<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 28 Aug 2026 11:49:46 +0530</lastBuildDate>
        <atom:link href="https://kannada.asianetnews.com/rss/bidar" rel="self" type="application/rss+xml"/>
        <item>
            <title><![CDATA[ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಆಸ್ತಿ ಪತ್ತೆ, ಎಲ್ಲೆಲ್ಲಿ ದಾಳಿ?]]></title>
            <link>https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</link>
            <guid isPermaLink="true">https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</guid>
            <pubDate>Tue, 16 Jun 2026 09:02:10 +0530</pubDate>
            <description><![CDATA[ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮತ್ತು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ghne3sn58e8amfw5e7hkgzhv,imgname-karnataka-lokayukta.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರು&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿ ಎ.ಸಿ.ಎಫ್.ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್&zwnj;ನಲ್ಲಿರುವ ನಿವಾಸ, ಕಡೂರಿನಲ್ಲಿರುವ ಶ್ರೀನಿವಾಸ್ ಸೋದರಿ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ದಾವಣಗೆರೆ&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರೋ ಎರಡು ಮನೆ, NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಸರಸ್ವತಿ ನಗರದಲ್ಲಿ ಮನೆ, ಕೆಆರ್&zwnj;ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತಿದೆ. ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.&lt;/p&gt;&lt;p&gt;&lt;strong&gt;ಕಲಬುರಗಿ&lt;/strong&gt;&lt;/p&gt;&lt;p&gt;ಕಲಬುರಗಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಮನೆ ಸೇರಿದಂತೆ ಐದು ಕಡೆ ಮೇಲೆ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ ನ ಎರಡು ಕಾಂಪ್ಲೆಂಕ್ಸ್ , ಹಳ್ಳಿಖೇಡ ಗ್ರಾಮದ ತೋಟದ ಮನೆಯ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಬೀದರ ಜಿಲ್ಲೆ ಹುಮನಾಬಾದನಲ್ಲಿ ಎರಡು ಕಾಂಪ್ಲೆಕ್ಸ್, ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಸೇರಿದಂತೆ ಆರಂಭದಲ್ಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಿವೃತ ಅಧಿಕಾರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt;&lt;/p&gt;&lt;p&gt;ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರಾಜಣ್ಣ ಅಡಿಷನಲ್ ಡೈರೆಕ್ಟರ್ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಬೆಸ್ಕಾಂ ಎಇಇ ಉದಯ್ ಕುಮಾರ್ ಅವರ ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಇಬ್ಬರು ಅಧಿಕಾರಿಗಳಿಂದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru"/>
        </item>
        <item>
            <title><![CDATA[CSMT ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಆರಾಮದಾಯಕ ಸುದ್ದಿ]]></title>
            <link>https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</link>
            <guid isPermaLink="true">https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</guid>
            <pubDate>Wed, 24 Jun 2026 12:00:24 +0530</pubDate>
            <description><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvw4j5ae9d645yzh1hybdcw8,imgname-indian-railways-1782281999694.jpg" type="image/jpeg" height="390" width="690"/>
            <content:encoded><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.&lt;img&gt;&lt;p&gt;24 ಬೋಗಿಗಳೊಂದಿಗೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಕೇಂದ್ರ ರೈಲ್ವೆ ಓಡಿಸಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸಲು ಹೆಚ್ಚುವರಿ 3 ಬೋಗಿಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.&lt;/p&gt;&lt;img&gt;&lt;p&gt;ಅನುಕೂಲಕರ ಪ್ರಯಾಣವನ್ನು ಸುಗಮಗೊಳಿಸುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸಪ್ರೆಸ್ ರೈಲುಗಳನ್ನು 3 ಹೆಚ್ಚುವರಿ ಬೋಗಿಗಳೊಂದಿಗೆ ಓಡಿಸಲು ನಿರ್ಧರಿಸಿದೆ. ಸದ್ಯ ರೈಲಿಗೆ 24 ಬೋಗಿಗಳನ್ನು ಅಳವಡಿಸ ಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;img&gt;&lt;p&gt;ಜೂನ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22107 CSMT ಮುಂಬೈ-ಲಾತೂರ್ ಎಕ್ಸಪ್ರೆಸ್ ಮತ್ತು ಜೂನ್ 26 ರಿಂದ ರೈಲು ಸಂಖ್ಯೆ 22108 ಲಾತೂರ್ - CSMT ಮುಂಬೈ ಎಕ್ಸಪ್ರೆಸ್ ಮತ್ತು ಜೂನ್ 26ರಿದ ರೈಲು ಸಂಖ್ಯೆ 22143 CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ರೈಲು ಸಂಖ್ಯೆ 22144 ಬೀದರ್- CSMT ಮುಂಬೈ ಎಕ್ಸ್&zwnj;ಪ್ರೆಸ್ ಜೂ. 27ರಿಂದ ಜಾರಿಗೆ ಬರಲಿದೆ.&lt;/p&gt;&lt;img&gt;&lt;p&gt;ಈ ರೈಲುಗಳಲ್ಲಿ 1 ಪ್ರಥಮ ಎಸಿ, 3 ಎಸಿ II-ಶ್ರೇಣಿ, 5 ಎಸಿ III-ಶ್ರೇಣಿ, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಗಾರ್ಡ್ ಕಮ್ ಬ್ರೇಕ್ ವ್ಯಾನ್&zwnj;ಗಳನ್ನು ಒಳಗೊಂಡಂತೆ 24 ಐಸಿಎಫ್ ಕೋಚ್&zwnj;ಗಳು ಇರುತ್ತವೆ. ಈ ನವೀಕರಣವು ಮುಂಬೈ, ಲಾತೂರ್ ಮತ್ತು ಬೀದರ್ ನಡುವೆ ಪ್ರಯಾಣಿಕರಿಗೆ ಹೆಚ್ಚಿನ ಆಸನ ಸಾಮರ್ಥ್ಯ, ಉತ್ತಮ ಅನುಕೂಲತೆ ಮತ್ತು ಸುಗಮ ಪ್ರಯಾಣವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು &lsquo;ETCS&rsquo; ಸಿಗ್ನಲಿಂಗ್&zwnj;ಗೆ ಸಜ್ಜಾದ ಕೆ-ರೈಡ್&zwnj;&lt;/strong&gt;&lt;/p&gt;&lt;img&gt;&lt;p&gt;3 ಹೆಚ್ಚುವರಿ ಕೋಚ್&zwnj;ಗಳು ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸುತ್ತವೆ. 1 ಎಸಿ II-ಶ್ರೇಣಿ - 46 ಆಸನಗಳು, 1 ಎಸಿ III- ಶ್ರೇಣಿ - 64 ಆಸನಗಳು, 1 ಸ್ಲೀಪರ್ ಕ್ಲಾಸ್ - 72 ಆಸನಗಳು. ಸೋಲಾಪುರ ವಿಭಾಗವು ಪ್ರಯಾಣಿಕರಿಗೆ ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಹೊಸದಾಗಿ ವರ್ಧಿತ ಕೋಚ್&zwnj;ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!&lt;/strong&gt;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12"/>
        </item>
        <item>
            <title><![CDATA[Prabhu Chauhan: 'ಇದು ರಾಜಕೀಯ ಪ್ರೇರಿತ' ಶಾಸಕ ಚವ್ಹಾಣ್‌ ಜಾತಿ ವಿವಾದ, ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು]]></title>
            <link>https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq</link>
            <guid isPermaLink="true">https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq</guid>
            <pubDate>Fri, 22 May 2026 06:48:32 +0530</pubDate>
            <description><![CDATA[&lt;p&gt;ಔರಾದ್&zwnj; ಶಾಸಕ ಪ್ರಭು ಚವ್ಹಾಣ್&zwnj; ಅವರ ಜಾತಿ ಮತ್ತು ಮೂಲ ನಿವಾಸವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್&zwnj; ವಜಾಗೊಳಿಸಿದೆ. ಈ ದೂರು ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, &amp;nbsp;ಸ್ಥಳೀಯರು, ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಹೈಕೋರ್ಟ್&zwnj; ತೀರ್ಪನ್ನು ಎತ್ತಿಹಿಡಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks6krpv8nrqyjn9gvd7wc7bx,imgname-----------------------2026-05-22t064031.911-1779412261736.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿರಾಳ - ಜಾತಿ, ಮೂಲನಿವಾಸಿ ವಿವಾದ ಬಗ್ಗೆ ದೂರು ರಾಜಕೀಯ ಪ್ರೇರಿತ: ಕೋರ್ಟ್&zwnj;&lt;/p&gt;&lt;p&gt;&amp;nbsp;&lt;strong&gt;ಔರಾದ್&zwnj; (ಮೇ.22): &lt;/strong&gt;ಮಾಜಿ ಸಚಿವ, ಔರಾದ್&zwnj; ಶಾಸಕ ಪ್ರಭು ಚವ್ಹಾಣ್&zwnj; ವಿರುದ್ಧ ಮೂಲನಿವಾಸ ಸ್ಥಳ ಹಾಗೂ ಜಾತಿ ಮೂಲ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂಕೋರ್ಟ್&zwnj;, ಇವರು ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಚುನಾವಣೆಯಲ್ಲಿ ಅಕ್ರಮವಾಗಿ ಸ್ಪರ್ಧಿಸಿದ್ದಾರೆ ಎಂಬ ವಾದವನ್ನು ತಳ್ಳಿ ಹಾಕಿದೆ.&lt;/p&gt;&lt;h2&gt;ಪ್ರಕರಣವೇನು?:&lt;/h2&gt;&lt;p&gt;ಶಾಸಕ ಪ್ರಭು ಚವ್ಹಾಣ್&zwnj; ಅವರು ಮಹಾರಾಷ್ಟ್ರ ಮೂಲದವರು. ಮಹಾರಾಷ್ಟ್ರದಲ್ಲಿ ಲಂಬಾಣಿ ಸಮಾಜವು ವಿಮುಕ್ತ ಜಾತಿ (ವಿಜೆ-ಎ) ಮೀಸಲಾತಿ ಹೊಂದಿದೆ. ಆದರೆ, ಇವರು ಬೀದರ್&zwnj; ಜಿಲ್ಲೆಯ ಬೋಂತಿ ತಾಂಡಾ ಮೂಲದವರೆಂದು ರಹವಾಸಿ ಪತ್ರ ಪಡೆದು, ಲಂಬಾಣಿ ಸಮಾಜ ಇಲ್ಲಿ ಹೊಂದಿರುವ ಪರಿಶಿಷ್ಟ ಜಾತಿ (ಎಸ್&zwnj;ಸಿ) ಮೀಸಲು ಸೌಲಭ್ಯದ ಮೇಲೆ 2008ರಿಂದ ಔರಾದ್&zwnj; ಕ್ಷೇತ್ರದ ಶಾಸಕರಾಗುತ್ತಿದ್ದಾರೆ. ಮೀಸಲು ಸೌಲಭ್ಯ ದುರ್ಬಳಕೆ ಮಾಡಿಕೊಂಡ ಇವರ ಶಾಸಕತ್ವ ಅನರ್ಹಗೊಳಿಸಬೇಕೆಂದು ನರಸಿಂಗ ತುಕಾರಾಮ ಎಂಬುವರು ಹೈಕೋರ್ಟ್&zwnj;ನ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್&zwnj; ಪೀಠ, ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತುಕಾರಾಮ ಅವರು, ಸುಪ್ರೀಂಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;&lt;p&gt;ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್&zwnj; ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ, ಸತೀಶಚಂದ್ರ ಶರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ಈ ಮೇಲ್ಮನವಿ ಅರ್ಜಿಯನ್ನು (2026ರ ಮೇ 6ರಂದು) ವಜಾಗೊಳಿಸಿದೆ.&lt;/p&gt;&lt;p&gt;ಚವ್ಹಾಣ್&zwnj; ಅವರ ಜಾತಿ ಮೂಲ ಮತ್ತು ಮೂಲ ನಿವಾಸದ ಬಗ್ಗೆ ಕ್ಯಾತೆ ತೆಗೆದು ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ವಿಜಯಕುಮಾರ ಕೌಡ್ಯಾಳ್&zwnj; ಮತ್ತು ಬೀದರ್&zwnj;ನ ರವೀಂದ್ರ ಕಲ್ಲಯ್ಯ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು 2023ರ ಮೇ 1ರಂದು ಸುಪ್ರೀಂಕೋರ್ಟ್&zwnj; ವಜಾಗೊಳಿಸಿತ್ತು.&lt;/p&gt;&lt;h3&gt;ನಾನು ಕನ್ನಡಿಗ: ಚವ್ಹಾಣ್&zwnj;&lt;/h3&gt;&lt;p&gt;ನಾನು ಕನ್ನಡಿಗ, ಕರ್ನಾಟಕದವನು. ಇಲ್ಲೇ ಹುಟ್ಟಿ, ಬೆಳೆದಿದ್ದೇನೆ. ವಿನಾಕಾರಣ ನನ್ನ ಜಾತಿ, ನಿವಾಸದ ಮೂಲ ಕೆದಕಿ ವಿವಾದ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್&zwnj; ಎರಡು ಸಲ ನನ್ನ ಪರವಾಗಿ ತೀರ್ಪು ಕೊಟ್ಟಿದೆ. ಇದೀಗ ಸುಪ್ರೀಂಕೋರ್ಟ್&zwnj; ಸಹ ಮತ್ತೊಮ್ಮೆ ನನ್ನ ವಿರುದ್ಧದ ಅರ್ಜಿ ವಜಾಗೊಳಿಸಿದೆ. ಇದು ಸತ್ಯಮೇವ ಜಯತೆ ಎಂದು ಶಾಸಕ ಚವ್ಹಾಣ್ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಚವ್ಹಾಣ್&zwnj; ಅವರ ಜನ್ಮಸ್ಥಳ, ವಿದ್ಯಾಭ್ಯಾಸ, ಎಸ್&zwnj;ಸಿ ಜಾತಿ ಪ್ರಮಾಣಪತ್ರ ಸ್ವೀಕಾರ, ಮತದಾರರ ಪಟ್ಟಿಯಲ್ಲಿನ ಹೆಸರು... ಹೀಗೆ ಎಲ್ಲದರ ಪರಿಶೀಲನೆ ನಡೆಸಿದ ವೇಳೆ ಇವರು ಸ್ಥಳೀಯರು ಹಾಗೂ ಲಂಬಾಣಿ ಎಸ್&zwnj;ಸಿ ಸಮಾಜದವರು ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಹೈಕೋರ್ಟ್&zwnj;ನ ಕಲಬುರಗಿ ಪೀಠ ನೀಡಿರುವ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವೇ ಇಲ್ಲ. ಈ ಮೇಲ್ಮನವಿ ರಾಜಕೀಯ ಪ್ರೇರಿತವಾಗಿದ್ದು, ಪ್ರತೀಕಾರದ ಹೊರತಾಗಿ ಬೇರೆ ಉದ್ದೇಶವೇನನ್ನೂ ಹೊಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/mla-chavan-caste-dispute-supreme-court-delivers-major-judgment-rav/articleshow-5y5foeq"/>
        </item>
        <item>
            <title><![CDATA[ಕರ್ನಾಟಕ ಮಣ್ಣಲ್ಲಿ ಜಪಾನ್‌ 'ಮಿಯಾಜಾಕಿ' ಕಮಾಲ್: ಕೊಪ್ಪಳ ಬಳಿಕ ಬೀದರ್‌ನಲ್ಲೂ ದುಬಾರಿ ಮಾವು? ರೇಟ್ ಸಿಕ್ಕಿದ್ದೆಷ್ಟು?]]></title>
            <link>https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</link>
            <guid isPermaLink="true">https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y</guid>
            <pubDate>Fri, 22 May 2026 16:37:01 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks7mzsqgab1q6bfhpnxv7ncy,imgname-bidar-miyazaki-mango-1779447097072.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರೈತರೊಬ್ಬರು ಜಪಾನ್ ಮೂಲದ, ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವನ್ನು ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ಹಣ್ಣಿಗೆ, ಸ್ಥಳೀಯ ಮಾರುಕಟ್ಟೆ ಸಿಗದಿರುವುದು ಸವಾಲಾಗಿದೆ.&lt;/p&gt;&lt;img&gt;&lt;p&gt;ಜಗತ್ತಿನ ಹಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ಜಪಾನ್ ಮೂಲದ ಮಿಯಾಜಾಕಿ ಹಣ್ಣು ನಿಜಕ್ಕೂ ರಾಜರಲ್ಲಿ ರಾಜ ಎಂದು ಹೇಳಬಹುದು. ಕಾರಣ ಈ ಮಿಯಾಜಾಕಿ ಹಣ್ಣಿಗೆ 1 ಕೆಜಿಗೆ 2.5 ಲಕ್ಷ ರೂ. ಎಂದು ಹೇಳುತ್ತಾರೆ. ಆದರೆ, ಭಾರತದ ರೈತರು ಈವರೆಗೆ 10 ಸಾವಿರ ರೂ. ಕೆಜಿ ಮಾರಾಟ ಮಾಡಿದ್ದನ್ನೂ ಯಾರೂ ನೋಡಿಲ್ಲ.&lt;/p&gt;&lt;p&gt;ಹೀಗಿರುವಾಗ, ಕೊಪ್ಪಳದಲ್ಲಿ ಮಿಯಾಜಾಕಿ ಮಾವಿನ ಹಣ್ಣು ಬೆಳೆದು ಕೇವಲ 3 ಸಾವಿರ ರೂ.ಗೆ ಒಂದು ಕೆಜಿ ಹಣ್ಣು ಮಾರಾಟ ಮಾಡಿ ಕೈ ಸುಟ್ಟುಕೊಂಡಿದ್ದನು. ಇದೀಗ ಬೀದರ್&zwnj;ನಲ್ಲಿಯೂ ಮತ್ತೊಬ್ಬ ರೈತ ಮಿಯಾಜಾಕಿ ಮಾವು ಬೆಳೆದು ಸುದ್ದಿಗೆ ಬಂದಿದ್ದಾರೆ. ಅವರ ಕುರಿತ ವಿಶೇಷ ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲ್ಬರ್ಗಾ ಗ್ರಾಮದ ರೈತರು ಈ ಅಪರೂಪದ ಸಾಹಸಕ್ಕೆ ಕೈಹಾಕಿದ್ದಾರೆ. ಇವರು ಜಪಾನ್ ದೇಶದಿಂದಲೇ ನೇರವಾಗಿ ಈ ಮಿಯಾಜಾಕಿ ಮಾವಿನ ಗಿಡಗಳನ್ನು ತರಿಸಿ, ತಮ್ಮ ಹೊಲದಲ್ಲಿ ಪ್ರಾಯೋಗಿಕವಾಗಿ 4 ಗಿಡಗಳನ್ನು ನಾಟಿ ಮಾಡಿದ್ದರು. ಈಗ ಈ ಗಿಡಗಳಲ್ಲಿ ಹಣ್ಣುಗಳು ಸಮೃದ್ಧವಾಗಿ ಬಂದಿವೆ.&lt;/p&gt;&lt;img&gt;&lt;p&gt;ಈ ಮಾವಿನ ಹಣ್ಣುಗಳು ಸಾಮಾನ್ಯ ಮಾವಿಗಿಂತ ಹೆಚ್ಚು ಸಿಹಿಯಾಗಿದ್ದು, ಗಾಢ ಕೆಂಪು ಬಣ್ಣದಿಂದ ಕೂಡಿವೆ. ಒಂದೊಂದು ಹಣ್ಣು ಸುಮಾರು 200 ರಿಂದ 500 ಗ್ರಾಂವರೆಗೆ ತೂಕ ಬರುತ್ತದೆ. ಸದ್ಯಕ್ಕೆ ಇದನ್ನು ಮನೆಯ ಬಳಕೆಗಾಗಿ ಬೆಳೆದಿದ್ದರೂ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸುವ ಇರಾದೆ ರೈತರದ್ದಾಗಿದೆ.&lt;/p&gt;&lt;img&gt;&lt;p&gt;ಅಂತಹ ಅದ್ಭುತ ಮತ್ತು ದುಬಾರಿ 'ಮಿಯಾಜಾಕಿ' (Miyazaki Mango) ಮಾವಿನ ಹಣ್ಣು ಈಗ ಕರ್ನಾಟಕದ ಮಣ್ಣಿನಲ್ಲಿಯೂ ಬೆಳೆಯುತ್ತಿದೆ. ಕೊಪ್ಪಳದ ಬಳಿಕ ಇದೀಗ ಗಡಿ ಜಿಲ್ಲೆ ಬೀದರ್&zwnj;ನ ರೈತರು ಈ ಅತಿ ದುಬಾರಿ ಮಾವು ಬೆಳೆದು ಸುದ್ದಿಯಾಗಿದ್ದಾರೆ. ಇದೀಗ ಪ್ರಾಯೋಗಿಕ ಬೆಳೆ ಯಶಸ್ವಿ ಆಗಿದ್ದು, ಹೆಚ್ಚಿನ ಗಿಡ ಬೆಳೆಯಲು ಉತ್ಸುಕರಾಗಿದ್ದಾರೆ.&lt;/p&gt;&lt;img&gt;&lt;p&gt;ಬೀದರ್&zwnj;ಗಿಂತ ಮೊದಲು ಕೊಪ್ಪಳ ಜಿಲ್ಲೆಯ ನಾಗಪ್ಪ ಬಗನಾಳ ಎಂಬ ರೈತರು ಈ ಮಿಯಾಜಾಕಿ ಮಾವನ್ನು ಬೆಳೆದು ಸದ್ದು ಮಾಡಿದ್ದರು. ಕಲ್ ತಾವರಗೇರಾ ಗ್ರಾಮದ ನಾಗಪ್ಪ ಅವರು 2 ಎಕರೆ ಪ್ರದೇಶದಲ್ಲಿ ಬರೋಬ್ಬರಿ 180 ಗಿಡಗಳನ್ನು ಬೆಳೆಸಿದ್ದಾರೆ. ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ ಸಸಿಗಳನ್ನು ತರಿಸಿದ್ದ ಅವರು, ಪ್ರತಿ ಸಸಿಗೆ 1,300 ರೂಪಾಯಿ ವೆಚ್ಚ ಮಾಡಿದ್ದರು.&lt;/p&gt;&lt;img&gt;&lt;p&gt;ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಜಾಕಿ ಮಾವಿನ ಹಣ್ಣಿಗೆ ಕೆಜಿಗೆ 2.50 ಲಕ್ಷ ರೂಪಾಯಿ ಬೆಲೆ ಇದೆ. ಇದನ್ನು ಜಪಾನ್&zwnj;ನಲ್ಲಿ 'ಸೂರ್ಯನ ಮೊಟ್ಟೆ' (Egg of the Sun) ಎಂದು ಕರೆಯಲಾಗುತ್ತದೆ. ಆದರೆ, ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೆಲೆ ಸಿಗುತ್ತಿಲ್ಲ ಎಂಬುದು ರೈತರ ಅಳಲು. ಕೊಪ್ಪಳದ ಮಾವು ಮೇಳದಲ್ಲಿ ಈ ಹಣ್ಣು ಕೆಜಿಗೆ ಕೇವಲ 3 ಸಾವಿರ ರೂಪಾಯಿಗೆ ಮಾರಾಟವಾಗಿದೆ. ವಿಶ್ವದ ಅತ್ಯಂತ ದುಬಾರಿ ಹಣ್ಣನ್ನು ಬೆಳೆದರೂ, ಅದಕ್ಕೆ ತಕ್ಕ ಮಾರುಕಟ್ಟೆ ಇಲ್ಲದಿರುವುದು ರೈತರಿಗೆ ದೊಡ್ಡ ಸವಾಲಾಗಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/world-s-costliest-miyazaki-mango-now-grown-in-bidar-karnataka-check-price-and-details-sat-6g7g80y"/>
        </item>
        <item>
            <title><![CDATA[ಬೀದರ್ ಎಟಿಎಂ ₹83 ಲಕ್ಷ ದರೋಡೆ: 19 ತಿಂಗಳ ಬಳಿಕ ಬಿಹಾರದಲ್ಲಿ ಖದೀಮರ ಬೇಟೆಯಾಡಿದ ಕರ್ನಾಟಕ ಪೊಲೀಸರು!]]></title>
            <link>https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</link>
            <guid isPermaLink="true">https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</guid>
            <pubDate>Wed, 12 Aug 2026 18:18:15 +0530</pubDate>
            <description><![CDATA[&lt;p&gt;ಬೀದರ್&zwnj;ನಲ್ಲಿ 19 ತಿಂಗಳ ಹಿಂದೆ ನಡೆದಿದ್ದ ಹಾಡಹಗಲು ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಬ್ಬಂದಿಯೊಬ್ಬರನ್ನು ಕೊಂದು 83 ಲಕ್ಷ ರೂ. ದೋಚಿದ್ದ ಇಬ್ಬರು ಆರೋಪಿಗಳನ್ನು, ಬೀದರ್ ಪೊಲೀಸರು ಬಿಹಾರದಲ್ಲಿ ಗೌಪ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಬೀದರ್&zwnj;ಗೆ ಕರೆತರಲಾಗುತ್ತಿದ್ದು, ತನಿಖೆ ಮುಂದುವರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv041c1346adp7b8q8kb6ky,imgname-bidar-sbi-atm-robbery-gang-arrest-in-bihar-1786538755457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಆ.12): ಕ&lt;/strong&gt;ಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬೀದರ್ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲಿನ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ಬಿಗ್ ಕ್ಲೈಮ್ಯಾಕ್ಸ್ ಸಿಕ್ಕಿದೆ! ಪ್ರಕರಣ ನಡೆದ ಭೀಕರ ಘಟನೆಗೆ ಭರ್ತಿ 1 ವರ್ಷ 7 ತಿಂಗಳ (19 ತಿಂಗಳು) ಬಳಿಕ, ಪ್ರಕರಣದ ಇಬ್ಬರು ಕುಖ್ಯಾತ ದರೋಡೆಕೋರರ ಹೆಡೆಮುರಿಯನ್ನು ಬೀದರ್ ಪೊಲೀಸರು ಬಿಹಾರದಲ್ಲಿ ಕಟ್ಟಿದ್ದಾರೆ.&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಮನ್&zwnj;ಕುಮಾರ್ ಸಿಂಗ್ ಹಾಗೂ ಅಲೋಕ್&zwnj;ಕುಮಾರ್ ಎಂದು ಗುರುತಿಸಲಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ಬೀದರ್ ಪೊಲೀಸರು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ ಈ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಹಾಡಹಗಲೇ ನಡೆದಿದ್ದ ಆ ಭೀಕರ ದರೋಡೆ ಏನು?&lt;/strong&gt;&lt;/h2&gt;&lt;p&gt;ಜನವರಿ 16, 2025ರಂದು ಬೀದರ್ ನಗರದ ಹೃದಯಭಾಗದಲ್ಲಿರುವ ಎಸ್&zwnj;ಬಿಐ (SBI) ಬ್ಯಾಂಕ್ ಹಾಗೂ ಎಟಿಎಂ ಮುಂಭಾಗದಲ್ಲಿ ಅತ್ಯಂತ ಭೀಕರ ದರೋಡೆ ನಡೆದಿತ್ತು. ಸಿಎಮ್&zwnj;ಎಸ್ (CMS) ಏಜೆನ್ಸಿಯ ಕ್ಯಾಶ್ ವ್ಯಾನ್&zwnj;ನಿಂದ ಹಣ ತುಂಬಲು ಬಂದಿದ್ದ ಸಿಬ್ಬಂದಿಯ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಿಎಮ್&zwnj;ಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರೆ, ಶಿವಕುಮಾರ್ ಗುನ್ನಳ್ಳಿ ಎಂಬ ಇನ್ನೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ಸ್ಥಳದಲ್ಲೇ ಬರೋಬ್ಬರಿ 83 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.&lt;/p&gt;&lt;h2&gt;&lt;strong&gt;ಯಾರ ಸಹಾಯವೂ ಇಲ್ಲದೇ 'ಬೀದರ್ ಸಿಂಹಗಳ' ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಪ್ರಕರಣ ನಡೆದ ದಿನದಿಂದಲೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಬೀದರ್ ಪೊಲೀಸರಿಗೆ ಕಳೆದ 20 ದಿನಗಳ ಹಿಂದೆ ಆರೋಪಿಗಳ ಖಚಿತ ಸುಳಿವು ಸಿಕ್ಕಿತ್ತು. ಸುಳಿವು ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಖಾಕಿ ಪಡೆ, ಕಳೆದ 20 ದಿನಗಳಿಂದ ಬಿಹಾರದಲ್ಲೇ ಬೀಡುಬಿಟ್ಟು ಆರೋಪಿಗಳ ಪ್ರತಿಯೊಂದು ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿತ್ತು. ವಿಶೇಷವೆಂದರೆ, ಈ ಕಾರ್ಯಾಚರಣೆಯಲ್ಲಿ ಬಿಹಾರ ಅಥವಾ ಇತರ ಯಾವುದೇ ರಾಜ್ಯದ ಪೊಲೀಸರ ಸಹಾಯವನ್ನು ಪಡೆಯದೇ, ಮಾಹಿತಿ ಸೋರಿಕೆಯಾಗದಂತೆ ಅತ್ಯಂತ ಗೌಪ್ಯವಾಗಿ ಬೀದರ್ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಖಡಕ್ ಆಪರೇಷನ್ ನಡೆಸಿದ ಪೊಲೀಸ್ ತಂಡ:&lt;/strong&gt;&lt;/h2&gt;&lt;p&gt;ಬೀದರ್ ಎಸ್&zwnj;ಪಿ ಪ್ರದೀಪ್ ಗುಂಟಿ ಅವರ ನೇರ ಉಸ್ತುವಾರಿಯಲ್ಲಿ ಈ ಹೈ-ವೋಲ್ಟೇಜ್ ಆಪರೇಷನ್ ನಡೆದಿದೆ. ಈ ಕ್ರೈಂ ಆಪರೇಷನ್&zwnj; ತಂಡದಲ್ಲಿ:&lt;/p&gt;&lt;ul&gt; &lt;li&gt;ಓರ್ವ ಎಸ್&zwnj;ಪಿ (SP)&lt;/li&gt; &lt;li&gt;ಇಬ್ಬರು ಡಿವೈಎಸ್ಪಿ (DySP)&lt;/li&gt; &lt;li&gt;ಇಬ್ಬರು ಸಿಪಿಐ (CPI)&lt;/li&gt; &lt;li&gt;ನಾಲ್ಕು ಪಿಎಸ್&zwnj;ಐ (PSI)&lt;/li&gt; &lt;li&gt;20 ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ&lt;/li&gt; &lt;li&gt;ಕ್ರೈಮ್ ವಿಭಾಗದ (Crime Branch) 12 ನುರಿತ ಸಿಬ್ಬಂದಿ ಸೇರಿ ಒಟ್ಟು ದೊಡ್ಡ ಪಡೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.&lt;/li&gt;&lt;/ul&gt;&lt;h2&gt;&lt;strong&gt;ದರೋಡೆ ನಡೆದ ಸ್ಥಳದಲ್ಲೇ ಸಾರ್ವಜನಿಕರ ಸಂಭ್ರಮಾಚರಣೆ!&lt;/strong&gt;&lt;/h2&gt;&lt;p&gt;ಕಳೆದ 19 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಹಂತಕ ದರೋಡೆಕೋರರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಬೀದರ್&zwnj;ನ ಎಸ್&zwnj;ಬಿಐ ಬ್ಯಾಂಕ್ ಮುಂಭಾಗ ಸಾರ್ವಜನಿಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸಂಭ್ರಮಾಚರಣೆ ನಡೆಸಿದರು. ಸತತ ಪ್ರಯತ್ನ ನಡೆಸಿ ಖದೀಮರ ಹೆಡೆಮುರಿ ಕಟ್ಟಿದ ಎಸ್&zwnj;ಪಿ ಪ್ರದೀಪ್ ಗುಂಟಿ ಹಾಗೂ ಅವರ ಇಡೀ ತಂಡಕ್ಕೆ ಬೀದರ್ ಜನತೆ ಸಾಷ್ಟಾಂಗ ನಮನ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಸದ್ಯ ಬಂಧಿತ ಆರೋಪಿಗಳನ್ನು ಬಿಹಾರದಿಂದ ಬೀದರ್&zwnj;ಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತಿದ್ದು, ವಿಚಾರಣೆಯ ಬಳಿಕ ದರೋಡೆ ಮಾಡಿದ 83 ಲಕ್ಷ ರೂಪಾಯಿ ಹಣ, ಬಳಸಿದ ಮಾರಕಾಸ್ತ್ರಗಳು ಹಾಗೂ ಈ ಕೃತ್ಯದ ಹಿಂದೆ ಇರುವ ಇತರ ಜಾಲದ ಬಗ್ಗೆ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆಯಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d"/>
        </item>
        <item>
            <title><![CDATA[ಸರಿಗಮಪ ವಿನ್ನರ್ ಶಿವಾನಿ ಈಗ ಸಾಂಸ್ಕೃತಿಕ ರಾಯಭಾರಿ: 8 ಪ್ರತಿಷ್ಠಿತ ಪ್ರಶಸ್ತಿಗಳ ಒಡತಿ]]></title>
            <link>https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</link>
            <guid isPermaLink="true">https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</guid>
            <pubDate>Mon, 24 Aug 2026 07:24:39 +0530</pubDate>
            <description><![CDATA[ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸಿದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಬೀದರ್&zwnj;ನ ಗಾಯಕಿ ಶಿವಾನಿ ಶಿವದಾಸಸ್ವಾಮಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸಿದ್ದಾರೆ. ಈ ಸಾಧನೆಗಾಗಿ ಅವರು ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ತಮ್ಮ ಈ ಯಶಸ್ಸಿಗೆ ಗುರುಗಳು, ಕುಟುಂಬ ಮತ್ತು ಬೀದರ್ ಜನತೆಯ ಪ್ರೋತ್ಸಾಹವೇ ಕಾರಣವೆಂದು ಸಂತಸ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rqjhsb48hqz92dk9ebycrf,imgname-shivani-1787536426795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬೈ ವತಿಯಿಂದ ನವೆಂಬರ್&zwnj;- ಡಿಸೆಂಬರ್&zwnj; 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಖ್ಯಾತ ಗಾಯಕಿ ಶಿವಾನಿ ಶಿವದಾಸಸ್ವಾಮಿ ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಎಂಟು ಪ್ರಶಸ್ತಿಗಳನ್ನು ಪ್ರದಾನ&lt;/strong&gt;&lt;/h2&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್&zwnj; 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್&zwnj; ಕೌರ್&zwnj; ಸೌದಿ ಪ್ರಶಸ್ತಿ, ದಿ. ಪಂ. ದಿ.ವಿ.ಪಾಲುಸ್ಕರ್&zwnj; ಪ್ರಶಸ್ತಿ, ಸೌ.ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ, ಹರಿಓಂ ಟ್ರಸ್ಟ್&zwnj; (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್&zwnj; ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿ.ಸೌ.ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್&zwnj;&ndash;ಡಿಸೆಂಬರ್&zwnj; ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ&zwj;್ಯಾಂಕ್&zwnj; ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ ತಾಯಿ, ಕುಟುಂಬಸ್ಥರು ಹಾಗೂ ಬೀದರ್&zwnj; ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಶಿವಾನಿ ಹೇಳಿದರು.&lt;/p&gt;&lt;h3&gt;&lt;strong&gt;ಶಿವಾನಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು: ರಾಮಕೃಷ್ಣನ್&zwnj; ಸಾಳೆ:&lt;/strong&gt;&lt;/h3&gt;&lt;p&gt;ಶಿವಾನಿ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯ ಸರ್ಕಾರಿ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್&zwnj;ನ ರಾಮಕೃಷ್ಣನ್&zwnj; ಸಾಳೆ ಒತ್ತಾಯಿಸಿದರು. ಇಂತಹ ಪ್ರತಿಭೆಗಳನ್ನು ಬೆಳೆಸುವ ಮೂಲಕ ಬೀದರ್&zwnj; ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಬಹುದು. ಶಿವಾನಿ ಅವರು ಇದೀಗ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸ್ಸು ಮಾಡಲಿ - ಪವಾರ್ :&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ರಾಜೇಂದ್ರ ಸಿಂಗ್&zwnj; ಪವಾರ್&zwnj; ಆಗ್ರಹಿಸಿದರು.&lt;/p&gt;&lt;p&gt;ಸಂಗೀತ ಕ್ಷೇತ್ರದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಮಾಜವು ಶಿವಾನಿ ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ್&zwnj;, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;p&gt;--&lt;/p&gt;&lt;p&gt;ಮಗಳಿಗೆ ನಾವು ಜನ್ಮ ನೀಡಿರಬಹುದು ಆದರೆ ಆಕೆಯ ಪ್ರತಿಭೆಯನ್ನು ಬೆಳೆಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಇಡೀ ಸಮಾಜ. ಜನರು ನೀಡುತ್ತಿರುವ ಪ್ರೀತಿ ಮತ್ತು ಸಹಕಾರದಿಂದಲೇ ಶಿವಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಎಲ್ಲರೂ ಸಹಕರಿಸಿ, ಪ್ರೋತ್ಸಾಹಿಸಿ ಎಂದು ಶಿವಾನಿ ತಂದೆ ಶಿವದಾಸ ಸ್ವಾಮಿ ಹೇಳುತ್ತಾರೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc"/>
        </item>
        <item>
            <title><![CDATA[ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!]]></title>
            <link>https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</link>
            <guid isPermaLink="true">https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</guid>
            <pubDate>Sun, 31 May 2026 12:48:57 +0530</pubDate>
            <description><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksycmtjcg3w9g4kwmrkhywkv,imgname-----------------------2026-05-31t121657.592-1780210100812.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;&lt;img&gt;&lt;p&gt;ರಾಜ್ಯದಲ್ಲಿ ಸಿಎಲ್&zwnj;ಪಿ ನಾಯಕನ ಆಯ್ಕೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಉಪಮುಖ್ಯಮಂತ್ರಿ (ಡಿಸಿಎಂ), ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಹುದ್ದೆಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ವಿವಿಧ ಬಣಗಳ ನಾಯಕರು ತಮಗೆ ಬೇಕಾದ ಸ್ಥಾನಗಳಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಕೆಲ ಪ್ರಭಾವಿ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸುತ್ತಿದ್ದರೆ, ಇನ್ನು ಹಲವರು ರಾಜ್ಯದ ಪ್ರಮುಖ ನಾಯಕರಾದ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ದುಂಬಾಲು ಬಿದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಈ ಬಾರಿ ಪ್ರಿಯಾಂಕ್ ಖರ್ಗೆ(Priyank kharge) ಅವರಿಗೆ ಡಿಸಿಎಂ(DCM) ಹುದ್ದೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಪಟ್ಟ ಹಾಗೂ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್(MLC Chandrashekhar patil) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಅಭಿಮಾನಿಗಳು ಹಲವು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಆರಂಭಿಸಿದ್ದಾರೆ. ಬೀದರ್&zwnj;ನ ಹುಮನಾಬಾದ್&zwnj;ನಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಬಳಿಕ ಪ್ರಿಯಾಂಕ್ ಖರ್ಗೆ ಡಿಸಿಎಂ ಸಿಗಲೆಂದು ಬರೋಬ್ಬರಿ 101 ತೆಂಗಿನಕಾಯಿಗಳನ್ನು ಒಡೆದು ಈಡೇರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;&lt;img&gt;&lt;p&gt;ಹುಮನಾಬಾದ್&zwnj;ನ ಮತ್ತೊಂದು ಪುರಾತನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲೂ ಅಭಿಮಾನಿಗಳು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಿಶೇಷ ಅರ್ಚನೆ ಮಾಡಿಸಿದರು. ಪ್ರಿಯಾಂಕ್ ಖರ್ಗೆ ಮತ್ತು ಚಂದ್ರಶೇಖರ್ ಪಾಟೀಲ್ ಅವರ ಭಾವಚಿತ್ರಗಳನ್ನು ಹಿಡಿದು ದೇವಸ್ಥಾನದ ಆವರಣದಲ್ಲಿ ಜಯಘೋಷಗಳನ್ನು ಕೂಗಲಾಯಿತು. ಇಬ್ಬರೂ ನಾಯಕರು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಸಹೋದರ ಹಾಗೂ ಪ್ರಸ್ತುತ ಎಂಎಲ್&zwnj;ಸಿ ಆಗಿರುವ ಚಂದ್ರಶೇಖರ್ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಯುವಕರ, ಪದವೀಧರರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಬೆಂಬಲಿಗರು ಹೈಕಮಾಂಡ್&zwnj;ಗೆ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಆಧಾರಿತ ರಾಜಕಾರಣವನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕ್ಷೇತ್ರದಾದ್ಯಂತ ಮತ್ತು ರಾಜ್ಯ ಮಟ್ಟದಲ್ಲಿ ಅವರು ಮಾಡುತ್ತಿರುವ ಜನಪರ ಕೆಲಸಗಳನ್ನು ಗಮನಿಸಿ, ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ನೀಡಲೇಬೇಕು ಎಂದು ಬೀದರ್ ನಾಯಕರು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವುದರಿಂದ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ರಾಜಕೀಯ ಬಲ ಸಿಗಲಿದ್ದು, ಪಕ್ಷದ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k"/>
        </item>
        <item>
            <title><![CDATA[ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಆರೋಪ, ಶಾಹೀನ್ ಶಾಲೆ ಪ್ರಾಂಶುಪಾಲ ವಿರುದ್ಧ FIR]]></title>
            <link>https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9</link>
            <guid isPermaLink="true">https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9</guid>
            <pubDate>Thu, 20 Aug 2026 11:13:59 +0530</pubDate>
            <description><![CDATA[&lt;p&gt;ಬೀದರ್&zwnj;ನ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಪ್ರಾಂಶುಪಾಲರೇ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಎಫ್&zwnj;ಐಆರ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0etxe9vfd5as1g3pfzj6n17,imgname-----------------------2026-08-20t110927.052-1787204385083.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಆ.20): &lt;/strong&gt;ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಆಘಾತಕಾರಿ ಘಟನೆ ಬೀದರ್&zwnj; ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಇತ್ತೀಚೆಗೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದೆ. ರಾಷ್ಟ್ರ ಧ್ವಜಾರೋಹಣ ಬಳಿಕ ಪಿಯು ವಿದ್ಯಾರ್ಥಿ ಸಾಗರ್ ಗೌಳಿ ಭಾರತ್ ಮಾತಾಕಿ ಜೈ, ವಂದೇ ಮಾತರಂ.. ಘೋಷಣೆಯನ್ನ ಕೂಗಿದ್ದ. ಆದರೆ ಈ ಘೋಷಣೆಯನ್ನು ಕೂಗಿದ್ದಕ್ಕೆ ಯಾವುದೋ ಪುಂಡ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಲ್ಲ. ಆ ಶಾಲೆಯ ಪ್ರಾಂಶುಪಾಲರೇ ವಿದ್ಯಾರ್ಥಿ ಸಾಗರ್&zwnj; ಗೌಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಆಘಾತ ಹುಟ್ಟಿಸಿದೆ.&lt;/p&gt;&lt;h2&gt;ಇನ್ನೊಮ್ಮೆ ವಂದೇ ಮಾತರಂ ಘೋಷಣೆ ಕೂಗಿದ್ರೆ ಹುಷಾರ್!&lt;/h2&gt;&lt;p&gt;ಶಾಹೀನ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದು, 'ಇದು(ವಂದೇ ಮಾತರಂ)ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆಯಾಗಿದ್ದು, ಈ ರೀತಿಯ ಘೋಷಣೆಗಳು ನಮ್ಮ ಕಾಲೇಜಿನಲ್ಲಿ ನಡೆಯುವುದಿಲ್ಲ. ಇನ್ನೊಮ್ಮೆ ಕೂಗಬೇಡ' ಎಂದು ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾರೆ. ಶಾಹೀನ್ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ನಡುವೆ ವೈಮನಸು ಮೂಡಿಸಿದ್ದಲ್ಲದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಎಂಬ ಆರೋಪಿಸಿದ್ದಾರೆ.&lt;/p&gt;&lt;h3&gt;ವಿದ್ಯಾರ್ಥಿಯಿಂದ ಪೊಲೀಸ್ ಠಾಣೆಗೆ ದೂರು:&lt;/h3&gt;&lt;p&gt;ವಂದೇ ಮಾತರಂ, ಭಾರತ್ ಮಾತಕೀ ಜೈ ಘೋಷಣೆ ಕೂಗಿದ್ದಕ್ಕೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಾಗರ್ ಗೌಳಿ ತಂದೆ ಹಿರೋಬಾ ಗೌಳಿ ಚಿಟಗುಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಯ ದೂರಿನನ್ವಯ ಪ್ರಾಂಶುಪಾಲರ ಅಬ್ದುಲ್ ಹಕೀಮ್ ವಿರುದ್ಧ ಎಫ್&zwnj;ಐಆರ್ ದಾಖಲಿಸಲಾಗಿದೆ.&lt;/p&gt;&lt;p&gt;ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಹೀನ್ ಶಾಲೆ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಎಫ್&zwnj;ಐಆರ್ ದಾಖಲಾಗಿದ್ದು,ಚಿಟಗುಪ್ಪಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಶಾಲೆಯ ಪ್ರಾಂಶುಪಾಲರಾಗಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಆ ಮೂಲದ ದೇಶದ ಬಗ್ಗೆ ಅವರಿಗಿರುವ ನಿಷ್ಠೆಯನ್ನ ನಾಗರಿಕರು ಪ್ರಶ್ನಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9"/>
        </item>
        <item>
            <title><![CDATA['ಹೆಣ್ಣೇ ಸಮಾಜದ ಶಕ್ತಿ': ಅಕ್ಕಪಡೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಂದೇಶ]]></title>
            <link>https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp</link>
            <guid isPermaLink="true">https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp</guid>
            <pubDate>Mon, 06 Jul 2026 18:24:58 +0530</pubDate>
            <description><![CDATA[&lt;p&gt;Women Empowerment Karnataka: ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvqxfqrjptekx4qycqa8s3r,imgname-vj-1783342481144.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಜು.06): &lt;/strong&gt;ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ, ಸಬಲೀಕರಣ ಮತ್ತು ರಾಜ್ಯದ ಮಹತ್ವಾಕಾಂಕ್ಷೆಯ ಅನುಭವ ಮಂಟಪ ಯೋಜನೆ ಕುರಿತು ಅವರು ಮಹತ್ವದ ಸಂದೇಶಗಳನ್ನು ನೀಡಿದರು.&lt;/p&gt;&lt;p&gt;&lt;strong&gt;'ಹೆಣ್ಣೇ ಸಮಾಜದ ಶಕ್ತಿ' ಎಂದ ಡಿಕೆಶಿ&lt;/strong&gt;&lt;/p&gt;&lt;p&gt;ಅಕ್ಕಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮಹಿಳೆಯರೇ ಕುಟುಂಬ ಮತ್ತು ಸಮಾಜದ ಶಕ್ತಿ ಎಂದು ಬಣ್ಣಿಸಿದರು. &quot;ಹೆಣ್ಣು ಕುಟುಂಬದ ಕಣ್ಣು. ಹೆಣ್ಣಿಲ್ಲದೆ ಕುಟುಂಬವೂ ಇಲ್ಲ, ಸಮಾಜವೂ ಇಲ್ಲ. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು ಮತ್ತು ಬೆಳಕು. ನಾರಿ ಶಕ್ತಿಯೇ ಈ ದೇಶದ ಶಕ್ತಿ&quot; ಎಂದು ಹೇಳಿದರು. ರಾಜ್ಯ ಸರ್ಕಾರ ಮಹಿಳೆಯರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ ಎಂದು ತಿಳಿಸಿದರು.&lt;/p&gt;&lt;p&gt;ಮಹಿಳೆಯರ ಸುರಕ್ಷತೆಗಾಗಿ ಆರಂಭವಾದ ಅಕ್ಕಪಡೆ ಇಂದು ರಾಜ್ಯಾದ್ಯಂತ ವಿಸ್ತರಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯವನ್ನು ಮೆಚ್ಚಿದ ಅವರು, ಅಕ್ಕಪಡೆ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಹಿಳಾ ಸಂಘಟನೆಗಳು ಬಲಿಷ್ಠವಾಗಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪಂಚಾಯಿತಿಯಿಂದ ಸಂಸತ್ತಿನವರೆಗೂ ಮಹಿಳೆಯರು ನಾಯಕತ್ವ ವಹಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಇದೇ ವೇಳೆ ದೇಶದ ಐಕ್ಯತೆ, ಶಾಂತಿ ಮತ್ತು ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಬರ ಪರಿಸ್ಥಿತಿಯ ಪರಿಶೀಲನೆಗಾಗಿ ತಮ್ಮ ಪ್ರವಾಸವನ್ನು ಬಸವಕಲ್ಯಾಣದಿಂದಲೇ ಆರಂಭಿಸಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು.&lt;/p&gt;&lt;h2&gt;&lt;strong&gt;₹742 ಕೋಟಿ ಅನುಭವ ಮಂಟಪ ಕಾಮಗಾರಿಗೆ ಪರಿಶೀಲನೆ&lt;/strong&gt;&lt;/h2&gt;&lt;p&gt;ಇದಾದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ₹742 ಕೋಟಿ ವೆಚ್ಚದ ನೂತನ ಅನುಭವ ಮಂಟಪ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯ ಪ್ರಗತಿ, ನಿರ್ಮಾಣದ ಗುಣಮಟ್ಟ ಹಾಗೂ ವಿವಿಧ ಹಂತಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಅವರು, ಸ್ಥಳದಲ್ಲೇ ಸಭೆ ನಡೆಸಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.&lt;/p&gt;&lt;p&gt;ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶರಣಪ್ರಕಾಶ್ ಪಾಟೀಲ್ ಕೂಡ ಈ ವೇಳೆ ಉಪಸ್ಥಿತರಿದ್ದು, ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಸವ ತತ್ವ, ವಚನ ಸಂಸ್ಕೃತಿ ಹಾಗೂ ಅನುಭವ ಮಂಟಪದ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರತಿಷ್ಠಿತ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಯೋಜನೆಯಾಗಿ ರೂಪಿಸುತ್ತಿದ್ದು, ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಸರ್ಕಾರ ಒತ್ತು ನೀಡಿದೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp"/>
        </item>
        <item>
            <title><![CDATA[ಜೂನ್‌ನಿಂದ ಬೀದರ್‌-ಕಲಬುರಗಿಗೆ ಬೆಂಗ್ಳೂರಿಂದ ವಿಮಾನ ಸೇವೆ ಪುನರಾರಂಭ; ಮುಂಗಡ ಬುಕ್ಕಿಂಗ್ ಶುರು]]></title>
            <link>https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1</link>
            <guid isPermaLink="true">https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1</guid>
            <pubDate>Sat, 23 May 2026 05:14:13 +0530</pubDate>
            <description><![CDATA[ಕಲ್ಯಾಣ ಕರ್ನಾಟಕ ಭಾಗದ ಬೀದರ್&zwnj; ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನರಾರಂಭಗೊಳ್ಳಲಿದೆ. ಸ್ಟಾರ್&zwnj; ಏರ್&zwnj;ಲೈನ್ಸ್&zwnj; ಈ ಸೇವೆಯನ್ನು ಒದಗಿಸಲಿದ್ದು, ಪ್ರಾದೇಶಿಕ ಸಂಪರ್ಕ ವೃದ್ಧಿಸುವ ಉದ್ದೇಶದಿಂದ ಸರ್ಕಾರವು ವಯಾಬಲಿಟಿ ಗ್ಯಾಪ್&zwnj; ಫಂಡಿಂಗ್&zwnj; ಮೂಲಕ ಆರ್ಥಿಕ ಬೆಂಬಲ ನೀಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks911arvcb7n05wjsvjc0j7p,imgname-airport-1779493284635.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಲ್ಯಾಣ ಕರ್ನಾಟಕ ಭಾಗದ ಬೀದರ್&zwnj; ಮತ್ತು ಕಲಬುರಗಿ ವಿಮಾನ ನಿಲ್ದಾಣಗಳಿಗೆ ಬೆಂಗಳೂರಿನಿಂದ ಕ್ರಮವಾಗಿ ಜೂ.1 ಮತ್ತು ಜೂ.10ರಿಂದ ವಿಮಾನಯಾನ ಸೇವೆ ಪುನರಾರಂಭಿಸಲಾಗುತ್ತಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಟಾರ್&zwnj; ಏರ್&zwnj;ಲೈನ್ಸ್&zwnj; ಸಂಸ್ಥೆಯು ಬೆಂಗಳೂರಿನಿಂದ ಬೀದರ್&zwnj;, ಕಲಬುರಗಿಗೆ ವಿಮಾನಯಾನ ಸೇವೆ ಒದಗಿಸಲಿದೆ. ಅದಕ್ಕೆ ಬೆಂಬಲ ನೀಡಲು ಸರ್ಕಾರವು 28.47 ಕೋಟಿ ರು.ಗಳನ್ನು ವಯಾಬಲಿಟಿ ಗ್ಯಾಪ್&zwnj; ಫಂಡಿಂಗ್&zwnj; ಆಗಿ ಕೊಡುತ್ತಿದೆ. ಎರಡೂ ಕರೆಯ ವಿಮಾನ ಪ್ರಯಾಣಕ್ಕೆ ಈಗಾಗಲೇ ಮುಂಗಡ ಬುಕ್ಕಿಂಗ್&zwnj; ಆರಂಭಿಸಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮ&lt;/strong&gt;&lt;/h2&gt;&lt;p&gt;ಈ ಹಿಂದೆ ಕಲಬುರಗಿಗೆಯಿದ್ದ ವಿಮಾನಸೇವೆ ನಷ್ಟದ ಕಾರಣ ಸ್ಥಗಿತಗೊಂಡಿತ್ತು. ಬೀದರ್&zwnj;ಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವಿಶೇಷ ನೆರವಿನಿಂದ ಒಂದು ವಿಮಾನ ಸೇವೆ ನೀಡಲಾಗುತ್ತಿತ್ತು. ಅದೂ ಸ್ಥಗಿತಗೊಂಡಿತ್ತು. ಇದೀಗ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಬೆಳವಣಿಗೆ ಪರಿಗಣಿಸಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ಉಪಕ್ರಮದಡಿ ವಿಮಾನ ಸೇವೆ ಮತ್ತೆ ಆರಂಭಿಸಲಾಗುತ್ತಿದೆ. ಅಲ್ಲದೆ, ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಿಗೆ ವಿಮಾನ ಸಂಪರ್ಕ ಒದಗಿಸಬೇಕು ಎನ್ನುವುದು ಸರ್ಕಾರದ ಕಾಳಜಿಯಾಗಿದೆ. ಅದರಿಂದ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿ ಜತೆಗೆ ಮೂಲಸೌಕರ್ಯ ಕೂಡ ಸುಧಾರಿಸಲಿದೆ ಎಂದು ವಿವರಿಸಿದರು.&lt;/p&gt;&lt;p&gt;&amp;nbsp;&lt;/p&gt;&lt;p&gt;ಜೂನ್ 1ರಿಂದ ಬೀದರ್ ಗೆ, ಜೂನ್ 10ರಿಂದ ಕಲಬುರಗಿಗೆ ಬೆಂಗಳೂರಿನಿಂದ ವಿಮಾನ ಸೇವೆ ಪುನಾರಂಭ!ಕಲ್ಯಾಣ ಕರ್ನಾಟಕ ಭಾಗದ ಬೀದರ್ ಹಾಗೂ ಕಲಬುರಗಿ ಜಿಲ್ಲಾ ಕೇಂದ್ರಗಳಿಗೆ ಕ್ರಮವಾಗಿ ಜೂನ್ 1 ಮತ್ತು ಜೂನ್ 10ರಿಂದ ಬೆಂಗಳೂರಿನಿಂದ ವಿಮಾನಯಾನ ಸೇವೆ ಪುನಾರಂಭಿಸಲಾಗುವುದು.ಸ್ಟಾರ್ ಏರ್ ಲೈನ್ಸ್ (ಘೋಡಾವತ್ ಎಂಟರ್ಪ್ರೈಸಸ್ ಲಿಮಿಟೆಡ್) ಸಂಸ್ಥೆಯು&hellip; pic.twitter.com/Kr2tJyaH4u&lt;/p&gt;&lt;p&gt;&mdash; M B Patil (@MBPatil) May 22, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/travel/flight-service-from-bengaluru-to-bidar-kalaburagi-to-start-from-june-mrq/articleshow-e330gq1"/>
        </item>
        <item>
            <title><![CDATA[ಮಹಾರಾಷ್ಟ್ರದಿಂದ ಅಕ್ರಮ ಮರಳು ಸಾಗಾಟಕ್ಕೆ ಬ್ರೇಕ್: ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ]]></title>
            <link>https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv</link>
            <guid isPermaLink="true">https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv</guid>
            <pubDate>Wed, 27 May 2026 22:29:00 +0530</pubDate>
            <description><![CDATA[&lt;p&gt;ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್&zwnj; ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzb06m75gr600cw7r5hv56hr,imgname-karnataka-forest-minister-eshwar-khandre--file-photoani--1751642231012.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಔರಾದ್&zwnj; (ಮೇ.27): &lt;/strong&gt;ಮಹಾರಾಷ್ಟ್ರದಿಂದ ಅಕ್ರಮವಾಗಿ ನಡೆಯುತ್ತಿದ್ದ ಮರಳು ದಂಧೆಯಿಂದ ರಸ್ತೆಗಳು ಹದಗೆಟ್ಟು ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತ ದುಬಾರಿ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ತಯಾರಿ ಮಾಡಿಕೊಂಡ ಮರಳು ದಂಧೆಯ ಕುರಿತಂತೆ ಕ್ರಮ ಕೈಗೊಂಡು, ಈ ಕುರಿತಾಗಿ ಸಮಗ್ರ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಬೀದರ್&zwnj; ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;&lt;p&gt;ಮಹಾರಾಷ್ಟ್ರದ ನಾಂದೇಡ್&zwnj; ಜಿಲ್ಲೆಯ ದೆಗಲೂರ ತಾಲೂಕಿನ ಹಣೆಗಾಂವ್&zwnj; ಮೂಲಕ ಔರಾದ್&zwnj; ತಾಲೂಕಿನ ವನಮಾರಪಳ್ಳಿ ಗ್ರಾಮದ ಚೆಕ್&zwnj;ಪೋಸ್ಟ್&zwnj; ಮೂಲಕ ಭಾರಿ ಮರಳನ್ನು ಹೊತ್ತ ವಾಹನಗಳ ಓಡಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೋಮವಾರ ತಡರಾತ್ರಿಯಿಂದಲೇ ಚೆಕ್&zwnj; ಪೋಸ್ಟ್&zwnj;ನಲ್ಲಿ ಖಡಕ್&zwnj; ಆದೇಶ ರವಾನೆ ಯಾಗಿದೆ. ಒಂದೇ ಒಂದು ಮರಳು ಹೊತ್ತ ವಾಹನ ಗಡಿ ಪ್ರವೇಶ ಮಾಡದಂತೆ ಎಚ್ಚರಿಸಲಾಗಿದೆ. ಹೀಗಾಗಿ ಮಂಗಳವಾರದವರೆಗೆ ವನಮಾರಪಳ್ಳಿ ಗಡಿಗೆ ಹೊಂದಿಕೊಂಡು ನೂರಾರು ಮರಳು ಹೊತ್ತ ಟಿಪ್ಪರ್&zwnj;ಗಳು ರಾಜ್ಯದ ಗಡಿ ಪ್ರವೇಶ ಮಾಡಲು ಬಕಪಕ್ಷಿಯಂತೆ ಕಾಯುತ್ತ ಕುಳಿತಿರುವ ದೃಶ್ಯ ಕಂಡು ಬಂದಿದೆ.&lt;/p&gt;&lt;p&gt;&lt;strong&gt;ಡಿಸಿಗೆ ಉಸ್ತುವಾರಿ ಸಚಿವರು ಬರೆದ ಪತ್ರದಲ್ಲೆನಿದೆ ?&lt;/strong&gt;&lt;/p&gt;&lt;p&gt;ಕಳೆದ ಒಂದು ವಾರದಿಂದ &lsquo;ಕನ್ನಡಪ್ರಭ&rsquo; ಮರಳು ಮಾಯೆ ಎಂಬ ತಲೆ ಬರಹದಡಿಯಲ್ಲಿ ವಿಸ್ತೃತವಾಗಿ ವರದಿ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನೆರೆ ರಾಜ್ಯದಿಂದ ಬೀದರ್&zwnj;ಗೆ ಬಂದಿರುವ ಮರಳಿನ ಲಾರಿಗಳು ರಸ್ತೆಯಲ್ಲೆ ನಿಂತಿದ್ದು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಇದರ ಜೊತೆಗೆ ರಸ್ತೆಯಲ್ಲಿ ಮರಳು ರಾಶಿ ಹಾಕಿ ದಾಸ್ತಾನು ಮಾಡಲಾಗಿರುವ ಕಾರಣ ದಿಂದಲೂ ಸಂಚಾರ ಸಮಸ್ಯೆ ಉದ್ಭವಿಸಿದೆ. ಇದರ ಜೊತೆಗೆ ಇಷ್ಟೆಲ್ಲ ಅಕ್ರಮ ಮರಳು ಸಾಗಾಟವಾಗ್ತಿದ್ದರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಇದ್ದು ಕೂಡಲೆ ಜಿಲ್ಲಾಡಳಿತ ಈ ಬಗ್ಗೆ ಪರಿಶಿಲಿಸಿ ಜನರಿಗೆ ತೊಂದರೆಯಾಗದಂತೆ ಮತ್ತು ಅಕ್ರಮಗಳಿಗೆ ಅವಕಾಶ ನೀಡದಂತೆ ಕೈಗೊಂಡಿರುವ ಕ್ರಮದ ವರದಿಯನ್ನು ಮೂರು ದಿನಗಳಲ್ಲಿ ಕಚೇರಿಗೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಲ್ಲಗೆ ಜಿಲ್ಲಾ ಪೊಲೀಸರ್&zwnj; ವರಿಷ್ಠಾಧಿಕಾರಿಗಳಿಗೂ ಪ್ರತಿಯನ್ನು ಲಗತ್ತಿಸಲಾಗಿದೆ.&lt;/p&gt;&lt;p&gt;&lt;strong&gt;ಚೆಕ್&zwnj; ಪೋಸ್ಟ್&zwnj; ಬಿಗಿ&lt;/strong&gt;&lt;/p&gt;&lt;p&gt;ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶ ಮಾಡುವ ಅಕ್ರಮ ಮರಳಿನ ಮೇಲೆ ಹದ್ದಿನ ಕಣ್ಣಿನ ನಿಗಾ ಇಟ್ಟಿರುವ ಪೊಲೀಸರು ಗಡಿಯ ಚೆಕ್&zwnj;ಪೋಸ್ಟ್&zwnj;ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಒಂದು ಲಾರಿ ಕೂಡ ಗಡಿ ಪ್ರವೇಶ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ವನಮಾರಪಳ್ಳಿ, ಮುರ್ಕಿ, ಚಿಂತಾಕಿ ಹಾಗೂ ಕಮಲನಗರ ಚೆಕ್&zwnj;ಪೊಸ್ಟ್&zwnj; ಗಳು ಸಕ್ರೀಯವಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ.&lt;/p&gt;&lt;h2&gt;&lt;strong&gt;ಮರಳು ದಾಸ್ತಾನು ಮೇಲೆ ದಾಳಿ ಯಾಕಿಲ್ಲ?&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡಿರುವ ಕೆಲವರು ಗಡಿ ಭಾಗದ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ಗುಡ್ಡೆ ಹಾಕಿಕೊಂಡು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮರಳು ಮಾರಾಟ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ವನಮಾರಪಳ್ಳಿ ಗ್ರಾಮದ ಗಡಿಗೆ ಹೊಂದಿಕೊಂಡಿರುವ ಹೆದ್ದಾರಿಯ ಎರಡೂ ಬದಿ ಯಲ್ಲಿ ನೂರಕ್ಕೂ ಅಧಿಕ ಲೋಡ್&zwnj; ಮರಳು ದಾಸ್ತಾನು ಮಾಡಲಾಗಿದೆ.&lt;/p&gt;&lt;p&gt;ಪಟ್ಟಣದ ನಾರಾಯಣಪೂರ್&zwnj; ರಸ್ತೆಯ ಲೇ ಔಟ್&zwnj;, ಅಮರೇಶ್ವರ ಕಾಲೇಜು, ದತ್ತ ಮಂದಿರ ಪಕ್ಕ, ಎಪಿಎಂಸಿ ಯಾರ್ಡ್&zwnj;, ಎಕಂಬಾ, ಭಂಡಾರಕುಮಠಾ, ಶಿವಪೂರ್&zwnj;, ಡೊಣಗಾಂವ್&zwnj;, ಚೊಂಡಿಮುಖೇಡ, ಡಿಗ್ಗಿ ಸೇರಿದಂತೆ ಹಲವು ಗ್ರಾಮಗಳ ಸಿಕ್ಕ ಸಿಕ್ಕಲ್ಲಿ ಅಕ್ರಮ ಮರಳಿನ ದಾಸ್ತಾನು ಇದ್ದರೂ ಸಂಬಂಧಿತ ಇಲಾಖಾ ಅಧಿಕಾರಿಗಳು ದಾಳಿ ನಡೆಸುವದಿರಲಿ ಮರಳು ಸಮಿತಿಗೆ ಶಿಫಾರಸ್ಸು ಮಾಡಲು ಹಿಂದೇಟು ಹಾಕುತ್ತಿರುವದರ ಹಿಂದಿನ ಮರ್ಮವೇನು ಎಂದು ಜನರ ಅನುಮಾನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ನಂತರ ಮರಳಿನ ಲಾರಿಗಳ ಓಡಾಟ ಸ್ಥಗಿತವಾದರೂ ದಾಸ್ತಾನು ಮಾಡಿದ ಮರಳಿನ ಮೇಲಿನ ಮಾಯೆ ಮಾತ್ರ ಕಮ್ಮಿಯಾಗ್ತಿಲ್ಲ. ಅಷ್ಟಕ್ಕೂ ಸಚಿವರ ಖಡಕ್&zwnj; ಪತ್ರಕ್ಕೆ ಜಿಲ್ಲಾಧಿಕಾರಿಗಳು ವರದಿ ನೀಡ್ತಾರೆಯೇ ಎಂಬುವದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/illegal-sand-transport-bidar-minister-eshwar-khandre-statement-gvd/articleshow-e5aiztv"/>
        </item>
        <item>
            <title><![CDATA[ಅನುಮಾನಾಸ್ಪದವಾಗಿ 'ಮಜಾ ಭಾರತ' ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ನಿಧನ; ಶವ ಪತ್ತೆ]]></title>
            <link>https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</link>
            <guid isPermaLink="true">https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</guid>
            <pubDate>Tue, 16 Jun 2026 05:30:34 +0530</pubDate>
            <description><![CDATA[ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಬೀದರ್&zwnj;ನಲ್ಲಿ ನಿಧನರಾಗಿದ್ದಾರೆ. ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv6ved5ykgzzvcqzcrf673kb,imgname-siddu-1781567796414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಉರ್ಫ್ ಸಿದ್ಧಾರ್ಥ್ ಪರಸನೂರು ನಿಧನರಾಗಿದ್ದಾರೆ. ಸಿದ್ದು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೀದರ್ ಜಿಲ್ಲೆಯ ನಿವಾಸಿಯಾಗಿದ್ದ ಸಿದ್ದು ಪರಸನೂರು ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು.&lt;/p&gt;&lt;h2&gt;&lt;strong&gt;ಸಾವಿನ ಸುತ್ತ ಅನುಮಾನ&lt;/strong&gt;&lt;/h2&gt;&lt;p&gt;ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಸಿದ್ದು ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದು ಅವರದ್ದು ಸಹಜ ಸಾವು ಅಲ್ಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರುವ ಸಾಧ್ಯತೆಗಳಿವೆ.&lt;/p&gt;&lt;p&gt;ಈ ಸಂಬಂಧ ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಜಾ ಭಾರತ ರಿಯಾಲಿಟಿ ಶೋ ಸಿದ್ದು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. 'ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಿದ್ದು ಪರಸನೂರು ಹೊಂದಿದ್ದರು.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f"/>
        </item>
        <item>
            <title><![CDATA[ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು]]></title>
            <link>https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var</link>
            <guid isPermaLink="true">https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var</guid>
            <pubDate>Tue, 11 Aug 2026 23:23:21 +0530</pubDate>
            <description><![CDATA[&lt;p&gt;ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್&zwnj;ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrz5zcwxv0ha7h6hwm5vscf,imgname-bidar-accident-1786470661530.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಗಾರೆಡ್ಡಿ (ತೆಲಂಗಾಣ):&lt;/strong&gt; ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಆರು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ಯಾಂಕರ್ ಲಾರಿ ಮತ್ತು ಆಟೋ ನಡುವೆ ನಡೆದ ಈ ಭೀಕರ ಡಿಕ್ಕಿಯಿಂದ ದುರಂತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಜಮೀನು ಕೆಲಸ ಮುಗಿಸಿ ಮರಳುವಾಗ ದುರ್ಘಟನೆ..&lt;/strong&gt;&lt;/h2&gt;&lt;p&gt;ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಕೂಲಿ ಕಾರ್ಮಿಕರು ಪ್ರತಿನಿತ್ಯ ಜಮೀನಿನ ಕೆಲಸಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದರು. ಎಂದಿನಂತೆ ಮೊಗುಡಂಪಳ್ಳಿ ಮಂಡಲದ ಸತ್ವೇರ್ ಗ್ರಾಮದ ಜಮೀನಿನಲ್ಲಿ ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಒಂದೇ ಆಟೋದಲ್ಲಿ ಚಾಲಕ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಸತ್ವೇರ್ ಗ್ರಾಮದ ಹೊರವಲಯದ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ಯಾಂಕರ್ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, 6 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಈ ಭೀಕರ ಅಪಘಾತದಲ್ಲಿ ರಾಜಗೀರಾ ಗ್ರಾಮದ ರೇಖಾ, ಶ್ರೀದೇವಿ, ಕವಿತಾ, ರೇಷ್ಮಾ ಮತ್ತು ಆಟೋ ಚಾಲಕ ದೇವದಾಸ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದ ಎಂಟು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ನಿರ್ಮಲಾ, ನಿಖಿತಾ, ತುಳಜಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಹಾಗೂ ಶೋಭಾ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಂಗಾರೆಡ್ಡಿ ಮತ್ತು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಡತನದ ನಡುವೆಯೂ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಗೀರಾ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರ ಕಣ್ಣಾಲಿಗಳು ತೇವಗೊಂಡಿವೆ.&lt;/p&gt;&lt;h2&gt;&lt;strong&gt;ಸಚಿವ ಈಶ್ವರ್ ಖಂಡ್ರೆ ಸಾಂತ್ವನ&lt;/strong&gt;&lt;/h2&gt;&lt;p&gt;ಕೂಲಿ ಕಾರ್ಮಿಕರ ಈ ದಾರುಣ ಸಾವಿಗೆ ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಈ ಘಟನೆಯು ಅತಿಯಾದ ಪ್ರಯಾಣಿಕರನ್ನು ಹೊತ್ತೊಯ್ಯುವ ಆಟೋಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ತೆಲಂಗಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var"/>
        </item>
        <item>
            <title><![CDATA[Bidar BRIMS hospital crime: ಪೋಸ್ಟ್‌ ಮಾರ್ಟ್‌ಮ್‌ ವೇಳೆ ಹೆಣ್ಣು ಶವಗಳ ಬೆತ್ತಲೆ ಚಿತ್ರ ಸೆರೆಹಿಡಿಯುತ್ತಿದ್ದ ಅಟೆಂಡರ್ ಅರೆಸ್ಟ್]]></title>
            <link>https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</link>
            <guid isPermaLink="true">https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</guid>
            <pubDate>Sat, 30 May 2026 09:12:01 +0530</pubDate>
            <description><![CDATA[ಬೀದರ್&zwnj;ನ ಬ್ರಿಮ್ಸ್&zwnj; ಆಸ್ಪತ್ರೆಯ ಶವಾಗಾರದಲ್ಲಿ, ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ ಅಟೆಂಡರ್&zwnj;ನನ್ನು ಬಂಧಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvf511ys88d1qmvq5ffjhpk,imgname-----------------------2026-05-30t090355.165-1780112065598.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj;ನ ಬ್ರಿಮ್ಸ್&zwnj; (BRIMS) ಜಿಲ್ಲಾಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್&zwnj;ನೊಬ್ಬ ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್&zwnj;ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.&lt;/p&gt;&lt;p&gt;ಆರೋಪಿ ಮುನೀರ್&zwnj; ಅಹ್ಮದ್&zwnj; ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್&zwnj; ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್&zwnj;ಮಾರ್ಟ್&zwnj;ಮ್&zwnj; ಪ್ರಕ್ರಿಯೆ ನಡೆಯುವ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಆರೋಪಿಯ ಮೊಬೈಲ್&zwnj; ಫೋನ್&zwnj; ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪ್ರಕರಣದ ಗಂಭೀರತೆಯನ್ನು ಮನಗಂಡ ಬ್ರಿಮ್ಸ್&zwnj; ಮುಖ್ಯಸ್ಥ ಡಾ. ಮೊಸಿನ್&zwnj; ಉಲ್&zwnj; ಹಕ್&zwnj; ಅವರು ನ್ಯೂಟೌನ್&zwnj; ಪೊಲೀಸ್&zwnj; ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮುನೀರ್&zwnj; ಅಹ್ಮದ್&zwnj;ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಮತ್ತು ಗೌರವಯುತ ಸ್ಥಳದಲ್ಲಿ ನಡೆದಿರುವ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5"/>
        </item>
        <item>
            <title><![CDATA[ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6</link>
            <guid isPermaLink="true">https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6</guid>
            <pubDate>Mon, 06 Jul 2026 23:47:59 +0530</pubDate>
            <description><![CDATA[&lt;p&gt;ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww8fr199rqc444bvyh4z0yt,imgname-bj-1783359856680.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಜು.06): &lt;/strong&gt;ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಸೌಲಭ್ಯ ತಲುಪುವಂತೆ ಮರುಪರಿಶೀಲನೆ ನಡೆಯುತ್ತಿದ್ದು, ಇದನ್ನು ಗ್ಯಾರಂಟಿ ರದ್ದು ಎಂದು ಯಾರೂ ಅರ್ಥೈಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಬೀದರ್&zwnj;ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿವೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;'ಗ್ಯಾರಂಟಿ ನಿಲ್ಲುವುದಿಲ್ಲ'&lt;/strong&gt;&lt;/p&gt;&lt;p&gt;&quot;ಇಂದಿನ ದಿನ ನನ್ನ ಬದುಕಿನಲ್ಲಿ ಶಾಶ್ವತವಾಗಿ ನೆನಪಿಡುವ ದಿನ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ. ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಯೇ ದೇಶದ ಗಮನ ಸೆಳೆದಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದಿಂದಲೇ ಈ ಯೋಜನೆಗಳು ಯಶಸ್ವಿಯಾಗಿವೆ&quot; ಎಂದು ಸಿಎಂ ಹೇಳಿದರು.&lt;/p&gt;&lt;p&gt;ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ನಡೆಯುತ್ತಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, &quot;ಮರುಪರಿಶೀಲನೆ ಎಂದರೆ ಯೋಜನೆಗಳನ್ನು ಸ್ಥಗಿತಗೊಳಿಸುವುದಲ್ಲ. ಸರ್ಕಾರದ ಉದ್ದೇಶ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವುದು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ&quot; ಎಂದು ಭರವಸೆ ನೀಡಿದರು.&lt;/p&gt;&lt;p&gt;&lt;strong&gt;ಬಿಜೆಪಿ ವಿರುದ್ಧ ವಾಗ್ದಾಳಿ&lt;/strong&gt;&lt;/p&gt;&lt;p&gt;ಭಾಷಣದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, &quot;ಬಿಜೆಪಿ ಮತ್ತು ಜೆಡಿಎಸ್ ಬಡವರಿಗಾಗಿ ಯಾವ ಉಚಿತ ಯೋಜನೆ ನೀಡಿದ್ದಾರೆ? ಉಚಿತ ಅಕ್ಕಿ, ಉಚಿತ ವಿದ್ಯುತ್, ಉಚಿತ ಆರೋಗ್ಯ ಸೇವೆ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರ&quot; ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ ಅವರು, &quot;ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವ ಭರವಸೆ ನೀಡಲಾಗಿತ್ತು. ಮೂರು ಬಾರಿ ಅಧಿಕಾರಕ್ಕೆ ಬಂದರೂ ಆ ಭರವಸೆ ಈಡೇರಿಸಲಿಲ್ಲ&quot; ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;'ರಾಮನ ಹೆಸರಿನಲ್ಲಿ ಲೂಟಿ ನಡೆದಿದೆ'&lt;/strong&gt;&lt;/p&gt;&lt;p&gt;ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಸಿಎಂ, &quot;ರಾಮನ ಹೆಸರಿನಲ್ಲಿ ಹಣ ಸಂಗ್ರಹಿಸಿ ದುರ್ಬಳಕೆ ಮಾಡಲಾಗಿದೆ. ಧರ್ಮದ ಹೆಸರಿನಲ್ಲಿ ಹಣ ಲೂಟಿ ಮಾಡುವ ಕೆಲಸ ನಡೆದಿದೆ&quot; ಎಂದು ಕಿಡಿಕಾರಿದರು.&lt;/p&gt;&lt;p&gt;&lt;strong&gt;72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ&lt;/strong&gt;&lt;/p&gt;&lt;p&gt;ರಾಜ್ಯದ ಯುವಕರಿಗೆ ಉದ್ಯೋಗದ ಭರವಸೆ ನೀಡಿದ ಮುಖ್ಯಮಂತ್ರಿ, &quot;ರಾಜ್ಯದಲ್ಲಿ ಖಾಲಿ ಇರುವ ಸುಮಾರು 72 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ&quot; ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;'ಸಿಎಂ ಹುದ್ದೆ ಅವಕಾಶದಿಂದ ಸಿಕ್ಕಿದೆ'&lt;/strong&gt;&lt;/h2&gt;&lt;p&gt;ತಮ್ಮ ರಾಜಕೀಯ ಪಯಣದ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, &quot;ಇಂದಿನ ದಿನ ನನ್ನ ಬದುಕಿನಲ್ಲಿ ಎಂದಿಗೂ ಮರೆಯಲಾಗದ ದಿನ. ಪಕ್ಷದ ಹೈಕಮಾಂಡ್ ನೀಡಿದ ಅವಕಾಶದಿಂದ ನಾನು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇನೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ&quot; ಎಂದು ಹೇಳಿದರು. ಒಟ್ಟಾರೆ, ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಸರ್ಕಾರಿ ಉದ್ಯೋಗ ನೇಮಕಾತಿ, ಬಿಜೆಪಿ ವಿರುದ್ಧ ವಾಗ್ದಾಳಿ ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗಳು ಬೀದರ್ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿವೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6"/>
        </item>
        <item>
            <title><![CDATA[ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ]]></title>
            <link>https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf</link>
            <guid isPermaLink="true">https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf</guid>
            <pubDate>Wed, 29 Jul 2026 12:41:09 +0530</pubDate>
            <description><![CDATA[&lt;p&gt;ಬೀದರ್&zwnj;ನ ಗುರುನಾನಕ ದೇವ್&zwnj; ಎಂಜಿನಿಯರಿಂಗ್&zwnj; ಕಾಲೇಜಿನ ಹಳೆಯ ವಿದ್ಯಾರ್ಥಿ ನರಸಿಂಗ್&zwnj; ಮಾಧವ್&zwnj; ಶಿಂಧೆ, ಸ್ಕೈರೂಟ್&zwnj; ಏರೋಸ್ಪೇಸ್&zwnj; ಅಭಿವೃದ್ಧಿಪಡಿಸಿದ 'ವಿಕ್ರಮ್-1' ಉಡಾವಣಾ ವಾಹಕ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9ccfhhsz44cx6tsp8jwcqf,imgname-screenshot-2026-07-24-114746-1784873893424.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಇಲ್ಲಿನ ಗುರುನಾನಕ ದೇವ್&zwnj; ಎಂಜಿನೀಯರಿಂಗ್&zwnj; ಕಾಲೇಜು ತನ್ನ ಮೆಕ್ಯಾನಿಕಲ್&zwnj; ಎಂಜಿನಿಯರಿಂಗ್&zwnj; ವಿಭಾಗದ ಹಳೆಯ ವಿದ್ಯಾರ್ಥಿ ನರಸಿಂಗ್&zwnj; ಮಾಧವ್&zwnj; ಶಿಂಧೆ (2019ರ ಬ್ಯಾಚ್&zwnj;) ಅವರು ಸ್ಕೈರೂಟ್&zwnj; ಏರೋಸ್ಪೇಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj; ಅಭಿವೃದ್ಧಿಪಡಿಸಿದ &lsquo;ವಿಕ್ರಮ್-1&rsquo;ಉಡಾವಣಾ ವಾಹಕ (ಮಿಷನ್&zwnj; ಆಗಮನ) ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದಕ್ಕೆ ಕಾಲೇಜು ಹೆಮ್ಮೆ ವ್ಯಕ್ತಪಡಿಸಿದೆ.&lt;/p&gt;&lt;p&gt;ಈ ಐತಿಹಾಸಿಕ ಉಡಾವಣೆಯು ಜುಲೈ 18ರಂದು ಶ್ರೀಹರಿಕೋಟಾದ ಸತೀಶ ಧವನ್&zwnj; ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನೆರೆವೇರಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.&lt;/p&gt;&lt;h2&gt;&lt;strong&gt;ನರಸಿಂಗ್&zwnj; ಮಾಧವ್&zwnj; ಶಿಂಧೆ ಶಿಕ್ಷಣ ಮತ್ತು ಸಾಧನೆ&lt;/strong&gt;&lt;/h2&gt;&lt;p&gt;ನರಸಿಂಗ್&zwnj; ಮಾಧವ್&zwnj; ಶಿಂಧೆ ಅವರು 2016ದಿಂದ 2019ರ ಅವಧಿಯಲ್ಲಿ ಗುರುನಾನಕ ದೇವ್&zwnj; ಎಂಜಿನಿಯರಿಂಗ್&zwnj; ಕಾಲೇಜಿನಿಲ್ಲಿ ಮೆಕ್ಯಾನಿಕಲ್&zwnj; ಎಂಜಿನಿಯರಿಂಗ್&zwnj; ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು 2020ರಿಂದ 2023ರ ವರೆಗೆ ಡಿಆರ್&zwnj;ಡಿಒನಲ್ಲಿ ಗುತ್ತಿಗೆ ಎಂಜಿನಿಯರ್&zwnj; ಆಗಿ ಸೇವೆ ಸಲ್ಲಿಸಿ, 2023ರಲ್ಲಿ ಸ್ಕೈರೂಟ್&zwnj;ಗೆ ಏರೋಸ್ಪೇಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj;ನಲ್ಲಿ ಕ್ಯಾಡ್&zwnj; ಆ್ಯಂಡ ಕನ್ಫಿಗರೇಷನ್&zwnj; ಡಿಪಾರ್ಟಮೆಂಟ್&zwnj;ನಲ್ಲಿ ರಚನಾತ್ಮಕ ಎಂಜಿನಿಯರ್&zwnj; ಆಗಿ ಸೇರ್ಪಡೆಯಾದರು.&amp;nbsp;&lt;/p&gt;&lt;p&gt;ವಿಕ್ರಮ-1 ಮಿಷನ್&zwnj; ತಂಡದ ಸದಸ್ಯರಾಗಿ ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿ, ರಚನಾತ್ಮಕ ವಿನ್ಯಾಸ, ಕ್ಯಾಡ್&zwnj; ಅಭಿವೃದ್ಧಿ, ಕಾನ್ಫಿಗರೇಶನ್&zwnj; ನಿರ್ವಹಣೆ, ಎಂಜಿನಿಯರಿಂಗ್&zwnj; ದಾಖಲೆಗಳ ಸಿದ್ಧತೆ, ವಿನ್ಯಾಸ ಮೌಲ್ಯಮಾಪನ ಹಾಗೂ ವಿನ್ಯಾಸ, ವಿಶ್ಲೇಷಣೆ, ಉತ್ಪಾದನೆ, ಜೋಡಣೆ, ಏಕೀಕರಣ ಮತ್ತು ಪರೀಕ್ಷಾ ತಂಡ ಗಳೊಂದಿಗೆ ಸಮನ್ವಯ ಸಾಧಿಸಿ ಮಿಷನ್&zwnj; ಯಶಸ್ವಿಯಾಗಲು ಮಹತ್ತರ ಪಾತ್ರ ವಹಿಸಿದ್ದಾರೆ.&lt;/p&gt;&lt;h3&gt;&lt;strong&gt;ನರಸಿಂಗ್ ಮಾಧವ್&zwnj; ಶಿಂಧೆ ಮಾತು&lt;/strong&gt;&lt;/h3&gt;&lt;p&gt;ನರಸಿಂಗ್ ಮಾಧವ್&zwnj; ಶಿಂಧೆ ಅವರು ತಮ್ಮ ಸಂತೋಷ ವ್ಯಕ್ತಪಡಿಸಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕಕ್ಷೀಯ ಉಡಾವಣಾ ವಾಹಕ ವಿಕ್ರಮ್&zwnj;-1 ಮಿಷನ್ ಭಾಗವಾಗಿರುವುದು ನನ್ನ ಎಂಜಿನಿಯರಿಂಗ್&zwnj; ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಗೆ ಅಗತ್ಯವಾದ ದೃಢವಾದ ಶೈಕ್ಷಣಿಕ ಅಡಿಪಾಯ ನೀಡಿದ ನನ್ನ ವಿದ್ಯಾಸಂಸ್ಥೆಯಾದ ಜಿಎನ್&zwnj;ಡಿ ಕಾಲೇಜಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಶ್ರೀ ನಾನಕ್&zwnj; ಝಿರಾ ಸಾಹೇಬ್&zwnj; ಫೌಂಡೆಷನ್&zwnj; ಅಧ್ಯಕ್ಷ ಸರದಾರ ಬಲಬೀರಸಿಂಗ್&zwnj;, ಉಪಾಧ್ಯಕ್ಷೆ ರೇಷ್ಮಾ ಕೌರ್&zwnj;, ಪ್ರಾಂಶುಪಾಲರಾದ ಡಾ. ವೀಣಾ ಎಸ್&zwnj;. ಸೊರಗನ್ವಿ ಹಾಗೂ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರು ಅಭಿನಂದನೆಗಳನ್ನು ಸಲ್ಲಿಸಿ ಅವರ ಮುಂದಿನ ವೃತ್ತಿಜೀವನದಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳು ಲಭಿಸಲಿ ಎಂದು ಶುಭ ಹಾರೈಸಿದರು.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf"/>
        </item>
        <item>
            <title><![CDATA[ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ]]></title>
            <link>https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</link>
            <guid isPermaLink="true">https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</guid>
            <pubDate>Wed, 10 Jun 2026 19:20:43 +0530</pubDate>
            <description><![CDATA[&lt;p&gt;ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktrw38tdkqhrywnryf1yybty,imgname-bidar-airport-1781098718028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬೀದರ್ ನಡುವಿನ ವಿಮಾನ ಸೇವೆಯ ವೇಳಾಪಟ್ಟಿ ಬದಲಾವಣೆಯಿಂದ ಸಾರ್ವಜನಿಕರಿಗೆ ಭಾರಿ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಳೆಯ ವೇಳಾಪಟ್ಟಿಯಂತೆಯೇ ಮುಂಜಾನೆಯ ಸೇವೆಯನ್ನು ಮುಂದುವರಿಸಲು ಸೂಚಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಸ್ಟಾರ್ ಏರ್ ಖಾಸಗಿ ವಿಮಾನಯಾನ ಸಂಸ್ಥೆ&lt;/h2&gt;&lt;p&gt;ಖಾಸಗಿ ವಿಮಾನಯಾನ ಸಂಸ್ಥೆಯಾದ &lsquo;ಸ್ಟಾರ್ ಏರ್&rsquo; ಜೂನ್ 1ರಿಂದ ಬೆಂಗಳೂರು-ಬೀದರ್-ಬೆಂಗಳೂರು ನಡುವೆ ತನ್ನ ನೂತನ ವಿಮಾನ ಸೇವೆಯನ್ನು ಆರಂಭಿಸಿದೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಈ ವಿಮಾನವು ಮುಂಜಾನೆ 6:30ಕ್ಕೆ ಬೆಂಗಳೂರಿನಿಂದ ಹೊರಟು 7:45ಕ್ಕೆ ಬೀದರ್ ತಲುಪುತ್ತಿತ್ತು. ಅದೇ ರೀತಿ, ಬೆಳಗ್ಗೆ 8:15ಕ್ಕೆ ಬೀದರ್&zwnj;ನಿಂದ ಜಿಗಿದು 9:30ಕ್ಕೆ ಬೆಂಗಳೂರಿಗೆ ಹಿಂತಿರುಗುತ್ತಿತ್ತು. ಈ ಮುಂಜಾನೆಯ ಸಮಯವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತು ಉದ್ಯಮಿಗಳಿಗೆ ಬೆಂಗಳೂರಿನ ಅಧಿಕೃತ ಕೆಲಸಗಳಿಗಾಗಿ ಒಂದೇ ದಿನದಲ್ಲಿ ಬಂದು ಹೋಗಲು ಅತ್ಯಂತ ಅನುಕೂಲಕರವಾಗಿತ್ತು.&lt;/p&gt;&lt;h2&gt;ಹೊಸ ವೇಳಾಪಟ್ಟಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಭೀತಿ&amp;nbsp;&lt;/h2&gt;&lt;p&gt;ಆದರೆ, ವಿಮಾನಯಾನ ಸಂಸ್ಥೆಯು ಜೂನ್ 10ರಿಂದ ಜಾರಿಗೆ ಬರುವಂತೆ ವಿಮಾನದ ಸಮಯವನ್ನು ಮಧ್ಯಾಹ್ನಕ್ಕೆ ಬದಲಾಯಿಸಿದೆ. ಹೊಸ ವೇಳಾಪಟ್ಟಿಯಂತೆ, ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 1:45ಕ್ಕೆ ಬೀದರ್ ತಲುಪಲಿದೆ. ತದನಂತರ ಮಧ್ಯಾಹ್ನ 2:30ಕ್ಕೆ ಬೀದರ್&zwnj;ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಬರಲಿದೆ.&lt;/p&gt;&lt;p&gt;&amp;nbsp;ಹೊಸದಾಗಿ ನಿಗದಿಪಡಿಸಲಾಗಿರುವ ಮಧ್ಯಾಹ್ನದ ವೇಳಾಪಟ್ಟಿಯಿಂದಾಗಿ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಮಯ ಬದಲಾವಣೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಇದು ವಿಮಾನಯಾನದ ಮೂಲ ಉದ್ದೇಶವನ್ನೇ ಹಳಿ ತಪ್ಪಿಸುತ್ತದೆ ಎಂಬುದು ಸಚಿವ ಈಶ್ವರ್ ಖಂಡ್ರೆ ಅವರ ವಾದವಾಗಿದೆ.&lt;/p&gt;&lt;p&gt;ಹೀಗಾಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಸ್ಟಾರ್ ಏರ್ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮೊದಲಿನ ಮುಂಜಾನೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4"/>
        </item>
        <item>
            <title><![CDATA[ದನದ ಕೊಟ್ಟಿಗೆ ಬಿಲ್ ಪಾವತಿಸದ ಅಧಿಕಾರಿ; ತಾ.ಪಂ ಕಚೇರಿಯಲ್ಲಿ ಹಸುಗಳನ್ನ ಕಟ್ಟಿ, ಕಾಲಿಗೆ ಬಿದ್ದ ಅನ್ನದಾತ!]]></title>
            <link>https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</link>
            <guid isPermaLink="true">https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</guid>
            <pubDate>Thu, 11 Jun 2026 14:50:06 +0530</pubDate>
            <description><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kttspb71h6pyneqt4pvkw70w,imgname-bidar-farmer-protests--4--1781163306208.jpg" type="image/jpeg" height="390" width="690"/>
            <content:encoded><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.&lt;img&gt;&lt;p&gt;&lt;strong&gt;ಬೀದರ್(ಜೂ.11): ಸ&lt;/strong&gt;ರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅಧಿಕಾರಿಗಳ ಕಾಲು ಹಿಡಿಯಬೇಕು ಎಂಬ ಮಾತು ಈಗ ಅಕ್ಷರಶಃ ನಿಜವಾಗಿದೆ. ಕೊಟ್ಟಿಗೆ ನಿರ್ಮಾಣ ಮಾಡಿ 9 ತಿಂಗಳು ಕಳೆದರೂ ಬಿಲ್ ಮಂಜೂರು ಮಾಡದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತನೊಬ್ಬ, ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಆಗಮಿಸಿ ವಿನೂತನವಾಗಿ ಪ್ರತಿಭಟಿಸಿದ ಘಟನೆ ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಘಟನೆ?:&lt;/strong&gt;&lt;/p&gt;&lt;p&gt;ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ರೈತ ಅಪ್ಪಾಸಾಬ್ ಮಡಕೆ ಎಂಬುವವರು ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದರು. ಕೊಟ್ಟಿಗೆ ಪೂರ್ಣಗೊಂಡು ಬರೋಬ್ಬರಿ ಒಂಬತ್ತು ತಿಂಗಳು ಕಳೆದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಇಂದು ಹುಲಸೂರು ತಾಲ್ಲೂಕು ಪಂಚಾಯತ್ ಕಚೇರಿಗೆ ತನ್ನ ಹಸುವನ್ನು ಕರೆತಂದು, ಕಚೇರಿಯ ಆವರಣದಲ್ಲೇ ಹಸು ಕಟ್ಟಿ ಮೇವು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಯ ಕಾಲಿಗೆ ಬಿದ್ದ ಅನ್ನದಾತ:&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಪ್ಪಾಸಾಬ್ ಮಡಕೆ, ತಾಲ್ಲೂಕು ಪಂಚಾಯತ್ ಇಒ (EO) ಮಹದೇವ ಜಮ್ಮು ಅವರ ಕಾಲಿಗೆ ಬಿದ್ದು, 'ದಯವಿಟ್ಟು ನನ್ನ ಬಿಲ್ ಮಾಡಿಕೊಡಿ ಸ್ವಾಮಿ' ಎಂದು ಕಣ್ಣೀರಿಟ್ಟರು. ಬಿಲ್ ಮಂಜೂರು ಮಾಡಲು ಗ್ರಾಮ ಪಂಚಾಯತ್ ಪಿಡಿಓ (PDO) ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;img&gt;&lt;p&gt;&lt;strong&gt;ಬೋಗಸ್ ಬಿಲ್ ಆರೋಪ:&lt;/strong&gt;&lt;/p&gt;&lt;p&gt;ಕೇವಲ ಅಪ್ಪಾಸಾಬ್ ಒಬ್ಬರೇ ಅಲ್ಲ, ಬೇಲೂರು ಗ್ರಾಮವೊಂದರಲ್ಲೇ ಸುಮಾರು 40ಕ್ಕೂ ಹೆಚ್ಚು ರೈತರಿಗೆ ಕೊಟ್ಟಿಗೆ ನಿರ್ಮಾಣದ ಬಿಲ್ ಪಾವತಿಯಾಗಿಲ್ಲ ಎನ್ನಲಾಗಿದೆ. 'ಗ್ರಾಮ ಪಂಚಾಯತ್&zwnj;ನಲ್ಲಿ ಚರಂಡಿ ಸ್ವಚ್ಛತೆ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬೋಗಸ್ ಬಿಲ್ ಮಾಡುತ್ತಾರೆ. ಆದರೆ ನೈಜವಾಗಿ ಕೆಲಸ ಮಾಡಿದ ರೈತರಿಗೆ ಮಾತ್ರ ಹಣ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟಿಸಿದ ರೈತನ ಹೋರಾಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg"/>
        </item>
        <item>
            <title><![CDATA[ಪ್ರತ್ಯೇಕ ಘಟನೆ; ನಾಗರ ಪಂಚಮಿಯಂದೆ ದುರಂತ, ಹಾವು ಕಡಿದು ವಾಟರ್‌ಮ್ಯಾನ್, ಮಹಿಳೆ ಸಾವು!]]></title>
            <link>https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</link>
            <guid isPermaLink="true">https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</guid>
            <pubDate>Tue, 18 Aug 2026 10:41:05 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಸೋಲದಾಬಕಾ ಗ್ರಾಮದಲ್ಲಿ, ನೀರಿನ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದ ವಾಟರ್&zwnj;ಮ್ಯಾನ್ ಭೀಮ ಜಾಧವ್ (48) ಮೃತಪಟ್ಟಿದ್ದಾರೆ. ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09mep030ksn0769k2n5gj9x,imgname-snake-bite--1787029837827.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಡಿದು ವಾಟರ್&zwnj;ಮ್ಯಾನ್ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು 48 ವರ್ಷದ ಭೀಮ ಜಾಧವ್ ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕ್ ಬಳಿ ನೀರು ಬಂದ್ ಮಾಡಲು ತೆರಳಿದ ಸಂದರ್ಭದಲ್ಲಿ ಹಾವು ಕಡಿದು ಭೀಮ ಸಾವನ್ನಪ್ಪಿದ್ದಾರೆ.&lt;/p&gt;&lt;h2&gt;ಕುಟುಂಬಸ್ಥರ ಆಕ್ರಂದನ&lt;/h2&gt;&lt;p&gt;ಹಾವು ಕಡಿದ ಪರಿಣಾಮ ಸ್ಥಳದಲ್ಲೇ ಭೀಮ ಜಾಧವ್ ಸಾವನ್ನಪ್ಪಿದ್ದು, ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು-ಕಡ್ಡಿ ಬೆಳೆದಿದ್ದೇ ಅವಘಡಕ್ಕೆ ಕಾರಣ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹುಲ್ಲು ಕಟಾವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸೋಲದಾಬಕಾ ಹೊರವಲಯದ ಹಾಲಹಳ್ಳಿ ರಸ್ತೆ ಬಳಿಯ ಮಹದೇವ ಮಂದಿರದ ಸಮೀಪ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹುಲಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ಹಾವು ಕಚ್ಚಿದಂತೆ ಕನಸು, ಮರುದಿನವೇ ಸಾವು!&lt;/h2&gt;&lt;p&gt;ಇತ್ತ ಚಿಕ್ಕೋಡಿಯಲ್ಲಿ ನಾಗರ ಪಂಚಮಿಯ ದಿನವೇ ಹಾವು ಕಡಿತದು ಮಹಿಳೆ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 43 ವರ್ಷದ ಸತ್ಯವ್ವ ಶಿವಾನಂದ ಶಿಂಗೆ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಸತ್ಯವ್ವ ಅವರಿಗೆ ನಾಗರ ಪಂಚಮಿಯ ಇಂದಿನ ದಿನವೇ ಹಾವು ಕಚ್ಚಿದಂತೆ ಕನಸು ಬಂದಿತ್ತಂತೆ. ಇದನ್ನು ಕೂಲಿ ಕೆಲಸಕ್ಕೆ ಹೋದಾಗ ತಮ್ಮ ಸಹಪಾಠಿಗಳೊಂದಿಗೆ ಮಹಿಳೆ ಹಂಚಿಕೊಂಡಿದ್ದರಂತೆ. ಆದರೆ ಇದಾದ ಮರುದಿನವೇ ಹಾವು ಕಚ್ಚಿಯೇ ಮಹಿಳೆ ಸತ್ಯವ್ವ ಸಾವನ್ನಪ್ಪಿದ್ದಾರೆ. ಕಾಕತಾಳೀಯ ಎಂಬಂತೆ ಪಂಚಮಿಯ ದಿನವೇ ಹಾವು ಹಚ್ಚಿ ಮಹಿಳೆ ಸಾವನ್ನಪ್ಪಿದ್ದು, ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>bidar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n"/>
        </item>
        <item>
            <title><![CDATA[ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರ: ಆದರೂ, ಸರ್ಕಾರದ ಆದೇಶ ಪಟ್ಟಿಯಲ್ಲಿಲ್ಲ ಬರಪೀಡಿತ ತಾಲೂಕುಗಳು!]]></title>
            <link>https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse</link>
            <guid isPermaLink="true">https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse</guid>
            <pubDate>Fri, 28 Aug 2026 11:49:41 +0530</pubDate>
            <description><![CDATA[ರಾಜ್ಯ ಸರ್ಕಾರವು ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಭಾಲ್ಕಿ, ಔರಾದ್ ಸೇರಿದಂತೆ ಇತರೆ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದು ಬೆಳೆ ಒಣಗುತ್ತಿರುವುದರಿಂದ ಪರಿಹಾರ ವಂಚಿತರಾಗುವ ಭೀತಿಯಲ್ಲಿರುವ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx0v3sr2xg2xkrk9wv954xzc,imgname-untitled-design---2026-07-08t175336.435-1783513605890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj; (ಆ.28): ರಾ&lt;/strong&gt;ಜ್ಯ ಸರ್ಕಾರವು 2026ರ ಮುಂಗಾರು ಹಂಗಾಮಿಗೆ (ಜೂನ್&zwnj; 1ರಿಂದ ಆಗಸ್ಟ್&zwnj; 12) ಸಂಬಂಧಿಸಿದಂತೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಬೀದರ್&zwnj; ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್&zwnj; ಮತ್ತು ಚಿಟಗುಪ್ಪ ತಾಲೂಕುಗಳನ್ನು ಮಾತ್ರ &lsquo;ತೀವ್ರತರನಾದ ಬರಪೀಡಿತ&rsquo; ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸ್ವಕ್ಷೇತ್ರವಾಗಿರುವ ಭಾಲ್ಕಿ ತಾಲೂಕು ಸೇರಿದಂತೆ, ಮಳೆ ಅಭಾವದಿಂದ ತೀವ್ರ ಬರ ಎದುರಿಸುತ್ತಿರುವ ಔರಾದ್&zwnj;, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಸರ್ಕಾರದ ಬರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.&lt;/p&gt;&lt;h2&gt;&lt;strong&gt;ಶೇ.42ರಷ್ಟು ಮಳೆ ಕೊರತೆ&lt;/strong&gt;&lt;/h2&gt;&lt;p&gt;ಈಗಾಗಲೇ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೂ ಮುಂಗಾರು ಮಳೆಯ ತೀವ್ರ ಅಭಾವದಿಂದಾಗಿ ಶೇಕಡಾ 31ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜೂನ್&zwnj; ತಿಂಗಳಿನಲ್ಲಿ ಶೇ. 42ರಷ್ಟು ಮಳೆ ಕಡಿಮೆಯಾಗಿ ಕಳೆದ 50 ವರ್ಷಗಳಲ್ಲೇ 4ನೇ ಅತ್ಯಂತ ಕಡಿಮೆ ಮಳೆ ಕಂಡ ಜೂನ್&zwnj; ಎಂಬಂತಾಗಿದೆ. ಇದರಿಂದಾಗಿ ಹೊಲಗದ್ದೆಗಳಲ್ಲಿ ನಿಂತಿರುವ ಬೆಳೆಗಳು ನೀರಿನ ಅಭಾವದಿಂದ ಒಣಗುವುದು, ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುವಂತಹ ತೀವ್ರ ಹಾನಿಯನ್ನು ಅನುಭವಿಸುತ್ತಿವೆ.&lt;/p&gt;&lt;p&gt;ಬೆಳೆ ಕಣ್ಣೆದುರೇ ಕಾಸಿಗೆ ಗತಿಯಿಲ್ಲದೇ ಕಮರಿ ಹೋಗುತ್ತಿರುವ ಈ ಸಮಯದಲ್ಲಿ ಸರ್ಕಾರ ಈ ತಾಲೂಕುಗಳನ್ನು ಕೈಬಿಟ್ಟಿರುವುದರಿಂದ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತವಾಗುವ ಭೀತಿಗೆ ಸಿಲುಕಿದ್ದಾರೆ. ಶೀಘ್ರದಲ್ಲಿಯೇ ಕಂದಾಯ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಬರಪೀಡಿತ ಪ್ರದೇಶಗಳ ಸರ್ವೆ ನಡೆಸಲಿವೆ.&lt;/p&gt;&lt;p&gt;ಮಾಸಾಂತ್ಯದ ಮ&zwj;ಳೆ ಪ್ರಮಾಣ ಪರಾಮರ್ಶಿಸುವ ಭರವಸೆ: ಆದರೆ, ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿರುವಂತೆ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್&zwnj;ನಲ್ಲಿ ಬರುವ ಮಳೆಯ ಪರಿಸ್ಥಿತಿಯನ್ನು ವಾರಕ್ಕೊಮ್ಮೆ ವೈಜ್ಞಾನಿಕವಾಗಿ ಪರಾಮರ್ಶಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರೌಂಡ್&zwnj; ಟ್ರೂಥಿಂಗ್&zwnj; (Ground Truthing) ಪ್ರಕ್ರಿಯೆ ಹಾಗೂ ಮಳೆ ಕೊರತೆ ಆಧಾರದ ಮೇಲೆ ಅರ್ಹತೆ ಪಡೆಯುವ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಹೊಸ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.&lt;/p&gt;&lt;h2&gt;&lt;strong&gt;ನಾಲ್ಕು ತಾಲೂಕುಗಳ ಸೇರ್ಪಡೆಗೆ ಆಗ್ರಹ&lt;/strong&gt;&lt;/h2&gt;&lt;p&gt;ಹೀಗಾಗಿ, ಪಟ್ಟಿಯಲ್ಲಿ ಬಿಟ್ಟುಹೋಗಿರುವ ಭಾಲ್ಕಿ, ಔರಾದ್&zwnj;, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ತಕ್ಷಣವೇ ಜಂಟಿ ಸಮೀಕ್ಷೆಗೆ ಒಳಪಡಿಸಿ ಬರಪೀಡಿತ ಎಂದು ಘೋಷಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.&lt;/p&gt;&lt;p&gt;--&lt;/p&gt;&lt;p&gt;ಬೀದರ್&zwnj; ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕ ರಾಜ್ಯ ಬರ ನಿರ್ವಹಣಾ ಕೋಶದ ಮಾಹಿತಿಯಾಧರಿಸಿ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಜಿಲ್ಲೆಯಿಂದ ಬರ ಘೋಷಣೆ ಕುರಿತು ಯಾವುದೇ ವರದಿ ಸಲ್ಲಿಕೆಗೆ ಅವಕಾಶ ಇರೋಲ್ಲ. ಇದೀಗ ಬರ ಘೋಷಿತ ಆಯಾ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಆಗಸ್ಟ್&zwnj; ಮಾಸಾಂತ್ಯ ಹಾಗೂ ಸೆಪ್ಟೆಂಬರ್&zwnj; ವರಗಿನ ಮುಂಗಾರು ಮಳೆಯನ್ನಾಧರಿಸಿ ಸರ್ಕಾರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;- ಆರ್&zwnj;. ದೇವಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ&lt;/strong&gt;&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse"/>
        </item>
    </channel>
</rss>
