<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 09 Aug 2026 07:06:24 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಬೆಂಗಳೂರು: ಹಿಂದಿ ಬರಲ್ಲವೆಂದ ಕನ್ನಡಿಗನ ಮೇಲೆ ಹಿಂದಿವಾಲಾಗಳಿಂದಲೇ ಹಲ್ಲೆ!]]></title>
            <link>https://kannada.asianetnews.com/viral/north-indians-assault-bengaluru-delivery-boy-for-not-knowing-hindi-rav/articleshow-6bmdgmk</link>
            <guid isPermaLink="true">https://kannada.asianetnews.com/viral/north-indians-assault-bengaluru-delivery-boy-for-not-knowing-hindi-rav/articleshow-6bmdgmk</guid>
            <pubDate>Sun, 09 Aug 2026 07:06:19 +0530</pubDate>
            <description><![CDATA[ಬೆಂಗಳೂರಿನ ಯಲಹಂಕದಲ್ಲಿ ಹಿಂದಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್ ಬಸವರಾಜ್ ಮೇಲೆ ಪರಭಾಷಿಕರು ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಿಹಾರ ಮೂಲದ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj1v32njne0nx0f4yp75aeq,imgname-----------------------2026-08-09t065238.023-1786238569557.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.9): &lt;/strong&gt;ಹಿಂದಿಯಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಹಿಂದಿ ಭಾಷಿಕರು ಹಲ್ಲೆ ನಡೆಸಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ನೆರೆ ರಾಜ್ಯದ ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಹಲ್ಲೆಗೊಳಗಾದ ಯಾದಗಿರಿಯ ಶಹಾಪುರ ಮೂಲದ ಬಸವರಾಜ್&zwnj; ನೀಡಿದ ದೂರಿನ ಮೇರೆಗೆ ಬಿಹಾರ ಮೂಲದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.&lt;/p&gt;&lt;h2&gt;ಪ್ರಕರಣದ ವಿವರ:&lt;/h2&gt;&lt;p&gt;ಕೆಲವು ವರ್ಷಗಳಿಂದ ನಗರದಲ್ಲಿ ವಾಸವಾಗಿರುವ ಬಸವರಾಜ್&zwnj;, ಬಿ.ಎಡ್&zwnj; ವ್ಯಾಸಂಗ ಮಾಡುತ್ತಿದ್ದು ಪಾರ್ಟ್&zwnj; ಟೈಂನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಆ. 8ರಂದು ಮುಂಜಾನೆ 4 ಗಂಟೆ ಸುಮಾರಿಗೆ ಡೆಲಿವರಿ ಕೆಲಸ ಮುಗಿಸಿ ಅಟ್ಟೂರಿನ ಸಂತೋಷ ನಗರದಿಂದ ಮನೆಗೆ ಕಡೆ ಹೋಗುವಾಗ ನಾಲ್ವರು ಯುವತಿಯರು ಇವರನ್ನು ನೋಡಿ ಹಿಂದಿಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಆಗ ಬಸವರಾಜು ಯಾಕೆ ಬೈಯುತ್ತಿದ್ದಿರಿ? ನನಗೆ ಹಿಂದಿ ಬರುವುದಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಾರೆ. ಈ ವೇಳೆ ನಾಲ್ವರು ಯುವತಿಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕೂಡಲೇ ಬಸವರಾಜ್&zwnj; ಅವರು ತಮ್ಮ ಸ್ನೇಹಿತ ಅಶೋಕ್&zwnj;ಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಯುವತಿಯರು ಸಹ ಇಬ್ಬರು ಹುಡುಗರನ್ನು ಸ್ಥಳಕ್ಕೆ ಕರೆಸಿಕೊಂಡರು.&lt;/p&gt;&lt;h3&gt;ಕಾಲಿನಿಂದ ಒದ್ದ ಯುವತಿಯರು&lt;/h3&gt;&lt;p&gt;ಸ್ಥಳಕ್ಕೆ ಬಂದ ಆ ಯುವಕರು ರಸ್ತೆಯಲ್ಲಿ ಬಿದ್ದಿದ್ದ ಕೋಲಿನಿಂದ ಏಕಾಏಕಿ ತನ್ನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕೆಳಗೆ ಬಿದ್ದಾಗ ಯುವತಿಯರು ಕೂಡ ಕಾಲಿನಲ್ಲಿ ಒದ್ದಿದ್ದಾರೆ. ಸ್ಥಳಕ್ಕೆ ಬಂದ ನನ್ನ ಸ್ನೇಹಿತನಿಗೂ ಹೊಡೆದು ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಬಸವರಾಜ್ ಆರೋಪಿಸಿದ್ದಾರೆ. ಬಸವರಾಜ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ವೇಳೆ ಯುವತಿಯರು ಮದ್ಯಸೇವಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;&lt;h3&gt;ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ&lt;/h3&gt;&lt;p&gt;ಘಟನೆಯನ್ನು ಖಂಡಿಸಿ ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವಂತೆ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರವೀಣ್ ಶೆಟ್ಟಿ ಮಾತನಾಡಿ, ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ ನಗರಕ್ಕೆ ಬಂದು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಕನ್ನಡಿಗರ ಮೇಲೆ ಪ್ರತಿನಿತ್ಯ ಪರಭಾಷಿಕರು ಹಲ್ಲೆ ಮಾಡುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ. ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/viral/north-indians-assault-bengaluru-delivery-boy-for-not-knowing-hindi-rav/articleshow-6bmdgmk"/>
        </item>
        <item>
            <title><![CDATA[ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?]]></title>
            <link>https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm</link>
            <guid isPermaLink="true">https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm</guid>
            <pubDate>Sat, 08 Aug 2026 20:43:34 +0530</pubDate>
            <description><![CDATA[&lt;p&gt;&lsquo;ಮಂತ್ರಿ ಆಗ್ಬೇಕು ಅಷ್ಟೇ..&rsquo; ಕೃಷ್ಣಪ್ಪ ಖಂಡತುಂಡ.! &lsquo;ಕೃಷ್ಣ&rsquo; ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.?&lt;/p&gt;]]></description>
            <media:content url="https://geo.dailymotion.com/player/x1tbu.html?video=xavzfji" medium="video" height="768" width="1024"/>
            <content:encoded><![CDATA[&lt;p&gt;&lsquo;ಮಂತ್ರಿ ಆಗ್ಬೇಕು ಅಷ್ಟೇ..&rsquo; ಕೃಷ್ಣಪ್ಪ ಖಂಡತುಂಡ.! &lsquo;ಕೃಷ್ಣ&rsquo; ಕೆಂಡ ಕೆಂಡ.. ತ್ಯಾಗಕ್ಕೆ ರೆಡಿ ಎಂದ ಬಾಲಕೃಷ್ಣ.! ಮಹಿಳಾ ಕಗ್ಗಂಟು ಬಿಡಿಸಲು ಅಸ್ತ್ರವಾಗ್ತಾರಾ ಅಪ್ಪ-ಮಗಳು.? ಅಂದರ್-ಬಾಹರ್ ಆಟ.. ಏನದು ಕೃಷ್ಣ ಗಾರುಡಿ ರಹಸ್ಯ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅದಲು-ಬದಲು ಆಟ. ಸಂಪುಟ ವಿಸ್ತರಣೆಯಾಗಿ ಸಚಿವರ ಪ್ರಮಾಣವಚನವೂ ಆಗಿದೆ.. ಖಾತೆ ಹಂಚಿಕೆ ಕಗ್ಗಂಟು ಇನ್ನೂ ಹಾಗೇ ಇದೆ. ಈ ಹಂತದಲ್ಲಿ ಸಂಪುಟದಲ್ಲೇನಾದ್ರೂ ಅದಲು-ಬದಲಾಗುತ್ತಾ.? ಯಾರಾದ್ರೂ ರಾಜೀನಾಮೆ ಕೊಡ್ತಾರಾ..? ಅಥವಾ ಹೈಕಮಾಂಡೇ ಕೊಡಿಸ್ತಾರಾ..? ಅವರ ಬದಲಾಗಿ ಹೊಸಬರು ಸಂಪುಟ ಸೇರ್ತಾರಾ..?&lt;/p&gt;&lt;p&gt;ಈ ರೀತಿಯ ಚರ್ಚೆ ಕೈ ಕೋಟೆಯಲ್ಲಿ ಜೋರಾಗಿದೆ. ಹಾಗಿದ್ರೆ ಇಂಥಹ ಚರ್ಚೆಗಳು ಶುರುವಾಗಿರೋದು ಯಾಕೆ..? ಅದಕ್ಕೆ ಕಾರಣಗಳೇನು..? ಇದಿಷ್ಟು ಎರಡು ಅದಲು-ಬದಲಿನ ಸಾಧ್ಯತೆಯ ಕುರಿತಾದ ಚರ್ಚೆಯಾಯ್ತು. ಇಷ್ಟೇ ಅಲ್ಲದೇ ಮತ್ತೆರಡು ಸಾಧ್ಯತೆಗಳು ಇವೆ. ಹಾಗಿದ್ರೆ ಆ ಸಾಧ್ಯತೆಗಳೇನು..? ಅವು ಕಾರ್ಯಸಾಧುವಾಗುವಂತಹ ಸಾಧ್ಯತೆಗಳೇ..? ಹೊಸತಾಗಿ ರಚನೆಯಾಗಿರೋ ಸಂಪುಟದಲ್ಲಿ ಮತ್ತೆ ಏನಾದ್ರೂ ಬದಲಾವಣೆ ಆಗುತ್ತಾ..? ಅಂತಹ ಸಾಧ್ಯಾಸಾಧ್ಯತೆಗಳೇನಾದ್ರೂ ಇವ್ಯಾ..? ಮಹಿಳಾ ಕೋಟವೂ ಫಿಲ್ ಆಗ್ಬೇಕು.&lt;/p&gt;&lt;p&gt;ಸಿದ್ದರಾಮಯ್ಯನವರ ಅಸಮಾಧಾನ ಕೂಡ ತಣ್ಣಗಾಗಬೇಕು ಅಂದ್ರೆ, ಅದ್ಯಕ್ಕಿನ್ಯಾವ ದಾರಿಗಳು ಉಳಿದುಕೊಂಡಿವೆ. ಇಷ್ಟೆಲ್ಲಾ ನೋಡಿದ್ಮೇಲೆ ನಿಮಗೊಂದು ಪ್ರಶ್ನೆ ಕಾಡುತ್ತೆ.. ಸಂಪುಟದಲ್ಲಿ ಬದಲಾವಣೆ ಮಾಡಲೇ ಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಸಂಪುಟ ವಿಸ್ತರಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ.. ಖಾತೆ ಹಂಚಿಕೆಯೂ ಆಗಿಲ್ಲ ಅಷ್ಟರಲ್ಲಿಯೇ ಸಂಪುಟದಲ್ಲಿ ಬದಲಾವಣೆ ಮಾಡಲೇಬೇಕಾ..? ಆ ಮಟ್ಟಿಗಿನ ಒತ್ತಡಕ್ಕೆ ಸರ್ಕಾರ ಹಾಗೂ ಹೈಕಮಾಂಡ್ ಸಿಲುಕಿದ್ಯಾ..? ಒಂದು ವೇಳೆ ಸಿಲುಕಿದ್ದೇ ಆದಲ್ಲಿ ಅದಕ್ಕೆ ಕಾರಣಗಳು ಏನೇನು..?&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/siddaramaiah-unhappy-whats-behind-the-fresh-karnataka-cabinet-change-buzz-gvd-videoshow-2xp7wzm"/>
        </item>
        <item>
            <title><![CDATA[ಮೈಸೂರು ನಿವೃತ್ತ ಶಿಕ್ಷಕರ ಖಾತೆಗೆ 1.33 ಕೋಟಿ ಕ್ಯಾಶ್ ಡೆಪಾಸಿಟ್; ITR ಕೂಡ ಇಲ್ಲ, 26 ದಿನ ತಡವಾದ ನೋಟಿಸ್‌ನಿಂದ ITATನಲ್ಲಿ ಬಿಗ್ ಗೆಲುವು]]></title>
            <link>https://kannada.asianetnews.com/viral/rs-1-33-crore-cash-deposit-no-itr-filing-yet-mysuru-senior-citizen-wins-income-tax-case-itat-bengaluru-suh/articleshow-9br356u</link>
            <guid isPermaLink="true">https://kannada.asianetnews.com/viral/rs-1-33-crore-cash-deposit-no-itr-filing-yet-mysuru-senior-citizen-wins-income-tax-case-itat-bengaluru-suh/articleshow-9br356u</guid>
            <pubDate>Sat, 08 Aug 2026 17:59:27 +0530</pubDate>
            <description><![CDATA[&lt;p&gt;ಮೈಸೂರಿನ ನಿವೃತ್ತ ಶಿಕ್ಷಕರ 1.33 ಕೋಟಿ ನಗದು ಠೇವಣಿ ಪ್ರಕರಣದಲ್ಲಿ 26 ದಿನ ತಡವಾಗಿ ತೆರಿಗೆ ನೋಟಿಸ್ ನೀಡಿದ್ದರಿಂದ ITAT ಬೆಂಗಳೂರು ಮರುಮೌಲ್ಯಮಾಪನ ಆದೇಶವನ್ನೇ ರದ್ದುಪಡಿಸಿ ಅವರ ಪರ ತೀರ್ಪು ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgnhxm41spqt1wk4a5tfezh,imgname-rs-1-33-crore-cash-deposit-no-itr-filing-yet-mysuru-senior-citizen-wins-income-tax-case-itat-bengaluru-1786192131716.jpg" type="image/jpeg" height="390" width="690"/>
            <content:encoded><![CDATA[&lt;p&gt;ಬ್ಯಾಂಕ್ ಖಾತೆಗಳಲ್ಲಿ ಬರೋಬ್ಬರಿ 1.33 ಕೋಟಿ ರೂಪಾಯಿ ನಗದು ಠೇವಣಿ ಮಾಡಿದ್ದರೂ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸದ ಕರ್ನಾಟಕದ ಮೈಸೂರಿನ ನಿವೃತ್ತ ಶಿಕ್ಷಕರೊಬ್ಬರು ತೆರಿಗೆ ಪ್ರಕರಣದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ಅವರ ವಿರುದ್ಧದ ಮರುಮೌಲ್ಯಮಾಪನ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ನಿವೃತ್ತ ಶಿಕ್ಷಕರ ಪರವಾಗಿ ತೀರ್ಪು ಬರಲು ಮುಖ್ಯ ಕಾರಣ ಅವರ ಬಳಿ 1.33 ಕೋಟಿ ರೂಪಾಯಿ ಹಣ ಇತ್ತು ಎಂಬುದಲ್ಲ. ಬದಲಾಗಿ ಆದಾಯ ತೆರಿಗೆ ಇಲಾಖೆ ಮರುಮೌಲ್ಯಮಾಪನದ ನೋಟಿಸ್ ನೀಡಿದ ಸಮಯವೇ ಕಾನೂನುಬದ್ಧ ಮಿತಿಯನ್ನು ಮೀರಿತ್ತು ಎಂಬುದು ಪ್ರಮುಖ ಕಾರಣವಾಗಿದೆ.&lt;/p&gt;&lt;h2&gt;1.33 ಕೋಟಿ ರೂಪಾಯಿ ನಗದು ಠೇವಣಿ ಹೇಗೆ ಪತ್ತೆಯಾಯಿತು?&lt;/h2&gt;&lt;p&gt;CBDT ಸ್ಥಾಪಿಸಿರುವ Risk Management Strategy (RMS) ವ್ಯವಸ್ಥೆಯಲ್ಲಿ ಮರಾಠಿಕ್ಯಾತನಹಳ್ಳಿ ಅವರ ಬ್ಯಾಂಕ್ ವಹಿವಾಟುಗಳು ರೆಡ್ ಫ್ಲ್ಯಾಗ್ ಆಗಿದ್ದವು. ಅವರು ಯಾವುದೇ ITR ಸಲ್ಲಿಸದ ಕಾರಣ, ಆ ವರ್ಷದಲ್ಲಿ ಅವರ ನಿಜವಾದ ಆದಾಯದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಇಲಾಖೆಗೆ ತಿಳಿದಿದ್ದ ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಆದಾಯದ ಮೂಲಗಳು ಕೃಷಿ ಚಟುವಟಿಕೆಗಳು ಮತ್ತು ಉಳಿತಾಯ ಬ್ಯಾಂಕ್ ಖಾತೆಗಳಿಂದ ಬಂದ ಬಡ್ಡಿ ಆಗಿದ್ದವು. ಆದರೆ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ನಗದು ಠೇವಣಿ ಆಗಿರುವುದು ಇಲಾಖೆಯ ಅನುಮಾನಕ್ಕೆ ಕಾರಣವಾಯಿತು.&lt;/p&gt;&lt;h2&gt;RMSನಲ್ಲಿ ಪತ್ತೆಯಾದ ವಹಿವಾಟುಗಳೇನು?&lt;/h2&gt;&lt;p&gt;2015-16ನೇ ಮೌಲ್ಯಮಾಪನ ವರ್ಷಕ್ಕೆ (AY 2015-16) ಸಂಬಂಧಿಸಿದಂತೆ CBDTಯ RMS ವ್ಯವಸ್ಥೆಯಲ್ಲಿ ಈ ವಹಿವಾಟುಗಳು ದಾಖಲಾಗಿದ್ದವು;&lt;/p&gt;&lt;p&gt;ಬ್ಯಾಂಕ್ ಆಫ್ ಬರೋಡಾ ಉಳಿತಾಯ ಖಾತೆಯಲ್ಲಿ ₹10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ , ಒಟ್ಟು ಮೊತ್ತ 13 ಲಕ್ಷ ರೂಪಾಯಿ. ಕೆನರಾ ಬ್ಯಾಂಕ್ ಖಾತೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಒಟ್ಟು ಮೊತ್ತ 60 ಲಕ್ಷ ರೂಪಾಯಿ. 50,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ನಗದು ಠೇವಣಿಗಳು ಒಟ್ಟು ಮೊತ್ತ 60 ಲಕ್ಷ ರೂಪಾಯಿ. ಬ್ಯಾಂಕ್ ಆಫ್ ಬರೋಡಾದಿಂದ ಬಡ್ಡಿ ಆದಾಯ 12,701 ರೂಪಾಯಿ. ಒಟ್ಟು ಸುಮಾರು 1.33 ಕೋಟಿ ರೂಪಾಯಿ. ಈ ಮಾಹಿತಿಯ ಆಧಾರದ ಮೇಲೆ, ಮರಾಠಿಕ್ಯಾತನಹಳ್ಳಿ ಅವರು 2015-16ನೇ ಸಾಲಿನಲ್ಲಿ ಬಹಿರಂಗಪಡಿಸದ ಆದಾಯ ಹೊಂದಿರಬಹುದು ಎಂದು ಆದಾಯ ತೆರಿಗೆ ಇಲಾಖೆ ಶಂಕಿಸಿತು.&lt;/p&gt;&lt;h2&gt;ಮಾರ್ಚ್ 26, 2022ರಂದು ಮೊದಲ ನೋಟಿಸ್&lt;/h2&gt;&lt;p&gt;ಈ ಹಿನ್ನೆಲೆಯಲ್ಲಿ ಮಾರ್ಚ್ 26, 2022ರಂದು ಸೆಕ್ಷನ್ 148A(b) ಅಡಿಯಲ್ಲಿ ತೆರಿಗೆ ನೋಟಿಸ್ ನೀಡಲಾಯಿತು. ಆದರೆ ಮರಾಠಿಕ್ಯಾತನಹಳ್ಳಿ ಅವರು ಈ ನೋಟಿಸ್&zwnj;ಗೆ ಪ್ರತಿಕ್ರಿಯಿಸಲಿಲ್ಲ ಅಥವಾ ಪ್ರತಿಕ್ರಿಯಿಸಲು ಹೆಚ್ಚುವರಿ ಸಮಯವನ್ನೂ ಕೇಳಲಿಲ್ಲ. ನಂತರ ಏಪ್ರಿಲ್ 26, 2022ರಂದು ಸೆಕ್ಷನ್ 148A(d) ಅಡಿಯಲ್ಲಿ ಆದೇಶ ಹೊರಡಿಸಲಾಯಿತು. AY 2015-16ಕ್ಕೆ ಸಂಬಂಧಿಸಿದಂತೆ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡಲು ಇದು ಸೂಕ್ತ ಪ್ರಕರಣ ಎಂದು AO ನಿರ್ಧರಿಸಿದರು. ಅದೇ ದಿನ ಸೆಕ್ಷನ್ 148ರ ಅಡಿಯಲ್ಲಿ ಮತ್ತೊಂದು ನೋಟಿಸ್ ನೀಡಿ, ನೋಟಿಸ್ ಸ್ವೀಕರಿಸಿದ 30 ದಿನಗಳೊಳಗೆ ITR ಸಲ್ಲಿಸುವಂತೆ ಸೂಚಿಸಲಾಯಿತು.&lt;/p&gt;&lt;h2&gt;ITR ಸಲ್ಲಿಸಿದರೂ ಮತ್ತೊಂದು ಸಮಸ್ಯೆ&lt;/h2&gt;&lt;p&gt;ಇದಕ್ಕೆ ಪ್ರತಿಕ್ರಿಯೆಯಾಗಿ ಮರಾಠಿಕ್ಯಾತನಹಳ್ಳಿ ITR ಸಲ್ಲಿಸಿದರು. ಆದರೆ ಅದನ್ನು ಇ-ವೆರಿಫೈ ಮಾಡಿರಲಿಲ್ಲ. ಹೀಗಾಗಿ ಆ ITR ಅಮಾನ್ಯವೆಂದು ಪರಿಗಣಿಸಲಾಯಿತು. ನಂತರ AO ಅವರು ಸೆಕ್ಷನ್ 142(1) ಅಡಿಯಲ್ಲಿ ವಿವಿಧ ನೋಟಿಸ್&zwnj;ಗಳನ್ನು ಹಾಗೂ ಶೋಕಾಸ್ ನೋಟಿಸ್&zwnj;ಗಳನ್ನು ನೀಡಿದರು. ಮರಾಠಿಕ್ಯಾತನಹಳ್ಳಿ ಅವರು ಇವುಗಳಿಗೆ ಭಾಗಶಃ ಮಾತ್ರ ಪ್ರತಿಕ್ರಿಯಿಸಿದರು. ಅಂತಿಮವಾಗಿ ಫೆಬ್ರವರಿ 29, 2024ರಂದು ಸೆಕ್ಷನ್ 147ರ ಜೊತೆಗೆ ಸೆಕ್ಷನ್ 144ರ ಅಡಿಯಲ್ಲಿ ಮರುಮೌಲ್ಯಮಾಪನ ಆದೇಶ ಹೊರಬಂದಿತು. ಅವರ ಒಟ್ಟು ಅಂದಾಜು ಆದಾಯವನ್ನು ಸುಮಾರು ₹48.85 ಲಕ್ಷ ಎಂದು ನಿಗದಿಪಡಿಸಲಾಯಿತು. ಇದರಲ್ಲಿ ಸುಮಾರು 48.73 ಲಕ್ಷವನ್ನು ಸೆಕ್ಷನ್ 69A ಮತ್ತು ಸೆಕ್ಷನ್ 115BBE ಅಡಿಯಲ್ಲಿ ವಿವರಿಸಲಾಗದ ಹಣ ಎಂದು ಪರಿಗಣಿಸಲಾಗಿತ್ತು.&lt;/p&gt;&lt;h2&gt;CIT(A)ಯಲ್ಲಿ ಸೋಲು, ITATನಲ್ಲಿ ಗೆಲುವು&lt;/h2&gt;&lt;p&gt;ಈ ಆದೇಶದಿಂದ ಅಸಮಾಧಾನಗೊಂಡ ಮರಾಠಿಕ್ಯಾತನಹಳ್ಳಿ ಅವರು CIT(A) ಮುಂದೆ ಮೇಲ್ಮನವಿ ಸಲ್ಲಿಸಿದರು. ಆದರೆ ಅಲ್ಲಿ ಅವರಿಗೆ ಪರಿಹಾರ ಸಿಗಲಿಲ್ಲ. ಇದಾದ ಬಳಿಕ ಅವರು ಬೆಂಗಳೂರಿನ ITAT ಮೊರೆ ಹೋದರು. ಏಪ್ರಿಲ್ 15, 2026ರಂದು ITAT ಬೆಂಗಳೂರು SMC ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಬಳಿಕ ಜುಲೈ 10, 2026ರಂದು ಅವರ ಪರವಾಗಿ ಆದೇಶ ನೀಡಿತು. ಈ ಪ್ರಕರಣದಲ್ಲಿ ಅವರನ್ನು ಚಾರ್ಟರ್ಡ್ ಅಕೌಂಟೆಂಟ್ ಅತುಲ್ ಸಿಜೆ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಸಿದ್ದೇಶ್ ಎನ್. ಗಡ್ಡಿ ಪ್ರತಿನಿಧಿಸಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/rs-1-33-crore-cash-deposit-no-itr-filing-yet-mysuru-senior-citizen-wins-income-tax-case-itat-bengaluru-suh/articleshow-9br356u"/>
        </item>
        <item>
            <title><![CDATA[ಬೆಂಗಳೂರಲ್ಲಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ, ಪಿಒಪಿ, ರಾಸಾಯನಿಕ ಗಣೇಶ ವಿಗ್ರಹ ನಿಷೇಧ]]></title>
            <link>https://kannada.asianetnews.com/karnataka-districts/bengaluru-ganesh-chaturthi-guidelines-issued-pop-and-chemical-idols-banned/articleshow-31v0x3g</link>
            <guid isPermaLink="true">https://kannada.asianetnews.com/karnataka-districts/bengaluru-ganesh-chaturthi-guidelines-issued-pop-and-chemical-idols-banned/articleshow-31v0x3g</guid>
            <pubDate>Sat, 08 Aug 2026 17:59:07 +0530</pubDate>
            <description><![CDATA[&lt;p&gt;ಗಣೇಶ ಹಬ್ಬದ ತಯಾರಿಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಆರಂಭದಲ್ಲಿ ಖಡಕ್ ಮಾರ್ಗಸೂಚಿ ಪ್ರಕಟಿಸಿದೆ. ಕೆಲ ಪ್ರಮುಖ ನಿರ್ಬಂಧನೆ, ನಿಷೇಧಗಳನ್ನು ಹೇರಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k41zjmcsxr89d1cnrj3z768r,imgname-ganesh-chaturthi-2025-02-1756708295065.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.08)&lt;/strong&gt; ಗಣೇಶ ಹಬ್ಬಕ್ಕಾಗಿ ತಯಾರಿಗಳು ಈಗಿನಿಂದಲೇ ಆರಂಭಗೊಂಡಿದೆ. ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಸಂಭ್ರಮ. ಈಗಾಗಲೇ ಗಣೇಶನ ವಿಗ್ರಹ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರು ವ್ಯಾಪ್ತಿಯಲ್ಲಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ ಹೊರಬಂದಿದೆ. ಆರಂಭಿಕ ಹಂತದಲ್ಲಿ ಪರಿಸರ ಪೂರಕ ಗಣೇಶ ವಿಗ್ರಹಗಳಿಗೆ ಮಾತ್ರ ಅವಕಾಶವಿದೆ. ಪಿಒಪಿ ಹಾಗೂ ಯಾವುದೇ ರಾಸಾಯನಿಕ ವಸ್ತುಗಳ ಗಣೇಶ ವಿಗ್ರಹ ತಯಾರಿಗೆ, ಮಾರಾಟ, ವಿಸರ್ಜನೆಗೆ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.&lt;/p&gt;&lt;p&gt;Pop ಹಾಗೂ ರಾಸಾಯನಿಕ ಗುಣವುಳ್ಳ ಗಣೇಶ ವಿಗ್ರಹ ತಯಾರಿಕೆ, ಮಾರಾಟ, ಸಂಗ್ರಹ, ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳಿಗೆ ಬ್ರೇಕ್ ಹಾಕಲಾಗಿದೆ. ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣ ಬಳಕೆಯ ವಿಗ್ರಹಗಳಿಗೂ ನಿಷೇಧ ಹೇರಲಾಗಿದೆ. ಹೀಗಾಗಿ POP ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟೇ ಅಲ್ಲ ಕೆರೆ, ಬಾವಿ ಸೇರಿದಂತೆ ಯಾವುದೇ ಜಲಮೂಲದಲ್ಲಿ POP ವಿಗ್ರಹ ವಿಸರ್ಜನೆಗೆ ನಿರ್ಬಂಧ ಹೇರಲಾಗಿದೆ.&lt;/p&gt;&lt;h2&gt;ನಿಯಮ ಉಲ್ಲಂಘಿಸಿದರೆ 1986ರ ಕಾಯ್ದೆ ಅಡಿ ಕ್ರಮ&lt;/h2&gt;&lt;p&gt;ಜಲಮೂಲಗಳ ಮಾಲಿನ್ಯ ತಡೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ ನೀರಿನ ಮೂಲಗಳು ಯಾವುದೇ ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಭಾರ ಲೋಹಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ವಿಗ್ರಹಗಳು ಹಾಗು ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪರಿಸರ ಸಂರಕ್ಷಣಾ ಕಾಯ್ದೆ 1986ರ ಅಡಿ ಉಲ್ಲಂಘನೆ ದಂಡನೀಯ ಅಪರಾಧವಾಗಿದೆ.&lt;/p&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಬರುವಂತಹ ಪ್ರದೇಶಗಳಲ್ಲಿ ಪ್ರತಿ ವರ್ಷ ಹಬ್ಬ-ಹರಿದಿನಗಳಂದು ಪೂಜಿಸಲ್ಪಟ್ಟ ವಿಗ್ರಹಗಳನ್ನು ಕೆರೆ, ಬಾವಿ ಹಾಗೂ ಇತರೆ ನೀರಿನ ಮೂಲಗಳಲ್ಲಿ ವ್ಯಾಪಕವಾಗಿ ವಿಸರ್ಜನೆ ಮಾಡಲಾಗುತ್ತಿದೆ. ಈ ವಿಗ್ರಹಗಳಿಗೆ ಭಾರೀ ಲೋಹಗಳನ್ನೊಳಗೊಂಡ ರಾಸಾಯನಿಕ ಬಣ್ಣಗಳನ್ನು ಅಳವಡಿಸಿ ಮತ್ತು ಕೃತಕ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗುತ್ತದೆ. ಜಾಗರೂಕತೆ ಹಾಗೂ ಕಾಳಜಿ ವಹಿಸದೆ ವಿಗ್ರಹಗಳ ವಿಸರ್ಜನೆ ಮಾಡಲಾಗುತ್ತದೆ. ಇದರಿಂದ ಜಲ ಹಾಗೂ ಭೂಮಿ ಕಲುಷಿತಗೊಂಡು ಪರಿಸರಕ್ಕೆ ಹಾನಿಯಾಗುತ್ತದೆ. ಜಲ ಮೂಲಗಳಲ್ಲಿರುವ ಜೀವ ರಾಶಿಗೆ ಅಪಾಯವಾಗುತ್ತದೆ. ಪರಿಸರ ಹಾನಿಯನ್ನು ತಡೆಗಟ್ಟುವುದು ಎಲ್ಲರ ಜವಾಬ್ದಾರಿ ಹಾಗು ಆದ್ಯ ಕರ್ತವ್ಯವಾಗಿದೆ ಎಂದು ಜಿಬಿಎ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/bengaluru-ganesh-chaturthi-guidelines-issued-pop-and-chemical-idols-banned/articleshow-31v0x3g"/>
        </item>
        <item>
            <title><![CDATA[ಬೆಂಗಳೂರಿನ 29 ಸ್ಥಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿಗಳ ಮೇಲೆ ಪೊಲೀಸ್ ದಾಳಿ, 1909 ಮಂದಿ ವಶ]]></title>
            <link>https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24</link>
            <guid isPermaLink="true">https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24</guid>
            <pubDate>Sat, 08 Aug 2026 16:23:28 +0530</pubDate>
            <description><![CDATA[&lt;p&gt;ಬೆಂಗಳೂರಿನ 29 ಕಡೆ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಪೊಲೀಸರು ದಾಳಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಈ ದಾಳಿ ನಡೆದಿದ್ದು ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgg2dd8bzx3j526p35y17xt,imgname-illegal-bangladeshi-1786186380711.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಆ.08) ಪಶ್ಚಿಮ ಬಂಗಾಳ, ಅಸ್ಸಾಂ ಗಡಿಗಳಲ್ಲಿ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಅಕ್ರಮ ಬಾಂಗ್ಲಾದೇಶಿಗಳು ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಅನ್ನೋ ಆರೋಪಗಳು ಹಲವು ಬಾರಿ ಸಾಬೀತಾಗಿದೆ. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 23 ವಿಶೇಷ ಪೊಲೀಸ್ ತಂಡಗಳು 29 ಕಡೆ ದಾಳಿ ಮಾಡಿದೆ. ಈ ವೇಳೆ ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಮುಂಜಾನೆ ನಾಲ್ಕು ಗಂಟೆಗೆ ಪೊಲೀಸ್ ದಾಳಿ&lt;/h2&gt;&lt;p&gt;ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೈಕೋರ್ಟ್ ಕೂಡ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಉವ ವಿಭಾಗದ ಡಿಸಿಪಿ ಎಮ್.ನಾರಾಯಣ್ ನೇತೃತ್ವದಲ್ಲಿ ವಲಸಿಗರ ಕಾರ್ಯಪಡೆ ರಚನೆ ಮಾಡಲಾಗಿತ್ತು. 23 ವಿಶೇಷ ಪೊಲೀಸ್ ತಂಡಗಳು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ದಕಾರ್ಯಾಚರಣೆ ನಡೆಸಲಾಗಿದೆ. ಇಂದು ಮುಂಜಾನೆ 4 ಗಂಟಗೆ ಏಕಕಾಲದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.&lt;/p&gt;&lt;p&gt;29 ಸ್ಥಳಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 295 ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ 1909 ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 15 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಎಂದು ದೃಢವಾಗಿದೆ.&lt;/p&gt;&lt;h2&gt;ಬಂಗಾಳ, ಅಸ್ಸಾಂ ಮೂಲದ ನಕಲಿ ಆಧಾರ್ ಕಾರ್ಡ್&lt;/h2&gt;&lt;p&gt;ಅಕ್ರಮ ವಲಸಿಗರ ಕೈಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ವಿಳಾಸದ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿಗಳು ಪತ್ತೆಯಾಗಿದೆ. ಹೀಗಾಗಿ ಪೊಲೀಸರು 1894 ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತರ ವೀಸಾ, ಪಾಸ್ ಪೋರ್ಟ್, ಮತ್ತು ರಾಷ್ಟೀಯತೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ದೃಢಪಟ್ಟಿರುವ 15 ಮಂದಿ ಬಾಂಗ್ಲಾ ದೇಶದ ಬಾಗೇರಹತ್ ನ ಖುಲ್ನಾ ಜಿಲ್ಲೆಯವರು. ಇವರು ಅಕ್ರಮವಾಗಿ ಭಾರತ ಗಡಿ ನುಸುಳಿ ಬಂದು ಇಲ್ಲಿನ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಭಾರತದಲ್ಲಿ ಕೆಲ ಸ್ಥಳೀಯರು ಇವರಿಗೆ ನೆರವು ನೀಡಿರುವ ಕುರಿತು ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಕೆಲವರು ನೈತಿಕ ಪೊಲೀಸ್&zwnj;ಗಿರಿ ಮಾಡುತ್ತಾರೆ. ಬಾಂಗ್ಲಾ ದೇಶಿಯರ ಶೇಡ್ ಮೇಲೆ ದಾಳಿ ಮಾಡುತ್ತಾರೆ. ಅವರನ್ನ ಹೆದರಿಸಿ ಬೆದರಿಸಿ ಕೆಲವರು ಹಣ ಹಾಕಿಸಿಕೊಳ್ತಾರೆ.ಸುಲಿಗೆ ಮಾಡುತ್ತಿದ್ದಾರೆ. ನಿಮಗೆ ಬಾಂಗ್ಲಾ ದೇಶಿಯರು ಅಂತ ತಿಳಿದರೆತಕ್ಷಣವೇ ಪೊಲೀರಿಗೆ ಮಾಹಿತಿ ನೀಡಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-police-crack-down-on-illegal-bangladeshi-nationals-1909-detained/articleshow-9vayp24"/>
        </item>
        <item>
            <title><![CDATA[Bengaluru: ಹೆಂಡಿತಿ ರೀಲ್ಸ್ ನೋಡುತ್ತಾಳೆ ಅಂತ ಕೊಲೆಗೈದು ಮೂಟೆ ಕಟ್ಟಿದ ಗಂಡ; ಆರೋಪಿ ಸಿಕ್ಕಿದ್ದೇ ರೋಚಕ!]]></title>
            <link>https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny</link>
            <guid isPermaLink="true">https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny</guid>
            <pubDate>Sat, 08 Aug 2026 16:13:58 +0530</pubDate>
            <description><![CDATA[&lt;p&gt;ತನಿಖೆ ಸಂದರ್ಭದಲ್ಲಿ ಆರೋಪಿ ಕೊಲೆಯ ಹಿಂದಿನ ಕಾರಣ ರಿವೀಲ್ ಮಾಡಿದ್ದು, 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದನಂತೆ. ಆದರೆ ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಬಳಿಕ ಆಕೆ ಗಂಡನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಳು ಅಂತ ಹೇಳಿದ್ದನಂತೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgfcc6gbdgjrrgbjtj8wj5x,imgname-bengaluru-police-1786185658576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಪತಿಯೇ ಪತ್ನಿಯ ಕುತ್ತಿಗೆ ಹಿಸುಕಿ ಕೊಲೆಗೈದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕುಂಬಳಗೋಡು ಪೊಲೀಸರು ಆರೋಪಿ ಧೀರಜ್ ಕುಮಾರ್&zwnj;ನನ್ನು ಬಂಧಿಸಿದ್ದು, ತನಿಖೆಯ ಸಂದರ್ಭದಲ್ಲಿ ಶಾಕಿಂಗ್ ವಿಚಾರಗಳು ಬೆಳಕಿಗೆ ಬಂದಿದೆ. ಬಿಹಾರದ ಮೂಲಕ 20 ವರ್ಷದ ರೀಮಾ ಕುಮಾರಿ ಮೃತ ದುರ್ದೈವಿಯಾಗಿದ್ದು, ಆಕೆಯ ಮೃತದೇಹ ಜುಲೈ 29ರಂದು ಬೆಡ್ ಶೀಟ್ ನಲ್ಲಿ ಮೂಟೆಕಟ್ಟಿದ ಸ್ಥಿತಿಯಲ್ಲಿ ಮನೆಯ ಬಾತ್&zwnj;ರೂಮ್&zwnj;ನಲ್ಲಿ ಪತ್ತೆಯಾಗಿತ್ತು.&lt;/p&gt;&lt;h2&gt;ಪ್ರೀತಿ ಮದುವೆಯಾಗಿದ್ದ ದಂಪತಿ&lt;/h2&gt;&lt;p&gt;ಈ ಬಗ್ಗೆ ಮಾತನಾಡಿರುವ ನೈಋತ್ಯ ವಿಭಾಗ ಡಿಸಿಪಿ ಅನಿತಾ ಹದ್ದಣ್ಣವರ್, ಕುಂಬಳಗೋಡು ಗೇರುಪಾಳ್ಯದಲ್ಲಿ 29ರಂದು ಮಹಿಳೆ ಮೃತದೇಹ ಸಿಕ್ಕಿತ್ತು. ಮನೆಯೊಂದ ನಾಲ್ಕನೇ ಮಹಡಿಯಲ್ಲಿ ದಂಪತಿ ವಾಸವಿದ್ದರು. ಪತ್ನಿ ಕೊಂದು ಪತಿ ಎಸ್ಕೇಪ್ ಆಗಿದ್ದ. ಧೀರಜ್ ಮತ್ತು ರೀಮಾ 10 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬಿಹಾರದಿಂದ ಪ್ರೀತಿಸಿ ಬೆಂಗಳೂರಿಗೆ ಬಂದು ಮದುವೆ ಮಾಡಿಕೊಂಡು ವಾಸವಿದ್ದರು. ಧೀರಜ್ ಕೂಲಿ ಕೆಲಸ ಮಾಡಿಕೊಂಡಿದ್ದ, ಆಕೆ ಕೂಡ ಕೂಲಿ ಕೆಲಸ ಮಾಡುತ್ತಿದ್ದರು. ಗಂಡನೇ ಹೆಂಡತಿಯನ್ನು ಕೊಲೆ ಮಾಡಿ ಪರಾರಿ ಆಗಿದ್ದ. ಒಂದು ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಿಕೊಡಲಾಗಿತ್ತು. ಮದುವೆ ಬಳಿಕ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಕೊಲೆ ದಿನ ಕೂಡ ಗಲಾಟೆ ಆಗಿದೆ, ಈ ವೇಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಿದ್ದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;ಆರೋಪಿ ಬಂಧಿಸಿದ್ದೇ ರೋಚಕ!&lt;/h2&gt;&lt;p&gt;ಪ್ರಕರಣದಲ್ಲಿ ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸರಿಗೆ ದೊಡ್ಡ ಸವಾಲು ಎದುರಾಗಿತ್ತು. ಆರೋಪಿ ಬಿಹಾರದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಅವಿತು ಕೊಂಡಿದ್ದನಂತೆ. ಅಲ್ಲಿಗೆ ನೇರ ನೇರ ಪೊಲೀಸರು ಹೋಗೋದಕ್ಕೆ ಸಾಧ್ಯವಾಗುತ್ತಿರಲಿಲ್ಲವಂತೆ. ಪೊಲೀಸರು ನೇರ ತೆರಳಿ ಕಾರ್ಯಾಚರಣೆ ನಡೆಸಲು ನಕ್ಸಲರು ದಾಳಿ ಮಾಡುವ ಸಾಧ್ಯತೆ ಇತ್ತಂತೆ. ಹೀಗಾಗಿ ಬಿಹಾರ ಪೊಲೀಸರ ಸಹಾಯ ಪಡೆದುಕೊಂಡಿದ್ದ ಬೆಂಗಳೂರು ಕುಂಬಳಗೋಡು ಪೊಲೀಸರು, ಬಿಹಾರದ ನಕ್ಸಲ್ ಪೀಡಿತ ಪ್ರದೇಶ ಕೊಥಿಯ ಎಂಬ ಪ್ರದೇಶದಲ್ಲಿ ಪೂರ್ತಿ ವೆಪನ್ ಗಳ ಸಮೇತ ತೆರಳಿ ಆರೋಪಿಯನ್ನು ಬಂಧಿಸಿದ್ದರಂತೆ.&lt;/p&gt;&lt;h2&gt;ಜಗಳ ಶುರುವಾಗಿದ್ದು ಎಲ್ಲಿ?&lt;/h2&gt;&lt;p&gt;ಪ್ರೀತಿ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆಲಸ ಸಮಯ ಸಂತೋಷದಿಂದಲೇ ಸಂಸಾರ ನಡೆಸಿದ್ದರಂತೆ. ಆದರೆ ಕೆಲವು ದಿನಗಳ ಬಳಿಕ ರೀಮಾ ಬಿಡುವಿನ ಸಮಯ ಸಿಕ್ಕರೆ ಸಾಕು ರೀಲ್ಸ್ ನೋಡಿಕೊಂಡು ಕಾಲ ಕಳೆಯುತ್ತಿದ್ದಳಂತೆ. ಆ ಬಳಿಕ ಮನೆಯಲ್ಲಿ ಸರಿಯಾದ ಸಮಯಕ್ಕೆ ಅಡುಗೆ ಮಾಡದಿರೋದು, ಮನೆಯ ಎಲ್ಲಾ ಕೆಲಸ ಬಾಕಿ ಉಳಿಯುತಿತ್ತಂತೆ. ಇದರೊಂದಿಗೆ ದಂಪತಿ ನಡುವೆ ಜಗಳ ಶುರುವಾಗಿತ್ತಂತೆ. ರೀಲ್ಸ್ ನೋಡುದು ಕಡಿಮೆ ಮಾಡಿ ಕೆಲಸ ಕಡೆ ಗಮನಕೊಡಲು ಧೀರಜ್ ಹೇಳ್ತಿದ್ದನಂತೆ. ಆದರೆ ರೀಮಾ ವರ್ತನೆಯಲ್ಲಿ ಯಾವುದೇ ಬದಲಾವಣೆ ಬಂದಿರಲಿಲ್ಲವಂತೆ. ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವಂತೆ, ಕೊಲೆ ನಡೆದ ಜುಲೈ 25ರಂದು ಕೂಡ, ಕೆಲಸಕ್ಕೆ ಹೋಗಿ ವಾಪಸ್ ಬಂದಿದ್ದ ಧೀರಜ್ ಮನೆಯಲ್ಲಿ ಅಡುಗೆ ಮಾಡದಿರೋದನ್ನು ನೋಡಿ, ರೀಮಾ ಜೊತೆ ಜಗಳ ಶುರು ಮಾಡಿದ್ದನಂತೆ. ಈ ವೇಳೆ ಕೋಪದಲ್ಲಿ ಆರೋಪಿ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಹಾಸಿಗೆಯಲ್ಲಿ ಮೂಟೆ ಕಟ್ಟಿ, ಮನೆಗೆ ಬೀಗ ಹಾಕಿ ಬಿಹಾರಕ್ಕೆ ಎಸ್ಕೇಪ್ ಆಗಿದ್ದ ಎಂದು ಆರೋಪಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/news/husband-murders-wife-and-stuffs-her-body-in-bedsheet-because-she-kept-watching-reels-in-bengaluru-at-kumbalgodu-sns/articleshow-5ligmny"/>
        </item>
        <item>
            <title><![CDATA[ಡಿಕೆ ಶಿವಕುಮಾರ್ ಸರ್ಕಾರಕ್ಕೆ ಸುನಿಲ್ ಜೋಶಿ ಶಹಬ್ಬಾಶ್.. ಬೆಂಗಳೂರಿನ 233 ಅಂಗಡಿಗಳ ತೆರವಿಗೆ ಜೈ ಎಂದ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b</link>
            <guid isPermaLink="true">https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b</guid>
            <pubDate>Sat, 08 Aug 2026 13:25:27 +0530</pubDate>
            <description><![CDATA[&lt;p&gt;ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಏನಂದ್ರು ಜೋಶಿ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg5whee3wt17dvkydw95krg,imgname-cricketer-sunil-joshi-on-bengaluru-encroachment-removal-1786175702478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಅತ್ಯಂತ ಜನದಟ್ಟಣೆಯ ಪ್ರದೇಶಗಳಾದ ಕೆ.ಆರ್.ಮಾರುಕಟ್ಟೆ ಮತ್ತು ವಿಕ್ಟೋರಿಯಾ ಆಸ್ಪತ್ರೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬೃಹತ್ ಕಾರ್ಯಾಚರಣೆಯನ್ನು ಕಂಡು ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಸಂತಸ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೃಷ್ಣ ಬೈರೇಗೌಡ ಅವರ ಧೈರ್ಯದ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.&lt;/p&gt;&lt;h2&gt;&lt;strong&gt;ಸುನಿಲ್ ಜೋಶಿ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಟ್ವೀಟ್ ಮಾಡಿರುವ ಸುನಿಲ್ ಜೋಶಿ, ಬೆಂಗಳೂರಿನ ಐತಿಹಾಸಿಕ ಕೋಟೆಯ ದೃಶ್ಯಾವಳಿ ಮತ್ತು ಪರಂಪರೆಯನ್ನು ರಕ್ಷಿಸುವುದು ಎಷ್ಟು ಮುಖ್ಯವೋ, ಪಾದಚಾರಿಗಳ ಸುರಕ್ಷತೆಗಾಗಿ ಫುಟ್&zwnj;ಪಾತ್&zwnj;ಗಳನ್ನು ಮರಳಿ ಪಡೆಯುವುದು ಅಷ್ಟೇ ಪ್ರಮುಖವಾಗಿದೆ. ಈ ಅತಿ ಅಗತ್ಯವಾದ ಕ್ರಮಕ್ಕಾಗಿ ಧನ್ಯವಾದಗಳು. ಇಂತಹ ಕಠಿಣ ಕ್ರಮಗಳು ನಿಜಕ್ಕೂ ಪ್ರಶಂಸನೀಯ ಎಂದು ಬರೆದುಕೊಂಡಿದ್ದಾರೆ. ಅವರು ತಮ್ಮ ಟ್ವೀಟ್&zwnj;ನಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಅವರನ್ನು ಟ್ಯಾಗ್ ಮಾಡುವ ಮೂಲಕ ಸರ್ಕಾರದ ಇಚ್ಛಾಶಕ್ತಿಯನ್ನು ಸ್ವಾಗತಿಸಿದ್ದಾರೆ.&lt;/p&gt;&lt;h2&gt;&lt;strong&gt;ಕಾರ್ಯಾಚರಣೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ಬೆಂಗಳೂರು ಫೋರ್ಟ್ (ಕೋಟೆ), ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯ ನಡುವಿನ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಸುಮಾರು 233 ಅಕ್ರಮ ಅಂಗಡಿಗಳನ್ನು ನಿರ್ಮಿಸಲಾಗಿತ್ತು. ಈ ಅಂಗಡಿಗಳ ಮಾಲೀಕರು ಹೊಂದಿದ್ದ ದಾಖಲೆಗಳು ನಕಲಿ ಎಂದು ಹೈಕೋರ್ಟ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು. 15 ದಿನಗಳೊಳಗೆ ಜಾಗ ಖಾಲಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೂ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ 20 ದಿನಗಳ ಕಾಲ ಕಾಯ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ತೆರವು ಕಾರ್ಯಾಚರಣೆ ನಡೆಸಿದೆ.&lt;/p&gt;&lt;h2&gt;&lt;strong&gt;ಸಾಮಾನ್ಯ ಜನರಿಗೆ ಸಿಕ್ಕ ಗೆಲುವು&lt;/strong&gt;&lt;/h2&gt;&lt;p&gt;ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣ ಬೈರೇಗೌಡ, ಪ್ರತಿದಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಬಳಸುವ ಲಕ್ಷಾಂತರ ಜನ ಸಾಮಾನ್ಯರಿಗೆ ಸಿಕ್ಕ ದೊಡ್ಡ ಗೆಲುವು ಇದು. ಸಾರ್ವಜನಿಕ ಜಾಗವನ್ನು ಕಾನೂನಾತ್ಮಕವಾಗಿ ಮರಳಿ ಪಡೆದ ನಮ್ಮ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಪಾದಚಾರಿಗಳಿಗೆ ಹಕ್ಕು ಕಲ್ಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಅದಕ್ಕೆ ಸುನಿಲ್ ಜೋಶಿ ಅವರಂತಹ ಗಣ್ಯರ ಬೆಂಬಲ ಸಿಕ್ಕಿರುವುದು ಸರ್ಕಾರದ ಉತ್ಸಾಹವನ್ನು ಹೆಚ್ಚಿಸಿದೆ. ಈ ಕಾರ್ಯಾಚರಣೆಯಿಂದಾಗಿ ಈಗ ಐತಿಹಾಸಿಕ ಬೆಂಗಳೂರು ಕೋಟೆಯ ಅಂದ ಕೂಡ ಹೆಚ್ಚಾಗಿದ್ದು ರಸ್ತೆಗಳು ವಿಶಾಲವಾಗಿ ಕಾಣುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.&lt;/p&gt;&lt;p&gt;Thank you Sir @KrishnaByreGowda for this excellent &amp;amp; much-needed initiative.  &amp;nbsp;Clearing these encroachments and reclaiming our footpaths for pedestrians is a significant step towards a safer, cleaner &amp;amp; more accessible Bengaluru. Protecting the visibility and heritage of the&hellip; https://t.co/LMNVf07wLt&lt;/p&gt;&lt;p&gt;&mdash; Sunil Joshi |  ಸುನಿಲ್ ಜೋಶಿ (@SunilJoshi_Spin) August 8, 2026&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/former-indian-cricketer-sunil-joshi-strongly-supported-the-bengaluru-footpath-encroachment-removal-drive-gkn/articleshow-4ub0i6b"/>
        </item>
        <item>
            <title><![CDATA[Bengaluru Crime News: ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ; ಡುಪ್ಲೆಕ್ಸ್ ಮನೆಯಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ, ವರ್ಷದ ಹಿಂದೆ ಸಾವನ್ನಪ್ಪಿರುವ ಶಂಕೆ]]></title>
            <link>https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0</link>
            <guid isPermaLink="true">https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0</guid>
            <pubDate>Sat, 08 Aug 2026 12:58:40 +0530</pubDate>
            <description><![CDATA[&lt;p&gt;ಬೆಂಗಳೂರಿನ ಬಾಗಲಕುಂಟೆಯಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 57 ವರ್ಷದ ಮಹಿಳೆಯ ಅಸ್ಥಿಪಂಜರ ಅವರ ಮನೆಯಲ್ಲಿ ಪತ್ತೆಯಾಗಿದೆ. ಸುಮಾರು ಒಂದು ವರ್ಷದ ಹಿಂದೆ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jrj8nt9txnv2cdkjz5m62y5r,imgname-fotojet--47-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನ ಬಾಗಲಕುಂಟೆಯ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದ್ದು, ಒಂದು ವರ್ಷದ ಹಿಂದೆಯೇ ಆಕೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತಮಹಿಳೆಯನ್ನು 57 ವರ್ಷದ ದಾಕ್ಷಾಯಿಣಿ ಎಂದು ಗುರುತಿಸಲಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತರು ಒಂಟಿಯಾಗಿ ಡುಪ್ಲೆಕ್ಸ್ ಮನೆಯಲ್ಲಿ ವಾಸ ಮಾಡುತ್ತಿದ್ದರಂತೆ.&lt;/p&gt;&lt;h2&gt;&lt;strong&gt;ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪೊಲೀಸರು ನೀಡಿರುವ ಮಾಹಿತಿಯ ಅನ್ವಯ, ಸ್ಥಳೀಯರು ಘಟನೆಯ ಬಗ್ಗೆ ಶುಕ್ರವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು, ಮನೆಯ ಒಳಹೋಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಂಪೂರ್ಣವಾಗಿ ಕೊಳೆತು ಹೋಗಿದ್ದ ಅಸ್ಥಿಪಂಜರ ಕಂಡು ಬಂದಿತ್ತು.&lt;/p&gt;&lt;p&gt;ಮನೆಯೂ ಹಲವು ವರ್ಷಗಳಿಂದ ಕ್ಲೋಸ್ ಆಗಿತ್ತು. ಸ್ಥಳೀಯರು, ಮನೆ ಬ್ರೋಕರ್&zwnj;ಗಳು ಮನೆ ಬಾಡಿಗೆಗೆ ಸಿಗುತ್ತಾ ಎಂದು ಪರಿಶೀಲನೆ ನಡೆಸಲು ಮನೆಯ ಬಳಿ ಹೋಗಿದ್ದರು. ಆದರೆ ಮನೆಯಲ್ಲಿ ಹಲವು ದಿನಗಳಿಂದ ಯಾವುದೇ ಚಟುವಟಿಕೆಗಳು ನಡೆದಂತೆ ಕಂಡಬಾರದ ಕಾರಣ ಅನುಮಾನಗೊಂಡು ಮಾಹಿತಿ ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;ಬಾಗಲಕುಂಟೆ ಪೊಲೀಸರ ತಂಡದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ದಾಕ್ಷಾಯಣಿ ಅವರ ಅಸ್ಥಿಪಂಜರ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಸಂದರ್ಭದಲ್ಲಿ ಮಹಿಳೆ ಒಂದು ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;2005ರಲ್ಲಿ ಪುತ್ರ ಸಾವು&lt;/strong&gt;&lt;/h2&gt;&lt;p&gt;ಮಹಿಳೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸ ಮಾಡುತ್ತಿದ್ದರು. ಮೃತರ ಪುತ್ರ 2005ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದ. ಆ ಬಳಿಕ ತೀವ್ರವಾಗಿ ನೊಂದಿದ್ದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆ ಬಳಿಕ ಅವರ ಕುಟುಂಸ್ಥರು ಅವರಿಗೆ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು. ಆದರೆ 2017ರಲ್ಲಿ ಅವರ ಪತಿ ಉಮೇಶ್ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದರೊಂದಿಗೆ ಹವನೂರ್ ಲೇಔಟ್ ನಲ್ಲಿರುವ ಮನೆಯಲ್ಲಿ ಮಹಿಳೆ ಒಬ್ಬರೇ ವಾಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ತನಿಖೆ ಮುಂದುವರಿಸಿದ ಪೊಲೀಸರು&lt;/strong&gt;&lt;/h2&gt;&lt;p&gt;ಮೃತಮಹಿಳೆಯ ಸಹೋದರ 50 ವರ್ಷದ ಮಹೇಶ್ ಅವರು ನೀಡಿರುವ ಮಾಹಿತಿಯ ಅನ್ವಯ, ಕಳೆದ ಎರಡು ವರ್ಷಗಳಿಂದ ಅವರಿಗೆ ಸಹೋದರಿಯೊಂದಿಗೆ ಸಂಪರ್ಕ ಇರಲಿಲ್ಲವಂತೆ. ಸದ್ಯ ಕುಟುಂಬಸ್ಥರು ಅವರ ಸಾವಿನ ಬಗ್ಗೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಇದರೊಂದಿಗೆ ಪೊಲೀಸರು, ಅನುಮಾನಸ್ಪದ ಸಾವಿನ ಅಡಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿ, ನಾವು ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಇದು ಮಹಿಳೆ ಯಾವ ಸಮಯದಲ್ಲಿ ಸಾವನ್ನಪ್ಪಿದ್ದರು ಅಂತ ಖಚಿತಪಡಿಸಲು ಮುಂದಾಗಿದ್ದೇವೆ. ಪ್ರಕರಣದ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/news/shocking-incident-in-bengaluru-woman-s-skeleton-found-in-a-duplex-house-bagalagunte-sns/articleshow-0zgkal0"/>
        </item>
        <item>
            <title><![CDATA[ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ]]></title>
            <link>https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</link>
            <guid isPermaLink="true">https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</guid>
            <pubDate>Sat, 08 Aug 2026 12:29:15 +0530</pubDate>
            <description><![CDATA[ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ನೀಲಿ ಮಾರ್ಗದ ಕಾಮಗಾರಿ ಶೇ. 72.75ರಷ್ಟು ಪೂರ್ಣಗೊಂಡಿದ್ದು, 2026-27ರ ನಡುವೆ ಹಂತ ಹಂತವಾಗಿ ತೆರೆಯುವ ನಿರೀಕ್ಷೆಯಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ 3ನೇ ಹಂತದ ಆರೆಂಜ್ ಮಾರ್ಗವು ಕೇವಲ ಶೇ. 3.6ರಷ್ಟು ಪ್ರಗತಿ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzg2nqqd1adtxhws5p9sy497,imgname-namma-metro-1786172333804.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್ ಅನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನೀಲಿ ಮಾರ್ಗದ ಕಾಮಗಾರಿ ಸದ್ಯ ಶೇಕಡಾ 72.75 ರಷ್ಟು ಪೂರ್ಣಗೊಂಡಿದ್ದು, ನಿಗದಿತ ವೇಳಾಪಟ್ಟಿಯ ಪ್ರಕಾರ ಮುಂದುವರೆದಿದೆ ಎಂದು BMRCL ಹೇಳಿದೆ. ವಿಮಾನ ನಿಲ್ದಾಣ ಕಾರಿಡಾರ್ 2026 ರ ಅಂತ್ಯದಿಂದ 2027 ರ ಅಂತ್ಯದ ನಡುವೆ ಹಂತಗಳಲ್ಲಿ ತೆರೆಯುವ ನಿರೀಕ್ಷೆಯಿದ್ದರೂ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆಗಳು ಬಾಕಿ ಇರುವುದರಿಂದ 3 ನೇ ಹಂತದ ಆರೆಂಜ್ ಮಾರ್ಗವು ಕೇವಲ 3.6% ಪ್ರಗತಿಯನ್ನು ಸಾಧಿಸಿದೆ ಎಂದಿದೆ.&lt;/p&gt;&lt;p&gt;ಬಿಎಂಆರ್&zwnj;ಸಿಎಲ್ ವೇಳಾಪಟ್ಟಿಯ ಪ್ರಕಾರ, ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗವು 2026 ರ ಅಂತ್ಯದ ವೇಳೆಗೆ, ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2027 ರ ಮಧ್ಯಭಾಗದಲ್ಲಿ ಮತ್ತು ಕೆಆರ್ ಪುರಂ-ಹೆಬ್ಬಾಳ ವಿಭಾಗವು 2027 ರ ಅಂತ್ಯದ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋದ 58.19 ಕಿ.ಮೀ. ಹಂತಗಳನ್ನು ಒಳಗೊಂಡಿರುವ 2ಎ ಮತ್ತು 2ಬಿ ಹಂತಗಳು ಜೂನ್ ವೇಳೆಗೆ ಶೇ. 72.75 ಪೂರ್ಣಗೊಂಡಿದ್ದು, 72.09 ಕಿ.ಮೀ. ಹಂತ 2 ಯೋಜನೆಯು ಶೇ. 95.70 ಪೂರ್ಣಗೊಂಡಿದೆ. 14,788 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2ಎ ಮತ್ತು 2ಬಿ ಹಂತಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 58 ಕಿ.ಮೀ. ಬ್ಲೂ ಲೈನ್ ಕಾರಿಡಾರ್ ನಿರ್ಮಾಣ ಪ್ರಾರಂಭವಾದಾಗಿನಿಂದ ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ. ಸಿಲ್ಕ್ ಬೋರ್ಡ್-ಕೆಆರ್ ಪುರಂ ಎಲಿವೇಟೆಡ್ ವಿಭಾಗದ ಕೆಲಸವು ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು, ಆದರೆ ಕೆಆರ್ ಪುರಂ-ವಿಮಾನ ನಿಲ್ದಾಣದ ನಿರ್ಮಾಣವು 2022 ರ ಆರಂಭದಲ್ಲಿ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ಸವಾಲಾಗಿರುವ ಕಾಮಗಾರಿ&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಸಮಸ್ಯೆಗಳು, ಮರಗಳ ತೆರವು ವಿಳಂಬ, ಹೊರ ವರ್ತುಲ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆ, ಬಾಕಿ ಇರುವ ಅನುಮೋದನೆಗಳು ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕೆಆರ್ ಪುರಂ-ಹೆಬ್ಬಾಳ ವಿಭಾಗವು ಅತ್ಯಂತ ಸವಾಲಿನ ವಿಭಾಗವಾಗಿ ಮುಂದುವರೆದಿದೆ. ಜನವರಿ 2023 ರಲ್ಲಿ ಪಿಯರ್ ಕುಸಿದು ಮಹಿಳೆ ಮತ್ತು ಅವರ ಚಿಕ್ಕ ಮಗನ ಪ್ರಾಣ ಕಳೆದುಕೊಂಡ ನಂತರ ನಿರ್ಮಾಣ ಕಾರ್ಯದ ಮೇಲೂ ಪರಿಣಾಮ ಬೀರಿದೆ. ಬಿಎಂಆರ್ ಸಿಎಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗದಲ್ಲಿ ಅಕ್ಟೋಬರ್&zwnj;ನಲ್ಲಿ ಪ್ರಾಯೋಗಿಕ ಸಂಚಾರಗಳನ್ನು ಪ್ರಾರಂಭಿಸಲು ಯೋಜಿಸಿದ್ದರೂ, ಬೈಯಪ್ಪನಹಳ್ಳಿಗೆ ಡಿಪೋ ಸಂಪರ್ಕ ಮತ್ತು ಸಿಲ್ಕ್ ಬೋರ್ಡ್, ಇಬ್ಲೂರು ಮತ್ತು ಮಾರತಹಳ್ಳಿಯಂತಹ ನಿಲ್ದಾಣಗಳಲ್ಲಿ ನಾಗರಿಕ ನಿರ್ಮಾಣ ಸೇರಿದಂತೆ ಪ್ರಮುಖ ಕಾರ್ಯಗಳು ಇನ್ನೂ ಬಾಕಿ ಉಳಿದಿವೆ.&lt;/p&gt;&lt;h3&gt;&lt;strong&gt;ಅಡೆತಡೆ ಮೀರಿ ಆರಂಭ&lt;/strong&gt;&lt;/h3&gt;&lt;p&gt;ಈ ಅಡೆತಡೆಗಳ ಹೊರತಾಗಿಯೂ, ಯೋಜನೆಯ ಸಮಯವು ಬದಲಾಗದೆ ಉಳಿದಿದೆ ಎಂದು ಬಿಎಂಆರ್ ಸಿಎಲ್ ವಕ್ತಾರರು ತಿಳಿಸಿದ್ದಾರೆ. ಏತನ್ಮಧ್ಯೆ, 3ನೇ ಹಂತದ ಅಡಿಯಲ್ಲಿ 45 ಕಿಮೀ ಆರೆಂಜ್ ಲೈನ್ ಕೇವಲ ಶೇ. 3.6ರಷ್ಟು ಭೌತಿಕ ಪ್ರಗತಿಯನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆ ಅಂದಾಜು ರೂ. 15,611 ಕೋಟಿ ವೆಚ್ಚದಲ್ಲಿ ಅನುಮೋದನೆ ಪಡೆದ ಈ ಕಾರಿಡಾರ್, ಕೆಂಪಾಪುರವನ್ನು ಜೆಪಿ ನಗರದಿಂದ ಹೊರ ವರ್ತುಲ ರಸ್ತೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸುತ್ತದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ರೂ. 9,700 ಕೋಟಿ ವೆಚ್ಚದ, ಮೆಟ್ರೋ ಜೋಡಣೆಯ ಕೆಲವು ಭಾಗಗಳ ಮೇಲೆ ಯೋಜಿಸಲಾದ 37 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ ಆರೆಂಜ್ ಲೈನ್&zwnj;ನ ಕೆಲಸವು ಪ್ರಾಥಮಿಕವಾಗಿ ವಿಳಂಬವಾಗಿದೆ. ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಿಗೆ ಈಗಾಗಲೇ ಟೆಂಡರ್&zwnj;ಗಳನ್ನು ಕರೆಯಲಾಗಿದ್ದರೂ, ಪ್ರಸ್ತಾವನೆಗೆ ಅನುಮತಿ ಸಿಗುವವರೆಗೆ ಅನುಷ್ಠಾನವು ಸ್ಥಗಿತಗೊಂಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx"/>
        </item>
        <item>
            <title><![CDATA[Satish Jarkiholi: ದೆಹಲಿ ಭೇಟಿ ಬಳಿಕ ಜಾರಕಿಹೊಳಿ ಮಹತ್ವದ ಹೇಳಿಕೆ! ಹೊರಟ್ಟಿಗೆ ಬೆದರಿಕೆ ಹಾಕಲಾಯ್ತೇ?]]></title>
            <link>https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr</link>
            <guid isPermaLink="true">https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr</guid>
            <pubDate>Sat, 08 Aug 2026 12:23:04 +0530</pubDate>
            <description><![CDATA[&lt;p&gt;ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ದೆಹಲಿ ಭೇಟಿ ಸಹಜ ಎಂದಿದ್ದು, ಸೋಮವಾರದೊಳಗೆ ಸಚಿವರಿಗೆ ಖಾತೆ ಹಂಚಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ. ಸಚಿವ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯಗೆ ಒತ್ತಾಯಿಸಿದರು. ಸಭಾಪತಿ ಹೊರಟ್ಟಿಯವರಿಗೆ ಬೆದರಿಕೆ ಆರೋಪ ತಳ್ಳಿಹಾಕಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg2488vth3cv961ydqagyd4,imgname-----------------------2026-08-08t121854.359-1786171760923.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.8):&lt;/strong&gt; ದೆಹಲಿ ಭೇಟಿ ಸಹಜವಾದದ್ದು ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ದೆಹಲಿ ಭೇಟಿ ವಿಚಾರವಾಗಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.&lt;/p&gt;&lt;h2&gt;ಡಿಸಿಎಂ ವಿಚಾರ ಸದ್ಯಕ್ಕೆ ಚರ್ಚೆ ಇಲ್ಲ&lt;/h2&gt;&lt;p&gt;ಡಿಸಿಎಂ ಹುದ್ದೆ ವಿಚಾರವಾಗಿ ಸದ್ಯಕ್ಕೆ ಯಾವುದೇ ಚರ್ಚೆ ನಡೆದಿಲ್ಲ. ಮುಂದೆ ಅವಕಾಶ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ ಎಂದರು. ಇದೇ ವೇಳೆ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು 'ಇವತ್ತು ಅಥವಾ ನಾಳೆ ಸಿಎಂ ಅವರು ಖಾತೆ ಹಂಚಿಕೆ ಮಾಡಬಹುದು. ಸಿಎಂ ಅವರು ಇಂದು ದೆಹಲಿಗೆ ಹೋಗುತ್ತಿದ್ದಾರೆ. ಬಹುಶಃ ಸೋಮವಾರದವರೆಗೆ ಪ್ರಕ್ರಿಯೆ ನಡೆಯಬಹುದು. ಸೋಮವಾರದೊಳಗೆ ಅಂತಿಮಗೊಳಿಸುವ ನಿರೀಕ್ಷೆ ಇದೆ. ಸಂಪುಟದಲ್ಲಿ ಹಳಬರು ಹಾಗೂ ಅನುಭವ ಇರುವವರು ಇದ್ದಾರೆ. ಹೀಗಾಗಿ ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;h3&gt;ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ&lt;/h3&gt;&lt;p&gt;ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಈಗಾಗಲೇ ಎಲ್ಲರೂ ಈ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಮಾತನಾಡಿದ್ದಾರೆ. ಸಿಎಂ ಖುದ್ದಾಗಿ ದೆಹಲಿಗೆ ತೆರಳಿ ಚರ್ಚಿಸಿದ್ದಾರೆ. ಪಕ್ಷದ ಅಧ್ಯಕ್ಷರು ಹಾಗೂ ಇತರ ಸಚಿವರೂ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.&lt;/p&gt;&lt;p&gt;ಉತ್ತರ ಕರ್ನಾಟಕದಲ್ಲಿ ಒಬ್ಬರು ಕುರುಬರಿಗೆ ಅವಕಾಶಕ್ಕೆ ಸಿದ್ದರಾಮಯ್ಯ ಪಟ್ಟು&zwnj; ಹಿಡಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ಗೊಂದಲ ಇದೆ ಅದನ್ನು ಸರಿಪಡಿಸುವ ಪ್ರಯತ್ನ ನಮ್ಮ ವರಿಷ್ಠರು ಮಾಡುತ್ತಾರೆ ಎಲ್ಲನೂ ಸರಿ ಆಗುತ್ತೆ. ಎಲ್ಲದಕ್ಕೂ ಕಾಲ ಬೇಕು ಅಷ್ಟೇ ಎಂದರು.&lt;/p&gt;&lt;p&gt;&lt;strong&gt;ಸಂಪುಟದಲ್ಲಿ ಮಹಿಳೆಗೆ ಅವಕಾಶ ಬೇಕು&lt;/strong&gt;&lt;/p&gt;&lt;p&gt;ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಲೇಬೇಕು ಎಂದ ಸತೀಶ್ ಜಾರಕಿಹೊಳಿ ಅವರು, ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆ ಬೇಕೇ ಬೇಕು. ಈಗ 19 ಮಂದಿ ಇದ್ದಾರೆ, ಇನ್ನೊಂದು ಅವಕಾಶ ಇದೆ. ಯಾವುದೇ ಸರ್ಕಾರವಾಗಿರಲಿ ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಹೊರಟ್ಟಿ ರಾಜೀನಾಮೆಗೆ ಬೆದರಿಕೆ ಆರೋಪ ತಳ್ಳಿಹಾಕಿದ ಸತೀಶ್&lt;/strong&gt;&lt;/p&gt;&lt;p&gt;ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬೆದರಿಕೆ ಹಾಕಿ ರಾಜೀನಾಮೆ ಪಡೆದಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಹೊರಟ್ಟಿಯವರೇ ರಾಜೀನಾಮೆ ನೀಡಿದ್ದಾರೆ. ಅವರು ಅತ್ಯಂತ ಹಿರಿಯ ಶಾಸಕರು. ಅವರೇ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ. ನಾನು ಪತ್ರಿಕೆಯಲ್ಲಿ ನೋಡಿದ್ದೇನೆ ಎಂದರು.&lt;/p&gt;&lt;p&gt;ಸಭಾಪತಿ ಹೊರಟ್ಟಿ ರಾಜೀನಾಮೆ ವಿಚಾರಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅದು ಈಗ ಮುಗಿದು ಹೋಗಿದೆ. ಈಗಾಗಲೇ ರಾಜೀನಾಮೆ ನೀಡಲಾಗಿದ್ದು, ಅದನ್ನು ಸ್ವೀಕರಿಸಲಾಗಿದೆ ಎಂದು ಹೇಳಿದರು ಮುಂದುವರಿದು ಬೆದರಿಕೆ ಹಾಕುವಂತಹ ಕಾಲ ಇದಲ್ಲ. ಅವರು ಹಿರಿಯ ರಾಜಕಾರಣಿ, ಸಭಾಪತಿ. ಅವರಿಗೆ ಬೆದರಿಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/former-minister-satish-jarkiholi-reacts-on-basavaraj-horatti-resignation-rav/articleshow-g30vbxr"/>
        </item>
        <item>
            <title><![CDATA[Namma Metro: ಬೆಂಗಳೂರಿನ ವಾಹನ ಸವಾರರಿಗೆ ಗುಡ್‌ನ್ಯೂಸ್; ಈ ಮಾರ್ಗದಲ್ಲಿ ಟ್ರಾಫಿಕ್ ತಲೆನೋವಿಗೆ ಶೀಘ್ರವೇ ಪರಿಹಾರ!]]></title>
            <link>https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro</link>
            <guid isPermaLink="true">https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro</guid>
            <pubDate>Sat, 08 Aug 2026 12:03:28 +0530</pubDate>
            <description><![CDATA[&lt;p&gt;ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzg0zvfnm8nj7n5hbxnvmczk,imgname-hebbal-flyover-1786170568181.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಮ್ಮ ಮೆಟ್ರೋದಿಂದ ಬೆಂಗಳೂರಿನ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ಮೆಟ್ರೋದ ನೀಲಿ ಮಾರ್ಗದ ಯೋಜನೆಯ ನಿರ್ಮಾಣ ಕೆಲಸ ಶೇಕಡಾ 70ರಷ್ಟು ಮುಕ್ತಾಯವಾಗಿದ್ದು, 58.19 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು 14,788 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2027ರ ಅಂತ್ಯದ ವೇಳೆ ಸಂಪೂರ್ಣ ಮಾರ್ಗದ ಕಾಮಗಾರಿ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದೆ.&lt;/p&gt;&lt;h2&gt;&lt;strong&gt;58 ಕಿಲೋ ಮೀಟರ್ ಉದ್ದದ ಕಾರಿಡಾರ್&lt;/strong&gt;&lt;/h2&gt;&lt;p&gt;ನಮ್ಮ ಮೆಟ್ರೋದ ನೀಲಿ ಮಾರ್ಗವೂ ದಕ್ಷಿಣ ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಉತ್ತರದಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಕೆಆರ್ ಪುರ, ಹೆಬ್ಬಾಳ ಮತ್ತು ಯಲಹಂಕ ಮಾರ್ಗದಲ್ಲಿ ಮೆಟ್ರೋ ಸಾಗುತ್ತದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಮುಕ್ತಾಯವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾದರೆ ನಿತ್ಯ ಕಚೇರಿಗೆ ತೆರಳುವ ವಾಹನ ಸವಾರರಿಗೆ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಗಲಿದೆ.&lt;/p&gt;&lt;h2&gt;&lt;strong&gt;ನಮ್ಮ ಮೆಟ್ರೋ ಫೇಸ್ 2ಎ ಮತ್ತು 2ಬಿ&lt;/strong&gt;&lt;/h2&gt;&lt;p&gt;ನಮ್ಮ ಮೆಟ್ರೋದ ಫೇಸ್ 2ಎ- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರ ನಡುವೆ 19.75 ಕಿಲೋ ಮೀಟರ್. ಫೇಸ್ 2ಬಿ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಆರ್ ಪುರಂ ವರೆಗೂ ಹೆಬ್ಬಾಳ, ಯಲಹಂಕ ಮೂಲಕ 38.44 ಕಿಲೋ ಮೀಟರ್ ಮಾರ್ಗವನ್ನು ಹೊಂದಿದೆ. ಎರಡು ಕಾರಿಡಾರ್ ಒಟ್ಟು ಮಾರ್ಗ 58.19 ಕಿಲೋ ಮೀಟರ್ ಇದ್ದು, 30 ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.&lt;/p&gt;&lt;p&gt;ಬಿಎಂಆರ್ಸಿಎಲ್ ಮೂಲಗಳ ಅನ್ವಯ, ಸಿವಿಲ್ ವರ್ಕ್, ಟ್ರ್ಯಾಕ್ ನಿರ್ಮಾಣ, ಸಿಗ್ನಲ್ ಅಳವಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ಉಳಿದ ಕಾಮಗಾರಿಯನ್ನು 2027ರ ಅಂತ್ಯದ ವೇಳೆ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಬ್ಯುಸಿನೆಸ್ ಟುಡೇ ವರದಿ ಮಾಡಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಈ ಯೋಜನೆಯೂ ಆರಂಭದಿಂದಲೂ ಹಲವು ಸವಾಲುಗಳನ್ನು ಎದುರಿಸಿತ್ತು. ಭೂಮಿ ಒತ್ತುವರಿ, ಮರಗಳ ತೆರವು, ಟ್ರಾಫಿಕ್, ಔಟರ್ ರಿಂಗ್ ರೋಡ್, ಕಾರ್ಮಿಕರ ಸಮಸ್ಯೆ ಮತ್ತು ಸುರಕ್ಷತೆಯ ಸಮಸ್ಯೆಗಳು ಕಾಮಗಾರಿಯ ವೇಳೆ ಎದುರಾಗಿತ್ತು. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಯೋಜನೆಯನ್ನು 2027ರ ಅಂತ್ಯದ ವೇಳೆ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ನೀಲಿ ಮಾರ್ಗವೂ ಕಾರ್ಯಾಚರಣೆಯನ್ನು ಆರಂಭ ಮಾಡಿದರೆ ಬೆಂಗಳೂರಿನ ಐಟಿ ಕಾರಿಡಾರ್ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಡುವೆ ನೇರ ಸಂಪರ್ಕ ಸಾಧ್ಯವಾಗುತ್ತದೆ. ನಿತ್ಯ 6.15 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚಾರ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ತೆರಳುವ ಹಾಗೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರು ರಸ್ತೆ ಮಾರ್ಗಕ್ಕೆ ಗುಡ್ ಬೈ ಹೇಳಿ ಮೆಟ್ರೋವನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲೂ ಔಟರ್ ರಿಂಗ್ ರೋಡ್ ನಲ್ಲಿ ಪ್ರಯಾಣಿಸುವ ವಾಹನ ಸವಾರರು ಖಾಸಗಿ ವಾಹನಗಳ ಬಳಕೆ ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಮಾರ್ಗದಲ್ಲಿ ಸಂಚಾರ ಆರಂಭವಾದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದು ಮಾತ್ರವಲ್ಲದೆ, ಪ್ರಯಾಣ ಸಮಯ ಕಡಿತ, ವಾಹನ ಕಾರ್ಬನ್ ಬಿಡುಗಡೆ ಪ್ರಮಾಣ ಕಡಿಮೆಯಾಗಿ, ಸುರಕ್ಷಿತ ಸಂಚಾರ ಲಭ್ಯವಾಗಲಿದೆ.&lt;/p&gt;&lt;p&gt;ಸದ್ಯ ಶೇಕಡಾ 72 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನೀಲಿ ಮಾರ್ಗದ ನಿರ್ಮಾಣದಲ್ಲಿ ಒಂದು ಮೈಲಿಗಲ್ಲು ಎಂದು ಪರಿಗಣಿಸಬಹುದು. ಅಲ್ಲದೇ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಿಗ್ ಬೂಸ್ಟ್ ಸಿಗಲಿದೆ. ಕೆಆರ್ ಪುರ, ಹೆಬ್ಬಾಳ, ಯಲಹಂಕ ಮತ್ತು ಉತ್ತರ ಬೆಂಗಳೂರಿನ ಪ್ರದೇಶಗಳ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/news/good-news-for-bengaluru-s-motorists-from-namma-metro-construction-work-of-blue-line-project-is-70-percent-complete-sns/articleshow-e95uyro"/>
        </item>
        <item>
            <title><![CDATA[Kerala Bus crash: ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಭೀಕರ ಅಪಘಾತ: ಶೈನಿಂಗ್ ಬೋರ್ಡ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ!]]></title>
            <link>https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx</link>
            <guid isPermaLink="true">https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx</guid>
            <pubDate>Sat, 08 Aug 2026 08:48:50 +0530</pubDate>
            <description><![CDATA[&lt;p&gt;Kerala Bus crash in bengaluru ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfp56cmsgr0f9n55h1svjzg,imgname-----------------------2026-08-08t084944.465-1786159208852.jpg" type="image/jpeg" height="390" width="690"/>
            <content:encoded><![CDATA[&lt;p&gt;Kerala Bus crash in bengaluru ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೇರಳಕ್ಕೆ ಸೇರಿದ ಸಾರಿಗೆ ಬಸ್ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಪ್ರಯಾಣಿಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಅವರಗೆರೆ ಬ್ರಿಡ್ಜ್ ಬಳಿ ಸಂಭವಿಸಿದೆ.&lt;/p&gt;&lt;img&gt;&lt;p&gt;ಕೇರಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಕೇರಳ ರಾಜ್ಯದ ಬಸ್. ಅವರಗೆರೆ ಬ್ರಿಡ್ಜ್ ಬಳಿ ಬರುತ್ತಿದ್ದಂತೆ ಹೆದ್ದಾರಿಯಲ್ಲಿ ಹಾಕಲಾಗಿದ್ದ ಶೈನಿಂಗ್ ಬೋರ್ಡ್&zwnj;ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿ ಹೊಡೆದು ರಸ್ತೆಗೆ ಬಿದ್ದಿದೆ. ಈ ವೇಳೆ ಸ್ಥಳದಲ್ಲೇ ಒರ್ವ ಪ್ರಯಾಣಿಕ ಮೃತನಾಗಿದ್ದರೆ ಹಲವು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಸ್&zwnj;ನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ತಿಳಿದುಬಂದಿಲ್ಲ. ಆದರೆ ಬಸ್ ಪಲ್ಟಿ ಹೊಡೆದಿದ್ದರಿಂದ ನಿದ್ದೆಯಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಪೆಟ್ಟಾಗಿವೆ ಗಾಯಾಳು ಪ್ರಯಾಣಿಕರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;img&gt;&lt;p&gt;ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿದ್ದು ಅಪಘಾತ ನಡೆದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಸ್ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಕಾರಣ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/kerala-bus-accident-on-bengaluru-mysuru-highway-one-dead-several-injured-1voypbx"/>
        </item>
        <item>
            <title><![CDATA[Bengaluru: ಹೆಸರಘಟ್ಟದಲ್ಲಿ ಭಾರತದ ಮೊದಲ ಕ್ವಾಂಟಮ್ ಸಿಟಿ ನಿರ್ಮಾಣ: ಡಿಕೆ ಶಿವಕುಮಾರ್]]></title>
            <link>https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7</link>
            <guid isPermaLink="true">https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7</guid>
            <pubDate>Sat, 08 Aug 2026 08:57:08 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಹೆಸರಘಟ್ಟದಲ್ಲಿ ಭಾರತದ ಮೊದಲ 'ಕ್ವಾಂಟಮ್ ಸಿಟಿ' ನಿರ್ಮಾಣವಾಗುತ್ತಿದ್ದು, ಈ ಮೂಲಕ ಕರ್ನಾಟಕವು ಕ್ವಾಂಟಮ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರಲು ಸಜ್ಜಾಗಿದೆ ಎಂದು ಅವರು 'ಕ್ವಾಂಟಮ್' ಪ್ರದರ್ಶನ ಉದ್ಘಾಟಿಸಿ ತಿಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzfpfq15jshnkcck7fyyp84j,imgname-dk-shivakumar-1786159553573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತ-ಅಮರಿಕ ನಡುವೆ ಐಟಿ ಮತ್ತಿತರ ವಲಯಗಳಲ್ಲಿ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.&lt;/p&gt;&lt;p&gt;ಶುಕ್ರವಾರ ನಗರದ ಸೈನ್ಸ್ ಗ್ಯಾಲರಿಯಲ್ಲಿ &lsquo;ಕ್ವಾಂಟಮ್&rsquo; ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ 700ಕ್ಕೂ ಹೆಚ್ಚು ಅಮೆರಿಕದ ಕಂಪನಿಗಳು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್&zwnj;ಅಪ್&zwnj;ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪಾಲುದಾರ ನಗರವಾಗಿರುವ ಬೆಂಗಳೂರಿಗೆ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ ಎಂದರು.&lt;/p&gt;&lt;h2&gt;&lt;strong&gt;ಕರ್ನಾಟಕ ಸರ್ಕಾರದಿಂದ ಅಗತ್ಯ ಅನುಮತಿ&lt;/strong&gt;&lt;/h2&gt;&lt;p&gt;ನಾವು ಕೇವಲ ವ್ಯಾಪಾರ ಕಚೇರಿಯನ್ನು ಕೇಳುತ್ತಿಲ್ಲ. ಶಾಶ್ವತ ರಾಜತಾಂತ್ರಿಕ ಕಚೇರಿ ಇಲ್ಲಿ ಸ್ಥಾಪನೆಯಾಗಬೇಕು. ಇದರಿಂದ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ ಮತ್ತು ವಿಮಾನಯಾನ ಕ್ಷೇತ್ರಗಳಲ್ಲಿ ಸಹಕಾರ ಮತ್ತಷ್ಟು ವಿಸ್ತರಣೆ ಸಾಧ್ಯವಾಗಲಿದೆ. ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ. ಅಮೆರಿಕದ ರಾಯಭಾರ ಕಚೇರಿ ಮತ್ತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.&lt;/p&gt;&lt;p&gt;ಅಮೆರಿಕದ ಪ್ರಮುಖ ಶೈಕ್ಷಣಿಕ ಹಾಗೂ ನಾವೀನ್ಯತಾ ಕೇಂದ್ರಗಳೊಂದಿಗೆ ತರಬೇತಿ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರ ನೆರವನ್ನು ಮುಖ್ಯಮಂತ್ರಿ ಕೋರಿದರು.&lt;/p&gt;&lt;p&gt;ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತದೆ. ಈ ಕ್ಷೇತ್ರದಲ್ಲಿ ನಮ್ಮ ಯುವಕರು ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.&lt;/p&gt;&lt;p&gt;ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಉದ್ಯಮಿ ಕಿರಣ್ ಮಜುಂದಾರ್ ಶಾ ಉಪಸ್ಥಿತರಿದ್ದರು.&lt;/p&gt;&lt;h3&gt;&lt;strong&gt;ಹೆಸರಘಟ್ಟದಲ್ಲಿ &lsquo;ಕ್ವಾಂಟಮ್ ಸಿಟಿ&rsquo; ಸ್ಥಾಪನೆ&lt;/strong&gt;&lt;/h3&gt;&lt;p&gt;ನಗರದ ಹೆಸರಘಟ್ಟದಲ್ಲಿ ಭಾರತದ ಮೊದಲ &lsquo;ಕ್ವಾಂಟಮ್ ಸಿಟಿ&rsquo; ನಿರ್ಮಾಣವಾಗುತ್ತಿದ್ದು, ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಕೇಂದ್ರವಾಗಲಿದೆ. ನಮ್ಮ ಬದ್ಧತೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ''ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ'' ಅಡಿಯಲ್ಲಿ, ಧಾರವಾಡದ ಐಐಐಟಿಯಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗಿದೆ.&lsquo;ಕ್ವಾಂಟಮ್&rsquo; ಪ್ರದರ್ಶನವನ್ನು ಎಲ್ಲರಿಗಾಗಿ ಮುಕ್ತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಘೋಷಿಸಿದರು.&lt;/p&gt;&lt;p&gt;Science has always moved humanity forward by encouraging us to ask questions, challenge assumptions and imagine new possibilities.&amp;nbsp;It was a pleasure to inaugurate QUANTUM at Science Gallery Bengaluru. Mr. Sergio Gor, Ambassador of the United States to India, Shri Priyank&hellip; pic.twitter.com/rPZ6WG1Twn&lt;/p&gt;&lt;p&gt;&mdash; DK Shivakumar (@DKShivakumar) August 7, 2026&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-india-s-first-quantum-city-to-be-built-in-hesarghatta-cm-dk-shivakumar-mrq/articleshow-z8vt0a7"/>
        </item>
        <item>
            <title><![CDATA[ಕಂಠೀರವ ಸ್ಟುಡಿಯೋ To ಬಿಇಎಲ್ ವೃತ್ತದವರೆಗಿನ 4.5 km ಉದ್ದದ  6 ಲೇನ್‌ ಸುರಂಗ ಮಾರ್ಗ]]></title>
            <link>https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4</link>
            <guid isPermaLink="true">https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4</guid>
            <pubDate>Sat, 08 Aug 2026 08:42:20 +0530</pubDate>
            <description><![CDATA[ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್&zwnj;ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾಪಿಸಿದೆ. ಈ ಯೋಜನೆಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್&zwnj;) ಸಿದ್ಧಪಡಿಸಲು ಬಿಡಿಎ ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfnj4d6afftr9msxt3g4br7,imgname-tunnel-1786158584230.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ (ಡಾ.ರಾಜ್&zwnj;ಕುಮಾರ್ ಸ್ಮಾರಕದ ಬಳಿ) ಗೊರಗುಂಟೆಪಾಳ್ಯ ಮೂಲಕ ಬಿಇಎಲ್ ವೃತ್ತದವರೆಗೆ 4.5 ಕಿ.ಮೀ ಉದ್ದದ 6 ಲೇನ್&zwnj;ಗಳ ಸುರಂಗ ಮಾರ್ಗ ನಿರ್ಮಿಸಲು ಪ್ರಸ್ತಾವನೆ ಸಿದ್ಧಪಡಿಸಿದ್ದು, ವಿಸ್ತೃತ ಯೋಜನಾ ವರದಿಗೆ (ಡಿಪಿಆರ್&zwnj;) ಟೆಂಡರ್ ಆಹ್ವಾನಿಸಲಾಗಿದೆ.&lt;/p&gt;&lt;h2&gt;&lt;strong&gt;1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್&zwnj;&lt;/strong&gt;&lt;/h2&gt;&lt;p&gt;ಬಿಡಿಎ ಪೂರ್ವ ವಿಭಾಗದ ಕನೆಕ್ಟಿಂಗ್&zwnj; ಲೂಪ್&zwnj;ಗಳೊಂದಿಗೆ ಕಂಠೀರವ ಸ್ಟುಡಿಯೋ ಅಂಡರ್&zwnj;ಪಾಸ್&zwnj;ನಿಂದ ಗೊರಗುಂಟೆಪಾಳ್ಯ ಜಂಕ್ಷನ್&zwnj; ಮೂಲಕ ಬಿಇಎಲ್&zwnj; ವೃತ್ತದವರೆಗೆ ಸುರಂಗ ಮಾರ್ಗದ ನಿರ್ಮಾಣಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್&zwnj;) ಅನ್ನು ಸಿದ್ಧಪಡಿಸುವ ಕಾಮಗಾರಿಗೆ ಕೆಪಿಸಿ ಪೋರ್ಟಲ್&zwnj; ಮೂಲಕ ಅರ್ಹ 1ನೇ ದರ್ಜೆಯ ಗುತ್ತಿಗೆದಾರರಿಂದ ಅಲ್ಫಾವಧಿ ಟೆಂಡರ್&zwnj; ಕರೆಯಲಾಗಿದೆ. ಬಿಡ್&zwnj; ಸಲ್ಲಿಸಲು ಆಗಸ್ಟ್&zwnj; 12 ಕೊನೆಯ ದಿನವಾಗಿದೆ. ತಾಂತ್ರಿಕ ಬಿಡ್&zwnj;ಗಳನ್ನು ಆಗಸ್ಟ್&zwnj; 13ರಂದು ಸಂಜೆ 5ಕ್ಕೆ ತೆರೆಯಲಾಗುವುದು.&lt;/p&gt;&lt;p&gt;ಹೆಚ್ಚಿನ ವಿವರಗಳಿಗೆ https://kppp/karnataka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಹಾಗೂ ಇ-ಪ್ರೊಕ್ಯೂರ್&zwnj;ಮೆಂಟ್&zwnj;ಗೆ ಸಂಬಂಧಿಸಿದ ಸಹಾಯಕ್ಕಾಗಿ ದೂರವಾಣಿ:080-22230960 ಮತ್ತು ಬಿಡಿಎ ಸಹಾಯವಾಣಿ 9483166622 ಸಂಪರ್ಕಿಸುವಂತೆ ಕೋರಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-proposal-for-a-4-point-5-km-long-6-lane-tunnel-from-kanteerava-studio-underpass-to-bel-circle-mrq/articleshow-vd6k0l4"/>
        </item>
        <item>
            <title><![CDATA[Bengaluru Namma Metro ನಿರ್ಲಕ್ಷ್ಯ: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ!]]></title>
            <link>https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh</link>
            <guid isPermaLink="true">https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh</guid>
            <pubDate>Sat, 08 Aug 2026 07:56:39 +0530</pubDate>
            <description><![CDATA[ಮಾರತಹಳ್ಳಿ-ಸರ್ಜಾಪುರ ಮೆಟ್ರೋ ಕಾಮಗಾರಿಯ ಕಬ್ಬಿಣದ ಶೀಟ್ ಬಸ್ ಮೇಲೆ ಬಿದ್ದು ಭಾರೀ ಅನಾಹುತ ತಪ್ಪಿದೆ. ಈ ಘಟನೆಯು ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯವನ್ನು ತೋರಿಸಿದ್ದು, 2023ರಲ್ಲಿ ಪಿಲ್ಲರ್ ಕುಸಿದು ತಾಯಿ-ಮಗು ಮೃತಪಟ್ಟಿದ್ದ ದುರಂತವನ್ನು ನೆನಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfjtfds49vrqvp185wggw2g,imgname-bmtc-1786155711929.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಮಾರತಹಳ್ಳಿ ಮತ್ತು ಸರ್ಜಾಪುರ ನಡುವೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ ಹತ್ತಾರು ಮೀಟರ್ ಎತ್ತರದಿಂದ ಕಳಚಿ ನೆಲಕ್ಕೆ ಬಿದ್ದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೆಟ್ರೋ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಕಬ್ಬಿಣದ ಶೀಟ್ ಬಿಎಂಟಿಸಿ ಬಸ್ ಮೇಲೆ ಬಿದ್ದಿದೆ. ಒಂದು ವೇಳೆ ರಸ್ತೆ ಮೇಲೆ ಬಿಎಂಟಿಸಿ ಬಸ್ ಬದಲು ಬೈಕ್ ಸವಾರ ಇದ್ದಿದ್ದರೆ ದೊಡ್ಡ ಅನಾಹುತ ನಡೆಯುವುದು ಖಚಿತವಾಗಿತ್ತು. 2023ರಲ್ಲಿ ಮೆಟ್ರೋ ಪಿಲ್ಲರ್ ಕುಸಿತದಿಂದ ತಾಯಿ ಮತ್ತು ಮಗು ಸಾವನ್ನಪ್ಪಿದ್ದರು. ನಿರ್ಮಾಣಹಂತದ ಮೆಟ್ರೋ ಪಿಲ್ಲರ್ ಕುಸಿತದ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.&lt;/p&gt;&lt;h2&gt;&lt;strong&gt;ತಾಯಿ ಮತ್ತು ಮಗುವನ್ನು ಬಲಿ ಪಡೆದಿತ್ತು ಮೆಟ್ರೋ ಪಿಲ್ಲರ್&lt;/strong&gt;&lt;/h2&gt;&lt;p&gt;2023 ರ ಜನವರಿ 10 ರಂದು ನಾಗವಾರ ಬಳಿ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಬಿದ್ದು ಬೈಕ್&zwnj;ನಲ್ಲಿ ಪ್ರಯಾಣಿಸುತ್ತಿದ್ದ ಅರ್ಜಿದಾರರ ಪತ್ನಿ ತೇಜಸ್ವಿನಿ ಎಲ್ ಸುಲಾಖೆ (26) ಮತ್ತು ಅವರ ಎರಡೂವರೆ ವರ್ಷದ ಮಗ ವಿಹಾನ್ ಸಾವನ್ನಪ್ಪಿದರು. ಮೃತ ತೇಜಸ್ವಿನಿ ಸಾಫ್ಟ್&zwnj;ವೇರ್ ಇಂಜಿನೀಯರ್ ಅಗಿ ಕೆಲಸ ಮಾಡುತ್ತಿದ್ದರು.&lt;/p&gt;&lt;p&gt;&lt;/p&gt;&lt;p&gt;ಇದೇ ಫೆಬ್ರವರಿಯಲ್ಲಿ (2026) ಮುಂಬೈ ಮೆಟ್ರೋ ಕಾಮಗಾರಿ ವೇಳೆ ನಿರ್ಮಾಣ ಹಂತದ ಪಿಲ್ಲರ್ ಆಟೋ ಮತ್ತು ಕಾರ್ ಮೇಲೆ ಕುಸಿದಿತ್ತು. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ನಷ್ಟದ ಸುಳಿಯಲ್ಲಿ ನಮ್ಮ ಮೆಟ್ರೋ? ನಿತ್ಯ 11 ಲಕ್ಷ ಪ್ರಯಾಣಿಕರೂ ಓಡಾಡಿದ್ರೂ ಕೋಟಿ ಕೋಟಿ ನಷ್ಟ?&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/a-major-disaster-was-averted-when-an-iron-sheet-from-the-marathahalli-sarjapura-metro-project-fell-on-a-bus-mrq/articleshow-bkugbnh"/>
        </item>
        <item>
            <title><![CDATA[Inside Bengaluru Star hotel: ಸ್ಟಾರ್‌ ಹೋಟೆಲಲ್ಲಿ ಕೊಳೆತ ತರಕಾರಿ, ಹಳತಾದ ಮಾಂಸ!  26 ಹೋಟೆಲ್‌ ಮೇಲೆ ಆಹಾರ ಇಲಾಖೆ ದಾಳಿ!]]></title>
            <link>https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</link>
            <guid isPermaLink="true">https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t</guid>
            <pubDate>Sat, 08 Aug 2026 06:14:57 +0530</pubDate>
            <description><![CDATA[&lt;p&gt;ಬೆಂಗಳೂರಿನ 26 ತ್ರಿತಾರಾ ಮತ್ತು ಪಂಚತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು ಮತ್ತು ಗಂಭೀರ ಅನೈರ್ಮಲ್ಯವನ್ನು ಪತ್ತೆಹಚ್ಚಿದೆ. ದಿ ಲಲಿತ್ ಅಶೋಕ್&zwnj;, ತಾಜ್&zwnj;ನಂತಹ ಪ್ರತಿಷ್ಠಿತ ಹೋಟೆಲ್&zwnj;ಗಳಿಂದಲೂ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzfd113jzy751tnje42r3wmz,imgname-----------------------2026-08-08t061022.325-1786149635186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.8): &lt;/strong&gt;ಬೆಂಗಳೂರು ವ್ಯಾಪ್ತಿಯ ತ್ರಿತಾರಾ(3 Star Hotels) ಹಾಗೂ ಪಂಚತಾರಾ ಹೋಟೆಲ್&zwnj;(Five star) ಸೇರಿ 26 ತಾರಾ ಹೋಟೆಲ್&zwnj;ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ(Food Safety Department Raids) ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆಯಾಗಿದೆ.&lt;/p&gt;&lt;p&gt;ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಹಾರ ಪ್ರತ್ಯೇಕಿಸದೆ ಒಟ್ಟಾಗಿ ಸಂಗ್ರಹಿಸಿರುವುದು, ಅವಧಿ ಮೀರಿದ ಆಹಾರ, ಅನೈರ್ಮಲ್ಯ, ಲೇಬಲ್&zwnj; ಇಲ್ಲದಿರುವ ಬ್ರಾಂಡ್ ಬಳಕೆ, ತರಕಾರಿಗಳ ಮೇಲೆ ಫಂಗಸ್&zwnj; ಬೆಳೆದಿರುವುದು ಸೇರಿ ಗಂಭೀರ ಲೋಪಗಳು ಪತ್ತೆಯಾಗಿವೆ. ಹೀಗಾಗಿ ಸಂಬಂಧಪಟ್ಟ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿದ್ದು, ನ್ಯಾಯ ನಿರ್ಣಾಯಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;h2&gt;ಹೋಟೆಲ್&zwnj; ಆಹಾರ ಜಪ್ತಿ:&lt;/h2&gt;&lt;p&gt;ತಪಾಸಣೆಯ ವೇಳೆ ದಿ ಲಲಿತ್ ಅಶೋಕ್&zwnj; ಹೋಟೆಲ್&zwnj;ನಿಂದ 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಜಪ್ತಿ ಮಾಡಲಾಗಿದೆ. ಜತೆಗೆ 32 ಲೀಟರ್&zwnj; ಅವಧಿ ಮೀರಿದ ಹಾಲು ವಶಪಡಿಸಿಕೊಂಡು ನಾಶಪಡಿಸಲಾಗಿದೆ.&lt;/p&gt;&lt;p&gt;ಶಾಂಗ್ರಿ-ಲಾ ಹೋಟೆಲ್&zwnj;ನಲ್ಲಿ 15 ಕೆ.ಜಿ. ಮಾಂಸ, ಫೋರ್&zwnj; ಸೀಸನ್ಸ್&zwnj; ಹೋಟೆಲ್&zwnj;ನಲ್ಲಿ 19 ಕೆ.ಜಿ. ಮಾಂಸ, ತಾಜ್ ವಿವಾಂತ- ವೈಟ್&zwnj;ಫೀಲ್ಡ್&zwnj;ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನ ಜಪ್ತಿ ಮಾಡಲಾಗಿದೆ.&lt;/p&gt;&lt;p&gt;ಜತೆಗೆ ಯಶವಂತಪುರದ ತಾಜ್&zwnj; ಹೋಟೆಲ್&zwnj;ನಲ್ಲಿ 72 ಕೆ.ಜಿ. ಮಾಂಸ ಹಾಗೂ ಸಾಲಮನ್&zwnj; ಮೀನು, ಏಟ್ರಿಯಾ ಹೋಟೆಲ್&zwnj;ನಲ್ಲಿ 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ.ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ. ಇವುಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;ಸುರಕ್ಷತೆ ಉಲ್ಲಂಘನೆ:&lt;/h3&gt;&lt;p&gt;ಅಡುಗೆ ಮನೆ, ಆಹಾರ ಸಂಗ್ರಹಣೆ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಎಫ್ಎಸ್&zwnj;ಎಸ್&zwnj;ಎಐ ನಿಯಮಗಳಿಗೆ ಅನುಗುಣವಾಗಿರುವ ಮಾಂಸ ಉತ್ಪನ್ನಗಳ ಲೇಬಲಿಂಗ್&zwnj; ಇಲ್ಲದಿರುವುದು, ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನ, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿ ಸಂಗ್ರಹ ಪತ್ತೆಯಾಗಿದೆ. ತರಕಾರಿ ಹಾಗೂ ಆಹಾರ ಪದಾರ್ಥಗಳಲ್ಲಿ ಶಿಲೀಂಧ್ರವೂ ಪತ್ತೆಯಾಗಿದೆ.&lt;/p&gt;&lt;p&gt;ಈ ಬಗ್ಗೆ ಪತ್ರಿಕ್ರಿಯಿಸಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾಹಿತಿ ನೀಡಿ, ತಾರಾ ಹೋಟೆಲ್&zwnj;ಗಳ ಮೇಲೆ ದಾಳಿ ಮಾಡಿ ಸ್ವಚ್ಛತೆ ಮತ್ತು ಗುಣಮಟ್ಟ ಪರಿಶೀಲಿಸಿದ್ದೇವೆ. ಲೋಪಗಳು ಪತ್ತೆಯಾಗಿರುವ ಹೋಟೆಲ್&zwnj;ಗಳಿಗೆ ನೋಟಿಸ್&zwnj; ಜಾರಿ ಮಾಡಿ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ಪರಿಶೀಲಿಸಲಾಗಿದೆ. ಗಂಭೀರ ಲೋಪ ಕಂಡುಬಂದರೆ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.&lt;/p&gt;&lt;h3&gt;ಜನರಿಗೆ ಸತ್ಯ ತಿಳಿಯಬೇಕು&lt;/h3&gt;&lt;p&gt;ಹೋಟೆಲ್&zwnj;ಗಳಲ್ಲಿ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಜನರು ಹೋಗುತ್ತಾರೆ. ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡುತ್ತೇವೆ. ಬಳಿಕ ಜನರೇ ನಿರ್ಧಾರ ಮಾಡುತ್ತಾರೆ. ಒಟ್ಟಾರೆ ಜನರ ಆರೋಗ್ಯ ರಕ್ಷಣೆ ನಮ್ಮ ಉದ್ದೇಶ.&lt;/p&gt;&lt;p&gt;&lt;strong&gt;-ಯು.ಟಿ. ಖಾದರ್, ಆರೋಗ್ಯ ಸಚಿವ&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rotten-veggies-stale-meat-at-star-hotel-food-safety-department-raids-26-hotels-in-bengaluru-rav/articleshow-nea5p0t"/>
        </item>
        <item>
            <title><![CDATA[HAL: ದೇಶದಲ್ಲೇ ಮೊದಲು, ಎಚ್‌ಎಎಲ್‌ನಲ್ಲಿ ಉಪಗ್ರಹ ಬಳಸಿ ಹೆಲಿಕಾಪ್ಟರ್‌ ಲ್ಯಾಂಡ್‌]]></title>
            <link>https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y</link>
            <guid isPermaLink="true">https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y</guid>
            <pubDate>Sat, 08 Aug 2026 07:11:20 +0530</pubDate>
            <description><![CDATA[ಬೆಂಗಳೂರಿನ ಎಚ್&zwnj;ಎಎಲ್ ಏರ್ಪೋರ್ಟ್, ಹೆಲಿಕಾಪ್ಟರ್&zwnj;ಗಳಿಗಾಗಿ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಈ ನೂತನ ತಂತ್ರಜ್ಞಾನವು ಲ್ಯಾಂಡಿಂಗ್ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವುದಲ್ಲದೆ, ಪ್ರತಿಕೂಲ ಹವಾಮಾನದಲ್ಲೂ ಸುರಕ್ಷಿತ ಲ್ಯಾಂಡಿಂಗ್&zwnj;ಗೆ ಸಹಕರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfgdxdv3rycvvxbpa19d5yq,imgname-hal-1786153203131.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಹೆಲಿಕಾಪ್ಟರ್&zwnj;ಗಳಿಗೆ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್&zwnj;ಎಎಲ್ ಏರ್ಪೋರ್ಟ್&zwnj;ನಲ್ಲಿ ಜಾರಿಗೆ ತರಲಾಗಿದೆ. ಇಂಥ ವ್ಯವಸ್ಥೆ ಹೊಂದಿರುವ ದೇಶದ ಮೊದಲ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಎಚ್&zwnj;ಎಎಲ್ ಏರ್ಪೋರ್ಟ್&zwnj; ಪಾತ್ರವಾಗಿದೆ.&lt;/p&gt;&lt;p&gt;ರಿಕ್ವೈರ್ಡ್ ನೇವಿಗೇಷನ್ ಪರ್ಫಾರ್ಮೆನ್ಸ್-ಕೆಟಗೆರಿ ಎಚ್ (ಆರ್&zwnj;ಎನ್&zwnj;ಪಿ-ಕೆಟಗೆರಿ ಎಚ್) ವ್ಯವಸ್ಥೆಯಿಂದ ಹೆಲಿಕಾಪ್ಟರ್&zwnj;ಗಳ ಲ್ಯಾಂಡಿಂಗ್ ಸಮಯ ಸರಾಸರಿ 12 ನಿಮಿಷಗಳಿಂದ 4 ನಿಮಿಷಕ್ಕೆ ಕಡಿಮೆಯಾಗಲಿದೆ.&lt;/p&gt;&lt;p&gt;ಹೆಲಿಕಾಪ್ಟರ್&zwnj;ಗಳ ಲ್ಯಾಂಡಿಂಗ್&zwnj;ಗಾಗಿ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಅಭಿವೃದ್ಧಿಪಡಿಸಿದೆ. ಎಚ್&zwnj;ಎಎಲ್&zwnj;ನ ಪರೀಕ್ಷಾ ಪೈಲಟ್&zwnj;ಗಳು ಹಲವು ಹಂತಗಳಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಪರೀಕ್ಷೆ ಮೂಲಕ ನೂತನ ತಂತ್ರಜ್ಞಾನ ಬಳಕೆಗೆ ಯೋಗ್ಯವೆಂದು ಧೃಡೀಕರಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇದಕ್ಕೆ ಅಂತಿಮ ಅನುಮೋದನೆ ನೀಡಿದೆ.&lt;/p&gt;&lt;h2&gt;&lt;strong&gt;ಸಮಯ ಉಳಿತಾಯ:&lt;/strong&gt;&lt;/h2&gt;&lt;p&gt;ನೂತನ ವ್ಯವಸ್ಥೆಯು ನಗರ ಪ್ರದೇಶಗಳಲ್ಲಿನ ಏರ್ಪೋರ್ಟ್&zwnj;ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಎತ್ತರದ ಕಟ್ಟಡಗಳು ಮತ್ತಿತರ ಅಡೆತಡೆಗಳು ಇರುವ ಕಾರಣ ಹೆಲಿಕಾಪ್ಟರ್&zwnj; ಅನ್ನು ನಿಖರವಾಗಿ ಲ್ಯಾಂಡಿಂಗ್ ಮಾಡಲು ಪೈಲಟ್&zwnj;ಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ, ನೂತನ ಉಪಗ್ರಹ ಆಧಾರಿತ ನ್ಯಾವಿಗೇಷನ್&zwnj;ನಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲೂ ನಿಖರವಾಗಿ ಮತ್ತು ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಬಹುದು ಎಂದು ಎಚ್&zwnj;ಎಎಲ್ ಹೇಳಿದೆ.&lt;/p&gt;&lt;p&gt;ಈ ಕುರಿತು ಪ್ರತಿಕ್ರಿಯಿಸಿರುವ ಎಚ್&zwnj;ಎಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ರವಿ, ಭಾರತದ ಮೊದಲ ಉಪಗ್ರಹ ಆಧಾರಿತ ಲ್ಯಾಂಡಿಂಗ್ ವ್ಯವಸ್ಥೆಯನ್ನು ಎಚ್&zwnj;ಎಎಲ್&zwnj;ನಲ್ಲಿ ಪರಿಚಯಿಸಿರುವುದು ದೇಶದ ವಿಮಾನಯಾನ ವಲಯಕ್ಕೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ನೂತನ ವ್ಯವಸ್ಥೆಯನ್ನು ದೇಶದ ಇತರ ವಿಮಾನ ನಿಲ್ದಾಣಗಳಿಗೂ ಪರಿಚಯಿಸಬಹುದಾಗಿದೆ ಎಂದರು.&lt;/p&gt;&lt;p&gt;ಎಚ್&zwnj;ಎಎಲ್&zwnj;ನಲ್ಲಿ ಪ್ರತಿದಿನ ಸುಮಾರು 50 ಹೆಲಿಕಾಪ್ಟರ್&zwnj;ಗಳು ಲ್ಯಾಂಡಿಂಗ್ ಆಗುತ್ತವೆ. ಇಲ್ಲಿ ಈ ತಂತ್ರಜ್ಞಾನವು ಬಹುದಿನಗಳ ಕೊರತೆ ನೀಗಿಸಿದೆ. ಇದು ಏರ್ ಅಂಬ್ಯುಲೆನ್ಸ್ ಹಾಗೂ ತುರ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತ್ವರಿತ ಮತ್ತು ಸುರಕ್ಷಿತ ಮಾರ್ಗ ಒದಗಿಸುವ ಜೊತೆಗೆ ಶಬ್ದ ಮಾಲಿನ್ಯ ಮತ್ತು ಇಂಧನ ಬಳಕೆ ತಗ್ಗಿಸಲು ನೆರವಾಗಲಿದೆ ಎಂದು ಕೆ.ರವಿ ಹೇಳಿದ್ದಾರೆ.&lt;/p&gt;&lt;p&gt;HAL Airport, Bengaluru, has become the first airport in India to operationalise the Required Navigation Performance &ndash; Category H (RNP CAT H) helicopter approach procedure, a satellite-guided precision navigation system designed exclusively for helicopters. The procedure reduces&hellip; pic.twitter.com/nWJxjffOW4&lt;/p&gt;&lt;p&gt;&mdash; HAL (@HALHQBLR) August 7, 2026&lt;/p&gt;&lt;p&gt;&lt;/p&gt;&lt;p&gt;Mr. Ravi K, CMD, HAL, says, &ldquo;The operationalisation of India's first RNP CAT H helicopter approach is a significant milestone for the country's aviation ecosystem. This capability enhances the safety, efficiency and accessibility of helicopter operations and establishes a&hellip;&lt;/p&gt;&lt;p&gt;&mdash; HAL (@HALHQBLR) August 7, 2026&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/hal-airport-in-bengaluru-is-the-first-airport-in-country-to-adopt-a-satellite-based-landing-system-for-helicopters-mrq/articleshow-pylqc9y"/>
        </item>
        <item>
            <title><![CDATA[‘ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ’: ಕೈಮಗ್ಗಕ್ಕೆ ಸರ್ಕಾರದ ಬಿಗ್ ಪ್ಲ್ಯಾನ್]]></title>
            <link>https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q</link>
            <guid isPermaLink="true">https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q</guid>
            <pubDate>Fri, 07 Aug 2026 20:33:04 +0530</pubDate>
            <description><![CDATA[&lt;p&gt;Karnataka Handloom: ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzebyyysxf8b3d9mrhvewq6p,imgname-m--1786114964423.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.07): &lt;/strong&gt;ರಾಜ್ಯದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಜೀವನೋಪಾಯವನ್ನು ಬಲಪಡಿಸುವ ಜೊತೆಗೆ ಕರ್ನಾಟಕದ ಕೈಮಗ್ಗ ಉತ್ಪನ್ನಗಳಿಗೆ ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಗುರುತನ್ನು ಸೃಷ್ಟಿಸುವ ಉದ್ದೇಶದಿಂದ, ರಾಜ್ಯ ಸರ್ಕಾರದ ಮುಂಬರುವ ಕರ್ನಾಟಕ ಜವಳಿ ಮತ್ತು ಉಡುಪು ನೀತಿಯಲ್ಲಿ ಕೈಮಗ್ಗ ಕ್ಷೇತ್ರದ ಪ್ರಚಾರಕ್ಕೆ ವಿಶೇಷ ಅನುದಾನ ಮೀಸಲಿಡಲಾಗಿದೆ ಎಂದು ಎಂ ಎಸ್ ಎಂ ಇ, ಗಣಿ ಮತ್ತು ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದರು.&lt;/p&gt;&lt;p&gt;ಇಂದು 12ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ರಾಜ್ಯದ ಕೈಮಗ್ಗ ಪರಂಪರೆ ಕೇವಲ ಸಾಂಸ್ಕೃತಿಕ ಪರಂಪರೆಯಲ್ಲ; ಸಾವಿರಾರು ನೇಕಾರರ ಜೀವನಾಧಾರವೂ ಹೌದು. ಈ ಪರಂಪರೆಯನ್ನು ಸಂರಕ್ಷಿಸುವುದರ ಜೊತೆಗೆ ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳಿಸಿ, ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ವಿಶೇಷ ಅನುದಾನದ ಮೂಲಕ ಕೈಮಗ್ಗ ಕ್ಷೇತ್ರದಲ್ಲಿ ವಿನ್ಯಾಸ ಅಭಿವೃದ್ಧಿ, ಉತ್ಪನ್ನ ಮೌಲ್ಯವರ್ಧನೆ, ಬ್ರ್ಯಾಂಡಿಂಗ್, ಡಿಜಿಟಲ್ ಮಾರುಕಟ್ಟೆ, ಇ-ಕಾಮರ್ಸ್, ಮಾರುಕಟ್ಟೆ ವಿಸ್ತರಣೆ ಹಾಗೂ ನೇಕಾರರ ಸ್ಪರ್ಧಾತ್ಮಕ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು. ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ರೋಹಿಣಿ ಸಿಂಧೂರಿ ಉದ್ಘಾಟಿಸಿದರು.&lt;/p&gt;&lt;p&gt;ಜವಳಿ ಅಭಿವೃದ್ಧಿ ಆಯುಕ್ತರಾದ ಎ.ಬಿ. ಬಸವರಾಜು ಮಾತನಾಡಿ, ಕರ್ನಾಟಕದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗಿ ಪರಿಚಯಿಸುವ ಗುರಿಯೊಂದಿಗೆ ಹೊಸ ಜವಳಿ ನೀತಿ ರೂಪಿಸಲಾಗುತ್ತಿದೆ ಎಂದರು. &quot;ಕರ್ನಾಟಕದ ಕೈಮಗ್ಗ ಕ್ಷೇತ್ರವು ನಮ್ಮ ಸಂಸ್ಕೃತಿ ಮತ್ತು ಆರ್ಥಿಕತೆಯ ಅಮೂಲ್ಯ ಆಸ್ತಿ. ಹೊಸ ಜವಳಿ ನೀತಿ ಹಾಗೂ ಸಾಮಾಜಿಕ ಜಾಲತಾಣ ಅಭಿಯಾನದ ಮೂಲಕ ರಾಜ್ಯದ ಕೈಮಗ್ಗ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ,&quot; ಎಂದು ಹೇಳಿದರು.&lt;/p&gt;&lt;p&gt;ಅಲ್ಲದೆ, &quot;ನಮ್ಮ ನೇಕಾರರ ಕೌಶಲ್ಯಕ್ಕೆ ಜಾಗತಿಕ ಮನ್ನಣೆ ದೊರಕುವಂತೆ ವಿನ್ಯಾಸ, ತಂತ್ರಜ್ಞಾನ, ಬ್ರ್ಯಾಂಡಿಂಗ್ ಹಾಗೂ ಮಾರುಕಟ್ಟೆ ಸಂಪರ್ಕಕ್ಕೆ ಇಲಾಖೆ ವಿಶೇಷ ಆದ್ಯತೆ ನೀಡುತ್ತಿದೆ,&quot; ಎಂದು ತಿಳಿಸಿದರು. ಮಾಜಿ ಸಚಿವೆ ಹಾಗೂ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಮಾತನಾಡಿ, &quot;ಕೈಮಗ್ಗವು ಕೇವಲ ಒಂದು ವೃತ್ತಿಯಲ್ಲ; ಅದು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿದೆ. ನೇಕಾರರ ಕೈಚಳಕವನ್ನು ಗೌರವಿಸುವುದು ನಮ್ಮ ಪರಂಪರೆಯನ್ನು ಉಳಿಸುವುದಕ್ಕೆ ಸಮಾನ,&quot; ಎಂದು ಹೇಳಿದರು.&lt;/p&gt;&lt;p&gt;ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ. ಗಣೇಶ್, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರಿಮಾ ಪನ್ಸಾರ್, ಕಾವೇರಿ ಹ್ಯಾಂಡ್&zwnj;ಲೂಮ್ಸ್&zwnj;ನ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ, ಜವಳಿ ಇಲಾಖೆಯ ಅಪರ ನಿರ್ದೇಶಕರಾದ ಸಿಎಸ್&zwnj; ಯೋಗೀಶ್&zwnj;, ಶ್ರೀಧರ್&zwnj; ನಾಯರ್&zwnj; ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾವಿದರು ಉಪಸ್ಥಿತರಿದ್ದರು.&lt;/p&gt;&lt;h2&gt;&lt;strong&gt;ವಿಶೇಷ ಕೈಮಗ್ಗ ಪ್ಯಾಕೇಜ್&zwnj;ನ ಪ್ರಮುಖ ಅಂಶಗಳು&lt;/strong&gt;&lt;/h2&gt;&lt;p&gt;- ಕೈಮಗ್ಗ ಕ್ಷೇತ್ರಕ್ಕೆ ವಿಶೇಷ ಅನುದಾನ&lt;/p&gt;&lt;p&gt;- ನೇಕಾರರ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು&lt;/p&gt;&lt;p&gt;- ವಿನ್ಯಾಸ ಅಭಿವೃದ್ಧಿ ಮತ್ತು ಉತ್ಪನ್ನ ಮೌಲ್ಯವರ್ಧನೆ&lt;/p&gt;&lt;p&gt;- ಡಿಜಿಟಲ್ ಪ್ರಚಾರ ಮತ್ತು ಇ-ಕಾಮರ್ಸ್ ಉತ್ತೇಜನ&lt;/p&gt;&lt;p&gt;- ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕರ್ನಾಟಕ ಕೈಮಗ್ಗಕ್ಕೆ ಹೊಸ ಗುರುತು&lt;/p&gt;&lt;p&gt;- &quot;ನೂಲಿನಲ್ಲಿ ನಮ್ಮ ಇತಿಹಾಸ... ಜವಳಿಯಲ್ಲಿ ನಮ್ಮ ಭವಿಷ್ಯ&quot; ರಾಜ್ಯವ್ಯಾಪಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭ&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/karnataka-handloom-sector-to-get-special-grant-under-new-textile-policy-gvd/articleshow-e22sm0q"/>
        </item>
        <item>
            <title><![CDATA[ಬೆಂಗಳೂರು: ಭಾನುವಾರ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ!]]></title>
            <link>https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g</guid>
            <pubDate>Fri, 07 Aug 2026 20:13:42 +0530</pubDate>
            <description><![CDATA[&lt;p&gt;ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಕಾರಣದಿಂದ, ಆಗಸ್ಟ್ 9ರ ಭಾನುವಾರ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ಇತರೆ ಮಾರ್ಗಗಳಲ್ಲಿ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಬೆಳಿಗ್ಗೆ 9 ಗಂಟೆಯ ನಂತರ ಸಂಪೂರ್ಣ ನೇರಳೆ ಮಾರ್ಗದಲ್ಲಿ ಸಂಚಾರ ಪುನರಾರಂಭಗೊಳ್ಳಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jw0nrs9yemb0pvhnqveh2ev4,imgname-bengaluru-metro-1748074521918.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.07): ಬೆಂ&lt;/strong&gt;ಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ (Purple Line) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ, ಆಗಸ್ಟ್ 9ರ ಭಾನುವಾರ ಬೆಳಿಗ್ಗೆ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಬಿಎಂಆರ್&zwnj;ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹೊರಡಿಸಿರುವ ಮಾಧ್ಯಮ ಪ್ರಕಟಣೆಯ ಪ್ರಕಾರ, ನೇರಳೆ ಮಾರ್ಗದ ಸ್ವಾಮಿ ವಿವೇಕಾನಂದ ರಸ್ತೆ (Swami Vivekananda Road) ಮತ್ತು ಇಂದಿರಾನಗರ (Indiranagar) ಮೆಟ್ರೋ ನಿಲ್ದಾಣಗಳ ನಡುವೆ ತುರ್ತು ನಿರ್ವಹಣಾ ಕಾಮಗಾರಿಯನ್ನು (Maintenance Work) ಆಯೋಜಿಸಲಾಗಿದೆ. ಈ ಕಾರಣಕ್ಕಾಗಿ ಆಗಸ್ಟ್ 9ರ ಭಾನುವಾರ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ (ಎರಡು ಗಂಟೆಗಳ ಕಾಲ) &lt;strong&gt;ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ&lt;/strong&gt; ನಡುವೆ ಮೆಟ್ರೋ ಸೇವೆ ಲಭ್ಯವಿರುವುದಿಲ್ಲ.&lt;/p&gt;&lt;h2&gt;&lt;strong&gt;ಬೆಳಿಗ್ಗೆ 7:00 ರಿಂದ 9:00 ರವರೆಗೆ ಯಾವ ಮಾರ್ಗಗಳಲ್ಲಿ ಮೆಟ್ರೋ ಸಿಗಲಿದೆ?&lt;/strong&gt;&lt;/h2&gt;&lt;p&gt;ಸೇವೆ ಸ್ಥಗಿತಗೊಳ್ಳುವ ಎರಡು ಗಂಟೆಗಳ ಅವಧಿಯಲ್ಲಿ ನಗರದ ಇತರೆ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ನಿಯಮಿತ ವೇಳಾಪಟ್ಟಿಯಂತೆ (Regular Timetable) ಸಂಚರಿಸಲಿವೆ:&lt;/p&gt;&lt;ul&gt; &lt;li&gt;ಚಲ್ಲಘಟ್ಟದಿಂದ ಎಂ.ಜಿ. ರಸ್ತೆ (Challaghatta to MG Road)&lt;/li&gt; &lt;li&gt;ಬೈಯಪ್ಪನಹಳ್ಳಿಯಿಂದ ವೈಟ್&zwnj;ಫೀಲ್ಡ್ - ಕಾಡುಗೋಡಿ (Baiyappanahalli to Whitefield - Kadugodi)&lt;/li&gt; &lt;li&gt;ಮಾದಾವರದಿಂದ ಸಿಲ್ಕ್ ಇನ್&zwnj;ಸ್ಟಿಟ್ಯೂಟ್ (Madavara to Silk Institute - ಹಸಿರು ಮಾರ್ಗ)&lt;/li&gt; &lt;li&gt;ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ (R.V. Road to Bommasandra - ಹಸಿರು/ಹಳದಿ ಸಂಪರ್ಕ ಮಾರ್ಗ)&lt;/li&gt;&lt;/ul&gt;&lt;h2&gt;&lt;strong&gt;ಬೆಳಿಗ್ಗೆ 9 ಗಂಟೆಯ ನಂತರ ಎಂದಿನಂತೆ ಸಂಚಾರ:&lt;/strong&gt;&lt;/h2&gt;&lt;p&gt;ಬೆಳಿಗ್ಗೆ 9:00 ಗಂಟೆಗೆ ನಿರ್ವಹಣಾ ಕಾಮಗಾರಿ ಪೂರ್ಣಗೊಂಡ ತಕ್ಷಣ, ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಮಾರ್ಗವೂ ಸೇರಿದಂತೆ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಪುನರಾರಂಭಗೊಳ್ಳಲಿವೆ ಎಂದು ಬಿಎಮ್&zwnj;ಆರ್&zwnj;ಸಿಎಲ್ ತಿಳಿಸಿದೆ.&lt;/p&gt;&lt;p&gt;ಆಗಸ್ಟ್ 9ರ ಭಾನುವಾರ ಬೆಳಿಗ್ಗೆ ಮೆಟ್ರೋದಲ್ಲಿ ಪ್ರಯಾಣಿಸಲು ಯೋಜಿಸುತ್ತಿರುವ ಪ್ರಯಾಣಿಕರು ಈ ಸಮಯದ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬೇಕಾಗಿ ಬಿಎಂಆರ್&zwnj;ಸಿಎಲ್ ಸಿಬ್ಬಂದಿ ಕೋರಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-namma-metro-purple-line-service-suspended-baiyappanahalli-mg-road-august-9-sunday/articleshow-fplr11g"/>
        </item>
        <item>
            <title><![CDATA[ಬ್ರಹ್ಮಚಾರಿಯಾದ ನನಗೆ ಬೆಂಗಳೂರಲ್ಲಿ 2 ವರ್ಷಕ್ಕೆ 12 ಲಕ್ಷ ಬೇಕಾಯ್ತು: ಲೆಕ್ಕ ಕೊಟ್ಟ ಯುವಕನ ವಿಡಿಯೋ ವೈರಲ್​]]></title>
            <link>https://kannada.asianetnews.com/life/man-breaks-down-cost-of-living-in-bengaluru-says-expenses-add-up-fast-12-lakhs-in-2-yrs-suc/articleshow-v04te3c</link>
            <guid isPermaLink="true">https://kannada.asianetnews.com/life/man-breaks-down-cost-of-living-in-bengaluru-says-expenses-add-up-fast-12-lakhs-in-2-yrs-suc/articleshow-v04te3c</guid>
            <pubDate>Fri, 07 Aug 2026 18:06:12 +0530</pubDate>
            <description><![CDATA[ಬೆಂಗಳೂರಿನಲ್ಲಿ ವಾಸಿಸುವ ಬ್ರಹ್ಮಚಾರಿಯೊಬ್ಬ ತಾನು ಎರಡು ವರ್ಷಗಳಲ್ಲಿ 12 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ವಿವರಿಸಿದ್ದಾನೆ. ವಿಲ್ಲಾ ಬಾಡಿಗೆ, ದಿನಸಿ, ಪೆಟ್ರೋಲ್ ಸೇರಿ ತಿಂಗಳಿಗೆ ಸುಮಾರು 50,000 ರೂ. ಖರ್ಚಾಗುತ್ತಿದ್ದು, ಇದು ನಗರದ ದುಬಾರಿ ಜೀವನಶೈಲಿಯನ್ನು ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze3fpcef56fkk2b34rgng94,imgname-bengaluru-life-1786106075534.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಜೀವನ ದುಬಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವೊಂದು ಉತ್ತಮ ಪ್ರದೇಶಗಳಲ್ಲಿ ಮನೆ ಬಾಡಿಗೆ ಕೇಳಿದರೇನೇ ಹಳ್ಳಿಗಳಲ್ಲಿ ಒಬ್ಬರು ತಿಂಗಳಿನ ಎಲ್ಲಾ ಖರ್ಚನ್ನೂ ಸರಿದೂಗಿಸುವಂತೆ ಇರುತ್ತದೆ. ಅದರಲ್ಲಿಯೂ ಸಂಸಾರಿಗಳಾಗಿದ್ದರೆ ಒಬ್ಬರ ಸಂಬಳ ಕೆಲವೇ ಸಾವಿರ ರೂಪಾಯಿಗಳಲ್ಲಿ ಇದ್ದರೆ, ಪತಿ-ಪತ್ನಿ ದುಡಿಯುವುದು ಅನಿವಾರ್ಯವೂ ಆಗಿದೆ. ಹಾಗೆಂದ ಮಾತ್ರಕ್ಕೆ ಬೆಂಗಳೂರಿನಲ್ಲಿ ಇರುವವರೆಗೂ ತಿಂಗಳಿಗೆ ಲಕ್ಷ ಲಕ್ಷ ದುಡಿಯುವವರಲ್ಲ. 20-25 ಸಾವಿರ ರೂಪಾಯಿ ಸಂಬಳ ಒಬ್ಬರು ಪಡೆದರೂ ಸಂಸಾರ ನಿಭಾಯಿಸಿಕೊಂಡು ಹೋಗುವವರು ಇದ್ದಾರೆ. 3-4 ಲಕ್ಷ ರೂಪಾಯಿ ಮಾಸಿಕ ಸಂಬಳ ಪಡೆದರೂ ಸ್ಯಾಲರಿ ಸಾಲರಿ... ಎಂದು ಗೋಳಾಡುವವರೂ ಇದ್ದಾರೆ. ಅದು ಅವರವರ ಜೀವನ ಕ್ರಮಕ್ಕೆ ಬಿಟ್ಟಿರುವ ವಿಷಯ.&lt;/p&gt;&lt;p&gt;ಆದರೆ ಸಾಮಾನ್ಯ ಜನರ ಮಾತಿಗೆ ಬರುವುದಾದರೆ, ಬೇರೆ ಊರುಗಳಿಗೆ ಹೋಲಿಸಿದರೆ ಬೆಂಗಳೂರು ದುಬಾರಿ. ನಾಲ್ಕೈದು ಮಂದಿ ಇರುವ ಸಂಸಾರದಲ್ಲಿ ಡಬಲ್​ ಬೆಡ್​ರೂಮ್ ಮನೆಗಳು ಬೇಕೆಂದರೆ ಹಲವು ಪ್ರದೇಶಗಳಲ್ಲಿ ಶುರುವಾಗುವುದೇ 22-25 ಸಾವಿರ ರೂಪಾಯಿಗಳಿಂದ. ಇನ್ನು ವಾಸ್ತು-ಗೀಸ್ತು ನೋಡುವವರಿಗೆ 30-40 ಸಾವಿರ ಕೊಟ್ಟರೂ ಉತ್ತಮ ಮನೆ ಸಿಗುವುದಿಲ್ಲ. ಇಂಥ ಪ್ರದೇಶಗಳಲ್ಲಿ ವಾಸಿಸುವ ಅವಿವಾಹಿತ ಯುವಕನೊಬ್ಬ, ತಾನು ಬ್ರಹ್ಮಚಾರಿಯಾಗಿದ್ರೂ ಎಷ್ಟು ಖರ್ಚಾಗುತ್ತಿದೆ ಎನ್ನೋದನ್ನು ವಿವರಿಸಿದ್ದಾನೆ. ಬೆಂಗಳೂರಿನಲ್ಲಿ ಇದ್ದ ಎರಡು ವರ್ಷಕ್ಕೆ 12 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಲೆಕ್ಕಾಚಾರ ಹಾಕಿದಾಗ ತಿಳಿಯಿತು ಎಂದಿದ್ದಾನೆ.&lt;/p&gt;&lt;h2&gt;&lt;strong&gt;ಯುವಕ ಹೇಳಿದ್ದೇನು?&lt;/strong&gt;&lt;/h2&gt;&lt;p&gt;&quot;ನಾನು ಬೆಂಗಳೂರಿನಲ್ಲಿ ಬ್ರಹ್ಮಚಾರಿಯಾಗಿ ವಾಸಿಸಿದ ಎರಡು ವರ್ಷಗಳಲ್ಲಿ 12 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದೇನೆ&quot; ಎಂದು ಹರ್ಷ್ ಅಗರ್ವಾಲ್ ತಮ್ಮ ಇನ್&zwnj;ಸ್ಟಾಗ್ರಾಮ್ ಪುಟ &quot;unfiltered_bachelord&quot; ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಅಗರ್ವಾಲ್ ಅವರು ತಮ್ಮ ಸ್ನೇಹಿತರೊಂದಿಗೆ ವಿಲ್ಲಾವನ್ನು ಬಾಡಿಗೆಗೆ ಪಡೆದಿದ್ದಾರೆ. ಇದಕ್ಕೆ ಅವರು ತಿಂಗಳಿಗೆ 28 ಸಾವಿರ ಬಾಡಿಗೆ ತುಂಬುತ್ತಾರೆ. ದಿನಸಿಗಳಿಗೆ ತಿಂಗಳಿಗೆ 5,000 ರೂ.ಗಳನ್ನು ವೆಚ್ಚ ಮಾಡಿದರೆ, ಅಡುಗೆ ಮತ್ತು ಸೇವಕಿ ಸೇವೆಗಳಿಗೆ ಮತ್ತೊಂದು 4,500 ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಇಂಟರ್ನೆಟ್ ಮತ್ತು ಇತರ ಸಣ್ಣ ವೆಚ್ಚಗಳು ತಿಂಗಳಿಗೆ ಸುಮಾರು 1,000 ರೂ.ಗಳನ್ನು ವೆಚ್ಚ ಮಾಡುತ್ತೇನೆ. ಪೆಟ್ರೋಲ್​ಗೆ ಇನ್ನೂ 3,000 ರೂ, ಹೊರಗೆ ಊಟ ಮತ್ತು ಆಹಾರವನ್ನು ಆರ್ಡರ್ ಮಾಡಲು ತಿಂಗಳಿಗೆ ಸುಮಾರು 5,000 ರೂ.ಗಳನ್ನು ವೆಚ್ಚ ಮಾಡುವುದಾಗಿ ತಿಳಿಸಿದ್ದಾರೆ. ಊರಿನಿಂದ ಬೆಂಗಳೂರಿಗೆ ಬಂದು ಹೋಗಲು, ತಿಂಗಳಿಗೆ ಸುಮಾರು 4,000 ರೂ.ಗಳನ್ನು ವೆಚ್ಚವಾಗುತ್ತದೆ ಎಂದು ಅವರು ಹೇಳಿದರು.&lt;/p&gt;&lt;h3&gt;&lt;strong&gt;50 ಸಾವಿರ ವೆಚ್ಚ&lt;/strong&gt;&lt;/h3&gt;&lt;p&gt;ಈ ವೆಚ್ಚಗಳು ತಿಂಗಳಿಗೆ ಸರಿಸುಮಾರು 50,000 ರೂ. ಆಗಬಹುದು ಎಂದಿದ್ದಾರೆ. ಅವರು ಎರಡು ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಬೆಂಗಳೂರಿನಲ್ಲಿ ಇರುವ ಕಾರಣದಿಂದ ಇದು ಒಂದು ವರ್ಷದಲ್ಲಿ ಸುಮಾರು 6 ಲಕ್ಷ ರೂ. ಮತ್ತು ಎರಡು ವರ್ಷಗಳಲ್ಲಿ 12 ಲಕ್ಷ ರೂ.ಗಳಾಗುತ್ತದೆ ಎಂದಿದ್ದಾರೆ. ಎಚ್ಚರಿಕೆಯಿಂದ ಯೋಜಿಸಿದರೂ ಸಹ, ಸಣ್ಣ ದೈನಂದಿನ ವೆಚ್ಚಗಳು ಬೇಗನೆ ಸೇರುತ್ತವೆ ಮತ್ತು ಪ್ರಮುಖ ಆರ್ಥಿಕ ಹೊರೆಯಾಗಬಹುದು ಎಂದಿದ್ದಾರೆ. ಎಲ್ಲರೂ ಹೀಗೆ ತಮ್ಮ ಮಾಸಿಕ ಖರ್ಚನ್ನು ಟ್ರ್ಯಾಕ್ ಮಾಡಿದರೆ ಎಷ್ಟು ಖರ್ಚಾಗುತ್ತದೆ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.&lt;/p&gt;&lt;p&gt;ಬೆಂಗಳೂರಿನಲ್ಲಿ ಜೀವನ ವೆಚ್ಚವು ತುಂಬಾ ದುಬಾರಿಯಾಗಿದೆ ಮತ್ತು 50,000 ರೂ.ಗಳನ್ನು ಎಲ್ಲಿ, ಹೇಗೆ ಖರ್ಚು ಆಗುತ್ತದೆಯೋ ತಿಳಿಯುವುದಿಲ್ಲ ಎಂದಿದ್ದಾರೆ. &quot;ನೀವು ಅಂತಿಮವಾಗಿ ನಿಮ್ಮ ಜೀವನ ವೆಚ್ಚವನ್ನು ಲೆಕ್ಕ ಹಾಕುತ್ತೀರಿ ಮತ್ತು ವಾಸ್ತವವು ತೀವ್ರವಾಗಿ ಪರಿಣಾಮ ಬೀರುತ್ತದೆ&quot; ಎಂದು ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ವಿಲ್ಲಾ ಬಾಡಿಗೆ, ಸ್ವಿಗ್ಗಿ ಆರ್ಡರ್&zwnj;ಗಳು ಮತ್ತು ವಾರಾಂತ್ಯದ ಇಂಧನದ ನಡುವೆ, ವೆಚ್ಚಗಳು ನಿರೀಕ್ಷೆಗಿಂತ ವೇಗವಾಗಿ ಸೇರುತ್ತವೆ ಎಂದು ಅವರು ಮುಂದುವರಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/life/man-breaks-down-cost-of-living-in-bengaluru-says-expenses-add-up-fast-12-lakhs-in-2-yrs-suc/articleshow-v04te3c"/>
        </item>
        <item>
            <title><![CDATA[ಬೆಂಗಳೂರು ಜೈಲು ಸೇರಿದ್ದ ಜಪಾನ್ ಪ್ರಜೆ! ಜಪಾನ್‌ನಿಂದಲೇ ಪೊಲೀಸರ ವಿರುದ್ಧ ಗೆದ್ದ ಹಿರೋ.. ಇಲ್ಲಿ ಪ್ರೇಮ ಕತೆಯೂ ಇದೆ!]]></title>
            <link>https://kannada.asianetnews.com/bengaluru-urban/hirotoshi-tanaka-bengaluru-jail-and-love-story-japanese-national-bengaluru-jail-compensation-karnataka-gkn/articleshow-wbp654t</link>
            <guid isPermaLink="true">https://kannada.asianetnews.com/bengaluru-urban/hirotoshi-tanaka-bengaluru-jail-and-love-story-japanese-national-bengaluru-jail-compensation-karnataka-gkn/articleshow-wbp654t</guid>
            <pubDate>Fri, 07 Aug 2026 17:17:47 +0530</pubDate>
            <description><![CDATA[ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದ ಜಪಾನ್&zwnj;ನ ಹಿರೋಟೋಶಿ ತನಕಾ, ಇಲ್ಲಿನ ಜೈಲು ಸೇರಿ, ಪೊಲೀಸ್ ಭ್ರಷ್ಟಾಚಾರದ ವಿರುದ್ಧ ಕಾನೂನು ಹೋರಾಟ ನಡೆಸುತ್ತಾರೆ. ಜಪಾನ್&zwnj;ನಿಂದಲೇ ಸಮರ ಸಾರಿ ಗೆಲ್ಲುವ ಅವರ ಈ ರೋಚಕ ಪಯಣದಲ್ಲಿ, ಅವರಿಗೆ ಬೆಂಗಳೂರಿನಲ್ಲೇ ಒಬ್ಬ ಜೀವದ ಗೆಳತಿಯೂ ಸಿಗುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze0paa6t6ntbqp9qskb8sb0,imgname-japan-hirotoshi-tanaka-1786103146820.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂಗ್ಲಿಷ್ ಕಲಿಯಲು ಬೆಂಗಳೂರಿಗೆ ಬಂದಿದ್ದ ಜಪಾನ್ ಪ್ರಜೆಯೊಬ್ಬರು ಇಲ್ಲಿನ ಜೈಲು ಪಾಲಾದರು. ಭಾಷೆ ತಿಳಿಯದ ನಾಡಿನಲ್ಲಿ ಐದುವರೆ ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. ಜಪಾನ್&zwnj;ಗೆ ಹೋದ ಮೇಲೆಯೂ ಭಾರತದ ಪೊಲೀಸರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಕೊನೆಗೂ ಗೆದ್ದರು. ಇದು ಕೇವಲ ಹೋರಾಟದ ಕಥೆಯಲ್ಲ, ಇದರ ನಡುವೆ ಅವರಿಗೆ ಒಂದು ಸುಂದರ ಪ್ರೇಮಕಥೆಯೂ ಸಿಕ್ಕಿದೆ. ಹಿರೋಟೋಶಿ ತನಕಾ ಅವರ ಈ ರೋಚಕ ಜರ್ನಿ ಹೀಗಿದೆ..&lt;/p&gt;&lt;h2&gt;&lt;strong&gt;ಜೈಲು ವಾಸ ಮತ್ತು ಅನಿರೀಕ್ಷಿತ ಸ್ನೇಹ&lt;/strong&gt;&lt;/h2&gt;&lt;p&gt;2019ರಲ್ಲಿ ಹಿರೋಟೋಶಿ ತನಕಾ ಬೆಂಗಳೂರಿನ ಆರ್.ಟಿ. ನಗರದ ಇಂಗ್ಲಿಷ್ ಅಕಾಡೆಮಿಗೆ ಸೇರಿದ್ದರು. ಅಕಾಡೆಮಿಯ ಮುಖ್ಯಸ್ಥರ ಜೊತೆಗಿನ ಗಲಾಟೆಯಲ್ಲಿ ಆವೇಶಕ್ಕೊಳಗಾದ ತನಕಾ ಅವರ ಮುಖಕ್ಕೆ ಹೊಡೆದಿದ್ದರು. ಈ ಸಂಬಂಧ ಪೊಲೀಸರು ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದರು. 19 ದಿನಗಳ ಜೈಲು ವಾಸದಲ್ಲಿ ಅವರು ಕೈದಿಗಳು ಜೂಜಾಡುವುದನ್ನು, ಮೊಬೈಲ್ ಮತ್ತು ಗಾಂಜಾ ಬಳಸುವುದನ್ನು ಕಣ್ಣಾರೆ ಕಂಡರು. ಅಲ್ಲಿ ಅವರಿಗೆ ಮೂವರು ವ್ಯಕ್ತಿಗಳ ಕೊಲೆ ಮಾಡಿ ಶಿಕ್ಷೆ ಅನುಭವಿಸುತ್ತಿದ್ದ ಶಂಕರ್ ಎಂಬಾತನ ಸ್ನೇಹವಾಯಿತು. ಶಂಕರ್ ನೀಡಿದ ಧೈರ್ಯದಿಂದಲೇ ನಾನು ಅಲ್ಲಿ ಬದುಕಲು ಸಾಧ್ಯವಾಯಿತು ಎಂದು ತನಕಾ ಸ್ಮರಿಸುತ್ತಾರೆ.&lt;/p&gt;&lt;h2&gt;&lt;strong&gt;ಪೊಲೀಸ್ ದೌರ್ಜನ್ಯ&lt;/strong&gt;&lt;/h2&gt;&lt;p&gt;ತನಕಾ ಅವರಿಗೆ ಜಾಮೀನು ಸಿಕ್ಕಾಗ ಅವರ ಬಳಿ ಹಣವಿರಲಿಲ್ಲ. ಅಂದು ಜೈಲಿನ ಸೂಪರಿಂಟೆಂಡೆಂಟ್ ಶೇಷಮೂರ್ತಿ ಅವರು ತಮ್ಮ ಸ್ವಂತ ಹಣದಿಂದ 4,000 ರೂ. ಕಟ್ಟಿ ಇವರನ್ನು ಬಿಡಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಸಬ್&zwnj; ಇನ್ಸ್&zwnj;ಪೆಕ್ಟರ್ ಹನುಮಂತರಾಯಪ್ಪ ಎಂಬುವವರು ಕೇಸ್ ಕ್ಲೋಸ್ ಮಾಡಲು ಲಂಚ ಕೇಳಿದರು ಎಂದು ತನಕಾ ಗಂಭೀರ ಆರೋಪ ಮಾಡಿದ್ದರು.&lt;/p&gt;&lt;p&gt;ನಂತರ ಕೋವಿಡ್ ಸಾಂಕ್ರಾಮಿಕ ಆರಂಭವಾಯಿತು. ತನಕಾ ಅವರ ಆರೋಗ್ಯ ಹದಗೆಟ್ಟಿತು. ಹಣವಿಲ್ಲದೆ ಆರ್.ಟಿ. ನಗರದ ಪಾರ್ಕ್&zwnj;ನಲ್ಲಿ ಮಲಗಿದರು, ಅಲ್ಲಿ ಅವರ ವಸ್ತುಗಳೆಲ್ಲ ಕಳ್ಳತನವಾದವು. ನಂತರ ಅವರು ಅದೇ ಪೊಲೀಸ್ ಠಾಣೆಯ ಆವರಣದಲ್ಲೇ ಮಲಗುತ್ತಿದ್ದರು. ವೀಸಾ ಅವಧಿ ಮುಗಿದಿದ್ದರೂ ಕೇಸ್ ನಡೆಯುತ್ತಿದ್ದ ಕಾರಣ ಅವರಿಗೆ ದೇಶ ಬಿಟ್ಟು ಹೋಗಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;h2&gt;&lt;strong&gt;ಪೊಲೀಸ್ ಠಾಣೆಯ 'ಕುರ್ಚಿ' ಕಳ್ಳತನ ಮಾಡಿದ ಕಥೆ!&lt;/strong&gt;&lt;/h2&gt;&lt;p&gt;ತಮ್ಮನ್ನು ಭಾರತದಿಂದ ಹೊರಹಾಕುವುದನ್ನು (Deportation) ತಡೆಯಲು ತನಕಾ ಒಂದು ವಿಚಿತ್ರ ಉಪಾಯ ಮಾಡಿದರು. ತಾವೇನಾದರೂ ಅಪರಾಧ ಮಾಡಿದರೆ ಮತ್ತೆ ಬಂಧಿಸುತ್ತಾರೆ, ಆಗ ಇಲ್ಲಿಯೇ ಇರಬಹುದು ಎಂದುಕೊಂಡು ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಯನ್ನು ಕಳ್ಳತನ ಮಾಡಿದರು! ಕುರ್ಚಿ ಜೊತೆ ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದರು. ಆದರೆ ಪೊಲೀಸರು ಇವರ ಮೇಲೆ ಕೇಸ್ ಹಾಕದೆ ಇವರನ್ನು ಡಿಟೆನ್ಶನ್ ಸೆಂಟರ್&zwnj;ಗೆ ಕಳುಹಿಸಿ 2021ರಲ್ಲಿ ಜಪಾನ್&zwnj;ಗೆ ಗಡಿಪಾರು ಮಾಡಿದರು.&lt;/p&gt;&lt;h2&gt;&lt;strong&gt;ಜಪಾನ್&zwnj;ನಿಂದಲೇ ಶುರುವಾಯಿತು ಕಾನೂನು ಸಮರ&lt;/strong&gt;&lt;/h2&gt;&lt;p&gt;ಗಡಿಪಾರಾದ ನಂತರವೂ ತನಕಾ ಸುಮ್ಮನಿರಲಿಲ್ಲ. ಬೆಂಗಳೂರಿನ ವಕೀಲ ರೋಹನ್ ಕೊಠಾರಿ ಮೂಲಕ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರು. ಹನುಮಂತರಾಯಪ್ಪ ಅವರ ಲಂಚದ ಬೇಡಿಕೆ ಮತ್ತು ಅಕ್ರಮ ಬಂಧನದ ಬಗ್ಗೆ ತನಿಖೆ ನಡೆಯಿತು. ಕೊನೆಗೂ 2022ರಲ್ಲಿ ಆಯೋಗವು ತನಕಾ ಪರವಾಗಿ ತೀರ್ಪು ನೀಡಿ, ಸರ್ಕಾರ 75,000 ರೂ. ಪರಿಹಾರ ನೀಡಬೇಕು ಮತ್ತು ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತು. ಇತ್ತೀಚೆಗೆ ಕರ್ನಾಟಕ ಸರ್ಕಾರ ಈ ಪರಿಹಾರದ ಹಣವನ್ನು ತನಕಾ ಅವರ ವಕೀಲರ ಖಾತೆಗೆ ಜಮೆ ಮಾಡಿದೆ.&lt;/p&gt;&lt;h2&gt;&lt;strong&gt;ಜರ್ನಿಯಲ್ಲಿ ಸಿಕ್ಕ ಜೀವದ ಗೆಳತಿ&lt;/strong&gt;&lt;/h2&gt;&lt;p&gt;ಇಷ್ಟೆಲ್ಲಾ ಕಷ್ಟಗಳ ನಡುವೆ ತನಕಾ ಅವರಿಗೆ ಬೆಂಗಳೂರಿನಲ್ಲಿ ಈಶಾನ್ಯ ಭಾರತದ ಮೂಲದ ಯುವತಿಯ ಪರಿಚಯವಾಯಿತು. ಇವರ ಕಾನೂನು ಹೋರಾಟಕ್ಕೆ ಆಕೆ ದೊಡ್ಡ ಬೆಂಬಲ ನೀಡಿದರು. ತನಕಾ ಜಪಾನ್&zwnj;ಗೆ ಹೋದ ಮೇಲೆಯೂ ಇವರ ಪ್ರೀತಿ ಮುಂದುವರಿಯಿತು. 2024ರಲ್ಲಿ ಆಕೆ ಜಪಾನ್&zwnj;ಗೆ ಹೋದಾಗ ಇಬ್ಬರಿಗೂ ನಿಶ್ಚಿತಾರ್ಥವಾಯಿತು ಮತ್ತು 2025ರಲ್ಲಿ ಇಬ್ಬರೂ ಮದುವೆಯಾಗಿದ್ದಾರೆ. ಸದ್ಯ ತನಕಾ ಅವರ ಪತ್ನಿ ಬೆಂಗಳೂರಿನಲ್ಲಿದ್ದು, ಜಪಾನ್ ವೀಸಾಗಾಗಿ ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಜೈಲು ಸೇರಿ ಪೊಲೀಸರ ವಿರುದ್ಧವೇ ಗೆದ್ದು ಈಗ ಕನ್ನಡಿಗರ ಸೊಸೆಯನ್ನು ಮದುವೆಯಾಗಿರುವ ಹಿರೋಟೋಶಿ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ.&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/hirotoshi-tanaka-bengaluru-jail-and-love-story-japanese-national-bengaluru-jail-compensation-karnataka-gkn/articleshow-wbp654t"/>
        </item>
        <item>
            <title><![CDATA[ಮನುಷ್ಯಳೇ ಅಲ್ಲದ ಸುಂದರಿ ಜೊತೆ  ಮಾಡಬಾರದ್ದೆಲ್ಲಾ ಮಾಡಿ 2 ಲಕ್ಷ ಕಳಕೊಂಡ ಬೆಂಗಳೂರು ಯುವಕ]]></title>
            <link>https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</link>
            <guid isPermaLink="true">https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</guid>
            <pubDate>Fri, 07 Aug 2026 17:12:12 +0530</pubDate>
            <description><![CDATA[ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನು ಪ್ರೀತಿಸಿದ ಯುವಕನೊಬ್ಬ ಬ್ಲ್ಯಾಕ್&zwnj;ಮೇಲ್&zwnj;ಗೆ ಒಳಗಾಗಿದ್ದಾನೆ. ತನ್ನ ನಗ್ನ ವಿಡಿಯೋ ಕಳುಹಿಸಿದ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಾಗ, ಆತ ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಆ ಯುವತಿ ಮನುಷ್ಯಳಲ್ಲ, ಬದಲಿಗೆ ಸೈಬರ್ ವಂಚನೆಗೆ ಬಳಸಲಾದ ಕೃತಕ ಬುದ್ಧಿಮತ್ತೆಯ (AI) ಅವತಾರ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze0dwcjcw4y1qvx28k344yc,imgname-dating-fraud-1786102870418.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲಿಯೂ ಡೇಟಿಂಗ್​ ಆ್ಯಪ್​, ಸೈಬರ್​ ಕ್ರೈಮ್​ಗಳಲ್ಲಿ ಮೋಸ ಹೋಗುವವರು ಹೈಲಿ ಎಜುಕೇಟೆಡ್​ ಎನ್ನುವವರೇ ಎನ್ನುವುದು ಮಾತ್ರ ಸೋಜಿಗ. ಡೇಟಿಂಗ್​ ಆ್ಯಪ್​ಗಳಲ್ಲಂತೂ ಮೋಸ ಹೋದವರಿಗೆ ಲೆಕ್ಕವೇ ಇಲ್ಲ. ಹೀಗೆ ಮೋಸ ಹೋದವರು, ಮರ್ಯಾದೆಗೆ ಅಂಜಿ ಕಂಪ್ಲೇಂಟ್​ ಕೊಡಲ್ಲ ಎನ್ನುವುದು ತಿಳಿಯುವ ಕಾರಣದಿಂದಲೇ ಚಾಲಾಕಿಗಳು ಇಂಥವರನ್ನೇ ಗಾಳ ಹಾಕ್ತಾರೆ. ಅಂಥದ್ದೇ ಒಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.&lt;/p&gt;&lt;p&gt;ಆತನೋ 26 ವರ್ಷದ ಸುಂದರ. ಒಬ್ಬ ಸುಂದರಿಯ ಹುಡುಕಾಟದಲ್ಲಿದ್ದ. ಇದಕ್ಕಾಗಿ ಆತ ಡೇಟಿಂಗ್​ ಅಪ್ಲಿಕೇಷನ್​ ಮೊರೆ ಹೋದ. ಅಲ್ಲೊಬ್ಬಳು ಸುಂದರಿ ಕಂಡಳು. ಪರಿಚಯವಾಯ್ತು, ಅವಳೇ ಇಶಾನಿ. ಆ ಆ್ಯಪ್​ ಮೂಲಕವೇ ಮಾತು ಬೆಳೆದು ಲವ್ವೂ ಆಗೋಯ್ತು. ಇನ್ನೇನು, ಆ ಸುಂದರಿಯ ಬುಟ್ಟಿಗೆ ಈ ಯುವಕ ಬಿದ್ದಾಗಿತ್ತು. ತಾನು ಏನು ಹೇಳಿದ್ರೂ ಅವನು ಕೇಳ್ತಾನೆ ಎನ್ನುವ ಮಟ್ಟಿಗೆ ಇಶಾನಿ ಬಂದಳು. ಸಾಮಾನ್ಯವಾಗಿ, ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ಐಷಾರಾಮಿ ಜೀವನದ ರುಚಿ ತೋರಿಸಿ, ಕೊನೆಗೆ, ನಿನ್ನ ನಗ್ನ ಫೋಟೋ ಕಳುಹಿಸು, ನಗ್ನ ದೇಹದ ವಿಡಿಯೋ ಮಾಡಿ ಕಳುಹಿಸು ಎಂದೆಲ್ಲಾ ಹೇಳುವುದು, ಐಷಾರಾಮಿ ಜೀವನದ ರುಚಿ ಕಂಡಾಕೆ ಹಾಗೆ ಮಾಡುವುದು, ಕೊನೆಗೆ ಆತ ಬ್ಲ್ಯಾಕ್​ಮೇಲ್​ ಮಾಡುವುದು... ಇವೆಲ್ಲಾ ಮಾಮೂಲು. ಆದರೆ ಈ ಸ್ಟೋರಿಯಲ್ಲಿ ಸ್ವಲ್ಪ ಟ್ವಿಸ್ಟ್​ ಇದೆ.&lt;/p&gt;&lt;h2&gt;&lt;strong&gt;ಬಟ್ಟೆ ಕಳಚಿದ ಸುಂದರಿ&lt;/strong&gt;&lt;/h2&gt;&lt;p&gt;ಅದೇನೆಂದರೆ, ಈ ಯುವಕನನ್ನು ಬುಟ್ಟಿಗೆ ಹಾಕಿಕೊಂಡ ಮೇಲೆ ಆ ಸುಂದರಿ ವಿಡಿಯೋ ಕಾಲ್​ ಮಾಡಿ ತನ್ನೆಲ್ಲಾ ಬಟ್ಟೆಗಳನ್ನು ಕಳಚಿ ತೋರಿಸಿದ್ದಾಳೆ. ಯುವಕನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು. ನಂತರ ಆಕೆ, ನಿನ್ನ ನಗ್ನ ಫೋಟೋ, ವಿಡಿಯೋ ಕಳುಹಿಸುವಂತೆ ಕೇಳಿದ್ದಾಳೆ. ಯುವಕ ಹಿರಿಹಿರಿ ಹಿಗ್ಗಿದ್ದಾನೆ. ಇನ್ನೇನು ತನ್ನ ಆಸೆಯೆಲ್ಲವೂ ನೆರವೇರಿತು ಎಂದುಕೊಂಡಿದ್ದಾನೆ. ಮುಂದೆ ಏನೇನು ಆಗಬಹುದು ಎಂದು ಸುಂದರ ಕನಸು ಕಂಡು, ಕನಸಿನಲ್ಲಿಯೇ ತೇಲಾಡಿದ್ದಾನೆ. ಇಶಾನಿ ಹೇಳಿದಂತೆ ತನ್ನ ಫೋಟೋ, ವಿಡಿಯೋ ಎಲ್ಲಾ ವಿವಿಧ ಭಂಗಿಗಳಲ್ಲಿ ಕಳುಹಿಸಿದ್ದಾನೆ. ಆದರೆ, ಇಷ್ಟಾಗುತ್ತಿದ್ದಂತೆಯೇ, ಆ ಸುಂದರಿ ತನ್ನ ಆಟ ಶುರು ಮಾಡಿದ್ದಾಳೆ. ಈ ವಿಡಿಯೋ, ಫೋಟೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆಕೆ, 2 ಲಕ್ಷ ಕೊಡದಿದ್ದರೆ, ಇದನ್ನು ಲೀಕ್​ ಮಾಡೋದಾಗಿ ಹೇಳಿದ್ದಾಳೆ. ಆಗಲೇ ಯುವಕನಿಗೆ ತಾನು ಮೋಸ ಹೋಗಿದ್ದು ತಿಳಿದಿದೆ.&lt;/p&gt;&lt;p&gt;ವಿಧಿಯಿಲ್ಲದೇ ದುಡ್ಡನ್ನು ಕಳುಹಿಸಿದ್ದಾನೆ. ಬ್ಲ್ಯಾಕ್​ಮೇಲ್​ ಮಾಡುವವರು ಸುಮ್ಮನೇ ಇರ್ತಾರೆ. ಮತ್ತೊಂದಿಷ್ಟು ದುಡ್ಡು ಕೇಳಿದ್ದಾಳೆ ಸುಂದರಿ. ಆಗ ಎಚ್ಚೆತ್ತುಕೊಂಡ ಯುವಕ, ಆಗಿದ್ದು ಆಗಲಿ, ಮರ್ಯಾದೆ ಹೋದರೆ ಹೋಗಲಿ ಎಂದು ಆ ಸುಂದರಿ ವಿರುದ್ಧ ದೂರು ದಾಖಲಿಸಿದ್ದಾನೆ. ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟ ನಂತರ, ಯುವಕ ಬೆಂಗಳೂರಿನ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ನೀಡದಿದ್ದರೆ ತನ್ನ ನಗ್ನ ವೀಡಿಯೊವನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.&lt;/p&gt;&lt;h3&gt;&lt;strong&gt;ಬೆಚ್ಚಿಬಿದ್ದ ಪೊಲೀಸರು&lt;/strong&gt;&lt;/h3&gt;&lt;p&gt;ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬಿದ್ದರು. ಏಕೆಂದರೆ, ಇಶಾನಿ ಹೆಸರಿನ ಆಕೆ, ಸುಂದರಿಯೂ ಅಲ್ಲ, ಹೋಗ್ಲಿ ಎಂದರೆ ಮನುಷ್ಯಳೇ ಅಲ್ಲ ಎನ್ನೋದು ಗೊತ್ತಾಯ್ತು. ಅವಳು ಕೃತಕ ಬುದ್ಧಿಮತ್ತೆ (AI) ಹೆಣ್ಣು. ಅಪರಾಧ ಮಾಡಲು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಸ್ತ್ರೀ ಅವತಾರವನ್ನು ಬಳಸಕಾಗಿದೆ. ಇದು ದೊಡ್ಡ ಸೈಬರ್ ಸುಲಿಗೆ ಜಾಲದ ಭಾಗವಾಗಿದೆ ಎಂದು ಪೊಲೀಸರು ಕಂಡುಹೊಂದರು. ಸದ್ಯ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್ ವಹಿವಾಟುಗಳು, UPI ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.&lt;/p&gt;&lt;h3&gt;&lt;strong&gt;ಅಪ್ಲಿಕೇಶನ್ ಬಳಕೆದಾರರಿಗೆ ಪೊಲೀಸ್ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಲು ತನಿಖಾಧಿಕಾರಿಗಳು ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, &quot;ಅಪರಿಚಿತ ವ್ಯಕ್ತಿಗಳೊಂದಿಗೆ ನಿಕಟ ವಿಡಿಯೋ ಕರೆಗಳಲ್ಲಿ ತೊಡಗಬೇಡಿ ಮತ್ತು ಖಾಸಗಿ ವಿಷಯವನ್ನು ಎಂದಿಗೂ ಹಂಚಿಕೊಳ್ಳಬೇಡಿ. ಒಮ್ಮೆ ರೆಕಾರ್ಡ್ ಮಾಡಿದ ನಂತರ, ಅಂತಹ ವಿಷಯವು ಬ್ಲ್ಯಾಕ್&zwnj;ಮೇಲ್ ಮಾಡುವ ಸಾಧನವಾಗುತ್ತದೆ&quot; ಎಂದು ಹೇಳಿದರು. ಈ ಪ್ರಕರಣವು ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಗೆ ಮತ್ತೊಂದು ಕೊಂಡಿಯಾಗಿ ಸೇರಿಸುತ್ತದೆ, ಅಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಕ್ತಿಗಳಂತೆ ನಟಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಸಂತ್ರಸ್ತರಿಗೆ ತಿಳಿಯುವ ಹೊತ್ತಿಗೆ ವಿಳಂಬವಾಗಿ ವಂಚನೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಎಂದಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9"/>
        </item>
        <item>
            <title><![CDATA[ಮೋದಿ ಹಾದಿಯಲ್ಲೇ ಡಿಕೆಶಿ! 3 ಹೊಸ ಲಾಲ್ ಬಾಗ್ ಮಾದರಿಯ ಉದ್ಯಾನಕ್ಕಾಗಿ ರಕ್ಷಣಾ ಇಲಾಖೆ ಭೂಮಿ ಮೇಲೆ ಸಿಎಂ ಕಣ್ಣು]]></title>
            <link>https://kannada.asianetnews.com/bengaluru-urban/cm-dk-shivakumar-eyes-defence-land-for-new-bengaluru-garden-gkn/articleshow-10bpvgd</link>
            <guid isPermaLink="true">https://kannada.asianetnews.com/bengaluru-urban/cm-dk-shivakumar-eyes-defence-land-for-new-bengaluru-garden-gkn/articleshow-10bpvgd</guid>
            <pubDate>Fri, 07 Aug 2026 16:52:24 +0530</pubDate>
            <description><![CDATA[&lt;p&gt;ನಗರದ ಹಸಿರು ಸಿರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಹತ್ತರ ಯೋಜನೆ ರೂಪಿಸಿದೆ. ಲಾಲ್ ಬಾಗ್ ಮಾದರಿಯಲ್ಲಿ ನಗರದ ಮೂರು ಕಡೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಅನುಸರಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdzamescz48grdn3k3gd3mc,imgname-dk-shivakumar-1786101715417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಹಸಿರು ಸಿರಿಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಮಹತ್ತರ ಯೋಜನೆ ರೂಪಿಸಿದೆ. ಲಾಲ್ ಬಾಗ್ ಮಾದರಿಯಲ್ಲಿ ನಗರದ ಮೂರು ಕಡೆ ಬೃಹತ್ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಾದರಿಯನ್ನೇ ಅನುಸರಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.&lt;/p&gt;&lt;h2&gt;&lt;strong&gt;'ಮೋದಿಯವರ ಮಾದರಿ' ಏನು?&lt;/strong&gt;&lt;/h2&gt;&lt;p&gt;ಲಾಲ್&zwnj;ಬಾಗ್&zwnj;ನಲ್ಲಿ 220ನೇ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರ ಬೆಂಗಳೂರಿನಲ್ಲಿ ಮೂರು ಹೊಸ ಲಾಲ್ ಬಾಗ್ ಮಾದರಿಯ ಉದ್ಯಾನಗಳನ್ನು ನಿರ್ಮಿಸಲು ಯೋಜಿಸಿದೆ. ಅದರಲ್ಲಿ ಒಂದನ್ನು ರಕ್ಷಣಾ ಇಲಾಖೆಯ (Defence Land) ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಭೂಮಿಯ ಮಾಲೀಕತ್ವ ರಕ್ಷಣಾ ಇಲಾಖೆಯ ಬಳಿಯೇ ಇರಲಿದೆ, ಆದರೆ ಸಾರ್ವಜನಿಕ ಉದ್ಯಾನವನ ನಿರ್ಮಿಸಲು ಅನುಮತಿ ನೀಡುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಿದ್ದೇನೆ. ಪ್ರಧಾನಿ ಮೋದಿ ಅವರು ಈ ಹಿಂದೆ ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಭೂಮಿಯಲ್ಲಿ ಉದ್ಯಾನವನ ನಿರ್ಮಿಸಲು ಅನುಮತಿ ನೀಡಿದ್ದರು. ಅದೇ ಮಾದರಿಯನ್ನು ನಾವು ಬೆಂಗಳೂರಿನಲ್ಲೂ ಅನುಸರಿಸಲಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಬರಲಿವೆ ಈ ಹೊಸ ಉದ್ಯಾನಗಳು?&lt;/strong&gt;&lt;/h2&gt;&lt;ul&gt; &lt;li&gt;ಒಂದು ಬೃಹತ್ ಉದ್ಯಾನವನ್ನು ರಕ್ಷಣಾ ಇಲಾಖೆಯ ಜಾಗದಲ್ಲಿ ನಿರ್ಮಿಸಲು ಕೇಂದ್ರದ ಅನುಮತಿ ಕೋರಲಾಗಿದೆ.&lt;/li&gt; &lt;li&gt;ನಗರದ ವ್ಯಾಪ್ತಿಯಲ್ಲಿರುವ ಅರಣ್ಯ ಇಲಾಖೆಯ ಭೂಮಿಯಲ್ಲಿ ಇನ್ನುಳಿದ ಎರಡು ಲಾಲ್ ಬಾಗ್ ಮಾದರಿಯ ಉದ್ಯಾನವನಗಳನ್ನು ನಿರ್ಮಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.&lt;/li&gt; &lt;li&gt;ಈ ಉದ್ಯಾನಗಳ ಜವಾಬ್ದಾರಿಯನ್ನು ಗ್ರೇಟರ್ ಬೆಂಗಳೂರು ಅಥಾರಿಟಿ, ಬಿಡಿಎ ಮತ್ತು ತೋಟಗಾರಿಕೆ ಇಲಾಖೆಗೆ ನೀಡಲು ನಿರ್ಧರಿಸಲಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;ಹೆಬ್ಬಾಳ ಟನಲ್ ಪ್ರಾಜೆಕ್ಟ್ ಮತ್ತು ಮರಗಳ ರಕ್ಷಣೆ:&lt;/strong&gt;&lt;/h2&gt;&lt;p&gt;ಉತ್ತರ ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ಮಾರ್ಗ (Tunnel Road) ನಿರ್ಮಾಣದ ವೇಳೆ ಸುಮಾರು 900 ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಪರಿಸರವಾದಿಗಳ ಈ ಆತಂಕಕ್ಕೆ ಪ್ರತಿಕ್ರಿಯೆಯಾಗಿ, ಸರ್ಕಾರವು ಈ ಮೂರು ಬೃಹತ್ ಉದ್ಯಾನಗಳನ್ನು ನಿರ್ಮಿಸುವ ಮೂಲಕ ಹಸಿರು ವಲಯವನ್ನು ವಿಸ್ತರಿಸಲು ಪ್ಲಾನ್ ಮಾಡಿದೆ. ಬಿಡಿಎ ಅಧಿಕಾರಿಗಳ ಪ್ರಕಾರ, ಶೇ. 85ರಷ್ಟು ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲು (Transplantation) ಉದ್ದೇಶಿಸಲಾಗಿದೆ.&lt;/p&gt;&lt;h2&gt;&lt;strong&gt;ರೈತರಿಗಾಗಿ 100 ದಿನಗಳ ಕಾರ್ಯಕ್ರಮ&lt;/strong&gt;&lt;/h2&gt;&lt;p&gt;ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರೈತರ ಸಬಲೀಕರಣಕ್ಕಾಗಿ ಸರ್ಕಾರವು ಹೊಸ ಯೋಜನೆ ಘೋಷಿಸಲಿದೆ. ರೈತರು ಮತ್ತು ಸರ್ಕಾರದ ಸಹಯೋಗದಲ್ಲಿ ಹಸಿರು ಹೆಚ್ಚಿಸುವ ಮತ್ತು ರೈತರ ಜೀವನೋಪಾಯಕ್ಕೆ ನೆರವಾಗುವ 100 ದಿನಗಳ ವಿಶೇಷ ಕಾರ್ಯಕ್ರಮವನ್ನು ನಾವು ಸಿದ್ಧಪಡಿಸಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ಘೋಷಿಸಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನವು 'ಗಂಗಾ ವಂಶದ ವೈಭವ' ಎಂಬ ವಿಷಯದ ಮೇಲೆ ಆಧಾರಿತವಾಗಿದೆ. ಗಂಗಾ ವಂಶದ ಇತಿಹಾಸವು ಸಮಾನತೆ ಮತ್ತು ರೈತರ ಹೋರಾಟದ ಸಂಕೇತವಾಗಿದೆ. ಅವರು ನಿರ್ಮಿಸಿದ ಕೆರೆಗಳು ಇಂದಿಗೂ ನಮಗೆ ನೀರು ನೀಡುತ್ತಿವೆ ಎಂದು ಅವರು ಸ್ಮರಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/cm-dk-shivakumar-eyes-defence-land-for-new-bengaluru-garden-gkn/articleshow-10bpvgd"/>
        </item>
        <item>
            <title><![CDATA[ಬೆಂಗಳೂರು ಪೊಲೀಸ್‌ ಇತಿಹಾಸದಲ್ಲೇ ಅತಿದೊಡ್ಡ ಬದಲಾವಣೆ! 63 ವರ್ಷಗಳ ನಂತರ 5 ಭಾಗವಾಗಿ ವಿಭಜನೆ; 6,633 ಹೊಸ ಪೊಸ್ಟ್!]]></title>
            <link>https://kannada.asianetnews.com/bengaluru-urban/bengaluru-5-commissionerates-6633-posts-karnataka-gives-in-principle-nod-to-split-bengaluru-police-gkn/articleshow-t2xr77y</link>
            <guid isPermaLink="true">https://kannada.asianetnews.com/bengaluru-urban/bengaluru-5-commissionerates-6633-posts-karnataka-gives-in-principle-nod-to-split-bengaluru-police-gkn/articleshow-t2xr77y</guid>
            <pubDate>Fri, 07 Aug 2026 16:25:59 +0530</pubDate>
            <description><![CDATA[&lt;p&gt;ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಸ್ವತಂತ್ರ ಕಮಿಷನರೇಟ್&zwnj;ಗಳಾಗಿ ವಿಭಜಿಸುವ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdxtk0thd62c4n238gk5gg8,imgname-bengaluru-police-1786100141082.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಸ್ವತಂತ್ರ ಕಮಿಷನರೇಟ್&zwnj;ಗಳಾಗಿ ವಿಭಜಿಸುವ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ಮಹತ್ವದ ಬದಲಾವಣೆಯೊಂದಿಗೆ ಒಟ್ಟು 6,633 ಹೊಸ ಪೊಲೀಸ್ ಹುದ್ದೆಗಳ ಸೃಜನೆಗೂ ಚಾಲನೆ ಸಿಕ್ಕಿದೆ.&lt;/p&gt;&lt;h2&gt;&lt;strong&gt;ಹೊಸ ರೂಪ ಹೇಗಿರಲಿದೆ?&lt;/strong&gt;&lt;/h2&gt;&lt;p&gt;ಸುಮಾರು 63 ವರ್ಷಗಳ ಇತಿಹಾಸವಿರುವ ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಇನ್ನು ಮುಂದೆ ಐದು ಉಪಘಟಕಗಳಾಗಿ ಹಂಚಲಾಗುವುದು.&lt;/p&gt;&lt;ul&gt; &lt;li&gt;ಉತ್ತರ (North)&lt;/li&gt; &lt;li&gt;ದಕ್ಷಿಣ (South)&lt;/li&gt; &lt;li&gt;ಕೇಂದ್ರ (Central)&lt;/li&gt; &lt;li&gt;ಪೂರ್ವ (East)&lt;/li&gt; &lt;li&gt;ಪಶ್ಚಿಮ (West)&lt;/li&gt;&lt;/ul&gt;&lt;p&gt;ಈ ಐದೂ ಘಟಕಗಳಿಗೆ ಐವರು ಪ್ರತ್ಯೇಕ ಪೊಲೀಸ್ ಕಮಿಷನರ್&zwnj;ಗಳು (ಐಜಿಪಿ ಅಥವಾ ಡಿಐಜಿ ದರ್ಜೆಯ ಅಧಿಕಾರಿಗಳು) ಇರಲಿದ್ದಾರೆ. ಇವರೆಲ್ಲರೂ ಒಬ್ಬರು 'ಮುಖ್ಯ ಪೊಲೀಸ್ ಕಮಿಷನರ್' (Chief Commissioner of Police) ಅಡಿಯಲ್ಲಿ ಕೆಲಸ ಮಾಡಲಿದ್ದಾರೆ. ಈ ಮುಖ್ಯ ಕಮಿಷನರ್ ಹುದ್ದೆಯು ಡಿಜಿಪಿ (DGP) ದರ್ಜೆಯದ್ದಾಗಿರಲಿದೆ.&lt;/p&gt;&lt;h2&gt;&lt;strong&gt;764 ಕೋಟಿ ವೆಚ್ಚ, 6 ಸಾವಿರಕ್ಕೂ ಹೆಚ್ಚು ಹುದ್ದೆಗಳು&lt;/strong&gt;&lt;/h2&gt;&lt;p&gt;ಈ ಬೃಹತ್ ಯೋಜನೆಗಾಗಿ ಸರ್ಕಾರವು 764 ಕೋಟಿ ರೂಪಾಯಿಗಳ ಬಜೆಟ್ ನಿಗದಿಪಡಿಸಿದೆ. ಪ್ರಸ್ತುತ ಬೆಂಗಳೂರಿನಲ್ಲಿರುವ 18 ಡಿಸಿಪಿ (DCP) ಹುದ್ದೆಗಳ ಸಂಖ್ಯೆಯನ್ನು 28ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಆಡಳಿತಾತ್ಮಕ ಸುಧಾರಣೆ ಮತ್ತು ಅಪರಾಧ ತಡೆಗೆ ಪೂರಕವಾಗಿ 6,633 ಹೊಸ ಸಿಬ್ಬಂದಿಗಳ ನೇಮಕಾತಿಗೂ ಈ ಪ್ರಸ್ತಾವನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;ವಿಭಜನೆಗೆ ಕಾರಣವೇನು?&lt;/strong&gt;&lt;/h2&gt;&lt;ul&gt; &lt;li&gt;1963ರಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಸ್ಥಾಪನೆಯಾದಾಗ ನಗರದ ವಿಸ್ತೀರ್ಣ ಕೇವಲ 712 ಚದರ ಕಿ.ಮೀ ಇತ್ತು. ಈಗ ಅದು 1,294 ಚದರ ಕಿ.ಮೀಗೆ ಬೆಳೆದಿದೆ.&lt;/li&gt; &lt;li&gt;ಬೆಂಗಳೂರಿನ ಜನಸಂಖ್ಯೆ ಈಗ ಅಂದಾಜು 1.56 ಕೋಟಿಯಷ್ಟಿದ್ದು, ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ.&lt;/li&gt; &lt;li&gt;ದೇಶದಲ್ಲೇ ಅತಿ ಹೆಚ್ಚು ಸೈಬರ್ ಕ್ರೈಂ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಹೆಚ್ಚಿನ ನಿಗಾ ಅಗತ್ಯವಿದೆ.&lt;/li&gt; &lt;li&gt;ವಿಶ್ವದ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಸೇರಿರುವುದರಿಂದ, ಸುಗಮ ಸಂಚಾರಕ್ಕೆ ಪ್ರತ್ಯೇಕ ಘಟಕಗಳ ಅಗತ್ಯವಿದೆ.&lt;/li&gt;&lt;/ul&gt;&lt;h2&gt;&lt;strong&gt;ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಪ್ಲಾನ್&lt;/strong&gt;&lt;/h2&gt;&lt;p&gt;ಬಿಬಿಎಂಪಿಯನ್ನು ವಿಭಜಿಸಿ 'ಗ್ರೇಟರ್ ಬೆಂಗಳೂರು ಅಥಾರಿಟಿ' ರಚಿಸಲು ಸರ್ಕಾರ ಈಗಾಗಲೇ ಮುಂದಾಗಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ವ್ಯವಸ್ಥೆಯನ್ನೂ ಐದು ಭಾಗಗಳಾಗಿ ವಿಂಗಡಿಸುವುದು ಸಿಎಂ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ನಾನು ಒಂದು ಉತ್ತಮ ಪರಂಪರೆಯನ್ನು (Legacy) ಬಿಟ್ಟು ಹೋಗಲು ಬಯಸುತ್ತೇನೆ ಎಂದು ಸಿಎಂ ಇತ್ತೀಚೆಗೆ ಹೇಳಿದ್ದರು. ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಪ್ರಸ್ತಾವನೆಗೆ ಪ್ರಾಥಮಿಕ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಸಂಪುಟ ಸಭೆಯ ಮುಂದೆ ಬರಲಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವೇಳೆ ಸಿಎಂ ಡಿ.ಕೆ. ಶಿವಕುಮಾರ್ ಈ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/bengaluru-5-commissionerates-6633-posts-karnataka-gives-in-principle-nod-to-split-bengaluru-police-gkn/articleshow-t2xr77y"/>
        </item>
        <item>
            <title><![CDATA['SSLC ಮಾರ್ಕ್ಸ್‌ ಕಾರ್ಡ್‌ ಕೂಡ ಕೊಡಬೇಕಾ...?' ಬೆಂಗಳೂರಿನಲ್ಲಿ ಮನೆ ಓನರ್ ಪ್ರಶ್ನೆ ಕೇಳಿ ಬಾಡಿಗೆದಾರ ಕಂಗಾಲು]]></title>
            <link>https://kannada.asianetnews.com/viral/bengaluru-house-hunting-landlords-job-interview-goes-viral/articleshow-u6unvwl</link>
            <guid isPermaLink="true">https://kannada.asianetnews.com/viral/bengaluru-house-hunting-landlords-job-interview-goes-viral/articleshow-u6unvwl</guid>
            <pubDate>Fri, 07 Aug 2026 13:28:05 +0530</pubDate>
            <description><![CDATA[&lt;p&gt;&lt;strong&gt;Bengaluru house hunting interview: &lt;/strong&gt;ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಪಡೆಯುವುದು ಈಗ ಕಂಪನಿ ಇಂಟರ್ವ್ಯೂ ಪಾಸ್ ಮಾಡಿದಷ್ಟೇ ಕಷ್ಟ! ಐಟಿ ಸಿಟಿಯಲ್ಲಿ ಮನೆ ಹುಡುಕಲು ಹೋದ ಯುವಕನಿಗೆ ಮನೆ ಮಾಲೀಕರು ಕೇಳಿದ ಸುದೀರ್ಘ ಪ್ರಶ್ನಾವಳಿ ಹಾಗೂ ಷರತ್ತುಗಳನ್ನು ನೋಡಿ ಸದ್ಯ ನೆಟ್ಟಿಗರು ಕಂಗಾಲಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knv6hxw9ms0mtheq0h4e3je0,imgname-new-project---2026-04-10t133103.992-1775808083849.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂ&lt;/strong&gt;ಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಮನೆ ಮಾಲೀಕರು ಕೇವಲ ಬಾಡಿಗೆ ಮತ್ತು ಡೆಪಾಸಿಟ್ ಬಗ್ಗೆ ಮಾತ್ರ ಕೇಳದೆ, ಪ್ರಶ್ನೆಗಳ ಸುದೀರ್ಘ ಪಟ್ಟಿಯನ್ನೇ ನೀಡಿದಾಗ ದೊಡ್ಡ ಶಾಕ್ ಕಾದಿತ್ತು. ಇದನ್ನು ನೋಡಿದರೆ ಯಾವುದೋ ಜಾಬ್ ಇಂಟರ್ವ್ಯೂ ನಡೆಯುತ್ತಿರುವಂತೆ ಅನಿಸುತ್ತಿತ್ತು. ರೆಡ್ಡಿಟ್ (Reddit)&zwnj;ನಲ್ಲಿ ಹಂಚಿಕೊಳ್ಳಲಾದ ಈ ಕಥೆ ಈಗ ಇಂಟರ್ನೆಟ್&zwnj;ನಲ್ಲಿ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;p&gt;ಬೆಂಗಳೂರಿಗೆ ಬಂದ ಹೊಸ ಬಾಡಿಗೆದಾರನಿಗೆ ಬಜೆಟ್&zwnj;ಗೆ ತಕ್ಕ ಮನೆ ಹುಡುಕುವುದು ಹೇಗೋ ಸುಲಭವಾಯಿತು, ಆದರೆ ಮನೆ ಮಾಲೀಕರ ಪ್ರಶ್ನೆಗಳ ಸುದೀರ್ಘ ಪಟ್ಟಿಗೆ ಉತ್ತರಿಸುವುದು ಅತ್ಯಂತ ಕಷ್ಟಕರವಾಗಿ ಪರಿಣಮಿಸಿತು. ರೆಡ್ಡಿಟ್&zwnj;ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಈ ವ್ಯಕ್ತಿ, ತಮಗೆ ದುಬಾರಿ ಬಾಡಿಗೆ ಮತ್ತು ಭಾರಿ ಸೆಕ್ಯೂರಿಟಿ ಡೆಪಾಸಿಟ್&zwnj;ನ ಅಂದಾಜಿತ್ತು, ಆದರೆ ಮನೆ ಮಾಲೀಕನ ಇಂಟರ್ವ್ಯೂಗೆ ಮಾತ್ರ ತಾವು ಸಿದ್ಧರಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಈ ಬಾಡಿಗೆದಾರನ ಪ್ರಕಾರ, ಮನೆ ಮಾಲೀಕರು ಕೇವಲ ಸಂಬಳ ಮತ್ತು ಕಂಪನಿಯ ಬಗ್ಗೆ ಕೇಳಿ ಸುಮ್ಮನಾಗಲಿಲ್ಲ. ಅವರಿಗೆ ಮದುವೆಯಾಗಿದೆಯೇ ಅಥವಾ ಇಲ್ಲವೇ, ಮುಂದೆ ಮದುವೆಯಾಗುವ ಪ್ಲಾನ್ ಏನು, ಪೋಷಕರು ಎಷ್ಟು ಬಾರಿ ಭೇಟಿ ನೀಡುತ್ತಾರೆ, ಸ್ನೇಹಿತರು ಮನೆಗೆ ಬರುತ್ತಾರೆಯೇ ಅಥವಾ ಇಲ್ಲವೇ, ಊಟದಲ್ಲಿ ಏನು ಇಷ್ಟಪಡುತ್ತಾರೆ ಮತ್ತು ಧೂಮಪಾನ ಅಥವಾ ಮದ್ಯಪಾನ ಮಾಡುತ್ತಾರೆಯೇ ಇಲ್ಲವೇ ಎಂದೆಲ್ಲಾ ಕೇಳಲಾಯಿತು. ಅಷ್ಟೇ ಅಲ್ಲದೆ, ಅವರ ಬರುವ-ಹೋಗುವ ಸಮಯದ ಜೊತೆಗೆ ಲಿಂಕ್ಡ್&zwnj;ಇನ್ (LinkedIn) ಪ್ರೊಫೈಲ್, ಕಳೆದ ಮೂರು ತಿಂಗಳ ಶಂಬಳದ ಸ್ಲಿಪ್ (Salary slip) ಮತ್ತು ಹಳೆಯ ಮನೆ ಮಾಲೀಕರ ರೆಫರೆನ್ಸ್ ಕೂಡ ಕೇಳಲಾಗಿತ್ತು.&lt;/p&gt;&lt;p&gt;ಈ ಇಡೀ ಅನುಭವದ ಬಗ್ಗೆ ಬಾಡಿಗೆದಾರ ತಮಾಷೆಯಾಗಿ ಹೀಗೆ ಬರೆದುಕೊಂಡಿದ್ದಾರೆ, &quot;ಬೆಂಗಳೂರಿನ ಬಾಡಿಗೆ ದರ ಕಿರಿಕಿರಿ ಉಂಟುಮಾಡುವುದು ಹೌದು, ಆದರೆ ಈ ಇಂಟರ್ವ್ಯೂ ಮಾತ್ರ ಬೇರೆಯದೇ ಹಂತದಲ್ಲಿದೆ. ಇನ್ಮುಂದೆ 10 ನೇ ತರಗತಿ ರಿಪೋರ್ಟ್ ಕಾರ್ಡ್, ಬ್ಲಡ್ ಗ್ರೂಪ್ ಮತ್ತು ಹಳೆಯ ಮನೆ ಮಾಲೀಕರ ಶಿಫಾರಸು ಪತ್ರವನ್ನೂ ಕೊಡಬೇಕಾಗುತ್ತಾ?&quot;&lt;/p&gt;&lt;p&gt;ಇದರೊಂದಿಗೆ ಅವರು ತಮ್ಮ ಜೇಬಿಗೆ ಬಿದ್ದ ಭಾರಿ ಹೊರೆಯನ್ನು ಸಹ ಉಲ್ಲೇಖಿಸಿದ್ದಾರೆ: ₹35,000 ಕ್ಕೂ ಹೆಚ್ಚು ಮಾಸಿಕ ಬಾಡಿಗೆ, 10 ತಿಂಗಳ ಅಡ್ವಾನ್ಸ್ ಸೆಕ್ಯೂರಿಟಿ ಡೆಪಾಸಿಟ್ ಮತ್ತು ನೀರಿನ ಅನಿಶ್ಚಿತ ಬಿಲ್.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಭಿನ್ನ ಅಭಿಪ್ರಾಯಗಳು&lt;/strong&gt;&lt;/h2&gt;&lt;p&gt;ರೆಡ್ಡಿಟ್&zwnj;ನಲ್ಲಿ ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು, ಆದರೆ ಇದರ ಮೇಲೆ ಜನರ ಅನುಭವಗಳು ವಿಭಿನ್ನವಾಗಿದ್ದವು. ಒಬ್ಬ ಬಳಕೆದಾರರು, &quot;ನಾನು 2017 ರಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ಮತ್ತು 5 ವಿಭಿನ್ನ ಮನೆಗಳನ್ನು ಬದಲಾಯಿಸಿದ್ದೇನೆ, ಆದರೆ ನನಗೆ ಎಂದಿಗೂ ಹೀಗಾಗಿಲ್ಲ&quot; ಎಂದು ಬರೆದಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರರು, ಇದು ಸಂಪೂರ್ಣವಾಗಿ ಮನೆ ಮಾಲೀಕರ ಮೇಲೆ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಕೆಲವರು ತಮ್ಮ ಉತ್ತಮ ಅನುಭವಗಳನ್ನು ಹಂಚಿಕೊಂಡಿದ್ದು, ಹಳೆಯ ಮನೆ ಮಾಲೀಕರು ಇಡೀ ತಿಂಗಳ ಡೆಪಾಸಿಟ್ ಮುರಿಯುವ ಬದಲು ಕೇವಲ ಕಳೆದುಹೋದ ಕೀ ಮತ್ತು ಸಣ್ಣಪುಟ್ಟ ಪೇಂಟ್ ವೆಚ್ಚವನ್ನು ಮಾತ್ರ ಪಡೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬೆಂಗಳೂರಿನಂತಹ ಟೆಕ್ ನಗರದಲ್ಲಿ ಈಗ ಮನೆ ಹುಡುಕುವುದು ಕೇವಲ ಒಂದು ಕಾಗದದ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಿಗೆ ಹಲವರಿಗೆ ಇದು ಕಠಿಣ ಇಂಟರ್ವ್ಯೂ ಪಾಸ್ ಮಾಡಿದಂತೆ ಆಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/bengaluru-house-hunting-landlords-job-interview-goes-viral/articleshow-u6unvwl"/>
        </item>
        <item>
            <title><![CDATA[ಬೆಂಗಳೂರಿನ 100 ಎಕರೆ ಜಾಗದಲ್ಲಿ ಎಐ ಯುನಿವರ್ಸಿಟಿ, ಮಸೂದೆ ಮಂಡನೆಗೆ ಸರ್ಕಾರ ಸಜ್ಜು!]]></title>
            <link>https://kannada.asianetnews.com/bengaluru-urban/karnataka-govt-table-ai-university-bill-100-acres-bengaluru-campus-san/articleshow-6ifrgl7</link>
            <guid isPermaLink="true">https://kannada.asianetnews.com/bengaluru-urban/karnataka-govt-table-ai-university-bill-100-acres-bengaluru-campus-san/articleshow-6ifrgl7</guid>
            <pubDate>Fri, 07 Aug 2026 11:04:34 +0530</pubDate>
            <description><![CDATA[&lt;p&gt;ಕರ್ನಾಟಕ ಸರ್ಕಾರವು ದೇಶದ ಮೊದಲ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಯು ಎಐ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಕರ್ನಾಟಕವನ್ನು ಜಾಗತಿಕ ಹಬ್ ಆಗಿ ರೂಪಿಸುವ ಗುರಿ ಹೊಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzdb9tssbk7xh40068hemfyy,imgname-ai-university-karnataka-1786080717625.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.7): &lt;/strong&gt;ಕೃತಕ ಬುದ್ಧಿಮತ್ತೆ (Artificial Intelligence - AI) ಶಿಕ್ಷಣ, ಸಂಶೋಧನೆ ಹಾಗೂ ನಾವೀನ್ಯತೆಗೆ ಜಾಗತಿಕ ಹಬ್ ರೂಪಿಸುವ ನಿಟ್ಟಿನಲ್ಲಿ ಮಹತ್ವದಜ್ಜೆ ಇಟ್ಟಿರುವ ಕರ್ನಾಟಕ ಸರ್ಕಾರ, ದೇಶದಲ್ಲೇ ಪ್ರಥಮ ಎನ್ನಲಾದ ಪ್ರತ್ಯೇಕ 'ಎಐ ವಿಶ್ವವಿದ್ಯಾಲಯ' ಸ್ಥಾಪನೆಗೆ ಧುಮುಕಿದೆ. ಈ ಸಂಬಂಧ ಮುಂಬರುವ ಅಧಿವೇಶನದಲ್ಲಿ ಪ್ರತ್ಯೇಕ ವಿಧೇಯಕ ಮಂಡಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಕೈಗಾರಿಕೆಗಳು ಮತ್ತು ಸರ್ಕಾರಿ ರಂಗದಲ್ಲಿ ಎಐ ತಜ್ಞರು ಹಾಗೂ ಪರಿಣಿತ ವೃತ್ತಿಪರರಿಗೆ ದಿನೇ ದಿನೇ ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಎಐ ಶಿಕ್ಷಣವನ್ನು ಸಂಸ್ಥೆಗತಗೊಳಿಸಲು (Institutionalise) ಈ ಯೋಜನೆಗೆ ಚಾಲನೆ ನೀಡಲಾಗಿದೆ.&lt;/p&gt;&lt;p&gt;ಶಾಶ್ವತ ಕ್ಯಾಂಪಸ್ ನಿರ್ಮಾಣವಾಗುವವರೆಗೆ ಈ ವಿಶ್ವವಿದ್ಯಾಲಯವು ತಾತ್ಕಾಲಿಕವಾಗಿ ಸರ್ಕಾರದ ಪ್ರಸ್ತುತ ಇರುವ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಭೂಸ್ವಾಧೀನ ಹಾಗೂ ಕಟ್ಟಡ ನಿರ್ಮಾಣದ ವಿಳಂಬಕ್ಕೆ ಕಾಯದೆ ತಕ್ಷಣವೇ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೆಂಗಳೂರಿನಲ್ಲಿ 100 ಎಕರೆ ಜಾಗ ಹುಡುಕಾಟ&lt;/strong&gt;&lt;/h2&gt;&lt;p&gt;&quot;ವಿಶ್ವವಿದ್ಯಾಲಯವನ್ನು ನಿಯಂತ್ರಿಸಲು ಹಾಗೂ ನಿರ್ವಹಿಸಲು ನಮಗೆ ಪ್ರತ್ಯೇಕ 'ಎಐ ವಿಶ್ವವಿದ್ಯಾಲಯ ಕಾಯ್ದೆ' ಅಗತ್ಯವಿದೆ. ಇದರ ಕರಡು ಮಸೂದೆ ಸಿದ್ಧಗೊಳ್ಳುತ್ತಿದ್ದು, ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು,&quot; ಎಂದು ಅತೀಕ್ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಈ ವಿಶ್ವವಿದ್ಯಾಲಯದ ಶಾಶ್ವತ ಕ್ಯಾಂಪಸ್&zwnj;ಗಾಗಿ ಬೆಂಗಳೂರಿನಲ್ಲಿ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಕ್ವಿನ್&zwnj; ಸಿಟಿ (KWIN City), ರಕ್ಷಣೆ ಮತ್ತು ಏರೋಸ್ಪೇಸ್ ಪಾರ್ಕ್ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳನ್ನು ಪ್ರಮುಖ ಸ್ಥಳಗಳನ್ನಾಗಿ ಪರಿಗಣಿಸಲಾಗಿದೆ.&lt;/p&gt;&lt;p&gt;&quot;ಸೂಕ್ತ ಜಾಗವನ್ನು ಗುರುತಿಸಿ ಮಂಜೂರು ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (KIADB) ಸೂಚಿಸಲಾಗಿದೆ. ಜಮೀನು ಹಂಚಿಕೆಯಾಗುವವರೆಗೆ ಸರ್ಕಾರಿ ಕಟ್ಟಡದಲ್ಲೇ ವಿಶ್ವವಿದ್ಯಾಲಯದ ಕೆಲಸಗಳು ಆರಂಭವಾಗಿ, ನಂತರ ಶಾಶ್ವತ ಕ್ಯಾಂಪಸ್&zwnj;ಗೆ ಸ್ಥಳಾಂತರಗೊಳ್ಳಲಿದೆ,&quot; ಎಂದು ಅವರು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಜಾಗತಿಕ ಮಾದರಿ&lt;/strong&gt;&lt;/h2&gt;&lt;p&gt;ಈ ವಿಶ್ವವಿದ್ಯಾಲಯವು ಎಐ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗೆ ಕರ್ನಾಟಕದ ಉನ್ನತ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇಲ್ಲಿ ಎಐ ವಲಯಕ್ಕೆ ಸಂಬಂಧಿಸಿದ ವಿಶೇಷ ಪದವಿ ಕೋರ್ಸ್&zwnj;ಗಳು ಹಾಗೂ ಪ್ರಮಾಣಪತ್ರ (Certificate) ಕೋರ್ಸ್&zwnj;ಗಳನ್ನು ನೀಡಲಾಗುತ್ತದೆ.&lt;/p&gt;&lt;p&gt;ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸ್ಥಾಪನೆಯಾಗುವವರೆಗೆ ಯುವಜನರ ಕೌಶಲ್ಯಾಭಿವೃದ್ಧಿಗೆ ವಿಳಂಬವಾಗದಂತೆ ನೋಡಿಕೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಯುಡಬ್ಲ್ಯೂಸಿಇ (UVCE) ಹಾಗೂ ಐಐಐಟಿ ಬೆಂಗಳೂರು (IIIT Bangalore) ಸಂಸ್ಥೆಗಳ ಮೂಲಕ ಎಐ ಪ್ರಮಾಣಪತ್ರ ಕೋರ್ಸ್&zwnj;ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯು ಶೈಕ್ಷಣಿಕ ಕ್ಷೇತ್ರ, ಉದ್ಯಮ ರಂಗ ಹಾಗೂ ಸರ್ಕಾರವನ್ನು ಒಂದೇ ಸೂರಿನಡಿ ತಂದು, ಹೊಸ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಿದೆ ಎಂದು ಅತೀಕ್ ಹೇಳಿದ್ದಾರೆ.&lt;/p&gt;&lt;p&gt;ಈ ಬೃಹತ್ ಯೋಜನೆಗೆ ಮಾರ್ಗಸೂಚಿ (Roadmap) ಸಿದ್ಧಪಡಿಸಲು ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಹಾಗೂ ಐಐಟಿ ಮುಂಬೈನ ಮಾಜಿ ನಿರ್ದೇಶಕ ಪ್ರೊ. ಮಿಶ್ರಾ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತಿದೆ. ಅಲ್ಲದೆ, ತೈವಾನ್/ಯುಎಇಯ ಎಐ ವಿಶ್ವವಿದ್ಯಾಲಯಗಳು, ಸ್ಟ್ಯಾನ್&zwnj;ಫೋರ್ಡ್ ಸ್ಕೂಲ್ ಆಫ್ ಎಐ ಮತ್ತು ಎಂಐಟಿ ಸ್ಕೂಲ್&zwnj; ಆಫ್ ಎಐ ಸಂಸ್ಥೆಗಳ ಮಾದರಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ನಂತರವೇ ಕರ್ನಾಟಕದ ಎಐ ವಿಶ್ವವಿದ್ಯಾಲಯದ ರೂಪುರೇಷೆಯನ್ನು ಅಂತಿಮಗೊಳಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/karnataka-govt-table-ai-university-bill-100-acres-bengaluru-campus-san/articleshow-6ifrgl7"/>
        </item>
        <item>
            <title><![CDATA[ಬೆಂಗಳೂರು-ಹೊಸೂರು ಪ್ರಸ್ತಾವಿತ ಮೆಟ್ರೋ ಯೋಜನೆ ವರ್ಕ್ ಔಟ್ ಆಗಲ್ಲ, ಸಬರ್ಬನ್ ರೈಲೇ ಬೆಸ್ಟ್! ತಜ್ಞರ ವಾದ]]></title>
            <link>https://kannada.asianetnews.com/karnataka-districts/bengaluru-hosur-metro-proposal-faces-feasibility-questions-as-experts-advocate-suburban-rail-gdp/articleshow-qsaafm2</link>
            <guid isPermaLink="true">https://kannada.asianetnews.com/karnataka-districts/bengaluru-hosur-metro-proposal-faces-feasibility-questions-as-experts-advocate-suburban-rail-gdp/articleshow-qsaafm2</guid>
            <pubDate>Fri, 07 Aug 2026 11:21:01 +0530</pubDate>
            <description><![CDATA[ತಮಿಳುನಾಡು ಸರ್ಕಾರವು ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಆಸಕ್ತಿ ತೋರಿದೆ. ಆದರೆ, ಸಾರಿಗೆ ತಜ್ಞರು ಈ ಯೋಜನೆಗೆ ಮೆಟ್ರೋಗಿಂತ ಉಪನಗರ ರೈಲು ಹೆಚ್ಚು ಸೂಕ್ತವೆಂದು ಅಭಿಪ್ರಾಯಪಟ್ಟಿದ್ದು, ಯಾವುದೇ ನಿರ್ಧಾರಕ್ಕೂ ಮುನ್ನ ವೈಜ್ಞಾನಿಕ ಬೇಡಿಕೆ ಅಧ್ಯಯನದ ಅಗತ್ಯವನ್ನು ಒತ್ತಿಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6mvq6x814y2pd9jhdcwzys,imgname-delhi-metro-16-stations-closed-neet-protest-dmrc-security-alert-rajiv-chowk-update-1784782118109.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ತಮಿಳುನಾಡಿನ ಹೊಸೂರು ಮತ್ತು ಬೆಂಗಳೂರಿನ ಬೊಮ್ಮಸಂದ್ರವನ್ನು ಸಂಪರ್ಕಿಸುವ ಪ್ರಸ್ತಾವಿತ ಗಡಿಯಾಚೆಗಿನ ಮೆಟ್ರೋ ಮಾರ್ಗಕ್ಕೆ ತಮಿಳುನಾಡು ತೀವ್ರ ಆಸಕ್ತಿ ತೋರುತ್ತಿದೆ. ತಮಿಳುನಾಡು ವಿತ್ತ ಸಚಿವ ಎನ್. ಮೇರಿ ವಿಲ್ಸನ್ ಬುಧವಾರ ಬಜೆಟ್ ಮಂಡನೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಹೊಸೂರಿನಿಂದ ಕರ್ನಾಟಕದ ಬೊಮ್ಮಸಂದ್ರದವರೆಗೆ ಮೆಟ್ರೋ ರೈಲು ಮಾರ್ಗವನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಬೊಮ್ಮಸಂದ್ರವು ಹೊಸೂರಿನಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ.&lt;/p&gt;&lt;p&gt;ಈ ನಡುವೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಪ್ರಯತ್ನವನ್ನು ಸಾರಿಗೆ ತಜ್ಞರು ಸ್ವಾಗತಿಸಿದ್ದರೂ, ಕೇವಲ ರಾಜಕೀಯ ಘೋಷಣೆಗಳ ಆಧಾರದ ಮೇಲೆ ಮೆಟ್ರೋ ಯೋಜನೆಯನ್ನು ಅಂತಿಮಗೊಳಿಸುವುದರ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಸಾರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಪ್ರಯಾಣಿಕರ ನೈಜ ಬೇಡಿಕೆಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಬೆಂಗಳೂರಿನ ಮೆಟ್ರೋ ಜಾಲವನ್ನು ಹೊಸೂರಿಗೆ ಜೋಡಿಸುವ ಉದ್ದೇಶ ಹೊಂದಿರುವ ಈ 23 ಕಿಲೋಮೀಟರ್ ಉದ್ದದ ಕಾರಿಡಾರ್&zwnj;ಗಾಗಿ ಪ್ರಸ್ತುತ ವಿವರವಾದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಗೊಳ್ಳುವ ಅಂತಿಮ ಹಂತದಲ್ಲಿದೆ.&lt;/p&gt;&lt;h2&gt;ಅವೈಜ್ಞಾನಿಕ ನಿರ್ಧಾರ ಮತ್ತು ವೈಜ್ಞಾನಿಕ ಬೇಡಿಕೆ ಅಧ್ಯಯನ&lt;/h2&gt;&lt;p&gt;ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಶ್ ವರ್ಮಾ ಮಾತನಾಡಿ, &quot;ಕಾರ್ಯಸಾಧ್ಯತಾ ಅಧ್ಯಯನವು ಪ್ರತಿ ದಿಕ್ಕಿನಲ್ಲಿ ಗಂಟೆಗೆ ಎಷ್ಟು ಪ್ರಯಾಣಿಕರು ಸಂಚರಿಸುತ್ತಾರೆ (PHPDT) ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಗರಿಷ್ಠ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿದ ನಂತರವಷ್ಟೇ ಸೂಕ್ತ ಸಾರಿಗೆ ಮಾದರಿಯನ್ನು ಶಿಫಾರಸು ಮಾಡಬೇಕು ಎಂದಿದ್ದಾರೆ.&lt;/p&gt;&lt;p&gt;ಪ್ರಮುಖ ವಾಣಿಜ್ಯ ಹಾಗೂ ಕೈಗಾರಿಕಾ ಕೇಂದ್ರಗಳ ನಡುವೆ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಸೂಕ್ತ. ಆದರೆ, ಮೊದಲೇ ಮೆಟ್ರೋ ಎಂದು ನಿರ್ಧರಿಸಿ, ನಂತರ ಕಾರ್ಯಸಾಧ್ಯತಾ ಅಧ್ಯಯನ ನಡೆಸುವುದು ಸಂಪೂರ್ಣವಾಗಿ ಅವೈಜ್ಞಾನಿಕ. ಬೇಡಿಕೆಯ ಪ್ರಮಾಣವನ್ನು ಆಧರಿಸಿ ಈ ಕಾರಿಡಾರ್&zwnj;ಗೆ ಮೆಟ್ರೋ, ಮೆಟ್ರೋ ಲೈಟ್, ಉಪನಗರ ರೈಲು (Suburban Rail) ಅಥವಾ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಪೈಕಿ ಯಾವುದು ಅಗತ್ಯ ಎಂಬುದನ್ನು ತೀರ್ಮಾನಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಹಲವು ಭಾರತೀಯ ನಗರಗಳಲ್ಲಿ ನೈಜ ಬೇಡಿಕೆಯನ್ನು ಪರಿಶೀಲಿಸದೆ ಮೆಟ್ರೋ ನಿರ್ಮಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ, ಮೂಲಸೌಕರ್ಯಗಳು ಸದ್ಬಳಕೆಯಾಗದೆ ನಷ್ಟ ಅನುಭವಿಸುತ್ತಿರುವುದನ್ನು ಪ್ರೊ. ವರ್ಮಾ ಉಲ್ಲೇಖಿಸಿದ್ದಾರೆ. ಅಲ್ಲದೆ, ತಮಿಳುನಾಡು ಮತ್ತು ಕರ್ನಾಟಕದ ವಿಭಿನ್ನ ಮೆಟ್ರೋ ವ್ಯವಸ್ಥೆಗಳ ನಡುವಿನ ಹೊಂದಾಣಿಕೆ ಸಮಸ್ಯೆಯ ಕುರಿತ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ. &quot;ವ್ಯವಸ್ಥೆಗಳ ತಾಂತ್ರಿಕ ಹೊಂದಾಣಿಕೆ ದೊಡ್ಡ ಸಮಸ್ಯೆಯಲ್ಲ. ಪ್ರಯಾಣಿಕರು ಸುಲಭವಾಗಿ ಪ್ರತ್ಯೇಕ ರೈಲುಗಳಿಗೆ ಬದಲಾಯಿಸಲು ಒಂದು ಸಾಮಾನ್ಯ ಇಂಟರ್&zwnj;ಚೇಂಜ್ ಟರ್ಮಿನಲ್ ನಿರ್ಮಿಸಿದರೆ ಸಾಕು. ಕೊಚ್ಚಿಯ ಮೆಟ್ರೋ ಮತ್ತು ವಾಟರ್ ಮೆಟ್ರೋ ಹಾಗೂ ಜಾಗತಿಕವಾಗಿ ಉಪನಗರ ರೈಲು, ಟ್ರಾಮ್ ಮತ್ತು ಮೆಟ್ರೋಗಳ ನಡುವಿನ ಸಂಪರ್ಕ ವ್ಯವಸ್ಥೆಗಳೇ ಇದಕ್ಕೆ ಉತ್ತಮ ನಿದರ್ಶನ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;h2&gt;ಮೆಟ್ರೋಗಿಂತ ಉಪನಗರ ರೈಲು ಹೆಚ್ಚು ಸೂಕ್ತ&lt;/h2&gt;&lt;p&gt;ಬೆಂಗಳೂರಿನ ನಮ್ಮ ಮೆಟ್ರೋದ ಅಸ್ತಿತ್ವದಲ್ಲಿರುವ ಹಳದಿ ಮಾರ್ಗವನ್ನು (Yellow Line) ಹೊಸೂರಿನವರೆಗೆ ವಿಸ್ತರಿಸುವುದು ಪ್ರಾಯೋಗಿಕವಾಗಿ ಸರಿಯೇ ಎಂಬ ಬಗ್ಗೆ ರೈಲು ಹಾಗೂ ಚಲನಶೀಲತೆ ತಜ್ಞ ಸಂಜೀವ್ ದ್ಯಾಮನ್ನವರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಮೆಟ್ರೋವನ್ನು ಪ್ರಾಥಮಿಕವಾಗಿ ನಗರದೊಳಗಿನ ಅಲ್ಪಾವಧಿ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಹೊಸೂರಿನಿಂದ ಬರುವ ಪ್ರಯಾಣಿಕರೇ ಮೆಟ್ರೋವನ್ನು ಭರ್ತಿ ಮಾಡಿದರೆ, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಬೆಂಗಳೂರಿನ ಒಳಗಿನ ನಿಲ್ದಾಣಗಳಿಂದ ಹತ್ತುವ ಪ್ರಯಾಣಿಕರಿಗೆ ಜಾಗವೇ ಸಿಗದೆ ತೀವ್ರ ತೊಂದರೆಯಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;ದ್ಯಾಮಣ್ಣವರ್ ಅವರ ಪ್ರಕಾರ:&lt;/h3&gt;&lt;ul&gt; &lt;li&gt;ಮೆಟ್ರೋ ವ್ಯವಸ್ಥೆಯು 30 ರಿಂದ 40 ಕಿ.ಮೀ ವ್ಯಾಪ್ತಿಯ ನಗರ ಪ್ರಯಾಣಕ್ಕೆ ಸೂಕ್ತ.&lt;/li&gt; &lt;li&gt;ಹೊಸೂರಿನಂತಹ ದೀರ್ಘ ಪ್ರಾದೇಶಿಕ ಪ್ರಯಾಣಗಳಿಗೆ ಉಪನಗರ ರೈಲು ಅಥವಾ RRTS ವ್ಯವಸ್ಥೆ ಹೆಚ್ಚು ಪರಿಣಾಮಕಾರಿ.&lt;/li&gt; &lt;li&gt;ಪ್ರಸ್ತುತ ಯೋಜನೆ ಹಂತದಲ್ಲಿರುವ ಬೆಂಗಳೂರು ಉಪನಗರ ರೈಲು ಮಾರ್ಗವನ್ನು ಹೀಲಲಿಗೆಯಿಂದ ಹೊಸೂರಿನವರೆಗೆ ವಿಸ್ತರಿಸುವುದು ಸೂಕ್ತ.&lt;/li&gt;&lt;/ul&gt;&lt;p&gt;&quot;ಉಪನಗರ ರೈಲುಗಳು ಹೆಚ್ಚಿನ ಸಾಮರ್ಥ್ಯ, ಹೆಚ್ಚಿನ ವೇಗ, ಕಡಿಮೆ ನಿಲ್ದಾಣಗಳು ಮತ್ತು ಕಡಿಮೆ ನಿರ್ಮಾಣ ವೆಚ್ಚವನ್ನು ಹೊಂದಿರುತ್ತವೆ. ಇದನ್ನು ಚಂದಾಪುರ ವೃತ್ತದ ಬಳಿ ಸಂಯೋಜಿಸಿದರೆ, ಕೇಂದ್ರ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಬೊಮ್ಮಸಂದ್ರದಲ್ಲಿ ಮೆಟ್ರೋಗೆ ಬದಲಾಯಿಸಬಹುದು ಅಥವಾ ಉಪನಗರ ರೈಲಿನ ಮೂಲಕವೇ ಕೆಎಸ್&zwnj;ಆರ್ ಬೆಂಗಳೂರು ಅಥವಾ ಇತರ ಪ್ರಮುಖ ರೈಲು ನಿಲ್ದಾಣಗಳಿಗೆ ನೇರವಾಗಿ ತಲುಪಬಹುದು&quot; ಎಂದು ಅವರು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಒಂದು ವೇಳೆ ಎರಡೂ ಸರ್ಕಾರಗಳು ಮೆಟ್ರೋ ಸಂಪರ್ಕಕ್ಕೇ ಆದ್ಯತೆ ನೀಡುವುದಾದರೆ, ಬೆಂಗಳೂರಿನ ಪ್ರಸ್ತುತ ಮೆಟ್ರೋ ಜಾಲವನ್ನು ನೇರವಾಗಿ ವಿಸ್ತರಿಸುವ ಬದಲು, ಹೊಸೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ 'ವಿಶೇಷ ಉದ್ದೇಶದ ವಾಹನ' (SPV) ಮಾದರಿಯಲ್ಲಿ ಪ್ರತ್ಯೇಕ ಗಡಿಯಾಚೆಗಿನ ಮೆಟ್ರೋ ಮಾರ್ಗವನ್ನು ನಿರ್ಮಿಸುವುದು ಒಳಿತು. ಇದರಿಂದ ನಗರದ ಒಳಗಿನ ಪ್ರಯಾಣಿಕರ ಹಿತಾಸಕ್ತಿಯೂ ರಕ್ಷಣೆಗೊಂಡು, ಪ್ರಾದೇಶಿಕ ಸಂಪರ್ಕವೂ ಸುಲಭವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-hosur-metro-proposal-faces-feasibility-questions-as-experts-advocate-suburban-rail-gdp/articleshow-qsaafm2"/>
        </item>
        <item>
            <title><![CDATA[KRS Party: ವಾಲ್ಮೀಕಿ ನಿಗಮ ಹಗರಣ: ಗಂಭೀರ ಆರೋಪ ಎದುರಿಸುತ್ತಿರುವ ಬಿ ನಾಗೇಂದ್ರಗೆ ಮಂತ್ರಿಗಿರಿ ಯಾಕೆ? KRS ಪಾರ್ಟಿ ಕಿಡಿ]]></title>
            <link>https://kannada.asianetnews.com/politics/b-nagendra-s-cabinet-entry-sparks-row-krs-raises-questions-over-valmiki-scam-allegations-rav/articleshow-g4h8wi5</link>
            <guid isPermaLink="true">https://kannada.asianetnews.com/politics/b-nagendra-s-cabinet-entry-sparks-row-krs-raises-questions-over-valmiki-scam-allegations-rav/articleshow-g4h8wi5</guid>
            <pubDate>Fri, 07 Aug 2026 09:44:12 +0530</pubDate>
            <description><![CDATA[&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಸಂಪುಟದಿಂದ ವಜಾಗೊಳಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್&zwnj;ಎಸ್) ಪಕ್ಷ ಆಗ್ರಹಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd4gy0249rwxggh7dfhh9jk,imgname-----------------------2026-08-07t090142.653-1786073610242.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7):&lt;/strong&gt; ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ತೀರ್ಪು ಬರುವವರೆಗೂ ಸಂಪುಟದಿಂದ ವಜಾಗೊಳಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್&zwnj;ಎಸ್) ಪಕ್ಷ ಆಗ್ರಹಿಸಿದೆ.&lt;/p&gt;&lt;h2&gt;ಗಂಭೀರ ಆರೋಪ ಎದುರಿಸುತ್ತಿರುವ ಬಿ ನಾಗೇಂದ್ರಗೆ ಮಂತ್ರಿಗಿರಿ ಯಾಕೆ?&lt;/h2&gt;&lt;p&gt;ಈ ಪ್ರಕರಣದಲ್ಲಿ ತನಿಖೆಗೆ ಒಳಗಾಗಿರುವ ಬಿ.ನಾಗೇಂದ್ರ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಈ ಪ್ರಕರಣ ಸಂಬಂಧ ಇಡಿ, ಸಿಬಿಐ ಮತ್ತು ಎಸ್ಐಟಿ ತನಿಖೆ ನಡೆಸಿದ್ದು, ನ್ಯಾಯಾಲಯಕ್ಕೆ ಚಾರ್ಜ್&zwnj;ಶೀಟ್&zwnj;ಗಳನ್ನೂ ಸಲ್ಲಿಸಿವೆ. ಈ ಚಾರ್ಜ್&zwnj;ಶೀಟ್&zwnj;ಗಳಲ್ಲಿ ಬಿ.ನಾಗೇಂದ್ರ ಅವರ ಪಾತ್ರದ ಬಗ್ಗೆ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ಸಚಿವ ಸಂಪುಟದಲ್ಲಿ ಮುಂದುವರೆಸಿರುವುದು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪೋಷಿಸುವ ನಿಲುವಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷ ರಘು ಜಾಣಗೆರೆ ಟೀಕಿಸಿದ್ದಾರೆ.&lt;/p&gt;&lt;h3&gt;ವಾಲ್ಮೀಕಿ ನಿಗಮದ ಹಣ ತಿಂದಿದ್ದಕ್ಕಲ್ಲವೇ ಜೈಲು ಸೇರಿದ್ದು?&lt;/h3&gt;&lt;p&gt;ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಕೋಟ್ಯಂತರ ರು. ಸಾರ್ವಜನಿಕ ಹಣದ ದುರುಪಯೋಗದ ಆರೋಪಗಳು ಇರುವ ಪ್ರಕರಣದ ಪ್ರಮುಖ ಆರೋಪಿಗೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ದೂರವಿಡಬೇಕು. ಅಗತ್ಯವಿದ್ದಲ್ಲಿ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;&lt;h3&gt;ರಾಜ್ಯವ್ಯಾಪಿ ಹೋರಾಟ ಕೆಆರ್&zwnj;ಎಸ್ ಎಚ್ಚರಿಕೆ&lt;/h3&gt;&lt;p&gt;ಪ್ರಸ್ತುತ ಜಾಮೀನಿನ ಮೇಲಿರುವ ನಾಗೇಂದ್ರ ಅವರಿಗೆ ಜಾಮೀನು ಷರತ್ತುಗಳಲ್ಲಿ ಅವರ ಸಂಚಾರದ ಮೇಲೂ ಕೆಲವು ನಿರ್ಬಂಧಗಳು ಜಾರಿಯಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನದಲ್ಲಿರುವ ವ್ಯಕ್ತಿಯು ತನ್ನ ಕರ್ತವ್ಯಗಳನ್ನು ಸಂಪೂರ್ಣ ಸ್ವಾತಂತ್ರ್ಯದಿಂದ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಹೇಗೆ ಸಾಧ್ಯ? ಹೀಗಾಗಿ ಈ ಪ್ರಕರಣದ ವಿಚಾರಣೆ ಪೂರ್ಣಗೊಂಡು ಅಂತಿಮ ತೀರ್ಪು ಬರುವವರೆಗೂ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ, ಪಕ್ಷದಿಂದ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಅವರು ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/b-nagendra-s-cabinet-entry-sparks-row-krs-raises-questions-over-valmiki-scam-allegations-rav/articleshow-g4h8wi5"/>
        </item>
        <item>
            <title><![CDATA[ಉಲ್ಟಾ ಹೊಡೆದ ಸ್ನೇಹಿತರು, ರಾತ್ರಿ ಇಡೀ ನಿದ್ದೆ ಮಾಡದೆ ಒದ್ದಾಡಿದ ದರ್ಶನ್! ಮಾಫಿ ಸಾಕ್ಷಿಅರ್ಜಿಯಲ್ಲಿ ಯಾವ ಅಂಶವಿದೆ?]]></title>
            <link>https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a</link>
            <guid isPermaLink="true">https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a</guid>
            <pubDate>Fri, 07 Aug 2026 09:11:23 +0530</pubDate>
            <description><![CDATA[ನಟ ದರ್ಶನ್&zwnj; ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆತನ ಆಪ್ತ ಸ್ನೇಹಿತರಾದ ಪ್ರದೋಷ್&zwnj; ಮತ್ತು ವಿನಯ್&zwnj; ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ದರ್ಶನ್&zwnj; ತಮಗೆ ಬೆದರಿಕೆ ಹಾಕಿದ್ದಾಗಿ ಪ್ರದೋಷ್&zwnj; ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಈ ಬೆಳವಣಿಗೆಯಿಂದ ಜೈಲಿನಲ್ಲಿರುವ ದರ್ಶನ್&zwnj;ಗೆ ತೀವ್ರ ಸಂಕಷ್ಟ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvst3z4z28htqeyycnpj5fmv,imgname-darshan-new-1782203939999.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಟ ದರ್ಶನ್&zwnj; ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಹು ದೊಡ್ಡ ತಿರುವು ಸಿಕ್ಕಿದ್ದು, ಪ್ರಕರಣದಲ್ಲಿ ತಮ್ಮನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ದರ್ಶನ್&zwnj; ಆಪ್ತ ಸ್ನೇಹಿತರಾದ ಪ್ರಕರಣದ 10 ಮತ್ತು 14ನೇ ಆರೋಪಿಗಳಾಗಿರುವ ವಿನಯ್&zwnj; ಹಾಗೂ ಪ್ರದೋಷ್&zwnj; ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್&zwnj;ಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದ್ದು, ತೀವ್ರ ಆತಂಕವನ್ನು ಸೃಷ್ಟಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ದರ್ಶನ್ ಆಪ್ತನಾಗಿರುವ ಪ್ರದೂಷ್, ನ್ಯಾಯಾಲಯದಲ್ಲಿ &lsquo;ಮಾಫಿ ಸಾಕ್ಷಿ&rsquo; (Approver) ಆಗಲು ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.&lt;/p&gt;&lt;p&gt;ತಮ್ಮದೇ ಆಪ್ತ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದರೆ ಕಾನೂನುಬದ್ಧವಾಗಿ ತಮಗೆ ದೊಡ್ಡ ಹಿನ್ನಡೆಯಾಗಲಿದೆ ಎಂಬ ಭೀತಿಯಿಂದ ನಟ ದರ್ಶನ್ ಜೈಲಿನಲ್ಲಿ ವಿಲವಿಲನೆ ಒದ್ದಾಡುತ್ತಿದ್ದಾರೆ. ಪ್ರದೂಷ್ ಅರ್ಜಿ ಸಲ್ಲಿಸಿದ ಸುದ್ದಿ ತಿಳಿಯುತ್ತಿದ್ದಂತೆ, ದರ್ಶನ್ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.&lt;/p&gt;&lt;h2&gt;ಊಟ-ನಿದ್ರೆ ತೊರೆದು ಮೌನಕ್ಕೆ ಶರಣಾದ &lsquo;ಡಿ ಬಾಸ್&rsquo;&lt;/h2&gt;&lt;p&gt;ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನೂ ಮಾಡದ ದರ್ಶನ್, ತೀವ್ರ ಚಿಂತಾಕ್ರಾಂತರಾಗಿ ಏಕಾಂಗಿಯಾಗಿ ಕುಳಿತಿದ್ದರು. ಇತರ ಸಹ-ಬಂಧಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೆ ಮೌನಕ್ಕೆ ಶರಣಾಗಿದ್ದ ದರ್ಶನ್, ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿ ಕಣ್ಣೇ ಮುಚ್ಚಿಲ್ಲವಂತೆ. ಈಗಾಗಲೇ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಕುಗ್ಗಿರುವ ದರ್ಶನ್&zwnj;ಗೆ, ಈ ಹೊಸ ಬೆಳವಣಿಗೆಯಿಂದಾಗಿ ಪ್ರಕರಣದ ಭವಿಷ್ಯ ಏನಾಗುವುದೋ ಎಂಬ ಭಯ ಹೆಚ್ಚಾಗಿದೆ.&lt;/p&gt;&lt;p&gt;ಶುಕ್ರವಾರ ಬೆಳಿಗ್ಗೆ ತಮ್ಮ ಬ್ಯಾರಕ್&zwnj;ನಲ್ಲಿಯೇ ಕೆಲಕಾಲ ವಾಕ್ ಮಾಡಿದ ದರ್ಶನ್, ದೇವರ ಫೋಟೋಗೆ ಕೈಮುಗಿದು ಕಾಫಿ ಸೇವಿಸಿದರು. ಆ ನಂತರ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ತಮ್ಮ ಪ್ರಕರಣದ ಸುದ್ದಿಯನ್ನು ಓದಿ, ಮತ್ತಷ್ಟು ಕಂಗಾಲಾಗಿ ಮತ್ತೆ ಮೌನಕ್ಕೆ ಜಾರಿದ್ದಾರೆ. ಒಟ್ಟಿನಲ್ಲಿ, ಆಪ್ತನ ನಿರ್ಧಾರದಿಂದಾಗಿ ದರ್ಶನ್ ಹಾಗೂ ಅವರ ಗ್ಯಾಂಗ್&zwnj;ಗೆ ಜೈಲಿನಲ್ಲಿ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ.&lt;/p&gt;&lt;h2&gt;ಮಾಫಿ ಅರ್ಜಿಯಲ್ಲಿ ಏನೇನು ಉಲ್ಲೇಖವಿದೆ?&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ, ದರ್ಶನ್&zwnj; ಸೇರಿದಂತೆ ಎಲ್ಲ ಆರೋಪಿಗಳು ವಹಿಸಿದ ಪಾತ್ರವನ್ನು ಅರ್ಜಿಯಲ್ಲಿ ಪ್ರದೋಷ್&zwnj; ವಿವರಿಸಿದ್ದಾನೆ. ಅಲ್ಲದೆ, &lsquo;ರೇಣುಕಾಸ್ವಾಮಿ ಮೊಬೈಲ್&zwnj;ನಲ್ಲಿದ್ದ ಮೆಸೇಜ್&zwnj;ಗಳನ್ನು ಓದಿದ್ದು ಬಿಟ್ಟರೆ ಯಾವುದೇ ಅಪರಾಧ ಕೃತ್ಯ ಎಸಗಿಲ್ಲ. ಸಾಯಿಸುವುದಾಗಿ ದರ್ಶನ್&zwnj; ಬೆದರಿಸಿದ ಹಿನ್ನೆಲೆಯಲ್ಲಿ ಆತನಿಗೆ ಸಹಾಯ ಮಾಡಿದೆ. ಆದ್ದರಿಂದ ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್&zwnj; ಪರ ನಾನು ಸಾಕ್ಷ್ಯ ನುಡಿಯುತ್ತೇನೆ&rsquo; ಎಂದು ಪ್ರದೋಷ್&zwnj; ಅರ್ಜಿಯಲ್ಲಿ ಕೋರಿದ್ದಾನೆ.&lt;/p&gt;&lt;p&gt;ಪ್ರಕರಣದ ತನಿಖಾಧಿಕಾರಿಗಳಾದ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರನ್ನು ಪ್ರತಿನಿಧಿಸುತ್ತಿರುವ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್&zwnj; ಲಿಖಿತವಾಗಿಯೇ ಈ ಅರ್ಜಿಗೆ ಸಮ್ಮತಿ ನೀಡಿದ್ದಾರೆ. ಮತ್ತೊಂದೆಡೆ, &lsquo;ಈ ಅರ್ಜಿಯನ್ನು ಪುರಸ್ಕರಿಸಬಾರದು. ಅರ್ಜಿ ಸಂಬಂಧ ತಮ್ಮ ವಾದವನ್ನು ಮಂಡಿಸಲು ಅವಕಾಶ ಕೊಡಬೇಕು&rsquo; ಎಂದು ದರ್ಶನ್&zwnj; ಹಾಗೂ ಇತರೆ ಆರೋಪಿಗಳು ನ್ಯಾಯಾಲಯವನ್ನು ಬಲವಾಗಿ ಕೋರಿದ್ದಾರೆ. ಹೀಗಾಗಿ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ವಿನಯ್&zwnj; ಮತ್ತು ಪ್ರದೋಷ್&zwnj; ಸಲ್ಲಿಸಿರುವ ಅರ್ಜಿ ಸಂಬಂಧ ಇತರೆ ಆರೋಪಿಗಳ ವಾದ ಆಲಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ಆ.10ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿ ವಿಚಾರಣೆ ಮುಂದೂಡಿದೆ.&lt;/p&gt;&lt;h2&gt;ಕೃತ್ಯದ ಪಾತ್ರದ ಬಗ್ಗೆ ಉಲ್ಲೇಖ&lt;/h2&gt;&lt;p&gt;ಪ್ರದೋಷ್&zwnj; ತನ್ನ ಅರ್ಜಿಯಲ್ಲಿ 2003ರಿಂದ ಆರಂಭವಾದ ದರ್ಶನ್&zwnj; ಜೊತೆಗಿನ ಸ್ನೇಹ, 2024ರ ಜೂ.9ರಂದು ನಡೆದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್&zwnj;, ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳು ವಹಿಸಿದ ಪಾತ್ರವನ್ನು ವಿವರಿಸಿದ್ದಾರೆ. ಅಲ್ಲದೇ, ರೇಣುಕಾಸ್ವಾಮಿ ಮೇಲೆ ದರ್ಶನ್&zwnj; ಮೆರೆದ ಕ್ರೌರ್ಯ, ಕೊಲೆ ನಂತರ ಪೊಲೀಸರ ಮುಂದೆ ಕೆಲ ಆರೋಪಿಗಳು ಶರಣಾಗುವ ವಿಚಾರದಲ್ಲಿ ನಡೆಸಿದ ಮಾತುಕತೆಗಳನ್ನು ಪ್ರದೋಷ್&zwnj; ತಿಳಿಸಿದ್ದಾರೆ.&lt;/p&gt;&lt;h2&gt;ಪ್ರದೋಷ್&zwnj; ಹೇಳಿದ್ದೇನು?:&lt;/h2&gt;&lt;p&gt;ಇನ್ನು &lsquo;ರೇಣುಕಾಸ್ವಾಮಿ ಇನ್&zwnj;ಸ್ಟಾಗ್ರಾಂ, ಫೇಸ್&zwnj;ಬುಕ್&zwnj; ಖಾತೆಯಲ್ಲಿ ಕಳುಹಿಸಿದ ಸಂದೇಶಗಳನ್ನು ನಾನು ಓದಿದೆಯಷ್ಟೇ. ವಾಸ್ತವವಾಗಿ ಕೊಲೆ ಘಟನೆ ನಡೆಯದಂತೆ ನಾನು ತಡೆಯಲು ಮುಂದಾದೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುತ್ತಿದ್ದಾಗ ದರ್ಶನ್&zwnj; ತಡೆಯಲು ಪ್ರಯತ್ನಿಸಿದೆ. ದರ್ಶನ್&zwnj; ನನ್ನ ಮಾತು ಕೇಳಲಿಲ್ಲ. ಕೊಲೆ ನಡೆದ ನಂತರ ದರ್ಶನ್&zwnj; ನನ್ನ ಬಳಿ ಸಹಾಯ ಕೇಳಿದ್ದಲ್ಲದೆ, ಸಹಾಯ ಮಾಡದೆ ಹೋದರೆ ಗನ್&zwnj;ನಿಂದ ಗುಂಡು ಹಾರಿಸಿ ಸಾಯಿಸುವುದಾಗಿ ದರ್ಶನ್&zwnj; ಬೆದರಿಸಿದರು. ಹಾಗಾಗಿ ನಾನು ದರ್ಶನ್&zwnj;ಗೆ ಸಹಾಯ ಮಾಡಿದೆ&rsquo; ಎಂದು ಹೇಳಿರುವ ಪ್ರದೋಷ್&zwnj;, &lsquo;ನನ್ನನ್ನು ಕ್ಷಮಿಸಬೇಕು. ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು. ಪ್ರಾಸಿಕ್ಯೂಷನ್&zwnj;ಗೆ (ತನಿಖಾಧಿಕಾರಿಗಳ ತನಿಖೆ ಹಾಗೂ ವಿಚಾರಣೆಗೆ) ಪೂರಕವಾಗಿ ಸಾಕ್ಷ್ಯವನ್ನು ನುಡಿಯುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಕು&rsquo; ಎಂದು ಅರ್ಜಿಯಲ್ಲಿ ಕೋರಿದ್ದಾರೆ.&lt;/p&gt;&lt;h2&gt;ವಿನಯ್&zwnj; ಕೂಡ ಮಾಫಿಸಾಕ್ಷಿ:&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ನಡೆಯುವ ಮುನ್ನ ದರ್ಶನ್&zwnj; ಪಾರ್ಟಿ ನಡೆಸಿದ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್&zwnj; ರೆಸ್ಟೋರೆಂಟ್&zwnj;ನ ಮಾಲೀಕನೂ ಆದ ಪ್ರಕರಣದ 10ನೇ ಆರೋಪಿ ವಿನಯ್&zwnj; ಸಹ ತನ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಕುರಿತು ಪ್ರತಿಕ್ರಿಯಿಸಿದ ಎಸ್&zwnj;ಪಿಪಿ ಪ್ರಸನ್ನ ಕುಮಾರ್&zwnj;, ಅರ್ಜಿಯಲ್ಲಿ ವಿನಯ್&zwnj; ವಿವರಗಳನ್ನು ನೀಡಿಲ್ಲ. ಆತನ ಅರ್ಜಿಯನ್ನು ವಿಚಾರಣೆಗೆ ಬಾಕಿ ಇಡಬೇಕು ಎಂದು ಕೋರಿದ್ದಾರೆ.&lt;/p&gt;&lt;h2&gt;ಅರ್ಜಿಗೆ ಆಕ್ಷೇಪ:&lt;/h2&gt;&lt;p&gt;ಈ ಮಧ್ಯೆ ಪ್ರದೋಷ್&zwnj; ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಶನ್&zwnj; ಹಾಗೂ ಇತರೆ ಆರೋಪಿಗಳು, ಅರ್ಜಿಯ ಕುರಿತು ವಾದ ಮಂಡಿಸಲು ತಮಗೆ ಹಕ್ಕು ಕಲ್ಪಿಸಬೇಕು ಎಂದು ಕೋರಿದರು. ಆರೋಪಿಗಳ ಈ ಮನವಿಗೆ ಆಕ್ಷೇಪಿಸಿದ ಎಸ್&zwnj;ಪಿಪಿ ಪ್ರಸನ್ನ ಕುಮಾರ್&zwnj; ಅವರು, ಪ್ರದೋಷ್&zwnj;ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಪ್ರಾಸಿಕ್ಯೂಷನ್&zwnj; ಒಪ್ಪಿಗೆ ನೀಡಿದೆ. ಆತ ಪ್ರಾಸಿಕ್ಯೂಷನ್&zwnj;ಗೆ ಬೆಂಬಲಿಸುವುದಾಗಿ ತಿಳಿಸಿದ್ದಾನೆ. ಆತ ಸತ್ಯ ನುಡಿಯುತ್ತಿದ್ದಾನೆಯೋ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್&zwnj; ಖಚಿತಪಡಿಸಬೇಕು. ಇತರೆ ಆರೋಪಿಗಳ ವಿರುದ್ಧವೇ ಪ್ರದೋಷ್&zwnj; ಸಾಕ್ಷ್ಯ ನುಡಿಯುವುದರಿಂದ, ಆತನ ಅರ್ಜಿ ಪರಿಗಣಿಸುವ ವಿಚಾರದಲ್ಲಿ ಆರೋಪಿಗಳ ವಾದ ಆಲಿಸುವ ಅಗತ್ಯವೇ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರತಿಪಾದಿಸಿದರು. ಅಂತಿಮವಾಗಿ ನ್ಯಾಯಾಲಯವು ಈ ಎಲ್ಲಾ ವಾದ-ಪ್ರತಿವಾದ ಆಲಿಸಿ, ಆ.10ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/renukaswamy-case-turning-point-actor-darshan-faces-new-legal-trouble-as-co-accused-seeks-approver-status-gdp/articleshow-syhe00a"/>
        </item>
        <item>
            <title><![CDATA[Flipkar: 1 ಲಕ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಫ್ಲಿಪ್‌ ಕಾರ್ಟ್, ಅಕ್ಷಯ ಪಾತ್ರೆ ಬೆಳಗಿನ ಉಪಾಹಾರ ವಿತರಣೆ]]></title>
            <link>https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp</link>
            <guid isPermaLink="true">https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp</guid>
            <pubDate>Fri, 07 Aug 2026 08:06:04 +0530</pubDate>
            <description><![CDATA[&lt;p&gt;ಫ್ಲಿಪ್&zwnj;ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd0q69e5816zv2tbncn9xsd,imgname-----------------------2026-08-07t075646.762-1786069621038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.7) &lt;/strong&gt;ಫ್ಲಿಪ್&zwnj;ಕಾರ್ಟ್ ಫೌಂಡೇಶನ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರ್ಕಾರಿ ಶಾಲೆಗಳ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಬೆಳಗಿನ ಉಪಾಹಾರವನ್ನು ವಿತರಿಸಲಾಗಿದೆ.&lt;/p&gt;&lt;p&gt;&amp;nbsp;ಅಕ್ಷಯ ಪಾತ್ರ ಸಂಸ್ಥೆಅಕ್ಷಯ ಪಾತ್ರ ಸಂಸ್ಥೆಯ ಮಾರ್ನಿಂಗ್ ನ್ಯೂಟ್ರಿಷನ್ ಪ್ರೋಗ್ರಾಮ್ ಅಡಿಯಲ್ಲಿ ಜಾರಿಗೊಳಿಸಲಾದ ಈ ಯೋಜನೆಯು, ಭಾರತ ಸರ್ಕಾರದ ಪಿಎಂ ಪೋಷಣ್ ಕಾರ್ಯಕ್ರಮಕ್ಕೆ ಪೂರಕವಾಗಿ ನಡೆಯುತ್ತಿದೆ. 21 ಲಕ್ಷಕ್ಕೂ ಹೆಚ್ಚು ಬಾರಿ ಪೌಷ್ಟಿಕಾಂಶಯುಕ್ತ ಉಪಹಾರ ವಿತರಿಸುವ ಮೂಲಕ ಮಕ್ಕಳು ಉತ್ತಮ ಪೌಷ್ಟಿಕಾಂಶ, ಶಕ್ತಿ ಮತ್ತು ಏಕಾಗ್ರತೆಯೊಂದಿಗೆ ತಮ್ಮ ಶಾಲಾ ದಿನವನ್ನು ಪ್ರಾರಂಭಿಸಲು ಈ ಯೋಜನೆ ಸಹಾಯ ಮಾಡಿದೆ.&lt;/p&gt;&lt;p&gt;ಈ ಕುರಿತು ಫ್ಲಿಪ್&zwnj;ಕಾರ್ಟ್ ಗ್ರೂಪ್&zwnj;ನ ಮುಖ್ಯ ಕಾರ್ಪೊರೇಟ್ ವ್ಯವಹಾರಗಳ ಅಧಿಕಾರಿ ರಜನೀಶ್ ಕುಮಾರ್ ಪ್ರತಿಕ್ರಿಯಿಸಿ, ಧೀರ್ಘ ಅನುಭವ ಮತ್ತು ಮಕ್ಕಳ ಜೀವನವನ್ನು ಉತ್ತಮಗೊಳಿಸುವ ಬದ್ಧತೆಯನ್ನು ಹೊಂದಿರುವ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದರಿಂದ ಮಾತ್ರ ಸುಸ್ಥಿರ ಬದಲಾವಣೆ ಸಾಧ್ಯ ಎಂಬ ನಮ್ಮ ನಂಬಿಕೆಗೆ ಈ ಸಹಯೋಗವೇ ಸಾಕ್ಷಿ ಎಂದಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/flipkart-and-akshaya-patra-bring-morning-nutrition-to-over-1-lakh-government-school-children-in-karnataka-rav/articleshow-7ogrcmp"/>
        </item>
    </channel>
</rss>
