<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 30 May 2025 12:30:01 +0530</lastBuildDate>
        <atom:link href="https://kannada.asianetnews.com/rss/careers" rel="self" type="application/rss+xml"/>
        <item>
            <title><![CDATA[Anganawadi Recruitment 2025: ಮಹಿಳೆಯರಿಗೆ ಬಂಪರ್ ಅವಕಾಶ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ 2500 ಹುದ್ದೆಗೆ ಅರ್ಜಿ ಆಹ್ವಾನ]]></title>
            <link>https://kannada.asianetnews.com/careers/karnataka-anganwadi-recruitment-2025-apply/articleshow-d5e0pgx</link>
            <guid isPermaLink="true">https://kannada.asianetnews.com/careers/karnataka-anganwadi-recruitment-2025-apply/articleshow-d5e0pgx</guid>
            <pubDate>Sat, 24 May 2025 10:35:55 +0530</pubDate>
            <description><![CDATA[&lt;p&gt;ಸರ್ಕಾರಿ ಕೆಲ್ಸ ಮಾಡ್ಬೇಕು ಎನ್ನುವ ಮಹಿಳಾ ಅಭ್ಯರ್ಥಿಗಳಿಗೆ ಖುಷಿ ಸುದ್ದಿ ಇದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸ್ಬಹುದು.&lt;/p&gt;]]></description>
            <media:content url="https://static-gi.asianetnews.com/images/01jw0avyxjcwjxyjpm973xmqyk/untitled-design---2025-05-24t103312.389-1748063091634.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಂಗನವಾಡಿ (Anganwadi)ಯಲ್ಲಿ ಕೆಲ್ಸ ಮಾಡ್ಬೇಕೆಂಬ ಆಸೆಯುಳ್ಳ ಮಹಿಳೆಯರಿಗೆ ಭರ್ಜರಿ ಅವಕಾಶ ಸಿಗ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (WCD) ಇಲಾಖೆಗಳು ರಾಜ್ಯವಾರು ನೇಮಕಾತಿಗಳನ್ನು ಘೋಷಿಸಿವೆ. ಅರ್ಹತೆ, ದಾಖಲೆ ಪರಿಶೀಲನೆ ಅಥವಾ ಸ್ಥಳೀಯ ಪರೀಕ್ಷೆಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಕರ್ನಾಟಕ (Karnataka), ಉತ್ತರ ಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳು ಪ್ರತಿ ವರ್ಷ ಸಾವಿರಾರು ಖಾಲಿ ಹುದ್ದೆಗಳನ್ನು ಆಗಾಗ್ಗೆ ಭರ್ತಿ ಮಾಡ್ತಿರುತ್ತವೆ.ಈಗ ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕ ಹುದ್ದೆ (Anganwadi Worker and Helper Posts)ಗಳಿಗೆ ಭರ್ತಿ ನಡೆಯುತ್ತಿದೆ. ಮೈಸೂರು, ಹುಬ್ಬಳ್ಳಿ &ndash; ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅರ್ಜಿ ಕರೆದಿದ್ದು, ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡ್ಬೇಕು. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) 2,500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಅಂಗನವಾಡಿ ಕಾರ್ಯಕರ್ತೆಯರ 1000 ಹುದ್ದೆ ಹಾಗೂ ಸಹಾಯಕರ 1500 ಹುದ್ದೆಗೆ ಅರ್ಜಿ ಕರೆಯಲಾಗಿದೆ.&lt;/p&gt;&lt;p&gt;&lt;strong&gt;ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಕಾರ್ಯಕರ್ತೆಯರ ಅರ್ಹತೆ :&lt;/strong&gt;&lt;/p&gt;&lt;p&gt;ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು. ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವ ಮಹಿಳೆಯರು 10ನೇ ತರಗತಿ ಉತ್ತೀರ್ಣವಾಗಿರಬೇಕು. ಇದಲ್ಲದೆ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಹೆಚ್ಚುವರಿ ಕೋರ್ಸ್ ಮಾಡಿದ ಅಭ್ಯರ್ಥಿಗಳಿಗೂ ಇಲ್ಲಿ ಅವಕಾಶವಿದೆ.&lt;/p&gt;&lt;p&gt;&lt;strong&gt;ವಯಸ್ಸಿನ ಮಿತಿ : &lt;/strong&gt;ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ರಿಯಾಯತಿ ಇದೆ. ಇನ್ನು ಎಸ್ ಸಿಎಸ್ ಟಿ ಅಭ್ಯರ್ಥಿಗಳುಗೆ 5 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ರಿಯಾಯಿತಿ ನೀಡಲಾಗಿದೆ.&lt;/p&gt;&lt;p&gt;&lt;strong&gt;ಸಂಬಳ : &lt;/strong&gt;ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ರಿಂದ 15 ಸಾವಿರ ರೂಪಾಯಿ ಸಂಬಳ. ಅಂಗನವಾಡಿ ಸಹಾಯಕಿಯರಿಗೆ ಸರ್ಕಾರ ತಿಂಗಳಿಗೆ 7 ಸಾವಿರದಿಂದ 10 ಸಾವಿರದೊಳಗೆ ಸಂಬಳ ನೀಡುತ್ತದೆ.&lt;/p&gt;&lt;p&gt;&lt;strong&gt;ನೇಮಕಾತಿ : &lt;/strong&gt;ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಅವಶ್ಯಕತೆಯಿದ್ದಲ್ಲಿ ಪರೀಕ್ಷೆ ನಡೆಯುತ್ತದೆ, ಸಂದರ್ಶನ ಹಾಗೂ ದಾಖಲೆ ಪರಿಶೀಲಿಸಿ ಅಭ್ಯರ್ಥಿಗಳ ನೇಮಕಾತಿ ಮಾಡಲಾಗುದು. ಆಯ್ಕೆ ಪ್ರಕ್ರಿಯೆ ಆಯಾ ಜಿಲ್ಲೆ ನಿಯಮಕ್ಕೆ ತಕ್ಕಂತೆ ನಡೆಯುತ್ತದೆ.&lt;/p&gt;&lt;p&gt;ಮೈಸೂರು ಜಿಲ್ಲೆಯಲ್ಲಿ 319 ಹುದ್ದೆಗೆ ನೇಮಕಾತಿ : ಮೈಸೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರ 315 ಹುದ್ದೆಗೆ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆನ್ಲೈನ್ ಮೂಲಕ ನೀವು ಅರ್ಜಿ ಭರ್ತಿ ಮಾಡ್ಬೇಕು. https://karnemakaone.kar.nic.in/abcd/ApplicationForm_JA_org.aspx ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.&lt;/p&gt;&lt;p&gt;&lt;strong&gt;ಅರ್ಜಿ ಸಲ್ಲಿಸಲು ಕೊನೆ ದಿನಾಂಕ : &lt;/strong&gt;ಮೇ 16ರಿಂದ ಅರ್ಜಿ ಭರ್ತಿ ಶುರುವಾಗಿದ್ದು ಅಭ್ಯರ್ಥಿಗಳು ಜೂನ್ 15ರವರೆ ಅರ್ಜಿ ಸಲ್ಲಿಸಲು ಅವಕಾಶವಿದೆ.&lt;/p&gt;&lt;p&gt;&lt;strong&gt;ಧಾರವಾಡ ಹುಬ್ಬಳಿಯಲ್ಲಿ 192 ಅಭ್ಯರ್ಥಿಗಳ ನೇಮಕ : &lt;/strong&gt;ಇನ್ನು ಧಾರವಾಡ ಹುಬ್ಬಳ್ಳಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ 192 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. www.karnemakaone.kar.nic.in Recruitment 2025 ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.&lt;/p&gt;&lt;p&gt;&lt;strong&gt;ಬಾಗಲಕೋಟೆಯಲ್ಲಿ 577 ಹುದ್ದೆಗಳ ನೇಮಕಾತಿ : &lt;/strong&gt;ಬಾಗಲಕೋಟೆಯಲ್ಲಿ 577 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ ಐದರವರೆಗೆ ಅರ್ಜಿ ಸಲ್ಲಿಸಬಹುದು.&lt;/p&gt;]]></content:encoded>
            <category><![CDATA[careers]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/careers/karnataka-anganwadi-recruitment-2025-apply/articleshow-d5e0pgx"/>
        </item>
        <item>
            <title><![CDATA[Discipline Habits: ಬ್ಯುಸಿಯಾಗಿರುವ ಆಧುನಿಕ ಜೀವನದಲ್ಲಿ ಯಶಸ್ಸು ಗಳಿಸಲು 10 ನಿಯಮಗಳು]]></title>
            <link>https://kannada.asianetnews.com/gallery/careers/10-simple-discipline-habits-for-busy-life-pav-chg7pbo</link>
            <guid isPermaLink="true">https://kannada.asianetnews.com/gallery/careers/10-simple-discipline-habits-for-busy-life-pav-chg7pbo</guid>
            <pubDate>Sat, 24 May 2025 16:00:41 +0530</pubDate>
            <description><![CDATA[&lt;p&gt;ಇಂದಿನ ಈ ಕಾರ್ಯನಿರತ ಜೀವನದಲ್ಲಿ, ಈ ಆಧುನಿಕ ಜೀವನದಲ್ಲಿ ಜೀವನದಲ್ಲಿ ಪ್ರಗತಿ, ಯಶಸ್ಸು ಬೇಕು ಎಂದಾದರೆ ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು.&lt;/p&gt;]]></description>
            <media:content url="https://static-gi.asianetnews.com/images/01jvm2tvkf03h703nz2mhxfae7/success-story-1747652013679.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಈ ಕಾರ್ಯನಿರತ ಜೀವನದಲ್ಲಿ, ಈ ಆಧುನಿಕ ಜೀವನದಲ್ಲಿ ಜೀವನದಲ್ಲಿ ಪ್ರಗತಿ, ಯಶಸ್ಸು ಬೇಕು ಎಂದಾದರೆ ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಅದಕ್ಕಾಗಿ ಕೆಲವೊಂದು ನಿಯಮಗಳನ್ನು ನೀವು ಪಾಲಿಸಬೇಕು.&lt;/p&gt;&lt;img&gt;&lt;p&gt;ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಥವಾ ಮುಂದಿನ ದಿನ ಮಲಗುವ ಮುನ್ನ ನಿಮ್ಮ ದಿನವನ್ನು ಶೆಡ್ಯೂಲ್ (Schedule) ಮಾಡಿ. ಇದರಿಂದ ನಿಮ್ಮ ಕೆಲಸವು ಅದರಂತೆ ಸರಿಯಾದ ರೀತಿಯಲ್ಲಿ ನಡೆಯಲು ಸಾಧ್ಯವಾಗುತ್ತೆ.&lt;/p&gt;&lt;img&gt;&lt;p&gt;ಹೌದು, ನೀವು ದಿನನಿತ್ಯ ಏನೆಲ್ಲಾ ಕೆಲಸ ಮಾಡುತ್ತಿರೋ ಅವುಗಳನ್ನು ಪೂರೈಸಲು ನೀವು ಆ ಕೆಲಸಗಳನ್ನು ಎರಡು ಅಥವಾ ಮೂರು ಭಾಗಗಳನ್ನಾಗಿ ಮಾಡಬೇಕು. ಇದರಿಂದ ಕೆಲಸ ಮಾಡಲು ಸುಲಭವಾಗುತ್ತೆ.&lt;/p&gt;&lt;img&gt;&lt;p&gt;ನಿರಂತರವಾಗಿ ನೋಟಿಫಿಕೇಶನ್ (notification) ಬರ್ತಾ ಇದ್ರೆ, ಪದೇ ಪದೇ ಅದೇ ಮೆಸೇಜ್, ಯೂಟ್ಯೂಬ್, ರೀಲ್ಸ್ ಗಳನ್ನು ನೋಡುತ್ತಿದ್ದರೆ, ಇದರಿಂದ ನೀವು ಹೆಚ್ಚು ಒತ್ತಡಕ್ಕೆ ಒಳಗಾಗುತ್ತೀರಿ. ಇದರಿಂದ ಸಮಯವೂ ವ್ಯರ್ಥ. ಹಾಗಾಗಿ, ಸಾಧ್ಯವಾದಷ್ಟು ಮೊಬೈಲ್ ಗಳಿಂದ, ಇತರ ಡಿಜಿಟಲ್ ವಸ್ತುಗಳಿಂದ ದೂರ ಇರಿ.&lt;/p&gt;&lt;img&gt;&lt;p&gt;ಹೌದು, ನೀವೇ ಏನೇ ಕೆಲಸ ಮಾಡಿದ್ರೂ ಅದಕ್ಕೆ ಸರಿಯಾದ ಸಮಯವನ್ನು ನಿಗಧಿ ಮಾಡೋದನ್ನು (fix the time) ಮರಿಬೇಡಿ. ಪ್ರತಿಯೊಂದು ಕೆಲಸಕ್ಕೂ ಟೈಮ್ ಫಿಕ್ಸ್ ಮಾಡಿ, ಅದೇ ಸಮಯದಲ್ಲಿ ಕೆಲಸ ಮುಗಿಯುವಂತೆ ನೋಡ್ಕೊಳಿ. ಇದರಿಂದ ಪ್ರಾಡಕ್ಟಿವಿಟಿ ಹೆಚ್ಚುತ್ತೆ, ಬೇಗನೆ ಕೆಲಸ ಮುಗಿಯುತ್ತೆ.&lt;/p&gt;&lt;img&gt;&lt;p&gt;ಪ್ರತಿದಿನ ನಿಮ್ಮ ಆ ದಿನದ ಗುರಿ (aim of life) ಏನು ಅನ್ನೋದನ್ನು ಬರೆದುಕೊಳ್ಳಿ, ಜೊತೆಗೆ ಆ ದಿನದ ಆದ್ಯತೆಯ ಕೆಲಸ ಏನು ಅನ್ನೋದನ್ನು ಸಹ ಆಯ್ಕೆ ಮಾಡಿ. ಆ ಕೆಲಸ ಆದಷ್ಟು ಬೇಗನೆ ಆಗುವಂತೆ ನೋಡಿಕೊಳ್ಳೋದು ಮುಖ್ಯ. ಇದರಿಂದ ನಿಮ್ಮ ದಿನ ಸುಲಭವಾಗುತ್ತೆ.&lt;/p&gt;&lt;img&gt;&lt;p&gt;ನಿಮ್ಮ ಕಾರ್ಯಗಳು, ಆಲೋಚನೆಗಳು ಮತ್ತು ಪ್ರಗತಿಯನ್ನು ಬರೆಯುವುದು ನಿಮ್ಮ ಮನಸ್ಸನ್ನು ಮತ್ತಷ್ಟು ಸ್ಟ್ರಾಂಗ್ ಆಗಿಸುತ್ತೆ ಮತ್ತು ನಿಮ್ಮನ್ನು ಜವಾಬ್ದಾರಿಯುತವಾಗಿರಿಸುತ್ತದೆ. ದಿನಚರಿ ಚಿಂತನೆಯನ್ನು ಬೆಳೆಸುತ್ತದೆ, ಅಭ್ಯಾಸಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಬದ್ಧತೆಯನ್ನು ಬಲಪಡಿಸುತ್ತದೆ. ಇದರಿಂದ ನೀವು ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತೆ.&lt;/p&gt;&lt;img&gt;&lt;p&gt;ನಿಮ್ಮ ಬ್ಯುಸಿ ಶೆಡ್ಯೂಲ್ (busy schedule) ನಡುವೆ, ಆಗೋಂದು ಈಗೊಂದು ಸಣ್ಣದಾದ ಬ್ರೇಕ್ ತೆಗೆದುಕೊಳ್ಳೋದನ್ನು ಮರಿಬೇಡಿ. ಇದರಿಂದ ಉಸಿರಾಟದ ಎಕ್ಸರ್ ಸೈಜ್, ಸಣ್ಣ ವಾಕಿಂಗ್, ಎಲ್ಲವನ್ನೂ ಸೇರಿಸಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗಿರುತ್ತೆ.&lt;/p&gt;&lt;img&gt;&lt;p&gt;ನೀವು ಶಿಸ್ತಿನ ಜೀವನವನ್ನು ನಡೆಸಬೇಕು ಎಂದಾದ್ರೆ, ರಾತ್ರಿ ಚೆನ್ನಾಗಿ ನಿದ್ರೆ (healthy sleep) ಮಾಡೋದು ಮುಖ್ಯ. ಅದಕ್ಕಾಗಿ ನಿದ್ರೆಗೂ ಮುನ್ನ ಓದುವುದು, ಧ್ಯಾನ ಮಾಡುವುದು, ಎಕ್ಸರ್ಸೈಜ್ ಮಾಡೋದು ಎಲ್ಲವನ್ನೂ ಮಾಡಿ. ಇದೆಲ್ಲದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತೆ. ಗುಣಮಟ್ಟದ ನಿದ್ರೆ ನಿಮ್ಮದಾಗುತ್ತೆ.&lt;/p&gt;&lt;img&gt;&lt;p&gt;ನಿಮ್ಮ ಪ್ರಗತಿಯನ್ನು ಗುರುತಿಸುವುದು ಮತ್ತು ಪುರಸ್ಕರಿಸುವುದು ತುಂಬಾನೆ ಮುಖ್ಯ. ನಿಮ್ಮ ಗೆಲುವು ಸಣ್ಣದಾಗಿದ್ದರೂ ಸಹ ಪರವಾಗಿಲ್ಲ, ಅದನ್ನು ಸಂಭ್ರಮಿಸೋದು ಮುಖ್ಯ. ಈ ಸೆಲೆಬ್ರೇಶನ್ ಹೆಚ್ಚಿನದನ್ನು ಸಾಧಿಸಲು ಪ್ರೇರಣೆ ನೀಡುತ್ತೆ. ಸಕಾರಾತ್ಮಕ ಫೀಲಿಂಗ್ ನಿಡುತ್ತೆ.&lt;/p&gt;&lt;img&gt;&lt;p&gt;ಶಿಸ್ತು ಎಂದರೆ ಪರ್ಫೆಕ್ಷನ್ ಎಂದಲ್ಲ. ಜೀವನದಲ್ಲಿ ಅದೆಷ್ಟೋ ಅಡೆತಡೆ ಜೀವನದಲ್ಲಿ ಬರುತ್ತೆ. ಆದರೆ ನೀವು ಅದೆಲ್ಲವನ್ನೂ ಎದುರಿಸಿ ಧೈರ್ಯದಿಂದ ಜೀವನದಲ್ಲಿ ಹೆಜ್ಜೆಯನ್ನಿಡಬೇಕು. ಆವಾಗ ಮಾತ್ರ ಜೀವನದಲ್ಲಿ ಯಶಸ್ಸು ಸಿಗೋದಕ್ಕೆ ಸಾಧ್ಯ.&lt;/p&gt;]]></content:encoded>
            <category><![CDATA[careers]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/careers/10-simple-discipline-habits-for-busy-life-pav-chg7pbo"/>
        </item>
    </channel>
</rss>
