<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 29 Jun 2026 22:51:26 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಹೆಬ್ಬಾಳ ವೆಟರ್ನರಿ ಕಾಲೇಜಿನಲ್ಲಿ ವಾಕಿಂಗ್‌ಗೆ ಇನ್ಮುಂದೆ ಉಚಿತ ಪ್ರವೇಶವಿಲ್ಲ; ವಾರ್ಷಿಕ ಪಾಸ್ ಕಡ್ಡಾಯ ಮಾಡಿದ ಮಂಡಳಿ!]]></title>
            <link>https://kannada.asianetnews.com/bengaluru-urban/hebbal-veterinar-college-walkers-annual-entry-fee-pass-bengaluru-san/articleshow-0tdxgut</link>
            <guid isPermaLink="true">https://kannada.asianetnews.com/bengaluru-urban/hebbal-veterinar-college-walkers-annual-entry-fee-pass-bengaluru-san/articleshow-0tdxgut</guid>
            <pubDate>Mon, 29 Jun 2026 12:10:51 +0530</pubDate>
            <description><![CDATA[&lt;p&gt;ಹೆಬ್ಬಾಳ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ವಾಕಿಂಗ್ ಮಾಡುವ ಸಾರ್ವಜನಿಕರಿಗೆ ವಾರ್ಷಿಕ ₹100 ಶುಲ್ಕದ 'ಪೇಯ್ಡ್ ಪಾಸ್' ವ್ಯವಸ್ಥೆ ಜಾರಿಗೆ ತರಲಾಗಿದೆ. ಕ್ಯಾಂಪಸ್ ನಿರ್ವಹಣೆ ಮತ್ತು ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಂದ ಈ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw91nd5deemb5356h5whn7e8,imgname-veterinary-college-hebbal-1782715167917.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.29): &lt;/strong&gt;ಸಿಲಿಕಾನ್ ಸಿಟಿಯ ಪ್ರಮುಖ ವಾಕಿಂಗ್&zwnj; ತಾಣಗಳಲ್ಲಿ ಒಂದಾದ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜು (Veterinary College, Hebbal) ಆವರಣಕ್ಕೆ ಬರುವ ಸಾರ್ವಜನಿಕರ ಪ್ರವೇಶಕ್ಕೆ ಕಾಲೇಜು ಆಡಳಿತ ಮಂಡಳಿಯು ಹೊಸದಾಗಿ ನಿಯಮ ರೂಪಿಸಿದೆ. ಇನ್ಮುಂದೆ ಈ ವಿಶಾಲವಾದ ಹಸಿರು ಕ್ಯಾಂಪಸ್&zwnj;ನಲ್ಲಿ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವ ಸಾರ್ವಜನಿಕರು ಉಚಿತವಾಗಿ ಪ್ರವೇಶಿಸುವಂತಿಲ್ಲ. ಸಾರ್ವಜನಿಕರ ಅನಿಯಂತ್ರಿತ ಪ್ರವೇಶವನ್ನು ನಿಯಂತ್ರಿಸಲು ಮತ್ತು ಶಿಸ್ತು ತರಲು ಆಡಳಿತ ಮಂಡಳಿಯು ಇದೀಗ 'ಪೇಯ್ಡ್ ಪಾಸ್' (Paid Pass System) ವ್ಯವಸ್ಥೆಯನ್ನು ಜಾರಿಗೆ ತಂದಿದೆ.&lt;/p&gt;&lt;h2&gt;&lt;strong&gt;ವರ್ಷಕ್ಕೆ 100 ರೂಪಾಯಿ ಪ್ರವೇಶ ಶುಲ್ಕ!&lt;/strong&gt;&lt;/h2&gt;&lt;p&gt;ಹೊಸ ನಿಯಮಾವಳಿಗಳ ಪ್ರಕಾರ, ಕಾಲೇಜು ಆವರಣಕ್ಕೆ ಬರುವ ಪ್ರತಿಯೊಬ್ಬ ವ್ಯಕ್ತಿಯು ಒಂದು ವರ್ಷದ ಅವಧಿಗೆ 100 ರೂಪಾಯಿ ಪಾವತಿಸಿ ಕಡ್ಡಾಯವಾಗಿ ಪ್ರವೇಶ ಪಾಸನ್ನು ಪಡೆದುಕೊಳ್ಳಬೇಕಾಗುತ್ತದೆ. ಹೆಬ್ಬಾಳ ಮತ್ತು ಅದರ ಸುತ್ತಮುತ್ತಲಿನ ನಿವಾಸಿಗಳಿಗೆ, ಪರಿಸರ ಪ್ರೇಮಿಗಳಿಗೆ ಹಾಗೂ ಫಿಟ್&zwnj;ನೆಸ್ ಆಸಕ್ತರಿಗೆ ವರ್ಷಗಳಿಂದ ಈ ಕ್ಯಾಂಪಸ್ ಅತ್ಯಂತ ನೆಚ್ಚಿನ ಮಾರ್ನಿಂಗ್ ಹಾಗೂ ಇವಿನಿಂಗ್ ವಾಕ್ ತಾಣವಾಗಿತ್ತು. ಆದರೆ ಇನ್ಮುಂದೆ ಈ ಆವರಣವನ್ನು ಬಳಸಿಕೊಳ್ಳಲು ವಾರ್ಷಿಕ ಪಾಸ್ ಅತ್ಯಗತ್ಯವಾಗಿದೆ.&lt;/p&gt;&lt;p&gt;ಕಾಲೇಜು ಆಡಳಿತ ಮಂಡಳಿಯ ಪ್ರಕಾರ, ಕ್ಯಾಂಪಸ್&zwnj;ಗೆ ಸಾರ್ವಜನಿಕರು ಬರುವುದನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಅದನ್ನು ವ್ಯವಸ್ಥಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ದಿನದಿಂದ ದಿನಕ್ಕೆ ಕ್ಯಾಂಪಸ್&zwnj;ಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಆವರಣದ ಸ್ವಚ್ಛತೆ, ನಿರ್ವಹಣೆ ಮತ್ತು ಭದ್ರತೆಯನ್ನು ಕಾಪಾಡುವುದು ಕಾಲೇಜು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಈ ಅತ್ಯಲ್ಪ ಶುಲ್ಕವನ್ನು ಕಾಲೇಜಿನ ಆವರಣದಲ್ಲಿನ ಮೂಲಸೌಕರ್ಯಗಳ ಮೇಲ್ವಿಚಾರಣೆ ಹಾಗೂ ಅಚ್ಚುಕಟ್ಟಾದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರಿಂದ ವ್ಯಕ್ತವಾಯ್ತು ಮಿಶ್ರ ಪ್ರತಿಕ್ರಿಯೆ!&lt;/strong&gt;&lt;/h2&gt;&lt;p&gt;ಕಾಲೇಜು ಮಂಡಳಿಯ ಈ ದಿಢೀರ್ ನಿರ್ಧಾರಕ್ಕೆ ನಿಯಮಿತವಾಗಿ ಇಲ್ಲಿಗೆ ವಾಕಿಂಗ್ ಬರಸಿಗುತ್ತಿದ್ದ ಜನರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ವರ್ಷಕ್ಕೆ 100 ರೂಪಾಯಿ ಎಂದರೆ ಅದು ಅತ್ಯಂತ ಅತ್ಯಲ್ಪ ಮೊತ್ತವಾಗಿದೆ. ಈ ನಾಮಮಾತ್ರದ ಶುಲ್ಕದಿಂದ ಕ್ಯಾಂಪಸ್&zwnj;ನಲ್ಲಿ ಅನಾವಶ್ಯಕವಾಗಿ ಅಡ್ಡಾಡುವವರ ಹಾವಳಿ ತಪ್ಪುತ್ತದೆ, ಭದ್ರತೆ ಹೆಚ್ಚುತ್ತದೆ ಮತ್ತು ವಾಕಿಂಗ್ ಟ್ರ್ಯಾಕ್&zwnj;ಗಳು ಸ್ವಚ್ಛವಾಗಿರುತ್ತವೆ ಎಂದು ಕೆಲವು ವಾಕರ್ಸ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.&lt;/p&gt;&lt;p&gt;ವರ್ಷಗಳಿಂದ ಸಾರ್ವಜನಿಕರಿಗಾಗಿ ಮುಕ್ತವಾಗಿದ್ದ ಹಸಿರು ಆವರಣಕ್ಕೆ ದಿಢೀರನೆ ಶುಲ್ಕ ವಿಧಿಸುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸಂಸ್ಥೆಗಳು ಇಂತಹ ಮುಕ್ತ ಸ್ಥಳಗಳಿಗೆ ಶುಲ್ಕ ವಿಧಿಸಲು ಆರಂಭಿಸಿದರೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ವಾಯುವಿಹಾರ ಮಾಡಲು ಜಾಗವಿಲ್ಲದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hebbal-veterinar-college-walkers-annual-entry-fee-pass-bengaluru-san/articleshow-0tdxgut"/>
        </item>
        <item>
            <title><![CDATA[Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ]]></title>
            <link>https://kannada.asianetnews.com/bengaluru-urban/hebbal-tunnel-road-project-bda-soil-testing-veterinary-college-bengaluru-san/articleshow-1b52b3n</link>
            <guid isPermaLink="true">https://kannada.asianetnews.com/bengaluru-urban/hebbal-tunnel-road-project-bda-soil-testing-veterinary-college-bengaluru-san/articleshow-1b52b3n</guid>
            <pubDate>Sat, 27 Jun 2026 18:28:20 +0530</pubDate>
            <description><![CDATA[&lt;p&gt;ಬೆಂಗಳೂರಿನ ಹೆಬ್ಬಾಳ ಜಂಕ್ಷನ್&zwnj;ನಲ್ಲಿನ ತೀವ್ರ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) 2.18 ಕಿ.ಮೀ ಉದ್ದದ ಕಿರು ಸುರಂಗ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ ಪಶುವೈದ್ಯಕೀಯ ಕಾಲೇಜು ಆವರಣದಲ್ಲಿ ಮಣ್ಣು ಪರೀಕ್ಷೆ ಆರಂಭವಾಗಿದೆ,&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4jfbxngen5qypa4z9p7q4g,imgname-hebbal-tunnel-road-project-1782565023669.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.27): &lt;/strong&gt;ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಜಂಕ್ಷನ್ ಆದ ಹೆಬ್ಬಾಳದಲ್ಲಿ ದಿನನಿತ್ಯ ಉಂಟಾಗುವ ವಾಹನ ದಟ್ಟಣೆಯನ್ನು (Traffic Decongestion) ಕಡಿಮೆ ಮಾಡುವ ಉದ್ದೇಶದಿಂದ ಪ್ರಸ್ತಾಪಿಸಲಾಗಿರುವ 2.18 ಕಿಲೋಮೀಟರ್ ಉದ್ದದ ಕಿರು ಸುರಂಗ ರಸ್ತೆ (Short Tunnel Road) ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಭರದಿಂದ ಪೂರ್ವಸಿದ್ಧತಾ ಕೆಲಸಗಳನ್ನು ಆರಂಭಿಸಿದೆ. ಈ ಯೋಜನೆಯ ಭಾಗವಾಗಿ, ಸುರಂಗ ಹಾದುಹೋಗುವ ಮಾರ್ಗದಲ್ಲಿ ಗುರುತಿಸಲಾಗಿರುವ ಪ್ರಮುಖ ಸ್ಥಳಗಳಲ್ಲಿ ಒಂದಾದ ಹೆಬ್ಬಾಳದ 'ಪಶುವೈದ್ಯಕೀಯ ಕಾಲೇಜು' (Veterinary College) ಆವರಣದಲ್ಲಿ ಗುತ್ತಿಗೆದಾರರು ಮಣ್ಣು ಪರೀಕ್ಷೆ (Soil Testing) ಕಾರ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.&lt;/p&gt;&lt;p&gt;ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಬಿಡಿಎ ನೇಮಿಸಿರುವ ತಾಂತ್ರಿಕ ತಂಡಗಳು ಬೋರ್&zwnj;ಹೋಲ್ ಡ್ರಲ್ಲಿಂಗ್ (Borehole Drilling) ಮತ್ತು ಜಿಯೋಟೆಕ್ನಿಕಲ್ ತನಿಖೆಗಳನ್ನು (Geotechnical Investigations) ನಡೆಸುತ್ತಿವೆ. ಈ ಸರ್ವೇಯ ಮೂಲಕ ನೆಲದಡಿಯ ಮಣ್ಣಿನ ಗಡಸುತನ, ಅಂತರ್ಜಲದ ಮಟ್ಟ (Groundwater levels) ಮತ್ತು ಭೂಮಿಯ ಕೆಳಭಾಗದ ಸ್ಥಿರತೆಯನ್ನು (Subsurface stability) ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಜಿಯೋಟೆಕ್ನಿಕಲ್ ತನಿಖೆ ನಡೆಸಲು ಬಿಡಿಎ ಗುತ್ತಿಗೆ ನೀಡಿದ ಕೆಲವೇ ವಾರಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಿದೆ.&lt;/p&gt;&lt;p&gt;ಈ ಮಹತ್ವಾಕಾಂಕ್ಷೆಯ ಸುರಂಗ ಯೋಜನೆಗೆ ಹೈದರಾಬಾದ್ ಮೂಲದ 'ರಿತ್ವಿಕ್ ಪ್ರಾಜೆಕ್ಟ್ಸ್ ಲಿಮಿಟೆಡ್' (Rithwik Projects Ltd) ಯಶಸ್ವಿ ಬಿಡ್&zwnj;ದಾರರಾಗಿ ಹೊರಹೊಮ್ಮಿದ್ದು, ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿದೆ. ಈ ಯೋಜನೆಗಾಗಿ ಒಟ್ಟು ಮೂರು ಕಂಪನಿಗಳು ಬಿಡ್ ಸಲ್ಲಿಸಿದ್ದವು. ಅದರಲ್ಲಿ ಅತ್ಯಂತ ಕಡಿಮೆ ಅಂದರೆ ₹1,139.67 ಕೋಟಿ ಮೊತ್ತವನ್ನು ಕೋಟ್ ಮಾಡುವ ಮೂಲಕ ರಿತ್ವಿಕ್ ಪ್ರಾಜೆಕ್ಟ್ಸ್ ಲಿಮಿಟೆಡ್ ಮುಂಚೂಣಿ ಸಾಧಿಸಿ ಕೆಲಸ ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಈ ಪ್ರಸ್ತಾವಿತ ಸುರಂಗ ಮಾರ್ಗವು ಎಸ್ಟೀಮ್ ಮಾಲ್ (Esteem Mall) ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಯ (Baptist Hospital) ಬಳಿ ಪ್ರವೇಶ (Entry) ಮತ್ತು ನಿರ್ಗಮನ (Exit) ರಾಂಪ್&zwnj;ಗಳನ್ನು ಹೊಂದಿರಲಿದೆ. ಇದು ಹೆಬ್ಬಾಳ ಮೇಲ್ಸೇತುವೆಯ (Hebbal Flyover) ಡೌನ್ ರಾಂಪ್&zwnj;ನ ಕೆಳಭಾಗದಲ್ಲಿ ಹಾಗೂ ಹೆಬ್ಬಾಳ ಕೆರೆಯ (Hebbal Lake) ಅಂಚಿನ ಮೂಲಕ ಹಾದುಹೋಗಲಿದೆ. ಇದಲ್ಲದೆ, ಈ ಯೋಜನೆಯು ರೈಲ್ವೆ ಅಂಡರ್&zwnj;ಬ್ರಿಡ್ಜ್ (Railway Underbridge) ನಿರ್ಮಾಣವನ್ನೂ ಒಳಗೊಂಡಿದೆ.&lt;/p&gt;&lt;h2&gt;&lt;strong&gt;ಮೇಕ್ರಿ ಸರ್ಕಲ್&zwnj;ನಲ್ಲೂ ಫ್ಲೈಓವರ್ ನಿರ್ಮಾಣ!&lt;/strong&gt;&lt;/h2&gt;&lt;p&gt;ಇದರ ಜೊತೆಯಲ್ಲೇ, ಹೆಬ್ಬಾಳದ ಕಡೆಗೆ ಸಾಗುವ ಮಾರ್ಗವನ್ನು ಮತ್ತಷ್ಟು ಸುಗಮಗೊಳಿಸಲು ಬಿಡಿಎ ಮತ್ತೊಂದು ಬೃಹತ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ನಗರದ ಮೇಕ್ರಿ ಸರ್ಕಲ್ (Mehkri Circle) ಬಳಿ ಸುಮಾರು ₹440 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರಸ್ತೆ (ಮೇಲ್ಸೇತುವೆ) ಯನ್ನು ಬಿಡಿಎ ನಿರ್ಮಿಸುತ್ತಿದೆ. ಈ ಮೇಲ್ಸೇತುವೆ ಕಾಮಗಾರಿಯ ಗುತ್ತಿಗೆಯನ್ನು 'ಅರವಿಂದೋ ರಿಯಾಲ್ಟಿ ಅಂಡ್ ಇನ್ಫ್ರಾಸ್ಟ್ರಕ್ಚರ್' (Aurobindo Realty and Infrastructure) ಸಂಸ್ಥೆಗೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಈ ಸುರಂಗ ಮಾರ್ಗ ಮತ್ತು ಎಲಿವೇಟೆಡ್ ರಸ್ತೆಗಳು ಸಿದ್ಧಗೊಂಡರೆ ವಿಮಾನ ನಿಲ್ದಾಣದ ಕಡೆಗೆ ಪ್ರಯಾಣಿಸುವ ಸಾರ್ವಜನಿಕರಿಗೆ ದೊಡ್ಡ ನೆಮ್ಮದಿ ಸಿಗಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hebbal-tunnel-road-project-bda-soil-testing-veterinary-college-bengaluru-san/articleshow-1b52b3n"/>
        </item>
        <item>
            <title><![CDATA[Bengaluru: ಮದ್ಯದ ಲೆಕ್ಕದಲ್ಲಿ ಗೋಲ್ಮಾಲ್: ಅಬಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಸರಣಿ ದಾಳಿ]]></title>
            <link>https://kannada.asianetnews.com/state/bengaluru-lokayukta-raids-excise-officials-over-election-liquor-seizure-scam-gdp/articleshow-74frrl3</link>
            <guid isPermaLink="true">https://kannada.asianetnews.com/state/bengaluru-lokayukta-raids-excise-officials-over-election-liquor-seizure-scam-gdp/articleshow-74frrl3</guid>
            <pubDate>Mon, 29 Jun 2026 10:55:42 +0530</pubDate>
            <description><![CDATA[ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಪ್ತಿ ಮಾಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯದ ಲೆಕ್ಕದಲ್ಲಿ ವ್ಯತ್ಯಾಸ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಇಬ್ಬರು ಪ್ರಭಾವಿ ಅಬಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಈ ದಾಳಿಯು ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದು, ಅಧಿಕಾರಿಗಳ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfcwezttavbd4p51deb5mch2,imgname-liquor-ban-1768885288794.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾರ್ ಹಾಗೂ ವೈನ್ ಶಾಪ್&zwnj;ಗಳ ಮೇಲೆ ದಾಳಿ ನಡೆಸಿ ಜಪ್ತಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮದ್ಯದ ಲೆಕ್ಕದಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಎಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಇಬ್ಬರು ಪ್ರಭಾವಿ ಅಬಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ.&lt;/p&gt;&lt;p&gt;ಹೊರಮಾವು ವಲಯದ ಅಬಕಾರಿ ಇನ್ಸ್ಪೆಕ್ಟರ್ ಸುಧೀರ್ ಕುಮಾರ್ ಹಾಗೂ ಅಬಕಾರಿ ಉಪ ಅಧೀಕ್ಷಕ (ಡಿವೈಎಸ್&zwnj;ಪಿ) ಅಬೂಬಕರ್ ಎ. ಮುಜಾವರ್ ಅವರಿಗೆ ಸೇರಿದ ಮನೆ ಮತ್ತು ಕಚೇರಿಗಳು ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗಿನ ಜಾವ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.&lt;/p&gt;&lt;p&gt;ಲೋಕಾಯುಕ್ತ ಎಸ್&zwnj;.ಪಿ. ಶಿವ ಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ರಚನೆಯಾಗಿದ್ದ ವಿಶೇಷ ಅಧಿಕಾರಿಗಳ ತಂಡವು ಇಂದು ಸೂರ್ಯೋದಯಕ್ಕೂ ಮುನ್ನವೇ ಆರೋಪಿ ಅಧಿಕಾರಿಗಳ ನಿವಾಸಗಳಿಗೆ ಲಗ್ಗೆ ಇಟ್ಟಿದೆ. ಸದ್ಯ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು, ಆಸ್ತಿಪಾಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ ಮುಂದುವರಿದಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಏನು?&lt;/h2&gt;&lt;p&gt;2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಪೂರ್ವಸಿದ್ಧತೆಯ ಭಾಗವಾಗಿ 2023ರ ಜನವರಿ 4 ರಂದು ಬೆಂಗಳೂರಿನ ಪ್ರಮುಖ ಬಾರ್ ಹಾಗೂ ರೆಸ್ಟೋರೆಂಟ್&zwnj;ಗಳ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿತ್ತು. ಶೋಭಾ ಎಂಬುವವರು ನೀಡಿದ್ದ ಅಧಿಕೃತ ದೂರಿನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.&lt;/p&gt;&lt;p&gt;ದಾಳಿಯ ಸಂದರ್ಭದಲ್ಲಿ ನಿಯಮಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ದೊಡ್ಡ ಪ್ರಮಾಣದ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಆದರೆ, ವಶಪಡಿಸಿಕೊಂಡ ಮದ್ಯವನ್ನು ಸರ್ಕಾರಿ ದಾಸ್ತಾನು ಕೊಠಡಿಗೆ ಒಪ್ಪಿಸುವಾಗ ಮತ್ತು ದಾಖಲೆ ಪುಸ್ತಕದಲ್ಲಿ ನಮೂದಿಸುವಾಗ ಅಧಿಕಾರಿಗಳು ಭಾರಿ ಪ್ರಮಾಣದ ಮದ್ಯವನ್ನು ಲಪಟಾಯಿಸಿ, ಲೆಕ್ಕದಲ್ಲಿ ವ್ಯತ್ಯಾಸ ತೋರಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಲೆಕ್ಕದಲ್ಲಿ ಪತ್ತೆಯಾದ ಪ್ರಮುಖ ವ್ಯತ್ಯಾಸಗಳು:&lt;/h2&gt;&lt;p&gt;ಲೋಕಾಯುಕ್ತ ಪ್ರಾಥಮಿಕ ತನಿಖೆಯ ವೇಳೆ ಜಪ್ತಿ ಮಾಡಿದ ಮದ್ಯದ ಪ್ರಮಾಣ ಮತ್ತು ಮೌಲ್ಯದಲ್ಲಿ ಕೆಳಕಂಡಂತೆ ಭಾರಿ ಕೊರತೆ ಕಂಡುಬಂದಿದೆ:&lt;/p&gt;&lt;p&gt;CL-2 ಮೈ ಡ್ರಾಪ್ಸ್ ವೈನ್ ಶಾಪ್: ಇಲ್ಲಿ ಜಪ್ತಿ ಮಾಡಲಾಗಿದ್ದ ಮದ್ಯದಲ್ಲಿ 24.43 ಲೀಟರ್ ಮದ್ಯ ನಾಪತ್ತೆಯಾಗಿದ್ದು, ಅಂದಾಜು ₹38,307 ಮೊತ್ತದ ಕೊರತೆ ಕಂಡುಬಂದಿದೆ.&lt;/p&gt;&lt;p&gt;CL-9 ಸುರಭಿ ಬಾರ್: ಇಲ್ಲಿ ಬರೋಬ್ಬರಿ 40.37 ಲೀಟರ್ ಮದ್ಯದ ಲೆಕ್ಕ ಸಿಗುತ್ತಿಲ್ಲ. ಇದರ ಅಂದಾಜು ಮೌಲ್ಯ ₹1,09,630 ಆಗಿದೆ.&lt;/p&gt;&lt;p&gt;CL-2 ಚಂದನಾ ಎಂಟರ್&zwnj;ಪ್ರೈಸಸ್: ಇಲ್ಲಿಯೂ ಕೂಡ 42.87 ಲೀಟರ್ ಮದ್ಯ ಮಾಯವಾಗಿದ್ದು, ಸುಮಾರು ₹93,564 ಮೌಲ್ಯದ ಮದ್ಯದ ಲೆಕ್ಕದಲ್ಲಿ ವ್ಯತ್ಯಾಸ ಪತ್ತೆಯಾಗಿದೆ.&lt;/p&gt;&lt;h2&gt;ಕ್ರಿಮಿನಲ್ ಮಿಸ್&zwnj;ಕಂಡಕ್ಟ್ ಅಡಿ ಎಫ್&zwnj;ಐಆರ್ ದಾಖಲು&lt;/h2&gt;&lt;p&gt;ಸರ್ಕಾರದ ವಶದಲ್ಲಿದ್ದ ಮದ್ಯವನ್ನು ದುರುಪಯೋಗಪಡಿಸಿಕೊಂಡು, ಕರ್ತವ್ಯ ಲೋಪ ಎಸಗಿರುವ ಕುರಿತು ಸಲ್ಲಿಕೆಯಾಗಿದ್ದ ತನಿಖಾ ವರದಿಯನ್ನಾಧರಿಸಿ ಲೋಕಾಯುಕ್ತ ಪೊಲೀಸರು ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮಿಸ್&zwnj;ಕಂಡಕ್ಟ್ (Criminal Misconduct - ಭ್ರಷ್ಟಾಚಾರ ಮತ್ತು ಅಪರಾಧಿಕ ದುರ್ನಡತೆ) ಕಾಯ್ದೆಯಡಿ ಅಧಿಕೃತವಾಗಿ ಎಫ್&zwnj;ಐಆರ್ (FIR) ದಾಖಲಿಸಿಕೊಂಡಿದ್ದಾರೆ.&lt;/p&gt;&lt;p&gt;ಚುನಾವಣಾ ನಿಯಮಾವಳಿಗಳ ಅಡಿಯಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ಇಲಾಖೆಯ ಒಳಗಣ್ಣು ತೆರೆಸುವಂತಾಗಿದ್ದು, ಸದ್ಯ ಲೋಕಾಯುಕ್ತ ದಾಳಿಯಿಂದಾಗಿ ಅಬಕಾರಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-lokayukta-raids-excise-officials-over-election-liquor-seizure-scam-gdp/articleshow-74frrl3"/>
        </item>
        <item>
            <title><![CDATA[ಕಾರಿನಲ್ಲಿ ಬಂದು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಂದ ಶೂ ಕಳ್ಳತನ, ಸಿಸಿಟಿವಿಯಲ್ಲಿ ಕೃತ್ಯ ಸೆರೆ]]></title>
            <link>https://kannada.asianetnews.com/state/shoe-thieves-target-bengaluru-apartments-cctv-captures-theft-police-probe-underway/articleshow-adew65q</link>
            <guid isPermaLink="true">https://kannada.asianetnews.com/state/shoe-thieves-target-bengaluru-apartments-cctv-captures-theft-police-probe-underway/articleshow-adew65q</guid>
            <pubDate>Sun, 28 Jun 2026 18:32:08 +0530</pubDate>
            <description><![CDATA[&lt;p&gt;ಕಾರಿನಲ್ಲಿ ಬಂದು ದುಬಾರಿ ಮೌಲ್ಯದ ಶೂಗಳನ್ನು ಕದಿಯುವ ಕೃತ್ಯ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಒಂದು ಅಪಾರ್ಟ್&zwnj;ಮೆಂಟ್&zwnj;ನಿಂದ ಬರೋಬ್ಬರಿ 1.35 ಲಕ್ಷ ರೂ ಮೌಲ್ಯದ ಶೂಗಳನ್ನು ಕದಿಯಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw7526z1n3v30kf59c978s84,imgname-bengaluru-apartment-shoe-theft-caught-on-camera-1782651624416.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.28)&lt;/strong&gt; ಬೆಂಗಳೂರಿನ ಅಪಾರ್ಟ್&zwnj;ಮೆಂಟ್&zwnj;ಗಳಿಂದ ಶೂಗಳನ್ನು ಕದಿಯು ಘಟನೆ ಬೆಳೆಕಿಗೆ ಬಂದಿದೆ. ಇಬ್ಬರು ಕಾರಿನಲ್ಲಿ ಬಂದು ಅಪಾರ್ಟ್&zwnj;ಮೆಂಟ್&zwnj;ಗೆ ನುಗ್ಗಿ ಮನೆಯ ಹೊರಗಿಟ್ಟಿದ್ದ ಶೂಗಳನ್ನು ಕದಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ದ ಶೂಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾರು ಹತ್ತಿ ಪರಾರಿಯಾಗುತ್ತಿರುವ ದೃಶ್ಯ ದಾಖಲಾಗಿದೆ. ಬ್ರ್ಯಾಂಡೆಡ್ ಶೂಗಳನ್ನು ಮಾತ್ರ ಈ ಕಳ್ಳರು ಕದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.&lt;/p&gt;&lt;h2&gt;ಕಾರಿನಲ್ಲಿ ಓಡಾಡುವ ಕಳ್ಳರು&lt;/h2&gt;&lt;p&gt;ಬೆಂಗಳೂರಿನ ಸದಾನಂದನಗರಲ್ಲಿ ಶ್ರೀಧಾಮ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಓರ್ವ ಅಪಾರ್ಟ್&zwnj;ಮೆಂಟ್ ಒಳಗೆ ನುಗ್ಗಿ ತನಗೆ ಬೇಕಾದ ಬ್ರಾಂಡೆಡ್ ಶೂಗಳನ್ನು ಮಾತ್ರ ಆರಿಸಿಕೊಳ್ಳುತ್ತಾನೆ. ಕದ್ದ ಶೂಗಳನ್ನು ಗೋಣಿ ಚೀಲದಲ್ಲಿ ತುಂಬಿ ಯಾವುದೇ ಆತಂಕವಿಲ್ಲದೆ ಹೊರಗೆ ನಡೆದಿದ್ದಾರೆ. ಇದೇ ವೇಳೆ ಮತ್ತೊಬ್ಬ ಕಾರಿನಲ್ಲಿ ಬಂದು ಪಿಕ್ ಮಾಡಿದ್ದಾನೆ. ಇಬ್ಬರು ಕಾರಿನಲ್ಲಿ ಸ್ಥಳದಿಂದ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.&lt;/p&gt;&lt;p&gt;ಒಟ್ಟು 1.35 ಲಕ್ಷ ರೂಪಾಯಿ ಮೌಲ್ಯದ 27 ಜೊತೆ ಶೂಗಳ ಕಳುವಾಗಿದೆ. ಬುಕಾರೋ, ಪುಮಾ, ಸ್ಕೆಚಸ್, ವರ್ಸಾ, ವಾಕರೋ ಸೇರಿದಂತೆ ಹಲವು ಬ್ರ್ಯಾಂಡೆಡ್ ಶೂಗಳನ್ನು ಕದ್ದಿದ್ದಾರೆ. ಕಳೆದ ಬುಧವಾರ ಬೆಳಗಿನ ಜಾವ 4:30 ರ ಸುಮಾರಿಗೆ ನಡೆದ ಕೃತ್ಯ ನಡೆದಿದೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶೂ ಕಳೆದುಕೊಂಡ ಮಾಲೀಕರು ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದರೆ.&lt;/p&gt;&lt;h2&gt;ಬೆಳಗ್ಗೆ ಪೆಟ್ರೋಲ್ ಬಂಕ್&zwnj;ನಲ್ಲಿ ಕೆಲಸ, ರಾತ್ರಿ ಬೈಕ್ ಕಳ್ಳತನ&lt;/h2&gt;&lt;p&gt;ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸರ ಕಾರ್ಯಾಚರಣೆಯಲ್ಲಿ ಕುಖ್ಯಾತ ಬೈಕ್ ಕಳ್ಳನ ಬಂಧನವಾಗಿದೆ. ಬೆಳಗ್ಗೆ ಪೆಟ್ರೋಲ್ ಬಂಕ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿಜಯಪುರ ಮೂಲದ ಖಲೀಲ್ ಅಹ್ಮದ್ ರಾತ್ರಿಯಾದರೆ ಬೈಕ್ ಕಳ್ಳತನಕ್ಕೆ ಇಳಿಯುತ್ತಿದ್ದ. ಕಳೆದ ಒಂದೂವರೆ ವರ್ಷದಿಂದ ಈತ ಬೈಕ್ ಕಳ್ಳತನ ಮಾಡುತ್ತಿದ್ದ. ಬಸ್ ನಿಲ್ಥಾಣ, ಜನನಿಬೀಡ ಪ್ರದೇಶ ಸೇರಿದಂತೆ ಪೊಲೀಸ್ ಠಾಣೆ ಮುಂದೆಯು ಬೈಕ್ ಕದಿಯುತ್ತಿದ್ದ. ಹೆಚ್ಚಾಗಿ ಸ್ಪ್ಲೆಂಡರ್ ಬೈಕ್&zwnj;ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ವಿಜಯಪುರ ಕೋಲಾರ ಹಾಗೂ ಚಿಕ್ಕಬಳ್ಳಾಪುರಗಳಲ್ಲೂ ಬೈಕ್ ಕಳ್ಳತನ ಮಾಡುತ್ತಿದ್ದ.&lt;/p&gt;&lt;p&gt;ನಕಲಿ ಕೀಗಳನ್ನು ಹಿಡಿದು ಬೈಕ್ ಕಳ್ಳತನ ಮಾಡುತ್ತಿದ್ದ. ಪೊಲೀಸರ ಕಾರ್ಯಾಚರಣೆಯಲ್ಲಿ ಖಲೀಲ್ ಅಹಮ್ಮದ್ ಸಿಕ್ಕಿಬಿದ್ದಿದ್ದಾರೆ. ಬಂಧಿತ ಖಲೀಲ್ ಅಹಮ್ಮದ್&zwnj;ನಿಂದ 20 ಲಕ್ಷ ಮೌಲ್ಯದ 42 ದ್ವೀಚಕ್ರ ವಾಹನಗಳು&zwnj; ವಶಕ್ಕೆ ಪಡೆಯಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/shoe-thieves-target-bengaluru-apartments-cctv-captures-theft-police-probe-underway/articleshow-adew65q"/>
        </item>
        <item>
            <title><![CDATA[ಸಿಎಂ‌ ಡಿಕೆಶಿಯಿಂದ ಗುಡ್ ನ್ಯೂಸ್, ಬೆಂಗಳೂರು ರಸ್ತೆ ಅಭಿವೃದ್ಧಿಗೆ 2000 ಕೋಟಿ ಬಿಡುಗಡೆ, ಯಾವ ಕ್ಷೇತ್ರಕ್ಕೆ ಎಷ್ಟು?]]></title>
            <link>https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm</link>
            <guid isPermaLink="true">https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm</guid>
            <pubDate>Mon, 29 Jun 2026 18:03:42 +0530</pubDate>
            <description><![CDATA[ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt5a00y8g1zvdg9c2qfdge1g,imgname-----------------------2026-06-03t043419.302-1780442203080.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;/p&gt;&lt;p&gt;ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DKS) ನೇತೃತ್ವದ ರಾಜ್ಯ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ₹2,000.00 ಕೋಟಿ ವೆಚ್ಚದ ಬೃಹತ್ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಸರ್ಕಾರ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.&lt;/p&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವ್ಯಾಪ್ತಿಯಲ್ಲಿ ಬರುವ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟಾರೆ ರಸ್ತೆಗಳ ಸಮಗ್ರ ಸುಧಾರಣೆಗೆ ಈ ಬೃಹತ್ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಬೆಂಗಳೂರಿನ ಐದು ನಗರ ಪಾಲಿಕೆಗಳ ಆಯುಕ್ತರುಗಳಿಂದ ವಿಧಾನಸಭಾ ಕ್ಷೇತ್ರವಾರು ಪಡೆದ ಕಾಮಗಾರಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಬಿಎ (GBA) ಮುಖ್ಯ ಆಯುಕ್ತರು ಜೂನ್ 16, 2026 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನ್ವಯ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.&lt;/p&gt;&lt;h2&gt;ಕ್ಷೇತ್ರವಾರು ಬಿಡುಗಡೆಯಾದ ಅನುದಾನ&lt;/h2&gt;&lt;p&gt;1. ಸಿ.ವಿ ರಾಮನ್ ನಗರ 40 ಕೋಟಿ ರೂ.&lt;/p&gt;&lt;p&gt;2. ಶಾಂತಿನಗರ 50+50 ಒಟ್ಟು 100 ಕೋಟಿ ರೂ.&lt;/p&gt;&lt;p&gt;3. ಶಿವಾಜಿನಗರ 80+20 ಒಟ್ಟು 100 ಕೋಟಿ ರೂ.&lt;/p&gt;&lt;p&gt;4. ಚಾಮರಾಜಪೇಟೆ 28.5+71.5 ಒಟ್ಟು&zwnj; 100 ಕೋಟಿ ರೂ.&lt;/p&gt;&lt;p&gt;5. ಚಿಕ್ಕಪೇಟೆ 40 ಕೋಟಿ ರೂ.&lt;/p&gt;&lt;p&gt;6. ಮಹದೇವಪುರ 50+10 ಒಟ್ಟು 60 ಕೋಟಿ ರೂ.&lt;/p&gt;&lt;p&gt;7. ಕೆ.ಆರ್.ಪುರ 60 ಕೋಟಿ ರೂ.&lt;/p&gt;&lt;p&gt;8. ಆರ್.ಆರ್ ನಗರ 47+13 ಒಟ್ಟು 60 ಕೋಟಿ ರೂ.&lt;/p&gt;&lt;p&gt;9. ಯಶವಂತಪುರ 50+25 ಒಟ್ಟು 75 ಕೋಟಿ ರೂ.&lt;/p&gt;&lt;p&gt;10. ದಾಸರಹಳ್ಳಿ 35+25 ಒಟ್ಟು 55 ಕೋಟಿ ರೂ.&lt;/p&gt;&lt;p&gt;11. ಮಹಾಲಕ್ಷ್ಮಿ ಲೇಔಟ್ 40 ಕೋಟಿ ರೂ.&lt;/p&gt;&lt;p&gt;12. ಮಲ್ಲೇಶ್ವರಂ 40 ಕೋಟಿ ರೂ.&lt;/p&gt;&lt;p&gt;13. ರಾಜಾಜಿನಗರ 40 ಕೋಟಿ ರೂ.&lt;/p&gt;&lt;p&gt;14. ಗೋವಿಂದರಾಜನಗರ 39+61 ಒಟ್ಟು 100 ಕೋಟಿ ರೂ.&lt;/p&gt;&lt;p&gt;15. ವಿಜಯನಗರ 42+58 ಒಟ್ಟು 100 ಕೋಟಿ ರೂ.16. ಬಸವನಗುಡಿ&zwnj; 40 ಕೋಟಿ ರೂ.&lt;/p&gt;&lt;p&gt;17. ಪದ್ಮನಾಭನಗರ 42+38 ಒಟ್ಟು 80 ಕೋಟಿ ರೂ.&lt;/p&gt;&lt;p&gt;18.ಬ್ಯಾಟರಾಯನಪುಟ 88.5+11.5 ಒಟ್ಟು 100 ಕೋಟಿ ರೂ.&lt;/p&gt;&lt;p&gt;19.ಸರ್ವಜ್ಞ ನಗರ 90+10 ಒಟ್ಟು 100 ಕೋಟಿ ರೂ.&lt;/p&gt;&lt;p&gt;20.ಪುಲಕೇಶಿನಗರ 95+5 ಒಟ್ಟು 100 ಕೋಟಿ ರೂ.&lt;/p&gt;&lt;p&gt;21. ಯಲಹಂಕ 55+5 ಒಟ್ಟು 55 ಕೋಟಿ ರೂ.&lt;/p&gt;&lt;p&gt;22. ಹೆಬ್ಬಾಳ 100 ಕೋಟಿ ರೂ.&lt;/p&gt;&lt;p&gt;23. ಜಯನಗರ 40 ಕೋಟಿ ರೂ.&lt;/p&gt;&lt;p&gt;24. ಬೆಂಗಳೂರು ದಕ್ಷಿಣ 60 ಕೋಟಿ ರೂ.&lt;/p&gt;&lt;p&gt;25. ಬೊಮ್ಮನಹಳ್ಳಿ 60 ಕೋಟಿ ರೂ.&lt;/p&gt;&lt;p&gt;26. ಬಿಟಿಎಂ ಲೇಔಟ್ 50+50 ಒಟ್ಟು 100 ಕೋಟಿ ರೂ.&lt;/p&gt;&lt;p&gt;27. ಆನೇಕಲ್ 45 ಕೋಟಿ ರೂ.&lt;/p&gt;&lt;p&gt;28. ಗಾಂಧಿನಗರ 73 ಕೋಟಿ ರೂ.&lt;/p&gt;&lt;h2&gt;ಅನುದಾನ ಹಂಚಿಕೆಯಲ್ಲಿ ರಾಜಕೀಯ ಲೆಕ್ಕಾಚಾರ!&lt;/h2&gt;&lt;p&gt;ಈ ಬೃಹತ್ ಅನುದಾನ ಹಂಚಿಕೆಯಲ್ಲಿ ಸ್ಪಷ್ಟ ರಾಜಕೀಯ ತಂತ್ರಗಾರಿಕೆ ಎದ್ದು ಕಾಣುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷದ ಕ್ಷೇತ್ರಗಳಿಗೆ ಸಿಂಹಪಾಲು ಸಿಕ್ಕಿದೆ. ಆಡಳಿತಾರೂಢ ಕಾಂಗ್ರೆಸ್ ಶಾಸಕರಿರುವ ಬಹುತೇಕ ಪ್ರಮುಖ ಕ್ಷೇತ್ರಗಳಿಗೆ ತಲಾ ₹100 ಕೋಟಿಗಳ ಬೃಹತ್ ಮೊತ್ತವನ್ನು ನೀಡಲಾಗಿದೆ. ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್ ಹಾಗೂ ಹೆಬ್ಬಾಳದಂತಹ ಕ್ಷೇತ್ರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.&lt;/p&gt;&lt;h2&gt;ಪ್ರತಿಪಕ್ಷಗಳ ಕ್ಷೇತ್ರಗಳಿಗೆ ನಿಯಮಿತ ಅನುದಾನ:&lt;/h2&gt;&lt;p&gt;ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರಕ್ಕೆ ₹80 ಕೋಟಿ ಮಂಜೂರಾಗಿದ್ದರೆ, ಉಳಿದಂತೆ ಪ್ರತಿಪಕ್ಷಗಳ (ಬಿಜೆಪಿ/ಜೆಡಿಎಸ್) ಶಾಸಕರಿರುವ ಬಹುತೇಕ ಕ್ಷೇತ್ರಗಳಿಗೆ ಕೇವಲ ₹40 ರಿಂದ ₹60 ಕೋಟಿಗಳಷ್ಟು ಸಾಧಾರಣ ಅನುದಾನ ಹಂಚಿಕೆ ಮಾಡಲಾಗಿದೆ.&lt;/p&gt;&lt;p&gt;ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ ವಾರ್ಡ್ ಮಟ್ಟದ ರಸ್ತೆ ಗುಂಡಿಗಳ ಮುಚ್ಚುವಿಕೆ, ಮುಖ್ಯ ರಸ್ತೆಗಳ ಡಾಂಬರೀಕರಣ (ಅಸ್ಫಾಲ್ಟಿಂಗ್) ಮತ್ತು ಜಂಕ್ಷನ್&zwnj;ಗಳ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಚಾಲನೆ ಪಡೆಯಲಿವೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ ಜಿಬಿಎ (GBA) ಮತ್ತು ಬಿಡಿಎ (BDA) ಅಧಿಕಾರಿಗಳು ಆದಷ್ಟು ಬೇಗ ಅಭಿವೃದ್ಧಿ ಮಾಡಿದರೆ ನಗರದ ಜನರ ಪ್ರಶಂಸೆಗೆ ಕಾರಣರಾಗಲಿದ್ದಾರೆ&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm"/>
        </item>
        <item>
            <title><![CDATA["ವಿಜಯೇಂದ್ರನನ್ನು ಒದ್ದು ಬಿಸಾಕಿ" ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ಲೀಕ್, ನೋ ಕಮೆಂಟ್ಸ್ ಎಂದ ಡಿವಿಎಸ್!!]]></title>
            <link>https://kannada.asianetnews.com/politics/karnataka-bjp-crisis-dv-sadananda-gowda-alleged-leaked-audio-triggers-leadership-war-by-vijayendra-gdp/articleshow-bn951og</link>
            <guid isPermaLink="true">https://kannada.asianetnews.com/politics/karnataka-bjp-crisis-dv-sadananda-gowda-alleged-leaked-audio-triggers-leadership-war-by-vijayendra-gdp/articleshow-bn951og</guid>
            <pubDate>Mon, 29 Jun 2026 14:20:36 +0530</pubDate>
            <description><![CDATA[ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಉಚ್ಚಾಟನೆ ಕುರಿತು ಮಾಜಿ ಸಿಎಂ ಸದಾನಂದಗೌಡರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ವಿವಾದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸದಾನಂದಗೌಡರು, ಇದು ತಮ್ಮ ವಿರುದ್ಧದ ಪಿತೂರಿ ಎಂದು ಆರೋಪಿಸಿದ್ದು, ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ತಾರಕಕ್ಕೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw98sj8mksbbjh6ferw7jw79,imgname-by-vijayendra-sadananda-gowda-1782722644244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಹಾಗೂ ಆಂತರಿಕ ಭಿನ್ನಮತದ ಬೆಂಕಿ ಮತ್ತೆ ಹೊಗೆಯಾಡಲು ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಉಚ್ಚಾಟಿಸುವ ಕುರಿತು ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ಕೇಂದ್ರದ ಪ್ರಭಾವಿ ನಾಯಕರೊಬ್ಬರ ಜೊತೆ ನಡೆಸಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ.&lt;/p&gt;&lt;h2&gt;ವೈರಲ್ ಆಡಿಯೋದಲ್ಲೇನಿದೆ?&lt;/h2&gt;&lt;p&gt;ಲೀಕ್ ಆಗಿರುವ ಆಡಿಯೋ ಸಂಭಾಷಣೆಯ ಪ್ರಕಾರ, ಬಿ.ವೈ. ವಿಜಯೇಂದ್ರ ಅವರನ್ನು ಸದ್ಯಕ್ಕೆ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸದಂತೆ ಸದಾನಂದಗೌಡರು ಕೇಂದ್ರದ ನಾಯಕರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&quot;ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೂ ವಿಜಯೇಂದ್ರ ಅವರನ್ನೇ ಮುಂದುವರೆಯಲು ಬಿಡಿ. ಈಗಲೇ ಅವರನ್ನು ಹುದ್ದೆಯಿಂದ ತೆಗೆದುಹಾಕಿದರೆ ಬಿಜೆಪಿ ಪಕ್ಷವು 'ಲಿಂಗಾಯತ ವಿರೋಧಿ' ಎಂಬ ಹಣೆಪಟ್ಟಿ ಹೊರಬೇಕಾಗುತ್ತದೆ. ಇದು ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆ ಹಾಗೂ ಡ್ಯಾಮೇಜ್ ಉಂಟುಮಾಡಲಿದೆ. ಆದ್ದರಿಂದ ಸೂಕ್ತ ಸಮಯದವರೆಗೂ ಕಾಯ್ದು, ಆ ಬಳಿಕ ವಿಜಯೇಂದ್ರ ಅವರನ್ನು ಒದ್ದು ಕಿತ್ತು ಬಿಸಾಕಿ,&quot; ಎಂದು ಸದಾನಂದಗೌಡರು ಹೇಳಿರುವುದು ಆಡಿಯೋದಲ್ಲಿದೆ ಎನ್ನಲಾಗಿದೆ.&lt;/p&gt;&lt;p&gt;ಇದೇ ಸಂಭಾಷಣೆಯ ವೇಳೆ ಕೇಂದ್ರದ ನಾಯಕನೆನ್ನಲಾದ ವ್ಯಕ್ತಿಯು, &quot;ಅಲ್ಲಿ ಬಿ.ಎಲ್. ಸಂತೋಷ್ ಮತ್ತು ಪ್ರಹ್ಲಾದ್ ಜೋಶಿ ಇದ್ದಾರೆ ಎಂದು ಪ್ರಸ್ತಾಪಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿರುವ ಸದಾನಂದಗೌಡರು, ನಾನು ಕೇವಲ ದೇವರನ್ನು ಮಾತ್ರ ನಂಬಿದ್ದೇನೆ&quot; ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮಾತುಗಳು ಈಗ ಬಿಜೆಪಿಯೊಳಗೆ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿವೆ.&lt;/p&gt;&lt;h2&gt;ನೋ ಕಾಮೆಂಟ್ಸ್, ನಾನೇನು ಕಳ್ಳನಲ್ಲ: ಸದಾನಂದಗೌಡ&lt;/h2&gt;&lt;p&gt;ಈ ವಿವಾದಾತ್ಮಕ ಆಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳ ಎದುರು ಬಂದ ಮಾಜಿ ಸಿಎಂ ಡಿ.ವಿ. ಸದಾನಂದಗೌಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ (No Comments). ನೋ ಕಾಮೆಂಟ್ಸ್, ನನ್ನದಲ್ಲದ ವಿಡಿಯೋ ಹಾಗೂ ಆಡಿಯೋಗಳ ಬಗ್ಗೆ ನಾನು ಇದುವರೆಗೆ ತಲೆಕೆಡಿಸಿಕೊಂಡಿಲ್ಲ, ಉತ್ತರವನ್ನೂ ಕೊಟ್ಟಿಲ್ಲ. ಸತ್ಯ ಏನೆಂಬುದನ್ನು ಮಾಧ್ಯಮದವರೇ ತನಿಖೆ ನಡೆಸಿ ಕಂಡುಹಿಡಿಯಲಿ. ಈ ಕುರಿತು ನಾನೇಕೆ ಪೊಲೀಸರಿಗೆ ದೂರು ನೀಡಬೇಕು? ನಾನೇನು ತಪ್ಪು ಮಾಡಿಲ್ಲ, ನಾನೇನು ಕಳ್ಳನಲ್ಲ. ಕಳ್ಳನಾಗಿದ್ದರೆ ಬಾಗಿಲು ಹಾಕಿಕೊಂಡು ಮನೆಯೊಳಗೆ ಕೂರುತ್ತಿದ್ದೆ, ಎಂದು ಭುಸುಗುಟ್ಟಿದ್ದಾರೆ.&lt;/p&gt;&lt;p&gt;ಮುಂದುವರಿದು ಮಾತನಾಡಿದ ಅವರು, ಕೆಲವು ಮಾಧ್ಯಮಗಳು ಈ ವಿಷಯದಲ್ಲಿ ತಮ್ಮ ಟಿಆರ್&zwnj;ಪಿ ಹಾಗೂ ಮೈಲೇಜ್&zwnj;ಗಾಗಿ ರಾಜಕೀಯ ಮಾಡುತ್ತಿವೆ. ಆದರೆ ಸುವರ್ಣ ನ್ಯೂಸ್&zwnj;ನವರು ನನಗೆ ಕರೆ ಮಾಡಿ ಮಾಹಿತಿ ಕೇಳಿದ ರೀತಿ ನನಗೆ ಅತ್ಯಂತ ಖುಷಿ ತಂದಿದೆ. ಈ ಬಗ್ಗೆ ನಾನು ಯಾರೊಂದಿಗೂ ಚರ್ಚಿಸುವುದಿಲ್ಲ. ರಾಷ್ಟ್ರೀಯ ನಾಯಕರು ಈ ಬಗ್ಗೆ ವಿವರಣೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸುತ್ತೇನೆ. ನಾನು ರಾಷ್ಟ್ರೀಯ ಮಟ್ಟದ ಜವಾಬ್ದಾರಿಯನ್ನು ನೋಡಿಯೇ ಇಲ್ಲಿಗೆ ಬಂದಿದ್ದೇನೆ. ನೀವು ಬೇಕಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷರನ್ನು ಕರೆಸಿ, ಅವರ ಸಮ್ಮುಖದಲ್ಲೇ ನನ್ನನ್ನು ಮಾತನಾಡಿಸಿ. ಅದನ್ನು ಬಿಟ್ಟು ರಾಮನ ಜೊತೆ, ಸೋಮನ ಜೊತೆ ಮಾತನಾಡಿ ಎಂದು ಕೇಳಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಫುಲ್ ಗರಂ ಆದರು.&lt;/p&gt;&lt;h2&gt;ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ!&lt;/h2&gt;&lt;p&gt;ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಬ್ಯಾಟಿಂಗ್ ಮಾಡಿದ್ದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ವಿರುದ್ಧ ಡಿ.ವಿ. ಸದಾನಂದಗೌಡರು ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದರು.&lt;/p&gt;&lt;p&gt;&quot;ಎಸ್.ಆರ್. ವಿಶ್ವನಾಥ್ ಹಿನ್ನೆಲೆ ಏನು? ಆತ ಹಿಂದೆ ಭೂಗತ ಪಾತಕಿ ಮುತ್ತಪ್ಪ ರೈ ಕೈಕೆಳಗೆ ಇದ್ದುಕೊಂಡು ಲೂಟಿ ಹೊಡೆಯುತ್ತಿದ್ದ ವ್ಯಕ್ತಿ. ಬೆಂಗಳೂರಿನಲ್ಲಿ ಗುಂಡಾಗಿರಿ ಮಾಡಿಕೊಂಡಿದ್ದ ವಿಶ್ವನಾಥ್ ಬಗ್ಗೆ ನಾನು ಮಾತನಾಡಬೇಕಾ? ಕೊಳ್ಳೆ ಹೊಡೆಯುವುದು ಮತ್ತು ಹಣ ಮಾಡುವುದಷ್ಟೇ ಆತನ ಕೆಲಸ. ಅಂತಹ ವ್ಯಕ್ತಿ ನನ್ನನ್ನು ಒಕ್ಕಲಿಗನೇ ಅಲ್ಲ ಎನ್ನುತ್ತಾನೆ,&quot; ಎಂದು ಏಕವಚನದಲ್ಲೇ ಕಿಡಿಕಾರಿದರು.&lt;/p&gt;&lt;h2&gt;ಹೈಕಮಾಂಡ್&zwnj;ಗೆ ದೂರು:&lt;/h2&gt;&lt;p&gt;ಈ ಆಡಿಯೋ ವಿವಾದ ಹಾಗೂ ಎಸ್.ಆರ್. ವಿಶ್ವನಾಥ್ ಹೇಳಿಕೆಯನ್ನು ಖಂಡಿಸಿ ಈಗಾಗಲೇ ದಕ್ಷಿಣ ಕನ್ನಡ ಭಾಗದಲ್ಲಿ ಸದಾನಂದಗೌಡರ ಬೆಂಬಲಿಗರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಇಡೀ ಬೆಳವಣಿಗೆ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಪಿತೂರಿಯ ಕುರಿತು ದೆಹಲಿಯ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸವಿಸ್ತಾರವಾದ ದೂರು ನೀಡುವುದಾಗಿ ಸದಾನಂದಗೌಡರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಈ ಆಂತರಿಕ ಯುದ್ಧ ಮತ್ತು ಆಡಿಯೋ ವಿವಾದ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/politics/karnataka-bjp-crisis-dv-sadananda-gowda-alleged-leaked-audio-triggers-leadership-war-by-vijayendra-gdp/articleshow-bn951og"/>
        </item>
        <item>
            <title><![CDATA[SN Shankar Death: ನಿನ್ನೆ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ 'ಉಲ್ಟಾ ಪಲ್ಟಾ' ಸಿನಿಮಾದ ನಿರ್ದೇಶಕ ಇನ್ನಿಲ್ಲ]]></title>
            <link>https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb</link>
            <guid isPermaLink="true">https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb</guid>
            <pubDate>Sun, 28 Jun 2026 11:53:43 +0530</pubDate>
            <description><![CDATA[&lt;p&gt;Director SN Shankar Death: ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಖ ಎಸ್&zwnj; ಎನ್&zwnj; ಶಂಕರ್&zwnj; ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಸಿನಿಮಾ ಶೂಟಿಂಗ್&zwnj;ನಲ್ಲಿ ಭಾಗಿಯಾಗಿದ್ದ ಅವರು ಇಂದು ಇನ್ನಿಲ್ಲ ಎನ್ನೋದು ಅನೇಕರಿಗೆ ಶಾಕ್&zwnj; ನೀಡಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6ea47c6zc5y83wj3sn14w3,imgname-new-project---2026-06-28t114724.815-1782627766508.jpg" type="image/jpeg" height="390" width="690"/>
            <content:encoded><![CDATA[&lt;p&gt;ಉಲ್ಟಾ ಪಲ್ಟಾ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್&zwnj; ಎನ್&zwnj; ಶಂಕರ್&zwnj; ಅವರು ( Director SN Shankar Death ) ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆಯಷ್ಟೇ ಸಿನಿಮಾ ಶೂಟಿಂಗ್&zwnj;ನಲ್ಲಿ ಭಾಗಿಯಾಗಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಮನೆಯಲ್ಲಿ ಇಂದು ಹೃದಯಾಘಾತ ಆಗಿದೆ.&lt;/p&gt;&lt;p&gt;ಎಸ್&zwnj; ಎನ್&zwnj; ಶಂಕರ್&zwnj; ಅವರು ಕೆಲ ತಿಂಗಳುಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದರು. ಈಗ ಅವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಇದನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದು, ಸಂತಾಪ ಸೂಚಿಸಿದ್ದಾರೆ.&lt;/p&gt;&lt;p&gt;&ldquo;ಬದುಕು ಯಾವತ್ತಿಗೂ ಆಕಸ್ಮಿಕವೇ&hellip; ನಿನ್ನೆ ಸಂಜೆ ಸುಮಾರು 6 ರ ಸಮಯದಲ್ಲಿ ತುಂಬಾ ಖುಷಿ ಖುಷಿಯಿಂದಲೇ 'ರಾಮಯ್ಯ' ಅವರ ಹೊಸ ಸಿನಿಮಾಗೆ ಕ್ಯಾಮರಾ ಚಾಲನೆಕೊಟ್ಟು .. ಫೋಟೋ ತೆಗೆಯಿರಿ ಲೋಕೇಶ್ ಎಂದಾ ನಲ್ಮೆಯ ಎನ್_ಎಸ್_ಶಂಕರ್ ಅವರು ಬೆಳಗ್ಗೆ ಇಲ್ಲ ಎನ್ನುವುದು .. ಜೀರ್ಣಿಸಿಕೊಳ್ಳಲಾಗದ ಸಂಗತಿ&rdquo; ಎಂದು ಫೋಟೋಗ್ರಾಫರ್&zwnj; ತಾಯಿ ಲೋಕೇಶ್&zwnj; ಅವರು ಪೋಸ್ಟ್&zwnj; ಹಂಚಿಕೊಂಡಿದ್ದಾರೆ.&lt;/p&gt;&lt;p&gt;ರಮೇಶ್&zwnj; ಅರವಿಂದ್&zwnj;, ಸರಿಗಮ ವಿಜಿ ನಟನೆಯ ಉಲ್ಟಾ ಪಲ್ಟಾ ಸಿನಿಮಾವನ್ನು ಅವರು ನಿರ್ದೇಶನ ಮಾಡಿದ್ದರು.&lt;/p&gt;&lt;h2&gt;ಬೆಳಚಿಕ್ಕನಹಳ್ಳಿ ಶ್ರೀನಾಥ್&zwnj; ಪೋಸ್ಟ್&zwnj; ಹೀಗಿದೆ&lt;/h2&gt;&lt;p&gt;ʼಅಂತೂ ತಂತ್ರಜ್ಞರೇ ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿ ಗೆದ್ದಿರಲ್ಲಾ ಸರ್ʼ ಎಂದೆ. ʼಸಿನಿಮಾ ಏನೋ ಗೆದ್ದಿತಾದರೂ ಅದನ್ನೆಲ್ಲಾ ನಿಭಾಯಿಸುವ ಹೊತ್ತಿಗೆ ನನ್ನ ಆರೋಗ್ಯ ಹಾಳಾಯಿತು. ನನಗೆ ಬಿ.ಪಿ, ಡಯಾಬಿಟಿಸ್ ಅಂಟಿಕೊಂಡಿತುʼ ಎಂದಿದ್ದರು ಎನ್.ಎಸ್.ಶಂಕರ್.&lt;/p&gt;&lt;p&gt;ಲಂಕೇಶ್ ಪತ್ರಿಕೆಯಲ್ಲಿ ಅವರ ಸಿನಿಮಾ ಬರಹಗಳನ್ನು ಓದಿ ಮೆಚ್ಚಿಕೊಂಡಿದ್ದ ನಾನು ಮುಂದೆ ಅವರೊಂದಿಗೆ ಎರಡು ಕಿರುಚಿತ್ರಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದೆ. ಅವರಿಗೆ ಸಿನಿಮಾ ಬಗ್ಗೆ ಅಪರೂಪದ ಒಳನೋಟಗಳಿದ್ದವು. ಕಮರ್ಷಿಯಲ್ ಸಿನಿಮಾದ ಬಗ್ಗೆ ಅತ್ಯಂತ ಗಂಭೀರ ವಿಶ್ಲೇಷಣೆ ಮಾಡುತ್ತಿದ್ದರು. ಆದರೆ, ಸಿನಿಮಾ ನಿರ್ದೇಶಕನಾಗಿ ದೊಡ್ಡ ಯಶಸ್ಸು ಕಾಣಲು ನಾನಾ ಕಾರಣಗಳಿಂದ ಅವರಿಗೆ ಸಾಧ್ಯವಾಗಲಿಲ್ಲ. ಸಾಲದು ಎಂಬಂತೆ ಅದರಿಂದ ಸಾಲಗಾರರಾಗಿ ಜೀವನ ಪರ್ಯಂತ ಕಷ್ಟ ಅನುಭವಿಸಿದರು.&lt;/p&gt;&lt;p&gt;ಉತ್ತಮ ಪತ್ರಕರ್ತರಾಗಿದ್ದ ಶಂಕರ್ ಅವರು, ಬರವಣಿಗೆಯ ಜತೆಗೆ ಪುಸ್ತಕದ ವಿನ್ಯಾಸ, ಮುಖಪುಟ ವಿನ್ಯಾಸವನ್ನೂ ಮಾಡುತ್ತಿದ್ದರು. ವ್ಯಂಗ್ಯಚಿತ್ರ ಬರೆಯುತ್ತಿದ್ದರು. ಕಾಲೇಜಿನಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಶಂಕರ್ ಅವರು ಕನ್ನಡದ ಉತ್ತಮ ಗದ್ಯ ಬರಹಗಾರರಾಗಿದ್ದರು. ಕಥೆ ಬರೆದರು, ಚಳವಳಿಗಳ ಬಗ್ಗೆ ಬರೆದರು. ಸಮಾಜ ವಿಮರ್ಶೆಯ ಲೇಖನಗಳನ್ನು ಬರೆದರು.&lt;/p&gt;&lt;p&gt;ತೀವ್ರ ರಾಜಕೀಯ ನಿಲುವುಗಳನ್ನು ಹೊಂದಿದ್ದರೂ ಸ್ನೇಹಜೀವಿಯಾಗಿದ್ದರು. ಅವರಿಗೆ ಅಪಾರ ಹಾಸ್ಯಪ್ರಜ್ಞೆ ಇತ್ತು. ತಮ್ಮ ಸುತ್ತಲಿನವರ ಬಗ್ಗೆ ಚಟಾಕಿ ಹಾರಿಸುತ್ತಿದ್ದ ಅವರು ತಮ್ಮನ್ನೂ ಗೇಲಿ ಮಾಡಿಕೊಳ್ಳಬಲ್ಲವರಾಗಿದ್ದರು. ಅವರ ಹೆಸರಿನೊಂದಿಗಿರುವ ಸೊಂಡೂರು ಬಗ್ಗೆ ಒಮ್ಮೆ ಕೇಳಿದರೆ, ನಮ್ಮದು ಸೊಂಡೂರಿನ ರಾಜಮನೆತನ ಎಂದು ನಮ್ಮ ಮನೆತನದವರು ಹೇಳುತ್ತಾರೆ. ಅದ್ಯಾವ ರಾಜಮನೆತನವೋ ಎಂದು ನಕ್ಕಿದ್ದರು.&lt;/p&gt;&lt;p&gt;ಅವರ ನಗುಮುಖವನ್ನು ಮರೆಯಲಾಗದು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Padmashree Bhat</dc:creator>
            <atom:link href="https://kannada.asianetnews.com/sandalwood/ulta-palta-kannada-movie-director-journalist-sn-shankar-passed-away-heart-attack/articleshow-d8p72tb"/>
        </item>
        <item>
            <title><![CDATA[ಬರೋಬ್ಬರಿ 4 ದಶಕಗಳ ಬೆಂಗಳೂರು ಉಪನಗರ ರೈಲು ಕನಸು ನನಸಾಗೋ ಕಾಲ ಸನ್ನಿಹಿತ, 2028ಕ್ಕೆ ಮೊದಲ ಸೇವೆ ಆರಂಭ!]]></title>
            <link>https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6</link>
            <guid isPermaLink="true">https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6</guid>
            <pubDate>Mon, 29 Jun 2026 16:42:38 +0530</pubDate>
            <description><![CDATA[ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಮೆಟ್ರೋಗಿಂತ ಹೆಚ್ಚು ಸವಾಲಿನದಾದ ಈ ಯೋಜನೆಯ ಕಾರಿಡಾರ್ 2 ಮತ್ತು 4ರ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 2028ರ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ. ಈ ಯೋಜನೆಯು ನಗರದ ಅಭಿವೃದ್ಧಿಯನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvasaszb74r9w3rgxwceq68z,imgname-k-ride-bengaluru-suburban-rail-1781699799018.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಬಹುದಿನಗಳ ಕನಸಾದ ಉಪನಗರ ರೈಲು ಯೋಜನೆಗೆ (Bengaluru Suburban Rail Project) ಮೊದಲ ಬಾರಿಗೆ 1983 ರಲ್ಲೇ ಪ್ರಸ್ತಾಪನೆ ಸಲ್ಲಿಕೆಯಾಗಿತ್ತು. ದೀರ್ಘಕಾಲದ ಕಾಯುವಿಕೆಯ ನಂತರ, 2020 ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿತು. ತದನಂತರ, ಜೂನ್ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು.&lt;/p&gt;&lt;p&gt;ಒಟ್ಟು 148 ಕಿಲೋಮೀಟರ್ ಉದ್ದದ ಈ ಜಾಲವು 4 ಪ್ರಮುಖ ಕಾರಿಡಾರ್&zwnj;ಗಳನ್ನು ಒಳಗೊಂಡಿದೆ. ಆರಂಭದಲ್ಲಿ 2026 ರ ವೇಳೆಗೆ ಇಡೀ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತಾದರೂ, ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇದುವರೆಗೆ ಒಂದೇ ಒಂದು ಕಾರಿಡಾರ್ ಕೂಡ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಲ್ಲ.&lt;/p&gt;&lt;p&gt;ಆದರೆ, 1996 ರ ಬ್ಯಾಚ್&zwnj;ನ &lsquo;ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಇಂಜಿನಿಯರ್ಸ್&rsquo; (IRSE) ಹಿರಿಯ ಅಧಿಕಾರಿ ಲಕ್ಷ್ಮಣ್ ಸಿಂಗ್ ಅವರು ಡಿಸೆಂಬರ್ 2025 ರಲ್ಲಿ ಕೆ-ರೈಡ್ ( ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್&zwnj;ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ - K-RIDE) ಸಂಸ್ಥೆಯ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಮಗಾರಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಯೋಜನೆಯ ಪ್ರಗತಿ, ಎದುರಾಗುತ್ತಿರುವ ಸವಾಲುಗಳು ಮತ್ತು ಹೊಸ ಗಡುವುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;h2&gt;ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಸ್ತುತ ಸ್ಥಿತಿ ಏನು?&lt;/h2&gt;&lt;p&gt;ಪ್ರಸ್ತುತ ಯೋಜನೆ ಒಟ್ಟಾರೆಯಾಗಿ ಉತ್ತಮ ಪ್ರಗತಿ ಕಾಣುತ್ತಿದೆ. ಕಾರಿಡಾರ್ 2 ಮತ್ತು ಕಾರಿಡಾರ್ 4 ರ ಮುಖ್ಯ ರೈಲು ಮಾರ್ಗ ಹಾಗೂ ನಿಲ್ದಾಣಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಸದ್ಯ ಬಾಕಿ ಇರುವ ಭೂಸ್ವಾಧೀನವು ಕೇವಲ ಫ್ಲೈಓವರ್&zwnj;ಗಳು ಮತ್ತು ರಸ್ತೆ ಮೇಲ್ಸೇತುವೆಗಳ (ROB) ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ.&lt;/p&gt;&lt;p&gt;ಕಾರಿಡಾರ್ 4 (46 ಕಿ.ಮೀ): ಈ ಮಾರ್ಗಕ್ಕಾಗಿ ನಿಗದಿಪಡಿಸಲಾದ ನಾಲ್ಕು ಸಿವಿಲ್ ಪ್ಯಾಕೇಜ್&zwnj;ಗಳ ಪೈಕಿ ಈಗಾಗಲೇ ಎರಡು ಟೆಂಡರ್&zwnj;ಗಳನ್ನು ಕರೆಯಲಾಗಿದೆ. ಇನ್ನುಳಿದ ಎರಡು ಟೆಂಡರ್&zwnj;ಗಳನ್ನು ಮುಂದಿನ ತಿಂಗಳ ಮಧ್ಯಭಾಗದಲ್ಲಿ ಪ್ರಕಟಿಸಲಾಗುವುದು.&lt;/p&gt;&lt;p&gt;ಕಾರಿಡಾರ್ 2 (27 ಕಿ.ಮೀ): ಈ ಮಾರ್ಗದ ಮೂರು ಸಿವಿಲ್ ಪ್ಯಾಕೇಜ್&zwnj;ಗಳ ಪೈಕಿ ಎರಡನ್ನು ಈಗಾಗಲೇ ಗುತ್ತಿಗೆ ನೀಡಲಾಗಿದೆ. ಮೂರನೇ ಪ್ಯಾಕೇಜ್&zwnj;ಗೆ ಮರು ಟೆಂಡರ್ ಕರೆಯಲಾಗಿದ್ದು, ಜುಲೈ ಆರಂಭದಲ್ಲಿ ಬಿಡ್&zwnj;ಗಳನ್ನು ಮುಕ್ತಗೊಳಿಸುವ ನಿರೀಕ್ಷೆಯಿದೆ. ಪ್ರಸ್ತುತ ಎರಡೂ ಕಾರಿಡಾರ್&zwnj;ಗಳ ವ್ಯಾಪ್ತಿಗೆ ಬರುವ ಎಲ್ಲಾ ನಿಲ್ದಾಣಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.&lt;/p&gt;&lt;h2&gt;ಕಾರಿಡಾರ್ 1 ಮತ್ತು ಕಾರಿಡಾರ್ 3 ರ ಸ್ಥಿತಿ ಏನು?&lt;/h2&gt;&lt;p&gt;ಭಾರತೀಯ ರೈಲ್ವೆಯು ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಮಾರ್ಗದ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಿದೆ. ಇನ್ನು ಕಾರಿಡಾರ್ 3 (ಕೆಂಗೇರಿ-ವೈಟ್&zwnj;ಫೀಲ್ಡ್) ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಅದು ರದ್ದಾಗಿದೆ ಎಂಬ ವದಂತಿಗಳಿದ್ದವು. ಆದರೆ ಇದನ್ನು ಕೆ-ರೈಡ್ ಸ್ಪಷ್ಟವಾಗಿ ನಿರಾಕರಿಸಿದೆ.&lt;/p&gt;&lt;p&gt;ಅನುಮೋದಿತ ಡಿಪಿಆರ್ (DPR) ಪ್ರಕಾರ ಹಂತ ಹಂತವಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸದ್ಯ ಸಂಸ್ಥೆಯ ಮೊದಲ ಆದ್ಯತೆ ಕಾರಿಡಾರ್ 2 ಮತ್ತು 4 ಆಗಿದ್ದು, ನಂತರದ ಗಮನ ಕಾರಿಡಾರ್ 1 ರ ಮೇಲಿರಲಿದೆ. ಕಾರಿಡಾರ್ 3 ರ ವ್ಯಾಪ್ತಿಯಲ್ಲಿ ಮೊದಲಿಗೆ ಬೆಂಗಳೂರು ಕಂಟೋನ್ಮೆಂಟ್-ಕೆಂಗೇರಿ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೆಂಗಳೂರು ಕಂಟೋನ್ಮೆಂಟ್-ವೈಟ್&zwnj;ಫೀಲ್ಡ್ ಮಾರ್ಗವನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಏಕೆಂದರೆ, ಈ ಮಾರ್ಗದಲ್ಲಿ ನೈಋತ್ಯ ರೈಲ್ವೆಯು ಈಗಾಗಲೇ ಹಳಿಗಳ ಚತುಷ್ಪಥ (ನಾಲ್ಕು ಹಳಿಗಳ) ಕಾಮಗಾರಿಯನ್ನು ನಡೆಸುತ್ತಿದ್ದು, ಇದು ಸ್ಥಳೀಯ ರೈಲು ಅಗತ್ಯತೆಗಳನ್ನು ಪೂರೈಸಲಿದೆ. ಚತುಷ್ಪಥ ಕಾಮಗಾರಿ ಮುಗಿದ ನಂತರ ಕೆ-ರೈಡ್ ಈ ಮಾರ್ಗದಲ್ಲಿ ರೈಲು ಓಡಿಸುವ ಬಗ್ಗೆ ನೈಋತ್ಯ ರೈಲ್ವೆಯ ಕಾರ್ಯಾಚರಣೆಯ ಯೋಜನೆಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ.&lt;/p&gt;&lt;h2&gt;ಮೆಟ್ರೋಗಿಂತ ಉಪನಗರ ರೈಲು ನಿರ್ಮಾಣ ಏಕೆ ಹೆಚ್ಚು ಸವಾಲಿನದ್ದು?&lt;/h2&gt;&lt;p&gt;ಬೃಹತ್ ರೈಲ್ವೆ ಮೂಲಸೌಕರ್ಯ ಯೋಜನೆಗಳು ಅನಿವಾರ್ಯವಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ, ನಮ್ಮ ಬೆಂಗಳೂರು ಮೆಟ್ರೋ (Namma Metro) ಕೂಡ ಇಂದಿನ ಹಂತ ತಲುಪಲು ಸುಮಾರು ಎರಡು ದಶಕಗಳ ಕಾಲಾವಕಾಶ ತೆಗೆದುಕೊಂಡಿದೆ. ಮೆಟ್ರೋ ಸಂಸ್ಥೆಯು ಇಷ್ಟು ವರ್ಷಗಳಲ್ಲಿ ಒಟ್ಟು 96 ಕಿ.ಮೀ ಮಾರ್ಗವನ್ನು ಕಾರ್ಯಗತಗೊಳಿಸಿದ್ದರೆ, ಕೆ-ರೈಡ್ ಈಗಾಗಲೇ ಕಾರಿಡಾರ್ 2 ಮತ್ತು 4 ರಲ್ಲಿ ಒಟ್ಟಿಗೆ ಸುಮಾರು 70 ಕಿ.ಮೀ ಮಾರ್ಗದ ಕೆಲಸವನ್ನು ಏಕಕಾಲದಲ್ಲಿ ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಸಾಮಾನ್ಯ ರಸ್ತೆಗಳ ಬದಿಯಲ್ಲಿ ನಿರ್ಮಾಣವಾಗುವ ಮೆಟ್ರೋಗಿಂತ ಉಪನಗರ ರೈಲು ಯೋಜನೆ ಅತ್ಯಂತ ಭಿನ್ನ ಮತ್ತು ಸವಾಲಿನದ್ದಾಗಿದೆ. ಇಲ್ಲಿ ಬಹುತೇಕ ಕಾಮಗಾರಿಗಳು ಪ್ರಸ್ತುತ ಚಾಲ್ತಿಯಲ್ಲಿರುವ, ಸಕ್ರಿಯವಾಗಿರುವ ರೈಲ್ವೆ ಹಳಿಗಳ ಪಕ್ಕದಲ್ಲೇ ನಡೆಯಬೇಕಿರುತ್ತದೆ. ನಿರಂತರವಾಗಿ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿರುವುದರಿಂದ ನಮಗೆ ಜಾಗ ಮತ್ತು ಕೆಲಸದ ಸಮಯದ ಮಿತಿ ಇರುತ್ತದೆ. ಹೀಗಾಗಿ ಸುರಕ್ಷತೆಗೆ ಕಠಿಣ ಆದ್ಯತೆ ನೀಡಿ, ಸಕ್ರಿಯ ಹಳಿಗಳಿಗೆ ಧಕ್ಕೆಯಾಗದಂತೆ ಏಕಕಾಲದಲ್ಲಿ ಕೆಲಸ ಮಾಡುವುದು ದೊಡ್ಡ ಸವಾಲಾಗಿದೆ.&lt;/p&gt;&lt;h2&gt;ಮೊದಲ ಉಪನಗರ ರೈಲು ಸಂಚಾರ ಯಾವಾಗ ಆರಂಭ?&lt;/h2&gt;&lt;p&gt;ಬೆಂಗಳೂರಿನ ಸಾರ್ವಜನಿಕರು ಡಿಸೆಂಬರ್ 2028 ರ ವೇಳೆಗೆ ಮೊದಲ ಉಪನಗರ ರೈಲಿನ ಸೇವೆಗಳನ್ನು ನಿರೀಕ್ಷಿಸಬಹುದಾಗಿದೆ. ಈ ನಿಗದಿತ ಗಡುವಿನೊಳಗೆ ಸಂಪೂರ್ಣ ಕಾರಿಡಾರ್ 2 ಮಾರ್ಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಕೆ-ರೈಡ್ ಬದ್ಧವಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಇಡೀ ಕಾರಿಡಾರ್ ಪೂರ್ಣಗೊಳ್ಳುವುದು ವಿಳಂಬವಾದರೆ, ಮೊದಲ ಆದ್ಯತೆಯ ವಿಭಾಗವನ್ನು ಮಾತ್ರ ಕಾರ್ಯಾಚರಣೆಗೆ ತರಲಾಗುತ್ತದೆ. ಕಾರಿಡಾರ್ 2 ಅನ್ನು ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಚಿಕ್ಕಬಾಣಾವರ-ಯಶವಂತಪುರ ಆದ್ಯತಾ ವಿಭಾಗವು ಮೊದಲು ಸಿದ್ಧವಾದರೆ, ಆ ಭಾಗದಲ್ಲಿ ರೈಲು ಸಂಚಾರವನ್ನು ಮುಂಚಿತವಾಗಿಯೇ ಆರಂಭಿಸಲಾಗುತ್ತದೆ.&lt;/p&gt;&lt;h2&gt;ಭವಿಷ್ಯದ ದೃಷ್ಟಿಕೋನ ಮತ್ತು ತಾಂತ್ರಿಕತೆ&lt;/h2&gt;&lt;p&gt;ಉಪನಗರ ರೈಲು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಬೆಂಗಳೂರಿನ ನಗರ ಅಭಿವೃದ್ಧಿಯನ್ನೇ ಮರುರೂಪಿಸಲಿದೆ. ಮೆಟ್ರೋ ಮಾರ್ಗಗಳು ಪ್ರಮುಖ ರಸ್ತೆಗಳನ್ನು ಅವಲಂಬಿಸಿದ್ದರೆ, ಉಪನಗರ ರೈಲು ನಗರದ ಸುತ್ತಲಿನ ಕಡಿಮೆ ಸಾಂದ್ರತೆಯ (ಒಂದು ಅಥವಾ ಎರಡು ಅಂತಸ್ತಿನ ಕಟ್ಟಡಗಳಿರುವ) ಅಭಿವೃದ್ಧಿಯಾಗದ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದು ಆಯಾ ಭಾಗಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ (TOD), ಮಲ್ಟಿಮೋಡಲ್ ಹಬ್&zwnj;ಗಳು ಮತ್ತು ಹೊಸ ಆರ್ಥಿಕ ಕಾರಿಡಾರ್&zwnj;ಗಳ ಸೃಷ್ಟಿಗೆ ಕಾರಣವಾಗಲಿದೆ.&lt;/p&gt;&lt;p&gt;ಇದರೊಂದಿಗೆ, ದೆಹಲಿ-ಮೀರತ್ ಮಾದರಿಯ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಯೋಜನೆಗಳನ್ನು ತರುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೆ-ರೈಡ್ ಈ ಯೋಜನೆಗಳ ಅನುಷ್ಠಾನದಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಸುರಕ್ಷತೆ ಮತ್ತು ವೇಗದ ದೃಷ್ಟಿಯಿಂದ ಎಲ್ಲಾ ಕಾರಿಡಾರ್&zwnj;ಗಳಲ್ಲಿ ಅತ್ಯಾಧುನಿಕ ಯುರೋಪಿಯನ್ ರೈಲು ನಿಯಂತ್ರಣ ವ್ಯವಸ್ಥೆ (ETCS) ಸಿಗ್ನಲಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6"/>
        </item>
        <item>
            <title><![CDATA[Bengaluru: ಸರ್ಜಾಪುರದಲ್ಲಿ ಪುರವಂಕರ ಭರ್ಜರಿ ಹೂಡಿಕೆ, ₹1,000 ಕೋಟಿ ಮೌಲ್ಯದ ವಸತಿ ಯೋಜನೆಗೆ ಸಹಿ!]]></title>
            <link>https://kannada.asianetnews.com/business/puravankara-shares-surge-post-rs1000-crore-sarjapur-housing-project-announcement-in-bengaluru-gdp/articleshow-en0w5v7</link>
            <guid isPermaLink="true">https://kannada.asianetnews.com/business/puravankara-shares-surge-post-rs1000-crore-sarjapur-housing-project-announcement-in-bengaluru-gdp/articleshow-en0w5v7</guid>
            <pubDate>Mon, 29 Jun 2026 11:45:54 +0530</pubDate>
            <description><![CDATA[ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಪುರವಂಕರ, ಬೆಂಗಳೂರಿನ ಸರ್ಜಾಪುರದಲ್ಲಿ 6.4 ಎಕರೆ ಭೂಮಿಯಲ್ಲಿ ₹1,000 ಕೋಟಿ ಮೌಲ್ಯದ ಬೃಹತ್ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯು ಸುಮಾರು 8 ಲಕ್ಷ ಚದರ ಅಡಿ ಮಾರಾಟ ಮಾಡಬಹುದಾದ ವಿಸ್ತೀರ್ಣವನ್ನು ಹೊಂದಿದ್ದು, ಐಟಿ ಕಾರಿಡಾರ್&zwnj;ನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಪೂರೈಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt1sz765f95ybh7aqq066yfy,imgname-puravankara-north-bengaluru-project-1780324736196.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಭಾರತದ ಪ್ರಮುಖ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆಗಳಲ್ಲಿ ಒಂದಾದ 'ಪುರವಂಕರ ಲಿಮಿಟೆಡ್', ಸಿಲಿಕಾನ್ ಸಿಟಿಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಿದೆ. ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಆದ ಸರ್ಜಾಪುರದಲ್ಲಿ ಸುಮಾರು 6.4 ಎಕರೆ ವಿಸ್ತೀರ್ಣದ ಬೃಹತ್ ಭೂಮಿಯಲ್ಲಿ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಕಂಪನಿಯು ಭೂಮಾಲೀಕರೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದವನ್ನು (JDA) ಮಾಡಿಕೊಂಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ಸುಮಾರು ₹1,000 ಕೋಟಿ ಒಟ್ಟು ಅಭಿವೃದ್ಧಿ ಮೌಲ್ಯದ (GDV) ಆದಾಯದ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಪ್ರಕಟಿಸಿದೆ. ಈ ಸಕಾರಾತ್ಮಕ ಬೆಳವಣಿಗೆಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಪುರವಂಕರ ಕಂಪನಿಯ ಷೇರುಗಳು ಶೇಕಡಾ 2.64 ರಷ್ಟು ಜಿಗಿತ ಕಂಡು, ಪ್ರತಿ ಷೇರಿನ ಬೆಲೆ ₹217.80 ಕ್ಕೆ ತಲುಪಿದೆ.&lt;/p&gt;&lt;h2&gt;ಯೋಜನೆಯ ಮುಖ್ಯಾಂಶಗಳು ಮತ್ತು ಮಾರುಕಟ್ಟೆ ಬೇಡಿಕೆ&lt;/h2&gt;&lt;p&gt;ಪ್ರಸ್ತಾವಿತ ವಸತಿ ಯೋಜನೆಯು ಸುಮಾರು 0.8 ಮಿಲಿಯನ್ ಚದರ ಅಡಿ (8 ಲಕ್ಷ ಚದರ ಅಡಿ) ಮಾರಾಟ ಮಾಡಬಹುದಾದ ವಿಸ್ತೀರ್ಣವನ್ನು ಹೊಂದಿರಲಿದೆ. ವೇಗವಾಗಿ ಬೆಳೆಯುತ್ತಿರುವ ಸರ್ಜಾಪುರ ಕಾರಿಡಾರ್&zwnj;ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಗುಣಮಟ್ಟದ ವಸತಿ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಈ ಯೋಜನೆ ಹೊಂದಿದೆ.&lt;/p&gt;&lt;p&gt;ಸರ್ಜಾಪುರ ಹೋಬಳಿಯ ಕಗ್ಗಲೀಪುರ ಗ್ರಾಮದಲ್ಲಿ ಈ ಜಮೀನು ಕಾರ್ಯತಂತ್ರದ ನೆಲೆ ಹೊಂದಿದ್ದು, ಸಂಪರ್ಕದ ದೃಷ್ಟಿಯಿಂದ ಅತ್ಯುತ್ತಮ ಸ್ಥಾನದಲ್ಲಿದೆ. ಈ ಭಾಗವು ಸರ್ಜಾಪುರ ರಸ್ತೆ, ಹೊರ ವರ್ತುಲ ರಸ್ತೆ (ORR) ಹಾಗೂ ಎಲೆಕ್ಟ್ರಾನಿಕ್ ಸಿಟಿ ತಂತ್ರಜ್ಞಾನ ಕಾರಿಡಾರ್ ಸೇರಿದಂತೆ ನಗರದ ಪ್ರಮುಖ ಉದ್ಯೋಗ ಕೇಂದ್ರಗಳಿಗೆ ಅತ್ಯುತ್ತಮ ಸಂಪರ್ಕವನ್ನು ಕಲ್ಪಿಸುತ್ತದೆ. ಹೀಗಾಗಿ, ಐಟಿ ವೃತ್ತಿಪರರು ಮತ್ತು ಮನೆ ಖರೀದಿದಾರರಿಗೆ ಈ ಕಾರಿಡಾರ್ ಮೊದಲ ಆದ್ಯತೆಯ ತಾಣವಾಗಿ ಮಾರ್ಪಟ್ಟಿದೆ.&lt;/p&gt;&lt;h2&gt;ಬಂಡವಾಳ ದಕ್ಷತೆಯ 'ಜೆಡಿಎ' (JDA) ಮಾದರಿ&lt;/h2&gt;&lt;p&gt;ಸೋಮವಾರ ನಿಯಂತ್ರಕ ಫೈಲಿಂಗ್&zwnj;ನಲ್ಲಿ ಕಂಪನಿಯು ಈ ವ್ಯವಹಾರದ ವಿವರಗಳನ್ನು ಹಂಚಿಕೊಂಡಿದೆ. ಆದಾಗ್ಯೂ, ಭೂಮಾಲೀಕರ ಹೆಸರು ಅಥವಾ ಒಪ್ಪಂದದ ಆರ್ಥಿಕ ನಿಯಮಗಳನ್ನು ಬಹಿರಂಗಪಡಿಸಿಲ್ಲ.&lt;/p&gt;&lt;p&gt;ಜಂಟಿ ಅಭಿವೃದ್ಧಿ ಒಪ್ಪಂದದ (JDA) ಅಡಿಯಲ್ಲಿ, ರಿಯಲ್ ಎಸ್ಟೇಟ್ ಡೆವಲಪರ್&zwnj;ಗಳು ಭೂಮಿಯನ್ನು ಸಂಪೂರ್ಣವಾಗಿ ಖರೀದಿಸುವ ಬದಲು, ಭೂಮಾಲೀಕರೊಂದಿಗೆ ಆದಾಯ, ಲಾಭ ಅಥವಾ ನಿರ್ಮಾಣಗೊಂಡ ವಸತಿ ಘಟಕಗಳನ್ನು ಹಂಚಿಕೊಳ್ಳುತ್ತಾರೆ. ಈ 'ಆಸ್ತಿ-ಬೆಳಕಿನ' (Asset-Light) ಮಾದರಿಯು ಕಂಪನಿಗೆ ಕಡಿಮೆ ಬಂಡವಾಳ ವೆಚ್ಚದೊಂದಿಗೆ ಹೆಚ್ಚಿನ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.&lt;/p&gt;&lt;h2&gt;FY27 ರ ಮೊದಲ ತ್ರೈಮಾಸಿಕದಲ್ಲೇ ಭಾರಿ ಮುನ್ನಡೆ&lt;/h2&gt;&lt;p&gt;ಈ ಇತ್ತೀಚಿನ ವಹಿವಾಟಿನೊಂದಿಗೆ, ಪ್ರಸಕ್ತ ಹಣಕಾಸು ವರ್ಷದ (FY27) ಮೊದಲ ತ್ರೈಮಾಸಿಕದಲ್ಲಿ (Q1) ಪುರವಂಕರ ಘೋಷಿಸಿದ ಒಟ್ಟು ಸ್ವಾಧೀನಗಳು ಮತ್ತು JDA ಗಳ ಸಂಭಾವ್ಯ ಮೌಲ್ಯ (GDV) ಬರೋಬ್ಬರಿ ₹5,200 ಕೋಟಿಗಳಿಗೆ ಏರಿದೆ.&lt;/p&gt;&lt;p&gt;ಕೇವಲ Q1FY27 ರಲ್ಲೇ ಕಂಪನಿಯು ನಾಲ್ಕು ಪ್ರಮುಖ ಭೂ ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇವೆಲ್ಲವೂ ಒಟ್ಟಾಗಿ ಸುಮಾರು 41.93 ಎಕರೆ ಪ್ರದೇಶವನ್ನು ವ್ಯಾಪಿಸಿದ್ದು, ಸುಮಾರು 4.23 ಮಿಲಿಯನ್ ಚದರ ಅಡಿಯಷ್ಟು ಒಟ್ಟು ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿವೆ. ಇದು ಬೆಂಗಳೂರಿನಲ್ಲಿ ಕಂಪನಿಯ ಬಲಿಷ್ಠ ಪೈಪ್&zwnj;ಲೈನ್ ಅನ್ನು ಸಾಬೀತುಪಡಿಸುತ್ತದೆ.&lt;/p&gt;&lt;h2&gt;ಸಂಸ್ಥೆಯ ನಾಯಕರ ಹೇಳಿಕೆ&lt;/h2&gt;&lt;p&gt;&quot;ಬೆಂಗಳೂರು ನಮ್ಮ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಯಾಗಿದೆ. ಮೂಲಸೌಕರ್ಯ, ಉದ್ಯೋಗ ಸಾಂದ್ರತೆ ಮತ್ತು ಮನೆ ಖರೀದಿದಾರರ ಬೇಡಿಕೆ ಹೆಚ್ಚಿರುವ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಭೂಮಿಯನ್ನು ಪಡೆದುಕೊಳ್ಳುವುದು ನಮ್ಮ ಪ್ರಮುಖ ಗಮನವಾಗಿದೆ. ಈ ಜಂಟಿ ಅಭಿವೃದ್ಧಿಯು ನಮ್ಮ ಪಾಲುದಾರರಿಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸಲಿದೆ.&quot;&lt;/p&gt;&lt;p&gt;&mdash; ಆಶಿಶ್ ಪುರವಂಕರ, ವ್ಯವಸ್ಥಾಪಕ ನಿರ್ದೇಶಕರು, ಪುರವಂಕರ ಲಿಮಿಟೆಡ್&lt;/p&gt;&lt;h2&gt;ಅಪ್ರತಿಮ ಆರ್ಥಿಕ ಚೇತರಿಕೆ ಮತ್ತು ಪ್ರಗತಿ&lt;/h2&gt;&lt;p&gt;ಇತ್ತೀಚಿನ ಆರ್ಥಿಕ ವರದಿಗಳ ಪ್ರಕಾರ, ಪುರವಂಕರ ಕಂಪನಿಯು ಅಸಾಧಾರಣ ಆರ್ಥಿಕ ಚೇತರಿಕೆಯನ್ನು ಪ್ರದರ್ಶಿಸಿದೆ. ಕ್ರೋಢೀಕೃತ ಆಧಾರದ ಮೇಲೆ, ಕಂಪನಿಯು ಮಾರ್ಚ್ 2026 ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ (Q4) ₹113.24 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ (ಮಾರ್ಚ್ 2025 ರ ಕ್ಯೂ4) ಅನುಭವಿಸಿದ್ದ ₹85.82 ಕೋಟಿ ನಿವ್ವಳ ನಷ್ಟಕ್ಕೆ ಹೋಲಿಸಿದರೆ ಭಾರಿ ಸುಧಾರಣೆಯಾಗಿದೆ. ಕಂಪನಿಯ ನಿವ್ವಳ ಮಾರಾಟವು ವಾರ್ಷಿಕವಾಗಿ ಶೇಕಡಾ 177.33 ರಷ್ಟು ಭಾರಿ ಜಿಗಿತ ಕಂಡು, ₹1,501.92 ಕೋಟಿಗೆ ತಲುಪಿದೆ.&lt;/p&gt;&lt;h2&gt;ಪುರವಂಕರ ಸಾಮ್ರಾಜ್ಯದ ವ್ಯಾಪ್ತಿ ಎಷ್ಟಿದೆ?&lt;/h2&gt;&lt;p&gt;ಪುರವಂಕರ ಸಂಸ್ಥೆಯು ಭಾರತದ ಒಂಬತ್ತು ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಯಮತ್ತೂರು, ಮಂಗಳೂರು, ಕೊಚ್ಚಿ, ಮುಂಬೈ, ಪುಣೆ ಮತ್ತು ಗೋವಾಗಳಲ್ಲಿ ವಸತಿ ಹಾಗೂ ವಾಣಿಜ್ಯ ಪೋರ್ಟ್&zwnj;ಫೋಲಿಯೊ ಹೊಂದಿದೆ.&lt;/p&gt;&lt;p&gt;ಪ್ರಸ್ತುತ ಪೂರ್ಣಗೊಂಡ ಯೋಜನೆಗಳು 57 ಮಿಲಿಯನ್ ಚದರ ಅಡಿ ವ್ಯಾಪ್ತಿಯ 95 ಯೋಜನೆಗಳು. ಪ್ರಗತಿಯಲ್ಲಿರುವ ಯೋಜನೆಗಳು 36.69 ಮಿಲಿಯನ್ ಚದರ ಅಡಿ ಒಟ್ಟು ವಿಸ್ತೀರ್ಣ. ದೇಶದ ರಿಯಲ್ ಎಸ್ಟೇಟ್ ವಲಯದಲ್ಲಿ ದೃಢವಾದ ಹೆಜ್ಜೆ ಇಡುತ್ತಿರುವ ಪುರವಂಕರ, ಈ ಹೊಸ ಯೋಜನೆಯ ಮೂಲಕ ಬೆಂಗಳೂರಿನ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/business/puravankara-shares-surge-post-rs1000-crore-sarjapur-housing-project-announcement-in-bengaluru-gdp/articleshow-en0w5v7"/>
        </item>
        <item>
            <title><![CDATA[ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು ಟೆಕ್ಕಿಯ ವೈರಲ್ ಸ್ಟೋರಿ! ಜೀವನ ವೆಚ್ಚವೋ? ಹಣ ನಿರ್ವಹಣೆ ಲೋಪವೋ?]]></title>
            <link>https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s</link>
            <guid isPermaLink="true">https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s</guid>
            <pubDate>Mon, 29 Jun 2026 19:11:37 +0530</pubDate>
            <description><![CDATA[ವಾರ್ಷಿಕ ₹45 ಲಕ್ಷ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಮೆಟ್ರೋ ನಗರಗಳಲ್ಲಿನ 'ಜೀವನಶೈಲಿ ಹಣದುಬ್ಬರ' ಮತ್ತು ಕಳಪೆ ಹಣಕಾಸು ಯೋಜನೆಯ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzpqemb1f2d4a02qcdph83a,imgname-gettyimages-84380314-612x612-1779180485259.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬನ ಸುಮಾರು ಒಂದು ವರ್ಷ ಹಳೆಯದಾದ ಸಂದರ್ಶನದ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ದೇಶಾದ್ಯಂತ &lsquo;ಜೀವನಶೈಲಿ ಹಣದುಬ್ಬರ&rsquo; (Lifestyle Inflation), ಕಳಪೆ ಹಣಕಾಸು ಯೋಜನೆ ಹಾಗೂ ಮೆಟ್ರೋ ನಗರಗಳ ದುಬಾರಿ ಜೀವನದ ಕುರಿತು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;ಮೂಲತಃ ಮ್ಯೂಚುವಲ್ ಫಂಡ್ ಸಲಹೆಗಾರರಾದ ಅಂಶುಮಾನ್ ಶರ್ಮಾ ಅವರು ರೆಕಾರ್ಡ್ ಮಾಡಿದ್ದ ಈ ಹಳೆಯ ಸಂದರ್ಶನವನ್ನು ಇತ್ತೀಚೆಗೆ 'X' (ಟ್ವಿಟರ್) ವೇದಿಕೆಯಲ್ಲಿ ಮರುಹಂಚಿಕೊಳ್ಳಲಾಗಿದೆ. ವಾರ್ಷಿಕವಾಗಿ ಬರೊಬ್ಬರಿ ₹45 ಲಕ್ಷ ಗಳಿಸುತ್ತಿದ್ದರೂ, ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಬಿಡಿ 1 ರೂಪಾಯಿಯೂ ಅಕೌಂಟ್&zwnj; ಇರುವುದಿಲ್ಲ ಎಂದು ಐಟಿ ಉದ್ಯೋಗಿ ಬಿಚ್ಚಿಟ್ಟ ಸತ್ಯ, ಈಗ ಸಾವಿರಾರು ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಇದು ಭಾರತದ ಸಿಲಿಕಾನ್ ಸಿಟಿಯಲ್ಲಿ ಉದ್ಯೋಗಿಗಳನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆಯನ್ನು ಮುಂಚೂಣಿಗೆ ತಂದಿದೆ. ಹೆಚ್ಚಿನ ಸಂಬಳ ನಿಜಕ್ಕೂ ಸಾಕಾಗುತ್ತಿದೆಯೇ? ಅಥವಾ ನಮ್ಮ ಮಿತಿಮೀರಿದ ಆಸೆಗಳು ನಮ್ಮ ಆದಾಯವನ್ನು ಸದ್ದಿಲ್ಲದೆ ನುಂಗಿ ಹಾಕುತ್ತಿವೆಯೇ?&lt;/p&gt;&lt;p&gt;ಸಂದರ್ಶನದಲ್ಲಿ ತಮ್ಮನ್ನು &lsquo;ಸೂರ್ಯ&rsquo; ಎಂದು ಗುರುತಿಸಿಕೊಂಡಿರುವ ಈ ಸಾಫ್ಟ್&zwnj;ವೇರ್ ವೃತ್ತಿಪರರು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಸದ್ಯ ಸಾಫ್ಟ್&zwnj;ವೇರ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರ ವಾರ್ಷಿಕ ಪ್ಯಾಕೇಜ್ ₹45 ಲಕ್ಷ ರೂಪಾಯಿಗಳು. ಎಲ್ಲಾ ತೆರಿಗೆಗಳು ಕಡಿತಗೊಂಡ ನಂತರ ಇವರ ಕೈಗೆ ಸಿಗುವ ಮಾಸಿಕ ನಿವ್ವಳ ಸಂಬಳ (Take-home salary) ಸುಮಾರು ₹2.45 ಲಕ್ಷ.&lt;/p&gt;&lt;p&gt;ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಇದು ಅತ್ಯಂತ ದೊಡ್ಡ ಮೊತ್ತದ ಆದಾಯವಾಗಿ ಕಂಡರೂ, ತಮಗೆ ಉಳಿತಾಯ ಮಾಡುವುದು ನಿರಂತರವಾಗಿ ಕಷ್ಟವಾಗುತ್ತಿದೆ ಎಂದು ಸೂರ್ಯ ಹೇಳಿದ್ದಾರೆ. ಈಗ ನಾನು ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ, ತಿಂಗಳ ಕೊನೆಯಲ್ಲಿ ನನ್ನ ಹಣ ಎಲ್ಲಿಗೆ ಮಾಯವಾಗುತ್ತದೆ ಎಂದೇ ತಿಳಿಯುತ್ತಿಲ್ಲ. ಸಾಮಾನ್ಯವಾಗಿ ತಿಂಗಳ ಕೊನೆಗೆ ನನ್ನ ಬ್ಯಾಂಕ್ ಖಾತೆಯಲ್ಲಿ ಏನೂ ಉಳಿದಿರುವುದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮದುವೆಯಾಗಿ ತಂದೆಯಾದ ನಂತರ ತಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಜವಾಬ್ದಾರಿಗಳು ಸಂಪೂರ್ಣವಾಗಿ ಬದಲಾದವು ಎಂದು ವಿವರಿಸಿದ್ದಾರೆ.&lt;/p&gt;&lt;h2&gt;ಗೃಹ ಸಾಲ, ಶಾಲಾ ಶುಲ್ಕ ಮತ್ತು ಐಷಾರಾಮಿ ಜೀವನದ ವೆಚ್ಚಗಳು&lt;/h2&gt;&lt;p&gt;ತಮ್ಮ ಮಾಸಿಕ ಖರ್ಚುಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸೂರ್ಯ, ತಮ್ಮ ಆದಾಯದ ಬಹುಪಾಲು ಹಣ ಹೋಮ್ ಲೋನ್ (ಗೃಹ ಸಾಲ) ಇಎಂಐ ಪಾವತಿಸಲು ಬಳಕೆಯಾಗುತ್ತದೆ ಎಂದು ಹೇಳಿದ್ದಾರೆ. ಅವರ ಮಾಸಿಕ ವೆಚ್ಚಗಳ ವಿವರ ಹೀಗಿದೆ:&lt;/p&gt;&lt;ul&gt; &lt;li&gt;ಗೃಹ ಸಾಲದ ಇಎಂಐ (Home Loan EMI): ₹63,000 (ಇದು ಅವರ ಒಟ್ಟು ಆದಾಯದ ಶೇ. 30 ಕ್ಕಿಂತ ಕಡಿಮೆ ಇರುವುದರಿಂದ, ಆರ್ಥಿಕ ತಜ್ಞರ ಪ್ರಕಾರ ಇದು ಸಮಂಜಸವಾದ ಮಿತಿಯಲ್ಲೇ ಇದೆ).&lt;/li&gt; &lt;li&gt;3.5 ವರ್ಷದ ಮಗನ ಶಾಲಾ ಶುಲ್ಕ ತಿಂಗಳಿಗೆ: ₹11,000&lt;/li&gt; &lt;li&gt;ಆಹಾರ ಮತ್ತು ದಿನಸಿ ಸಾಮಗ್ರಿಗಳು: ₹12,000&lt;/li&gt; &lt;li&gt;ಇತರ ಅನಿವಾರ್ಯ ವೆಚ್ಚಗಳು: ₹20,000&lt;/li&gt; &lt;li&gt;ಶಾಪಿಂಗ್, ಪ್ರವಾಸ ಮತ್ತು ರೆಸ್ಟೋರೆಂಟ್ ಊಟ: ₹32,000&lt;/li&gt;&lt;/ul&gt;&lt;p&gt;ಇಲ್ಲಿ ಮನೆ ಮತ್ತು ಮಗನ ಶಿಕ್ಷಣದ ವೆಚ್ಚಗಳ ಬಗ್ಗೆ ಯಾರಿಗೂ ಆಕ್ಷೇಪವಿಲ್ಲದಿದ್ದರೂ, ಕೇವಲ ಹೋಟೆಲ್ ಊಟ, ಶಾಪಿಂಗ್ ಹಾಗೂ ಪ್ರವಾಸದಂತಹ ಐಷಾರಾಮಿ ಹವ್ಯಾಸಗಳಿಗೆ ಪ್ರತಿ ತಿಂಗಳು ಖರ್ಚು ಮಾಡುತ್ತಿರುವ ₹32,000 ಹಣವೇ ಈಗ ಇಂಟರ್ನೆಟ್&zwnj;ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯ ವಿಷಯವಾಗಿದೆ.&lt;/p&gt;&lt;h2&gt;ಹಣಕಾಸು ನಿರ್ವಹಣೆಯ ಲೋಪವೇ? ಅಥವಾ ಹಣದುಬ್ಬರದ ಹೊಡೆತವೇ?&lt;/h2&gt;&lt;p&gt;ಅನಾಮಧೇಯ ಎಕ್ಸ್ (X) ಖಾತೆಯೊಂದು ಈ ವಿಡಿಯೋವನ್ನು ಮರುಪೋಸ್ಟ್ ಮಾಡಿ, ಇದು ದೇಶದ ಹಣದುಬ್ಬರದ ಸಮಸ್ಯೆಯಲ್ಲ, ಬದಲಿಗೆ ಕಳಪೆ ಹಣಕಾಸು ಯೋಜನೆಯ (Poor Financial Planning) ಜೀವಂತ ಉದಾಹರಣೆ ಎಂದು ಅಭಿಪ್ರಾಯಪಟ್ಟಿದೆ. ಸೂರ್ಯ ಅವರ ಬೃಹತ್ ಆದಾಯದ ಜೊತೆಗೆ ಅವರ ದುಂದುವೆಚ್ಚಗಳನ್ನು ಗಮನಿಸಿದರೆ, ಭಾರತೀಯರು ಎದುರಿಸುತ್ತಿರುವುದು ಆರ್ಥಿಕ ದುರುಪಯೋಗದ ಸಮಸ್ಯೆಯೇ ಹೊರತು ವಾತಾವರಣದ ಹಣದುಬ್ಬರವಲ್ಲ ಎಂದು ಪೋಸ್ಟರ್&zwnj;ನಲ್ಲಿ ಟೀಕಿಸಲಾಗಿದೆ. ಅವರು ಸರಿಯಾದ ಬಜೆಟ್ ರೂಪಿಸಿಕೊಂಡರೆ ದೊಡ್ಡ ಮೊತ್ತವನ್ನು ಉಳಿಸಬಹುದು ಎಂದು ಸಲಹೆ ನೀಡಲಾಗಿದೆ.&lt;/p&gt;&lt;p&gt;ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ. ಅನೇಕರು ಈ ವಾದವನ್ನು ಒಪ್ಪಿಕೊಂಡಿದ್ದು, ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ಖರ್ಚುಗಳು ಸಮಾಂತರವಾಗಿ ಹೆಚ್ಚಾಗುತ್ತವೆ, ಹಾಗಾಗಿ ಎಷ್ಟು ಸಂಬಳ ಬಂದರೂ ಸಾಲುವುದಿಲ್ಲ ಎಂದಿದ್ದಾರೆ.&lt;/p&gt;&lt;p&gt;ಮತ್ತೊಂದೆಡೆ, ಹಲವರು ಐಟಿ ಉದ್ಯೋಗಿಯ ಬೆಂಬಲಕ್ಕೆ ನಿಂತಿದ್ದಾರೆ. ದುಡಿದ ಹಣದಲ್ಲಿ ಕುಟುಂಬದೊಂದಿಗೆ ಆರಾಮದಾಯಕವಾಗಿ ಬದುಕುವುದು ಮತ್ತು ಒಳ್ಳೆಯ ನೆನಪುಗಳಿಗಾಗಿ ಖರ್ಚು ಮಾಡುವುದನ್ನು ಕಳಪೆ ಆರ್ಥಿಕ ನಿರ್ವಹಣೆ ಎಂದು ಕರೆಯಲು ಸಾಧ್ಯವಿಲ್ಲ. ಸೂರ್ಯ ಅವರು ಮಗನ ಭವಿಷ್ಯಕ್ಕಾಗಿ ಹಾಗೂ ವಸತಿಗಾಗಿ ಈಗಾಗಲೇ ದೊಡ್ಡ ಹೂಡಿಕೆ (EMI) ಮಾಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;h2&gt;ಬೃಹತ್ ಸಂಬಳ ಮತ್ತು ಆಧುನಿಕ ನಗರದ ಆರ್ಥಿಕ ಬಿಕ್ಕಟ್ಟು&lt;/h2&gt;&lt;p&gt;ಈ ಚರ್ಚೆಯು ಕೇವಲ ಒಬ್ಬ ವ್ಯಕ್ತಿಯ ಮಾಸಿಕ ಬಜೆಟ್&zwnj;ಗೆ ಸೀಮಿತವಾಗಿಲ್ಲ. ಇದು ಇಂದಿನ ಮಹಾನಗರಗಳಲ್ಲಿ ವಾಸಿಸುತ್ತಿರುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರ ಹೊಸ ಅರ್ಥಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ನಗರಗಳಲ್ಲಿ ಆದಾಯ ಹೆಚ್ಚಾದಂತೆಲ್ಲಾ ಜೀವನದ ಗುಣಮಟ್ಟ ಮತ್ತು ವೆಚ್ಚಗಳೂ ಅಷ್ಟೇ ವೇಗವಾಗಿ ಹೆಚ್ಚಾಗುತ್ತಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s"/>
        </item>
        <item>
            <title><![CDATA[Illegal Foreign Migrants: ರಾಜ್ಯದಲ್ಲಿ 13,675 ಅಕ್ರಮ ವಿದೇಶಿ ವಲಸಿಗರ ಪತ್ತೆ: ಬೆಂಗಳೂರಲ್ಲೇ 10,650! ಗೃಹ ಸಚಿವರೇ ಕ್ರಮ ಯಾವಾಗ?]]></title>
            <link>https://kannada.asianetnews.com/state/karnataka-identifies-13-675-illegal-foreign-migrants-bengaluru-tops-the-list-with-over-10-650-cases/articleshow-gsg5yvr</link>
            <guid isPermaLink="true">https://kannada.asianetnews.com/state/karnataka-identifies-13-675-illegal-foreign-migrants-bengaluru-tops-the-list-with-over-10-650-cases/articleshow-gsg5yvr</guid>
            <pubDate>Sun, 28 Jun 2026 08:15:03 +0530</pubDate>
            <description><![CDATA[ರಾಜ್ಯದಲ್ಲಿ ಒಟ್ಟು 13,675 ಅಕ್ರಮ ವಿದೇಶಿ ವಲಸಿಗರು ಇರುವುದನ್ನು ಪತ್ತೆಹಚ್ಚಲಾಗಿದ್ದು, ಅವರಲ್ಲಿ 10,650 ಮಂದಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಈ ಆತಂಕಕಾರಿ ಸಂಖ್ಯೆಯ ಹೊರತಾಗಿಯೂ, ಅವರನ್ನು ಗಡಿಪಾರು ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಕಳವಳವನ್ನು ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw61t4xtvgdc6qykdgdtj3w7,imgname----------------------47--1782614660026.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.28)&lt;/strong&gt;: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರ ಸಂಖ್ಯೆ ಗಾಬರಿ ಹುಟ್ಟಿಸುತ್ತದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಒಟ್ಟು 13,675 ಅಕ್ರಮ ವಿದೇಶಿ ವಲಸಿಗರು ಇರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಬೆಂಗಳೂರಿನಲ್ಲೇ ನೆಲೆಸಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;ರಾಜಧಾನಿ ಬೆಂಗಳೂರೊಂದರಲ್ಲೇ ಬರೋಬ್ಬರಿ 10,650 ಮಂದಿ ಅಕ್ರಮ ವಿದೇಶಿ ವಲಸಿಗರು ನೆಲೆಸಿರುವುದು ಆತಂಕಪಡುವ ವಿಚಾರ. ಇನ್ನು ಉಳಿದ ಜಿಲ್ಲೆಗಳಲ್ಲಿಯೂ ನೂರಾರು ಮಂದಿ ಪತ್ತೆಯಾಗಿದ್ದಾರೆ. ಜಿಲ್ಲಾವಾರು ಪಟ್ಟಿಯೇನೋ ಸಿದ್ಧವಾಗಿದೆ ಆದರೆ ಶಿಫ್ಟಿಂಗ್ ಯಾವಾಗ? ವಿದೇಶಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಬೀಳುವುದು ಯಾವಾಗ? ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ವಲಸಿಗರ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ? ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದರೂ ಗಡಿಪಾರು ಮಾಡಲು ಯಾಕೆ ವಿಳಂಬ? ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಹತ್ತು ಸಾವಿರ ಅಕ್ರಮ ವಿದೇಶಿಗರು ನೆಲೆಸಿದ್ದಾರೆ ಎಂದರೆ ಆತಂಕ ಪಡುವ ವಿಚಾರವಲ್ಲವೇ? ಸಾರ್ವಜನಿಕರ ಎಲ್ಲ ಪ್ರಶ್ನೆ, ಆತಂಕಗಳಿಗೆ ಉತ್ತರ ಬೇಕಿದೆ. ಅಕ್ರಮ ವಿದೇಶಿ ವಲಸಿಗರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;&lt;strong&gt;ವಿದೇಶಿ ಅಕ್ರಮ ವಲಸಿಗರ ಜಿಲ್ಲಾವಾರು ಮಾಹಿತಿ :&lt;/strong&gt;&lt;/p&gt;&lt;p&gt;ಬೆಂಗಳೂರು : 10,650&lt;/p&gt;&lt;p&gt;ಬೆಳಗಾವಿ : 458&lt;/p&gt;&lt;p&gt;ಬಳ್ಳಾರಿ : 53&lt;/p&gt;&lt;p&gt;ಚಾಮರಾಜನಗರ : 03&lt;/p&gt;&lt;p&gt;ಚಿಕ್ಕಬಳ್ಳಾಪುರ : 38&lt;/p&gt;&lt;p&gt;ಚಿತ್ರದುರ್ಗ : 08&lt;/p&gt;&lt;p&gt;ದಕ್ಷಿಣ ಕನ್ನಡ : 268&lt;/p&gt;&lt;p&gt;ದಾವಣಗೆರೆ : 20&lt;/p&gt;&lt;p&gt;ಧಾರವಾಡ : 10&lt;/p&gt;&lt;p&gt;ಹಾಸನ : 05&lt;/p&gt;&lt;p&gt;ಹುಬ್ಬಳ್ಳಿ/ಧಾರವಾಡ : 35&lt;/p&gt;&lt;p&gt;ಕಲಬುರಗಿ : 09&lt;/p&gt;&lt;p&gt;ಕೋಲಾರ : 13&lt;/p&gt;&lt;p&gt;ಕೊಡಗು : 10&lt;/p&gt;&lt;p&gt;ಕೊಪ್ಪಳ : 10&lt;/p&gt;&lt;p&gt;ಮಂಡ್ಯ : 37&lt;/p&gt;&lt;p&gt;ಮೈಸೂರು : 810&lt;/p&gt;&lt;p&gt;ರಾಯಚೂರು : 19&lt;/p&gt;&lt;p&gt;ರಾಮನಗರ : 191&lt;/p&gt;&lt;p&gt;ಶಿವಮೊಗ್ಗ : 21&lt;/p&gt;&lt;p&gt;ತುಮಕೂರು : 40&lt;/p&gt;&lt;p&gt;ಉಡುಪಿ : 458&lt;/p&gt;&lt;p&gt;ಉತ್ತರ ಕನ್ನಡ : 496&lt;/p&gt;&lt;p&gt;ವಿಜಯಪುರ : 03&lt;/p&gt;&lt;p&gt;ವಿಜಯನಗರ : 08&lt;/p&gt;&lt;p&gt;&lt;strong&gt;ಒಟ್ಟು : 13,675&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/karnataka-identifies-13-675-illegal-foreign-migrants-bengaluru-tops-the-list-with-over-10-650-cases/articleshow-gsg5yvr"/>
        </item>
        <item>
            <title><![CDATA[Bengaluru: ನಗರದ ಮೊದಲ ಟನಲ್‌ ರಸ್ತೆಗೆ ಇಂದು ಸಿಎಂ ಶಂಕು, ಎಲ್ಲಿಂದ ಎಲ್ಲಿವರೆಗೆ? ಟ್ರಾಫಿಕ್ ಸಮಸ್ಯೆಗೆ ಸಿಗುತ್ತಾ ಶಾಶ್ವತ ಪರಿಹಾರ?]]></title>
            <link>https://kannada.asianetnews.com/gallery/state/bengaluru-s-first-tunnel-road-project-launched-today-cm-to-lay-foundation-stone-check-route-and-benefits-rav-pasf77o</link>
            <guid isPermaLink="true">https://kannada.asianetnews.com/gallery/state/bengaluru-s-first-tunnel-road-project-launched-today-cm-to-lay-foundation-stone-check-route-and-benefits-rav-pasf77o</guid>
            <pubDate>Sun, 28 Jun 2026 07:22:57 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ, ನಗರದ ಮೊಟ್ಟ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(DK Shivakumar) ಅವರು ಭಾನುವಾರ ಬೆಳಗ್ಗೆ ಹೆಬ್ಬಾಳ ಜಂಕ್ಷನ್&zwnj;(Hebbal Junction) ಬಳಿ ಭೂಮಿಪೂಜೆ ನೆರವೇರಿಸಲಿದ್ದಾರೆ&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv0j92bb5fdz64c7w03gcta5,imgname-dk-shivakumar-orders-officials-1781356857707.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ, ನಗರದ ಮೊಟ್ಟ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(DK Shivakumar) ಅವರು ಭಾನುವಾರ ಬೆಳಗ್ಗೆ ಹೆಬ್ಬಾಳ ಜಂಕ್ಷನ್&zwnj;(Hebbal Junction) ಬಳಿ ಭೂಮಿಪೂಜೆ ನೆರವೇರಿಸಲಿದ್ದಾರೆ&amp;nbsp;&lt;/p&gt;&lt;img&gt;&lt;p&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ, ನಗರದ ಮೊಟ್ಟ ಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್(DK Shivakumar) ಅವರು ಭಾನುವಾರ ಬೆಳಗ್ಗೆ ಹೆಬ್ಬಾಳ ಜಂಕ್ಷನ್&zwnj;(Hebbal Junction) ಬಳಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಖ್ರಿ ವೃತ್ತದಿಂದ ಹೆಬ್ಬಾಳ ಜಂಕ್ಷನ್&zwnj;ವರೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಇದರಿಂದ ವಿಮಾನ ನಿಲ್ದಾಣ ಸೇರಿದಂತೆ ಇತರೆಡೆಗೆ ಹೋಗುವುದು ಕಷ್ಟವಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸುರಂಗ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ. ಹೆಬ್ಬಾಳ ಜಂಕ್ಷನ್&zwnj;ನಿಂದ ಕೃಷಿ ವಿಶ್ವವಿದ್ಯಾಲಯ ವಸತಿಗೃಹವರೆಗೆ ನಿರ್ಮಾಣವಾಗುವ ಮೂರು ಪಥಗಳ ಸುರಂಗ ರಸ್ತೆಯು 2.28 ಕಿ.ಮೀ ಉದ್ದವಿದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಸುಮಾರು 60 ಅಡಿ ಆಳದಲ್ಲಿ ನಿರ್ಮಾಣವಾಗುವ ಸುರಂಗ ರಸ್ತೆಯ ತಲಾ ಒಂದು ಮಾರ್ಗ 3.5 ಮೀಟರ್ ಅಗಲವಿರಲಿದೆ. ಒಟ್ಟು 1,139 ಕೋಟಿ ರು. ವೆಚ್ಚದ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಯೋಜನೆಗೆ ಯಾವುದೇ ಖಾಸಗಿ ಜಾಗ ಬಳಕೆಯಾಗುವುದಿಲ್ಲ ಎಂದು ಸಚಿವರು ವಿವರಿಸಿದರು.&lt;/p&gt;&lt;img&gt;&lt;p&gt;ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ವಿರೋಧ ಮಾಡಲೆಂದೇ ವಿರೋಧ ಪಕ್ಷದವರು ವಿರೋಧಿಸುತ್ತಾರೆ. ಆದರೆ, ಲಕ್ಷಾಂತರ ಜನರ ಉಪಯೋಗಕ್ಕಾಗಿ ಈ ಯೋಜನೆ ಜಾರಿಗೆ ತರುತ್ತಿದ್ದೇವೆ ಎಂದು ಸಚಿವ ಸುರೇಶ್ ತಿಳಿಸಿದರು.&lt;/p&gt;&lt;img&gt;&lt;p&gt;&amp;nbsp;ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾಗುತ್ತಿವೆ. ಎಲ್ಲ ಸಾರಿಗೆ ನಿಗಮಗಳಿಗೆ ಸುಮಾರು 5 ಸಾವಿರ ಕೋಟಿ ರು. ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಾಮಾನ್ಯರಿಗೆ ಹೊರೆಯಾಗದಂತೆ ಬಸ್ ಪ್ರಯಾಣ ದರ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಆದರೆ, ಸರ್ಕಾರಕ್ಕೆ ಇಲಾಖೆಯಿಂದ ಇದುವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಮುಂದಿನ ಸಂಪುಟ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾವನೆ ಮಂಡಿಸಲಾಗುತ್ತದೆ. ಮುಖ್ಯಮಂತ್ರಿಗಳು ಮತ್ತು ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/bengaluru-s-first-tunnel-road-project-launched-today-cm-to-lay-foundation-stone-check-route-and-benefits-rav-pasf77o"/>
        </item>
        <item>
            <title><![CDATA[ರಸ್ತೆ ಅಪಘಾತ ಅತೀ ಹೆಚ್ಚು ಸಂಭವಿಸುತ್ತಿರುವುದರಲ್ಲಿ ಬೆಂಗಳೂರಿಗೆ ದೇಶದಲ್ಲೇ 2ನೇ ಸ್ಥಾನ!]]></title>
            <link>https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze</link>
            <guid isPermaLink="true">https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze</guid>
            <pubDate>Mon, 29 Jun 2026 21:41:33 +0530</pubDate>
            <description><![CDATA[ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 'ಭಾರತದಲ್ಲಿ ರಸ್ತೆ ಅಪಘಾತಗಳು 2024' ವರದಿಯ ಪ್ರಕಾರ, ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಅತಿ ವೇಗದ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khamczgq1phgwa0g6jhpng8s,imgname-hoskote-accident-car-and-canter-photos--2--1770957209111.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜಧಾನಿ ಬೆಂಗಳೂರು ರಸ್ತೆ ಸುರಕ್ಷತೆಯ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಕಳವಳಕಾರಿ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ &lsquo;ಭಾರತದಲ್ಲಿ ರಸ್ತೆ ಅಪಘಾತಗಳು 2024&rsquo; ವರದಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು &amp;nbsp;ಎರಡನೇ ಸ್ಥಾನದಲ್ಲಿದೆ. ಈ ಕಪ್ಪು ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿಯು 5,657 ಅಪಘಾತಗಳು ಮತ್ತು 1,551 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶದ ಜಬಲ್&zwnj;ಪುರವು 3,928 ಅಪಘಾತಗಳು ಹಾಗೂ 589 ಸಾವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 2023ರ ಅಂಕಿ-ಅಂಶಗಳಿಗೆ ಹೋಲಿಸಿದರೆ 2024ರಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದ್ದರೂ, ದೀರ್ಘಾವಧಿಯ ಅಂಕಿ-ಅಂಶಗಳು ಮಾತ್ರ ತೀವ್ರ ಆತಂಕವನ್ನು ಮೂಡಿಸುತ್ತಿವೆ.&lt;/p&gt;&lt;h2&gt;ಬೆಂಗಳೂರಿನ ಸ್ಥಿತಿಗತಿ ಮತ್ತು ದೀರ್ಘಾವಧಿಯ ಕಳವಳಕಾರಿ ಪ್ರವೃತ್ತಿ&lt;/h2&gt;&lt;p&gt;ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಪಘಾತಗಳು ಹಾಗೂ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 4.1 ರಷ್ಟು ಪ್ರಗತಿ ಕಂಡುಬಂದಿದೆ. ಅಂದರೆ 2023 ರಲ್ಲಿ ಬೆಂಗಳೂರಿನಲ್ಲಿ 4,974 ಅಪಘಾತಗಳು ಮತ್ತು 915 ಸಾವುಗಳು ದಾಖಲಾಗಿದ್ದರೆ, 2024 ರಲ್ಲಿ ಒಟ್ಟು 4,769 ರಸ್ತೆ ಅಪಘಾತಗಳು ಸಂಭವಿಸಿದ್ದು, 894 ಸಾವುಗಳು ಮತ್ತು 4,022 ಗಾಯಗಳಾಗಿವೆ. ಇದು 205 ಅಪಘಾತಗಳ ಇಳಿಕೆಯನ್ನು ತೋರಿಸುತ್ತದೆ. ಪ್ರಸ್ತುತ ವರ್ಷದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಕಳೆದ ನಾಲ್ಕು ವರ್ಷಗಳ ಒಟ್ಟಾರೆ ಪ್ರವೃತ್ತಿಯನ್ನು ಗಮನಿಸಿದರೆ ಅಪಘಾತಗಳ ಪ್ರಮಾಣ ತೀವ್ರವಾಗಿ ಏರಿದೆ. 2020 ರ ಸಾಲಿನಲ್ಲಿ ಕೇವಲ 3,233 ರಷ್ಟಿದ್ದ ರಸ್ತೆ ಅಪಘಾತಗಳ ಸಂಖ್ಯೆ, ಪ್ರಸ್ತುತ ವರ್ಷದ ವೇಳೆಗೆ ಬರೊಬ್ಬರಿ 4,769 ಕ್ಕೆ ತಲುಪಿರುವುದು ನಗರದ ಸಂಚಾರ ಸುರಕ್ಷತೆಯನ್ನು ಗಂಭೀರ ಪ್ರಶ್ನೆಯಾಗಿಸಿದೆ.&lt;/p&gt;&lt;h2&gt;ಅತಿ ವೇಗದ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ&lt;/h2&gt;&lt;p&gt;ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರ ಅತಿ ವೇಗದ ಚಾಲನೆಯೇ ಅತಿ ದೊಡ್ಡ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಅತಿ ವೇಗದ ಚಾಲನೆಗೆ ಸಂಬಂಧಿಸಿದ ಅಪಘಾತಗಳ ವಿಭಾಗದಲ್ಲಿ ಬೆಂಗಳೂರು ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಗರದಲ್ಲಿ ಕೇವಲ ಅತಿ ವೇಗದಿಂದಾಗಿ 4,290 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 776 ಜನರು ಜೀವ ಕಳೆದುಕೊಂಡಿದ್ದಾರೆ ಮತ್ತು 3,609 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಿಭಾಗದಲ್ಲಿ ಜಬಲ್&zwnj;ಪುರ ನಗರವು 3,878 ಅಪಘಾತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.&lt;/p&gt;&lt;h2&gt;ರಸ್ತೆಯ ವಿನ್ಯಾಸ ಮತ್ತು ಅಪಘಾತಗಳ ವರ್ಗೀಕರಣ&lt;/h2&gt;&lt;p&gt;ನಗರದ ರಸ್ತೆಗಳ ಸ್ಥಿತಿಗತಿ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಅಪಘಾತಗಳು ಸಂಭವಿಸುತ್ತಿರುವ ರೀತಿ ವಿಭಿನ್ನವಾಗಿದೆ. ಅಚ್ಚರಿಯೆಂದರೆ, ತಿರುವುಗಳಿಗಿಂತ ನೇರ ಮತ್ತು ಉತ್ತಮವಾಗಿರುವ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ಜರುಗಿವೆ. ನಗರದ ನೇರ ರಸ್ತೆಗಳಲ್ಲಿ ಒಟ್ಟು 4,161 ಅಪಘಾತಗಳು ಸಂಭವಿಸಿದ್ದು, 766 ಸಾವುಗಳು ಹಾಗೂ 3,463 ಗಾಯಗಳು ದಾಖಲಾಗಿವೆ. ಅದೇ ರೀತಿ ವಕ್ರ ಅಥವಾ ಕಡಿದಾದ ತಿರುವುಗಳಿರುವ ರಸ್ತೆಗಳಲ್ಲಿ 415 ಅಪಘಾತಗಳು ಸಂಭವಿಸಿದ್ದು, 87 ಜನರು ಮೃತಪಟ್ಟಿದ್ದಾರೆ. ಇನ್ನು ರಸ್ತೆ ಗುಂಡಿಗಳಿಂದ ಅಧಿಕೃತ ವರದಿಯ ಪ್ರಕಾರ ಕೇವಲ 2 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿ ಅಥವಾ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಬಳಿ 21 ಅಪಘಾತಗಳು ಸಂಭವಿಸಿದ್ದು, 6 ಸಾವುಗಳು ಹಾಗೂ 30 ಗಾಯಗಳಾಗಿವೆ.&lt;/p&gt;&lt;h2&gt;ಹವಾಮಾನದ ಪ್ರಭಾವ ಮತ್ತು ಶುಭ್ರ ಆಕಾಶವಿದ್ದಾಗ ಸಂಭವಿಸುವ ದುರಂತಗಳು&lt;/h2&gt;&lt;p&gt;ಸಾಮಾನ್ಯವಾಗಿ ಮಳೆ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಬೆಂಗಳೂರಿನಲ್ಲಿ ಇದರ ಉಲ್ಟಾ ವಾಸ್ತವ ಬಯಲಾಗಿದೆ. ಹಗಲು ಮತ್ತು ಬಿಸಿಲಿರುವ ಶುಭ್ರ ವಾತಾವರಣದಲ್ಲೇ ಅತಿ ಹೆಚ್ಚು ಅಂದರೆ 4,213 ಅಪಘಾತಗಳು ಸಂಭವಿಸಿದ್ದು, 755 ಸಾವುಗಳು ಸಂಭವಿಸಿವೆ. ರಸ್ತೆಗಳು ಖಾಲಿ ಇರುವುದು ಮತ್ತು ಚಾಲನೆಗೆ ಸೂಕ್ತ ವಾತಾವರಣ ಇರುವುದೇ ಸವಾರರ ಅತಿ ವೇಗಕ್ಕೆ ಪ್ರೇರಣೆಯಾಗುತ್ತಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇನ್ನುಳಿದಂತೆ ಮಂಜು ಮತ್ತು ಮಂಜಿನ ಪರಿಸ್ಥಿತಿಗಳು 375 ಅಪಘಾತಗಳಿಗೆ ಕಾರಣವಾಗಿದ್ದು, 97 ಸಾವುಗಳು ಮತ್ತು 355 ಗಾಯಗಳಾಗಿವೆ. ಮಳೆಯ ವಾತಾವರಣದಲ್ಲಿ 144 ಅಪಘಾತಗಳು ಸಂಭವಿಸಿದ್ದು, 32 ಸಾವುಗಳು ವರದಿಯಾಗಿವೆ.&lt;/p&gt;&lt;h2&gt;ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳೇ ಪ್ರಮುಖ ಬಲಿಪಶುಗಳು&lt;/h2&gt;&lt;p&gt;ನಗರದ ಒಟ್ಟು ಅಪಘಾತಗಳಲ್ಲಿ ಬೈಕ್ ಸವಾರರು ಮತ್ತು ಪಾದಚಾರಿಗಳದ್ದೇ ಸಿಂಹಪಾಲಾಗಿದೆ. ಅತಿ ಹೆಚ್ಚು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳು ಭಾಗಿಯಾಗಿದ್ದು, 2,175 ಅಪಘಾತಗಳಲ್ಲಿ 467 ಸಾವುಗಳು ಮತ್ತು 2,091 ಗಾಯಗಳು ಸಂಭವಿಸಿವೆ. ಪಾದಚಾರಿ ಅಪಘಾತಗಳ ಸಂಖ್ಯೆ 216 ಆಗಿದ್ದರೂ, ಸಾವಿನ ಸಂಖ್ಯೆ ಮಾತ್ರ ಅಸಮಾನವಾಗಿ ಅತಿ ಹೆಚ್ಚಿದೆ. ವಾಹನಗಳ ಡಿಕ್ಕಿಯಿಂದಾಗಿ ಬರೊಬ್ಬರಿ 241 ಪಾದಚಾರಿಗಳು ಸಾವನ್ನಪ್ಪಿದ್ದಾರೆ ಮತ್ತು 1,039 ಜನರು ಗಾಯಗೊಂಡಿದ್ದಾರೆ. ಬೈಸಿಕಲ್ ಸಂಬಂಧಿತ ಅಪಘಾತಗಳು 47 ಆಗಿದ್ದು, 13 ಸಾವುಗಳು ಮತ್ತು 36 ಗಾಯಗಳಾಗಿವೆ. ಇದರೊಂದಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ನಗರದಲ್ಲಿ ಒಟ್ಟು 129 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟು, 83 ಜನರು ಗಾಯಗೊಂಡಿದ್ದಾರೆ.&lt;/p&gt;&lt;h2&gt;ಒಟ್ಟಾರೆ ಭಾರತದ ಚಿತ್ರಣ ಮತ್ತು ಮಹಾನಗರಗಳ ಪಾಲು&lt;/h2&gt;&lt;p&gt;ಭಾರತದಾದ್ಯಂತ ಪೊಲೀಸ್ ಇಲಾಖೆಗಳು ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 4,87,707 ರಸ್ತೆ ಅಪಘಾತಗಳು ವರದಿಯಾಗಿದ್ದು, 1,77,175 ಜನರು ಸಾವನ್ನಪ್ಪಿದ್ದಾರೆ ಮತ್ತು 4,71,441 ಜನರು ಗಾಯಗೊಂಡಿದ್ದಾರೆ. ವಿಶೇಷವೆಂದರೆ, ದೇಶದ ಒಟ್ಟು ಅಪಘಾತಗಳ ಪೈಕಿ ಶೇಕಡಾ 46.34 ರಷ್ಟು ಬೃಹತ್ ಪ್ರಮಾಣದ ಅಪಘಾತಗಳು ಕೇವಲ 10 ಪ್ರಮುಖ ಮಿಲಿಯನ್ ಪ್ಲಸ್ ಅಥವಾ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲೇ ಸಂಭವಿಸುತ್ತಿವೆ. ಈ ಪಟ್ಟಿಯಲ್ಲಿ ದೆಹಲಿ, ಬೆಂಗಳೂರು, ಜಬಲ್ಪುರ, ಹೈದರಾಬಾದ್, ಚೆನ್ನೈ, ಇಂದೋರ್, ಮಲಪ್ಪುರಂ, ಕೊಚ್ಚಿ, ಜೈಪುರ ಮತ್ತು ಭೋಪಾಲ್ ನಗರಗಳು ಸೇರಿವೆ. ಈ ಅಂಕಿ-ಅಂಶಗಳು ಬೆಂಗಳೂರಿನಲ್ಲಿ ತುರ್ತಾಗಿ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಜಾಗೃತಿಯ ಅಗತ್ಯತೆಯನ್ನು ಎತ್ತಿ ತೋರಿಸುತ್ತವೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze"/>
        </item>
        <item>
            <title><![CDATA[ChatGPT ಮೂಲಕ ಇಂಗ್ಲಿಷ್ ಕಲಿತ ಬೆಂಗಳೂರು ಆಟೋ ಚಾಲಕ; ಈಗ ಪುಸ್ತಕ ಬರೆಯುವ ಕನಸು!]]></title>
            <link>https://kannada.asianetnews.com/gallery/bengaluru-urban/bengaluru-auto-driver-reveals-how-chatgpt-helps-him-every-day-internet-is-impressed-suh-rfgc9ig</link>
            <guid isPermaLink="true">https://kannada.asianetnews.com/gallery/bengaluru-urban/bengaluru-auto-driver-reveals-how-chatgpt-helps-him-every-day-internet-is-impressed-suh-rfgc9ig</guid>
            <pubDate>Mon, 29 Jun 2026 14:23:08 +0530</pubDate>
            <description><![CDATA[&lt;p&gt;ಬೆಂಗಳೂರು ಆಟೋ ಚಾಲಕರೊಬ್ಬರ AI ಮೇಲಿನ ಪ್ರೀತಿ ಈಗ ದೇಶದಾದ್ಯಂತ ಸುದ್ದಿಯಾಗಿದೆ. ಪ್ರತಿದಿನ ChatGPT ಬಳಸಿ ಇಂಗ್ಲಿಷ್ ಕಲಿಯುತ್ತಿರುವ ಈ ಚಾಲಕನ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw991akrne72p8c032ehcg1a,imgname-bengaluru-auto-driver-1782722898552.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಆಟೋ ಚಾಲಕರೊಬ್ಬರ AI ಮೇಲಿನ ಪ್ರೀತಿ ಈಗ ದೇಶದಾದ್ಯಂತ ಸುದ್ದಿಯಾಗಿದೆ. ಪ್ರತಿದಿನ ChatGPT ಬಳಸಿ ಇಂಗ್ಲಿಷ್ ಕಲಿಯುತ್ತಿರುವ ಈ ಚಾಲಕನ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಆಟೋ ಚಾಲಕ ತಮ್ಮ ದಿನನಿತ್ಯದ ಬದುಕಿನಲ್ಲಿ ChatGPT ಅನ್ನು ಶಿಕ್ಷಕರಂತೆ ಬಳಸುತ್ತಿದ್ದಾರೆ. ಇಂಗ್ಲಿಷ್ ಮಾತನಾಡುವುದು, ಹೊಸ ಪದಗಳನ್ನು ಕಲಿಯುವುದು, ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆಯುವುದು ಮತ್ತು ಪ್ರಯಾಣಿಕರೊಂದಿಗೆ ಆತ್ಮವಿಶ್ವಾಸದಿಂದ ಸಂಭಾಷಣೆ ನಡೆಸಲು AI ಅವರಿಗೆ ನೆರವಾಗುತ್ತಿದೆ.&lt;/p&gt;&lt;p&gt;ಪುಸ್ತಕ ಬರೆಯುವ ಕನಸು&lt;/p&gt;&lt;p&gt;ವೈರಲ್ ಆದ ಬಳಿಕ ನೀಡಿದ ಸಂದರ್ಶನದಲ್ಲಿ, ತಾವು ಒಂದು ದಿನ ಪುಸ್ತಕ ಬರೆಯುವ ಕನಸು ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ತಮ್ಮ ಜೀವನದ ಅನುಭವಗಳು, ಆಟೋ ಚಾಲಕರಾಗಿ ಕಂಡ ಘಟನೆಗಳು ಮತ್ತು ತಂತ್ರಜ್ಞಾನದಿಂದ ಜೀವನದಲ್ಲಿ ಬಂದ ಬದಲಾವಣೆಗಳನ್ನು ಪುಸ್ತಕದ ರೂಪದಲ್ಲಿ ಬರೆಯಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಆಟೋ ಚಾಲಕರಿಗೆ ತಂತ್ರಜ್ಞಾನದಲ್ಲಿ ಅಪಾರ ಆಸಕ್ತಿ ಇದೆ. ಹೊಸ ಮೊಬೈಲ್ ಆ್ಯಪ್&zwnj;ಗಳು, AI ಉಪಕರಣಗಳು ಮತ್ತು ಡಿಜಿಟಲ್ ಸಾಧನಗಳ ಬಗ್ಗೆ ತಿಳಿದುಕೊಳ್ಳುವುದರಲ್ಲಿ ಅವರು ಸಮಯ ಕಳೆಯುತ್ತಾರೆ. ತಂತ್ರಜ್ಞಾನವನ್ನು ಸರಿಯಾಗಿ ಬಳಸಿದರೆ ಯಾರೂ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.&lt;/p&gt;&lt;p&gt;ವಿದೇಶಿ ಪ್ರಯಾಣಿಕರೊಂದಿಗೆ ಸುಲಭ ಸಂಭಾಷಣೆ&lt;/p&gt;&lt;p&gt;ಹಿಂದೆ ಇಂಗ್ಲಿಷ್ ಮಾತನಾಡಲು ಹಿಂಜರಿಯುತ್ತಿದ್ದ ಅವರು, ಈಗ ವಿದೇಶಿ ಪ್ರವಾಸಿಗರೊಂದಿಗೆ ನಿರಾಯಾಸವಾಗಿ ಮಾತನಾಡುತ್ತಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಗ್ರಾಹಕರು ಸಿಗುತ್ತಿದ್ದು, ಆತ್ಮವಿಶ್ವಾಸವೂ ಹೆಚ್ಚಾಗಿದೆ.&lt;/p&gt;&lt;img&gt;&lt;p&gt;ಈ ವಿಡಿಯೋ ವೈರಲ್ ಆದ ಬಳಿಕ OpenAI ಕೂಡ ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿದ್ದು, &quot;Pookie uncle-ge help madakke always happy&quot; ಎಂದು ಕಾಮೆಂಟ್ ಮಾಡಿದೆ. ಈ ಪ್ರತಿಕ್ರಿಯೆ ಮತ್ತಷ್ಟು ಜನರ ಗಮನ ಸೆಳೆದಿದೆ.&lt;/p&gt;&lt;p&gt;ತಂತ್ರಜ್ಞಾನದಿಂದ ಬದಲಾದ ಬದುಕು&lt;/p&gt;&lt;p&gt;ಒಬ್ಬ ಸಾಮಾನ್ಯ ಆಟೋ ಚಾಲಕ AI ಅನ್ನು ಬಳಸಿಕೊಂಡು ಹೊಸ ಭಾಷೆ ಕಲಿಯುವುದು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮತ್ತು ಪುಸ್ತಕ ಬರೆಯುವ ಕನಸು ಕಾಣುವುದು ಸಾವಿರಾರು ಜನರಿಗೆ ಸ್ಫೂರ್ತಿಯಾಗಿದೆ. ಈ ಘಟನೆ ತಂತ್ರಜ್ಞಾನವು ಯಾರ ಬದುಕನ್ನಾದರೂ ಬದಲಾಯಿಸುವ ಶಕ್ತಿ ಹೊಂದಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/bengaluru-urban/bengaluru-auto-driver-reveals-how-chatgpt-helps-him-every-day-internet-is-impressed-suh-rfgc9ig"/>
        </item>
        <item>
            <title><![CDATA[Bloom Avenue Greening Project: ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!]]></title>
            <link>https://kannada.asianetnews.com/gallery/state/bengaluru-launches-bloom-avenue-greening-project-in-nadaprabhu-kempegowda-layout-rav-smale6s</link>
            <guid isPermaLink="true">https://kannada.asianetnews.com/gallery/state/bengaluru-launches-bloom-avenue-greening-project-in-nadaprabhu-kempegowda-layout-rav-smale6s</guid>
            <pubDate>Sun, 28 Jun 2026 08:55:27 +0530</pubDate>
            <description><![CDATA[&lt;p&gt;Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್&zwnj; ಆರ್ಟಿರಿಯಲ್&zwnj; ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್&zwnj;ಬಾಕ್ಸಿಂಗ್&zwnj; ಬಿಎಲ್&zwnj;ಆರ್&zwnj; ಸಂಸ್ಥೆ &lsquo;ಬ್ಲೂಮ್&zwnj; ಅವೆನ್ಯೂ&rsquo; ಪ್ರಾಜೆಕ್ಟ್&zwnj;.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw63jf7dkt9qee547yr17t0k,imgname----------------------49--1782616505580.jpg" type="image/jpeg" height="390" width="690"/>
            <content:encoded><![CDATA[&lt;p&gt;Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್&zwnj; ಆರ್ಟಿರಿಯಲ್&zwnj; ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್&zwnj;ಬಾಕ್ಸಿಂಗ್&zwnj; ಬಿಎಲ್&zwnj;ಆರ್&zwnj; ಸಂಸ್ಥೆ &lsquo;ಬ್ಲೂಮ್&zwnj; ಅವೆನ್ಯೂ&rsquo; ಪ್ರಾಜೆಕ್ಟ್&zwnj;.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಲೇಔಟ್&zwnj;ನ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಮೇಜರ್&zwnj; ಆರ್ಟಿರಿಯಲ್&zwnj; ರಸ್ತೆಯ (ಎಂಎಆರ್&zwnj;) 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ರಾಜ್ಯ ಸರ್ಕಾರದ 15 ಲಕ್ಷ ಸಸಿ ನೆಟ್ಟು ಗಿನ್ನಿಸ್&zwnj; ವಿಶ್ವದಾಖಲೆ ನಿರ್ಮಿಸುವ ಅಭಿಯಾನದ ಭಾಗವಾಗಿ, ಬಿಡಿಎ ಸಹಯೋಗದಲ್ಲಿ ಆರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದೆ.&lt;/p&gt;&lt;p&gt;&lsquo;ಬ್ಲೂಮ್ ಅವೆನ್ಯೂ&rsquo; ಯೋಜನೆಯು ಹಲವು ವಿಶೇಷ ಅಂಶಗಳನ್ನು ಒಳಗೊಂಡಿದೆ. ಸ್ಥಳೀಯ ಹೂಬಿಡುವ ಏಳು ವಿಭಿನ್ನ ಜಾತಿಯ ಮರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಹುತೇಕ ಸ್ಥಳೀಯ ಮತ್ತು ಕೆಲ ವಿದೇಶಿ ಮರಗಳಾಗಿವೆ. ಸಂಪಿಗೆ, ಬೌಹಿನಿಯಾ (ಕಂಚುವಾಳ), ಕಾರ್ವಿಯಾ ಸೆಬೆಸ್ಟೇನಾ, ಹೊಳೆದಾಸವಾಳ, ಟ್ಯಾಬೆಬುಯಾ ಇತ್ಯಾದಿ ತಳಿಗಳ ಸಸಿಗಳನ್ನು ಬಣ್ಣಗಳ ಆಧಾರದಲ್ಲಿ ಕ್ರಮಬದ್ಧವಾಗಿ ಆಯ್ಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ವರ್ಷಪೂರ್ತಿ ರಸ್ತೆಯ ಯಾವುದಾದರೂ ಭಾಗದಲ್ಲಿ ಹೂಗಳು ಅರಳುವಂತಾಗಲಿದೆ.&lt;/p&gt;&lt;img&gt;&lt;p&gt;ಅಲ್ಲದೆ, ಮರಗಳು ಬೆಳೆದಂತೆ ಪಕ್ಷಿಗಳು ಹಾಗೂ ಚಿಟ್ಟೆಗಳನ್ನು ಆಕರ್ಷಿಸುವ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿಯನ್ನೂ ಯೋಜನೆ ಹೊಂದಿದೆ. ಸಸಿಗಳ ಸಂರಕ್ಷಣೆಗಾಗಿ ನೀರುಣಿಕೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನೊಳಗೊಂಡಂತೆ ಮೂರು ವರ್ಷಗಳ ಕಾಲ ವಿಶೇಷ ಪಾಲನಾ ಯೋಜನೆಯನ್ನೂ ರೂಪಿಸಲಾಗಿದೆ.&lt;/p&gt;&lt;p&gt;ಈ ಯೋಜನೆಯು ಬೆಂಗಳೂರಿನ ಸಸ್ಯಶಾಸ್ತ್ರ ಮತ್ತು ಪರಿಸರ ಪರಂಪರೆ ಮುಂದುವರಿಸುವ ಪ್ರಯತ್ನವಾಗಿದೆ. ಜರ್ಮನ್ ತೋಟಗಾರ ಹಾಗೂ ಸಸ್ಯಶಾಸ್ತ್ರಜ್ಞ ಗುಸ್ತಾವ್ ಹರ್ಮನ್&zwnj; ಕ್ರುಂಬೀಗಲ್ ಮತ್ತು ಪರಿಸರ ತಜ್ಞ ಎಸ್.ಜಿ.ನೆಗಿನಹಾಳ್ ಅವರ ಪರಂಪರೆಯಿಂದ ಪ್ರೇರಿತವಾಗಿ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒದಗಿಸಿದ್ದು, ಅನ್&zwnj;ಬಾಕ್ಸಿಂಗ್ ಬಿಎಲ್&zwnj;ಆರ್ (ಯುಬಿಎಲ್&zwnj;ಆರ್) ಸಂಸ್ಥೆಯು ಯೋಜನೆಗೆ ಹಣಕಾಸು ನೆರವು ನೀಡಿ, ನೆಲಮಟ್ಟದ ಎಲ್ಲ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದೆ. ನಗರದ ಹಸಿರು ಸಂಪತ್ತು ಹೆಚ್ಚಿಸುವ ಜತೆಗೆ ಪರಿಸರ ಸಂರಕ್ಷಣೆ, ಜೀವ ವೈವಿಧ್ಯವೃದ್ಧಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ &lsquo;ಬ್ಲೂಮ್ ಅವೆನ್ಯೂ&rsquo; ಯೋಜನೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಹಲವು ವರ್ಷಗಳ ಹಿಂದೆ ಜರ್ಮನ್ ಸಸ್ಯಶಾಸ್ತ್ರಜ್ಞ ಕ್ರುಂಬಿಗಲ್&zwnj; ಅವರು, ಬೆಂಗಳೂರನ್ನು ವರ್ಷಪೂರ್ತಿ ಅರಳುವ ಹೂವುಗಳ ನಗರವನ್ನಾಗಿ ರೂಪಿಸಿದ್ದರು. ಇದು ದಶಕಗಳ ನಂತರವೂ ಬೆಂಗಳೂರಿನ ಸೌಂದರ್ಯಕ್ಕೆ ಹೊಸ ಮೆರುಗು ನೀಡುತ್ತಿದೆ. ಅದರಿಂದ ಪ್ರೇರಣೆ ಪಡೆದಿರುವ &lsquo;ಪ್ರಾಜೆಕ್ಟ್ ಬ್ಲೂಮ್&rsquo; ಸ್ಥಳೀಯ ಸಸ್ಯಪ್ರಭೇದಗಳು ಹೂವಿನ ಅಲಂಕಾರಗಳ ಮೂಲಕ ಮುಂದಿನ ಪೀಳಿಗೆಗಾಗಿ ನಗರದ ನೈಸರ್ಗಿಕ ಪರಂಪರೆ ಹೆಚ್ಚಿಸಲಿದೆ. ನಾಗರಿಕರು, ಸಂಸ್ಥೆಗಳು ಮತ್ತು ಸರ್ಕಾರ ಈ ಯೋಜನೆಗೆ ಕೈಜೋಡಿಸಿರುವುದು ವಿಶೇಷ.&lt;/p&gt;&lt;p&gt;&lt;strong&gt;- ಪ್ರಶಾಂತ್&zwnj; ಪ್ರಕಾಶ್&zwnj;, ಅಧ್ಯಕ್ಷ, ಅನ್&zwnj;ಬಾಕ್ಸಿಂಗ್&zwnj;ಬಿಎಲ್&zwnj;ಆರ್&zwnj;&amp;nbsp;&lt;/strong&gt;&lt;/p&gt;&lt;p&gt;&lt;strong&gt;ಮಾದರಿ ರಸ್ತೆ&lt;/strong&gt;&lt;/p&gt;&lt;p&gt;&lsquo;ಬ್ಲ್ಯೂಮ್&zwnj; ಅವೆನ್ಯೂ&rsquo; ಯೋಜನೆಯಡಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯುದ್ದಕ್ಕೂ ಹಸಿರು ಹಾಗೂ ಅರಳುವ ವಾತಾವರಣ ನಿರ್ಮಾಣವಾಗುವುದರಿಂದ ಸ್ಥಳೀಯ ನಿವಾಸಿಗಳು ಮತ್ತು ಸಮುದಾಯಗಳಿಗೆ ಅಪಾರ ಪ್ರಯೋಜನವಾಗಲಿದೆ. ಪ್ರಮುಖ ರಸ್ತೆಗಳನ್ನು ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಇದು ಮಾದರಿಯಾಗಲಿದೆ.&lt;/p&gt;&lt;p&gt;&lt;strong&gt;- ಎನ್.ಎ ಹ್ಯಾರಿಸ್, ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)&lt;/strong&gt;&lt;/p&gt;&lt;p&gt;&lt;strong&gt;ಸಂಪೂರ್ಣ ಸಹಕಾರ&lt;/strong&gt;&lt;/p&gt;&lt;p&gt;ಬ್ಲ್ಯೂಮ್&zwnj; ಅವೆನ್ಯೂ ಯೋಜನೆಗೆ ಬಿಡಿಎ ಸಂಪೂರ್ಣ ಸಹಕಾರ ನೀಡಿದೆ. ಇಂಥ ಮಾದರಿಯ ಸಹಭಾಗಿತ್ವಗಳು ನಗರಾದ್ಯಂತ ಇನ್ನಷ್ಟು ಬೆಳೆಯಲಿ ಎಂಬುದು ನಮ್ಮ ಆಶಯ. ಇದರಿಂದ ಮಾಗಡಿ ರಸ್ತೆ&ndash;ಮೈಸೂರು ರಸ್ತೆ ಕಾರಿಡಾರ್ ಇನ್ನಷ್ಟು ಹಸಿರಿನಿಂದ ಕೂಡಿದ್ದು, ಆಕರ್ಷಕವಾಗಲಿದೆ.&lt;/p&gt;&lt;p&gt;&lt;strong&gt;-ಮೇಜರ್&zwnj; ಪಿ.ಮಣಿವಣ್ಣನ್&zwnj;, ಆಯುಕ್ತರು, ಬಿಡಿಎ.&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/bengaluru-launches-bloom-avenue-greening-project-in-nadaprabhu-kempegowda-layout-rav-smale6s"/>
        </item>
        <item>
            <title><![CDATA[Bigg Boss ಖ್ಯಾತಿಯ ದಿವ್ಯಾ ಸುರೇಶ್‌ಗೆ ಬೆಚ್ಚಿಬೀಳಿಸುವ ಅನುಭವ: ವಿಡಿಯೋ ಹಂಚಿಕೊಂಡು ಪೊಲೀಸರಿಗೆ ಮನವಿ]]></title>
            <link>https://kannada.asianetnews.com/tv-talk/bigg-boss-fame-divya-suresh-harassment-bengaluru-incident-video-gvd/articleshow-srcrpw1</link>
            <guid isPermaLink="true">https://kannada.asianetnews.com/tv-talk/bigg-boss-fame-divya-suresh-harassment-bengaluru-incident-video-gvd/articleshow-srcrpw1</guid>
            <pubDate>Mon, 29 Jun 2026 16:08:51 +0530</pubDate>
            <description><![CDATA[&lt;p&gt;Divya Suresh: ಬೆಂಗಳೂರಿನಲ್ಲಿ ರಾತ್ರಿ ನಟಿ ಹಾಗೂ ಬಿಗ್&zwnj;ಬಾಸ್ ಕನ್ನಡ ಖ್ಯಾತಿಯ ದಿವ್ಯಾ ಸುರೇಶ್&zwnj;ಗೆ ಯುವಕನಿಂದ ಕಿರುಕುಳ ಆರೋಪ. ಘಟನೆದ ವಿಡಿಯೋ ಹಂಚಿಕೊಂಡು ಬೆಂಗಳೂರು ಪೊಲೀಸರ ಕ್ರಮಕ್ಕೆ ಮನವಿ ಮಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw9fb57yh6c99wh20dj2n05r,imgname-gcgc-1782729512190.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.29): &lt;/strong&gt;ನಟಿ ಹಾಗೂ ಬಿಗ್&zwnj;ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ಅವರಿಗೆ ಭಾನುವಾರ ತಡರಾತ್ರಿ ಬೆಚ್ಚಿಬೀಳಿಸುವ ಅನುಭವವಾಗಿದೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಆರೋಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಏನಾಯಿತು?&lt;/strong&gt;&lt;/h2&gt;&lt;p&gt;ಭಾನುವಾರ ರಾತ್ರಿ ಸುಮಾರು 11:30ರ ವೇಳೆಗೆ, ತಮ್ಮ ಕಸಿನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದೇ ವೇಳೆ ಯುವಕನೊಬ್ಬ ಅವರನ್ನು ಹಿಂಬಾಲಿಸುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದಿವ್ಯಾ ಆರೋಪಿಸಿದ್ದಾರೆ.&lt;/p&gt;&lt;p&gt;ಯುವಕನ ವರ್ತನೆಯಿಂದ ಆತಂಕಗೊಂಡ ದಿವ್ಯಾ ಮತ್ತು ಅವರ ಕಸಿನ್ ತಕ್ಷಣ ಕಾರಿನೊಳಗೆ ಕುಳಿತು ಬಾಗಿಲು ಲಾಕ್ ಮಾಡಿಕೊಂಡಿದ್ದಾರೆ. ಆದರೆ ಕಾರಿನೊಳಗೆ ಕುಳಿತ ಬಳಿಕವೂ ಆತ ತನ್ನ ಅಸಭ್ಯ ವರ್ತನೆಯನ್ನು ಮುಂದುವರಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;p&gt;ಅದೇ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ಆರೋಪಿಯನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ಹೋಗುವಂತೆ ಎಚ್ಚರಿಸಿದ್ದರೂ, ಆತ ತನ್ನ ವರ್ತನೆ ಬದಲಿಸದೆ ಮಹಿಳೆಯರ ಎದುರೇ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ದಿವ್ಯಾ ತಿಳಿಸಿದ್ದಾರೆ.&lt;/p&gt;&lt;p&gt;ಈ ಘಟನೆಯ ವಿಡಿಯೋವನ್ನು ದಿವ್ಯಾ ಸುರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/bigg-boss-fame-divya-suresh-harassment-bengaluru-incident-video-gvd/articleshow-srcrpw1"/>
        </item>
        <item>
            <title><![CDATA[ಕರ್ನಾಟಕ ಪೊಲೀಸ್ ಇಲಾಖೆಗೇ ಕಪ್ಪುಚುಕ್ಕೆ: ಅಪ್ರಾಪ್ತರ ಮೇಲೆ ವಿಕೃತಿ ಮೆರೆದ ಅಮೃತಹಳ್ಳಿ ಪಿಎಸ್‌ಐ ಪ್ರವೀಣ್ ಬಂಧನ!]]></title>
            <link>https://kannada.asianetnews.com/karnataka-districts/bengaluru-amrutahalli-psi-praveen-arrested-for-harassing-minor-boys/articleshow-tay5q1z</link>
            <guid isPermaLink="true">https://kannada.asianetnews.com/karnataka-districts/bengaluru-amrutahalli-psi-praveen-arrested-for-harassing-minor-boys/articleshow-tay5q1z</guid>
            <pubDate>Mon, 29 Jun 2026 22:51:22 +0530</pubDate>
            <description><![CDATA[ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪಿಎಸ್&zwnj;ಐ ಪ್ರವೀಣ್, ಕೊಲೆ ಪ್ರಕರಣದ ವಿಚಾರಣೆ ವೇಳೆ ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ವಿಕೃತ ಕೃತ್ಯವನ್ನು ವಿಡಿಯೋ ಮಾಡಿ, ಅದು ವೈರಲ್ ಆದ ನಂತರ ಪೋಕ್ಸೋ ಕಾಯ್ದೆಯಡಿ ಅವರನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwa6bamw9m0k3p1v83s6qk4f,imgname-bengaluru-psi-praveen--1--1782753634970.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.29): ರ&lt;/strong&gt;ಕ್ಷಕನೇ ಭಕ್ಷಕನಾದ ಎಂಬ ಮಾತಿನಂತೆ, ಕರ್ತವ್ಯದ ಹೆಸರಿನಲ್ಲಿ ಅಪ್ರಾಪ್ತ ಬಾಲಕರ ಮೇಲೆ ಅತ್ಯಂತ ವಿಕೃತವಾಗಿ ದೌರ್ಜನ್ಯ ಎಸಗಿದ ಅಮೃತಹಳ್ಳಿ ಠಾಣೆಯ ಪಿಎಸ್&zwnj;ಐ (PSI) ಪ್ರವೀಣ್&zwnj;ನನ್ನು ಪೊಲೀಸರು ಬಂಧಿಸಿದ್ದಾರೆ. ಇಲಾಖೆಯ ಘನತೆಗೆ ಧಕ್ಕೆ ತರುವಂತಹ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇಡೀ ನಗರವನ್ನು ಬೆಚ್ಚಿಬೀಳಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಕೆಲ ತಿಂಗಳ ಹಿಂದೆ ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಲವು ಅಪ್ರಾಪ್ತ ಬಾಲಕರನ್ನು ವಿಚಾರಣೆಗಾಗಿ ಕರೆತರಲಾಗಿತ್ತು. ಆದರೆ, ಪಿಎಸ್&zwnj;ಐ ಪ್ರವೀಣ್ ಈ ಬಾಲಕರನ್ನು ಠಾಣೆಯಲ್ಲಿ ಇರಿಸುವ ಬದಲು ಖಾಸಗಿ ಸ್ಥಳವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಬಾಲಕರ ಮೇಲೆ ಬೆಲ್ಟ್&zwnj;ನಿಂದ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೆ, ಅತೀವ ವಿಕೃತಿ ಮೆರೆದಿದ್ದಾರೆ.&lt;/p&gt;&lt;h2&gt;&lt;strong&gt;ವಿಕೃತಿಯ ವಿಡಿಯೋ ವೈರಲ್:&lt;/strong&gt;&lt;/h2&gt;&lt;p&gt;ವಿಚಾರಣೆಯ ನೆಪದಲ್ಲಿ ಓರ್ವ ಅಪ್ರಾಪ್ತ ಆರೋಪಿಯಿಂದ ಇನ್ನೊಬ್ಬ ಆರೋಪಿಯ ಬಾಯಿಗೆ ಮ*ರ್ಮಾಂಗ ಇರಿಸುವಂತೆ ಒತ್ತಾಯಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ. ಈ ಇಡೀ ವಿಕೃತ ಘಟನೆಯನ್ನು ಪಿಎಸ್&zwnj;ಐ ಪ್ರವೀಣ್ ಸ್ವತಃ ತನ್ನ ಮೊಬೈಲ್&zwnj;ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ಇತ್ತೀಚೆಗೆ ಈ ವಿಡಿಯೋ ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಸತ್ಯಾಂಶ ಹೊರಬಿದ್ದಿದೆ.&lt;/p&gt;&lt;p&gt;ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು, ಪ್ರವೀಣ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆ ಹಾಗೂ ಅಸಭ್ಯ ವರ್ತನೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿ ಪಿಎಸ್&zwnj;ಐ ಪ್ರವೀಣ್&zwnj;ನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-amrutahalli-psi-praveen-arrested-for-harassing-minor-boys/articleshow-tay5q1z"/>
        </item>
        <item>
            <title><![CDATA[ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ  ಸಂಚಾರ ಮುಕ್ತ, ಆಂಧ್ರದವರೆಗೆ 100 ಕಿ.ಮೀ  ತಡೆರಹಿತ ಸಂಚಾರ!]]></title>
            <link>https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr</link>
            <guid isPermaLink="true">https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr</guid>
            <pubDate>Mon, 29 Jun 2026 15:49:52 +0530</pubDate>
            <description><![CDATA[ಬೆಂಗಳೂರು-ಚೆನ್ನೈ ಎಕ್ಸ್&zwnj;ಪ್ರೆಸ್&zwnj;ವೇಯ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಒಟ್ಟು 100 ಕಿ.ಮೀ ನಿರಂತರ ಸಂಚಾರ ಸಾಧ್ಯವಾಗಿದ್ದು, ಚೆನ್ನೈ, ತಿರುಪತಿ ಕಡೆಗಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw9e4knh3t11k7j385jw0kdh,imgname-bengaluru-chennai-expressway-1782728249009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ &lsquo;ಬೆಂಗಳೂರು-ಚೆನ್ನೈ ಎಕ್ಸ್&zwnj;ಪ್ರೆಸ್&zwnj;ವೇ&rsquo; (Bengaluru-Chennai Expressway) ಕಾಮಗಾರಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಆಂಧ್ರಪ್ರದೇಶದ ವ್ಯಾಪ್ತಿಗೆ ಒಳಪಡುವ ಬೇತಮಂಗಲದಿಂದ ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಉದ್ದದ ಹೊಸ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ.&lt;/p&gt;&lt;p&gt;ಇದರೊಂದಿಗೆ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ (ಹೊಸಕೋಟೆ) ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿಯವರೆಗೆ ಸುಮಾರು 100 ಕಿ.ಮೀ ವರೆಗೆ ಯಾವುದೇ ತಡೆಯಿಲ್ಲದೆ ನಿರಂತರವಾಗಿ ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸಂಚರಿಸಲು ವಾಹನ ಸವಾರರಿಗೆ ಅವಕಾಶ ಸಿಕ್ಕಂತಾಗಿದೆ.&lt;/p&gt;&lt;h2&gt;ಚೆನ್ನೈ, ತಿರುಪತಿ, ಚಿತ್ತೂರಿಗೆ ತೆರಳುವವರಿಗೆ ಸಮಯ ಉಳಿತಾಯ&lt;/h2&gt;&lt;p&gt;ಈ ಹಿಂದೆ 2025ರ ಆರಂಭದಲ್ಲಿ ಕರ್ನಾಟಕ ವ್ಯಾಪ್ತಿಯ ಹೊಸಕೋಟೆಯಿಂದ ಬೇತಮಂಗಲದವರೆಗಿನ 71 ಕಿ.ಮೀ ಮಾರ್ಗವನ್ನು ಮುಕ್ತಗೊಳಿಸಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬೇತಮಂಗಲ-ಬೈರೆಡ್ಡಿಪಲ್ಲಿ (25 ಕಿ.ಮೀ) ರಸ್ತೆಯೂ ಸಿದ್ಧವಾಗಿದೆ.&lt;/p&gt;&lt;p&gt;ಬೆಂಗಳೂರಿನಿಂದ ಚಿತ್ತೂರು, ತಿರುಪತಿ ಹಾಗೂ ಚೆನ್ನೈ ಕಡೆಗೆ ತೆರಳುವ ವಾಹನ ಸವಾರರು ಬೈರೆಡ್ಡಿಪಲ್ಲಿಯವರೆಗೆ ಈ ಎಕ್ಸ್&zwnj;ಪ್ರೆಸ್&zwnj;ವೇ ಬಳಸಿ, ನಂತರ ಅಲ್ಲಿಂದ ಜಿಲ್ಲಾ ರಸ್ತೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ಪ್ರಯಾಣದ ಸಮಯ ಮತ್ತು ಇಂಧನ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸದ್ಯ ಬೈರೆಡ್ಡಿಪಲ್ಲಿ ಟೋಲ್ ಪ್ಲಾಜಾದಲ್ಲಿ ಪ್ರತಿದಿನ ಸರಾಸರಿ ₹2.2 ಲಕ್ಷ ಟೋಲ್ ಸಂಗ್ರಹವಾಗುತ್ತಿದೆ.&lt;/p&gt;&lt;h2&gt;ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ: ಡಿಸೆಂಬರ್ 2026ಕ್ಕೆ ಇಡೀ ರಸ್ತೆ ಮುಕ್ತ!&lt;/h2&gt;&lt;p&gt;ಒಟ್ಟು 262 ಕಿ.ಮೀ ಉದ್ದದ ಈ ಇಡೀ ಎಕ್ಸ್&zwnj;ಪ್ರೆಸ್&zwnj;ವೇ 2026ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;ul&gt; &lt;li&gt;ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಬರುವ 85 ಕಿ.ಮೀ ಎಕ್ಸ್&zwnj;ಪ್ರೆಸ್&zwnj;ವೇ ರಸ್ತೆಯನ್ನು ಮೂರು ಪ್ಯಾಕೇಜ್&zwnj;ಗಳಾಗಿ ನಿರ್ಮಿಸಲಾಗುತ್ತಿದೆ:&lt;/li&gt; &lt;li&gt;ಬೇತಮಂಗಲದಿಂದ ಬೈರೆಡ್ಡಿಪಲ್ಲಿ (25 ಕಿ.ಮೀ): ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.&lt;/li&gt; &lt;li&gt;ಬಂಗಾರಪಾಳೆಂನಿಂದ ಗುಡಿಪಾಲ (29 ಕಿ.ಮೀ): ಈ ಕಾಮಗಾರಿಯೂ ಪೂರ್ಣಗೊಂಡಿದೆ.&lt;/li&gt;&lt;/ul&gt;&lt;p&gt;ಬೈರೆಡ್ಡಿಪಲ್ಲಿಯಿಂದ ಬಂಗಾರಪಾಳೆಂ (31 ಕಿ.ಮೀ): ಈ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅನುಮತಿ ವಿಳಂಬವಾಗಿದ್ದರಿಂದ 11 ಕಿ.ಮೀ ಕಾಮಗಾರಿ ಬಾಕಿ ಉಳಿದಿದೆ. ಇಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕಾಗಿ ಅತ್ಯಾಧುನಿಕ ಅಂಡರ್&zwnj;ಪಾಸ್ (Eco-ducts/Underpass) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;p&gt;ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಟೋಲ್ ದರ ಪಟ್ಟಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಅಧಿಕೃತ ಟೋಲ್ ದರಗಳನ್ನು ಪ್ರಕಟಿಸಿದೆ. ಮುಖ್ಯ ಎಕ್ಸ್&zwnj;ಪ್ರೆಸ್&zwnj;ವೇ ಮಾರ್ಗವನ್ನು ಬಳಸುವ ವಾಹನಗಳಿಗೆ ಮಾತ್ರ ಟೋಲ್ ಅನ್ವಯವಾಗಲಿದ್ದು, ಪ್ರವೇಶ (Entry) ಮತ್ತು ನಿರ್ಗಮನ (Exit) ರ್ಯಾಂಪ್&zwnj;ಗಳನ್ನು ಬಳಸುವ ವಾಹನಗಳಿಗೆ ಯಾವುದೇ ಟೋಲ್ ಇರುವುದಿಲ್ಲ ಎಂದು NHAI ಸ್ಪಷ್ಟಪಡಿಸಿದೆ.&lt;/p&gt;&lt;h3&gt;ಏಕಮುಖ ಪ್ರಯಾಣ ದರ&lt;/h3&gt;&lt;ul&gt; &lt;li&gt;ಕಾರು, ಜೀಪ್, ವ್ಯಾನ್ : 195 ರೂ&lt;/li&gt; &lt;li&gt;ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 315 ರೂ&lt;/li&gt; &lt;li&gt;ಟ್ರಕ್ ಮತ್ತು ಬಸ್ : 655 ರೂ&lt;/li&gt;&lt;/ul&gt;&lt;h3&gt;ದ್ವಿಮುಖ ಪ್ರಯಾಣ ದರ&lt;/h3&gt;&lt;ul&gt; &lt;li&gt;ಕಾರು, ಜೀಪ್, ವ್ಯಾನ್ : 290 ರೂ&lt;/li&gt; &lt;li&gt;ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 470 ರೂ&lt;/li&gt; &lt;li&gt;ಟ್ರಕ್ ಮತ್ತು ಬಸ್ : 985 ರೂ&lt;/li&gt;&lt;/ul&gt;&lt;p&gt;ನಿಯಮಿತವಾಗಿ ಸಂಚರಿಸುವವರಿಗಾಗಿ ತಿಂಗಳಿಗೆ 50 ಏಕಮುಖ ಸಂಚಾರಕ್ಕೆ ಅನ್ವಯವಾಗುವಂತೆ ₹6,465 ದರದ ವಿಶೇಷ ಪಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.&lt;/p&gt;&lt;h2&gt;ಬೆಂಗಳೂರು ಮತ್ತು ಕರ್ನಾಟಕಕ್ಕೆ ಆಗುವ ಲಾಭಗಳೇನು?&lt;/h2&gt;&lt;ul&gt; &lt;li&gt;ಈ ಎಕ್ಸ್&zwnj;ಪ್ರೆಸ್&zwnj;ವೇ ಪೂರ್ಣಗೊಳ್ಳುವುದರಿಂದ ಕರ್ನಾಟಕದ ಕೈಗಾರಿಕಾ ಮತ್ತು ಆರ್ಥಿಕ ವಲಯಕ್ಕೆ ಭಾರಿ ಉತ್ತೇಜನ ಸಿಗಲಿದೆ:&lt;/li&gt; &lt;li&gt;ಪ್ರಬೆಂಗಳೂರು ಮತ್ತು ಚೆನ್ನೈ ನಡುವಿನ ಒಟ್ಟು ಪ್ರಯಾಣದ ಅವಧಿ ಬರೋಬ್ಬರಿ 2 ರಿಂದ 3 ಗಂಟೆಗಳಷ್ಟು ತಗ್ಗಲಿದೆ.&lt;/li&gt; &lt;li&gt;ಚೆನ್ನೈ ಬಂದರಿಗೆ (Port) ಸಂಪರ್ಕ ಸುಲಭ ಮತ್ತು ವೇಗವಾಗುವುದರಿಂದ ಬೆಂಗಳೂರಿನ ಕೈಗಾರಿಕೆಗಳ ರಫ್ತು ಮತ್ತು ಆಮದು ಚಟುವಟಿಕೆಗಳು ಚುರುಕುಗೊಳ್ಳಲಿವೆ.&lt;/li&gt; &lt;li&gt;ಸರಕು ಸಾಗಣೆ ಸಮಯ ಮತ್ತು ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ.&lt;/li&gt;&lt;/ul&gt;&lt;p&gt;ಹೂಡಿಕೆಗೆ ಆಕರ್ಷಕ ಕಾರಿಡಾರ್: ಹೊಸಕೋಟೆ-ಬೆಂಗಳೂರು ಕಾರಿಡಾರ್&zwnj;ನಲ್ಲಿ ಹೊಸ ಕೈಗಾರಿಕೆಗಳು, ಬೃಹತ್ ಗೋದಾಮುಗಳು (Warehouses) ಮತ್ತು ಲಾಜಿಸ್ಟಿಕ್ಸ್ ಪಾರ್ಕ್&zwnj;ಗಳ ಸ್ಥಾಪನೆಗೆ ಹೂಡಿಕೆದಾರರು ಮುಗಿಬೀಳುತ್ತಿದ್ದಾರೆ. ಇದು ಐಟಿ, ಉತ್ಪಾದನಾ (Manufacturing) ಹಾಗೂ ಇ-ಕಾಮರ್ಸ್ ವಲಯಗಳ ವಿಸ್ತರಣೆಗೆ ಹೊಸ ದಾರಿ ತೆರೆದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr"/>
        </item>
        <item>
            <title><![CDATA[ಇ-ಕೆವೈಸಿ, ಆಧಾರ ಲಿಂಕ್ ಮಾಡಿಸದ 6 ಲಕ್ಷ ರೈತರಿಗೆ ಬಂದಿಲ್ಲ ‘ಕಿಸಾನ್‌ ಸಮ್ಮಾನ್‌’ ಹಣ! ನಿಮಗೂ ಬಂದಿಲ್ವ? ಮೊದಲು ಈ ಕೆಲಸ ಮಾಡಿ]]></title>
            <link>https://kannada.asianetnews.com/state/6-lakh-farmers-have-not-received-kisan-samman-money-due-to-lack-of-e-kyc-aadhaar-linking-rav/articleshow-w6ts4wg</link>
            <guid isPermaLink="true">https://kannada.asianetnews.com/state/6-lakh-farmers-have-not-received-kisan-samman-money-due-to-lack-of-e-kyc-aadhaar-linking-rav/articleshow-w6ts4wg</guid>
            <pubDate>Sun, 28 Jun 2026 09:56:53 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್' ಯೋಜನೆಯ 23ನೇ ಕಂತಿನ ಹಣವು ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರಿಗೆ ತಲುಪಿಲ್ಲ. ಇ-ಕೆವೈಸಿ &amp;nbsp;ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡದಿರುವುದು ಈ ತಾಂತ್ರಿಕ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಹಣ ಬರದಿದ್ದರೆ ತಡಮಾಡದೆ ಈ ಕೆಲಸ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0pgtars9rwt6ct1y308d1x0,imgname-kisan-samman-nidhi-1753102494489.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿದ್ದು ಚಿಕ್ಕಬಳ್ಳೇಕೆರೆ&lt;/strong&gt;&lt;/p&gt;&lt;p&gt;&amp;nbsp;&lt;strong&gt;ಬೆಂಗಳೂರು (ಜೂ.28): &lt;/strong&gt;ತಾಂತ್ರಿಕ ಕಾರಣಗಳಿಂದಾಗಿ ರಾಜ್ಯದ 6 ಲಕ್ಷಕ್ಕೂ ಅಧಿಕ ರೈತರು ಕೇಂದ್ರ ಸರ್ಕಾರದ &lsquo;ಪ್ರಧಾನ ಮಂತ್ರಿ ಕಿಸಾನ್&zwnj; ಸಮ್ಮಾನ್&zwnj; ಯೋಜನೆ&rsquo;ಯ 23ನೇ ಕಂತಿನಿಂದ ವಂಚಿತರಾಗಿದ್ದಾರೆ.&lt;/p&gt;&lt;p&gt;ಭೂಮಿ ಹೊಂದಿರುವ ಎಲ್ಲ ರೈತರಿಗೂ 4 ತಿಂಗಳಿಗೊಮ್ಮೆ 2 ಸಾವಿರ ರುಪಾಯಿಯಂತೆ ವರ್ಷಕ್ಕೆ ₹6 ಸಾವಿರ ನೀಡುವ ಕೇಂದ್ರ ಸರ್ಕಾರದ ಕಿಸಾನ್&zwnj; ಸಮ್ಮಾನ್&zwnj; ಯೋಜನೆಯಡಿ ಈಗಾಗಲೇ 22 ಕಂತುಗಳು ಬಿಡುಗಡೆಯಾಗಿದ್ದು, ಜೂ.20 ರಂದು 23ನೇ ಕಂತಿನ ಹಣ ಸಹ ರೈತರ ಖಾತೆಗಳಿಗೆ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಜಮೆಯಾಗಿದೆ.&lt;/p&gt;&lt;p&gt;ರಾಜ್ಯದಲ್ಲಿ ಕಿಸಾನ್&zwnj; ಸಮ್ಮಾನ್&zwnj; ಯೋಜನೆಗೆ 46,69,841 ರೈತರು ಅರ್ಹರಾಗಿದ್ದು, ಇದರಲ್ಲಿ ಬರೋಬ್ಬರಿ 3,80,428 ರೈತರು ಇ-ಕೆವೈಸಿ ಮಾಡಿಸದೇ ಇರುವುದರಿಂದ ಆರ್ಥಿಕ ನೆರವಿನಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ, 2,27,384 ರೈತರು ತಮ್ಮ ಬ್ಯಾಂಕ್&zwnj; ಖಾತೆಗಳಿಗೆ ಆಧಾರ್&zwnj; ಲಿಂಕ್&zwnj; ಮಾಡದೇ ಇರುವುದರಿಂದ ಯೋಜನೆಯಿಂದ ಹೊರಗೆ ಉಳಿಯುವಂತಾಗಿದೆ.&lt;/p&gt;&lt;h2&gt;ಕೃಷಿ ಇಲಾಖೆ ಕಾರ್ಯೋನ್ಮುಖವಾಗಲಿ:&lt;/h2&gt;&lt;p&gt;ರಾಜ್ಯದಲ್ಲಿ ಕೃಷಿ ಇಲಾಖೆಯು ಕಿಸಾನ್&zwnj; ಸಮ್ಮಾನ್&zwnj; ಯೋಜನೆಯ ನೋಡೆಲ್&zwnj; ಏಜೆನ್ಸಿಯಾಗಿದ್ದು, ಅಧಿಕಾರಿಗಳ ಮೂಲಕ ರೈತರಿಗೆ ಮಾಹಿತಿ ನೀಡಿ ಹಣ ಬರುವಂತೆ ಮಾಡಬೇಕಾದ ಗುರುತರ ಜವಾಬ್ದಾರಿ ಹೊಂದಿದೆ. ರಾಜ್ಯದಲ್ಲಿ ಅತಿ ಹೆಚ್ಚು ಎಂದರೆ ಬೆಳಗಾವಿ ಜಿಲ್ಲೆಯಲ್ಲಿ 41,459 ರೈತರಿಗೆ ಹಣ ಪಾವತಿಯಾಗಿಲ್ಲ. ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು 41,082 ರೈತರು ಹಣದಿಂದ ವಂಚಿತರಾಗಿದ್ದಾರೆ. ಬೀದರ್&zwnj; ಜಿಲ್ಲೆಯಲ್ಲಿ 29,910 ಅನ್ನದಾತರಿಗೆ ಹಣ ಸಂದಾಯವಾಗಿಲ್ಲ.&lt;/p&gt;&lt;h3&gt;ಇ-ಕೆವೈಸಿ ಮಾಡಿಸುವುದು ಹೇಗೆ? (ಇಂಗ್ಲಿಷ್&zwnj; ಇದೆ ಗಮನಿಸಿ)&lt;/h3&gt;&lt;p&gt;ಮೂರು ವಿಧಾನಗಳ ಮೂಲಕ ಇ-ಕೆವೈಸಿ ಮಾಡಿಸಬಹುದು. ಪಿಎಂ ಕಿಸಾನ್&zwnj; ಪೋರ್ಟಲ್&zwnj;(https://pmkisan.gov.in/) ಮತ್ತು ಮೊಬೈಲ್&zwnj; ಅಪ್ಲಿಕೇಷನ್&zwnj;ನಲ್ಲಿ ಆಧಾರ್&zwnj; ಲಿಂಕ್&zwnj; ಮಾಡಿದ ಸಕ್ರಿಯ ಮೊಬೈಲ್&zwnj; ಸಂಖ್ಯೆ ನಮೂದಿಸಿ ಒಟಿಪಿ ಆಧಾರಿತವಾಗಿ ಇ-ಕೆವೈಸಿ ಪೂರ್ಣಗೊಳಿಸಬಹುದು. ನಾಗರಿಕ ಸೇವಾ ಕೇಂದ್ರಗಳು ಮತ್ತು ರಾಜ್ಯ ಸೇವಾ ಕೇಂದ್ರ(ಎಸ್&zwnj;ಎಸ್&zwnj;ಕೆ)ಕ್ಕೆ ಆಧಾರ್&zwnj; ಕಾರ್ಡ್&zwnj; ಮತ್ತು ಆಧಾರ್&zwnj;ಗೆ ಲಿಂಕ್&zwnj; ಆಗಿರುವ ಮೊಬೈಲ್&zwnj; ತೆಗೆದುಕೊಂಡು ಹೋಗಿ ಬಯೋಮೆಟ್ರಿಕ್&zwnj; ನೀಡಿ ಸಹ ಇ-ಕೆವೈಸಿ ಮಾಡಿಸಬಹುದು. ಇದಲ್ಲದೆ, ಪಿಎಂ ಕಿಸಾನ್&zwnj; ಮೊಬೈಲ್&zwnj; ಅಪ್ಲಿಕೇಷನ್&zwnj;ನಲ್ಲಿ ಮುಖಚರ್ಯೆ ಆಧಾರಿತ(ಫೇಸ್&zwnj; ರೆಕಗ್ನೇಷನ್&zwnj;) ಇ-ಕೆವೈಸಿ ಪೂರ್ಣಗೊಳಿಸಬಹುದು. 24 ಗಂಟೆ ಬಳಿಕ ಇ-ಕೆವೈಸಿಯು ವೆಬ್&zwnj;ಸೈಟ್&zwnj;ನಲ್ಲಿ ಅಪ್&zwnj;ಡೇಟ್&zwnj; ಆಗಲಿದ್ದು, ನಂತರ ಪರಿಶೀಲಿಸಬಹುದು.&lt;/p&gt;&lt;p&gt;&lt;strong&gt;ಪ್ರಮುಖ 10 ಜಿಲ್ಲೆಯ ಪಿಎಂ ಕಿಸಾನ್&zwnj; ಫಲಾನುಭವಿಗಳ ಮಾಹಿತಿ&lt;/strong&gt;&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/6-lakh-farmers-have-not-received-kisan-samman-money-due-to-lack-of-e-kyc-aadhaar-linking-rav/articleshow-w6ts4wg"/>
        </item>
        <item>
            <title><![CDATA[ಬೆಂಗಳೂರು ನಗರ ಯೋಜನೆ: ಉದ್ಯಾನ ನಗರಿಯ ಕಳೆದುಹೋದ ವೈಭವದ ಕಥೆ ಹೇಳಿದ ಕಿರಣ್ ಮಜುಂದಾರ್ ಶಾ! ತರಹೇವಾರಿ ಕಮೆಂಟ್‌]]></title>
            <link>https://kannada.asianetnews.com/karnataka-districts/from-garden-city-to-concrete-jungle-kiran-mazumdar-shaw-sparks-fierce-debate-over-bengaluru-concrete-urban-planning-gdp/articleshow-zakgkdk</link>
            <guid isPermaLink="true">https://kannada.asianetnews.com/karnataka-districts/from-garden-city-to-concrete-jungle-kiran-mazumdar-shaw-sparks-fierce-debate-over-bengaluru-concrete-urban-planning-gdp/articleshow-zakgkdk</guid>
            <pubDate>Sun, 28 Jun 2026 13:04:29 +0530</pubDate>
            <description><![CDATA[&lt;p&gt;ಕಿರಣ್ ಮಜುಂದಾರ್-ಶಾ ಅವರು ಬೆಂಗಳೂರಿನ ಅವೈಜ್ಞಾನಿಕ ನಗರೀಕರಣದ ಬಗ್ಗೆ ಎಕ್ಸ್&zwnj;ನಲ್ಲಿ ಹಂಚಿಕೊಂಡ ಚಿತ್ರವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಕಾಂಕ್ರೀಟ್ ರಸ್ತೆಗಳು ಮತ್ತು ಹಸಿರು, ಸುಸ್ಥಿರ ರಸ್ತೆಗಳ ನಡುವಿನ ವ್ಯತ್ಯಾಸವನ್ನು ತೋರಿಸುವ ಈ ಪೋಸ್ಟ್, ನಗರದ ಕಳಪೆ ಯೋಜನೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw6hdmebj96821hyf6hjbvtv,imgname-kiran-mazumdar-shaw-1782631027147.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಒಂದೊಮ್ಮೆ ತನ್ನ ಹಸಿರು ಮತ್ತು ತಂಪಾದ ವಾತಾವರಣದಿಂದಾಗಿ 'ಉದ್ಯಾನ ನಗರಿ' (ಗಾರ್ಡನ್ ಸಿಟಿ) ಎಂದೇ ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದ ಬೆಂಗಳೂರು, ಇಂದು ಅವೈಜ್ಞಾನಿಕ ನಗರೀಕರಣದಿಂದಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಇತ್ತೀಚೆಗೆ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್-ಶಾ ಅವರು ಎಕ್ಸ್ (X) ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಚಿತ್ರ ಹಾಗೂ ಅದಕ್ಕೆ ನೀಡಿದ ಶೀರ್ಷಿಕೆ, ಬೆಂಗಳೂರಿನ ಪ್ರಸ್ತುತ ನಗರ ಯೋಜನೆಯ ಲೋಪದೋಷಗಳ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿದೆ.&lt;/p&gt;&lt;h2&gt;&lt;strong&gt;ಮರುಕಲ್ಪನೆಯ ಗ್ರಾಫಿಕ್&zwnj;&lt;/strong&gt;&lt;/h2&gt;&lt;p&gt;'ನಾವು ಏನು ನಿರ್ಮಿಸಿದ್ದೇವೆ' ಮತ್ತು 'ಏನು ನಿರ್ಮಿಸಬಹುದಿತ್ತು?' ಕಿರಣ್ ಮಜುಂದಾರ್-ಶಾ ಅವರು ಹಂಚಿಕೊಂಡಿರುವ ಗ್ರಾಫಿಕ್ ಚಿತ್ರದಲ್ಲಿ ಬೆಂಗಳೂರಿನ ಎತ್ತರಿಸಿದ ರಸ್ತೆ ಕಾರಿಡಾರ್ (Elevated Road Corridor) ನ ಎರಡು ಭಿನ್ನ ಆವೃತ್ತಿಗಳನ್ನು ಪರಸ್ಪರ ಹೋಲಿಕೆ ಮಾಡಲಾಗಿದೆ. ಇದು ನಗರವನ್ನು ಹೆಚ್ಚು ಹಸಿರಾಗಿ ಮತ್ತು ಪರಿಸರಸ್ನೇಹಿಯಾಗಿ ಹೇಗೆ ವಿನ್ಯಾಸಗೊಳಿಸಬಹುದಿತ್ತು ಎಂಬುದನ್ನು ಸೂಕ್ಷ್ಮವಾಗಿ ಬಿಂಬಿಸುತ್ತದೆ.&lt;/p&gt;&lt;p&gt;&lt;strong&gt;ಭಾಗ ೧:&lt;/strong&gt; &quot;ನಾವು ಏನು ನಿರ್ಮಿಸಿದ್ದೇವೆ (ವಾಸ್ತವ ಸ್ಥಿತಿ) ಈ ಚಿತ್ರದ ಒಂದು ಭಾಗದಲ್ಲಿ ಪ್ರಸ್ತುತ ನಾವು ಕಾಣುತ್ತಿರುವ ಕಾಂಕ್ರೀಟ್ ಮಯವಾದ ರಸ್ತೆಗಳನ್ನು ತೋರಿಸಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಿಡಗಳನ್ನು ಸಂಪೂರ್ಣವಾಗಿ ಕತ್ತರಿಸಿ ಹಾಕಿರುವುದು, ಪಾದಚಾರಿ ಮಾರ್ಗಗಳು (Footpaths) ಮತ್ತು ಸರ್ವಿಸ್ ರಸ್ತೆಗಳ ಕೊರತೆ ಹಾಗೂ ಸಾರ್ವಜನಿಕ ಸೌಲಭ್ಯಗಳು ಹೇಗೆ ನಾಶವಾಗಿವೆ ಎಂಬುದನ್ನು ಈ ಚಿತ್ರವು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.&lt;/p&gt;&lt;p&gt;&lt;strong&gt;ಭಾಗ ೨: &lt;/strong&gt;&quot;ನಾವು ಏನು ನಿರ್ಮಿಸಬಹುದಿತ್ತು&quot; (ಪರ್ಯಾಯ ಕಲ್ಪನೆ) ಚಿತ್ರದ ಇನ್ನೊಂದು ಭಾಗವು ಅದೇ ರಸ್ತೆ ಕಾರಿಡಾರ್ ಅನ್ನು ಅತ್ಯಂತ ಸುಸ್ಥಿರವಾಗಿ ಮರುಕಲ್ಪಿಸಿದೆ. ರಸ್ತೆಯ ಇಕ್ಕೆಲಗಳಲ್ಲಿ ಹಚ್ಚಹಸಿರಿನ ಮರಗಳನ್ನು ಉಳಿಸಿಕೊಳ್ಳುವುದು, ಪರಿಸರಸ್ನೇಹಿ ಸೈಕ್ಲಿಂಗ್ ಟ್ರ್ಯಾಕ್&zwnj;ಗಳನ್ನು ನಿರ್ಮಿಸುವುದು, ವಿಶಾಲವಾದ ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಬೀದಿ ದೀಪಗಳು, ಆಸನಗಳು (ಬೆಂಚುಗಳು) ಮತ್ತು ಕಸದ ತೊಟ್ಟಿಗಳನ್ನು ಒಳಗೊಂಡ ಸುಸಜ್ಜಿತ ರಸ್ತೆ ವಿನ್ಯಾಸವನ್ನು ಇದು ಪ್ರತಿನಿಧಿಸುತ್ತದೆ.&lt;/p&gt;&lt;h2&gt;ಕಿರಣ್ ಮಜುಂದಾರ್-ಶಾ ಅವರ ಮಾತುಗಳಲ್ಲಿ&lt;/h2&gt;&lt;p&gt;ನಮ್ಮ ಉದ್ಯಾನ ನಗರಿಯ ಹೆಮ್ಮೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಾವು ರಸ್ತೆಗಳನ್ನು ವಿನ್ಯಾಸಗೊಳಿಸಬೇಕು ಮತ್ತು ಯೋಜಿಸಬೇಕು. ಆದರೆ ದುರದೃಷ್ಟವಶಾತ್, ನಮ್ಮ ಬೆಂಗಳೂರು ಇಂದು ದಿನದಿಂದ ದಿನಕ್ಕೆ ಹಸಿರನ್ನು ಕಳೆದುಕೊಳ್ಳುತ್ತಾ ಕಸದ ನಗರವಾಗಿ ಮಾರ್ಪಡುತ್ತಿದೆ.&quot;&lt;/p&gt;&lt;p&gt;ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾದ ಆಕ್ರೋಶ ಮತ್ತು ಸಾರ್ವಜನಿಕ ಪ್ರತಿಕ್ರಿಯೆ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲ್ಪಟ್ಟ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ನಾಗರಿಕರು ನಗರದ ಹದಗೆಡುತ್ತಿರುವ ಮೂಲಸೌಕರ್ಯದ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕಳಪೆ ನಗರಾಭಿವೃದ್ಧಿ ಯೋಜನೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಮುಖ್ಯ ಕಾರಣ ಎಂದು ನೆಟ್ಟಿಗರು ದೂರಿದ್ದಾರೆ.&lt;/p&gt;&lt;h2&gt;ಸಾರ್ವಜನಿಕರ ಪ್ರಮುಖ ಕಾಮೆಂಟ್&zwnj;ಗಳು&lt;/h2&gt;&lt;p&gt;ಭ್ರಷ್ಟಾಚಾರ ಮತ್ತು ಕಾಂಕ್ರೀಟ್ ಹಾವಳಿ: ಬಳಕೆದಾರರೊಬ್ಬರು ತೀವ್ರ ಬೇಸರ ವ್ಯಕ್ತಪಡಿಸುತ್ತಾ, &quot;ಕಿರಣ್ ಅವರ ಮಾತನ್ನು ನೂರಕ್ಕೆ ನೂರು ಒಪ್ಪಲೇಬೇಕು. ನಮ್ಮ ಆಡಳಿತಗಾರರು ಮತ್ತು ರಾಜಕಾರಣಿಗಳು ಸೇರಿ ಈ ಸುಂದರ ನಗರವನ್ನು ಲೂಟಿ ಮಾಡುತ್ತಿದ್ದಾರೆ. ಕಾಂಕ್ರೀಟ್ ರಸ್ತೆ ಮತ್ತು ಫ್ಲೈಓವರ್&zwnj;ಗಳನ್ನು ನಿರ್ಮಿಸುವುದರಲ್ಲೇ ಅವರಿಗೆ ಹೆಚ್ಚಿನ ಆಸಕ್ತಿ. ಏಕೆಂದರೆ ಕಬ್ಬಿಣ, ಸಿಮೆಂಟ್ ಮುಂತಾದ ಸಿವಿಲ್ ಕಾಮಗಾರಿಗಳಲ್ಲಿ ಅವರಿಗೆ ಭಾರಿ ಕಮಿಷನ್ ಸಿಗುತ್ತದೆ. ಬೆಳೆದು ನಿಂತ ಮರಗಳನ್ನು ಉಳಿಸುವುದರಿಂದ ಅವರಿಗೆ ಯಾವುದೇ ವೈಯಕ್ತಿಕ ಲಾಭವಿಲ್ಲ&quot; ಎಂದು ನೇರವಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;ಅಂತರರಾಷ್ಟ್ರೀಯ ಮಟ್ಟದ ತೆರಿಗೆ &ndash; ಬಡ ದೇಶದಂತಹ ಸೌಲಭ್ಯ:&lt;/h2&gt;&lt;p&gt;ಮತ್ತೊಬ್ಬ ಬಳಕೆದಾರರು ಭಾರತೀಯ ನಗರಗಳ ಸುಸ್ಥಿರತೆಯನ್ನು ಪ್ರಶ್ನಿಸುತ್ತಾ, &quot;ಇಂದಿನ ಭಾರತದ ನಗರಗಳು ವಾಸಿಸಲು ಯೋಗ್ಯವಾಗಿ ಉಳಿದಿಲ್ಲ. ನಾವು ಜಾಗತಿಕ ಮಟ್ಟದ ಅಂತರರಾಷ್ಟ್ರೀಯ ನಗರಗಳಿಗೆ ಸರಿಸಮಾನವಾಗಿ ತೆರಿಗೆ ಮತ್ತು ಜೀವನ ವೆಚ್ಚವನ್ನು ಪಾವತಿಸುತ್ತಿದ್ದೇವೆ. ಆದರೆ, ಅದಕ್ಕೆ ಪ್ರತಿಯಾಗಿ ಸಿಗುತ್ತಿರುವ ಸೌಲಭ್ಯಗಳು ಮಾತ್ರ ಅತ್ಯಂತ ಕಳಪೆಯಾಗಿದ್ದು, ಬಡ ದೇಶದ ಪರಿಸ್ಥಿತಿಯನ್ನು ನೆನಪಿಸುತ್ತವೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಭಾರತದಲ್ಲಿ ಸಮರ್ಥ ಸಿವಿಲ್ ಎಂಜಿನಿಯರ್&zwnj;ಗಳೇ ಇಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ. ನಾವು ಕೇವಲ ತಂತ್ರಜ್ಞಾನ ಮತ್ತು ಸಾಫ್ಟ್&zwnj;ವೇರ್ ಲೋಕದಲ್ಲಿ ಬದುಕುತ್ತಿದ್ದೇವೆಯೇ ಹೊರತು, ನಿಜವಾದ ಭೌತಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ&quot; ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಸುಸ್ಥಿರ ಅಭಿವೃದ್ಧಿಯತ್ತ ತುರ್ತು ಹೆಜ್ಜೆಯ ಅಗತ್ಯತೆ ಬೆಂಗಳೂರು ಕೇವಲ ತಂತ್ರಜ್ಞಾನದ ಹಬ್ ಆಗಿ ಉಳಿಯದೆ, ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ಸುಸ್ಥಿರ ನಗರವಾಗಬೇಕಿದೆ. ಕಿರಣ್ ಮಜುಂದಾರ್-ಶಾ ಅವರು ಆರಂಭಿಸಿರುವ ಈ ಚರ್ಚೆಯು ಕೇವಲ ಒಂದು ಟ್ವೀಟ್ ಅಥವಾ ಪೋಸ್ಟ್&zwnj;ಗೆ ಸೀಮಿತವಾಗದೆ, ಸರ್ಕಾರ, ನಗರಾಭಿವೃದ್ಧಿ ಪ್ರಾಧಿಕಾರಗಳು (ಬಿಬಿಎಂಪಿ, ಬಿಡಿಎ) ಮತ್ತು ಬಿಲ್ಡರ್&zwnj;ಗಳು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಹಸಿರು ಮತ್ತು ಪರಿಸರಸ್ನೇಹಿ ನಗರ ಯೋಜನೆಯನ್ನು ರೂಪಿಸಲು ಒಂದು ಎಚ್ಚರಿಕೆಯ ಗಂಟೆಯಾಗಬೇಕಿದೆ.&lt;/p&gt;&lt;p&gt;ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯನ್ನು ನಾಶಪಡಿಸಿದರೆ, ಮುಂದಿನ ಪೀಳಿಗೆಗೆ ನಾವು ಕೇವಲ ಕಾಂಕ್ರೀಟ್ ಕಾಡನ್ನು ಮಾತ್ರ ಬಿಟ್ಟುಹೋಗಬೇಕಾಗುತ್ತದೆ ಎಂಬ ಕಹಿ ಸತ್ಯವನ್ನು ಈ ಇಡೀ ಚರ್ಚೆ ನೆನಪಿಸುತ್ತದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/from-garden-city-to-concrete-jungle-kiran-mazumdar-shaw-sparks-fierce-debate-over-bengaluru-concrete-urban-planning-gdp/articleshow-zakgkdk"/>
        </item>
    </channel>
</rss>
