<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 09 Jun 2026 08:18:27 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಬಿಲ್ ಪಾವತಿ, ಹೊಸ ಸಂಪರ್ಕ, ವರ್ಗಾವಣೆ ಸೇರಿ ಬೆಸ್ಕಾಂ ಆನ್‌ಲೈನ್ ಸೇವೆಗಳು ಇನ್ನು 21 ದಿನ ಸಿಗಲ್ಲ]]></title>
            <link>https://kannada.asianetnews.com/state/bescom-online-services-to-remain-unavailable-for-21-days-key-services-impacted/articleshow-nigm6d5</link>
            <guid isPermaLink="true">https://kannada.asianetnews.com/state/bescom-online-services-to-remain-unavailable-for-21-days-key-services-impacted/articleshow-nigm6d5</guid>
            <pubDate>Tue, 09 Jun 2026 08:18:22 +0530</pubDate>
            <description><![CDATA[&lt;p&gt;ಬೆಸ್ಕಾಂ ಆನ್&zwnj;ಲೈನ್ ಸೇವೆಗಳು 21 ದಿನಗಳ ಕಾಲ ಅಲಭ್ಯವಾಗಿದೆ. ಹೊಸ ಸಂಪರ್ಕ, ಬಿಲ್ ಪಾವತಿ, ಲೋಡ್ ಹೆಚ್ಚಳ ಸೇರಿದಂತೆ ಹಲವು ಆನ್&zwnj;ಲೈನ್ ಸೇವೆಗಳಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksgwpqnf4a8ck139d54tb5mr,imgname-power-shutdown-2-1779757178543.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.09) &lt;/strong&gt;ಬೆಸ್ಕಾಂ ವ್ಯಾಪ್ತಿಯಲ್ಲಿ ಸಾಫ್ಟ್&zwnj;ವೇರ್ ಅಳವಡಿಕೆ ಹಿನ್ನಲೆಯಲ್ಲಿ ಆನ್&zwnj;&zwj;ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ.ಸಮಗ್ರ ವಿದ್ಯುತ್&zwnj; ಅಭಿವೃದ್ದಿ ಯೋಜನೆಯ (ಐಪಿಡಿಎಸ್&zwnj;) ಹಂತ-2 ರ ಅಡಿಯಲ್ಲಿ ಸಾಪ್ಟ್ವೇರ್ ಅಪ್&zwnj;ಡೇಟ್ ಕಾರ್ಯಗಳು ನಡೆಯುತ್ತಿದೆ. ಪರಿಣಾಮ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಆನ್&zwnj; ಲೈನ್ ಸೇವೆ ಅಲಭ್ಯವಾಗುತ್ತಿದೆ. ಈ ಕುರಿತು ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದೆ.&lt;/p&gt;&lt;h2&gt;ಯಾವಾಗಿನಿಂದ ಬೆಸ್ಕಾಂ ಆನ್&zwnj;ಲೈನ್ ಸೇವೆ ಅಲಭ್ಯ?&lt;/h2&gt;&lt;p&gt;ಬೆಸ್ಕಾಂ ಸಾಫ್ಟ್&zwnj;ವೇರ್ ಅಪ್&zwnj;ಡೇಟ್ ಕಾರಣದಿಂದ ಜೂನ್ 10ರಿಂದ ಜೂನ್ 30ರವರೆಗೆ ಬೆಸ್ಕಾಂನ ಆನ್&zwnj; ಲೈನ್&zwnj; ಸೇವೆಗಳು ಅಲಭ್ಯ ವಾಗುತ್ತಿದೆ. ಒಟ್ಟು 21 ದಿನ 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್&zwnj;ಲೈನ್ ಸೇವೆ ಬಳಸಲು ಸಾಧ್ಯವಾಗುವುದಿಲ್ಲ. ಇದೀಗ ಬಹುತೇಕರು ಬೆಸ್ಕಾಂ ಕೆಲಸ ಕಾರ್ಯಗಳನ್ನು ಆನ್&zwnj;ಲೈನ್ ಮುಖಾಂತರವೇ ಮಾಡಿ ಮುಗಿಸುತ್ತಿದ್ದಾರೆ. ಆದರೆ ಮುಂದಿನ 21 ದಿನ ಸಮಸ್ಯೆಯಾಗಲಿದೆ. ಕೇಂದ್ರಕ್ಕೆ ತೆರಳಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.&lt;/p&gt;&lt;h2&gt;ಯುಪಿಐ ಮೂಲಕ ಬಿಲ್ ಪಾವತಿಗೆ ಅವಕಾಶ&lt;/h2&gt;&lt;p&gt;21 ದಿನಗಳ ಕಾಲ ಆನ್&zwnj; ಲೈನ್&zwnj; ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್&zwnj; ಹೆಚ್ಚಳ, ಬಿಲ್&zwnj; ಪಾವತಿ, ಸೇರಿದಂತೆ ಆನ್&zwnj;ಲೈನ್&zwnj; ಸೇವೆಗಳು ಸ್ಥಗಿತಗೊಳ್ಳಲಿದೆ. ಗ್ರಾಹಕರು ಗೂಗಲ್&zwnj; ಪೇ, ಫೋನ್&zwnj; ಪೇ ಮೂಲಕ ಬಿಲ್&zwnj; ಪಾವತಿ ಮಾಡಲು ಅವಕಾಶವಿರುತ್ತದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಹೇಳಿದೆ.&lt;/p&gt;&lt;h2&gt;ಆನ್&zwnj; ಲೈನ್&zwnj; ಸೇವೆ ಸ್ಥಗಿತಗೊಳ್ಳುವ ಪಟ್ಟಣಗಳು&lt;/h2&gt;&lt;p&gt;ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆಯಲ್ಲಿ ಆನ್&zwnj;ಲೈನ್&zwnj; ಸೇವೆ ಅಲಭ್ಯವಾಗುತ್ತಿದೆ.&lt;/p&gt;&lt;p&gt;ಸೂಚಿಸಿದ 20 ಪಟ್ಟಣದ ಗ್ರಾಹಕರು ಹತ್ತಿರದ ಬೆಸ್ಕಾಂ ಕೇಂದ್ರಕ್ಕೆ ತೆರಳಿ ತಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ. ಇದೇ ವೇಳೆ ಹೆಚ್ಚಿನ ಗ್ರಾಹಕರು ಬೆಸ್ಕಾಂ ಕೇಂದ್ರಗಳಿಗೆ ಭೇಟಿ ನೀಡುವ ಕಾರಣ ಜನಸಂದಣಿ ಹೆಚ್ಚಾಗಬಹುದು, ಸೇವೆಯಲ್ಲಿ ವಿಳಂಬವಾಗಬಹುದು. ಹೀಗಾಗಿ ಗ್ರಾಹಕರು ಸಹಕರಿಸಬೇಕಾಗಿ ವಿನಂತಿ ಮಾಡಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bescom-online-services-to-remain-unavailable-for-21-days-key-services-impacted/articleshow-nigm6d5"/>
        </item>
        <item>
            <title><![CDATA[Bitcoin Scam Case: ಬಿಟ್‌ಕಾಯಿನ್‌ ಹಗರಣದಲ್ಲಿ ನಲಪಾಡ್‌ಗೆ ಇದೀಗ ಎಸ್ಐಟಿ ಚಾರ್ಜ್‌ಶೀಟ್‌ ಶಾಕ್‌!]]></title>
            <link>https://kannada.asianetnews.com/state/bitcoin-scam-case-nalapad-faces-fresh-setback-as-sit-files-charge-sheet-rav/articleshow-73ckmc1</link>
            <guid isPermaLink="true">https://kannada.asianetnews.com/state/bitcoin-scam-case-nalapad-faces-fresh-setback-as-sit-files-charge-sheet-rav/articleshow-73ckmc1</guid>
            <pubDate>Tue, 09 Jun 2026 06:22:37 +0530</pubDate>
            <description><![CDATA[&lt;p&gt;ಬಿಟ್&zwnj; ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕಿಯಿಂದ ಪಾಲು ಪಡೆದ ಆರೋಪದ ಮೇಲೆ ಮೊಹಮ್ಮದ್ ನಲಪಾಡ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್&zwnj;ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ತುಮಕೂರಿನ ಕಂಪನಿಯಿಂದ ಕದ್ದ ಬಿಟ್&zwnj;ಕಾಯಿನ್&zwnj;ಗಳನ್ನು ನಗದು ಮಾಡಲು ನಲಪಾಡ್ ಸಹಾಯ ಮಾಡಿದ್ದ ಬಗ್ಗೆ ಮಾಹಿತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktmxkypeper8ajvtxgyy8v4j,imgname-----------------------2026-06-09t061744.876-1780966095565.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;- ನಲಪಾಡ್&zwnj;ಗೆ ಹ್ಯಾಕರ್&zwnj; ಶ್ರೀಕಿಯಿಂದ ಪಾಲು । ಚಾರ್ಜ್&zwnj;ಶೀಟಲ್ಲಿ ಎಸ್&zwnj;ಐಟಿಯಿಂದ ಉಲ್ಲೇಖ?&lt;/li&gt; &lt;li&gt;- ನಲಪಾಡ್&zwnj; ಆಪ್ತ ಸ್ನೇಹಿತರ ಹೆಸರೂ ಪ್ರಸ್ತಾಪ । ಹ್ಯಾರಿಸ್&zwnj; ಪುತ್ರಗೆ ಶುರುವಾಯ್ತು ಸಂಕಷ್ಟ&lt;/li&gt;&lt;/ul&gt;&lt;p&gt;&amp;nbsp;&lt;strong&gt;ಬೆಂಗಳೂರು (ಜೂ.9): &lt;/strong&gt;ಬಿಟ್&zwnj; ಕಾಯಿನ್ ಹಗರಣ(Bitcoin scam) ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಕಾಂಗ್ರೆಸ್&zwnj;ನ ಹಿರಿಯ ಮುಖಂಡರೂ ಆಗಿರುವ ಶಾಂತಿನಗರದ ಶಾಸಕ ಎನ್.ಎ.ಹ್ಯಾರಿಸ್ ಹಿರಿಯ ಪುತ್ರ ಮೊಹಮ್ಮದ್ ನಲಪಾಡ್ ಅವರಿಗೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್&zwnj;ಐಟಿ) ನಲಪಾಡ್&zwnj; ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.&lt;/p&gt;&lt;p&gt;ಇದೇ ಪ್ರಕರಣದಡಿ ಹಣ ವರ್ಗಾವಣೆ ಆರೋಪದಲ್ಲಿ ಇ.ಡಿ (ಜಾರಿ ನಿರ್ದೇಶನಾಲಯ) ತನಿಖೆ ನಡೆಸುತ್ತಿದ್ದು, ಇತ್ತೀಚೆಗೆ ನಲಪಾಡ್&zwnj; ಮನೆ ಮೇಲೆ ಈ ಸಂಬಂಧ ದಾಳಿಯೂ ನಡೆಸಿತ್ತು. ಇದರ ಬೆನ್ನಲ್ಲೇ ಎಸ್&zwnj;ಐಟಿ ಚಾರ್ಜ್&zwnj;ಶೀಟ್&zwnj; ಸಲ್ಲಿಸಿದೆ.&lt;/p&gt;&lt;p&gt;ತುಮಕೂರಿನ ಖಾಸಗಿ ಕಂಪನಿಯ ಬಿಟ್&zwnj; ಕಾಯಿನ್&zwnj; ಕಳವು ಕೃತ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ನಲಪಾಡ್&zwnj;ಗೆ &lsquo;ಪಾಲು&rsquo; ಸಿಕ್ಕಿದೆ ಎಂದು ಎಸ್&zwnj;ಐಟಿ ಉಲ್ಲೇಖಿಸಿರುವುದಾಗಿ &lsquo;ಕನ್ನಡಪ್ರಭ&rsquo;ಕ್ಕೆ ಮೂಲಗಳು ತಿಳಿಸಿವೆ. ನಲಪಾಡ್ ಜೊತೆ ಅವರ ಆಪ್ತ ಸ್ನೇಹಿತರ ಹೆಸರೂ ಹಗರಣದಲ್ಲಿ ಪ್ರಸ್ತಾಪವಾಗಿದೆ ಎನ್ನಲಾಗಿದೆ.&lt;/p&gt;&lt;h2&gt;ನಲಪಾಡ್&zwnj;ಗೆ ಸಿಕ್ಕಿದ್ದೆಷ್ಟು?:&lt;/h2&gt;&lt;p&gt;2017ರಲ್ಲಿ ಬಿಟ್ ಕಾಯಿನ್ ಟ್ರೇಡಿಂಗ್ ಕಂಪನಿಯಾದ ತುಮಕೂರಿನ ಖಾಸಗಿ ಕಂಪನಿ ವೆಬ್&zwnj;ಸೈಟ್&zwnj;ಗೆ ಕನ್ನ ಹಾಕಿ 60 ಕಾಯಿನ್&zwnj;ಗಳನ್ನು (2024ರಲ್ಲಿ ಮಾರುಕಟ್ಟೆ ಮೌಲ್ಯ 1.14 ಕೋಟಿ ರು.) ಶ್ರೀಕಿ ಗ್ಯಾಂಗ್ ದೋಚಿತ್ತು. ಈ ಬಗ್ಗೆ ತುಮಕೂರಿನ ಹೊಸ ಬಡಾವಣೆ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಎಸ್&zwnj;ಐಟಿ ಅಧಿಕಾರಿಗಳು, ಕೆಲ ದಿನಗಳ ಹಿಂದೆ ಹ್ಯಾಕರ್ ಶ್ರೀಕಿ ಮತ್ತು ಆತನ ಸ್ನೇಹಿತ ರಾಬಿನ್ ಖಂಡೇವಾಲಾ, ಮೊಹಮ್ಮದ್ ನಲಪಾಡ್ ಸೇರಿ ಇತರರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಈ ಕೃತ್ಯದಲ್ಲಿ ದೋಚಿದ್ದ ಬಿಟ್&zwnj; ಕಾಯಿನ್&zwnj;ಗಳನ್ನು ನಲಪಾಡ್ ಸಂಪರ್ಕ ಜಾಲ ಬಳಸಿ ಶ್ರೀಕಿ ನಗದು ಮಾಡಿಕೊಂಡಿದ್ದ. ಇದಕ್ಕೆ ಪ್ರತಿಯಾಗಿ ನಲಪಾಡ್ ಅವರಿಗೆ &lsquo;ಹಣ&rsquo; ಸಿಕ್ಕಿದೆ. ತನ್ನ ಮುಂಬೈ ಗೆಳೆಯನ ಮುಖಾಂತರ ಹವಾಲಾದಲ್ಲಿ ನಲಪಾಡ್&zwnj;ಗೆ ಹಣ ವರ್ಗಾವಣೆಯಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.&lt;/p&gt;&lt;h3&gt;ದುಬಾರಿ ಕಾರು ಖರೀದಿ&amp;nbsp;&lt;/h3&gt;&lt;p&gt;ಇದೇ ಪ್ರಕರಣದ ಹಣದಲ್ಲೇ ಐಷರಾಮಿ ಕಾರನ್ನು ನಲಪಾಡ್ ಆಪ್ತ ಸ್ನೇಹಿತ ಹಾಗೂ ರಾಜ್ಯದ ನಿವೃತ್ತ ಐಪಿಎಸ್ ಅಧಿಕಾರಿ ಪುತ್ರ ಖರೀದಿಸಿದ್ದ. ಈ ಸಂಬಂಧ ವಿಚಾರಣೆ ನಡೆಸಿ ಈತನಿಂದ ಕೂಡ ಎಸ್ಐಟಿ ಕೇಳಿ ಪಡೆದಿದೆ ಎಂದು ಗೊತ್ತಾಗಿದೆ.&lt;/p&gt;&lt;h3&gt;ನಲಪಾಡ್ ಬಾಲ್ಯ ಸ್ನೇಹಿತರು&lt;/h3&gt;&lt;p&gt;ಪ್ರೌಢಶಾಲೆಯಲ್ಲಿ ಓದುವಾಗ ಮೊಹಮ್ಮದ್ ನಲಪಾಡ್ ಸೋದರ ಉಮರ್ ನಲವಾಡ್ ಹಾಗೂ ಶ್ರೀಕಿ ಸಹಪಾಠಿಗಳಾಗಿದ್ದು, ಬಾಲ್ಯದಿಂದ ಅವರಿಬ್ಬರು ಸ್ನೇಹಿತರು. ತನ್ನ ಸೋದರನ ಮೂಲಕ ಮೊಹಮ್ಮದ್&zwnj;ಗೆ ಶ್ರೀಕಿ ಗೆಳೆತನವಾಯಿತು. ಈ ಸ್ನೇಹದಲ್ಲೇ ಬಿಟ್ ಕಾಯಿನ್ ದಂಧೆಗೆ ಸಾಥ್ ಕೊಟ್ಟಿರಬಹುದು ಎಂಬ ಆರೋಪ ಕೇಳಿಬಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bitcoin-scam-case-nalapad-faces-fresh-setback-as-sit-files-charge-sheet-rav/articleshow-73ckmc1"/>
        </item>
        <item>
            <title><![CDATA[ಖಾಸಗಿ ಬಸ್‌ನಲ್ಲಿ ಪ್ರಯಾಣಿಸೋರ ಗಮನಕ್ಕೆ: ಈ ವಿಷಯ ತಿಳ್ಕೊಳ್ಳದೆ ಪ್ರಯಾಣಿಸಿದ್ರೆ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ!]]></title>
            <link>https://kannada.asianetnews.com/state/karnataka-day-service-private-bus-ticket-fares-hiked-from-today-rav/articleshow-75dg00f</link>
            <guid isPermaLink="true">https://kannada.asianetnews.com/state/karnataka-day-service-private-bus-ticket-fares-hiked-from-today-rav/articleshow-75dg00f</guid>
            <pubDate>Tue, 09 Jun 2026 04:46:34 +0530</pubDate>
            <description><![CDATA[&lt;p&gt;ಡೀಸೆಲ್ ದರ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದಿಂದಾಗಿ, ರಾಜ್ಯಾದ್ಯಂತ ಖಾಸಗಿ ಬಸ್&zwnj;ಗಳ ಪ್ರಯಾಣ ದರವನ್ನು ಶೇ. 3 ರಿಂದ 8 ರಷ್ಟು ಹೆಚ್ಚಿಸಲು ನಿರ್ಧಾರ.. ಈ ಹೊಸ ದರ ಮಂಗಳವಾರದಿಂದ ಜಾರಿಗೆ ಬರಲಿದ್ದು, ಶಾಲಾ ವಿದ್ಯಾರ್ಥಿಗಳ ರಿಯಾಯಿತಿ ಮುಂದುವರಿಯಲಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘ ತಿಳಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktmqxvmbjfa4s99pnp9azt2z,imgname-----------------------2026-06-09t042729.679-1780960128651.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;&amp;nbsp;ಡೇ ಸರ್ವಿಸ್&zwnj; ಬಸ್&zwnj;ಗಳ ದರ ಏರಿಕೆ ಮಾಡಲಾಗುತ್ತೆ&lt;/li&gt; &lt;li&gt;ಖಾಸಗಿ ಬಸ್​ ಮಾಲೀಕರ ಸಂಘಗಳ ಅಧ್ಯಕ್ಷ ಹೇಳಿಕೆ&lt;/li&gt;&lt;/ul&gt;&lt;p&gt;&amp;nbsp;&lt;strong&gt;ಉಡುಪಿ (ಜೂ.9): &lt;/strong&gt;ಡೀಸೆಲ್​ ದರ ಏರಿಕೆ(Diesel price hike) ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ರಾಜ್ಯಾದ್ಯಂತ ಚಾಲನೆಯಲ್ಲಿರುವ ಎಲ್ಲಾ ಖಾಸಗಿ ಮಜಲು ವಾಹನ (ಡೇ ಸರ್ವಿಸ್​) ಬಸ್​ಗಳ ಪ್ರಯಾಣ ದರವನ್ನು ಶೇ.3 ರಿಂದ 8ರವರೆಗೆ ಪರಿಷ್ಕರಿಸಿ ಮಂಗಳವಾರದಿಂದ (ಜೂ.9) ಹೊಸ ದರ ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಖಾಸಗಿ ಬಸ್​ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್(Kuiladi Suresh Nayak)​ ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ 5300 ಬಸ್​ಗಳು ಒಕ್ಕೂಟದ ವ್ಯಾಪ್ತಿಯಲ್ಲಿದ್ದು, ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆ 3 ರು. ಹಾಗೂ ಕೇಂದ್ರ ಸರ್ಕಾರ 4 ಬಾರಿ 8.17 ರು. ಡೀಸೆಲ್​ ದರ ಏರಿಕೆ ಮಾಡಿದೆ. ವಾಹನದ ಬಿಡಿ ಭಾಗಗಳ ದರ, ಟೈರ್​,ಟೈರ್​ ರಿಸೋಲಿಂಗ್​ ದರ, ಟೋಲ್​ ದರ, ನೌಕರರ ವೇತನ, ಸರ್ಕಾರದ ತೆರಿಗೆ ಸಹಿತ ದೈನಂದಿನ ವೆಚ್ಚಗಳಲ್ಲಿ ತೀವ್ರ ಏರಿಕೆಯಾಗಿರುವುದರಿಂದ ಬಸ್​ ಟಿಕೆಟ್​ ದರ ಹೆಚ್ಚಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದರು. ಶಾಲಾ ವಿದ್ಯಾರ್ಥಿಗಳಿಗೆ ಮುಂಚಿತವಾಗಿ ಸಿಗುತ್ತಿದ್ದ ರಿಯಾಯಿತಿ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ಪ್ರತಿ ಪ್ರಯಾಣಿಕರಿಗೆ 4 ಪೈಸೆಯಂತೆ ಪ್ರತಿ ಕಿ.ಮೀ.ಗೆ ಕನಿಷ್ಟ 0.25 ಪೈಸೆಯವರೆಗೆ ಸೆಸ್​ ಹಾಕಲು ಅವಕಾಶವಿದ್ದು, ಹಾಲಿ ದರದ ಮೇಲೆ ಶೇ.3ರಿಂದ 8ರವರೆಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-day-service-private-bus-ticket-fares-hiked-from-today-rav/articleshow-75dg00f"/>
        </item>
        <item>
            <title><![CDATA[ಆರೋಗ್ಯ ಸಚಿವ ಯುಟಿ ಖಾದರ್ ಮಹತ್ವದ ನಿರ್ಧಾರ; ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್!]]></title>
            <link>https://kannada.asianetnews.com/state/plans-for-low-cost-treatment-for-apl-cardholders-says-health-minister-ut-khader-rav/articleshow-541s8m8</link>
            <guid isPermaLink="true">https://kannada.asianetnews.com/state/plans-for-low-cost-treatment-for-apl-cardholders-says-health-minister-ut-khader-rav/articleshow-541s8m8</guid>
            <pubDate>Tue, 09 Jun 2026 04:21:34 +0530</pubDate>
            <description><![CDATA[&lt;p&gt;ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಆರೋಗ್ಯ ಕರ್ನಾಟಕ ಯೋಜನೆಯಡಿ ಎಪಿಎಲ್ ಕಾರ್ಡ್&zwnj;(APL Card)ದಾರರ ಚಿಕಿತ್ಸಾ ವೆಚ್ಚದ ಪಾವತಿ ಅನುಪಾತವನ್ನು ಪುನರ್&zwnj;ಪರಿಶೀಲನೆ.. ಬಿಪಿಎಲ್ ಕಾರ್ಡ್&zwnj;(BPL Card)ದಾರರಿಂದ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಶುಲ್ಕ ಪಡೆದರೆ ಆರೋಗ್ಯ ಮಿತ್ರರ ವಿರುದ್ಧ ಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krj45es1ztyfwmnykns19x7w,imgname-----------------------2026-05-14t074221.241-1778724813601.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಈ ಹಿಂದೆ ನಾನು ಸಚಿವನಾಗಿದ್ದಾಗ ಸರ್ಕಾರ 70%, ರೋಗಿ 30% ಪಾವತಿ ಮಾಡುವ ವ್ಯವಸ್ಥೆ ಇತ್ತು&lt;/li&gt; &lt;li&gt;ಈಗ ರೋಗಿ 70%, ಸರ್ಕಾರ 30% ಬಿಲ್&zwnj; ಪಾವತಿಸುತ್ತದೆ । ಈ ಸೌಲಭ್ಯ ಪುನರ್&zwnj;ಪರಿಶೀಲನೆ: ಸಚಿವ&lt;/li&gt;&lt;/ul&gt;&lt;p&gt;&lt;strong&gt;ಮಂಗಳೂರು (ಜೂ.9): &lt;/strong&gt;ಹಿಂದೆ ನಾನು ಆರೋಗ್ಯ ಸಚಿವನಾಗಿದ್ದ ವೇಳೆ ಆರೋಗ್ಯ ಕರ್ನಾಟಕದಲ್ಲಿ ಬಿಪಿಎಲ್&zwnj; ಕಾರ್ಡ್&zwnj;ದಾರರಿಗೆ ಉಚಿತ ಹಾಗೂ ಎಪಿಎಲ್&zwnj;ನವರಿಗೆ ಶೇ.70ರಷ್ಟು ಉಚಿತ, ಶೇ.30ರಷ್ಟು ವೆಚ್ಚವನ್ನು ರೋಗಿ ಭರಿಸುವ ವ್ಯವಸ್ಥೆ ಇತ್ತು. ಬಳಿಕ ಅದೀಗ ಶೇ. 70ರಷ್ಟು ರೋಗಿ ಭರಿಸುತ್ತಿದ್ದು, ಶೇ.30 ಸರ್ಕಾರ ಎಂಬಂತಾಗಿದೆ. ಈ ಬಗ್ಗೆ ಪುನರ್&zwnj; ಪರಿಶೀಲನೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್&zwnj; ಹೇಳಿದರು.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಪಿಎಲ್&zwnj; ಹಾಗೂ ಬಿಪಿಎಲ್&zwnj;ನವರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸುವ ಬಗ್ಗೆ ರೂಪುರೇಷೆ ಮಾಡಲಾಗುವುದು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆಯವರು ಆಯುಷ್ಮಾನ್&zwnj; ಕರ್ನಾಟಕ ಯೋಜನೆಯಡಿ ಬಿಪಿಎಲ್&zwnj; ಕಾರ್ಡ್&zwnj; ಹೊಂದಿರುವ ರೋಗಿಯಿಂದ ಹಣ ಪಡೆಯುವಂತಿಲ್ಲ. ಒಂದು ವೇಳೆ ಹೆಚ್ಚುವರಿ ಶುಲ್ಕ ಪಡೆದರೆ ಆರೋಗ್ಯ ಮಿತ್ರರು ಈ ಬಗ್ಗೆ ಗಮನ ಹರಿಸಿ ಮೇಲಿನ ಅಧಿಕಾರಿಗಳ ಮೂಲಕ ಉಚಿತ ಚಿಕಿತ್ಸೆಗೆ ಕ್ರಮ ವಹಿಸಬೇಕು. ಒಂದು ವೇಳೆ ಹೆಚ್ಚುವರಿ ಶುಲ್ಕ ತಡೆಗೆ ವಿಫಲರಾಗುವ ಆರೋಗ್ಯ ಮಿತ್ರರ ವಿರುದ್ಧವೇ ಇಲಾಖೆಯಿಂದ ಕ್ರಮ ವಹಿಸಲಾಗುವುದು ಎಂದರು.&lt;/p&gt;&lt;p&gt;ಜನಸಾಮಾನ್ಯರಿಗೂ ಅತ್ಯುತ್ತಮ ಆರೋಗ್ಯ ಸೇವೆಗೆ ಖಾತರಿ ಪಡಿಸುವುದಕ್ಕಾಗಿ ಆರೋಗ್ಯ ಮಿತ್ರರ ನೇಮಕ ಮಾಡಿರುವುದು. ಅಗತ್ಯವಾದ ಕೆಲವು ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ಅನಗತ್ಯ ಕಾರ್ಯಕ್ರಮಗಳನ್ನು ಕೈಬಿಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಕ್ರಮ ವಹಿಸಲಾಗುವುದು ಎಂದು ಹೇಳಿದರು.&lt;/p&gt;&lt;h2&gt;ಗುತ್ತಿಗೆ ವೈದ್ಯರ ಕಾಯಂ ಮರು ಪರಿಶೀಲನೆ&lt;/h2&gt;&lt;p&gt;ಗುತ್ತಿಗೆ ಆಧಾರದಲ್ಲಿ ನೇಮಕಗೊಂದ ವೈದ್ಯರು 3 ವರ್ಷ ಸೇವೆ ಸಲ್ಲಿಸಿದರೆ ಅವರನ್ನು ಕಾಯಂಗೊಳಿಸುವ ಪದ್ಧತಿ ಹಿಂದೆ ಮಾಡಲಾಗಿತ್ತು. ಇದರಿಂದ ಉದ್ಯೋಗ ಭದ್ರತೆಯ ಕಾರಣದಿಂದ ಹೆಚ್ಚಿನ ವೈದ್ಯರ ನೇಮಕವಾಗುತ್ತಿತ್ತು. ಆದರೆ ಅದೀಗ ಬದಲಾಗಿದೆ. ಅದನ್ನು ಮರು ಪರಿಶೀಲಿಸಲಾಗುವುದು. ಗುಡ್ಡಗಾಡು, ಬುಡಕಟ್ಟು ಪ್ರದೇಶ, ಕುಗ್ರಾಮಗಳಲ್ಲಿ ವೈದ್ಯರು ಹೋಗುವುಗು ಕಡಿಮೆ. ಅದಕ್ಕಾಗಿ ಅಲ್ಲಿ ಕೆಲಸ ನಿರ್ವಹಿಸುವವರಿಗೆ ಹೆಚ್ಚುವರಿ ವೇತನ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/plans-for-low-cost-treatment-for-apl-cardholders-says-health-minister-ut-khader-rav/articleshow-541s8m8"/>
        </item>
        <item>
            <title><![CDATA[20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ!]]></title>
            <link>https://kannada.asianetnews.com/karnataka-districts/bengaluru-lokayukta-traps-deputy-chief-electrical-inspector-siddappa-for-taking-bribe-sat/articleshow-ru15d9k</link>
            <guid isPermaLink="true">https://kannada.asianetnews.com/karnataka-districts/bengaluru-lokayukta-traps-deputy-chief-electrical-inspector-siddappa-for-taking-bribe-sat/articleshow-ru15d9k</guid>
            <pubDate>Mon, 08 Jun 2026 20:40:04 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ವಿದ್ಯುತ್ ಪರಿಶೀಲನೆಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ ಸಿದ್ದಪ್ಪ, 20 ಸಾವಿರ ರೂಪಾಯಿ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktkwh4dw748v6a38p9g4vqvv,imgname-bengaluru-lokayukta-raid-1780931400124.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.08): ಬೆಂ&lt;/strong&gt;ಗಳೂರಿನಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಬೇಟೆ ಮುಂದುವರಿದಿದೆ. ಬಾಕಿ ಇರುವ ಅಪಾರ್ಟ್ಮೆಂಟ್ ಕಟ್ಟಡವೊಂದರ ವಿದ್ಯುತ್ ಆವರ್ತಕ ಪರಿಶೀಲನೆ (Periodic Inspection) ನಡೆಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬೆಂಗಳೂರು ದಕ್ಷಿಣ ವಿಭಾಗದ ಉಪ ಮುಖ್ಯ ವಿದ್ಯುತ್ ನಿರೀಕ್ಷಕ (Deputy Chief Electrical Inspector) ಸಿದ್ದಪ್ಪ ಅವರು 20 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/h2&gt;&lt;p&gt;ಅಪಾರ್ಟ್&zwnj;ಮೆಂಟ್ ಕಟ್ಟಡದ ವಿದ್ಯುತ್ ಪರಿಶೀಲನಾ ಕಾರ್ಯಕ್ಕೆ ಸಂಬಂಧಿಸಿದಂತೆ ಸಿದ್ದಪ್ಪ ಅವರು ಲಂಚ ನೀಡುವಂತೆ ಒತ್ತಾಯಿಸುತ್ತಿದ್ದರು. ಈ ಕುರಿತು ವಿದ್ಯುತ್ ಗುತ್ತಿಗೆದಾರರಾದ ರಘುರಾಜ್ ಹಾಗೂ ನಾಗರಾಜ್ ಅವರು ಲೋಕಾಯುಕ್ತ ಪೊಲೀಸರಿಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಾಗರೂಕರಾದ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಕಾರ್ಯಾಚರಣೆಗೆ ಸ್ಕೆಚ್ ಹಾಕಿದ್ದರು.&lt;/p&gt;&lt;p&gt;ದೂರುದಾರರಿಂದ ನಿಗದಿಪಡಿಸಿದ 20,000 ರೂಪಾಯಿ ನಗದು ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ, ಸಿದ್ದಪ್ಪ ಅವರನ್ನು ರಂಗೇ ರಾಗಿ (ರೆಡ್ ಹ್ಯಾಂಡ್ ಆಗಿ) ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಭ್ರಷ್ಟ ಅಧಿಕಾರಿಯನ್ನು ಬಂಧಿಸಿರುವ ಅಧಿಕಾರಿಗಳು ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ತೀವ್ರ ವಿಚಾರಣೆಯನ್ನು ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-lokayukta-traps-deputy-chief-electrical-inspector-siddappa-for-taking-bribe-sat/articleshow-ru15d9k"/>
        </item>
        <item>
            <title><![CDATA[ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ  ಬಂಡೆ ಆಡಳಿತ?]]></title>
            <link>https://kannada.asianetnews.com/politics/dk-shivakumar-government-first-5-days-10-key-decisions-gvd-videoshow-ds5eqpm</link>
            <guid isPermaLink="true">https://kannada.asianetnews.com/politics/dk-shivakumar-government-first-5-days-10-key-decisions-gvd-videoshow-ds5eqpm</guid>
            <pubDate>Mon, 08 Jun 2026 20:13:21 +0530</pubDate>
            <description><![CDATA[&lt;p&gt;ಪಂಚತಂತ್ರ ಪಾಂಚಜನ್ಯ.. ಡಿಕೆ ಪವರ್ ಪಂಚ್..! 5 ದಿನಗಳಲ್ಲಿ 10 ಹೆಜ್ಜೆ.. ಇದು ಡಿಕೆ ಸರ್ಕಾರ್..! ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ..! ಹೇಗಿದೆ ಬಂಡೆ ಆಡಳಿತ..? 5 ದಿನಗಳ ರಹಸ್ಯ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಸರ್ಕಾರ.&lt;/p&gt;]]></description>
            <media:content url="https://geo.dailymotion.com/player/x1tbu.html?video=xadzzq2" medium="video" height="768" width="1024"/>
            <content:encoded><![CDATA[&lt;p&gt;ಪಂಚತಂತ್ರ ಪಾಂಚಜನ್ಯ.. ಡಿಕೆ ಪವರ್ ಪಂಚ್..! 5 ದಿನಗಳಲ್ಲಿ &amp;nbsp;10 ಹೆಜ್ಜೆ.. &amp;nbsp;ಇದು ಡಿಕೆ ಸರ್ಕಾರ್..! ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ..! ಹೇಗಿದೆ &amp;nbsp;ಬಂಡೆ ಆಡಳಿತ..? 5 ದಿನಗಳ ರಹಸ್ಯ.! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಡಿಕೆ ಸರ್ಕಾರ.. ಹೊಸ ಅವತಾರ. ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಬೆರಳಂಕಿ ದಿನಗಳಲ್ಲಿಯೇ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ.&lt;/p&gt;&lt;p&gt;ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್​ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ ಪಂಚ ದಿನದಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.? ಇಷ್ಟೆಲ್ಲದರ ಮಧ್ಯೆ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಹಾಗಿದ್ರೆ ಕನಕಪುರದಲ್ಲಿ ಕನಕಾಧಿಪತಿಯ ಎಂಟ್ರಿ ಹೇಗಿತ್ತು..? ಅಲ್ಲಿ ತಮ್ಮ ಜನರಿಗೆ ಡಿಕೆ ಕೊಟ್ಟ ಭರವಸೆಯೇನು..? ಹೇಳಿದ ಕಿವಿಮಾತೇನು.? ಮುಖ್ಯಮಂತ್ರಿಯಾಗಿರೋ ಮನೆ ಮಗನಿಗೆ ಕನಕಪುರದಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ.&lt;/p&gt;&lt;p&gt;ರಾಜಕೀಯವಾಗಿ ತಮ್ಮನ್ನ ಬೆಳೆಸಿದ ಅಲ್ಲಿನ ಮತದಾರರಿಗೆ ಧನ್ಯವಾದ ಹೇಳಿದ್ದಾರೆ ಡಿ.ಕೆ.ಶಿವಕುಮಾರ್. ಹಾಗಿದ್ರೆ &amp;nbsp;ಸಿಎಂ ಆದ ಬಳಿಕ ಸ್ವಕ್ಷೇತ್ರಕ್ಕೆ ಹೇಗಿತ್ತು ಮೊಟ್ಟ ಮೊದಲ ಭೇಟಿ..? ಈ ವೇಳೆ ತಮ್ಮ ಕ್ಷೇತ್ರದ ಜನರಿಗೆ ಡಿಕೆ ಕೊಟ್ಟ ಭರವಸೆಯೇನು..? ಜೊತೆಗೆ ಮತದಾರರಿಗೆ ಹೇಳಿದ ಆ ಕಿವಿಮಾತೇನು.? ಈ ಸಂಭ್ರಮದ ಮಧ್ಯೆಯೇ ಅದೊಂದು ರಾಜಕೀಯ ದಾಳವನ್ನ ಡಿ.ಕೆ.ಶಿವಕುಮಾರ್ ಉರುಳಿಸಿದ್ದಾರೆ. ಸ್ವಕ್ಷೇತ್ರದಲ್ಲಿ ಸಂಭ್ರಮದ ಮೆರವಣಿಗೆ ನಡೆಸ್ತಾ ಇರುವಾಗಲೇ ಅದೊಂದು ರಾಜಕೀಯ ದಾಳವನ್ನ ಸಹ ಡಿ.ಕೆ.ಶಿವಕುಮಾರ್ ಉರುಳಿಸಿದ್ದಾರೆ. 2028ರ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉರುಳಿಸಿರೋ ಮಹಾದಾಳವದು. ಹಾಗಿದ್ರೆ ಸಂಭ್ರಮದ ಮಧ್ಯೆ ಏನಿದು ಡಿಕೆ ರಣಕಹಳೆ.?&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-government-first-5-days-10-key-decisions-gvd-videoshow-ds5eqpm"/>
        </item>
        <item>
            <title><![CDATA[ಬೆಂಗಳೂರು ಯುವಕನಿಂದ ₹35 ಲಕ್ಷ ದೋಚಿದ ಮ್ಯಾಟ್ರಿಮೋನಿಯಲ್ ಮಾಯಾಂಗನೆ! ಸೈಬರ್ ಠಾಣೆಯಲ್ಲಿ ಲಕ್ಷ್ಮಿ ವಿರುದ್ದ ದೂರು]]></title>
            <link>https://kannada.asianetnews.com/crime/woman-uses-matrimonial-site-to-trap-man-cheats-him-of-35-lakh-rupees-in-crypto-fraud-kvn/articleshow-50q5ztf</link>
            <guid isPermaLink="true">https://kannada.asianetnews.com/crime/woman-uses-matrimonial-site-to-trap-man-cheats-him-of-35-lakh-rupees-in-crypto-fraud-kvn/articleshow-50q5ztf</guid>
            <pubDate>Mon, 08 Jun 2026 13:13:39 +0530</pubDate>
            <description><![CDATA[ವೈವಾಹಿಕ ವೆಬ್&zwnj;ಸೈಟ್&zwnj;ನಲ್ಲಿ ಪರಿಚಯವಾದ ಯುವತಿಯೊಬ್ಬಳು, ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬನಿಗೆ ಹೂಡಿಕೆಯ ಆಮಿಷವೊಡ್ಡಿದ್ದಾಳೆ. ಆಕೆಯ ಮಾತನ್ನು ನಂಬಿ ಹಂತ ಹಂತವಾಗಿ ₹35 ಲಕ್ಷ ಹೂಡಿಕೆ ಮಾಡಿದ ಯುವಕ, ಇದೀಗ ಹಣ ಕಳೆದುಕೊಂಡು ಸೈಬರ್ ಠಾಣೆಗೆ ದೂರು ನೀಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jr4f91g3p3vwvbp8qdzq1fk8,imgname-Matrimonial-Site-Trap-1743906964995.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ವೈವಾಹಿಕ ವೆಬ್&zwnj;ಸೈಟ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಯುವಕನಿಗೆ ಮದುವೆಯಾಗುವುದಾಗಿ ನಂಬಿಸಿ ಹೂಡಿಕೆ ನೆಪದಲ್ಲಿ ₹35 ಲಕ್ಷ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಆಗ್ನೇಯ ವಿಭಾಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಮಡಿವಾಳ ನಿವಾಸಿಯಾದ ಅನಿಲ್&zwnj; ಕುಮಾರ್&zwnj; ಸಾಗಿನಾಲಾ ಎಂಬುವರು ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ವೈವಾಹಿಕ ವೆಬ್&zwnj;ಸೈಟ್&zwnj; ಮೂಲಕ ಯುವತಿ ಪರಿಚಯ&lt;/strong&gt;&lt;/h2&gt;&lt;p&gt;ಅನಿಲ್&zwnj; ಕುಮಾರ್&zwnj; ವೈವಾಹಿಕ ವೆಬ್&zwnj;ಸೈಟ್&zwnj; ಮೂಲಕ ಮದುವೆಯಾಗಲು ಯುವತಿಯರ ವಿವರ ಹುಡುಕುತ್ತಿದ್ದರು. ಫೆ.4 ರಂದು ವಾಟ್ಸ್&zwnj;ಆ್ಯಪ್&zwnj; ಕಾಲ್&zwnj; ಮಾಡಿದ್ದ ಯುವತಿಯೊಬ್ಬಳು ಲಕ್ಷ್ಮಿ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಳು. ಬಳಿಕ ಇಬ್ಬರು ಕೆಲ ದಿನಗಳ&zwnj; ಕಾಲ ಫೋನ್&zwnj;ನಲ್ಲಿಯೇ ಮಾತುಕತೆ ನಡೆಸಿದ್ದರು. ಭವಿಷ್ಯ ದೃಷ್ಟಿಯಿಂದ ತಾನು ಆನ್&zwnj;ಲೈನ್&zwnj;ನಲ್ಲಿ ಹೂಡಿಕೆ ಮಾಡಿದ್ದೀನಿ ಎಂದು ಅನಿಲ್&zwnj;ಕುಮಾರ್&zwnj;ಗೆ ಹೇಳಿ ನೀವು ಕೂಡ ಕ್ರಿಪ್ಟೋ/ಟ್ರೇಡಿಂಗ್&zwnj;ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಅನಿಲ್&zwnj;ಗೆ ಆಮಿಷವೊಡ್ಡಿದ್ದಳು.&lt;/p&gt;&lt;h3&gt;&lt;strong&gt;ಲೋನ್ ಪಡೆದು ₹35 ಲಕ್ಷ ಹೂಡಿಕೆ!&lt;/strong&gt;&lt;/h3&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಹೂಡಿಕೆ ಮಾಡು ಮದುವೆ ಬಳಿಕ ಅದೇ ಹಣದಲ್ಲಿ ಲೈಫ್&zwnj; ಸೆಟಲ್ ಆಗಬಹುದು ಎಂದು ಹೇಳಿದ್ದಳು. ಇದಕ್ಕೆ ಅನಿಲ್&zwnj; ಈಗ ಬೇಡ ಮದುವೆ ಬಳಿಕ ನೋಡೋಣ ಎಂದಿದ್ದರು. ಆದರೂ ಕೂಡ ಹಣ ಹೂಡಿಕೆ ಮಾಡುವಂತೆ ಲಕ್ಷ್ಮಿ ಪ್ರೇರೇಪಿಸಿದ್ದಳು. ನಂತರ ಆಕೆಯ ಒತ್ತಡಕ್ಕೆ ಮಣಿದ ಅನಿಲ್&zwnj; ಆಕೆ ನೀಡಿದ ವೆಬ್&zwnj;ಸೈಟ್&zwnj;ನಲ್ಲಿ ಆರಂಭದಲ್ಲಿ ₹60 ಸಾವಿರ ಹೂಡಿಕೆ ಮಾಡಿದ್ದರು. ನಂತರ ವಿವಿಧ ಬ್ಯಾಂಕ್&zwnj;ಗಳಲ್ಲಿ ಲೋನ್&zwnj; ಪಡೆದು ಹಂತಹಂತವಾಗಿ ₹35 ಲಕ್ಷ ಹೂಡಿಕೆ ಮಾಡಿದ್ದರು. ಬಳಿಕ ಲಾಭದ ಹಣ ಪಡೆಯಲು ಹೋದಾಗ ಖಾತೆಯೇ ಡಿಲೀಟ್ ಆಗಿತ್ತು. ನಂಬರ್ ಕೊಟ್ಟಿದ್ದ ಯುವತಿಯ ಮೊಬೈಲ್ ಕೂಡ ಸ್ವಿಚ್ ಆಫ್&zwnj; ಆಗಿತ್ತು. ಕೊನೆಗೆ ತಾನೂ ಮೋಸ ಹೋಗಿರುವುದನ್ನು ಅರಿತ ಅನಿಲ್&zwnj; ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿಕೊಂಡಿರುವ ಆಗ್ನೇಯ ವಿಭಾಗ ಸೈಬರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/woman-uses-matrimonial-site-to-trap-man-cheats-him-of-35-lakh-rupees-in-crypto-fraud-kvn/articleshow-50q5ztf"/>
        </item>
        <item>
            <title><![CDATA[ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ ಏನೂ ಬೇಡ, ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುವೆ: ರಾಮಲಿಂಗಾರೆಡ್ಡಿ ಯೂ ಟರ್ನ್]]></title>
            <link>https://kannada.asianetnews.com/karnataka-districts/do-not-need-another-portfolio-or-bengaluru-in-charge-post-karnataka-minister-ramalinga-reddy-gdp/articleshow-9y29zup</link>
            <guid isPermaLink="true">https://kannada.asianetnews.com/karnataka-districts/do-not-need-another-portfolio-or-bengaluru-in-charge-post-karnataka-minister-ramalinga-reddy-gdp/articleshow-9y29zup</guid>
            <pubDate>Mon, 08 Jun 2026 18:15:14 +0530</pubDate>
            <description><![CDATA[&lt;p&gt;ಈ ಹಿಂದೆ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮಗೆ ನೀಡಲಾದ ಜಲಸಂಪನ್ಮೂಲ ಇಲಾಖೆಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಬೆಂಗಳೂರು ಉಸ್ತುವಾರಿ ಸೇರಿದಂತೆ ಬೇರೆ ಯಾವುದೇ ಖಾತೆಯೂ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದಾರೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktba9brar8txe3c4sf6gpmdn,imgname-ramalinga-reddy-karnataka-congress-resignation-portfolio-dispute-dk-shivakumar-biography-news-50-1780643835658.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಈ ಹಿಂದೆ ಮುನಿಸಿಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ತಮ್ಮ ನಿಲುವನ್ನು ಈಗ ಬದಲಿಸಿದ್ದು, ತಮಗೆ ಸದ್ಯ ಹಂಚಿಕೆಯಾಗಿರುವ ಜಲಸಂಪನ್ಮೂಲ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲೇ ತಾವು ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಉಸ್ತುವಾರಿ ನನಗೆ ಬೇಡ, ಕೊಟ್ಟರು ಬೇಡ ಅಂತಿನಿ. ತಮಗೆ ಬೇರೆ ಯಾವುದೇ ಇಲಾಖೆಯ ಅಗತ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.&lt;/p&gt;&lt;p&gt;ವಿಧಾನಸೌಧದಲ್ಲಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಮೊದಲ ಅಧಿಕೃತ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಖಾತೆ ಹಂಚಿಕೆ ಹಾಗೂ ಬೆಂಗಳೂರು ಉಸ್ತುವಾರಿಯ ಕುರಿತು ಕೇಳಲಾದ ಪ್ರಶ್ನೆಗಳಿಗೆ ಅತ್ಯಂತ ನೇರವಾಗಿಯೇ ಉತ್ತರಿಸಿದರು.&lt;/p&gt;&lt;h2&gt;ಖಾತೆ ಬದಲಾವಣೆಯೂ ಬೇಡ, ಬೆಂಗಳೂರು ಉಸ್ತುವಾರಿಯೂ ಬೇಡ!&lt;/h2&gt;&lt;p&gt;ನನಗೆ ಇನ್ನೊಂದು ಖಾತೆ ಬೇಡವೇ ಬೇಡ. ಸದ್ಯ ನನಗೆ ನೀಡಿರುವ ಇಲಾಖೆಯಲ್ಲೇ ನಾನು ಮುಂದುವರಿಯುತ್ತೇನೆ. ಸರ್ಕಾರದಲ್ಲಿ ಖಾತೆಗಾಗಿ ಕಾಯುತ್ತಿರುವ ಬೇರೆ ಶಾಸಕರು ಮತ್ತು ನಾಯಕರಿದ್ದಾರೆ, ಹೊಸ ಖಾತೆಗಳನ್ನು ಅವರಿಗೆ ಕೊಡಲಿ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು. ನಾನು ಯಾವತ್ತೂ ಬೆಂಗಳೂರು ಉಸ್ತುವಾರಿಗಾಗಿ ಬೇಡಿಕೆ ಇಟ್ಟಿಲ್ಲ. ಒಂದು ವೇಳೆ ಅವರಾಗಿ ತಂದುಕೊಟ್ಟರೂ ನಾನು ಅದನ್ನು ತಿರಸ್ಕರಿಸುತ್ತೇನೆ, ನನಗೆ ಉಸ್ತುವಾರಿ ಹುದ್ದೆ ಬೇಡ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಈ ಇಲಾಖೆಯು ದೇಶದ ಬೆನ್ನೆಲುಬಾದ ರೈತರಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ನಾನು ಈ ಹಿಂದೆಯೂ ಕೃಷಿ ಸಚಿವನಾಗಿ ಯಶಸ್ವಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಹೈಕಮಾಂಡ್ ಮುಂದೆ ಇಂತಹದೇ ಇಲಾಖೆ ಬೇಕು ಎಂದು ನಾನು ಯಾವತ್ತೂ ಕೇಳಿದವನಲ್ಲ. ಖಾತೆಗಳ ಬದಲಾವಣೆಗಾಗಿ ನಾನು ದೆಹಲಿಗೆ ಹೋಗಿಯೇ ಇಲ್ಲ ಎಂದರು.&lt;/p&gt;&lt;h2&gt;ಹಿಂದಿನ ಸಾಧನೆಗಳನ್ನು ಸ್ಮರಿಸಿದ ಸಚಿವರು&lt;/h2&gt;&lt;p&gt;ಈ ಹಿಂದೆ ತಾವು ನಿಭಾಯಿಸಿದ ಸಾರಿಗೆ ಹಾಗೂ ಮುಜರಾಯಿ ಇಲಾಖೆಗಳ ದಿನಗಳನ್ನು ನೆನಪಿಸಿಕೊಂಡ ಸಚಿವರು, ತಮಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಹೇಳಿದರು. ನನಗೆ ಹಿಂದೆ ಸಾರಿಗೆ ಇಲಾಖೆಯ ಜವಾಬ್ದಾರಿ ನೀಡಿದಾಗ ಸಂಸ್ಥೆಯು ತೀವ್ರ ಸಾಲದ ಸುಳಿಯಲ್ಲಿ ಸಿಲುಕಿತ್ತು. ಆದರೆ, ನನ್ನ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಂಘಟಿತ ಶ್ರಮದಿಂದಾಗಿ ಸಾರಿಗೆ ಸಂಸ್ಥೆಗೆ ಬರೋಬ್ಬರಿ 425 ಕ್ಕಿಂತಲೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳು ಒಲಿದು ಬಂದವು. ನಾನು ಈವರೆಗೆ ಕೆಲಸ ಮಾಡಿದ ಎಲ್ಲಾ ಇಲಾಖೆಗಳಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದೇ ಇಲಾಖೆಯಲ್ಲೂ ಕೆಟ್ಟ ಹೆಸರು ತಂದ ಉದಾಹರಣೆ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೆಮ್ಮೆಯಿಂದ ನುಡಿದರು.&lt;/p&gt;&lt;h2&gt;ನೀರಾವರಿ ಅಧಿಕಾರಿಗಳೊಂದಿಗೆ ಮೊದಲ ಸಭೆ: ಭದ್ರಾ ನೀರು ಬಿಡುಗಡೆಗೆ ಸಜ್ಜು&lt;/h2&gt;&lt;p&gt;ಖಾತೆ ಬೇಡ ಎಂದಿದ್ದ ಸಚಿವರು, ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಭರದಿಂದ ಕೆಲಸಕ್ಕೆ ಇಳಿದಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಸುದೀರ್ಘ ಮೊದಲ ಪರಿಶೀಲನಾ ಸಭೆ ನಡೆಸಿದರು. ಇಲಾಖೆಯ ಇಲಾಖಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ಹಾಗೂ ರಾಜ್ಯದ ನಾಲ್ಕು ಪ್ರಮುಖ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ (MD) ಸಭೆ ನಡೆಸಿದ ಸಚಿವರು, ಪ್ರಸ್ತುತ ಚಾಲ್ತಿಯಲ್ಲಿರುವ ನೀರಾವರಿ ಯೋಜನೆಗಳು ಹಾಗೂ ವಿವಿಧ ಕಾಮಗಾರಿಗಳ ಪ್ರಗತಿಯ ವಿವರವಾದ ಮಾಹಿತಿಯನ್ನು ಪಡೆದುಕೊಂಡರು.&lt;/p&gt;&lt;h2&gt;ಸುದ್ದಿಗೋಷ್ಠಿಯಲ್ಲಿ ಸಚಿವರು ಹಂಚಿಕೊಂಡ ಪ್ರಮುಖ ನಿರ್ಧಾರಗಳು:&lt;/h2&gt;&lt;p&gt;&lt;strong&gt;ನಿಗಮಗಳ ಸಭೆ: &lt;/strong&gt;ಕೃಷ್ಣ ಜಲಭಾಗ್ಯ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲಶಕ್ತಿ ಹಾಗೂ ಕಾವೇರಿ ನೀರಾವರಿ ನಿಗಮಗಳ ಪ್ರಗತಿ ಪರಿಶೀಲನೆಗಾಗಿ ಈ ವಾರದ ಶುಕ್ರವಾರ ಹಾಗೂ ಮುಂದಿನ ವಾರ ಎರಡು ಹಂತಗಳಲ್ಲಿ ಪ್ರತ್ಯೇಕ ನಿಗಮವಾರು ಸಭೆಗಳನ್ನು ಕರೆಯಲಾಗಿದೆ.&lt;/p&gt;&lt;p&gt;&lt;strong&gt;ಬೆಂಗಳೂರು ನೀರಿನ ಸಮಸ್ಯೆ: &lt;/strong&gt;ರಾಜಧಾನಿ ಬೆಂಗಳೂರಿನಲ್ಲಿ ತಲೆದೋರುತ್ತಿರುವ ಕುಡಿಯುವ ನೀರಿನ ಅಭಾವವನ್ನು ಕಾಯಂ ಆಗಿ ತಗ್ಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಗಂಭೀರ ಚರ್ಚೆ ನಡೆಸಲಾಗಿದ್ದು, ಸೂಕ್ತ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ಭದ್ರಾ ಮೇಲ್ದಂಡೆ ಯೋಜನೆ:&lt;/strong&gt; ರಾಜ್ಯದ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕೊನೆಯ ಹಂತದಲ್ಲಿದ್ದು, ಮುಂದಿನ ಎರಡು ತಿಂಗಳ ಒಳಗಾಗಿ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.&lt;/p&gt;&lt;p&gt;ಇಲಾಖೆಯ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿರುವುದರಿಂದ, ಮುಂದಿನ ವಾರ ತಾವು ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವಾಸ ಕೈಗೊಳ್ಳುತ್ತಿರುವುದಾಗಿ ಸಚಿವರು ಪ್ರಕಟಿಸಿದರು. ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ರಾಜ್ಯದ ಯೋಜನೆಗಳಿಗೆ ಅನುಮೋದನೆ ಹಾಗೂ ಅನುದಾನ ಕೋರಲಿದ್ದಾರೆ. ಇದೇ ವೇಳೆ ಕರ್ನಾಟಕ ಮೂಲದ ಕೇಂದ್ರ ಸಚಿವರು ಹಾಗೂ ರಾಜ್ಯದ ಎಲ್ಲಾ ಸಂಸದರನ್ನು ಒಟ್ಟಾಗಿ ಭೇಟಿಯಾಗಿ, ರಾಜ್ಯದ ನೀರಾವರಿ ಹಿತರಕ್ಷಣೆಗಾಗಿ ಪಕ್ಷಾತೀತವಾಗಿ ಒಟ್ಟಾಗಿ ಧ್ವನಿ ಎತ್ತುವಂತೆ ಮನವಿ ಮಾಡುವುದಾಗಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/do-not-need-another-portfolio-or-bengaluru-in-charge-post-karnataka-minister-ramalinga-reddy-gdp/articleshow-9y29zup"/>
        </item>
        <item>
            <title><![CDATA[ಹಳಿ ಇಲ್ಲದ ನೀಲಿ ಮಾರ್ಗಕ್ಕೆ ಬೋಗಿ ಬಂತು! ಸಿಲ್ಕ್ ಬೋರ್ಡ್-ಏರ್ಪೋರ್ಟ್ ಮೆಟ್ರೋ ಸಂಚಾರ ಆರಂಭ ಯಾವಾಗ?]]></title>
            <link>https://kannada.asianetnews.com/karnataka-districts/bengaluru-metro-blue-line-receives-first-train-operations-delayed-amid-ongoing-work-kvn/articleshow-axcmsx4</link>
            <guid isPermaLink="true">https://kannada.asianetnews.com/karnataka-districts/bengaluru-metro-blue-line-receives-first-train-operations-delayed-amid-ongoing-work-kvn/articleshow-axcmsx4</guid>
            <pubDate>Mon, 08 Jun 2026 08:49:08 +0530</pubDate>
            <description><![CDATA[ಸಿಲ್ಕ್&zwnj;ಬೋರ್ಡ್&zwnj;ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋ ನೀಲಿ ಮಾರ್ಗದ ಮೊದಲ ರೈಲು ಸಿದ್ಧವಾಗಿ ಡಿಪೋ ತಲುಪಿದೆ. ಆದರೆ, ಹಳಿ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ, ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲು ಮತ್ತಷ್ಟು ವಿಳಂಬವಾಗಲಿದೆ. ಈ ರೈಲನ್ನು ತಾಂತ್ರಿಕ ಭಿನ್ನತೆಯಿಂದಾಗಿ ಹಳದಿ ಮಾರ್ಗದಲ್ಲಿ ಬಳಸಲು ಸಾಧ್ಯವಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01ktggr4wbg1a2fpsgtx8094qc,imgname-blue-line-metro-05-1780818383755.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ನಗರದ ಸೆಂಟ್ರಲ್&zwnj; ಸಿಲ್ಕ್&zwnj;ಬೋರ್ಡ್&zwnj;ನಿಂದ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಹು ನಿರೀಕ್ಷೆಯ ನಮ್ಮ ಮೆಟ್ರೋ 58.19 ಕಿ.ಮೀ ಉದ್ದದ &lsquo;ನೀಲಿ ಮಾರ್ಗ&rsquo;ದಲ್ಲಿ ಸಂಚರಿಸುವ ಮೊದಲ ರೈಲು ಸಿದ್ಧವಾಗಿ ಡಿಪೋ ತಲುಪಿದೆ. ಆದರೆ, ಹಳಿ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ.&lt;/p&gt;&lt;p&gt;ನಗರದ ತಿಪ್ಪಸಂದ್ರದಲ್ಲಿನ ಬಿಇಎಂಎಲ್ ಪ್ಲಾಂಟ್&zwnj;ನಲ್ಲಿ ನಿರ್ಮಾಣಗೊಂಡಿರುವ 6 ಕೋಚ್&zwnj;ಗಳ ಮೊದಲ ರೈಲು ಸೆಟ್ ಬಿಎಂಆರ್&zwnj;ಸಿಎಲ್&zwnj;ನ ಬೈಯಪ್ಪನಹಳ್ಳಿ ಡಿಪೋವನ್ನು ತಲುಪಿದೆ. ಒಂದೆರಡು ವಾರಗಳಲ್ಲಿ ಮತ್ತೊಂದು ರೈಲು ಕೂಡ ಆಗಮಿಸಲಿದ್ದು, ಡಿಪೋದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಏರ್&zwnj;ಪೋರ್ಟ್ ಮಾರ್ಗದಲ್ಲಿ ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ 6 ಕೋಚ್&zwnj;ಗಳ ಪೈಕಿ 2 ಕೋಚ್&zwnj;ಗಳಲ್ಲಿ ಲಗೇಜ್ ರ್&zwj;ಯಾಕ್ ಅಳವಡಿಸಲಾಗಿದೆ. &lsquo;ನಿಗದಿತ ವೇಳೆಯ ಪ್ರಕಾರವೇ ನೀಲಿ ಮಾರ್ಗದ ರೈಲುಗಳು ಪೂರೈಕೆ ಮಾಡಲಾಗುತ್ತಿದೆ&rsquo; ಎಂದು ಬಿಎಂಆರ್&zwnj;ಸಿಎಲ್ ಅಧಿಕಾರಿಯೊಬ್ಬರು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿದರು.&lt;/p&gt;&lt;p&gt;ಸಿಲ್ಕ್&zwnj;ಬೋರ್ಡ್&zwnj;ನಿಂದ ಕೆ.ಆರ್.ಪುರ, ನಾಗವಾರ, ಹೆಬ್ಬಾಳ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ನಗರದ ಪ್ರಮುಖ ಐಟಿ-ಬಿಟಿ ಪ್ರದೇಶಗಳ ಮೂಲಕ ನೀಲಿ ಮಾರ್ಗ ಹಾದು ಹೋಗುತ್ತದೆ. ನೀಲಿ ಮಾರ್ಗದಲ್ಲಿ ಮೊದಲ ಹಂತದಲ್ಲಿ ಸಿಲ್ಕ್&zwnj;ಬೋರ್ಡ್&zwnj;ನಿಂದ ಕೆ.ಆರ್.ಪುರವರೆಗೆ 13 ರೈಲು ನಿಲ್ದಾಣಗಳ ನಡುವಿನ ರೈಲು ಸಂಚಾರ ಈ ವರ್ಷಾಂತ್ಯಕ್ಕೆ ಆರಂಭಿಸುವ ಗುರಿ ಹೊಂದಲಾಗಿದೆ. ಆದರೆ, ಸಾಕಷ್ಟು ಕಾಮಗಾರಿ ಬಾಕಿ ಇರುವುದರಿಂದ ನಿಗದಿತ ವೇಳೆಗೆ ರೈಲು ಸಂಚಾರ ಆರಂಭವಾಗುವುದಿಲ್ಲ ಎಂದು ತಿಳಿದು ಬಂದಿದೆ.&lt;/p&gt;&lt;h2&gt;&lt;strong&gt;ಪರೀಕ್ಷೆಗೆ ತಿಂಗಳುಗಳು ಬೇಕು:&amp;nbsp;&lt;/strong&gt;&lt;/h2&gt;&lt;p&gt;19.75 ಕಿ.ಮೀ ಉದ್ದದ ಸಿಲ್ಕ್&zwnj;ಬೋರ್ಡ್ ಮತ್ತು ಕೆ.ಆರ್.ಪುರ ನಡುವಿನ ಮಾರ್ಗದಲ್ಲಿ ಹಳಿ ಅಳವಡಿಕೆಗಾಗಿ ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಇನ್ನು ಕೆ.ಆರ್.ಪುರದಿಂದ ಏರ್&zwnj;ಪೋರ್ಟ್&zwnj;ವರೆಗಿನ ಮಾರ್ಗದಲ್ಲಿ 38.44 ಕಿ.ಮೀ ಉದ್ದದ ಮಾರ್ಗದಲ್ಲಿ ಏಪ್ರಿಲ್ ಅಂತ್ಯದವರೆಗೆ ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ ಕ್ರಮವಾಗಿ ಶೇ.18ರಷ್ಟು ಪೂರ್ಣಗೊಂಡಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕವೇ ರೈಲುಗಳನ್ನು ಹಳಿಗೆ ಇಳಿಸಿ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುತ್ತದೆ. ಅದಕ್ಕೆ ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಬಿಎಂಆರ್&zwnj;ಸಿಎಲ್ ಹೇಳಿದೆ.&lt;/p&gt;&lt;h3&gt;&lt;strong&gt;ಮುಂದಿನ ವರ್ಷ ರೈಲು ಸಂಚಾರ&amp;nbsp;&lt;/strong&gt;&lt;/h3&gt;&lt;p&gt;ರೈಲು ನಿಲ್ದಾಣಗಳ ನಿರ್ಮಾಣ, ಹಳಿ ಅಳವಡಿಕೆ, ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ ಸಾಕಷ್ಟು ಕಾಮಗಾರಿ ಬಾಕಿ ಇರುವ ಜೊತೆಗೆ ರೈಲುಗಳ ಪರೀಕ್ಷಾರ್ಥ ಸಂಚಾರವೂ ಆಗಬೇಕಿರುವ ಕಾರಣ ನೀಲಿ ಮಾರ್ಗದಲ್ಲಿ ನಿಗದಿತ ಅವಧಿಯಲ್ಲಿ ರೈಲು ಸಂಚಾರ ಆರಂಭವಾಗುವುದಿಲ್ಲ. ಸಿಲ್ಕ್&zwnj;ಬೋರ್ಡ್&zwnj;ನಿಂದ ಕೆ.ಆರ್.ಪುರ ವರೆಗಿನ ಮಾರ್ಗದಲ್ಲಿ ಮುಂದಿನ ವರ್ಷದಿಂದ ಸಂಚಾರ ಆರಂಭವಾಗಬಹುದು ಎಂದು ಹೇಳಲಾಗಿದೆ.&lt;/p&gt;&lt;h3&gt;&lt;strong&gt;ಹಳದಿ ಮಾರ್ಗದಲ್ಲಿ ರೈಲು ಇರಲಿಲ್ಲ ಹಳಿ ಸಿದ್ಧವಾಗಿತ್ತು!&lt;/strong&gt;&lt;/h3&gt;&lt;p&gt;ಆರ್.ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಸಂಪೂರ್ಣ ಸಿದ್ಧವಾಗಿ ಹಲವು ತಿಂಗಳುಗಳೇ ಕಳೆದರೂ ರೈಲುಗಳು ಬಂದಿರಲಿಲ್ಲ. ಈಗಲು ಕೇವಲ 10 ರೈಲುಗಳು ಮಾತ್ರ ಸಂಚರಿಸುತ್ತವೆ. ಇನ್ನೂ 5 ರೈಲುಗಳು ಬರಬೇಕಾಗಿದೆ.&lt;/p&gt;&lt;h3&gt;&lt;strong&gt;ಹಳದಿ ಮಾರ್ಗಕ್ಕೆ ಬಳಸಲಾಗದು!&lt;/strong&gt;&lt;/h3&gt;&lt;p&gt;ಹಳದಿ ಮಾರ್ಗದಲ್ಲಿ ರೈಲುಗಳ ಕೊರತೆ ಇದೆ. ಆದರೆ, ನೀಲಿ ಮಾರ್ಗದಲ್ಲಿ ಹಳಿ ಸಿದ್ಧವಾಗುವ ಮುಂಚೆಯೇ ರೈಲು ಬಂದಿದೆ. ಹೀಗಾಗಿ, ನೀಲಿ ಮಾರ್ಗದ ರೈಲನ್ನು ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಬಿಡಬಾರದೇಕೆ? ಎಂದು ಕೆಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಆದರೆ, ಎರಡು ಮಾರ್ಗದಲ್ಲಿ ರೈಲು ಪೂರೈಕೆ ಮಾಡಿರುವ ಕಂಪನಿಗಳು ಹಾಗೂ ತಂತ್ರಜ್ಞಾನ ಭಿನ್ನವಾಗಿದೆ. ಅಲ್ಲದೇ, ರೈಲು ಮಾರ್ಗಗಳು ಕೂಡ ಬೇರೆ ಬೇರೆ ಆಗಿರುವುದರಿಂದ ನೀಲಿ ಮಾರ್ಗದ ರೈಲನ್ನು ಹಳದಿ ಮಾರ್ಗಕ್ಕೆ ಬಳಸಲಾಗದು ಎಂದು ಬಿಎಂಆರ್&zwnj;ಸಿಎಲ್ ಮೂಲಗಳು ತಿಳಿಸಿವೆ.&lt;/p&gt;&lt;p&gt;&lt;strong&gt;ನೀಲಿ ಮಾರ್ಗದ ಪ್ರಮುಖಾಂಶಗಳು&lt;/strong&gt;&lt;/p&gt;&lt;p&gt;- ಮಾರ್ಗದ ಉದ್ದ - 58 ಕಿ.ಮೀ&lt;/p&gt;&lt;p&gt;- ಮಾರ್ಗದಲ್ಲಿ ಸಂಚರಿಸುವ ಒಟ್ಟು ರೈಲುಗಳು- 37&lt;/p&gt;&lt;p&gt;- ಒಟ್ಟು ನಿಲ್ದಾಣಗಳು - 30&lt;/p&gt;&lt;p&gt;- 2026ರ ಅಂತ್ಯಕ್ಕೆ ಸಿಲ್ಕ್&zwnj;ಬೋರ್ಡ್&zwnj;ನಿಂದ ಕೆಂಪಾಪುರ ಸಂಚಾರ ಕಾರ್ಯಾರಂಭ ಗುರಿ.&lt;/p&gt;&lt;p&gt;- 2027ರ ಅಂತ್ಯದೊಳಗೆ ಕೆ.ಆರ್.ಪುರದಿಂದ ಕೆಂಪೇಗೌಡ ಏರ್ಪೋರ್ಟ್ ಕಾರ್ಯಾರಂಭ ಗುರಿ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-metro-blue-line-receives-first-train-operations-delayed-amid-ongoing-work-kvn/articleshow-axcmsx4"/>
        </item>
        <item>
            <title><![CDATA[ಬೆಂಗ್ಳೂರಲ್ಲಿ 1 BHK ಮನೆಗೆ ಬರೋಬ್ಬರಿ 45,000 ರೂ.ಬಾಡಿಗೆ ನೀಡುತ್ತಿದ್ದವನಿಗೆ ಕೊನೆಗೂ ಸ್ನೇಹಿತ ಕೊಟ್ಟ ಗುಡ್ ಐಡಿಯಾ]]></title>
            <link>https://kannada.asianetnews.com/viral/paying-45000-rs-rent-for-1-bhk-is-madness-why-this-bengaluru-resident-finally-quit-hsr-layout/articleshow-btbfgnk</link>
            <guid isPermaLink="true">https://kannada.asianetnews.com/viral/paying-45000-rs-rent-for-1-bhk-is-madness-why-this-bengaluru-resident-finally-quit-hsr-layout/articleshow-btbfgnk</guid>
            <pubDate>Sun, 07 Jun 2026 21:01:02 +0530</pubDate>
            <description><![CDATA[&lt;p&gt;&lt;strong&gt;Bengaluru rent viral post: &lt;/strong&gt;ಕಷ್ಟಪಟ್ಟು ದುಡಿದ 24 ಲಕ್ಷ ರೂಪಾಯಿ ಹಣ ಕಣ್ಣೆದುರೇ ಬಾಡಿಗೆ ರೂಪದಲ್ಲಿ ನೀರು ಪಾಲಾದರೆ ಯಾರಿಗೆ ತಾನೇ ಬೇಜಾರಾಗಲ್ಲ ಹೇಳಿ? ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ 1 BHK ಮನೆಗೆ 45 ಸಾವಿರ ರೂ. ಸುರಿಯುತ್ತಿದ್ದ ಬೆಂಗಳೂರಿನ ನಿವಾಸಿಯೊಬ್ಬರಿಗೆ ಕೊನೆಗೂ ಆ ಒಂದು ಶಾಕಿಂಗ್ ಸತ್ಯದ ಅರಿವಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kthb775a51dpfjz0vph5ceka,imgname-thumbnail---2026-06-07t205827.727-1780846140585.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾ&lt;/strong&gt;ರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾದ ಬೆಂಗಳೂರಿನಲ್ಲಿ ಐಟಿ ಕಂಪನಿಗಳು ಮತ್ತು ಸಾಫ್ಟ್&zwnj;ವೇರ್ ಉದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ಎಂಬಂತೆ ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಮನೆಗಳ ಬಾಡಿಗೆ ವೆಚ್ಚಗಳು ಕೂಡ ಗಗನಕ್ಕೇರುತ್ತಿವೆ. ಇತ್ತೀಚೆಗೆ ವೃತ್ತಿಪರರ ಪ್ರಮುಖ ಸಾಮಾಜಿಕ ಜಾಲತಾಣ ವೇದಿಕೆಯಾದ 'ಗ್ರೇಪ್&zwnj;ವೈನ್' (Grapevine) ನಲ್ಲಿ ಬೆಂಗಳೂರಿನ ಉದ್ಯೋಗಿಯೊಬ್ಬರು ಹಂಚಿಕೊಂಡಿರುವ ನೈಜ ಪೋಸ್ಟ್ ಇಂಟರ್ನೆಟ್&zwnj;ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಅವರು ನಗರದ ಅತ್ಯಂತ ಪ್ರತಿಷ್ಠಿತ, ಜನಪ್ರಿಯ ಹಾಗೂ ಅತ್ಯಂತ ದುಬಾರಿ ಐಟಿ ಹಬ್ ಪ್ರದೇಶವಾದ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ (HSR Layout) ಕೇವಲ ಒಂದು ಬಿಹೆಚ್&zwnj;ಕೆ (1 BHK) ಅಪಾರ್ಟ್&zwnj;ಮೆಂಟ್&zwnj;ಗಾಗಿ ತಿಂಗಳಿಗೆ ಬರೋಬ್ಬರಿ 45,000 ರೂಪಾಯಿಗಳಷ್ಟು ಭಾರಿ ಮೊತ್ತದ ಬಾಡಿಗೆ ಪಾವತಿಸುತ್ತಿದ್ದರು! ಕೊನೆಗೂ ಈ ವಿಪರೀತ ಆರ್ಥಿಕ ವೆಚ್ಚದಿಂದ ಬೇಸತ್ತು ಅವರು ಆ ಮನೆಯನ್ನು ಖಾಲಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ನೀರಿನ ಸಮಸ್ಯೆ, ಟ್ರಾಫಿಕ್ ಕಿರಿಕಿರಿ&lt;/strong&gt;&lt;/h3&gt;&lt;p&gt;ಬಳಕೆದಾರರು ತಮ್ಮ ಪೋಸ್ಟ್&zwnj;ನಲ್ಲಿ ಸುದೀರ್ಘವಾಗಿ ತಿಳಿಸಿರುವಂತೆ, ಕೇವಲ ಸುತ್ತಮುತ್ತಲಿನ ಜನರ ಪ್ರಭಾವ, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸುವ ಸುಳ್ಳು ಸೌಂದರ್ಯದ ಪ್ರದರ್ಶನ (Fake Aesthetic) ಮತ್ತು ಕೇವಲ ಬ್ರಾಂಡ್ ವ್ಯಾಲ್ಯೂ ಇರುವ ಇಂಟರ್ನೆಟ್ ಟ್ರೆಂಡ್ ನೋಡಿ ಅವರು ಆರಂಭದಲ್ಲಿ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ಗೆ ವಾಸಿಸಲು ಬಂದಿದ್ದರು. ಆದರೆ ಈ ದುಬಾರಿ ಬಾಡಿಗೆಯು ಅವರ ಕಷ್ಟದ ಗಳಿಕೆಯಲ್ಲಿ ಬರೋಬ್ಬರಿ 24 ಲಕ್ಷ ರೂಪಾಯಿಗಳಷ್ಟು ಬ್ಯಾಂಕ್ ಉಳಿತಾಯದ ಆದಾಯವನ್ನು ಸಂಪೂರ್ಣವಾಗಿ ಖಾಲಿ ಮಾಡಿತ್ತು. ಇದರೊಂದಿಗೆ ಆ ಭಾಗದಲ್ಲಿದ್ದ ತೀವ್ರ ಬೇಸಿಗೆಯ ನೀರಿನ ಸಮಸ್ಯೆ ಮತ್ತು ಆಫೀಸ್&zwnj;ಗೆ ಹೋಗುವಾಗ ದಿನನಿತ್ಯ ರಸ್ತೆಯಲ್ಲಿ ಎದುರಾಗುತ್ತಿದ್ದ ಭೀಕರ ಟ್ರಾಫಿಕ್ ಕಿರಿಕಿರಿ ಕೂಡ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಸುಸ್ತು ಮಾಡಿತ್ತು.&lt;/p&gt;&lt;h2&gt;&lt;strong&gt;ದೃಷ್ಟಿಕೋನ ಬದಲಿಸಿದ ಸಹೋದ್ಯೋಗಿಯ ಮಹತ್ವದ ಸಲಹೆ&lt;/strong&gt;&lt;/h2&gt;&lt;p&gt;ತಿಂಗಳುಗಳ ಕಾಲ ತೀವ್ರ ಆರ್ಥಿಕ ನಿರಾಶೆಯಲ್ಲಿದ್ದ ಇವರಿಗೆ ಅವರ ಸಹೋದ್ಯೋಗಿಯೊಬ್ಬರು ಹೊಸ ಐಡಿಯಾ ನೀಡಿದರು. ಅವರ ಆಹ್ವಾನದ ಮೇರೆಗೆ ಈ ಉದ್ಯೋಗಿ ವೈಟ್&zwnj;ಫೀಲ್ಡ್ ಸಮೀಪದ ಬ್ರೂಕ್&zwnj;ಫೀಲ್ಡ್ (Brookefield) ಪ್ರದೇಶದ ಉತ್ತಮ ವಸತಿ ಸೊಸೈಟಿಗೆ ಭೇಟಿ ನೀಡಿದರು. ಅಲ್ಲಿನ ವಿಶಾಲವಾದ ಮನೆಗಳು, ಶಾಂತಿಯುತವಾದ ವಾತಾವರಣ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಪ್ರತ್ಯಕ್ಷವಾಗಿ ನೋಡಿದಾಗ, ಕೇವಲ ಸಾಮಾಜಿಕ ಟ್ರೆಂಡ್ ಫಾಲೋ ಮಾಡುವುದಕ್ಕಿಂತ ತಮಗೆ ಆರ್ಥಿಕವಾಗಿ ಮತ್ತು ಪ್ರಾಯೋಗಿಕವಾಗಿ ಯಾವುದು ಸೂಕ್ತ ಎಂಬ ಸ್ಪಷ್ಟತೆ ಅವರಿಗೆ ಸಿಕ್ಕಿತು. ಕೂಡಲೇ ಅವರು ಎಚ್&zwnj;ಎಸ್&zwnj;ಆರ್ ಲೇಔಟ್&zwnj;ಗೆ &quot;ಗುಡ್&zwnj;ಬೈ&quot; ಹೇಳಿ, ಸ್ವಲ್ಪ ದೂರದಲ್ಲಿರುವ ಪ್ರಶಾಂತವಾದ ಸೊಸೈಟಿಗೆ ಮನೆ ಬದಲಾಯಿಸಿದರು. ಅಲ್ಲಿ ಕಡಿಮೆ ಬಾಡಿಗೆಯಲ್ಲಿ ಹೆಚ್ಚು ದೊಡ್ಡದಾದ ಮತ್ತು ಉತ್ತಮ ಸೌಕರ್ಯವಿರುವ ಅಪಾರ್ಟ್&zwnj;ಮೆಂಟ್ ಕೊನೆಗೂ ಅವರಿಗೆ ಸಿಕ್ಕಿದೆ.&lt;/p&gt;&lt;h3&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್&zwnj;ಗೆ ಇಂಟರ್ನೆಟ್&zwnj;ನಲ್ಲಿ ನೆಟ್ಟಿಗರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 1 BHK ಮನೆಗೆ 45,000 ರೂಪಾಯಿ ನೀಡುವುದು ಅತಿ ದೊಡ್ಡ ಹುಚ್ಚುತನ ಎಂದು ಬಹುತೇಕರು ಒಪ್ಪಿಕೊಂಡಿದ್ದಾರೆ. ಆದರೆ ಇನ್ನು ಕೆಲವು ಬಳಕೆದಾರರು ಆಫೀಸ್&zwnj;ಗೆ ಹತ್ತಿರವಾಗಿರಲು ಮತ್ತು ಬೆಂಗಳೂರಿನ ಭೀಕರ ಟ್ರಾಫಿಕ್&zwnj;ನಿಂದ ಪಾರಾಗಲು ಹೆಚ್ಚಿನ ಬಾಡಿಗೆ ನೀಡುವುದೇ ವಾಸಿ ಎಂದು ಜಾಗದ ಪರವಾಗಿ ವಾದಿಸಿದ್ದಾರೆ. ಒಟ್ಟಿನಲ್ಲಿ ಈ ವೈರಲ್ ಪೋಸ್ಟ್ ಬೆಂಗಳೂರಿನ ಮಧ್ಯಮ ವರ್ಗದ ಉದ್ಯೋಗಿಗಳ ಬಾಡಿಗೆ ಮನೆಗಳ ಕಷ್ಟವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/paying-45000-rs-rent-for-1-bhk-is-madness-why-this-bengaluru-resident-finally-quit-hsr-layout/articleshow-btbfgnk"/>
        </item>
        <item>
            <title><![CDATA[ಆಗಸ್ಟ್ 15ರಿಂದ ಹೊಸ 6 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚಾರ ನಿರೀಕ್ಷೆ; 7.5 ಕಿ.ಮೀ ಉದ್ದದ ಮಾರ್ಗ]]></title>
            <link>https://kannada.asianetnews.com/gallery/bengaluru-urban/bmrcl-namma-metro-train-services-expected-between-6-new-stations-from-august-15-mrq-d0f599m</link>
            <guid isPermaLink="true">https://kannada.asianetnews.com/gallery/bengaluru-urban/bmrcl-namma-metro-train-services-expected-between-6-new-stations-from-august-15-mrq-d0f599m</guid>
            <pubDate>Mon, 08 Jun 2026 11:00:07 +0530</pubDate>
            <description><![CDATA[&lt;p&gt;ಬಿಎಂಆರ್&zwnj;ಸಿಎಲ್ ಆಗಸ್ಟ್ 15ರಿಂದ 6 ನಿಲ್ದಾಣ ತೆರೆಯುವ ನಿರೀಕ್ಷೆಯಿದೆ. ಈ 7.5 ಕಿ.ಮೀ ಉದ್ದದ ಮಾರ್ಗವು ಯಶಸ್ವಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಇದರ ಕಾರ್ಯಾಚರಣೆಯಿಂದ ಬೆಂಗಳೂರು ಮೆಟ್ರೋ ಜಾಲವು ದೇಶದ ಎರಡನೇ ಅತಿದೊಡ್ಡ ಜಾಲವಾಗಿ ಹೊರಹೊಮ್ಮಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktjtv5cdpzag4qz3gg7rncp3,imgname-metro-1780896077197.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಎಂಆರ್&zwnj;ಸಿಎಲ್ ಆಗಸ್ಟ್ 15ರಿಂದ 6 ನಿಲ್ದಾಣ ತೆರೆಯುವ ನಿರೀಕ್ಷೆಯಿದೆ. ಈ 7.5 ಕಿ.ಮೀ ಉದ್ದದ ಮಾರ್ಗವು ಯಶಸ್ವಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಇದರ ಕಾರ್ಯಾಚರಣೆಯಿಂದ ಬೆಂಗಳೂರು ಮೆಟ್ರೋ ಜಾಲವು ದೇಶದ ಎರಡನೇ ಅತಿದೊಡ್ಡ ಜಾಲವಾಗಿ ಹೊರಹೊಮ್ಮಲಿದೆ.&lt;/p&gt;&lt;img&gt;&lt;p&gt;ಬಿಎಂಆರ್&zwnj;ಸಿಎಲ್ ಬೆಂಗಳೂರು ಮಹಾನಗರದ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಆಗಸ್ಟ್ 15ರಿಂದ ಆರು ಹೊಸ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಏಷ್ಯಾನೆಟ್&zwnj; ಸುವರ್ಣ ನ್ಯೂಸ್&zwnj;ಗೆ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ನಮ್ಮ ಮೆಟ್ರೋದ ಗುಲಾಬಿ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ನುರಿತ ತಜ್ಞರು ಮತ್ತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಗುಣಮಟ್ಟ ಸೇರಿದಂತೆ ನಡೆಸಿದ ವಿವಿಧ ಪರೀಕ್ಷೆಯಲ್ಲಿ ಗುಲಾಬಿ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಆಸಿಲೇಶನ್ ಪರೀಕ್ಷೆ ಯಶಸ್ವಿಯಾಗಿದೆ.&lt;/p&gt;&lt;img&gt;&lt;p&gt;ಇದೇ ವರ್ಷ ಆಗಸ್ಟ್ 15ರ ವೇಳೆಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಗಳಿವೆ. ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸಲು ರೈಲುಗಳಿಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನುಳಿದ ಅಂತಿಮ ಹಂತದ ಸುರಕ್ಷತಾ ತಪಾಸಣೆಗಳು ಭರದಿಂದ ಸಾಗುತ್ತಿವೆ. ಹೊಸ ಮಾರ್ಗ ಸಂಚಾರದ ಬಳಿಕ ನಮ್ಮ ಬೆಂಗಳೂರು ಮೆಟ್ರೋ ದೇಶದ 2ನೇ ಅತಿದೊಡ್ಡ ಜಾಲವಾಗಲಿದೆ. ಬೆಂಗಳೂರು ಮೆಟ್ರೋ ಜಾಲವು 103.6 ಕಿ.ಮೀ ಗೆ ವಿಸ್ತರಣೆಯಾಗುವ ಮೂಲಕ ಮುಂಬೈ ನಗರವನ್ನು ಹಿಂದಿಕ್ಕಲಿದೆ. ಮುಂಬೈ ಮೆಟ್ರೋ 101.43 ಕಿ.ಮೀ ಜಾಲವನ್ನು ಹೊಂದಿದೆ. ಡಿಸೆಂಬರ್&zwnj;ನಲ್ಲಿ ಸುರಂಗ ಮಾರ್ಗ್ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಗಳಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/bengaluru-urban/bmrcl-namma-metro-train-services-expected-between-6-new-stations-from-august-15-mrq-d0f599m"/>
        </item>
        <item>
            <title><![CDATA[ಮುಂದಿನ 3 ಗಂಟೆ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್]]></title>
            <link>https://kannada.asianetnews.com/gallery/karnataka-districts/bengaluru-rain-alert-next-3-hours-yellow-alert-karnataka-gvd-f1lglcr</link>
            <guid isPermaLink="true">https://kannada.asianetnews.com/gallery/karnataka-districts/bengaluru-rain-alert-next-3-hours-yellow-alert-karnataka-gvd-f1lglcr</guid>
            <pubDate>Sun, 07 Jun 2026 16:41:51 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktgqqedqff3c36v99djy936r,imgname-karnataka-rain-red-alert--2--1780825700791.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗುವ ಲಕ್ಷಣಗಳು ಕಂಡುಬಂದಿವೆ. ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಜೂ.07): &lt;/strong&gt;ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮುಂದಿನ 3 ಗಂಟೆ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.&lt;/p&gt;&lt;img&gt;&lt;p&gt;ಈಗಾಗಲೇ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ರಾಜ್ಯದ ಕರಾವಳಿ ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದ್ದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ಕರಾವಳಿ ಪ್ರದೇಶದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಇನ್ನೊಂದೆಡೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಬೆಳಗಾವಿ, ಬಾಗಲಕೋಟೆ, ರಾಯಚೂರು ಸೇರಿದಂತೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;img&gt;&lt;p&gt;ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/karnataka-districts/bengaluru-rain-alert-next-3-hours-yellow-alert-karnataka-gvd-f1lglcr"/>
        </item>
        <item>
            <title><![CDATA[ಬೆಂಗಳೂರು ಮನೆ ಮಾಲೀಕರಿಗೆ BESCOM ಸಿಹಿ ಸುದ್ದಿ: ವಿದ್ಯುತ್ ಸಂಪರ್ಕಕ್ಕೆ ಇನ್ಮುಂದೆ 'ಒಸಿ' (OC) ಕಡ್ಡಾಯವಲ್ಲ!]]></title>
            <link>https://kannada.asianetnews.com/karnataka-districts/bescom-exemption-occupancy-certificate-bengaluru-residential-buildings-power-connection/articleshow-fdryv5t</link>
            <guid isPermaLink="true">https://kannada.asianetnews.com/karnataka-districts/bescom-exemption-occupancy-certificate-bengaluru-residential-buildings-power-connection/articleshow-fdryv5t</guid>
            <pubDate>Sun, 07 Jun 2026 21:42:36 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ನಿರ್ದಿಷ್ಟ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು 'ಸ್ವಾಧೀನಾಭಭವ ಪ್ರಮಾಣಪತ್ರ' (OC) ಸಲ್ಲಿಕೆಯಿಂದ ಬೆಸ್ಕಾಂ ವಿನಾಯಿತಿ ನೀಡಿದೆ. 2400 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿದ G+3 ಅಥವಾ ಸ್ಟಿಲ್ಟ್ ಪಾರ್ಕಿಂಗ್ ಸಹಿತ 4 ಅಂತಸ್ತಿನ ಕಟ್ಟಡಗಳಿಗೆ ಈ ನಿಯಮ ಅನ್ವಯವಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jxhmbz1fnfj89ss2ch0f9bfr,imgname-electricity-consumption-1749717220399.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.07): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸುವ ಕನಸು ಕಾಣುತ್ತಿರುವವರಿಗೆ ಬೆಸ್ಕಾಂ (BESCOM) ಒಂದು ದೊಡ್ಡ ಸಮಾಧಾನಕರ ಸುದ್ದಿ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ನಿರ್ಮಿಸಲಾದ ನಿರ್ದಿಷ್ಟ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಇನ್ಮುಂದೆ 'ಸ್ವಾಧೀನಾಭಭವ ಪ್ರಮಾಣಪತ್ರ' ಅಥವಾ ಆಕ್ಯುಪೆನ್ಸಿ ಸರ್ಟಿಫಿಕೇಟ್ (Occupancy Certificate - OC) ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಹೊಸ ನಿಯಮ?&lt;/strong&gt;&lt;/h2&gt;&lt;p&gt;ಕರ್ನಾಟಕ ರಾಜ್ಯಪಾಲರ ಆದೇಶದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ 2024ರ ಕಲಂ 241(7)ರ ಅಡಿಯಲ್ಲಿ ಈ ಹೊಸ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಮೊದಲು ವಸತಿ ಕಟ್ಟಡಗಳು ಪೂರ್ಣಗೊಂಡ ನಂತರ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಕಡ್ಡಾಯವಾಗಿತ್ತು. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಮನೆ ಮಾಲೀಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಸರ್ಕಾರ, ಈಗ ನಿಯಮಗಳನ್ನು ಸರಳಗೊಳಿಸಿದೆ.&lt;/p&gt;&lt;h2&gt;&lt;strong&gt;ಯಾರಿಗೆ ಈ ವಿನಾಯಿತಿ ಅನ್ವಯಿಸುತ್ತದೆ?&lt;/strong&gt;&lt;/h2&gt;&lt;ul&gt; &lt;li&gt;ಬೆಸ್ಕಾಂ ನೀಡಿರುವ ಆದೇಶದ ಪ್ರಕಾರ, ಈ ಕೆಳಗಿನ ಮಾನದಂಡಗಳನ್ನು ಪೂರೈಸುವ ಕಟ್ಟಡಗಳಿಗೆ ಮಾತ್ರ ವಿನಾಯಿತಿ ಸಿಗಲಿದೆ:&lt;/li&gt; &lt;li&gt;ನಿವೇಶನದ ಅಳತೆ: 2400 ಚದರ ಅಡಿವರೆಗಿನ ವಿಸ್ತೀರ್ಣದ ಸೈಟ್&zwnj;ಗಳಲ್ಲಿ ನಿರ್ಮಿಸಲಾದ ಕಟ್ಟಡಗಳು (ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ).&lt;/li&gt; &lt;li&gt;ಕಟ್ಟಡದ ಎತ್ತರ: ಜಿ+3 (G+3) ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಟಿಲ್ಟ್ ಪಾರ್ಕಿಂಗ್ ಜೊತೆಗೆ 4 ಅಂತಸ್ತುಗಳನ್ನು (Stilt Parking + 4 Floors) ಹೊಂದಿರುವ ಕಟ್ಟಡಗಳು.&lt;/li&gt;&lt;/ul&gt;&lt;h3&gt;&lt;strong&gt;ಗಮನಿಸಬೇಕಾದ ಪ್ರಮುಖ ದಿನಾಂಕ:&lt;/strong&gt;&lt;/h3&gt;&lt;p&gt;ಈ ಸೌಲಭ್ಯವು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಮನೆ ಮಾಲೀಕರು ವಿದ್ಯುತ್ ಸಂಪರ್ಕಕ್ಕಾಗಿ 31 ಮೇ 2026ರ ಒಳಗೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಈ ಗಡುವಿನ ನಂತರ ಸಲ್ಲಿಸುವ ಅರ್ಜಿಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಬೆಸ್ಕಾಂನ ಈ ನಿರ್ಧಾರದಿಂದಾಗಿ ಬೆಂಗಳೂರಿನ ಸಾವಿರಾರು ಮಧ್ಯಮ ವರ್ಗದ ಮನೆ ಮಾಲೀಕರಿಗೆ ದೊಡ್ಡ ಮಟ್ಟದ ಆರ್ಥಿಕ ಮತ್ತು ಆಡಳಿತಾತ್ಮಕ ಹೊರೆ ತಪ್ಪಿದಂತಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bescom-exemption-occupancy-certificate-bengaluru-residential-buildings-power-connection/articleshow-fdryv5t"/>
        </item>
        <item>
            <title><![CDATA[ಲಾಲ್‌ಬಾಗ್ ಮಾವು ಮೇಳಕ್ಕೆ ಬಂತು ವಿಶ್ವದ ಅತ್ಯಂತ ದುಬಾರಿ ‘ಮಿಯಾಜಾಕಿ’; ಇದರ ಬೆಲೆ ₹3 ಲಕ್ಷ ಅಲ್ಲ, ಬರೀ 2000 ರೂ.!]]></title>
            <link>https://kannada.asianetnews.com/gallery/state/world-most-expensive-miyazaki-mango-selling-at-just-rs-2000-in-lalbagh-mango-mela-sat-fso3qrt</link>
            <guid isPermaLink="true">https://kannada.asianetnews.com/gallery/state/world-most-expensive-miyazaki-mango-selling-at-just-rs-2000-in-lalbagh-mango-mela-sat-fso3qrt</guid>
            <pubDate>Sun, 07 Jun 2026 19:21:57 +0530</pubDate>
            <description><![CDATA[&lt;p&gt;ಬೆಂಗಳೂರಿನ ಲಾಲ್&zwnj;ಬಾಗ್&zwnj; ಮಾವು ಮೇಳದಲ್ಲಿ, ವಿಶ್ವದ ಅತ್ಯಂತ ದುಬಾರಿ 'ಮಿಯಾಜಾಕಿ' ಮಾವು ಮಾರಾಟಕ್ಕೆ ಲಭ್ಯವಿದೆ. ಕರ್ನಾಟಕದ ರೈತರೇ ಬೆಳೆದ ಈ ಮಿಯಾಜಾಜಿ (Miyazaki Mango) &amp;nbsp;ಹಣ್ಣು, 2 ಲಕ್ಷ ರೂ. ಬದಲು ಕೇವಲ 2,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. &amp;nbsp;ಹಣ್ಣಿನ ವಿಶೇಷತೆ ತಿಳಿಯಲು ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kth4vehedna84rs9cbcnv1xq,imgname-world-most-expensive-miyazaki-mango-at-bengaluru--1--1780839463470.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಲಾಲ್&zwnj;ಬಾಗ್&zwnj; ಮಾವು ಮೇಳದಲ್ಲಿ, ವಿಶ್ವದ ಅತ್ಯಂತ ದುಬಾರಿ 'ಮಿಯಾಜಾಕಿ' ಮಾವು ಮಾರಾಟಕ್ಕೆ ಲಭ್ಯವಿದೆ. ಕರ್ನಾಟಕದ ರೈತರೇ ಬೆಳೆದ ಈ ಮಿಯಾಜಾಜಿ (Miyazaki Mango) &amp;nbsp;ಹಣ್ಣು, 2 ಲಕ್ಷ ರೂ. ಬದಲು ಕೇವಲ 2,000 ರೂ.ಗೆ ಮಾರಾಟ ಮಾಡಲಾಗುತ್ತಿದೆ. &amp;nbsp;ಹಣ್ಣಿನ ವಿಶೇಷತೆ ತಿಳಿಯಲು ಓದಿ.&lt;/p&gt;&lt;img&gt;&lt;p&gt;ಬೆಂಗಳೂರಿನ ಮಾವು ಪ್ರಿಯರ ನೆಚ್ಚಿನ ತಾಣವಾಗಿರುವ ಬೆಂಗಳೂರಿನ ಲಾಲ್&zwnj;ಬಾಗ್ ಸಸ್ಯೋದ್ಯಾನದಲ್ಲಿ ವಾರ್ಷಿಕ 'ಮಾವು ಮತ್ತು ಹಲಸು ಮೇಳ' ಅತ್ಯಂತ ಅದ್ಧೂರಿಯಾಗಿ ಆರಂಭಗೊಂಡಿದೆ. ಜೂನ್ 5 ರಿಂದ ಜೂನ್ 30 ರವರೆಗೆ ಒಟ್ಟು 26 ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ.&amp;nbsp;&lt;/p&gt;&lt;p&gt;ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಬರೋಬ್ಬರಿ 2.50 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಮಾರಾಟವಾಗುವ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು 'ಮಿಯಾಜಾಕಿ' (Miyazaki Mango) ಈ ಬಾರಿಯ ಮೇಳದ ಪ್ರಮುಖ ಶೋಕಿ ಎನಿಸಿಕೊಂಡಿದೆ. ಆದರೆ ಆಶ್ಚರ್ಯ ಎಂದರೆ, ಲಾಲ್&zwnj;ಬಾಗ್&zwnj;ನಲ್ಲಿ ಈ ಹಣ್ಣು ಲಕ್ಷಗಳಲ್ಲಲ್ಲ, ಕೇವಲ 2,000 ರೂಪಾಯಿಗೆ ಲಭ್ಯವಿದೆ!&lt;/p&gt;&lt;img&gt;&lt;p&gt;ಜಪಾನ್ ಮೂಲದ ತಳಿಯಾಗಿರುವ ಈ ಮಿಯಾಜಾಕಿಯನ್ನು ನಮ್ಮ ಹೆಮ್ಮೆಯ ಕರ್ನಾಟಕದ ರೈತರೇ ಸ್ಥಳೀಯವಾಗಿ ಬೆಳೆದು ಮೇಳಕ್ಕೆ ತಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ 'ಅನ್ನಪೂರ್ಣೇಶ್ವರ ಫಾರ್ಮ್'ನಲ್ಲಿ ಬೆಳೆದ ಮಿಯಾಜಾಕಿ ಮಾವಿನ ಹಣ್ಣುಗಳನ್ನು ಇಲ್ಲಿ ಮಾರಾಟಕ್ಕಿಡಲಾಗಿದೆ.&lt;/p&gt;&lt;img&gt;&lt;p&gt;ಇಲ್ಲಿನ ಪ್ರತಿಯೊಂದು ಹಣ್ಣು ಕೂಡ ಸುಮಾರು 1 ಕೆಜಿಯಿಂದ ಹಿಡಿದು 1,200 ಗ್ರಾಂ ವರೆಗೆ ತೂಕ ಬರುತ್ತದೆ. ಹಾಗಾಗಿ, ರೈತರು ಇದನ್ನು ಕೆಜಿ ಲೆಕ್ಕದಲ್ಲಿ ಮಾರಾಟ ಮಾಡದೆ, ಕೇವಲ ಒಂದು ಹಣ್ಣಿಗೆ 2,000 ರೂಪಾಯಿ ಬೆಲೆ ನಿಗದಿಪಡಿಸಿದ್ದಾರೆ. ವಿಶ್ವದ ಅತ್ಯಂತ ದುಬಾರಿ ಹಣ್ಣಿನ ರುಚಿ ಹೇಗಿರುತ್ತದೆ ಎಂದು ನೋಡಲು ಮಾವು ಪ್ರಿಯರು ಮುಂದಾಗಿದ್ದು, ಕಳೆದೆರಡು ಮೂರು ದಿನಗಳಲ್ಲೇ 150ಕ್ಕೂ ಅಧಿಕ ಮಿಯಾಜಾಕಿ ಹಣ್ಣುಗಳು ಮಾರಾಟವಾಗಿರಬಹುದು ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಜಪಾನ್&zwnj;ನಲ್ಲಿ ಅತ್ಯಂತ ಐಷಾರಾಮಿ ಹಣ್ಣಾಗಿ ಗುರುತಿಸಿಕೊಂಡಿರುವ ಮಿಯಾಜಾಕಿಗೆ ನಮ್ಮ ದೇಶದಲ್ಲಿ ಸೂಕ್ತ ಮಾರುಕಟ್ಟೆ ಸಿಗುತ್ತಿಲ್ಲ. ಭಾರತೀಯ ಗ್ರಾಹಕರು ಇಷ್ಟೊಂದು ದೊಡ್ಡ ಮೊತ್ತ ನೀಡಿ ಹಣ್ಣು ಖರೀದಿಸಲು ಮುಂದಾಗುತ್ತಿಲ್ಲ. ಅಲ್ಲದೆ, ನಮ್ಮ ದೇಶೀಯ ತಳಿಗಳಾದ ಬಾದಾಮಿ, ರಸಪುರಿಗಳ ರುಚಿಗೇ ಜನರು ಫಿದಾ ಆಗಿರುವುದರಿಂದ ಈ ದುಬಾರಿ ಹಣ್ಣಿನ ಸಹವಾಸಕ್ಕೆ ಯಾರೂ ಹೋಗುತ್ತಿಲ್ಲ. ಸೂಕ್ತ ಮಾರುಕಟ್ಟೆ ಹಾಗೂ ಬ್ರ್ಯಾಂಡಿಂಗ್ ಇಲ್ಲದ ಕಾರಣ ರೈತರು ಅನಿವಾರ್ಯವಾಗಿ ಇಷ್ಟು ಕಡಿಮೆ ಬೆಲೆಗೆ ಅಂದರೆ ಮಿಯಾಜಾಕಿ ಮಾವಿನ ಹಣ್ಣನ್ನು ಕೇವಲ 2 ಸಾವಿರ ರೂ.ಗೆ ಮಾರಾಟ ಮಾಡುವಂತಾಗಿದೆ.&lt;/p&gt;&lt;img&gt;&lt;p&gt;ಮೇಳದಲ್ಲಿ ಕೇವಲ ಮಿಯಾಜಾಕಿ ಮಾತ್ರವಲ್ಲದೆ, ರಾಜ್ಯದ ಪ್ರಮುಖ ಮಾವು ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯದ ರೈತರು ಭಾಗವಹಿಸಿದ್ದಾರೆ. ಮೇಳದಲ್ಲಿ ದಶೇರಿ, ಬಾದಾಮಿ, ಮಲ್ಲಿಕಾ, ಸಕ್ಕರೆ ಗುತ್ತಿ, ರಸಪುರಿ, ಆಮ್ರಪಾಲಿ, ಕೇಸರ್, ಹಿಮಾಮ್ ಪಸಂದ್, ಆಮ್ಲಟ್, ಕಾಲಾಪಾಡ್, ರುಮಾನಿ, ಸೇಂದೂರ, ಮರಿಗೌಡ, ತೋತಾಪುರಿ, ಲಾಂಗ್ರ ಸೇರಿದಂತೆ 20ಕ್ಕೂ ಹೆಚ್ಚು ತಳಿಯ ತಾಜಾ ಮಾವಿನ ಹಣ್ಣುಗಳು ಗ್ರಾಹಕರ ಕೈಗೆಟಕುವ ದರದಲ್ಲಿ ನೇರವಾಗಿ ರೈತರಿಂದಲೇ ಸಿಗುತ್ತಿವೆ.&lt;/p&gt;&lt;img&gt;&lt;p&gt;ಒಂದೆಡೆ ಮಾವು ಮೇಳ ಸಾರ್ವಜನಿಕರನ್ನು ಸೆಳೆಯುತ್ತಿದ್ದರೆ, ಮತ್ತೊಂದೆಡೆ ಲಾಲ್&zwnj;ಬಾಗ್&zwnj;ನ ಪ್ರವೇಶ ಶುಲ್ಕ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಪ್ರತಿಯೊಬ್ಬರಿಗೂ 50 ರೂಪಾಯಿ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದಲೇ ನಿರ್ವಹಣೆಯಾಗುವ ಇಂತಹ ಸಸ್ಯೋದ್ಯಾನಕ್ಕೆ, ಅದರಲ್ಲೂ ರೈತರಿಗಾಗಿ ಆಯೋಜಿಸುವ ಮಾವು ಮೇಳದ ಸಂದರ್ಭದಲ್ಲಿ ಇಷ್ಟು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಹಾಗೂ ಮಾವು ಪ್ರಿಯರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಶುಲ್ಕ ಕಡಿತಗೊಳಿಸುವಂತೆ ಆಗ್ರಹಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/world-most-expensive-miyazaki-mango-selling-at-just-rs-2000-in-lalbagh-mango-mela-sat-fso3qrt"/>
        </item>
        <item>
            <title><![CDATA[ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚರ್ಚೆಯೇ ಆಗಿಲ್ಲ, ಸುಮಲತಾಗೆ ಮುಂದೆ ಒಳ್ಳೆಯ ಸ್ಥಾನಮಾನ: ವಿಜಯೇಂದ್ರ]]></title>
            <link>https://kannada.asianetnews.com/gallery/karnataka-districts/by-vijayendra-clarifies-bjp-tickets-deve-gowda-seat-not-discussed-at-state-level-promises-better-role-for-sumalatha-gdp-gcwaef8</link>
            <guid isPermaLink="true">https://kannada.asianetnews.com/gallery/karnataka-districts/by-vijayendra-clarifies-bjp-tickets-deve-gowda-seat-not-discussed-at-state-level-promises-better-role-for-sumalatha-gdp-gcwaef8</guid>
            <pubDate>Mon, 08 Jun 2026 13:36:27 +0530</pubDate>
            <description><![CDATA[&lt;p&gt;ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-ani20250619201337,imgname-image-4f2f9cde-469a-4ba9-bc62-d72bd7319f8d.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಹೈಕಮಾಂಡ್ ಮಟ್ಟದಲ್ಲೇ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳುಹಿಸುವ ಕುರಿತು ಅಥವಾ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡುವ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ನಡೆದ ಚರ್ಚೆಗಳು ಹಾಗೂ ಹೈಕಮಾಂಡ್ ತಗೆದುಕೊಂಡ ಅಂತಿಮ ತೀರ್ಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಎನ್&zwnj;ಡಿಎ (NDA) ಜಂಟಿ ಅಭ್ಯರ್ಥಿಯಾಗಿ ರಾಜ್ಯಸಭೆ ಕಣಕ್ಕಿಳಿಯದ ವಿಚಾರವಾಗಿ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರಿಸಿದ ವಿಜಯೇಂದ್ರ, ಈ ವಿಷಯದಲ್ಲಿ ಹೈಕಮಾಂಡ್ ನೇರ ನಿರ್ಧಾರ ಕೈಗೊಂಡಿದೆ ಎಂದರು. ಎಚ್.ಡಿ. ದೇವೇಗೌಡರು ದೇಶದ ಅತ್ಯಂತ ಹಿರಿಯ ನಾಯಕರು ಹಾಗೂ ಮಾಜಿ ಪ್ರಧಾನಿಗಳು. ಅವರ ಬಗ್ಗೆ ನಮಗೆ ಮತ್ತು ಇಡೀ ರಾಜ್ಯಕ್ಕೆ ಅಪಾರ ಗೌರವವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವ ಕೆಲಸವನ್ನು ಅವರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವ ಕುರಿತು ರಾಜ್ಯ ಮಟ್ಟದ ಕೋರ್ ಕಮಿಟಿಯಲ್ಲಾಗಲಿ ಅಥವಾ ಸ್ಥಳೀಯ ನಾಯಕರ ಮಟ್ಟದಲ್ಲಾಗಲಿ ಯಾವುದೇ ಚರ್ಚೆಗಳು ನಡೆದಿರಲಿಲ್ಲ. ವರಿಷ್ಠರೇ ಈ ಬಗ್ಗೆ ನೇರ ತೀರ್ಮಾನ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗಾಗಿ ಬಿಟ್ಟುಕೊಟ್ಟಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ಸಿಗಬಹುದು ಎಂಬ ಬಲವಾದ ನಿರೀಕ್ಷೆಯಿತ್ತು. ಆದರೆ ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸುಮಲತಾ ಅವರ ತ್ಯಾಗವನ್ನು ಪಕ್ಷ ಮರೆತಿಲ್ಲ ಎಂಬ ಭರವಸೆ ನೀಡಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದಾಗ ಬಿಜೆಪಿ ಅವರಿಗೆ ಸಂಪೂರ್ಣ ಬೆಂಬಲ ನೀಡಿತ್ತು. ತದನಂತರ ಅವರು ಬಿಜೆಪಿಯನ್ನು ಅಧಿಕೃತವಾಗಿ ಬೆಂಬಲಿಸಿದರು. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಮೈತ್ರಿ ಧರ್ಮಕ್ಕಾಗಿ ಬಿಟ್ಟುಕೊಟ್ಟಿದ್ದೂ ಕೂಡ ಪಕ್ಷದ ಗಮನದಲ್ಲಿದೆ. ಸುಮಲತಾ ಅವರ ಹೆಸರು ಕೂಡಾ ಪ್ರಸ್ತಾಪ ಅಗಿತ್ತು. ಆದರೆ ಇಂದಿನ ರಾಜಕೀಯ ಸ್ಥಿತಿ ಗಮನದಲ್ಲಿಟ್ಟುಕೊಂಡು ವರಿಷ್ಠರು ತೀರ್ಮಾನ ಮಾಡಿದ್ದಾರೆ ಆದರೆ ಇಲ್ಲಿಗೇ ಎಲ್ಲವೂ ಮುಗಿದಿಲ್ಲ. ಸುಮಲತಾ ಅವರಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಪಕ್ಷದಲ್ಲಿ ಅತ್ಯಂತ ಸೂಕ್ತ ಹಾಗೂ ಗೌರವಯುತ ಸ್ಥಾನಮಾನ ಸಿಗಲಿದೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ವಿಜಯೇಂದ್ರ ತಿಳಿಸಿದರು.&lt;/p&gt;&lt;img&gt;&lt;p&gt;ಇದೇ ಸಂದರ್ಭದಲ್ಲಿ ಹೈಕಮಾಂಡ್ ಪ್ರಕಟಿಸಿರುವ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿ.ವೈ. ವಿಜಯೇಂದ್ರ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸ್ಥಾನಗಳಿಗೆ ವರಿಷ್ಠರು ಹೆಸರು ಘೋಷಣೆ ಮಾಡಿದ್ದಾರೆ. ರಾಜ್ಯಸಭೆಗೆ ಕುರುಬ ಸಮುದಾಯದ ನಾಗರಾಜ್ ಅವರನ್ನು ಅಯ್ಕೆ ಮಾಡಲಾಗಿದೆ. ವಿಧಾನ ಪರಿಷತ್ ಗೆ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮಡಿವಾಳ ಸಮುದಾಯದ ರಘು ಕೌಟಿಲ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಎಲ್ಲರಿಗೂ ಸಂತೋಷ ತಂದಿದೆ ವರಿಷ್ಠರ ಈ ನಡೆ ಪಕ್ಷದ ಎಲ್ಲ ನಾಯಕರು ಹಾಗೂ ಕಾರ್ಯಕರ್ತರಲ್ಲಿ ತೀವ್ರ ಸಂತಸ ಮೂಡಿಸಿದೆ ಎಂದು ಅವರು ಹೇಳಿದರು.&lt;/p&gt;&lt;p&gt;ವಿಶೇಷವಾಗಿ ಹಿಂದುಳಿದ ಮಡಿವಾಳ ಸಮುದಾಯದ ಅತ್ಯಂತ ಸಕ್ರಿಯ ನಾಯಕರಾದ ರಘು ಕೌಟಿಲ್ಯ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಿರುವುದು ಪಕ್ಷದ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ವರಿಷ್ಠರು ಇಂದಿನ ರಾಜಕೀಯ ಸ್ಥಿತ್ಯಂತರಗಳು ಹಾಗೂ ಸಮುದಾಯಗಳ ಸಮತೋಲನವನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿ ಈ ತೀರ್ಮಾನ ಪ್ರಕಟಿಸಿದ್ದಾರೆ ಎಂದು ವಿಜಯೇಂದ್ರ ಸಮರ್ಥಿಸಿಕೊಂಡರು.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/by-vijayendra-clarifies-bjp-tickets-deve-gowda-seat-not-discussed-at-state-level-promises-better-role-for-sumalatha-gdp-gcwaef8"/>
        </item>
        <item>
            <title><![CDATA[ಬೆಂಗಳೂರು ಜೈಲಿನಲ್ಲಿ ಶಂಕಿತ ಉಗ್ರರ ಪುಂಡಾಟ; ಧರ್ಮದ ಪರ ಘೋಷಣೆ ಕೂಗಿ ಗದ್ದಲ, ಹಲ್ಲೆ ಯತ್ನ]]></title>
            <link>https://kannada.asianetnews.com/state/suspected-terrorists-tried-to-seek-treatment-in-the-name-of-other-prisoners-at-parappana-agrahara-jail-bengaluru-mrq/articleshow-h75tgy2</link>
            <guid isPermaLink="true">https://kannada.asianetnews.com/state/suspected-terrorists-tried-to-seek-treatment-in-the-name-of-other-prisoners-at-parappana-agrahara-jail-bengaluru-mrq/articleshow-h75tgy2</guid>
            <pubDate>Mon, 08 Jun 2026 05:41:46 +0530</pubDate>
            <description><![CDATA[ಪರಪ್ಪನ ಅಗ್ರಹಾರ ಜೈಲಿನಲ್ಲಿ, ಶಂಕಿತ ಉಗ್ರರು ಬೇರೆ ಕೈದಿಗಳ ಹೆಸರಿನಲ್ಲಿ ಚಿಕಿತ್ಸೆ ಪಡೆಯಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ ವಾರ್ಡನ್&zwnj; ಮೇಲೆ ಹಲ್ಲೆಗೆ ಯತ್ನಿಸಿ, ಧರ್ಮದ ಪರ ಘೋಷಣೆ ಕೂಗಿ ಗದ್ದಲ ಸೃಷ್ಟಿಸಿದ್ದಾರೆ. ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj4v3zmg23rbaqra33w3ttmn,imgname-parappana-agrahara-jail-1771836669584.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತ ಉಗ್ರರು ಜೈಲು ಸಿಬ್ಬಂದಿ ಜತೆ ವಾಗ್ವಾದ ಮಾಡಿ, ಧರ್ಮದ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಪುಂಡಾಟ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ನಾಲ್ಕೈದು ದಿನಗಳ ಹಿಂದೆ ಜೈಲಿನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸ್ಫೋಟ ಪ್ರಕರಣದ ಮೂವರು ಕೈದಿಗಳು ಚಿಕಿತ್ಸೆಗಾಗಿ ಜೈಲು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಅವರನ್ನು ಜೈಲು ವಾರ್ಡನ್&zwnj; ಪ್ರಶ್ನಿಸಿದ್ದಾರೆ. ಆಗ ಕೋಪಗೊಂಡ ಕೈದಿಗಳು ವಾರ್ಡನ್&zwnj; ಜತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೆ, ಹಲ್ಲೆಗೂ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ವಿವರ&lt;/strong&gt;&lt;/h2&gt;&lt;p&gt;ನಾಲ್ಕೈದು ದಿನಗಳ ಹಿಂದೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಕೈದಿಗಳು ಚಿಕಿತ್ಸೆಗಾಗಿ ಜೈಲಿನ ಆಸ್ಪತ್ರೆಗೆ ಬಂದಿದ್ದರು. ನಂತರ ಪರಿಶೀಲಿಸಿದಾಗ ಕೈದಿಗಳು ಬೇರೆ ಕೈದಿಗಳ ಹೆಸರಿನಲ್ಲಿ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಜೈಲು ವಾರ್ಡನ್&zwnj; ದಾಖಲೆಗಳನ್ನು ಪರಿಶೀಲಿಸಿದಾಗ ಇವರ ಅಸಲಿ ಗುರುತು ಪತ್ತೆಯಾಗಿದೆ.&lt;/p&gt;&lt;p&gt;ಬೇರೆ ಕೈದಿಗಳ ಹೆಸರಿನಲ್ಲಿ ಏಕೆ ಬಂದಿದ್ದೀರಿ ಎಂದು ವಾರ್ಡನ್&zwnj; ಪ್ರಶ್ನಿಸಿದಾಗ, ಇದರಿಂದ ಕೆರಳಿದ ಕೈದಿಗಳು ವಾರ್ಡನ್&zwnj; ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರ ತಿಳಿದ ಒಂದೇ ಸಮುದಾಯದ ಸುಮಾರು 50ಕ್ಕೂ ಹೆಚ್ಚು ಕೈದಿಗಳು ಒಂದೆಡೆ ಜಮಾಯಿಸಿ, ವಾರ್ಡನ್&zwnj; ವಿರುದ್ಧ ಘೋಷಣೆ ಕೂಗಿದ್ದಾರೆ. ಜತೆಗೆ ಒಂದು ಧರ್ಮದ ಪರ ಜೋರಾಗಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಕರ್ತವ್ಯದಲ್ಲಿದ್ದ ಜೈಲು ವಾರ್ಡನ್&zwnj; ಮೇಲೂ ಹಲ್ಲೆ ನಡೆಸಲು ಸಹ ಯತ್ನಿಸಿದ್ದಾರೆ. ಇದರಿಂದಾಗಿ ಜೈಲು ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ಎಂದು ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ದಾಖಲಾಗದ ದೂರು&lt;/strong&gt;&lt;/h3&gt;&lt;p&gt;ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜೈಲಿನ ಹಿರಿಯ ಅಧಿಕಾರಿಗಳು, ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/suspected-terrorists-tried-to-seek-treatment-in-the-name-of-other-prisoners-at-parappana-agrahara-jail-bengaluru-mrq/articleshow-h75tgy2"/>
        </item>
        <item>
            <title><![CDATA[ಬೆಂಗಳೂರು ಆಕಾಶದಲ್ಲಿ ಕಂಡ ಆ ವಿಲಕ್ಷಣ ವಸ್ತು ಯಾವುದು? ರಾಕೆಟ್ ಅಥವಾ ಯುಎಫ್‌ಒ? ಬೆಚ್ಚಿಬಿದ್ದ ಜನತೆ!]]></title>
            <link>https://kannada.asianetnews.com/viral/mysterious-flying-object-smoke-trail-seen-in-bengaluru-sky-kr-market-flyover-sat/articleshow-sty1uyn</link>
            <guid isPermaLink="true">https://kannada.asianetnews.com/viral/mysterious-flying-object-smoke-trail-seen-in-bengaluru-sky-kr-market-flyover-sat/articleshow-sty1uyn</guid>
            <pubDate>Sun, 07 Jun 2026 13:52:31 +0530</pubDate>
            <description><![CDATA[ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಬಳಿ ಆಕಾಶದಲ್ಲಿ ರಾಕೆಟ್ ಮಾದರಿಯ ನಿಗೂಢ ವಸ್ತುವೊಂದು ಕಾಣಿಸಿಕೊಂಡು ಚರ್ಚೆಗೆ ಕಾರಣವಾಗಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ರಾಕೆಟ್, ಯುಎಫ್&zwnj;ಒ ಅಥವಾ ಜೆಟ್ ಇರಬಹುದೇ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgj6mjxbwwfkyrs7j18amaa,imgname-bengaluru-mysterious-flying-object-smoke-trail-1780819907162.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.07): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ಆಕಾಶದಲ್ಲಿ ಕಳೆದ ಎರಡು ದಿನಗಳ ಹಿಂದೆ ಕಂಡುಬಂದ ಅಪರೂಪದ ದೃಶ್ಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆಕಾಶದಿಂದ ಭೂಮಿಗೆ ರಾಕೆಟ್ ಮಾದರಿಯ ವಸ್ತುವೊಂದು ಹೊಗೆಯನ್ನು ಉಗುಳುತ್ತಾ ಧುಮ್ಮಿಕ್ಕುತ್ತಿರುವಂತೆ ಕಾಣುವ ದೃಶ್ಯ ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸಿದೆ. ಇದನ್ನು ನೋಡಿದ ತಕ್ಷಣ ಯಾವುದಾದರೂ ನಕ್ಷತ್ರ ಅಥವಾ ಆಕಾಶದ ತುಂಡೊಂದು ಭೂಮಿಗೆ ಅಪ್ಪಳಿಸುತ್ತಿದೆಯೇ ಎಂಬಂತೆ ಭಾಸವಾಗುತ್ತಿತ್ತು. ಆದರೆ, ಇಷ್ಟಕ್ಕೂ ಆಕಾಶದಲ್ಲಿ ಕಂಡ ಆ ನಿಗೂಢ ವಸ್ತು ಏನು ಎಂಬುದು ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ.&lt;/p&gt;&lt;h2&gt;&lt;strong&gt;ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆ ಬಳಿ ಕಂಡ ದೃಶ್ಯ:&lt;/strong&gt;&lt;/h2&gt;&lt;p&gt;ರಾಘವೇಂದ್ರ ಗುಡಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ರೋಮಾಂಚಕ ದೃಶ್ಯ ಸೆರೆಯಾಗಿದೆ. ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ರಸ್ತೆ ಮೇಲ್ಸೇತುವೆಯಲ್ಲಿ (KR Market road flyover) ಶುಕ್ರವಾರ ಸಂಜೆ ವೇಳೆ ಈ ವಿಚಿತ್ರ ದೃಶ್ಯ ಗೋಚರಿಸಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಬೆಂಕಿ ಅವಘಡ ಅಥವಾ ಕಟ್ಟಡ ನೆಲಸಮದ ವೇಳೆ ಧೂಳು ಮತ್ತು ಹೊಗೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಅವುಗಳು ಆಕಾಶದಲ್ಲಿ ಅಷ್ಟೊಂದು ಎತ್ತರಕ್ಕೆ ಹೋಗುವುದಿಲ್ಲ. ಗಗನಚುಂಬಿ ಕಟ್ಟಡಗಳು ಗಾಳಿಯನ್ನು ತಡೆಗಟ್ಟುವುದರಿಂದ ಇಂತಹ ದೃಶ್ಯಗಳು ಬೆಂಗಳೂರಿನಲ್ಲಿ ಅಪರೂಪ.&lt;/p&gt;&lt;h2&gt;&lt;strong&gt;ರಾಕೆಟ್? ಯುಎಫ್&zwnj;ಒ? ನೆಟ್ಟಿಗರ ಪ್ರಶ್ನೆಗಳ ಸುರಿಮಳೆ:&lt;/strong&gt;&lt;/h2&gt;&lt;p&gt;ಈ ವಿಡಿಯೋದಲ್ಲಿ, ಬಾಹ್ಯಾಕಾಶದ ವಸ್ತುವೊಂದು ಅಥವಾ ಮಾನವ ನಿರ್ಮಿತ ರಾಕೆಟ್ ಮಾದರಿಯ ವಸ್ತುವೊಂದು ದಟ್ಟವಾದ ಹೊಗೆಯನ್ನು ಬಿಡುತ್ತಾ ಭೂಮಿಯತ್ತ ಬರುತ್ತಿರುವಂತೆ ಭಾಸವಾಗುತ್ತದೆ. ಆಶ್ಚರ್ಯಚಕಿತರಾದ ಅವರು ತಕ್ಷಣವೇ ಅದನ್ನು ತಮ್ಮ ಮೊಬೈಲ್&zwnj;ನಲ್ಲಿ ಸೆರೆಹಿಡಿದು, ನೆಟ್ಟಿಗರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದಾರೆ.&lt;/p&gt;&lt;p&gt;&lsquo;ಬೆಂಗಳೂರಿನಲ್ಲಿ ಇಂದು ನಾನು ಕಂಡ ದೃಶ್ಯ. ಇದು ಆಪ್ಟಿಕಲ್ ಇಲ್ಯೂಷನ್, ಹೊಗೆ ಏನಾದ್ರೂ ಬಂದಿರೋದ? ಅಥವಾ ಅನ್ ಐಡೆಂಟಿಫೈಡ್ ಫಾರಿನ್ ಅಬ್ಜೆಕ್ಟ? ಇದು optical illusion ಅಂತೂ ಅಲ್ಲ. ಯಾಕಂದ್ರೆ ನಾನೇ ಕಣ್ಣಾರೆ ಕಂಡು, ನನ್ನ ಕೈಯಾರೆ ಮೊಬೈಲ್ ಅಲ್ಲಿ ತೆಗೆದ ದೃಶ್ಯ ಇದು. ಹಾಗಿದ್ರೆ ಏನಿದು?&rsquo; ಎಂದು ಅವರು ತಮಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಉತ್ತರ ಹುಡುಕಿದ ನೆಟ್ಟಿಗರು:&lt;/strong&gt;&lt;/h3&gt;&lt;p&gt;ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಉತ್ತರಿಸಲು ಪ್ರಯತ್ನಿಸಿದ್ದಾರೆ. ಒಬ್ಬ ಬಳಕೆದಾರರು, 'ಸಹೋದರ, ಅದು ಜೆಟ್ (Jet), ನನ್ನ ಬಳಿ ವಿಡಿಯೋ ಇದೆ, ಇದು ಯುಎಫ್&zwnj;ಒ ಅಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಘವೇಂದ್ರ ಗುಡಿ ಅವರು, &lsquo;ಓಹ್ ಓಕೆ. ಆದರೆ ನಾನು ಗಮನಿಸಿದ ಹಾಗೆ ವಿಮಾನದ ಶಬ್ದ ಕೇಳಿಸಲಿಲ್ಲ. ಬಹುಶಃ ಇದು ಯುಎವಿ (UAV - ಮಾನವರಹಿತ ವಿಮಾನ) ಕೂಡ ಆಗಿರಬಹುದು&rsquo; ಎಂದು ಊಹಿಸುವ ಮೂಲಕ ತಮ್ಮ ಕುತೂಹಲಕ್ಕೆ ಸಮಾಧಾನ ತಂದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್&zwnj;ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕುತೂಹಲ ಕೆರಳಿಸಿದೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Raghavendra Gudi (@raghavendra_gudi)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/mysterious-flying-object-smoke-trail-seen-in-bengaluru-sky-kr-market-flyover-sat/articleshow-sty1uyn"/>
        </item>
        <item>
            <title><![CDATA[ಐಟಿ ಕೆಲ್ಸ ಬಿಟ್ಟು ಬೆಂಗಳೂರಲ್ಲಿ ಆಟೋ ಓಡಿಸ್ತಿರೋ ಲೇಡಿ: ಅಮೆರಿಕದಲ್ಲಿಯೂ ಕನ್ನಡತಿಯ ಹವಾ]]></title>
            <link>https://kannada.asianetnews.com/women/netra-who-quit-it-job-and-drove-an-auto-bengaluru-woman-viral-in-california-too-suc/articleshow-ui9q0uy</link>
            <guid isPermaLink="true">https://kannada.asianetnews.com/women/netra-who-quit-it-job-and-drove-an-auto-bengaluru-woman-viral-in-california-too-suc/articleshow-ui9q0uy</guid>
            <pubDate>Sun, 07 Jun 2026 16:44:07 +0530</pubDate>
            <description><![CDATA[ಬೆಂಗಳೂರಿನ ನೇತ್ರಾ, ಐಟಿ ಕ್ಷೇತ್ರದ ಒತ್ತಡದ ಬದುಕನ್ನು ತ್ಯಜಿಸಿ ಆಟೋ ಚಾಲಕಿಯಾದರು. ಹಣಕ್ಕಿಂತ ನೆಮ್ಮದಿಯೇ ಮುಖ್ಯವೆಂದು ಸಾರುವ ಇವರು, ಈಗ ತಿಂಗಳಿಗೆ 60,000 ರೂ. ಸಂಪಾದಿಸುತ್ತಿದ್ದು, ಇವರ ಕಥೆ ಅಮೆರಿಕಾದಲ್ಲಿಯೂ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktgwjs42zmm810xa7a59eevp,imgname-auto-netra-1780830790786.jpg" type="image/jpeg" height="390" width="690"/>
            <content:encoded><![CDATA[&lt;p&gt;ಐಟಿ-ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಬೇಕು ಎನ್ನೋದು ಲಕ್ಷಾಂತರ ಮಂದಿಯ ಕನಸಾಗಿರುತ್ತದೆ. ಆದರೆ ಅಲ್ಲಿ ಹೋದ ಮೇಲೆ ಅಲ್ಲಿಯ ಒತ್ತಡವನ್ನು ಸಹಿಸಿಕೊಳ್ಳುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಲಕ್ಷ ಲಕ್ಷದಲ್ಲಿ ತಿಂಗಳ ಸಂಬಳ ಬಂದರೂ ನೆಮ್ಮದಿಯೇ ಇಲ್ಲದ ಮೇಲೆ ಇದೆಂಥ ಜೀವನ ಎಂದು ಅಂದುಕೊಂಡು ಆ ಕ್ಷೇತ್ರದಿಂದ ಹೊರಕ್ಕೆ ಬರುವವರು ಆಗಾಗ್ಗೆ ಕಾಣಸಿಗುತ್ತಾರೆ. ಅಂಥವರಲ್ಲಿ ಒಬ್ಬರು ಬೆಂಗಳೂರಿನ ನೇತ್ರಾ.&lt;/p&gt;&lt;h2&gt;&lt;strong&gt;ಹಣಕ್ಕಿಂತಲೂ ನೆಮ್ಮದಿ ಮುಖ್ಯ&lt;/strong&gt;&lt;/h2&gt;&lt;p&gt;ಐಟಿ ಕಂಪೆನಿ ಬಿಟ್ಟು ಆಟೋ ಓಡಿಸುವುದು ಎಂದರೆ ಅದೇನೂ ಸುಮ್ಮನೇ ಅಲ್ಲ. ಆದರೂ ಹಣಕ್ಕಿಂತಲೂ ಮುಖ್ಯವಾದದ್ದು ನೆಮ್ಮದಿ ಎನ್ನುವ ಸತ್ಯ ಕಂಡುಕೊಂಡಾಗ ಮನುಷ್ಯ ಸಹಜವಾಗಿ ಇಂಥ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಇದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ನೇತ್ರಾ. ಇದೀಗ ಇವರು ಬೆಂಗಳೂರು ಮೀರಿ, ಭಾರತವನ್ನೂ ದಾಟಿ ಅಮೆರಿಕದಲ್ಲಿಯೂ ಹವಾ ಸೃಷ್ಟಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿಯೂ ಐಟಿ ಲೇಡಿಯ ವಿಡಿಯೋ ವೈರಲ್​ ಆಗುತ್ತಿವೆ. ಐಟಿ ಕ್ಷೇತ್ರವನ್ನು ಬಿಟ್ಟಿದ್ದಾರೆ ಎನ್ನುವುದೇ ದೊಡ್ಡ ಮಟ್ಟಿಗಿನ ಚರ್ಚೆಯಾಗಿದೆ.&lt;/p&gt;&lt;h3&gt;&lt;strong&gt;ನಿದ್ದೆ ಮಾಡಲೂ ಆಗ್ತಿರಲಿಲ್ಲ&lt;/strong&gt;&lt;/h3&gt;&lt;p&gt;ನ್ಯೂಸೋನ್ಯೂಸು ಚಾನೆಲ್​ಗೆ ನೇತ್ರಾ ಅವರು ನೀಡಿರುವ ಸಂದರ್ಶನದಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಐಟಿ ಕಂಪೆನಿಯಲ್ಲಿ ಕೆಲಸ ಮಾಡುವಾಗ ಹೇಗೆ ನಿದ್ದೆ ಕೂಡ ಮಾಡಲು ಸಮಯಾವಕಾಶ ಇರಲಿಲ್ಲ ಎನ್ನುವ ಬಗ್ಗೆ ನೇತ್ರಾ ತಿಳಿಸಿದ್ದಾರೆ. ಅತಿ ದೂರದಲ್ಲಿ ರೈಲು ಹಿಡಿದು ಆಫೀಸ್​ಗೆ ಹೋಗಿ ಮತ್ತೆ ಮನೆಗೆ ಬಂದು 2-3 ಗಂಟೆ ನಿದ್ದೆ ಮಾಡಿ ಮತ್ತೆ ಕಚೇರಿಗೆ ಹೋಗುತ್ತಿದ್ದ ಆ ದಿನಗಳನ್ನು ನೆನಪಿಸಿಕೊಂಡಿರುವ ನೇತ್ರಾ, ತಮ್ಮ ಮಕ್ಕಳಿಗೂ ಟೈಮ್​ ಕೊಡಲು ಆಗುತ್ತಿರಲಿಲ್ಲ. ಆ ದಿನಗಳನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ನೋವಾಗತ್ತೆ ಎಂದಿದ್ದಾರೆ.&lt;/p&gt;&lt;p&gt;ಇದೇ ಕಾರಣಕ್ಕೆ ಆಟೋ ವೃತ್ತಿ ಆಯ್ದುಕೊಂಡೆ. ಜನ ಏನೇನೋ ಹೇಳ್ತಾರೆ. ಅದನ್ನು ಕೇಳುತ್ತಾ ಕುಳಿತರೆ ಆಗುವುದಿಲ್ಲ. ತಿಂಗಳಿಗೆ ಸಾಕಷ್ಟು ಸಂಪಾದನೆ ಮಾಡುತ್ತೇನೆ. ಈ ಕೆಲಸದಲ್ಲಿ ಅವರಿಗೆ ಈಗ ತಿಂಗಳಿಗೆ ಸುಮಾರು 60,000 ರೂಪಾಯಿ ಆದಾಯ ಬರುತ್ತಿದೆ. &quot;ನಾನು ಈಗ ಮೊದಲಿನಿಗಿಂತ ಹೆಚ್ಚು ಸಂತೋಷವಾಗಿದ್ದೇನೆ. ನನ್ನದೇ ಆದ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತೇನೆ, ಇದು ನನಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಶಾಂತಿ ನೀಡಿದೆ&quot; ಎಂದಿದ್ದಾರೆ ನೇತ್ರಾ.&lt;/p&gt;&lt;h3&gt;&lt;strong&gt;ಕ್ಯಾಲಿಫೋರ್ನಿಯಾದಲ್ಲಿ ಹವಾ&lt;/strong&gt;&lt;/h3&gt;&lt;p&gt;ಹೀಗೆ ವಿದೇಶಿಗರೊಬ್ಬರು ಇವರ ಆಟೋದಲ್ಲಿ ಬಂದಾಗ ಮಾತನಾಡುವ ಮಧ್ಯೆ ತಮ್ಮ ಐಟಿ ಅನುಭವವನ್ನು ಹಂಚಿಕೊಂಡಿದ್ದರಂತೆ ನೇತ್ರಾ. ಅದನ್ನು ಕೇಳಿದ ಆ ಪ್ರಯಾಣಿಕನಿಗೆ ಸಿಕ್ಕಾಪಟ್ಟೆ ಅಚ್ಚರಿಯಾಗಿದೆ. ಆಟೋ ಓಡಿಸುವಾಗ ಹಿಂದುಗಡೆಯಿಂದ ವಿಡಿಯೋ ಮಾಡುತ್ತಾ ಹೋಗಿದ್ದಾನೆ. ಅದು ನೇತ್ರಾ ಅವರ ಗಮನಕ್ಕೂ ಬಂದಿರಲಿಲ್ಲ. ಸಹಜವಾಗಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ಇದರಿಂದ ಪ್ರೇರೇಪಿತರಾದ ಆ ಪ್ರಯಾಣಿಕ, ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಇದನ್ನು ಶೇರ್​ ಮಾಡಿದ್ದೇ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿಯೂ ನೇತ್ರಾ ಹವಾ ಜೋರಾಗಿ ನಡೆದಿದೆ. ಅಲ್ಲಿಂದಲೂ ಸಿಕ್ಕಾಪಟ್ಟೆ ಜನರು ನೇತ್ರಾ ಅವರ ಬಗ್ಗೆ ತಿಳಿದುಕೊಳ್ಳಲು ತವಕರಾಗಿರುವ ಬಗ್ಗೆ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/women/netra-who-quit-it-job-and-drove-an-auto-bengaluru-woman-viral-in-california-too-suc/articleshow-ui9q0uy"/>
        </item>
        <item>
            <title><![CDATA[ಆರಂಕಿ ಸಂಬಳ ಪಡಿತಿದ್ರೂ ವೀಕೆಂಡ್ ಬಂದ್ರೆ Rapido ಬೈಕ್ ಓಡಿಸುವ ಸಾಫ್ಟ್‌ವೇರ್ ಇಂಜಿನಿಯರ್, ಇದೇ ಕಾರಣ!]]></title>
            <link>https://kannada.asianetnews.com/viral/bengaluru-techies-shocking-weekend-side-hustle-goes-viral/articleshow-uxsng1o</link>
            <guid isPermaLink="true">https://kannada.asianetnews.com/viral/bengaluru-techies-shocking-weekend-side-hustle-goes-viral/articleshow-uxsng1o</guid>
            <pubDate>Sun, 07 Jun 2026 22:01:48 +0530</pubDate>
            <description><![CDATA[&lt;p&gt;&lt;strong&gt;Bengaluru techie rapido driver: &lt;/strong&gt;ತಿಂಗಳಿಗೆ ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಿದ್ದರೂ, ಈ ವ್ಯಕ್ತಿ ವಾರಾಂತ್ಯದಲ್ಲಿ ರ&zwj;್ಯಾಪಿಡೋ ಬೈಕ್ ಓಡಿಸಲು ಆರಂಭಿಸಿದ್ದಾರಂತೆ! ಅಷ್ಟಕ್ಕೂ ಕೈತುಂಬಾ ಹಣವಿದ್ದರೂ ಈ ಇಂಜಿನಿಯರ್ ಇಂತಹ ನಿರ್ಧಾರ ತಗೆದುಕೊಳ್ಳಲು ಕಾರಣವಾದ ಆ ಕಹಿ ಸತ್ಯವಾದರೂ ಏನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kthehcver32vnmwanveqezsr,imgname-thumbnail---2026-06-07t215304.099-1780849619821.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾ&lt;/strong&gt;ರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಐಟಿ ಉದ್ಯೋಗ ಮತ್ತು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ ಎಂದರೆ ಆರ್ಥಿಕ ಭದ್ರತೆಯ ಅತ್ಯುನ್ನತ ಸಂಕೇತ ಎಂದೇ ಇಡೀ ಸಮಾಜದಲ್ಲಿ ಎಲ್ಲರೂ ಭಾವಿಸುತ್ತಾರೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣ 'X' (ಟ್ವಿಟರ್) ವೇದಿಕೆಯಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಇಡೀ ಮಧ್ಯಮ ವರ್ಗದ ಜನರನ್ನು ತೀವ್ರವಾಗಿ ಯೋಚನೆಗೆ ದೂಡುವಂತಿದೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದರೂ, ಸಾಫ್ಟ್&zwnj;ವೇರ್ ಇಂಜಿನಿಯರ್ ಒಬ್ಬರು ವಾರಾಂತ್ಯದಲ್ಲಿ (Weekends) ರ&zwj;್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನಾಗಿ ರಸ್ತೆಗೆ ಇಳಿಯುವ ನೈಜ ಕಥೆ ಈಗ ಇಂಟರ್ನೆಟ್ ಲೋಕದಲ್ಲಿ ಭಾರಿ ಚರ್ಚೆಗೆ ಮತ್ತು ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.&lt;/p&gt;&lt;p&gt;ಶಬಾಜ್ ಎಂಬ ಬಳಕೆದಾರರು ನಗರದ ಬನ್ನೇರುಘಟ್ಟಕ್ಕೆ ಪ್ರಯಾಣಿಸಲು ರ&zwj;್ಯಾಪಿಡೋ ಬೈಕ್ ಬುಕ್ ಮಾಡಿದಾಗ ಈ ಅಪರೂಪದ ಹಾಗೂ ಆಶ್ಚರ್ಯಕರ ಘಟನೆ ನಡೆದಿದೆ. ಪ್ರಯಾಣದ ಸಮಯದಲ್ಲಿ ಇವರಿಬ್ಬರ ಮಧ್ಯೆ ಆರಂಭವಾದ ಸಾಮಾನ್ಯ ಮಾತುಕತೆ, ಮೆಟ್ರೋ ನಗರ ಜೀವನದ ಆರ್ಥಿಕ ರಿಯಾಲಿಟಿಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿತು. ಚಾಲಕ ಮೊದಲು ಕನ್ನಡದಲ್ಲಿ ಮಾತನಾಡಿ, ನಂತರ ಶಬಾಜ್ ಅವರಿಗೆ ಕನ್ನಡ ಸರಿಯಾಗಿ ಬಾರದಿರುವುದನ್ನು ಗಮನಿಸಿ ತಕ್ಷಣ ಇಂಗ್ಲಿಷ್&zwnj;ಗೆ ಬದಲಾದರು. ಮಾತಿನ ಮಧ್ಯೆ ಶಬಾಜ್ ತಾವೊಬ್ಬ ಸಾಫ್ಟ್&zwnj;ವೇರ್ ಇಂಜಿನಿಯರ್ ಎಂದು ಹೇಳಿದಾಗ, ಆ ರ&zwj;್ಯಾಪಿಡೋ ರೈಡರ್ ನೀಡಿದ ಆಘಾತಕಾರಿ ಉತ್ತರ ಅವರಿಗೆ ದೊಡ್ಡ ಶಾಕ್ ನೀಡಿತು.&lt;/p&gt;&lt;h2&gt;&lt;strong&gt;ಆರ್ಥಿಕ ಭದ್ರತೆ, ಸುಭದ್ರ ಭವಿಷ್ಯ ಮತ್ತು ನೆಮ್ಮದಿಯ ಜೀವನ&lt;/strong&gt;&lt;/h2&gt;&lt;p&gt;ತಾನೂ ಕೂಡ ಒಂದು ಪ್ರಮುಖ ಎಂಎನ್&zwnj;ಸಿ ಕಂಪನಿಯಲ್ಲಿ ಹಿರಿಯ ಸಾಫ್ಟ್&zwnj;ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 6 ಅಂಕಿಯ (ಲಕ್ಷಕ್ಕೂ ಅಧಿಕ) ಭಾರಿ ಸಂಬಳ ಪಡೆಯುತ್ತಿರುವುದಾಗಿ ಆ ರೈಡರ್ ತಿಳಿಸಿದರು. ಇಷ್ಟೊಂದು ಉತ್ತಮ ಕಾರ್ಪೊರೇಟ್ ಆದಾಯವಿದ್ದರೂ, ಕೇವಲ ಹೆಚ್ಚುವರಿ ಆದಾಯ ಗಳಿಸಲು ಅವರು ಶನಿವಾರ ಮತ್ತು ಭಾನುವಾರ ರ&zwj;್ಯಾಪಿಡೋ ಓಡಿಸುತ್ತಿದ್ದರು. ಅದಕ್ಕೆ ಅವರು ನೀಡಿದ ಕಾರಣ ಅತ್ಯಂತ ಸರಳ, ನೈಜ ಹಾಗೂ ಭಾವುಕವಾಗಿತ್ತು. ತಮಗೆ ಮದುವೆಯಾಗಿದ್ದು, ಒಂದು ಸಣ್ಣ ಮಗುವಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಖರ್ಚುಗಳ ಮಧ್ಯೆ ತನ್ನ ಸ್ವಂತ ಕುಟುಂಬಕ್ಕೆ ಮತ್ತಷ್ಟು ಉತ್ತಮ ಆರ್ಥಿಕ ಭದ್ರತೆ, ಸುಭದ್ರ ಭವಿಷ್ಯ ಮತ್ತು ನೆಮ್ಮದಿಯ ಜೀವನ ನೀಡಲು ಈ ಪಾರ್ಟ್ ಟೈಮ್ ಸೈಡ್ ಹಸ್ಸಲ್ (Side Hustle) ಮಾಡುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದರು.&lt;/p&gt;&lt;h3&gt;&lt;strong&gt;ನೆಟ್ಟಿಗರಿಂದ ಬಂತು ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮಧ್ಯಮ ವರ್ಗದ ಕುಟುಂಬಗಳು ಮೆಟ್ರೋ ನಗರಗಳಲ್ಲಿ ಎದುರಿಸುತ್ತಿರುವ ತೀವ್ರ ಹಣದುಬ್ಬರ, ಗಗನಕ್ಕೇರುತ್ತಿರುವ ಅಪಾರ್ಟ್&zwnj;ಮೆಂಟ್ ಮನೆ ಬಾಡಿಗೆ ಹಾಗೂ ಮಕ್ಕಳ ಶಾಲಾ ಫೀಸುಗಳ ದುಬಾರಿ ವೆಚ್ಚದ ಬಗ್ಗೆ ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ತಾಂತ್ರಿಕ ಬಳಕೆದಾರರು ಇದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇಂತಹ ಐಟಿ ಉದ್ಯೋಗಿಗಳು ರ&zwj;್ಯಾಪಿಡೋ ಓಡಿಸಿ ಸಮಯ ಕಳೆಯುವ ಬದಲು ಹೊಸ ಆಧುನಿಕ ತಂತ್ರಜ್ಞಾನಗಳನ್ನು ಕಲಿತು ಹೆಚ್ಚಿನ ಸಂಬಳವಿರುವ ಉದ್ಯೋಗಕ್ಕೆ ಪ್ರಯತ್ನಿಸುವುದು ದೀರ್ಘಾವಧಿಯಲ್ಲಿ ತುಂಬಾ ಲಾಭದಾಯಕ ಎಂದು ಪ್ರಮುಖ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಒಂದು ಕಾಲದಲ್ಲಿ ಅತ್ಯಂತ ಐಷಾರಾಮಿ ಎನಿಸುತ್ತಿದ್ದ ಲಕ್ಷಗಳ ಸಂಬಳ ಕೂಡ ಇಂದಿನ ಬೆಂಗಳೂರಿನಂತಹ ದುಬಾರಿ ನಗರಗಳ ಜೀವನ ವೆಚ್ಚಕ್ಕೆ ಸಾಕಾಗುತ್ತಿಲ್ಲ ಎಂಬ ಕಹಿ ಸತ್ಯವನ್ನು ಈ ವೈರಲ್ ಸ್ಟೋರಿ ಸಾಬೀತುಪಡಿಸಿದೆ.&lt;/p&gt;&lt;p&gt;Today, while traveling to Bannerghatta, I booked a Rapido.The rider, a 35-year old, started speaking in Kannada, realized mine wasn&rsquo;t great, and switched to English. He asked what I do, and I told him I&rsquo;m a software engineer.Then he told me he&rsquo;s also a software developer at&hellip; pic.twitter.com/wCfgB6Vb8D&lt;/p&gt;&lt;p&gt;&mdash; Shabaz (@Shabaz1406) June 6, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/bengaluru-techies-shocking-weekend-side-hustle-goes-viral/articleshow-uxsng1o"/>
        </item>
        <item>
            <title><![CDATA[ಹಣ ಎಲ್ಲಿಗೆ ಹೋಗುತ್ತೆ? ತಿಂಗ್ಳಿಗೆ ಮನೆ ಖರ್ಚೆ 1.66 ಲಕ್ಷ ! ಬೆಂಗಳೂರು ಫ್ಯಾಮಿಲಿಯ ಬಜೆಟ್ ಲಿಸ್ಟ್ ವೈರಲ್]]></title>
            <link>https://kannada.asianetnews.com/viral/is-bengaluru-too-expensive-familys-one-lakh-sixty-six-thousand-rupees-monthly-cost-goes-viral/articleshow-vf4omf9</link>
            <guid isPermaLink="true">https://kannada.asianetnews.com/viral/is-bengaluru-too-expensive-familys-one-lakh-sixty-six-thousand-rupees-monthly-cost-goes-viral/articleshow-vf4omf9</guid>
            <pubDate>Mon, 08 Jun 2026 11:30:09 +0530</pubDate>
            <description><![CDATA[&lt;p&gt;&lt;strong&gt;Bangalore monthly expenses debate: &lt;/strong&gt;ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಕುಟುಂಬವೊಂದರ ತಿಂಗಳ ಖರ್ಚಿನ ಪಟ್ಟಿ ವೈರಲ್ ಆಗಿದೆ. ಕೆಲವರು ಇದು ನಗರ ಜೀವನದ ವಾಸ್ತವ ಅಂದ್ರೆ, ಇನ್ನು ಕೆಲವರು ಇದೊಂದು ಲೈಫ್&zwnj;ಸ್ಟೈಲ್ ಆಯ್ಕೆ ಅಂತ ಟೀಕಿಸಿದ್ದಾರೆ. ಈ ಚರ್ಚೆ, ಆಧುನಿಕ ಭಾರತದ ಮಹಾನಗರಗಳಲ್ಲಿ ಹೆಚ್ಚುತ್ತಿರುವ ಖರ್ಚು-ವೆಚ್ಚ ಮತ್ತು ಕುಟುಂಬಗಳ ಆರ್ಥಿಕ ಆದ್ಯತೆಗಳ ಬಗ್ಗೆ ಹೊಸ ಮಾತುಕತೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktjrdzkv4ppavacq838v8t8d,imgname-capture-1780893548155.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂ&lt;/strong&gt;ಗಳೂರಿನ ಒಂದು ಕುಟುಂಬ ತಮ್ಮ ತಿಂಗಳ ಮನೆ ಖರ್ಚು ಬರೋಬ್ಬರಿ 1.66 ಲಕ್ಷ ರೂಪಾಯಿ ಅಂತ ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಅವರು ಆನ್&zwnj;ಲೈನ್&zwnj;ನಲ್ಲಿ ಹಂಚಿಕೊಂಡ ಈ ಖರ್ಚಿನ ವಿವರವಾದ ಪಟ್ಟಿ, ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಭಾರತದ ಟೆಕ್ ರಾಜಧಾನಿಯಲ್ಲಿ ಬದುಕಲು ನಿಜವಾಗಿಯೂ ಎಷ್ಟು ಖರ್ಚಾಗುತ್ತೆ ಅನ್ನೋ ಬಗ್ಗೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಈ ಕುಟುಂಬ ತಮ್ಮ ತಿಂಗಳ ಖರ್ಚಿನ ಪಟ್ಟಿಯಲ್ಲಿ ಮನೆ ಬಾಡಿಗೆ, ಮಕ್ಕಳ ಆರೈಕೆ, ಜಿಮ್ ಮೆಂಬರ್&zwnj;ಶಿಪ್, ದಿನಸಿ, ಸಾರಿಗೆ ಮತ್ತು ಯುಟಿಲಿಟಿ ಬಿಲ್&zwnj;ಗಳಂತಹ ಹಲವು ಖರ್ಚುಗಳನ್ನು ಸೇರಿಸಿದೆ. ಈ ಮೊತ್ತವನ್ನು ನೋಡಿ ಕೆಲವರು ಶಾಕ್ ಆಗಿದ್ರೆ, ಇನ್ನು ಕೆಲವರು ದೊಡ್ಡ ಮಹಾನಗರಗಳಲ್ಲಿ ವಾಸಿಸುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳಿಗೆ ಇಂತಹ ಖರ್ಚುಗಳು ಈಗ ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವೈರಲ್ ವಿಡಿಯೋ ಇಲ್ಲಿದೆ ನೋಡಿ&lt;/strong&gt;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Megha &amp;amp; Shubham | Couple | Fitness journey (@the12absproject)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;&lt;h2&gt;&lt;strong&gt;ಹಣ ಎಲ್ಲಿಗೆ ಹೋಗುತ್ತೆ?&lt;/strong&gt;&lt;/h2&gt;&lt;p&gt;ವೈರಲ್ ಆದ ಪೋಸ್ಟ್ ಪ್ರಕಾರ, ಈ ಕುಟುಂಬದ ಬಜೆಟ್&zwnj;ನ ದೊಡ್ಡ ಪಾಲು ಮನೆ ಮತ್ತು ಮಕ್ಕಳ ಆರೈಕೆಗೆ ಹೋಗುತ್ತದೆ. ತಿಂಗಳ ಖರ್ಚಿನಲ್ಲಿ ಮನೆ ಬಾಡಿಗೆಯೇ ಸಿಂಹಪಾಲು ಪಡೆದರೆ, ಮಕ್ಕಳನ್ನು ನೋಡಿಕೊಳ್ಳಲು ನೇಮಿಸಿಕೊಂಡಿರುವ ಆಯಾ ಖರ್ಚು ಕೂಡ ಆನ್&zwnj;ಲೈನ್ ಬಳಕೆದಾರರ ಗಮನ ಸೆಳೆದಿದೆ.&lt;/p&gt;&lt;p&gt;ಇನ್ನುಳಿದಂತೆ ಬಾಡಿಗೆ, ಮಕ್ಕಳ ಆರೈಕೆ, ಜಿಮ್ ಮತ್ತು ಫಿಟ್&zwnj;ನೆಸ್ ಸದಸ್ಯತ್ವ, ದಿನಸಿ ಮತ್ತು ಮನೆಗೆ ಬೇಕಾದ ವಸ್ತುಗಳು, ಸಾರಿಗೆ ಮತ್ತು ಇಂಧನ, ಯುಟಿಲಿಟಿ ಬಿಲ್&zwnj;ಗಳು, ಡೈನಿಂಗ್ ಮತ್ತು ಲೈಫ್&zwnj;ಸ್ಟೈಲ್ ಖರ್ಚು, ಮಕ್ಕಳ ಚಟುವಟಿಕೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಖರ್ಚುಗಳು ಪಟ್ಟಿಯಲ್ಲಿವೆ.&lt;/p&gt;&lt;p&gt;ಕೆಲಸ, ಪಾಲನೆ, ಆರೋಗ್ಯ ಮತ್ತು ಜೀವನಶೈಲಿಯ ನಡುವೆ ಸಮತೋಲನ ಸಾಧಿಸಲು ಪ್ರಯತ್ನಿಸುವ ನಗರವಾಸಿ ಕುಟುಂಬಗಳಿಗೆ ಖರ್ಚುಗಳು ಎಷ್ಟು ಬೇಗನೆ ಹೆಚ್ಚಾಗುತ್ತವೆ ಎಂಬುದನ್ನು ಈ ವಿವರವಾದ ಪಟ್ಟಿ ತೋರಿಸುತ್ತದೆ.&lt;/p&gt;&lt;h3&gt;&lt;strong&gt;ಅಂಕಿ-ಸಂಖ್ಯೆ ಬಗ್ಗೆ ಇಂಟರ್&zwnj;ನೆಟ್&zwnj;ನಲ್ಲಿ ಪರ-ವಿರೋಧ&lt;/strong&gt;&lt;/h3&gt;&lt;p&gt;ಈ ಪೋಸ್ಟ್ ಸಾವಿರಾರು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಜನರ ಅಭಿಪ್ರಾಯಗಳು ಎರಡು ಭಾಗವಾಗಿವೆ.&lt;/p&gt;&lt;p&gt;ಕೆಲವು ಬಳಕೆದಾರರು, ಇತ್ತೀಚಿನ ವರ್ಷಗಳಲ್ಲಿ ಬಾಡಿಗೆ ಮತ್ತು ಸೇವಾ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವ ಬೆಂಗಳೂರಿನ ಜೀವನದ ವಾಸ್ತವತೆಯನ್ನು ಈ ಖರ್ಚುಗಳು ಪ್ರತಿಬಿಂಬಿಸುತ್ತವೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಆದರೆ, ಇನ್ನು ಕೆಲವರು ಕೆಲವು ಜೀವನಶೈಲಿಯ ಆಯ್ಕೆಗಳನ್ನು ಪ್ರಶ್ನಿಸಿದ್ದು, ಉತ್ತಮ ಬಜೆಟ್ ಮೂಲಕ ಕೆಲವು ಖರ್ಚುಗಳನ್ನು ಕಡಿಮೆ ಮಾಡಬಹುದು. &quot;ಅನೇಕ ಕುಟುಂಬಗಳು ಇದಕ್ಕಿಂತ ಕಡಿಮೆ ಖರ್ಚಿನಲ್ಲಿ ಬದುಕುತ್ತವೆ. ಈ ಪಟ್ಟಿಯಲ್ಲಿರುವ ಬಹಳಷ್ಟು ಖರ್ಚುಗಳು ಐಚ್ಛಿಕ&quot; ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಹೆಚ್ಚುತ್ತಿರುವ ನಗರ ಜೀವನದ ವೆಚ್ಚ&lt;/strong&gt;&lt;/h3&gt;&lt;p&gt;ಈ ವೈರಲ್ ಚರ್ಚೆಯು ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದ ಬಗ್ಗೆ ಇರುವ ದೊಡ್ಡ ಕಳವಳವನ್ನು ತೋರಿಸುತ್ತದೆ. ಹೆಚ್ಚುತ್ತಿರುವ ಬಾಡಿಗೆ, ಹಣದುಬ್ಬರ, ಶಿಕ್ಷಣದ ವೆಚ್ಚ, ಆರೋಗ್ಯ ವೆಚ್ಚಗಳು ಮತ್ತು ಜೀವನಶೈಲಿಯ ಖರ್ಚುಗಳು ಸಂಬಳ ಪಡೆಯುವ ವೃತ್ತಿಪರರಿಗೆ ದೊಡ್ಡ ಸವಾಲುಗಳಾಗಿವೆ.&lt;/p&gt;&lt;p&gt;ಅದರಲ್ಲೂ ಬೆಂಗಳೂರಿನಲ್ಲಿ, ಟೆಕ್ನಾಲಜಿ ವಲಯದ ನಿರಂತರ ಬೇಡಿಕೆ ಮತ್ತು ದೇಶದಾದ್ಯಂತ ವೃತ್ತಿಪರರ ವಲಸೆಯಿಂದಾಗಿ ಮನೆ ಬಾಡಿಗೆ ದರಗಳು ತೀವ್ರವಾಗಿ ಏರಿವೆ.&lt;/p&gt;&lt;p&gt;ಮಹಾನಗರಗಳಲ್ಲಿ ಆದಾಯದ ಮಟ್ಟ ಹೆಚ್ಚಿರಬಹುದಾದರೂ, ಆರಾಮದಾಯಕ ನಗರ ಜೀವನಶೈಲಿಯನ್ನು ಕಾಪಾಡಿಕೊಳ್ಳುವ ಒಟ್ಟಾರೆ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ.&lt;/p&gt;&lt;h3&gt;&lt;strong&gt;ಅನೇಕ ಕುಟುಂಬಗಳ ಮನದಾಳದ ಮಾತು&lt;/strong&gt;&lt;/h3&gt;&lt;p&gt;ಈ ಕುಟುಂಬದ ತಿಂಗಳ ಬಜೆಟ್ ಅನೇಕ ನಗರವಾಸಿ ಕುಟುಂಬಗಳು ಇಂದು ಎದುರಿಸುತ್ತಿರುವ ವಾಸ್ತವವನ್ನು ಎತ್ತಿ ತೋರಿಸಿದ್ದರಿಂದ ಎಲ್ಲರ ಗಮನ ಸೆಳೆದಿದೆ. ಇದನ್ನು ಅಗತ್ಯ ಖರ್ಚು ಎಂದು ನೋಡಿದರೂ ಸರಿ, ಜೀವನಶೈಲಿಯ ಹಣದುಬ್ಬರ ಎಂದು ನೋಡಿದರೂ ಸರಿ, ಈ 1.66 ಲಕ್ಷ ರೂಪಾಯಿಯ ಖರ್ಚಿನ ಪಟ್ಟಿ, ಆಧುನಿಕ ಭಾರತದಲ್ಲಿನ ನಗರ ಜೀವನದ ಕೈಗೆಟುಕುವಿಕೆ, ಆರ್ಥಿಕ ಆದ್ಯತೆಗಳು ಮತ್ತು ಬದಲಾಗುತ್ತಿರುವ ಅರ್ಥಶಾಸ್ತ್ರದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;&lt;p&gt;ಈ ಪೋಸ್ಟ್ ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಲೇ ಇದ್ದು, ಭಾರತದ ದೊಡ್ಡ ನಗರ ಕೇಂದ್ರಗಳಲ್ಲಿ ಜೀವನ ವೆಚ್ಚಗಳು ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದನ್ನು ನೆನಪಿಸುತ್ತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ashwini HR</dc:creator>
            <atom:link href="https://kannada.asianetnews.com/viral/is-bengaluru-too-expensive-familys-one-lakh-sixty-six-thousand-rupees-monthly-cost-goes-viral/articleshow-vf4omf9"/>
        </item>
        <item>
            <title><![CDATA[ಮುಡಾ ಹಗರಣ: ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ನುಡಿ, ವಿಚಾರಣೆ ಜುಲೈಗೆ ಮುಂದೂಡಿಕೆ]]></title>
            <link>https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs</link>
            <guid isPermaLink="true">https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs</guid>
            <pubDate>Mon, 08 Jun 2026 17:14:35 +0530</pubDate>
            <description><![CDATA[ಮುಡಾ ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ. ವಿಚಾರಣೆಯನ್ನು ಮತ್ತಷ್ಟು ಮುಂದೂಡುವಂತೆ ಸಿದ್ದರಾಮಯ್ಯ ಪರ ವಕೀಲರು ಕೋರಿದಾಗ, ನ್ಯಾಯಪೀಠವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kmph3sdj0fzmsxmjqqvf767r,imgname----------------------53--1774577640882.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ತನಿಖೆಗೆ ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಅವರು ನೀಡಿದ್ದ ಪೂರ್ವಾನುಮತಿಯನ್ನು ಎತ್ತಿಹಿಡಿದಿದ್ದ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಜುಲೈ ಮೂರನೇ ವಾರಕ್ಕೆ ಮುಂದೂಡಿದೆ.&lt;/p&gt;&lt;p&gt;ಸೋಮವಾರ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರನ್ನೊಳಗೊಂಡ ಹೈಕೋರ್ಟ್&zwnj;ನ ದ್ವಿಸದಸ್ಯ ವಿಭಾಗೀಯ ಪೀಠವು ಈ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರ ಕಾನೂನು ತಂಡವು, ಆಗಸ್ಟ್&zwnj;ನಲ್ಲಿ ನಿಗದಿಯಾಗಿದ್ದ ವಿಚಾರಣೆಯನ್ನು ಮತ್ತಷ್ಟು ಮುಂದೂಡುವಂತೆ ನ್ಯಾಯಾಲಯಕ್ಕೆ ವಿನಂತಿಸಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪೀಠವು, ನಾವು ಈ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕೇ? ಎಂದು ಪ್ರಶ್ನಿಸಿತು.&lt;/p&gt;&lt;p&gt;ಈ ಹಂತದಲ್ಲಿ ಪ್ರಕರಣದ ಪ್ರಮುಖ ಭೂಮಾಲೀಕರಾದ ಜೆ. ದೇವರಾಜು ಅವರ ಪರವಾಗಿ ಹಾಜರಾಗಿದ್ದ ವಕೀಲ ಆದಿತ್ಯ ನಾರಾಯಣನ್ ಅವರು, ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ಮರು ನಿಗದಿಪಡಿಸುವಂತೆ ನ್ಯಾಯಪೀಠಕ್ಕೆ ಸಲಹೆ ನೀಡಿದರು. ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠವು, ಅದಕ್ಕೆ ಅನುಗುಣವಾಗಿ ಜುಲೈ ತಿಂಗಳ ಮೂರನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿ ಆದೇಶ ಹೊರಡಿಸಿತು.&lt;/p&gt;&lt;h2&gt;ಹಗರಣದ ಹಿನ್ನೆಲೆ ಮತ್ತು ಆರೋಪಗಳೇನು?&lt;/h2&gt;&lt;p&gt;ಮೈಸೂರಿನ ಅತ್ಯಂತ ಪ್ರಮುಖ ತನಿಖಾ ವಿಷಯವಾಗಿ ಮಾರ್ಪಟ್ಟಿರುವ ಮುಡಾ ಹಗರಣದ ಮೂಲ ಹಿನ್ನೆಲೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಮುಖ ವಿದ್ಯಮಾನಗಳು ಹೀಗಿವೆ.&lt;/p&gt;&lt;h2&gt;ಭೂಮಿಯ ವಿವರ ಮತ್ತು ಮೌಲ್ಯ&lt;/h2&gt;&lt;p&gt;ಮೈಸೂರಿನ ಕೆಸಾರೆ ಗ್ರಾಮದಲ್ಲಿರುವ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಅತ್ಯಂತ ಪ್ರಮುಖ ಬಡಾವಣೆಯಲ್ಲಿ ಸುಮಾರು 56 ಕೋಟಿ ರೂಪಾಯಿ ಮೌಲ್ಯದ 14 ಪರ್ಯಾಯ ನಿವೇಶನಗಳನ್ನು (ಪ್ಲಾಟ್&zwnj;ಗಳನ್ನು) ಹಂಚಿಕೆ ಮಾಡಲಾಗಿತ್ತು.&lt;/p&gt;&lt;h2&gt;ಅಧಿಕಾರ ದುರುಪಯೋಗದ ಆರೋಪ&lt;/h2&gt;&lt;p&gt;ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಈ ಅಕ್ರಮ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಜುಲೈ 3, 2024 ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವಂತೆ ಕೋರಿ ಅಧಿಕೃತ ದೂರು ಸಲ್ಲಿಸಿದ್ದರು.&lt;/p&gt;&lt;h2&gt;ರಾಜ್ಯಪಾಲರ ಅನುಮೋದನೆ ಮತ್ತು ಕಾನೂನು ಸಮರ&lt;/h2&gt;&lt;p&gt;ದೂರು ದಾಖಲಾದ ಬೆನ್ನಲ್ಲೇ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆ ನಡೆಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರು ಜೂನ್-ಜುಲೈ 2024 ರ ಅವಧಿಯಲ್ಲಿ ರಾಜ್ಯಪಾಲರ ಒಪ್ಪಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ಪರಿಶೀಲನೆಯ ನಂತರ, ರಾಜ್ಯಪಾಲ ಥಾವರ್&zwnj;ಚಂದ್ ಗೆಹ್ಲೋಟ್ ಅವರು ಆಗಸ್ಟ್ 17 ರಂದು ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅಧಿಕೃತವಾಗಿ ಅನುಮೋದನೆ ನೀಡಿದರು.&lt;/p&gt;&lt;p&gt;ರಾಜ್ಯಪಾಲರ ಈ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದರಾದರೂ, ಆಗಸ್ಟ್ 19 ರಂದು ಅವರ ಮಧ್ಯಂತರ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ತದನಂತರ ಸೆಪ್ಟೆಂಬರ್ 24, 2024 ರಂದು ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯಪಾಲರ ಕ್ರಮ ಕಾನೂನುಬದ್ಧವಾಗಿದೆ ಎಂದು ಎತ್ತಿಹಿಡಿದು, ಕಡ್ಡಾಯ ಪೊಲೀಸ್ ತನಿಖೆಗೆ ಆದೇಶಿಸಿತು.&lt;/p&gt;&lt;p&gt;ಆದಾಗ್ಯೂ, ಈ ದೂರಿನ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅಕ್ರಮ ಸಾಬೀತಾಗಿಲ್ಲ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ 'ಬಿ' ವರದಿಯನ್ನು (B-Report) ಸಲ್ಲಿಸಿದ್ದರು. ಈ ತನಿಖಾ ವರದಿಯನ್ನು ತದನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪುರಸ್ಕರಿಸಿ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚೀಟ್ ನೀಡಿತ್ತು. ಆದರೂ, ರಾಜ್ಯಪಾಲರ ಅಂದಿನ ಆದೇಶವನ್ನು ಪ್ರಶ್ನಿಸಿರುವ ಕಾನೂನು ಹೋರಾಟದ ಪ್ರಕ್ರಿಯೆಗಳು ಈಗ ಹೈಕೋರ್ಟ್&zwnj;ನ ವಿಭಾಗೀಯ ಪೀಠದ ಮುಂದೆ ಮುಂದುವರಿದಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/muda-scam-case-karnataka-high-court-postpones-siddaramaiah-appeal-hearing-to-july-gdp/articleshow-vg4snqs"/>
        </item>
        <item>
            <title><![CDATA[ಬೆಂಗಳೂರಿನ ದೇವನಹಳ್ಳಿಯಲ್ಲಿ ಎಮ್ವಿ ಗ್ರೂಪ್ ಮೆಗಾ ಪ್ಲಾನ್: ಸೋಲಾರ್ ಗಿಗಾಫ್ಯಾಕ್ಟರಿಗಾಗಿ ₹5,500 ಕೋಟಿ ಭಾರಿ ಹೂಡಿಕೆ!]]></title>
            <link>https://kannada.asianetnews.com/business/emmvee-group-to-setup-5500-crore-solar-gigafactory-in-devanahalli-bengaluru-san/articleshow-x5okkel</link>
            <guid isPermaLink="true">https://kannada.asianetnews.com/business/emmvee-group-to-setup-5500-crore-solar-gigafactory-in-devanahalli-bengaluru-san/articleshow-x5okkel</guid>
            <pubDate>Mon, 08 Jun 2026 19:36:40 +0530</pubDate>
            <description><![CDATA[&lt;p&gt;ಬೆಂಗಳೂರು ಮೂಲದ ಎಮ್ವಿ ಗ್ರೂಪ್, ದೇವನಹಳ್ಳಿಯಲ್ಲಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ 'ಗಿಗಾಫ್ಯಾಕ್ಟರಿ' ಸ್ಥಾಪಿಸುತ್ತಿದೆ. ಈ ಯೋಜನೆಯು ಕಂಪನಿಯ ಸೋಲಾರ್ ಮಾಡ್ಯೂಲ್ ಮತ್ತು ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktkrd1sgfqzbznsn9fw5h93v,imgname-dobaspet-1780927072048.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಜೂ.8): &lt;/strong&gt;ರಾಜಧಾನಿ ಬೆಂಗಳೂರು ಮೂಲದ ಹಸಿರು ಇಂಧನ ದೈತ್ಯ &lsquo;ಎಮ್ವಿ ಗ್ರೂಪ್&rsquo; (Emmvee Group) ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಬೆಂಗಳೂರಿನ ದೇವನಹಳ್ಳಿಯಲ್ಲಿ ಬರೋಬ್ಬರಿ 5,500 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಬೃಹತ್ &lsquo;ಗಿಗಾಫ್ಯಾಕ್ಟರಿ&rsquo; (Greenfield Gigafactory) ಸ್ಥಾಪಿಸುತ್ತಿದೆ. ಈ ಹೊಸ ಘಟಕವು ಸದ್ಯದ ಮಾರುಕಟ್ಟೆಯಲ್ಲಿ ಕಂಪನಿಯ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ಕಂಪನಿಯ ಸಂಸ್ಥಾಪಕ ಅಧ್ಯಕ್ಷರಾದ ಡಿ.ವಿ. ಮಂಜುನಾಥ ದೊಂತಿ, ದೇವನಹಳ್ಳಿಯ 100 ಎಕರೆ ಪ್ರದೇಶದಲ್ಲಿ ಈ ಹೊಸ ಬೃಹತ್ ಘಟಕ ತಲೆಯೆತ್ತುತ್ತಿದ್ದು, ಇದು ಎಮ್ವಿ ಗ್ರೂಪ್ ಅನ್ನು ದೇಶದ ಅತಿ ದೊಡ್ಡ ಸಂಯೋಜಿತ ಸೋಲಾರ್ ಸಂಸ್ಥೆಯನ್ನಾಗಿ ಮಾಡಲಿದೆ. ಪ್ರಸ್ತುತ 10.3 ಗಿಗಾವ್ಯಾಟ್ (gw) ಇರುವ ಸೋಲಾರ್ ಮಾಡ್ಯೂಲ್ ಉತ್ಪಾದನೆಯನ್ನು ಈ ಡಿಸೆಂಬರ್ ವೇಳೆಗೆ 16.3 ಗಿಗಾವ್ಯಾಟ್&zwnj;ಗೆ ಹೆಚ್ಚಿಸಲಾಗುತ್ತಿದೆ. ಹಾಗೆಯೇ, ಪ್ರಸ್ತುತ 2.9 ಗಿಗಾವ್ಯಾಟ್ ಇರುವ ಸೋಲಾರ್ ಸೆಲ್ ಉತ್ಪಾದನೆಯನ್ನು ಮಾರ್ಚ್ 2027 ರ ವೇಳೆಗೆ ಮೂರು ಪಟ್ಟು ಅಂದರೆ 8.90 ಗಿಗಾವ್ಯಾಟ್&zwnj;ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.&lt;/p&gt;&lt;p&gt;ಈ 5,500 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಕಂಪನಿಯು ಸಾಲಮುಕ್ತ (Zero Debt) ಸಂಸ್ಥೆಯಾಗಿರುವುದರಿಂದ ಶೇ. 40 ರಷ್ಟು ಅಂದರೆ 2,200 ಕೋಟಿ ರೂಪಾಯಿಗಳನ್ನು ಇಕ್ವಿಟಿ ಮೂಲಕ ಭರಿಸುತ್ತಿದೆ. ಉಳಿದ 3,300 ಕೋಟಿ ರೂಪಾಯಿಗಳ ಸಂಪೂರ್ಣ ಸಾಲದ ಮೊತ್ತವನ್ನು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ಧನಸಹಾಯ ಮಾಡುತ್ತಿದೆ.&lt;/p&gt;&lt;h2&gt;&lt;strong&gt;ಯುದ್ಧದ ಪ್ರಭಾವ ಹಾಗೂ ಹಿನ್ನಡೆ ಇಲ್ಲ&lt;/strong&gt;&lt;/h2&gt;&lt;p&gt;ಇರಾನ್ ಯುದ್ಧದ ಜಾಗತಿಕ ಬಿಕ್ಕಟ್ಟಿನಿಂದಾಗಿ ಎಮ್ವಿ ಗ್ರೂಪ್&zwnj;ನ ಕಾರ್ಯಾಚರಣೆಗೆ ಯಾವುದೇ ಧಕ್ಕೆಯಾಗಿಲ್ಲ. ಕಂಪನಿಯು ಶೇ. 35 ರಷ್ಟು ಕಚ್ಚಾ ವಸ್ತುಗಳನ್ನು (ವೇಫರ್ಸ್, ಇಂಗಾಟ್ಸ್ ಮತ್ತು ಗ್ಲಾಸ್) ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಅಲ್ಲಿಂದ ಯಾವುದೇ ಪೂರೈಕೆ ವ್ಯತ್ಯಯವಾಗಿಲ್ಲ ಎಂದಿದ್ದಾರೆ.&lt;/p&gt;&lt;p&gt;ಈ ಹಿಂದೆ ಭಾರತವು ಸೋಲಾರ್ ಉತ್ಪನ್ನಗಳಿಗಾಗಿ ಸಂಪೂರ್ಣವಾಗಿ ಚೀನಾದ ಆಮದನ್ನು ಅವಲಂಬಿಸಿತ್ತು. ಆದರೆ ಈಗ ದೇಶೀಯ ಉತ್ಪಾದನೆ ವೇಗ ಪಡೆದುಕೊಂಡಿದೆ. ಚೀನಾದ ಉತ್ಪನ್ನಗಳಿಗೆ ಹೋಲಿಸಿದರೆ ಎಮ್ವಿ ಗ್ರೂಪ್&zwnj;ನ ಕ್ಲೈಮ್ ರೇಶಿಯೋ (Claim Ratio) ಜಾಗತಿಕ ಮಟ್ಟದಲ್ಲೇ ಅತ್ಯಂತ ಕಡಿಮೆ ಅಂದರೆ ಕೇವಲ 0.008 ರಷ್ಟಿದೆ. ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಮ್ವಿ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದ್ದು, 2028 ರ ವೇಳೆಗೆ ಭಾರತದಲ್ಲೇ ಅತ್ಯಂತ ನಿರ್ಣಾಯಕವಾಗಿರುವ ಸಿಲಿಕಾನ್ ವೇಫರ್ಸ್ ಮತ್ತು ಇಂಗಾಟ್ಸ್ ಉತ್ಪಾದನೆಯನ್ನು ಆರಂಭಿಸಲು ಯೋಜನೆ ರೂಪಿಸಿದೆ. ಸರ್ಕಾರದಿಂದ ಸೂಕ್ತ ರಕ್ಷಣೆ ಮತ್ತು ರಿಸ್ಕ್ ಮ್ಯಾನೇಜ್&zwnj;ಮೆಂಟ್ ಬೆಂಬಲ ಸಿಕ್ಕರೆ ಚೀನಾದ ಮಾರುಕಟ್ಟೆ ದರಕ್ಕೆ ಭಾರತೀಯ ಕಂಪನಿಗಳು ಸುಲಭವಾಗಿ ಪೈಪೋಟಿ ನೀಡಬಲ್ಲವು ಎಂದು ಮಂಜುನಾಥ ದೊಂತಿ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/business/emmvee-group-to-setup-5500-crore-solar-gigafactory-in-devanahalli-bengaluru-san/articleshow-x5okkel"/>
        </item>
        <item>
            <title><![CDATA[ಅನೈತಿಕತೆಗೆ ಅಡ್ಡಿಯಾಗಿದ್ದ 5 ವರ್ಷದ ಮಗು ಕೊಂದ ತಾಯಿ -ಪ್ರಿಯಕರ, ಕೊಲೆಯಾದ ಬಳಿಕ ಬೆಂಗಳೂರು ದೇವಸ್ಥಾನಕ್ಕೆ ಭೇಟಿ!]]></title>
            <link>https://kannada.asianetnews.com/gallery/karnataka-districts/mother-priyanka-and-live-in-partner-mohan-murdered-5-year-old-girl-vennela-in-bengaluru-visit-malleshwaram-temple-gdp-xlhun94</link>
            <guid isPermaLink="true">https://kannada.asianetnews.com/gallery/karnataka-districts/mother-priyanka-and-live-in-partner-mohan-murdered-5-year-old-girl-vennela-in-bengaluru-visit-malleshwaram-temple-gdp-xlhun94</guid>
            <pubDate>Mon, 08 Jun 2026 12:16:41 +0530</pubDate>
            <description><![CDATA[ಸ್ವಚ್ಛಂದ ಜೀವನಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಐದು ವರ್ಷದ ಮಗಳನ್ನು ತಾಯಿಯೇ ಹತ್ಯೆ ಮಾಡಿದ್ದಾಳೆ. ಮಗು ಮೃತಪಟ್ಟು 15 ದಿನಗಳಲ್ಲೇ, ಈ ಜೋಡಿ ಮಲ್ಲೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಂದೆಯ ದೂರಿನ ಮೇರೆಗೆ ಪ್ರಿಯಕರನನ್ನು ಬಂಧಿಸಲಾಗಿದೆ, ತಾಯಿ ಪರಾರಿಯಾಗಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktjyxx528rf50pp6my4437y0,imgname-nurder-1780900361378.jpg" type="image/jpeg" height="390" width="690"/>
            <content:encoded><![CDATA[ಸ್ವಚ್ಛಂದ ಜೀವನಕ್ಕೆ ಅಡ್ಡಿ ಎಂದು ಪ್ರಿಯಕರನೊಂದಿಗೆ ಸೇರಿ ಐದು ವರ್ಷದ ಮಗಳನ್ನು ತಾಯಿಯೇ ಹತ್ಯೆ ಮಾಡಿದ್ದಾಳೆ. ಮಗು ಮೃತಪಟ್ಟು 15 ದಿನಗಳಲ್ಲೇ, ಈ ಜೋಡಿ ಮಲ್ಲೇಶ್ವರಂ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಂದೆಯ ದೂರಿನ ಮೇರೆಗೆ ಪ್ರಿಯಕರನನ್ನು ಬಂಧಿಸಲಾಗಿದೆ, ತಾಯಿ ಪರಾರಿಯಾಗಿದ್ದಾಳೆ.&lt;img&gt;&lt;p&gt;ಬೆಂಗಳೂರು: ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಐದು ವರ್ಷದ ಮಗಳನ್ನು ತಾಯಿ ತನ್ನ ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿರುವ ಪ್ರಕರಣದ ಒದೊಂದೇ ಕಥೆಗಳು ಹೊರಬರುತ್ತಿದೆ. ಇದೀಗ ಮಗು ಸಾವನ್ನಪ್ಪಿದ ಕೇವಲ 15 ದಿನಗಳಲ್ಲೇ, ಯಾವುದೇ ಪಶ್ಚಾತ್ತಾಪವಿಲ್ಲದೆ ಈ ಜೋಡಿ ಮಲ್ಲೇಶ್ವರಂ ದೇವಸ್ಥಾನಕ್ಕೆ ಒಟ್ಟಿಗೆ ತೆರಳಿ ದೇವರ ದರ್ಶನ ಪಡೆದಿತ್ತು. ಈ ಸಬಂಧ ವಿಡಿಯೋ ಈಗ ವೈರಲ್ ಆಗುತ್ತಿದೆ. ಕೈಕೈ ಹಿಡಿದುಕೊಂಡು ಈ ಜೋಡಿ ದೇವಾಲಯಕ್ಕೆ ಎಂಟ್ರಿ ಕೊಡುತ್ತಿರುವುದು ಕಾಣಿಸಿದೆ. ಚಿಕ್ಕಬನಹಳ್ಳಿ ನಿವಾಸಿ ವೆನ್ನೆಲಾ (5) ಹತ್ಯೆಯಾದ ದುರ್ದೈವಿ ಮಗು. ಪ್ರಕರಣ ಸಂಬಂಧ ಮೃತಳ ತಾಯಿಯ ಪ್ರಿಯಕರ ಮೋಹನ್&zwnj;ನನ್ನು ಪೊಲೀಸರು ಬಂಧಿಸಿದ್ದು, ತಾಯಿ ಪ್ರಿಯಾಂಕ ಪರಾರಿಯಾಗಿದ್ದಾಳೆ. ಆಕೆಯ ಪತ್ತೆಗೆ ಕಾಡುಗೋಡಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಮಗಳ ಸಾವಿನ ಬಗ್ಗೆ ಅನುಮಾನಗೊಂಡ ತಂದೆ ಪ್ರವೀಣ್, ಮರಣೋತ್ತರ ಪರೀಕ್ಷಾ ವರದಿಯನ್ನು ವಿದೇಶದಲ್ಲಿ ವೈದ್ಯೆಯಾಗಿರುವ ತನ್ನ ಸಹೋದರಿಗೆ ಕಳುಹಿಸಿ ಅಭಿಪ್ರಾಯ ಕೇಳಿದ್ದರು. ಮಗು ಸಹಜವಾಗಿ ಸಾವಿಗೀಡಾಗಿಲ್ಲ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರವೀಣ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುಟ್ಟೂರು ಗ್ರಾಮದಲ್ಲಿ ಖಾಸಗಿ ಶಾಲೆ ನಡೆಸುತ್ತಿದ್ದು, 2007ರಲ್ಲಿ ಹೊಸಕೋಟೆಯ ಪ್ರಿಯಾಂಕಳನ್ನು ವಿವಾಹವಾಗಿದ್ದರು. ದಂಪತಿಗೆ ಇಶಿಕಾ ಮತ್ತು ವೆನ್ನೆಲಾ ಎಂಬ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ದಾಂಪತ್ಯ ಜೀವನದಲ್ಲಿ ಕಲಹ ಉಂಟಾಗಿತ್ತು.&lt;/p&gt;&lt;h2&gt;ಹಳೆಯ ಸ್ನೇಹದಿಂದ ಪ್ರೇಮ ಸಂಬಂಧ&lt;/h2&gt;&lt;p&gt;ಪ್ರಿಯಾಂಕಳಿಗೆ ಕಾಲೇಜು ದಿನಗಳಲ್ಲಿ ಪರಿಚಿತನಾಗಿದ್ದ ಮೋಹನ್&zwnj; ಎಂಬಾತನೊಂದಿಗೆ ಮತ್ತೆ ಸಂಪರ್ಕ ಬೆಳೆದಿತ್ತು. ಜಮೀನು ವ್ಯಾಜ್ಯ ವಿಚಾರವಾಗಿ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಈ ಪರಿಚಯ ಮತ್ತಷ್ಟು ಗಾಢವಾಗಿದ್ದು, ಬಳಿಕ ಅದು ಪ್ರೇಮ ಸಂಬಂಧಕ್ಕೆ ತಿರುಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;img&gt;&lt;p&gt;ಮಾ.24ರಂದು ರಾತ್ರಿ ಮಗಳಿಗೆ ಬಿರಿಯಾನಿ ತಿನ್ನಿಸಿದ್ದೆ, ಬೆಳಿಗ್ಗೆ ನೋಡಿದಾಗ ಮಗು ಮೃತಪಟ್ಟಿತ್ತು ಎಂದು ಪ್ರಿಯಾಂಕ ಹೇಳಿದ್ದಾಳೆ. ಇದಕ್ಕೂ ಮುನ್ನ ಐಸ್&zwnj;ಕ್ರೀಮ್ ತಿನ್ನಿಸಿ ಕಾರಿನಲ್ಲಿ ಮಲಗಿಸಿದ್ದೆ ಎಂದೂ ಹೇಳಿದ್ದಾಳೆ. ಈ ರೀತಿಯ ಪರಸ್ಪರ ಗೊಂದಲ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗಿತ್ತು.&lt;/p&gt;&lt;p&gt;ಮೋಹನ್ ಜೊತೆಗಿನ ಮೋಜಿನ ಜೀವನ ಹಾಗೂ ಖಾಸಗಿ ಕ್ಷಣಗಳಿಗೆ 5 ವರ್ಷದ ಮಗಳು ವೆನ್ನೆಲಾ ಅಡ್ಡಿಯಾಗುತ್ತಿದ್ದಳು. ಜೊತೆಗೆ ಮಗು ಕಪ್ಪಗಿದ್ದಾಳೆ ಎಂಬ ಅಸಮಾಧಾನವೂ ತಾಯಿಗಿತ್ತು ಎನ್ನಲಾಗಿದೆ.&lt;/p&gt;&lt;p&gt;ಮಾರ್ಚ್ 24ರ ರಾತ್ರಿ ಮಗುವಿಗೆ ಐಸ್&zwnj;ಕ್ರೀಮ್ ತಿನ್ನಿಸಿ, ಕಾರಿನಲ್ಲಿ ಎಸಿ ಹಾಕಿ ಮಲಗಿಸಲಾಗಿತ್ತು. ಆ ನಂತರ ಮನೆಗೆ ತಂದು ಬಿರಿಯಾನಿ ತಿನ್ನಿಸಲಾಗಿತ್ತು. ಮಾರ್ಚ್ 25 ರಂದು ಬೆಳಗ್ಗೆ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಿಯಾಂಕಳ ಸಹೋದರ ರಾಘವೇಂದ್ರ ತಕ್ಷಣ ಪತಿ ಪ್ರವೀಣ್&zwnj;ಗೆ ಕರೆ ಮಾಡಿ ವೈದೇಹಿ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದ. ಅಲ್ಲಿಗೆ ಹೋದಾಗ ಮಗಳ ಸಾವಿನ ಸುದ್ದಿ ತಿಳಿದಿದೆ. &quot;ರಾತ್ರಿ ಬಿರಿಯಾನಿ ತಿಂದಿದ್ದಾಳೆ, ಬೆಳಗ್ಗೆ ನೋಡುವಷ್ಟರಲ್ಲಿ ಮೃತಪಟ್ಟಿದ್ದಾಳೆ&quot; ಎಂದು ಪ್ರಿಯಾಂಕ ಎಲ್ಲರ ಹಾದಿ ತಪ್ಪಿಸಲು ಗೊಂದಲಕಾರಿ ಹೇಳಿಕೆಗಳನ್ನು ನೀಡಿದ್ದಳು.&lt;/p&gt;&lt;img&gt;&lt;p&gt;ಮಗಳ ಸಾವಿನ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ ತಂದೆ ಪ್ರವೀಣ್, ಮಗುವಿನ ಮರಣೋತ್ತರ ಪರೀಕ್ಷೆಯ (Post-Mortem) ವರದಿಯನ್ನು ಇಂಗ್ಲೆಂಡ್&zwnj;ನಲ್ಲಿ ಮಕ್ಕಳ ತಜ್ಞೆಯಾಗಿರುವ ತನ್ನ ಅಕ್ಕ ಡಾ. ಪೂರ್ಣಿಮಾ ಪಾಂಡೆ ಅವರಿಗೆ ಕಳುಹಿಸಿಕೊಟ್ಟಿದ್ದರು. ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಡಾ. ಪೂರ್ಣಿಮಾ, &quot;ಇದು ಸಹಜ ಸಾವಲ್ಲ, ಮಗುವಿಗೆ ಏನೋ ಮಾಡಲಾಗಿದೆ. ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡು&quot; ಎಂದು ಸಲಹೆ ನೀಡಿದ್ದರು. ಸಹೋದರಿಯ ಮಾರ್ಗದರ್ಶನದಂತೆ ಪ್ರವೀಣ್ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. &quot;ನನ್ನ ಪತ್ನಿ ಪ್ರಿಯಾಂಕ ಮತ್ತು ಆಕೆಯ ಪ್ರಿಯಕರ ಮೋಹನ್, ತಮ್ಮ ಮೋಜಿನ ಬದುಕಿಗೆ ಅಡ್ಡಿಯಾಗಿದ್ದಾಳೆ ಎಂಬ ಏಕೈಕ ಕಾರಣಕ್ಕೆ ಮಗುವಿನ ಹೊಟ್ಟೆಗೆ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ&quot; ಎಂದು ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದರು.&lt;/p&gt;&lt;img&gt;&lt;p&gt;ಮೋಹನ್ ಈಗಾಗಲೇ ವಿವಾಹಿತನಾಗಿದ್ದು, ಅವನಿಗೂ ಮೂವರು ಮಕ್ಕಳಿದ್ದಾರೆ. ಇಬ್ಬರೂ ತಮ್ಮ ತಮ್ಮ ಸಂಗಾತಿಗಳಿಂದ ವಿಚ್ಛೇದನ ಪಡೆಯದೇ ಲಿವ್-ಇನ್ ಸಂಬಂಧದಲ್ಲಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಿಯಾಂಕ ಮತ್ತು ಮೋಹನ್ ದುಬೈ ಪ್ರವಾಸ ಸೇರಿದಂತೆ ಹಲವು ಕಡೆಗಳಿಗೆ ಒಟ್ಟಿಗೆ ತೆರಳಿದ್ದರು. ದುಬೈನಲ್ಲಿ ದುಬಾರಿ ಉಡುಗೊರೆಗಳನ್ನು ನೀಡಿದ್ದ ಮೋಹನ್, ಕಾಶಿಯಲ್ಲಿ ಮದುವೆಯಾಗಿದ್ದೇವೆ ಎಂದು ಪ್ರಿಯಾಂಕ ಹೇಳಿದ್ದಾಳೆ. ಡಿಸೆಂಬರ್ 27 ಏಕಾಂಗಿ ಪ್ರವಾಸ ಎಂದು ಸುಳ್ಳು ಹೇಳಿ ಮೋಹನ್ ಜೊತೆ ಪ್ರಿಯಾಂಕ ಕಾಶಿಗೆ ತೆರಳಿ ಮದುವೆಯಾಗಿದ್ದಳು ಎಂದು ಪ್ರವೀಣ್ ಆರೋಪಿಸಿದ್ದಾರೆ.&lt;/p&gt;&lt;h2&gt;ಮಗು ಬಗ್ಗೆ ಅಸಮಾಧಾನ?&lt;/h2&gt;&lt;p&gt;ಮಗು ಕಪ್ಪು ಬಣ್ಣದಲ್ಲಿದ್ದಾಳೆ ಎಂಬ ಕಾರಣಕ್ಕೂ ಪ್ರಿಯಾಂಕ ಅಸಮಾಧಾನಗೊಂಡಿದ್ದಾಳೆ ಎಂಬ ಮಾಹಿತಿಯೂ ಇದೆ. ಮಗು ಸಾವಿಗೀಡಾದ ಸುಮಾರು 15 ದಿನಗಳ ನಂತರ ಪ್ರಿಯಾಂಕ ಮತ್ತು ಮೋಹನ್ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಮೋಹನ್ ಬಂಧನವಾಗಿದ್ದು, ಪರಾರಿಯಾಗಿರುವ ಪ್ರಿಯಾಂಕ ಪತ್ತೆಗೆ ಪೊಲೀಸರು ಶೋಧ ಮುಂದುವರೆಸಿದ್ದಾರೆ. ಪ್ರಕರಣದ ನಿಖರ ಕಾರಣ ಮತ್ತು ಇತರೆ ವಿವರಗಳು ಮುಂದಿನ ತನಿಖೆಯಲ್ಲಿ ಬೆಳಕಿಗೆ ಬರಲಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/mother-priyanka-and-live-in-partner-mohan-murdered-5-year-old-girl-vennela-in-bengaluru-visit-malleshwaram-temple-gdp-xlhun94"/>
        </item>
    </channel>
</rss>
