<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 08 Jul 2026 22:17:40 +0530</lastBuildDate>
        <atom:link href="https://kannada.asianetnews.com/rss/business" rel="self" type="application/rss+xml"/>
        <item>
            <title><![CDATA[ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್‌ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ]]></title>
            <link>https://kannada.asianetnews.com/gallery/business/epfo-pf-interest-credit-july-15-crores-employees-account-centralized-it-san-x9n3l57</link>
            <guid isPermaLink="true">https://kannada.asianetnews.com/gallery/business/epfo-pf-interest-credit-july-15-crores-employees-account-centralized-it-san-x9n3l57</guid>
            <pubDate>Wed, 08 Jul 2026 22:17:36 +0530</pubDate>
            <description><![CDATA[ಇಪಿಎಫ್&zwnj;ಒ, ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಶೇ. 8.25ರಷ್ಟು ಬಡ್ಡಿ ಹಣವನ್ನು ಜಮೆ ಮಾಡುವುದಾಗಿ ಘೋಷಿಸಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದ್ದು, ಜೊತೆಗೆ ವೇಗದ ಸೇವೆಗಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwyfrbwdh3g0h6zp86ffh9n0,imgname-epfo-1783434588045.jpg" type="image/jpeg" height="390" width="690"/>
            <content:encoded><![CDATA[ಇಪಿಎಫ್&zwnj;ಒ, ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಶೇ. 8.25ರಷ್ಟು ಬಡ್ಡಿ ಹಣವನ್ನು ಜಮೆ ಮಾಡುವುದಾಗಿ ಘೋಷಿಸಿದೆ. ಜುಲೈ 15ರೊಳಗೆ ಸುಮಾರು 34 ಕೋಟಿ ಖಾತೆಗಳಿಗೆ ಈ ಹಣ ವರ್ಗಾವಣೆಯಾಗಲಿದ್ದು, ಜೊತೆಗೆ ವೇಗದ ಸೇವೆಗಾಗಿ ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.&lt;img&gt;&lt;p&gt;ಇಪಿಎಫ್&zwnj;ಒ (EPFO) ಪಿಎಫ್ ಖಾತೆದಾರರಿಗೆ ಪ್ರಮುಖ ಮಾಹಿತಿಯೊಂದನ್ನು ಪ್ರಕಟಿಸಿದೆ. ವಿಶೇಷವೆಂದರೆ, ಪ್ರತಿಯೊಬ್ಬರೂ ಯಾವ ವಿಷಯಕ್ಕಾಗಿ ಕಾಯುತ್ತಿದ್ದರೋ, ಕೊನೆಗೂ ಆ ಬಗ್ಗೆ ದೊಡ್ಡ ಘೋಷಣೆಯಾಗಿದೆ. ಶೀಘ್ರದಲ್ಲೇ ಪಿಎಫ್ ಖಾತೆದಾರರ ಖಾತೆಗೆ ಬಡ್ಡಿ ಹಣ ಜಮೆಯಾಗಲಿದೆ.&lt;/p&gt;&lt;img&gt;&lt;p&gt;ಹೊಸ ವ್ಯವಸ್ಥೆಯಡಿ ಜುಲೈ 15 ರೊಳಗೆ 34 ಕೋಟಿ ಖಾತೆಗಳಿಗೆ ಬರೋಬ್ಬರಿ ಶೇಕಡಾ 8.25 ರಷ್ಟು ಬಡ್ಡಿಯನ್ನು ಜಮೆ ಮಾಡಲಾಗುವುದು ಎಂದು ಇಪಿಎಫ್&zwnj;ಒ ಪ್ರಕಟಿಸಿದೆ. ಇದು ಸದ್ಯದ ದಿನಗಳಲ್ಲಿ ಉದ್ಯೋಗಿಗಳ ಪಾಲಿನ ದೊಡ್ಡ ಘೋಷಣೆ ಎನಿಸಿದೆ.&lt;/p&gt;&lt;img&gt;&lt;p&gt;ಈ ಒಟ್ಟು ಬಡ್ಡಿಯ ಮೊತ್ತ ಸುಮಾರು 1.44 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ. ಇದರಿಂದ ಗ್ರಾಹಕರಿಗೆ ನೇರ ಲಾಭ ಸಿಗಲಿದೆ. ಜುಲೈ 15 ರೊಳಗೆ ಈ ಮೊತ್ತ ಖಾತೆಗಳಿಗೆ ಜಮೆಯಾಗಲಿದ್ದು, ಕಳೆದ ಹಲವು ದಿನಗಳಿಂದ ಇದೇ ಘೋಷಣೆಗಾಗಿ ಎಲ್ಲರೂ ಕಾಯುತ್ತಿದ್ದರು.&lt;/p&gt;&lt;img&gt;&lt;p&gt;ಇದರೊಂದಿಗೆ, ಪಿಎಫ್&zwnj;ಗೆ ಸಂಬಂಧಿಸಿದ ಸೇವೆಗಳು ಇನ್ಮುಂದೆ ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿ ಲಭ್ಯವಾಗಲಿವೆ. ಹೊಸ ಕೇಂದ್ರೀಕೃತ ಐಟಿ ವ್ಯವಸ್ಥೆಯನ್ನು (Centralized IT System) ಜಾರಿಗೆ ತರುತ್ತಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ. ಇದು ಅತ್ಯಂತ ವೇಗದ ಸೇವೆಯನ್ನು ಒದಗಿಸುತ್ತದೆ.&lt;/p&gt;&lt;img&gt;&lt;p&gt;ಈ ಹೊಸ ವ್ಯವಸ್ಥೆಯಿಂದಾಗಿ ದೇಶಾದ್ಯಂತ ಇರುವ ಎಲ್ಲಾ ಪಿಎಫ್ ಖಾತೆಗಳ ಮಾಹಿತಿಯನ್ನು ಒಂದೇ ಕೇಂದ್ರೀಕೃತ ಡೇಟಾಬೇಸ್&zwnj;ನಲ್ಲಿ ಸಂಗ್ರಹಿಸಲಾಗುತ್ತದೆ. ಇದರಿಂದಾಗಿ ಪಿಎಫ್ ಸದಸ್ಯರು ದೇಶದ ಯಾವುದೇ ಇಪಿಎಫ್&zwnj;ಒ ಕಚೇರಿಯಿಂದಲಾದರೂ ಸೇವೆಗಳ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/epfo-pf-interest-credit-july-15-crores-employees-account-centralized-it-san-x9n3l57"/>
        </item>
        <item>
            <title><![CDATA[ಜುಲೈ 10 ರಿಂದ ದುಬಾರಿಯಾಗಲಿವೆ ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳು!]]></title>
            <link>https://kannada.asianetnews.com/car-news/mahindra-suv-price-hike-july-10-scorpio-n-xuv700-thar-roxx-costlier-san/articleshow-mxwr2u6</link>
            <guid isPermaLink="true">https://kannada.asianetnews.com/car-news/mahindra-suv-price-hike-july-10-scorpio-n-xuv700-thar-roxx-costlier-san/articleshow-mxwr2u6</guid>
            <pubDate>Wed, 08 Jul 2026 21:54:48 +0530</pubDate>
            <description><![CDATA[&lt;p&gt;ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್&zwnj;ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್&zwnj;ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktaw3mwq63qnsz9nt00819z0,imgname-tamil-news---2026-06-05t083637.760-1780628968343.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಜು.8): &lt;/strong&gt;ದೇಶೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿಯ ಬಲಿಷ್ಠ ಎಸ್&zwnj;ಯುವಿ (SUV) ಕಾರುಗಳನ್ನು ಖರೀದಿಸಲು ಪ್ಲ್ಯಾನ್&zwnj; ಮಾಡ್ತಾ ಇರುವ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಜುಲೈ 10 ರಿಂದ ಮಹೀಂದ್ರಾ &amp;amp; ಮಹೀಂದ್ರಾ ಕಂಪನಿಯ ವಾಹನಗಳ ಬೆಲೆಯಲ್ಲಿ ಗಣನೀಯ ಏರಿಕೆಯಾಗಲಿದೆ. ಕಂಪನಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿರುವಂತೆ, ಜುಲೈ 10 ರಿಂದ ಅನ್ವಯವಾಗುವಂತೆ ತನ್ನ ಇಡೀ ಎಸ್&zwnj;ಯುವಿ ಶ್ರೇಣಿಯ ಕಾರುಗಳ ಬೆಲೆಯನ್ನು ಸರಾಸರಿ ಶೇ. 2.7 ರಷ್ಟು ಮತ್ತು ಕಮರ್ಷಿಯಲ್ (ವಾಣಿಜ್ಯ) ವಾಹನಗಳ ದರವನ್ನು ಸರಾಸರಿ ಶೇ. 2 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ. ಆದರೆ, ಈ ಬೆಲೆ ಏರಿಕೆಯು ಕಾರಿನ ವಿವಿಧ ಮಾಡೆಲ್ ಹಾಗೂ ವೇರಿಯೆಂಟ್&zwnj;ಗಳ ಆಧಾರದ ಮೇಲೆ ಬದಲಾಗಲಿದೆ.&lt;/p&gt;&lt;p&gt;ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಸ್&zwnj;ಯುವಿ ಕಾರುಗಳಿಗೆ ಅಭೂತಪೂರ್ವ ಬೇಡಿಕೆ ಇರುವ ಸಂದರ್ಭದಲ್ಲೇ ಕಂಪನಿಯು ಈ ನಿರ್ಧಾರ ಕೈಗೊಂಡಿದೆ. ಸದ್ಯ ದೇಶದಲ್ಲಿ ಎಸ್&zwnj;ಯುವಿ ಸೆಗ್ಮೆಂಟ್ ಕಾರುಗಳ ಜನಪ್ರಿಯತೆ ಹೆಚ್ಚುತ್ತಿರುವುದರಿಂದ ಮಹೀಂದ್ರಾ ಮಾರಾಟದಲ್ಲಿ ಸತತ ಪ್ರಗತಿ ದಾಖಲಿಸುತ್ತಿದೆ. ವಿಶೇಷವೆಂದರೆ, ಮಹೀಂದ್ರಾದ ಪ್ಯಾಸೆಂಜರ್ ವೆಹಿಕಲ್ ಪೋರ್ಟ್&zwnj;ಫೋಲಿಯೊದಲ್ಲಿ ಕೇವಲ ಎಸ್&zwnj;ಯುವಿ ಕಾರುಗಳು ಮಾತ್ರವೇ ಶಾಮೀಲಾಗಿವೆ. ಇದಲ್ಲದೆ, ಕಳೆದ ಕೆಲವು ತಿಂಗಳುಗಳಿಂದ ಕಂಪನಿಯ ಹೊಸ ಎಲೆಕ್ಟ್ರಿಕ್ ಎಸ್&zwnj;ಯುವಿ ಕಾರುಗಳ ಬೇಡಿಕೆಯಲ್ಲೂ ಭಾರಿ ಜಿಗಿತ ಕಂಡುಬಂದಿದೆ.&lt;/p&gt;&lt;h2&gt;&lt;strong&gt;ಬೆಲೆ ಏರಿಕೆಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಕಾರಣ&lt;/strong&gt;&lt;/h2&gt;&lt;p&gt;ಮಹೀಂದ್ರಾ ಕಂಪನಿಗಿಂತ ಮುಂಚಿತವಾಗಿ ದೇಶದ ಹಲವು ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಈಗಾಗಲೇ ತಮ್ಮ ಕಾರುಗಳ ಬೆಲೆಯನ್ನು ಹೆಚ್ಚಿಸಿವೆ. ಕಾರುಗಳ ತಯಾರಿಕೆಗೆ ಬಳಸಲಾಗುವ ಕಚ್ಚಾ ವಸ್ತುಗಳಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಹೆಚ್ಚಾದ ಉತ್ಪಾದನಾ ವೆಚ್ಚದ ಬಹುದೊಡ್ಡ ಪಾಲನ್ನು ಕಂಪನಿಯೇ ಭರಿಸುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ವೆಚ್ಚ ಮಿತಿಮೀರುತ್ತಿರುವುದರಿಂದ ಅದರ ಸ್ವಲ್ಪ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಮಹೀಂದ್ರಾ ಹೇಳಿದೆ.&lt;/p&gt;&lt;h2&gt;&lt;strong&gt;ಬೆಲೆ ಏರಿಕೆಯ ನಡುವೆಯೂ ಮುಗಿಬಿದ್ದ ಗ್ರಾಹಕರು&lt;/strong&gt;&lt;/h2&gt;&lt;p&gt;ಬೆಲೆ ಏರಿಕೆಯ ಮುನ್ಸೂಚನೆ ನಡುವೆಯೂ ಮಹೀಂದ್ರಾ ಕಂಪನಿಯ ಹಲವು ಎಸ್&zwnj;ಯುವಿ ಕಾರುಗಳ ಮಾರಾಟ ಅತ್ಯಂತ ಬಲಿಷ್ಠವಾಗಿ ಮುಂದುವರಿದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿಯು ವಾರ್ಷಿಕ ಆಧಾರದ ಮೇಲೆ ಎರಡಂಕಿ ಪ್ರಗತಿಯನ್ನು ದಾಖಲಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಕಂಪನಿಯ ಜನಪ್ರಿಯ ಮಾದರಿಗಳಾದ ಸ್ಕಾರ್ಪಿಯೋ ಎನ್ (Scorpio N), ಎಕ್ಸ್&zwnj;ಯುವಿ700 (XUV700), ಥಾರ್ ರಾಕ್ಸ್ (Thar Roxx), ಎಕ್ಸ್&zwnj;ಯುವಿ 3ಎಕ್ಸ್&zwnj;ಒ (XUV 3XO) ಮತ್ತು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಕಂಪನಿಯ ಹೊಸ ಎಲೆಕ್ಟ್ರಿಕ್ ಎಸ್&zwnj;ಯುವಿಗಳಿಗೆ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ದೇಶದ ಅಗ್ರಗಣ್ಯ ಎಸ್&zwnj;ಯುವಿ ತಯಾರಿಕಾ ಕಂಪನಿಗಳಲ್ಲಿ ಮಹೀಂದ್ರಾ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.&lt;/p&gt;&lt;h2&gt;&lt;strong&gt;ಹೊಸ ಮಾದರಿಗಳ ಮೇಲೆ ತೀವ್ರ ನಿಗಾ&lt;/strong&gt;&lt;/h2&gt;&lt;p&gt;ಮಹೀಂದ್ರಾ ಕಂಪನಿಯು ತನ್ನ ಪ್ರಾಡಕ್ಟ್ ಪೋರ್ಟ್&zwnj;ಫೋಲಿಯೊವನ್ನು ವಿಸ್ತರಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಹಕರಿಗೆ ಮತ್ತಷ್ಟು ಪ್ರೀಮಿಯಂ ಅನುಭವವನ್ನು ನೀಡುವ ಸಲುವಾಗಿ ಕಂಪನಿಯು ಇತ್ತೀಚೆಗಷ್ಟೇ ತನ್ನ ಜನಪ್ರಿಯ ಇವಿ ಮಾದರಿಯಾದ ಎಕ್ಸ್&zwnj;ಇವಿ 9ಇ (XEV 9e) ಕಾರಿನ ಹೊಸ &lsquo;ಸಿನೆಲಕ್ಸ್ ಎಡಿಷನ್&rsquo; (Cineluxe Edition) ಅನ್ನು ಪರಿಚಯಿಸಿದೆ. ಇದರಲ್ಲಿ ಹೊಸ ಎಕ್ಸ್&zwnj;ಟೀರಿಯರ್ ಕಲರ್ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.&lt;/p&gt;&lt;p&gt;ಇದರ ಜೊತೆಗೆ ಕಂಪನಿಯು ಹಲವು ಹೊಸ ಆಕರ್ಷಕ ಕಾರುಗಳ ತಯಾರಿಕೆಯಲ್ಲೂ ತೊಡಗಿಸಿಕೊಂಡಿದೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಮಹೀಂದ್ರಾ ಕಂಪನಿಯು ಶೀಘ್ರದಲ್ಲೇ ತನ್ನ &lsquo;ವಿಷನ್ ಎಸ್&rsquo; (Vision S) ಕಾನ್ಸೆಪ್ಟ್ ಆಧಾರಿತ ಹೊಚ್ಚಹೊಸ ಎಸ್&zwnj;ಯುವಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕಾರು ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಕ್ಯಾಮೆರಾಗೆ ಸಿಲುಕಿದೆ. ಅಷ್ಟೇ ಅಲ್ಲದೆ, ಕಂಪನಿಯು ಭವಿಷ್ಯದ ತನ್ನ ಹೊಸ ಮಾಡೆಲ್&zwnj;ಗಾಗಿ &lsquo;SXT&rsquo; ಎಂಬ ಹೆಸರಿನ ಹೊಸ ಟ್ರೇಡ್&zwnj;ಮಾರ್ಕ್ (ನೇಮ್&zwnj;ಪ್ಲೇಟ್) ಅನ್ನು ಸಹ ನೋಂದಾಯಿಸಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಮಹೀಂದ್ರಾದಿಂದ ಮತ್ತೊಂದು ಧಮಾಕಾ ಕಾರು ಮಾರುಕಟ್ಟೆಗೆ ಬರುವುದು ಖಚಿತವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/mahindra-suv-price-hike-july-10-scorpio-n-xuv700-thar-roxx-costlier-san/articleshow-mxwr2u6"/>
        </item>
        <item>
            <title><![CDATA[ಉದ್ಯೋಗಸ್ಥ ಹೆಂಡತಿ ಸತ್ತರೆ ಗಂಡನಿಗೆ ಪಿಂಚಣಿ ಸಿಗುತ್ತಾ? ಸರ್ಕಾರದ ನಿಯಮಗಳು, ದಾಖಲೆಗಳ ಮಾಹಿತಿ ಇಲ್ಲಿದೆ]]></title>
            <link>https://kannada.asianetnews.com/gallery/business/husband-receive-family-pension-after-his-wife-s-death-check-govt-rules-and-eligibility-kqh7dqt</link>
            <guid isPermaLink="true">https://kannada.asianetnews.com/gallery/business/husband-receive-family-pension-after-his-wife-s-death-check-govt-rules-and-eligibility-kqh7dqt</guid>
            <pubDate>Wed, 08 Jul 2026 21:51:15 +0530</pubDate>
            <description><![CDATA[&lt;p&gt;ಉದ್ಯೋಗಸ್ಥ ಮಹಿಳೆ ಮೃತಪಟ್ಟರೆ, ಆಕೆಯ ಪತಿಗೆ ಪಿಂಚಣಿ ಸೌಲಭ್ಯ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಈ ಲೇಖನವು ಸರ್ಕಾರದ ನಿಯಮಗಳ ಅಡಿಯಲ್ಲಿ ಉತ್ತರ ನೀಡುತ್ತದೆ. ಮಹಿಳೆಯ ಪತಿಗೆ ಪಿಂಚಣಿ ಪಡೆಯುವ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಪಿಂಚಣಿ ನಿರಾಕರಿಸಬಹುದಾದ ಸಂದರ್ಭಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwnp77cras8f8nn4j2ymesae,imgname-gemini-generated-image-dbpmhldbpmhldbpm-1783139376536.png" type="image/jpeg" height="390" width="690"/>
            <content:encoded><![CDATA[&lt;p&gt;ಉದ್ಯೋಗಸ್ಥ ಮಹಿಳೆ ಮೃತಪಟ್ಟರೆ, ಆಕೆಯ ಪತಿಗೆ ಪಿಂಚಣಿ ಸೌಲಭ್ಯ ಲಭ್ಯವಿದೆಯೇ ಎಂಬ ಪ್ರಶ್ನೆಗೆ ಈ ಲೇಖನವು ಸರ್ಕಾರದ ನಿಯಮಗಳ ಅಡಿಯಲ್ಲಿ ಉತ್ತರ ನೀಡುತ್ತದೆ. ಮಹಿಳೆಯ ಪತಿಗೆ ಪಿಂಚಣಿ ಪಡೆಯುವ ಅರ್ಹತೆ, ಅಗತ್ಯ ದಾಖಲೆಗಳು ಮತ್ತು ಪಿಂಚಣಿ ನಿರಾಕರಿಸಬಹುದಾದ ಸಂದರ್ಭಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಇಂದಿನ ದಿನಗಳಲ್ಲಿ ಮಹಿಳೆಯರು ಮನೆ ಕೆಲಸಕ್ಕಷ್ಟೇ ಸೀಮಿತವಾಗದೆ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಗಳಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆ ಮೃತಪಟ್ಟರೆ, ಆಕೆಯ ಪತಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆಯೇ? ಎಂಬ ಪ್ರಶ್ನೆ ಅನೇಕರಲ್ಲಿರುತ್ತದೆ. ಈ ಕುರಿತಾದ ಸರ್ಕಾರದ ಸ್ಪಷ್ಟ ನಿಯಮಗಳು ಇಲ್ಲಿವೆ.&lt;/p&gt;&lt;p&gt;ನಮ್ಮ ಸಮಾಜದಲ್ಲಿ ಈಗ ಪುರುಷರಷ್ಟೇ ಸಮಾನವಾಗಿ ಮಹಿಳೆಯರೂ ಆರ್ಥಿಕವಾಗಿ ಕುಟುಂಬವನ್ನು ಬೆಂಬಲಿಸುತ್ತಿದ್ದಾರೆ. ಒಂದು ವೇಳೆ ಕೆಲಸ ಮಾಡುತ್ತಿರುವ ಮಹಿಳೆ ಅಥವಾ ಪಿಂಚಣಿ ಪಡೆಯುತ್ತಿರುವ ಮಹಿಳೆ ಮರಣ ಹೊಂದಿದರೆ, ಆಕೆಯ ಕುಟುಂಬದ ಆರ್ಥಿಕ ಭದ್ರತೆಗಾಗಿ ಸರ್ಕಾರವು 'ಫ್ಯಾಮಿಲಿ ಪೆನ್ಷನ್' ನಿಯಮಗಳನ್ನು ರೂಪಿಸಿದೆ. ಈ ನಿಯಮಗಳ ಪ್ರಕಾರ ಕೆಲವು ಷರತ್ತುಗಳ ಅನ್ವಯ ಪತಿಗೆ ಪಿಂಚಣಿ ಲಭ್ಯವಿರುತ್ತದೆ.&lt;/p&gt;&lt;img&gt;&lt;p&gt;ಸರ್ಕಾರದ ನಿಯಮಗಳ ಪ್ರಕಾರ, ಮೃತ ಮಹಿಳೆಯು ಈ ಕೆಳಗಿನ ಯಾವುದೇ ವರ್ಗಕ್ಕೆ ಸೇರಿದರೆ ಆಕೆಯ ಪತಿ ಪಿಂಚಣಿಗೆ ಅರ್ಹನಾಗಿರುತ್ತಾನೆ:&lt;/p&gt;&lt;p&gt;&lt;strong&gt;ಸರ್ಕಾರಿ ಉದ್ಯೋಗಿ:&lt;/strong&gt; ಮಹಿಳೆಯು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗಿಯಾಗಿದ್ದು, ಸೇವೆಯಲ್ಲಿರುವಾಗಲೇ ಅಥವಾ ನಿವೃತ್ತಿಯ ನಂತರ ಮರಣ ಹೊಂದಿದರೆ ಗಂಡ ಪಿಂಚಣಿಗೆ ಅರ್ಹನಾಗುತ್ತಾನೆ.&lt;/p&gt;&lt;p&gt;&lt;strong&gt;ಪಿಂಚಣಿದಾರರು:&lt;/strong&gt; ಮಹಿಳೆಯು ಈಗಾಗಲೇ ಪಿಂಚಣಿ ಪಡೆಯುತ್ತಿದ್ದರೆ.&lt;/p&gt;&lt;p&gt;&lt;strong&gt;EPS ಸದಸ್ಯರು: &lt;/strong&gt;ಮಹಿಳೆಯು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಎಂಪ್ಲಾಯೀಸ್ ಪೆನ್ಷನ್ ಸ್ಕೀಮ್ (EPS) ಅಡಿಯಲ್ಲಿ ಸದಸ್ಯರಾಗಿದ್ದರೆ ಗಂಡನಿಗೂ ಪಿಂಚಣಿ ಸಿಗುತ್ತದೆ.&lt;/p&gt;&lt;p&gt;ಆದಾಗ್ಯೂ, ಕೇಂದ್ರ ಸರ್ಕಾರದ ಪಿಂಚಣಿ ವ್ಯವಸ್ಥೆ ಮತ್ತು ಇಪಿಎಸ್ (EPS) ನಿಯಮಗಳು ಭಿನ್ನವಾಗಿರುತ್ತವೆ. ಪಿಂಚಣಿಯ ಮೊತ್ತ ಮತ್ತು ಅರ್ಹತೆಯು ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ.&lt;/p&gt;&lt;img&gt;&lt;p&gt;ಕೆಲವು ವಿಶೇಷ ಸಂದರ್ಭಗಳಲ್ಲಿ ಪತಿಗೆ ಪಿಂಚಣಿ ಹಕ್ಕನ್ನು ನಿರಾಕರಿಸಬಹುದು ಅಥವಾ ಆ ಹಕ್ಕು ಮಕ್ಕಳಿಗೆ ವರ್ಗಾವಣೆಯಾಗಬಹುದು:&lt;/p&gt;&lt;p&gt;&lt;strong&gt;ವಿಚ್ಛೇದನ: &lt;/strong&gt;ಮಹಿಳಾ ಉದ್ಯೋಗಿಯು ತನ್ನ ಪತಿಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದರೆ.&lt;/p&gt;&lt;p&gt;&lt;strong&gt;ಕಾನೂನು ಕ್ರಮ: &lt;/strong&gt;ಮಹಿಳೆಯು ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಅಥವಾ ಇತರ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೂಡಿದ್ದರೆ.&lt;/p&gt;&lt;p&gt;&lt;strong&gt;ನಾಮಿನಿ ಬದಲಾವಣೆ: &lt;/strong&gt;ಇಂತಹ ಸಂದರ್ಭಗಳಲ್ಲಿ ಮಹಿಳೆಯು ತನ್ನ ಮರಣದ ನಂತರ ಪಿಂಚಣಿ ಹಣವು ಪತಿಗೆ ಸಿಗುವ ಬದಲು ತನ್ನ ಮಕ್ಕಳಿಗೆ ಸಿಗಬೇಕು ಎಂದು ಲಿಖಿತವಾಗಿ ವಿನಂತಿಸಬಹುದು.&lt;/p&gt;&lt;p&gt;ಈ ಮೇಲಿನ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಪತಿಯೇ ಪಿಂಚಣಿ ಪಡೆಯುವ ಮೊದಲ ಹಕ್ಕುದಾರನಾಗಿರುತ್ತಾನೆ.&lt;/p&gt;&lt;img&gt;&lt;p&gt;&lt;strong&gt;ಅರ್ಹತೆ ಇದ್ದರೂ ಸಹ ಹಲವು ಬಾರಿ ಪಿಂಚಣಿ ವಿಳಂಬವಾಗುತ್ತದೆ. ಅದಕ್ಕೆ ಈ ಕೆಳಗಿನ ಅಂಶಗಳು ಕಾರಣವಿರಬಹುದು:&lt;/strong&gt;&lt;/p&gt;&lt;ul&gt; &lt;li&gt;ದಾಖಲೆಗಳಲ್ಲಿ ಹೆಸರು ಅಥವಾ ಹುಟ್ಟಿದ ದಿನಾಂಕದ ವ್ಯತ್ಯಾಸ.&lt;/li&gt; &lt;li&gt;ಸರ್ಕಾರಿ ದಾಖಲೆಗಳಲ್ಲಿ ನಾಮಿನಿ ವಿವರಗಳನ್ನು ಅಪ್&zwnj;ಡೇಟ್ ಮಾಡದಿರುವುದು.&lt;/li&gt; &lt;li&gt;ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವುದು.&lt;/li&gt; &lt;li&gt;ಕ್ಲೈಮ್ ಫಾರ್ಮ್&zwnj;ಗಳನ್ನು ಸರಿಯಾಗಿ ಭರ್ತಿ ಮಾಡದಿರುವುದು.&lt;/li&gt;&lt;/ul&gt;&lt;img&gt;&lt;p&gt;&lt;strong&gt;ಪಿಂಚಣಿಗಾಗಿ ಅರ್ಜಿ ಸಲ್ಲಿಸುವಾಗ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:&lt;/strong&gt;&lt;/p&gt;&lt;ul&gt; &lt;li&gt;ಪತ್ನಿಯ ಮರಣ ಪ್ರಮಾಣ ಪತ್ರ (Death Certificate).&lt;/li&gt; &lt;li&gt;ಪತಿಯ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್.&lt;/li&gt; &lt;li&gt;ಮದುವೆ ಪ್ರಮಾಣ ಪತ್ರ ಅಥವಾ ವಿವಾಹದ ಪುರಾವೆ.&lt;/li&gt; &lt;li&gt;PPO (Pension Payment Order) ಅಥವಾ ಇಪಿಎಫ್ ಸಂಬಂಧಿತ ದಾಖಲೆಗಳು.&lt;/li&gt; &lt;li&gt;ಬ್ಯಾಂಕ್ ಖಾತೆಯ ವಿವರಗಳು ಮತ್ತು ಪಾಸ್&zwnj;ಬುಕ್ ಪ್ರತಿ.&lt;/li&gt;&lt;/ul&gt;&lt;img&gt;&lt;p&gt;&lt;strong&gt;ಸಲಹೆ: &lt;/strong&gt;ಉದ್ಯೋಗದಲ್ಲಿರುವಾಗ ಅಥವಾ ಪಿಂಚಣಿ ಯೋಜನೆಯಲ್ಲಿದ್ದಾಗ ನಾಮಿನಿ ವಿವರಗಳನ್ನು ಕಾಲಕಾಲಕ್ಕೆ ಅಪ್&zwnj;ಡೇಟ್ ಮಾಡುವುದು ಅತ್ಯಂತ ಮುಖ್ಯ. ಇದು ಕುಟುಂಬದ ಸದಸ್ಯರು ಸಂಕಷ್ಟದ ಸಮಯದಲ್ಲಿ ಆರ್ಥಿಕ ಸೌಲಭ್ಯವನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.&lt;/p&gt;]]></content:encoded>
            <category>business</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/business/husband-receive-family-pension-after-his-wife-s-death-check-govt-rules-and-eligibility-kqh7dqt"/>
        </item>
        <item>
            <title><![CDATA[ಹೋಟೆಲ್​ ಉದ್ಯಮಕ್ಕೆ ಕಾಲಿಟ್ಟ Bigg Boss ಉಗ್ರಂ ಮಂಜು: ಏನಿದರ ಸ್ಪೆಷ್ಯಾಲಿಟಿ? ಎಲ್ಲಿದೆ]]></title>
            <link>https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</link>
            <guid isPermaLink="true">https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k</guid>
            <pubDate>Wed, 08 Jul 2026 20:52:26 +0530</pubDate>
            <description><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx14vrenq1nsb1506avnv7xn,imgname-ugram-manju-1783523828181.jpg" type="image/jpeg" height="390" width="690"/>
            <content:encoded><![CDATA['ಬಿಗ್ ಬಾಸ್' ಖ್ಯಾತಿಯ ನಟ ಉಗ್ರಂ ಮಂಜು ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಲಘಟ್ಟಪುರದಲ್ಲಿ 'ಮಂಡಿಪೇಟೆ ಮೈಸೂರು ಪಲಾವ್' ಹೆಸರಿನ ಹೋಟೆಲ್ ಆರಂಭಿಸಿದ್ದು, ಈ ಮೂಲಕ ಬಾಣಸಿಗನಾಗಿ ಹೊಸ ಅವತಾರವೆತ್ತಿದ್ದಾರೆ. ತಮ್ಮ ಈ ಹೊಸ ಪ್ರಯತ್ನಕ್ಕೆ ಅವರು ಅಭಿಮಾನಿಗಳ ಬೆಂಬಲ ಕೋರಿದ್ದಾರೆ.&lt;img&gt;&lt;p&gt;ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟನಾಗಿ ಮಿಂಚುತ್ತಿದ್ದ ಉಗ್ರಂ ಮಂಜು, ಎಲ್ಲ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದದ್ದು ʻಬಿಗ್ ಬಾಸ್ʼ ಸೀಸನ್​ ಮೂಲಕ. ಇದೀಗ ಅವರ ಹೆಸರಿನ ಹಿಂದೆ ಬಿಗ್ ಬಾಸ್ ಖ್ಯಾತಿಯ ಎನ್ನುವ ಬಿರುದು ಸೇರಿಕೊಳ್ಳುತ್ತದೆ. ಈಚೆಗಷ್ಟೇ ಇವರ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾ ಬಿಡುಗಡೆಯಾಗಿದೆ. ಇವೆಲ್ಲವುಗಳ ನಡುವೆ ಹೊಸದೊಂದು ಗುಡ್​ನ್ಯೂಸ್ ಕೊಟ್ಟಿದ್ದಾರೆ ಮಂಜು.&lt;/p&gt;&lt;img&gt;&lt;p&gt;ಅಷ್ಟಕ್ಕೂ ನಟ ಉಗ್ರಂ ಮಂಜು (Bigg Boss Ugram Manju) ಕಳೆದ ಜನವರಿಯಲ್ಲಿ ತಮ್ಮ ಸ್ನೇಹಿತೆ ಸಂಧ್ಯಾ ಜೊತೆ ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಜುನಾಥನ ಸಾನಿಧ್ಯದಲ್ಲಿ ಇವರು ವಿವಾಹವಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ತಿಂಗಳಿಗೆ ಹೊಸ ಬಿಜಿನೆಸ್​ ಶುರು ಮಾಡಿದ್ದಾರೆ ಉಗ್ರಂ ಮಂಜು. ಅವರು ಹೋಟೆಲ್​ ಉದ್ಯಮವನ್ನು ಆರಂಭ ಮಾಡಿದ್ದಾರೆ. ಈ ಕುರಿತು ವಿಶೇಷ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇದರಲ್ಲಿ ಮಂಜು ಅವರೇ ಬಾಣಸಿಗನಾಗಿರುವುದನ್ನು ಕಾಣಬಹುದು. ದೊಡ್ಡ ಪಾತ್ರೆಯಲ್ಲಿ ಸೌಟು ಹಿಡಿದು ಅಡುಗೆ ಮಾಡುತ್ತಿರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಈ ಹೊಸ ಉದ್ಯಮಕ್ಕೆ ಎಲ್ಲರ ಪ್ರೀತಿ, ವಿಶ್ವಾಸ, ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ನಾನು ನಿಮ್ಮ ಪ್ರೀತಿಯ ಉಗ್ರಂ ಮಂಜು. ಇಷ್ಟು ದಿನ ಕಲಾವಿದನಾಗಿ ನನಗೆ ನಿಮ್ಮ ಪ್ರೀತಿ ಕೊಟ್ಟಿದ್ದೀರಾ. ಇವಾಗ ಹೋಟೆಲ್ ಉದ್ಯಮ ಪ್ರಾರಂಭ ಮಾಡಿದ್ದೇನೆ. ಇದಕ್ಕೂ ನಿಮ್ಮ ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ&quot; ಎಂದಿದ್ದಾರೆ.&lt;/p&gt;&lt;img&gt;&lt;p&gt;ಮಂಡಿಪೇಟೆ ಶೈಲಿಯ ರುಚಿಕರ ಆಹಾರಕ್ಕೆ ಫೇಮಸ್ ಆಗಿರುವುದಾಗಿ ತಿಳಿಸಲಾಗಿದೆ. ನಾಟಿ ಶೈಲಿಯ ಹಾಗೂ ಮೈಸೂರು ಶೈಲಿಯ ಪಲಾವ್ ಪ್ರಿಯರಿಗಾಗಿ ಈ ಹೋಟೆಲ್ ಮಸ್ತ್ ತಾಣವಾಗಲಿದೆ. ಅಂದಹಾಗೆ ʻಮಂಡಿಪೇಟೆ ಮೈಸೂರು ಪಲಾವ್ʼ ಹೆಸರಿನ ಈ ಹೋಟೆಲ್​ ಬೆಂಗಳೂರಿನ ತಲಘಟ್ಟಪುರ ಬ್ರಾಂಚ್ ಕನಕಪುರ ರಸ್ತೆಯಲ್ಲಿ ತೆರೆಯಲಾಗಿರುವುದಾಗಿ ನಟ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-ugram-manju-enters-the-hotel-industry-what-is-his-specialty-where-is-it-suc-f1h9t5k"/>
        </item>
        <item>
            <title><![CDATA[ಜಿಯೋ ಟಿವಿ ಪ್ರೋ ಪ್ಯಾಕ್ ಲಾಂಚ್, ಕೇವಲ 55 ರೂಪಾಯಿಗೆ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯ]]></title>
            <link>https://kannada.asianetnews.com/gallery/business/jio-launches-jiotv-pro-pack-at-rs-55-with-access-to-over-1000-live-tv-channels-sem7eka</link>
            <guid isPermaLink="true">https://kannada.asianetnews.com/gallery/business/jio-launches-jiotv-pro-pack-at-rs-55-with-access-to-over-1000-live-tv-channels-sem7eka</guid>
            <pubDate>Wed, 08 Jul 2026 19:20:55 +0530</pubDate>
            <description><![CDATA[&lt;p&gt;ಜಿಯೋ ಇದೀಗ ಮತ್ತೊಂದು ಆಫರ್ ಮೂಲಕ ಬಂಪರ್ ಕೊಡುಗೆ ನೀಡಿದೆ. ಕೇವಲ 55 ರೂಪಾಯಿಗೆ 30 ದಿನಗಳ ವ್ಯಾಲಿಟಿಡಿಯಲ್ಲಿ ಬರೋಬ್ಬರಿ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಸ್ ನೀಡುತ್ತಿದೆ. ಹೊಸ ಪ್ಲಾನ್ ಕುರಿತ ಡಿಟೇಲ್ಸ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0zmh0jkydaj63mw1qybvj6,imgname-jiotv-pro-pack-debuts-1783518348305.png" type="image/jpeg" height="390" width="690"/>
            <content:encoded><![CDATA[&lt;p&gt;ಜಿಯೋ ಇದೀಗ ಮತ್ತೊಂದು ಆಫರ್ ಮೂಲಕ ಬಂಪರ್ ಕೊಡುಗೆ ನೀಡಿದೆ. ಕೇವಲ 55 ರೂಪಾಯಿಗೆ 30 ದಿನಗಳ ವ್ಯಾಲಿಟಿಡಿಯಲ್ಲಿ ಬರೋಬ್ಬರಿ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ಸ್ ನೀಡುತ್ತಿದೆ. ಹೊಸ ಪ್ಲಾನ್ ಕುರಿತ ಡಿಟೇಲ್ಸ್ ಇಲ್ಲಿದೆ.&lt;/p&gt;&lt;img&gt;&lt;p&gt;ರಿಲಯನ್ಸ್ ಜಿಯೋ ಮತ್ತೊಂದು ಹೊಸ ಆಫರ್ ಮೂಲಕ ಧೂಳೆಬ್ಬಿಸಿದೆ. ಇದೀಗ ರಿಲಯನ್ಸ್ ಜಿಯೋ ಟಿವಿ ಪ್ರೊ ಪ್ಯಾಕ್ ಕೇವಲ 55 ರೂಪಾಯಿಗೆ ಬಿಡುಗಡೆ ಮಾಡಿದೆ. ಇದು 30 ದಿನಗಳ ವ್ಯಾಲಿಟಿಡಿ ಹೊಂದಿದೆ ಈ ಪ್ಯಾಕ್ ಮೂಲಕ, ಬಳಕೆದಾರರು ತಮ್ಮ ಮೊಬೈಲ್ ಫೋನ್&zwnj;ಗಳಲ್ಲಿ ಜಿಯೋ ಟಿವಿ ಅಪ್ಲಿಕೇಶನ್ ಮೂಲಕ 1000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್&zwnj;ಗಳನ್ನು ಆನಂದಿಸಲು ಸಾಧ್ಯ.&lt;/p&gt;&lt;img&gt;&lt;p&gt;ಈ ಹೊಸ ಯೋಜನೆಯಲ್ಲಿ 16 ಕ್ಕೂ ಹೆಚ್ಚು ಭಾಷಾ ಚಾನೆಲ್&zwnj;ಗಳನ್ನು ಸೇರಿಸಲಾಗಿದೆ. ಇದರಲ್ಲಿ 150 ಕ್ಕೂ ಹೆಚ್ಚು ಪ್ರೀಮಿಯಂ ಚಾನೆಲ್&zwnj;ಗಳು ಸಹ ಲಭ್ಯವಿರುತ್ತವೆ. ವೀಕ್ಷಕರು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಮನರಂಜನೆ, ಚಲನಚಿತ್ರಗಳು, ಸುದ್ದಿಗಳು, ಮಕ್ಕಳ ಕಾರ್ಯಕ್ರಮಗಳು ನೋಡಬಹುದು. ಈ ಪ್ಯಾಕ್, ಸ್ಟಾರ್ ಪ್ಲಸ್ ಎಚ್&zwnj;ಡಿ, ಕಲರ್ಸ್ ಎಚ್&zwnj;ಡಿ, ಸೋನಿ ಎಂಟರ್ ಟೈನ್&zwnj;ಮೆಂಟ್ ಟೆಲಿವಿಷನ್ ಎಚ್&zwnj;ಡಿ, ಸೋನಿ ಎಸ್&zwnj;ಎಬಿ ಎಚ್&zwnj;ಡಿ, ಡಿಸ್ಕವರಿ, ಅನಿಮಲ್ ಪ್ಲಾನೆಟ್, ಸನ್ ಟಿವಿ ನೆಟ್ವರ್ಕ್, ಇಟಿವಿ ಸೇರಿದಂತೆ ದೇಶದ ಪ್ರಮುಖ, ಜನಪ್ರಿಯ ಚಾನೆಲ್&zwnj;ಗಳನ್ನು ಒಳಗೊಂಡಿದೆ. ಆದರೆ ಜಿಯೋಸ್ಟಾರ್ ಮತ್ತು ಸೋನಿಯ ಸ್ಪೋರ್ಟ್ಸ್ ಚಾನೆಲ್&zwnj;ಗಳು ಈ ಪ್ಯಾಕ್&zwnj;ನ ಭಾಗವಾಗುವುದಿಲ್ಲ.&lt;/p&gt;&lt;img&gt;&lt;p&gt;ಈ ಸೇವೆಯನ್ನು ಪಡೆಯಲು, ಗ್ರಾಹಕರು ಕೇವಲ ₹ 55 ರೀಚಾರ್ಜ್ ಮಾಡಬೇಕಾಗುತ್ತದೆ. ಇದರ ನಂತರ, ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಜಿಯೋ ಟಿವಿ ಅಪ್ಲಿಕೇಶನ್&zwnj;ಗೆ ಲಾಗ್ ಇನ್ ಮಾಡಿದ ತಕ್ಷಣ ಲಭ್ಯವಿರುವ ಎಲ್ಲಾ ಪ್ರೀಮಿಯಂ ಚಾನೆಲ್&zwnj;ಗಳು ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುತ್ತವೆ. ಇದಕ್ಕೆ ಯಾವುದೇ ಪ್ರತ್ಯೇಕ ಸಕ್ರಿಯಗೊಳಿಸುವಿಕೆಯ ಅಗತ್ಯವಿಲ್ಲ.&lt;/p&gt;&lt;img&gt;&lt;p&gt;ಇದು ಮನರಂಜನೆಯ ಪ್ಯಾಕ್ ಆಗಿದೆ. ಇದು ಧ್ವನಿ ಕರೆಗಳು ಅಥವಾ ಎಸ್ಎಂಎಸ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿಲ್ಲ. ಈ ಸೇವೆಯನ್ನು ಬಳಸಲು ಗ್ರಾಹಕರು ಸಕ್ರಿಯ ಜಿಯೋ ಪ್ರೀಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಸಂಪರ್ಕವನ್ನು ಹೊಂದಿರಬೇಕು. ಈ ಪ್ಯಾಕ್ ಜಿಯೋ ಟಿವಿ ಅಪ್ಲಿಕೇಶನ್ ಮೂಲಕ ಒಂದು ಟೈಮ್&zwnj;ನಲ್ಲಿ ಕೇವಲ ಒಂದು ಮೊಬೈಲ್&zwnj;ನಲ್ಲಿ ಬಳಸಬಹುದು.&lt;/p&gt;&lt;img&gt;&lt;p&gt;ಜಿಯೋದ ಈ ಹೊಸ 55 ರೂ.ಗಳ ಜಿಯೋ ಟಿವಿ ಪ್ರೊ ಪ್ಯಾಕ್ ಆನ್&zwnj;ಲೈನ್ ಮತ್ತು ಆಫ್&zwnj;ಲೈನ್ ಎರಡರಲ್ಲೂ ರೀಚಾರ್ಜ್ ಮಾಡಲು ಲಭ್ಯವಿದೆ. ಈಗ ವೀಕ್ಷಕರು ತಮ್ಮ ನೆಚ್ಚಿನ ಟಿವಿ ಧಾರಾವಾಹಿಗಳು, ಬ್ರೇಕಿಂಗ್ ನ್ಯೂಸ್, ಮಕ್ಕಳ ವ್ಯಂಗ್ಯಚಿತ್ರಗಳು ಮತ್ತು ಪ್ರಾದೇಶಿಕ ಭಾಷಾ ಕಾರ್ಯಕ್ರಮಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಆನಂದಿಸಲು ಸಾಧ್ಯವಾಗುತ್ತದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/jio-launches-jiotv-pro-pack-at-rs-55-with-access-to-over-1000-live-tv-channels-sem7eka"/>
        </item>
        <item>
            <title><![CDATA[ರಕ್ಷಣಾ ರಂಗದಲ್ಲಿ ಭಾರತದ ಆತ್ಮನಿರ್ಭರ: ಸ್ವದೇಶಿ ನಿರ್ಮಿತ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಮೊದಲ ವಿದೇಶಿ ದೇಶ ಇಂಡೋನೇಷ್ಯಾ!]]></title>
            <link>https://kannada.asianetnews.com/gallery/business/indonesia-first-buyer-india-astra-missile-brahmos-deal-sabang-port-san-rgq0tyg</link>
            <guid isPermaLink="true">https://kannada.asianetnews.com/gallery/business/indonesia-first-buyer-india-astra-missile-brahmos-deal-sabang-port-san-rgq0tyg</guid>
            <pubDate>Wed, 08 Jul 2026 19:01:43 +0530</pubDate>
            <description><![CDATA[&lt;p&gt;ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx0ykb902yr3rfpdz016hr32,imgname-astra-air-missile--5--1783517261088.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.&lt;/p&gt;&lt;img&gt;&lt;p&gt;ಭಾರತದ ರಕ್ಷಣಾ ಉತ್ಪಾದನಾ ವಲಯಕ್ಕೆ ಹಾಗೂ &lsquo;ಮೇಕ್ ಇನ್ ಇಂಡಿಯಾ&rsquo; (Make-in-India) ಯೋಜನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ದೊಡ್ಡ ಯಶಸ್ಸು ಸಿಕ್ಕಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ 'ಬಿಯಾಂಡ್-ವಿಶುವಲ್&zwnj;-ರೇಂಜ್' ಏರ್&zwnj;-ಟು-ಏರ್&zwnj; 'ಅಸ್ತ್ರ' (Astra) ಕ್ಷಿಪಣಿಯನ್ನು ಖರೀದಿಸುತ್ತಿರುವ ವಿಶ್ವದ ಮೊದಲ ವಿದೇಶಿ ದೇಶ ಎಂಬ ಹೆಗ್ಗಳಿಕೆಗೆ ಇಂಡೋನೇಷ್ಯಾ ಪಾತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರ ಸಮ್ಮುಖದಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.&lt;/p&gt;&lt;img&gt;&lt;p&gt;ಭಾರತ ಮತ್ತು ಇಂಡೋನೇಷ್ಯಾ ನಡುವೆ ಜಕಾರ್ತದಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ &quot;ಬ್ರಹ್ಮೋಸ್ ಸಿಸ್ಟಮ್ ಸಹಕಾರ&quot;ದ ಒಪ್ಪಂದದ ಜೊತೆಗೆ 'ಅಸ್ತ್ರ' ಕ್ಷಿಪಣಿ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. ಭಾರತ ಮತ್ತು ರಷ್ಯಾದ ಜಂಟಿ ಪಾಲುದಾರಿಕೆಯಲ್ಲಿ ತಯಾರಾಗುವ ಬ್ರಹ್ಮೋಸ್ ಕ್ಷಿಪಣಿಗಿಂತ 'ಅಸ್ತ್ರ' ಒಪ್ಪಂದವು ಭಾರತಕ್ಕೆ ಹೆಚ್ಚು ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ಅಸ್ತ್ರ ಕ್ಷಿಪಣಿಯನ್ನು ಯಾವುದೇ ವಿದೇಶಿ ತಂತ್ರಜ್ಞಾನದ ಸಹಾಯವಿಲ್ಲದೆ, ಸಂಪೂರ್ಣವಾಗಿ ಭಾರತದಲ್ಲೇ ಸ್ವದೇಶಿ ಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಭಾರತದ ಸರ್ಕಾರಿ ಸ್ವಾಮ್ಯದ 'ಭಾರತ್ ಡೈನಾಮಿಕ್ಸ್ ಲಿಮಿಟೆಡ್' (BDL) ಮತ್ತು ಇಂಡೋನೇಷ್ಯಾದ ರಕ್ಷಣಾ ಹೋಲ್ಡಿಂಗ್ ಕಂಪನಿ 'ರೆಪಬ್ಲಿಕಾರ್ಪ್' (Republikorp) ನಡುವೆ ಈ ಒಪ್ಪಂದ ಏರ್ಪಟ್ಟಿದೆ. ಬ್ರಹ್ಮೋಸ್&zwnj;ನಂತೆಯೇ ಅಸ್ತ್ರ ಕ್ಷಿಪಣಿಯೂ ಸಹ 'ಆಪರೇಷನ್ ಸಿಂದೂರ್' ಸಮಯದಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿತ್ತು.&lt;/p&gt;&lt;img&gt;&lt;p&gt;ಅಸ್ತ್ರ ಕ್ಷಿಪಣಿಯು ಮ್ಯಾಕ್ 4.5 (Mach 4.5) ನಷ್ಟು ಅತಿವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಶತ್ರುಗಳ ಯುದ್ಧ ವಿಮಾನಗಳನ್ನು ಕಣ್ಣಿಗೆ ಕಾಣದ ದೂರದಲ್ಲೇ ಹೊಡೆದುರುಳಿಸಬಲ್ಲದು. ಇದು ಸಾಮಾನ್ಯವಾಗಿ 80 ರಿಂದ 110 ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಾಗೂ ಗರಿಷ್ಠ ಅಂದರೆ 160 ಕಿಲೋಮೀಟರ್ ದೂರದವರೆಗಿನ ಶತ್ರುಗಳ ಗುರಿಯನ್ನು ನಿಖರವಾಗಿ ಧ್ವಂಸಗೊಳಿಸುತ್ತದೆ. ಈ ಕ್ಷಿಪಣಿಗಳನ್ನು ಇಂಡೋನೇಷ್ಯಾ ವಾಯುಪಡೆಯು ತನ್ನಲ್ಲಿರುವ ರಷ್ಯಾ ನಿರ್ಮಿತ 'ಸುಖೋಯ್' (Su-30 ಮತ್ತು Su-27) ಫೈಟರ್ ಜೆಟ್&zwnj;ಗಳ ಫ್ಲೀಟ್&zwnj;ನಲ್ಲಿ ಅಳವಡಿಸಿಕೊಳ್ಳಲಿದೆ.&lt;/p&gt;&lt;img&gt;&lt;p&gt;ಕ್ಷಿಪಣಿ ಒಪ್ಪಂದಗಳ ಜೊತೆಗೆ, ಉಭಯ ದೇಶಗಳ ನಾಯಕರು &quot;ಸಾಗರ ಸುರಕ್ಷತೆ ಮತ್ತು ಭದ್ರತಾ ಸಹಕಾರದ ತಿಳುವಳಿಕಾ ಪತ್ರದ (MoU) ವಿಸ್ತರಣೆ&quot;ಯ ಕುರಿತು ಚರ್ಚಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಭಾರತ ಮತ್ತು ಇಂಡೋನೇಷ್ಯಾದ ಕೋಸ್ಟ್ ಗಾರ್ಡ್&zwnj;ಗಳ (ಕರಾವಳಿ ಕಾವಲು ಪಡೆ) ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಇದು ಕಡಲ ವಲಯದ ಜಾಗೃತಿ, ಜಂಟಿ ಶೋಧನೆ ಮತ್ತು ರಕ್ಷಣೆ (Search and Rescue), ಸಾಮರ್ಥ್ಯ ವೃದ್ಧಿ ಹಾಗೂ ಇಂಡೋ-ಪೆಸಿಫಿಕ್ ವಲಯದಲ್ಲಿ ಹಡಗುಗಳ ಮುಕ್ತ ಹಾಗೂ ಸುರಕ್ಷಿತ ಸಂಚಾರವನ್ನು ಉತ್ತೇಜಿಸಲು ಸಹಕಾರಿಯಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ ಮತ್ತೊಂದು ಒಪ್ಪಂದವೆಂದರೆ ಅದು 'ಸಬಾಂಗ್ ಬಂದರು' (Sabang Port) ಜಂಟಿ ಅಭಿವೃದ್ಧಿ. ಈ ಬಂದರು ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾದ 'ಮಲಕ್ಕಾ ಜಲಸಂಧಿ'ಯ (Strait of Malacca) ಮೇಲ್ವಿಚಾರಣೆ ನಡೆಸುವಂತಹ ಆಯಕಟ್ಟಿನ ಜಾಗದಲ್ಲಿದೆ. ಇದು ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ದಕ್ಷಿಣ ತುದಿಯಾದ ಇಂದಿರಾ ಪಾಯಿಂಟ್&zwnj;ನಿಂದ ಕೇವಲ 90 ನಾಟಿಕಲ್ ಮೈಲಿ ದೂರದಲ್ಲಿದೆ. ಚೀನಾ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಶೇ. 75 ರಿಂದ ಶೇ. 80 ರಷ್ಟು ಭಾಗ ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಪ್ರಸ್ತುತ ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ನೌಕಾಪಡೆಯ ಪ್ರಭಾವವನ್ನು ಹೆಚ್ಚಿಸುತ್ತಿದ್ದು, ಅದಕ್ಕೆ ಕೌಂಟರ್ ನೀಡಲು ಭಾರತವು ಸಬಾಂಗ್ ಬಂದರನ್ನು ಬಳಸಿಕೊಳ್ಳಲಿದೆ. ಈ ಆಳ ಸಮುದ್ರದ ಬಂದರು ಪ್ರವೇಶದಿಂದಾಗಿ ಭಾರತೀಯ ನೌಕಾಪಡೆಗೆ ಹಿಂದೂ ಮಹಾಸಾಗರ ಪ್ರವೇಶಿಸುವ ಚೀನಾದ ಜಲಾವೃತ ನೌಕೆಗಳು (Submarines) ಮತ್ತು ಯುದ್ಧ ಹಡಗುಗಳ ಚಲನವಲನಗಳನ್ನು ಸುಲಭವಾಗಿ ಕಣ್ಗಾವಲಿಡಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;ಈ ಮಹತ್ವದ ರಕ್ಷಣಾ ಒಪ್ಪಂದಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. &quot;ಬ್ರಹ್ಮೋಸ್ ವ್ಯವಸ್ಥೆಯ ಮೇಲಿನ ಸಹಕಾರವು ಭಾರತೀಯ ರಕ್ಷಣಾ ಉದ್ಯಮದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುತ್ತದೆ, ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆ ಮತ್ತು ರಫ್ತಿಗೆ ಭಾರಿ ಉತ್ತೇಜನ ನೀಡುತ್ತದೆ&quot; ಎಂದು ಬರೆದುಕೊಂಡಿದ್ದಾರೆ. ಹಾಗೆಯೇ, ಅಸ್ತ್ರ ಕ್ಷಿಪಣಿ ಒಪ್ಪಂದವು ಭಾರತದ ರಕ್ಷಣಾ ರಫ್ತನ್ನು ಹೆಚ್ಚಿಸುವುದಲ್ಲದೆ, ವಿಶ್ವದಾದ್ಯಂತ 'ಮೇಕ್ ಇನ್ ಇಂಡಿಯಾ' ಬ್ರ್ಯಾಂಡ್ ಅನ್ನು ಬಲಪಡಿಸುತ್ತದೆ ಮತ್ತು ಭಾರತದ ಸ್ವದೇಶಿ ಕ್ಷಿಪಣಿ ಅಭಿವೃದ್ಧಿ ಪರಿಸರ ವ್ಯವಸ್ಥೆಗೆ ಹೊಸ ಚೈತನ್ಯ ನೀಡುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/indonesia-first-buyer-india-astra-missile-brahmos-deal-sabang-port-san-rgq0tyg"/>
        </item>
        <item>
            <title><![CDATA[ಕೇವಲ ತಿಂಗಳಿಗೆ 2000 ರೂಪಾಯಿ ಹೂಡಿಕೆ 1.42 ಲಕ್ಷ ರೂಪಾಯಿ ರಿಟರ್ನ್ಸ್, ಪೋಸ್ಟ್ ಅಫೀಸ್ RD ಸ್ಕೀಮ್]]></title>
            <link>https://kannada.asianetnews.com/gallery/business/post-office-rd-scheme-rs-2000-monthly-investment-can-grow-to-rs-1-42-lakh-zqcgskf</link>
            <guid isPermaLink="true">https://kannada.asianetnews.com/gallery/business/post-office-rd-scheme-rs-2000-monthly-investment-can-grow-to-rs-1-42-lakh-zqcgskf</guid>
            <pubDate>Wed, 08 Jul 2026 16:23:46 +0530</pubDate>
            <description><![CDATA[&lt;p&gt;ಪೋಸ್ಟ್ ಆಫೀಸ್ ಹೂಡಿಕೆ ಎಂದಿಗೂ ಸುರಕ್ಷಿತ. ವಿಶೇಷ ಅಂದರೆ ಅತೀ ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷ ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುವ ಹಲವು ಯೋಜನೆಗಳಿವೆ. ಈ ಪೈಕಿ ಆರ್&zwnj;ಡಿ ಸಣ್ಣ ಹಣದಲ್ಲಿ ದೊಡ್ಡ ಲಾಭ ಪಡೆಯಲು ಸಾಧ್ಯವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9xtzhh78kmmbrgpy6n7ycy5,imgname-kisan-vikas-kalpa-post-office-scheme-that-doubles-the-money-you-invest-1763011708455.jpg" type="image/jpeg" height="390" width="690"/>
            <content:encoded><![CDATA[&lt;p&gt;ಪೋಸ್ಟ್ ಆಫೀಸ್ ಹೂಡಿಕೆ ಎಂದಿಗೂ ಸುರಕ್ಷಿತ. ವಿಶೇಷ ಅಂದರೆ ಅತೀ ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷ ಲಕ್ಷ ರೂಪಾಯಿ ರಿಟರ್ನ್ಸ್ ಪಡೆಯುವ ಹಲವು ಯೋಜನೆಗಳಿವೆ. ಈ ಪೈಕಿ ಆರ್&zwnj;ಡಿ ಸಣ್ಣ ಹಣದಲ್ಲಿ ದೊಡ್ಡ ಲಾಭ ಪಡೆಯಲು ಸಾಧ್ಯವಿದೆ.&lt;/p&gt;&lt;img&gt;&lt;p&gt;ಪೋಸ್ಟ್ ಆಫೀಸ್&zwnj;ನಲ್ಲಿ ಉಳಿತಾಯ ಯೋಜನೆ, ಹೂಡಿಕೆ ಸೇರಿದಂತೆ ಹಲವು ಸ್ಕೀಮ್&zwnj;ಗಳು ಲಭ್ಯವಿದೆ. ಈ ಪೈಕಿ ಪೋಸ್ಟ್ ಆಫೀಸ್ ಆರ್&zwnj;ಡಿ ಸ್ಕೀಮ್ ಉತ್ತಮ ಉಳಿತಾಯ ಯೋಜನೆಯಾಗಿ ಗುರುತಿಸಿಕೊಂಡಿದೆ. ಅತೀ ಸಣ್ಣ ಮೊತ್ತ ಹೂಡಿಕೆ ಮಾಡಿದ ದೊಡ್ಡ ರಿಟರ್ನ್ಸ್ ಪಡೆಯಲು ಸಾಧ್ಯವಿದೆ. ಹೀಗೆ ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಿ 1.42 ಲಕ್ಷ ರೂಪಾಯಿ ರಿಟನ್ಸ್ ಪಡೆಯುವ ಯೋಜನೆ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಸಣ್ಣ ಉಳಿತಾಯ ಯೋಜನೆಗಳಿಗೆ 6.7 ರಷ್ಟು ಬಡ್ಡಿದರ ನೀಡುತ್ತಿದೆ. ಪೋಸ್ಟ್ ಆಫೀಸ್ ಆರ್&zwnj;ಡಿ ಸ್ಕೀಮ್ ಮೂಲಕ ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಬೇಕು. 5 ವರ್ಷಗಳ ಅವಧಿಯಲ್ಲಿ ಈ ಮೊತ್ತಕ್ಕೆ ಬಡ್ಡಿ ಸೇರಿಸಿ ಪೋಸ್ಟ್ ಆಫೀಸ್ 1.42 ಲಕ್ಷ ರೂಪಾಯಿ ಹಿಂದಿರುಗಿಸಿ ನೀಡಲಿದೆ. ಈ ಮೂಲಕ ಸಣ್ಣ ಮೊತ್ತ ಉಳಿತಾಯ ಮಾಡಿ ದೊಡ್ಡ ಮೊತ್ತ ರಿಟರ್ನ್ಸ್ ಮೂಲಕ ಪಡೆಯಲು ಸಾಧ್ಯವಿದೆ.&lt;/p&gt;&lt;img&gt;&lt;p&gt;5 ವರ್ಷಗಳು ಅಂದರೆ 60 ತಿಂಗಳು. ಪ್ರತಿ ತಿಂಗಳು 2000 ರೂಪಾಯಿ ಹೂಡಿಕೆ ಮಾಡಿದೆರ ಒಟ್ಟು ಹೂಡಿಕೆ ಮೊತ್ತ 1.20 ಲಕ್ಷ ರೂಪಾಯಿ. ಇದಕ್ಕೆ ಬಡ್ಡಿ ರೂಪದಲ್ಲಿ 22,732 ರೂಪಾಯಿ ಸಿಗಲಿದೆ.ಹೂಡಿಕೆ ಮೆಚ್ಯೂರಿಟಿ ವೇಳೆ ಒಟ್ಟು 1,42,732 ರೂಪಾಯಿ ಸಿಗಲಿದೆ. ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತ ಎದುರಾದರೂ ಹೂಡಿಕೆ ಹಾಗೂ ರಿಟರ್ನ್ಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.&lt;/p&gt;&lt;img&gt;&lt;p&gt;ಪೋಸ್ಟ್ ಆಫೀಸ್ ಆರ್&zwnj;ಡಿ ಯೋಜನೆಯಲ್ಲಿ ಕೇವಲ 100 ರೂಪಾಯಿಯಿಂದ ಹೂಡಿಕೆ ಆರಂಭಿಸಲು ಸಾಧ್ಯವಿದೆ 12 ತಿಂಗಳು ಕಂತು ಪಾವತಿಸಿದ ಬಳಿಕ ಹೂಡಿಕೆ ಮೊತ್ತದಲ್ಲಿ ಶೇಕಡಾ 50ರಷ್ಟು ಸಾಲ ಪಡೆಯಲು ಅವಕಾಶವಿದೆ. ಸಾಲಕ್ಕೆ ಆರ್&zwnj;ಡಿ ಬಡ್ಡಿಗಿಂತ ಶೇಕಡಾ 2ರಷ್ಟು ಹೆಚ್ಚುವರಿ ಬಡ್ಡಿ ವಿಧಿಸಲಾಗುತ್ತದೆ.&lt;/p&gt;&lt;img&gt;&lt;p&gt;ಪೋಸ್ಟ್ ಆಫೀಸ್&zwnj;ಗಳಲ್ಲಿ ಅತೀ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಹಣ ಹೂಡಿಕೆ ಮಾಡಬಹುತು. ಮಾರುಕಟ್ಟೆ ಏರಿಳಿತ, ಷೇರು ಮಾರುಕಟ್ಟೆಗಳ ಕುಸಿತ ನಿಮ್ಮ ಸುರಕ್ಷಿತ ಹೂಡಿಕೆ ಮೊತ್ತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಗದಿತ ಸಮಯದಲ್ಲಿ ಬಡ್ಡಿ ಸೇರಿ ಉತ್ತಮ ಮೊತ್ತ ರಿಟರ್ನ್ಸ್ ಪಡೆಯಲು ಸಾಧ್ಯವಿದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/post-office-rd-scheme-rs-2000-monthly-investment-can-grow-to-rs-1-42-lakh-zqcgskf"/>
        </item>
        <item>
            <title><![CDATA[ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ, ದಿಢೀರ್ ಸೆನ್ಸೆಕ್ಸ್, ನಿಫ್ಟಿ ಕುಸಿತಕ್ಕೆ ಕಾರಣವೇನು?]]></title>
            <link>https://kannada.asianetnews.com/gallery/business/sensex-nifty-drop-suddenly-what-triggered-indian-stock-market-fall-tsqdcgq</link>
            <guid isPermaLink="true">https://kannada.asianetnews.com/gallery/business/sensex-nifty-drop-suddenly-what-triggered-indian-stock-market-fall-tsqdcgq</guid>
            <pubDate>Wed, 08 Jul 2026 15:28:51 +0530</pubDate>
            <description><![CDATA[&lt;p&gt;ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಾಣೆ ಹಡುಗು ಸಾಗುತ್ತಿದ್ದಂತೆ ಮಾರುಕಟ್ಟೆಗಳು ಚೇತರಿಸಿಕೊಂಡಿತ್ತು. ಭಾರತದ ಸ್ಟಾಕ್ ಮಾರ್ಕೆಟ್ ಸುಧಾರಣೆ ಕಂಡಿತ್ತು. ಆದರೆ ಇಂದು ದಿಢೀರ್ ಕುಸಿತ ತಂಡಿದೆ. ಇದಕ್ಕೆ ಕಾರಣವೇನು? ಕುಸಿತ ಮುಂದುವರಿಯುತ್ತಾ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3japqxqegyy1c0cgjqgqgj2,imgname-tamil-news---2025-08-26t100743.841-1756183093174.png" type="image/jpeg" height="390" width="690"/>
            <content:encoded><![CDATA[&lt;p&gt;ಹೊರ್ಮುಜ್ ಜಲಸಂಧಿ ಮೂಲಕ ಸರಕು ಸಾಗಾಣೆ ಹಡುಗು ಸಾಗುತ್ತಿದ್ದಂತೆ ಮಾರುಕಟ್ಟೆಗಳು ಚೇತರಿಸಿಕೊಂಡಿತ್ತು. ಭಾರತದ ಸ್ಟಾಕ್ ಮಾರ್ಕೆಟ್ ಸುಧಾರಣೆ ಕಂಡಿತ್ತು. ಆದರೆ ಇಂದು ದಿಢೀರ್ ಕುಸಿತ ತಂಡಿದೆ. ಇದಕ್ಕೆ ಕಾರಣವೇನು? ಕುಸಿತ ಮುಂದುವರಿಯುತ್ತಾ?&lt;/p&gt;&lt;img&gt;&lt;p&gt;ಪಾಶ್ಚಿಮಾತ್ಯ ಯುದ್ಧಗಳಿಂದ ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆ ಮೇಲೆ ಪರಿಣಾಮ ಬೀರಿತ್ತು. ಯುದ್ಧ ಶಾಂತಗೊಳ್ಳುತ್ತಿದ್ದಂತೆ ಭಾರತದ ಸ್ಟಾಕ್ ಮಾರ್ಕೆಟ್ ಚೇತರಿಕೆ ಕಂಡಿತ್ತು. ಆದರೆ ಎಲ್ಲವು ಶಾಂತವಾಯಿತು ಅನ್ನೋವಷ್ಟರಲ್ಲೇ ಭಾರತದ ಸ್ಟಾಕ್ ಮಾರ್ಕೆಟ್ ದಿಢೀರ್ ಕುಸಿತ ಕಂಡಿದೆ. ಸೆನ್ಸೆಕ್ಸ್, ನಿಫ್ಟಿ ತಲ್ಲಣಿಸಿದೆ.&lt;/p&gt;&lt;img&gt;&lt;p&gt;ಎಲ್ಲವೂ ಒಕೆ ಎಂದು ಮುಂದೆ ಸಾಗುತ್ತಿದ್ದಂತೆ ಡೋನಾಲ್ಡ್ ಟ್ರಂಪ್ ಮಾಡಿದ ಘೋಷಣೆ ಆತಂಕ ತರಿಸಿದೆ. ಇರಾನ್ ಜೊತೆಗಿನ ಕದನ ವಿರಾಮ ಅಂತ್ಯ ಎಂದು ಟ್ರಂಪ್ ಹೇಳಿದ್ದಾರೆ. ಹೀಗಾಗಿ ಮತ್ತೆ ಯುದ್ಧ ತೀವ್ರಗೊಳ್ಳುವ ಭೀತಿ ಎದುರಾಗಿದೆ. ಟ್ರಂಪ್ ಘೋಷಣೆಯಿಂದ ಇದೀಗ ಹಲವು ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಕಚ್ಚಾ ತೈಲ ಬೆಲೆ ಶೇಕಡಾ 6ರಷ್ಟು ಏರಿಕೆಯಾಗಿದೆ. ನಾಗರೀಕ ಹಡಗುಗಳ ಮೇಲೆ ಇರಾನ್ ದಾಳಿಗೆ ಪ್ರತಿಯಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ವೈಮಾನಿಕ ದಾಳಿ ನಡೆಸಿದೆ.&lt;/p&gt;&lt;img&gt;&lt;p&gt;ಇಂದು ಭಾರತದ ಷೇರು ಮಾರುಕಟ್ಟೆ ವಬಹಿವಾಟು ಆರಂಭಿಸಿದ ಕೆಲ ಹೊತ್ತಲ್ಲೇ ಟ್ರಂಪ್ ಘೋಷಣೆ ಪ್ರಭಾವ ಬೀರಿದೆ. ಸೆನ್ಸೆಕ್ಸ್ 550ಕ್ಕೂ ಹೆಚ್ಚು ಅಂಕ ಕುಸಿತ ಕಂಡಿದೆ. ಇತ್ತ ನಿಫ್ಠಿ 24,250 ಸೂಚ್ಯಂಕಕ್ಕಿಂತ ಕೆಳಕ್ಕೆ ಜಾರಿದೆ. ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 5ರಷ್ಟು ನಷ್ಟ ಅನುಭವಿಸಿದೆ.&lt;/p&gt;&lt;img&gt;&lt;p&gt;ಟ್ರಂಪ್ ಕದನ ವಿರಾಮ ಅಂತ್ಯ ಎಂದು ಘೋಷಣೆ ಮಾಡುತ್ತಿದ್ದಂತೆ ಕಚ್ಚಾ ತೈಲ ಬೆಲೆ ಏರಿಕೆ, ಡಾಲರ್ ಎದರು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್&zwnj;ಗೆ 76 ಡಾಲರ್&zwnj; ಗಡಿ ದಾಟಿದೆ. ಭಾರತ ತೈಲದ ಮೇಲೆ ಅವಲಂಬಿತವಾಗಿರುವ ಕಾರಣ ಇತ್ತ ರೂಪಾಯಿ ಮೌಲ್ಯ ಶೇಕಡಾ 0.2ರಷ್ಟು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆಗಾರರು ಭಾರತೀಯ ಮಾರುಕಟ್ಟೆಯಲ್ಲಿ ಉಳಿದಿದ್ದಾರೆ. ಹೀಗಾಗಿ ಭಾರತದ ಮಾರುಕಟ್ಟೆ ನಿಧಾನವಾಗಿ ಚೇತರಿಕೆ ಕಾಣಲಿದೆ. ಆದರೆ ಜಾಗತಿಕ ಮಟ್ಟದಲ್ಲಿನ ಮಹತ್ತರ ಬದಲಾವಣೆ, ಯುದ್ಧದ ಕಾರ್ಮೋಡಗಳಿಂದ ಪರಿಸ್ಥಿತಿ ಬದಲಾಗಬಗುದು.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/sensex-nifty-drop-suddenly-what-triggered-indian-stock-market-fall-tsqdcgq"/>
        </item>
        <item>
            <title><![CDATA[ಡೇಟಾ ಮುಗಿದು ಪರದಾಡುವ ಸ್ಥಿತಿ ಎದುರಾಗುತ್ತಿದೆಯಾ? ಜಿಯೋ ನೀಡುತ್ತಿದೆ ಉಚಿತ ಬೋನಸ್ ಡೇಟಾ]]></title>
            <link>https://kannada.asianetnews.com/gallery/business/jio-offers-free-bonus-data-for-customers-running-out-of-internet-benefit-for-users-qthxytk</link>
            <guid isPermaLink="true">https://kannada.asianetnews.com/gallery/business/jio-offers-free-bonus-data-for-customers-running-out-of-internet-benefit-for-users-qthxytk</guid>
            <pubDate>Wed, 08 Jul 2026 13:54:33 +0530</pubDate>
            <description><![CDATA[&lt;p&gt;ತಿಂಗಳ ರೀಚಾರ್ಜ್ ಮಾಡಿದ ಬಳಿಕವೂ ಕೆಲವೊಮ್ಮೆ ಡೇಟಾ ಮುಗಿದು ಪರದಾಡುವ ಪರಿಸ್ಥಿತಿ ಎದುರಾಗುತದೆ. ಇತರರಿಗೆ ಹೇಳಿ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿದವರೇ ಹಲವರು. ಆದರೆ ಜಿಯೋ ಉಚಿತವಾಗಿ ಬೋನಸ್ ಡೇಟಾ ನೀಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksqear4mzew8hsdw6gs64nw7,imgname-jio-launches-rs-200-ott-pass--3--1779976986772.jpeg" type="image/jpeg" height="390" width="690"/>
            <content:encoded><![CDATA[&lt;p&gt;ತಿಂಗಳ ರೀಚಾರ್ಜ್ ಮಾಡಿದ ಬಳಿಕವೂ ಕೆಲವೊಮ್ಮೆ ಡೇಟಾ ಮುಗಿದು ಪರದಾಡುವ ಪರಿಸ್ಥಿತಿ ಎದುರಾಗುತದೆ. ಇತರರಿಗೆ ಹೇಳಿ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿದವರೇ ಹಲವರು. ಆದರೆ ಜಿಯೋ ಉಚಿತವಾಗಿ ಬೋನಸ್ ಡೇಟಾ ನೀಡುತ್ತಿದೆ.&lt;/p&gt;&lt;img&gt;&lt;p&gt;ತಿಂಗಳ ರೀಚಾರ್ಜ್ ಮಾಡುವ ಬಹುತೇಕರು ಕೆಲವು ದಿನ ಹಲವು ಕಾರಣಗಳಿಂದ ಅಥವಾ ಹೆಚ್ಚು ಫ್ರಿಯಾಗಿದ್ದಾಗ ಡೇಟಾ ಬಳಕೆಯೂ ಹೆಚ್ಚಾಗುತ್ತದೆ. ಕೊನೆಯಲ್ಲಿ ಡೇಟಾ ಮುಗಿದು ಪರಿದಾಡುವ ಪರಿಸ್ಥಿತಿ ಎದುರಾಗುವುದು ಸಹಜ. ಕಂಪನಿ ಇಮೇಲ್, ವ್ಯಾಟ್ಸಾಪ್ ಗ್ರೂಪ್ ಸೇರಿದಂತೆ ಯಾವ ಅಪ್&zwnj;ಡೇಟ್ ಇಲ್ಲದೆ ಹಲವರು ಸಮಸ್ಯೆ ಎದುರಿಸುತ್ತಾರೆ. ಕೊನೆಗೆ ಆಪ್ತರಿಗೆ ಹೇಳಿ ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿಸುವ ಅನಿವಾರ್ಯತೆ ಎದುರಾಗಲಿದೆ. ಈ ಸಮಸ್ಯೆಗಳಿಗಾಗಿಯೇ ಜಿಯೋ ಹೆಚ್ಚುವರಿ ಬೋನಸ್ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ನಿಮ್ಮ ರೀಚಾರ್ಜ್&zwnj;ನಲ್ಲೇ ಹೆಚ್ಚುವರಿ ಉಚಿತ ಡೇಟಾ ನೀಡಲಾಗುತ್ತದೆ. ಇದಕ್ಕಾಗಿ ಬೇರೆ ರೀಚಾರ್ಜ್ ಮಾಡಬೇಕಿಲ್ಲ.&lt;/p&gt;&lt;img&gt;&lt;p&gt;ಜಿಯೋ ಗ್ರಾಹಕರು ಪ್ರತಿ ದಿನ 2 ಜಿಬಿ ಡೇಟಾ ಪ್ಲಾನ್ ರೀಚಾರ್ಜ್ ಮಾಡಿಕೊಂಡರೆ, ಅಂದರೆ 459 ರೂಪಾಯಿ ರೀಚಾರ್ಜ್&zwnj;ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದೆ. 28 ದಿನಗಳ ವ್ಯಾಲಿಟಿಡಿ ಇರಲಿದೆ. ಆದರೆ ಈ ಪ್ಲಾನ್&zwnj;ನಲ್ಲಿ ಜಿಯೋ ಬೋನಸ್ ರೂಪದಲ್ಲಿ 5 ಜಿಬಿ ಉಚಿತವಾಗಿ ನೀಡಲಿದೆ. 100 ಎಸ್ಎಂಎಸ್, ಜಿಯೋ ಟಿವಿ, ಜಿಯೋ ಕ್ಲೌಡ್ ಸ್ಟೋರೇಜ್, ಗೂಗಲ್ ಜೆಮಿನಿ ಪ್ರೋ, ಜಿಯೋ ಹಾಟ್&zwnj;ಸ್ಟಾರ್ ಸೇರಿದಂತೆ ಹಲವು ಪ್ರಯೋಜನ ಸಿಗಲಿದೆ.&lt;/p&gt;&lt;img&gt;&lt;p&gt;ಜಿಯೋ ಗ್ರಾಹಕರು 749 ರೂಪಾಯಿ ಅಥವಾ 899 ರೂಪಾಯಿ ರೀಚಾರ್ಜ್ ಮಾಡಿದರೆ 3 ತಿಂಗಳ ವ್ಯಾಲಿಟಿಡಿ ಅಂದರೆ ಮೂರು ತಿಂಗಳ ವ್ಯಾಲಿಟಿಡಿ ಸಿಗಲಿದೆ. ಪ್ರತಿ ದಿನ 2 ಜಿಬಿ ಉಚಿ ಡೇಡಾ ಈ ಪ್ಲಾನ್&zwnj;ನಲ್ಲಿ ಇರಲಿದೆ. ವಿಶೇಷ ಅಂದರೆ ಪ್ರತಿ ದಿನದ ಡೇಟಾ ಮುಗಿದರೂ ಚಿಂತೆ ಇಲ್ಲ ಕಾರಣ ಹೆಚ್ಚುವರಿಯಾಗಿ 20 ಜಿಬಿ ಡೇಟಾ ನೀಡಲಾಗಿರುತ್ತದೆ. ಈ ಡೇಟಾ ಬಳಕೆ ಮಾಡಬಹುದು.&lt;/p&gt;&lt;img&gt;&lt;p&gt;ಜಿಯೋ ಗ್ರಾಹಕರು 495 ರೂಪಾಯಿ ಅಥವಾ 545 ರೂಪಾಯಿ ರೀಚಾರ್ಜ್ ಮಾಡಿದರೆ ಪ್ರತಿ ದಿನ 1.5 ಜಿಬಿ ಹಾಗೂ 2 ಜಿಬಿ ಡೇಟಾ ಪ್ರತಿ ದಿನ ಲಭ್ಯವಿದೆ. ಆದರೆ ನಿಮ್ಮ ಪ್ರತಿ ದಿನ ಕೋಟಾ ಮುಗಿದ ಬಳಿಕ 5 ಜಿಬಿ ಉಚಿತ ಡೇಟಾ ನೆರವಾಗಲಿದೆ. 28 ದಿನಗಳ ವ್ಯಾಲಿಟಿ ಹೊಂದಿರುವ ಈ ಪ್ಲಾನ್&zwnj;ನಲ್ಲಿ ಹಲವು ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದು.&lt;/p&gt;&lt;img&gt;&lt;p&gt;ವ್ಯಾಲಿಟಿಡಿ ಇದೆ ಆದರೆ ಡೇಟಾ ಮುಗಿದಿದೆ. ಈ ಸಮಸ್ಯೆ ಎದುರಿಸುವ ಮಂದಿ ಬೋನಸ್ ಡೇಟಾ ಇರುವ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಡೇಟಾ ಕುರಿತು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆಪ್ತರಿಗೆ, ಇತರರಿಗೆ ಕರೆ ಮಾಡಿ ಡೇಟಾ ರೀಚಾರ್ಜ್ ಮಾಡಿೊಳ್ಳುವ ಕಿರಿಕಿರಿ ತಪ್ಪಲಿದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/jio-offers-free-bonus-data-for-customers-running-out-of-internet-benefit-for-users-qthxytk"/>
        </item>
        <item>
            <title><![CDATA[Paytm ಪ್ರತಿ ಪಾವತಿಗೂ ಗ್ರಾಹಕರಿಗೆ ಚಿನ್ನದ ನಾಣ್ಯ ಆಫರ್, ಪ್ರತಿಯೊಬ್ಬರಿಗೂ ಸಿಗಲಿದೆ ಬಂಪರ್ ಕೊಡುಗೆ]]></title>
            <link>https://kannada.asianetnews.com/business/paytm-offers-gold-coins-on-every-payment-customers-to-get-big-rewards-how-to-get/articleshow-log1gsa</link>
            <guid isPermaLink="true">https://kannada.asianetnews.com/business/paytm-offers-gold-coins-on-every-payment-customers-to-get-big-rewards-how-to-get/articleshow-log1gsa</guid>
            <pubDate>Wed, 08 Jul 2026 12:34:00 +0530</pubDate>
            <description><![CDATA[&lt;p&gt;ಚಹಾ, ಜ್ಯೂಸ್, ಬಿಲ್ ಪಾವತಿ, ರೀಚಾರ್ಜ್, ಕಿರಾಣಿ ಅಂಗಡಿಯಲ್ಲಿ ಪಾವತಿ ಸೇರಿದಂತೆ ಪೇಟಿಎಂ ಮೂಲಕ ಮಾಡುವ ಯುಪಿಐ ಪಾವತಿಗೆ ಇದೀಗ ಚಿನ್ನದ ನಾಣ್ಯದ ಆಫರ್ ನೀಡಲಾಗಿದೆ. ಪ್ರತಿಯೊಬ್ಬ ಗ್ರಾಹಕ ತನ್ನ ಪಾವತಿ ಮೇಲೆ ಗೋಲ್ಡ್ ಕಾಯಿನ್ ಪಡೆಯುಲು ಸಾಧ್ಯವಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx08hkxgmh1jr8xn3kq5wh9e,imgname-paytm-announces-gold-coin-offer-1783494135728.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.08)&lt;/strong&gt; ಭಾರತದಲ್ಲಿ ಸದ್ಯ ಯುಪಿಐ ಮೂಲಕ ಪಾವತಿಯನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಹಲವರು ನಗದು ಹಣ ಇಟ್ಟುಕೊಳ್ಳು ಪದ್ಧತಿಯಿಂದ ಹೊರಬಂದು ಎಲ್ಲವೂ ಡಿಜಿಟಲ್ ಪೇಮೆಂಟ್ ಆಗಿ ಬದಲಾಗಿದೆ. ಕೆಲಸಕ್ಕೆ ಹೋಗುವಾಗ ಕುಡಿಯುವ ಫಿಲ್ಟರ್ ಕಾಫಿ, ಹಿಂದಿರುವಾಗ ಕಿರಾಣಿ ಅಂಗಡಿಯಲ್ಲಿ ಖರೀದಿ, ಮೊಬೈಲ್ ರೀಚಾರ್ಜ್, ಆಟೋ ಪ್ರಯಾಣ, ಬಿಲ್ ಪಾವತಿ ಸೇರಿದಂತೆ ಸಣ್ಣ ಸಣ್ಣ ಪಾವತಿಯಿಂದ ಹಿಡಿದು ದೊಡ್ಡ ಪಾವತಿಗಳು ಯುಪಿಐ ಮೂಲಕವೇ ನಡೆಯುತ್ತಿದೆ. ಇದೀಗ ಪೇಟಿಎಂ ಇದೇ ಹಣದ ವಹಿವಾಟಿಗೆ ಚಿನ್ನದ ನಾಣ್ಯ ನೀಡುತ್ತಿದೆ. ಕರ್ನಾಟಕ ಜನತೆಗೆ ಇದೀಗ ಪೇಟಿಎಂ ಪ್ರತಿ ಪಾವತಿಯನ್ನು ಚಿನ್ನದ ನಾಣ್ಯವಾಗಿ ಪರಿವರ್ತಿಸುವ ಅವಕಾಶ ನೀಡಿದೆ.&lt;/p&gt;&lt;h2&gt;ಪೇಟಿಎಂ ಚಿನ್ನದ ನಾಣ್ಯ ಪಡೆಯುವುದು ಹೇಗೆ?&lt;/h2&gt;&lt;p&gt;ಪೇಟಿಎಂ ಆ್ಯಪ್&zwnj;ನಲ್ಲಿ ನಡೆಯುವ ಪ್ರತಿಯೊಂದು ಅರ್ಹ ವಹಿವಾಟಿಗೂ ಗ್ರಾಹಕರು ಚಿನ್ನದ ನಾಣ್ಯದ ಆಫರ್ ನೀಡಲಾಗುತ್ತದೆ. ಅಂದರೆ ವಹಿವಾಟಿನ ಮೌಲ್ಯದ 1% ರಷ್ಟು Gold Coins ದೊರೆಯುತ್ತವೆ. ಇವು ನೆರೆಹೊರೆಯ ಅಂಗಡಿಗಳಲ್ಲಿ Scan &amp;amp; Pay, ಬಿಲ್ ಪಾವತಿಗಳು, ಮೊಬೈಲ್ ರೀಚಾರ್ಜ್&zwnj;ಗಳು, ಆನ್&zwnj;ಲೈನ್ ಶಾಪಿಂಗ್ ಮತ್ತು ಹಣ ವರ್ಗಾವಣೆಗಳ ಮೇಲೆ ಲಭ್ಯವಿರುತ್ತವೆ. ಪ್ರತಿ 100 Gold Coins ಅನ್ನು ₹1 ಮೌಲ್ಯದ Digital Gold ಆಗಿ ಪರಿವರ್ತಿಸಬಹುದು. Gold Coins ಸಂಖ್ಯೆ 1,500 ತಲುಪಿದಾಗ, ಆ್ಯಪ್&zwnj;ನಲ್ಲಿ &lsquo;Convert to Real Gold&rsquo; ಆಯ್ಕೆ ಲಭ್ಯವಾಗುತ್ತದೆ. ಇದರಿಂದ ಸಂಗ್ರಹಿಸಿದ ಬಹುಮಾನಗಳನ್ನು 24K ಚಿನ್ನವಾಗಿ ಪರಿವರ್ತಿಸಬಹುದು. Paytm UPI ಮೂಲಕ RuPay Credit Card ಬಳಸಿ ಪಾವತಿ ಮಾಡಿದರೆ Gold Coins ದ್ವಿಗುಣವಾಗುತ್ತವೆ.&lt;/p&gt;&lt;h2&gt;40 ಸಾವಿರ ರೂ ವಹಿವಾಟು ಮಾಡಿದರೆ ಎಷ್ಟು ರೂ ಗೋಲ್ಡ್ ಕಾಯಿನ್ ಸಿಗುತ್ತೆ&lt;/h2&gt;&lt;p&gt;ಈ ಬಹುಮಾನಗಳು ನಿಧಾನವಾಗಿ ಸಂಗ್ರಹವಾಗುತ್ತವೆ. 1% ದರದಲ್ಲಿ ಲೆಕ್ಕ ಹಾಕಿದರೆ, ತಿಂಗಳಿಗೆ ಸುಮಾರು 40,000 ರೂಪಾಯಿ ಮೌಲ್ಯದ ಅರ್ಹ Paytm ಪಾವತಿಗಳ ಮೇಲೆ ಒಂದು ವರ್ಷದಲ್ಲಿ ಸುಮಾರು 4,800 ರೂಪಾಯಿ ಮೌಲ್ಯದ Gold Coins ಗಳಿಸಬಹುದು. ಇದು ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಚಿನ್ನವನ್ನು ನೀಡುವುದಿಲ್ಲ, ಆದರೆ ಕ್ರಮೇಣ ಚಿನ್ನದ ಉಳಿತಾಯ ನಿರ್ಮಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;ಕರ್ನಾಟಕದಲ್ಲಿ ಈ ಅಭ್ಯಾಸ ಹೊಸದೇನಲ್ಲ. ಚಿನ್ನದ ಬೆಲೆಗಳು ದಾಖಲೆಯ ಮಟ್ಟದ ಸಮೀಪದಲ್ಲಿದ್ದು, ಈ ವರ್ಷ ಬೆಂಗಳೂರಿನಲ್ಲಿ 24K ಚಿನ್ನದ 10 ಗ್ರಾಂ ಬೆಲೆ ₹1 ಲಕ್ಷಕ್ಕಿಂತ ಹೆಚ್ಚಾಗಿದೆ. ಚಿನ್ನವು ಇನ್ನೂ ದೀರ್ಘಾವಧಿಯ ಉಳಿತಾಯದ ಪ್ರಮುಖ ಆಯ್ಕೆಯಾಗಿದೆ. ಇದೀಗ ಪೇಟಿಎಂ ಗ್ರಾಹಕರಿಗೆ ಚಿನ್ನದ ನಾಣ್ಯದ ಆಫರ್ ನೀಡಿದ್ದು, ತಮ್ಮ ದೈನಂದಿನ ವಹಿವಾಟಿನಿಂದಲೇ ಚಿನ್ನ ಉಳಿತಾಯ ಮಾಡಬಹುದು.&lt;/p&gt;&lt;h2&gt;24ಕೆ ಶುದ್ಧ ಚಿನ್ನ&lt;/h2&gt;&lt;p&gt;ಪೇಟಿಎಂನಲ್ಲಿ ನೀವು ಉಳಿತಾಯ ಮಾಡುವ ಡಿಜಿಟಲ್ ಚಿನ್ನ 24ಕೆ ಚಿನ್ನವಾಗಿದೆ. ಅದು ಭೌತಿಕ ರೂಪದಲ್ಲಿ ಸಂಗ್ರಹವಾಗಿರುತ್ತದೆ. Paytm Gold ಅನ್ನು MMTC-PAMP ಬೆಂಬಲಿಸುತ್ತದೆ. ಇದು ಭಾರತ ಸರ್ಕಾರದ MMTC Ltd ಮತ್ತು ಸ್ವಿಟ್ಜರ್&zwnj;ಲ್ಯಾಂಡ್&zwnj;ನ MKS PAMP SA ನಡುವಿನ ಜಂಟಿ ಉದ್ಯಮವಾಗಿದೆ. 24K ಚಿನ್ನವನ್ನು ವಿಮೆ ಹೊಂದಿರುವ, ಬ್ಯಾಂಕ್-ಮಟ್ಟದ ಭದ್ರತೆಯ ವಾಲ್ಟ್&zwnj;ಗಳಲ್ಲಿ ಸಂಗ್ರಹಿಸಲಾಗುತ್ತದೆ. ಯಾವುದೇ ಸಂಗ್ರಹಣಾ ಶುಲ್ಕವಿಲ್ಲ. ಬಳಕೆದಾರರು ಪ್ರಚಲಿತ ಮಾರುಕಟ್ಟೆ ಬೆಲೆಗೆ ಅದನ್ನು ಮಾರಾಟ ಮಾಡಬಹುದು. ಹಣವನ್ನು ತಮ್ಮ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಅಥವಾ UPI ಮೂಲಕ ಪಡೆಯಬಹುದು.&lt;/p&gt;&lt;p&gt;Gold Coins ಮೂಲಕ ದೊರೆಯುವ ಉಳಿತಾಯದ ಹೊರತಾಗಿ, Paytm ಆ್ಯಪ್&zwnj;ನಲ್ಲಿ 51ರೂಪಾಯಿಯಿಂದ 24K Digital Gold ಖರೀದಿಸಲು ಅವಕಾಶವಿದೆ. ಇದು ನೈಜ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ ಲಭ್ಯವಿರುತ್ತದೆ. ಬಳಕೆದಾರರು ಸಣ್ಣ ಮೊತ್ತಗಳಿಂದ ಚಿನ್ನ ಖರೀದಿಸಬಹುದು ಅಥವಾ ನಿಯಮಿತ ಹೂಡಿಕೆಗಾಗಿ Daily Gold SIP ಆಯ್ಕೆ ಮಾಡಬಹುದು&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/business/paytm-offers-gold-coins-on-every-payment-customers-to-get-big-rewards-how-to-get/articleshow-log1gsa"/>
        </item>
        <item>
            <title><![CDATA[Gold Rate Today: 8 ದಿನದಲ್ಲಿ 5ನೇ ಬಾರಿ ಕುಸಿತ ಕಂಡ ಬಂಗಾರ; ಹಣ ಇದ್ರೆ ಇಂದೇ ಖರೀದಿಸಿ ಚಿನ್ನ]]></title>
            <link>https://kannada.asianetnews.com/gallery/business/gold-prices-see-major-drop-is-this-the-right-time-to-buy-gold-kvn-tat6nl1</link>
            <guid isPermaLink="true">https://kannada.asianetnews.com/gallery/business/gold-prices-see-major-drop-is-this-the-right-time-to-buy-gold-kvn-tat6nl1</guid>
            <pubDate>Wed, 08 Jul 2026 11:32:26 +0530</pubDate>
            <description><![CDATA[&lt;p&gt;ಬೆಂಗಳೂರು: ಕಳೆದ ಎಂಟು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿದೆ. ಇದರ ನಡುವೆ ಜುಲೈ 08ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmcx0yw0kzmp7s1v53259hz3,imgname-1-1774254586750.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕಳೆದ ಎಂಟು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಮುಂದುವರೆದಿದೆ. ಇದರ ನಡುವೆ ಜುಲೈ 08ರಂದು ಮತ್ತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಇನ್ನೇನು ಅಮೆರಿಕ ಹಾಗೂ ಇರಾನ್ ನಡುವಿನ ಯುದ್ದ ಮುಗಿಯಿತು ಎನ್ನುತ್ತಿರುವಾಗಲೇ ಮತ್ತೆ ಹೊರದಾಗಿ ಯುಎಸ್&zwnj; ಹಾಗೂ ಇರಾನ್ ನಡುವೆ ಏರ್&zwnj;ಸ್ಟ್ರೈಕ್&zwnj; ಶುರುವಾಗಿದೆ. ಇದರ ಬೆನ್ನಲ್ಲೇ ಜುಲೈ 08ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದು ಭಾರತದಲ್ಲಿ ಆಭರಣ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.&lt;/p&gt;&lt;img&gt;&lt;p&gt;ಯುಎಸ್ ಹಾಗೂ ಇರಾನ್ ನಡುವೆ ಹೊಸದಾಗಿ ಮತ್ತೆ ಯುದ್ದ ಭೀತಿ ಆರಂಭವಾಗಿರುವುದರಿಂದ ಕಚ್ಚಾ ತೈಲದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ. ಹೀಗಾಗಿ ಹಣದುಬ್ಬರದ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಕಳೆದ ಐದು ದಿನಗಳಿಂದಲೂ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ. ಕಳೆದ ಎಂಟು ದಿನಗಳಿಗೆ ಹೋಲಿಸಿದರೆ, ಐದನೇ ಬಾರಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಹೌದು, 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 770 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,449 ರುಪಾಯಿಗಳಾಗಿದೆ. ಕಳೆದ ಐದು ದಿನಗಳಲ್ಲಿ 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2240 ರುಪಾಯಿ ಇಳಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಕೂಡಾ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಭರಣ ಚಿನ್ನವೆಂದು ಕರೆಸಿಕೊಳ್ಳುವ 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 700 ರುಪಾಯಿ ಇಳಿಕೆಯಾಗಿದೆ. ಇದರೊಂದಿಗೆ ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ಇದೀಗ ಇಂದು 13,245 ರುಪಾಯಿಗಳಾಗಿದೆ.&lt;/p&gt;&lt;img&gt;&lt;p&gt;ಚಿನ್ನದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದರೂ ಬೆಳ್ಳಿ ಬೆಲೆಯು ಸ್ಥಿರವಾಗಿದ್ದು, ಯಾವುದೇ ಏರಿಳಿತಗಳಾಗಿಲ್ಲ. ಇದೀಗ ಒಂದು ಕೆಜಿ ಬೆಳ್ಳಿ ಬೆಲೆಯು ಜುಲೈ 08ರಂದು 2,45,000 ರುಪಾಯಿಗಳಾಗಿದೆ. ಕಳೆದ ಮೂರು ದಿನಗಳಿಂದಲೂ ಬೆಳ್ಳಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.&lt;/p&gt;&lt;img&gt;&lt;p&gt;ಇರಾನ್-ಯುಎಸ್ ಯುದ್ದ ಭೀತಿ ಹಿನ್ನಲೆಯಿಂದ ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ ಬಂಗಾರ ಖರೀದಿಸುವವರಿಗೆ ಒಟ್ಟಿನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಸದ್ಯದ ಬಂಗಾರದ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಗಮನಿಸಿದರೆ, ನಿಮ್ಮ ಕೈಯಲ್ಲಿ ಹಣವಿದ್ರೆ ಇಂದೇ ಬಂಗಾರ ಖರೀದಿಸುವುದು ಒಳ್ಳೆಯದು ಎನಿಸುತ್ತಿದೆ.&lt;/p&gt;]]></content:encoded>
            <category>business</category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/business/gold-prices-see-major-drop-is-this-the-right-time-to-buy-gold-kvn-tat6nl1"/>
        </item>
        <item>
            <title><![CDATA[ರಾಜಸ್ಥಾನ ಸುತ್ತಾಡಲು ಆಸೆ ಇರುವ ಕರ್ನಾಟಕದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ಬೆಂಗಳೂರಿನಿಂದ ಉದಯಪುರಕ್ಕೆ ನೇರ ವಿಮಾನ]]></title>
            <link>https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7</link>
            <guid isPermaLink="true">https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7</guid>
            <pubDate>Wed, 08 Jul 2026 10:45:27 +0530</pubDate>
            <description><![CDATA[ಆಕಾಸಾ ಏರ್ ವಿಮಾನಯಾನ ಸಂಸ್ಥೆಯು ಬೆಂಗಳೂರು ಮತ್ತು ಮುಂಬೈನಿಂದ ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಉದಯಪುರಕ್ಕೆ ಹೊಸ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಅಕ್ಟೋಬರ್ 15, 2026 ರಿಂದ ಈ ಸೇವೆ ಪ್ರಾರಂಭವಾಗಲಿದ್ದು, 'ಲೇಕ್&zwnj; ಸಿಟಿ'ಗೆ ಪ್ರಯಾಣವನ್ನು ಸುಲಭಗೊಳಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv8bt82brfsvydg3x60cjvtb,imgname-untitled-design---2026-06-16t193116.327-1781618516043.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಇಚ್ಛಿಸುವ ಹಾಗೂ 'ಡೆಸ್ಟಿನೇಶನ್ ವೆಡ್ಡಿಂಗ್'ಗೆ ಜನಪ್ರಿಯವಾಗಿರುವ ಐತಿಹಾಸಿಕ ನಗರ ಉದಯಪುರಕ್ಕೆ ಭೇಟಿ ನೀಡಬೇಕು ಅಂದುಕೊಂಡಿರುವವರಿಗೆ ಒಂದು ಶುಭ ಸುದ್ದಿ ಇದೆ. ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 'ಆಕಾಸಾ ಏರ್' ವಿಮಾನಯಾನ ಸಂಸ್ಥೆ ಇದೇ ಮೊದಲ ಬಾರಿಗೆ ರಾಜಸ್ಥಾನಕ್ಕೆ ಕಾಲಿಟ್ಟಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಮುಂಬೈನಿಂದ ಉದಯಪುರಕ್ಕೆ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಈ ವಿಮಾನಗಳು ಪ್ರತಿದಿನ ಕಾರ್ಯಾಚರಣೆ ನಡೆಸಲಿವೆ.&lt;/p&gt;&lt;p&gt;ಇದೇ ಅಕ್ಟೋಬರ್ 15, 2026 ರಿಂದ ಈ ಹೊಸ ಮಾರ್ಗದಲ್ಲಿ ವಿಮಾನಗಳ ಹಾರಾಟ ಶುರುವಾಗಲಿದೆ. ಈ ವಿಮಾನಗಳ ಟಿಕೆಟ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಆಸಕ್ತರು ಆಕಾಸಾ ಏರ್&zwnj;ನ ಅಧಿಕೃತ ವೆಬ್&zwnj;ಸೈಟ್, ಮೊಬೈಲ್ ಆ್ಯಪ್ ಅಥವಾ ಪ್ರಮುಖ ಆನ್&zwnj;ಲೈನ್ ಟ್ರಾವೆಲ್ ಏಜೆನ್ಸಿಗಳ ಟಿಕೆಟ್ ಅನ್ನು ಕಾಯ್ದಿರಿಸಬಹುದು.&lt;/p&gt;&lt;h2&gt;ವಿಮಾನದ ವೇಳಾಪಟ್ಟಿ&lt;/h2&gt;&lt;ul&gt; &lt;li&gt;ಕನ್ನಡಿಗರ ಪ್ರಯಾಣದ ಅನುಕೂಲಕ್ಕಾಗಿ ಬೆಂಗಳೂರಿನಿಂದ ಉಯಪುರಕ್ಕೆ ಪ್ರತಿದಿನ ಒಂದು ವಿಮಾನ ಕಾರ್ಯನಿರ್ವಹಿಸಲಿದೆ.&lt;/li&gt; &lt;li&gt;ಬೆಂಗಳೂರಿನಿಂದ ಉದಯಪುರಕ್ಕೆ QP 1527 ಸಂಖ್ಯೆಯ ವಿಮಾನವು ಪ್ರತಿದಿನ ಬೆಳಗ್ಗೆ 8:40ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10:55ಕ್ಕೆ ಉದಯಪುರ ತಲುಪಲಿದೆ.&lt;/li&gt; &lt;li&gt;ಉದಯಪುರಿಂದ ಬೆಂಗಳೂರಿಗೆ QP 1528 ಸಂಖ್ಯೆಯ ವಿಮಾನವು ಬೆಳಗ್ಗೆ 11:35ಕ್ಕೆ ಉದಯಪುರದಿಂದ ಟೇಕ್-ಆಫ್ ಆಗಿ ಮಧ್ಯಾಹ್ನ 1:55ಕ್ಕೆ ಮರಳಿ ಬೆಂಗಳೂರು ತಲುಪಲಿದೆ.&lt;/li&gt; &lt;li&gt;ಇದೇ ರೀತಿ ಮುಂಬೈ ಮತ್ತು ಉದಯಪುರ ನಡುವೆಯೂ ಪ್ರತಿದಿನ ಅಪರಾಹ್ನ ವಿಮಾನ ಸೇವೆ ಲಭ್ಯವಿರಲಿದೆ.&lt;/li&gt; &lt;li&gt;ಮುಂಬೈನಿಂದ ಉದಯಪುರಕ್ಕೆ QP 1155 ಸಂಖ್ಯೆಯ ವಿಮಾನವು ಪ್ರತಿದಿನ ಬೆಳಗ್ಗೆ 11:25ಕ್ಕೆ ಮುಂಬೈನಿಂದ ಹೊರಟು ಅಪರಾಹ್ನ 13:00ಕ್ಕೆ ಉದಯಪುರ ತಲುಪಲಿದೆ.&lt;/li&gt; &lt;li&gt;ಉದಯಪುರದಿಂದ ಬೆಂಗಳೂರಿಗೆ QP 1156 ಸಂಖ್ಯೆಯ ವಿಮಾನವು ಮಧ್ಯಾಹ್ನ13:40ಕ್ಕೆ ಉದಯಪುರದಿಂದ ಟೇಕ್-ಆಫ್ ಆಗಲಿದ್ದು ಅಪರಾಹ್ನ 15:10ಕೆ ಮರಳಿ ಮುಂಬೈ ತಲುಪಲಿದೆ.&lt;/li&gt;&lt;/ul&gt;&lt;h2&gt;ಉದಯಪುರಕ್ಕೆ ಯಾಕೆ ಆದ್ಯತೆ?&lt;/h2&gt;&lt;p&gt;ರಾಜಸ್ಥಾನದ ಲೇಕ್&zwnj; ಸಿಟಿ ಉದಯಪುರವು ಭಾರತದ ಪ್ರೀಮಿಯಂ ಪ್ರವಾಸೋದ್ಯಮ, ಅದ್ದೂರಿ ವಿವಾಹಗಳು ಮತ್ತು ಸಾಂಸ್ಕೃತಿಕ ಪ್ರಯಾಣದ ಪ್ರಮುಖ ಕೇಂದ್ರವಾಗಿದೆ. ಮಹಾನಗರಗಳಿಂದ ಈ ತಾಣಕ್ಕೆ ಹೆಚ್ಚಿನ ಜನರು ಭೇಟಿ ನೀಡುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಆಕಾಸಾ ಏರ್ ಈ ಹೊಸ ಮಾರ್ಗವನ್ನು ಪರಿಚಯಿಸಿದೆ.&lt;/p&gt;&lt;p&gt;ಈ ಬಗ್ಗೆ ವಿವರ ಹಂಚಿಕೊಂಡಿರುವ ಆಕಾಸಾ ಏರ್&zwnj;ನ ಸಹ-ಸ್ಥಾಪಕ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, &quot;ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಉದಯಪುರಕ್ಕೆ ವಿಮಾನ ಸೇವೆ ಆರಂಭಿಸಲು ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ಮತ್ತು ಮುಂಬೈನ ಗ್ರಾಹಕರು ಈಗ ದೇಶದ ಅತ್ಯಂತ ಸುಂದರ ತಾಣವೊಂದಕ್ಕೆ ಸುಲಭವಾಗಿ ಹಾಗೂ ಅನುಕೂಲಕರವಾಗಿ ಪ್ರಯಾಣಿಸಬಹುದು,&quot; ಎಂದಿರುವ ಅವರು, ಗ್ರಾಹಕ-ಸ್ನೇಹಿ ಜಾಲವನ್ನು ನಿರ್ಮಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಭರ್ಜರಿ ಸೌಲಭ್ಯ?&lt;/h2&gt;&lt;p&gt;ವಿನೂತನ ಹಾಗೂ ಪ್ರಯಾಣಿಕ-ಸ್ನೇಹಿ ಸೇವೆಗಳಿಗೆ ಹೆಸರುವಾಸಿಯಾಗಿರುವ ಆಕಾಸಾ ಏರ್&zwnj;ನ ವಿಮಾನಗಳಲ್ಲಿ ವಿಶಾಲವಾದ ಲೆಗ್&zwnj;ರೂಮ್ (ಕಾಲು ಚಾಚಲು ಜಾಗ) ಇದ್ದು, ಪ್ರಯಾಣದ ವೇಳೆ ಮೊಬೈಲ್/ಲ್ಯಾಪ್&zwnj;ಟಾಪ್ ಚಾರ್ಜ್ ಮಾಡಲು ಹೆಚ್ಚಿನ ಸೀಟ್&zwnj;ಗಳಲ್ಲಿ ಯುಎಸ್&zwnj;ಬಿ ಪೋರ್ಟ್&zwnj;ಗಳೂ ಇವೆ.&lt;/p&gt;&lt;p&gt;ತನ್ನ 'ಕೆಫೆ ಆಕಾಸಾ' ಮೂಲಕ ರುಚಿಕರವಾದ ಹಾಗೂ ಆರೋಗ್ಯಕರ ಊಟ, ಹಬ್ಬದ ವಿಶೇಷ ಮೆನುಗಳು ಮತ್ತು 'ಕೊಂಬುಚಾ'ದಂತಹ ವಿಶೇಷ ಪಾನೀಯಗಳನ್ನೂ ಪ್ರಯಾಣಿಕರಿಗೆ ಆಕಾಶದಲ್ಲೇ ಸವಿಯುವ ಅವಕಾಶ ಕಲ್ಪಿಸಿದೆ. ಇದರ ಜೊತೆ ಜೊತೆಗೆ 25ಕ್ಕೂ ಹೆಚ್ಚು ಕಸ್ಟಮೈಸ್ಡ್ ಸೇವೆಗಳನ್ನು ಸಹ ಪ್ರಯಾಣಿಕರು ಪಡೆಯಬಹುದು.&lt;/p&gt;&lt;p&gt;ಆಕಾಸಾ ಏರ್&zwnj; ಬೆಂಗಳೂರು, ದೆಹಲಿ, ಅಯೋಧ್ಯೆ ಸೇರಿದಂತೆ ಭಾರತದ 28 ನಗರಗಳು ಹಾಗೂ ದೋಹಾ, ಅಬುಧಾಬಿ ಮುಂತಾದ 7 ಅಂತಾರಾಷ್ಟ್ರೀಯ ತಾಣಗಳಿಗೆ ವಿಮಾನ ಕಾರ್ಯಾಚರಣೆಯನ್ನು ನಡೆಸುತ್ತಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/business/akasa-air-launches-direct-flights-to-udaipur-from-bengaluru-gdp/articleshow-w825hn7"/>
        </item>
        <item>
            <title><![CDATA[ಆ ಹುಡ್ಗಿ ಮನೆ ಬಿಟ್ಟು ನಮ್​ ಮನೆಗೆ ಬಂದು ಬಿಟ್ಟಳು: ಪ್ಲೀಸ್​ ​ ಹೀಗೆಲ್ಲಾ ಮಾಡ್ಬೇಡಿ; ಕಂಪ್ಲೇಂಟ್​ ಆಗತ್ತೆ- ಭವ್ಯಾ ಗೌಡ ಮನವಿ]]></title>
            <link>https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</link>
            <guid isPermaLink="true">https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2</guid>
            <pubDate>Tue, 07 Jul 2026 22:26:29 +0530</pubDate>
            <description><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyqtyz0gppdfvqw2xfqbq3n,imgname-bhavya-gowda-1783443061728.jpg" type="image/jpeg" height="390" width="690"/>
            <content:encoded><![CDATA[&lt;p&gt;'ಕರ್ಣ' ಧಾರಾವಾಹಿ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಹೊಸ ಹೂವಿನ ಉದ್ಯಮಕ್ಕೆ ಅಭಿಮಾನಿಗಳಿಂದಲೇ ತೊಂದರೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಾಪಾರದ ಫೋನ್ ಸಂಖ್ಯೆಗೆ ಕರೆ ಮಾಡಿ ತೊಂದರೆ ನೀಡಿದರೆ, ಮತ್ತೊಬ್ಬ ಯುವತಿ ನಟಿಯಾಗುವ ಆಸೆಯಿಂದ &amp;nbsp;ಮನೆಗೆ ಬಂದಿರುವ ಬಗ್ಗೆ ತಿಳಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ ನಿಧಿಯಾಗಿ ಎಲ್ಲರ ಮನ ಸೆಳೆಯುತ್ತಿರುವ ನಟಿ ಭವ್ಯಾ ಗೌಡ ಅವರು, ಕೆಲ ತಿಂಗಳುಗಳಿಂದ ಸಹೋದರಿ ದಿವ್ಯಾ ಗೌಡ ಜೊತೆ ಸೇರಿ 'ಹೌಸ್ ಆಫ್ ಫ್ಲವರ್ಸ್' ಎಂಬ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ ಒಣ ಹೂವುಗಳನ್ನು ಬಳಸಿ ಕೈಯಿಂದ ತಯಾರಿಸಿದ ಬೊಕ್ಕೆಗಳನ್ನು (handmade bouquets) ಅವರು ಮಾರಾಟ ಮಾಡುತ್ತಿದ್ದಾರೆ. ಒಣ ಹೂವುಗಳನ್ನು ಬಳಸಿ ವಿಶಿಷ್ಟವಾದ, ಕೈಯಿಂದ ಮಾಡಿದ ಹೂವಿನ ಬೊಕ್ಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.&lt;/p&gt;&lt;img&gt;&lt;p&gt;ಇದರ ಬಗ್ಗೆ ಅವರು ಮಾಹಿತಿ ನೀಡುತ್ತಲೇ, ಹೂವಿನ ಬಗ್ಗೆ ವಿಚಾರಿಸೋದನ್ನು ಬಿಟ್ಟು ಮೊಬೈಲ್​ ನಂಬರ್​ ಸಿಕ್ಕಿಬಿಟ್ಟಿದೆ ಎನ್ನುವ ಖುಷಿಯಲ್ಲಿ ಭವ್ಯಾ ಗೌಡ ಅವರ ಜೊತೆಗೆಮಾತನಾಡಲು ಅಭಿಮಾನಿಗಳು ದಿನನಿತ್ಯವೂ ಆಮೊಬೈಲ್​ಗೆ ಕರೆಮಾಡಿ ಬಿಜಿನೆಸ್​ಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಭವ್ಯಾ ಅವರು ನೋವು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಈ ಫೋನ್​ ನನ್ನ ಬಳಿ ಇರುವುದಿಲ್ಲ. ಅದು ಬಿಜಿನೆಸ್​ ಮಾಡುವವರ ಬಳಿ ಇರುತ್ತದೆ. ಅವರಿಗೆ ಕಾಲ್​ಮಾಡಿ ನನ್ನ ಬಗ್ಗೆ ವಿಚಾರಿಸೋದು, ಫೋನ್​ ನಂಬರ್​ ಕೇಳೋದು ಹೀಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ.ಪ್ಲೀಸ್​ ಹಾಗೆಲ್ಲಾ ಮಾಡಿ ಬಿಜಿನೆಸ್​ಗೆ ತೊಂದರೆ ಮಾಡಬೇಡಿ ಎಂದು ಭವ್ಯಾ ಕೇಳಿಕೊಂಡಿದ್ದಾರೆ..&lt;/p&gt;&lt;img&gt;&lt;p&gt;ಒಬ್ಬ ಹುಡುಗಿ ಕೆಲವು ದಿನಗಳ ಹಿಂದೆ ಬಂದು ಆ್ಯಕ್ಟಿಂಗ್​ಮಾಡಬೇಕು, ಇಲ್ಲೇ ಇರ್ತೇನೆ ಎಂದು ಬಂದುಬಿಟ್ಟಳು.ಮೊದಲಿಗೆ ಆ ಹುಡುಗಿಯ ಅಕ್ಕ ಬಂದು ಕರೆದುಕೊಂಡು ಹೋದರು. ಮತ್ತೊಮ್ಮೆ ಬಂದ ಹುಡುಗಿ, ನಿನ್ನೆ ಕೂಡ ಮತ್ತೆ ಬಂದಿದ್ದಾಳೆ. ಮನೆ ಬಿಟ್ಟು ಬಂದಿದ್ದೇನೆ. ನನಗೆ ನೀವು ಆ್ಯಕ್ಟಿಂಗ್​ ಕಲಿಸಲೇಬೇಕು. ಎಲ್ಲಿಯೂ ಹೋಗಲ್ಲ ಎಂದು ಬಟ್ಟೆ ಪ್ಯಾಕ್​ ಮಾಡಿಕೊಂಡು ಬಂದಿದ್ದಾಳೆ. ಹೀಗೆಲ್ಲಾ ಆದ್ರೆ ತುಂಬಾ ಭಯ ಆಗುತ್ತೆ ಎಂದಿದ್ದಾರೆ ನಟಿ.&lt;/p&gt;&lt;img&gt;&lt;p&gt;ಕೊನೆಗೆ ಆ ಹುಡುಗಿ ನೇರವಾಗಿ ನಮ್ಮ ಮನೆಗೆ ಮಧ್ಯರಾತ್ರಿ ಬಂದಿದ್ದಾಳೆ. ನಮ್ಮ ಓನರ್​ ನೋಡಿ ಭಯಪಟ್ಟುಕೊಂಡಿದ್ದಾರೆ. ಹೀಗೆ ತೊಂದರೆ ಕೊಟ್ಟರೆ ಪೊಲೀಸ್​ ಕಂಪ್ಲೇಂಟ್​ ಕೊಡುವುದಾಗಿ ಅವರು ಹೇಳಿದ್ದಾರೆ. ಹೀಗೆಲ್ಲಾ ಆದರೆ ದೊಡ್ಡ ಇಶ್ಯು ಆಗುತ್ತದೆ, ದಯವಿಟ್ಟು ಸಹಕರಿಸಿ ಎಂದು ನಟಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಮಗೂ ನಮ್ಮ ಪರ್ಸನಲ್​ ಲೈಫ್​ ಇದೆ. ಅದನ್ನು ಬದುಕಲು ಬಿಡಿ. ನನ್ನ ಸೋಷಿಯಲ್​ ಮೀಡಿಯಾ ಖಾತೆಗೆ ಎಷ್ಟೇ ಮೆಸೇಜ್ ಮಾಡಿ, ನಾನು ರೆಸ್ಪಾನ್ಸ್​ ಮಾಡುತ್ತೇನೆ. ಅದನ್ನು ಬಿಟ್ಟು ಹೀಗೆಲ್ಲಾ ನಮ್ಮ ಬಿಜಿನೆಸ್​ಗೆ ಬಂದು ತೊಂದರೆ ಕೊಡಬೇಡಿ ಎಂದಿದ್ದಾರೆ ನಟಿ ಭವ್ಯಾ ಗೌಡ.&lt;/p&gt;]]></content:encoded>
            <category>business</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-nidhi-urf-bhavya-gowda-asking-fans-not-to-disturb-her-flower-business-by-calling-suc-ake67g2"/>
        </item>
        <item>
            <title><![CDATA[DMart ಸೀಕ್ರೆಟ್ ಟ್ರಿಕ್: ವಾರದ ಯಾವ ದಿನ ಶಾಪಿಂಗ್ ಮಾಡಿದ್ರೆ ಸಿಗುತ್ತೆ ಭಾರಿ ರಿಯಾಯಿತಿ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌]]></title>
            <link>https://kannada.asianetnews.com/gallery/business/best-day-to-shop-at-dmart-for-huge-discounts-offers-shopping-tricks-san-ic3ydai</link>
            <guid isPermaLink="true">https://kannada.asianetnews.com/gallery/business/best-day-to-shop-at-dmart-for-huge-discounts-offers-shopping-tricks-san-ic3ydai</guid>
            <pubDate>Tue, 07 Jul 2026 22:53:12 +0530</pubDate>
            <description><![CDATA[&lt;p&gt;ಡಿಮಾರ್ಟ್, ಮಧ್ಯಮ ವರ್ಗದ ನೆಚ್ಚಿನ ಶಾಪಿಂಗ್ ತಾಣವಾಗಿದ್ದು, ಇಲ್ಲಿ MRP ಗಿಂತ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ. ವಾರದ ನಿರ್ದಿಷ್ಟ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಶಾಪಿಂಗ್ ಮಾಡುವುದರಿಂದ ವಿಶೇಷ ರಿಯಾಯಿತಿಗಳು ಸಿಗುತ್ತವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9khg5sbktzwmphc8tgxzpjg,imgname-tamil-news--35--1762666223402.png" type="image/jpeg" height="390" width="690"/>
            <content:encoded><![CDATA[&lt;p&gt;ಡಿಮಾರ್ಟ್, ಮಧ್ಯಮ ವರ್ಗದ ನೆಚ್ಚಿನ ಶಾಪಿಂಗ್ ತಾಣವಾಗಿದ್ದು, ಇಲ್ಲಿ MRP ಗಿಂತ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ. ವಾರದ ನಿರ್ದಿಷ್ಟ ದಿನಗಳಾದ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಶಾಪಿಂಗ್ ಮಾಡುವುದರಿಂದ ವಿಶೇಷ ರಿಯಾಯಿತಿಗಳು ಸಿಗುತ್ತವೆ.&lt;/p&gt;&lt;img&gt;&lt;p&gt;ದೇಶದ ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಶಾಪಿಂಗ್ ತಾಣ ಎಂದರೆ ಅದು &lsquo;ಡಿ-ಮಾರ್ಟ್&rsquo; (D-Mart). ದಿನಸಿ, ಬಟ್ಟೆಗಳು ಹಾಗೂ ಗೃಹಬಳಕೆಯ ವಸ್ತುಗಳು ಇಲ್ಲಿ ಯಾವಾಗಲೂ ಎಂಆರ್&zwnj;ಪಿ (MRP) ಗಿಂತ ಕಡಿಮೆ ಬೆಲೆಗೆ ಸಿಗುವುದರಿಂದ ಇಲ್ಲಿ ಸದಾ ಜನಜಂಗುಳಿ ಇರುತ್ತದೆ. ಆದರೆ, ನೀವು ಡಿ-ಮಾರ್ಟ್&zwnj;ನಲ್ಲಿ ಇನ್ನೂ ಹೆಚ್ಚಿನ ಹಣವನ್ನು ಉಳಿತಾಯ ಮಾಡಬೇಕೇ? ಹಾಗಿದ್ದರೆ ವಾರದ ಯಾವ ದಿನಗಳಲ್ಲಿ ಶಾಪಿಂಗ್ ಮಾಡುವುದು ಹೆಚ್ಚು ಲಾಭದಾಯಕ ಹಾಗೂ ಡಿ-ಮಾರ್ಟ್&zwnj;ನ ಆಫರ್ ರಹಸ್ಯಗಳೇನು ಅನ್ನೋದರ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಶುಕ್ರವಾರ, ಶನಿವಾರ ಮತ್ತು ಭಾನುವಾರದ ದಿನಗಳಲ್ಲಿ ಡಿ-ಮಾರ್ಟ್ ಸ್ಟೋರ್&zwnj;ಗಳಲ್ಲಿ ಗ್ರಾಹಕರ ಸಂಖ್ಯೆ ಅತ್ಯಂತ ಹೆಚ್ಚಾಗಿರುತ್ತದೆ. ಈ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ದಿನಸಿ ಸಾಮಗ್ರಿ, ರೆಡಿಮೇಡ್ ಬಟ್ಟೆಗಳು, ಸ್ಕಿನ್&zwnj;ಕೇರ್ ಉತ್ಪನ್ನಗಳು ಮತ್ತು ಗೃಹಬಳಕೆಯ ವಸ್ತುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ಘೋಷಿಸಲಾಗುತ್ತದೆ.&lt;/p&gt;&lt;img&gt;&lt;p&gt;ದೀಪಾವಳಿ, ದಸರಾ, ಹೋಳಿ, ಕ್ರಿಸ್ಮಸ್ ಮತ್ತು ಹೊಸ ವರ್ಷದಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಡಿ-ಮಾರ್ಟ್&zwnj;ನಲ್ಲಿ ಆಫರ್&zwnj;ಗಳ ಮಹಾಪೂರವೇ ಇರುತ್ತದೆ. ಈ ಸೀಸನ್&zwnj;ನಲ್ಲಿ ಹೆಚ್ಚಾಗಿ 'ಬೈ ಒನ್ ಗೆಟ್ ಒನ್' (Buy One Get One) ನಂತಹ ಅತ್ಯಂತ ಆಕರ್ಷಕ ಆಫರ್&zwnj;ಗಳನ್ನು ಹೆಚ್ಚಿನ ಸಂಖ್ಯೆಯ ಉತ್ಪನ್ನಗಳ ಮೇಲೆ ಅನ್ವಯಿಸಲಾಗುತ್ತದೆ.&lt;/p&gt;&lt;img&gt;&lt;p&gt;ಕೆಲವು ಡಿ-ಮಾರ್ಟ್ ಮಳಿಗೆಗಳಲ್ಲಿ ವಾರಾಂತ್ಯದ (ಭಾನುವಾರದ) ನಂತರ ಉಳಿದುಕೊಂಡಿರುವ ಹಳೆಯ ಸ್ಟಾಕ್&zwnj;ಗಳನ್ನು ಬೇಗನೆ ಖಾಲಿ ಮಾಡಲು 'ಕ್ಲಿಯರೆನ್ಸ್ ಸೇಲ್' ಹಮ್ಮಿಕೊಳ್ಳಲಾಗುತ್ತದೆ. ಈ ಸೇಲ್&zwnj;ನಲ್ಲಿ ಆಯ್ದ ವಸ್ತುಗಳ ಮೇಲೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಒಂದು ವೇಳೆ ನೀವು 'ಡಿ-ಮಾರ್ಟ್ ರೆಡಿ' (D-Mart Ready) ಆ್ಯಪ್ ಮೂಲಕ ಆನ್&zwnj;ಲೈನ್&zwnj;ನಲ್ಲಿ ಶಾಪಿಂಗ್ ಮಾಡುತ್ತಿದ್ದರೆ, ಸೋಮವಾರ ಅಥವಾ ಬುಧವಾರದ ದಿನಗಳಲ್ಲಿ ವಿಶೇಷ ಆನ್&zwnj;ಲೈನ್ ಡೀಲ್ಸ್ ಮತ್ತು ರಿಯಾಯಿತಿ ಕೂಪನ್&zwnj;ಗಳು ಲಭ್ಯವಾಗುತ್ತವೆ.&lt;/p&gt;&lt;img&gt;&lt;p&gt;ಡಿ-ಮಾರ್ಟ್&zwnj;ನಲ್ಲಿ ಹೊಸ ವಾರದ ಸೇಲ್ ಪ್ರತಿ ಶುಕ್ರವಾರದಿಂದಲೇ ಆರಂಭವಾಗುತ್ತದೆ. ಈ ದಿನ ಮಳಿಗೆಯ ಒಳಗೆ ಹೋದರೆ ನಿಮಗೆ 'Weekend Special' ಎಂಬ ಬೋರ್ಡ್&zwnj;ಗಳು ಕಾಣಸಿಗುತ್ತವೆ. ಶುಕ್ರವಾರದಂದು ದಿನಸಿ ಸಾಮಗ್ರಿ, ಅಡುಗೆ ಎಣ್ಣೆ, ಬೇಳೆಕಾಳುಗಳು ಮತ್ತು ಸೋಪ್&zwnj;ಗಳ ಹೊಸ ಸ್ಟಾಕ್ ಭರಪೂರವಾಗಿರುತ್ತದೆ. ಈ ದಿನ ವಾರಾಂತ್ಯದ ಉಳಿದ ದಿನಗಳಿಗೆ ಹೋಲಿಸಿದರೆ ಜನದಟ್ಟಣೆ ಕಡಿಮೆ ಇರುವುದರಿಂದ, ಮೊದಲ ದಿನವೇ ನಿಮ್ಮ ನೆಚ್ಚಿನ ಬ್ರ್ಯಾಂಡ್&zwnj;ನ ವಸ್ತುಗಳನ್ನು ಸುಲಭವಾಗಿ ಆಯ್ದುಕೊಳ್ಳಬಹುದು.&lt;/p&gt;&lt;img&gt;&lt;p&gt;ಶನಿವಾರ ಡಿ-ಮಾರ್ಟ್ ಪಾಲಿಗೆ ಅತ್ಯಂತ ಬ್ಯುಸಿ ದಿನವಾಗಿರುತ್ತದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮಳಿಗೆಗಳಲ್ಲಿ ವಿಪರೀತ ಜನಜಂಗುಳಿ ಇರುತ್ತದೆ. ಆದರೆ, ಇದೇ ದಿನದಂದು 'ಬೈ 1 ಗೆಟ್ 1' (Buy 1 Get 1), ಶೇ. 50 ರಷ್ಟು ಭಾರಿ ರಿಯಾಯಿತಿ (50% Off) ಮತ್ತು ಮೌಲ್ಯಯುತವಾದ 'ಕಾಂಬೋ ಪ್ಯಾಕ್' (Combo Packs) ಆಫರ್&zwnj;ಗಳು ಗ್ರಾಹಕರಿಗೆ ಅತಿ ಹೆಚ್ಚಾಗಿ ಸಿಗುತ್ತವೆ.&lt;/p&gt;&lt;img&gt;&lt;p&gt;ಭಾನುವಾರ ವಾರದ ಕೊನೆಯ ದಿನವಾಗಿರುವುದರಿಂದ ಮಳಿಗೆಗಳಲ್ಲಿ ಉಳಿದುಹೋಗಿರುವ ಹಳೆಯ ಸ್ಟಾಕ್&zwnj;ಗಳ ಮೇಲೆ ಹೆಚ್ಚುವರಿಯಾಗಿ ಶೇ. 10 ರಿಂದ ಶೇ. 20 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಮುಖ್ಯವಾಗಿ ಹಸಿರು ತರಕಾರಿಗಳು, ತಾಜಾ ಹಣ್ಣುಗಳು ಮತ್ತು ಹಾಲಿನ ಪುಡಿಯಂತಹ ನಿತ್ಯಬಳಕೆಯ ಕೆಲವು ನಿರ್ದಿಷ್ಟ ವಸ್ತುಗಳು ಭಾನುವಾರ ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತವೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/best-day-to-shop-at-dmart-for-huge-discounts-offers-shopping-tricks-san-ic3ydai"/>
        </item>
        <item>
            <title><![CDATA[ಕ್ರೆಟಾಗೆ ಟಕ್ಕರ್ ನೀಡಲು ಕಾರಿನ ದರ ಇಳಿಸಿದ ಮಾರುತಿ ಸುಜುಕಿ, ವಿಕ್ಟೋರಿಸ್ SUV ಈಗ ಮತ್ತಷ್ಟು ಅಗ್ಗ]]></title>
            <link>https://kannada.asianetnews.com/car-news/maruti-suzuki-victoris-suv-price-cut-hyundai-creta-rival-automobile-news-san/articleshow-go4fs4x</link>
            <guid isPermaLink="true">https://kannada.asianetnews.com/car-news/maruti-suzuki-victoris-suv-price-cut-hyundai-creta-rival-automobile-news-san/articleshow-go4fs4x</guid>
            <pubDate>Tue, 07 Jul 2026 22:25:03 +0530</pubDate>
            <description><![CDATA[ಮಾರುತಿ ಸುಜುಕಿ ತನ್ನ ಜನಪ್ರಿಯ ಮಿಡ್-ಸೈಜ್ ಎಸ್&zwnj;ಯುವಿ 'ವಿಕ್ಟೋರಿಸ್' ಕಾರಿನ ಆಯ್ದ ಟಾಪ್-ಎಂಡ್ ಪೆಟ್ರೋಲ್ ವೇರಿಯೆಂಟ್&zwnj;ಗಳ ಬೆಲೆಯಲ್ಲಿ ₹38,900 ವರೆಗೆ ಕಡಿತಗೊಳಿಸಿದೆ. ಹ್ಯುಂಡೈ ಕ್ರೆಟಾಗೆ ಪೈಪೋಟಿ ನೀಡಲು ಮತ್ತು ಹಬ್ಬದ ಸೀಸನ್&zwnj;ಗೂ ಮುನ್ನ ಗ್ರಾಹಕರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k947f7053wcyty8yzkwx8r2b,imgname-tamil-news---2025-11-03t121345.097-1762152389637.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಜು.7): &lt;/strong&gt;ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಗಳಿಸಿರುವ ಹ್ಯುಂಡೈ ಕ್ರೆಟಾಗೆ ನೇರ ಪೈಪೋಟಿ ನೀಡುವ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೆಮ್ಮೆಯ ಮಿಡ್-ಸೈಜ್ ಎಸ್&zwnj;ಯುವಿ &lsquo;ವಿಕ್ಟೋರಿಸ್&rsquo; (Victoris) ಕಾರಿನ ಆಯ್ದ ಪೆಟ್ರೋಲ್ ವೇರಿಯೆಂಟ್&zwnj;ಗಳ ಬೆಲೆಯಲ್ಲಿ ಭಾರಿ ಡಿಸ್ಕೌಂಟ್&zwnj; ಪ್ರಕಟಿಸಿದೆ. ಆಯ್ದ ಮಾಡೆಲ್&zwnj;ಗಳ ಎಕ್ಸ್-ಶೋರೂಮ್ ಬೆಲೆಯಲ್ಲಿ ಗರಿಷ್ಠ ₹38,900 ರವರೆಗೆ ಕಡಿತಗೊಳಿಸಲಾಗಿದ್ದು, ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.&lt;/p&gt;&lt;h2&gt;&lt;strong&gt;ಯಾವ ವೇರಿಯೆಂಟ್&zwnj;ಗಳು ಅಗ್ಗವಾಗಿವೆ?&lt;/strong&gt;&lt;/h2&gt;&lt;p&gt;ಕಂಪನಿಯ ಈ ಬೆಲೆ ಕಡಿತದ ಲಾಭವು ಕೇವಲ ಪೆಟ್ರೋಲ್ ಎಂಜಿನ್ ಹೊಂದಿರುವ ಟಾಪ್-ಎಂಡ್ ವೇರಿಯೆಂಟ್&zwnj;ಗಳಾದ ZXi (O) ಮತ್ತು ZXi Plus (O) ಮಾಡೆಲ್&zwnj;ಗಳಿಗೆ ಮಾತ್ರ ಅನ್ವಯಿಸಲಿದೆ. ಈ ಎರಡು ವೇರಿಯೆಂಟ್&zwnj;ಗಳ ಮ್ಯಾನುಯಲ್ (MT) ಮತ್ತು ಆಟೋಮ್ಯಾಟಿಕ್ (AT) ಗೇರ್&zwnj;ಬಾಕ್ಸ್ ಹೊಂದಿರುವ ಒಟ್ಟು ನಾಲ್ಕು ಮಾದರಿಗಳ ಬೆಲೆಯಲ್ಲಿ ಮಾತ್ರ ಇಳಿಕೆ ಮಾಡಲಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ನೋಡುವುದಾದರೆ, ZXi (O) ಪೆಟ್ರೋಲ್ ಮ್ಯಾನುಯಲ್ ವೇರಿಯೆಂಟ್ ಮೇಲೆ ಅತ್ಯಂತ ಗರಿಷ್ಠ ಅಂದರೆ ಶೇ. 2.76 ರಷ್ಟು ದರ ಕಡಿತವಾಗಿದೆ. ಅದೇ ರೀತಿ, ZXi (O) ಪೆಟ್ರೋಲ್ ಆಟೋಮ್ಯಾಟಿಕ್ ಬೆಲೆಯಲ್ಲಿ ಶೇ. 2.49 ರಷ್ಟು ಹಾಗೂ ZXi Plus (O) ಪೆಟ್ರೋಲ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಯಲ್ಲಿ ಶೇ. 2.46 ರಷ್ಟು ಇಳಿಕೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಮಾಡೆಲ್&zwnj;ಗಳ ದರ ಬದಲಾಗಿಲ್ಲ?&lt;/strong&gt;&lt;/h2&gt;&lt;p&gt;ವಿಕ್ಟೋರಿಸ್ ಕಾರಿನ ಬೇಸ್ ಮತ್ತು ಮಿಡ್ ವೇರಿಯೆಂಟ್&zwnj;ಗಳಾದ LXi, VXi, ZXi ಮತ್ತು ZXi Plus ನಾರ್ಮಲ್ (ನ್ಯಾಚುರಲಿ ಆಸ್ಪಿರೇಟೆಡ್) ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರಂಟ್-ವೀಲ್ ಡ್ರೈವ್ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಆವೃತ್ತಿಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇವೆಲ್ಲವೂ ಹಳೆಯ ದರದಲ್ಲೇ ಮುಂದುವರಿಯಲಿವೆ. ಇದರೊಂದಿಗೆ, ಪರಿಸರ ಸ್ನೇಹಿ ಸಿಎನ್&zwnj;ಜಿ (CNG) ಮತ್ತು ಇಂಧನ ದಕ್ಷತೆಯ ಸ್ಟ್ರಾಂಗ್ ಹೈಬ್ರಿಡ್ (Strong Hybrid) ಮಾಡೆಲ್&zwnj;ಗಳ ಬೆಲೆಯನ್ನು ಯಥಾಸ್ಥಿತಿಯಲ್ಲಿಡಲಾಗಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;&lt;strong&gt;ಮಾಡೆಲ್&zwnj;&lt;/strong&gt;&lt;/td&gt;   &lt;td&gt;&lt;strong&gt;ಹೊಸ ಬೆಲೆ (ಲಕ್ಷದಲ್ಲಿ)&lt;/strong&gt;&lt;/td&gt;   &lt;td&gt;&lt;strong&gt;ಹಳೆ ಬೆಲೆ (ಲಕ್ಷದಲ್ಲಿ)&lt;/strong&gt;&lt;/td&gt;   &lt;td&gt;&lt;strong&gt;ಅಂತರ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;LXi MT&lt;/td&gt;   &lt;td&gt;10.5&lt;/td&gt;   &lt;td&gt;10.5&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;VXi MT&lt;/td&gt;   &lt;td&gt;11.8&lt;/td&gt;   &lt;td&gt;11.8&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;VXi AT&lt;/td&gt;   &lt;td&gt;13.36&lt;/td&gt;   &lt;td&gt;13.36&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi MT&lt;/td&gt;   &lt;td&gt;13.57&lt;/td&gt;   &lt;td&gt;13.57&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi (O) MT&lt;/td&gt;   &lt;td&gt;13.69&lt;/td&gt;   &lt;td&gt;14.08&lt;/td&gt;   &lt;td&gt;39,000&lt;/td&gt;  &lt;/tr&gt;  &lt;tr&gt;   &lt;td&gt;ZXi AT&lt;/td&gt;   &lt;td&gt;15.13&lt;/td&gt;   &lt;td&gt;15.13&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi+ MT&lt;/td&gt;   &lt;td&gt;15.24&lt;/td&gt;   &lt;td&gt;15.24&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi (O) AT&lt;/td&gt;   &lt;td&gt;15.25&lt;/td&gt;   &lt;td&gt;15.64&lt;/td&gt;   &lt;td&gt;39,000&lt;/td&gt;  &lt;/tr&gt;  &lt;tr&gt;   &lt;td&gt;ZXi+ (O) MT&lt;/td&gt;   &lt;td&gt;15.43&lt;/td&gt;   &lt;td&gt;15.82&lt;/td&gt;   &lt;td&gt;39,000&lt;/td&gt;  &lt;/tr&gt;  &lt;tr&gt;   &lt;td&gt;ZXI+ AT&lt;/td&gt;   &lt;td&gt;17.19&lt;/td&gt;   &lt;td&gt;17.19&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi+ (O) AT&lt;/td&gt;   &lt;td&gt;17.38&lt;/td&gt;   &lt;td&gt;17.77&lt;/td&gt;   &lt;td&gt;39,000&lt;/td&gt;  &lt;/tr&gt;  &lt;tr&gt;   &lt;td&gt;ZXi+ AT AWD&lt;/td&gt;   &lt;td&gt;18.64&lt;/td&gt;   &lt;td&gt;18.64&lt;/td&gt;   &lt;td&gt;None&lt;/td&gt;  &lt;/tr&gt;  &lt;tr&gt;   &lt;td&gt;ZXi+ (O) AT AWD&lt;/td&gt;   &lt;td&gt;19.22&lt;/td&gt;   &lt;td&gt;19.22&lt;/td&gt;   &lt;td&gt;None&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಮಾರುತಿ ಸುಜುಕಿ ಈ ನಿರ್ಧಾರ ಕೈಗೊಂಡಿದ್ದೇಕೆ?&lt;/strong&gt;&lt;/h2&gt;&lt;p&gt;ಪ್ರಸ್ತುತ ದಿನಗಳಲ್ಲಿ ದೇಶದ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕಾರುಗಳ ಬೆಲೆಯನ್ನು ಸತತವಾಗಿ ಹೆಚ್ಚಿಸುತ್ತಿರುವಾಗ, ಮಾರುತಿ ಸುಜುಕಿ ತನ್ನ ಸಖತ್ ಡಿಮ್ಯಾಂಡ್&zwnj;ನಲ್ಲಿರುವ ಎಸ್&zwnj;ಯುವಿ ದರ ಇಳಿಸಿರುವುದು ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ. ಪ್ರಸ್ತುತ ವಿಕ್ಟೋರಿಸ್ ಭಾರತದಲ್ಲಿ ಸಿ-ಸೆಗ್ಮೆಂಟ್ ಮಿಡ್-ಸೈಜ್ ಎಸ್&zwnj;ಯುವಿ ವಿಭಾಗದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾಗುವ ಕಾರಾಗಿದೆ. ಆದರೂ, ಹಬ್ಬಗಳ ಸೀಸನ್&zwnj;ಗೂ ಮುನ್ನ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲು ಮತ್ತು ಈ ಸೆಗ್ಮೆಂಟ್&zwnj;ನಲ್ಲಿ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಕಂಪನಿ ಈ ರಣತಂತ್ರ ಹೂಡಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ವಿಕ್ಟೋರಿಯಸ್&zwnj; ಕಾರಿಗೆ ಪ್ರಬಲ ಎದುರಾಳಿಗಳು&lt;/strong&gt;&lt;/h2&gt;&lt;p&gt;ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ವಿಕ್ಟೋರಿಸ್ ಕಾರಿಗೆ ಪ್ರಬಲ ಸ್ಪರ್ಧಿಗಳ ದಂಡೇ ಇದೆ. ಇದು ಹ್ಯುಂಡೈ ಕ್ರೆಟಾ (Hyundai Creta), ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ (Toyota Hyryder), ತನ್ನದೇ ಕಂಪನಿಯ ಮಾರುತಿ ಗ್ರಾಂಡ್ ವಿಟಾರಾ (Grand Vitara), ಟಾಟಾ ಸಿಯೆರಾ (Tata Sierra), ರೆನಾಲ್ಟ್ ಡಸ್ಟರ್ (Renault Duster) ಮತ್ತು ಹೋಂಡಾ ಎಲಿವೇಟ್ (Honda Elevate) ಕಾರುಗಳಿಗೆ ನೇರ ಪೈಪೋಟಿ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ನಿಸ್ಸಾನ್ ಟೆಕ್ಟಾನ್ (Nissan Tekton) ಕೂಡ ಈ ಸೆಗ್ಮೆಂಟ್&zwnj;ಗೆ ಎಂಟ್ರಿ ಕೊಡಲಿದ್ದು, ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/maruti-suzuki-victoris-suv-price-cut-hyundai-creta-rival-automobile-news-san/articleshow-go4fs4x"/>
        </item>
        <item>
            <title><![CDATA[ಎಚ್ಚರ! ಕಾರ್‌ ಸೀಟ್ ಕವರ್ ಹಾಕಿಸುವ ಮುನ್ನ Airbag ಲೋಗೋ ಚೆಕ್ ಮಾಡ್ತೀರಾ? ಖರೀದಿಸುವಾಗ ಈ ಅಂಶಗಳು ನೆನಪಿರಲಿ!]]></title>
            <link>https://kannada.asianetnews.com/car-news/car-seat-covers-blocking-airbags-safety-tips-buying-guide-automobile-news-san/articleshow-0nf4692</link>
            <guid isPermaLink="true">https://kannada.asianetnews.com/car-news/car-seat-covers-blocking-airbags-safety-tips-buying-guide-automobile-news-san/articleshow-0nf4692</guid>
            <pubDate>Tue, 07 Jul 2026 21:29:24 +0530</pubDate>
            <description><![CDATA[&lt;p&gt;ಕಾರಿಗೆ ಆಕರ್ಷಕ ಲುಕ್ ನೀಡಲು ಬಳಸುವ ಫ್ಯಾನ್ಸಿ ಸೀಟ್ ಕವರ್&zwnj;ಗಳು ಅಪಘಾತದ ಸಮಯದಲ್ಲಿ ಸೈಡ್ ಏರ್&zwnj;ಬ್ಯಾಗ್&zwnj;ಗಳು ತೆರೆದುಕೊಳ್ಳದಂತೆ ತಡೆಯಬಹುದು. ಇದು ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwymsje3qq0q9v8av1n0y8g3,imgname-car-airbags-and-seat-cover-1783439870403.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ಕಾರ್&zwnj; ಸೀಟ್&zwnj; ಕೊಳಕಾಗಬಾರದು ಮತ್ತು ವಾಹನಕ್ಕೆ ಆಕರ್ಷಕ ಲುಕ್ ಸಿಗಬೇಕು ಎನ್ನುವ ಕಾರಣಕ್ಕೆ ಅನೇಕರು ಮಾರುಕಟ್ಟೆಯಲ್ಲಿ ಸಿಗುವ ಫ್ಯಾನ್ಸಿ ಸೀಟ್ ಕವರ್&zwnj;ಗಳನ್ನು ಅಳವಡಿಸುತ್ತಾರೆ. ಆದರೆ, ಸೀಟ್ ಕವರ್&zwnj;ಗಳನ್ನು ಆಯ್ಕೆ ಮಾಡುವಾಗ ಮಾಡುವ ಒಂದು ಸಣ್ಣ ತಪ್ಪು, ಅಪಘಾತದ ಸಮಯದಲ್ಲಿ ನಿಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಬಹುದು! ಮಾರುಕಟ್ಟೆಯಲ್ಲಿ ಸಿಗುವ ಹಲವು ಫ್ಯಾನ್ಸಿ ಕವರ್&zwnj;ಗಳು ಕಾರಿನ ಏರ್&zwnj;ಬ್ಯಾಗ್&zwnj;ಗಳು ತೆರೆದುಕೊಳ್ಳದಂತೆ ತಡೆಯುತ್ತವೆ. ಇದು ಪ್ರಯಾಣಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;&lt;p&gt;ಹೊಸ ಸೀಟ್ ಕವರ್&zwnj;ಗಳನ್ನು ಖರೀದಿಸುವಾಗ ಅವು ಕಾರಿನ &lsquo;ಸೈಡ್ ಏರ್&zwnj;ಬ್ಯಾಗ್&zwnj;&rsquo; (Side Airbags) ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಅಗತ್ಯ. ಕವರ್&zwnj;ಗಳ ಅಂದದ ಜೊತೆಗೆ, ಅವು ಸುರಕ್ಷತೆಯ ಮಾನದಂಡಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಸುರಕ್ಷಿತ ಪ್ರಯಾಣಕ್ಕಾಗಿ ಮತ್ತು ಏರ್&zwnj;ಬ್ಯಾಗ್&zwnj;ಗಳು ಸರಿಯಾದ ಸಮಯಕ್ಕೆ ತೆರೆದುಕೊಳ್ಳಲು ಸೀಟ್ ಕವರ್ ತೆಗೆದುಕೊಳ್ಳುವಾಗ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂಬುದರ ವಿವರ ಇಲ್ಲಿದೆ.&lt;/p&gt;&lt;p&gt;ಪ್ರತಿಯೊಬ್ಬ ಕಾರು ಮಾಲೀಕನಿಗೂ ತನ್ನ ವಾಹನವನ್ನು ಚಂದವಾಗಿ ಇಟ್ಟುಕೊಳ್ಳುವುದು ಮತ್ತು ಅದಕ್ಕೊಂದು ವೈಯಕ್ತಿಕ ಸ್ಪರ್ಶ ನೀಡುವುದು ಇಷ್ಟದ ಕೆಲಸ. ಸ್ಟೈಲಿಶ್ ಅಲಾಯ್ ವೀಲ್ಸ್, ಅತ್ಯುತ್ತಮ ಸೌಂಡ್ ಸಿಸ್ಟಮ್&zwnj;ನಿಂದ ಹಿಡಿದು ಆಕರ್ಷಕ ಸೀಟ್ ಕವರ್&zwnj;ಗಳವರೆಗೆ ತಮ್ಮ ಕಾರಿಗೆ ವಿಭಿನ್ನ ಲುಕ್ ನೀಡಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಕಾರ್ ಆಕ್ಸೆಸರೀಸ್&zwnj;ಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮಾರುಕಟ್ಟೆ ಇದೆ. ಹೆಚ್ಚಿನ ಆಕ್ಸೆಸರೀಸ್&zwnj;ಗಳು ಕಾರಿನ ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಸೀಟ್ ಕವರ್ ಆಯ್ಕೆಯಲ್ಲಿನ ನಿರ್ಲಕ್ಷ್ಯ ಪ್ರಾಣಕ್ಕೆ ಸಂಚಕಾರ ತರಬಲ್ಲದು.&lt;/p&gt;&lt;h2&gt;&lt;strong&gt;ಸೀಟ್ ಕವರ್ ಮತ್ತು ಏರ್&zwnj;ಬ್ಯಾಗ್ ನಡುವಿನ ಕನೆಕ್ಷನ್ ಏನು?&lt;/strong&gt;&lt;/h2&gt;&lt;p&gt;'ಇನ್ಶೂರೆನ್ಸ್ ಇನ್&zwnj;ಸ್ಟಿಟ್ಯೂಟ್ ಫಾರ್ ಹೈವೇ ಸೇಫ್ಟಿ' (IIHS) ವರದಿಯ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಫ್ಯಾನ್ಸಿ ಸೀಟ್ ಕವರ್&zwnj;ಗಳನ್ನು ಕಾರಿನ ಸುರಕ್ಷತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಿರುವುದಿಲ್ಲ.&lt;/p&gt;&lt;p&gt;&lt;strong&gt;ಅಪಾಯವೇನು?: &lt;/strong&gt;ಇಂದಿನ ಆಧುನಿಕ ಕಾರುಗಳಲ್ಲಿ ಸೀಟುಗಳು ಕೇವಲ ಕುಳಿತುಕೊಳ್ಳಲು ಮಾತ್ರ ಇರುವುದಿಲ್ಲ. ಬದಲಿಗೆ ಅವುಗಳ ಒಳಭಾಗದಲ್ಲಿ 'ಸೈಡ್ ಏರ್&zwnj;ಬ್ಯಾಗ್&zwnj;'ಗಳನ್ನು ಅಳವಡಿಸಲಾಗಿರುತ್ತದೆ. ನೀವು ಸೀಟಿನ ಮೇಲೆ ಯಾವುದೇ ಸಾಮಾನ್ಯ ಅಥವಾ ಕಸ್ಟಮೈಸ್ಡ್ ಸೀಟ್ ಕವರ್ ಹಾಕಿದರೆ, ಅವು ಅಪಘಾತದ ಸಮಯದಲ್ಲಿ ಏರ್&zwnj;ಬ್ಯಾಗ್ ಹೊರಬರುವ ಮಾರ್ಗವನ್ನು ತಡೆಯುತ್ತವೆ ಅಥವಾ ಅದರ ದಿಕ್ಕನ್ನು ಬದಲಾಯಿಸುತ್ತವೆ.&lt;/p&gt;&lt;p&gt;&lt;strong&gt;ಏರ್&zwnj;ಬ್ಯಾಗ್ ಮಹತ್ವ:&lt;/strong&gt; ಅಮೆರಿಕದ ಪ್ರಸಿದ್ಧ ಸಂಸ್ಥೆ 'NHTSA' ಪ್ರಕಾರ, ಏರ್&zwnj;ಬ್ಯಾಗ್&zwnj;ಗಳಿಂದಾಗಿ ಇದುವರೆಗೆ 70,000 ಕ್ಕೂ ಹೆಚ್ಚು ಜನರ ಪ್ರಾಣ ಉಳಿದಿದೆ. ಅಪಘಾತವಾದ ಕ್ಷಣಾರ್ಧದಲ್ಲಿ ಇವು ತೆರೆದುಕೊಳ್ಳುತ್ತವೆ, ಆದರೆ ತಪ್ಪು ಸೀಟ್ ಕವರ್&zwnj;ಗಳು ಅವುಗಳನ್ನು ಹೊರಬರಲು ಬಿಡುವುದಿಲ್ಲ.&lt;/p&gt;&lt;h2&gt;&lt;strong&gt;ನಿಮ್ಮ ಕಾರಿಗೆ ಸುರಕ್ಷಿತ ಸೀಟ್ ಕವರ್ ಆಯ್ಕೆ ಮಾಡುವುದು ಹೇಗೆ?&lt;/strong&gt;&lt;/h2&gt;&lt;p&gt;ನಿಮ್ಮ ಕಾರಿಗೆ ಸೂಕ್ತವಾದ ಸೀಟ್ ಕವರ್ ಆಯ್ಕೆ ಮಾಡಲು ಈ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ&lt;/p&gt;&lt;p&gt;&lt;strong&gt;ಏರ್&zwnj;ಬ್ಯಾಗ್ ಲೋಗೋ ಪರಿಶೀಲಿಸಿ:&lt;/strong&gt; ಮೊದಲನೆಯದಾಗಿ, ನಿಮ್ಮ ಕಾರಿನ ಸೀಟಿನ ಎಡ್ಜ್&zwnj;ಗಳನ್ನು ಜಾಗರೂಕತೆಯಿಂದ ಗಮನಿಸಿ. ಅಲ್ಲಿ ಏನಾದರೂ &lsquo;SRS Airbag&rsquo; ಅಥವಾ &lsquo;Airbag&rsquo; ಟ್ಯಾಗ್ ಅಥವಾ ಲೋಗೋ ಇದ್ದರೆ, ಆ ಸೀಟಿನ ಒಳಗಡೆ ಏರ್&zwnj;ಬ್ಯಾಗ್ ಅಡಗಿದೆ ಎಂದರ್ಥ.&lt;/p&gt;&lt;p&gt;&lt;strong&gt;ವಿಶೇಷ ಸ್ಟಿಚ್ (ಹೊಲಿಗೆ) ಕವರ್&zwnj;ಗಳು: &lt;/strong&gt;ಸೀಟಿನ ಒಳಗಿರುವ ಏರ್&zwnj;ಬ್ಯಾಗ್&zwnj;ಗಳು ಅತ್ಯಂತ ಹಗುರವಾದ ಹೊಲಿಗೆಯನ್ನು ಸೀಳಿಕೊಂಡು ಹೊರಬರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಆದ್ದರಿಂದ ಯಾವಾಗಲೂ 'ಏರ್&zwnj;ಬ್ಯಾಗ್ ಕಾಂಪಾಟಿಬಲ್' (Airbag Compatible) ಆಗಿರುವ ಸೀಟ್ ಕವರ್&zwnj;ಗಳನ್ನೇ ಖರೀದಿಸಿ. ಈ ಕವರ್&zwnj;ಗಳಲ್ಲಿ ಏರ್&zwnj;ಬ್ಯಾಗ್ ಇರುವ ಜಾಗದಲ್ಲಿ ವಿಶೇಷವಾದ ದಾರವನ್ನು ಬಳಸಿ ಹೊಲಿಗೆ ಹಾಕಲಾಗಿರುತ್ತದೆ, ಇದು ಏರ್&zwnj;ಬ್ಯಾಗ್&zwnj;ನ ಒತ್ತಡಕ್ಕೆ ತಕ್ಷಣವೇ ಕಟ್ ಆಗುತ್ತದೆ.&lt;/p&gt;&lt;p&gt;&lt;strong&gt;ಯುನಿವರ್ಸಲ್ ಕವರ್&zwnj;ಗಳನ್ನು ತಪ್ಪಿಸಿ: &lt;/strong&gt;ಎಲ್ಲಾ ಕಾರುಗಳಿಗೂ ಫಿಟ್ ಆಗುತ್ತದೆ ಎಂದು ಹೇಳುವ ಯಾವುದೇ ಸಾಮಾನ್ಯ ಅಂಗಡಿಯ 'ಯುನಿವರ್ಸಲ್ ಸೀಟ್ ಕವರ್&zwnj;'ಗಳನ್ನು ಖರೀದಿಸಬೇಡಿ. ಯಾವಾಗಲೂ ನಿಮ್ಮ ಕಾರಿನ ನಿರ್ದಿಷ್ಟ ಮಾಡೆಲ್&zwnj;ಗೆಂದೇ ಪ್ರತ್ಯೇಕವಾಗಿ ತಯಾರಿಸಲಾದ ವಿಶೇಷ ಕವರ್&zwnj;ಗಳನ್ನು ಮಾತ್ರ ಆಯ್ಕೆ ಮಾಡಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/car-seat-covers-blocking-airbags-safety-tips-buying-guide-automobile-news-san/articleshow-0nf4692"/>
        </item>
        <item>
            <title><![CDATA[Airtel ₹548 vs Jio ₹448 : ಪ್ರೀಪೇಯ್ಡ್‌ ಪ್ಲಾನ್ ಪೈಕಿ ಯಾವುದು ಬೆಸ್ಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್]]></title>
            <link>https://kannada.asianetnews.com/business/airtel-rs-548-vs-jio-rs-448-prepaid-plan-complete-comparison-of-benefits-and-validity-kvn/articleshow-1nbor62</link>
            <guid isPermaLink="true">https://kannada.asianetnews.com/business/airtel-rs-548-vs-jio-rs-448-prepaid-plan-complete-comparison-of-benefits-and-validity-kvn/articleshow-1nbor62</guid>
            <pubDate>Tue, 07 Jul 2026 18:11:38 +0530</pubDate>
            <description><![CDATA[ಏರ್&zwnj;ಟೆಲ್&zwnj;ನ ₹548 ಮತ್ತು ಜಿಯೋದ ₹448 ವಾಯ್ಸ್-ಓನ್ಲಿ ಪ್ರಿಪೇಯ್ಡ್ ಪ್ಲಾನ್&zwnj;ಗಳ ನಡುವಿನ ಹೋಲಿಕೆ ಇಲ್ಲಿದೆ. 84 ದಿನಗಳ ವ್ಯಾಲಿಡಿಟಿಯ ಈ ಎರಡೂ ಪ್ಲಾನ್&zwnj;ಗಳಲ್ಲಿ, ಏರ್&zwnj;ಟೆಲ್ ಸ್ವಲ್ಪ ಡೇಟಾ ನೀಡಿದರೆ, ಜಿಯೋ ಡೇಟಾ ಇಲ್ಲದೆ ಕರೆ ಮತ್ತು SMS ಮೇಲೆ ಗಮನಹರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jq3mbs0xea242069r6186daz,imgname-gjr8enmxyaahjsn.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಮನೆಯಲ್ಲೋ ಅಥವಾ ಕಚೇರಿಯಲ್ಲೋ ವೈ-ಫೈ ಬಳಸುತ್ತಿರುವುದರಿಂದ, ಪ್ರತಿದಿನ ಹೆಚ್ಚಿನ ಮೊಬೈಲ್ ಡೇಟಾ ಅಗತ್ಯವಿರುವುದಿಲ್ಲ. ಇಂತಹ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಟೆಲಿಕಾಂ ಕಂಪನಿಗಳು ವಾಯ್ಸ್-ಓನ್ಲಿ (Voice Only) ಪ್ರಿಪೇಯ್ಡ್ ಪ್ಲಾನ್&zwnj;ಗಳನ್ನು ಪರಿಚಯಿಸಿವೆ. ಈ ವಿಭಾಗದಲ್ಲಿ ಭಾರ್ತಿ ಏರ್&zwnj;ಟೆಲ್&zwnj;ನ ₹548 ಪ್ಲಾನ್ ಮತ್ತು ರಿಲಯನ್ಸ್ ಜಿಯೋದ ₹448 ಪ್ಲಾನ್ ಹೆಚ್ಚು ಗಮನ ಸೆಳೆಯುತ್ತಿವೆ.&lt;/p&gt;&lt;p&gt;ಹಾಗಾದರೆ ಈ ಎರಡು ಪ್ಲಾನ್&zwnj;ಗಳಲ್ಲಿ ಯಾವುದು ಹೆಚ್ಚು ಮೌಲ್ಯ ನೀಡುತ್ತದೆ? ಯಾವ ಪ್ಲಾನ್ ಯಾರಿಗೆ ಸೂಕ್ತ? ಇಲ್ಲಿದೆ ಸಂಪೂರ್ಣ ಮಾಹಿತಿ&lt;/p&gt;&lt;h2&gt;&lt;strong&gt;Airtel ₹548 ಪ್ರಿಪೇಯ್ಡ್ ಪ್ಲಾನ್: ಏನೆಲ್ಲಾ ಸೌಲಭ್ಯ?&lt;/strong&gt;&lt;/h2&gt;&lt;p&gt;ಏರ್&zwnj;ಟೆಲ್&zwnj;ನ ₹548 ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ.&lt;/p&gt;&lt;p&gt;ಈ ಪ್ಲಾನ್&zwnj;ನಲ್ಲಿ ಸಿಗುವ ಪ್ರಯೋಜನಗಳು:&lt;/p&gt;&lt;p&gt;84 ದಿನಗಳ ವ್ಯಾಲಿಡಿಟಿ&lt;/p&gt;&lt;p&gt;ಯಾವುದೇ ನೆಟ್&zwnj;ವರ್ಕ್&zwnj;ಗೆ ಅನಿಯಮಿತ ವಾಯ್ಸ್ ಕರೆಗಳು&lt;/p&gt;&lt;p&gt;ಒಟ್ಟು 900 SMS&lt;/p&gt;&lt;p&gt;ಸಂಪೂರ್ಣ ವ್ಯಾಲಿಡಿಟಿಗೆ 7GB ಡೇಟಾ&lt;/p&gt;&lt;p&gt;Airtel Thanks ಪ್ರಯೋಜನಗಳು&lt;/p&gt;&lt;p&gt;Airtel Xstream Play ಎಂಟ್ರಿ&lt;/p&gt;&lt;p&gt;Apollo 24/7 Circle ಸೇರಿದಂತೆ ಹೆಚ್ಚುವರಿ ರಿವಾರ್ಡ್&zwnj;ಗಳು ಈ ಪ್ಲಾನ್&zwnj;ನಲ್ಲಿ ಲಭ್ಯವಿವೆ.&lt;/p&gt;&lt;h3&gt;&lt;strong&gt;Jio ₹448 ಪ್ರಿಪೇಯ್ಡ್ ಪ್ಲಾನ್: ಏನೆಲ್ಲಾ ಲಾಭ?&lt;/strong&gt;&lt;/h3&gt;&lt;p&gt;ಜಿಯೋದ ₹448 ಪ್ಲಾನ್ ಕೂಡ 84 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಆದರೆ ಇದು ಮುಖ್ಯವಾಗಿ ಕರೆ ಹಾಗೂ SMS ಬಳಕೆದಾರರಿಗಾಗಿಯೇ ವಿನ್ಯಾಸಗೊಳಿಸಲಾಗಿದೆ.&lt;/p&gt;&lt;p&gt;ಈ ಪ್ಲಾನ್&zwnj;ನ ಪ್ರಮುಖ ಸೌಲಭ್ಯಗಳು:&lt;/p&gt;&lt;p&gt;84 ದಿನಗಳ ವ್ಯಾಲಿಡಿಟಿ&lt;/p&gt;&lt;p&gt;ಅನಿಯಮಿತ ವಾಯ್ಸ್ ಕರೆಗಳು&lt;/p&gt;&lt;p&gt;ಒಟ್ಟು 1000 SMS&lt;/p&gt;&lt;p&gt;ಯಾವುದೇ ಮೊಬೈಲ್ ಡೇಟಾ ಇಲ್ಲ&lt;/p&gt;&lt;p&gt;JioTV ಹಾಗೂ JioAICloud ಸೇವೆಗಳ ಪಡೆದುಕೊಳ್ಳಬಹುದು.&lt;/p&gt;&lt;h3&gt;&lt;strong&gt;ಯಾವ ಪ್ಲಾನ್ ಆಯ್ಕೆ ಮಾಡಬೇಕು?&lt;/strong&gt;&lt;/h3&gt;&lt;p&gt;ನಿಮಗೆ ಮೊಬೈಲ್ ಡೇಟಾದ ಅಗತ್ಯವೇ ಇಲ್ಲದಿದ್ದರೆ ಮತ್ತು ಮುಖ್ಯವಾಗಿ ಕರೆ ಹಾಗೂ SMS ಬಳಕೆ ಇದ್ದರೆ Jio ₹448 ಉತ್ತಮ ಆಯ್ಕೆಯಾಗಬಹುದು.&lt;/p&gt;&lt;p&gt;ಆದರೆ ತುರ್ತು ಸಂದರ್ಭಗಳಲ್ಲಿ WhatsApp, UPI, Maps ಅಥವಾ ಬ್ರೌಸಿಂಗ್&zwnj;ಗಾಗಿ ಸ್ವಲ್ಪ ಡೇಟಾ ಬೇಕಾಗುತ್ತದೆ ಎನ್ನುವವರು Airtel ₹548 ಪ್ಲಾನ್ ಆಯ್ಕೆ ಮಾಡಿಕೊಂಡರೆ ಉತ್ತಮ. ಏಕೆಂದರೆ ಇದರಲ್ಲಿ ಹೆಚ್ಚುವರಿ 7GB ಡೇಟಾ ದೊರೆಯುತ್ತದೆ.&lt;/p&gt;&lt;p&gt;ಕೇವಲ ಕರೆ ಹಾಗೂ SMS ಬೇಕಿದ್ದರೆ: Jio ₹448&lt;/p&gt;&lt;p&gt;ಸ್ವಲ್ಪ ಡೇಟಾ ಜೊತೆಗೆ ದೀರ್ಘ ವ್ಯಾಲಿಡಿಟಿ ಬೇಕಿದ್ದರೆ: Airtel ₹548&lt;/p&gt;&lt;p&gt;ಎರಡೂ ಪ್ಲಾನ್&zwnj;ಗಳು 84 ದಿನಗಳ ವ್ಯಾಲಿಡಿಟಿ ನೀಡುತ್ತವೆ. ಆದರೆ ನಿಮ್ಮ ಬಳಕೆಯ ರೀತಿಯನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ಪ್ಲಾನ್ ಆಯ್ಕೆ ಮಾಡುವುದು ಉತ್ತಮ.&lt;/p&gt;]]></content:encoded>
            <category>business</category>
            <dc:creator>Naveen Kodase</dc:creator>
            <atom:link href="https://kannada.asianetnews.com/business/airtel-rs-548-vs-jio-rs-448-prepaid-plan-complete-comparison-of-benefits-and-validity-kvn/articleshow-1nbor62"/>
        </item>
        <item>
            <title><![CDATA[ದಿವಾಳಿಯಾಗುತ್ತಾ OLA Electric?  40 ಕೋಟಿ ಬಾಕಿ ಪಾವತಿ ವಿವಾದಕ್ಕೆ NCLT ಮೆಟ್ಟಿಲೇರಿದ ಸಪ್ಲೈಯರ್ಸ್!]]></title>
            <link>https://kannada.asianetnews.com/gallery/business/ola-electric-faces-nclt-insolvency-supplier-dispute-sterling-anevolve-san-1rs242d</link>
            <guid isPermaLink="true">https://kannada.asianetnews.com/gallery/business/ola-electric-faces-nclt-insolvency-supplier-dispute-sterling-anevolve-san-1rs242d</guid>
            <pubDate>Tue, 07 Jul 2026 16:54:09 +0530</pubDate>
            <description><![CDATA[&lt;p&gt;ಓಲಾ ಎಲೆಕ್ಟ್ರಿಕ್&zwnj;ಗೆ ಸುಮಾರು 40 ಕೋಟಿ ರೂ. ಬಾಕಿ ಪಾವತಿಸದ ಆರೋಪದ ಮೇಲೆ ಇಬ್ಬರು ಬಿಡಿಭಾಗಗಳ ಪೂರೈಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ದಿವಾಳಿತನ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwy4v5az7krkjckss9fbtj45,imgname-ola-electric-news--5--1783423145311.jpg" type="image/jpeg" height="390" width="690"/>
            <content:encoded><![CDATA[&lt;p&gt;ಓಲಾ ಎಲೆಕ್ಟ್ರಿಕ್&zwnj;ಗೆ ಸುಮಾರು 40 ಕೋಟಿ ರೂ. ಬಾಕಿ ಪಾವತಿಸದ ಆರೋಪದ ಮೇಲೆ ಇಬ್ಬರು ಬಿಡಿಭಾಗಗಳ ಪೂರೈಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ದಿವಾಳಿತನ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ ಓಲಾ ಎಲೆಕ್ಟ್ರಿಕ್ (Ola Electric) ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಸರಿಸುಮಾರು 40 ಕೋಟಿ ರೂಪಾಯಿ ಬಾಕಿ ಹಣವನ್ನು ಪಾವತಿಸದೆ ವಂಚಿಸಿದೆ ಎಂದು ಆರೋಪಿಸಿ ಕಂಪನಿಯ ಇಬ್ಬರು ಪ್ರಮುಖ ಬಿಡಿಭಾಗಗಳ ಪೂರೈಕೆದಾರರು (Component Suppliers) ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮೆಟ್ಟಿಲೇರಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಸ್ಟರ್ಲಿಂಗ್ ಟೂಲ್ಸ್ ಲಿಮಿಟೆಡ್&zwnj;ನ ಇವಿ ಬಿಡಿಭಾಗಗಳ ವಿಭಾಗವಾದ 'ಸ್ಟರ್ಲಿಂಗ್ ಇ-ಮೊಬಿಲಿಟಿ ಸೊಲ್ಯೂಷನ್ಸ್ ಲಿಮಿಟೆಡ್' (Sterling E-Mobility Solutions Ltd.) ಮತ್ತು ಆನಂದ್ ಗ್ರೂಪ್&zwnj;ನ ಭಾಗವಾಗಿರುವ 'ಆನೆವೋಲ್ವ್ ಮಾಂಡೋ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್' (Anevolve Mando eMobility Pvt. Ltd.) ಕಂಪನಿಗಳು ಈ ಕಾನೂನು ಕ್ರಮ ಕೈಗೊಂಡಿವೆ. ಈ ಎರಡೂ ಸಂಸ್ಥೆಗಳು ಓಲಾ ಎಲೆಕ್ಟ್ರಿಕ್&zwnj;ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ 'ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್' ವಿರುದ್ಧ IBC 2016 ರ ಸೆಕ್ಷನ್ 9 ರ ಅಡಿಯಲ್ಲಿ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು (CIRP) ಪ್ರಾರಂಭಿಸುವಂತೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿವೆ.&lt;/p&gt;&lt;img&gt;&lt;p&gt;ಈ ಬೆಳವಣಿಗೆಯನ್ನು ಕೇವಲ ವಾಣಿಜ್ಯ ವಿವಾದ (Commercial Dispute) ಎಂದು ಕರೆದಿರುವ ಓಲಾ ಎಲೆಕ್ಟ್ರಿಕ್&zwnj;ಗೆ ಹತ್ತಿರವಿರುವ ಮೂಲಗಳು, ಕಂಪನಿಯು ಸಪ್ಲೈಯರ್&zwnj;ಗಳ ವಿರುದ್ಧವೇ ಮೊದಲು ಕಾನೂನು ಸಮರ ಸಾರಿದೆ ಎಂದು ತಿಳಿಸಿವೆ. ಪೂರೈಕೆದಾರರು ನೀಡಿದ ಬಿಡಿಭಾಗಗಳು ಒಪ್ಪಂದದ ಪ್ರಕಾರ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲ ಎಂದು ಓಲಾ ಆರೋಪಿಸಿದೆ. &quot;ನಮಗೆ ಸರಬರಾಜು ಮಾಡಿದ ಬಿಡಿಭಾಗಗಳ ಗುಣಮಟ್ಟ ಸರಿಯಾಗಿಲ್ಲ ಎಂದು ಆರೋಪಿಸಿ ನಾವು ಈಗಾಗಲೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇವೆ. ನಾವು ಮೊದಲು ಕೇಸ್ ದಾಖಲಿಸಿದ ನಂತರ, ಅದಕ್ಕೆ ಪ್ರತಿಯಾಗಿ ವೆಂಡರ್&zwnj;ಗಳು ತಮಗಿರುವ ಬಾಕಿ ಹಣದ ನೆಪವೊಡ್ಡಿ ಐಬಿಸಿ (IBC) ಅಡಿಯಲ್ಲಿ ಎನ್&zwnj;ಸಿಎಲ್&zwnj;ಟಿ ಮೆಟ್ಟಿಲೇರಿದ್ದಾರೆ,&quot; ಎಂದು ವಿಷಯ ತಿಳಿದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಓಲಾ ಎಲೆಕ್ಟ್ರಿಕ್ ಮತ್ತು ಅದರ ವೆಂಡರ್&zwnj;ಗಳ ನಡುವೆ ಇಂತಹ ಕಾನೂನು ಸಮರ ನಡೆಯುತ್ತಿರುವುದು ಇದೇ ಮೊದಲೇನಲ್ಲ, ಬದಲಿಗೆ ಇದು ಸರಣಿ ವಿವಾದಗಳ ಮುಂದುವರಿದ ಭಾಗವಾಗಿದೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ (ಮಾರ್ಚ್ 2025) 'ರೋಸ್ಮರ್ಟಾ ಡಿಜಿಟಲ್ ಸರ್ವಿಸಸ್ ಲಿಮಿಟೆಡ್' (Rosmerta Digital Services Ltd.) ಎಂಬ ಸಂಸ್ಥೆಯು ಸಹ ತನಗೆ ನೀಡಬೇಕಾದ ಸೇವಾ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ಓಲಾ ಎಲೆಕ್ಟ್ರಿಕ್ ಟೆಕ್ನಾಲಜೀಸ್ ವಿರುದ್ಧ ಎನ್&zwnj;ಸಿಎಲ್&zwnj;ಟಿಯ ಬೆಂಗಳೂರು ಪೀಠದ ಮುಂದೆ ದಿವಾಳಿತನದ ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ನಂತರದ ದಿನಗಳಲ್ಲಿ ಉಭಯ ಕಂಪನಿಗಳು ಮಾತುಕತೆಯ ಮೂಲಕ ಪರಸ್ಪರ ವಿವಾದವನ್ನು ಬಗೆಹರಿಸಿಕೊಂಡಿದ್ದರಿಂದ, ಆ ಅರ್ಜಿಯನ್ನು ಹಿಂಪಡೆಯಲಾಗಿತ್ತು.&lt;/p&gt;&lt;img&gt;&lt;p&gt;ಒಂದೆಡೆ ಕಾನೂನು ಸಂಕಷ್ಟ ಎದುರಾಗಿದ್ದರೂ, ಮತ್ತೊಂದೆಡೆ ಓಲಾ ಎಲೆಕ್ಟ್ರಿಕ್ ಸಂಸ್ಥೆಯು ತನ್ನ ವ್ಯವಹಾರ ಕಾರ್ಯಾಚರಣೆಯಲ್ಲಿ ಉತ್ತಮ ಪ್ರದರ್ಶನವನ್ನು ದಾಖಲಿಸುತ್ತಿದೆ. ಸರ್ಕಾರದ ಅಧಿಕೃತ 'ವಾಹನ' (VAHAN) ನೋಂದಣಿ ದತ್ತಾಂಶವನ್ನು ಉಲ್ಲೇಖಿಸಿ ಕಂಪನಿಯು ನೀಡಿರುವ ಮಾಹಿತಿಯ ಪ್ರಕಾರ, ಚಾಲ್ತಿ ಆರ್ಥಿಕ ವರ್ಷದ 2027 ರ (FY27) ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಓಲಾ ವಾಹನಗಳ ನೋಂದಣಿ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿದ್ದ 22,252 ವಾಹನಗಳ ನೋಂದಣಿ ಸಂಖ್ಯೆಯು, ಈ ತ್ರೈಮಾಸಿಕದಲ್ಲಿ ಸರಿಸುಮಾರು ದುಪ್ಪಟ್ಟಾಗುವ ಮೂಲಕ 43,719ಕ್ಕೆ ತಲುಪಿದೆ ಎಂದು ಕಂಪನಿ ಹೇಳಿದೆ.&lt;/p&gt;&lt;img&gt;&lt;p&gt;ವಾಹನ ಮಾರಾಟದ ಸುಧಾರಣೆಯ ಜೊತೆಗೆ ಕಂಪನಿಯು ತನ್ನ ಆರ್ಥಿಕ ನಷ್ಟದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಕಂಪನಿಯು ಮಾರ್ಚ್ ತ್ರೈಮಾಸಿಕದಲ್ಲಿ (Q4 FY26) ತನ್ನ ಏಕೀಕೃತ ನಿವ್ವಳ ನಷ್ಟವನ್ನು ಶೇಕಡಾ 42 ರಷ್ಟು ಕಡಿಮೆ ಮಾಡಿಕೊಂಡಿದೆ. ಇದರಿಂದಾಗಿ ಕಂಪನಿಯ ನಷ್ಟದ ಪ್ರಮಾಣವು 870 ಕೋಟಿ ರೂಪಾಯಿಗಳಿಂದ 500 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಆದರೆ, ನಷ್ಟದ ಪ್ರಮಾಣ ತಗ್ಗಿದ್ದರೂ ಇದೇ ಅವಧಿಯಲ್ಲಿ ಕಂಪನಿಯ ಒಟ್ಟಾರೆ ಆದಾಯ ಮತ್ತು ವಾಹನಗಳ ಉತ್ಪಾದನಾ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಈ ಪರಿಸ್ಥಿತಿಯನ್ನು ಕಂಪನಿಯು ತನ್ನ ವ್ಯವಹಾರವನ್ನು ಮರುಹೊಂದಿಸುವ ಮಹತ್ವದ ವರ್ಷ (Year of Reset) ಎಂದು ಬಣ್ಣಿಸಿದೆ.&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/business/ola-electric-faces-nclt-insolvency-supplier-dispute-sterling-anevolve-san-1rs242d"/>
        </item>
        <item>
            <title><![CDATA[ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಭಾರಿ ಹೂಡಿಕೆ: ಬೆಳಗಿನ ಜಾವ 3 ಗಂಟೆಗೆ ಉದ್ಯಮಿಗೆ ಕರೆ ಮಾಡಿ 15 ಕೋಟಿ ರವಾನೆ!]]></title>
            <link>https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu</link>
            <guid isPermaLink="true">https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu</guid>
            <pubDate>Tue, 07 Jul 2026 10:24:09 +0530</pubDate>
            <description><![CDATA[&lt;p&gt;ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcqvv2p2jr229sz8e2j5rgyn,imgname-amitabh-bachchan-in-kbc-17-1766032509634.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 'ಹೌಸ್ ಆಫ್ ಅಭಿನಂದನ್ ಲೋಧಾ' ಮೂಲಕ ಕೋಟ್ಯಂತರ ರೂಪಾಯಿಗಳ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮದಿಂದಾಗಿ ಅಯೋಧ್ಯೆಯು ಜಾಗತಿಕ ಹೂಡಿಕೆ ತಾಣವಾಗಿ ಮಾರ್ಪಡುತ್ತಿದೆ.&lt;/p&gt;&lt;img&gt;&lt;p&gt;ಅಯೋಧ್ಯೆ ರಾಮ ಮಂದಿರದ ಅವ್ಯವಹಾರಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಮಧ್ಯೆಯೇ ಅಲ್ಲಿ ರಿಯಲ್ ಎಸ್ಟೇಟ್&zwnj; ಉದ್ಯಮವು ವ್ಯಾಪಕ ಬೆಳವಣಿಗೆ ಕಾಣುತ್ತಿದೆ. ಬಾಲಿವುಡ್ ಸೂಪರ್&zwnj;ಸ್ಟಾರ್ ಅಮಿತಾಬ್ ಬಚ್ಚನ್ ಅವರು ಇತ್ತೀಚಿನ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ತಮ್ಮ ರಿಯಲ್ ಎಸ್ಟೇಟ್ ಹೂಡಿಕೆಯನ್ನು ವ್ಯಾಪಕವಾಗಿ ವಿಸ್ತರಿಸುತ್ತಿರುವುದು ಕೂಡ ಈಗ ಸುದ್ದಿಯಲ್ಲಿದೆ. 'ಹಿಂದೂಸ್ತಾನ್ ಟೈಮ್ಸ್ ಇಂಡಿಯಾ ನೆಕ್ಸ್ಟ್ ರಿಯಲ್ ಎಸ್ಟೇಟ್ ಶೃಂಗಸಭೆ 2026' ರಲ್ಲಿ ಮಾತನಾಡಿದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ 'ಹೌಸ್ ಆಫ್ ಅಭಿನಂದನ್ ಲೋಧಾ' (HoABL) ಸಂಸ್ಥಾಪಕ ಮತ್ತು ಸಿಎಂಡಿ ಅಭಿನಂದನ್ ಲೋಧಾ ಅವರು, ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ತಮ್ಮ ಮೊದಲ ಭೂಮಿಯನ್ನು ಹೇಗೆ ಖರೀದಿಸಿದರು ಎಂಬ ಸ್ವಾರಸ್ಯಕರ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;2023 ರಲ್ಲಿ ಅಭಿನಂದನ್ ಲೋಧಾ ಅವರು ಆಸ್ಟ್ರೇಲಿಯಾದಲ್ಲಿದ್ದಾಗ, ಅವರ ಮೊಬೈಲ್&zwnj;ಗೆ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಒಂದೆರಡು ಮಿಸ್ಡ್ ಕಾಲ್&zwnj;ಗಳು ಮತ್ತು ಒಂದು ಸಂದೇಶ ಬಂದಿದ್ದವು. ಆ ಸಂದೇಶದಲ್ಲಿ, ಇದು ಅಮಿತಾಬ್ ಬಚ್ಚನ್, ದಯವಿಟ್ಟು ಅನುಕೂಲವಾದಾಗ ಮತ್ತೆ ಕರೆ ಮಾಡಿ ಎಂದು ಬರೆಯಲಾಗಿತ್ತು. ಇದನ್ನು ನೋಡಿ ಆಶ್ಚರ್ಯಚಕಿತರಾದ ಲೋಧಾ, ತಕ್ಷಣವೇ ಎದ್ದು ನಿಂತು ಬಿಗ್ ಬಿ ಅವರಿಗೆ ಮರಳಿ ಕರೆ ಮಾಡಿದರು.&lt;/p&gt;&lt;p&gt;ಆಗ ಬಚ್ಚನ್ ಅವರು ಅತ್ಯಂತ ನಮ್ರತೆಯಿಂದ, ನಾನು ಮೂಲತಃ ಉತ್ತರ ಪ್ರದೇಶದವನಾಗಿದ್ದು, ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ ಭೂಮಿಯನ್ನು ಖರೀದಿಸಲು ಬಯಸುತ್ತೇನೆ ಎಂದು ಹೇಳಿದರು. ಅದಕ್ಕೆ ಲೋಧಾ ಅವರು, ಖಂಡಿತವಾಗಿಯೂ ನಾವು ಅದನ್ನು ನಿಮಗಾಗಿ ಮಾಡುತ್ತೇವೆ ಎಂದು ಭರವಸೆ ಕೊಟ್ಟರು. ಬಳಿಕ ಬಚ್ಚನ್ ಅವರು ಬೆಲೆಯ ಬಗ್ಗೆ ವಿಚಾರಿಸಿದಾಗ, ನಿಮ್ಮೊಂದಿಗೆ ನಾನು ಬೆಲೆಯ ಬಗ್ಗೆ ಹೇಗೆ ಮಾತನಾಡಲಿ? ಎನ್ನುತ್ತಲೇ, ಅವರು ಕೇಳಿದ 15,000 ಚದರ ಅಡಿ ಜಾಗಕ್ಕೆ ಸುಮಾರು 15 ಕೋಟಿ ರೂ. ಆಗಬಹುದು ಎಂದು ಲೋಧಾ ತಿಳಿಸಿದರು. ಆಶ್ಚರ್ಯಕರ ಸಂಗತಿಯೆಂದರೆ, ಬೆಲೆ ತಿಳಿದ ಮರುದಿನವೇ ಅಮಿತಾಬ್ ಬಚ್ಚನ್ ಅವರು ಪೂರ್ಣ 15 ಕೋಟಿ ರೂ.ಗಳನ್ನು ಕಂಪನಿಗೆ ವರ್ಗಾಯಿಸುವ ಮೂಲಕ ವ್ಯವಹಾರವನ್ನು ಪೂರ್ಣಗೊಳಿಸಿದರು.&lt;/p&gt;&lt;img&gt;&lt;p&gt;ಕಳೆದ ಕೆಲವು ವರ್ಷಗಳಿಂದ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಸರಣಿ ಹೂಡಿಕೆಗಳನ್ನು ಮಾಡುತ್ತಾ ಬಂದಿದ್ದಾರೆ.&lt;/p&gt;&lt;p&gt;2024 (ಮೊದಲ ಹೂಡಿಕೆ): HoABL ನ ಪ್ರಮುಖ ಸೆವೆನ್-ಸ್ಟಾರ್ ಮಿಶ್ರ-ಬಳಕೆಯ ಎನ್&zwnj;ಕ್ಲೇವ್ ಆದ 'ದಿ ಸರಯು' ಯೋಜನೆಯಲ್ಲಿ 10,000 ಚದರ ಅಡಿ ಜಾಗವನ್ನು 14.5 ಕೋಟಿ ರೂ. ಗೆ ಖರೀದಿಸಿದರು.&lt;/p&gt;&lt;p&gt;ಮೇ 2025 (ಎರಡನೇ ಹೂಡಿಕೆ): 'ದಿ ಸರಯು' ಯೋಜನೆಗೆ ಹೊಂದಿಕೊಂಡಂತಿರುವ 25,000 ಚದರ ಅಡಿ ವಿಸ್ತೀರ್ಣದ ಮತ್ತೊಂದು ಪ್ಲಾಟ್&zwnj; ಅನ್ನು ಸುಮಾರು 40 ಕೋಟಿ ರೂ. ಗೆ ತಮ್ಮದಾಗಿಸಿಕೊಂಡರು.&lt;/p&gt;&lt;p&gt;ಮಾರ್ಚ್ 2026 (ಮೂರನೇ ಹೂಡಿಕೆ): 'ದಿ ಸರಯು' ಯೋಜನೆಯ ಸಮೀಪದಲ್ಲೇ ಬರೋಬ್ಬರಿ 2.67 ಎಕರೆ ಭೂಮಿಯನ್ನು 35 ಕೋಟಿ ರೂ. ಮೌಲ್ಯಕ್ಕೆ ಖರೀದಿಸಿದ್ದಾರೆ. ಇದು ಅಯೋಧ್ಯೆಯಲ್ಲಿ ಅವರ 3ನೇ ಹೂಡಿಕೆಯಾಗಿದ್ದು, HoABL ಸಂಸ್ಥೆಯೊಂದಿಗೆ ನಡೆದ 4ನೇ ಪ್ಲಾಟ್ ವ್ಯವಹಾರವಾಗಿದೆ.&lt;/p&gt;&lt;p&gt;ಅಯೋಧ್ಯೆಯ ಹೊರತಾಗಿ, ಬಚ್ಚನ್ ಅವರು ಮಹಾರಾಷ್ಟ್ರದ ಅಲಿಬಾಗ್&zwnj;ನಲ್ಲಿರುವ HoABL ನ 'ಸೋಲ್ ಡಿ ಅಲಿಬಾಗ್' ಯೋಜನೆಯಲ್ಲೂ 10 ಕೋಟಿ ರೂ. ಹೂಡಿಕೆ ಮಾಡಿ 10,000 ಚದರ ಅಡಿ ಭೂಮಿಯನ್ನು ಖರೀದಿಸಿದ್ದಾರೆ. ಈ ಯೋಜನೆಯಲ್ಲಿ ಬಾಲಿವುಡ್&zwnj;ನ ಇತರ ತಾರೆಯರಾದ ಕೃತಿ ಸನನ್ ಮತ್ತು ಕಾರ್ತಿಕ್ ಆರ್ಯನ್ ಕೂಡ ಹೂಡಿಕೆ ಮಾಡಿದ್ದಾರೆ. HoABL ಸಂಸ್ಥೆಯ ಪ್ರಕಾರ, ಅವರ ಗ್ರಾಹಕರಲ್ಲಿ ಶೇ. 65 ಕ್ಕಿಂತ ಹೆಚ್ಚು ಜನರು ಪ್ರಮುಖ ಔಷಧೀಯ, BFSI ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳು, ಸಿಎಕ್ಸ್&zwnj;ಒಗಳು ಹಾಗೂ ಬಾಲಿವುಡ್ ಗಣ್ಯರಾಗಿದ್ದಾರೆ.&lt;/p&gt;&lt;img&gt;&lt;p&gt;ಅಮಿತಾಬ್ ಬಚ್ಚನ್ ಅವರ ಈ ಹೂಡಿಕೆಯ ಕುರಿತು ಮಾತನಾಡಿದ ಅಭಿನಂದನ್ ಲೋಧಾ, ಬಚ್ಚನ್ ಅವರ ಹೂಡಿಕೆಯು ಭೂಮಿಯ ಮೇಲಿನ ಹಂಚಿಕೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಇದು ದೀರ್ಘಾವಧಿಯಲ್ಲಿ ಮೌಲ್ಯವನ್ನು ಕಾಯ್ದುಕೊಳ್ಳುವ ಒಂದು ಅಂತರ ಪೀಳಿಗೆಯ ಆಸ್ತಿಯಾಗಿದೆ ಎಂದಿದ್ದಾರೆ. ನಾವು ಭೂಮಿಯನ್ನು ಕೇವಲ ಸಂಪತ್ತಾಗಿ ನೋಡುವುದಿಲ್ಲ, ಬದಲಾಗಿ ಪರಂಪರೆಯಾಗಿ ನೋಡುತ್ತೇವೆ. ಅಯೋಧ್ಯೆಯಲ್ಲಿ ಈ ಪರಂಪರೆಯು ಅತ್ಯಂತ ಆಳವಾದ ಅರ್ಥವನ್ನು ಪಡೆದುಕೊಳ್ಳುತ್ತದೆ. ಇದು ನಂಬಿಕೆ ಮತ್ತು ಆನುವಂಶಿಕತೆ ಒಟ್ಟಿಗೆ ಬರುವ ಪರಂಪರೆ. ಸೌಕರ್ಯಗಳ ಅಭಿವೃದ್ಧಿ ಮತ್ತು ಸಾರ್ವಜನಿಕ ಹೂಡಿಕೆಯ ಬೆಂಬಲದೊಂದಿಗೆ ಅಯೋಧ್ಯೆಯು ಶಾಶ್ವತ ಮೌಲ್ಯ ಸೃಷ್ಟಿಯ ಬಲವಾದ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅಭಿನಂದನ್ ಲೋಧಾ, ಸಿಎಂಡಿ (HoABL) ಹೇಳಿದರು.&lt;/p&gt;&lt;img&gt;&lt;p&gt;ಭಾರತದ ದೇವಾಲಯ ಪಟ್ಟಣಗಳ ಸುತ್ತ ಬೆಳೆಯುತ್ತಿರುವ ಸಾಂಸ್ಕೃತಿಕ ಪ್ರವಾಸೋದ್ಯಮದ ಬಗ್ಗೆ ಮಾತನಾಡಿದ ಲೋಧಾ, ಇದು ಶೀಘ್ರದಲ್ಲೇ ಹಿರಿಯ ನಾಗರಿಕ ಸಮುದಾಯಗಳಿಗೆ ಅತ್ಯುತ್ತಮ ಆವಾಸಸ್ಥಾನವಾಗಲಿದ್ದು, ರಿಯಲ್ ಎಸ್ಟೇಟ್ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶವನ್ನು ತರಲಿದೆ ಎಂದಿದ್ದಾರೆ. ಜಾಗತಿಕ ಪ್ರವಾಸೋದ್ಯಮದ ಅಂಕಿ-ಅಂಶಗಳನ್ನು ಹೋಲಿಸಿದ ಅವರು, ವ್ಯಾಟಿಕನ್ ಸಿಟಿಯು ವರ್ಷಕ್ಕೆ ಸುಮಾರು 10 ಮಿಲಿಯನ್ (1 ಕೋಟಿ) ಪ್ರವಾಸಿಗರನ್ನು ಆಕರ್ಷಿಸಿದರೆ, ಅಯೋಧ್ಯೆಯು ಸುಮಾರು 250 ಮಿಲಿಯನ್ (25 ಕೋಟಿ) ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಒತ್ತಿ ಹೇಳಿದರು. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನ ಹರಿದು ಬಂದಾಗ ಸ್ಥಳೀಯ ಆರ್ಥಿಕತೆ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಅಭೂತಪೂರ್ವ ಬೆಳವಣಿಗೆಯನ್ನು ಕಾಣುವುದು ಸ್ವಾಭಾವಿಕ.&lt;/p&gt;&lt;img&gt;&lt;p&gt;'ಅಯೋಧ್ಯೆ - ಎ ರೈಸಿಂಗ್ ಗ್ಲೋಬಲ್ ಸ್ಪಿರಿಚ್ಯುವಲ್ ಕ್ಯಾಪಿಟಲ್' ಎಂಬ ಶೀರ್ಷಿಕೆಯ 'ಲಿಯಾಸೆಸ್ ಫೋರಾಸ್' ವರದಿಯ ಪ್ರಕಾರ, ಅಯೋಧ್ಯೆಯ ರಿಯಲ್ ಎಸ್ಟೇಟ್ ಮಾರುಕಟ್ಟೆ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಅಯೋಧ್ಯೆಯಲ್ಲಿ ಭೂಮಿಯ ಬೆಲೆಗಳು ಶೇ. 19 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ (CAGR) ಹೆಚ್ಚುತ್ತಿದ್ದು, ಇದು 2035 ರ ವೇಳೆಗೆ ಶೇ. 25 ಕ್ಕೆ ತಲುಪುವ ಮುನ್ಸೂಚನೆ ಇದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಸ್ತರಣೆ, ಸುಧಾರಿತ ರಸ್ತೆ-ರೈಲು ಸಂಪರ್ಕ ಮತ್ತು ಭವ್ಯ ರಾಮ ಮಂದಿರ ನಿರ್ಮಾಣದ ಕಾರಣದಿಂದಾಗಿ ಕಳೆದ ಐದು ವರ್ಷಗಳಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಭಾರಿ ಉತ್ತೇಜನ ಸಿಕ್ಕಿದೆ. ಪ್ರಮುಖವಾಗಿ ಸರಯು ನದಿ ದಂಡೆ ಮತ್ತು ರಾಮ ಮಂದಿರ ಕಾರಿಡಾರ್&zwnj;ಗಳಂತಹ ಆಯಕಟ್ಟಿನ ಪ್ರದೇಶಗಳಲ್ಲಿನ ಭೂಮಿಯ ಮೌಲ್ಯವು 2020 ರಿಂದ 2025 ರ ನಡುವಿನ ಅವಧಿಯಲ್ಲಿ ಬರೋಬ್ಬರಿ 4.5 ಪಟ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಅಯೋಧ್ಯೆಯು ಕೇವಲ ಧಾರ್ಮಿಕ ಕೇಂದ್ರವಾಗಿ ಉಳಿಯದೆ, ಜಾಗತಿಕ ಮಟ್ಟದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮುತ್ತಿರುವುದಕ್ಕೆ ಅಮಿತಾಬ್ ಬಚ್ಚನ್ ಅವರಂತಹ ದಿಗ್ಗಜರ ಹೂಡಿಕೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/real-estate-bollywood-megastar-amitabh-bachchan-ayodhya-property-investment-deal-revealed-gdp-47cgezu"/>
        </item>
        <item>
            <title><![CDATA[Microsoft layoffs: ತನ್ನ 2 ವಿಭಾಗ ಮುಚ್ಚುವ ಹಂತ, ಮೈಕ್ರೋಸಾಫ್ಟ್ ನಿಂದ 4800 ಉದ್ಯೋಗಿಗಳ ವಜಾ!]]></title>
            <link>https://kannada.asianetnews.com/jobs/microsoft-layoffs-4800-jobs-cut-in-gaming-and-sales-division-gdp/articleshow-4f74scv</link>
            <guid isPermaLink="true">https://kannada.asianetnews.com/jobs/microsoft-layoffs-4800-jobs-cut-in-gaming-and-sales-division-gdp/articleshow-4f74scv</guid>
            <pubDate>Tue, 07 Jul 2026 12:19:34 +0530</pubDate>
            <description><![CDATA[ಜಾಗತಿಕ ಸಾಫ್ಟ್&zwnj;ವೇರ್ ದೈತ್ಯ ಮೈಕ್ರೋಸಾಫ್ಟ್, ತನ್ನ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಸುಮಾರು 4,800 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಈ ಉದ್ಯೋಗ ಕಡಿತವು ಮುಖ್ಯವಾಗಿ ಕಂಪನಿಯ ವಾಣಿಜ್ಯ ಮಾರಾಟ ಮತ್ತು ಎಕ್ಸ್&zwnj;ಬಾಕ್ಸ್ ಗೇಮಿಂಗ್ ವಿಭಾಗಗಳ ಮೇಲೆ ಪರಿಣಾಮ ಬೀರಿದ್ದು, ಆಂತರಿಕ ಪುನರ್ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1fb7pc01gdpts18vjzgasx,imgname-microsoft-soft-layoff-voluntary-buyout-8500-employees-ai-cost-cutting-tech-industry-trends-5-1777092370124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್: &lt;/strong&gt;ಜಾಗತಿಕ ಸಾಫ್ಟ್&zwnj;ವೇರ್ ದೈತ್ಯ ಸಂಸ್ಥೆಯಾದ ಮೈಕ್ರೋಸಾಫ್ಟ್ ತನ್ನ ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಉದ್ಯೋಗಿಗಳಿಗೆ ದೊಡ್ಡ ಶಾಕ್ ನೀಡಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಗಳ ಪೈಕಿ ಸುಮಾರು ಶೇಕಡಾ 2.1 ರಷ್ಟು, ಅಂದರೆ ಸುಆರು 4,800 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ. ಮೈಕ್ರೋಸಾಫ್ಟ್&zwnj;ನ ಈ ದಿಢೀರ್ ನಿರ್ಧಾರದಿಂದ ಕಂಪನಿಯ ವಾಣಿಜ್ಯ ಮಾರಾಟ (Commercial Sales) ಹಾಗೂ ಎಕ್ಸ್&zwnj;ಬಾಕ್ಸ್ ಗೇಮಿಂಗ್ (Xbox Gaming) ವಿಭಾಗಗಳ ಮೇಲೆ ಹೆಚ್ಚಿನ ಮಟ್ಟದ ಪರಿಣಾಮ ಬೀರಿದೆ.&lt;/p&gt;&lt;h2&gt;ಗೇಮಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ&lt;/h2&gt;&lt;p&gt;ಮುಂದಿನ ಆರ್ಥಿಕ ವರ್ಷದಲ್ಲಿ ಗೇಮಿಂಗ್ ವಿಭಾಗವೊಂದರಲ್ಲೇ ಸುಮಾರು 3,200 ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಯೋಚನೆ ಮಾಡಿದೆಯಂತೆ. ಇದರೊಂದಿಗೆ ನಾಲ್ಕು ಪ್ರಮುಖ ಗೇಮ್ ಸ್ಟುಡಿಯೋಗಳನ್ನು ಸಂಪೂರ್ಣವಾಗಿ ಮುಚ್ಚಲು, ಇಲ್ಲವೇ ಬೇರೆ ಕಂಪನಿಗಳಿಗೆ ಮಾರಾಟ ಮಾಡಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಸದ್ಯ ಎಕ್ಸ್&zwnj;ಬಾಕ್ಸ್ ಗೇಮಿಂಗ್ ವಿಭಾಗವು ತೀವ್ರ ನಷ್ಟದಲ್ಲಿದ್ದು, ಮುಂಬರುವ ದಿನಗಳಲ್ಲಿ ಈ ವಿಭಾಗದಲ್ಲಿ ಮತ್ತಷ್ಟು ಉದ್ಯೋಗ ಕಡಿತ ಉಂಟಾಗುವ ಮುನ್ಸೂಚನೆಯನ್ನು ಕಂಪನಿ ನೀಡಿದೆ.&lt;/p&gt;&lt;h2&gt;ಉದ್ಯೋಗ ಕಡಿತಕ್ಕೆ ಕಾರಣವೇನು?&lt;/h2&gt;&lt;p&gt;ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನ ವಲಯದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲು, ಹೂಡಿಕೆ ಹಾಗೂ ಕಂಪನಿಯ ಆದ್ಯತೆಗಳನ್ನು ಮರುಹೊಂದಿಸುವ ಭಾಗವಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಕ್ರೋಸಾಫ್ಟ್&zwnj;ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (CHRO) ಆಮಿ ಹುಡ್ ಉದ್ಯೋಗಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಈ ಉದ್ಯೋಗ ಕಡಿತಕ್ಕೂ ಮತ್ತು ಪ್ರಸ್ತುತ ಚಾಲ್ತಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಬೆಳವಣಿಗೆಗೂ ಯಾವುದೇ ನೇರ ಸಂಬಂಧವಿಲ್ಲ ಎಂಬುದನ್ನು ಕಂಪನಿ ಉಲ್ಲೇಖಿಸಿದೆ. ತಂತ್ರಜ್ಞಾನ ವಲಯದಲ್ಲಿನ ಮಾರುಕಟ್ಟೆಯಲ್ಲಿನ ಏರಿಳಿತಗಳು ಹಾಗೂ ಆಂತರಿಕ ಪುನರ್ರಚನೆಯೇ ಈ ಲೇ-ಆಫ್&zwnj;ಗೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಈ ಉದ್ಯೋಗ ಕಡಿತದ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುವ ಸಾಧ್ಯತೆಗಳಿವೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/jobs/microsoft-layoffs-4800-jobs-cut-in-gaming-and-sales-division-gdp/articleshow-4f74scv"/>
        </item>
        <item>
            <title><![CDATA[ಹೇಗೆಲ್ಲ ಹಣ ಹೂಡಿಕೆ ಮಾಡಿ ದುಡ್ಡು ಮಾಡಬಹುದು? ಬೆಂಗಳೂರಿನ ದಂಪತಿ ಬಿಚ್ಚಿಟ್ಟ ಸೀಕ್ರೇಟ್‌ ಇದು!]]></title>
            <link>https://kannada.asianetnews.com/gallery/money/best-money-investment-strategy-bengaluru-millennial-couple-monthly-investment-strategy-7gglics</link>
            <guid isPermaLink="true">https://kannada.asianetnews.com/gallery/money/best-money-investment-strategy-bengaluru-millennial-couple-monthly-investment-strategy-7gglics</guid>
            <pubDate>Tue, 07 Jul 2026 11:20:45 +0530</pubDate>
            <description><![CDATA[&lt;p&gt;Investment Strategy For Beginners: ಇಂದು ಹಣ ಉಳಿತಾಯ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಈಗ ದಂಪತಿಯೊಂದು ಹೇಗೆಲ್ಲ ಹಣ ಉಳಿತಾಯ ಮಾಡಬಹುದು ಎಂಬುದನ್ನು ವಿಡಿಯೋ ಮೂಲಕ ಹೇಳಿದ್ದಾರೆ. ಎಸ್&zwnj;ಐಪಿ (SIP), ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಬೇರೆ ಏನೆಲ್ಲ ಮಾಡಬಹುದು ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxhpmh3fy9te2eznpgm1yed,imgname-new-project---2026-07-07t110647.438-1783403074083.jpg" type="image/jpeg" height="390" width="690"/>
            <content:encoded><![CDATA[&lt;p&gt;Investment Strategy For Beginners: ಇಂದು ಹಣ ಉಳಿತಾಯ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಈಗ ದಂಪತಿಯೊಂದು ಹೇಗೆಲ್ಲ ಹಣ ಉಳಿತಾಯ ಮಾಡಬಹುದು ಎಂಬುದನ್ನು ವಿಡಿಯೋ ಮೂಲಕ ಹೇಳಿದ್ದಾರೆ. ಎಸ್&zwnj;ಐಪಿ (SIP), ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರ ಜೊತೆಗೆ ಬೇರೆ ಏನೆಲ್ಲ ಮಾಡಬಹುದು ಎಂದಿದ್ದಾರೆ.&lt;/p&gt;&lt;img&gt;&lt;p&gt;ನಗರದಲ್ಲಿ ಕೆಲಸ ಮಾಡಿಕೊಂಡು ಬದುಕುವವರು ಹೇಗೆಲ್ಲ ಹಣ ಉಳಿಸಬಹುದು ಎಂಬುದನ್ನು ಆ ಜೋಡಿ ಮುಕ್ತವಾಗಿ ಹೇಳಿಕೊಂಡಿದೆ. ತಮ್ಮ ಆರ್ಥಿಕ ಭವಿಷ್ಯವನ್ನು ಸುರಕ್ಷಿತಗೊಳಿಸಲು ಹಣವನ್ನು ಹೇಗೆ ಎಷ್ಟು ಮುತುವರ್ಜಿಯಿಂದ ಖರ್ಚು ಮಾಡೋದು? ಹಂಚಿಕೆ ಮಾಡೋದು ಎಂದು ಈ ದಂಪತಿ ಹೇಳಿದ್ದಾರೆ.&lt;/p&gt;&lt;p&gt;ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಮಿಲೇನಿಯಲ್ ದಂಪತಿಯಾದ ನಾವು ವಿವಿಧ ಕಡೆ ಹೇಗೆ ಎಷ್ಟು ಹೂಡಿಕೆ ಮಾಡುತ್ತೇವೆ ಎಂದು ಈ ದಂಪತಿ ಹೇಳಿದ್ದೇವೆ. ಮೇಘಾ ಮತ್ತು ಶುಭಂ ಎನ್ನುವವರು ಈ ವಿಡಿಯೋ ಮಾಡಿದ್ದಾರೆ.&lt;/p&gt;&lt;img&gt;&lt;p&gt;&quot;ಬೆಂಗಳೂರಿನಲ್ಲಿ ಮಿಲೇನಿಯಲ್ ಕುಟುಂಬವಾಗಿ ನಾವು ನಮ್ಮ ಹಣವನ್ನು ಹೇಗೆ ಹೂಡಿಕೆ ಮಾಡುತ್ತೇವೆ ಎಂಬುದನ್ನು ಹೇಳ್ತೀವಿ. ಕ್ರಮೇಣವಾಗಿ ತಮ್ಮ ಎಸ್&zwnj;ಐಪಿಗಳನ್ನು (SIPs) ಹೆಚ್ಚು ಮಾಡಿದ್ದು, ಈಗ ತಿಂಗಳಿಗೆ ₹65,000 ಕೊಡುತ್ತಿದ್ದೇವೆ&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈಕ್ವಿಟಿಗಳಲ್ಲೂ ಹೂಡಿಕೆ ಮಾಡುತ್ತಿದ್ದೇವೆ, ಅವಕಾಶ ಸಿಕ್ಕಿದರೆ ದೊಡ್ಡ ಮೊತ್ತದ ಹೂಡಿಕೆ ಮಾಡ್ತೀವಿ. ಅಷ್ಟೇ ಅಲ್ಲದೆ ನಿವೃತ್ತಿ ನಿಧಿಗೂ ಹಣ ಹಾಕ್ತೀವಿ. ಮಗಳ ಭವಿಷ್ಯವನ್ನು ಭದ್ರ ಮಾಡಲು ಸರ್ಕಾರಿ ಯೋಜನೆಯಲ್ಲಿ ಕೂಡ ಹೂಡಿಕೆ ಮಾಡ್ತೀವಿ ಎಂದು ಈ ದಂಪತಿ ಹೇಳಿಕೊಂಡಿದೆ.&lt;/p&gt;&lt;img&gt;&lt;p&gt;ಇದನ್ನು ನೋಡಿ ಅನೇಕರು ಖುಷಿ ಪಟ್ಟರೆ, ಇನ್ನೂ ಕೆಲವರು ಕಾಮಿಡಿ ಮಾಡಿದ್ದಾರೆ. &ldquo;ಇದು ಒಂದು ವರ್ಗಕ್ಕೆ ಮಾತ್ರ ಅನ್ವಯ ಆಗುತ್ತದೆ, ಎಲ್ಲರಿಗೂ ಹೂಡಿಕೆ ಮಾಡಲು ಇಷ್ಟೆಲ್ಲ ಹಣ ಇರೋದಿಲ್ಲ&rdquo; ಎಂದು ಓರ್ವ ದಂಪತಿ ಹೇಳಿದೆ. ಇನ್ನೋರ್ವ ದಂಪತಿ &ldquo;ಹೂಡಿಕೆ ಮಾಡಲು ನನಗೂ ಸ್ವಲ್ಪ ಹಣ ಕೊಡಿ. ನೀವು ಹೂಡಿಕೆ ಮಾಡ್ತಿರುವ ನಿರ್ದಿಷ್ಟ ಫಂಡ್&zwnj; ಯಾವುವು&rdquo; ಎಂದು ಇನ್ನೂ ಕೆಲವರು ಕಾಮಿಡಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;&quot;ಜಾಸ್ತಿ ಸಂಬಳ ಇಲ್ಲ ಎನ್ನೋರಿಗೆ ಈ ಮಾಹಿತಿ ಯೂಸ್&zwnj; ಇಲ್ಲ. ನೀವೇನು ಕೆಲಸ ಮಾಡುತ್ತೀರಿ?&quot; ಎಂದು ಕೂಡ ಹೇಳಿದ್ದಾರೆ. ಈ ದಂಪತಿ ಈ ಹಿಂದೆ ಯುರೋಪ್&zwnj;ಗೆ 15 ದಿನಗಳ ಪ್ರವಾಸಕ್ಕಾಗಿ ತಾವು ಮಾಡಿದ ₹6.85 ಲಕ್ಷ ಬಜೆಟ್&zwnj;ನ ಬಗ್ಗೆ ಹೇಳಿದ್ದರು.&lt;/p&gt;]]></content:encoded>
            <category>business</category>
            <dc:creator>Padmashree Bhat</dc:creator>
            <atom:link href="https://kannada.asianetnews.com/gallery/money/best-money-investment-strategy-bengaluru-millennial-couple-monthly-investment-strategy-7gglics"/>
        </item>
        <item>
            <title><![CDATA[ZOZO Connect: ಒಂದೇ ಒಂದು ಚಿಕ್ಕ ಐಡಿಯಾದಿಂದ 11 ವರ್ಷದ ಹುಡುಗ 25 ಕೋಟಿ ಮೌಲ್ಯದ ಸ್ಟಾರ್ಟ್‌ಅಪ್ ಸಂಸ್ಥಾಪಕ]]></title>
            <link>https://kannada.asianetnews.com/business/11-year-old-athvik-builds-a-25-rs-crore-startup-by-transforming-business-cards/articleshow-92n68qi</link>
            <guid isPermaLink="true">https://kannada.asianetnews.com/business/11-year-old-athvik-builds-a-25-rs-crore-startup-by-transforming-business-cards/articleshow-92n68qi</guid>
            <pubDate>Tue, 07 Jul 2026 12:04:08 +0530</pubDate>
            <description><![CDATA[&lt;p&gt;&lt;strong&gt;Athvik ZOZO Connect: &lt;/strong&gt;ಸಾಧನೆಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ್ದಾನೆ 11 ವರ್ಷದ ಬಾಲಕ ಅಥ್ವಿಕ್. ಹೆಚ್ಚಿನ ಮಕ್ಕಳು ಓದು, ಆಟಗಳಲ್ಲಿ ಬ್ಯುಸಿಯಾಗಿರುವ ವಯಸ್ಸಿನಲ್ಲಿ, ಈತ ನಾವು ದಿನನಿತ್ಯ ಬಳಸುವ ವಿಸಿಟಿಂಗ್ ಕಾರ್ಡ್&zwnj;ಗಳಲ್ಲಿದ್ದ ಒಂದು ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಡಿಜಿಟಲ್ ರೂಪ ನೀಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwxmfwdvjgch0aw1k14nyd8e,imgname-thumbnail--89--1783405998523.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;11&lt;/strong&gt; ವರ್ಷ ವಯಸ್ಸಿನಲ್ಲಿ ಹೆಚ್ಚಿನ ಮಕ್ಕಳು ಓದು, ಹೋಮ್&zwnj;ವರ್ಕ್ ಅಥವಾ ವಿಡಿಯೋ ಗೇಮ್ಸ್&zwnj;ಗಳಲ್ಲಿ ಬ್ಯುಸಿಯಾಗಿರುತ್ತಾರೆ. ಆದರೆ ಅಥ್ವಿಕ್ ಕಥೆಯೇ ಬೇರೆ. 11ನೇ ವಯಸ್ಸಿನಲ್ಲೇ ಅಥ್ವಿಕ್ ಕಂಪನಿಯೊಂದನ್ನು ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರು ಇದನ್ನು ಯಾರದ್ದೋ ಒತ್ತಾಯಕ್ಕಾಗಲಿ ಅಥವಾ ಶಾಲೆಯ ಪ್ರಾಜೆಕ್ಟ್&zwnj;ಗಾಗಲಿ ಮಾಡಿದ್ದಲ್ಲ. ಬದಲಿಗೆ, ಹೆಚ್ಚಿನ ಜನರು ಸಾಮಾನ್ಯ ಎಂದುಕೊಂಡು ನಿರ್ಲಕ್ಷಿಸಿದ್ದ ಸಮಸ್ಯೆಯೊಂದನ್ನು ಅವರು ಗುರುತಿಸಿದರು. ಅವರ ಒಂದು ಐಡಿಯಾ ಕೇವಲ ಅವರ ಹಣೆಬರಹವನ್ನಷ್ಟೇ ಬದಲಾಯಿಸಲಿಲ್ಲ, ಬದಲಿಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ಸೃಷ್ಟಿಸಿತು. ಅವರ ಕಥೆ ಕೇವಲ ಸಣ್ಣ ವಯಸ್ಸಿನ ಕಾರಣಕ್ಕಾಗಿ ಅಷ್ಟೇ ಚರ್ಚೆಯಲ್ಲಿಲ್ಲ, ಬದಲಿಗೆ ಯಶಸ್ವಿ ಉದ್ಯಮಿಯಾಗಲು ಎಂಜಿನಿಯರಿಂಗ್, ಎಂಬಿಎ ಅಥವಾ ವರ್ಷಗಟ್ಟಲೆಯ ಕಾರ್ಪೊರೇಟ್ ಅನುಭವದ ಅಗತ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿರುವುದಕ್ಕಾಗಿ ಸುದ್ದಿಯಲ್ಲಿದೆ.&lt;/p&gt;&lt;h2&gt;&lt;strong&gt;ಯಾವ ಕಂಪನಿಯ ಸಂಸ್ಥಾಪಕ ಇವರು?&lt;/strong&gt;&lt;/h2&gt;&lt;p&gt;ಇಂದು ಅಥ್ವಿಕ್ ZOZO Connect ಹೆಸರಿನ ಸ್ಟಾರ್ಟ್&zwnj;ಅಪ್&zwnj;ನ ಸಂಸ್ಥಾಪಕರಾಗಿದ್ದಾರೆ. ಇದರ ಮೌಲ್ಯ (Valuation) ಸುಮಾರು 25 ಕೋಟಿ ರೂಪಾಯಿ. ಈ ಸ್ಟಾರ್ಟ್&zwnj;ಅಪ್ ಸಾಂಪ್ರದಾಯಿಕ ಬಿಸಿನೆಸ್ ಕಾರ್ಡ್&zwnj;ಗಳನ್ನು (ವಿಸಿಟಿಂಗ್ ಕಾರ್ಡ್) ಹೊಸ ಮತ್ತು ಡಿಜಿಟಲ್ ರೂಪದಲ್ಲಿ ಪ್ರಸ್ತುತಪಡಿಸುತ್ತಿದೆ. ಬನ್ನಿ, ಇವರ ಬಗ್ಗೆ ಮತ್ತಷ್ಟು ತಿಳಿಯೋಣ.&lt;/p&gt;&lt;h2&gt;&lt;strong&gt;ಏನಿದು ಐಡಿಯಾ?&lt;/strong&gt;&lt;/h2&gt;&lt;p&gt;ಹೆಚ್ಚಿನ ಜನರು ಕಾಗದದ ವಿಸಿಟಿಂಗ್ ಕಾರ್ಡ್&zwnj;ಗಳನ್ನು ಸಾಮಾನ್ಯ ಎಂದು ಭಾವಿಸಿದರೆ, ಅಥ್ವಿಕ್ ಇದರ ಬಗ್ಗೆ ಪ್ರಶ್ನೆ ಮಾಡಿದರು. ಯಾರಾದರೂ ನಿಮಗೆ ವಿಸಿಟಿಂಗ್ ಕಾರ್ಡ್ ನೀಡಿದಾಗ, ಅದು ಯಾವಾಗಲೂ ನಿಮ್ಮ ಬಳಿಯೇ ಇರುತ್ತದೆಯೇ? ಎಂದು ಯೋಚಿಸಿದರು. ಹಲವು ಬಾರಿ ಅದು ಕಳೆದುಹೋಗುತ್ತದೆ, ಯಾವುದೋ ಡ್ರಾಯರ್&zwnj;ನಲ್ಲಿ ಬಿದ್ದಿರುತ್ತದೆ ಅಥವಾ ಬೇಡವೆಂದು ಕಸಕ್ಕೆ ಎಸೆಯಲಾಗುತ್ತದೆ. ಇದೇ ಪ್ರಶ್ನೆ ಅವರಿಗೆ ಒಂದು ಹೊಸ ಐಡಿಯಾ ನೀಡಿತು.&lt;/p&gt;&lt;p&gt;ಸಾಮಾನ್ಯವಾಗಿ ಸಾಂಪ್ರದಾಯಿಕ ಬಿಸಿನೆಸ್ ಕಾರ್ಡ್&zwnj;ಗಳನ್ನು ದೊಡ್ಡ ಮಟ್ಟದಲ್ಲಿ ಮುದ್ರಿಸಲಾಗುತ್ತದೆ. ಫೋನ್ ನಂಬರ್ ಅಥವಾ ಹುದ್ದೆ ಬದಲಾದ ತಕ್ಷಣ ಅವುಗಳನ್ನು ಮತ್ತೆ ಮುದ್ರಿಸಬೇಕಾಗುತ್ತದೆ. ಇದರಿಂದ ವೆಚ್ಚವೂ ಹೆಚ್ಚಾಗುತ್ತದೆ ಮತ್ತು ಕಾಗದದ ಬಳಕೆಯಿಂದ ಪರಿಸರದ ಮೇಲೂ ಪರಿಣಾಮ ಬೀರುತ್ತದೆ.&lt;/p&gt;&lt;h2&gt;&lt;strong&gt;25 ಕೋಟಿ ರೂಪಾಯಿ ಮೌಲ್ಯ&lt;/strong&gt;&lt;/h2&gt;&lt;p&gt;ಹೀಗೆ ಒಂದು ಸಣ್ಣ ಐಡಿಯಾದಿಂದ ಆರಂಭವಾದ ಈ ಪ್ರಯಾಣ ಇಂದು 25 ಕೋಟಿ ರೂಪಾಯಿ ಮೌಲ್ಯದ ಸ್ಟಾರ್ಟ್&zwnj;ಅಪ್ ಹಂತಕ್ಕೆ ಬಂದು ತಲುಪಿದೆ.&lt;/p&gt;&lt;h2&gt;&lt;strong&gt;ಕಂಪನಿ ಏನು ಮಾಡುತ್ತದೆ?&lt;/strong&gt;&lt;/h2&gt;&lt;p&gt;ZOZO Connect ಈಗ ಕೇವಲ ಸಂಪರ್ಕ ಮಾಹಿತಿ (Contact Details) ಹಂಚಿಕೊಳ್ಳುವ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಈ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಬಳಕೆದಾರರು ತಮ್ಮ ಡಿಜಿಟಲ್ ಪ್ರೊಫೈಲ್ ರಚಿಸಬಹುದು, ಮಾಹಿತಿಯನ್ನು ಯಾವಾಗ ಬೇಕಾದರೂ ಅಪ್&zwnj;ಡೇಟ್ ಮಾಡಬಹುದು ಮತ್ತು ಸಿಆರ್&zwnj;ಎಂ (CRM) ಪ್ಲಾಟ್&zwnj;ಫಾರ್ಮ್ ಹಾಗೂ ಇತರೆ ಬಿಸಿನೆಸ್ ಟೂಲ್&zwnj;ಗಳೊಂದಿಗೆ ಲಿಂಕ್ ಮಾಡಬಹುದು. ಇದಕ್ಕಾಗಿ ಒಂದು ಪರ್ಸನಲೈಸ್ಡ್ ಡ್ಯಾಶ್&zwnj;ಬೋರ್ಡ್ ಕೂಡ ಸಿಗುತ್ತದೆ.&lt;/p&gt;&lt;p&gt;ಈ ಪ್ಲಾಟ್&zwnj;ಫಾರ್ಮ್ NFC ತಂತ್ರಜ್ಞಾನ, QR ಕೋಡ್ ಮತ್ತು ಡೈರೆಕ್ಟ್ ಲಿಂಕ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುವ ಸೌಲಭ್ಯವನ್ನು ನೀಡುತ್ತದೆ. ಇದರಿಂದ ಉದ್ಯಮಿಗಳು, ವಿದ್ಯಾರ್ಥಿಗಳು, ಫ್ರೀಲಾನ್ಸರ್&zwnj;ಗಳು ಮತ್ತು ಕಾರ್ಪೊರೇಟ್ ವೃತ್ತಿಪರರ ನೆಟ್&zwnj;ವರ್ಕಿಂಗ್ ಪ್ರಕ್ರಿಯೆ ಮೊದಲಿಗಿಂತಲೂ ಅತ್ಯಂತ ಸುಲಭ ಮತ್ತು ವೇಗವಾಗಿದೆ.&lt;/p&gt;&lt;h3&gt;&lt;strong&gt;ಯಶಸ್ಸಿನ ಮಂತ್ರ&lt;/strong&gt;&lt;/h3&gt;&lt;p&gt;ಅಥ್ವಿಕ್ ಅವರ ಕಥೆ ಕೇವಲ ಒಂದು ಸ್ಟಾರ್ಟ್&zwnj;ಅಪ್&zwnj;ಗಷ್ಟೇ ಸೀಮಿತವಾಗಿಲ್ಲ, ಬದಲಿಗೆ ಇದು ಇಂದಿನ ಯುವಕರಿಗೆ ದೊಡ್ಡ ಪಾಠವನ್ನು ಕಲಿಸುತ್ತದೆ. ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಓದುತ್ತಾರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ ಅಥವಾ ವಿದೇಶದಲ್ಲಿ ಓದಲು 25 ರಿಂದ 40 ಲಕ್ಷ ರೂಪಾಯಿಗಳವರೆಗೆ ಎಜುಕೇಶನ್ ಲೋನ್ ಪಡೆಯುತ್ತಾರೆ. ಆದರೆ, 11 ವರ್ಷದ ಅಥ್ವಿಕ್ ಮಾತ್ರ ಬೇರೆ ಹಾದಿ ಆಯ್ದುಕೊಂಡರು. ತಮ್ಮ ಓದು ಮುಗಿಯುವವರೆಗೆ ಕಾಯಲಿಲ್ಲ, ಬದಲಿಗೆ ತಮ್ಮ ಸುತ್ತಮುತ್ತಲಿದ್ದ ಸಮಸ್ಯೆಯನ್ನು ಗುರುತಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಂಡರು.&lt;/p&gt;&lt;p&gt;ಅವರ ಕಥೆಯು ವಯಸ್ಸು ಅಥವಾ ಡಿಗ್ರಿಯನ್ನು ಹೋಲಿಕೆ ಮಾಡುವುದರ ಬಗ್ಗೆ ಅಲ್ಲ. ಇಂದಿನ ದಿನಗಳಲ್ಲಿ ಉತ್ತಮ ಆಲೋಚನೆ ಮತ್ತು ಹೊಸ ಐಡಿಯಾ ಇದ್ದರೆ ಯಾವುದೇ ವಯಸ್ಸಿನಲ್ಲಾದರೂ ಯಶಸ್ಸು ಪಡೆಯಬಹುದು ಎಂಬುದನ್ನು ಇದು ತೋರಿಸುತ್ತದೆ. ತಂತ್ರಜ್ಞಾನ, ಆನ್&zwnj;ಲೈನ್ ಲರ್ನಿಂಗ್ ಮತ್ತು ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳು, ಇನ್ನೋವೇಶನ್ (ಆವಿಷ್ಕಾರ) ಕೇವಲ ಡಿಗ್ರಿ ಅಥವಾ ಸುದೀರ್ಘ ಅನುಭವದ ಮೇಲೆ ಅವಲಂಬಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿವೆ.&lt;/p&gt;&lt;h3&gt;&lt;strong&gt;ವಿದ್ಯಾರ್ಥಿಗಳಿಗೆ ಸಂದೇಶ&lt;/strong&gt;&lt;/h3&gt;&lt;p&gt;ವಿದ್ಯಾರ್ಥಿಗಳಿಗೆ ಅಥ್ವಿಕ್ ಅವರ ಯಶಸ್ಸು ನೀಡುವ ಸಂದೇಶವೇನೆಂದರೆ&mdash;ಕುತೂಹಲ ಮತ್ತು ಹೊಸದನ್ನು ಮಾಡುವ ಆಲೋಚನೆ ಹಲವು ಬಾರಿ ಡಿಗ್ರಿಗಿಂತಲೂ ಮುಖ್ಯವಾಗುತ್ತದೆ.&lt;/p&gt;&lt;h3&gt;&lt;strong&gt;ವೃತ್ತಿಪರರಿಗೆ ಸಂದೇಶ&lt;/strong&gt;&lt;/h3&gt;&lt;p&gt;ವೃತ್ತಿಪರರಿಗೆ ಅವರ ಕಥೆಯು, ದಿನನಿತ್ಯದ ಸಣ್ಣ ಸಮಸ್ಯೆಯೂ ಸಹ ಒಂದು ದೊಡ್ಡ ಮತ್ತು ಯಶಸ್ವಿ ಬಿಸಿನೆಸ್&zwnj;ನ ಆರಂಭಕ್ಕೆ ನಾಂದಿ ಹಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.&lt;/p&gt;&lt;p&gt;ಕೇವಲ 11 ವರ್ಷದ ವಯಸ್ಸಿನಲ್ಲಿ ಅಥ್ವಿಕ್ ಇಂತಹದೊಂದು ಸ್ಟಾರ್ಟ್&zwnj;ಅಪ್ ಕಟ್ಟಿ ನಿಲ್ಲಿಸಿದ್ದಾರೆ, ಇದು ಡಿಜಿಟಲ್ ಯುಗದಲ್ಲಿ ನೆಟ್&zwnj;ವರ್ಕಿಂಗ್ ಮತ್ತು ಬಿಸಿನೆಸ್ ಕಾರ್ಡ್&zwnj;ಗಳ ಬಳಕೆಯ ಬಗ್ಗೆ ಜನರು ಹೊಸದಾಗಿ ಯೋಚಿಸುವಂತೆ ಮಾಡಿದೆ.&lt;/p&gt;]]></content:encoded>
            <category>business</category>
            <dc:creator>Ashwini HR</dc:creator>
            <atom:link href="https://kannada.asianetnews.com/business/11-year-old-athvik-builds-a-25-rs-crore-startup-by-transforming-business-cards/articleshow-92n68qi"/>
        </item>
        <item>
            <title><![CDATA[ಹೀರೋ-ಹೋಂಡಾಗೆ TVS ಶಾಕ್!; ಜಾಗತಿಕ ಮಾರಾಟದಲ್ಲಿ ದೇಶದ ನಂ.1 ದ್ವಿಚಕ್ರ ಕಂಪನಿಯಾಗಿ ಹೊಸ ಇತಿಹಾಸ!]]></title>
            <link>https://kannada.asianetnews.com/bike-news/tvs-beats-hero-honda-largest-two-wheeler-company-global-sales-june-2026-san/articleshow-9b0k3vl</link>
            <guid isPermaLink="true">https://kannada.asianetnews.com/bike-news/tvs-beats-hero-honda-largest-two-wheeler-company-global-sales-june-2026-san/articleshow-9b0k3vl</guid>
            <pubDate>Mon, 06 Jul 2026 22:27:25 +0530</pubDate>
            <description><![CDATA[&lt;p&gt;ಜೂನ್ 2026ರ ಜಾಗತಿಕ ಮಾರಾಟದಲ್ಲಿ, ಟಿವಿಎಸ್ ಮೋಟಾರ್ಸ್ ಕಂಪನಿಯು ಹೀರೋ ಮತ್ತು ಹೋಂಡಾವನ್ನು ಹಿಂದಿಕ್ಕಿ ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಸಾಧನೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬಲಿಷ್ಠ ರಫ್ತು ಪ್ರದರ್ಶನವೇ ಮುಖ್ಯ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdydvkhp82t24mjdfdbgemy8,imgname-tamil-news---2026-01-02t093026.229-1767326469686.png" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ (ಜು.6): ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ದೇಶಿ ಮೂಲದ ದೈತ್ಯ ಕಂಪನಿ 'ಟಿವಿಎಸ್ ಮೋಟಾರ್ಸ್' (TVS) ಹೊಸ ಇತಿಹಾಸ ಸೃಷ್ಟಿಸಿದೆ. ಜೂನ್ 2026 ರ ಒಟ್ಟಾರೆ ಜಾಗತಿಕ ಮಾರಾಟದ (Global Sales) ಅಂಕಿ-ಅಂಶಗಳ ಆಧಾರದ ಮೇಲೆ, ಟಿವಿಎಸ್ ಕಂಪನಿಯು ಭಾರತೀಯ ಮಾರುಕಟ್ಟೆಯ ದಿಗ್ಗಜರಾದ ಹೀರೋ ಮೊಟೊಕಾರ್ಪ್&zwnj; ಮತ್ತು ಹೋಂಡಾ ಕಂಪನಿಗಳನ್ನು ಹಿಂದಿಕ್ಕಿ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಭಾರತೀಯ ಬ್ರ್ಯಾಂಡ್&zwnj;ನ ಅದ್ಭುತ ಪ್ರದರ್ಶನವೇ ಈ ಐತಿಹಾಸಿಕ ಸಾಧನೆಗೆ ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;ಟಿವಿಎಸ್ ಮೋಟಾರ್ಸ್ ಜೂನ್ ತಿಂಗಳಿನಲ್ಲಿ ಒಟ್ಟು 5,65,417 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇಕಡಾ 47 ರಷ್ಟು ಭಾರಿ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ. ಇದೇ ಅವಧಿಯಲ್ಲಿ ಮಾಜಿ ನಂ.1 ಕಂಪನಿ ಹೀರೋ ಮೋಟೋಕಾರ್ಪ್ 5,41,159 ಯುನಿಟ್&zwnj;ಗಳನ್ನು ಮತ್ತು ಹೋಂಡಾ ಕಂಪನಿಯು 5,28,281 ಯುನಿಟ್&zwnj;ಗಳನ್ನು ಮಾರಾಟ ಮಾಡಿದ್ದು, ಟಿವಿಎಸ್ ಜಾಗತಿಕ ರೇಸ್&zwnj;ನಲ್ಲಿ ಮುಂಚೂಣಿಗೆ ಬಂದಿದೆ. ಈ ಹೋಲಿಕೆಯಲ್ಲಿ ಟಿವಿಎಸ್&zwnj;ನ 'ಮೊಪೆಡ್' (Moped) ಮಾರಾಟವನ್ನು ಸೇರಿಸಲಾಗಿಲ್ಲ. ಏಕೆಂದರೆ ಮೊಪೆಡ್ ವಿಭಾಗದಲ್ಲಿ ಹೀರೋ ಮತ್ತು ಹೋಂಡಾ ಕಂಪನಿಗಳು ಕಾರ್ಯನಿರ್ವಹಿಸುತ್ತಿಲ್ಲ. ಕೇವಲ ಮೋಟಾರ್&zwnj;ಸೈಕಲ್ ಹಾಗೂ ಸ್ಕೂಟರ್ ಮಾರಾಟದ ಆಧಾರದ ಮೇಲೆಯೇ ಟಿವಿಎಸ್ ಈ ಗೆಲುವು ಸಾಧಿಸಿದೆ.&lt;/p&gt;&lt;p&gt;ಟಿವಿಎಸ್ ಕೈಹಿಡಿದ ಅಂತಾರಾಷ್ಟ್ರೀಯ ರಫ್ತು ವ್ಯವಸ್ಥೆ&lt;/p&gt;&lt;p&gt;ಭಾರತೀಯ ದ್ವಿಚಕ್ರ ವಾಹನ ಉದ್ಯಮದಲ್ಲಿ ಇಂತಹದೊಂದು ದೊಡ್ಡ ಬದಲಾವಣೆ ಗಾಳಿ ಬೀಸಲು ಭಾರತದ ಮಾರುಕಟ್ಟೆಯಲ್ಲ, ಬದಲಿಗೆ ವಿದೇಶಿ ಮಾರುಕಟ್ಟೆಯಲ್ಲಿ ಟಿವಿಎಸ್ ಗಳಿಸಿರುವ ಭದ್ರ ಬುನಾದಿ ಕಾರಣವಾಗಿದೆ. ಜೂನ್ ತಿಂಗಳೊಂದರಲ್ಲೇ ಟಿವಿಎಸ್ ಕಂಪನಿಯು 1,72,355 ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ಈ ರಫ್ತು ಪ್ರಮಾಣವು ಹೀರೋ ಮತ್ತು ಹೋಂಡಾ ಎರಡೂ ಕಂಪನಿಗಳ ಒಟ್ಟು ರಫ್ತಿಗಿಂತಲೂ ಹೆಚ್ಚಾಗಿದೆ! ಜೂನ್&zwnj;ನಲ್ಲಿ ಹೀರೋ 38,269 ಯುನಿಟ್&zwnj;ಗಳನ್ನು ಮತ್ತು ಹೋಂಡಾ 59,325 ಯುನಿಟ್&zwnj;ಗಳನ್ನು ರಫ್ತು ಮಾಡಿದ್ದು, ಎರಡೂ ಕಂಪನಿಗಳ ಒಟ್ಟು ರಫ್ತು ಪ್ರಮಾಣ 97,594 ಯುನಿಟ್&zwnj;ಗಳಷ್ಟೇ ಆಗಿದೆ.&lt;/p&gt;&lt;p&gt;ಆದರೆ, ಕೇವಲ ರಫ್ತು ಮಾರುಕಟ್ಟೆಯನ್ನಷ್ಟೇ ಪರಿಗಣಿಸಿದರೆ 'ಬಜಾಜ್ ಆಟೋ' ದೇಶದಲ್ಲೇ ನಂ.1 ಸ್ಥಾನವನ್ನು ಕಾಯ್ದುಕೊಂಡಿದೆ. ಬಜಾಜ್ ಜೂನ್ 2026 ರಲ್ಲಿ ಶೇ.49 ರಷ್ಟು ವಾರ್ಷಿಕ ಪ್ರಗತಿಯೊಂದಿಗೆ 2,22,439 ವಾಹನಗಳನ್ನು ರಫ್ತು ಮಾಡಿದೆ.&lt;/p&gt;&lt;p&gt;ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ; 90 ದೇಶಗಳಲ್ಲಿ ಟಿವಿಎಸ್ ಹವಾ!&lt;/p&gt;&lt;p&gt;ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯು ಟಿವಿಎಸ್ ಪಾಲಿಗೆ ಪ್ರಮುಖ ವರಮಾನದ ಮೂಲವಾಗಿ ಮಾರ್ಪಟ್ಟಿದೆ. ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಟಿವಿಎಸ್ ವಾಹನಗಳು ಪ್ರಸ್ತುತ ವಿಶ್ವದ 90 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿವೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾ ಖಂಡಗಳು ಟಿವಿಎಸ್&zwnj;ನ ಅತಿ ದೊಡ್ಡ ಅಂತಾರಾಷ್ಟ್ರೀಯ ಮಾರುಕಟ್ಟೆಗಳಾಗಿವೆ.&lt;/p&gt;&lt;p&gt;2025-26 ರ ಆರ್ಥಿಕ ವರ್ಷದಲ್ಲಿ ಟಿವಿಎಸ್ ಕಂಪನಿಯ ಒಟ್ಟು ಆದಾಯದ ಸುಮಾರು ಶೇಕಡಾ 25 ರಷ್ಟು ಭಾಗವು ಅಂತಾರಾಷ್ಟ್ರೀಯ ವ್ಯವಹಾರದಿಂದಲೇ ಬಂದಿದೆ. ಈ ಬಲಿಷ್ಠ ಜಾಗತಿಕ ಪ್ರದರ್ಶನದ ಕಾರಣದಿಂದಾಗಿ ಟಿವಿಎಸ್ ಕಂಪನಿಯು ವಾರ್ಷಿಕ ಮಾರಾಟದ ಆಧಾರದ ಮೇಲೆ ವಿಶ್ವದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಇನ್ನೂ ನಂ.1; 3ನೇ ಸ್ಥಾನದಲ್ಲಿ ಟಿವಿಎಸ್&lt;/p&gt;&lt;p&gt;ಭಾರತದ ಒಳಗಿನ ದೇಶೀಯ (Domestic) ಮಾರಾಟವನ್ನು ಮಾತ್ರ ಲೆಕ್ಕ ಹಾಕಿದರೆ ಹೀರೋ ಮೋಟೋಕಾರ್ಪ್ ಇನ್ನೂ ತನ್ನ ನಂ.1 ಸ್ಥಾನವನ್ನು ಉಳಿಸಿಕೊಂಡಿದೆ. ಜೂನ್ ತಿಂಗಳಲ್ಲಿ ಹೀರೋ ಭಾರತದೊಳಗೆ 5,02,890 ವಾಹನಗಳನ್ನು ಮಾರಾಟ ಮಾಡಿದೆ (ಇದು ಕಳೆದ ವರ್ಷಕ್ಕಿಂತ ಶೇ.4.2 ರಷ್ಟು ಕುಸಿತ ಕಂಡಿದೆ). ಇನ್ನು ಹೋಂಡಾ ಕಂಪನಿಯು ಶೇ.21 ರಷ್ಟು ವಾರ್ಷಿಕ ಪ್ರಗತಿಯೊಂದಿಗೆ ಭಾರತದಲ್ಲಿ 4,68,956 ಯುನಿಟ್&zwnj;ಗಳನ್ನು ಮಾರಾಟ ಮಾಡಿ ಎರಡನೇ ಸ್ಥಾನದಲ್ಲಿದೆ.&lt;/p&gt;&lt;p&gt;ಟಿವಿಎಸ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ 4,11,014 ವಾಹನಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಆದರೆ, ಟಿವಿಎಸ್ ದೇಶೀಯ ಮಾರಾಟದಲ್ಲೂ ಶೇಕಡಾ 46 ರಷ್ಟು ಅದ್ಭುತ ಬೆಳವಣಿಗೆ ದಾಖಲಿಸಿದೆ. ಭಾರತದ ಮಾರುಕಟ್ಟೆಯಲ್ಲಿ ಹೀರೋ ಮತ್ತು ಹೋಂಡಾ ಮುಂದಿದ್ದರೂ, ವಿದೇಶಿ ರಫ್ತಿನ ಬಲದೊಂದಿಗೆ ಒಟ್ಟಾರೆ ಜಾಗತಿಕ ಮಾರಾಟವನ್ನು ಒಟ್ಟುಗೂಡಿಸಿದಾಗ ಟಿವಿಎಸ್ ಪ್ರಥಮ ಬಾರಿಗೆ ಇತಿಹಾಸ ಬರೆದಿದೆ. ಇದು ಮುಂಬರುವ ದಿನಗಳಲ್ಲಿ ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ಜಾಗತಿಕ ವಿಸ್ತರಣೆಯೇ ಯಶಸ್ಸಿನ ಪ್ರಮುಖ ಸೂತ್ರ ಎಂಬುದನ್ನು ಸಾಬೀತುಪಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>business</category>
            <dc:creator>Santosh Naik</dc:creator>
            <atom:link href="https://kannada.asianetnews.com/bike-news/tvs-beats-hero-honda-largest-two-wheeler-company-global-sales-june-2026-san/articleshow-9b0k3vl"/>
        </item>
        <item>
            <title><![CDATA[ಕಳಚಿ ಬಿತ್ತು ಎಲಾನ್ ಮಸ್ಕ್ ಟ್ರಿಲಿಯನೆರ್ ಶ್ರೀಮಂತ ಪಟ್ಟ, ಒಂದು ತಪ್ಪಿನಿಂದ ಉದ್ಯಮಿಗೆ ಭಾರಿ ಹಿನ್ನಡೆ]]></title>
            <link>https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd</link>
            <guid isPermaLink="true">https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd</guid>
            <pubDate>Tue, 07 Jul 2026 12:29:55 +0530</pubDate>
            <description><![CDATA[&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಪಟ್ಟ ಹೆಚ್ಚು ದಿನ ಇರಲೇ ಇಲ್ಲ. ಎಲಾನ್ ಮಸ್ಕ್ ಟ್ರಿಲಿಯನೆರ್ ಪಟ್ಟ ಕಳಚಲು ಕಾರಣವೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kcxvdrj8wyw4hbgf8vhn8y9g,imgname-elon-musk-1766233399880.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಈ ಪಟ್ಟ ಹೆಚ್ಚು ದಿನ ಇರಲೇ ಇಲ್ಲ. ಎಲಾನ್ ಮಸ್ಕ್ ಟ್ರಿಲಿಯನೆರ್ ಪಟ್ಟ ಕಳಚಲು ಕಾರಣವೇನು?&lt;/p&gt;&lt;img&gt;&lt;p&gt;ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ವಿಶ್ವದ ಮೊದಲ ಹಾಗೂ ಏಕೈಕ ಟ್ರಿಲಿಯನೆರ್ ಅಂದರೆ ಸರಿಸುಮಾರು 83 ಲಕ್ಷ ಕೋಟಿ ರೂಪಾಯಿ) ಸಂಪತ್ತಿನ ಮೂಲಕ ಹೊಸ ದಾಖಲೆ ಬರೆದಿದ್ದರು. ಮಸ್ಕ್ ಉದ್ಯಮ, ಆದಾಯ, ಆಸ್ತಿ ಸಂಪತ್ತು ಶ್ರೀಮಂತರನ್ನೇ ಚಕಿತಗೊಳಿಸಿತ್ತು. ಆದರೆ ಎಲಾನ್ ಮಸ್ಕ್ ಇದೀಗ ಟ್ರಿಲಿಯನೆರ್ ಶ್ರೀಮಂತಿಕೆ ಪಟ್ಟ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಜೂನ್ 12 ರಿಂದ ಎಸಕ್ ಮಾಲೀಕತ್ವದ ಸ್ಪೇಸ್ ಎಕ್ಸ್ ಸಂಸ್ಥೆ ಐಪಿಒ ಮೂಲಕ ಮಾರುಕಟ್ಟೆಗೆ ಕಾಲಿಟ್ಟಿತ್ತು. ಆರಂಭದಲ್ಲಿ 135 ಡಾಲರ್&zwnj;ಗೆ ನಿಗದಿಯಾಗಿದ್ದ ಷೇರು ಕೆಲವೇ ದಿನಗಳಲ್ಲಿ 225 ಡಾಲರ್&zwnj;ಗೆ ಜಿಗಿತ ಕಂಡಿತ್ತು. ಈ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು.ಪರಿಣಾಮ ಮಸ್ಕ್ ಸಂಪತ್ತು 1.4 ಟ್ರಿಲಿಯನ್ ಡಾಲರ್ ದಾಟಿತ್ತು. ಈ ಮೂಲಕ ಮಸ್ಕ್ ಟ್ರಿಲಿಯನೇರ್ ದಾಟಿ ಮುಂದೆ ಸಾಗುವ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿ ಹಾಗೇ ಉಳಿಯಲಿಲ್ಲ.&lt;/p&gt;&lt;img&gt;&lt;p&gt;ಸ್ಟಾಕ್ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ಷೇರುಗಳ ಸತತವಾಗಿ ಕುಸಿತ ಕಾಣುತ್ತಿರುವ ಪರಿಣಾಮ ಆಸ್ತಿ ಮೌಲ್ಯ ಟ್ರಿಲಿಯನೆರ್ ಡಾಲರ್&zwnj;ನಿಂದ ಕುಸಿತ ಕಂಡಿದೆ. ಜೂನ್ 16ರಂದು ಸ್ಪೇಸ್ ಎಕ್ಸ್ ತೆಗೆದುಕೊಂಡು ಒಂದು ನಿರ್ಧಾರ ಈ ಪತನಕ್ಕೆ ಕಾರಣಾಗಿದೆ ಜೂನ್ 16 ರಂದು ಸ್ಪೇಸ್ ಎಕ್ಸ್ ಸಂಸ್ಥೆ ಕೋಡಿಂಗ್ ಎಜೆಂಟ್ ಕರ್ಸರ್' (Cursor) ಕಂಪನಿಯನ್ನು 60 ಬಿಲಿಯನ್ ಡಾಲರ್&zwnj;ಗೆ ಖರೀದಿ ಮಾಡವುದಾಗಿ ಘೋಷಿಸಿತ್ತು. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಆತಂಕ ಸೃಷ್ಟಿಸಿ, ಪತನಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಬಾಹ್ಯಾಕಾಶದಲ್ಲಿ ಎಐ ಡೇಟಾ ಸ್ಥಾಪಿಸಲು ಎಲಾನ್ ಮಸ್ಕ್ ಮಹತ್ವದ ಯೋಜನೆ ರೂಪಿಸಿದ್ದಾರೆ. ಇದಕ್ಕೆ ಪೂರಕವಾಗಿ ಕರ್ಸರ್ ಕಂಪನಿ ಖರೀದಿಗೆ ಮುಂದಾಗಿದ್ದರು. ಆದರೆ ಮಸ್ಕ್ ಮಹತ್ವದ ಯೋದನೆಗಳು ಇನ್ನು ಪ್ರಾಯೋಗಿಕವಾಗಿ ಜಾರಿಯಾಗಿಲ್ಲ. ಹೀಗಾಗಿ ಹೂಡಿಕೆದಾರರಲ್ಲಿ ಆತಂಕ ಸೃಷ್ಚಿಸಿತ್ತು. ಪರಿಣಾಮ ಷೇರು ಮೌಲ್ಯ ಕುಸಿತ ಕಂಡಿತ್ತು .ಎಐ ಮೇಲಿನ ಅತೀಯಾದ ಹೂಡಿಕೆ ಹಾಗೂ ಅವಲಂಬನೆ ಕುರಿತು ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಸ್ಪೇಸ್ ಎಕ್ಸ್ ದಾಖಲೆಯತ್ತ ಸಾಗುತ್ತಿದ್ದಂತೆ ಎಲಾನ್ ಮಸ್ಕ್ ತೆಗೆದುಕೊಂಡ ಖರೀದಿ ನಿರ್ಧಾರದಿಂದ ಷೇರು ಮೌಲ್ಯ ಕುಸಿತ ಕಂಡಿತ್ತು. ಪರಿಣಾಮ ಶೇಕಡಾ 30ರಷ್ಟು ಕುಸಿತ ಕಂಡಿತ್ತು. ಇದೀಗ ಸ್ಪೇಸ್ ಎಕ್ಸ್ ಷೇರು ಮೌಲ್ಯ 152 ರಿಂದ 154 ಡಾಲರ್ ಮಟ್ಟಕ್ಕೆ ಕುಸಿದಿದೆ. ಇದರ ಬೆನ್ನಲ್ಲೇ ಟೆಸ್ಲಾ ಷೇರುಗಳು ಶೇಕಡಾ 21ರಷ್ಟು ಕುಸಿತ ಕಂಡಿದೆ.&lt;/p&gt;&lt;img&gt;&lt;p&gt;ಎಲಾನ್ ಮಸ್ಕ್ ಬಿಲಿಯೇನರ್ ಪಟ್ಟ ಕೈತಪ್ಪಿದೆ. ಆದರೂ ಎಲಾನ್ ಮಸ್ಕ್ ವಿಶ್ವದ ಶ್ರೀಮಂತನಾಗಿ ಮುಂದುವರಿದಿದ್ದಾರೆ. ಸದ್ಯ ಮಸ್ತ್ ಆಸ್ತಿ ಮೌಲ್ಯ 957 ರಿಂದ 997 ಬಿಲಿಯನ್ ಡಾಲರ್&zwnj;ಗೆ ಕುಸಿತ ಕಂಡಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಗೂಗಲ್ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಆಸ್ತಿ ಮೌಲ್ಯ 284 ಬಿಲಿಯನ್ ಡಾಲರ್. ಮಸ್ಕ್ ಹಾಗೂ ಲ್ಯಾರಿ ಪೇಜ್ ನಡುವೆ ಅಜಗಜಾಂತರ ವ್ಯತ್ಯಸಾವಿದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/one-mistake-costs-elon-musk-dear-trillionaire-dream-takes-a-hit-fortune-suffers-su5pgfd"/>
        </item>
        <item>
            <title><![CDATA[ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯಿಂದ ಮತ್ತೆ ಶಾಕ್: ರೀಚಾರ್ಜ್ ದರ ಶೇ.12-15 ಏರಿಕೆ ಸಾಧ್ಯತೆ!]]></title>
            <link>https://kannada.asianetnews.com/business/indian-telecom-industry-mobile-recharge-tariff-rates-likely-to-rise-by-12-to-15-percent-gdp/articleshow-ygihy82</link>
            <guid isPermaLink="true">https://kannada.asianetnews.com/business/indian-telecom-industry-mobile-recharge-tariff-rates-likely-to-rise-by-12-to-15-percent-gdp/articleshow-ygihy82</guid>
            <pubDate>Tue, 07 Jul 2026 12:49:45 +0530</pubDate>
            <description><![CDATA[ಮುಂಬರುವ 3-4 ತಿಂಗಳಲ್ಲಿ ಮೊಬೈಲ್ ರೀಚಾರ್ಜ್ ದರಗಳು ಶೇ. 12-15ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸೆಂಟ್ರಮ್ ಇನ್&zwnj;ಸ್ಟಿಟ್ಯೂಷನಲ್ ರಿಸರ್ಚ್ ವರದಿ ಮಾಡಿದೆ. '3+1' ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸ್ಪರ್ಧೆ ಕಡಿಮೆಯಾಗಿದ್ದು, ಜಿಯೋ ಮತ್ತು ಏರ್&zwnj;ಟೆಲ್ ಲಾಭ ಗಳಿಸುವ ನಿರೀಕ್ಷೆಯಿದ್ದರೆ, ವೊಡಾಫೋನ್-ಐಡಿಯಾ ಹಿನ್ನಡೆ ಅನುಭವಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k9mb67thsssqdcwc2y2jp0gy,imgname-telecom-tariff-hike-1762693160785.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟುವ ಆತಂಕ ಎದುರಾಗಿದೆ. ಮುಂಬರುವ 3-4 ತಿಂಗಳಲ್ಲಿ ಮೊಬೈಲ್ ರೀಚಾರ್ಜ್ ದರಗಳು ಶೇಕಡಾ 12 ರಿಂದ 15 ರಷ್ಟು ಹೆಚ್ಚಳವಾಗಬಹುದು ಎಂದು ಪ್ರಮುಖ ಆರ್ಥಿಕ ಸಂಶೋಧನಾ ಸಂಸ್ಥೆಯಾದ 'ಸೆಂಟ್ರಮ್ ಇನ್&zwnj;ಸ್ಟಿಟ್ಯೂಷನಲ್ ರಿಸರ್ಚ್' ತನ್ನ ಇತ್ತೀಚಿನ ವರದಿಯಲ್ಲಿ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;ಏನಿದು '3+1' ಮಾರುಕಟ್ಟೆ ತಂತ್ರ?&lt;/h2&gt;&lt;p&gt;ಪ್ರಸ್ತುತ ಭಾರತೀಯ ದೂರಸಂಪರ್ಕ (ಟೆಲಿಕಾಂ) ಮಾರುಕಟ್ಟೆಯಲ್ಲಿನ ಸ್ಪರ್ಧೆಯು ಕೇವಲ ಬೆರಳೆಣಿಕೆಯ ಸಂಸ್ಥೆಗಳ ನಡುವೆ ಮಾತ್ರ ಉಳಿದುಕೊಂಡಿದೆ. ಸದ್ಯ ಜಿಯೋ, ಏರ್&zwnj;ಟೆಲ್, ವೊಡಾಫೋನ್-ಐಡಿಯಾ (Vi) ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್&zwnj;ಎನ್&zwnj;ಎಲ್ (BSNL) ಮಾತ್ರ ಮಾರುಕಟ್ಟೆಯಲ್ಲಿ ಪ್ರಬಲವಾಗಿವೆ. ಈ '3+1' ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಸ್ಪರ್ಧೆ ಕಡಿಮೆಯಾಗಿದ್ದು, ಕಂಪನಿಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ದರ ಏರಿಕೆಯ ಅಸ್ತ್ರ ಬಳಸಲು ಮುಂದಾಗಿವೆ. ಮಾರುಕಟ್ಟೆ ಬಲವರ್ಧನೆಯ ನಂತರ ಕಂಪನಿಗಳಿಗೆ ದರ ಹೆಚ್ಚಿಸಲು ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಸೆಂಟ್ರಮ್ ಸಂಸ್ಥೆ ತನ್ನ Q1FY27 (2026-27ರ ಮೊದಲ ತ್ರೈಮಾಸಿಕ) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.&lt;/p&gt;&lt;h2&gt;ಆದಾಯ ಹೆಚ್ಚಳಕ್ಕೆ ಕಾರಣಗಳೇನು?&lt;/h2&gt;&lt;p&gt;ಪ್ರಸಕ್ತ ಜೂನ್ ತ್ರೈಮಾಸಿಕದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್&zwnj;ಗಳು ಸಾಧಾರಣ ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) ಶೇ. 1 ರಿಂದ 1.5 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಪ್ರಮುಖ ಕಾರಣಗಳು, ಗ್ರಾಹಕರು ವೇಗವಾಗಿ 2G ನೆಟ್&zwnj;ವರ್ಕ್&zwnj;ನಿಂದ 4G ಮತ್ತು 5G ನೆಟ್&zwnj;ವರ್ಕ್&zwnj;ಗಳಿಗೆ ವಲಸೆ ಹೋಗುತ್ತಿರುವುದು. ಪೋಸ್ಟ್&zwnj;ಪೇಯ್ಡ್ ಚಂದಾದಾರರ ಸಂಖ್ಯೆಯಲ್ಲಿ ಕಂಡುಬಂದಿರುವ ಸರಣಿ ಬೆಳವಣಿಗೆ. ಪ್ರಸಕ್ತ ತ್ರೈಮಾಸಿಕದಲ್ಲಿ ರೀಚಾರ್ಜ್ ದಿನಗಳ ಸಂಖ್ಯೆ ಹೆಚ್ಚಿರುವುದು.&lt;/p&gt;&lt;h2&gt;ಜಿಯೋ, ಏರ್&zwnj;ಟೆಲ್&zwnj;ಗೆ ಲಾಭ; ವೊಡಾಫೋನ್-ಐಡಿಯಾಗೆ ಹಿನ್ನಡೆ&lt;/h2&gt;&lt;p&gt;ಮಾರುಕಟ್ಟೆಯಲ್ಲಿನ ಈ ಪೈಪೋಟಿಯು ಭಾರ್ತಿ ಏರ್&zwnj;ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪನಿಗಳಿಗೆ ಭಾರಿ ಅನುಕೂಲಕರವಾಗಿ ಪರಿಣಮಿಸಲಿದೆ. ಆದರೆ, ಆರ್ಥಿಕ ಮುಗ್ಗಟ್ಟಿನಲ್ಲಿರುವ ವೊಡಾಫೋನ್ ಐಡಿಯಾ (Vi) ಮಾತ್ರ ತೀವ್ರ ಒತ್ತಡದಲ್ಲೇ ಮುಂದುವರಿಯಲಿದೆ. ವರದಿಯ ಪ್ರಕಾರ, ವೊಡಾಫೋನ್ ಐಡಿಯಾ ಕಂಪನಿಯ ಗ್ರಾಹಕರನ್ನು ಸೆಳೆಯುವ ಮೂಲಕ ಜಿಯೋ ಮತ್ತು ಏರ್&zwnj;ಟೆಲ್ ತಮ್ಮ ಮಾರುಕಟ್ಟೆ ಪಾಲನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲಿವೆ. ಈ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಸುಮಾರು 70 ಲಕ್ಷ (7 ಮಿಲಿಯನ್) ಮತ್ತು ಭಾರ್ತಿ ಏರ್&zwnj;ಟೆಲ್ 50 ಲಕ್ಷ (5 ಮಿಲಿಯನ್) ಹೊಸ ಚಂದಾದಾರರನ್ನು ಸೇರ್ಪಡೆಗೊಳಿಸಿಕೊಳ್ಳುವ ಅಂದಾಜಿದೆ. ಇದಕ್ಕೆ ವಿರುದ್ಧವಾಗಿ ವೊಡಾಫೋನ್ ಐಡಿಯಾ ಕೇವಲ 2 ಲಕ್ಷ (0.2 ಮಿಲಿಯನ್) ಗ್ರಾಹಕರನ್ನು ಮಾತ್ರ ಗಳಿಸಬಹುದು ಎನ್ನಲಾಗಿದೆ.&lt;/p&gt;&lt;h2&gt;ಹೆಚ್ಚುತ್ತಿದೆ 5G ಕ್ರೇಜ್ ಮತ್ತು ಡೇಟಾ ಬಳಕೆ&lt;/h2&gt;&lt;p&gt;ದೇಶಾದ್ಯಂತ 4G ಮತ್ತು 5G ನೆಟ್&zwnj;ವರ್ಕ್&zwnj;ಗಳ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವುದರಿಂದ ಮೊಬೈಲ್ ಡೇಟಾ ಬಳಕೆ ಅತ್ಯಂತ ಗರಿಷ್ಠ ಮಟ್ಟದಲ್ಲಿ ಮುಂದುವರಿಯಲಿದೆ. ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್&zwnj;ಟೆಲ್ ಸಂಸ್ಥೆಗಳು ಈಗಾಗಲೇ ದೇಶದ ಶೇ. 90 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಮ್ಮ 5G ಸೇವೆಗಳನ್ನು ಯಶಸ್ವಿಯಾಗಿ ತಲುಪಿಸಿವೆ. ಈಗ ಅವುಗಳ ಗಮನವೇನಿದ್ದರೂ ನೆಟ್&zwnj;ವರ್ಕ್&zwnj;ಗೆ ಹೆಚ್ಚಿನ ಸಂಖ್ಯೆಯ 5G ಸಾಧನಗಳನ್ನು (Devices) ಜೋಡಿಸುವುದಾಗಿದೆ.&lt;/p&gt;&lt;p&gt;ಇದರ ಜೊತೆಗೆ, ಭಾರತದಲ್ಲಿ ಸದ್ಯಕ್ಕೆ ಅತ್ಯಂತ ಕಡಿಮೆ ಮಾರುಕಟ್ಟೆ ಪ್ರಾತಿನಿಧ್ಯ ಹೊಂದಿರುವ 5G ಫಿಕ್ಸೆಡ್ ವೈರ್&zwnj;ಲೆಸ್ ಆಕ್ಸೆಸ್ (FWA) ಮತ್ತು ಸ್ಥಿರ ಬ್ರಾಡ್&zwnj;ಬ್ಯಾಂಡ್ (Fixed Broadband) ಸೇವೆಗಳಲ್ಲೂ ಜಿಯೋ ಹಾಗೂ ಏರ್&zwnj;ಟೆಲ್ ಕಂಪನಿಗಳು ಭಾರಿ ವೇಗವನ್ನು ಕಂಡುಕೊಳ್ಳುತ್ತಿವೆ ಎಂದು ಸೆಂಟ್ರಮ್ ವರದಿ ವಿಶ್ಲೇಷಿಸಿದೆ. ಆದಾಗ್ಯೂ, ಮುಂಬರುವ ದಿನಗಳಲ್ಲಿ ಮೊಬೈಲ್ ಬಿಲ್ ಮತ್ತಷ್ಟು ದುಬಾರಿಯಾಗುವುದು ಮಾತ್ರ ಗ್ಯಾರಂಟಿ ಎನ್ನಲಾಗುತ್ತಿದೆ.&lt;/p&gt;]]></content:encoded>
            <category>business</category>
            <dc:creator>Gowthami K</dc:creator>
            <atom:link href="https://kannada.asianetnews.com/business/indian-telecom-industry-mobile-recharge-tariff-rates-likely-to-rise-by-12-to-15-percent-gdp/articleshow-ygihy82"/>
        </item>
        <item>
            <title><![CDATA[ಟಾಟಾ ಗ್ರೂಪ್ ನಿರ್ಧಾರದಿಂದ ಖುಲಾಯಿಸಿದ ಅದೃಷ್ಠ, ಸಾರ್ವಕಾಲಿಕ ದಾಖಲೆ ಬರದ ಷೇರು ಮೌಲ್ಯ]]></title>
            <link>https://kannada.asianetnews.com/gallery/business/tata-group-major-move-drives-share-price-to-an-all-time-high-ykwu4yd</link>
            <guid isPermaLink="true">https://kannada.asianetnews.com/gallery/business/tata-group-major-move-drives-share-price-to-an-all-time-high-ykwu4yd</guid>
            <pubDate>Tue, 07 Jul 2026 14:44:21 +0530</pubDate>
            <description><![CDATA[&lt;p&gt;ಟಾಟಾ ಗ್ರೂಪ್ ಷೇರುಗಳು ಸಾರ್ವಕಾಲಿಕ ದಾಖಲೆ ಬರೆದಿದೆ. ಕಂಪನಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಿದೆ. ಪರಿಮಾಮ ಹೂಡಿಕೆದಾರರ ಆಸಕ್ತಿ ಡಬಲ್ ಆಗಿದೆ. ಟಾಟಾ ಗ್ರೂಪ್ ಯಾವ ಕಂಪನಿಗಳ ಷೇರು ದಾಖಲೆ ಬರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k73tsbhwmttg78xrk6m30qs9,imgname-tata-group-1759991606844.jpeg" type="image/jpeg" height="390" width="690"/>
            <content:encoded><![CDATA[&lt;p&gt;ಟಾಟಾ ಗ್ರೂಪ್ ಷೇರುಗಳು ಸಾರ್ವಕಾಲಿಕ ದಾಖಲೆ ಬರೆದಿದೆ. ಕಂಪನಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ದಾಖಲಿಸಿದೆ. ಪರಿಮಾಮ ಹೂಡಿಕೆದಾರರ ಆಸಕ್ತಿ ಡಬಲ್ ಆಗಿದೆ. ಟಾಟಾ ಗ್ರೂಪ್ ಯಾವ ಕಂಪನಿಗಳ ಷೇರು ದಾಖಲೆ ಬರೆದಿದೆ.&lt;/p&gt;&lt;img&gt;&lt;p&gt;ರತನ್ ಟಾಟಾ ಮುಖ್ಯಸ್ಥರಾಗಿ ಟಾಟಾ ಗ್ರೂಪ್ ಕಂಪನಿಗಳ ವ್ಯಾಪ್ತಿ ವಿಸ್ತಾರ ಮಾಡಿದ್ದು ಮಾತ್ರವಲ್ಲ, ಆದಾಯ, ಕಾರ್ಪೋರೇಟ್ ಲೈಫ್ ಸೇರಿದಂತೆ ಹಲವು ಆಯಾಮಗಳಲ್ಲಿ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರತನ್ ಟಾಟಾ ನಿಧನರಾದ ಬಳಿಕ ಟಾಟಾ ಗ್ರೂಪ್ ಮತ್ತೆ ಪುಟೆದಿದ್ದಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿ ಉತ್ತಮ ಪ್ರಗತಿ ಸಾಧಿಸಿದೆ. ಟಾಟಾ ಗ್ರೂಪ್ ಅಡಿಯಲ್ಲಿರುವ ಕೆಲ ಕಂಪನಿಗಳ ಷೇರುಗಳು ಸಾರ್ವಕಾಲಿಕ ದಾಖಲೆ ಬರೆದಿದೆ.&lt;/p&gt;&lt;img&gt;&lt;p&gt;ಟಾಟಾ ಗ್ರೂಪ್&zwnj;ನ ಪ್ರಮುಖ ಬ್ರ್ಯಾಂಡ್ ಆಗಿರುವ ಟೈಟಾನ್ ಕಂಪನಿ ನರೀಕ್ಷೆಗೂ ಮೀರಿದ ಬೆಳವಣಿಗೆ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಟೈಟಾನ್ ಷೇರುಗಳು ಶೇಕಡಾ 4ರಷ್ಟು ಜಿಗಿತ ಕಂಡಿದೆ. ಈ ಮೂಲಕ 4,655.90 ರೂಪಾಯಿ ಮಟ್ಟ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಂಪನಿಯ ಒಟ್ಟಾರೆ ಬೆಳವಣಿಗೆಯಲ್ಲಿ ಶೇಕಡಾ 41ರಷ್ಟು ಪ್ರಗತಿ ಸಾಧಿಸಿದೆ.&lt;/p&gt;&lt;img&gt;&lt;p&gt;ಟಾಟಾ ಗ್ರೂಪ್&zwnj;ನ ಮತ್ತೊಂದು ಕಂಪನಿ ತನಿಷ್ಕ್ ಆಭರಣ ಬಾರಿ ಬೇಡಿಕೆ, ಮಾರಾಟ ದಾಖಲೆ ಮೂಲಕ ಪ್ರಗತಿ ಸಾಧಿಸಿದೆ. ಟಾಟಾ ಗ್ರೂಪ್ ಕಂಪನಿ ಅಂಗ ಸಂಸ್ಥೆಗಳಾಗಿರುವ ತನಿಷ್ಕ್ (Tanishq), ಮಿಯಾ (Mia) ಮತ್ತು ಜೊಯಾ (Zoya) ಜಂಟಿಯಾಗಿ ಶೇ. 39 ರಷ್ಟು ಪ್ರಗತಿ ದಾಖಲಿಸಿವೆ. ಕ್ಯಾರಟ್&zwnj;ಲೇನ್ (CaratLane) ಬ್ರ್ಯಾಂಡ್ ಕೂಡ ಭರ್ಜರಿ ಶೇ. 42ರಷ್ಟು ಮಾರಾಟದ ಬೆಳವಣಿಗೆ ದಾಖಲಾಗಿದೆ.&lt;/p&gt;&lt;img&gt;&lt;p&gt;ಟೈಟಾನ್ ಐಕೇರ್ (EyeCare) ಕಣ್ಣಿನ ಕನ್ನಡಕಗಳ ವಿಭಾಗದಲ್ಲೂ ಕಂಪನಿಯು ಶೇ. 23ರಷ್ಟು ಭರ್ಜರಿ ಚೇತರಿಕೆ ದಾಖಲಿಸಿದೆ. ಟೈಟಾನ್ ಜಾಗತಿಕ ಮಾರುಕಟ್ಟೆಯ ವ್ಯವಹಾರವು ವಿದೇಶಗಳಲ್ಲಿ ಹೊಸ ಮಳಿಗೆಗಳನ್ನು ತೆರೆಯುವ ಮೂಲಕ ಬರೋಬ್ಬರಿ ಶೇಕಡಾ 128 ರಷ್ಟು ಬೃಹತ್ ಜಿಗಿತ ಕಂಡಿದೆ. ಕಂಪನಿಯು ತನ್ನ ರೀಟೇಲ್ ಜಾಲವನ್ನು ಮತ್ತಷ್ಟು ಬಲಪಡಿಸಲು ಪ್ರಸಕ್ತ ತ್ರೈಮಾಸಿಕದಲ್ಲೇ ಹೊಸದಾಗಿ 77 ಅತ್ಯಾಧುನಿಕ ಮಳಿಗೆಗಳನ್ನು ಸೇರ್ಪಡೆಗೊಳಸಿದೆ.&lt;/p&gt;&lt;img&gt;&lt;p&gt;ಮಾರುಕಟ್ಟೆ ಸವಾಲುಗಳ ನಡುವೆ ಟಾಟಾ ಗ್ರೂಪ್&zwnj;ನ ಬಹುತೇಕ ಕಂಪನಿಗಳು ಪ್ರಗತಿಯ ಹಾದಿಯಲ್ಲಿದೆ. ಈ ಪೈಕಿ ಟೈಟಾನ್ಸ್ ಟಾಟಾದ ಅತೀ ದೊಡ್ಡ ಬೆಳವಣಿಗೆ ಕಾರಣವಾಗಿದೆ. ಗ್ರಾಹಕರ ನಂಬಕೆ, ಷೇರು ಮೌಲ್ಯಗಳಿಂದ ಕಂಪನಿಯ ಲಾಭ ದುಪ್ಪಟ್ಟಾಗಿದೆ.&lt;/p&gt;&lt;img&gt;&lt;p&gt;ಟೈಟಾನ್ಸ್ ಪ್ರಗತಿ, ಟಾಟಾ ಸಮೂಹಗಳ ಬೆಳವಣಿಗೆಯಿಂದ ಇದೀಗ ಷೇರು ಮಾರುಕಟ್ಟೆ ಭವಿಷ್ಯ ನುಡಿವ ಹಲವು ಬ್ರೋಕರೇಜ್ ಕಂಪನಿಗಳು ಟೈಟಾನ್ಸ್ ಸೇರಿದಂತೆ ಟಾಟಾ ಷೇರುಗಳು ಲಾಭ ನೀಡಲಿದೆ ಎಂದುು ಭವಿಷ್ಯ ನುಡಿದಿದೆ.&lt;/p&gt;]]></content:encoded>
            <category>business</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/tata-group-major-move-drives-share-price-to-an-all-time-high-ykwu4yd"/>
        </item>
        <item>
            <title><![CDATA[Gold Price: ಸತತ ನಾಲ್ಕನೇ ದಿನವೂ ಕುಸಿದ ಚಿನ್ನ: ಬಂಗಾರ ಖರೀದಿಗೆ ಇದುವೇ ಸುವರ್ಣವಕಾಶ]]></title>
            <link>https://kannada.asianetnews.com/gallery/business/gold-falls-for-fourth-consecutive-day-today-price-details-7-july-2026-mrq-zk1s6o3</link>
            <guid isPermaLink="true">https://kannada.asianetnews.com/gallery/business/gold-falls-for-fourth-consecutive-day-today-price-details-7-july-2026-mrq-zk1s6o3</guid>
            <pubDate>Tue, 07 Jul 2026 10:22:37 +0530</pubDate>
            <description><![CDATA[ಭಾರತದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 15,000 ರೂ.ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwxedyd682w74wg3x0j89hw8,imgname-gold-1783399643558.jpg" type="image/jpeg" height="390" width="690"/>
            <content:encoded><![CDATA[ಭಾರತದಲ್ಲಿ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಮೇಲೆ 15,000 ರೂ.ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಸ್ಥಿರವಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ದರಗಳ ಮಾಹಿತಿ ಇಲ್ಲಿದೆ.&lt;img&gt;&lt;p&gt;ಭಾರತದದಲ್ಲಿ ನಾಲ್ಕನೇ ದಿನವೂ ಚಿನ್ನದ ಬೆಲೆ ಇಳಿಕೆ ಕಂಡು ಬಂದಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ 12 ಸಾವಿರ ರೂ.ಗೂ ಹೆಚ್ಚು ಕುಸಿತ ಕಂಡು ಬಂದಿರೋದು ವಿಶೇಷವಾಗಿ. ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 15,000 ರೂ.ಗಳಿಗೂ ಹೆಚ್ಚು ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;1 ಗ್ರಾಂ: 13,315 ರೂಪಾಯಿ&lt;/p&gt;&lt;p&gt;8 ಗ್ರಾಂ: 1,06,520 ರೂಪಾಯಿ&lt;/p&gt;&lt;p&gt;10 ಗ್ರಾಂ: 1,33,150 ರೂಪಾಯಿ&lt;/p&gt;&lt;p&gt;100 ಗ್ರಾಂ: 13,31,500 ರೂಪಾಯಿ&lt;/p&gt;&lt;img&gt;&lt;p&gt;1 ಗ್ರಾಂ: 14,256 ರೂಪಾಯಿ&lt;/p&gt;&lt;p&gt;8 ಗ್ರಾಂ: 1.16,208 ರೂಪಾಯಿ&lt;/p&gt;&lt;p&gt;10 ಗ್ರಾಂ: 1,45,260 ರೂಪಾಯಿ&lt;/p&gt;&lt;p&gt;100 ಗ್ರಾಂ: 14,52,600 ರೂಪಾಯಿ&lt;/p&gt;&lt;img&gt;&lt;p&gt;ಇಂದು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಚೆನ್ನೈ: 1,34,000 ರೂಪಾಯಿ, ಮುಂಬೈ: 1,33,150 ರೂಪಾಯಿ, ದೆಹಲಿ: 1,33,150 ರೂಪಾಯಿ, ಕೋಲ್ಕತ್ತಾ: 1,33,150 ರೂಪಾಯಿ, ಬೆಂಗಳೂರು: 1,33,150 ರೂಪಾಯಿ, ಹೈದರಾಬಾದ್: 1,33,150 ರೂಪಾಯಿ, ಪುಣೆ: 1,33,150 ರೂಪಾಯಿ&lt;/p&gt;&lt;img&gt;&lt;p&gt;ಚಿನ್ನದ ಬೆಲೆಯಲ್ಲಿ ಇಳಿಕೆಯಾದ್ರೆ ಬೆಳ್ಳಿ ದರಗಳು ಸ್ಥಿರವಾಗಿದ್ದು, ಬದಲಾವಣೆ ಆಗಿಲ್ಲ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿವೆ&lt;/p&gt;&lt;p&gt;10 ಗ್ರಾಂ: 2,450 ರೂಪಾಯಿ&lt;/p&gt;&lt;p&gt;100 ಗ್ರಾಂ: 24,500 ರೂಪಾಯಿ&lt;/p&gt;&lt;p&gt;1000 ಗ್ರಾಂ: 2,45,000 ರೂಪಾಯಿ&lt;/p&gt;]]></content:encoded>
            <category>business</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/gold-falls-for-fourth-consecutive-day-today-price-details-7-july-2026-mrq-zk1s6o3"/>
        </item>
    </channel>
</rss>
