<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 29 May 2026 20:55:56 +0530</lastBuildDate>
        <atom:link href="https://kannada.asianetnews.com/rss/business" rel="self" type="application/rss+xml"/>
        <item>
            <title><![CDATA[₹175450000000 ಕೋಟಿ ಸಂಪತ್ತಿನಿಂದ ಶೂನ್ಯಕ್ಕೆ ಕುಸಿದ ಕಂಪನಿ! ಸ್ಟಾರ್ಟ್ಅಪ್‌ ಹೀರೋ Byju Raveendran ಗೆ ಏನಾಯ್ತು?]]></title>
            <link>https://kannada.asianetnews.com/gallery/business/from-rs-175450000000-wealth-to-zero-what-happened-to-byju-s-founder-byju-raveendran-rav-2dkqgtt</link>
            <guid isPermaLink="true">https://kannada.asianetnews.com/gallery/business/from-rs-175450000000-wealth-to-zero-what-happened-to-byju-s-founder-byju-raveendran-rav-2dkqgtt</guid>
            <pubDate>Wed, 27 May 2026 11:27:32 +0530</pubDate>
            <description><![CDATA[&lt;p&gt;ಒಂದು ಕಾಲದಲ್ಲಿ ಭಾರತದ ಅತಿ ದೊಡ್ಡ ಎಡ್ಟೆಕ್ ಕಂಪನಿಯಾಗಿದ್ದ BYJU&rsquo;S ಇಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಶಾರುಖ್ ಖಾನ್, ಲಿಯೋನೆಲ್ ಮೆಸ್ಸಿ ಜೊತೆ ಜಾಗತಿಕ ಗುರುತು ಪಡೆದ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್&zwnj;ಗೆ ಇದೀಗ ಜೈಲು ಶಿಕ್ಷೆ ಸುದ್ದಿ ಶಾಕ್ ನೀಡಿದೆ. ಏನಾಯ್ತು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kskzm80acevyv8b5qjra9saa,imgname-----------------------2026-05-27t111755.008-1779860905994.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದಲ್ಲಿ ಭಾರತದ ಅತಿ ದೊಡ್ಡ ಎಡ್ಟೆಕ್ ಕಂಪನಿಯಾಗಿದ್ದ BYJU&rsquo;S ಇಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಶಾರುಖ್ ಖಾನ್, ಲಿಯೋನೆಲ್ ಮೆಸ್ಸಿ ಜೊತೆ ಜಾಗತಿಕ ಗುರುತು ಪಡೆದ ಕಂಪನಿಯ ಸ್ಥಾಪಕ ಬೈಜು ರವೀಂದ್ರನ್&zwnj;ಗೆ ಇದೀಗ ಜೈಲು ಶಿಕ್ಷೆ ಸುದ್ದಿ ಶಾಕ್ ನೀಡಿದೆ. ಏನಾಯ್ತು?&lt;/p&gt;&lt;img&gt;&lt;p&gt;ಒಂದು ಕಾಲದಲ್ಲಿ ಭಾರತದ ಸ್ಟಾರ್ಟ್ಅಪ್&zwnj; ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಬೈಜು ರವೀಂದ್ರನ್ (Byju Raveendran) ಅವರಿಗೆ ಇದೀಗ ಸಿಂಗಾಪುರ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. 2024ರಲ್ಲಿ ನ್ಯಾಯಾಲಯ ನೀಡಿದ್ದ ಹಲವು ಕಾನೂನು ಆದೇಶಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಕಂಪನಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಕಾನೂನು ವೆಚ್ಚಗಳನ್ನು ನೀಡಲು ಕೂಡ ಅವರಿಗೆ ಸೂಚನೆ ನೀಡಲಾಗಿತ್ತು.&lt;/p&gt;&lt;img&gt;&lt;p&gt;2011ರಲ್ಲಿ ಆರಂಭವಾದ BYJU'S ಕೆಲವೇ ವರ್ಷಗಳಲ್ಲಿ ಭಾರತದ ಅತ್ಯಂತ ಮೌಲ್ಯಯುತ ಎಡ್ಟೆಕ್ ಕಂಪನಿಯಾಗಿ ಬೆಳೆದಿತ್ತು. ಸುಮಾರು 22 ಬಿಲಿಯನ್ ಡಾಲರ್ ಮೌಲ್ಯ ತಲುಪಿದ್ದ ಕಂಪನಿ, ಆನ್&zwnj;ಲೈನ್ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯೇ ಮಾಡಿತು. ಭಾರತ ಮಾತ್ರವಲ್ಲ, ವಿದೇಶಗಳಲ್ಲಿಯೂ ಕಂಪನಿ ವೇಗವಾಗಿ ಅಕ್ರಮಣಕಾರಿಯಾಗಿ ಬೆಳೆದು ನಿಂತಿತು&lt;/p&gt;&lt;img&gt;&lt;p&gt;ಕಂಪನಿಯ ಪ್ರಚಾರಕ್ಕಾಗಿ ದೊಡ್ಡ ಸ್ಟಾರ್&zwnj;ಗಳಾದ ಶಾರುಖ್ ಖಾನ್ (Shah Rukh Khan)ಲಿಯೊನೆಲ್ ಮೆಸ್ಸಿ (Lionel Messi) ಅವರನ್ನು ಬ್ರ್ಯಾಂಡ್&zwnj; ಅಂಬಾಸಿಡರ್&zwnj;ಗಳಾಗಿ ನೇಮಿಸಲಾಗಿತ್ತು. ಭಾರತದಲ್ಲಿ ಶಾರುಖ್&zwnj; ಖಾನ್ ಹಲವು ವರ್ಷಗಳ ಕಾಲ ಬೈಜುಸ್&zwnj; ಪ್ರಚಾರ ಮಾಡಿದ್ದರು. ನಂತರ 'Education for All' ಅಭಿಯಾನಕ್ಕಾಗಿ ಮೆಸ್ಸಿಯನ್ನು ಜಾಗತಿಕ ರಾಯಭಾರಿಯಾಗಿ ಘೋಷಿಸಲಾಗಿತ್ತು. ಈ ಒಪ್ಪಂದಕ್ಕೆ ವರ್ಷಕ್ಕೆ ಕೋಟಿ ಕೋಟಿ ರೂಪಾಯಿ ವೆಚ್ಚವಾಗುತ್ತಿತ್ತು ಎನ್ನಲಾಗಿದೆ.&lt;/p&gt;&lt;img&gt;&lt;p&gt;ಒಮ್ಮೆ ಬೈಜು ರವೀಂದ್ರನ್ ಅವರ ಆಸ್ತಿ ಮೌಲ್ಯ ಸುಮಾರು ₹17,545 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ ನಂತರ ಕಂಪನಿಗೆ ಆರ್ಥಿಕ ಸಮಸ್ಯೆಗಳು ಶುರುವಾದವು. ಸಾಲದ ಒತ್ತಡ, ಉದ್ಯೋಗ ಕಡಿತ, ಹೂಡಿಕೆದಾರರ ಜಗಳ ಮತ್ತು ಕಾನೂನು ಸಮಸ್ಯೆಗಳು ಒಂದರ ಹಿಂದೆ ಒಂದಾಗಿ ಎದುರಾದವು. ಕೊನೆಗೆ ಕಂಪನಿಯ ಮೌಲ್ಯ ಕುಸಿದು, ಬೈಜು ಅವರ ಸಂಪತ್ತೂ ಶೂನ್ಯಕ್ಕೆ ಇಳಿದಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದ ಸ್ಟಾರ್ಟ್ಅಪ್&zwnj; ಇತಿಹಾಸದಲ್ಲೇ ಇದು ದೊಡ್ಡ ಕುಸಿತಗಳಲ್ಲಿ ಒಂದಾಗಿ ಕಾಣಲಾಗುತ್ತಿದೆ.&lt;/p&gt;]]></content:encoded>
            <category>business</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/business/from-rs-175450000000-wealth-to-zero-what-happened-to-byju-s-founder-byju-raveendran-rav-2dkqgtt"/>
        </item>
        <item>
            <title><![CDATA[ಉಳಿದ ಸೂಪರ್‌ ಮಾರ್ಕೆಟ್‌ಗಳಿಗಿಂತ ಎಲ್ಲ ವಸ್ತುಗಳು D Mart ನಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ! ಯಾಕೆ?]]></title>
            <link>https://kannada.asianetnews.com/gallery/business/compare-to-super-market-d-mart-shopping-price-is-too-cheap-in-india-2gg3q6u</link>
            <guid isPermaLink="true">https://kannada.asianetnews.com/gallery/business/compare-to-super-market-d-mart-shopping-price-is-too-cheap-in-india-2gg3q6u</guid>
            <pubDate>Mon, 25 May 2026 16:34:10 +0530</pubDate>
            <description><![CDATA[&lt;p&gt;D mart shopping is too cheap: ಇಂದು ಸಾಕಷ್ಟು ಸೂಪರ್&zwnj; ಮಾರ್ಕೆಟ್&zwnj;ಗಳು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಸಿಗುವ ವಸ್ತುಗಳು, ರೇಶನ್&zwnj;ಗಳಿಗಿಂತ ಕಡಿಮೆ ಬೆಲೆಗೆ ಈಗ ಡಿ-ಮಾರ್ಟ್ ವಸ್ತುಗಳ ಮಾರಾಟ ಮಾಡುತ್ತಿದೆ. ಇಷ್ಟೆಲ್ಲ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡೋದು ಯಾಕೆ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksfcnrrkpxm7avzymtzqwhch,imgname-new-project---2026-05-25t162418.870-1779706815251.jpg" type="image/jpeg" height="390" width="690"/>
            <content:encoded><![CDATA[&lt;p&gt;D mart shopping is too cheap: ಇಂದು ಸಾಕಷ್ಟು ಸೂಪರ್&zwnj; ಮಾರ್ಕೆಟ್&zwnj;ಗಳು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಸಿಗುವ ವಸ್ತುಗಳು, ರೇಶನ್&zwnj;ಗಳಿಗಿಂತ ಕಡಿಮೆ ಬೆಲೆಗೆ ಈಗ ಡಿ-ಮಾರ್ಟ್ ವಸ್ತುಗಳ ಮಾರಾಟ ಮಾಡುತ್ತಿದೆ. ಇಷ್ಟೆಲ್ಲ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡೋದು ಯಾಕೆ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದು ಸಾಕಷ್ಟು ಶಾಪ್&zwnj;ಗಳು ರಸ್ತೆಗಳ ಮುಂದೆ ದೊಡ್ಡ ಜಾಗವನ್ನು ಬಾಡಿಗೆಗೆ ಪಡೆದು ವಸ್ತುಗಳ ಮಾರಾಟ ಮಾಡುತ್ತವೆ. ಹೀಗಾಗಿ ಬಾಡಿಗೆ ಹಣವೇ ಹೆಚ್ಚಿರುತ್ತದೆ. ಆದರೆ ಡಿ-ಮಾರ್ಟ್ ಮಾತ್ರ ಸ್ವಂತ ಜಾಗ ಖರೀದಿ ಮಾಡುತ್ತದೆ. ಹೀಗಾಗಿ ಲಾಭ ಆಗುತ್ತದೆ.&lt;/p&gt;&lt;img&gt;&lt;p&gt;ಕಂಪನಿಗಳಿಂದ ಅಥವಾ ಸಪ್ಲೈಯರ್&zwnj;ಗಳಿಂದ ಸೂಪರ್&zwnj;ಮಾರ್ಕೆಟ್&zwnj;ಗಳು ವಸ್ತುಗಳನ್ನು ಖರೀದಿ ಮಾಡುತ್ತವೆ. ಹೀಗಾಗಿ ಒಂದು ಅಥವಾ ಎರಡು ತಿಂಗಳ ನಂತರ ಹಣ ಕಟ್ಟುತ್ತವೆ. ಆದರೆ ಡಿ ಮಾರ್ಟವ ಮಾತ್ರ 7-10 ದಿನಗಳಲ್ಲಿ ಹಣ ಕೊಡುತ್ತದೆ. ಹೀಗಾಗಿ ಸಪ್ಲೈಯರ್&zwnj;ಗಳು ಒಂದಿಷ್ಟು ರಿಯಾಯಿತಿ ಕೊಡುತ್ತವೆ.&lt;/p&gt;&lt;img&gt;&lt;p&gt;ಭಾರತದಾದ್ಯಂತ ಡಿ-ಮಾರ್ಟ್ ಬ್ರ್ಯಾಂಚ್&zwnj; ಇದ್ದು, ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತದೆ. ಇಲ್ಲಿ ಮೀಡಿಯೇಟರ್&zwnj; ಇರೋದಿಲ್ಲ, ಕಮಿಷನ್&zwnj; ಕೂಡ ಇರೋದಿಲ್ಲ. ಹೀಗಾಗಿ ಡಿ-ಮಾರ್ಟ್&zwnj;ಗೆ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ.&lt;/p&gt;&lt;img&gt;&lt;p&gt;ಡಿ-ಮಾರ್ಟ್ ಶಾಪ್&zwnj;ನಲ್ಲಿ ಇಂಟಿರಿಯರ್&zwnj; ಡಿಸೈನ್&zwnj;ಗೆ ಹೆಚ್ಚು ಹಣ ಕೊಡೋದಿಲ್ಲ. ಅಷ್ಟೇ ಅಲ್ಲದೆ ಕೋಟಿ ಕೋಟಿ ರೂಪಾಯಿ ಕೊಟ್ಟು ಜಾಹೀರಾತು ಕೂಡ ಕೊಡೋದಿಲ್ಲ. ಕಡಿಮೆ ಬೆಲೆ, ಉತ್ತಮ ಗುಣಮಟ್ಟದಿಂದಲೇ ಇದರ ಗ್ರಾಹಕರು ಹೆಚ್ಚಿದ್ದಾರೆ.&lt;/p&gt;&lt;img&gt;&lt;p&gt;ಸಿಂಪಲ್&zwnj; ಆಗಿರುವ ಉತ್ತಮ ಗುಣಮಟ್ಟದ ವಸ್ತುಗೋಉ ಸಿಗುತ್ತದೆ. ಇಲ್ಲಿ ಐಷಾರಾಮಿ ವಸ್ತುಗಳು ಇರೋದಿಲ್ಲ. ನಿತ್ಯ ಬಳಸುವ ವಸ್ತುಗಳು, ಕಿರಾಣಿ ಪದಾರ್ಥಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇವೆಲ್ಲ ಬೇಗ ಬೇಗ ಖಾಲಿ ಆಗುತ್ತದೆ, ಲಾಭವೂ ಆಗುತ್ತದೆ.&lt;/p&gt;]]></content:encoded>
            <category>business</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/business/compare-to-super-market-d-mart-shopping-price-is-too-cheap-in-india-2gg3q6u"/>
        </item>
        <item>
            <title><![CDATA[8th Pay Commission: ಬರುತ್ತಾ 5 ಹಂತಗಳ ‘ಫಿಟ್‌ಮೆಂಟ್ ಫ್ಯಾಕ್ಟರ್’: ಹಿರಿಯ ಅಧಿಕಾರಿಗಳ ಬೇಸಿಕ್ ಪೇ ನೇರ ₹10.95 ಲಕ್ಷಕ್ಕೆ ಜಿಗಿತ!]]></title>
            <link>https://kannada.asianetnews.com/business/8th-pay-commission-irtsa-proposes-five-fitment-factors-salary-hike-san/articleshow-4heh7wa</link>
            <guid isPermaLink="true">https://kannada.asianetnews.com/business/8th-pay-commission-irtsa-proposes-five-fitment-factors-salary-hike-san/articleshow-4heh7wa</guid>
            <pubDate>Wed, 27 May 2026 18:33:28 +0530</pubDate>
            <description><![CDATA[8ನೇ ವೇತನ ಆಯೋಗದ ಮುಂದೆ ನೌಕರರ ಸಂಘಟನೆಗಳು ಹೊಸ 5 ಹಂತದ ಫಿಟ್&zwnj;ಮೆಂಟ್ ಫ್ಯಾಕ್ಟರ್ ಸೂತ್ರವನ್ನು ಪ್ರಸ್ತಾಪಿಸಿವೆ. ಈ ಪ್ರಸ್ತಾಪವು ಅಂಗೀಕಾರವಾದರೆ, ಕೆಲವು ಹಿರಿಯ ಅಧಿಕಾರಿಗಳ ವೇತನದಲ್ಲಿ ಶೇ. 400ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದ್ದು, ಇದು ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmpn1z873712nhnba8gp9wgr,imgname-8th-pay-commission-timeline-salary-hike-arrears-fitment-factor-central-government-employees-pension-update-india-3-1774581775623.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.27): &lt;/strong&gt;ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ 8ನೇ ವೇತನ ಆಯೋಗದ (8th Pay Commission) ಪ್ರಕ್ರಿಯೆಗಳು ಈಗ ಕೇವಲ ವಾಡಿಕೆಯ ಸಂಬಳ ಪರಿಷ್ಕರಣೆಯಾಗಿ ಉಳಿದಿಲ್ಲ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ವೇತನ ಕ್ರಾಂತಿಗೆ ಮುನ್ನುಡಿ ಬರೆಯುವ ಮುನ್ಸೂಚನೆ ನೀಡಿದೆ. ಪ್ರಸ್ತುತ ನಡೆಯುತ್ತಿರುವ ಸಮಾಲೋಚನೆಗಳ ನಡುವೆ, ಕೆಲವು ಹಿರಿಯ ಅಧಿಕಾರಿಗಳ ವೇತನದಲ್ಲಿ ಬರೋಬ್ಬರಿ ಶೇಕಡಾ 400 ಕ್ಕೂ ಹೆಚ್ಚು ಭಾರಿ ಏರಿಕೆ ತರಬಲ್ಲ ಹೊಸ ಸೂತ್ರವೊಂದು ಈಗ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಡಿಯನ್ ರೈಲ್ವೇ ಟೆಕ್ನಿಕಲ್ ಸೂಪರ್&zwnj;ವೈಸರ್ಸ್ ಅಸೋಸಿಯೇಷನ್ (IRTSA) ಒಳಗೊಂಡಂತೆ ವಿವಿಧ ನೌಕರರ ಸಂಘಟನೆಗಳು ಆಯೋಗದ ಮುಂದೆ ಇಟ್ಟಿರುವ ಬೇಡಿಕೆಗಳು ಮತ್ತು ಈ ಸಂಬಳದ ಲೆಕ್ಕಾಚಾರದ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಏನಿದು ಐದು ಹಂತದ &lsquo;ಫಿಟ್&zwnj;ಮೆಂಟ್ ಫ್ಯಾಕ್ಟರ್&rsquo; ಪ್ರಸ್ತಾಪ?&lt;/strong&gt;&lt;/h2&gt;&lt;p&gt;ಹಿಂದಿನ ವೇತನ ಆಯೋಗಗಳಲ್ಲಿ ದೇಶದ ಎಲ್ಲಾ ಹಂತದ ನೌಕರರಿಗೂ ಒಂದೇ ರೀತಿಯ ಸಾಮಾನ್ಯ &lsquo;ಫಿಟ್&zwnj;ಮೆಂಟ್ ಫ್ಯಾಕ್ಟರ್&rsquo; (ಗುಣಕ) ಅನ್ನು ಬಳಸಲಾಗುತ್ತಿತ್ತು. ಆದರೆ ಈ ಬಾರಿ ಐಆರ್&zwnj;ಟಿಎಸ್&zwnj;ಎ (IRTSA) ಸಂಘಟನೆಯು ನೌಕರರ ವೇತನದ ಮಟ್ಟಕ್ಕೆ (Pay Levels) ಅನುಗುಣವಾಗಿ 5 ವಿಭಿನ್ನ ಫಿಟ್&zwnj;ಮೆಂಟ್ ಫ್ಯಾಕ್ಟರ್&zwnj;ಗಳನ್ನು ಅನ್ವಯಿಸಲು ಪ್ರಸ್ತಾಪಿಸಿದೆ.&lt;/p&gt;&lt;h3&gt;&lt;strong&gt;ಪ್ರಸ್ತಾಪಿಸಲಾದ 5 ಹಂತಗಳ ವಿವರ ಹೀಗಿದೆ&lt;/strong&gt;&lt;/h3&gt;&lt;ul&gt; &lt;li&gt;ಲೆವೆಲ್ 1 ರಿಂದ 5 ರವರೆಗಿನ ನೌಕರರಿಗೆ: 2.92 ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/li&gt; &lt;li&gt;ಲೆವೆಲ್ 6 ರಿಂದ 8 ರವರೆಗಿನ ನೌಕರರಿಗೆ: 3.50 ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/li&gt; &lt;li&gt;ಲೆವೆಲ್ 9 ರಿಂದ 12 ರವರೆಗಿನ ನೌಕರರಿಗೆ: 3.80 ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/li&gt; &lt;li&gt;ಲೆವೆಲ್ 13 ರಿಂದ 16 ರವರೆಗಿನ ನೌಕರರಿಗೆ: 4.09 ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/li&gt; &lt;li&gt;ಲೆವೆಲ್ 17 ರಿಂದ 18 ರವರೆಗಿನ ನೌಕರರಿಗೆ: 4.38 ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/li&gt;&lt;/ul&gt;&lt;h2&gt;&lt;strong&gt;ಸಂಬಳದ ಮೇಲಾಗುವ ಅಗಾಧ ಪರಿಣಾಮ ಎಷ್ಟು?&lt;/strong&gt;&lt;/h2&gt;&lt;p&gt;ವೇತನ ಆಯೋಗವು ಈ ಪ್ರಸ್ತಾಪವನ್ನು ಒಪ್ಪಿಕೊಂಡರೆ ಸರ್ಕಾರಿ ನೌಕರರ ಮೂಲ ವೇತನದಲ್ಲಿ (Basic Pay) ಊಹಿಸಲಾಗದಷ್ಟು ಏರಿಕೆಯಾಗಲಿದೆ.&lt;/p&gt;&lt;p&gt;&lt;strong&gt;ಹಿರಿಯ ಅಧಿಕಾರಿಗಳು (ಲೆವೆಲ್ 17-18):&lt;/strong&gt; ಪ್ರಸ್ತುತ ₹2.5 ಲಕ್ಷ ಮೂಲ ವೇತನ ಪಡೆಯುತ್ತಿರುವ ಹಿರಿಯ ಅಧಿಕಾರಿಯ ಸಂಬಳ, ಪ್ರಸ್ತಾಪಿತ 4.38 ಗುಣಕದ ಅನ್ವಯ ನೇರವಾಗಿ ಸುಮಾರು ₹10.95 ಲಕ್ಷಕ್ಕೆ ಜಿಗಿಯಲಿದೆ!&lt;/p&gt;&lt;p&gt;&lt;strong&gt;ಮಧ್ಯಮ ಕ್ರಮಾಂಕದ ನೌಕರರು (ಲೆವೆಲ್ 6-8): &lt;/strong&gt;ಪ್ರಸ್ತುತ ₹45,000 ಮೂಲ ವೇತನ ಹೊಂದಿರುವ ನೌಕರನ ಸಂಬಳ ಈ ಸೂತ್ರದ ಪ್ರಕಾರ ₹1.57 ಲಕ್ಷಕ್ಕೆ ಏರಿಕೆಯಾಗಲಿದೆ.&lt;/p&gt;&lt;p&gt;ಜೂನಿಯರ್ ಮತ್ತು ಸೀನಿಯರ್ ನೌಕರರ ನಡುವಿನ ವೇತನದ ಅಂತರವನ್ನು ಪ್ರಸ್ತುತ ವ್ಯವಸ್ಥೆಯು ಅನ್ಯಾಯವಾಗಿ ಕುಗ್ಗಿಸಿದೆ. ಪ್ರಮುಖವಾಗಿ ರೈಲ್ವೆಯ ಸುರಕ್ಷತಾ ವಿಭಾಗದ ತಾಂತ್ರಿಕ ಸಿಬ್ಬಂದಿಗೆ ಪ್ರತ್ಯೇಕ ವೇತನ ಶ್ರೇಣಿ, ವೇಗವಾಗಿ ಪ್ರಮೋಷನ್, ವಾರ್ಷಿಕ ಶೇ.5 ರಷ್ಟು ವೇತನ ಹೆಚ್ಚಳ ಮತ್ತು ವೇತನ ಪರಿಷ್ಕರಣೆಗೂ ಮುನ್ನ ಶೇ.50 ರಷ್ಟು ತುಟ್ಟಿಭತ್ಯೆಯನ್ನು (DA) ಮೂಲ ವೇತನಕ್ಕೆ ವಿಲೀನಗೊಳಿಸಬೇಕು ಎಂದು ಸಂಘಟನೆಗಳು ಒತ್ತಾಯಿಸಿವೆ.&lt;/p&gt;&lt;h2&gt;&lt;strong&gt;ಏನಿದು &lsquo;ಫಿಟ್&zwnj;ಮೆಂಟ್ ಫ್ಯಾಕ್ಟರ್&rsquo;? (The Fitment Factor Formula)&lt;/strong&gt;&lt;/h2&gt;&lt;p&gt;ಸರ್ಕಾರಿ ನೌಕರರ ಸಂಬಳವನ್ನು ಪರಿಷ್ಕರಿಸಲು ಬಳಸುವ ಸರಳ ಗುಣಕವನ್ನೇ ಫಿಟ್&zwnj;ಮೆಂಟ್ ಫ್ಯಾಕ್ಟರ್ ಎನ್ನಲಾಗುತ್ತದೆ. ಇದರ ಅಧಿಕೃತ ಸೂತ್ರ ಹೀಗಿದೆ&lt;/p&gt;&lt;h3&gt;&lt;strong&gt;ಹೊಸ ಮೂಲ ವೇತನ=ಪ್ರಸ್ತುತ ಇರುವ ಮೂಲ ವೇತನ * ಫಿಟ್&zwnj;ಮೆಂಟ್ ಫ್ಯಾಕ್ಟರ್&lt;/strong&gt;&lt;/h3&gt;&lt;p&gt;7ನೇ ವೇತನ ಆಯೋಗದಲ್ಲಿ ಈ ಫಿಟ್&zwnj;ಮೆಂಟ್ ಫ್ಯಾಕ್ಟರ್ ಅನ್ನು 2.57 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಈ ಬಾರಿ ವಿವಿಧ ಒಕ್ಕೂಟಗಳು ಕನಿಷ್ಠ ವಿಮಾ ಮೊತ್ತ ಹೆಚ್ಚಿಸಲು ಭಾರಿ ಪಟ್ಟು ಹಿಡಿದಿವೆ. ನ್ಯಾಷನಲ್ ಕೌನ್ಸಿಲ್-ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (NC-JCM) ಕನಿಷ್ಠ ಮೂಲ ವೇತನವನ್ನು ₹69,000 ಗೆ ಹೆಚ್ಚಿಸಲು ಒತ್ತಾಯಿಸಿದ್ದರೆ, ಭಾರತೀಯ ಪ್ರತಿರಕ್ಷಾ ಮಜ್ದೂರ್ ಸಂಘವು (BPMS) ಕನಿಷ್ಠ ಸಂಬಳ ₹72,000 ಹಾಗೂ 4.0 ಫಿಟ್&zwnj;ಮೆಂಟ್ ಫ್ಯಾಕ್ಟರ್ ನೀಡುವಂತೆ ಆಗ್ರಹಿಸಿದೆ.&lt;/p&gt;&lt;h2&gt;&lt;strong&gt;ಸರ್ಕಾರಕ್ಕಿರುವ ಆರ್ಥಿಕ ಸವಾಲುಗಳೇನು?&lt;/strong&gt;&lt;/h2&gt;&lt;p&gt;ಇಷ್ಟು ದೊಡ್ಡ ಮಟ್ಟದ ಸಂಬಳದ ಏರಿಕೆಯನ್ನು ಭರಿಸಲು ದೇಶದ ಬೊಕ್ಕಸಕ್ಕೆ ಸಾಧ್ಯವೇ ಎಂಬ ಯಕ್ಷಪ್ರಶ್ನೆ ಕೇಂದ್ರ ಸರ್ಕಾರದ ಮುಂದಿದೆ. ಸಂಬಳ ಹೆಚ್ಚಾದರೆ ಕೇವಲ ಹಾಲಿ ನೌಕರರಷ್ಟೇ ಅಲ್ಲದೆ, ನಿವೃತ್ತ ನೌಕರರ ಪೆನ್ಷನ್, ಭತ್ಯೆಗಳು (Allowances) ಹಾಗೂ ಒಟ್ಟಾರೆ ದೀರ್ಘಕಾಲದ ಆರ್ಥಿಕ ಹೊರೆ ಹೆಚ್ಚಾಗುತ್ತದೆ.&lt;/p&gt;&lt;p&gt;ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳೂ ಸಹ ವೇತನ ಪರಿಷ್ಕರಣೆ ಮಾಡಬೇಕಾಗುವುದರಿಂದ ದೇಶದಾದ್ಯಂತ ಆರ್ಥಿಕ ಒತ್ತಡ ಸೃಷ್ಟಿಯಾಗಲಿದೆ. ಆದ್ದರಿಂದ ಸರ್ಕಾರವು ಹಣದುಬ್ಬರ ಮತ್ತು ಮಾರುಕಟ್ಟೆಯ ವಾಸ್ತವತೆಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಮ ಮಾರ್ಗವನ್ನು (Middle Path) ಕಾಯ್ದುಕೊಳ್ಳಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಇತರ ಪ್ರಮುಖ ಬೇಡಿಕೆಗಳು: ಕುಟುಂಬದ ಸೂತ್ರ ಮತ್ತು ಹಳೆ ಪಿಂಚಣಿ (OPS)&lt;/strong&gt;&lt;/h2&gt;&lt;p&gt;&lt;strong&gt;ಕುಟುಂಬದ ವ್ಯಾಖ್ಯಾನ ಪರಿಷ್ಕರಣೆ (Family Unit):&lt;/strong&gt; ಈ ಹಿಂದೆ ಸಂಬಳ ನಿಗದಿಪಡಿಸುವಾಗ ನೌಕರನ ಕುಟುಂಬದಲ್ಲಿ 3 ಜನರನ್ನು (ಗಂಡ, ಹೆಂಡತಿ, ಮಗು) ಒಂದು ಯೂನಿಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಪ್ರಸ್ತುತ ಶಿಕ್ಷಣ, ಆರೋಗ್ಯ ವೆಚ್ಚ ಹೆಚ್ಚಿರುವುದರಿಂದ ಪೋಷಕರನ್ನೂ ಒಳಗೊಂಡಂತೆ &lsquo;ಫ್ಯಾಮಿಲಿ ಯೂನಿಟ್&rsquo; ಸೂತ್ರವನ್ನು 3 ರಿಂದ 5 ಕ್ಕೆ ಹೆಚ್ಚಿಸಬೇಕು ಎಂದು ನೌಕರರು ಆಗ್ರಹಿಸಿದ್ದಾರೆ.&lt;/p&gt;&lt;p&gt;&lt;strong&gt;ಹಳೆ ಪಿಂಚಣಿ ಯೋಜನೆ (OPS) ಚರ್ಚೆ: &lt;/strong&gt;ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು (NPS) ಮಾರುಕಟ್ಟೆಯ ಏರಿಳಿತಕ್ಕೆ ಒಳಪಟ್ಟಿರುವುದರಿಂದ, ಹಳೆ ಪಿಂಚಣಿ ಯೋಜನೆಯನ್ನು (OPS) ಮರುಸ್ಥಾಪಿಸಬೇಕು ಎಂಬ ಬೇಡಿಕೆ ಜೀವಂತವಾಗಿದೆ. ಆದರೆ ಸಂಪೂರ್ಣ ರೋಲ್&zwnj;ಬ್ಯಾಕ್ ಕಷ್ಟವಾಗಿರುವುದರಿಂದ, ಒಪಿಎಸ್ ಮಾದರಿಯ ರಕ್ಷಣೆ ಎಂದರೆ ಖಾತರಿಪಡಿಸಿದ ಪಿಂಚಣಿ ಮತ್ತು ಡಿಎ ಆಧಾರಿತ ಪಿಂಚಣಿ ರಕ್ಷಣೆಯನ್ನು ನೀಡುವಂತೆ ನೌಕರರು ಒಲವು ತೋರುತ್ತಿದ್ದಾರೆ.&lt;/p&gt;&lt;h2&gt;&lt;strong&gt;ತೀವ್ರಗೊಂಡ ಸಮಾಲೋಚನೆ ಪ್ರಕ್ರಿಯೆ&lt;/strong&gt;&lt;/h2&gt;&lt;p&gt;ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ 8ನೇ ವೇತನ ಆಯೋಗದ ಸಮಿತಿಯು ಈಗಾಗಲೇ ದೆಹಲಿ ಸೇರಿದಂತೆ ವಿವಿಧೆಡೆ ತೀವ್ರ ಸಮಾಲೋಚನೆ ನಡೆಸುತ್ತಿದೆ. ಮುಂದಿನ ಹಂತವಾಗಿ ಜುಲೈ 6 ಮತ್ತು 7 ರಂದು ಭುವನೇಶ್ವರಕ್ಕೆ ಭೇಟಿ ನೀಡಲಿದ್ದು, ತದನಂತರ ಲಕ್ನೋ, ಹೈದರಾಬಾದ್, ಶ್ರೀನಗರ, ಲಡಾಖ್ ಮತ್ತು ಜಮ್ಮು-ಕಾಶ್ಮೀರದಲ್ಲೂ ಸಭೆಗಳನ್ನು ನಡೆಸಲಿದೆ.&lt;/p&gt;&lt;p&gt;ಕೇಂದ್ರ ಸರ್ಕಾರವು 2025 ರ ನವೆಂಬರ್ 3 ರಂದು ಈ 8ನೇ ವೇತನ ಆಯೋಗವನ್ನು ಅಧಿಕೃತವಾಗಿ ರಚಿಸಿತ್ತು. ಈ ಆಯೋಗದ ಅಂತಿಮ ನಿರ್ಧಾರಗಳು ದೇಶದ ಸುಮಾರು 1.1 ಕೋಟಿಗೂ ಅಧಿಕ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಹಾಗೂ ಅವರ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಲಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/8th-pay-commission-irtsa-proposes-five-fitment-factors-salary-hike-san/articleshow-4heh7wa"/>
        </item>
        <item>
            <title><![CDATA[West Asia conflict : ಭಾರತದ ಎಕಾನಮಿ ಉಳಿಸಲು 3F ಪ್ಲ್ಯಾನ್? ನಿರ್ಮಲಾ ಸೀತಾರಾಮನ್ ಹೇಳಿದ ಮಾತು ವೈರಲ್]]></title>
            <link>https://kannada.asianetnews.com/india-news/what-is-nirmala-sitharamans-3f-formula-how-west-asia-conflict-is-impacting-india-s-economy-rav/articleshow-aynp5xc</link>
            <guid isPermaLink="true">https://kannada.asianetnews.com/india-news/what-is-nirmala-sitharamans-3f-formula-how-west-asia-conflict-is-impacting-india-s-economy-rav/articleshow-aynp5xc</guid>
            <pubDate>Tue, 26 May 2026 09:28:23 +0530</pubDate>
            <description><![CDATA[&lt;p&gt;ಪಶ್ಚಿಮ ಏಷ್ಯಾ ಸಂಘರ್ಷವು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಈ ಸವಾಲನ್ನು ಎದುರಿಸಲು ಸರ್ಕಾರವು ಇಂಧನ, ರಸಗೊಬ್ಬರ ಮತ್ತು ವಿದೇಶಿ ವಿನಿಮಯ (3F) ಕ್ಷೇತ್ರಗಳ ಮೇಲೆ ಗಮನಹರಿಸಿದೆ. ನಾಗರಿಕರ ರಕ್ಷಿಸಲು ಮತ್ತು ಆರ್ಥಿಕ ಸ್ಥಿರತೆ ಕಾಪಾಡಲು 3F ಸೂತ್ರಗಳ ಬಗ್ಗೆ ಲೇಖನದಲ್ಲಿ ವಿವರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j7bxn86s1ewjeajjndz5qh7y,imgname-nirmala-sitaraman--1-.png" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&lt;strong&gt;ನಿರ್ಮಲಾ ಸೀತಾರಾಮನ್&zwnj;, ಕೇಂದ್ರ ಹಣಕಾಸು ಸಚಿವೆ&lt;/strong&gt;&lt;/li&gt;&lt;/ul&gt;&lt;p&gt;ಪಶ್ಚಿಮ ಏಷ್ಯಾ ಸಂಘರ್ಷವು ಈಗ ದೂರದ ಭೂರಾಜಕೀಯ ಘಟನೆಯಾಗಿ ಉಳಿದಿಲ್ಲ. ಇದು ನಮ್ಮ ಆರ್ಥಿಕತೆ, ವ್ಯವಹಾರಗಳು ಮತ್ತು ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಸವಾಲನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲು, 3 ಪ್ರಮುಖ ಕ್ಷೇತ್ರಗಳಾದ ಇಂಧನ (Fuel), ರಸಗೊಬ್ಬರ (Fertilisers) ಮತ್ತು ವಿದೇಶಿ ವಿನಿಮಯ (Forex) &ndash; ಎಂಬ 3Fಗಳ ಸೂತ್ರ ಇಲ್ಲಿದೆ.&lt;/p&gt;&lt;p&gt;ಪಶ್ಚಿಮ ಏಷ್ಯಾ ಸಂಘರ್ಷವು ಈಗ ದೂರದ ಭೂರಾಜಕೀಯ ಘಟನೆಯಾಗಿ ಉಳಿದಿಲ್ಲ. ಇದು ನಮ್ಮ ಆರ್ಥಿಕತೆ, ವ್ಯವಹಾರಗಳು ಮತ್ತು ಸಾಮಾನ್ಯ ನಾಗರಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಹಣಕಾಸು ಸಚಿವೆಯಾಗಿ, ನಾನು 3 ಪ್ರಮುಖ ಕ್ಷೇತ್ರಗಳಾದ ಇಂಧನ (Fuel), ರಸಗೊಬ್ಬರ (Fertilisers) ಮತ್ತು ವಿದೇಶಿ ವಿನಿಮಯ (Forex) &ndash; ಎಂಬ 3Fಗಳ ಕುರಿತು ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.&lt;/p&gt;&lt;p&gt;ಈ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ರಕ್ಷಿಸುವುದರೊಂದಿಗೆ ದುರ್ಬಲ ವರ್ಗಗಳನ್ನು ರಕ್ಷಿಸುವತ್ತ ಗಮನ ಹರಿಸಿದೆ. 3Fಗಳು ಈಗ ಏಕೆ ಮುಖ್ಯ ಎಂಬುದನ್ನು ನೋಡೋಣ. 80 ದಿನಗಳನ್ನು ಮೀರಿದ ಈ ಸಂಘರ್ಷವು ವಿಶ್ವದ ಕಚ್ಚಾ ತೈಲ ಬೆಲೆಗಳನ್ನು ತೀವ್ರವಾಗಿ ಏರಿಸಿದೆ. ಹೋರ್ಮುಜ್ ಜಲಸಂಧಿಯಂತಹ ಪ್ರಮುಖ ತೈಲ ಸಾಗಣಿಕೆ ಮಾರ್ಗಗಳಲ್ಲಿ ಅಡಚಣೆ ಉಂಟಾಗಿದೆ. ಇದು ಪೂರೈಕೆ ಸರಪಳಿಗಳ ಮೇಲೆ ಒತ್ತಡ ಹೇರಿದ್ದು, ಸಾಗಣಿಕೆ ವೆಚ್ಚಗಳನ್ನು ಹೆಚ್ಚಿಸಿದೆ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಇಂಧನ ಮತ್ತು ರಸಗೊಬ್ಬರದ ದೊಡ್ಡ ಆಮದುದಾರ ದೇಶವಾಗಿರುವ ಭಾರತ ಈ ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವು ಈ ಆಘಾತವನ್ನು ಹೊರಲು ಸಿದ್ಧವಾಗಿದ್ದು, ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸುತ್ತಿದ್ದೇವೆ.&lt;/p&gt;&lt;h2&gt;ಇಂಧನ: ಇಂದಿನ ಅತಿ ದೊಡ್ಡ ಸವಾಲು&lt;/h2&gt;&lt;p&gt;ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವುದರೊಂದಿಗೆ ದೇಶದ ಮೇಲಿನ ಆರ್ಥಿಕ ಪ್ರಭಾವವನ್ನು ನಿಭಾಯಿಸುವುದು ಇವತ್ತಿನ ಅತಿ ದೊಡ್ಡ ಸವಾಲು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಏರಿಕೆಯು ಹಂತಹಂತವಾಗಿ ವಿಸ್ತರಿಸುತ್ತಿದೆ. ಇಂದು ಪೆಟ್ರೋಲ್ ಬೆಲೆ ಲೀ.ಗೆ 2.61 ರು. ಮತ್ತು ಡೀಸಲ್ ಬೆಲೆ ಲೀ.ಗೆ 2.71 ರು. ಏರಿಕೆಯಾಗಿದೆ. ಇದು 11 ದಿನಗಳಲ್ಲಿ 4ನೇ ಏರಿಕೆಯಾಗಿದ್ದು, ಮೇ 15ರಿಂದ ಒಟ್ಟು ಸುಮಾರು 7.50 ರು. ಏರಿಕೆಯಾಗಿದೆ. ನಾಗರಿಕರ ಮೇಲಿನ ಹೊರೆಯನ್ನು ಕಡಿಮೆಗೊಳಿಸಲು ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್&zwnj;ನ ಉತ್ಪಾದನಾ ತೆರಿಗೆಯನ್ನು ಕಡಿತಗೊಳಿಸಿದೆ. ಈ ಒಂದು ನಿರ್ಧಾರದಿಂದ ಸರ್ಕಾರಕ್ಕೆ ಸುಮಾರು 1 ಲಕ್ಷ ಕೋಟಿ ರು. ಆದಾಯ ನಷ್ಟವಾಗುತ್ತದೆ. ಮನೆಗಳು ಮತ್ತು ಸಣ್ಣ ವ್ಯವಹಾರಗಳ ಮೇಲೆ ಅತಿಯಾದ ಹಣದುಬ್ಬರದ ಒತ್ತಡವನ್ನು ತಡೆಯಲು ನಾವು ಈ ಮಾರ್ಗವನ್ನು ಆಯ್ಕೆ ಮಾಡಿದ್ದೇವೆ.&lt;/p&gt;&lt;p&gt;ಆದರೂ ಇಂಧನ ಬೆಲೆಗಳು ಸಾರಿಗೆ, ಲಾಜಿಸ್ಟಿಕ್ಸ್ ಮತ್ತು ಒಟ್ಟಾರೆ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತವೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ಇಂಧನ ಸಂರಕ್ಷಣೆ ಕರೆಯನ್ನು ಪಾಲಿಸುವಂತೆ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಅಗತ್ಯವಿಲ್ಲದ ಪ್ರಯಾಣ ಕಡಿಮೆಗೊಳಿಸಿ. ಸಾಧ್ಯವಾದಲ್ಲಿ ಕಚೇರಿಗೆ ಬರದೆ ಮನೆಯಿಂದಲೇ ಕೆಲಸ ಮಾಡಿ.&lt;/p&gt;&lt;h3&gt;ರಸಗೊಬ್ಬರ ಬೆಲೆ ಏರಿಕೆಗೆ ಕಾರಣವೇನು?&lt;/h3&gt;&lt;p&gt;ವಿಶ್ವದ ಪೂರೈಕೆ ಅಡಚಣೆಗಳಿಂದಾಗಿ ರಸಗೊಬ್ಬರ ಬೆಲೆಗಳು ಕಲ್ಪನೆಗೂ ಮೀರಿ ಏರಿವೆ. ರೈತರಿಗೆ ಭಾರೀ ರಸಗೊಬ್ಬರ ಸಬ್ಸಿಡಿ ನೀಡುವ ದೇಶವಾಗಿರುವುದರಿಂದ ಇದು ನಮ್ಮ ಆರ್ಥಿಕ ಸ್ಥಿತಿಗೆ ದೊಡ್ಡ ಸವಾಲಾಗಿದೆ. 2026-27ರಲ್ಲಿ ಸಬ್ಸಿಡಿ ಹೊರೆ ಸುಮಾರು 70,000 ಕೋಟಿ ರು. ಹೆಚ್ಚಳವಾಗಬಹುದು ಮತ್ತು ಒಟ್ಟು ಸುಮಾರು 2.4 ಲಕ್ಷ ಕೋಟಿ ರು.ಗೆ ತಲುಪಬಹುದು. ಈ ವೆಚ್ಚದ ಒತ್ತಡದ ಹೊರತಾಗಿಯೂ, ಮುಂಬರುವ ಖಾರೀಫ್ ಋತುವಿಗೆ ಸಾಕಷ್ಟು ಸಂಗ್ರಹವನ್ನು ಖಚಿತಪಡಿಸಿದ್ದೇವೆ. ದೇಶೀಯ ಉತ್ಪಾದನೆ ಮುಂದುವರಿದಿದೆ ಮತ್ತು ಆಮದುಗಳನ್ನು ಅಂತಿಮಗೊಳಿಸಲಾಗಿದೆ. ನಮ್ಮ ರೈತರು ರಸಗೊಬ್ಬರದ ಕೊರತೆ ಎದುರಿಸುವುದಿಲ್ಲ ಎಂದು ಖಚಿತಪಡಿಸುತ್ತೇನೆ.&lt;/p&gt;&lt;p&gt;&lt;strong&gt;ವಿದೇಶಿ ವಿನಿಮಯ:&lt;/strong&gt;&lt;/p&gt;&lt;p&gt;ಇಂಧನ ಬೆಲೆ ಏರಿಕೆ ಮತ್ತು ಜಾಗತಿಕ ಅನಿಶ್ಚಿತತೆಗಳು ನಮ್ಮ ವಿದೇಶಿ ವಿನಿಮಯ ಮೀಸಲು ಮತ್ತು ರುಪಾಯಿ ಮೌಲ್ಯದ ಮೇಲೆ ಒತ್ತಡ ಹೇರುತ್ತಿವೆ. ಸ್ಥಿರತೆ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಹಸ್ತಕ್ಷೇಪ ಮಾಡುತ್ತಿರುವುದರಿಂದ ಮೀಸಲುಗಳಲ್ಲಿ ಕೆಲವು ಕುಸಿತ ಕಂಡುಬಂದಿದೆ. ಆದರೂ ಭಾರತವು ವಿಶ್ವದ ಅತಿದೊಡ್ಡ ವಿದೇಶಿ ವಿನಿಮಯ ಮೀಸಲುಗಳಲ್ಲಿ ಒಂದನ್ನು ಹೊಂದಿದೆ. ಆದರೆ ಚಿನ್ನದ ಬೆಲೆ ಏರಿಕೆ ಮತ್ತು ಆಮದು ವೆಚ್ಚಗಳು ಬಾಹ್ಯ ಕ್ಷೇತ್ರದಲ್ಲಿ ಸವಾಲು ಸೃಷ್ಟಿಸುತ್ತಿವೆ. ಆದ್ದರಿಂದ ಅನಗತ್ಯ ಆಮದುಗಳನ್ನು ಕಡಿಮೆಗೊಳಿಸುವುದು ಮತ್ತು ಜಾಗರೂಕ ವೆಚ್ಚದ ಮೂಲಕ ವಿದೇಶಿ ವಿನಿಮಯವನ್ನು ಉಳಿಸುವುದು ಈ ಸಂದರ್ಭದಲ್ಲಿ ಅತ್ಯಗತ್ಯ.&lt;/p&gt;&lt;p&gt;&lt;strong&gt;ಸರ್ಕಾರದ ಆದ್ಯತೆಯ ಕ್ರಮಗಳು:&lt;/strong&gt;&lt;/p&gt;&lt;ul&gt; &lt;li&gt;ಸಾಮಾನ್ಯ ನಾಗರಿಕರನ್ನು ಅನಗತ್ಯ ಕಷ್ಟದಿಂದ ರಕ್ಷಿಸುವುದು&lt;/li&gt; &lt;li&gt;ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್&zwnj;ಎಂಇ) ಬೆಂಬಲ&lt;/li&gt; &lt;li&gt;ಸರಳೀಕೃತ ಕಸ್ಟಮ್ಸ್ ಕಾರ್ಯವಿಧಾನಗಳ ಮೂಲಕ ರಫ್ತುದಾರರನ್ನು ರಕ್ಷಿಸುವುದು&lt;/li&gt; &lt;li&gt;ಒಟ್ಟಾರೆ ಸಾಮೂಹಿಕ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು&lt;/li&gt;&lt;/ul&gt;&lt;p&gt;&lt;strong&gt;ನಮ್ಮ ಗುರಿ ಸ್ಪಷ್ಟ:&lt;/strong&gt;&lt;/p&gt;&lt;p&gt;ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಅಡಚಣೆಗಳನ್ನು ಕನಿಷ್ಠಗೊಳಿಸಿ, ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ನಮ್ಮ ಪ್ರಮುಖ ಗುರಿ. ಇವತ್ತಿನ ಜಾಗತಿಕ ಸವಾಲು ನಮ್ಮ ಸಿದ್ಧತೆಯನ್ನು ಪರೀಕ್ಷಿಸುತ್ತಿದೆ. ನಮ್ಮ ಆಡಳಿತದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತಿದೆ. ನಾವು ಜಾಗತಿಕ ಬೆಳವಣಿಗೆಗಳನ್ನು ನಿರಂತರವಾಗಿ ಗಮನಿಸುತ್ತಾ, ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಜನರು ಮತ್ತು ರೈತರ ಹಿತವನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ. ಭಾರತವು ಈ ಸವಾಲುಗಳನ್ನು ಶಕ್ತಿ, ಏಕತೆ ಮತ್ತು ಆರ್ಥಿಕ ಜಾಗರೂಕತೆಯೊಂದಿಗೆ ಹಿಮ್ಮೆಟ್ಟಿಸುತ್ತದೆ ಎಂಬ ವಿಶ್ವಾಸ ನನಗಿದೆ.&lt;/p&gt;]]></content:encoded>
            <category>business</category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/what-is-nirmala-sitharamans-3f-formula-how-west-asia-conflict-is-impacting-india-s-economy-rav/articleshow-aynp5xc"/>
        </item>
        <item>
            <title><![CDATA[ಲೋನ್ ಫ್ರೀ ಪೇಮೆಂಟ್ ಚಾರ್ಚ್ ಇಲ್ಲ, ಎಟಿಎಂ ಫೇಲ್ ಆದ್ರೆ ದಿನಕ್ಕೆ 100 ರೂ. ಪರಿಹಾರ - ಆರ್ ಬಿಐ ತಂದಿದೆ ಹೊಸ ನಿಯಮ]]></title>
            <link>https://kannada.asianetnews.com/gallery/business/rbi-new-rules-2026-loan-prepayment-charges-eliminated-100-daily-compensation-for-failed-atm-transaction-bfomzyc</link>
            <guid isPermaLink="true">https://kannada.asianetnews.com/gallery/business/rbi-new-rules-2026-loan-prepayment-charges-eliminated-100-daily-compensation-for-failed-atm-transaction-bfomzyc</guid>
            <pubDate>Thu, 28 May 2026 17:52:56 +0530</pubDate>
            <description><![CDATA[&lt;p&gt;ಬ್ಯಾಂಕ್ ಸಾಲಗಳ ಮೇಲೆ ಇಎಂಐ ಪಾವತಿಸ್ತಿದ್ರೆ ಎಟಿಎಂಗಳನ್ನು ಬಳಸುತ್ತಿದ್ರೆ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ವಹಿವಾಟು ನಡೆಸುತ್ತಿದ್ದರೆ ಮಹತ್ವದ ಸುದ್ದಿ ಇಲ್ಲಿದೆ. ಡಿಜಿಟಲ್ ವಂಚನೆ ತಡೆಗಟ್ಟಲು &amp;nbsp;ಆರ್ಬಿಐ &amp;nbsp;2026 ರಲ್ಲಿ ಬ್ಯಾಂಕಿಂಗ್ ನಿಯಮಗಳನ್ನು ಬಿಗಿಗೊಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksq828hqtcn9zp1nv254vg4e,imgname-rbi-new-banking-rules-1779970417207.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯಾಂಕ್ ಸಾಲಗಳ ಮೇಲೆ ಇಎಂಐ ಪಾವತಿಸ್ತಿದ್ರೆ ಎಟಿಎಂಗಳನ್ನು ಬಳಸುತ್ತಿದ್ರೆ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ವಹಿವಾಟು ನಡೆಸುತ್ತಿದ್ದರೆ ಮಹತ್ವದ ಸುದ್ದಿ ಇಲ್ಲಿದೆ. ಡಿಜಿಟಲ್ ವಂಚನೆ ತಡೆಗಟ್ಟಲು &amp;nbsp;ಆರ್ಬಿಐ &amp;nbsp;2026 ರಲ್ಲಿ ಬ್ಯಾಂಕಿಂಗ್ ನಿಯಮಗಳನ್ನು ಬಿಗಿಗೊಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಕಾಲಿಕ ಸಾಲ ಮುಕ್ತಾಯ ಮಾಡುವ ಸಾಲಗಾರರಿಗೆ ಬ್ಯಾಂಕ್ ಖುಷಿ ಸುದ್ದಿ ನೀಡಿದೆ. ಜನವರಿ 1, 2026 ರಿಂದ ಹೊಸ ನಿಯಮ ಜಾರಿಗೆ ಬಂದಿದೆ. ಆರ್ಬಿಐ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು, ವೈಯಕ್ತಿಕ ಸಾಲಗಳು, ಗೃಹ ಸಾಲಗಳು, ಕಾರು ಸಾಲ ಮತ್ತು ಶಿಕ್ಷಣ ಸಾಲಗಳ ಮೇಲೆ ಮುಟ್ಟುಗೋಲು ಅಥವಾ ಪೂರ್ವಪಾವತಿ ಶುಲ್ಕಗಳನ್ನು ವಿಧಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಹಿಂದೆ, ಅಕಾಲಿಕ ಸಾಲ ಮುಕ್ತಾಯಕ್ಕೆ ಬ್ಯಾಂಕುಗಳು ಶೇಕಡಾ 2 ರಿಂದ 4 ರಷ್ಟು ಹೆಚ್ಚುವರಿ ದಂಡವನ್ನು ವಿಧಿಸುತ್ತಿದ್ದವು. ಹೊಸ ನಿಯಮದ ನಂತ್ರ ಗ್ರಾಹಕರಿಗೆ ಸಾಲಗಳನ್ನು ವೇಗವಾಗಿ ಮರುಪಾವತಿಸಲು, ಬಡ್ಡಿ ಹೊರೆಯನ್ನು ಕಡಿಮೆ ಮಾಡಲು ಮತ್ತು ಬಾಕಿ ಹಣವನ್ನು ವರ್ಗಾಯಿಸೋದು ಸುಲಭವಾಗಿದೆ.&lt;/p&gt;&lt;img&gt;&lt;p&gt;ಎಟಿಎಂನಲ್ಲಿ ತಾಂತ್ರಿಕ ದೋಷ ಅಥವಾ ಬೇರೆ ಕಾರಣಕ್ಕೆ ವಿತ್ ಡ್ರಾ ಮಾಡಿದ ಹಣ ನಮ್ಮ ಕೈಗೆ ಸಿಗೋದಿಲ್ಲ. ಆದ್ರೆ ಖಾತೆಯಿಂದ ಹಣ ಕಟ್ ಆಗಿರುತ್ತೆ. ಹಿಂದೆ ಬ್ಯಾಂಕ್ ಇದಕ್ಕೆ ಸಮಯ ನೀಡ್ತಿತ್ತು. ಒಂದೆರಡು ತಿಂಗಳಲ್ಲಿ ಹಣ ವಾಪಸ್ ಖಾತೆಗೆ ಬರ್ತಾ ಇತ್ತು. ಆದ್ರೀಗ ಆರ್ ಬಿಐ ಇದಕ್ಕೆ ಸಂಬಂಧಿಸಿದಂತೆ ನಿಯಮ ಕಠಿಣಗೊಳಿಸಿದೆ. ಬ್ಯಾಂಕ್ ಐದು ಕೆಲಸದ ದಿನಗಳಲ್ಲಿ ಹಣವನ್ನು ಮರುಪಾವತಿಸಬೇಕು. ಐದು ದಿನಗಳಲ್ಲಿ ಗ್ರಾಹಕರ ಹಣ, ಜಮಾ ಆಗ್ದೆ ಹೋದಲ್ಲಿ ಬ್ಯಾಂಕ್, ಗ್ರಾಹಕರಿಗೆ ದಿನಕ್ಕೆ 100 ರೂಪಾಯಿಯಂತೆ ಕಡ್ಡಾಯವಾಗಿ ಪರಿಹಾರ ನೀಡಬೇಕು.&lt;/p&gt;&lt;img&gt;&lt;p&gt;ಸಿಮ್ ವಿನಿಮಯ ಮತ್ತು ಫಿಶಿಂಗ್ನಿಂದ ಡಿಜಿಟಲ್ ವಂಚನೆ ಹೆಚ್ಚಾಗ್ತಿದೆ. ಅದನ್ನು ತಡೆಗಟ್ಟಲು ಏಪ್ರಿಲ್ 2026 ರಿಂದ ಭದ್ರತೆಯನ್ನು ನವೀಕರಿಸಲಾಗಿದೆ. ದೊಡ್ಡ ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಸುರಕ್ಷಿತಗೊಳಿಸಲು, ಸರಳ ಎಸ್ಎಂಎಸ್ ಒಟಿಪಿಗಳನ್ನು ಮಾತ್ರ ಅವಲಂಬಿಸುವ ಬದಲು ಬಯೋಮೆಟ್ರಿಕ್ ದೃಢೀಕರಣ, ಫೇಸ್ ಐಡಿ ಮತ್ತು ಅಪ್ಲಿಕೇಶನ್ ಆಧಾರಿತ ಅನುಮೋದನೆ ಟೋಕನ್ಗಳಂತಹ ಸುಧಾರಿತ ಭದ್ರತಾ ಕ್ರಮಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಅಂದ್ರೆ ಅನಿಯಂತ್ರಿತ ಮತ್ತು ಗುಪ್ತ ದಂಡಗಳನ್ನು ಬ್ಯಾಂಕ್ ವಿಧಿಸುತ್ತಿತ್ತು. ಈಗ ಆರ್ಬಿಐ ಇದ್ರ ಮೇಲೆ ತನ್ನ ಹಿಡಿತ ಬಿಗಿಗೊಳಿಸಿದೆ. ದಂಡದ ದರಗಳು ಸಂಪೂರ್ಣವಾಗಿ ಪಾರದರ್ಶಕ ಮತ್ತು ಸಮಂಜಸವಾಗಿರಬೇಕು ಎಂದು ಆರ್ಬಿಐ ಸ್ಪಷ್ಟವಾಗಿ ನಿರ್ದೇಶಿಸಿದೆ.&lt;/p&gt;&lt;img&gt;&lt;p&gt;ಡಿಜಿಟಲ್ ಸಾಲ ಮಾರ್ಗಸೂಚಿಗಳ ಅಡಿಯಲ್ಲಿ, ಆರ್ಬಿಐ ಕಾನೂನುಬಾಹಿರ ಮತ್ತು ಅನಿಯಂತ್ರಿತ ಸಾಲದ ಅಪ್ಲಿಕೇಶನ್ಗಳ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ಯಾವುದೇ ಸಾಲದ ಅಪ್ಲಿಕೇಶನ್ ಸಾಲಗಳನ್ನು ಒದಗಿಸುವ ನೆಪದಲ್ಲಿ ಗ್ರಾಹಕರ ವೈಯಕ್ತಿಕ ಸಂಪರ್ಕಗಳು, ಗ್ಯಾಲರಿಗಳು, ಫೋಟೋಗಳು ಮತ್ತು ಕರೆ ಲಾಗ್ಗಳನ್ನು ಬಲವಂತವಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಸಂಬಂಧಿಕರಿಗೆ ಕರೆ ಮಾಡುವುದು ಅಥವಾ ಸಾರ್ವಜನಿಕ ಅವಮಾನದಂತಹ ರಿಕವರಿ ಏಜೆಂಟ್ಗಳಿಂದ ಕಿರುಕುಳವನ್ನು ತಡೆಗಟ್ಟಲು ಗ್ರಾಹಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಲಾಗಿದೆ.&lt;/p&gt;&lt;img&gt;&lt;p&gt;ಆರ್ ಬಿಐಗೆ ಸಂಬಂಧಿಸಿದ ನಿಯಮಗಳು ಹೆಸರಿನಲ್ಲಿ ಅನೇಕ ಸುದ್ದಿಗಳು, ಲಿಂಕ್ಸ್ ಪೋಸ್ಟ್ ಆಗ್ತಿರುತ್ತವೆ. ಅದನ್ನು ಓಪನ್ ಮಾಡುವ ಮುನ್ನ ಅಥವಾ ಅಪಾಲಿಸುವ ಮೊದಲು ಆರ್ ಬಿಐ ಅಧಿಕೃತ ವೆಬ್ಸೈಟ್ ನಿಂದ ಮಾಹಿತಿ ಪಡೆಯಲು ಮರೆಯಬೇಡಿ.&lt;/p&gt;]]></content:encoded>
            <category>business</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/rbi-new-rules-2026-loan-prepayment-charges-eliminated-100-daily-compensation-for-failed-atm-transaction-bfomzyc"/>
        </item>
        <item>
            <title><![CDATA[ಒಂದೇ ಪಾಲಿಸಿಯಲ್ಲಿ ಗಂಡ-ಹೆಂಡ್ತಿ ಇಬ್ಬರಿಗೂ ರಕ್ಷಣೆ: ಜೂನ್ 1 ರಿಂದ ಖರೀದಿಗೆ ಸಿಗಲಿವೆ ಎಲ್‌ಐಸಿಯ ಸೂಪರ್ ಪ್ಲಾನ್‌ಗಳು!]]></title>
            <link>https://kannada.asianetnews.com/business/lic-launches-new-jeevan-sathi-joint-life-insurance-plans-888-889-san/articleshow-d3i6x28</link>
            <guid isPermaLink="true">https://kannada.asianetnews.com/business/lic-launches-new-jeevan-sathi-joint-life-insurance-plans-888-889-san/articleshow-d3i6x28</guid>
            <pubDate>Wed, 27 May 2026 17:10:20 +0530</pubDate>
            <description><![CDATA[&lt;p&gt;ಭಾರತೀಯ ಜೀವ ವಿಮಾ ನಿಗಮ (LIC) ದಂಪತಿಗಳಿಗಾಗಿ 'ನ್ಯೂ ಜೀವನ್ ಸಾಥಿ' ಹೆಸರಿನ ಎರಡು ಹೊಸ ಜಂಟಿ ಜೀವ ವಿಮಾ ಯೋಜನೆಗಳನ್ನು (ಪ್ಲಾನ್ 888 ಮತ್ತು 889) ಬಿಡುಗಡೆ ಮಾಡಿದೆ. ಈ ಯೋಜನೆಗಳು ಉಳಿತಾಯ ಮತ್ತು ರಕ್ಷಣೆಯ ಜೊತೆಗೆ ಸಿಂಗಲ್ ಪ್ರೀಮಿಯಂ ಹಾಗೂ ಲಿಮಿಟೆಡ್ ಪ್ರೀಮಿಯಂ ಪಾವತಿ ಆಯ್ಕೆ ಒದಗಿಸುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k1df8xc728rfqmf1fvyszm97,imgname-jeevan-anand-policy-1753872627079.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ 27):&lt;/strong&gt; ಭಾರತೀಯ ಜೀವ ವಿಮಾ ನಿಗಮ (LIC of India) ವಿಮಾ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ಎಲ್&zwnj;ಐಸಿಯ ಸಿಇಒ ಮತ್ತು ಎಂಡಿ ಆಗಿರುವ ಶ್ರೀ ಆರ್. ದೊರೈಸ್ವಾಮಿ ಅವರು ಬುಧವಾರ ಮುಂಬೈನಲ್ಲಿ &lsquo;ಎಲ್&zwnj;ಐಸಿ ನ್ಯೂ ಜೀವನ್ ಸಾಥಿ - ಸಿಂಗಲ್ ಪ್ರೀಮಿಯಂ&rsquo; (ಪ್ಲಾನ್ 888) ಮತ್ತು &lsquo;ಎಲ್&zwnj;ಐಸಿ ನ್ಯೂ ಜೀವನ್ ಸಾಥಿ - ಲಿಮಿಟೆಡ್ ಪ್ರೀಮಿಯಂ&rsquo; (ಪ್ಲಾನ್ 889) ಎಂಬ ಎರಡು ಹೊಸ ಆಕರ್ಷಕ ಯೋಜನೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಇವೆರಡೂ ನಾನ್-ಪಾರ್ (ಲಾಭರಹಿತ), ನಾನ್-ಲಿಂಕ್ಡ್ (ಷೇರು ಮಾರುಕಟ್ಟೆ ಆಧಾರಿತವಲ್ಲದ), ವೈಯಕ್ತಿಕ ಮತ್ತು ಉಳಿತಾಯ ಯೋಜನೆಗಳಾಗಿವೆ. ಮುಖ್ಯವಾಗಿ, ಇವು ದಂಪತಿಗಳಿಗೆ ಉಳಿತಾಯ ಮತ್ತು ಗರಿಷ್ಠ ರಕ್ಷಣೆ ಎರಡನ್ನೂ ಒಟ್ಟಿಗೆ ನೀಡುವ ಜಂಟಿ ಜೀವ ವಿಮಾ (Joint Life Plans) ಯೋಜನೆಗಳಾಗಿವೆ.&lt;/p&gt;&lt;h2&gt;&lt;strong&gt;ಎರಡೂ ಯೋಜನೆಗಳಲ್ಲಿರುವ ಸಾಮಾನ್ಯ ವೈಶಿಷ್ಟ್ಯಗಳು (Common Features)&lt;/strong&gt;&lt;/h2&gt;&lt;p&gt;&lt;strong&gt;ಜಂಟಿ ವಿಮಾ ಸೌಲಭ್ಯ:&lt;/strong&gt; ಇವು ಜಂಟಿ ಜೀವ ವಿಮಾ ಯೋಜನೆಗಳಾಗಿದ್ದು, ವಿವಾಹಿತ ವ್ಯಕ್ತಿ ಮತ್ತು ಅವರ ಸಂಗಾತಿಯನ್ನು ಒಂದೇ ಪಾಲಿಸಿಯ ಅಡಿಯಲ್ಲಿ ರಕ್ಷಣೆ ಮಾಡಲಾಗುತ್ತದೆ&lt;/p&gt;&lt;p&gt;&lt;strong&gt;ಕನಿಷ್ಠ ವಿಮಾ ಮೊತ್ತ (Basic Sum Assured): &lt;/strong&gt;ಈ ಯೋಜನೆಗಳಲ್ಲಿ ಕನಿಷ್ಠ ಮೂಲ ವಿಮಾ ಮೊತ್ತ ₹3,00,000 ಆಗಿದೆ. ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ. ಇದು ಮಂಡಳಿ ಅನುಮೋದಿಸಿದ ಅಂಡರ್&zwnj;ರೈಟಿಂಗ್ ನೀತಿಯ ನಿರ್ಧಾರಕ್ಕೆ ಒಳಪಟ್ಟಿರುತ್ತದೆ.&lt;/p&gt;&lt;p&gt;&lt;strong&gt;ವಯೋಮಿತಿ: &lt;/strong&gt;ಪಾಲಿಸಿ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿಯು ಪಾಲಿಸಿದಾರರು ಆಯ್ಕೆ ಮಾಡುವ ಪಾಲಿಸಿಯ ಆಯ್ಕೆಗಳ ಆಧಾರದ ಮೇಲೆ ಬದಲಾಗುತ್ತದೆ.&lt;/p&gt;&lt;p&gt;&lt;strong&gt;ಡೆತ್ ಬೆನಿಫಿಟ್ ಆಯ್ಕೆಗಳು: &lt;/strong&gt;ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಎರಡು &lsquo;ಡೆತ್ ಬೆನಿಫಿಟ್ ಆಪ್ಷನ್&zwnj;&rsquo;ಗಳಲ್ಲಿ ರಿಸ್ಕ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳುವ ಫ್ಲೆಕ್ಸಿಬಲಿಟಿ ನೀಡಲಾಗುದೆ.&lt;/p&gt;&lt;p&gt;&lt;strong&gt;ಸಾಲದ ಸೌಲಭ್ಯ ಮತ್ತು ರೈಡರ್ಸ್:&lt;/strong&gt; ತುರ್ತು ಹಣಕಾಸಿನ ಅಗತ್ಯಗಳಿಗಾಗಿ ಈ ಪಾಲಿಸಿಗಳ ಮೇಲೆ ಸಾಲದ ಸೌಲಭ್ಯ ಲಭ್ಯವಿದೆ. ಇದರೊಂದಿಗೆ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ Optional Riders ಪಡೆದು ವಿಮಾ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;ವಿಶೇಷ ರಿಯಾಯಿತಿ (Rebate):&lt;/strong&gt; ಎಲ್&zwnj;ಐಸಿಯ ಪ್ರಸ್ತುತ ಪಾಲಿಸಿದಾರರಿಗೆ ಹಾಗೂ ಮರಣ ಹೊಂದಿದ ಪಾಲಿಸಿದಾರರ ನಾಮಿನಿಗಳು/ಫಲಾನುಭವಿಗಳಿಗೆ ಪ್ರೀಮಿಯಂನಲ್ಲಿ ವಿಶೇಷ ರಿಯಾಯಿತಿ ಸಿಗಲಿದೆ.&lt;/p&gt;&lt;h2&gt;&lt;strong&gt;ಪೇಮೆಂಟ್&zwnj; ಮತ್ತು ಡೆತ್&zwnj; ಬೆನಿಫಿಟ್&zwnj;&lt;/strong&gt;&lt;/h2&gt;&lt;p&gt;&lt;strong&gt;ಮೆಚ್ಯೂರಿಟಿ ಬೆನಿಫಿಟ್ (ಪಾಲಿಸಿ ಅವಧಿ ಮುಕ್ತಾಯದ ಲಾಭ): &lt;/strong&gt;ಪಾಲಿಸಿ ಚಾಲ್ತಿಯಲ್ಲಿದ್ದಾಗ, ಪಾಲಿಸಿಯ ಅವಧಿಯ ಕೊನೆಯಲ್ಲಿ ದಂಪತಿಗಳಲ್ಲಿ ಕನಿಷ್ಠ ಒಬ್ಬರು ಬದುಕುಳಿದಿದ್ದರೂ ಸಹ, ಮೂಲ ವಿಮಾ ಮೊತ್ತದೊಂದಿಗೆ (Basic Sum Assured) ಒಟ್ಟುಗೂಡಿದ ಗ್ಯಾರಂಟಿ ಎಡಿಷನ್&zwnj;ಗಳನ್ನು (Accrued Guaranteed Additions) ಪಾವತಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಡೆತ್ ಬೆನಿಫಿಟ್ (ಮರಣದ ಪ್ರಯೋಜನ):&lt;/strong&gt; ಪಾಲಿಸಿ ಅವಧಿಯಲ್ಲಿ ದಂಪತಿಗಳಲ್ಲಿ ಮೊದಲ ವ್ಯಕ್ತಿ ಮರಣ ಹೊಂದಿದಾಗ 'ಡೆತ್ ಬೆನಿಫಿಟ್ ವಿಮಾ ಮೊತ್ತ'ವನ್ನು ಪಾವತಿಸಲಾಗುತ್ತದೆ. ಅದೇ ಪಾಲಿಸಿ ಅವಧಿಯಲ್ಲಿ ಎರಡನೇ ವ್ಯಕ್ತಿಯೂ ಮರಣ ಹೊಂದಿದರೆ, ಮತ್ತೊಮ್ಮೆ 'ಡೆತ್ ಬೆನಿಫಿಟ್ ವಿಮಾ ಮೊತ್ತ'ದೊಂದಿಗೆ ಒಟ್ಟುಗೂಡಿದ ಗ್ಯಾರಂಟಿ ಎಡಿಷನ್&zwnj;ಗಳನ್ನು ಪಾವತಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಕಂತುಗಳಲ್ಲಿ ಹಣ ಪಡೆಯುವ ಅವಕಾಶ: &lt;/strong&gt;ಪಾಲಿಸಿದಾರರು ತಮ್ಮ ಮೆಚ್ಯೂರಿಟಿ ಅಥವಾ ಡೆತ್ ಬೆನಿಫಿಟ್ ಮೊತ್ತವನ್ನು ಒಟ್ಟಿಗೆ ಪಡೆಯುವ ಬದಲಿಗೆ ಕಂತುಗಳ (Instalments) ರೂಪದಲ್ಲಿ ಪಡೆಯುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.&lt;/p&gt;&lt;h2&gt;&lt;strong&gt;ಎಲ್&zwnj;ಐಸಿ ನ್ಯೂ ಜೀವನ್ ಸಾಥಿ - ಸಿಂಗಲ್ ಪ್ರೀಮಿಯಂ (ಪ್ಲಾನ್ 888) ವಿಶೇಷತೆಗಳು&lt;/strong&gt;&lt;/h2&gt;&lt;p&gt;&lt;strong&gt;ಒಂದೇ ಬಾರಿ ಪ್ರೀಮಿಯಂ:&lt;/strong&gt; ಈ ಯೋಜನೆಯಡಿ ಪ್ರೀಮಿಯಂ ಅನ್ನು ಕೇವಲ ಒಂದು ಬಾರಿ ಮಾತ್ರ ಪಾವತಿಸಬೇಕು (Single Premium).&lt;/p&gt;&lt;p&gt;&lt;strong&gt;ಸ್ಥಿರ ಗ್ಯಾರಂಟಿ ಎಡಿಷನ್: &lt;/strong&gt;ಪಾಲಿಸಿಯ ಸಂಪೂರ್ಣ ಅವಧಿಯುದ್ದಕ್ಕೂ ಪ್ರತಿ ವರ್ಷಕ್ಕೆ, ಪ್ರತಿ ₹1,000 ಮೂಲ ವಿಮಾ ಮೊತ್ತಕ್ಕೆ ₹70 ರ ದರದಲ್ಲಿ ಗ್ಯಾರಂಟಿ ಎಡಿಷನ್&zwnj;ಗಳನ್ನು (Guaranteed Additions) ನೀಡಲಾಗುತ್ತದೆ.&lt;/p&gt;&lt;p&gt;ಪಾಲಿಸಿ ಅವಧಿಯನ್ನು (Policy Term) ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ವಿವಿಧ ಆಯ್ಕೆಗಳು ಲಭ್ಯವಿವೆ.&lt;/p&gt;&lt;h2&gt;&lt;strong&gt;ಎಲ್&zwnj;ಐಸಿ ನ್ಯೂ ಜೀವನ್ ಸಾಥಿ - ಲಿಮಿಟೆಡ್ ಪ್ರೀಮಿಯಂ (ಪ್ಲಾನ್ 889) ವಿಶೇಷತೆಗಳು&lt;/strong&gt;&lt;/h2&gt;&lt;p&gt;&lt;strong&gt;ಸೀಮಿತ ಅವಧಿಯ ಪ್ರೀಮಿಯಂ: &lt;/strong&gt;ಈ ಯೋಜನೆಯಡಿ ಪಾಲಿಸಿದಾರರು ಸೀಮಿತ ಅವಧಿಗೆ ಮಾತ್ರ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಗ್ರಾಹಕರು ಆಯ್ಕೆ ಮಾಡಿಕೊಳ್ಳುವ 10, 15, 20 ಮತ್ತು 25 ವರ್ಷಗಳ ಪಾಲಿಸಿ ಅವಧಿಗೆ ಅನುಗುಣವಾಗಿ, ಪ್ರೀಮಿಯಂ ಪಾವತಿಸುವ ಅವಧಿಯು (Premium Paying Term) 5, 10 ಅಥವಾ 15 ವರ್ಷಗಳಾಗಿರಬಹುದು.&lt;/p&gt;&lt;p&gt;&lt;strong&gt;ಶೇಕಡಾ 7 ರಷ್ಟು ಗ್ಯಾರಂಟಿ ಎಡಿಷನ್: &lt;/strong&gt;ಪಾಲಿಸಿಯ ಇಡೀ ಅವಧಿಯುದ್ದಕ್ಕೂ ಪ್ರತಿ ವರ್ಷ, ಪಾವತಿಸಿದ ಒಟ್ಟು ವಾರ್ಷಿಕ ಪ್ರೀಮಿಯಂನ (Total Tabular Annual Premium) ಶೇ. 7 ರ ದರದಲ್ಲಿ ಗ್ಯಾರಂಟಿ ಎಡಿಷನ್&zwnj;ಗಳನ್ನು ನೀಡಲಾಗುತ್ತದೆ.&lt;/p&gt;&lt;p&gt;&lt;strong&gt;ಪ್ರೀಮಿಯಂ ಮನ್ನಾ ಸೌಲಭ್ಯ: &lt;/strong&gt;ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ದಂಪತಿಗಳಲ್ಲಿ ಮೊದಲ ವ್ಯಕ್ತಿ ಮರಣ ಹೊಂದಿದರೆ, ಉಳಿದ ಅವಧಿಯ ಪ್ರೀಮಿಯಂ ಅನ್ನು ಸಂಪೂರ್ಣವಾಗಿ ಮನ್ನಾ (Premium Waiver Benefit) ಮಾಡಲಾಗುತ್ತದೆ.&lt;/p&gt;&lt;h2&gt;&lt;strong&gt;ಖರೀದಿಸುವುದು ಹೇಗೆ&lt;/strong&gt;&lt;/h2&gt;&lt;p&gt;ಈ ಯೋಜನೆಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ಗ್ರಾಹಕರು ಮಾರಾಟ ಕರಪತ್ರಗಳನ್ನು ಗಮನಿಸಬಹುದು ಅಥವಾ ಎಲ್&zwnj;ಐಸಿಯ ಅಧಿಕೃತ ವೆಬ್&zwnj;ಸೈಟ್&zwnj; (www.licindia.in) ಗೆ ಭೇಟಿ ನೀಡಬಹುದು. ಈ ಯೋಜನೆಗಳನ್ನು ಎಲ್&zwnj;ಐಸಿ ಪರವಾನಗಿ ಪಡೆದ ಏಜೆಂಟರು, ಕಾರ್ಪೊರೇಟ್ ಏಜೆಂಟರು, ಬ್ರೋಕರ್&zwnj;ಗಳು, ಇನ್ಶೂರೆನ್ಸ್ ಮಾರ್ಕೆಟಿಂಗ್ ಸಂಸ್ಥೆಗಳ ಮೂಲಕ ಆಫ್&zwnj;ಲೈನ್ ಆಗಿ ಹಾಗೂ ಎಲ್&zwnj;ಐಸಿ ವೆಬ್&zwnj;ಸೈಟ್ ಮೂಲಕ ನೇರವಾಗಿ ಆನ್&zwnj;ಲೈನ್ ಆಗಿಯೂ ಖರೀದಿಸಬಹುದಾಗಿದೆ. ಗ್ರಾಹಕರು ಈ ಎರಡೂ ಹೊಸ &lsquo;ನ್ಯೂ ಜೀವನ್ ಸಾಥಿ&rsquo; ಯೋಜನೆಗಳನ್ನು ಮುಂಬರುವ 2026 ರ ಜೂನ್ 1 ರಿಂದ ಖರೀದಿಸಲು ಲಭ್ಯವಿರಲಿವೆ ಎಂದು ತಿಳಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/lic-launches-new-jeevan-sathi-joint-life-insurance-plans-888-889-san/articleshow-d3i6x28"/>
        </item>
        <item>
            <title><![CDATA[80ರ ಹರೆಯದಲ್ಲಿ ಐಸ್‌ಕ್ರೀಂ ಉದ್ಯಮ ಕಟ್ಟಿ ಯಶಸ್ವಿಯಾದ ಅಜ್ಜಿ, ಉದ್ಯಮಿಯಾಗಲು ವಯಸ್ಸು ಬೇಕಿಲ್ಲ]]></title>
            <link>https://kannada.asianetnews.com/business/age-is-just-a-number-80-year-old-ahmedabad-woman-finds-success-in-ice-cream-business/articleshow-d524h2b</link>
            <guid isPermaLink="true">https://kannada.asianetnews.com/business/age-is-just-a-number-80-year-old-ahmedabad-woman-finds-success-in-ice-cream-business/articleshow-d524h2b</guid>
            <pubDate>Sun, 24 May 2026 17:08:36 +0530</pubDate>
            <description><![CDATA[&lt;p&gt;80ರ ಹರೆಯದ ಅಜ್ಜಿಯ ಐಸ್&zwnj;ಕ್ರೀಂ ಉದ್ಯಮ ಇದೀಗ ಭಾರಿ ಸದ್ದು ಮಾಡುತ್ತಿದೆ. ಹೋಮ್&zwnj;ಮೇಡ್ ಐಸ್&zwnj;ಕ್ರೀಂ ಇದೀಗ ಮಳಿಗೆ ರೂಪದಲ್ಲಿ ವಿಸ್ತರಣೆಗೊಂಡಿದೆ. ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ವಯಸ್ಸು ಲೆಕ್ಕಕ್ಕಿಲ್ಲ ಅನ್ನೋದು ಸಾಬೀತಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kscwdr39mkxqweprcbakarw3,imgname-grandmother-builds-successful-ice-cream-business-1779622666344.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಹಮ್ಮದಾಬಾದ್ (ಮೇ.24) &lt;/strong&gt;ಬದಲಾಗುತ್ತಿರುವ ವ್ಯವಸ್ಥೆ, ಎಐ ಆತಂಕ,ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಹಲವರು ಸ್ವಂತ ಉದ್ಯಮದತ್ತ ಚಿತ್ತ ಹರಿಸುತ್ತಿದ್ದಾರೆ. ಇದರ ನಡುವೆ ಹಲವರು ವಯಸ್ಸು ಮೀರಿದೆ, ಬಂಡವಾಳದ ಕೊರತೆ ಸೇರಿದಂತೆ ಹಲವು ಕಾರಣ ನೀಡಿ ಹಿಂದೇಟು ಹಾಕುತ್ತಾರೆ. ಆದರೆ ಇಲ್ಲೊಬ್ಬ ಅಜ್ಜಿ 80 ಹರೆಯದಲ್ಲಿ ಐಸ್&zwnj;ಕ್ರೀಂ ಉದ್ಯಮದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಹೋಮ್&zwnj;ಮೇಡ್, ನೈಸರ್ಗಿಕ ಐಸ್&zwnj;ಕ್ರೀಮ್&zwnj;ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಉದ್ಯಮ ಭರ್ಜರಿ ಯಶಸ್ಸು ಕಂಡಿದೆ.&lt;/p&gt;&lt;h2&gt;ಕಳದ ನಾಲ್ಕು ದಶಕಗಳ ಪರಿಶ್ರಮ&lt;/h2&gt;&lt;p&gt;ಅಹಮ್ಮದಬಾದ್ ಮೂಲದ 80 ಹರೆಯದ ನೀರುಬೆನ್ (ನಿರಂಜನ ದೇಸಾಯಿ) ಭಾರಿ ಜನಪ್ರಿಯರಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ನೈಸರ್ಗಿಕ, ಯಾವುದೇ ರಾಸಾಯನಿಕ, ಬಣ್ಣಗಳನ್ನು ಬಳಸದೆ, ಹಣ್ಣು, ಡ್ರೈಫ್ರೂಟ್ಸ್ , ಹಾಲು ಸೇರಿದಂತೆ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಐಸ್&zwnj;ಕ್ರೀಂ ಉದ್ಯಮ ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಾಗಿ ಬಂದಿದೆ. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಎಲ್ಲರೂ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅಜ್ಜಿಯ ಹೋಮ್&zwnj;ಮೇಡ್ ಐಸ್&zwnj;ಕ್ರೀಂ ಭಾರಿ ಬೇಡಿಕೆ ಪಡೆದುಕೊಂಡಿದೆ.&lt;/p&gt;&lt;h2&gt;ಅತ್ಯಂತ ಸ್ವಾದ ಹಾಗೂ ರುಚಿಕರ ಐಸ್&zwnj;ಕ್ರೀಂ&lt;/h2&gt;&lt;p&gt;ಅಜ್ಜಿ ತನಗೆ ಯಾವುದೇ ಲಾಭ ಇಟ್ಟುಕೊಳ್ಳದೆ ಮಾರುಕಟ್ಟೆಯ ಪೈಪೋಟಿ ದರಕ್ಕೆ ಐಸ್&zwnj;ಕ್ರೀಂ ಮಾರಾಟ ಮಾಡುತ್ತಿದ್ದರು. ಮನೆಯಲ್ಲಿ ತಯಾರಿಸಿ ಐಸ್&zwnj;ಕ್ರೀಂ ಮಾರಾಟ ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಅತೀ ಕಡಿಮೆ ದರಕ್ಕೆ ಐಸ್&zwnj;ಕ್ರೀಂ ಲಭ್ಯವಾಗಾಗುತ್ತಿದ್ದ ಸಂದರ್ಭದಲ್ಲೇ ನಿರುಬೆನ್ ಅದೇ ಪೈಪೋಟಿ ದರಕ್ಕೆ ಅತ್ಯುತ್ತಮ ಐಸ್&zwnj;ಕ್ರೀಂ ಮಾರಾಟ ಮಾಡುತ್ತಾ ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ನಿರುಬೆನ್ ಐಸ್&zwnj;ಕ್ರೀಂಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದೀಗ ಮಳಿಗೆಯೂ ತೆರೆದಿದ್ದು, ಹಲವು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.&lt;/p&gt;&lt;p&gt;ವಿಶೇಷ ಅಂದರೆ ಪ್ರತಿ ದಿನ ನಿರುಬೆನ್ ತಾವೇ ಕೈಯಾರೆ ಐಸ್&zwnj;ಕ್ರೀಂ ತಯಾರಿಸುತ್ತಾರೆ. ಐಸ್&zwnj;ಕ್ರೀಂ ತಯಾರಿಕೆ ಜವಾಬ್ದಾರಿ ಬೇರೆ ಯಾರಿಗೂ ನೀಡಿಲ್ಲ. ಕಾರಣ ಅದೇ ಸ್ವಾದ, ಅದೇ ರುಚಿಕರ ಐಸ್&zwnj;ಕ್ರೀಂ ತಯಾರಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಗ್ರಾಹಕರು ದೂರಸರಿಯುತ್ತಾರೆ ಅನ್ನೋ ಕಾರಣಕ್ಕೆ ನಿರುಬೆನ್ ಸ್ವತಃ ತಾವೆ ಐಸ್&zwnj;ಕ್ರೀಂ ತಯಾರಿಸುತ್ತಾರೆ.&lt;/p&gt;&lt;p&gt;80ನೇ ವಯಸ್ಸಿನ ನಿರುಬೆನ್ ಸದ್ಯ ಅಹಮ್ಮದಾಬಾದ್&zwnj;ನ ಯಶಸ್ವಿ ಉದ್ಯಮಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣ ಐಸ್&zwnj;ಕ್ರೀಂ ಉದ್ಯಮ ಇದೀಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/business/age-is-just-a-number-80-year-old-ahmedabad-woman-finds-success-in-ice-cream-business/articleshow-d524h2b"/>
        </item>
        <item>
            <title><![CDATA[ಓಲಾ, ಉಬರ್‌ಗೆ ಇವಿ ದೈತ್ಯ ವಿನ್‌ಫಾಸ್ಟ್ ಟಕ್ಕರ್: ಭಾರತದಲ್ಲಿ ಲಾಂಚ್ ಆಗ್ತಿದೆ ‘ಗ್ರೀನ್ ಎಸ್‌ಎಂ’ ಎಲೆಕ್ಟ್ರಿಕ್ ಟ್ಯಾಕ್ಸಿ!]]></title>
            <link>https://kannada.asianetnews.com/business/vinfast-green-sm-electric-taxi-launch-india-ola-uber-competitor-san/articleshow-diakwor</link>
            <guid isPermaLink="true">https://kannada.asianetnews.com/business/vinfast-green-sm-electric-taxi-launch-india-ola-uber-competitor-san/articleshow-diakwor</guid>
            <pubDate>Tue, 26 May 2026 16:04:38 +0530</pubDate>
            <description><![CDATA[ವಿಯೆಟ್ನಾಂನ 'ವಿನ್&zwnj;ಫಾಸ್ಟ್' ಕಂಪನಿಯು 'ಗ್ರೀನ್ ಎಸ್&zwnj;ಎಂ' ಹೆಸರಿನಲ್ಲಿ ಭಾರತದಲ್ಲಿ ತನ್ನದೇ ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯನ್ನು ಆರಂಭಿಸುತ್ತಿದೆ. ಕಂಪನಿಯೇ ನಿರ್ವಹಿಸುವ ಈ ಸೇವೆಯು ದೆಹಲಿ-ಎನ್&zwnj;ಸಿಆರ್&zwnj;ನಿಂದ ಆರಂಭವಾಗಿ, ಓಲಾ-ಉಬರ್&zwnj;ಗೆ ಪೈಪೋಟಿ ನೀಡಲು ಆಕ್ರಮಣಕಾರಿ ದರ ನಿಗದಿಪಡಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kshx9510vx2w9mk33c0mksr2,imgname-green-sm-vinfast-1779791336480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.26):&lt;/strong&gt; ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಇತ್ತೀಚೆಗಷ್ಟೇ ಕಾಲಿಟ್ಟಿರುವ ವಿಯೆಟ್ನಾಂನ ಪ್ರಮುಖ ಎಲೆಕ್ಟ್ರಿಕ್ ವಾಹನ (EV) ತಯಾರಿಕಾ ಸಂಸ್ಥೆ &lsquo;ವಿನ್&zwnj;ಫಾಸ್ಟ್&rsquo;, ದೇಶದ ಸಾರಿಗೆ ರಂಗದಲ್ಲಿ ಭಾರಿ ಸಂಚಲನ ಮೂಡಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಸಾಮಾನ್ಯ ಪ್ರಯಾಣಿಕ ವಾಹನಗಳ ಲಾಂಚ್&zwnj;ಗಿಂತ ಭಿನ್ನವಾಗಿ, ಕಂಪನಿಯು ಭಾರತದ ಅತ್ಯಂತ ಹೆಚ್ಚು ಬೇಡಿಕೆಯಿರುವ ಪಬ್ಲಿಕ್ ಕಮರ್ಷಿಯಲ್ ವಲಯಕ್ಕೆ ಲಗ್ಗೆ ಇಡುತ್ತಿದ್ದು, ತನ್ನದೇ ಆದ ಬ್ಯಾಕಿಂಗ್ ಹೊಂದಿರುವ &lsquo;ಗ್ರೀನ್ ಎಸ್&zwnj;ಎಂ&rsquo; (Green SM - Green and Smart Mobility) ಎಲೆಕ್ಟ್ರಿಕ್ ಟ್ಯಾಕ್ಸಿ ಸೇವೆಯನ್ನು ದೇಶದಲ್ಲಿ ಆರಂಭಿಸುತ್ತಿದೆ.&lt;/p&gt;&lt;p&gt;ಮೊದಲ ಹಂತದಲ್ಲಿ ದೆಹಲಿ-ಎನ್&zwnj;ಸಿಆರ್ (Delhi-NCR) ಪ್ರಾಂತ್ಯದಲ್ಲಿ ಈ ಎಲೆಕ್ಟ್ರಿಕ್ ಕ್ಯಾಬ್ ಸೇವೆ ಆರಂಭವಾಗಲಿದ್ದು, ತದನಂತರ ಬೆಂಗಳೂರು ಮತ್ತು ಹೈದರಾಬಾದ್&zwnj;ನಂತಹ ಪ್ರಮುಖ ಮೆಟ್ರೋ ನಗರಗಳಿಗೆ ವಿಸ್ತರಣೆಯಾಗಲಿದೆ. ಆರಂಭದಲ್ಲಿ 1,000 ಎಲೆಕ್ಟ್ರಿಕ್ ಕ್ಯಾಬ್&zwnj;ಗಳನ್ನು ರಸ್ತೆಗಿಳಿಸಲಿರುವ ಸಂಸ್ಥೆ, 2026ರ ವರ್ಷಾಂತ್ಯದ ವೇಳೆಗೆ ಈ ಸಂಖ್ಯೆಯನ್ನು ಬಾರೋಬ್ಬರಿ 15,000ಕ್ಕೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ.&lt;/p&gt;&lt;h2&gt;&lt;strong&gt;ಕಂಪನಿಯೇ ನಿರ್ವಹಿಸುವ ಸ್ವಂತ ನೆಟ್&zwnj;ವರ್ಕ್ (Company-Owned Model)&lt;/strong&gt;&lt;/h2&gt;&lt;p&gt;ವಿಯೆಟ್ನಾಂನ ದೈತ್ಯ &lsquo;ವಿನ್&zwnj;ಗ್ರೂಪ್&rsquo; (Vingroup) ಕಂಪನಿಯ ಭಾಗವಾಗಿರುವ &lsquo;ಗ್ರೀನ್ ಎಸ್&zwnj;ಎಂ&rsquo;, ಓಲಾ ಅಥವಾ ಉಬರ್&zwnj;ನಂತೆ ಕೇವಲ ಒಂದು ಅಪ್ಲಿಕೇಶನ್ ಅಗ್ರಿಗೇಟರ್ ಆಗಿ ಕೆಲಸ ಮಾಡುವುದಿಲ್ಲ. ಬದಲಿಗೆ, ಭಾರತದಲ್ಲಿ ಇದು ಸಂಪೂರ್ಣವಾಗಿ ಕಂಪನಿಯ ಒಡೆತನದ ಮತ್ತು ಕಂಪನಿಯೇ ನಿರ್ವಹಿಸುವ (Fleet-owned &amp;amp; Company-managed) ಮಾದರಿಯಾಗಿರಲಿದೆ. ಇದರಿಂದ ಕಾರುಗಳ ಗುಣಮಟ್ಟ, ಚಾಲಕರ ವರ್ತನೆ, ಚಾರ್ಜಿಂಗ್ ಶಿಸ್ತು ಮತ್ತು ವಾಹನಗಳ ನಿರ್ವಹಣೆಯನ್ನು ಸಂಸ್ಥೆಯು ಕಟ್ಟುನಿಟ್ಟಾಗಿ ನಿಯಂತ್ರಿಸಬಹುದು. ಪ್ರಯಾಣಿಕರಿಗೆ ಸುಲಭ, ಆರಾಮದಾಯಕ ಮತ್ತು ಪರಿಸರ ಸ್ನೇಹಿ ಪ್ರಯಾಣದ ಅನುಭವ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;h2&gt;&lt;strong&gt;ಲೈಮ್&zwnj;ಲೈಟ್&zwnj;ಗೆ ಬರಲಿದೆ &lsquo;ಲಿಮೋ ಗ್ರೀನ್&rsquo; ಎಂಪಿವಿ (Limo Green EV)&lt;/strong&gt;&lt;/h2&gt;&lt;p&gt;ಭಾರತೀಯ ಟ್ಯಾಕ್ಸಿ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ವಿನ್&zwnj;ಫಾಸ್ಟ್ ಸಂಸ್ಥೆಯು ತನ್ನ &lsquo;ಲಿಮೋ ಗ್ರೀನ್&rsquo; (VinFast Limo Green) ಎಲೆಕ್ಟ್ರಿಕ್ ಕಾರನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಈಗಾಗಲೇ ಭಾರತದ ರಸ್ತೆಗಳಲ್ಲಿ ಪರೀಕ್ಷಾರ್ಥ ಸಂಚಾರ (Testing) ನಡೆಸುತ್ತಿರುವ ಈ ಕಾರು, ನಗರ ಪ್ರದೇಶಗಳ ಸಾರ್ವಜನಿಕ ಬಳಕೆಗೆ ಸೂಕ್ತವಾದ ವಿಶಾಲವಾದ ಕ್ಯಾಬಿನ್ ಸ್ಪೇಸ್, ಕಡಿಮೆ ರನ್ನಿಂಗ್ ವೆಚ್ಚ, ಅತ್ಯುತ್ತಮ ರೇರ್-ಸೀಟ್ ಕಂಫರ್ಟ್, ಬಲಿಷ್ಠ ಎಸಿ ಮತ್ತು ಸ್ಥಿರವಾದ ಮೈಲೇಜ್ (Range) ನೀಡುವ ಸಾಮರ್ಥ್ಯ ಹೊಂದಿದೆ. ಭಾರತದ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ಎಂಪಿವಿ (MPV) ಕಾರುಗಳಿಗೆ ಭಾರಿ ಬೇಡಿಕೆಯಿರುವುದರಿಂದ ಬಿವೈಡಿ ಇಮ್ಯಾಕ್ಸ್ 7 (BYD eMax 7) ನಂತಹ ಕಾರುಗಳಿಗೆ ಇದು ನೇರ ಪೈಪೋಟಿ ನೀಡಲಿದೆ.&lt;/p&gt;&lt;h2&gt;&lt;strong&gt;ಪ್ರತಿ ಕಿಲೋಮೀಟರ್&zwnj;ಗೆ ₹8 ದರ!: ಓಲಾ-ಉಬರ್&zwnj;ಗೆ ನೇರ ಸವಾಲು&lt;/strong&gt;&lt;/h2&gt;&lt;p&gt;ಅಚ್ಚರಿಯ ಇನ್ನೊಂದು ಸಂಗತಿ ಏನೆಂದರೆ, &lsquo;ಗ್ರೀನ್ ಎಸ್&zwnj;ಎಂ&rsquo; ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಪ್ರತಿ ಕಿಲೋಮೀಟರ್&zwnj;ಗೆ ಕೇವಲ ₹8 ರಷ್ಟು ಆಕ್ರಮಣಕಾರಿ ದರವನ್ನು ನಿಗದಿಪಡಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಭಾರತದ ಇವಿ ಟ್ಯಾಕ್ಸಿ ರಂಗದಲ್ಲಿ ಮುಂಚೂಣಿಯಲ್ಲಿದ್ದ &lsquo;ಬ್ಲೂಸ್ಮಾರ್ಟ್&rsquo; (BluSmart) ಸಂಸ್ಥೆಯು ಆಂತರಿಕ ಕಾರ್ಯಾಚರಣೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಸೃಷ್ಟಿಯಾಗಿರುವ ದೊಡ್ಡ ಪಲ್ಲಟವನ್ನು ತನ್ನದಾಗಿಸಿಕೊಳ್ಳಲು ವಿನ್&zwnj;ಫಾಸ್ಟ್ ಮುಂದಾಗಿದೆ. ನಿರಂತರ ಬೆಲೆ ಏರಿಕೆ (Surge Pricing), ಪದೇ ಪದೇ ರೈಡ್ ಕ್ಯಾನ್ಸಲ್ ಆಗುವ ಕಿರಿಕಿರಿ ಹಾಗೂ ಕಳಪೆ ವಾಹನಗಳಿಂದ ಬೇಸತ್ತಿರುವ ನಗರ ಪ್ರದೇಶದ ಜನರಿಗೆ ಸ್ಥಿರ ಸಂಬಳದ ಚಾಲಕರು ಮತ್ತು ಅತ್ಯಾಧುನಿಕ ಕ್ಲೀನ್ ಕಾರುಗಳಿರುವ ಈ ವ್ಯವಸ್ಥೆ ದೊಡ್ಡ ರಿಲೀಫ್ ನೀಡಲಿದೆ.&lt;/p&gt;&lt;h2&gt;&lt;strong&gt;ಇದು ಬ್ರ್ಯಾಂಡ್ ಬಿಲ್ಡಿಂಗ್ ಮಾಸ್ಟರ್ ಸ್ಟ್ರೋಕ್!&lt;/strong&gt;&lt;/h2&gt;&lt;p&gt;ಭಾರತದಲ್ಲಿ ಹೊಸದಾಗಿ ಕಾರು ಲಾಂಚ್ ಮಾಡುವ ಕಂಪನಿಗಳಿಗೆ ಗ್ರಾಹಕರಲ್ಲಿ ನಂಬಿಕೆ ಮತ್ತು ಜಾಗೃತಿ ಮೂಡಿಸುವುದು ದೊಡ್ಡ ಸವಾಲಾಗಿರುತ್ತದೆ. ಆದರೆ ಟ್ಯಾಕ್ಸಿಗಳ ಮೂಲಕ ಸಾವಿರಾರು ಜನ ದಿನನಿತ್ಯ ಈ ಕಾರಿನಲ್ಲಿ ಪ್ರಯಾಣಿಸುವುದರಿಂದ, ವಿನ್&zwnj;ಫಾಸ್ಟ್ ಕಾರುಗಳ ಗುಣಮಟ್ಟ ಮತ್ತು ತಂತ್ರಜ್ಞಾನ ಜನರಿಗೆ ನೇರವಾಗಿ ಪರಿಚಯವಾಗುತ್ತದೆ. ಇದು ಮುಂದೆ ಕಂಪನಿಯ ವೈಯಕ್ತಿಕ ಕಾರುಗಳ ಮಾರಾಟಕ್ಕೂ (VF 6 ಮತ್ತು VF 7 ಮಾಡೆಲ್&zwnj;ಗಳು) ಭಾರಿ ನೆರವಾಗಲಿದೆ.&lt;/p&gt;&lt;h2&gt;&lt;strong&gt;ತಮಿಳುನಾಡಿನ ಮ್ಯಾನುಫ್ಯಾಕ್ಚರಿಂಗ್ ಹಬ್ ಮತ್ತು ಚಾರ್ಜಿಂಗ್ ನೆಟ್&zwnj;ವರ್ಕ್&lt;/strong&gt;&lt;/h2&gt;&lt;p&gt;ವಿನ್&zwnj;ಫಾಸ್ಟ್ ಸಂಸ್ಥೆಯು ಈಗಾಗಲೇ ತಮಿಳುನಾಡಿನ ತೂತುಕುಡಿಯಲ್ಲಿ (Thoothukudi) ತನ್ನ ಮೊದಲ ವಿದೇಶಿ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಆರಂಭದಲ್ಲಿ ವಾರ್ಷಿಕ 50,000 ಇವಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಈ ಪ್ಲಾಂಟ್ ಅನ್ನು 1.5 ಲಕ್ಷ ಯುನಿಟ್&zwnj;ಗಳವರೆಗೆ ವಿಸ್ತರಿಸಬಹುದಾಗಿದೆ. ಟ್ಯಾಕ್ಸಿ ಉದ್ಯಮಕ್ಕೆ ದೊಡ್ಡ ಪ್ರಮಾಣದ ಕಾರುಗಳನ್ನು ಈ ಪ್ಲಾಂಟ್ ಪೂರೈಸಲಿದೆ. ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ ವಿನ್&zwnj;ಫಾಸ್ಟ್&zwnj;ನ ಚಾರ್ಜಿಂಗ್ ಅಂಗಸಂಸ್ಥೆಯಾದ &lsquo;ವಿ-ಗ್ರೀನ್&rsquo; (V-GREEN), ಈಗಾಗಲೇ ದೇಶಾದ್ಯಂತ ಇರುವ ಹೆಚ್&zwnj;ಪಿಸಿಎಲ್ (HPCL) ಇಂಧನ ತುಂಬುವ ಕೇಂದ್ರಗಳಲ್ಲಿ ಇವಿ ಚಾರ್ಜರ್&zwnj;ಗಳನ್ನು ಅಳವಡಿಸಲು ಒಪ್ಪಂದ ಮಾಡಿಕೊಂಡಿದೆ. ಇದು ಟ್ಯಾಕ್ಸಿಗಳು ತ್ವರಿತವಾಗಿ ಚಾರ್ಜ್ ಆಗಲು ಬ್ಯಾಕ್&zwnj;ಬೋನ್ ಆಗಿ ಕೆಲಸ ಮಾಡಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/vinfast-green-sm-electric-taxi-launch-india-ola-uber-competitor-san/articleshow-diakwor"/>
        </item>
        <item>
            <title><![CDATA[10 ವರ್ಷದ ಉದ್ಯೋಗ ಪೂರೈಸಿಲ್ವೇ? ಚಿಂತೆ ಬೇಡ: ಈ ಸರಳ ವಿಧಾನದ ಮೂಲಕ EPS ಪಿಂಚಣಿಯ ಅಷ್ಟೂ ಹಣ ವಾಪಾಸ್‌ ಪಡೆಯಿರಿ]]></title>
            <link>https://kannada.asianetnews.com/business/how-to-withdraw-eps-pension-fund-using-epfo-form-10c-less-than-10-years-service-san/articleshow-ic4way0</link>
            <guid isPermaLink="true">https://kannada.asianetnews.com/business/how-to-withdraw-eps-pension-fund-using-epfo-form-10c-less-than-10-years-service-san/articleshow-ic4way0</guid>
            <pubDate>Fri, 29 May 2026 20:55:51 +0530</pubDate>
            <description><![CDATA[10 ವರ್ಷಗಳ ಸೇವೆ ಪೂರ್ಣಗೊಳ್ಳದಿದ್ದರೂ, ನೌಕರರು ಇಪಿಎಫ್&zwnj;ಒ 'ಫಾರ್ಮ್ 10ಸಿ' ಬಳಸಿ ತಮ್ಮ ಪೆನ್ಷನ್ ಖಾತೆಯಲ್ಲಿನ ಸಂಪೂರ್ಣ ಹಣವನ್ನು ಹಿಂಪಡೆಯಬಹುದು. ಈ ಲೇಖನವು ಆನ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸುವ ವಿಧಾನ, ಬೇಕಾಗುವ ದಾಖಲೆಗಳು ಮತ್ತು ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr83gtykfs8ybnzm5r9dpc1m,imgname-epfo-3-0-upi-atm-pf-withdrawal-auto-claim-settlement-subscribers-india-2026-4-1778388593619.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.29): &lt;/strong&gt;ನಿಮ್ಮ ಖಾಸಗಿ ಅಥವಾ ಸರ್ಕಾರಿ ಉದ್ಯೋಗದ ಅವಧಿ ಇನ್ನೂ 10 ವರ್ಷ ಪೂರ್ಣಗೊಂಡಿಲ್ಲ ಮತ್ತು ನಿಮ್ಮ ಪೆನ್ಷನ್ (ನಿವೃತ್ತಿ ವೇತನ) ಹಣ ಸಿಗುವುದಿಲ್ಲ ಎಂದು ನೀವು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಇಲ್ಲಿದೆ ಒಂದು ಉಪಯುಕ್ತ ಮಾಹಿತಿ. ನಿಮ್ಮ ಉದ್ಯೋಗಾವಧಿ 10 ವರ್ಷಕ್ಕಿಂತ ಕಡಿಮೆ ಇದ್ದರೂ ಸಹ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) &lsquo;ಫಾರ್ಮ್ 10ಸಿ&rsquo; (Form 10C) ಬಳಸಿ ನಿಮ್ಮ ಪೆನ್ಷನ್ ಖಾತೆಯಲ್ಲಿ ಜಮೆ ಆಗಿರುವ ಸಂಪೂರ್ಣ ಹಣವನ್ನು ನೀವು ಸುಲಭವಾಗಿ ಹಿಂಪಡೆಯಬಹುದು. ಇದಕ್ಕೆ ಬೇಕಾಗುವ ದಾಖಲೆಗಳು ಯಾವುವು ಮತ್ತು ಆನ್&zwnj;ಲೈನ್&zwnj;ನಲ್ಲಿ ಕ್ಲೈಮ್ ಮಾಡುವುದು ಹೇಗೆ? ಅನ್ನೋ ವಿವರ ಇಲ್ಲಿದೆ.&lt;/p&gt;&lt;p&gt;ಹಲವಾರು ಉದ್ಯೋಗಿಗಳಲ್ಲಿ 10 ವರ್ಷಗಳ ಕನಿಷ್ಠ ಸೇವೆ ಪೂರ್ಣಗೊಳ್ಳದ ಹೊರತು ಇಪಿಎಸ್ (EPS) ನಿಧಿಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಇಪಿಎಫ್&zwnj;ಒ ನಿಯಮಗಳ ಪ್ರಕಾರ, ಕಡಿಮೆ ಅವಧಿಯಲ್ಲಿ ಉದ್ಯೋಗ ತೊರೆದರೂ ಸಹ ಉದ್ಯೋಗಿಗಳು &lsquo;ಫಾರ್ಮ್ 10ಸಿ&rsquo; ಮೂಲಕ ತಮ್ಮ ಪೆನ್ಷನ್ ನಿಧಿಯ ಸಂಪೂರ್ಣ ಸೆಟಲ್ಮೆಂಟ್ ಮಾಡಿಕೊಳ್ಳಬಹುದು. ಕೆಲವೇ ನಿಮಿಷಗಳಲ್ಲಿ ಆನ್&zwnj;ಲೈನ್&zwnj;ನಲ್ಲಿ ಕ್ಲೈಮ್ ಸಲ್ಲಿಸಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪಡೆಯುವ ಸಂಪೂರ್ಣ ಪ್ರಕ್ರಿಯೆ ಇಲ್ಲಿದೆ.&lt;/p&gt;&lt;h2&gt;&lt;strong&gt;ಇಪಿಎಫ್&zwnj;ಒ &lsquo;ಫಾರ್ಮ್ 10ಸಿ&rsquo; (Form 10C) ಎಂದರೇನು?&lt;/strong&gt;&lt;/h2&gt;&lt;p&gt;ಉದ್ಯೋಗಿಯೊಬ್ಬರ ಇಪಿಎಫ್ ಖಾತೆಗೆ ಕಂಪನಿಯು ನೀಡುವ ಶೇಕಡಾ 12 ರಷ್ಟು ಕೊಡುಗೆಯಲ್ಲಿ, ಶೇಕಡಾ 8.33 ರಷ್ಟು ಭಾಗವು ನೌಕರರ ಪೆನ್ಷನ್ ಯೋಜನೆಗೆ (EPS) ಜಮೆಯಾಗುತ್ತದೆ. ನಿಯಮಗಳ ಪ್ರಕಾರ, 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸದ ನೌಕರರು ಮಾಸಿಕ ಪೆನ್ಷನ್ ಪಡೆಯಲು ಅರ್ಹರಾಗಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೌಕರರು ಉದ್ಯೋಗ ಬದಲಾಯಿಸುವಾಗ ತಮ್ಮ ಜಮೆಯಾಗಿರುವ ಪೆನ್ಷನ್ ಫಂಡ್ ಅನ್ನು ಹಿಂಪಡೆಯಲು ಅಥವಾ &lsquo;ಸ್ಕೀಮ್ ಸರ್ಟಿಫಿಕೇಟ್&rsquo; (Scheme Certificate) ಮೂಲಕ ಅದನ್ನು ಮುಂದಿನ ಕಂಪನಿಯ ಖಾತೆಗೆ ವರ್ಗಾಯಿಸಲು ಇಪಿಎಫ್&zwnj;ಒ ಈ &lsquo;ಫಾರ್ಮ್ 10ಸಿ&rsquo; ಅನ್ನು ಪರಿಚಯಿಸಿದೆ. ಉದ್ಯೋಗ ಕಳೆದುಕೊಂಡು 2 ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿರುವಾಗ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳಲ್ಲೂ ಇದರ ಪ್ರಯೋಜನ ಪಡೆಯಬಹುದು.&lt;/p&gt;&lt;h3&gt;&lt;strong&gt;ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?&lt;/strong&gt;&lt;/h3&gt;&lt;ul&gt; &lt;li&gt;10 ವರ್ಷಗಳ ಸೇವಾ ಅವಧಿಗಿಂತ ಮುನ್ನವೇ ನಿವೃತ್ತರಾದವರು ಅಥವಾ ಉದ್ಯೋಗ ತೊರೆದವರು.&lt;/li&gt; &lt;li&gt;58 ವರ್ಷ ವಯಸ್ಸು ಪೂರ್ಣಗೊಂಡಿರುವ ನೌಕರರು.&lt;/li&gt; &lt;li&gt;10 ವರ್ಷಗಳ ಸೇವೆ ಪೂರ್ಣಗೊಂಡಿದ್ದರೂ, ಪ್ರಸ್ತುತ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವವರು ಈ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಬಹುದು.&lt;/li&gt;&lt;/ul&gt;&lt;h3&gt;&lt;strong&gt;ಅಗತ್ಯವಿರುವ ದಾಖಲೆಗಳು ಮತ್ತು ವಿವರಗಳು&lt;/strong&gt;&lt;/h3&gt;&lt;ul&gt; &lt;li&gt;ಆನ್&zwnj;ಲೈನ್ ಅಥವಾ ಆಫ್&zwnj;ಲೈನ್&zwnj;ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಪ್ರಮುಖ ಮಾಹಿತಿ ಹಾಗೂ ದಾಖಲೆಗಳು ಅಗತ್ಯವಾಗಿವೆ:&lt;/li&gt; &lt;li&gt;ಯುಎನ್ (UAN - ಸಾರ್ವತ್ರಿಕ ಖಾತೆ ಸಂಖ್ಯೆ)&lt;/li&gt; &lt;li&gt;ಪ್ಯಾನ್ ಕಾರ್ಡ್ (PAN Card)&lt;/li&gt; &lt;li&gt;ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಪ್ರಸ್ತುತ ವಿಳಾಸ (Address)&lt;/li&gt; &lt;li&gt;ಬ್ಯಾಂಕ್ ಪರಿಶೀಲನೆಗಾಗಿ ಹೆಸರಿರುವ ರದ್ದಾದ ಚೆಕ್ ಲೀಫ್ (Cancelled Cheque)&lt;/li&gt; &lt;li&gt;ಸ್ಕೀಮ್ ಸರ್ಟಿಫಿಕೇಟ್ ಪಡೆಯಲು ಮಕ್ಕಳ ಜನ್ಮ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)&lt;/li&gt; &lt;li&gt;ಆಫ್&zwnj;ಲೈನ್ ಅರ್ಜಿಯಾಗಿದ್ದರೆ 1 ರೂಪಾಯಿಯ ರೆವೆನ್ಯೂ ಸ್ಟ್ಯಾಂಪ್ (ಕಂದಾಯ ಚೀಟಿ) ಕಡ್ಡಾಯ.&lt;/li&gt; &lt;li&gt;ಒಂದು ವೇಳೆ ಸದಸ್ಯರು ಮೃತಪಟ್ಟಿದ್ದರೆ ಅವರ ಮರಣ ಪ್ರಮಾಣಪತ್ರ (Death Certificate) ಅಗತ್ಯವಿರುತ್ತದೆ.&lt;/li&gt;&lt;/ul&gt;&lt;h3&gt;&lt;strong&gt;ಆನ್&zwnj;ಲೈನ್&zwnj;ನಲ್ಲಿ ಫಾರ್ಮ್ ತುಂಬುವ ಸರಳ ವಿಧಾನ&lt;/strong&gt;&lt;/h3&gt;&lt;p&gt;ಇಪಿಎಫ್&zwnj;ಒ ಸಂಸ್ಥೆಯ ಅಧಿಕೃತ ಇ-ಸರ್ವೀಸ್ ಪೋರ್ಟಲ್ https://unifiedportal-mem.epfindia.gov.in/memberinterface/ ಗೆ ಭೇಟಿ ನೀಡುವ ಮೂಲಕ ನೀವು ಸುಲಭವಾಗಿ ಆನ್&zwnj;ಲೈನ್ ಅರ್ಜಿ ಸಲ್ಲಿಸಬಹುದು:&lt;/p&gt;&lt;ul&gt; &lt;li&gt;ಪ್ರಥಮವಾಗಿ ನಿಮ್ಮ UAN ಮತ್ತು ಪಾಸ್&zwnj;ವರ್ಡ್ ಬಳಸಿ ಪೋರ್ಟಲ್&zwnj;ಗೆ ಲಾಗ್ ಇನ್ ಆಗಿ.&lt;/li&gt; &lt;li&gt;ಬಳಿಕ ಮೆನುವಿನಲ್ಲಿರುವ 'Online Services' ಆಯ್ಕೆಗೆ ಹೋಗಿ, ಅಲ್ಲಿ 'Claim Form-31, 19, 10C &amp;amp; 10D' ಅನ್ನು ಆಯ್ಕೆ ಮಾಡಿ.&lt;/li&gt; &lt;li&gt;ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿದ (Verify) ನಂತರ, 'Proceed for Online Claim' ಮೇಲೆ ಕ್ಲಿಕ್ ಮಾಡಿ.&lt;/li&gt; &lt;li&gt;ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ 'Form 10C' (Only Pension Withdrawal) ಅನ್ನು ಆಯ್ದುಕೊಳ್ಳಿ.&lt;/li&gt; &lt;li&gt;ಕೊನೆಯದಾಗಿ, ನಿಮ್ಮ ಆಧಾರ್ ಕಾರ್ಡ್&zwnj;ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಸಬ್ಮಿಟ್ ಮಾಡಿದರೆ ನಿಮ್ಮ ಕ್ಲೈಮ್ ಯಶಸ್ವಿಯಾಗಿ ದಾಖಲಾಗುತ್ತದೆ.&lt;/li&gt;&lt;/ul&gt;&lt;p&gt;(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ಪರಿಹಾರಗಳು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ಅಥವಾ ಯಾವುದೇ ಹೂಡಿಕೆ/ಹಿಂಪಡೆಯುವಿಕೆ ನಿರ್ಧಾರಗಳಿಗಿಂತ ಮುಂಚಿತವಾಗಿ ಸಂಬಂಧಪಟ್ಟ ಇಪಿಎಫ್&zwnj;ಒ ತಜ್ಞರ ಅಥವಾ ಅಧಿಕೃತ ಕಚೇರಿಯ ಸಲಹೆಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ.)&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/how-to-withdraw-eps-pension-fund-using-epfo-form-10c-less-than-10-years-service-san/articleshow-ic4way0"/>
        </item>
        <item>
            <title><![CDATA[ಭಾರತದಲ್ಲಿ ಬದಲಾಗಲಿದೆ 50, 100, 500ರ ನೋಟು ! ಆರ್ ಬಿಐ ಪ್ಲಾನ್ ಇದು]]></title>
            <link>https://kannada.asianetnews.com/gallery/business/rbi-may-introduce-polymer-notes-in-india-iegmdlo</link>
            <guid isPermaLink="true">https://kannada.asianetnews.com/gallery/business/rbi-may-introduce-polymer-notes-in-india-iegmdlo</guid>
            <pubDate>Fri, 29 May 2026 18:25:05 +0530</pubDate>
            <description><![CDATA[&lt;p&gt;ನೋಟಿನ ವಿಷ್ಯದಲ್ಲಿ ಆರ್ ಬಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರ್ ಬಿಐ ಈಗಿರುವ 50,100, 500ರ ನೋಟನ್ನು ರದ್ದು ಮಾಡಿ ಹೊಸ ನೋಟು ಜಾರಿಗೆ ತರು ಚಿಂತನೆ ನಡೆಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksswa78qfk8sg7kdw4v948h0,imgname-indian-currency-1780058758423.jpg" type="image/jpeg" height="390" width="690"/>
            <content:encoded><![CDATA[&lt;p&gt;ನೋಟಿನ ವಿಷ್ಯದಲ್ಲಿ ಆರ್ ಬಿಐ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರ್ ಬಿಐ ಈಗಿರುವ 50,100, 500ರ ನೋಟನ್ನು ರದ್ದು ಮಾಡಿ ಹೊಸ ನೋಟು ಜಾರಿಗೆ ತರು ಚಿಂತನೆ ನಡೆಸಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಮ್ಮ ಕೈನಲ್ಲಿರುವ ನೋಟು ಕೇವಲ ವಹಿವಾಟಿನ ಸಾಧನ ಅಲ್ಲ. ದೇಶದ ಆರ್ಥಿಕತೆ ಸಂಕೇತ. ಯುಪಿಐ ಪೇಮೆಂಟ್ ಮತ್ತು ಆನ್ಲೈನ್ ವಹಿವಾಟು ಹೆಚ್ಚಾಗ್ತಿದ್ರೂ ನಗದಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸದ್ಯ ಭಾರತದಲ್ಲಿ ಪೇಪರ್ ನೋಟುಗಳಿವೆ. ಅವುಗಳನ್ನು ಸಂಪೂರ್ಣವಾಗಿ ಬದಲಿಸುವ ಆಲೋಚನೆಯಲ್ಲಿ ರಿಸರ್ವ್ ಬ್ಯಾಂಕ್ ಇದೆ. ಆರ್ ಬಿಐ (RBI) ಸಾಂಪ್ರದಾಯಿಕ ಕಾಗದದ ನೋಟುಗಳನ್ನು ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟಾಗಿ ಬದಲಿಸುವ ಯೋಜನೆ ಮಾಡ್ತಿದೆ.&lt;/p&gt;&lt;img&gt;&lt;p&gt;ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾ ಮತ್ತು ಮುಂಬೈನಲ್ಲಿ ಇತ್ತೀಚೆಗೆ ನಡೆದ ಆರ್ ಬಿಐ ಮಂಡಳಿಯ ಸಭೆಗಳಲ್ಲಿ ಪಾಲಿಮರ್ ನೋಟುಗಳ ಬಗ್ಗೆ ಚರ್ಚೆ ನಡೆದಿದೆ. ಹೆಚ್ಚುತ್ತಿರುವ ನಗದು ಬೇಡಿಕೆ, ನೋಟುಗಳ ತ್ವರಿತ ಕ್ಷೀಣತೆಯ ಸಮಸ್ಯೆ ಮತ್ತು ನಕಲಿ ನೋಟುಗಳನ್ನು ತಡೆಗಟ್ಟುವಿಕೆ ಸೇರಿದಂತೆ ಅನೇಕ ಸಮಸ್ಯೆಗೆ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟು ಪರಿಹಾರವಾಗಲಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಪ್ರತಿದಿನ ಶತಕೋಟಿ ಕರೆನ್ಸಿ ನೋಟುಗಳ ಚಲಾವಣೆಯಾಗುತ್ತದೆ. ಒಂದೇ ನೋಟನ್ನು ಅನೇಕರು ಬಳಸೋದ್ರಿಂದ, ನಿರಂತರವಾಗಿ ನಡೆಯುವ ವಿನಿಮಯದಿಂದ ಕಾಗದದ ನೋಟುಗಳು ಬೇಗ ಹರಿಯುತ್ತಿವೆ. ನೋಟುಗಳು ಕೊಳೆಯಾಗ್ತಿವೆ. ನೋಟುಗಳ ಮರುಮುದ್ರಣ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ಗೆ ಭಾರಿ ನಷ್ಟವುಂಟು ಮಾಡ್ತಿದೆ. ಇದೆಲ್ಲಕ್ಕೆ ಪಾಲಿಮರ್ ನೋಟು ಉತ್ತಮ ಪರ್ಯಾಯ ಎಂದು ಪರಿಗಣಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಬ್ಯಾಂಕಿಂಗ್ ತಜ್ಞರ ಪ್ರಕಾರ, ಪ್ಲಾಸ್ಟಿಕ್ ನೋಟುಗಳು ಸಾಮಾನ್ಯ ಕಾಗದದ ನೋಟುಗಳಿಗಿಂತ ಸುಮಾರು ಎರಡೂವರೆ ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ನೀರು, ತೇವಾಂಶ ಮತ್ತು ಧೂಳಿನ ಪರಿಣಾಮ ಇವುಗಳ ಮೇಲಾಗುವುದು ಕಡಿಮೆ. ಈಗಾಗಲೇ ಅನೇಕ ದೇಶಗಳು ಪ್ಲಾಸ್ಟಿಕ್ ಕರೆನ್ಸಿ ಜಾರಿಗೆ ತಂದಿವೆ. ಅಲ್ದೆ ಈ ನೋಟುಗಳ ಭದ್ರತೆ. ಈ ನೋಟುಗಳನ್ನು ನಕಲಿ ಮಾಡೋದು ಕಷ್ಟ. ಭಾರತದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಪ್ಲಾಸ್ಟಿಕ್ ನೋಟುಗಳು ಭಾರತಕ್ಕೆ ಸೂಕ್ತ.&lt;/p&gt;&lt;img&gt;&lt;p&gt;ಮೊದಲೇ ಹೇಳಿದಂತೆ ವಿಶ್ವದ ಅನೇಕ ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತಂದಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ , ವಿಯೆಟ್ನಾಂ, ರೊಮೇನಿಯಾ, ಬ್ರೂನಿ ಮತ್ತು ಪಪುವಾ ನ್ಯೂಗಿನಿಯಾ ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳು ಚಲಾವಣೆಯಲ್ಲಿವೆ. ವಿಶ್ವದ ಸುಮಾರು 60 ದೇಶಗಳು ಪಾಲಿಮರ್ ನೋಟುಗಳನ್ನು ಜಾರಿಗೆ ತಂದಿವೆ. ವಿಶ್ವದ ಅತ್ಯಂತ ಜನಪ್ರಿಯ ಕರೆನ್ಸಿಯಾದ ಯುಎಸ್ ಡಾಲರ್ ಇನ್ನೂ ಸಂಪೂರ್ಣವಾಗಿ ಪ್ಲಾಸ್ಟಿಕ್ ಆಗಲ್ಲ. ಅಮೆರಿಕದ ನೋಟುಗಳನ್ನು ಹತ್ತಿ ಮತ್ತು ಲಿನಿನ್ನ ವಿಶೇಷ ಮಿಶ್ರಣದಿಂದ ತಯಾರಿಸಲ್ಪಡುತ್ತವೆ.&lt;/p&gt;&lt;img&gt;&lt;p&gt;ಈ ಹಿಂದೆ 2012ರಲ್ಲಿ ಪ್ಲಾಸ್ಟಿಕ್ ನೋಟುಗಳ ಪ್ರಾಯೋಗಿಕ ಪ್ರಯತ್ನ ನಡೆದಿದೆ. 2012 ರಲ್ಲಿ, ರಿಸರ್ವ್ ಬ್ಯಾಂಕ್ 10 ರೂಪಾಯಿ ಮೌಲ್ಯದ 1 ಬಿಲಿಯನ್ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರಲು ಮುಂದಾಗಿತ್ತು. ಎಟಿಎಂ ಯಂತ್ರಗಳು ಮತ್ತು ಬ್ಯಾಂಕುಗಳಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಈ ಪ್ರಯೋಗವನ್ನು ನಿಲ್ಲಿಸಲಾಯಿತು.&lt;/p&gt;&lt;img&gt;&lt;p&gt;ಈಗ್ಲೂ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರುವುದು ಸುಲಭವಲ್ಲ. ಎಟಿಎಂ ಯಂತ್ರಗಳನ್ನು ಹೊಸ ಪರಿಕರಗಳೊಂದಿಗೆ ನವೀಕರಿಸಿದ ನಂತರವೇ ಹೊಸ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರಬೇಕು. ಪ್ಲಾಸ್ಟಿಕ್ ನೋಟಿಗೆ ಸಂಬಂಧಿಸಿದ ಪರಿಕರಗಳನ್ನು ಯಂತ್ರಗಳಲ್ಲಿ ಅಳವಡಿಸಲು ಈಗಾಗಲೇ ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿರುವ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗ್ತಿದೆ.&lt;/p&gt;]]></content:encoded>
            <category>business</category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/business/rbi-may-introduce-polymer-notes-in-india-iegmdlo"/>
        </item>
        <item>
            <title><![CDATA[ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್‌! ಕೇವಲ 'ಪ್ರೋಟೀನ್ ಬಾರ್'ಗಾಗಿಯೇ ₹2 ಲಕ್ಷ ಖರ್ಚು ಮಾಡಿದ ಗ್ರಾಹಕ!]]></title>
            <link>https://kannada.asianetnews.com/food/instamart-reports-150-percent-surge-in-protein-product-orders-across-india-gdp/articleshow-lx84n6n</link>
            <guid isPermaLink="true">https://kannada.asianetnews.com/food/instamart-reports-150-percent-surge-in-protein-product-orders-across-india-gdp/articleshow-lx84n6n</guid>
            <pubDate>Mon, 25 May 2026 16:42:17 +0530</pubDate>
            <description><![CDATA[ಇನ್&zwnj;ಸ್ಟಾಮಾರ್ಟ್&zwnj; ವರದಿ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಪ್ರೋಟೀನ್ ಉತ್ಪನ್ನಗಳ ಬೇಡಿಕೆ ಶೇ. 150ರಷ್ಟು ಹೆಚ್ಚಾಗಿದೆ. ಬೆಂಗಳೂರು ಮುಂಚೂಣಿಯಲ್ಲಿದ್ದರೂ, ಟಯರ್-2 ನಗರಗಳಲ್ಲಿ ಈ ಬೆಳವಣಿಗೆ ಇನ್ನೂ ವೇಗವಾಗಿದ್ದು, ಗ್ರಾಹಕರು ಲಕ್ಷಾಂತರ ರೂಪಾಯಿಗಳನ್ನು ಪ್ರೋಟೀನ್&zwnj;ಗಾಗಿ ಖರ್ಚು ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpq4jaqcjap19nvah96aw1gz,imgname-protein-1776745523948.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಭಾರತೀಯರು ಈಗ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಇದಕ್ಕೆ ಸ್ಪಷ್ಟ ನಿದರ್ಶನವೆಂಬಂತೆ 'ಇನ್&zwnj;ಸ್ಟಾಮಾರ್ಟ್&zwnj;ʼ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಕಳೆದ ಎರಡು ವರ್ಷಗಳಲ್ಲಿ 'ಪ್ರೋಟೀನ್' ಆಧಾರಿತ ಉತ್ಪನ್ನಗಳ ಆರ್ಡರ್&zwnj;ಗಳಲ್ಲಿ ಶೇ. 150ರಷ್ಟು ಭಾರಿ ಏರಿಕೆ ದಾಖಲಾಗಿದೆ. ಆನ್&zwnj;ಲೈನ್ ಮೂಲಕ ದಿನಸಿಗಳನ್ನು ತ್ವರಿತವಾಗಿ ತಲುಪಿಸುವ ಪ್ರಸಿದ್ಧ ಸಂಸ್ಥೆ 'ಇನ್&zwnj;ಸ್ಟಾಮಾರ್ಟ್' ದೇಶದ ಜನರಲ್ಲಿ 'ಪ್ರೋಟೀನ್' ಬಗ್ಗೆ ಹೆಚ್ಚಿನ ಒಲವು ಬೆಳೆಯುತ್ತಿರುವುದನ್ನು ಗುರುತಿಸಿದೆ.&lt;/p&gt;&lt;h2&gt;ಬೆಂಗಳೂರು ಮುಂದು, ಟಯರ್-2 ನಗರಗಳಲ್ಲೂ ಹೆಚ್ಚಿದ ಬೇಡಿಕೆ&lt;/h2&gt;&lt;p&gt;ಪ್ರೋಟೀನ್ ಉತ್ಪನ್ನಗಳ ಬೇಡಿಕೆಯಲ್ಲಿ ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆದರೆ ಅಚ್ಚರಿಯ ವಿಚಾರವೆಂದರೆ, ಕೇವಲ ಮೆಟ್ರೋ ನಗರಗಳಿಗಷ್ಟೇ ಸೀಮಿತವಾಗಿದ್ದ ಈ ಟ್ರೆಂಡ್, ಇದೀಗ ನಾಗ್ಪುರ, ಜೈಪುರ, ಚಂಡೀಗಢ, ಭುವನೇಶ್ವರ, ಗುವಾಹಟಿ ಮತ್ತು ವೈಜಾಗ್&zwnj;ನಂತಹ ಎರಡನೇ ಸ್ಥರದ ನಗರಗಳಿಗೂ ವ್ಯಾಪಿಸಿದೆ. ಮೆಟ್ರೋ ನಗರಗಳಿಗಿಂತ ಟಿಯರ್-II ನಗರಗಳಲ್ಲಿ ಪ್ರೋಟೀನ್ ಆರ್ಡರ್&zwnj;ಗಳು ಶೇ. 200 ರಷ್ಟು ಏರಿಕೆ ಕಂಡಿದ್ದು, ವೇಗವಾಗಿ ಬೆಳವಣಿಗೆ ಕಾಣುತ್ತಿವೆ.&lt;/p&gt;&lt;h2&gt;ಸಾಂಪ್ರದಾಯಿಕ ಪ್ರೊಟೀನ್&zwnj; ಉತ್ಪನ್ನಗಳಿಗೂ ಭಾರೀ ಬೇಡಿಕೆ&lt;/h2&gt;&lt;p&gt;ಇಂದಿಗೂ ಭಾರತೀಯರ ನೆಚ್ಚಿನ ಪ್ರೋಟೀನ್ ಆಹಾರಗಳ ಪಟ್ಟಿಯಲ್ಲಿ ಮೊಟ್ಟೆ ಮತ್ತು ಪನ್ನೀರ್ ಮೊದಲ ಸ್ಥಾನದಲ್ಲಿವೆ. ಇವೆರಡರ ಕಾಂಬಿನೇಷನ್ ಅನ್ನು ಅತಿ ಹೆಚ್ಚು ಆರ್ಡರ್ ಮಾಡಲಾಗಿದೆ. ಇದರ ನಂತರದ ಸ್ಥಾನದಲ್ಲಿ ಕೋಳಿ ಮಾಂಸ, ಕಡಲೆ, ಗ್ರೀಕ್ ಯೋಗರ್ಟ್ ಮತ್ತು ಮಖಾನಾ ಸೇರಿವೆ. ಇದಲ್ಲದೆ ಪ್ರೋಟೀನ್ ಮೊಸರು ಶೇ. 280ರಷ್ಟು ಹಾಗೂ ಪ್ರೋಟೀನ್ ಸ್ನ್ಯಾಕ್ಸ್ (ಚಿಪ್ಸ್) ವಿಭಾಗವು ಶೇ. 300ರಷ್ಟು ಬೆಳವಣಿಗೆ ಸಾಧಿಸಿದ್ದು, ಅತಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ವಿಭಾಗಗಳಾಗಿವೆ. ಇದರ ಜೊತೆಗೆ ಸೋಯಾ ಚಂಕ್ಸ್ ಮತ್ತು ಸತ್ತು ಪುಡಿಯಂತಹ ಸಾಂಪ್ರದಾಯಿಕ ಪ್ರೋಟೀನ್ ಆಹಾರಗಳ ಬೇಡಿಕೆ ಶೇ. 100ಕ್ಕಿಂತ ಹೆಚ್ಚಾಗಿದೆ. ಇನ್ನು ಆ್ಯಪ್&zwnj;ನಲ್ಲಿ 'ಪೀನಟ್ ಬಟರ್' ಅನ್ನು ಗ್ರಾಹಕರು ಅತಿ ಹೆಚ್ಚು ಬಾರಿ ಸರ್ಚ್ ಮಾಡಿದ್ದಾರೆ.&lt;/p&gt;&lt;h2&gt;ವಿಚಿತ್ರ ಗ್ರಾಹಕರು, ಪ್ರೊಟೀನ್&zwnj;ಗಾಗಿಯೇ ಲಕ್ಷ ಲಕ್ಷ ಖರ್ಚು&lt;/h2&gt;&lt;p&gt;ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ ಪ್ರೋಟೀನ್&zwnj;ಗಾಗಿ ಗ್ರಾಹಕರು ಖರ್ಚು ಮಾಡುತ್ತಿರುವ ಹಣವನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಚೆನ್ನೈ ಮೂಲದ ಬಳಕೆದಾರರೊಬ್ಬರು ಕಡಲೆಕಾಯಿ ಆಧಾರಿತ ಪ್ರೋಟೀನ್ ಉತ್ಪನ್ನಗಳಿಗಾಗಿ ಒಂದೇ ಆರ್ಡರ್&zwnj;ನಲ್ಲಿ ಬರೋಬ್ಬರಿ 2,71,385 ರೂ. ಖರ್ಚು ಮಾಡಿದ್ದಾರೆ! ಇನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಕೇವಲ ಪ್ರೋಟೀನ್ ಬಾರ್&zwnj;ಗಳನ್ನು ಖರೀದಿಸಲು 2 ಲಕ್ಷ ರೂ.ಗೂ ಅಧಿಕ ಹಣ ವ್ಯಯಿಸಿದ್ದಾರೆ. ಇದಲ್ಲದೆ, ಮುಂಬೈ, ದೆಹಲಿ ಮತ್ತು ಸೂರತ್&zwnj;ನಲ್ಲಿ ಗ್ರಾಹಕರು ವೇ ಪ್ರೋಟೀನ್&zwnj;ಗಳಿಗಾಗಿ ಒಮ್ಮೆಲೇ 20 ಸಾವಿರ ರೂ. ಗಿಂತ ಹೆಚ್ಚು ಹಣ ಖರ್ಚು ಮಾಡಿದ್ದಾರೆ.&lt;/p&gt;&lt;h2&gt;ಜಿಮ್&zwnj; ಸಮಯದಲ್ಲೇ ಅತಿ ಹೆಚ್ಚಿನ ಆರ್ಡರ್&lt;/h2&gt;&lt;p&gt;ವರದಿಯ ಪ್ರಕಾರ, ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ ಅತಿ ಹೆಚ್ಚು ಪ್ರೋಟೀನ್ ಉತ್ಪನ್ನಗಳಿಗೆ ಜನರು ಆರ್ಡರ್&zwnj; ಮಾಡುತ್ತಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ಇದು ಹೆಚ್ಚಿನ ಜನರು ಜಿಮ್&zwnj;ನಲ್ಲಿ ಕಳೆಯುವ ಸಮಯವಾಗಿದೆ. ಇದಲ್ಲದೆ ಇತ್ತೀಚೆಗೆ ಮಧ್ಯಾಹ್ನ, ಸಂಜೆ ಹಾಗೂ ಮಧ್ಯರಾತ್ರಿ ವೇಳೆ ಅಂದ್ರೆ 12 ರಿಂದ ಬೆಳಗ್ಗೆ 4 ಗಂಟೆಯ ಅವಧಿಯಲ್ಲಿ ಆರ್ಡರ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.&lt;/p&gt;&lt;p&gt;ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಇನ್&zwnj;ಸ್ಟಾಮಾರ್ಟ್&zwnj;ನ 'ಚೀಫ್ ಬಿಸಿನೆಸ್ ಆಫೀಸರ್' ಹರಿ ಕುಮಾರ್ ಜಿ, &quot;ಭಾರತೀಯರ ದಿನಸಿ ಖರೀದಿಸುವ ವಿಧಾನ ಈಗ ಬದಲಾಗಿದೆ. ಕೇವಲ 'ಅಗತ್ಯ' ವಸ್ತುಗಳ ಬದಲಾಗಿ 'ಆರೋಗ್ಯಕರ' ವಸ್ತುಗಳಿಗೆ ಜನರು ಆದ್ಯತೆ ನೀಡುತ್ತಿದ್ದಾರೆ. ಈ ಬದಲಾವಣೆಗೆ ಬೆಂಬಲ ನೀಡಲು ಉದ್ದೇಶಿಸಿದ್ದು ಮೆಟ್ರೋ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ, ಪ್ರತಿಯೊಬ್ಬರಿಗೂ ಗುಣಮಟ್ಟದ ಪ್ರೋಟೀನ್ ಆಹಾರವನ್ನು ಒದಗಿಸಲಿದ್ದೇವೆ,&quot; ಎಂದು ತಿಳಿಸಿದರು.&lt;/p&gt;&lt;p&gt;ಆಗಸ್ಟ್ 2020ರಲ್ಲಿ ಆರಂಭವಾದ 'ಇನ್&zwnj;ಸ್ಟಾಮಾರ್ಟ್', ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್&zwnj;ಫಾರ್ಮ್ ಆಗಿದ್ದು, ದೇಶದ 131ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದೆ. ದಿನಸಿ ಹಾಗೂ ದೈನಂದಿನ ಅಗತ್ಯ ವಸ್ತುಗಳನ್ನು ಅತ್ಯಂತ ವೇಗವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಕಂಪನಿ ಮುಂಚೂಣಿಯಲ್ಲಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/food/instamart-reports-150-percent-surge-in-protein-product-orders-across-india-gdp/articleshow-lx84n6n"/>
        </item>
        <item>
            <title><![CDATA[ಪ್ರವಾಸೋದ್ಯಮದಲ್ಲಿ ಎಐ ತಂತ್ರಜ್ಞಾನ, ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ  ಮತ್ತಷ್ಟು ಸುಲಭ!]]></title>
            <link>https://kannada.asianetnews.com/gallery/business/ai-revolution-in-travel-cognizant-anthropic-and-travelport-partner-to-modernize-flight-and-hotel-bookings-gdp-olonskn</link>
            <guid isPermaLink="true">https://kannada.asianetnews.com/gallery/business/ai-revolution-in-travel-cognizant-anthropic-and-travelport-partner-to-modernize-flight-and-hotel-bookings-gdp-olonskn</guid>
            <pubDate>Fri, 29 May 2026 14:55:42 +0530</pubDate>
            <description><![CDATA[&lt;p&gt;ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್, ಟ್ರಾವೆಲ್&zwnj;ಪೋರ್ಟ್ &amp;amp; ಎಐ ಸಂಶೋಧನಾ ಸಂಸ್ಥೆ ಆಂಥ್ರೋಪಿಕ್, ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಕೈಜೋಡಿಸಿವೆ. ಆಂಥ್ರೋಪಿಕ್&zwnj;ನ 'ಕ್ಲೌಡ್' ಎಐ ಮಾಡೆಲ್ ಬಳಸಿ, ಟ್ರಾವೆಲ್&zwnj;ಪೋರ್ಟ್&zwnj;ನ ಬುಕ್ಕಿಂಗ್ ತಂತ್ರಜ್ಞಾನ ಆಧುನೀಕರಿಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knr7mqe563szes47rt27134g,imgname-india-airport-charges-cut-25-percent-flight-ticket-price-impact-domestic-airfare-atf-fuel-cost-airlines-update-1-1775708560837.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಟೆಕ್ ದೈತ್ಯ ಕಾಗ್ನಿಜೆಂಟ್, ಟ್ರಾವೆಲ್&zwnj;ಪೋರ್ಟ್ &amp;amp; ಎಐ ಸಂಶೋಧನಾ ಸಂಸ್ಥೆ ಆಂಥ್ರೋಪಿಕ್, ಪ್ರವಾಸೋದ್ಯಮ ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಕೈಜೋಡಿಸಿವೆ. ಆಂಥ್ರೋಪಿಕ್&zwnj;ನ 'ಕ್ಲೌಡ್' ಎಐ ಮಾಡೆಲ್ ಬಳಸಿ, ಟ್ರಾವೆಲ್&zwnj;ಪೋರ್ಟ್&zwnj;ನ ಬುಕ್ಕಿಂಗ್ ತಂತ್ರಜ್ಞಾನ ಆಧುನೀಕರಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಪ್ರಸ್ತುತ ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನವು ಹೊಸ ಅಲೆ ಸೃಷ್ಟಿಸುತ್ತಿದೆ. ಇದೀಗ ಇದೇ ಹಾದಿಯಲ್ಲಿ ಜಾಗತಿಕ ಪ್ರಯಾಣ ಮತ್ತು ಪ್ರವಾಸೋದ್ಯಮ (Travel and Tourism) ಕ್ಷೇತ್ರವನ್ನು ಸಂಪೂರ್ಣವಾಗಿ ಎಐ ಯುಗಕ್ಕೆ ಕೊಂಡೊಯ್ಯಲು ಜಾಗತಿಕ ಟೆಕ್ ದೈತ್ಯ ಸಂಸ್ಥೆ 'ಕಾಗ್ನಿಜೆಂಟ್' (Cognizant), ಪ್ರಮುಖ ಟ್ರಾವೆಲ್ ಮೂಲಸೌಕರ್ಯ ಒದಗಿಸುವ 'ಟ್ರಾವೆಲ್&zwnj;ಪೋರ್ಟ್' (Travelport) ಹಾಗೂ ಪ್ರಸಿದ್ಧ ಎಐ ಸಂಶೋಧನಾ ಸಂಸ್ಥೆ 'ಆಂಥ್ರೋಪಿಕ್' (Anthropic) ಕೈಜೋಡಿಸಿವೆ. ಹಳೆಯ ಮತ್ತು ಸಾಂಪ್ರದಾಯಿಕ ಟ್ರಾವೆಲ್ ತಂತ್ರಜ್ಞಾನಗಳನ್ನು ಆಧುನೀಕರಿಸಿ, ಗ್ರಾಹಕರಿಗೆ ಅತ್ಯಂತ ವೇಗದ ಸೇವೆ ನೀಡುವುದು ಈ ಮೂರು ಪ್ರಮುಖ ಸಂಸ್ಥೆಗಳ ಜಂಟಿ ಪಾಲುದಾರಿಕೆಯ ಮುಖ್ಯ ಉದ್ದೇಶವಾಗಿದೆ.&lt;/p&gt;&lt;img&gt;&lt;p&gt;ಈ ಬೃಹತ್ ಯೋಜನೆಗಾಗಿ ಕಾಗ್ನಿಜೆಂಟ್ ಸಂಸ್ಥೆಯು, ಆಂಥ್ರೋಪಿಕ್ ಅಭಿವೃದ್ಧಿಪಡಿಸಿರುವ ವಿಶ್ವದಕ್ಷ 'ಕ್ಲೌಡ್' (Claude AI) ಮಾಡೆಲ್ ಅನ್ನು ಬಳಸಿಕೊಳ್ಳಲಿದೆ. ಈ ಸುಧಾರಿತ ತಂತ್ರಜ್ಞಾನದ ಮೂಲಕ 'ಟ್ರಾವೆಲ್&zwnj;ಪೋರ್ಟ್'ನ ಬುಕ್ಕಿಂಗ್ ಸಾಫ್ಟ್&zwnj;ವೇರ್&zwnj;ಗಳನ್ನು ಕಾಗ್ನಿಜೆಂಟ್ ಪುನರ್ ರೂಪಿಸಲಿದ್ದು, ಅದರ ಸಂಪೂರ್ಣ ನಿರ್ವಹಣೆ ಮತ್ತು ಪರೀಕ್ಷೆಯ ಜವಾಬ್ದಾರಿಯನ್ನು ಹೊರಲಿದೆ. ಇದರಿಂದಾಗಿ ವಿಮಾನಯಾನ ಸಂಸ್ಥೆಗಳು (Airlines), ಹೋಟೆಲ್&zwnj;ಗಳು ಮತ್ತು ಆನ್&zwnj;ಲೈನ್ ಟ್ರಾವೆಲ್ ಏಜೆನ್ಸಿಗಳಿಗೆ (OTAs) ಅತ್ಯಾಧುನಿಕ ಎಐ ಆಧಾರಿತ ಸೇವೆಗಳು ಅತ್ಯಂತ ತ್ವರಿತವಾಗಿ ಲಭ್ಯವಾಗಲಿವೆ.&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಸಾಮಾನ್ಯ ಗ್ರಾಹಕರು ತಮ್ಮ ಪ್ರವಾಸವನ್ನು ಪ್ಲಾನ್ ಮಾಡಲು ಚಾಟ್&zwnj;ಜಿಪಿಟಿ ಅಥವಾ ಕ್ಲೌಡ್&zwnj;ನಂತಹ ಎಐ ಟೂಲ್&zwnj;ಗಳನ್ನು ಬಳಸುತ್ತಿದ್ದಾರೆ. ಆದರೆ, ಅವರಿಗೆ ಅಧಿಕೃತವಾಗಿ ಟಿಕೆಟ್ ಬುಕ್ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳ ಆಂತರಿಕ ಸಿಸ್ಟಮ್&zwnj;ಗಳು (Backend Systems) ಇನ್ನೂ ಹಳೆಯ ಕಾಲದ ತಂತ್ರಜ್ಞಾನದ ಮೇಲೆಯೇ ನಡೆಯುತ್ತಿವೆ. ಇದರಿಂದಾಗಿ ಟ್ರಾವೆಲ್ ಏಜೆಂಟ್&zwnj;ಗಳು ಇಂದಿಗೂ ಮ್ಯಾನುಯಲ್ ಆಗಿ ಕಷ್ಟಪಟ್ಟು ಟಿಕೆಟ್ ಬುಕ್ ಮಾಡಬೇಕಾದ ಪರಿಸ್ಥಿತಿ ಇದೆ. ಪ್ರಸ್ತುತ ಇರುವ ಇದೇ ತಾಂತ್ರಿಕ ಅಂತರವನ್ನು (Tech Gap) ಇಲ್ಲದೂಡಿಸಲು ಈ ಹೊಸ ಮೈತ್ರಿ ಮುಂದಾಗಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಟ್ರಾವೆಲ್ ಏಜೆಂಟ್&zwnj;ಗಳು ನಿರ್ವಹಿಸುವ ಅತ್ಯಂತ ಸಂಕೀರ್ಣವಾದ ಕೆಲಸಗಳನ್ನು (ಉದಾಹರಣೆಗೆ: ಹಠಾತ್ ರದ್ದಾದ ವಿಮಾನ ಟಿಕೆಟ್&zwnj;ಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುವುದು, ರಿಸ್ಕ್ ಕಡಿಮೆ ಇರುವ ರೂಟ್&zwnj;ಗಳನ್ನು ಗ್ರಾಹಕರಿಗೆ ಸೂಚಿಸುವುದು) ಇನ್ಮುಂದೆ ಈ ಎಐ ಸಿಸ್ಟಮ್ ಕೆಲವೇ ಸೆಕೆಂಡುಗಳಲ್ಲಿ ಮಾಡಲಿದೆ. ಇದರಿಂದ ಪ್ರತೀ ಏಜೆಂಟ್&zwnj;ಗೆ ದಿನಕ್ಕೆ ಕನಿಷ್ಠ 1 ಗಂಟೆ ಸಮಯ ಉಳಿತಾಯವಾಗಲಿದ್ದು, ದೊಡ್ಡ ಟ್ರಾವೆಲ್ ಏಜೆನ್ಸಿಗಳಿಗೆ ವಾರ್ಷಿಕವಾಗಿ ಲಕ್ಷಾಂತರ ಡಾಲರ್ ಹಣ ಉಳಿಯಲಿದೆ.&lt;/p&gt;&lt;img&gt;&lt;p&gt;ಆನ್&zwnj;ಲೈನ್ ಗ್ರಾಹಕರು ಭವಿಷ್ಯದಲ್ಲಿ ಸಾಮಾನ್ಯ ಭಾಷೆಯಲ್ಲೇ ಎಐ ಚಾಟ್&zwnj;ಬಾಟ್&zwnj;ಗೆ ಪ್ರಶ್ನೆ ಕೇಳಬಹುದು. ಉದಾಹರಣೆಗೆ, &quot;ನನಗೆ ನಾಳೆ ಮುಂಬೈಗೆ ಹೋಗಲು ಅತ್ಯಂತ ಅಗ್ಗದ ವಿಮಾನ ಟಿಕೆಟ್ ಬೇಕು&quot; ಎಂದು ಸಂದೇಶ ಕಳುಹಿಸಿದರೆ, ಎಐ ಅದನ್ನು ತಕ್ಷಣವೇ ಅರ್ಥಮಾಡಿಕೊಂಡು ಲೈವ್ ಆಗಿ ಟಿಕೆಟ್ ಕನ್ಫರ್ಮ್ ಮಾಡುವ ಸುಲಭ ವ್ಯವಸ್ಥೆ ಜಾರಿಗೆ ಬರಲಿದೆ.&lt;/p&gt;&lt;img&gt;&lt;p&gt;ಈ ಐತಿಹಾಸಿಕ ಒಪ್ಪಂದದ ಕುರಿತು ಮಾತನಾಡಿರುವ ಕಾಗ್ನಿಜೆಂಟ್ ಸಂಸ್ಥೆಯ ಸಿಇಒ ರವಿ ಕುಮಾರ್ ಎಸ್, &quot;ಪ್ರಪಂಚದಲ್ಲೇ ಅತ್ಯಂತ ಸಂಕೀರ್ಣವಾದ ಸಾಫ್ಟ್&zwnj;ವೇರ್ ತಂತ್ರಜ್ಞಾನದ ಮೇಲೆ ಟ್ರಾವೆಲ್ ಇಂಡಸ್ಟ್ರಿ ನಡೆಯುತ್ತಿದೆ. ಯಾರು ಈ ತಂತ್ರಜ್ಞಾನದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುತ್ತಾರೋ ಅವರೇ ಭವಿಷ್ಯದ ಲೀಡರ್ಸ್ ಆಗುತ್ತಾರೆ. ಟ್ರಾವೆಲ್&zwnj;ಪೋರ್ಟ್&zwnj;ಗೆ ಅತ್ಯಂತ ವೇಗವಾಗಿ ಮತ್ತು ಗುಣಮಟ್ಟದ ಸಾಫ್ಟ್&zwnj;ವೇರ್ ಒದಗಿಸಲು ನಾವು ಆಂಥ್ರೋಪಿಕ್&zwnj;ನ 'ಕ್ಲೌಡ್ ಎಐ' ಅನ್ನು ಬಳಸುತ್ತಿದ್ದೇವೆ,&quot; ಎಂದಿದ್ದಾರೆ.&lt;/p&gt;&lt;p&gt;ಇತ್ತ ಟ್ರಾವೆಲ್&zwnj;ಪೋರ್ಟ್&zwnj;ನ ಸಿಇಒ ಜಾನ್ ಮ್ಯಾಂಗೆಲಾರ್ಸ್ ಮಾತನಾಡಿ, &quot;ಎಐ ಎನ್ನುವುದು ಭವಿಷ್ಯದ ತಂತ್ರಜ್ಞಾನವಲ್ಲ, ಅದು ಈಗಾಗಲೇ ನಮ್ಮೆದುರು ಲೈವ್ ಆಗಿ ನಡೆಯುತ್ತಿದೆ. ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಜೊತೆಗಿನ ಒಪ್ಪಂದ ನಮಗೆ ಭಾರಿ ತಾಂತ್ರಿಕ ಶಕ್ತಿ ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಗ್ರಾಹಕರ ಡೇಟಾ ಭದ್ರತೆಯ (Data Security) ದೃಷ್ಟಿಯಿಂದಲೂ ಆಂಥ್ರೋಪಿಕ್ ಅತ್ಯಂತ ವಿಶ್ವಾಸಾರ್ಹವಾಗಿದೆ,&quot; ಎಂದು ಪ್ರಶಂಸಿಸಿದ್ದಾರೆ.&lt;/p&gt;&lt;p&gt;ಆಂಥ್ರೋಪಿಕ್ ಸಂಸ್ಥೆಯ ಅಲಯನ್ಸ್&zwnj; ವಿಭಾಗದ ಮುಖ್ಯಸ್ಥ ರಿಚ್ ಒ'ಕಾನ್ನೆಲ್ ಮಾತನಾಡಿ, &quot;ಕಾಗ್ನಿಜೆಂಟ್ ನಮಗೆ ಅತ್ಯಂತ ನಂಬಿಕಸ್ಥ ಪಾಲುದಾರ ಸಂಸ್ಥೆಯಾಗಿದೆ. ಟ್ರಾವೆಲ್&zwnj;ನಂತಹ ಜಾಗತಿಕ ಹಾಗೂ ಸಂಕೀರ್ಣವಾದ ಉದ್ಯಮಕ್ಕೆ ನಮ್ಮ 'ಕ್ಲೌಡ್' ಎಐ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ,&quot; ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಇದು ಕೇವಲ ಸಣ್ಣ ಮಟ್ಟದ ಪ್ರಾಯೋಗಿಕ ಯೋಜನೆಯಲ್ಲ. ಟ್ರಾವೆಲ್&zwnj;ಪೋರ್ಟ್ ಸಂಸ್ಥೆಯ ಇಡೀ 'ಟ್ರಿಪ್ ಸರ್ವೀಸಸ್' (ಬುಕ್ಕಿಂಗ್ ಮತ್ತು ರಿಫಂಡ್ ನಿರ್ವಹಣೆ ಮಾಡುವ ಬೃಹತ್ ವೇದಿಕೆ) ವ್ಯವಸ್ಥೆಯನ್ನು ಸಂಪೂರ್ಣವಾಗಿ ಎಐ ತಂತ್ರಜ್ಞಾನಕ್ಕೆ ಬದಲಾಯಿಸಲಾಗುತ್ತಿದೆ. ನವೆಂಬರ್ 2025ರಲ್ಲಿ ಕಾಗ್ನಿಜೆಂಟ್ ಮತ್ತು ಆಂಥ್ರೋಪಿಕ್ ಮಾಡಿಕೊಂಡಿದ್ದ ಜಾಗತಿಕ ಒಪ್ಪಂದದ ಮುಂದುವರಿದ ಭಾಗವಾಗಿ ಈ ಬೃಹತ್ ಪ್ರಾಜೆಕ್ಟ್ ನಡೆಯುತ್ತಿದ್ದು, ಈ ವರ್ಷದ (2026) ಅಂತ್ಯದ ವೇಳೆಗೆ ಜಾಗತಿಕ ಗ್ರಾಹಕರು ಇದರ ಮೊದಲ ಹಂತದ ತಾಂತ್ರಿಕ ಅನುಭವವನ್ನು ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರವಾಸ ಮಾಡಲು ಇಷ್ಟಪಡುವ ಜಾಗತಿಕ ಪ್ರವಾಸಿಗರಿಗೆ ಇಡೀ ಬುಕ್ಕಿಂಗ್ ಪ್ರಕ್ರಿಯೆ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಮುಗಿಯಲblueprint ಸಿದ್ಧವಾಗಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/ai-revolution-in-travel-cognizant-anthropic-and-travelport-partner-to-modernize-flight-and-hotel-bookings-gdp-olonskn"/>
        </item>
        <item>
            <title><![CDATA[ಕಳೆದ ಆರು ವರ್ಷದಿಂದ ರಿಲಯನ್ಸ್‌ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್‌ ಅಂಬಾನಿ!]]></title>
            <link>https://kannada.asianetnews.com/business/mukesh-ambani-zero-salary-6th-year-reliance-dividend-income-anant-package-san/articleshow-ptco31n</link>
            <guid isPermaLink="true">https://kannada.asianetnews.com/business/mukesh-ambani-zero-salary-6th-year-reliance-dividend-income-anant-package-san/articleshow-ptco31n</guid>
            <pubDate>Thu, 28 May 2026 21:44:38 +0530</pubDate>
            <description><![CDATA[&lt;p&gt;ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಆರನೇ ವರ್ಷವೂ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ನಿರ್ಧಾರ ಮುಂದುವರೆಸಿದ್ದು, ಅವರ ಆದಾಯದ ಪ್ರಮುಖ ಮೂಲ ಈಗ ಕಂಪನಿಯಿಂದ ಬರುವ ಲಾಭಾಂಶವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcpnap2fp8am0dz338kwqjxt,imgname-mukesh-ambani-and-nita-ambani-1765992126543.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಮೇ.28):&lt;/strong&gt; ದೇಶದ ಅತ್ಯಂತ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಸತತ ಆರನೇ ವರ್ಷವೂ ಕಂಪನಿಯಿಂದ ಯಾವುದೇ ರೀತಿಯ ವೇತನವನ್ನು ಪಡೆದಿಲ್ಲ. ಕಂಪನಿಯು ಬಿಡುಗಡೆ ಮಾಡಿರುವ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ ಮುಖೇಶ್ ಅಂಬಾನಿ ಅವರ ಸಂಬಳ, ಭತ್ಯೆಗಳು (Allowances) ಮತ್ತು ನಿವೃತ್ತಿ ಸೌಲಭ್ಯಗಳು ಸಂಪೂರ್ಣ &lsquo;ಶೂನ್ಯ&rsquo; (Zero) ಆಗಿವೆ. ಪ್ರಸ್ತುತ ಕಂಪನಿಯಿಂದ ಸಿಗುವ ಡಿವಿಡೆಂಡ್ (ಲಾಭಾಂಶ) ಮಾತ್ರವೇ ಅವರ ಆದಾಯದ ಮುಖ್ಯ ಮೂಲವಾಗಿದೆ.&lt;/p&gt;&lt;p&gt;ಪ್ರಸ್ತುತ 69 ವರ್ಷ ವಯಸ್ಸಿನ ಮುಖೇಶ್ ಅಂಬಾನಿ ಅವರು ಜೂನ್ 2020 ರಲ್ಲಿ ಕೊರೊನಾ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕಾ ರಂಗದ ಮೇಲಾದ ಭೀಕರ ಪರಿಣಾಮವನ್ನು ಗಮನಿಸಿ ತಮ್ಮ ಸಂಪೂರ್ಣ ಸಂಬಳವನ್ನು ತ್ಯಜಿಸಲು ನಿರ್ಧರಿಸಿದ್ದರು. ರಿಲಯನ್ಸ್ ಸಂಸ್ಥೆಯ ಎಲ್ಲಾ ವ್ಯವಹಾರಗಳು ತನ್ನ ಪೂರ್ಣ ಗಳಿಕೆಯ ಸಾಮರ್ಥ್ಯಕ್ಕೆ ಮರಳುವವರೆಗೆ ತಾನು ಯಾವುದೇ ವೇತನವನ್ನು ಪಡೆಯುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದರು.&lt;/p&gt;&lt;p&gt;ಅದರಂತೆ, ಅವರು ಹಣಕಾಸು ವರ್ಷ 2021-22, 2022-23, 2023-24, 2024-25 ಮತ್ತು ಈಗ ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲೂ ಯಾವುದೇ ಸಂಬಳವಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸಿದ್ದಾರೆ. ಇದಕ್ಕೂ ಮುನ್ನ 2008 ರಿಂದಲೇ ಅವರು ತಮ್ಮ ವಾರ್ಷಿಕ ವೇತನವನ್ನು ₹15 ಕೋಟಿಗೆ ಸೀಮಿತಗೊಳಿಸಿಕೊಂಡಿದ್ದರು ಎಂಬುದು ಗಮನಾರ್ಹ.&lt;/p&gt;&lt;h2&gt;&lt;strong&gt;ವೇತನ ಶೂನ್ಯವಾದ್ರೂ ಡಿವಿಡೆಂಡ್&zwnj;ನಿಂದ ಬಂತು ₹3,996 ಕೋಟಿ!&lt;/strong&gt;&lt;/h2&gt;&lt;p&gt;ಮುಖೇಶ್ ಅಂಬಾನಿ ಅವರು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (CMD) ಹುದ್ದೆಯಲ್ಲಿದ್ದರೂ ಯಾವುದೇ ವೇತನ, ಭತ್ಯೆ ಅಥವಾ ಸ್ಟಾಕ್ ಆಪ್ಷನ್&zwnj;ಗಳನ್ನು ತೆಗೆದುಕೊಳ್ಳುತ್ತಿಲ್ಲ. ಆದರೆ, ವಿಶ್ವದ 22ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಅವರ ಮುಖ್ಯ ಆದಾಯದ ಮೂಲ ಡಿವಿಡೆಂಡ್ ಆಗಿದೆ. ಸದ್ಯ ಮುಖೇಶ್ ಅಂಬಾನಿ ಅವರ ವೈಯಕ್ತಿಕ ಆಸ್ತಿ ಮೌಲ್ಯ (Net Worth) ಸುಮಾರು 92 ಬಿಲಿಯನ್ ಡಾಲರ್ (ಅಂದರೆ ಅಂದಾಜು ₹8.83 ಲಕ್ಷ ಕೋಟಿ ರೂಪಾಯಿ) ಆಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಪ್ರಸಕ್ತ ಹಣಕಾಸು ವರ್ಷ 2025-26 ಕ್ಕೆ ಪ್ರತಿ ಷೇರಿಗೆ ₹6 ರಷ್ಟು ಡಿವಿಡೆಂಡ್ ಪ್ರಕಟಿಸಿದೆ.&lt;/p&gt;&lt;p&gt;ಮುಖೇಶ್ ಅಂಬಾನಿ ಅವರು ವೈಯಕ್ತಿಕವಾಗಿ ರಿಯಲನ್ಸ್ ಸಂಸ್ಥೆಯ 1.61 ಕೋಟಿ ಷೇರುಗಳನ್ನು ಹೊಂದಿದ್ದು, ಇದರಿಂದ ಅವರಿಗೆ ₹9.66 ಕೋಟಿ ವೈಯಕ್ತಿಕ ಡಿವಿಡೆಂಡ್ ಆದಾಯ ಬರಲಿದೆ. ಇದರ ಹೊರತಾಗಿ, ಅವರ ನಿಯಂತ್ರಣದಲ್ಲಿರುವ ಪ್ರಮೋಟರ್ ಗ್ರೂಪ್ ಕಂಪನಿಗಳು ರಿಯಲನ್ಸ್&zwnj;ನಲ್ಲಿ ಶೇ. 50.07 ರಷ್ಟು ಪಾಲನ್ನು (664.5 ಕೋಟಿ ಷೇರುಗಳು) ಹೊಂದಿವೆ. ಇದರಿಂದ ಪ್ರಮೋಟರ್ ಗ್ರೂಪ್&zwnj;ಗೆ ₹3,987 ಕೋಟಿ ಲಾಭಾಂಶ ಸಿಕ್ಕಿದೆ. ಒಟ್ಟಾರೆಯಾಗಿ ಈ ಎರಡೂ ಮೊತ್ತ ಸೇರಿದರೆ ಬರೋಬ್ಬರಿ ₹3,996.66 ಕೋಟಿ ಆಗುತ್ತದೆ.&lt;/p&gt;&lt;h2&gt;&lt;strong&gt;ಮಕ್ಕಳ ಪ್ಯಾಕೇಜ್ ವಿವರ: ಅನಂತ್&zwnj;ಗೆ ಕೋಟಿ ಕೋಟಿ, ಆಕಾಶ್-ಈಶಾಗೆ ಸಿಟ್ಟಿಂಗ್ ಫೀಸ್ ಮಾತ್ರ&lt;/strong&gt;&lt;/h2&gt;&lt;p&gt;ಮುಖೇಶ್ ಅಂಬಾನಿ ಅವರ ಮೂವರು ಮಕ್ಕಳಾದ ಈಶಾ, ಆಕಾಶ್ ಮತ್ತು ಅನಂತ್ ಅವರನ್ನು ಅಕ್ಟೋಬರ್ 2023 ರಲ್ಲಿ ಯಾವುದೇ ಸಂಬಳವಿಲ್ಲದೆ ರಿಲಯನ್ಸ್ ಮಂಡಳಿಗೆ (Board) ಸೇರಿಸಿಕೊಳ್ಳಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ ಇವರ ಪ್ಯಾಕೇಜ್ ವಿವರ ಬಹಿರಂಗವಾಗಿದೆ. ಆಕಾಶ್ ಮತ್ತು ಈಶಾ ಅಂಬಾನಿಗೆ ಪ್ರಸಕ್ತ ಸಾಲಿನಲ್ಲಿ ಕೇವಲ ₹5 ಲಕ್ಷ ಸಿಟ್ಟಿಂಗ್ ಫೀಸ್ (Siting Fees) ಮತ್ತು ₹2.5 ಕೋಟಿ ಪ್ರಾಫಿಟ್ ಕಮಿಷನ್ (ಲಾಭದ ಆಧಾರಿತ ಕಮಿಷನ್) ಮಾತ್ರ ಲಭಿಸಿದೆ.&lt;/p&gt;&lt;p&gt;ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಅವರನ್ನು ಕಳೆದ ವರ್ಷ ರಿಲಯನ್ಸ್ ಬೋರ್ಡ್&zwnj;ನ ಎಕ್ಸಿಕ್ಯೂಟಿವ್ ಡೈರೆಕ್ಟರ್ (ಕಾರ್ಯನಿರ್ವಾಹಕ ನಿರ್ದೇಶಕ) ಆಗಿ ನೇಮಕ ಮಾಡಲಾಗಿತ್ತು. ಈ ಹುದ್ದೆಯ ಅಡಿಯಲ್ಲಿ ಅವರು ಹಣಕಾಸು ವರ್ಷ 2025-26 ರಲ್ಲಿ ₹12.17 ಕೋಟಿ ವೇತನ ಪ್ಯಾಕೇಜ್ ಪಡೆದಿದ್ದಾರೆ (ಇದರಲ್ಲಿ ₹2.29 ಕೋಟಿ ಕಮಿಷನ್ ಸೇರಿದೆ).&lt;/p&gt;&lt;h2&gt;&lt;strong&gt;ಇತರ ಅಧಿಕಾರಿಗಳ ವೇತನ&lt;/strong&gt;&lt;/h2&gt;&lt;p&gt;ಮುಖೇಶ್ ಅಂಬಾನಿ ಅವರ ಸೋದರಸಂಬಂಧಿಗಳಾದ ನಿಖಿಲ್ ಮೇಸ್ವಾನಿ ಮತ್ತು ಹಿತಲ್ ಮೇಸ್ವಾನಿ ಅವರ ವೇತನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಬ್ಬರಿಗೂ ತಲಾ ₹25 ಕೋಟಿ ಸಂಭಾವನೆ ಸಿಕ್ಕಿದೆ (ಇದರಲ್ಲಿ ₹10 ಕೋಟಿ ಸಂಬಳ ಮತ್ತು ಭತ್ಯೆ, ₹44 ಲಕ್ಷ ನಿವೃತ್ತಿ ಸೌಲಭ್ಯ ಮತ್ತು ₹14.56 ಕೋಟಿ ಲಾಭದ ಕಮಿಷನ್ ಸೇರಿದೆ). ಇನ್ನು ಎಕ್ಸಿಕ್ಯೂಟಿವ್ ಡೈರೆಕ್ಟರ್ ಪಿ.ಎಂ.ಎಸ್. ಪ್ರಸಾದ್ ಅವರ ಪ್ಯಾಕೇಜ್ ಕಳೆದ ಸಾಲಿನ ₹19.96 ಕೋಟಿಯಿಂದ ₹20.58 ಕೋಟಿಗೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಶೇ. 13 ರಷ್ಟು ಕುಸಿತ&lt;/strong&gt;&lt;/h2&gt;&lt;p&gt;ಹಣಕಾಸು ವರ್ಷ 2025-26 ರ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್ ಅವಧಿ) ರಿಯಲನ್ಸ್ ಇಂಡಸ್ಟ್ರೀಸ್ ಲಿಮಿಟೆಡ್&zwnj;ನ ನಿವ್ವಳ ಲಾಭದಲ್ಲಿ (Net Profit) ವಾರ್ಷಿಕ ಆಧಾರದ ಮೇಲೆ ಶೇ. 13 ರಷ್ಟು ಕುಸಿತ ಕಂಡುಬಂದಿದೆ. ಕಂಪನಿಯ ನಿವ್ವಳ ಲಾಭ ₹16,971 ಕೋಟಿಗೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹19,407 ಕೋಟಿ ಲಾಭ ಗಳಿಸಿತ್ತು. ಆದರೆ, ಇದೇ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯ (Revenue) ಶೇ. 13 ರಷ್ಟು ಹೆಚ್ಚಾಗಿದ್ದು, ₹2.98 ಲಕ್ಷ ಕೋಟಿ ತಲುಪಿದೆ. ಕಳೆದ ವರ್ಷದ (ಜನವರಿ-ಮಾರ್ಚ್ 2025) ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ₹2.64 ಲಕ್ಷ ಕೋಟಿ ರೂಪಾಯಿ ಆಗಿತ್ತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/mukesh-ambani-zero-salary-6th-year-reliance-dividend-income-anant-package-san/articleshow-ptco31n"/>
        </item>
        <item>
            <title><![CDATA[ಇನ್​ಸ್ಟಾ, ಫೇಸ್​ಬುಕ್​, ವಾಟ್ಸ್​ಆ್ಯಪ್​ಗೆ ಮಾಸಿಕ ಶುಲ್ಕ ನಿಗದಿ: ದುಡ್ಡು ಕೊಟ್ರೆ ಮಾತ್ರ ಬಳಕೆ- ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/gallery/technology/meta-launches-paid-subscriptions-for-instagram-facebook-whatsapp-suc-ug4o3yn</link>
            <guid isPermaLink="true">https://kannada.asianetnews.com/gallery/technology/meta-launches-paid-subscriptions-for-instagram-facebook-whatsapp-suc-ug4o3yn</guid>
            <pubDate>Fri, 29 May 2026 13:08:03 +0530</pubDate>
            <description><![CDATA[&lt;p&gt;ಮೆಟಾ ತನ್ನ ಜನಪ್ರಿಯ ಆ್ಯಪ್​ಗಳಾದ ಇನ್​ಸ್ಟಾಗ್ರಾಮ್​, ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಪ್ಲಸ್ ಯೋಜನೆಗಳ ಮೂಲಕ, ಬಳಕೆದಾರರು ಹಣ ಪಾವತಿಸಿ ವಿಶೇಷ AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಆಯ್ಕೆಗಳು ಮತ್ತು ಇತರ ಪ್ರೀಮಿಯಂ ಸೌಲಭ್ಯ ಪಡೆಯಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kssanrb903sxvzk9snq7d9pf,imgname-meta-subscription-1780040261993.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೆಟಾ ತನ್ನ ಜನಪ್ರಿಯ ಆ್ಯಪ್​ಗಳಾದ ಇನ್​ಸ್ಟಾಗ್ರಾಮ್​, ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಿಗಾಗಿ ಹೊಸ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈ ಪ್ಲಸ್ ಯೋಜನೆಗಳ ಮೂಲಕ, ಬಳಕೆದಾರರು ಹಣ ಪಾವತಿಸಿ ವಿಶೇಷ AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಆಯ್ಕೆಗಳು ಮತ್ತು ಇತರ ಪ್ರೀಮಿಯಂ ಸೌಲಭ್ಯ ಪಡೆಯಬಹುದು.&lt;/p&gt;&lt;img&gt;&lt;p&gt;ಸ್ಮಾರ್ಟ್​ಫೋನ್​ ಇಲ್ಲದೇ ಬದುಕೇ ದುಸ್ತರ ಎನ್ನಿಸುವಷ್ಟರ ಮಟ್ಟಿಗೆ ಬಹುತೇಕ ಮಂದಿಯ ಸ್ಥಿತಿ ಇಂದಿನದ್ದಾಗಿದೆ. ಒಂದು ಹೊತ್ತು ಊಟ ಬೇಕಾದರೂ ಬಿಟ್ಟಾರು, ಒಂದು ಹೊತ್ತು ಫೋನ್​ ನೋಡದೇ ಇರಲು ಆಗಲ್ಲ ಎನ್ನುವ ಚಟಕ್ಕೆ ದಾಸರಾಗಿರುವವರು ಹಲವರು. ಅದರಲ್ಲಿಯೂ, Instagram, WhatsApp ಮತ್ತು Facebook ಇಲ್ಲದೇ ಒಂದು ನಿಮಿಷವೂ ಇರಲಾಗದ ಎಂದುಕೊಂಡವರಿಗೆ ಇಲ್ಲೊಂದು ಶಾಕಿಂಗ್​ ನ್ಯೂಸ್​. ಅದೇನೆಂದರೆ, ಬಳಕೆದಾರರು ಇನ್ಮುಂದೆ ಇನ್​ಸ್ಟಾಗ್ರಾಮ್​, ವಾಟ್ಸ್​ಆ್ಯಪ್​ ಮತ್ತು ಫೇಸ್​ಬುಕ್​ಗಳಿಗೆ ಹಣ ಪಾವತಿಸಬೇಕಾಗುತ್ತದೆ&lt;/p&gt;&lt;img&gt;&lt;p&gt;ಹಾಗೆಂದು ಗಾಬರಿಯಾಗಬೇಕಿಲ್ಲ. ಇದಕ್ಕೆ ಮುಂದಿನ ಡಿಟೇಲ್ಸ್​ ಓದಿ. ಅಷ್ಟಕ್ಕೂ ಈ ಆ್ಯಪ್​ಗಳ ಪ್ರೀಮಿಯಂ ವೈಶಿಷ್ಟ್ಯಗಳನ್ನು ಬಳಸಲು ಬಯಸಿದರೆ, ಮೆಟಾ ಮೂರು ಪ್ಲಾಟ್&zwnj;ಫಾರ್ಮ್&zwnj;ಗಳಿಗೂ ಚಂದಾದಾರಿಕೆ ಯೋಜನೆಗಳನ್ನು ಪ್ರಾರಂಭಿಸಿದೆ. ಇದರರ್ಥ ನೀವು ಇಂತಿಷ್ಟು ದುಡ್ಡು ಕೊಟ್ಟರೆ ವಿಶೇಷ ವೈಶಿಷ್ಟ್ಯಗಳನ್ನು ಪಡೆಯಬಹುದಾಗಿದೆ. ಹೊಸ ಚಂದಾದಾರಿಕೆ (Subscription) ಯೋಜನೆಗಳ ವಿಶಿಷ್ಟ ವೈಶಿಷ್ಟ್ಯವೆಂದರೆ, ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ, ಬಳಕೆದಾರರು ದೈನಂದಿನ ಕಾರ್ಯಗಳನ್ನು ಸುಲಭಗೊಳಿಸುವ ವಿಶೇಷ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಮೆಟಾದ ಉತ್ಪನ್ನ ಮುಖ್ಯಸ್ಥೆ ನವೋಮಿ ಗ್ಲೀಟ್, ಕಂಪೆನಿಯು ತನ್ನ ಅಪ್ಲಿಕೇಶನ್&zwnj;ಗಳು ಮತ್ತು AI ಉತ್ಪನ್ನಗಳಲ್ಲಿ ಸುಧಾರಿತ ಪರಿಕರಗಳನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದ್ದಾರೆ. ಇದನ್ನು ಬಳಕೆದಾರರು ದುಡ್ಡು ಕೊಟ್ಟರೆ ಬಳಸಬಹುದಾಗಿದೆ ಎಂದಿದ್ದಾರೆ. ಮೆಟಾ ಕಂಪೆನಿಯು ಬಿಡುಗಡೆ ಮಾಡಿದ ವಿಡಿಯೋದಲ್ಲಿ, &quot;ನಮ್ಮ ಸಮುದಾಯವು ಈಗಾಗಲೇ ಇಷ್ಟಪಡುವ ಸುಧಾರಿತ ವೈಶಿಷ್ಟ್ಯಗಳೊಂದಿಗೆ ನಾವು Facebook Plus, Instagram Plus ಮತ್ತು WhatsApp Plus ಅನ್ನು ಪ್ರಾರಂಭಿಸಲು ಪ್ರಾರಂಭಿಸುತ್ತಿದ್ದೇವೆ&quot; ಎಂದು ಅದು ಹೇಳಿದೆ.&lt;/p&gt;&lt;img&gt;&lt;p&gt;ಮೆಟಾ ಹೇಳುವಂತೆ ಇನ್&zwnj;ಸ್ಟಾಗ್ರಾಮ್ ಪ್ಲಸ್ ಮತ್ತು ಫೇಸ್&zwnj;ಬುಕ್ ಪ್ಲಸ್ ತಿಂಗಳಿಗೆ $3.99 (ಸರಿಸುಮಾರು ₹380) ವೆಚ್ಚವಾಗಲಿದೆ, ಆದರೆ ವಾಟ್ಸಾಪ್ ಪ್ಲಸ್ ತಿಂಗಳಿಗೆ $2.99 ​​(ಸರಿಸುಮಾರು ₹290) ವೆಚ್ಚವಾಗಲಿದೆ. ಈ ಯೋಜನೆಗಳು ಮುಂಬರುವ ವಾರಗಳಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಕಸ್ಟಮೈಸೇಶನ್, ಸಂದೇಶ ಕಳುಹಿಸುವಿಕೆ ಮತ್ತು ಪ್ರೇಕ್ಷಕರ ತೊಡಗಿಸಿಕೊಳ್ಳುವಿಕೆಗಾಗಿ ವರ್ಧಿತ ಆಯ್ಕೆಗಳನ್ನು ಒಳಗೊಂಡಂತೆ ಚಂದಾದಾರಿಕೆ ಯೋಜನೆಗಳು ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತವೆ. ಇನ್&zwnj;ಸ್ಟಾಗ್ರಾಮ್ ಪ್ಲಸ್ ಚಂದಾದಾರರು ಕಥೆಗಳು, ಪ್ರೊಫೈಲ್ ಕಸ್ಟಮೈಸೇಶನ್ ಮತ್ತು ಹೆಚ್ಚುವರಿ ಪ್ರೊಫೈಲ್ ಪಿನ್&zwnj;ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಫೇಸ್&zwnj;ಬುಕ್ ಪ್ಲಸ್ ಬಳಕೆದಾರರು ವರ್ಧಿತ ಸ್ಟೋರಿ ವೈಶಿಷ್ಟ್ಯಗಳು, ಹೆಚ್ಚು ಅನಿಮೇಟೆಡ್ ಪ್ರತಿಕ್ರಿಯೆಗಳು ಮತ್ತು ಪ್ರೊಫೈಲ್ ವೈಯಕ್ತೀಕರಣ ಪರಿಕರಗಳನ್ನು ಸಹ ಪಡೆಯುತ್ತಾರೆ. ಅದೇ ರೀತಿ, ವಾಟ್ಸಾಪ್ ಪ್ಲಸ್ ಸದಸ್ಯರು ಪ್ರೀಮಿಯಂ ಸ್ಟಿಕ್ಕರ್&zwnj;ಗಳು, ಅಪ್ಲಿಕೇಶನ್ ಥೀಮ್&zwnj;ಗಳು, ಕಸ್ಟಮ್ ರಿಂಗ್&zwnj;ಟೋನ್&zwnj;ಗಳು ಮತ್ತು ಹೆಚ್ಚು ಪಿನ್ ಮಾಡಿದ ಚಾಟ್&zwnj;ಗಳಿಗೆ ಪ್ರವೇಶವನ್ನು ಸಹ ಪಡೆಯುತ್ತಾರೆ. ಕಂಪನಿಯು ಮೆಟಾ ಒನ್ ಅಡಿಯಲ್ಲಿ ಈ ವೈಶಿಷ್ಟ್ಯಗಳನ್ನು ಪ್ರಾರಂಭಿಸುತ್ತಿದೆ, ಇದು ವಿವಿಧ ಕೃತಕ ಬುದ್ಧಿಮತ್ತೆ ಪರಿಕರಗಳನ್ನು ಒಳಗೊಂಡಿದೆ. AI-ಕೇಂದ್ರಿತ ಚಂದಾದಾರಿಕೆಯನ್ನು ಆರಂಭದಲ್ಲಿ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರೀಕ್ಷಿಸಲಾಗುವುದು ಮತ್ತು ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಮ್ ಮತ್ತು ವಾಟ್ಸಾಪ್&zwnj;ನಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಒಳಗೊಂಡಿರುತ್ತದೆ ಎಂದು ಮೆಟಾ ಹೇಳಿದೆ.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/technology/meta-launches-paid-subscriptions-for-instagram-facebook-whatsapp-suc-ug4o3yn"/>
        </item>
        <item>
            <title><![CDATA[ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹2.90ಪೈಸೆ  ಏರಿಕೆ; 10 ದಿನದಲ್ಲಿ 8 ರೂಪಾಯಿ ಹೆಚ್ಚಳ]]></title>
            <link>https://kannada.asianetnews.com/gallery/business/petrol-price-hiked-by-2-rupees-90-paise-per-litre-an-increase-of-rs-8-in-10-days-mrq-uhbp6tm</link>
            <guid isPermaLink="true">https://kannada.asianetnews.com/gallery/business/petrol-price-hiked-by-2-rupees-90-paise-per-litre-an-increase-of-rs-8-in-10-days-mrq-uhbp6tm</guid>
            <pubDate>Mon, 25 May 2026 07:22:53 +0530</pubDate>
            <description><![CDATA[ಕಳೆದ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿವೆ. ಇಂದಿನ ಭಾರಿ ಏರಿಕೆಯೊಂದಿಗೆ, ಪೆಟ್ರೋಲ್ ದರವು ₹110.99 ಮತ್ತು ಡೀಸೆಲ್ ದರವು ₹98.80 ಕ್ಕೆ ತಲುಪಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks987swyh69red3ex152kxjs,imgname-india-fuel-price-hike-petrol-diesel-rates-rise-middle-east-oil-crisis-may-2026-1779500836766.jpg" type="image/jpeg" height="390" width="690"/>
            <content:encoded><![CDATA[ಕಳೆದ ಹತ್ತು ದಿನಗಳಲ್ಲಿ ನಾಲ್ಕನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿವೆ. ಇಂದಿನ ಭಾರಿ ಏರಿಕೆಯೊಂದಿಗೆ, ಪೆಟ್ರೋಲ್ ದರವು ₹110.99 ಮತ್ತು ಡೀಸೆಲ್ ದರವು ₹98.80 ಕ್ಕೆ ತಲುಪಿದ್ದು, ಗ್ರಾಹಕರಿಗೆ ದೊಡ್ಡ ಹೊರೆಯಾಗಿದೆ.&lt;img&gt;&lt;p&gt;ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರುತ್ತಿದ್ದು, ಕೇವಲ ಹತ್ತು ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ಬೆಲೆ ಏರಿಕೆ ಕಂಡುಬಂದಿದೆ. ಮೇ 15 ರಿಂದ ಇಂದಿನವರೆಗೂ ಒಟ್ಟಾರೆ 8 ರೂಪಾಯಿಯಷ್ಟು ದರ ಹೆಚ್ಚಳವಾಗಿದೆ.&lt;/p&gt;&lt;img&gt;&lt;p&gt;ಮೇ 15 ರಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 3 ರೂಪಾಯಿ ಏರಿಕೆಯಾಗುವ ಮೂಲಕ ಈ ಸರಣಿ ಆರಂಭವಾಗಿತ್ತು. ತದನಂತರ ಮೇ 19 ರಂದು ಪೆಟ್ರೋಲ್ ದರ 94 ಪೈಸೆ ಹೆಚ್ಚಳ ಕಂಡರೆ, ಮೇ 23 ರಂದು ಪ್ರತಿ ಲೀಟರ್ ಪೆಟ್ರೋಲ್ ಗೆ 94 ಪೈಸೆ ಹಾಗೂ ಡೀಸೆಲ್ ಗೆ 60 ಪೈಸೆಯಷ್ಟು ದರ ಏರಿಕೆಯಾಗಿತ್ತು.&lt;/p&gt;&lt;img&gt;&lt;p&gt;ಇದೀಗ ಇಂದಿನ ನಾಲ್ಕನೇ ಬಾರಿಯ ಏರಿಕೆಯಲ್ಲಿ ಗ್ರಾಹಕರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು, ಇಂದು ಒಂದೇ ದಿನ ಪ್ರತಿ ಲೀಟರ್ ಪೆಟ್ರೋಲ್ ಗೆ ಭಾರಿ 2.90 ರೂಪಾಯಿ ಹಾಗೂ ಡೀಸೆಲ್ ಗೆ 2.81 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ.&lt;/p&gt;&lt;img&gt;&lt;p&gt;ಈ ಹೊಸ ಪರಿಷ್ಕರಣೆಯಿಂದಾಗಿ ಈ ಮೊದಲು ₹108.09 ಇದ್ದ ಪೆಟ್ರೋಲ್ ದರವು ಇಂದು ₹110.99ಗೆ ತಲುಪಿದೆ. ಹಾಗೆಯೇ, ₹95.99 ಪೈಸೆ ಇದ್ದ ಡೀಸೆಲ್ ದರವು ಇಂದಿನ ಏರಿಕೆಯ ನಂತರ ₹98.80 ಪೈಸೆಗೆ ಬಂದು ನಿಂತಿದೆ. ಇನ್ನು ಪ್ರಸ್ತುತ ಹೆಚ್.ಪಿ (HP) ಪೆಟ್ರೋಲ್ ಬಂಕ್&zwnj;ಗಳಲ್ಲಿ ಇಂದಿನ ನಿಖರ ದರವನ್ನು ನೋಡುವುದಾದರೆ, ಪ್ರತಿ ಲೀಟರ್ ಪೆಟ್ರೋಲ್ ₹110.93 ರೂ. ಹಾಗೂ ಡೀಸೆಲ್ ₹98.79 ರೂ. ನಷ್ಟು ದಾಖಲಾಗಿದೆ.&lt;/p&gt;]]></content:encoded>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/petrol-price-hiked-by-2-rupees-90-paise-per-litre-an-increase-of-rs-8-in-10-days-mrq-uhbp6tm"/>
        </item>
        <item>
            <title><![CDATA[ಒಂದೇ ದಿನ ಬರೋಬ್ಬರಿ 2,230 ರುಪಾಯಿ ಕುಸಿತ ಕಂಡ ಚಿನ್ನದ ಬೆಲೆ..! ಬಂಗಾರ ಕೊಳ್ಳೋ ಮೊದಲು ಇವತ್ತಿನ ಗೋಲ್ಡ್‌ ರೇಟ್ ಇಲ್ಲಿದೆ ನೋಡಿ!]]></title>
            <link>https://kannada.asianetnews.com/gallery/business/gold-price-drops-sharply-today-24k-and-22k-gold-rates-fall-on-may-28-kvn-vqiosq7</link>
            <guid isPermaLink="true">https://kannada.asianetnews.com/gallery/business/gold-price-drops-sharply-today-24k-and-22k-gold-rates-fall-on-may-28-kvn-vqiosq7</guid>
            <pubDate>Thu, 28 May 2026 12:20:21 +0530</pubDate>
            <description><![CDATA[&lt;p&gt;ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೇ.28ರಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರ(ಮೇ.28)ವಾದ ಇಂದಿನ ಗೋಲ್ಡ್ ರೇಟ್ ಎಷ್ಟು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwtqcvx79vd7m3h1gwb4cee,imgname-chatgpt-image-may-18--2026--11-28-53-am-1779084014461.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೇ.28ರಂದು ಚಿನ್ನ ಖರೀದಿಸಬೇಕು ಎನ್ನುವವರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಗುರುವಾರ(ಮೇ.28)ವಾದ ಇಂದಿನ ಗೋಲ್ಡ್ ರೇಟ್ ಎಷ್ಟು ನೋಡೋಣ ಬನ್ನಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕಳೆದೊಂದು ವಾರದ ಹಿಂದಷ್ಟೇ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ ಸುಮಾರು 16 ಸಾವಿರ ಸಮೀಪ(15,993) ಬಂದು ನಿಂತಿತ್ತು. ನಿರಂತವಾದ ಚಿನ್ನದ ಬೆಲೆಯಲ್ಲಿನ ಏರಿಕೆ ಆಭರಣ ಖರೀದಿಸುವ ಸಾಮಾನ್ಯ ವರ್ಗದ ಮಂದಿ ಕೊಂಚ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ.&lt;/p&gt;&lt;img&gt;&lt;p&gt;ಹೌದು, ಕಳೆದೆರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡಿತ್ತು. ಆದರೆ ಗುರುವಾರವಾದ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, ಆಭರಣ ಖರೀದಿಸುವ ಮಂದಿಯ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.&lt;/p&gt;&lt;img&gt;&lt;p&gt;24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 2230 ರುಪಾಯಿ ಇಳಿಕೆಯಾಗಿದೆ. ಮೇ 28ರಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 15,606 ರುಪಾಯಿಗೆ ಇಳಿಕೆ ಕಂಡಿದೆ. ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿಂದು 223 ರುಪಾಯಿ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಆಭರಣ ಚಿನ್ನ ಎಂದು ಕರೆಸಿಕೊಳ್ಳುವ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ. ಇಂದು 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯ ಮೇಲೆ ಸುಮಾರು 2,050 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,305 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಕಳೆದ 10 ದಿನಗಳಿಗೆ ಹೋಲಿಸಿದರೆ ಇದು ಕನಿಷ್ಠ ಮೊತ್ತಕ್ಕೆ ಕುಸಿದ ಚಿನ್ನದ ಬೆಲೆ ಎನಿಸಿಕೊಂಡಿದೆ. 10 ದಿನಗಳ ಹಿಂದೆ ಅಂದರೆ ಮೇ 19ರಂದು 24 ಕ್ಯಾರಟ್ ಚಿನ್ನದ ಬೆಲೆ 15,704 ರುಪಾಯಿಗಳಾಗಿದ್ದರೇ, 22 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 14,395 ರುಪಾಯಿಗಳಾಗಿತ್ತು.&lt;/p&gt;&lt;img&gt;&lt;p&gt;ಚಿನ್ನದ ಬೆಲೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಭಾರೀ ಇಳಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಇಂದು ಬರೋಬ್ಬರಿ 10,000 ರುಪಾಯಿ ಇಳಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ಇಂದು 2,75,000 ರುಪಾಯಿಗಳಾಗಿದೆ.&lt;/p&gt;]]></content:encoded>
            <category>business</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-price-drops-sharply-today-24k-and-22k-gold-rates-fall-on-may-28-kvn-vqiosq7"/>
        </item>
        <item>
            <title><![CDATA[ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನಿಯಮದಲ್ಲಿ ಭಾರಿ ಬದಲಾವಣೆ: ಇನ್ಮುಂದೆ ಈ ಗ್ರಾಹಕರಿಗೆ ಸಿಗಲ್ಲ ಸಿಲಿಂಡರ್!]]></title>
            <link>https://kannada.asianetnews.com/gallery/business/govt-bans-lpg-cylinders-for-png-users-strait-of-hormuz-gas-shortage-san-wgba4em</link>
            <guid isPermaLink="true">https://kannada.asianetnews.com/gallery/business/govt-bans-lpg-cylinders-for-png-users-strait-of-hormuz-gas-shortage-san-wgba4em</guid>
            <pubDate>Mon, 25 May 2026 20:54:46 +0530</pubDate>
            <description><![CDATA[&lt;p&gt;ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು &amp;nbsp;ಪಿಎನ್&zwnj;ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್&zwnj;ಪಿಜಿ ಸಿಲಿಂಡರ್ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ದಿಗ್ಬಂಧನದಿಂದ ಉಂಟಾಗಿರುವ ಗ್ಯಾಸ್ ಕೊರತೆಯನ್ನು ನಿಭಾಯಿಸಲು ಈ ನಿರ್ಧಾರ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqh185x6kesssq9tzde30k07,imgname-mixcollage-01-may-2026-11-16-am-1719-1777614460838.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾಗತಿಕ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು &amp;nbsp;ಪಿಎನ್&zwnj;ಜಿ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಎಲ್&zwnj;ಪಿಜಿ ಸಿಲಿಂಡರ್ ವಿತರಣೆಯನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಸ್ಟ್ರೇಟ್ ಆಫ್ ಹಾರ್ಮುಜ್ ದಿಗ್ಬಂಧನದಿಂದ ಉಂಟಾಗಿರುವ ಗ್ಯಾಸ್ ಕೊರತೆಯನ್ನು ನಿಭಾಯಿಸಲು ಈ ನಿರ್ಧಾರ ಮಾಡಲಾಗಿದೆ.&lt;/p&gt;&lt;img&gt;&lt;p&gt;ಜಾಗತಿಕ ರಾಜಕೀಯ ವಿದ್ಯಮಾನ ಹಾಗೂ ಆಯಕಟ್ಟಿನ ಸಮುದ್ರ ಮಾರ್ಗವಾಗಿರುವ 'ಸ್ಟ್ರೇಟ್ ಆಫ್ ಹಾರ್ಮುಜ್' (Strait of Hormuz) ಬಂದ್ ಆಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್&zwnj;ಪಿಜಿ ಗ್ಯಾಸ್ ಕೊರತೆ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಕಠಿಣ ತೀರ್ಮಾನವೊಂದನ್ನು ಕೈಗೊಂಡಿದೆ. ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದ್ದು, ಗ್ಯಾಸ್ ಪೈಪ್&zwnj;ಲೈನ್ ಸಂಪರ್ಕ ಹೊಂದಿರುವ ದೇಶದ ಕೋಟ್ಯಂತರ ಗ್ರಾಹಕರಿಗೆ ಇನ್ಮುಂದೆ ಎಲ್&zwnj;ಪಿಜಿ ಸಿಲಿಂಡರ್ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.&lt;/p&gt;&lt;img&gt;&lt;p&gt;ಸೋಮವಾರವಷ್ಟೇ ಕೇಂದ್ರ ಸರ್ಕಾರದ ವತಿಯಿಂದ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. ಹೊಸ ಆದೇಶದ ಪ್ರಕಾರ, ಯಾವ ಗ್ರಾಹಕರ ಮನೆಯಲ್ಲಿ ಈಗಾಗಲೇ ಪೈಪ್&zwnj;ಲೈನ್ ಮೂಲಕ ನೈಸರ್ಗಿಕ ಅನಿಲ (PNG - Piped Natural Gas) ಸರಬರಾಜು ಆಗುತ್ತಿದೆಯೋ, ಅಂತಹ ಗ್ರಾಹಕರಿಗೆ ಇನ್ಮುಂದೆ ಎಲ್&zwnj;ಪಿಜಿ (LPG) ಗ್ಯಾಸ್ ಸಿಲಿಂಡರ್&zwnj;ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂದರೆ, ಇನ್ಮುಂದೆ ಒಬ್ಬನೇ ವ್ಯಕ್ತಿ ಅಥವಾ ಒಂದೇ ಮನೆಯಲ್ಲಿ ಎಲ್&zwnj;ಪಿಜಿ ಮತ್ತು ಪಿಎನ್&zwnj;ಜಿ ಎರಡೂ ಕನೆಕ್ಷನ್&zwnj;ಗಳನ್ನು ಒಟ್ಟಿಗೆ ಹೊಂದುವಂತಿಲ್ಲ.&lt;/p&gt;&lt;img&gt;&lt;p&gt;ಅಮೆರಿಕ ಮತ್ತು ಇರಾನ್ ದೇಶಗಳ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದ್ದರೂ, ಉಭಯ ದೇಶಗಳ ನಡುವಿನ ಸಂಘರ್ಷದ ಕಿಡಿ ಇನ್ನೂ ಸಂಪೂರ್ಣವಾಗಿ ಆರಿಲ್ಲ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧದ ಹಿನ್ನೆಲೆಯಲ್ಲಿ ಇರಾನ್ ದೇಶವು ಮೊದಲೇ 'ಸ್ಟ್ರೇಟ್ ಆಫ್ ಹಾರ್ಮುಜ್' ಸಮುದ್ರ ಮಾರ್ಗವನ್ನು ವ್ಯಾಪಾರಿ ಹಡಗುಗಳ ಸಂಚಾರಕ್ಕಾಗಿ ಬಂದ್ ಮಾಡಿತ್ತು. ತದನಂತರ ಈ ಪ್ರದೇಶದಲ್ಲಿ ಅಮೆರಿಕ ಕೂಡ ಭದ್ರತಾ ದಿಗ್ಬಂಧನ ಹೇರಿದೆ. ಈ ಆಯಕಟ್ಟಿನ ಜಲಮಾರ್ಗ ಬಂದ್ ಆಗಿರುವುದರಿಂದ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಮೇಲೆ ಭಾರಿ ಇಂಧನ ಬಿಕ್ಕಟ್ಟು (Energy Crisis) ಸೃಷ್ಟಿಯಾಗಿದೆ.&lt;/p&gt;&lt;img&gt;&lt;p&gt;ಕೊಲ್ಲಿ ರಾಷ್ಟ್ರಗಳಿಂದ (Gulf Countries) ಭಾರತಕ್ಕೆ ಸರಬರಾಜಾಗುತ್ತಿದ್ದ ಕಚ್ಚಾ ತೈಲ (Crude Oil) ಹಾಗೂ ಎಲ್&zwnj;ಪಿಜಿ ಗ್ಯಾಸ್ ಪೂರೈಕೆ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಜಾಗತಿಕ ಇಂಧನ ಬಿಕ್ಕಟ್ಟಿನ ನೇರ ಪರಿಣಾಮ ಭಾರತದ ಮೇಲಾಗಿದ್ದು, ಕಳೆದ ಕೆಲವು ದಿನಗಳಿಂದ ದೇಶದ ವಿವಿಧೆಡೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್&zwnj;ಪಿಜಿ ಗ್ಯಾಸ್ ಸಿಲಿಂಡರ್&zwnj;ಗಳ ಭಾರಿ ಕೊರತೆ ಕಂಡುಬರುತ್ತಿದೆ. ದೇಶದಲ್ಲಿ ಮುಂಬರುವ ದಿನಗಳಲ್ಲಿ ಅಡುಗೆ ಅನಿಲದ ತೀವ್ರ ಅಭಾವ ಸೃಷ್ಟಿಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಸರ್ಕಾರ ಈ ತುರ್ತು ಕ್ರಮಕ್ಕೆ ಮುಂದಾಗಿದೆ.&lt;/p&gt;&lt;img&gt;&lt;p&gt;ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಕಳೆದ 2025ರ ಸಾಲಿನಲ್ಲಿ ಭಾರತಕ್ಕೆ ಅಗತ್ಯವಿದ್ದ ಒಟ್ಟು ಎಲ್&zwnj;ಪಿಜಿ ಬಳಕೆಯ ಪೈಕಿ ಶೇಕಡಾ 90 ರಷ್ಟು ಗ್ಯಾಸ್ ಅನ್ನು ಕೇವಲ ಮಧ್ಯಪ್ರಾಚ್ಯ (Middle East) ರಾಷ್ಟ್ರಗಳಿಂದಲೇ ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಹಾರ್ಮುಜ್ ಜಲಮಾರ್ಗ ಬಂದ್ ಆಗಿರುವುದರಿಂದ ಭಾರತವು ಆಮದು ಪ್ರಕ್ರಿಯೆಯಲ್ಲಿ ಭಾರಿ ಸಂಕಷ್ಟಗಳನ್ನು ಎದುರಿಸುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಗ್ಯಾಸ್ ದಾಸ್ತಾನನ್ನು ಅತ್ಯಂತ ಅಗತ್ಯವಿರುವ ಗ್ರಾಹಕರಿಗೆ ಮಾತ್ರ ತಲುಪಿಸಲು ಸರ್ಕಾರ ಈಗ ಹೊಸ ನಿಯಮ ರೂಪಿಸಿದೆ.&lt;/p&gt;&lt;img&gt;&lt;p&gt;ದೇಶದಲ್ಲಿ ಗ್ಯಾಸ್ ಸಿಲಿಂಡರ್&zwnj;ಗಳ ಅಭಾವ ತಾರಕಕ್ಕೇರಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗುವುದನ್ನು ತಡೆಯಲು ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ. ಪೈಪ್&zwnj;ಲೈನ್ (PNG) ಸೌಲಭ್ಯ ಇರುವ ನಗರ ಪ್ರದೇಶಗಳ ಜನರಿಗೆ ಅಡುಗೆ ಅನಿಲದ ಪರ್ಯಾಯ ವ್ಯವಸ್ಥೆ ಇರುವುದರಿಂದ, ಸಿಲಿಂಡರ್ ಕೊರತೆಯ ಬಿಸಿಯನ್ನು ಗ್ರಾಮೀಣ ಹಾಗೂ ಪೈಪ್&zwnj;ಲೈನ್ ಇಲ್ಲದ ಪ್ರದೇಶಗಳ ಗ್ರಾಹಕರಿಗೆ ತಟ್ಟದಂತೆ ಸಮಬಲ ಕಾಯ್ದುಕೊಳ್ಳಲು ಈ ಹೊಸ ನಿಯಮ ಸಹಕಾರಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/govt-bans-lpg-cylinders-for-png-users-strait-of-hormuz-gas-shortage-san-wgba4em"/>
        </item>
        <item>
            <title><![CDATA[ಅತಿಯಾದ ಇಂಧನ ವೆಚ್ಚ, ದೇಶೀಯ ವಿಮಾನ ಸೇವೆ ಕಡಿತ ಮಾಡಿದ ಏರ್‌ ಇಂಡಿಯಾ]]></title>
            <link>https://kannada.asianetnews.com/business/air-india-cuts-domestic-flights-high-fuel-costs-june-august-2026-san/articleshow-wkyvcfz</link>
            <guid isPermaLink="true">https://kannada.asianetnews.com/business/air-india-cuts-domestic-flights-high-fuel-costs-june-august-2026-san/articleshow-wkyvcfz</guid>
            <pubDate>Wed, 27 May 2026 15:34:42 +0530</pubDate>
            <description><![CDATA[&lt;p&gt;ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ, ಜೂನ್ ಮತ್ತು ಆಗಸ್ಟ್ 2026 ರ ನಡುವೆ ಆಯ್ದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿನ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshjxqd109fzw68exh4b6g5z,imgname-air-india-maharaja-points-express-loyalty-rewards-flights-tier-1779780476321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಮೇ.27): &lt;/strong&gt;ಗಗನಕ್ಕೇರುತ್ತಿರುವ ಇಂಧನ ಬೆಲೆಗಳಿಂದಾಗಿ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚವನ್ನು ವಿಮಾನಯಾನ ಸಂಸ್ಥೆಯು ಎದುರಿಸುತ್ತಿರುವುದರಿಂದ, ಏರ್ ಇಂಡಿಯಾ ಜೂನ್ ಮತ್ತು ಆಗಸ್ಟ್ 2026 ರ ನಡುವೆ ಆಯ್ದ ದೇಶೀಯ ಮಾರ್ಗಗಳಲ್ಲಿನ ವಿಮಾನ ಪ್ರಯಾಣವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಿದೆ. ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಟಾಟಾ ಗ್ರೂಪ್ ಒಡೆತನದ ಏರ್&zwnj;ಲೈನ್ಸ್&zwnj;, ಅದೇ ಅವಧಿಯಲ್ಲಿ ಕೆಲವು ಅಂತರರಾಷ್ಟ್ರೀಯ ಸೇವೆಗಳನ್ನು ಕಡಿಮೆ ಮಾಡುವ ಹಿಂದಿನ ನಿರ್ಧಾರವನ್ನು ಅನುಸರಿಸಿ ಈ ಕ್ರಮವನ್ನು ತಿಳಿಸಿದೆ.&lt;/p&gt;&lt;p&gt;&quot;ಜೂನ್ ಮತ್ತು ಆಗಸ್ಟ್ 2026 ರ ನಡುವೆ ಆಯ್ದ ಅಂತರರಾಷ್ಟ್ರೀಯ ಸೇವೆಗಳಿಗೆ ನಾವು ಈ ಹಿಂದೆ ಘೋಷಿಸಿದ ಹೊಂದಾಣಿಕೆಗಳ ಮುಂದುವರಿಕೆಯಾಗಿ, ಅದೇ ಅವಧಿಯಲ್ಲಿ ನಾವು ಕೆಲವು ದೇಶೀಯ ಮಾರ್ಗಗಳಲ್ಲಿ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಕಡಿತ ಮಾಡಲಿದ್ದೇವೆ, ಆಯ್ದ ಮಾರ್ಗಗಳಲ್ಲಿ ವಿಮಾನ ಪ್ರಯಾಣವನ್ನು ಕಡಿಮೆ ಮಾಡಿದ್ದೇವೆ&quot; ಎಂದು ಏರ್ ಇಂಡಿಯಾ ತಿಳಿಸಿದೆ.&lt;/p&gt;&lt;p&gt;ಪಿಟಿಐ ಮೂಲಗಳ ಪ್ರಕಾರ, ವಿಮಾನಯಾನ ಸಂಸ್ಥೆಯು ತನ್ನ ದೇಶೀಯ ವಿಮಾನಗಳಲ್ಲಿ ಸುಮಾರು ಶೇ.20-22 ರಷ್ಟು ಕಡಿತಗೊಳಿಸುವ ನಿರೀಕ್ಷೆಯಿದೆ. ಹೆಚ್ಚುತ್ತಿರುವ ಆರ್ಥಿಕ ಮತ್ತು ಕಾರ್ಯಾಚರಣೆಯ ಒತ್ತಡಗಳ ನಡುವೆ ಏರ್ ಇಂಡಿಯಾ ಈಗಾಗಲೇ ತನ್ನ ಅಂತರರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಶೇ.27 ರಷ್ಟು ಕಡಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ವಾರಕ್ಕೆ 4,400 ವಿಮಾನ ಸೇವೆ ನೀಡುತ್ತಿರುವ ಏರ್&zwnj; ಇಂಡಿಯಾ&lt;/strong&gt;&lt;/h2&gt;&lt;p&gt;ಏರ್ ಇಂಡಿಯಾ ಪ್ರಸ್ತುತ ವಾರಕ್ಕೆ ಸುಮಾರು 4,400 ವಿಮಾನಗಳನ್ನು ನಿರ್ವಹಿಸುತ್ತಿದೆ, ಇದರಲ್ಲಿ ಸುಮಾರು 3,600 ದೇಶೀಯ ಮತ್ತು 800 ಅಂತರರಾಷ್ಟ್ರೀಯ ಸೇವೆಗಳು ಸೇರಿವೆ. ಹೆಚ್ಚಿದ ಇಂಧನ ಬೆಲೆಗಳ ಕಾರ್ಯಾಚರಣೆಯ ಮೇಲೆ ನಿರಂತರ ಪರಿಣಾಮ ಬೀರುವುದರಿಂದ ತಾತ್ಕಾಲಿಕ ಹೊಂದಾಣಿಕೆಗಳು ಅಗತ್ಯವಾಗಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.&lt;/p&gt;&lt;p&gt;&quot;ಪರಿಸ್ಥಿತಿಗಳು ಸ್ಥಿರವಾದಂತೆ ವಿಮಾನ ಸೇವೆ ಪುನಃಸ್ಥಾಪಿಸುವ ಉದ್ದೇಶದಿಂದ ಏರ್ ಇಂಡಿಯಾ ಬೇಡಿಕೆ ಮತ್ತು ಕಾರ್ಯಾಚರಣೆಯ ಪರಿಸ್ಥಿತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ&quot; ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. ವಿಮಾನ ಕಡಿಮೆ ಮಾಡಿದ ಸ್ಥಳಗಳಿಗೆ ಈಗಾಗಲೇ ಟಿಕೆಟ್&zwnj; ಬುಕ್&zwnj; ಮಾಡಿರುವ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆಗಳು, ಉಚಿತವಾಗಿ ದಿನಾಂಕ ಬದಲಾವಣೆಗಳು ಅಥವಾ ಪೂರ್ಣ ಮರುಪಾವತಿಗಳ ಮೂಲಕ ಸಹಾಯ ಮಾಡಲಾಗುವುದು ಎಂದು ವಿಮಾನಯಾನ ಸಂಸ್ಥೆ ಭರವಸೆ ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/air-india-cuts-domestic-flights-high-fuel-costs-june-august-2026-san/articleshow-wkyvcfz"/>
        </item>
        <item>
            <title><![CDATA[ರಾಜ್ಯ ಕೈಗಾರಿಕಾ ರಂಗದಲ್ಲಿ ಹೊಸ ಕ್ರಾಂತಿ: ‘ಕ್ವಿನ್ ಸಿಟಿ’ಗೆ ಎಂಟ್ರಿ ಕೊಟ್ಟ ಟೊಯೋಟಾದಿಂದ ₹1,200 ಕೋಟಿ ಬೂಸ್ಟರ್ ಡೋಸ್]]></title>
            <link>https://kannada.asianetnews.com/business/toyota-to-invest-1200-crore-bizintel-hub-karnataka-kwin-city-san/articleshow-wocsq10</link>
            <guid isPermaLink="true">https://kannada.asianetnews.com/business/toyota-to-invest-1200-crore-bizintel-hub-karnataka-kwin-city-san/articleshow-wocsq10</guid>
            <pubDate>Mon, 25 May 2026 21:33:25 +0530</pubDate>
            <description><![CDATA[ಟೊಯೋಟಾ ಕಿರ್ಲೋಸ್ಕರ್ ಮೋಟಾರ್, ಕರ್ನಾಟಕ ಸರ್ಕಾರದ 'ಕ್ವಿನ್ ಸಿಟಿ' ಯೋಜನೆಯಲ್ಲಿ ₹1,200 ಕೋಟಿ ಹೂಡಿಕೆ ಮಾಡಿ 'ಬಿಜ್&zwnj;ಇಂಟೆಲ್ ಹಬ್' ಸ್ಥಾಪಿಸಲಿದೆ. ಈ ಒಪ್ಪಂದದ ಅಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ ಸುಮಾರು 200 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಯೋಜನೆಗೆ 300 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksfxqnahs22cy3bngcb8p8x5,imgname-toyota-1779724703057.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.25):&lt;/strong&gt; ಪ್ರಮುಖ ಆಟೋಮೊಬೈಲ್ ದೈತ್ಯ ಸಂಸ್ಥೆಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM), ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಸಮಗ್ರ ಟೌನ್&zwnj;ಶಿಪ್ ಯೋಜನೆಯಾದ &lsquo;ಕ್ವಿನ್ ಸಿಟಿ&rsquo;ಯಲ್ಲಿ (KWIN City) ಜಾಗತಿಕ ಗುಣಮಟ್ಟದ &lsquo;ಬಿಜ್&zwnj;ಇಂಟೆಲ್ ಹಬ್&rsquo; (BizIntel Hub) ಅನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ. ಈ ಬೃಹತ್ ಯೋಜನೆಗಾಗಿ ಕಂಪನಿಯು ₹1,200 ಕೋಟಿ ಹೂಡಿಕೆ ಮಾಡಲಿದ್ದು, ಮುಂದಿನ ಐದು ವರ್ಷಗಳಲ್ಲಿ ಸುಮಾರು 200 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.&lt;/p&gt;&lt;p&gt;ದಾಬಸ್&zwnj;ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ &lsquo;ಕ್ವಿನ್ ಸಿಟಿ&rsquo;ಯಲ್ಲಿ ಈ ಅತ್ಯಾಧುನಿಕ ಕೇಂದ್ರ ತಲೆಯೆತ್ತಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಸಮ್ಮುಖದಲ್ಲಿ ಅಧಿಕೃತ ತಿಳುವಳಿಕಾ ಒಪ್ಪಂದಕ್ಕೆ (MoU) ಸಹಿ ಹಾಕಲಾಯಿತು. ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಮತ್ತು ಟೊಯೋಟಾ ಸಂಸ್ಥೆಯ ಸಿಒಒ ಹಾಗೂ ವಿಶೇಷ ಯೋಜನೆಗಳ ನಿರ್ದೇಶಕ ಸುದೀಪ್ ದಾಲ್ವಿ ಒಪ್ಪಂದಕ್ಕೆ ಸಹಿ ಹಾಕಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟೊಯೋಟಾ ಸಂಸ್ಥೆಯ ಈ ಬೃಹತ್ ಹೂಡಿಕೆಗೆ ರಾಜ್ಯ ಸರ್ಕಾರದ ವತಿಯಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಪ್ರಸ್ತಾವಿತ ಈ ಜಾಗತಿಕ ಕೇಂದ್ರವು ಇಡೀ ವಿಶ್ವದಲ್ಲೇ ತನ್ನದೇ ಆದ ಮಾದರಿಯಲ್ಲಿ ಮೊದಲನೆಯದಾಗಿರಲಿದೆ ಎಂದು ತಿಳಿಯಲು ಅತ್ಯಂತ ಸಂತೋಷವಾಗುತ್ತಿದೆ ಎಂದರು.&lt;/p&gt;&lt;h2&gt;&lt;strong&gt;ಉದ್ಯೋಗ ಸೃಷ್ಟಿ ಮತ್ತು 300 ಎಕರೆ ಜಮೀನು ಹಂಚಿಕೆ&lt;/strong&gt;&lt;/h2&gt;&lt;p&gt;ಬಳಿಕ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, &quot;ಕ್ವಿನ್ ಸಿಟಿಯಲ್ಲಿ ಸಾಕಾರಗೊಳ್ಳುತ್ತಿರುವ ಮೊದಲ ಪ್ರಮುಖ ಬೃಹತ್ ಹೂಡಿಕೆ ಇದಾಗಿದೆ. ಟೊಯೋಟಾ ಕಂಪನಿಯು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಆರಂಭಿಕ ಬಂಡವಾಳ ವೆಚ್ಚವಾಗಿ ₹1,200 ಕೋಟಿ ಹೂಡಿಕೆ ಮಾಡಲಿದ್ದು, ಸುಮಾರು 200 ನೇರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಈ ಮಹತ್ವದ ಯೋಜನೆಗಾಗಿ ಒಟ್ಟು 300 ಎಕರೆ ಜಮೀನನ್ನು ಹಂಚಿಕೆ ಮಾಡಲಾಗುವುದು,&quot; ಎಂದು ವಿವರ ನೀಡಿದರು.&lt;/p&gt;&lt;p&gt;ಈ ಅತ್ಯಾಧುನಿಕ ಸೌಲಭ್ಯದ ಕೇಂದ್ರದಲ್ಲಿ ಪ್ರಮುಖವಾಗಿ ವಾಹನಗಳ ತಯಾರಿಕೆ, ಸುಧಾರಿತ ಟೆಸ್ಟಿಂಗ್ (ಪರೀಕ್ಷಾರ್ಥ) ಚಟುವಟಿಕೆಗಳು ಹಾಗೂ ಅತ್ಯಾಧುನಿಕ ಆಟೋಮೊಬೈಲ್ ಉತ್ಪಾದನಾ ಕೇಂದ್ರದ ಸ್ಥಾಪನೆಯನ್ನು ಕೈಗೊಳ್ಳಲಾಗುವುದು. ಈ ಯೋಜನೆಯು ರಾಜ್ಯದ ಯುವಜನತೆಗೆ ಉದ್ಯೋಗ ಮತ್ತು ತಾಂತ್ರಿಕ ರಂಗದಲ್ಲಿ ದೂಡ್ಡ ಮಟ್ಟದ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಕ್ವಿನ್ ಸಿಟಿಗೆ ಸಿಗಲಿದೆ ₹48,000 ಕೋಟಿ ಹೂಡಿಕೆಯ ಬಲ&lt;/strong&gt;&lt;/h2&gt;&lt;p&gt;ಸಚಿವ ಎಂ.ಬಿ. ಪಾಟೀಲ್ ಅವರ ಪ್ರಕಾರ, ಕ್ವಿನ್ ಸಿಟಿಯಲ್ಲಿ ನಾವೀನ್ಯತೆ (ಇನೋವೇಶನ್), ಆರೋಗ್ಯ ರಕ್ಷಣೆ (ಹೆಲ್ತ್&zwnj;ಕೇರ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಲಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಈಗಾಗಲೇ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ 7 ರಿಂದ 8 ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ಪ್ರಮುಖ ಆರೋಗ್ಯ ಸಂಸ್ಥೆಗಳು ಮತ್ತು ಸಂಶೋಧನಾ ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ತೋರಿಸಿದ್ದು, ಅವುಗಳೊಂದಿಗಿನ ಒಪ್ಪಂದಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ಅತ್ಯಾಧುನಿಕ ಅಲ್ಟ್ರಾ-ಮಾಡರ್ನ್ ಸಿಟಿಯನ್ನು ಒಟ್ಟು 5,800 ಎಕರೆ ಪ್ರದೇಶದಲ್ಲಿ ವಿವಿಧ ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಪ್ರಸ್ತುತ ಮೊದಲ ಹಂತದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಈ ಸಮಗ್ರ ಯೋಜನೆಯ ಮೂಲಕ ಒಟ್ಟಾರೆಯಾಗಿ ರಾಜ್ಯಕ್ಕೆ ₹48,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಹಾಗೂ ಸುಮಾರು 1 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಕರ್ನಾಟಕ ಸರ್ಕಾರ ಹೊಂದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/toyota-to-invest-1200-crore-bizintel-hub-karnataka-kwin-city-san/articleshow-wocsq10"/>
        </item>
        <item>
            <title><![CDATA[ಇಂದಿನ ಸಿಎಂಒಗಳ ಮೇಲೆ ಯಾಕಿಷ್ಟು ಒತ್ತಡ? ‘ದಿ ಸಿಎಂಒ ಅಸೆಂಬ್ಲಿ’ ಸಂಸ್ಥಾಪಕ ವಿವೇಕ್ ಸೇಠ್‌ ಬಿಚ್ಚಿಟ್ಟ ಮಾರ್ಕೆಟಿಂಗ್ ಜಗತ್ತಿನ ಕಹಿ ಸತ್ಯ]]></title>
            <link>https://kannada.asianetnews.com/business/why-indian-cmos-are-under-pressure-vivek-sheth-cmo-assembly-exclusive-san/articleshow-ykgm4gz</link>
            <guid isPermaLink="true">https://kannada.asianetnews.com/business/why-indian-cmos-are-under-pressure-vivek-sheth-cmo-assembly-exclusive-san/articleshow-ykgm4gz</guid>
            <pubDate>Wed, 27 May 2026 19:03:33 +0530</pubDate>
            <description><![CDATA[&lt;p&gt;&lsquo;ದಿ ಸಿಎಂಒ ಅಸೆಂಬ್ಲಿ&rsquo; ಸಂಸ್ಥಾಪಕ ವಿವೇಕ್ ಸೇಠ್&zwnj;, ಮಾರ್ಕೆಟಿಂಗ್ ಲೀಡರ್&zwnj;ಗಳಿಗಾಗಿ ಒಂದು ಪ್ರಾಮಾಣಿಕ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಈ ಸಂದರ್ಶನದಲ್ಲಿ, ಅವರು ಸಿಎಂಒಗಳ ಖಾಸಗಿ ಆತಂಕಗಳು, ಕೃತಕ ಬುದ್ಧಿಮತ್ತೆಯ ಪ್ರಭಾವ ಹಾಗೂ ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವಿನ ಸಂಘರ್ಷವನ್ನು ಚರ್ಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksmqqawv22bzmsg6hk8byc37,imgname-vivek-sheth-founder-of-the-cmo-assembly-explains-why-todays-chief-marketing-officers-are-under-pressure-1779886173083.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&lsquo;ದಿ&lt;/strong&gt; ಸಿಎಂಒ ಅಸೆಂಬ್ಲಿ&rsquo; ಸಂಸ್ಥೆ ಭಾರತೀಯ ಮಾರ್ಕೆಟಿಂಗ್ ಲೀಡರ್&zwnj;ಗಳು ಯಾವುದೇ ಮುಖವಾಡವಿಲ್ಲದೆ, ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಚರ್ಚಿಸಲು ಅತ್ಯುನ್ನತ ನಂಬಿಕೆಯ ವೇದಿಕೆಯೊಂದನ್ನು ಕಲ್ಪಿಸಿಕೊಟ್ಟಿದೆ. ಇದರ ಸಂಸ್ಥಾಪಕರಾದ ವಿವೇಕ್ ಸೇಠ್&zwnj; ಅವರು ಸಿಎಂಒಗಳ ವೈಯಕ್ತಿಕ ಆತಂಕಗಳು, ಮಾರ್ಕೆಟಿಂಗ್ ಕ್ಷೇತ್ರದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವ ಮತ್ತು ಅಲ್ಪಾವಧಿಯ ಲಾಭ ಹಾಗೂ ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವೆ ನಡೆಯುತ್ತಿರುವ ನಿರಂತರ ಹೋರಾಟವನ್ನು ಏಷ್ಯಾನೆಟ್&zwnj; ನ್ಯೂಸ್&zwnj; ಜೊತೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಪ್ರತಿ ವರ್ಷ ಮಾರ್ಕೆಟಿಂಗ್ ಉದ್ಯಮವು ಸಾರ್ವಜನಿಕವಾಗಿ ಸಾಕಷ್ಟು ಆಶಾವಾದವನ್ನು ಪ್ರದರ್ಶಿಸುತ್ತದೆ. ಆದರೆ ಯಾವುದೇ ಸ್ಟೇಜ್, ಪ್ಯಾನಲ್ ಮತ್ತು ಜನರ ಜಡ್ಜ್&zwnj;ಮೆಂಟ್ ಇಲ್ಲದಿದ್ದಾಗ ಈ ಸಿಎಂಒಗಳು ನಿಜವಾಗಿ ಏನನ್ನು ಮಾತನಾಡಿಕೊಳ್ಳುತ್ತಾರೆ? &lsquo;ದಿ ಸಿಎಂಒ ಅಸೆಂಬ್ಲಿ&rsquo; ಎಂಬುದು ಗ್ರಾಹಕಸ್ನೇಹಿ ಬ್ರ್ಯಾಂಡ್&zwnj;ಗಳ ಚೀಫ್ ಮಾರ್ಕೆಟಿಂಗ್ ಆಫೀಸರ್ಸ್ (CMOs) ಮತ್ತು ಹಿರಿಯ ಮಾರ್ಕೆಟಿಂಗ್ ತಜ್ಞರಿಗಾಗಿಯೇ ರೂಪಿಸಲಾದ ಒಂದು ಪ್ರತ್ಯೇಕ ಕಮ್ಯುನಿಟಿ. ಸಾಂಪ್ರದಾಯಿಕ ಸಾರ್ವಜನಿಕ ವೇದಿಕೆಗಳ ಭಾಷಣಗಳನ್ನು ಬದಿಗಿಟ್ಟು, ಆಧುನಿಕ ಮಾರ್ಕೆಟಿಂಗ್&zwnj;ನ ಕಾರ್ಯಾಚರಣೆಯ ವಾಸ್ತವಗಳು, ಕಷ್ಟಪಟ್ಟು ಕಲಿತ ಪಾಠಗಳು ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸಲು ಈ ವೇದಿಕೆ ಅವಕಾಶ ಮಾಡಿಕೊಡುತ್ತದೆ.&lt;/p&gt;&lt;p&gt;ಇತ್ತೀಚೆಗಷ್ಟೇ ಈ ಸಂಸ್ಥೆಯು 11 ವಿವಿಧ ಉದ್ಯಮಗಳ 121 ಮಾರ್ಕೆಟಿಂಗ್ ಲೀಡರ್&zwnj;ಗಳಿಂದ ಅನಾಮಧೇಯ (Anonymous) ಮತ್ತು ಮುಕ್ತ ಅಭಿಪ್ರಾಯಗಳನ್ನು ಸಂಗ್ರಹಿಸಿ &lsquo;ದಿ ಇಂಡಿಯಾ ಸಿಎಂಒ ಇಂಡೆಕ್ಸ್ 2026&rsquo; (The India CMO Index 2026) ಅನ್ನು ಬಿಡುಗಡೆ ಮಾಡಿದೆ. ಈ ವರದಿಯು ಭಾರತೀಯ ಮಾರ್ಕೆಟಿಂಗ್ ನಾಯಕತ್ವ ಎದುರಿಸುತ್ತಿರುವ ವಿರೋಧಾಭಾಸಗಳನ್ನು, ಪ್ರಮುಖವಾಗಿ ಅಲ್ಪಾವಧಿಯ ಕಾರ್ಯಕ್ಷಮತೆಯ ಮೆಟ್ರಿಕ್ಸ್ ಮತ್ತು ದೀರ್ಘಕಾಲದ ಬ್ರ್ಯಾಂಡ್ ಮೌಲ್ಯದ ನಡುವಿನ ಜಗ್ಗಾಟವನ್ನು ಎತ್ತಿ ತೋರಿಸುತ್ತದೆ.&lt;/p&gt;&lt;p&gt;&lt;strong&gt;&lsquo;ದಿ ಸಿಎಂಒ ಅಸೆಂಬ್ಲಿ&rsquo; ಸಂಸ್ಥಾಪಕ ವಿವೇಕ್ ಸೇಠ್&zwnj; ಅವರೊಂದಿಗಿನ ವಿಶೇಷ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ:&lt;/strong&gt;&lt;/p&gt;&lt;p&gt;&lt;strong&gt;ಪ್ರಶ್ನೆ 1: ಭಾರತದ ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ನೀವು ಕಂಡುಕೊಂಡ ಅಂತಹ ಕೊರತೆ ಏನು? &lsquo;ದಿ ಸಿಎಂಒ ಅಸೆಂಬ್ಲಿ&rsquo; ಕಟ್ಟಲು ನಿಮಗೆ ಪ್ರೇರಣೆ ನೀಡಿದ ಅಂಶ ಯಾವುದು?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಭಾರತದಲ್ಲಿ ಸಿಎಂಒಗಳು ತಮ್ಮ ಮನದಾಳದ ನಿಜವಾದ ಮಾತುಗಳನ್ನು ಆಡಲು ಒಂದು ಪ್ರಾಮಾಣಿಕವಾದ ಜಾಗದ ತೀವ್ರ ಅಭಾವವಿದೆ ಎಂದು ನನಗೆ ಅನಿಸಿತು. ದೇಶದಲ್ಲಿ ಸಾಕಷ್ಟು ಕಾನ್ಫರೆನ್ಸ್&zwnj;ಗಳು, ಪ್ಯಾನಲ್&zwnj;ಗಳು, ಅವಾರ್ಡ್ಸ್ ಶೋಗಳು ಮತ್ತು ನೆಟ್&zwnj;ವರ್ಕಿಂಗ್ ಗ್ರೂಪ್&zwnj;ಗಳಿವೆ - ಆದರೆ ಸಿಎಂಒಗಳು ಯಾವುದೇ ನಾಟಕೀಯತೆ ಇಲ್ಲದೆ ಮುಕ್ತವಾಗಿ ಮಾತನಾಡುವ ಜಾಗಗಳು ತೀರಾ ವಿರಳ. ಸಾರ್ವಜನಿಕವಾಗಿ ನಡೆಯುವ ಹೆಚ್ಚಿನ ಸಂಭಾಷಣೆಗಳು ಪಿಆರ್-ಚಾಲಿತ (PR-driven) ಅಥವಾ ವ್ಯವಹಾರದ ದೃಷ್ಟಿಯದ್ದಾಗಿರುತ್ತವೆ. ಆದರೆ ವಾಸ್ತವ ಏನೆಂದರೆ, ಇಂದಿನ ಸಿಎಂಒಗಳು ಬೋರ್ಡ್ ಮೀಟಿಂಗ್&zwnj;ಗಳ ಒತ್ತಡ, ಎಐ ತಂತ್ರಜ್ಞಾನದ ಅಬ್ಬರ, ಗ್ರಾಹಕರಲ್ಲಿ ಕುಸಿಯುತ್ತಿರುವ ಗಮನದ ಅವಧಿ, ಮಾರುಕಟ್ಟೆಯ ನಿರೀಕ್ಷೆಗಳು ಮತ್ತು ಆಂತರಿಕ ರಾಜಕೀಯದಂತಹ ಅಗಾಧವಾದ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಇವುಗಳನ್ನು ತಮ್ಮದೇ ಸಮಾನ ಮನಸ್ಕರೊಂದಿಗೆ ಪ್ರಾಮಾಣಿಕವಾಗಿ ಚರ್ಚಿಸುವ ವಾತಾವರಣ ಯಾರು ನಿರ್ಮಿಸಿರಲಿಲ್ಲ. ಅದನ್ನು ಪರಿಹರಿಸಲು &lsquo;ದಿ ಸಿಎಂಒ ಅಸೆಂಬ್ಲಿ&rsquo; ಜನ್ಮತಾಳಿತು. ಇದು ಮತ್ತೊಂದು ಉದ್ಯಮ ವೇದಿಕೆಯಲ್ಲ, ಬದಲಿಗೆ ಒಂದೇ ರೀತಿಯ ಒತ್ತಡವನ್ನು ಹೊತ್ತಿರುವ ನಾಯಕರ ನಡುವಿನ ನಿಜವಾದ ಸಂಭಾಷಣೆಗಳ ನಂಬಿಕಸ್ಥ ಕಮ್ಯುನಿಟಿ.&lt;/p&gt;&lt;p&gt;&lt;strong&gt;ಪ್ರಶ್ನೆ 2: ಪ್ರಸ್ತುತ ಇರುವ ಮಾರ್ಕೆಟಿಂಗ್ ಕಮ್ಯುನಿಟಿ ಸಿಎಂಒಗಳ &quot;ಜೊತೆ ಮಾತನಾಡುವ&quot; ಬದಲು, ಸಿಎಂಒಗಳಿಗೆ &quot;ಉಪದೇಶ ನೀಡುತ್ತವೆ&quot; ಎಂದು ನೀವು ಪದೇ ಪದೇ ಹೇಳಿದ್ದೀರಿ. ಈಗಿನ ಮಾದರಿಯಲ್ಲಿ ದೋಷ ಎಲ್ಲಿದೆ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ:&lt;/strong&gt; ಇಂದಿನ ಬಹುತೇಕ ವ್ಯವಸ್ಥೆಗಳು ನಾಯಕರ &lsquo;ದೃಶ್ಯ ಪ್ರದರ್ಶನ&rsquo;ಕ್ಕೆ (Visibility) ಪ್ರಾಮುಖ್ಯತೆ ನೀಡುತ್ತವೆಯೇ ಹೊರತು ಅವರ &lsquo;ಅಸಹಾಯಕತೆ ಅಥವಾ ವಾಸ್ತವ&rsquo;ಕ್ಕೆ (Vulnerability) ಅಲ್ಲ. ಇಂದಿನ ಫಾರ್ಮ್ಯಾಟ್&zwnj;ಗಳು ಒಂದೇ ಮಾದರಿಯಲ್ಲಿವೆ: ಒಂದು ಸ್ಟೇಜ್, ಒಬ್ಬ ಮಾಡರೇಟರ್, ಮೊದಲೇ ಊಹಿಸಬಹುದಾದ ಪ್ರಶ್ನೆಗಳು, ಸಿದ್ಧಪಡಿಸಿದ ಉತ್ತರಗಳು, ಪ್ರಾಯೋಜಕರ ಪ್ರಚಾರದ ಕಥೆಗಳು ಮತ್ತು ತಮಗೆ ಎಲ್ಲವೂ ಗೊತ್ತು ಎನ್ನುವಂತೆ ನಟಿಸುವ ಜನರ ಸೋಗು. ಆದರೆ ನೈಜ ನಾಯಕತ್ವದ ಸಂಭಾಷಣೆಗಳು ಹೀಗೆ ನಡೆಯುವುದಿಲ್ಲ. ಸಿಎಂಒಗಳಿಗೆ ಯಾವುದೇ ಸಾಮಾನ್ಯ ಪ್ರೇರಣೆಯ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ಸಮಾನ ಮನಸ್ಕರ ಪ್ರಾಮಾಣಿಕತೆ. ತಾವೊಂದು ಮುಚ್ಚಿದ ಕೋಣೆಯಲ್ಲಿ ಕುಳಿತು&mdash; &quot;ನಮ್ಮ ಈ ಕ್ಯಾಂಪೇನ್ ಫೇಲ್ ಆಯ್ತು, ದೀರ್ಘಕಾಲದ ಬ್ರ್ಯಾಂಡ್ ಆರ್&zwnj;ಒಐ (ROI) ಅನ್ನು ಸಾಬೀತುಪಡಿಸಲು ನಾನು ಹೆಣಗಾಡುತ್ತಿದ್ದೇನೆ, ನಾನು ಅಡಾಪ್ಟ್ ಮಾಡಿಕೊಳ್ಳುವುದಕ್ಕಿಂತ ವೇಗವಾಗಿ ಎಐ ನನ್ನ ಸಂಸ್ಥೆಯನ್ನು ಬದಲಾಯಿಸುತ್ತಿದೆ, ಇನ್ನು ಮೂರು ವರ್ಷಗಳಲ್ಲಿ ಮಾರ್ಕೆಟಿಂಗ್ ಕ್ಷೇತ್ರ ಹೇಗಿರುತ್ತದೆ ಎಂದು ನನಗೆ ತಿಳಿಯುತ್ತಿಲ್ಲ&quot;&mdash; ಎಂದು ಮುಕ್ತವಾಗಿ ಒಪ್ಪಿಕೊಳ್ಳುವ ವೇದಿಕೆ ಅವರಿಗೆ ಬೇಕು. ಇಂದಿನ ಮಾಡೆಲ್&zwnj;ಗಳು ಕೇವಲ ಸಿದ್ಧಾಂತಗಳಿಗೆ ಬೆಲೆ ಕೊಡುತ್ತವೆ, ಆದರೆ ಅತ್ಯುತ್ತಮ ಸಂಭಾಷಣೆಗಳು ಯಾವಾಗಲೂ ಗೊಂದಲ ಮತ್ತು ಅನಿಶ್ಚಿತತೆಯಿಂದಲೇ ಆರಂಭವಾಗುತ್ತವೆ.&lt;/p&gt;&lt;p&gt;&lt;strong&gt;ಪ್ರಶ್ನೆ 3: ಈ ವಿಶಿಷ್ಟ ವೇದಿಕೆಯ ಆಲೋಚನೆ ನಿಮ್ಮ ತಲೆಯಲ್ಲಿ ಮೂಡಲು ಯಾವುದಾದರೂ ನಿರ್ದಿಷ್ಟ ಸನ್ನಿವೇಶ ಅಥವಾ ಮಾತುಕತೆ ಕಾರಣವಾಯಿತೇ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಹೌದು, ಖಂಡಿತ. ಉದ್ಯಮದ ದೊಡ್ಡ ಇವೆಂಟ್&zwnj;ಗಳು ಮುಗಿದ ನಂತರ ನಾನು ಸಿಎಂಒಗಳ ಜೊತೆ ವೇದಿಕೆಯ ಮೇಲಲ್ಲದೆ, ಹೊರಗಡೆ ಕಾಫಿ ಅಥವಾ ಡಿನ್ನರ್ ಸಮಯದಲ್ಲಿ ನಡೆಸುತ್ತಿದ್ದ ಮಾತುಕತೆಗಳು ನೆನಪಿವೆ. ಅವರ ಖಾಸಗಿ ಮಾತುಗಳು ಸಾರ್ವಜನಿಕ ವೇದಿಕೆಯಲ್ಲಿ ಆಡಿದ ಮಾತುಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತಿದ್ದವು! ವೇದಿಕೆಯ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ಕಾಣುತ್ತಿದ್ದ ವ್ಯಕ್ತಿಗಳು, ಖಾಸಗಿಯಾಗಿ ಸಿಕ್ಕಾಗ ತಾವೆಷ್ಟು ಒತ್ತಡದಲ್ಲಿದ್ದೇವೆ, ಸಾಂಪ್ರದಾಯಿಕ ಮಾರ್ಕೆಟಿಂಗ್ ಸೂತ್ರಗಳ ಬಗ್ಗೆ ತಮಗಿರುವ ಅಪನಂಬಿಕೆಗಳು, ಬೋರ್ಡ್ ನಿರೀಕ್ಷೆಗಳನ್ನು ತಲುಪಲು ಆಗುತ್ತಿರುವ ಕಷ್ಟಗಳು ಮತ್ತು ಎಐ ಈ ಉದ್ಯಮವನ್ನು ಎತ್ತ ಕೊಂಡೊಯ್ಯುತ್ತಿದೆ ಎಂಬ ಗೊಂದಲಗಳನ್ನು ಒಪ್ಪಿಕೊಳ್ಳುತ್ತಿದ್ದರು. ಈ ವ್ಯತ್ಯಾಸ ನನ್ನ ಮನಸ್ಸಿನಲ್ಲಿ ಬಲವಾಗಿ ಉಳಿಯಿತು. ಭಾರತದಲ್ಲಿ ಮಾರ್ಕೆಟಿಂಗ್ ಕ್ಷೇತ್ರದ ಅತ್ಯಂತ ಮೌಲ್ಯಯುತವಾದ ಮಾತುಕತೆಗಳು ಅಧಿಕೃತವಾಗಿ ಅಲ್ಲ, ಬದಲಿಗೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆಯುತ್ತಿವೆ ಎಂದು ನನಗೆ ಅರ್ಥವಾಯಿತು. ಆ ಸಂಭಾಷಣೆಗಳಿಗೆ ಒಂದು ನೈಜ ವೇದಿಕೆ ಸಿಗಬೇಕು ಎಂಬ ಆಲೋಚನೆಯಿಂದಲೇ &lsquo;ದಿ ಸಿಎಂಒ ಅಸೆಂಬ್ಲಿ&rsquo; ಹುಟ್ಟಿಕೊಂಡಿತು.&lt;/p&gt;&lt;p&gt;&lt;strong&gt;ಪ್ರಶ್ನೆ 4: ಸಾರ್ವಜನಿಕರಿಗೆ ಕಾಣಿಸದಂತೆ ಸಿಎಂಒಗಳು ಇಂದು ಖಾಸಗಿಯಾಗಿ ಚರ್ಚಿಸುತ್ತಿರುವ ಮೂರು ದೊಡ್ಡ ಆತಂಕಗಳು ಯಾವುವು?&lt;/strong&gt;&lt;/p&gt;&lt;p&gt;&lt;strong&gt;ಉತ್ತರ:&lt;/strong&gt; ಮೂರು ವಿಷಯಗಳು ಪದೇ ಪದೇ ಚರ್ಚೆಗೆ ಬರುತ್ತವೆ. ಮೊದಲನೆಯದು, ಪ್ರಸ್ತುತತೆ (Relevance). ಈ ಎಐ-ಮಯ ಹಾಗೂ ಗ್ರಾಹಕರ ಗಮನ ಹರಿದುಹೋಗಿರುವ ಜಗತ್ತಿನಲ್ಲಿ ಸಾಂಪ್ರದಾಯಿಕ ಬ್ರ್ಯಾಂಡ್-ಬಿಲ್ಡಿಂಗ್ ಸೂತ್ರಗಳು ಇಂದಿಗೂ ಕೆಲಸ ಮಾಡುತ್ತವೆಯೇ ಎಂದು ಹಲವರು ಯೋಚಿಸುತ್ತಿದ್ದಾರೆ. ಎರಡನೆಯದು, ಮಾಪನ (Measurement). ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ತಕ್ಷಣದ ಲೆಕ್ಕ ನೀಡಬೇಕಾದ ಭಾರಿ ಒತ್ತಡವಿದೆ, ಆದರೆ ಮಾರ್ಕೆಟಿಂಗ್&zwnj;ನಲ್ಲಿ ಮೌಲ್ಯಯುತವಾದ ಪ್ರತಿಯೊಂದನ್ನೂ ತಕ್ಷಣವೇ ಅಳೆಯಲು ಸಾಧ್ಯವಿಲ್ಲ. ಹೀಗಾಗಿ ಸಿಎಂಒಗಳು ಅಲ್ಪಾವಧಿಯ ಆದಾಯದ ನಿರೀಕ್ಷೆ ಮತ್ತು ದೀರ್ಘಕಾಲದ ಬ್ರ್ಯಾಂಡ್ ನಿರ್ಮಾಣದ ನಡುವೆ ಸಿಲುಕಿಕೊಂಡಿದ್ದಾರೆ. ಮೂರನೆಯದು, ಅಸ್ತಿತ್ವದ ಗುರುತು (Identity). ಭವಿಷ್ಯದಲ್ಲಿ ಮಾರ್ಕೆಟಿಂಗ್ ತಂಡಗಳು ಹೇಗಿರಬೇಕು ಎಂಬುದನ್ನು ಮರುಚಿಂತನೆ ಮಾಡಲು ಎಐ ಲೀಡರ್&zwnj;ಅನ್ನು ಒತ್ತಾಯಿಸುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೇವಲ ಮನುಷ್ಯರಿಂದ ಮಾತ್ರ ಸಾಧ್ಯವಾಗುವ ವಿಶಿಷ್ಟ ಅಂಶ ಯಾವುದು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.&lt;/p&gt;&lt;p&gt;&lt;strong&gt;ಪ್ರಶ್ನೆ 5: ಇಂದಿನ ಸಿಎಂಒಗಳ ಮೇಲೆ ಮಾರ್ಕೆಟಿಂಗ್ ವೆಚ್ಚಗಳು ಮತ್ತು ಆರ್&zwnj;ಒಐ (ROI) ಅನ್ನು ಸಾಬೀತುಪಡಿಸಲು ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡವಿದೆಯೇ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಖಂಡಿತವಾಗಿಯೂ ಹೌದು. ಹಳೆಯ ದಿನಗಳಲ್ಲಿ ಮಾರ್ಕೆಟಿಂಗ್ ಫಲಿತಾಂಶಗಳ ಗುಣಲಕ್ಷಣಗಳನ್ನು ನಿಧಾನವಾಗಿ ಮೌಲ್ಯಮಾಪನ ಮಾಡುವ ಸೌಕರ್ಯವಿತ್ತು. ಆದರೆ ಇಂದು ಕಂಪನಿಗಳ ಲೀಡರ್&zwnj;ಶಿಪ್ ತಂಡಗಳು ತಕ್ಷಣದ ಫಲಿತಾಂಶ, ದಕ್ಷತೆ ಮತ್ತು ವ್ಯವಹಾರದ ಮೇಲಿನ ಪ್ರಭಾವದ ಸ್ಪಷ್ಟತೆಯನ್ನು ಬಯಸುತ್ತವೆ. ಇಲ್ಲಿನ ಸವಾಲೆಂದರೆ ಮಾರ್ಕೆಟಿಂಗ್ ಎರಡು ವಿಭಿನ್ನ ಕಾಲಾವಧಿಗಳಲ್ಲಿ ಕೆಲಸ ಮಾಡುತ್ತದೆ: ಒಂದು ಅಲ್ಪಾವಧಿಯ ಆದಾಯದ ಪ್ರಭಾವ, ಇನ್ನೊಂದು ದೀರ್ಘಕಾಲದ ಬ್ರ್ಯಾಂಡ್ ನೆನಪು. ಸಂಸ್ಥೆಗಳು ಕೇವಲ ಅಲ್ಪಾವಧಿಯಲ್ಲಿ ಅಳೆಯಬಹುದಾದ ಫಲಿತಾಂಶಗಳಿಗಾಗಿ ಮಾತ್ರ ಅತಿಯಾಗಿ ಒಲವು ತೋರಿದಾಗ ಅಪಾಯ ಕಾದಿರುತ್ತದೆ. ನೀವು ಆಯಾ ತ್ರೈಮಾಸಿಕದ ದಕ್ಷತೆಯನ್ನು ಉತ್ತಮಗೊಳಿಸಬಹುದು, ಆದರೆ ಭವಿಷ್ಯದಲ್ಲಿ ಬ್ರ್ಯಾಂಡ್&zwnj;ನ ವಿಶಿಷ್ಟತೆಯನ್ನು ಕಳೆದುಕೊಳ್ಳಬಹುದು. ಇಂದಿನ ಸಿಎಂಒಗಳು ಕೇವಲ ಬೆಳವಣಿಗೆಯನ್ನು ತಂದರೆ ಸಾಲದು, ತಮ್ಮ ಪ್ರತಿಯೊಂದು ನಿರ್ಧಾರವನ್ನೂ ರಿಯಲ್ ಟೈಮ್&zwnj;ನಲ್ಲಿ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.&lt;/p&gt;&lt;p&gt;&lt;strong&gt;ಪ್ರಶ್ನೆ 6: ಮಾರ್ಕೆಟಿಂಗ್ ಲೀಡರ್&zwnj; ನಡುವೆ ನಡೆಯುವ ಸಂಭಾಷಣೆಗಳ ಸ್ವರೂಪವನ್ನು ಎಐ (AI) ಮೂಲಭೂತವಾಗಿ ಬದಲಾಯಿಸಿದೆಯೇ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಸಂಪೂರ್ಣವಾಗಿ ಬದಲಾಯಿಸಿದೆ. ಕೇವಲ ಒಂದು ವರ್ಷದ ಹಿಂದೆ, ಎಐ ಕುರಿತಾದ ಸಂಭಾಷಣೆಗಳು ಕೇವಲ ಕುತೂಹಲದ ಆಧಾರದ ಮೇಲಿದ್ದವು. ಆದರೆ ಇಂದು ಅವು ಅಸ್ತಿತ್ವದ (Existential) ಪ್ರಶ್ನೆಯಾಗಿ ಮಾರ್ಪಟ್ಟಿವೆ. ಇದರ ಸ್ವರೂಪವು &quot;ಎಐ ನಮಗೆ ಏನು ಮಾಡಲು ಸಹಾಯ ಮಾಡುತ್ತದೆ?&quot; ಎಂಬುದರಿಂದ &quot;ಎಐ ಎಲ್ಲವನ್ನೂ ಬದಲಾಯಿಸಿದರೆ ನಮ್ಮ ಮಾರ್ಕೆಟಿಂಗ್ ಸಂಸ್ಥೆಗಳ ಗತಿ ಏನು?&quot; ಎಂಬ ಮಟ್ಟಿಗೆ ಬದಲಾಗಿದೆ. ಸಿಎಂಒಗಳು ಈಗ ಸಣ್ಣ ಮಾರ್ಕೆಟಿಂಗ್ ತಂಡಗಳು, ಎಐ-ರಚಿತ ಕ್ರಿಯೇಟಿವಿಟಿ, ಸಿಂಥೆಟಿಕ್ ಕಸ್ಟಮರ್ಸ್&zwnj;, ಬೃಹತ್ ಮಟ್ಟದ ವೈಯಕ್ತೀಕರಣ (Personalization) ಮತ್ತು ಗ್ರಾಹಕರ ನಡವಳಿಕೆ ಎಷ್ಟು ವೇಗವಾಗಿ ವಿಕಸನಗೊಳ್ಳಬಹುದು ಎಂಬುದರ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ, ಬುದ್ಧಿವಂತ ನಾಯಕರು ಎಐ ಅನ್ನು ಕೇವಲ ಉತ್ಪಾದಕತೆಯನ್ನು ಹೆಚ್ಚಿಸುವ ಒಂದು ಸಾಧನವಾಗಿ ನೋಡುತ್ತಿಲ್ಲ. ಬದಲಿಗೆ ಬ್ರ್ಯಾಂಡ್&zwnj;ಗಳನ್ನು ನಿರ್ಮಿಸುವ ವಿಧಾನದಲ್ಲಿ ಆಗುತ್ತಿರುವ ಒಂದು ದೊಡ್ಡ ರಚನಾತ್ಮಕ ಬದಲಾವಣೆ ಎಂದು ಪರಿಗಣಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಪ್ರಶ್ನೆ 7: ಈ ಮುಚ್ಚಿದ ಕೋಣೆಗಳಲ್ಲಿ ಮಾರ್ಕೆಟಿಂಗ್ ಲೀಡರ್&zwnj;ಗಳು ಕೊನೆಗೂ ಒಪ್ಪಿಕೊಳ್ಳುತ್ತಿರುವ ಆ ಒಂದು ಮುಜುಗರದ ಸತ್ಯ ಯಾವುದು?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಮಾರ್ಕೆಟಿಂಗ್&zwnj;ನ ಭವಿಷ್ಯದ ದಿನಗಳು ಹೇಗಿರಲಿವೆ ಎಂಬುದು ಯಾರಿಗೂ ಪೂರ್ಣವಾಗಿ ತಿಳಿದಿಲ್ಲ! ವರ್ಷಗಳ ಕಾಲ ಈ ಉದ್ಯಮವು ಅತಿಯಾದ ಆತ್ಮವಿಶ್ವಾಸ ಮತ್ತು ಖಚಿತತೆಯನ್ನು ಗೌರವಿಸುತ್ತಿತ್ತು. ಆದರೆ ಖಾಸಗಿಯಾಗಿ, ಹಳೆಯ ಮಾರ್ಕೆಟಿಂಗ್ ಸೂತ್ರಗಳು ಈಗ ನಂಬಿಕಸ್ಥವಾಗಿ ಉಳಿದಿಲ್ಲ ಎಂಬುದನ್ನು ಅನೇಕ ನಾಯಕರು ಒಪ್ಪಿಕೊಳ್ಳುತ್ತಿದ್ದಾರೆ. ಗ್ರಾಹಕರ ಗಮನ ವಿಭಜನೆಯಾಗಿದೆ, ಬ್ರ್ಯಾಂಡ್ ನಿಷ್ಠೆ ದುರ್ಬಲವಾಗಿದೆ, ಅಲ್ಗಾರಿದಮ್&zwnj;ಗಳು ಬ್ರ್ಯಾಂಡ್&zwnj;ನ ವಿಸಿಬಿಲಿಟಿಯನ್ನು ನಿರ್ಧರಿಸುತ್ತಿವೆ, ಎಐ ಕ್ರಿಯೇಟಿವಿಟಿಯನ್ನು ಮರುರೂಪಿಸುತ್ತಿದೆ ಮತ್ತು ಕೇವಲ ಪರ್ಫಾರ್ಮೆನ್ಸ್ ಮಾರ್ಕೆಟಿಂಗ್&zwnj;ನಿಂದ ಮಾತ್ರ ದೀರ್ಘಕಾಲ ಬಾಳುವ ಬ್ರ್ಯಾಂಡ್&zwnj;ಗಳನ್ನು ಕಟ್ಟಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಹಿರಿಯ ಮತ್ತು ಅತ್ಯಂತ ಅನುಭವವಿರುವ ಮಾರ್ಕೆಟಿಂಗ್ ತಜ್ಞರು ಕೂಡ ಇಂದು ಮಾರುಕಟ್ಟೆಯಲ್ಲಿ ಹೊಸದಾಗಿ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅತ್ಯಂತ ಕಹಿ ಸತ್ಯ.&lt;/p&gt;&lt;p&gt;&lt;strong&gt;ಪ್ರಶ್ನೆ 8: ಸ್ಪರ್ಧಿಗಳಾಗಿರುವ ಸಿಎಂಒಗಳ ನಡುವೆ ನಂಬಿಕೆಯನ್ನು ಮೂಡಿಸುವುದು ಕಷ್ಟದ ಕೆಲಸ. ಜನರು ಮುಕ್ತವಾಗಿ ಮಾತನಾಡಲು ನೀವು ಆ ನಂಬಿಕೆಯ ವಾತಾವರಣವನ್ನು ಹೇಗೆ ಸೃಷ್ಟಿಸುತ್ತೀರಿ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ:&lt;/strong&gt; ನಂಬಿಕೆ ಎಂಬುದು ನಮ್ಮ ಉದ್ದೇಶದಿಂದ ಬರುತ್ತದೆ. ಒಂದು ವೇದಿಕೆಯು ಕೇವಲ ಪ್ರಚಾರಕ್ಕಾಗಿ, ಬ್ಯುಸಿನೆಸ್ ಮಾರಾಟಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಅಸ್ತಿತ್ವದಲ್ಲಿದೆ ಎಂದು ಜನರಿಗೆ ಅನಿಸಿದ ತಕ್ಷಣ ಅಲ್ಲಿ ಪ್ರಾಮಾಣಿಕತೆ ಮಾಯವಾಗುತ್ತದೆ. &lsquo;ದಿ ಸಿಎಂಒ ಅಸೆಂಬ್ಲಿ&rsquo;ಯಲ್ಲಿ ನಾವು ಯಾವುದೇ ರೀತಿಯ ಪ್ರದರ್ಶನದ ಒತ್ತಡವಿಲ್ಲದ ವಾತಾವರಣವನ್ನು ಸೃಷ್ಟಿಸಲು ಹೆಚ್ಚಿನ ಗಮನ ನೀಡುತ್ತೇವೆ. ಸಣ್ಣ ಗುಂಪುಗಳನ್ನು ರಚಿಸುವುದು, ಸೆಷನ್&zwnj;ಗಳನ್ನು ರೆಕಾರ್ಡ್ ಮಾಡದಿರುವುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುತ್ತೇವೆ. ವಿಪರ್ಯಾಸವೆಂದರೆ, ತಾವು ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ ಎಂದು ನಾಯಕರಿಗೆ ಅರಿವಾದ ತಕ್ಷಣ, ಅಲ್ಲಿನ ಸಂಭಾಷಣೆಗಳು ಅತ್ಯಂತ ಮೌಲ್ಯಯುತವಾಗುತ್ತವೆ. ಹಿರಿಯ ನಾಯಕರು ಹೆಚ್ಚಿನ ನೆಟ್&zwnj;ವರ್ಕಿಂಗ್ ಬಯಸುವುದಿಲ್ಲ, ಅವರು ಕಡಿಮೆ ಜನರಿದ್ದರೂ ಅರ್ಥಪೂರ್ಣವಾದ ಮಾತುಕತೆಯನ್ನು ಬಯಸುತ್ತಾರೆ.&lt;/p&gt;&lt;p&gt;&lt;strong&gt;ಪ್ರಶ್ನೆ 9: &lsquo;ದಿ ಸಿಎಂಒ ಅಸೆಂಬ್ಲಿ&rsquo; ಪ್ರಾರಂಭಿಸಿದ ನಂತರ ನಿಮಗೆ ಅತ್ಯಂತ ಆಶ್ಚರ್ಯ ತಂದ ವಿಷಯ ಯಾವುದು?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಸಿಎಂಒಗಳು ಒಳಗೊಳಗೇ ಎಷ್ಟೊಂದು ಪ್ರಾಮಾಣಿಕ ಸಂಭಾಷಣೆಗಾಗಿ ಹಂಬಲಿಸುತ್ತಿದ್ದರು ಎಂಬುದು ನನಗೆ ಆಶ್ಚರ್ಯ ತಂದಿತು. ನನಗೆ ಈ ವೇದಿಕೆಯ ಮೇಲೆ ಆಸಕ್ತಿ ಇರುತ್ತದೆ ಎಂದು ತಿಳಿದಿತ್ತು, ಆದರೆ ಸಿಎಂಒಗಳು ಈ ಮಟ್ಟಿಗೆ ಭಾವನಾತ್ಮಕವಾಗಿ ಮುಕ್ತವಾಗಿ ಮಾತನಾಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಬಹಳಷ್ಟು ಸಿಎಂಒಗಳು ತಮ್ಮ ಮೇಲಿರುವ ಭಾರಿ ಒತ್ತಡವನ್ನು ಅತ್ಯಂತ ಖಾಸಗಿಯಾಗಿ ತಮ್ಮೊಳಗೆ ಇಟ್ಟುಕೊಂಡಿರುತ್ತಾರೆ. ಹೊರಗಿನಿಂದ ನೋಡುವಾಗ ಮಾರ್ಕೆಟಿಂಗ್ ನಾಯಕತ್ವದ ಹುದ್ದೆಗಳು ಅತ್ಯಂತ ಗ್ಲಾಮರಸ್ ಆಗಿ ಕಾಣುತ್ತವೆ, ಆದರೆ ಆಂತರಿಕವಾಗಿ ಅದು ಒಂಟಿತನದಿಂದ ಕೂಡಿರಬಹುದು. ಇದು ತಾವೆಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ ಎಂಬ ಕೃತಕ ಮುಖವಾಡವನ್ನು ಕಳಚಿಡುವ ಜಾಗ ಎಂದು ತಿಳಿದ ತಕ್ಷಣ ನಾಯಕರು ಸ್ಪಂದಿಸಿದ ರೀತಿ ನನಗೆ ಅತ್ಯಂತ ಆಶ್ಚರ್ಯ ಮೂಡಿಸಿತು.&lt;/p&gt;&lt;p&gt;&lt;strong&gt;ಪ್ರಶ್ನೆ 10: ಇಂತಹದೊಂದು ಸಾಂಪ್ರದಾಯಿಕವಲ್ಲದ ಹೊಸ ವೇದಿಕೆಯನ್ನು ನಂಬುವಂತೆ ಹಿರಿಯ ನಾಯಕರನ್ನು ಒಪ್ಪಿಸುವುದು ಕಷ್ಟವಾಯಿತೇ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಆರಂಭದಲ್ಲಿ ಹೌದು. ಏಕೆಂದರೆ ಇಂತಹ ಕ್ಷೇತ್ರಗಳಲ್ಲಿ ನಂಬಿಕೆ ಎಂಬುದು ಅತ್ಯಂತ ನಿಧಾನವಾಗಿ ಗಳಿಸಬೇಕಾದ ಅಂಶ. ಹಿರಿಯ ನಾಯಕರು ಕೇವಲ ವಾಣಿಜ್ಯೀಕರಣಗೊಂಡ ಮತ್ತು ವ್ಯವಹಾರದ ಉದ್ದೇಶದ ಸಾಕಷ್ಟು ಸಮುದಾಯಗಳನ್ನು ನೋಡಿರುತ್ತಾರೆ. ನಾವು ಎಂದಿಗೂ ಅತಿಯಾಗಿ ಬೆಳೆಯಲು ಅಥವಾ ಕೃತಕ ಹೈಪ್ ಸೃಷ್ಟಿಸಲು ಪ್ರಯತ್ನಿಸಲಿಲ್ಲ. ನಾವು ಪ್ರಮಾಣಕ್ಕಿಂತ ಹೆಚ್ಚಾಗಿ ಆಳಕ್ಕೆ ಮತ್ತು ವಿಸಿಬಿಲಿಟಿಗಿಂತ ಹೆಚ್ಚಾಗಿ ಸಂಭಾಷಣೆಗೆ ಒತ್ತು ನೀಡಿದೆವು. ಕಾಲಾನಂತರದಲ್ಲಿ ನಂಬಿಕೆ ಗಟ್ಟಿಯಾಯಿತು. ಒಬ್ಬ ಗೌರವಾನ್ವಿತ ನಾಯಕನಿಗೆ ಇಲ್ಲಿ ಅರ್ಥಪೂರ್ಣ ಅನುಭವ ಸಿಕ್ಕಾಗ, ಅವರು ತಮ್ಮ ಸಹೋದ್ಯೋಗಿಗಳನ್ನು ತಾವಾಗಿಯೇ ಇಲ್ಲಿಗೆ ಕರೆತರುತ್ತಾರೆ. ಸಾಂಪ್ರದಾಯಿಕ ಬೆಳವಣಿಗೆಯ ತಂತ್ರಗಳಿಗಿಂತ ಈ ಸಾವಯವ (Organic) ನಂಬಿಕೆ ನಿರ್ಮಾಣದ ಪ್ರಕ್ರಿಯೆ ಅತ್ಯಂತ ಶಕ್ತಿಶಾಲಿಯಾದುದು.&lt;/p&gt;&lt;p&gt;&lt;strong&gt;ಪ್ರಶ್ನೆ 11: ಇಂದಿನಿಂದ ಐದು ವರ್ಷಗಳ ನಂತರ &lsquo;ದಿ ಸಿಎಂಒ ಅಸೆಂಬ್ಲಿ&rsquo; ಏನಾಗಬೇಕು ಎಂದು ನೀವು ಬಯಸುತ್ತೀರಿ? ಒಂದು ನೆಟ್&zwnj;ವರ್ಕ್, ಒಂದು ಮೂವ್&zwnj;ಮೆಂಟ್ ಅಥವಾ ಒಂದು ಥಿಂಕ್ ಟ್ಯಾಂಕ್?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ಇದು ಈ ಪ್ರದೇಶದಲ್ಲೇ ಅತ್ಯಂತ ನಂಬಿಕಸ್ಥ ಸಿಎಂಒಗಳ ಇಕೋಸಿಸ್ಟಮ್ ಆಗಬೇಕು ಎಂದು ನಾನು ಬಯಸುತ್ತೇನೆ - ಇದು ಅತಿ ದೊಡ್ಡದಾಗಿದೆ ಎಂದಲ್ಲ, ಬದಲಿಗೆ ಇದು ಅತ್ಯಂತ ಪ್ರಾಮಾಣಿಕವಾಗಿದೆ ಎಂಬ ಕಾರಣಕ್ಕಾಗಿ. ಉದ್ಯಮದ ನೈಜ ಚಿಂತನೆಗಳು ಹೊರಹೊಮ್ಮುವ, ಅರ್ಥಪೂರ್ಣ ಸಂಶೋಧನೆಗಳು ನಡೆಯುವ, ಭವಿಷ್ಯದ ಮಾರ್ಕೆಟಿಂಗ್ ನಾಯಕರು ರೂಪುಗೊಳ್ಳುವ ಮತ್ತು ಕಠಿಣ ಸಂಭಾಷಣೆಗಳು ಸಾರ್ವಜನಿಕವಾಗಿ ಚರ್ಚೆಗೆ ಬರುವ ಮುನ್ನವೇ ಇಲ್ಲಿ ಬಗೆಹರಿಯುವ ಜಾಗ ಇದಾಗಬೇಕು. ಭವಿಷ್ಯವು ಕೇವಲ ವಿಸಿಬಿಲಿಟಿ ತರುವ ವೇದಿಕೆಗಳದ್ದಲ್ಲ, ಬದಲಿಗೆ ಸ್ಪಷ್ಟತೆಯನ್ನು (Clarity) ನೀಡುವ ಸಮುದಾಯಗಳದ್ದಾಗಿದೆ ಎಂದು ನಾನು ನಂಬುತ್ತೇನೆ. ಇದರೊಂದಿಗೆ ನಾವು ಇಡೀ ಮಾರ್ಕೆಟಿಂಗ್ ವ್ಯವಸ್ಥೆಗೆ ಮುಕ್ತವಾಗಿರುವ &lsquo;ದಿ ಮಾರ್ಕೆಟಿಂಗ್ ಅಸೆಂಬ್ಲಿ&rsquo; (The Marketing Assembly) ಎಂಬ ಮತ್ತೊಂದು ವಿಭಾಗವನ್ನೂ ನಡೆಸುತ್ತಿದ್ದೇವೆ - ಅದರ ಉದ್ದೇಶವೂ ಒಂದೇ, ಜನರು ಪರಸ್ಪರ ಒಟ್ಟಿಗೆ ಬೆಳೆಯಲು ಸಹಾಯ ಮಾಡುವುದು!&lt;/p&gt;&lt;p&gt;&lt;strong&gt;ಪ್ರಶ್ನೆ 12: ಭಾರತದ ಪ್ರತಿಯೊಬ್ಬ ಸಿಎಂಒ ಕೂಡ ಖಾಸಗಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಉತ್ತರಿಸಲೇಬೇಕಾದ ಒಂದು ಪ್ರಶ್ನೆಯನ್ನು ಕೇಳಲು ನಿಮಗೆ ಅವಕಾಶ ನೀಡಿದರೆ, ನೀವು ಯಾವ ಪ್ರಶ್ನೆ ಕೇಳುತ್ತೀರಿ?&lt;/strong&gt;&lt;/p&gt;&lt;p&gt;&lt;strong&gt;ಉತ್ತರ: &lt;/strong&gt;ನಾನು ಅವರನ್ನು ಹೀಗೆ ಕೇಳುತ್ತೇನೆ: &quot;ಒಂದು ವೇಳೆ ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂದಾದರೆ, ನಾಳೆಯಿಂದ ಮಾರ್ಕೆಟಿಂಗ್&zwnj;ನಲ್ಲಿ ನೀವು ಮಾಡುತ್ತಿರುವ ಯಾವ ಕೆಲಸವನ್ನು ತಕ್ಷಣವೇ ನಿಲ್ಲಿಸಿಬಿಡುತ್ತಿದ್ದೀರಿ?&quot; ಏಕೆಂದರೆ ಈ ಒಂದೇ ಒಂದು ಪ್ರಶ್ನೆಯು ಎಲ್ಲವನ್ನೂ ಬಿಚ್ಚಿಡುತ್ತದೆ: ನಾವ ಒಳಗೊಳಗೇ ನಂಬದ ಕೆಲವು ಮೆಟ್ರಿಕ್ಸ್, ಕೇವಲ ಸಾರ್ವಜನಿಕ ಪ್ರದರ್ಶನಕ್ಕಾಗಿ ನಾವು ಮಾಡುವ ಕ್ಯಾಂಪೇನ್&zwnj;ಗಳು, ಯಾವುದೇ ಮೌಲ್ಯವನ್ನು ಸೃಷ್ಟಿಸದ ಸಭೆಗಳು, ಯಾರೂ ಓದದ ವರದಿಗಳು ಮತ್ತು ಎಲ್ಲರೂ ಮಾಡುತ್ತಿದ್ದಾರೆ ಎಂಬ ಒಂದೇ ಕಾರಣಕ್ಕಾಗಿ ನಾವು ಮುಂದುವರಿಸಿಕೊಂಡು ಹೋಗುತ್ತಿರುವ ಉದ್ಯಮದ ಹಳೆಯ ಹವ್ಯಾಸಗಳು... ಮಾರ್ಕೆಟಿಂಗ್&zwnj;ನ ಪ್ರಾಮಾಣಿಕ ಸಂಭಾಷಣೆಗಳು ನಿಜವಾಗಿ ಆರಂಭವಾಗುವುದೇ ಇಲ್ಲಿಂದ!&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/business/why-indian-cmos-are-under-pressure-vivek-sheth-cmo-assembly-exclusive-san/articleshow-ykgm4gz"/>
        </item>
    </channel>
</rss>
