಳ ಕುರಿತಾದ ಕಥೆಯನ್ನು ಹೊಂದಿದೆ. ಚಿತ್ರದ ಬಗ್ಗೆ ಮಾತನಾಡಿದ ತಾರುಷ್&zwnj;, &quot;ಇಂದಿನ ದಿನಗಳಲ್ಲಿ ಸಣ್ಣ ತಪ್ಪು ತಿಳುವಳಿಕೆಯೇ ಸಂಬಂಧಗಳಲ್ಲಿ ದೂರವನ್ನು ಸೃಷ್ಟಿಸುತ್ತದೆ. ಸ್ನೇಹಿತರಾಗಲಿ, ಕುಟುಂಬವಾಗಲಿ, ಪ್ರೀತಿಯ ಸಂಬಂಧವಾಗಲಿ-ತಾಳ್ಮೆ ಕಳೆದುಕೊಂಡಾಗ ನಾವು ನಮ್ಮವರನ್ನೇ ಕಳೆದುಕೊಳ್ಳುತ್ತೇವೆ. 'ಜಾಲಿ' ಕಥೆಯ ಮೂಲ ಇದೇ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ರಂಗಭೂಮಿಯೇ ನನ್ನ ಮೊದಲ ಪಾಠಶಾಲೆ&lt;/strong&gt;&lt;/p&gt;&lt;p&gt;ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ತಾರುಷ್&zwnj;, ರಂಗಭೂಮಿ ತಮ್ಮ ಜೀವನದ ದೊಡ್ಡ ಪ್ರಭಾವ ಎಂದು ಹೇಳಿದ್ದಾರೆ. &quot;ರಂಗಭೂಮಿಯೇ ನನ್ನ ಅಡಿಪಾಯ. ಅದು ಶಿಸ್ತು ಕಲಿಸುತ್ತದೆ. ಇರುವುದರಲ್ಲೇ ಉತ್ತಮ ಪ್ರದರ್ಶನ ನೀಡುವುದನ್ನು ಕಲಿಸುತ್ತದೆ. 'ಕಸದಿಂದ ರಸ' ಎಂಬುದೇ ರಂಗಭೂಮಿಯ ಶಕ್ತಿ. ಆದರೆ ರಂಗಭೂಮಿ ಮಾತ್ರ ಭವಿಷ್ಯ ಕಟ್ಟಲು ಸಾಕಾಗುವುದಿಲ್ಲ,&quot; ಎಂದಿದ್ದಾರೆ.&lt;/p&gt;&lt;p&gt;ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ತಾರುಷ್&zwnj;, ಡಾ.ರಾಜ್&zwnj;ಕುಮಾರ್ ಅವರ ಸಿನಿಮಾಗಳನ್ನು ನೋಡಿ ಅವರ ದೃಶ್ಯಗಳನ್ನು ಅನುಕರಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ. &quot;ನಂತರ ಒಂದು ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಹಾಡಿಗೆ ಪ್ರದರ್ಶನ ನೀಡಿದ್ದೆ. ಆಗ ಸಿಕ್ಕ ಶಿಳ್ಳೆ, ಚಪ್ಪಾಳೆಗಳು ನನ್ನ ಮನಸ್ಸಿನಲ್ಲಿ ಉಳಿದುಕೊಂಡವು. ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ?&quot; ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾದತ್ತ ಹೆಜ್ಜೆ&lt;/strong&gt;&lt;/p&gt;&lt;p&gt;ಸಿನಿಮಾಗೆ ಬರುವ ಮುನ್ನ ತಾರುಷ್&zwnj; ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮನಸ್ಸು ಮಾತ್ರ ಯಾವಾಗಲೂ ಸಿನಿಮಾದಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ. &quot;ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ನನ್ನ ಮನಸ್ಸು ಕಥೆ ಬರೆಯುತ್ತಿತ್ತು. ಸಿನಿಮಾ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನನ್ನ ಕೆಲಸದ ಸಂಸ್ಥೆಗೆ ನ್ಯಾಯ ಮಾಡುತ್ತಿಲ್ಲ ಎಂಬ ಭಾವನೆ ಬಂತು. ಆಗ ಕೆಲಸ ಬಿಟ್ಟು ನಿರ್ದೇಶಕನಾಗುವ ಕನಸಿನ ಹಿಂದೆ ಹೋಗಲು ನಿರ್ಧರಿಸಿದೆ,&quot; ಎಂದಿದ್ದಾರೆ. ತಮ್ಮ ಕನಸಿಗೆ ತಾಯಿ ನೀಡಿದ ಬೆಂಬಲವೇ ದೊಡ್ಡ ಶಕ್ತಿ ಎಂದು ಹೇಳಿರುವ ತಾರುಷ್&zwnj;, ತಂದೆಯನ್ನು ಒಪ್ಪಿಸುವಲ್ಲಿಯೂ ತಾಯಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೊಸಬರ ಸಿನಿಮಾಗಳಿಗೂ ಅವಕಾಶ ನೀಡಿ&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ತಾರುಷ್&zwnj;, ಪ್ರೇಕ್ಷಕರಲ್ಲಿ ವಿಶ್ವಾಸ ಮೂಡಿಸುವ ಮನವಿ ಮಾಡಿದ್ದಾರೆ. &quot;ಮನೆಯಲ್ಲೇ ಪೂಜಾ ಕೋಣೆ ಇದ್ದರೂ ಜನ ದೇವಸ್ಥಾನಕ್ಕೆ ಹೋಗುತ್ತಾರೆ. ಅದೇ ರೀತಿ ಮನೆಯಲ್ಲೇ ಸಿನಿಮಾ ನೋಡಬಹುದಾದರೂ ಥಿಯೇಟರ್ ಅನುಭವಕ್ಕಾಗಿ ಜನ ಬರುತ್ತಾರೆ. ಒಂದು-ಎರಡು ಸಿನಿಮಾಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂದು ಚಿತ್ರಮಂದಿರಗಳ ಮೇಲಿನ ನಂಬಿಕೆ ಕಳೆದುಕೊಳ್ಳಬೇಡಿ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;'ಜಾಲಿ' ಚಿತ್ರದ ಮುಖ್ಯ ಉದ್ದೇಶ ಮನರಂಜನೆ ನೀಡುವುದು ಎಂದು ಹೇಳಿರುವ ತಾರುಷ್&zwnj;, &quot;ನಾವು ಪ್ರೇಕ್ಷಕರಿಗೆ ಯಾವುದೇ ಸಂದೇಶ ಬೋಧಿಸಲು ಬಂದಿಲ್ಲ. ಪ್ರೀತಿ, ಸಂಬಂಧ ಮತ್ತು ಭಾವನೆಗಳ ಮೂಲಕ ಸಾಗುವ ಮನರಂಜನಾತ್ಮಕ ಕಥೆ ಇದು,&quot; ಎಂದಿದ್ದಾರೆ. ಚಿತ್ರದಲ್ಲಿ ಡಾ. ಪುನೀತ್ ರಾಜ್&zwnj;ಕುಮಾರ್ ಅವರ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಗೌರವ ಸಲ್ಲಿಸುವ ಅಂಶವೂ ಇದೆ ಎಂದು ತಾರುಷ್&zwnj; ತಿಳಿಸಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕರಿಗೆ ಮನವಿ ಮಾಡಿರುವ ಅವರು, &quot;ಕೆಜಿಎಫ್, ಕಾಂತಾರ, ಸಪ್ತ ಸಾಗರದಾಚೆ ಎಲ್ಲೋ ರೀತಿಯ ಸಿನಿಮಾಗಳನ್ನು ಬೆಂಬಲಿಸಿದವರು ಹೊಸಬರ ಪ್ರಯತ್ನಗಳಿಗೂ ಅವಕಾಶ ನೀಡಿ. ಪ್ರತಿಯೊಬ್ಬ ನಿರ್ದೇಶಕನೂ ಎಲ್ಲೋ ಒಂದು ಕಡೆ ಆರಂಭಿಸುತ್ತಾನೆ. ಮೊದಲು ನಮ್ಮ ಸಿನಿಮಾ ನೋಡಿ, ನಂತರ ನಿಮ್ಮ ತೀರ್ಪು ನೀಡಿ,&quot; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/jolly-director-tarush-urges-audience-to-support-new-kannada-films-gvd/articleshow-tdiqoqy"/>
        </item>
        <item>
            <title><![CDATA[ಶಾಂತಿ ಕ್ರಾಂತಿ ರೀ-ರಿಲೀಸ್, ‘ಮುಧೋಳ್’ ಸಿನಿಮಾ, ನಿರ್ಮಾಪಕರ ಪ್ರಶ್ನೆ: ವಿಕ್ರಮ್ ರವಿಚಂದ್ರನ್ ಓಪನ್ ಟಾಕ್]]></title>
            <link>https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y</link>
            <guid isPermaLink="true">https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y</guid>
            <pubDate>Thu, 06 Aug 2026 22:49:07 +0530</pubDate>
            <description><![CDATA[&lt;p&gt;ಈ ವರ್ಷ ಸೆಪ್ಟೆಂಬರ್&zwnj; 19 ಬಂದರೆ &lsquo;ಶಾಂತಿ ಕ್ರಾಂತಿ&rsquo; ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ ಎಂದರು ವಿಕ್ರಮ್ ರವಿಚಂದ್ರನ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzc0p8fmt9a38vqevn9tqmsg,imgname-kk-1786036036084.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;* ರವಿಚಂದ್ರನ್&zwnj; ಅವರ ಶಾಂತಿಕ್ರಾಂತಿ ರೀ ರಿಲೀಸ್ ಪ್ಲಾನ್&zwnj; ಏನು?&lt;/strong&gt;&lt;/p&gt;&lt;p&gt;ಚಿತ್ರ ಮರುಬಿಡುಗಡೆ ಮಾತುಕತೆ ನಡೆಯುತ್ತಿದೆ. ಆ ಪ್ರಕ್ರಿಯೆ, ಸಾಧ್ಯತೆ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಜೊತೆಗೆ ಸಿನಿಮಾದ ನೆಗೆಟಿವ್&zwnj; ರೀಲ್&zwnj; ಚೆಕ್&zwnj; ಮಾಡಬೇಕು, ಸಿನಿಮಾಕ್ಕೆ ಸಂಬಂಧಿಸಿದವರ ಜೊತೆಗೆ ಮಾತುಕತೆ ಆಗಬೇಕು. ಇನ್ನೊಂದು ಹತ್ತು ದಿನದಲ್ಲಿ ಮರು ಬಿಡುಗಡೆ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಸಾಧ್ಯತೆ ಇಲ್ಲ ಅಂದರೆ ಆಗಲ್ಲ ಅಂತ ನೇರವಾಗಿ ಜನರಿಗೆ ಹೇಳ್ತೀವಿ.&lt;/p&gt;&lt;p&gt;&lt;strong&gt;* ಇದ್ದಕ್ಕಿದ್ದ ಹಾಗೆ ಶಾಂತಿಕ್ರಾಂತಿ ಬಗ್ಗೆ ಅಲೆ ಎದ್ದಿದ್ದು ಯಾಕೆ?&lt;/strong&gt;&lt;/p&gt;&lt;p&gt;ಈ ವರ್ಷ ಸೆಪ್ಟೆಂಬರ್&zwnj; 19 ಬಂದರೆ &lsquo;ಶಾಂತಿ ಕ್ರಾಂತಿ&rsquo; ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ. ಆದರೆ ಅದಕ್ಕೂ ಹೆಚ್ಚೇ ಬಜೆಟ್&zwnj; ಇತ್ತು ಅಂತ ತಂದೆಯವರು ಹೇಳುತ್ತಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ಸೋಷಿಯಲ್&zwnj; ಮೀಡಿಯಾ ತೆಗೆದರೆ ಬರೀ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಮಾಡಿ ಅನ್ನುವ ಪೋಸ್ಟ್&zwnj;ಗಳೇ ಕಣ್ಣಿಗೆ ಬೀಳುತ್ತಿವೆ. ಅಪ್ಪನೂ ರೀರಿಲೀಸ್&zwnj; ಚಾನ್ಸ್&zwnj; ಇದೆಯಾ ನೋಡು ಅಂದಿದ್ದಾರೆ. ಅದು ಜನರ ಪ್ರೀತಿ. ಆ ಪ್ರೀತಿ ಬಗ್ಗೆ ಯೋಚಿಸುತ್ತೇನೆಯೇ ಹೊರತು ಹಿಟ್&zwnj; ಫ್ಲಾಪ್&zwnj; ಬಗ್ಗೆ ತಲೆ ಕೆಡಿಸಿಕೊಳಲ್ಲ.&lt;/p&gt;&lt;p&gt;&lt;strong&gt;* ಆರು ತಿಂಗಳ ಹಿಂದೆ ಸೋಷಲ್&zwnj; ಮೀಡಿಯಾದಿಂದ ಔಟ್ ಆದ್ರಿ. ಸಡನ್ನಾಗಿ ಮತ್ತೆ ಕಾಣಿಸಿಕೊಂಡು ಮುಧೋಳ್&zwnj; ಸಿನಿಮಾ ಬಗ್ಗೆ ಮಾತಾಡಿದ್ರಿ. ಈ ಆರು ತಿಂಗಳಲ್ಲಿ ಏನಾಗಿತ್ತು?&lt;/strong&gt;&lt;/p&gt;&lt;p&gt;ಮುಧೋಳ್ ಸಿನಿಮಾವನ್ನು ಈ ವರ್ಷ ಜನವರಿಗೆ ಬಿಡುಗಡೆ ಮಾಡುವ ಪ್ಲಾನ್&zwnj; ಇತ್ತು. ಆದರೆ ಸಿನಿಮಾದ ಔಟ್&zwnj;ಪುಟ್&zwnj; ನಾವಂದುಕೊಂಡ ಹಾಗೆ ಬರಲಿಲ್ಲ. ರೀ ವರ್ಕ್&zwnj; ಮಾಡಬೇಕಿತ್ತು. ಹಾಗೆಂದು ನಾವೇನು ದೊಡ್ಡ ಬಜೆಟ್&zwnj; ಸಿನಿಮಾ ಮಾಡ್ತಿಲ್ಲ. ಆದರೆ ಮಾಡುವ ಸಿನಿಮಾವನ್ನು ಅಚ್ಚುಕಟ್ಟಾಗಿ ಮಾಡಿ ಜನರ ಮುಂದಿಡಬೇಕು, ನಾವು ಅಂದುಕೊಂಡಿರುವ ಹಾಗೆಯೇ ಮಾಡಬೇಕು ಅನ್ನುವುದಿತ್ತು. ಸೋಷಿಯಲ್&zwnj; ಮೀಡಿಯಾದಲ್ಲಿದ್ದರೆ ಜನ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡುತ್ತಾರೆ, ಅವರಿಗೆ ಉತ್ತರ ರೂಪದಲ್ಲಿ ಸಿನಿಮಾ ಅಪ್&zwnj;ಡೇಟ್&zwnj; ಅನ್ನೇ ಕೊಡೋಣ ಅಂದುಕೊಂಡು ಹೊರಬಂದೆ.&lt;/p&gt;&lt;p&gt;&lt;strong&gt;* ವಿಜಯ್&zwnj; ಟಾಟಾ ನಿಮಗೀಗ ಸಾಥ್&zwnj; ನೀಡುತ್ತಿದ್ದಾರಲ್ವಾ?&lt;/strong&gt;&lt;/p&gt;&lt;p&gt;ಅವರು ಕಳೆದ ವರ್ಷವೇ ನಮ್ಮ ಟೀಂಗೆ ಬಂದರು. ಅವರು ಪ್ರೊಡ್ಯೂಸರ್ಸ್ ಅನ್ನುವುದಕ್ಕಿಂತಲೂ ನಮ್ಮ ಕುಟುಂಬದ ಸದಸ್ಯರ ಹಾಗಿದ್ದಾರೆ. ಮುಧೋಳ್&zwnj; ಕಂಟೆಂಟ್&zwnj; ನೋಡಿ ಇಷ್ಟಪಟ್ಟರು. ದುಡ್ಡು ಮಾಡಬೇಕು ಅನ್ನೋದಕ್ಕಿಂತಲೂ ಒಂದೊಳ್ಳೆ ಸಿನಿಮಾ ಮಾಡುವ ಹಂಬಲ ಇತ್ತು. ಅವರ ಸಹಕಾರದಿಂದ ಮುಧೋಳ್&zwnj; ರಿಲೀಸ್&zwnj; ಪ್ರಕ್ರಿಯೆ ಸರಾಗವಾಗಿದೆ.&lt;/p&gt;&lt;p&gt;&lt;strong&gt;* ರವಿಚಂದ್ರನ್&zwnj; ಅವರಂಥಾ ನಟನ ಮಗನ ಸಿನಿಮಾಕ್ಕೇ ಪ್ರೊಡ್ಯೂಸರ್ಸ್&zwnj; ಸಿಗುತ್ತಿಲ್ಲವಾ?&lt;/strong&gt;&lt;/p&gt;&lt;p&gt;ಅದು ನಿರ್ಮಾಪಕರ ತಪ್ಪಲ್ಲ. ನನ್ನ ಪ್ರತಿಭೆ ಏನು ಅಂತ ಜಗತ್ತಿಗೆ ಪರಿಚಯವಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಆಗ ನಿರ್ಮಾಪಕರು ತಾನೇ ತಾನಾಗಿ ಬಂದು ಸಿನಿಮಾ ಮಾಡುತ್ತಾರೆ. ಅವರಿಗೂ ತಮ್ಮ ಬಂಡವಾಳ ವಾಪಸ್&zwnj; ಬರುವ ವಿಶ್ವಾಸ ಬರಬೇಕಲ್ವ, ನಾವೂ ಸ್ಪಂದಿಸಬೇಕು. ಒಳ್ಳೆ ಕತೆ ಸಿಗಬೇಕು. ಇವತ್ತು ಇರುವ ಟ್ರೆಂಡ್&zwnj;ಗೆ ರೆವೆನ್ಯೂ ತಂದುಕೊಡುವಷ್ಟು ನಾವೂ ಬೆಳೆದಿರಬೇಕು. ಮುಧೋಳ್&zwnj; ನನ್ನ ನಟನೆಯ ಮತ್ತೊಂದು ಸಿನಿಮಾ. ಇದನ್ನು ನೋಡಿ ಚೆನ್ನಾಗಿ ಆ್ಯಕ್ಟ್&zwnj; ಮಾಡಿದ ಹುಡುಗ ಅಂತ ಪ್ರೇಕ್ಷಕ ಹೇಳಿದರೂ ನನಗೆ ತೃಪ್ತಿ.&lt;/p&gt;&lt;p&gt;&lt;strong&gt;* ಯಾವಾಗ ಮುಧೋಳ್&zwnj; ರಿಲೀಸ್&zwnj;?&lt;/strong&gt;&lt;/p&gt;&lt;p&gt;ಶೂಟಿಂಗ್&zwnj; ಮುಗಿದಿದೆ. ಪೋಸ್ಟ್&zwnj; ಪ್ರೊಡಕ್ಷನ್&zwnj; ನಡೆಯುತ್ತಿದೆ. ಈ ವರ್ಷ ಅಕ್ಟೋಬರ್&zwnj; 15 ನಂತರ ಡಿಸೆಂಬರ್&zwnj;ಗೂ ಮೊದಲು ಬರ್ತೀವಿ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/vikram-ravichandran-i-m-waiting-for-the-day-my-talent-reaches-the-world-gvd/articleshow-xe5906y"/>
        </item>
        <item>
            <title><![CDATA[Special Interview: ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ, ನಾನು ಸ್ಟ್ರಿಕ್ಟ್: ನಟಿ ನಿಮಿಷಾ ಚಂದ್ರ]]></title>
            <link>https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude</link>
            <guid isPermaLink="true">https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude</guid>
            <pubDate>Mon, 15 Jun 2026 16:36:15 +0530</pubDate>
            <description><![CDATA[&lt;p&gt;Special Interview: ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ ಎಂದು ಸಂದರ್ಶನದಲ್ಲಿ ನಟಿ ನಿಮಿಷಾ ಚಂದ್ರ ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5fbj5key2rj930dhjgyzb6,imgname-bikb-1781521565875.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಕೇಳಿದ್ದೇನೆ, ಆದರೆ ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ ಎಂದು ನಟಿ ನಿಮಿಷಾ ಚಂದ್ರ ಹೇಳಿದ್ದಾರೆ. ಗ್ಲಾಮರ್ ಪಾತ್ರಗಳು, ನಾಯಕಿಯ ಘನತೆ ಮತ್ತು ಸಿನಿಮಾ ಪಯಣದ ಬಗ್ಗೆ ವಿಶೇಷ ಸಂದರ್ಶನ.&lt;/p&gt;&lt;p&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/p&gt;&lt;p&gt;&lt;strong&gt;* ಸಿನಿಮಾರಂಗಕ್ಕೆ ಎಂಟ್ರಿ ಹೇಗೆ?&lt;/strong&gt;&lt;/p&gt;&lt;p&gt;ನನ್ನ ತಾತ ಟೆಂಟ್&zwnj; ಸಿನಿಮಾ ನಡೆಸ್ತಿದ್ರು. ವಿತರಣೆಯನ್ನೂ ಮಾಡುತ್ತಿದ್ದರು. ತಂದೆ ಬರಹಗಾರರು. ಕೇಶವಚಂದ್ರ ಅಂತ. ಲಕುಮಿ, ಪುಟ್ಟಗೌರಿ ಮದುವೆ ಆರಂಭದ ಭಾಗ ಸೇರಿ ಒಂದಿಷ್ಟು ಧಾರಾವಾಹಿಗಳಿಗೆ, ಸಿನಿಮಾಗಳಿಗೆ ಸ್ಕ್ರಿಪ್ಟ್ ಕೆಲಸ ಮಾಡಿದ್ದಾರೆ. ನಾನು ಬಿ.ಸುರೇಶ್&zwnj; ಅವರ &lsquo;ನಾಕುತಂತಿ&rsquo; ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸಿದ್ದೆ. ಮುಂದೆ ಆನಿಮೇಶನ್&zwnj; ಮತ್ತು ಡಿಜಿಟಲ್&zwnj; ಮೀಡಿಯಾದಲ್ಲಿ ಡಿಗ್ರಿ ಮಾಡಿದೆ. ಈ ವೇಳೆ ಶಾರ್ಟ್ ಫಿಲಂಗಳನ್ನೂ ಮಾಡ್ತಿದ್ವಿ. ಆಗೆಲ್ಲ ನಟನೆಯತ್ತ ನನ್ನ ಒಲವಿರುವುದು ಸ್ಪಷ್ಟವಾಯಿತು. ಇನ್ನೇನು ಆ್ಯಕ್ಟಿಂಗ್&zwnj;ನಲ್ಲಿ ಕೋರ್ಸ್ ಮಾಡಬೇಕು ಅನ್ನುವಾಗ &lsquo;ಗೋಪಿಲೋಲ&rsquo; ಸಿನಿಮಾದ ನಾಯಕಿ ಪಾತ್ರಕ್ಕೆ ಕರೆಬಂತು. &lsquo;ಕನಕರಾಜ&rsquo; ಎರಡನೇ ಚಿತ್ರ.&lt;/p&gt;&lt;p&gt;&lt;strong&gt;* ಅಪ್ಪನಂತೆ ಬರವಣಿಗೆ ಮೇಲೆ ಪ್ರೀತಿ ಇದೆಯಾ?&lt;/strong&gt;&lt;/p&gt;&lt;p&gt;ಇದೆ. ಸದ್ಯ ಕಥೆ ಬರೀತಿದ್ದೇನೆ. ಅಪ್ಪ ಗೈಡ್&zwnj; ಮಾಡ್ತಿದ್ದಾರೆ. ನಿರ್ದೇಶನದಲ್ಲೂ ಆಸಕ್ತಿ ಇದೆ. ಈ ಹಿಂದಿನ ಚಿತ್ರ &lsquo;ಗೋಪಿಲೋಲ&rsquo; ಕ್ಕೆ ಅಸೋಸಿಯೇಟ್&zwnj; ಡೈರೆಕ್ಟರ್&zwnj; ಆಗಿ ಕೆಲಸ ಮಾಡಿದ್ದೆ.&lt;/p&gt;&lt;p&gt;&lt;strong&gt;* ಸಿನಿಮಾರಂಗ ನಾಯಕಿಯರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ?&lt;/strong&gt;&lt;/p&gt;&lt;p&gt;ನಾವು ಹೇಗಿರುತ್ತೇವೆಯೋ ಪ್ರತಿಕ್ರಿಯೆ ಹಾಗೇ ಇರುತ್ತೆ. ಆದರೂ ಸಿನಿಮಾರಂಗದಲ್ಲಿ ಕಾಸ್ಟಿಂಗ್ ಕೌಚ್ ಸಾಮಾನ್ಯ ಎಂದು ಕೇಳಿದ್ದೇನೆ. ಆದರೆ ನಾನು ಆ ವಿಷಯದಲ್ಲಿ ಸ್ಟ್ರಿಕ್ಟ್. ಆ ಥರದ ಕಾಂಪ್ರಮೈಸ್&zwnj; ಇರಲ್ಲ ಅನ್ನುವುದನ್ನು ಸ್ಪಷ್ಟವಾಗಿ ಹೇಳಿಯೇ ಸ್ಕ್ರಿಪ್ಟ್&zwnj; ಕೈಗೆತ್ತಿಕೊಳ್ಳುತ್ತೇನೆ.&lt;/p&gt;&lt;p&gt;&lt;strong&gt;* ಕಳೆದ ವಾರ ಜಾನ್ವಿ ಕಪೂರ್&zwnj; ಬೋಲ್ಡ್&zwnj;ನೆಸ್&zwnj; ಬಗ್ಗೆ ಚರ್ಚೆ ಆಯ್ತಲ್ಲಾ..&lt;/strong&gt;&lt;/p&gt;&lt;p&gt;ಅವರ ನಡುವೆ ಏನು ಕಮಿಟ್&zwnj;ಮೆಂಟ್&zwnj; ಇತ್ತೋ ಗೊತ್ತಿಲ್ಲ. ಆದರೆ ನಾಯಕಿಯ ವ್ಯಕ್ತಿತ್ವದ ಘನತೆ ಕಾಯಬೇಕು ಅನ್ನುವುದು ನನ್ನ ಅಭಿಪ್ರಾಯ. ನನಗೆ ವ್ಯಕ್ತಿತ್ವ ಇಲ್ಲದ ನಾಯಕಿ ಪಾತ್ರ ಇಷ್ಟವಿಲ್ಲ. ನನ್ನ ಅದೃಷ್ಟಕ್ಕೆ ಈ ಎರಡೂ ಸಿನಿಮಾಗಳಲ್ಲೂ ಸ್ವತಂತ್ರ ವ್ಯಕ್ತಿತ್ವದ ಅಭಿನಯಕ್ಕೆ ಅವಕಾಶ ಇರುವ ನಾಯಕಿ ಪಾತ್ರ ಸಿಕ್ಕಿದೆ.&lt;/p&gt;&lt;h2&gt;&lt;strong&gt;* ಗ್ಲಾಮರಸ್&zwnj;, ಬೋಲ್ಡ್&zwnj; ಪಾತ್ರಗಳಲ್ಲಿ ನಟಿಸ್ತೀರ?&lt;/strong&gt;&lt;/h2&gt;&lt;p&gt;ಕಥೆ ಪೂರಕವಾಗಿದ್ದರೆ, ಒಂದು ಚೌಕಟ್ಟಿನೊಳಗಿದ್ದರೆ ಗ್ಲಾಮರ್&zwnj; ಪಾತ್ರದಲ್ಲಿ ನಟಿಸಲು ಅಡ್ಡಿಯಿಲ್ಲ. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಲು ರೆಡಿ. ಹಾಗೆಂದು ಕನ್ನಡ ನನ್ನ ಭಾಷೆ. ಇದರಲ್ಲೇ ಮುಂದೆ ಹೋಗಬೇಕು ಎಂಬ ತುಡಿತವೂ ಇದೆ.&lt;/p&gt;]]></content:encoded>
            <category>celebrity-interviews</category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/nimisha-chandra-casting-couch-kannada-actress-interview-gvd/articleshow-z2x3ude"/>
        </item>
    </channel>
</rss>
