<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 18 Sep 2026 07:21:04 +0530</lastBuildDate>
        <atom:link href="https://kannada.asianetnews.com/rss/bidar" rel="self" type="application/rss+xml"/>
        <item>
            <title><![CDATA[ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಲೋಕಾಯುಕ್ತ ಶಾಕ್: ಕೋಟಿ ಕೋಟಿ ಆಸ್ತಿ ಪತ್ತೆ, ಎಲ್ಲೆಲ್ಲಿ ದಾಳಿ?]]></title>
            <link>https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</link>
            <guid isPermaLink="true">https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru</guid>
            <pubDate>Tue, 16 Jun 2026 09:02:10 +0530</pubDate>
            <description><![CDATA[ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಮತ್ತು ಬೆಂಗಳೂರಿನಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಈ ಕಾರ್ಯಾಚರಣೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ghne3sn58e8amfw5e7hkgzhv,imgname-karnataka-lokayukta.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಿಕ್ಕಮಗಳೂರು, ದಾವಣಗೆರೆ, ಕಲಬುರಗಿ, ಬೆಂಗಳೂರಿನಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ, ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.&lt;/p&gt;&lt;h2&gt;&lt;strong&gt;ಚಿಕ್ಕಮಗಳೂರು&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿ ಎ.ಸಿ.ಎಫ್.ಶ್ರೀನಿವಾಸ್ ಅವರ ಮನೆ ಮತ್ತು ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್&zwnj;ನಲ್ಲಿರುವ ನಿವಾಸ, ಕಡೂರಿನಲ್ಲಿರುವ ಶ್ರೀನಿವಾಸ್ ಸೋದರಿ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.&lt;/p&gt;&lt;h3&gt;&lt;strong&gt;ದಾವಣಗೆರೆ&lt;/strong&gt;&lt;/h3&gt;&lt;p&gt;ದಾವಣಗೆರೆಯಲ್ಲಿ ಮೂವರು ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಬಯಲು ಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಕೃಷ್ಣಾ ನಾಯ್ಕ್ ಅವರ ಸಿದ್ದವೀರಪ್ಪ ಬಡಾವಣೆಯಲ್ಲಿರೋ ಎರಡು ಮನೆ, NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಹೆಬ್ಬಾಳ್ ಅವರ ಸರಸ್ವತಿ ನಗರದಲ್ಲಿ ಮನೆ, ಕೆಆರ್&zwnj;ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗುತ್ತಿದೆ. ದಾವಣಗೆರೆಯ ಶಿವಕುಮಾರ್ ಬಡಾವಣೆಯಲ್ಲಿಯ ಮನೆ, ಹರಪನಹಳ್ಳಿ ಒಂದು ಮನೆ ಮೇಲೆ ದಾಳಿ ಸೇರಿದಂತೆ ಒಟ್ಟು 12 ಕಡೆ ದಾಳಿ ನಡೆದಿದೆ. ಬೆಳಗಾವಿ, ಹುಬ್ಬಳ್ಳಿ, ವಿಜಯನಗರ ದಾವಣಗೆರೆಯಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದೆ.&lt;/p&gt;&lt;p&gt;&lt;strong&gt;ಕಲಬುರಗಿ&lt;/strong&gt;&lt;/p&gt;&lt;p&gt;ಕಲಬುರಗಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನಿವೃತ್ತ ಸುಪರಿಡೆಂಟ್ ಇಂಜಿನಿಯರ್ ಮಾಣಿಕ್ ಕನಕಟ್ಟಿ ಮನೆ ಸೇರಿದಂತೆ ಐದು ಕಡೆ ಮೇಲೆ ದಾಳಿ ನಡೆದಿದೆ. ಬೀದರ್ ಜಿಲ್ಲೆಯ ಹಳ್ಳಿಖೇಡ ಗ್ರಾಮದ ಮನೆ, ಹುಮ್ನಾಬಾದ್ ನ ಎರಡು ಕಾಂಪ್ಲೆಂಕ್ಸ್ , ಹಳ್ಳಿಖೇಡ ಗ್ರಾಮದ ತೋಟದ ಮನೆಯ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಬೀದರ ಜಿಲ್ಲೆ ಹುಮನಾಬಾದನಲ್ಲಿ ಎರಡು ಕಾಂಪ್ಲೆಕ್ಸ್, ಹಳ್ಳಿ ಖೇಡನಲ್ಲಿ 20 ಎಕರೆ ತೋಟ, ಕಲಬುರಗಿಯಲ್ಲಿ ಎರಡು ಮನೆ ಸೇರಿದಂತೆ ಆರಂಭದಲ್ಲೇ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ನಿವೃತ ಅಧಿಕಾರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt;&lt;/p&gt;&lt;p&gt;ಬೆಂಗಳೂರಿನ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ರಾಜಣ್ಣ ಅಡಿಷನಲ್ ಡೈರೆಕ್ಟರ್ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಬೆಸ್ಕಾಂ ಎಇಇ ಉದಯ್ ಕುಮಾರ್ ಅವರ ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಇಬ್ಬರು ಅಧಿಕಾರಿಗಳಿಂದ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದೆ.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/karnataka-lokayukta-officials-conducted-raids-in-many-parts-of-the-state-in-the-early-hours-of-the-morning-mrq/articleshow-0s097ru"/>
        </item>
        <item>
            <title><![CDATA[CSMT ಮುಂಬೈ-ಲಾತೂರ್-ಬೀದರ್ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಗೆ ಆರಾಮದಾಯಕ ಸುದ್ದಿ]]></title>
            <link>https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</link>
            <guid isPermaLink="true">https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12</guid>
            <pubDate>Wed, 24 Jun 2026 12:00:24 +0530</pubDate>
            <description><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvw4j5ae9d645yzh1hybdcw8,imgname-indian-railways-1782281999694.jpg" type="image/jpeg" height="390" width="690"/>
            <content:encoded><![CDATA[ಕೇಂದ್ರ ರೈಲ್ವೆಯು CSMT ಮುಂಬೈ-ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳಿಗೆ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ಒಟ್ಟು 24 ಬೋಗಿಗಳಾಗಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳು ಲಭ್ಯವಾಗಲಿವೆ, ಇದರಿಂದ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.&lt;img&gt;&lt;p&gt;24 ಬೋಗಿಗಳೊಂದಿಗೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಕೇಂದ್ರ ರೈಲ್ವೆ ಓಡಿಸಲಿದ್ದು, ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸಲು ಹೆಚ್ಚುವರಿ 3 ಬೋಗಿಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.&lt;/p&gt;&lt;img&gt;&lt;p&gt;ಅನುಕೂಲಕರ ಪ್ರಯಾಣವನ್ನು ಸುಗಮಗೊಳಿಸುವ ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ CSMT ಮುಂಬೈ- ಲಾತೂರ್ ಮತ್ತು CSMT ಮುಂಬೈ-ಬೀದರ್ ಎಕ್ಸಪ್ರೆಸ್ ರೈಲುಗಳನ್ನು 3 ಹೆಚ್ಚುವರಿ ಬೋಗಿಗಳೊಂದಿಗೆ ಓಡಿಸಲು ನಿರ್ಧರಿಸಿದೆ. ಸದ್ಯ ರೈಲಿಗೆ 24 ಬೋಗಿಗಳನ್ನು ಅಳವಡಿಸ ಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;img&gt;&lt;p&gt;ಜೂನ್ 25 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 22107 CSMT ಮುಂಬೈ-ಲಾತೂರ್ ಎಕ್ಸಪ್ರೆಸ್ ಮತ್ತು ಜೂನ್ 26 ರಿಂದ ರೈಲು ಸಂಖ್ಯೆ 22108 ಲಾತೂರ್ - CSMT ಮುಂಬೈ ಎಕ್ಸಪ್ರೆಸ್ ಮತ್ತು ಜೂನ್ 26ರಿದ ರೈಲು ಸಂಖ್ಯೆ 22143 CSMT ಮುಂಬೈ-ಬೀದರ್ ಎಕ್ಸ್&zwnj;ಪ್ರೆಸ್ ಮತ್ತು ರೈಲು ಸಂಖ್ಯೆ 22144 ಬೀದರ್- CSMT ಮುಂಬೈ ಎಕ್ಸ್&zwnj;ಪ್ರೆಸ್ ಜೂ. 27ರಿಂದ ಜಾರಿಗೆ ಬರಲಿದೆ.&lt;/p&gt;&lt;img&gt;&lt;p&gt;ಈ ರೈಲುಗಳಲ್ಲಿ 1 ಪ್ರಥಮ ಎಸಿ, 3 ಎಸಿ II-ಶ್ರೇಣಿ, 5 ಎಸಿ III-ಶ್ರೇಣಿ, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಗಾರ್ಡ್ ಕಮ್ ಬ್ರೇಕ್ ವ್ಯಾನ್&zwnj;ಗಳನ್ನು ಒಳಗೊಂಡಂತೆ 24 ಐಸಿಎಫ್ ಕೋಚ್&zwnj;ಗಳು ಇರುತ್ತವೆ. ಈ ನವೀಕರಣವು ಮುಂಬೈ, ಲಾತೂರ್ ಮತ್ತು ಬೀದರ್ ನಡುವೆ ಪ್ರಯಾಣಿಕರಿಗೆ ಹೆಚ್ಚಿನ ಆಸನ ಸಾಮರ್ಥ್ಯ, ಉತ್ತಮ ಅನುಕೂಲತೆ ಮತ್ತು ಸುಗಮ ಪ್ರಯಾಣವನ್ನು ಒದಗಿಸುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು ಸಬರ್ಬನ್ ರೈಲಿಗೆ ಯುರೋಪಿಯನ್ ತಂತ್ರಜ್ಞಾನದ ಸ್ಪರ್ಶ; ಮೆಟ್ರೋ ಮಾದರಿ ಕೈಬಿಟ್ಟು &lsquo;ETCS&rsquo; ಸಿಗ್ನಲಿಂಗ್&zwnj;ಗೆ ಸಜ್ಜಾದ ಕೆ-ರೈಡ್&zwnj;&lt;/strong&gt;&lt;/p&gt;&lt;img&gt;&lt;p&gt;3 ಹೆಚ್ಚುವರಿ ಕೋಚ್&zwnj;ಗಳು ಪ್ರಯಾಣಿಕರಿಗೆ 182 ಹೆಚ್ಚಿನ ಆಸನಗಳನ್ನು ಒದಗಿಸುತ್ತವೆ. 1 ಎಸಿ II-ಶ್ರೇಣಿ - 46 ಆಸನಗಳು, 1 ಎಸಿ III- ಶ್ರೇಣಿ - 64 ಆಸನಗಳು, 1 ಸ್ಲೀಪರ್ ಕ್ಲಾಸ್ - 72 ಆಸನಗಳು. ಸೋಲಾಪುರ ವಿಭಾಗವು ಪ್ರಯಾಣಿಕರಿಗೆ ತಮ್ಮ ಅನುಕೂಲಕರ ಪ್ರಯಾಣಕ್ಕಾಗಿ ಹೊಸದಾಗಿ ವರ್ಧಿತ ಕೋಚ್&zwnj;ಗಳ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು-ದೆಹಲಿ ರೈಲಲ್ಲಿ ಹಾವೇರಿ ಸಮೀಪ ಅಕ್ರಮ ಮಾರಾಟಗಾರರಿಂದ ಟ್ರೈನ್ ಸಿಬ್ಬಂದಿಗೆ ಚಾಕು ಇರಿತ, ಇಬ್ಬರು ಗಂಭೀರ!&lt;/strong&gt;&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/indian-railways-good-news-for-mumbai-latur-bidar-express-train-passengers-mrq-2fnfb12"/>
        </item>
        <item>
            <title><![CDATA[ಕೆಪಿಎಸ್‌ಸಿ ಹಗರಣ, ಪ್ರೇಯಸಿಯ ಉಡುಗೊರೆ  ರಹಸ್ಯ, ಜ್ಞಾನೇಂದ್ರನ ಲವರ್‌ ಚಿನ್ನದ ಬಿಲ್‌ ಕಟ್ಟಿದ ಬ್ಯಾಂಕ್‌ ಅಧ್ಯಕ್ಷ!]]></title>
            <link>https://kannada.asianetnews.com/state/kpsc-scam-key-accused-ias-gyanendra-kumar-gold-gifted-to-girlfriend-jewellery-bill-paid-via-bhalki-bank-account-gdp/articleshow-2s3utd4</link>
            <guid isPermaLink="true">https://kannada.asianetnews.com/state/kpsc-scam-key-accused-ias-gyanendra-kumar-gold-gifted-to-girlfriend-jewellery-bill-paid-via-bhalki-bank-account-gdp/articleshow-2s3utd4</guid>
            <pubDate>Mon, 14 Sep 2026 14:59:46 +0530</pubDate>
            <description><![CDATA[ಕೆಪಿಎಸ್&zwnj;ಸಿ ಪಶು ವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದೆ. ಮುಖ್ಯ ಆರೋಪಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ನೀಡಿದ ದುಬಾರಿ ಉಡುಗೊರೆಯ ಹಣವನ್ನು ಭಾಲ್ಕಿ ಪಟ್ಟಣದ ಬ್ಯಾಂಕ್ ಅಧ್ಯಕ್ಷರ ಖಾತೆಯಿಂದ ಪಾವತಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಬ್ಯಾಂಕ್&zwnj;ನ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1n583z95hs8ftam6khgx3y5,imgname-kpsc-scam-jnanendra-gangwar-1788490289129.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;:&lt;/strong&gt; ಕೆಪಿಎಸ್&zwnj;ಸಿ ಅಕ್ರಮ ನೇಮಕಾತಿಯ ಕೋಟ್ಯಂತರ ರುಪಾಯಿ ಹಣದ ಪೈಕಿ, ಪ್ರಕರಣದ ಮುಖ್ಯ ರೂವಾರಿ ಎನ್ನಲಾದ ಜ್ಞಾನೇಂದ್ರ ಕುಮಾರ್&zwnj; ತನ್ನ ಪ್ರೇಯಸಿಗೆ ನೀಡಿದ ದುಬಾರಿ ಉಡುಗೊರೆಯ ಬಿಲ್ಲನ್ನು ಜಿಲ್ಲೆಯ ಭಾಲ್ಕಿ ಪಟ್ಟಣದ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್&zwnj; ಅಧ್ಯಕ್ಷನ ಖಾತೆಯಿಂದಲೇ ಪಾವತಿಸಿರುವುದು ಬೆಳಕಿಗೆ ಬಂದಿದೆ.&lt;/p&gt;&lt;p&gt;ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್&zwnj; ಅಕ್ರಮ ದಂಧೆಯ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣದ ಸುದೀರ್ಘ ತನಿಖೆಯ ಭಾಗವಾಗಿ ಜಿಲ್ಲೆಯ ಭಾಲ್ಕಿ ಪಟ್ಟಣದ ಓಂ ಲಕ್ಷ್ಮೀ ಸೌಹಾರ್ದ ಸಹಕಾರಿ ಬ್ಯಾಂಕ್&zwnj;, ತನಿಖಾ ಸಂಸ್ಥೆಯ ರೇಡಾರ್&zwnj;ನಲ್ಲಿದ್ದು, ಬ್ಯಾಂಕ್&zwnj;ನ ವಹಿವಾಟು ಹಾಗೂ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.&lt;/p&gt;&lt;p&gt;ಬೆಂಗಳೂರಿನ ಚಿನ್ನದ ಅಂಗಡಿಯೊಂದಕ್ಕೆ ₹15 ಲಕ್ಷ ಹಣ ವರ್ಗಾವಣೆ ಆಗಿರುವುದನ್ನು ಬ್ಯಾಂಕ್&zwnj;ನ ಅಧ್ಯಕ್ಷ ಓಂಕಾರ ಕನಶೆಟ್ಟಿ ಈಗಾಗಲೇ ಒಪ್ಪಿಕೊಂಡಿದ್ದಾರೆ. ತಮಗೆ ಜ್ಞಾನೇಂದ್ರಕುಮಾರ್&zwnj; ಪರಿಚಯವಿಲ್ಲ. ಆದರೆ, ಬಸವರಾಜ್ ಕನ್ನಾಳೆ ಫೋನ್&zwnj; ಮಾಡಿ ಸೂಚಿಸಿದ ಹಿನ್ನೆಲೆಯಲ್ಲಿ, ಆತ ತಮ್ಮ ಖಾತೆಗೆ ಹಾಕಿದ್ದ ಹಣದಲ್ಲೇ ₹15 ಲಕ್ಷವನ್ನು ಚಿನ್ನದ ಅಂಗಡಿಯ ಅಕೌಂಟ್&zwnj;ಗೆ ಜಮೆ ಮಾಡಿದ್ದಾಗಿ ಅವರು ತನಿಖೆ ವೇಳೆ ಸ್ಪಷ್ಟಪಡಿಸಿದ್ದಾಗಿ ತಿಳಿದು ಬಂದಿದೆ.&lt;/p&gt;&lt;h2&gt;ಭಾಲ್ಕಿ ಬ್ಯಾಂಕ್&zwnj;ನಲ್ಲಿ ಕನ್ನಾಳೆ ಖಾತೆ ಇಲ್ಲ!&lt;/h2&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡಿದ ಬ್ಯಾಂಕ್&zwnj; ಅಧ್ಯಕ್ಷ ಓಂಕಾರ ಕನಶೆಟ್ಟಿ, ತನಿಖೆ ಮತ್ತು ಹಣಕಾಸಿನ ವಹಿವಾಟಿನ ಕುರಿತು ಮತ್ತಷ್ಟು ಸ್ಫೋಟಕ ವಿವರಗಳನ್ನು ನೀಡಿದ್ದಾರೆ. ತಮ್ಮ ಬ್ಯಾಂಕ್&zwnj;ನಲ್ಲಿ ಬಸವರಾಜ ಕನ್ನಾಳೆ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲದಿದ್ದರೂ, ತಮ್ಮ ವೈಯಕ್ತಿಕ ಖಾತೆಗೆ ಕನ್ನಾಳೆ ಒಟ್ಟು ₹70 ಲಕ್ಷ ಜಮೆ ಮಾಡಿರುವುದು ನಿಜ ಎಂದು ಹೇಳಿದ್ದಾರೆ.&lt;/p&gt;&lt;p&gt;ಕೃಷಿ ಭೂಮಿ ಮಾರಾಟ (ಲ್ಯಾಂಡ್&zwnj; ಡೀಲಿಂಗ್&zwnj;) ಹಾಗೂ ಕಮಿಷನ್&zwnj; ದಂಧೆಗೆ ಸಂಬಂಧಿಸಿದಂತೆ ಈ ಹಣಕಾಸಿನ ವ್ಯವಹಾರ ನಡೆದಿದ್ದು, ಬೆಂಗಳೂರು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಈ ಎಲ್ಲಾ ವಹಿವಾಟಿನ ಸಂಪೂರ್ಣ ಮಾಹಿತಿಯನ್ನು ಒದಗಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ, ಬ್ಯಾಂಕ್&zwnj; ಗ್ರಾಹಕರಿಗೆ ಅಭಯ ನೀಡಿರುವ ಅಧ್ಯಕ್ಷರು, ತಮ್ಮ ಬ್ಯಾಂಕ್&zwnj;ಗೂ, ಬಸವರಾಜ ಕನ್ನಾಳೆಗೂ ಯಾವುದೇ ರೀತಿಯ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಸಿಐಡಿ ವಿಚಾರಣೆ ನಡೆಯುತ್ತಿದೆಯೇ ಹೊರತು, ಬ್ಯಾಂಕ್&zwnj; ಮೇಲೆ ಹೊಸದಾಗಿ ಯಾವುದೇ ದಾಳಿ ನಡೆದಿಲ್ಲ. ಭಾಲ್ಕಿ ಪಟ್ಟಣದ ವ್ಯಾಪಾರಿಗಳು, ಬ್ಯಾಂಕ್&zwnj;ನ ಗ್ರಾಹಕರು ಮತ್ತು ಸದಸ್ಯರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.&lt;/p&gt;&lt;p&gt;-ಓಂಕಾರ ಕನಶೆಟ್ಟಿ, ಬ್ಯಾಂಕ್&zwnj; ಅಧ್ಯಕ್ಷ.&lt;/p&gt;&lt;h2&gt;ಗರ್ಲ್&zwnj;ಫ್ರೆಂಡ್&zwnj;ಗೆ ಜ್ಞಾನೇಂದ್ರ ಕೊಡಿಸಿದ್ದ ಒಡವೆ ಸಿಐಡಿ ವಶ&lt;/h2&gt;&lt;p&gt;ಕೆಪಿಎಸ್&zwnj;ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಆರೋಪಿಯಾಗಿರುವ ಐಎಎಸ್​ ಅಧಿಕಾರಿ ಜ್ಞಾನೇಂದ್ರಕುಮಾರ್&zwnj; ಅವರ ಗೆಳತಿ ಬಳಿಯಿದ್ದ ₹23 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಆರೋಪಿ ಜ್ಞಾನೇಂದ್ರ ಕುಮಾರ್&zwnj; ಕೆಪಿಎಸ್ಸಿ ಅಕ್ರಮದ ಹಣದಲ್ಲಿ ತನ್ನ ಗೆಳತಿಗೆ ₹23 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಖರೀದಿಸಿ ಕೊಟ್ಟಿರುವುದನ್ನು ಪ್ರಕರಣದ ಬೆನ್ನು ಹತ್ತಿದ್ದ ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಜ್ಞಾನೇಂದ್ರ ಕುಮಾರ್&zwnj; ಬೆಂಗಳೂರಿನ ಡಿಕನ್ಸನ್ ರಸ್ತೆಯ ಜ್ಯುವೆಲ್ಲರಿ ಶಾಪ್&zwnj;ವೊಂದಕ್ಕೆ ಗೆಳತಿಯ ಕರೆದೊಯ್ದು ಆಭರಣ ಕೊಡಿಸಿದ್ದರು. ಆಭರಣ ಅಂಗಡಿಗೆ ಹೋಗಿ ಸಿಸಿ ಕ್ಯಾಮರಾ ದೃಶ್ಯ ಮತ್ತು ಬಿಲ್&zwnj; ಅನ್ನು ಜಪ್ತಿ ಮಾಡಿದ್ದ ಅಧಿಕಾರಿಗಳು ಇದೀಗ ಜ್ಞಾನೇಂದ್ರ ಗೆಳತಿಯಿಂದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;273 ಮಂದಿಯ ವಿಚಾರಣೆ&lt;/h2&gt;&lt;p&gt;ಅಕ್ರಮಕ್ಕೆ ಸಂಬಂಧಿಸಿದಂತೆ ₹5 ಕೋಟಿ ಕಪ್ಪು ಹಣ ವಹಿವಾಟು ನಡೆದಿರುವುದು ಸಿಐಡಿ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ₹85 ಲಕ್ಷ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ. ಇದುವರೆಗೂ ಪ್ರಕರಣದಲ್ಲಿ 273 ಮಂದಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ 12 ಅಭ್ಯರ್ಥಿಗಳು ಸೇರಿ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಆರೋಪಿ ಬಸವರಾಜ್ ಕನ್ನಾಳೆ ಸಹಚರರಿಗೂ ಬಲೆ ಬೀಸಿರುವ ಸಿಐಡಿ, ಪ್ರಕರಣ ಸಂಬಂಧ ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಈ ನಡುವೆ ಕೆಪಿಎಸ್&zwnj;ಸಿ ಮಾಜಿ ಸದಸ್ಯೆ ಶಾಂತಾ ಹೊಸಮನಿ ವಿಚಾರಣೆಗೆ ಬಾರದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮ್ಮೆ ನೋಟಿಸ್​​​ ಕೊಡಲು ಸಿಐಡಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/state/kpsc-scam-key-accused-ias-gyanendra-kumar-gold-gifted-to-girlfriend-jewellery-bill-paid-via-bhalki-bank-account-gdp/articleshow-2s3utd4"/>
        </item>
        <item>
            <title><![CDATA[ಬಸವಕಲ್ಯಾಣ ಆಸ್ಪತ್ರೆ ಕಾರ್ಯಕ್ರಮದಲ್ಲೇ ಆರೋಗ್ಯ ಸಚಿವ ಖಾದರ್ ಫೋಟೋಗೆ ಕತ್ತರಿ ಹಾಕಿದ್ದ ಡಿಎಚ್ಒ ಸಸ್ಪೆಂಡ್‌]]></title>
            <link>https://kannada.asianetnews.com/karnataka-districts/health-minister-ut-khader-photo-missing-from-basava-kalyan-hospital-events-dho-suspended-rav/articleshow-4fq2ch3</link>
            <guid isPermaLink="true">https://kannada.asianetnews.com/karnataka-districts/health-minister-ut-khader-photo-missing-from-basava-kalyan-hospital-events-dho-suspended-rav/articleshow-4fq2ch3</guid>
            <pubDate>Fri, 18 Sep 2026 07:21:00 +0530</pubDate>
            <description><![CDATA[ಬಸವಕಲ್ಯಾಣದಲ್ಲಿ ನಡೆದ ಉಪವಿಭಾಗ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಬ್ಯಾನರ್&zwnj;ನಲ್ಲಿ ಆರೋಗ್ಯ ಸಚಿವರ ಫೋಟೋ ಹಾಕದ ಕಾರಣ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಶಿಷ್ಟಾಚಾರ ಉಲ್ಲಂಘನೆ ಕುರಿತು 'ಕನ್ನಡಪ್ರಭ' ವರದಿ ಪ್ರಕಟಿಸಿದ ಬೆನ್ನಲ್ಲೇ ಸರ್ಕಾರ ಈ ಶಿಸ್ತು ಕ್ರಮ ಜರುಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2s30sqjnfjn84k2n8k5b7j1,imgname-health-minister-ut-khader-photo-missing-1789695911666.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಸವಕಲ್ಯಾಣ (ಸೆ.17): &lt;/strong&gt;ತಾಲೂಕಿನಲ್ಲಿ ಸೆ.16ರಂದು ನಡೆದ ಉಪವಿಭಾಗ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಸರ್ಕಾರಿ ಕಾರ್ಯಕ್ರಮದ ಬ್ಯಾನರ್&zwnj;ನಲ್ಲಿ ಆರೋಗ್ಯ ಸಚಿವರ ಫೋಟೋ ಹಾಕದೆ ನಿರ್ಲಕ್ಷ್ಯ ತೋರಿದ್ದ ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾಲೇಶ್ವರ ನಿರಗುಡೆ ಹಾಗೂ ಬಸವಕಲ್ಯಾಣ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ ಮೈಲಾರೆ ಅವರನ್ನು ಅಮಾನತು ಮಾಡಲಾಗಿದೆ.&lt;/p&gt;&lt;h2&gt;ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆ&lt;/h2&gt;&lt;p&gt;ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಉಪವಿಭಾಗೀಯ ಆಸ್ಪತ್ರೆ ಕಟ್ಟಡ ಕಾಮಗಾರಿ ಶಂಕುಸ್ಥಾಪನೆ ಸಮಾರಂಭದಲ್ಲಿ ಅಧಿಕಾರಿಗಳ ಶಿಷ್ಟಾಚಾರದ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದ ಕುರಿತು &lsquo;ಕನ್ನಡಪ್ರಭ&rsquo; ದಿನಪತ್ರಿಕೆಯು ಬುಧವಾರದ ಆವೃತ್ತಿಯಲ್ಲಿ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.&lt;/p&gt;&lt;p&gt;ಈ ಕುರಿತು ಕರ್ತವ್ಯ ನಿರ್ಲಕ್ಷ್ಯ ಹಾಗೂ &lsquo;ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ಶಿಸ್ತು ಕ್ರಮ ಜರುಗಿಸಲಾಗಿದೆ.&lt;/p&gt;&lt;h3&gt;ಅಮಾನತು ಮಾಡಿ ಆದೇಶ:&lt;/h3&gt;&lt;p&gt;&lsquo;ಕನ್ನಡಪ್ರಭ&rsquo; ವರದಿಗೆ ತಕ್ಷಣವೇ ಸ್ಪಂದಿಸಿರುವ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯು ಇದೀಗ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದು, ಶಿಷ್ಟಾಚಾರ ನಿಯಮಗಳ ಉಲ್ಲಂಘನೆ ಹಾಗೂ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ವೈದ್ಯಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.&lt;/p&gt;&lt;p&gt;ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಯಾದ ಗುರುದತ್ತ ಹೆಗಡೆ ಸೆ.17ರಂದು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/health-minister-ut-khader-photo-missing-from-basava-kalyan-hospital-events-dho-suspended-rav/articleshow-4fq2ch3"/>
        </item>
        <item>
            <title><![CDATA[ಬೀದರ್ ಎಟಿಎಂ ₹83 ಲಕ್ಷ ದರೋಡೆ: 19 ತಿಂಗಳ ಬಳಿಕ ಬಿಹಾರದಲ್ಲಿ ಖದೀಮರ ಬೇಟೆಯಾಡಿದ ಕರ್ನಾಟಕ ಪೊಲೀಸರು!]]></title>
            <link>https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</link>
            <guid isPermaLink="true">https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</guid>
            <pubDate>Wed, 12 Aug 2026 18:18:15 +0530</pubDate>
            <description><![CDATA[&lt;p&gt;ಬೀದರ್&zwnj;ನಲ್ಲಿ 19 ತಿಂಗಳ ಹಿಂದೆ ನಡೆದಿದ್ದ ಹಾಡಹಗಲು ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಬ್ಬಂದಿಯೊಬ್ಬರನ್ನು ಕೊಂದು 83 ಲಕ್ಷ ರೂ. ದೋಚಿದ್ದ ಇಬ್ಬರು ಆರೋಪಿಗಳನ್ನು, ಬೀದರ್ ಪೊಲೀಸರು ಬಿಹಾರದಲ್ಲಿ ಗೌಪ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಬೀದರ್&zwnj;ಗೆ ಕರೆತರಲಾಗುತ್ತಿದ್ದು, ತನಿಖೆ ಮುಂದುವರೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv041c1346adp7b8q8kb6ky,imgname-bidar-sbi-atm-robbery-gang-arrest-in-bihar-1786538755457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಆ.12): ಕ&lt;/strong&gt;ಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬೀದರ್ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲಿನ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ಬಿಗ್ ಕ್ಲೈಮ್ಯಾಕ್ಸ್ ಸಿಕ್ಕಿದೆ! ಪ್ರಕರಣ ನಡೆದ ಭೀಕರ ಘಟನೆಗೆ ಭರ್ತಿ 1 ವರ್ಷ 7 ತಿಂಗಳ (19 ತಿಂಗಳು) ಬಳಿಕ, ಪ್ರಕರಣದ ಇಬ್ಬರು ಕುಖ್ಯಾತ ದರೋಡೆಕೋರರ ಹೆಡೆಮುರಿಯನ್ನು ಬೀದರ್ ಪೊಲೀಸರು ಬಿಹಾರದಲ್ಲಿ ಕಟ್ಟಿದ್ದಾರೆ.&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಮನ್&zwnj;ಕುಮಾರ್ ಸಿಂಗ್ ಹಾಗೂ ಅಲೋಕ್&zwnj;ಕುಮಾರ್ ಎಂದು ಗುರುತಿಸಲಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ಬೀದರ್ ಪೊಲೀಸರು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ ಈ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಹಾಡಹಗಲೇ ನಡೆದಿದ್ದ ಆ ಭೀಕರ ದರೋಡೆ ಏನು?&lt;/strong&gt;&lt;/h2&gt;&lt;p&gt;ಜನವರಿ 16, 2025ರಂದು ಬೀದರ್ ನಗರದ ಹೃದಯಭಾಗದಲ್ಲಿರುವ ಎಸ್&zwnj;ಬಿಐ (SBI) ಬ್ಯಾಂಕ್ ಹಾಗೂ ಎಟಿಎಂ ಮುಂಭಾಗದಲ್ಲಿ ಅತ್ಯಂತ ಭೀಕರ ದರೋಡೆ ನಡೆದಿತ್ತು. ಸಿಎಮ್&zwnj;ಎಸ್ (CMS) ಏಜೆನ್ಸಿಯ ಕ್ಯಾಶ್ ವ್ಯಾನ್&zwnj;ನಿಂದ ಹಣ ತುಂಬಲು ಬಂದಿದ್ದ ಸಿಬ್ಬಂದಿಯ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಿಎಮ್&zwnj;ಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರೆ, ಶಿವಕುಮಾರ್ ಗುನ್ನಳ್ಳಿ ಎಂಬ ಇನ್ನೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ಸ್ಥಳದಲ್ಲೇ ಬರೋಬ್ಬರಿ 83 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.&lt;/p&gt;&lt;h2&gt;&lt;strong&gt;ಯಾರ ಸಹಾಯವೂ ಇಲ್ಲದೇ 'ಬೀದರ್ ಸಿಂಹಗಳ' ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಪ್ರಕರಣ ನಡೆದ ದಿನದಿಂದಲೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಬೀದರ್ ಪೊಲೀಸರಿಗೆ ಕಳೆದ 20 ದಿನಗಳ ಹಿಂದೆ ಆರೋಪಿಗಳ ಖಚಿತ ಸುಳಿವು ಸಿಕ್ಕಿತ್ತು. ಸುಳಿವು ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಖಾಕಿ ಪಡೆ, ಕಳೆದ 20 ದಿನಗಳಿಂದ ಬಿಹಾರದಲ್ಲೇ ಬೀಡುಬಿಟ್ಟು ಆರೋಪಿಗಳ ಪ್ರತಿಯೊಂದು ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿತ್ತು. ವಿಶೇಷವೆಂದರೆ, ಈ ಕಾರ್ಯಾಚರಣೆಯಲ್ಲಿ ಬಿಹಾರ ಅಥವಾ ಇತರ ಯಾವುದೇ ರಾಜ್ಯದ ಪೊಲೀಸರ ಸಹಾಯವನ್ನು ಪಡೆಯದೇ, ಮಾಹಿತಿ ಸೋರಿಕೆಯಾಗದಂತೆ ಅತ್ಯಂತ ಗೌಪ್ಯವಾಗಿ ಬೀದರ್ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಖಡಕ್ ಆಪರೇಷನ್ ನಡೆಸಿದ ಪೊಲೀಸ್ ತಂಡ:&lt;/strong&gt;&lt;/h2&gt;&lt;p&gt;ಬೀದರ್ ಎಸ್&zwnj;ಪಿ ಪ್ರದೀಪ್ ಗುಂಟಿ ಅವರ ನೇರ ಉಸ್ತುವಾರಿಯಲ್ಲಿ ಈ ಹೈ-ವೋಲ್ಟೇಜ್ ಆಪರೇಷನ್ ನಡೆದಿದೆ. ಈ ಕ್ರೈಂ ಆಪರೇಷನ್&zwnj; ತಂಡದಲ್ಲಿ:&lt;/p&gt;&lt;ul&gt; &lt;li&gt;ಓರ್ವ ಎಸ್&zwnj;ಪಿ (SP)&lt;/li&gt; &lt;li&gt;ಇಬ್ಬರು ಡಿವೈಎಸ್ಪಿ (DySP)&lt;/li&gt; &lt;li&gt;ಇಬ್ಬರು ಸಿಪಿಐ (CPI)&lt;/li&gt; &lt;li&gt;ನಾಲ್ಕು ಪಿಎಸ್&zwnj;ಐ (PSI)&lt;/li&gt; &lt;li&gt;20 ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ&lt;/li&gt; &lt;li&gt;ಕ್ರೈಮ್ ವಿಭಾಗದ (Crime Branch) 12 ನುರಿತ ಸಿಬ್ಬಂದಿ ಸೇರಿ ಒಟ್ಟು ದೊಡ್ಡ ಪಡೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.&lt;/li&gt;&lt;/ul&gt;&lt;h2&gt;&lt;strong&gt;ದರೋಡೆ ನಡೆದ ಸ್ಥಳದಲ್ಲೇ ಸಾರ್ವಜನಿಕರ ಸಂಭ್ರಮಾಚರಣೆ!&lt;/strong&gt;&lt;/h2&gt;&lt;p&gt;ಕಳೆದ 19 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಹಂತಕ ದರೋಡೆಕೋರರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಬೀದರ್&zwnj;ನ ಎಸ್&zwnj;ಬಿಐ ಬ್ಯಾಂಕ್ ಮುಂಭಾಗ ಸಾರ್ವಜನಿಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸಂಭ್ರಮಾಚರಣೆ ನಡೆಸಿದರು. ಸತತ ಪ್ರಯತ್ನ ನಡೆಸಿ ಖದೀಮರ ಹೆಡೆಮುರಿ ಕಟ್ಟಿದ ಎಸ್&zwnj;ಪಿ ಪ್ರದೀಪ್ ಗುಂಟಿ ಹಾಗೂ ಅವರ ಇಡೀ ತಂಡಕ್ಕೆ ಬೀದರ್ ಜನತೆ ಸಾಷ್ಟಾಂಗ ನಮನ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಸದ್ಯ ಬಂಧಿತ ಆರೋಪಿಗಳನ್ನು ಬಿಹಾರದಿಂದ ಬೀದರ್&zwnj;ಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತಿದ್ದು, ವಿಚಾರಣೆಯ ಬಳಿಕ ದರೋಡೆ ಮಾಡಿದ 83 ಲಕ್ಷ ರೂಪಾಯಿ ಹಣ, ಬಳಸಿದ ಮಾರಕಾಸ್ತ್ರಗಳು ಹಾಗೂ ಈ ಕೃತ್ಯದ ಹಿಂದೆ ಇರುವ ಇತರ ಜಾಲದ ಬಗ್ಗೆ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆಯಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d"/>
        </item>
        <item>
            <title><![CDATA[ಸರಿಗಮಪ ವಿನ್ನರ್ ಶಿವಾನಿ ಈಗ ಸಾಂಸ್ಕೃತಿಕ ರಾಯಭಾರಿ: 8 ಪ್ರತಿಷ್ಠಿತ ಪ್ರಶಸ್ತಿಗಳ ಒಡತಿ]]></title>
            <link>https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</link>
            <guid isPermaLink="true">https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc</guid>
            <pubDate>Mon, 24 Aug 2026 07:24:39 +0530</pubDate>
            <description><![CDATA[ಮುಂಬೈನ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ನಡೆಸಿದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಬೀದರ್&zwnj;ನ ಗಾಯಕಿ ಶಿವಾನಿ ಶಿವದಾಸಸ್ವಾಮಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸಿದ್ದಾರೆ. ಈ ಸಾಧನೆಗಾಗಿ ಅವರು ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ತಮ್ಮ ಈ ಯಶಸ್ಸಿಗೆ ಗುರುಗಳು, ಕುಟುಂಬ ಮತ್ತು ಬೀದರ್ ಜನತೆಯ ಪ್ರೋತ್ಸಾಹವೇ ಕಾರಣವೆಂದು ಸಂತಸ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rqjhsb48hqz92dk9ebycrf,imgname-shivani-1787536426795.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮುಂಬೈ ವತಿಯಿಂದ ನವೆಂಬರ್&zwnj;- ಡಿಸೆಂಬರ್&zwnj; 2024ರಲ್ಲಿ ನಡೆದ ಸಂಗೀತ ವಿಶಾರದ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ&zwj;್ಯಾಂಕ್&zwnj; ಗಳಿಸುವುದರ ಜೊತೆಗೆ ಗಾಯನ ವಿಷಯದಲ್ಲಿಯೂ ಅತ್ಯುನ್ನತ ಅಂಕಗಳನ್ನು ಪಡೆದಿರುವ ಖ್ಯಾತ ಗಾಯಕಿ ಶಿವಾನಿ ಶಿವದಾಸಸ್ವಾಮಿ ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಿ ಶಿವದಾಸ ಸ್ವಾಮಿ, ಈ ಸಾಧನೆ ತನ್ನ ಜೀವನದ ಮಹತ್ವದ ಮೈಲಿಗಲ್ಲಾಗಿದ್ದು, ದೇಶದಾದ್ಯಂತ ತನ್ನ ಪ್ರತಿಭೆಯನ್ನು ಗುರುತಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಎಂಟು ಪ್ರಶಸ್ತಿಗಳನ್ನು ಪ್ರದಾನ&lt;/strong&gt;&lt;/h2&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದ ದೀಕ್ಷಾಂತ ಸಮಾರಂಭವು ಆಗಸ್ಟ್&zwnj; 22ರಂದು ನವಿಮುಂಬೈನ ವಾಶಿಯ ವಿಷ್ಣುದಾಸ ಭಾವೆ ನಾಟ್ಯಗೃಹದಲ್ಲಿ ನಡೆದಿದ್ದು, ಸಮಾರಂಭದಲ್ಲಿ ತನಗೆ ಪ್ರೀತಮ್&zwnj; ಕೌರ್&zwnj; ಸೌದಿ ಪ್ರಶಸ್ತಿ, ದಿ. ಪಂ. ದಿ.ವಿ.ಪಾಲುಸ್ಕರ್&zwnj; ಪ್ರಶಸ್ತಿ, ಸೌ.ನಳಿನಿ ಪ್ರತಾಪ್ ಕಾನವಿಂದೆ ಪ್ರಶಸ್ತಿ, ಪ್ರಾ. ವಾಸುದೇವ ಚಿಂತಾಮಣಿ ವಾಘಮಾರೆ ಪ್ರಶಸ್ತಿ, ಹರಿಓಂ ಟ್ರಸ್ಟ್&zwnj; (ಗಾಯನ) ಪ್ರಥಮ ಪ್ರಶಸ್ತಿ,, ಶ್ರೀ ಹರಿಶ್ಚಂದ್ರ ಬಾಳಕೃಷ್ಣ ಪೋತದಾರ್&zwnj; ಪ್ರಶಸ್ತಿ,, ಪಂ. ನಾ.ಕೃ. ಕ-ಹಾಡೆ ಸ್ಮೃತಿ ಪ್ರಶಸ್ತಿ ಹಾಗೂ ದಿ.ಸೌ.ಪ್ರಾಜಕ್ತಾ ಪುರುಷೋತ್ತಮ ಕುಲಕರ್ಣಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.&lt;/p&gt;&lt;p&gt;ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮುಂಬೈ ವತಿಯಿಂದ ನವೆಂಬರ್&zwnj;&ndash;ಡಿಸೆಂಬರ್&zwnj; ಅವಧಿಯಲ್ಲಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಇಡೀ ದೇಶದಲ್ಲಿಯೇ ಪ್ರಥಮ ರ&zwj;್ಯಾಂಕ್&zwnj; ಪಡೆದಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಈ ಸಾಧನೆ ನನ್ನೊಬ್ಬಳದ್ದಲ್ಲ. ನನ್ನನ್ನು ಪ್ರೋತ್ಸಾಹಿಸಿದ ಗುರುಗಳು, ತಂದೆ ತಾಯಿ, ಕುಟುಂಬಸ್ಥರು ಹಾಗೂ ಬೀದರ್&zwnj; ಜನರ ಸಹಕಾರವೇ ಇದಕ್ಕೆ ಕಾರಣ ಎಂದು ಶಿವಾನಿ ಹೇಳಿದರು.&lt;/p&gt;&lt;h3&gt;&lt;strong&gt;ಶಿವಾನಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು: ರಾಮಕೃಷ್ಣನ್&zwnj; ಸಾಳೆ:&lt;/strong&gt;&lt;/h3&gt;&lt;p&gt;ಶಿವಾನಿ ಅವರ ಅಪರೂಪದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಅಗತ್ಯ ಸರ್ಕಾರಿ ಸೌಲಭ್ಯ ಹಾಗೂ ಪ್ರೋತ್ಸಾಹ ನೀಡಬೇಕು ಎಂದು ವಿಶ್ವ ಹಿಂದು ಪರಿಷತ್&zwnj;ನ ರಾಮಕೃಷ್ಣನ್&zwnj; ಸಾಳೆ ಒತ್ತಾಯಿಸಿದರು. ಇಂತಹ ಪ್ರತಿಭೆಗಳನ್ನು ಬೆಳೆಸುವ ಮೂಲಕ ಬೀದರ್&zwnj; ಜಿಲ್ಲೆ ಹಾಗೂ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸಬಹುದು. ಶಿವಾನಿ ಅವರು ಇದೀಗ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿ ಗುರುತಿಸಿಕೊಂಡಿದ್ದು, ಅವರಿಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ ಎಂದು ಹೇಳಿದರು.&lt;/p&gt;&lt;h3&gt;&lt;strong&gt;ರಾಷ್ಟ್ರಮಟ್ಟದಲ್ಲಿ ಶಿವಾನಿ ಹೆಸರು ಶಿಫಾರಸ್ಸು ಮಾಡಲಿ - ಪವಾರ್ :&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರವು ಶಿವಾನಿ ಅವರ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಹಾಗೂ ಗೌರವಗಳಿಗೆ ಶಿಫಾರಸು ಮಾಡಬೇಕು ಎಂದು ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ ಡಾ. ರಾಜೇಂದ್ರ ಸಿಂಗ್&zwnj; ಪವಾರ್&zwnj; ಆಗ್ರಹಿಸಿದರು.&lt;/p&gt;&lt;p&gt;ಸಂಗೀತ ಕ್ಷೇತ್ರದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ದೇಶಿಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರ ಹಾಗೂ ಸಮಾಜವು ಶಿವಾನಿ ಅವರ ಪ್ರತಿಭೆಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಕನ್ನಡಾಂಬೆಯ ಗೆಳೆಯರ ಬಳಗದ ಅಧ್ಯಕ್ಷ ವಿರೂಪಾಕ್ಷ ಗಾದಗಿ, ಉದಯ ಪಾಟೀಲ್&zwnj;, ಶಿವಾನಿಯ ತಾಯಿ ಕವಿತಾ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.&lt;/p&gt;&lt;p&gt;--&lt;/p&gt;&lt;p&gt;ಮಗಳಿಗೆ ನಾವು ಜನ್ಮ ನೀಡಿರಬಹುದು ಆದರೆ ಆಕೆಯ ಪ್ರತಿಭೆಯನ್ನು ಬೆಳೆಸುತ್ತಿರುವುದು, ಪ್ರೋತ್ಸಾಹಿಸುತ್ತಿರುವುದು ಹಾಗೂ ಬೆಂಬಲಿಸುತ್ತಿರುವುದು ಇಡೀ ಸಮಾಜ. ಜನರು ನೀಡುತ್ತಿರುವ ಪ್ರೀತಿ ಮತ್ತು ಸಹಕಾರದಿಂದಲೇ ಶಿವಾನಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮುಂದೆಯೂ ಎಲ್ಲರೂ ಸಹಕರಿಸಿ, ಪ್ರೋತ್ಸಾಹಿಸಿ ಎಂದು ಶಿವಾನಿ ತಂದೆ ಶಿವದಾಸ ಸ್ವಾಮಿ ಹೇಳುತ್ತಾರೆ.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/zee-kannada-sa-re-ga-ma-pa-winner-shivani-is-now-cultural-ambassador-winner-of-8-prestigious-awards-mrq/articleshow-b3uiocc"/>
        </item>
        <item>
            <title><![CDATA[ಪ್ರಿಯಾಂಕ್ ಖರ್ಗೆಗೆ ಡಿಸಿಎಂ ನೀಡುವಂತೆ ದೇಗುಲದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದು ವಿಶೇಷ ಪೂಜೆ!]]></title>
            <link>https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</link>
            <guid isPermaLink="true">https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k</guid>
            <pubDate>Sun, 31 May 2026 12:48:57 +0530</pubDate>
            <description><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksycmtjcg3w9g4kwmrkhywkv,imgname-----------------------2026-05-31t121657.592-1780210100812.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಹೊಸ ಸರ್ಕಾರ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಬೀದರ್&zwnj;ನಲ್ಲಿ ಅಭಿಮಾನಿಗಳು ದೇಗುಲಗಳಲ್ಲಿ 101 ತೆಂಗಿನಕಾಯಿಗಳನ್ನ ಹೊಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೈಕಮಾಂಡ್&zwnj;ಗೆ &amp;nbsp;ಒತ್ತಾಯಿಸಿದರು.&lt;/p&gt;&lt;img&gt;&lt;p&gt;ರಾಜ್ಯದಲ್ಲಿ ಸಿಎಲ್&zwnj;ಪಿ ನಾಯಕನ ಆಯ್ಕೆಯ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಉಪಮುಖ್ಯಮಂತ್ರಿ (ಡಿಸಿಎಂ), ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಹುದ್ದೆಗಳಿಗಾಗಿ ತೀವ್ರ ಪೈಪೋಟಿ ಆರಂಭವಾಗಿದೆ. ವಿವಿಧ ಬಣಗಳ ನಾಯಕರು ತಮಗೆ ಬೇಕಾದ ಸ್ಥಾನಗಳಿಗಾಗಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಕೆಲ ಪ್ರಭಾವಿ ನಾಯಕರು ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಲಾಬಿ ನಡೆಸುತ್ತಿದ್ದರೆ, ಇನ್ನು ಹಲವರು ರಾಜ್ಯದ ಪ್ರಮುಖ ನಾಯಕರಾದ ಸಿದ್ದರಾಮಯ್ಯ(Siddaramaiah) ಮತ್ತು ಡಿ.ಕೆ. ಶಿವಕುಮಾರ್(DK Shivakumar) ಅವರಿಗೆ ದುಂಬಾಲು ಬಿದ್ದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ, ಈ ಬಾರಿ ಪ್ರಿಯಾಂಕ್ ಖರ್ಗೆ(Priyank kharge) ಅವರಿಗೆ ಡಿಸಿಎಂ(DCM) ಹುದ್ದೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬರುತ್ತಿದೆ.&lt;/p&gt;&lt;img&gt;&lt;p&gt;ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಪಟ್ಟ ಹಾಗೂ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್(MLC Chandrashekhar patil) ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಬೀದರ್ ಜಿಲ್ಲೆಯಲ್ಲಿ ಅಭಿಮಾನಿಗಳು ಹಲವು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳನ್ನು ಆರಂಭಿಸಿದ್ದಾರೆ. ಬೀದರ್&zwnj;ನ ಹುಮನಾಬಾದ್&zwnj;ನಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಬಳಿಕ ಪ್ರಿಯಾಂಕ್ ಖರ್ಗೆ ಡಿಸಿಎಂ ಸಿಗಲೆಂದು ಬರೋಬ್ಬರಿ 101 ತೆಂಗಿನಕಾಯಿಗಳನ್ನು ಒಡೆದು ಈಡೇರಿಕೆಗಾಗಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.&lt;/p&gt;&lt;img&gt;&lt;p&gt;ಹುಮನಾಬಾದ್&zwnj;ನ ಮತ್ತೊಂದು ಪುರಾತನ ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲೂ ಅಭಿಮಾನಿಗಳು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ವಿಶೇಷ ಅರ್ಚನೆ ಮಾಡಿಸಿದರು. ಪ್ರಿಯಾಂಕ್ ಖರ್ಗೆ ಮತ್ತು ಚಂದ್ರಶೇಖರ್ ಪಾಟೀಲ್ ಅವರ ಭಾವಚಿತ್ರಗಳನ್ನು ಹಿಡಿದು ದೇವಸ್ಥಾನದ ಆವರಣದಲ್ಲಿ ಜಯಘೋಷಗಳನ್ನು ಕೂಗಲಾಯಿತು. ಇಬ್ಬರೂ ನಾಯಕರು ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಉನ್ನತ ಜವಾಬ್ದಾರಿಗಳನ್ನು ನಿಭಾಯಿಸಲು ಸಮರ್ಥರಾಗಿದ್ದು, ಅವರಿಗೆ ಸೂಕ್ತ ಸ್ಥಾನಮಾನ ಸಿಗಬೇಕೆಂದು ಒತ್ತಾಯಿಸಿದರು.&lt;/p&gt;&lt;img&gt;&lt;p&gt;ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರ ಸಹೋದರ ಹಾಗೂ ಪ್ರಸ್ತುತ ಎಂಎಲ್&zwnj;ಸಿ ಆಗಿರುವ ಚಂದ್ರಶೇಖರ್ ಪಾಟೀಲ್ ಅವರಿಗೆ ಈ ಬಾರಿ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಸ್ಥಾನ ನೀಡಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂಎಲ್&zwnj;ಸಿ ಚಂದ್ರಶೇಖರ್ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಯುವಕರ, ಪದವೀಧರರ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಬಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಬೆಂಬಲಿಗರು ಹೈಕಮಾಂಡ್&zwnj;ಗೆ ಆಗ್ರಹಿಸಿದ್ದಾರೆ.&lt;/p&gt;&lt;img&gt;&lt;p&gt;ಮತ್ತೊಂದೆಡೆ, ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಅಭಿವೃದ್ಧಿ ಆಧಾರಿತ ರಾಜಕಾರಣವನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕ್ಷೇತ್ರದಾದ್ಯಂತ ಮತ್ತು ರಾಜ್ಯ ಮಟ್ಟದಲ್ಲಿ ಅವರು ಮಾಡುತ್ತಿರುವ ಜನಪರ ಕೆಲಸಗಳನ್ನು ಗಮನಿಸಿ, ಅವರಿಗೆ ಈ ಬಾರಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಯನ್ನು ನೀಡಲೇಬೇಕು ಎಂದು ಬೀದರ್ ನಾಯಕರು ಒತ್ತಾಯಿಸಿದ್ದಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡುವುದರಿಂದ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ರಾಜಕೀಯ ಬಲ ಸಿಗಲಿದ್ದು, ಪಕ್ಷದ ಸಂಘಟನೆಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/priyank-kharge-supporters-special-pooja-veerabhadreshwar-temple-demand-dcm-post-rav-ch5w05k"/>
        </item>
        <item>
            <title><![CDATA[ವಂದೇ ಮಾತರಂ, ಭಾರತ್ ಮಾತಾಕೀ ಜೈ ಎಂದ ವಿದ್ಯಾರ್ಥಿಗೆ ಬೆದರಿಕೆ ಆರೋಪ, ಶಾಹೀನ್ ಶಾಲೆ ಪ್ರಾಂಶುಪಾಲ ವಿರುದ್ಧ FIR]]></title>
            <link>https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9</link>
            <guid isPermaLink="true">https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9</guid>
            <pubDate>Thu, 20 Aug 2026 11:13:59 +0530</pubDate>
            <description><![CDATA[&lt;p&gt;ಬೀದರ್&zwnj;ನ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು 'ವಂದೇ ಮಾತರಂ' ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಪ್ರಾಂಶುಪಾಲರೇ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಾಂಶುಪಾಲರ ವಿರುದ್ಧ ಎಫ್&zwnj;ಐಆರ್.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0etxe9vfd5as1g3pfzj6n17,imgname-----------------------2026-08-20t110927.052-1787204385083.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಆ.20): &lt;/strong&gt;ವಂದೇ ಮಾತರಂ, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿದ ವಿದ್ಯಾರ್ಥಿಗೆ ಬೆದರಿಕೆ ಆಘಾತಕಾರಿ ಘಟನೆ ಬೀದರ್&zwnj; ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಶಾಹೀನ್ ಕಾಲೇಜಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಇತ್ತೀಚೆಗೆ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಈ ಘಟನೆ ನಡೆದಿದೆ. ರಾಷ್ಟ್ರ ಧ್ವಜಾರೋಹಣ ಬಳಿಕ ಪಿಯು ವಿದ್ಯಾರ್ಥಿ ಸಾಗರ್ ಗೌಳಿ ಭಾರತ್ ಮಾತಾಕಿ ಜೈ, ವಂದೇ ಮಾತರಂ.. ಘೋಷಣೆಯನ್ನ ಕೂಗಿದ್ದ. ಆದರೆ ಈ ಘೋಷಣೆಯನ್ನು ಕೂಗಿದ್ದಕ್ಕೆ ಯಾವುದೋ ಪುಂಡ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಲ್ಲ. ಆ ಶಾಲೆಯ ಪ್ರಾಂಶುಪಾಲರೇ ವಿದ್ಯಾರ್ಥಿ ಸಾಗರ್&zwnj; ಗೌಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಆಘಾತ ಹುಟ್ಟಿಸಿದೆ.&lt;/p&gt;&lt;h2&gt;ಇನ್ನೊಮ್ಮೆ ವಂದೇ ಮಾತರಂ ಘೋಷಣೆ ಕೂಗಿದ್ರೆ ಹುಷಾರ್!&lt;/h2&gt;&lt;p&gt;ಶಾಹೀನ್ ಶಾಲೆಯ ಪ್ರಾಂಶುಪಾಲ ಅಬ್ದುಲ್ ಹಕೀಮ್ ವಿರುದ್ಧ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದು, 'ಇದು(ವಂದೇ ಮಾತರಂ)ಒಂದು ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆಯಾಗಿದ್ದು, ಈ ರೀತಿಯ ಘೋಷಣೆಗಳು ನಮ್ಮ ಕಾಲೇಜಿನಲ್ಲಿ ನಡೆಯುವುದಿಲ್ಲ. ಇನ್ನೊಮ್ಮೆ ಕೂಗಬೇಡ' ಎಂದು ವಿದ್ಯಾರ್ಥಿ ಸಾಗರ್ ಗೌಳಿಗೆ ಬೆದರಿಕೆ ಹಾಕಿದ್ದಾರೆ. ಶಾಹೀನ್ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮ್ ವಿದ್ಯಾರ್ಥಿಗಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲ ಧರ್ಮದ ಆಧಾರದ ಮೇಲೆ ವಿದ್ಯಾರ್ಥಿಗಳ ನಡುವೆ ವೈಮನಸು ಮೂಡಿಸಿದ್ದಲ್ಲದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಂದೆ ಎಂಬ ಆರೋಪಿಸಿದ್ದಾರೆ.&lt;/p&gt;&lt;h3&gt;ವಿದ್ಯಾರ್ಥಿಯಿಂದ ಪೊಲೀಸ್ ಠಾಣೆಗೆ ದೂರು:&lt;/h3&gt;&lt;p&gt;ವಂದೇ ಮಾತರಂ, ಭಾರತ್ ಮಾತಕೀ ಜೈ ಘೋಷಣೆ ಕೂಗಿದ್ದಕ್ಕೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಾಗರ್ ಗೌಳಿ ತಂದೆ ಹಿರೋಬಾ ಗೌಳಿ ಚಿಟಗುಪ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿಯ ದೂರಿನನ್ವಯ ಪ್ರಾಂಶುಪಾಲರ ಅಬ್ದುಲ್ ಹಕೀಮ್ ವಿರುದ್ಧ ಎಫ್&zwnj;ಐಆರ್ ದಾಖಲಿಸಲಾಗಿದೆ.&lt;/p&gt;&lt;p&gt;ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಹೀನ್ ಶಾಲೆ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಎಫ್&zwnj;ಐಆರ್ ದಾಖಲಾಗಿದ್ದು,ಚಿಟಗುಪ್ಪಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಶಾಲೆಯ ಪ್ರಾಂಶುಪಾಲರಾಗಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ ಆ ಮೂಲದ ದೇಶದ ಬಗ್ಗೆ ಅವರಿಗಿರುವ ನಿಷ್ಠೆಯನ್ನ ನಾಗರಿಕರು ಪ್ರಶ್ನಿಸಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/vande-mataram-bharat-mata-ki-jai-slogans-fir-against-shaheen-school-principal-over-alleged-student-bidar-rav/articleshow-ckx52k9"/>
        </item>
        <item>
            <title><![CDATA['ಹೆಣ್ಣೇ ಸಮಾಜದ ಶಕ್ತಿ': ಅಕ್ಕಪಡೆ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಸಂದೇಶ]]></title>
            <link>https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp</link>
            <guid isPermaLink="true">https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp</guid>
            <pubDate>Mon, 06 Jul 2026 18:24:58 +0530</pubDate>
            <description><![CDATA[&lt;p&gt;Women Empowerment Karnataka: ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwvqxfqrjptekx4qycqa8s3r,imgname-vj-1783342481144.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಜು.06): &lt;/strong&gt;ಕಲ್ಯಾಣ ಕರ್ನಾಟಕ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬಸವಕಲ್ಯಾಣದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಹಿಳಾ ಸುರಕ್ಷತೆ, ಸಬಲೀಕರಣ ಮತ್ತು ರಾಜ್ಯದ ಮಹತ್ವಾಕಾಂಕ್ಷೆಯ ಅನುಭವ ಮಂಟಪ ಯೋಜನೆ ಕುರಿತು ಅವರು ಮಹತ್ವದ ಸಂದೇಶಗಳನ್ನು ನೀಡಿದರು.&lt;/p&gt;&lt;p&gt;&lt;strong&gt;'ಹೆಣ್ಣೇ ಸಮಾಜದ ಶಕ್ತಿ' ಎಂದ ಡಿಕೆಶಿ&lt;/strong&gt;&lt;/p&gt;&lt;p&gt;ಅಕ್ಕಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮಹಿಳೆಯರೇ ಕುಟುಂಬ ಮತ್ತು ಸಮಾಜದ ಶಕ್ತಿ ಎಂದು ಬಣ್ಣಿಸಿದರು. &quot;ಹೆಣ್ಣು ಕುಟುಂಬದ ಕಣ್ಣು. ಹೆಣ್ಣಿಲ್ಲದೆ ಕುಟುಂಬವೂ ಇಲ್ಲ, ಸಮಾಜವೂ ಇಲ್ಲ. ಹೆಣ್ಣು ಎಂದರೆ ಭೂಮಿ, ಧೈರ್ಯ, ಭರವಸೆ, ಒಗ್ಗಟ್ಟು ಮತ್ತು ಬೆಳಕು. ನಾರಿ ಶಕ್ತಿಯೇ ಈ ದೇಶದ ಶಕ್ತಿ&quot; ಎಂದು ಹೇಳಿದರು. ರಾಜ್ಯ ಸರ್ಕಾರ ಮಹಿಳೆಯರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬುದು ಸರ್ಕಾರದ ಆಶಯ ಎಂದು ತಿಳಿಸಿದರು.&lt;/p&gt;&lt;p&gt;ಮಹಿಳೆಯರ ಸುರಕ್ಷತೆಗಾಗಿ ಆರಂಭವಾದ ಅಕ್ಕಪಡೆ ಇಂದು ರಾಜ್ಯಾದ್ಯಂತ ವಿಸ್ತರಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯವನ್ನು ಮೆಚ್ಚಿದ ಅವರು, ಅಕ್ಕಪಡೆ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಮಹಿಳಾ ಸಂಘಟನೆಗಳು ಬಲಿಷ್ಠವಾಗಬೇಕು. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಪಂಚಾಯಿತಿಯಿಂದ ಸಂಸತ್ತಿನವರೆಗೂ ಮಹಿಳೆಯರು ನಾಯಕತ್ವ ವಹಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.&lt;/p&gt;&lt;p&gt;ಇದೇ ವೇಳೆ ದೇಶದ ಐಕ್ಯತೆ, ಶಾಂತಿ ಮತ್ತು ಯುವಜನರನ್ನು ಸಂಘಟಿಸುವ ಉದ್ದೇಶದಿಂದ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು. ಬರ ಪರಿಸ್ಥಿತಿಯ ಪರಿಶೀಲನೆಗಾಗಿ ತಮ್ಮ ಪ್ರವಾಸವನ್ನು ಬಸವಕಲ್ಯಾಣದಿಂದಲೇ ಆರಂಭಿಸಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದರು.&lt;/p&gt;&lt;h2&gt;&lt;strong&gt;₹742 ಕೋಟಿ ಅನುಭವ ಮಂಟಪ ಕಾಮಗಾರಿಗೆ ಪರಿಶೀಲನೆ&lt;/strong&gt;&lt;/h2&gt;&lt;p&gt;ಇದಾದ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ₹742 ಕೋಟಿ ವೆಚ್ಚದ ನೂತನ ಅನುಭವ ಮಂಟಪ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದರು. ಕಾಮಗಾರಿಯ ಪ್ರಗತಿ, ನಿರ್ಮಾಣದ ಗುಣಮಟ್ಟ ಹಾಗೂ ವಿವಿಧ ಹಂತಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದ ಅವರು, ಸ್ಥಳದಲ್ಲೇ ಸಭೆ ನಡೆಸಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.&lt;/p&gt;&lt;p&gt;ಸಚಿವರಾದ ಈಶ್ವರ್ ಖಂಡ್ರೆ ಹಾಗೂ ಶರಣಪ್ರಕಾಶ್ ಪಾಟೀಲ್ ಕೂಡ ಈ ವೇಳೆ ಉಪಸ್ಥಿತರಿದ್ದು, ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಸವ ತತ್ವ, ವಚನ ಸಂಸ್ಕೃತಿ ಹಾಗೂ ಅನುಭವ ಮಂಟಪದ ಐತಿಹಾಸಿಕ ವೈಭವವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಪ್ರತಿಷ್ಠಿತ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಯೋಜನೆಯಾಗಿ ರೂಪಿಸುತ್ತಿದ್ದು, ಕಾಮಗಾರಿಗೆ ಮತ್ತಷ್ಟು ವೇಗ ನೀಡಲು ಸರ್ಕಾರ ಒತ್ತು ನೀಡಿದೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-on-women-empowerment-in-bidar-gvd/articleshow-cumsvhp"/>
        </item>
        <item>
            <title><![CDATA[ಅನುಮಾನಾಸ್ಪದವಾಗಿ 'ಮಜಾ ಭಾರತ' ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ನಿಧನ; ಶವ ಪತ್ತೆ]]></title>
            <link>https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</link>
            <guid isPermaLink="true">https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f</guid>
            <pubDate>Tue, 16 Jun 2026 05:30:34 +0530</pubDate>
            <description><![CDATA[ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಪರಸನೂರು ಬೀದರ್&zwnj;ನಲ್ಲಿ ನಿಧನರಾಗಿದ್ದಾರೆ. ಹುಮ್ನಾಬಾದ್ ಹೊರವಲಯದಲ್ಲಿ ಅವರ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv6ved5ykgzzvcqzcrf673kb,imgname-siddu-1781567796414.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ಮಜಾ ಭಾರತ ಖ್ಯಾತಿಯ ಹಾಸ್ಯ ಕಲಾವಿದ ಸಿದ್ದು ಉರ್ಫ್ ಸಿದ್ಧಾರ್ಥ್ ಪರಸನೂರು ನಿಧನರಾಗಿದ್ದಾರೆ. ಸಿದ್ದು ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೀದರ್ ಜಿಲ್ಲೆಯ ನಿವಾಸಿಯಾಗಿದ್ದ ಸಿದ್ದು ಪರಸನೂರು ಹುಮ್ನಾಬಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ವಾಸವಾಗಿದ್ದರು.&lt;/p&gt;&lt;h2&gt;&lt;strong&gt;ಸಾವಿನ ಸುತ್ತ ಅನುಮಾನ&lt;/strong&gt;&lt;/h2&gt;&lt;p&gt;ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿ ಸಿದ್ದು ಅವರ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಿದ್ದು ಅವರದ್ದು ಸಹಜ ಸಾವು ಅಲ್ಲ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಶಾಕ್&zwnj;ನಿಂದ ಸಾವು ಸಂಭವಿಸಿರುವ ಸಾಧ್ಯತೆಗಳಿವೆ.&lt;/p&gt;&lt;p&gt;ಈ ಸಂಬಂಧ ಹುಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಜಾ ಭಾರತ ರಿಯಾಲಿಟಿ ಶೋ ಸಿದ್ದು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ನಂತರ ಕಾಮಿಡಿ ಕಿಲಾಡಿಗಳು ಶೋನಲ್ಲಿ ಕಾಣಿಸಿಕೊಂಡಿದ್ದರು. 'ಕುಲದಲ್ಲಿ ಕೀಳ್ಯಾವುದೋ ಸಿನಿಮಾದಲ್ಲಿಯೂ ಸಿದ್ದು ನಟಿಸಿದ್ದಾರೆ. ವಿಭಿನ್ನ ಹಾಗೂ ಸಹಜವಾದ ಹಾಸ್ಯ ಶೈಲಿಗೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಿದ್ದು ಪರಸನೂರು ಹೊಂದಿದ್ದರು.&lt;/p&gt;]]></content:encoded>
            <category>bidar</category>
            <dc:creator>Mahmad Rafik</dc:creator>
            <atom:link href="https://kannada.asianetnews.com/tv-talk/bidar-humnabad-comedian-sidhu-parasanur-of-maja-bharat-fame-dies-suspiciously-mrq/articleshow-ff39u6f"/>
        </item>
        <item>
            <title><![CDATA[ಟ್ಯಾಂಕರ್-ಆಟೋ ಮಧ್ಯೆ ಭೀಕರ ಅಪಘಾತ.. ಬೀದರ್‍‌ ಮೂಲದ ಆರು ಮಂದಿ ದಾರುಣ ಸಾವು]]></title>
            <link>https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var</link>
            <guid isPermaLink="true">https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var</guid>
            <pubDate>Tue, 11 Aug 2026 23:23:21 +0530</pubDate>
            <description><![CDATA[&lt;p&gt;ತೆಲಂಗಾಣದ ಸಂಗಾರೆಡ್ಡಿಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಬೀದರ್&zwnj;ನ 6 ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಒಂದೇ ಆಟೋದಲ್ಲಿ 14 ಜನ ಪ್ರಯಾಣಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತಕ್ಕೆ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrz5zcwxv0ha7h6hwm5vscf,imgname-bidar-accident-1786470661530.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಗಾರೆಡ್ಡಿ (ತೆಲಂಗಾಣ):&lt;/strong&gt; ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ಮೂಲದ ಆರು ಮಂದಿ ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಟ್ಯಾಂಕರ್ ಲಾರಿ ಮತ್ತು ಆಟೋ ನಡುವೆ ನಡೆದ ಈ ಭೀಕರ ಡಿಕ್ಕಿಯಿಂದ ದುರಂತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಜಮೀನು ಕೆಲಸ ಮುಗಿಸಿ ಮರಳುವಾಗ ದುರ್ಘಟನೆ..&lt;/strong&gt;&lt;/h2&gt;&lt;p&gt;ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಕೂಲಿ ಕಾರ್ಮಿಕರು ಪ್ರತಿನಿತ್ಯ ಜಮೀನಿನ ಕೆಲಸಕ್ಕಾಗಿ ತೆಲಂಗಾಣಕ್ಕೆ ತೆರಳುತ್ತಿದ್ದರು. ಎಂದಿನಂತೆ ಮೊಗುಡಂಪಳ್ಳಿ ಮಂಡಲದ ಸತ್ವೇರ್ ಗ್ರಾಮದ ಜಮೀನಿನಲ್ಲಿ ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಒಂದೇ ಆಟೋದಲ್ಲಿ ಚಾಲಕ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಸತ್ವೇರ್ ಗ್ರಾಮದ ಹೊರವಲಯದ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ಯಾಂಕರ್ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, 6 ಮಂದಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ಈ ಭೀಕರ ಅಪಘಾತದಲ್ಲಿ ರಾಜಗೀರಾ ಗ್ರಾಮದ ರೇಖಾ, ಶ್ರೀದೇವಿ, ಕವಿತಾ, ರೇಷ್ಮಾ ಮತ್ತು ಆಟೋ ಚಾಲಕ ದೇವದಾಸ್ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದ ಎಂಟು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರಲ್ಲಿ ನಿರ್ಮಲಾ, ನಿಖಿತಾ, ತುಳಜಮ್ಮ, ಚಂದ್ರಕಲಾ, ರಾಧಿಕಾ, ಶಿಲ್ಪಾ ಹಾಗೂ ಶೋಭಾ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸಂಗಾರೆಡ್ಡಿ ಮತ್ತು ಬೀದರ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಬಡತನದ ನಡುವೆಯೂ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜಗೀರಾ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರ ಕಣ್ಣಾಲಿಗಳು ತೇವಗೊಂಡಿವೆ.&lt;/p&gt;&lt;h2&gt;&lt;strong&gt;ಸಚಿವ ಈಶ್ವರ್ ಖಂಡ್ರೆ ಸಾಂತ್ವನ&lt;/strong&gt;&lt;/h2&gt;&lt;p&gt;ಕೂಲಿ ಕಾರ್ಮಿಕರ ಈ ದಾರುಣ ಸಾವಿಗೆ ಅರಣ್ಯ ಸಚಿವ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಈ ಘಟನೆಯು ಅತಿಯಾದ ಪ್ರಯಾಣಿಕರನ್ನು ಹೊತ್ತೊಯ್ಯುವ ಆಟೋಗಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ. ತೆಲಂಗಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bidar/telangana-road-horror-6-workers-from-bidar-die-in-deadly-collision-on-national-highway-65-gkn/articleshow-hhe3var"/>
        </item>
        <item>
            <title><![CDATA[KPSC ಅಕ್ರಮ; ಜಿಪಂ ಮಾಜಿ ಸಿಇಒ ಜ್ಞಾನೇಂದ್ರಕುಮಾರ್ ಅರೆಸ್ಟ್ ಬೆನ್ನಲ್ಲೇ, ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದ CID!]]></title>
            <link>https://kannada.asianetnews.com/karnataka-districts/kpsc-scam-jp-ceo-jnanendra-kumar-arrest-bjp-mla-personal-assistant-detained-by-cid-bmk/articleshow-ifkcot7</link>
            <guid isPermaLink="true">https://kannada.asianetnews.com/karnataka-districts/kpsc-scam-jp-ceo-jnanendra-kumar-arrest-bjp-mla-personal-assistant-detained-by-cid-bmk/articleshow-ifkcot7</guid>
            <pubDate>Mon, 31 Aug 2026 16:34:41 +0530</pubDate>
            <description><![CDATA[&lt;p&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ, ಸಿಐಡಿ ಅಧಿಕಾರಿಗಳು ಬಿಜೆಪಿ ಶಾಸಕನ ಆಪ್ತ ಸಹಾಯಕನನ್ನು ವಶಕ್ಕೆ ಪಡೆದಿದ್ದಾರೆ. ಈತ ಈ ಹಿಂದೆ ಬಂಧಿತರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ಮತ್ತು ಉದ್ಯೋಗಾಕಾಂಕ್ಷಿಗಳ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದ ಎಂಬ ಆರೋಪವಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bqttdq3dhprt523nvxqrb8,imgname-kpsc-scam-1788174231991.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ಮರುಜೀವ ಪಡೆಯುತ್ತಿದ್ದು, ತನಿಖೆ ತೀವ್ರಗೊಂಡಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ IAS ಅಧಿಕಾರಿ ಜ್ಞಾನೇಂದ್ರ&zwnj;ಕುಮಾರ್ ಅವರನ್ನು ಬಂಧಿಸಿದ ಬೆನ್ನಲ್ಲೇ, ಪ್ರಕರಣದ ಪ್ರಮುಖ ಕೊಂಡಿಯಾಗಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ಬಸವರಾಜ್&zwnj; ಕನ್ನಾಳೆ ಎಂಬುವವರನ್ನು ಸಿಐಡಿ (CID) ತಂಡ ವಶಕ್ಕೆ ಪಡೆದುಕೊಂಡಿದೆ.&lt;/p&gt;&lt;h2&gt;&lt;strong&gt;IAS ಅಧಿಕಾರಿ ಮತ್ತು ಬಸವರಾಜ್&zwnj; ನಡುವಿನ ಲಿಂಕ್!&lt;/strong&gt;&lt;/h2&gt;&lt;p&gt;ಬಂಧಿತ IAS ಅಧಿಕಾರಿ ಜ್ಞಾನೇಂದ್ರ&zwnj;ಕುಮಾರ್ ಅವರು 2018 ರಿಂದ 2019 ರವರೆಗೆ ಸುಮಾರು 11 ತಿಂಗಳುಗಳ ಕಾಲ ಬಸವಕಲ್ಯಾಣದಲ್ಲಿ ಎಸಿ (AC) ಆಗಿ ಕರ್ತವ್ಯ ನಿರ್ವಹಿಸಿದ್ದರು. ತದನಂತರ 2020-21 ರಲ್ಲಿ ಬೀದರ್&zwnj; ಜಿಲ್ಲಾ ಪಂಚಾಯ್ತಿ ಸಿಇಒ (CEO) ಆಗಿ ಕಾರ್ಯನಿರ್ವಹಿಸಿದ್ದರು. ಇದೇ ಅವಧಿಯಲ್ಲಿ ಬಸವರಾಜ್&zwnj; ಕನ್ನಾಳೆ, ಪ್ರಸ್ತುತ ಬಿಜೆಪಿ ಶಾಸಕರಾಗಿರುವ ಡಾ.ಶೈಲೇಂದ್ರ ಬೆಲ್ದಾಳೆ ಅವರ ಪಿಎ ಆಗಿ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಜ್ಞಾನೇಂದ್ರ&zwnj;ಕುಮಾರ್ ಅವರೊಂದಿಗೆ ಬಸವರಾಜ್ ಅತ್ಯಂತ ನಿಕಟ ಹಾಗೂ ಉತ್ತಮ ಒಡನಾಟ ಬೆಳೆಸಿಕೊಂಡಿದ್ದ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಮಧ್ಯವರ್ತಿಯಾಗಿ ಕೋಟಿ ಕೋಟಿ ಸಂಪಾದನೆ!&lt;/strong&gt;&lt;/h3&gt;&lt;p&gt;ಈ ಪರಿಚಯವನ್ನೇ ಬಂಡವಾಳ ಮಾಡಿಕೊಂಡ ಬಸವರಾಜ್&zwnj; ಕನ್ನಾಳೆ, KPSC ಪಶುವೈದ್ಯಾಧಿಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ IAS ಅಧಿಕಾರಿ ಜ್ಞಾನೇಂದ್ರ ಮತ್ತು ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳ ನಡುವೆ ಪ್ರಮುಖ &lsquo;ಮಧ್ಯವರ್ತಿ&rsquo;ಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದನು. ಬೀದರ್ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅನೇಕ ಅಭ್ಯರ್ಥಿಗಳಿಂದ ಹಣ ಪಡೆದು ಉದ್ಯೋಗ ಕೊಡಿಸುವಲ್ಲಿ ಈತ ಭಾಗಿಯಾಗಿದ್ದನೆಂಬ ಗಂಭೀರ ಆರೋಪ ಕೇಳಿಬಂದಿದೆ. ಕೇವಲ ನಾಲ್ಕೈದು ವರ್ಷಗಳ ಅವಧಿಯಲ್ಲಿ ಈತ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಗಳಿಸಿದ್ದು, ತನ್ನ ತಂದೆಯ ವಯೋನಿವೃತ್ತಿಯ ಶುಭ ಸಂದರ್ಭದಲ್ಲಿ ಐಷಾರಾಮಿ &lsquo;ಇನ್ನೋವಾ&rsquo; ಕಾರನ್ನು ಉಡುಗೊರೆಯಾಗಿ ನೀಡಿದ್ದನೆನ್ನಲಾಗಿದೆ. ಈತನ ಹಠಾತ್ ಶ್ರೀಮಂತಿಕೆ ಈಗ ಸಿಐಡಿ ತನಿಖೆಯ ಮುಖ್ಯ ವಸ್ತುವಾಗಿದೆ.&lt;/p&gt;&lt;h3&gt;&lt;strong&gt;ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನೀಡಿದ ಸ್ಪಷ್ಟನೆ!&lt;/strong&gt;&lt;/h3&gt;&lt;p&gt;ಬಸವರಾಜ್&zwnj; ಕನ್ನಾಳೆ ಸಿಐಡಿ ವಶಕ್ಕೆ ಒಳಗಾಗುತ್ತಿದ್ದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. &quot;ಈ ಅಕ್ರಮದ ಕುರಿತು ಸಂಪೂರ್ಣ ಸಿಐಡಿ ತನಿಖೆಯಾಗಲಿ ಮತ್ತು ಸತ್ಯಾಸತ್ಯತೆ ಶೀಘ್ರವೇ ಹೊರಬರಲಿ&quot; ಎಂದು ಒತ್ತಾಯಿಸಿದ್ದಾರೆ.&lt;/p&gt;&lt;h3&gt;&lt;strong&gt;ಉದ್ಯೋಗ ಕೊಡಿಸಿದ ಮಾಹಿತಿ ನನಗಿಲ್ಲ!&lt;/strong&gt;&lt;/h3&gt;&lt;p&gt;ಬಸವರಾಜ್&zwnj; ಕುರಿತು ಮಾತನಾಡಿದ ಶಾಸಕರು, ಆತ ಹಿಂದೆ ನನ್ನ ಬಳಿಯೂ ಬರುತ್ತಿದ್ದ, ಆಪ್ತನಾಗಿದ್ದ ನಿಜ. ಆದರೆ ಆತನೊಂದಿಗೆ ನನಗೆ ಯಾವುದೇ ರೀತಿಯ ವ್ಯವಹಾರಿಕ ಅಥವಾ ಹಣಕಾಸಿನ ಸಂಬಂಧ ಇರಲಿಲ್ಲ. ಆತ ಬಿಜೆಪಿಯ ಅಧಿಕೃತ ಮುಖಂಡನೂ ಅಲ್ಲ, ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲೂ ಇಲ್ಲ. ಆತನಿಗೆ ರಾಜಕೀಯದಲ್ಲಿ ಎಲ್ಲರ ಜೊತೆಗೂ ಒಡನಾಟ ಇಟ್ಟುಕೊಳ್ಳುವ ಅಭ್ಯಾಸವಿತ್ತು. ಕೇವಲ ನನ್ನ ಬಳಿ ಮಾತ್ರವಲ್ಲದೆ ಈಶ್ವರ್ ಖಂಡ್ರೆ ಹಾಗೂ ಜಿ.ಪರಮೇಶ್ವರ್ ಅವರಂತಹ ಪ್ರಭಾವಿ ನಾಯಕರ ಜೊತೆಯೂ ಆತನಿಗೆ ಒಳ್ಳೆಯ ಸಂಬಂಧವಿತ್ತು. ಆತ ಯಾರಿಗೆಲ್ಲಾ ಉದ್ಯೋಗ ಕೊಡಿಸಿದ್ದಾನೆ ಎಂಬ ಮಾಹಿತಿ ನನಗಿಲ್ಲ. ಈ ಅಕ್ರಮದಲ್ಲಿ ಯಾರಿದ್ದಾರೆ, ಏನು ನಡೆದಿದೆ ಎಂಬುದು ನಿಷ್ಪಕ್ಷಪಾತ ತನಿಖೆಯಿಂದಷ್ಟೇ ಹೊರಬರಬೇಕಿದೆ ಎಂದು ಶಾಸಕ ಬೆಲ್ದಾಳೆ ಹೇಳಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/kpsc-scam-jp-ceo-jnanendra-kumar-arrest-bjp-mla-personal-assistant-detained-by-cid-bmk/articleshow-ifkcot7"/>
        </item>
        <item>
            <title><![CDATA[Bidar BRIMS hospital crime: ಪೋಸ್ಟ್‌ ಮಾರ್ಟ್‌ಮ್‌ ವೇಳೆ ಹೆಣ್ಣು ಶವಗಳ ಬೆತ್ತಲೆ ಚಿತ್ರ ಸೆರೆಹಿಡಿಯುತ್ತಿದ್ದ ಅಟೆಂಡರ್ ಅರೆಸ್ಟ್]]></title>
            <link>https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</link>
            <guid isPermaLink="true">https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5</guid>
            <pubDate>Sat, 30 May 2026 09:12:01 +0530</pubDate>
            <description><![CDATA[ಬೀದರ್&zwnj;ನ ಬ್ರಿಮ್ಸ್&zwnj; ಆಸ್ಪತ್ರೆಯ ಶವಾಗಾರದಲ್ಲಿ, ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತೆಗೆಯುತ್ತಿದ್ದ ಅಟೆಂಡರ್&zwnj;ನನ್ನು ಬಂಧಿಸಲಾಗಿದೆ. ಆಸ್ಪತ್ರೆ ಆಡಳಿತ ಮಂಡಳಿ ದೂರು ನೀಡಿದ ನಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvf511ys88d1qmvq5ffjhpk,imgname-----------------------2026-05-30t090355.165-1780112065598.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೀದರ್&zwnj;ನ ಬ್ರಿಮ್ಸ್&zwnj; (BRIMS) ಜಿಲ್ಲಾಸ್ಪತ್ರೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದ್ದು, ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್&zwnj;ನೊಬ್ಬ ಪೋಸ್ಟ್&zwnj;ಮಾರ್ಟ್&zwnj;ಮ್&zwnj; ವೇಳೆ ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್&zwnj;ನಲ್ಲಿ ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.&lt;/p&gt;&lt;p&gt;ಆರೋಪಿ ಮುನೀರ್&zwnj; ಅಹ್ಮದ್&zwnj; ಹಲವು ವರ್ಷಗಳಿಂದ ಆಸ್ಪತ್ರೆಯ ಶವಾಗಾರ ವಿಭಾಗದಲ್ಲಿ ಅಟೆಂಡರ್&zwnj; ಆಗಿ ಕೆಲಸ ಮಾಡುತ್ತಿದ್ದಾನೆ. ಪೋಸ್ಟ್&zwnj;ಮಾರ್ಟ್&zwnj;ಮ್&zwnj; ಪ್ರಕ್ರಿಯೆ ನಡೆಯುವ ವೇಳೆ ಮಹಿಳಾ ಶವಗಳ ಫೋಟೋಗಳನ್ನು ರಹಸ್ಯವಾಗಿ ತೆಗೆದು ಸಂಗ್ರಹಿಸಿಡುತ್ತಿದ್ದನೆಂಬ ವಿಚಾರ ತಿಳಿದು ಆಸ್ಪತ್ರೆ ಸಿಬ್ಬಂದಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಆರೋಪಿಯ ಮೊಬೈಲ್&zwnj; ಫೋನ್&zwnj; ಪರಿಶೀಲಿಸಿದಾಗ ಹಲವು ಮಹಿಳಾ ಮೃತದೇಹಗಳ ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ವರ್ಷಗಳಿಂದ ಇದೇ ರೀತಿಯ ವಿಕೃತ ಕೃತ್ಯ ಎಸಗುತ್ತಿದ್ದಾನೆಯೇ ಎಂಬ ಅನುಮಾನ ಮೂಡಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪ್ರಕರಣದ ಗಂಭೀರತೆಯನ್ನು ಮನಗಂಡ ಬ್ರಿಮ್ಸ್&zwnj; ಮುಖ್ಯಸ್ಥ ಡಾ. ಮೊಸಿನ್&zwnj; ಉಲ್&zwnj; ಹಕ್&zwnj; ಅವರು ನ್ಯೂಟೌನ್&zwnj; ಪೊಲೀಸ್&zwnj; ಠಾಣೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮುನೀರ್&zwnj; ಅಹ್ಮದ್&zwnj;ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಮತ್ತು ಗೌರವಯುತ ಸ್ಥಳದಲ್ಲಿ ನಡೆದಿರುವ ಈ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Ravi Janekal</dc:creator>
            <atom:link href="https://kannada.asianetnews.com/crime/bidar-brims-attender-arrested-for-capturing-female-body-nude-photos-during-post-mortems-rav/articleshow-ly6kkc5"/>
        </item>
        <item>
            <title><![CDATA[ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ: ಬಿಜೆಪಿ ವಿರುದ್ಧ ಸಿಎಂ ಡಿಕೆಶಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6</link>
            <guid isPermaLink="true">https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6</guid>
            <pubDate>Mon, 06 Jul 2026 23:47:59 +0530</pubDate>
            <description><![CDATA[&lt;p&gt;ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kww8fr199rqc444bvyh4z0yt,imgname-bj-1783359856680.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಜು.06): &lt;/strong&gt;ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಗಳ ಸೌಲಭ್ಯ ತಲುಪುವಂತೆ ಮರುಪರಿಶೀಲನೆ ನಡೆಯುತ್ತಿದ್ದು, ಇದನ್ನು ಗ್ಯಾರಂಟಿ ರದ್ದು ಎಂದು ಯಾರೂ ಅರ್ಥೈಸಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಬೀದರ್&zwnj;ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿವೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;'ಗ್ಯಾರಂಟಿ ನಿಲ್ಲುವುದಿಲ್ಲ'&lt;/strong&gt;&lt;/p&gt;&lt;p&gt;&quot;ಇಂದಿನ ದಿನ ನನ್ನ ಬದುಕಿನಲ್ಲಿ ಶಾಶ್ವತವಾಗಿ ನೆನಪಿಡುವ ದಿನ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ ನಾಯಕರು ನಮ್ಮನ್ನು ಟೀಕಿಸಿ ನಕ್ಕಿದ್ದರು. ಆದರೆ ಇಂದು ಅದೇ ಬಿಜೆಪಿ ವಿವಿಧ ರಾಜ್ಯಗಳಲ್ಲಿ ಗ್ಯಾರಂಟಿಗಳ ಮಾತನ್ನಾಡುತ್ತಿದೆ. ಕರ್ನಾಟಕ ಸರ್ಕಾರದ ಗ್ಯಾರಂಟಿ ಮಾದರಿಯೇ ದೇಶದ ಗಮನ ಸೆಳೆದಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸದಿಂದಲೇ ಈ ಯೋಜನೆಗಳು ಯಶಸ್ವಿಯಾಗಿವೆ&quot; ಎಂದು ಸಿಎಂ ಹೇಳಿದರು.&lt;/p&gt;&lt;p&gt;ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆ ನಡೆಯುತ್ತಿದೆ ಎಂಬ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಅವರು, &quot;ಮರುಪರಿಶೀಲನೆ ಎಂದರೆ ಯೋಜನೆಗಳನ್ನು ಸ್ಥಗಿತಗೊಳಿಸುವುದಲ್ಲ. ಸರ್ಕಾರದ ಉದ್ದೇಶ ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸುವುದು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ&quot; ಎಂದು ಭರವಸೆ ನೀಡಿದರು.&lt;/p&gt;&lt;p&gt;&lt;strong&gt;ಬಿಜೆಪಿ ವಿರುದ್ಧ ವಾಗ್ದಾಳಿ&lt;/strong&gt;&lt;/p&gt;&lt;p&gt;ಭಾಷಣದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, &quot;ಬಿಜೆಪಿ ಮತ್ತು ಜೆಡಿಎಸ್ ಬಡವರಿಗಾಗಿ ಯಾವ ಉಚಿತ ಯೋಜನೆ ನೀಡಿದ್ದಾರೆ? ಉಚಿತ ಅಕ್ಕಿ, ಉಚಿತ ವಿದ್ಯುತ್, ಉಚಿತ ಆರೋಗ್ಯ ಸೇವೆ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರ&quot; ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಟೀಕಿಸಿದ ಅವರು, &quot;ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಜಮಾ ಮಾಡುವ ಭರವಸೆ ನೀಡಲಾಗಿತ್ತು. ಮೂರು ಬಾರಿ ಅಧಿಕಾರಕ್ಕೆ ಬಂದರೂ ಆ ಭರವಸೆ ಈಡೇರಿಸಲಿಲ್ಲ&quot; ಎಂದು ಆರೋಪಿಸಿದರು.&lt;/p&gt;&lt;p&gt;&lt;strong&gt;'ರಾಮನ ಹೆಸರಿನಲ್ಲಿ ಲೂಟಿ ನಡೆದಿದೆ'&lt;/strong&gt;&lt;/p&gt;&lt;p&gt;ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ ಸಿಎಂ, &quot;ರಾಮನ ಹೆಸರಿನಲ್ಲಿ ಹಣ ಸಂಗ್ರಹಿಸಿ ದುರ್ಬಳಕೆ ಮಾಡಲಾಗಿದೆ. ಧರ್ಮದ ಹೆಸರಿನಲ್ಲಿ ಹಣ ಲೂಟಿ ಮಾಡುವ ಕೆಲಸ ನಡೆದಿದೆ&quot; ಎಂದು ಕಿಡಿಕಾರಿದರು.&lt;/p&gt;&lt;p&gt;&lt;strong&gt;72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿ&lt;/strong&gt;&lt;/p&gt;&lt;p&gt;ರಾಜ್ಯದ ಯುವಕರಿಗೆ ಉದ್ಯೋಗದ ಭರವಸೆ ನೀಡಿದ ಮುಖ್ಯಮಂತ್ರಿ, &quot;ರಾಜ್ಯದಲ್ಲಿ ಖಾಲಿ ಇರುವ ಸುಮಾರು 72 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ&quot; ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;'ಸಿಎಂ ಹುದ್ದೆ ಅವಕಾಶದಿಂದ ಸಿಕ್ಕಿದೆ'&lt;/strong&gt;&lt;/h2&gt;&lt;p&gt;ತಮ್ಮ ರಾಜಕೀಯ ಪಯಣದ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, &quot;ಇಂದಿನ ದಿನ ನನ್ನ ಬದುಕಿನಲ್ಲಿ ಎಂದಿಗೂ ಮರೆಯಲಾಗದ ದಿನ. ಪಕ್ಷದ ಹೈಕಮಾಂಡ್ ನೀಡಿದ ಅವಕಾಶದಿಂದ ನಾನು ಮುಖ್ಯಮಂತ್ರಿ ಸ್ಥಾನಕ್ಕೇರಿದ್ದೇನೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ&quot; ಎಂದು ಹೇಳಿದರು. ಒಟ್ಟಾರೆ, ಗ್ಯಾರಂಟಿ ಯೋಜನೆಗಳ ಮುಂದುವರಿಕೆ, ಸರ್ಕಾರಿ ಉದ್ಯೋಗ ನೇಮಕಾತಿ, ಬಿಜೆಪಿ ವಿರುದ್ಧ ವಾಗ್ದಾಳಿ ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆಗಳು ಬೀದರ್ ಕಾರ್ಯಕ್ರಮದ ಪ್ರಮುಖ ಹೈಲೈಟ್ ಆಗಿವೆ.&lt;/p&gt;]]></content:encoded>
            <category>bidar</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/cm-dk-shivakumar-guarantee-schemes-not-stopped-bidar-gvd/articleshow-rdfekw6"/>
        </item>
        <item>
            <title><![CDATA[ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ]]></title>
            <link>https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf</link>
            <guid isPermaLink="true">https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf</guid>
            <pubDate>Wed, 29 Jul 2026 12:41:09 +0530</pubDate>
            <description><![CDATA[&lt;p&gt;ಬೀದರ್&zwnj;ನ ಗುರುನಾನಕ ದೇವ್&zwnj; ಎಂಜಿನಿಯರಿಂಗ್&zwnj; ಕಾಲೇಜಿನ ಹಳೆಯ ವಿದ್ಯಾರ್ಥಿ ನರಸಿಂಗ್&zwnj; ಮಾಧವ್&zwnj; ಶಿಂಧೆ, ಸ್ಕೈರೂಟ್&zwnj; ಏರೋಸ್ಪೇಸ್&zwnj; ಅಭಿವೃದ್ಧಿಪಡಿಸಿದ 'ವಿಕ್ರಮ್-1' ಉಡಾವಣಾ ವಾಹಕ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9ccfhhsz44cx6tsp8jwcqf,imgname-screenshot-2026-07-24-114746-1784873893424.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj;: &lt;/strong&gt;ಇಲ್ಲಿನ ಗುರುನಾನಕ ದೇವ್&zwnj; ಎಂಜಿನೀಯರಿಂಗ್&zwnj; ಕಾಲೇಜು ತನ್ನ ಮೆಕ್ಯಾನಿಕಲ್&zwnj; ಎಂಜಿನಿಯರಿಂಗ್&zwnj; ವಿಭಾಗದ ಹಳೆಯ ವಿದ್ಯಾರ್ಥಿ ನರಸಿಂಗ್&zwnj; ಮಾಧವ್&zwnj; ಶಿಂಧೆ (2019ರ ಬ್ಯಾಚ್&zwnj;) ಅವರು ಸ್ಕೈರೂಟ್&zwnj; ಏರೋಸ್ಪೇಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj; ಅಭಿವೃದ್ಧಿಪಡಿಸಿದ &lsquo;ವಿಕ್ರಮ್-1&rsquo;ಉಡಾವಣಾ ವಾಹಕ (ಮಿಷನ್&zwnj; ಆಗಮನ) ಯೋಜನೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದಕ್ಕೆ ಕಾಲೇಜು ಹೆಮ್ಮೆ ವ್ಯಕ್ತಪಡಿಸಿದೆ.&lt;/p&gt;&lt;p&gt;ಈ ಐತಿಹಾಸಿಕ ಉಡಾವಣೆಯು ಜುಲೈ 18ರಂದು ಶ್ರೀಹರಿಕೋಟಾದ ಸತೀಶ ಧವನ್&zwnj; ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನೆರೆವೇರಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.&lt;/p&gt;&lt;h2&gt;&lt;strong&gt;ನರಸಿಂಗ್&zwnj; ಮಾಧವ್&zwnj; ಶಿಂಧೆ ಶಿಕ್ಷಣ ಮತ್ತು ಸಾಧನೆ&lt;/strong&gt;&lt;/h2&gt;&lt;p&gt;ನರಸಿಂಗ್&zwnj; ಮಾಧವ್&zwnj; ಶಿಂಧೆ ಅವರು 2016ದಿಂದ 2019ರ ಅವಧಿಯಲ್ಲಿ ಗುರುನಾನಕ ದೇವ್&zwnj; ಎಂಜಿನಿಯರಿಂಗ್&zwnj; ಕಾಲೇಜಿನಿಲ್ಲಿ ಮೆಕ್ಯಾನಿಕಲ್&zwnj; ಎಂಜಿನಿಯರಿಂಗ್&zwnj; ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು 2020ರಿಂದ 2023ರ ವರೆಗೆ ಡಿಆರ್&zwnj;ಡಿಒನಲ್ಲಿ ಗುತ್ತಿಗೆ ಎಂಜಿನಿಯರ್&zwnj; ಆಗಿ ಸೇವೆ ಸಲ್ಲಿಸಿ, 2023ರಲ್ಲಿ ಸ್ಕೈರೂಟ್&zwnj;ಗೆ ಏರೋಸ್ಪೇಸ್&zwnj; ಪ್ರೈವೇಟ್&zwnj; ಲಿಮಿಟೆಡ್&zwnj;ನಲ್ಲಿ ಕ್ಯಾಡ್&zwnj; ಆ್ಯಂಡ ಕನ್ಫಿಗರೇಷನ್&zwnj; ಡಿಪಾರ್ಟಮೆಂಟ್&zwnj;ನಲ್ಲಿ ರಚನಾತ್ಮಕ ಎಂಜಿನಿಯರ್&zwnj; ಆಗಿ ಸೇರ್ಪಡೆಯಾದರು.&amp;nbsp;&lt;/p&gt;&lt;p&gt;ವಿಕ್ರಮ-1 ಮಿಷನ್&zwnj; ತಂಡದ ಸದಸ್ಯರಾಗಿ ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಕೊಡುಗೆ ನೀಡಿ, ರಚನಾತ್ಮಕ ವಿನ್ಯಾಸ, ಕ್ಯಾಡ್&zwnj; ಅಭಿವೃದ್ಧಿ, ಕಾನ್ಫಿಗರೇಶನ್&zwnj; ನಿರ್ವಹಣೆ, ಎಂಜಿನಿಯರಿಂಗ್&zwnj; ದಾಖಲೆಗಳ ಸಿದ್ಧತೆ, ವಿನ್ಯಾಸ ಮೌಲ್ಯಮಾಪನ ಹಾಗೂ ವಿನ್ಯಾಸ, ವಿಶ್ಲೇಷಣೆ, ಉತ್ಪಾದನೆ, ಜೋಡಣೆ, ಏಕೀಕರಣ ಮತ್ತು ಪರೀಕ್ಷಾ ತಂಡ ಗಳೊಂದಿಗೆ ಸಮನ್ವಯ ಸಾಧಿಸಿ ಮಿಷನ್&zwnj; ಯಶಸ್ವಿಯಾಗಲು ಮಹತ್ತರ ಪಾತ್ರ ವಹಿಸಿದ್ದಾರೆ.&lt;/p&gt;&lt;h3&gt;&lt;strong&gt;ನರಸಿಂಗ್ ಮಾಧವ್&zwnj; ಶಿಂಧೆ ಮಾತು&lt;/strong&gt;&lt;/h3&gt;&lt;p&gt;ನರಸಿಂಗ್ ಮಾಧವ್&zwnj; ಶಿಂಧೆ ಅವರು ತಮ್ಮ ಸಂತೋಷ ವ್ಯಕ್ತಪಡಿಸಿ ಭಾರತದ ಮೊದಲ ಖಾಸಗಿಯಾಗಿ ಅಭಿವೃದ್ಧಿಪಡಿಸಿದ ಕಕ್ಷೀಯ ಉಡಾವಣಾ ವಾಹಕ ವಿಕ್ರಮ್&zwnj;-1 ಮಿಷನ್ ಭಾಗವಾಗಿರುವುದು ನನ್ನ ಎಂಜಿನಿಯರಿಂಗ್&zwnj; ಜೀವನದ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ. ಈ ಸಾಧನೆಗೆ ಅಗತ್ಯವಾದ ದೃಢವಾದ ಶೈಕ್ಷಣಿಕ ಅಡಿಪಾಯ ನೀಡಿದ ನನ್ನ ವಿದ್ಯಾಸಂಸ್ಥೆಯಾದ ಜಿಎನ್&zwnj;ಡಿ ಕಾಲೇಜಿಗೆ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಶ್ರೀ ನಾನಕ್&zwnj; ಝಿರಾ ಸಾಹೇಬ್&zwnj; ಫೌಂಡೆಷನ್&zwnj; ಅಧ್ಯಕ್ಷ ಸರದಾರ ಬಲಬೀರಸಿಂಗ್&zwnj;, ಉಪಾಧ್ಯಕ್ಷೆ ರೇಷ್ಮಾ ಕೌರ್&zwnj;, ಪ್ರಾಂಶುಪಾಲರಾದ ಡಾ. ವೀಣಾ ಎಸ್&zwnj;. ಸೊರಗನ್ವಿ ಹಾಗೂ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅವರು ಅಭಿನಂದನೆಗಳನ್ನು ಸಲ್ಲಿಸಿ ಅವರ ಮುಂದಿನ ವೃತ್ತಿಜೀವನದಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳು ಲಭಿಸಲಿ ಎಂದು ಶುಭ ಹಾರೈಸಿದರು.&lt;/p&gt;]]></content:encoded>
            <category>bidar</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vikram-1-launch-bidar-guru-nanak-engineering-college-student-narsingh-shinde-s-achievement-mrq/articleshow-s25gtnf"/>
        </item>
        <item>
            <title><![CDATA[ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ]]></title>
            <link>https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</link>
            <guid isPermaLink="true">https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4</guid>
            <pubDate>Wed, 10 Jun 2026 19:20:43 +0530</pubDate>
            <description><![CDATA[&lt;p&gt;ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktrw38tdkqhrywnryf1yybty,imgname-bidar-airport-1781098718028.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಬೀದರ್ ನಡುವಿನ ವಿಮಾನ ಸೇವೆಯ ವೇಳಾಪಟ್ಟಿ ಬದಲಾವಣೆಯಿಂದ ಸಾರ್ವಜನಿಕರಿಗೆ ಭಾರಿ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವಿಮಾನಯಾನ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ, ಹಳೆಯ ವೇಳಾಪಟ್ಟಿಯಂತೆಯೇ ಮುಂಜಾನೆಯ ಸೇವೆಯನ್ನು ಮುಂದುವರಿಸಲು ಸೂಚಿಸಬೇಕು ಎಂದು ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ ಬರೆದಿದ್ದಾರೆ.&lt;/p&gt;&lt;h2&gt;ಸ್ಟಾರ್ ಏರ್ ಖಾಸಗಿ ವಿಮಾನಯಾನ ಸಂಸ್ಥೆ&lt;/h2&gt;&lt;p&gt;ಖಾಸಗಿ ವಿಮಾನಯಾನ ಸಂಸ್ಥೆಯಾದ &lsquo;ಸ್ಟಾರ್ ಏರ್&rsquo; ಜೂನ್ 1ರಿಂದ ಬೆಂಗಳೂರು-ಬೀದರ್-ಬೆಂಗಳೂರು ನಡುವೆ ತನ್ನ ನೂತನ ವಿಮಾನ ಸೇವೆಯನ್ನು ಆರಂಭಿಸಿದೆ. ಆರಂಭಿಕ ವೇಳಾಪಟ್ಟಿಯ ಪ್ರಕಾರ, ಈ ವಿಮಾನವು ಮುಂಜಾನೆ 6:30ಕ್ಕೆ ಬೆಂಗಳೂರಿನಿಂದ ಹೊರಟು 7:45ಕ್ಕೆ ಬೀದರ್ ತಲುಪುತ್ತಿತ್ತು. ಅದೇ ರೀತಿ, ಬೆಳಗ್ಗೆ 8:15ಕ್ಕೆ ಬೀದರ್&zwnj;ನಿಂದ ಜಿಗಿದು 9:30ಕ್ಕೆ ಬೆಂಗಳೂರಿಗೆ ಹಿಂತಿರುಗುತ್ತಿತ್ತು. ಈ ಮುಂಜಾನೆಯ ಸಮಯವು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮತ್ತು ಉದ್ಯಮಿಗಳಿಗೆ ಬೆಂಗಳೂರಿನ ಅಧಿಕೃತ ಕೆಲಸಗಳಿಗಾಗಿ ಒಂದೇ ದಿನದಲ್ಲಿ ಬಂದು ಹೋಗಲು ಅತ್ಯಂತ ಅನುಕೂಲಕರವಾಗಿತ್ತು.&lt;/p&gt;&lt;h2&gt;ಹೊಸ ವೇಳಾಪಟ್ಟಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಕೆ ಭೀತಿ&amp;nbsp;&lt;/h2&gt;&lt;p&gt;ಆದರೆ, ವಿಮಾನಯಾನ ಸಂಸ್ಥೆಯು ಜೂನ್ 10ರಿಂದ ಜಾರಿಗೆ ಬರುವಂತೆ ವಿಮಾನದ ಸಮಯವನ್ನು ಮಧ್ಯಾಹ್ನಕ್ಕೆ ಬದಲಾಯಿಸಿದೆ. ಹೊಸ ವೇಳಾಪಟ್ಟಿಯಂತೆ, ಮಧ್ಯಾಹ್ನ 12:30ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 1:45ಕ್ಕೆ ಬೀದರ್ ತಲುಪಲಿದೆ. ತದನಂತರ ಮಧ್ಯಾಹ್ನ 2:30ಕ್ಕೆ ಬೀದರ್&zwnj;ನಿಂದ ಹೊರಟು 3:30ಕ್ಕೆ ಬೆಂಗಳೂರಿಗೆ ಬರಲಿದೆ.&lt;/p&gt;&lt;p&gt;&amp;nbsp;ಹೊಸದಾಗಿ ನಿಗದಿಪಡಿಸಲಾಗಿರುವ ಮಧ್ಯಾಹ್ನದ ವೇಳಾಪಟ್ಟಿಯಿಂದಾಗಿ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಮಯ ಬದಲಾವಣೆಯಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಇದು ವಿಮಾನಯಾನದ ಮೂಲ ಉದ್ದೇಶವನ್ನೇ ಹಳಿ ತಪ್ಪಿಸುತ್ತದೆ ಎಂಬುದು ಸಚಿವ ಈಶ್ವರ್ ಖಂಡ್ರೆ ಅವರ ವಾದವಾಗಿದೆ.&lt;/p&gt;&lt;p&gt;ಹೀಗಾಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಬೇಕು. ಸ್ಟಾರ್ ಏರ್ ಸಂಸ್ಥೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಮೊದಲಿನ ಮುಂಜಾನೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/revert-bengaluru-bidar-flight-timings-minister-eshwar-khandre-writes-to-cm-dk-shivakumar-gdp/articleshow-ugdodp4"/>
        </item>
        <item>
            <title><![CDATA[KPSC ಅಕ್ರಮದ ಕಿಂಗ್‌ಪಿನ್ ಕನ್ನಾಳೆ ಜೊತೆ ಸ್ವೀಟ್ ಸವಿದ ಸಚಿವ ಖಂಡ್ರೆ; ಭಾಲ್ಕಿಯಲ್ಲಿ 'ಸಹೋದರರ ಸವಾಲ್' ಸ್ಪಷ್ಟೀಕರಣಕ್ಕೆ ಬಿಜೆಪಿ ಲೇವಡಿ!]]></title>
            <link>https://kannada.asianetnews.com/karnataka-districts/kpsc-recruitment-irregularities-scam-allegations-kannale-prakash-khandre-targets-eshwar-khandre-bmk/articleshow-v6rct4d</link>
            <guid isPermaLink="true">https://kannada.asianetnews.com/karnataka-districts/kpsc-recruitment-irregularities-scam-allegations-kannale-prakash-khandre-targets-eshwar-khandre-bmk/articleshow-v6rct4d</guid>
            <pubDate>Thu, 03 Sep 2026 15:53:02 +0530</pubDate>
            <description><![CDATA[&lt;p&gt;ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮದ ಕಿಂಗ್&zwnj;ಪಿನ್ ಜೊತೆ ಸಚಿವ ಈಶ್ವರ್ ಖಂಡ್ರೆ ಸಿಹಿ ಸವಿದ ಫೋಟೋ ವೈರಲ್ ಆಗಿದ್ದು, ಭಾಲ್ಕಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಫೋಟೋವನ್ನು ಮುಂದಿಟ್ಟುಕೊಂಡು ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಸಚಿವರ ವಿರುದ್ಧ ರಾಜಕೀಯ ಗಿಮಿಕ್ ಆರೋಪ ಮಾಡಿದ್ದು, ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1kcmt51cv6pktp133pehm2e,imgname-eswar-khandre-1788430936224.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಅಕ್ರಮದ ವಿಚಾರವು ಬೀದರ್ ಜಿಲ್ಲೆಯ ಭಾಲ್ಕಿ ಕ್ಷೇತ್ರದಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಅಕ್ರಮ ಹಗರಣದ ಕೊಂಡಿ ಭಾಲ್ಕಿಯ ರಾಜಕೀಯ ಅಂಗಳ ತಲುಪಿದ್ದು, ಬಿಜೆಪಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಸಚಿವ ಈಶ್ವರ್ ಖಂಡ್ರೆ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಕಾವೇರಿದ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಅಕ್ರಮದ ಕಿಂಗ್&zwnj;ಪಿನ್ ಜೊತೆಗಿನ ವೈರಲ್ ಫೋಟೋ!&lt;/strong&gt;&lt;/h2&gt;&lt;p&gt;ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಸೂತ್ರಧಾರ ಅಥವಾ 'ಕಿಂಗ್&zwnj;ಪಿನ್' ಎಂದೇ ಬಿಂಬಿತವಾಗಿರುವ ಬಸವರಾಜ್ ಕನ್ನಾಳೆ ಜೊತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಿಹಿ ತಿನ್ನಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಫೋಟೋ ಬಹಿರಂಗಗೊಳ್ಳುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ರಂಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.&lt;/p&gt;&lt;h3&gt;&lt;strong&gt;ಈಶ್ವರ ಖಂಡ್ರೆ ಸ್ಪಷ್ಟೀಕರಣಕ್ಕೆ ವ್ಯಂಗ್ಯ!&lt;/strong&gt;&lt;/h3&gt;&lt;p&gt;ಈ ಘಟನೆಗೆ ಸಚಿವ ಈಶ್ವರ್ ಖಂಡ್ರೆ ನೀಡಿದ ಸ್ಪಷ್ಟೀಕರಣವನ್ನು ಪ್ರಕಾಶ್ ಖಂಡ್ರೆ ಅವರು ತೀವ್ರವಾಗಿ ಹಾಸ್ಯಮಾಡಿದ್ದಾರೆ. &quot;ಬಸವರಾಜ್ ಕನ್ನಾಳೆ ಅವರು ನನ್ನ ಬಳಿ ಬಂದು, ಭಾಲ್ಕಿ ಕ್ಷೇತ್ರದಲ್ಲಿ ನಿಮ್ಮೆದುರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದಾಗ ನಾನು ಸಿಹಿ ತನಿಸಿದೆ&quot; ಎಂದು ಸಚಿವರು ನೀಡಿದ ಸಮಜಾಯಿಷಿಯನ್ನು ಮಾಜಿ ಶಾಸಕರು ಕಡ್ಡಾಯವಾಗಿ ತಳ್ಳಿಹಾಕಿದ್ದಾರೆ. &quot;ಸಚಿವರಿಗೆ ಸ್ವೀಟ್ ತಿನ್ನಿಸಲು ಹೋದವರು ಯಾರಾದರೂ 'ನಾನು ನಿಮ್ಮ ವಿರುದ್ಧವೇ ಸ್ಪರ್ಧಿಸುತ್ತೇನೆ' ಎಂದು ಎದುರಿಗೇ ಹೇಳುತ್ತಾರೆಯೇ? ಇಂತಹ ಬಾಲಿಶ ಮಾತನ್ನು ಯಾರೂ ನಂಬಲು ಸಾಧ್ಯವಿಲ್ಲ&quot; ಎಂದು ಅವರು ಲೇವಡಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಭಾಲ್ಕಿ ರಾಜಕೀಯ ಗಿಮಿಕ್ ಹಾಗೂ ಕುಮ್ಮಕ್ಕಿನ ಆರೋಪ!&lt;/strong&gt;&lt;/h3&gt;&lt;p&gt;ಭಾಲ್ಕಿ ಕ್ಷೇತ್ರದಲ್ಲಿ ಸ್ವಂತ ರಾಜಕೀಯ ಲಾಭಕ್ಕಾಗಿ ಸಚಿವ ಈಶ್ವರ್ ಖಂಡ್ರೆ ಅವರು ದೊಡ್ಡ ಗಿಮಿಕ್ ಮಾಡುತ್ತಿದ್ದಾರೆ ಎಂದು ಪ್ರಕಾಶ್ ಖಂಡ್ರೆ ಕಿಡಿಕಾರಿದ್ದಾರೆ. ಬಸವರಾಜ್ ಕನ್ನಾಳೆ ರಾಜಕೀಯವಾಗಿ ಮುನ್ನೆಲೆಗೆ ಬರಲು ಹಾಗೂ ಚುನಾವಣೆಗೆ ಸ್ಪರ್ಧಿಸಲು ಸ್ವತಃ ಈಶ್ವರ್ ಖಂಡ್ರೆ ಅವರೇ ಹಿನ್ನೆಲೆಯಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ವಿಪಕ್ಷಗಳ ಮತಗಳನ್ನು ಒಡೆಯುವ ಹಾಗೂ ಗೊಂದಲ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಆದರೆ, ಈ ರೀತಿಯ ತಂತ್ರಗಳು ಭಾಲ್ಕಿಯಲ್ಲಿ ನಡೆಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೈದ್ಧಾಂತಿಕ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆ!&lt;/strong&gt;&lt;/h3&gt;&lt;p&gt;ಅಲ್ಲದೆ, ಬಿಜೆಪಿ ಟಿಕೆಟ್ ನೀಡಿಕೆ ವಿಷಯವಾಗಿಯೂ ಸ್ಪಷ್ಟನೆ ನೀಡಿರುವ ಮಾಜಿ ಶಾಸಕರು, ಈಶ್ವರ್ ಖಂಡ್ರೆ ಅವರು ಪ್ರತ್ಯಕ್ಷವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಸೂಚಿಸುವ ಅಥವಾ ಬೆಂಬಲಿಸುವ ಯಾವುದೇ ಅಭ್ಯರ್ಥಿಗೆ ನಮ್ಮ ಬಿಜೆಪಿಯಲ್ಲಿ ಟಿಕೆಟ್ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆಯೇ ಹೊರತು ಕಾಂಗ್ರೆಸ್ ಸಚಿವರ ಗಿಮಿಕ್&zwnj;ಗಳ ಮೇಲಲ್ಲ&quot; ಎಂದು ಖಡಕ್ಕಾಗಿ ನುಡಿದಿದ್ದಾರೆ.&lt;/p&gt;&lt;h3&gt;&lt;strong&gt;ನೇಮಕಾತಿ ಅಕ್ರಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ!&lt;/strong&gt;&lt;/h3&gt;&lt;p&gt;ಕೆಪಿಎಸ್&zwnj;ಸಿ ಅಧ್ಯಕ್ಷರ ನೇಮಕದ ವಿಚಾರವಾಗಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಪ್ರಕಾಶ್ ಖಂಡ್ರೆ, ಕೆಪಿಎಸ್&zwnj;ಸಿ ಅಧ್ಯಕ್ಷರನ್ನ ನೇಮಿಸಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಇರಬಹುದು. ಆದರೆ, ಅಕ್ರಮ ನಡೆದಿರುವುದು ಮಾತ್ರ ಈಗಿನ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಎಂದು ಪ್ರತಿಪಾದಿಸಿದರು. ಸರ್ಕಾರದ ಕಣ್ಣಳತೆಯಲ್ಲೇ ಅಕ್ರಮಗಳು ತಲೆಯೆತ್ತಿದ್ದು, ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ. ಹೀಗಾಗಿ ಈ ಬೃಹತ್ ನೇಮಕಾತಿ ಹಗರಣಕ್ಕೆ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಅವರ ಸಚಿವರೇ ನೇರ ಹೊಣೆಗಾರರು ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;]]></content:encoded>
            <category>bidar</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/kpsc-recruitment-irregularities-scam-allegations-kannale-prakash-khandre-targets-eshwar-khandre-bmk/articleshow-v6rct4d"/>
        </item>
        <item>
            <title><![CDATA[ದನದ ಕೊಟ್ಟಿಗೆ ಬಿಲ್ ಪಾವತಿಸದ ಅಧಿಕಾರಿ; ತಾ.ಪಂ ಕಚೇರಿಯಲ್ಲಿ ಹಸುಗಳನ್ನ ಕಟ್ಟಿ, ಕಾಲಿಗೆ ಬಿದ್ದ ಅನ್ನದಾತ!]]></title>
            <link>https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</link>
            <guid isPermaLink="true">https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg</guid>
            <pubDate>Thu, 11 Jun 2026 14:50:06 +0530</pubDate>
            <description><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kttspb71h6pyneqt4pvkw70w,imgname-bidar-farmer-protests--4--1781163306208.jpg" type="image/jpeg" height="390" width="690"/>
            <content:encoded><![CDATA[ಬೀದರ್ ಜಿಲ್ಲೆಯ ಹುಲಸೂರಿನಲ್ಲಿ, ಕೊಟ್ಟಿಗೆ ನಿರ್ಮಾಣದ ಬಿಲ್ 9 ತಿಂಗಳಿಂದ ಮಂಜೂರಾಗದ ಕಾರಣ ರೈತನೊಬ್ಬ ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಬಂದು ಪ್ರತಿಭಟಿಸಿದ್ದಾನೆ. ಈ ವೇಳೆ ಅಧಿಕಾರಿಗಳ ಕಾಲಿಗೆ ಬಿದ್ದು, ತನ್ನ ಬಿಲ್ ಮಂಜೂರು ಮಾಡುವಂತೆ ಕಣ್ಣೀರಿಟ್ಟು ಬೇಡಿಕೊಂಡಿದ್ದಾನೆ.&lt;img&gt;&lt;p&gt;&lt;strong&gt;ಬೀದರ್(ಜೂ.11): ಸ&lt;/strong&gt;ರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕಾದರೆ ಅಧಿಕಾರಿಗಳ ಕಾಲು ಹಿಡಿಯಬೇಕು ಎಂಬ ಮಾತು ಈಗ ಅಕ್ಷರಶಃ ನಿಜವಾಗಿದೆ. ಕೊಟ್ಟಿಗೆ ನಿರ್ಮಾಣ ಮಾಡಿ 9 ತಿಂಗಳು ಕಳೆದರೂ ಬಿಲ್ ಮಂಜೂರು ಮಾಡದ ಅಧಿಕಾರಿಗಳ ಧೋರಣೆಯಿಂದ ಬೇಸತ್ತ ರೈತನೊಬ್ಬ, ಹಸುವಿನ ಸಮೇತ ತಾಲ್ಲೂಕು ಪಂಚಾಯತ್ ಕಚೇರಿಗೆ ಆಗಮಿಸಿ ವಿನೂತನವಾಗಿ ಪ್ರತಿಭಟಿಸಿದ ಘಟನೆ ಬೀದರ್ ಜಿಲ್ಲೆಯ ಹುಲಸೂರಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಘಟನೆ?:&lt;/strong&gt;&lt;/p&gt;&lt;p&gt;ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ರೈತ ಅಪ್ಪಾಸಾಬ್ ಮಡಕೆ ಎಂಬುವವರು ತಮ್ಮ ಜಮೀನಿನಲ್ಲಿ ದನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿದ್ದರು. ಕೊಟ್ಟಿಗೆ ಪೂರ್ಣಗೊಂಡು ಬರೋಬ್ಬರಿ ಒಂಬತ್ತು ತಿಂಗಳು ಕಳೆದರೂ, ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಬಿಲ್ ಪಾವತಿಗೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಂಗಾಲಾದ ರೈತ ಇಂದು ಹುಲಸೂರು ತಾಲ್ಲೂಕು ಪಂಚಾಯತ್ ಕಚೇರಿಗೆ ತನ್ನ ಹಸುವನ್ನು ಕರೆತಂದು, ಕಚೇರಿಯ ಆವರಣದಲ್ಲೇ ಹಸು ಕಟ್ಟಿ ಮೇವು ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಅಧಿಕಾರಿಯ ಕಾಲಿಗೆ ಬಿದ್ದ ಅನ್ನದಾತ:&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅಪ್ಪಾಸಾಬ್ ಮಡಕೆ, ತಾಲ್ಲೂಕು ಪಂಚಾಯತ್ ಇಒ (EO) ಮಹದೇವ ಜಮ್ಮು ಅವರ ಕಾಲಿಗೆ ಬಿದ್ದು, 'ದಯವಿಟ್ಟು ನನ್ನ ಬಿಲ್ ಮಾಡಿಕೊಡಿ ಸ್ವಾಮಿ' ಎಂದು ಕಣ್ಣೀರಿಟ್ಟರು. ಬಿಲ್ ಮಂಜೂರು ಮಾಡಲು ಗ್ರಾಮ ಪಂಚಾಯತ್ ಪಿಡಿಓ (PDO) ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;img&gt;&lt;p&gt;&lt;strong&gt;ಬೋಗಸ್ ಬಿಲ್ ಆರೋಪ:&lt;/strong&gt;&lt;/p&gt;&lt;p&gt;ಕೇವಲ ಅಪ್ಪಾಸಾಬ್ ಒಬ್ಬರೇ ಅಲ್ಲ, ಬೇಲೂರು ಗ್ರಾಮವೊಂದರಲ್ಲೇ ಸುಮಾರು 40ಕ್ಕೂ ಹೆಚ್ಚು ರೈತರಿಗೆ ಕೊಟ್ಟಿಗೆ ನಿರ್ಮಾಣದ ಬಿಲ್ ಪಾವತಿಯಾಗಿಲ್ಲ ಎನ್ನಲಾಗಿದೆ. 'ಗ್ರಾಮ ಪಂಚಾಯತ್&zwnj;ನಲ್ಲಿ ಚರಂಡಿ ಸ್ವಚ್ಛತೆ, ಬೀದಿ ದೀಪ ಅಳವಡಿಕೆಯಂತಹ ಕೆಲಸಗಳಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಬೋಗಸ್ ಬಿಲ್ ಮಾಡುತ್ತಾರೆ. ಆದರೆ ನೈಜವಾಗಿ ಕೆಲಸ ಮಾಡಿದ ರೈತರಿಗೆ ಮಾತ್ರ ಹಣ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ' ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟಿಸಿದ ರೈತನ ಹೋರಾಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಒದಗಿಸುತ್ತಾರೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bidar-farmer-protests-at-taluk-panchayat-with-cow-over-unpaid-bill-sat-vl1gxqg"/>
        </item>
        <item>
            <title><![CDATA[ಪ್ರತ್ಯೇಕ ಘಟನೆ; ನಾಗರ ಪಂಚಮಿಯಂದೆ ದುರಂತ, ಹಾವು ಕಡಿದು ವಾಟರ್‌ಮ್ಯಾನ್, ಮಹಿಳೆ ಸಾವು!]]></title>
            <link>https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</link>
            <guid isPermaLink="true">https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</guid>
            <pubDate>Tue, 18 Aug 2026 10:41:05 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಸೋಲದಾಬಕಾ ಗ್ರಾಮದಲ್ಲಿ, ನೀರಿನ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದ ವಾಟರ್&zwnj;ಮ್ಯಾನ್ ಭೀಮ ಜಾಧವ್ (48) ಮೃತಪಟ್ಟಿದ್ದಾರೆ. ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09mep030ksn0769k2n5gj9x,imgname-snake-bite--1787029837827.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಡಿದು ವಾಟರ್&zwnj;ಮ್ಯಾನ್ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು 48 ವರ್ಷದ ಭೀಮ ಜಾಧವ್ ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕ್ ಬಳಿ ನೀರು ಬಂದ್ ಮಾಡಲು ತೆರಳಿದ ಸಂದರ್ಭದಲ್ಲಿ ಹಾವು ಕಡಿದು ಭೀಮ ಸಾವನ್ನಪ್ಪಿದ್ದಾರೆ.&lt;/p&gt;&lt;h2&gt;ಕುಟುಂಬಸ್ಥರ ಆಕ್ರಂದನ&lt;/h2&gt;&lt;p&gt;ಹಾವು ಕಡಿದ ಪರಿಣಾಮ ಸ್ಥಳದಲ್ಲೇ ಭೀಮ ಜಾಧವ್ ಸಾವನ್ನಪ್ಪಿದ್ದು, ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು-ಕಡ್ಡಿ ಬೆಳೆದಿದ್ದೇ ಅವಘಡಕ್ಕೆ ಕಾರಣ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹುಲ್ಲು ಕಟಾವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸೋಲದಾಬಕಾ ಹೊರವಲಯದ ಹಾಲಹಳ್ಳಿ ರಸ್ತೆ ಬಳಿಯ ಮಹದೇವ ಮಂದಿರದ ಸಮೀಪ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹುಲಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ಹಾವು ಕಚ್ಚಿದಂತೆ ಕನಸು, ಮರುದಿನವೇ ಸಾವು!&lt;/h2&gt;&lt;p&gt;ಇತ್ತ ಚಿಕ್ಕೋಡಿಯಲ್ಲಿ ನಾಗರ ಪಂಚಮಿಯ ದಿನವೇ ಹಾವು ಕಡಿತದು ಮಹಿಳೆ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 43 ವರ್ಷದ ಸತ್ಯವ್ವ ಶಿವಾನಂದ ಶಿಂಗೆ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಸತ್ಯವ್ವ ಅವರಿಗೆ ನಾಗರ ಪಂಚಮಿಯ ಇಂದಿನ ದಿನವೇ ಹಾವು ಕಚ್ಚಿದಂತೆ ಕನಸು ಬಂದಿತ್ತಂತೆ. ಇದನ್ನು ಕೂಲಿ ಕೆಲಸಕ್ಕೆ ಹೋದಾಗ ತಮ್ಮ ಸಹಪಾಠಿಗಳೊಂದಿಗೆ ಮಹಿಳೆ ಹಂಚಿಕೊಂಡಿದ್ದರಂತೆ. ಆದರೆ ಇದಾದ ಮರುದಿನವೇ ಹಾವು ಕಚ್ಚಿಯೇ ಮಹಿಳೆ ಸತ್ಯವ್ವ ಸಾವನ್ನಪ್ಪಿದ್ದಾರೆ. ಕಾಕತಾಳೀಯ ಎಂಬಂತೆ ಪಂಚಮಿಯ ದಿನವೇ ಹಾವು ಹಚ್ಚಿ ಮಹಿಳೆ ಸಾವನ್ನಪ್ಪಿದ್ದು, ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>bidar</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n"/>
        </item>
        <item>
            <title><![CDATA[ಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರ: ಆದರೂ, ಸರ್ಕಾರದ ಆದೇಶ ಪಟ್ಟಿಯಲ್ಲಿಲ್ಲ ಬರಪೀಡಿತ ತಾಲೂಕುಗಳು!]]></title>
            <link>https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse</link>
            <guid isPermaLink="true">https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse</guid>
            <pubDate>Fri, 28 Aug 2026 11:49:41 +0530</pubDate>
            <description><![CDATA[ರಾಜ್ಯ ಸರ್ಕಾರವು ಬೀದರ್ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಭಾಲ್ಕಿ, ಔರಾದ್ ಸೇರಿದಂತೆ ಇತರೆ ನಾಲ್ಕು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಇದು ಬೆಳೆ ಒಣಗುತ್ತಿರುವುದರಿಂದ ಪರಿಹಾರ ವಂಚಿತರಾಗುವ ಭೀತಿಯಲ್ಲಿರುವ ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx0v3sr2xg2xkrk9wv954xzc,imgname-untitled-design---2026-07-08t175336.435-1783513605890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್&zwnj; (ಆ.28): ರಾ&lt;/strong&gt;ಜ್ಯ ಸರ್ಕಾರವು 2026ರ ಮುಂಗಾರು ಹಂಗಾಮಿಗೆ (ಜೂನ್&zwnj; 1ರಿಂದ ಆಗಸ್ಟ್&zwnj; 12) ಸಂಬಂಧಿಸಿದಂತೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದ್ದು, ಜಿಲ್ಲೆಯ ರೈತ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;ಸರ್ಕಾರದ ಅಧಿಕೃತ ಆದೇಶದ ಪ್ರಕಾರ ಬೀದರ್&zwnj; ಜಿಲ್ಲೆಯ ಬೀದರ್, ಬಸವಕಲ್ಯಾಣ, ಹುಮನಾಬಾದ್&zwnj; ಮತ್ತು ಚಿಟಗುಪ್ಪ ತಾಲೂಕುಗಳನ್ನು ಮಾತ್ರ &lsquo;ತೀವ್ರತರನಾದ ಬರಪೀಡಿತ&rsquo; ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸ್ವಕ್ಷೇತ್ರವಾಗಿರುವ ಭಾಲ್ಕಿ ತಾಲೂಕು ಸೇರಿದಂತೆ, ಮಳೆ ಅಭಾವದಿಂದ ತೀವ್ರ ಬರ ಎದುರಿಸುತ್ತಿರುವ ಔರಾದ್&zwnj;, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಸರ್ಕಾರದ ಬರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.&lt;/p&gt;&lt;h2&gt;&lt;strong&gt;ಶೇ.42ರಷ್ಟು ಮಳೆ ಕೊರತೆ&lt;/strong&gt;&lt;/h2&gt;&lt;p&gt;ಈಗಾಗಲೇ ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೂ ಮುಂಗಾರು ಮಳೆಯ ತೀವ್ರ ಅಭಾವದಿಂದಾಗಿ ಶೇಕಡಾ 31ರಷ್ಟು ಮಳೆ ಕೊರತೆ ದಾಖಲಾಗಿದ್ದು, ಜೂನ್&zwnj; ತಿಂಗಳಿನಲ್ಲಿ ಶೇ. 42ರಷ್ಟು ಮಳೆ ಕಡಿಮೆಯಾಗಿ ಕಳೆದ 50 ವರ್ಷಗಳಲ್ಲೇ 4ನೇ ಅತ್ಯಂತ ಕಡಿಮೆ ಮಳೆ ಕಂಡ ಜೂನ್&zwnj; ಎಂಬಂತಾಗಿದೆ. ಇದರಿಂದಾಗಿ ಹೊಲಗದ್ದೆಗಳಲ್ಲಿ ನಿಂತಿರುವ ಬೆಳೆಗಳು ನೀರಿನ ಅಭಾವದಿಂದ ಒಣಗುವುದು, ಹಳದಿ ಬಣ್ಣಕ್ಕೆ ತಿರುಗುವುದು ಹಾಗೂ ಬೆಳವಣಿಗೆ ಕುಂಠಿತಗೊಳ್ಳುವಂತಹ ತೀವ್ರ ಹಾನಿಯನ್ನು ಅನುಭವಿಸುತ್ತಿವೆ.&lt;/p&gt;&lt;p&gt;ಬೆಳೆ ಕಣ್ಣೆದುರೇ ಕಾಸಿಗೆ ಗತಿಯಿಲ್ಲದೇ ಕಮರಿ ಹೋಗುತ್ತಿರುವ ಈ ಸಮಯದಲ್ಲಿ ಸರ್ಕಾರ ಈ ತಾಲೂಕುಗಳನ್ನು ಕೈಬಿಟ್ಟಿರುವುದರಿಂದ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತವಾಗುವ ಭೀತಿಗೆ ಸಿಲುಕಿದ್ದಾರೆ. ಶೀಘ್ರದಲ್ಲಿಯೇ ಕಂದಾಯ ಹಾಗೂ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ಬರಪೀಡಿತ ಪ್ರದೇಶಗಳ ಸರ್ವೆ ನಡೆಸಲಿವೆ.&lt;/p&gt;&lt;p&gt;ಮಾಸಾಂತ್ಯದ ಮ&zwj;ಳೆ ಪ್ರಮಾಣ ಪರಾಮರ್ಶಿಸುವ ಭರವಸೆ: ಆದರೆ, ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿರುವಂತೆ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್&zwnj;ನಲ್ಲಿ ಬರುವ ಮಳೆಯ ಪರಿಸ್ಥಿತಿಯನ್ನು ವಾರಕ್ಕೊಮ್ಮೆ ವೈಜ್ಞಾನಿಕವಾಗಿ ಪರಾಮರ್ಶಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಗ್ರೌಂಡ್&zwnj; ಟ್ರೂಥಿಂಗ್&zwnj; (Ground Truthing) ಪ್ರಕ್ರಿಯೆ ಹಾಗೂ ಮಳೆ ಕೊರತೆ ಆಧಾರದ ಮೇಲೆ ಅರ್ಹತೆ ಪಡೆಯುವ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಹೊಸ ಆದೇಶ ಹೊರಡಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.&lt;/p&gt;&lt;h2&gt;&lt;strong&gt;ನಾಲ್ಕು ತಾಲೂಕುಗಳ ಸೇರ್ಪಡೆಗೆ ಆಗ್ರಹ&lt;/strong&gt;&lt;/h2&gt;&lt;p&gt;ಹೀಗಾಗಿ, ಪಟ್ಟಿಯಲ್ಲಿ ಬಿಟ್ಟುಹೋಗಿರುವ ಭಾಲ್ಕಿ, ಔರಾದ್&zwnj;, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ತಕ್ಷಣವೇ ಜಂಟಿ ಸಮೀಕ್ಷೆಗೆ ಒಳಪಡಿಸಿ ಬರಪೀಡಿತ ಎಂದು ಘೋಷಿಸಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.&lt;/p&gt;&lt;p&gt;--&lt;/p&gt;&lt;p&gt;ಬೀದರ್&zwnj; ಜಿಲ್ಲೆಯಲ್ಲಿ ಶೇ. 93ರಷ್ಟು ಬಿತ್ತನೆ ಪ್ರಕ್ರಿಯೆ ಮುಗಿದಿದ್ದು, ಕರ್ನಾಟಕ ರಾಜ್ಯ ಬರ ನಿರ್ವಹಣಾ ಕೋಶದ ಮಾಹಿತಿಯಾಧರಿಸಿ ಸರ್ಕಾರ ಈಗಾಗಲೇ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಜಿಲ್ಲೆಯಿಂದ ಬರ ಘೋಷಣೆ ಕುರಿತು ಯಾವುದೇ ವರದಿ ಸಲ್ಲಿಕೆಗೆ ಅವಕಾಶ ಇರೋಲ್ಲ. ಇದೀಗ ಬರ ಘೋಷಿತ ಆಯಾ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಲಾಗುತ್ತದೆ. ಅಲ್ಲದೆ ಆಗಸ್ಟ್&zwnj; ಮಾಸಾಂತ್ಯ ಹಾಗೂ ಸೆಪ್ಟೆಂಬರ್&zwnj; ವರಗಿನ ಮುಂಗಾರು ಮಳೆಯನ್ನಾಧರಿಸಿ ಸರ್ಕಾರ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆಯಿದೆ.&lt;/p&gt;&lt;p&gt;&lt;strong&gt;- ಆರ್&zwnj;. ದೇವಿಕಾ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ&lt;/strong&gt;&lt;/p&gt;]]></content:encoded>
            <category>bidar</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bidar-drought-hit-taluks-list-bhalki-aurad-excluded-farmers-outrage-sat/articleshow-xfg8bse"/>
        </item>
    </channel>
</rss>
