<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 09 Sep 2026 22:33:07 +0530</lastBuildDate>
        <atom:link href="https://kannada.asianetnews.com/rss/business" rel="self" type="application/rss+xml"/>
        <item>
            <title><![CDATA[Oil: ದೀಪಾವಳಿಗಾದ್ರು ತೈಲ ಬೆಲೆ ಇಳಿಯುತ್ತಾ? ಇಳಿಯಲ್ವಾ? ರಷ್ಯಾ-ಸೌದಿಯಿಂದ ಬಿಗ್ ಅಪ್ಡೇಟ್!]]></title>
            <link>https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu</link>
            <guid isPermaLink="true">https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu</guid>
            <pubDate>Sun, 06 Sep 2026 20:43:50 +0530</pubDate>
            <description><![CDATA[&lt;p&gt;ಹಬ್ಬಗಳ ಸೀಸನ್&zwnj;ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ತೈಲ ಉತ್ಪಾದಕ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1131yxp9tnhs2ytjhdagrft,imgname-petrol-pump-1787816901558.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರುವ ಸಾಲು ಸಾಲು ಹಬ್ಬಗಳ ಸೀಸನ್&zwnj;ನಲ್ಲಿ ಪೆಟ್ರೋಲ್-ಡೀಸೆಲ್ ದರ ಕಮ್ಮಿಯಾಗಿ ಜೇಬಿಗೆ ಸ್ವಲ್ಪ ಸಮಾಧಾನ ಸಿಗಬಹುದು ಎಂದು ಕಾಯುತ್ತಿದ್ದೀರಾ? ದೀಪಾವಳಿ ಹೊತ್ತಿಗೆ ಭಾರತೀಯರ ಜೇಬಿಗೆ ಶುಭಸುದ್ದಿ ಸಿಗುತ್ತಾ ಅಥವಾ ತೈಲ ದರ ಏರಿಕೆಯ ಭೀಕರ ಶಾಕ್ ಕಾದಿದೆಯಾ? ಈ ಗೊಂದಲಕ್ಕೆ ಜಗತ್ತಿನ ಬಲಶಾಲಿ ರಾಷ್ಟ್ರಗಳಾದ ರಷ್ಯಾ ಮತ್ತು ಸೌದಿ ಅರೇಬಿಯಾ ರಹಸ್ಯ ಉತ್ತರವೊಂದನ್ನು ನೀಡಿವೆ! ಏನೆಂದು ನೋಡಿಕೊಂಡು ಬರೋಣ ಬನ್ನಿ.&lt;/p&gt;&lt;h2&gt;&lt;strong&gt;ತೈಲ ಬೆಲೆ ಇಳಿಯುತ್ತಾ? ಅಥವಾ ಇಳಿಯಲ್ವಾ?!&lt;/strong&gt;&lt;/h2&gt;&lt;p&gt;ಜನರ ನಿರೀಕ್ಷೆಗೆ ಸಂಪೂರ್ಣ ಉಲ್ಟಾ ಫಲಿತಾಂಶ ಸಿಕ್ಕಿದೆ. ದೀಪಾವಳಿ ವೇಳೆಗೆ ತೈಲ ಬೆಲೆ ಖಂಡಿತವಾಗಿಯೂ ಇಳಿಯುವುದಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಭಾರಿ ಬೇಡಿಕೆಯಿದ್ದರೂ, ದೀಪಾವಳಿ ಹಬ್ಬ ಮುಗಿಯುವವರೆಗೆ ತೈಲ ಉತ್ಪಾದನೆಯನ್ನು ಯಾವುದೇ ಕಾರಣಕ್ಕೂ ಹೆಚ್ಚಿಸದಿರಲು ಬಲಶಾಲಿ ರಾಷ್ಟ್ರಗಳು ನಿರ್ಧರಿಸಿವೆ. ಇದರಿಂದಾಗಿ ಮುಂಬರುವ ಹಬ್ಬದ ಋತುವಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವ ಭರವಸೆಗಳು ಸಂಪೂರ್ಣವಾಗಿ ಹುಸಿಯಾಗಿವೆ.&lt;/p&gt;&lt;h3&gt;&lt;strong&gt;ರಷ್ಯಾ ಮತ್ತು ಸೌದಿ ಪಡೆಯ ಬಿಗ್ ಅಪ್ಡೇಟ್!&lt;/strong&gt;&lt;/h3&gt;&lt;p&gt;ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ 'ಒಪೆಕ್' (OPEC) ತೈಲ ಸಂಘಟನೆಯ ಏಳು ರಾಷ್ಟ್ರಗಳು ನಡೆಸಿರುವ ತುರ್ತು ವೀಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳಿಗೆ ಆಘಾತ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.&lt;/p&gt;&lt;p&gt;&lt;strong&gt;ಉತ್ಪಾದನೆ ಹೆಚ್ಚಳಕ್ಕೆ ಬ್ರೇಕ್;&lt;/strong&gt; ಪ್ರಸ್ತುತ ಮಾರುಕಟ್ಟೆಯಲ್ಲಿ ತೈಲ ಅಭಾವವಿದ್ದರೂ, ಅಕ್ಟೋಬರ್ ವರೆಗೆ ಕಚ್ಚಾ ತೈಲ ಉತ್ಪಾದನಾ ಕೋಟಾವನ್ನು ಹೆಚ್ಚಿಸದೆ ಯಥಾವತ್ತಾಗಿ ಕಾಯ್ದುಕೊಳ್ಳಲು ನಿರ್ಧರಿಸಲಾಗಿದೆ.&lt;/p&gt;&lt;p&gt;&lt;strong&gt;ಹೊಸ ಮಾರ್ಗ ಸಿಗುವವರೆಗೆ ಕಾಯುವಿಕೆ;&lt;/strong&gt; ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ತೈಲ ರಫ್ತು ಮಾರ್ಗಗಳು ಕಂಡುಕೊಳ್ಳುವವರೆಗೆ ಪ್ರಸ್ತುತ ಇರುವ ಉತ್ಪಾದನೆಯನ್ನಷ್ಟೇ ಮುಂದುವರಿಸಲಾಗುವುದು ಎಂದು ಈ ಒಕ್ಕೂಟ ಪಟ್ಟು ಹಿಡಿದಿದೆ.&lt;/p&gt;&lt;h3&gt;&lt;strong&gt;ಯುಎಸ್-ಇರಾನ್ ಯುದ್ಧ ತಂದಿಟ್ಟ ಸಂಕಟ!&lt;/strong&gt;&lt;/h3&gt;&lt;p&gt;ಅಮೆರಿಕ ಮತ್ತು ಇರಾನ್ ನಡುವೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಭೀಕರ ಯುದ್ಧವೇ ಈ ಎಲ್ಲಾ ಗೊಂದಲಗಳಿಗೆ ಮುಖ್ಯ ಕಾರಣವಾಗಿದೆ.&lt;/p&gt;&lt;p&gt;&lt;strong&gt;1. ಹಾರ್ಮುಜ್ ಜಲಸಂಧಿ ಬ್ಲಾಕ್&lt;/strong&gt;; ಯುದ್ಧದ ಬಿಕ್ಕಟ್ಟಿನಿಂದಾಗಿ ಪ್ರಮುಖ ತೈಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ ತೈಲ ಸಾಗಣೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.&lt;/p&gt;&lt;p&gt;&lt;strong&gt;2. ಪೂರೈಕೆಯಲ್ಲಿ ಭಾರಿ ಕಡಿತ;&lt;/strong&gt; ಪರ್ಷಿಯನ್ ಕೊಲ್ಲಿಯ ಮೂಲಕ ಜಗತ್ತಿನಾದ್ಯಂತ ರಫ್ತಾಗಬೇಕಿದ್ದ ಕಚ್ಚಾ ತೈಲದ ಪ್ರಮಾಣ ಗಣನೀಯವಾಗಿ ಕುಸಿದಿದೆ.&lt;/p&gt;&lt;h3&gt;ಸಾಗಣೆಯಲ್ಲಾಗಿರುವ ಈ ಭಾರಿ ತಡೆಯಿಂದಾಗಿ ಜಾಗತಿಕವಾಗಿ ತೈಲ ಅಭಾವ ಸೃಷ್ಟಿಯಾಗಿದ್ದು, ಬೆಲೆ ಇಳಿಕೆ ಸಾಧ್ಯವೇ ಇಲ್ಲದಂತಾಗಿದೆ.&lt;/h3&gt;&lt;h3&gt;&lt;strong&gt;ಕೈಕೊಟ್ಟ ಒಪೆಕ್ ದೇಶಗಳ ಯೋಜನೆ!&lt;/strong&gt;&lt;/h3&gt;&lt;p&gt;2023 ರಲ್ಲಿ ಉತ್ಪಾದನಾ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಮಾರುಕಟ್ಟೆಗೆ ಯಥೇಚ್ಛವಾಗಿ ತೈಲ ಪೂರೈಸುವ ಯೋಜನೆಯನ್ನು ಈ ಮೈತ್ರಿಕೂಟ ಹೊಂದಿತ್ತು. ಯುದ್ಧ ಮುಗಿದ ಬಳಿಕ ಉತ್ಪಾದನೆ ಹೆಚ್ಚಿಸುವ ಆಸೆಯಿತ್ತಾದರೂ, ಹಲವು ವರ್ಷಗಳ ನಿರ್ಬಂಧಗಳಿಂದಾಗಿ ಸದಸ್ಯ ರಾಷ್ಟ್ರಗಳ ಬೌದ್ಧಿಕ ಹಾಗೂ ತಾಂತ್ರಿಕ ಉತ್ಪಾದನಾ ಸಾಮರ್ಥ್ಯವೇ ಕುಸಿದುಹೋಗಿದೆ. ಇದೀಗ ಯುಎಸ್-ಇರಾನ್ ಸಮರ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ತೈಲ ಪೂರೈಸುವುದು ತೈಲ ಒಕ್ಕೂಟಕ್ಕೂ ಸವಾಲಾಗಿ ಪರಿಣಮಿಸಿದೆ. ಪರಿಣಾಮವಾಗಿ, ಈ ದೀಪಾವಳಿ ಹಬ್ಬಕ್ಕೂ ತೈಲ ದರ ಇಳಿಕೆಯಾಗದೆ ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತವಾಗಿದೆ.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/diwali-oil-price-petrol-diesel-price-russia-saudi-arabia-opec-plus-big-decision-crude-oil-price-bmk/articleshow-3euzdyu"/>
        </item>
        <item>
            <title><![CDATA[Layoffs: ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಉದ್ಯೋಗ ಕಡಿತ; ನೂರಾರು ಉದ್ಯೋಗಿಗಳಿಗೆ ಗೇಟ್‌ಪಾಸ್, ಕಾರಣವೇನು?]]></title>
            <link>https://kannada.asianetnews.com/business/samsung-india-layoffs-begin-amid-weak-sales-rising-costs-rav/articleshow-4xgq6y4</link>
            <guid isPermaLink="true">https://kannada.asianetnews.com/business/samsung-india-layoffs-begin-amid-weak-sales-rising-costs-rav/articleshow-4xgq6y4</guid>
            <pubDate>Tue, 08 Sep 2026 13:31:16 +0530</pubDate>
            <description><![CDATA[&lt;p&gt;ಹೆಚ್ಚುತ್ತಿರುವ ವೆಚ್ಚ ಮತ್ತು ಕುಸಿಯುತ್ತಿರುವ ಮಾರಾಟದಿಂದಾಗಿ ಸ್ಯಾಮ್&zwnj;ಸಂಗ್ ಇಂಡಿಯಾ ತನ್ನ ಟೆಲಿವಿಷನ್ ಮತ್ತು ಗೃಹೋಪಯೋಗಿ ವಿಭಾಗದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಖರ್ಚು ಕಡಿಮೆ ಮಾಡಲು ಕಂಪನಿಯು ತನ್ನ ಬ್ರಾಂಚ್&zwnj;ಗಳನ್ನು ವಿಲೀನಗೊಳಿಸಲು ಮುಂದಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2008dan72bvp7y0rk58gpq1,imgname-samsung-india-layoffs-1788854154581.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದೆಡೆ ಹೆಚ್ಚುತ್ತಿರುವ ವೆಚ್ಚ, ಇನ್ನೊಂದೆ ನಿರಿಕ್ಷಿತ ಮಾರಾಟ ಆಗದೆ ಕುಸಿಯುತ್ತಿರುವ ಹಿನ್ನೆಲೆ ನಷ್ಟದಿಂದ ತಪ್ಪಿಸಿಕೊಳ್ಳಲು ಇದೀಗ ದೈತ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾದ 'ಸ್ಯಾಮ್&zwnj;ಸಂಗ್ ಇಂಡಿಯಾ' ಕೂಡ ತನ್ನ ಉದ್ಯೋಗಿಗಳನ್ನು ಹಂತ ಹಂತವಾಗಿ ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ.&lt;/p&gt;&lt;p&gt;ವರದಿಗಳ ಪ್ರಕಾರ ಕಂಪನಿಯು ಟೆಲಿವಿಷನ್ ಮತ್ತು ಗೃಹೋಪಯೋಗಿ ವಿಭಾಗದಿಂದ ಸುಮಾರು 80-100 ಉದ್ಯೋಗಿಗಳಿಗೆ ಈಗಾಗಲೇ ಕೆಲಸ ಬಿಡುವಂತೆ ಸೂಚಿಸಿದೆ. ಇದರಲ್ಲಿ ಕಂಪನಿಯ ಹೆಡ್&zwnj;ಕ್ವಾರ್ಟರ್ಸ್&zwnj;ನಲ್ಲಿರುವ ಡೈರೆಕ್ಟರ್ ಮಟ್ಟದ ಅಧಿಕಾರಿಗಳು, ಟೀಮ್ ಲೀಡ್&zwnj;ಗಳು ಹಾಗೂ ವಿವಿಧ ನಗರಗಳಲ್ಲಿರುವ ಬ್ರಾಂಚ್ ಮತ್ತು ಏರಿಯಾ ಮ್ಯಾನೇಜರ್&zwnj;ಗಳು ಸೇರಿದ್ದಾರೆ.&lt;/p&gt;&lt;h2&gt;ಸ್ಯಾಮ್&zwnj;ಸಂಗ್ Layoff ಯಾರ ಮೇಲೆ ಪರಿಣಾಮ?&lt;/h2&gt;&lt;p&gt;ಎಲೆಕ್ಟ್ರಾನಿಕ್ಸ್ ಬಿಸಿನೆಸ್&zwnj;ನಲ್ಲಿರುವ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಶೇ. 25ರಷ್ಟು ಉದ್ಯೋಗಿಗಳ ಮೇಲೆ ಇದು ಪರಿಣಾಮ ಬೀರಬಹುದು. ಇದರಲ್ಲಿ ಮ್ಯಾನ್&zwnj;ಪವರ್ ಏಜೆನ್ಸಿಗಳ ಮೂಲಕ ನೇಮಕಗೊಂಡ ಸಿಬ್ಬಂದಿಯೂ ಸೇರಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;h3&gt;ಬ್ಯಾಚ್&zwnj;ಗಳಲ್ಲಿ ಟರ್ಮಿನೇಷನ್ ಲೆಟರ್&lt;/h3&gt;&lt;p&gt;ಸ್ಯಾಮ್&zwnj;ಸಂಗ್ ಇಂಡಿಯಾದ ಎಲೆಕ್ಟ್ರಾನಿಕ್ಸ್ ಸೇಲ್ಸ್ ವಿಭಾಗದಲ್ಲಿ ಸುಮಾರು 550-600 ಅಧಿಕಾರಿಗಳಿದ್ದಾರೆ. ಸ್ಮಾರ್ಟ್&zwnj;ಫೋನ್ ವಿಭಾಗದ ಸಿಬ್ಬಂದಿ ಇದಕ್ಕಿಂತ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಉದ್ಯೋಗ ಕಡಿತದಿಂದ ತೊಂದರೆಗೊಳಗಾದ ಉದ್ಯೋಗಿಯೊಬ್ಬರು ಹೇಳುವ ಪ್ರಕಾರ, ಕಂಪನಿಯು ಕಳೆದ ಕೆಲವು ದಿನಗಳಿಂದ ಪ್ರತಿದಿನ ಸಣ್ಣ ಸಣ್ಣ ಬ್ಯಾಚ್&zwnj;ಗಳಲ್ಲಿ ಟರ್ಮಿನೇಷನ್ ಲೆಟರ್ ನೀಡುತ್ತಿದೆ. ಹಲವು ಉದ್ಯೋಗಿಗಳಿಗೆ ನೋಟಿಸ್ ಪೀರಿಯಡ್ ಪೂರೈಸದೆಯೇ ಕೆಲಸ ಬಿಡಲು ಹೇಳಲಾಗಿದೆ. ಇದಕ್ಕೆ ಕಂಪನಿಯು ಪರಿಹಾರವಾಗಿ ಮೂರು ತಿಂಗಳ ಸಂಬಳ ಹಾಗೂ ಪ್ರತಿ ವರ್ಷದ ಸೇವೆಗೆ ಒಂದು ತಿಂಗಳ ಹೆಚ್ಚುವರಿ ಸಂಬಳವನ್ನು ನೀಡುತ್ತಿದೆ.&lt;/p&gt;&lt;h3&gt;ರೂಪಾಯಿ ಮೌಲ್ಯ ಕುಸಿತದ ಪರಿಣಾಮವೇ?&lt;/h3&gt;&lt;p&gt;ಹೌದು ಎನ್ನುತ್ತದೆ ಅಂಕಿ-ಅಂಶ. FY26ರ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇ. 10ರಷ್ಟು ಕುಸಿದಿರುವುದು ಸ್ಯಾಮ್&zwnj;ಸಂಗ್&zwnj;ಗೆ ದೊಡ್ಡ ತಲೆನೋವಾಗಿದೆ. ಈ ವರ್ಷ ರೂಪಾಯಿ ಮೌಲ್ಯ ಸ್ಥಿರವಾಗಿದ್ದರೂ, ಹಿಂದಿನ ಕುಸಿತದ ಪರಿಣಾಮ ಕಂಪನಿಯ ಮೇಲೆ ಇನ್ನೂ ಇದೆ. ದುರ್ಬಲ ರೂಪಾಯಿಯಿಂದಾಗಿ ಸ್ಯಾಮ್&zwnj;ಸಂಗ್ ಸ್ಮಾರ್ಟ್&zwnj;ಫೋನ್&zwnj;ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆ ಹೆಚ್ಚಾಗಿದ್ದು, ಮಾರಾಟದ ಮೇಲೆ ಮತ್ತಷ್ಟು ಒತ್ತಡ ಬಿದ್ದಿದೆ. ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ಸ್ ಉದ್ಯಮವೇ ಮಾರಾಟ ಮತ್ತು ಲಾಭಾಂಶದ ಕುಸಿತವನ್ನು ಎದುರಿಸುತ್ತಿದೆ. ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ ಸ್ಮಾರ್ಟ್&zwnj;ಫೋನ್ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 11-12ರಷ್ಟು ಕಡಿಮೆಯಾಗಿದೆ.&lt;/p&gt;&lt;p&gt;ಸ್ಯಾಮ್&zwnj;ಸಂಗ್ ಇಂಡಿಯಾದ ಒಟ್ಟು ಆದಾಯದಲ್ಲಿ ಮೊಬೈಲ್ ಫೋನ್&zwnj;ಗಳ ಪಾಲು ಸುಮಾರು ನಾಲ್ಕನೇ ಮೂರರಷ್ಟಿದೆ. ಹೀಗಾಗಿ, ಈ ವಿಭಾಗದಲ್ಲಿನ ಕುಸಿತ ಕಂಪನಿಗೆ ದೊಡ್ಡ ಹೊಡೆತ ನೀಡಲಿದೆ. ಇದೇ ವೇಳೆ, ಭಾರತದ ಏರ್-ಕಂಡಿಷನರ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸ್ಯಾಮ್&zwnj;ಸಂಗ್ ಈ ವರ್ಷ ಸಾಕಷ್ಟು ಪ್ರಯತ್ನ ಪಟ್ಟರೂ, ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಕಚ್ಚಾ ವಸ್ತುಗಳ ಬೆಲೆ ಏರಿಕೆಯು ಅದರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.&lt;/p&gt;&lt;h3&gt;ಬ್ರಾಂಚ್&zwnj;ಗಳ ವಿಲೀನ&lt;/h3&gt;&lt;p&gt;ಖರ್ಚು ಕಡಿಮೆ ಮಾಡುವ ಭಾಗವಾಗಿ, ಸ್ಯಾಮ್&zwnj;ಸಂಗ್ ತನ್ನ ಬ್ರಾಂಚ್ ನೆಟ್&zwnj;ವರ್ಕ್ ಅನ್ನು ವಿಲೀನ ಮಾಡಲು ಮುಂದಾಗಿದೆ. ರಾಂಚಿ ಮತ್ತು ಪಾಟ್ನಾ, ದೆಹಲಿ ಮತ್ತು ಗುರ್&zwnj;ಗಾಂವ್, ಹಾಗೂ ಪಂಜಾಬ್ ಮತ್ತು ಚಂಡೀಗಢದಂತಹ ಕಚೇರಿಗಳನ್ನು ವಿಲೀನಗೊಳಿಸಲಾಗುತ್ತಿದೆ. ಈ ವಿಲೀನದಿಂದಾಗಿ ಕೆಲವು ಹುದ್ದೆಗಳು ಅನಗತ್ಯವಾಗುತ್ತವೆ ಇದರಿಂದ ಹುದ್ದೆ ತೆರವುಗೊಳಿಸಬಹುದು ಎಂದು ಉದ್ಯಮದ ತಜ್ಞರು ಹೇಳುತ್ತಾರೆ.&lt;/p&gt;&lt;p&gt;ಸ್ಮಾರ್ಟ್&zwnj;ಫೋನ್ ವಿಭಾಗ ಸದ್ಯಕ್ಕೆ ಸೇಫ್?&lt;/p&gt;&lt;p&gt;ವರದಿಗಳ ಪ್ರಕಾರ, ಸದ್ಯದ ಪಟ್ಟಿಗೆ ಉದ್ಯೋಗ ಕಡಿತವು ಸ್ಯಾಮ್&zwnj;ಸಂಗ್&zwnj;ನ ಸ್ಮಾರ್ಟ್&zwnj;ಫೋನ್ ವಿಭಾಗದ ಮೇಲೆ ಪರಿಣಾಮ ಬೀರಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣ ಮೊಬೈಲ್ ಬಿಸಿನೆಸ್ ಸ್ಯಾಮ್&zwnj;ಸಂಗ್&zwnj;ಗೆ ಭಾರತದಲ್ಲಿ ಅತಿ ಹೆಚ್ಚು ಆದಾಯ ತರುವ ವಿಭಾಗವಾಗಿದೆ. ಹೀಗಾಗಿ, ಸ್ಮಾರ್ಟ್&zwnj;ಫೋನ್ ಮಾರಾಟದಲ್ಲಿ ಚೇತರಿಕೆ ಕಾಣುವುದು ಕಂಪನಿಗೆ ಬಹಳ ಮುಖ್ಯವಾಗಿದೆ.&lt;/p&gt;&lt;p&gt;ಸ್ಯಾಮ್&zwnj;ಸಂಗ್&zwnj;ನ ಹೊಸ ಪ್ರೀಮಿಯಂ ಫೋನ್&zwnj;ಗಳಾದ ಗ್ಯಾಲಕ್ಸಿ ಫೋಲ್ಡ್ ಮತ್ತು ಫ್ಲಿಪ್&zwnj;ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, 1 ಲಕ್ಷ ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಫೋನ್&zwnj;ಗಳು ಒಟ್ಟು ಸ್ಮಾರ್ಟ್&zwnj;ಫೋನ್ ಮಾರುಕಟ್ಟೆಯ ಕೇವಲ ಶೇ. 4ರಷ್ಟು ಮಾತ್ರ. ಹಾಗಾಗಿ, ಈ ಪ್ರೀಮಿಯಂ ವಿಭಾಗದಿಂದ ಕಂಪನಿಯ ಒಟ್ಟಾರೆ ಮಾರುಕಟ್ಟೆ ಪಾಲುದಾರಿಕೆಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ.&lt;/p&gt;&lt;h3&gt;ಕೌಂಟರ್&zwnj;ಪಾಯಿಂಟ್ ರಿಸರ್ಚ್ ಹೇಳೋದೇನು?&lt;/h3&gt;&lt;p&gt;ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್&zwnj;ಪಾಯಿಂಟ್ ರಿಸರ್ಚ್ ಪ್ರಕಾರ, ಏಪ್ರಿಲ್-ಜೂನ್ ಅವಧಿಯಲ್ಲಿ ಸ್ಯಾಮ್&zwnj;ಸಂಗ್ ಭಾರತದ ಸ್ಮಾರ್ಟ್&zwnj;ಫೋನ್ ಮಾರುಕಟ್ಟೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ವಿವೋ ಮೊದಲ ಸ್ಥಾನ ಮತ್ತು ಒಪ್ಪೋ ಎರಡನೇ ಸ್ಥಾನದಲ್ಲಿದೆ. ಕೌಂಟರ್&zwnj;ಪಾಯಿಂಟ್ ರಿಸರ್ಚ್ ಪ್ರಕಾರ, ಸ್ಯಾಮ್&zwnj;ಸಂಗ್ ತನ್ನ ಪ್ರಮುಖ ಸ್ಮಾರ್ಟ್&zwnj;ಫೋನ್ ಮಾಡೆಲ್&zwnj;ಗಳ ಮೇಲೆ ಆಕ್ರಮಣಕಾರಿ ಪ್ರಚಾರವನ್ನು ಅವಲಂಬಿಸಿದೆ.&lt;/p&gt;&lt;h3&gt;FY25ರ ಉತ್ತಮ ಫಲಿತಾಂಶದ ನಡುವೆಯೂ ಒತ್ತಡ&lt;/h3&gt;&lt;p&gt;ಕಂಪನಿಯು ರಿಜಿಸ್ಟ್ರಾರ್ ಆಫ್ ಕಂಪನೀಸ್&zwnj;ಗೆ ಸಲ್ಲಿಸಿದ ದಾಖಲೆಗಳ ಪ್ರಕಾರ, FY25ರಲ್ಲಿ ಸ್ಯಾಮ್&zwnj;ಸಂಗ್ ಇಂಡಿಯಾದ ಒಟ್ಟು ಆದಾಯ ₹1.1 ಲಕ್ಷ ಕೋಟಿಗೆ ಏರಿದ್ದು, ಹಿಂದಿನ ವರ್ಷಕ್ಕಿಂತ ಶೇ. 12ರಷ್ಟು ಹೆಚ್ಚಳವಾಗಿದೆ. ಮೊಬೈಲ್ ಫೋನ್&zwnj;ಗಳ ನಂತರ, ಗೃಹೋಪಯೋಗಿ ವಸ್ತುಗಳ ವಿಭಾಗವು ಶೇ. 11ರಷ್ಟು ಮಾರಾಟದೊಂದಿಗೆ ಎರಡನೇ ಅತಿದೊಡ್ಡ ಬಿಸಿನೆಸ್ ಆಗಿದೆ. ಕಂಪನಿಯು FY25ರಲ್ಲಿ ₹11,287 ಕೋಟಿ ನಿವ್ವಳ ಲಾಭ ಗಳಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಶೇ. 38ರಷ್ಟು ಹೆಚ್ಚಾಗಿದೆ. FY26ರ ಆರ್ಥಿಕ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆದರೆ, ಜೂನ್ ತ್ರೈಮಾಸಿಕದಲ್ಲಿ ಸ್ಯಾಮ್&zwnj;ಸಂಗ್&zwnj;ನ ಜಾಗತಿಕ ಮೊಬೈಲ್ ಬಿಸಿನೆಸ್ ನಷ್ಟ ಅನುಭವಿಸಿದೆ. ಮೆಮೊರಿ ಚಿಪ್&zwnj;ಗಳಿಗೆ ಉತ್ತಮ ಬೇಡಿಕೆ ಇದ್ದರೂ, ಅದರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ವಿಭಾಗವು ಒತ್ತಡದಲ್ಲಿಯೇ ಉಳಿದಿದೆ.&lt;/p&gt;&lt;p&gt;'ಮೊಬೈಲ್ ಫೋನ್ ವಿಭಾಗದಲ್ಲಿ ಸದ್ಯಕ್ಕೆ ಯಾವುದೇ ಉದ್ಯೋಗ ಕಡಿತ ಇರುವುದಿಲ್ಲ. ಯಾಕೆಂದರೆ ಇದು ಕಂಪನಿಯ ಮುಖ್ಯ ಆದಾಯದ ಮೂಲ. ದೀಪಾವಳಿ ಸಮಯದಲ್ಲಿ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ, ನಂತರದ ದಿನಗಳಲ್ಲಿ ಈ ಬಗ್ಗೆಯೂ ಮರುಪರಿಶೀಲನೆ ನಡೆಸಬಹುದು' ಎಂದಿದ್ದಾರೆ.&lt;/p&gt;&lt;h3&gt;ಮತ್ತೆ ಸ್ಮಾರ್ಟ್&zwnj;ಫೋನ್ ಬೆಲೆ ಏರಿಕೆಯಾಗುತ್ತಾ?&lt;/h3&gt;&lt;p&gt;ಸೋಮವಾರ, ಸ್ಯಾಮ್&zwnj;ಸಂಗ್ ತನ್ನ ಕೆಲವು ಸ್ಮಾರ್ಟ್&zwnj;ಫೋನ್ ಮಾಡೆಲ್&zwnj;ಗಳ ಬೆಲೆಯನ್ನು ಶೇ. 5-10ರಷ್ಟು ಹೆಚ್ಚಿಸಿದೆ. ಈ ತಿಂಗಳಲ್ಲಿ ಇದು ಮೂರನೇ ಬಾರಿಯ ಬೆಲೆ ಏರಿಕೆಯಾಗಿದೆ. ಆಲ್ ಇಂಡಿಯಾ ಮೊಬೈಲ್ ರಿಟೇಲರ್&zwnj;ಗಳ ಸಂಘದ ಪ್ರಕಾರ, ಪದೇ ಪದೇ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಸಂಖ್ಯೆಯಲ್ಲಿ ಶೇ. 40ರಷ್ಟು ತೀವ್ರ ಕುಸಿತವಾಗಿದೆ. ಇದು ಸ್ಮಾರ್ಟ್&zwnj;ಫೋನ್ ತಯಾರಕರು ಮತ್ತು ಮಾರಾಟಗಾರರಿಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ.&lt;/p&gt;&lt;p&gt;ಸ್ಯಾಮ್&zwnj;ಸಂಗ್ ಇಂಡಿಯಾ ತನ್ನ ಗೃಹೋಪಯೋಗಿ ಮತ್ತು ಟೆಲಿವಿಷನ್ ಸೇಲ್ಸ್ ತಂಡಗಳನ್ನು ವಿಲೀನಗೊಳಿಸುವ ಪ್ರಸ್ತಾಪವನ್ನು ಡಿಸೆಂಬರ್ ತ್ರೈಮಾಸಿಕಕ್ಕೆ ಮುಂದೂಡಿದೆ.&lt;/p&gt;&lt;p&gt;ಈ ಮರುರಚನೆಯು ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಿರ್ವಹಣೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ಉದ್ಯಮದ ತಜ್ಞರು ಹೇಳುತ್ತಾರೆ. ಆದರೆ, ಈ ವಿಲೀನ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;]]></content:encoded>
            <category>business</category>
            <dc:creator>Ravi Janekal</dc:creator>
            <atom:link href="https://kannada.asianetnews.com/business/samsung-india-layoffs-begin-amid-weak-sales-rising-costs-rav/articleshow-4xgq6y4"/>
        </item>
        <item>
            <title><![CDATA[PF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.]]></title>
            <link>https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</link>
            <guid isPermaLink="true">https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph</guid>
            <pubDate>Wed, 09 Sep 2026 13:22:05 +0530</pubDate>
            <description><![CDATA[ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್&zwnj;ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್&zwnj;ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyc7rfmrq9fjgna1c4376zzt,imgname-epfo-interest-credited-check-pf-balance-missed-call-sms-withdrawal-rules-upi-atm-umang-epfo-portal-2025-26-1784969707160.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಪಿಎಫ್&zwnj;ಓ ಬಿಗ್ ಅಲರ್ಟ್ ನೀಡಿದೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಪ್ಪದೇ ಮಾಡಬೇಕಾದವರು ಈ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದೆ. ಇಲ್ಲ ಎಂದರೆ ಖಾತೆ ಬೀಳಲಿರುವ 15 ಸಾವಿರ ರೂಪಾಯಿ ಮಿಸ್ ಆಗಲಿದೆ ಎಂದು ತಿಳಿಸಿದೆ. ಬ್ಯಾಂಕ್ ಖಾತೆಗೆ ಡಿಬಿಟಿ ಸೌಲಭ್ಯ ತಪ್ಪದೇ ಇರಬೇಕು, ಎನ್&zwnj;ಪಿಸಿಐ ಮ್ಯಾಪಿಂಹ್ ಪೂರ್ತಿಗೊಳಿಸಬೇಕು ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಇಪಿಎಫ್&zwnj;ಓ ಎಚ್ಚರಿಕೆ: ಈ ತಪ್ಪಿನಿಂದ ₹15,000 ನಷ್ಟ!&lt;/h2&gt;&lt;p&gt;ಹೊಸದಾಗಿ ಕೆಸಲಕ್ಕೆ ಸೇರುವವರಿಗೆ ಲಾಭಗಳಿಸಲು, ಉದ್ಯೋಗ ಕೊಡುವ ಕಂಪನಿಗಳಿಗೆ ಪ್ರೋತ್ಸಹ ನೀಡಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಮೂಲಕ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ 15 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಿದೆ. ಒಮ್ಮೆ ಮಾತ್ರ ಈ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಆದರೆ ಎರಡು ಹಂತಗಳಲ್ಲಿ ಈ ಹಣ ಫಲಾನುಭವಿಯ ಖಾತೆಗೆ ಜಮಾ ಮಾಡಲಿದೆ. ಇನ್ನು, ಕೆಲಸ ನೀಡುವ ಕಂಪನಿಗೂ ಓರ್ವ ಉದ್ಯೋಗಿಗೆ ಮೂರು ಸಾವಿರ ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ.&lt;/p&gt;&lt;p&gt;ದೇಶದಲ್ಲಿ ಉದ್ಯೋಗ ಸೃಷ್ಟಿ, ಕಂಪನಿಗಳು ಉದ್ಯೋಗ ನೀಡುವುದನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿ ಮಾಡುತ್ತಿದೆ. ಈ ಯೋಜನೆ ಮೂಲಕ ಲಕ್ಷಾಂತರ ಮಂದಿಗೆ ಉದ್ಯೋಗಗಳು ಲಾಭ ಪಡೆದುಕೊಳ್ಳಲಿದ್ದಾರೆ. ಆದರೆ ಈ ಯೋಜನೆಯ ಕುರಿತು ಈಪಿಎಫ್&zwnj;ಓ ಬಿಗ್ ಅಪ್&zwnj;ಡೇಟ್ ನೀಡಿ, ಉದ್ಯೋಗಿಗಳಿಗೆ ಅಲರ್ಟ್ ನೀಡಿದೆ.&lt;/p&gt;&lt;h2&gt;ಈ ಕೆಲಸ ಮಾಡಿದರೆ ಮಾತ್ರ ಖಾತೆ ಹಣ ಬರುತ್ತದೆ!&lt;/h2&gt;&lt;p&gt;ಹೊಸದಾಗಿ ಕೆಲಸಕ್ಕೆ ಸೇರುವವರು ಈ ಯೋಜನೆಗೆ ಲಾಭ ಪಡೆದುಕೊಳ್ಳಲು ಪಿಎಫ್ ಖಾತೆ ಹೊಂದಿರಬೇಕು. ಪಿಎಫ್ (PF) ಯೋಜನೆಯ ವ್ಯಾಪ್ತಿಗೆ ಬರುವ ಕಂಪನಿಗೆ ಸೇರಿದರೆ ಮಾತ್ರ ನೀವು ಹಣವನ್ನು ಪಡೆಯುತ್ತೀರಿ. ನಿಮಗೆ ಪಿಎಫ್ ಖಾತೆ ಇದ್ದರೆ ಮಾತ್ರ ಸಾಕಾಗುವುದಿಲ್ಲ. ನಿಮಗೆ ಯಎಎನ್ ನಂಬರ್ ಕೂಡ ಆಕ್ಟೀವ್ ಮಾಡಿಕೊಳ್ಳಬೇಕು ಎಂದು ಈಪಿಎಫ್&zwnj;ಓ ಅಲರ್ಟ್ ನೀಡಿದೆ. ಫೇಸ್ ಅಥೆಂಟಿಕೇಷನ್ ಪ್ರಕ್ರಿಯೆ ಮೂಲಕ ಈ ಪ್ರೋಸೆಸ್ ಪೂರ್ತಿ ಮಾಡಬೇಕು. ಇಷ್ಟೇ ಅಲ್ಲದೆ, ಈಪಿಎಫ್&zwnj;ಓ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಸೌಕರ್ಯ ಕೂಡ ಇರ್ಬೇಕು ಅಂತ ಚೆಕ್ ಮಾಡಿಕೊಳ್ಳಬೇಕು. ಡಿಬಿಟಿ ಸೌಕರ್ಯ ಇಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಅಪ್&zwnj;ಡೇಟ್ ಮಾಡಿಕೊಳ್ಳಿ. ಉದ್ಯೋಗಿಗಳು ಈ ಪ್ರಕ್ರಿಯೆ ಪೂರ್ಣಗೊಳಿಸಿದರೆ 15 ಸಾವಿರ ರೂಪಾಯಿ ಖಾತೆ ಜಮೆ ಆಗಲಿದೆ. ಇಲ್ಲ ಎಂದರೆ ಸಮಸ್ಯೆಗಳು ಎದುರಾಗುತ್ತದೆ. ಈ ವಿಚಾರವನ್ನ ಈಪಿಎಫ್ಓ ತನ್ನ ಎಕ್ಸ್ ಫ್ಲಾಟ್&zwnj;ಫಾರ್ಮ್&zwnj;ನಲ್ಲಿ ತಿಳಿಸಿದೆ.&lt;/p&gt;&lt;h2&gt;ಮೊದಲ ವರ್ಷವೇ ಖಾತೆಗೆ ಬರುತ್ತೆ ಹಣ!&lt;/h2&gt;&lt;p&gt;ಬ್ಯಾಂಕ್ ಖಾತೆಗೆ ಎನ್&zwnj;ಪಿಸಿಐ ಮ್ಯಾಪಿಂಗ್ ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ವಿಕಸಿತ್ ಭಾರತ್ ಯೋಜನೆಯನ್ನು ಆಗಸ್ಟ್ 15, 2025ರಂದು ಪ್ರಧಾನಿ ಮೋದಿ ಪ್ರಾರಂಭಿಸಿದ್ದರು. ಕೆಲಸಕ್ಕೆ ಸೇರಿದ ಮೊದಲ ವರ್ಷವೇ ಈ ಯೋಜನೆಯ ಲಾಭ ಸಿಗಲಿದೆ. ಒಂದು ಲಕ್ಷ ರೂಪಾಯಿ ಒಳಗೆ ಸಂಬಳ ಇರುವ ಈ ಸೌಲಭ್ಯ ಸಿಗುತ್ತದೆ. ಈ ಯೋಜನೆಗೆ ನೀವು ಯಾವುದೇ ವಿಶೇಷ ಅರ್ಜಿ ಸಲ್ಲಿಕೆ ಮಾಡುವ ಅಗತ್ಯವಿಲ್ಲ. ಪಿಎಫ್ ಅಕೌಂಟ್ ಇದ್ದರೆ ಸತತವಾಗಿ ಆರು ತಿಂಗಳ ಕಾಲ ನಿಮ್ಮ ಖಾತೆಗೆ ಪಿಎಫ್ ಹಣ ಜಮೆಯಾದರೆ, ಎರಡು ಹಂತಗಳಲ್ಲಿ ಉದ್ಯೋಗಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಿದೆ. ಮೊದಲ ಹಂತದಲ್ಲಿ 8 ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 7 ಸಾವಿರ ರೂಪಾಯಿ ನಿಮ್ಮ ಖಾತೆಗೆ ಹಣ ಜಮೆ ಆಗುತ್ತದೆ.&lt;/p&gt;&lt;p&gt;Pradhan Mantri Viksit Bharat Rozgar YojanaEmployees must complete UAN Activation and Authentication through Face Authentication and ensure that their bank account is DBT-enabled to receive the incentive.#PradhanMantriViksitBharatRozgarYojana #EPFO #EPFOWithYou #HumHainNa pic.twitter.com/54rOLdmdiU&lt;/p&gt;&lt;p&gt;&mdash; EPFO (@officialepfo) September 8, 2026&lt;/p&gt;&lt;p&gt;&lt;/p&gt;]]></content:encoded>
            <category>business</category>
            <dc:creator>Sumanth SN</dc:creator>
            <atom:link href="https://kannada.asianetnews.com/business/good-news-for-pf-account-holders-pradhan-mantri-viksit-bharat-rozgar-yojana-must-complete-uan-activation-sns/articleshow-6n8cdph"/>
        </item>
        <item>
            <title><![CDATA[ಬಾಲಿವುಡ್‌ ಸಿನಿಮಾವಾದ ಕನ್ನಡಿಗನ ಕಥೆ, ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್, ಕೋಟಿ ಉದ್ಯಮಿಯಾದ ಹಾಸನದ ಯವಕ!]]></title>
            <link>https://kannada.asianetnews.com/business/the-inspiring-story-how-karnataka-man-captain-g-r-gopinath-revolutionised-indian-aviation-with-air-deccan-gdp/articleshow-9w9p6hu</link>
            <guid isPermaLink="true">https://kannada.asianetnews.com/business/the-inspiring-story-how-karnataka-man-captain-g-r-gopinath-revolutionised-indian-aviation-with-air-deccan-gdp/articleshow-9w9p6hu</guid>
            <pubDate>Wed, 09 Sep 2026 15:17:13 +0530</pubDate>
            <description><![CDATA[ಕರ್ನಾಟಕದ ಸಣ್ಣ ಹಳ್ಳಿಯಿಂದ ಬಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, 'ಏರ್ ಡೆಕ್ಕನ್' ಎಂಬ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಅವರು ಸಾಮಾನ್ಯ ಜನರಿಗೂ ವಿಮಾನ ಪ್ರಯಾಣದ ಕನಸನ್ನು ನನಸಾಗಿಸಿ, ಭಾರತದ ವಾಯುಯಾನ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಯನ್ನೇ ಮಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m22r7t1sst26wcs9kg5znynr,imgname-captain-g-r-gopinath-1788946409529.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ &quot;ಸರ್ಫಿರಾ&quot; ಚಲನಚಿತ್ರವು ಸಣ್ಣ ಪಟ್ಟಣದ ಕನಸುಗಾರನೊಬ್ಬ ಉದ್ಯಮಶೀಲತೆಯಲ್ಲಿ ಯಶಸ್ಸು ಸಾಧಿಸಲು ಎದುರಿಸಿದ ಅಡೆತಡೆಗಳ ಕಥೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಿತು. ಈ ಸಿನಿಮೀಯ ಪ್ರಯಾಣವು ಭಾರತದ ಮೊದಲ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯಾದ &lsquo;ಏರ್ ಡೆಕ್ಕನ್&rsquo; ಸ್ಥಾಪಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ನೈಜ ಜೀವನವನ್ನು ಆಧರಿಸಿದೆ. ಕರ್ನಾಟಕದ ದೂರದ ಹಳ್ಳಿಯ ಯುವಕನೊಬ್ಬ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿ, ಸಾಮಾನ್ಯ ಜನರಿಗೂ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಿದ ಕಥೆ ಕೇವಲ ಉದ್ಯಮಕ್ಕೆ ಸೀಮಿತವಾಗಿರದೆ. ದೃಢ ನಿರ್ಣಯ, ಹೊಸ ಚಿಂತನೆ ಮತ್ತು ದೃಷ್ಟಿಕೋನದ ನಿರೂಪಣೆಯಾಗಿದೆ. ಇವರು ಭಾರತೀಯ ಮಾಜಿ ಸೈನಿಕ, ಉದ್ಯಮಿ, ರಾಜಕಾರಣಿಯೂ ಹೌದು.&lt;/p&gt;&lt;h2&gt;ಭಾರತೀಯ ಸೇನೆಯ ಕ್ಯಾಪ್ಟನ್&lt;/h2&gt;&lt;p&gt;ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೋಪಿನಾಥ್ (ಕ್ಯಾಪ್ಟನ್ ಜಿ.ಆರ್. ಗೋಪಿನಾಥ್) ಅವರು 1951 ರ ನವೆಂಬರ್ 13 ರಂದು ಮೇಲುಕೋಟೆಯಲ್ಲಿ ತಮಿಳು ಹಿಂದೂ ಕುಟುಂಬದಲ್ಲಿ ಜನಿಸಿದರು. ಇವರು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಗೊರೂರು ಎಂಬ ಸಣ್ಣ ಹಳ್ಳಿಯಲ್ಲಿ ಬೆಳೆದರು. ಇವರ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಶಾಲಾ ಶಿಕ್ಷಕರಾಗಿದ್ದರು. ಶಾಲಾ ವ್ಯವಸ್ಥೆಯು ಮಕ್ಕಳನ್ನು ಕಟ್ಟುಪಾಡುಗೊಳಿಸುತ್ತದೆ ಎಂದು ನಂಬಿದ್ದ ಇವರ ತಂದೆ, ಗೋಪಿನಾಥ್ ಅವರಿಗೆ ಆರಂಭದಲ್ಲಿ ಮನೆಯಲ್ಲಿಯೇ ಶಿಕ್ಷಣ ನೀಡಲು ನಿರ್ಧರಿಸಿದರು.&lt;/p&gt;&lt;p&gt;ಗ್ರಾಮೀಣ ವಾತಾವರಣದಲ್ಲಿ ಬೆಳೆದ ಗೋಪಿನಾಥ್, ಸಾಮಾನ್ಯ ಜನರು ಎದುರಿಸುವ ಸವಾಲುಗಳನ್ನು ಹತ್ತಿರದಿಂದ ಕಂಡರು. ಶೈಕ್ಷಣಿಕವಾಗಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಇವರು ಬಿಜಾಪುರದ ಪ್ರತಿಷ್ಠಿತ ಸೈನಿಕ್ ಶಾಲೆಗೆ ಸೇರಿದರು. ತದನಂತರ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್&zwnj;ಡಿಎ) ಪ್ರವೇಶಿಸಿ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ತರಬೇತಿ ಪಡೆದರು.&lt;/p&gt;&lt;p&gt;ತರಬೇತಿಯ ನಂತರ 8 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಗೋಪಿನಾಥ್, 1971 ರ ಇಂಡೋ-ಪಾಕ್ ಯುದ್ಧದಲ್ಲೂ ಪಾಲ್ಗೊಂಡು ಕ್ಯಾಪ್ಟನ್ ಹುದ್ದೆಗೆ ಏರಿದರು. ಸೇನಾದಿನಗಳಲ್ಲಿ ಗಳಿಸಿದ ಶಿಸ್ತು ಮತ್ತು ನಾಯಕತ್ವ ಗುಣಗಳು ಮುಂದೆ ಅವರ ಉದ್ಯಮಶೀಲತೆಗೆ ಪ್ರಮುಖ ತಡಿಪಾಯವಾದವು.&lt;/p&gt;&lt;h2&gt;ಕೃಷಿಯಿಂದ ವಾಯುಯಾನ ರಂಗದತ್ತ ಸಾಹಸ&lt;/h2&gt;&lt;p&gt;ಸೇನೆಯಿಂದ ನಿವೃತ್ತರಾಗಿ ಗೋಪಿನಾಥ್ ಅವರು ದನಗಳ ಸಾಕಣೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ, ಮೋಟಾರ್ ಸೈಕಲ್ ವ್ಯಾಪಾರ, ಉಡುಪಿ ಹೋಟೆಲ್ ನಿರ್ವಹಣೆ, ಸ್ಟಾಕ್ ಬ್ರೋಕಿಂಗ್, ನೀರಾವರಿ ಉಪಕರಣಗಳ ವ್ಯಾಪಾರ, ಕೃಷಿ ಸಲಹೆಗಾರ ಹಾಗೂ ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ತಮ್ಮ ಆತ್ಮಚರಿತ್ರೆ &quot;ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ&quot; ಯಲ್ಲಿ ಬರೆದಿರುವಂತೆ, ಅವರ ಜೀವನವು ಹೋರಾಟ, ಕುಸಿತ ಮತ್ತು ಮರಳಿ ಏಳುವಿಕೆಯ ನಿರಂತರ ಸರಣಿಯಾಗಿತ್ತು. ವಿಯೆಟ್ನಾಂ ಯುದ್ಧದ ನಂತರ ಹೆಲಿಕಾಪ್ಟರ್&zwnj;ಗಳನ್ನು ಹಾರಿಸಿ ತನ್ನ ದೇಶವನ್ನು ಪುನರ್ನಿರ್ಮಿಸಲು ಶ್ರಮಿಸಿದ ವಿಯೆಟ್ನಾಂನ ಅನಾಥ ಹುಡುಗಿಯ ಕಥೆಯಿಂದ ಪ್ರೇರಿತರಾಗಿ, ಅವರು ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. &quot;ನನ್ನ ಗ್ರಾಹಕರು ಗಣ್ಯರಷ್ಟೇ ಅಲ್ಲ; ಕಚೇರಿಯ ಶುಚಿಗೊಳಿಸುವ ಸಿಬ್ಬಂದಿ, ಆಟೋರಿಕ್ಷಾ ಚಾಲಕರು ಸಹ ವಿಮಾನ ಹಾರಾಟದ ಕನಸು ಕಾಣಬೇಕು ಮತ್ತು ಅದನ್ನು ನನಸಾಗಿಸಬೇಕು&quot; ಎಂಬುದು ಅವರ ಮುಖ್ಯ ಧ್ಯೇಯವಾಗಿತ್ತು.&lt;/p&gt;&lt;h2&gt;ಏರ್ ಡೆಕ್ಕನ್&zwnj;ನ ಜನನ ಮತ್ತು ಕಾರ್ಯಾಚರಣೆ&lt;/h2&gt;&lt;p&gt;ವಿದೇಶ ಪ್ರವಾಸಗಳ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್&zwnj;ನ 'ಸೌತ್&zwnj;ವೆಸ್ಟ್ ಏರ್&zwnj;ಲೈನ್ಸ್' ಮತ್ತು ಯುರೋಪಿನ 'ರಯಾನ್&zwnj;ಏರ್' ನಂತಹ ಬಜೆಟ್ ವಿಮಾನಯಾನ ಸಂಸ್ಥೆಗಳ ಯಶಸ್ಸನ್ನು ಗಮನಿಸಿದ ಗೋಪಿನಾಥ್, ಭಾರತದಲ್ಲೂ ಅಂತಹದೇ ಮಾದರಿಯನ್ನು ತರಲು ಬಯಸಿದರು.&lt;/p&gt;&lt;p&gt;2003 ರಲ್ಲಿ ಅಗತ್ಯ ಅನುಮೋದನೆಗಳನ್ನು ಪಡೆದು 'ಏರ್ ಡೆಕ್ಕನ್' ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟ ಮೊದಲ ವಿಮಾನವು ಭಾರತೀಯ ವಾಯುಯಾನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿತು. ಯಾವುದೇ ಅತಿಯಾದ ಅಲಂಕಾರಗಳಿಲ್ಲದ, ಕಡಿಮೆ ದರದ ಹಾಗೂ ದಕ್ಷ ಸೇವೆಯ ಈ ಮಾದರಿಯು ಸಾರ್ವಜನಿಕರಲ್ಲಿ ಶೀಘ್ರವಾಗಿ ಜನಪ್ರಿಯತೆ ಪಡೆಯಿತು.&lt;/p&gt;&lt;h2&gt;ಸವಾಲುಗಳನ್ನು ಮೆಟ್ಟಿ ನಿಂತ ಹಾದಿ&lt;/h2&gt;&lt;p&gt;ಭಾರತದಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯ ಯಶಸ್ಸಿನ ಬಗ್ಗೆ ಉದ್ಯಮ ತಜ್ಞರು, ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿದ್ದವು. ಹೆಚ್ಚಿನ ಕಾರ್ಯಾಚರಣೆಯ ವೆಚ್ಚ ಮತ್ತು ನಿಯಂತ್ರಕ ಅಡೆತಡೆಗಳ ನಡುವೆಯೂ ಗೋಪಿನಾಥ್ ಅವರು ವಿಮಾನಗಳನ್ನು ಪಡೆದುಕೊಳ್ಳಲು, ಲ್ಯಾಂಡಿಂಗ್ ಹಕ್ಕುಗಳನ್ನು ಮಾತುಕತೆ ಮಾಡಲು ದಣಿವರಿಯಿಲ್ಲದೆ ಶ್ರಮಿಸಿದರು.&lt;/p&gt;&lt;p&gt;ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸುವುದು, ವಿಮಾನಗಳ ಬಳಕೆಯನ್ನು ಗರಿಷ್ಠಗೊಳಿಸುವುದು ಮತ್ತು ಸಣ್ಣ ನಗರಗಳಿಗೆ ಸೇವೆ ಒದಗಿಸುವುದು ಏರ್ ಡೆಕ್ಕನ್&zwnj;ನ ತಂತ್ರವಾಗಿತ್ತು. ಆರಂಭಿಕ ದಿನಗಳಲ್ಲಿ ವಿಳಂಬ, ತಾಂತ್ರಿಕ ದೋಷಗಳು ಮತ್ತು ಗ್ರಾಹಕರ ದೂರುಗಳು ಎದುರಾದಾಗ, ಗೋಪಿನಾಥ್ ಅವರು ಪಾರದರ್ಶಕತೆಯಿಂದ ಸ್ವತಃ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಿದರು.&lt;/p&gt;&lt;h2&gt;ಸಾಧನೆ ಮತ್ತು ವಾಯುಯಾನದ ಮೇಲಾದ ಪ್ರಭಾವ&lt;/h2&gt;&lt;p&gt;2005 ರ ಹೊತ್ತಿಗೆ ಏರ್ ಡೆಕ್ಕನ್ ದೇಶದಾದ್ಯಂತ ತನ್ನ ಜಾಲವನ್ನು ವಿಸ್ತರಿಸಿತು. ಮೊದಲ ಬಾರಿಗೆ ವಿಮಾನವೇರಿದ ಲಕ್ಷಾಂತರ ಭಾರತೀಯರಿಗೆ ಇದು ಬಾಗಿಲು ತೆರೆಯಿತು. ಈ ಬದಲಾವಣೆಯು ಪ್ರಯಾಣದ ಶೈಲಿಯನ್ನು ಬದಲಿಸಿದ್ದಲ್ಲದೆ, ಸಣ್ಣ ನಗರಗಳ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಿತು.&lt;/p&gt;&lt;p&gt;2007 ರಲ್ಲಿ, ಏರ್ ಡೆಕ್ಕನ್ ಸಂಸ್ಥೆಯು ವಿಜಯ್ ಮಲ್ಯ ನೇತೃತ್ವದಲ್ಲಿದ್ದ 'ಕಿಂಗ್&zwnj;ಫಿಷರ್ ಏರ್&zwnj;ಲೈನ್ಸ್' ನೊಂದಿಗೆ ವಿಲೀನಗೊಂಡಿತು. ಕಾಲಕ್ರಮೇಣ ಏರ್ ಡೆಕ್ಕನ್ ಬ್ರ್ಯಾಂಡ್ ಮರೆಯಾದ Melu, ಗೋಪಿನಾಥ್ ಅವರು ರೂಪಿಸಿದ ಕಡಿಮೆ-ವೆಚ್ಚದ ಮಾದರಿಯು ಮುಂದೆ ಬಂದ ಇಂಡಿಗೊ ಮತ್ತು ಸ್ಪೈಸ್&zwnj;ಜೆಟ್&zwnj;ನಂತಹ ಪ್ರಮುಖ ಸಂಸ್ಥೆಗಳಿಗೆ ಮಾರ್ಗದರ್ಶಿಯಾಯಿತು.&lt;/p&gt;&lt;h2&gt;ಗೌರವಗಳು ಮತ್ತು ಪ್ರಶಸ್ತಿಗಳು:&lt;/h2&gt;&lt;p&gt;ವಾಯುಯಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ:&lt;/p&gt;&lt;p&gt;ಉದ್ಯಮಕ್ಕಾಗಿ ರೋಲೆಕ್ಸ್ ಪ್ರಶಸ್ತಿ (1996)&lt;/p&gt;&lt;p&gt;ರಾಜ್ಯೋತ್ಸವ ಪ್ರಶಸ್ತಿ - ಕರ್ನಾಟಕ ಸರ್ಕಾರ (2005)&lt;/p&gt;&lt;p&gt;ಚೆವಲಿಯರ್ ಡೆ ಲಾ ಲೀಜಿಯನ್ ಡಿ'ಆನರ್ - ಫ್ರೆಂಚ್ ಸರ್ಕಾರ (2007)&lt;/p&gt;&lt;p&gt;ದಶಕದ ವ್ಯಕ್ತಿತ್ವ ಪ್ರಶಸ್ತಿ - ಕೆಜಿ ಫೌಂಡೇಶನ್&lt;/p&gt;&lt;p&gt;ಸರ್ ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ - FKCCI (ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ)&lt;/p&gt;&lt;h2&gt;ನಂತರದ ಉದ್ಯಮಗಳು ಮತ್ತು ಪರಂಪರೆ&lt;/h2&gt;&lt;p&gt;ಏರ್ ಡೆಕ್ಕನ್ ನಂತರ ಗೋಪಿನಾಥ್ ಅವರು ಭಾರತದಲ್ಲಿ ಸರಕು ಸಾಗಣೆಯನ್ನು ಸುಧಾರಿಸಲು 'ಡೆಕ್ಕನ್ 360' ಎಂಬ ಲಾಜಿಸ್ಟಿಕ್ಸ್ ಕಂಪನಿಯನ್ನು ಪ್ರಾರಂಭಿಸಿದರು. ಈ ಉದ್ಯಮವು ಸವಾಲುಗಳನ್ನು ಎದುರಿಸಿ ಸ್ಥಗಿತಗೊಂಡರೂ, ಅವರ ನಾವೀನ್ಯತೆಯ ಬದ್ಧತೆ ಸಾಗುತ್ತಲೇ ಇತ್ತು. 2007 ರಲ್ಲಿ ಏರ್ ಡೆಕ್ಕನ್ ಅನ್ನು ವಿಜಯ್ ಮಲ್ಯಗೆ ಮಾರಾಟ ಮಾಡಿದ ನಂತರ, ಗೋಪಿನಾಥ್ 2009 ರಲ್ಲಿ ಡೆಕ್ಕನ್ 360 ಅನ್ನು ಪ್ರಾರಂಭಿಸುವ ಮೂಲಕ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಕಡಿಮೆ-ವೆಚ್ಚದ ಮಾದರಿಯನ್ನು ಪುನರಾವರ್ತಿಸಲು ನಿರ್ಧರಿಸಿದರು. ಫೆಡ್ಎಕ್ಸ್&zwnj;ನಲ್ಲಿ 21 ವರ್ಷಗಳ ಅನುಭವ ಹೊಂದಿರುವ ಆಸ್ಟ್ರೇಲಿಯಾ-ಶ್ರೀಲಂಕನ್ ಜೂಡ್ ಫೋನ್ಸೆಕಾ ಅವರನ್ನು ದೇಶೀಯ ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ಒಳಗೊಂಡ ಕಾರ್ಯಾಚರಣೆಗಳನ್ನು ನಡೆಸಲು ಕಂಪನಿಯ ಸಿಇಒ ಆಗಿ ನೇಮಿಸಿದರು. ವ್ಯವಹಾರ ಆರಂಭಿಸಿ ಒಂದು ವರ್ಷವಾದ ಡೆಕ್ಕನ್ 360, ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಸುಮಾರು 125 ಕೋಟಿ ರೂ.ಗಳಿಗೆ ಗಮನಾರ್ಹ ಪಾಲನ್ನು ಖರೀದಿಸುವುದರೊಂದಿಗೆ ಕಾರ್ಯತಂತ್ರದ ಹೂಡಿಕೆದಾರರನ್ನು ತನ್ನತ್ತ ಸೆಳೆಯಿತು. ಆರಂಭಿಸಿ ಎರಡು ವರ್ಷಗಳ ಕಾಲ ಸರಕು ವ್ಯವಹಾರವು ಹಿನ್ನಡೆ ಅನುಭವಿಸಿತು ಮತ್ತು ಅಂದಿನಿಂದ ಇದುವರೆಗೆ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ.&lt;/p&gt;&lt;p&gt;ತಮ್ಮ ಆತ್ಮಚರಿತ್ರೆ &quot;ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ&quot; ಮೂಲಕ ತಮ್ಮ ಉದ್ಯಮಶೀಲತೆಯ ಪಯಣವನ್ನು ಹಂಚಿಕೊಂಡಿರುವ ಅವರ ಕಥೆಯು, ಸಾಮಾನ್ಯ ಹಿನ್ನೆಲೆಯಿಂದ ಬಂದು ದೊಡ್ಡ ಕನಸುಗಳನ್ನು ನನಸಾಗಿಸಲು ಶ್ರಮಿಸುವ ಅಸಂಖ್ಯಾತ ವ್ಯಕ್ತಿಗಳಿಗೆ ಇಂದಿಗೂ ಭರವಸೆ ಮತ್ತು ಸ್ಫೂರ್ತಿಯ ದಾರಿದೀಪವಾಗಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/business/the-inspiring-story-how-karnataka-man-captain-g-r-gopinath-revolutionised-indian-aviation-with-air-deccan-gdp/articleshow-9w9p6hu"/>
        </item>
        <item>
            <title><![CDATA[ಒಂದು ಸಣ್ಣ ಬದಲಾವಣೆ, ಮುಳುಗುತ್ತಿದ್ದ ಈ ಡಿಟರ್ಜೆಂಟ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿದ್ದು ಹೇಗೆ?]]></title>
            <link>https://kannada.asianetnews.com/business/one-small-change-turned-a-failing-detergent-surf-into-a-billion-dollar-brand/articleshow-9yrfd0y</link>
            <guid isPermaLink="true">https://kannada.asianetnews.com/business/one-small-change-turned-a-failing-detergent-surf-into-a-billion-dollar-brand/articleshow-9yrfd0y</guid>
            <pubDate>Tue, 08 Sep 2026 19:32:18 +0530</pubDate>
            <description><![CDATA[&lt;p&gt;ಸರ್ಫ್ ಡಿಟರ್ಜೆಂಟ್ ಮಕಾಡೆ ಮಲಗಿತ್ತು. ಕಂಪನಿ ಮುಳುಗುವ ಹಂತಕ್ಕೆ ತಲುಪಿತ್ತು. ಈ ವೇಳೆ ಮಾಡಿದ ಒಂದು ಬದಲಾವಣೆ ಕಂಪನಿ ಹಣೆಬರಹ ಬದಲಾಯಿಸಿತು. ಪರಿಣಾಮ ಸರ್ಫ್ ಇದೀಗ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m20n6ka2f0q23x9va6tzs9k3,imgname-dying-detergent-brand-into-a-billion-dollar-success-1788876115264.png" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ (ಸೆ.08) ಭಾರತದ ಮನೆ ಮನೆಗಳಲ್ಲಿ ಡಿಟರ್ಜೆಂಟ್ ಪೌಡರ್ ಎಂದರೆ ಹಲವರು ಸರ್ಫ್ ಎಂದು ಹೇಳುತ್ತಾರೆ. ಅವರು ಬಳಸುತ್ತಿರುವ ಬ್ರ್ಯಾಂಡ್ ಯಾವುದೇ ಆದರೂ ಹೇಳುವಾಗ ಸರ್ಫ್ ಎಂದೇ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಸರ್ಫ್ ಮನೆಮಾತಾಗಿದೆ. ಆದರೆ ನಿರ್ಮಾ, ಏರಿಯಲ್ ಸೇರಿದಂತೆ ಹಲವು ಡಿಟರ್ಜೆಂಟ್ ಪೌಡರ್&zwnj;ಗಳ ತೀವ್ರ ಪೈಪೋಟಿಯಿಂದ ಸರ್ಫ್ ಮುಳುಗುವ ಹಂತಕ್ಕೆ ತಲುಪಿತ್ತು. ಕಂಪನಿ ಮಾಡಿದ ಕೆಲ ಬದಲಾವಣೆಗಳಿಂದ ಇಂದು ಸರ್ಫ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.&lt;/p&gt;&lt;h2&gt;ಡಿಟರ್ಜೆಂಟ್ ಪೌಡರ್ ಕ್ರಾಂತಿ&lt;/h2&gt;&lt;p&gt;ಭಾರತದಲ್ಲಿ ಬಟ್ಟೆ ಸೋಪ್, ಬಾರ್ ಸೋಪ್ ಸೇರಿದಂತೆ ಸೋಪ್ ಬಳಸುತ್ತಿದ್ದ ಸಮಯದಲ್ಲಿ ಹಿಂದೂಸ್ತಾನ್ ಯುನಿಲಿವರ್ ಕಂಪನಿ ಡಿಟರ್ಜೆಂಟ್ ಪೌಡರ್ ಬಿಡುಗಡೆ ಮಾಡಿತ್ತು. ಸರ್ಫ್ ಹೆಸರಿನಲ್ಲಿ ಬಂದ ಈ ಪೌಡರ್ ಮನೆ ಮನೆಯಲ್ಲಿ ಬಳಕೆ ಹೆಚ್ಚಾಯಿತು. ಎಷ್ಟರ ಮಟ್ಟಿಗೆ ಎಂದರೆ ಸರ್ಫ್ ಎಂದರೆ ಡಿಟರ್ಜೆಂಟ್ ಪೌಡರ್ ಅನ್ನೋ ಮಟ್ಟಕ್ಕೆ ಬ್ರ್ಯಾಂಡ್ ಬೆಳದು ಬಿಟ್ಟಿತು.&lt;/p&gt;&lt;h2&gt;ನಿರ್ಮಾ ಪೈಪೋಟಿ&lt;/h2&gt;&lt;p&gt;ಸರ್ಫ್ ತನ್ನ ಮಾರ್ಕೆಟಿಂಗ್ ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿತ್ತು. ಟಿವಿ ಸೇರಿದಂತೆ ಮಾಧ್ಯಮ ಜಾಹೀರಾತು ಮೂಲಕ ಸರ್ಫ್ ಜನರ ಮನಸ್ಸು ತಲುಪಿತ್ತು. ಲಲಿತಾ ಜಿ ಜಾಹೀರಾತು ಸಾಮಾನ್ಯ ವರ್ಗಕ್ಕೂ ಮುಟ್ಟಿತ್ತು. ದುಬಾರಿ ಅಲ್ಲ, ನಮ್ಮ ಬಟ್ಟೆ ಶುಭ್ರವಾಗಿ ಕಾಣಲು ಸರ್ಫ್ ಬೇಕೇ ಬೇಕು ಅನ್ನೋ ಮಟ್ಟಕ್ಕೆ ತಲುಪಿತು. ಬಳಿಕ ಸರ್ಫ್ ಜಾಹೀರಾತುಗಳು ಜನರ ಆತ್ಮವಿಶ್ವಾಸ, ಭಾವನೆ ಸೇರಿದಂತೆ ಹಲವು ರೀತಿಯಲ್ಲಿ ಬೆಸೆದುಕೊಂಡಿತು. ಆದರೆ ಡಿಟರ್ಜೆಂಟ್ ಕ್ಷೇತ್ರಕ್ಕೆ ನಿರ್ಮಾ, ಏರಿಯಲ್ ಸೇರಿದಂತೆ ಹಲವು ಬ್ರ್ಯಾಂಡ್ ಎಂಟ್ರಿಕೊಟ್ಟಿತು. ಲೋಕಲ್ ಬ್ರ್ಯಾಂಡ್&zwnj;ಗಳು ಅತೀ ಕಡಿಮೆ ಬೆಲೆಗೆ ಪೌಡರ್ ನೀಡಲು ಆರಂಭಿಸಿತು. ಸರ್ಫ್ ಪ್ರಾಮುಖ್ಯತೆ ಕಳೆದುಕೊಳ್ಳಲು ಆರಂಭಿಸಿತು.&lt;/p&gt;&lt;p&gt;ಸರ್ಫ್ ತನ್ನ ಬೆಲೆ ಹಾಗೂ ಗುಣಮಟ್ಟದಲ್ಲಿ ರಾಜೀಮಾಡಲಿಲ್ಲ. ಆದರೆ ಜನಸಾಮಾನ್ಯರನ್ನು ಹಿಡಿದಿಟ್ಟುಕೊಳ್ಳಲು ವೀಲ್ ಬ್ರ್ಯಾಂಡ್ ಪರಿಚಯಿಸಿತು. ಇಷ್ಟೇ ಅಲ್ಲ ತನ್ನ ಜಾಹೀರಾತಿನಲ್ಲಿ ಬದಲಾವಣೆ ಮಾಡಿತು. ಬಟ್ಟೆಯ ಯಾವುದೇ ಕಲೆಯನ್ನು ಪರಿಣಾಮಕಾರಿಯಾಗಿ ತೆಗೆಯು ಪರಿಕಲ್ಪನೆಯಲ್ಲಿ ಸರ್ಫ್ ಮತ್ತೆ ಮಾರುಕಟ್ಟೆಯಲ್ಲಿ ಬದಲಾವಣೆ ತರಲು ಮುಂದಾಯಿತು. ಮಕ್ಕಳು ಆಟವಾಡುವಾಗ ಆಗುವ ಕಲೆ, ಹೋಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಆಗುವ ಕಲೆಗಳಿಗೆ ಸರ್ಫ್ ಒಂದೇ ಪರಿಹಾರ ಅನ್ನೋ ರೀತಿಯಲ್ಲಿ ಜಾಹೀರಾತು ನೀಡಿತು. ಬಳಿಕ ಮಕ್ಕಳು, ಕುಟುಂಬ, ಸಂಬಂಧ, ಭಾವನೆಗಳೊಂದಿಗೂ ಸರ್ಫ್ ಬೆಸೆದುಕೊಂಡಿತು. ಮಾನವೀಯ ಮೌಲ್ಯಗಳ ಜೊತೆಗೆ ಹೊರಬಂದ ಜಾಹೀರಾತುಗಳು ಸರ್ಫ್ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಯನ್ನು ತೀವ್ರಗೊಳಿಸಿತು.&lt;/p&gt;&lt;p&gt;ಪ್ರೀಮಿಯಂ ಬ್ರ್ಯಾಂಡ್&zwnj;ನಲ್ಲಿ ಸರ್ಫ್ ಕಾಣಿಸಿಕೊಂಡರೆ ಮಧ್ಯ ವರ್ಗಕ್ಕೆ ರಿನ್ ಹಾಗೂ ಜನಸಾಮಾನ್ಯರು, ಕಡಿಮೆ ಬೆಲೆಗೆ ವೀಲ್ ಬ್ರ್ಯಾಂಡ್ ಹೊರತಂದು ಎಲ್ಲಾ ಗ್ರಾಹಕರನ್ನು ತನ್ನಲ್ಲೇ ಉಳಿಯುವಂತೆ ಮಾಡಿತು. ಇದೀಗ ಸರ್ಫ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/business/one-small-change-turned-a-failing-detergent-surf-into-a-billion-dollar-brand/articleshow-9yrfd0y"/>
        </item>
        <item>
            <title><![CDATA[FD: ಬ್ಯಾಂಕ್ ಆಫ್ ಬರೋಡಾ ಎಫ್‌ಡಿ ದರಗಳ ವಿವರ: 444 ದಿನಗಳ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ ಆಕರ್ಷಕ ಬಡ್ಡಿ!]]></title>
            <link>https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng</link>
            <guid isPermaLink="true">https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng</guid>
            <pubDate>Mon, 07 Sep 2026 18:19:34 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾ ತನ್ನ ಸ್ಥಿರ ಠೇವಣಿಗಳ ಮೇಲೆ ಹೊಸ ಬಡ್ಡಿದರಗಳನ್ನು ಪ್ರಕಟಿಸಿದೆ. ಇದರಲ್ಲಿ 444 ದಿನಗಳ ವಿಶೇಷ ಎಫ್&zwnj;ಡಿ ಯೋಜನೆಯು ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಸಾಮಾನ್ಯ ಗ್ರಾಹಕರು, ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಶೇಕಡಾ 7.05 ರವರೆಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyj985kat9th81z04czb6awh,imgname-bank-of-baroda-data-leak-dark-web-customer-data-security-1785172596330.png" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಸ್ಥಿರ ಠೇವಣಿ ಖಾತೆಗಳ ಮೇಲೆ ಆಕರ್ಷಕ ಬಡ್ಡಿದರಗಳನ್ನು ಪ್ರಕಟಿಸಿದೆ. ಈ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್&zwnj;ನಲ್ಲಿ ಕನಿಷ್ಠ 7 ದಿನಗಳಿಂದ ಹಿಡಿದು ಗರಿಷ್ಠ 10 ವರ್ಷಗಳ ಅವಧಿಯವರೆಗೆ ಎಫ್&zwnj;ಡಿ ಖಾತೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಮೂರು ಕೋಟಿ ರೂಪಾಯಿಗಿಂತ ಕಡಿಮೆ ಮೌಲ್ಯದ ಎಫ್&zwnj;ಡಿ ಠೇವಣಿಗಳ ಮೇಲೆ ಬ್ಯಾಂಕ್ ಶೇಕಡಾ 3.50 ರಿಂದ ಶೇಕಡಾ 7.35 ರವರೆಗೆ ವಿಭಿನ್ನ ಬಡ್ಡಿದರಗಳನ್ನು ನೀಡುತ್ತಿದೆ.&lt;/p&gt;&lt;h2&gt;&lt;strong&gt;ಹೂಡಿಕೆದಾರರ ಗಮನ ಸೆಳೆದ ಈ ಎಫ್&zwnj;ಡಿ ಯೋಜನೆ!&lt;/strong&gt;&lt;/h2&gt;&lt;p&gt;ಬ್ಯಾಂಕ್ ಆಫ್ ಬರೋಡಾ ಪರಿಚಯಿಸಿರುವ 444 ದಿನಗಳ ವಿಶೇಷ ಎಫ್&zwnj;ಡಿ ಯೋಜನೆಯು ಹೂಡಿಕೆದಾರರ ಗಮನ ಸೆಳೆಯುತ್ತಿದ್ದು, ಈ ಅವಧಿಗೆ ಶೇಕಡಾ 6.45 ರಿಂದ ಶೇಕಡಾ 7.05 ರವರೆಗೆ ಬಡ್ಡಿ ಲಭ್ಯವಿದೆ. 59 ವರ್ಷ ವಯಸ್ಸಿನವರೆಗಿನ ಸಾಮಾನ್ಯ ಗ್ರಾಹಕರಿಗೆ 444 ದಿನಗಳ ಠೇವಣಿ ಮೇಲೆ ವಾರ್ಷಿಕ ಶೇಕಡಾ 6.45 ರಷ್ಟು ಬಡ್ಡಿ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಹೆಚ್ಚಿನ ಬಡ್ಡಿ ಸೌಲಭ್ಯ!&lt;/strong&gt;&lt;/h3&gt;&lt;p&gt;ಹಿರಿಯ ನಾಗರಿಕರಿಗೆ ಬ್ಯಾಂಕ್ ವಿಶೇಷ ರಿಯಾಯಿತಿ ಹಾಗೂ ಹೆಚ್ಚಿನ ಬಡ್ಡಿ ಸೌಲಭ್ಯ ಒದಗಿಸಿದೆ. 60 ರಿಂದ 79 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ಇದೇ 444 ದಿನಗಳ ಯೋಜನೆಗೆ ಶೇಕಡಾ 6.95 ರಷ್ಟು ಬಡ್ಡಿ ಸಿಗಲಿದೆ. ಇನ್ನು 80 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೂಪರ್ ಹಿರಿಯ ನಾಗರಿಕರಿಗೆ ಬ್ಯಾಂಕ್ ಗರಿಷ್ಠ ಶೇಕಡಾ 7.05 ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ. ಈ ವಿಶೇಷ ಯೋಜನೆಯಡಿಯಲ್ಲಿ ಗ್ರಾಹಕರು ಗರಿಷ್ಠ 3 ಕೋಟಿ ರೂಪಾಯಿಯವರೆಗೆ ಹೂಡಿಕೆ ಮಾಡಲು ಅವಕಾಶವಿದೆ.&lt;/p&gt;&lt;h3&gt;&lt;strong&gt;ಎಷ್ಟು ಬರಲಿದೆ ಹಣ!&lt;/strong&gt;&lt;/h3&gt;&lt;p&gt;ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ಸಿಗುವ ಲಾಭದ ಲೆಕ್ಕಾಚಾರವನ್ನು ಗಮನಿಸುವುದಾದರೆ, ಸಾಮಾನ್ಯ ಗ್ರಾಹಕರೊಬ್ಬರು 444 ದಿನಗಳ ಅವಧಿಗೆ 3 ಲಕ್ಷ ರೂಪಾಯಿಗಳನ್ನು ಎಫ್&zwnj;ಡಿಯಲ್ಲಿ ಠೇವಣಿ ಇಟ್ಟರೆ, ವಾರ್ಷಿಕ ಶೇಕಡಾ 6.45 ರ ಬಡ್ಡಿದರದಲ್ಲಿ ಸುಮಾರು 24,000 ದಿಂದ 24,300 ರೂಪಾಯಿಗಳಷ್ಟು ಬಡ್ಡಿ ಆದಾಯ ಗಳಿಸಬಹುದು. ಇದರಿಂದಾಗಿ 444 ದಿನಗಳ ಅವಧಿ ಪೂರ್ಣಗೊಂಡಾಗ ಒಟ್ಟು ಮೆಚ್ಯೂರಿಟಿ ಮೊತ್ತ ಸರಿಸುಮಾರು 3,24,000 ರೂಪಾಯಿ ತಲುಪುತ್ತದೆ. ಹಿರಿಯ ನಾಗರಿಕರು ಇದೇ ಮೊತ್ತವನ್ನು ಠೇವಣಿ ಮಾಡಿದರೆ ಹೆಚ್ಚಿನ ಬಡ್ಡಿದರದ ಕಾರಣದಿಂದ ಮೆಚ್ಯೂರಿಟಿ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.&lt;/p&gt;&lt;h3&gt;&lt;strong&gt;ಯಾರಿಗೆ ಸೂಕ್ತ!&lt;/strong&gt;&lt;/h3&gt;&lt;p&gt;ಆದಾಗ್ಯೂ, ಗ್ರಾಹಕರ ಒಟ್ಟು ಆದಾಯ ಹಾಗೂ ನಿಯಮಗಳಿಗೆ ಅನುಗುಣವಾಗಿ ಅನ್ವಯವಾಗುವ ಟಿಡಿಎಸ್ ಅಥವಾ ತೆರಿಗೆ ಕಡಿತದ ನಂತರ ಕೈಗೆ ಸಿಗುವ ಅಂತಿಮ ಮೊತ್ತದಲ್ಲಿ ಸಣ್ಣ ಪ್ರಮಾಣದ ವ್ಯತ್ಯಾಸವಿರಬಹುದು. ಕಡಿಮೆ ಅವಧಿಯಲ್ಲಿ ಸುರಕ್ಷಿತ ಹಾಗೂ ಉತ್ತಮ ಆದಾಯ ಬಯಸುವ ಹೂಡಿಕೆದಾರರಿಗೆ ಈ ಯೋಜನೆ ಸೂಕ್ತವಾಗಿದೆ.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/bank-of-baroda-444-days-fd-3-lakh-investment-maturity-amount-interest-rate-fixed-deposit-bmk/articleshow-bg844ng"/>
        </item>
        <item>
            <title><![CDATA[ಮಾರುಕಟ್ಟೆಯಲ್ಲಿ ಧರೆಗುರುಳಿದ ಇನ್ಫೋಸಿಸ್‌, ಒಂದೇ ವಾರದಲ್ಲಿ 40 ಸಾವಿರ ಕೋಟಿ ನಷ್ಟ!]]></title>
            <link>https://kannada.asianetnews.com/business/infosys-shares-fall-sixth-day-loses-40000-crore-market-cap-san/articleshow-d073pmn</link>
            <guid isPermaLink="true">https://kannada.asianetnews.com/business/infosys-shares-fall-sixth-day-loses-40000-crore-market-cap-san/articleshow-d073pmn</guid>
            <pubDate>Wed, 09 Sep 2026 15:57:02 +0530</pubDate>
            <description><![CDATA[ಇನ್ಫೋಸಿಸ್ ಶೇರುಗಳು ಸತತ ಆರನೇ ದಿನವೂ ಕುಸಿತ ಕಂಡು, ಮಾರುಕಟ್ಟೆ ಬಂಡವಾಳದಲ್ಲಿ ₹40,000 ಕೋಟಿಗೂ ಅಧಿಕ ನಷ್ಟವಾಗಿದೆ. ಈ ಕುಸಿತಕ್ಕೆ ಎಐ-ಆಧಾರಿತ ಬೆಲೆ ಇಳಿಕೆ ಮತ್ತು ಕೆಲವು ವಲಯಗಳಲ್ಲಿನ ಬೇಡಿಕೆಯ ಮಂದಗತಿ ಪ್ರಮುಖ ಕಾರಣಗಳಾಗಿವೆ. ಜೆಪಿ ಮಾರ್ಗನ್ ಸಂಸ್ಥೆಯು 'ನ್ಯೂಟ್ರಲ್' ರೇಟಿಂಗ್ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22tqv13smj8jqpn4qc3v3xw,imgname-infosys-share-price-fall-1788949031971.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.9): &lt;/strong&gt;ದೇಶದ ಎರಡನೇ ಅತಿ ದೊಡ್ಡ ಸಾಫ್ಟ್&zwnj;ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್ ಲಿಮಿಟೆಡ್ (Infosys Ltd.) ಶೇರುಗಳು ಬುಧವಾರ (ಸೆಪ್ಟೆಂಬರ್ 9) ಸತತ ಆರನೇ ದಿನವೂ ಕುಸಿತದ ಹಾದಿ ಮುಂದುವರಿಸಿವೆ. ಶೇ.4.55 ರಷ್ಟು ಇಂಟ್ರಾಡೇ ಕುಸಿತ ಕಂಡ ಇನ್ಫೋಸಿಸ್ ಶೇರು ಮೌಲ್ಯ ₹1,032.80 ಕ್ಕೆ ಕುಸಿದಿದೆ. ಸತತ 6 ದಿನಗಳ ಈ ಕುಸಿತದ ಪರ್ವದಲ್ಲಿ ಇನ್ಫೋಸಿಸ್ ಶೇರುಗಳ ಮೌಲ್ಯ ಒಟ್ಟಾರೆಯಾಗಿ ಶೇ. 11 ರಷ್ಟು ಕುಸಿದಿದ್ದು, ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದಲ್ಲಿ (Market Capitalisation) ಬರೋಬ್ಬರಿ ₹40,000 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.&lt;/p&gt;&lt;p&gt;ಈ ವಾರದ ಮೊದಲ ಮೂರು ದಿನಗಳ ವಹಿವಾಟಿನಲ್ಲಿ 'ನಿಫ್ಟಿ ಐಟಿ' (Nifty IT) ಸೂಚ್ಯಂಕದಲ್ಲಿ ಇನ್ಫೋಸಿಸ್ ಶೇರುಗಳೇ ಅತ್ಯಂತ ಕಳಪೆ ಪ್ರದರ್ಶನ ತೋರಿವೆ. ಇನ್ಫೋಸಿಸ್ ಮಾತ್ರವಲ್ಲದೆ, ಇತರೆ ಐಟಿ ದೈತ್ಯ ಸಂಸ್ಥೆಗಳಾದ ಕೋಫೋರ್ಜ್, ಟೆಕ್ ಮಹೀಂದ್ರಾ, ವಿಪ್ರೋ, ಹೆಚ್&zwnj;ಸಿಎಲ್&zwnj;ಟೆಕ್, ಎಂಪಾಸಿಸ್, ಟಿಸಿಎಸ್, ಎಲ್&zwnj;ಟಿಐಎಂ ಹಾಗೂ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಶೇರುಗಳು ಕೂಡ ಶೇ. 3 ರಿಂದ ಶೇ. 6 ರಷ್ಟು ಕುಸಿತ ಕಂಡಿವೆ. ಈ ವಾರದಲ್ಲಿ ನಿಫ್ಟಿ ಐಟಿ ಸೂಚ್ಯಂಕವು ಒಟ್ಟಾರೆಯಾಗಿ ಶೇ. 6 ರಷ್ಟು ಕುಸಿತ ದಾಖಲಿಸಿದೆ.&lt;/p&gt;&lt;p&gt;ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ 'ಜೆಪಿ ಮಾರ್ಗನ್' ಇನ್ಫೋಸಿಸ್ ಶೇರುಗಳಿಗೆ &quot;ನ್ಯೂಟ್ರಲ್&quot; (Neutral) ರೇಟಿಂಗ್ ನೀಡಿದ್ದು, ಪ್ರತಿ ಶೇರಿಗೆ ₹1,050 ಟಾರ್ಗೆಟ್&zwnj; ಬೆಲೆಯನ್ನು (Target Price) ನಿಗದಿಪಡಿಸಿದೆ.&lt;/p&gt;&lt;p&gt;&lt;strong&gt;ಎಐ ತಂತ್ರಜ್ಞಾನ ಮತ್ತು ಬೆಲೆಗಳ ಮೇಲಿನ ಒತ್ತಡ: &lt;/strong&gt;ಕಂಪನಿಗಳು ಉತ್ಪಾದಕತೆ ಹೆಚ್ಚಿಸಲು ಎಐ ತಂತ್ರಜ್ಞಾನದ ಮೊರೆ ಹೋಗುತ್ತಿದ್ದು, ಇದು ವಲಯದಲ್ಲಿ 'ಎಐ-ಆಧಾರಿತ ಬೆಲೆ ಇಳಿಕೆಗೆ' (AI-led deflation) ಕಾರಣವಾಗಿದೆ. ಆದರೆ ಎಐ ತಂತ್ರಜ್ಞಾನದ ಬಳಕೆಯು ಸಾಮಾನ್ಯ ಹಂತಕ್ಕೆ ಬಂದಂತೆ ಈ ದರ ಇಳಿಕೆಯ ತೀವ್ರತೆ ಕಡಿಮೆಯಾಗಬಹುದು ಎಂದು ಬ್ರೋಕರೇಜ್ ಹೇಳಿದೆ.&lt;/p&gt;&lt;p&gt;&lt;strong&gt;ಆದಾಯ ಬೆಳವಣಿಗೆಯ ಸವಾಲು:&lt;/strong&gt; ಎಐ ಆಧಾರಿತ ಆದಾಯ ಬೆಳವಣಿಗೆಯಾಗಬೇಕಾದರೆ ಬಲವಾದ ಬೇಡಿಕೆ, ಬೆಲೆ ಇಳಿಕೆಯ ತೀವ್ರತೆ ತಗ್ಗುವುದು ಹಾಗೂ ಸಂಸ್ಥೆಗಳ ಐಟಿ ವೆಚ್ಚ ಹೆಚ್ಚಾಗುವುದು (Discretionary Spending) ಅತ್ಯಗತ್ಯ.&lt;/p&gt;&lt;p&gt;&lt;strong&gt;ವಿವಿಧ ವಲಯಗಳ ಬೇಡಿಕೆ: &lt;/strong&gt;ಪ್ರಸ್ತುತ ಬ್ಯಾಂಕಿಂಗ್ ಹಾಗೂ ಹಣಕಾಸು ಸೇವೆಗಳು (Financial Services), ಯುಟಿಲಿಟೀಸ್ ಹಾಗೂ ಇಂಧನ (SURE) ಮತ್ತು ಉತ್ಪಾದನಾ (Manufacturing) ವಲಯಗಳಲ್ಲಿ ಐಟಿ ಸೇವೆಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ ಟೆಲಿಕಾಂ ಮತ್ತು ಚಿಲ್ಲರೆ (Retail) ಮಾರಾಟ ವಲಯಗಳಲ್ಲಿ ಬೇಡಿಕೆ ಮಂದಗತಿಯಲ್ಲಿದೆ.&lt;/p&gt;&lt;p&gt;&lt;strong&gt;ಮಾರ್ಜಿನ್ ರಕ್ಷಣೆ ಹಾಗೂ ಪ್ರಾಜೆಕ್ಟ್ ಮ್ಯಾಕ್ಸಿಮಸ್: &lt;/strong&gt;ವೆಂಡರ್-ಕಾನ್ಸಾಲಿಡೇಷನ್ (ಒಪ್ಪಂದಗಳ ಒಗೂಡುವಿಕೆ) ಒಪ್ಪಂದಗಳಲ್ಲಿ ಪೈಪೋಟಿ ತೀವ್ರಗೊಂಡಿದ್ದರೂ, ಇನ್ಫೋಸಿಸ್ ತನ್ನ ಲಾಭದ ಪ್ರಮಾಣಕ್ಕೆ (Margin) ಧಕ್ಕೆಯಾಗುವಂತಹ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಕಂಪನಿಯು ತನ್ನ 'ಪ್ರಾಜೆಕ್ಟ್ ಮ್ಯಾಕ್ಸಿಮಸ್' (Project Maximus) ಮೂಲಕ ಬರುವ ಉಳಿತಾಯವನ್ನು ಮಾರಾಟ, ಪಾಲುದಾರಿಕೆ ಹಾಗೂ ಉದ್ಯೋಗಿಗಳ ಮರು-ಕೌಶಲ್ಯ (Reskilling) ತರಬೇತಿಗೆ ಮರುಹೂಡಿಕೆ ಮಾಡುವ ನಿರೀಕ್ಷೆಯಿದೆ. ಜೊತೆಗೆ ಮೌಲ್ಯಮಾಪನವನ್ನು ಗಮನದಲ್ಲಿಟ್ಟುಕೊಂಡು ಹೊಸ ಸ್ವಾಧೀನಗಳಿಗೆ (M&amp;amp;A) ಮುಕ್ತವಾಗಿದೆ.&lt;/p&gt;&lt;h2&gt;&lt;strong&gt;ವಿಶ್ಲೇಷಕರ ಅಭಿಪ್ರಾಯ ಮತ್ತು ಶೇರು ಸ್ಥಿತಿಗತಿ&lt;/strong&gt;&lt;/h2&gt;&lt;p&gt;ಬ್ಲೂಮ್&zwnj;ಬರ್ಗ್ (Bloomberg) ದತ್ತಾಂಶದ ಪ್ರಕಾರ, ಇನ್ಫೋಸಿಸ್ ಶೇರುಗಳನ್ನು ವಿಶ್ಲೇಷಿಸುವ 49 ಆರ್ಥಿಕ ತಜ್ಞರಲ್ಲಿ 29 ಜನರು Buy, 16 ಜನರು Hold ಹಾಗೂ 4 ಜನರು Sell ಎಂದು ಸಲಹೆ ನೀಡಿದ್ದಾರೆ. ತಜ್ಞರ 12 ತಿಂಗಳ ಸರಾಸರಿ ಟಾರ್ಗೆಟ್ ಬೆಲೆ ₹1,201.18 ಆಗಿದ್ದು, ಇದು ಪ್ರಸ್ತುತ ದರಕ್ಕಿಂತ ಶೇ. 16 ರಷ್ಟು ಲಾಭದ ಸಾಧ್ಯತೆಯನ್ನು ತೋರಿಸುತ್ತದೆ.&lt;/p&gt;&lt;p&gt;ಬುಧವಾರ ಇನ್ಫೋಸಿಸ್ ಶೇರುಗಳು ಶೇ. 4.55 ರಷ್ಟು ಕುಸಿದು ₹1,032.80 ರಲ್ಲಿ ವಹಿವಾಟು ನಡೆಸಿದೆ. ಕಳೆದ ಒಂದು ತಿಂಗಳಿನಲ್ಲಿ ಈ ಶೇರು ಶೇ. 13 ರಷ್ಟು ಕುಸಿದಿದ್ದು, ಈ ವರ್ಷದಲ್ಲಿ (YTD) ಬರೋಬ್ಬರಿ ಶೇ. 37 ರಷ್ಟು ಮೌಲ್ಯ ಕಳೆದುಕೊಂಡಿದೆ. ವಾರದ ಹಂತದಲ್ಲಿ ಇನ್ಫೋಸಿಸ್ ಕಂಡ ಶೇ. 8.4 ರಷ್ಟು ಕುಸಿತವು ಐಟಿ ವಲಯದಲ್ಲೇ ಅತಿ ದೊಡ್ಡ ಕುಸಿತವಾಗಿದೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/infosys-shares-fall-sixth-day-loses-40000-crore-market-cap-san/articleshow-d073pmn"/>
        </item>
        <item>
            <title><![CDATA[Bengaluru: ವಿಜಯಾನಂದ ಟ್ರಾವೆಲ್ಸ್ ನಿಂದ ಹೊಸ ದಾಖಲೆ: ಸಾರಿಗೆಯಲ್ಲಿ ನೂತನ ಮೈಲಿಗಲ್ಲು]]></title>
            <link>https://kannada.asianetnews.com/business/vijayananda-travels-has-purchased-150-volvo-buses-through-volvo-india-mrq/articleshow-dzbom5g</link>
            <guid isPermaLink="true">https://kannada.asianetnews.com/business/vijayananda-travels-has-purchased-150-volvo-buses-through-volvo-india-mrq/articleshow-dzbom5g</guid>
            <pubDate>Sun, 06 Sep 2026 15:37:58 +0530</pubDate>
            <description><![CDATA[&lt;p&gt;ದೇಶದ ಪ್ರಮುಖ ಖಾಸಗಿ ಸಾರಿಗೆ ಸಂಸ್ಥೆಯಾದ ವಿಜಯಾನಂದ ಟ್ರಾವೆಲ್ಸ್, ಹೊಸ ದಾಖಲೆ ನಿರ್ಮಿಸಿದೆ. ಶೌಚಾಲಯ ವ್ಯವಸ್ಥೆ ಹೊಂದಿರುವ ಈ ಬಸ್&zwnj;ಗಳು ಪ್ರಯಾಣಿಕರಿಗೆ ಉತ್ತಮ ಅನುಭವ ನೀಡುವುದಲ್ಲದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1v2qkxhvdsw3rn4h2x9bqbb,imgname-vrl-1788688977840.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶದ ಅತಿ ದೊಡ್ಡ ಖಾಸಗಿ ಸಂಸ್ಥೆ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. (ವಿಟಿಪಿಎಲ್) ವೋಲ್ವೋ ಇಂಡಿಯಾ ಸಂಸ್ಥೆ ಮೂಲಕ ಒಂದೇ ಬಾರಿಗೆ 150 ವೋಲ್ವೋ ಬಸ್&zwnj;ಗಳನ್ನು ಖರೀದಿಸುವ ಮೂಲಕ ಸಾರಿಗೆ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ.&lt;/p&gt;&lt;p&gt;ಇತ್ತೀಚೆಗೆ 150 ಬಸ್&zwnj;ಗಳು ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್&zwnj;ಗಳನ್ನು ಸಂಸ್ಥೆ ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್&zwnj;ವೊಂದು ವೋಲ್ವೋ ಬಸ್&zwnj;ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ&lt;/p&gt;&lt;h2&gt;&lt;strong&gt;ವೋಲ್ವೋ ಸಂಸ್ಥೆ&lt;/strong&gt;&lt;/h2&gt;&lt;p&gt;ನಗರದ ಖಾಸಗಿ ಹೋಟೆಲ್&zwnj;ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ.ಶ್ರೀನಿವಾಸ್ ಅವರು ವಿಆರ್&zwnj;ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್&zwnj;ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್.ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;2007ರಿಂದ ವೋಲ್ವೋ ಜೊತೆ ವ್ಯವಹಾರ&lt;/strong&gt;&lt;/h3&gt;&lt;p&gt;ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ಸಂಸ್ಥೆ ಒಪ್ಪಂದವಿದೆ. ಮೊದಲು 20 ಬಸ್&zwnj;ಗಳನ್ನು ಸಂಸ್ಥೆ ಖರೀದಿಸಿತ್ತು. 2012ರ ವೇಳೆ 100 ಬಸ್&zwnj;ಗಳಿಗೆ ಆರ್ಡರ್ ಮಾಡಿದ್ದೆವು. ಈಗ 150 ಬಸ್&zwnj;ಗಳನ್ನು ಖರೀದಿಸಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್&zwnj;ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.&lt;/p&gt;&lt;p&gt;&lt;strong&gt;ಪ್ರಯಾಣದ ಸಮಯ ಉಳಿತಾಯ&lt;/strong&gt;&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಬುಕ್ ಮಾಡುವ ವೇಳೆ ಶೌಚಾಲಯ ವ್ಯವಸ್ಥೆ ಇದೆಯೇ ಎಂಬುದನ್ನು ಕೇಳಿ ಬುಕ್ ಮಾಡುತ್ತಿದ್ದಾರೆ. ಶೌಚಾಲಯ ವ್ಯವಸ್ಥೆ ಇರುವುದರಿಂದ ಪ್ರಯಾಣದ ಅವಧಿ ಕೂಡ ಕಡಿಮೆಯಾಗಲಿದೆ. ಶೌಚಕ್ಕಾಗಿ ಒಂದೆಡೆ ಬಸ್ ನಿಲ್ಲಿಸಿದರೆ ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯ ಉಳಿಯುವುದರಿಂದ ನಿಗದಿತ ಸಮಯಕ್ಕಿಂತ ಮೊದಲೇ ನಿಗದಿತ ಸ್ಥಳ ತಲುಪಿದರೆ ಪ್ರಯಾಣಿಕರಿಗೂ ಅನುಕೂಲ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;HDFC ಬಳಿಕ ICICI Bank ಮೇಲೆ LIC ಕಣ್ಣು; ನಾಳೆ ಈ ಎರಡೂ ಷೇರುಗಳ ಮೇಲೆ ಹೂಡಿಕೆದಾರರ ಗಮನ!&lt;/strong&gt;&lt;/p&gt;]]></content:encoded>
            <category>business</category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/vijayananda-travels-has-purchased-150-volvo-buses-through-volvo-india-mrq/articleshow-dzbom5g"/>
        </item>
        <item>
            <title><![CDATA[Cricket: ಒಂದೇ ದಿನ ಎರಡು ದೇಶಗಳಲ್ಲಿ ಕಣಕ್ಕಿಳಿಯಲಿದೆ ಭಾರತ! 28 ವರ್ಷಗಳ ಬಳಿಕ ಮರುಕಳಿಸಲಿದೆ ಅಪರೂಪದ ಇತಿಹಾಸ!]]></title>
            <link>https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su</link>
            <guid isPermaLink="true">https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su</guid>
            <pubDate>Mon, 07 Sep 2026 20:13:54 +0530</pubDate>
            <description><![CDATA[&lt;p&gt;ಭಾರತೀಯ ಕ್ರೀಡಾಭಿಮಾನಿಗಳಿಗೆ ಅಪರೂಪದ ದಿನ ಎದುರಾಗಲಿದೆ. ಅಂದು ಭಾರತ ಒಂದೇ ದಿನ ಎರಡು ವಿಭಿನ್ನ ದೇಶಗಳಲ್ಲಿ ಕಣಕ್ಕಿಳಿಯಲಿದೆ. ಈ ಅಪರೂಪದ ವೇಳಾಪಟ್ಟಿಯ ಸಂಪೂರ್ಣ ವಿವರನ್ನೊಮ್ಮೆ ನೋಡಿಕೊಂಡು ಬರೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y54sk34b085f6v2ske2j3n,imgname-team-india-1788792170083.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಕ್ಟೋಬರ್ 3, 2026 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ದಿನವಾಗಲಿದೆ. ಈ ಒಂದೇ ದಿನದಂದು ಭಾರತದ ಎರಡು ಪ್ರತ್ಯೇಕ ಪುರುಷರ ಕ್ರಿಕೆಟ್ ತಂಡಗಳು ಎರಡು ವಿಭಿನ್ನ ದೇಶಗಳಲ್ಲಿ ಮೈದಾನಕ್ಕಿಳಿದು ಪಂದ್ಯಗಳನ್ನು ಆಡಲಿವೆ. ಒಂದು ತಂಡ ಭಾರತದ ಚಂಡೀಗಢ ಸಮೀಪದ ಮುಲ್ಲನ್&zwnj;ಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಸೆಣಸಿದರೆ, ಮತ್ತೊಂದು ತಂಡ ಜಪಾನ್&zwnj;ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್&zwnj;ನ ಪದಕದ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಲಿದೆ.&lt;/p&gt;&lt;h2&gt;&lt;strong&gt;ಯಾವಾಗ ಮ್ಯಾಚ್?&amp;nbsp;&lt;/strong&gt;&lt;/h2&gt;&lt;p&gt;ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವು ಅಕ್ಟೋಬರ್ 3 ರಂದು ಮಧ್ಯಾಹ್ನ 2 ಗಂಟೆಗೆ ಮುಲ್ಲನ್&zwnj;ಪುರದಲ್ಲಿ ಪ್ರಾರಂಭವಾಗಲಿದೆ. ಅದೇ ದಿನ ಜಪಾನ್&zwnj;ನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದ ಕಂಚಿನ ಮತ್ತು ಚಿನ್ನದ ಪದಕಕ್ಕಾಗಿ ಪಂದ್ಯಗಳು ನಡೆಯಲಿವೆ. ಭಾರತ ತಂಡವು ಫೈನಲ್ ತಲುಪಿದರೆ ಚಿನ್ನದ ಪದಕಕ್ಕಾಗಿ, ಇಲ್ಲವಾದರೆ ಕಂಚಿನ ಪದಕಕ್ಕಾಗಿ ಅಕ್ಟೋಬರ್ 3 ರಂದೇ ಕಣಕ್ಕಿಳಿಯಲಿದೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಸೆಪ್ಟೆಂಬರ್ 28 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ.&lt;/p&gt;&lt;h3&gt;&lt;strong&gt;ತಂಡವ್ನು ಯಾರು ಮುನ್ನಡೆಸಲಿದ್ದಾರೆ? &lt;/strong&gt;&lt;/h3&gt;&lt;p&gt;ಏಷ್ಯನ್ ಗೇಮ್ಸ್&zwnj;ಗಾಗಿ ಭಾರತೀಯ ಕ್ರಿಕೆಟ್ ಮಂಡಳಿಯು ಬಲಶಾಲಿ ಪಡೆ ಹಾಗೂ ಹೊಸ ನಾಯಕನನ್ನು ಘೋಷಿಸಿದೆ. ಶ್ರೇಯಸ್ ಅಯ್ಯರ್ ಈ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಿತ್ ರಾಣಾ ಅವರಂತಹ ಸ್ಟಾರ್ ಆಟಗಾರರಿದ್ದಾರೆ.&lt;/p&gt;&lt;h3&gt;&lt;strong&gt;28 ವರ್ಷಗಳ ನಂತರ ಬಂದ ಆ ದಿನ!&lt;/strong&gt;&lt;/h3&gt;&lt;p&gt;ಭಾರತೀಯ ಕ್ರಿಕೆಟ್&zwnj;ನಲ್ಲಿ ಒಂದೇ ದಿನ ಎರಡು ಬೇರೆ ಬೇರೆ ದೇಶಗಳಲ್ಲಿ ಎರಡು ಪಂದ್ಯಗಳನ್ನು ಆಡುತ್ತಿರುವ ಈ ಅಪರೂಪದ ಕಾಕತಾಳೀಯವು ಬರೋಬ್ಬರಿ 28 ವರ್ಷಗಳ ನಂತರ ಮರುಕಳಿಸುತ್ತಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 12, 1998 ರಂದು ಭಾರತೀಯ ಕ್ರಿಕೆಟ್ ತಂಡವು ಒಂದೇ ದಿನದಲ್ಲಿ ಇಂತಹ ಎರಡು ಭಿನ್ನ ಪಂದ್ಯಗಳನ್ನು ಆಡಿತ್ತು. ಅಂದು ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಅಜಯ್ ಜಡೇಜಾ ಹಾಗೂ ವಿ.ವಿ.ಎಸ್. ಲಕ್ಷ್ಮಣ್ ಅವರನ್ನೊಳಗೊಂಡ ತಂಡವು ಕೌಲಾಲಂಪುರದಲ್ಲಿ ನಡೆದ ಕಾಮನ್&zwnj;ವೆಲ್ತ್ ಕ್ರೀಡಾಕೂಟದಲ್ಲಿ ಕೆನಡಾ ವಿರುದ್ಧ ಆಡಿ 112 ರನ್&zwnj;ಗಳ ಭರ್ಜರಿ ಗೆಲುವು ಸಾಧಿಸಿತ್ತು. ಅನಿಲ್ ಕುಂಬ್ಳೆ ಕೇವಲ 11 ರನ್ ನೀಡಿ 4 ವಿಕೆಟ್ ಕಬಳಿಸಿ ಕೆನಡಾವನ್ನು 45 ರನ್&zwnj;ಗಳಿಗೆ ಆಲೌಟ್ ಮಾಡಿದ್ದರು.&lt;/p&gt;&lt;h3&gt;&lt;strong&gt;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಕ್ರಿಕೆಟ್&zwnj; ಲೋಕ!&lt;/strong&gt;&lt;/h3&gt;&lt;p&gt;ಅದೇ ದಿನ, ಮೊಹಮ್ಮದ್ ಅಜರುದ್ದೀನ್ ನಾಯಕತ್ವದ ಮತ್ತೊಂದು ಭಾರತ ತಂಡವು ಕೆನಡಾದ ಟೊರೊಂಟೊದಲ್ಲಿ ನಡೆದ ಸಹಾರಾ ಫ್ರೆಂಡ್&zwnj;ಶಿಪ್ ಕಪ್&zwnj;ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಡಿತ್ತು. ಸೌರವ್ ಗಂಗೂಲಿ, ನವಜೋತ್ ಸಿಂಗ್ ಸಿಧು, ಜಾವಗಲ್ ಶ್ರೀನಾಥ್ ಮತ್ತು ಅಜಿತ್ ಅಗರ್ಕರ್ ಅವರಿದ್ದ ಈ ಪಡೆಯು ಪಾಕಿಸ್ತಾನವನ್ನು 6 ವಿಕೆಟ್&zwnj;ಗಳಿಂದ ಧೂಳೀಪಟ ಮಾಡಿತ್ತು. ಇದೀಗ 2026 ರಲ್ಲಿ ಮತ್ತೆ ಅದೇ ಮಾದರಿಯ ಐತಿಹಾಸಿಕ ಕ್ಷಣಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಗಲಿದೆ.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/team-india-two-matches-same-day-28-years-after-historic-record-india-cricket-schedule-bmk/articleshow-fzx85su"/>
        </item>
        <item>
            <title><![CDATA[73ನೇ ವಯಸ್ಸಿನಲ್ಲಿಯೂ ಕೆಲಸ; ದಿನಕ್ಕೆ 25 ಸಾವಿರ ಸಂಪಾದನೆ; ಇದು ಅಜ್ಜಿ ಖಾನಾವಳಿ!]]></title>
            <link>https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i</link>
            <guid isPermaLink="true">https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i</guid>
            <pubDate>Tue, 08 Sep 2026 12:45:55 +0530</pubDate>
            <description><![CDATA[&lt;p&gt;73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1zx91pfrcb0t5qdyn2xepe0,imgname-ajji-khanavali--3--1788851029711.jpg" type="image/jpeg" height="390" width="690"/>
            <content:encoded><![CDATA[&lt;p&gt;73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.&lt;/p&gt;&lt;img&gt;&lt;p&gt;ದುಡಿಬೇಕು ಅನ್ನೋ ಛಲ ಇದ್ರೆ ವಯಸ್ಸು ಅಡ್ಡಿ ಬರಲ್ಲ ಎಂಬುದಕ್ಕೆ ಈ ಅಜ್ಜಿ ಸಾಕ್ಷಿಯಾಗಿದ್ದಾರೆ. ವಯಸ್ಸು 73 ಆದರೂ 23ರ ಹರೆಯದವರಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 9ಕ್ಕೆ ಶುರುವಾದ್ರೆ ಕೆಲಸ ರಾತ್ರಿ 11 ಗಂಟೆಗೆ ಮುಗಿಯುತ್ತದೆ. ಕೊಪ್ಪಳಕ್ಕೆ ಬರೋ ಜನರು ಈ ಅಜ್ಜಿಯ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಬಂಗಾರ ಗಳಿಕೆ ಮಾಡಬಾರದು, ಬಂಗಾರದಂತಹ ಗುಣ ಸಂಪಾದನೆ ಮಾಡಬೇಕು ಅನ್ನೋದು ಅಜ್ಜಿಯವರ ಮಾತು. ಬೇಕು ಅನ್ನೋನು ಬೇಕೂಫ್, ಸಾಕು ಅನ್ನೋನೇ ಸಿದ್ದಪ್ಪ ಅನ್ನೋ ಅಜ್ಜಿ, ಪ್ರತಿಕ್ಷಣವೂ ಸಿದ್ದಾರೂಢ (ದೇವರು) ಅವರನ್ನು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ಈ ಅಜ್ಜಿಯ ಹೆಸರು ಶಿವಗಂಗಮ್ಮ, ಶ್ರೀ ಸಿದ್ದಾರೂಢ ಹೆಸರಿನಲ್ಲಿ ಕಳೆದ 25 ವರ್ಷದಿಂದ ಖಾನಾವಳಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಜ್ಜಿಗೆ ನಾಲ್ಕು ಮಕ್ಕಳು. ಇಲ್ಲಿ ನೀಡಲಾಗುವ ಜೋಳದ ರೊಟ್ಟಿ ಕೊಪ್ಪಳದಲ್ಲಿ ಫೇಮಸ್. ನನಗೆ ಅಕ್ಷರಜ್ಞಾನ ಇಲ್ಲ ಸರ್. ಲೋಕಜ್ಞಾನ ಇದೆ. ಲೆಕ್ಕ ಮಾಡಲು ಯಾವುದೇ ಕ್ಯಾಲ್ಕುಲೇಟರ್ ಬಳಸಲ್ಲ.&lt;/p&gt;&lt;p&gt;ಲಾಕ್&zwnj;ಡೌನ್ ಸಂದರ್ಭದಲ್ಲಿಯೂ ಹೋಟೆಲ್ ಮುಚ್ಚದೇ ಕೆಲಸ ಮಾಡಿದ್ದೇನೆ. ಆ ವೇಳೆ ಪೊಲೀಸರು, ಪುರಸಭೆ ಸಿಬ್ಬಂದಿಯೂ ಇಲ್ಲಿಗೆ ಬಂದು ಊಟ ಮಾಡುತ್ತಿದ್ದರು. ಎಲ್ಲವೂ ಸಿದ್ದಾರೂಢ ಸ್ವಾಮೀಜಿಗಳ ಆಶೀರ್ವಾದದಿಂದ ಕೆಲಸ ನಡೆಯುತ್ತಿದೆ ಎಂದು ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಶಿವಗಂಗಮ್ಮ ಅವರ ಮೂಲತಃ ಹುನ್ನಾಳದ ನಿವಾಸಿ. ಕುಷ್ಟಗಿ ತಾಲೂಕಿನ ಮುನ್ನಾಳ ಗ್ರಾಮದ ಚಂದಲಿಂಗಪ್ಪ ಎಂಬವರ ಜೊತೆ ಮದುವೆಯಾಗುತ್ತದೆ. ಬಾಲ್ಯವಿವಾಹ ಆಗಿದ್ದರಿಂದ ಶಿವಲಿಂಗಮ್ಮಾ ಅವರಿಗೆ ಮದುವೆಯಾಗಿದ್ದು ಸಹ ಅಷ್ಟು ನೆನಪಿಲ್ಲ. ಗಂಡನೂ ಹೆಚ್ಚು ಕೆಲಸ ಮಾಡದ ಹಿನ್ನೆಲೆ ಉದ್ಯೋಗ ಅರಿಸಿಕೊಂಡು ಕೊಪ್ಪಳ ಪಟ್ಟಣಕ್ಕೆ ಬರುತ್ತಾರೆ.&lt;/p&gt;&lt;img&gt;&lt;p&gt;ತವರುಮನೆಯಲ್ಲಿ ಹೋಟೆಲ್ ವ್ಯಾಪಾರ ಮಾಡಿದ್ದರಿಂದ ಕೆಲಸದ ಅನುಭವ ಇತ್ತು. ಗಂಡನ ಮನೆಯಲ್ಲಿ ಸಣ್ಣದಾಗಿ ಹೋಟೆಲ್ ವ್ಯಾಪಾರ ಮಾಡಿದೆ. ಅಲ್ಲಿ ಹೆಚ್ಚು ವ್ಯಾಪಾರ ಇಲ್ಲದ ಕಾರಣ ಕೊಪ್ಪಳಕ್ಕೆ ಬಂದೆ. ಆರಂಭದಲ್ಲಿ ರಸ್ತೆಬದಿ ಹೋಟೆಲ್ ಇತ್ತು. ಈಗ ಇಲ್ಲಿಯವರಗೆ ಬಂದಿದ್ದೇನೆ.&lt;/p&gt;&lt;p&gt;ಕೊಪ್ಪಳದಲ್ಲಿ ಮಗ ಪ್ರತ್ಯೇಕ ಹೋಟೆಲ್ ಮಾಡ್ಕೊಂಡಿದ್ದಾನೆ. ಅಳಿಯನೂ ಸರ್ಕಲ್&zwnj;ನಲ್ಲಿ ಹೋಟೆಲ್ ಹಾಕಿಕೊಂಡಿದ್ದಾನೆ. ಇಲ್ಲಿ ನಾನೊಬ್ಬಳೇ ಹೋಟೆಲ್ ನಡೆಸುತ್ತಿದ್ದೇನೆ. ಅಡುಗೆ ಮಾತ್ರ ನಾನೇ ಮಾಡುವೆ. ಅಡುಗೆ ಮಾಡಿಯೇ ಗಲ್ಲಾಪೆಟ್ಟಿಗೆಗೆ ಬಂದು ಕುಳಿತುಕೊಳ್ಳುತ್ತೇನೆ ಎಂದು ಶಿವಗಂಗಮ್ಮಾ ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಕೊಪ್ಪಳಕ್ಕೆ ಬಂದು 25 ವರ್ಷ ಆಯ್ತು. ಕೈ-ಕಾಲು ಗಟ್ಟಿಯಾಗಿರುವಾಗಲೇ ಜೀವ ಹೋಗಬೇಕೆಂದು ಆ ಸಿದ್ದಾರೂಢನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರ ಹಂಗಿನಲ್ಲಿಯೂ ಇರಬಾರದು. ನಮ್ಮ ಖಾನಾವಳಿಗೆ ಬರುವ ಗ್ರಾಹಕರಲ್ಲಿ ಸಿದ್ದಾರೂಢರನ್ನು ಕಾಣುತ್ತೇನೆ. ಗ್ರಾಹಕರು ಸಹ ನನ್ನನ್ನು ತಾಯಿ ಸ್ವರೂಪದಲ್ಲಿ ನೋಡುತ್ತಾರೆ. ನನ್ನ ಜೀವನಕ್ಕಿಷ್ಟು ಸಾಕು. ಕೊನೆಯವರೆಗೂ ದುಡಿಯಬೇಕು, ಚೆನ್ನಾಗಿಯೇ ಇರೋವಾಗಲೇ ಶಿವನ ಪಾದ ಸೇರಿಕೊಳ್ಳಬೇಕು ಎಂದು ಅಜ್ಜಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ತಿಂಗಳಿಗೆ ಒಂದು ಬಾರಿ ದಿನಸಿ ಖರೀದಿ ಮಾಡುತ್ತೇವೆ. ಪಾಟೀಲರ ಅಂಗಡಿಯಲ್ಲಿ ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ ಮಾಡುತ್ತೇನೆ. ಇಲ್ಲಿ 10 ಜನರು ಕೆಲಸ ಮಾಡುತ್ತಾರೆ. ದಿನಕ್ಕೆ 25 ಸಾವಿರ ರೂಪಾಯಿಗಷ್ಟು ಕಲೆಕ್ಷನ್ ಆಗುತ್ತದೆ. ಉಳಿತಾಯ ಕಡಿಮೆಯಾಗುತ್ತದೆ. ಒಂದು ಊಟಕ್ಕೆ 2 ರೊಟ್ಟಿ ಕೊಡುತ್ತೇನೆ. ಅನ್ನಕ್ಕೆ ಯಾವುದೇ ಲಿಮಿಟ್ ಇಲ್ಲ. ಇದುವರೆಗೂ ಇಷ್ಟೇ ಅಂತ ಸೀಮಿತ ಮಾಡಿಲ್ಲ. ಈ ಹಿಂದೆ ಸಗಣಿಯನ್ನು ಸಂಗ್ರಹಿಸಿದ್ರೆ ತಿಂಗಳಿಗೆ 5 ರೂಪಾಯಿ ಸಿಗುತ್ತಿತ್ತು ಎಂದು ಹಳೆ ದಿನಗಳನ್ನು ನೆನಪು ಮಾಡಿಕೊಂಡರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ&lt;/strong&gt;&lt;/p&gt;]]></content:encoded>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/koppal-shivagangamma-ajji-khanavali-story-earning-25-thousand-rupees-per-day-old-woman-inspiration-success-story-mrq-g4lqy4i"/>
        </item>
        <item>
            <title><![CDATA[Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?]]></title>
            <link>https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am</link>
            <guid isPermaLink="true">https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am</guid>
            <pubDate>Sun, 06 Sep 2026 19:15:39 +0530</pubDate>
            <description><![CDATA[ಸ್ವಂತ ಉದ್ಯಮ ಆರಂಭಿಸಲು ಬಂಡವಾಳ ಮತ್ತು ಸಾಲದ ಗೊಂದಲದಲ್ಲಿರುವವರಿಗೆ ಕೇಂದ್ರ ಸರ್ಕಾರದ 'ಜನ ಸಮರ್ಥ್' ಪೋರ್ಟಲ್ ಒಂದು ಉತ್ತಮ ಪರಿಹಾರವಾಗಿದೆ. ಈ ಡಿಜಿಟಲ್ ವೇದಿಕೆಯು ಕೃಷಿ, ವ್ಯವಹಾರ, ವಸತಿ ಸೇರಿದಂತೆ 16 ಸರ್ಕಾರಿ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತಂದಿದ್ದು, ಬ್ಯಾಂಕ್&zwnj;ಗೆ ಅಲೆಯದೆ ಸುಲಭವಾಗಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0qdq99pz1a9epqv54s98422,imgname-80-20-rule-for-money-a-simple-way-to-control-expenses-and-save-more-from-your-salary-1787492541750.png" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯುಸಿನೆಸ್ ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್&zwnj;ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?&lt;/p&gt;&lt;p&gt;ನಮ್ಮಲ್ಲಿ ಹಲವರಿಗೆ ಸ್ವಂತ ಉದ್ಯಮ ಅಥವಾ ಬ್ಯುಸಿನೆಸ್ ಪ್ರಾರಂಭಿಸಬೇಕೆಂಬ ದೊಡ್ಡ ಕನಸಿರುತ್ತದೆ. ಆದರೆ, ಆರಂಭಿಕ ಬಂಡವಾಳ ಹೂಡುವುದು ಹೇಗೆ ಮತ್ತು ಸಾಲ ಪಡೆಯುವುದು ಎಲ್ಲಿ ಎಂಬ ಗೊಂದಲದಿಂದಾಗಿ ಅನೇಕರ ಕನಸುಗಳು ಕೈಗೂಡುವುದೇ ಇಲ್ಲ. ವಿಶೇಷವಾಗಿ, ಬ್ಯಾಂಕ್&zwnj;ಗಳಿಗೆ ಹೋದಾಗ ಅವರು ಕೇಳುವ 'ಗ್ಯಾರಂಟಿ' (ಶ್ಯೂರಿಟಿ) ನೀಡಲು ಸಾಧ್ಯವಾಗದೆ ಸಣ್ಣ ಉದ್ಯಮಿಗಳು ಹಿಂಜರಿಯುತ್ತಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರವು 'ಜನ ಸಮರ್ಥ್' ಎಂಬ ಅತ್ಯುತ್ತಮ ಡಿಜಿಟಲ್ ವೇದಿಕೆಯನ್ನು ಜಾರಿಗೆ ತಂದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಏನಿದು 'ಜನ ಸಮರ್ಥ್' ಡಿಜಿಟಲ್ ವೇದಿಕೆ?&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ವಿವಿಧ ಸಾಲ ಯೋಜನೆಗಳನ್ನು ಒಂದೇ ಸೂರಿನಡಿ ತರಲು 'ಜನ ಸಮರ್ಥ್' ಎಂಬ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಉತ್ತೇಜಿಸಲು ರೂಪಿಸಲಾದ ಏಕ-ಗವಾಕ್ಷಿ ಡಿಜಿಟಲ್ ವ್ಯವಸ್ಥೆಯಾಗಿದೆ. ಕೃಷಿ, ವ್ಯವಹಾರ, ವಸತಿ, ಇಂಧನ ಮತ್ತು ಜೀವನೋಪಾಯದಂತಹ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದ ಸಾಲಗಳನ್ನು ಬ್ಯಾಂಕ್&zwnj;ಗೆ ಅಲೆಯದೆ ಈ ವೇದಿಕೆಯ ಮೂಲಕ ಸುಲಭವಾಗಿ ಪಡೆಯಬಹುದು.&lt;/p&gt;&lt;h3&gt;&lt;strong&gt;ಒಂದೇ ಪೋರ್ಟಲ್&zwnj;ನಲ್ಲಿ ಲಭ್ಯವಿರುವ 16 ಪ್ರಮುಖ ಯೋಜನೆಗಳು!&lt;/strong&gt;&lt;/h3&gt;&lt;p&gt;ಈ ಸಿಂಗಲ್ ಪ್ಲಾಟ್&zwnj;ಫಾರ್ಮ್ ಮೂಲಕ ನೀವು ಸರ್ಕಾರದ 16 ಪ್ರಮುಖ ಯೋಜನೆಗಳ ಅಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಅವುಗಳಲ್ಲಿ ಪ್ರಮುಖವಾದವು!&lt;/p&gt;&lt;p&gt;ಪ್ರಧಾನ ಮಂತ್ರಿ ಮುದ್ರಾ ಯೋಜನೆ (MUDRA Loan)&lt;/p&gt;&lt;p&gt;ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP)&lt;/p&gt;&lt;p&gt;ಪಿಎಂ ಸ್ವನಿಧಿ ಯೋಜನೆ (PM SVANidhi)&lt;/p&gt;&lt;p&gt;ಕಿಸಾನ್ ಕ್ರೆಡಿಟ್ ಕಾರ್ಡ್ (KCC)&lt;/p&gt;&lt;p&gt;ಇ-ಕಿಸಾನ್ ಉಪಜ್ ನಿಧಿ ಹಾಗೂ ವಸತಿ ಯೋಜನೆಗಳು&lt;/p&gt;&lt;p&gt;ತುರ್ತು ಸಾಲ ಖಾತರಿ ಯೋಜನೆ ಮತ್ತು ಸೌರ ಮೇಲ್ಛಾವಣಿ (Solar Rooftop) ಯೋಜನೆ&lt;/p&gt;&lt;p&gt;ಅರ್ಜಿ ಸಲ್ಲಿಸುವುದು ಮತ್ತು ಪ್ರಕ್ರಿಯೆ ಹೇಗೆ?&lt;/p&gt;&lt;h3&gt;&lt;strong&gt;ಈ ಪೋರ್ಟಲ್&zwnj;ನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನ ಅತ್ಯಂತ ಸರಳವಾಗಿದೆ!&lt;/strong&gt;&lt;/h3&gt;&lt;p&gt;&lt;strong&gt;1. ಅರ್ಹತೆ ಪರಿಶೀಲನೆ;&lt;/strong&gt; ಜನ್ ಸಮರ್ಥ್ ವೆಬ್&zwnj;ಸೈಟ್&zwnj;ಗೆ ಭೇಟಿ ನೀಡಿ ಕೆಲವೇ ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಯಾವ ಯೋಜನೆಗೆ ಅರ್ಹರಾಗಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.&lt;/p&gt;&lt;p&gt;&lt;strong&gt;2. ಸ್ವಯಂಚಾಲಿತ ಮಾಹಿತಿ ಭರ್ತಿ; &lt;/strong&gt;ಸುಧಾರಿತ ತಂತ್ರಜ್ಞಾನದ ನೆರವಿನಿಂದ ನಿಮ್ಮ ವಿವರಗಳು ಆಟೋಮ್ಯಾಟಿಕ್ ಆಗಿ ಭರ್ತಿಯಾಗುತ್ತವೆ.&lt;/p&gt;&lt;p&gt;&lt;strong&gt;3.ಸರ್ಕಾರಿ ದಾಖಲೆಗಳ ಜೋಡಣೆ:&lt;/strong&gt; ಉದ್ಯಮ್ ನೋಂದಣಿ, ಆಧಾರ್ (UIDAI), ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್&zwnj;ಟಿ (GST) ದತ್ತಸಂಚಯಗಳೊಂದಿಗೆ ಈ ಪೋರ್ಟಲ್ ಸಂಯೋಜನೆಗೊಂಡಿರುವುದರಿಂದ, ನಿಮ್ಮ ದಾಖಲೆಗಳ ಪರಿಶೀಲನೆ ಕ್ಷಣಾರ್ಧದಲ್ಲಿ ನಡೆಯುತ್ತದೆ.&lt;/p&gt;&lt;p&gt;&lt;strong&gt;4. ಆನ್&zwnj;ಲೈನ್ ಟ್ರ್ಯಾಕಿಂಗ್; &lt;/strong&gt;ಬ್ಯಾಂಕ್&zwnj;ಗೆ ನೇರವಾಗಿ ಅಲೆಯುವ ಅಗತ್ಯವಿಲ್ಲದೆ, ನಿಮ್ಮ ಅರ್ಜಿಗೆ ಆನ್&zwnj;ಲೈನ್&zwnj;ನಲ್ಲೇ ಅನುಮೋದನೆ ದೊರೆಯುತ್ತದೆ ಮತ್ತು ಅರ್ಜಿಯ ಸ್ಥಿತಿಯನ್ನು (Application Status) ನೀವೇ ಮೊಬೈಲ್&zwnj;ನಲ್ಲಿ ಟ್ರ್ಯಾಕ್ ಮಾಡಬಹುದು.&lt;/p&gt;&lt;h3&gt;&lt;strong&gt;ಲಕ್ಷಾಂಸತರ ಉದ್ಯಮಿಗಳಿಗೆ ವರದಾನವಾದ ಯೋಜನೆ!&lt;/strong&gt;&lt;/h3&gt;&lt;p&gt;ಜನ ಸಮರ್ಥ್ ವೇದಿಕೆಯು ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಜೂನ್ 1, 2026 ರವರೆಗಿನ ಅಂಕಿ-ಅಂಶಗಳ ಪ್ರಕಾರ, ಈ ಪೋರ್ಟಲ್ ಮೂಲಕ ಸುಮಾರು 54.10 ಲಕ್ಷ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, 3 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ. ಇದಲ್ಲದೆ, ಬ್ಯಾಂಕುಗಳು ಡಿಜಿಟಲ್ ರೂಪದಲ್ಲೇ 49.55 ಲಕ್ಷ ಫಲಾನುಭವಿಗಳಿಗೆ 2.76 ಲಕ್ಷ ಕೋಟಿ ರೂ. ಸಾಲವನ್ನು ಅನುಮೋದಿಸಿವೆ.&lt;/p&gt;&lt;h3&gt;ಸೈಟ್&zwnj;ಗೆ ಒಂದು ಸಾರಿ ಭೇಟಿ ನೀಡಿ!&lt;/h3&gt;&lt;p&gt;ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳಾ ಉದ್ಯಮಿಗಳು, ರೈತರು ಮತ್ತು ಸಣ್ಣ ಬೀದಿಬದಿ ವ್ಯಾಪಾರಿಗಳಿಗೆ ಈ ಯೋಜನೆ ಅತ್ಯಂತ ನೆರವಾಗಿದೆ. ನೀವೂ ಕೂಡ ಸ್ವಂತ ಉದ್ಯಮ ಆರಂಭಿಸುವ ಕನಸು ಕಂಡಿದ್ದರೆ, ತಕ್ಷಣವೇ 'ಜನ ಸಮರ್ಥ್' ಪೋರ್ಟಲ್&zwnj;ಗೆ ಭೇಟಿ ನೀಡಿ ಈ ಸೌಲಭ್ಯದ ಪ್ರಯೋಜನ ಪಡೆಯಬಹುದು.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/government-business-loans-16-schemes-for-starting-business-online-application-without-visiting-banks-bmk/articleshow-ht665am"/>
        </item>
        <item>
            <title><![CDATA[EPFO: ಪಿಎಫ್‌ಗೆ 5 ವರ್ಷ ಹಣ ಹಾಕಿಲ್ಲ ಅಂದ್ರೆ ಬಡ್ಡಿ ನಿಲ್ಲುತ್ತಾ? ನಿಮ್ಮ ಖಾತೆಯ ಹಣದ ಲೆಕ್ಕ ಇಲ್ಲಿದೆ!]]></title>
            <link>https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq</link>
            <guid isPermaLink="true">https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq</guid>
            <pubDate>Wed, 09 Sep 2026 20:24:02 +0530</pubDate>
            <description><![CDATA[&lt;p&gt;ಉದ್ಯೋಗಿ ಭವಿಷ್ಯ ನಿಧಿ (EPF) ಖಾತೆಗೆ ಹಣ ಜಮಾ ಮಾಡುವುದು ನಿಂತರೂ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಬಡ್ಡಿ ಜಮೆಯಾಗುತ್ತಲೇ ಇರುತ್ತಾ? 2016ರ ನಿಯಮ ತಿದ್ದುಪಡಿಯ ಪ್ರಕಾರ, ನಿಷ್ಕ್ರಿಯ ಖಾತೆಗಳಿಗೂ ಬಡ್ಡಿ ಲಭ್ಯವಿದೆಯಾ? ಇಲ್ಲಿದೆ ಕಂಪ್ಲೀಟ್&zwnj; ಮಾಹಿತಿ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m01yqrrrnwbsft9mtm9kjksm,imgname-epfo-pension-1786772185880.jpg" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO) ಖಾತೆಗೆ ಹಣ ಜಮಾ ಮಾಡುವುದು ನಿಂತ ತಕ್ಷಣವೇ ಬಡ್ಡಿ ಬರುವುದು ನಿಂತುಹೋಗುತ್ತದೆ ಎಂಬುದು ಹಲವು ಚಂದಾದಾರರಲ್ಲಿರುವ ದೊಡ್ಡ ತಪ್ಪು ಕಲ್ಪನೆ. ನಾನು ಕಳೆದ 5 ವರ್ಷಗಳಿಂದ ಪಿಎಫ್&zwnj;ಗೆ ಹಣ ಠೇವಣಿ ಮಾಡಿಲ್ಲ, ನನಗಿನ್ನೂ ಬಡ್ಡಿ ಸಿಗುತ್ತದೆಯೇ? ಎಂಬ ಪ್ರಶ್ನೆಗೆ ಸ್ಪಷ್ಟ ಮತ್ತು ನೇರ ಉತ್ತರ &lsquo;ಹೌದು, ಖಂಡಿತವಾಗಿಯೂ ಸಿಗುತ್ತದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಇಪಿಎಫ್&zwnj;ಒ ನ ನಿಯಮಗಳ ಪ್ರಕಾರ, ನೀವು ಕೆಲಸ ಬಿಟ್ಟರೂ ಅಥವಾ ಖಾತೆಗೆ ವಂತಿಗೆ ಜಮೆಯಾಗುವುದು ನಿಂತರೂ ಸಹ, ನಿಮ್ಮ ಪಿಎಫ್&zwnj; ಖಾತೆಯಲ್ಲಿರುವ ಮೊತ್ತಕ್ಕೆ ನಿಯಮಿತವಾಗಿ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ.&lt;/p&gt;&lt;h2&gt;&lt;strong&gt;3 ವರ್ಷಗಳ ನಿಯಮದ ಅಸಲಿ ಸತ್ಯವೇನು?&lt;/strong&gt;&lt;/h2&gt;&lt;p&gt;ಹಿಂದೆ (2016 ಕ್ಕಿಂತ ಮೊದಲು) ಪಿಎಫ್&zwnj; ಖಾತೆಗೆ ಸತತ 36 ತಿಂಗಳು (3 ವರ್ಷ) ಯಾವುದೇ ಹಣ ಜಮೆಯಾಗದಿದ್ದರೆ, ಅದನ್ನು 'ನಿಷ್ಕ್ರಿಯ ಖಾತೆ' (Inoperative Account) ಎಂದು ಪರಿಗಣಿಸಿ ಬಡ್ಡಿ ನೀಡುವುದನ್ನು ತಡೆಹಿಡಿಯಲಾಗುತ್ತಿತ್ತು. ಆದರೆ, ಇಪಿಎಫ್&zwnj;ಒ 2016 ರಲ್ಲಿ ಈ ನಿಯಮಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮದಂತೆ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಪಿಎಫ್&zwnj; ಖಾತೆಯಲ್ಲಿರುವ ಹಣಕ್ಕೆ ಚಕ್ರಬಡ್ಡಿ (Compounding Interest) ಸಿಗುತ್ತಲೇ ಇರುತ್ತದೆ.&lt;/p&gt;&lt;h3&gt;&lt;strong&gt;ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ!&lt;/strong&gt;&lt;/h3&gt;&lt;p&gt;&lt;strong&gt;ಉದಾಹರಣೆಗೆ; &lt;/strong&gt;ಒಬ್ಬ ವ್ಯಕ್ತಿ ತಮ್ಮ ೪೦ನೇ ವಯಸ್ಸಿನಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ, ಪಿಎಫ್&zwnj; ಹಣವನ್ನು ಹಿಂಪಡೆಯದೆ ಹಾಗೆಯೇ ಬಿಡುತ್ತಾರೆ ಎಂದಿಟ್ಟುಕೊಳ್ಳೋಣ. 5 ವರ್ಷಗಳ ಕಾಲ (ಅಂದರೆ ಅವರಿಗೆ 45 ವರ್ಷವಾಗುವವರೆಗೆ) ಯಾವುದೇ ಹಣ ಜಮೆಯಾಗದಿದ್ದರೂ, ಮುಂದಿನ 13 ವರ್ಷಗಳ ಕಾಲ ಅಂದರೆ ಅವರಿಗೆ 58 ವರ್ಷ ವಯಸ್ಸಾಗುವವರೆಗೆ ಆ ಖಾತೆಯಲ್ಲಿರುವ ಹಣಕ್ಕೆ ಇಪಿಎಫ್&zwnj;ಒ ನಿಗದಿಪಡಿಸುವ ವಾರ್ಷಿಕ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಅದೇ ರೀತಿ, 50ನೇ ವಯಸ್ಸಿನಲ್ಲಿ ಕೆಲಸ ಬಿಟ್ಟ ಸಚೇತನ ಸದಸ್ಯರಿಗೂ 58 ವರ್ಷ ತಲುಪುವವರೆಗಿನ 8 ವರ್ಷಗಳ ಕಾಲ ಬಡ್ಡಿ ಪಡೆಯಲು ಅರ್ಹತೆ ಇರುತ್ತದೆ.&lt;/p&gt;&lt;h3&gt;&lt;strong&gt;ತೆರಿಗೆ ನಿಯಮವನ್ನು ಮರೆಯದಿರಿ!&lt;/strong&gt;&lt;/h3&gt;&lt;p&gt;ನಿಮ್ಮ ಹಣಕ್ಕೆ ಬಡ್ಡಿಯಂತೂ ಸಿಗುತ್ತದೆ, ಆದರೆ ಇಲ್ಲಿ ಒಂದು ಪ್ರಮುಖ ತೆರಿಗೆ ನಿಯಮವನ್ನು ನೆನಪಿನಲ್ಲಿಡಬೇಕು. ನೀವು ಕೆಲಸದಲ್ಲಿದ್ದಾಗ ಪಿಎಫ್&zwnj; ಬಡ್ಡಿಗೆ ತೆರಿಗೆ ವಿನಾಯಿತಿ ಇರುತ್ತದೆ. ಆದರೆ, ಕೆಲಸ ಬಿಟ್ಟ ನಂತರ ನಿಮ್ಮ ಪಿಎಫ್&zwnj; ಖಾತೆಯಲ್ಲಿ ಜಮೆಯಾಗುವ ಬಡ್ಡಿಯು &lsquo;ಇತರ ಮೂಲಗಳಿಂದ ಬಂದ ಆದಾಯ&rsquo; (Income from Other Sources) ಎಂದು ಪರಿಗಣಿತವಾಗುತ್ತದೆ ಮತ್ತು ಆ ಬಡ್ಡಿಯ ಮೊತ್ತಕ್ಕೆ ನೀವು ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್&zwnj;ಗೆ ಅನುಗುಣವಾಗಿ ತೆರಿಗೆ ಪಾವತಿಸಬೇಕಾಗುತ್ತದೆ.&lt;/p&gt;&lt;h3&gt;&lt;strong&gt;ಖಾತೆದಾರರು ಏನು ಮಾಡಬೇಕು?&lt;/strong&gt;&lt;/h3&gt;&lt;p&gt;&lt;strong&gt;1. ಕೆಲಸ ಬದಲಾಯಿಸಿದ್ದರೆ;&lt;/strong&gt; ಹಳೆಯ ಪಿಎಫ್&zwnj; ಖಾತೆಯಲ್ಲಿರುವ ಹಣವನ್ನು ಹಿಂಪಡೆಯುವ ಬದಲು, ಹೊಸ ಕಂಪನಿಯ ಯುಎಎನ್&zwnj; (UAN) ಖಾತೆಗೆ ವರ್ಗಾವಣೆ (Transfer) ಮಾಡುವುದು ಜಾಣತನ.&lt;/p&gt;&lt;p&gt;&lt;strong&gt;2. ಕೆಲಸ ಬಿಟ್ಟಿದ್ದರೆ/ವಿರಾಮದಲ್ಲಿದ್ದರೆ;&lt;/strong&gt; 58 ವರ್ಷಗಳವರೆಗೆ ಹಣ ಸುರಕ್ಷಿತವಾಗಿರುತ್ತದೆ ಮತ್ತು ಬಡ್ಡಿಯೂ ಸಿಗುತ್ತದೆ. ಆದರೆ ಅಗತ್ಯವಿಲ್ಲದಿದ್ದರೆ ಹಣವನ್ನು ಸುಮ್ಮನೆ ಇಡುವ ಬದಲು ಸೂಕ್ತ ಹೂಡಿಕೆ ಯೋಜನೆಗಳಿಗೆ ಬಳಸುವುದು ಉತ್ತಮ.&lt;/p&gt;&lt;p&gt;&lt;strong&gt;3. 58 ವರ್ಷ ಪೂರ್ಣಗೊಂಡರೆ;&lt;/strong&gt; ಖಾತೆದಾರನಿಗೆ 58 ವರ್ಷ ತುಂಬಿದ ನಂತರವೂ ಹಣ ಹಿಂಪಡೆಯದಿದ್ದರೆ ಮಾತ್ರ ಖಾತೆಯನ್ನು 'ನಿಷ್ಕ್ರಿಯ' ಎಂದು ವರ್ಗೀಕರಿಸಿ, ಬಡ್ಡಿ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಆದ್ದರಿಂದ, 5 ವರ್ಷಗಳಿಂದ ಹಣ ಠೇವಣಿಯಾಗದಿದ್ದರೂ ನಿಮ್ಮ ಪಿಎಫ್&zwnj; ಖಾತೆಯಲ್ಲಿ ನಿಮ್ಮ ಹಣ ಬಡ್ಡಿಯೊಂದಿಗೆ ಸುರಕ್ಷಿತವಾಗಿ ಬೆಳೆಯುತ್ತಿರುತ್ತದೆ.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/pf-interest-after-5-years-no-contribution-epf-account-interest-rules-epfo-pf-interest-on-inactive-account-bmk/articleshow-idmmizq"/>
        </item>
        <item>
            <title><![CDATA[ಗ್ರಾಹಕರಿಗೆ ಕೇಂದ್ರದಿಂದ  ಬಿಗ್ ರಿಲೀಫ್: ನಗರ-ಗ್ರಾಮೀಣ ಭಾಗದ ಎಲ್‌ಪಿಜಿ ಬುಕಿಂಗ್ ನಿಯಮ ಇನ್ಮುಂದೆ ಸೇಮ್ ಟು ಸೇಮ್!]]></title>
            <link>https://kannada.asianetnews.com/india-news/rural-lpg-refill-booking-gap-reduced-to-25-days-big-relief-by-center-to-rural-domestic-gdp/articleshow-k4tp219</link>
            <guid isPermaLink="true">https://kannada.asianetnews.com/india-news/rural-lpg-refill-booking-gap-reduced-to-25-days-big-relief-by-center-to-rural-domestic-gdp/articleshow-k4tp219</guid>
            <pubDate>Mon, 07 Sep 2026 18:28:01 +0530</pubDate>
            <description><![CDATA[ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದ ಎಲ್&zwnj;ಪಿಜಿ ಗ್ರಾಹಕರಿಗೆ ಸಿಲಿಂಡರ್ ಮರುಪೂರಣದ ಕಡ್ಡಾಯ ಕಾಯುವ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿ ಆದೇಶ ಹೊರಡಿಸಿದೆ. ಈ ಮೂಲಕ, ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಬುಕಿಂಗ್ ಅಂತರ ಒಂದೇ ಸಮನಾಗಿದ್ದು, ಸುಧಾರಿತ ಅನಿಲ ಪೂರೈಕೆ ಸ್ಥಿತಿಗತಿಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwea10qws93q5pvn93t79r8r,imgname-gas-main-1782891709180.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಗ್ರಾಮೀಣ ಪ್ರದೇಶದ ಅಡುಗೆ ಅನಿಲ (LPG) ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ದೇಶೀಯ ಎಲ್&zwnj;ಪಿಜಿ ಸಿಲಿಂಡರ್ ಮರುಪೂರಣ (Re-fill) ಬುಕಿಂಗ್&zwnj;ಗಾಗಿ ಗ್ರಾಮೀಣ ಭಾಗದಲ್ಲಿ ಇದ್ದ ಕಡ್ಡಾಯ ಕಾಯುವ ಅವಧಿಯನ್ನು 45 ದಿನಗಳಿಂದ 25 ದಿನಗಳಿಗೆ ಇಳಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ ಹೊಸ ಪರಿಷ್ಕರಣೆಯೊಂದಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡರಲ್ಲೂ ಎಲ್&zwnj;ಪಿಜಿ ಬುಕಿಂಗ್ ಮಧ್ಯಂತರ ನಿಯಮ ಒಂದೇ ಸಮನಾಗಿರಲಿದೆ.&lt;/p&gt;&lt;p&gt;ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಈ ವಿಷಯವನ್ನು ಪ್ರಕಟಿಸಿದ್ದು, ಈ ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರುವಂತೆ ತೈಲ ಮಾರುಕಟ್ಟೆ ಕಂಪನಿಗಳಿಗೆ (OMC) ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;45 ದಿನಗಳ ಅಂತರ ನಿಯಮ ಪರಿಚಯಿಸಿದ್ದು ಏಕೆ?&lt;/h2&gt;&lt;p&gt;ಅಮೆರಿಕ ಮತ್ತು ಇರಾನ್ ನಡುವಿನ ಜಾಗತಿಕ ಸಂಘರ್ಷದಿಂದಾಗಿ ಪ್ರಮುಖ ನೌಕಾ ಮಾರ್ಗವಾದ 'ಹಾರ್ಮುಜ್ ಜಲಸಂಧಿ' ಬಂದ್ ಆಗಿತ್ತು. ಪರಿಣಾಮವಾಗಿ ಜಾಗತಿಕವಾಗಿ ಅನಿಲ ಸರಬರಾಜಿನಲ್ಲಿ ಭಾರಿ ಅಭಾವ ಸೃಷ್ಟಿಯಾಗಿತ್ತು. ಭಾರತದಲ್ಲೂ ಎಲ್&zwnj;ಪಿಜಿ ಅಭಾವ ಉಂಟಾಗದಂತೆ ತಡೆಯಲು ಮತ್ತು ಇಂಧನವನ್ನು ಸಮಾನವಾಗಿ ಹಂಚುವ ಉದ್ದೇಶದಿಂದ ಅಗತ್ಯ ಸರಕುಗಳ ಕಾಯ್ದೆಯಡಿ ಸರ್ಕಾರ ನಿರ್ಬಂಧಗಳನ್ನು ವಿಧಿಸಿತ್ತು. ಅದರಂತೆ, ನಗರ ಪ್ರದೇಶಗಳಲ್ಲಿ 25 ದಿನಗಳ ಬುಕಿಂಗ್ ಅಂತರವಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು 45 ದಿನಗಳಿಗೆ ಹೆಚ್ಚಿಸಲಾಗಿತ್ತು. ಜೊತೆಗೆ C3 ಮತ್ತು C4 ಅನಿಲಗಳನ್ನು ಕೇವಲ ಎಲ್&zwnj;ಪಿಜಿಗೆ ಬಳಸುವಂತೆ ಸೂಚಿಸಲಾಗಿತ್ತು.&lt;/p&gt;&lt;h2&gt;ಈಗ ನಿರ್ಬಂಧ ಸಡಿಲಿಸಲು ಕಾರಣವೇನು?&lt;/h2&gt;&lt;p&gt;ಪ್ರಸ್ತುತ ದೇಶದಲ್ಲಿ ಎಲ್&zwnj;ಪಿಜಿ ಪೂರೈಕೆ ಸ್ಥಿತಿಗತಿ ಸಂಪೂರ್ಣ ಸುಧಾರಿಸಿದೆ. ಮರುಪೂರಣ ಬಾಕಿ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಹೀಗಾಗಿ ಗ್ರಾಮೀಣ ಗ್ರಾಹಕರ ಮೇಲಿದ್ದ ನಿಯಮವನ್ನು ಸಡಿಲಗೊಳಿಸಲಾಗಿದೆ. ಈಗ ದೇಶದ ಯಾವುದೇ ಭಾಗದ ಉದ್ಯೋಗಿ ಅಥವಾ ನಾಗರಿಕ, ನಗರ-ಗ್ರಾಮೀಣ ಭೇದವಿಲ್ಲದೆ ಪ್ರತಿ 25 ದಿನಗಳ ಅಂತರದಲ್ಲಿ ಮುಂದಿನ ಸಿಲಿಂಡರ್ ಬುಕ್ ಮಾಡಬಹುದು ಎಂದು ಸಚಿವ ಸುರೇಶ್ ಗೋಪಿ ತಮ್ಮ ಫೇಸ್&zwnj;ಬುಕ್ ಪೋಸ್ಟ್&zwnj;ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಇದರೊಂದಿಗೆ ಗ್ರಾಮೀಣ ಭಾಗದ ಮನೆಗಳಿಗೆ ಎಲ್&zwnj;ಪಿಜಿ ಸಿಲಿಂಡರ್ ಕಾಯುವಿಕೆ ಅವಧಿ 20 ದಿನಗಳು ಕಡಿಮೆಯಾದಂತಾಗಿದೆ. ಜೂನ್ ತಿಂಗಳ ಆರಂಭದಲ್ಲೇ ಸರ್ಕಾರ ವಾಣಿಜ್ಯ ಬಳಕೆಯ ಎಲ್&zwnj;ಪಿಜಿ ಮೇಲಿದ್ದ ನಿರ್ಬಂಧಗಳನ್ನೂ ಹಿಂಪಡೆದು, ಕೈಗಾರಿಕೆಗಳಿಗೆ ಯುದ್ಧಪೂರ್ವದಲ್ಲಿದ್ದಂತೆ ಶೇ. 50ರಷ್ಟು ಸರಬರಾಜಿಗೆ ಹಸಿರು ನಿಶಾನೆ ತೋರಿಸಿತ್ತು.&lt;/p&gt;&lt;h2&gt;ಬೆಲೆ ಏರಿಕೆಯ ಹಿನ್ನೆಲೆ:&lt;/h2&gt;&lt;p&gt;ಜಾಗತಿಕ ತೈಲ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲ ದರ ಏರಿಕೆಯಾಗಿತ್ತು. ಮಾರ್ಚ್&zwnj;ನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ ₹60 ಹಾಗೂ ಜೂನ್&zwnj;ನಲ್ಲಿ ₹29 ಏರಿಕೆಯಾಗಿತ್ತು (ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ದರ ₹942 ತಲುಪಿತ್ತು). ಇತ್ತೀಚೆಗಷ್ಟೇ 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲೂ ₹9.50 ಹೆಚ್ಚಳ ಮಾಡಲಾಗಿತ್ತು.&lt;/p&gt;&lt;p&gt;ಆದರೆ, ಈಗ ಪೂರೈಕೆ ಸರಿಹೋಗಿರುವುದರಿಂದ ಹೊಸ ರೀಫಿಲ್ ಬುಕಿಂಗ್ ಮಧ್ಯಂತರ ನಿಯಮ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಗ್ರಾಮೀಣ ಭಾಗದ ಕುಟುಂಬಗಳಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/rural-lpg-refill-booking-gap-reduced-to-25-days-big-relief-by-center-to-rural-domestic-gdp/articleshow-k4tp219"/>
        </item>
        <item>
            <title><![CDATA[90 ಲಕ್ಷ ರೂ ಸಂಬಳದ ಕೆಲಸ ಬಿಟ್ಟು ಕೃಷಿಗೆ ಇಳಿದ ಯುವಕ; 30000 ಹೂಡಿಕೆಯಲ್ಲಿ ಈ ಕೋಟಿಗಳ ಒಡೆಯ]]></title>
            <link>https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</link>
            <guid isPermaLink="true">https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe</guid>
            <pubDate>Sun, 06 Sep 2026 18:52:11 +0530</pubDate>
            <description><![CDATA[&lt;p&gt;90 ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಕೇವಲ 30 ಸಾವಿರ ರೂ. ಹೂಡಿಕೆಯೊಂದಿಗೆ ಮೈಕ್ರೋಗ್ರೀನ್ಸ್ ಕೃಷಿ ಆರಂಭಿಸಿದ ಚಂಡೀಗಢದ ಮೋಹಿತ್ ನಿಜ್ಹವನ್, ಇಂದು ಕೋಟಿಗಳ ಒಡೆಯನಾಗಿದ್ದಾರೆ. ವಾರ್ಷಿಕ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಇವರು, ಲಾಭದಾಯಕ ಕೃಷಿ ಮಾಡುವುದು ಹೇಗೆಂದು ಇತರ ರೈತರು ಮತ್ತು ಉದ್ಯಮಿಗಳಿಗೆ ತರಬೇತಿ ನೀಡುತ್ತಾ ಸ್ಫೂರ್ತಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1vdz31pc8qysvreeg6vc7gb,imgname-microgreens-business-1788700757046.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂಡೀಗಢ: &lt;/strong&gt;ಇಂದಿನ ಕಾಲದಲ್ಲಿ ವರ್ಷಕ್ಕೆ 90 ಲಕ್ಷ ರೂಪಾಯಿ ಸಂಬಳ ಬರುವ ಕಾರ್ಪೊರೇಟ್ ಕೆಲಸ ಎಂದರೆ ಅದು ಅನೇಕರ ಪಾಲಿಗೆ ಕನಸಿನ ಉದ್ಯೋಗ. ಆದರೆ ಚಂಡೀಗಢದ ಮೋಹಿತ್ ನಿಜ್ಹವನ್ ಅವರಿಗೆ ಈ ಸಂಬಳ ಕೇವಲ ಒಂದು ಆರಂಭವಾಗಿತ್ತು. ತಮ್ಮ ಸುಖದಾಯಕ ಕೆಲಸಕ್ಕೆ ರಾಜೀನಾಮೆ ನೀಡಿ, ಕೇವಲ 30 ಸಾವಿರ ರೂಪಾಯಿ ಹೂಡಿಕೆಯೊಂದಿಗೆ ಅವರು ಆರಂಭಿಸಿದ 'ಮೈಕ್ರೋಗ್ರೀನ್ಸ್' ಕೃಷಿ ಇಂದು ಕೋಟಿ ರೂಪಾಯಿಗಳ ವ್ಯವಹಾರವಾಗಿ ಬೆಳೆದಿದೆ.&lt;/p&gt;&lt;h2&gt;&lt;strong&gt;ಯಾರು ಈ ಮೋಹಿತ್ ನಿಜ್ಹವನ್?&lt;/strong&gt;&lt;/h2&gt;&lt;p&gt;ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಮೋಹಿತ್, 2020ರ ಡಿಸೆಂಬರ್&zwnj;ನಲ್ಲಿ ತಮ್ಮ ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದರು. ಏನಾದರೂ ಹೊಸದನ್ನು ಮಾಡಬೇಕೆಂಬ ಹಂಬಲದಿಂದ ಅವರು ಆಯ್ದುಕೊಂಡಿದ್ದು 'ಇಂಡೋರ್ ಫಾರ್ಮಿಂಗ್' ಅಥವಾ ಒಳಾಂಗಣ ಕೃಷಿ. ಅಂತಿಮವಾಗಿ ಅವರು ಮೈಕ್ರೋಗ್ರೀನ್ಸ್ (ಪೋಷಕಾಂಶ ಭರಿತ ಸಣ್ಣ ಸಸ್ಯಗಳು) ಬೆಳೆಯುವತ್ತ ಗಮನ ಹರಿಸಿದರು.&lt;/p&gt;&lt;h2&gt;&lt;strong&gt;100 ಚದರ ಅಡಿಯಿಂದ ಆರಂಭವಾದ ಪಯಣ&lt;/strong&gt;&lt;/h2&gt;&lt;p&gt;ಯಾವುದೇ ದೊಡ್ಡ ಹೂಡಿಕೆ ಮಾಡದೆ, ಮೋಹಿತ್ ತಮ್ಮ ಮನೆಯ ಎರಡನೇ ಮಹಡಿಯ 100 ಚದರ ಅಡಿ ಜಾಗದಲ್ಲಿ ಕೇವಲ 30,000 ರೂಪಾಯಿಗಳೊಂದಿಗೆ ಈ ಕೆಲಸ ಆರಂಭಿಸಿದರು. ಆರಂಭದಲ್ಲಿ ಕೇವಲ 21 ಜಾತಿಯ ಸಾವಯವ ತರಕಾರಿಗಳನ್ನು ಬೆಳೆಸಲು ಮುಂದಾದರು. ಯಾವುದೇ ಕೀಟನಾಶಕಗಳಿಲ್ಲದೆ, ನೈಸರ್ಗಿಕ ವಿಧಾನದಲ್ಲಿ ಬೆಳೆ ತೆಗೆಯುವುದು ಅವರ ಗುರಿಯಾಗಿತ್ತು. 'ಗ್ರೀನು ಮೈಕ್ರೋಗ್ರೀನ್ಸ್' (Greenu Microgreens) ಎಂಬ ಹೆಸರಿನಲ್ಲಿ ಈ ಉದ್ದಿಮೆ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ತಿಂಗಳಿಗೆ 12 ಲಕ್ಷ ರೂಪಾಯಿ ಆದಾಯ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಕೇವಲ 3 ರಾಕ್&zwnj;ಗಳಿಂದ ಶುರುವಾದ ಕೃಷಿ, ಇಂದು 500 ಚದರ ಅಡಿಯ ಫೆಸಿಲಿಟಿಗೆ ವಿಸ್ತರಿಸಿದೆ. ಪ್ರಸ್ತುತ ಮೋಹಿತ್ ಬಳಿ 60 ರಾಕ್&zwnj;ಗಳಿದ್ದು, ಪ್ರತಿ ತಿಂಗಳು 12,000 ಟ್ರೇಗಳಲ್ಲಿ ಮೈಕ್ರೋಗ್ರೀನ್ಸ್ ಬೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರ ಈ ಉದ್ಯಮವು ತಿಂಗಳಿಗೆ ಸುಮಾರು 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 1.44 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.&lt;/p&gt;&lt;p&gt;ಕೇವಲ ತಾವೊಬ್ಬರೇ ಬೆಳೆಯುವುದಲ್ಲದೆ ಮೋಹಿತ್ ಇತರ ರೈತರಿಗೆ ಮತ್ತು ಉದ್ಯಮಿಗಳಿಗೆ ಮೈಕ್ರೋಗ್ರೀನ್ಸ್ ಕೃಷಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಕೃಷಿ ತಂತ್ರಜ್ಞಾನ ಮತ್ತು ವಾಣಿಜ್ಯ ಎರಡನ್ನೂ ಅವರು ಜನರಿಗೆ ಕಲಿಸಿಕೊಡುತ್ತಿದ್ದಾರೆ. ಅವರ ಈ ಅಸಾಧಾರಣ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.&lt;/p&gt;]]></content:encoded>
            <category>business</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/money/corporate-employee-quits-rs-90-lakh-salary-to-start-microgreens-farm-now-earns-1-44-crore-gkn/articleshow-s50zmxe"/>
        </item>
        <item>
            <title><![CDATA[ಪ್ರತಿಷ್ಠಿತ ಕಂಪನಿ ಯಜಮಾನನ ದೊಡ್ಡ ಮನಸ್ಸು; ತನ್ನ ಉದ್ಯೋಗಿಗಳಿಗೆ 20 ಕೋಟಿ ರೂ ಮೌಲ್ಯದ ಷೇರು ಗಿಫ್ಟ್]]></title>
            <link>https://kannada.asianetnews.com/viral/symphony-limited-founder-gifts-rs-20-crore-worth-shares-to-employees-gkn/articleshow-tzb1i00</link>
            <guid isPermaLink="true">https://kannada.asianetnews.com/viral/symphony-limited-founder-gifts-rs-20-crore-worth-shares-to-employees-gkn/articleshow-tzb1i00</guid>
            <pubDate>Tue, 08 Sep 2026 18:20:56 +0530</pubDate>
            <description><![CDATA[&lt;p&gt;ಸಿಂಫನಿ ಲಿಮಿಟೆಡ್ ಸ್ಥಾಪಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಉದ್ಯೋಗಿಗಳಿಗೆ 20 ಕೋಟಿ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದು, ಇದರಿಂದ ಷೇರು ಬೆಲೆ ಶೇ. 13 ರಷ್ಟು ಏರಿಕೆಯಾಗಿದೆ. ಕೂಲರ್ ಜೊತೆಗೆ ಎಸಿ ಮತ್ತು ಫ್ಯಾನ್ ಮಾರುಕಟ್ಟೆಗೂ ಪ್ರವೇಶಿಸಲು ಕಂಪನಿ ಸಜ್ಜಾಗಿದ್ದು, ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m00ndycmrm1akafvfw0fe64z,imgname-it-employee-1786728872340.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ ನೀಡಿರುವ ಪ್ರಖ್ಯಾತ ಏರ್ ಕೂಲರ್ ತಯಾರಿಕಾ ಕಂಪನಿ 'ಸಿಂಫನಿ ಲಿಮಿಟೆಡ್' (Symphony Limited) ಈಗ ಸುದ್ದಿಯಲ್ಲಿದೆ. ಕಂಪನಿಯ ಸ್ಥಾಪಕರು ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಂಪನಿಯ ಷೇರು ಬೆಲೆ ಇಂದು ಶೇ. 13 ರಷ್ಟು ಏರಿಕೆ ಕಂಡಿದೆ.&lt;/p&gt;&lt;h2&gt;&lt;strong&gt;20 ಕೋಟಿ ರೂಪಾಯಿ ಮೌಲ್ಯದ ಷೇರು ಗಿಫ್ಟ್&lt;/strong&gt;&lt;/h2&gt;&lt;p&gt;ಸಿಂಫನಿ ಲಿಮಿಟೆಡ್&zwnj;ನ ಸ್ಥಾಪಕ ಪ್ರವರ್ತಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಸುಮಾರು 3,43,000 ಇಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದು ಕಂಪನಿಯ ಒಟ್ಟು ಬಂಡವಾಳದ ಶೇ. 0.5 ರಷ್ಟಿದ್ದು, ಇದರ ಮಾರುಕಟ್ಟೆ ಮೌಲ್ಯ ಅಂದಾಜು 20 ಕೋಟಿ ರೂಪಾಯಿಗಳಾಗಿದೆ.&lt;/p&gt;&lt;p&gt;ಈ ಉಡುಗೊರೆಯನ್ನು ಒಂದೇ ಬಾರಿಗೆ ನೀಡುವ ಬದಲಾಗಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುತ್ತದೆ. ಪ್ರಸ್ತುತ ಉದ್ಯೋಗಿಗಳು ಮಾತ್ರವಲ್ಲದೆ, ಮಾಜಿ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಕಂಪನಿಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಉದ್ಯೋಗಿಗಳಿಗೆ ಇದು ಉಚಿತ&lt;/strong&gt;&lt;/h2&gt;&lt;p&gt;ಈ ಯೋಜನೆಯ ವಿಶೇಷತೆಯೆಂದರೆ.. ಉದ್ಯೋಗಿಗಳು ಈ ಷೇರುಗಳನ್ನು ಪಡೆಯಲು ಒಂದು ರೂಪಾಯಿ ಕೂಡ ಖರ್ಚು ಮಾಡಬೇಕಿಲ್ಲ. ಇದು ಪ್ರವರ್ತಕರ ವೈಯಕ್ತಿಕ ಪಾಲಿನಿಂದ ನೀಡುತ್ತಿರುವ ಉಡುಗೊರೆಯಾದ್ದರಿಂದ ಕಂಪನಿಯ ನಗದು ಹರಿವಿನ (Cash Flow) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಾಲೀಕತ್ವದ ಭಾವನೆಯನ್ನು ಉದ್ಯೋಗಿಗಳಲ್ಲಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h2&gt;&lt;strong&gt;ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ&lt;/strong&gt;&lt;/h2&gt;&lt;p&gt;ಈ ಘೋಷಣೆಯ ಬೆನ್ನಲ್ಲೇ ಬಿಎಸ್&zwnj;ಇ (BSE) ನಲ್ಲಿ ಸಿಂಫನಿ ಷೇರುಗಳು ಶೇ. 13 ಕ್ಕಿಂತ ಹೆಚ್ಚು ಜಿಗಿದು 652.25 ರೂ. ಮಟ್ಟವನ್ನು ತಲುಪಿದವು. ಕಂಪನಿಯ ಈ ಮಾನವೀಯ ನಡೆ ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸಿದೆ.&lt;/p&gt;&lt;p&gt;ಕೂಲರ್ ಮಾರುಕಟ್ಟೆಯಲ್ಲಿ ನಾಯಕನಾಗಿರುವ ಸಿಂಫನಿ ಈಗ ತನ್ನ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಏರ್ ಕಂಡಿಷನರ್ (AC), ಏರ್ ಪ್ಯೂರಿಫೈಯರ್ ಮತ್ತು ಬಿಎಲ್&zwnj;ಡಿಸಿ (BLDC) ಸೀಲಿಂಗ್ ಫ್ಯಾನ್ ಮಾರುಕಟ್ಟೆಗೆ ಲಗ್ಗೆ ಇಡಲು ಯೋಜಿಸಿದೆ. ದೇಶಾದ್ಯಂತ ಬಲಿಷ್ಠ ಡೀಲರ್ ಜಾಲವನ್ನು ಹೊಂದಿರುವ ಕಾರಣ, ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಇದರಿಂದ ಕಂಪನಿಯ ಲಾಭಾಂಶ ಹೆಚ್ಚಲಿದ್ದು, ದೀರ್ಘಾವಧಿ ಹೂಡಿಕೆದಾರರಿಗೆ ಇದು ಶುಭ ಸುದ್ದಿಯಾಗಿದೆ.&lt;/p&gt;]]></content:encoded>
            <category>business</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/viral/symphony-limited-founder-gifts-rs-20-crore-worth-shares-to-employees-gkn/articleshow-tzb1i00"/>
        </item>
        <item>
            <title><![CDATA[Long Time Investment: ಈ ವರ್ಷ 1 ಲಕ್ಷ ರೂಪಾಯಿ ಚಿನ್ನ ತೆಗೆದುಕೊಂಡದರೆ 2050ರಲ್ಲಿ ಎಷ್ಟು ಹಣ ಆಗುತ್ತೆ?]]></title>
            <link>https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh</link>
            <guid isPermaLink="true">https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh</guid>
            <pubDate>Mon, 07 Sep 2026 14:18:35 +0530</pubDate>
            <description><![CDATA[ಭಾರತದಲ್ಲಿ ಚಿನ್ನವು ದೀರ್ಘಕಾಲದ ಹೂಡಿಕೆಯಾಗಿದ್ದು, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇಂದಿನ 1 ಲಕ್ಷ ರೂಪಾಯಿ ಹೂಡಿಕೆಯು 2050ರ ಹೊತ್ತಿಗೆ 9.85 ಲಕ್ಷದಿಂದ 15 ಲಕ್ಷದವರೆಗೆ ಮೌಲ್ಯವನ್ನು ಪಡೆಯಬಹುದು, ಆದರೆ ಹೂಡಿಕೆಯಲ್ಲಿ ಅಪಾಯಗಳಿರುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1xgkbrk1g7n9cbxb30ae6y8,imgname-gold--1788770627347.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಚಿನ್ನದ ಬೆಲೆ ಆರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದರಂತೆ 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ವರೆಗೂ ತಲುಪಬಹುದಾಗಿದೆ. ಜಾತಿಗಿಕವಾಗಿ ನೋಡುವುದಾದರೆ ಒಂದು ಔನ್ಸ್ ಚಿನ್ನದ ಬೆಲೆ 10 ಸಾವಿರ ಡಾಲರ್ಗೆ ಮೀರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.&lt;/p&gt;&lt;p&gt;ಭಾರತದಲ್ಲಿ ಚಿನ್ನ ಕೇವಲ ಒಂದು ಆಭರಣ ಮಾತ್ರ ಅಲ್ಲ. ಇದು ಒಂದು ದೀರ್ಘದ ಕಾಲದ ಹೂಡಿಕೆಯಾಗಿದೆ. ಐತಿಹಾಸಿಕವಾಗಿಯೂ ಚಿನ್ನದ ದರ ಏರಿಕೆಯಾಗುತ್ತಲೇ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ಅಂದರೆ ಹಣದುಬ್ಬರ, ಆರ್ಥಿಕ ಅನಿಶ್ಚತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಸಂದರ್ಭದಲ್ಲಿಯೂ ಚಿನ್ನದ ದರ ಹೆಚ್ಚಾಗುತ್ತಲೇ ಇವೆ. 2050ರ ವೇಳೆಗೆ ಚಿನ್ನ ಬೆಲೆಗಳು ಹೇಗಿರಬಹುದು ಎಂಬ ಕುತೂಹಲ ಹಲವರಿಗೆ ಇರುತ್ತದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;2050ರ ಚಿನ್ನದ ದರ: ನಿಮ್ಮ 1 ಲಕ್ಷದ ಭವಿಷ್ಯವೇನು?&lt;/h2&gt;&lt;p&gt;2026ರ ಜನವರಿಗೆ ವೇಳೆಗೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ಸುಮಾರು 1,42,540 ರೂಪಾಯಿ ಅಥವಾ ಪ್ರತಿ ಗ್ರಾಂಗೆ 14,254 ರೂಪಾಯಿ ಇತ್ತು. ಅದೇ ರೀತಿ 22 ಕ್ಯಾರೆಟ್ ಚಿನ್ನದ ವೇಲೆ 10 ಗ್ರಾಂಗೆ 1,30,660 ರೂಪಾಯಿ, ಪ್ರತಿ ಗ್ರಾಂಗೆ 13,066 ರೂಪಾಯಿ ಇತ್ತು. ಕಳೆದ ಆರು ವರ್ಷಗಳಲ್ಲಿ ಕ್ಯಾರೆಟ್ ಚಿನ್ನದ ಬೆಲೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. 2020ರಲ್ಲಿ 50,000 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 1,42,540 ರೂಪಾಯಿಗೆ ಏರಿಕೆಯಾಗಿದೆ.&lt;/p&gt;&lt;p&gt;ಕಳೆದ 30 ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ಪರಿಶೀಲನೆ ನಡೆಸುವುದಾದರೆ, ಸರಾಸರಿ 10.83 ಪ್ರಮಾಣದಲ್ಲಿ ಬೆಳೆದಿದ್ದು, ಇದು 20 ವರ್ಷಗಳಲ್ಲಿ 14.35 ಶೇಕಡಾ ಹೆಚ್ಚಾಗಿದೆ. ಕಳೆದ 15 ವರ್ಷಗಳಲ್ಲಿ ಸರಾಸರಿ ಆದಾಯ ಸುಮಾರು 12ರಷ್ಟು ಹೆಚ್ಚಾಗಿದೆ. ಇದಕ್ಕೆ ಹಣದುಬ್ಬರ ಹಾಗೂ ರೂಪಾಯಿಯ ಅಪಮೌಲ್ಯ ಪ್ರಮುಖ ಕಾರಣವಾಗಿದೆ. ಯುಎಸ್&zwnj;ಡಿಯಲ್ಲಿ ನೋಡುವುದಾದರೆ, ಚಿನ್ನದ ವಾರ್ಷಿಕ ದರ ಹೆಚ್ಚಳ ಶೇಕಡಾ 5-7ರಷ್ಟಿದೆ.&lt;/p&gt;&lt;p&gt;2030ರ ವೇಳೆಗೆ ಚಿನ್ನವೂ ಪ್ರತಿ ಔನ್ಸ್ಗೆ 5-10 ಸಾವಿರ ಯುಸ್ ಡಾಲರ್&zwnj;ಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ವೇಳೆ 2040-2050ರ ವೇಳೆಗೆ ಎಷ್ಟು ದರ ಹೆಚ್ಚಳ ಆಗಬಹುದು ಎಂದು ತಜ್ಞರು ಊಹೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರಿಯ ಅಂದಾಜಿನ ಪ್ರಕಾರ 2050ರ ವೇಳೆಗೆ ಪ್ರತಿ ಔನ್ಸ್ ಚಿನ್ನ ಬೆಲೆ 10 ಸಾವಿರ ಯುಎಸ್ ಡಾಲರ್&zwnj; ಮೀರಬಹುದು. ಆದರೆ ಕೆಲವರು 15 ರಿಂದ 20 ಸಾವಿರ ಯುಎಸ್ ಡಾಲರ್&zwnj;ಗೆ ಮುಟ್ಟಬಹುದು ಎಂದು ಊಹೆ ಮಾಡಿದ್ದಾರೆ. ಭಾರತದಲ್ಲಿ ರೂಪಾಯಿ ಮೌಲ್ಯ ಆಧಾರ ಮೇಲೆ ನೋಡುವುದಾದರೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 2050ರ ವೇಳೆಗೆ ಚಿನ್ನದ ಪ್ರಸ್ತುತ ಮೌಲ್ಯಕ್ಕಿಂತ 6-8 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಹಿಂದಿ ಅಂಕಿ-ಅಂಶಗಳ ಆಧಾರದ ಮೇರೆಗೆ ನೋಡುವುದಾದರೆ, ಚಿನ್ನದ ಬೆಲೆ 2050ರ ವೇಳೆಗೆ ಶೇಕಡಾ 10ರಷ್ಟು ಬೆಳೆವಣಿಗೆ ಕಂಡರೂ, 24 ಕ್ಯಾರೆಟ್ ಚಿನ್ನದ ಬೆಲೆ 14-15 ಲಕ್ಷಗಳಿಗೆ ಏರಿಕೆ ಆಗಬಹುದು. ಶೇಕಡಾ 12ರಷ್ಟು ಸಿಎಜಿಆರ್ ನೊಂದಿಗೆ ಬೆಳವಣಿಗೆ ಆದರೆ 21-22 ಲಕ್ಷಗಳ ವರೆಗೂ ಹೆಚ್ಚಾಗಬಹುದು. ಅದೇ ರೀತಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 12.8 ಲಕ್ಷ ರೂಪಾಯಿಗೆ ಅಥವಾ 19.8 ಲಕ್ಷ ರೂಪಾಯಿಗೆ ತಲುಪಬಹುದು. ಇದು ಕೇಲವ ಸರಾಸರಿ ಅಂದಾಜು ಆಗಿದ್ದು, ನಿಖರ ಬೆಲೆ ಬದಲಾವಣೆಯಾಗಬಹುದು.&lt;/p&gt;&lt;p&gt;ಈಗ ನೀವು 24 ಕ್ಯಾರೆಟ್ ಚಿನ್ನದಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ ಸುಮಾರು 7.016 ಗ್ರಾಂ ಚಿನ್ನ ಖರೀದಿ ಮಾಡಬಹುದು. ಶೇಕಡಾ 10 ಸಿಎಜಿಆರ್&zwnj;ನಲ್ಲಿ 2050ರ ವೇಳೆಗೆ ಸುಮಾರು 9.85 ಲಕ್ಷ ರೂಪಾಯಿ, 11-12 ಸಿಎಜಿಆರ್&zwnj;ನಲ್ಲಿ 12-15 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, 2050ರ ವೇಳೆಗೆ 4.17-5.29 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಆದರೆ ಇಲ್ಲಿ ಚಿನ್ನ ಮೇಲಿನ ಹೂಡಿಕೆ ಅಪಾಯವನ್ನು ಹೊಂದಿರುತ್ತದೆ ಎಂದು ಗ್ರಾಹಕರು ಮರೆಯುವಂತೆ ಇಲ್ಲ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಯಗಳ ಉತ್ತಮ ಲಾಭ ನೀಡಿದರೂ, ಇದರ ಆಯ್ಕೆ ಸಂಪೂರ್ಣ ವೈಯುಕ್ತಿಕವಾಗಿರುತ್ತದೆ.&lt;/p&gt;]]></content:encoded>
            <category>business</category>
            <dc:creator>Sumanth SN</dc:creator>
            <atom:link href="https://kannada.asianetnews.com/business/if-you-buy-gold-worth-rs-1-lakh-this-year-how-much-will-it-be-worth-in-2050-sns/articleshow-vh9eivh"/>
        </item>
        <item>
            <title><![CDATA[EPFO: ಪಿಎಫ್ ಹಣ ಹಿಂಪಡೆಯುವುದು ಈಗ ನೀರು ಕುಡಿದಷ್ಟೇ ಸುಲಭ! ಇಲ್ಲಿದೆ ಕಂಪ್ಲೀಟ್ ಗೈಡ್!]]></title>
            <link>https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag</link>
            <guid isPermaLink="true">https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag</guid>
            <pubDate>Wed, 09 Sep 2026 22:33:02 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರವು ಪಿಎಫ್ ಭಾಗಶಃ ಹಣ ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಿದೆ. ಅನಾರೋಗ್ಯ, ಶಿಕ್ಷಣ, ಮದುವೆ, ಮನೆ ಖರೀದಿ ಮತ್ತು ಇತರೆ ತುರ್ತು ಅಗತ್ಯಗಳಿಗಾಗಿ ಹಣ ಕ್ಲೈಮ್ ಮಾಡಲು ಮೂರು ಹೊಸ ವರ್ಗಗಳನ್ನು ಪರಿಚಯಿಸಲಾಗಿದೆ. ಈ ಕುರಿತು ಕಂಪ್ಲೀಟ್&zwnj; ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9sk78secph9ksxbenyzxxj,imgname-epfo-new-rules-2026-1784887745800.png" type="image/jpeg" height="390" width="690"/>
            <content:encoded><![CDATA[&lt;p&gt;ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ಇಪಿಎಫ್&zwnj;ಒ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು &lsquo;ನೌಕರರ ಭವಿಷ್ಯ ನಿಧಿ ಯೋಜನೆ, 2026&rsquo; ಅಡಿಯಲ್ಲಿ ಪಿಎಫ್ ಖಾತೆಯಿಂದ ಭಾಗಶಃ ಹಣವನ್ನು (PF Partial Withdrawal) ಹಿಂಪಡೆಯುವ ನಿಯಮಗಳನ್ನು ಅತ್ಯಂತ ಸರಳ ಮತ್ತು ಪಾರದರ್ಶಕಗೊಳಿಸಿದೆ. ಈ ಹಿಂದೆ ಇದ್ದ ಸಂಕೀರ್ಣ ನಿಯಮಗಳು ಹಾಗೂ ಹತ್ತಾರು ನಮೂನೆಗಳ (Forms) ಗೊಂದಲಕ್ಕೆ ತೆರೆ ಎಳೆದಿರುವ ಇಪಿಎಫ್&zwnj;ಒ, ಮುಂಗಡ ಹಣ ಕ್ಲೈಮ್ ಮಾಡುವುದನ್ನು ಮೂರು ಪ್ರಮುಖ ವರ್ಗಗಳಾಗಿ (Categories) ವಿಂಗಡಿಸಿದೆ.&lt;/p&gt;&lt;h2&gt;&lt;strong&gt;1.ಮುಂಗಡ ಹಣ ಹಿಂಪಡೆಯುವಿಕೆಯ 3 ಹೊಸ ವರ್ಗಗಳು!&lt;/strong&gt;&lt;/h2&gt;&lt;p&gt;&lt;strong&gt;ವರ್ಗ 1:&lt;/strong&gt; ಅನಾರೋಗ್ಯ, ಶಿಕ್ಷಣ ಮತ್ತು ಮದುವೆ;&lt;/p&gt;&lt;p&gt;&lt;strong&gt;ಅನಾರೋಗ್ಯ ಚಿಕಿತ್ಸೆ;&lt;/strong&gt; ಸದಸ್ಯರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಆರೋಗ್ಯ ತುರ್ತುಸ್ಥಿತಿಗಾಗಿ ಯಾವುದೇ ನಿರ್ದಿಷ್ಟ ಮಿತಿಯಿಲ್ಲದೆ ಎಷ್ಟು ಬಾರಿ ಬೇಕಾದರೂ ಮುಂಗಡ ಹಣವನ್ನು ಹಿಂಪಡೆಯಬಹುದು.&lt;/p&gt;&lt;p&gt;&lt;strong&gt;ಶಿಕ್ಷಣ;&lt;/strong&gt; ಇಪಿಎಫ್ ಸದಸ್ಯತ್ವದ ಸಂಪೂರ್ಣ ಅವಧಿಯಲ್ಲಿ ಮಕ್ಕಳ ಅಥವಾ ಸ್ವಂತ ಉನ್ನತ ಶಿಕ್ಷಣಕ್ಕಾಗಿ ಗರಿಷ್ಠ 10 ಬಾರಿ ಹಣ ಪಡೆಯಲು ಅವಕಾಶವಿದೆ.&lt;/p&gt;&lt;p&gt;&lt;strong&gt;ಮದುವೆ;&lt;/strong&gt; ಸದಸ್ಯತ್ವ ಅವಧಿಯಲ್ಲಿ ಮದುವೆ ವೆಚ್ಚಗಳಿಗಾಗಿ ಗರಿಷ್ಠ ೫ ಬಾರಿ ಮುಂಗಡ ಪಡೆಯಬಹುದು.&lt;/p&gt;&lt;p&gt;&lt;strong&gt;ವರ್ಗ 2; &lt;/strong&gt;ಮನೆ ಖರೀದಿ, ನಿರ್ಮಾಣ ಮತ್ತು ಗೃಹ ಸಾಲ!&lt;/p&gt;&lt;p&gt;ಮನೆ ಅಥವಾ ಫ್ಲಾಟ್ ಖರೀದಿ, ಭೂಮಿ ಖರೀದಿ, ಹೊಸ ಮನೆ ನಿರ್ಮಾಣ, ಗೃಹ ಸಾಲ ಮರುಪಾವತಿ (Home Loan Repayment) ಮತ್ತು ಮನೆಯ ನವೀಕರಣಕ್ಕಾಗಿ (Renovation) ಇಡೀ ಸದಸ್ಯತ್ವ ಅವಧಿಯಲ್ಲಿ ಗರಿಷ್ಠ 5 ಬಾರಿ ಮುಂಗಡ ಹಣ ಹಿಂಪಡೆಯಬಹುದು.&lt;/p&gt;&lt;h3&gt;&lt;strong&gt;ವರ್ಗ 3: ವಿಶೇಷ ಮತ್ತು ಇತರೆ ಸಂದರ್ಭಗಳು!&lt;/strong&gt;&lt;/h3&gt;&lt;p&gt;ಮಂಡಳಿಯು ನಿಗದಿಪಡಿಸಿದ ವಿಶೇಷ ತುರ್ತು ಅಥವಾ ಇತರೆ ಅಗತ್ಯಗಳಿಗಾಗಿ ಸದಸ್ಯರು ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ೨ ಬಾರಿ ಭಾಗಶಃ ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h3&gt;&lt;strong&gt;2. ಅರ್ಹತೆ ಮತ್ತು 75% ನ ಹೊಸ ಪ್ರಮುಖ ನಿಯಮಗಳು!&lt;/strong&gt;&lt;/h3&gt;&lt;p&gt;&lt;strong&gt;ಕನಿಷ್ಠ 12 ತಿಂಗಳ ಸದಸ್ಯತ್ವ;&lt;/strong&gt; ಯಾವುದೇ ವರ್ಗದಲ್ಲಿ ಭಾಗಶಃ ಪಿಎಫ್ ಮುಂಗಡ ಪಡೆಯಲು, ಉದ್ಯೋಗಿಯು ಕನಿಷ್ಠ 12 ತಿಂಗಳು (1 ವರ್ಷ) ಇಪಿಎಫ್ ಸದಸ್ಯತ್ವ ಪೂರ್ಣಗೊಳಿಸಿರಬೇಕು.&lt;/p&gt;&lt;p&gt;&lt;strong&gt;ಶೇ. 75ರಷ್ಟು ಮುಂಗಡ ಪಡೆಯಬಹುದು;&lt;/strong&gt; ಇನ್ಮುಂದೆ ಚಂದಾದಾರರು ತಮ್ಮ ಮತ್ತು ಉದ್ಯೋಗದಾತರ ಒಟ್ಟು ಕೊಡುಗೆಯ ಗರಿಷ್ಠ ಶೇ. 75 ರಷ್ಟು ಹಣ ಹಾಗೂ ಅದಕ್ಕೆ ಬಂದ ಬಡ್ಡಿಯನ್ನು ಮುಂಗಡವಾಗಿ ಹಿಂಪಡೆಯಬಹುದು.&lt;/p&gt;&lt;h3&gt;&lt;strong&gt;ಶೇ. 25ರಷ್ಟು ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ!&lt;/strong&gt;&lt;/h3&gt;&lt;p&gt;ಉದ್ಯೋಗಿಯ ನಿವೃತ್ತಿ ಜೀವನ ಸುರಕ್ಷಿತವಾಗಿರಬೇಕು ಎಂಬ ಉದ್ದೇಶದಿಂದ ಖಾತೆಯಲ್ಲಿ ಒಟ್ಟು ಪಿಎಫ್ ಬ್ಯಾಲೆನ್ಸ್&zwnj;ನ ಕನಿಷ್ಠ ಶೇ. 25ರಷ್ಟು ಹಣವನ್ನು ಕಡ್ಡಾಯವಾಗಿ ಕಾಯ್ದಿರಿಸಬೇಕಾಗುತ್ತದೆ. ಈ ಸರಳೀಕೃತ ವ್ಯವಸ್ಥೆಗೆ ಅಕ್ಟೋಬರ್ ೨೦೨೫ ರಲ್ಲಿ ಇಪಿಎಫ್&zwnj;ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಅನುಮೋದನೆ ನೀಡಿತ್ತು. ತದನಂತರ ಜುಲೈ ೨೦೨೬ ರಿಂದ ದೇಶಾದ್ಯಂತ ಇದು ಕಾನೂನುಬದ್ಧವಾಗಿ ಅನುಷ್ಠಾನಕ್ಕೆ ಬಂದಿದೆ.&lt;/p&gt;&lt;h3&gt;&lt;strong&gt;ಕಾನೂನು ಹಾಗೂ ಆರ್ಥಿಕ ತಜ್ಞರ ಪ್ರಕಾರ!&lt;/strong&gt;&lt;/h3&gt;&lt;p&gt;ಹಳೆಯ ಗೊಂದಲಮಯ ನಿಯಮಗಳಿಂದಾಗಿ ಲಕ್ಷಾಂತರ ಪಿಎಫ್ ಕ್ಲೈಮ್&zwnj;ಗಳು ರಿಜೆಕ್ಟ್ (Reject) ಆಗುತ್ತಿದ್ದವು. ಈ ಮೂರು ಸ್ಪಷ್ಟ ವರ್ಗೀಕರಣದಿಂದಾಗಿ ಕ್ಲೈಮ್&zwnj;ಗಳು ತಿರಸ್ಕರಿಸಲ್ಪಡುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ತುರ್ತು ಅಗತ್ಯವಿರುವ ಉದ್ಯೋಗಿಗಳ ಕೈಗೆ ಶೀಘ್ರವಾಗಿ ಹಣ ತಲುಪಲಿದೆ.&lt;/p&gt;]]></content:encoded>
            <category>business</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/pf-withdrawal-process-epfo-pf-money-withdrawal-online-rules-guide-bmk/articleshow-vig0iag"/>
        </item>
        <item>
            <title><![CDATA[ಕೈಯಲ್ಲಿದ್ದುದ್ದು ಕೇವಲ ಅರ್ಧ ಎಕರೆ ಮಾತ್ರ! 80 ಲಕ್ಷ ಗಳಿಸುವ ಮಟ್ಟಿಗೆ ಬೆಳೆದ ಈ ರೈತ ಮಹಿಳೆಯ ರೋಚಕ ಕಥೆ!]]></title>
            <link>https://kannada.asianetnews.com/india-news/from-half-an-acre-to-40-moga-woman-turns-mockery-into-a-80-lakh-farming-success-story/articleshow-xmgkt4b</link>
            <guid isPermaLink="true">https://kannada.asianetnews.com/india-news/from-half-an-acre-to-40-moga-woman-turns-mockery-into-a-80-lakh-farming-success-story/articleshow-xmgkt4b</guid>
            <pubDate>Tue, 08 Sep 2026 15:21:20 +0530</pubDate>
            <description><![CDATA[&lt;p&gt;ಪಂಜಾಬ್&zwnj;ನ ಮೋಗಾದ ಮಂದೀಪ್ ಕೌರ್ ಖೈರಾ ಅವರು ಕೇವಲ ಅರ್ಧ ಎಕರೆ ಸ್ವಂತ ಜಮೀನಿನಿಂದ ಕೃಷಿ ಆರಂಭಿಸಿ, ಇಂದು 40 ಎಕರೆ ಪ್ರದೇಶದಲ್ಲಿ ಕೃಷಿ ಉದ್ಯಮ ನಡೆಸುತ್ತಿದ್ದಾರೆ. ಹೆಚ್ಚಿನ ಜಮೀನು ಗುತ್ತಿಗೆ ಪಡೆದಿದ್ದು, ಮೂರು ಟ್ರ್ಯಾಕ್ಟರ್, ಏಳು ಟ್ರಾಲಿ ಸೇರಿದಂತೆ ಕೃಷಿ ಉಪಕರಣಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ವಾರ್ಷಿಕ ಆದಾಯ ಸುಮಾರು ₹80 ಲಕ್ಷ ಎಂದು ವರದಿ ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y4yqp6qnghfwqtc1v21nk3,imgname-moga-woman-s-success-story-as-a-farmer-1788791971525.jpg" type="image/jpeg" height="390" width="690"/>
            <content:encoded><![CDATA[&lt;h2&gt;ಅರ್ಧ ಎಕರೆಯಿಂದ 40 ಎಕರೆಗೆ ಬೆಳೆದ ಕನಸು!&lt;/h2&gt;&lt;p&gt;ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಇರುವ ಸಾಂಪ್ರದಾಯಿಕ ಕಲ್ಪನೆಗಳಿಗೆ ಸವಾಲು ಹಾಕುವಂತಹ ಯಶೋಗಾಥೆಯೊಂದು ಪಂಜಾಬ್&zwnj;ನ ಮೋಗಾದಿಂದ ಬಂದಿದೆ. ಮಂದೀಪ್ ಕೌರ್ ಖೈರಾ ಎಂಬ ಮಹಿಳೆ ಕೇವಲ ಅರ್ಧ ಎಕರೆ ಸ್ವಂತ ಜಮೀನಿನಿಂದ ಕೃಷಿ ಆರಂಭಿಸಿ, ಇಂದು ಸುಮಾರು 40 ಎಕರೆ ಪ್ರದೇಶದಲ್ಲಿ ಕೃಷಿ ಉದ್ಯಮವನ್ನು ನಡೆಸುತ್ತಿದ್ದಾರೆ. ಅವರ ಈ ಪಯಣದ ವಿಶೇಷತೆ ಎಂದರೆ, ಆರಂಭದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಕ್ಕಾಗಿ ಎದುರಿಸಿದ ಟೀಕೆ ಮತ್ತು ಅಪಹಾಸ್ಯವನ್ನೇ ಅವರು ತಮ್ಮ ಯಶಸ್ಸಿನ ಇಂಧನವಾಗಿಸಿಕೊಂಡಿದ್ದಾರೆ.&lt;/p&gt;&lt;h3&gt;ಸ್ವಂತ ಜಮೀನು ಅರ್ಧ ಎಕರೆ, ಕೃಷಿ ವ್ಯಾಪ್ತಿ 40 ಎಕರೆ!&lt;/h3&gt;&lt;p&gt;ಮಂದೀಪ್ ಕೌರ್ ಅವರ ಬಳಿ ಸ್ವಂತವಾಗಿ ಇರುವ ಜಮೀನು ಕೇವಲ ಅರ್ಧ ಎಕರೆ. ಆದರೆ ತಮ್ಮ ಕೃಷಿ ಚಟುವಟಿಕೆಯನ್ನು ವಿಸ್ತರಿಸಲು ಅವರು ಹೆಚ್ಚಿನ ಜಮೀನನ್ನು ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಹೀಗೆ, ಸ್ವಂತ ಜಮೀನು ಕಡಿಮೆ ಇದ್ದರೂ ಕೃಷಿ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.&lt;/p&gt;&lt;p&gt;40 ಎಕರೆ ಪ್ರದೇಶದಲ್ಲಿ ಕೃಷಿ ಕಾರ್ಯಾಚರಣೆ ನಡೆಸುವ ಮಟ್ಟಕ್ಕೆ ಬೆಳೆದಿರುವ ಅವರ ಉದ್ಯಮವು ಈಗ ಗಮನ ಸೆಳೆಯುವಷ್ಟು ದೊಡ್ಡದಾಗಿದೆ. ಇದು ಕೇವಲ ಜಮೀನಿನ ವಿಸ್ತರಣೆ ಮಾತ್ರವಲ್ಲದೆ, ಕೃಷಿಯನ್ನು ಉದ್ಯಮದ ದೃಷ್ಟಿಕೋನದಿಂದ ನಡೆಸಿದ ಫಲಿತಾಂಶವೂ ಆಗಿದೆ.&lt;/p&gt;&lt;p&gt;&lt;strong&gt;ಮೂರು ಟ್ರ್ಯಾಕ್ಟರ್, ಏಳು ಟ್ರಾಲಿ; ₹80 ಲಕ್ಷದ ಉಪಕರಣ!&lt;/strong&gt;&lt;/p&gt;&lt;p&gt;ಕೃಷಿ ಚಟುವಟಿಕೆಯನ್ನು ವಿಸ್ತರಿಸುವುದರ ಜೊತೆಗೆ ಮಂದೀಪ್ ಕೌರ್ ಕೃಷಿ ಯಂತ್ರೋಪಕರಣಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರ ಬಳಿ ಮೂರು ಟ್ರ್ಯಾಕ್ಟರ್&zwnj;ಗಳು, ಏಳು ಟ್ರಾಲಿಗಳು ಮತ್ತು ವಿವಿಧ ಕೃಷಿ ಉಪಕರಣಗಳಿವೆ. ಈ ಉಪಕರಣಗಳ ಒಟ್ಟು ಮೌಲ್ಯ ಸುಮಾರು ₹80 ಲಕ್ಷ ಎಂದು ವರದಿ ತಿಳಿಸಿದೆ.&lt;/p&gt;&lt;p&gt;ಇದರಿಂದ ಅವರು ಸಣ್ಣ ಪ್ರಮಾಣದ ಕೃಷಿಯಿಂದ ದೊಡ್ಡ ಮಟ್ಟದ ಕೃಷಿ ಉದ್ಯಮದತ್ತ ಹೇಗೆ ಹೆಜ್ಜೆ ಹಾಕಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;&lt;strong&gt;&lsquo;ಹೊಲದಲ್ಲಿ ಕೆಲಸ ಮಾಡುತ್ತೀಯಾ?&rsquo; ಎಂಬ ಅಪಹಾಸ್ಯಕ್ಕೆ ಯಶಸ್ಸಿನ ಉತ್ತರ&lt;/strong&gt;&lt;/p&gt;&lt;p&gt;ಮಹಿಳೆಯೊಬ್ಬರು ಸ್ವತಃ ಹೊಲದಲ್ಲಿ ದುಡಿಯುವುದನ್ನು ಕೆಲವರು ಅಪಹಾಸ್ಯ ಮಾಡುತ್ತಿದ್ದರೂ, ಮಂದೀಪ್ ಕೌರ್ ಅದಕ್ಕೆ ಹಿಂದೆ ಸರಿಯಲಿಲ್ಲ. ಬದಲಾಗಿ, ತಮ್ಮ ಕೆಲಸದ ಮೇಲಿನ ನಂಬಿಕೆಯಿಂದ ಕೃಷಿಯಲ್ಲಿ ಮುಂದುವರಿದರು. ಇಂದು ಅದೇ ಕೃಷಿ ಚಟುವಟಿಕೆ ವರ್ಷಕ್ಕೆ ಸುಮಾರು ₹80 ಲಕ್ಷ ಆದಾಯ ತರುವ ಉದ್ಯಮವಾಗಿ ಬೆಳೆದಿದೆ ಎಂದು ವರದಿ ಹೇಳುತ್ತದೆ.&lt;/p&gt;&lt;p&gt;&lt;strong&gt;ಜಮೀನು ಹೊಂದಿರುವುದಕ್ಕಿಂತ ಅವಕಾಶ ಬಳಸಿಕೊಳ್ಳುವುದು ಮುಖ್ಯ!&lt;/strong&gt;&lt;/p&gt;&lt;p&gt;ಪಂಜಾಬ್&zwnj;ನ ಕೃಷಿ ವ್ಯವಸ್ಥೆಯಲ್ಲಿ ಜಮೀನು ಗುತ್ತಿಗೆಗೆ ಪಡೆದು ಕೃಷಿ ಮಾಡುವುದು ಸಾಮಾನ್ಯ ಪದ್ಧತಿಯಾಗಿದೆ. ಆದರೆ ಮಂದೀಪ್ ಕೌರ್ ಅವರ ಕಥೆ ಅದರಲ್ಲಿರುವ ದೊಡ್ಡ ಸಾಧ್ಯತೆಯನ್ನು ತೋರಿಸುತ್ತದೆ. ಸ್ವಂತ ಜಮೀನು ಸೀಮಿತವಾಗಿದ್ದರೂ, ಗುತ್ತಿಗೆ ಜಮೀನನ್ನು ಸಮರ್ಥವಾಗಿ ಬಳಸಿಕೊಂಡು ದೊಡ್ಡ ಪ್ರಮಾಣದ ಕೃಷಿ ಉದ್ಯಮ ನಿರ್ಮಿಸಬಹುದು ಎಂಬುದಕ್ಕೆ ಅವರು ಉದಾಹರಣೆಯಾಗಿದ್ದಾರೆ.&lt;/p&gt;&lt;p&gt;&lt;strong&gt;ಮಹಿಳಾ ರೈತರಿಗೆ ಪ್ರೇರಣೆಯಾದ ಕಥೆ&lt;/strong&gt;&lt;/p&gt;&lt;p&gt;ಮಂದೀಪ್ ಕೌರ್ ಅವರ ಪಯಣ ಕೇವಲ ವೈಯಕ್ತಿಕ ಯಶಸ್ಸಿನ ಕಥೆಯಲ್ಲ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಕೇವಲ ಕಾರ್ಮಿಕರಾಗಿ ಉಳಿಯದೆ, ದೊಡ್ಡ ಪ್ರಮಾಣದ ಕೃಷಿ ಉದ್ಯಮವನ್ನು ಮುನ್ನಡೆಸಬಹುದು ಎಂಬುದನ್ನೂ ಇದು ತೋರಿಸುತ್ತದೆ. ಟೀಕೆ ಮತ್ತು ಅಪಹಾಸ್ಯವನ್ನು ಮೆಟ್ಟಿಲಾಗಿಸಿಕೊಂಡು, ಅರ್ಧ ಎಕರೆಯಿಂದ 40 ಎಕರೆವರೆಗೆ ತಮ್ಮ ಕೃಷಿ ಸಾಮ್ರಾಜ್ಯವನ್ನು ವಿಸ್ತರಿಸಿರುವ ಅವರ ಕಥೆ ಅನೇಕರಿಗೆ ಪ್ರೇರಣೆಯಾಗಬಹುದು.&lt;/p&gt;]]></content:encoded>
            <category>business</category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/from-half-an-acre-to-40-moga-woman-turns-mockery-into-a-80-lakh-farming-success-story/articleshow-xmgkt4b"/>
        </item>
        <item>
            <title><![CDATA[Oracle layoffs: ಉದ್ಯೋಗ ಕಡಿತದ ನಡುವೆಯೇ ಒರಾಕಲ್ ಷೇರು ಗಗನಕ್ಕೆ!  ಟೆಕ್ಕಿಗಳಿಗೆ ಶಾಕ್, ಹೂಡಿಕೆದಾರರಿಗೆ ಜಾಕ್‌ಪಾಟ್]]></title>
            <link>https://kannada.asianetnews.com/business/oracle-layoffsoracle-layoffs-shares-skyrocket-amidst-job-cuts-rav/articleshow-z3h7g8t</link>
            <guid isPermaLink="true">https://kannada.asianetnews.com/business/oracle-layoffsoracle-layoffs-shares-skyrocket-amidst-job-cuts-rav/articleshow-z3h7g8t</guid>
            <pubDate>Wed, 09 Sep 2026 11:59:25 +0530</pubDate>
            <description><![CDATA[&lt;p&gt;ಟೆಕ್ ದೈತ್ಯ ಒರಾಕಲ್ ಕಂಪನಿಯು ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿದ್ದು, ಇದು ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಇದೇ ಸಮಯದಲ್ಲಿ, OpenAI ಜೊತೆಗಿನ AI ಮತ್ತು ಕ್ಲೌಡ್ ಒಪ್ಪಂದದಿಂದಾಗಿ ಕಂಪನಿಯ ಷೇರು ಮೌಲ್ಯವು ಗಗನಕ್ಕೇರುತ್ತಿದೆ, ಇದು ಕಂಪನಿಯ ದ್ವಂದ್ವ ನೀತಿ ತೋರಿಸುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1e3vad48zf4qydn9qyj6nxk,imgname-oracle-layoffs-1788253940132.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೆಕ್ ದೈತ್ಯ ಒರಾಕಲ್(Oracle) ಕಂಪನಿಯಲ್ಲಿ ಒಂದು ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಉದ್ಯೋಗಿಗಳಲ್ಲಿ ಕೆಲಸ ಕಳೆದುಕೊಳ್ಳುವ ಆತಂಕ ಮನೆಮಾಡಿದ್ದರೆ, ಇನ್ನೊಂದೆಡೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೇಲಿನ ಹೂಡಿಕೆದಾರರ ಉತ್ಸಾಹದಿಂದ ಕಂಪನಿಯ ಷೇರುಗಳ ಮೌಲ್ಯ ಗಗನಕ್ಕೇರುತ್ತಿದೆ. ವರದಿಗಳ ಪ್ರಕಾರ, ಒರಾಕಲ್ ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ(Layoff) ಸಿದ್ಧತೆ ನಡೆಸುತ್ತಿದೆ. ಕಂಪನಿಯ ಈ ನಿರ್ಧಾರದಿಂದ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದೇ ವೇಳೆ, OpenAI ಸಂಸ್ಥೆಯ ಹೊಸ AI ಮಾಡೆಲ್ GPT-6 Astra ಮತ್ತು ಒರಾಕಲ್ ಜೊತೆಗಿನ ದೊಡ್ಡ ಕ್ಲೌಡ್-ಕಂಪ್ಯೂಟಿಂಗ್ ಒಪ್ಪಂದದಿಂದಾಗಿ ಕಂಪನಿಯ ಷೇರುಗಳು ಲಾಭ ಗಳಿಸಿವೆ.&lt;/p&gt;&lt;h2&gt;Oracle Layoff: ಆತಂಕದಲ್ಲಿ ಟೆಕ್ಕಿಗಳು&lt;/h2&gt;&lt;p&gt;ಸೆಪ್ಟೆಂಬರ್&zwnj;ನಲ್ಲಿ ಹೊಸದಾಗಿ ಉದ್ಯೋಗ ಕಡಿತ ಮಾಡಲಿದೆ ಎಂಬ ಚರ್ಚೆಗಳು ನಡೆದಿವೆ. ಆದರೆ ಈ ಬಗ್ಗೆ ಒರಾಕಲ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಖರ್ಚು ಕಡಿಮೆ ಮಾಡುವಂತೆ ಮ್ಯಾನೇಜರ್&zwnj;ಗಳು ಮತ್ತು ತಂಡಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಗಳು ಹೇಳುತ್ತಿವೆ. ಇದೇ ಕಾರಣಕ್ಕೆ ಉದ್ಯೋಗ ಕಡಿತದ ಆತಂಕ ಶುರುವಾಗಿದೆ. ಮನಿ ಕಂಟ್ರೋಲ್ ವರದಿ ಪ್ರಕಾರ, ಸೆಪ್ಟೆಂಬರ್ ಮಧ್ಯದಲ್ಲಿ ಅಥವಾ ಆರಂಭದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಉದ್ಯೋಗಿಗಳಿಗೆ ತಿಳಿಸಲಾಗಿದೆ. ಸೆಪ್ಟೆಂಬರ್ 15ರಂದು ಈ ಪ್ರಕ್ರಿಯೆ ನಡೆಯಬಹುದು ಎನ್ನಲಾಗುತ್ತಿದೆ. ಈ ಸಂಭಾವ್ಯ ಉದ್ಯೋಗ ಕಡಿತ ಕೇವಲ ಒಂದು ವಿಭಾಗಕ್ಕೆ ಸೀಮಿತವಾಗಿರದೆ, ಹಲವು ವಿಭಾಗಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಬಹುದು.&lt;/p&gt;&lt;p&gt;ಈ ವರ್ಷ ಈಗಾಗಲೇ ಕಂಪನಿ ದೊಡ್ಡ ಮಟ್ಟದಲ್ಲಿ ವ್ಯವಹಾರ ಸಂಬಂಧಿತ ಉದ್ಯೋಗ ಕಡಿತ ಮಾಡಿರುವುದರಿಂದ, ಮುಂದೆ ಮಾಡುವ ಸಾಧ್ಯತೆಯೂ ಇರಬಹುದು. ಹೀಗಾಗಿ ಒರಾಕಲ್ ಉದ್ಯೋಗಿಗಳಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;h3&gt;ಈಗಾಗಲೇ 21,000 ಉದ್ಯೋಗಗಳು ಕಡಿತ&lt;/h3&gt;&lt;p&gt;ಮೇ 31, 2026ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಒರಾಕಲ್ ತನ್ನ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು ಸುಮಾರು 21,000ದಷ್ಟು ಕಡಿಮೆ ಮಾಡಿದೆ ಎಂದು ಹೇಳಿದೆ. ಇದರಿಂದ ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆ ಸುಮಾರು 1,62,000ದಿಂದ 1,41,000ಕ್ಕೆ ಇಳಿದಿದೆ. ಅಂದರೆ, ಶೇ. 13ರಷ್ಟು ಇಳಿಕೆಯಾಗಿದೆ. AI ತಂತ್ರಜ್ಞಾನದ ಹೆಚ್ಚಿದ ಬಳಕೆ ಮತ್ತು ಕ್ಲೌಡ್ ಆಧಾರಿತ ಕಾರ್ಯಾಚರಣೆಗಳಿಗೆ ಬದಲಾಗುತ್ತಿರುವುದೇ ಈ ಉದ್ಯೋಗ ಕಡಿತಕ್ಕೆ ಕಾರಣ ಎಂದು ಒರಾಕಲ್ ಹೇಳಿಕೊಂಡಿದೆ. ಒಂದೆಡೆ ಖರ್ಚು ಮತ್ತು ಉದ್ಯೋಗಗಳನ್ನು ಕಡಿತಗೊಳಿಸುತ್ತಿರುವ ಒರಾಕಲ್, ಇನ್ನೊಂದೆಡೆ ಭವಿಷ್ಯದ ಬೆಳವಣಿಗೆಗೆ ಕಾರಣವಾಗುವ ತಂತ್ರಜ್ಞಾನದಲ್ಲಿ ಶತಕೋಟಿ ಡಾಲರ್&zwnj;ಗಳನ್ನು ಹೂಡಿಕೆ ಮಾಡುತ್ತಿದೆ.&lt;/p&gt;&lt;h3&gt;OpenAI GPT-6 Astra ಒರಾಕಲ್ ಷೇರುಗಳಿಗೆ ಬೂಸ್ಟ್!&lt;/h3&gt;&lt;p&gt;ಉದ್ಯೋಗಿಗಳು ಸಂಭಾವ್ಯ ಉದ್ಯೋಗ ಕಡಿತದ ಬಗ್ಗೆ ಚಿಂತೆಯಲ್ಲಿದ್ದರೆ, ಹೂಡಿಕೆದಾರರು ಮಾತ್ರ ಬೆಳೆಯುತ್ತಿರುವ AI ಮೂಲಸೌಕರ್ಯ ಕ್ಷೇತ್ರದಲ್ಲಿ ಒರಾಕಲ್&zwnj;ನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. OpenAI ಸಂಸ್ಥೆಯು ತನ್ನ ಹೊಸ ಮಾಡೆಲ್ GPT-6 Astra ಅನ್ನು ಪರಿಚಯಿಸಿದೆ. ಇದು ಕಂಪ್ಯೂಟರ್ ಬಳಕೆ, ಸಾಫ್ಟ್&zwnj;ವೇರ್ ಎಂಜಿನಿಯರಿಂಗ್, ಸೈಬರ್&zwnj; ಸೆಕ್ಯುರಿಟಿ, ವಿಜ್ಞಾನ ಮತ್ತು ವೃತ್ತಿಪರ ಕೆಲಸಗಳಲ್ಲಿ ಒಂದು ದೊಡ್ಡ ಮುನ್ನಡೆ ಎಂದು ಬಣ್ಣಿಸಲಾಗಿದೆ.&lt;/p&gt;&lt;p&gt;ಅಂದಾಜು $300 ಶತಕೋಟಿ ಮೌಲ್ಯದ ಐದು ವರ್ಷಗಳ ಕಂಪ್ಯೂಟಿಂಗ್-ಪವರ್ ಒಪ್ಪಂದದ ಮೂಲಕ ಒರಾಕಲ್, OpenAI ಜೊತೆ ನಿಕಟ ಸಂಬಂಧ ಹೊಂದಿದೆ. OpenAIನ AI ಸೇವೆಗಳಿಗೆ ಬೇಡಿಕೆ ಹೆಚ್ಚಾದರೆ, ಈ ಪಾಲುದಾರಿಕೆ ಮೂಲಕ ಒರಾಕಲ್&zwnj;ನ ಕಂಪ್ಯೂಟಿಂಗ್ ಮೂಲಸೌಕರ್ಯಕ್ಕೂ ಬೇಡಿಕೆ ಹೆಚ್ಚಾಗುತ್ತದೆ. ಮಾರ್ಕೆಟ್&zwnj;ವಾಚ್ ಪ್ರಕಾರ, OpenAI ಇಕೋಸಿಸ್ಟಮ್&zwnj;ನಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಾಗಿದ್ದರಿಂದ ಸೆಪ್ಟೆಂಬರ್ 8ರಂದು ಒರಾಕಲ್ ಷೇರುಗಳು ಶೇ. 2.4ರಷ್ಟು ಏರಿಕೆ ಕಂಡಿವೆ.&lt;/p&gt;&lt;h3&gt;ಒರಾಕಲ್&zwnj;ನ AI ಮೇಲಿನ ಹೂಡಿಕೆ ಏಕೆ ಮುಖ್ಯ?&lt;/h3&gt;&lt;p&gt;ಒರಾಕಲ್&zwnj;ನ AI ಮೇಲಿನ ಈ ದೊಡ್ಡ ಹೂಡಿಕೆ, ಗಣನೀಯ ಆರ್ಥಿಕ ಪರಿಣಾಮಗಳನ್ನು ಹೊಂದಿದೆ. ಕಂಪನಿಯು ಡೇಟಾ ಸೆಂಟರ್&zwnj;ಗಳು ಮತ್ತು ಕಂಪ್ಯೂಟರ್ ಮೂಲಸೌಕರ್ಯಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಹೂಡಿಕೆದಾರರು ಅದರ ಬಂಡವಾಳದ ಅವಶ್ಯಕತೆಗಳು ಮತ್ತು ಲಾಭದಾಯಕತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.&lt;/p&gt;&lt;p&gt;ಇದು ಕಂಪನಿಯ ಉದ್ಯೋಗ ನೀತಿ ಮತ್ತು ಅದರ AI ಗುರಿಗಳ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಉದ್ಯೋಗ ಕಡಿತದಿಂದ ಖರ್ಚು ಕಡಿಮೆಯಾಗಬಹುದು, ಆದರೆ AI ಮೂಲಸೌಕರ್ಯಕ್ಕೆ ಭಾರಿ ಹೂಡಿಕೆಯ ಅಗತ್ಯವಿದೆ. ಒರಾಕಲ್ ಸೆಪ್ಟೆಂಬರ್ 10ರಂದು ತನ್ನ ಇತ್ತೀಚಿನ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಲಿದೆ. ಹೀಗಾಗಿ ಕ್ಲೌಡ್ ಬೆಳವಣಿಗೆ, AI ಬೇಡಿಕೆ ಮತ್ತು ಖರ್ಚು ಯೋಜನೆಗಳು ಹೂಡಿಕೆದಾರರಿಗೆ ನಿರ್ಣಾಯಕವಾಗಿವೆ.&lt;/p&gt;&lt;h3&gt;ಒರಾಕಲ್ ಉದ್ಯೋಗ ಕಡಿತ: ಮುಂದೇನು?&lt;/h3&gt;&lt;p&gt;ಸೆಪ್ಟೆಂಬರ್&zwnj;ನಲ್ಲಿ ನಡೆಯಲಿದೆ ಎನ್ನಲಾದ ಉದ್ಯೋಗ ಕಡಿತ ಒರಾಕಲ್ ಇನ್ನೂ ಖಚಿತಪಡಿಸಿಲ್ಲ. ಎಷ್ಟು ಉದ್ಯೋಗಿಗಳಿಗೆ ತೊಂದರೆಯಾಗಬಹುದು ಅಥವಾ ನಿಖರವಾದ ದಿನಾಂಕ ಯಾವುದು ಎಂಬುದನ್ನು ಕಂಪನಿ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಮುಂದಿನ ದಿನಗಳು ಉದ್ಯೋಗಿಗಳಿಗೆ, ಹೂಡಿಕೆದಾರರಿಬ್ಬರಿಗೂ ನಿರ್ಣಾಯಕ ಎಂಬುದು ಸ್ಪಷ್ಟ. ಉದ್ಯೋಗಿಗಳು ಕೆಲಸ ಕಡಿತದ ಬಗ್ಗೆ ಸ್ಪಷ್ಟನೆಗಾಗಿ ಕಾಯುತ್ತಿದ್ದರೆ, ವಾಲ್ ಸ್ಟ್ರೀಟ್&zwnj;ನಲ್ಲಿರುವ ಹೂಡಿಕೆದಾರರು ಒರಾಕಲ್&zwnj;ನ ಬೃಹತ್ AI ಹೂಡಿಕೆಗಳು ಮತ್ತು OpenAI ಪಾಲುದಾರಿಕೆಯು ದೀರ್ಘಾವಧಿಯ ಕ್ಲೌಡ್ ಬೆಳವಣಿಗೆಯಾಗಿ ಬದಲಾಗುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;]]></content:encoded>
            <category>business</category>
            <dc:creator>Ravi Janekal</dc:creator>
            <atom:link href="https://kannada.asianetnews.com/business/oracle-layoffsoracle-layoffs-shares-skyrocket-amidst-job-cuts-rav/articleshow-z3h7g8t"/>
        </item>
        <item>
            <title><![CDATA[ಎಂಎಸ್ಸಿ ಪದವೀಧರೆಯ ಹಾಲಿನ ಕ್ರಾಂತಿ: 23ರ ವಯಸ್ಸಲ್ಲೇ ಕೋಟಿಯ ಒಡತಿ! ಯುವತಿಯ ರೋಚಕ ಸ್ಟೋರಿ]]></title>
            <link>https://kannada.asianetnews.com/life/from-buffalo-girl-to-dairy-mogul-shraddha-dhavan-rs-1-cr-journey-suc/articleshow-zyimh0u</link>
            <guid isPermaLink="true">https://kannada.asianetnews.com/life/from-buffalo-girl-to-dairy-mogul-shraddha-dhavan-rs-1-cr-journey-suc/articleshow-zyimh0u</guid>
            <pubDate>Wed, 09 Sep 2026 12:15:53 +0530</pubDate>
            <description><![CDATA[ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದ ಮಹಾರಾಷ್ಟ್ರದ ಶ್ರದ್ಧಾ ಧವನ್, ಉದ್ಯೋಗ ಅರಸದೆ ತಂದೆಯ ಎಮ್ಮೆ ಸಾಕಣೆ ಉದ್ಯಮವನ್ನು ಮುಂದುವರಿಸಿದರು. ತಮ್ಮ ಛಲ ಮತ್ತು ಶ್ರದ್ಧೆಯಿಂದ, 2 ಎಮ್ಮೆಗಳಿಂದ ಆರಂಭವಾದ ಪುಟ್ಟ ಹಟ್ಟಿಯನ್ನು 80 ಎಮ್ಮೆಗಳ ಬೃಹತ್ ಡೈರಿ ಫಾರ್ಮ್ ಆಗಿ ಪರಿವರ್ತಿಸಿ, ಇಂದು ಕೋಟಿಗೂ ಅಧಿಕ ಆದಾಯ ಗಳಿಸುವ ಮೂಲಕ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22ekyy6afa5wcpmgmfmm553,imgname-shraddha-dhavan-1788936321990.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಕಲಿತ ಶಿಕ್ಷಣಕ್ಕೆ ಉದ್ಯೋಗ ಸಿಕ್ತಿಲ್ಲ, ಅಷ್ಟು ಸಂಬಳ ಬರ್ತಿಲ್ಲ. ಅದಿಲ್ಲ, ಇದಿಲ್ಲ ಎನ್ನೋ ಯುವಕ-ಯುವತಿಯರೇ ಹೆಚ್ಚಾಗಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ರೂಪಾಯಿ ಸಂಬಳ ಬರುವ ಉದ್ಯೋಗಕ್ಕೇ ಆಸೆ ಪಟ್ಟು ಕೊನೆಗೆ ಏನೂ ಸಿಗದೇ ಸರ್ಕಾರಗಳ ಮೇಲೆ ಗೂಬೆ ಕೂಡ್ರಿಸುವುದು ಸರ್ವೇ ಸಾಮಾನ್ಯವಾಗಿದೆ. ಕೊನೆಗೆ ದೇಶದಲ್ಲಿ, ರಾಜ್ಯದಲ್ಲಿ ಹೆಚ್ಚಾಗ್ತಿದೆ ನಿರುದ್ಯೋಗಿಗಳ ಸಂಖ್ಯೆ ಎನ್ನುವ ಹಣೆಪಟ್ಟಿ ಕಟ್ಟಿ, ರಾಜಕಾರಣಿಗಳನ್ನು ಟಾರ್ಗೆಟ್​ ಮಾಡುವುದು ಹಲವು ದಶಕಗಳಿಂದ ನಡೆದುಕೊಂಡೇ ಬಂದಿದೆ. ಆದರೆ, ಸ್ವಲ್ಪ ಕಷ್ಟಪಟ್ಟು ದುಡಿದರೆ, ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು, ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಮುಂದೆ ದೊಡ್ಡ ಮಟ್ಟದ ಯಶಸ್ಸು ಸಿಗಬಹುದು ಎನ್ನುವ ಉದಾಹರಣೆಗಳು, ಅಂಥ ಛಲಗಾರರಿಗೆ ಭಾರತದಲ್ಲಿ ಕೊರತೆಯೂ ಇಲ್ಲ. ಅಂಥ ಛಲಗಾರರಲ್ಲಿ ಒಬ್ಬಾಕೆ ಮಹಾರಾಷ್ಟ್ರದ ಅಹ್ಮದ್&zwnj;ನಗರದ 21 ವರ್ಷದ ಶ್ರದ್ಧಾ ಧವನ್.&lt;/p&gt;&lt;p&gt;ಡಬಲ್​ ಡಿಗ್ರಿ ಆದ ಮಾತ್ರಕ್ಕೆ ತ್ರಿಬಲ್​ ಅಂಕಿಯ ಸಂಬಳವೇ ಬೇಕೆಂದು ಪಟ್ಟುಹಿಡಿದು ಕುಳಿತಾಕೆಯಲ್ಲ ಶ್ರದ್ಧಾ. ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಬಳಿಕ ಶ್ರದ್ಧಾ, ಹೆಸರಿಗೆ ತಕ್ಕಂತೆಯೇ ಶ್ರದ್ಧೆಯಿಂದ ಮಾಡಿದ ಕೆಲಸವೇ ಇಂದು ಆಕೆ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡುವಂತೆ ಮಾಡಿದೆ. ಅಂಗ ವೈಕಲ್ಯ ಹೊಂದಿದ್ದ ತಂದೆಗೆ ಬಾಲ್ಯದಿಂದಲೇ ಎಮ್ಮೆ ಸಾಕಣೆ ಹಾಗೂ ಅದರ ಹಾಲು ಮಾರಾಟಕ್ಕೆ ನೆರವು ನೀಡಲು ಪ್ರಾರಂಭಿಸಿದ ಶ್ರದ್ಧಾ ಮುಂದೆ ಈ ಉದ್ಯಮವನ್ನೇ ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಮೂಲಕ ಒಂದು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಶ್ರದ್ಧಾ ಧವನ್ ತಮ್ಮ 11ನೇ ವಯಸ್ಸಿನಲ್ಲೇ ತಂದೆ ಸತ್ಯವನ್ ಅವರಿಗೆ ಎಮ್ಮೆಗಳ ಸಾಕಣೆ ಹಾಗೂ ಹಾಲು ಮಾರಾಟದಲ್ಲಿ ನೆರವು ನೀಡಲು ಪ್ರಾರಂಭಿಸಿದ್ದರು.&lt;/p&gt;&lt;p&gt;ಸತ್ಯವನ್ ಅಂಗವೈಕಲ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆಗೆ ವ್ಯಾಪಾರದಲ್ಲಿ ನೆರವು ನೀಡಲು ಪ್ರಾರಂಭಿಸಿದರು. ಹೀಗೆ ತಂದೆಯ ಜೊತೆಗೆ ಎಮ್ಮೆ ಸಾಕಣೆ ಹಾಗೂ ಮಾರಾಟದ ಉದ್ಯಮದಲ್ಲಿ ತೊಡಗಿಕೊಂಡ ಕಾರಣ ಅವರಿಗೆ ವ್ಯಾಪಾರದ ಉದ್ದಗಲ ಬಹುಬೇಗ ಅರ್ಥವಾಯಿತು. ಹಾಲು ಮಾರಾಟದ ಸಮಯದಲ್ಲಿ ಗ್ರಾಹಕರ ಜೊತೆಗೆ ಹೇಗೆ ಚರ್ಚೆ ನಡೆಸಬೇಕು, ಎಮ್ಮೆಗೆ ಯಾವ ಆಹಾರ ನೀಡಬೇಕು, ಅದರ ಪೋಷಣೆ ಹೇಗೆ ಮಾಡಬೇಕು ಮುಂತಾದ ವಿಷಯಗಳಲ್ಲಿ ಶ್ರದ್ಧಾಗೆ ಸಾಕಷ್ಟು ಅನುಭವ ದೊರಕಿತು. 13-14ನೇ ವಯಸ್ಸಿನಲ್ಲೇ ಈ ಎಲ್ಲ ಕೆಲಸಗಳನ್ನು ಮಾಡಲು ಶ್ರದ್ಧಾ ಕಲಿತಿದ್ದರು.&lt;/p&gt;&lt;h2&gt;&lt;strong&gt;ಆರಂಭದಲ್ಲಿ ಮುಜುಗರವಾಯ್ತು ಎಂದ ಶ್ರದ್ಧಾ&lt;/strong&gt;&lt;/h2&gt;&lt;p&gt;ನನ್ನ ತಂದೆಗೆ ಬೈಕ್ ಓಡಿಸಲು ಸಾಧ್ಯವಾಗಲಿಲ್ಲ. ನನ್ನ ಸಹೋದರ ಯಾವುದೇ ಜವಾಬ್ದಾರಿಗಳನ್ನು ಹೊರಲು ತುಂಬಾ ಚಿಕ್ಕವನಾಗಿದ್ದನು.&quot; ಹಾಗಾಗಿ 11 ನೇ ವಯಸ್ಸಿನಲ್ಲಿ ನಾನು ಆ ಜವಾಬ್ದಾರಿಯನ್ನು ವಹಿಸಿಕೊಂಡೆ, ಅದು ವಿಚಿತ್ರವೆನಿಸಿತು, ಏಕೆಂದರೆ ನಮ್ಮ ಹಳ್ಳಿಯಲ್ಲಿ ಈ ಹಿಂದೆ ಯಾವುದೇ ಹುಡುಗಿ ಅಂತಹ ಕೆಲಸ ಮಾಡಿರಲಿಲ್ಲ. ಆರಂಭದಲ್ಲಿ, ಈ ಕೆಲಸ ಮಾಡುವುದರಿಂದ ಅವರಿಗೆ ಮುಜುಗರವಾಯಿತು. &quot;ನನ್ನ ಪ್ರದೇಶದಲ್ಲಿ ಹಾಲು ಮಾರಾಟ ಮಾಡಲು ಬೈಕ್ ಸವಾರಿ ಮಾಡುವ ಹುಡುಗಿಯನ್ನು ನಾನು ಎಂದಿಗೂ ನೋಡಿರಲಿಲ್ಲ&quot; ಎಂದು ಅವರು ಹೇಳುತ್ತಾರೆ. ಕೆಲವು ಗ್ರಾಮಸ್ಥರು ಪ್ರಭಾವಿತರಾಗಿ ಅವರನ್ನು ಪ್ರೋತ್ಸಾಹಿಸಿದರು. ಇದು ಶ್ರದ್ಧಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅವರು ತಮ್ಮ ಎಮ್ಮೆಗಳಿಗೆ ಮೇವು ಒದಗಿಸುವುದು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು, ಆದರೆ ಅವರು ಮುಂದುವರಿಯುತ್ತಲೇ ಇದ್ದರು. ಈಗ ಅವರು 80 ಎಮ್ಮೆಗಳನ್ನು ಹೊಂದಿದ್ದಾರೆ ಮತ್ತು ಪ್ರತಿದಿನ ಸುಮಾರು 450 ಲೀಟರ್ ಹಾಲು ಮಾರಾಟ ಮಾಡುತ್ತಾರೆ. 2019 ರಲ್ಲಿ, ಪ್ರಾಣಿಗಳಿಗಾಗಿ ಎರಡನೇ ಮಹಡಿಯನ್ನು ನಿರ್ಮಿಸಲಾಯಿತು. ಕೆಲಸ ಮಾಡುತ್ತಲೇ ಶ್ರದ್ಧಾ ತನ್ನ ಅಧ್ಯಯನವನ್ನು ಮುಂದುವರಿಸಿದರು.&lt;/p&gt;&lt;p&gt;ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಬಳಿಕ ಶ್ರದ್ಧಾ ಬೇರೆ ಯಾವ ಉದ್ಯೋಗವನ್ನು ಕೂಡ ಅರಸಿ ಹೋಗದೆ ತಂದೆಯ ಎಮ್ಮೆ ಸಾಕಾಣೆ, ಮಾರಾಟ ಹಾಗೂ ಹಾಲು ಮಾರಾಟದ ಉದ್ಯಮವನ್ನೇ ಬೆಳೆಸುವ ನಿರ್ಧಾರ ಕೈಗೊಳ್ಳುತ್ತಾರೆ. ಸತತ ಪರಿಶ್ರಮ, ಬದ್ಧತೆ ಹಾಗೂ ಸೂಕ್ತ ಯೋಜನೆಗಳ ಮೂಲಕ ಶ್ರದ್ಧಾ ತಂದೆಯ ಪುಟ್ಟ ಉದ್ಯಮವನ್ನು ಇಂದು 1 ಕೋಟಿ ರೂ. ಮೌಲ್ಯದ ಉದ್ಯಮವನ್ನಾಗಿ ಬದಲಾಯಿಸಿದ್ದಾರೆ.ನಿಘೋಜ್ ಹಳ್ಳಿಯಲ್ಲಿರುವ ಶ್ರದ್ಧಾ ಫಾರ್ಮ್ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಹಾಲು, ಬೆಣ್ಣೆ, ತುಪ್ಪ, ಪನೀರ್​ ಮಾರಾಟ ಮಾಡಿ ಕೋಟಿಗೂ ಅಧಿಕ ಗಳಿಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಒಂದು ಕೋಟಿಯ ವ್ಯವಹಾರ&lt;/strong&gt;&lt;/h3&gt;&lt;p&gt;ತಂದೆಯ 2 ಎಮ್ಮೆಗಳ ಹಟ್ಟಿ ಇಂದು 80 ಎಮ್ಮೆಗಳಿಗೆ ಆಶ್ರಯ ನೀಡುತ್ತಿದೆ. ಶ್ರದ್ಧಾ ಅವರ ತಂದೆ ಎಮ್ಮೆಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದರೆ, ಶ್ರದ್ಧಾ ಇದನ್ನು ಡೈರಿ ಫಾರ್ಮ್ ಆಗಿ ಬದಲಾಯಿಸಿದರು. ಇದನ್ನು ಸೂಕ್ತ ಯೋಜನೆ ಮೂಲಕ ಮಾಡಿದ ಕಾರಣಕ್ಕೆ ಎಮ್ಮೆ ಹಾಲಿನ ಮಾರಾಟ ಹೆಚ್ಚಿ ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಯಿತು. ಲಾಭದ ಹಣವನ್ನು ಬೇರೆ ಎಲ್ಲೂ ಬಳಸದೆ ಮತ್ತೆ ಉದ್ಯಮದಲ್ಲಿ ತೊಡಗಿಸಿದ ಕಾರಣ ಶ್ರದ್ಧಾಗೆ ಸಾಲ ಮಾಡುವ ಅನಿವಾರ್ಯತೆ ಎದುರಾಗಲಿಲ್ಲ.&lt;/p&gt;&lt;p&gt;2016ರಲ್ಲಿ ದೊಡ್ಡ ಶೆಡ್ ಕಟ್ಟಿ ಎಮ್ಮೆಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಿದರು. 2017ರಲ್ಲಿ ಎಮ್ಮೆಗಳ ಸಂಖ್ಯೆ 45ಕ್ಕೆ ಏರಿಕೆಯಾಯಿತು. ಆ ಬಳಿಕ ಶ್ರದ್ಧಾ ಹಾಲಿನ ಗುಣಮಟ್ಟ ಹೆಚ್ಚಿಸುವ ಕಡೆಗೆ ಗಮನ ನೀಡಿದರು. ಇದಕ್ಕಾಗಿ ಅವರು ಹತ್ತಿಬೀಜದ ಹಿಂಡಿ, ಜೋಳ, ಜೋಳದ ಪುಡಿ ಹಾಗೂ ಮೆಂತೆ ಹಲ್ಲು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಲು ಪ್ರಾರಂಭಿಸಿದರು. ಇದರಿಂದ ಹಾಲಿನ ಗುಣಮಟ್ಟ ಹೆಚ್ಚುವ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಯಿತು.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/life/from-buffalo-girl-to-dairy-mogul-shraddha-dhavan-rs-1-cr-journey-suc/articleshow-zyimh0u"/>
        </item>
    </channel>
</rss>
