<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 29 Aug 2026 08:53:56 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಬಿ ನಾಗೇಂದ್ರ ರಾಜೀನಾಮೆ ಆಯ್ತು, ಕೆಪಿಎಸ್‌ಸಿ ಎಇಇ ನೇಮಕಾತಿ ಹಗರಣದಲ್ಲಿ ಈಗ ಪ್ರಿಯಾಂಕ್ ಖರ್ಗೆ ಸರದಿ! ಹೆಚ್‌ಡಿಕೆ ಗಂಭೀರ ಆರೋಪ!]]></title>
            <link>https://kannada.asianetnews.com/politics/b-nagendra-resigned-now-priyank-kharge-s-turns-in-kpsc-aee-scam-hdk-serious-allegation-rav/articleshow-70xpgsd</link>
            <guid isPermaLink="true">https://kannada.asianetnews.com/politics/b-nagendra-resigned-now-priyank-kharge-s-turns-in-kpsc-aee-scam-hdk-serious-allegation-rav/articleshow-70xpgsd</guid>
            <pubDate>Sat, 29 Aug 2026 08:53:50 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ನಡೆದ ಎಇಇ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದಾಖಲೆ ಬಿಡುಗಡೆ. ರಾಜೀನಾಮೆಗೆ ಆಗ್ರಹ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15r4184pfsdj6188d9h6ywg,imgname-----------------------2026-08-29t071303.130-1787973207300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29) &lt;/strong&gt;: ಪ್ರಿಯಾಂಕ್ ಖರ್ಗೆ(Priyank kharge) ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಂತ್ರಿಯಾಗಿದ್ದಾಗ ಕರ್ನಾಟಕ ಲೋಕಸೇವಾ ಆಯೋಗ(KPSC)ಮುಖಾಂತರ ನಡೆದ ಸಹಾಯಕ ಎಕ್ಸಿಕ್ಯೂಟಿವ್ ಎಂಜಿನಿಯರ್(ಎಇಇ) ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;h2&gt;ನಾಗೇಂದ್ರ ಆಯ್ತು ಈಗ ಪ್ರಿಯಾಂಕ್ ರಾಜೀನಾಮೆಗೆ ಪಟ್ಟು!&lt;/h2&gt;&lt;p&gt;ಈ ಅಕ್ರಮ ನೇಮಕಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಹಾಗೂ ಸಚಿವ ಸ್ಥಾನಕ್ಕೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.&lt;/p&gt;&lt;p&gt;ಜೆಡಿಎಸ್&zwnj; ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, &lsquo;ರಾಜ್ಯದಲ್ಲಿ ಪ್ರಿಯಾಂಕ್ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಇದು. ಇಡೀ ಹಗರಣವನ್ನು ಮುಚ್ಚಿ ಹಾಕಲು ಅವರು ಈಗ ಗೃಹ ಖಾತೆ ವಹಿಸಿಕೊಂಡಂತಿದೆ&rsquo; ಎಂದು ದೂರಿದರು. ಅಕ್ರಮಕ್ಕೆ ಸಂಬಂಧಿಸಿದ ತನಿಖಾ ವರದಿ, ಓಎಂಆರ್ ಶೀಟ್&zwnj;ಗಳನ್ನು ಕಾರ್ಬನ್ ಬಳಸಿ ತಿದ್ದಿರುವ ಹಲವು ದಾಖಲೆಗಳನ್ನು ಬಿಡುಗಡೆಗೊಳಿಸಿದರು.&lt;/p&gt;&lt;h3&gt;ಆರೋಪಿತ ಅಧಿಕಾರಿಗೆ ರಕ್ಷಣೆ:&lt;/h3&gt;&lt;p&gt;ನನಗೆ ಅಧಿಕಾರ ಕೊಟ್ಟರೆ ಕೆಪಿಎಸ್ಸಿ ಮತ್ತು ನೇಮಕ ರದ್ದು ಮಾಡುವೆ ಎಂದು ಪ್ರಿಯಾಂಕ್&zwnj; ಹೇಳಿದ್ದಾರೆ. ಕಾನೂನು ಮಾಡುವುದು ನಾವೇ ಎಂದಿದ್ದಾರೆ. ಒಂದು ಕಡೆ ಕೆಪಿಎಸ್ಸಿ ರದ್ದು ಮಾಡುವೆ ಎಂದು ವೀರಾವೇಶದ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು, ಮತ್ತೊಂದು ಕಡೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಗ್ರೇಡ್-1 ಹುದ್ದೆಗಳ ನೇಮಕಾತಿಯಲ್ಲಿನ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅಂದು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್&zwnj; ಗಂಗ್ವಾರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;h3&gt;ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಆಗ್ರಹ:&lt;/h3&gt;&lt;p&gt;ಪ್ರಿಯಾಂಕ್ ಖರ್ಗೆ ಅವರು ತಮ್ಮಲ್ಲಿ ಪಾರದರ್ಶಕತೆ ಅಥವಾ ಮಾತಿನ ಮೇಲೆ ನಿಗಾ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಸಿಬಿಐಗೆ ಕೊಡಬೇಕು ಎಂದು ಹೇಳಿತ್ತು. ಈ ಸರ್ಕಾರದ ಯೋಗ್ಯತೆಗೆ ಒಂದು ಎಫ್ಐಆರ್ ಹಾಕಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಜವಾಬ್ದಾರಿ ಹೊರಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದರು.&lt;/p&gt;&lt;p&gt;&lt;strong&gt;ಸಬ್&zwnj; ಕಮಿಟಿ ವರದಿಯಲ್ಲಿ ಅಕ್ರಮ ಉಲ್ಲೇಖ:&lt;/strong&gt;&lt;/p&gt;&lt;p&gt;ಅಕ್ರಮ ನಡೆದಿರುವುದು, ಓಎಂಆರ್ ಶೀಟ್ ತಿದ್ದಿರುವುದು ಫೋರೆನ್ಸಿಕ್ ತನಿಖೆ ವರದಿಯಲ್ಲಿ ಸಾಬೀತಾಗಿದೆ. ಸಬ್ ಕಮಿಟಿ ಓಎಂಆರ್ ಶೀಟ್ ಸೇರಿ ಎಲ್ಲವನ್ನೂ ಪರಿಶೀಲಿಸಿದೆ. ನ್ಯೂನತೆ ಕಂಡು ಬಂದ ಹಿನ್ನೆಲೆಯಲ್ಲಿ ಆ ಸಬ್ ಕಮಿಟಿ ಸದಸ್ಯರು 24 ಅಭ್ಯರ್ಥಿಗಳಿಗೆ ನೊಟೀಸ್ ಕೊಟ್ಟಿದ್ದಾರೆ. ಆ ಸಮಿತಿ ಮುಂದೆ 20 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದು, ಉಳಿದ ನಾಲ್ವರು ಗೈರು ಹಾಜರಾಗಿದ್ದಾರೆ. ಹೀಗಾಗಿ ಫೋರೆನ್ಸಿಕ್ ಪ್ರಯೋಗಾಲಕ್ಕೆ ಓಎಂಆರ್ ಶೀಟ್ ಸೇರಿ ಎಲ್ಲವನ್ನೂ ಕಳುಹಿಸಿದ್ದರು. ಆಯೋಗದ ಕಾರ್ಯದರ್ಶಿ ಡಿಪಿಆರ್&zwnj;ಗೆ ಸಿಸಿಟಿವಿ ಪರಿಶೀಲನೆಗಾಗಿ ಪತ್ರ ಬರೆದಿದ್ದರು. ಬಳಿಕ ಫೋರೆನ್ಸಿಕ್ ಲ್ಯಾಬ್ ಗೆ ಫೂಟೇಜ್&zwnj; ಕಳಿಸುತ್ತಾರೆ. ಅಲ್ಲಿ ಅಕ್ರಮ ಆಗಿರುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.&lt;/p&gt;&lt;p&gt;&lt;strong&gt;ಶೀಘ್ರದಲ್ಲೇ ಮತ್ತಷ್ಟು ದಾಖಲೆ ಬಿಡುಗಡೆ:&lt;/strong&gt;&lt;/p&gt;&lt;p&gt;ಈ ವಿಷಯವನ್ನು ನಾನು ಇಲ್ಲಿಗೆ ಬಿಡುವುದಿಲ್ಲ. ಈಗ ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಯಾವುದೇ ಕ್ರಮ ಆಗದೆ ನಾನು ಬಿಡಲ್ಲ. ಈ ಅಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೂ ಭಾಗಿಯಾಗಿದ್ದಾರೆ. 24 ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕ್ರಮ ಸಾಬೀತಾಗಿದೆ. ಆದರೂ ಪ್ರಿಯಾಂಕ್ ಖರ್ಗೆ ತರಾತುರಿಯಲ್ಲಿ ನೇಮಕಾತಿ ಮಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವ ಆಗ್ರಹಿಸಿದರು.&lt;/p&gt;&lt;p&gt;&lt;strong&gt;ಅಧ್ಯಕ್ಷ, ಸದಸ್ಯರ ಒಪ್ಪಿಗೆ ಇಲ್ಲದೆ ಲಿಸ್ಟ್&zwnj; ಅಂತಿಮ:&lt;/strong&gt;&lt;/p&gt;&lt;p&gt;ಅಂದಿನ ಕಾರ್ಯದರ್ಶಿ ಅವರು ಕೆಪಿಎಸ್ಸಿ ಅಧ್ಯಕ್ಷ ಮತ್ತು ಸದಸ್ಯರು ಒಪ್ಪಿಗೆ ಇಲ್ಲದೆ ಪ್ರಾವಿಷನ್ ಲಿಸ್ಟ್ ಅಂತಿಮಗೊಳಿಸಿದ್ದಾರೆ. ಯಾರ ಒತ್ತಡದ ಮೇಲೆ ಅವರು ಇದೆಲ್ಲವನ್ನೂ ಮಾಡಿದರು ಎಂಬುದು ಗೊತ್ತಾಗಬೇಕಿದೆ. ಅವರ ವಿರುದ್ಧ ಸರ್ಕಾರ ಏನು ಕ್ರಮ ಜರುಗಿಸಿದೆ? ಈ ನೇಮಕಾತಿ ಅಕ್ರಮದಲ್ಲಿ ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಲಿ. 24 ಅಭ್ಯರ್ಥಿಗಳು ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರ ಓಎಂಆರ್ ಶೀಟ್ ಗಳು ತಿದ್ದುಪಡಿ ಆಗಿವೆ. ಅಕ್ರಮ ಆಗಿದೆ ಅಂತ ವರದಿ &zwnj;ಇದೆ. ಇದರ ಬಗ್ಗೆ ಅವರು ಯಾಕೆ ಮಾತಾಡಲ್ಲ ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಯುವ ಜನರು ಬೀದಿಗಿಳಿದು ಹೋರಾಡಿ:&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಇಷ್ಟೆಲ್ಲ ಅನ್ಯಾಯ ಮತ್ತು ಅಕ್ರಮಗಳು ನಡೆಯುತ್ತಿವೆ. ನಿರುದ್ಯೋಗಿಗಳು, ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಮೌನವಾಗಿರುವುದೇಕೆ? ನೀವೆಲ್ಲರೂ ಬೀದಿಗಿಳಿದು ಹೋರಾಟ ನಡೆಸಬೇಕು. ನಿರುದ್ಯೋಗಿಗಳು ಎದ್ದೇಳದಿದ್ದರೆ ನಿಮಗೆ ಉದ್ಯೋಗ ಸಿಗುವುದು ಸುಲಭವಲ್ಲ. ಹೀಗಾಗಿ ಬೀದಿಗಿಳಿದು ಹೋರಾಟ ಮಾಡಿ ಎಂದು ಕರೆ ನೀಡಿದರು.&lt;/p&gt;&lt;p&gt;&lt;strong&gt;ಮುಖ್ಯಾಂಶಗಳು&lt;/strong&gt;&lt;/p&gt;&lt;ul&gt; &lt;li&gt;ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಅವರು ಅಕ್ರಮ ನೇಮಕಾತಿ ಸಂಬಂಧ ದಾಖಲೆ ಪ್ರದರ್ಶಿಸಿದರು.&lt;/li&gt; &lt;li&gt;ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಇಇಗಳ ನೇಮಕಕ್ಕೆ 2023ರಲ್ಲಿ ಪರೀಕ್ಷೆ, 24 ಜನರ ಆಯ್ಕೆ&lt;/li&gt; &lt;li&gt;ಆದರೆ ಕೆಲ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆನಂದ್&zwnj; ಸಿದ್ದಾರೆಡ್ಡಿ ದೂರು&lt;/li&gt; &lt;li&gt;ಈ ಹಿನ್ನೆಲೆಯಲ್ಲಿ ತನಿಖೆಗೆ ಕೆಪಿಎಸ್ಸಿ ಸದಸ್ಯ ವಿಜಯ್&zwnj;ಕುಮಾರ್&zwnj; ನೇತೃತ್ವದಲ್ಲಿ ಸಮಿತಿ ರಚನೆ&lt;/li&gt; &lt;li&gt;ಅಕ್ರಮದ ಬಗ್ಗೆ ಸಿಸಿಟೀವಿ, ವಿಡಿಯೋ ಸಾಕ್ಷ್ಯಗಳಿವೆ. ಸಿಐಡಿ ತನಿಖೆ ಸೂಕ್ತ ಎಂದು ಸಮಿತಿ ವರದಿ&lt;/li&gt; &lt;li&gt;ಆದರೂ ಸಿಐಡಿ ತನಿಖೆಗೆ ಆದೇಶಿಸದ ಕೆಪಿಎಸ್&zwnj;ಸಿಯ ಅಂದಿನ ಅಧ್ಯಕ್ಷ ಮತ್ತು ಕಾರ್ಯದರ್ಶಿ&lt;/li&gt;&lt;/ul&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/b-nagendra-resigned-now-priyank-kharge-s-turns-in-kpsc-aee-scam-hdk-serious-allegation-rav/articleshow-70xpgsd"/>
        </item>
        <item>
            <title><![CDATA[ಮೈಸೂರು ರೈಲ್ವೆ ವಲಯಕ್ಕೆ ಸೇರ್ಪಡೆ ಬೆನ್ನಲ್ಲೇ, ಮಂಗಳೂರಿನಿಂದ ಬೆಂಗಳೂರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಸ್ಪೆಷಲ್‌ ಟ್ರೇನ್‌!]]></title>
            <link>https://kannada.asianetnews.com/dakshina-kannada/mangaluru-to-bengaluru-special-train-via-kerala-onam-festival-san/articleshow-p4eeg3f</link>
            <guid isPermaLink="true">https://kannada.asianetnews.com/dakshina-kannada/mangaluru-to-bengaluru-special-train-via-kerala-onam-festival-san/articleshow-p4eeg3f</guid>
            <pubDate>Sat, 29 Aug 2026 08:52:19 +0530</pubDate>
            <description><![CDATA[&lt;p&gt;ಓಣಂ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್&zwnj;ನಿಂದ ಬೆಂಗಳೂರಿನ SMVT ಟರ್ಮಿನಲ್&zwnj;ಗೆ ಏಕಮುಖ ವಿಶೇಷ ಎಕ್ಸ್&zwnj;ಪ್ರೆಸ್ ರೈಲು (06072) ಓಡಿಸಲಿದೆ. ಶನಿವಾರ ಮಂಗಳೂರಿನಿಂದ ಹೊರಟು, ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ, ಭಾನುವಾರ ಮುಂಜಾನೆ ಬೆಂಗಳೂರು ತಲುಪಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxzt01wysjc0b1nvm86q0ha3,imgname-indian-railways-1784552621982.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಆ.29): &lt;/strong&gt;ಓಣಂ ಹಬ್ಬದ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ಹೆಚ್ಚುವರಿ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ದಕ್ಷಿಣ ರೈಲ್ವೆಯು ಮಂಗಳೂರು ಜಂಕ್ಷನ್&zwnj;ನಿಂದ ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್&zwnj; ನಡುವೆ ಏಕಮುಖ ವಿಶೇಷ ಎಕ್ಸ್&zwnj;ಪ್ರೆಸ್ ರೈಲನ್ನು ಓಡಿಸಲಿದೆ.&lt;/p&gt;&lt;p&gt;ರೈಲು ಸಂಖ್ಯೆ 06072 ಮಂಗಳೂರು ಜಂಕ್ಷನ್&ndash;ಎಸ್&zwnj;ಎಂವಿಟಿ ಬೆಂಗಳೂರು ಏಕಮುಖ ಎಕ್ಸ್&zwnj;ಪ್ರೆಸ್ ವಿಶೇಷ ರೈಲು ಶನಿವಾರ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್&zwnj;ನಿಂದ ಪ್ರಯಾಣ ಆರಂಭಿಸಲಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಕೇರಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಗೆ ತೆರಳುವ ಮತ್ತು ಮರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ವಿಶೇಷ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.&lt;/p&gt;&lt;p&gt;ಮಂಗಳೂರು ಜಂಕ್ಷನ್&zwnj;ನಿಂದ ಹೊರಡುವ ರೈಲು ಕಾಸರಗೋಡು, ಕಾಞಂಗಾಡ್, ನೀಲೇಶ್ವರ, ಕಣ್ಣೂರು, ತಲಶ್ಶೇರಿ, ವಡಕರ, ಕೋಝಿಕ್ಕೋಡ್, ಶೋರನೂರು ಜಂಕ್ಷನ್, ತಿರೂರು, ಪಾಲಕ್ಕಾಡ್ ಜಂಕ್ಷನ್, ಪೋದನೂರು ಜಂಕ್ಷನ್, ತಿರುಪ್ಪೂರು, ಈರೋಡ್ ಜಂಕ್ಷನ್, ಸೇಲಂ ಜಂಕ್ಷನ್, ಬಂಗಾರಪೇಟೆ ಜಂಕ್ಷನ್ ಹಾಗೂ ಕೃಷ್ಣರಾಜಪುರಂ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ನಿಗದಿತ ವೇಳಾಪಟ್ಟಿಯಂತೆ ಭಾನುವಾರ ಮುಂಜಾನೆ 4 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರನ್ನು ತಲುಪಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/dakshina-kannada/mangaluru-to-bengaluru-special-train-via-kerala-onam-festival-san/articleshow-p4eeg3f"/>
        </item>
        <item>
            <title><![CDATA[B Nagendra Redux: ಒಂದೇ ಹಗರಣಕ್ಕೆ ಎರಡು ಬಾರಿ ನಾಗೇಂದ್ರ ರಾಜೀನಾಮೆ, ಸಂಪುಟದ 2 ಖಾಲಿ ಸ್ಥಾನಗಳು ಯಾರಿಗೆ?]]></title>
            <link>https://kannada.asianetnews.com/politics/b-nagendra-resigns-as-minister-who-will-get-the-two-vacant-posts-rav/articleshow-69qnxmp</link>
            <guid isPermaLink="true">https://kannada.asianetnews.com/politics/b-nagendra-resigns-as-minister-who-will-get-the-two-vacant-posts-rav/articleshow-69qnxmp</guid>
            <pubDate>Sat, 29 Aug 2026 07:48:09 +0530</pubDate>
            <description><![CDATA[&lt;p&gt;ಸಚಿವ ಬಿ. ನಾಗೇಂದ್ರ ಅವರ ಸಂಭಾವ್ಯ ರಾಜೀನಾಮೆಯಿಂದಾಗಿ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಾಗುವ ನಿರೀಕ್ಷೆಯಿದೆ. ಈ ಸ್ಥಾನಗಳಿಗಾಗಿ ವಾಲ್ಮೀಕಿ, ಕುರುಬ ಸಮುದಾಯದ ಶಾಸಕರು ಹಾಗೂ ಪ್ರಿಯಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್&zwnj;ರಂತಹ ಪ್ರಭಾವಿ ನಾಯಕರು ತೀವ್ರ ಲಾಬಿ, ಯಾರಿಗೆ ಸಿಗಲಿದೆ ಸಚಿವ ಸ್ಥಾನ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m15df3hpthpc3zfty0rmyx0g,imgname-b-nagendra-resignation-1787962035766.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29): &lt;/strong&gt;ಸಚಿವ ಬಿ. ನಾಗೇಂದ್ರ ರಾಜೀನಾಮೆ(B Nagendra resignation)ಯಿಂದ ಸಂಪುಟದಲ್ಲಿ ಎರಡು ಸ್ಥಾನ ಖಾಲಿ ಆಗಲಿದ್ದು, ಮುಂದಿನ ವಾರ ನಡೆಯಬಹುದಾದ ಸಂಪುಟ ಭರ್ತಿ ವೇಳೆ ಯಾರಿಬ್ಬರು ಅವಕಾಶ ಗಿಟ್ಟಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಬಿ. ನಾಗೇಂದ್ರ ರಾಜೀನಾಮೆ ಅಂಗೀಕಾರವಾದರೆ ಖಾಲಿ ಆಗುವ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದವರಿಗೇ ಅವಕಾಶ ನೀಡಬೇಕು ಎಂದರೆ ಇ.ಅನ್ನಪೂರ್ಣ ಅವರಿಗೆ ಅವಕಾಶ ಒಲಿಯಲಿದೆ. ಆ ಮೂಲಕ ಸಂಪುಟದಲ್ಲಿ ಖಾಲಿ ಇರುವ ಮಹಿಳಾ ಕೋಟಾ ಸಹ ಭರ್ತಿ ಮಾಡಿದಂತಾಗುತ್ತದೆ.&lt;/p&gt;&lt;p&gt;ಮತ್ತೊಂದು ಖಾಲಿ ಸ್ಥಾನಕ್ಕೆ ಕುರುಬ ಸಮುದಾಯದ ಬಸವರಾಜ ಶಿವಣ್ಣನವರ್ ಅವರಿಗೆ ನೀಡಿದರೆ ಸಿದ್ದರಾಮಯ್ಯ ಅವರ ಮುನಿಸು ಸಹ ಶಮನಗೊಳಿಸಬಹುದು ಎಂಬ ಚರ್ಚೆ ಶುರುವಾಗಿದೆ. ಆದರೆ, ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಎಂ. ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಇನ್ನೂ ತಣ್ಣಗಾಗಿಲ್ಲ. ಪ್ರಿಯಕೃಷ್ಣ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಸಂಪುಟ ಸೇರಲು ಒತ್ತಡ ಹೇರುತ್ತಿದ್ದಾರೆ.&lt;/p&gt;&lt;p&gt;ಜತೆಗೆ ಸಂಪುಟಕ್ಕೆ ಸೇರ್ಪಡೆಯಾಗಲು ಲಕ್ಷ್ಮೀ ಹೆಬ್ಬಾಳ್ಕರ್&zwnj; ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಮತ್ತೊಂದೆಡೆ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್&zwnj; ಅವರು ಪರಿಷತ್&zwnj; ಸದಸ್ಯರಾಗಿ ಸಚಿವರಾಗಲು ಪ್ರಯತ್ನ ತೀವ್ರಗೊಳಿಸಿದ್ದಾರೆ. ಹೀಗಾಗಿ ಖಾಲಿ ಇರುವ ಎರಡು ಸ್ಥಾನಗಳಿಗೆ ಲಾಬಿ ನಡೆಸುತ್ತಿರುವವರ ಪಟ್ಟಿ ದೊಡ್ಡದಿದ್ದು, ಅಂತಿಮವಾಗಿ ಯಾರು ಇಬ್ಬರು ಸಂಪುಟದ ಒಳಗೆ ಬರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/b-nagendra-resigns-as-minister-who-will-get-the-two-vacant-posts-rav/articleshow-69qnxmp"/>
        </item>
        <item>
            <title><![CDATA[KPSC Scam: 200 ಕೋಟಿ ಪಡೆದು ಸಾಹುಕಾರನ ಅಧ್ಯಕ್ಷ ಮಾಡಿದ್ದು ಯಾರು? ಶಿವಶಂಕರಪ್ಪ ಮನೆಯಲ್ಲಿ ಯಾರ ಫೋಟೋ ಇವೆ? ಹೆಚ್‌ಡಿಕೆಗೆ ಪ್ರಿಯಾಂಕ್ ಸವಾಲ್!]]></title>
            <link>https://kannada.asianetnews.com/politics/priyank-kharge-challenges-hdk-who-appointed-sahukar-an-accused-kpsc-scam-as-president-rav/articleshow-09biz2c</link>
            <guid isPermaLink="true">https://kannada.asianetnews.com/politics/priyank-kharge-challenges-hdk-who-appointed-sahukar-an-accused-kpsc-scam-as-president-rav/articleshow-09biz2c</guid>
            <pubDate>Sat, 29 Aug 2026 07:29:08 +0530</pubDate>
            <description><![CDATA[ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮಗಳ ಕುರಿತು ಮಾತನಾಡುವ ಕೇಂದ್ರ ಸಚಿವ ಎಚ್&zwnj;.ಡಿ. ಕುಮಾರಸ್ವಾಮಿ ಅವರಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ. ಕೆಪಿಎಸ್&zwnj;ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನೇಮಕಾತಿ ಮತ್ತು 200 ಕೋಟಿ ರೂಪಾಯಿಗಳ ಆರೋಪದ ಬಗ್ಗೆ ಮಾತನಾಡುವಂತೆ ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m15kns67jm7h17ra2hk1zrcc,imgname-----------------------2026-08-29t071303.130-1787968545991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29): &lt;/strong&gt;ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್&zwnj;ಸಿ) ನೇಮಕಾತಿ ಅಕ್ರಮಗಳ ಕುರಿತು ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್&zwnj;.ಡಿ. ಕುಮಾರಸ್ವಾಮಿ ಅವರು ಕೆಪಿಎಸ್&zwnj;ಸಿ ಅಧ್ಯಕ್ಷರ ನೇಮಕಾತಿಯ ಬಗ್ಗೆಯೂ ಮಾತನಾಡುವ ಧೈರ್ಯ ತೋರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಕಿಡಿಕಾರಿದರು.&lt;/p&gt;&lt;h2&gt;ಕೆಪಿಎಸ್&zwnj;ಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಯಾರು?&lt;/h2&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಎಸ್&zwnj;ಸಿ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರು ಶಿವಶಂಕರಪ್ಪ ಸಾಹುಕಾರ್&zwnj; ಅವರನ್ನು ಕೆಪಿಎಸ್&zwnj;ಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದು ಯಾರು? ಎಂಬುದನ್ನೂ ಹೇಳಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;ಸಾಹುಕಾರ್&zwnj;ನ ಮನೆಯಲ್ಲಿ ಯಾರ ಫೋಟೋಗಳಿವೆ?&lt;/h3&gt;&lt;p&gt;ಸಾಹುಕಾರ್&zwnj; ಅವರ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಮಾಜಿ ಪ್ರಧಾನಿ ಎಚ್&zwnj;.ಡಿ. ದೇವೇಗೌಡರ ಫೋಟೋ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೋ ಇದೆ ಎಂದು ಹೇಳಲಾಗುತ್ತಿದೆ. 200 ಕೋಟಿ ರು. ನೀಡಿ ಅವರನ್ನು ಕೆಪಿಎಸ್&zwnj;ಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು ಎಂದು ಬಿಜೆಪಿ ಮಾಜಿ ಶಾಸಕರೇ ಆರೋಪಿಸಿದ್ದಾರೆ. ಇದು ನಿಜವೇ? ಇದರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಧೈರ್ಯವಿದೆಯೇ? ಎಂದು ಸವಾಲು ಹಾಕಿದರು.&lt;/p&gt;&lt;p&gt;ನನ್ನ ನಾಲಿಗೆಯ ಬಗ್ಗೆ ಮಾತನಾಡಲು ಜೆಡಿಎಸ್&zwnj;ನವರಿಗೆ ಯಾವ ನೈತಿಕತೆ ಇದೆ? ಈವರೆಗೂ ಬಿಜೆಪಿಯ ನಾಯಕರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ಬೇಕಿತ್ತು. ಈಗ ಜೆಡಿಎಸ್&zwnj;ಗೂ ಅನಿವಾರ್ಯ ಎಂದಾದರೆ ಮಾತನಾಡಿಕೊಳ್ಳಲಿ ಒಳ್ಳೆಯದು ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/priyank-kharge-challenges-hdk-who-appointed-sahukar-an-accused-kpsc-scam-as-president-rav/articleshow-09biz2c"/>
        </item>
        <item>
            <title><![CDATA[ಮಂತ್ರಿಯಾದ 25 ದಿನಕ್ಕೆ ನಾಗೇಂದ್ರ ರಾಜೀನಾಮೆ, ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ]]></title>
            <link>https://kannada.asianetnews.com/state/b-nagendra-resigns-as-minister-in-just-25-days-congress-bows-to-by-vijayendra-led-protest/articleshow-6haiyai</link>
            <guid isPermaLink="true">https://kannada.asianetnews.com/state/b-nagendra-resigns-as-minister-in-just-25-days-congress-bows-to-by-vijayendra-led-protest/articleshow-6haiyai</guid>
            <pubDate>Fri, 28 Aug 2026 21:39:14 +0530</pubDate>
            <description><![CDATA[&lt;p&gt;ಪ್ರಮಾಣ ವಚನ ಸ್ವೀಕರಿಸಿದ 25 ದಿನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಸತತ ಹೋರಾಟಕ್ಕೆ ಗೆಲುವು ಸಿಕ್ಕಿದೆ. ವಾಲ್ಮೀಕಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರ ರಾಜೀನಾಮೆ ಅಂಗೀಕಾರಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m14j3h3qssgkwqjfdwra2g49,imgname-congress-government-faces-pressure-from-by-vijayendra-led-protest-1787933344887.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28) &lt;/strong&gt;ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಡುವಿನ ಯುದ್ಧಕ್ಕೆ ಕಾರಣವಾಗಿದ್ದ ವಾಲ್ಮೀಕಿ ಹಗರಣ ಹಾಗೂ ಸಚಿವ ಬಿ ನಾಗೇಂದ್ರ ರಾಜೀನಾಮೆ ಪ್ರಕರಣದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಮಣಿದಿದೆ. ಪರಿಣಾಮ ಬಿ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜೀನಾಮೆ ಅಂಗೀಕರಿಸಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಸರ್ಕಾರದ ಮೊದಲ ವಿಕೆಟ್ ಪತನಗೊಂಡಿದೆ.&lt;/p&gt;&lt;h2&gt;ನಾಗೇಂದ್ರ ಸಚಿವ ಸಂಪುಟ ಸೇರ್ಪಡೆಯಿಂದ ಶುರುವಾದ ಹೋರಾಟ&lt;/h2&gt;&lt;p&gt;ಬಿವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಡಿಕೆ ಶಿವಕುಮಾರ್ ಸರ್ಕಾರದ ವಿರುದ್ದ ಸತತ ಹೋರಾಟದ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಡಿಕೆ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ವೇಳೆ ಬಿ ನಾಗೇಂದ್ರ ಸೇರ್ಪಡೆ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. 187 ಕೋಟಿ ರೂಪಾಯಿ ಮೊತ್ತದ ವಾಲ್ಮೀಕಿ ಹಗರಣ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೆ ಮಳುವಾಯಿತು. ಪ್ರತಿಭಟನೆ, ಹೋರಾಟ ತೀವ್ರಗೊಳಿಸಿದ್ದ ಬಿವೈ ವಿಜಯೇಂದ್ರ, ಬಳ್ಳಾರಿ ಪಾದಯಾತ್ರೆ ಘೋಷಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಪರಿಣಾಮ ಬಿ ನಾಗೇಂದ್ರ ರಾಜೀನಾಮೆ ಪಡೆದುಕೊಂಡಿರುವ ಕಾಂಗ್ರೆಸ್, ಪರಿಸ್ಥಿತಿ ನಿಭಾಯಿಸುವ ತಂತ್ರ ಮಾಡಿದೆ. ಆದರೆ ಈ ಹೋರಾಟ ರಾಜೀನಾಮೆಯಿಂದ ಅಂತ್ಯಗೊಳ್ಳುತ್ತಿಲ್ಲ ಅನ್ನೋ ಸ್ಪಷ್ಟ ಸಂದೇಶವನ್ನು ಬಿವೈ ವಿಜಯೇಂದ್ರ ನೀಡಿದ್ದಾರೆ.&lt;/p&gt;&lt;h2&gt;ಅಧಿವೇಶನ ಮೊಟಕು ಮಾಡಿದ್ದ ಸರ್ಕಾರ&lt;/h2&gt;&lt;p&gt;ವಿಧಾನಮಂಡಲ ಅಧಿವೇಶನದಲ್ಲೂ ನಾಗೇಂದ್ರ ವಜಾಗೆ ಬಿಜೆಪಿ ಒತ್ತಾಯಿಸಿತ್ತು. ಸದನದ ಒಳಗೂ, ಹೊರಗೂ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರ ಪರಿಣಾಮ ಸರ್ಕಾರ ಅಧಿವೇಶವನ್ನೇ ಮೊಟಕುಗೊಳಿಸಿತ್ತು. ಇದರ ಬೆನ್ನಲ್ಲೇ ನಾಗೇಂದ್ರ ವಜಾಗೆ ಪಟ್ಟು ಹಿಡಿದು ವಿಜಯೇಂದ್ರ ಪಾದಯಾತ್ರೆ ಘೋಷಿಸಿದ್ದರು. ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಘೋಷಣೆ ಮಾಡಿದ್ದರು. ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಮಣಿದು ನಾಗೇಂದ್ರ ರಾಜೀನಾಮೆ ಪಡೆದುಕೊಂಡಿದೆ.&lt;/p&gt;&lt;p&gt;ವಾಲ್ಮೀಕಿ ಸಮುದಾಯದ ಅಭಿೃದ್ಧಿಗೆ ಮೀಸಲಿಟ್ಟ ಹಣ ಭ್ರಷ್ಟರ ಕೈಸರಿದೆ. ನಾಗೇಂದ್ರ ರಾಜೀನಾಮೆಯಿಂದ ಹೋರಾಟ ಅಂತ್ಯಗೊಳ್ಳುತ್ತಿಲ್ಲ. 187 ಕೋಟಿ ರೂಪಾಯಿ ವಾಪಸ್ ಖಾತೆಗೆ ಬರುವವರೆಗೂ ಹೋರಾಟ ಮುಂದುವರಿಯಲಿದೆ. ಪಾದಯಾತ್ರೆ ನಡೆಯಲಿದೆ ಎಂದು ಬಿವೈ ವಿಜಯೇಂದ್ರ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಗಂಭೀರ ಭ್ರಷ್ಟಾಚಾರ ಆರೋಪ ಹೊತ್ತಿರುವ ನಾಗೇಂದ್ರ ವಿರುದ್ಧ ಹೋರಾಟ ಮುಂದುವರಿಯಲಿದೆ. ಸಂಪುಟಕ್ಕೆ ನಾಗೇಂದ್ರ ಸೇರ್ಪಡೆ ಮಾಡಿದ್ದೇ ತಪ್ಪು. ಲಿಂಗಸುಗೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಯುತ್ತದೆ. ಈ ಪಾದಯಾತ್ರೆಯಲ್ಲಿ ಕೆಪಿಎಸ್ಸಿ ಹಗರಣ, ಬರದ ವಿಚಾರ, ಗೃಹ ಲಕ್ಷ್ಮಿ ಯೋಜನೆ ಯಲ್ಲಿ 5000 ಕೋಟಿ ಹಗರಣ ಎಲ್ಲದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/b-nagendra-resigns-as-minister-in-just-25-days-congress-bows-to-by-vijayendra-led-protest/articleshow-6haiyai"/>
        </item>
        <item>
            <title><![CDATA[226 ಸೇತುವೆ, 57 ಸುರಂಗ, 108 ತಿರುವು, ಪ್ರಕೃತಿ ನಡುವೆ ಬೆಂಗಳೂರು ಮಂಗಳೂರು ವಂದೇ ಭಾರತ್ ಬ್ಯೂಟಿ]]></title>
            <link>https://kannada.asianetnews.com/bengaluru-urban/mangaluru-vande-bharat-226-bridges-57-tunnels-and-108-curves-on-scenic-route/articleshow-hz8dq9t</link>
            <guid isPermaLink="true">https://kannada.asianetnews.com/bengaluru-urban/mangaluru-vande-bharat-226-bridges-57-tunnels-and-108-curves-on-scenic-route/articleshow-hz8dq9t</guid>
            <pubDate>Fri, 28 Aug 2026 19:04:53 +0530</pubDate>
            <description><![CDATA[&lt;p&gt;ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲಿನ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. ಪ್ರಕೃತಿ ನಡುವೆ ಸಾಗುತ್ತಿರುವ ರೈಲು 227 ಸೇತುವೆ, 57 ಸುರಂಗಗಳಿಂದ ಹಾದು ಹೋಗುತ್ತಿದೆ. ಬೆಂಗಳೂರು-ಮಂಗಳೂರು ದಾರಿಯಲ್ಲಿದೆ ಹಲವು ಅಚ್ಚರಿ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1497bf4yn8wr73n10xfgwdy,imgname-bengaluru-mangaluru-vande-bharat-beauty-1787924032994.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28) &lt;/strong&gt;ಪಶ್ಟಿಮ ಘಟ್ಟಗಳ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಇದರ ನಡುವೆ ಬಳುತ್ತಾ ಸಾಗುವ ವಂದೇ ಭಾರತ್ ರೈಲಿನ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಏರಿಯಲ್ ವಿಡಿಯೋ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೇಸರಿ ಬಣ್ಣದ ವಂದೇ ಭಾರತ್ ರೈಲು ಈ ಹಚ್ಚ ಹಸುರಿನ ಪ್ರಕೃತಿ ನಡುವೆ ಸಾಗುತ್ತಿರುವ ದೃಶ್ಯ ಇದಾಗಿದೆ. ವಿಶೇಷ ಅಂದರೆ ಬೆಂಗಳೂರು ಮಂಗಳೂರು ಭಾರತೀಯ ರೈಲ್ವೇಯ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಕಾರಣ ಈ ಪೈಕಿ ಸಕಲೇಶಪುರದಿಂದ ಸುಬ್ರಹ್ಮಣ್ಯವರೆಗಿನ 55 ಕಿಲೋಮೀಟರ್ ರಸ್ತೆ ನಿಜಕ್ಕೂ ಹಲವು ಅಚ್ಚರಿಗಳ ತಾಣ.&lt;/p&gt;&lt;h2&gt;ಸುರಂಗ, ಸೇತುಗಳ ಮೇಲೆ ಪ್ರಯಾಣ&lt;/h2&gt;&lt;p&gt;ಮಂಜು ಮುಸುಕಿದ ವಾತಾರಣವ, ಸುರಂಗ, ಸೇತುವೆ, ನದಿ, ಝರಿ, ಜಲಾಪತ ಸೇರಿದಂತೆ ಹಲವು ಸೌಂದರ್ಯಗಳ ನಡುವೆ ರೈಲು ಸಾಗಲಿದೆ. ಪಶ್ಚಿಮ ಘಟ್ಟಗಳ ನಡುವೆ ಸಾಗುವಾಗ ರೈಲು ಬರೋಬ್ಬರಿ 57 ಸುರಂಗದ ಮೂಲಕ ಸಾಗಲಿದೆ. 226 ಸೇತುಗಗಳು ಸಿಗಲಿದೆ. ಕೆಲವು ಸಣ್ಣ ಸೇತುವೆಗಳಾಗಿದ್ದರೆ, ಮತ್ತೆ ಕೆಲವು ದೊಡ್ಡದು. ಇನ್ನು 108 ತಿರುವುಗಳು ಸಿಗಲಿದೆ. ಕಡಿದಾದ ಬೆಟ್ಟ, ದೈತ್ಯ ಮರಗಳು, ಇಳಿಜಾರುಗಳ ನಡುವೆ ರೈಲು ಸಾಗಲಿದೆ. ಮಳೆಗಾಲದಲ್ಲಿ ಭೂಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿದೆ. ವಿಶೇಷ ಅಂದರೆ ಮಳೆಗಾಲದಲ್ಲಿ ಈ ಪ್ರಯಾಣ ಮತ್ತಷ್ಟು ಆಹ್ಲಾದಕರ. ಪ್ರಮುಖವಾಗಿ 100ಕ್ಕೂ ಹೆಚ್ಚು ಜಲಪಾತಗಳು ಕಾಣಿಸಿಗುತ್ತದೆ. ಇನ್ನು ಹಚ್ಚ ಹಸುರಿನ ನಡುವೆ ಬೆಳ್ಳಿನ ಹಾಲಿನಂತೆ ಹರಿಯುವ ನದಿಗಳು, ತೊರೆಗಳು ಎಲ್ಲೆಡೆ ಕಾಣುತ್ತದೆ.&lt;/p&gt;&lt;h2&gt;ಅತ್ಯಂತ ಸವಾಲಿನ ಮಾರ್ಗ&lt;/h2&gt;&lt;p&gt;ಭಾರತೀಯ ರೈಲ್ವೇ ಇಲಾಖೆ ಭಾರತದ ಹಲವು ಪ್ರದೇಶಗಳಲ್ಲಿ ಸವಾಲಿನ ಮಾರ್ಗ ರಚಿಸಿದೆ. ಬೆಂಗಳೂರು-ಮಂಗಳೂರು ಇದೇ ರೀತಿಯ ಅತ್ಯಂತ ಸವಾಲಿನ ಮಾರ್ಗವಾಗಿದೆ. ಅದರಲ್ಲೂ 55 ಕಿಲೋಮೀಟರ್ ಪಶ್ಟಿಮ ಘಟ್ಟಗಳ ನಡುವೆ ಮಾರ್ಗ ದುರ್ಗಮವಾಗಿತ್ತು. ಹಲವು ವರ್ಷಗಳೇ ಬೇಕಾಯಿತು. ಪರಿಸರ, ಬಂಡೆಗಳು, ಕಡಿದಾಟ ಬೆಟ್ಟ, ಝರಿಗಳು ಸೇರಿದಂತೆ ಪ್ರಕೃತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಎಂಜಿನೀಯರ್ ಈ ಮಾರ್ಗ ರಚಿಸಿದ್ದಾರೆ. ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ರೈಲು ಮಾರ್ಗ ನಿರ್ಮಾಣವಾಗಿದೆ.&lt;/p&gt;&lt;p&gt;ಮಳೆಗಾಲದಲ್ಲಿ ವಿಶೇಷ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಮುಖವಾಗಿ ಭೂಕುಸಿತ ಆತಂಕ ಹೆಚ್ಚಿರುವ ಕಾರಣ ಸುರಕ್ಷತಾ ತಂಡಗಳು ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗೆ ವಂದೇ ಭಾರತ್ ಯಶಸ್ವಿಯಾಗಿ ಪ್ರಯಾಣ ಆರಂಭಿಸಿದೆ. ಇದರೊಂದಿಗೆ ಬೆಂಗಳೂರು ಹಾಗೂ ಮಂಗಳೂರಿಗೆ ವಂದೇ ಭಾರತ್ ಸಂಪರ್ಕ ಸಾಧ್ಯವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/mangaluru-vande-bharat-226-bridges-57-tunnels-and-108-curves-on-scenic-route/articleshow-hz8dq9t"/>
        </item>
        <item>
            <title><![CDATA[ಅಮ್ಮನಿಗೆ ದುಡ್ಡು ಕೊಡಬೇಕಿತ್ತು, ಆದರೆ... 'ಹಾಸ್ಪಿಟಲ್ ಎಮರ್ಜೆನ್ಸಿ' ಅಂತ ಹೇಳಿ ರಾಪಿಡೋ ಡ್ರೈವರ್‌ಗೆ ವಂಚನೆ!]]></title>
            <link>https://kannada.asianetnews.com/bengaluru-urban/bengaluru-student-scammed-out-of-rapido-earnings-in-fake-hospital-emergency-ploy/articleshow-g57p77i</link>
            <guid isPermaLink="true">https://kannada.asianetnews.com/bengaluru-urban/bengaluru-student-scammed-out-of-rapido-earnings-in-fake-hospital-emergency-ploy/articleshow-g57p77i</guid>
            <pubDate>Fri, 28 Aug 2026 17:00:07 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ರಾಪಿಡೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ, 'ಆಸ್ಪತ್ರೆ ತುರ್ತುಪರಿಸ್ಥಿತಿ' ಎಂದು ನಂಬಿಸಿ ವಂಚಕರು ಮೋಸ ಮಾಡಿದ್ದಾರೆ. ನಕಲಿ ಪಾವತಿ SMS ಮತ್ತು QR ಕೋಡ್ ಬಳಸಿ, ವಿದ್ಯಾರ್ಥಿಯಿಂದ ₹1,000 ದೋಚಿದ್ದಾರೆ. ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿದ್ಯಾರ್ಥಿ, ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರಲು ಇತರರಿಗೆ ಎಚ್ಚರಿಕೆ ನೀಡಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kc3g03grphz6v0f2jh64t4ds,imgname-rapido-1765349002776.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕಿಸೆ ಖರ್ಚಿಗಾಗಿ ರಾಪಿಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಯೊಬ್ಬ, 'ಹಾಸ್ಪಿಟಲ್ ಎಮರ್ಜೆನ್ಸಿ' ಎಂದು ನಾಟಕವಾಡಿದ ವಂಚಕರ ಜಾಲಕ್ಕೆ ಬಿದ್ದು ₹1,000 ಕಳೆದುಕೊಂಡಿದ್ದಾನೆ. ಈ ಘಟನೆಯಿಂದ ನೊಂದ ವಿದ್ಯಾರ್ಥಿ, ತನ್ನ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಯಾರಾದರೂ ವೈದ್ಯಕೀಯ ಸಂಕಷ್ಟದಲ್ಲಿದ್ದಾರೆ ಎಂದು ತಿಳಿದಾಗ ಸಹಾಯ ಮಾಡಲು ಹೋಗಿ ತಾನು ಹೇಗೆ ಮೋಸ ಹೋದೆ ಎಂಬುದನ್ನು ವಿವರಿಸಿ, ಇತರರು ಇಂತಹ ತಪ್ಪು ಮಾಡದಂತೆ ಎಚ್ಚರಿಸಿದ್ದಾನೆ.&lt;/p&gt;&lt;p&gt;ಈ ವಿದ್ಯಾರ್ಥಿ ಏಳನೇ ಸೆಮಿಸ್ಟರ್&zwnj;ನಲ್ಲಿ ಓದುತ್ತಿದ್ದಾನೆ. ಹೆಚ್ಚುವರಿ ಹಣ ಸಂಪಾದಿಸಲು ರಾಪಿಡೋ ಚಾಲನೆ ಮಾಡಲು ಆರಂಭಿಸಿದ್ದ. ಈ ಘಟನೆ ನಡೆದ ದಿನ ಆತ ಬಹಳ ನೊಂದುಕೊಂಡಿದ್ದ, ಯಾಕೆಂದರೆ ಅಂದು ಸಂಪಾದಿಸಿದ ಪೂರ್ತಿ ಹಣವನ್ನು ತನ್ನ ತಾಯಿಗೆ ಕೊಟ್ಟು ಅವರನ್ನು ಖುಷಿಪಡಿಸಬೇಕು ಎಂದು ಅಂದುಕೊಂಡಿದ್ದ. &quot;ಅದಕ್ಕಿಂತ ಕೆಟ್ಟ ಭಾಗ ಅಂದ್ರೆ, ಬೆಳಗ್ಗೆ ನಾನು ಇವತ್ತಿನ ಸಂಪಾದನೆ ಪೂರ್ತಿ ಅಮ್ಮನಿಗೆ ಕೊಡಬೇಕು ಅಂತ ನಿರ್ಧರಿಸಿದ್ದೆ. ನನ್ನ ಕಷ್ಟದ ದುಡ್ಡಿನಿಂದ ಅಮ್ಮನನ್ನು ಖುಷಿಪಡಿಸಬೇಕಿತ್ತು,&quot; ಎಂದು ಆತ ಹೇಳಿಕೊಂಡಿದ್ದಾನೆ.&lt;/p&gt;&lt;h2&gt;'ಹಾಸ್ಪಿಟಲ್ ಎಮರ್ಜೆನ್ಸಿ' ವಂಚನೆ ನಡೆದಿದ್ದು ಹೇಗೆ?&lt;/h2&gt;&lt;p&gt;ವಿದ್ಯಾರ್ಥಿಯ ಪ್ರಕಾರ, ಈ ವಂಚನೆ ಶುರುವಾಗಿದ್ದು ಆರ್.ಟಿ. ನಗರದ ಲಕ್ಷ್ಮಿ ಆಸ್ಪತ್ರೆಯಿಂದ ಬಂದ ಒಂದು ಪಿಕ್&zwnj;ಅಪ್&zwnj; ರಿಕ್ವೆಸ್ಟ್&zwnj;ನಿಂದ. ಆತ ರಿಕ್ವೆಸ್ಟ್ ಸ್ವೀಕರಿಸಿದ ನಂತರ, ಬೇರೊಂದು ನಂಬರ್&zwnj;ನಿಂದ ಒಬ್ಬ ವ್ಯಕ್ತಿ ಕರೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಅಡ್ಮಿಟ್ ಆಗಿದ್ದಾರೆ, ಅವರನ್ನು ಡಿಸ್ಚಾರ್ಜ್ ಮಾಡಿಸಬೇಕು, ಆದರೆ ಬಿಲ್ಲಿಂಗ್ ಕೌಂಟರ್&zwnj;ನಲ್ಲಿ ತನ್ನ ಯುಪಿಐ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾನೆ.&lt;/p&gt;&lt;p&gt;ಆಸ್ಪತ್ರೆ ಬಿಲ್&zwnj;ಗಾಗಿ ₹5,000 ಕಳುಹಿಸುವುದಾಗಿಯೂ, ಸಹಾಯ ಮಾಡಿದ್ದಕ್ಕಾಗಿ ವಿದ್ಯಾರ್ಥಿಗೆ ₹300 ಹೆಚ್ಚುವರಿ ನೀಡುವುದಾಗಿಯೂ ವಂಚಕ ಆಫರ್ ನೀಡಿದ್ದಾನೆ. ತುರ್ತು ಪರಿಸ್ಥಿತಿ ಎಂದು ಕೇಳಿದಾಗ ತನ್ನ ಯೋಚನಾ ಶಕ್ತಿ ನಿಂತುಹೋಯಿತು ಎನ್ನುತ್ತಾನೆ ವಿದ್ಯಾರ್ಥಿ. &quot;ಯಾರಾದರೂ 'ಹಾಸ್ಪಿಟಲ್ ಎಮರ್ಜೆನ್ಸಿ' ಅಂದಾಗ ನಮ್ಮ ತಲೆ ಸರಿಯಾಗಿ ಕೆಲಸ ಮಾಡಲ್ಲ. ವಂಚನೆ ಬಗ್ಗೆ ಯೋಚನೆ ಬರೋದಿಲ್ಲ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಅನ್ನಿಸುತ್ತೆ ಅಷ್ಟೇ,&quot; ಎಂದು ಆತ ಹೇಳಿದ್ದಾನೆ.&lt;/p&gt;&lt;p&gt;ವಿದ್ಯಾರ್ಥಿ ಹಣ ವರ್ಗಾವಣೆಗಾಗಿ ತನ್ನ ತಾಯಿಯ ನಂಬರ್ ಕೊಟ್ಟಿದ್ದಾನೆ. ತಕ್ಷಣವೇ, ಆ ನಂಬರ್&zwnj;ಗೆ ₹5,000 ಜಮಾ ಆಗಿದೆ ಎಂದು ಬ್ಯಾಂಕ್&zwnj;ನಿಂದ ಬಂದ ಹಾಗೆ ಒಂದು ನಕಲಿ ಎಸ್&zwnj;ಎಂಎಸ್&zwnj; ಬಂದಿದೆ. ಇದನ್ನು ನಂಬಿದ ತಾಯಿ, ತಮ್ಮ ಖಾತೆಯಿಂದ ಮಗನಿಗೆ ₹5,000 ಕಳುಹಿಸಿದ್ದಾರೆ.&lt;/p&gt;&lt;p&gt;ನಂತರ ವಂಚಕ ಒಂದು ಕ್ಯೂಆರ್ ಕೋಡ್ ಕಳುಹಿಸಿ, 'ಡೆಸ್ಕ್ ಫೀ' ಎಂದು ₹1,000 ಪಾವತಿಸಲು ಹೇಳಿದ್ದಾನೆ. ವಿದ್ಯಾರ್ಥಿ ಅದನ್ನು ಸ್ಕ್ಯಾನ್ ಮಾಡಿ ಹಣ ವರ್ಗಾಯಿಸಿದ್ದಾನೆ. പിന്നാലೆ, ಉಳಿದ ಹಣ ಕಳುಹಿಸುವಂತೆ ಒತ್ತಡ ಹೇರಿ ಮತ್ತೊಂದು ಕ್ಯೂಆರ್ ಕೋಡ್ ಕಳುಹಿಸಿದ್ದಾನೆ.&lt;/p&gt;&lt;h2&gt;ತಾಯಿಯಿಂದ ಬಯಲಾಯ್ತು ನಕಲಿ ಬ್ಯಾಂಕ್ ಅಲರ್ಟ್&lt;/h2&gt;&lt;p&gt;ವಿದ್ಯಾರ್ಥಿಯ ತಾಯಿ ಬ್ಯಾಂಕ್&zwnj;ಗೆ ಕರೆ ಮಾಡಿ ವಿಚಾರಿಸಿದಾಗ ಅಥವಾ ತಮ್ಮ ಬ್ಯಾಂಕಿಂಗ್ ಆ್ಯಪ್ ಚೆಕ್ ಮಾಡಿದಾಗ ಈ ವಂಚನೆ ಬಯಲಾಗಿದೆ. ಅವರ ಖಾತೆಗೆ ಯಾವುದೇ ₹5,000 ಬಂದಿರಲಿಲ್ಲ. ಆ ಎಸ್&zwnj;ಎಂಎಸ್&zwnj;, ಬ್ಯಾಂಕ್&zwnj;ನಿಂದ ಬಂದ ಹಾಗೆ ಕಾಣುವಂತೆ ಸೃಷ್ಟಿಸಲಾದ ನಕಲಿ ಸಂದೇಶವಾಗಿತ್ತು.&lt;/p&gt;&lt;p&gt;&quot;ನನಗೆ ತಲೆ ತಿರುಗಿದಂತಾಯ್ತು. ನಾನು ಉಳಿದ ಹಣ ಕಳುಹಿಸಲು ನಿರಾಕರಿಸಿ, ನನ್ನ ₹1,000 ವಾಪಸ್ ಕೊಡಿ ಎಂದು ಅವನನ್ನು ಬೇಡಿಕೊಂಡೆ. ಇಡೀ ದಿನ ಬೆಂಗಳೂರಿನ ಟ್ರಾಫಿಕ್&zwnj;ನಲ್ಲಿ ಕಷ್ಟಪಟ್ಟು ಅಷ್ಟು ಹಣ ಸಂಪಾದಿಸಿದ್ದೇನೆ ಎಂದು ಹೇಳಿದೆ. ಆದರೆ ಅವನು ಫೋನ್ ಕಟ್ ಮಾಡಿ, ನನ್ನ ನಂಬರ್ ಬ್ಲಾಕ್ ಮಾಡಿದ.&quot;&lt;/p&gt;&lt;p&gt;₹1,000 ಕಳೆದುಕೊಂಡಿದ್ದು ನೋವಿನ ಸಂಗತಿ, ಆದರೆ ಅದನ್ನು ನಾನು ಮತ್ತೆ ಸಂಪಾದಿಸಬಹುದು. ಆದರೆ ದಿನಗೂಲಿ ನಂಬಿ ಬದುಕುವ ಗಿಗ್ ವರ್ಕರ್&zwnj;ಗಳ ಪಾಡೇನು ಎಂದು ವಿದ್ಯಾರ್ಥಿ ಕಳವಳ ವ್ಯಕ್ತಪಡಿಸಿದ್ದಾನೆ.&lt;/p&gt;&lt;p&gt;&quot;ಬೆಂಗಳೂರಿನ ಟ್ರಾಫಿಕ್&zwnj;ನಲ್ಲಿ 12 ಗಂಟೆಗಳ ಕಾಲ ದುಡಿದು, ಮನೆಗೆ ಮಕ್ಕಳ ಹೊಟ್ಟೆ ತುಂಬಿಸಲು ಅಥವಾ ಬಾಡಿಗೆ ಕಟ್ಟಲು ಇಟ್ಟಿದ್ದ ಹಣವನ್ನು ಇಂತಹ ಕಳ್ಳರು ದೋಚಿದರೆ ಅವರ ಗತಿ ಏನು? ಇದು ನಿಜಕ್ಕೂ ಅಸಹ್ಯಕರ,&quot; ಎಂದು ಆತ ಹೇಳಿದ್ದಾನೆ.&lt;/p&gt;&lt;h2&gt;ಸೋಶಿಯಲ್ ಮೀಡಿಯಾದಲ್ಲಿ ಜನರ ಪ್ರತಿಕ್ರಿಯೆ&lt;/h2&gt;&lt;p&gt;ವಿದ್ಯಾರ್ಥಿಯ ಪೋಸ್ಟ್ ಆನ್&zwnj;ಲೈನ್&zwnj;ನಲ್ಲಿ ಗಮನ ಸೆಳೆದಿದ್ದು, ಹಲವರು ಆತನಿಗೆ ಧೈರ್ಯ ತುಂಬಿದ್ದಾರೆ ಮತ್ತು ಅಪರಿಚಿತರಿಗೆ ಹಣ ವರ್ಗಾಯಿಸದಂತೆ ಎಚ್ಚರಿಸಿದ್ದಾರೆ. &quot;ಈಗೆಲ್ಲಾ ನಾವು ಸುಮ್ಮನೆ ಜನರಿಗೆ ಹಣ ಕೊಡುವುದನ್ನು ನಿಲ್ಲಿಸಬೇಕು,&quot; ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, &quot;ಇಂತಹ ಕಷ್ಟದ ಕೆಲಸ ಮಾಡುವ ಬದಲು ನಿನ್ನ ಓದಿನ ಕಡೆ ಗಮನ ಕೊಡು,&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರ, &quot;ಇದು ನಿಜಕ್ಕೂ ಬೇಸರದ ಸಂಗತಿ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಕರಿಗೆ ಕಳೆದುಕೊಳ್ಳುವುದು ನೋವಿನ ವಿಚಾರ. ಮುಂದೆ ಜಾಗರೂಕರಾಗಿರಿ ಮತ್ತು ಅಪರಿಚಿತರಿಗೆ ಎಂದಿಗೂ ಹಣ ವರ್ಗಾಯಿಸಬೇಡಿ,&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಿದೆ. ವಂಚಕರು ಭಾವನಾತ್ಮಕ ಒತ್ತಡ, ನಕಲಿ ಪಾವತಿ ದೃಢೀಕರಣಗಳು ಮತ್ತು ಕ್ಯೂಆರ್ ಕೋಡ್&zwnj;ಗಳನ್ನು ಬಳಸಿ ಹೇಗೆ ಮೋಸ ಮಾಡುತ್ತಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ನಿಜವಾದ ಬ್ಯಾಂಕ್ ಎಸ್&zwnj;ಎಂಎಸ್&zwnj;ನಂತೆ ಕಾಣುವ ಸಂದೇಶವನ್ನು ಹಣ ಬಂದಿದೆ ಎಂಬುದಕ್ಕೆ ಸಾಕ್ಷಿಯಾಗಿ ಪರಿಗಣಿಸಬಾರದು. ಯಾವುದೇ ಹಣವನ್ನು ಬೇರೆಯವರಿಗೆ ಕಳುಹಿಸುವ ಮೊದಲು, ನಿಮ್ಮ ಬ್ಯಾಂಕಿಂಗ್ ಆ್ಯಪ್ ಮೂಲಕ ಹಣ ಜಮೆಯಾಗಿದೆಯೇ ಎಂದು ಸ್ವತಃ ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ.&lt;/p&gt;]]></content:encoded>
            <category>bengaluru-urban</category>
            <dc:creator>Chandrashekar GS</dc:creator>
            <atom:link href="https://kannada.asianetnews.com/bengaluru-urban/bengaluru-student-scammed-out-of-rapido-earnings-in-fake-hospital-emergency-ploy/articleshow-g57p77i"/>
        </item>
        <item>
            <title><![CDATA[ಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?]]></title>
            <link>https://kannada.asianetnews.com/gallery/karnataka-districts/series-of-holidays-for-schools-colleges-and-offices-in-september-when-can-you-get-a-long-weekend-sns-ok2ir2p</link>
            <guid isPermaLink="true">https://kannada.asianetnews.com/gallery/karnataka-districts/series-of-holidays-for-schools-colleges-and-offices-in-september-when-can-you-get-a-long-weekend-sns-ok2ir2p</guid>
            <pubDate>Fri, 28 Aug 2026 16:33:34 +0530</pubDate>
            <description><![CDATA[2026ರ ಸೆಪ್ಟೆಂಬರ್ ತಿಂಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಾಲು ಸಾಲು ರಜೆಗಳನ್ನು ತರಲಿದೆ. ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬಗಳು ವಾರಾಂತ್ಯದೊಂದಿಗೆ ಸೇರಿ ಎರಡು ಲಾಂಗ್ ವೀಕೆಂಡ್&zwnj;ಗಳನ್ನು ಸೃಷ್ಟಿಸುತ್ತವೆ. ಈ ತಿಂಗಳಿನಲ್ಲಿರುವ ಒಟ್ಟು ರಜೆಗಳ ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdvye0bnb0pn8n1tbsnbgkwm,imgname-2026-hindi-long-weekend-festival-dates-holidays-calendar-03-1767243186549.jpg" type="image/jpeg" height="390" width="690"/>
            <content:encoded><![CDATA[2026ರ ಸೆಪ್ಟೆಂಬರ್ ತಿಂಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಾಲು ಸಾಲು ರಜೆಗಳನ್ನು ತರಲಿದೆ. ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬಗಳು ವಾರಾಂತ್ಯದೊಂದಿಗೆ ಸೇರಿ ಎರಡು ಲಾಂಗ್ ವೀಕೆಂಡ್&zwnj;ಗಳನ್ನು ಸೃಷ್ಟಿಸುತ್ತವೆ. ಈ ತಿಂಗಳಿನಲ್ಲಿರುವ ಒಟ್ಟು ರಜೆಗಳ ಸಂಪೂರ್ಣ ವಿವರ ಇಲ್ಲಿದೆ.&lt;img&gt;&lt;p&gt;ಆಗಸ್ಟ್&zwnj; ತಿಂಗಳ ರೀತಿಯಲ್ಲಿಯೇ ಸೆಪ್ಟೆಂಬರ್&zwnj;ನಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಾಲು ಸಾಲು ರಜೆ ಸಿಗಲಿದೆ. ವೀಕ್ ಎಂಡ್&zwnj;ಗಳು ಸ್ವಲ್ಪ ಹೆಚ್ಚಾಗಿ ಸಿಗಲಿದ್ದು, ಸೆಪ್ಟೆಂಬರ್&zwnj;ನಲ್ಲಿ ಒಟ್ಟು ಎಷ್ಟು ರಜೆಗಳಿದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.&lt;/p&gt;&lt;img&gt;&lt;p&gt;ಆಗಸ್ಟ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸಾಲು ಸಾಲು ರಜೆ ಸಿಗಲಿದೆ. ಆಷಾಢ ಮಾಸದಲ್ಲಿ ಆರಂಭವಾದ ರಜೆಗಳ ಪರಂಪರೆ ಸ್ವಾತಂತ್ರ್ಯ ದಿನಾಚರಣೆ, ವರಲಕ್ಷ್ಮೀ ಪೂಜೆ, ಈದ್ ಮಿಲಾದ್ ವರೆಗೂ ಮುಂದುವರೆದಿತ್ತು. ಶ್ರಾವಣ ಹುಣ್ಣಿಮೆಯೊಂದಿಗೆ ಈ ತಿಂಗಳ ಸೇವೆಗಳು ಮುಗಿಯಲಿದ್ದು, ಆಗಸ್ಟ್ ತಿಂಗಳು ಮುಗಿದರೂ ಮುಂದಿನ ತಿಂಗಳಿನಲ್ಲಿ ರಜೆಗಳ ಸಾಲುಗಳು ಮುಂದುವರಿಯಲಿದೆ. ಸೆಪ್ಟೆಂಬರ್&zwnj;ನಲ್ಲಿ ಸಾಲು ಸಾಲು ರಜೆ ಇರಲಿದ್ದು, ಹಬ್ಬದ ರಜೆಗಳು ವೀಕ್ ಎಂಡ್ ನೊಂದಿಗೆ ಸೇರಿ ಬರಲಿದೆ. ಇದರೊಂದಿಗೆ ವೀಕೆಂಡ್, ಲಾಮಗ್ ವೀಕೆಂಡ್ ಆಗಿ ಬದಲಾವಣೆಯಾಗಲಿದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 04 ರಂದು (ಶುಕ್ರವಾರ) ಹಿಂದೂಗಳು ಪವಿತ್ರಾವಾಗಿ ಭಾವಿಸುವ ಶ್ರೀಕೃಷ್ಣನ ಜನ್ಮ ದಿನಾಚರಣೆ, ಈ ದಿನ ದೇಶದಾದ್ಯಂತ ಕೃಷ್ಣಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯಲಿದೆ. ಕರ್ನಾಟಕದ ಜನರು ಕೂಡ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ದೇಶದ ಹಲವು ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಅಧಿಕೃತವಾಗಿ ರಜೆ ಇದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ರಜೆ ಸಿಗಲಿದೆ. ಕರ್ನಾಟಕದಲ್ಲಿ ಮಾತ್ರ ಸಾರ್ವತ್ರಿಕ ರಜೆ ಇಲ್ಲ, ಆದರೆ ಪರಿಮಿತ ರಜೆ ಪಟ್ಟಿಯಲ್ಲಿ ಅವಕಾಶ ನೀಡಲಾಗಿದ್ದು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ಹಿಸುತ್ತವೆ.&lt;/p&gt;&lt;p&gt;ಸೆಪ್ಟೆಂಬರ್&zwnj; 5ರ ಶನಿವಾರ, ಬೆಂಗಳೂರು ಸೇರಿದಂತೆ ದೇಶದ ಹಲವು ಐಟಿ, ಕಾರ್ಪೋರೇಟ್ ಉದ್ಯೋಗಿಗಳಿಗೆ ವಾರದ ರಜೆ ಇರಲಿದೆ. ಕೆಲವು ಶಾಲೆಗಳಿಗೆ ಈ ದಿನವೂ ರಜೆ ಇರುತ್ತದೆ. ವಿದ್ಯಾರ್ಥಿಗಳಿಗೆ ಹೊರತು ಪಡಿಸಿದರೆ ಉದ್ಯೋಗಿಗಳಿಗೆ ಲಾಂಗ್ ವೀಕ್ ಎಂಡ್ ರಜೆ ಸಿಗಲಿದೆ. ಇನ್ನು ಸೆಪ್ಟೆಂಬರ್ 06 ಭಾನುವಾರ ಆಗಿರುವುದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ರಜೆ ಇರಲಿದೆ. ಇದರಂತೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಗ್ ವೀಕ್ ಎಂಡ್ ಸಿಗಲಿದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್&zwnj;ನ ಮೊದಲ ವಾರದಂತೆಯೇ, ಎರಡನೇ ವಾರವೂ ದೀರ್ಘ ವಾರಾಂತ್ಯದ ರಜೆಯನ್ನು (long weekend) ಒದಗಿಸುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರದಂದು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಅಧಿಕೃತ ರಜೆ ಇರುತ್ತದೆ. ಸೆಪ್ಟೆಂಬರ್ 12 ಎರಡನೇ ಶನಿವಾರದಂದು ಬರುವುದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ರಜೆ ಇರುತ್ತದೆ. ಹಾಗೆಯೇ ಸೆಪ್ಟೆಂಬರ್ 13 (ಭಾನುವಾರ) ಎಂದಿನಂತೆ ಸಾರ್ವತ್ರೀಕ ರಜಾದಿನವಾಗಿರುತ್ತದೆ.&lt;/p&gt;&lt;p&gt;ಸೆಪ್ಟೆಂಬರ್ 14 (ಸೋಮವಾರ) ಕೂಡ ಒಂದು ವಿಶೇಷ ರಜಾದಿನವಾಗಿದೆ. ಈ ದಿನದಂದು ಗಣೇಶ ಹಬ್ಬ ಬರುವುದರಿಂದ, ಕರ್ನಾಟಕ ಸರ್ಕಾರ ಇದನ್ನು ಅಧಿಕೃತ ರಜಾದಿನವೆಂದು ಘೋಷಿಸಿವೆ. ನಗರಗಳು, ಪಟ್ಟಣಗಳು ​​ಮತ್ತು ಹಳ್ಳಿಗಳಾದ್ಯಂತ ವಿಜೃಂಭಣೆಯ ಆಚರಣೆಗಳು ನಡೆಯುತ್ತವೆ. ಪ್ರತಿಯೊಂದು ಬಡಾವಣೆಯಲ್ಲೂ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಮತ್ತು ಮನೆಗಳಲ್ಲೂ ದೇವರಿಗೆ ಅತ್ಯಂತ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಇದರ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಗ್ರಹ ವಿಸರ್ಜನೆಯ ದಿನದಂದೂ ರಜೆಯನ್ನು ಘೋಷಿಸಲಾಗಿದೆ.&lt;/p&gt;&lt;p&gt;ಸೆಪ್ಟೆಂಬರ್ 12, 13 ಮತ್ತು 14 ರಂದು (ಅಂದರೆ ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾರ) ಸತತ ರಜೆಗಳು ಬರುತ್ತಿರುವುದರಿಂದ, ಈ ವಾರಾಂತ್ಯವು ವಾಸ್ತವವಾಗಿ ದೀರ್ಘ ವಾರಾಂತ್ಯವಾಗಿ (long weekend) ಪರಿವರ್ತನೆಗೊಳ್ಳುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ವಿನಾಯಕ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;ಮುಸ್ಲಿಮರ ಹಬ್ಬ ಯಝ್&zwj;ದಹುಮ್ ಶರೀಫ್ ಇರುವುದರಿಂದ ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಜೆ ಇರಲಿದೆ. ಖ್ಯಾತ ಸೂಫಿ ಸಂತ ಹಜರತ್ ಖಾದಿರ್ ಜಿಲಾನಿ (ಗೌಸ್-ಎ-ಆಜಮ್) ಅವರ ಸ್ಮರಣಾರ್ಥ ಆಚರಿಸಲಾಗುವ ಪವಿತ್ರ ಧಾರ್ಮಿಕ ಆಚರಣೆಯಾಗಿದೆ. ಈ ಶುಭ ದಿನದಂದು ರಜೆ ಪಡೆಯಲು ಬಯಸುವ ಸರ್ಕಾರಿ ನೌಕರರು, ಪೂರ್ವಾನುಮತಿ ಪಡೆಯುವ ಮೂಲಕ ವೇತನ ಸಹಿತ ರಜೆಯನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಸೆಪ್ಟೆಂಬರ್&zwnj;ನಲ್ಲಿ ಒಟ್ಟು 30 ದಿನಗಳಿದ್ದು, ಇದರಲ್ಲಿ 6,13,20,27 ದಿನಾಂಕಗಳಂದು ಭಾನುವಾರ ಆಗಿರುವುದರಿಂದ ನಾಲ್ಕು ರಜೆ, ಸೆಪ್ಟೆಂಬರ್ 12ರಂದು ಎರಡನೇ ಶನಿವಾರ ರಜೆ, ಸೆಪ್ಟೆಂಬರ್ 04 ರಂದು ಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 14ರಂದು ಗಣೇಶ ಹಬ್ಬ ಇರುವುದರಿಂದ ವಿಶೇಷ ರಜೆ ಸಿಗಲಿದೆ. ಇದರಂತೆ ಮುಂದಿನ ತಿಂಗಳು ಒಟ್ಟು 7 ರಜೆ ದಿನಗಳು ಸಿಗಲಿದ್ದು, ಆಪ್ಷನಲ್ ಹಾಲಿಡೇ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಹಬ್ಬಗಳ ಕಾರಣದಿಂದಾಗಿ ಹೆಚ್ಚುವರಿ ರಜೆಗಳು ಇರುವ ಸಾಧ್ಯತೆಯೂ ಇರುತ್ತದೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/series-of-holidays-for-schools-colleges-and-offices-in-september-when-can-you-get-a-long-weekend-sns-ok2ir2p"/>
        </item>
        <item>
            <title><![CDATA[ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನೇರಳೆ ಮಾರ್ಗದ ಈ 2 ನಿಲ್ದಾಣಗಳ ನಡುವೆ ರೈಲಿನ ವೇಗಕ್ಕೆ ಬ್ರೇಕ್!]]></title>
            <link>https://kannada.asianetnews.com/bengaluru-urban/namma-metro-purple-line-speed-restriction-benniganahalli-baiyappanahalli-bmrcl-maintenance-sat/articleshow-4w5o8sq</link>
            <guid isPermaLink="true">https://kannada.asianetnews.com/bengaluru-urban/namma-metro-purple-line-speed-restriction-benniganahalli-baiyappanahalli-bmrcl-maintenance-sat/articleshow-4w5o8sq</guid>
            <pubDate>Fri, 28 Aug 2026 15:51:23 +0530</pubDate>
            <description><![CDATA[ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ, ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯುತ್ತಿದೆ. ಈ ಕಾರಣದಿಂದ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಗಂಟೆಗೆ 40 ಕಿ.ಮೀ.ಗೆ ಸೀಮಿತಗೊಳಿಸಲಾಗಿದ್ದು, ಪ್ರಯಾಣದ ಸಮಯದಲ್ಲಿ ಅಲ್ಪ ವಿಳಂಬವಾಗಬಹುದು. ಈ ಕಾಮಗಾರಿ ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kznp0pd2vt0yye88e59d3s60,imgname-namma-metro--2--1786360388002.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): ಬೆಂ&lt;/strong&gt;ಗಳೂರಿನ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್&zwnj;ಸಿಎಲ್ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ನೇರಳೆ ಮಾರ್ಗದ (Purple Line) ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ತಾಂತ್ರಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ವೇಗಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;h2&gt;&lt;strong&gt;ವೇಗ ನಿರ್ಬಂಧಕ್ಕೆ ಕಾರಣವೇನು?&lt;/strong&gt;&lt;/h2&gt;&lt;p&gt;ಬೆನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ಮಧ್ಯೆ ಇರುವ &lsquo;ಓಪನ್ ವೆಬ್ ಗರ್ಡ&zwnj;ರ್&rsquo;ನಲ್ಲಿ (Open Web Girder - OWG) ಪ್ರಸ್ತುತ ನಿಗದಿತ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಜ್ಞರ ವಿಶೇಷ ತಂಡವು ಗರ್ಡರ್&zwnj;ನ ನಿಯತಕಾಲಿಕ ಸುರಕ್ಷತಾ ತಪಾಸಣೆ ನಡೆಸುತ್ತಿದ್ದು, ಅಗತ್ಯ ದುರಸ್ತಿ ಹಾಗೂ ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ.&lt;/p&gt;&lt;h3&gt;&lt;strong&gt;65 ಕಿ.ಮೀ. ಬದಲಾಗಿ 40 ಕಿ.ಮೀ. ವೇಗದಲ್ಲಿ ಸಂಚಾರ:&lt;/strong&gt;&lt;/h3&gt;&lt;ul&gt; &lt;li&gt;ಹೆಚ್ಚುವರಿ ಮುಂಜಾಗ್ರತಾ ಮತ್ತು ಸುರಕ್ಷತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ:&lt;/li&gt; &lt;li&gt;ಸಾಮಾನ್ಯವಾಗಿ ಈ ಗರ್ಡರ್ ಮೇಲೆ ಮೆಟ್ರೋ ರೈಲುಗಳು ಗಂಟೆಗೆ ಗರಿಷ್ಠ 65 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದವು.&lt;/li&gt; &lt;li&gt;ನಿರ್ವಹಣಾ ಅವಧಿ ಮುಗಿಯುವವರೆಗೆ ತಾತ್ಕಾಲಿಕವಾಗಿ ರೈಲುಗಳ ವೇಗವನ್ನು ಗಂಟೆಗೆ ಗರಿಷ್ಠ 40 ಕಿ.ಮೀ. ಗೆ ಇಳಿಸಲಾಗಿದೆ.&lt;/li&gt; &lt;li&gt;ರೈಲ್ವೆ ಸುರಕ್ಷತಾ ನಿಯಮಗಳ ಪ್ರಕಾರ, ತಾಂತ್ರಿಕ ಮೇಲ್ವಿಚಾರಣೆ ವೇಳೆ ಇಂತಹ ತಾತ್ಕಾಲಿಕ ವೇಗ ನಿರ್ಬಂಧ ವಿಧಿಸುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;ಮೆಟ್ರೋ ಸೇವೆಗಳಲ್ಲಿ ವ್ಯತ್ಯಯವಿಲ್ಲ:&lt;/strong&gt;&lt;/h2&gt;&lt;p&gt;ನೇರಳೆ ಮಾರ್ಗದಲ್ಲಿ (ಚಲ್ಲಘಟ್ಟ - ವೈಟ್&zwnj;ಫೀಲ್ಡ್) ಮೆಟ್ರೋ ರೈಲು ಸಂಚಾರ ಎಂದಿನಂತೆಯೇ ಸುಗಮವಾಗಿ ಮುಂದುವರಿಯಲಿದೆ. ಆದರೆ, ಈ ನಿರ್ದಿಷ್ಟ ಮಾರ್ಗದಲ್ಲಿ ವೇಗ ಕಡಿಮೆ ಮಾಡಿರುವುದರಿಂದ ಒಟ್ಟಾರೆ ಪ್ರಯಾಣದ ಸಮಯದಲ್ಲಿ ಕೇವಲ ಅಲ್ಪ ಪ್ರಮಾಣದ ವ್ಯತ್ಯಾಸ (ಕೆಲವೇ ನಿಮಿಷಗಳ ವಿಳಂಬ) ಉಂಟಾಗಬಹುದು. ನಿರ್ವಹಣಾ ಕಾರ್ಯವು ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾಮಗಾರಿ ಸಂಪೂರ್ಣಗೊಂಡ ನಂತರ ತಜ್ಞರ ತಾಂತ್ರಿಕ ಮೌಲ್ಯಮಾಪನ ನಡೆಸಿ, ಎಂದಿನಂತೆ ಸಾಮಾನ್ಯ ವೇಗದಲ್ಲಿ ರೈಲು ಓಡಿಸಲು ಅನುಮತಿ ನೀಡಲಾಗುವುದು.&lt;/p&gt;&lt;p&gt;ಪ್ರಯಾಣಿಕರ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣಕ್ಕೆ ಸದಾ ಬದ್ಧವಾಗಿರುವ ಬಿಎಂಆರ್&zwnj;ಸಿಎಲ್, ಈ ನಿರ್ವಹಣಾ ಅವಧಿಯಲ್ಲಿ ಪ್ರಯಾಣಿಕರು ತೋರುತ್ತಿರುವ ಸಹಕಾರಕ್ಕೆ ಧನ್ಯವಾದ ತಿಳಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/namma-metro-purple-line-speed-restriction-benniganahalli-baiyappanahalli-bmrcl-maintenance-sat/articleshow-4w5o8sq"/>
        </item>
        <item>
            <title><![CDATA[ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!]]></title>
            <link>https://kannada.asianetnews.com/india-news/bengaluru-based-sarvam-ai-co-founder-vivek-raghavan-in-time100-ai-2026-from-iit-delhi-to-aadhaar-architect-gdp/articleshow-1ysatd8</link>
            <guid isPermaLink="true">https://kannada.asianetnews.com/india-news/bengaluru-based-sarvam-ai-co-founder-vivek-raghavan-in-time100-ai-2026-from-iit-delhi-to-aadhaar-architect-gdp/articleshow-1ysatd8</guid>
            <pubDate>Fri, 28 Aug 2026 15:41:04 +0530</pubDate>
            <description><![CDATA[ಆಧಾರ್ ಯೋಜನೆಯ ಪ್ರಮುಖ ರೂವಾರಿ ವಿವೇಕ್ ರಾಘವನ್, ಇದೀಗ 'ಸರ್ವಂ AI' ಮೂಲಕ ಭಾರತದಲ್ಲಿ ಸ್ವದೇಶಿ ಕೃತಕ ಬುದ್ಧಿಮತ್ತೆ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಭಾಷಾ ವೈವಿಧ್ಯತೆಗೆ ತಕ್ಕಂತೆ AI ಮಾದರಿಗಳನ್ನು ನಿರ್ಮಿಸುತ್ತಿರುವ ಅವರ ಸಾಧನೆಯನ್ನು 'ಟೈಮ್' ಪತ್ರಿಕೆಯು ಜಾಗತಿಕ ಪ್ರಭಾವಿಗಳ ಪಟ್ಟಿಯಲ್ಲಿ ಸೇರಿಸಿ ಗೌರವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13xggev4tkc28ftfv541taw,imgname-vivek-raghavan-1787911750107.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ದಶಕಕ್ಕೂ ಹೆಚ್ಚು ಕಾಲ, ಒಂದು ಶತಕೋಟಿಗೂ ಅಧಿಕ ಭಾರತೀಯರ ದೈನಂದಿನ ಜೀವನವನ್ನು ಧನಾತ್ಮಕವಾಗಿ ಸ್ಪರ್ಶಿಸಿದ ಐತಿಹಾಸಿಕ ತಂತ್ರಜ್ಞಾನ ಯೋಜನೆ &lsquo;ಆಧಾರ್&rsquo; ನಿರ್ಮಾಣದಲ್ಲಿ ವಿವೇಕ್ ರಾಘವನ್ ಪ್ರಮುಖ ಪಾತ್ರವಹಿಸಿದ್ದರು. ಐಐಟಿ ದೆಹಲಿಯ ಈ ಅಪರೂಪದ ಪ್ರತಿಭಾನ್ವಿತ ತಂತ್ರಜ್ಞ, ಇದೀಗ ಭಾರತದ ಮತ್ತೊಂದು ಕ್ರಾಂತಿಕಾರಿ ತಾಂತ್ರಿಕ ಪರಿವರ್ತನೆಯ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದಾರೆ.&lt;/p&gt;&lt;p&gt;ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ ನವೋದ್ಯಮ 'ಸರ್ವಂ AI' (Sarvam AI) ಯ ಸಹ-ಸಂಸ್ಥಾಪಕರಾಗಿರುವ ವಿವೇಕ್ ರಾಘವನ್ ಅವರನ್ನು ಜಾಗತಿಕ ಮಟ್ಟದ ಪ್ರಸಿದ್ಧ &lsquo;ಟೈಮ್&rsquo; ನಿಯತಕಾಲಿಕೆಯು &quot;TIME100 AI 2026&quot; ಪ್ರಭಾವಿಗಳ ಪಟ್ಟಿಯಲ್ಲಿ ಸೇರಿಸಿದೆ. ಕೃತಕ ಬುದ್ಧಿಮತ್ತೆಯ ಭವಿಷ್ಯವನ್ನು ರೂಪಿಸುತ್ತಿರುವ ಜಾಗತಿಕ ಮಟ್ಟದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಸಾಲಿನಲ್ಲಿ ಇವರಿಗೆ ಈ ಗೌರವ ಲಭಿಸಿದೆ. ಆದರೆ, ಈ ಐತಿಹಾಸಿಕ ಮೈಲಿಗಲ್ಲಿನ ಹಿಂದಿರುವುದು ವರ್ಷಗಳ ಕಾಲ ದೇಶಕ್ಕಾಗಿ ಅಭೂತಪೂರ್ವ ಪ್ರಮಾಣದಲ್ಲಿ ಬೃಹತ್ ತಂತ್ರಜ್ಞಾನ ಮೂಲಸೌಕರ್ಯಗಳನ್ನು ನಿರ್ಮಿಸಿದ ಸುದೀರ್ಘ ಅನುಭವ.&lt;/p&gt;&lt;h2&gt;ಐಐಟಿಯಿಂದ ಆಧಾರ್&zwnj; ರಚನೆವರೆಗೆ&lt;/h2&gt;&lt;p&gt;ಐಐಟಿ ದೆಹಲಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್&zwnj;ನಲ್ಲಿ ಬಿ.ಟೆಕ್ ಪದವಿ ಪಡೆದ ರಾಘವನ್, ನಂತರ ಅಮೆರಿಕದ ಪ್ರಸಿದ್ಧ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್&zwnj;ನಲ್ಲಿ ಎಂಎಸ್ ಹಾಗೂ ಪಿಎಚ್&zwnj;ಡಿ ಪದವಿಗಳನ್ನು ಪೂರೈಸಿದರು. ಆರಂಭದಲ್ಲಿ ಎಲೆಕ್ಟ್ರಾನಿಕ್ ವಿನ್ಯಾಸ ಯಾಂತ್ರೀಕರಣ (EDA) ವಲಯದಲ್ಲಿ ಹಲವು ವರ್ಷಗಳ ಕಾಲ ಶ್ರಮಿಸಿ, ಹಿರಿಯ ತಾಂತ್ರಿಕ ಹುದ್ದೆಗಳನ್ನು ಅಲಂಕರಿಸಿದ್ದಲ್ಲದೆ, ಸ್ವಂತ ಕಂಪನಿಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದರು.&lt;/p&gt;&lt;p&gt;ತದನಂತರ ಭಾರತಕ್ಕೆ ಮರಳಿದ ಅವರು, ಜಗತ್ತಿನ ಅತಿದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾದ 'ಆಧಾರ್' ಯೋಜನೆಯ ಮುಖ್ಯ ಯೋಜನಾ ವ್ಯವಸ್ಥಾಪಕ ಹಾಗೂ ಬಯೋಮೆಟ್ರಿಕ್ ವಾಸ್ತುಶಿಲ್ಪಿ (Biometric Architect) ಯಾಗಿ ಕಾರ್ಯನಿರ್ವಹಿಸಿದರು. ಬಿಲಿಯನ್&zwnj;ಗೂ ಅಧಿಕ ಜನಸಂಖ್ಯೆಯ ದತ್ತಾಂಶವನ್ನು ನಿರ್ವಹಿಸುವ, ವಂಚನೆಗಳನ್ನು ಪತ್ತೆಹಚ್ಚುವ ಮತ್ತು ಸೇವಾ ಗುಣಮಟ್ಟ ಸುಧಾರಿಸಲು ಕೃತಕ ಬುದ್ಧಿಮತ್ತೆಯನ್ನು ಸೃಜನಶೀಲವಾಗಿ ಬಳಸುವ ಬೃಹತ್ ಸವಾಲನ್ನು ಅವರು ಯಶಸ್ವಿಯಾಗಿ ನಿಭಾಯಿಸಿದರು. ಭಾರತದ ವೈವಿಧ್ಯಮಯ ಜನಸಂಖ್ಯೆಗೆ ತಂತ್ರಜ್ಞಾನ ರೂಪಿಸಿದ ಈ ಅನುಭವವೇ ಮುಂದೆ AI ಕ್ಷೇತ್ರದಲ್ಲಿ ಅವರ ದೃಷ್ಟಿಕೋನವನ್ನು ರೂಪಿಸಿತು.&lt;/p&gt;&lt;h2&gt;ಭಾರತಕ್ಕೆ ಸ್ವಂತ AI ಅಗತ್ಯವೇ?&lt;/h2&gt;&lt;p&gt;ಆಧಾರ್ ಯೋಜನೆಯ ಯಶಸ್ಸಿನ ನಂತರ, ಪ್ರತ್ಯೂಷ್ ಕುಮಾರ್ ಅವರೊಂದಿಗೆ ಕೈಜೋಡಿಸಿದ ರಾಘವನ್, ಐಐಟಿ ಮದ್ರಾಸ್&zwnj;ನ 'AI4Bharat' ಉಪಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಭಾರತೀಯ ಭಾಷೆಗಳಿಗೆ ಓಪನ್ ಸೋರ್ಸ್ AI ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು.&lt;/p&gt;&lt;p&gt;ಈ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಲು, ಇಬ್ಬರೂ ಸೇರಿ 2023 ರಲ್ಲಿ 'ಸರ್ವಂ AI' ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಕೇವಲ ವಿದೇಶಿ AI ವ್ಯವಸ್ಥೆಗಳ ಮೇಲೆ ಅವಲಂಬಿತರಾಗುವ ಬದಲು, ಭಾರತದ ಭಾಷಾ ವೈವಿಧ್ಯತೆಗೆ ಸೂಕ್ತವಾದ ಸ್ವದೇಶಿ AI ತಂತ್ರಜ್ಞಾನ ಸ್ಟ್ಯಾಕ್ (Technology Stack) ನಿರ್ಮಿಸುವುದು ಇವರ ಮುಖ್ಯ ಗುರಿಯಾಗಿದೆ. ಸರ್ವಂ ಈಗ 13,700 ಕೋಟಿ ಮೌಲ್ಯ ಹಿಂದಿರುವ ಕಂಪನಿಯಾಗಿದೆ&lt;/p&gt;&lt;p&gt;&quot;ವಿದೇಶಿ AI ವೇದಿಕೆಗಳ ಮೇಲಿನ ಅತಿಯಾದ ಅವಲಂಬನೆಯು ನಮ್ಮ ದೇಶದ ಅಮೂಲ್ಯ ಡೇಟಾವನ್ನು ರಫ್ತು ಮಾಡಿ, ಕೇವಲ ಜ್ಞಾನ ಅಥವಾ ಬುದ್ಧಿಮತ್ತೆಯನ್ನು ಆಮದು ಮಾಡಿಕೊಳ್ಳುವಂತಹ ಅಪಾಯಕಾರಿ ಪರಿಸ್ಥಿತಿಯನ್ನು ತಂದೊಡ್ಡುತ್ತದೆ.&quot;&lt;/p&gt;&lt;p&gt;&mdash; ವಿವೇಕ್ ರಾಘವನ್ (TIME ಸಂದರ್ಶನದಲ್ಲಿ)&lt;/p&gt;&lt;h2&gt;ಭಾಷಾ ವೈವಿಧ್ಯತೆಯ ಭಾರತಕ್ಕೆ ವಿಶೇಷ AI ಮಾದರಿಗಳು&lt;/h2&gt;&lt;p&gt;ಇಂಗ್ಲಿಷ್ ಭಾಷೆಯ ಸಾಂಪ್ರದಾಯಿಕ ಚಾಟ್&zwnj;ಬಾಟ್ ನಿರ್ಮಿಸುವುದಕ್ಕಿಂತ ಭಾರತಕ್ಕಾಗಿ AI ನಿರ್ಮಿಸುವುದು ಸಂಪೂರ್ಣ ಭಿನ್ನವಾದ ಸವಾಲಾಗಿದೆ. 22 ಅಧಿಕೃತ ಭಾಷೆಗಳು ಹಾಗೂ ನೂರಾರು ಉಪಭಾಷೆಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ಸಂದರ್ಭಕ್ಕೆ ತಕ್ಕಂತೆ ಮಾಹಿತಿಯನ್ನು ಗ್ರಹಿಸುವ ವ್ಯವಸ್ಥೆ ಅತ್ಯಗತ್ಯ. ಸರ್ವಂ AI ಪ್ರಸ್ತುತ ಈ ಕೆಳಗಿನ ಪ್ರಮುಖ ತಾಂತ್ರಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.&lt;/p&gt;&lt;p&gt;&lt;strong&gt;ಬಹುಭಾಷಾ ಮಾದರಿಗಳು: &lt;/strong&gt;ಭಾರತೀಯ ಭಾಷೆಗಳಲ್ಲಿ ತಾರ್ಕಿಕ ಚಿಂತನೆ, ಕೋಡಿಂಗ್ ಮತ್ತು ಗಣಿತೀಯ ಕಾರ್ಯಗಳನ್ನು ನಿರ್ವಹಿಸಬಲ್ಲ ಓಪನ್ ವೈಟ್ ವ್ಯವಸ್ಥೆಗಳು.&lt;/p&gt;&lt;p&gt;&lt;strong&gt;ದೃಷ್ಟಿ-ಭಾಷಾ ತಂತ್ರಜ್ಞಾನ (Vision-Language Tech): &lt;/strong&gt;ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿರುವ ದಾಖಲೆಗಳನ್ನು ನಿಖರವಾಗಿ ಪ್ರಕ್ರಿಯೆಗೊಳಿಸುವ ಸುಧಾರಿತ ಮಾದರಿಗಳು.&lt;/p&gt;&lt;p&gt;ಈ ನವೀನ ದೃಷ್ಟಿಕೋನವು ಜಾಗತಿಕ ಹೂಡಿಕೆದಾರರ ಗಮನಸೆಳೆದಿದ್ದು, 2026 ರಲ್ಲಿ ಜಾಗತಿಕ ಟೆಕ್ ದೈತ್ಯ 'ಎನ್&zwnj;ವಿಡಿಯಾ' (Nvidia) ಸರ್ವಂ AI ಸಂಸ್ಥೆಯ ಸರಣಿ-B ಫಂಡಿಂಗ್&zwnj;ನಲ್ಲಿ ಪ್ರಮುಖ ಕಾರ್ಯತಾಂತ್ರಿಕ ಹೂಡಿಕೆದಾರರಾಗಿ ಪಾಲುದಾರಿಕೆ ಪಡೆದುಕೊಂಡಿದೆ.&lt;/p&gt;&lt;h2&gt;ಯುವ ಎಂಜಿನಿಯರ್&zwnj;ಗಳಿಗೆ ಪ್ರೇರಣೆ&lt;/h2&gt;&lt;p&gt;ವಿವೇಕ್ ರಾಘವನ್ ಅವರ ಈ ಯಶೋಗಾಥೆಯು ಉದಯೋನ್ಮುಖ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಉತ್ತಮ ದಿಕ್ಸೂಚಿಯಾಗಿದೆ. ಒಬ್ಬ ವ್ಯಕ್ತಿಯ ವೃತ್ತಿಜೀವನವನ್ನು ವ್ಯಾಖ್ಯಾನಿಸುವ ತಂತ್ರಜ್ಞಾನಗಳು, ಆ ವೃತ್ತಿಜೀವನ ಪ್ರಾರಂಭವಾದಾಗ ಅಸ್ತಿತ್ವದಲ್ಲೇ ಇರಬೇಕೆಂದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ.&lt;/p&gt;&lt;p&gt;ಅವರು ಐಐಟಿ ದೆಹಲಿಯಿಂದ ಪದವಿ ಪಡೆದಾಗ ದೇಶದಲ್ಲಿ 'ಆಧಾರ್' ಕಲ್ಪನೆಯಾಗಲಿ ಅಥವಾ ಇಂದಿನ 'ಜನರೇಟಿವ್ AI' ರೂಪವಾಗಲಿ ಅಸ್ತಿತ್ವದಲ್ಲಿರಲಿಲ್ಲ. ಆದಾಗ್ಯೂ, ಕಂಪ್ಯೂಟಿಂಗ್, ಎಂಜಿನಿಯರಿಂಗ್ ಹಾಗೂ ಸಾರ್ವಜನಿಕ ತಂತ್ರಜ್ಞಾನ ವಲಯದಲ್ಲಿ ದಶಕಗಳ ಕಾಲ ಅವರು ಸಾಧಿಸಿದ ಪರಿಣತಿ, ಇಂದು ಅವರನ್ನು ಭಾರತದ ಎರಡು ಬೃಹತ್ ತಾಂತ್ರಿಕ ಕ್ರಾಂತಿಗಳ ಸಂಗಮದಲ್ಲಿ ತಂದು ನಿಲ್ಲಿಸಿದೆ. 140 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತಕ್ಕೆ ಸ್ವದೇಶಿ AI ತಂತ್ರಜ್ಞಾನದ ಭವಿಷ್ಯ ರೂಪಿಸುತ್ತಿರುವ ವಿವೇಕ್ ರಾಘವನ್ ಅವರಿಗೆ ಲಭಿಸಿರುವ 'TIME100 AI' ಗೌರವವು ಜಾಗತಿಕ ಮಟ್ಟದಲ್ಲಿ ಭಾರತದ ತಾಂತ್ರಿಕ ಶಕ್ತಿಯನ್ನು ಎತ್ತಿಹಿಡಿದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/india-news/bengaluru-based-sarvam-ai-co-founder-vivek-raghavan-in-time100-ai-2026-from-iit-delhi-to-aadhaar-architect-gdp/articleshow-1ysatd8"/>
        </item>
        <item>
            <title><![CDATA[El Nino ಎಷ್ಟು ವರ್ಷ ಇರುತ್ತೆ? ಸೆಪ್ಟೆಂಬರ್‌ನಲ್ಲಿ ಆದರೂ ಮಳೆ ಬರುತ್ತಾ?]]></title>
            <link>https://kannada.asianetnews.com/gallery/karnataka-districts/how-long-does-el-nino-last-will-there-be-any-rain-in-september-karnataka-sns-mnhozg3</link>
            <guid isPermaLink="true">https://kannada.asianetnews.com/gallery/karnataka-districts/how-long-does-el-nino-last-will-there-be-any-rain-in-september-karnataka-sns-mnhozg3</guid>
            <pubDate>Fri, 28 Aug 2026 15:38:12 +0530</pubDate>
            <description><![CDATA[&lt;p&gt;ದೇಶದಲ್ಲಿ ಎಲ್&zwnj; ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13xd5z3wm4w3654w69cwj8s,imgname-el-nino-1787911641059.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದಲ್ಲಿ ಎಲ್&zwnj; ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?&lt;/p&gt;&lt;img&gt;&lt;p&gt;ದೇಶದಲ್ಲಿ ಎಲ್&zwnj; ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ಎಲ್ ನಿನೋ ಪ್ರಭಾವದಿಂದ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಕೂಡ ಉದ್ಭವಿಸಲಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ? ಈ ರೀತಿ ಏನಾಗಬೇಕು?&lt;/p&gt;&lt;img&gt;&lt;p&gt;ಜಗತ್ತಿನ ಹವಾಮಾನವನ್ನು ತಲೆಕೆಳಗಾಗಿ ಮಾಡುತ್ತಿರುವ ಎಲ್ ನಿನೋ ಪ್ರಭಾವ ಹೇಗೆ ಕಡಿಮೆಯಾಗುತ್ತದೆ? ಸಾಮಾನ್ಯ ವಾತಾವರಣದ ಸ್ಥಿತಿಗೆ ಹವಾಮಾನ ಯಾವಾಗ ಬದಲಾವಣೆ ಆಗಲಿದೆ ಎಂಬ ಪ್ರಶ್ನೆಗಳು ತಜ್ಞರು ಸೇರಿದಂತೆ ಸಾಮಾನ್ಯ ಜನರನ್ನು ಕಾಡುತ್ತಿದೆ. ಎಲ್ ನಿನೋ ಕಾರಣದಿಂದ ಜಗತ್ತಿನಾದ್ಯಂತ ಉಷ್ಣತೆ, ತೀವ್ರ ಬರ ಸ್ಥಿತಿ, ಕೆಲವು ಕಡೆ ಭಾರೀ ಮಳೆ-ಪ್ರವಾಹಗಳು ಉಂಟಾಗುತ್ತಿವೆ. ಆದರೆ ಪ್ರಕೃತಿಯ ಈ ಋತುವಿನಲ್ಲಿ ಎಲ್ ನಿನೋ ಯಾವಾಗ ಪ್ರಭಾವ ಕಡಿಮೆಯಾಗುವ ಪ್ರಭಾವ ಸಮುದ್ರ ವಾತಾವರಣ ಪ್ರಕ್ರಿಯೆಯಿಂದ ನಡೆಯುತ್ತದೆ.&lt;/p&gt;&lt;img&gt;&lt;p&gt;'ಎಲ್ ನಿನೋ' (El Ni&ntilde;o) ಎಂಬುದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ವಾಡಿಕೆಗಿಂತ ಗಮನಾರ್ಹವಾಗಿ ಹೆಚ್ಚು ಬಿಸಿಯಾಗುವ ವಿದ್ಯಮಾನವಾಗಿದೆ. ಸಮುದ್ರದ ಮೇಲ್ಮೈ ತಾಪಮಾನವು ಮತ್ತೆ ತಣ್ಣಗಾಗಲು ಪ್ರಾರಂಭಿಸಿದಾಗ ಇದರ ತೀವ್ರತೆಯು ಕುಗ್ಗಲು ಆರಂಭವಾಗುತ್ತದೆ. ಎಲ್ ನಿನೋ (El Ni&ntilde;o) ತನ್ನ ಉತ್ತುಂಗವನ್ನು ತಲುಪಿದ ನಂತರ, ಸಾಗರದ ಆಳದಿಂದ ತಣ್ಣನೆಯ ನೀರಿನ ಪ್ರವಾಹಗಳು ಮೇಲಕ್ಕೆ ಏರಲು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ, ಬೆಚ್ಚಗಾದ ಮೇಲ್ಮೈ ನೀರಿನ ತಾಪಮಾನವು ಕ್ರಮೇಣ ಕಡಿಮೆಯಾಗಿ ಸಾಮಾನ್ಯ ಮಟ್ಟಕ್ಕೆ ಮರಳುತ್ತದೆ. ಹವಾಮಾನಶಾಸ್ತ್ರದಲ್ಲಿ, ಈ ಪ್ರಕ್ರಿಯೆಯನ್ನು &quot;ತಟಸ್ಥ ಹಂತ&quot; (neutral phase) ಎಂದು ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ಎಲ್ ನಿನೋ ಪ್ರಭಾವ ಉಂಟಾದ ಸಂದರ್ಭದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬೀಸುವ ಗಾಳಿಯ ವೇಗ ಕಡಿಮೆಯಾಗುತ್ತದೆ. ಆದರೆ ಎಲ್ ನಿನೋ ಬಲ ಕಡಿಮೆಯಾಗುವ ಸಂದರ್ಭದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ಮತ್ತೆ ಬಲಪಡೆದುಕೊಂಡು ಚಲಿಸಲು ಪ್ರಾರಂಭಿಸುತ್ತವೆ. ಈ ಬಲವಾದ ಗಾಳಿಯೂ ಸಮುದ್ರದ ಮೇಲ್ಮೈ ಇರುವ ಬೀಸಿ ನೀರನ್ನು ಪಶ್ಚಿಮ ಪೆಸಿಫಿಕ್ (ಏಷ್ಯಾ, ಆಸ್ಟ್ರೇಲಿಯಾ) ಕಡೆಗೆ ಬೀಸುವಂತೆ ಮಾಡುತ್ತದೆ. ಪೂರ್ವ ಪೆಸಿಫಿಕ್ ತೀರದಲ್ಲಿ ಖಾಲಿಯಾಗುವ ಸ್ಥಳದಲ್ಲಿ ಸಮುದ್ರದ ಅಳದಲ್ಲಿರುವ ತಣ್ಣನೆಯ ನೀರು ಮೇಲಕ್ಕೆ ಬಂದು ಸೇರುತ್ತದೆ. ಇದು ಪ್ರಾರಂಭವಾದ ಸಂದರ್ಭದಲ್ಲಿ ಎಲ್ ನಿನೋ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಲಿದೆ.&lt;/p&gt;&lt;img&gt;&lt;p&gt;ಸಾಗರದಲ್ಲಿ ಉಂಟಾಗುವ 'ಕೆಲ್ವಿನ್ ಅಲೆಗಳು' (Kelvin waves) ವಾತಾವರಣದ ಬದಲಾವಣೆಗಳಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಸಾಗರದ ಮೇಲ್ಮೈ ಅಡಿಯಲ್ಲಿ ಚಲಿಸುವ ಈ ಕೆಲ್ವಿನ್ ಅಲೆಗಳು ಪಶ್ಚಿಮದಿಂದ ಪೂರ್ವಕ್ಕೆ ಸಾಗುವಾಗ, ತಮ್ಮ ಹಾದಿಯಲ್ಲಿರುವ ಬೆಚ್ಚಗಿನ ನೀರಿನ ಪದರಗಳ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದರ ಪರಿಣಾಮವಾಗಿ, ಸಾಗರದ ನೀರಿನಲ್ಲಿರುವ ಉಷ್ಣತೆಯು ಕ್ರಮೇಣ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಅಥವಾ ಇತರ ಪ್ರದೇಶಗಳಿಗೆ ಹರಡುತ್ತದೆ, ಇದರಿಂದಾಗಿ ತಾಪಮಾನದಲ್ಲಿ ಇಳಿಕೆಯಾಗುತ್ತದೆ.&lt;/p&gt;&lt;img&gt;&lt;p&gt;ಎಲ್&zwnj; ನಿನೋ ಪ್ರಭಾವ ಕಡಿಮೆಯಾದ ಬಳಿಕ ಸಾಮಾನ್ಯ ವಾತಾವರಣ ನಿರ್ಮಾಣವಾಗುತ್ತದೆ, ಈ ಬಳಿಕ ಸಮುದ್ರ ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ತಣ್ಣಗಾಗಿ ನಿನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ ನಿನೋ ಭಾರತದಲ್ಲಿ ಮಳೆಯ ಪ್ರಭಾವ, ಮಳೆಗಾಲದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ನಿರ್ಮಾಣವಾಗಲು ಕಾರಣವಾದರೆ. ಎಲ್ ನಿನೋ ಪ್ರಭಾವ ಕಡಿಮೆಯಾಗಿ ಎಲ್ ನಿನಾ ಸ್ಥಿತಿ ನಿರ್ಮಾಣವಾದರೆ ನೈರುತ್ಯ ಮಾನ್ಸೂನ್ ಮಾರುತಗಳು ಅತ್ಯಂತ ವೇಗವಾಗಿ ದೇಶದಾದ್ಯಂತ ವಿಸ್ತರಣೆಯಾಗಿ ಭಾರೀ ಮಳೆಯಾಗುತ್ತದೆ.&lt;/p&gt;&lt;img&gt;&lt;p&gt;ಭಾರತದ ಕೃಷಿಯ ಮೇಲೆ ಹಾಗೂ ಜಲಾಶಯಗಳ ನೀರಿನ ಸಂಗ್ರಹಕ್ಕೆ ರಿಲೀಫ್ ನೀಡುತ್ತದೆ. ಎಲ್ ನಿನೋ ಮುಗಿದ ಬಳಿಕ ಲಾ ನಿನಾ ಆರಂಭವಾಗಲು ಕೆಲವು ತಿಂಗಳಿಂದ ಗರಿಷ್ಠ 1-2 ವರ್ಷಗಳು ತೆಗೆದುಕೊಳ್ಳುತ್ತದೆ. ಇದು ವರ್ಷಗಳ ಕಾಲ ನಡೆಯುವ ಸುದೀರ್ಘ ಪ್ರಕ್ರಿಯೆ ಆಗಿದ್ದು, ಕೆಲವು ಸಂದರ್ಭಗಳಲ್ಲಿ ಕೇವಲ ಒಂದು ವರ್ಷದಲ್ಲಿಯೇ ಬದಲಾವಣೆಗಳು ನಡೆಯುತ್ತದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 01ರ ವರೆಗೂ ಮಳೆ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದ್ದು, ಕರ್ನಾಟಕದಾದ್ಯಂ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/how-long-does-el-nino-last-will-there-be-any-rain-in-september-karnataka-sns-mnhozg3"/>
        </item>
        <item>
            <title><![CDATA[ಕೇಂದ್ರದ 7 ಚತುಷ್ಪಥ ರೈಲು ಯೋಜನೆಯಲ್ಲಿ ರಾಜ್ಯಕ್ಕೆ ‘ಮಲತಾಯಿ ಧೋರಣೆ’; ಸಚಿವ ಎಂ.ಬಿ.ಪಾಟೀಲ್ ಆಕ್ರೋಶ!]]></title>
            <link>https://kannada.asianetnews.com/state/karnataka-railway-quadrupling-project-injustice-mb-patil-slams-centre-ashwini-vaishnaw/articleshow-7qq8oa9</link>
            <guid isPermaLink="true">https://kannada.asianetnews.com/state/karnataka-railway-quadrupling-project-injustice-mb-patil-slams-centre-ashwini-vaishnaw/articleshow-7qq8oa9</guid>
            <pubDate>Fri, 28 Aug 2026 15:02:12 +0530</pubDate>
            <description><![CDATA[&lt;p&gt;ಕೇಂದ್ರ ಸರ್ಕಾರ ಘೋಷಿಸಿರುವ 7 ಅತಿಸಾಂದ್ರತೆಯ ಚತುಷ್ಪಥ ರೈಲ್ವೆ ಯೋಜನೆಯಲ್ಲಿ ಕರ್ನಾಟಕವನ್ನು ಕಡೆಗಣಿಸಿರುವುದಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯವು 50:50 ವೆಚ್ಚ ಹಂಚಿಕೆಗೆ ಸಹಕರಿಸುತ್ತಿದ್ದರೂ ಕೇಂದ್ರವು ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwb406jty1phs12n8qg3j1f4,imgname-v-somanna-mb-patil-1782784727642.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): ದೇ&lt;/strong&gt;ಶದಲ್ಲಿ ಸುಗಮ ರೈಲು ಸಂಚಾರ ಮತ್ತು ಸರಕು ಸಾಗಣೆಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ 7 ಅತಿಸಾಂದ್ರತೆಯ (High Density) ಚತುಷ್ಪಥ (4-Lane Track) ಮೇಲ್ದರ್ಜೆಗೇರಿಸುವ ರೈಲ್ವೆ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಸೇರಿಸದೆ ಇರುವುದು ತೀವ್ರ ಅನ್ಯಾಯದ ಪರಮಾವಧಿ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (M.B. Patil) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಕೇಂದ್ರದ ಈ ತಾರತಮ್ಯದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪ್ರಧಾನಿ ಹಾಗೂ ಕೇಂದ್ರಕ್ಕೆ ಪತ್ರ ಬರೆಸುವುದರ ಜತೆಗೆ, ಖುದ್ದಾಗಿ ನಾವೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರಾಜ್ಯದ ಅತಿದಟ್ಟಣೆಯ ಮಾರ್ಗಗಳಿಗೆ ಬೇಕಿದೆ ಚತುಷ್ಪಥ:&lt;/strong&gt;&lt;/h2&gt;&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ದೆಹಲಿ-ಹೌರಾ, ಹೌರಾ-ಚೆನ್ನೈ, ಚೆನ್ನೈ-ಮುಂಬೈ, ಮುಂಬೈ-ದೆಹಲಿ, ದೆಹಲಿ-ಚೆನ್ನೈ, ಮುಂಬೈ-ಹೌರಾ ಮತ್ತು ದೆಹಲಿ-ಗುವಾಹಟಿ ಸೇರಿದಂತೆ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿದ್ದಾರೆ. ಆದರೆ ಕರ್ನಾಟಕದ ಪ್ರಮುಖ ಮಾರ್ಗಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ.&lt;/p&gt;&lt;p&gt;ರಾಜ್ಯದಲ್ಲಿಯೂ ವಿಪರೀತ ಸಂಚಾರ ದಟ್ಟಣೆ ಇರುವ ಈ ಕೆಳಗಿನ ಮಾರ್ಗಗಳನ್ನು ತಕ್ಷಣವೇ ಚತುಷ್ಪಥ ಮಾರ್ಗಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ:&lt;/p&gt;&lt;ul&gt; &lt;li&gt;ಬೆಂಗಳೂರು &ndash; ಪುಣೆ &ndash; ಮುಂಬೈ&lt;/li&gt; &lt;li&gt;ಬೆಂಗಳೂರು &ndash; ಮೈಸೂರು&lt;/li&gt; &lt;li&gt;ಬೆಂಗಳೂರು &ndash; ಮಂಗಳೂರು&lt;/li&gt; &lt;li&gt;ಬೆಂಗಳೂರು &ndash; ಚೆನ್ನೈ&lt;/li&gt; &lt;li&gt;ಬೆಂಗಳೂರು &ndash; ಶಿವಮೊಗ್ಗ&lt;/li&gt; &lt;li&gt;ಬೆಂಗಳೂರು &ndash; ವಿಜಯಪುರ&lt;/li&gt; &lt;li&gt;ಬೆಂಗಳೂರು &ndash; ಕಲಬುರಗಿ&lt;/li&gt;&lt;/ul&gt;&lt;h2&gt;&lt;strong&gt;50:50 ವೆಚ್ಚ ಹಂಚಿಕೊಂಡರೂ ಕೇಂದ್ರದ ಮಲತಾಯಿ ಧೋರಣೆ!&lt;/strong&gt;&lt;/h2&gt;&lt;p&gt;'ರಾಜ್ಯದಲ್ಲಿ ರೈಲ್ವೆ ಯೋಜನೆಗಳು ವೇಗವಾಗಿ ಜಾರಿಯಾಗಲಿ ಎಂಬ ಉದ್ದೇಶದಿಂದ ನಾವು 50:50 ವೆಚ್ಚ ಹಂಚಿಕೆ ಸೂತ್ರದಲ್ಲಿ ಕೇಂದ್ರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಇಂತಹ ಸಹಕಾರವಿಲ್ಲ. ಆದರೂ ಕೇಂದ್ರ ಸರ್ಕಾರವು ತಮಿಳುನಾಡು, ಆಂಧ್ರಪ್ರದೇಶಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಕರ್ನಾಟಕಕ್ಕೆ ನೀಡುತ್ತಿಲ್ಲ. ಕೇಂದ್ರದ ಈ ಮಲತಾಯಿ ಧೋರಣೆಯಿಂದಾಗಿ ನಮ್ಮ ಹೆದ್ದಾರಿಗಳು ಹಾಗೂ ರಸ್ತೆಗಳ ಮೇಲೆ ವಾಹನಗಳ ಮಿತಿಮೀರಿದ ಒತ್ತಡ ಬೀಳುತ್ತಿದೆ' ಎಂದು ಪಾಟೀಲ ದೂರಿದ್ದಾರೆ.&lt;/p&gt;&lt;h2&gt;&lt;strong&gt;ಕರಾವಳಿ ಸಂಪರ್ಕ ಮತ್ತು ಹೈಸ್ಪೀಡ್ ರೈಲು ಅನ್ಯಾಯ:&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ 330 ಕಿ.ಮೀ ಉದ್ದದ ಕರಾವಳಿ ತೀರವಿದ್ದರೂ, ಬಂದರು ಪಟ್ಟಣಗಳಾದ ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ, ಕಾರವಾರಗಳಿಂದ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ ಅಥವಾ ಶಿವಮೊಗ್ಗಕ್ಕೆ ಸಮರ್ಪಕ ರೈಲ್ವೆ ಸಂಪರ್ಕ ಕಲ್ಪಿಸಿಲ್ಲ. ಇದಲ್ಲದೆ, ಕೇಂದ್ರ ಬಜೆಟ್&zwnj;ನಲ್ಲಿ ಘೋಷಿಸಲಾದ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲುಗಳು ರಾಜ್ಯದೊಳಗೆ 100 ಕಿ.ಮೀ ಕೂಡ ಸಂಚರಿಸುವುದಿಲ್ಲ. ಇದರಿಂದ ನೆರೆ ರಾಜ್ಯಗಳಿಗಷ್ಟೇ ಲಾಭ. ಬದಲಾಗಿ ಬೆಂಗಳೂರು &ndash; ಹುಬ್ಬಳ್ಳಿ &ndash; ಪುಣೆ ಮಾರ್ಗದಲ್ಲಿ ಹೈಸ್ಪೀಡ್ ರೈಲು ಮಾರ್ಗ ನಿರ್ಮಿಸಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಿಜೆಪಿ ಸಂಸದರು, ಮಾಜಿ ಸಿಎಂಗಳು ಮೌನ ಮುರಿಯಲಿ:&lt;/strong&gt;&lt;/h2&gt;&lt;p&gt;'ಬೆಂಗಳೂರು ಜಾಗತಿಕ ಮಟ್ಟದಲ್ಲಿ ಐಟಿ, ನವೋದ್ಯಮ, ಆರ್&zwnj;&amp;amp;ಡಿ, ಸೆಮಿಕಂಡಕ್ಟರ್ ಮತ್ತು ಹೂಡಿಕೆಯ ಪ್ರಮುಖ ಕೇಂದ್ರವಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರವೇ ಸ್ವಯಂಪ್ರೇರಿತವಾಗಿ ರಾಜ್ಯಕ್ಕೆ ಬೃಹತ್ ಯೋಜನೆಗಳನ್ನು ನೀಡಬೇಕಿತ್ತು. ಈ ಅನ್ಯಾಯದ ವಿರುದ್ಧ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಮೌನ ಮುರಿದು ಧ್ವನಿ ಎತ್ತಬೇಕು. ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು' ಎಂದು ಎಂ.ಬಿ. ಪಾಟೀಲ ಎಚ್ಚರಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-railway-quadrupling-project-injustice-mb-patil-slams-centre-ashwini-vaishnaw/articleshow-7qq8oa9"/>
        </item>
        <item>
            <title><![CDATA[ಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ]]></title>
            <link>https://kannada.asianetnews.com/gallery/politics/karnataka-bjp-jds-alliance-target-2028-mission-pm-modi-gave-new-responsibilities-for-kumaraswamy-and-nikhil-sns-btb3d08</link>
            <guid isPermaLink="true">https://kannada.asianetnews.com/gallery/politics/karnataka-bjp-jds-alliance-target-2028-mission-pm-modi-gave-new-responsibilities-for-kumaraswamy-and-nikhil-sns-btb3d08</guid>
            <pubDate>Fri, 28 Aug 2026 13:17:21 +0530</pubDate>
            <description><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13mtd28bsn9yh0k6t8cwc8t,imgname-hd-kumaraswamy---2--1787902637128.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕುಮಾರಸ್ವಾಮಿ ಅವರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ದೆಹಲಿ ಭೇಟಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ಮೋದಿ ಅವರ ನಡುವೆ ಮಾತುಕತೆ ನಡೆಸಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ಪ್ರಧಾನಿಗಳು ಮಾತನಾಡಿದ್ದರಂತೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಎಕ್ಸ್&zwnj; ಕ್ಲೂಸಿವ್ ಮಾಹಿತಿ ಲಭ್ಯವಾಗಿದ್ದು, 2028ರ ಚುನಾವಣೆ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಅದರಲ್ಲೂ ಇದಕ್ಕೆ ಬಿಜೆಪಿ ಜೆಡಿಎಸ್ ಮಿತ್ರಪಕ್ಷವಾಗಿ ಅದರ ಪಾತ್ರ ಹಾಗೂ ಟಾರ್ಗೆಟ್ ರೀಚ್ ಆಗಲು ಯಾವ ಪಾತ್ರವಹಿಸಬೇಕು ಎಂದು ಜೆಡಿಎಸ್&zwnj;ಗೆ ಮೋದಿ ಜವಾಬ್ದಾರಿ ನೀಡಿದ್ದಾರಂತೆ.&lt;/p&gt;&lt;img&gt;&lt;p&gt;ಏನೆಲ್ಲಾ ಮಾತುಕತೆ ಆಗಿದೆ? ಜೆಡಿಎಸ್&zwnj;ಗೆ ಮೋದಿ ಅವರು ಕೊಟ್ಟ ಟಾಸ್ಕ್ ಏನು ಅಂತ ನೋಡುವುದಾದರೆ, ರಾಜ್ಯದಲ್ಲಿ ಜೆನ್&zwnj; ಝೀಗಳನ್ನು ಗುರುರಿಯಾಗಿಸಿಕೊಂಡು ಮೋದಿ ಅವರು ಕೆಲವು ಸಲಹೆ ನೀಡಿದ್ದರಂತೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರಿಗೆ ಈ ಬಗ್ಗೆ ಟಾಸ್ಕ್ ಕೊಟ್ಟಿದ್ದೇವೆ. ಜೆನ್ ಝೀಗಳ ನಡುವೆ ಸಾವಿರ ಸಭೆಗಳನ್ನು ಮಾಡಿ ಅಂತ ಹೇಳಿದ್ದರಂತೆ. ಈಗ ಇದೇ ಟಾಸ್ಕ್ ಅನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಅವರಿಗೂ ನೀಡಿದ್ದರಂತೆ.&lt;/p&gt;&lt;img&gt;&lt;p&gt;1997ರ ನಂತರ ಹುಟ್ಟಿರುವ ಹಾಗೂ ಹೊಸ ಮತದಾರರನ್ನು ಟಾರ್ಗೆಟ್ ಮಾಡಿ, ನಮ್ಮ ಕಡೆ ಸೆಳೆಯುವ ಕಾರ್ಯಕ್ರಮಗಳನ್ನು ರೂಪಿಸಿ. ಅವರ ಬೇಡಿಕೆಗಳು ಏನು? ಅವುಗಳಿಗೆ ತಕ್ಷಣದ ಪರಿಹಾರ ಏನು? ದೂರದೃಷ್ಟಿಯಿಂದ ಏನು ಮಾಡಬೇಕು ಎಂದು ನಿರ್ಧಾರ ಮಾಡಿ. ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಮೋದಿ ಸಲಹೆ ನೀಡಿದ್ದಾರಂತೆ.&lt;/p&gt;&lt;img&gt;&lt;p&gt;ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೂ ಒಂದಷ್ಟು ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರಂತೆ. ಜೆನ್ ಝೀಗಳ ಶಕ್ತಿ ಏನು ಅಂತ ಈಗಾಗಲೇ ಗೊತ್ತಾಗಿದೆ. ಸಂಪೂರ್ಣ ಇಮೇಜ್ ಅನ್ನೇ ಬದಲಾವಣೆ ಮಾಡುವ ತಾಕತ್ತು ಈ ಯುವ ಸಮೂಹಕ್ಕೆ ಇದೆ. ಅವರನ್ನು ನಮ್ಮ ಕಡೆ ಸೆಳೆಯಲು ಕ್ರಿಯಾಶೀಲವಾಗಿ ಕೆಲಸ ಮಾಡಿ, ಪಕ್ಷದ ಯುವ ಘಟಕದೊಂದಿಗೆ ಕೆಲಸ ಮಾಡಿ. ಹೊಸ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಶುರು ಮಾಡಿ ಎಂದು ಹೇಳಿದ್ದಾರಂತೆ.&lt;/p&gt;&lt;img&gt;&lt;p&gt;ಇನ್ನು, ಪ್ರಧಾನಿ ಮೋದಿ ಅವರು ಕೊಟ್ಟ ಟಾಸ್ಕ್ ಅನ್ನು ಜೆಡಿಎಸ್ ಸವಾಲಿನ ರೂಪದಲ್ಲಿ ಸ್ವೀಕಾರ ಮಾಡಿದ್ದು, ಹೊಸ ತಂತ್ರಗಾರಿಕೆ ರೂಪಿಸಲು ಸಿದ್ಧತೆ ನಡೆಸಿದೆಯಂತೆ. ಇದರಂತೆ ಶೀಘ್ರವೇ ಪಕ್ಷದ ಯುವಘಟಕದ ಮೂಲಕ ಟಾಸ್ಕ್ ಜಾರಿಗೆ ಮಾರ್ಗಸೂಚಿ ಮಾಡಿಕೊಂಡಿದೆಯಂತೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಯಾವ ದಿಕ್ಕಿನಲ್ಲಿ ಹೋಗ್ತಾ ಇದೆ. ಹಲವಾರು ಸಮಸ್ಯೆ ಗಳು ಪ್ರತಿನಿತ್ಯ ಹೇಗೆ ನಡೆಯುತ್ತಿವೆ. ಬರಗಾಲ, ಮಂತ್ರಿಗಳ ರಾಜೀನಾಮೆ, ಕೆಪಿಎಸ್ಸಿ ಸಮಸ್ಯೆ, ಬೆಂಗಳೂರು ಅಭಿವೃದ್ಧಿ, ಇತ್ತೀಚಿನ ಅಧಿವೇಶನ, ಪಾರ್ಕ್ ಗಳ ಭೂಮಿ ಪಡೆದುಕೊಳ್ಳುವ ಬಿಲ್ ಹೀಗೆ ಅನೇಕ ವಿಚಾರಗಳಿವೆ. ಚರ್ಚೆ ಮಾಡ್ತಾ ಹೋದರೆ ಧಾರಾವಾಹಿ ರೀತಿ ಆಗುತ್ತದೆ. ಇಂದು ನಮ್ಮ ರಾಜ್ಯದ ಗೃಹ ಸಚಿವರಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಿದ್ದು, ಎಪ್ಪತ್ತೈದು ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ತೀವಿ ಅಂತ ಹೇಳಿ ಯಾವ ರೀತಿ ನಡೆಸುತ್ತಿದ್ದಾರೆ ನೋಡಿ. ನಿರುದ್ಯೋಗಿ ಯುವಕರು ನೀವು ಏಳದಿದ್ದರೆ, ಇದು ಸರಿ ಹೋಗೋದಿಲ್ಲ. ಮನೆ&zwnj; ಮಠ ಹಾಳುಮಾಡಿಕೊಂಡು ಕೋಟಿ ಕೋಟಿ ಹಣ ಕೊಟ್ಟು ಬಂದು, ಯಾರ ತಲೆ&zwnj; ಹೊಡೀತೀರಾ ನೀವು? ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಪ್ರಿಯಾಂಕ್ ಖರ್ಗೆಯವರೇ? ಇದರ ಬಗ್ಗೆ ಯಾಕೆ ಮಾತನಾಡೋದಿಲ್ಲ? ಈಗಾಗಲೇ ಅಪಾಯಿಟ್ಮೆಂಟ್ ಕೊಟ್ಟಾಗಿದೆ, ಒಂದು ವರ್ಷ ಸಂಬಳ ಕೊಟ್ಟಾಗಿದೆ, ಈಗ ಏನು ಕ್ರಮ ತಗೋತೀರಿ? ದೆಹಲಿಯಲ್ಲಿ ಅಪಾಯಿಟ್ಮೆಂಟ್ ಮಾಡುವಾಗ 360 ಡಿಗ್ರಿ ತನಿಕೆ ನಡೆಯುತ್ತೆ. ಇಲ್ಲಿ ಯಾಕೆ ಯಾವುದೇ ಪರಿಶೀಲನೆ ಮಾಡಲ್ಲ? ಯುವಕರು ಯಾಕೆ ಮೌನವಾಗಿದ್ದೀರಿ? ಇದನ್ನು ಸರಿಪಡಿಸಲು ನೀವು ಬೀದಿಗಿಳಿಯಬೇಕು. ನೀಟ್ ಪರೀಕ್ಷೆ ಅಕ್ರಮ ದಲ್ಲಿ ಹೋರಾಟ ಮಾಡಿದ ರೀತಿ ಇಲ್ಲೂ ರಾಜ್ಯದಲ್ಲಿ ಆಗಬೇಕು ಎಂದು ಯುವಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/politics/karnataka-bjp-jds-alliance-target-2028-mission-pm-modi-gave-new-responsibilities-for-kumaraswamy-and-nikhil-sns-btb3d08"/>
        </item>
        <item>
            <title><![CDATA[ಸೆ.10ಕ್ಕೆ ಮುಕ್ತಾಯವಾಗಲಿದೆ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್‌ ಟೋಲ್‌ ಒಪ್ಪಂದ, ವಾಹನ ಸವಾರರಿಗೆ ಸಿಗುತ್ತಾ ರಿಲೀಫ್?]]></title>
            <link>https://kannada.asianetnews.com/bengaluru-urban/bengaluru-electronics-city-attibele-toll-agreement-expires-september-10-san/articleshow-soxqh6p</link>
            <guid isPermaLink="true">https://kannada.asianetnews.com/bengaluru-urban/bengaluru-electronics-city-attibele-toll-agreement-expires-september-10-san/articleshow-soxqh6p</guid>
            <pubDate>Fri, 28 Aug 2026 12:43:29 +0530</pubDate>
            <description><![CDATA[&lt;p&gt;ಸೆಪ್ಟೆಂಬರ್ 10ಕ್ಕೆ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳ ಗುತ್ತಿಗೆ ಒಪ್ಪಂದ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಟೋಲ್ ಸಂಗ್ರಹವನ್ನು ನಿಲ್ಲಿಸುವುದು, ಮುಂದುವರಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಕೇಂದ್ರ ಸರ್ಕಾರ ಮತ್ತು ಎನ್&zwnj;ಹೆಚ್&zwnj;ಎಐ ಪರಿಶೀಲಿಸುತ್ತಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13k94j2e8hab7q462aefse5,imgname-electronics-city-flyover-1787901022786.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28):&lt;/strong&gt; ಸಿಲ್ಕ್ ಬೋರ್ಡ್&zwnj;ನಿಂದ ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ 9.9 ಕಿಲೋಮೀಟರ್ ಉದ್ದದ ಫ್ಲೈಓವರ್ (ಎಲೆವೇಟೆಡ್ ರಸ್ತೆ) ಹಾಗೂ ಅತ್ತಿಬೆಲೆ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದಂತೆ ಮಾಡಿಕೊಳ್ಳಲಾಗಿದ್ದ ಗುತ್ತಿಗೆ ಒಪ್ಪಂದವು (Concession Agreement) ಸೆಪ್ಟೆಂಬರ್ 10ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಮುಂಬರುವ ದಿನಗಳಲ್ಲಿ ಟೋಲ್ ಸಂಗ್ರಹ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರಮುಖ ನಿರ್ಧಾರ ಕೈಗೊಳ್ಳಲು ಮುಂದಾಗಿವೆ.&lt;/p&gt;&lt;p&gt;ಕರ್ನಾಟಕ-ತಮಿಳುನಾಡು ಗಡಿಯತ್ತ ಸಾಗುವ ಬೆಂಗಳೂರು-ಹೊಸೂರು ಕಾರಿಡಾರ್&zwnj;ನ ಭಾಗವಾಗಿರುವ ಈ ಮೇಲ್ಸೇತುವೆಯು ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುತ್ತದೆ. ಪ್ರಸ್ತುತ ಕೇಂದ್ರ ಸರ್ಕಾರ ಹಾಗೂ ಎನ್&zwnj;ಹೆಚ್&zwnj;ಎಐ ಮುಂದೆ ನಾಲ್ಕು ಪ್ರಮುಖ ಆಯ್ಕೆಗಳಿವೆ.&lt;/p&gt;&lt;ul&gt; &lt;li&gt;&lt;strong&gt;ಎಲೆಕ್ಟ್ರಾನಿಕ್ಸ್ ಸಿಟಿ ಹಾಗೂ ಅತ್ತಿಬೆಲೆ ಟೋಲ್ ಪ್ಲಾಜಾಗಳಲ್ಲಿ ಹಾಲಿ ಇರುವ ಟೋಲ್ ಸಂಗ್ರಹವನ್ನು ಪೂರ್ತಿಯಾಗಿ ಸ್ಥಗಿತಗೊಳಿಸುವುದು.&lt;/strong&gt;&lt;/li&gt; &lt;li&gt;&lt;strong&gt;ರಸ್ತೆ ನಿರ್ವಹಣೆಗಾಗಿ ಎನ್&zwnj;ಹೆಚ್&zwnj;ಎಐ ಏಜೆನ್ಸಿಯೊಂದರ ಮೂಲಕ ಟೋಲ್ ಸಂಗ್ರಹವನ್ನು ತಾನೇ ಮುಂದುವರಿಸುವುದು.&lt;/strong&gt;&lt;/li&gt; &lt;li&gt;&lt;strong&gt;ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿ ಪಟ್ಟಿಯಿಂದ ಹೊರಗಿಟ್ಟು (Denotify), ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆಗೆ (PWD) ಹಸ್ತಾಂತರಿಸುವುದು.&lt;/strong&gt;&lt;/li&gt; &lt;li&gt;&lt;strong&gt;ನಿಯಮಾವಳಿಗಳ ಪ್ರಕಾರ ಕನಿಷ್ಠ ಅಂತರ ಕಾಯ್ದುಕೊಳ್ಳಲು ಒಂದು ಟೋಲ್ ಪ್ಲಾಜಾವನ್ನು ಬೇರೆಡೆಗೆ ಸ್ಥಳಾಂತರಿಸುವುದು.&lt;/strong&gt;&lt;/li&gt;&lt;/ul&gt;&lt;h2&gt;&lt;strong&gt;ಟೋಲ್ ಸ್ಥಳಾಂತರ ಪ್ರಸ್ತಾಪ&lt;/strong&gt;&lt;/h2&gt;&lt;p&gt;ಎನ್&zwnj;ಹೆಚ್&zwnj;ಎಐ ನಿಯಮಾವಳಿಗಳ ಪ್ರಕಾರ ಒಂದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ದಿಸೆಯಲ್ಲಿರುವ ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿಲೋಮೀಟರ್ ಅಂತರವಿರಬೇಕು. ಆದರೆ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಅತ್ತಿಬೆಲೆ ಟೋಲ್ ಪ್ಲಾಜಾಗಳು ಅತ್ಯಂತ ಹತ್ತಿರದಲ್ಲಿವೆ. ಹೀಗಾಗಿ ಅತ್ತಿಬೆಲೆ ಟೋಲ್ ಪ್ಲಾಜಾವನ್ನು ಮುಚ್ಚಿ, ಕೃಷ್ಣಗಿರಿ ಬಳಿ ಟೋಲ್ ಸಂಗ್ರಹಿಸಲು ಪ್ರಸ್ತಾಪಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಟೋಲ್ ಸಮಿತಿಯು ಈ ಪ್ರಸ್ತಾಪವನ್ನು ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.&lt;/p&gt;&lt;h2&gt;&lt;strong&gt;ಪರಿಹಾರಕ್ಕೆ ಗುತ್ತಿಗೆದಾರ ಸಂಸ್ಥೆ ಪಟ್ಟು&lt;/strong&gt;&lt;/h2&gt;&lt;p&gt;ಕೋವಿಡ್-19 ಲಾಕ್&zwnj;ಡೌನ್ ಹಾಗೂ ಇತರ ಕಾರಣಗಳಿಂದ ಟೋಲ್ ಸಂಗ್ರಹದಲ್ಲಿ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ಟೋಲ್ ಅವಧಿಯನ್ನು ವಿಸ್ತರಿಸಬೇಕು ಎಂದು ಗುತ್ತಿಗೆದಾರ ಸಂಸ್ಥೆಯು ಸ್ವತಂತ್ರ ತಜ್ಞರ ಸಂಧಾನ ಸಮಿತಿ (CCIE) ಮುಂದೆ ಮನವಿ ಮಾಡಿದೆ. ಸ್ಥಳೀಯ ವಾಣಿಜ್ಯ ವಾಹನ ಮಾಲೀಕರು ಹಾಗೂ ನಿವಾಸಿಗಳು ಟೋಲ್ ನೀಡಲು ನಿರಾಕರಿಸಿದ್ದರಿಂದ ತಮಗೆ ನಷ್ಟವಾಗಿದೆ ಎಂದು ಕಂಪನಿ ಹೇಳಿದ್ದು, ರಾಜ್ಯ ಸರ್ಕಾರದಿಂದ ಪರಿಹಾರವನ್ನೂ ಕೋರಿದೆ. ಹೀಗಾಗಿ ಟೋಲ್ ಸಂಗ್ರಹದ ಅವಧಿ ವಿಸ್ತರಣೆಯು ಈ ಹಕ್ಕುಪತ್ರಗಳ (Claims) ನಿರ್ಧಾರದ ಮೇಲೂ ಅವಲಂಬಿತವಾಗಿದೆ.&lt;/p&gt;&lt;h2&gt;&lt;strong&gt;BOT ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ಯೋಜನೆ&lt;/strong&gt;&lt;/h2&gt;&lt;p&gt;ಆರಂಭದಲ್ಲಿ ಎನ್&zwnj;ಹೆಚ್&zwnj;ಎಐ, ಕರ್ನಾಟಕ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯ ಇನ್ಫೋಸಿಸ್, ವಿಪ್ರೋದಂತಹ ಕಂಪನಿಗಳು ತಲಾ ₹100 ಕೋಟಿ ಹೂಡಿಕೆ ಮಾಡಿ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದವು. ಆದರೆ ನಂತರ ಅದನ್ನು ಕೈಬಿಟ್ಟು ಬಿಲ್ಡ್-ಆಪರೇಟ್-ಟ್ರಾನ್ಸ್&zwnj;ಫರ್ (BOT) ಮಾದರಿಯಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು. ಸೊಮಾ-ಎನ್&zwnj;ಸಿಸಿ-ಮಾಯ್&zwnj;ತಾಸ್ (Soma-NCC-Maytas) ಒಕ್ಕೂಟದ 'ಬೆಂಗಳೂರು ಎಲಿವೇಟೆಡ್ ಟೋಲ್&zwnj;ವೇ ಲಿಮಿಟೆಡ್' (BETL) ಸಂಸ್ಥೆಯು 2006ರಲ್ಲಿ ಒಪ್ಪಂದ ಮಾಡಿಕೊಂಡು, ಸುಮಾರು ₹990 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿತು. 2010ರ ಜನವರಿಯಲ್ಲಿ ಈ ಫ್ಲೈಓವರ್ ಲೋಕಾರ್ಪಣೆಗೊಂಡಿತ್ತು. ವೆಚ್ಚ ಭರಿಸಲು ದ್ವಿಚಕ್ರ ವಾಹನಗಳಿಗೂ ಟೋಲ್ ವಿಧಿಸಲಾಯಿತು.&lt;/p&gt;&lt;p&gt;ಎಲೆಕ್ಟ್ರಾನಿಕ್ಸ್ ಸಿಟಿ ಟೋಲ್ ಪ್ಲಾಜಾ ಪ್ರಮುಖವಾಗಿ ಐಟಿ ಹಬ್ ಹಾಗೂ ನಗರದ ದೈನಂದಿನ ಸಂಚಾರಕ್ಕೆ ಬಳಸಲ್ಪಡುತ್ತಿದ್ದರೆ, ಅತ್ತಿಬೆಲೆ ಟೋಲ್ ಪ್ಲಾಜಾ ಬೆಂಗಳೂರು, ಹೊಸೂರು ಹಾಗೂ ಚೆನ್ನೈ ನಡುವಿನ ವಾಣಿಜ್ಯ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನೆರವಾಗುತ್ತಿದೆ. ಆದರೆ ಪ್ರಸ್ತುತ ಎಲೆಕ್ಟ್ರಾನಿಕ್ಸ್ ಸಿಟಿಯು ಬೆಂಗಳೂರು ನಗರದ ಭಾಗವಾಗಿಯೇ ಬೆಳೆದಿರುವುದರಿಂದ ಟೋಲ್ ರದ್ದುಪಡಿಸಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ. ಒಂದು ವೇಳೆ ರಾಜ್ಯ ಸರ್ಕಾರಕ್ಕೆ ರಸ್ತೆ ಹಸ್ತಾಂತರವಾದರೆ, ನಿರ್ವಹಣಾ ವೆಚ್ಚಕ್ಕಾಗಿ ರಾಜ್ಯದ ನೀತಿಗೆ ಅನುಗುಣವಾಗಿ ಟೋಲ್ ಮುಂದುವರಿಯುವ ಸಾಧ್ಯತೆಯೂ ಇದೆ.&lt;/p&gt;&lt;h2&gt;&lt;strong&gt;ಇತ್ತೀಚೆಗಷ್ಟೇ ಪರಿಷ್ಕರಣೆಯಾಗಿದ್ದ ದರಗಳು&lt;/strong&gt;&lt;/h2&gt;&lt;p&gt;2026ರ ಜುಲೈ 1ರಿಂದ ಜಾರಿಗೆ ಬರುವಂತೆ ಈ ಮಾರ್ಗದ ಟೋಲ್ ದರಗಳನ್ನು ಪರಿಷ್ಕರಿಸಲಾಗಿತ್ತು. ಮೇಲ್ಸೇತುವೆಯಲ್ಲಿ ಕಾರು, ಜೀಪ್&zwnj;ಗಳಿಗೆ ಏಕಮುಖ ಪ್ರಯಾಣಕ್ಕೆ ₹65, ಬಹುಮುಖ ಪ್ರಯಾಣಕ್ಕೆ ₹100 ಹಾಗೂ ಮಾಸಿಕ ಪಾಸ್&zwnj;ಗೆ ₹1,960 ದರ ನಿಗದಿಯಾಗಿದೆ. ದ್ವಿಚಕ್ರ ವಾಹನಗಳ ಮಾಸಿಕ ಪಾಸ್&zwnj;ಗೆ ₹785 ದರವಿದೆ. ಅತ್ತಿಬೆಲೆ ಟೋಲ್&zwnj;ನಲ್ಲಿ ಕಾರುಗಳಿಗೆ ಏಕಮುಖ ಪ್ರಯಾಣಕ್ಕೆ ₹40 ಹಾಗೂ ಬಹುಮುಖ ಪ್ರಯಾಣಕ್ಕೆ ₹60 ದರ ಚಾಲ್ತಿಯಲ್ಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-electronics-city-attibele-toll-agreement-expires-september-10-san/articleshow-soxqh6p"/>
        </item>
        <item>
            <title><![CDATA[ಉಚಿತ ಟೀ, ಸ್ನ್ಯಾಕ್ಸ್ ಜೊತೆ 3 ಹೊತ್ತು ಬಫೆ ಊಟ: ಬೆಂಗಳೂರಿನ ಗೂಗಲ್ ಅನಂತ ಬೇಸ್‌ಮೆಂಟ್ ವ್ಯವಸ್ಥೆಗೆ ಕ್ಯಾಬ್ ಚಾಲಕ ಮೆಚ್ಚುಗೆ]]></title>
            <link>https://kannada.asianetnews.com/bengaluru-urban/cab-driver-praises-google-ananta-office-hospitality-viral-post-san/articleshow-rbmpxun</link>
            <guid isPermaLink="true">https://kannada.asianetnews.com/bengaluru-urban/cab-driver-praises-google-ananta-office-hospitality-viral-post-san/articleshow-rbmpxun</guid>
            <pubDate>Fri, 28 Aug 2026 12:11:31 +0530</pubDate>
            <description><![CDATA[&lt;p&gt;ಬೆಂಗಳೂರಿನ ಗೂಗಲ್ 'ಅನಂತ' ಕಚೇರಿಗೆ ಉದ್ಯೋಗಿಯನ್ನು ಡ್ರಾಪ್ ಮಾಡಲು ಹೋದ ಕ್ಯಾಬ್ ಚಾಲಕರೊಬ್ಬರು ಅಲ್ಲಿ ತಮಗೆ ದೊರೆತ ಸತ್ಕಾರದ ಬಗ್ಗೆ ಹಂಚಿಕೊಂಡಿದ್ದಾರೆ. ಚಾಲಕರಿಗೆ ಪ್ರತ್ಯೇಕ ಪಾರ್ಕಿಂಗ್, ಉಚಿತ ಉಪಹಾರ ಮತ್ತು ಬಫೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಗೂಗಲ್&zwnj;ನ ಸಂಸ್ಕೃತಿ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13hge7t1b5hacfkx9hh57t5,imgname-google-ananta-office-bengaluru-1787899164922.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): &lt;/strong&gt;ಕಂಪನಿಯೊಂದರ ನಿಜವಾದ ಸಂಸ್ಕೃತಿ (Corporate Culture) ಹೇಗಿದೆ ಎಂದು ತಿಳಿಯಬೇಕೇ? ಹಾಗಿದ್ದರೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನಷ್ಟೇ ಅಲ್ಲ, ಅಲ್ಲಿಗೆ ಉದ್ಯೋಗಿಗಳನ್ನು ಡ್ರಾಪ್&zwnj; ಮಾಡಲು ಬರುವ ಚಾಲಕರನ್ನೂ ಕೇಳಿ ನೋಡಬೇಕು! ಬೆಂಗಳೂರಿನ ಗೂಗಲ್ 'ಅನಂತ' (Google Ananta) ಕಚೇರಿಯ ಬಗ್ಗೆ ಕ್ಯಾಬ್ ಚಾಲಕರೊಬ್ಬರು ಹಂಚಿಕೊಂಡಿರುವ ಅನುಭವ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;ಬೆಂಗಳೂರು ಮೂಲದ ಲೇಖಕಿ ಹಾಗೂ ಕೋಚ್ ತನ್ಯಾ ಮಾಥುರ್ ಭಟ್ಟಾಚಾರ್ಯ ಅವರು ತಮ್ಮ ಲಿಂಕ್ಡ್&zwnj;ಇನ್ (LinkedIn) ಖಾತೆಯಲ್ಲಿ &quot;ಕಂಪನಿಯ ಸಂಸ್ಕೃತಿ ತಿಳಿಯಬೇಕಿದ್ದರೆ ಚಾಲಕರನ್ನು ಕೇಳಿ&quot; ಎಂಬ ಶೀರ್ಷಿಕೆಯಡಿಯಲ್ಲಿ ಈ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಮಯ ತಡವಾದರೂ ಕೋಪಗೊಳ್ಳದ ಚಾಲಕ!&lt;/strong&gt;&lt;/h2&gt;&lt;p&gt;ತನ್ಯಾ ಅವರು ಇತ್ತೀಚೆಗೆ ಗೂಗಲ್ ಕಚೇರಿಗೆ ಭೇಟಿ ನೀಡಿದ್ದಾಗ, ಅವರಿಗೆ ಶರತ್ ಎಂಬುವವರ ಕ್ಯಾಬ್ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮವೊಂದರ ನಂತರ ಮಧ್ಯಾಹ್ನ 11:30ಕ್ಕೆ ವಾಪಸಾಗುವುದಾಗಿ ತನ್ಯಾ ಚಾಲಕ ಶರತ್&zwnj;ಗೆ ತಿಳಿಸಿದ್ದರು. ಆದರೆ ಕಚೇರಿಯ ಮಾಸ್ಟರ್&zwnj;ಕ್ಲಾಸ್ ಮತ್ತು ಊಟದ ಕಾರಣದಿಂದಾಗಿ ಅವರು ವಾಪಸಾಗಲು ಮಧ್ಯಾಹ್ನ 12:30 ದಾಟಿತ್ತು. ಚಾಲಕನನ್ನು ಕಾಯಿಸಿದ್ದಕ್ಕಾಗಿ ತನ್ಯಾ ಕ್ಷಮೆ ಯಾಚಿಸಿದಾಗ, ಚಾಲಕ ಶರತ್ ನೀಡಿದ ಉತ್ತರ ಅವರಿಗೆ ಅಚ್ಚರಿ ತಂದಿತು. ಮೇಡಂ, ನೀವು ತಡ ಮಾಡಿದ್ದಕ್ಕೆ ಧನ್ಯವಾದಗಳು! ನನಗೆ ಗೂಗಲ್ ಕಚೇರಿಗೆ ಬರುವುದೆಂದರೆ ತುಂಬಾ ಇಷ್ಟ ಎಂದು ಶರತ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಉಚಿತ ಉಪಹಾರ, 3 ಬಾರಿಯ ಬಫೆ ಊಟ&lt;/strong&gt;&lt;/h2&gt;&lt;p&gt;ಕಾರಣ ಏನೆಂದು ವಿಚಾರಿಸಿದಾಗ ಶರತ್, ಗೂಗಲ್ ಆವರಣದಲ್ಲಿ ಚಾಲಕರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಬಿಚ್ಚಿಟ್ಟರು. &quot;ಗೂಗಲ್ ಕಚೇರಿಯ ಬೇಸ್&zwnj;ಮೆಂಟ್&zwnj;ನಲ್ಲಿ ಕ್ಯಾಬ್&zwnj;ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲಿ ಚಾಲಕರಿಗೆ ಚಹಾ, ಕಾಫಿ, ತಿಂಡಿ ಮತ್ತು 3 ಬಾರಿಯ ಬಫೆ (Buffet) ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆ, ನಾನು ಬೆಳಗ್ಗಿನ ಉಪಹಾರ ಇಲ್ಲೇ ಮಾಡಿದೆ. ನೀವು ತಡ ಮಾಡಿದ್ದರಿಂದ ನನಗೆ ಬೇಗನೇ ಮಧ್ಯಾಹ್ನದ ಊಟ ಮಾಡಲು ಸಮಯ ಸಿಕ್ಕಿತು&quot; ಎಂದು ಶರತ್ ಸಂತಸದಿಂದ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಆಹಾರ ವ್ಯರ್ಥ ಮಾಡಬೇಡಿ, ಎಷ್ಟು ಬೇಕಾದರೂ ತಿನ್ನಿ&lt;/strong&gt;&lt;/h2&gt;&lt;p&gt;ಚಾಲಕರ ಜೊತೆ ಗೂಗಲ್ ನಡೆದುಕೊಳ್ಳುವ ರೀತಿಯನ್ನು ಶರತ್ ಶ್ಲಾಘಿಸಿದ್ದಾರೆ. ಗೂಗಲ್&zwnj;ನಲ್ಲಿ ಆಹಾರ ವ್ಯರ್ಥ ಮಾಡಬೇಡಿ, ನಿಮಗೆ ಎಷ್ಟು ಬೇಕೋ ಅಷ್ಟೇ ತಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಎಷ್ಟು ಬಾರಿ ಬೇಕಾದರೂ ಮತ್ತೆ ಹೋಗಿ ಊಟ ಪಡೆದುಕೊಳ್ಳಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇತರ ಕೆಲವು ಕಂಪನಿಗಳು ಹೊರಗೆ ಊಟ ಮಾಡಲು ಅಲ್ಪಸ್ವಲ್ಪ ಭತ್ಯೆ ಕೊಡುತ್ತವೆ, ಆದರೆ ಗೂಗಲ್ ಅತ್ಯುತ್ತಮ. ಇಲ್ಲಿ ನಾವು ಅತಿಥಿಗಳಂತೆ ಭಾಸವಾಗುತ್ತೇವೆ&quot; ಎಂದು ಚಾಲಕ ಶರತ್ ಹೆಮ್ಮೆಯಿಂದ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಲಿಂಕ್ಡ್&zwnj;ಇನ್&zwnj;ನಲ್ಲಿ ಸಂಚಲನ ಸೃಷ್ಟಿಸಿದ ಪೋಸ್ಟ್&lt;/strong&gt;&lt;/h2&gt;&lt;p&gt;ಚಾಲಕನ ಮಾತುಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆದಿರುವ ತನ್ಯಾ, ಒಂದು ಸಂಸ್ಥೆಯ ಹೈಟೆಕ್ ಕಚೇರಿಯ ಸೌಂದರ್ಯವನ್ನು ಯಾರು ಬೇಕಾದರೂ ಮೆಚ್ಚಬಹುದು. ಆದರೆ ಆ ಸಂಸ್ಥೆಯ ನಿಜವಾದ ಸಂಸ್ಕೃತಿ ಮತ್ತು ಮೌಲ್ಯ ಏನೆಂಬುದು ಅದರ ಬೇಸ್&zwnj;ಮೆಂಟ್ ಪಾರ್ಕಿಂಗ್&zwnj;ನಲ್ಲಿ ತಿಳಿಯುತ್ತದೆ. ಕೇವಲ ನಿಮ್ಮ ಗೋಡೆಗಳ ಮೇಲಿರುವ ಸಾಲುಗಳು ಸಂಸ್ಥೆಯ ಸಂಸ್ಕೃತಿಯಾಗುವುದಿಲ್ಲ; ನಿಮ್ಮ ಕಚೇರಿಯ ಬಾಗಿಲು ತುಳಿಯದ, ಪ್ರತ್ಯಕ್ಷವಾಗಿ ನಿಮಗಾಗಿ ಕೆಲಸ ಮಾಡದ ವ್ಯಕ್ತಿಗಳನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ&quot; ಎಂದು ಪೋಸ್ಟ್&zwnj;ನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/cab-driver-praises-google-ananta-office-hospitality-viral-post-san/articleshow-rbmpxun"/>
        </item>
        <item>
            <title><![CDATA[200 ಕೋಟಿ ವೆಚ್ಚ, 18 ಅಂತಸ್ತು; ಬೆಂಗಳೂರಿನಲ್ಲಿ ಇಂದಿನಿಂದ ಬೃಹತ್ ಕಟ್ಟಡ ತೆರವು ಕಾರ್ಯ ಆರಂಭ]]></title>
            <link>https://kannada.asianetnews.com/karnataka-districts/cost-of-rs-200-crore-18-floors-massive-building-demolition-operation-begins-in-bengaluru-today-sns/articleshow-sl4tfvr</link>
            <guid isPermaLink="true">https://kannada.asianetnews.com/karnataka-districts/cost-of-rs-200-crore-18-floors-massive-building-demolition-operation-begins-in-bengaluru-today-sns/articleshow-sl4tfvr</guid>
            <pubDate>Fri, 28 Aug 2026 12:11:09 +0530</pubDate>
            <description><![CDATA[ಬೆಂಗಳೂರಿನ ಕೂಡ್ಲು ಬಳಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದ 200 ಕೋಟಿ ಮೌಲ್ಯದ 18 ಅಂತಸ್ತಿನ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದೆ. ಕಟ್ಟಡವು ಒಂದು ಬದಿಗೆ ವಾಲಿದ್ದರಿಂದ, ಸುರಕ್ಷತಾ ಕ್ರಮವಾಗಿ ಅಧಿಕಾರಿಗಳು ಈ ತೆರವು ಕಾರ್ಯಾಚರಣೆಯನ್ನು ನಿಯಂತ್ರಿತ ವಿಧಾನದಲ್ಲಿ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13hjxttfvmc2pcr4ymedd7q,imgname-bengaluru-building--2--1787899246426.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಕೂಡ್ಲು ಸಮೀಪದಲ್ಲಿ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾನ ಮಾಡಿದ್ದ 18 ಅಂತಸ್ತಿನ ಕಟ್ಟಡವನ್ನು ಕೆಡುವ ಕೆಲಸ ಇಂದಿನಿಂದ ಅಧಿಕಾರಿಗಳು ಆರಂಭ ಮಾಡಿದ್ದಾರೆ. ಎಸ್&zwnj;ಎನ್&zwnj;ಎನ್ ರಾಜ್ ಕಾರ್ಪ್&zwnj; ಸಂಸ್ಥೆಯಿಂದ ಕಟ್ಟಡ ನೆಲಸಮ ಕಾರ್ಯ ನಡೆಯಲಿದ್ದು, ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದ್ದ ಭವನವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ.&lt;/p&gt;&lt;h2&gt;18 ಅಂತಸ್ತಿನ ಕಟ್ಟಡ ತೆರವು ಆರಂಭ&lt;/h2&gt;&lt;p&gt;ಬೆಂಗಳೂರಿನ ಕೂಡ್ಲು ಗ್ರಾಮದಲ್ಲಿ ನಿರ್ಮಾಣವಾಗಿದ್ದ SNN ರಾಜ್ 'E-' ಬ್ಲಾಕ್&zwnj;ನಲ್ಲಿರುವ 49 ಅಪಾರ್ಟ್&zwnj;ಮೆಂಟ್&zwnj;ಗಳು ತೆರವು ಕಾರ್ಯ ನಡೆಯಲಿದ್ದು, ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ಕೆಡವಲು ನಿರ್ಧಾರ ಮಾಡಲಾಗಿದೆ. ಸುಮಾರು 200 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೃಹತ್ ವಸತಿ ಸಂಕೀರ್ಣ, ಸುಮಾರು 18 ಅಂತಸ್ತು ಹೊಂದಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ತೆರವು&lt;/h2&gt;&lt;p&gt;SNN ರಾಜ್ 'E-' ಬ್ಲಾಕ್&zwnj;ನಲ್ಲಿರುವ 49 ಅಪಾರ್ಟ್&zwnj;ಮೆಂಟ್&zwnj;ಗಳು ತೆರವು ಹಿನ್ನೆಲೆಯಲ್ಲಿ ಕೇಂಬ್ರಿಡ್ ಶಾಲೆಯ ಮಕ್ಕಳು ಆತಂಕಕ್ಕೆ ಒಳಗಾಗಿದ್ದು, SNN ಕಟ್ಟಡದ ಪಕ್ಕದಲ್ಲೇ ದಿ&zwnj; ಕೇಂಬ್ರಿಡ್ಜ್ ಇಂಟರ್ ನ್ಯಾಷನಲ್ ಸ್ಕೂಲ್ ಇದೆ. ಈ ಶಾಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದು, ಈ ಹಿನ್ನೆಲೆಯಲ್ಲಿ ಸುರಕ್ಷಿತ ಹಾಗೂ ನಿಯಂತ್ರಿತ ವಿಧಾನದಲ್ಲಿ ಕಟ್ಟಡ ಕೆಡವಲು ನಿರ್ಧಾರ ಮಾಡಲಾಗಿದೆ. ಇಂದು ಅಧಿಕೃತವಾಗಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ.&lt;/p&gt;&lt;p&gt;ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ನೊಂದಿಗೆ ಮಾತನಾಡಿದ ಕೇಂಬ್ರಿಡ್ಜ್ ಶಾಲೆ ವಿದ್ಯಾರ್ಥಿಯ ತಂದೆ ಅಶೋಕ್ ಅವರು, ಸ್ಕೂಲ್ ನವರು ಆನ್ ಲೈನ್ ಕ್ಲಾಸ್ ಮಾಡ್ತೀವಿ ಅಂದಿದ್ದರು. ಆದರೆ ಈಗ ಸ್ಕೂಲ್ ಗೆ ಬನ್ನಿ ಅಂತ ಹೇಳಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ನಮ್ಮ ಮಕ್ಕಳನ್ನ ಶಾಲೆಗೆ ಕಳಿಸೋಕೆ ಭಯ ಆಗ್ತಿದೆ. ಈ ಕಟ್ಟಡವನ್ನ ನೋಡಿದ್ರೆ ಭಯ ಆಗುತ್ತೆ. ಆದಷ್ಟು ಬೇಗ ಯಾವುದೇ ತೊಂದರೆ ಆಗದಂತೆ, ಕಟ್ಟಡ ಡೆಮಾಲಿಷನ್ ಮಾಡಲಿ ಅಂತ ಖಾಸಗಿ ಶಾಲೆಯ ಪೋಷಕರ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;ಕಟ್ಟಡ ತೆರವಿಗೆ ನಿರ್ಮಾಣ ಸಂಸ್ಥೆಯ ಅನುಮತಿ&lt;/h2&gt;&lt;p&gt;ಕಟ್ಟಡ ಒಂದು ಕಡೆ ವಾಲಿದಂತೆ ಇದ್ದು, ಇದರಿಂದ ಪ್ರಮಾದ ಉಂಟಾಗಲಿದೆ ಎಂದು ಗುರುತಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಟ್ಟಡ ತೆರವಿಗೆ ನಿರ್ಧರಿಸಿತ್ತು. ಜಿಬಿಎ ಎಂಜಿನಿಯರ್&zwnj;ಗಳು ಈ ಕಟ್ಟಡವನ್ನು ಪರಿಶೀಲನೆ ನಡೆಸಿ ಕಟ್ಟಡ ತೆರವು ಮಾಡಲು ನಿರ್ಧಾರ ಮಾಡಿದ್ದರು. ಚೀಫ್ ಕಮಿಷನರ್ ಮಹೇಶ್ವರ ರಾವು ಅವರು ನಿರ್ಮಾಣ ಸಂಸ್ಥೆಯೊಂದಿಗೆ ಮಾತನಾಡಿದ್ದು, ಅವರು ಅಧಿಕೃತವಾಗಿ ಕಟ್ಟಡ ತೆರವಿಗೆ ಸಮ್ಮತಿ ಸೂಚಿಸಿದ್ದರು. ಇದರ ನಡುವೆಯೇ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ನಡೆಯ ಬಗ್ಗೆ ವಿಮರ್ಶೆ ಎದುರಾಗಿತ್ತು. ಆದರೆ ಭೂಮಿಯ ಮಣ್ಣಿನ ಪರಿಶೀಲನೆ ಸಂಬಂಧದಲ್ಲಿ ನಡೆದ ಒಂದು ತಪ್ಪಿನಿಂದ ಈ ಘಟನೆ ನಡೆದಿದೆ ಎಂದು ವರದಿಯಾಗಿತ್ತು.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/cost-of-rs-200-crore-18-floors-massive-building-demolition-operation-begins-in-bengaluru-today-sns/articleshow-sl4tfvr"/>
        </item>
        <item>
            <title><![CDATA[ಬಂಗಾರದಂಡಿಗೆ ಬಂದ ಕಳ್ಳಿಯರು; ಕಣ್ಮುಚ್ಚಿ ತೆಗೆಯೋದ್ರೊಳಗೆ ₹12 ಲಕ್ಷದ 4 ಚಿನ್ನದ ಬಳೆ ಕದ್ದು ಪರಾರಿ]]></title>
            <link>https://kannada.asianetnews.com/gallery/bengaluru-urban/2-women-steal-4-gold-bangles-worth-rs-12-lakh-from-showroom-in-bengaluru-suh-1itl9a4</link>
            <guid isPermaLink="true">https://kannada.asianetnews.com/gallery/bengaluru-urban/2-women-steal-4-gold-bangles-worth-rs-12-lakh-from-showroom-in-bengaluru-suh-1itl9a4</guid>
            <pubDate>Fri, 28 Aug 2026 11:54:45 +0530</pubDate>
            <description><![CDATA[&lt;p&gt;ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶೋರೂಂಗೆ ಬಂದ ಇಬ್ಬರು ಮಹಿಳೆಯರು, ಸಿಬ್ಬಂದಿಯ ಕಣ್ತಪ್ಪಿಸಿ ಬರೋಬ್ಬರಿ ₹12 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13g8h8tj3tym5fybsbrbdz2,imgname-2-women-steal-4-gold-bangles-worth-rs-12-lakh-from-showroom-in-bengaluru--3--1787897857306.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶೋರೂಂಗೆ ಬಂದ ಇಬ್ಬರು ಮಹಿಳೆಯರು, ಸಿಬ್ಬಂದಿಯ ಕಣ್ತಪ್ಪಿಸಿ ಬರೋಬ್ಬರಿ ₹12 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.&lt;/p&gt;&lt;img&gt;&lt;p&gt;ಗ್ರಾಹಕರ ಸೋಗಿನಲ್ಲಿ ಜ್ಯುವೆಲರಿ ಶೋರೂಂಗೆ ಬಂದ ಇಬ್ಬರು ಮಹಿಳೆಯರು, ಸಿಬ್ಬಂದಿಯ ಕಣ್ತಪ್ಪಿಸಿ ಬರೋಬ್ಬರಿ ₹12 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಬಳೆಗಳನ್ನು ಕದ್ದೊಯ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಆಗಸ್ಟ್ 22ರಂದು ನಡೆದಿದ್ದು, ಶೋರೂಂನ ದೈನಂದಿನ ಸ್ಟಾಕ್ ಪರಿಶೀಲನೆ ವೇಳೆ ಕಳ್ಳತನ ಬೆಳಕಿಗೆ ಬಂದಿದೆ. ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋರೂಂಗೆ ಇಬ್ಬರು ಮಹಿಳೆಯರು ಗ್ರಾಹಕರಂತೆ ಆಗಮಿಸಿದ್ದರು. ಮಧ್ಯಾಹ್ನ ಸುಮಾರು 3.15ರ ವೇಳೆಗೆ ಮಹಿಳಾ ಮಾರಾಟ ಸಿಬ್ಬಂದಿಯೊಬ್ಬರು ಅವರಿಗೆ ವಿವಿಧ ವಿನ್ಯಾಸದ ಬಳೆಗಳನ್ನು ತೋರಿಸುತ್ತಿದ್ದರು.&lt;/p&gt;&lt;img&gt;&lt;p&gt;ಮಾರಾಟ ಸಿಬ್ಬಂದಿ ಬೇರೆ ವಿನ್ಯಾಸಗಳನ್ನು ಆಯ್ಕೆ ಮಾಡಿ ತೋರಿಸುವಲ್ಲಿ ಬ್ಯುಸಿಯಾಗಿದ್ದ ಸಂದರ್ಭದಲ್ಲಿ, ಮಹಿಳೆಯೊಬ್ಬಳು ಡಿಸ್ಪ್ಲೇ ಟ್ರೇಯಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ತೆಗೆದುಕೊಂಡು ತನ್ನ ಹ್ಯಾಂಡ್&zwnj;ಬ್ಯಾಗ್&zwnj;ಗೆ ಹಾಕಿಕೊಂಡಿದ್ದಾಳೆ ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲದ ಆಕೆ, ಕೆಲವೇ ಕ್ಷಣಗಳ ಬಳಿಕ ಮತ್ತೆ ಎರಡು ಬಳೆಗಳನ್ನು ತೆಗೆದುಕೊಂಡು ಬ್ಯಾಗ್&zwnj;ಗೆ ಹಾಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಇಬ್ಬರೂ ಮಹಿಳೆಯರು ತಮಗೆ ಯಾವುದೇ ವಿನ್ಯಾಸ ಇಷ್ಟವಾಗಲಿಲ್ಲ ಎಂಬಂತೆ ವರ್ತಿಸಿ ಶೋರೂಂನಿಂದ ಹೊರಟು ಹೋಗಿದ್ದಾರೆ.&lt;/p&gt;&lt;img&gt;&lt;p&gt;ಮಹಿಳೆಯರು ಹೊರಟ ಬಳಿಕವೂ ಶೋರೂಂ ಸಿಬ್ಬಂದಿಗೆ ತಕ್ಷಣ ಕಳ್ಳತನದ ಅನುಮಾನ ಬಂದಿರಲಿಲ್ಲ ಎನ್ನಲಾಗಿದೆ. ದಿನದ ಕೊನೆಯಲ್ಲಿ ಶೋರೂಂನ ಸ್ಟಾಕ್ ಪರಿಶೀಲನೆ ನಡೆಸಿದಾಗ ನಾಲ್ಕು ಚಿನ್ನದ ಬಳೆಗಳು ಕಾಣೆಯಾಗಿರುವುದು ಪತ್ತೆಯಾಗಿದೆ. ಕಾಣೆಯಾಗಿದ್ದ ಬಳೆಗಳ ಒಟ್ಟು ಮೌಲ್ಯ ಸುಮಾರು ₹12 ಲಕ್ಷ ಎಂದು ತಿಳಿದುಬಂದಿದೆ. ಬಳಿಕ ಶೋರೂಂ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.&lt;/p&gt;&lt;img&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶೋರೂಂನ CCTV ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳು ಬಳಸಿದ್ದ ವಾಹನದ ನೋಂದಣಿ ಸಂಖ್ಯೆ ಕೂಡ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆ ವಾಹನದ ಮಾಹಿತಿ ಹಾಗೂ CCTV ದೃಶ್ಯಗಳ ಆಧಾರದ ಮೇಲೆ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಗ್ರಾಹಕರ ಸೋಗಿನಲ್ಲಿ ಬಂದು ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿರುವ ಈ ಘಟನೆ ಇದೀಗ ಬೆಂಗಳೂರಿನಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನದ ಕುರಿತು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಯಾರು, ಅವರು ಯಾವ ರೀತಿಯಲ್ಲಿ ಕಳ್ಳತನ ನಡೆಸಿದರು ಮತ್ತು ಕದ್ದ ಚಿನ್ನಾಭರಣ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಈ ಪ್ರಕರಣವು ಚಿನ್ನಾಭರಣ ಮಳಿಗೆಗಳಲ್ಲಿ CCTV, ಸಿಬ್ಬಂದಿಯ ಎಚ್ಚರಿಕೆ ಮತ್ತು ಭದ್ರತಾ ವ್ಯವಸ್ಥೆಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/bengaluru-urban/2-women-steal-4-gold-bangles-worth-rs-12-lakh-from-showroom-in-bengaluru-suh-1itl9a4"/>
        </item>
        <item>
            <title><![CDATA[ಸೈಬರ್ ಖದೀಮರ ಪತ್ತೆಗೆ ಹೋಗಿದ್ದ ಆಗ್ನೇಯ ವಿಭಾಗದ ಇನ್ಸ್‌ಪೆಕ್ಟರ್ ರವಿ ದುರ್ಮರಣ: ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯ!]]></title>
            <link>https://kannada.asianetnews.com/bengaluru-urban/cen-inspector-kb-ravi-dies-indore-bus-accident-madhya-pradesh-san/articleshow-sgdshew</link>
            <guid isPermaLink="true">https://kannada.asianetnews.com/bengaluru-urban/cen-inspector-kb-ravi-dies-indore-bus-accident-madhya-pradesh-san/articleshow-sgdshew</guid>
            <pubDate>Fri, 28 Aug 2026 10:40:55 +0530</pubDate>
            <description><![CDATA[&lt;p&gt;ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಸೆನ್ ಪೊಲೀಸ್ ಠಾಣೆಯ ಇನ್ಸ್&zwnj;ಪೆಕ್ಟರ್ ಕೆ.ಬಿ. ರವಿ, ಬಸ್ ಅಪಘಾತದಲ್ಲಿ ದುರಂತವಾಗಿ ಮೃತಪಟ್ಟಿದ್ದಾರೆ. ಭೋಪಾಲ್&zwnj;ನಿಂದ ಇಂದೋರ್&zwnj;ಗೆ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್&zwnj;ನಿಂದ ಕೆಳಗೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13c5p0hk9ebzrvf1q8363vx,imgname-inspector-kb-ravi-death-1787893569553.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): &lt;/strong&gt;ಸೈಬರ್ ಅಪರಾಧ ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಮೂಲದ ಪೊಲೀಸ್ ಇನ್ಸ್&zwnj;ಪೆಕ್ಟರ್&zwnj; ಬಸ್ ಅಪಘಾತದಲ್ಲಿ ಭೀಕರವಾಗಿ ಮೃತಪಟ್ಟ ದುಃಖದ ಘಟನೆ ಸಂಭವಿಸಿದೆ. ಬೆಂಗಳೂರು ಆಗ್ನೇಯ ವಿಭಾಗದ ಸೆನ್ (CEN) ಪೊಲೀಸ್ ಠಾಣೆಯ ಇನ್ಸ್&zwnj;ಪೆಕ್ಟರ್ ಕೆ.ಬಿ. ರವಿ (2007 ಬ್ಯಾಚ್ ಅಧಿಕಾರಿ) ಅವರೇ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರು. ಸೈಬರ್ ಎಪಿಕೆ (APK) ಫೈಲ್ ಫ್ರಾಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ಒಟ್ಟು ಒಂಬತ್ತು ಜನರಿದ್ದ ಪೊಲೀಸರ ತಂಡ ಮಧ್ಯಪ್ರದೇಶಕ್ಕೆ ತೆರಳಿತ್ತು.&lt;/p&gt;&lt;p&gt;ಈ ಪೈಕಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಆರು ಸಿಬ್ಬಂದಿ ಬೆಂಗಳೂರಿಗೆ ವಾಪಸಾಗಿದ್ದರು. ಆದರೆ, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಇನ್ಸ್&zwnj;ಪೆಕ್ಟರ್ ರವಿ ಸೇರಿದಂತೆ ಮೂವರು ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದುಕೊಂಡಿದ್ದರು.&lt;/p&gt;&lt;p&gt;ಭೋಪಾಲ್&zwnj;ನಿಂದ ಇಂದೋರ್&zwnj;ಗೆ ಸ್ಲೀಪರ್ ಬಸ್&zwnj;ನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಫ್ಲೈ ಓವರ್&zwnj;ನಿಂದ ಕೆಳಗೆ ಬಿದ್ದು ಈ ಭೀಕರ ಅಪಘಾತ ಸಂಭವಿಸಿದೆ. ಇನ್ಸ್&zwnj;ಪೆಕ್ಟರ್ ರವಿ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಅವರ ಜೊತೆಗಿದ್ದ ಪಿಎಸ್&zwnj;ಐ ರಮೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇನ್ನಿಬ್ಬರು ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;p&gt;ಮೃತ ಕೆ.ಬಿ. ರವಿ ಅವರು 2005 ಬ್ಯಾಚ್&zwnj;ನಲ್ಲಿ ಕಾನ್&zwnj;ಸ್ಟೇಬಲ್ ಆಗಿ ಸೇವೆಗೆ ಸೇರಿ, ಬಳಿಕ 2007ರಲ್ಲಿ ಪಿಎಸ್&zwnj;ಐ ಆಗಿ ಆಯ್ಕೆಯಾಗಿದ್ದರು. ಈ ಹಿಂದೆ ಬೆಂಗಳೂರಿನ ಅಶೋಕನಗರ, ಇಂದಿರಾನಗರ ಹಾಗೂ ಕೋರಮಂಗಲ ಠಾಣೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. ಘಟನೆಯ ಕುರಿತು ಬೆಂಗಳೂರು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/cen-inspector-kb-ravi-dies-indore-bus-accident-madhya-pradesh-san/articleshow-sgdshew"/>
        </item>
        <item>
            <title><![CDATA[ಬೆಂಗಳೂರು ಲಾಲ್‌ಬಾಗ್‌ ರೂವಾರಿ ಗುಸ್ತಾವ್ ಕ್ರುಂಬಿಗಲ್ ಸಮಾಧಿ ಧ್ವಂಸ: ಪರಂಪರೆ ಪ್ರೇಮಿಗಳ ಆಕ್ರೋಶ!]]></title>
            <link>https://kannada.asianetnews.com/bengaluru-urban/gustav-krumbiegel-tombstone-damaged-hosur-road-cemetery-bengaluru-san/articleshow-gkbcpyx</link>
            <guid isPermaLink="true">https://kannada.asianetnews.com/bengaluru-urban/gustav-krumbiegel-tombstone-damaged-hosur-road-cemetery-bengaluru-san/articleshow-gkbcpyx</guid>
            <pubDate>Fri, 28 Aug 2026 10:21:55 +0530</pubDate>
            <description><![CDATA[&lt;p&gt;ಲಾಲ್&zwnj;ಬಾಗ್&zwnj;ಗೆ ಇಂದಿನ ರೂಪ ನೀಡಿದ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿದೆ. ಈ ಘಟನೆಯ ಬಗ್ಗೆ 'ಹೆರಿಟೇಜ್ ಬೇಕು' ಸಂಘಟನೆಯು ತನಿಖೆಗೆ ಆಗ್ರಹಿಸಿದ್ದು, ತೋಟಗಾರಿಕೆ ಇಲಾಖೆ ಮತ್ತು ಪೊಲೀಸರಿಗೆ ಪತ್ರ ಬರೆದು ಸಮಾಧಿಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m13b8nae02166qjt6dnz9f28,imgname-gustav-krumbiegel-1787892618574.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): &lt;/strong&gt;ಲಾಲ್&zwnj;ಬಾಗ್&zwnj; ಸಸ್ಯತೋಟಕ್ಕೆ ಇಂದಿನ ಅಪರೂಪದ ಹಾಗೂ ರಮಣೀಯ ಶೈಲಿಯನ್ನು ನೀಡಿದ ಖ್ಯಾತ ಲ್ಯಾಂಡ್&zwnj;ಸ್ಕೇಪ್ ರೂವಾರಿ ಗುಸ್ತಾವ್ ಕ್ರುಂಬಿಗಲ್ ಅವರ ಸಮಾಧಿ ಹೊಸೂರು ರಸ್ತೆಯಲ್ಲಿರುವ ಸ್ಮಶಾನದಲ್ಲಿ ತೀವ್ರವಾಗಿ ಜಖಂಗೊಂಡಿರುವುದು ಬೆಳಕಿಗೆ ಬಂದಿದೆ. ಈ ಘಟನೆ ನಗರದ ಇತಿಹಾಸ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣವೇ ತನಿಖೆ ನಡೆಸಿ, ಸಮಾಧಿ ಕಲ್ಲನ್ನು ಮರುಸ್ಥಾಪಿಸುವಂತೆ ಅವರು ಆಗ್ರಹಿಸಿದ್ದಾರೆ. ಹೊಸೂರು ರಸ್ತೆ ಸಿಮೆಟ್ರಿಯ ಗೇಟ್ 1, ಪ್ಲಾಟ್ 6, ಸಾಲು 7ರ ಸಮಾಧಿ 6ರಲ್ಲಿರುವ ಈ ಸಮಾಧಿ ಕಲ್ಲು ಜಖಂಗೊಂಡಿರುವುದು ನಗರದ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಗೆ ಉಂಟಾದ ಬಹುದೊಡ್ಡ ನಷ್ಟ ಎಂದು ನಾಗರಿಕ ಸಂಘಟನೆ &lsquo;ಹೆರಿಟೇಜ್ ಬೇಕು&rsquo; (Heritage Beku) ತೀವ್ರ ಕಳವಳ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;ಪೊಲೀಸ್ ಮತ್ತು ತೋಟಗಾರಿಕೆ ಇಲಾಖೆಗೆ ಪತ್ರ&lt;/strong&gt;&lt;/h2&gt;&lt;p&gt;ಈ ಸಂಬಂಧ &lsquo;ಹೆರಿಟೇಜ್ ಬೇಕು&rsquo; ಸಂಘಟನೆಯು ನಗರ ಪೊಲೀಸ್ ಆಯುಕ್ತರು ಹಾಗೂ ತೋಟಗಾರಿಕೆ ಇಲಾಖೆಗೆ ಸುದೀರ್ಘ ಪತ್ರವೊಂದನ್ನು ಬರೆದಿದೆ. &quot;ಬೆಂಗಳೂರಿನ ಸೌಂದರ್ಯಕ್ಕೆ, ವಿಶೇಷವಾಗಿ ಲಾಲ್&zwnj;ಬಾಗ್&zwnj;ಗೆ ಐಕಾನಿಕ್ ರೂಪುರೇಷೆ ನೀಡುವಲ್ಲಿ ಕ್ರುಂಬಿಗಲ್ ಅವರ ಕೊಡುಗೆ ಅಮೂಲ್ಯವಾದದ್ದು. ಅವರ ನೆನಪನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ&quot; ಎಂದು ಸಂಘಟನೆ ಪತ್ರದಲ್ಲಿ ಉಲ್ಲೇಖಿಸಿದೆ.&lt;/p&gt;&lt;p&gt;ಪ್ರಿಯಾ ಶೆಟ್ಟಿ ರಾಜಗೋಪಾಲ್ ನೇತೃತ್ವದ 'ಹೆರಿಟೇಜ್ ಬೇಕು' ಬಳಗವು, ಘಟನೆ ನಡೆದ ಸ್ಥಳ ಪರಿಶೀಲನೆಗೆ ಪೊಲೀಸ್ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ತಪಾಸಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಈ ಹಾನಿಯು ಯಾವುದೇ ಅಪಘಾತದಿಂದಾಗಿದೆಯೇ, ಪ್ರಾಕೃತಿಕವಾಗಿ ಕಾಲಕ್ರಮೇಣ ಸಂಭವಿಸಿದ ನಷ್ಟವೇ ಅಥವಾ ಯಾರಾದರೂ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆಯೇ ಎಂಬುದನ್ನು ತಕ್ಷಣವೇ ಪತ್ತೆ ಹಚ್ಚಬೇಕು ಎಂದು ಸಂಘಟನೆ ಮನವಿ ಮಾಡಿದೆ.&lt;/p&gt;&lt;p&gt;ಒಂದು ವೇಳೆ ಇದು ಕಿಡಿಗೇಡಿಗಳ ಕೃತ್ಯವೆಂದು ಕಂಡುಬಂದರೆ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಸೂಕ್ತ ಪೊಲೀಸ್ ತನಿಖೆ ನಡೆಸಬೇಕು ಹಾಗೂ ತೋಟಗಾರಿಕೆ ಇಲಾಖೆಯು ತಜ್ಞರ ನೆರವಿನಿಂದ ಈ ಸಮಾಧಿ ಕಲ್ಲನ್ನು ತಕ್ಷಣವೇ ವೃತ್ತಿಪರವಾಗಿ ಮರುಸ್ಥಾಪಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.&lt;/p&gt;&lt;h2&gt;&lt;strong&gt;ಕುಟುಂಬಸ್ಥರ ಕಳವಳ&lt;/strong&gt;&lt;/h2&gt;&lt;p&gt;ಗುಸ್ತಾವ್ ಕ್ರುಂಬಿಗಲ್ ಅವರ ಮರಿಮೊಮ್ಮಗಳು ಹಾಗೂ 'ಹೆರಿಟೇಜ್ ಬೇಕು' ಸಂಘಟನೆಯ ಸಕ್ರಿಯ ಸದಸ್ಯೆಯಾಗಿರುವ ಅಲಿಯಾ ಕ್ರುಂಬಿಗಲ್ ಅವರು ತಮ್ಮ ಮುತ್ತಜ್ಜನ ಸಮಾಧಿ ಸ್ಥಿತಿಯನ್ನು ಕಂಡು ತೀವ್ರ ದುಃಖಿತರಾಗಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/gustav-krumbiegel-tombstone-damaged-hosur-road-cemetery-bengaluru-san/articleshow-gkbcpyx"/>
        </item>
        <item>
            <title><![CDATA[Mangaluru To Palakkad train: ಮಂಗಳೂರು ಮರಳಿ ಪಾಲಕ್ಕಾಡ್‌ಗೆ ಬೇಡ; ಕೇರಳ ಲಾಭಿ ವಿರುದ್ಧ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು!]]></title>
            <link>https://kannada.asianetnews.com/state/pro-kannada-organizations-raise-voices-against-keral-lobby-over-mangaluru-palakkad-train-row-rav/articleshow-z30k1bv</link>
            <guid isPermaLink="true">https://kannada.asianetnews.com/state/pro-kannada-organizations-raise-voices-against-keral-lobby-over-mangaluru-palakkad-train-row-rav/articleshow-z30k1bv</guid>
            <pubDate>Fri, 28 Aug 2026 09:36:35 +0530</pubDate>
            <description><![CDATA[ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ 30 ವರ್ಷಗಳ ಹೋರಾಟಕ್ಕೆ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ, ಕೇರಳದ ಒತ್ತಡಕ್ಕೆ ಮಣಿದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m138mfnzsksq992c4tyj8gxc,imgname-----------------------2026-08-28t093358.503-1787889860287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಆ.28): &lt;/strong&gt;ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ಮೈಸೂರಿನ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರನ್ನು ವರ್ಗಾವಣೆ ಮಾಡುವ ಅಧಿಸೂಚನೆ ಹೊರಡಿಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಇದರಲ್ಲಿ ಯಾವುದೇ ಬದಲಾವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.&lt;/p&gt;&lt;p&gt;ಜತೆಗೆ, ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಕೇವಲ ನಕ್ಷೆ ಬದಲಾವಣೆಗಷ್ಟೇ ಸೀಮಿತ ಆಗಬಾರದು, ಮಂಗಳೂರಿನ ಮಹತ್ವ ಕುಗ್ಗಿಸಿ ಕೇರಳ ಅಥ&zwj;ವಾ ಕೊಂಕಣಕ್ಕೆ ರೈಲುಗಳನ್ನು ವಿಸ್ತರಿಸುವ ಯಾವುದೇ ಕ್ರಮಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಹಾಗೂ ರೈಲ್ವೆ ಬಳಕೆದಾರರ ಸಮಿತಿ ಎಚ್ಚರಿಸಿವೆ.&lt;/p&gt;&lt;h2&gt;ದಿಲ್ಲಿಯಲ್ಲಿ ಕರವೇ ಪ್ರತಿಭಟನೆ:&lt;/h2&gt;&lt;p&gt;ಅ.1ರಿಂದ ಮಂಗಳೂರನ್ನು ನೈಋತ್ಯ ವಿಭಾಗಕ್ಕೆ ಸೇರ್ಪಡೆ ಮಾಡುವ ನಿರ್ಧಾರ ಕನ್ನಡಿಗರ ಹೋರಾಟಕ್ಕೆ ಕೇಂದ್ರ ನೀಡಿದ ಕೊಡುಗೆ. ಈ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭೂತ ಪೂರ್ವ ಅಭಿನಂದನೆ ಸಲ್ಲಿಸುತ್ತೇವೆ. ಇದರಲ್ಲಿ ಒಂದು ರೈಲು ನಿಲ್ದಾಣವೂ ಪಾಲಕ್ಕಾಡ್ ( ದಕ್ಷಿಣ ರೈಲ್ವೆ)ಗೆ ಸೇರಿದರೆ, ನಮ್ಮ ಸಂಘಟನೆ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮೊಂದಿಗೆ ರಾಜ್ಯದ ಎಲ್ಲಾ ಸಂಘಟನೆಗಳ ಕಾರ್ಯಕರ್ತರನ್ನು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದೆ.&lt;/p&gt;&lt;p&gt;ಇದೇ ವೇಳೆ ಬುಧವಾರ ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕರವೇ ಸೇರಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.&lt;/p&gt;&lt;h3&gt;ನಾರಾಯಣಗೌಡ ಹೇಳಿದ್ದೇನು?&lt;/h3&gt;&lt;p&gt;ಈ ಸಂಬಂಧ &lsquo;ಕನ್ನಡಪ್ರಭ&rsquo;ದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕೇಂದ್ರದ ಈ ಐತಿಹಾಸಿಕ ನಿರ್ಣಯವನ್ನು ಒಬ್ಬ ಜನಪ್ರತಿನಿಧಿಯೂ ಸ್ವಾಗತಿಸಿಲ್ಲ. ಕೇಂದ್ರಕ್ಕೆ ಅಭಿನಂದನೆ ತಿಳಿಸಿಲ್ಲ. ಒಳ್ಳೆಯ ಕೆಲಸ ಯಾರಿಂದಾದರೂ ಆಗಲಿ ಅವರಿಗೆ ಅಭಿನಂದಿಸುವುದು ನಮ್ಮ ಕರ್ತವ್ಯ. ಕೇರಳಂನಲ್ಲಿ ಅಷ್ಟು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಇವರಾರಿಗೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ ಎಂದರು.&lt;/p&gt;&lt;p&gt;ಕಳೆದ ಮೂವತ್ತು ವರ್ಷಗಳಿಂದ ಮಂಗಳೂರನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬುದೂ ಸೇರಿ ರೈಲ್ವೆ ಇಲಾಖೆಯಲ್ಲಿ ಹಲವು ಬೇಡಿಕೆ ಈಡೇರಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಲೇ ಬಂದಿದೆ. ನಮ್ಮ ಸಂಘಟನೆ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರ್ನಾಟಕಕ್ಕೆ ಯಾವ ಮಟ್ಟದಲ್ಲಾದರೂ ಅನ್ಯಾಯವಾದರೆ ಸಂಘಟನೆ ಹೋರಾಟ ತೀವ್ರಗೊಳಿಸುತ್ತದೆ ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/pro-kannada-organizations-raise-voices-against-keral-lobby-over-mangaluru-palakkad-train-row-rav/articleshow-z30k1bv"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಇನ್ಫಿನಿಯಾನ್ ಬೃಹತ್ ಹೂಡಿಕೆ: ₹752 ಕೋಟಿಗೆ ಕಚೇರಿ ಲೀಸ್‌ ಪಡೆದ ಜರ್ಮನ್ ಕಂಪೆನಿ!]]></title>
            <link>https://kannada.asianetnews.com/business/infineon-technologies-leases-6-3-lakh-sq-ft-office-space-in-bengaluru-for-rs-752-crore-gdp/articleshow-4hr17vp</link>
            <guid isPermaLink="true">https://kannada.asianetnews.com/business/infineon-technologies-leases-6-3-lakh-sq-ft-office-space-in-bengaluru-for-rs-752-crore-gdp/articleshow-4hr17vp</guid>
            <pubDate>Thu, 27 Aug 2026 11:30:31 +0530</pubDate>
            <description><![CDATA[ಜರ್ಮನಿಯ ಪ್ರಮುಖ ಸೆಮಿಕಂಡಕ್ಟರ್ ಸಂಸ್ಥೆ 'ಇನ್ಫಿನಿಯಾನ್ ಟೆಕ್ನಾಲಜೀಸ್', ಬೆಂಗಳೂರಿನ ವೈಟ್&zwnj;ಫೀಲ್ಡ್&zwnj;ನಲ್ಲಿ ₹752 ಕೋಟಿ ಮೌಲ್ಯದ ಬೃಹತ್ ಕಚೇರಿ ಜಾಗವನ್ನು 10 ವರ್ಷಗಳ ಅವಧಿಗೆ ಲೀಸ್&zwnj;ಗೆ ಪಡೆದುಕೊಂಡಿದೆ. ಈ ಹೂಡಿಕೆಯು ಭಾರತದಲ್ಲಿ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ (R&amp;amp;D) ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನ ಕೇಂದ್ರವಾಗಿ ರೂಪಿಸುವ ಸಂಸ್ಥೆಯ ಗುರಿಯ ಭಾಗವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmptwbwqzjyb3476dqz48nm6,imgname-hyd3-1774587883415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಜರ್ಮನಿಯ ಪ್ರಮುಖ ಸೆಮಿಕಂಡಕ್ಟರ್ ಸಂಸ್ಥೆಯಾದ &lsquo;ಇನ್ಫಿನಿಯಾನ್ ಟೆಕ್ನಾಲಜೀಸ್&rsquo; (Infineon Technologies), ಬೆಂಗಳೂರಿನ ವೈಟ್&zwnj;ಫೀಲ್ಡ್&zwnj;ನಲ್ಲಿರುವ ಬ್ರಿಗೇಡ್ ಸೋಲಾರಿಯಂ ಸಿಟಿಯಲ್ಲಿ 6.31 ಲಕ್ಷ ಚದರ ಅಡಿ ಕಚೇರಿ ಜಾಗವನ್ನು 10 ವರ್ಷಗಳ ಸುದೀರ್ಘ ಅವಧಿಗೆ ಲೀಸ್&zwnj;ಗೆ ಪಡೆದುಕೊಂಡಿದೆ. ರಿಯಲ್ ಎಸ್ಟೇಟ್ ದತ್ತಾಂಶ ಸಂಸ್ಥೆ &lsquo;ಪ್ರಾಪ್&zwnj;ಸ್ಟ್ಯಾಕ್&rsquo; (PropStack) ದಾಖಲೆಗಳ ಪ್ರಕಾರ, ಈ ಗುತ್ತಿಗೆಯ ಒಟ್ಟು ಅಂದಾಜು ಮೌಲ್ಯ ಇತರ ಶುಲ್ಕಗಳನ್ನು ಹೊರತುಪಡಿಸಿ ಸುಮಾರು ₹752 ಕೋಟಿ ಆಗಿದೆ.&lt;/p&gt;&lt;p&gt;ಅಕೃತಿ ಇನ್ಫ್ರಾ-ಬಿಲ್ಡ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಈ ಕಟ್ಟಡದಲ್ಲಿ ಇನ್ಫಿನಿಯಾನ್ ಸಂಸ್ಥೆಯು ಗ್ರೌಂಡ್ ಪ್ಲೋರ್ ನಿಂದ 9ನೇ ಮಹಡಿಯವರೆಗೆ ಕೋಣೆಗಳನ್ನು ತನ್ನದಾಗಿಸಿಕೊಂಡಿದೆ. ಡಿಸೆಂಬರ್ 1, 2026 ರಿಂದ ಈ ಗುತ್ತಿಗೆ ಅವಧಿ ಆರಂಭವಾಗಲಿದ್ದು, ಆರಂಭಿಕ ಹಂತದಲ್ಲಿ 8 ತಿಂಗಳ ಬಾಡಿಗೆ ಮುಕ್ತ ಅವಧಿಯ ಸೌಲಭ್ಯವನ್ನು ಒಳಗೊಂಡಿದೆ.&lt;/p&gt;&lt;h2&gt;ಒಪ್ಪಂದದ ಪ್ರಮುಖ ಮುಖ್ಯಾಂಶಗಳು:&lt;/h2&gt;&lt;p&gt;ಪ್ರತಿ ಚದರ ಅಡಿಗೆ ₹88 ರಂತೆ, ಕಂಪನಿಯು ತಿಂಗಳಿಗೆ ಸುಮಾರು ₹5.56 ಕೋಟಿ ಬಾಡಿಗೆ ಪಾವತಿಸಲಿದೆ. ಆರು ತಿಂಗಳ ಬಾಡಿಗೆಗೆ ಸಮಾನವಾದ ₹33.36 ಕೋಟಿಯನ್ನು ಭದ್ರತಾ ಠೇವಣಿಯಾಗಿ (Security Deposit) ನೀಡಲಾಗಿದೆ. ಗುತ್ತಿಗೆ ನಿಯಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಬಾಡಿಗೆಯಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಲಿದೆ.&lt;/p&gt;&lt;h2&gt;C2i ಸೆಮಿಕಂಡಕ್ಟರ್ಸ್ ಸ್ವಾಧೀನ ಮತ್ತು R&amp;amp;D ವಿಸ್ತರಣೆ:&lt;/h2&gt;&lt;p&gt;ಬೆಂಗಳೂರು ಮೂಲದ ಫ್ಯಾಬ್ಲೆಸ್ ಚಿಪ್ ಸ್ಟಾರ್ಟ್&zwnj;ಅಪ್ 'C2i ಸೆಮಿಕಂಡಕ್ಟರ್ಸ್' ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಇನ್ಫಿನಿಯಾನ್ ಇತ್ತೀಚೆಗೆ ಘೋಷಿಸಿತ್ತು. AI ಡೇಟಾ ಸೆಂಟರ್&zwnj;ಗಳಿಗೆ ಅಗತ್ಯವಿರುವ ವಿದ್ಯುತ್ ನಿರ್ವಹಣಾ ಪರಿಹಾರಗಳನ್ನು ಬಲಪಡಿಸುವುದು ಮತ್ತು ಭಾರತದಲ್ಲಿ ತನ್ನ ಸಂಶೋಧನೆ ಹಾಗೂ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಸ್ವಾಧೀನದ ಮುಖ್ಯ ಉದ್ದೇಶವಾಗಿದೆ.&lt;/p&gt;&lt;p&gt;ಪ್ರಸ್ತುತ ಭಾರತದಲ್ಲಿ ಸುಮಾರು 2,500 ಉದ್ಯೋಗಿಗಳನ್ನು ಹೊಂದಿರುವ ಇನ್ಫಿನಿಯಾನ್, ಈ ಹೂಡಿಕೆಯ ಮೂಲಕ ಡಿಜಿಟಲ್ ಪವರ್ ತಂತ್ರಜ್ಞಾನದಲ್ಲಿ ಭಾರತವನ್ನು ಜಾಗತಿಕ 'ಉತ್ಕೃಷ್ಟತಾ ಕೇಂದ್ರ'ವನ್ನಾಗಿ ರೂಪಿಸಲು ಮುಂದಾಗಿದೆ.&lt;/p&gt;&lt;p&gt;ಈ ಕುರಿತು ಮಾತನಾಡಿದ ಪ್ರಾಪ್&zwnj;ಸ್ಟ್ಯಾಕ್&zwnj;ನ ಸಹ-ಸಂಸ್ಥಾಪಕ ರಾಜಾ ಸೀತಾರಾಮನ್, ಬೆಂಗಳೂರಿನಲ್ಲಿ ಇನ್ಫಿನಿಯಾನ್ ಸಂಸ್ಥೆಯ ಈ ಬೃಹತ್ ಹೂಡಿಕೆಯು ನಗರವು ಕೇವಲ ಪ್ರಾದೇಶಿಕ ಸೇವಾ ಕೇಂದ್ರವಾಗಿರದೆ, ಜಾಗತಿಕ R&amp;amp;D ಮತ್ತು AI ಎಂಜಿನಿಯರಿಂಗ್&zwnj; ಶಕ್ತಿ ಕೇಂದ್ರವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಬೆಂಗಳೂರು ವಾಣಿಜ್ಯ ರಿಯಲ್ ಎಸ್ಟೇಟ್: ಜಾಗತಿಕ ಸಂಸ್ಥೆಗಳ ಭಾರಿ ಹೂಡಿಕೆ&lt;/h2&gt;&lt;p&gt;ಬೆಂಗಳೂರಿನ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಜಾಗತಿಕ ಸಂಸ್ಥೆಗಳ ಕಚೇರಿ ವಿಸ್ತರಣೆ ಭರದಿಂದ ಸಾಗುತ್ತಿದ್ದು, ಇತ್ತೀಚಿನ ಪ್ರಮುಖ ವಹಿವಾಟುಗಳು ಹೀಗಿವೆ.&lt;/p&gt;&lt;p&gt;&lt;strong&gt;NVIDIA: &lt;/strong&gt;ಬಾಗ್ಮನೆ ಕ್ಯಾಪಿಟಲ್&zwnj;ನ ಮೆಂಫಿಸ್ ಸೌತ್ ಟವರ್&zwnj;ನಲ್ಲಿ 7.6 ಲಕ್ಷ ಚದರ ಅಡಿ ಕಚೇರಿ ಜಾಗವನ್ನು 10 ವರ್ಷಗಳ ಅವಧಿಗೆ ₹1,230 ಕೋಟಿ ವೆಚ್ಚದಲ್ಲಿ ಗುತ್ತಿಗೆಗೆ ಪಡೆದಿದೆ. ಇದು ಭಾರತದಲ್ಲಿ ಸಂಸ್ಥೆಯ ಅತಿದೊಡ್ಡ ವಿಸ್ತರಣೆಯಾಗಿದೆ.&lt;/p&gt;&lt;p&gt;&lt;strong&gt;Intuit India: &lt;/strong&gt;ಬೆಳ್ಳಂದೂರಿನಲ್ಲಿ 6.31 ಲಕ್ಷ ಚದರ ಅಡಿ ಜಾಗವನ್ನು 10 ವರ್ಷಗಳ ಅವಧಿಗೆ ಮಾಸಿಕ ₹6.13 ಕೋಟಿ ಬಾಡಿಗೆಗೆ ಕಾಯ್ದಿರಿಸಿದೆ.&lt;/p&gt;&lt;p&gt;&lt;strong&gt;Disney (India): &lt;/strong&gt;ಬೆಳ್ಳಂದೂರಿನಲ್ಲಿ 1.75 ಲಕ್ಷ ಚದರ ಅಡಿ ಆಸ್ತಿಯನ್ನು 5 ವರ್ಷಗಳ ಅವಧಿಗೆ ₹128 ಕೋಟಿ ಬಾಡಿಗೆ ಒಪ್ಪಂದದಡಿ ಪಡೆದುಕೊಂಡಿದೆ.&lt;/p&gt;&lt;h2&gt;ಕಚೇರಿ ಜಾಗದ ಬೇಡಿಕೆಯಲ್ಲಿ ದಾಖಲೆ:&lt;/h2&gt;&lt;p&gt;ನೈಟ್ ಫ್ರಾಂಕ್ ಇಂಡಿಯಾ (Knight Frank India) ವರದಿಯ ಪ್ರಕಾರ, ಜೂನ್ 30, 2026 ರ ವೇಳೆಗೆ ಭಾರತದ ಪ್ರಮುಖ 8 ನಗರಗಳಲ್ಲಿ ಆಕ್ರಮಿತ ಕಚೇರಿ ಜಾಗದ ಪ್ರಮಾಣ 901.1 ಮಿಲಿಯನ್ ಚದರ ಅಡಿ ತಲುಪಿದ್ದು, ವರ್ಷದಿಂದ ವರ್ಷಕ್ಕೆ (YoY) 6% ಬೆಳವಣಿಗೆ ಕಂಡಿದೆ. ಇದರಲ್ಲಿ 222.4 ಮಿಲಿಯನ್ ಚದರ ಅಡಿ ಕೊಡುಗೆ ನೀಡುವ ಮೂಲಕ ಬೆಂಗಳೂರು ದೇಶದ ಅತ್ಯಂತ ದೊಡ್ಡ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/business/infineon-technologies-leases-6-3-lakh-sq-ft-office-space-in-bengaluru-for-rs-752-crore-gdp/articleshow-4hr17vp"/>
        </item>
        <item>
            <title><![CDATA[Highest Paying Jobs: ಐಟಿ ಕೆಲಸ ಬಿಟ್ಟುಬಿಡಿ! ಬೆಂಗಳೂರಿನಲ್ಲಿ ‘ದೊಡ್ಡ ಸಂಪಾದನೆ’ ಮಾಡೋ 5 ಕೆಲಸಗಳಿವು]]></title>
            <link>https://kannada.asianetnews.com/viral/best-paying-jobs-in-bengaluru-viral-post-takes-a-hilarious-swipe-at-real-estate-kvn/articleshow-9wz5xrg</link>
            <guid isPermaLink="true">https://kannada.asianetnews.com/viral/best-paying-jobs-in-bengaluru-viral-post-takes-a-hilarious-swipe-at-real-estate-kvn/articleshow-9wz5xrg</guid>
            <pubDate>Thu, 27 Aug 2026 14:31:42 +0530</pubDate>
            <description><![CDATA[ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಅವರು ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳದ 'ಕೆಲಸ'ಗಳ ತಮಾಷೆಯ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಪಿಜಿ ಮಾಲೀಕರು, ರಿಯಲ್ ಎಸ್ಟೇಟ್ ಬ್ರೋಕರ್&zwnj;ಗಳು ಮತ್ತು ವಾಟರ್ ಟ್ಯಾಂಕರ್ ಮಾಲೀಕರು ಹೇಗೆ ಸುಲಭವಾಗಿ ಹಣ ಗಳಿಸುತ್ತಾರೆ ಎಂಬುದನ್ನು ವಿವರಿಸುವ ಈ ಪೋಸ್ಟ್, ನಗರದ ದುಬಾರಿ ಜೀವನ ವೆಚ್ಚದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0ke7zecpn26dd2dpjrdvsg9,imgname-----------------------2026-08-22t060417.420-1787358870988.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಭಾರತದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಸುಲಿಗೆ ಮತ್ತು ದುಬಾರಿ ಜೀವನ ವೆಚ್ಚದ ಬಗ್ಗೆ ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಹಂಚಿಕೊಂಡ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳ ಸಿಗುವ 'ಕೆಲಸ'ಗಳ ಒಂದು ತಮಾಷೆಯ ಪಟ್ಟಿಯನ್ನು ಸಾಕ್ಷಿ ಅವರು ಎಕ್ಸ್ (X) ಮತ್ತು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸಾಕ್ಷಿ ಹಂಚಿಕೊಂಡ 5 'ದೊಡ್ಡ' ಸಂಪಾದನೆಯ ಕೆಲಸಗಳು:&lt;/strong&gt;&lt;/h2&gt;&lt;p&gt;ಪಿಜಿ (PG) ಮಾಲೀಕರು&lt;/p&gt;&lt;p&gt;ಸಿಗರೇಟ್ (ಗೂಡಂಗಡಿ) ಅಂಗಡಿ ಮಾಲೀಕರು&lt;/p&gt;&lt;p&gt;ಬೆಂಗಳೂರಿನ ಮನೆ ಮಾಲೀಕರು (ಲ್ಯಾಂಡ್&zwnj;ಲಾರ್ಡ್)&lt;/p&gt;&lt;p&gt;ವಾಟರ್ ಟ್ಯಾಂಕರ್ ಮಾಲೀಕರು&lt;/p&gt;&lt;p&gt;ರಿಯಲ್ ಎಸ್ಟೇಟ್ ಬ್ರೋಕರ್&lt;/p&gt;&lt;h2&gt;&lt;strong&gt;ಪಿಜಿ ರೂಮ್&zwnj;ಗಳು&lt;/strong&gt;&lt;/h2&gt;&lt;p&gt;ಸೋಷಿಯಲ್ ಮೀಡಿಯಾ ಪೋಸ್ಟ್&zwnj;ನಲ್ಲಿ ಸಾಕ್ಷಿ ಹೇಳಿರುವ ಪ್ರಮುಖ ಅಂಶಗಳು ಹೀಗಿವೆ. ಪಿಜಿ ಮಾಲೀಕರು ಒಂದು ರೂಮಿನಲ್ಲಿ ಮೂರು ಜನರನ್ನು ತುಂಬಿ, ಪ್ರತಿಯೊಬ್ಬರಿಂದ 10,000 ದಿಂದ 15,000 ರೂಪಾಯಿ ವಸೂಲಿ ಮಾಡುತ್ತಾರೆ. ಫ್ಲ್ಯಾಟ್&zwnj;ಗೆ 40,000 ರೂಪಾಯಿ ಬಾಡಿಗೆ ಕಟ್ಟುವ ಇವರು, ತಿಂಗಳಿಗೆ 1 ರಿಂದ 1.5 ಲಕ್ಷ ರೂಪಾಯಿ ಲಾಭ ಮಾಡುತ್ತಾರೆ. ಬಾಡಿಗೆದಾರರ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಮನೆ ಮಾಲೀಕರು ಹೇಗೆ ಹೆಚ್ಚು ಬಾಡಿಗೆ ವಸೂಲಿ ಮಾಡುತ್ತಾರೆ ಎಂಬುದನ್ನು ಕೂಡ ಸಾಕ್ಷಿ ತಮಾಷೆಯಾಗಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ರಿಯಲ್ ಎಸ್ಟೇಟ್ ಬ್ರೋಕರ್&lt;/strong&gt;&lt;/h3&gt;&lt;p&gt;ರಿಯಲ್ ಎಸ್ಟೇಟ್ ಬ್ರೋಕರ್&zwnj;ಗಳು ಲೀಕ್ ಆಗುವ ಅಥವಾ ಇಲಿಗಳಿರುವ ಫ್ಲ್ಯಾಟ್&zwnj;ಗಳನ್ನು ತೋರಿಸುತ್ತಾರೆ. 'ಮೆಟ್ರೋಗೆ ನಡೆದು ಹೋಗುವಷ್ಟು ದೂರ' ಎಂದು ಹೇಳುವ ಫ್ಲ್ಯಾಟ್ 5 ಕಿಲೋಮೀಟರ್ ದೂರದಲ್ಲಿರುತ್ತದೆ. ಆದರೂ ನೀವು ಆ ಫ್ಲ್ಯಾಟ್ ತೆಗೆದುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೊನೆಗೆ, ನೀವೂ ಮತ್ತು ಮನೆ ಮಾಲೀಕರೂ ಸೇರಿ ಇವರಿಗೆ ಒಂದು ತಿಂಗಳ ಬಾಡಿಗೆಯನ್ನು ಕಮಿಷನ್ ಆಗಿ ಕೊಡಬೇಕು.&lt;/p&gt;&lt;h3&gt;&lt;strong&gt;ವಾಟರ್ ಟ್ಯಾಂಕ್ ಮಾಲೀಕರು:&lt;/strong&gt;&lt;/h3&gt;&lt;p&gt;ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಆಗಾಗ ಕಾಡುತ್ತಲೇ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಾಟರ್ ಟ್ಯಾಂಕ್ ಮಾಲೀಕರು ಒಂದು ವಾಟರ್ ಟ್ಯಾಂಕ್&zwnj;ಗೆ 1200ರಿಂದ 1500 ರುಪಾಯಿ ಚಾರ್ಜ್ ಮಾಡುತ್ತಾರೆ. ದಿನಕ್ಕೆ ಹಲವು ಟ್ರಿಪ್ ವಾಟರ್ ಸಪ್ಲೆ ಮಾಡುವುದರಿಂದ ವಾಟರ್ ಟ್ಯಾಂಕ್ ಮಾಲೀಕರು ಒಳ್ಳೆಯ ದುಡಿಮೆ ಮಾಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಐಟಿ ಪ್ರೊಫೆಷನಲ್&zwnj;ಗಳು&lt;/strong&gt;&lt;/h3&gt;&lt;p&gt;&quot;ಇದೆಲ್ಲದರ ನಡುವೆ, ಸಂಬಳ ಜಾಸ್ತಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ರಾತ್ರಿ 2 ಗಂಟೆಗೆ ಡಿಎಸ್&zwnj;ಎ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂತಿರುತ್ತಾರೆ,&quot; ಎಂದು ಐಟಿ ವಲಯದ ವೃತ್ತಿಪರರ ಸ್ಥಿತಿಯನ್ನು ವಿವರಿಸಿ ಸಾಕ್ಷಿ ಪೋಸ್ಟ್ ಮಾಡಿದ್ದಾರೆ.&lt;/p&gt;&lt;p&gt;I analysed the Indian job market and here are the highest paying careers right now:1. PG Owner:This guy has 3 people packed into one room paying ₹10k&ndash;15k each.He&rsquo;s probably paying ₹40k rent for the flat and making ₹1&ndash;1.5 lakhs from it.2. Sutta Shop Owner:Thousands of&hellip;&lt;/p&gt;&lt;p&gt;&mdash; Sakshi (@Sakshi50038) August 25, 2026&lt;/p&gt;&lt;p&gt;&lt;/p&gt;&lt;p&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್&lt;/strong&gt;&lt;/p&gt;&lt;p&gt;ಸಾಕ್ಷಿ ಅವರ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ. &quot;ಕೆಲಸ ಉಳಿಸಿಕೊಳ್ಳಲು ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ಯುರೋಪ್ ಮತ್ತು ಯುಎಸ್ ಉದ್ಯೋಗಿಗಳ ಮಟ್ಟದಲ್ಲಿ ಕೆಲಸ ಮಾಡಬೇಕು. ಆದರೆ ಈ 1 ರಿಂದ 5ನೇ ಸ್ಥಾನದಲ್ಲಿರುವವರು ಕೊಡುವ ಸೇವೆಯ ಗುಣಮಟ್ಟವಾದರೂ ಏನು?&quot; ಎಂದು ಒಬ್ಬರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;&quot;1, 3, ಮತ್ತು 5ನೇ ಸ್ಥಾನದಲ್ಲಿರುವವರು ಪಕ್ಕಾ ರಿಯಲ್. ಈ ಮಾಫಿಯಾ ಆಳವಾಗಿ ಬೇರೂರಿದೆ. ಕೋವಿಡ್ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಸಾಧ್ಯ ಎಂದು ಗೊತ್ತಾಯ್ತು, ಈಗ ಎಐ ಅಲೆಯೂ ಬಂದಿದೆ. ಆದರೂ ಐಟಿ ಆಫೀಸ್&zwnj;ಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಆಗುತ್ತಿಲ್ಲ. ಮನುಷ್ಯರು ಸೃಷ್ಟಿಸಿದ ಈ ಸಮಸ್ಯೆಯನ್ನು ಎಐ ಕೂಡ ಬಗೆಹರಿಸಲು ಸಾಧ್ಯವಿಲ್ಲ&quot; ಎಂದು ಮತ್ತೊಬ್ಬರು ಬರೆದಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಸಾಕ್ಷಿ ಅವರ ಈ ವೈರಲ್ ಪೋಸ್ಟ್, ಬೆಂಗಳೂರಿನ ಟೆಕ್ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ದುಬಾರಿ ಜೀವನ ವೆಚ್ಚ ಮತ್ತು ರಿಯಲ್ ಎಸ್ಟೇಟ್ ಸುಲಿಗೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Naveen Kodase</dc:creator>
            <atom:link href="https://kannada.asianetnews.com/viral/best-paying-jobs-in-bengaluru-viral-post-takes-a-hilarious-swipe-at-real-estate-kvn/articleshow-9wz5xrg"/>
        </item>
        <item>
            <title><![CDATA[ಟೀ ಅಂಗಡಿಯಿಂದ ಪಿಜಿವರೆಗೆ: ಸಾಫ್ಟ್‌ವೇರ್ ಉದ್ಯೋಗಿಗಳನ್ನೇ ಮೀರಿಸಿದ ‘ಈ’ ಉದ್ಯೋಗಗಳು!]]></title>
            <link>https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6</link>
            <guid isPermaLink="true">https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6</guid>
            <pubDate>Thu, 27 Aug 2026 09:13:31 +0530</pubDate>
            <description><![CDATA[&lt;p&gt;IIT, FAANG ಮತ್ತು DSA ಹಿಂದೆ ಓಡುವ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳಿಗಿಂತ ಪಿಜಿ ಮಾಲೀಕರು, ಮನೆ ಮಾಲೀಕರು, ನೀರಿನ ಟ್ಯಾಂಕರ್&zwnj;ಗಳು ಹಾಗೂ ಚಾಯ್ ಅಂಗಡಿ ಮಾಲೀಕರೇ ಹೆಚ್ಚು ಗಳಿಸುತ್ತಾರೆ ಎಂಬ ವೈರಲ್ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ. ಇದು ಅಧಿಕೃತ ರ&zwj;್ಯಾಂಕಿಂಗ್ ಅಲ್ಲ; ನಗರಗಳ ಬಾಡಿಗೆ, ನೀರು ಮತ್ತು ದಿನನಿತ್ಯದ ಬೇಡಿಕೆಯ ಆಧಾರದ ಮೇಲಿನ ವ್ಯಂಗ್ಯಾತ್ಮಕ ಲೆಕ್ಕಾಚಾರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10dzmam2f2vd1r9d8md1gc5,imgname-highest-paying-careers-in-india--1--1787794805076.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸಾಫ್ಟ್&zwnj;ವೇರ್ ಉದ್ಯೋಗವೇ ದೊಡ್ಡ ಆದಾಯದ ದಾರಿ?&lt;/h2&gt;&lt;p&gt;ಭಾರತದಲ್ಲಿ ಉತ್ತಮ ಸಂಬಳದ ಉದ್ಯೋಗ ಎಂದಾಕ್ಷಣ IIT, MNC, FAANG ಅಥವಾ ಸಾಫ್ಟ್&zwnj;ವೇರ್ ಎಂಜಿನಿಯರಿಂಗ್ ನೆನಪಾಗುತ್ತದೆ. ಡೇಟಾ ಸ್ಟ್ರಕ್ಚರ್ಸ್ ಮತ್ತು ಅಲ್ಗಾರಿದಮ್&zwnj;ಗಳ (DSA) ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡು, ತಡರಾತ್ರಿಯವರೆಗೂ ಕೋಡಿಂಗ್ ಮಾಡುವ ಯುವಕರ ಸಂಖ್ಯೆಯೂ ಕಡಿಮೆಯಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಈ ಸಾಂಪ್ರದಾಯಿಕ ಕಲ್ಪನೆಗೆ ತಮಾಷೆಯ ತಿರುವು ನೀಡಿದೆ.&lt;/p&gt;&lt;h3&gt;ಪಿಜಿ ಮಾಲೀಕರು &lsquo;ನಂ.1&rsquo;!&lt;/h3&gt;&lt;p&gt;ಟೆಕ್ ಮತ್ತು AI ಕ್ಷೇತ್ರದ ನಿರೂಪಕಿ ಸಾಕ್ಷಿ ಹಂಚಿಕೊಂಡಿರುವ ವೈರಲ್ ರ&zwj;್ಯಾಂಕಿಂಗ್&zwnj;ನಲ್ಲಿ ಪೇಯಿಂಗ್ ಗೆಸ್ಟ್ (PG) ಮಾಲೀಕರನ್ನು ಅಗ್ರಸ್ಥಾನದಲ್ಲಿರಿಸಲಾಗಿದೆ. ನಗರಗಳಲ್ಲಿ ಉದ್ಯೋಗ, ಶಿಕ್ಷಣಕ್ಕಾಗಿ ಬರುವ ಜನರಿಗೆ ಒಂದೇ ಕೊಠಡಿಯಲ್ಲಿ ಹಲವು ಹಾಸಿಗೆಗಳನ್ನು ಒದಗಿಸಿ ಬಾಡಿಗೆ ಪಡೆಯುವ ಮಾದರಿಯನ್ನು ಪೋಸ್ಟ್ ವ್ಯಂಗ್ಯವಾಗಿ ವಿವರಿಸುತ್ತದೆ.&lt;/p&gt;&lt;p&gt;ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯಿಂದ ₹10,000&ndash;₹15,000 ವರೆಗೆ ಪಡೆಯುವ ಮೂಲಕ, ಹಲವು ನಿವಾಸಿಗಳಿಂದ ಒಟ್ಟಾರೆ ದೊಡ್ಡ ಮೊತ್ತದ ಆದಾಯ ಗಳಿಸಬಹುದು ಎಂಬುದು ಇದರ ವಾದ.&lt;/p&gt;&lt;h3&gt;ಚಾಯ್ ಅಂಗಡಿ, ಮನೆ ಮಾಲೀಕರಿಗೂ ಸ್ಥಾನ&lt;/h3&gt;&lt;p&gt;ಟೆಕ್ ಪಾರ್ಕ್&zwnj;ಗಳ ಸುತ್ತಲಿನ ಚಹಾ, ತಿಂಡಿ ಮತ್ತು ಸಿಗರೇಟ್ ಅಂಗಡಿಗಳ ಮಾಲೀಕರನ್ನೂ ಪಟ್ಟಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಪ್ರತಿದಿನ ಸಾವಿರಾರು ಟೆಕ್ಕಿಗಳ ಓಡಾಟವಿರುವ ಪ್ರದೇಶಗಳಲ್ಲಿ ಇಂತಹ ಸಣ್ಣ ವ್ಯಾಪಾರಗಳು ನಿರಂತರ ಗ್ರಾಹಕರನ್ನು ಹೊಂದಿರುತ್ತವೆ.&lt;/p&gt;&lt;p&gt;ಬೆಂಗಳೂರಿನ ಮನೆ ಮಾಲೀಕರು ಮತ್ತು ನೀರಿನ ಟ್ಯಾಂಕರ್ ಮಾಲೀಕರನ್ನೂ ವೈರಲ್ ಪೋಸ್ಟ್ ತನ್ನ ಪಟ್ಟಿಯಲ್ಲಿ ಸೇರಿಸಿದೆ. ನಗರದಲ್ಲಿ ಮನೆ ಬಾಡಿಗೆ ಮತ್ತು ನೀರಿನ ಬೇಡಿಕೆ ಹೆಚ್ಚಿರುವುದೇ ಇವರ ಆದಾಯಕ್ಕೆ ಪ್ರಮುಖ ಕಾರಣವೆಂದು ಪೋಸ್ಟ್ ವ್ಯಂಗ್ಯವಾಡುತ್ತದೆ.&lt;/p&gt;&lt;h3&gt;DSA ಹಿಂದೆ ಓಡುವ ಟೆಕ್ಕಿಗಳಿಗೆ ವೈರಲ್ ಪೋಸ್ಟ್&zwnj;ನ ಚಾಟಿ&lt;/h3&gt;&lt;p&gt;&ldquo;ಬೆಳಗಿನ ಜಾವ 2 ಗಂಟೆಗೆ DSA ಪ್ರಶ್ನೆಗಳನ್ನು ಬಿಡಿಸುತ್ತಿರುವ ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು&rdquo; ಎಂಬ ಸಾಲು ನೆಟ್ಟಿಗರ ಗಮನ ಸೆಳೆದಿದೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದರೆ, ಮತ್ತಷ್ಟು ಮಂದಿ ಆದಾಯವನ್ನು ಕೇವಲ ಸಂಬಳದ ಆಧಾರದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ವಾಸ್ತವವಾಗಿ, ಈ ವೈರಲ್ ಪಟ್ಟಿ ಅಧಿಕೃತ ಆದಾಯ ಸಮೀಕ್ಷೆಯಲ್ಲ. ಬಾಡಿಗೆ, ಆಸ್ತಿ ಮೌಲ್ಯ, ವ್ಯಾಪಾರ ವೆಚ್ಚ, ತೆರಿಗೆ, ಸಾಲ ಮತ್ತು ಸ್ಥಳೀಯ ಬೇಡಿಕೆ ಸೇರಿದಂತೆ ಹಲವು ಅಂಶಗಳು ನಿಜವಾದ ಲಾಭವನ್ನು ನಿರ್ಧರಿಸುತ್ತವೆ. ಹೀಗಾಗಿ ಇದು ಗಂಭೀರ ವೃತ್ತಿ ರ&zwj;್ಯಾಂಕಿಂಗ್&zwnj;ಗಿಂತ ನಗರ ಜೀವನದ ಆರ್ಥಿಕ ವಾಸ್ತವತೆಯ ಮೇಲಿನ ವ್ಯಂಗ್ಯಾತ್ಮಕ ಚರ್ಚೆಯಾಗಿ ನೋಡಬಹುದು.&lt;/p&gt;]]></content:encoded>
            <category>bengaluru-urban</category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/bengaluru-pg-owners-earn-more-than-software-engineers-viral-post-sparks-debate/articleshow-f9l50i6"/>
        </item>
        <item>
            <title><![CDATA['ಪೊಲೀಸ್ ರಾಜ್ಯವಾಗಲು ಬಿಡುವುದಿಲ್ಲ..' ವೈಟ್‌ಫೀಲ್ಡ್ ಪೊಲೀಸರಿಗೆ 3 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌]]></title>
            <link>https://kannada.asianetnews.com/bengaluru-urban/police-interference-in-a-civil-case-high-court-imposes-rs-3-lakh-fine-on-whitefield-police-gkn/articleshow-gdecn26</link>
            <guid isPermaLink="true">https://kannada.asianetnews.com/bengaluru-urban/police-interference-in-a-civil-case-high-court-imposes-rs-3-lakh-fine-on-whitefield-police-gkn/articleshow-gdecn26</guid>
            <pubDate>Thu, 27 Aug 2026 16:22:00 +0530</pubDate>
            <description><![CDATA[&lt;p&gt;ತಮ್ಮದಲ್ಲದ ಪ್ರಕರಣದಲ್ಲಿ ಮೂಗು ತೋರಿಸಿದ ಬೆಂಗಳೂರಿನ ವೈಟ್&zwnj;ಫೀಲ್ಡ್ ಪೊಲೀಸರ ವಿರುದ್ಧ ಹೈಕೋರ್ಟ್&zwnj; ಗರಂ ಆಗಿದೆ. ಅಲ್ಲದೇ ಭಾರೀ ದಂಡವನ್ನು ಪೊಲೀಸರ ಜೇಬಿನಿಂದಲೇ ತೆತ್ತಬೇಕು ಎಂದು ಆದೇಶ ನೀಡಿದೆ. ಅಷ್ಟಕ್ಕೂ ಏನಿದು ಕೇಸ್ ಅನ್ನೋ ವಿವರ ಈ ಸ್ಟೋರಿಯಲ್ಲಿದ್ದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m094nv17qq2q7zdgtrjw11cv,imgname-karnataka-high-court-1787013295143.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿವಿಲ್ ವ್ಯಾಜ್ಯಗಳಲ್ಲಿ ಅನಗತ್ಯವಾಗಿ ಮಧ್ಯಪ್ರವೇಶಿಸಿ ಕಾನೂನು ಬಾಹಿರವಾಗಿ ವರ್ತಿಸಿದ ಬೆಂಗಳೂರಿನ ವೈಟ್&zwnj;ಫೀಲ್ಡ್ ಪೊಲೀಸರ ವಿರುದ್ಧ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಪೊಲೀಸರ ಈ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕೋರ್ಟ್&zwnj; ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಸಿವಿಲ್ ಕೋರ್ಟ್&zwnj;ನಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣವೊಂದರಲ್ಲಿ ವೈಟ್&zwnj;ಫೀಲ್ಡ್ ಪೊಲೀಸರು ಅನಗತ್ಯವಾಗಿ ಮಧ್ಯಪ್ರವೇಶಿಸಿದ್ದರು. ವಿವಾದಿತ ದಾನಪತ್ರವೊಂದಕ್ಕೆ (Gift Deed) ಸಾಕ್ಷಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಆ ವ್ಯಕ್ತಿಗೆ ಆಗಸ್ಟ್ 27ಕ್ಕೆ ನೋಟಿಸ್ ನೀಡಿದ್ದರು. ನೋಟಿಸ್&zwnj;ನಲ್ಲಿ ನೀಡಿದ ಸಮಯಕ್ಕಿಂತ ಮೊದಲೇ ಅಂದರೆ ಆಗಸ್ಟ್ 25ರಂದೇ ಆತನನ್ನು ಬಂಧಿಸುವ ಮೂಲಕ ಪೊಲೀಸರು ಕಾನೂನು ಉಲ್ಲಂಘಿಸಿದ್ದರು.&lt;/p&gt;&lt;h2&gt;&lt;strong&gt;ಪೊಲೀಸ್ ರಾಜ್ಯ ಆಗಲು ಬಿಡುವುದಿಲ್ಲ - ಹೈಕೋರ್ಟ್ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠವು ಪೊಲೀಸರ ಕಾರ್ಯವೈಖರಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇದು ಪ್ರಜಾಪ್ರಭುತ್ವವೇ ಹೊರತು ಪೊಲೀಸ್ ರಾಜ್ಯವಲ್ಲ. ರಾಜ್ಯವನ್ನು ಪೋಲೀಸ್ ರಾಜ್ಯವಾಗಲು ನಾವು ಬಿಡುವುದಿಲ್ಲ ಎಂದು ನ್ಯಾಯಪೀಠವು ಖಡಕ್ ಎಚ್ಚರಿಕೆ ನೀಡಿತು. ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದ ತನಿಖಾಧಿಕಾರಿ ಪಿಎಸ್​​ಐ ಸುನಿಲ್​​ ಕುಮಾರ್ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಎಸಿಪಿ ಹಾಗೂ ಡಿಸಿಪಿ ಸೂಚನೆ ನೀಡಿದರೆ ನೀವು ಏನು ಬೇಕಾದರೂ ಮಾಡುತ್ತೀರಾ? ಹಿರಿಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಎಸಿಪಿ ಮತ್ತು ಡಿಸಿಪಿ ಅವರ ಹೊಣೆಗಾರಿಕೆಯ ಬಗ್ಗೆಯೂ ಕಿಡಿಕಾರಿದರು.&lt;/p&gt;&lt;p&gt;ಸಿವಿಲ್ ಕೇಸ್&zwnj;ನಲ್ಲಿ ಅಕ್ರಮವಾಗಿ ಮಧ್ಯಪ್ರವೇಶಿಸಿದ್ದಕ್ಕೆ ಶಿಕ್ಷೆಯಾಗಿ ನ್ಯಾಯಾಲಯವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿಶೇಷವೆಂದರೆ, ಈ ದಂಡದ ಮೊತ್ತವನ್ನು ಸರ್ಕಾರದ ಖಜಾನೆಯಿಂದ ಪಾವತಿಸುವಂತಿಲ್ಲ. ಬದಲಾಗಿ, ತಪ್ಪು ಮಾಡಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳೇ ತಮ್ಮ ಸ್ವಂತ ಹಣದಿಂದ ಈ ದಂಡವನ್ನು ಪಾವತಿಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸೂಚಿಸಿರುವ ಹೈಕೋರ್ಟ್, ಇನ್ಮುಂದೆ ಸಿವಿಲ್ ಕೇಸ್&zwnj;ಗಳಲ್ಲಿ ಪೊಲೀಸರು ಮೂಗು ತೂರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/police-interference-in-a-civil-case-high-court-imposes-rs-3-lakh-fine-on-whitefield-police-gkn/articleshow-gdecn26"/>
        </item>
        <item>
            <title><![CDATA[ಇಂದು ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆ ಸ್ಥಗಿತ]]></title>
            <link>https://kannada.asianetnews.com/bengaluru-urban/bengaluru-water-supply-disrupted-august-28-bwssb-pipe-repair-san/articleshow-iggqzo7</link>
            <guid isPermaLink="true">https://kannada.asianetnews.com/bengaluru-urban/bengaluru-water-supply-disrupted-august-28-bwssb-pipe-repair-san/articleshow-iggqzo7</guid>
            <pubDate>Fri, 28 Aug 2026 05:52:05 +0530</pubDate>
            <description><![CDATA[ಕಾವೇರಿ ನೀರು ಸರಬರಾಜು ಯೋಜನೆಯ ಮುಖ್ಯ ಕೊಳವೆ ಮಾರ್ಗದ ದುರಸ್ತಿ ಕಾಮಗಾರಿಯಿಂದಾಗಿ ಆ.28ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಲಮಂಡಳಿಯು ಸುಮಾರು 8 ಗಂಟೆಗಳ ಕಾಲ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಿದ್ದು, ಸಾರ್ವಜನಿಕರು ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gf664w4a99g6zdh52j6djz5e,imgname-variation-in-cauvery-water-supply.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): &lt;/strong&gt;ಕಾವೇರಿ ನೀರು ಸರಬರಾಜು ಯೋಜನೆ 4ನೇ ಹಂತ, 2ನೇ ಘಟ್ಟದ 2700 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ಮಾರ್ಗದಲ್ಲಿನ ಚೈನೇಜ್ 65.80 ಕಿ.ಮೀ ನೈಸ್ ಜಂಕ್ಷನ್ ಸಮೀಪವಿರುವ &lsquo;ಸ್ಕೌರ್ ವಾಲ್ವ್&rsquo; ಸೋರಿಕೆಯನ್ನು ಸರಿಪಡಿಸಲು ಜಲಮಂಡಳಿ ಕಾಮಗಾರಿ ಕೈಗೊಂಡಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಆ.28ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕಾಮಗಾರಿಯ ಕಾರಣದಿಂದ ಸುಮಾರು ಒಟ್ಟು 8 ಗಂಟೆ ಜಲರೇಚಕ ಯಂತ್ರಾಗಾರಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಸ್ಥಗಿತದಿಂದಾಗಿ ಕಾವೇರಿ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.&lt;/p&gt;&lt;p&gt;ಸಾರ್ವಜನಿಕರಿಗೆ ಜಲಮಂಡಳಿ ಸೂಚನೆ ಕಾಮಗಾರಿ ನಡೆಯುವ ಸಮಯದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಳ್ಳಬೇಕು ಹಾಗೂ ಜಲಮಂಡಳಿಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.&lt;/p&gt;&lt;h2&gt;&lt;strong&gt;ಪಶ್ಚಿಮ ಹಾಗೂ ದಾಸರಹಳ್ಳಿ ವಲಯ&lt;/strong&gt;&lt;/h2&gt;&lt;p&gt;ನಂದಿನಿ ಲೇಔಟ್ (4ನೇ ಬ್ಲಾಕ್), ಬಿ.ಹೆಚ್.ಇ.ಎಲ್ ಲೇಔಟ್, ಶ್ರೀನಿವಾಸ ನಗರ, ಜೈಮಾರುತಿ ನಗರ, ಸಾಕಮ್ಮ ಲೇಔಟ್, ನರಸಿಂಹಸ್ವಾಮಿ ಲೇಔಟ್, ಮುನೇಶ್ವರನಗರ. ಜ್ಞಾನಜ್ಯೋತಿನಗರ, ಜ್ಞಾನಗಂಗಾನಗರ, ಮಲ್ಲತ್ತಹಳ್ಳಿ, ಎನ್&zwnj;ಜಿಇಎಫ್ ಲೇಔಟ್, ಐಟಿಐ ಲೇಔಟ್ (ಪಾರ್ಟ್), ರೈಲ್ವೇ ಲೇಔಟ್ (1 ಮತ್ತು 2ನೇ ಹಂತ), ಆರ್.ಹೆಚ್.ಬಿ.ಸಿ.ಎಸ್ ಲೇಔಟ್. ಭೈರವೇಶ್ವರನಗರ, ಸುಂಕದಕಟ್ಟೆ, ಜಯಲಕ್ಷ್ಮಮ್ಮ ಲೇಔಟ್, ಈರಣ್ಣಪಾಳ್ಯ, ಡಿ ಗ್ರೂಪ್ ಲೇಔಟ್, ಕೆಬ್ಬಹಳ್ಳಿ, ಚಂದನ ಲೇಔಟ್, ಚಂದ್ರಶೇಖರ ಲೇಔಟ್, ಜಿಯೋಲೊಜಿ ಲೇಔಟ್, ನರಸಪುರ. ಪಾಪರೆಡ್ಡಿಪಾಳ್ಯ, ಬಿ.ಇ.ಎಲ್ (1 ಮತ್ತು 2ನೇ ಹಂತ), ಬಿಲೇಕಲ್ಲು, ಬ್ಯಾಡರಹಳ್ಳಿ, ಉಪಕಾರ್ ಲೇಔಟ್, ಆರ್.ಆರ್.ರೆಸಿಡೆನ್ಸಿ, ಗಿಡದಕೋನೇನಹಳ್ಳಿ, ಉಲ್ಲಾಳ ವಿಲೇಜ್, ಸೊನ್ನೇನಹಳ್ಳಿ.ಟೆಲಿಕಾಂ ಲೇಔಟ್, ವಿನಾಯಕ ಲೇಔಟ್, ಉಲ್ಲಾಳ, ಬಾಲಾಜಿ ಲೇಔಟ್, ಸರ್.ಎಂ.ವಿಶ್ವೇಶರಯ್ಯ ಲೇಔಟ್ (1 ರಿಂದ 9ನೇ ಬ್ಲಾಕ್), ಪ್ರಕೃತಿನಗರ, ಹೆಚ್.ಎಂ.ಟಿ ಲೇಔಟ್, ನಿಸರ್ಗ ಲೇಔಟ್, ಇನ್&zwnj;ಕಮ್ ಟ್ಯಾಕ್ಸ್ ಲೇಔಟ್, ರಾಮಯ್ಯ ಲೇಔಟ್, ಗಂಗಮ್ಮ ಬಡಾವಣೆ, ಶೆಟ್ಟಿಹಳ್ಳಿ.&lt;/p&gt;&lt;p&gt;&lt;strong&gt;ವಾರ್ಡ್&zwnj;ಗಳು:&lt;/strong&gt; ಬಗಳಗುಂಟೆ (ವಾರ್ಡ್-13), ಚೊಕ್ಕಸಂದ್ರ (ವಾರ್ಡ್-38), ಲಗ್ಗೆರೆ (ವಾರ್ಡ್-42), ಕೊಟ್ಟಿಗೆಪಾಳ್ಯ (ವಾರ್ಡ್-73), ಮಲ್ಲಸಂದ್ರ (ವಾರ್ಡ್-12), ಹೆಚ್.ಎಂ.ಟಿ (ವಾರ್ಡ್-16), ದಾಸರಹಳ್ಳಿ (ವಾರ್ಡ್-14), ಜಾಲಹಳ್ಳಿ (ವಾರ್ಡ್-15), ಪೀಣ್ಯ ಇಂಡಸ್ಟ್ರಿಯಲ್ ಏರಿಯಾ (ವಾರ್ಡ್-39), ಲಕ್ಷ್ಮಿದೇವಿ ನಗರ (ವಾರ್ಡ್-41), ರಾಜಗೋಪಾಲನಗರ (ವಾರ್ಡ್-69), ಹೆಗ್ಗನಹಳ್ಳಿ (ವಾರ್ಡ್-70), ಹೇರೋಹಳ್ಳಿ (ವಾರ್ಡ್-71, 72).&lt;/p&gt;&lt;h2&gt;&lt;strong&gt;ವಿಜಯಗರ, ಕೆಂಗೇರಿ ಆರ್&zwnj;ಆರ್&zwnj; ನಗರ ಸುತ್ತ&lt;/strong&gt;&lt;/h2&gt;&lt;p&gt;ಐಡಿಯಲ್ ಹೋಮ್ (1 ಮತ್ತು 2ನೇ ಫೇಸ್), ಕೆಂಚನಹಳ್ಳಿ, ಜವರೇಗೌಡ ನಗರ, ಹಲಗೆವಡೇರಹಳ್ಳಿ, ಎಲ್.ಐ.ಸಿ ಲೇಔಟ್, ನಾಗಪ್ಪ ಲೇಔಟ್, ಕೃಷ್ಣಪ್ಪ ಗಾರ್ಡನ್, ಬಿಎಚ್ಇಎಲ್ ಲೇಔಟ್ (ನಾರ್ತ್, ಸೌತ್, ಎಕ್ಸ್&zwnj;ಟೆನ್ಷನ್, ಎಲ್&zwnj;-ಶೇಪ್). ಪಟ್ಟಣ್ಣಗೆರೆ, ಮೈಲಸಂದ್ರ, ಯುನಿವರ್ಸಿಟಿ ಲೇಔಟ್ (4 ಮತ್ತು 5ನೇ ಸ್ಟೇಜ್), ಬಿ.ಇ.ಎಂ.ಎಲ್ 10ನೇ ಸ್ಟೇಜ್, ಮಣಿಪಾಲ 5ನೇ ಸ್ಟೇಜ್, ಭುವನೇಶ್ವರಿನಗರ.ಕೆಂಗೇರಿ ಉಪನಗರ, ಕೆಂಗೇರಿ, ನಾಗದೇವನಹಳ್ಳಿ, ಜ್ಞಾನಭಾರತಿ (1 ರಿಂದ 4ನೇ ಬ್ಲಾಕ್), ಆರ್.ಆರ್ ಲೇಔಟ್, ಜಗಜ್ಯೋತಿ ಲೇಔಟ್, ಮರಿಯಪ್ಪನಪಾಳ್ಯ, ದುಬಾಸಿ ಪಾಳ್ಯ, ಬೃಂದಾವನ್ ಲೇಔಟ್, ದೊಡ್ಡಗೊಲ್ಲರಹಟ್ಟಿ, ಚಿಕ್ಕಗೊಲ್ಲರಹಟ್ಟಿ, ಶಿರರ್ಕೆ, ಮೈಸೂರು ರೋಡ್.&lt;/p&gt;&lt;h2&gt;&lt;strong&gt;ರಾಜಾಜಿನಗರ/ವಿಜಯನಗರ ವ್ಯಾಪ್ತಿ&lt;/strong&gt;&lt;/h2&gt;&lt;p&gt;ಎಂ.ಸಿ. ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್, ಆರ್&zwnj;ಪಿಸಿ ಲೇಔಟ್, ನಾಗರಬಾವಿ, ಮಾನಸನಗರ, ಹೊಯ್ಸಳನಗರ, ನಾಯಂಡಹಳ್ಳಿ, ರಂಗನಾಥ ಕಾಲೋನಿ, ಬಿಸಿಸಿ ಲೇಔಟ್, ಕಾಮಾಕ್ಷಿಪಾಳ್ಯ, ಪಟ್ಟೇಗಾರಪಾಳ್ಯ, ಪ್ರಶಾಂತನಗರ, ತಿಮ್ಮೆನಹಳ್ಳಿ, ಗೋವಿಂದರಾಜನಗರ, ಕೆ.ಹೆಚ್.ಬಿ ಕಾಲೋನಿ, ಎಂಆರ್ಸಿಆರ್ ಲೇಔಟ್, ಸರಸ್ವತಿನಗರ, ಮೂಡಲಪಾಳ್ಯ, ಮಧುರನಗರ, ಅನ್ನಪೂರ್ಣೇಶ್ವರಿ ನಗರ, ಅಮರಜ್ಯೋತಿನಗರ.&lt;/p&gt;&lt;h2&gt;&lt;strong&gt;ಯಲಹಂಕ, ವಿದ್ಯಾರಣ್ಯಪುರ, ಉತ್ತರ ಬೆಂಗಳೂರು&lt;/strong&gt;&lt;/h2&gt;&lt;p&gt;ಕೊಡಿಗೆಹಳ್ಳಿ, ಟಾಟಾನಗರ, ದೇವಿನಗರ, ಬ್ಯಾಟರಾಯನಪುರ, ಯಶೋಧನಗರ, ಅಮೃತನಗರ, ಅಮೃತಹಳ್ಳಿ, ಜಕ್ಕೂರು, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಜಿ.ಕೆ.ವಿ.ಕೆ, ಯಲಹಂಕ ನ್ಯೂಟೌನ್, ಜುಡಿಷಿಯಲ್ ಲೇಔಟ್, ಅಟ್ಟೂರು, ಯಲಹಂಕ ಓಲ್ಡ್ ಟೌನ್, ಕೋಗಿಲು ಎಪಿಎಂಸಿ ವಿದ್ಯಾರಣ್ಯಪುರ, ಸಿಂಗಾಪುರ, ಎಂ.ಎಸ್.ಪಾಳ್ಯ, ರಾಮಚಂದ್ರಪುರ, ಡಿಫೆನ್ಸ್ ಲೇಔಟ್, ಏರ್&zwnj;ಫೋರ್ಸ್ ಸ್ಟೇಷನ್ ಜಾಲಹಳ್ಳಿ ಈಸ್ಟ್, ಮಾನ್ಯತಾ ರೆಸಿಡೆನ್ಸಿ, ಮರಿಯಣ್ಣಪಾಳ್ಯ, ಯಶವಂತಪುರ (ಪಾರ್ಟ್), ಮುತ್ಯಾಲನಗರ, ಜೆ.ಪಿ.ಪಾರ್ಕ್, ಬಿ.ಇ.ಎಲ್ ರಸ್ತೆ, ಡಾಲರ್ಸ್ ಕಾಲೋನಿ.&lt;/p&gt;&lt;h2&gt;&lt;strong&gt;ಇಂದಿರಾನಗರ, ಎಚ್&zwnj;ಎಎಲ್&zwnj; ಮತ್ತು ಪೂರ್ವ ವಲಯ&lt;/strong&gt;&lt;/h2&gt;&lt;p&gt;ಈಜಿಪುರ, ಹೆಚ್.ಎ.ಎಲ್ 2ನೇ ಮತ್ತು 3ನೇ ಹಂತ, ಇಂದಿರಾನಗರ (1ನೇ ಹಂತ ಸೇರಿದಂತೆ), ಜೀವನ್ ಭೀಮನಗರ, ನ್ಯೂ ತಿಪ್ಪಸಂದ್ರ, ಗೀತಾಂಜಲಿ ಲೇಔಟ್, 515 ಕಾಲೋನಿ, ಕಗ್ಗದಾಸಪುರ, ನಾಗವಾರ ಪಾಳ್ಯ, ಸದಾನಂದ ನಗರ, ನ್ಯೂ ಬೈಯ್ಯಪ್ಪನಹಳ್ಳಿ, ಜಿ.ಎಮ್. ಪಾಳ್ಯ, ಮಲ್ಲೇಶ್ ಪಾಳ್ಯ, ಕೊನೇನ ಅಗ್ರಹಾರ, ಕೋಡಿಹಳ್ಳಿ, ವರ್&zwnj;ಸೋವ ಲೇಔಟ್, ಬೈರಸಂದ್ರ. ಮಾರತ್ತಹಳ್ಳಿ, ಯಮಲೂರು, ಕೆಂಪಾಪುರ, ಮುರುಗೇಶ ಪಾಳ್ಯ, ಎನ್.ಆರ್. ಕಾಲೋನಿ, ಎನ್.ಎ.ಎಲ್, ವಿನ್ಯಾಕ ನಗರ (ಎ ಮತ್ತು ಬಿ ಬ್ಲಾಕ್), ಹರಲೂರು, ಅಂಬಲಿಪುರ, ಕಸವನಹಳ್ಳಿ, ಕೈಕೊಂಡನಹಳ್ಳಿ, ದೊಡ್ಡ ಕಣ್ಣಹಳ್ಳಿ, ಜುನ್ನಸಂದ್ರ. ಹೆಚ್&zwnj;ಬಿಆರ್ ಲೇಔಟ್, ಹೆಚ್&zwnj;ಆರ್&zwnj;ಬಿಆರ್ ಲೇಔಟ್, ಕಲ್ಯಾಣ ನಗರ, ಗೋವಿಂದಪುರ, ನಾಗವಾರ, ಹೆಣ್ಣೂರು, ಕಮ್ಮನಹಳ್ಳಿ, ಕಾಚರಕನಹಳ್ಳಿ, ಒಎಂಬಿಆರ್ ಲೇಔಟ್, ಚಿಕ್ಕಬಾಣಸವಾಡಿ, ಕಸ್ತೂರಿನಗರ, ಬಾಣಸವಾಡಿ, ಬಿ ಚನ್ನಸಂದ್ರ.&lt;/p&gt;&lt;h2&gt;&lt;strong&gt;ಬೊಮ್ಮನಹಳ್ಳಿ, ಜೆಪಿನಗರ, ಸರ್ಜಾಪುರ ರಸ್ತೆ ವ್ಯಾಪ್ತಿ&lt;/strong&gt;&lt;/h2&gt;&lt;p&gt;ಜೆ.ಪಿ.ನಗರ 8ನೇ ಫೇಸ್ ( 1ಮತ್ತು 2ನೇ ಬ್ಲಾಕ್), ಜೆ.ಪಿ. ನಗರ 9ನೇ ಫೇಸ್ (1 ರಿಂದ 7ನೇ ಬ್ಲಾಕ್), ಅಂಜನಾಪುರ (1 ರಿಂದ 5ನೇ ಜಿ ಬ್ಲಾಕ್), ಬಿಲೇಕಹಳ್ಳಿ, ಅರಕೆರೆ, ನ್ಯಾಯನಪ್ಪನಹಳ್ಳಿ, ಹುಳಿಮಾವು, ಜಂಬುಸವಾರಿ ದಿಣ್ಣೆ, ಕೊತನೂರು ದಿಣ್ಣೆ. ಹೊಂಗಸಂದ್ರ, ಬೇಗೂರು ರೋಡ್, ನ್ಯೂ ಮೈಕೋ ಲೇಔಟ್, ಮಂಗಮ್ಮನ ಪಾಳ್ಯ (ಪಾರ್ಟ್), ಗಾರ್ವೆಭಾವಿ ಪಾಳ್ಯ, ಸಿಂಗಸಂದ್ರ, ಬೊಮ್ಮನಹಳ್ಳಿ, ವಿರಾಟ್ ನಗರ, ರೂಪೇನ ಅಗ್ರಹಾರ, ದೇವರಚಿಕ್ಕನಹಳ್ಳಿ, ಹೊಸಪಾಳ್ಯ, ಎಂ.ಜಿ.ಪಾಳ್ಯ, ಬಂಡೆಪಾಳ್ಯ, ಸಿ.ಕೆ. ನಗರ. ದೊಡ್ಡನೆಕ್ಕುಂದಿ, ಕುಂದಲಹಳ್ಳಿ, ಅಶ್ವತ್ ನಗರ, ಬಸವಣ್ಣನಗರ, ವೈಟ್&zwnj;ಫೀಲ್ಡ್, ಪಟ್ಟಣದೂರು ಅಗ್ರಹಾರ, ಸಪ್ತಗಿರಿ ಲೇಔಟ್, ಮುನೇಖೊಳಾಲ, ಅಯ್ಯಪ್ಪ ನಗರ, ಹೂಡಿ, ವಿಜ್ಞಾನ ನಗರ, ಅಕ್ಷಯ ನಗರ, ಪೈ ಲೇಔಟ್, ವಿಭೂತಿಪುರ, ಅಣ್ಣಸಂದ್ರ ಪಾಳ್ಯ, ಎಲ್.ಬಿ.ಎಸ್ ನಗರ, ಎನ್&zwnj;ಜಿವಿ (ಪಾರ್ಟ್) ಪ್ರದೇಶಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-water-supply-disrupted-august-28-bwssb-pipe-repair-san/articleshow-iggqzo7"/>
        </item>
        <item>
            <title><![CDATA[ಸಿಜೆಐ ಸೂರ್ಯಕಾಂತ್‌, ಬಿಸಿಐ ಅಧ್ಯಕ್ಷ ಭಾಗವಹಿಸುವಿಕೆಗೆ ವಿರೋಧ; ಬೆಂಗಳೂರಿನ NLSIU 34ನೇ ವಾರ್ಷಿಕ ಘಟಿಕೋತ್ಸವ ರದ್ದು]]></title>
            <link>https://kannada.asianetnews.com/bengaluru-urban/nlsiu-34th-convocation-cancelled-cji-surya-kant-bci-chief-row-san/articleshow-ku3b6yl</link>
            <guid isPermaLink="true">https://kannada.asianetnews.com/bengaluru-urban/nlsiu-34th-convocation-cancelled-cji-surya-kant-bci-chief-row-san/articleshow-ku3b6yl</guid>
            <pubDate>Thu, 27 Aug 2026 17:04:45 +0530</pubDate>
            <description><![CDATA[&lt;p&gt;ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 34ನೇ ವಾರ್ಷಿಕ ಘಟಿಕೋತ್ಸವವನ್ನು ರದ್ದುಗೊಳಿಸಿದೆ. ಸಿಜೆಐ ಸೂರ್ಯ ಕಾಂತ್ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11fw2mhbabw0ah218rmtfk3,imgname-nlsiu-and-cji-1787830340241.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.27): &lt;/strong&gt;ದೇಶದ ಪ್ರಮುಖ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 2026 ರ ಸಾಲಿನ ವಿದ್ಯಾರ್ಥಿಗಳ 34ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವನ್ನು &quot;ಅನಿವಾರ್ಯ ಕಾರಣಗಳಿಂದಾಗಿ&quot; ರದ್ದುಗೊಳಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಹಾಗೂ ಭಾರತೀಯ ವಕೀಲರ ಪರಿಷತ್ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಕೆಲವೇ ವಾರಗಳಲ್ಲಿ ಈ ನಿರ್ಧಾರ ಹೊರಬಿದ್ದಿದೆ.&lt;/p&gt;&lt;p&gt;ಆಗಸ್ಟ್ 27 ರಂದು ವಿಶ್ವವಿದ್ಯಾಲಯ ಹೊರಡಿಸಿರುವ ಅಧಿಕೃತ ಸೂಚನೆಯಲ್ಲಿ, ಸೆಪ್ಟೆಂಬರ್ 12 ರಂದು ತಾತ್ಕಾಲಿಕವಾಗಿ ನಿಗದಿಯಾಗಿದ್ದ ಘಟಿಕೋತ್ಸವ ಕಾರ್ಯಕ್ರಮವು ನಡೆಯುವುದಿಲ್ಲ ಎಂದು ತಿಳಿಸಿದೆ. ಈ ಮೊದಲು ಆಗಸ್ಟ್ 3 ರಂದು ಶೈಕ್ಷಣಿಕ ಆಡಳಿತ ಮಂಡಳಿಯು ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಪ್ರಸ್ತಾವಿತ ದಿನಾಂಕವನ್ನು ತಿಳಿಸಿತ್ತು.&lt;/p&gt;&lt;h2&gt;&lt;strong&gt;ಅನುಪಸ್ಥಿತಿಯಲ್ಲೇ ಪದವಿ ಪ್ರದಾನ: ಪೋಸ್ಟ್ ಮೂಲಕ ಸರ್ಟಿಫಿಕೇಟ್!&lt;/strong&gt;&lt;/h2&gt;&lt;p&gt;ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ನೀಡಿದ ನೋಟಿಸ್&zwnj;ನಲ್ಲಿ, &quot;ನಮ್ಮ ಶ್ರಮದ ಹೊರತಾಗಿಯೂ, ಕೆಲವು ಅನಿವಾರ್ಯ ಕಾರಣಗಳಿಂದಾಗಿ ನಮಗೆ 34ನೇ ವಾರ್ಷಿಕ ಘಟಿಕೋತ್ಸವವನ್ನು ನಡೆಸುವುದು ಸಾಧ್ಯವಾಗುತ್ತಿಲ್ಲ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಘಟಿಕೋತ್ಸವ ರದ್ದಾಗಿರುವುದರಿಂದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಗತ್ಯ ಅನುಮೋದನೆಗೆ ಒಳಪಟ್ಟು 'ಅನುಪಸ್ಥಿತಿಯಲ್ಲೇ' (in absentia) ಪದವಿಗಳನ್ನು ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಪದವೀಧರರು ತಮ್ಮ ಪದವಿ ಪ್ರಮಾಣಪತ್ರಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳಬಹುದು ಅಥವಾ ನೇರವಾಗಿ ಕ್ಯಾಂಪಸ್&zwnj;ಗೆ ಬಂದು ಪಡೆದುಕೊಳ್ಳಬಹುದು. ಈ ಕುರಿತು ತಮ್ಮ ಆದ್ಯತೆಯನ್ನು ತಿಳಿಸಲು ವಿದ್ಯಾರ್ಥಿಗಳಿಗೆ ಹೊಸ ಅರ್ಜಿ ಹಾಗೂ ಪ್ರಕ್ರಿಯೆಯ ವಿವರಗಳನ್ನು ಒದಗಿಸುವುದಾಗಿ ಎನ್&zwnj;ಎಲ್&zwnj;ಎಸ್&zwnj;ಐಯು ತಿಳಿಸಿದೆ.&lt;/p&gt;&lt;h2&gt;&lt;strong&gt;ವಿವಾದದ ಹಿನ್ನೆಲೆ: ನಲ್ಸಾರ್ ವಿಶ್ವವಿದ್ಯಾಲಯದಿಂದ ಆರಂಭವಾದ ಕಿಡಿ&lt;/strong&gt;&lt;/h2&gt;&lt;p&gt;ಈ ವಿವಾದದ ಮೂಲ ಹೈದರಾಬಾದ್&zwnj;ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ. ಅಲ್ಲಿನ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯ ಕಾಂತ್ ಅವರ ಭೇಟಿಯನ್ನು ವಿದ್ಯಾರ್ಥಿಗಳು ವಿರೋಧಿಸಿದ್ದರು. ಈ ಪ್ರತಿಭಟನೆಯಿಂದ ಕೆರಳಿದ್ದ ಬಿಸಿಐ (BCI), ನಲ್ಸಾರ್&zwnj;ನ 2026ರ ಸಾಲಿನ ಪದವೀಧರರನ್ನು ವಕೀಲರೆಂದು ನೋಂದಾಯಿಸದಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ದಿಢೀರ್ ನಿರ್ದೇಶನ ನೀಡಿತ್ತು. ಆದರೆ, ಈ ನಿರ್ಧಾರಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು.&lt;/p&gt;&lt;p&gt;ಈ ಘಟನೆಯು ಎನ್&zwnj;ಎಲ್&zwnj;ಎಸ್&zwnj;ಐಯು ಕ್ಯಾಂಪಸ್&zwnj;ನಲ್ಲೂ ಕಿಚ್ಚು ಹೊತ್ತಿಸಿತು. ನಲ್ಸಾರ್ ವಿದ್ಯಾರ್ಥಿಗಳ ವಿರುದ್ಧ ಬಿಸಿಐ ತೆಗೆದುಕೊಂಡಿದ್ದ ಏಕಪಕ್ಷೀಯ ಕ್ರಮವನ್ನು ಪ್ರಶ್ನಿಸಿದ ಎನ್&zwnj;ಎಲ್&zwnj;ಎಸ್&zwnj;ಐಯು ವಿದ್ಯಾರ್ಥಿಗಳು, ತಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೂ ಸಿಜೆಐ ಸೂರ್ಯ ಕಾಂತ್ ಹಾಗೂ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭೇಟಿಗೆ ಕಟು ಆಕ್ಷೇಪ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಬಿಸಿಐ ವಿರುದ್ಧ ಬಹಿರಂಗ ಸಮರ&lt;/strong&gt;&lt;/h2&gt;&lt;p&gt;ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯ ಕಾಂತ್ ಮತ್ತು ಮನನ್ ಕುಮಾರ್ ಮಿಶ್ರಾ ಭಾಗವಹಿಸುವುದನ್ನು ವಿರೋಧಿಸಿ ಎನ್&zwnj;ಎಲ್&zwnj;ಎಸ್&zwnj;ಐಯುವಿನ ಪದವಿ ಪಡೆಯುತ್ತಿರುವ 165 ವಿದ್ಯಾರ್ಥಿಗಳು, 409 ಪ್ರಸ್ತುತ ವಿದ್ಯಾರ್ಥಿಗಳು ಹಾಗೂ 128 ಹಳೆಯ ವಿದ್ಯಾರ್ಥಿಗಳು (Alumni) ಸಹಿ ಮಾಡಿದ ಬಹಿರಂಗ ಪತ್ರವನ್ನು ಆಡಳಿತ ಮಂಡಳಿಗೆ ಸಲ್ಲಿಸಿದ್ದರು. ನಲ್ಸಾರ್ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡ ಕ್ರಮಕ್ಕೆ ಬಿಸಿಐ ಹೊಣೆಗಾರಿಕೆ ಹೊರಬೇಕು ಎಂದು ಅವರು ಪಟ್ಟು ಹಿಡಿದಿದ್ದರು.&lt;/p&gt;&lt;p&gt;ವಿಶೇಷವೆಂದರೆ, 2025 ರ ಎನ್&zwnj;ಎಲ್&zwnj;ಎಸ್&zwnj;ಐಯು ಘಟಿಕೋತ್ಸವದಲ್ಲಿ ಸಿಜೆಐ ಸೂರ್ಯ ಕಾಂತ್ ಹಾಗೂ ಮನನ್ ಕುಮಾರ್ ಮಿಶ್ರಾ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು. ಸೂರ್ಯ ಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದ್ದರೆ, ಮಿಶ್ರಾ ಸ್ವಾಗತ ಭಾಷಣ ಮಾಡಿದ್ದರು.&lt;/p&gt;&lt;h2&gt;&lt;strong&gt;'ಜೆನ್-ಝಿ ಶೈಲಿಯಲ್ಲಿ ಪದವಿ ಆಚರಿಸಿ!': ಎಕ್ಸ್&zwnj;ನಲ್ಲಿ ದನಿ ಎತ್ತಿದ ಸೌರವ್ ದಾಸ್&lt;/strong&gt;&lt;/h2&gt;&lt;p&gt;ಈ ಬೆಳವಣಿಗೆಯ ಕುರಿತು &lsquo;ಕಾಕ್ರೋಚ್ ಜನತಾ ಪಾರ್ಟಿ&rsquo; (CJP) ವಕ್ತಾರ ಸೌರವ್ ದಾಸ್ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದು, &quot;ಎನ್&zwnj;ಎಲ್&zwnj;ಎಸ್&zwnj;ಐಯುವಿನ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ತಮಗಾಗಿ ಪ್ರತ್ಯೇಕ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಿಕೊಂಡು, ತಮಗೆ ಅತ್ಯಂತ ಗೌರವಾನ್ವಿತ ಎನಿಸುವ ಅತಿಥಿಯನ್ನು ಕರೆಸಿ ಗೌರವ ಪಡೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಇದನ್ನು ಜೆನ್-ಝಿ (Gen-Z) ಶೈಲಿಯಲ್ಲೇ ಮಾಡಿ ತೋರಿಸಿ!&quot; ಎಂದು ಬರೆದುಕೊಂಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/nlsiu-34th-convocation-cancelled-cji-surya-kant-bci-chief-row-san/articleshow-ku3b6yl"/>
        </item>
        <item>
            <title><![CDATA[ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ ಆರು ಪಟ್ಟು ದುಬಾರಿ ಆಗಲಿದೆ ಹೆಬ್ಬಾಳದ ಚಿಕ್ಕ ಸುರಂಗ ರಸ್ತೆ: IISc ವರದಿ]]></title>
            <link>https://kannada.asianetnews.com/bengaluru-urban/hebbal-short-tunnel-project-iisc-study-traffic-congestion-bengaluru-san/articleshow-mbvmrr6</link>
            <guid isPermaLink="true">https://kannada.asianetnews.com/bengaluru-urban/hebbal-short-tunnel-project-iisc-study-traffic-congestion-bengaluru-san/articleshow-mbvmrr6</guid>
            <pubDate>Thu, 27 Aug 2026 18:42:23 +0530</pubDate>
            <description><![CDATA[&lt;p&gt;ಹೆಬ್ಬಾಳ ಜಂಕ್ಷನ್&zwnj;ನಲ್ಲಿ ಉದ್ದೇಶಿತ ಚಿಕ್ಕ ಸುರಂಗ ರಸ್ತೆ ಯೋಜನೆಯು ಸಂಚಾರ ದಟ್ಟಣೆಗೆ ಕೇವಲ ತಾತ್ಕಾಲಿಕ ಪರಿಹಾರ ನೀಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿಯು ತಿಳಿಸಿದೆ. ಈ ಯೋಜನೆಯು ಪ್ರತಿ ಪ್ರಯಾಣಿಕನಿಗೆ ಮೆಟ್ರೋಗಿಂತ 6 ಪಟ್ಟು ದುಬಾರಿಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m11ng01ak3w9ssfpz8gpt8xt,imgname-short-tunel-road-1787836235818.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.27): &lt;/strong&gt;ಹೆಬ್ಬಾಳ ಜಂಕ್ಷನ್&zwnj;ನಲ್ಲಿ ಎದುರಾಗುತ್ತಿರುವ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು 1,385 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ 2.2 ಕಿಮೀ ಉದ್ದದ ಶಾರ್ಟ್ ಟನೆಲ್ (ಚಿಕ್ಕ ಸುರಂಗ ರಸ್ತೆ) ಯೋಜನೆಯು ಕೇವಲ ತಾತ್ಕಾಲಿಕ ಪರಿಹಾರವಷ್ಟೇ ನೀಡಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISc) ನಡೆಸಿರುವ ಅಧ್ಯಯನ ವರದಿ ತಿಳಿಸಿದೆ. ಐಐಎಸ್&zwnj;ಸಿಯ 'ಸಸ್ಟೈನಬಲ್ ಟ್ರಾನ್ಸ್&zwnj;ಪೋರ್ಟೇಶನ್ ಲ್ಯಾಬ್' (IST Lab) ಮುಖ್ಯಸ್ಥ ಪ್ರೊ. ಆಶಿಶ್ ವರ್ಮಾ ಮತ್ತು ಅವರ ತಂಡ ನಡೆಸಿರುವ ಸಂಚಾರ ಪ್ರಭಾವ ಅಧ್ಯಯನದ ಪ್ರಕಾರ, ಈ ಸುರಂಗ ಮಾರ್ಗದಿಂದ ದೊರೆಯುವ ಉಪಶಮನವು 2031 ರ ವೇಳೆಗೆ ಕ್ಷೀಣಿಸಲು ಪ್ರಾರಂಭವಾಗಲಿದ್ದು, 2041 ರ ವೇಳೆಗೆ ಸಂಚಾರ ದಟ್ಟಣೆಯು ಅತ್ಯಂತ ಭೀಕರ ಮಟ್ಟಕ್ಕೆ ತಲುಪಲಿದೆ.&lt;/p&gt;&lt;h2&gt;&lt;strong&gt;ಮೆಟ್ರೋಗಿಂತ 6 ಪಟ್ಟು ದುಬಾರಿ!: ಹಣಕಾಸಿನ ಸೌಲಭ್ಯದ ಪ್ರಶ್ನೆ&lt;/strong&gt;&lt;/h2&gt;&lt;p&gt;ವರದಿಯು ಈ ಯೋಜನೆಯ ಆರ್ಥಿಕ ಸಮರ್ಥನೀಯತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸುರಂಗ ಮಾರ್ಗ ನಿರ್ಮಾಣ ವೆಚ್ಚವನ್ನು ಪ್ರಯಾಣಿಕರ ಸಾಮರ್ಥ್ಯಕ್ಕೆ ಹೋಲಿಸಿ ನೋಡಿದರೆ, ಇದು ಭೂಗತ ಮೆಟ್ರೋ (Underground Metro) ಯೋಜನೆಗಿಂತ ಸುಮಾರು 6 ಪಟ್ಟು ಹೆಚ್ಚು ದುಬಾರಿಯಾಗಲಿದೆ. ಸುರಂಗ ರಸ್ತೆಗೆ ಪ್ರತಿ ಪ್ರಯಾಣಿಕನಿಗೆ ₹5.23 ವೆಚ್ಚವಾದರೆ, ಅದೇ ಮಾರ್ಗದಲ್ಲಿ ಭೂಗತ ಮೆಟ್ರೋ ಯೋಜನೆಗೆ ತಗುಲುವ ವೆಚ್ಚ ಕೇವಲ ₹0.86 ರೂಪಾಯಿ ಮಾತ್ರ. ಗರಿಷ್ಠ ಸಂಚಾರದ ಅವಧಿಯಲ್ಲಿ ಪ್ರತಿ ಗಂಟೆಗೆ, ಪ್ರತಿ ದಿಕ್ಕಿನ ಪ್ರಯಾಣಿಕರ ಸಾಮರ್ಥ್ಯದ ಆಧಾರದ ಮೇಲೆ ಸುರಂಗ ರಸ್ತೆಗೆ ₹13.74 ಲಕ್ಷ ತಗುಲಿದರೆ, ಮೆಟ್ರೋ ಯೋಜನೆಗೆ ₹2.26 ಲಕ್ಷ ವೆಚ್ಚವಾಗುತ್ತದೆ.&lt;/p&gt;&lt;h2&gt;&lt;strong&gt;ದಟ್ಟಣೆ ತಗ್ಗಲ್ಲ, ಬದಲಿಗೆ ಹೊಸ ಚೋಕ್ ಪಾಯಿಂಟ್ ಸೃಷ್ಟಿ!&lt;/strong&gt;&lt;/h2&gt;&lt;p&gt;ಹೆಬ್ಬಾಳ ಫ್ಲೈಓವರ್ ಜಂಕ್ಷನ್&zwnj;ನಿಂದ ವೆಟರ್ನರಿ ಕಾಲೇಜಿನವರೆಗೆ ನಿರ್ಮಿಸಲು ಉದ್ದೇಶಿಸಿರುವ 2.22 ಕಿಮೀ ಉದ್ದದ ಈ 'ಕಟ್ ಅಂಡ್ ಕವರ್' ಸುರಂಗ ಮಾರ್ಗವು ಕೇವಲ ಸ್ಥಳೀಯ ಮಟ್ಟದಲ್ಲಿ ತಾತ್ಕಾಲಿಕ ಪರಿಹಾರ ನೀಡಲಿದೆಯೇ ಹೊರತು, ಸುರಂಗದ ಪ್ರವೇಶ (Entry) ಮತ್ತು ನಿರ್ಗಮನ (Exit) ದ್ವಾರಗಳಲ್ಲಿ ಸಂಚಾರ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಸಂಚಾರ ದಟ್ಟಣೆಯು ವೆಟರ್ನರಿ ಕಾಲೇಜು ಮತ್ತು ಎಸ್ಟೀಮ್ ಮಾಲ್ ಬಳಿಯ ಹೊಸ ಚೋಕ್ ಪಾಯಿಂಟ್&zwnj;ಗಳಿಗೆ ಸ್ಥಳಾಂತರಗೊಳ್ಳಲಿದೆ.&lt;/p&gt;&lt;p&gt;ವಾಹನಗಳ ಸಾಲು ಮೇಕ್ರಿ ಸರ್ಕಲ್ ಹಾಗೂ ಬೆಂಗಳೂರು ನಗರದ ಕಡೆಗೆ ತೆರಳುವ ಸುರಂಗದ ನಿರ್ಗಮನ ದ್ವಾರದವರೆಗೆ ಬೆಳೆದು, ಅಂತಿಮವಾಗಿ ಸುರಂಗದ ಒಳಗೂ ವಿಸ್ತರಿಸುವ ಅಪಾಯವಿದೆ. 2041 ರ ವೇಳೆಗೆ ಹೆಬ್ಬಾಳ ಜಂಕ್ಷನ್&zwnj;ನಲ್ಲಿ ಸಂಚಾರ ಪರಿಸ್ಥಿತಿಯು 'LOS-F' (ಲೆವೆಲ್ ಆಫ್ ಸರ್ವಿಸ್ ಎಫ್ - ಅತ್ಯಂತ ಕೆಟ್ಟ ಸಂಚಾರ ಸ್ಥಿತಿ) ಮಟ್ಟಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.&lt;/p&gt;&lt;h2&gt;&lt;strong&gt;ಡಿಪಿಆರ್ ಹಾಗೂ ಯೋಜನಾ ನ್ಯೂನತೆಗಳ ಮೇಲಿನ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಈಗಾಗಲೇ ಜಂಕ್ಷನ್&zwnj;ನಲ್ಲಿ ಪ್ರಾಥಮಿಕ ಕಾಮಗಾರಿಗಳನ್ನು ಆರಂಭಿಸಿದೆ. ಇನ್ನೊಂದೆಡೆ, ಹೆಬ್ಬಾಳ ಕೆರೆಯ 3.5 ಎಕರೆ ಜಾಗವನ್ನು ಈ ಯೋಜನೆಗೆ ಬಳಸಿಕೊಳ್ಳುವುದನ್ನು ವಿರೋಧಿಸಿ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆಯೇ ಐಐಎಸ್&zwnj;ಸಿ ವರದಿಯು ಯೋಜನೆಯ ಮೂಲ ವಿವರವಾದ ಯೋಜನಾ ವರದಿ (DPR) ಯಲ್ಲಿರುವ ತಪ್ಪು ಕಲ್ಪನೆಗಳನ್ನು ಬೊಟ್ಟು ಮಾಡಿದೆ. ಮೂಲಭೂತ ಸಂಚಾರ ದಟ್ಟಣೆಯನ್ನು ಹೆಚ್ಚಿಸಿ ತೋರಿಸಿರುವುದು ಹಾಗೂ ಶೇ. 50 ರಿಂದ ಶೇ. 80 ರಷ್ಟು ಟ್ರಾಫಿಕ್ ಬೇರೆಡೆಗೆ ಡೈವರ್ಟ್ ಆಗುತ್ತದೆ ಎಂದು ಅಂದಾಜಿಸಿರುವುದು ವಾಸ್ತವಕ್ಕೆ ದೂರವಾಗಿದೆ. ಎಸ್ಟೀಮ್ ಮಾಲ್ ನಿರ್ಗಮನದ ಬಳಿ ಇರುವ 60 ಮೀಟರ್ ಕಡಿದಾದ ತಿರುವು ಅಪಾಯಕಾರಿಯಾಗಿದೆ. ಸುರಂಗವು ಹೆಬ್ಬಾಳ ಕೆರೆಯ ತಗ್ಗು ಪ್ರದೇಶದಲ್ಲಿ ಬರುವುದರಿಂದ ಪ್ರವಾಹ (Flooding) ಉಂಟಾಗುವ ಭೀತಿಯಿದೆ. ಸಂಶೋಧಕರು ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಮ್ಮ ಮೆಟ್ರೋದಂತಹ 'ಮಾಸ್ ರ&zwj;್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್' (MRTS) ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಕಟ್ಟುನಿಟ್ಟಿನ ಶಿಫಾರಸು ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ವರದಿಯ ಪ್ರಮುಖ ಅಂಶಗಳು&lt;/strong&gt;&lt;/h2&gt;&lt;ul&gt; &lt;li&gt;2031 ರ ವೇಳೆಗೆ ಹೆಬ್ಬಾಳ ಜಂಕ್ಷನ್&zwnj;ನಲ್ಲಿ ಸುರಂಗ ಮಾರ್ಗದ ಪ್ರಯೋಜನ ಕ್ಷೀಣಿಸಲಿದೆ.&lt;/li&gt; &lt;li&gt;2041 ರ ವೇಳೆಗೆ ಸಂಚಾರ ದಟ್ಟಣೆ ಅತ್ಯಂತ ತೀವ್ರ ಮಟ್ಟಕ್ಕೆ ತಲುಪಲಿದೆ.&lt;/li&gt; &lt;li&gt;ಭೂಗತ ಮೆಟ್ರೋಗೆ ಹೋಲಿಸಿದರೆ ಸುರಂಗ ರಸ್ತೆಗೆ ಪ್ರತಿ ಪ್ರಯಾಣಿಕನಿಗೆ 6 ಪಟ್ಟು ಹೆಚ್ಚು ವೆಚ್ಚ.&lt;/li&gt; &lt;li&gt;ವೆಟರ್ನರಿ ಕಾಲೇಜು ಮತ್ತು ಎಸ್ಟೀಮ್ ಮಾಲ್ ಬಳಿ ಹೊಸ ಟ್ರಾಫಿಕ್ ಚೋಕ್ ಪಾಯಿಂಟ್&zwnj;ಗಳು ನಿರ್ಮಾಣ.&lt;/li&gt; &lt;li&gt;ಮೇಕ್ರಿ ಸರ್ಕಲ್ ಹಾಗೂ ಸುರಂಗದ ಒಳಗಿನವರೆಗೂ ವಿಸ್ತರಿಸಲಿರುವ ವಾಹನಗಳ ದೀರ್ಘ ಸಾಲು.&lt;/li&gt; &lt;li&gt;ಸುರಂಗ ರಸ್ತೆಯ ಪ್ರತಿ ಪ್ರಯಾಣಿಕನ ವೆಚ್ಚ ₹5.23; ಭೂಗತ ಮೆಟ್ರೋ ವೆಚ್ಚ ಕೇವಲ ₹0.86.&lt;/li&gt;&lt;/ul&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hebbal-short-tunnel-project-iisc-study-traffic-congestion-bengaluru-san/articleshow-mbvmrr6"/>
        </item>
        <item>
            <title><![CDATA[ನಮ್ಮ ಮೆಟ್ರೋದಲ್ಲಿ ಸಿಂಪಲ್‌ ಆಗಿ ಪ್ರಯಾಣ ಮಾಡಿದ ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌]]></title>
            <link>https://kannada.asianetnews.com/bengaluru-urban/javagal-srinath-namma-metro-travel-simple-lifestyle-viral-photo-san/articleshow-rm9lzwb</link>
            <guid isPermaLink="true">https://kannada.asianetnews.com/bengaluru-urban/javagal-srinath-namma-metro-travel-simple-lifestyle-viral-photo-san/articleshow-rm9lzwb</guid>
            <pubDate>Fri, 28 Aug 2026 09:32:19 +0530</pubDate>
            <description><![CDATA[ಟೀಮ್ ಇಂಡಿಯಾ ಮಾಜಿ ವೇಗಿ ಜಾವಗಲ್&zwnj; ಶ್ರೀನಾಥ್&zwnj; ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಸಾಮಾನ್ಯರಂತೆ ಪ್ರಯಾಣಿಸುತ್ತಿರುವ ಫೋಟೋ ವೈರಲ್ ಆಗಿದೆ. ಈ ಹಿಂದೆ ಮೈಸೂರು ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ಸರಳವಾಗಿ ಕಾಣಿಸಿಕೊಂಡಿದ್ದ ಅವರ ನಡೆಗೆ ಅಭಿಮಾನಿಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m138e0ekanvmewvk7r36ktj1,imgname-javagal-srinath-in-metro-1787889648082.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.28): &lt;/strong&gt;ಟೀಮ್&zwnj; ಇಂಡಿಯಾ ಮಾಜಿ ವೇಗದ ಬೌಲರ್&zwnj;, ಐಸಿಸಿ ಮ್ಯಾಚ್&zwnj; ರೆಫರಿ ಹಾಗೂ ಕನ್ನಡಿಗ ಜಾವಗಲ್&zwnj; ಶ್ರೀನಾಥ್&zwnj; ಅವರ ಸರಳತೆ ಮತ್ತೊಮ್ಮೆ ಸೋಶಿಯಲ್&zwnj; ಮೀಡಿಯಾದಲ್ಲಿ ಕನ್ನಡಿಗರ ಹೃದಯ ಗೆದ್ದಿದೆ. 90ರ ದಶಕದಲ್ಲಿ ತಮ್ಮ ಮಾರಕ ವೇಗದ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್&zwnj;ಗಳಿಗೆ ನಡುಕ ಹುಟ್ಟಿಸುತ್ತಿದ್ದ ಶ್ರೀನಾಥ್&zwnj;, ಮೈದಾನದಿಂದ ಹೊರಗೆ ಅತ್ಯಂತ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಇತ್ತೀಚೆಗೆ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟ್ರ್ಯಾಲಿ ಬ್ಯಾಗ್ ಹಿಡಿದು ನಿಂತುಕೊಂಡು ಪ್ರಯಾಣಿಸುತ್ತಿರುವ ಅವರ ಫೋಟೋವೊಂದು ವೈರಲ್ ಆಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಯಾವುದೇ ಅಹಂ ಇಲ್ಲದೆ, ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಅವರ ಈ ಸರಳ ಶೈಲಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದೆ.&lt;/p&gt;&lt;p&gt;ಇದೇ ಮಾದರಿಯ ಸರಳತೆಯ ಪ್ರಸಂಗವೊಂದು ಈ ಹಿಂದೆಯೂ ಸುದ್ದಿಯಾಗಿತ್ತು. ಮೈಸೂರು ರೈಲ್ವೆ ಸ್ಟೇಷನ್&zwnj;ನಲ್ಲಿ ಬ್ಯಾಗ್ ಬೆನ್ನಿಗೇರಿಸಿಕೊಂಡು ರೈಲಿಗಾಗಿ ಕಾಯುತ್ತಿದ್ದ ಶ್ರೀನಾಥ್ ಅವರ ಫೋಟೋವನ್ನು ಲಿಂಕ್ಡ್&zwnj;ಇನ್&zwnj;ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದರು. ಯಾವುದೇ ಬಿಲ್ಡಪ್ ಇಲ್ಲದೆ ಒಬ್ಬ ಸಾಮಾನ್ಯ ನಾಗರಿಕನಂತೆ ಜೀವಿಸುವ ಶ್ರೀನಾಥ್ ಅವರ ಈ ನಡವಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.&lt;/p&gt;&lt;p&gt;ಬೆಂಗಳೂರು ಮೆಟ್ರೋದಲ್ಲಿ ನೀಲಿ ಜೀನ್ಸ್&zwnj; ಹಾಗೂ ಆಕಾಶ ಬಣ್ಣದ ಶರ್ಟ್&zwnj; ಧರಿಸಿದ್ದ ಜಾವಗಲ್&zwnj; ಶ್ರೀನಾಥ್&zwnj; ಟ್ರಾಲಿ ಹಿಡಿದು ನಿಂತಿದ್ದರು. ಕಿವಿಗೆ ಇಯರ್&zwnj;ಬಡ್ಸ್&zwnj; ಹಾಕಿಕೊಂಡು ನಿಂತಿದ್ದರು. ಬೆಂಗಳೂರಿನ ಜಯನಗರದಲ್ಲಿ ವಾಸವಾಗಿರುವ ಸರಳವಾಗಿ ಇರುವುದರಲ್ಲೇ ಖುಷಿ ಕಾಣುತ್ತಾರೆ. ಆದರೆ, ಈ ಫೋಟೋ ಯಾವಾಗ ತೆಗೆದಿದ್ದು ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಟ್ಟಾರೆ ಇತ್ತೀಚಿನ ದಿನದಲ್ಲಿ ತೆಗೆದಿರುವ ಫೋಟೋ ಎನ್ನುವುದಂತೂ ಜಾವಗಲ್&zwnj; ಶ್ರೀನಾಥ್&zwnj; ಅವರನ್ನು ನೋಡಿದರೆ ಗೊತ್ತಾಗುತ್ತದೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/javagal-srinath-namma-metro-travel-simple-lifestyle-viral-photo-san/articleshow-rm9lzwb"/>
        </item>
        <item>
            <title><![CDATA[ಕನ್ನಡಿಗರ ಕುಡಿಯುವ ಕಾವೇರಿ ನೀರು ಕಿತ್ತುಕೊಂಡು, ರೈತರ ಬೆಳೆಗಳಿಗೆ ನೀರು ಹರಿಸುತ್ತಿರುವ ತಮಿಳುನಾಡು ಸರ್ಕಾರ!]]></title>
            <link>https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn</link>
            <guid isPermaLink="true">https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn</guid>
            <pubDate>Thu, 27 Aug 2026 10:26:47 +0530</pubDate>
            <description><![CDATA[&lt;p&gt;ತೀವ್ರ ಬರಗಾಲದ ನಡುವೆಯೂ ಕರ್ನಾಟಕದಿಂದ ಪಡೆದ ಕಾವೇರಿ ನೀರನ್ನು ತಮಿಳುನಾಡು ತನ್ನ ರೈತರ ಬೆಳೆಗಳಿಗೆ ಹರಿಸಲು ಮುಂದಾಗಿದೆ. ಕನ್ನಡಿಗರ ಕುಡಿಯುವ ನೀರಿಗೆ ಸಂಕಷ್ಟ ಎದುರಾಗಿದ್ದರೂ, ಮೆಟ್ಟೂರು ಜಲಾಶಯದಿಂದ ನೀರು ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwyfmchxjdyw6jc67r64c7db,imgname-screenshot-2026-07-07-194927-1783434457660.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚೆನ್ನೈ (ಆ.27): ತೀ&lt;/strong&gt;ವ್ರ ಬರಗಾಲದಿಂದ ತತ್ತರಿಸುತ್ತಿರುವ ಕರ್ನಾಟಕದ ಜನರಿಗೆ ಕುಡಿಯಲು ನೀರಿಲ್ಲವೆಂದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸಮಿತಿಯಲ್ಲಿ ತಮಗೆ ನೀರು ಬೇಕೇಬೇಕು ಎಂದು ಪಟ್ಟು ಬಿಡದೆ ನೀರು ಬಿಡುಗಡೆ ಮಾಡಿಸಿಕೊಂಡ ತಮಿಳುನಾಡು ಸರ್ಕಾರ, ಇದೀಗ ತನ್ನ ರೈತರಿಗೆ ಡ್ಯಾಂನಿಂದ ಭರಪೂರ ನೀರು ಹರಿಸಲು ಮುಂದಾಗಿದೆ.&lt;/p&gt;&lt;p&gt;ಹೌದು, ಕನ್ನಡಿಗರ ಕುಡಿಯುವ ನೀರನ್ನು ಕಿತ್ತುಕೊಂಡ ತಮಿಳುನಾಡು ಸರ್ಕಾರ, ಮೆಟ್ಟೂರು ಜಲಾಶಯದಿಂದ ಕಾವೇರಿ ನದಿಪಾತ್ರದ ಜಿಲ್ಲೆಗಳ ರೈತರಿಗೆ ಬೆಳೆಗಳನ್ನು ಬೆಳೆಯುವುದಕ್ಕೆ ನೀರು ಹರಿಸಲು ಮುಂದಾಗಿದೆ. ಇನ್ನು ತಮಿಳುನಾಡು ಕಾವೇರಿ ನದಿಪಾತ್ರದ ಜನರ ಜೀವನಾಡಿ ಎಂದೇ ಪರಿಗಣಿಸಲ್ಪಟ್ಟಿರುವ ಮೆಟ್ಟೂರು ಜಲಾಶಯದಿಂದ ಸೆ.1ರಿಂದ ಮುಂದಿನ 45 ದಿನಗಳ ಅವಧಿಗೆ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಬುಧವಾರ ತಿಳಿಸಿದೆ.&lt;/p&gt;&lt;h2&gt;&lt;strong&gt;ಕಾವೇರಿಯ ತವರಿನ ಮಕ್ಕಳಿಗೆ ಅನ್ಯಾಯ&lt;/strong&gt;&lt;/h2&gt;&lt;p&gt;ಕಾವೇರಿ ನದಿಯ ಉಗಮ ಸ್ಥಾನವಾಗಿರುವ ಕನ್ನಡಿಗರ ತವರು ಕರ್ನಾಟಕ ಸರ್ಕಾರ ಈ ಬಾರಿ ಮಳೆಯ ಕೊರತೆ ಕಾರಣ ರೈತರಿಗೆ ನೀರು ಬಿಡದಿರಲು ನಿರ್ಧರಿಸಿದೆ. ಜೊತೆಗೆ, ಕರ್ನಾಟಕದ ಕಾವೇರಿ ನದಿ ಪಾತ್ರಗಳ ರೈತರಿಗೆ ಭತ್ತ ಹಾಗೂ ಕಬ್ಬು ಬೆಳೆಗಳನ್ನು ಹೊರತುಪಡಿಸಿ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವಂತೆ ಸೂಚನೆಯನ್ನು ನೀಡಿದೆ. ಇಂತಹ ಹೊತ್ತಿನಲ್ಲೇ ಕರ್ನಾಟಕದಿಂದ ಕಸಿದ ನೀರನ್ನು ತನ್ನ ರೈತರಿಗೆ ಹರಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ.&lt;/p&gt;&lt;h2&gt;&lt;strong&gt;ಜಲಾಶಯದ ತೂಬುಗಳನ್ನು ತೆರೆದು ನೀರು&lt;/strong&gt;&lt;/h2&gt;&lt;p&gt;ಸೇಲಂ ಜಿಲ್ಲೆಯ ಮೆಟ್ಟೂರಿನಲ್ಲಿರುವ ಸ್ಟ್ಯಾನ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಿದ್ದ ಕಾರಣ, ವಾಡಿಕೆಯಂತೆ ಜೂ.12ರಂದು ನೀರು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನೀರು ಬಿಡುಗಡೆ ಮಾಡುವಂತೆ ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಒತ್ತಾಯಿಸುತ್ತಿದ್ದವು. ಅದರ ಬೆನ್ನಲ್ಲೇ, ಸಿಎಂ ವಿಜಯ್ ಸೆ.1ರಂದು ಅಧಿಕೃತವಾಗಿ ಜಲಾಶಯದ ತೂಬುಗಳನ್ನು ತೆರೆದು ನೀರು ಬಿಡಲಿದ್ದಾರೆ&rsquo; ಎಂದು ತಮಿಳುನಾಡು ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವ ಎನ್. ಆನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;'ಕರ್ನಾಟಕದ ಜಲಾಶಯಗಳಿಂದ ಅಗತ್ಯ ನೀರು ಹರಿಯದ ಕಾರಣ ಹಾಗೂ ಕನಿಷ್ಠ 10 ಟಿಎಂಸಿ ಡೆಡ್ ಸ್ಟೋರೇಜ್&zwnj; ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದರಿಂದ, ನದೀಪಾತ್ರದ ಪ್ರದೇಶಕ್ಕೆ ಸತತವಾಗಿ ನೀರಾವರಿ ನೀರು ಪೂರೈಸಲು ಸಾಧ್ಯವಾಗಿರಲಿಲ್ಲ. ಆದರೂ ಅಗತ್ಯ ಕುಡಿಯುವ ನೀರಿನ ಪೂರೈಕೆಯನ್ನು ಕಾಯ್ದುಕೊಂಡಿದ್ದೆವು' ಎಂದು ಕರ್ನಾಟಕದ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಕನ್ನಡಿಗರಿಗೆ ಸಂತಸದ ಸುದ್ದಿ: ಕೆಆರ್&zwnj;ಎಸ್ ಒಳಹರಿವು 13,758 ಕ್ಯುಸೆಕ್&zwnj;ಗೆ ಏರಿಕೆ&lt;/strong&gt;&lt;/h2&gt;&lt;p&gt;ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ 13,758 ಸಾವಿರ ಕ್ಯುಸೆಕ್&zwnj; ನೀರು ಹರಿದು ಬರುತ್ತಿದೆ. ಕಳೆದ ಎರಡು ದಿನಗಳಿಂದ ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ನೀರಿನ ಮಟ್ಟ 109.15 (ಗರಿಷ್ಠ 124.80)ಅಡಿಗೆ ಏರಿಕೆಯಾಗಿದೆ. 30.875 ಟಿಎಂಸಿ ನೀರು ಸದ್ಯ ಸಂಗ್ರಹವಾಗಿದೆ. ಡ್ಯಾನಿಂದ 4,513 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ. ಆದರೆ, ಪುನಃ ತಮಿಳುನಾಡು ಸರ್ಕಾರ ಈ ನೀರನ್ನೂ ಕೂಡ ತಮಗೆ ಬೇಕೆಂದು ಬಿಡಿಸಿಕೊಂಡಲ್ಲಿ ಕರ್ನಾಟಕದ ರೈತರು ಪುನಃ ಸಂಕಷ್ಟಕ್ಕೆ ಸಿಲುಕಲಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-cauvery-dispute-tamil-nadu-mettur-dam-water-release-crops-krs-dam-inflow/articleshow-szi0fnn"/>
        </item>
        <item>
            <title><![CDATA[ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ವಿರುದ್ಧ ಸಿಡಿದೆದ್ದ ಉದ್ಯಮಿ  ಕಿರಣ್ ಮಜುಂದಾರ್-ಶಾ!]]></title>
            <link>https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s</link>
            <guid isPermaLink="true">https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s</guid>
            <pubDate>Thu, 27 Aug 2026 20:36:59 +0530</pubDate>
            <description><![CDATA[ಬೆಂಗಳೂರಿನ ಆನೇಕಲ್ ಮತ್ತು ಹುಸ್ಕೂರು-ಸರ್ಜಾಪುರ ರಸ್ತೆಗಳ ದುಸ್ಥಿತಿಯ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಮತ್ತು ಶಾಸಕ ಬಿ. ಶಿವಣ್ಣ ನಡುವೆ ತೀವ್ರ ವಾಕ್ಸಮರ ನಡೆದಿದೆ. ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಕಿರಣ್ ಹೇಳಿದರೆ, ಮೂಲಸೌಕರ್ಯಕ್ಕೆ ಸಿಎಸ್&zwnj;ಆರ್ ನಿಧಿ ಬಳಸಲಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m11w21vbycs8tv0kz93dj2dr,imgname-mla-b-shivanna-kiran-mazumdar-shaw-1787843118954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬೆಂಗಳೂರಿನ ಹೊರವಲಯದ ಪ್ರಮುಖ ಕೈಗಾರಿಕಾ ಸಮೂಹವಾದ ಆನೇಕಲ್ ಹಾಗೂ ಹುಸ್ಕೂರು-ಸರ್ಜಾಪುರ ಸಂಪರ್ಕ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಬಗ್ಗೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಹಾಗೂ ಆನೇಕಲ್ ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ನಡುವೆ ವಾಕ್ಸಮರ ತೀವ್ರಗೊಂಡಿದೆ.&lt;/p&gt;&lt;h2&gt;&quot;ನನ್ನನ್ನು ಕೋಟ್ಯಾಧಿಪತಿ ಎಂದು ನಿಂದಿಸಬೇಡಿ!&quot;&lt;/h2&gt;&lt;p&gt;ಆನೇಕಲ್ ಪ್ರದೇಶದ ಹಾನಿಗೊಳಗಾದ ಮೂಲಸೌಕರ್ಯದ ಬಗ್ಗೆ ಎಕ್ಸ್&zwnj;ನಲ್ಲಿ ಧ್ವನಿ ಎತ್ತಿದ್ದಕ್ಕೆ ಶಾಸಕ ಶಿವಣ್ಣ ನೀಡಿದ ಹೇಳಿಕೆಗೆ ಕಿರಣ್ ಮಜುಂದಾರ್-ಶಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ನನ್ನನ್ನು ಕೇವಲ ಕೋಟ್ಯಾಧಿಪತಿ ಎಂದು ನಿಂದಿಸಬೇಡಿ. ನಾನು ಧ್ವನಿ ಇಲ್ಲದ ಮತ್ತು ಈ ದಿನನಿತ್ಯದ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಪರವಾಗಿ ಮಾತನಾಡುತ್ತಿದ್ದೇನೆ. ಹುಸ್ಕೂರು ಮತ್ತು ಸರ್ಜಾಪುರ ರಸ್ತೆಯ ನಡುವಿನ ಹಾದಿ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಮತ್ತು ಆರೋಪ&lt;/h2&gt;&lt;p&gt;ಮೂಲಸೌಕರ್ಯಗಳ ನಿರ್ಲಕ್ಷ್ಯದ ಬಗ್ಗೆ ಆನೇಕಲ್ ಶಾಸಕ ಶಿವಣ್ಣ ಅವರಿಗೆ ಸಾರ್ವಜನಿಕರು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಸಾರ್ವಜನಿಕರಿಗೆ ಪ್ರಯೋಜನವಾಗದ ಬೇರೆ ಕಾರ್ಯಗಳಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಕಿರಣ್ ಮಜುಂದಾರ್ ಆರೋಪಿಸಿದ್ದರು. ಪ್ರತಿದಿನ ಸಾವಿರಾರು ಬಿಎಂಟಿಸಿ ಬಸ್&zwnj;ಗಳು, ಶಾಲಾ ವಾಹನಗಳು ಹಾಗೂ ಕಾರುಗಳು ಸಂಚರಿಸುವ ಈ ರಸ್ತೆಗಳು ಮಾರಕ ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.&lt;/p&gt;&lt;h2&gt;ಶಾಸಕ ಶಿವಣ್ಣ ನೀಡಿದ ಪ್ರತಿಕ್ರಿಯೆ:&lt;/h2&gt;&lt;p&gt;ಕಿರಣ್ ಮಜುಂದಾರ್ ಅವರ ಟೀಕೆಗೆ ತಿರುಗೇಟು ನೀಡಿದ್ದ ಶಾಸಕ ಬಿ. ಶಿವಣ್ಣ, ಅವರು ಸಾವಿರಾರು ಕೋಟಿ ಗಳಿಸುತ್ತಾರೆ. ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಮೂಲಸೌಕರ್ಯ ಸುಧಾರಣೆಗೆ ನೀಡಲಿ. ನಾನು CSR ಸಹಾಯ ಕೇಳಿ ಹಲವು ಬಾರಿ ಅವರ ಬಳಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.&lt;/p&gt;&lt;p&gt;ಸರ್ಕಾರದಿಂದ ಬರುವ ಅನುದಾನದ ಕೊರತೆಯ ಬಗ್ಗೆ ಮಾತನಾಡಿದ ಶಾಸಕರು, ಸರ್ಕಾರದಿಂದ ಎಷ್ಟು ಅನುದಾನ ಸಿಗಲು ಸಾಧ್ಯ? ನಾವು ಡಾಂಬರು ಹಾಕುತ್ತೇವೆ, ಆದರೆ ಮಳೆಗೆ ರಸ್ತೆ ಮತ್ತೆ ಕೊಚ್ಚಿಹೋಗುತ್ತದೆ. ಹಾಗಾಗಿ ಸಿಎಸ್&zwnj;ಆರ್ ನಿಧಿ ನೀಡುವುದು ಅವರ ಕರ್ತವ್ಯ ಎಂದು ಸಮರ್ಥಿಸಿಕೊಂಡಿದ್ದರು.&lt;/p&gt;&lt;p&gt;ಇದಕ್ಕೆ ಸ್ಪಷ್ಟನೆ ನೀಡಿದ ಮಜುಂದಾರ್-ಶಾ, ತಾವು ಕೇವಲ ಉದ್ಯಮಿಯಾಗಿ ಅಲ್ಲದೆ ಸಾರ್ವಜನಿಕರ ಧ್ವನಿಯಾಗಿ ಈ ವಿಷಯ ಎತ್ತುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸುರಿಯುತ್ತಿರುವ ಮಧ್ಯಂತರ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳು ಮತ್ತು ಬಿಬಿಎಂಪಿ/ಸ್ಥಳೀಯಾಡಳಿತದ ವೈಫಲ್ಯದ ವಿರುದ್ಧ ಬೆಂಗಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ರಾಜಕೀಯ ವಾಕ್ಸಮರ ಮುನ್ನೆಲೆಗೆ ಬಂದಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s"/>
        </item>
        <item>
            <title><![CDATA[₹1.8 ಕೋಟಿಯ ಮನೆ ಮಾರಿ ಬೈಕ್ ಖರೀದಿಸಿದ ಸ್ಟಾರ್ಟ್‌ಅಪ್ ಉದ್ಯಮಿ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!]]></title>
            <link>https://kannada.asianetnews.com/business/startup-founder-sells-1-8-crore-mumbai-home-to-buy-his-dream-ducati-bike/articleshow-x5h8cqv</link>
            <guid isPermaLink="true">https://kannada.asianetnews.com/business/startup-founder-sells-1-8-crore-mumbai-home-to-buy-his-dream-ducati-bike/articleshow-x5h8cqv</guid>
            <pubDate>Thu, 27 Aug 2026 15:17:43 +0530</pubDate>
            <description><![CDATA[&lt;p&gt;ಡುಕಾನ್ ಸಹ-ಸಂಸ್ಥಾಪಕ ಸುಭಾಷ್ ಚೌಧರಿ ₹1.8 ಕೋಟಿಗೆ ಖರೀದಿಸಿದ್ದ ಮುಂಬೈ ಮನೆಯನ್ನು ಮಾರಾಟ ಮಾಡಿ Ducati XDiavel ಖರೀದಿಸಿದ್ದಾರೆ. EMI, ಸ್ಟಾರ್ಟಪ್ ಒತ್ತಡ ಮತ್ತು ಭವಿಷ್ಯಕ್ಕಾಗಿ ಬದುಕುವ ಮನೋಭಾವದಿಂದ ಹೊರಬಂದು, ವರ್ತಮಾನದಲ್ಲೂ ಜೀವನವನ್ನು ಅನುಭವಿಸಬೇಕು ಎಂಬ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10yr3qhtzdd4d3gtztjfs2x,imgname-startup-founder-sells--1.8-crore-mumbai-home-to-buy-his-dream-ducati--1--1787812384497.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;₹1.8 ಕೋಟಿ ಮನೆ ಮಾರಾಟ&hellip; ಕನಸಿನ ಡುಕಾಟಿ ಖರೀದಿ!&lt;/strong&gt;&lt;/h2&gt;&lt;p&gt;ಮುಂಬೈನಲ್ಲಿ ₹1.8 ಕೋಟಿಗೆ ಖರೀದಿಸಿದ್ದ ಮನೆಯನ್ನು ಮಾರಾಟ ಮಾಡಿ ದುಬಾರಿ ಡುಕಾಟಿ ಬೈಕ್ ಖರೀದಿಸಿದ ಸ್ಟಾರ್ಟಪ್ ಸಂಸ್ಥಾಪಕರೊಬ್ಬರ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಐಷಾರಾಮಿ ಖರೀದಿ ಅಲ್ಲ, &lsquo;ಭವಿಷ್ಯಕ್ಕಾಗಿ ಬದುಕುತ್ತಾ ವರ್ತಮಾನವನ್ನು ಕಳೆದುಕೊಳ್ಳಬಾರದು&rsquo; ಎಂಬ ತಮ್ಮ ಜೀವನದೃಷ್ಟಿಯ ಭಾಗ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಡೂಕಾನ್&zwnj;ನ ಸಹ-ಸಂಸ್ಥಾಪಕ ಹಾಗೂ CTO ಸುಭಾಷ್ ಚೌಧರಿ ಅವರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;h3&gt;ಮನೆ ಇತ್ತು, ಆದರೆ ಜೀವನ ಬೆಂಗಳೂರಿನಲ್ಲಿತ್ತು&lt;/h3&gt;&lt;p&gt;2018ರಲ್ಲಿ ಚೌಧರಿ ಮುಂಬೈನಲ್ಲಿ ₹1.8 ಕೋಟಿ ಮೌಲ್ಯದ ಮನೆ ಖರೀದಿಸಿದ್ದರು. ಬಳಿಕ 2020ರಲ್ಲಿ ಡೂಕಾನ್ ಆರಂಭಿಸಿದ ನಂತರ ಬೆಂಗಳೂರಿಗೆ ಸ್ಥಳಾಂತರಗೊಂಡರು. ಮನೆ ಮುಂಬೈನಲ್ಲೇ ಉಳಿದರೂ, ಅದರ EMI ಮಾತ್ರ ಅವರೊಂದಿಗೆ ಮುಂದುವರಿಯಿತು.&lt;/p&gt;&lt;p&gt;ತಾವು ಹೆಚ್ಚಾಗಿ ಬಳಸದೇ ಇದ್ದ ಆಸ್ತಿಗಾಗಿ ತಿಂಗಳಿಗೆ ₹1 ಲಕ್ಷಕ್ಕೂ ಹೆಚ್ಚು ಪಾವತಿಸುತ್ತಿದ್ದೆ ಎಂದು ಅವರು ಹೇಳಿದ್ದಾರೆ. ಈ ಹಣದ ಬಹುಪಾಲು ಬಡ್ಡಿಗೆ ಹೋಗುತ್ತಿತ್ತು.&lt;/p&gt;&lt;h3&gt;&lsquo;ಭವಿಷ್ಯಕ್ಕಾಗಿ ಹೂಡಿಕೆ&rsquo; ಎಂಬ ಭ್ರಮೆ&lt;/h3&gt;&lt;p&gt;ಆಸ್ತಿಯನ್ನು ಹೂಡಿಕೆಯೆಂದು ಪರಿಗಣಿಸಿ ಮುಂದುವರಿದಿದ್ದರೂ, ಅದು ತಮ್ಮ ವರ್ತಮಾನದ ಜೀವನಕ್ಕೆ ಯಾವುದೇ ಸಂತೋಷ ನೀಡುತ್ತಿಲ್ಲ ಎಂಬ ಅರಿವು ಚೌಧರಿಗೆ ಮೂಡಿತು. ಸ್ಟಾರ್ಟಪ್&zwnj;ನ ಒತ್ತಡ, ನಿರಂತರ ಕೆಲಸ ಮತ್ತು ಭವಿಷ್ಯದ ಚಿಂತನೆಯ ನಡುವೆ ತಮಗಾಗಿ ಬದುಕುವ ಸಮಯವೇ ಕಳೆದುಹೋಗುತ್ತಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;ಕೊನೆಗೆ ಕನಸಿನ Ducati XDiavel&lt;/h3&gt;&lt;p&gt;ಈ ಆಲೋಚನೆಯ ಬಳಿಕ ಅವರು ಮನೆಯನ್ನು ಮಾರಾಟ ಮಾಡಿ Ducati XDiavel ಖರೀದಿಸಿದರು. ಶಕ್ತಿಶಾಲಿ ಎಂಜಿನ್, ಬೈಕ್&zwnj;ನ ಧ್ವನಿ ಮತ್ತು ರಾತ್ರಿ ಬೆಂಗಳೂರಿನ ರಸ್ತೆಗಳ ಮೇಲೆ ಸವಾರಿ&mdash;ಇವೆಲ್ಲವೂ ಅವರಿಗೆ ಮಾನಸಿಕ ನೆಮ್ಮದಿ ನೀಡುತ್ತವೆ ಎಂದು ಚೌಧರಿ ವಿವರಿಸಿದ್ದಾರೆ.&lt;/p&gt;&lt;h3&gt;60ರ ವಯಸ್ಸಿನ ಪ್ರಶ್ನೆ ಬದಲಿಸಿದ ನಿರ್ಧಾರ&lt;/h3&gt;&lt;p&gt;ಒಬ್ಬ ವಯಸ್ಸಾದ MotoGP ಅಭಿಮಾನಿ ತಮ್ಮ ಬೈಕ್&zwnj;ನ ಥ್ರೊಟಲ್ ಅನುಭವಿಸಲು ಕೇಳಿದ ಘಟನೆ ಚೌಧರಿಯನ್ನು ಆಳವಾಗಿ ಯೋಚಿಸುವಂತೆ ಮಾಡಿತು. &ldquo;60ರ ವಯಸ್ಸಿನಲ್ಲಿ ನನ್ನ ಬಳಿ ಹಣ ಇರಬಹುದು; ಆದರೆ ಆಗ ಇದನ್ನು ಅನುಭವಿಸಲು ಸಾಧ್ಯವಾಗುತ್ತದೆಯೇ?&rdquo; ಎಂಬ ಪ್ರಶ್ನೆ ಅವರ ನಿರ್ಧಾರಕ್ಕೆ ಪ್ರಮುಖ ಕಾರಣವಾಯಿತು.&lt;/p&gt;&lt;h3&gt;&lsquo;ವರ್ತಮಾನದಲ್ಲಿ ಬದುಕಿ&rsquo;&lt;/h3&gt;&lt;p&gt;ಚೌಧರಿಯ ಸಂದೇಶ ಸರಳ: ಭವಿಷ್ಯ ಕಟ್ಟುವುದು ಮುಖ್ಯ, ಆದರೆ ಅದಕ್ಕಾಗಿ ಇಂದಿನ ಜೀವನವನ್ನೇ ಸಂಪೂರ್ಣವಾಗಿ ತ್ಯಜಿಸಬಾರದು. ಕನಸುಗಳನ್ನು ಸದಾ ಮುಂದೂಡುತ್ತಲೇ ಹೋದರೆ, ಅವುಗಳನ್ನು ಅನುಭವಿಸುವ ಅವಕಾಶವೇ ಕಳೆದುಹೋಗಬಹುದು ಎಂಬುದನ್ನು ಅವರ ಕಥೆ ನೆನಪಿಸುತ್ತದೆ.&lt;/p&gt;&lt;p&gt;I sold my house to buy a Ducati.Yes. That Dukaan founder/CTO sold his house for a f*cking Ducati.Let me tell you about yesterday first.An old man walked up to me at a signal. Turned out he&rsquo;d followed MotoGP his whole life. Rattled off riders, their bikes, championships,&hellip; pic.twitter.com/1FkMkb9Nuc&lt;/p&gt;&lt;p&gt;&mdash; Subhash Choudhary (@subhashchy) August 26, 2026&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Chandrashekar GS</dc:creator>
            <atom:link href="https://kannada.asianetnews.com/business/startup-founder-sells-1-8-crore-mumbai-home-to-buy-his-dream-ducati-bike/articleshow-x5h8cqv"/>
        </item>
        <item>
            <title><![CDATA[ಬೆಂಗಳೂರು ಮೆಜೆಸ್ಟಿಕ್ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಗರ್ಭಿಣಿ ಪೊಲೀಸ್ ಮೇಲೆ ಹಲ್ಲೆಗೈದ ತಮಿಳುನಾಡು ಪ್ರಯಾಣಿಕ!]]></title>
            <link>https://kannada.asianetnews.com/bengaluru-urban/bengaluru-majestic-ksr-railway-station-police-pregnant-woman-constable-shilpa-attacked-by-drunk-passenger/articleshow-xmiif8z</link>
            <guid isPermaLink="true">https://kannada.asianetnews.com/bengaluru-urban/bengaluru-majestic-ksr-railway-station-police-pregnant-woman-constable-shilpa-attacked-by-drunk-passenger/articleshow-xmiif8z</guid>
            <pubDate>Thu, 27 Aug 2026 12:13:24 +0530</pubDate>
            <description><![CDATA[&lt;p&gt;ಬೆಂಗಳೂರಿನ KSR ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ, ಗಜೇಂದ್ರ ಎಂಬ ಪ್ರಯಾಣಿಕನು 2 ತಿಂಗಳ ಗರ್ಭಿಣಿ ಕಾನ್&zwnj;ಸ್ಟೇಬಲ್ ಶಿಲ್ಪಾ ಅವರ ಮೇಲೆ ಕಬ್ಬಿಣದ ರಾಡ್&zwnj;ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಶಿಲ್ಪಾ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m10z7g6qr99aednma2ez66r6,imgname-bengaluru-ksr-railway-station-police-1787812888791.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.27): ರಾ&lt;/strong&gt;ಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್&zwnj;ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ 2 ತಿಂಗಳ ಗರ್ಭಿಣಿ ಮಹಿಳಾ ಪೊಲೀಸ್ ಕಾನ್&zwnj;ಸ್ಟೇಬಲ್ ಮೇಲೆ ಪ್ರಯಾಣಿಕನೊಬ್ಬ ಕಬ್ಬಿಣದ ರಾಡ್&zwnj;ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕಾನ್&zwnj;ಸ್ಟೇಬಲ್ ಶಿಲ್ಪಾ ಅವರಿಗೆ ಬರೋಬ್ಬರಿ 23 ಹೊಲಿಗೆಗಳು ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;p&gt;ಇನ್ನು ಈ ಘಟನೆ ಸಂಬಂಧ ಹಲ್ಲೆ ನಡೆಸಿದ ಚೆನ್ನೈ ಮೂಲದ ಆರೋಪಿ ಗಜೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೆಳಗಿನ ಜಾವ 3 ಗಂಟೆಗೆ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ನಿನ್ನೆ ಬೆಳಗಿನ ಜಾವ ಸುಮಾರು 3 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಆರೋಪಿ ಗಜೇಂದ್ರ ರೈಲ್ವೆ ನಿಲ್ದಾಣದಲ್ಲಿ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದನು. ಈ ಬಗ್ಗೆ ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದನು. ಆ ಸಮಯದಲ್ಲಿ ಠಾಣೆಯಲ್ಲಿ ಕಾನ್&zwnj;ಸ್ಟೇಬಲ್ ಶಿಲ್ಪಾ ಕರ್ತವ್ಯದಲ್ಲಿದ್ದರು. ತೀವ್ರವಾಗಿ ಮದ್ಯ ಸೇವಿಸಿ ತೂರಾಡುತ್ತಿದ್ದ ಆರೋಪಿ ಗಜೇಂದ್ರ, ಶಿಲ್ಪಾ ಅವರನ್ನು ಎಬ್ಬಿಸಿ ತಕ್ಷಣ ದೂರು ಸ್ವೀಕರಿಸುವಂತೆ ಪಟ್ಟು ಹಿಡಿದಿದ್ದಾನೆ. ಆ ವೇಳೆ ಠಾಣೆಯಲ್ಲಿ ಇನ್ಯಾರೂ ಅಧಿಕಾರಿಗಳಿಲ್ಲದ ಕಾರಣ ಮತ್ತು ಆರೋಪಿ ಸಂಪೂರ್ಣ ಕುಡಿದ ಮತ್ತಿನಲ್ಲಿದ್ದಿದ್ದರಿಂದ 'ಬೆಳಗ್ಗೆ ಬಂದು ದೂರು ನೀಡಿ' ಎಂದು ಶಿಲ್ಪಾ ತಿಳಿಸಿದ್ದಾರೆ. ಇದರಿಂದ ಕೆರಳಿದ ಆರೋಪಿ, ಠಾಣೆಯಲ್ಲೇ ಇದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಶಿಲ್ಪಾ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ.&lt;/p&gt;&lt;h2&gt;&lt;strong&gt;ತಲೆಗೆ 23 ಹೊಲಿಗೆ: ಪ್ರಾಣಾಪಾಯದಿಂದ ಪಾರು&lt;/strong&gt;&lt;/h2&gt;&lt;p&gt;ರಾಡ್&zwnj;ನಿಂದ ತೀವ್ರ ಹಲ್ಲೆಗೊಳಗಾದ ಶಿಲ್ಪಾ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗಾಯದ ತೀವ್ರತೆಗೆ ವೈದ್ಯರು 23 ಹೊಲಿಗೆಗಳನ್ನು (Stitches) ಹಾಕಿದ್ದು, ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಠಾಣಾಧಿಕಾರಿಗಳ ವಿರುದ್ಧ ಕಾನ್&zwnj;ಸ್ಟೇಬಲ್ ಸೋದರ ಗಂಭೀರ ಆರೋಪ!&lt;/strong&gt;&lt;/h2&gt;&lt;p&gt;ಈ ದುರ್ಘಟನೆಯ ಬೆನ್ನಲ್ಲೇ ರೈಲ್ವೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವಿರುದ್ಧ ಗಾಯಾಳು ಶಿಲ್ಪಾ ಅವರ ಸಹೋದರ ಕೃಷ್ಣ ನಾಯಕ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ನನ್ನ ತಂಗಿ ಶಿಲ್ಪಾ 2 ತಿಂಗಳ ಗರ್ಭಿಣಿ. ಗರ್ಭಿಣಿಯಾಗಿರುವ ಕಾರಣ ಆಕೆಗೆ ಹಗಲು ಪಾಳಿಯ (Day Shift) ಕರ್ತವ್ಯ ನೀಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಆಕೆಗೆ ರಾತ್ರಿ ವೇಳೆ ಸೆಂಟ್ರಿ ಡ್ಯೂಟಿ ಹಾಕಿದ್ದಾರೆ. ಈ ದುರ್ಘಟನೆಗೆ ಪಿಎಸ್&zwnj;ಐ ನಟರಾಜ್ ಹಾಗೂ ಸರ್ಕಲ್ ಇನ್&zwnj;ಸ್ಪೆಕ್ಟರ್ ಕಾಂತರಾಜು ಅವರೇ ನೇರ ಹೊಣೆ' ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;'ಅಧಿಕಾರಿಗಳು ತಮ್ಮ ಆಪ್ತ ಸಿಬ್ಬಂದಿಗೆ ಮಾತ್ರ ಹಗಲು ಪಾಳಿ ನೀಡುತ್ತಾರೆ. ಉಳಿದ ಸಿಬ್ಬಂದಿಗೆ ಮಾನಸಿಕ ಕಿರುಕುಳ ಹಾಗೂ ಟಾರ್ಚರ್ ನೀಡುತ್ತಿದ್ದಾರೆ. 'ಆರಕ್ಷಕ' ಎಂದು ಬೋರ್ಡ್ ಹಾಕಿಕೊಳ್ಳುವ ಪೊಲೀಸ್ ಠಾಣೆಯಲ್ಲೇ ಕರ್ತವ್ಯದಲ್ಲಿರುವ ಮಹಿಳಾ ಸಿಬ್ಬಂದಿಗೆ ರಕ್ಷಣೆ ಇಲ್ಲದಂತಾಗಿದೆ' ಎಂದು ಕೃಷ್ಣ ನಾಯಕ್ ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಆರೋಪಿ ಗಜೇಂದ್ರನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೊಂದೆಡೆ ಗರ್ಭಿಣಿ ಸಿಬ್ಬಂದಿಗೆ ನೈಟ್ ಡ್ಯೂಟಿ ನಿಯೋಜನೆ ಮತ್ತು ಠಾಣೆಯಲ್ಲಿ ಭದ್ರತಾ ಲೋಪದ ಬಗ್ಗೆಯೂ ಇಲಾಖಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-majestic-ksr-railway-station-police-pregnant-woman-constable-shilpa-attacked-by-drunk-passenger/articleshow-xmiif8z"/>
        </item>
    </channel>
</rss>
