<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 24 Jun 2026 12:00:30 +0530</lastBuildDate>
        <atom:link href="https://kannada.asianetnews.com/rss/bidar" rel="self" type="application/rss+xml"/>
        <item>
            <title><![CDATA[Stray Dog Attacks 4 Month Old Baby: ಮನೆಯೊಳಗೆ ಮಲಗಿದ್ದ 4 ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ, ಚಿಕಿತ್ಸೆ ಫಲಿಸದೆ ಮಗು ಸಾವು]]></title>
            <link>https://kannada.asianetnews.com/karnataka-districts/bidar-horror-stray-dog-attacks-4-month-old-baby-sleeping-inside-house-infant-dies-rav/articleshow-0np99aq</link>
            <guid isPermaLink="true">https://kannada.asianetnews.com/karnataka-districts/bidar-horror-stray-dog-attacks-4-month-old-baby-sleeping-inside-house-infant-dies-rav/articleshow-0np99aq</guid>
            <pubDate>Sun, 10 May 2026 09:46:34 +0530</pubDate>
            <description><![CDATA[&lt;p&gt;ಬೀದರ್&zwnj;ನ ದುಬಲಗುಂಡಿ ಗ್ರಾಮದಲ್ಲಿ, ಮನೆಯೊಳಗೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನ ಮೇಲೆ ಬೀದಿ ನಾಯಿ ದಾಳಿ ಮಾಡಿ, ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಈ ಘಟನೆಗೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಸಚಿವರಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr81bvq01w04qwrg64073wzr,imgname-----------------------2026-05-10t093449.241-1778386333408.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮೇ.10)&lt;/strong&gt;: ಮನೆಯ ಒಳಗಡೆ ಮಲಗಿದ್ದ ನಾಲ್ಕು ತಿಂಗಳ ಕಂದಮ್ಮನನ್ನು ಬೀದಿ ನಾಯಿಯೊಂದು ದಾಳಿ ಮಾಡಿ ಗಂಭೀರವಾಗಿ ಕಚ್ಚಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನಪ್ಪಿದ ಘಟನೆ ಶನಿವಾರ ಬೆಳಗ್ಗೆ ಹುಮನಾಬಾದ್&zwnj; ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಸಂಭವಿಸಿದೆ.&lt;/p&gt;&lt;p&gt;ಸುಧಾ ಹಾಗೂ ಸಿದ್ಧಪ್ಪ ದಂಪತಿಯ ಮಗು ಬೀದಿ ನಾಯಿ ದಾಳಿಗೆ ಬಲಿಯಾಗಿದ್ದು, ನಾಯಿ ದಾಳಿಯಿಂದ ಮಗುವಿನ ಮುಖ, ಕಣ್ಣು ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಇದರಿಂದ ದುಬಲಗುಂಡಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರ್&zwnj;ನ ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು, ಆದರೆ ಮಗು ಚಿಕಿತ್ಸೆ ಫಲಿಸದೆ ಅಸುನೀಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಮಗುವನ್ನು ಮನೆಯೊಳಗೆ ಮಲಗಿಸಿ ತಾಯಿ ಹೊರಗೆ ಕೆಲಸ ಮಾಡುವಾಗ ಬೀದಿ ನಾಯಿಯೊಂದು ಮನೆಯೊಳಗೆ ನುಗ್ಗಿ ಮಗುವಿನ ದೇಹದ ವಿವಿಧ ಭಾಗಗಳನ್ನು ಕಚ್ಚಿದ್ದರಿಂದ ಮಗು ಗಂಭೀರವಾಗಿ ಗಾಯಗೊಂಡು ಅತ್ತಿರುವ ಶಬ್ದ ಕೇಳಿ ಪಾಲಕರು ಓಡಿ ಬಂದು ನೋಡುವಷ್ಟರಲ್ಲಿ ಮಗು ನಾಯಿ ದಾಳಿಕ್ಕೆ ತುತ್ತಾಗಿತ್ತು ಎಂದು ಹೇಳಲಾಗಿದೆ. ಈ ನಾಯಿ ಗ್ರಾಮದ ಇತರೇ ಒಬ್ಬ ಬಾಲಕ ಸೇರಿ ಮೂರು ಜನರಿಗೂ ನಾಯಿ ದಾಳಿ ನಡೆಸಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಇನ್ನು, ಮಗು ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಕಾರಣವಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಸಚಿವ ಖಂಡ್ರೆ ಕಂಬನಿ:&lt;/h2&gt;&lt;p&gt;ಮೃತ ಕಂದಮ್ಮನ ಕುಟುಂಬದವರೊಂದಿಗೆ ಈ ನೋವಿನ ಸಂದರ್ಭದಲ್ಲಿ ಸರ್ಕಾರ ನಿಲ್ಲುತ್ತದೆ. ದೇವರು ಮೃತ ಮಗುವಿನ ಆತ್ಮಕ್ಕೆ ಚಿರಶಾಂತಿ ನೀಡಲಿ, ತಂದೆ ತಾಯಿಗಳಿಗೆ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ನಿಯಮಾನುಸಾರ ಪರಿಹಾರ ನೀಡುವಂತೆ ಬೀದರ್&zwnj; ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bidar-horror-stray-dog-attacks-4-month-old-baby-sleeping-inside-house-infant-dies-rav/articleshow-0np99aq"/>
        </item>
        <item>
            <title><![CDATA[ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಆಸ್ತಿ ಪತ್ತೆ, ಎಲ್ಲೆಲ್ಲಿ ದಾಳಿ?]]></title>
            <link>https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</link>
            <guid isPermaLink="true">https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</guid>
            <pubDate>Tue, 16 Jun 2026 09:02:10 +0530</pubDate>
            <description><![CDATA[ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮತ್ತು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ghne3sn58e8amfw5e7hkgzhv,imgname-karnataka-lokayukta.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರು&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿ ಎ.ಸಿ.ಎಫ್.ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್&zwnj;ನಲ್ಲಿರುವ ನಿವಾಸ, ಕಡೂರಿನಲ್ಲಿರುವ ಶ್ರೀನಿವಾಸ್ ಸೋದರಿ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ದಾವಣಗೆರೆ&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರೋ ಎರಡು ಮನೆ, NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಸರಸ್ವತಿ ನಗರದಲ್ಲಿ ಮನೆ, ಕೆಆರ್&zwnj;ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತಿದೆ. ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.&lt;/p&gt;&lt;p&gt;&lt;strong&gt;ಕಲಬುರಗಿ&lt;/strong&gt;&lt;/p&gt;&lt;p&gt;ಕಲಬುರಗಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಮನೆ ಸೇರಿದಂತೆ ಐದು ಕಡೆ ಮೇಲೆ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ ನ ಎರಡು ಕಾಂಪ್ಲೆಂಕ್ಸ್ , ಹಳ್ಳಿಖೇಡ ಗ್ರಾಮದ ತೋಟದ ಮನೆಯ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಬೀದರ ಜಿಲ್ಲೆ ಹುಮನಾಬಾದನಲ್ಲಿ ಎರಡು ಕಾಂಪ್ಲೆಕ್ಸ್, ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಸೇರಿದಂತೆ ಆರಂಭದಲ್ಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಿವೃತ ಅಧಿಕಾರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt;&lt;/p&gt;&lt;p&gt;ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರಾಜಣ್ಣ ಅಡಿಷನಲ್ ಡೈರೆಕ್ಟರ್ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಬೆಸ್ಕಾಂ ಎಇಇ ಉದಯ್ ಕುಮಾರ್ ಅವರ ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಇಬ್ಬರು ಅಧಿಕಾರಿಗಳಿಂದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru"/>
        </item>
        <item>
            <title><![CDATA[CSMT ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಆರಾಮದಾಯಕ ಸುದ್ದಿ]]></title>
            <link>https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</link>
            <guid isPermaLink="true">https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</guid>
            <pubDate>Wed, 24 Jun 2026 12:00:24 +0530</pubDate>
            <description><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvw4j5ae9d645yzh1hybdcw8,imgname-indian-railways-1782281999694.jpg" type="image/jpeg" height="390" width="690"/>
            <content:encoded><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.&lt;img&gt;&lt;p&gt;24 ಬೋಗಿಗಳೊಂದಿಗೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಕೇಂದ್ರ ರೈಲ್ವೆ ಓಡಿಸಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸಲು ಹೆಚ್ಚುವರಿ 3 ಬೋಗಿಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.&lt;/p&gt;&lt;img&gt;&lt;p&gt;ಅನುಕೂಲಕರ ಪ್ರಯಾಣವನ್ನು ಸುಗಮಗೊಳಿಸುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸಪ್ರೆಸ್ ರೈಲುಗಳನ್ನು 3 ಹೆಚ್ಚುವರಿ ಬೋಗಿಗಳೊಂದಿಗೆ ಓಡಿಸಲು ನಿರ್ಧರಿಸಿದೆ. ಸದ್ಯ ರೈಲಿಗೆ 24 ಬೋಗಿಗಳನ್ನು ಅಳವಡಿಸ ಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;img&gt;&lt;p&gt;ಜೂನ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22107 CSMT ಮುಂಬೈ-ಲಾತೂರ್ ಎಕ್ಸಪ್ರೆಸ್ ಮತ್ತು ಜೂನ್ 26 ರಿಂದ ರೈಲು ಸಂಖ್ಯೆ 22108 ಲಾತೂರ್ - CSMT ಮುಂಬೈ ಎಕ್ಸಪ್ರೆಸ್ ಮತ್ತು ಜೂನ್ 26ರಿದ ರೈಲು ಸಂಖ್ಯೆ 22143 CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ರೈಲು ಸಂಖ್ಯೆ 22144 ಬೀದರ್- CSMT ಮುಂಬೈ ಎಕ್ಸ್&zwnj;ಪ್ರೆಸ್ ಜೂ. 27ರಿಂದ ಜಾರಿಗೆ ಬರಲಿದೆ.&lt;/p&gt;&lt;img&gt;&lt;p&gt;ಈ ರೈಲುಗಳಲ್ಲಿ 1 ಪ್ರಥಮ ಎಸಿ, 3 ಎಸಿ II-ಶ್ರೇಣಿ, 5 ಎಸಿ III-ಶ್ರೇಣಿ, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಗಾರ್ಡ್ ಕಮ್ ಬ್ರೇಕ್ ವ್ಯಾನ್&zwnj;ಗಳನ್ನು ಒಳಗೊಂಡಂತೆ 24 ಐಸಿಎಫ್ ಕೋಚ್&zwnj;ಗಳು ಇರುತ್ತವೆ. ಈ ನವೀಕರಣವು ಮುಂಬೈ, ಲಾತೂರ್ ಮತ್ತು ಬೀದರ್ ನಡುವೆ ಪ್ರಯಾಣಿಕರಿಗೆ ಹೆಚ್ಚಿನ ಆಸನ ಸಾಮರ್ಥ್ಯ, ಉತ್ತಮ ಅನುಕೂಲತೆ ಮತ್ತು ಸುಗಮ ಪ್ರಯಾಣವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು &lsquo;ETCS&rsquo; ಸಿಗ್ನಲಿಂಗ್&zwnj;ಗೆ ಸಜ್ಜಾದ ಕೆ-ರೈಡ್&zwnj;&lt;/strong&gt;&lt;/p&gt;&lt;img&gt;&lt;p&gt;3 ಹೆಚ್ಚುವರಿ ಕೋಚ್&zwnj;ಗಳು ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸುತ್ತವೆ. 1 ಎಸಿ II-ಶ್ರೇಣಿ - 46 ಆಸನಗಳು, 1 ಎಸಿ III- ಶ್ರೇಣಿ - 64 ಆಸನಗಳು, 1 ಸ್ಲೀಪರ್ ಕ್ಲಾಸ್ - 72 ಆಸನಗಳು. ಸೋಲಾಪುರ ವಿಭಾಗವು ಪ್ರಯಾಣಿಕರಿಗೆ ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಹೊಸದಾಗಿ ವರ್ಧಿತ ಕೋಚ್&zwnj;ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!&lt;/strong&gt;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12"/>
        </item>
        <item>
            <title><![CDATA[Prabhu Chauhan: 'ಇದು ರಾಜಕೀಯ ಪ್ರೇರಿತ' ಶಾಸಕ ಚವ್ಹಾಣ್‌ ಜಾತಿ ವಿವಾದ, ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು]]></title>
            <link>https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq</link>
            <guid isPermaLink="true">https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq</guid>
            <pubDate>Fri, 22 May 2026 06:48:32 +0530</pubDate>
            <description><![CDATA[&lt;p&gt;ಔರಾದ್&zwnj; ಶಾಸಕ ಪ್ರಭು ಚವ್ಹಾಣ್&zwnj; ಅವರ ಜಾತಿ ಮತ್ತು ಮೂಲ ನಿವಾಸವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್&zwnj; ವಜಾಗೊಳಿಸಿದೆ. ಈ ದೂರು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, &amp;nbsp;ಸ್ಥಳೀಯರು, ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಹೈಕೋರ್ಟ್&zwnj; ತೀರ್ಪನ್ನು ಎತ್ತಿಹಿಡಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks6krpv8nrqyjn9gvd7wc7bx,imgname-----------------------2026-05-22t064031.911-1779412261736.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿರಾಳ - ಜಾತಿ, ಮೂಲನಿವಾಸಿ ವಿವಾದ ಬಗ್ಗೆ ದೂರು ರಾಜಕೀಯ ಪ್ರೇರಿತ: ಕೋರ್ಟ್&zwnj;&lt;/p&gt;&lt;p&gt;&amp;nbsp;&lt;strong&gt;ಔರಾದ್&zwnj; (ಮೇ.22): &lt;/strong&gt;ಮಾಜಿ ಸಚಿವ, ಔರಾದ್&zwnj; ಶಾಸಕ ಪ್ರಭು ಚವ್ಹಾಣ್&zwnj; ವಿರುದ್ಧ ಮೂಲನಿವಾಸ ಸ್ಥಳ ಹಾಗೂ ಜಾತಿ ಮೂಲ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್&zwnj;, ಇವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಚುನಾವಣೆಯಲ್ಲಿ ಅಕ್ರಮವಾಗಿ ಸ್ಪರ್ಧಿಸಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕಿದೆ.&lt;/p&gt;&lt;h2&gt;ಪ್ರಕರಣವೇನು?:&lt;/h2&gt;&lt;p&gt;ಶಾಸಕ ಪ್ರಭು ಚವ್ಹಾಣ್&zwnj; ಅವರು ಮಹಾರಾಷ್ಟ್ರ ಮೂಲದವರು. ಮಹಾರಾಷ್ಟ್ರದಲ್ಲಿ ಲಂಬಾಣಿ ಸಮಾಜವು ವಿಮುಕ್ತ ಜಾತಿ (ವಿಜೆ-ಎ) ಮೀಸಲಾತಿ ಹೊಂದಿದೆ. ಆದರೆ, ಇವರು ಬೀದರ್&zwnj; ಜಿಲ್ಲೆಯ ಬೋಂತಿ ತಾಂಡಾ ಮೂಲದವರೆಂದು ರಹವಾಸಿ ಪತ್ರ ಪಡೆದು, ಲಂಬಾಣಿ ಸಮಾಜ ಇಲ್ಲಿ ಹೊಂದಿರುವ ಪರಿಶಿಷ್ಟ ಜಾತಿ (ಎಸ್&zwnj;ಸಿ) ಮೀಸಲು ಸೌಲಭ್ಯದ ಮೇಲೆ 2008ರಿಂದ ಔರಾದ್&zwnj; ಕ್ಷೇತ್ರದ ಶಾಸಕರಾಗುತ್ತಿದ್ದಾರೆ. ಮೀಸಲು ಸೌಲಭ್ಯ ದುರ್ಬಳಕೆ ಮಾಡಿಕೊಂಡ ಇವರ ಶಾಸಕತ್ವ ಅನರ್ಹಗೊಳಿಸಬೇಕೆಂದು ನರಸಿಂಗ ತುಕಾರಾಮ ಎಂಬುವರು ಹೈಕೋರ್ಟ್&zwnj;ನ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್&zwnj; ಪೀಠ, ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತುಕಾರಾಮ ಅವರು, ಸುಪ್ರೀಂಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;&lt;p&gt;ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್&zwnj; ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಸತೀಶಚಂದ್ರ ಶರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಈ ಮೇಲ್ಮನವಿ ಅರ್ಜಿಯನ್ನು (2026ರ ಮೇ 6ರಂದು) ವಜಾಗೊಳಿಸಿದೆ.&lt;/p&gt;&lt;p&gt;ಚವ್ಹಾಣ್&zwnj; ಅವರ ಜಾತಿ ಮೂಲ ಮತ್ತು ಮೂಲ ನಿವಾಸದ ಬಗ್ಗೆ ಕ್ಯಾತೆ ತೆಗೆದು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ್&zwnj; ಮತ್ತು ಬೀದರ್&zwnj;ನ ರವೀಂದ್ರ ಕಲ್ಲಯ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು 2023ರ ಮೇ 1ರಂದು ಸುಪ್ರೀಂಕೋರ್ಟ್&zwnj; ವಜಾಗೊಳಿಸಿತ್ತು.&lt;/p&gt;&lt;h3&gt;ನಾನು ಕನ್ನಡಿಗ: ಚವ್ಹಾಣ್&zwnj;&lt;/h3&gt;&lt;p&gt;ನಾನು ಕನ್ನಡಿಗ, ಕರ್ನಾಟಕದವನು. ಇಲ್ಲೇ ಹುಟ್ಟಿ, ಬೆಳೆದಿದ್ದೇನೆ. ವಿನಾಕಾರಣ ನನ್ನ ಜಾತಿ, ನಿವಾಸದ ಮೂಲ ಕೆದಕಿ ವಿವಾದ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್&zwnj; ಎರಡು ಸಲ ನನ್ನ ಪರವಾಗಿ ತೀರ್ಪು ಕೊಟ್ಟಿದೆ. ಇದೀಗ ಸುಪ್ರೀಂಕೋರ್ಟ್&zwnj; ಸಹ ಮತ್ತೊಮ್ಮೆ ನನ್ನ ವಿರುದ್ಧದ ಅರ್ಜಿ ವಜಾಗೊಳಿಸಿದೆ. ಇದು ಸತ್ಯಮೇವ ಜಯತೆ ಎಂದು ಶಾಸಕ ಚವ್ಹಾಣ್ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಚವ್ಹಾಣ್&zwnj; ಅವರ ಜನ್ಮಸ್ಥಳ, ವಿದ್ಯಾಭ್ಯಾಸ, ಎಸ್&zwnj;ಸಿ ಜಾತಿ ಪ್ರಮಾಣಪತ್ರ ಸ್ವೀಕಾರ, ಮತದಾರರ ಪಟ್ಟಿಯಲ್ಲಿನ ಹೆಸರು... ಹೀಗೆ ಎಲ್ಲದರ ಪರಿಶೀಲನೆ ನಡೆಸಿದ ವೇಳೆ ಇವರು ಸ್ಥಳೀಯರು ಹಾಗೂ ಲಂಬಾಣಿ ಎಸ್&zwnj;ಸಿ ಸಮಾಜದವರು ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಹೈಕೋರ್ಟ್&zwnj;ನ ಕಲಬುರಗಿ ಪೀಠ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ. ಈ ಮೇಲ್ಮನವಿ ರಾಜಕೀಯ ಪ್ರೇರಿತವಾಗಿದ್ದು, ಪ್ರತೀಕಾರದ ಹೊರತಾಗಿ ಬೇರೆ ಉದ್ದೇಶವೇನನ್ನೂ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq"/>
        </item>
        <item>
            <title><![CDATA[ಕರ್ನಾಟಕ ಮಣ್ಣಲ್ಲಿ ಜಪಾನ್‌ 'ಮಿಯಾಜಾಕಿ' ಕಮಾಲ್: ಕೊಪ್ಪಳ ಬಳಿಕ ಬೀದರ್‌ನಲ್ಲೂ ದುಬಾರಿ ಮಾವು? ರೇಟ್ ಸಿಕ್ಕಿದ್ದೆಷ್ಟು?]]></title>
            <link>https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</link>
            <guid isPermaLink="true">https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</guid>
            <pubDate>Fri, 22 May 2026 16:37:01 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks7mzsqgab1q6bfhpnxv7ncy,imgname-bidar-miyazaki-mango-1779447097072.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;&lt;img&gt;&lt;p&gt;ಜಗತ್ತಿನ ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ಜಪಾನ್ ಮೂಲದ ಮಿಯಾಜಾಕಿ ಹಣ್ಣು ನಿಜಕ್ಕೂ ರಾಜರಲ್ಲಿ ರಾಜ ಎಂದು ಹೇಳಬಹುದು. ಕಾರಣ ಈ ಮಿಯಾಜಾಕಿ ಹಣ್ಣಿಗೆ 1 ಕೆಜಿಗೆ 2.5 ಲಕ್ಷ ರೂ. ಎಂದು ಹೇಳುತ್ತಾರೆ. ಆದರೆ, ಭಾರತದ ರೈತರು ಈವರೆಗೆ 10 ಸಾವಿರ ರೂ. ಕೆಜಿ ಮಾರಾಟ ಮಾಡಿದ್ದನ್ನೂ ಯಾರೂ ನೋಡಿಲ್ಲ.&lt;/p&gt;&lt;p&gt;ಹೀಗಿರುವಾಗ, ಕೊಪ್ಪಳದಲ್ಲಿ ಮಿಯಾಜಾಕಿ ಮಾವಿನ ಹಣ್ಣು ಬೆಳೆದು ಕೇವಲ 3 ಸಾವಿರ ರೂ.ಗೆ ಒಂದು ಕೆಜಿ ಹಣ್ಣು ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದನು. ಇದೀಗ ಬೀದರ್&zwnj;ನಲ್ಲಿಯೂ ಮತ್ತೊಬ್ಬ ರೈತ ಮಿಯಾಜಾಕಿ ಮಾವು ಬೆಳೆದು ಸುದ್ದಿಗೆ ಬಂದಿದ್ದಾರೆ. ಅವರ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತರು ಈ ಅಪರೂಪದ ಸಾಹಸಕ್ಕೆ ಕೈಹಾಕಿದ್ದಾರೆ. ಇವರು ಜಪಾನ್ ದೇಶದಿಂದಲೇ ನೇರವಾಗಿ ಈ ಮಿಯಾಜಾಕಿ ಮಾವಿನ ಗಿಡಗಳನ್ನು ತರಿಸಿ, ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ 4 ಗಿಡಗಳನ್ನು ನಾಟಿ ಮಾಡಿದ್ದರು. ಈಗ ಈ ಗಿಡಗಳಲ್ಲಿ ಹಣ್ಣುಗಳು ಸಮೃದ್ಧವಾಗಿ ಬಂದಿವೆ.&lt;/p&gt;&lt;img&gt;&lt;p&gt;ಈ ಮಾವಿನ ಹಣ್ಣುಗಳು ಸಾಮಾನ್ಯ ಮಾವಿಗಿಂತ ಹೆಚ್ಚು ಸಿಹಿಯಾಗಿದ್ದು, ಗಾಢ ಕೆಂಪು ಬಣ್ಣದಿಂದ ಕೂಡಿವೆ. ಒಂದೊಂದು ಹಣ್ಣು ಸುಮಾರು 200 ರಿಂದ 500 ಗ್ರಾಂವರೆಗೆ ತೂಕ ಬರುತ್ತದೆ. ಸದ್ಯಕ್ಕೆ ಇದನ್ನು ಮನೆಯ ಬಳಕೆಗಾಗಿ ಬೆಳೆದಿದ್ದರೂ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಇರಾದೆ ರೈತರದ್ದಾಗಿದೆ.&lt;/p&gt;&lt;img&gt;&lt;p&gt;ಅಂತಹ ಅದ್ಭುತ ಮತ್ತು ದುಬಾರಿ 'ಮಿಯಾಜಾಕಿ' (Miyazaki Mango) ಮಾವಿನ ಹಣ್ಣು ಈಗ ಕರ್ನಾಟಕದ ಮಣ್ಣಿನಲ್ಲಿಯೂ ಬೆಳೆಯುತ್ತಿದೆ. ಕೊಪ್ಪಳದ ಬಳಿಕ ಇದೀಗ ಗಡಿ ಜಿಲ್ಲೆ ಬೀದರ್&zwnj;ನ ರೈತರು ಈ ಅತಿ ದುಬಾರಿ ಮಾವು ಬೆಳೆದು ಸುದ್ದಿಯಾಗಿದ್ದಾರೆ. ಇದೀಗ ಪ್ರಾಯೋಗಿಕ ಬೆಳೆ ಯಶಸ್ವಿ ಆಗಿದ್ದು, ಹೆಚ್ಚಿನ ಗಿಡ ಬೆಳೆಯಲು ಉತ್ಸುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಬೀದರ್&zwnj;ಗಿಂತ ಮೊದಲು ಕೊಪ್ಪಳ ಜಿಲ್ಲೆಯ ನಾಗಪ್ಪ ಬಗನಾಳ ಎಂಬ ರೈತರು ಈ ಮಿಯಾಜಾಕಿ ಮಾವನ್ನು ಬೆಳೆದು ಸದ್ದು ಮಾಡಿದ್ದರು. ಕಲ್ ತಾವರಗೇರಾ ಗ್ರಾಮದ ನಾಗಪ್ಪ ಅವರು 2 ಎಕರೆ ಪ್ರದೇಶದಲ್ಲಿ ಬರೋಬ್ಬರಿ 180 ಗಿಡಗಳನ್ನು ಬೆಳೆಸಿದ್ದಾರೆ. ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ ಸಸಿಗಳನ್ನು ತರಿಸಿದ್ದ ಅವರು, ಪ್ರತಿ ಸಸಿಗೆ 1,300 ರೂಪಾಯಿ ವೆಚ್ಚ ಮಾಡಿದ್ದರು.&lt;/p&gt;&lt;img&gt;&lt;p&gt;ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಹಣ್ಣಿಗೆ ಕೆಜಿಗೆ 2.50 ಲಕ್ಷ ರೂಪಾಯಿ ಬೆಲೆ ಇದೆ. ಇದನ್ನು ಜಪಾನ್&zwnj;ನಲ್ಲಿ 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಕೊಪ್ಪಳದ ಮಾವು ಮೇಳದಲ್ಲಿ ಈ ಹಣ್ಣು ಕೆಜಿಗೆ ಕೇವಲ 3 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿಶ್ವದ ಅತ್ಯಂತ ದುಬಾರಿ ಹಣ್ಣನ್ನು ಬೆಳೆದರೂ, ಅದಕ್ಕೆ ತಕ್ಕ ಮಾರುಕಟ್ಟೆ ಇಲ್ಲದಿರುವುದು ರೈತರಿಗೆ ದೊಡ್ಡ ಸವಾಲಾಗಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y"/>
        </item>
        <item>
            <title><![CDATA[ಬಂಗಾರದ ಮನುಷ್ಯನ ಸೈಕಲ್ ಸವಾರಿ ಹಿಂದಿದೆ ರಹಸ್ಯ; ಮೋದಿ ಮಾತಿನಿಂದ ಐಷಾರಾಮಿ ಕಾರಿಗೆ ಟಾಟಾ ಹೇಳಿದ ಚಿನ್ನದ ವ್ಯಾಪಾರಿ!]]></title>
            <link>https://kannada.asianetnews.com/karnataka-districts/basavakalyan-gold-shop-owner-revannappa-switches-to-bicycle-from-luxury-car-to-save-fuel-inspired-by-pm-modi-sat/articleshow-8amo747</link>
            <guid isPermaLink="true">https://kannada.asianetnews.com/karnataka-districts/basavakalyan-gold-shop-owner-revannappa-switches-to-bicycle-from-luxury-car-to-save-fuel-inspired-by-pm-modi-sat/articleshow-8amo747</guid>
            <pubDate>Fri, 15 May 2026 17:53:52 +0530</pubDate>
            <description><![CDATA[&lt;p&gt;ಬಸವಕಲ್ಯಾಣದ ಚಿನ್ನದ ವ್ಯಾಪಾರಿ ರೇವಣಪ್ಪ, ಪ್ರಧಾನಿ ಮೋದಿಯವರ ಇಂಧನ ಉಳಿತಾಯದ ಕರೆಯಿಂದ ಪ್ರೇರಿತರಾಗಿ, ತಮ್ಮ ಐಷಾರಾಮಿ ಕಾರನ್ನು ಬಿಟ್ಟು ಸೈಕಲ್&zwnj;ನಲ್ಲಿ ಅಂಗಡಿಗೆ ತೆರಳುತ್ತಿದ್ದಾರೆ. ಅವರ ಈ ನಡೆ ಇಂಧನ ಉಳಿತಾಯ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುತ್ತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krns5kncv3nc2nzhfznhpdtt,imgname-bidar-jewellery-shop-owner-1778847501996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮೇ 15): ಇಂ&lt;/strong&gt;ದಿನ ಕಾಲದಲ್ಲಿ ಶ್ರೀಮಂತಿಕೆ ಎಂದರೆ ಐಷಾರಾಮಿ ಕಾರುಗಳು, ಬೈಕುಗಳು ಮತ್ತು ವೈಭವದ ಜೀವನ. ಅದರಲ್ಲೂ ಚಿನ್ನದ ಅಂಗಡಿಯ ಮಾಲೀಕರು ಅಂದಮೇಲೆ ಅವರ ಜೀವನಶೈಲಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣದ ಚಿನ್ನದ ವ್ಯಾಪಾರಿಯೊಬ್ಬರು ಇದಕ್ಕೆ ಅಪವಾದ ಎಂಬಂತೆ ನಡೆದುಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಐಷಾರಾಮಿ ಕಾರು ಬಿಟ್ಟು ಸೈಕಲ್ ಮೊರೆ:&lt;/strong&gt;&lt;/h3&gt;&lt;p&gt;ಬಸವಕಲ್ಯಾಣ ನಗರದಲ್ಲಿ ಬಂಗಾರದ ಅಂಗಡಿ ಹೊಂದಿರುವ ರೇವಣಪ್ಪ ಅವರು ಪ್ರತಿದಿನ ತಮ್ಮ ಐಷಾರಾಮಿ ಕಾರಿನಲ್ಲೇ ಅಂಗಡಿಗೆ ತೆರಳುತ್ತಿದ್ದರು. ಆದರೆ, ಇಂದು ರೇವಣಪ್ಪ ಅವರು ತಮ್ಮ ಕಾರು ಮತ್ತು ಬೈಕುಗಳನ್ನು ಮನೆಯಲ್ಲೇ ಬಿಟ್ಟು ಸೈಕಲ್ ತುಳಿಯುತ್ತಾ ಅಂಗಡಿಗೆ ಬಂದಿದ್ದಾರೆ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಸುಮಾರು 2 ಕಿಲೋಮೀಟರ್ ಸೈಕಲ್ ತುಳಿದು ಅವರು ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಧಾನಿ ಮೋದಿ ಮಾತೇ ಪ್ರೇರಣೆ:&lt;/strong&gt;&lt;/h2&gt;&lt;p&gt;ರೇವಣಪ್ಪ ಅವರು ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಪ್ರೇರಣೆಯಾಗಿದೆ. ದೇಶದ ಹಿತದೃಷ್ಟಿಯಿಂದ ಇಂಧನ ಉಳಿಸುವುದು ಅತ್ಯಂತ ಅವಶ್ಯಕವಾಗಿದೆ. ಪ್ರಧಾನಿ ಮೋದಿ ಅವರು ಇಂಧನ ಉಳಿತಾಯದ ಬಗ್ಗೆ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ರೇವಣಪ್ಪ, &quot;ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯ. ನಾವು ಇಂಧನ ಉಳಿಸಿದರೆ ಅದು ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಹೀಗಾಗಿ ಇಂದಿನಿಂದ ಸೈಕಲ್ ಮೂಲಕವೇ ಸಂಚರಿಸಲು ನಿರ್ಧರಿಸಿದ್ದೇನೆ&quot; ಎಂದು ಹೆಮ್ಮೆಯಿಂದ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಆರೋಗ್ಯ ಮತ್ತು ಪರಿಸರ ಎರಡಕ್ಕೂ ಲಾಭ:&lt;/strong&gt;&lt;/h3&gt;&lt;p&gt;ಕೇವಲ ಇಂಧನ ಉಳಿತಾಯ ಮಾತ್ರವಲ್ಲದೆ, ಸೈಕಲ್ ಬಳಕೆಯಿಂದ ಆರೋಗ್ಯ ವೃದ್ಧಿಸುತ್ತದೆ ಮತ್ತು ಪರಿಸರ ಮಾಲಿನ್ಯವೂ ಕಡಿಮೆಯಾಗುತ್ತದೆ ಎಂಬ ಸಂದೇಶವನ್ನು ರೇವಣಪ್ಪ ನೀಡಿದ್ದಾರೆ. ಬಸವಕಲ್ಯಾಣದ ರಸ್ತೆಯಲ್ಲಿ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು ಸೈಕಲ್ ತುಳಿಯುತ್ತಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಅವರ ಸರಳತೆ ಮತ್ತು ದೇಶಪ್ರೇಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ದೇಶದ ಹಿತಕ್ಕಾಗಿ ಸಣ್ಣ ಬದಲಾವಣೆ ಮಾಡಿಕೊಳ್ಳುವುದು ದೊಡ್ಡ ವಿಷಯವಲ್ಲ. ನಾವೆಲ್ಲರೂ ವಾರದಲ್ಲಿ ಕನಿಷ್ಠ ಒಂದು ದಿನವಾದರೂ ಇಂಧನ ಬಳಸದ ವಾಹನಗಳನ್ನು ಅಥವಾ ಸೈಕಲ್ ಬಳಸಿದರೆ ದೇಶಕ್ಕೆ ದೊಡ್ಡ ಲಾಭವಾಗಲಿದೆ'ಎಂಬುದು ರೇವಣಪ್ಪ ಅವರ ಮನವಿಯಾಗಿದೆ. ಬಸವಕಲ್ಯಾಣದ ಈ ಬಂಗಾರದ ವ್ಯಾಪಾರಿಯ ನಡೆ ಈಗ ಸೋಷಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗುತ್ತಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/basavakalyan-gold-shop-owner-revannappa-switches-to-bicycle-from-luxury-car-to-save-fuel-inspired-by-pm-modi-sat/articleshow-8amo747"/>
        </item>
        <item>
            <title><![CDATA[ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!]]></title>
            <link>https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</link>
            <guid isPermaLink="true">https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</guid>
            <pubDate>Sun, 31 May 2026 12:48:57 +0530</pubDate>
            <description><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksycmtjcg3w9g4kwmrkhywkv,imgname-----------------------2026-05-31t121657.592-1780210100812.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;&lt;img&gt;&lt;p&gt;ರಾಜ್ಯದಲ್ಲಿ ಸಿಎಲ್&zwnj;ಪಿ ನಾಯಕನ ಆಯ್ಕೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಉಪಮುಖ್ಯಮಂತ್ರಿ (ಡಿಸಿಎಂ), ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಹುದ್ದೆಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ವಿವಿಧ ಬಣಗಳ ನಾಯಕರು ತಮಗೆ ಬೇಕಾದ ಸ್ಥಾನಗಳಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಕೆಲ ಪ್ರಭಾವಿ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸುತ್ತಿದ್ದರೆ, ಇನ್ನು ಹಲವರು ರಾಜ್ಯದ ಪ್ರಮುಖ ನಾಯಕರಾದ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ದುಂಬಾಲು ಬಿದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಈ ಬಾರಿ ಪ್ರಿಯಾಂಕ್ ಖರ್ಗೆ(Priyank kharge) ಅವರಿಗೆ ಡಿಸಿಎಂ(DCM) ಹುದ್ದೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಪಟ್ಟ ಹಾಗೂ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್(MLC Chandrashekhar patil) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಅಭಿಮಾನಿಗಳು ಹಲವು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಆರಂಭಿಸಿದ್ದಾರೆ. ಬೀದರ್&zwnj;ನ ಹುಮನಾಬಾದ್&zwnj;ನಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಬಳಿಕ ಪ್ರಿಯಾಂಕ್ ಖರ್ಗೆ ಡಿಸಿಎಂ ಸಿಗಲೆಂದು ಬರೋಬ್ಬರಿ 101 ತೆಂಗಿನಕಾಯಿಗಳನ್ನು ಒಡೆದು ಈಡೇರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;&lt;img&gt;&lt;p&gt;ಹುಮನಾಬಾದ್&zwnj;ನ ಮತ್ತೊಂದು ಪುರಾತನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲೂ ಅಭಿಮಾನಿಗಳು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಿಶೇಷ ಅರ್ಚನೆ ಮಾಡಿಸಿದರು. ಪ್ರಿಯಾಂಕ್ ಖರ್ಗೆ ಮತ್ತು ಚಂದ್ರಶೇಖರ್ ಪಾಟೀಲ್ ಅವರ ಭಾವಚಿತ್ರಗಳನ್ನು ಹಿಡಿದು ದೇವಸ್ಥಾನದ ಆವರಣದಲ್ಲಿ ಜಯಘೋಷಗಳನ್ನು ಕೂಗಲಾಯಿತು. ಇಬ್ಬರೂ ನಾಯಕರು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಸಹೋದರ ಹಾಗೂ ಪ್ರಸ್ತುತ ಎಂಎಲ್&zwnj;ಸಿ ಆಗಿರುವ ಚಂದ್ರಶೇಖರ್ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಯುವಕರ, ಪದವೀಧರರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಬೆಂಬಲಿಗರು ಹೈಕಮಾಂಡ್&zwnj;ಗೆ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಆಧಾರಿತ ರಾಜಕಾರಣವನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕ್ಷೇತ್ರದಾದ್ಯಂತ ಮತ್ತು ರಾಜ್ಯ ಮಟ್ಟದಲ್ಲಿ ಅವರು ಮಾಡುತ್ತಿರುವ ಜನಪರ ಕೆಲಸಗಳನ್ನು ಗಮನಿಸಿ, ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ನೀಡಲೇಬೇಕು ಎಂದು ಬೀದರ್ ನಾಯಕರು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವುದರಿಂದ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ರಾಜಕೀಯ ಬಲ ಸಿಗಲಿದ್ದು, ಪಕ್ಷದ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k"/>
        </item>
        <item>
            <title><![CDATA[ಜೂನ್‌ನಿಂದ ಬೀದರ್‌-ಕಲಬುರಗಿಗೆ ಬೆಂಗ್ಳೂರಿಂದ ವಿಮಾನ ಸೇವೆ ಪುನರಾರಂಭ; ಮುಂಗಡ ಬುಕ್ಕಿಂಗ್ ಶುರು]]></title>
            <link>https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1</link>
            <guid isPermaLink="true">https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1</guid>
            <pubDate>Sat, 23 May 2026 05:14:13 +0530</pubDate>
            <description><![CDATA[ಕಲ್ಯಾಣ ಕರ್ನಾಟಕ ಭಾಗದ ಬೀದರ್&zwnj; ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಸ್ಟಾರ್&zwnj; ಏರ್&zwnj;ಲೈನ್ಸ್&zwnj; ಈ ಸೇವೆಯನ್ನು ಒದಗಿಸಲಿದ್ದು, ಪ್ರಾದೇಶಿಕ ಸಂಪರ್ಕ ವೃದ್ಧಿಸುವ ಉದ್ದೇಶದಿಂದ ಸರ್ಕಾರವು ವಯಾಬಲಿಟಿ ಗ್ಯಾಪ್&zwnj; ಫಂಡಿಂಗ್&zwnj; ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks911arvcb7n05wjsvjc0j7p,imgname-airport-1779493284635.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಲ್ಯಾಣ ಕರ್ನಾಟಕ ಭಾಗದ ಬೀದರ್&zwnj; ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ಕ್ರಮವಾಗಿ ಜೂ.1 ಮತ್ತು ಜೂ.10ರಿಂದ ವಿಮಾನಯಾನ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾರ್&zwnj; ಏರ್&zwnj;ಲೈನ್ಸ್&zwnj; ಸಂಸ್ಥೆಯು ಬೆಂಗಳೂರಿನಿಂದ ಬೀದರ್&zwnj;, ಕಲಬುರಗಿಗೆ ವಿಮಾನಯಾನ ಸೇವೆ ಒದಗಿಸಲಿದೆ. ಅದಕ್ಕೆ ಬೆಂಬಲ ನೀಡಲು ಸರ್ಕಾರವು 28.47 ಕೋಟಿ ರು.ಗಳನ್ನು ವಯಾಬಲಿಟಿ ಗ್ಯಾಪ್&zwnj; ಫಂಡಿಂಗ್&zwnj; ಆಗಿ ಕೊಡುತ್ತಿದೆ. ಎರಡೂ ಕರೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್&zwnj; ಆರಂಭಿಸಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮ&lt;/strong&gt;&lt;/h2&gt;&lt;p&gt;ಈ ಹಿಂದೆ ಕಲಬುರಗಿಗೆಯಿದ್ದ ವಿಮಾನಸೇವೆ ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್&zwnj;ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಶೇಷ ನೆರವಿನಿಂದ ಒಂದು ವಿಮಾನ ಸೇವೆ ನೀಡಲಾಗುತ್ತಿತ್ತು. ಅದೂ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಬೆಳವಣಿಗೆ ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನ ಸೇವೆ ಮತ್ತೆ ಆರಂಭಿಸಲಾಗುತ್ತಿದೆ. ಅಲ್ಲದೆ, ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಅದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ವಿವರಿಸಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಜೂನ್ 1ರಿಂದ ಬೀದರ್ ಗೆ, ಜೂನ್ 10ರಿಂದ ಕಲಬುರಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನಾರಂಭ!ಕಲ್ಯಾಣ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನಾರಂಭಿಸಲಾಗುವುದು.ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು&hellip; pic.twitter.com/Kr2tJyaH4u&lt;/p&gt;&lt;p&gt;&mdash; M B Patil (@MBPatil) May 22, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1"/>
        </item>
        <item>
            <title><![CDATA[ಮಹಾರಾಷ್ಟ್ರದಿಂದ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್: ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ]]></title>
            <link>https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv</link>
            <guid isPermaLink="true">https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv</guid>
            <pubDate>Wed, 27 May 2026 22:29:00 +0530</pubDate>
            <description><![CDATA[&lt;p&gt;ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್&zwnj; ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzb06m75gr600cw7r5hv56hr,imgname-karnataka-forest-minister-eshwar-khandre--file-photoani--1751642231012.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಔರಾದ್&zwnj; (ಮೇ.27): &lt;/strong&gt;ಮಹಾರಾಷ್ಟ್ರದಿಂದ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯಿಂದ ರಸ್ತೆಗಳು ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತ ದುಬಾರಿ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್&zwnj; ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;&lt;p&gt;ಮಹಾರಾಷ್ಟ್ರದ ನಾಂದೇಡ್&zwnj; ಜಿಲ್ಲೆಯ ದೆಗಲೂರ ತಾಲೂಕಿನ ಹಣೆಗಾಂವ್&zwnj; ಮೂಲಕ ಔರಾದ್&zwnj; ತಾಲೂಕಿನ ವನಮಾರಪಳ್ಳಿ ಗ್ರಾಮದ ಚೆಕ್&zwnj;ಪೋಸ್ಟ್&zwnj; ಮೂಲಕ ಭಾರಿ ಮರಳನ್ನು ಹೊತ್ತ ವಾಹನಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೋಮವಾರ ತಡರಾತ್ರಿಯಿಂದಲೇ ಚೆಕ್&zwnj; ಪೋಸ್ಟ್&zwnj;ನಲ್ಲಿ ಖಡಕ್&zwnj; ಆದೇಶ ರವಾನೆ ಯಾಗಿದೆ. ಒಂದೇ ಒಂದು ಮರಳು ಹೊತ್ತ ವಾಹನ ಗಡಿ ಪ್ರವೇಶ ಮಾಡದಂತೆ ಎಚ್ಚರಿಸಲಾಗಿದೆ. ಹೀಗಾಗಿ ಮಂಗಳವಾರದವರೆಗೆ ವನಮಾರಪಳ್ಳಿ ಗಡಿಗೆ ಹೊಂದಿಕೊಂಡು ನೂರಾರು ಮರಳು ಹೊತ್ತ ಟಿಪ್ಪರ್&zwnj;ಗಳು ರಾಜ್ಯದ ಗಡಿ ಪ್ರವೇಶ ಮಾಡಲು ಬಕಪಕ್ಷಿಯಂತೆ ಕಾಯುತ್ತ ಕುಳಿತಿರುವ ದೃಶ್ಯ ಕಂಡು ಬಂದಿದೆ.&lt;/p&gt;&lt;p&gt;&lt;strong&gt;ಡಿಸಿಗೆ ಉಸ್ತುವಾರಿ ಸಚಿವರು ಬರೆದ ಪತ್ರದಲ್ಲೆನಿದೆ ?&lt;/strong&gt;&lt;/p&gt;&lt;p&gt;ಕಳೆದ ಒಂದು ವಾರದಿಂದ &lsquo;ಕನ್ನಡಪ್ರಭ&rsquo; ಮರಳು ಮಾಯೆ ಎಂಬ ತಲೆ ಬರಹದಡಿಯಲ್ಲಿ ವಿಸ್ತೃತವಾಗಿ ವರದಿ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನೆರೆ ರಾಜ್ಯದಿಂದ ಬೀದರ್&zwnj;ಗೆ ಬಂದಿರುವ ಮರಳಿನ ಲಾರಿಗಳು ರಸ್ತೆಯಲ್ಲೆ ನಿಂತಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಇದರ ಜೊತೆಗೆ ರಸ್ತೆಯಲ್ಲಿ ಮರಳು ರಾಶಿ ಹಾಕಿ ದಾಸ್ತಾನು ಮಾಡಲಾಗಿರುವ ಕಾರಣ ದಿಂದಲೂ ಸಂಚಾರ ಸಮಸ್ಯೆ ಉದ್ಭವಿಸಿದೆ. ಇದರ ಜೊತೆಗೆ ಇಷ್ಟೆಲ್ಲ ಅಕ್ರಮ ಮರಳು ಸಾಗಾಟವಾಗ್ತಿದ್ದರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಇದ್ದು ಕೂಡಲೆ ಜಿಲ್ಲಾಡಳಿತ ಈ ಬಗ್ಗೆ ಪರಿಶಿಲಿಸಿ ಜನರಿಗೆ ತೊಂದರೆಯಾಗದಂತೆ ಮತ್ತು ಅಕ್ರಮಗಳಿಗೆ ಅವಕಾಶ ನೀಡದಂತೆ ಕೈಗೊಂಡಿರುವ ಕ್ರಮದ ವರದಿಯನ್ನು ಮೂರು ದಿನಗಳಲ್ಲಿ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಲ್ಲಗೆ ಜಿಲ್ಲಾ ಪೊಲೀಸರ್&zwnj; ವರಿಷ್ಠಾಧಿಕಾರಿಗಳಿಗೂ ಪ್ರತಿಯನ್ನು ಲಗತ್ತಿಸಲಾಗಿದೆ.&lt;/p&gt;&lt;p&gt;&lt;strong&gt;ಚೆಕ್&zwnj; ಪೋಸ್ಟ್&zwnj; ಬಿಗಿ&lt;/strong&gt;&lt;/p&gt;&lt;p&gt;ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶ ಮಾಡುವ ಅಕ್ರಮ ಮರಳಿನ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಪೊಲೀಸರು ಗಡಿಯ ಚೆಕ್&zwnj;ಪೋಸ್ಟ್&zwnj;ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಒಂದು ಲಾರಿ ಕೂಡ ಗಡಿ ಪ್ರವೇಶ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ವನಮಾರಪಳ್ಳಿ, ಮುರ್ಕಿ, ಚಿಂತಾಕಿ ಹಾಗೂ ಕಮಲನಗರ ಚೆಕ್&zwnj;ಪೊಸ್ಟ್&zwnj; ಗಳು ಸಕ್ರೀಯವಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.&lt;/p&gt;&lt;h2&gt;&lt;strong&gt;ಮರಳು ದಾಸ್ತಾನು ಮೇಲೆ ದಾಳಿ ಯಾಕಿಲ್ಲ?&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡಿರುವ ಕೆಲವರು ಗಡಿ ಭಾಗದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಗುಡ್ಡೆ ಹಾಕಿಕೊಂಡು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮರಳು ಮಾರಾಟ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ವನಮಾರಪಳ್ಳಿ ಗ್ರಾಮದ ಗಡಿಗೆ ಹೊಂದಿಕೊಂಡಿರುವ ಹೆದ್ದಾರಿಯ ಎರಡೂ ಬದಿ ಯಲ್ಲಿ ನೂರಕ್ಕೂ ಅಧಿಕ ಲೋಡ್&zwnj; ಮರಳು ದಾಸ್ತಾನು ಮಾಡಲಾಗಿದೆ.&lt;/p&gt;&lt;p&gt;ಪಟ್ಟಣದ ನಾರಾಯಣಪೂರ್&zwnj; ರಸ್ತೆಯ ಲೇ ಔಟ್&zwnj;, ಅಮರೇಶ್ವರ ಕಾಲೇಜು, ದತ್ತ ಮಂದಿರ ಪಕ್ಕ, ಎಪಿಎಂಸಿ ಯಾರ್ಡ್&zwnj;, ಎಕಂಬಾ, ಭಂಡಾರಕುಮಠಾ, ಶಿವಪೂರ್&zwnj;, ಡೊಣಗಾಂವ್&zwnj;, ಚೊಂಡಿಮುಖೇಡ, ಡಿಗ್ಗಿ ಸೇರಿದಂತೆ ಹಲವು ಗ್ರಾಮಗಳ ಸಿಕ್ಕ ಸಿಕ್ಕಲ್ಲಿ ಅಕ್ರಮ ಮರಳಿನ ದಾಸ್ತಾನು ಇದ್ದರೂ ಸಂಬಂಧಿತ ಇಲಾಖಾ ಅಧಿಕಾರಿಗಳು ದಾಳಿ ನಡೆಸುವದಿರಲಿ ಮರಳು ಸಮಿತಿಗೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿರುವದರ ಹಿಂದಿನ ಮರ್ಮವೇನು ಎಂದು ಜನರ ಅನುಮಾನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ನಂತರ ಮರಳಿನ ಲಾರಿಗಳ ಓಡಾಟ ಸ್ಥಗಿತವಾದರೂ ದಾಸ್ತಾನು ಮಾಡಿದ ಮರಳಿನ ಮೇಲಿನ ಮಾಯೆ ಮಾತ್ರ ಕಮ್ಮಿಯಾಗ್ತಿಲ್ಲ. ಅಷ್ಟಕ್ಕೂ ಸಚಿವರ ಖಡಕ್&zwnj; ಪತ್ರಕ್ಕೆ ಜಿಲ್ಲಾಧಿಕಾರಿಗಳು ವರದಿ ನೀಡ್ತಾರೆಯೇ ಎಂಬುವದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv"/>
        </item>
        <item>
            <title><![CDATA[ಸಿಲಿಂಡರ್‌ಗೆ ಮಧ್ಯರಾತ್ರಿಯಿಂದ್ಲೇ ಕ್ಯೂ, ಪೆಟ್ರೋಲ್‌ ‘ನೋ ಸ್ಟಾಕ್‌’! ಭಾಲ್ಕಿ, ಬಳ್ಳಾರಿಯಲ್ಲಿ ಜನರ ಪರದಾಟ]]></title>
            <link>https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug</link>
            <guid isPermaLink="true">https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug</guid>
            <pubDate>Mon, 18 May 2026 06:04:12 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೀದರ್&zwnj;ನ ಭಾಲ್ಕಿಯಲ್ಲಿ ಗ್ಯಾಸ್&zwnj; ಸಿಲಿಂಡರ್&zwnj;ಗಳಿಗಾಗಿ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್&zwnj;ಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3rwv0hk7vmf4gw4kkkdtwq,imgname-save-gas-cylinder-life--1--1778243234833.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾಲ್ಕಿ/ಬಳ್ಳಾರಿ: &lt;/strong&gt;ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ಎಲ್&zwnj;ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೀದರ್&zwnj; ಜಿಲ್ಲೆಯ ಭಾಲ್ಕಿಯಲ್ಲಿ ಗ್ಯಾಸ್&zwnj; ಸಿಲಿಂಡರ್&zwnj;ಗೆ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್&zwnj;ಗಾಗಿ ಜನರು ಪರದಾಡುವಂತಾಗಿದೆ.&lt;/p&gt;&lt;h2&gt;&lt;strong&gt;ಸುಮಾರು 1 ಕಿಲೋ ಮೀಟರ್&zwnj; ಸಾಲು&lt;/strong&gt;&lt;/h2&gt;&lt;p&gt;ಗ್ಯಾಸ್&zwnj; ಸಿಲಿಂಡರ್ ಸಿಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ಭಾನುವಾರ ಬೆಳ್ಳಂ ಬೆಳಗ್ಗೆ ಭಾಲ್ಕಿ ಪಟ್ಟಣದ ಭಾರತ್&zwnj; ಗ್ಯಾಸ್&zwnj; ಏಜೆನ್ಸಿಯ ಕಚೇರಿ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದು, ಗ್ಯಾಸ್&zwnj; ಸಿಲಿಂಡರ್&zwnj;ಗಳನ್ನು ಕ್ಯೂನಲ್ಲಿ ಇಟ್ಟಿದ್ದರು. ಸುಮಾರು 1 ಕಿಲೋ ಮೀಟರ್&zwnj; ದೂರದವರೆಗೆ ಸಿಲಿಂಡರ್&zwnj;ಗಳು ಸರತಿ ಸಾಲಿನಲ್ಲಿಟ್ಟಿದ್ದು ಕಂಡು ಬಂತು.&lt;/p&gt;&lt;p&gt;ಹಲವರು ಮಧ್ಯರಾತ್ರಿಯಿಂದಲೇ ಸಿಲಿಂಡರ್&zwnj; ಪಡೆಯಲು ಸಾಲುಗಟ್ಟಿ ನಿಂತ&zwnj;ರೆ, ಮಹಿಳೆಯರು, ವೃದ್ಧರು ತಮ್ಮ, ತಮ್ಮ ಖಾಲಿ ಸಿಲಿಂಡರ್&zwnj; ಮೇಲೆಯೇ ಕುಳಿತುಕೊಂಡು ಸಮಯ ಕಳೆದಿದ್ದಾರೆ. ಭಾಲ್ಕಿಯಲ್ಲಿ ಭಾರತ್&zwnj; ಗ್ಯಾಸ್&zwnj;ನ ಒಂದೇ ಒಂದು ಏಜೆನ್ಸಿ ಇರುವ ಕಾರಣ ಸಿಲಿಂಡರ್&zwnj; ಕೊರತೆಯಿಂದ ಜನರು ಪರದಾಡುವಂತಾಗಿದೆ. ನೂರಾರು ಜನ ಸೇರಿದ್ದರಿಂದ ಪೊಲೀಸರನ್ನು ಕರೆಸಿ, ಎಲ್ಲರಿಗೂ ಸಿಲಿಂಡರ್&zwnj; ಸಿಗುವಂತೆ ಮಾಡಲಾಯಿತು.&lt;/p&gt;&lt;h3&gt;&lt;strong&gt;ಹೊಸ ಬೈಕ್&zwnj;ಗೂ ಸಿಗಲಿಲ್ಲ ಪೆಟ್ರೋಲ್&lt;/strong&gt;&lt;/h3&gt;&lt;p&gt;ಬಳ್ಳಾರಿಯ ಎಚ್&zwnj;.ಪಿ.ಪೆಟ್ರೋಲ್&zwnj; ಬಂಕ್&zwnj;ನಲ್ಲಿ ಪೆಟ್ರೋಲ್&zwnj; ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಹೊಸ ಬೈಕ್&zwnj; ಖರೀದಿಸಿದ್ದ ಗ್ರಾಹಕನೊಬ್ಬ ಪೆಟ್ರೋಲ್&zwnj; ಸಿಗದೆ ಸುಮಾರು 2 ಕಿ.ಮೀ. ದೂರ ಬೈಕ್&zwnj; ತಳ್ಳಿಕೊಂಡು ಬಂದಿದ್ದ. ಭಾನುವಾರ ಬೆಳಗ್ಗೆಯಿಂದಲೇ ಸ್ಟಾಕ್&zwnj; ಇಲ್ಲದೆ, ಬಂಕನ್ನು ಬಂದ್&zwnj; ಮಾಡಲಾಗಿತ್ತು.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug"/>
        </item>
        <item>
            <title><![CDATA[ಕಮರ್ಷಿಯಲ್ ಗ್ಯಾಸ್ ಬೆಲೆ ₹993 ಏರಿಕೆ; ಸಂಕಷ್ಟದಲ್ಲಿ ಹೋಟೆಲ್  ಉದ್ದಿಮೆ, ತಿಂಡಿ ಬೆಲೆ ಇನ್ನಷ್ಟು ಹೆಚ್ಚಳದ ಬಗ್ಗೆ ಚರ್ಚೆ!]]></title>
            <link>https://kannada.asianetnews.com/karnataka-districts/rs-993-increase-hotel-industry-struggles-as-commercial-gas-prices-skyrocket-rav/articleshow-eazkc0i</link>
            <guid isPermaLink="true">https://kannada.asianetnews.com/karnataka-districts/rs-993-increase-hotel-industry-struggles-as-commercial-gas-prices-skyrocket-rav/articleshow-eazkc0i</guid>
            <pubDate>Sat, 02 May 2026 05:02:12 +0530</pubDate>
            <description><![CDATA[&lt;p&gt;Hotel Gas Up by ₹993 ಬೀದರ್&zwnj;ನಲ್ಲಿ ಕಮರ್ಷಿಯಲ್ ಎಲ್&zwnj;ಪಿಜಿ ಗ್ಯಾಸ್ ಬೆಲೆ ₹993 ಏರಿಕೆಯಾಗಿದ್ದು, ಹೊಟೇಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತಿಂಡಿ ತಿನಿಸುಗಳ ಬೆಲೆ ಹೆಚ್ಚಿಸಿದ್ದು, ಮತ್ತೊಮ್ಮೆ ಬೆಲೆ ಏರಿಕೆ ಮಾಡಿದರೆ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqjy3ng1fng86cnwfn8mwqw4,imgname-----------------------2026-05-02t050057.673-1777678276097.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ (ಮೇ.2): ದೇಶಾದ್ಯಂತ ಕಮರ್ಷಿಯಲ್ ಎಲ್&zwnj;ಪಿಜಿ ಗ್ಯಾಸ್ ಬೆಲೆ ಏರಿಕೆ ಶುಕ್ರವಾರದಿಂದ ಜಾರಿಯಾದ ಹಿನ್ನೆಲೆ ಜಿಲ್ಲೆಯ ಹೊಟೇಲ್ ಹಾಗೂ ರೆಸ್ಟೋರೆಂಟ್ ಮಾಲೀಕರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ.&lt;/p&gt;&lt;p&gt;ಏಕಾಏಕಿ ಕಮರ್ಷಿಯಲ್ ಗ್ಯಾಸ್ ಬೆಲೆ 993 ಏರಿಕೆ ಮಾಡಿದ್ದು, ಬೆಳಂಬೆಳಗ್ಗೆ ಹೊಟೇಲ್ ಮಾಲಿಕರಿಗೆ ಶಾಕ್ ಆಗಿದೆ. ಈಗಾಗಲೇ ಬೆಳಗಿನ ಉಪಾಹಾರ ಸೇರಿದಂತೆ ಹೊಟೇಲ್ ತಿಂಡಿಯ ಬೆಲೆ 15 ರಿಂದ 20 ರು. ಏರಿಕೆ ಮಾಡಲಾಗಿದೆ. ಈಗ ಮತ್ತೆ ಬೆಲೆ ಹೆಚ್ಚಳ ಮಾಡಿದರೆ ಗ್ರಾಹಕರ ಸಂಖ್ಯೆ ಕಡಿಮೆಯಾಗುವುದಂತೂ ಗ್ಯಾರಂಟಿ ಎನ್ನುತ್ತಾರೆ ಹೊಟೇಲ್&zwnj; ಮಾಲೀಕರು.&lt;/p&gt;&lt;p&gt;ಇರಾನ್ - ಇಸ್ರೇಲ್ ವಾರ್ ಎಫೆಕ್ಟ್&zwnj;ನಿಂದ ಇಂಧನ ಪೂರೈಕೆ ವ್ಯತ್ಯಯದಿಂದ ಬೆಲೆ ಏರಿಕೆಯಾಗುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಸತತ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಳ ಆಗಿದೆ. ಮಾರ್ಚ್&zwnj; ತಿಂಗಳಿನಲ್ಲಿ 144 ರು. ಏಪ್ರಿಲ್&zwnj;ನಲ್ಲಿ 190 ಹಾಗೂ ಈಗ 993 ರು. ಏರಿಕೆಯಾಗಿದೆ. ಹೀಗೆ ಸತತ ಗ್ಯಾಸ್ ದರ ಏರಿಕೆಯಿಂದ ಹೊಟೇಲ್ ಉದ್ಯಮಕ್ಕೆ ದೊಡ್ಡ ಹೊರೆ ಬಿದ್ದಿದ್ದು, ಹೋಟೆಲ್ ಉದ್ಯಮ ನಡೆಸೋದಕ್ಕೂ ಕಷ್ಟ ಆಗ್ತಿದೆ ಎನ್ನುತ್ತಾರೆ ಮಾಲಿಕರು.&lt;/p&gt;&lt;p&gt;ಗ್ಯಾಸ್ ಬೆಲೆ ಹೆಚ್ಚಳದಿಂದ ಹೋಟೆಲ್ ಮುಚ್ಚಿದರೂ ಬಾಡಿಗೆ ಕಟ್ಟಬೇಕು. ಕಾರ್ಮಿಕರಿಗೆ ವೇತನ ನೀಡಬೇಕು. ನಾವು ಏನು ಮಾಡಬೇಕು ತಿಳಿಯುತ್ತಿಲ್ಲ. ಹೊಟೇಲ್ ಮಾಲಿಕರ ಸಂಘದ ಸಭೆ ನಡೆಸಿ ಅದರಲ್ಲಿ ತಿಂಡಿಯ ಬೆಲೆ ಹೆಚ್ಚಳ ಮಾಡಬೇಕು. ಎನ್ನುವುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೊಟೇಲ್ ಮಾಲೀಕ ಮೂರ್ತಿ ಹೇಳಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rs-993-increase-hotel-industry-struggles-as-commercial-gas-prices-skyrocket-rav/articleshow-eazkc0i"/>
        </item>
        <item>
            <title><![CDATA[ಅನುಮಾನಾಸ್ಪದವಾಗಿ 'ಮಜಾ ಭಾರತ' ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ನಿಧನ; ಶವ ಪತ್ತೆ]]></title>
            <link>https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</link>
            <guid isPermaLink="true">https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</guid>
            <pubDate>Tue, 16 Jun 2026 05:30:34 +0530</pubDate>
            <description><![CDATA[ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಬೀದರ್&zwnj;ನಲ್ಲಿ ನಿಧನರಾಗಿದ್ದಾರೆ. ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv6ved5ykgzzvcqzcrf673kb,imgname-siddu-1781567796414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಉರ್ಫ್ ಸಿದ್ಧಾರ್ಥ್ ಪರಸನೂರು ನಿಧನರಾಗಿದ್ದಾರೆ. ಸಿದ್ದು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೀದರ್ ಜಿಲ್ಲೆಯ ನಿವಾಸಿಯಾಗಿದ್ದ ಸಿದ್ದು ಪರಸನೂರು ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು.&lt;/p&gt;&lt;h2&gt;&lt;strong&gt;ಸಾವಿನ ಸುತ್ತ ಅನುಮಾನ&lt;/strong&gt;&lt;/h2&gt;&lt;p&gt;ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಸಿದ್ದು ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದು ಅವರದ್ದು ಸಹಜ ಸಾವು ಅಲ್ಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರುವ ಸಾಧ್ಯತೆಗಳಿವೆ.&lt;/p&gt;&lt;p&gt;ಈ ಸಂಬಂಧ ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಜಾ ಭಾರತ ರಿಯಾಲಿಟಿ ಶೋ ಸಿದ್ದು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. 'ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಿದ್ದು ಪರಸನೂರು ಹೊಂದಿದ್ದರು.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f"/>
        </item>
        <item>
            <title><![CDATA[ಬೀದರ್‌ನಲ್ಲೊಂದು ಮನುಕುಲವೇ ತಲೆತಗ್ಗಿಸುವ ಘಟನೆ ಚರಂಡಿಯಲ್ಲಿ ಆಗಷ್ಟೇ ಹುಟ್ಟಿದ ಶಿಶುವಿನ ಶವ ಪತ್ತೆ!]]></title>
            <link>https://kannada.asianetnews.com/karnataka-districts/newborn-baby-found-in-drain-at-bidar-shocking-incident-sparks-outrage-gdp/articleshow-fgzmd6h</link>
            <guid isPermaLink="true">https://kannada.asianetnews.com/karnataka-districts/newborn-baby-found-in-drain-at-bidar-shocking-incident-sparks-outrage-gdp/articleshow-fgzmd6h</guid>
            <pubDate>Mon, 11 May 2026 21:15:49 +0530</pubDate>
            <description><![CDATA[ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ, ಕಿರಾಣಿ ಅಂಗಡಿಯ ಪಕ್ಕದ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೇ ಹುಟ್ಟಿದ ಮಗುವನ್ನು ರಾತ್ರೋರಾತ್ರಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಈ ಅಮಾನವೀಯ ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krbv4z28fsdbe85ab3g1pd44,imgname-bidar-newborn-baby-case--1--1778514033687.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಜೀವನದಲ್ಲಿ ಅದೆಷ್ಟೋ ಜನ ಮಕ್ಕಳಿಲ್ಲದೆ ಕೊರಗುತ್ತಿದ್ದಾರೆ. ಅದೆಷ್ಟೋ ಮಂದಿ ಮಕ್ಕಳನ್ನು ಪಡೆಯಲು ವರ್ಷಾನುಗಟ್ಟಲೆ ಚಿಕಿತ್ಸೆ ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಐವಿಎಫ್ ಮೊರೆ ಹೋಗುತ್ತಿದ್ದಾರೆ. ಆದರೆ ಇಂತಹ ಸನ್ನಿವೆಶದ ನಡುವೆ ಬೀದರ್&zwnj; ನಲ್ಲಿ ಮನುಕುಲವೇ ತಲೆತಗ್ಗಿಸುವ ಹೃದಯವಿದ್ರಾವಕ ಘಟನೆ ನಡೆದಿದೆ. ಇಲ್ಲಿನ ಹುಲಸೂರು ತಾಲೂಕಿನ ಗಡಿಗೌಡಗಾಂವ್ ಗ್ರಾಮದ ಬಸವೇಶ್ವರ ವೃತ್ತದ ಸಮೀಪ ಇರುವ ಕಿರಾಣಿ ಅಂಗಡಿ ಪಕ್ಕದ ಚರಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಹೆತ್ತವರು ಮಾನವೀಯತೆಯನ್ನು ಮರೆತು ಮಗುವನ್ನು ಬೀದಿ ಹೆಣ ಮಾಡಿದ್ದಾರೆ.&lt;/p&gt;&lt;h2&gt;ಚರಂಡಿಯಲ್ಲಿ ಕಾಣಿಸಿದ ಅನುಮಾನಾಸ್ಪದ ವಸ್ತು&lt;/h2&gt;&lt;p&gt;ಸ್ಥಳೀಯರು ಬೆಳಿಗ್ಗೆ ಚರಂಡಿಯಲ್ಲಿ ಏನೋ ಅನುಮಾನಾಸ್ಪದ ವಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದಾಗ ನವಜಾತ ಶಿಶುವಿನ ಶವ ಕಂಡುಬಂದಿದೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹುಲಸೂರು ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.&lt;/p&gt;&lt;p&gt;ಮೃತ ಶಿಶಿವಿನ ಹೊಕ್ಕಳ ಬಳ್ಳಿ ಇನ್ನೂ ಹಸಿಯಾಗಿಯೇ ಇತ್ತು. ಆಗಷ್ಟೇ ಹುಟ್ಟಿದ ಮಗುವನ್ನು ರಾತ್ರೋರಾತ್ರಿ ಚರಂಡಿಗೆ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಜನನದ ವಿಚಾರವನ್ನು ಮುಚ್ಚಿಡಲು ಈ ಅಮಾನವೀಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಅಕ್ರಮ ಸಂಬಂಧದಲ್ಲಿ ಈ ಮಗು ಜನಿಸಿರಬಹುದೆಂಬ ಶಂಕೆ ಕೂಡ ಇದೆ.&lt;/p&gt;&lt;h2&gt;ಸಾರ್ವಜನಿಕರ ತೀವ್ರ ಆಕ್ರೋಶ&lt;/h2&gt;&lt;p&gt;ಈ ಘಟನೆ ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವಂತಿದ್ದು, ಹೆತ್ತ ಮಗುವನ್ನೇ ತ್ಯಜಿಸಿರುವ ಪೋಷಕರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಜನಿಸಿದ ತಕ್ಷಣವೇ ಅದನ್ನು ತ್ಯಜಿಸಿ ಚರಂಡಿಗೆ ಎಸೆದಿರುವುದು ಮನುಕುಲವೇ ತಲೆತಗ್ಗಿಸುವ ಸಂಗತಿ. ಘಟನೆ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಶುವನ್ನು ಚರಂಡಿಗೆ ಎಸೆದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ, ಈ ದುರ್ಘಟನೆ ಸಮಾಜದಲ್ಲಿ ಮಾನವೀಯತೆ ಕುಗ್ಗುತ್ತಿರುವುದಕ್ಕೆ ಕನ್ನಡಿ ಹಿಡಿದಂತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳ ಅಗತ್ಯವಿದೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/newborn-baby-found-in-drain-at-bidar-shocking-incident-sparks-outrage-gdp/articleshow-fgzmd6h"/>
        </item>
        <item>
            <title><![CDATA[Bidar BRIMS hospital crime: ಪೋಸ್ಟ್‌ ಮಾರ್ಟ್‌ಮ್‌ ವೇಳೆ ಹೆಣ್ಣು ಶವಗಳ ಬೆತ್ತಲೆ ಚಿತ್ರ ಸೆರೆಹಿಡಿಯುತ್ತಿದ್ದ ಅಟೆಂಡರ್ ಅರೆಸ್ಟ್]]></title>
            <link>https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</link>
            <guid isPermaLink="true">https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</guid>
            <pubDate>Sat, 30 May 2026 09:12:01 +0530</pubDate>
            <description><![CDATA[ಬೀದರ್&zwnj;ನ ಬ್ರಿಮ್ಸ್&zwnj; ಆಸ್ಪತ್ರೆಯ ಶವಾಗಾರದಲ್ಲಿ, ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ ಅಟೆಂಡರ್&zwnj;ನನ್ನು ಬಂಧಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvf511ys88d1qmvq5ffjhpk,imgname-----------------------2026-05-30t090355.165-1780112065598.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj;ನ ಬ್ರಿಮ್ಸ್&zwnj; (BRIMS) ಜಿಲ್ಲಾಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್&zwnj;ನೊಬ್ಬ ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್&zwnj;ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.&lt;/p&gt;&lt;p&gt;ಆರೋಪಿ ಮುನೀರ್&zwnj; ಅಹ್ಮದ್&zwnj; ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್&zwnj; ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್&zwnj;ಮಾರ್ಟ್&zwnj;ಮ್&zwnj; ಪ್ರಕ್ರಿಯೆ ನಡೆಯುವ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಆರೋಪಿಯ ಮೊಬೈಲ್&zwnj; ಫೋನ್&zwnj; ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪ್ರಕರಣದ ಗಂಭೀರತೆಯನ್ನು ಮನಗಂಡ ಬ್ರಿಮ್ಸ್&zwnj; ಮುಖ್ಯಸ್ಥ ಡಾ. ಮೊಸಿನ್&zwnj; ಉಲ್&zwnj; ಹಕ್&zwnj; ಅವರು ನ್ಯೂಟೌನ್&zwnj; ಪೊಲೀಸ್&zwnj; ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮುನೀರ್&zwnj; ಅಹ್ಮದ್&zwnj;ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಮತ್ತು ಗೌರವಯುತ ಸ್ಥಳದಲ್ಲಿ ನಡೆದಿರುವ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5"/>
        </item>
        <item>
            <title><![CDATA[ಬೀದರ್-ಬೆಂಗಳೂರು ವಿಮಾನ ಸೇವೆ ಶೀಘ್ರವೇ ಪುನರಾರಂಭ, ಮತ್ತೆ ಜಿಲ್ಲೆಯ ಜನತೆಗೆ ಸಂತಸದ ಸುದ್ದಿ]]></title>
            <link>https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7</link>
            <guid isPermaLink="true">https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7</guid>
            <pubDate>Sat, 16 May 2026 17:54:49 +0530</pubDate>
            <description><![CDATA[ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆ ಜೂನ್ 1 ರಿಂದ ಪುನರಾರಂಭಗೊಳ್ಳಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟವನ್ನು ಸರ್ಕಾರವೇ ಭರಿಸಲಿದ್ದು, ಈ ನಿರ್ಧಾರದಿಂದ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krrbvjk4t29js5f256yxprrq,imgname-bidar-airport-1778934205028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ : &lt;/strong&gt;ಕೆಲ ದಿನಗಳಿಂದ ಸ್ಥಗಿತಗೊಂಡಿದ್ದ ಬೀದರ್ ಮತ್ತು ಬೆಂಗಳೂರು ನಡುವಿನ ನಾಗರಿಕ ವಿಮಾನಯಾನ ಸೇವೆ ಬರುವ ಜೂನ್ 1ರಿಂದ ಪುನರಾರಂಭಗೊಳ್ಳಲಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;p&gt;ಈ ಕುರಿತಂತೆ ಮಾತನಾಡಿ, ಕಳೆದ ಒಂದು ವರ್ಷದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅನುದಾನದ ಸಹಯೋಗದೊಂದಿಗೆ ಸ್ಟಾರ್ ಏರ್ ವಿಮಾನ ಸಂಸ್ಥೆಯು ಬೀದರ್-ಬೆಂಗಳೂರು ನಡುವೆ ಯಶಸ್ವಿಯಾಗಿ ಸೇವೆ ನೀಡುತ್ತಿತ್ತು. ಆದರೆ, ಮೇ 14ಕ್ಕೆ ಒಪ್ಪಂದದ ಅವಧಿ ಮುಕ್ತಾಯಗೊಂಡಿದ್ದರಿಂದ ವಿಮಾನಯಾನ ಸಂಸ್ಥೆಯು ತನ್ನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.&lt;/p&gt;&lt;h2&gt;ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟ ಸರ್ಕಾರದ ವತಿಯಿಂದಲೇ ಭರಿಸುವ ನಿರ್ಧಾರ&lt;/h2&gt;&lt;p&gt;ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ. ವಿಮಾನಯಾನ ಸಂಸ್ಥೆಗೆ ಆಗುವ ಆರ್ಥಿಕ ನಷ್ಟದ ಪಾಲನ್ನು (Viability Gap Funding) ಸರ್ಕಾರದ ವತಿಯಿಂದಲೇ ಭರಿಸುವ ಮೂಲಕ ಸೇವೆಯನ್ನು ಮತ್ತೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.&lt;/p&gt;&lt;p&gt;ಜೂನ್ 1ರಿಂದ ಬೀದರ್-ಬೆಂಗಳೂರು ಹಾಗೂ ಬೆಂಗಳೂರು-ಬೀದರ್ ಮಧ್ಯೆ ಪ್ರತಿದಿನ ವಿಮಾನಯಾನ ಸೇವೆ ಲಭ್ಯವಿರಲಿದ್ದು, ಇದರಿಂದ ಜಿಲ್ಲೆಯ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ನಾಗರಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರವಾಸೋದ್ಯಮ ಮತ್ತು ವ್ಯಾಪಾರೋದ್ಯಮದ ವೃದ್ಧಿಗೂ ಇದು ಮತ್ತಷ್ಟು ವೇಗ ನೀಡಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಬೀದರ್ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ತಕ್ಷಣ ಸ್ಪಂದಿಸಿ, ವಿಮಾನಯಾನ ಪುನರಾರಂಭಕ್ಕೆ ಸಂಪೂರ್ಣ ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.&lt;/p&gt;&lt;h2&gt;KKRDB ಅಧ್ಯಕ್ಷ ಅಜಯ್ ಸಿಂಗ್ ಕೂಡ ಸ್ಪಷ್ಟನೆ&lt;/h2&gt;&lt;p&gt;ಇನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ ಅಜಯ್ ಸಿಂಗ್ ಅವರು ಕೂಡ ಬೀದರ್&ndash;ಬೆಂಗಳೂರು ನಾಗರಿಕ ವಿಮಾನ ಸೇವೆ ಒಂದು ತಿಂಗಳೊಳಗೆ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bidar-bengaluru-flight-services-to-resume-from-june-1announces-minister-eshwar-khandre-gdp/articleshow-o2gb9s7"/>
        </item>
        <item>
            <title><![CDATA[ಬೀದರ್‌ನಲ್ಲೂ ಕೋಟಿ ಬೆಲೆಯ ‘ಎರಡು ತಲೆ ಹಾವು’ ರಕ್ಷಣೆ: ಅರಣ್ಯ ಇಲಾಖೆಯಿಂದ ಮೂವರು ಸ್ಮಗ್ಲರ್‌ಗಳ ಬಂಧನ!]]></title>
            <link>https://kannada.asianetnews.com/gallery/state/bidar-two-headed-snake-or-red-sand-boa-snake-rescue-smuggling-arrest-dfo-ashish-reddy-sat-slzzgky</link>
            <guid isPermaLink="true">https://kannada.asianetnews.com/gallery/state/bidar-two-headed-snake-or-red-sand-boa-snake-rescue-smuggling-arrest-dfo-ashish-reddy-sat-slzzgky</guid>
            <pubDate>Thu, 14 May 2026 15:08:28 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ 'ಎರಡು ತಲೆ ಹಾವು' (ರೆಡ್ ಸ್ಯಾಂಡ್ ಬೋವಾ) ಅನ್ನು ರಕ್ಷಿಸಿದೆ. ಆಂಧ್ರಪ್ರದೇಶ ನೋಂದಣಿಯ ಕಾರಿನಲ್ಲಿ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krjw38a4cgne6246qdd1d8q0,imgname-bidar-red-sand-boa-snake-rescue-1778749907268.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಭರ್ಜರಿ ಕಾರ್ಯಾಚರಣೆ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ 'ಎರಡು ತಲೆ ಹಾವು' (ರೆಡ್ ಸ್ಯಾಂಡ್ ಬೋವಾ) ಅನ್ನು ರಕ್ಷಿಸಿದೆ. ಆಂಧ್ರಪ್ರದೇಶ ನೋಂದಣಿಯ ಕಾರಿನಲ್ಲಿ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೀದರ್:&lt;/strong&gt; ಗಡಿ ಜಿಲ್ಲೆ ಬೀದರ್&zwnj;ನಲ್ಲಿ ವನ್ಯಜೀವಿಗಳ ಅಕ್ರಮ ಸಾಗಾಟದ ದೊಡ್ಡ ಜಾಲವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ &lsquo;ಎರಡು ತಲೆ ಹಾವು&rsquo; ಅಥವಾ &lsquo;ಮಣ್ಣ ಮುಕ್ಕ ಹಾವು&rsquo; (Red Sand Boa) ಎಂದು ಕರೆಯಲ್ಪಡುವ ಅಪರೂಪದ ಹಾವನ್ನು ರಕ್ಷಿಸಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಬೀದರ್ ಉಪ ಅರಣ್ಯ ಸಂರಕ್ಷಣಾಧಿಕಾರಿ (DFO) ಆಶಿಶ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ತಂಡವು ಈ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಆಂಧ್ರಪ್ರದೇಶ ನೋಂದಣಿ (AP Registration) ಹೊಂದಿದ್ದ ಬಿಳಿ ಬಣ್ಣದ ಕಾರಿನಲ್ಲಿ ಹಾವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.&lt;/p&gt;&lt;img&gt;&lt;p&gt;ವಶಪಡಿಸಿಕೊಳ್ಳಲಾದ ರೆಡ್ ಸ್ಯಾಂಡ್ ಬೋವಾ ಹಾವು ಸುಮಾರು 5.34 ಕೆಜಿ ತೂಕವಿದ್ದು, ಇದು ಅತ್ಯಂತ ದೊಡ್ಡ ಗಾತ್ರದ ಹಾವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿಗೆ ಕೋಟ್ಯಾಂತರ ರೂಪಾಯಿ ಬೆಲೆ ಇದೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಮಾಟ-ಮಂತ್ರ, ವಾಮಾಚಾರ ಹಾಗೂ ಔಷಧೀಯ ಗುಣಗಳಿವೆಯೆಂಬ ಮೂಢನಂಬಿಕೆಯಿಂದಾಗಿ ಇಂತಹ ಹಾವುಗಳ ಅಕ್ರಮ ಸಾಗಾಟ ಮತ್ತು ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಹಾವು ಸಾಗಿಸುತ್ತಿದ್ದ ಕಾರನ್ನು ಜಪ್ತಿ ಮಾಡಿರುವ ಅಧಿಕಾರಿಗಳು, ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳು ಹಾವನ್ನು ಎಲ್ಲಿಂದ ತಂದಿದ್ದರು ಮತ್ತು ಯಾರಿಗೆ ಮಾರಾಟ ಮಾಡಲು ಹೊರಟಿದ್ದರು ಎಂಬ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಎರಡು ತಲೆ ಹಾವು ಅಥವಾ ಮಣ್ಣ ಮುಕ್ಕ ಹಾವುಗಳನ್ನು ಮನೆಯಲ್ಲಿಟ್ಟರೆ ಅಥವಾ ಪೂಜೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಸ್ಮಗ್ಲರ್&zwnj;ಗಳು ಕಾಡಿನಿಂದ ಇವುಗಳನ್ನು ಹಿಡಿದು ಕೋಟಿಗಟ್ಟಲೆ ಹಣಕ್ಕೆ ಮಾರಾಟ ಮಾಡುತ್ತಾರೆ. ಆದರೆ ವನ್ಯಜೀವಿಗಳನ್ನು ಹಿಡಿಯುವುದು ಮತ್ತು ಮಾರಾಟ ಮಾಡುವುದು ಕಾನೂನುಬಾಹಿರ ಹಾಗೂ ಕಠಿಣ ಶಿಕ್ಷಾರ್ಹ ಅಪರಾಧವಾಗಿದೆ.&amp;nbsp;&lt;/p&gt;&lt;p&gt;ಬೀದರ್ ಅರಣ್ಯ ಇಲಾಖೆಯ ಈ ಸಮಯೋಚಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದ್ದು, ವನ್ಯಜೀವಿಗಳ ರಕ್ಷಣೆಗೆ ಇಲಾಖೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ.&lt;/p&gt;&lt;img&gt;&lt;p&gt;ಚಿಕ್ಕಮಗಳೂರಿನಲ್ಲಿಯೂ 2 ತಲೆ ಹಾವನ್ನ ಮಾರಾಟ ಮಾಡಲು ಯತ್ನಿಸಿದಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧನ ಮಾಡಿದ್ದರು. 1 ಕೆಜಿ 400 ಗ್ರಾಂ ತೂಕದ ಬೃಹತ್ 2 ತಲೆ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳಿಂದ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಸೀಜ್ ಮಾಡಿದ್ದರು. ಇಬ್ಬರು ಆಂಧ್ರ, ಇಬ್ಬರು ತುಮಕೂರು, ಓರ್ವ ಶಿವಮೊಗ್ಗ ಮೂಲದವರ ಬಂಧನ ಮಾಡಿ, ಕೋಟ್ಯಾಂತರ ರೂಪಾಯಿಗೆ ಬೆಲೆ ಬಾಳುವ ಎರಡು ತಲೆ (ಮಣ್ಣುಮುಕ್ಕ) ಹಾವು ರಕ್ಷಣೆ ಮಾಡಲಾಗಿತ್ತು.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/bidar-two-headed-snake-or-red-sand-boa-snake-rescue-smuggling-arrest-dfo-ashish-reddy-sat-slzzgky"/>
        </item>
        <item>
            <title><![CDATA[ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ]]></title>
            <link>https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</link>
            <guid isPermaLink="true">https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</guid>
            <pubDate>Wed, 10 Jun 2026 19:20:43 +0530</pubDate>
            <description><![CDATA[&lt;p&gt;ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktrw38tdkqhrywnryf1yybty,imgname-bidar-airport-1781098718028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬೀದರ್ ನಡುವಿನ ವಿಮಾನ ಸೇವೆಯ ವೇಳಾಪಟ್ಟಿ ಬದಲಾವಣೆಯಿಂದ ಸಾರ್ವಜನಿಕರಿಗೆ ಭಾರಿ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಳೆಯ ವೇಳಾಪಟ್ಟಿಯಂತೆಯೇ ಮುಂಜಾನೆಯ ಸೇವೆಯನ್ನು ಮುಂದುವರಿಸಲು ಸೂಚಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಸ್ಟಾರ್ ಏರ್ ಖಾಸಗಿ ವಿಮಾನಯಾನ ಸಂಸ್ಥೆ&lt;/h2&gt;&lt;p&gt;ಖಾಸಗಿ ವಿಮಾನಯಾನ ಸಂಸ್ಥೆಯಾದ &lsquo;ಸ್ಟಾರ್ ಏರ್&rsquo; ಜೂನ್ 1ರಿಂದ ಬೆಂಗಳೂರು-ಬೀದರ್-ಬೆಂಗಳೂರು ನಡುವೆ ತನ್ನ ನೂತನ ವಿಮಾನ ಸೇವೆಯನ್ನು ಆರಂಭಿಸಿದೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಈ ವಿಮಾನವು ಮುಂಜಾನೆ 6:30ಕ್ಕೆ ಬೆಂಗಳೂರಿನಿಂದ ಹೊರಟು 7:45ಕ್ಕೆ ಬೀದರ್ ತಲುಪುತ್ತಿತ್ತು. ಅದೇ ರೀತಿ, ಬೆಳಗ್ಗೆ 8:15ಕ್ಕೆ ಬೀದರ್&zwnj;ನಿಂದ ಜಿಗಿದು 9:30ಕ್ಕೆ ಬೆಂಗಳೂರಿಗೆ ಹಿಂತಿರುಗುತ್ತಿತ್ತು. ಈ ಮುಂಜಾನೆಯ ಸಮಯವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತು ಉದ್ಯಮಿಗಳಿಗೆ ಬೆಂಗಳೂರಿನ ಅಧಿಕೃತ ಕೆಲಸಗಳಿಗಾಗಿ ಒಂದೇ ದಿನದಲ್ಲಿ ಬಂದು ಹೋಗಲು ಅತ್ಯಂತ ಅನುಕೂಲಕರವಾಗಿತ್ತು.&lt;/p&gt;&lt;h2&gt;ಹೊಸ ವೇಳಾಪಟ್ಟಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಭೀತಿ&amp;nbsp;&lt;/h2&gt;&lt;p&gt;ಆದರೆ, ವಿಮಾನಯಾನ ಸಂಸ್ಥೆಯು ಜೂನ್ 10ರಿಂದ ಜಾರಿಗೆ ಬರುವಂತೆ ವಿಮಾನದ ಸಮಯವನ್ನು ಮಧ್ಯಾಹ್ನಕ್ಕೆ ಬದಲಾಯಿಸಿದೆ. ಹೊಸ ವೇಳಾಪಟ್ಟಿಯಂತೆ, ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 1:45ಕ್ಕೆ ಬೀದರ್ ತಲುಪಲಿದೆ. ತದನಂತರ ಮಧ್ಯಾಹ್ನ 2:30ಕ್ಕೆ ಬೀದರ್&zwnj;ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಬರಲಿದೆ.&lt;/p&gt;&lt;p&gt;&amp;nbsp;ಹೊಸದಾಗಿ ನಿಗದಿಪಡಿಸಲಾಗಿರುವ ಮಧ್ಯಾಹ್ನದ ವೇಳಾಪಟ್ಟಿಯಿಂದಾಗಿ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಮಯ ಬದಲಾವಣೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಇದು ವಿಮಾನಯಾನದ ಮೂಲ ಉದ್ದೇಶವನ್ನೇ ಹಳಿ ತಪ್ಪಿಸುತ್ತದೆ ಎಂಬುದು ಸಚಿವ ಈಶ್ವರ್ ಖಂಡ್ರೆ ಅವರ ವಾದವಾಗಿದೆ.&lt;/p&gt;&lt;p&gt;ಹೀಗಾಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಸ್ಟಾರ್ ಏರ್ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮೊದಲಿನ ಮುಂಜಾನೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4"/>
        </item>
        <item>
            <title><![CDATA[ಮನೆ ಮ್ಯೂಟೇಷನ್‌ಗೆ ₹5 ಲಕ್ಷ ಲಂಚ; 2.5 ಲಕ್ಷ ಹಣದ ಸಮೇತ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ!]]></title>
            <link>https://kannada.asianetnews.com/karnataka-districts/bidar-village-accountant-trapped-by-lokayukta-while-taking-bribe-for-mutation-sat/articleshow-vi4fsrr</link>
            <guid isPermaLink="true">https://kannada.asianetnews.com/karnataka-districts/bidar-village-accountant-trapped-by-lokayukta-while-taking-bribe-for-mutation-sat/articleshow-vi4fsrr</guid>
            <pubDate>Tue, 05 May 2026 20:13:15 +0530</pubDate>
            <description><![CDATA[&lt;p&gt;ಬೀದರ್&zwnj;ನಲ್ಲಿ ಮನೆ ಮ್ಯೂಟೇಷನ್ ಮಾಡಿಕೊಡಲು ₹5 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮರಗುಂದಾ ಗ್ರಾಮದ ಡಾಬಾದಲ್ಲಿ ಮೊದಲ ಕಂತು ₹2.5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿ ಶಿವಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqw93fhg6xsat79dw0tmhkny,imgname-bidar-lokayukta-trap-1777991794224.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಮೇ 05): ಭ್ರ&lt;/strong&gt;ಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಬೀದರ್&zwnj;ನಲ್ಲಿ ಮನೆಯ ಮ್ಯೂಟೇಷನ್ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡವಾಗಿ 2.5 ಲಕ್ಷ ರೂಪಾಯಿ ಪಡೆಯುತ್ತಿದ್ದಾಗ ಈ ದಾಳಿ ನಡೆದಿದೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಬೀದರ್ ತಾಲೂಕಿನ ಮರಗುಂದಾ ಗ್ರಾಮದ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಮರಕುಂದಾ ಗ್ರಾಮದ ನಿವಾಸಿ ಮಹಾದೇವ್ ಶಾಂತಪ್ಪ ಎಂಬುವವರು ತಮ್ಮ ಮನೆಯ ಮ್ಯೂಟೇಷನ್ (ಖಾತಾ ಬದಲಾವಣೆ) ಮಾಡಿಕೊಡುವಂತೆ ಗ್ರಾಮ ಲೆಕ್ಕಾಧಿಕಾರಿ ಶಿವಕುಮಾರ್ ಅವರ ಬಳಿ ಮನವಿ ಮಾಡಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಶಿವಕುಮಾರ್ ಬರೋಬ್ಬರಿ 5 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.&lt;/p&gt;&lt;h2&gt;&lt;strong&gt;ದಾಬಾದಲ್ಲಿ ನಡೆದ ಲಂಚದ ಡೀಲ್:&lt;/strong&gt;&lt;/h2&gt;&lt;p&gt;ಲಂಚದ ಹಣ ನೀಡಲು ಇಚ್ಛಿಸದ ಮಹಾದೇವ್ ಅವರು ಬೀದರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ, ಮರಕುಂದಾ ಗ್ರಾಮದ ಹೊರವಲಯದಲ್ಲಿರುವ ದಾಬಾವೊಂದರಲ್ಲಿ ಲಂಚದ ಹಣದ ಮೊದಲ ಕಂತು 2.5 ಲಕ್ಷ ರೂಪಾಯಿಯನ್ನು ನೀಡಲು ನಿರ್ಧರಿಸಲಾಗಿತ್ತು. ಹಣವನ್ನು ಸ್ವೀಕರಿಸಲು ಶಿವಕುಮಾರ್ ತನ್ನ ಸಹಚರ ಶರಣಯ್ಯ ಎಂಬಾತನೊಂದಿಗೆ ಆಗಮಿಸಿದ್ದನು.&lt;/p&gt;&lt;h2&gt;&lt;strong&gt;ಲೋಕಾಯುಕ್ತ ಪೊಲೀಸರ ಮಿಂಚಿನ ದಾಳಿ:&lt;/strong&gt;&lt;/h2&gt;&lt;p&gt;ಮಹಾದೇವ್ ಅವರಿಂದ 2.5 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ, ಸುತ್ತುವರಿದಿದ್ದ ಲೋಕಾಯುಕ್ತ ಅಧಿಕಾರಿಗಳು ಶಿವಕುಮಾರ್ ಮತ್ತು ಆತನ ಸಹಚರ ಶರಣಯ್ಯನನ್ನು ವಶಕ್ಕೆ ಪಡೆದಿದ್ದಾರೆ. ಬೀದರ್ ಲೋಕಾಯುಕ್ತ ಡಿಎಸ್&zwnj;ಪಿ ಹಣಮಂತರಾಯ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಸಾರ್ವಜನಿಕರ ಆಕ್ರೋಶ:&lt;/strong&gt;&lt;/h3&gt;&lt;p&gt;ಸಣ್ಣ ಕೆಲಸಗಳಿಗೂ ಸಾವಿರಾರು ರೂಪಾಯಿ ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಮನೆ ಮ್ಯೂಟೇಷನ್ ಮಾಡಲು 5 ಲಕ್ಷ ರೂಪಾಯಿ ಬೇಡಿಕೆಯಿಟ್ಟ ಗ್ರಾಮ ಲೆಕ್ಕಾಧಿಕಾರಿಯ ಧಾರ್ಷ್ಟ್ಯ ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಬಂಧಿತರಿಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಬೀದರ್ ಲೋಕಾಯುಕ್ತ ಪೊಲೀಸರ ಈ ಕಾರ್ಯಾಚರಣೆಯು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದು, ಸಾರ್ವಜನಿಕರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಪ್ರೇರಣೆಯಾಗಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-village-accountant-trapped-by-lokayukta-while-taking-bribe-for-mutation-sat/articleshow-vi4fsrr"/>
        </item>
        <item>
            <title><![CDATA[ದನದ ಕೊಟ್ಟಿಗೆ ಬಿಲ್ ಪಾವತಿಸದ ಅಧಿಕಾರಿ; ತಾ.ಪಂ ಕಚೇರಿಯಲ್ಲಿ ಹಸುಗಳನ್ನ ಕಟ್ಟಿ, ಕಾಲಿಗೆ ಬಿದ್ದ ಅನ್ನದಾತ!]]></title>
            <link>https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</link>
            <guid isPermaLink="true">https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</guid>
            <pubDate>Thu, 11 Jun 2026 14:50:06 +0530</pubDate>
            <description><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kttspb71h6pyneqt4pvkw70w,imgname-bidar-farmer-protests--4--1781163306208.jpg" type="image/jpeg" height="390" width="690"/>
            <content:encoded><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.&lt;img&gt;&lt;p&gt;&lt;strong&gt;ಬೀದರ್(ಜೂ.11): ಸ&lt;/strong&gt;ರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅಧಿಕಾರಿಗಳ ಕಾಲು ಹಿಡಿಯಬೇಕು ಎಂಬ ಮಾತು ಈಗ ಅಕ್ಷರಶಃ ನಿಜವಾಗಿದೆ. ಕೊಟ್ಟಿಗೆ ನಿರ್ಮಾಣ ಮಾಡಿ 9 ತಿಂಗಳು ಕಳೆದರೂ ಬಿಲ್ ಮಂಜೂರು ಮಾಡದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತನೊಬ್ಬ, ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಆಗಮಿಸಿ ವಿನೂತನವಾಗಿ ಪ್ರತಿಭಟಿಸಿದ ಘಟನೆ ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಘಟನೆ?:&lt;/strong&gt;&lt;/p&gt;&lt;p&gt;ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ರೈತ ಅಪ್ಪಾಸಾಬ್ ಮಡಕೆ ಎಂಬುವವರು ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದರು. ಕೊಟ್ಟಿಗೆ ಪೂರ್ಣಗೊಂಡು ಬರೋಬ್ಬರಿ ಒಂಬತ್ತು ತಿಂಗಳು ಕಳೆದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಇಂದು ಹುಲಸೂರು ತಾಲ್ಲೂಕು ಪಂಚಾಯತ್ ಕಚೇರಿಗೆ ತನ್ನ ಹಸುವನ್ನು ಕರೆತಂದು, ಕಚೇರಿಯ ಆವರಣದಲ್ಲೇ ಹಸು ಕಟ್ಟಿ ಮೇವು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಯ ಕಾಲಿಗೆ ಬಿದ್ದ ಅನ್ನದಾತ:&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಪ್ಪಾಸಾಬ್ ಮಡಕೆ, ತಾಲ್ಲೂಕು ಪಂಚಾಯತ್ ಇಒ (EO) ಮಹದೇವ ಜಮ್ಮು ಅವರ ಕಾಲಿಗೆ ಬಿದ್ದು, 'ದಯವಿಟ್ಟು ನನ್ನ ಬಿಲ್ ಮಾಡಿಕೊಡಿ ಸ್ವಾಮಿ' ಎಂದು ಕಣ್ಣೀರಿಟ್ಟರು. ಬಿಲ್ ಮಂಜೂರು ಮಾಡಲು ಗ್ರಾಮ ಪಂಚಾಯತ್ ಪಿಡಿಓ (PDO) ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;img&gt;&lt;p&gt;&lt;strong&gt;ಬೋಗಸ್ ಬಿಲ್ ಆರೋಪ:&lt;/strong&gt;&lt;/p&gt;&lt;p&gt;ಕೇವಲ ಅಪ್ಪಾಸಾಬ್ ಒಬ್ಬರೇ ಅಲ್ಲ, ಬೇಲೂರು ಗ್ರಾಮವೊಂದರಲ್ಲೇ ಸುಮಾರು 40ಕ್ಕೂ ಹೆಚ್ಚು ರೈತರಿಗೆ ಕೊಟ್ಟಿಗೆ ನಿರ್ಮಾಣದ ಬಿಲ್ ಪಾವತಿಯಾಗಿಲ್ಲ ಎನ್ನಲಾಗಿದೆ. 'ಗ್ರಾಮ ಪಂಚಾಯತ್&zwnj;ನಲ್ಲಿ ಚರಂಡಿ ಸ್ವಚ್ಛತೆ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬೋಗಸ್ ಬಿಲ್ ಮಾಡುತ್ತಾರೆ. ಆದರೆ ನೈಜವಾಗಿ ಕೆಲಸ ಮಾಡಿದ ರೈತರಿಗೆ ಮಾತ್ರ ಹಣ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟಿಸಿದ ರೈತನ ಹೋರಾಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg"/>
        </item>
        <item>
            <title><![CDATA[ಬೀದರ್-ಬೆಂಗಳೂರು ನೇರ ವಿಮಾನಯಾನ ಜೂನ್ 1 ರಿಂದ ಆರಂಭ, ವೇಳಾಪಟ್ಟಿ ಬಿಡುಗಡೆ, ಚೆಕ್ ಮಾಡಿಕೊಳ್ಳಿ]]></title>
            <link>https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</link>
            <guid isPermaLink="true">https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k</guid>
            <pubDate>Tue, 19 May 2026 18:20:57 +0530</pubDate>
            <description><![CDATA[ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್&zwnj;ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jj8hkaw4djebaykbmsng1vq7,imgname-star-air.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿದ್ದ ಬೀದರ್&ndash;ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಜೂನ್ 1ರಿಂದ ಪುನರಾರಂಭಗೊಳ್ಳಲಿದ್ದು, ನೂತನ ವೇಳಾಪಟ್ಟಿ ಯನ್ನು ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಹೊರಡಲಿರುವ ವಿಮಾನ 7:45ಕ್ಕೆ ಬೀದರ್ ತಲುಪಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;h2&gt;ವಿಮಾನ ವೇಳಾಪಟ್ಟಿ ಇಲ್ಲಿದೆ&lt;/h2&gt;&lt;p&gt;ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಸ್ಟಾರ್ ಏರ್ ವತಿಯಿಂದ ಆರಂಭವಾಗುತ್ತಿರುವ ಈ ವಿಮಾನ ಸೇವೆಯ ವೇಳಾಪಟ್ಟಿಯಂತೆ ಬೀದರ್&zwnj;ನಿಂದ ಬೆಳಿಗ್ಗೆ 8:15ಕ್ಕೆ ಹೊರಡುವ ವಿಮಾನ 9:30ಕ್ಕೆ ಬೆಂಗಳೂರು ತಲುಪಲಿದ್ದು, ಕೇವಲ 1 ಗಂಟೆ 15 ನಿಮಿಷಗಳಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಸಬಹುದಾಗಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಈ ವಿಮಾನ ಸೇವೆ ಪುನರಾರಂಭಗೊಳ್ಳಲು ನಿರಂತರ ಪ್ರಯತ್ನ ಮಾಡಲಾಗಿದ್ದು, ಇದರ ಫಲವಾಗಿ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತೆ ವಾಯು ಸಂಪರ್ಕ ಸೌಲಭ್ಯ ಲಭ್ಯವಾಗುತ್ತಿದೆ. ಇದರಿಂದ ಜಿಲ್ಲೆಯ ವ್ಯಾಪಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಪ್ರಗತಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಈ ಮಹತ್ವದ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್, ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳು, ಕೆಕೆಆರ್&zwnj;ಡಿಬಿ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ನೀಡಿದ ಸಹಕಾರಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹಾಗೆಯೇ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸಾಗರ್ ಖಂಡ್ರೆ, ಸಚಿವರಾದ ರಹೀಂ ಖಾನ್ ಹಾಗೂ ಜಿಲ್ಲೆಯ ಎಲ್ಲಾ ಮುಖಂಡರ ಸಹಕಾರವೂ ಶ್ಲಾಘನೀಯ ವಾಗಿದೆ ಎಂದು ಅವರು ತಿಳಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಮತ್ತು ಜನರ ಸೌಲಭ್ಯಕ್ಕಾಗಿ ಸರ್ಕಾರ ಇನ್ನಷ್ಟು ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/good-news-for-kalyana-karnataka-bengaluru-bidar-star-air-flights-resume-from-june-1st-check-out-airline-timings-gdp/articleshow-xlsh34k"/>
        </item>
    </channel>
</rss>
