<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 08 May 2026 20:32:03 +0530</lastBuildDate>
        <atom:link href="https://kannada.asianetnews.com/rss/business" rel="self" type="application/rss+xml"/>
        <item>
            <title><![CDATA[ನೀವೂ ಆಗಬಹುದು ಕೋಟ್ಯಾಧಿಪತಿ, ಹಣವನ್ನು ಆಯಸ್ಕಾಂತದಂತೆ ಸೆಳೆಯುವ ಟಾಪ್ 4 ರಾಶಿಗಳಿವು]]></title>
            <link>https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn</link>
            <guid isPermaLink="true">https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn</guid>
            <pubDate>Fri, 08 May 2026 16:09:21 +0530</pubDate>
            <description><![CDATA[&lt;p&gt;Astrology ಜ್ಯೋತಿಷ್ಯದ ಪ್ರಕಾರ 4 ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಹೆಚ್ಚಿರುತ್ತೆ. 2026ರ ಡಿಸೆಂಬರ್&zwnj;ವರೆಗೆ, ಇವರ ಆರ್ಥಿಕ ಶಿಸ್ತು, ನಿಖರ ಯೋಜನೆ ಮತ್ತು ಧೈರ್ಯದ ನಿರ್ಧಾರಗಳಿಂದ ಕೋಟ್ಯಾಧಿಪತಿಗಳಾಗುವ ಅವಕಾಶ ಹೆಚ್ಚಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr069dc21edxyj72t6eqjjqc,imgname-jupiter-venus-conjuction-in-gemini-makes-dhana-yogam-for-this-5-zodiac-signs-1778123060609.jpg" type="image/jpeg" height="390" width="690"/>
            <content:encoded><![CDATA[&lt;p&gt;Astrology ಜ್ಯೋತಿಷ್ಯದ ಪ್ರಕಾರ 4 ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಹೆಚ್ಚಿರುತ್ತೆ. 2026ರ ಡಿಸೆಂಬರ್&zwnj;ವರೆಗೆ, ಇವರ ಆರ್ಥಿಕ ಶಿಸ್ತು, ನಿಖರ ಯೋಜನೆ ಮತ್ತು ಧೈರ್ಯದ ನಿರ್ಧಾರಗಳಿಂದ ಕೋಟ್ಯಾಧಿಪತಿಗಳಾಗುವ ಅವಕಾಶ ಹೆಚ್ಚಿದೆ.&lt;/p&gt;&lt;img&gt;&lt;p&gt;ಆರ್ಥಿಕ ಸ್ವಾತಂತ್ರ್ಯ ಪ್ರತಿಯೊಬ್ಬರ ಕನಸು. ಆ ಕನಸನ್ನು ನನಸಾಗಿಸುವುದು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ರಾಶಿಯವರಿಗೆ ಹಣವನ್ನು ಆಕರ್ಷಿಸುವ ಶಕ್ತಿ ಸ್ವಾಭಾವಿಕವಾಗಿಯೇ ಹೆಚ್ಚಿರುತ್ತದೆ. ಗ್ರಹಗಳ ಪ್ರಭಾವ ಮತ್ತು ಅವರ ವಿಶಿಷ್ಟ ಗುಣಗಳು ಅವರನ್ನು ಸುಲಭವಾಗಿ ಕೋಟ್ಯಾಧಿಪತಿಗಳಾಗುವ ದಾರಿಯಲ್ಲಿ ನಡೆಸುತ್ತವೆ. 2026ರ ಮೇ ತಿಂಗಳ ಗ್ರಹಸ್ಥಿತಿಗಳನ್ನು ನೋಡಿದರೆ, ಡಿಸೆಂಬರ್&zwnj;ವರೆಗೆ ಈ ನಾಲ್ಕು ರಾಶಿಯವರು ಆರ್ಥಿಕವಾಗಿ ದೊಡ್ಡ ಯಶಸ್ಸನ್ನು ಕಾಣಲಿದ್ದಾರೆ.&lt;/p&gt;&lt;img&gt;&lt;p&gt;ವೃಷಭ ರಾಶಿಯವರು ಶುಕ್ರನ ನೆಚ್ಚಿನವರು. ಐಷಾರಾಮಿ ಜೀವನವನ್ನು ಇಷ್ಟ. ಇವರು ಎಂದಿಗೂ ಆತುರಪಟ್ಟು ಹಣವನ್ನು ವ್ಯರ್ಥ ಮಾಡುವುದಿಲ್ಲ. ಉಳಿತಾಯವನ್ನು ಚಿನ್ನ ಮತ್ತು ಭೂಮಿಯಂತಹ ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಇವರು ನಿಪುಣರು. ಈ ನಿಧಾನಗತಿಯ ನಡೆಯೇ ಇವರನ್ನು ಜೀವನದುದ್ದಕ್ಕೂ ಶ್ರೀಮಂತರಾಗಿರಿಸಲು ಸಹಾಯ ಮಾಡುತ್ತದೆ.&amp;nbsp;&lt;/p&gt;&lt;img&gt;&lt;p&gt;ಬುಧ ಗ್ರಹದ ಪ್ರಭಾವವಿರುವ ಕನ್ಯಾ ರಾಶಿಯವರು, ತಮ್ಮ ಜ್ಞಾನದಿಂದ ಹಣವನ್ನು ಸೃಷ್ಟಿಸುತ್ತಾರೆ. ಒಂದು ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಅದರ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ವಿಶ್ಲೇಷಿಸುವುದರಲ್ಲಿ ಇವರಿಗೆ ಯಾರೂ ಸಾಟಿಯಿಲ್ಲ. ಇವರ ಕೈಗೆ ಹಣ ಸಿಕ್ಕರೆ, ಅದನ್ನು ಹೇಗೆ ದ್ವಿಗುಣಗೊಳಿಸಬೇಕು ಎಂಬ ರಹಸ್ಯ ಇವರಿಗೆ ತಿಳಿದಿದೆ. ವಿಶೇಷವಾಗಿ ಷೇರು ಮಾರುಕಟ್ಟೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇವರು ತೆಗೆದುಕೊಳ್ಳುವ ನಿರ್ಧಾರಗಳು ಕೋಟ್ಯಂತರ ರೂಪಾಯಿ ಲಾಭವನ್ನು ತಂದುಕೊಡುತ್ತವೆ.&amp;nbsp;&lt;/p&gt;&lt;img&gt;ವೃಶ್ಚಿಕ ರಾಶಿಯವರು ಬೇರೆಯವರು ಯೋಚಿಸಲು ಹೆದರುವ ಕಡೆಗಳಲ್ಲಿ ಧೈರ್ಯವಾಗಿ ಹೂಡಿಕೆ ಮಾಡುತ್ತಾರೆ. ಮಂಗಳನ ಪ್ರಭಾವವು ಇವರಿಗೆ ಅಪಾಯಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ. ಇವರ ಆರ್ಥಿಕ ಯೋಜನೆಗಳು ಯಾವಾಗಲೂ ರಹಸ್ಯವಾಗಿರುತ್ತವೆ; ಯಶಸ್ಸು ಸಿಕ್ಕ ನಂತರವೇ ಅದನ್ನು ಜಗತ್ತಿಗೆ ತಿಳಿಸುತ್ತಾರೆ. ರಿಯಲ್ ಎಸ್ಟೇಟ್ ಮತ್ತು ಕ್ರಿಪ್ಟೋದಂತಹ ಆಧುನಿಕ ಹೂಡಿಕೆಗಳಲ್ಲಿ ಇವರು ಪರಿಣಿತರು. ಮೇ ತಿಂಗಳಿಂದ ಡಿಸೆಂಬರ್&zwnj;ವರೆಗೆ ಇವರ ಸತತ ಪ್ರಯತ್ನಕ್ಕೆ ದೊಡ್ಡ ಆರ್ಥಿಕ ಮನ್ನಣೆ ಸಿಗುವ ವರ್ಷ ಇದಾಗಲಿದೆ.&lt;img&gt;ನಿಮ್ಮ ರಾಶಿ ಯಾವುದೇ ಇರಲಿ, ಸಕಾರಾತ್ಮಕ ಆಲೋಚನೆಗಳು ಮತ್ತು ಸರಿಯಾದ ಯೋಜನೆ ನಿಮ್ಮನ್ನು ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ. ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿಯನ್ನು ಶುಕ್ರವಾರದಂದು ಪೂಜಿಸುವುದು ಮತ್ತು 'ಓಂ ಶ್ರೀಂ ಹ್ರೀಂ ಕ್ಲೀಂ' ಎಂಬ ಮಂತ್ರವನ್ನು ಪಠಿಸುವುದು ನಿಮ್ಮ ಆರ್ಥಿಕ ಅಡೆತಡೆಗಳನ್ನು ನಿವಾರಿಸಿ, ಸಂಪತ್ತನ್ನು ತಂದುಕೊಡುತ್ತದೆ. ಶ್ರಮ ಮತ್ತು ಅದೃಷ್ಟ ಕೈಜೋಡಿಸಿದಾಗ ಯಾರಾದರೂ ಕೋಟ್ಯಾಧಿಪತಿ ಆಗಬಹುದು! ನಿಮ್ಮ ರಾಶಿ ಈ ಪಟ್ಟಿಯಲ್ಲಿದ್ದರೆ, ಇಂದೇ ನಿಮ್ಮ ಯಶಸ್ಸಿನ ಮೊದಲ ಹೆಜ್ಜೆ ಇಡಿ!]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/zodiac-signs-that-attract-wealth-according-to-astrology-suh-4g6c9nn"/>
        </item>
        <item>
            <title><![CDATA[ರಾಜ್ಯದಲ್ಲಿ ಏಪ್ರಿಲ್‌ ತಿಂಗಳು ಎಣ್ಣೆ ಪಾರ್ಟಿ ರೆಕಾರ್ಡ್: 13ವರ್ಷದ ದಾಖಲೆ ಉಡೀಸ್! ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ]]></title>
            <link>https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v</link>
            <guid isPermaLink="true">https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v</guid>
            <pubDate>Fri, 08 May 2026 09:39:54 +0530</pubDate>
            <description><![CDATA[ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ ಮದ್ಯ ಮಾರಾಟವು ಕಳೆದ 13 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿ ಹೊಸ ದಾಖಲೆ ನಿರ್ಮಿಸಿದೆ. ಐಎಂಎಲ್ ಮತ್ತು ಬಿಯರ್ ಎರಡರ ಮಾರಾಟದಲ್ಲೂ ಭಾರೀ ಏರಿಕೆ ಕಂಡಿದ್ದು, ಇದು ರಾಜ್ಯ ಸರ್ಕಾರದ ಆದಾಯವನ್ನು ಸಾವಿರಾರು ಕೋಟಿಗಳಷ್ಟು ಹೆಚ್ಚಿಸಿದೆ. ಗಡಿ ರಾಜ್ಯಗಳ ಚುನಾವಣೆಯು ಈ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಅಂದಾಜಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfcwezttavbd4p51deb5mch2,imgname-liquor-ban-1768885288794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಲೆಯೇರಿಕೆಯ ನಡುವೆಯೂ ಕರ್ನಾಟಕದಲ್ಲಿ ಮದ್ಯ ಮಾರಾಟ ಹೊಸ ಗರಿಷ್ಠ ಮಟ್ಟ ತಲುಪಿದ್ದು, ಏಪ್ರಿಲ್ ತಿಂಗಳಲ್ಲಿ ಕಳೆದ 13 ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟ ದಾಖಲಾಗಿದೆ. ಈ ಮೂಲಕ ರಾಜ್ಯದ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಹೊಸ ದಾಖಲೆ ಆಗಿದೆ.&lt;/p&gt;&lt;p&gt;ಅಧಿಕೃತ ಅಂಕಿ-ಅಂಶಗಳ ಪ್ರಕಾರ, ವಿಸ್ಕಿ, ಬ್ರಾಂಡಿ, ರಮ್ ಮತ್ತು ಜಿನ್ ಸೇರಿದಂತೆ ಐಎಂಎಲ್ (Indian Made Liquor) ಮದ್ಯವು ಏಪ್ರಿಲ್ ತಿಂಗಳಲ್ಲಿ ಒಟ್ಟು 68.17 ಲಕ್ಷ ಬಾಕ್ಸ್ ಮಾರಾಟವಾಗಿದೆ. ಒಂದು ಬಾಕ್ಸ್&zwnj;ನಲ್ಲಿ ಸರಾಸರಿ 8.64 ಲೀಟರ್ ಮದ್ಯ ಇರುವುದರಿಂದ, ಇದು ಅತ್ಯಂತ ಭಾರೀ ಪ್ರಮಾಣದ ಬಳಕೆಯನ್ನು ಸೂಚಿಸುತ್ತದೆ. ಇದೇ ವೇಳೆ, ಬಿಯರ್ ಮಾರಾಟವೂ ದಾಖಲೆ ಮಟ್ಟಕ್ಕೇರಿದ್ದು, ಏಪ್ರಿಲ್&zwnj;ನಲ್ಲಿ 50.39 ಲಕ್ಷ ಬಾಕ್ಸ್ (ಒಂದು ಬಾಕ್ಸ್&zwnj;ಗೆ 7.80 ಲೀಟರ್) ಬಿಯರ್ ಮಾರಾಟವಾಗಿದೆ.&lt;/p&gt;&lt;h2&gt;13 ವರ್ಷಗಳಲ್ಲೇ ಅತಿ ದೊಡ್ಡ ಸಾಧನೆ&lt;/h2&gt;&lt;p&gt;2013ರಿಂದ ಇಂದಿನವರೆಗೂ ಯಾವುದೇ ತಿಂಗಳಲ್ಲಿ ಈ ಮಟ್ಟದ ಮದ್ಯ ಮಾರಾಟ ದಾಖಲಾಗಿರಲಿಲ್ಲ. ಇದುವರೆಗೆ 2023ರ ಜುಲೈನಲ್ಲಿ 66.22 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದೇ ಗರಿಷ್ಠ ದಾಖಲೆ ಆಗಿತ್ತು. ಆದರೆ, ಈ ವರ್ಷ ಏಪ್ರಿಲ್ ತಿಂಗಳ ಮಾರಾಟ ಆ ದಾಖಲೆಗೂ ಮೀರಿದ್ದು, ಹೊಸ ಇತಿಹಾಸ ನಿರ್ಮಾಣವಾಗಿದೆ. ಹಿಂದಿನ ವರ್ಷದ ಹೋಲಿಕೆಯಲ್ಲಿ ಗಮನಿಸಿದರೆ, 2025ರ ಏಪ್ರಿಲ್&zwnj;ನಲ್ಲಿ 57.44 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಅದು 68.17 ಲಕ್ಷ ಬಾಕ್ಸ್&zwnj;ಗೆ ಏರಿಕೆಯಾಗಿ ಗಮನಾರ್ಹ ಏರಿಕೆಯನ್ನು ಕಂಡಿದೆ.&lt;/p&gt;&lt;h2&gt;ಬಿಯರ್ ಮಾರಾಟದಲ್ಲೂ ಭಾರೀ ಏರಿಕೆ&lt;/h2&gt;&lt;p&gt;ಬಿಯರ್ ವಿಭಾಗದಲ್ಲಿಯೂ ಇದೇ ರೀತಿಯ ಟ್ರೆಂಡ್ ಕಂಡುಬಂದಿದೆ. 2025ರ ಏಪ್ರಿಲ್&zwnj;ನಲ್ಲಿ 41.60 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಈ ಬಾರಿ ಅದು 50.39 ಲಕ್ಷ ಬಾಕ್ಸ್&zwnj;ಗೆ ಏರಿಕೆಯಾಗಿದೆ. ಅಂದರೆ, ಶೇ.21.13ರಷ್ಟು ವೃದ್ಧಿ ದಾಖಲಾಗಿದೆ.&lt;/p&gt;&lt;h2&gt;ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ&lt;/h2&gt;&lt;p&gt;ಈ ಭಾರೀ ಮಾರಾಟದ ಪರಿಣಾಮವಾಗಿ ರಾಜ್ಯ ಸರ್ಕಾರದ ಖಜಾನೆಗೆ ದೊಡ್ಡ ಮಟ್ಟದ ಆದಾಯ ಹರಿದು ಬಂದಿದೆ. ಕಳೆದ ವರ್ಷದ ಏಪ್ರಿಲ್&zwnj;ನಲ್ಲಿ ಮದ್ಯ ಮಾರಾಟದಿಂದ ಸುಮಾರು ₹2,904 ಕೋಟಿ ರಾಜಸ್ವ ಸಂಗ್ರಹವಾಗಿದ್ದರೆ, ಈ ಬಾರಿ ಅದು ಏರಿಕೆಯಾಗಿ ಸುಮಾರು ₹3,688 ಕೋಟಿಗೆ ತಲುಪಿದೆ. ಅಂದರೆ, ಒಂದು ತಿಂಗಳಲ್ಲೇ ಸಾವಿರಾರು ಕೋಟಿ ರೂಪಾಯಿ ಆದಾಯ ಸರ್ಕಾರಕ್ಕೆ ಲಭಿಸಿದೆ.&lt;/p&gt;&lt;h2&gt;ಮಾರಾಟ ಹೆಚ್ಚಳಕ್ಕೆ ಕಾರಣಗಳೇನು?&lt;/h2&gt;&lt;p&gt;ಮದ್ಯ ಮಾರಾಟದಲ್ಲಿ ಏರಿಕೆಗೆ ಹಲವು ಕಾರಣಗಳು ಸೂಚಿಸಲಾಗುತ್ತಿವೆ. ಮುಖ್ಯವಾಗಿ, ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದ ಹಿನ್ನೆಲೆ, ಮತದಾನದ ಮುನ್ನ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಇದರ ಪರಿಣಾಮವಾಗಿ, ಆ ರಾಜ್ಯಗಳಿಗೆ ಹೊಂದಿಕೊಂಡ ಗಡಿಭಾಗಗಳಲ್ಲಿ ಕರ್ನಾಟಕದ ಮದ್ಯ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಬೆಲೆ ಏರಿಕೆ ಇದ್ದರೂ ಮದ್ಯದ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಅಬಕಾರಿ ಇಲಾಖೆಗೆ ಇದು ದೊಡ್ಡ ಮಟ್ಟದ ಆದಾಯದ ಮೂಲವಾಗಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗೂ ಸಹಾಯವಾಗುತ್ತಿದೆ. ಏಪ್ರಿಲ್ ತಿಂಗಳ ಈ ದಾಖಲೆ ಮಾರಾಟ ಮುಂದಿನ ತಿಂಗಳಲ್ಲಿ ಮುಂದುವರಿಯುತ್ತದೆಯೇ ಎಂಬುದು ಈಗ ಕುತೂಹಲದ ವಿಷಯವಾಗಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-liquor-sales-hit-13-year-high-in-april-state-earns-rs-3688-crore-revenue-gdp/articleshow-4mak64v"/>
        </item>
        <item>
            <title><![CDATA[ಬಯೋಕಾನ್‌ ಸಾಮ್ರಾಜ್ಯಕ್ಕೆ ಹೊಸ ಬಾಸ್‌: ಸೊಸೆಯ ಕೈಗೆ ಕಂಪನಿ ಚುಕ್ಕಾಣಿ ನೀಡಿದ ಕಿರಣ್ ಮಜುಂದಾರ್ ಶಾ!]]></title>
            <link>https://kannada.asianetnews.com/business/biocon-kiran-mazumdar-shaw-names-claire-mazumdar-successor-leadership-change-san/articleshow-6ikg1g0</link>
            <guid isPermaLink="true">https://kannada.asianetnews.com/business/biocon-kiran-mazumdar-shaw-names-claire-mazumdar-successor-leadership-change-san/articleshow-6ikg1g0</guid>
            <pubDate>Tue, 05 May 2026 15:33:16 +0530</pubDate>
            <description><![CDATA[&lt;p&gt;ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಅವರು ತಮ್ಮ ಉತ್ತರಾಧಿಕಾರಿಯಾಗಿ ಸೋದರನ ಮಗಳು ಕ್ಲೇರ್ ಮಜುಂದಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ಕ್ಲೇರ್, ಎಐ ಮತ್ತು ಅಡ್ವಾನ್ಸ್ಡ್ ಬಯೋಟೆಕ್ ತಂತ್ರಜ್ಞಾನದ ಮೂಲಕ ಬಯೋಕಾನ್&zwnj;ನ ಮುಂದಿನ ಹಂತವನ್ನು ಮುನ್ನಡೆಸಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqvs82v60b6hjbwp5zsydwy6,imgname-claire-mazumdar-1777975167846.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.5):&lt;/strong&gt; ದೇಶದ ಅತಿದೊಡ್ಡ ಬಯೋಫಾರ್ಮಾಸ್ಯುಟಿಕಲ್ ಸಂಸ್ಥೆ 'ಬಯೋಕಾನ್' (Biocon) ಈಗ ಹೊಸ ಪೀಳಿಗೆಯ ನಾಯಕತ್ವಕ್ಕೆ ಸಾಕ್ಷಿಯಾಗುತ್ತಿದೆ. ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಕಿರಣ್ ಮಜುಂದಾರ್-ಶಾ ಅವರು ತಮ್ಮ ಉತ್ತರಾಧಿಕಾರ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ತಮ್ಮ ಸೋದರ ಎರಿಕ್&zwnj; ಮಜುಂದಾರ್&zwnj; ಮಗಳಾದ 37 ವರ್ಷದ ಕ್ಲೇರ್ ಮಜುಂದಾರ್ ಅವರನ್ನು ಬಯೋಕಾನ್&zwnj;ನ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುವ ನಾಯಕಿಯಾಗಿ ಕಿರಣ್ ಆಯ್ಕೆ ಮಾಡಿದ್ದಾರೆ.&lt;/p&gt;&lt;p&gt;ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಅವರಿಗೆ ಮಕ್ಕಳಿಲ್ಲದ ಕಾರಣ, ತಾವು ಪ್ರೀತಿಯಿಂದ ಬೆಳೆಸಿದ ಸಂಸ್ಥೆಯನ್ನು ಸುರಕ್ಷಿತ ಮತ್ತು ಸಮರ್ಥ ಕೈಗಳಿಗೆ ಒಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ 'ಫಾರ್ಚೂನ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, &quot;ಕ್ಲೇರ್ ಮಜುಂದಾರ್ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕಂಪನಿಯ ಮುಂದಿನ ಹಂತದ ಸವಾಲುಗಳನ್ನು ಎದುರಿಸಲು ಅವರೇ ಅತ್ಯಂತ ಸೂಕ್ತ ವ್ಯಕ್ತಿ,&quot; ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಯಾರು ಈ ಹೊಸ ವಾರಸುದಾರೆ ಕ್ಲೇರ್?&lt;/strong&gt;&lt;/h2&gt;&lt;p&gt;ಕ್ಲೇರ್ ಮಜುಂದಾರ್ ಅವರು ಬಯೋಫಾರ್ಮಾ ಕ್ಷೇತ್ರದಲ್ಲಿ ಕೇವಲ ಉತ್ತರಾಧಿಕಾರಿಯಷ್ಟೇ ಅಲ್ಲ, ಒಬ್ಬ ಯಶಸ್ವಿ ಉದ್ಯಮಿಯೂ ಹೌದು. ಬಯೋಕಾನ್&zwnj;ನಿಂದ ಪ್ರವರ್ತಿತಗೊಂಡ 'ಬಿಕಾರಾ ಥೆರಪಿಟಿಕ್ಸ್' (Bicara Therapeutics) ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿರುವ ಕ್ಲೇರ್, ತಮ್ಮ ಕಂಪನಿಯನ್ನು 2024ರಲ್ಲಿ ನಾಸ್ಡಾಕ್&zwnj;ನಲ್ಲಿ ಲಿಸ್ಟಿಂಗ್&zwnj; ಮಾಡಿಸಿದ್ದಾರೆ. ಪ್ರಸ್ತುತ ಬಿಕಾರಾ ಸಂಸ್ಥೆಯು 1.6 ಬಿಲಿಯನ್ ಡಾಲರ್&zwnj;ಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಶೈಕ್ಷಣಿಕವಾಗಿ ಎಂಐಟಿ ಮತ್ತು ಸ್ಟ್ಯಾನ್&zwnj;ಫೋರ್ಡ್&zwnj;ನಂತಹ ಜಗತ್ಪ್ರಸಿದ್ಧ ಸಂಸ್ಥೆಗಳಲ್ಲಿ ಪದವಿ ಪಡೆದಿರುವ ಇವರು, ಕ್ಯಾನ್ಸರ್ ಬಯೋಲಜಿಯಲ್ಲಿ ಪಿಎಚ್&zwnj;ಡಿ ಪದವಿ ಹೊಂದಿದ್ದಾರೆ.&lt;/p&gt;&lt;h2&gt;&lt;strong&gt;ಎಐ ಮತ್ತು ಅಡ್ವಾನ್ಸ್ಡ್ ಬಯೋಟೆಕ್ ಮೇಲೆ ಕಣ್ಣು&lt;/strong&gt;&lt;/h2&gt;&lt;p&gt;ಬಯೋಕಾನ್&zwnj;ನ ಭವಿಷ್ಯದ ಯಶಸ್ಸಿಗಾಗಿ ಕಿರಣ್ ಮಜುಂದಾರ್ ಅವರು ಕೇವಲ ಕ್ಲೇರ್ ಅವರನ್ನಷ್ಟೇ ಅಲ್ಲದೆ, ಒಂದು ಬಲಿಷ್ಠವಾದ 'ಫ್ಯಾಮಿಲಿ ಎಕೋಸಿಸ್ಟಮ್' ಅನ್ನು ಸಿದ್ಧಪಡಿಸಿದ್ದಾರೆ. ಕ್ಲೇರ್ ಅವರ ಸಹೋದರ ಎರಿಕ್ ಮಜುಂದಾರ್ ಕ್ಯಾಲ್ಟೆಕ್&zwnj;ನಲ್ಲಿ ಪ್ರೊಫೆಸರ್ ಆಗಿದ್ದು, ಕೃತಕ ಬುದ್ಧಿಮತ್ತೆ (AI) ತಜ್ಞರಾಗಿದ್ದಾರೆ. ಹಾಗೆಯೇ ಕ್ಲೇರ್ ಅವರ ಪತಿ ಥಾಮಸ್ ರಾಬರ್ಟ್ಸ್ ಅವರು ಖ್ಯಾತ ಕ್ಯಾನ್ಸರ್ ತಜ್ಞರಾಗಿದ್ದಾರೆ. ಈ ತಜ್ಞರ ತಂಡದ ಬೆಂಬಲದೊಂದಿಗೆ ಬಯೋಕಾನ್ ಇನ್ನು ಮುಂದೆ ಸಂಶೋಧನೆ ಮತ್ತು ಅಭಿವೃದ್ಧಿ (R&amp;amp;D) ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಜ್ಜಾಗಿದೆ.&lt;/p&gt;&lt;h2&gt;&lt;strong&gt;ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆ&lt;/strong&gt;&lt;/h2&gt;&lt;p&gt;ಉತ್ತರಾಧಿಕಾರ ಬದಲಾವಣೆಯ ಬೆನ್ನಲ್ಲೇ ಬಯೋಕಾನ್&zwnj;ನಲ್ಲಿ ಹಲವು ಆಂತರಿಕ ಬದಲಾವಣೆಗಳೂ ನಡೆಯುತ್ತಿವೆ. ಕಂಪನಿಯು ತನ್ನ ಸಾಲವನ್ನು ಕಡಿಮೆ ಮಾಡುವ ಉದ್ದೇಶದಿಂದ ಜೆನೆರಿಕ್ಸ್ ಮತ್ತು ಬಯೋಲಾಜಿಕ್ಸ್ ವ್ಯವಹಾರಗಳನ್ನು ವಿಲೀನಗೊಳಿಸಿದೆ. ಇದರೊಂದಿಗೆ ಗ್ರೂಪ್ ಕಂಪನಿಗಳಲ್ಲೂ ಹೊಸ ನಾಯಕತ್ವ ಉದಯಿಸಿದೆ. ಶ್ರೀಹಾಸ್ ತಾಂಬೆ ಅವರು ಬಯೋಕಾನ್ ಬಯೋಲಾಜಿಕ್ಸ್&zwnj;ನ ಎಂಡಿಯಾಗಿ ಅಧಿಕಾರ ವಹಿಸಿಕೊಂಡರೆ, ಸಿದ್ಧಾರ್ಥ್ ಮಿತ್ತಲ್ ಅವರು ಜುಲೈ 1ರಿಂದ ಸಿಂಜಿನ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಬಯೋಸಿಮಿಲರ್ಸ್ ಕ್ಷೇತ್ರದಲ್ಲಿ ಜಾಗತಿಕ ನಾಯಕಿಯಾಗಿರುವ ಬಯೋಕಾನ್, ಇನ್ನು ಮುಂದೆ ಎಐ ಆಧಾರಿತ ಸಂಶೋಧನೆ ಮತ್ತು ಸ್ವಂತ ಸಂಶೋಧನೆಯ ಒರಿಜಿನಲ್ ಬಯೋಲಾಜಿಕ್ ಔಷಧಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಿದೆ. ಆ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿ ಹೊಂದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/biocon-kiran-mazumdar-shaw-names-claire-mazumdar-successor-leadership-change-san/articleshow-6ikg1g0"/>
        </item>
        <item>
            <title><![CDATA[Car Loan: SBIಗಿಂತ ಕಡಿಮೆ ಬಡ್ಡಿಗೆ ಸರ್ಕಾರಿ ಬ್ಯಾಂಕ್‌ಗಳು ಸಾಲ ನೀಡ್ತಿವೆ! ಶೋರೂಂಗೆ ಹೋಗೋ ಮುನ್ನ ರೇಟ್ ಚೆಕ್ ಮಾಡಿ]]></title>
            <link>https://kannada.asianetnews.com/gallery/business/cheapest-car-loan-rates-may-2026-sbi-vs-other-banks-sat-828l97a</link>
            <guid isPermaLink="true">https://kannada.asianetnews.com/gallery/business/cheapest-car-loan-rates-may-2026-sbi-vs-other-banks-sat-828l97a</guid>
            <pubDate>Wed, 06 May 2026 19:02:03 +0530</pubDate>
            <description><![CDATA[ಹೊಸ ಕಾರು ಖರೀದಿಸಲು ಸಾಲ ಪಡೆಯುವ ಯೋಚನೆಯಲ್ಲಿದ್ದೀರಾ? ಹೆಚ್ಚಿನವರು ಮೊದಲು ಸಾಲ ಪಡೆದು, ನಂತರ EMI ಬಗ್ಗೆ ಯೋಚಿಸುತ್ತಾರೆ. ಇದೇ ದೊಡ್ಡ ತಪ್ಪು. ನೀವೂ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಮೇ ತಿಂಗಳಲ್ಲಿ ಯಾವ ಬ್ಯಾಂಕ್&zwnj;ಗಳು ಅಗ್ಗದ ದರದಲ್ಲಿ ಸಾಲ ನೀಡುತ್ತಿವೆ ಎಂದು ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kqym2bn0qk162kp2sx360x2b,imgname-car-loan-in-may-2026-1778070400672.jpg" type="image/jpeg" height="390" width="690"/>
            <content:encoded><![CDATA[ಹೊಸ ಕಾರು ಖರೀದಿಸಲು ಸಾಲ ಪಡೆಯುವ ಯೋಚನೆಯಲ್ಲಿದ್ದೀರಾ? ಹೆಚ್ಚಿನವರು ಮೊದಲು ಸಾಲ ಪಡೆದು, ನಂತರ EMI ಬಗ್ಗೆ ಯೋಚಿಸುತ್ತಾರೆ. ಇದೇ ದೊಡ್ಡ ತಪ್ಪು. ನೀವೂ ಕಾರು ಖರೀದಿಸುವ ಯೋಚನೆಯಲ್ಲಿದ್ದರೆ, ಮೇ ತಿಂಗಳಲ್ಲಿ ಯಾವ ಬ್ಯಾಂಕ್&zwnj;ಗಳು ಅಗ್ಗದ ದರದಲ್ಲಿ ಸಾಲ ನೀಡುತ್ತಿವೆ ಎಂದು ತಿಳಿಯಿರಿ.&lt;img&gt;ಸರ್ಕಾರಿ ಬ್ಯಾಂಕ್&zwnj;ಗಳಲ್ಲಿ ಕಾರ್ ಲೋನ್ ಬಡ್ಡಿ ದರ ಎಷ್ಟಿದೆ? ಯೂನಿಯನ್ ಬ್ಯಾಂಕ್ (Union Bank)- 7.60% ಬ್ಯಾಂಕ್ ಆಫ್ ಬರೋಡಾ (Bank of Baroda)- 7.60% ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)- 7.65% ಕೆನರಾ ಬ್ಯಾಂಕ್ (Canara Bank)- 7.95% ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)- 8.90%&lt;img&gt;ಖಾಸಗಿ ಬ್ಯಾಂಕ್&zwnj;ಗಳಲ್ಲಿ ಕಾರ್ ಲೋನ್ ಬಡ್ಡಿ ದರಗಳು ಹೀಗಿವೆ: IDBI ಬ್ಯಾಂಕ್- 7.75% ICICI ಬ್ಯಾಂಕ್- 8.50% ಆಕ್ಸಿಸ್ ಬ್ಯಾಂಕ್ (Axis Bank)- 8.95% HDFC ಬ್ಯಾಂಕ್- 9.00% IDFC ಫಸ್ಟ್ ಬ್ಯಾಂಕ್- 9.99%&lt;img&gt;&lt;p&gt;ಕೇವಲ ಕಡಿಮೆ ಬಡ್ಡಿ ದರವನ್ನು ನೋಡಿ ಕಾರ್ ಲೋನ್ ತೆಗೆದುಕೊಳ್ಳಬಾರದು ಎಂದು ತಜ್ಞರು ಹೇಳುತ್ತಾರೆ. ಯಾಕಂದ್ರೆ, ಗುಪ್ತ ಶುಲ್ಕಗಳು (hidden charges) ನಿಮ್ಮ ಹೊರೆಯನ್ನು ಹೆಚ್ಚಿಸಬಹುದು.&amp;nbsp;&lt;/p&gt;&lt;p&gt;ಬ್ಯಾಂಕ್&zwnj;ಗಳು 7.60% ಬಡ್ಡಿ ತೋರಿಸಿದರೂ, ಪ್ರೊಸೆಸಿಂಗ್ ಶುಲ್ಕ, ಫೈಲ್ ಚಾರ್ಜ್, ವಿಮೆ ಮತ್ತು ಇತರ ಶುಲ್ಕಗಳು ಸೇರಿ ನಿಮ್ಮ ಒಟ್ಟು ವೆಚ್ಚ ಹೆಚ್ಚಾಗುತ್ತದೆ. ಹಾಗಾಗಿ, ಕೇವಲ ಬಡ್ಡಿ ದರವನ್ನಲ್ಲ, ಯಾವಾಗಲೂ ಪರಿಣಾಮಕಾರಿ ವೆಚ್ಚವನ್ನು (Effective Cost) ಅರ್ಥಮಾಡಿಕೊಳ್ಳಿ.&lt;/p&gt;&lt;img&gt;&lt;p&gt;ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ 5 ವಿಷಯಗಳನ್ನು ಅರ್ಥಮಾಡಿಕೊಳ್ಳಿ: 1. ಕಡಿಮೆ EMI ಆಸೆಗೆ ದೀರ್ಘಾವಧಿ ಸಾಲ ಪಡೆದರೆ, ಒಟ್ಟು ಹೆಚ್ಚು ಬಡ್ಡಿ ಕಟ್ಟಬೇಕಾಗುತ್ತದೆ. ಸಮತೋಲನ ಮುಖ್ಯ. 2. ನಿಮ್ಮ ಕ್ರೆಡಿಟ್ ಸ್ಕೋರ್ 750+ ಇದ್ದರೆ, ನಿಮಗೆ ಅಗ್ಗದ ದರದಲ್ಲಿ ಸಾಲ ಸಿಗಬಹುದು. ಸ್ಕೋರ್ ಕಡಿಮೆಯಿದ್ದರೆ ಬ್ಯಾಂಕ್&zwnj;ಗಳು ಹೆಚ್ಚು ಬಡ್ಡಿ ವಿಧಿಸುತ್ತವೆ. 3. ಸಾಲದ ಅವಧಿಯನ್ನು (Loan tenure) ಯೋಚಿಸಿ ಆಯ್ಕೆ ಮಾಡಿ.&amp;nbsp;&lt;/p&gt;&lt;p&gt;ದೀರ್ಘಾವಧಿಯಿಂದ EMI ಕಡಿಮೆಯಾದರೂ, ಒಟ್ಟು ಹೆಚ್ಚು ಹಣ ಕಟ್ಟಬೇಕಾಗುತ್ತದೆ. 4. ಮುಂಗಡ ಪಾವತಿ ನಿಯಮಗಳನ್ನು (Prepayment rules) ಓದಿ. ಅವಧಿಗೂ ಮುನ್ನ ಸಾಲ ತೀರಿಸಲು ಕೆಲವು ಬ್ಯಾಂಕ್&zwnj;ಗಳು ಶುಲ್ಕ ವಿಧಿಸುತ್ತವೆ. 5. ಸ್ಥಿರ ಮತ್ತು ಫ್ಲೋಟಿಂಗ್ (Fixed vs Floating) ಬಡ್ಡಿ ದರದ ವ್ಯತ್ಯಾಸ ತಿಳಿಯಿರಿ. ರಿಸ್ಕ್ ಬೇಡ ಎನ್ನುವವರಿಗೆ ಸ್ಥಿರ ಬಡ್ಡಿ ದರ ಉತ್ತಮ.&lt;/p&gt;&lt;img&gt;&lt;p&gt;ತಜ್ಞರ ಪ್ರಕಾರ, ಹೆಚ್ಚಿನ ಜನರು ಮೊದಲು ಕಾರು ಬುಕ್ ಮಾಡಿ, ನಂತರ ಸಾಲಕ್ಕಾಗಿ ಹುಡುಕುತ್ತಾರೆ. ಇದು ತಪ್ಪು ವಿಧಾನ. ಯಾವಾಗಲೂ ಮೊದಲು ನಿಮ್ಮ EMI ಸಾಮರ್ಥ್ಯವನ್ನು ಅಂದಾಜಿಸಿ, ನಂತರ ಬ್ಯಾಂಕ್ ಆಯ್ಕೆ ಮಾಡಿ, ಆಮೇಲೆ ಕಾರು ಖರೀದಿಸಬೇಕು. ಇದರಿಂದ ನಷ್ಟದ ಸಾಧ್ಯತೆ ಕಡಿಮೆಯಾಗುತ್ತದೆ.&amp;nbsp;&lt;/p&gt;&lt;p&gt;&lt;strong&gt;ಹಕ್ಕುತ್ಯಾಗ: &lt;/strong&gt;ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದರಲ್ಲಿ ನೀಡಿರುವ ಬಡ್ಡಿ ದರಗಳು, ಬ್ಯಾಂಕ್ ಆಫರ್&zwnj;ಗಳು ಮತ್ತು ಇತರ ಹಣಕಾಸು ಮಾಹಿತಿ ಕಾಲಕಾಲಕ್ಕೆ ಬದಲಾಗಬಹುದು. ಯಾವುದೇ ಕಾರ್ ಲೋನ್ ಅಥವಾ ಹಣಕಾಸಿನ ನಿರ್ಧಾರ ತೆಗೆದುಕೊಳ್ಳುವ ಮೊದಲು, ದಯವಿಟ್ಟು ಸಂಬಂಧಪಟ್ಟ ಬ್ಯಾಂಕ್&zwnj;ನ ಅಧಿಕೃತ ವೆಬ್&zwnj;ಸೈಟ್ ಅಥವಾ ಶಾಖೆಯಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ. ಇದು ಹೂಡಿಕೆ ಅಥವಾ ಸಾಲ ಪಡೆಯಲು ನೀಡುವ ವೈಯಕ್ತಿಕ ಸಲಹೆಯಲ್ಲ.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/cheapest-car-loan-rates-may-2026-sbi-vs-other-banks-sat-828l97a"/>
        </item>
        <item>
            <title><![CDATA[ಭಿಕ್ಷೆ ಬೇಡಿದರೂ ಬರದ ಹಣ; ಸಾಲ ತೀರಿಸಲು 50 ವರ್ಷಗಳ ಬಳಿಕ ಸಾರಾಯಿ ರಫ್ತಿಗೆ ಇಳಿದ ಪಾಕಿಸ್ತಾನ!]]></title>
            <link>https://kannada.asianetnews.com/world-news/pakistan-resumes-alcohol-export-murree-brewery-economic-crisis-debt-relief-san/articleshow-erlmclc</link>
            <guid isPermaLink="true">https://kannada.asianetnews.com/world-news/pakistan-resumes-alcohol-export-murree-brewery-economic-crisis-debt-relief-san/articleshow-erlmclc</guid>
            <pubDate>Tue, 05 May 2026 21:11:29 +0530</pubDate>
            <description><![CDATA[&lt;p&gt;ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಪಾಕಿಸ್ತಾನವು 50 ವರ್ಷಗಳ ವಿರಾಮದ ನಂತರ ಮದ್ಯ ರಫ್ತನ್ನು ಪುನರಾರಂಭಿಸಿದೆ. 'ಮರ್ರಿ ಬ್ರೂವರಿ' ಸಂಸ್ಥೆಯು ವಿದೇಶಗಳಿಗೆ ಬಿಯರ್ ರಫ್ತು ಮಾಡಲು ಆರಂಭಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqe7nt5vz27vaysjrqbam3w7,imgname-pakistan-economic-loss-iran-war-oil-import-bill-rise-shahbaz-sharif-us-iran-conflict-impact-3-1777520535739.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.5): &lt;/strong&gt;ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನವು ಬರೊಬ್ಬರಿ 50 ವರ್ಷಗಳ ವಿರಾಮದ ನಂತರ ಮತ್ತೆ ವಿದೇಶಗಳಿಗೆ ಮದ್ಯ ರಫ್ತು ಮಾಡಲು ಆರಂಭಿಸಿದೆ. ದೇಶದ ಏಕೈಕ ಸ್ಥಳೀಯ ಮದ್ಯ ತಯಾರಿಕಾ ಸಂಸ್ಥೆಯಾದ 'ಮರ್ರಿ ಬ್ರೂವರಿ' (Murree Brewery), 2026ರ ಏಪ್ರಿಲ್&zwnj;ನಲ್ಲಿ ಬ್ರಿಟನ್, ಜಪಾನ್, ಪೋರ್ಚುಗಲ್ ಮತ್ತು ಥೈಲ್ಯಾಂಡ್&zwnj;ನಂತಹ ದೇಶಗಳಿಗೆ ಬಿಯರ್ ಮತ್ತು ಇತರ ಮದ್ಯದ ಉತ್ಪನ್ನಗಳನ್ನು ರಫ್ತು ಮಾಡಲು ಶುರು ಮಾಡಿದೆ. ಕಂಪನಿಯ ರಫ್ತು ವ್ಯವಸ್ಥಾಪಕ ರಮೀಜ್ ಶಾ ಅವರ ಪ್ರಕಾರ, ಸದ್ಯಕ್ಕೆ ವಿದೇಶಗಳಲ್ಲಿ ಮಾರುಕಟ್ಟೆ ಜಾಲವನ್ನು ಸೃಷ್ಟಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಯೋಜನೆಯಿದೆ ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಆರ್ಥಿಕ ಸಂಕಷ್ಟದಿಂದ ನಿಯಮಕ್ಕೆ ವಿನಾಯುತಿ&lt;/strong&gt;&lt;/h2&gt;&lt;p&gt;ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಸುಮಾರು 50 ವರ್ಷಗಳ ಹಿಂದೆ ಪಾಕಿಸ್ತಾನದ ಮುಸ್ಲಿಂ ಜನಸಂಖ್ಯೆಗೆ ಮದ್ಯಪಾನವನ್ನು ನಿಷೇಧಿಸಲಾಗಿತ್ತು ಮತ್ತು ಅದರ ಬೆನ್ನಲ್ಲೇ ರಫ್ತು ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಆದರೆ, ಪಾಕಿಸ್ತಾನದಲ್ಲಿರುವ ಮುಸ್ಲಿಮೇತರರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿತ್ತು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು 2025ರಲ್ಲಿ ಮದ್ಯ ರಫ್ತಿಗೆ ಅನುಮತಿ ನೀಡಿದ್ದು, ಇದೀಗ ಇಸ್ಲಾಮಿಕ್ ಸಹಕಾರ ಸಂಘಟನೆಯ (OIC) ಭಾಗವಲ್ಲದ ದೇಶಗಳಿಗೆ ಪೂರೈಕೆ ಆರಂಭವಾಗಿದೆ.&lt;/p&gt;&lt;h2&gt;&lt;strong&gt;138 ಬಿಲಿಯನ್&zwnj; ಡಾಲರ್&zwnj; ವಿದೇಶಿ ಸಾಲ&lt;/strong&gt;&lt;/h2&gt;&lt;p&gt;ಪಾಕಿಸ್ತಾನದ ಪ್ರಸ್ತುತ ಆರ್ಥಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ದೇಶವು 138 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಹೊಂದಿದೆ. ಸರ್ಕಾರದ ಆದಾಯ ಮತ್ತು ವೆಚ್ಚದ ನಡುವೆ ಭಾರಿ ಅಂತರವಿದ್ದು, 2026ರ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ 11,072 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳಾಗಿದ್ದರೆ ($40 ಬಿಲಿಯನ್), ವೆಚ್ಚವು 16,286 ಬಿಲಿಯನ್ ರೂಪಾಯಿಗಳಿಗೆ ($58 ಬಿಲಿಯನ್) ತಲುಪಿದೆ. ಇದರಲ್ಲಿ ಸುಮಾರು 8,200 ಬಿಲಿಯನ್ ರೂಪಾಯಿಗಳು ($30 ಬಿಲಿಯನ್) ಕೇವಲ ಸಾಲದ ಬಡ್ಡಿ ಪಾವತಿಗೆ ವ್ಯಯವಾಗುತ್ತಿದೆ.&lt;/p&gt;&lt;p&gt;ಒಟ್ಟು 138 ಬಿಲಿಯನ್ ಡಾಲರ್ ಬಾಹ್ಯ ಸಾಲದಲ್ಲಿ ಸರ್ಕಾರಿ ಸಾಲದ ಪಾಲು 92 ಬಿಲಿಯನ್ ಡಾಲರ್ ಆಗಿದ್ದರೆ, ಉಳಿದದ್ದು ಖಾಸಗಿ ವಲಯ ಮತ್ತು ಬ್ಯಾಂಕುಗಳ ಹೊಣೆಗಾರಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಮರ್ರಿ ಬ್ರೂವರಿ ಕೇವಲ ಪ್ಯಾಕೇಜ್ ಮಾಡಿದ ಜ್ಯೂಸ್, ಮಿನರಲ್ ವಾಟರ್ ಮತ್ತು ಫ್ರೂಟ್ ಫ್ಲೇವರ್ ಪಾನೀಯಗಳಂತಹ ಅಲ್ಕೊಹಾಲ್ ರಹಿತ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಕಳೆದ ಹಣಕಾಸು ವರ್ಷದಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಸಿದ್ದ ಈ ಸಂಸ್ಥೆಯ ಸಿಇಒ ಇಸ್ಫನ್ಯಾರ್ ಭಂಡಾರಾ ಅವರು ಮದ್ಯ ರಫ್ತು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, 2021ರಲ್ಲಿ ಪಾಕಿಸ್ತಾನವು ಬಲೂಚಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ಚೀನೀ ಪ್ರಜೆಗಳ ಅಗತ್ಯಕ್ಕಾಗಿ ಮದ್ಯ ತಯಾರಿಸಲು ಚೀನೀ ಕಂಪನಿಯೊಂದಕ್ಕೆ ಅನುಮತಿ ನೀಡಿತ್ತು. 70ರ ದಶಕದ ನಿಷೇಧಕ್ಕೂ ಮೊದಲು ಮರ್ರಿ ಬ್ರೂವರಿ ಭಾರತ, ಅಫ್ಘಾನಿಸ್ತಾನ ಮತ್ತು ಅಮೆರಿಕಕ್ಕೂ ಮದ್ಯ ರಫ್ತು ಮಾಡುತ್ತಿತ್ತು.&lt;/p&gt;&lt;h2&gt;&lt;strong&gt;ಮದ್ಯ ಮಾರಾಟ ನಿಷೇಧಿಸಿದ್ದ ಭುಟ್ಟೋ&lt;/strong&gt;&lt;/h2&gt;&lt;p&gt;ಪಾಕಿಸ್ತಾನದಲ್ಲಿ ಮದ್ಯ ನಿಷೇಧದ ಇತಿಹಾಸವನ್ನು ಗಮನಿಸಿದರೆ, 1977ರ ಏಪ್ರಿಲ್&zwnj;ನಲ್ಲಿ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರು ದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದರು. ಆ ಸಮಯದಲ್ಲಿ ಭುಟ್ಟೋ ಸರ್ಕಾರದ ವಿರುದ್ಧ ಭಾರಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದವು ಮತ್ತು ಅವರು 1977ರ ಚುನಾವಣೆಯಲ್ಲಿ ಅಕ್ರಮ ಎಸಗಿದ್ದಾರೆ ಹಾಗೂ 'ಪಾಶ್ಚಿಮಾತ್ಯ ಜೀವನಶೈಲಿ' ಅಳವಡಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದರು. ವಿರೋಧ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸುವಾಗ ಅವರು ನೈಟ್&zwnj;ಕ್ಲಬ್&zwnj;ಗಳು ಮತ್ತು ಬಾರ್&zwnj;ಗಳನ್ನು ಮುಚ್ಚಬೇಕು ಹಾಗೂ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಈ ಒತ್ತಡಕ್ಕೆ ಮಣಿದ ಭುಟ್ಟೋ ಸರ್ಕಾರವು ಮೇ 1977ರಲ್ಲಿ ಕರಾಚಿಯಲ್ಲಿ ಉದ್ಘಾಟನೆಯಾಗಬೇಕಿದ್ದ ದೊಡ್ಡ ಕ್ಯಾಸಿನೊ ಯೋಜನೆಯನ್ನೂ ರದ್ದುಗೊಳಿಸಿದರು. ಉದ್ಯಮಿ ತುಫೈಲ್ ಶೇಖ್ ನಿರ್ಮಿಸುತ್ತಿದ್ದ ಈ ಕ್ಯಾಸಿನೊ ಕೊಲ್ಲಿ ರಾಷ್ಟ್ರಗಳು ಮತ್ತು ಯುರೋಪ್&zwnj;ನ ಪ್ರವಾಸಿಗರನ್ನು ಆಕರ್ಷಿಸುವ ಗುರಿ ಹೊಂದಿತ್ತು. ಈ ನಿರ್ಧಾರದಿಂದ ಶೇಖ್ ಅಸಮಾಧಾನಗೊಂಡಾಗ, ಭುಟ್ಟೋ ಅವರು ಇದು ತಾತ್ಕಾಲಿಕ ಕ್ರಮವಷ್ಟೇ ಎಂದು ಭರವಸೆ ನೀಡಿದ್ದರು.&lt;/p&gt;&lt;h2&gt;&lt;strong&gt;ಕಾನೂನು ಸಡಿಲ ಮಾಡಿದ್ದ ಮುಷರಫ್&zwnj;&lt;/strong&gt;&lt;/h2&gt;&lt;p&gt;ಆದರೆ 1977ರ ಜುಲೈನಲ್ಲಿ ಭುಟ್ಟೋ ಸರ್ಕಾರವನ್ನು ಪದಚ್ಯುತಗೊಳಿಸಿದ ಮಿಲಿಟರಿ ಆಡಳಿತಗಾರ ಜಿಯಾ-ಉಲ್-ಹಕ್, ಮದ್ಯ ನಿಷೇಧದ ಕಾನೂನನ್ನು ಇನ್ನಷ್ಟು ಕಠಿಣಗೊಳಿಸಿದರು. ಅವರು ಇದನ್ನು ಇಸ್ಲಾಮಿಕ್ ಕಾನೂನಿನೊಂದಿಗೆ ಜೋಡಿಸಿ, ಮುಸ್ಲಿಮರಿಗೆ ಮದ್ಯ ಮಾರಾಟ ಮತ್ತು ಸೇವನೆಯನ್ನು ಅಕ್ರಮವೆಂದು ಘೋಷಿಸಿ ಕಠಿಣ ಶಿಕ್ಷೆ ವಿಧಿಸಲು ಆರಂಭಿಸಿದರು. ಆದರೂ, ಮುಸ್ಲಿಮೇತರ ಹೆಸರಿನಲ್ಲಿ ಪರವಾನಗಿ ಪಡೆದ ಮದ್ಯದ ಅಂಗಡಿಗಳಿಗೆ ಅವಕಾಶ ನೀಡಲಾಯಿತು. ನಂತರದ ವರ್ಷಗಳಲ್ಲಿ ಜನರಲ್ ಪರ್ವೇಜ್ ಮುಷರಫ್ ಅವರ ಕಾಲದಲ್ಲಿ ಈ ಕಾನೂನು ಸ್ವಲ್ಪ ಸಡಿಲಗೊಂಡಿತು. ಮುಷರಫ್ ಕಾನೂನನ್ನು ರದ್ದುಗೊಳಿಸಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದ ಸಾಧ್ಯವಾಗಲಿಲ್ಲ, ಆದರೆ ಅವರ ಅವಧಿಯಲ್ಲಿ ಮುಸ್ಲಿಮರಿಗೆ ಮದ್ಯ ಲಭ್ಯವಾಗುವುದು ಸುಲಭವಾಯಿತು. ಈ ನಿಷೇಧದ ಬಗ್ಗೆ ಒಂದು ವಿಭಿನ್ನ ವಾದವಿದ್ದು, ಮದ್ಯ ನಿಷೇಧದಿಂದಾಗಿ ಪಾಕಿಸ್ತಾನದ ಜನರು ಹೆಚ್ಚು ಅಪಾಯಕಾರಿಯಾದ ಹೆರಾಯಿನ್ ವ್ಯಸನಕ್ಕೆ ತಿರುಗಿದರು ಎನ್ನಲಾಗುತ್ತದೆ. 1979ರಲ್ಲಿ ಪಾಕಿಸ್ತಾನದಲ್ಲಿ ಕೇವಲ ಎರಡು ಹೆರಾಯಿನ್ ಪ್ರಕರಣಗಳು ವರದಿಯಾಗಿದ್ದರೆ, 1985ರ ವೇಳೆಗೆ ಪಾಕಿಸ್ತಾನವು ವಿಶ್ವದ ಅತಿದೊಡ್ಡ ಹೆರಾಯಿನ್ ಗ್ರಾಹಕ ದೇಶಗಳಲ್ಲಿ ಒಂದಾಯಿತು. ಅಲ್ಲದೆ, ಅಕ್ರಮ ಮದ್ಯ ಮಾಫಿಯಾದಿಂದಾಗಿ ವಿಷಪೂರಿತ ಮದ್ಯ ಸೇವಿಸಿ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪವೂ ಇದೆ.&lt;/p&gt;&lt;p&gt;ಧಾರ್ಮಿಕ ಸಂಘಟನೆಗಳು ಮದ್ಯಪಾನವನ್ನು ಬ್ರಿಟಿಷರ ಕಾಲದ ಅಭ್ಯಾಸ ಎಂದು ಕರೆದರೂ, ದಕ್ಷಿಣ ಏಷ್ಯಾದಲ್ಲಿ ಮದ್ಯದ ಇತಿಹಾಸವು ಸುಮಾರು 5,000 ವರ್ಷಗಳಷ್ಟು ಹಳೆಯದಾಗಿದೆ. ಸಿಂಧೂ ನಾಗರಿಕತೆಯ ಕಾಲದಲ್ಲೂ ವೈನ್ ತಯಾರಿಸಲಾಗುತ್ತಿತ್ತು ಎಂಬ ಕುರುಹುಗಳು ಸಿಕ್ಕಿವೆ. ಮೊಹೆಂಜೊದಾರೋದಲ್ಲಿ ಪತ್ತೆಯಾದ ವಿಶ್ವದ ಅತ್ಯಂತ ಹಳೆಯ ಡಿಸ್ಟಿಲರ್&zwnj;ಗಳು (Distillers) ಪ್ರಸ್ತುತ ತಕ್ಷಶಿಲಾ ಮ್ಯೂಸಿಯಂನಲ್ಲಿವೆ. ಮೊಘಲರ ಮತ್ತು ದೆಹಲಿ ಸುಲ್ತಾನರ ಕಾಲದಲ್ಲೂ ಮದ್ಯ, ಗಾಂಜಾ ಮತ್ತು ಅಫೀಮು ಬಳಕೆ ಸಾಮಾನ್ಯವಾಗಿದ್ದು, ಅನೇಕ ಅರಸರು ಸ್ವತಃ ಮದ್ಯ ಸೇವಿಸುತ್ತಿದ್ದರು. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಅನೇಕ ಆಡಳಿತಗಾರರು ಮದ್ಯವನ್ನು ನಿಷೇಧಿಸಲು ಪ್ರಯತ್ನಿಸಿದರೂ, ಜನರ ಹಳೆಯ ಅಭ್ಯಾಸಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ ಎಂದು ವರದಿಗಳು ತಿಳಿಸಿವೆ. ಇದೀಗ ಆರ್ಥಿಕ ದುಸ್ಥಿತಿಯು ಪಾಕಿಸ್ತಾನದ ಈ 50 ವರ್ಷಗಳ ಹಳೆಯ ನೀತಿಯನ್ನು ಬದಲಿಸುವಂತೆ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/pakistan-resumes-alcohol-export-murree-brewery-economic-crisis-debt-relief-san/articleshow-erlmclc"/>
        </item>
        <item>
            <title><![CDATA[ರಾಜ್ಯದಲ್ಲಿ ಎನ್‌ಫೀಲ್ಡ್‌ ಶೋರೂಮ್‌ ಮೇಲೆ ಕನ್ನಡ ಕಾರ್ಯರ್ಕತರ ದಾಳಿ, ಇನ್ನೊಂದೆಡೆ ಆಂಧ್ರದಲ್ಲಿ ಭಾರೀ ಹೂಡಿಕೆ ಘೋಷಿಸಿದ ಕಂಪನಿ!]]></title>
            <link>https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119</link>
            <guid isPermaLink="true">https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119</guid>
            <pubDate>Fri, 08 May 2026 20:31:56 +0530</pubDate>
            <description><![CDATA[&lt;p&gt;ರಾಯಲ್ ಎನ್&zwnj;ಫೀಲ್ಡ್ ಸಂಸ್ಥೆಯು ಆಂಧ್ರಪ್ರದೇಶದಲ್ಲಿ ₹2200 ಕೋಟಿ ವೆಚ್ಚದ ಬೃಹತ್ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ, ಇದು 5000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದೇ ಸಮಯದಲ್ಲಿ, ಕರ್ನಾಟಕದ ಕೋಲಾರದಲ್ಲಿ ನಾಮಫಲಕ ವಿಚಾರವಾಗಿ ರಾಯಲ್ ಎನ್&zwnj;ಫೀಲ್ಡ್ ಶೋರೂಮ್ ದಾಳಿ ನಡೆಸಿದ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr41h97bggckh5240t01rdh2,imgname-royal-enfield-andhra-pradesh-1778252293355.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.8): &lt;/strong&gt;ಒಂದೆಡೆ ರಾಜ್ಯದಲ್ಲಿ ಕನ್ನಡ ಕಾರ್ಯಕರ್ತರು ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj;ನಲ್ಲಿ ಕನ್ನಡ ವಿಚಾರವಾಗಿ ದಾಳಿ ಮಾಡಿರುವ ದಿನವೇ ಕಂಪನಿ ಆಂಧ್ರಪ್ರದೇಶದಲ್ಲಿ ತನ್ನ ಮೇಜರ್&zwnj; ಪ್ಲ್ಯಾಂಟ್&zwnj; ಘೋಷಣೆ ಮಾಡಿದೆ. ಈ ಎರಡೂ ವಿಚಾರ ಕಾಕತಾಳೀಯವಾಗಿದ್ದರೂ, ಹೂಡಿಕೆಯ ವಿಚಾರದಲ್ಲಿ ಕರ್ನಾಟಕ ಮತ್ತೊಂದು ಪ್ರಮುಖ ಅವಕಾಶವನ್ನು ತಪ್ಪಿಸಿಕೊಂಡಂತಾಗಿದೆ. ಅದಾಗಲೇ ತಮಿಳುನಾಡಿನಲ್ಲಿ ಒಂದು ಉತ್ಪಾದನಾ ಘಟಕ ಹೊಂದಿರುವ ರಾಯಲ್&zwnj; ಎನ್&zwnj;ಫೀಲ್ಡ್&zwnj; ತಮಿಳುನಾಡು ಹೊರತಾಗಿ ಮತ್ತೊಂದು ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ತೆರೆಯುವ ಬಗ್ಗೆ ವರ್ಷಗಳ ಹಿಂದೆ ವಿಚಾರ ಮಾಡಿತ್ತು. ಈಗ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನೀಡಿದ ಆಫರ್&zwnj; ಒಪ್ಪಿರುವ ಕಂಪನಿ, ಅಂದಾಜು 2200 ಕೋಟಿ ರೂಪಾಯಿ ಹೂಡಿಕೆಯ ಪ್ಲ್ಯಾಂಟ್&zwnj;ಅನ್ನು ರಾಯಲ್&zwnj;ಸೀಮಾ ಭಾಗದಲ್ಲಿ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ.&lt;/p&gt;&lt;p&gt;ಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ 'ರಾಯಲ್ ಎನ್&zwnj;ಫೀಲ್ಡ್' (Royal Enfield), ಆಂಧ್ರಪ್ರದೇಶದಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಆಸಕ್ತಿ ವ್ಯಕ್ತಪಡಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. 1950ರ ದಶಕದಲ್ಲಿ ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ, ಕಂಪನಿಯು ತಮಿಳುನಾಡಿನಿಂದ ಹೊರಗೆ ಸ್ಥಾಪಿಸುತ್ತಿರುವ ಮೊದಲ ಬೃಹತ್ ಉತ್ಪಾದನಾ ಘಟಕ ಇದಾಗಲಿದೆ.&lt;/p&gt;&lt;p&gt;ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯ ಸಮೀಪವಿರುವ ತಿರುಪತಿ ಜಿಲ್ಲೆಯ ಸತ್ಯವೇಡು ಎಂಬಲ್ಲಿ ಈ ನೂತನ ಘಟಕ ತಲೆ ಎತ್ತಲಿದೆ. ಆಂಧ್ರಪ್ರದೇಶ ರಾಜ್ಯ ಹೂಡಿಕೆ ಉತ್ತೇಜನಾ ಮಂಡಳಿಯ (SIPB) ಭಾಗವಾಗಿರುವ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಯೋಜನೆಗೆ ವೈಯಕ್ತಿಕವಾಗಿ ಅನುಮೋದನೆ ನೀಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;5 ಸಾವಿರಕ್ಕೂ ಅಧಿಕ ಉದ್ಯೋಗ&lt;/strong&gt;&lt;/h2&gt;&lt;p&gt;ಎರಡು ಹಂತಗಳಲ್ಲಿ ಕಂಪನಿಯು ಸುಮಾರು 2,200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಈ ಘಟಕವು ವಾರ್ಷಿಕ 9 ಲಕ್ಷ ಯುನಿಟ್&zwnj;ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಯೋಜನೆಯಿಂದ ಈ ಭಾಗದಲ್ಲಿ ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.&lt;/p&gt;&lt;h2&gt;&lt;strong&gt;ವೆಂಡರ್ ಪಾರ್ಕ್ ಸೌಲಭ್ಯ&lt;/strong&gt;&lt;/h2&gt;&lt;p&gt;ಕಂಪನಿಗೆ ಸುಮಾರು 267 ಎಕರೆ ಭೂಮಿಯನ್ನು ನಿಗದಿಪಡಿಸಲಾಗಿದ್ದು, ಉತ್ಪಾದನಾ ಘಟಕದ ಜೊತೆಗೆ ಪ್ರತ್ಯೇಕ 'ವೆಂಡರ್ ಪಾರ್ಕ್' (Vendor Park) ಅನ್ನು ಕೂಡ ಇಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಬಿಡಿಭಾಗಗಳ ಪೂರೈಕೆ ವ್ಯವಸ್ಥೆ ಸುಗಮವಾಗಲಿದ್ದು, ಸಾರಿಗೆ ವೆಚ್ಚ ಕಡಿಮೆಯಾಗುವುದಲ್ಲದೆ ಉತ್ಪಾದನಾ ಪ್ರಕ್ರಿಯೆಯೂ ವೇಗವನ್ನು ಪಡೆದುಕೊಳ್ಳಲಿದೆ.&lt;/p&gt;&lt;h2&gt;&lt;strong&gt;ಯೋಜನೆಯ ಕಾಲಮಿತಿ&lt;/strong&gt;&lt;/h2&gt;&lt;p&gt;ರಾಯಲ್ ಎನ್&zwnj;ಫೀಲ್ಡ್&zwnj;ನ ಈ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತವು 2029 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಮತ್ತು ಎರಡನೇ ಹಂತವು 2032 ರ ವೇಳೆಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ರಾಯಲ್ ಎನ್&zwnj;ಫೀಲ್ಡ್ ಬೈಕ್&zwnj;ಗಳಿಗೆ ಇರುವ ಭಾರಿ ಬೇಡಿಕೆಯನ್ನು ಪೂರೈಸಲು ಈ ಘಟಕವು ಪೂರಕವಾಗಲಿದೆ.&lt;/p&gt;&lt;h2&gt;&lt;strong&gt;ಕೋಲಾರದಲ್ಲಿ ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj; ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಒಂದೆಡೆ ಕಂಪನಿ ತನ್ನ ಪ್ರಮುಖ ಉತ್ಪಾದನಾ ಘಟಕವನ್ನು ಘೋಷಣೆ ಮಾಡಿರುವ ದಿನವೇ ಸೋಶಿಯಲ್&zwnj; ಮೀಡಿಯಾದಲ್ಲಿ ಕರ್ನಾಟಕದ ಕೋಲಾರದಲ್ಲಿರುವ ರಾಯಲ್&zwnj; ಎನ್&zwnj;ಫೀಲ್ಡ್&zwnj; ಶೋರೂಮ್&zwnj; ಮೇಲೆ ಕನ್ನಡ ಕಾರ್ಯಕರ್ತರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ. ಕನ್ನಡ ನಾಮಫಲಕದ ವಿಚಾರವಾಗಿ ದಾಳಿ ಮಾಡಿರುವ ಕರ್ನಾಟಕ ನಾಡು ನುಡಿ ಸ್ವಾಭಿಮಾನಿ ವೇದಿಕೆ, ಶೋರೂಮ್&zwnj;ನ ಅಧಿಕಾರಿಗಳಿಗೆ ನೋಟಿಸ್&zwnj; ನೀಡಿ ಎಚ್ಚರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/royal-enfield-new-plant-andhra-pradesh-2200-crore-karnataka-showroom-protest-san/articleshow-g4rx119"/>
        </item>
        <item>
            <title><![CDATA[ಎಸ್‌ಬಿಐ ಹೂಡಿಕೆದಾರರಿಗೆ ಲಾಟರಿ:ಪ್ರತಿ ಷೇರಿಗೆ ₹17.35 ಡಿವಿಡೆಂಡ್ ಘೋಷಣೆ; ರೆಕಾರ್ಡ್ ಡೇಟ್ ಯಾವಾಗ?]]></title>
            <link>https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3</link>
            <guid isPermaLink="true">https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3</guid>
            <pubDate>Fri, 08 May 2026 15:19:45 +0530</pubDate>
            <description><![CDATA[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025-26ರ ಹಣಕಾಸು ವರ್ಷಕ್ಕೆ ಪ್ರತಿ ಷೇರಿಗೆ ₹17.35 ಅಂತಿಮ ಲಾಭಾಂಶವನ್ನು ಘೋಷಿಸಿದೆ. ಈ ಲಾಭಾಂಶವನ್ನು ಪಡೆಯಲು ಮೇ 16, 2026 ಅನ್ನು ದಾಖಲೆ ದಿನಾಂಕವಾಗಿ ನಿಗದಿಪಡಿಸಲಾಗಿದ್ದು, ಜೂನ್ 4, 2026 ರಂದು ಅರ್ಹ ಹೂಡಿಕೆದಾರರಿಗೆ ಹಣ ಪಾವತಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kr3fn1bve8r1cc0hf5880dm6,imgname-sbi-share-dividend-1778233542011.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 08): ದೇ&lt;/strong&gt;ಶದ ಅತಿದೊಡ್ಡ ಸಾರ್ವಜನಿಕ ವಲಯದ ಸಾಲದಾತ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಹೂಡಿಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. 2025-26ರ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಪ್ರತಿ ಷೇರಿಗೆ ಬರೋಬ್ಬರಿ 17.35 ರೂಪಾಯಿಗಳ ಅಂತಿಮ ಲಾಭಾಂಶವನ್ನು (Final Dividend) ಘೋಷಿಸಿದೆ.&lt;/p&gt;&lt;p&gt;ಶುಕ್ರವಾರ ನಡೆದ ಬ್ಯಾಂಕಿನ ಕೇಂದ್ರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದ್ದು, ಸೆಬಿ (SEBI) ನಿಯಮಾವಳಿಗಳ ಅನ್ವಯ ಈ ಘೋಷಣೆ ಮಾಡಲಾಗಿದೆ. ಈ ಲಾಭಾಂಶವು ಬ್ಯಾಂಕಿನ ಷೇರುದಾರರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ತಂದುಕೊಡಲಿದೆ.&lt;/p&gt;&lt;h3&gt;&lt;strong&gt;1,735 ಶೇಕಡಾ ಲಾಭಾಂಶ!&lt;/strong&gt;&lt;/h3&gt;&lt;p&gt;ಎಸ್&zwnj;ಬಿಐನ ಪ್ರತಿ ಈಕ್ವಿಟಿ ಷೇರಿನ ಮುಖಬೆಲೆ (Face Value) 1 ರೂಪಾಯಿ ಆಗಿದ್ದು, ಈಗ ಘೋಷಿಸಲಾದ 17.35 ರೂಪಾಯಿ ಡಿವಿಡೆಂಡ್ ಎಂದರೆ ಅದು ಶೇಕಡಾ 1,735 ರಷ್ಟು ಲಾಭಾಂಶ ಎಂದರ್ಥ. ಬ್ಯಾಂಕ್ ತನ್ನ ಹಣಕಾಸಿನ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆದಾರರಿಗೆ ಈ ಪ್ರತಿಫಲವನ್ನು ನೀಡಲು ಮುಂದಾಗಿದೆ.&lt;/p&gt;&lt;h2&gt;&lt;strong&gt;ರೆಕಾರ್ಡ್ ಡೇಟ್ ಮತ್ತು ಅರ್ಹತೆ:&lt;/strong&gt;&lt;/h2&gt;&lt;p&gt;ಹೂಡಿಕೆದಾರರು ಈ ಡಿವಿಡೆಂಡ್ ಪಡೆಯಲು ಅರ್ಹರಾಗಿದ್ದಾರೆಯೇ ಎಂದು ನಿರ್ಧರಿಸಲು ಬ್ಯಾಂಕ್ 2026ರ ಮೇ 16 ರನ್ನು 'ದಾಖಲೆ ದಿನಾಂಕ' (Record Date) ಎಂದು ನಿಗದಿಪಡಿಸಿದೆ. ಅಂದರೆ, ಮೇ 16ರ ವೇಳೆಗೆ ಯಾರೆಲ್ಲಾ ತಮ್ಮ ಡಿಮ್ಯಾಟ್ ಖಾತೆಯಲ್ಲಿ ಎಸ್&zwnj;ಬಿಐ ಷೇರುಗಳನ್ನು ಹೊಂದಿರುತ್ತಾರೋ, ಅವರು ಮಾತ್ರ ಈ 17.35 ರೂಪಾಯಿ ಡಿವಿಡೆಂಡ್ ಪಡೆಯಲು ಅರ್ಹರಾಗಿರುತ್ತಾರೆ.&lt;/p&gt;&lt;h3&gt;&lt;strong&gt;ಹಣ ಪಾವತಿ ಯಾವಾಗ?&lt;/strong&gt;&lt;/h3&gt;&lt;p&gt;ಅರ್ಹ ಷೇರುದಾರರಿಗೆ ಡಿವಿಡೆಂಡ್ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ, 2026ರ ಜೂನ್ 4 ರಂದು ಈ ಲಾಭಾಂಶದ ಮೊತ್ತವನ್ನು ಪಾವತಿಸಲಾಗುವುದು.&lt;/p&gt;&lt;h2&gt;&lt;strong&gt;ಷೇರು ಮಾರುಕಟ್ಟೆಯಲ್ಲಿ ಎಸ್&zwnj;ಬಿಐ ಸ್ಥಿತಿ:&lt;/strong&gt;&lt;/h2&gt;&lt;p&gt;ಡಿವಿಡೆಂಡ್ ಘೋಷಣೆಯ ಹೊರತಾಗಿಯೂ, ಶುಕ್ರವಾರದ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಎಸ್&zwnj;ಬಿಐ ಷೇರುಗಳು ಶೇಕಡಾ 3 ಕ್ಕಿಂತ ಹೆಚ್ಚು ಕುಸಿತ ಕಂಡಿವೆ. ಮಾರ್ಚ್ ತ್ರೈಮಾಸಿಕದ ಫಲಿತಾಂಶಗಳು ಮಾರುಕಟ್ಟೆಯ ನಿರೀಕ್ಷೆಗಿಂತ ಭಿನ್ನವಾಗಿದ್ದರಿಂದ ಷೇರು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಎಸ್&zwnj;ಬಿಐ ವರದಿ ಮಾಡಿದ ಮಿಶ್ರ ಫಲಿತಾಂಶವು ಹೂಡಿಕೆದಾರರಲ್ಲಿ ಸ್ವಲ್ಪ ಮಟ್ಟದ ಆತಂಕ ಮೂಡಿಸಿದ್ದರೂ, ಭಾರಿ ಪ್ರಮಾಣದ ಡಿವಿಡೆಂಡ್ ಘೋಷಣೆಯು ದೀರ್ಘಕಾಲದ ಹೂಡಿಕೆದಾರರಿಗೆ ಸಮಾಧಾನ ತಂದಿದೆ.&lt;/p&gt;&lt;p&gt;ಕಳೆದ ಹಣಕಾಸು ವರ್ಷದಲ್ಲಿ ಎಸ್&zwnj;ಬಿಐ ಸ್ಥಿರವಾದ ಕಾರ್ಯಾಚರಣೆಯ ಪ್ರದರ್ಶನ ನೀಡಿದ್ದು, ತನ್ನ ಲಾಭದ ಒಂದು ಭಾಗವನ್ನು ಷೇರುದಾರರೊಂದಿಗೆ ಹಂಚಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/business/state-bank-of-india-dividend-2026-record-date-payment-details-share-price-update-sat/articleshow-gfqsgt3"/>
        </item>
        <item>
            <title><![CDATA[Met Gala: ಇಶಾ ಅಂಬಾನಿ ಕೈಯಲ್ಲಿ 95 ಲಕ್ಷ ರೂ. ಮಾವಿನ ಹಣ್ಣು! ಫ್ಯಾಷನ್​ ಲೋಕ ದಿಗ್ಭ್ರಮೆ- ಏನಿದರ ವಿಶೇಷತೆ]]></title>
            <link>https://kannada.asianetnews.com/gallery/fashion/isha-ambani-met-gala-2026-expensive-steel-mango-price-details-gaurav-gupta-gold-saree-look-95-lakhs-suc-h66vgxd</link>
            <guid isPermaLink="true">https://kannada.asianetnews.com/gallery/fashion/isha-ambani-met-gala-2026-expensive-steel-mango-price-details-gaurav-gupta-gold-saree-look-95-lakhs-suc-h66vgxd</guid>
            <pubDate>Thu, 07 May 2026 13:28:16 +0530</pubDate>
            <description><![CDATA[ಮೆಟ್ ಗಾಲಾ 2026 ರ ರೆಡ್ ಕಾರ್ಪೆಟ್ ಮೇಲೆ ಇಶಾ ಅಂಬಾನಿ ಸೀರೆಯುಟ್ಟು ಗಮನ ಸೆಳೆದರು. ಆದರೆ ಎಲ್ಲರ ಕಣ್ಣು ಬಿದ್ದಿದ್ದು ಅವರ ಕೈಯಲ್ಲಿದ್ದ ಮಾವಿನ ಹಣ್ಣಿನಂತಹ ವಸ್ತುವಿನ ಮೇಲೆ. ಇದು ನಿಜವಾದ ಹಣ್ಣಲ್ಲ, ಬದಲಿಗೆ ಕಲಾವಿದ ಸುಬೋಧ್ ಗುಪ್ತಾ ರಚಿಸಿದ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಉಕ್ಕಿನ ಕಲಾಕೃತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr0pyady1bqe41sxmxgq78aa,imgname-isha-ambani-1778140522942.jpg" type="image/jpeg" height="390" width="690"/>
            <content:encoded><![CDATA[ಮೆಟ್ ಗಾಲಾ 2026 ರ ರೆಡ್ ಕಾರ್ಪೆಟ್ ಮೇಲೆ ಇಶಾ ಅಂಬಾನಿ ಸೀರೆಯುಟ್ಟು ಗಮನ ಸೆಳೆದರು. ಆದರೆ ಎಲ್ಲರ ಕಣ್ಣು ಬಿದ್ದಿದ್ದು ಅವರ ಕೈಯಲ್ಲಿದ್ದ ಮಾವಿನ ಹಣ್ಣಿನಂತಹ ವಸ್ತುವಿನ ಮೇಲೆ. ಇದು ನಿಜವಾದ ಹಣ್ಣಲ್ಲ, ಬದಲಿಗೆ ಕಲಾವಿದ ಸುಬೋಧ್ ಗುಪ್ತಾ ರಚಿಸಿದ ಸುಮಾರು 95 ಲಕ್ಷ ರೂಪಾಯಿ ಮೌಲ್ಯದ ಉಕ್ಕಿನ ಕಲಾಕೃತಿಯಾಗಿದೆ.&lt;img&gt;&lt;p&gt;ಅಂಬಾನಿ ಕುಟುಂಬದ ಮಹಿಳೆಯರು ತಮ್ಮ ಫ್ಯಾಷನ್ ಮತ್ತು ಶೈಲಿಯಿಂದ ಪ್ರಭಾವಿತರಾಗುತ್ತಲೇ ಇದ್ದಾರೆ. ವೇದಿಕೆ ಏನೇ ಇರಲಿ, ಅಂಬಾನಿ ಕುಟುಂಬದವರು ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಾರೆ. ಇತ್ತೀಚಿನ ಉದಾಹರಣೆಯೆಂದರೆ ಇಶಾ ಅಂಬಾನಿ, ವಿಶ್ವದ ಅತಿದೊಡ್ಡ ಫ್ಯಾಷನ್ ಕಾರ್ಯಕ್ರಮಗಳಲ್ಲಿ ಒಂದಾದ ಮೆಟ್ ಗಾಲಾ 2026 ರ ರೆಡ್ ಕಾರ್ಪೆಟ್ ಮೇಲೆ ಸೀರೆ ಧರಿಸಿ ನಡೆದರು. ಇದು ಎಲ್ಲರ ಕಣ್ಣು ಕುಕ್ಕಿದ್ದಂತೂ ನಿಜ.&lt;/p&gt;&lt;img&gt;&lt;p&gt;ಆದರೆ ಈ ಬಾರಿ, ಅವರ ಸೀರೆ ಮತ್ತು ಆಭರಣಗಳ ಜೊತೆಗೆ, ಎಲ್ಲರನ್ನೂ ಸೆಳೆದ ಇನ್ನೊಂದು ವಿಷಯವಿತ್ತು: ಅದು ಅವರ ಕೈಯಲ್ಲಿ ಮಾವು. ಇಶಾ ಕೈಯಲ್ಲಿ ಮಾವಿನೊಂದಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ತಕ್ಷಣ, ಅದು ಕೆಲವೇ ಸೆಕೆಂಡುಗಳಲ್ಲಿ ವಿಶ್ವಾದ್ಯಂತ ಚರ್ಚೆಯಾಗುತ್ತಿದೆ.&lt;/p&gt;&lt;img&gt;&lt;p&gt;ಇಶಾ ಅಂಬಾನಿ ಮೆಟ್ ಗಾಲಾಗೆ ನಿಜವಾದ ಮಾವನ್ನು ತಂದಿದ್ದಾರೆ ಎಂದು ಜನರು ಭಾವಿಸಿದ್ದರು, ಆದರೆ ಸತ್ಯ ಹೊರಹೊಮ್ಮುತ್ತಿದ್ದಂತೆ, ಜನರ ಆಸಕ್ತಿ ಹೆಚ್ಚಾಯಿತು. ವಾಸ್ತವವಾಗಿ, ಇದು ಕೇವಲ ಯಾವುದೇ ಮಾವಿನಹಣ್ಣು ಅಲ್ಲ, ಆದರೆ ಸುಮಾರು 20 ವರ್ಷಗಳ ಹಿಂದಿನ ವಿಶಿಷ್ಟ ಕಲಾಕೃತಿ, ಇದರ ಬೆಲೆ ನಿಮ್ಮನ್ನು ಆಘಾತಗೊಳಿಸುತ್ತದೆ. ಇಶಾ ಅವರ 'ಮಾವು' ಸಾಮಾನ್ಯವಾದದ್ದೇನೂ ಅಲ್ಲ. ಸಿಕ್ಕಾಪಟ್ಟೆ ರೋಚಕತೆ ಅದರಲ್ಲಿ ಇದೆ.&lt;/p&gt;&lt;img&gt;&lt;p&gt;ಇಶಾ ಅಂಬಾನಿ ರೆಡ್ ಕಾರ್ಪೆಟ್ ಮೇಲೆ ನಡೆದಾಗ, ಅವರು ನಿಜವಾದ ಮಾವನ್ನು ಹಿಡಿದಿದ್ದಾರೆಯೇ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದರು. ನೀವು ಅವರಲ್ಲಿ ಒಬ್ಬರಾಗಿದ್ದರೆ, ಅದು ದುಬಾರಿ ಕ್ಲಚ್ ಅಥವಾ ಚೀಲ ಎಂದು ನೀವು ಭಾವಿಸಿರಬಹುದು. ಆದರೆ ಅದು ಹಾಗಲ್ಲ. ವಾಸ್ತವವಾಗಿ, ಇದು ಕೇವಲ ಯಾವುದೇ ಸಾಮಾನ್ಯ ಹಣ್ಣು ಅಥವಾ ಚೀಲವಲ್ಲ, ಆದರೆ ಬೆಲೆಬಾಳುವ ಕಲಾಕೃತಿ.&lt;/p&gt;&lt;img&gt;&lt;p&gt;ಪ್ರಸಿದ್ಧ ಭಾರತೀಯ ಕಲಾವಿದ ಸುಬೋಧ್ ಗುಪ್ತಾ ರಚಿಸಿದ ಮಾವಿನ ಉಕ್ಕಿನ ಶಿಲ್ಪವನ್ನು ಅದಾಗಿದೆ. ರೆಡ್ ಕಾರ್ಪೆಟ್ ಮೇಲಿನ ಸಂಭಾಷಣೆಯ ಸಮಯದಲ್ಲಿ, ಇದು ಸುಬೋಧ್ ಗುಪ್ತಾ ಅವರ ಇತ್ತೀಚಿನ ಕಲಾಕೃತಿಯಲ್ಲ, ಬದಲಿಗೆ, ಇದನ್ನು ಸುಮಾರು 20 ವರ್ಷಗಳ ಹಿಂದೆ ರಚಿಸಲಾಗಿದೆ ಎಂದು ಇಶಾ ಸ್ವತಃ ಬಹಿರಂಗಪಡಿಸಿದರು. ಇದನ್ನು ನಿಜವಾದ ಮಾಗಿದ ಮಾವನ್ನು ಹೋಲುವಂತೆ ಕೈಯಿಂದ ಚಿತ್ರಿಸಲಾಗಿದೆ. ಇಶಾ ಅದನ್ನು ಪಾರದರ್ಶಕ ಚೀಲದೊಳಗೆ ಇಟ್ಟುಕೊಂಡಿದ್ದರು, ಅದು ಅವರಿಗೆ ಅದನ್ನು ಸುಲಭವಾಗಿ ಸಾಗಿಸಲು ಅವಕಾಶ ಮಾಡಿಕೊಟ್ಟಿತು.&lt;/p&gt;&lt;img&gt;&lt;p&gt;ಮೆಟ್ ಗಾಲಾ ರೆಡ್ ಕಾರ್ಪೆಟ್ ಮೇಲೆ ಇಶಾ ತುಂಬಾ ಸಾಧಾರಣವಾಗಿ ಪ್ರದರ್ಶಿಸಿದ ಮಾವಿನ ಬೆಲೆ ಕಡಿಮೆ ಅಲ್ಲ. ಇದರ ಬೆಲೆ ಸುಮಾರು $100,000 ಅಥವಾ ಸುಮಾರು ₹9.5 ಮಿಲಿಯನ್ ಅರ್ಥಾತ್​ ಸುಮಾರು 95 ಲಕ್ಷ ರೂಪಾಯಿ ಎಂದು ವರದಿಯಾಗಿದೆ. ಸುಬೋಧ್ ಗುಪ್ತಾ ರಚಿಸಿದ ಈ ಹೆಚ್ಚಿನ ಮೌಲ್ಯದ ಕಲಾಕೃತಿಯು ಭಾರತೀಯರು ಮತ್ತು ವಿದೇಶಿಯರ ಗಮನ ಸೆಳೆದಿದೆ. ಸುಬೋಧ್ ಗುಪ್ತಾ ತಮ್ಮ ಕಲೆಯಲ್ಲಿ ದೈನಂದಿನ ವಸ್ತುಗಳ ವಿಶಿಷ್ಟ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಉಕ್ಕಿನ ಶಿಲ್ಪವು ಸುಮಾರು 800 ಗ್ರಾಂ ತೂಗುತ್ತದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಈ 'ಮಾವಿನ' ಮೌಲ್ಯವು ಅದರ ವಸ್ತು ಅಥವಾ ನೋಟದಿಂದಾಗಿ ಮಾತ್ರವಲ್ಲ, ಅದರ ಹಿಂದಿನ ಕಲ್ಪನೆ ಮತ್ತು ಚಿಂತನೆಯ ಕಾರಣದಿಂದಾಗಿಯೂ ಇದೆ. ಇಶಾ ಭಾರತದ ರಾಷ್ಟ್ರೀಯ ಹಣ್ಣನ್ನು ತನ್ನ ಕಲೆಯಾಗಿ ಆರಿಸಿಕೊಳ್ಳುವ ಮೂಲಕ, ಸರಳತೆ ಅನನ್ಯವಾಗಿರಬಹುದು.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/isha-ambani-met-gala-2026-expensive-steel-mango-price-details-gaurav-gupta-gold-saree-look-95-lakhs-suc-h66vgxd"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಮೇ 9 ರಿಂದ 3 ದಿನಗಳ ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ ಆರಂಭ]]></title>
            <link>https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx</link>
            <guid isPermaLink="true">https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx</guid>
            <pubDate>Fri, 08 May 2026 19:22:46 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಮೇ 9 ರಿಂದ 11, 2026 ರವರೆಗೆ ದೇಶದ ಅತಿದೊಡ್ಡ 'ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ' ನಡೆಯಲಿದೆ. ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆಯುವ 12ನೇ ಆವೃತ್ತಿಯ B2B ಎಕ್ಸ್&zwnj;ಪೋದಲ್ಲಿ 10 ದೇಶಗಳ 150ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3xnvr1rp73aj203805case,imgname-international-agarbatti-perfume-expo-2026-1778248249087.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: ಸು&lt;/strong&gt;ಗಂಧ ದ್ರವ್ಯ ಮತ್ತು ಧೂಪದ್ರವ್ಯ ಉದ್ಯಮದ ಜಾಗತಿಕ ಕೇಂದ್ರವೆಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರವು ಈಗ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಿದ್ಧವಾಗಿದೆ. ಭಾರತದ ಅತಿದೊಡ್ಡ 'ಅಂತರರಾಷ್ಟ್ರೀಯ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಪ್ರದರ್ಶನ-2026'ರ (12th International Agarbatti &amp;amp; Perfume Expo) 12ನೇ ಆವೃತ್ತಿಯು ಇದೇ ಮೇ 9 ರಿಂದ 11 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ಅದ್ಧೂರಿಯಾಗಿ ನಡೆಯಲಿದೆ.&lt;/p&gt;&lt;h3&gt;&lt;strong&gt;ಸುಗಂಧ ರಾಜಧಾನಿಯಲ್ಲಿ ಉದ್ಯಮದ ಹಬ್ಬ:&lt;/strong&gt;&lt;/h3&gt;&lt;p&gt;ಇನ್ಸೆನ್ಸ್ ಮೀಡಿಯಾ ಆಯೋಜಿಸಿರುವ ಈ ಬೃಹತ್ ಬಿ2ಬಿ (B2B) ಪ್ರದರ್ಶನವು ಸುಗಂಧ ದ್ರವ್ಯ, ಧೂಪದ್ರವ್ಯ ಮತ್ತು ಪೂಜಾ ಉತ್ಪನ್ನಗಳ ವಲಯದಲ್ಲಿ ಭಾರತದ ಅತಿದೊಡ್ಡ ವೇದಿಕೆಯಾಗಿದೆ. ಈ ಹಿಂದೆ ಮುಂಬೈನಲ್ಲಿ ನಡೆದ 11ನೇ ಆವೃತ್ತಿಯ ಅಭೂತಪೂರ್ವ ಯಶಸ್ಸಿನ ನಂತರ, ಈಗ ಈ ಉದ್ಯಮದ ಉತ್ಪಾದನಾ ಹಬ್ ಆಗಿರುವ ಬೆಂಗಳೂರಿನಲ್ಲಿ ಈ ಎಕ್ಸ್&zwnj;ಪೋ ಆಯೋಜನೆಯಾಗಿದೆ. ಈ ಪ್ರದರ್ಶನವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಸಂಗಮವಾಗಿ ಹೊರಹೊಮ್ಮಲಿದೆ.&lt;/p&gt;&lt;h2&gt;&lt;strong&gt;ಜಾಗತಿಕ ಮಟ್ಟದ ಭಾಗವಹಿಸುವಿಕೆ:&lt;/strong&gt;&lt;/h2&gt;&lt;p&gt;ಈ ಮೂರು ದಿನಗಳ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಭಾರತ ಮಾತ್ರವಲ್ಲದೆ ಜಮೈಕಾ, ಶ್ರೀಲಂಕಾ ಮತ್ತು ಮಲೇಷ್ಯಾ ಸೇರಿದಂತೆ ವಿಶ್ವದ 10ಕ್ಕೂ ಹೆಚ್ಚು ದೇಶಗಳ ಉದ್ಯಮಿಗಳು, ಜಾಗತಿಕ ಖರೀದಿದಾರರು ಮತ್ತು ವ್ಯಾಪಾರ ಸಂದರ್ಶಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಗರಬತ್ತಿ, ಧೂಪ, ಸಾಂಬ್ರಾಣಿ, ಪೂಜಾ ಕಿಟ್&zwnj;ಗಳು, ಕರ್ಪೂರ ಮತ್ತು ಸುಗಂಧ ದ್ರವ್ಯ ತಯಾರಕರಿಗೆ ಇದು ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಒದಗಿಸಲಿದೆ.&lt;/p&gt;&lt;h3&gt;&lt;strong&gt;ಭವಿಷ್ಯದ ಪರಿಮಳ (Future of Fragrance):&lt;/strong&gt;&lt;/h3&gt;&lt;p&gt;ಈ ಬಾರಿಯ ಪ್ರದರ್ಶನವು 'ಭವಿಷ್ಯದ ಪರಿಮಳ' ಎಂಬ ಆಶಯದೊಂದಿಗೆ ನಡೆಯುತ್ತಿದೆ. ಸಾಂಪ್ರದಾಯಿಕ ಸುಗಂಧ ತಯಾರಿಕಾ ಪದ್ಧತಿಗಳನ್ನು ಇಂದಿನ ಆಧುನಿಕ ಉತ್ಪಾದನಾ ತಂತ್ರಜ್ಞಾನದೊಂದಿಗೆ ಜೋಡಿಸುವುದು ಈ ಎಕ್ಸ್&zwnj;ಪೋದ ಪ್ರಮುಖ ಗುರಿಯಾಗಿದೆ. ಇನ್ಸೆನ್ಸ್ ಮೀಡಿಯಾದ ಸಂಸ್ಥಾಪಕ ದೀಪಕ್ ಗೋಯಲ್ ಮಾತನಾಡಿ, 'ಬೆಂಗಳೂರು ಈ ಉದ್ಯಮದ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಕುಶಲಕರ್ಮಿಗಳು ಮತ್ತು ದೊಡ್ಡ ಪ್ರಮಾಣದ ತಯಾರಕರು ಜಾಗತಿಕ ಪಾಲುದಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಈ ಎಕ್ಸ್&zwnj;ಪೋ ಒಂದು ಸೇತುವೆಯಾಗಲಿದೆ' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರದರ್ಶನದ ಪ್ರಮುಖ ಮುಖ್ಯಾಂಶಗಳು:&lt;/strong&gt;&lt;/h2&gt;&lt;p&gt;&lt;strong&gt;ನೆಟ್&zwnj;ವರ್ಕಿಂಗ್: &lt;/strong&gt;ತಯಾರಕರು, ವಿತರಕರು ಮತ್ತು ಅಂತರರಾಷ್ಟ್ರೀಯ ಖರೀದಿದಾರರೊಂದಿಗೆ ನೇರ ಮಾತುಕತೆಗೆ ಅವಕಾಶ.&lt;/p&gt;&lt;p&gt;&lt;strong&gt;ಉದ್ಯಮದ ಒಳನೋಟ: &lt;/strong&gt;ಸುಗಂಧ ದ್ರವ್ಯದ ಪ್ರವೃತ್ತಿಗಳು ಮತ್ತು ಸುಸ್ಥಿರ ಪ್ಯಾಕೇಜಿಂಗ್ ಕುರಿತು ತಜ್ಞರಿಂದ ವಿಚಾರ ಸಂಕಿರಣಗಳು.&lt;/p&gt;&lt;p&gt;&lt;strong&gt;ತಾಂತ್ರಿಕ ಪ್ರದರ್ಶನ: &lt;/strong&gt;ಅಗರಬತ್ತಿ ತಯಾರಿಕಾ ಯಂತ್ರೋಪಕರಣಗಳು, ಕಚ್ಚಾ ವಸ್ತುಗಳು ಮತ್ತು ಪ್ಯಾಕೇಜಿಂಗ್ ಪರಿಹಾರಗಳ ಪ್ರದರ್ಶನ.&lt;/p&gt;&lt;p&gt;&lt;strong&gt;ಕಲಿಕೆ:&lt;/strong&gt; ಸುವಾಸನೆಯ ಪ್ರೊಫೈಲಿಂಗ್ ಮತ್ತು ಮಿಶ್ರಣ ತಂತ್ರಗಳ ಕುರಿತು ಸಂವಾದಾತ್ಮಕ ಕಾರ್ಯಾಗಾರಗಳು.&lt;/p&gt;&lt;h3&gt;&lt;strong&gt;ಕಾರ್ಯಕ್ರಮದ ವಿವರಗಳು:&lt;/strong&gt;&lt;/h3&gt;&lt;p&gt;&lt;strong&gt;ದಿನಾಂಕ:&lt;/strong&gt; ಮೇ 9&ndash;11, 2026&lt;/p&gt;&lt;p&gt;&lt;strong&gt;ಸ್ಥಳ:&lt;/strong&gt; ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ತುಮಕೂರು ರಸ್ತೆ.&lt;/p&gt;&lt;p&gt;&lt;strong&gt;ಸಮಯ:&lt;/strong&gt; ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ.&lt;/p&gt;&lt;p&gt;&lt;strong&gt;ನೋಂದಣಿ:&lt;/strong&gt; ಆನ್&zwnj;ಲೈನ್&zwnj;ನಲ್ಲಿ ಮೇ 8ರವರೆಗೆ ₹100, ಸ್ಥಳದಲ್ಲೇ ನೋಂದಣಿಗೆ ₹200 ಶುಲ್ಕವಿರುತ್ತದೆ.&lt;/p&gt;&lt;p&gt;ಹೆಚ್ಚಿನ ಮಾಹಿತಿಗಾಗಿ ಆಸಕ್ತರು www.incensemedia.in ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಬಹುದು ಅಥವಾ +91 9549404000 ಸಂಖ್ಯೆಯನ್ನು ಸಂಪರ್ಕಿಸಬಹುದು.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/international-agarbatti-perfume-expo-2026-bengaluru-biec-details-sat/articleshow-kvrdezx"/>
        </item>
        <item>
            <title><![CDATA[ನೀವು ಶ್ರೀಮಂತರಾಗಬೇಕೇ? ಹಾಗಿದ್ರೆ ಈ 5 ತಪ್ಪುಗಳನ್ನು ಮಾಡಲೇಬೇಡಿ]]></title>
            <link>https://kannada.asianetnews.com/gallery/business/five-common-money-mistakes-that-keep-you-poor-suh-n1iyetw</link>
            <guid isPermaLink="true">https://kannada.asianetnews.com/gallery/business/five-common-money-mistakes-that-keep-you-poor-suh-n1iyetw</guid>
            <pubDate>Tue, 05 May 2026 18:18:33 +0530</pubDate>
            <description><![CDATA[&lt;p&gt;Money Mistakes ಶ್ರೀಮಂತರು ಸಾಮಾನ್ಯವಾಗಿ ಈ 5 ಹಣಕಾಸಿನ ತಪ್ಪುಗಳನ್ನು ಮಾಡುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೋಟ್ಯಾಧಿಪತಿಯಾಗಲು, ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಶ್ರೀಮಂತರು ಮತ್ತಷ್ಟು ಸಂಪತ್ತು ಗಳಿಸಲು ಅನುಸರಿಸುವ ರಹಸ್ಯ ಮಾರ್ಗವೂ ಇದೇ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw1sbj92y1xjete2hrv2zez,imgname-wealthy-lifestyle--1--1777984122441.jpg" type="image/jpeg" height="390" width="690"/>
            <content:encoded><![CDATA[&lt;p&gt;Money Mistakes ಶ್ರೀಮಂತರು ಸಾಮಾನ್ಯವಾಗಿ ಈ 5 ಹಣಕಾಸಿನ ತಪ್ಪುಗಳನ್ನು ಮಾಡುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ ಕೋಟ್ಯಾಧಿಪತಿಯಾಗಲು, ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಶ್ರೀಮಂತರು ಮತ್ತಷ್ಟು ಸಂಪತ್ತು ಗಳಿಸಲು ಅನುಸರಿಸುವ ರಹಸ್ಯ ಮಾರ್ಗವೂ ಇದೇ ಆಗಿದೆ.&lt;/p&gt;&lt;img&gt;ಮಧ್ಯಮ ವರ್ಗದವರು ತಾವು ಶ್ರೀಮಂತರು ಎಂದು ತೋರಿಸಿಕೊಳ್ಳಲು ದುಬಾರಿ ಕಾರು, ಬ್ರಾಂಡೆಡ್ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ, ನಿಜವಾದ ಶ್ರೀಮಂತರು 'ಕಣ್ಣಿಗೆ ಕಾಣದ ಸಂಪತ್ತನ್ನು' (Invisible Wealth) ಹೆಚ್ಚಿಸುವುದರ ಮೇಲೆ ಗಮನ ಹರಿಸುತ್ತಾರೆ. ಅವರು ಹಳೆಯ ಕಾರು ಓಡಿಸಿದರೂ, ಅವರ ಬ್ಯಾಂಕ್ ಖಾತೆ ಬೆಳೆಯುತ್ತಲೇ ಇರುತ್ತದೆ. ಅವರಿಗೆ ಆಡಂಬರಕ್ಕಿಂತ 'ಸ್ವಾತಂತ್ರ್ಯ' ಮುಖ್ಯ.&lt;img&gt;ಅನೇಕರು ತಮ್ಮ ತಿಂಗಳ ಸಂಬಳವನ್ನೇ ಸಂಪೂರ್ಣವಾಗಿ ನಂಬಿಕೊಂಡಿರುತ್ತಾರೆ. ಆದರೆ, ಕೋಟ್ಯಾಧಿಪತಿಗಳು ಸರಾಸರಿ 7 ವಿವಿಧ ಆದಾಯದ ಮೂಲಗಳನ್ನು (Passive Income) ಹೊಂದಿರುತ್ತಾರೆ. ಒಂದು ದಾರಿ ಮುಚ್ಚಿದರೂ, ಉಳಿದ ಮೂಲಗಳು ಅವರನ್ನು ಕಾಪಾಡುತ್ತವೆ. ಶೇರು ಮಾರುಕಟ್ಟೆ ಲಾಭ, ಬಾಡಿಗೆ ಆದಾಯ, ವ್ಯಾಪಾರದಲ್ಲಿನ ಹೂಡಿಕೆಗಳು ಇದರಲ್ಲಿ ಸೇರಿವೆ.&lt;img&gt;ಹಣವನ್ನು ಬ್ಯಾಂಕಿನಲ್ಲಿ ಹಾಗೆಯೇ ಇಟ್ಟರೆ ಹಣದುಬ್ಬರದಿಂದ (Inflation) ಅದರ ಮೌಲ್ಯ ಕಡಿಮೆಯಾಗುತ್ತದೆ ಎಂಬುದು ಅವರಿಗೆ ತಿಳಿದಿರುತ್ತದೆ. ಸಾಮಾನ್ಯ ಜನರು ಹಣವನ್ನು ಉಳಿತಾಯ (Saving) ಮಾಡುತ್ತಾರೆ. ಆದರೆ ಶ್ರೀಮಂತರು ಹಣವನ್ನು ಹೂಡಿಕೆ (Invest) ಮಾಡುತ್ತಾರೆ. ನೀವು ಹಣಕ್ಕಾಗಿ ದುಡಿಯುವಂತೆ, ಹಣವೂ ನಿಮಗಾಗಿ 24 ಗಂಟೆಗಳ ಕಾಲ ದುಡಿಯಬೇಕು ಎನ್ನುವುದೇ ಅವರ ತತ್ವ.&lt;img&gt;ಶ್ರೀಮಂತರಿಗೆ ಮಾನಸಿಕ ಒತ್ತಡ ಅಥವಾ ಅತಿಯಾದ ಸಂತೋಷದ ಸಮಯದಲ್ಲಿ ವಸ್ತುಗಳನ್ನು ಖರೀದಿಸುವ ಅಭ್ಯಾಸವಿರುವುದಿಲ್ಲ. ಏನನ್ನಾದರೂ ಖರೀದಿಸುವ ಮೊದಲು, 'ಇದು ನನ್ನ ಅಗತ್ಯವೇ ಅಥವಾ ಕೇವಲ ಆಸೆಯೇ?' ಎಂದು ಯೋಚಿಸುತ್ತಾರೆ. ವಿಶೇಷವಾಗಿ, ಅನಗತ್ಯ ಸಾಲ ಮಾಡಿ ಆಸ್ತಿಗಳನ್ನು ಖರೀದಿಸುವುದಿಲ್ಲ. ಉದಾಹರಣೆಗೆ, ಸಾಲದಲ್ಲಿ ಫೋನ್ ಖರೀದಿಸುವುದು ಅವರಿಗೆ ಇಷ್ಟವಾಗದ ವಿಚಾರ.&lt;img&gt;'ನನಗೆ ಎಲ್ಲವೂ ತಿಳಿದಿದೆ' ಎಂದು ಭಾವಿಸುವುದೇ ಅತಿದೊಡ್ಡ ಹಣಕಾಸಿನ ತಪ್ಪು. ಶ್ರೀಮಂತರು ಯಾವಾಗಲೂ ಹಣದ ಬಗ್ಗೆ ಪುಸ್ತಕಗಳನ್ನು ಓದುವುದು ಮತ್ತು ಹೊಸ ಹೂಡಿಕೆ ವಿಧಾನಗಳನ್ನು ಕಲಿಯುವುದರಲ್ಲಿ ಸಮಯ ಕಳೆಯುತ್ತಾರೆ. ಅವರು ಹಣಕಾಸು ಸಲಹೆಗಾರರ ಸಲಹೆ ಪಡೆಯಲು ಎಂದಿಗೂ ಹಿಂಜರಿಯುವುದಿಲ್ಲ.]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/five-common-money-mistakes-that-keep-you-poor-suh-n1iyetw"/>
        </item>
        <item>
            <title><![CDATA[ಈ ಬ್ಯುಸಿನೆಸ್‌ಗಳನ್ನುಮಾಡಿ... IAS, IPS ಅಧಿಕಾರಿಗಳಿಗಿಂತ ಹೆಚ್ಚು ಸಂಪಾದಿಸಬಹುದು!]]></title>
            <link>https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1</link>
            <guid isPermaLink="true">https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1</guid>
            <pubDate>Thu, 07 May 2026 13:17:55 +0530</pubDate>
            <description><![CDATA[&lt;p&gt;High Income Street Businesses ದೊಡ್ಡ ಓದು, ಆಫೀಸ್ ಕೆಲಸ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಇಲ್ಲದೆಯೂ ಕೆಲವು ಬೀದಿ ಬದಿಯ ವ್ಯಾಪಾರಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತವೆ. ಅತಿ ಹೆಚ್ಚು ಲಾಭ ತರುವ ಆ ವ್ಯಾಪಾರಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn2219beg77f790yx3ed017d,imgname-new-project---2026-03-31t190403.407-1774964483438.jpg" type="image/jpeg" height="390" width="690"/>
            <content:encoded><![CDATA[&lt;p&gt;High Income Street Businesses ದೊಡ್ಡ ಓದು, ಆಫೀಸ್ ಕೆಲಸ ಅಥವಾ ಕೋಟ್ಯಂತರ ರೂಪಾಯಿ ಬಂಡವಾಳ ಇಲ್ಲದೆಯೂ ಕೆಲವು ಬೀದಿ ಬದಿಯ ವ್ಯಾಪಾರಗಳು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ತಂದುಕೊಡುತ್ತವೆ. ಅತಿ ಹೆಚ್ಚು ಲಾಭ ತರುವ ಆ ವ್ಯಾಪಾರಗಳು ಯಾವುವು ಗೊತ್ತಾ? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;ಬೀದಿ ಬದಿಯ ಫುಡ್ ಸ್ಟಾಲ್&zwnj;ಗಳು ಇಂದು ಅತಿ ಹೆಚ್ಚು ಆದಾಯ ತರುವ ಉದ್ಯಮಗಳಲ್ಲಿ ಒಂದಾಗಿವೆ. ಇಡ್ಲಿ, ದೋಸೆ, ಪರೋಟ, ಚಿಕನ್ ರೈಸ್, ಶವರ್ಮಾ, ಜ್ಯೂಸ್&zwnj;ನಂತಹ ತಿನಿಸುಗಳನ್ನು ಮಾರುವ ಅಂಗಡಿಗಳಿಗೆ ಪ್ರತಿದಿನ ನೂರಾರು ಗ್ರಾಹಕರು ಬರುತ್ತಾರೆ. ಅದರಲ್ಲೂ ರಾತ್ರಿ &amp;nbsp;ಫುಡ್&zwnj; &amp;nbsp;ಸ್ಟಾಲ್ ಯುವಜನರ ಭಾರಿ ಬೇಡಿಕೆಯಿದೆ. ಕೆಲವು ಪ್ರಸಿದ್ಧ ಸ್ಟ್ರೀಟ್ ಫುಡ್ ಅಂಗಡಿಗಳು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸುತ್ತವೆ.&lt;/p&gt;&lt;img&gt;ಒಂದು ಸಣ್ಣ ಟೀ ಅಂಗಡಿ ಕೂಡ, ಸರಿಯಾದ ಜಾಗದಲ್ಲಿದ್ದರೆ ಚಿನ್ನದ ಗಣಿಯಂತೆ ಆಗಬಲ್ಲದು. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕಾಲೇಜು ಬಳಿಯಿರುವ ಟೀ ಸ್ಟಾಲ್&zwnj;ಗಳಿಗೆ ಯಾವಾಗಲೂ ಜನಜಂಗುಳಿ ಇರುತ್ತದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ವ್ಯವಹಾರದಲ್ಲಿ ಪ್ರತಿದಿನದ ಹಣದ ಹರಿವು ಹೆಚ್ಚಾಗಿರುತ್ತದೆ. ಕೆಲವರು ಟೀ ಅಂಗಡಿಯನ್ನೇ ಬ್ರ್ಯಾಂಡ್ ಮಾಡಿ, ಹಲವು ಶಾಖೆಗಳನ್ನು ತೆರೆದು ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ.&lt;img&gt;ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳಿಗೆ ಸದಾ ಬೇಡಿಕೆ ಇರುತ್ತದೆ. ಬೀದಿ ಬದಿಯಲ್ಲಿ ಚಾರ್ಜರ್, ಹೆಡ್&zwnj;ಫೋನ್, ಮೊಬೈಲ್ ಕವರ್, ಟೆಂಪರ್ಡ್ ಗ್ಲಾಸ್&zwnj;ನಂತಹ ವಸ್ತುಗಳನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಹೆಚ್ಚು ಓಡಾಡುವ ಪ್ರದೇಶಗಳಲ್ಲಿ ಈ ವ್ಯಾಪಾರ ವೇಗವಾಗಿ ಬೆಳೆಯುತ್ತದೆ.&lt;img&gt;&lt;p&gt;ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದರಿಂದ, ಹಣ್ಣಿನ ರಸ ಮತ್ತು ಹಣ್ಣುಗಳ ಮಾರಾಟದ ಉದ್ಯಮಕ್ಕೂ ಉತ್ತಮ ಬೇಡಿಕೆ ಬಂದಿದೆ. ಫ್ರೆಶ್ ಜ್ಯೂಸ್, ಫ್ರೂಟ್ ಸಲಾಡ್, ಕಬ್ಬಿನ ಹಾಲನ್ನುನೀಡಿದರೆ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ. ಬೇಸಿಗೆ ಕಾಲದಲ್ಲಿ ಈ ವ್ಯಾಪಾರದ ಆದಾಯ ಮತ್ತಷ್ಟು ಹೆಚ್ಚಾಗುತ್ತದೆ.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/high-income-street-businesses-that-beat-officer-salaries-suh-n2zc2h1"/>
        </item>
        <item>
            <title><![CDATA['ತನ್ನ ಹಣವನ್ನೇ ಸರಿಯಾಗಿ ನಿಭಾಯಿಸದ ವಿಜಯ್‌, ತಮಿಳುನಾಡಿನ ಹಣಕಾಸು ಹೇಗೆ ನಿಭಾಯಿಸ್ತಾರೋ?' ಟ್ರೋಲ್‌ ಆದ ದಳಪತಿ ಇನ್ವೆಸ್ಟ್‌ಮೆಂಟ್‌!]]></title>
            <link>https://kannada.asianetnews.com/business/vijay-tvk-net-worth-300-crore-cash-warren-buffett-troll-tamil-nadu-election-san/articleshow-ockdxp6</link>
            <guid isPermaLink="true">https://kannada.asianetnews.com/business/vijay-tvk-net-worth-300-crore-cash-warren-buffett-troll-tamil-nadu-election-san/articleshow-ockdxp6</guid>
            <pubDate>Wed, 06 May 2026 15:56:18 +0530</pubDate>
            <description><![CDATA[ನಟ ಹಾಗೂ ರಾಜಕಾರಣಿ ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂ. ಆಗಿದ್ದು, ಇದರಲ್ಲಿ 313 ಕೋಟಿ ರೂ.ಗಳನ್ನು ಬ್ಯಾಂಕ್ ಠೇವಣಿಗಳಲ್ಲೇ ಇರಿಸಿದ್ದಾರೆ. ಮ್ಯೂಚುವಲ್ ಫಂಡ್ ಅಥವಾ ಷೇರುಗಳ ಬದಲು ಎಫ್&zwnj;ಡಿ ಮೇಲೆ ನಂಬಿಕೆ ಇಟ್ಟಿರುವ ಅವರ ಈ ಹೂಡಿಕೆ ಶೈಲಿಯು ನೆಟ್ಟಿಗರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqyabwx5r14e0y1phahq7kgb,imgname-thalapathy-vijay-tamil-nadu-cm-2026-net-worth-assets-car-collection-tvk-property-affidavit-6-1778060227493.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಮೇ.6): &lt;/strong&gt;ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿರುವ ವಿಜಯ್ ಅವರ ಒಟ್ಟು ಆಸ್ತಿ ಮೌಲ್ಯ 624 ಕೋಟಿ ರೂಪಾಯಿ. ಇದರಲ್ಲಿ 404 ಕೋಟಿ ರೂಪಾಯಿ ಚರಾಸ್ತಿ ಹಾಗೂ 220 ಕೋಟಿ ರೂಪಾಯಿ ಸ್ಥಿರಾಸ್ತಿ ಸೇರಿದೆ. 2024-25ರ ಆರ್ಥಿಕ ವರ್ಷದಲ್ಲಿ ಅವರು 184.53 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದು, ಇದು ಸ್ವಯಂ ಉದ್ಯೋಗ, ಬಾಡಿಗೆ ಮತ್ತು ಬಡ್ಡಿಯಿಂದ ಬಂದ ಆದಾಯವಾಗಿದೆ. ಆದರೆ, ಎಲ್ಲರ ಗಮನ ಸೆಳೆದಿರುವುದು ಅವರು ಬ್ಯಾಂಕ್&zwnj;ಗಳಲ್ಲಿ ಇಟ್ಟಿರುವ ನಗದು ಮೊತ್ತ. ಮಾರ್ಚ್ 27, 2026ರ ಅಂಕಿಅಂಶದಂತೆ, ಸಾಲಿಗ್ರಾಮದ ಇಂಡಿಯನ್ ಓವರ್&zwnj;ಸೀಸ್ ಬ್ಯಾಂಕ್ (IOB) ಶಾಖೆಯ ಒಂದೇ ಉಳಿತಾಯ ಖಾತೆಯಲ್ಲಿ ಬರೋಬ್ಬರಿ 213.36 ಕೋಟಿ ರೂಪಾಯಿ ಹಣವಿದೆ!&lt;/p&gt;&lt;p&gt;ಇದಿಷ್ಟೇ ಅಲ್ಲದೆ, ವಿಜಯ್ ಅವರು ನಾಲ್ಕು ವಿವಿಧ ಬ್ಯಾಂಕ್&zwnj;ಗಳಲ್ಲಿ ಒಟ್ಟು 100 ಕೋಟಿ ರೂಪಾಯಿಗಳನ್ನು ಫಿಕ್ಸೆಡ್ ಡಿಪಾಸಿಟ್ (FD) ಮಾಡಿದ್ದಾರೆ. ಆಕ್ಸಿಸ್ ಬ್ಯಾಂಕ್&zwnj;ನಲ್ಲಿ 40 ಕೋಟಿ ರೂ., ಐಒಬಿಯಲ್ಲಿ 25 ಕೋಟಿ ರೂ., ಎಚ್&zwnj;ಡಿಎಫ್&zwnj;ಸಿಯಲ್ಲಿ 20 ಕೋಟಿ ರೂ. ಹಾಗೂ ಎಸ್&zwnj;ಬಿಐನಲ್ಲಿ 15 ಕೋಟಿ ರೂಪಾಯಿಗಳನ್ನು ಇರಿಸಿದ್ದಾರೆ. ಅಂದರೆ, ಮಾರುಕಟ್ಟೆಯ ಯಾವುದೇ ರಿಸ್ಕ್ ಇಲ್ಲದ ಬ್ಯಾಂಕ್ ಡಿಪಾಸಿಟ್&zwnj;ಗಳಲ್ಲೇ ಅವರ 313 ಕೋಟಿ ರೂಪಾಯಿ ಹಣ ಸುರಕ್ಷಿತವಾಗಿದೆ. ಇಂದಿನ ಕಾಲದಲ್ಲಿ ಹಣಕಾಸು ತಜ್ಞರು ಎಸ್&zwnj;ಐಪಿ (SIP) ಅಥವಾ ಮ್ಯೂಚುವಲ್ ಫಂಡ್&zwnj;ಗಳಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿದ್ದರೆ, ವಿಜಯ್ ಮಾತ್ರ ಹಳೆಯ ಮಾದರಿಯ ಎಫ್&zwnj;ಡಿ ಮೇಲೆ ನಂಬಿಕೆ ಇಟ್ಟಿರುವುದನ್ನು ಕಂಡು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.&lt;/p&gt;&lt;p&gt;&quot;ವಾರೆನ್ ಬಫೆಟ್ ಹೇಗೆ 300 ಬಿಲಿಯನ್ ಡಾಲರ್ ನಗದಿನ ಮೇಲೆ ಕುಳಿತಿದ್ದಾರೋ, ಹಾಗೆಯೇ ದಳಪತಿ ವಿಜಯ್ ಕೂಡ 300 ಕೋಟಿ ನಗದಿನ ಮೇಲೆ ಕುಳಿತಿದ್ದಾರೆ, ಅವರು ನಿಜಕ್ಕೂ ವಿಷನರಿ&quot; ಎಂದು ಎಕ್ಸ್&zwnj;ನಲ್ಲಿ ಒಬ್ಬ ಯೂಸರ್&zwnj; ತಮಾಷೆ ಮಾಡಿದ್ದಾರೆ. ವಿಜಯ್ ಅವರ ಷೇರು ಮಾರುಕಟ್ಟೆ ಹೂಡಿಕೆ ಅತ್ಯಂತ ಕನಿಷ್ಠವಾಗಿದ್ದು, ಕೇವಲ 19.37 ಲಕ್ಷ ರೂಪಾಯಿ ಮಾತ್ರ ಷೇರುಗಳಲ್ಲಿದೆ. ಇದು ಅವರ ಒಟ್ಟು ಆಸ್ತಿಯ ಶೇ. 0.04 ಕ್ಕಿಂತಲೂ ಕಡಿಮೆ. ಉಳಿದಂತೆ ಅವರು ಮ್ಯೂಚುವಲ್ ಫಂಡ್ ಅಥವಾ ಬಾಂಡ್&zwnj;ಗಳಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ.&lt;/p&gt;&lt;h2&gt;&lt;strong&gt;ತಮಿಳುನಾಡಿನ ವಾರನ್&zwnj; ಬಫೆಟ್&zwnj; ಅಂತೆ ವಿಜಯ್&zwnj;&lt;/strong&gt;&lt;/h2&gt;&lt;p&gt;ನೆಟ್ಟಿಗರ ಈ ಚರ್ಚೆಯಲ್ಲಿ ಹಲವರು ಹೂಡಿಕೆಯ ಸಲಹೆಗಳನ್ನೂ ನೀಡಿದ್ದಾರೆ. &quot;ಪಿಎಸ್&zwnj;ಯು ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ನಿಯಮಿತ ಆದಾಯದ ಜೊತೆಗೆ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿತ್ತು&quot; ಎಂದು ಕೆಲವರು ಹೇಳಿದರೆ, ಇನ್ನು ಕೆಲವರು &quot;ವಿಜಯ್ ಹಣಕಾಸು ತಜ್ಞರ ಪಾಲಿನ ದುಸ್ವಪ್ನ&quot; ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ವಿಜಯ್&zwnj; ತನ್ನ ಹಣವನ್ನೇ ಸರಿಯಾಗಿ ನಿಭಾಯಿಸಿಲ್ಲ, ಹಣದುಬ್ಬರ, ರಿಟರ್ನ್ಸ್&zwnj; ಯಾವುದನ್ನೂ ಲೆಕ್ಕಹಾಕದೇ ಬರೀ ಎಫ್&zwnj;ಡಿಯಲ್ಲಿ ಇನ್ವೆಸ್ಟ್&zwnj; ಮಾಡಿದ್ದಾರೆ. ಹೀಗಿರುವ ವ್ಯಕ್ತಿ ತಮಿಳುನಾಡಿನ ಹಣಕಾಸು ವ್ಯವಸ್ಥೆ ಹೇಗೆ ನಿಭಾಯಿಸ್ತಾರೋ' ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ. ತಮಿಳರು ಸಾಮಾನ್ಯವಾಗಿ ಚಿನ್ನ ಮತ್ತು ಆಸ್ತಿಯ ಮೇಲೆ ಹೂಡಿಕೆ ಮಾಡಲು ಇಷ್ಟಪಡುತ್ತಾರೆ ಎಂಬ ಮಾತು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.&lt;/p&gt;&lt;p&gt;ವಿಜಯ್ ಅವರ 220 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳ ಪೈಕಿ ನೀಲಂಕರೈ, ಸಾಲಿಗ್ರಾಮ, ಮೈಲಾಪುರ ಮತ್ತು ಎಗ್ಮೋರ್&zwnj;ನಲ್ಲಿ 115 ಕೋಟಿ ರೂ. ಮೌಲ್ಯದ 10 ವಸತಿ ಕಟ್ಟಡಗಳಿವೆ. ತ್ಯಾಗರಾಯ ನಗರ ಮತ್ತು ಶೋಲಿಂಗನಲ್ಲೂರು ಸೇರಿದಂತೆ ವಿವಿಧೆಡೆ 82.8 ಕೋಟಿ ರೂ. ಮೌಲ್ಯದ ವಾಣಿಜ್ಯ ಮಳಿಗೆಗಳಿವೆ. ಕೊಪ್ಪೂರು ಗ್ರಾಮದಲ್ಲಿ ಅವರು 2023ರಲ್ಲಿ 35.81 ಕೋಟಿ ರೂಪಾಯಿಗೆ ಖರೀದಿಸಿದ 2.30 ಎಕರೆ ಜಮೀನು ಅವರ ದೊಡ್ಡ ವಾಣಿಜ್ಯ ಆಸ್ತಿಯಾಗಿದೆ. ಇದರೊಂದಿಗೆ ಪೋರೂರ್ ಮತ್ತು ನೀಲಂಕರೈನಲ್ಲಿ 22 ಕೋಟಿ ರೂಪಾಯಿ ಮೌಲ್ಯದ ಕೃಷಿಯೇತರ ಜಮೀನುಗಳನ್ನು ಅವರು ಹೊಂದಿದ್ದಾರೆ.&lt;/p&gt;&lt;h3&gt;&lt;strong&gt;ವಿಜಯ್&zwnj; ಬಳಿಯ ಕಾರುಗಳ ಸಂಗ್ರಹ&lt;/strong&gt;&lt;/h3&gt;&lt;ul&gt; &lt;li&gt;₹3.01 ಕೋಟಿ &rarr; ಲೆಕ್ಸಸ್ 350&lt;/li&gt; &lt;li&gt;₹6 ಕೋಟಿ &rarr; ಟಾಟಾ ಕ್ಯಾರವಾನ್&lt;/li&gt; &lt;li&gt;₹2 ಕೋಟಿ &rarr; BMW i7&lt;/li&gt; &lt;li&gt;₹1.63 ಕೋಟಿ &rarr; ಟೊಯೋಟಾ ವೆಲ್&zwnj;ಫೈರ್&lt;/li&gt; &lt;li&gt;₹5.35 ಲಕ್ಷ &rarr; ಮಾರುತಿ ಸ್ವಿಫ್ಟ್&lt;/li&gt; &lt;li&gt;₹67,400 &rarr; TVS XL ಸೂಪರ್&lt;/li&gt;&lt;/ul&gt;&lt;h3&gt;&lt;strong&gt;ವಿಜಯ್&zwnj; ಅವರ ಸಾಲಗಳು&lt;/strong&gt;&lt;/h3&gt;&lt;ul&gt; &lt;li&gt;₹12.6 ಕೋಟಿ &rarr; ಪತ್ನಿಗೆ ಸಾಲ&lt;/li&gt; &lt;li&gt;₹20 ಕೋಟಿ &rarr; A L P ಆಂಟೋನಿಯಸ್ ಬ್ರಿಟ್ಟೊ&lt;/li&gt; &lt;li&gt;₹20 ಕೋಟಿ &rarr; ಕೋಕಿಲಾಂಬಲ್ ಶೈಕ್ಷಣಿಕ ಪ್ರತಿಷ್ಠಾನ&lt;/li&gt; &lt;li&gt;₹5.84 ಕೋಟಿ &rarr; ವಿದ್ಯಾ ಚಾರಿಟೇಬಲ್ ಟ್ರಸ್ಟ್&lt;/li&gt; &lt;li&gt;₹5 ಕೋಟಿ &rarr; ವಿ ರವಿಚಂದ್ರನ್&lt;/li&gt; &lt;li&gt;₹3 ಕೋಟಿ &rarr; ಎನ್. ಆನಂದ್&lt;/li&gt; &lt;li&gt;₹2.34 ಕೋಟಿ &rarr; ಗ್ರೀನ್ ಲೀಪ್ ಇನ್ಫೋಟೆಕ್&lt;/li&gt;&lt;/ul&gt;&lt;h3&gt;&lt;strong&gt;ವಿಜಯ್&zwnj; ಅವರ ಆಸ್ತಿ ಹೂಡಿಕೆಗಳು&lt;/strong&gt;&lt;/h3&gt;&lt;ul&gt; &lt;li&gt;₹115 ಕೋಟಿ &rarr; ವಸತಿ&lt;/li&gt; &lt;li&gt;₹82.8 ಕೋಟಿ &rarr; ವಾಣಿಜ್ಯ&lt;/li&gt; &lt;li&gt;₹35.81 ಕೋಟಿ &rarr; ಕೊಪ್ಪಳದಲ್ಲಿ 2.30 ಎಕರೆ&lt;/li&gt; &lt;li&gt;₹22 ಕೋಟಿ &rarr; ಕೃಷಿಯೇತರ ಭೂಮಿ&lt;/li&gt;&lt;/ul&gt;&lt;h3&gt;&lt;strong&gt;ವಿಜಯ್ ಬಳಿ ಇರುವ ಚಿನ್ನ&lt;/strong&gt;&lt;/h3&gt;&lt;ul&gt; &lt;li&gt;₹1.20 ಕೋಟಿ &rarr; 883 ಗ್ರಾಂ ಚಿನ್ನ ಮತ್ತು ಬೆಳ್ಳಿ&lt;/li&gt;&lt;/ul&gt;&lt;h3&gt;&lt;strong&gt;ವಿಜಯ್ ಪತ್ನಿ ಸಂಗೀತ ಬಳಿ ಇರುವ ಚಿನ್ನ / ಆಭರಣ:&lt;/strong&gt;&lt;/h3&gt;&lt;ul&gt; &lt;li&gt;₹4.07 ಕೋಟಿ &rarr; 3,132 ಗ್ರಾಂ ಚಿನ್ನ&lt;/li&gt; &lt;li&gt;₹4.75 ಲಕ್ಷ &rarr; 2 ಕೆಜಿ ಬೆಳ್ಳಿ&lt;/li&gt; &lt;li&gt;₹1 ಕೋಟಿ &rarr; 134.91 ಕ್ಯಾರೆಟ್ ವಜ್ರಗಳು&lt;/li&gt;&lt;/ul&gt;&lt;p&gt;&lt;strong&gt;ವಿಜಯ್&zwnj; ಅವರ ಆದಾಯ ಮೂಲಗಳು:&lt;/strong&gt; ಚಲನಚಿತ್ರಗಳು, ಬಡ್ಡಿ ಆದಾಯ, ಬಾಡಿಗೆ ಆದಾಯ&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/vijay-tvk-net-worth-300-crore-cash-warren-buffett-troll-tamil-nadu-election-san/articleshow-ockdxp6"/>
        </item>
        <item>
            <title><![CDATA[Met Gala: 1800 ಕ್ಯಾರಟ್​ ವಜ್ರದಲ್ಲಿ ಮಿಂಚಿದ ಇಶಾ ಅಂಬಾನಿ- ರಾಜ ಮನೆತನದ ಆಭರಣ: ಕ್ಯೂಟ್​ ಫೋಟೋಸ್​ ಇಲ್ಲಿವೆ]]></title>
            <link>https://kannada.asianetnews.com/gallery/fashion/isha-ambani-dazzles-in-1800-carat-diamond-saree-and-ornaments-suc-olf52lf</link>
            <guid isPermaLink="true">https://kannada.asianetnews.com/gallery/fashion/isha-ambani-dazzles-in-1800-carat-diamond-saree-and-ornaments-suc-olf52lf</guid>
            <pubDate>Wed, 06 May 2026 16:30:10 +0530</pubDate>
            <description><![CDATA[&lt;p&gt;ಮೆಟ್ ಗಾಲಾ ಕಾರ್ಯಕ್ರಮದಲ್ಲಿ, ಇಶಾ ಅಂಬಾನಿ ಗೌರವ್ ಗುಪ್ತಾ ವಿನ್ಯಾಸದ ಸೀರೆಯೊಂದಿಗೆ ಕಂಗೊಳಿಸಿದರು. &amp;nbsp;ಆಭರಣಗಳು ಕೇವಲ ಫ್ಯಾಷನ್ ಆಗಿರದೆ, ಹೈದರಾಬಾದ್ ನಿಜಾಮ ಮತ್ತು ಮೊಘಲ್ ಚಕ್ರವರ್ತಿಗಳಿಗೆ ಸೇರಿದ ಐತಿಹಾಸಿಕ ಮಹತ್ವ ಹೊಂದಿದ್ದವು, ಈ ಮೂಲಕ ಭಾರತದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyew4hf4ee0nrpxqwsb7fe3,imgname-isha-ambani-1778064953903.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಟ್ ಗಾಲಾ ಕಾರ್ಯಕ್ರಮದಲ್ಲಿ, ಇಶಾ ಅಂಬಾನಿ ಗೌರವ್ ಗುಪ್ತಾ ವಿನ್ಯಾಸದ ಸೀರೆಯೊಂದಿಗೆ ಕಂಗೊಳಿಸಿದರು. &amp;nbsp;ಆಭರಣಗಳು ಕೇವಲ ಫ್ಯಾಷನ್ ಆಗಿರದೆ, ಹೈದರಾಬಾದ್ ನಿಜಾಮ ಮತ್ತು ಮೊಘಲ್ ಚಕ್ರವರ್ತಿಗಳಿಗೆ ಸೇರಿದ ಐತಿಹಾಸಿಕ ಮಹತ್ವ ಹೊಂದಿದ್ದವು, ಈ ಮೂಲಕ ಭಾರತದ ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಿದರು.&lt;/p&gt;&lt;img&gt;&lt;p&gt;ಅಮೆರಿಕದ ನ್ಯೂಯಾರ್ಕ್​ನಲ್ಲಿ ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯುವ ಉನ್ನತ ಮಟ್ಟದ ನಿಧಿ ಸಂಗ್ರಹಣೆ ಕಾರ್ಯಕ್ರಮ ಮೆಟ್ ಗಾಲಾಕ್ಕಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡುತ್ತಾರೆ. ಇದಕ್ಕೆ ಕಾರಣ, ಪ್ರಪಂಚದಾದ್ಯಂತದ ತಾರೆಯರು ತಮ್ಮ ಸೃಜನಶೀಲತೆ ಮತ್ತು ಶೈಲಿಯನ್ನು ಪ್ರದರ್ಶಿಸುತ್ತಾರೆ. ಈ ಬಾರಿ ನಡೆದ ಮೆಟ್​ ಗಾಲಾದಲ್ಲಿ ಕೈಲೀ ಜೆನ್ನರ್ ಮತ್ತು ಕಿಮ್ ಕಾರ್ಡಶಿಯಾನ್ ಅವರಂತಹ ಜಾಗತಿಕ ಸೆಲೆಬ್ರಿಟಿಗಳಲ್ಲಿ ಭಾರತವನ್ನು ಬಲವಾಗಿ ಪ್ರತಿನಿಧಿಸುವ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ, ಫ್ಯಾಷನ್ ಮಾತ್ರವಲ್ಲದೆ ಇತಿಹಾಸ ಮತ್ತು ಪರಂಪರೆಯ ವಿಶಿಷ್ಟ ಮಿಶ್ರಣವನ್ನು ಪ್ರಸ್ತುತಪಡಿಸಿದರು.&lt;/p&gt;&lt;img&gt;&lt;p&gt;ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ಅದ್ಭುತವಾದ ಚಿನ್ನದ ಟಿಶ್ಯೂ ರೇಷ್ಮೆ ಸೀರೆಯಲ್ಲಿ ಇಶಾ ಅದ್ಭುತವಾಗಿ ಕಾಣುತ್ತಿದ್ದರು, ಆದರೆ ಹೆಚ್ಚಿನ ಗಮನ ಸೆಳೆದದ್ದು ಅವರ ಬ್ಲೌಸ್. ಬ್ಲೌಸ್ ಸಂಪೂರ್ಣವಾಗಿ ಭಾರವಾದ ಆಭರಣಗಳಿಂದ ಅಲಂಕರಿಸಲ್ಪಟ್ಟಿತ್ತು, ಅದರ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಹೈದರಾಬಾದ್ ನಿಜಾಮನ ಮೂಲ ಸರ್ಪೆಚ್ (ಟರ್ಬನ್ ಬ್ರೂಚ್).&lt;/p&gt;&lt;img&gt;&lt;p&gt;ಸುಮಾರು 1,800 ಕ್ಯಾರೆಟ್​ ವಜ್ರಾಭರಣಗಳಿಂದ ಕಂಗೊಳಿಸಿದರು ಇಶಾ. ಒಂದು ಕಾಲದಲ್ಲಿ ಹೈದರಾಬಾದ್ ನಿಜಾಮರ ಪೇಟವನ್ನು ಅಲಂಕರಿಸುತ್ತಿದ್ದ ಈ ಅಪರೂಪದ ಮತ್ತು ಐತಿಹಾಸಿಕ ರತ್ನವನ್ನು ಈಗ ಇಶಾ ತಮ್ಮ ಬ್ಲೌಸ್&zwnj;ನ ಹಿಂಭಾಗದಲ್ಲಿ ಬ್ರೂಚ್ ಆಗಿ ಧರಿಸಿದ್ದರು. ನೀತಾ ಅಂಬಾನಿಯವರ ವೈಯಕ್ತಿಕ ಸಂಗ್ರಹದಿಂದ ಪಡೆದ ಈ ಸರ್ಪೆಚ್ ಪಚ್ಚೆ, ವಜ್ರ ಮತ್ತು ಕುಂದನ್ ಕೆಲಸದ ಅದ್ಭುತ ಉದಾಹರಣೆಯಾಗಿತ್ತು.&lt;/p&gt;&lt;img&gt;&lt;p&gt;ಇಶಾ ಅವರು, ಮಿಸ್ ವರ್ಲ್ಡ್ 2024 ರ ಸಮಯದಲ್ಲಿ, ಅವರು ಮೊಘಲ್ ಚಕ್ರವರ್ತಿ ಷಹಜಹಾನ್&zwnj;ಗೆ ಸೇರಿದ ವಿಶೇಷವಾದ ಬ್ರೇಸ್ಲೆಟ್ ಅನ್ನು ಧರಿಸಿದ್ದರು. ಇದು 17 ನೇ ಶತಮಾನಕ್ಕೆ ಹಿಂದಿನದು ಮತ್ತು ವಜ್ರಗಳು, ಮಾಣಿಕ್ಯಗಳು ಮತ್ತು ಸ್ಪಿನೆಲ್&zwnj;ಗಳಿಂದ ಕೂಡಿದೆ. ಇದು 2 ಬಿಲಿಯನ್&zwnj;ಗಿಂತಲೂ ಡಾಲರ್​ಗಿಂತಲೂ ಹೆಚ್ಚು ಬೆಳೆ ಬಾಳುವಂಥದ್ದಾಗಿತ್ತು. ಸುಮಾರು 400 ವರ್ಷಗಳು ಹಳೆಯದ್ದಾಗಿದೆ ಇದು.&lt;/p&gt;&lt;img&gt;&lt;p&gt;ಇಶಾ ಅಂಬಾನಿಯವರಿಗೆ ಈ ಲುಕ್​ ಕೊಡಲು 50 ಕುಶಲಕರ್ಮಿಗಳು 1,200 ಗಂಟೆಗಳನ್ನು ತೆಗೆದುಕೊಂಡರು. 1928 ರಲ್ಲಿ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್&zwnj;ಗಾಗಿ ತಯಾರಿಸಲ್ಪಟ್ಟ ಮತ್ತು 2,930 ವಜ್ರಗಳಿಂದ ಕೂಡಿದ ಹಾರವನ್ನು ನಂತರ ದಿಲ್ಜಿತ್ ದೋಸಾಂಜ್ ವಿನ್ಯಾಸಗೊಳಿಸಿದರು.&lt;/p&gt;&lt;img&gt;&lt;p&gt;1953 ರಲ್ಲಿ, ಬರೋಡಾದ ಮಹಾರಾಣಿ ಸೀತಾ ದೇವಿ ತನ್ನ ಅತ್ಯಂತ ಅಮೂಲ್ಯವಾದ ಪಚ್ಚೆಗಳು ಮತ್ತು ವಜ್ರಗಳನ್ನು ಪ್ರಸಿದ್ಧ ಅಮೇರಿಕನ್ ಆಭರಣ ವ್ಯಾಪಾರಿ ಹ್ಯಾರಿ ವಿನ್ಸ್ಟನ್&zwnj;ಗೆ ಮಾರಿದರು. ಈ ಅಮೂಲ್ಯ ವಜ್ರಗಳು ರಾಣಿಯ ಹಾರದ ಭಾಗವಾಗಿರಲಿಲ್ಲ, ಬದಲಿಗೆ ಅವಳ ಕಣಕಾಲುಗಳನ್ನು ಅಲಂಕರಿಸಿದವು. ಹ್ಯಾರಿ ವಿನ್ಸ್ಟನ್ ಆ ಕಣಕಾಲುಗಳನ್ನು ಕಿತ್ತುಹಾಕಿ ಭವ್ಯವಾದ ಹಾರವಾಗಿ ಮರುವಿನ್ಯಾಸಗೊಳಿಸಿದರು. 1957 ರಲ್ಲಿ, ನ್ಯೂಯಾರ್ಕ್&zwnj;ನಲ್ಲಿ ನಡೆದ ಪಾರ್ಟಿಯಲ್ಲಿ ವಾಲಿಸ್ ಸಿಂಪ್ಸನ್ ಆ ಹಾರವನ್ನು ಧರಿಸಿದ್ದರು. ಅದನ್ನು ಇಶಾ ಧರಿಸಿದ್ದರು.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/isha-ambani-dazzles-in-1800-carat-diamond-saree-and-ornaments-suc-olf52lf"/>
        </item>
        <item>
            <title><![CDATA[ಮೇ 7 ರಂದು ನೆನಪಿಡಿ 3 ರಾಶಿಗೆ ಬಹಳಷ್ಟು ಅದೃಷ್ಟ, ಬುಧನ ಪ್ರಬಲ ಸಂಚಾರದಿಂದ ಸಾಲ ಸಮಸ್ಯೆ ಅಂತ್ಯ, ಆರ್ಥಿಕ ತೊಂದರೆ ಇಲ್ಲ]]></title>
            <link>https://kannada.asianetnews.com/gallery/business/lucky-zodiac-signs-7-may-2026-news-on-may-7-mercury-is-entering-bharani-nakshatra-lead-to-increased-opportunities-suh-oxfztdi</link>
            <guid isPermaLink="true">https://kannada.asianetnews.com/gallery/business/lucky-zodiac-signs-7-may-2026-news-on-may-7-mercury-is-entering-bharani-nakshatra-lead-to-increased-opportunities-suh-oxfztdi</guid>
            <pubDate>Wed, 06 May 2026 16:58:42 +0530</pubDate>
            <description><![CDATA[&lt;p&gt;Lucky zodiac signs 7 may 2026 ಜ್ಯೋತಿಷ್ಯದ ಪ್ರಕಾರ ಮೇ 7 ರಂದು ಬುಧ ಗ್ರಹವು ಭರಣಿ ನಕ್ಷತ್ರವನ್ನು ಪ್ರವೇಶಿಸುತ್ತಿದ್ದು, ಇದು ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುತ್ತದೆ, 3 ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನವನ್ನು ನೀಡುತ್ತದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kany48gne1hdwqyq27ghyfbz,imgname-these-are-the-zodiac-signs-that-will-overcome-poverty-in-2026-1763820315157.jpg" type="image/jpeg" height="390" width="690"/>
            <content:encoded><![CDATA[&lt;p&gt;Lucky zodiac signs 7 may 2026 ಜ್ಯೋತಿಷ್ಯದ ಪ್ರಕಾರ ಮೇ 7 ರಂದು ಬುಧ ಗ್ರಹವು ಭರಣಿ ನಕ್ಷತ್ರವನ್ನು ಪ್ರವೇಶಿಸುತ್ತಿದ್ದು, ಇದು ಉದ್ಯೋಗ ಮತ್ತು ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುತ್ತದೆ, 3 ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನವನ್ನು ನೀಡುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ ಮೇ 7 ನಿಮಗೆ ಬಹಳ ಮುಖ್ಯವಾದ ದಿನವಾಗಬಹುದು. ನಿಮ್ಮ ಕಠಿಣ ಪರಿಶ್ರಮವು ಕೆಲಸದಲ್ಲಿ ಗಮನಕ್ಕೆ ಬರುತ್ತದೆ ಮತ್ತು ನಿಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯಬಹುದು. ಹಣಕಾಸಿನ ವಿಷಯಗಳಲ್ಲಿ ಹೊಸ ಅವಕಾಶ ಅಥವಾ ಹೆಚ್ಚುವರಿ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಸ್ಥಿರತೆಯನ್ನು ಅನುಭವಿಸುವಿರಿ. ಆದಾಗ್ಯೂ, ನಿಮ್ಮ ಖರ್ಚುಗಳನ್ನು ನಿಯಂತ್ರಿಸುವುದು ಅವಶ್ಯಕ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮೇ 7 ಭಾವನಾತ್ಮಕವಾಗಿ ಮತ್ತು ಕುಟುಂಬವಾಗಿ ತೃಪ್ತಿಕರ ದಿನವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ವಿಶೇಷವಾಗಿ ವೃತ್ತಿ ಅಥವಾ ಹಣಕ್ಕೆ ಸಂಬಂಧಿಸಿದಂತೆ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಹಳೆಯ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಅವಕಾಶ ಸಿಗುತ್ತದೆ. ನಿಮ್ಮ ನಿರ್ಧಾರಗಳಲ್ಲಿ ನಿಮ್ಮ ಕುಟುಂಬದಿಂದ ಬೆಂಬಲ ಸಿಗುತ್ತದೆ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮೇ 7 ನಿಮ್ಮ ಕೆಲಸದಲ್ಲಿ ದಕ್ಷತೆ ಹೆಚ್ಚಾಗುವ ದಿನವಾಗಿರುತ್ತದೆ. ಹೊಸ ಯೋಜನೆ ಅಥವಾ ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆ ಇದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರುತ್ತವೆ.&lt;/p&gt;&lt;p&gt;ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ಆರೋಗ್ಯದ ವಿಷಯದಲ್ಲಿ ನೀವು ಸ್ವಲ್ಪ ದಣಿದಿರಬಹುದು, ಆದ್ದರಿಂದ ವಿಶ್ರಾಂತಿ ಪಡೆಯುವುದು ಅವಶ್ಯಕ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ ಮೇ 7 ರಂದು, ದೀರ್ಘಾವಧಿಯ ಯೋಜನೆಗಳು ಯಶಸ್ಸಿನತ್ತ ಸಾಗಲು ಪ್ರಾರಂಭಿಸುತ್ತವೆ. ಹೂಡಿಕೆಗಳು ಅಥವಾ ಉಳಿತಾಯದಿಂದ ಪ್ರಯೋಜನಗಳು ಕಂಡುಬರಬಹುದು. ನಿಮ್ಮ ಕೆಲಸದಲ್ಲಿ ಸ್ಥಿರತೆ ಮತ್ತು ಪ್ರಗತಿಯನ್ನು ನೀವು ನೋಡುತ್ತೀರಿ. ನಿಮ್ಮ ಆತ್ಮವಿಶ್ವಾಸ ಮತ್ತು ತಾಳ್ಮೆ ಕಷ್ಟಕರ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಕುಟುಂಬದಲ್ಲಿ ಸಾಮರಸ್ಯವೂ ಇರುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ ಮೇ 7 ಸೃಜನಶೀಲತೆ ಮತ್ತು ಮಾನಸಿಕ ಶಾಂತಿಗೆ ಉತ್ತಮ ದಿನ. ಕಲಾತ್ಮಕ ಅಥವಾ ಸೃಜನಶೀಲ ಕೆಲಸ ಮಾಡುವವರು ವಿಶೇಷವಾಗಿ ಪ್ರಯೋಜನ ಪಡೆಯುತ್ತಾರೆ. ನೀವು ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಸಹಾಯ ಪಡೆಯುತ್ತೀರಿ. ಭವಿಷ್ಯದಲ್ಲಿ ಹೊಸ ಆಲೋಚನೆ ಪ್ರಯೋಜನಕಾರಿಯಾಗಬಹುದು. ಮನಸ್ಸು ಸಕಾರಾತ್ಮಕವಾಗಿರುತ್ತದೆ ಮತ್ತು ಒತ್ತಡ ಕಡಿಮೆಯಾಗುತ್ತದೆ.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/lucky-zodiac-signs-7-may-2026-news-on-may-7-mercury-is-entering-bharani-nakshatra-lead-to-increased-opportunities-suh-oxfztdi"/>
        </item>
        <item>
            <title><![CDATA[ಫಾಸ್ಟ್‌ಟ್ಯಾಗ್ ಕೈಯಲ್ಲಿ ಹಿಡಿದು ಟೋಲ್ ಕಟ್ಟುವುದು ಇನ್ಮುಂದೆ ಶಿಕ್ಷಾರ್ಹ ಅಪರಾಧ; NHAI ನೀಡಿದೆ ಬ್ಲ್ಯಾಕ್‌ಲಿಸ್ಟ್ ಮಾಡುವ ಎಚ್ಚರಿಕೆ!]]></title>
            <link>https://kannada.asianetnews.com/gallery/business/nhai-alert-dont-hold-fastag-in-hand-at-toll-gates-blacklist-warning-new-rules-san-qnymvit</link>
            <guid isPermaLink="true">https://kannada.asianetnews.com/gallery/business/nhai-alert-dont-hold-fastag-in-hand-at-toll-gates-blacklist-warning-new-rules-san-qnymvit</guid>
            <pubDate>Thu, 07 May 2026 16:56:45 +0530</pubDate>
            <description><![CDATA[ಫಾಸ್ಟ್&zwnj;ಟ್ಯಾಗ್ ಅನ್ನು ವಿಂಡ್&zwnj;ಶೀಲ್ಡ್&zwnj;ಗೆ ಅಂಟಿಸದೆ ಕೈಯಲ್ಲಿ ಹಿಡಿದು ತೋರಿಸುವ ಚಾಲಕರ ವಿರುದ್ಧ NHAI ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಯಮ ಉಲ್ಲಂಘಿಸುವವರ ಫಾಸ್ಟ್&zwnj;ಟ್ಯಾಗ್&zwnj;ಗಳನ್ನು 'ಬ್ಲ್ಯಾಕ್&zwnj;ಲಿಸ್ಟ್' ಮಾಡಲಾಗುವುದು ಮತ್ತು ಅವರು ದುಪ್ಪಟ್ಟು ಟೋಲ್ ಅಥವಾ ಕಾನೂನು ಕ್ರಮ ಎದುರಿಸಬೇಕಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kk19z6ag1q61a2qx6an911ye,imgname-toll-plaza-1772791765328.jpeg" type="image/jpeg" height="390" width="690"/>
            <content:encoded><![CDATA[ಫಾಸ್ಟ್&zwnj;ಟ್ಯಾಗ್ ಅನ್ನು ವಿಂಡ್&zwnj;ಶೀಲ್ಡ್&zwnj;ಗೆ ಅಂಟಿಸದೆ ಕೈಯಲ್ಲಿ ಹಿಡಿದು ತೋರಿಸುವ ಚಾಲಕರ ವಿರುದ್ಧ NHAI ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಿಯಮ ಉಲ್ಲಂಘಿಸುವವರ ಫಾಸ್ಟ್&zwnj;ಟ್ಯಾಗ್&zwnj;ಗಳನ್ನು 'ಬ್ಲ್ಯಾಕ್&zwnj;ಲಿಸ್ಟ್' ಮಾಡಲಾಗುವುದು ಮತ್ತು ಅವರು ದುಪ್ಪಟ್ಟು ಟೋಲ್ ಅಥವಾ ಕಾನೂನು ಕ್ರಮ ಎದುರಿಸಬೇಕಾಗಬಹುದು.&lt;img&gt;&lt;p&gt;ಕಾರಿನಲ್ಲಿ ಪ್ರಯಾಣಿಸುವಾಗ ಫಾಸ್ಟ್&zwnj;ಟ್ಯಾಗ್ ಅನ್ನು ವಿಂಡ್&zwnj;ಶೀಲ್ಡ್&zwnj;ಗೆ (ಮುಂಭಾಗದ ಗಾಜು) ಅಂಟಿಸದೆ, ಟೋಲ್ ಪ್ಲಾಜಾ ಬಂದಾಗ ಕೈಯಲ್ಲಿ ಹಿಡಿದು ತೋರಿಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಇಂತಹ ಚಾಲಕರ ವಿರುದ್ಧ ಈಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ಮುಂದೆ ಈ ರೀತಿ ಮಾಡುವವರ ಫಾಸ್ಟ್&zwnj;ಟ್ಯಾಗ್ ಅನ್ನು ನೇರವಾಗಿ 'ಬ್ಲ್ಯಾಕ್&zwnj;ಲಿಸ್ಟ್' ಮಾಡಲಾಗುವುದು ಎಂದು ಎಚ್ಚರಿಸಿದೆ.&lt;/p&gt;&lt;img&gt;&lt;p&gt;ಟೋಲ್ ಪ್ಲಾಜಾಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ವಂಚನೆ ತಡೆಯಲು NHAI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ನಿಯಮದ ಪ್ರಕಾರ, ಫಾಸ್ಟ್&zwnj;ಟ್ಯಾಗ್ ಅನ್ನು ಕಾರಿನ ವಿಂಡ್&zwnj;ಶೀಲ್ಡ್&zwnj; ಮೇಲೆ ಅಂಟಿಸುವುದು ಕಡ್ಡಾಯ.&lt;/p&gt;&lt;img&gt;&lt;p&gt;ಯಾರು ಉದ್ದೇಶಪೂರ್ವಕವಾಗಿ ಅದನ್ನು ಅಂಟಿಸದೆ ಕೈಯಲ್ಲಿ ಹಿಡಿದು ತೋರಿಸುತ್ತಾರೋ, ಅಂತಹವರನ್ನು ಗುರುತಿಸಿ ಅವರ ಫಾಸ್ಟ್&zwnj;ಟ್ಯಾಗ್ ನಿಷ್ಕ್ರಿಯಗೊಳಿಸಲಾಗುತ್ತದೆ. ಇದರಿಂದಾಗಿ ನೀವು ಮುಂದಿನ ಬಾರಿ ಪ್ರಯಾಣಿಸುವಾಗ ದುಪ್ಪಟ್ಟು ಟೋಲ್ ಅಥವಾ ಕಾನೂನು ಕ್ರಮ ಎದುರಿಸಬೇಕಾಗಬಹುದು.&lt;/p&gt;&lt;img&gt;&lt;p&gt;ವಿಂಡ್&zwnj;ಶೀಲ್ಡ್&zwnj; ಮೇಲೆ ಫಾಸ್ಟ್&zwnj;ಟ್ಯಾಗ್ ಇದ್ದಾಗ ಅಲ್ಲಿನ ಕ್ಯಾಮೆರಾಗಳು ಮತ್ತು ಸೆನ್ಸರ್&zwnj;ಗಳು ತಕ್ಷಣವೇ ಅದನ್ನು ಸ್ಕ್ಯಾನ್ ಮಾಡುತ್ತವೆ. ಇದರಿಂದ ವಾಹನ ನಿಲ್ಲಿಸದೆ ಸಂಚರಿಸಲು ಅನುಕೂಲವಾಗುತ್ತದೆ. ಫಾಸ್ಟ್&zwnj;ಟ್ಯಾಗ್ ಗಾಜಿಗೆ ಅಂಟಿಸದೆ ಇದ್ದರೆ, ಅದನ್ನು ಒಂದಕ್ಕಿಂತ ಹೆಚ್ಚು ವಾಹನಗಳಿಗೆ ಬಳಸುವ ಸಾಧ್ಯತೆ ಇರುತ್ತದೆ. ಇಂತಹ ಅಕ್ರಮಗಳನ್ನು ತಡೆಯಲು NHAI ಈಗ ಈ ಕಠಿಣ ಹೆಜ್ಜೆ ಇಟ್ಟಿದೆ. ಕೈಯಲ್ಲಿ ಫಾಸ್ಟ್&zwnj;ಟ್ಯಾಗ್ ತೋರಿಸುವುದರಿಂದ ಟೋಲ್ ವ್ಯವಸ್ಥೆಯಲ್ಲಿ ಅಡಚಣೆಯಾಗಿ ವಿಳಂಬ ಉಂಟಾಗುತ್ತದೆ.&lt;/p&gt;&lt;img&gt;&lt;p&gt;NHAI ಚಾಲಕರಿಗೆ ಕೆಲವು ಸುರಕ್ಷತಾ ಕ್ರಮಗಳನ್ನೂ ಸೂಚಿಸಿದೆ. ಆಮಿಷ ತೋರಿಸುವ ಫಾಸ್ಟ್&zwnj;ಟ್ಯಾಗ್ ಮಾರಾಟದ ನಕಲಿ ವೆಬ್&zwnj;ಸೈಟ್&zwnj;ಗಳ ಬಗ್ಗೆ ಜಾಗರೂಕರಾಗಿರಿ. ಫಾಸ್ಟ್&zwnj;ಟ್ಯಾಗ್ ರೀಚಾರ್ಜ್ ಅಥವಾ ಇತರ ಕೆಲಸಗಳಿಗಾಗಿ ಕೇವಲ 'Rajmargyatra' ಆಪ್ ಅಥವಾ ಬ್ಯಾಂಕ್&zwnj;ಗಳ ಅಧಿಕೃತ ವೆಬ್&zwnj;ಸೈಟ್ ಮಾತ್ರ ಬಳಸಿ. ನಿಮ್ಮ ಓಟಿಪಿ (OTP), ಕಾರ್ಡ್ ವಿವರ ಅಥವಾ ಲಾಗಿನ್ ಪಾಸ್&zwnj;ವರ್ಡ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಪರಿಚಿತ ಲಿಂಕ್&zwnj;ಗಳ ಮೇಲೆ ಕ್ಲಿಕ್ ಮಾಡಬೇಡಿ. ಒಟ್ಟಾರೆಯಾಗಿ, ನಿಮ್ಮ ಫಾಸ್ಟ್&zwnj;ಟ್ಯಾಗ್ ಬ್ಲ್ಯಾಕ್&zwnj;ಲಿಸ್ಟ್ ಆಗಬಾರದು ಎಂದರೆ ಇಂದು ಅಥವಾ ಈಗಲೇ ಅದನ್ನು ನಿಮ್ಮ ಕಾರಿನ ಮುಂಭಾಗದ ಗಾಜಿನ ಮೇಲೆ ಸರಿಯಾದ ಕ್ರಮದಲ್ಲಿ ಅಂಟಿಸಿಕೊಳ್ಳಿ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/nhai-alert-dont-hold-fastag-in-hand-at-toll-gates-blacklist-warning-new-rules-san-qnymvit"/>
        </item>
        <item>
            <title><![CDATA[Met Gala: 142 ಕೋಟಿ ಮೌಲ್ಯದ ಡ್ರೆಸ್​ ತೊಟ್ಟು ಫ್ಯಾಷನ್​ ಲೋಕ ದಂಗುಬಡಿಸಿದ ಈ ಚೆಲುವೆ ಯಾರು]]></title>
            <link>https://kannada.asianetnews.com/gallery/fashion/indian-billionaire-sudha-reddy-at-met-gala-2026-its-her-142-crore-tanzanite-necklace-suc-rfltvqv</link>
            <guid isPermaLink="true">https://kannada.asianetnews.com/gallery/fashion/indian-billionaire-sudha-reddy-at-met-gala-2026-its-her-142-crore-tanzanite-necklace-suc-rfltvqv</guid>
            <pubDate>Thu, 07 May 2026 19:23:01 +0530</pubDate>
            <description><![CDATA[&lt;p&gt;ನ್ಯೂಯಾರ್ಕ್​ನಲ್ಲಿ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಹೈದರಾಬಾದ್​ನ ಬಿಲಿಯನೇರ್ ಸುಧಾ ರೆಡ್ಡಿ ಎಲ್ಲರ ಗಮನ ಸೆಳೆದರು. ಅವರು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ, 'ದಿ ಟ್ರೀ ಆಫ್ ಲೈಫ್' ಥೀಮ್​ನ ಗೌನ್ ಧರಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr1b5brshcy6z9wdd2pkz77j,imgname-sudha-reddy-04-1778161725209.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯೂಯಾರ್ಕ್​ನಲ್ಲಿ ನಡೆದ ಮೆಟ್ ಗಾಲಾ ಕಾರ್ಯಕ್ರಮದಲ್ಲಿ ಹೈದರಾಬಾದ್​ನ ಬಿಲಿಯನೇರ್ ಸುಧಾ ರೆಡ್ಡಿ ಎಲ್ಲರ ಗಮನ ಸೆಳೆದರು. ಅವರು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ, 'ದಿ ಟ್ರೀ ಆಫ್ ಲೈಫ್' ಥೀಮ್​ನ ಗೌನ್ ಧರಿಸಿದ್ದರು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಮೆರಿಕದ ನ್ಯೂಯಾರ್ಕ್​ನಲ್ಲಿ ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಡೆಯುವ ಉನ್ನತ ಮಟ್ಟದ ನಿಧಿ ಸಂಗ್ರಹಣೆ ಕಾರ್ಯಕ್ರಮ ಮೆಟ್ ಗಾಲಾಕ್ಕಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚುಮಾಡುತ್ತಾರೆ. ಇದಕ್ಕೆ ಕಾರಣ, ಪ್ರಪಂಚದಾದ್ಯಂತದ ತಾರೆಯರು ತಮ್ಮ ಸೃಜನಶೀಲತೆ ಮತ್ತು ಶೈಲಿಯನ್ನು ಪ್ರದರ್ಶಿಸುತ್ತಾರೆ. ಈ ಬಾರಿ ನಡೆದ ಮೆಟ್​ ಗಾಲಾದಲ್ಲಿ ಕೈಲೀ ಜೆನ್ನರ್ ಮತ್ತು ಕಿಮ್ ಕಾರ್ಡಶಿಯಾನ್ ಅವರಂತಹ ಜಾಗತಿಕ ಸೆಲೆಬ್ರಿಟಿಗಳೂ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;ಈ ವರ್ಷ, ಮೆಟ್ ಗಾಲಾ ಥೀಮ್ &quot;ಫ್ಯಾಷನ್ ಈಸ್ ಆರ್ಟ್&quot;. ಅಂದರೆ ಸ್ಟಾರ್​ಗಳು ತಮ್ಮ ಬಟ್ಟೆಗಳ ಮೂಲಕ ಕಲೆಯನ್ನು ಪ್ರದರ್ಶಿಸುವುದು. ರೆಡ್ ಕಾರ್ಪೆಟ್ ಪ್ರಪಂಚದಾದ್ಯಂತದ ಹಲವಾರು ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಭಾರತೀಯರು ಸಹ ಕಾಣಿಸುತ್ತಾರೆ. ಇದಾಗಲೇ ಇಶಾ ಅಂಬಾನಿ, ಕರಣ್​ ಜೋಹರ್​ ಅವರಂಥ ಪ್ರಮುಖರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವಾಗಲೇ 140 ಕೋಟಿ ಮೌಲ್ಯದ ಡ್ರೆಸ್​ ತೊಟ್ಟ ಚೆಲುವೆಯೊಬ್ಬರು ಎಲ್ಲರ ಕಣ್ಣು ಕುಕ್ಕಿದರು.&lt;/p&gt;&lt;img&gt;&lt;p&gt;ಇವರೇ ಸುಧಾ ರೆಡ್ಡಿ. ಹೈದರಾಬಾದ್&zwnj;ನ ಬಿಲಿಯನೇರ್ ಸುಧಾ ರೆಡ್ಡಿ 2026 ರ ಮೆಟ್ ಗಾಲಾದಲ್ಲಿ ತಮ್ಮ ಅದ್ಭುತ ನೋಟದಿಂದ ಎಲ್ಲರನ್ನೂ ಬೆರಗುಗೊಳಿಸಿದರು. ಅವರು ತಮ್ಮ ಭಾರತೀಯ ಪರಂಪರೆಯನ್ನು ವೇದಿಕೆಗೆ ತಂದರು, ವಿದೇಶಿ ವೇದಿಕೆಯನ್ನು ಸುಂದರವಾಗಿ ಅಲಂಕರಿಸಿದರು. ಸುಧಾ ರೆಡ್ಡಿ ಮೆಟ್ ಗಾಲಾದಲ್ಲಿ ಕಪ್ಪು ಮತ್ತು ಚಿನ್ನದ ಗೌನ್&zwnj;ನಲ್ಲಿ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡರು, ಅವರು ಸುಂದರವಾದ ಕಸೂತಿಯಿಂದ ಮಾಡಿದ ಹೂವಿನ ಕೇಪ್&zwnj;ನೊಂದಿಗೆ ಕಾಣಿಸಿಕೊಂಡರು. ಮೇಲ್ಭಾಗದಲ್ಲಿ ಚಿನ್ನದ ಕಸೂತಿ ಕಾಣಬಹುದು.&lt;/p&gt;&lt;img&gt;&lt;p&gt;ಪ್ರಸಿದ್ಧ ವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಗೌನ್ ಅನ್ನು ಸುಧಾ ಧರಿಸಿದ್ದರು, ಇದು ಒಟ್ಟು 3,459 ಗಂಟೆಗಳನ್ನು ರಚಿಸಲು ತೆಗೆದುಕೊಂಡಿತು ಮತ್ತು ಇದನ್ನು 90 ಕ್ಕೂ ಹೆಚ್ಚು ಕುಶಲಕರ್ಮಿಗಳು ರಚಿಸಿದ್ದಾರೆ. ಸುಧಾ ರೆಡ್ಡಿ ಅವರ ಗೌನ್&zwnj;ನ ಥೀಮ್ 'ದಿ ಟ್ರೀ ಆಫ್ ಲೈಫ್' ಆಗಿತ್ತು, ಇದು ದಕ್ಷಿಣ ಭಾರತದ 3,000 ವರ್ಷಗಳಷ್ಟು ಹಳೆಯದಾದ ಕಲಂಕರಿ ಕಲೆಯಿಂದ ಪ್ರೇರಿತವಾಗಿದೆ. ಇದು ತೆಲಂಗಾಣ ರಾಜ್ಯ ಪಕ್ಷಿ, 'ಪಾಲ್ಪಿಟ್ಟ', 'ಜಮ್ಮಿ ಚೆಟ್ಟು' (ಶಾಮಿ ಮರ) ಮತ್ತು 'ತಂಗೇಡು' ಹೂವಿನ ಲಕ್ಷಣಗಳನ್ನು ಒಳಗೊಂಡಿತ್ತು. ಈ ಉಡುಗೆ ದಕ್ಷಿಣದ ಸಾಂಪ್ರದಾಯಿಕ ಜವಳಿ ಕಲೆ ಮತ್ತು ಆಧುನಿಕ ಜಾಗತಿಕ ಫ್ಯಾಷನ್&zwnj;ನ ಮಿಶ್ರಣವನ್ನು ಪ್ರದರ್ಶಿಸುತ್ತದೆ.&lt;/p&gt;&lt;img&gt;&lt;p&gt;ಸುಧಾ ರೆಡ್ಡಿ ಕೂಡ ತಮ್ಮ ವೈಯಕ್ತಿಕ ಸಂಗ್ರಹದಿಂದ ಸುಮಾರು $15 ಮಿಲಿಯನ್ ಅಂದರೆ 142 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಈ ಉಡುಪನ್ನು ಅಲಂಕರಿಸಿದರು. ಈ ಸೆಟ್&zwnj;ನಲ್ಲಿ 550-ಕ್ಯಾರೆಟ್ ಆಳವಾದ ನೀಲಿ-ನೇರಳೆ ವಜ್ರಗಳು ಇದ್ದವು. ಇವು ತಾಂಜೇನಿಯಾದ ಬೆಟ್ಟಗಳಲ್ಲಿ ಸಿಗುವಂಥವು. ಇದು ಅವರ ಸಂಪೂರ್ಣ ಲುಕ್&zwnj;ನ ಕೇಂದ್ರಬಿಂದುವಾಗಿತ್ತು.&lt;/p&gt;&lt;img&gt;&lt;p&gt;ಅವರು 23-ಕ್ಯಾರೆಟ್ ಹಳದಿ ವಜ್ರದ ಉಂಗುರ ಮತ್ತು 30-ಕ್ಯಾರೆಟ್ ಗುಲಾಬಿ-ಕಟ್ ಪಲ್ಲಕ್ಕಿ ವಜ್ರದ ಉಂಗುರವನ್ನು ಸಹ ಧರಿಸಿದ್ದರು. ಈ ಆಭರಣಗಳು ಅವರನ್ನು ರಾಜಮನೆತನದ ಮತ್ತು ಸೊಗಸಾಗಿ ಕಾಣುವಂತೆ ಮಾಡಿತು.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/fashion/indian-billionaire-sudha-reddy-at-met-gala-2026-its-her-142-crore-tanzanite-necklace-suc-rfltvqv"/>
        </item>
        <item>
            <title><![CDATA[ತಿಂಗಳಿಗೆ ₹10,000 ಸಂಬಳದಲ್ಲಿ ₹50 ಲಕ್ಷದ ಮನೆ ಖರೀದಿಸಬಹುದೇ? ಇಲ್ಲಿದೆ ಸೂಪರ್ ಪ್ಲ್ಯಾನ್]]></title>
            <link>https://kannada.asianetnews.com/gallery/business/smart-real-estate-investment-plan-to-buy-a-50-lakh-house-or-plots-without-loans-mrq-vdnr27u</link>
            <guid isPermaLink="true">https://kannada.asianetnews.com/gallery/business/smart-real-estate-investment-plan-to-buy-a-50-lakh-house-or-plots-without-loans-mrq-vdnr27u</guid>
            <pubDate>Tue, 05 May 2026 11:46:12 +0530</pubDate>
            <description><![CDATA[ಕಡಿಮೆ ಸಂಬಳದಲ್ಲಿ ಸ್ವಂತ ಮನೆ ಖರೀದಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಖ್ಯಾತ ಷೇರು ಮಾರುಕಟ್ಟೆ ವಿಶ್ಲೇಷಕರೊಬ್ಬರು EMI ಹೊರೆಯಿಲ್ಲದೆ ₹50 ಲಕ್ಷದ ಮನೆ ಖರೀದಿಸುವ ಅದ್ಭುತ ಸೂತ್ರವನ್ನು ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkrhgtfaqg7tre3bxh60efdj,imgname-apartment-1773571434986.jpg" type="image/jpeg" height="390" width="690"/>
            <content:encoded><![CDATA[ಕಡಿಮೆ ಸಂಬಳದಲ್ಲಿ ಸ್ವಂತ ಮನೆ ಖರೀದಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಖ್ಯಾತ ಷೇರು ಮಾರುಕಟ್ಟೆ ವಿಶ್ಲೇಷಕರೊಬ್ಬರು EMI ಹೊರೆಯಿಲ್ಲದೆ ₹50 ಲಕ್ಷದ ಮನೆ ಖರೀದಿಸುವ ಅದ್ಭುತ ಸೂತ್ರವನ್ನು ವಿವರಿಸಿದ್ದಾರೆ.&lt;img&gt;ಹಿಂದಿನ ಕಾಲದಲ್ಲಿ ಜನರು ಚಿಟ್ ಫಂಡ್ ಅಥವಾ ಬ್ಯಾಂಕ್&zwnj;ನಲ್ಲಿ ಹಣ ಇಡುವುದನ್ನೇ ಸುರಕ್ಷಿತ ಎಂದು ಭಾವಿಸಿದ್ದರು. ಆದರೆ, 2026ರ ಹೊತ್ತಿಗೆ ಬದಲಾಗುವ ಕಾಲಘಟ್ಟದಲ್ಲಿ, ಷೇರು ಮಾರುಕಟ್ಟೆ ಮತ್ತು ಡಿಜಿಟಲ್ ಆಸ್ತಿಗಳ ಕಡೆಗೆ ಗಮನ ಹರಿಸುವುದು ಅನಿವಾರ್ಯ. ಇಲ್ಲಿ ಹಣವು ಅನಿಯಮಿತವಾಗಿ ಬೆಳೆಯುತ್ತದೆ ಮತ್ತು ಕಾನೂನುಬದ್ಧವಾಗಿ ನಮಗೆ ಸಿಗುತ್ತದೆ.&lt;img&gt;ಬಹಳಷ್ಟು ಜನರು ಉದ್ಯೋಗ ಸಿಕ್ಕ ತಕ್ಷಣ ಮನೆ ಖರೀದಿಸಲು ಆತುರಪಡುತ್ತಾರೆ. ಆದರೆ, 40-45 ವರ್ಷ ವಯಸ್ಸು ಮನೆ ಖರೀದಿಸಲು ಸೂಕ್ತ ಸಮಯ ಎನ್ನುತ್ತಾರೆ ತಜ್ಞರು. ಆ ಹೊತ್ತಿಗೆ ನಮ್ಮ ವೃತ್ತಿಜೀವನ ಎಲ್ಲಿ ಸ್ಥಿರಗೊಳ್ಳುತ್ತದೆ ಮತ್ತು ಮಕ್ಕಳ ಅಗತ್ಯಗಳೇನು ಎಂಬ ಸ್ಪಷ್ಟತೆ ಸಿಗುತ್ತದೆ. ಅಲ್ಲಿಯವರೆಗೆ ಮಾಡಿದ ಹೂಡಿಕೆಗಳು ಸಾಲವಿಲ್ಲದೆ ಮನೆ ಖರೀದಿಸುವ ಮಟ್ಟಕ್ಕೆ ನಮ್ಮನ್ನು ತಲುಪಿಸುತ್ತವೆ.&lt;img&gt;ಕಡಿಮೆ ಹಣವಿದೆ ಎಂದು ಹೂಡಿಕೆ ಮಾಡುವುದನ್ನು ನಿಲ್ಲಿಸಬಾರದು. ತಿಂಗಳಿಗೆ ₹300 ಅಥವಾ ದಿನಕ್ಕೆ ಕೇವಲ ₹10 SIP ಮಾಡಿದರೆ, ಅದು ದೀರ್ಘಾವಧಿಯಲ್ಲಿ ಕೋಟಿ ರೂಪಾಯಿಗಳವರೆಗೆ ಸಂಪತ್ತನ್ನು ಸೃಷ್ಟಿಸುತ್ತದೆ. ಹನಿ ಹನಿ ಗೂಡಿದರೆ ಹಳ್ಳ ಎಂಬ ಗಾದೆ ಹೂಡಿಕೆಯ ವಿಷಯದಲ್ಲೂ ಸತ್ಯ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಇಂದೇ ಸಣ್ಣ ಮೊತ್ತದಿಂದ ಪ್ರಾರಂಭಿಸಿ.&lt;img&gt;ನೀವು ನೇರವಾಗಿ ಭೂಮಿ ಅಥವಾ ಮನೆ ಖರೀದಿಸಲು ಸಾಧ್ಯವಾಗದಿದ್ದರೆ, ಷೇರು ಮಾರುಕಟ್ಟೆಯ ಮೂಲಕ ರಿಯಲ್ ಎಸ್ಟೇಟ್&zwnj;ನಲ್ಲಿ ಹೂಡಿಕೆ ಮಾಡಬಹುದು. ಇದನ್ನು 'ರೀಟ್ಸ್' (REITs) ಎಂದು ಕರೆಯುತ್ತಾರೆ. ಇದರಲ್ಲಿ ನೀವು ಹೂಡಿಕೆ ಮಾಡಿದರೆ, ಅಪಾರ್ಟ್&zwnj;ಮೆಂಟ್&zwnj; ಅಥವಾ ಕಮರ್ಷಿಯಲ್ ಕಟ್ಟಡಗಳಿಂದ ಬರುವ ಬಾಡಿಗೆಯಲ್ಲಿ ನಿಮಗೆ ಪಾಲು ನೀಡುತ್ತಾರೆ. ಭವಿಷ್ಯದಲ್ಲಿ ಆಸ್ತಿಯನ್ನು ಮಾರಾಟ ಮಾಡುವುದಕ್ಕಿಂತ ಈ ರೀತಿ ಡಿಜಿಟಲ್ ಆಗಿ ನಿರ್ವಹಿಸುವುದು ತುಂಬಾ ಸುಲಭ.&lt;img&gt;ಅನೇಕರು ಷೇರು ಮಾರುಕಟ್ಟೆ ಎಂದರೆ ಹೆದರುತ್ತಾರೆ. ಆದರೆ, ಅದು ಜ್ಞಾನದ ಕೊರತೆಯಿಂದ ಬರುವ ಭಯವಷ್ಟೇ. ನಿಮ್ಮ ಫೋನ್ ಮೂಲಕವೇ ಡಿಜಿಟಲ್ ಆಸ್ತಿಗಳನ್ನು ನಿರ್ವಹಿಸುವುದನ್ನು ಕಲಿತರೆ, ನಿಮ್ಮ ಸಂಪತ್ತನ್ನು ನೀವೇ ಬೆಳೆಸಿಕೊಳ್ಳಬಹುದು. ಇದರಿಂದ ನಿಮ್ಮ ಮಕ್ಕಳಿಗೆ ಆಸ್ತಿ ವರ್ಗಾವಣೆ ಮಾಡುವುದೂ ಸುಲಭವಾಗುತ್ತದೆ.]]></content:encoded>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/smart-real-estate-investment-plan-to-buy-a-50-lakh-house-or-plots-without-loans-mrq-vdnr27u"/>
        </item>
        <item>
            <title><![CDATA[ಎಸ್‌ಬಿಐನಲ್ಲಿ ಕವಿದ ಕಾರ್ಮೋಡ: ಮೇ 25, 26ಕ್ಕೆ ಬ್ಯಾಂಕ್ ಸೇವೆ ವ್ಯತ್ಯಯ, ಒಟ್ಟು 4 ದಿನ ಬಂದ್ ಸಾಧ್ಯತೆ!]]></title>
            <link>https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg</link>
            <guid isPermaLink="true">https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg</guid>
            <pubDate>Fri, 08 May 2026 18:56:02 +0530</pubDate>
            <description><![CDATA[ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್&zwnj;ಬಿಐ) ನೌಕರರು ತಮ್ಮ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25 ಮತ್ತು 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ, ವೇತನ ಅಸಮಾನತೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8avbdy297k210jxeknt0tap,imgname-3-1761300821954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್&zwnj;ಬಿಐ) ನೌಕರರು 16 ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ ಮೇ 25, 26 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಖಿಲ ಭಾರತ ಸ್ಟೇಟ್ ಬ್ಯಾಂಕ್&zwnj; ಆಫ್&zwnj; ಇಂಡಿಯಾ ಸಿಬ್ಬಂದಿ ಒಕ್ಕೂಟ ( ಎಐಎಸ್&zwnj;ಬಿಐಎಸ್&zwnj;ಎಫ್&zwnj;) ದೇಶಾದ್ಯಂತ 2 ದಿನಗಳ ಮುಷ್ಕರ ನಡೆಸುವುದಾಗಿ ಘೋಷಿಸಿವೆ. ಬ್ಯಾಂಕುಗಳಲ್ಲಿ ಸಂದೇಶವಾಹಕ ನೇಮಕಾತಿ, ಸಶಸ್ತ್ರ ಗಾರ್ಡ್&zwnj;ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ, ಪಿಂಚಣಿ ಸೌಲಭ್ಯ ಸೇರಿದಂತೆ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದರ ಪರಿಣಾಮ ಎಸ್&zwnj;ಬಿಐ ಶಾಖೆಗಳಲ್ಲಿ ಸತತ 4 ದಿನ ಗ್ರಾಹಕರಿಗೆ ಬ್ಯಾಂಕ್&zwnj; ಸೇವೆಯಲ್ಲಿ ವ್ಯತ್ಯಯವಾಗಲಿದೆ. ಕಾರಣ 23 ನಾಲ್ಕನೇ ಶನಿವಾರ, 24 ಭಾನುವಾರ ಆಗಿರಲಿದೆ.&lt;/p&gt;&lt;h2&gt;16 ಬೇಡಿಕೆಗಳ ಈಡೇರಿಕೆಗೆ ಆಗ್ರಹ&lt;/h2&gt;&lt;p&gt;ನೌಕರರು ಒಟ್ಟು 16 ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಿದ್ದು, ಪ್ರಮುಖವಾಗಿ ಸಂದೇಶವಾಹಕರ (ಮೆಸೆಂಜರ್) ನೇಮಕಾತಿ, ಸಶಸ್ತ್ರ ಗಾರ್ಡ್&zwnj;ಗಳ ಹೊಸ ನೇಮಕಾತಿ, ಸಿಬ್ಬಂದಿ ಕೊರತೆ ನಿವಾರಣೆ, ಶಾಶ್ವತ ಹುದ್ದೆಗಳ ಹೊರಗುತ್ತಿಗೆ ನಿಲ್ಲಿಸುವುದು, ವೇತನ ಸಮಾನತೆ ಸಮಸ್ಯೆ ಪರಿಹಾರ, ಪಿಂಚಣಿ ಸೌಲಭ್ಯಗಳಲ್ಲಿ ಸುಧಾರಣೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.&lt;/p&gt;&lt;p&gt;ಇದೇ ವೇಳೆ, 2019ರಿಂದ ಸೇರ್ಪಡೆಯಾದ ನೌಕರರಿಗೆ ಅಂತರ ವಲಯ (ಇಂಟರ್-ಸರ್ಕಲ್) ವರ್ಗಾವಣೆ ಜಾರಿಗೊಳಿಸುವುದು, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್&zwnj;ಪಿಎಸ್) ವ್ಯಾಪ್ತಿಯಲ್ಲಿರುವ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ನೀಡುವುದು, ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆ ತರುವುದು, ವೃತ್ತಿ ಪ್ರಗತಿ ಯೋಜನೆಯ ಮರುಪರಿಶೀಲನೆ, ಎಚ್&zwnj;ಆರ್&zwnj;ಎಂಎಸ್ ಸಮಸ್ಯೆಗಳ ಪರಿಹಾರ ಮತ್ತು ಕಾರ್ಮಿಕರ ಪ್ರತಿನಿಧಿಗಳ ನೇಮಕ ಸೇರಿದಂತೆ ಬೇಡಿಕೆಗಳನ್ನೂ ಒಕ್ಕೂಟ ಮುಂದಿಟ್ಟಿದೆ.&lt;/p&gt;&lt;h2&gt;ಸಿಬ್ಬಂದಿ ಕೊರತೆ, ಭದ್ರತಾ ಸಮಸ್ಯೆಗಳ ಬಗ್ಗೆ ಆತಂಕ&lt;/h2&gt;&lt;p&gt;ಅಧೀನ ಕೇಡರ್&zwnj;ನಲ್ಲಿ ಸಿಬ್ಬಂದಿ ಕೊರತೆ ಗಂಭೀರವಾಗಿದ್ದು, ಸುಮಾರು ಮೂರು ದಶಕಗಳಿಂದ ಸಂದೇಶವಾಹಕರ ನೇಮಕಾತಿ ಸ್ಥಗಿತಗೊಂಡಿರುವುದಾಗಿ ಒಕ್ಕೂಟ ಹೇಳಿದೆ. ಇದರ ಪರಿಣಾಮವಾಗಿ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂದು ಆರೋಪಿಸಲಾಗಿದೆ. ಸಶಸ್ತ್ರ ಗಾರ್ಡ್&zwnj;ಗಳ ಕೊರತೆಯಿಂದ ಭದ್ರತಾ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನೂ ಒಕ್ಕೂಟ ಉಲ್ಲೇಖಿಸಿದೆ. ಇತ್ತೀಚೆಗೆ ಸೂರತ್&zwnj;ನ ಎಸ್&zwnj;ಬಿಐ ಶಾಖೆಯಲ್ಲಿ ನಡೆದ ದರೋಡೆ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದು, ಇಂತಹ ನಿರ್ಲಕ್ಷ್ಯವು ನೌಕರರು ಹಾಗೂ ಗ್ರಾಹಕರ ಭದ್ರತೆಯನ್ನು ಹಾನಿಗೊಳಿಸುತ್ತದೆ ಎಂದು ಎಚ್ಚರಿಸಿದೆ.&lt;/p&gt;&lt;h2&gt;ವೇತನ ಅಸಮಾನತೆ ಆರೋಪ&lt;/h2&gt;&lt;p&gt;ಎಸ್&zwnj;ಬಿಐನಲ್ಲಿ ಅಧಿಕಾರಿಗಳು ಮತ್ತು ಕಾರ್ಮಿಕರ ನಡುವೆ ವೇತನ ಪರಿಷ್ಕರಣೆಯಲ್ಲಿ ಅಸಮಾನತೆ ಇದೆ ಎಂದು ಎಐಎಸ್&zwnj;ಬಿಐಎಸ್&zwnj;ಎಫ್ ಆರೋಪಿಸಿದೆ. 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಶೇ.17ರಷ್ಟು ವೇತನ ಹೆಚ್ಚಳ ಒಪ್ಪಂದವಾಗಿದ್ದರೂ, ವಿಶೇಷ ವೇತನದ ಮೂಲಕ ಅಧಿಕಾರಿಗಳು ಶೇ.22ರಷ್ಟು ಲಾಭ ಪಡೆದರೆ, ಕಾರ್ಮಿಕ ಸಿಬ್ಬಂದಿಗೆ ಶೇ.17ರಷ್ಟೇ ಸೀಮಿತವಾಗಿದೆ ಎಂದು ಹೇಳಲಾಗಿದೆ.&lt;/p&gt;&lt;h2&gt;ಪ್ರತಿಭಟನೆಗಳ ಸರಣಿ ಕಾರ್ಯಕ್ರಮ&lt;/h2&gt;&lt;p&gt;ಮುಷ್ಕರಕ್ಕೂ ಮುನ್ನ ಒಕ್ಕೂಟವು ಹಲವು ಹಂತಗಳಲ್ಲಿ ಪ್ರತಿಭಟನೆಗಳನ್ನು ಘೋಷಿಸಿದೆ. ಊಟದ ವಿರಾಮದ ವೇಳೆ ಪ್ರತಿಭಟನೆ, ಸಾಮಾಜಿಕ ಜಾಲತಾಣ ಅಭಿಯಾನ, ಮೌನ ಧರಣಿ, ಧರಣಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜೊತೆಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜ್ಞಾಪಕ ಪತ್ರಗಳನ್ನು ಸಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ. ನೌಕರರು ಮೇ 19ರಂದು ಹಣಕಾಸು ಸಚಿವರಿಗೆ ಮತ್ತು ಮೇ 21ರಂದು ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮೇ 25 ಅಥವಾ 26ರಂದು ರಜೆ ಬಂದಲ್ಲಿ, ಮುಷ್ಕರವನ್ನು ಮೇ 27ರಂದು ಮುಂದೂಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.&lt;/p&gt;&lt;h2&gt;ಬ್ಯಾಂಕ್ ಸೇವೆಗಳ ಮೇಲೆ ಪರಿಣಾಮ&lt;/h2&gt;&lt;p&gt;ಈ ಮುಷ್ಕರದ ಪರಿಣಾಮವಾಗಿ ಎಸ್&zwnj;ಬಿಐ ಶಾಖೆಗಳಲ್ಲಿನ ದೈನಂದಿನ ಬ್ಯಾಂಕಿಂಗ್ ಕಾರ್ಯಾಚರಣೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಆದರೆ ಸೇವೆಗಳ ಅಡಚಣೆ ಕುರಿತು ಬ್ಯಾಂಕ್ ವತಿಯಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.&lt;/p&gt;&lt;p&gt;ಒಟ್ಟಾರೆ, ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯವಾಗಿ ನಡೆಯಲಿರುವ ಈ ರಾಷ್ಟ್ರವ್ಯಾಪಿ ಮುಷ್ಕರ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಸರ್ಕಾರ ಮತ್ತು ಬ್ಯಾಂಕ್ ಆಡಳಿತವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಗಮನಾರ್ಹವಾಗಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/business/sbi-employees-announce-nationwide-strike-on-may-25-26-over-16-demands-gdp/articleshow-vmtnvsg"/>
        </item>
        <item>
            <title><![CDATA[Car Sales: ಮಾರುತಿ ಹವಾ, ಟಾಟಾ ಸವಾಲು! 2026ರ ಟಾಪ್ 5 ಕಾರುಗಳ ಪಟ್ಟಿ ಇಲ್ಲಿದೆ]]></title>
            <link>https://kannada.asianetnews.com/car-news/maruti-suzuki-dominates-april-2026-car-sales-tata-punch-shines/articleshow-wbgqw5w</link>
            <guid isPermaLink="true">https://kannada.asianetnews.com/car-news/maruti-suzuki-dominates-april-2026-car-sales-tata-punch-shines/articleshow-wbgqw5w</guid>
            <pubDate>Fri, 08 May 2026 14:17:17 +0530</pubDate>
            <description><![CDATA[&lt;p&gt;2026ರ ಏಪ್ರಿಲ್ ತಿಂಗಳ ಕಾರ್ ಸೇಲ್ಸ್ ರಿಪೋರ್ಟ್ ಬಂದಿದೆ. ಎಂದಿನಂತೆ ಮಾರುತಿ ಸುಜುಕಿ ತನ್ನ ಪಾರುಪತ್ಯ ಮುಂದುವರಿಸಿದೆ. ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ 4 ಮಾರುತಿ ಕಾರುಗಳೇ ಇವೆ. ಮಾರುತಿ ಸುಜುಕಿ ಡಿಸೈರ್ ಮೊದಲ ಸ್ಥಾನದಲ್ಲಿದ್ದರೆ, ಟಾಟಾ ಪಂಚ್ ಎರಡನೇ ಸ್ಥಾನ ಪಡೆದು ಪ್ರಬಲ ಪೈಪೋಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpqx5pynyacaqxmjasxqg45w,imgname-top-5-diesel-cars-1776771324885.jpg" type="image/jpeg" height="390" width="690"/>
            <content:encoded><![CDATA[&lt;p&gt;2026ರ ಏಪ್ರಿಲ್ ತಿಂಗಳಲ್ಲಿ ಭಾರತದ ಕಾರ್ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿದೆ. ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳಲ್ಲಿ ನಾಲ್ಕು ಕಾರುಗಳು ಮಾರುತಿ ಸುಜುಕಿ ಕಂಪನಿಯದ್ದೇ ಆಗಿವೆ. ಇನ್ನೊಂದೆಡೆ, ಟಾಟಾ ಪಂಚ್ ಅತ್ಯುತ್ತಮ ಪ್ರದರ್ಶನ ನೀಡಿ ಎರಡನೇ ಸ್ಥಾನಕ್ಕೇರಿದೆ. ಹೆಚ್ಚುತ್ತಿರುವ ಬೇಡಿಕೆ, ಸುಧಾರಿತ ಫೀಚರ್&zwnj;ಗಳು ಮತ್ತು ಗ್ರಾಹಕರ ವಿಶ್ವಾಸದಿಂದಾಗಿ ಈ ಮಾಡೆಲ್&zwnj;ಗಳ ಮಾರಾಟ ಗಣನೀಯವಾಗಿ ಏರಿಕೆಯಾಗಿದೆ.&lt;/p&gt;&lt;h2&gt;ಮಾರುತಿ ಸುಜುಕಿ ಡಿಸೈರ್&lt;/h2&gt;&lt;p&gt;ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಮಾರುತಿ ಸುಜುಕಿ ಡಿಸೈರ್ ಪಾತ್ರವಾಗಿದೆ. 2026ರ ಏಪ್ರಿಲ್&zwnj;ನಲ್ಲಿ ಕಂಪನಿಯು ಈ ಕಾರಿನ 23,000ಕ್ಕೂ ಹೆಚ್ಚು ಯೂನಿಟ್&zwnj;ಗಳನ್ನು ಮಾರಾಟ ಮಾಡಿದೆ. ಪ್ರೀಮಿಯಂ ಡಿಸೈನ್, ಆರಾಮದಾಯಕ ಕ್ಯಾಬಿನ್ ಮತ್ತು ಅತ್ಯುತ್ತಮ ಮೈಲೇಜ್&zwnj;ನಿಂದಾಗಿ ಹೊಸ ಡಿಸೈರ್ ಗ್ರಾಹಕರ ನೆಚ್ಚಿನ ಕಾರಾಗಿದೆ. ಇದರಲ್ಲಿ ಕಂಪನಿಯು ಆಧುನಿಕ ಇನ್ಫೋಟೈನ್&zwnj;ಮೆಂಟ್ ಸಿಸ್ಟಮ್, ಸನ್&zwnj;ರೂಫ್ ಮತ್ತು ಹಲವಾರು ಸುಧಾರಿತ ಫೀಚರ್&zwnj;ಗಳನ್ನು ಅಳವಡಿಸಿದೆ. ಹೀಗಾಗಿ, ಇದು ಕುಟುಂಬಗಳು ಮತ್ತು ಯುವ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ.&lt;/p&gt;&lt;p&gt;ಭಾರತದಲ್ಲಿ ಮಾರುತಿ ಸುಜುಕಿ ಡಿಸೈರ್ ಬೆಲೆಯು ₹6.26 ಲಕ್ಷದಿಂದ (ಎಕ್ಸ್-ಶೋರೂಂ) ₹9.31 ಲಕ್ಷದವರೆಗೆ ಇದೆ. ಇದು 80 bhp ಪವರ್ ಉತ್ಪಾದಿಸುವ 1.2-ಲೀಟರ್ Z-ಸೀರೀಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಸಿಎನ್&zwnj;ಜಿ ವೇರಿಯೆಂಟ್&zwnj;ನಲ್ಲೂ ಲಭ್ಯವಿದೆ. ಮೈಲೇಜ್ ವಿಚಾರಕ್ಕೆ ಬಂದರೆ, ಇದು ಪೆಟ್ರೋಲ್&zwnj;ನಲ್ಲಿ 25.7 ಕಿ.ಮೀ ಮತ್ತು ಸಿಎನ್&zwnj;ಜಿಯಲ್ಲಿ 33.7 ಕಿ.ಮೀ ಮೈಲೇಜ್ ನೀಡುತ್ತದೆ.&lt;/p&gt;&lt;h3&gt;ಟಾಟಾ ಪಂಚ್&lt;/h3&gt;&lt;p&gt;ಎರಡನೇ ಸ್ಥಾನದಲ್ಲಿರುವ ಟಾಟಾ ಪಂಚ್ ಕೂಡ ಮಾರುಕಟ್ಟೆಯಲ್ಲಿ ತನ್ನ ಬಲವಾದ ಹಿಡಿತವನ್ನು ಪ್ರದರ್ಶಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟದಲ್ಲಿ ಶೇ. 50ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಗಟ್ಟಿಮುಟ್ಟಾದ ಬಾಡಿ, 5-ಸ್ಟಾರ್ ಸುರಕ್ಷತಾ ರೇಟಿಂಗ್ ಮತ್ತು ಎಸ್&zwnj;ಯುವಿ ತರಹದ ಲುಕ್&zwnj;ನಿಂದಾಗಿ ಇದು ಗ್ರಾಹಕರ ನೆಚ್ಚಿನ ಆಯ್ಕೆಯಾಗಿದೆ.&lt;/p&gt;&lt;p&gt;ಮಾರುತಿ ಸುಜುಕಿ ಎರ್ಟಿಗಾ&lt;/p&gt;&lt;p&gt;ಮಾರುತಿ ಸುಜುಕಿ ಎರ್ಟಿಗಾ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಎಂಪಿವಿ, ದೊಡ್ಡ ಕುಟುಂಬಗಳಿಗೆ ಬಹಳ ಹಿಂದಿನಿಂದಲೂ ಒಂದು ನಂಬಿಕಸ್ಥ ಆಯ್ಕೆಯಾಗಿದೆ. ಆರಾಮದಾಯಕ ಆಸನಗಳು, ವಿಶಾಲವಾದ ಸ್ಥಳಾವಕಾಶ ಮತ್ತು ಉತ್ತಮ ಇಂಧನ ದಕ್ಷತೆಯು ಇದನ್ನು ಸತತವಾಗಿ ಜನಪ್ರಿಯಗೊಳಿಸಿದೆ.&lt;/p&gt;&lt;p&gt;&lt;strong&gt;ಮಾರುತಿ ಸುಜುಕಿ ವ್ಯಾಗನ್&zwnj;ಆರ್&lt;/strong&gt;&lt;/p&gt;&lt;p&gt;ಮಾರುತಿ ಸುಜುಕಿ ವ್ಯಾಗನ್&zwnj;ಆರ್ ಟಾಪ್ 5 ಸ್ಥಾನಗಳಲ್ಲಿ ಒಂದನ್ನು ಪಡೆದಿದೆ. ಕೈಗೆಟುಕುವ ಬೆಲೆ, ಸುಲಭ ಡ್ರೈವಿಂಗ್ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಇದು ಸಣ್ಣ ಕುಟುಂಬಗಳ ಜನಪ್ರಿಯ ಆಯ್ಕೆಯಾಗಿದೆ. ಉತ್ತಮ ಇಂಧನ ದಕ್ಷತೆ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯು ಇದರ ಸ್ಥಿರ ಮಾರಾಟಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಮಾರುತಿ ಸುಜುಕಿ ಫ್ರಾಂಕ್ಸ್&lt;/strong&gt;&lt;/p&gt;&lt;p&gt;ಮಾರುತಿ ಸುಜುಕಿ ಫ್ರಾಂಕ್ಸ್ ಕೂಡ ಉತ್ತಮ ಪ್ರದರ್ಶನ ನೀಡಿದೆ. ಸ್ಟೈಲಿಶ್ ಡಿಸೈನ್ ಮತ್ತು ಆಧುನಿಕ ಫೀಚರ್&zwnj;ಗಳೊಂದಿಗೆ ಈ ಕಾರು ವಿಶೇಷವಾಗಿ ಯುವಜನರನ್ನು ಆಕರ್ಷಿಸುತ್ತಿದೆ. ಟರ್ಬೋಚಾರ್ಜ್ಡ್ ಎಂಜಿನ್ ಮತ್ತು ಪ್ರೀಮಿಯಂ ಇಂಟೀರಿಯರ್ ಇದರ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.&lt;/p&gt;]]></content:encoded>
            <category>business</category>
            <dc:creator>Ravi Janekal</dc:creator>
            <atom:link href="https://kannada.asianetnews.com/car-news/maruti-suzuki-dominates-april-2026-car-sales-tata-punch-shines/articleshow-wbgqw5w"/>
        </item>
        <item>
            <title><![CDATA[Money Zodiac: ಈ ನಾಲ್ಕು ರಾಶಿಯವರು ಹಣ ಗಳಿಸುವದರಲ್ಲಿ ಬೆಸ್ಟ್, ದುಡ್ಡು ಮಾಡೋದ್ರಲ್ಲಿ ನಿಸ್ಸೀಮರು!]]></title>
            <link>https://kannada.asianetnews.com/gallery/business/astrology-says-these-four-zodiac-signs-naturally-have-more-wealth-luck-suh-zp2dr0r</link>
            <guid isPermaLink="true">https://kannada.asianetnews.com/gallery/business/astrology-says-these-four-zodiac-signs-naturally-have-more-wealth-luck-suh-zp2dr0r</guid>
            <pubDate>Thu, 07 May 2026 10:16:07 +0530</pubDate>
            <description><![CDATA[&lt;p&gt;ಜ್ಯೋತಿಷ್ಯ ತಜ್ಞ ಸಂತೋಷ್ ಶರ್ಮಾ ಅವರ ಪ್ರಕಾರ ಈ ರಾಶಿಯವರು ಹಣ ಸಂಪಾದಿಸುವುದು, ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದರಲ್ಲಿ ಕೌಶಲ್ಯ ಹೊಂದಿರುತ್ತಾರೆ ಮತ್ತು ಅವರು ಶ್ರೀಮಂತರಾಗುತ್ತಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kck28vtdc6sgdc5z4k12cxhd,imgname-d1764483-e407-4cad-9a8c-70ececa62b71--1--1765871480652.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯ ತಜ್ಞ ಸಂತೋಷ್ ಶರ್ಮಾ ಅವರ ಪ್ರಕಾರ ಈ ರಾಶಿಯವರು ಹಣ ಸಂಪಾದಿಸುವುದು, ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದರಲ್ಲಿ ಕೌಶಲ್ಯ ಹೊಂದಿರುತ್ತಾರೆ ಮತ್ತು ಅವರು ಶ್ರೀಮಂತರಾಗುತ್ತಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಈ ರಾಶಿಯವರು ಜೀವನದಲ್ಲಿ ಸ್ಥಿರತೆಯನ್ನು ಇಷ್ಟಪಡುತ್ತಾರೆ, ಅದಕ್ಕಾಗಿಯೇ ಅವರು ಹಣಕಾಸಿನ ವಿಷಯಗಳಲ್ಲಿ ಬಹಳ ಶಿಸ್ತುಬದ್ಧರಾಗಿರುತ್ತಾರೆ. ಅವರು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ಆಳವಾದ ಚಿಂತನೆ ಇರುತ್ತದೆ. ಅನಗತ್ಯ ಖರ್ಚುಗಳಿಂದ ದೂರವಿರುವುದು ಮತ್ತು ಅಗತ್ಯವಿರುವಲ್ಲಿ ಮಾತ್ರ ಹಣವನ್ನು ಖರ್ಚು ಮಾಡುವುದು ಅವರ ಮುಖ್ಯ ಲಕ್ಷಣವಾಗಿದೆ. ಅವರು ಗಳಿಸುವ ಪ್ರತಿ ರೂಪಾಯಿಯನ್ನು ಹೇಗೆ ಉಳಿಸಿಕೊಳ್ಳುವುದು ಮತ್ತು ಅದನ್ನು ಹೇಗೆ ದ್ವಿಗುಣಗೊಳಿಸುವುದು ಎಂದು ಅವರಷ್ಟು ಯಾರಿಗೂ ತಿಳಿದಿಲ್ಲ. ಅವರ ಆರ್ಥಿಕ ಶಿಸ್ತು ಅವರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರು ತಮ್ಮ ಜೀವನವನ್ನು ಅಸಾಧಾರಣ ಯೋಜನೆಯೊಂದಿಗೆ ನಡೆಸುತ್ತಾರೆ. ಅವರು ಸಣ್ಣ ವಿವರಗಳನ್ನು ಸಹ ಸಂಪೂರ್ಣವಾಗಿ ವಿಶ್ಲೇಷಿಸುತ್ತಾರೆ ಮತ್ತು ಸಾಧಕ-ಬಾಧಕಗಳನ್ನು ಅಳೆಯುತ್ತಾರೆ. ಯಾವುದೇ ಕೆಲಸ ಅಥವಾ ವ್ಯವಹಾರವಾಗಿದ್ದರೂ, ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ. ಅವರ ಶಿಸ್ತು ಮತ್ತು ಕೆಲಸದ ಬದ್ಧತೆಯು ಆದಾಯದಲ್ಲಿ ಸ್ಥಿರ ಮತ್ತು ಸ್ಥಿರವಾದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲದೆ ಅವರು ತೆಗೆದುಕೊಳ್ಳುವ ಹೆಜ್ಜೆಗಳು ಅವರನ್ನು ಆರ್ಥಿಕ ಎತ್ತರಕ್ಕೆ ಕೊಂಡೊಯ್ಯುತ್ತವೆ.&lt;/p&gt;&lt;img&gt;&lt;p&gt;ಈ ರಾಶಿಯವರು ರಹಸ್ಯ ಸ್ವಭಾವದವರು ಮತ್ತು ತಮ್ಮ ಹಣಕಾಸಿನ ಯೋಜನೆಗಳ ಬಗ್ಗೆ ಯಾರಿಗೂ ತಿಳಿಸುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಅವರು ಅಪಾಯಗಳನ್ನು ಮುಂಚಿತವಾಗಿ ಊಹಿಸುವ ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವಾಗ ಅಪಾಯಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವಾಗ ಹಿಂದೆ ಸರಿಯಬೇಕು ಎಂಬ ಅವರ ಬುದ್ಧಿವಂತ ನಿರ್ಧಾರಗಳು ವ್ಯಾಪಾರ ಕ್ಷೇತ್ರದಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತವೆ. ಹೊಸ ಅವಕಾಶಗಳನ್ನು ಗುರುತಿಸುವಲ್ಲಿ ಅವರು ಎಲ್ಲರಿಗಿಂತ ಮುಂದಿರುತ್ತಾರೆ, ಇದು ಅವರಿಗೆ ದೊಡ್ಡ ಪ್ರಮಾಣದ ಹಣವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ.&lt;/p&gt;&lt;img&gt;&lt;p&gt;ಈ ರಾಶಿಚಕ್ರದ ಜನರು ಶ್ರಮಶೀಲರು, ಅವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಒಮ್ಮೆ ಅವರು ಸಂಪತ್ತನ್ನು ಸಂಗ್ರಹಿಸಲು ನಿರ್ಧರಿಸಿದರೆ, ಅದನ್ನು ಸಾಧಿಸುವವರೆಗೆ ಅವರು ನಿದ್ರೆ ಮಾಡುವುದಿಲ್ಲ. ಅವರ ಅಪಾರ ತಾಳ್ಮೆ ದೀರ್ಘಾವಧಿಯ ಹೂಡಿಕೆಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ತಕ್ಷಣದ ಲಾಭಗಳನ್ನು ಬೆನ್ನಟ್ಟದೆ ಸ್ಥಿರವಾಗಿ ಬೆಳೆಯುವ ಅವರ ಬಲವಾದ ದೃಢಸಂಕಲ್ಪವು ಅವರಿಗೆ ದೊಡ್ಡ ಪ್ರಮಾಣದಲ್ಲಿ ಸಂಪತ್ತನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಅವರು ತಮ್ಮ ಜೀವನದ ಅಂತ್ಯದ ವೇಳೆಗೆ ತಮ್ಮನ್ನು ತಾವು ಅತ್ಯಂತ ಶ್ರೀಮಂತ ವ್ಯಕ್ತಿಗಳಾಗಿ ಸ್ಥಾಪಿಸಿಕೊಳ್ಳುವ ಹೆಚ್ಚಿನ ಅವಕಾಶವನ್ನು ಹೊಂದಿದ್ದಾರೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.&lt;/p&gt;]]></content:encoded>
            <category>business</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/astrology-says-these-four-zodiac-signs-naturally-have-more-wealth-luck-suh-zp2dr0r"/>
        </item>
    </channel>
</rss>
