<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 26 Apr 2026 11:27:31 +0530</lastBuildDate>
        <atom:link href="https://kannada.asianetnews.com/rss/bidar" rel="self" type="application/rss+xml"/>
        <item>
            <title><![CDATA[ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹತ್ತಿದ ಪೊಲೀಸ್ ಪೇದೆ ಕಾರ್; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!]]></title>
            <link>https://kannada.asianetnews.com/karnataka-districts/bidar-police-constable-s-car-runs-over-woman-in-bhalki-shocking-cctv-footage-emerges-sat/articleshow-0ge4gqr</link>
            <guid isPermaLink="true">https://kannada.asianetnews.com/karnataka-districts/bidar-police-constable-s-car-runs-over-woman-in-bhalki-shocking-cctv-footage-emerges-sat/articleshow-0ge4gqr</guid>
            <pubDate>Fri, 03 Apr 2026 21:04:09 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ, ರಸ್ತೆ ಗುಡಿಸುತ್ತಿದ್ದ ಜ್ಞಾನಾಬಾಯಿ ಎಂಬ ಮಹಿಳೆಯ ಮೇಲೆ ಪೊಲೀಸ್ ಪೇದೆಯೊಬ್ಬರ ಕಾರು ವೇಗವಾಗಿ ಹರಿದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn9zm3n7b5zqr6ma20gkrr05,imgname-bidar-police-constable-car-accident-1775230389927.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: ಜಿ&lt;/strong&gt;ಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಪೊಲೀಸ್ ಪೇದೆಯೊಬ್ಬರ ಕಾರು ವೇಗವಾಗಿ ಹರಿದಿದ್ದು, ಅಪಘಾತದ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.&lt;/p&gt;&lt;h3&gt;ಘಟನೆಯ ವಿವರ:&lt;/h3&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಚಿನ್ನದ ಅಂಗಡಿಯೊಂದರ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ. ಎಂದಿನಂತೆ ಜ್ಞಾನಾಬಾಯಿ (55) ಎಂಬ ಮಹಿಳೆ ರಸ್ತೆ ಬದಿಯಲ್ಲಿ ಕಸ ಗುಡಿಸುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಮಾರುತಿ ಸುಜುಕಿ ಸ್ವಿಫ್ಟ್ ಕಾರೊಂದು ನೇರವಾಗಿ ಮಹಿಳೆಯ ಮೇಲೆ ಹರಿದಿದೆ. ಕಾರು ಹರಿದ ರಭಸಕ್ಕೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸದ್ಯ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಪೊಲೀಸ್ ಪೇದೆಯ ಕಾರು:&lt;/strong&gt;&lt;/h3&gt;&lt;p&gt;ಈ ಭೀಕರ ಅಪಘಾತಕ್ಕೆ ಕಾರಣವಾದ ಕಾರು ಮೆಹಕರ್ ಪೊಲೀಸ್ ಠಾಣೆಯ ಪೇದೆ ಉಮಾಕಾಂತ್ ಅವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಪೇದೆ ಉಮಾಕಾಂತ್ ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರೇ ಅಥವಾ ಬೇರೆಯವರು ಇದ್ದರೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಅಪಘಾತದ ದೃಶ್ಯಗಳು ಲಭ್ಯವಿದ್ದು, ಕಾರು ಎಷ್ಟು ವೇಗವಾಗಿ ಬಂದು ಮಹಿಳೆಗೆ ಡಿಕ್ಕಿ ಹೊಡೆದಿದೆ ಎಂಬುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಸ್ಥಿತಿ ಗಂಭೀರ:&lt;/strong&gt;&lt;/h2&gt;&lt;p&gt;ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಜ್ಞಾನಾಬಾಯಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ತಲೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರವಾದ ಪೆಟ್ಟು ಬಿದ್ದಿರುವುದರಿಂದ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಲಾಗಿದೆ. ಸದ್ಯ ಅವರಿಗೆ ಬೀದರ್&zwnj;ನ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ತನಿಖೆ ಆರಂಭ:&lt;/strong&gt;&lt;/h3&gt;&lt;p&gt;ಘಟನೆ ನಡೆದ ಸ್ಥಳಕ್ಕೆ ಭಾಲ್ಕಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರ್ತವ್ಯದಲ್ಲಿರಬೇಕಾದ ಅಥವಾ ಕಾನೂನು ಪಾಲಿಸಬೇಕಾದ ಪೊಲೀಸ್ ಪೇದೆಯ ಕಾರೇ ಈ ರೀತಿ ಅನಾಹುತ ಸೃಷ್ಟಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.&lt;/p&gt;&lt;p&gt;In a tragic incident in Bhalki town of Bidar district, a woman was critically injured after being run over by a car driven by a police constable.The victim, Gyanabai (45), a resident of Bhalaki, was sweeping the road when the accident occurred.According to reports, the car,&hellip; pic.twitter.com/NHOiO54Mz0&lt;/p&gt;&lt;p&gt;&mdash; Hate Detector  (@HateDetectors) April 3, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-police-constable-s-car-runs-over-woman-in-bhalki-shocking-cctv-footage-emerges-sat/articleshow-0ge4gqr"/>
        </item>
        <item>
            <title><![CDATA[ಬೀದರ್ ಎಸ್‌ಪಿ  ಕಿರುಕುಳ ಆರೋಪ, ಪೇಸ್‌ಬುಕ್ ಲೈವ್‌ನಲ್ಲೇ  ಆತ್ಮ*ಹತ್ಯೆಗೆ ಯತ್ನಿಸಿದ ಯೂಟ್ಯೂಬರ್!]]></title>
            <link>https://kannada.asianetnews.com/karnataka-districts/youtuber-attempts-suicide-alleging-harassment-by-bidar-sp-pradeep-gunti-incident-sparks-outrage-gdp/articleshow-101l8r0</link>
            <guid isPermaLink="true">https://kannada.asianetnews.com/karnataka-districts/youtuber-attempts-suicide-alleging-harassment-by-bidar-sp-pradeep-gunti-incident-sparks-outrage-gdp/articleshow-101l8r0</guid>
            <pubDate>Fri, 03 Apr 2026 09:15:29 +0530</pubDate>
            <description><![CDATA[ಬೀದರ್ ಜಿಲ್ಲೆಯ ಯೂಟ್ಯೂಬರ್ ಸಲ್ಮಾನ್ ಖಾನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಕೆಲ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಫೇಸ್&zwnj;ಬುಕ್ ಲೈವ್&zwnj;ನಲ್ಲಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಾಂತಿ ಸಭೆಯ ಹೆಸರಿನಲ್ಲಿ ಕರೆಸಿ ಅವಮಾನಿಸಿ, ಎನ್&zwnj;ಕೌಂಟರ್ ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn8pst2wykmnk11pzs4g1954,imgname-bidar-youtuber-suicide-attempt-1775187585116.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ ಜಿಲ್ಲೆಯಲ್ಲಿ ಯೂಟ್ಯೂಬರ್ ಆತ್ಮ*ಹತ್ಯೆ ಯತ್ನ ಪ್ರಕರಣವು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಯೂಟ್ಯೂಬರ್ ಸಲ್ಮಾನ್ ಖಾನ್ ಎಂಬ ಯುವಕ, ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್&zwnj;ಪಿ) ಪ್ರದೀಪ್ ಗುಂಟಿ ಸೇರಿದಂತೆ ಕೆಲ ಪೊಲೀಸ್ ಸಿಬ್ಬಂದಿಯಿಂದ ನಿರಂತರ ಕಿರುಕುಳಕ್ಕೆ ಒಳಗಾಗಿದ್ದೇನೆಂದು ಆರೋಪಿಸಿ, ಪೇಸ್&zwnj;ಬುಕ್ ಲೈವ್&zwnj;ನಲ್ಲೇ ಮಾತ್ರೆಗಳು ನುಂಗಿ ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಶಾಂತಿ ಸಭೆ ಇದೆ ಎಂದು ಕರೆಸಿ ಅವಮಾನ&lt;/h2&gt;&lt;p&gt;ಸಲ್ಮಾನ್ ಖಾನ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಮಾಜದ ವಿವಿಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ಆದರೆ, ಈ ವಿಡಿಯೋಗಳ ವಿಷಯವಸ್ತು ಸಮಾಜದಲ್ಲಿ ಶಾಂತಿ ಕೆದಕುವಂತಿದೆ ಎಂದು ಹೇಳಿ, ಶಾಂತಿ ಸಭೆ ಇದೆ ಎಂದು ಕಛೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಮುಂದುವರೆಸದಂತೆ ತಾಕೀತು ಮಾಡಲಾಗಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ಅಲ್ಲದೇ, ಎನ್&zwnj;ಕೌಂಟರ್ ಮಾಡುತ್ತೇನೆ ಮತ್ತು ಮರ್ಡರ್ ಮಾಡುತ್ತೇನೆ ಎಂಬ ಬೆದರಿಕೆಗಳನ್ನು ಹಾಕಲಾಗಿದೆ ಎಂದು ಕಣ್ಣೀರಿಟ್ಟು ಪೇಸ್&zwnj;ಬುಕ್ ಲೈವ್&zwnj;ನಲ್ಲಿ ಹೇಳಿಕೊಂಡಿದ್ದಾರೆ.&lt;/p&gt;&lt;h2&gt;ಈ ವಿಡಿಯೋ ಮೋದಿಗೆ ತಲುಪಬೇಕು&lt;/h2&gt;&lt;p&gt;ತಮ್ಮ ಲೈವ್ ವಿಡಿಯೋದಲ್ಲಿ ಸಲ್ಮಾನ್, &ldquo;ಈ ವಿಡಿಯೋ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಲುಪಬೇಕು&rdquo; ಎಂದು ಹೇಳಿದ್ದು, ಪೊಲೀಸ್ ಇಲಾಖೆಯ ಕಿರುಕುಳದಿಂದಲೇ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಎಲ್ಲಾ ವಿಚಾರವನ್ನು ಹೇಳಿ ಪೇಸ್&zwnj;ಬುಕ್ ಲೈವ್&zwnj;ನಲ್ಲೇ ಮಾತ್ರೆಗಳು ನುಂಗಿ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನು ಬೀದರ್&zwnj;ನ ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಈ ಘಟನೆಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ವರ್ತನೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ಇನ್ನೊಂದೆಡೆ, ಸಲ್ಮಾನ್ ಮಾಡಿದ ಆರೋಪಗಳ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/youtuber-attempts-suicide-alleging-harassment-by-bidar-sp-pradeep-gunti-incident-sparks-outrage-gdp/articleshow-101l8r0"/>
        </item>
        <item>
            <title><![CDATA[ಆನ್‌ಲೈನ್ ಗೇಮ್ ಚಟಕ್ಕೆ MBBS ವಿದ್ಯಾರ್ಥಿ ಬಲಿ: ₹80 ಸಾವಿರ ಹಣ ಕಳೆದುಕೊಂಡು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣು!]]></title>
            <link>https://kannada.asianetnews.com/karnataka-districts/bidar-brims-college-mbbs-student-anishkar-died-for-online-gaming-money-loss-sat/articleshow-29y8zo4</link>
            <guid isPermaLink="true">https://kannada.asianetnews.com/karnataka-districts/bidar-brims-college-mbbs-student-anishkar-died-for-online-gaming-money-loss-sat/articleshow-29y8zo4</guid>
            <pubDate>Tue, 24 Mar 2026 13:13:36 +0530</pubDate>
            <description><![CDATA[&lt;p&gt;ಬೀದರ್&zwnj;ನ ಬ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಅನಿಷ್ಕಾರ್ ಚವ್ಹಾಣ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆನ್&zwnj;ಲೈನ್ ಗೇಮ್&zwnj;ನಲ್ಲಿ ಸುಮಾರು 80 ಸಾವಿರ ರೂ. ಸಾಲ ಮಾಡಿಕೊಂಡು, ಅದನ್ನು ತೀರಿಸಲಾಗದೆ ವಸತಿ ನಿಲಯದಲ್ಲಿ ನೇಣಿಗೆ ಶರಣಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmfcm1zsv73gcrhs7gde88rk,imgname-bidar-online-game-mbbs-student-death--1--1774338050041.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಯುವಜನರು ಆನ್&zwnj;ಲೈನ್ ಗೇಮ್&zwnj;ಗೆ ಅಡಿಕ್ಟ್ ಆಗಿ ಹಣ ಕಳೆದುಕೊಳ್ಳುವುದು ಹೆಚ್ಚಾಗಿದೆ. ಜೊತೆಗೆ, ಕೆಲವರು ಆನ್&zwnj;ಲೈನ್ ಗೇಮಿಂಗ್ ದಾಸರಾಗಿ ಪ್ರಾಣವನ್ನೂ ಕಳೆದುಕೊಂಡ ಉದಾಹರಣೆಗಳಿವೆ. ಇದೀಗ ಬೀದರ್&zwnj;ನಲ್ಲಿ ಆನ್&zwnj;ಲೈನ್ ಗೇಮ್&zwnj;ಗೆ ಎಂಬಿಬಿಎಸ್ (MBBS) ವಿದ್ಯಾರ್ಥಿ ಬಲಿಯಾಗಿದ್ದಾರೆ. ಅದೂ ಕೂಡ ತನ್ನ ಹಣಕಾಸಿನ ವ್ಯವಹಾರವನ್ನೂ ಮೀರಿದಂತೆ ಸಾಲ ಮಾಡಿಕೊಂಡು ಇದೀಗ ಜೀವ ಬಿಟ್ಟಿದ್ದಾನೆ.&lt;/p&gt;&lt;h3&gt;&lt;strong&gt;ಹಣ ತೀರಿಸಲಾಗದೇ ಪರದಾಟ&lt;/strong&gt;&lt;/h3&gt;&lt;p&gt;ಅನಿಷ್ಕಾರ್ ಚವ್ಹಾಣ್(21) ಆನ್&zwnj;ಲೈನ್ ಗೇಮ್&zwnj;ನಿಂದ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಆತ್ಮ*ಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾರೆ. ಈ ಘಟನೆ ಬೀದರ್&zwnj;&zwnj;ನ ಬ್ರಿಮ್ಸ್ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ. ಯುವಕ ಅನಿಷ್ಕಾರ್ MBBS ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆನ್&zwnj;ಲೈನ್ ಗೇಮ್&zwnj;ನಲ್ಲಿ ಸುಮಾರು 80 ಸಾವಿರ ರೂ. ಕಳೆದುಕೊಂಡು, ಅದನ್ನು ತೀರಿಸಲಾಗದೇ ತುಂಬಾ ಪರದಾಡುತ್ತಿದ್ದನು. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಕಾಲೇಜಿನ ವಸತಿ ನಿಲಯದ ಕೊಠಡಿಯಲ್ಲಿ ಪ್ಯಾನ್&zwnj;ಗೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.&lt;/p&gt;&lt;h2&gt;&lt;strong&gt;ಅಂತಿಮ ವರ್ಷದಲ್ಲಿ ಸಂಭವಿಸಿದ ದುರಂತ&lt;/strong&gt;&lt;/h2&gt;&lt;p&gt;ಇನ್ನು ಮೃತ ಅನಿಷ್ಕಾರ್ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾದ ನಿವಾಸಿ ಆಗಿದ್ದನು. ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಬ್ರಿಮ್ಸ್ ಮೆಡಿಕಲ್ ಕಾಲೇಜಿಗೆ ಸೇರಿಕೊಂಡಿದ್ದು, ಇನ್ನೇ ಅಂತಿಮ ವರ್ಷವನ್ನು ಪೂರ್ಣಗೊಳಿಸಬೇಕು ಎನ್ನುವಷ್ಟರಲ್ಲಿ ಆನ್&zwnj;ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಎಸ್&zwnj;ಪಿ ಪ್ರದೀಪ್ ಗಂಟಿ ಮಾಹಿತಿ&lt;/strong&gt;&lt;/h3&gt;&lt;p&gt;ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಪ್ರದೀಪ್ ಗುಂಟಿ ಅವರು, ಆನ್&zwnj;ಲೈನ್ ಗೇಮಿನಲ್ಲಿ ಹಣ ಕಳೆದುಕೊಂಡಿದಕ್ಕೆ ವಿದ್ಯಾರ್ಥಿ ಅನಿಷ್ಕಾರ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಇನ್ನು ವಿದ್ಯಾರ್ಥಿ ಅನಿಷ್ಕಾರ್ ವಾಟ್ಸಾಪ್&zwnj;ನಲ್ಲಿ ಗೇಮ್ ಆಡಿದ ಬಗ್ಗೆ ಚಾಟ್&zwnj;ಗಳು ಸಿಕ್ಕಿವೆ. ಹೀಗಾಗಿ ಮನನೊಂದು ಇಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಬ್ರಿಮ್ಸ್ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ಸಾವಿಗೆ ಶರಣಾಗಿದ್ದಾನೆ. ಈಗಾಗಲೇ ನಮ್ಮ ಪೊಲೀಸರ ಟೀಂ ತನಿಖೆ ಮಾಡಿದೆ. ಈ ಬಗ್ಗೆ ಪೋಷಕರು ದೂರು ಸಲ್ಲಿಸಲಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.&lt;/p&gt;&lt;h3&gt;&lt;strong&gt;ಯುವಜನತೆಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಆನ್&zwnj;ಲೈನ್ ಜೂಜು ಮತ್ತು ಗೇಮ್&zwnj;ಗಳು ಯುವಜನತೆಯನ್ನು ದಾರಿತಪ್ಪಿಸುತ್ತಿವೆ. ಕೇವಲ ಹಣ ಗಳಿಕೆಯ ಆಸೆಯಿಂದ ಇಂತಹ ಮಾಯಾಜಾಲಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಪೊಲೀಸರು ಮತ್ತು ಮನಃಶಾಸ್ತ್ರಜ್ಞರು ಮನವಿ ಮಾಡುತ್ತಿದ್ದಾರೆ. ಅನಿಷ್ಕಾರ್ ಸಾವು ಇಡೀ ವೈದ್ಯಕೀಯ ವಲಯಕ್ಕೆ ಮತ್ತು ಅವನ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-brims-college-mbbs-student-anishkar-died-for-online-gaming-money-loss-sat/articleshow-29y8zo4"/>
        </item>
        <item>
            <title><![CDATA[ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ]]></title>
            <link>https://kannada.asianetnews.com/politics/doesnt-differentiate-between-terrorists-and-terror-to-terrorists-vp-radhakrishnan-slams-kharge-suc/articleshow-3hzlyc8</link>
            <guid isPermaLink="true">https://kannada.asianetnews.com/politics/doesnt-differentiate-between-terrorists-and-terror-to-terrorists-vp-radhakrishnan-slams-kharge-suc/articleshow-3hzlyc8</guid>
            <pubDate>Wed, 22 Apr 2026 17:17:52 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ, ಖರ್ಗೆಯವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತೀಕ್ಷ್ಣ ತಿರುಗೇಟು ನೀಡಿದ್ದು, ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kptg5hjvvbwpp808ykzn86ag,imgname-cr-radhakrishnan-and-kharge-1776858351195.jpg" type="image/jpeg" height="390" width="690"/>
            <content:encoded><![CDATA[&lt;p&gt;ಚುನಾವಣೆಯ ಕಾವು ಏರುತ್ತಿದ್ದಂತೆಯೇ ಆರೋಪ, ಪ್ರತ್ಯಾರೋಪಗಳು ಸರ್ವೇ ಸಾಮಾನ್ಯ. ಆದರೆ ಇದರ ನಡುವೆ ಕೆಲವು ರಾಜಕೀಯ ಮುಖಂಡರು, ಯಾರನ್ನೋ ಓಲೈಸುವುದಕ್ಕಾಗಿ ಅಥವಾ ತಮಗೆ ಆಗದವರನ್ನು ಹೀಯಾಳಿಸುವ ಭರದಲ್ಲಿ ನಾಲಿಗೆ ಹರಿಬಿಡುವುದು ಮಾಮೂಲು. ತಮ್ಮ ಸ್ಥಾನ ಏನು, ತಮ್ಮ ಅಧಿಕಾರ ಏನು ಎನ್ನುವುದನ್ನೂ ಮರೆತು ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುವುದು ನಡೆದೇ ಇರುತ್ತದೆ. ಈ ಮೂಲಕ ತಮ್ಮತನವನ್ನು ತೋರಿಸಿಕೊಳ್ಳುತ್ತಾರೆ ಎಂಬ ಭಾರಿ ಆರೋಪ ಅವರ ಮೇಲೆ ಕೇಳಿಬರುತ್ತಿದ್ದರೂ ಮಾತಿನ ಮೇಲೆ ನಿಗಾ ಇಡದೇ ಅಸಭ್ಯವಾಗಿ ಮಾತನಾಡುವುದು ನಡೆದಿರುತ್ತದೆ.&lt;/p&gt;&lt;h2&gt;&lt;strong&gt;ಮೋದಿಯನ್ನು ಟೆರರಿಸ್ಟ್​ ಎಂದ ಖರ್ಗೆ&lt;/strong&gt;&lt;/h2&gt;&lt;p&gt;ಮೊನ್ನೆಯಷ್ಟೇ, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನೀಡಿದ ಹೇಳಿಕೆಯೊಂದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರನ್ನು 'ಭಯೋತ್ಪಾದಕ' ಎಂದು ಕರೆದಿದ್ದಾರೆ. ಈ ಹಿಂದೆ ಆರ್​ಎಸ್​​ಎಸ್​​ ಮತ್ತು ಬಿಜೆಪಿ ವಿಷಸರ್ಪ, ಅವರನ್ನು ಸಾಯಿಸಿ ಎಂಬ ಅರ್ಥದಲ್ಲಿ ಮುಸ್ಲಿಂ ಸಮುದಾಯಕ್ಕೆ ಕರೆ ಕೊಟ್ಟಿದ್ದ ಖರ್ಗೆ ಈಗ ಈ ಹೇಳಿಕೆ ನೀಡಿದರು. ಐಎಡಿಎಂಕೆ ಹೇಗೆ ಮೋದಿಯವರ ಜೊತೆ ಕೈಜೋಡಿಸಲು ಸಾಧ್ಯ? ಅವರು ಒಬ್ಬ ಟೆರರಿಸ್ಟ್​. ಅವರು ಸಮಾನತೆಯಲ್ಲಿ ನಂಬಿಕೆ ಇಟ್ಟಿಲ್ಲ. ಅವರ ಪಕ್ಷಕ್ಕೆ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಇಂತಹವರ ಜೊತೆ ಕೈಜೋಡಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದು ಎಂದೇ ಅರ್ಥ ಎಂದು ಹೇಳುವುದನ್ನೆಲ್ಲಾ ಹೇಳಿ, ಬಳಿಕ &quot;ನಾನು ಭಯೋತ್ಪಾದಕ ಎಂದರೆ ಅವರು ಎಲ್ಲರನ್ನೂ ಬೆದರಿಸುತ್ತಾರೆ (Terrorises) ಎಂಬ ಅರ್ಥದಲ್ಲಿ ಹೇಳಿದ್ದೇನೆ&quot; ಎಂದು ಸ್ಪಷ್ಟನೆ ಬೇರೆ ನೀಡಿದರು.&lt;/p&gt;&lt;h3&gt;&lt;strong&gt;ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ&lt;/strong&gt;&lt;/h3&gt;&lt;p&gt;ಆದರೆ, ಅವರ ಈ ಮಾತು ಬಿಜೆಪಿಯನ್ನು ಕೆರಳಿಸಿದೆ. ಕೆಪಿಸಿಸಿ ಅಧ್ಯಕ್ಷನ ಸ್ಥಾನದಲ್ಲಿ ಇರುವಂಥವರು ಇಂಥ ಮಾತುಗಳನ್ನಾಡುವ ಬಗ್ಗೆ ಎಲ್ಲೆಡೆ ಭಾರಿ ಟೀಕೆಗಳೂ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಇದೀಗ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್​ ಅವರು ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಖರ್ಗೆ ಅವರು ಕೆಲವು ಬಾರಿ ಕಪ್ಪು ಮತ್ತು ಬಿಳುಪಿನ ಅಂದರೆ &quot;ಟೆರರಿಸ್ಟ್​ ಮತ್ತು ಟೆರರಿಸ್ಟ್​ಗಳಿಗೇ ಟೆರರ್​ ಆಗಿರುವವರ ನಡುವೆ ವ್ಯತ್ಯಾಸವನ್ನು ಗುರುತಿಸಲು ವಿಫಲರಾಗುತ್ತಾರೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ. ಬೀದರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಖರ್ಗೆ ಅವರೂ ಉಪಸ್ಥಿತರಿದ್ದು, ಅವರ ಎದುರೇ ಉಪರಾಷ್ಟ್ರಪತಿ ಈ ಮಾತು ಹೇಳಿದರು.&lt;/p&gt;&lt;p&gt;ಇದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಕ್ರಮಕ್ಕೆ ಕೋರಿ ಬಿಜೆಪಿ ನಾಯಕರು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bidar</category>
            <dc:creator>Suchethana D</dc:creator>
            <atom:link href="https://kannada.asianetnews.com/politics/doesnt-differentiate-between-terrorists-and-terror-to-terrorists-vp-radhakrishnan-slams-kharge-suc/articleshow-3hzlyc8"/>
        </item>
        <item>
            <title><![CDATA[100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದ ಬೀದರ್‌ ಶಿಕ್ಷಣ ಸಂಸ್ಥೆ]]></title>
            <link>https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56</link>
            <guid isPermaLink="true">https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56</guid>
            <pubDate>Sun, 26 Apr 2026 10:01:58 +0530</pubDate>
            <description><![CDATA[&lt;p&gt;ಬೀದರ್ ಶಿಕ್ಷಣ ಸಂಸ್ಥೆಯು ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ 95%ಕ್ಕೂ ಹೆಚ್ಚು ಅಂಕ ಗಳಿಸಿದ 100 ವಿದ್ಯಾರ್ಥಿಗಳಿಗೆ ಉಚಿತ ಪಿಯು ಶಿಕ್ಷಣವನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಫೌಂಡೇಷನ್&zwnj; ಕೋರ್ಸ್&zwnj;ಗಳನ್ನು ಸಹ ನಡೆಸಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ka2kmz9ezq63cnffyr5h4qqs,imgname-7518c2f3-9195-4ab3-95cb-0b026dfcb5a3--1--1763171794222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಪ್ರಸಕ್ತ ಸಾಲಿನ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಯಲ್ಲಿ ಶೇಕಡ 95ಕ್ಕೂ ಅಧಿಕ ಅಂಕ ಗಳಿಸಿದ ರಾಜ್ಯದ 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎರಡು ವರ್ಷದ ಪಿಯು ಶಿಕ್ಷಣವನ್ನು ಉಚಿತವಾಗಿ ನೀಡುವುದಾಗಿ ಇಲ್ಲಿಯ ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಪ್ರಕಟಿಸಿದೆ.&lt;/p&gt;&lt;p&gt;100 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬೀದರ್&zwnj; ಸೇರಿದಂತೆ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಉಚಿತ ಸ್ಥಾನಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಓದಿದ, ತಂದೆಯನ್ನು ಕಳೆದುಕೊಂಡ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ಕೊಡಲಾಗುವುದು ಎಂದು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್&zwnj; ಖದೀರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಉಚಿತ ಶಿಕ್ಷಣ ಯೋಜನೆಯ ಉದ್ದೇಶವಾಗಿದೆ. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಎರಡು ವರ್ಷದ ಬೋಧನಾ ಶುಲ್ಕದ ಸಂಪೂರ್ಣ ರಿಯಾಯಿತಿ ಇರಲಿದೆ. ಅರ್ಹ ವಿದ್ಯಾರ್ಥಿಗಳು ಸಮೂಹದ ಪದವಿ ಪೂರ್ವ ಕಾಲೇಜುಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಎಐಸಿಯುಗೆ ಶೇ.100 ಫಲಿತಾಂಶ&lt;/strong&gt;&lt;/h2&gt;&lt;p&gt;ಶಾಲೆ ಬಿಟ್ಟ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮರಳಿ ಮುಖ್ಯವಾಹಿನಿಗೆ ತರಲು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಆರಂಭಿಸಿದ ಶೈಕ್ಷಣಿಕ ತುರ್ತು ನಿಗಾ ಘಟಕ (ಎಐಸಿಯು) ಪರಿಣಾಮಕಾರಿ ಫಲಿತಾಂಶ ನೀಡುತ್ತಾ ಮುನ್ನಡೆದಿದೆ. ಶಾಲೆ ಬಿಟ್ಟ 90 ವಿದ್ಯಾರ್ಥಿಗಳು ಇಲ್ಲಿಯ ಶಾಹೀನ್&zwnj; ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 81 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಶಾಹೀನ್&zwnj; ತುರ್ತು ಶೈಕ್ಷಣಿಕ ನಿಗಾ ಘಟಕದಲ್ಲಿ ಓದಿದವರಾಗಿರುವುದು ವಿಶೇಷ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ವಿಶೇಷ ನಿಗಾ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ತರುವ ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಶಾಹೀನ್&zwnj; ಶೈಕ್ಷಣಿಕ ತುರ್ತು ನಿಗಾ ಘಟಕದ ಮಾದರಿಯನ್ನು ಪ್ರಶಂಸಿಸಿರುವ ಜಾಗತಿಕ ಮಟ್ಟದ ನಿಯತಕಾಲಿಕೆಯ ಭಾರತೀಯ ಆವೃತ್ತಿಯಾದ ಫೋರ್ಬ್ಸ್&zwnj; ಇಂಡಿಯಾ, ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್&zwnj; ಖದೀರ್&zwnj; ಅವರನ್ನು ''''&lsquo;ಲೀಡರ್&zwnj; ಆಫ್&zwnj; ಟುಮಾರೋ&rsquo; ಎಂದು ಗುರುತಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಸ್ಸೆಸ್ಸೆಲ್ಸಿ ಕನ್ನಡದಲ್ಲಿ ಫೇಲಾಗಿದ್ದು ಮಕ್ಕಳಷ್ಟೇ ಅಲ್ಲ; ಅಮುಲಾಗ್ರ ಬದಲಾವಣೆಗೆ ತಜ್ಞರ ಒತ್ತಡ&lt;/strong&gt;&lt;/p&gt;&lt;h3&gt;&lt;strong&gt;ಪ್ರಿ ಪ್ಲಸ್&zwnj; ಟು ಫೌಂಡೇಷನ್&zwnj; ಕೋರ್ಸ್&amp;nbsp;&lt;/strong&gt;&lt;/h3&gt;&lt;p&gt;ಎಸ್&zwnj;ಎಸ್&zwnj;ಎಲ್&zwnj;ಸಿಯಲ್ಲಿ ಉತ್ತೀರ್ಣ, ಅನುತ್ತೀರ್ಣರಾದವರಿಗೆ ವಿಷಯಗಳ ಮೇಲೆ ಹಿಡಿತವಿಲ್ಲದ, ವಿಷಯಗಳನ್ನು ಅರಿತುಕೊಳ್ಳಲಾಗದ ವಿದ್ಯಾರ್ಥಿಗಳ ನೀಟ್&zwnj; / ಜೆಇಇ ಕನಸು ಸಾಕಾರಗೊಳಿಸಲು ಶಾಹೀನ್&zwnj; ಶಿಕ್ಷಣ ಸಂಸ್ಥೆಗಳ ಸಮೂಹ ಮೂರು ವರ್ಷದ ಪ್ರಿ ಪ್ಲಸ್&zwnj; ಟು ಫೌಂಡೇಷನ್&zwnj; ಕೋರ್ಸ್ ಸಹ ಆರಂಭಿಸಿದೆ ಎಂದು ಅಬ್ದುಲ್&zwnj; ಖದೀರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಶಾಹೀನ್&zwnj; ವೆಬ್ಸೈಟ್ &lt;strong&gt;https://shaheengroup.org&lt;/strong&gt; ಹಾಗೂ ಟೋಲ್&zwnj; ಫ್ರೀ ಸಂಖ್ಯೆ&lt;strong&gt; 1800 121 6235&lt;/strong&gt; ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೊನೆಗೂ ಅಂಧ ವಿದ್ಯಾರ್ಥಿನಿಗೆ ಅಂಕದ ಬೆಳಕು ನೀಡಿದ SSLC ಬೋರ್ಡ್! ಫೇಲಾದ ಹುಡಗಿಗೆ ಈಗ 603 ಅಂಕ!&lt;/strong&gt;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidar-shaheen-group-educational-institute-announces-free-pu-education-for-100-students/articleshow-47u1i56"/>
        </item>
        <item>
            <title><![CDATA[ಬೀದರ್‌ನಲ್ಲಿ ಅಚ್ಚರಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ, ಅಮ್ಮನಿಗಿದು ಎರಡನೇ ಹೆರಿಗೆ]]></title>
            <link>https://kannada.asianetnews.com/karnataka-districts/rare-birth-in-bidar-woman-delivers-triplets-at-brims-hospital-gdp/articleshow-az9i8mq</link>
            <guid isPermaLink="true">https://kannada.asianetnews.com/karnataka-districts/rare-birth-in-bidar-woman-delivers-triplets-at-brims-hospital-gdp/articleshow-az9i8mq</guid>
            <pubDate>Fri, 24 Apr 2026 18:04:48 +0530</pubDate>
            <description><![CDATA[ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಬಸಮ್ಮ ಎಂಬ ಮಹಿಳೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಮ್ಮ ಎರಡನೇ ಹೆರಿಗೆಯಲ್ಲಿ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಸದ್ಯ ನವಜಾತ ಶಿಶುಗಳನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpzqez8ewsswy3539n93fhth,imgname-bidar-woman-delivers-triplets-1777033772302.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&lt;/strong&gt; ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ಜಿಲ್ಲೆಯ ಬ್ರಿಮ್ಸ್ (Bidar Institute of Medical Sciences) ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಒಂದೇ ಬಾರಿ ಮೂರು ಮಕ್ಕಳಿಗೆ ಜನ್ಮ ನೀಡಿರುವುದು ಗಮನಸೆಳೆದಿದೆ.&lt;/p&gt;&lt;p&gt;ಹುಮನಾಬಾದ್ ತಾಲೂಕಿನ ವಡ್ಡನಕೇರಾ ಗ್ರಾಮದ ಬಸಮ್ಮ ಎಂಬ ಮಹಿಳೆ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಈಗಾಗಲೇ ಒಂದು ಮಗುವಿಗೆ ಜನ್ಮ ನೀಡಿದ್ದ ಬಸಮ್ಮ, ತನ್ನ ಎರಡನೇ ಹೆರಿಗೆಯ ಸಂದರ್ಭದಲ್ಲಿ ಈ ಬಾರಿ ಮೂರು ಮಕ್ಕಳಿಗೆ ಜನ್ಮ ನೀಡಿರುವುದು ವಿಶೇಷವಾಗಿದೆ.&lt;/p&gt;&lt;h2&gt;ಯಶಸ್ವಿ ಹೆರಿಗೆ&lt;/h2&gt;&lt;p&gt;ಬಸಮ್ಮ ಅವರು ಏಪ್ರಿಲ್ 22ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರಿಗೆ ಯಶಸ್ವಿ ಹೆರಿಗೆ ನಡೆದಿದೆ. ಈ ವೇಳೆ ಅವರು ಎರಡು ಗಂಡು ಮಕ್ಕಳಿಗೂ ಒಂದು ಹೆಣ್ಣು ಮಗುವಿಗೂ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ತಕ್ಷಣವೇ ಅಗತ್ಯ ಚಿಕಿತ್ಸೆ ಒದಗಿಸಿದ್ದಾರೆ.&lt;/p&gt;&lt;h2&gt;ಆರೋಗ್ಯವಾಗಿರುವ ಮಗು&lt;/h2&gt;&lt;p&gt;ಪ್ರಸ್ತುತ, ಮೂರು ನವಜಾತ ಶಿಶುಗಳನ್ನು ತುರ್ತು ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರ ಆರೋಗ್ಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಮಕ್ಕಳು ಮತ್ತು ತಾಯಿಯ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ.&lt;/p&gt;&lt;p&gt;ಈ ಅಪರೂಪದ ಘಟನೆ ಕುಟುಂಬದಲ್ಲಿ ಸಂತಸ ಮೂಡಿಸಿದ್ದು, ಸ್ಥಳೀಯರಲ್ಲಿ ಕುತೂಹಲಕ್ಕೂ ಕಾರಣವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಇಂತಹ ಘಟನೆಗಳು ಅಪರೂಪವಾಗಿರುವುದರಿಂದ, ವೈದ್ಯರು ವಿಶೇಷ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-birth-in-bidar-woman-delivers-triplets-at-brims-hospital-gdp/articleshow-az9i8mq"/>
        </item>
        <item>
            <title><![CDATA[ಬೀದರ್: ಬಸವಕಲ್ಯಾಣದಲ್ಲಿ ಭೀಕರ ದುರಂತ, ಲಾರಿ ಡಿಕ್ಕಿಯಾಗಿ ಕ್ಷಣಾರ್ಧದಲ್ಲಿ  ದಂಪತಿ ಸ್ಥಳದಲ್ಲೇ ಸಾವು!]]></title>
            <link>https://kannada.asianetnews.com/karnataka-districts/fatal-road-accident-in-bidar-couple-killed-after-tipper-lorry-hits-bike-in-basavakalyan-gdp/articleshow-bnizde8</link>
            <guid isPermaLink="true">https://kannada.asianetnews.com/karnataka-districts/fatal-road-accident-in-bidar-couple-killed-after-tipper-lorry-hits-bike-in-basavakalyan-gdp/articleshow-bnizde8</guid>
            <pubDate>Wed, 18 Mar 2026 16:35:48 +0530</pubDate>
            <description><![CDATA[ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್&zwnj;ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01km09y5b6c9z68rh6y2wttg7e,imgname-accident-1773831918949.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಬಸವಕಲ್ಯಾಣ ಬಸ್ ನಿಲ್ದಾಣದ ಸಮೀಪದ ಮುಚಳಂಬ ಕ್ರಾಸ್ ಬಳಿ ಈ ಭೀಕರ ಘಟನೆ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಸಯ್ಯದ್ ದಸ್ತಗೀರ್ (35) ಹಾಗೂ ಅವರ ಪತ್ನಿ ಯಾಸ್ಮೀನ್ ದಸ್ತಗೀರ್ (33) ಎಂದು ಗುರುತಿಸಲಾಗಿದೆ. ಇವರು ಬಸವಕಲ್ಯಾಣ ನಗರದ ಖಾದಿಜಂಡಾ ಕಾಲೋನಿಯಲ್ಲಿ ವಾಸವಿದ್ದು, ದಂಪತಿಗಳು ಬೈಕ್&zwnj;ನಲ್ಲಿ ತಮ್ಮ ಮನೆ ಕಡೆಗೆ ತೆರಳುತ್ತಿದ್ದರು.&lt;/p&gt;&lt;h2&gt;ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್&zwnj;ಗೆ ಡಿಕ್ಕಿ&lt;/h2&gt;&lt;p&gt;ಈ ವೇಳೆ ಮುಚಳಂಬ ಕ್ರಾಸ್ ಬಳಿ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್&zwnj;ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ದಂಪತಿಗಳು ರಸ್ತೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ, ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h2&gt;ಅಪಘಾತದ ನಿಖರ ಕಾರಣದ ತನಿಖೆ&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿದು ತಕ್ಷಣವೇ ಸಿಪಿಐ ಅಲಿಸಾಬ್ ಹಾಗೂ ಪಿಎಸ್ಐಗಳಾದ ಸಿದ್ದೇಶ್ವರ್ ಮತ್ತು ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತದೇಹಗಳನ್ನು ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;ಈ ದುರ್ಘಟನೆ ಹಿನ್ನೆಲೆಯಲ್ಲಿ ವಾಹನ ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ವಿಶೇಷವಾಗಿ ಅತಿವೇಗದಲ್ಲಿ ವಾಹನ ಚಲಾಯಿಸುವುದನ್ನು ತಪ್ಪಿಸಬೇಕು.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/fatal-road-accident-in-bidar-couple-killed-after-tipper-lorry-hits-bike-in-basavakalyan-gdp/articleshow-bnizde8"/>
        </item>
        <item>
            <title><![CDATA['ಮನೇಲಿ ಗ್ಯಾಸ್ ಖಾಲಿ, ಅಡುಗೆ ಆಗಿಲ್ಲ ಸಾರ್..' : ಪರೀಕ್ಷೆ ಬರೆಯಲು ಹೋಗದೇ ಗ್ಯಾಸ್‌ಗಾಗಿ ಕ್ಯೂ ನಿಂತ ಸ್ಟೂಡೆಂಟ್!]]></title>
            <link>https://kannada.asianetnews.com/gallery/karnataka-districts/education-vs-survival-bidar-student-queue-for-gas-cylinder-during-exams-bidar-ccpbzz7</link>
            <guid isPermaLink="true">https://kannada.asianetnews.com/gallery/karnataka-districts/education-vs-survival-bidar-student-queue-for-gas-cylinder-during-exams-bidar-ccpbzz7</guid>
            <pubDate>Thu, 26 Mar 2026 11:24:49 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿ 27ನೇ ದಿನಕ್ಕೆ ಕಾಲಿಟ್ಟಿದ್ದು, ಅದರ ಬಿಸಿ ಭಾರತದ ಹಳ್ಳಿಹಳ್ಳಿಗೂ ತಟ್ಟಿದೆ. ಗಡಿಜಿಲ್ಲೆ ಬೀದರ್&zwnj; ಜಿಲ್ಲೆಯಲ್ಲಿ ಅಡುಗೆ ಅನಿಲದ (LPG) ತೀವ್ರ ಕೊರತೆಯಿಂದ ಜನಸಾಮಾನ್ಯರನ್ನ ಹೈರಾಣಾಗಿಸಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmmas6q4fasbht02gzts7fxk,imgname-whatsapp-image-2026-03-26-at-11.12.57-am--4--1774503893732.jpeg" type="image/jpeg" height="390" width="690"/>
            <content:encoded><![CDATA[&lt;p&gt;ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿ 27ನೇ ದಿನಕ್ಕೆ ಕಾಲಿಟ್ಟಿದ್ದು, ಅದರ ಬಿಸಿ ಭಾರತದ ಹಳ್ಳಿಹಳ್ಳಿಗೂ ತಟ್ಟಿದೆ. ಗಡಿಜಿಲ್ಲೆ ಬೀದರ್&zwnj; ಜಿಲ್ಲೆಯಲ್ಲಿ ಅಡುಗೆ ಅನಿಲದ (LPG) ತೀವ್ರ ಕೊರತೆಯಿಂದ ಜನಸಾಮಾನ್ಯರನ್ನ ಹೈರಾಣಾಗಿಸಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇಂದು ಬೆಳಿಗ್ಗೆ ಬೀದರ್ ನಗರದ ಜಿಲ್ಲಾ ಕ್ರೀಡಾಂಗಣದ ಬಳಿಯಿರುವ ಹೆಚ್&zwnj;ಪಿ ಗ್ಯಾಸ್ ಏಜೆನ್ಸಿ ಮುಂದೆ ಮನಕಲುಕುವ ದೃಶ್ಯವೊಂದು ಕಂಡುಬಂತು. ವಿವೇಕಾನಂದ ಎಂಬ ವಿದ್ಯಾರ್ಥಿ ಇಂದು ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಗೆ ಪರೀಕ್ಷೆಗೆ ತಯಾರಿ ನಡೆಸಬೇಕಿತ್ತು, ಪರೀಕ್ಷೆ ಬರೆಯಲು ಸಿದ್ಧವಾಗಬೇಕಿತ್ತು. ಆದರೆ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದ ಕಾರಣ, ಪರೀಕ್ಷೆಯ ಸಿದ್ಧತೆಯನ್ನು ಬಿಟ್ಟು ಬೆಳಿಗ್ಗೆ 7 ಗಂಟೆಯಿಂದಲೇ ಖಾಲಿ ಸಿಲಿಂಡರ್ ಹಿಡಿದು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾನೆ.&lt;/p&gt;&lt;img&gt;&lt;p&gt;ಮನೆಯಲ್ಲಿ ಗ್ಯಾಸ್ ಇಲ್ಲದೆ ಅಡುಗೆಯೂ ಆಗಿಲ್ಲ, ಟಿಫನ್ ಕೂಡ ಮಾಡಿಲ್ಲ. ಹಸಿವಿನಿಂದಲೇ ಸಿಲಿಂಡರ್ ಹಿಡಿದು ಸಾಲಿನಲ್ಲಿ ನಿಂತಿದ್ದೇನೆ ಎಂದು ವಿವೇಕಾನಂದ ಸುವರ್ಣ ನ್ಯೂಸ್ ಮುಂದೆ ತನ್ನ ನೋವನ್ನು ತೋಡಿಕೊಂಡಿದ್ದಾನೆ. 'ಗ್ಯಾಸ್ ಬುಕ್ ಮಾಡಿ ಎಂಟು ದಿನಗಳಾಗಿವೆ. ದಿನವೂ ಏಜೆನ್ಸಿ ಮುಂದೆ ಬಂದು ಕಾಯುವುದೇ ಕೆಲಸವಾಗಿದೆ. ಈಗ ಅನಿವಾರ್ಯವಾಗಿ ಹೋಟೆಲ್&zwnj;ನಲ್ಲಿ ತಿಂಡಿ ತಿಂದು ಪರೀಕ್ಷೆಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ' ಎಂದು ಆತ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.&lt;/p&gt;&lt;img&gt;&lt;p&gt;ಬೀದರ್&zwnj;ನಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದರೂ, ಜನರು ಮಾತ್ರ ಇದ್ಯಾವುದು ಲೆಕ್ಕಿಸದೇ ಗ್ಯಾಸ್&zwnj;ಗಾಗಿ ಏಜೆನ್ಸಿಗಳ ಮುಂದೆ ಮುಗಿಬೀಳುತ್ತಿದ್ದಾರೆ. ಬಿಸಿಲಿದ್ದರೂ ನಮ್ಮ ಹೊಟ್ಟೆಗೆ ಊಟ ಮುಖ್ಯ. ಇಲ್ಲಿ ಕಷ್ಟಪಟ್ಟರೆ ಮಾತ್ರ ಅಡುಗೆ ಮಾಡಲು ಗ್ಯಾಸ್ ಸಿಗುತ್ತದೆ ಎನ್ನುವುದು ಜನರ ಆಕ್ರೋಶದ ನುಡಿ. ಗ್ಯಾಸ್ ವಿತರಣೆಯಲ್ಲಿನ ಈ ವಿಳಂಬವು ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿರುವುದು ಜಿಲ್ಲಾಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.&lt;/p&gt;&lt;img&gt;&lt;p&gt;ನಗರದ ಬಹುತೇಕ ಗ್ಯಾಸ್ ಏಜೆನ್ಸಿಗಳ ಮುಂದೆ ನಿತ್ಯವೂ ನೂರಾರು ಅಡಿ ಉದ್ದದ ಸರತಿ ಸಾಲುಗಳು ಕಂಡುಬರುತ್ತಿವೆ. ಗ್ಯಾಸ್ ಅಭಾವಕ್ಕೆ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವೋ ಅಥವಾ ಸ್ಥಳೀಯ ವಿತರಣಾ ದೋಷವೋ ಎಂಬ ಗೊಂದಲದಲ್ಲಿ ಗ್ರಾಹಕರಿದ್ದಾರೆ.&lt;/p&gt;&lt;img&gt;&lt;p&gt;ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಸಾರ್ವಜನಿಕರ ಪ್ರತಿಭಟನೆ ಉಗ್ರರೂಪ ತಾಳುವ ಸಾಧ್ಯತೆಯಿದೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/education-vs-survival-bidar-student-queue-for-gas-cylinder-during-exams-bidar-ccpbzz7"/>
        </item>
        <item>
            <title><![CDATA[ಕಸಾಯಿಖಾನೆಗೆ ಸಾಗಿಸುತ್ತಿದ್ದ ಲಾರಿ ಅಡ್ಡಗಟ್ಟಿ 23 ಹಸು ರಕ್ಷಿಸದ ಶಾಸಕ ಶರಣು ಸಲಗರ; ಒಂದು ಎತ್ತು ಸಾವು]]></title>
            <link>https://kannada.asianetnews.com/karnataka-districts/bidar-mla-sharanu-salagar-raids-illegal-cattle-smuggling-23-cattle-rescued-one-ox-dead-sat/articleshow-fetlh6v</link>
            <guid isPermaLink="true">https://kannada.asianetnews.com/karnataka-districts/bidar-mla-sharanu-salagar-raids-illegal-cattle-smuggling-23-cattle-rescued-one-ox-dead-sat/articleshow-fetlh6v</guid>
            <pubDate>Sun, 26 Apr 2026 11:12:22 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 23ಕ್ಕೂ ಹೆಚ್ಚು ಜಾನುವಾರುಗಳನ್ನು ಬಸವಕಲ್ಯಾಣ ಶಾಸಕ ಶರಣು ಸಲಗರ ರಕ್ಷಿಸಿದ್ದಾರೆ. 3 ಗೂಡ್ಸ್ ವಾಹನಗಳಲ್ಲಿ ಅಮಾನವೀಯವಾಗಿ ತುಂಬಿದ್ದರಿಂದ ಉಸಿರುಗಟ್ಟಿ ಒಂದು ಎತ್ತು ಸಾವನ್ನಪ್ಪಿದ್ದು, ಶಾಸಕರು ದಂಧೆಕೋರರ ವಿರುದ್ಧ ದೂರು ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq44tj6f4hz3arbfqe4exjt4,imgname-screenshot-2026-04-26-110103-1777182001358.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಏ.26): ಜಿ&lt;/strong&gt;ಲ್ಲೆಯಲ್ಲಿ ಅಕ್ರಮ ಜಾನುವಾರು ಸಾಗಾಟ ಜಾಲ ಮತ್ತೆ ಹೆಡೆಎತ್ತುತ್ತಿದ್ದು, ಇಂದು ಸ್ವತಃ ಶಾಸಕರೊಬ್ಬರು ರಸ್ತೆಗಿಳಿದು ಅಕ್ರಮ ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ ಅವರು ಮೂರು ಗೂಡ್ಸ್ ವಾಹನಗಳ ಮೇಲೆ ಧಿಡೀರ್ ದಾಳಿ ನಡೆಸಿ, ಅಮಾನವೀಯವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ 23ಕ್ಕೂ ಅಧಿಕ ಜಾನುವಾರುಗಳನ್ನು ರಕ್ಷಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಚಿಟ್ಟಾ ಕ್ರಾಸ್ ಬಳಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಮೂರು ಗೂಡ್ಸ್ ವಾಹನಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಶಾಸಕ ಶರಣು ಸಲಗರ್ ಅವರು ಸ್ಥಳಕ್ಕೆ ಭೇಟಿ ನೀಡಿ ವಾಹನಗಳನ್ನು ತಡೆದರು. ಈ ವೇಳೆ ವಾಹನಗಳನ್ನು ಪರಿಶೀಲಿಸಿದಾಗ ಅಲ್ಲಿನ ದೃಶ್ಯ ಅತ್ಯಂತ ಮನಕಲಕುವಂತಿತ್ತು.&lt;/p&gt;&lt;h2&gt;&lt;strong&gt;ಉಸಿರುಗಟ್ಟಿ ಪ್ರಾಣ ಬಿಟ್ಟ ಎತ್ತು:&lt;/strong&gt;&lt;/h2&gt;&lt;p&gt;ಆಕಳುಗಳು, ಕರುಗಳು, ಎತ್ತುಗಳು ಹಾಗೂ ಎಮ್ಮೆ ಕರುಗಳನ್ನು ಯಾವುದೇ ಕನಿಷ್ಠ ನಿಯಮಗಳನ್ನು ಪಾಲಿಸದೆ, ಉಸಿರುಗಟ್ಟುವಂತೆ ವಾಹನಗಳಲ್ಲಿ ತುರುಕಲಾಗಿತ್ತು. ಕೇವಲ ಒಂದು ವಾಹನದಲ್ಲಿ ಮಿತಿಮೀರಿದ ಅಂದರೆ ಆರು ದೊಡ್ಡ ಜಾನುವಾರುಗಳನ್ನು ತುಂಬಿದ್ದರಿಂದ, ಗಾಳಿ ಸಿಗದೆ ಎತ್ತುವೊಂದು ವಾಹನದಲ್ಲೇ ಸಾವನ್ನಪ್ಪಿದೆ. ಇದನ್ನು ಕಂಡ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಚಾಲಕರಿಗೆ ಶಾಸಕರಿಂದ ಕ್ಲಾಸ್:&lt;/strong&gt;&lt;/h2&gt;&lt;p&gt;ಜಾನುವಾರುಗಳ ಮೇಲಿನ ಕ್ರೌರ್ಯ ಕಂಡ ಶಾಸಕ ಸಲಗರ್ ಚಾಲಕರ ಮೇಲೆ ಕೆಂಡಾಮಂಡಲರಾದರು. &quot;ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಕೆಲಸ ಮಾಡಿ, ಈ ರೀತಿ ಮೂಕ ಪ್ರಾಣಿಗಳನ್ನು ಕೊಲ್ಲುವುದು ಎಷ್ಟು ಸರಿ? ನಿಮ್ಮ ಹೆಂಡತಿ, ಮಕ್ಕಳನ್ನು ಇದೇ ರೀತಿ ಅಮಾನವೀಯವಾಗಿ ವಾಹನದಲ್ಲಿ ತುಂಬಿ ಸಾಗಿಸ್ತೀರಾ? ಪ್ರಾಣಿಗಳ ಮೇಲೆ ಯಾಕಿಷ್ಟು ಕ್ರೌರ್ಯ?&quot; ಎಂದು ಚಾಲಕರನ್ನು ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, &quot;ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದಲೇ ಇಂತಹ ಅಕ್ರಮ ದಂಧೆಕೋರರಿಗೆ ಲೈಸೆನ್ಸ್ ಸಿಕ್ಕಂತಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ&quot; ಎಂದು ದೂರಿದರು.&lt;/p&gt;&lt;p&gt;&lt;strong&gt;ಪೊಲೀಸ್ ಕ್ರಮ:&lt;/strong&gt;&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ಮಂಠಾಳ ಪೊಲೀಸ್ ಠಾಣೆಯ ಪಿಎಸ್ಐ ಸುವರ್ಣ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಸಕ ಶರಣು ಸಲಗರ್ ಅವರು ಅಕ್ರಮ ದಂಧೆಕೋರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ರಕ್ಷಿಸಲಾದ 23 ಜಾನುವಾರುಗಳನ್ನು ತಕ್ಷಣವೇ ಹತ್ತಿರದ ಗೋಶಾಲೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಬೀದರ್ ಜಿಲ್ಲೆಯ ಗಡಿ ಭಾಗಗಳಲ್ಲಿ ಇಂತಹ ಅಕ್ರಮ ಸಾಗಾಟ ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-mla-sharanu-salagar-raids-illegal-cattle-smuggling-23-cattle-rescued-one-ox-dead-sat/articleshow-fetlh6v"/>
        </item>
        <item>
            <title><![CDATA[Bhagwant Khuba life threat case: ಸಂಸದ ಸಾಗರ್ ಖಂಡ್ರೆ ಹೆಸರೇಳಿಕೊಂಡು ಭಗವಂತ ಖೂಬಾರಿಗೆ ಜೀವ ಬೆದರಿಕೆ! FIR]]></title>
            <link>https://kannada.asianetnews.com/state/fir-filed-against-individual-for-threatening-bhagwanth-khuba-in-mp-sagar-khandre-s-name-rav/articleshow-i6e5z0a</link>
            <guid isPermaLink="true">https://kannada.asianetnews.com/state/fir-filed-against-individual-for-threatening-bhagwanth-khuba-in-mp-sagar-khandre-s-name-rav/articleshow-i6e5z0a</guid>
            <pubDate>Tue, 31 Mar 2026 10:38:58 +0530</pubDate>
            <description><![CDATA[ಬೀದರ್&zwnj;ನ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ಫೇಸ್&zwnj;ಬುಕ್ ವಿಡಿಯೋ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ತುಕಾರಾಮ ದೊಡ್ಡಿ ಎಂಬ ವ್ಯಕ್ತಿಯ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಹಾಲಿ ಸಂಸದ ಸಾಗರ್ ಖಂಡ್ರೆ ಹೆಸರಿನ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn14fvhjqkf09pwzd927ttk5,imgname----------------------10--1774933503538.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮಾ.31):&lt;/strong&gt; ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ. ಭಾಲ್ಕಿ ತಾಲೂಕಿನ ನಿಟ್ಟೂರು(ಬಿ) ಗ್ರಾಮದ ತುಕಾರಾಮ ದೊಡ್ಡಿ ಎಂಬಾತನೇ ಮಾಜಿ ಸಚಿವರಿಗೆ ಬೆದರಿಕೆ ಹಾಕಿದ ಆರೋಪಿ. ಈತ ಫೇಸ್&zwnj;ಬುಕ್&zwnj;ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾನೆ.&lt;/p&gt;&lt;h2&gt;ಫೇಸ್&zwnj;ಬುಕ್ ವಿಡಿಯೋ ಮೂಲಕ ನಿಂದನೆ&lt;/h2&gt;&lt;p&gt;ಆರೋಪಿ ತುಕಾರಾಮ್ 'ಸಂಸದ ಸಾಗರ್ ಖಂಡ್ರೆ ಅಭಿಮಾನಿ ಭಾಲ್ಕಿ' ಎಂಬ ಹೆಸರಿನ ಫೇಸ್&zwnj;ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ಈ ವಿಡಿಯೋದಲ್ಲಿ ಮಾಜಿ ಸಚಿವ ಭಗವಂತ ಖೂಬಾ ಅವರ ವಿರುದ್ಧ ಏಕವಚನದಲ್ಲಿ ಬಳಸಬಾರದ ಶಬ್ದಗಳನ್ನು ಬಳಸಿ ನಿಂದಿಸಲಾಗಿದೆ. ಕೇವಲ ನಿಂದನೆಯಷ್ಟೇ ಅಲ್ಲದೆ, ಪ್ರಾಣ ಬೆದರಿಕೆ ಹಾಕುವ ಮಟ್ಟಕ್ಕೆ ಈತ ಹೋಗಿದ್ದಾನೆ. ಹೀಗಾಗಿ ಮುಂಜಾಗ್ರತವಾಗಿ ಎಫ್&zwnj;ಐಆರ್ ದಾಖಲಿಸಲಾಗಿದೆ.&lt;/p&gt;&lt;h3&gt;ಸಂಸದ ಸಾಗರ್ ಖಂಡ್ರೆ ಹೆಸರು ಬಳಕೆ&lt;/h3&gt;&lt;p&gt;ವಿಶೇಷವೆಂದರೆ, ಈ ಕಿಡಿಗೇಡಿ ಹಾಲಿ ಸಂಸದ ಸಾಗರ್ ಖಂಡ್ರೆ ಅವರ ಹೆಸರನ್ನು ಬಳಸಿಕೊಂಡು ಮಾಜಿ ಸಂಸದರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಸಂಸದ ಕುಮ್ಮಕ್ಕಿನಿಂದಲೇ ಇಂಥ ಬೆದರಿಕೆ ಹಾಕಿದ್ದಾನೆಯೇ? ಅಥವಾ ಸಂಸದ ಹೆಸರು ದುರಪಯೋಗಪಡಿಸಿಕೊಂಡಿದ್ದಾನೆಯೇ ಎಂಬ ಬಗ್ಗೆ ಸದ್ಯ ಜಿಲ್ಲೆಯಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಿಂದಬಂದಗಿ ಗ್ರಾಮದ ರವಿ ನಿಜಾಂಪುರೆ ಎಂಬುವವರು ತಕ್ಷಣವೇ ಗಮನಹರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.&lt;/p&gt;&lt;p&gt;&lt;strong&gt;ಎಫ್ಐಆರ್ ದಾಖಲು&lt;/strong&gt;&lt;/p&gt;&lt;p&gt;ರವಿ ನಿಜಾಂಪುರೆ ನೀಡಿದ ದೂರಿನನ್ವಯ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಆರೋಪಿ ತುಕಾರಾಮ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಕದಡುವ ಇಂತಹ ಪ್ರಯತ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/fir-filed-against-individual-for-threatening-bhagwanth-khuba-in-mp-sagar-khandre-s-name-rav/articleshow-i6e5z0a"/>
        </item>
        <item>
            <title><![CDATA[ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ: ಹೊತ್ತಿ ಉರಿದ ತೆಂಗಿನ ಮರ, ವ್ಯಕ್ತಿ ಸಿಡಿಲಿಗೆ ಬಲಿ, ಆಲಿಕಲ್ಲು ಮಳೆಗೆ ಭಾರಿ ಬೆಳೆ ಹಾನಿ]]></title>
            <link>https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</link>
            <guid isPermaLink="true">https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680</guid>
            <pubDate>Wed, 18 Mar 2026 10:23:18 +0530</pubDate>
            <description><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkzh3db8vzk9hdyt39nf4dwa,imgname-coconut-tree-fire-after-lightning-strike-1773805876584.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ &amp;nbsp;ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;img&gt;&lt;p&gt;ರಾಯಚೂರು: ನಿನ್ನೆ ಗುಡುಗು ಮಿಂಚು ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವೊಂದು ಅನಾಹುತಗಳು ಸಂಭವಿಸಿದೆ. ರಾಯಚೂರು ಜಿಲ್ಲೆ ಅರಕೇರಾ ತಾ. ಹಾಳಜಾಡಲದಿನ್ನಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ತೆಂಗಿನ ಮರ ಇದಾಗಿದೆ. ಸಿಡಿಲು ಬಡಿದ ಪರಿಣಾಮ ತೆಂಗಿನಮರ ಸಂಪೂರ್ಣ ಸುಟ್ಟು ಹೋಗಿದ್ದು, ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ: ನಿನ್ನೆ ಸುರಿದ ಆಲಿಕಲ್ಲು ಮಳೆ ಚಾಮರಾಜನಗರದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಬೆಳೆದ ಬೆಳೆ ಕೈಗೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ಮೆಣಸಿನಕಾಯಿ,ಟೊಮ್ಯಾಟೊ, ಕಲ್ಲಂಗಡಿ, ಬಾಳೆ ಸೇರಿ ಹಲವು ಬೆಳೆಗೆ ಹಾನಿಯಾಗಿದೆ. ಚಾಮರಾಜನಗರ ಗ್ರಾಮಾಂತರ ಪ್ರದೇಶದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ,ಕಾಡಳ್ಳಿ,ಸಂತೇಮರಹಳ್ಳಿ, ಬಸವಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೌಟುಂಬಿಕ ಕಲಹ ಎರಡು ಮಕ್ಕಳಾದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ&lt;/strong&gt;&lt;/p&gt;&lt;img&gt;&lt;p&gt;ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಹಾಗು ಜಿಲ್ಲೆಯ ಗಡಿಭಾಗದ ತಾಳವಾಡಿಯಲ್ಲಿ ಕಂಡೂ ಕೇಳರಿಯದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಗ್ರಾಮಗಳ ಬೀದಿಬೀದಿಗಳಲ್ಲಿ ಹಾಗು ಜಮೀನು, ತೋಟಗಳಲ್ಲಿ ಆಲಿಕಲ್ಲು ರಾಶಿರಾಶಿಯಾಗಿ ಬಿದ್ದಿದ್ದು ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದಾರೆ..&lt;/p&gt;&lt;p&gt;&lt;strong&gt;ಇದನ್ನೂ ಓದಿ: &amp;nbsp;&lt;/strong&gt;ರಾಜ್ಯದಲ್ಲಿ ಬೇಸಿಗೆ ಮಳೆಗೆ ಮತ್ತೊಂದು ಬಲಿ: ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್&lt;/p&gt;&lt;img&gt;&lt;p&gt;ಬೀದರ್: ಗಡಿ ಜಿಲ್ಲೆ ಬೀದರ್&zwnj;ನಲ್ಲಿಯೂ ಆಕಾಲಿಕ ಮಳೆಗೆ ಜನ ಹೈರಾಣಾಗಿದ್ದಾರೆ.ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸತತ ಎರಡು ಗಂಟೆ ಕಾಲ ಆಲಿಕಲ್ಲು ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ರಾತ್ರಿ ನಿರಂತರ ಮಳೆಯಾಗಿದೆ.ಬೀದರ್ ಜಿಲ್ಲೆಯ ಹುಮನಾಬಾದ್&zwnj;, ಔರಾದ್, ಬಸವಕಲ್ಯಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ &zwnj;ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ&lt;/p&gt;&lt;img&gt;&lt;p&gt;ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ (58) ಮೃತಪಟ್ಟಿದ್ದಾರೆ. ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಅವರು ಕೆಲಸ ಮುಗಿಸಿ ವಾಪಾಸ್ ಬರುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೆಯೇ ಗದಗ ಜಿಲ್ಲೆಯ ರೋಣ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈತರ ಕೈಗೆ ಸಿಕ್ಕ ಪಂಪ್&zwnj;ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್&zwnj;ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು&lt;/strong&gt;&lt;/p&gt;]]></content:encoded>
            <category>bidar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/summer-rains-wreak-havoc-in-the-state-raichur-bidar-chamarajanagar-rain-damage-kl5c680"/>
        </item>
        <item>
            <title><![CDATA[ರಾಜ್ಯದಲ್ಲಿ ಕೆಂಡದಂತಹ ಬಿಸಿಲು ಹವಾಮಾನ ಇಲಾಖೆಯ ಎಚ್ಚರಿಕೆ ಗಂಟೆ, 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲು!]]></title>
            <link>https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</link>
            <guid isPermaLink="true">https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v</guid>
            <pubDate>Thu, 02 Apr 2026 11:26:01 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಸಿಲಿನ ತೀವ್ರತೆ ಹೆಚ್ಚಿರುವ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjptv959tj7p1s6exffvkc02,imgname-heatwave-1772440364201.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಕೆಂಡದಂತಹ ಬಿಸಿಲು ದಾಖಲಾಗುವ ಸಾಧ್ಯತೆ ಇದ್ದು, ಜನಜೀವನದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಒಣ ಹವಾಮಾನ&lt;/h2&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ಉಷ್ಣಾಂಶವು ಸುಮಾರು 35&deg;C ರಿಂದ 37&deg;C ನಡುವೆಯೇ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ತಂಪಾದ ವಾತಾವರಣ ಕಂಡುಬಂದರೂ, ಮಧ್ಯಾಹ್ನ ವೇಳೆಗೆ ಬಿಸಿಲಿನ ತೀವ್ರತೆ ಹೆಚ್ಚಾಗಲಿದೆ.&lt;/p&gt;&lt;h2&gt;ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ತೀವ್ರ&lt;/h2&gt;&lt;p&gt;ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ 42&deg;C ತನಕ ಏರಿಕೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಬಿಸಿಗಾಳಿ (Heat Wave) ಉಂಟಾಗುವ ಸಾಧ್ಯತೆಯೂ ಹೆಚ್ಚಿದ್ದು, ಜನರು ಹೆಚ್ಚಿನ ಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೆ ಬಿಸಿಗಾಳಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ಈ ಅವಧಿಯಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆಯಿಂದಿರಬೇಕು.&lt;/p&gt;&lt;h2&gt;ಕರಾವಳಿ ಜಿಲ್ಲೆಗಳಲ್ಲಿ ಸೆಕೆ&ndash;ಹಬೆ ಹೆಚ್ಚಳ&lt;/h2&gt;&lt;p&gt;ಮಂಗಳೂರು, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತೇವಾಂಶ ಹೆಚ್ಚಿರುವ ಕಾರಣ ಸೆಕೆ ಮತ್ತು ಹಬೆ (humidity) ಹೆಚ್ಚಾಗಲಿದೆ. ಇದರಿಂದ ಜನರಿಗೆ ತೀವ್ರ ಬೆವರಿನ ಜೊತೆಗೆ ಬಿಸಿಲಿನ ಅನುಭವವಾಗುವ ಸಾಧ್ಯತೆ ಇದೆ. ಸಮುದ್ರ ತೀರ ಪ್ರದೇಶಗಳಲ್ಲಿ ಉಷ್ಣಾಂಶ ಅಷ್ಟಾಗಿ ಏರಿಕೆಯಾಗದಿದ್ದರೂ, ಹವಾಮಾನ ಉರಿಯುತ್ತಿರುವ ಅನುಭವವಾಗಲಿದೆ&lt;/p&gt;&lt;h2&gt;ಮಲೆನಾಡಿನಲ್ಲಿ ತುಂತುರು ಮಳೆ ಸಾಧ್ಯತೆ&lt;/h2&gt;&lt;p&gt;ಮಲೆನಾಡು ಭಾಗಗಳಲ್ಲಿ, ವಿಶೇಷವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಅಲ್ಲಲ್ಲಿ ಹಗುರವಾದ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶವು 20&deg;C ರಿಂದ 22&deg;C ನಡುವೆಯೇ ಇರಲಿದೆ.&lt;/p&gt;&lt;h2&gt;ಜನರಿಗೆ ಎಚ್ಚರಿಕೆ ಮತ್ತು ಸಲಹೆಗಳು&lt;/h2&gt;&lt;p&gt;ಹವಾಮಾನ ಇಲಾಖೆಯು ಉತ್ತರ ಕರ್ನಾಟಕದ ಜನರಿಗೆ ವಿಶೇಷ ಎಚ್ಚರಿಕೆ ನೀಡಿದ್ದು, ಬಿಸಿಲಿನ ತೀವ್ರತೆ ಹೆಚ್ಚಿರುವ ಸಮಯದಲ್ಲಿ ಮನೆಯೊಳಗೇ ಇರುವಂತೆ ಸಲಹೆ ನೀಡಿದೆ. ಮಧ್ಯಾಹ್ನ 12ರಿಂದ 4ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸಿ, ಹೆಚ್ಚು ನೀರು ಕುಡಿಯಿರಿ, ಹಗುರವಾದ ಬಟ್ಟೆ ಧರಿಸಿ . ನೇರ ಬಿಸಿಲಿನಿಂದ ದೂರವಿರಿ ಎಂದು ಸಲಹೆ ನೀಡಲಾಗಿದೆ.&lt;/p&gt;&lt;h2&gt;9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಕೆಲಸದ ಸಮಯ ಬದಲು&lt;/h2&gt;&lt;p&gt;ವಿಪರೀತ ಬಿಸಿಲಿನ ಹಿನ್ನೆಲೆಯಲ್ಲಿ ಕಲಬುರಗಿ ಕಂದಾಯ ವಿಭಾಗದ ಕಲಬುರಗಿ, ಬೀದರ್&zwnj;, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳು, ಬೆಳಗಾವಿ ಕಂದಾಯ ವಿಭಾಗದ ವಿಜಯನಗರ, ಬಾಗಲಕೋಟೆ 2 ಜಿಲ್ಲೆಗಳು ಸೇರಿದಂತೆ 9 ಜಿಲ್ಲೆಗಳಲ್ಲಿನ ಸರ್ಕಾರದ ಕಚೇರಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗಿನ 8 ರಿಂದ ಮಧ್ಯಾಹ್ನ 1.30ರವರೆಗೆ ಸಮಯ ಬದಲಿಸಿ ಏ.1ರಿಂದಲೇ ಜಾರಿಗೆ ಬರುವಂತೆ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.&lt;/p&gt;&lt;p&gt;ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಈ ಬದಲಾವಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿನ ಸರ್ಕಾರಿ ನೌಕರರು ಬದಲಾದ ಸಮಯದಲ್ಲಿ ಎಂದಿನಂತೆ ಯಾವುದೇ ಲೋಷ/ ಅಡೆತಡೆಯಿಲ್ಲದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಧಿಕಾರಿಗಳು/ಜಿಪಂ ಸಿಇಒ ತುರ್ತು ಸಂದರ್ಭಗಳಲ್ಲಿ ಯಾವುದೇ ಕಾರ್ಯವನ್ನು ನಿರ್ವಹಿಸಲು ನಿರ್ದೇಶಿಸಿದಲ್ಲಿ ಸಮಯದ ಮಿತಿಯಿಲ್ಲದೆ ಕೆಲಸ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಒಟ್ಟಾರೆ, ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಹವಾಮಾನ ಸ್ಥಿತಿಗಳು ಕಂಡುಬರುತ್ತಿದ್ದರೂ, ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತೀವ್ರತೆ ಹೆಚ್ಚು ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-heatwave-alert-north-karnataka-may-touch-42-c-office-timings-changed-in-9-districts-gdp/articleshow-lagcg1v"/>
        </item>
        <item>
            <title><![CDATA[ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯಕ್ಕೆ ಬಸವಣ್ಣನ ತತ್ವವೇ ಪ್ರೇರಣೆ: ಸಚಿವ ಈಶ್ವರ್ ಖಂಡ್ರೆ]]></title>
            <link>https://kannada.asianetnews.com/karnataka-districts/bhalki-basavanna-principles-annabhagya-eshwar-khandre-speech-gvd/articleshow-na49hqx</link>
            <guid isPermaLink="true">https://kannada.asianetnews.com/karnataka-districts/bhalki-basavanna-principles-annabhagya-eshwar-khandre-speech-gvd/articleshow-na49hqx</guid>
            <pubDate>Wed, 22 Apr 2026 23:52:48 +0530</pubDate>
            <description><![CDATA[&lt;p&gt;ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದೊಂದಿಗೆ ದುಡಿಯಬೇಕು, ದುಡಿದು ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9es3asmbdr2q8bxc24xnxzw,imgname-eshwar-khandre-1762506418996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾಲ್ಕಿ (ಏ.22): &lt;/strong&gt;ಬಸವಣ್ಣನವರು ಕಾಯಕವೇ ಕೈಲಾಸ ಎಂಬ ಸಂದೇಶದೊಂದಿಗೆ ದುಡಿಯಬೇಕು, ದುಡಿದು ಗಳಿಸಬೇಕು, ಗಳಿಸಿದ್ದನ್ನು ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದು ಸಾರಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಈ ದಾಸೋಹ ತತ್ವವೇ ಪ್ರೇರಣೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.&lt;/p&gt;&lt;p&gt;ಅವರು ಭಾಲ್ಕಿಯ ಹಿರೇಮಠ ಸಂಸ್ಥಾನದ ಆವರಣದಲ್ಲಿ ನಡೆಯುತ್ತಿರುವ ನಾಡೋಜ ಬಸವಲಿಂಗ ಪಟ್ಟದ್ದೇವರ ಅಮೃತಮಹೋತ್ಸವ ಹಾಗೂ ಲಿಂ. ಚನ್ನಬಸವ ಪಟ್ಟದ್ದೇವರ 27ನೇ ಸಂಸ್ಮರಣೋತ್ಸವದಲ್ಲಿ ಮಾತನಾಡಿ, ಇದಷ್ಟೇ ಅಲ್ಲ ಬಸವಾದಿ ಪ್ರಮಥರು ಅನುಭವಮಂಟಪದಲ್ಲಿ ಎಲ್ಲ, ಜಾತಿ ಜನಾಂಗದವರಿಗೂ ಸಮಾನ ಅವಕಾಶ ನೀಡಿದ್ದರು. ಇಲ್ಲಿ ಲಿಂಗತಾರತಮ್ಯವೂ ಇರಲಿಲ್ಲ, ಅಕ್ಕಮಹಾದೇವಿ, ಸತ್ಯಕ್ಕ, ಆಯ್ದಕ್ಕಿ ಲಕ್ಕಮ್ಮ, ನೀಲಾಂಬಿಕೆ, ಮುಕ್ತಾಯಕ್ಕ ಮೊದಲಾದವರು ತಮ್ಮ ವಿಚಾರಧಾರೆಗಳನ್ನು ಮುಂಡಿಸುತ್ತಿದ್ದರು. ಇದು ಮಹಿಳಾ ಸಬಲೀಕರಣದ ಸಂಕೇತವಾಗಿದ್ದು, ನಮ್ಮ ಸರ್ಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಯ ಮೂಲಕ ಅದನ್ನೂ ಮುಂದುವರಿಸಿದೆ ಎಂದರು.&lt;/p&gt;&lt;p&gt;ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಶತಾಯುಷಿ ಶ್ರೀ ಚನ್ನಬಸವ ಪಟ್ಟದ್ದೇವರ 27ನೇ ಸಂಸ್ಮರಣೋತ್ಸವ ನಡೆಸುತ್ತಿದ್ದೇವೆ. ಅವರು, ಕ್ರಾಂತಿ ಪುರುಷರು. ಅಸ್ಪೃಶ್ಯತೆಯ ಆಚರಣೆ ತೊಡೆದು ಹಾಕಲು ನಮ್ಮ ತಂದೆ ಲಿಂ.ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರಿಗೆ ಬೆಂಬಲವಾಗಿ ನಿಂತು ಭಾಲ್ಕೇಶ್ವರ ದೇವಾಲಯಕ್ಕೆ ಅಶೋಕನಗರ ನಿವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಇಂದು ನಾವು ಕಾಣುತ್ತಿರುವ ಶಿವಲಿಂಗದಾಕಾರದ ಅನುಭವ ಮಂಟಪದ ನಿರ್ಮಾಣದ ಶ್ರೇಯಸ್ಸು ಚನ್ನಬಸವಪಟ್ಟದ್ದೇವರಿಗೆ ಆಗಲೂ ತಲೆ ಮೇಲೆ ಇಟ್ಟಿಗೆ ಹೊತ್ತು ಕಟ್ಟಡ ನಿರ್ಮಿಸಿದ್ದು ಆದರ್ಶವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಉಪ ರಾಷ್ಟ್ರಪತಿಗಳು ಆಗಮಿಸಿರುವುದು ಯೋಗಾಯೋಗ&lt;/strong&gt;&lt;/h2&gt;&lt;p&gt;ನಿಜಾಮರ ಆಳ್ವಿಕೆಯ ಕಾಲದಲ್ಲಿ ಕನ್ನಡ ಕಲಿಸಲು ಅವಕಾಶ ಇರಲಿಲ್ಲ. ಆಗ ಹೊರಗೆ ಉರ್ದು ಫಲಕ ಹಾಕಿ ಒಳಗೆ ಕನ್ನಡ ಕಲಿಸಲು ಶ್ರಮಿಸಿದ ಪಟ್ಟದ್ದೇವರು, ಮಕ್ಕಳಿಗೆ ವಚನ ಸಾರ ತಿಳಿಯುವಂತೆ ಮಾಡಿದ್ದರು. ತಮ್ಮ ದೀಕ್ಷಾ ಗುರು ಚನ್ನಬಸವ ಪಟ್ಟದ್ದೇವರ ಶತಮಾನೋತ್ಸವವನ್ನು ಭೀಮಣ್ಣ ಖಂಡ್ರೆ ಅವರು ಅದ್ಧೂರಿಯಾಗಿ ನಡೆಸಿದ್ದರು, ಆಗ ಅಂದಿನ ರಾಷ್ಟ್ರಪತಿ ಡಾ.ಶಂಕರದಯಾಳ್ ಶರ್ಮಾ ಆಗಮಿಸಿದ್ದರು. ಇಂದಿನ ಪೀಠಾಧಿಪತಿಗಳ ಅಮೃತ ಮಹೋತ್ಸವಕ್ಕೆ ಉಪ ರಾಷ್ಟ್ರಪತಿಗಳು ಆಗಮಿಸಿರುವುದು ಯೋಗಾಯೋಗ ಎಂದು ಈಶ್ವರ ಖಂಡ್ರೆ ಹೇಳಿದರು.&lt;/p&gt;&lt;p&gt;ನಾಡೋಜ ಬಸವಲಿಂಗ ಪಟ್ಟದ್ದೇವರು, ಮಾಸಿಕ ಶರಣ ಸಂಗಮ, ಶಿವಾನುಭವ ಪ್ರವಚನ, ವಚನ ಗಾಯನದಂತಹ ಕಾರ್ಯಕ್ರಮಗಳ ಮೂಲಕ ಶರಣರ ವಚನಗಳ ಪ್ರಚಾರ ಪ್ರಸಾರ ಮಾಡುತ್ತಿದ್ದಾರೆ, ಸರಳ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಬಡವರು ಸಾಲದ ಸುಳಿಗೆ ಸಿಲುಕದಂತೆ ರಕ್ಷಿಸಿ ದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಹಂಪಿ ವಿಶ್ವವಿದ್ಯಾಲಯ ಅವರಿಗೆ ನಾಡೋಜ ಗೌರವ ನೀಡಿದೆ. ಅವರು ನೂರ್ಕಾಲ ಬಾಳಲಿ ನಮಗೆ ಮಾರ್ಗದರ್ಶನ ನೀಡಲಿ ಎಂದರು.&lt;/p&gt;&lt;p&gt;ಭಾಲ್ಕಿಯ ಮಣ್ಣಿನ ಮಗನಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಕಲ್ಯಾಣ ಕರ್ನಾಟಕಕ್ಕೆ 371 ಜೆ ಸಾಂವಿಧಾನಿಕ ತಿದ್ದುಪಡಿ ಯೊಂದಿಗೆ ವಿಶೇಷ ಸ್ಥಾನಮಾನ ದೊರಕಿದೆ. ಇಂದು ಅದು ಕಾಯ್ದೆಯಾಗಿದ್ದು ನಮ್ಮ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಅನುಯಾಯಿಯಾದ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಜೀವನದ ಉದ್ದಕ್ಕೂ ವಂಚಿತರಿಗೆ, ನೊಂದವರಿಗೆ ನ್ಯಾಯ ದೊರಕಿಸಲು ಹಾಗೂ ಸರ್ವರ ಸಮಾನತೆಗಾಗಿ ಶ್ರಮಿಸುತ್ತಿದ್ದಾರೆ, ಅವರು ಒಬ್ಬ ಮುತ್ಸದ್ದಿ ರಾಜಕಾರಣಿ ಎಂದು ಬಣ್ಣಿಸಿದರು.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bhalki-basavanna-principles-annabhagya-eshwar-khandre-speech-gvd/articleshow-na49hqx"/>
        </item>
        <item>
            <title><![CDATA[ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ: ಬಿ.ವೈ.ವಿಜಯೇಂದ್ರ ವಾಗ್ದಾಳಿ]]></title>
            <link>https://kannada.asianetnews.com/karnataka-districts/by-vijayendra-bjp-win-claim-bidar-training-campaign-gvd/articleshow-oapdcor</link>
            <guid isPermaLink="true">https://kannada.asianetnews.com/karnataka-districts/by-vijayendra-bjp-win-claim-bidar-training-campaign-gvd/articleshow-oapdcor</guid>
            <pubDate>Sat, 21 Mar 2026 21:57:12 +0530</pubDate>
            <description><![CDATA[&lt;p&gt;ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಇಂದೇ ಚುನಾವಣೆ ನಡೆದರೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k4wp2b5v03z6v8krfh3yrqaf,imgname-gnghmn-1757604293819.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮಾ.21): &lt;/strong&gt;ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದಾರೆ. ಇಂದೇ ಚುನಾವಣೆ ನಡೆದರೂ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಅವರು ಬೀದರ್ ದಕ್ಷಿಣ ಕ್ಷೇತ್ರದ ಚಾಂಗಲೇರಾ ಗ್ರಾಮದಲ್ಲಿರುವ ಜೆಡಿ ಕಲ್ಯಾಣ ಮಂಟಪದಲ್ಲಿ, ಬೀದರ್ ದಕ್ಷಿಣ ಮಂಡಲದ ವತಿಯಿಂದ ನಡೆದ ಪಂಡಿತ ದೀನದಯಾಳ ಉಪಾಧ್ಯಾಯರ 2026ರ ಪ್ರಶಿಕ್ಷಣ ಮಹಾಭಿಯಾನವನ್ನು ಭವ್ಯವಾಗಿ ಉದ್ಘಾಟಿಸಿ ಮಾತನಾಡಿದರು.&lt;/p&gt;&lt;p&gt;ಮಹಾಭಿಯಾನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವುದು, ಪಕ್ಷದ ಸಿದ್ಧಾಂತಗಳ ತಿಳಿವುದು ಹಾಗೂ ಜನಸೇವೆಯಲ್ಲಿ ಇನ್ನಷ್ಟು ಚುರುಕುತನ ತರುವ ಬಗ್ಗೆ ಮಾರ್ಗದರ್ಶನ ನೀಡಿದರು. ಭಾರತೀಯ ಜನತಾ ಪಕ್ಷವು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಇದು ಒಂದು ಸಿದ್ಧಾಂತ ಮತ್ತು ಸೇವಾ ಮನೋಭಾವದ ನಮ್ಮ ಪಕ್ಷದ ನಿಜವಾದ ಬಲವೇ ನೀವು ನಮ್ಮ ನಿಷ್ಠಾವಂತ ಕಾರ್ಯಕರ್ತರು. ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ ಮತ್ತು ಸೌಲಭ್ಯಗಳು ತಲುಪಬೇಕು ಎಂಬುದು ನಮ್ಮ ಧ್ಯೇಯವಾಗಿದೆ ಎಂದರು.&lt;/p&gt;&lt;p&gt;ಪಕ್ಷದ ಸಿದ್ಧಾಂತ, ಸಾಧನೆ ಜನರಿಗೆ ಮತ್ತಷ್ಟು ವ್ಯಾಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ಬದ್ಧತೆಯಿಂದ ಶ್ರಮಿಸುವ ಹಾಗೂ ಜನಕಲ್ಯಾಣಕ್ಕಾಗಿ ನಮ್ಮ ಪರಿಪೂರ್ಣ ಪರಿಶ್ರಮದ ದೃಢಸಂಕಲ್ಪವನ್ನು ಪುನರುಚ್ಚರಿಸಬೇಕು. ಪಕ್ಷ ಸಂಘಟನೆ ಬಲವಾಗಿದ್ದರೆ ಮಾತ್ರ ಚುನಾವಣೆಯಲ್ಲಿ ಯಶಸ್ಸು ಸಾಧ್ಯ. ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಮನೆಮನೆಗೆ ಪಕ್ಷದ ಸಾಧನೆಗಳು ಮತ್ತು ಸಿದ್ಧಾಂತಗಳನ್ನು ತಲುಪಿಸಬೇಕು ಎಂದರು.&lt;/p&gt;&lt;p&gt;ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಈ ಅಭಿವೃದ್ಧಿಯ ಪಥವನ್ನು ಇನ್ನಷ್ಟು ಬಲಪಡಿಸಲು ನಾವು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ನಮ್ಮ ಗುರಿ ಕೇವಲ ಅಧಿಕಾರವಲ್ಲ, ಜನಸೇವೆ. ಕಾರ್ಯಕರ್ತರು ಸದಾ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಪಕ್ಷದ ಮೇಲೆ ವಿಶ್ವಾಸ ಹೆಚ್ಚಿಸಬೇಕು ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ವಿಜಯ ನಿಶ್ಚಿತ&lt;/strong&gt;&lt;/h2&gt;&lt;p&gt;ನಾವು ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ತೋರಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತ ಪಕ್ಷದ ರಾಯಭಾರಿಯಾಗಿ ಕೆಲಸ ಮಾಡಿದರೆ, ನಮ್ಮ ವಿಜಯ ನಿಶ್ಚಿತ ಎಂದರು. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಸಂಘಟನೆಗೆ ಒತ್ತು ನೀಡುವುದು ಪಕ್ಷದ ಬಲವರ್ಧನೆಗೆ ಮೂಲಭೂತ ಅಂಶವಾಗಿದೆ. ಸಂಘಟಿತ ಕಾರ್ಯಕರ್ತರು, ಶಕ್ತಿಶಾಲಿ ಮಂಡಲ-ಬೂತ್ ಮಟ್ಟದ ವ್ಯವಸ್ಥೆ ಹಾಗೂ ಜನರೊಂದಿಗೆ ನೇರ ಸಂಪರ್ಕವೇ ಪಕ್ಷದ ಯಶಸ್ಸಿನ ಪ್ರಮುಖ ಶಕ್ತಿ.&lt;/p&gt;&lt;p&gt;ಬೂತ್ ಮಟ್ಟದಿಂದಲೇ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದರು. ನಮ್ಮ ಅವಧಿಯಲ್ಲಿ ಜಾರಿಗೊಂಡ ಜನಪರ ಯೋಜನೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಸ್ಪಷ್ಟವಾಗಿ ತಿಳಿಸಿ, ಅವರ ವಿಶ್ವಾಸವನ್ನು ಇನ್ನಷ್ಟು ಬಲಪಡಿಸೋಣ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಮಾಜಿ ಸಚಿವ ಮತ್ತು ಶಾಸಕರಾದ ಪ್ರಭು ಚವ್ಹಾಣ, ಶಾಸಕರುಗಳಾದ ಸಿದ್ದು ಪಾಟೀಲ, ಶರಣು ಸಲಗರ, ಬಸವರಾಜ್ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಜಿ. ಮೂಳೆ, ಶಶಿಲ್ ನಮೋಶಿ ಸೇರಿದಂತೆ ಪ್ರಮುಖರು, ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/by-vijayendra-bjp-win-claim-bidar-training-campaign-gvd/articleshow-oapdcor"/>
        </item>
        <item>
            <title><![CDATA[ಬೀದರ್, ಬೆಳಗಾವಿಯಲ್ಲಿ ಭಾರಿ ಮಳೆ: ಶಿವಮೊಗ್ಗದಲ್ಲಿ ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ]]></title>
            <link>https://kannada.asianetnews.com/gallery/state/heavy-rain-in-bidar-belgaum-lightning-strike-on-coconut-tree-in-shivamogga-s7h1r7b</link>
            <guid isPermaLink="true">https://kannada.asianetnews.com/gallery/state/heavy-rain-in-bidar-belgaum-lightning-strike-on-coconut-tree-in-shivamogga-s7h1r7b</guid>
            <pubDate>Sun, 15 Mar 2026 22:37:39 +0530</pubDate>
            <description><![CDATA[ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಶಿವಮೊಗ್ಗದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡರೆ, ಬೀದರ್ ಮತ್ತು ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kks6yt8at71jg4pzkx1na7q2,imgname-rain-1773593913610.jpg" type="image/jpeg" height="390" width="690"/>
            <content:encoded><![CDATA[ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಶಿವಮೊಗ್ಗದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡರೆ, ಬೀದರ್ ಮತ್ತು ಬೆಳಗಾವಿಯಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ಇಂದು ಸಂಜೆ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮತ್ತೆ ಕೆಲವೆಡೆ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗ, ಬೀದರ್ ಬೆಳಗಾವಿಯಲ್ಲಿ ಮಳೆ ಜೋರಾಗಿ ಸುರಿದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗದಲ್ಲಿಯೂ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗಿದ್ದು, ಶಿವಮೊಗ್ಗ ಹೊರವಲಯದ ಗೋಪಿ ಶೆಟ್ಟಿ ಕೊಪ್ಪದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಿದ್ದು ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಗೆ ತೆಂಗಿನ ಗರಿಗಳು ಹೊತ್ತಿ ಉರಿದಿದ್ದು, ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.&lt;/p&gt;&lt;img&gt;&lt;p&gt;ಹಾಗೆಯೇ ಬೀದರ್&zwnj;ನಲ್ಲಿಯೂ ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಗಡಿ ಜಿಲ್ಲೆಯ ಜನರಿಗೆ ವರುಣ ತಂಪೆರೆದಿದ್ದಾನೆ. ಬೀದರ್ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.&lt;/p&gt;&lt;img&gt;&lt;p&gt;ನಿರಂತರ ಮಳೆಗೆ ರಸ್ತೆಗಳು ಜಲಾವೃತವಾಗಿವೆ. ಭಾರಿ ಮಳೆಯಿಂದ ವಾಹನ ಸವಾರರ ಸಂಚರಿಸಲು ಪರದಾಟ ನಡೆಸಿದ್ದಾರೆ. ಔರಾದ್, ಕಮಲನಗರ, ಭಾಲ್ಕಿ, ಹುಲಸೂರು, ಬಸವಕಲ್ಯಾಣ, ಚಿಟಗುಪ್ಪಾ ಸೇರಿದಂತೆ ಹಲವೆಡೆ ಮಳೆಯಾಗಿದೆ.&lt;/p&gt;&lt;img&gt;&lt;p&gt;ಬೆಳಗಾವಿಯಲ್ಲೂ ಮಳೆಯ ಆರ್ಭಟ ಜೋರಾಗಿದ್ದು, ನಿರಂತರ ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ ಚರಂಡಿಗಳು ಬ್ಲಾಕ್ ಆಗಿ ರಸ್ತೆಗಳಲ್ಲೇ ನೀರು ಹರಿದಿದ್ದರಿಂದ ಗ್ರಾಪಂ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/heavy-rain-in-bidar-belgaum-lightning-strike-on-coconut-tree-in-shivamogga-s7h1r7b"/>
        </item>
        <item>
            <title><![CDATA[Bidar: ಬಿಸಿಲಾಘಾತಕ್ಕೆ ಕುಸಿದು ಸಾವನ್ನಪ್ಪಿದ 20 ವರ್ಷದ ಯುವಕ; ರಸ್ತೆಬದಿ  ಪತ್ತೆಯಾದ ಶವ]]></title>
            <link>https://kannada.asianetnews.com/gallery/karnataka-districts/bidar-20-year-old-man-dies-after-collapsing-on-the-side-of-the-road-due-to-heatstroke-in-kamalanagar-mrq-tmx22er</link>
            <guid isPermaLink="true">https://kannada.asianetnews.com/gallery/karnataka-districts/bidar-20-year-old-man-dies-after-collapsing-on-the-side-of-the-road-due-to-heatstroke-in-kamalanagar-mrq-tmx22er</guid>
            <pubDate>Mon, 20 Apr 2026 11:49:18 +0530</pubDate>
            <description><![CDATA[ಬೀದರ್ ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpmr78bwm94jztjdvsjqr57p,imgname-bidar-death--5--1776665469308.jpg" type="image/jpeg" height="390" width="690"/>
            <content:encoded><![CDATA[ಬೀದರ್ ಜಿಲ್ಲೆಯ ಕಮಲನಗರದಲ್ಲಿ 20 ವರ್ಷದ ಯುವಕನೋರ್ವ ರಸ್ತೆ ಬದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್, ಬಿಸಿಲಿನ ತಾಪ ತಾಳಲಾರದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ಏಪ್ರಿಲ್ 14ರಂದು 20 ವರ್ಷದ ಯುವಕನೋರ್ವ ರಸ್ತೆ ಬದಿ ಶವವಾಗಿ ಪತ್ತೆಯಾಗಿದ್ದು, ಆತನ ಸಾವಿಗೆ ಅತಿಯಾದ ಬಿಸಿಲು ಕಾರಣ ಎಂದು ಹೇಳಲಾಗುತ್ತಿದೆ. ಬೀದರ್ ಜಿಲ್ಲೆಯ ಕಮಲನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50 ಬಳಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು.&lt;/p&gt;&lt;img&gt;&lt;p&gt;ಮೃತ ಯುವಕನನ್ನು ಉತ್ತರ ಪ್ರದೇಶ ಮೂಲದ ಮೊಹ್ಮದ್ ಸಮೀರ್ ಎಂದು ಗುರುತಿಸಲಾಗಿದೆ. ಕಳೆದ ಹಲವು ತಿಂಗಳಿಂದ ಮೃತ ಸಮೀರ್ ಕಮಲನಗರ ಪಟ್ಟಣದ ಕಟಿಂಗ್ ಶಾಪ್&zwnj;ನಲ್ಲಿ ಕೆಲಸ ಮಾಡಿಕೊಂಡಿದ್ದನು. ಬಿಸಿಲಿನ ತಾಪ ತಾಳಲಾರದೇ ತಲೆ ಸುತ್ತು ಬಿದ್ದು ಸಮೀರ್ ಮೃತನಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.&lt;/p&gt;&lt;img&gt;&lt;p&gt;ಏಪ್ರಿಲ್ 14ರಂದು ಬೆಳ್ಳಗ್ಗೆ 10 ಗಂಟೆಗೆ ತರಕಾರಿ ತೆಗೆದುಕೊಂಡು ಬರಲು ಸಮೀರ್ ರೂಮ್&zwnj;ನಿಂದ ಹೊರ ಬಂದಿದ್ದಾನೆ. ತರಕಾರಿ ಖರೀದಿಸಿ ಹಿಂದಿರುಗುವಾಗ ಬಿಸಿಲಿನ ಪ್ರಮಾಣ ಏರಿಕೆಯಾಗಿತ್ತು. ಈ ವೇಳೆ ರಸ್ತೆ ಬದಿಯ ಮೆಕಾನಿಕ್ ಅಂಗಡಿಯಲ್ಲಿ ನೀರು ಕುಡಿದು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ್ದಿದ್ದನು. ಸ್ವಲ್ಪ ಚೇತರಿಸಿಕೊಂಡ ನಂತರ ಸಮೀರ್ ಡಿಗ್ಗಿ ಗ್ರಾಮಕ್ಕೆ ಹೊರಟಿದ್ದನು.&lt;/p&gt;&lt;img&gt;&lt;p&gt;ಮಾರ್ಗಮಧ್ಯೆಯೇ ಸಮೀರ್ ತಲೆಸುತ್ತು ಬಂದು ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಶ್ರೀಕಾಂತ್ ಅಲ್ಲಾಪುರೆ ಮತ್ತು ಪಿಎಸ್ಐ ಆಶಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮೀರ್ ತಂದೆ ಲಯಿಕ್ ಅಹ್ಮದ್ ನೀಡಿದ ದೂರಿನ ಮೇರೆಗೆ ಕಮಲನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಮಹಾದುರಂತ; ಆತಂಕದಿಂದ ಕಣ್ಣೀರಿಟ್ಟ ಪ್ರಯಾಣಿಕರು&lt;/strong&gt;&lt;/p&gt;&lt;img&gt;&lt;p&gt;ಈ ವರ್ಷ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಹೆಚ್ಚಿಸುತ್ತಾ ಸಾಗಿದ್ದು, ಜನರು ಮನೆಯಿಂದ ಹೊರಗಡೆ ಬರಲು ಭಯಪಡುವಂತಾಗಿದೆ. ಅನಿವಾರ್ಯವಾಗಿ ಹೊರ ಬರುವ ಜನರು ಛತ್ರಿ ಬಳಕೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ 35 ರಿಂದ 38 ಡಿಗ್ರಿ ಸೆಲ್ಸಿಯಸ್&zwnj; ವರೆಗೂ ತಾಪಮಾನ ದಾಖಲಾಗುತ್ತಿದೆ. ಬೇಸಿಗೆಯ ಹೊಡೆತಕ್ಕೆ ಈಗಾಗಲೇ ಕೃಷಿಹೊಂಡ, ಹಳ್ಳ, ಕೊಳ್ಳಗಳು ಬತ್ತಿ ಹೋಗುತ್ತಿದ್ದು, ಜಾನುವಾರುಗಳು ಸಹ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ&lt;/strong&gt;&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bidar-20-year-old-man-dies-after-collapsing-on-the-side-of-the-road-due-to-heatstroke-in-kamalanagar-mrq-tmx22er"/>
        </item>
        <item>
            <title><![CDATA[ಬೀದರ್: ಶಾಲಾ ಕಟ್ಟಡದಿಂದ ಜಿಗಿದು 10ನೇ ಕ್ಲಾಸ್ ಬಾಲಕಿ ಸಾವಿಗೆ ಶರಣು]]></title>
            <link>https://kannada.asianetnews.com/gallery/karnataka-districts/bidar-news-class-10th-girl-dies-after-jumping-from-school-building-tz8ld4d</link>
            <guid isPermaLink="true">https://kannada.asianetnews.com/gallery/karnataka-districts/bidar-news-class-10th-girl-dies-after-jumping-from-school-building-tz8ld4d</guid>
            <pubDate>Thu, 12 Mar 2026 12:56:56 +0530</pubDate>
            <description><![CDATA[&lt;p&gt;&lt;strong&gt;Girl jumps from school building school building&lt;/strong&gt;: ಬೀದರ್&zwnj;ನ ಭೆಮಳಖೇಡ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ. ಪ್ರಾರ್ಥನೆ ವೇಳೆ ತರಗತಿಯಲ್ಲೇ ಉಳಿದಿದ್ದ ಬಾಲಕಿಯ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkg3mrm81ngyxefjv0z6kh5b,imgname-student-death-in-bidar--2--1773288448648.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Girl jumps from school building school building&lt;/strong&gt;: ಬೀದರ್&zwnj;ನ ಭೆಮಳಖೇಡ ಗ್ರಾಮದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ. ಪ್ರಾರ್ಥನೆ ವೇಳೆ ತರಗತಿಯಲ್ಲೇ ಉಳಿದಿದ್ದ ಬಾಲಕಿಯ ಸಾವಿಗೆ ಶಾಲೆಯ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಬೀದರ್&zwnj;: ಶಾಲಾ ಕಟ್ಟಡದಿಂದ ಜಿಗಿದು 16 ವರ್ಷದ ಬಾಲಕಿ ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ಘಟನೆ ಬೀದರ್​ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ನಡೆದಿದೆ. ಬಾಲಕಿ ಇಲ್ಲಿನ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು.&lt;/p&gt;&lt;img&gt;&lt;p&gt;ಶಾಲೆಯ ಪ್ರಾರ್ಥನೆ ಮುಗಿದ ಬಳಿಕ ಬಾಲಕಿ ಶಾಲಾ ಕಟ್ಟಡದಿಂದ ಜಿಗಿದು ಸಾವಿಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ. ಪ್ರಾರ್ಥನೆ ವೇಳೆ ಆಕೆ ಹೊರಗೆ ಬರದೇ ತರಗತಿಯಲ್ಲೇ ಕುಳಿತಿದ್ದು ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಶಾಲೆಯ ವಿರುದ್ಧ ಬಾಲಕಿಯ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಶಾಲೆಯ ಪ್ರಾರ್ಥನೆ ವೇಳೆ ಆಕೆ ಬರಲಿಲ್ಲ ಎಂದಾಗ ನೀವು ಏಕೆ ಆಕೆಯನ್ನು ಕರೆದು ಪ್ರಶ್ನಿಸಿಲ್ಲ ಎಂದು ಶಾಲೆಯ ಶಿಕ್ಷಕರಿಗೆ ಮೃತ ಬಾಲಕಿಯ ಕುಟುಂಬಸ್ಥರು ಪ್ರಶ್ನೆ ಮಾಡಿದ್ದು, ಶಾಲಾ ಶಿಕ್ಷಕರ ವಿರುದ್ಧ ಕುಟುಂಬಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ಸಾವಿಗೆ ಶರಣು&lt;/p&gt;&lt;img&gt;&lt;p&gt;ನನ್ನ ಮಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆ ಮಾಡುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಮೃತ ಬಾಲಕಿಯನ್ನು ಮದಿಯಾ ನಶೀರ್ ಪಾಷಾ ಎಂದು ಗುರುತಿಸಲಾಗಿದೆ. ಬಾಲಕಿ ಸಾವಿಗೆ ಶರಣಾಗುವ ಮುನ್ನ ತರಗತಿ ಕೋಣೆಯಲ್ಲಿ ಸ್ನೇಹಿತೆಯರ ಜೊತೆ ಕುಳಿತಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.&lt;/p&gt;&lt;p&gt;ಇದನ್ನೂ ಓದಿ: ಮಡಿಕೇರಿಯ ಭಾಗಮಂಡಲದಲ್ಲಿ ಸಹಜೀವನ ನಡೆಸುತ್ತಿದ್ದ ಜೋಡಿಯ ಕೊಲೆ: ಮಹಿಳೆ ಸೋದರನಿಂದ ಕೃತ್ಯ&lt;/p&gt;&lt;img&gt;&lt;p&gt;ಬಾಲಕಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಬೇಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Prison break:ಜೈಲಿನಿಂದ ತಪ್ಪಿಸಿಕೊಳ್ಳಲು ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ?&lt;/strong&gt;&lt;/p&gt;]]></content:encoded>
            <category>bidar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/karnataka-districts/bidar-news-class-10th-girl-dies-after-jumping-from-school-building-tz8ld4d"/>
        </item>
        <item>
            <title><![CDATA[40th State Journalists Conference: ಏ.11, 12ರಂದು ಬೀದರ್‌ಲ್ಲಿ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ]]></title>
            <link>https://kannada.asianetnews.com/state/40th-state-journalists-conference-in-bidar-on-the-11th-and-12th-april-2026-rav/articleshow-uvd3ia2</link>
            <guid isPermaLink="true">https://kannada.asianetnews.com/state/40th-state-journalists-conference-in-bidar-on-the-11th-and-12th-april-2026-rav/articleshow-uvd3ia2</guid>
            <pubDate>Fri, 10 Apr 2026 14:01:53 +0530</pubDate>
            <description><![CDATA[&lt;p&gt;ಬೀದರ್&zwnj;ನಲ್ಲಿ ಏಪ್ರಿಲ್ 11 ಮತ್ತು 12 ರಂದು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv89d5rj4tdn86599tb1xvs,imgname-----------------------2026-04-10t140118.684-1775809901752.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.10): &lt;/strong&gt;ಬೀದರ್&zwnj;ನಲ್ಲಿ ಏ.11 ಮತ್ತು 12 ರಂದು 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ನಡೆಯಲಿದ್ದು, ಗುರುವಾರ ಬೆಂಗಳೂರು ಪ್ರೆಸ್&zwnj;ಕ್ಲಬ್&zwnj;ನಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಲಾಯಿತು.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಝೀರಾ ಕನ್ವೆನ್ಷನ್ ಹಾಲ್&zwnj;ನಲ್ಲಿ ಡಾ. ಭೀಮಣ್ಣ ಖಂಡ್ರೆ ವೇದಿಕೆಯಲ್ಲಿ ಆಯೋಜನೆಗೊಂಡಿರುವ ಸಮ್ಮೇಳನವನ್ನು 11ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ ಎಂದರು.&lt;/p&gt;&lt;p&gt;ಅರಣ್ಯ, ಪರಿಸರ ಮತ್ತು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಪೌರಾಡಳಿತ ಸಚಿವ ರಹೀಂಖಾನ್ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಂಸದ ಸಾಗರ ಖಂಡ್ರೆ ವ್ಯಂಗ್ಯಚಿತ್ರ ಪ್ರದರ್ಶನ ಅನಾವರಣಗೊಳಿಸುವರು.&lt;/p&gt;&lt;h2&gt;12ಂದು ಸಮಾರೋಪ:&lt;/h2&gt;&lt;p&gt;ಏ.12 ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಮಾರೋಪ ಭಾಷಣ ಮಾಡಲಿದ್ದು, ಸ್ಪೀಕರ್ ಯು.ಟಿ.ಖಾದರ್ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉಪಸ್ಥಿತರಿರುವರು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದನಾ ನುಡಿ ನೆರವೇರಿಸಲಿದ್ದು, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಪಾಟೀಲ್, ಬೋಸರಾಜು ಪಾಲ್ಗೊಳ್ಳಲಿದ್ದಾರೆ. ಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜೇಯ ಸಿಂಗ್ ಉಪಸ್ಥಿತರಿರುವರು ಎಂದು ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಘಟಕ ಅಧ್ಯಕ್ಷ ಸೋಮಶೇಖರಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರಗೌಡ, ರಾಜ್ಯ ಸಮಿತಿ ಸದಸ್ಯ ಎಚ್.ಆರ್.ರವೀಶ್, ಉಪಾಧ್ಯಕ್ಷ ಡಾ.ಸ್ವಾಮಿ, ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಚ, ಜುಕ್ರಿಯಾ ಮತ್ತಿತರರು ಇದ್ದರು.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/40th-state-journalists-conference-in-bidar-on-the-11th-and-12th-april-2026-rav/articleshow-uvd3ia2"/>
        </item>
        <item>
            <title><![CDATA[ಮನೆಮುಂದೆ ಮೂರು ಬಾರಿ ಓಡಾಡಿದ ಮಹಿಳೆ: ಮಕ್ಕಳ ಕಳ್ಳಿ ಎಂದು ಮನಸೋ ಇಚ್ಛೆ ಥಳಿಸಿದ ಜನ!]]></title>
            <link>https://kannada.asianetnews.com/karnataka-districts/bidar-mob-attack-on-maharashtra-woman-child-kidnapping-rumors-sat/articleshow-vcq8n40</link>
            <guid isPermaLink="true">https://kannada.asianetnews.com/karnataka-districts/bidar-mob-attack-on-maharashtra-woman-child-kidnapping-rumors-sat/articleshow-vcq8n40</guid>
            <pubDate>Thu, 12 Mar 2026 20:33:01 +0530</pubDate>
            <description><![CDATA[&lt;p&gt;ಮೂರು ಬಾರಿ ಮಹಿಳೆಯೊಬ್ಬರು ಮನೆ ಮುಂದೆ ಓಡಾದಿದ್ದಾಳೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈಕೆ ಮಕ್ಕಳ ಕಳ್ಳತನಕ್ಕೆ ಬಂದಿದ್ದಾಳೆ ಎಂದು ಭಾವಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಆದರೆ, ಅಮಾಯಕ ಕೂಲಿಕ ಕಾರ್ಮಿಕ ಮಹಿಳೆ ನೋವಿನಲ್ಲಿ ನರಳಾಡಿ, ಪೊಲೀರು ಬಂದ ನಂತರ ಜೀವ ಉಳಿಸಿಕೊಂಡು ಹೋಗಿದ್ದಾಳೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kkh93fm2fatpkqqmv0j9p64a,imgname-bidar-child-kidnapper-1773327728256.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮಾ.12): ಕ&lt;/strong&gt;ಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಹಬ್ಬುತ್ತಿರುವ 'ಮಕ್ಕಳ ಕಳ್ಳರು ಊರಿಗೆ ಬಂದಿದ್ದಾರೆ' ಎಂಬ ಕಿಡಿಗೇಡಿಗಳ ಸುಳ್ಳು ವದಂತಿಯು ಈಗ ಮಹಿಳೆಯೊಬ್ಬರ ಮೇಲೆ ಅಮಾನವೀಯ ಹಲ್ಲೆಗಳಿಗೆ ನಾಂದಿ ಹಾಡಿದೆ. ಕೇವಲ ಶಂಕೆಯ ಆಧಾರದ ಮೇಲೆ ಮಹಿಳೆಯೊಬ್ಬಳನ್ನು ಅಟ್ಟಾಡಿಸಿ ಹೊಡೆದು, ಕೂದಲು ಜಗ್ಗಿ, ಮುಖಕ್ಕೆ ಒದ್ದು ವಿಕೃತಿ ಮೆರೆದಿರುವ ಭೀಕರ ಘಟನೆ ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?:&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರ ಮೂಲದ ಉಷಾ ಎಂಬ ಮಹಿಳೆ ತನ್ನ ಕುಟುಂಬದೊಂದಿಗೆ ಕಬ್ಬು ಕಟಾವು ಮಾಡುವ ಕೆಲಸಕ್ಕಾಗಿ ಘಾಟಬೋರಾಳ ಗ್ರಾಮಕ್ಕೆ ಬಂದಿದ್ದರು. ಕಬ್ಬಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅವರು, ಅಡುಗೆಗೆ ಮಟನ್ ತರುವ ಉದ್ದೇಶದಿಂದ ಗ್ರಾಮದ ಮಾರುಕಟ್ಟೆಗೆ ಬಂದಿದ್ದರು. ಈ ವೇಳೆ ಅವರ ವೇಷಭೂಷಣ ಮತ್ತು ಭಾಷೆಯನ್ನು ಗಮನಿಸಿದ ಗ್ರಾಮಸ್ಥರು, ಈಕೆ 'ಮಕ್ಕಳ ಕಳ್ಳಿ' ಇರಬೇಕು ಎಂದು ಸುಳ್ಳು ಶಂಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಮಾನುಷ ಹಲ್ಲೆ, ವಿಕೃತಿಯ ಪರಾಕಾಷ್ಠೆ:&lt;/strong&gt;&lt;/h3&gt;&lt;p&gt;ಯಾವುದೇ ವಿಚಾರಣೆ ನಡೆಸದೆ, ಕೇವಲ ವದಂತಿಯನ್ನು ನಂಬಿದ ಗ್ರಾಮಸ್ಥರು ಉಷಾ ಅವರ ಮೇಲೆ ಮುಗಿಬಿದ್ದಿದ್ದಾರೆ. ಜನರ ಗುಂಪಿಗೆ ಸಿಲುಕಿದ ಮಹಿಳೆಯ ಕೂದಲನ್ನು ಜಗ್ಗಿ ಎಳೆದಾಡಿದ್ದಲ್ಲದೆ, ಮುಖಕ್ಕೆ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ರಕ್ತಸಿಕ್ತವಾಗಿ ಅಂಗಲಾಚುತ್ತಿದ್ದರೂ ಬಿಡದ ಗ್ರಾಮಸ್ಥರು, ಅವರನ್ನು ಹಿಡಿದು ಗ್ರಾಮ ಪಂಚಾಯತ್ ಆವರಣದ ಕೊಠಡಿಯೊಂದರಲ್ಲಿ ಕೂಡಿ ಹಾಕಿ ವಿಕೃತಿ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ಮಧ್ಯಪ್ರವೇಶ - ಅಸಲಿ ಸತ್ಯ ಬಹಿರಂಗ:&lt;/strong&gt;&lt;/h2&gt;&lt;p&gt;ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹುಮನಾಬಾದ್ ಪೊಲೀಸರು, ಹಲ್ಲೆಗೊಳಗಾದ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಪೊಲೀಸರು ಸ್ಪಷ್ಟನೆ ನೀಡಿದ್ದು, 'ಹಲ್ಲೆಗೊಳಗಾದ ಮಹಿಳೆ ಯಾವುದೇ ಮಕ್ಕಳ ಕಳ್ಳಿ ಅಲ್ಲ. ಆಕೆ ಕೇವಲ ಕಬ್ಬು ಕಟಾವು ಮಾಡಲು ಬಂದಿದ್ದ ಕಾರ್ಮಿಕ ಮಹಿಳೆ. ಗ್ರಾಮಸ್ಥರು ಸುಳ್ಳು ವದಂತಿಯನ್ನು ನಂಬಿ ಈ ಕೃತ್ಯ ಎಸಗಿದ್ದಾರೆ' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಹೆಚ್ಚುತ್ತಿರುವ ಗುಂಪು ಹಲ್ಲೆಗಳು:&lt;/strong&gt;&lt;/h2&gt;&lt;p&gt;ಬೀದರ್ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲೇ ಇದು ಮೂರನೇ ಘಟನೆಯಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳನ್ನು ನಂಬಿ ಜನರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅಪರಿಚಿತರು ಅಥವಾ ಭಿಕ್ಷುಕರನ್ನು ಕಂಡರೆ ಸಾಕು, ಯಾವುದೇ ವಿಚಾರಣೆ ಮಾಡದೆ ಗುಂಪು ಹಲ್ಲೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರ ಎಚ್ಚರಿಕೆ:&lt;/strong&gt;&lt;/h2&gt;&lt;p&gt;ಯಾರೇ ಆಗಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮಕ್ಕಳ ಕಳ್ಳರು ಎಂಬ ಬಗ್ಗೆ ಅನುಮಾನವಿದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ವದಂತಿ ನಂಬಿ ಅಮಾಯಕರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಘಾಟಬೋರಾಳ ಗ್ರಾಮದಲ್ಲಿ ಹಲ್ಲೆ ನಡೆಸಿದ ಕಿಡಿಗೇಡಿಗಳ ಪತ್ತೆಗಾಗಿ ಪೊಲೀಸರು ಈಗ ಜಾಲ ಬೀಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-mob-attack-on-maharashtra-woman-child-kidnapping-rumors-sat/articleshow-vcq8n40"/>
        </item>
        <item>
            <title><![CDATA[ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ರಸ್ತೆಗೆ ಬಿದ್ದ ಟನ್‌ಗಟ್ಟಲೇ ಅಕ್ಕಿ]]></title>
            <link>https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</link>
            <guid isPermaLink="true">https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf</guid>
            <pubDate>Fri, 17 Apr 2026 17:42:32 +0530</pubDate>
            <description><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpdn7wjmvgmmraeh9tq69550,imgname-ration-lorry-overturn--4--1776427463252.jpg" type="image/jpeg" height="390" width="690"/>
            <content:encoded><![CDATA[&lt;p&gt;ತೆಲಂಗಾಣದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬೀದರ್&zwnj;ನ ಝರಣಿ ನರಸಿಂಹ ದೇವಸ್ಥಾನದ ಬಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕ ಸೇರಿದಂತೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.&lt;/p&gt;&lt;img&gt;&lt;p&gt;ಬೀದರ್: ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಈ ಲಾರಿ ಹೋಗುತ್ತಿತ್ತು.&lt;/p&gt;&lt;img&gt;&lt;p&gt;ಬೀದರ್ ನಗರದ ಝರಣಿ ನರಸಿಂಹ ದೇವಸ್ಥಾನದ ಬಳಿ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿ ನೂರು ಟನ್&zwnj;ಗೂ ಅಧಿಕ&zwnj; ಪಡಿತರ ಅಕ್ಕಿ ಇರೋ ಬಗ್ಗೆ ಮಾಹಿತಿ ಇದೆ.&lt;/p&gt;&lt;img&gt;&lt;p&gt;ಕಾರು ಹಾಗೂ ಟಾಟಾ ಮ್ಯಾಜಿಕ್&zwnj;ಗೆ ಡಿಕ್ಕಿ ಹೊಡೆದ ಬಳಿಕ ಲಾರಿ ಪಲ್ಟಿಯಾಗಿದೆ. ಅಕ್ಕಿ ತುಂಬಿದ ಈ ಟ್ರಕ್ ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುತ್ತಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;img&gt;&lt;p&gt;ಬೀದರ್&zwnj;ನ ರಿಂಗ್ ರೋಡ್&zwnj; ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕಾರಿನಲ್ಲಿದ್ದ 6 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.&lt;/p&gt;&lt;img&gt;&lt;p&gt;ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ನಭಾಗ್ಯದ ಅಕ್ಕಿಯನ್ನ ಅಕ್ರಮವಾಗಿ ಸಾಗಿಸುತ್ತಿದ್ದಿರಬಹುದು ಎಂಬ ಶಂಕೆ ಮೂಡಿದ್ದು, ಅಪಘಾತದ ನಂತರ ಲಾರಿ ಮಗುಚಿ ಬಿದ್ದಿದ್ದರಿಂದ ರಸ್ತೆ ತುಂಬಾ ಅಕ್ಕಿ ಚೆಲ್ಲಿದೆ.&lt;/p&gt;]]></content:encoded>
            <category>bidar</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/lorry-carrying-illegal-ration-rice-overturns-tons-of-rice-fall-onto-the-road-xhaxfaf"/>
        </item>
    </channel>
</rss>
