<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 18 Apr 2026 22:26:27 +0530</lastBuildDate>
        <atom:link href="https://kannada.asianetnews.com/rss/business" rel="self" type="application/rss+xml"/>
        <item>
            <title><![CDATA[ಕೋರ್ಟ್ ಕೇಸಲ್ಲಿ ಕೋಟಿ ಕೋಟಿ ಕಳೆದುಕೊಂಡ ಆಸ್ಟ್ರೇಲಿಯಾ ಶ್ರೀಮಂತ ಮಹಿಳೆ; ಸಂಪತ್ತನ್ನೆಲ್ಲಾ ಹಂಚುವಂತೆ ಆದೇಶ!]]></title>
            <link>https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb</link>
            <guid isPermaLink="true">https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb</guid>
            <pubDate>Wed, 15 Apr 2026 21:46:52 +0530</pubDate>
            <description><![CDATA[&lt;p&gt;ಆಸ್ಟ್ರೇಲಿಯಾದ ಶ್ರೀಮಂತೆ ಗೀನಾ ರೈನ್&zwnj;ಹಾರ್ಟ್ ವಿರುದ್ಧ ಅವರ ಇಬ್ಬರು ಮಕ್ಕಳು ಹಾಗೂ ತಂದೆಯ ಬ್ಯುಸಿನೆಸ್ ಪಾರ್ಟ್ನರ್&zwnj;ಗಳ ಮಕ್ಕಳು 13 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಇದೀಗ ಕೋರ್ಟ್ ತೀರ್ಪು ನೀಡಿದ್ದು, ಗೀನಾ ತಮ್ಮ ಸಂಪತ್ತಿನ ಪಾಲನ್ನು ಹಂಚಿಕೊಳ್ಳಬೇಕಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8q02fxk17f939bd0t5qbsj,imgname-gina-rinehart-1776261532156.jpg" type="image/jpeg" height="390" width="690"/>
            <content:encoded><![CDATA[&lt;p&gt;ದಶಕಗಳ ಕಾಲ ನಡೆದ ಕಾನೂನು ಸಮರದ ನಂತರ, ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ಮಹಿಳೆ ಗೀನಾ ರೈನ್&zwnj;ಹಾರ್ಟ್ ತಮ್ಮ ಸಂಪತ್ತಿನ ಲಾಭಾಂಶವನ್ನು ಇತರ ಕುಟುಂಬ ಸದಸ್ಯರಿಗೆ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿದೆ.&amp;nbsp;&lt;/p&gt;&lt;p&gt;ಆಸ್ಟ್ರೇಲಿಯಾದ ನಂಬರ್ 1 ಶ್ರೀಮಂತೆ ಗೀನಾ, ತಮ್ಮ ಗಣಿಗಾರಿಕೆ ಸಾಮ್ರಾಜ್ಯದಿಂದ ಬರುವ ಲಾಭವನ್ನು ಬೇರೆ ಎರಡು ಕುಟುಂಬಗಳೊಂದಿಗೆ ಹಂಚಿಕೊಳ್ಳಬೇಕಾಗಿದೆ. 1992ರಲ್ಲಿ ಗೀನಾ ತಮ್ಮ ತಂದೆಯ ಗಣಿಗಳನ್ನು ವಹಿಸಿಕೊಂಡಿದ್ದರು. ಪಶ್ಚಿಮ ಆಸ್ಟ್ರೇಲಿಯಾದ ಪಿಲ್ಬಾರಾದಲ್ಲಿ ಈ ಗಣಿಗಳಿವೆ. ಗೀನಾ ಅವರ ಇಬ್ಬರು ಮಕ್ಕಳು ಮತ್ತು ಅವರ ತಂದೆಯ ಬ್ಯುಸಿನೆಸ್ ಪಾರ್ಟ್ನರ್&zwnj;ಗಳ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿ 13 ವರ್ಷಗಳ ಕಾಲ ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.&amp;nbsp;&lt;/p&gt;&lt;p&gt;ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಗಣಿಗಳಿಂದ ಬರುವ ಲಾಭದ ಪಾಲನ್ನು ಗೀನಾ ಈಗ ಹಂಚಿಕೊಳ್ಳಬೇಕಾಗಿದೆ. ಪಿಲ್ಬರಾ ಪ್ರದೇಶದಲ್ಲಿರುವ ಅತ್ಯಂತ ಲಾಭದಾಯಕ ಕಬ್ಬಿಣದ ಅದಿರು ಗಣಿಗಳಿಂದ ಬರುವ ರಾಯಧನದ ಬಗ್ಗೆ ಈ ವಿವಾದವಿತ್ತು. ಆದರೆ, ಗಣಿಗಾರಿಕೆಯ ಹಕ್ಕು ರೈನ್&zwnj;ಹಾರ್ಟ್ ಅವರ ಬಳಿಯೇ ಇರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಅಮ್ಮನ ವಿರುದ್ಧವೇ ಮಕ್ಕಳಿಂದ ಆರೋಪ&lt;/strong&gt;&lt;/h2&gt;&lt;p&gt;ಆಸ್ಟ್ರೇಲಿಯಾದ ಅತಿದೊಡ್ಡ ಕಬ್ಬಿಣದ ಅದಿರು ಯೋಜನೆಗಳಲ್ಲಿ ಒಂದಾದ 'ಹೋಪ್ ಡೌನ್ಸ್' ಅನ್ನು ಕೇಂದ್ರವಾಗಿಟ್ಟುಕೊಂಡು ಈ ಕಾನೂನು ಸಮರ ನಡೆದಿತ್ತು. ಲಾಭದಾಯಕ ಗಣಿಗಾರಿಕೆ ಹಕ್ಕುಗಳನ್ನು ತಮಗೆ ಸಿಗದಂತೆ ಮಾಡಲು, ತಮ್ಮ ತಾಯಿ ಅವುಗಳನ್ನು ಫ್ಯಾಮಿಲಿ ಟ್ರಸ್ಟ್&zwnj;ನಿಂದ ವ್ಯವಹಾರದ ಇನ್ನೊಂದು ವಿಭಾಗಕ್ಕೆ ವರ್ಗಾಯಿಸಿದ್ದಾರೆ ಎಂದು ಗೀನಾ ರೈನ್&zwnj;ಹಾರ್ಟ್ ಅವರ ಮಕ್ಕಳು ಆರೋಪಿಸಿದ್ದರು. ದಶಕಗಳ ಹಿಂದೆ ಈ ಗಣಿಗಾರಿಕೆ ಪ್ರದೇಶಗಳನ್ನು ಪತ್ತೆಹಚ್ಚುವಲ್ಲಿ ಪಾಲುದಾರರ ಕುಟುಂಬಗಳು ವಹಿಸಿದ ಪಾತ್ರವು ಈ ತೀರ್ಪಿನಲ್ಲಿ ನಿರ್ಣಾಯಕವಾಯಿತು. ರೈನ್&zwnj;ಹಾರ್ಟ್ ಅವರ ಕಂಪನಿ 'ಹ್ಯಾನ್&zwnj;ಕಾಕ್ ಪ್ರಾಸ್ಪೆಕ್ಟಿಂಗ್' ಈ ಆಸ್ತಿಗಳ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದರೂ, ಪಾಲುದಾರರ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಳೆದ ವರ್ಷವೊಂದರಲ್ಲೇ ರೈನ್&zwnj;ಹಾರ್ಟ್ ಕಂಪನಿಗೆ 832 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಲಾಭ ಬಂದಿತ್ತು.&lt;/p&gt;&lt;p&gt;ಈ ತೀರ್ಪು ಗೀನಾ ರೈನ್&zwnj;ಹಾರ್ಟ್ ಅವರ ಕಂಪನಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ. ಅವರು ಈಗ ಕೋಟ್ಯಂತರ ಡಾಲರ್&zwnj;ಗಳನ್ನು ರಾಯಧನದ ರೂಪದಲ್ಲಿ ಈ ಕುಟುಂಬಗಳಿಗೆ ನೀಡಬೇಕಾಗುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಗೀನಾ ರೈನ್&zwnj;ಹಾರ್ಟ್&zwnj;ಗೆ ಇದು ದೊಡ್ಡ ಕಾನೂನು ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಗೀನಾ ಸಿದ್ಧತೆ ನಡೆಸಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/australian-billionaire-gina-rinehart-ordered-to-share-mining-fortune-after-13-year-legal-battle-sat/articleshow-0dzwzyb"/>
        </item>
        <item>
            <title><![CDATA[ನಿಮ್ಮಲ್ಲಿ Wipro ಷೇರು ಇದ್ಯಾ? 2023ರ ಬಳಿಕ ಮೊದಲ ಬಾರಿಗೆ ಷೇರು Buyback ಘೋಷಿಸಿದ ಕಂಪನಿ!]]></title>
            <link>https://kannada.asianetnews.com/business/wipro-share-buyback-2026-announcement-price-premium-q4-results-updates-san/articleshow-3a2zq2r</link>
            <guid isPermaLink="true">https://kannada.asianetnews.com/business/wipro-share-buyback-2026-announcement-price-premium-q4-results-updates-san/articleshow-3a2zq2r</guid>
            <pubDate>Thu, 16 Apr 2026 17:51:40 +0530</pubDate>
            <description><![CDATA[ಭಾರತದ ಪ್ರಮುಖ ಐಟಿ ಸಂಸ್ಥೆ ವಿಪ್ರೋ, ₹15,000 ಕೋಟಿ ಮೊತ್ತದ ಬೃಹತ್ ಶೇರ್ ಬೈಬ್ಯಾಕ್ ಘೋಷಿಸಿದೆ. ಟೆಂಡರ್ ಆಫರ್ ಮೂಲಕ ಪ್ರತಿ ಷೇರಿಗೆ ₹250 ದರದಲ್ಲಿ 60 ಕೋಟಿ ಷೇರುಗಳನ್ನು ಮರುಖರೀದಿ ಮಾಡಲಿದೆ. ಇದರೊಂದಿಗೆ, ಕಂಪನಿಯು ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hn0qfvdvb59vfxrekssj0va9,imgname-Wipro-Azim-Premji-1706200395195.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.16):&lt;/strong&gt; ಭಾರತದ ಪ್ರಮುಖ ಐಟಿ ಸೇವಾ ಸಂಸ್ಥೆಯಾದ ವಿಪ್ರೋ ಲಿಮಿಟೆಡ್ (Wipro Ltd.), ಗುರುವಾರ (ಏಪ್ರಿಲ್ 16) ಬರೋಬ್ಬರಿ ₹15,000 ಕೋಟಿ ಮೊತ್ತದ ಶೇರ್ ಬೈಬ್ಯಾಕ್ (Share Buyback) ಘೋಷಿಸಿದೆ. ಸುಮಾರು ಮೂರು ವರ್ಷಗಳ ನಂತರ ಕಂಪನಿಯು ಇಂತಹ ದೊಡ್ಡ ನಿರ್ಧಾರ ಕೈಗೊಂಡಿದೆ. ಕಂಪನಿಯು ಒಟ್ಟು 60 ಕೋಟಿ ಈಕ್ವಿಟಿ ಷೇರುಗಳನ್ನು ಮರುಖರೀದಿ ಮಾಡಲು ಯೋಜಿಸಿದೆ. ಇದು ಕಂಪನಿಯ ಒಟ್ಟು ಪಾವತಿಸಿದ ಈಕ್ವಿಟಿ ಶೇರು ಬಂಡವಾಳದ ಶೇ. 5.7 ರಷ್ಟಿದೆ. ಪ್ರತಿ ಷೇರಿಗೆ ₹250 ದರವನ್ನು ನಿಗದಿಪಡಿಸಲಾಗಿದೆ. ಗುರುವಾರದ ಮಾರುಕಟ್ಟೆ ಮುಕ್ತಾಯದ ಬೆಲೆಗೆ ಹೋಲಿಸಿದರೆ ಇದು ಸುಮಾರು ಶೇ. 19 ರಷ್ಟು ಪ್ರೀಮಿಯಂ (ಹೆಚ್ಚುವರಿ ಲಾಭ) ಹೊಂದಿದೆ.&lt;/p&gt;&lt;p&gt;ಈ ಬೈಬ್ಯಾಕ್ ಪ್ರಕ್ರಿಯೆಯು 'ಟೆಂಡರ್ ಆಫರ್' (Tender Offer) ಮೂಲಕ ನಡೆಯಲಿದ್ದು, ಪ್ರವರ್ತಕರು (Promoters) ಮತ್ತು ಪ್ರವರ್ತಕ ಗುಂಪು ಕೂಡ ಇದರಲ್ಲಿ ಭಾಗವಹಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಕಂಪನಿಯಲ್ಲಿ ಪ್ರವರ್ತಕರು ಶೇ. 72.6 ರಷ್ಟು ಪಾಲು ಹೊಂದಿದ್ದಾರೆ.&lt;/p&gt;&lt;p&gt;ವಿಪ್ರೋ ಕೊನೆಯದಾಗಿ 2023ರ ಜೂನ್&zwnj;ನಲ್ಲಿ ಬೈಬ್ಯಾಕ್ ನಡೆಸಿತ್ತು. ಅಂದು ₹12,000 ಕೋಟಿ ಮೊತ್ತದ ಮೂಲಕ ಶೇ. 4.91 ರಷ್ಟು ಷೇರುಗಳನ್ನು ಪ್ರತಿ ಷೇರಿಗೆ ₹445 ರಂತೆ ಮರುಖರೀದಿ ಮಾಡಿತ್ತು. 2024ರ ಡಿಸೆಂಬರ್&zwnj;ನಲ್ಲಿ ನೀಡಲಾದ 1:1 ಬೋನಸ್ ಇಶ್ಯೂ ನಂತರ ಈಗಿನ ಬೆಲೆ ಬದಲಾಗಿದೆ.&lt;/p&gt;&lt;h2&gt;&lt;strong&gt;ನಾಲ್ಕನೇ ತ್ರೈಮಾಸಿಕದ ಫಲಿತಾಂಶ&lt;/strong&gt;&lt;/h2&gt;&lt;p&gt;ಬೈಬ್ಯಾಕ್ ಜೊತೆಗೆ ವಿಪ್ರೋ ತನ್ನ ನಾಲ್ಕನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನೂ ಪ್ರಕಟಿಸಿದೆ. 2027ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಬೆಳವಣಿಗೆಯು ಸ್ಥಿರ ಕರೆನ್ಸಿ (CC) ಆಧಾರದ ಮೇಲೆ -2% ರಿಂದ 0% ರಷ್ಟಿರಬಹುದು ಎಂದು ಅಂದಾಜಿಸಿದೆ. CLSA, JPMorgan ಮತ್ತು Morgan Stanley ನಂತಹ ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ನಿರೀಕ್ಷಿಸಿದ್ದಂತೆಯೇ ಈ ಅಂಕಿ-ಅಂಶಗಳು ಇವೆ. ಗುರುವಾರ ವಿಪ್ರೋ ಷೇರುಗಳು ಶೇ. 0.19 ರಷ್ಟು ಏರಿಕೆ ಕಂಡು ₹210.15 ಕ್ಕೆ ಮುಕ್ತಾಯವಾಗಿದೆ. ಆದರೆ, ಈ ವರ್ಷದಲ್ಲಿ ವಿಪ್ರೋ ಷೇರುಗಳು ಒಟ್ಟಾರೆಯಾಗಿ ಶೇ. 20 ಕ್ಕಿಂತ ಹೆಚ್ಚು ಕುಸಿತ ಕಂಡಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/wipro-share-buyback-2026-announcement-price-premium-q4-results-updates-san/articleshow-3a2zq2r"/>
        </item>
        <item>
            <title><![CDATA[ಆದಾಯ ಹೆಚ್ಚಳದಲ್ಲಿ ಐತಿಹಾಸಿಕ ದಾಖಲೆ ಬರೆದ ಈ ರಾಜ್ಯದ ಅಬಕಾರಿ ಇಲಾಖೆ]]></title>
            <link>https://kannada.asianetnews.com/webstories/business/jharkhand-s-excise-department-creates-historic-record-in-revenue-increase-mrq-8gpnpbr</link>
            <guid isPermaLink="true">https://kannada.asianetnews.com/webstories/business/jharkhand-s-excise-department-creates-historic-record-in-revenue-increase-mrq-8gpnpbr</guid>
            <pubDate>Sat, 18 Apr 2026 22:26:22 +0530</pubDate>
            <description><![CDATA[&lt;p&gt;2025-26ನೇ ಆರ್ಥಿಕ ವರ್ಷದಲ್ಲಿ ದಾಖಲೆಯ ಆದಾಯ ಸಂಗ್ರಹ. ಕಳೆದ ವರ್ಷಕ್ಕೆ 2,700 ಕೋಟಿ ರು.ಗಳಿಗಿಂತ ಹೆಚ್ಚಾಗಿದೆ. ಐತಿಹಾಸಿಕ ದಾಖಲೆ ಬರೆದ ಜಾರ್ಖಂಡ್ ರಾಜ್ಯ. ಜಾರ್ಖಂಡ್ ಅಬಕಾರಿ ಇಲಾಖೆ 2025-26ರಲ್ಲಿ ₹4,013 ಕೋಟಿ ಸಂಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpgr0nbfc3xsh6yp6b6mqb0p,imgname-liquor--3--1776531035503.jpg" type="image/jpeg" height="390" width="690"/>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/business/jharkhand-s-excise-department-creates-historic-record-in-revenue-increase-mrq-8gpnpbr"/>
        </item>
        <item>
            <title><![CDATA[ಕನ್ನಡಿಗ ರಾಕೇಶ್‌ ಗಾಂವ್ಕರ್‌ ಸ್ಥಾಪಿಸಿದ ಏರ್‌ ಟ್ಯಾಕ್ಸಿ ಸರಳಾ ಏವಿಯೇಷನ್‌ನಲ್ಲಿ ಪಾಲು ಖರೀದಿಸಿದ ಇಂಡಿಗೋ!]]></title>
            <link>https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi</link>
            <guid isPermaLink="true">https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi</guid>
            <pubDate>Fri, 17 Apr 2026 21:27:48 +0530</pubDate>
            <description><![CDATA[&lt;p&gt;ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್&zwnj;ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpe2c0re3cjz2yxfzmcppavj,imgname-indigo-airlines-and-sarla-aviation-1776441230094.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): &lt;/strong&gt;ಭಾರತದ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಹೊರಟಿರುವ ಇಂಡಿಗೋ ಸಂಸ್ಥೆಯು, ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್&zwnj;ಅಪ್ ಆಗಿರುವ 'ಸರಳಾ ಏವಿಯೇಷನ್' (Sarla Aviation) ನಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿ ಪಾಲನ್ನು ಖರೀದಿಸಿದೆ. ಈ ಮೂಲಕ ಇಂಡಿಗೋ ಅಧಿಕೃತವಾಗಿ ಭಾರತದ ಬೆಳೆಯುತ್ತಿರುವ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. ರೆಗ್ಯುಲೇಟರಿ ಫೈಲಿಂಗ್&zwnj;ಗಳ ಪ್ರಕಾರ, ಇಂಡಿಗೋ ವೆಂಚರ್ಸ್ ಫಂಡ್-I ಮೂಲಕ ಈ ಹೂಡಿಕೆ ಮಾಡಲಾಗಿದೆ. ಸರಳಾ ಏವಿಯೇಷನ್&zwnj;ನ ಮಂಡಳಿಯು ಇಂಡಿಗೋಗೆ ಪ್ರತಿ ಷೇರಿಗೆ ₹1,87,425 ಪ್ರೀಮಿಯಂ ದರದಲ್ಲಿ 10 ಈಕ್ವಿಟಿ ಷೇರುಗಳನ್ನು ಮತ್ತು 524 ಸರಣಿ A1 ಕಡ್ಡಾಯ ಪರಿವರ್ತಿತ ಸಂಚಿತ ಆದ್ಯತೆಯ ಷೇರುಗಳನ್ನು (CCPS) ನೀಡಲು ನಿರ್ಧರಿಸಿದೆ. ಈ ಹೂಡಿಕೆಯ ಒಟ್ಟು ಮೊತ್ತ ಸುಮಾರು 10 ಕೋಟಿ ರೂಪಾಯಿಗಳಾಗಿವೆ.&lt;/p&gt;&lt;h2&gt;&lt;strong&gt;ಬೆಂಗಳೂರು ಮೂಲದ ಸ್ಟಾರ್ಟ್&zwnj;ಅಪ್ 'ಸರಳಾ'&lt;/strong&gt;&lt;/h2&gt;&lt;p&gt;2023ರಲ್ಲಿ ಆಡ್ರಿಯನ್ ಸ್ಮಿತ್, ಕನ್ನಡಿಗ ರಾಕೇಶ್ ಗಾಂವ್ಕರ್ ಮತ್ತು ಶಿವಂ ಚೌಹಾಣ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಸರಳಾ ಏವಿಯೇಷನ್ ಪ್ರಸ್ತುತ 'ಶೂನ್ಯ' (Shunya) ಹೆಸರಿನ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್&zwnj;ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಹೆಲಿಕಾಪ್ಟರ್&zwnj;ನಂತೆ ಲಂಬವಾಗಿ ಟೇಕ್&zwnj;ಆಫ್ ಮತ್ತು ಲ್ಯಾಂಡ್ ಆಗಬಲ್ಲ ವಿದ್ಯುತ್ ಚಾಲಿತ ವಿಮಾನವಾಗಿದೆ.&lt;/p&gt;&lt;p&gt;ಈ ವರ್ಷದ ಏಪ್ರಿಲ್ ವೇಳೆಗೆ ಕಂಪನಿಯು ಒಟ್ಟು 13.4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದೆ. ಇದರಲ್ಲಿ 2025ರ ಆರಂಭದಲ್ಲಿ 'ಅಕ್ಸೆಲ್' (Accel) ಮತ್ತು 'ನಿಖಿಲ್ ಕಾಮತ್' ನೇತೃತ್ವದಲ್ಲಿ ನಡೆದ 10 ಮಿಲಿಯನ್ ಡಾಲರ್ ಸರಣಿ A1 ಹೂಡಿಕೆಯೂ ಸೇರಿದೆ. ಸಂಗ್ರಹಿಸಿದ ಮೊತ್ತವನ್ನು ಏರ್-ಟ್ಯಾಕ್ಸಿಗಳ ಅಭಿವೃದ್ಧಿಗೆ ಬಳಸಲಾಗುತ್ತಿದ್ದು, 2028ರ ವೇಳೆಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಸೇವೆಯನ್ನು ಪ್ರಾರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ.&lt;/p&gt;&lt;h2&gt;&lt;strong&gt;ಇಂಡಿಗೋದ ಎರಡನೇ ಪ್ರಯತ್ನ&lt;/strong&gt;&lt;/h2&gt;&lt;p&gt;ಇಂಡಿಗೋ ಈ ಹಿಂದೆ ಅಮೆರಿಕ ಮೂಲದ 'ಆರ್ಚರ್ ಏವಿಯೇಷನ್' (Archer Aviation) ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ಟ್ಯಾಕ್ಸಿಗಳನ್ನು ಪ್ರಾರಂಭಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ, ಆರ್ಚರ್ ಏವಿಯೇಷನ್ ನಿಗದಿತ ಸಮಯಕ್ಕೆ ವಿಮಾನಗಳನ್ನು ನೀಡಲು ಸಾಧ್ಯವಾಗದ ಕಾರಣ ಆ ಒಪ್ಪಂದವು ಮುರಿದುಬಿದ್ದಿತ್ತು. ಹೀಗಾಗಿ, ಇಂಡಿಗೋ ಈಗ ದೇಶೀಯ ಸ್ಟಾರ್ಟ್&zwnj;ಅಪ್ 'ಸರಳಾ' ಜೊತೆ ಕೈಜೋಡಿಸಿ ವಾಯು ಟ್ಯಾಕ್ಸಿ ಕನಸನ್ನು ನನಸು ಮಾಡಲು ಮುಂದಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/indigo-invests-10-crore-in-bengaluru-air-taxi-startup-sarla-aviation-san/articleshow-cg3oqzi"/>
        </item>
        <item>
            <title><![CDATA[ಕೋವಿಡ್​ನಲ್ಲಿ ರೀಲ್ಸ್​ ನೋಡಿದ್ದೇ ಬದಲಾಗೋಯ್ತು ಬದುಕು: 21ನೇ ವಯಸ್ಸಲ್ಲಿ ಕೋಟಿ ಕೋಟಿ ಗಳಿಕೆ]]></title>
            <link>https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y</link>
            <guid isPermaLink="true">https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y</guid>
            <pubDate>Sat, 18 Apr 2026 15:58:03 +0530</pubDate>
            <description><![CDATA[ಕೋವಿಡ್ ಸಮಯದಲ್ಲಿ ರೀಲ್ಸ್ ನೋಡುತ್ತಾ ಕಾಲ ಕಳೆದ 16 ವರ್ಷದ ದಿಗ್ವಿಜಯ ಸಿಂಗ್, ಮನೆಯಲ್ಲಿಯೇ ಚಾಕಲೇಟ್ ತಯಾರಿಸಲು ಆರಂಭಿಸಿದರು. ಹವ್ಯಾಸವಾಗಿ ಶುರುವಾದ ಈ ಚಾಕಲೇಟ್ ತಯಾರಿಕೆ, ಇಂದು 'ಸಾರಮ್' ಎಂಬ ಬ್ರ್ಯಾಂಡ್&zwnj;ನಡಿಯಲ್ಲಿ ಕೋಟಿ ರೂಪಾಯಿ ವ್ಯವಹಾರವಾಗಿ ಬೆಳೆದು, ಅವರನ್ನು ಯುವ ಉದ್ಯಮಿಯನ್ನಾಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpg23j0j7gc2d21ysanp6zca,imgname-digvijaya-singh-1776508061714.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೋವಿಡ್​ ಎನ್ನೋ ಮಹಾಮಾರಿ 2019ರಿಂದ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಈಗ ಇತಿಹಾಸ. ಆ ಮಹಾಮಾರಿಯಿಂದ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿಯಾದರೆ, ಸಂಪೂರ್ಣ ನಷ್ಟ ಅನುಭವಿಸಿ ಬೀದಿ ಪಾಲಾದವರೂ ಅಷ್ಟೇ ಮಂದಿ. ಐದಾರು ವರ್ಷಗಳ ಬಳಿಕವೂ ಇಂದಿಗೂ ಬಿಜಿನೆಸ್​ನಲ್ಲಿ ಸುಧಾರಿಸಿಕೊಳ್ಳಲು ಆಗದೇ ದಿಕ್ಕೆಟ್ಟವರೂ ಇದ್ದಾರೆ, ಅಂದು ಅನುಭವಿಸಿದ ನಷ್ಟದಿಂದ ಇನ್ನೂ ಚೇತರಿಸಿಕೊಳ್ಳದವರೂ ಇದ್ದಾರೆ. ಆದರೆ ಇದೇ ಮಹಾಮಾರಿ ಅದೆಷ್ಟೋ ಮಂದಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಕೈಯಲ್ಲಿ ಕಾಸಿಲ್ಲದವರನ್ನು ಲಕ್ಷಾಧೀಶ್ವರನ್ನಾಗಿಸಿದೆ, ಮನೆಯಲ್ಲಿ ಕುಳಿತು ಮೊಬೈಲ್​ ನೋಡ್ತಿರೋರಿಗೂ ಉತ್ತಮ ಆದಾಯ ಗಳಿಸಿಕೊಟ್ಟಿದೆ. ಅಂಥವರಲ್ಲಿ ಒಬ್ಬಾತ 16ರ ಬಾಲಕ ದಿಗ್ವಿಜಯ ಸಿಂಗ್​.&lt;/p&gt;&lt;h2&gt;&lt;strong&gt;ಕೋವಿಡ್​ನಲ್ಲಿ ರೀಲ್ಸ್​&lt;/strong&gt;&lt;/h2&gt;&lt;p&gt;16ನೇ ವಯಸ್ಸಿನಲ್ಲಿ ಕೋವಿಡ್​ ವೇಳೆ ರೀಲ್ಸ್ ನೋಡುತ್ತಾ ಕುಳಿತ ಈ ಬಾಲಕ ಈಗ 21ರ ತರುಣ. ಅದೇ ರೀಲ್ಸ್​ ಈತನ ಲೈಫ್​ ಚೇಂಜ್​ ಮಾಡಿದೆ. 21ನೇ ವಯಸ್ಸಿನಲ್ಲಿಯೇ ಕೋಟಿ ಕೋಟಿ ವ್ಯವಹಾರ ನಡೆಸುತ್ತಾ ದೊಡ್ಡ ಬಿಜಿನೆಸ್​ಮ್ಯಾನ್​ ಆಗಿದ್ದಾನೆ ಈ ಯುವಕ. ಇದೇನು ಸಿನಿಮಾನೋ, ಸೀರಿಯಲ್ಲೋ ಅಲ್ಲ, ರಿಯಲ್​ ಲೈಫ್​ನ ರೋಚಕ ಸ್ಟೋರಿ ಇದು. ಕೋವಿಡ್​ನಲ್ಲಿ ಈತನಿಗೆ ಸರಿಸುಮಾರು 16 ವರ್ಷ ವಯಸ್ಸು. ರಾಯಸ್ಥಾನದ ಉದಯಪುರದ ಈ ಬಾಲಕ ದಿಗ್ವಿಜಯ ಸಿಂಗ್​ ಎಲ್ಲರಂತೆ ಕಾಲ ಕಳೆಯಲು ಮೊಬೈಲ್​ ನೋಡುತ್ತಾ ಕುಳಿತ. ಅವನಿಗೆ ಕಂಡದ್ದು ಮನೆಯಲ್ಲಿಯೇ ಚಾಕಲೆಟ್​ ಮಾಡುವ ವಿಡಿಯೋ. ಇದನ್ನು ಬಹುತೇಕ ಎಲ್ಲರೂ ನೋಡಿಯೇ ಇರುತ್ತಾರೆ, ರೀಲ್ಸ್​ ನೋಡುವವರು, ಯುಟ್ಯೂಬ್ ನೋಡುವವರಿಗೆ ಮನೆಯಲ್ಲಿಯೇ ವಿವಿಧ ರೀತಿಯ ಆಹಾರ, ಚಾಕಲೇಟ್​ ತಯಾರಿಸುವ ವಿಡಿಯೋಗಳು ಕಂಡೇ ಇರುತ್ತವೆ. ಹೆಚ್ಚಿನವರು ಎಲ್ಲರೂ ಸ್ಕ್ರೋಲ್​ ಮಾಡಿ ಮುಂದಕ್ಕೆ ಹೋಗ್ತೇವೆ. ಆದರೆ ಬಾಲಕ ದಿಗ್ವಿಜಯ ಸಿಂಗ್​ ತಲೆಯಲ್ಲಿ ಹೊಳೆದದ್ದೇ ಬೇರೆ. ನಾನ್ಯಾಕೆ ಈ ಬಿಡುವಿನ ವೇಳೆಯನ್ನು ಇದಕ್ಕಾಗಿ ಬಳಸಿಕೊಳ್ಳಬಾರದು ಎಂದು ಯೋಚನೆ ಮಾಡಿದ.&lt;/p&gt;&lt;h3&gt;&lt;strong&gt;ಸುಮ್ಮನೇ ಚಾಕಲೆಟ್​ ಮಾಡಿದ&lt;/strong&gt;&lt;/h3&gt;&lt;p&gt;ಸುಮ್ಮನೇ ಮನೆಯಲ್ಲಿ ಆತ ಚಾಕಲೆಟ್​ ತಯಾರಿಕೆ ಆರಂಭಿಸಿದ. ಅದನ್ನೇನು ಆತ ಬಿಜಿನೆಸ್​​ ಸ್ಟಾರ್ಟ್​ ಮಾಡಬೇಕು ಎಂದು ಮಾಡಿದವನಲ್ಲ. ಸುಮ್ಮನೇ ಟ್ರೈ ಮಾಡಿದ ಅಷ್ಟೇ. ಅದನ್ನು ಟೇಸ್ಟ್​ ಮಾಡಿದ ಮನೆಯವರೆಲ್ಲರೂ ವ್ಹಾವ್​ ಸಕತ್​ ಟೇಸ್ಟಿಯಾಗಿದೆ ಅಂದರು. ಅದೇ ಖುಷಿಯಲ್ಲಿ ಆತ ಚಾಕಲೆಟ್​ ತಯಾರಿಸಿ ಫ್ರೆಂಡ್ಸ್​, ಕುಟುಂಬದ ಸದಸ್ಯರು, ನೆಂಟರಿಷ್ಟರು ಕ್ರಮೇಣ ನೆರೆಹೊರೆಯವರಿಗೂ ಕೊಡಲು ಶುರು ಮಾಡಿದಾಗ, ಎಲ್ಲರೂ ಅದನ್ನು ಕೊಂಡಾಡಿದ್ದೇ ಕೊಂಡಾಡಿದ್ದು.&lt;/p&gt;&lt;h3&gt;&lt;strong&gt;ಗಿಫ್ಟ್​ಪ್ಯಾಕ್​ ಮಾಡಿ ಕೊಟ್ಟ&lt;/strong&gt;&lt;/h3&gt;&lt;p&gt;ಈ ಪರಿಯ ಜನಪ್ರಿಯತೆ ಕಂಡ ಆ ಬಾಲಕನಿಗೆ ತಾನ್ಯಾಕೆ ಇದನ್ನು ಗಿಫ್ಟ್​ಪ್ಯಾಕ್​ ಮಾಡಿ ಮಾರಾಟ ಮಾಡಬಾರದು ಎನ್ನಿಸಿತು. ಮನೆಯವರ ಜೊತೆ ಚರ್ಚಿಸಿದ. ಅದು ದೀಪಾವಳಿಯ ಸಮಯ. ಹಾಗೆಯೇ ಚಾಕಲೆಟ್​ ಮಾಡಿ, ಪ್ಯಾಕ್​ ಮಾಡಿದ. ಆದರೆ ಮಾರಾಟ ಮಾಡುವುದು ಹೇಗೆ? ಯಾರಿಗೆ ಕೊಡುವುದು ಎಂದು ತಿಳಿಯಲಿಲ್ಲ. ಕೊನೆಗೆ ಅವನ ಮನೆಯ ಸಮೀಪದ ಕಾರಿನ ಷೋರೂಮ್​ನಲ್ಲಿ ಜನರನ್ನು ಸೆಳೆಯುವುದಕ್ಕಾಗಿ ಆಫರ್​ ಬಿಟ್ಟಿದ್ದರು. ಷೋರೂಮ್​ ಸಂಪರ್ಕಿಸಿದ ಬಾಲಕ, ಆ ಉಡುಗೊರೆ ಜೊತೆ, ಚಾಕೊಲೇಟ್&zwnj; ಪ್ಯಾಕ್​ ಅನ್ನೂ ನೀಡಲು ವಿನಂತಿಸಿ, ಅವರನ್ನು ಒಪ್ಪಿಸಿದ.ಅಷ್ಟೇ.&lt;/p&gt;&lt;h3&gt;&lt;strong&gt;ಕಾರಿನ ಷೋರೂಮ್​ನಲ್ಲಿ ಆರಂಭ&lt;/strong&gt;&lt;/h3&gt;&lt;p&gt;ಷೋರೂಮ್​ನವರು ಚಾಕಲೆಟ್​ ಟೇಸ್ಟ್​ ಮಾಡಿ ಅದಕ್ಕೆ ಮಾರು ಹೋಗಿ 2021 ರಲ್ಲಿ, ಅವರು ಒಂದು ಸಾವಿರ ಚಾಕೊಲೇಟ್&zwnj;ಗಳ ಮೊದಲ ಬೃಹತ್ ಆರ್ಡರ್ ಅನ್ನು ಪಡೆದರು. ಹಾಗೆಯೇ ಕೊಡುವುದು ಬೇಡ, ಒಂದು ಹೆಸರಿಟ್ಟು ಕೊಡೋಣ ಎಂದುಕೊಂಡ ದಿಗ್ವಿಜಯ ಅದಕ್ಕೆ ಸಾರಮ್ ಎಂದು ಹೆಸರಿಸಿ ಆ ಬ್ರ್ಯಾಂಡ್​ನಲ್ಲಿ ಚಾಕಲೇಟ್​ ಕೊಟ್ಟ. ಅಲ್ಲಿಂದ ಆರಂಭವಾದದ್ದು ಇದೀಗ ಬೃಹತ್​ ಉದ್ಯಮವಾಗಿ ಬೆಳೆದಿದೆ. ಇಂದು, ಸಾರಮ್ ಉತ್ತಮವಾದ ಬೀನ್-ಟು-ಬಾರ್ ಚಾಕೊಲೇಟ್&zwnj;ಗಳನ್ನು ಉತ್ಪಾದಿಸುತ್ತದೆ, ದೆಹಲಿ, ಬೆಂಗಳೂರು, ಜೈಪುರ ಮತ್ತು ಉದಯಪುರದಂತಹ ನಗರಗಳಲ್ಲಿ ಎರಡು ಟನ್&zwnj;ಗಳಿಗಿಂತ ಹೆಚ್ಚು ಮಾರಾಟ ಮಾಡುತ್ತದೆ. ಈ ಬಾಲಕನಿಗೆ ಈಗ 21 ವರ್ಷ. ಹವ್ಯಾಸವಾಗಿ ಪ್ರಾರಂಭವಾದದ್ದು ಈಗ 1 ಕೋಟಿ ರೂಪಾಯಿ ಬ್ರ್ಯಾಂಡ್ ಆಗಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದಾನೆ ಈ ಯುವಕ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/business/udaipurs-digvijay-singh-21-yrs-old-is-earning-crores-with-his-chocolate-business-suc/articleshow-dhpu98y"/>
        </item>
        <item>
            <title><![CDATA[ಅಕ್ಷಯ ತೃತೀಯ ನಂತರ ಈ 5 ರಾಶಿಗೆ ಅದೃಷ್ಟ, ಮಂಗಳ ಮತ್ತು ಶನಿಯ ಸಂಯೋಗದಿಂದ ಬಂಪರ್‌ ಲಾಟರಿ]]></title>
            <link>https://kannada.asianetnews.com/gallery/astrology/mangal-shani-yuti-akshaya-tritiya-mars-saturn-conjunction-lucky-zodiac-signs-april-2026-rashifal-in-kannada-suh-dnz1z55</link>
            <guid isPermaLink="true">https://kannada.asianetnews.com/gallery/astrology/mangal-shani-yuti-akshaya-tritiya-mars-saturn-conjunction-lucky-zodiac-signs-april-2026-rashifal-in-kannada-suh-dnz1z55</guid>
            <pubDate>Fri, 17 Apr 2026 10:15:59 +0530</pubDate>
            <description><![CDATA[&lt;p&gt;Mangal shani yuti ಅಕ್ಷಯ ತೃತೀಯದ ನಂತರ, ಏಪ್ರಿಲ್ 20 ರಂದು ಮಂಗಳ ಮತ್ತು ಶನಿಯ ಸಂಯೋಗ ಉಂಟಾಗುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಹೆಚ್ಚು ಪ್ರಭಾವಶಾಲಿ, ಒಳ್ಳೆಯದು ಎಂದು ಪರಿಗಣಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kck28vtdc6sgdc5z4k12cxhd,imgname-d1764483-e407-4cad-9a8c-70ececa62b71--1--1765871480652.jpg" type="image/jpeg" height="390" width="690"/>
            <content:encoded><![CDATA[&lt;p&gt;Mangal shani yuti ಅಕ್ಷಯ ತೃತೀಯದ ನಂತರ, ಏಪ್ರಿಲ್ 20 ರಂದು ಮಂಗಳ ಮತ್ತು ಶನಿಯ ಸಂಯೋಗ ಉಂಟಾಗುತ್ತಿದೆ, ಇದನ್ನು ಜ್ಯೋತಿಷ್ಯದಲ್ಲಿ ಹೆಚ್ಚು ಪ್ರಭಾವಶಾಲಿ, ಒಳ್ಳೆಯದು ಎಂದು ಪರಿಗಣಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮೇಷ ರಾಶಿಯವರಿಗೆ ಮಂಗಳ ಮತ್ತು ಶನಿಯ ಸಂಯೋಗವು ಒಂದು ಮಹತ್ವದ ಬದಲಾವಣೆಯನ್ನು ತರಬಹುದು. ನಿಮ್ಮ ಕಠಿಣ ಪರಿಶ್ರಮವು ನಿಮ್ಮ ವೃತ್ತಿಜೀವನದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ನಿಮ್ಮ ಬಾಸ್ ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಹಣಕಾಸಿನ ನಿಯಂತ್ರಣ ಹೆಚ್ಚಾಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ತೆರೆದುಕೊಳ್ಳಬಹುದು.ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಮಯ ಇದು. ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ.&lt;/p&gt;&lt;img&gt;&lt;p&gt;ವೃಷಭ ರಾಶಿಯವರಿಗೆ ಈ ಸಂಯೋಗದಿಂದ ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ, ನಿಮ್ಮನ್ನು ಮುನ್ನಡೆಸುತ್ತೀರಿ. ಚಿಂತನಶೀಲ ಆರ್ಥಿಕ ನಿರ್ಧಾರಗಳು ಗಮನಾರ್ಹ ಪ್ರಯೋಜನಗಳನ್ನು ನೀಡುತ್ತವೆ. ಹಳೆಯ ಹೂಡಿಕೆಗಳು ಈಗ ಲಾಭವನ್ನು ನೀಡಲು ಪ್ರಾರಂಭಿಸಬಹುದು. ಜೀವನವು ಸಮತೋಲನದಲ್ಲಿರುತ್ತದೆ ಮತ್ತು ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಸಂಬಂಧಗಳು ಬಲಗೊಳ್ಳುತ್ತವೆ ಮತ್ತು ಕುಟುಂಬ ಬಂಧಗಳು ಸುಧಾರಿಸುತ್ತವೆ.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯವರಿಗೆ ಇದು &quot;ಕಠಿಣ ಪರಿಶ್ರಮ&quot;ದ ಸಮಯವಾಗಿದ್ದು ಅದು ಫಲಿತಾಂಶಗಳನ್ನು ನೀಡುತ್ತದೆ. ಯಶಸ್ಸು ನಿಧಾನವಾಗಿ ಆದರೆ ಖಂಡಿತವಾಗಿಯೂ ಸಮೀಪಿಸುತ್ತಿದೆ. ಕೆಲಸದಲ್ಲಿ ನಿಮ್ಮ ತಂಡದಿಂದ ನಿಮಗೆ ಬೆಂಬಲ ಸಿಗುತ್ತದೆ ಮತ್ತು ಹೊಸ ಅವಕಾಶಗಳು ಹೊರಹೊಮ್ಮುತ್ತವೆ. ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಮತ್ತು ಹಳೆಯ ಉದ್ವಿಗ್ನತೆಗಳು ದೂರವಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರಿಗೆ ಈ ಸಂಯೋಗವು ಜೀವನದಲ್ಲಿ &quot;ಹೊಸ ತಿರುವು&quot; ತರಬಹುದು. ವೃತ್ತಿಜೀವನವು ಹೊಸ ದಿಕ್ಕನ್ನು ಪಡೆಯುತ್ತದೆ ಮತ್ತು ಸ್ಥಗಿತಗೊಂಡ ಯೋಜನೆಗಳು ಮತ್ತೆ ಹಳಿಗೆ ಬರುತ್ತವೆ. ಉತ್ತಮ ಆರ್ಥಿಕ ಅವಕಾಶಗಳು ಉದ್ಭವಿಸುತ್ತವೆ. ಸಂಬಂಧಗಳು ಸುಧಾರಿಸುತ್ತವೆ ಮತ್ತು ತಿಳುವಳಿಕೆ ಬಲಗೊಳ್ಳುತ್ತದೆ. ಆತ್ಮವಿಶ್ವಾಸದ ಮಟ್ಟಗಳು ಹೆಚ್ಚಾಗಿದ್ದು, ನಿರ್ಧಾರಗಳನ್ನು ಸುಲಭಗೊಳಿಸುತ್ತದೆ.&lt;/p&gt;&lt;img&gt;&lt;p&gt;ಮಕರ ರಾಶಿಯವರಿಗೆ ಈ ಸಂಯೋಗವು &quot;ಕಠಿಣ ಪರಿಶ್ರಮಕ್ಕೆ ಉತ್ತಮ ಲಾಭ&quot; ನೀಡುತ್ತದೆ. ಶನಿಯು ಶಿಸ್ತನ್ನು ತುಂಬುತ್ತಾನೆ ಮತ್ತು ಮಂಗಳವು ನಿಮ್ಮನ್ನು ಚೈತನ್ಯಗೊಳಿಸುತ್ತದೆ. ವೃತ್ತಿಜೀವನದಲ್ಲಿ ಪ್ರಮುಖ ಸಾಧನೆ ಸಾಧ್ಯ. ಹಣ ಗಳಿಸಲು ಅತ್ಯುತ್ತಮ ಅವಕಾಶಗಳು ಹೊರಹೊಮ್ಮುತ್ತವೆ. ಹಳೆಯ ಸಮಸ್ಯೆಗಳು ಕ್ರಮೇಣ ಪರಿಹಾರವಾಗುತ್ತವೆ. ಬಡ್ತಿ ಅಥವಾ ಸಂಬಳ ಹೆಚ್ಚಳವನ್ನು ಸೂಚಿಸಲಾಗುತ್ತದೆ. ಮನೆಯಲ್ಲಿ ವಾತಾವರಣ ಸಕಾರಾತ್ಮಕವಾಗಿರುತ್ತದೆ ಮತ್ತು ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/mangal-shani-yuti-akshaya-tritiya-mars-saturn-conjunction-lucky-zodiac-signs-april-2026-rashifal-in-kannada-suh-dnz1z55"/>
        </item>
        <item>
            <title><![CDATA[Gold Price: ಮುಂದಿನ ಅಕ್ಷಯ ತೃತೀಯಕ್ಕೆ ಚಿನ್ನ ₹2 ಲಕ್ಷ ಆಗುತ್ತಾ? 24K ಗೋಲ್ಡ್ ಹೊಸ ಟಾರ್ಗೆಟ್ ನೋಡಿ]]></title>
            <link>https://kannada.asianetnews.com/gallery/business/gold-price-prediction-2027-akshaya-tritiya-target-reaches-2-lakh-suh-gce39y3</link>
            <guid isPermaLink="true">https://kannada.asianetnews.com/gallery/business/gold-price-prediction-2027-akshaya-tritiya-target-reaches-2-lakh-suh-gce39y3</guid>
            <pubDate>Thu, 16 Apr 2026 14:13:38 +0530</pubDate>
            <description><![CDATA[&lt;p&gt;&amp;nbsp;ಈ ವರ್ಷ ನೀವು ಚಿನ್ನ ತಗೊಳ್ಳೋ ಪ್ಲಾನ್&zwnj;ನಲ್ಲಿದ್ರೆ, ಈ ಅಂಕಿ-ಅಂಶಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆ ₹60,000ದಷ್ಟು ಹೆಚ್ಚಾಗಿದೆ. ಈಗ ತಜ್ಞರು ಬರೋಬ್ಬರಿ ₹2 ಲಕ್ಷದ ಟಾರ್ಗೆಟ್ ಕೊಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k76x7tndmvnpbxq2ttak18xj,imgname-gold-jewelry-shopping-1760094841516.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;ಈ ವರ್ಷ ನೀವು ಚಿನ್ನ ತಗೊಳ್ಳೋ ಪ್ಲಾನ್&zwnj;ನಲ್ಲಿದ್ರೆ, ಈ ಅಂಕಿ-ಅಂಶಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಿನ್ನದ ಬೆಲೆ ₹60,000ದಷ್ಟು ಹೆಚ್ಚಾಗಿದೆ. ಈಗ ತಜ್ಞರು ಬರೋಬ್ಬರಿ ₹2 ಲಕ್ಷದ ಟಾರ್ಗೆಟ್ ಕೊಟ್ಟಿದ್ದಾರೆ.&lt;/p&gt;&lt;img&gt;&lt;p&gt;ಕಳೆದ ವರ್ಷ ಏಪ್ರಿಲ್ 15 ರಂದು 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ ಸುಮಾರು ₹95,500 ಇತ್ತು. ಆದರೆ, ಇಂದು ಅಂದರೆ ಏಪ್ರಿಲ್ 15, 2026 ರಂದು ಇದು ₹1,55,570ಕ್ಕೆ ತಲುಪಿದೆ. ಒಂದೇ ವರ್ಷದಲ್ಲಿ ಚಿನ್ನ ಶೇ. 63ರಷ್ಟು ದುಬಾರಿಯಾಗಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ 10 ಗ್ರಾಂ ಚಿನ್ನಕ್ಕೆ ನೀವು ನೇರವಾಗಿ ₹60,000 ಹೆಚ್ಚು ಖರ್ಚು ಮಾಡಬೇಕಾಗಿದೆ.&lt;/p&gt;&lt;img&gt;&lt;p&gt;ಚಿನ್ನದ ಈ ಓಟ ಸದ್ಯಕ್ಕೆ ನಿಲ್ಲುವುದಿಲ್ಲ ಎಂದು ಕಮೊಡಿಟಿ ತಜ್ಞರು ನಂಬಿದ್ದಾರೆ. ಮನಿ ಕಂಟ್ರೋಲ್ ಪ್ರಕಾರ, ಎಸ್&zwnj;ಎಂಸಿ ಗ್ಲೋಬಲ್ ಸೆಕ್ಯುರಿಟೀಸ್&zwnj;ನ ತಜ್ಞೆ ವಂದನಾ ಭಾರತಿ, 'ವಿಶ್ವದಾದ್ಯಂತ ಕೇಂದ್ರ ಬ್ಯಾಂಕ್&zwnj;ಗಳು ಚಿನ್ನವನ್ನು ಖರೀದಿಸುತ್ತಿರುವ ರೀತಿ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳನ್ನು ನೋಡಿದರೆ, ಮುಂದಿನ ಅಕ್ಷಯ ತೃತೀಯ (2027) ವೇಳೆಗೆ ಚಿನ್ನ ₹2 ಲಕ್ಷದ ಮಟ್ಟವನ್ನು ಮುಟ್ಟಬಹುದು' ಎಂದು ಹೇಳಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಯುದ್ಧದ ಭೀತಿ:&lt;/strong&gt; ಇರಾನ್ ಮತ್ತು ಇಸ್ರೇಲ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ (Iran War) ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ಜಗತ್ತಿನಲ್ಲಿ ಅನಿಶ್ಚಿತತೆ ಇದ್ದಾಗ, ಜನರು ತಮ್ಮ ಹಣವನ್ನು ಚಿನ್ನದಲ್ಲಿ ಸುರಕ್ಷಿತವೆಂದು ಭಾವಿಸುತ್ತಾರೆ.&lt;/p&gt;&lt;p&gt;&lt;strong&gt;ಡಾಲರ್ ದೌರ್ಬಲ್ಯ:&lt;/strong&gt; ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮತ್ತು ಕಚ್ಚಾ ತೈಲ (Crude Oil) ಬೆಲೆಗಳಲ್ಲಿನ ಬದಲಾವಣೆಗಳು ಚಿನ್ನದ ಮೇಲೆ ನೇರ ಪರಿಣಾಮ ಬೀರುತ್ತಿವೆ.&lt;/p&gt;&lt;p&gt;&lt;strong&gt;ಭಾರೀ ಬೇಡಿಕೆ:&lt;/strong&gt; ಭಾರತದಲ್ಲಿ ಹಬ್ಬ ಮತ್ತು ಮದುವೆ ಸೀಸನ್ ಇರುವುದರಿಂದ ಜನರು ಭರ್ಜರಿಯಾಗಿ ಚಿನ್ನ ಖರೀದಿಸುತ್ತಿದ್ದಾರೆ. ಇದರಿಂದ ಬೆಲೆಗಳು ಇಳಿಯುವ ಲಕ್ಷಣ ಕಾಣುತ್ತಿಲ್ಲ.&lt;/p&gt;&lt;img&gt;&lt;p&gt;ಇತ್ತೀಚೆಗೆ ಜನರು ಕೇವಲ ಭಾರೀ ಆಭರಣಗಳನ್ನು ಮಾತ್ರ ಖರೀದಿಸುತ್ತಿಲ್ಲ, ಬದಲಾಗಿ ಹೂಡಿಕೆಯ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ತಜ್ಞರ ಪ್ರಕಾರ, ಜನರು ಈಗ ಗೋಲ್ಡ್ ಇಟಿಎಫ್ (Gold ETFs) ಮತ್ತು ಡಿಜಿಟಲ್ ಗೋಲ್ಡ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಡಿಜಿಟಲ್ ಗೋಲ್ಡ್&zwnj;ನಲ್ಲಿ 'ಮೇಕಿಂಗ್ ಚಾರ್ಜ್' ಇರುವುದಿಲ್ಲ ಮತ್ತು ಕಳ್ಳತನದ ಭಯವೂ ಇರುವುದಿಲ್ಲ ಎಂಬುದು ಇದರ ಪ್ರಯೋಜನ. ಅಕ್ಷಯ ತೃತೀಯದಂದು ಜನರು 24 ಕ್ಯಾರೆಟ್ ಚಿನ್ನದ ನಾಣ್ಯ ಮತ್ತು ಬಿಸ್ಕತ್ತುಗಳನ್ನು ಹೆಚ್ಚು ಇಷ್ಟಪಡುತ್ತಾರೆ, ಏಕೆಂದರೆ ಭವಿಷ್ಯದಲ್ಲಿ ಇವುಗಳನ್ನು ಮಾರಾಟ ಮಾಡುವುದು ಸುಲಭ.&lt;/p&gt;&lt;img&gt;&lt;p&gt;ನೀವು ಹೂಡಿಕೆಗಾಗಿ ಚಿನ್ನವನ್ನು ತೆಗೆದುಕೊಳ್ಳಲು ಬಯಸಿದರೆ, ತಜ್ಞರ ಪ್ರಕಾರ ಇದು ಸರಿಯಾದ ಸಮಯವಾಗಿರಬಹುದು. ಏಕೆಂದರೆ ಬೆಲೆ ₹2 ಲಕ್ಷದ ಕಡೆಗೆ ಸಾಗಿದರೆ, ಇಂದಿನ ₹1.55 ಲಕ್ಷ ಕೂಡ ನಿಮಗೆ ಅಗ್ಗವೆನಿಸಬಹುದು. ಬಜೆಟ್ ಕಡಿಮೆ ಇದ್ದರೆ, ನೀವು ಬೆಳ್ಳಿಯ (Silver) ಮೇಲೂ ಕಣ್ಣಿಡಬಹುದು. ಕಳೆದ ವಾರದಲ್ಲಿ ಬೆಳ್ಳಿ ಶೇ. 4ರಷ್ಟು ಏರಿಕೆ ಕಂಡಿದೆ.&lt;/p&gt;&lt;p&gt;&lt;strong&gt;ಹಕ್ಕುತ್ಯಾಗ:&lt;/strong&gt; ಈ ಲೇಖನದಲ್ಲಿ ನೀಡಿರುವ ಚಿನ್ನದ ಬೆಲೆಗಳು ಮತ್ತು ಭವಿಷ್ಯದ ಅಂದಾಜುಗಳು (₹2 ಲಕ್ಷದ ಟಾರ್ಗೆಟ್&zwnj;ನಂತಹ) ಕೇವಲ ಮಾರುಕಟ್ಟೆಯ ಟ್ರೆಂಡ್&zwnj;ಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಆಧರಿಸಿದ ಮಾಹಿತಿಯಾಗಿದೆ. ಚಿನ್ನದ ದರದಲ್ಲಿನ ಏರಿಳಿತವು ಜಾಗತಿಕ ಪರಿಸ್ಥಿತಿಗಳು, ತೆರಿಗೆ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಇದು ಯಾವುದೇ ರೀತಿಯ ಹೂಡಿಕೆ ಸಲಹೆ (Investment Advice) ಅಲ್ಲ. ಯಾವುದೇ ದೊಡ್ಡ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರನ್ನು (Financial Advisor) ಸಂಪರ್ಕಿಸಿ ಮತ್ತು ನಿಮ್ಮ ನಗರದ ಸ್ಥಳೀಯ ಆಭರಣ ವ್ಯಾಪಾರಿಗಳಿಂದ ಇತ್ತೀಚಿನ ದರಗಳನ್ನು ಖಚಿತಪಡಿಸಿಕೊಳ್ಳಿ.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/gold-price-prediction-2027-akshaya-tritiya-target-reaches-2-lakh-suh-gce39y3"/>
        </item>
        <item>
            <title><![CDATA[ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು]]></title>
            <link>https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez</link>
            <guid isPermaLink="true">https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez</guid>
            <pubDate>Fri, 17 Apr 2026 10:31:58 +0530</pubDate>
            <description><![CDATA[&lt;p&gt;ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್&zwnj;ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmpqcncf05867y2qcf626995,imgname-upi--3--1774584223119.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇ.1ರಿಂದ ಯುಪಿಐ ಹೊಸ ರೂಲ್ಸ್, 10000 ಹಣ ವರ್ಗಾವಣೆಗೆ 1 ಗಂಟೆ ಕಾಯಬೇಕು, ಹಣ ವರ್ಗಾವಣೆಯಲ್ಲಿನ ವಂಚನೆ ತಡೆಯಲು ಆರ್&zwnj;ಬಿಐ ಹೊಸ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದ ಪ್ರಕಾರ ಹಣ ವರ್ಗಾವಣೆ ನಿಯದಲ್ಲಿನ ಬದಲಾವಣೆ ಏನು?&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಹಣ ವರ್ಗಾವಣೆ, ಪಾವತಿ ಸೇರಿದಂತೆ ಹಣ ವಹಿವಾಟುಗಳು ಈಗ ಡಿಜಿಟಲ್ ಮೂಲಕವೇ ಅತೀ ಹೆಚ್ಚು ನಡೆಯುತ್ತಿದೆ. ವಿಶೇಷವಾಗಿ ಯುಪಿಐ ಮೂಲಕವೇ ಹೆಚ್ಚಿನ ವಹಿವಾಟು ನಡೆಯುತ್ತದೆ. ಇದರ ಜೊತೆಗೆ ಯುಪಿಐನಲ್ಲಿ ವಂಚನೆಗಳ ಸಂಖ್ಯೆಯೂ ಹಚ್ಚಾಗುತ್ತಿದೆ. ಇದನ್ನು ತಡೆಯಲು ಆರ್&zwnj;ಬಿಐ ಕಟ್ಟು ನಿಟ್ಟಿನ ಕೆಲ ನಿಯಮ ಜಾರಿಗೆ ತರುತ್ತಿದೆ. ಈ ಪೈಕಿ 10 ಸಾವಿರ ರೂಪಾಯಿ ಟ್ರಾನ್ಸಾಕ್ಷನ್ ಮಾಡಲು 1 ಗಂಟೆ ಕಾಯಬೇಕು.&lt;/p&gt;&lt;img&gt;&lt;p&gt;ಮೇ.1 ರಿಂದ ಯುಪಿಐ ನಿಮಯದಲ್ಲಿ ಭಾರಿ ಬದಲಾವಣೆ ಮಾಡಲಾಗುತ್ತಿದೆ. ಹೊಸಬರಿಗೆ 10 ಸಾವಿರ ರೂಪಾಯಿಗಿಂತ ಅಧಿಕ ಹಣ ವರ್ಹಾವಣೆ ಮಾಡಲು ಒಂದು ಗಂಟೆ ಗಾಯಬೇಕು. ಸೈಬರ್ ಕಳ್ಳರು ಹ್ಯಾಕ್ ಮಾಡಿ ಅಥವಾ ಇನ್ಯಾವುದೋ ರೀತಿಯಲ್ಲಿ ಯುಪಿಐ ಮೂಲಕ ಹಣವನ್ನು ಕ್ಷಣಾರ್ಧದಲ್ಲಿ ವರ್ಗವಣೆ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಒಂದು ಗಂಟೆ ಕಾಯಬೇಕು.&lt;/p&gt;&lt;img&gt;&lt;p&gt;ಸೈಬರ್ ಕಳ್ಳರು ತಮ್ಮ ಖಾತೆಗೆ ಅಥವಾ ಫ್ರಾಡ್ ಖಾತೆಗೆ ಹಣ ವರ್ಗಾವಣೆ ಮಾಡಿ ಖಾತೆಯಲ್ಲಿರುವ ಹಣ ಖಾಲಿ ಮಾಡುತ್ತಾರೆ. ಹೀಗಾಗಿ 10 ಸಾವಿರ ರೂಪಾಯಿಗಿಂತ ಅಧಿಕ ಹಣ ಹೊಸಬರಿಗೆ ವರ್ಗಾವಣೆ ಮಾಡಿದರೆ ಒಂದು ಗಂಟೆ ಬ್ಯಾಂಕ್ ಸೆಂಟ್ರಲ್ ಸಿಸ್ಟಮ್&zwnj;ನಲ್ಲಿರುತ್ತದೆ. ಒಂದು ಗಂಟೆ ಬಳಿಕ ಹಣ ಹೊಸಬರ ಖಾತೆಗೆ ಜಮೆ ಆಗಲಿದೆ. ಈ ಒಂದು ಗಂಟೆಯಲ್ಲಿ ಮೂಲ ಖಾತೆಗೆ ಹಣ ಹಿಂಪಡೆಯಲು ಅವಕಾಶವಿದೆ.&lt;/p&gt;&lt;img&gt;&lt;p&gt;ಹಣ ರಿಸೀವರ್ ಕೈಗೆ ಸೇರಲು 1 ಗಂಟೆಯ ಕಾಲ ಅತಂತ್ರವಾಗಿ ಮಧ್ಯದಲ್ಲೇ ನಿಂತಿರಲಿದೆ. ಇದಕ್ಕೆ ಆರ್&zwnj;ಬಿಐ ಡಿಲೇ ರೂಲ್ಸ್ ತರುತ್ತಿದೆ. ಈ ರೂಲ್ಸ್ ಮರ್ಚೆಂಟ್ ಪೇಮೆಂಟ್ಸ್ ಗಳಿಗೆ,ರಿಕರಿಂಗ ಪೇಮೆಂಟ್, ಮೆಡಿಕಲ್ ಪೇಮೆಂಟ್ಸ್ ಗಳಿಗೆ ಅನ್ವಯವಾಗುವುದಿಲ್ಲ.&lt;/p&gt;&lt;img&gt;&lt;p&gt;ಈ ನಿಯಮ ಹೊಸಬರಿಗೆ ಅನ್ವಯವಾಗಲಿದೆ. ಅಂದರೆ ಈಗಾಗಲೇ ಹಣ ವರ್ಗಾವಣೆ ಮಾಡುತ್ತಿರುವ ಕಾಂಟಾಕ್ಟ್ ನಂಬರ್ ಅಥವಾ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಸೈಬರ್ ಕ್ರೈಂ ಗೆ ಕಡಿವಾಣ ಹಾಕಲು ರಿಸರ್ವ್ ಬ್ಯಾಂಕ್ ಹೊಸ ಪ್ಲಾನ್ ಮಾಡಿದೆ.&lt;/p&gt;&lt;img&gt;&lt;p&gt;2021ರಲ್ಲಿ 2.6 ಲಕ್ಷ ಡಿಜಿಟಲ್ ಪೇಮೆಂಟ್ ವಂಚನೆ ಪ್ರಕರಣ ದಾಖಲಾಗಿದೆ. 2025ರಲ್ಲಿ 28 ಲಕ್ಷ ಕೇಸ್ ದಾಖಲಾಗಿದೆ. 2025ರಲ್ಲಿ ಸೈಬರ್ ವಂಚಕರಿಂದ ಲಪಾಟಾಸಿದ ಒಟ್ಟು ಹಣ 22931 ಕೋಟಿ ರೂಪಾಯಿ.&lt;/p&gt;&lt;h2&gt;ಕಳೆದ 28 ಲಕ್ಷ ಸೈಬರ್ ಕೇಸ್&lt;/h2&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/rbi-mulls-1-hour-cooling-off-period-for-upi-transfers-over-rs-10-000-to-curb-fraud-gg6lqez"/>
        </item>
        <item>
            <title><![CDATA[ಏಷ್ಯಾದಲ್ಲೇ ಬೆಂಗಳೂರಿಗೆ ಟಾಪ್ ಸ್ಥಾನ! ಸಿಲಿಕಾನ್ ಸಿಟಿ ನಂತ್ರದ ಸ್ಥಾನದಲ್ಲಿ ಮುಂಬೈ,  ಚೆನ್ನೈ]]></title>
            <link>https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb</link>
            <guid isPermaLink="true">https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb</guid>
            <pubDate>Sat, 18 Apr 2026 21:09:19 +0530</pubDate>
            <description><![CDATA[ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpgkmt5gmmp3d86at8f4grhm,imgname-bengaluru-it-hub-1776526452912.jpg" type="image/jpeg" height="390" width="690"/>
            <content:encoded><![CDATA[ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಕಚೇರಿ ಸ್ಥಳ ಗುತ್ತಿಗೆಗೆ ನೀಡಲಾಗಿದ್ದು, ಬಾಡಿಗೆಯಲ್ಲಿ 7.5% ಬೆಳವಣಿಗೆ ಕಂಡಿದೆ. 16.2% ಸ್ಥಳಗಳು ಖಾಲಿ ಇರುವುದರಿಂದ, ಸದ್ಯದ ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.&lt;img&gt;ಭಾರತದ ಇತರ ಪ್ರಮುಖ ನಗರಗಳಲ್ಲೂ ಬಾಡಿಗೆ ಬೆಳವಣಿಗೆ ಸ್ಥಿರವಾಗಿದೆ. ಇದೇ ತ್ರೈಮಾಸಿಕದಲ್ಲಿ, ಮುಂಬೈನಲ್ಲಿ 7.5% ಮತ್ತು ದೆಹಲಿ-NCRನಲ್ಲಿ 8.2% ಬಾಡಿಗೆ ಬೆಳವಣಿಗೆ ದಾಖಲಾಗಿದೆ. ಏಷ್ಯಾ-ಪೆಸಿಫಿಕ್ ವಲಯದ 24 ಪ್ರಮುಖ ನಗರಗಳ ಪೈಕಿ 18 ನಗರಗಳಲ್ಲಿ ಬಾಡಿಗೆ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇದ್ದರೂ, ಒಟ್ಟಾರೆಯಾಗಿ ಪ್ರಾದೇಶಿಕ ಬಾಡಿಗೆ 0.8% ರಷ್ಟು ಹೆಚ್ಚಾಗಿದೆ.&lt;img&gt;&lt;p&gt;ಈ ಬೆಳವಣಿಗೆಗೆ ಭಾರತ ಮತ್ತು ಆಸ್ಟ್ರೇಲಿಯಾ ಪ್ರಮುಖ ಕಾರಣವೆಂದು ವರದಿ ಹೇಳುತ್ತದೆ. ಏಷ್ಯಾ-ಪೆಸಿಫಿಕ್ ವಲಯದಲ್ಲಿ ಹಾಂಗ್ ಕಾಂಗ್ SARನಲ್ಲಿ ಕಚೇರಿ ಬಾಡಿಗೆ ಅತಿ ದುಬಾರಿಯಾಗಿದೆ.&lt;/p&gt;&lt;p&gt;&amp;nbsp;ಅಲ್ಲಿ ಪ್ರತಿ ಚದರ ಅಡಿಗೆ ವಾರ್ಷಿಕ USD 158.96 ವೆಚ್ಚವಾಗುತ್ತದೆ. ಭಾರತದಲ್ಲಿ, ದೆಹಲಿ-NCR ಅತಿ ದುಬಾರಿ ಮಾರುಕಟ್ಟೆಯಾಗಿದ್ದು, ಪ್ರತಿ ಚದರ ಅಡಿಗೆ ವಾರ್ಷಿಕ USD 72.33 ಬಾಡಿಗೆ ಇದೆ (ಏಷ್ಯಾದಲ್ಲಿ 6ನೇ ಸ್ಥಾನ). ನಂತರದ ಸ್ಥಾನದಲ್ಲಿ ಮುಂಬೈ (USD 68.51, 8ನೇ ಸ್ಥಾನ) ಮತ್ತು ಬೆಂಗಳೂರು (USD 36.84, 19ನೇ ಸ್ಥಾನ) ಇವೆ.&amp;nbsp;&lt;/p&gt;&lt;p&gt;ಈ ಮೂರು ನಗರಗಳಲ್ಲಿ ಈ ತ್ರೈಮಾಸಿಕದಲ್ಲಿ ಒಟ್ಟು 1.88 ಕೋಟಿ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ನೀಡಲಾಗಿದೆ. ಮುಂಬೈ ಒಂದೇ ತ್ರೈಮಾಸಿಕದಲ್ಲಿ 56 ಲಕ್ಷ ಚದರ ಅಡಿ ಸ್ಥಳವನ್ನು ಬಾಡಿಗೆಗೆ ನೀಡಿ ಹೊಸ ದಾಖಲೆ ಬರೆದಿದೆ. ಆದರೆ, ಹೊಸ ಕಟ್ಟಡಗಳ ನಿರ್ಮಾಣ ಅಷ್ಟಾಗಿ ನಡೆಯುತ್ತಿಲ್ಲ. ಕೇವಲ 85 ಲಕ್ಷ ಚದರ ಅಡಿ ಹೊಸ ಕಚೇರಿ ಸ್ಥಳಗಳು ಮಾತ್ರ ನಿರ್ಮಾಣವಾಗಿವೆ.&lt;/p&gt;&lt;img&gt;&lt;p&gt;ಬಾಡಿಗೆಗೆ ಸ್ಥಳ ಹುಡುಕುವವರು ಹೆಚ್ಚಾಗಿ ಪ್ರೈಮ್ ಆಫೀಸ್ ಕಟ್ಟಡಗಳನ್ನೇ ಇಷ್ಟಪಡುತ್ತಾರೆ. GCC (ಗ್ಲೋಬಲ್ ಕಂಪನಿಗಳ ಕೇಂದ್ರಗಳು) ವಿಸ್ತರಣೆ ಮತ್ತು ಫ್ಲೆಕ್ಸಿಬಲ್ ವರ್ಕಿಂಗ್ ಸ್ಪೇಸ್&zwnj;ಗಳ ಆಗಮನ ಈ ಟ್ರೆಂಡ್&zwnj; ಅನ್ನು ಮತ್ತಷ್ಟು ಹೆಚ್ಚಿಸಿದೆ.&amp;nbsp;&lt;/p&gt;&lt;p&gt;ಬೆಂಗಳೂರು, ಏಷ್ಯಾದಲ್ಲೇ ಅತಿಹೆಚ್ಚು ಅಂದರೆ 14% ಬಾಡಿಗೆ ಬೆಳವಣಿಗೆಯನ್ನು ಕಂಡಿದೆ. GCC ಕಂಪನಿಗಳು ಬಾಡಿಗೆಗೆ ಪಡೆದ ಸ್ಥಳಗಳಲ್ಲಿ 41% ಬೆಂಗಳೂರಿನಲ್ಲೇ ಇವೆ. ಇಲ್ಲಿ ಕೇವಲ 11.8% ಸ್ಥಳಗಳು ಮಾತ್ರ ಖಾಲಿ ಇರುವುದರಿಂದ, ಬಾಡಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Delimitation impact: ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯ ಕುಗ್ಗಿಸುವ ಷಡ್ಯಂತ್ರ&lt;/strong&gt;&lt;/p&gt;&lt;img&gt;&lt;p&gt;ಮುಂಬೈನಲ್ಲಿ ದಾಖಲೆಯ 56 ಲಕ್ಷ ಚದರ ಅಡಿ ಸ್ಥಳ ಬಾಡಿಗೆಗೆ ಹೋಗಿದ್ದು, 7.5% ಬಾಡಿಗೆ ಬೆಳವಣಿಗೆ ಕಂಡಿದೆ. ಅಲ್ಲಿ 16.2% ಸ್ಥಳಗಳು ಖಾಲಿ ಇರುವುದರಿಂದ, ವಾರ್ಷಿಕ ಪ್ರತಿ ಚದರ ಅಡಿಗೆ ರೂ. 4,025 ಇರುವ ಬಾಡಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ದೆಹಲಿ-NCRನಲ್ಲಿ ಬಾಡಿಗೆ ಬೆಳವಣಿಗೆ 8.2% ರಷ್ಟು ಸ್ಥಿರವಾಗಿದೆ.&amp;nbsp;&lt;/p&gt;&lt;p&gt;ಅಲ್ಲಿ 14.2% ಸ್ಥಳಗಳು ಖಾಲಿ ಇರುವುದರಿಂದ, ಪ್ರತಿ ಚದರ ಅಡಿಗೆ ವಾರ್ಷಿಕ ರೂ. 4,428 ಬಾಡಿಗೆ ಸ್ಥಿರವಾಗಿರಲಿದೆ. ಈ ವರದಿಯು 'ಪ್ರೈಮ್' ಅಥವಾ 'ಎ-ಗ್ರೇಡ್' ಕಚೇರಿ ಸ್ಥಳಗಳನ್ನು ಮಾತ್ರ ಪರಿಗಣಿಸುತ್ತದೆ. ಚೆನ್ನೈನಲ್ಲಿ ಕಚೇರಿ ಬಾಡಿಗೆ ಮತ್ತು ವಹಿವಾಟು ಮೌಲ್ಯ ಸ್ವಲ್ಪ ಕಡಿಮೆ ಇರುವುದರಿಂದ, ಅದು ಏಷ್ಯಾದ ಅಗ್ರ 24 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭೂ ದಾಖಲೆ ಸ್ಕ್ಯಾನಿಂಗ್ ವಿಳಂಬ: ತಹಸೀಲ್ದಾರ್&zwnj;ಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ&lt;/strong&gt;&lt;/p&gt;]]></content:encoded>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/silicon-city-bengaluru-leads-asia-in-office-rent-hike-mumbai-and-delhi-follow-mrq-hq8r2rb"/>
        </item>
        <item>
            <title><![CDATA[ಇಳಿ ವಯಸ್ಸಿನಲ್ಲೂ ಬತ್ತದ ಛಲ, 98ನೇ ವಯಸ್ಸಿನಲ್ಲಿ ಫುಡ್ ಬ್ಯುಸಿನೆಸ್ ನಡೆಸ್ತಿರುವ ಅಜ್ಜಿ]]></title>
            <link>https://kannada.asianetnews.com/gallery/business/98-year-old-nani-food-business-ahmedabad-nanis-nashta-i3opkds</link>
            <guid isPermaLink="true">https://kannada.asianetnews.com/gallery/business/98-year-old-nani-food-business-ahmedabad-nanis-nashta-i3opkds</guid>
            <pubDate>Wed, 15 Apr 2026 20:09:22 +0530</pubDate>
            <description><![CDATA[&lt;p&gt;Nani food business : ಕೆಲ್ಸ ಮಾಡೋ ಛಲವಿದ್ರೆ ವಯಸ್ಸು ಬರೀ ಲೆಕ್ಕ. ಇದಕ್ಕೆ 70, 80 ವರ್ಷವಲ್ಲ, ಬರೋಬ್ಬರಿ 98 ವರ್ಷವಾಗಿರುವ ಅಜ್ಜಿ ಉತ್ತಮ ನಿದರ್ಶನ. ನಿವೃತ್ತಿ ಪಡೆಯುವ ಬದಲು ಸೂರ್ಯೋದಯಕ್ಕಿಂತ ಮೊದಲೇ ಏಳುವ ಈ ಅಜ್ಜಿ ತಮ್ಮ ಬ್ಯುಸಿನೆಸ್ ನಲ್ಲಿ ಈಗ್ಲೂ ಬ್ಯುಸಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kp8rrbne5bxrjbz1eqgsyjzf,imgname-nani-food-business-1776263376558.jpg" type="image/jpeg" height="390" width="690"/>
            <content:encoded><![CDATA[&lt;p&gt;Nani food business : ಕೆಲ್ಸ ಮಾಡೋ ಛಲವಿದ್ರೆ ವಯಸ್ಸು ಬರೀ ಲೆಕ್ಕ. ಇದಕ್ಕೆ 70, 80 ವರ್ಷವಲ್ಲ, ಬರೋಬ್ಬರಿ 98 ವರ್ಷವಾಗಿರುವ ಅಜ್ಜಿ ಉತ್ತಮ ನಿದರ್ಶನ. ನಿವೃತ್ತಿ ಪಡೆಯುವ ಬದಲು ಸೂರ್ಯೋದಯಕ್ಕಿಂತ ಮೊದಲೇ ಏಳುವ ಈ ಅಜ್ಜಿ ತಮ್ಮ ಬ್ಯುಸಿನೆಸ್ ನಲ್ಲಿ ಈಗ್ಲೂ ಬ್ಯುಸಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಹಮದಾಬಾದ್ (Ahmedabad)ನ 98 ವರ್ಷದ ಪ್ರಭಾವತಿ ಎಲ್ಲರಿಗೂ ಮಾದರಿ. ನನಗೆ ಇನ್ನೂ 98 ವರ್ಷ. ನಾನಿನ್ನೂ ಚಿಕ್ಕವನಾಗಿದ್ದೇನೆ ಅಂತ ಭಾವಿಸಿರುವ ಪ್ರಭಾವತಿ ಬದುಕಿರುವವರೆಗೂ, ನನ್ನ ಮಕ್ಕಳಿಗಾಗಿ ಅಡುಗೆ ಮಾಡುತ್ತೇನೆ ಅಂತ ಪ್ರಮಾಣ ಮಾಡ್ಕೊಂಡಿದ್ದಾರೆ.&lt;/p&gt;&lt;img&gt;&lt;p&gt;22 ನೇ ವಯಸ್ಸಿನಲ್ಲಿ ಮದುವೆಯಾದ ಪ್ರಭಾವತಿಗೆ ಮೂವರು ಹೆಣ್ಣು ಮಕ್ಕಳು. ಅವರನ್ನು ಬೆಳೆಸಿ, ಮನೆ ಸಂಸಾರ ನೋಡಿಕೊಳ್ಳೋದ್ರಲ್ಲಿ ಆರು ದಶಕ ಕಳೆದಿತ್ತು. ಆದ್ರೆ ಅಲ್ಲಿಗೆ ಪ್ರಭಾವತಿ ನಿಲ್ಲಲಿಲ್ಲ. ಹೊಸ ಹೊಸ ಅಡುಗೆಯನ್ನು ರುಚಿಯಾಗಿ ತಯಾರಿಸ್ತಿದ್ದ ಪ್ರಭಾವತಿ, ರುಚಿ ನೋಡಲು ನೆರೆಹೊರೆಯವರಿಗೆ ನೀಡ್ತಿದ್ದರು. ಈಗ ಅದೇ ವ್ಯವಹಾರವಾಗಿದೆ. ಅಜ್ಜಿಯ ಆಹಾರ ಬರೀ ರುಚಿಯಾಗಿಲ್ಲ. ಪ್ರತಿ ತುತ್ತಿನಲ್ಲೂ ಪ್ರೀತಿ ಅಡಗಿದೆ.&lt;/p&gt;&lt;img&gt;&lt;p&gt;2017 ರಲ್ಲಿ ಪ್ರಭಾವತಿ ಪತಿ ನಿಧನರಾದರು. ಮನೆ ಇದ್ದಕ್ಕಿದ್ದಂತೆ ತುಂಬಾ ಶಾಂತವಾಯ್ತು. ಹೆಣ್ಮಕ್ಕಳಿಗೆ ಮದುವೆಯಾಗಿತ್ತು, ಮೊಮ್ಮಕ್ಕಳು ಕೈಗೆ ಬಂದಿದ್ರು. ಎಲ್ಲರೂ ಅವರವರ ಜೀವನದಲ್ಲಿ ಬ್ಯುಸಿಯಾಗಿದ್ರು. 60 ವರ್ಷಗಳಲ್ಲಿ ಮೊದಲ ಬಾರಿಗೆ, ಅಡುಗೆ ಮಾಡಿ ತಿನ್ನಿಸಲು ಯಾರೂ ಇರ್ಲಿಲ್ಲ.&lt;/p&gt;&lt;img&gt;&lt;p&gt;ಒಂದು ದಿನ, ಮಗಳ ಸ್ನೇಹಿತೆ, ಪಾರ್ಟಿಗೆ ಖಾಂಡ್ವಿ ಮಾಡ್ತೀರಾ ಅಂತ ಕೇಳಿದ್ದರು. ಹಣ ಕೊಡೋದಾಗಿ ಒತ್ತಾಯಿಸಿದ್ರು. ಸಣ್ಣ ಆರ್ಡರ್ ನಿಂದ ಪ್ರಾರಂಭವಾದ ಅಡುಗೆ ಶೀಘ್ರದಲ್ಲೇ ದೊಡ್ಡ ಆರ್ಡರ್ ಆಗಿ ಬದಲಾಯಿತು. 91ನೇ ವಯಸ್ಸಿನಲ್ಲಿ ಪ್ರಭಾವತಿ ನಾನಿ ನಾಶ್ತಾ ಶುರು ಮಾಡಿದ್ರು. ಇಂದು, 200 ಕ್ಕೂ ಹೆಚ್ಚು ಕುಟುಂಬಗಳು ಪ್ರಭಾವತಿ ತಯಾರಿಸುವ ಗುಜರಾತಿ ಭಕ್ಷ್ಯಗಳಿಗಾಗಿ ಕಾಯುತ್ತಿವೆ. 98 ನೇ ವಯಸ್ಸಿನಲ್ಲಿಯೂ ಸಹ, ಪ್ರಭಾವತಿ ಈ ಕೆಲ್ಸವನ್ನು ಮುಂದುವರೆಸಿದ್ದಾರೆ. ಅವರು ಪ್ರತಿ ಕೆಲ್ಸದ ಮೇಲೆ ಕಣ್ಣಿಟ್ಟಿದ್ದಾರೆ. ಆಹಾರದ ರುಚಿ ನೋಡುತ್ತಾರೆ. ಪ್ರತಿ ಆರ್ಡರ್ ಗೆ ಸ್ವತಃ ಒಪ್ಪಿಗೆ ನೀಡ್ತಾರೆ.&lt;/p&gt;&lt;img&gt;&lt;p&gt;ಮೊದಲು, ನಾನು ನನ್ನ ಕುಟುಂಬಕ್ಕಾಗಿ ಅಡುಗೆ ಮಾಡುತ್ತಿದ್ದೆ. ಇಂದು, ನಾನು ಅನೇಕ ಕುಟುಂಬಗಳಿಗೆ ಅಡುಗೆ ಮಾಡುತ್ತೇನೆ. ನಾನು ಯಾರೊಬ್ಬರ ಹೆಂಡತಿ ಅಥವಾ ತಾಯಿ ಮಾತ್ರವಲ್ಲ. ನಾನು ಸ್ಥಾಪಕಿ ಎಂದು ಹೆಮ್ಮೆಯಿಂದ ಹೇಳ್ತಾರೆ ಪ್ರಭಾವತಿ. ಇದು ಕೇವಲ ಆಹಾರ, ವ್ಯವಹಾರವಲ್ಲ. ಇದು ಜೀವನದ ಉದ್ದೇಶವನ್ನು ಮರು ಸ್ಥಾಪಿಸುವ ಕೆಲ್ಸವಾಗಿದೆ. ಪ್ರಭಾವತಿ ಅಜ್ಜಿ ತಮ್ಮನ್ನು ತಾವು ಮರು ಶೋಧಿಸಿಕೊಂಡಿದ್ದಾರೆ. ಜೀವನವನ್ನು ಖುಷಿಯಿಂದ ಸಾರ್ಥಕತೆಯಿಂದ ಕಳೆಯುತ್ತಿದ್ದಾರೆ. ವಯಸ್ಸು ಕೇವಲ ಒಂದು ಸಂಖ್ಯೆ. ನೀವು ಯಾವುದೇ ದಿನವನ್ನು ಹೊಸದಾಗಿ ಪ್ರಾರಂಭಿಸಬಹುದು. ನಿಮ್ಮ ಜೀವನದ ಕಥೆಯನ್ನು ಬದಲಾಯಿಸಬಹುದು ಅಂತ ಪ್ರಭಾವತಿ ಹೇಳ್ತಾರೆ.&lt;/p&gt;&lt;img&gt;&lt;p&gt;ಸಣ್ಣಪುಟ್ಟ ವಿಷ್ಯಕ್ಕೆ ನೊಂದು ಆತ್ಮ*ಹತ್ಯೆ ಮಾಡ್ಕೊಳ್ಳುವ, ಖಿನ್ನತೆಗೆ ಒಳಗಾಗುವ ಜನರ ಮಧ್ಯೆ ಪ್ರಭಾವತಿ ಅಜ್ಜಿ ಮಾದರಿಯಾಗಿ ನಿಲ್ತಾರೆ. ಜೀವನದಲ್ಲಿ ಏನೇ ಕಷ್ಟಬಂದ್ರೂ ಅದನ್ನು ಎದುರಿಸಬೇಕು, ಜೀವನವನ್ನು ಪ್ರೀತಿಸಬೇಕು ಎಂಬುದನ್ನು ಪ್ರಭಾವತಿ ಅಜ್ಜಿ ತೋರಿಸಿಕೊಟ್ಟಿದ್ದಾರೆ.&lt;/p&gt;]]></content:encoded>
            <category>business</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/98-year-old-nani-food-business-ahmedabad-nanis-nashta-i3opkds"/>
        </item>
        <item>
            <title><![CDATA[ಅಬ್ಬಬ್ಬಾ ಒಂದು ಫ್ರೂಟಿಗೆ ಅಮೆರಿಕದಲ್ಲಿ ಇಷ್ಟು ದುಡ್ಡು ಕೊಡಬೇಕಾ ? ಹೋದ್ರೆ ಗೊತ್ತಿರಲಿ]]></title>
            <link>https://kannada.asianetnews.com/gallery/business/frooti-drink-price-difference-india-rs-10-and-america-rs-150-maam2oa</link>
            <guid isPermaLink="true">https://kannada.asianetnews.com/gallery/business/frooti-drink-price-difference-india-rs-10-and-america-rs-150-maam2oa</guid>
            <pubDate>Fri, 17 Apr 2026 19:18:47 +0530</pubDate>
            <description><![CDATA[&lt;p&gt;frooti Price in America : ಬೇಸಿಗೆ ಬರ್ತಿದ್ದಂತೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಾಗುತ್ತೆ. ಜನರು ಟೆಟ್ರಾ ಪ್ಯಾಕ್ ಜ್ಯೂಸ್ ಗಳನ್ನು ಹೆಚ್ಚು ಸೇವನೆ ಮಾಡ್ತಾರೆ. ಭಾರತದಲ್ಲಿ 10 ರೂಪಾಯಿಗೆ ಸಿಗುವ ಫ್ರೂಟಿಗೆ ಬೇಡಿಕೆ ಹೆಚ್ಚಿದೆ. ಅದೇ ಅಮೆರಿಕಾದಲ್ಲಿ ಇದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdtwks3dy4xkrr1m4s8qw7c,imgname-frooti-1776433385251.jpg" type="image/jpeg" height="390" width="690"/>
            <content:encoded><![CDATA[&lt;p&gt;frooti Price in America : ಬೇಸಿಗೆ ಬರ್ತಿದ್ದಂತೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಾಗುತ್ತೆ. ಜನರು ಟೆಟ್ರಾ ಪ್ಯಾಕ್ ಜ್ಯೂಸ್ ಗಳನ್ನು ಹೆಚ್ಚು ಸೇವನೆ ಮಾಡ್ತಾರೆ. ಭಾರತದಲ್ಲಿ 10 ರೂಪಾಯಿಗೆ ಸಿಗುವ ಫ್ರೂಟಿಗೆ ಬೇಡಿಕೆ ಹೆಚ್ಚಿದೆ. ಅದೇ ಅಮೆರಿಕಾದಲ್ಲಿ ಇದ್ರ ಬೆಲೆ ಕೇಳಿದ್ರೆ ನೀವು ಶಾಕ್ ಆಗ್ತೀರಾ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಭಾರತದಲ್ಲಿ ಜನರು ಅತಿ ಇಷ್ಟಪಡುವ ಪಾನೀಯಗಳಲ್ಲಿ ಫ್ರೂಟಿ ಕೂಡ ಒಂದು. ಐದು, ಹತ್ತು ರೂಪಾಯಿಗೆ ಈ ಪ್ರೂಟಿ ಟೆಟ್ರಾ ಪ್ಯಾಕ್ ಲಭ್ಯವಿದೆ. ದೊಡ್ಡ ಬಾಟಲಿಯಲ್ಲಿ ಲೀಟರ್ ಗಟ್ಟಲೆ ಫ್ರೂಟಿಯನ್ನೂ ನೀವು ಖರೀದಿ ಮಾಡ್ಬಹುದು. ಬೇಸಿಗೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಹತ್ತು ರೂಪಾಯಿಗೆ ಸಿಗುವ ಈ ಫ್ರೂಟಿಯನ್ನು ನೀವು ಹೋಲ್ಸೇಲ್ ನಲ್ಲಿ ಖರೀದಿ ಮಾಡಿದ್ರೆ ಅದ್ರಲ್ಲೂ ನಿಮಗೆ ಡಿಸ್ಕೌಂಟ್ ಲಭ್ಯವಿದೆ. ಅಷ್ಟೇ ಅಲ್ಲ 10 ಪ್ಯಾಕೆಟ್ ಗೆ ಶೇಕಡಾ 5 ರೂಪಾಯಿ ಡಿಸ್ಕೌಂಟ್ ನೀಡಿ ಆನ್ಲೈನ್ ಕಂಪನಿಗಳು ಮಾರಾಟ ಮಾಡ್ತವೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಹುತೇಕ ಎಲ್ಲರಿಗೂ ಫ್ರೂಟಿ ಇಷ್ಟವಾಗುತ್ತದೆ. ಸಭೆ, ಸಮಾರಂಭಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಫ್ರೂಟಿ ಲಭ್ಯವಿದೆ. ಅಮೆರಿಕಾದಲ್ಲೂ ನಿಮಗೆ ಫ್ರೂಟಿ ಸಿಗುತ್ತೆ. ಆದ್ರೆ ಅದ್ರ ಬೆಲೆ ಮಾತ್ರ ಭಾರತಕ್ಕಿಂತ 8 &ndash; 10 ಪಟ್ಟು ಹೆಚ್ಚಿದೆ.&lt;/p&gt;&lt;img&gt;&lt;p&gt;ಅಮೆರಿಕಾದಲ್ಲಿ ಭಾರತ ಅಥವಾ ಏಷ್ಯಾ ಅಂಗಡಿಗಳಲ್ಲಿ ನಿಮಗೆ ಫ್ರೂಟಿ ಸಿಗುತ್ತೆ. ಅಲ್ಲಿ ನೀವು ಒಂದು ಫ್ರೂಟಿ ಪ್ಯಾಕ್ ಖರೀದಿ ಮಾಡೋಕೆ 80 ರಿಂದ 150 ರೂಪಾಯಿ ನೀಡ್ಬೇಕು. ಇದು ಸಾಮಾನ್ಯ ಸಂಗತಿ. ಭಾರತದಲ್ಲಿ ಅತಿ ಕಡಿಮೆಗೆ ಸಿಗುವ ಪದಾರ್ಥ, ವಸ್ತುಗಳು ವಿದೇಶದಲ್ಲಿ ದುಬಾರಿ.&lt;/p&gt;&lt;img&gt;&lt;p&gt;ಭಾರತದಲ್ಲಿ 10 ರೂಪಾಯಿಗೆ ಸಿಗುವ ಜ್ಯೂಸ್ ಅಮೆರಿಕಾದಲ್ಲಿ 80 ರಿಂದ 150 ರೂಪಾಯಿಗೆ ಮಾರಾಟವಾಗಲು ಕಾರಣ ಏನು ಎನ್ನುವ ಪ್ರಶ್ನೆ ಕಾಡೋದು ಸಹಜ. ಇದಕ್ಕೆ ಬರೀ ಒಂದೇ ಕಾರಣವಿಲ್ಲ. ನಾನಾ ಕಾರಣಗಳಿಂದಾಗಿ ಜ್ಯೂಸ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಲಿಕೆ ಮಾಡಿದ್ರೆ ಭಿನ್ನವಾಗಿರುತ್ತದೆ.&lt;/p&gt;&lt;img&gt;&lt;p&gt;ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅದನ್ನು ರಫ್ತು ಮಾಡುವ ಖರ್ಚು ಹೆಚ್ಚಿರುತ್ತದೆ. ಇದ್ರ ಜೊತೆ ತೆರಿಗೆ ಕಟ್ಟಬೇಕು. ದೇಶ ಬದಲಾವಣೆಯಿಂದ ಇತರ ಖರ್ಚುಗಳು ಹೆಚ್ಚಿರುತ್ತವೆ. ಹಾಗಾಗಿ ತಯಾರಿಸಿದ ದೇಶಕ್ಕಿಂತ ಮಾರಾಟವಾಗ್ತಿರುವ ದೇಶದಲ್ಲಿ ವಸ್ತುವಿನ ಬೆಲೆ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ.&lt;/p&gt;&lt;img&gt;&lt;p&gt;ಪ್ರತಿಯೊಂದ ದೇಶ ಅದರದೇ ಆದ ಬಾಡಿಗೆ ರೂಲ್ಸ್ ಹೊಂದಿರುತ್ತದೆ. ಅಂಗಡಿಗಳ ಬಾಡಿಗೆ ಹೆಚ್ಚಾದಂತೆ ಅಂಗಡಿ ಮಾಲೀಕರು ವಸ್ತುಗಳ ಬೆಲೆ ಏರಿಸ್ತಾರೆ. ಅಮೆರಿಕಾದಲ್ಲಿ ಅಂಗಡಿ ಬಾಡಿಗೆ, ಕರೆಂಟ್ ಬಿಲ್ ಹಾಗೂ ಕಾರ್ಮಿಕರಿಗೆ ನೀಡುವ ಖರ್ಚು ಹೆಚ್ಚು. ಈ ಎಲ್ಲ ಖರ್ಚನ್ನು ಸರಿದೂಗಿಸಲು ಅಂಗಡಿ ಮಾಲೀಕ ಬೆಲೆ ಏರಿಕೆ ಮಾಡೋದು ಅನಿರ್ವಾಯ.&lt;/p&gt;]]></content:encoded>
            <category>business</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/frooti-drink-price-difference-india-rs-10-and-america-rs-150-maam2oa"/>
        </item>
        <item>
            <title><![CDATA[ಅಕ್ಷಯ ತೃತೀಯಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ! ಇವತ್ತಿನ ಗೋಲ್ಡ್ ರೇಟ್ ಎಷ್ಟು?]]></title>
            <link>https://kannada.asianetnews.com/gallery/business/gold-rate-today-april-17-prices-drop-before-akshaya-tritiya-kvn-qglh59a</link>
            <guid isPermaLink="true">https://kannada.asianetnews.com/gallery/business/gold-rate-today-april-17-prices-drop-before-akshaya-tritiya-kvn-qglh59a</guid>
            <pubDate>Fri, 17 Apr 2026 11:19:50 +0530</pubDate>
            <description><![CDATA[&lt;p&gt;ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4sa30q5gyte1m30xghsxzp3,imgname-gold-1757491069669.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಅಕ್ಷಯ ತೃತೀಯಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಚಿನ್ನ ಖರೀದಿಸುವವರ ಪಾಲಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಯಾಗಿದೆ. ಏಪ್ರಿಲ್ 17ರಂದು ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಒಂದು ಕಡೆ ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣುತ್ತಾ ಸಾಗಿತ್ತು. ಇನ್ನೊಂದೆಡೆ ಅಕ್ಷಯ ತೃತೀಯ ಸಮೀಪಿಸುತ್ತಿತ್ತು. ಹೀಗಿರುವಾಗಲೇ ಚಿನ್ನ ಖರೀದಿಸುವವರ ಪಾಲಿಗೆ ಇದೀಗ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ ಪ್ರತಿ 10 ಗ್ರಾಮ್ ಚಿನ್ನದ ಮೇಲೆ ಶುಕ್ರವಾರವಾದ ಇಂದು ಬರೋಬ್ಬರಿ 1370 ರುಪಾಯಿ ಇಳಿಯಾಗಿದೆ. ನಿನ್ನೆ 24 ಕ್ಯಾರಟ್ ಒಂದು ಗ್ರಾಮ್&zwnj;ಗೆ 15,557 ಇದ್ದ ರೇಟ್ ಇಂದು 15,420 ರುಪಾಯಿಗೆ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಇದಷ್ಟೇ ಅಲ್ಲದೇ ಆಭರಣ ಚಿನ್ನವಾಗಿರುವ 22 ಕ್ಯಾರಟ್ ಗೋಲ್ಡ್ ರೇಟ್&zwnj;ನಲ್ಲೂ ಇಂದು ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 1250 ರುಪಾಯಿ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ನಿನ್ನೆ 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,260 ರುಪಾಯಿ ಆಗಿತ್ತು. ಈ ಮೂಲಕ ಮೇ ತಿಂಗಳ ಗರಿಷ್ಠ ಮೊತ್ತ ತಲುಪಿತ್ತು. ಆದರೆ ಇದೀಗ ಪ್ರತಿ ಗ್ರಾಮ್ ಮೇಲೆ 125 ರುಪಾಯಿ ಕುಸಿತವಾಗಿದ್ದು, ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,135 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ ಅಕ್ಷಯ ತೃತೀಯ ಸಮೀಪಿಸುತ್ತಿರುವಾಗಲೇ ಚಿನ್ನದ ಬೆಲೆಯಲ್ಲಿ ಇಳಿಮುಖ ಕಾಣುತ್ತಿರುವುದು ಬಂಗಾರ ಖರೀದಿಸುವವರ ಮುಖದಲ್ಲಿ ಕೊಂಚ ಸಮಾಧಾನ ಮೂಡುವಂತೆ ಮಾಡಿರುವಂತೆ ಮಾಡಿರುವುದಂತೂ ಸುಳ್ಳಲ್ಲ.&lt;/p&gt;&lt;img&gt;&lt;p&gt;ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿಯ ಬೆಲೆಯಲ್ಲೂ ಇಳಿಕೆಯಾಗಿದೆ. ನಿನ್ನೆಯ ದಿನಕ್ಕೆ ಹೋಲಿಸಿದರೆ ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ 5000 ರುಪಾಯಿ ಇಳಿಕೆಯಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 2,65,000 ರುಪಾಯಿಗಳಾಗಿದೆ.&lt;/p&gt;]]></content:encoded>
            <category>business</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-rate-today-april-17-prices-drop-before-akshaya-tritiya-kvn-qglh59a"/>
        </item>
        <item>
            <title><![CDATA[46 ಮನೆ ಮಾಲೀಕ ಜೊತೆ ಜೊತೆಯಲಿ ಧಾರಾವಾಹಿ ನಟ ಶಿವಾಜಿ ಜಾಧವ್;‌ ಮೈಸೂರು ಅರಮನೆಯ ಪೀಠೋಪಕರಣವೂ ಇದೆ!]]></title>
            <link>https://kannada.asianetnews.com/gallery/tv-talk/jothe-jotheyali-kannada-serial-actor-shivaji-jadhav-45-house-apartment-property-r8fwyve</link>
            <guid isPermaLink="true">https://kannada.asianetnews.com/gallery/tv-talk/jothe-jotheyali-kannada-serial-actor-shivaji-jadhav-45-house-apartment-property-r8fwyve</guid>
            <pubDate>Sat, 18 Apr 2026 17:35:16 +0530</pubDate>
            <description><![CDATA[&lt;p&gt;Actor Shivaji Jadhav: ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶಿವಾಜಿರಾವ್ ಜಾಧವ್ ಅವರು ಸುಮಾರು 45 ಮನೆಗಳ ಮಾಲೀಕರು. ಒಟ್ಟಾರೆಯಾಗಿ 4 ಅಪಾರ್ಟ್&zwnj;ಮೆಂಟ್&zwnj;ಗಳನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಕಲಾ ಮಾಧ್ಯಮ ಯುಟ್ಯೂಬ್&zwnj; ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpg7aewcdqr8yfgwby3ja7by,imgname-new-project---2026-04-18t172315.553-1776513530764.jpg" type="image/jpeg" height="390" width="690"/>
            <content:encoded><![CDATA[&lt;p&gt;Actor Shivaji Jadhav: ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಿರುವ ನಟ ಶಿವಾಜಿರಾವ್ ಜಾಧವ್ ಅವರು ಸುಮಾರು 45 ಮನೆಗಳ ಮಾಲೀಕರು. ಒಟ್ಟಾರೆಯಾಗಿ 4 ಅಪಾರ್ಟ್&zwnj;ಮೆಂಟ್&zwnj;ಗಳನ್ನು ಹೊಂದಿದ್ದಾರಂತೆ. ಈ ಬಗ್ಗೆ ಅವರು ಕಲಾ ಮಾಧ್ಯಮ ಯುಟ್ಯೂಬ್&zwnj; ಚಾನೆಲ್&zwnj;ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲದಿಂದ ನಟಿಸುತ್ತಿರುವ ಅವರು, 'ಕೌರವ' ಸಿನಿಮಾದ &quot;ನಿಮ್ಮ ಎಮ್ಮೆ ಹಗ್ಗ ಬಿಚ್ಕೊಂತ...&quot; ಎಂಬ ಒಂದೇ ಒಂದು ಸಂಭಾಷಣೆಯ ಮೂಲಕ ಹೆಸರು ಮಾಡಿದ್ದರು. ಜಾಯಿಂಟ್&zwnj; ವೆಂಚರ್&zwnj;ನಲ್ಲಿ ಈ ರೀತಿ ಅಪಾರ್ಟ್&zwnj;ಮೆಂಟ್&zwnj; ಕಟ್ಟಲಾಗಿದೆಯಂತೆ.&lt;/p&gt;&lt;img&gt;&lt;p&gt;ಮೈಸೂರಿನ ಜೆ.ಪಿ. ನಗರದಲ್ಲಿ ಶಿವಾಜಿರಾವ್ ಅವರು ಇಂದು 'ಪ್ರೈಡ್ ಬ್ಲಾಕ್' ಮತ್ತು 'ಪ್ರೈಮ್ ಬ್ಲಾಕ್' ಎಂಬ ಎರಡು ಬೃಹತ್ ಅಪಾರ್ಟ್&zwnj;ಮೆಂಟ್ ಒಡೆಯರಾಗಿದ್ದಾರೆ. ಸುಮಾರು 240/220 ಅಳತೆಯ (ಅಂದಾಜು ಮುಕ್ಕಾಲು ಎಕರೆ) ವಿಶಾಲವಾದ ಜಾಗದಲ್ಲಿ ಈ ಕಟ್ಟಡಳಿವೆ.&lt;/p&gt;&lt;img&gt;&lt;p&gt;ಮನೆಗಳ ಬಗ್ಗೆ ಮಾತನಾಡಿರುವ ಶಿವಾಜಿ ಜಾಧವ್&zwnj; ಅವರು, &quot;ಬಹಳ ಕಷ್ಟಪಟ್ಟು, ಹೊಟ್ಟೆ ಬಟ್ಟೆ ಕಟ್ಟಿ ಈ ಜಾಗವನ್ನು ಉಳಿಸಿಕೊಂಡಿದ್ದೆ. ಎಂತಹ ಕಷ್ಟ ಬಂದರೂ ಜಾಗ ಮಾರಲಿಲ್ಲ. ಕೊನೆಗೆ ಬಿಲ್ಡರ್ಸ್&zwnj;ಗಳ ಜೊತೆ ಜಾಯಿಂಟ್ ವೆಂಚರ್ ಒಪ್ಪಂದ ಮಾಡಿಕೊಂಡು ಇಂದು ಈ ಸುಂದರ ಅರಮನೆಯಂತಹ ಮನೆಯಲ್ಲಿ ವಾಸವಾಗಿದ್ದೇನೆ&quot; ಎಂದು ಹೇಳಿದ್ದಾರೆ. ಶಿವಾಜಿ ಅವರು ಸಾಕಷ್ಟು ಕೆಲಸ, ಉದ್ಯಮಗಳನ್ನು ಮಾಡಿ ಹಣ ಮಾಡಿದ್ದರಂತೆ. ಇದರಿಂದಲೇ ಮನೆ ಕಟ್ಟಿದ್ದರಂತೆ.&lt;/p&gt;&lt;img&gt;&lt;p&gt;1960-70ರ ದಶಕದಲ್ಲಿ ಮೈಸೂರು ಅರಮನೆಯಲ್ಲಿ ಹರಾಜಾದ ರಾಜತ್ವದ ಕಾಲದ ಟೀಕ್ ಮತ್ತು ರೋಸ್&zwnj;ವುಡ್ ಪೀಠೋಪಕರಣಗಳನ್ನು ಅವರ ತಂದೆ ಖರೀದಿಸಿದ್ದರು. ಅವುಗಳನ್ನು ಇಂದಿಗೂ ಶಿವಾಜಿರಾವ್ ಅತ್ಯಂತ ಜಾಗರೂಕತೆಯಿಂದ ಕಾಪಾಡಿಕೊಂಡು ಬಂದಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಅಮೆರಿಕ ಸೇರಿದಂತೆ ವಿದೇಶಗಳಿಂದ ತಂದ ಗಾಜಿನ ಕೆತ್ತನೆಗಳು, ಹಿತ್ತಾಳೆಯ ಕಲಾಕೃತಿಗಳು ಮತ್ತು ಅಪರೂಪದ ಲೈಟರ್&zwnj;ಗಳ ಸಂಗ್ರಹ ಅವರ ಮನೆಯಲ್ಲಿವೆ. ಅಂದಹಾಗೆ ಶಿವಾಜಿ ಅವರ ಮಗಳು ಅಮೆರಿಕದಲ್ಲಿ ಇರುತ್ತಾರೆ.&amp;nbsp;&lt;/p&gt;]]></content:encoded>
            <category>business</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/tv-talk/jothe-jotheyali-kannada-serial-actor-shivaji-jadhav-45-house-apartment-property-r8fwyve"/>
        </item>
        <item>
            <title><![CDATA[10 ಸಾವಿರಕ್ಕಿಂತ ಹೆಚ್ಚು UPIನಲ್ಲಿ ಹಣ ಹಾಕ್ತೀರಾ? ಇನ್ಮುಂದೆ ಹೊಸ ರೂಲ್ಸ್​- ಏನಿದು ನಿಯಮ, ಯಾರಿಗೆಲ್ಲಾ ಅನ್ವಯ]]></title>
            <link>https://kannada.asianetnews.com/business/rbi-plans-1-hour-delay-on-upi-transactions-above-10000-proposes-here-suc/articleshow-reufp5p</link>
            <guid isPermaLink="true">https://kannada.asianetnews.com/business/rbi-plans-1-hour-delay-on-upi-transactions-above-10000-proposes-here-suc/articleshow-reufp5p</guid>
            <pubDate>Wed, 15 Apr 2026 22:35:22 +0530</pubDate>
            <description><![CDATA[ಸೈಬರ್ ವಂಚನೆಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತರಲು ಚಿಂತಿಸುತ್ತಿದೆ. ಈ ನಿಯಮದ ಪ್ರಕಾರ, ಯುಪಿಐ ಮೂಲಕ ಹೊಸ ಬಳಕೆದಾರರಿಗೆ ಮೊದಲ ಬಾರಿಗೆ ₹10,000 ಕ್ಕಿಂತ ಹೆಚ್ಚು ಹಣ ವರ್ಗಾಯಿಸಿದರೆ, ಅದು ಕ್ರೆಡಿಟ್ ಆಗಲು ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ವಂಚನೆ ಎಂದು ತಿಳಿದರೆ ವಹಿವಾಟನ್ನು ರದ್ದುಗೊಳಿಸಲು ಅವಕಾಶವಿರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmpqcncf05867y2qcf626995,imgname-upi--3--1774584223119.jpg" type="image/jpeg" height="390" width="690"/>
            <content:encoded><![CDATA[&lt;p&gt;ಇದು ಡಿಜಿಟಲ್​ ಯುಗ. ಯಾರ ಬಳಿಯೂ ಕ್ಯಾಷ್​ ಇರೋದೇ ಕಷ್ಟ. 1 ರೂಪಾಯಿಯಿಂದ ಹಿಡಿದು ಲಕ್ಷಾಂತರ ರೂಪಾಯಿ ವ್ಯವಹಾರ ಒಂದೇ ಕ್ಲಿಕ್​ನಲ್ಲಿ ಆಗುತ್ತದೆ. ಅದರಲ್ಲಿಯೂ 10-20 ಸಾವಿರ ರೂಪಾಯಿ ಟ್ರಾನ್ಸ್​ಫರ್​ ಮಾಡುವುದಿದ್ದರೆ ಗೂಗಲ್​ಪೇ, ಫೋನ್​ ಪೇ ಎಂದೆಲ್ಲಾ ಕ್ಷಣ ಮಾತ್ರದಲ್ಲಿ ದುಡ್ಡು ನೀಡಲಾಗುತ್ತದೆ. ಆದರೆ ಇನ್ನು ಮುಂದೆ ಹೀಗೆಲ್ಲಾ ಮಾಡುವಂತಿಲ್ಲ. ಏಕೆಂದರೆ ಇನ್ಮುಂದೆ 10 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಬೇರೆಯವರಿಗೆ ವರ್ಗ ಮಾಡಿದರೆ, ಅವರಿಗೆ ಅದು ತಕ್ಷಣ ಸಿಗುವುದಿಲ್ಲ. ಬದಲಿಗೆ ಕನಿಷ್ಠ ಒಂದು ಗಂಟೆ ತೆಗೆದುಕೊಳ್ಳುತ್ತದೆ. ಹೌದು. ಇಂಥದ್ದೊಂದು ಹೊಸ ರೂಲ್ಸ್ ಶೀಘ್ರವೇ ಬರಲಿದೆ. ವೇಟ್​, ವೇಟ್​... ಹಾಗೆಂದು ನೀವು ಗಾಬರಿಯಾಗುವ ಅಗತ್ಯವಿಲ್ಲ. ಬಾಯಿಗೆ ಬಂದಂತೆ ಶಾಪ ಹಾಕುವುದೂ ಬೇಕಿಲ್ಲ. ಏನಿದು ಹೊಸ ರೂಲ್ಸ್​,, ಯಾಕೆ ಇದನ್ನು ಮಾಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಸೈಬರ್​ ಕ್ರೈಂ ತಡೆಗೆ ಕ್ರಮ&lt;/strong&gt;&lt;/h2&gt;&lt;p&gt;ಇದೀಗ ಡಿಜಿಟಲ್​ ವ್ಯವಹಾರ ಹೆಚ್ಚಿದಂತೆ ಸೈಬರ್​ ಕ್ರೈಂಗಳು ಹೆಚ್ಚುತ್ತಿವೆ. ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನವೂ ನೂರಾರು ಮಂದಿ ಇದರ ವಂಚನೆಗೆ ಒಳಗಾಗುತ್ತಿದ್ದಾರೆ. ವಂಚನೆ ಬಗ್ಗೆ ಎಷ್ಟೇ ಬಾಯಿ ಬಡಿದುಕೊಂಡರೂ, ಯಾರೋ ಆಫರ್ ನೀಡಿದ್ರು ಎಂದೋ, ಇನ್ನಾರೋ ಏನನ್ನೋ ಗಿಫ್ಟ್​ ಅಂತ ಕೊಟ್ಟು ಲಿಂಕ್​ ಕ್ಲಿಕ್​ ಮಾಡಿ ಅಂದುಬಿಟ್ಟರೆ ಸಾಕು, ಹಿಂದೆ ಮುಂದೆ ನೋಡದೇ ಆಫರ್​ ಆಸೆಗೆ ಬಿದ್ದು ಲಿಂಕ್​ ಕ್ಲಿಕ್​ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ ಎಜುಕೇಟೆಡ್​ ಮಂದಿ. ಆದ್ದರಿಂದ ಈ ಹೊಸ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮ ಜಾರಿಗೆ ಮುಂದಾಗಿದ್ದು ಶೀಘ್ರವೇ ಇದು ಜಾರಿಗೆ ಬರಲಿದೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;10 ಸಾವಿರಕ್ಕಿಂತ ಹೆಚ್ಚಿಗೆ ಹಣವಿದ್ದರೆ...&lt;/strong&gt;&lt;/h3&gt;&lt;p&gt;ಅದೇನೆಂದರೆ, UPI ಮೂಲಕ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣವನ್ನು ಕಳುಹಿಸಲು ಮುಂದಿನ ದಿನಗಳಲ್ಲಿ ಒಂದು ತಾಸು ಬೇಕಾಗಲಿದೆ. ಅಂದರೆ, ಯುಪಿಐ ಮೂಲಕ ನಾವು ಹಣ ಕಳುಹಿಸಿದರೆ, ಅದು ಒಂದು ತಾಸಿನ ಬಳಿಕ ಬೇರೆಯವರಿಗೆ ಕ್ರೆಡಿಟ್ ಆಗುತ್ತದೆ. ಆದರೆ, ಇದು ಎಲ್ಲರಿಗೂ ಅನ್ವಯ ಅಲ್ಲ. ಕೇವಲ ಹೊಸ ಬಳಕೆದಾರರು ಅಥವಾ ಇಬ್ಬರು ವ್ಯಕ್ತಿಗಳು ಮೊದಲ ಬಾರಿಗೆ ವಹಿವಾಟು ನಡೆಸುತ್ತಿದ್ದರೆ ಮಾತ್ರ ಅನ್ವಯಿಸುತ್ತದೆ. 10 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಮೊದಲ ಬಾರಿ ವರ್ಗಾಯಿಸುವಾಗ ಅದು ಆ ವ್ಯಕ್ತಿಗೆ ಕ್ರೆಡಿಟ್​ ಆಗಲು ಒಂದು ಗಂಟೆ ಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ಹೆಚ್ಚು ಬಾರಿ ವಹಿವಾಟು&lt;/strong&gt;&lt;/h3&gt;&lt;p&gt;ಇಬ್ಬರು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸುತ್ತಿದ್ದರೆ, ಇದು ಅನ್ವಯ ಆಗುವುದಿಲ್ಲ. ಒಂದು ವೇಳೆ 10 ಸಾವಿರಕ್ಕಿಂತ ಹೆಚ್ಚು ವರ್ಗಾವಣೆ ಆದರೆ, ಅದು ಆ ವ್ಯಕ್ತಿಗೆ ಮೊದಲ ಬಾರಿಗೆ ತಲುಪಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. ಒಂದು ವೇಳೆ, ನಿಮಗೆ ಅದು ವಂಚನೆ ಎನ್ನಿಸಿದರೆ ಅಥವಾ ಏನೋ ಎಡವಟ್ಟು ಆಯಿತು ಎಂದರೆ, ಆ ಹಣವನ್ನು ಹಿಂದಕ್ಕೆ ಪಡೆಯಲು ಅಥವಾ ವಹಿವಾಟನ್ನು ರದ್ದುಗೊಳಿಸಲು ಈ ಸಮಯಾವಕಾಶ ನೀಡಲಾಗುತ್ತದೆ. ಇದು ಏನಿದ್ದರೂ ಸೈಬರ್​ ಕ್ರೈಂ ತಡೆಗಟ್ಟುವ ವಿಧಾನವಾಗಿದೆ. ನಿಮ್ಮ ಫೋನ್​ ಟ್ಯಾಪ್​ ಆಗಿ ನಿಮ್ಮ ಫೋನ್​ನಿಂದ 10 ಸಾವಿರಕ್ಕಿಂತ ಹೆಚ್ಚಿನ ಹಣ ಬೇರೆಯವರಿಗೆ ವರ್ಗವಾಗಿದ್ದು ತಿಳಿಯುತ್ತಲೇ ನೀವು ಅದನ್ನು ಹಿಂದಕ್ಕೆ ಪಡೆಯಲು ಅವಕಾಶ ಸಿಗಲಿದೆ. ಆದರೆ ಸದ್ಯ ಆ ರೀತಿ ಇಲ್ಲ. ಎಷ್ಟು ಲಕ್ಷ ಬೇಕಾದರೂ ಕ್ಷಣ ಮಾತ್ರದಲ್ಲಿ ವರ್ಗಾವಣೆ ಆಗಿ ಮೋಸ ಆಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/business/rbi-plans-1-hour-delay-on-upi-transactions-above-10000-proposes-here-suc/articleshow-reufp5p"/>
        </item>
        <item>
            <title><![CDATA[ರಾಜ್ಯದ ಜನತೆಗೆ 'ವಿದ್ಯುತ್ ದರ ಏರಿಕೆ' ಶಾಕ್ ಕೊಟ್ಟ ಗ್ಯಾರಂಟಿ ಸರ್ಕಾರ! ಪ್ರತಿ ಯೂನಿಟ್ ಮೇಲೆ 56 ಪೈಸೆ ಹೆಚ್ಚಳ ಆದೇಶ!]]></title>
            <link>https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly</link>
            <guid isPermaLink="true">https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly</guid>
            <pubDate>Fri, 17 Apr 2026 19:58:45 +0530</pubDate>
            <description><![CDATA[&lt;p&gt;ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್&zwnj;ಗೆ 56 ಪೈಸೆ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿದೆ. ಆದಾಯ ಕೊರತೆ ಸರಿದೂಗಿಸಲು ಈ 'ಟ್ರೂ ಅಪ್' ಶುಲ್ಕವನ್ನು ವಿಧಿಸಲಾಗಿದ್ದು, ಮೇ 2026 ರಿಂದ ಗ್ರಾಹಕರ ಬಿಲ್&zwnj;ನಲ್ಲಿ ಇದು ಜಾರಿಗೆ ಬರಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdxfp3bn2cqhts9n9av6jte,imgname-karnataka-electricity-tariff-hike-1776436107371.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.17): ಸು&lt;/strong&gt;ಡುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ರಾಜ್ಯದ ಜನರಿಗೆ ವಿದ್ಯುತ್ (ಎಲ್ಲಾ ಎಸ್ಕಾಂಗಳು-ESCOM) ಗ್ರಾಹಕರಿಗೆ ಈಗ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (KERC) ವಿದ್ಯುತ್ ದರವನ್ನು ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಆದೇಶದನ್ವಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಯ ಮೇಲೆ 56 ಪೈಸೆ ಹೆಚ್ಚುವರಿ ಹೊರೆಯನ್ನು ಗ್ರಾಹಕರು ಹೊರಬೇಕಾಗಿದೆ.&lt;/p&gt;&lt;h2&gt;&lt;strong&gt;ದರ ಏರಿಕೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಕೆಇಆರ್&zwnj;ಸಿ ಹೊರಡಿಸಿರುವ ಆದೇಶದ ಪ್ರಕಾರ, ಈ ದರ ಏರಿಕೆಯು 2024-25ರ ಆರ್ಥಿಕ ವರ್ಷದ ಆದಾಯದ ಕೊರತೆಯನ್ನು ಸರಿದೂಗಿಸಲು ಮಾಡಲಾದ 'ಟ್ರೂ ಅಪ್' (True up Charges) ಪ್ರಕ್ರಿಯೆಯಾಗಿದೆ. 2024-25ರ ಹಣಕಾಸು ವರ್ಷದಲ್ಲಿ ಬೆಸ್ಕಾಂ ಒಟ್ಟು 34,087.94 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿತ್ತು. ಆದರೆ, ವಾಸ್ತವದಲ್ಲಿ ವಿದ್ಯುತ್ ಮಾರಾಟದಿಂದ ಬಂದ ಆದಾಯ ಕೇವಲ 32,019.56 ಕೋಟಿ ರೂಪಾಯಿಗಳು ಮಾತ್ರ. ಇದರಿಂದಾಗಿ ಬೆಸ್ಕಾಂಗೆ ಬರೋಬ್ಬರಿ 2,068.38 ಕೋಟಿ ರೂಪಾಯಿಗಳ ಬೃಹತ್ ಆದಾಯದ ಕೊರತೆ ಉಂಟಾಗಿದೆ.&lt;/p&gt;&lt;p&gt;ಈ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಕೊರತೆಯನ್ನು ತುಂಬಿಕೊಳ್ಳಲು ಎಸ್ಕಾಂಗಳು ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದ್ದವು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೆಇಆರ್ಸಿ, ಕೊರತೆಯನ್ನು ನೀಗಿಸಲು ಪ್ರತಿ ಯೂನಿಟ್&zwnj;ಗೆ 56 ಪೈಸೆಯಂತೆ ಗ್ರಾಹಕರಿಂದ ವಸೂಲಿ ಮಾಡಲು ಅನುಮತಿ ನೀಡಿದೆ.&lt;/p&gt;&lt;h2&gt;&lt;strong&gt;ಯಾವಾಗಿನಿಂದ ಜಾರಿಗೆ ಬರಲಿದೆ?&lt;/strong&gt;&lt;/h2&gt;&lt;p&gt;ಕೆಇಆರ್&zwnj;ಸಿಯ ಈ ಆದೇಶವು ಏಪ್ರಿಲ್ 17, 2026 ರಂದು ಹೊರಬಿದ್ದಿದ್ದು, ಪರಿಷ್ಕೃತ ದರವು 2026 ರ ಮೇ 1 ರಿಂದ ಜಾರಿಗೆ ಬರಲಿದೆ. ಅಂದರೆ, ಮೇ ತಿಂಗಳಿನಲ್ಲಿ ಬರುವ ವಿದ್ಯುತ್ ಬಿಲ್&zwnj;ಗಳಲ್ಲಿ ಗ್ರಾಹಕರು ಈ ಹೆಚ್ಚುವರಿ 56 ಪೈಸೆ 'ಟ್ರೂ ಅಪ್' ದರವನ್ನು ಪಾವತಿಸಬೇಕಾಗುತ್ತದೆ. ಈ ವಸೂಲಾತಿಯು 2026-27ರ ಇಡೀ ಆರ್ಥಿಕ ವರ್ಷದಲ್ಲಿ ಅನ್ವಯವಾಗಲಿದ್ದು, ಏಪ್ರಿಲ್ 30, 2027 ರವರೆಗೆ ಮುಂದುವರಿಯಲಿದೆ.&lt;/p&gt;&lt;h3&gt;&lt;strong&gt;ಗ್ರಾಹಕರ ಮೇಲೆ ಬೀರುವ ಪ್ರಭಾವ:&lt;/strong&gt;&lt;/h3&gt;&lt;p&gt;ಗೃಹಬಳಕೆದಾರರು ಮಾತ್ರವಲ್ಲದೆ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ವಿದ್ಯುತ್ ಗ್ರಾಹಕರಿಗೂ ಈ ಏರಿಕೆ ಅನ್ವಯವಾಗಲಿದೆ. ಉದಾಹರಣೆಗೆ, ಒಂದು ಮನೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸಿದರೆ, ಆ ಮನೆಯ ಬಿಲ್&zwnj;ನಲ್ಲಿ ಕನಿಷ್ಠ 112 ರೂಪಾಯಿಗಳಷ್ಟು ಹೆಚ್ಚುವರಿ ಮೊತ್ತ ಸೇರ್ಪಡೆಯಾಗಲಿದೆ. ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಿ ಪರಿಣಮಿಸಲಿದೆ.&lt;/p&gt;&lt;h2&gt;&lt;strong&gt;ಆದೇಶದ ಮುಖ್ಯಾಂಶಗಳು:&lt;/strong&gt;&lt;/h2&gt;&lt;ul&gt; &lt;li&gt;&lt;strong&gt;56 ಪೈಸೆ ಹೆಚ್ಚಳ: &lt;/strong&gt;ಪ್ರತಿ ಯೂನಿಟ್&zwnj;ಗೆ 56 ಪೈಸೆ ಟ್ರೂ ಅಪ್ ಚಾರ್ಜ್ ಸಂಗ್ರಹ.&lt;/li&gt; &lt;li&gt;&lt;strong&gt;ಮೇ 2026 ರಿಂದ ಜಾರಿ: &lt;/strong&gt;ಮೇ 1 ರಿಂದ ಪಡೆಯುವ ಮೀಟರ್ ರೀಡಿಂಗ್&zwnj;ಗಳಲ್ಲಿ ದರ ಅನ್ವಯ.&lt;/li&gt; &lt;li&gt;&lt;strong&gt;ಕೊರತೆ ನೀಗಿಸುವ ಗುರಿ:&lt;/strong&gt; 2,068.38 ಕೋಟಿ ರೂ.ಗಳ ಕಂದಾಯ ಕೊರತೆ ತುಂಬಿಕೊಳ್ಳಲು ಕ್ರಮ.&lt;/li&gt; &lt;li&gt;&lt;strong&gt;ಪ್ರತ್ಯೇಕ ಲೆಕ್ಕಾಚಾರ: &lt;/strong&gt;ವಸೂಲಿ ಮಾಡುವ ಮೊತ್ತದ ಬಗ್ಗೆ ಬೆಸ್ಕಾಂ ಪ್ರತ್ಯೇಕ ಲೆಕ್ಕಪತ್ರವನ್ನು ನಿರ್ವಹಿಸಬೇಕೆಂದು ಕೆಇಆರ್ಸಿ ಸೂಚಿಸಿದೆ.&lt;/li&gt;&lt;/ul&gt;&lt;p&gt;ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-kerc-electricity-tariff-hike-all-escom-s-56-paise-per-unit-from-may-2026-sat/articleshow-szs4nly"/>
        </item>
        <item>
            <title><![CDATA[ಹಣ...ಐಶ್ವರ್ಯ, 3 ದಿನದ ನಂತರ ವೈಭವ ಲಕ್ಷ್ಮಿ ರಾಜಯೋಗದಿಂದ ಈ ರಾಶಿಗೆ ಸಂಪತ್ತು]]></title>
            <link>https://kannada.asianetnews.com/gallery/business/vaibhav-lakshmi-rajyog-2026-after-3-days-shukra-chandra-yuti-akshaya-tritiya-horoscope-suh-tohni0o</link>
            <guid isPermaLink="true">https://kannada.asianetnews.com/gallery/business/vaibhav-lakshmi-rajyog-2026-after-3-days-shukra-chandra-yuti-akshaya-tritiya-horoscope-suh-tohni0o</guid>
            <pubDate>Thu, 16 Apr 2026 11:01:13 +0530</pubDate>
            <description><![CDATA[&lt;p&gt;Vaibhav lakshmi rajyog 2026 after 3 days ವೈಭವ ಲಕ್ಷ್ಮಿ ರಾಜಯೋಗವು ಏಪ್ರಿಲ್ 19, 2026 ರಂದು ಅಕ್ಷಯ ತೃತೀಯದ ಮಂಗಳಕರ ದಿನದಂದು ರೂಪುಗೊಳ್ಳುತ್ತಿದೆ. ಇದು ಹೆಚ್ಚಿನ ರಾಶಿಚಕ್ರ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpaayh83za0c3adtjsps0pt7,imgname-these-3-zodiac-signs-earn-a-lot-of-money-after-the-age-of-40-1776316007683.jpg" type="image/jpeg" height="390" width="690"/>
            <content:encoded><![CDATA[&lt;p&gt;Vaibhav lakshmi rajyog 2026 after 3 days ವೈಭವ ಲಕ್ಷ್ಮಿ ರಾಜಯೋಗವು ಏಪ್ರಿಲ್ 19, 2026 ರಂದು ಅಕ್ಷಯ ತೃತೀಯದ ಮಂಗಳಕರ ದಿನದಂದು ರೂಪುಗೊಳ್ಳುತ್ತಿದೆ. ಇದು ಹೆಚ್ಚಿನ ರಾಶಿಚಕ್ರ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ದೃಕ್ ಪಂಚಾಂಗದ ಪ್ರಕಾರ ಸಂಪತ್ತು ಮತ್ತು ಪ್ರೀತಿಯ ಗ್ರಹವಾದ ಶುಕ್ರನು ಮಾರ್ಚ್ 26 ರಿಂದ ಏಪ್ರಿಲ್ 19, 2026 ರವರೆಗೆ ಮೇಷ ರಾಶಿಯಲ್ಲಿ ಇರುತ್ತಾನೆ. ಚಂದ್ರನು ಏಪ್ರಿಲ್ 17 ರಂದು ಮೇಷ ರಾಶಿಗೆ ಸಾಗುತ್ತಾನೆ, ಅಲ್ಲಿ ಅವನು ಏಪ್ರಿಲ್ 19 ರ ಮಧ್ಯಾಹ್ನದವರೆಗೆ ಇರುತ್ತಾನೆ. ಶುಕ್ರ ಮತ್ತು ಚಂದ್ರ ಯಾವುದೇ ರಾಶಿಚಕ್ರ ಚಿಹ್ನೆ ಅಥವಾ ಮನೆಯಲ್ಲಿ ಸಂಯೋಗದಲ್ಲಿರುವಾಗ, ವೈಭವ ಲಕ್ಷ್ಮಿ ರಾಜ್ಯಯೋಗವು ರೂಪುಗೊಳ್ಳುತ್ತದೆ.&lt;/p&gt;&lt;img&gt;&lt;p&gt;ದೇಶೀಯ ಕಲಹಗಳು ಕೊನೆಗೊಳ್ಳುತ್ತವೆ ಮತ್ತು ಎಲ್ಲಾ ಸದಸ್ಯರು ಕುಟುಂಬದ ಎಲ್ಲಾ ಸದಸ್ಯರ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬರುತ್ತಾರೆ. ವಿದ್ಯಾರ್ಥಿಗಳು ಉತ್ತಮ ಪರೀಕ್ಷೆಯ ಅಂಕಗಳಿಂದ ಸಂತೋಷಪಡುತ್ತಾರೆ. ಇದಲ್ಲದೆ, ವ್ಯವಹಾರ ವಿಸ್ತರಣೆಗಾಗಿ ಮಾಡಿದ ಯೋಜನೆಗಳು ಪ್ರಯೋಜನಗಳನ್ನು ನೀಡುತ್ತವೆ.&lt;/p&gt;&lt;img&gt;&lt;p&gt;ಕುಟುಂಬದಿಂದ ದೂರ ವಾಸಿಸುವವರಿಗೆ ತಮ್ಮ ಸಂಗಾತಿಯಿಂದ ಬೆಂಬಲ ಸಿಗುತ್ತದೆ. ನಿಮ್ಮ ವ್ಯವಹಾರವು ವಿದೇಶದಲ್ಲಿ ವಿಸ್ತರಿಸಿದರೆ, ನೀವು ಲಾಭವನ್ನು ನೋಡುತ್ತೀರಿ. ಇದಲ್ಲದೆ, ದಿನದ ಆರಂಭದಲ್ಲಿ ನಿಮಗೆ ಆಗಾಗ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ.&lt;/p&gt;&lt;img&gt;&lt;p&gt;ಮನೆಗೆ ಅತಿಥಿಗಳ ಆಗಮನವು ಸಂತೋಷ ತರುತ್ತದೆ. ಶತ್ರುಗಳು ನಿಮ್ಮನ್ನು ಬಿಟ್ಟು ಹೋಗುತ್ತಾರೆ, ಇದರಿಂದ ನಿಮಗೆ ಹಗುರವಾಗುತ್ತದೆ. ದೂರದ ಪ್ರಯಾಣವೂ ಪ್ರಯೋಜನಕಾರಿಯಾಗಲಿದೆ.&lt;/p&gt;&lt;img&gt;&lt;p&gt;ನೀವು ನಿಮ್ಮ ಕೆಲಸದ ಬಗ್ಗೆ ಗಂಭೀರವಾಗಿರುತ್ತೀರಿ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಈ ಸಮಯದಲ್ಲಿ ನಿಮ್ಮ ತಾಯಿಯ ಆರೋಗ್ಯದಲ್ಲಿನ ಸುಧಾರಣೆಗಳು ಸ್ವಲ್ಪ ಪರಿಹಾರವನ್ನು ತರುತ್ತವೆ. ಹೆಚ್ಚುವರಿಯಾಗಿ, ಭೂಮಿ ಮತ್ತು ಕಟ್ಟಡ ವ್ಯವಹಾರಗಳು ಗಮನಾರ್ಹ ಲಾಭವನ್ನು ತರಬಹುದು.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/vaibhav-lakshmi-rajyog-2026-after-3-days-shukra-chandra-yuti-akshaya-tritiya-horoscope-suh-tohni0o"/>
        </item>
        <item>
            <title><![CDATA[Richest Person: ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ ಗೌತಮ್ ಅದಾನಿ, ಈಗ ಏಷ್ಯಾದ ನಂಬರ್ 1 ಶ್ರೀಮಂತ!]]></title>
            <link>https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg</link>
            <guid isPermaLink="true">https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg</guid>
            <pubDate>Fri, 17 Apr 2026 13:04:13 +0530</pubDate>
            <description><![CDATA[&lt;p&gt;ಗೌತಮ್ ಅದಾನಿ ಈಗ ಏಷ್ಯಾದ ನಂಬರ್ 1 ಶ್ರೀಮಂತ. ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್&zwnj;ನ ಹೊಸ ಪಟ್ಟಿ ಪ್ರಕಾರ, ಅದಾನಿ &amp;nbsp;ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷರ ನಿವ್ವಳ ಆಸ್ತಿ 92.6 ಬಿಲಿಯನ್ ಡಾಲರ್ . ಜಾಗತಿಕವಾಗಿ 19ನೇ ಸ್ಥಾನದಲ್ಲಿದ್ದಾರೆ. ಅಂಬಾನಿ 20ನೇ ಸ್ಥಾನ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-aea8e137-90ec-4e56-bb20-9ec373e651b2.jpg" type="image/jpeg" height="390" width="690"/>
            <content:encoded><![CDATA[&lt;h2&gt;ಏಷ್ಯಾದ ನಂಬರ್ 1 ಶ್ರೀಮಂತ ಪಟ್ಟ ಅದಾನಿ ಪಾಲು&lt;/h2&gt;&lt;p&gt;ಬ್ಲೂಮ್&zwnj;ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಹೊಸ ಪಟ್ಟಿಯ ಪ್ರಕಾರ, ಗೌತಮ್ ಅದಾನಿ ಈಗ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬಿಡುಗಡೆಯಾದ ಈ ರ&zwj;್ಯಾಂಕಿಂಗ್&zwnj;ನಲ್ಲಿ, ಅದಾನಿ ಗ್ರೂಪ್&zwnj;ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಗೌತಮ್ ಅದಾನಿ, 92.6 ಬಿಲಿಯನ್ ಡಾಲರ್ ನಿವ್ವಳ ಆಸ್ತಿಯೊಂದಿಗೆ ಜಾಗತಿಕವಾಗಿ 19ನೇ ಸ್ಥಾನಕ್ಕೆ ಏರಿದ್ದಾರೆ.&lt;/p&gt;&lt;p&gt;ಇದೇ ವೇಳೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ 90.8 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 20ನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಅದಾನಿ ಅವರ ಆಸ್ತಿಯಲ್ಲಿ ಭಾರೀ ಏರಿಕೆಯಾಗಿದ್ದು, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿಯನ್ನು ಹಿಂದಿಕ್ಕಲು ಇದು ಕಾರಣವಾಗಿದೆ.&lt;/p&gt;&lt;h3&gt;ಜಾಗತಿಕ ಶ್ರೀಮಂತರ ಪಟ್ಟಿ ಹೇಗಿದೆ?&lt;/h3&gt;&lt;p&gt;ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಎಲಾನ್ ಮಸ್ಕ್ 656 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇವರ ನಂತರ ಆಲ್ಫಾಬೆಟ್&zwnj;ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ (286 ಬಿಲಿಯನ್ ಡಾಲರ್) ಮತ್ತು ಅಮೆಜಾನ್&zwnj;ನ ಜೆಫ್ ಬೆಜೋಸ್ (269 ಬಿಲಿಯನ್ ಡಾಲರ್) ಇದ್ದಾರೆ. ಮೆಟಾದ ಮಾರ್ಕ್ ಜುಕರ್&zwnj;ಬರ್ಗ್ ಮತ್ತು ಒರಾಕಲ್ ಸಹ-ಸಂಸ್ಥಾಪಕ ಲ್ಯಾರಿ ಎಲಿಸನ್ ಕೂಡಾ ಟಾಪ್ ಲಿಸ್ಟ್&zwnj;ನಲ್ಲಿದ್ದಾರೆ. ಟೆಕ್ ಉದ್ಯಮಿಗಳೇ ಈ ಪಟ್ಟಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದಿದ್ದಾರೆ.&lt;/p&gt;&lt;h3&gt;ಅದಾನಿ ಗ್ರೂಪ್&zwnj;ನ ಬೃಹತ್ ಉದ್ಯಮ ಸಾಮ್ರಾಜ್ಯ&lt;/h3&gt;&lt;p&gt;ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್, ಭಾರತದ ಅತಿದೊಡ್ಡ ಮೂಲಸೌಕರ್ಯ ಸಮೂಹವಾಗಿದೆ. ಹಲವು ಕ್ಷೇತ್ರಗಳಲ್ಲಿ ಈ ಗ್ರೂಪ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಮೊದಲು ಕೇವಲ B2B (ಬಿಸಿನೆಸ್-ಟು-ಬಿಸಿನೆಸ್) ವಲಯದಲ್ಲಿ ಗಮನಹರಿಸಿದ್ದ ಕಂಪನಿ, ಈಗ B2C (ಬಿಸಿನೆಸ್-ಟು-ಕನ್ಸ್ಯೂಮರ್) ವ್ಯವಹಾರಗಳಿಗೂ ಕಾಲಿಡುತ್ತಿದೆ. ಸಾರಿಗೆ, ಇಂಧನ, ನೈಸರ್ಗಿಕ ಸಂಪನ್ಮೂಲ, ವಿಮಾನ ನಿಲ್ದಾಣ, ರಕ್ಷಣೆ, ಡೇಟಾ ಸೆಂಟರ್, ಸಿಮೆಂಟ್, ಮೀಡಿಯಾ, ರಸ್ತೆ, ರೈಲು, ಮೆಟ್ರೋ, ರಿಯಲ್ ಎಸ್ಟೇಟ್, ಆಹಾರ FMCG, ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳಂತಹ ಅನೇಕ ಕ್ಷೇತ್ರಗಳಲ್ಲಿ ಅದಾನಿ ಗ್ರೂಪ್ ಹೂಡಿಕೆ ಮಾಡಿದೆ.&lt;/p&gt;&lt;h3&gt;ಅದಾನಿ ಸಾಧನೆ ಮತ್ತು ಕೊಡುಗೆಗಳು&lt;/h3&gt;&lt;p&gt;ಅದಾನಿ ಗ್ರೂಪ್ ಪ್ರಕಾರ, 200 ಬಿಲಿಯನ್ ಡಾಲರ್&zwnj;ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯದ ಬಿಸಿನೆಸ್ ಗ್ರೂಪ್ ಕಟ್ಟಿದ ಭಾರತದ ಮೊದಲ ತಲೆಮಾರಿನ ಉದ್ಯಮಿ ಗೌತಮ್ ಅದಾನಿ. ಇವರು ಗ್ರಾಮೀಣ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 7 ಬಿಲಿಯನ್ ಡಾಲರ್ ದೇಣಿಗೆ ನೀಡುತ್ತಿದ್ದಾರೆ. ಜೊತೆಗೆ, ಭಾರತದ ಹಸಿರು ಇಂಧನ ಪರಿವರ್ತನೆಗೆ 70 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.&lt;/p&gt;&lt;p&gt;ಸದ್ಯ 150 ಬಿಲಿಯನ್ ಡಾಲರ್&zwnj;ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಅದಾನಿ ಗ್ರೂಪ್, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 12 ಕಂಪನಿಗಳನ್ನು ಒಳಗೊಂಡಿದೆ. 'Nation Building' and 'Growth with Goodness ಎಂಬ ತತ್ವಗಳ ಮೇಲೆ ಈ ಸಮೂಹ ಕಾರ್ಯನಿರ್ವಹಿಸುತ್ತಿದೆ. (ANI)&lt;/p&gt;]]></content:encoded>
            <category>business</category>
            <dc:creator>Ravi Janekal</dc:creator>
            <atom:link href="https://kannada.asianetnews.com/business/gautam-adani-overtakes-mukesh-ambani-to-reclaim-title-of-asia-s-richest-man/articleshow-v2nc3eg"/>
        </item>
        <item>
            <title><![CDATA['ಜಿಗಣಿ ಬೆಂಗಳೂರು ಅಲ್ಲ': ಕಡಿಮೆ ಬೆಲೆಗೆ ಸಿಕ್ಕಿತೆಂದು ಫ್ಲಾಟ್ ಖರೀದಿಸಿ ಕೊನೆಗೆ ಬೆಪ್ಪಾದ ಮನೆ ಮಾಲೀಕ]]></title>
            <link>https://kannada.asianetnews.com/business/the-reality-of-buying-a-home-in-jigani-value-for-money-or-a-dead-investment/articleshow-vg5r2xs</link>
            <guid isPermaLink="true">https://kannada.asianetnews.com/business/the-reality-of-buying-a-home-in-jigani-value-for-money-or-a-dead-investment/articleshow-vg5r2xs</guid>
            <pubDate>Fri, 17 Apr 2026 12:08:33 +0530</pubDate>
            <description><![CDATA[&lt;p&gt;&lt;strong&gt;Reddit Bangalore story: &lt;/strong&gt;ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಆದರೆ ಬಜೆಟ್ ಕೈಗೆಟಕುವಂತಿರಲಿ ಎಂದು ನಗರದಿಂದ ಕೊಂಚ ದೂರ ಹೋದರೆ ಸಿಗುವ ಸುಖಕ್ಕಿಂತ ಪಡುವ ಕಷ್ಟವೇ ಹೆಚ್ಚಾ? ಇತ್ತೀಚೆಗೆ ಜಿಗಣಿಯಲ್ಲಿ ಫ್ಲಾಟ್ ಖರೀದಿಸಿದ ವ್ಯಕ್ತಿಯೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, ಅದು ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರನ್ನು ಕ್ಷಣಕಾಲ ಬೆಪ್ಪಾಗುವಂತೆ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz7qxb9m95d4gjff5mk882jp,imgname-whatsapp-image-2025-07-03-at-2.23.51-pm-1751532875060.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂ&lt;/strong&gt;ಗಳೂರಿನ ರಿಯಲ್ ಎಸ್ಟೇಟ್ ದರಗಳು ಗಗನಕ್ಕೇರುತ್ತಿರುವ ಈ ಕಾಲದಲ್ಲಿ, ನಗರದ ಹೊರವಲಯದಲ್ಲಿ ಮನೆ ಖರೀದಿಸುವುದು ಲಾಭದಾಯಕವೇ ಅಥವಾ ಸಂಕಷ್ಟವೇ ಎಂಬ ಚರ್ಚೆ ಸದಾ ನಡೆಯುತ್ತಿರುತ್ತದೆ. ಇತ್ತೀಚೆಗೆ ಜಿಗಣಿ (Jigani) ಪ್ರದೇಶದಲ್ಲಿ ₹55 ಲಕ್ಷಕ್ಕೆ ಫ್ಲಾಟ್ ಖರೀದಿಸಿದ ವ್ಯಕ್ತಿಯೊಬ್ಬರು ತಮ್ಮ ಒಂದು ವರ್ಷದ ಅನುಭವವನ್ನು ಹಂಚಿಕೊಂಡಿದ್ದು, ಅದು ಇಂಟರ್ನೆಟ್&zwnj;ನಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಬದಲಿಗೆ ಬೆಂಗಳೂರಿನ ಅತಿಯಾದ ವಿಸ್ತರಣೆ ಮತ್ತು ಮಧ್ಯಮ ವರ್ಗದ ಜನರ ಹೂಡಿಕೆಯ ಗೊಂದಲಕ್ಕೆ ಹಿಡಿದ ಕನ್ನಡಿಯಾಗಿದೆ.&lt;/p&gt;&lt;h2&gt;&lt;strong&gt;ಮನೆಮಾಲೀಕರ ಪ್ರಾಮಾಣಿಕ ಅನಿಸಿಕೆ&lt;/strong&gt;&lt;/h2&gt;&lt;p&gt;ರೆಡಿಟ್ (Reddit) ಬಳಕೆದಾರರೊಬ್ಬರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಅವರು 1,020 ಚದರ ಅಡಿಯ ಅಪಾರ್ಟ್&zwnj;ಮೆಂಟ್ ಅನ್ನು₹45 ಲಕ್ಷದ ಮೂಲ ಬೆಲೆಗೆ ಖರೀದಿಸಿದ್ದರು. ಆದರೆ ಇಂಟೀರಿಯರ್ ಡಿಸೈನ್, ಸ್ಟಾಂಪ್ ಡ್ಯೂಟಿ ಮತ್ತು ಇತರೆ ನೋಂದಣಿ ಶುಲ್ಕಗಳು ಸೇರಿದಾಗ ಅದರ ಒಟ್ಟು ಮೊತ್ತ ₹55 ಲಕ್ಷಕ್ಕೆ ತಲುಪಿದೆ. ಈ ಹೂಡಿಕೆಯ ಅನುಕೂಲಗಳ ಬಗ್ಗೆ ಮಾತನಾಡಿದ ಅವರು, &quot;ಇಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ಕೇವಲ 15 ನಿಮಿಷ ಹಾಗೂ ಬನ್ನೇರುಘಟ್ಟ ರಸ್ತೆ, ಹುಳಿಮಾವು ಮತ್ತು ಎಚ್&zwnj;ಎಸ್&zwnj;ಆರ್ ಲೇಔಟ್&zwnj;ಗಳಿಗೆ ಅರ್ಧ ಗಂಟೆಯೊಳಗೆ ತಲುಪಬಹುದು&quot; ಎಂದು ಸಮಾಧಾನಪಟ್ಟುಕೊಂಡಿದ್ದಾರೆ.&lt;/p&gt;&lt;p&gt;ಆದರೆ, ನಾಣ್ಯದ ಇನ್ನೊಂದು ಮುಖವನ್ನು ವಿವರಿಸುತ್ತಾ ಅವರು ಕೆಲವು ಕಹಿಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. &quot;ನಗರದ ಮುಖ್ಯ ಭಾಗದಿಂದ ಇದು ಬಹಳ ದೂರವಿದೆ. ಪ್ರತಿದಿನ ಕೆಲಸ ಮುಗಿಸಿ ತಡರಾತ್ರಿ ಮನೆಗೆ ಮರಳುವ ಪ್ರಯಾಣ ನನಗೆ ನರಕದಂತೆ ಭಾಸವಾಗುತ್ತಿದೆ. ಅತಿ ದೂರ ಎಂಬ ಕಾರಣಕ್ಕೆ ನನ್ನ ಸ್ನೇಹಿತರು ಯಾರೂ ಸಹ ಇದುವರೆಗೂ ನನ್ನ ಮನೆಗೆ ಬಂದು ನನ್ನನ್ನು ಭೇಟಿ ಮಾಡುವ ಧೈರ್ಯವನ್ನೇ ಮಾಡಿಲ್ಲ&quot; ಎಂದು ತಮ್ಮ ಒಂಟಿತನ ಮತ್ತು ಪ್ರತಿದಿನದ ಸಂಚಾರದ ಆಯಾಸವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ನೆಟ್ಟಿಗರ ತೀಕ್ಷ್ಣ ಪ್ರತಿಕ್ರಿಯೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್ ನೋಡಿದ ಅನೇಕ ಬೆಂಗಳೂರಿಗರು ಜಿಗಣಿಯನ್ನು ಬೆಂಗಳೂರಿನ ಭಾಗ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. &quot;ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನಮಗೆ ಗೊತ್ತು, ಜಿಗಣಿ ಎಂದರೆ ಜಿಗಣಿಯೇ ಹೊರತು ಅದು ಬೆಂಗಳೂರಲ್ಲ. ಅಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿ ವೇಗ ಬಹಳ ಕಡಿಮೆ&quot; ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಹೂಡಿಕೆಯ ದೃಷ್ಟಿಯಿಂದ ಇದನ್ನು ಟೀಕಿಸಿ, &quot;ನೀವು ಮಾಡಿದ ಹೂಡಿಕೆ ಲಾಭದಾಯಕವಲ್ಲ ಎಂದು ನಿಮಗೂ ತಿಳಿದಿದೆ, ಆದರೆ ಮನಸ್ಸಿಗೆ ಸಮಾಧಾನ ಹೇಳಿಕೊಳ್ಳಲು ಹೀಗೆ ಬರೆಯುತ್ತಿದ್ದೀರಿ&quot; ಎಂದು ಕಾಲೆಳೆದಿದ್ದಾರೆ.&lt;/p&gt;&lt;p&gt;ಅನುಭವಿ ಹೂಡಿಕೆದಾರರು ಹೇಳುವಂತೆ, ಮರುಮಾರಾಟ ಮಾಡುವಾಗ ಜನರು ಹಳೆಯ ಫ್ಲಾಟ್&zwnj;ಗಿಂತ ಹೊಸದನ್ನೇ ಇಷ್ಟಪಡುವುದರಿಂದ, ನಗರದಿಂದ ಇಷ್ಟು ದೂರದಲ್ಲಿ ದೊಡ್ಡ ಲಾಭ ನಿರೀಕ್ಷಿಸುವುದು ಕಷ್ಟ. ಈ ಘಟನೆಯು ಬೆಂಗಳೂರಿನಲ್ಲಿ ಮನೆ ಖರೀದಿಸುವ ಮುನ್ನ ಬೆಲೆಯ ಜೊತೆಗೆ ಸಂಪರ್ಕ, ಸಾಮಾಜಿಕ ಜೀವನ ಮತ್ತು ಮೂಲಸೌಕರ್ಯಗಳನ್ನು ಪರಿಗಣಿಸುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ. ಕಡಿಮೆ ಬೆಲೆಗೆ ದೊಡ್ಡ ಮನೆ ಸಿಗಬಹುದು, ಆದರೆ ಅದಕ್ಕೆ ನಾವು ನೀಡಬೇಕಾದ 'ಸಮಯ' ಮತ್ತು 'ನೆಮ್ಮದಿ'ಯ ಬೆಲೆ ಬಹಳ ದೊಡ್ಡದಾಗಿರುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಬೆಂಗಳೂರಿನ ಇತಿಹಾಸವನ್ನು ಗಮನಿಸಿದರೆ, ಒಂದು ಕಾಲದಲ್ಲಿ ವಿಜಯನಗರ ಅಥವಾ ಜೆ.ಪಿ. ನಗರ ಕೂಡ ನಗರದ ಹೊರವಲಯವೆಂದೇ ಪರಿಗಣಿಸಲ್ಪಟ್ಟಿದ್ದವು. ಆದರೆ ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ 'ಸಮಯ' ಮತ್ತು 'ಸೌಕರ್ಯ' ಮುಖ್ಯವಾಗುತ್ತದೆ. ಹಿಂದೆ ಹೊಸಕೋಟೆ ಅಥವಾ ದೇವನಹಳ್ಳಿಯಲ್ಲಿ ಹೂಡಿಕೆ ಮಾಡಿದವರು ಈಗಲೂ ಸೂಕ್ತ ಗ್ರಾಹಕರಿಗಾಗಿ ಕಾಯುತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಜಿಗಣಿಯ ವಿಷಯದಲ್ಲೂ ಸಹ, ಕೇವಲ ಕಡಿಮೆ ಬೆಲೆಗೆ ಆಕರ್ಷಿತರಾಗಿ ಮನೆ ಖರೀದಿಸುವುದು ಎಷ್ಟು ಸರಿ? ಎಂಬ ಹಳೆಯ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.&lt;/p&gt;]]></content:encoded>
            <category>business</category>
            <dc:creator>Ashwini HR</dc:creator>
            <atom:link href="https://kannada.asianetnews.com/business/the-reality-of-buying-a-home-in-jigani-value-for-money-or-a-dead-investment/articleshow-vg5r2xs"/>
        </item>
        <item>
            <title><![CDATA[ಅಂದು ದೇವೇಂದ್ರ ಮಹಾಲಕ್ಷ್ಮೀಗೋಸ್ಕರ ಹೇಳಿದ್ದ ಈ ಮಂತ್ರ ಹೇಳಿ; ಕೋಟ್ಯಧಿಪತಿ ಆಗ್ತೀರಾ! ಯಾವಾಗ? ಹೇಗೆ?]]></title>
            <link>https://kannada.asianetnews.com/gallery/astrology/secret-mantra-chant-for-money-millionaire-yoga-how-and-when-xouutfy</link>
            <guid isPermaLink="true">https://kannada.asianetnews.com/gallery/astrology/secret-mantra-chant-for-money-millionaire-yoga-how-and-when-xouutfy</guid>
            <pubDate>Sat, 18 Apr 2026 18:56:16 +0530</pubDate>
            <description><![CDATA[&lt;p&gt;Mantra Chant ಬಡತನವನ್ನು ದೂರ ಮಾಡಿ ಕೋಟ್ಯಾಧಿಪತಿ ಯೋಗ ಪಡೆಯಲು, ಮಹಾಲಕ್ಷ್ಮಿ, ಶುಕ್ರ ಮತ್ತು ಕುಬೇರರ ಶಕ್ತಿಶಾಲಿ ಮಂತ್ರಗಳನ್ನು ಪಠಿಸುವುದು ಬಹಳ ಮುಖ್ಯ. ಈ ಮಂತ್ರಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಂಬಿಕೆಯಿಂದ ಜಪಿಸಿದರೆ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಿ, ಸಂಪತ್ತು ವೃದ್ಧಿಯಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k22023d06pnpy7phd53yt7vk,imgname-numerology-millionaire-1754561318304.png" type="image/jpeg" height="390" width="690"/>
            <content:encoded><![CDATA[&lt;p&gt;Mantra Chant ಬಡತನವನ್ನು ದೂರ ಮಾಡಿ ಕೋಟ್ಯಾಧಿಪತಿ ಯೋಗ ಪಡೆಯಲು, ಮಹಾಲಕ್ಷ್ಮಿ, ಶುಕ್ರ ಮತ್ತು ಕುಬೇರರ ಶಕ್ತಿಶಾಲಿ ಮಂತ್ರಗಳನ್ನು ಪಠಿಸುವುದು ಬಹಳ ಮುಖ್ಯ. ಈ ಮಂತ್ರಗಳನ್ನು ಬ್ರಹ್ಮ ಮುಹೂರ್ತದಲ್ಲಿ ನಂಬಿಕೆಯಿಂದ ಜಪಿಸಿದರೆ, ಹಣಕಾಸಿನ ಅಡೆತಡೆಗಳು ನಿವಾರಣೆಯಾಗಿ, ಸಂಪತ್ತು ವೃದ್ಧಿಯಾಗುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಲಕ್ಷ್ಮಿ ಕಟಾಕ್ಷದಿಂದ ಕೂಡಿದ ಜೀವನ ಎಲ್ಲರ ಕನಸು. ಆದರೆ, ಕಠಿಣ ಪರಿಶ್ರಮದ ಜೊತೆಗೆ ದೇವರ ಅನುಗ್ರಹ ಮತ್ತು ಸರಿಯಾದ ಮಂತ್ರಗಳ ಪಠಣ ಸೇರಿದಾಗ, ಆ ಜೀವನ ಸಾಧ್ಯವಾಗುತ್ತದೆ. ಬ್ರಹ್ಮಾಂಡದ ಶಕ್ತಿಯನ್ನು ನಮ್ಮತ್ತ ಸೆಳೆಯುವ ಶಕ್ತಿ ಮಂತ್ರಗಳಿಗಿದೆ. ಅದರಲ್ಲೂ, ಶುಕ್ರ ಮತ್ತು ಮಹಾಲಕ್ಷ್ಮಿಯ ಕೃಪೆಯಿಂದ ಬಡತನವನ್ನು ನೀಗಿಸಿಕೊಂಡು ಕೋಟ್ಯಾಧಿಪತಿ ಯೋಗವನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಮಹಾಲಕ್ಷ್ಮಿಯನ್ನು ಪೂಜಿಸುವುದೇ ಮೊದಲ ಹೆಜ್ಜೆ. ಈ ಮಂತ್ರವನ್ನು ದೇವೇಂದ್ರನು ಮಹಾಲಕ್ಷ್ಮಿಯನ್ನು ಸ್ತುತಿಸಿ ಹಾಡಿದ್ದನು. &amp;nbsp;&lt;/p&gt;&lt;p&gt;&ldquo;ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ | ಶಂಖ ಚಕ್ರ ಗದಾ ಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ&rdquo;&amp;nbsp;&lt;/p&gt;&lt;p&gt;ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಪಠಿಸಿದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಣಕಾಸಿನ ಅಡೆತಡೆಗಳು ದೂರವಾಗಿ, ಆದಾಯ ಹೆಚ್ಚಲು ಪ್ರಾರಂಭವಾಗುತ್ತದೆ.&lt;/p&gt;&lt;img&gt;&lt;p&gt;ವೇದಗಳಲ್ಲಿ ಉಲ್ಲೇಖಿಸಿರುವ ಶ್ರೀ ಸೂಕ್ತವು ಅತ್ಯಂತ ಶಕ್ತಿಶಾಲಿಯಾಗಿದೆ. ಇದು ಜಾತಕದಲ್ಲಿರುವ ಬಡತನದ ದೋಷಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.&amp;nbsp;&lt;/p&gt;&lt;p&gt;ಶುಕ್ರವಾರ ಮುಂಜಾನೆ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ ಮಹಾಲಕ್ಷ್ಮಿಯ ಚಿತ್ರದ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ಶ್ರೀ ಸೂಕ್ತವನ್ನು ಪಠಿಸುವುದು ಅಥವಾ ಕೇಳುವುದರಿಂದ ಲಕ್ಷ್ಮಿಯು ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಗೆ ಕೋಟ್ಯಾಧಿಪತಿ ಯೋಗವನ್ನು ಕರುಣಿಸುವವನು ಶುಕ್ರ ಭಗವಾನ್. ಐಷಾರಾಮಿ ಜೀವನ, ವಾಹನ, ಆಸ್ತಿಪಾಸ್ತಿಗಳಿಗೆ ಇವನೇ ಕಾರಕ. &amp;nbsp;&lt;/p&gt;&lt;p&gt;&ldquo;ಓಂ ಅಶ್ವಧ್ವಜಾಯ ವಿದ್ಮಹೇ ಧನುರ್ ಹಸ್ತಾಯ ಧೀಮಹಿ ತನ್ನೋ ಶುಕ್ರಃ ಪ್ರಚೋದಯಾತ್&rdquo;&lt;/p&gt;&lt;p&gt;ಇದನ್ನು ಶುಕ್ರವಾರದಂದು 108 ಬಾರಿ ಜಪಿಸಿದರೆ, ಜಾತಕದಲ್ಲಿ ಶುಕ್ರನು ಬಲಗೊಂಡು ಹಠಾತ್ ಧನಲಾಭ ಉಂಟಾಗುತ್ತದೆ.&lt;/p&gt;&lt;img&gt;&lt;p&gt;ಮಹಾಲಕ್ಷ್ಮಿಯು ಸಂಪತ್ತಿನ ಅಧಿದೇವತೆಯಾದರೆ, ಕುಬೇರನು ಆ ಸಂಪತ್ತನ್ನು ರಕ್ಷಿಸುವವನು.&amp;nbsp;&lt;/p&gt;&lt;p&gt;&quot;ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ ಧನಧಾನ್ಯ ಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹಾ&quot;&lt;/p&gt;&lt;p&gt;ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಈ ಮಂತ್ರವನ್ನು ಪಠಿಸಿದರೆ, ವ್ಯಾಪಾರ ಮತ್ತು ವ್ಯವಹಾರದಲ್ಲಿ ದೊಡ್ಡ ಲಾಭ ಸಿಗುತ್ತದೆ.&lt;/p&gt;&lt;img&gt;&lt;p&gt;ಮಂತ್ರಗಳನ್ನು ಪಠಿಸಲು ಕೆಲವು ಸೂಕ್ಷ್ಮ ವಿಧಾನಗಳಿವೆ. ಆಗ ಮಾತ್ರ ಅದರ ಫಲ ದುಪ್ಪಟ್ಟಾಗುತ್ತದೆ.&lt;/p&gt;&lt;p&gt;&lt;strong&gt;ಬ್ರಹ್ಮ ಮುಹೂರ್ತ&lt;/strong&gt;&lt;/p&gt;&lt;p&gt;ಮುಂಜಾನೆ 4:30 ರಿಂದ 6:00 ಗಂಟೆಯವರೆಗಿನ ಸಮಯ ಅತ್ಯುತ್ತಮ. ಈ ಸಮಯದಲ್ಲಿ ಬ್ರಹ್ಮಾಂಡದ ಶಕ್ತಿ ಹೆಚ್ಚಾಗಿರುತ್ತದೆ.&amp;nbsp;&lt;/p&gt;&lt;p&gt;ದೇಹ ಮತ್ತು ಮನಸ್ಸಿನ ಶುಚಿತ್ವ ಅತ್ಯಗತ್ಯ. ಶುದ್ಧವಾದ ಸ್ಥಳದಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತು ಜಪಿಸಬೇಕು.&lt;/p&gt;&lt;p&gt;ಯಾವುದೇ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸುವುದರಿಂದ ಅದರ ಕಂಪನಗಳು ನಿಮ್ಮ ದೇಹ ಮತ್ತು ಮನೆಯಲ್ಲಿ ನೆಲೆಗೊಳ್ಳುತ್ತವೆ.&lt;/p&gt;&lt;p&gt;&quot;ನನಗೆ ಸಂಪತ್ತು ಹರಿದು ಬರುತ್ತಿದೆ&quot; ಎಂಬ ಸಕಾರಾತ್ಮಕ ಭಾವನೆಯೊಂದಿಗೆ ಮಂತ್ರವನ್ನು ಪಠಿಸಬೇಕು. ಸಂಶಯದ ಮನಸ್ಸಿನಿಂದ ಫಲ ಸಿಗುವುದಿಲ್ಲ.&lt;/p&gt;&lt;img&gt;&lt;p&gt;ಮಂತ್ರಗಳು ಕೇವಲ ಶಬ್ದಗಳಲ್ಲ; ಅವು ಬ್ರಹ್ಮಾಂಡದ ಕೀಲಿ ಕೈಗಳು. ಮೇಲೆ ತಿಳಿಸಿದ ಮಂತ್ರಗಳನ್ನು ಶ್ರದ್ಧೆ ಮತ್ತು ನಂಬಿಕೆಯಿಂದ ಪಾಲಿಸಿದಾಗ, ನಿಮ್ಮ ಪರಿಶ್ರಮದ ಫಲ ಹಲವು ಪಟ್ಟು ಹೆಚ್ಚಾಗುತ್ತದೆ. ಬಡತನ ದೂರವಾಗಿ, ಮಹಾಲಕ್ಷ್ಮಿಯ ಕೃಪೆಯಿಂದ ಕೋಟ್ಯಾಧಿಪತಿ ಯೋಗ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಧ್ಯಾತ್ಮಿಕ ಸಾಧನೆಯ ಜೊತೆಗೆ, ಸತತ ಪ್ರಯತ್ನ ಮತ್ತು ಇತರರಿಗೆ ಸಹಾಯ ಮಾಡುವ ಮನೋಭಾವವಿದ್ದರೆ ಮಾತ್ರ ಸಂಪತ್ತು ಸ್ಥಿರವಾಗಿ ಉಳಿಯುತ್ತದೆ.&lt;/p&gt;]]></content:encoded>
            <category>business</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/astrology/secret-mantra-chant-for-money-millionaire-yoga-how-and-when-xouutfy"/>
        </item>
        <item>
            <title><![CDATA[ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡ್ತೀರಾ? ಅಸಲಿ ಬಂಗಾರ ಗುರುತಿಸೋದು ಹೇಗೆ?]]></title>
            <link>https://kannada.asianetnews.com/webstories/business/a-guide-to-checking-gold-purity-quality-huid-number-bis-mark-for-akshaya-tritiya-mrq-yqc18lc</link>
            <guid isPermaLink="true">https://kannada.asianetnews.com/webstories/business/a-guide-to-checking-gold-purity-quality-huid-number-bis-mark-for-akshaya-tritiya-mrq-yqc18lc</guid>
            <pubDate>Sat, 18 Apr 2026 21:47:43 +0530</pubDate>
            <description><![CDATA[&lt;p&gt;ಅಕ್ಷಯ ತೃತೀಯ ದಿನ ಚಿನ್ನ ಖರೀದಿಸುವುದು ಶುಭಕರ. ಇದರಿಂದ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಚಿನ್ನ ಖರೀದಿಸುವ ಮುನ್ನ ಅದರ ಶುದ್ಧತೆ ಪರಿಶೀಲಿಸುವುದು ಬಹಳ ಮುಖ್ಯ. HUID ಸಂಖ್ಯೆ, BIS ಕೇರ್ ಆ್ಯಪ್ ಮತ್ತು ಮ್ಯಾಗ್ನೆಟ್ ಟೆಸ್ಟ್&zwnj;ನಂತಹ ವಿಧಾನಗಳನ್ನು ಬಳಸಿ ಅಸಲಿ ಚಿನ್ನ ಪತ್ತೆ ಹಚ್ಚಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpb4t5x0mvx2rfzrvj8hbjdm,imgname-braslate-1776343127968.jpg" type="image/jpeg" height="390" width="690"/>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/webstories/business/a-guide-to-checking-gold-purity-quality-huid-number-bis-mark-for-akshaya-tritiya-mrq-yqc18lc"/>
        </item>
    </channel>
</rss>
