<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 19 Jul 2026 12:50:21 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ']]></title>
            <link>https://kannada.asianetnews.com/gallery/bengaluru-urban/chennammas-last-intimate-moments-with-her-husband-h-d-deve-gowda-3-days-before-she-was-admitted-to-the-hospital-gkn-l9q2vgz</link>
            <guid isPermaLink="true">https://kannada.asianetnews.com/gallery/bengaluru-urban/chennammas-last-intimate-moments-with-her-husband-h-d-deve-gowda-3-days-before-she-was-admitted-to-the-hospital-gkn-l9q2vgz</guid>
            <pubDate>Sun, 19 Jul 2026 12:47:25 +0530</pubDate>
            <description><![CDATA[&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwjyap9jc2wydk20tyq71nk,imgname-hd-devegowda-and-chennamma--2--1784444562121.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...&lt;/p&gt;&lt;img&gt;&lt;p&gt;ಬದುಕಿನ ದಾರಿಯಲ್ಲಿ ಏಳು ದಶಕಗಳ ಕಾಲ ಹೆಜ್ಜೆಗೆ ಹೆಜ್ಜೆಯಾಗಿ ನಡೆದವರು.. ಸುಖದಲ್ಲೂ, ಕಷ್ಟದಲ್ಲೂ ನೆರಳಿನಂತೆ ಪತಿಯ ಬೆನ್ನಿಗೆ ನಿಂತವರು.. ಕನ್ನಡ ನಾಡಿನ 'ದೊಡ್ಡಗೌಡರ' ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ ಅವರು ಇಂದು ನೆನಪು ಮಾತ್ರ. ಆದರೆ, ಅವರು ದೈಹಿಕವಾಗಿ ಮರೆಯಾಗುವ ಕೇವಲ ಮೂರು ದಿನಗಳ ಮುನ್ನ ನಡೆದ ಆ ಒಂದು ದೃಶ್ಯ ಮಾತ್ರ ಈಗ ಕೋಟ್ಯಂತರ ಕನ್ನಡಿಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ.&lt;/p&gt;&lt;img&gt;&lt;p&gt;ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಕೇವಲ ಮೂರು ದಿನಗಳ ಮೊದಲು ಚಿತ್ರೀಕರಿಸಲಾದ ಈ ವಿಡಿಯೋ, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಥವರ ಹೃದಯವನ್ನೂ ಚುಚ್ಚುವಂತಿದೆ. ಎದುರು ಬದರು ವೀಲ್ ಚೇರ್ ಮೇಲೆ ಕುಳಿತಿರುವ ಆ ಹಿರಿಯ ಜೀವಗಳು, ಪರಸ್ಪರ ಕಣ್ಣಲ್ಲೇ ಮಾತನಾಡಿಕೊಳ್ಳುತ್ತಿರುವ ದೃಶ್ಯ &quot;ಪ್ರೀತಿ ಎಂದರೆ ಹೀಗಿರಬೇಕು&quot; ಎಂಬುದಕ್ಕೆ ಸಾಕ್ಷಿಯಂತಿದೆ.&lt;/p&gt;&lt;img&gt;&lt;p&gt;ವಿಡಿಯೋದಲ್ಲಿ ಚೆನ್ನಮ್ಮ ಅವರು ಸ್ವಲ್ಪ ಆಹಾರ ಸೇವಿಸುತ್ತಿರುತ್ತಾರೆ. ಎದುರಿಗೆ ಕುಳಿತಿರುವ ದೇವೇಗೌಡರು, ಮುಗುಳ್ನಗುತ್ತಲೇ ತಮ್ಮ ಪ್ರೀತಿಯ ಪತ್ನಿಯ ಬಲಗೈಯನ್ನು ಹಿಡಿದು ಸವರುತ್ತಾರೆ. &quot;ಏನೂ ಆಗಲ್ಲ, ಧೈರ್ಯವಾಗಿರು&quot; ಎಂದು ಕೈತಟ್ಟುತ್ತಾ ಅಭಯ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದ ಗೌಡರು, ಪತ್ನಿಯ ಭುಜದ ಮೇಲೆ ಮೆಲ್ಲಗೆ ಕೈಹಾಕಿ ಸಮಾಧಾನಪಡಿಸುತ್ತಾರೆ. ಏಳು ದಶಕಗಳ ಕಾಲ ತನ್ನನ್ನು ಕಾಯ್ದ ತಾಯಿಗೆ, ಆಪತ್ಕಾಲದಲ್ಲಿ ಮಗನಂತೆ ಬೆಂಬಲವಾಗಿ ನಿಂತ ಗೌಡರ ಆ ಪ್ರೀತಿ ಮೈ ಜುಂ ಎನ್ನುವಂತಿದೆ.&lt;/p&gt;&lt;img&gt;&lt;p&gt;ಚೆನ್ನಮ್ಮನವರಿಗೆ ಹಣ್ಣು ತಿನ್ನಲು ಸ್ವಲ್ಪ ಕಷ್ಟವಾದಾಗ, ದೇವೇಗೌಡರು ತಾವೇ ಕೈಯಿಂದ ಸಹಾಯ ಮಾಡುತ್ತಾರೆ. ಆದರೆ, ಅಷ್ಟೊಂದು ಅಶಕ್ತತೆಯಲ್ಲೂ ಚೆನ್ನಮ್ಮನವರಿಗೆ ಪತಿಯ ಮೇಲಿನ ಕಾಳಜಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ದೇವೇಗೌಡರ ಪಂಚೆಯ ಮೇಲೆ ಬಿದ್ದಿದ್ದ ಸಣ್ಣ ದೂಳು ಅಥವಾ ಆಹಾರದ ಕಣವನ್ನು ಕಂಡ ತಕ್ಷಣ, ತಮ್ಮ ನಡುಗುವ ಕೈಗಳಿಂದಲೇ ಅದನ್ನು ಸವರುತ್ತಾ ಕ್ಲೀನ್ ಮಾಡುತ್ತಾರೆ. ಜೀವನದುದ್ದಕ್ಕೂ ಪತಿಯನ್ನು ಅಚ್ಚುಕಟ್ಟಾಗಿ ನೋಡಿಕೊಂಡ ಆ ತಾಯಿಯ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವೇ?&lt;/p&gt;&lt;img&gt;&lt;p&gt;ಈ ಎಲ್ಲದಕ್ಕಿಂತ ಹೆಚ್ಚಾಗಿ ನೋಡುಗರ ಎದೆಯಲ್ಲಿ ಭಾರವಾಗುವುದು ವಿಡಿಯೋದ ಕೊನೆಯ ಕ್ಷಣ. ತಾವು ಕುಳಿತಿದ್ದ ವೀಲ್ ಚೇರ್&zwnj;ನಿಂದಲೇ ಬಾಗಿ, ಪತಿ ದೇವೇಗೌಡರ ಕಾಲುಗಳನ್ನ ಮುಟ್ಟಿ ಚೆನ್ನಮ್ಮ ನಮಸ್ಕರಿಸುತ್ತಾರೆ. ಬಹುಶಃ ಆ ತಾಯಿಗೆ ತಾನು ಮರೆಯಾಗುತ್ತೇನೆ ಎಂಬ ಸಣ್ಣ ಸುಳಿವು ಸಿಕ್ಕಿತ್ತೇನೋ? ಅಥವಾ ಮುಂದಿನ ಜನ್ಮದಲ್ಲೂ ನೀವೇ ಪತಿಯಾಗಿ ಸಿಗಲಿ ಎಂಬ ಮೌನ ಪ್ರಾರ್ಥನೆಯೋ? ಆ ಪಾದ ನಮಸ್ಕಾರದ ದೃಶ್ಯ ಈಗ ಎಂಥವರ ಕಣ್ಣಲ್ಲೂ ನೀರು ತರಿಸುತ್ತಿದೆ.&lt;/p&gt;&lt;img&gt;&lt;p&gt;ಚೆನ್ನಮ್ಮ ಅವರು ಈಗ ಇಲ್ಲದಿರಬಹುದು. ಆದರೆ, ವೀಲ್ ಚೇರ್ ಮೇಲೆ ಕುಳಿತು ಒಬ್ಬರಿಗೊಬ್ಬರು ಸಾಂತ್ವನ ನೀಡಿದ, ಪರಸ್ಪರರ ಕೈಹಿಡಿದು ಬೆಚ್ಚಗೆ ಸವರಿದ ಈ ದೃಶ್ಯಗಳು ಮಾತ್ರ ಇತಿಹಾಸದಲ್ಲಿ ಉಳಿಯಲಿವೆ. ರಾಜಕೀಯದ ಏಳು-ಬೀಳುಗಳ ನಡುವೆ, ಪ್ರೀತಿ ಮತ್ತು ನಿಷ್ಠೆಯ ಸುಂದರ ಕಾವ್ಯದಂತೆ ಬದುಕಿದ ಈ ದಂಪತಿಗಳಿಗೆ ಇಡೀ ನಾಡು ಇಂದು ಕಣ್ಣೀರಿನ ವಿದಾಯ ಕೋರುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/bengaluru-urban/chennammas-last-intimate-moments-with-her-husband-h-d-deve-gowda-3-days-before-she-was-admitted-to-the-hospital-gkn-l9q2vgz"/>
        </item>
        <item>
            <title><![CDATA[ಬೆಂಗಳೂರು ಹವಾಮಾನ vs EMI... ಕಾಮಿಡಿಯನ್ ಕೊಟ್ಟ ಪಂಚ್... ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್!]]></title>
            <link>https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6</link>
            <guid isPermaLink="true">https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6</guid>
            <pubDate>Sun, 19 Jul 2026 11:39:39 +0530</pubDate>
            <description><![CDATA[&lt;p&gt;ಬೆಂಗಳೂರಿನ ತಂಪಾದ ವಾತಾವರಣ ಮತ್ತು ಜನರ ದೈನಂದಿನ ಕೆಲಸದ ಉತ್ಪಾದಕತೆಯನ್ನು ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಶುರುವಾಗಿದೆ. ಕಾಮೆಡಿಯನ್ ಶುಭಂ ಪೂಜಾರಿ ಅವರು ದೆಹಲಿ ಹಾಗೂ ಬೆಂಗಳೂರಿನ ಹವಾಮಾನವನ್ನು ವಿಡಂಬನಾತ್ಮಕವಾಗಿ ಹೋಲಿಸಿದ್ದು, ಇಲ್ಲಿನ ವೆದರ್ ಕಂಬಳಿ ಹೊದ್ದು ಮಲಗಲು ಮಾತ್ರ ಪ್ರೇರೇಪಿಸುತ್ತದೆ ಎಂದಿದ್ದಾರೆ. ಇದಕ್ಕೆ ನೆಟ್ಟಿಗರು ಇಎಂಐಗಳೇ ನಮ್ಮನ್ನು ಕೆಲಸಕ್ಕೆ ಓಡಿಸುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwfcfxc5tmnx3hhe62cj6zw,imgname-video-shared-on-instagram-by-comedian-shubham-pujari--1--1784440831916.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಿಲಿಕಾನ್ ಸಿಟಿಯ ಆಹ್ಲಾದಕರ ಹವಾಮಾನದ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಆದರೆ, ಇದೇ ತಂಪಾದ ವಾತಾವರಣವು ಜನರ ಕೆಲಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಶುಭಂ ಪೂಜಾರಿ ತಮ್ಮ ಇನ್&zwnj;ಸ್ಟಾಗ್ರಾಮ್ ರೀಲ್ಸ್&zwnj;ನಲ್ಲಿ ಅತ್ಯಂತ ಹಾಸ್ಯಭರಿತವಾಗಿ ವಿವರಿಸಿದ್ದಾರೆ. ಅವರ ಈ ವಿಡಿಯೋ ಸದ್ಯ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ವಿಶ್ರಾಂತಿಯ ತಾಣದಂತೆ ಬೆಂಗಳೂರು:&lt;/strong&gt;&lt;/p&gt;&lt;p&gt;ಶುಭಂ ಪೂಜಾರಿ ಅವರ ಪ್ರಕಾರ, ಬೆಂಗಳೂರಿನ ತಂಗಾಳಿ ಮತ್ತು ಮೋಡ ಕವಿದ ವಾತಾವರಣವು ಕೆಲಸ ಮಾಡಲು ಬಿಡುವುದೇ ಇಲ್ಲ. &quot;ಇಲ್ಲಿಗೆ ಬಂದ ತಕ್ಷಣ ನನಗಂತೂ ಕಂಬಳಿ ಹೊದ್ದು, ಫ್ಯಾನ್ ವೇಗವನ್ನು ಮಧ್ಯಮದಲ್ಲಿಟ್ಟುಕೊಂಡು, ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮಲಗಬೇಕೆನಿಸುತ್ತದೆ. ಇದು ಐಟಿ ಹಬ್ ತರ ಕಾಣಲ್ಲ, ಬದಲಿಗೆ ನಿವೃತ್ತಿಯ ನಂತರ ವಿಶ್ರಾಂತಿ ಪಡೆಯುವ ತಾಣದಂತೆ ಭಾಸವಾಗುತ್ತದೆ&quot; ಎಂದು ಅವರು ವ್ಯಂಗ್ಯವಾಡಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರಿನಲ್ಲಿ ಕೆಲಸ ಮಾಡಲು ಇಎಂಐಗಳೇ ಪ್ರೇರಣೆ!&lt;/strong&gt;&lt;/p&gt;&lt;p&gt;ದೆಹಲಿಯ ಹವಾಮಾನಕ್ಕೆ ಹೋಲಿಸಿದ ಶುಭಂ, &quot;ದೆಹಲಿಯಲ್ಲಿ ಒಂದು ಕಪ್ ಚಹಾ ಕುಡಿದರೆ ಸಾಕು, ಮರುಕ್ಷಣವೇ ಕೆಲಸದ ಮೂಡ್ ಬರುತ್ತದೆ. ಆದರೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಕಪ್ ಚಹಾ ಕುಡಿದರೂ ಆಲಸ್ಯ ದೂರಾಗುವುದಿಲ್ಲ. ಇಂತಹ ನಿದ್ದೆ ಬರಿಸುವ ಹವಾಮಾನದಲ್ಲೂ ಬೆಂಗಳೂರಿಗರು ಪ್ರತಿದಿನ ಬೆಳಿಗ್ಗೆ ಎಚ್ಚರಗೊಂಡು ಆಫೀಸ್&zwnj;ಗೆ ಹೇಗೆ ಓಡುತ್ತಾರೆ? ಬಹುಶಃ ಇವರೆಲ್ಲರಿಗೂ ದೊಡ್ಡ ದೊಡ್ಡ ಸಾಲ ಮತ್ತು ಇಎಂಐ (EMI) ಗಳ ಭಾರ ಇರಬೇಕು. ಇಲ್ಲದಿದ್ದರೆ ಈ ವೆದರ್&zwnj;ನಲ್ಲಿ ಕೆಲಸ ಮಾಡಲು ಬೇರೆ ಯಾವುದೇ ಪ್ರೇರಣೆ ಸಿಗಲು ಸಾಧ್ಯವೇ ಇಲ್ಲ!&quot; ಎಂದು ತಮಾಷೆ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:&lt;/strong&gt;&lt;/p&gt;&lt;p&gt;ಈ ವಿಡಿಯೋಗೆ ಕಾಮೆಂಟ್ ಬಾಕ್ಸ್&zwnj;ನಲ್ಲಿ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬ ಬಳಕೆದಾರರು, &quot;ಹೌದು, ಇಲ್ಲಿನ ದಿನಚರಿ ಎಂದರೆ ಮಲಗುವುದು, ಏಳುವುದು, ಸ್ವಲ್ಪ ಕೆಲಸ ಮಾಡಿ ಮತ್ತೆ ಮಲಗುವುದು ಅಷ್ಟೇ&quot; ಎಂದಿದ್ದಾರೆ. ಮುಂಬೈಗೆ ಹೋಲಿಸಿದ ಮತ್ತೊಬ್ಬರು, ಮುಂಬೈನಲ್ಲಿರುವ ಅವ್ಯವಸ್ಥೆಯ ನಡುವೆಯೂ ಅಲ್ಲಿನ ಜನ ಹೆಚ್ಚು ಉತ್ಪಾದಕರು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನು ಕೆಲವು ಸ್ಥಳೀಯರು, &quot;ದಯವಿಟ್ಟು ಬೆಂಗಳೂರಿನ ಹವಾಮಾನವನ್ನು ವೈಭವೀಕರಿಸುವುದನ್ನು ನಿಲ್ಲಿಸಿ. ಇಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗಿದೆ, ಮಳೆ ಕೊರತೆಯಿಂದ ನೀರಿನ ಸಮಸ್ಯೆಯೂ ಎದುರಾಗುತ್ತಿದೆ&quot; ಎಂದು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shubham Pujari (@notsopujari)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Chandrashekar GS</dc:creator>
            <atom:link href="https://kannada.asianetnews.com/bengaluru-urban/this-comedians-bengaluru-weather-joke-is-too-relatable-for-every-working-professional/articleshow-xbrrqs6"/>
        </item>
        <item>
            <title><![CDATA[DK Shivakumar: ಮುಂಗಾರು ಮಳೆ ಕೊರತೆ: ಬರದ ನಾಡಿಗೆ ಸಿಎಂ ಸಿದ್ಧತೆ; ಇಂದು ಸರಣಿ ಸಭೆ]]></title>
            <link>https://kannada.asianetnews.com/state/monsoon-rain-deficit-in-karnataka-cm-dk-shivakumar-prepares-for-drought-hit-region-meeting-today-rav/articleshow-0dzqhne</link>
            <guid isPermaLink="true">https://kannada.asianetnews.com/state/monsoon-rain-deficit-in-karnataka-cm-dk-shivakumar-prepares-for-drought-hit-region-meeting-today-rav/articleshow-0dzqhne</guid>
            <pubDate>Sun, 19 Jul 2026 07:44:51 +0530</pubDate>
            <description><![CDATA[&lt;p&gt;ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್&zwnj; ತಿಳಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxjhbbc4n19mjqk19hbzy63z,imgname-dk-shivakumar--9--1784107347332.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.19): &lt;/strong&gt;ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿ ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್&zwnj; ತಿಳಿಸಿದರು.&lt;/p&gt;&lt;h2&gt;ಇಂದು ಸಿಎಂ ಮಹತ್ವದ ಸಭೆ&lt;/h2&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಪರಮೇಶ್ವರ್&zwnj;, ರಾಜ್ಯದ ಬರ ಪರಿಸ್ಥಿತಿ ಸಂಬಂಧ ಮುಖ್ಯಮಂತ್ರಿ ಅವರ ಜತೆಗೂಡಿ ಈಗಾಗಲೇ ಬೆಳಗಾವಿ ಕಂದಾಯ ವಿಭಾಗ, ಕಲಬುರಗಿ ಕಂದಾಯ ವಿಭಾಗ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಇದೀಗ ಇಡೀ ರಾಜ್ಯದ ಬರ ಪರಿಸ್ಥಿತಿ ಕುರಿತು ಚರ್ಚಿಸಿ, ಪರಿಹಾರ ಸೂಚಿಸಲು ಭಾನುವಾರ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್&zwnj; ಮೂಲಕ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಸಲಹೆ, ಸೂಚನೆ ನೀಡಲಾಗುವುದು ಎಂದರು.&lt;/p&gt;&lt;h3&gt;ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ&lt;/h3&gt;&lt;p&gt;ರಾಜ್ಯದಲ್ಲಿ ಮಳೆ ಕೊರತೆ ಕಾರಣದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದನ್ನು ತಡೆಯಲು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಲಾ 5 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರು ಪೂರೈಕೆಗಾಗಿಯೇ 329 ಕೋಟಿ ರು. ನೀಡಲಾಗಿದೆ. ಅದರೊಂದಿಗೆ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳಲ್ಲಿ ಸುಮಾರು 600 ಕೋಟಿ ರು. ಲಭ್ಯವಿದ್ದು, ಅದನ್ನು ಅಗತ್ಯ ಸಂದರ್ಭದಲ್ಲಿ ಬಳಸುವಂತೆ ಸೂಚಿಸಲಾಗಿದೆ. ಹಾಗೆಯೇ, ರಾಜ್ಯದ ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಾವು ಸುಮ್ಮನೆ ಕೂರದೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.&lt;/p&gt;&lt;p&gt;ಜೂನ್&zwnj; ತಿಂಗಳಲ್ಲಿ ಭಾರಿ ಮಳೆಯ ಕೊರತೆಯ ಬಳಿಕ ಜುಲೈನಲ್ಲಿ ಉತ್ತಮ ಮಳೆಯಾಗದೇ ಇದ್ದರೆ ರಾಜ್ಯವು 150 ವರ್ಷಗಳಲ್ಲೇ ಕಂಡುಕೇಳರಿಯದ ಭೀಕರ ಬರಕ್ಕೆ ತುತ್ತಾಗಲಿದೆ ಎಂದು ಇತ್ತೀಚೆಗೆ ಸ್ವತಃ ಕಂದಾಯ ಸಚಿವ ಪರಮೇಶ್ವರ್&zwnj; ಆತಂಕ ವ್ಯಕ್ತಪಡಿಸಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/monsoon-rain-deficit-in-karnataka-cm-dk-shivakumar-prepares-for-drought-hit-region-meeting-today-rav/articleshow-0dzqhne"/>
        </item>
        <item>
            <title><![CDATA[ಕೊಡಚಾದ್ರಿಗೆ ಬಂದಿದ್ದ ಬೆಂಗಳೂರಿನ ಯುವ ಚಾರಣಿಗ ಹೃದಯಾಘಾತದಿಂದ ಸಾವು: ಒಂದೇ ತಿಂಗಳಲ್ಲಿ ಎರಡನೇ ದುರಂತ!]]></title>
            <link>https://kannada.asianetnews.com/karnataka-districts/28-year-old-bengaluru-trekker-dies-of-sudden-heart-attack-at-kodachadri-hills-gdp/articleshow-1g6hn7u</link>
            <guid isPermaLink="true">https://kannada.asianetnews.com/karnataka-districts/28-year-old-bengaluru-trekker-dies-of-sudden-heart-attack-at-kodachadri-hills-gdp/articleshow-1g6hn7u</guid>
            <pubDate>Sat, 18 Jul 2026 13:03:14 +0530</pubDate>
            <description><![CDATA[ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕೆಂದು ಬಂದಿದ್ದ ಬೆಂಗಳೂರಿನ 28 ವರ್ಷದ ಯುವಕ ಶ್ರೀಕಾಂತ್, ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊಸನಗರದ ಸ್ನೇಹಿತರ ಮನೆಯಲ್ಲಿ ತಂಗಿದ್ದಾಗ ಈ ದುರಂತ ಸಂಭವಿಸಿದ್ದು, ತಿಂಗಳ ಅಂತರದಲ್ಲಿ ಕೊಡಚಾದ್ರಿಯಲ್ಲಿ ನಡೆದ ಎರಡನೇ ಸಾವಿನ ಘಟನೆ ಇದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxt21h8tt6hb72xbxy3kt2hf,imgname-bengaluru-youth-death-in-kodachadri-1784359732506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸನಗರ: &lt;/strong&gt;ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ತಡರಾತ್ರಿ ಸಂಭವಿಸಿದ ದಿಢೀರ್ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ಶ್ರೀಕಾಂತ್ (28) ಎಂದು ಗುರುತಿಸಲಾಗಿದೆ. ಕೊಡಚಾದ್ರಿ ಶಿಖರದ ಸೌಂದರ್ಯವನ್ನು ಸವಿಯಲು ಉತ್ಸಾಹದಿಂದ ಬಂದಿದ್ದ ಯುವಕನೊಬ್ಬ ಹೀಗೆ ಅರ್ಧದಲ್ಲೇ ಪ್ರಾಣ ಕಳೆದುಕೊಂಡಿರುವುದು ತೀವ್ರ ಬೇಸರ ಮೂಡಿಸಿದೆ.&lt;/p&gt;&lt;h2&gt;ಸ್ನೇಹಿತರ ಮನೆಯಲ್ಲಿ ತಂಗಿದ್ದಾಗ ಸಂಭವಿಸಿದ ದುರಂತ&lt;/h2&gt;&lt;p&gt;ಮೃತ ಶ್ರೀಕಾಂತ್ ಅವರು ತಮ್ಮ ಸ್ನೇಹಿತರ ತಂಡದೊಂದಿಗೆ ಜುಲೈ 17ರಂದು ಕೊಡಚಾದ್ರಿ ಶಿಖರ ವೀಕ್ಷಣೆ ಮತ್ತು ಚಾರಣದ (Trekking) ಉದ್ದೇಶದಿಂದ ಹೊಸನಗರಕ್ಕೆ ಆಗಮಿಸಿದ್ದರು. ಚಾರಣಕ್ಕೆ ತೆರಳುವ ಮುನ್ನ ಅವರು ಹೊಸನಗರ ತಾಲೂಕಿನ ಸಂಪೇಕಟ್ಟೆ ಸಮೀಪವಿರುವ ಕಟ್ಟಿನಹೊಳೆ ಗ್ರಾಮದಲ್ಲಿದ್ದ ತಮ್ಮ ಆಪ್ತ ಸ್ನೇಹಿತನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಜುಲೈ 18ರ ಮುಂಜಾನೆ ಎಲ್ಲರೂ ಒಟ್ಟಾಗಿ ಕೊಡಚಾದ್ರಿ ಶಿಖರಕ್ಕೆ ತೆರಳಿ ಚಾರಣ ಆರಂಭಿಸಬೇಕು ಎಂದು ಯೋಜಿಸಿದ್ದರು.&lt;/p&gt;&lt;p&gt;ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಜುಲೈ 17ರ ತಡರಾತ್ರಿ ಶ್ರೀಕಾಂತ್ ಅವರ ಆರೋಗ್ಯದಲ್ಲಿ ಏಕಾಏಕಿ ತೀವ್ರ ಏರುಪೇರು ಕಾಣಿಸಿಕೊಂಡಿದೆ. ಎದೆನೋವಿನಿಂದ ಬಳಲಿದ ಅವರು, ತಂಗಿದ್ದ ಮನೆಯಲ್ಲೇ ದಿಢೀರನೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಎಚ್ಚೆತ್ತ ಸ್ನೇಹಿತರು ಮತ್ತು ಸ್ಥಳೀಯರು ಅವರನ್ನು ಹೊಸನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಶ್ರೀಕಾಂತ್ ಮೃತಪಟ್ಟಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ತೀವ್ರ ಹೃದಯಾಘಾತದಿಂದಲೇ (Heart Attack) ಸಾವು ಸಂಭವಿಸಿದೆ ಎಂದು ಅಧಿಕೃತವಾಗಿ ದೃಢಪಡಿಸಿದ್ದಾರೆ.&lt;/p&gt;&lt;h2&gt;ಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಹೊಸನಗರ ತಾಲೂಕಿನ ಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಬೆಂಗಳೂರಿನಲ್ಲಿರುವ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆದಿವೆ.&lt;/p&gt;&lt;h2&gt;ಕೊಡಚಾದ್ರಿಯಲ್ಲಿ ತಿಂಗಳೊಳಗೆ ನಡೆದ ಎರಡನೇ ಸಾವು!&lt;/h2&gt;&lt;p&gt;ಕೊಡಚಾದ್ರಿ ಬೆಟ್ಟದ ಪರಿಸರದಲ್ಲಿ ಪ್ರವಾಸಿಗರು ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಚಾರಣಿಗರಲ್ಲಿ ಆತಂಕ ಮೂಡಿಸಿದೆ. ಏಕೆಂದರೆ, ಕೇವಲ ಒಂದು ತಿಂಗಳ ಅಂತರದಲ್ಲಿ ಇಲ್ಲಿ ನಡೆದಿರುವ ಎರಡನೇ ದುರಂತ ಇದಾಗಿದೆ. ಇದಕ್ಕೂ ಮುನ್ನ, ಜೂನ್ 27 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮಾಜಿ ಅಧ್ಯಕ್ಷರಾದ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ ಕೂಡ ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಬಂದಿದ್ದಾಗ ಇದೇ ರೀತಿ ಹಠಾತ್ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದರು. ಈ ಘಟನೆಯ ಮಾಸುವ ಮುನ್ನವೇ ಈಗ ಮತ್ತೊಬ್ಬ 28 ವರ್ಷದ ಬೆಂಗಳೂರಿನ ಯುವಕ ಬಲಿಯಾಗಿರುವುದು ಪ್ರವಾಸೋದ್ಯಮ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/28-year-old-bengaluru-trekker-dies-of-sudden-heart-attack-at-kodachadri-hills-gdp/articleshow-1g6hn7u"/>
        </item>
        <item>
            <title><![CDATA['ಚಿನ್ನದ ಗಂಟು ಬಿಚ್ಚಿದರೆ ರಕ್ತ ಕಾರಿಕೊಂಡು ಸಾಯ್ತೀಯ'; ಬೆಂಗಳೂರು ಮಹಿಳೆಗೆ ₹7.5 ಲಕ್ಷ ಪಂಗನಾಮ ಹಾಕಿದ ನಕಲಿ ಸ್ವಾಮಿ!]]></title>
            <link>https://kannada.asianetnews.com/karnataka-districts/bengaluru-fake-godman-fraud-case-bagalgunte-woman-cheated-of-gold-cash-sat/articleshow-1gldga1</link>
            <guid isPermaLink="true">https://kannada.asianetnews.com/karnataka-districts/bengaluru-fake-godman-fraud-case-bagalgunte-woman-cheated-of-gold-cash-sat/articleshow-1gldga1</guid>
            <pubDate>Fri, 17 Jul 2026 22:57:30 +0530</pubDate>
            <description><![CDATA[ಮಗಳ ದಾಂಪತ್ಯ ಕಲಹ ಸರಿಪಡಿಸುವ ನೆಪದಲ್ಲಿ ನಕಲಿ ಸ್ವಾಮೀಜಿಯೊಬ್ಬ ಬಾಗಲಗುಂಟೆಯ ಮಹಿಳೆಗೆ ವಂಚಿಸಿದ್ದಾನೆ. ಪೂಜೆಯ ಹೆಸರಲ್ಲಿ 43 ಗ್ರಾಂ ಚಿನ್ನ ಹಾಗೂ 1.3 ಲಕ್ಷ ರೂ. ನಗದು ದೋಚಿ, ಬದಲಿಗೆ ಹುಣಸೆಹಣ್ಣು ಇಟ್ಟು ಪರಾರಿಯಾಗಿದ್ದು, ಪೊಲೀಸರು ವಂಚಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxrhh5jkytknge5ey3nqetj6,imgname-bengaluru-fake-swamiji-gold-robbery-1784308864592.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.17): 'ಮ&lt;/strong&gt;ಗಳ ಮೇಲಿರುವ ದೋಷ ಪರಿಹರಿಸುತ್ತೇನೆ, ದಾಂಪತ್ಯ ಕಲಹ ಸರಿಪಡಿಸುತ್ತೇನೆ' ಎಂದು ನಂಬಿಸಿದ ನಕಲಿ ಸ್ವಾಮೀಜಿಯೊಬ್ಬ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ರಾಜಧಾನಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಂಚಕ ಮಹಿಳೆಯಿಂದ 43 ಗ್ರಾಂ ಚಿನ್ನಾಭರಣ ಹಾಗೂ 1.3 ಲಕ್ಷ ರೂಪಾಯಿ ನಗದು ದೋಚಿದ್ದಾನೆ.&lt;/p&gt;&lt;h2&gt;&lt;strong&gt;ಮಗಳ ದೋಷದ ಹೆಸರಲ್ಲಿ ವಂಚನೆ:&lt;/strong&gt;&lt;/h2&gt;&lt;p&gt;ಬಾಗಲಗುಂಟೆಯ ನಿವಾಸಿ ಗೀತಾ (37) ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಅವರ ಎರಡನೇ ಮಗಳ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳಿದ್ದವು. ಇದನ್ನು ತಿಳಿದ ನೆರೆಮನೆಯವರು ಶಿವಕಾಲಿ ಅಲಿಯಾಸ್ ನಿತಿನ್ ಎಂಬ ಸ್ವಾಮೀಜಿಯನ್ನು ಪರಿಚಯಿಸಿದ್ದರು. ಈತ 'ನಿಮ್ಮ ಮಗಳ ಮೇಲೆ ಪ್ರಾಣಾಪಾಯದ ಮಂತ್ರ ಮಾಡಿಸಲಾಗಿದೆ, ಇದನ್ನು ತೆಗೆಯದಿದ್ದರೆ ಅಪಾಯ ತಪ್ಪಿದ್ದಲ್ಲ' ಎಂದು ಗೀತಾ ಅವರನ್ನು ಹೆದರಿಸಿದ್ದ.&lt;/p&gt;&lt;h2&gt;&lt;strong&gt;ಪೂಜೆಯ ನೆಪದಲ್ಲಿ ದೋಚಿದ ಚಿನ್ನ-ಹಣ:&lt;/strong&gt;&lt;/h2&gt;&lt;p&gt;ಜೂನ್ 26ರಂದು ಸಂಜೆ ಪೂಜೆ ಮಾಡಲು ಗೀತಾ ಅವರ ಮನೆಗೆ ಬಂದ ನಿತಿನ್, ಮನೆಯಲ್ಲಿ ಯಾರೂ ಇರಬಾರದು ಎಂದು ಸೂಚಿಸಿದ್ದ. ನಿಂಬೆಹಣ್ಣು, ಬೂದಿ, ಮಂತ್ರಾಕ್ಷತೆ ಬಳಸಿ ಪೂಜೆ ಮಾಡುವ ನಾಟಕವಾಡಿದ ಆತ, ಮನೆಯಲ್ಲಿದ್ದ ಎಲ್ಲಾ ಚಿನ್ನ ಮತ್ತು ನಗದು ತರುವಂತೆ ಹೇಳಿದ್ದಾನೆ. ಮನೆಯ ನವೀಕರಣಕ್ಕಾಗಿ ಇಟ್ಟಿದ್ದ 1.3 ಲಕ್ಷ ರೂ. ಹಣ ಹಾಗೂ 43 ಗ್ರಾಂ ಚಿನ್ನಾಭರಣಗಳನ್ನು ಒಂದು ಬಟ್ಟೆಯಲ್ಲಿ ಗಂಟು ಕಟ್ಟುವಂತೆ ಸೂಚಿಸಿದ್ದಾನೆ. ಪೂಜೆಯ ಮಧ್ಯೆ ಗೀತಾ ಅವರ ಮೇಲೆ ವಿಭೂತಿ ಎರಚಿ, ತಲೆ ಬಗ್ಗಿಸಿ ಬೆನ್ನಿಗೆ ಹೊಡೆದಿದ್ದಾನೆ. ಇದರಿಂದ ಗೀತಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸುಮಾರು 30 ನಿಮಿಷಗಳ ನಂತರ ಎಚ್ಚರವಾದಾಗ ಸ್ವಾಮೀಜಿ ಅಲ್ಲಿಂದ ನಾಪತ್ತೆಯಾಗಿದ್ದ.&lt;/p&gt;&lt;h2&gt;&lt;strong&gt;ರಕ್ತ ಕಾರಿ ಸಾಯ್ತೀಯಾ ಎಂದು ಬೆದರಿಕೆ:&lt;/strong&gt;&lt;/h2&gt;&lt;p&gt;ಅದೇ ದಿನ ಸಂಜೆ ಗೀತಾ ಅವರು ಅರುಣೋದಯ ಆಸ್ಪತ್ರೆಯ ಬಳಿ ಸ್ವಾಮೀಜಿಯನ್ನು ಕಂಡಾಗ, ಚಿನ್ನ ಮತ್ತು ಹಣದ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಆ ವಂಚಕ, 'ಚಿನ್ನ ಮತ್ತು ಹಣ ನಿನ್ನ ಮನೆಯಲ್ಲೇ ಗಂಟು ಕಟ್ಟಿ ಇಡಲಾಗಿದೆ. ಎರಡು ದಿನದವರೆಗೂ ಅದನ್ನು ಬಿಚ್ಚಬಾರದು. ಒಂದು ವೇಳೆ ಮೊದಲೇ ಬಿಚ್ಚಿದರೆ ನೀನು ರಕ್ತ ಕಾರಿ ಸ್ಥಳದಲ್ಲೇ ಸಾಯ್ತೀಯಾ' ಎಂದು ಭಯಾನಕವಾಗಿ ಬೆದರಿಸಿದ್ದಾನೆ.&lt;/p&gt;&lt;p&gt;ಸಾವಿನ ಭೀತಿಯಿಂದ ಗೀತಾ ಎರಡು ದಿನ ಗಂಟನ್ನು ಮುಟ್ಟಲೇ ಇಲ್ಲ. ಎರಡು ದಿನದ ನಂತರ ಆತಂಕದಿಂದಲೇ ಗಂಟು ಬಿಚ್ಚಿ ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಅದರಲ್ಲಿ ಚಿನ್ನ ಅಥವಾ ಹಣದ ಬದಲು ಕೇವಲ 'ಹುಣಸೆಹಣ್ಣು' ಇಡಲಾಗಿತ್ತು! ತಕ್ಷಣ ಆತನ ಮೊಬೈಲ್&zwnj;ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿತ್ತು. ಸದ್ಯ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ವಂಚಕ ಶಿವಕಾಲಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-fake-godman-fraud-case-bagalgunte-woman-cheated-of-gold-cash-sat/articleshow-1gldga1"/>
        </item>
        <item>
            <title><![CDATA[ನೀಟ್: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡೋವರೆಗೆ ಹೋರಾಟ ನಿಲ್ಲಿಸಲ್ಲ: ಹರಿಪ್ರಸಾದ್‌]]></title>
            <link>https://kannada.asianetnews.com/politics/kpcc-president-bk-hariprasad-says-congress-to-continue-protest-until-union-minister-dharmendra-pradhan-resigns-rav/articleshow-7gbs2ak</link>
            <guid isPermaLink="true">https://kannada.asianetnews.com/politics/kpcc-president-bk-hariprasad-says-congress-to-continue-protest-until-union-minister-dharmendra-pradhan-resigns-rav/articleshow-7gbs2ak</guid>
            <pubDate>Sun, 19 Jul 2026 06:56:54 +0530</pubDate>
            <description><![CDATA[&lt;p&gt;ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvwvzgmwcx2dhbekzy438edf,imgname-vjvj-1782306554524.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.19) &lt;/strong&gt;ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪಷ್ಟಪಡಿಸಿದರು.&lt;/p&gt;&lt;p&gt;ಕೆಪಿವೈಸಿಸಿ ರಾಜ್ಯಾಧ್ಯಕ್ಷ ಎಚ್.ಎಸ್&zwnj;.ಮಂಜುನಾಥ್ ನೇತೃತ್ವದಲ್ಲಿ ಶನಿವಾರ ನಗರದ ಭಾರತ್ ಜೋಡೋ ಸಭಾಂಗಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.&lt;/p&gt;&lt;p&gt;ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ಒಂದು ಪರೀಕ್ಷೆಯಲ್ಲೂ ಅಕ್ರಮ ಸಂಭವಿಸಲು ಬಿಡುವುದಿಲ್ಲ. ದೇಶದ ಯುವಕರ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನಮ್ಮ ಗುರಿಯಾಗಿದ್ದು, ಅದನ್ನು ಸಾಕಾರಗೊಳಿಸುತ್ತೇವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಸರ್ಕಾರದ ವೈಫಲ್ಯವಾಗಿದೆ. ಆದ್ದರಿಂದ ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕೆಂದು ಆಗ್ರಹಿಸಿದರು.&lt;/p&gt;&lt;p&gt;ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳಿಂದ ಆತಂಕಕ್ಕೊಳಗಾಗಿ ವಿದ್ಯಾರ್ಥಿಗಳು ಆತ್ಮ೧ಹತ್ಯೆ ಮಾಡಿಕೊಳ್ಳಬಾರದು, ಆತ್ಮ೧ಹತ್ಯೆ ಪರಿಹಾರವಲ್ಲ ಎಂಬ ಸಂದೇಶ ಸಾರಲು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ(ಕೆಪಿವೈಸಿಸಿ)ಯಿಂದ ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ&zwnj; ಧ್ವನಿ) ಅಭಿಯಾನದ ಅಂಗವಾಗಿ ಈ ಸಂವಾದ ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಈ ರಾಜ್ಯಗಳಿಗೇ ನೀಡಬೇಕು ಎಂದು ಒತ್ತಡ ಹೇರಿದ್ದವು. ಆದರೆ, ಕೇಂದ್ರ ಸರ್ಕಾರ ನೀಟ್ ಜಾರಿಗೊಳಿಸಿ ಪರೀಕ್ಷಾ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅದನ್ನು ಸರಿಪಡಿಸಲು ಬಹಳ ವರ್ಷಗಳೇ ಬೇಕು. ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಯಾವ ಸರ್ಕಾರ ಬೇಕೆಂದು ನೀವೇ ನಿರ್ಧರಿಸಬೇಕು. ಶಿಕ್ಷಣವು ಭವಿಷ್ಯದ ಹಾದಿಯಾಗಿದ್ದು, ಶಿಕ್ಷಣದಿಂದ ಉಜ್ವಲ ಭವಿಷ್ಯ ಸಾಧ್ಯವಿದೆ. ಶಿಕ್ಷಣದಿಂದ ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಬರುತ್ತದೆ. ಪ್ರಶ್ನಿಸುವುದರಿಂದಲೇ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.&lt;/p&gt;&lt;p&gt;ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಮಾತನಾಡಿ, ನೀಟ್&zwnj; ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಆತ್ಮ೧ಹತ್ಯೆಗೆ ಶರಣಾಗಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನೂ ನೀಡುತ್ತಿಲ್ಲ ಎಂದು ಟೀಕಿಸಿದರು.&lt;/p&gt;&lt;p&gt;ಇಂದು, ದೇಶದ ಶಿಕ್ಷಣ ವ್ಯವಸ್ಥೆ ಪಾರದರ್ಶಕ ರಹಿತವಾಗಿದ್ದು, ಅಕ್ರಮಗಳ ಜಾಲ ತಿಳಿದಿದ್ದರೂ ಕೇಂದ್ರ ಸರ್ಕಾರ ಜಾಣ ಮೌನ ವಹಿಸಿದೆ. ಅಕ್ರಮವಿಲ್ಲದೆ ಒಂದೇ ಒಂದು ಪರೀಕ್ಷೆ ನಡೆಸಲು ಸಾಧ್ಯವಿಲ್ಲದವರು, ವಿಕಸಿತ ಭಾರತದ ಕುರಿತು ಮಾತನಾಡುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿರುವುದು ಕೇಂದ್ರ ಸರ್ಕಾರಕ್ಕೆ ನಾಚಿಕೆಯ ವಿಷಯ ಎಂದು ಕಿಡಿಕಾರಿದರು. ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಮಾತನಾಡಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/kpcc-president-bk-hariprasad-says-congress-to-continue-protest-until-union-minister-dharmendra-pradhan-resigns-rav/articleshow-7gbs2ak"/>
        </item>
        <item>
            <title><![CDATA[ಬೆಂಗಳೂರಲ್ಲೊಂದು ವಿಚಿತ್ರ ಘಟನೆ: ತನ್ನದಲ್ಲದ ತಪ್ಪಿಗೆ ಆಸ್ಪತ್ರೆ ಸೇರಿದ ಮಹಿಳೆ! ಕಾರಿನ ಡ್ಯಾಶ್ ಕ್ಯಾಮೆರಾ ಶಾಕಿಂಗ್ ದೃಶ್ಯ ಸೆರೆ!]]></title>
            <link>https://kannada.asianetnews.com/gallery/state/woman-seriously-injured-after-car-drivers-rope-snags-her-neck-near-tin-factory-bengaluru-7hgh5e4</link>
            <guid isPermaLink="true">https://kannada.asianetnews.com/gallery/state/woman-seriously-injured-after-car-drivers-rope-snags-her-neck-near-tin-factory-bengaluru-7hgh5e4</guid>
            <pubDate>Sat, 18 Jul 2026 12:52:55 +0530</pubDate>
            <description><![CDATA[&lt;p&gt;Tin Factory accident ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxt1k9sjsqne6axkr6cn8sbn,imgname-----------------------2026-07-18t125038.114-1784359266098.jpg" type="image/jpeg" height="390" width="690"/>
            <content:encoded><![CDATA[&lt;p&gt;Tin Factory accident ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;/p&gt;&lt;img&gt;&lt;p&gt;ತನ್ನದಲ್ಲದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರು ಆಸ್ಪತ್ರೆಗೆ ಸೇರಿದ ವಿಚಿತ್ರ ಘಟನೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಕಾರು ಚಾಲಕನ ನಿರ್ಲಕ್ಷ್ಯತನವೇ ದುರಂತಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಎಲ್ಲಿಗೆ ಪ್ರಯಾಣಕ್ಕೆ ಸಜ್ಜಾಗಿ ರಸ್ತೆ ಬದಿ ನಿಂತಿದ್ದ ಕಾರು. ಕಾರಿನ ಮೇಲೆ ಲಗ್ಗೇಜು ಇಟ್ಟು ಅದಕ್ಕೆ ಹಗ್ಗ ಬಿಗಿಯುತ್ತಿದ್ದ ಕಾರಿನ ಚಾಲಕ. ಒಂದು ಬದಿಯಿಂದ ಇನ್ನೊಂದು ಬದಿಗೆ ಲಗ್ಗೇಜ್ ಮೇಲೆ ಹಗ್ಗ ಎಸೆದಿದ್ದಾನೆ. ಆದರೆ ಇದೇ ವೇಳೆ ಇನ್ನೊಂದು ಬದಿಯ ಮುಖ್ಯರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರನಿಗೆ ಹಗ್ಗ ಬಿದ್ದಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಯುವತಿಯ ಕುತ್ತಿಗೆಗೆ ಹಗ್ಗ ಸಿಲುಕಿದೆ ಇತ್ತ ಅದೇ ವೇಳೆ ಕಾರಿನ ಚಾಲಕ ಹಗ್ಗ ಎಳೆದಿದ್ದರಿಂದ ಅತ್ತ ಬೈಕ್ ಸಹ ರನ್ನಿಂಗ್&zwnj;ನಲ್ಲಿದ್ದರಿಂದ ಯುವತಿ ರಸ್ತೆ ಮೇಲೆ ಬಿದ್ದಿದ್ದಾಳೆ. ಚಲಲಿಸುತ್ತಿದ್ದ ಬೈಕ್&zwnj;ನಿಂದ ನೆಲಕ್ಕೆ ಬಿದ್ದಿದ್ದರಿಂದ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆಸ್ಪತ್ರೆ ದಾಖಲಿಸಲಾಗಿದೆ.&lt;/p&gt;&lt;img&gt;&lt;p&gt;ಕಾರು ಚಾಲಕನ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣವಾಗಿದೆ. ಒಂದು ಬದಿಯಿಂದ ಹಗ್ಗ ಎಸೆಯುವಾಗ ಇನ್ನೊಂದು ವಾಹನ ಸವಾರರ ಮೇಲೆ ಬಿದ್ದರೆ ಅನಾಹುತವಾಗುತ್ತದೆ ಎಂಬ ಕಾಮನ್&zwnj;ಸೆನ್ಸ್ ಇಲ್ಲವಾಯಿತೇ ಕಾರು ಚಾಲಕನಿಗೆ. ಮುಖ್ಯ ರಸ್ತೆಯ ಬದಿ ನಿಂತು ಹಗ್ಗ ಕಟ್ಟಬಹುದಿತ್ತು. ಆದರೆ ಕಾರು ಚಾಲಕನ ನಿರ್ಲಕ್ಷ್ಯವೋ, ದಡ್ಡತನವೋ ಒಟ್ಟಿನಲ್ಲಿ ತಪ್ಪೇ ಮಾಡದ ಮಹಿಳೆಯೊಬ್ಬಳು ಅನ್ಯಾಯವಾಗಿ ಆಸ್ಪತ್ರೆ ಸೇರುವಂತಾಗಿದೆ. ಘಟನೆಯ ಭೀಕರ ದೃಶ್ಯ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/woman-seriously-injured-after-car-drivers-rope-snags-her-neck-near-tin-factory-bengaluru-7hgh5e4"/>
        </item>
        <item>
            <title><![CDATA[Swiggy: ಬರಿಗೈ ಫಕೀರನಾಗಿ ಬಂದು ಸ್ವಂತ ಮನೆ, ದುಬಾರಿ ಬೈಕ್ ಮಾಲೀಕನಾದ ಬೆಂಗಳೂರು ಸ್ವಿಗ್ಗಿ ಡೆಲಿವರಿ ಬಾಯ್!]]></title>
            <link>https://kannada.asianetnews.com/bengaluru-urban/bengaluru-swiggy-delivery-partner-roopchand-bar-success-story-housekeeping-to-home-owner/articleshow-bru3vwg</link>
            <guid isPermaLink="true">https://kannada.asianetnews.com/bengaluru-urban/bengaluru-swiggy-delivery-partner-roopchand-bar-success-story-housekeeping-to-home-owner/articleshow-bru3vwg</guid>
            <pubDate>Fri, 17 Jul 2026 20:42:02 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ₹2,700 ಸಂಬಳದ ಹೌಸ್&zwnj;ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕ ಬಾರ್, ಸ್ವಿಗ್ಗಿ ಡೆಲಿವರಿ ಪಾರ್ಟ್&zwnj;ನರ್ ಆಗಿ ತಮ್ಮ ಬದುಕನ್ನೇ ಬದಲಿಸಿಕೊಂಡರು. ಹತ್ತು ವರ್ಷಗಳ ಕಠಿಣ ಪರಿಶ್ರಮದಿಂದ ಸ್ವಂತ ಮನೆ, ಬೈಕ್ ಖರೀದಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ, ಇವರು ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr9vbypaeam6760sbfrexkx,imgname-bengaluru-swiggy-delivery-agent-1784300810198.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶಸ್ಸು ಎನ್ನುವುದು ಕೇವಲ ದೊಡ್ಡ ಕಂಪನಿಗಳ ಎಸಿ ರೂಮುಗಳಲ್ಲಿ ಕುಳಿತು ಕೆಲಸ ಮಾಡುವವರಿಗೆ ಮಾತ್ರ ಮೀಸಲಲ್ಲ. ಬೆವರಿನ ಹನಿಗಳನ್ನು ಸುರಿಸಿ, ಪ್ರಾಮಾಣಿಕವಾಗಿ ದುಡಿಯುವ ಶ್ರಮಜೀವಿಗಳಿಗೂ ಯಶಸ್ಸು ಒಲಿಯುತ್ತದೆ ಎಂಬುದಕ್ಕೆ ಬೆಂಗಳೂರಿನ ಸ್ವಿಗ್ಗಿ ಡೆಲಿವರಿ ಪಾರ್ಟ್&zwnj;ನರ್ ರೂಪ್&zwnj;ಚಂದ್ ಬಾರ್ (Roopchand Bar) ಅವರೇ ಸಾಕ್ಷಿ. 2,700 ರೂಪಾಯಿ ಸಂಬಳಕ್ಕೆ ಹೌಸ್&zwnj;ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕ ಇಂದು ಸ್ವಂತ ಮನೆ, ಬೈಕ್ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.&lt;/p&gt;&lt;h2&gt;&lt;strong&gt;ಭಗ್ನಗೊಂಡ 'ಸೇನೆ'ಯ ಕನಸು, ಅರಸಿ ಬಂದ ಬೆಂಗಳೂರು:&lt;/strong&gt;&lt;/h2&gt;&lt;p&gt;ಮೂಲತಃ ಕೋಲ್ಕತ್ತಾದ ಹಳ್ಳಿಯೊಂದರ ರೈತ ಕುಟುಂಬದವರಾದ ರೂಪ್&zwnj;ಚಂದ್, ಶಾಲಾ ದಿನಗಳಲ್ಲಿ ಓಟದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಪಟುವಾಗಿದ್ದರು. ಭಾರತೀಯ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು ಅವರ ದೊಡ್ಡ ಕನಸಾಗಿತ್ತು. ಆದರೆ, ಅದೃಷ್ಟ ಕೈಕೊಟ್ಟಿತು. ಸೇನೆಗೆ ಬೇಕಾದ ದೈಹಿಕ ಎತ್ತರ (Height) ಅವರಿಗಿಲ್ಲದ ಕಾರಣ ಆ ಕನಸು ಭಗ್ನವಾಯಿತು. ಬದುಕಿನ ದಾರಿ ಹುಡುಕುತ್ತಾ ಅವರು ಬೆಂಗಳೂರಿನ ರೈಲೇರಿದರು. ಅಂದು ಅವರ ಬಳಿ ಬದುಕು ಕಟ್ಟಿಕೊಳ್ಳುವ ಛಲವಿತ್ತೇ ಹೊರತು ಹಣವಿರಲಿಲ್ಲ.&lt;/p&gt;&lt;h2&gt;&lt;strong&gt;₹2,700 ಸಂಬಳದ ಕೆಲಸದಿಂದ ಮೊದಲ ತಿರುವು:&lt;/strong&gt;&lt;/h2&gt;&lt;p&gt;ಬೆಂಗಳೂರಿಗೆ ಬಂದ ಹೊಸದರಲ್ಲಿ ರೂಪ್&zwnj;ಚಂದ್ ಹೌಸ್&zwnj;ಕೀಪಿಂಗ್ (ಸ್ವಚ್ಛತಾ) ಕೆಲಸಕ್ಕೆ ಸೇರಿದರು. ಆಗ ಅವರಿಗೆ ಸಿಗುತ್ತಿದ್ದ ತಿಂಗಳ ಸಂಬಳ ಕೇವಲ 2,700 ರೂಪಾಯಿ. ಈ ಸಾಲದ ಮೊತ್ತದಲ್ಲಿ ಜೀವನ ನಡೆಸುವುದು ಅವರಿಗೆ ಸವಾಲಾಗಿತ್ತು. 2016ರಲ್ಲಿ ಸ್ನೇಹಿತನೊಬ್ಬನ ಸಲಹೆಯಂತೆ 'ಸ್ವಿಗ್ಗಿ' ಸಂಸ್ಥೆಗೆ ಡೆಲಿವರಿ ಪಾರ್ಟ್&zwnj;ನರ್ ಆಗಿ ಸೇರಿಕೊಂಡರು. ಅಂದು ಆರಂಭವಾದ ಪಯಣ ಅವರ ಬದುಕನ್ನೇ ಬದಲಿಸಿತು. ಸ್ವಿಗ್ಗಿಗೆ ಸೇರಿದ ಕೇವಲ ಮೊದಲ ವಾರದಲ್ಲೇ ಅವರು ಹಿಂದೆ ಮಾಡುತ್ತಿದ್ದ ಹೌಸ್&zwnj;ಕೀಪಿಂಗ್ ಕೆಲಸದ ಇಡೀ ತಿಂಗಳ ಸಂಬಳಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸಿದರು!&lt;/p&gt;&lt;h2&gt;&lt;strong&gt;10 ವರ್ಷಗಳ ಪ್ರಾಮಾಣಿಕ ದುಡಿಮೆ ಮತ್ತು ಸಾಧನೆ:&lt;/strong&gt;&lt;/h2&gt;&lt;p&gt;ಇಂದು ರೂಪ್&zwnj;ಚಂದ್ ಸ್ವಿಗ್ಗಿ ಸಂಸ್ಥೆಯಲ್ಲಿ 10 ವರ್ಷಗಳನ್ನು ಪೂರೈಸಿದ್ದಾರೆ. ಈ ಒಂದು ದಶಕದಲ್ಲಿ ಅವರು ಗಳಿಸಿದ್ದು ಸಾಮಾನ್ಯ ಸಾಧನೆಯಲ್ಲ. ಅವರು ತಮ್ಮ ಗ್ರಾಮದಲ್ಲಿ ಒಂದು ಸುಂದರವಾದ ಮನೆಯನ್ನು ನಿರ್ಮಿಸಿದ್ದಾರೆ. ಓಡಾಟಕ್ಕೆ ಸ್ವಂತ ಬೈಕ್ ಖರೀದಿಸಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ, ತಮ್ಮ ಮಕ್ಕಳಿಗೆ ನಗರದ ಖಾಸಗಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ್ದಾರೆ. ಸಂಸ್ಥೆಯಲ್ಲಿ 'ಸ್ಟಾರ್ ಪರ್ಫಾರ್ಮರ್' ಆಗಿ ಗುರುತಿಸಿಕೊಂಡಿರುವ ಇವರು, ಡೆಲಿವರಿ ಉದ್ಯೋಗದ ಬಗ್ಗೆ ಕೀಳರಿಮೆ ಹೊಂದಿರುವ ಯುವಕರಿಗೆ ಕಪಾಳಮೋಕ್ಷ ಮಾಡಿದಂತೆ ಸಾಧನೆ ಮಾಡಿ ತೋರಿಸಿದ್ದಾರೆ.&lt;/p&gt;&lt;h2&gt;&lt;strong&gt;ಕನ್ನಡ ಪ್ರೇಮಕ್ಕೆ ಗ್ರಾಹಕರು ಫಿದಾ:&lt;/strong&gt;&lt;/h2&gt;&lt;p&gt;ರೂಪ್&zwnj;ಚಂದ್ ಅವರ ಸಾಧನೆಯಲ್ಲಿ ಮತ್ತೊಂದು ವಿಶೇಷತೆಯಿದೆ. ಮೂಲತಃ ಬಂಗಾಳಿ ಭಾಷಿಕರಾದ ಇವರು, ಇಂದು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಹೊರ ರಾಜ್ಯದಿಂದ ಬಂದು ವರ್ಷಗಳೇ ಕಳೆದರೂ ಇಲ್ಲಿನ ಭಾಷೆ ಕಲಿಯದವರ ನಡುವೆ, ರೂಪ್&zwnj;ಚಂದ್ ಕನ್ನಡದಲ್ಲಿ ಮಾತನಾಡುತ್ತಾ ಗ್ರಾಹಕರಿಗೆ ಆಹಾರ ತಲುಪಿಸುತ್ತಾರೆ. 'ನಮ್ಮ ಕುಟುಂಬದಲ್ಲಿ ಮೂರ್ನಾಲ್ಕು ಭಾಷೆ ಕಲಿತ ಮೊದಲ ವ್ಯಕ್ತಿ ನಾನೇ' ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.&lt;/p&gt;&lt;p&gt;ಬದುಕಿನಲ್ಲಿ ಏನೂ ಇಲ್ಲದ ಸ್ಥಿತಿಯಿಂದ ಬಂದು, ಹತ್ತು ವರ್ಷಗಳ ಸತತ ಪರಿಶ್ರಮದಿಂದ ಆರ್ಥಿಕ ಸಬಲತೆ ಕಂಡುಕೊಂಡ ರೂಪ್&zwnj;ಚಂದ್ ಬಾರ್ ಅವರ ಕಥೆ, ಇಂದಿನ ಹತಾಶೆಗೊಂಡ ಯುವಜನತೆಗೆ ದೊಡ್ಡ ಸ್ಫೂರ್ತಿಯಾಗಿದೆ. ಕೆಲಸ ಯಾವುದೇ ಇರಲಿ, ನಿಷ್ಠೆ ಮತ್ತು ಶ್ರಮವಿದ್ದರೆ ಯಶಸ್ಸು ಖಚಿತ ಎಂಬುದಕ್ಕೆ ಇವರೇ ಮಾದರಿ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-swiggy-delivery-partner-roopchand-bar-success-story-housekeeping-to-home-owner/articleshow-bru3vwg"/>
        </item>
        <item>
            <title><![CDATA[ಕೋಡಿಚಿಕ್ಕನಹಳ್ಳಿ ಕೆರೆ ತನಿಖೆ: ಅಧಿಕಾರಿಗಳ ಬೇಜವಾಬ್ದಾರಿಗೆ NGT ತರಾಟೆ!]]></title>
            <link>https://kannada.asianetnews.com/bengaluru-urban/ngt-slams-bengaluru-dm-over-kodichikkanahalli-lake-encroachment-records-san/articleshow-cx36as3</link>
            <guid isPermaLink="true">https://kannada.asianetnews.com/bengaluru-urban/ngt-slams-bengaluru-dm-over-kodichikkanahalli-lake-encroachment-records-san/articleshow-cx36as3</guid>
            <pubDate>Fri, 17 Jul 2026 18:27:08 +0530</pubDate>
            <description><![CDATA[&lt;p&gt;ಕೊಡಿಚಿಕ್ಕನಹಳ್ಳಿ ಕೆರೆ ಪರಿಸರಕ್ಕೆ ಧಕ್ಕೆ ತರುತ್ತಿರುವ ರಾಜಕಾಲುವೆ ಒತ್ತುವರಿ ಮತ್ತು ಒಳಚರಂಡಿ ನೀರು ಹರಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr2ab3fn9bpby89smwp2550,imgname-kodichikkanahalli-lake-probe-1784292912239.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.17):&lt;/strong&gt; ಸಿಲಿಕಾನ್ ಸಿಟಿಯ ಕೊಡಿಚಿಕ್ಕನಹಳ್ಳಿ ಕೆರೆ ಪರಿಸರ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ರಾಜಕಾಲುವೆಗಳ ಒತ್ತುವರಿ ಮತ್ತು ಒಳಚರಂಡಿ ನೀರು ಮುಕ್ತವಾಗಿ ಹರಿಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮಡಿವಾಳ ಕೆರೆ ಸಮೀಪದ ಕೊಡಿಚಿಕ್ಕನಹಳ್ಳಿಯ ರಾಜಕಾಲುವೆಗಳ ಹಳೆಯ ಕಂದಾಯ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಬೆಂಗಳೂರು ನಗರ ಜಿಲ್ಲಾಧಿಕಾರಿ (District Magistrate) ಕಚೇರಿಗೆ ಎನ್&zwnj;ಜಿಟಿಯ ಪ್ರಧಾನ ಪೀಠವು ಅಂತಿಮ ಗಡುವು (Ultimatum) ನೀಡಿದೆ.&lt;/p&gt;&lt;p&gt;ಕೊಡಿಚಿಕ್ಕನಹಳ್ಳಿ ಕೆರೆ ವ್ಯಾಪ್ತಿಯಲ್ಲಿ ನಡೆದಿರುವ ಒತ್ತುವರಿಗಳನ್ನು ಪರಿಶೀಲಿಸಲು ರಾಜಕಾಲುವೆಗಳ ಹಳೆಯ ಕಂದಾಯ ದಾಖಲೆಗಳನ್ನು ಹಾಜರುಪಡಿಸುವಂತೆ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿಯೇ ನ್ಯಾಯಾಧಿಕರಣವು ಆದೇಶಿಸಿತ್ತು. ಆದರೆ ಈ ಆದೇಶವನ್ನು ಪಾಲಿಸದ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಎನ್&zwnj;ಜಿಟಿ, &quot;ನಮ್ಮ ಹಿಂದಿನ ಆದೇಶದಲ್ಲಿ ಜಲಮೂಲದ ವಿಸ್ತೀರ್ಣವನ್ನು ಸೂಚಿಸುವ ಹಳೆಯ ಕಂದಾಯ ದಾಖಲೆಗಳನ್ನು ಇರಿಸಲು ಮತ್ತು ಅಲ್ಲಿ ಯಾವುದೇ ಒತ್ತುವರಿ ಆಗಿದೆಯೇ ಎಂಬುದನ್ನು ಬಹಿರಂಗಪಡಿಸಲು ನಿರ್ದೇಶಿಸಲಾಗಿತ್ತು. ಆದರೆ ಪ್ರತಿವಾದಿಗಳಿಂದ ಯಾವುದೇ ಪ್ರತಿಕ್ರಿಯೆ ಸಲ್ಲಿಕೆಯಾಗಿಲ್ಲ. ಮುಂದಿನ ನಾಲ್ಕು ವಾರಗಳೊಳಗೆ ಈ ವರದಿಯನ್ನು ಸಲ್ಲಿಸಬೇಕು. ಒಂದು ವೇಳೆ ವಿಫಲವಾದರೆ, ಮುಂದಿನ ವಿಚಾರಣೆಯ ದಿನದಂದು ಜಿಲ್ಲಾಧಿಕಾರಿಗಳು ವರ್ಚುವಲ್ (Virtual) ಮೂಲಕ ನ್ಯಾಯಪೀಠದ ಮುಂದೆ ಖುದ್ದು ಹಾಜರಿರಬೇಕಾಗುತ್ತದೆ,&quot; ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಕಠಿಣ ಎಚ್ಚರಿಕೆ ನೀಡಿದೆ.&lt;/p&gt;&lt;p&gt;ಶುದ್ಧೀಕರಿಸದ ಒಳಚರಂಡಿ ನೀರನ್ನು (Sewage) ಕೊಡಿಚಿಕ್ಕನಹಳ್ಳಿ ಕೆರೆಗೆ ಬಿಡುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಸ್ಪಷ್ಟನೆ ನೀಡುವಂತೆ &lsquo;ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ&rsquo;ಗೆ (BSSC) ಹಸಿರು ಪೀಠವು ನಿರ್ದೇಶಿಸಿದೆ. ಇತ್ತೀಚೆಗೆ ಜಿಬಿಎ ಸಲ್ಲಿಸಿದ ಕೈಗೊಂಡ ಕ್ರಮಗಳ ವರದಿಯಲ್ಲಿ (Action Taken Report), ಕೆರೆಗೆ ಹೊಂದಿಕೊಂಡಿರುವ ರಾಜಕಾಲುವೆಯ ಎರಡೂ ಬದಿಗಳಲ್ಲಿ ತಡೆಗೋಡೆಗಳನ್ನು (Retaining Walls) ನಿರ್ಮಿಸಿರುವುದನ್ನು ಸಮರ್ಥಿಸಿಕೊಂಡಿತ್ತು. ಆದರೆ, &quot;ಒಂದು ವೇಳೆ ನೆಲಮಟ್ಟಕ್ಕಿಂತ ಎತ್ತರಕ್ಕೆ ತಡೆಗೋಡೆಗಳನ್ನು ನಿರ್ಮಿಸಿದರೆ, ಸುತ್ತಮುತ್ತಲಿನ ಮಳೆನೀರು ರಾಜಕಾಲುವೆಯೊಳಗೆ ಹರಿಯದಂತೆ ಅದು ತಡೆಯಬಹುದು. ಹೀಗಾಗಿ ಇಂತಹ ತಡೆಗೋಡೆಗಳ ನಿರ್ಮಾಣವು ರಾಜಕಾಲುವೆಯ ಮೂಲ ಉದ್ದೇಶವನ್ನೇ ಹಳಿ ತಪ್ಪಿಸಿದಂತಾಗುವುದಿಲ್ಲವೇ?&quot; ಎಂದು ಎನ್&zwnj;ಜಿಟಿ ತಾಂತ್ರಿಕ ಪ್ರಶ್ನೆಯನ್ನು ಮುಂದಿಟ್ಟಿದೆ.&lt;/p&gt;&lt;h2&gt;&lt;strong&gt;ಜಿಬಿಎ (GBA) ನೀಡಿದ ಸಮರ್ಥನೆ ಏನು?&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಧನಸಹಾಯದೊಂದಿಗೆ ಕೈಗೊಳ್ಳಲಾದ ರಾಜಕಾಲುವೆ (SWD) ಯೋಜನೆಯ ಭಾಗವಾಗಿ ಈ ತಡೆಗೋಡೆಗಳನ್ನು ನಿರ್ಮಿಸಲಾಗಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ. ತಗ್ಗು ಪ್ರದೇಶಗಳಾದ ಬಿಲೇಕಹಳ್ಳಿ, ಅನುಗ್ರಹ ಲೇಔಟ್&zwnj;ನ 1 ಮತ್ತು 2ನೇ ಹಂತ, ಡ್ಯುಯೊ ಲೇಔಟ್ ಮತ್ತು ಗುಲ್ಬರ್ಗಾ ಕಾಲೋನಿಯಲ್ಲಿ ಉಂಟಾಗುತ್ತಿದ್ದ ತೀವ್ರ ಪ್ರವಾಹದ ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಕಾಮಗಾರಿ ಮಾಡಲಾಗಿದೆ. ಮಳೆನೀರು ಸರಾಗವಾಗಿ ಹರಿಯಲು ಮತ್ತು ಪ್ರವಾಹ ತಡೆಯಲು ಕಾಲುವೆಯ ಇರಡೂ ಬದಿಗಳಲ್ಲಿ ಸುಮಾರು 2.5 ಕಿಲೋಮೀಟರ್ ಉದ್ದದ ಆರ್&zwnj;ಸಿಸಿ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಈ ನಿರ್ಮಾಣವು ಕೆರೆಯ ಅಸ್ತಿತ್ವದಲ್ಲಿರುವ ಗಡಿಗೆ ಅನುಗುಣವಾಗಿಯೇ ನಡೆದಿದ್ದು, ಕೆರೆಯ ಯಾವುದೇ ಭಾಗವನ್ನು ಒತ್ತುವರಿ ಮಾಡಿಲ್ಲ ಅಥವಾ ವಿಸ್ತೀರ್ಣವನ್ನು ಕಡಿಮೆ ಮಾಡಿಲ್ಲ ಎಂದು ಜಿಬಿಎ ವಾದಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಈ ಇಡೀ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಅಕ್ಟೋಬರ್ 2024 ರಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯೊಂದನ್ನು ಆಧರಿಸಿ ಎನ್&zwnj;ಜಿಟಿ ಈ ಸ್ವಯಂಪ್ರೇರಿತ (Suo Motu) ದೂರನ್ನು ದಾಖಲಿಸಿಕೊಂಡಿತ್ತು. ಮಡಿವಾಳ ಕೆರೆ ಸಮೀಪದ ಕೊಡಿಚಿಕ್ಕನಹಳ್ಳಿಯಲ್ಲಿರುವ &lsquo;ವಕೀಲ್ ಮರೀನಾ&rsquo; (Vakil Marina) ವಸತಿ ಸಮುಚ್ಚಯಕ್ಕೆ ಸಂಪರ್ಕ ಹೊಂದಿದ ರಾಜಕಾಲುವೆಗೆ ನೇರವಾಗಿ ಒಳಚರಂಡಿ ನೀರನ್ನು ಹರಿಸಲಾಗುತ್ತಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹಸಿರು ಪೀಠವು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಮತ್ತು ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿ ಅಗತ್ಯ ಕ್ರಮಕ್ಕೆ ಸೂಚಿಸಿತ್ತು.&lt;/p&gt;&lt;p&gt;ಕೊಡಿಚಿಕ್ಕನಹಳ್ಳಿಯ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ನಿರಂತರವಾಗಿ ಆಗುತ್ತಿರುವ ಈ ಹಾನಿಯನ್ನು ತಡೆಯಲು ಎನ್&zwnj;ಜಿಟಿ ಈಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಅಧಿಕಾರಿಗಳು ಸಬೂಬುಗಳನ್ನು ನೀಡುವುದನ್ನು ನಿಲ್ಲಿಸಿ, ನೈಜ ಕಂದಾಯ ದಾಖಲೆಗಳೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೆರೆಯ ಒತ್ತುವರಿ ತೆರವು ಮತ್ತು ಕಲುಷಿತ ನೀರು ಹರಿಯುವುದನ್ನು ತಡೆಯುವ ನಿಟ್ಟಿನಲ್ಲಿ ಎನ್&zwnj;ಜಿಟಿಯ ಮುಂದಿನ ಆದೇಶವು ಅತ್ಯಂತ ನಿರ್ಣಾಯಕವಾಗಲಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/ngt-slams-bengaluru-dm-over-kodichikkanahalli-lake-encroachment-records-san/articleshow-cx36as3"/>
        </item>
        <item>
            <title><![CDATA[ಡಿಸೆಂಬರ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ, ಮತ್ತೆ ಅವಧಿ ವಿಸ್ತರಿಸಿದ ಸುಪ್ರೀಂ ಕೋರ್ಟ್]]></title>
            <link>https://kannada.asianetnews.com/bengaluru-urban/greater-bengaluru-authority-elections-scheduled-for-december-supreme-court-extends-deadline/articleshow-f9i200z</link>
            <guid isPermaLink="true">https://kannada.asianetnews.com/bengaluru-urban/greater-bengaluru-authority-elections-scheduled-for-december-supreme-court-extends-deadline/articleshow-f9i200z</guid>
            <pubDate>Fri, 17 Jul 2026 13:18:14 +0530</pubDate>
            <description><![CDATA[&lt;p&gt;ಜಿಬಿಎ ಚುನಾವಣೆ ನ ನಡೆಸಲು ನೀಡಿದ್ದ ಗಡುವು ಹತ್ತಿರ ಬರುತ್ತಿದ್ದಂತೆ ವಿಸ್ತರಣೆಗಾಗಿ ರಾಜ್ಯ ಸರ್ಕಾರ ನೀಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಇದೀಗ ಡಿಸೆಂಬರ್ ವರೆಗೆ ಅವಧಿ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk82q6byytxcv8x2jjv36378,imgname-----------------------2026-03-09t064657.095-1773019044222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಜು.17)&lt;/strong&gt; ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಹಗ್ಗ ಜಗ್ಗಾಟದಲ್ಲಿ ರಾಜ್ಯ ಸರ್ಕಾರ ನಿಟ್ಟುಸಿರು ಬಿಟ್ಟಿದೆ. ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಈ ಮೊದಲು ಆದೇಶ ನೀಡಿತ್ತು. ಆದರೆ ಸದ್ಯ ಎಸ್ಐಆರ್ ಪ್ರಕ್ರಿಯೆ ಮುಂದಿಟ್ಟು ಚುನಾವಣೆಗೆ ಮತ್ತಷ್ಟು ಕಾಲವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್&zwnj;ಗೆ ಮನವಿ ಮಾಡಿತ್ತು. ಈ ಮನವಿಯಂತೆ ಇದೀಗ ಸುಪ್ರೀಂ ಕೋರ್ಟ್ ಡಿಸೆಂಬರ್ 31, 2026ರೊಳಗೆ ಗ್ರೇಟರ್ ಬೆಂಗಳೂರು ಚುನಾವಣೆ ನಡೆಸುವಂತೆ ಆದೇಶ ನೀಡಿದೆ.&lt;/p&gt;&lt;h2&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮತ್ತೆ ಮುಂದೂಡಿಕೆ&lt;/h2&gt;&lt;p&gt;ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಬದಲಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಕಾಣದೆ ಮುಂದೆ ಸಾಗುತ್ತಿದೆ. ಆಯಾ ಸರ್ಕಾರಗಳು ಚುನಾವಣೆ ನಡೆಸಲು ಮೀನಾಮಿಷ ಎಣಿಸುತ್ತಿದೆ. ಸದ್ಯ ಎಸ್&zwnj;ಐಆರ್ ಪ್ರಕ್ರಿಯೆ ಮುಂದಿಟ್ಟು ಸಮಯಾವಕಾಶ ಪಡೆದುಕೊಳ್ಳುವಲ್ಲಿ ಬೆಂಗಳೂರು ಪ್ರಾಧಿಕಾರ ಯಶಸ್ವಿಯಾಗಿದೆ.&lt;/p&gt;&lt;p&gt;2020ರಲ್ಲಿ ಬೆಂಗಳೂರು ಸ್ಥಳೀಯ ಆಡಳಿತ ಮಂಡಳಿ (ಬಿಬಿಎಂಪಿ) ಆಡಳಿತ ಅವಧಿ ಮುಕ್ತಾಯಗೊಂಡಿದೆ. 2020ರಲ್ಲೇ ಚುನಾವಣೆ ನಡೆದು ಕಾರ್ಪೋರೇಟರ್&zwnj;ಗಳ ಆಯ್ಕೆ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಚುನಾವಣೆ ಮುಂದೂಡಲಾಗಿತ್ತು. ಬಳಿಕ ಪ್ರತಿ ಬಾರಿ ಒಂದೊಂದು ಕಾರಣದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡೂತ್ತಲೇ ಸಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ನಾಯಕರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ. ಆಡಳಿತ ವಿಕೇಂದ್ರೀಕರಣ ಉದ್ದೇಶದಿಂದ ಬಿಬಿಎಂಪಿ ಯನ್ನು ಜಿಬಿಎ ರೂಪಕ್ಕೆ ತರಲಾಗಿದೆ. ಆದರೆ ಚುನಾವಣೆಯನ್ನು ಮತ್ತೆ ಮಂದೂಡಲಾಗಿದೆ.&lt;/p&gt;&lt;p&gt;ಸೆಪ್ಟೆಂಬರ್ 10, 2020ಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಚುನಾಯಿತ ಸಮಿತಿಯ ಅವಧಿ ಮುಕ್ತಾಯಗೊಂಡಿತು. ಬಳಿಕ ಕಾರ್ಪೋರೇಟರ್ ಆಡಳಿತ ಅಂತ್ಯಗೊಂಡು ಸರ್ಕಾರಿ ಆಡಳಿತಾಧಿಕಾರಿಗಳ ಆಡಳಿತ ಆರಂಭಗೊಂಡಿದೆ. ಸದ್ಯ ಚುನಾವಣೆ ನಡೆಯದ ಕಾರಣ ಆಡಳಿತಾಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/greater-bengaluru-authority-elections-scheduled-for-december-supreme-court-extends-deadline/articleshow-f9i200z"/>
        </item>
        <item>
            <title><![CDATA[Bengaluru Traffic Big Update: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪಂಚ ಸೂತ್ರಗಳು: ಖಾಸಗಿ ವಾಹನಗಳಿಗೆ 'ನೋ ಎಂಟ್ರಿ'!]]></title>
            <link>https://kannada.asianetnews.com/state/five-point-formula-to-resolve-bengaluru-s-traffic-woes-rav/articleshow-gqwn754</link>
            <guid isPermaLink="true">https://kannada.asianetnews.com/state/five-point-formula-to-resolve-bengaluru-s-traffic-woes-rav/articleshow-gqwn754</guid>
            <pubDate>Sat, 18 Jul 2026 10:27:15 +0530</pubDate>
            <description><![CDATA[&lt;p&gt;ರಾಜಧಾನಿಯ ತೀವ್ರ ಸಂಚಾರ ದಟ್ಟಣೆ ನಿವಾರಿಸಲು, ಸಂಚಾರ ವಿಭಾಗದ ಪೊಲೀಸರು ರಾಜ್ಯ ಸರ್ಕಾರದ ಮುಂದೆ 'ಪಂಚ ಸೂತ್ರ' ಪ್ರಸ್ತಾಪಿಸಿದ್ದಾರೆ. ಕಾರ್ ಪೂಲಿಂಗ್ ಅಧಿಕೃತಗೊಳಿಸುವುದು, ಖಾಸಗಿ ಬಸ್&zwnj;ಗಳಿಗೆ ನಗರ ಪ್ರವೇಶ ನಿರ್ಬಂಧ, &amp;nbsp;ಪರಿಷ್ಕೃತ ದಂಡ ವಿಧಿಸುವುದು ಸೇರಿದಂತೆ ಹಲವು ಪ್ರಮುಖ ಶಿಫಾರಸು ಇದು ಒಳಗೊಂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxss3qdbtpzv4m07rapmk09c,imgname-----------------------2026-07-18t102131.077-1784350367147.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.18): &lt;/strong&gt;ರಾಜಧಾನಿಗೆ ಮೂಲಭೂತ ಬವಣೆಯಾಗಿ ಕಾಡುತ್ತಿರುವ ಸಂಚಾರ ಸಮಸ್ಯೆ ಪರಿಹಾರಕ್ಕೆ ಕಾರ್ ಪೂಲಿಂಗ್ ಅನ್ನು ಅಧಿಕೃತಗೊಳಿಸುವುದು, ಕೇಂದ್ರ ಸರ್ಕಾರದ ಸಂಚಾರ ನಿಯಮ ಉಲ್ಲಂಘನೆಗಳ ದಂಡ ಪರಿಷ್ಕರಣೆ ಆದೇಶ ಜಾರಿ ಹಾಗೂ ರಾಷ್ಟ್ರೀಯ ಸಾರಿಗೆ ಪರವಾನಿಗೆ ಹೊಂದಿದ ಖಾಸಗಿ ಬಸ್&zwnj;ಗಳಿಗೆ ನಗರ ಪ್ರವೇಶ ಸಂಪೂರ್ಣ ನಿರ್ಬಂಧ ಸೇರಿದಂತೆ ರಾಜ್ಯ ಸರ್ಕಾರದ ಮುಂದೆ ಬಹುಮುಖ್ಯ &lsquo;ಪಂಚ ಸೂತ್ರ&rsquo; ಗಳನ್ನು ಸಂಚಾರ ವಿಭಾಗದ ಪೊಲೀಸರು ಪ್ರಸ್ತಾಪ ಮಾಡಿದ್ದಾರೆ.&lt;/p&gt;&lt;p&gt;ವಿಶ್ವ ಭೂಪಟದಲ್ಲಿ ಉದ್ಯಾನ ನಗರಿ, ಐಟಿ ಸಿಟಿ ಎಂದೆಲ್ಲ ಬಿರುದಾಂಕಿತವಾಗಿರುವ ಬೆಂಗಳೂರಿಗೆ ಸಂಚಾರ ದಟ್ಟಣೆ (ಟ್ರಾಫಿಕ್ ) ಶಾಪವಾಗಿ ಪರಿಣಮಿಸಿದೆ. ಇತ್ತ ಶಾಪ ವಿಮೋಚನೆಗೆ ಶಬರಿಯಂತೆ ನಾಗರಿಕರು ಕಾಯುತ್ತಿದ್ದರೆ, ಅತ್ತ ಈ ಸಮಸ್ಯೆ ಪರಿಹರಿಸುವ ಮಾರ್ಗೋಪಾಯಗಳನ್ನು ಸಂಚಾರ ವಿಭಾಗದ ಹಾಗೂ ಸರ್ಕಾರ ಅವಿರತವಾಗಿ ಅರಸುತ್ತಿವೆ.&lt;/p&gt;&lt;p&gt;ಅಂತೆಯೇ ರಾಜಧಾನಿಯಲ್ಲಿ ವಾಹನಗಳ ಸುಗಮ ಓಡಾಟಕ್ಕೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರ ಸಾರಥ್ಯದಲ್ಲಿ &lsquo;ಪಂಚಸೂತ್ರ&rsquo;ವನ್ನು ಪೊಲೀಸರು ಸಿದ್ಧಗೊಳಿಸಿದ್ದಾರೆ. ಅವುಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ಎದುರಾಗುವ ತಾಂತ್ರಿಕ ತೊಡಕುಗಳ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಗೃಹ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಸಮಾಲೋಚನೆ ನಡೆದಿದೆ ಎಂದು ಮೂಲಗಳು ಹೇಳಿವೆ.&lt;/p&gt;&lt;h2&gt;1.ಭಾರಿ ವಾಹನಗಳಿಗೆ ಶಾಶ್ವತ ತಡೆ&lt;/h2&gt;&lt;p&gt;ನಗರದಲ್ಲಿ ಭಾರಿ ಸರಕು ಸಾಗಾಣಿಕೆ ವಾಹನಗಳ ಪ್ರವೇಶಕ್ಕೆ ಶಾಶ್ವತವಾಗಿ ನಿರ್ಬಂಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. 2014ರಲ್ಲಿ ನಗರಕ್ಕೆ ರಾತ್ರಿ 10 ರಿಂದ ಬೆಳಗ್ಗೆ 7 ಗಂಟೆವರೆಗೆ ಸರಕು ಸಾಗಾಣಿಕೆ ವಾಹನಗಳಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಭಾರಿ ಪ್ರಮಾಣದ ಸರಕು ಸಾಗಿಸುವ ವಾಹನಗಳಿಗೆ ನಗರದ ವಲಯದಲ್ಲೇ ತಡೆ ಹಾಕಿದರೆ ಇತರೆ ವಾಹನಗಳ ಓಡಾಟಕ್ಕೆ ಅಡ್ಡಿ ತಪ್ಪಲಿದೆ. ಅಲ್ಲಿಂದ ಸಣ್ಣ ಟ್ರಕ್&zwnj;ಗಳಲ್ಲಿ ಸರಕು ಸಾಗಾಣಿಕೆಗೆ ಅವಕಾಶ ಮಾಡಿಕೊಡ ಲಾಗುತ್ತದೆ. ಅಲ್ಲದೆ ಪಿಕ್ ಆ&zwj;ವರ್&zwnj;ನಲ್ಲಿ ಅಂದರೆ ಬೆಳಗ್ಗೆ 8 ರಿಂದ 10 ಹಾಗೂ ಸಂಜೆ 5 ರಿಂದ 7 ಗಂಟೆವರೆಗೆ ಎಲ್ಲ ಮಾದರಿಯ ಸರಕು ಸಾಗಾಣಿಕೆ ವಾಹನಗಳಿಗೆ ಕೂಡ ಬ್ರೇಕ್ ಹಾಕಬೇಕು.&lt;/p&gt;&lt;h3&gt;2.ಸರ್ಕಾರವೇ ಕಾರ್ ಪೂಲಿಂಗ್ ಅಧಿಕೃತಗೊಳಿಸಬೇಕು&lt;/h3&gt;&lt;p&gt;ಸಂಚಾರ ಸಮಸ್ಯೆ ನಿವಾರಣೆಗೆ ಕಾರ್ ಪೂಲಿಂಗ್ ದೊಡ್ಡ ಕೊಡುಗೆ ನೀಡುತ್ತದೆ. ಕೊರೋನಾ ಮುನ್ನ ನಗರದಲ್ಲಿ ಈ ವ್ಯವಸ್ಥೆಯನ್ನು ಆ್ಯಪ್ ಆಧಾರಿತ ಸಾರಿಗೆ ಕಂಪನಿಗಳು ರೂಪಿಸಿದ್ದವು. ಇದಕ್ಕೆ ಐಟಿ-ಬಿಟಿ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರತಿದಿನ 60 ಸಾವಿರ ಜನರು ಬಳಸುತ್ತಿದ್ದರು. ಇದರಿಂದ ಸುಮಾರು 1 ಲಕ್ಷ ವಾಹನಗಳು ರಸ್ತೆಗಿಳಿಯುವುದು ತಪ್ಪಿತು. ಕೊರೋನಾ ಬಳಿಕ ಕಾರ್ ಪೂಲಿಂಗ್ ಬಳಕೆದಾರರ ಸಂಖ್ಯೆ 60 ರಿಂದ 20 ಸಾವಿರಕ್ಕಿಳಿಯಿತು. ಈ ನಡುವೆ ಕಾರ್ ಪೂಲಿಂಗ್&zwnj;ಗೆ ಸಾರಿಗೆ ಇಲಾಖೆ ತಾಂತ್ರಿಕ ತೊಡಕು ಮುಂದಿಟ್ಟಿತು. ಇದರಿಂದ ಮತ್ತೆ ವಾಹನಗಳ ಓಡಾಟ ಸಂಖ್ಯೆ ಏರಿತು.&lt;/p&gt;&lt;p&gt;&lt;strong&gt;3. ಕೇಂದ್ರ ಸರ್ಕಾರದ ದಂಡ ಹೆಚ್ಚಳ ಆದೇಶ ಜಾರಿ&lt;/strong&gt;&lt;/p&gt;&lt;p&gt;2018ರಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ವಿಧಿಸುವ ದಂಡವನ್ನು 2 ಪಟ್ಟು ಹೆಚ್ಚಳ ಮಾಡಿ ಕೇಂದ್ರ ಸಾರಿಗೆ ಇಲಾಖೆ ಆದೇಶಿಸಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಆಗ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರವು, ರಾಜ್ಯದ ಮಟ್ಟಿಗೆ ಕೇಂದ್ರ ಸರ್ಕಾರದ ಆದೇಶಕ್ಕಿಂತ ಅರ್ಧದಷ್ಟು ದಂಡ ಪರಿಷ್ಕರಿಸಿತು. ಈಗ ಕೇಂದ್ರ ಸರ್ಕಾರದ ಹಳೇ ಆದೇಶ ಜಾರಿಗೆ ಪೊಲೀಸರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದರಲ್ಲೂ ಸಿಗ್ನಲ್ ಜಂಪ್&zwnj;, ಏಕಮುಖ ಸಂಚಾರ ರಸ್ತೆಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಹಾಗೂ ವಾಹನ ಚಲಾಯಿಸುವಾಗ ಮೊಬೈಲ್&zwnj; ಬಳಕೆ ಸೇರಿದಂತೆ ಪ್ರಮುಖ 5 ಸಂಚಾರ ನಿಯಮ ಉಲ್ಲಂಘನೆಗಳಿಗೆ ದಂಡ ಏರಿಕೆ ಮಾಡುವಂತೆ ಕೋರಿದ್ದಾರೆ. ಇದಕ್ಕೊಪ್ಪಿದರೆ 500 ರು. ನಿಂದ 1 ಸಾವಿರ ರು.ಗೆ ದಂಡ ಏರಿಕೆಯಾಗಲಿದೆ. &lsquo;ದಂಡ&rsquo; ವಿಧಿಸದೆ ಹೋದರೆ ಜನರು ಕಾನೂನು ಪಾಲಿಸುವುದಿಲ್ಲ ಎಂದಿದ್ದಾರೆ ಪೊಲೀಸರು.&lt;/p&gt;&lt;p&gt;&lt;strong&gt;4. ಮೇಲ್ಸೇತುವೆಗಳಲ್ಲಿ ಬೈಕ್ ನಿರ್ಬಂಧ&lt;/strong&gt;&lt;/p&gt;&lt;p&gt;ನಗರದ ಕೆಲ ಮೇಲ್ಸೇತುವೆಗಳಲ್ಲಿ ಬೈಕ್&zwnj; ವಾಹನಗಳಿಗೆ ನಿಷೇಧಿಸುವ ಬಗ್ಗೆ ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಮೇಲ್ಸೇತುವೆಗಳಲ್ಲಿ ಬೈಕ್&zwnj;ಗಳ ಅಪಘಾತ ಪ್ರಮಾಣ ಹಾಗೂ ಅವುಗಳಿಂದ ಸಂಚಾರಕ್ಕೆ ಉಂಟಾಗಿರುವ ಅಡ್ಡಿ ಬಗ್ಗೆ ಪೊಲೀಸರು ಪರಾಮರ್ಶಿಸಿದ್ದಾರೆ. ಇನ್ನು ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ಸರಕು ಸಾಗಾಣಿಕೆ ವಾಹನಗಳು (ಟಾಟಾ ಏಸ್&zwnj;, ಮಿನಿ ಟ್ಯಾಂಕರ್&zwnj;ಗಳು) ಓಡಾಟಕ್ಕೆ ನಿರ್ಬಂಧಿಸುವುದಕ್ಕೆ ಪೊಲೀಸರು ಶಿಫಾರಸು ಮಾಡಿದ್ದಾರೆ.&lt;/p&gt;&lt;p&gt;&lt;strong&gt;5. ಖಾಸಗಿ ಬಸ್&zwnj;ಗಳಿಗೆ ನೋ ಎಂಟ್ರಿ&lt;/strong&gt;&lt;/p&gt;&lt;p&gt;ನಗರದ ಹೊರವಲಯಗಳಿಂದಲೇ ಖಾಸಗಿ ಬಸ್&zwnj;ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಅದರಲ್ಲೂ ರಾಷ್ಟ್ರೀಯ ಸಂಚಾರ ಪರವಾನಿಗೆ (ಆಲ್&zwnj; ಇಂಡಿಯಾ ಫರ್ಮಿಟ್&zwnj;) ಬಸ್&zwnj;ಗಳಿಗೆ ನಗರ ಒಳ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧಿಸಬೇಕಿದೆ. ನಗರದೊಳಗೆ ಬಸ್&zwnj;ಗಳ ಪ್ರವೇಶಿಸದೆ ಹೋದರೆ ಸಂಚಾರ ದಟ್ಟಣೆ ತಗ್ಗಲಿದೆ. ಖಾಸಗಿ ಬಸ್&zwnj;ಗಳ ನಿಲುಗಡೆಗೆ ನಿಖರ ಸ್ಥಳ ಮೀಸಲಿಡಬೇಕು. ಎಲ್ಲೆಂದರಲ್ಲಿ ಆ ಬಸ್&zwnj;ಗಳು ನಿಲುಗಡೆ ಮಾಡುತ್ತಿರುವುದು ಸಹ ಸಂಚಾರ ಅಡ್ಡಿಯಾಗಿದೆ ಎಂದಿದ್ದಾರೆ.&lt;/p&gt;&lt;p&gt;&lt;strong&gt;ಪಂಚ ಸೂತ್ರ ಸಿದ್ಧತೆ ಹೇಗೆ?&lt;/strong&gt;&lt;/p&gt;&lt;p&gt;ರಸ್ತೆಗಳಲ್ಲಿ ವಾಹನಗಳ ಸಂಚಾರ ಪ್ರಮಾಣ, ಅಪಘಾತ ಪ್ರಕರಣಗಳು ಹಾಗೂ ಸಂಚಾರ ದಟ್ಟಣೆ ಹೀಗೆ ಎಲ್ಲ ಅಂಶಗಳನ್ನು ಅವಲೋಕಿಸಿ ಸಂಚಾರ ದಟ್ಟಣೆ ನಿವಾರಣೆಗೆ &lsquo;ಪಂಚ ಸೂತ್ರ&rsquo;ವನ್ನು ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಸಿದ್ಧಪಡಿಸಿದೆ ಎಂದು ತಿಳಿದು ಬಂದಿದೆ. ಮೇಲ್ಸೇತುವೆಗಳು, ಐಟಿ ಕಾರಿಡಾರ್&zwnj;, ಹೊರ ವರ್ತುಲ ರಸ್ತೆಗಳು (ರಿಂಗ್ ರೋಡ್&zwnj;) ಹಾಗೂ ಸಿಬಿಡಿ ಪ್ರದೇಶಗಳಲ್ಲಿ ಯಾವ ಸಮಯದಲ್ಲಿ ಸಂಚಾರ ದಟ್ಟಣೆಯಾಗಲಿದೆ ಎಂದು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಅಲ್ಲದೆ ಆ ಸಂಚಾರ ಸಮಸ್ಯೆ ಹೆಚ್ಚು ಭಾದಿತ ಸ್ಥಳಗಳಿಗೆ ಖದ್ದು ಎರಡ್ಮೂರು ಬಾರಿ ಜಂಟಿ ಆಯುಕ್ತರು ತೆರಳಿ ಪರಿಶೀಲಿಸಿದ್ದಾರೆ ಎಂದು ಉನ್ನತ ಮೂಲಗಳು &lsquo;ಕನ್ನಡಪ್ರಭ&rsquo; ಮಾಹಿತಿ ನೀಡಿವೆ.&lt;/p&gt;&lt;p&gt;&lt;strong&gt;ಸೆಪ್ಟೆಂಬರಲ್ಲೇ ಹೆಚ್ಚು ಟ್ರಾಫಿಕ್&zwnj;!&lt;/strong&gt;&lt;/p&gt;&lt;p&gt;ನಗರದಲ್ಲಿ ಸಂಚಾರ ದಟ್ಟಣೆ ಬಗ್ಗೆ ಶೈಕ್ಷಣಿಕ ವರ್ಷ ಆಧರಿಸಿ ತಿಂಗಳುವಾರು ಪೊಲೀಸರು ಪರಾಮರ್ಶಿಸಿದ್ದಾರೆ. ಯಾವ್ಯಾವ ತಿಂಗಳು ಸಂಚಾರ ಸಮಸ್ಯೆ ಹೆಚ್ಚು, ಯಾವ ತಿಂಗಳ ಕಡಿಮೆ ಇದೆ. ಇದಕ್ಕೆ ಕಾರಣಗಳೇನು ಎಂದು ಕೂಡ ವಿಶ್ಲೇಷಿಸಿದ್ದಾರೆ. ಶಾಲೆಗಳ ಆರಂಭದ ಜೂನ್&zwnj;ನಿದ ನವೆಂಬರ್&zwnj;ವರೆಗೆ ಸಂಚಾರ ಸಮಸ್ಯೆ ಬಾಧಿಸುತ್ತದೆ. ಅದರಲ್ಲೂ ಸೆಪ್ಟೆಂಬರ್&zwnj;ನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ನೂರೆಂಟು ವಿಘ್ನಗಳು ಜಾಸ್ತಿ ಎದುರಾಗುತ್ತವೆ. ಇದಕ್ಕೆ ಕಾರಣ ಆ ತಿಂಗಳಲ್ಲಿ ಹೆಚ್ಚಿನ ಮಳೆ ಹಾಗೂ ಹಬ್ಬಗಳು ಎನ್ನಲಾಗಿದೆ. ಆದರೆ ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸಂಚಾರದ ಮೇಲೆ ದುಷ್ಪರಿಣಾಮ ಕ್ಷೀಣವಾಗಿರುತ್ತದೆ. ಅಂತೆಯೇ ನವೆಂಬರ್&zwnj;, ಡಿಸೆಂಬರ್&zwnj;, ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳು ಕಾಕದೃಷ್ಟಿ ಬೀರದೆ ಜನರು ನಿರಾಳವಾಗಿ ವಾಹನಗಳಲ್ಲಿ ಓಡಾಡಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/five-point-formula-to-resolve-bengaluru-s-traffic-woes-rav/articleshow-gqwn754"/>
        </item>
        <item>
            <title><![CDATA[ಅಮ್ಮನ ನೆನೆದು ಹೆಚ್‌ಡಿಕೆ ಕಣ್ಣೀರು: ಇಂದು ಮಾವಿನಕೆರೆ ಹರದನಹಳ್ಳಿಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ, ಸ್ಥಳ, ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ]]></title>
            <link>https://kannada.asianetnews.com/gallery/state/kumaraswamy-pays-tribute-to-mother-chennamma-final-rites-mavinakere-haradanahalli-on-july-19-rav-iemkema</link>
            <guid isPermaLink="true">https://kannada.asianetnews.com/gallery/state/kumaraswamy-pays-tribute-to-mother-chennamma-final-rites-mavinakere-haradanahalli-on-july-19-rav-iemkema</guid>
            <pubDate>Sun, 19 Jul 2026 05:59:33 +0530</pubDate>
            <description><![CDATA[&lt;p&gt;Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್&zwnj;ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxvwa6wxnxfx6ytan1vwv6bb,imgname-----------------------2026-07-19t054351.213-1784420834205.jpg" type="image/jpeg" height="390" width="690"/>
            <content:encoded><![CDATA[&lt;p&gt;Channamma final rites ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮ ಶಿವೈಕ್ಯರಾಗಿದ್ದಾರೆ .ಅವರ ಅಂತ್ಯಕ್ರಿಯೆ ಇಂದು ಭಾನುವಾರ ಮಾವಿನಕೆರೆ ಹರದನಹಳ್ಳಿಯಲ್ಲಿ ನಡೆಸಲಾಗುವುದು ಎಂದು ಪುತ್ರ ಹೆಚ್&zwnj;ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.&lt;/p&gt;&lt;img&gt;&lt;p&gt;ನಮ್ಮ ಜನ್ಮದಾತೆ ನಮ್ಮನ್ನು ಅಗಲಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೇಂದ್ರ ಸಚಿವ ಹಾಗೂ ಚೆನ್ನಮ್ಮ ಅವರ ಪುತ್ರರಾದ ಎಚ್&zwnj;.ಡಿ ಕುಮಾರಸ್ವಾಮಿ ತಿಳಿಸಿದರು.&lt;/p&gt;&lt;img&gt;&lt;p&gt;ಆಸ್ಪತ್ರೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಾಯಿಯವರು ಮೊದಲಿನಿಂದಲೂ ಸರಳ ಜೀವನ ನಡೆಸಿಕೊಂಡು ಬಂದವರು, ದೈವಭಕ್ತೆ ಆಗಿದ್ದರು. ನಮ್ಮ ತಂದೆಯ ಸಂಗಾತಿಯಾಗಿ 70 ವರ್ಷ ಬಾಳಿದ್ದಾರೆ. ನಮ್ಮ ತಂದೆಯವರ ಬದುಕಿಗೆ ಅವರ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಬದುಕಿನಲ್ಲಿ ನಮಗೆ ತಾಯಿ ಹೃದಯ ಅಂತ ಬಂದಿದ್ದರೆ ಅದು ಅವರಿಂದ. ಒಂದು ಸಣ್ಣ ಹಳ್ಳಿಯಲ್ಲಿ ಅವರು ಜನಿಸಿದವರು. ಲಕ್ಷಾಂತರ ಕುಟುಂಬಗಳ ಬದುಕಿಗೆ ದಾರಿ ದೀಪವಾಗಿದ್ದವರು ಎಂದು ಹೇಳಿದರು.&lt;/p&gt;&lt;img&gt;&lt;p&gt;ಕಳೆದ ಒಂದೂವರೆ ವರ್ಷದಿಂದ ಅವರಿಗೆ ಆರೋಗ್ಯದ ಸಮಸ್ಯೆ ಪ್ರಾರಂಭವಾಗಿತ್ತು. ಅವರು ದಿನಕ್ಕೆ 5 ಗಂಟೆಗೂ ಹೆಚ್ಚು ಕಾಲ ದೇವರ ಕೋಣೆಯಲ್ಲಿಯೇ ಭಗವಂತನ ಸ್ಮರಣೆ ಮಾಡಿಕೊಂಡು ಸಮಯ ಕಳೆಯುತ್ತಿದ್ದರು. ನಮ್ಮ ರಾಜಕೀಯದ ಬದುಕಿನಲ್ಲಿ ಅಲ್ಪ ಸ್ವಲ್ಪ ಒಳ್ಳೆ ಬುದ್ದಿ ಕಲಿತ್ತಿದ್ದರೆ ಅದು ಅವರಿಂದ. ಕಳೆದ ಒಂದು ವರ್ಷದಿಂದ ಅವರು ಪ್ರತಿನಿತ್ಯ ಪಡುತ್ತಿದ್ದ ಯಾತನೆಯನ್ನು ನಾವು ನೋಡುತ್ತಿದ್ದೆವು. ನಾವು ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೂ ಅವರ ಸ್ಮರಣೆಯಲ್ಲಿಯೇ ಇರುತ್ತಿದ್ದೆವು ಎಂದರು.&lt;/p&gt;&lt;p&gt;ಸಮಯ ಸಿಕ್ಕಾಗ ಅವರನ್ನು ಮಾತನಾಡಿಸಲು ಹೋದಾಗ ಊಟ ಮಾಡಿದ್ದೀಯಾ? ಮೊದಲು ಊಟ ಮಾಡು ಎಂದು ಹೇಳುತ್ತಿದ್ದರು. ಅವರಿಗೆ ಎರಡು ಬಾರಿ ಕೋವಿಡ್&zwnj; ಸೋಂಕು ತಗುಲಿತ್ತು. ಆ ಸಮಯದಲ್ಲಿ ಶ್ವಾಸಕೋಶದ ಸಮಸ್ಯೆ ಉಂಟಾಗಿತ್ತು. ಕಳೆದ 4 ದಿನಗಳಿಂದ ಸಮಸ್ಯೆ ಬಿಗಡಾಯಿಸಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಉತ್ತಮ ಪ್ರಯತ್ನ ಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ನಮ್ಮ ತಾಯಿ ರಾಜರಾಜೇಶ್ವರಿ ಭಕ್ತೆಯಾಗಿದ್ದರು. ಕಳೆದ 30-35 ವರ್ಷಗಳಿಂದ ಪ್ರತಿ ಶುಕ್ರವಾರ ರಾಜರಾಜೇಶ್ವರಿ ದೇವಾಲಯಕ್ಕೆ ತಪ್ಪದೇ ಹೋಗುತ್ತಿದ್ದರು. ಆ ತಾಯಿಯ ಕೃಪೆಯಿಂದ ಈ ಹಿಂದೆ ಆ್ಯಸಿಡ್&zwnj; ದಾಳಿಗೆ ಒಳಗಾಗಿದ್ದ ಸಂದರ್ಭದಲ್ಲಿ ಬದುಕುಳಿದರು. ಆ ದೇವರೇ ಅಂದು ಅವರನ್ನು ಬದುಕಿಸಿದ್ದ. ಆ ದೇವರೇ ಇದೀಗ ಅವರ ಬದುಕು ಸಾಕು ಎಂಬ ತೀರ್ಮಾನಕ್ಕೆ ಬಂದು ಕರೆದುಕೊಂಡು ಹೋಗಿದ್ದಾರೆ ಎಂಬುದು ನನ್ನ ಅಭಿಪ್ರಾಯ ಎಂದು ಭಾವುಕರಾದರು.&lt;/p&gt;&lt;p&gt;ಅವರಿಂದ ಜೀವನ ಕಂಡುಕೊಂಡಿರುವ ಕುಟುಂಬದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಅಂತಿಮ ದರ್ಶನ ಕಲ್ಪಿಸುವುದು ನಮ್ಮ ಕರ್ತವ್ಯ. ಭಾನುವಾರ ಬೆಳಗ್ಗೆ 11 ಗಂಟೆಯವರೆಗೂ ಪದ್ಮನಾಭ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ನಂತರ ಹಾಸನದ ಮಾವಿನಕೆರೆ ಅಥವಾ ಹರದನಹಳ್ಳಿ ಅಂತ್ಯ ಸಂಸ್ಕಾರ ಮಾಡಲಾಗುವುದು. ಅಂತಿಮ ಸಂಸ್ಕಾರ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಕುಟುಂಬ ಸದಸ್ಯರ ಜತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/state/kumaraswamy-pays-tribute-to-mother-chennamma-final-rites-mavinakere-haradanahalli-on-july-19-rav-iemkema"/>
        </item>
        <item>
            <title><![CDATA[ಸೋನಮ್ ವಾಂಗ್ಚುಕ್‌ ಬೆಂಬಲಿಸಿ ಬೆಂವಿವಿ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ]]></title>
            <link>https://kannada.asianetnews.com/gallery/state/bengaluru-university-students-hold-a-hunger-strike-in-support-of-sonam-wangchuk-rav-lm3hihx</link>
            <guid isPermaLink="true">https://kannada.asianetnews.com/gallery/state/bengaluru-university-students-hold-a-hunger-strike-in-support-of-sonam-wangchuk-rav-lm3hihx</guid>
            <pubDate>Sat, 18 Jul 2026 13:48:06 +0530</pubDate>
            <description><![CDATA[&lt;p&gt;Bengaluru University student protest: ಜಂತರ್&zwnj;ಮಂತರ್&zwnj;ನಲ್ಲಿ ಸೋನಮ್ ವಾಂಗ್&zwnj;ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರು ವಿವಿ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxt3stf2ra3jpr8dg9meqrj3,imgname-----------------------2026-07-18t131534.738-1784361576929.jpg" type="image/jpeg" height="390" width="690"/>
            <content:encoded><![CDATA[&lt;p&gt;Bengaluru University student protest: ಜಂತರ್&zwnj;ಮಂತರ್&zwnj;ನಲ್ಲಿ ಸೋನಮ್ ವಾಂಗ್&zwnj;ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರು ವಿವಿ ಸ್ನಾತಕೋತ್ತರ, ಸಂಶೋಧನಾ ವಿದ್ಯಾರ್ಥಿಗಳು ಇಂದು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ&lt;/p&gt;&lt;img&gt;&lt;p&gt;ನೀಟ್ ಅಕ್ರಮ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜಂತರ್&zwnj; ಮಂತರ್&zwnj;ನಲ್ಲಿ ಕಳೆದ ಹತ್ತೊಬ್ಬಂತು ದಿನಗಳಿಂದ ಸೋನಮ್ ವಾಂಗ್&zwnj;ಚುಕ್ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಬೆಂಗಳೂರಿನ ವಿವಿ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ &amp;nbsp;ಪ್ರತಿಭಟನೆ ನಡೆಯುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಪರೀಕ್ಷಾ ಪ್ರಕ್ರಿಯೆ ಲೋಪಗಳ ವಿರುದ್ಧ ವಿದ್ಯಾರ್ಥಿಗಳ ಧ್ವನಿಯಾಗಿ ಸೋನಮ್ ವಾಂಗ್&zwnj;ಚುಕ್ ಶಾಂತಿಯುತ ಹೋರಾಟ ನಡೆಸಿದ್ದಾರೆ. ಕಳೆದ ಹತ್ತೊಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ಅರಂಭಿಸಿದರೂ ಕೇಂದ್ರ ಸರ್ಕಾರ ಸೋನಂ ವಾಂಗ್&zwnj;ಚುಕ್ ಬೇಡಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.&lt;/p&gt;&lt;img&gt;&lt;p&gt;ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತೆಗೆ, ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.&lt;/p&gt;&lt;img&gt;&lt;p&gt;ಸೋನಮ್ ವಾಂಗ್&zwnj;ಚುಕ್ ಕಳೆದ ಹತ್ತೊಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿನ್ನೆಲೆ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು &amp;nbsp;ಅವರ ಜೀವ ರಕ್ಷಣೆ ಹೈಕೋರ್ಟ್ ಸೂಚನೆ ನೀಡಿದ ಹಿನ್ನೆಲೆ ಅವರನ್ನು ಇಂದು ಜಂತರ್ ಮಂತರ್&zwnj;ನಿಂದ ಸ್ಥಳಾಂರಿಸಿ ಆಸ್ಸಸ್ಪತ್ರೆಗೆ ದಾಖಲಾಗಿದೆ.&amp;nbsp;&lt;/p&gt;&lt;p&gt;ವಾಂಗ್&zwnj;ಚುಕ್ ಅವರು ಉಪವಾಸ ಸತ್ಯಾಗ್ರಹಕ್ಕೆ ಅರವಿಂದ್ ಕೇಜ್ರಿವಾಲ್ ಸಂಸದ ಚಂದ್ರಶೇಖರ್ ಅಜಾದ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳಿಂದ ಬೆಂಬಲ ವ್ಯಕ್ತವಾಗಿದೆ. ಉಪವಾಸ ಸತ್ಯಾಗ್ರಹ ಆರಂಭಿಸಿ ಹತ್ತೊಂಬತ್ತು ದಿನಗಳೇ ಕಳೆದರೂ ಕೇಂದ್ರ ಇದುವರೆಗೆ ಏಕೆ ಸ್ಪಂದಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಸದ್ಯ ವಾಂಗ್ಚುಕ್ ಆಸ್ಪತ್ರೆಗೆ ದಾಖಲಾಗಿದ್ದು ವ್ಯದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/bengaluru-university-students-hold-a-hunger-strike-in-support-of-sonam-wangchuk-rav-lm3hihx"/>
        </item>
        <item>
            <title><![CDATA[JDS V BJP Credit war:  ಬಿಡದಿಯಿಂದ ಬೆಂಗಳೂರಿಗೆ  ದಳ ಪ್ರತ್ಯೇಕ ಪಾದಯಾತ್ರೆ! ತನ್ನ ಕೇಳದೆ ಪಾದಯಾತ್ರೆ ಘೋಷಿಸಿದ್ದ ಬಿಜೆಪಿಗೆ ಸೆಡ್ಡು]]></title>
            <link>https://kannada.asianetnews.com/politics/bjp-and-jds-hold-separate-padayatras-opposing-the-bidadi-township-rav/articleshow-n1ti8py</link>
            <guid isPermaLink="true">https://kannada.asianetnews.com/politics/bjp-and-jds-hold-separate-padayatras-opposing-the-bidadi-township-rav/articleshow-n1ti8py</guid>
            <pubDate>Sun, 19 Jul 2026 06:19:13 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್&zwnj; ಯೋಜನೆ(Bidadi township project) ವಿರೋಧಿಸಿ ಬಿಜೆಪಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದ ಮರುದಿನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ ಸಮೇತ ತನ್ನ ಪಾದಯಾತ್ರೆಯನ್ನು ಪ್ರಕಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxvxh26dbypthse9k7070eqg,imgname-----------------------2026-07-19t060956.169-1784422107341.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಬಿಡದಿ ಟೌನ್&zwnj;ಶಿಪ್&zwnj; ವಿರುದ್ಧ ಶುಕ್ರವಾರ ಬೆಂಗಳೂರಿನಲ್ಲಿ ಹೋರಾಟ ನಡೆಸಿದ್ದ ಬಿಜೆಪಿ ನಾಯಕರು&lt;/li&gt; &lt;li&gt;ಬಿಡದಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ&lt;/li&gt; &lt;li&gt;&amp;nbsp;ಜೆಡಿಎಸ್&zwnj; ನಾಯಕರ ಜತೆ ಚರ್ಚಿಸಿ ದಿನಾಂಕ ನಿಗದಿಪಡಿಸುವುದಾಗಿಯೂ ಹೇಳಿದ್ದ ವಿಜಯೇಂದ್ರ&lt;/li&gt; &lt;li&gt;ತಮ್ಮನ್ನು ಕೇಳದೆ ಪಾದಯಾತ್ರೆ ಘೋಷಣೆ ಮಾಡಿದ್ದಕ್ಕೆ ಜೆಡಿಎಸ್&zwnj; ನಾಯಕರಲ್ಲಿ ಅಸಮಾಧಾನ&lt;/li&gt; &lt;li&gt;&amp;nbsp;ಹೀಗಾಗಿ ಸ್ವತಂತ್ರವಾಗಿ ಪಾದಯಾತ್ರೆ ಮಾಡಲು ಮೂರು ದಿನಗಳ ದಿನಾಂಕ ಘೋಷಿಸಿದ ಪಕ್ಷ&lt;/li&gt; &lt;li&gt;- ಸಾವಿರಾರು ರೈತರೊಂದಿಗೆ ಕಾಲ್ನಡಿಗೆಯಲ್ಲಿ ಬಂದು ಬೆಂಗಳೂರಲ್ಲಿ ಸಮಾವೇಶ ಆಯೋಜನೆ&lt;/li&gt;&lt;/ul&gt;&lt;p&gt;ಬೆಂಗಳೂರು (ಜು.19): ಬಿಡದಿ ಟೌನ್&zwnj;ಶಿಪ್&zwnj; ಯೋಜನೆ(Bidadi township project) ವಿರೋಧಿಸಿ ಬಿಜೆಪಿ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದ ಮರುದಿನವೇ ಜೆಡಿಎಸ್ ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ ಸಮೇತ ತನ್ನ ಪಾದಯಾತ್ರೆಯನ್ನು ಪ್ರಕಟಿಸಿದೆ.&lt;/p&gt;&lt;p&gt;ಮಿತ್ರಪಕ್ಷವಾದ ಬಿಜೆಪಿಯು ತನ್ನ ಜತೆ ಯಾವುದೇ ಸಮಾಲೋಚನೆ ನಡೆಸದೆ ಏಕಾಏಕಿ ಪಾದಯಾತ್ರೆ ಘೋಷಣೆ ಮಾಡಿದ ಬೆನ್ನಲ್ಲೇ ಅದಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಜೆಡಿಎಸ್&zwnj; ಪಕ್ಷವು ಇದೀಗ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸುವ ಘೋಷಣೆ ಮಾಡಿದೆ.&lt;/p&gt;&lt;p&gt;ಇದೇ ತಿಂಗಳ 30 ರಿಂದ ಮೂರು ದಿನಗಳ ಕಾಲ ಬಿಡದಿಯ ಬೈರಮಂಗಲ ವೃತ್ತದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ವರೆಗೆ ಬೃಹತ್&zwnj; ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್&zwnj; ಕೋರ್&zwnj; ಕಮಿಟಿ ಅಧ್ಯಕ್ಷ ಕೃಷ್ಣಾ ರೆಡ್ಡಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸುರೇಶ್&zwnj; ಬಾಬು ತಿಳಿಸಿದ್ದಾರೆ.&lt;/p&gt;&lt;p&gt;ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಾದಯಾತ್ರೆಗೆ ಸಂಬಂಧಿಸಿದ ಪೋಸ್ಟರ್&zwnj; ಬಿಡುಗಡೆ ಮಾಡಿ ಮಾತನಾಡಿದರು.&lt;/p&gt;&lt;p&gt;ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ವಿರುದ್ಧ ಜೆಡಿಎಸ್&zwnj; 495 ದಿನಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಜೆಡಿಎಸ್ ಪಕ್ಷ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ನಮ್ಮ ಹೋರಾಟಕ್ಕೆ ರೈತ ಮುಖಂಡರು ಮತ್ತು ರೈತರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಶೇ.9ರಷ್ಟು ಜನರಿಗೆ ಮಾತ್ರ ಒಪ್ಪಿಗೆ:&lt;/h2&gt;&lt;p&gt;ಈ ಯೋಜನೆಗೆ ಕೇವಲ ಶೇ.9 ರಷ್ಟು ಜನರಿಗೆ ಮಾತ್ರ ಒಪ್ಪಿಗೆ ಇದೆ. ನಾವು ಈಗಾಗಲೇ 11 ಕಿ.ಮೀ. ಪಾದಯಾತ್ರೆ ಮಾಡಿದ್ದೇವೆ. ಅಲ್ಲಿ ಹೈನುಗಾರಿಕೆ, ವ್ಯವಸಾಯ ಮಾಡಿಕೊಂಡು ರೈತರಿದ್ದಾರೆ. ಸಿಎಂ ಬಹಳ ಹಠಮಾರಿಯಾಗಿದ್ದು, ಈ ಯೋಜನೆ ಕೈಬಿಡಲ್ಲ. ಹೀಗಾಗಿ ನಾವು ಅವತ್ತೇ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದ್ದೇವು. ಜತೆಗೆ ವಿಧಾನಸೌಧ ಚಲೋ ಕೂಡ ಮಾಡುತ್ತೇವೆ ಎಂದು ಹೇಳಿದ್ದೆವು. ಸಿಎಂ ಡಿ.ಕೆ.ಶಿವಕುಮಾರ್&zwnj; ಅವರು ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.&lt;/p&gt;&lt;p&gt;ಭೂಮಿ ಕೊಡಲು ಇಷ್ಟಇರುವವರು ಕೊಡಿ, ಬೇಡವಾದವರು ಬೇಡ ಎಂಬ ಹೇಳಿಕೆ ನೀಡುವ ಮೂಲಕ ರೈತರಲ್ಲಿ ಮುಖ್ಯಮಂತ್ರಿಗಳು ದ್ವಂದ್ವ ಸೃಷ್ಟಿಸಿದ್ದಾರೆ. ನಾವು ಬರ ಪ್ರವಾಸ ಮಾಡುವ ವೇಳೆ ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೆವು. ಜು.30, 31 ಮತ್ತು ಆ.1 ವರೆಗೆ ಪಾದಯಾತ್ರೆ ಮಾಡುತ್ತೇವೆ. ಈ ಹಿಂದೆ ನಿಖಿಲ್&zwnj; ಕುಮಾರಸ್ವಾಮಿ ಮತ್ತು ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಕಾಂಚಗಾರಹಳ್ಳಿಯಿಂದ ಹೊಸೂರು ಗ್ರಾಮದವರೆಗೂ 11 ಕಿ.ಮೀ. ಪಾದಯಾತ್ರೆ ನಡೆಸಿ ಸರ್ಕಾರದ ನಿಲುವನ್ನು ಉಗ್ರವಾಗಿ ವಿರೋಧಿಸಲಾಯಿತು. ಇದೀಗ ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.&lt;/p&gt;&lt;h3&gt;ಪಾದಯಾತ್ರೆಯಲ್ಲಿ ಎಚ್&zwnj;ಡಿಡಿ, ಎಚ್&zwnj;ಡಿಕೆ ಭಾಗಿ:&lt;/h3&gt;&lt;p&gt;ಜು.30 ರಂದು ನಡೆಯಲಿರುವ ಪಾದಯಾತ್ರೆಗೆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್&zwnj;.ಡಿ ಕುಮಾರಸ್ವಾಮಿ ಅವರು ಚಾಲನೆ ನೀಡಲಿದ್ದಾರೆ. ಇದರ ನೇತೃತ್ವ ನಿಖಿಲ್&zwnj; ಕುಮಾರಸ್ವಾಮಿ ವಹಿಸಲಿದ್ದಾರೆ. ಜು.31 ಮಾಜಿ ಪ್ರಧಾನಿ ಎಚ್&zwnj;.ಡಿ.ದೇವೇಗೌಡ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬಲಿದ್ದಾರೆ. ಆ.1 ರಂದು ಸಾವಿರಾರು ರೈತರೊಂದಿಗೆ ಪಾದಯಾತ್ರೆ ಫ್ರೀಡಂ ಪಾರ್ಕ್&zwnj; ತಲುಪಲಿದ್ದು, ಅಲ್ಲಿ ಬೃಹತ್&zwnj; ಪ್ರತಿಭಟನಾ ಸಮಾವೇಶದೊಂದಿಗೆ ಪಾದಯಾತ್ರೆ ಮುಕ್ತಾಯವಾಗಲಿದೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಮುಖ್ಯಮಂತ್ರಿಗಳ ದ್ವಂದ್ವ ಹೇಳಿಕೆ:&lt;/strong&gt;&lt;/p&gt;&lt;p&gt;ಈ ಸರ್ಕಾರಕ್ಕೆ ರೈತರ ಮೇಲೆ ಕಿಂಚಿತ್ತೂ ಕಾಳಜಿಯಿಲ್ಲ ಎನ್ನುವುದಕ್ಕೆ ಅವರ ನಡವಳಿಕೆಯೇ ಸಾಕ್ಷಿ. ಒಂದು ಕಡೆ ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮಗಳ ಮುಂದೆ ನಿಂತು, ಈ ಬಿಡದಿ ಟೌನ್&zwnj;ಶಿಪ್ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ರಚಿಸುತ್ತೇವೆ ಎಂದು ಭರವಸೆ ನೀಡುತ್ತಾರೆ. ಆದರೆ ಇನ್ನೊಂದು ಕಡೆ, ಅದೇ ಬೆನ್ನಲ್ಲೇ ಗುಟ್ಟಾಗಿ ಮತ್ತೆ 4 ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತಾರೆ. ಸಿಎಂ ಅವರ ಈ ದ್ವಂದ್ವ ನೀತಿ ರೈತರಿಗೆ ಮಾಡಿದ ದ್ರೋಹವಲ್ಲವೇ ಎಂದು ಪ್ರಶ್ನಿಸಿದರು.&lt;/p&gt;&lt;p&gt;&lt;strong&gt;ಪಕ್ಷಾತೀತ ಹೋರಾಟಕ್ಕೆ ಕರೆ:&lt;/strong&gt;&lt;/p&gt;&lt;p&gt;ಇದು ಕೇವಲ ಒಂದು ರಾಜಕೀಯ ಪಕ್ಷದ ಹೋರಾಟವಲ್ಲ. ಇದು ನಮ್ಮ ರೈತರ ಬದುಕಿನ ಹೋರಾಟ. ಹಾಗಾಗಿ ರಾಜ್ಯದ ಎಲ್ಲಾ ರೈತ ಸಂಘಟನೆಗಳು, ಪ್ರಗತಿಪರ ಚಿಂತಕರು, ರೈತ ಬಾಂಧವರು ಪಕ್ಷಾತೀತವಾಗಿ ಈ ಬೃಹತ್&zwnj; ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-and-jds-hold-separate-padayatras-opposing-the-bidadi-township-rav/articleshow-n1ti8py"/>
        </item>
        <item>
            <title><![CDATA[ನಾಡಗೀತೆಗೆ ‘ಬೌದ್ದರುದ್ಯಾನ’ ಹೊಸ ಪದ ಶಿಫಾರಸಿಗೂ ಕಅಪ್ರಾಗೂ ಸಂಬಂಧ ಇಲ್ಲ: ಬಿಳಿಮಲೆ ಸ್ಪಷ್ಟನೆ]]></title>
            <link>https://kannada.asianetnews.com/state/controversy-on-addition-bauddha-new-word-karnataka-naadageete-purushottam-bilimale-clarification-rav/articleshow-ozg831l</link>
            <guid isPermaLink="true">https://kannada.asianetnews.com/state/controversy-on-addition-bauddha-new-word-karnataka-naadageete-purushottam-bilimale-clarification-rav/articleshow-ozg831l</guid>
            <pubDate>Sat, 18 Jul 2026 06:03:01 +0530</pubDate>
            <description><![CDATA[&lt;p&gt;ಕುವೆಂಪು ವಿರಚಿತ &lsquo;ಜಯ ಭಾರತ ಜನನಿಯ ತನುಜಾತೇ&rsquo; ನಾಡಗೀತೆಗೆ ಬೌದ್ದರುದ್ಯಾನ ಪದ ಸೇರ್ಪಡೆ ಶಿಫಾರಸಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jayfkyb7xj3sj4gnz612p1w3,imgname-457758069-10161507585584034-915814561816407360-n.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.18):&lt;/strong&gt; ಕುವೆಂಪು ವಿರಚಿತ &lsquo;ಜಯ ಭಾರತ ಜನನಿಯ ತನುಜಾತೇ&rsquo; ನಾಡಗೀತೆಗೆ ಬೌದ್ದರುದ್ಯಾನ ಪದ ಸೇರ್ಪಡೆ ಶಿಫಾರಸಿಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&amp;nbsp;ಶುಕ್ರವಾರ ಈ ಕುರಿತು ಸ್ಪಷ್ಟೀಕರಣ ನೀಡಿರುವ ಅವರು, ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಜಯ ಭಾರತ ಜನನಿಯ ತನುಜಾತೇ ನಾಡಗೀತೆಗೆ ಬೌದ್ದರುದ್ಯಾನ ಸಾಲು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಮಿತಿ ರಚಿಸಿತ್ತು ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದಿದ್ದಾರೆ.&amp;nbsp;&lt;/p&gt;&lt;p&gt;ತಜ್ಞರ ಸಮಿತಿ ರಚಿಸಿದ್ದು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸರ್ಕಾರದ ಆದೇಶದ ಪ್ರಕಾರ ಸಮಿತಿ ಅಧ್ಯಕ್ಷನಾಗಿದ್ದ ನಾನು ಗೌರವಾನ್ವಿತ ಸದಸ್ಯರ ಅಭಿಪ್ರಾಯವನ್ನು ಕ್ರೋಢೀಕರಿಸಿ ಸಂಸ್ಕೃತಿ ಇಲಾಖೆಗೆ ಸಲ್ಲಿಸಿ ನನ್ನ ಕರ್ತವ್ಯ ಪೂರೈಸಿದ್ದೇನೆ ಎಂದಿದ್ದಾರೆ.&lt;/p&gt;&lt;p&gt;ಇದರ ಹೊರತಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸರ್ವ ಸದಸ್ಯರ ಸಭೆಯಲ್ಲಿ ಈ ವಿಷಯದ ಬಗೆಗೆ ಚರ್ಚೆಯೂ ಆಗಿಲ್ಲ ಎಂದು ಪುರುಷೋತ್ತಮ ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/controversy-on-addition-bauddha-new-word-karnataka-naadageete-purushottam-bilimale-clarification-rav/articleshow-ozg831l"/>
        </item>
        <item>
            <title><![CDATA[ನಮ್ಮ ಮೆಟ್ರೋದಲ್ಲಿ ಕಠಿಣ  ರೂಲ್ಸ್ ಜಾರಿ: ಈ ನಿಯಮ ಉಲ್ಲಂಘಿಸಿದ್ರೆ ₹25,000 ವರೆಗೆ ಭಾರೀ ದಂಡ! ಯಾವ ತಪ್ಪಿಗೆ ಎಷ್ಟು?]]></title>
            <link>https://kannada.asianetnews.com/karnataka-districts/bengaluru-namma-metro-fines-hiked-up-to-rs-25000-check-bmrcl-strict-new-rules-gdp/articleshow-p6ucmv6</link>
            <guid isPermaLink="true">https://kannada.asianetnews.com/karnataka-districts/bengaluru-namma-metro-fines-hiked-up-to-rs-25000-check-bmrcl-strict-new-rules-gdp/articleshow-p6ucmv6</guid>
            <pubDate>Sat, 18 Jul 2026 09:43:37 +0530</pubDate>
            <description><![CDATA[ಬೆಂಗಳೂರು ನಮ್ಮ ಮೆಟ್ರೋದಲ್ಲಿ ಶಿಸ್ತು ಮತ್ತು ಸುರಕ್ಷತೆಗಾಗಿ BMRCL ನಿಯಮ ಉಲ್ಲಂಘನೆ ದಂಡವನ್ನು 50 ಪಟ್ಟು ಹೆಚ್ಚಿಸಿದೆ. ಹಳಿಗೆ ಜಿಗಿಯುವುದು, ರೀಲ್ಸ್ ಮಾಡುವುದು, ಗೋಡೆಗಳ ಮೇಲೆ ಬರೆಯುವುದು ಮುಂತಾದ ತಪ್ಪುಗಳಿಗೆ ಈಗ ₹2,500 ರಿಂದ ₹25,000 ವರೆಗೆ ದಂಡ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳು 'ಜನ ವಿಶ್ವಾಸ್ ಕಾಯ್ದೆ' ಅಡಿಯಲ್ಲಿ ಜಾರಿಗೆ ಬಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvvgmz5j4fnpd685fdq8ehay,imgname-3-1782261120178.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಲೈಫ್&zwnj;ಲೈನ್ ಎಂದೇ ಕರೆಯಲ್ಪಡುವ 'ನಮ್ಮ ಮೆಟ್ರೋ' ಪ್ರಯಾಣಿಕರಲ್ಲಿ ಶಿಸ್ತು, ಸುರಕ್ಷತೆ ಮತ್ತು ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮೆಟ್ರೋ ನಿಲ್ದಾಣ ಹಾಗೂ ರೈಲುಗಳಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದು, ದಂಡದ ಮೊತ್ತವನ್ನು ಬರೋಬ್ಬರಿ 10 ರಿಂದ 50 ಪಟ್ಟು ಹೆಚ್ಚಳ ಮಾಡಿದೆ.&lt;/p&gt;&lt;p&gt;ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯವು ರೂಪಿಸಿದ್ದ 'ಜನ ವಿಶ್ವಾಸ್ ಕಾಯ್ದೆ (ನಿಬಂಧನೆ ತಿದ್ದುಪಡಿ) ಮಸೂದೆ-2026' ಕ್ಕೆ ಕಳೆದ ಏಪ್ರಿಲ್&zwnj;ನಲ್ಲಿ ರಾಷ್ಟ್ರಪತಿಗಳು ಅಂಗೀಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಮೆಟ್ರೋ ಸಂಸ್ಥೆಗಳಿಗೆ ನಿಯಮ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಬಿಎಂಆರ್&zwnj;ಸಿಎಲ್ ನಮ್ಮ ಮೆಟ್ರೋದಲ್ಲಿ ಈ ನೂತನ ದಂಡದ ನಿಯಮಗಳನ್ನು ಅನುಷ್ಠಾನಕ್ಕೆ ತಂದಿದೆ. ಹೊಸ ನಿಯಮಗಳ ಪ್ರಕಾರ ಕನಿಷ್ಠ ₹2,500 ರಿಂದ ಗರಿಷ್ಠ ₹25,000 ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;h2&gt;ಮೆಟ್ರೋದಲ್ಲಿ ಯಾವ ಉಲ್ಲಂಘನೆಗೆ ಎಷ್ಟು ದಂಡ?&lt;/h2&gt;&lt;p&gt;ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಸಾರ್ವಜನಿಕ ಆಸ್ತಿ ರಕ್ಷಣೆಗಾಗಿ ಪರಿಷ್ಕರಿಸಲಾದ ನೂತನ ದಂಡದ ವಿವರಗಳು ಈ ಕೆಳಗಿನಂತಿವೆ:&lt;/p&gt;&lt;p&gt;ಹಳಿಗೆ ಜಿಗಿಯುವುದು, ಹಳಿಯ ಮೇಲೆ ಓಡಾಡುವುದು, ಟಿಕೆಟ್/ಪಾಸ್ ದುರ್ಬಳಕೆ ಹಾಗೂ ನಕಲಿ ಟಿಕೆಟ್ ಬಳಕೆಗೆ ₹5,000 ರಿಂದ ₹25,000 ವರೆಗೆ ದಂಡ ಬೀಳಲಿದೆ. ಈ ಹಿಂದೆ ₹500 ರಿಂದ ₹5,000 ವರೆಗೆ ಇತ್ತು. ಸುರಕ್ಷತೆಗೆ ಧಕ್ಕೆ ತರುವ ಅತ್ಯಂತ ಗಂಭೀರ ತಪ್ಪು ಇದಾಗಿದೆ.&lt;/p&gt;&lt;p&gt;ನಿಲ್ದಾಣದ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು, ಚಿತ್ರ ಬಿಡಿಸುವುದು, ಬರೆಯುವುದು ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ₹10,000 ದಂಡ ಹಾಕಲಿದೆ. ಸೌಂದರ್ಯ ಹಾಳು ಮಾಡುವ ಈ ಕೃತ್ಯಕ್ಕೆ ಈ ಹಿಂದೆ ಕೇವಲ ₹1,000 ದಂಡವಿತ್ತು.&lt;/p&gt;&lt;p&gt;ಅನುಮತಿಯಿಲ್ಲದೆ ವ್ಯಾಪಾರ ಮಾಡುವುದು, ವಸ್ತುಗಳ ಮಾರಾಟ ಹಾಗೂ ಅನಗತ್ಯ ಪ್ರಚಾರ ನಡೆಸುವುದು ₹5,000 ದಂಡ ಬೀಳಲಿದೆ. ನಿಲ್ದಾಣದ ಆವರಣದಲ್ಲಿ ಅನಧಿಕೃತ ವಾಣಿಜ್ಯ ಚಟುವಟಿಕೆ ತಡೆಯಲು ಜಾರಿಯಾಗುತ್ತಿದೆ.&lt;/p&gt;&lt;p&gt;ರೈಲಿನಲ್ಲಿ ರೀಲ್ಸ್ ಮಾಡುವುದು, ಆಹಾರ ಸೇವನೆ (ತಿಂಡಿ-ತಿನಿಸು), ನೆಲದ ಮೇಲೆ ಕುಳಿತುಕೊಳ್ಳುವುದು, ಜೋರಾಗಿ ಮ್ಯೂಸಿಕ್ ಹಾಕಿ ಕಿರಿಕಿರಿ ಮಾಡುವುದು ₹2,500 ರಿಂದ ₹10,000 ವರೆಗೆ ದಂಡ ಬೀಳಲಿದೆ. ಈ ಹಿಂದೆ ₹500 ದಂಡ ಇತ್ತು. ಇತರ ಪ್ರಯಾಣಿಕರ ನೆಮ್ಮದಿಗೆ ಭಂಗ ತರುವುದನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ.&lt;/p&gt;&lt;p&gt;ಮದ್ಯಪಾನ ಮಾಡಿ ಪ್ರಯಾಣಿಸುವುದು, ಗಲಾಟೆ/ಜಗಳ ಮಾಡುವುದು, ಉಗುಳುವುದು ಮತ್ತು ಅಸಭ್ಯ ವರ್ತನೆ ₹2,500 ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ಬಿಸಿ ಮುಟ್ಟಿಸಲು ಈ ನಿಯಮ.&lt;/p&gt;&lt;p&gt;ಪಟಾಕಿ, ಸ್ಫೋಟಕ ವಸ್ತುಗಳು, ಅಪಾಯಕಾರಿ ರಾಸಾಯನಿಕ ಅಥವಾ ನಿಷೇಧಿತ ವಸ್ತುಗಳ ಸಾಗಾಟ ₹2,500 ದಂಡ. ಈ ಹಿಂದೆ ಇದಕ್ಕೆ ₹500 ದಂಡವಿತ್ತು. ಸುರಕ್ಷತೆಯ ದೃಷ್ಟಿಯಿಂದ ದಂಡ ಹೆಚ್ಚಿಸಲಾಗಿದೆ.&lt;/p&gt;&lt;h2&gt;ಪ್ರತಿ 3 ವರ್ಷಕ್ಕೊಮ್ಮೆ ದಂಡದ ಮೊತ್ತ ಹೆಚ್ಚಳ:&lt;/h2&gt;&lt;p&gt;ಈ ನೂತನ ಕಾಯ್ದೆಯ ಪ್ರಕಾರ, ಮೆಟ್ರೋದಲ್ಲಿ ನಿಗದಿಪಡಿಸಲಾದ ಈ ಎಲ್ಲಾ ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಸ್ವಯಂಚಾಲಿತವಾಗಿ (Automatic) ಶೇಕಡಾ 10 ರಷ್ಟು ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ನಿಯಮ ಉಲ್ಲಂಘನೆಗೆ ಶಾಶ್ವತ ತಡೆ ಒಡ್ಡುವುದು ಬಿಎಂಆರ್&zwnj;ಸಿಎಲ್ ಉದ್ದೇಶವಾಗಿದೆ.&lt;/p&gt;&lt;h2&gt;ಆತ್ಮHತ್ಯೆ ತಡೆಗೆ ₹1,274 ಕೋಟಿ ವೆಚ್ಚದಲ್ಲಿ 'ಪ್ಲಾಟ್&zwnj;ಫಾರ್ಮ್ ಸ್ಕ್ರೀನ್ ಡೋರ್' ಅಳವಡಿಕೆ&lt;/h2&gt;&lt;p&gt;ಮೆಟ್ರೋ ಹಳಿಗಳ ಮೇಲೆ ಜಿಗಿದು ಆತ್ಮHತ್ಯೆ ಮಾಡಿಕೊಳ್ಳುವ ಮತ್ತು ಆತ್ಮಹತ್ಯೆಗೆ ಯತ್ನಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿರುವುದರ ಜೊತೆಗೆ ಮೆಟ್ರೋ ಸಂಚಾರದಲ್ಲೂ ಭಾರಿ ವ್ಯತ್ಯಯವಾಗುತ್ತಿದೆ.&lt;/p&gt;&lt;p&gt;ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬಿಎಂಆರ್&zwnj;ಸಿಎಲ್ ಸುಮಾರು ₹1,274 ಕೋಟಿ ಭಾರಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ 'ಪ್ಲಾಟ್&zwnj;ಫಾರ್ಮ್ ಸ್ಕ್ರೀನ್ ಡೋರ್' (PSD) ಅಳವಡಿಸುವ ಬೃಹತ್ ಯೋಜನೆ ರೂಪಿಸಿದೆ.&lt;/p&gt;&lt;p&gt;ಈಗ ಚಾಲ್ತಿಯಲ್ಲಿರುವ 35 ನಿಲ್ದಾಣಗಳು ಸೇರಿದಂತೆ ಒಟ್ಟು 191 ಮೆಟ್ರೋ ನಿಲ್ದಾಣಗಳಲ್ಲಿ ಹಂತ ಹಂತವಾಗಿ ಈ ಸ್ವಯಂಚಾಲಿತ ಗೇಟ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ.&lt;/p&gt;&lt;p&gt;ಈಗಾಗಲೇ ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ'ದ (Pink Line) ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ ಅಳವಡಿಕೆ ಕಾರ್ಯ ಆರಂಭಗೊಂಡಿದೆ.&lt;/p&gt;&lt;p&gt;ಮುಂಬರುವ ದಿನಗಳಲ್ಲಿ ನಮ್ಮ ಮೆಟ್ರೋದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲು ಬಿಎಂಆರ್&zwnj;ಸಿಎಲ್ ಸಿದ್ಧತೆ ನಡೆಸಿದೆ. ರೈಲು ಬಂದು ನಿಂತಾಗ ಮಾತ್ರ ಈ ಸ್ಕ್ರೀನ್ ಡೋರ್&zwnj;ಗಳು ತೆರೆದುಕೊಳ್ಳುವುದರಿಂದ, ಸಾರ್ವಜನಿಕರು ಹಳಿಗೆ ಜಿಗಿಯುವುದನ್ನು ಸಂಪೂರ್ಣವಾಗಿ ತಡೆಯಬಹುದು.&lt;/p&gt;&lt;h2&gt;ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಸ್ಪ್ರೇ ಆತಂಕ: ಸಿಕ್ಕಿಬೀಳದ ಕಿಡಿಗೇಡಿ&lt;/h2&gt;&lt;p&gt;ಇದೇ ಸಂದರ್ಭದಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಯ ಅಗತ್ಯತೆಯನ್ನು ಸಾರುವ ಘಟನೆಯೊಂದು ಇಂದಿರಾನಗರದಲ್ಲಿ ನಡೆದಿದೆ. ಗುರುವಾರ ರಾತ್ರಿ ಸುಮಾರು 7.30ರ ಸುಮಾರಿಗೆ ನೇರಳೆ ಮಾರ್ಗದ ಇಂದಿರಾನಗರ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಹೊರಬರುತ್ತಿದ್ದಾಗ, ಮಾಸ್ಕ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಹಠಾತ್ ಆಗಿ ಪ್ರಯಾಣಿಕರ ಮೇಲೆ ಏನೋ ದ್ರವವನ್ನು ಸಿಂಪಡಿಸಿ ಓಡಿಹೋಗಿದ್ದಾನೆ.&lt;/p&gt;&lt;p&gt;ನಿಲ್ದಾಣದ ಆವರಣದಲ್ಲಿ ಹೊಗೆಯಂತಹ ವಾತಾವರಣ ಆವರಿಸಿದ್ದರಿಂದ ರಾಸಾಯನಿಕ ದಾಳಿ ನಡೆದಿರಬಹುದು ಎಂದು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಆತಂಕದಿಂದ ಓಡಾಡಿದರು. ತಕ್ಷಣ ಎಚ್ಚೆತ್ತ ಮೆಟ್ರೋ ಅಧಿಕಾರಿಗಳು ತನಿಖೆ ನಡೆಸಿದಾಗ, ಆ ಕಿಡಿಗೇಡಿ ಸಿಂಪಡಿಸಿದ್ದು ಯಾವುದೇ ಅಪಾಯಕಾರಿ ರಾಸಾಯನಿಕವಲ್ಲ, ಬದಲಿಗೆ 'ರೂಮ್ ಫ್ರೆಶ್&zwnj;ನರ್' ಎಂದು ತಿಳಿದುಬಂದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟರು. ಸದ್ಯ ಇಂದಿರಾನಗರ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅನಗತ್ಯ ಆತಂಕ ಸೃಷ್ಟಿಸಿದ ಆ ಕಿಡಿಗೇಡಿಯ ಪತ್ತೆಗೆ ಜಾಲ ಬೀಸಿದ್ದಾರೆ.&lt;/p&gt;&lt;p&gt;ನಮ್ಮ ಮೆಟ್ರೋ ಕೇವಲ ಪ್ರಯಾಣಕ್ಕೆ ಮಾತ್ರವಲ್ಲ, ಅದು ಬೆಂಗಳೂರಿನ ಹೆಮ್ಮೆ. ಪ್ರಯಾಣಿಕರು ನಿಯಮಗಳನ್ನು ಗೌರವಿಸಿ, ದಂಡದಿಂದ ಪಾರಾಗುವುದರ ಜೊತೆಗೆ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-namma-metro-fines-hiked-up-to-rs-25000-check-bmrcl-strict-new-rules-gdp/articleshow-p6ucmv6"/>
        </item>
        <item>
            <title><![CDATA[ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಕ್ಕರೂ ಜೈಲೇ ಗತಿ ವಿವರಿಸಿದ ಹೈಕೋರ್ಟ್, ಕೆ.ಆರ್. ನಗರದ ಮೂವರು ಆರೋಪಿಗಳ ಅರ್ಜಿ ವಜಾ]]></title>
            <link>https://kannada.asianetnews.com/state/prajwal-revanna-bail-hearing-adjourned-karnataka-high-court-rejects-plea-of-co-accused-in-abduction-case-gdp/articleshow-pxykwtk</link>
            <guid isPermaLink="true">https://kannada.asianetnews.com/state/prajwal-revanna-bail-hearing-adjourned-karnataka-high-court-rejects-plea-of-co-accused-in-abduction-case-gdp/articleshow-pxykwtk</guid>
            <pubDate>Sat, 18 Jul 2026 10:19:26 +0530</pubDate>
            <description><![CDATA[ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಬೇರೊಂದು ಪ್ರಕರಣದಲ್ಲಿ ಜೈಲಿನಲ್ಲಿರುವುದರಿಂದ ಜಾಮೀನು ಸಿಕ್ಕರೂ ಬಿಡುಗಡೆಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಸಂತ್ರಸ್ತೆ ಅಪಹರಣ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ನಡಾವಳಿ ರದ್ದು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1n1xn37eqzrnf7d937wvb9w,imgname-prajwal-revanna--1--1754127062119.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಲೈಂಗಿಕ ದೌರ್ಜನ್ಯ ಮತ್ತು ಅThಚಾರ ಪ್ರಕರಣಗಳ ಆರೋಪ ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನು ಸಂಕಷ್ಟಗಳು ಮತ್ತಷ್ಟು ಬಿಗಿಗೊಂಡಿವೆ. ಮಹಿಳೆಯೊಬ್ಬರ ಖಾಸಗಿ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಡಿಫಾಲ್ಟ್ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, &quot;ಈ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದರೂ ಸಹ ಪ್ರಜ್ವಲ್ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ&quot; ಎಂದು ಅತ್ಯಂತ ಪ್ರಮುಖ ಕಾನೂನು ಸೂಕ್ಷ್ಮತೆಯನ್ನು ಒತ್ತಿ ಹೇಳಿದೆ.&lt;/p&gt;&lt;p&gt;ಜಾಮೀನು ತಿರಸ್ಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್&zwnj;ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.&lt;/p&gt;&lt;h2&gt;ಜಾಮೀನು ಸಿಕ್ಕರೂ ಮುಕ್ತಿ ಇಲ್ಲವೇಕೆ? ಹೈಕೋರ್ಟ್ ಸ್ಪಷ್ಟನೆ&lt;/h2&gt;&lt;p&gt;ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಮತ್ತು ವಿಶೇಷ ಸರ್ಕಾರಿ ಅಭಿಯೋಜಕರ ನಡುವೆ ಕೆಲಕಾಲ ವಾದ-ಪ್ರತಿವಾದಗಳು ನಡೆದವು. ಅರ್ಜಿದಾರರ ಪರ ವಕೀಲರು, &quot;ಈ ಅರ್ಜಿಗೆ ಸರ್ಕಾರವು ಇನ್ನೂ ಆಕ್ಷೇಪಣೆ ಸಲ್ಲಿಸಿಲ್ಲ&quot; ಎಂದು ನ್ಯಾಯಪೀಠದ ಗಮನಕ್ಕೆ ತಂದರು.&lt;/p&gt;&lt;p&gt;ಆಗ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಇಲ್ಲಿ ಪ್ರಮುಖ ಕಾನೂನಾತ್ಮಕ ಪ್ರಶ್ನೆಯೊಂದು ಉದ್ಭವಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಜ್ವಲ್ ರೇವಣ್ಣ ಅವರು ಈಗಾಗಲೇ ಮತ್ತೊಂದು ಪ್ರತ್ಯೇಕ ಅThಚಾರ ಪ್ರಕರಣದಲ್ಲಿ 'ಜೀವಾವಧಿ ಶಿಕ್ಷೆ'ಗೆ (Life Imprisonment) ಗುರಿಯಾಗಿ ಜೈಲು ಪಾಲಾಗಿದ್ದಾರೆ. ಹೀಗಾಗಿ, ಪ್ರಸ್ತುತ ಪರಿಗಣನೆಯಲ್ಲಿರುವ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಒಂದು ವೇಳೆ ನ್ಯಾಯಾಲಯವು ಜಾಮೀನು ನೀಡಿದರೂ ಸಹ, ಜೀವಾವಧಿ ಶಿಕ್ಷೆ ಜಾರಿಯಲ್ಲಿರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶವನ್ನು ಮುಂದಿನ ವಿಚಾರಣೆಯಲ್ಲಿ ಸವಿಸ್ತಾರವಾಗಿ ತೀರ್ಮಾನಿಸೋಣ ಎಂದು ಹೇಳಿದ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿತು.&lt;/p&gt;&lt;h2&gt;ಸಂತ್ರಸ್ತೆ ಅಪಹರಣ ಪ್ರಕರಣ: ಕೆ.ಆರ್. ನಗರದ ಮೂವರು ಆರೋಪಿಗಳ ಅರ್ಜಿ ವಜಾ&lt;/h2&gt;&lt;p&gt;ಇದೇ ವೇಳೆ, ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತೊಂದು ಮಹತ್ವದ ಆದೇಶ ನೀಡಿದೆ. ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್ ನಡಾವಳಿಗಳನ್ನು ರದ್ದುಪಡಿಸಬೇಕು ಎಂದು ಕೋರಿ ಕೆ.ಆರ್. ನಗರದ ಆರೋಪಿಗಳಾದ ಸುಜಯ್, ಎಚ್.ಎನ್. ಮಧು ಮತ್ತು ಎಚ್.ಡಿ. ಮನುಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.&lt;/p&gt;&lt;h2&gt;ಹೈಕೋರ್ಟ್ ಅರ್ಜಿ ತಿರಸ್ಕರಿಸಿದ್ದಕ್ಕೆ ಕಾರಣಗಳೇನು?&lt;/h2&gt;&lt;p&gt;ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಈ ಕೆಳಗಿನ ಕಾರಣಗಳನ್ನು ನೀಡಿ ಆರೋಪಿಗಳ ಮನವಿಯನ್ನು ತಿರಸ್ಕರಿಸಿತು.&lt;/p&gt;&lt;p&gt;ದೋಷಾರೋಪ ಪಟ್ಟಿಯಲ್ಲಿನ ವಿವರಗಳು: ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (Charge Sheet) ಸಂತ್ರಸ್ತೆಯ ಅಪಹರಣದ ಸಂಚಿನಲ್ಲಿ ಈ ಮೂವರು ಆರೋಪಿಗಳು ವಹಿಸಿರುವ ಪ್ರತಿಯೊಂದು ಪಾತ್ರದ ಬಗ್ಗೆ ಅತ್ಯಂತ ವಿವರವಾದ ದಾಖಲೆಗಳನ್ನು ಒದಗಿಸಲಾಗಿದೆ.&lt;/p&gt;&lt;p&gt;ವಿಚಾರಣಾ ನ್ಯಾಯಾಲಯದ ವ್ಯಾಪ್ತಿ: ಆರೋಪಿಗಳು ನಿಜವಾಗಿಯೂ ಅಪರಾಧ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪೂರ್ಣ ಪ್ರಮಾಣದ ಸಾಕ್ಷ್ಯವಿಚಾರಣೆ ನಡೆಸಿ ತೀರ್ಮಾನಿಸಬೇಕಿರುವುದು ವಿಚಾರಣಾ ನ್ಯಾಯಾಲಯವೇ ಹೊರತು, ಈ ಹಂತದಲ್ಲಿ ಹೈಕೋರ್ಟ್ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.&lt;/p&gt;&lt;h2&gt;ಕೋರ್ಟ್&zwnj;ನಲ್ಲಿ ನಡೆದ ವಾದ-ಪ್ರತಿವಾದಗಳೇನು?&lt;/h2&gt;&lt;h3&gt;ಅರ್ಜಿದಾರರ ಪರ ವಕೀಲರ ವಾದ:&lt;/h3&gt;&lt;p&gt;ವಿಚಾರಣೆ ವೇಳೆ ಮೂವರು ಆರೋಪಿಗಳ ಪರ ವಕೀಲರು ವಾದ ಮಂಡಿಸಿ, &quot;ನನ್ನ ಕಕ್ಷಿದಾರರು ಈ ಪ್ರಕರಣದಲ್ಲಿ ಕೇವಲ 3, 4 ಮತ್ತು 5ನೇ ಆರೋಪಿಗಳಾಗಿದ್ದಾರೆ. ಇವರ ವಿರುದ್ಧದ ಆರೋಪಗಳನ್ನು ದೃಢಪಡಿಸಲು ದೋಷಾರೋಪ ಪಟ್ಟಿಯಲ್ಲಿ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಸಂತ್ರಸ್ತೆಯು ದಂಡಾಧಿಕಾರಿಗಳ ಮುಂದೆ ನೀಡಿರುವ ಪ್ರಾಮಾಣೀಕೃತ ಹೇಳಿಕೆಯಲ್ಲೂ ಈ ಮೂವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಕೇವಲ ಸಂತ್ರಸ್ತೆಯನ್ನು ಅವರ ಹಳ್ಳಿಯಿಂದ ಸಾಲಿಗ್ರಾಮದಲ್ಲಿರುವ 8ನೇ ಆರೋಪಿಯ ಮನೆಗೆ ಕಾರಿನಲ್ಲಿ ಕರೆತಂದು ಬಿಟ್ಟಿರುವುದನ್ನು ಹೊರತುಪಡಿಸಿದರೆ, ಇವರು ಅಪಹರಣದ ಪಿತೂರಿ ನಡೆಸಿದ್ದಾರೆ ಅಥವಾ 2ನೇ ಆರೋಪಿಯೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ವಿಚಾರಣೆಯನ್ನು ರದ್ದುಗೊಳಿಸಬೇಕು&quot; ಎಂದು ಕೋರಿದರು.&lt;/p&gt;&lt;h3&gt;ವಿಶೇಷ ಸರ್ಕಾರಿ ಅಭಿಯೋಜಕರ ಪ್ರತಿವಾದ:&lt;/h3&gt;&lt;p&gt;ಸರ್ಕಾರದ ಪರವಾಗಿ ಹಾಜರಿದ್ದ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಬಿ.ಎನ್. ಜಗದೀಶ್ ಅವರು ಈ ವಾದವನ್ನು ಬಲವಾಗಿ ವಿರೋಧಿಸಿದರು. &quot;ಆರೋಪಿಗಳು ಪ್ರಕರಣದ ಇತರ ಪ್ರಮುಖ ಆರೋಪಿಗಳೊಂದಿಗೆ ನಿರಂತರವಾಗಿ ಫೋನ್ ಮೂಲಕ ಸಂಪರ್ಕದಲ್ಲಿದ್ದರು ಮತ್ತು ಸಂಭಾಷಣೆ ನಡೆಸಿದ್ದರು ಎಂಬುದಕ್ಕೆ ಗಟ್ಟಿ ದಾಖಲೆಗಳಿವೆ. ಅಪಹರಣ ಪ್ರಕ್ರಿಯೆಯಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿರುವ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಸಂಪೂರ್ಣ ವಿವರಣೆ ನೀಡಲಾಗಿದೆ. ಆದ್ದರಿಂದ ಇವರ ಅರ್ಜಿಯನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು&quot; ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.&lt;/p&gt;&lt;p&gt;ಉಭಯ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ಈಗಾಗಲೇ ಆರೋಪ ಮುಕ್ತಗೊಳಿಸಲು ನಿರಾಕರಿಸಿ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದು, ಮೂವರ ವಿರುದ್ಧದ ತನಿಖೆ ಮುಂದುವರಿಸಲು ಹಸಿರು ನಿಶಾನೆ ನೀಡಿತು.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/prajwal-revanna-bail-hearing-adjourned-karnataka-high-court-rejects-plea-of-co-accused-in-abduction-case-gdp/articleshow-pxykwtk"/>
        </item>
        <item>
            <title><![CDATA[2ನೇ ವಿಮಾನ ನಿಲ್ದಾಣ ಕನಕಪುರಕ್ಕೆ ಬೇಡ; ಸಿಎಂಗೆ ಪತ್ರ ಬರೆದು ಸ್ಥಳ ಹೇಳಿದ ವಿಜಯೇಂದ್ರ]]></title>
            <link>https://kannada.asianetnews.com/state/bengaluru-2nd-airport-should-be-near-tumakuru-not-in-kanakapura-by-vijayendra-letter-to-cm-dk-shivakumar-mrq/articleshow-r452nlk</link>
            <guid isPermaLink="true">https://kannada.asianetnews.com/state/bengaluru-2nd-airport-should-be-near-tumakuru-not-in-kanakapura-by-vijayendra-letter-to-cm-dk-shivakumar-mrq/articleshow-r452nlk</guid>
            <pubDate>Sat, 18 Jul 2026 07:25:38 +0530</pubDate>
            <description><![CDATA[&lt;p&gt;ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದ ಬದಲು ತುಮಕೂರಿನಲ್ಲಿ ಸ್ಥಾಪಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿದೆ, ಆದರೆ ಕನಕಪುರದಲ್ಲಿ ಸ್ಥಾಪಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕೆ ಮಾತ್ರ ಲಭ್ಯವಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxsergexwfm4g2s86a62105v,imgname-dk-shivakumar-vijayendra-1784339513821.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬೆಂಗಳೂರಿನ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದ ಸಮೀಪ ಬದಲು ತುಮಕೂರು ಸುತ್ತಮುತ್ತ ಸ್ಥಾಪಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ತುಮಕೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳ ಜನತೆಗೆ ಸಮಾನ ಅನುಕೂಲ ಆಗುತ್ತದೆ. ಕನಕಪುರ ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕಷ್ಟೇ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಕನಕಪುರದಲ್ಲಿ ತಮ್ಮ ಜಮೀನಿನ ಬೆಲೆ ಹೆಚ್ಚಾಗಬೇಕು, ಅಲ್ಲಿ ತಮ್ಮ ಕಂಪನಿಗಳೂ ಬರಬೇಕೆಂಬ ಆಲೋಚನೆಯನ್ನು ಬದಿಗಿಟ್ಟು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಾಜ್ಯದ ಒಳಿತಿಗಾಗಿ ತುಮಕೂರು ಅಕ್ಕಪಕ್ಕದಲ್ಲಿ ಸ್ಥಾಪಿಸುವಂತೆ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ. ಇದರಿಂದ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಪ್ರಯೋಜನ ಆಗಲಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸಿಎಂ ಡಿಕೆ ಶಿವಕುಮಾರ್&zwnj;ಗೆ ವಿಜಯೇಂದ್ರ ಬರೆದ ಪತ್ರ&lt;/strong&gt;&lt;/h2&gt;&lt;p&gt;ಮಾನ್ಯ ಮುಖ್ಯಮಂತ್ರಿಗಳೇ,&lt;/p&gt;&lt;p&gt;ಬೆಂಗಳೂರು ಮಹಾನಗರವು ತನ್ನ ಸಾಮರ್ಥ್ಯ ಮೀರಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಮ್ಮ ಕ್ಷೇತ್ರವಾದ ಕನಕಪುರ ವ್ಯಾಪ್ತಿಯಲ್ಲಿ ಸ್ಥಾಪಿಸುವ ಬಗ್ಗೆ ಕೇಳಿಬರುತ್ತಿರುವ ಮಾಹಿತಿಯು ಜನಸಾಮಾನ್ಯರ, ಸಮಗ್ರ ಕರ್ನಾಟಕದ ಹಿತದೃಷ್ಟಿಯಿಂದ ಕೆಲ ಮಹತ್ವದ ವಿಚಾರಗಳನ್ನು ತಮ್ಮ ಮುಂದೆ ತರಲು ಈ ಬಹಿರಂಗ ಪತ್ರ.&lt;/p&gt;&lt;p&gt;ಮೊದಲನೆಯದಾಗಿ, ಬೆಂಗಳೂರು ಅಭಿವೃದ್ಧಿಯೇ ಕರ್ನಾಟಕದ ಅಭಿವೃದ್ಧಿಯಲ್ಲ. ರಾಜ್ಯದ ಅಭಿವೃದ್ಧಿಯ ಫಲ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ, ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗ ಸೇರಿ ಎಲ್ಲ ಪ್ರದೇಶಗಳಿಗೂ ಸಮಾನವಾಗಿ ತಲುಪುವಂತೆ ಯೋಜನೆಗಳನ್ನು ರೂಪಿಸುವುದು ಯಾವುದೇ ಸರ್ಕಾರದ ಜವಾಬ್ದಾರಿಯಾಗಿದೆ.&lt;/p&gt;&lt;p&gt;ಎರಡನೆಯದಾಗಿ, ಬೆಂಗಳೂರು ಈಗಾಗಲೇ ಜನಸಂಖ್ಯೆ, ವಾಹನ ದಟ್ಟಣೆ, ಕುಡಿಯುವ ನೀರು, ಸಂಚಾರ ಮತ್ತು ಪರಿಸರದ ಮೇಲೆ ಅತಿಯಾದ ಒತ್ತಡವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೊಂದು ಬೃಹತ್ ಮೂಲಸೌಕರ್ಯ ಯೋಜನೆಯನ್ನು ಬೆಂಗಳೂರಿನ ಸುತ್ತಮುತ್ತಲೇ ಕೇಂದ್ರೀಕರಿಸುವುದು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುವ ಆಪಾಯ ಹೊಂದಿದೆ.&lt;/p&gt;&lt;p&gt;ಹಿಂದಿನ ಕೆಲವು ಯೋಜನೆಗಳ ಅನುಭವಗಳಿಂದ ನಾವು ಪಾಠ ಕಲಿಯಬೇಕಾಗಿದೆ. ಉದಾಹರಣೆಗೆ, ಎಲೆಕ್ಟ್ರಾನಿಕ್ಸ್&zwnj; ಸಿಟಿಯನ್ನು ರಾಜ್ಯದ ಒಳಭಾಗದಲ್ಲಿ ಅಭಿವೃದ್ಧಿಪಡಿಸುವ ಬದಲು ತಮಿಳುನಾಡು ಗಡಿಯ ಸಮೀಪ ನಿರ್ಮಿಸಿದ ಪರಿಣಾಮ ಅದರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯ ಪ್ರಯೋಜನದ ಒಂದು ಭಾಗ ನೆರೆಯ ರಾಜ್ಯಕ್ಕೂ ಹರಿಯಿತು.&lt;/p&gt;&lt;p&gt;ಅದೇ ರೀತಿಯಲ್ಲಿ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಅದರ ಅಭಿವೃದ್ಧಿಯ ಪೂರಕ ಪರಿಣಾಮಗಳು ಮುಖ್ಯವಾಗಿ ಬೆಂಗಳೂರು ಸುತ್ತಮುತ್ತ ಮಾತ್ರ ಸೀಮಿತಗೊಂಡಿವೆ. ಇದೇ ಯೋಜನೆ ತುಮಕೂರು ಭಾಗದಲ್ಲಿ ಆರಂಭವಾಗಿದ್ದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ದೊರೆಯುತ್ತಿತ್ತು. ತುಮಕೂರು ಕೈಗಾರಿಕಾ ವಲಯವಾಗಿ ಮತ್ತು ಬೆಳೆಯುತ್ತಿರುವ ಬೆಂಗಳೂರು ಮೇಲಿನ ಜನಸಂಖ್ಯೆ ಮತ್ತು ಸಂಚಾರದ ಒತ್ತಡವೂ ಗಣನೀಯವಾಗಿ ಕಡಿಮೆಯಾಗುತ್ತಿತ್ತು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರದಲ್ಲಿ ನಿರ್ಮಿಸುವ ಬದಲು ತುಮಕೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಾಪಿಸುವುದೇ ರಾಜ್ಯದ ದೀರ್ಘಾವಧಿಯ ಹಿತಕ್ಕೆ ಅನುಕೂಲಕರ.&lt;/p&gt;&lt;p&gt;ತುಮಕೂರು ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳು, ರೈಲು ಸಂಪರ್ಕ, ಕೈಗಾರಿಕಾ ಬೆಳವಣಿಗೆ ಮತ್ತು ಭೌಗೋಳಿಕ ಸ್ಥಾನಮಾನದಿಂದಾಗಿ ರಾಜ್ಯದ ಮಧ್ಯಭಾಗಕ್ಕೆ ಸಹಜ ಪ್ರವೇಶದ್ವಾರವಾಗಿದೆ. ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗಗಳ ಜನತೆಗೆ ಸಮಾನ ಅನುಕೂಲ ದೊರೆಯುತ್ತದೆ. ಇದಕ್ಕೆ ವಿರುದ್ಧವಾಗಿ ಕನಕಪುರ ರಾಜ್ಯದ ದಕ್ಷಿಣ ತುದಿಯಲ್ಲಿದ್ದು, ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಅದರ ಪ್ರಯೋಜನ ಸೀಮಿತ ಪ್ರದೇಶಕ್ಕಷ್ಟೇ ಮಿತಿಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೀಸಲು ಅರಣ್ಯ ಪ್ರದೇಶಗಳು ಹಾಗೂ ಫಲವತ್ತಾದ ಕೃಷಿಭೂಮಿ ಸಮೀಪ ಇಂತಹ ಬೃಹತ್ ಯೋಜನೆಯನ್ನು ಕೈಗೊಳ್ಳುವುದು ಪರಿಸರ ಹಾಗೂ ಕೃಷಿ ಎರಡೂ ದೃಷ್ಟಿಯಿಂದ ಸೂಕ್ತವಲ್ಲ.&lt;/p&gt;&lt;p&gt;ಮಾನ್ಯರೇ, ನೆರೆಯ ರಾಜ್ಯಗಳನ್ನು ಗಮನಿಸಿದರೆ ಸಮತೋಲಿತ ಅಭಿವೃದ್ಧಿಯ ಮಹತ್ವ ಸ್ಪಷ್ಟವಾಗುತ್ತದೆ. ತಮಿಳುನಾಡಿನಲ್ಲಿ ಚೆನ್ನೈ, ಕೊಯಂಬತ್ತೂರು, ಮಧುರೈ, ತಿರುಚಿರಾಪಳ್ಳಿ, ಸೇಲಂ, ತಿರುನೆಲ್ವೆಲಿ ಸೇರಿ ಅನೇಕ ನಗರಗಳು ಅಭಿವೃದ್ಧಿಗೊಂಡಿವೆ. ಮಹಾರಾಷ್ಟ್ರದಲ್ಲಿ ಮುಂಬೈ ಜೊತೆಗೆ ಪುಣೆ, ನಾಗ್ಪುರ, ಔರಂಗಾಬಾದ್, ನಾಸಿಕ್, ಕೋಲ್ಹಾಪುರ ಮುಂತಾದ ನಗರಗಳು ಬೆಳವಣಿಗೆಯ ಕೇಂದ್ರಗಳಾಗಿವೆ. ಇದೇ ರೀತಿಯಾಗಿ ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಹೈದರಾಬಾದ್ ಜೊತೆಗೆ ವಿಶಾಖಪಟ್ಟಣಂ, ವಿಜಯವಾಡ, ಗುಂಟೂರು, ತಿರುಪತಿ, ವಾರಂಗಲ್ ಸೇರಿ ಅನೇಕ ನಗರಗಳು ಸಮಾನವಾಗಿ ಅಭಿವೃದ್ಧಿಗೊಂಡಿವೆ.&lt;/p&gt;&lt;p&gt;ಆದರೆ, ಕರ್ನಾಟಕದಲ್ಲಿ ಅಭಿವೃದ್ಧಿಯು ಬಹುತೇಕ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಮೈಸೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ಹಾವೇರಿ ಮೊದಲಾದ ನಗರಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕ ಅಭಿವೃದ್ಧಿಯನ್ನು ಇನ್ನೂ ಕಾಣಬೇಕಿದೆ. ಇದರ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಮತ್ತು ಹೂಡಿಕೆಗಾಗಿ ಜನ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಇದು ಬೆಂಗಳೂರಿನ ಮೇಲಿನ ಒತ್ತಡವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ.&lt;/p&gt;&lt;p&gt;ಮತ್ತೊಂದು ಮಹತ್ವದ ವಿಷಯವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ. ರಾಜ್ಯದಲ್ಲಿ ಬೃಹತ್ ಯೋಜನೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಅವು ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಳ್ಳುತ್ತಿವೆ ಎಂಬ ಸಾರ್ವಜನಿಕ ಅನುಮಾನ ವ್ಯಕ್ತವಾಗುತ್ತಿದೆ. ಸರ್ಕಾರ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಪಾರದರ್ಶಕವಾಗಿದ್ದು, ಸಮಗ್ರ ಕರ್ನಾಟಕದ ಅಭಿವೃದ್ಧಿಯ ಉದ್ದೇಶವನ್ನೇ ಪ್ರತಿಬಿಂಬಿಸಬೇಕು ಎಂಬುದು ಜನರ ನಿರೀಕ್ಷೆ.&lt;/p&gt;&lt;p&gt;ಮಾನ್ಯ ಮುಖ್ಯಮಂತ್ರಿಗಳಾದ ತಾವು ಕನಕಪುರದಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ತೀರ್ಮಾನ ಮಾಡುವ ಮುನ್ನ, ರಾಜ್ಯದ ಎಲ್ಲಾ ಶಾಸಕರು ಅಭಿಪ್ರಾಯ ಸಂಗ್ರಹಿಸಬೇಕು. ಮುಖ್ಯಮಂತ್ರಿ ಆದ ಕ್ಷಣ ಕೇವಲ ಕೇತ್ರ ಎಂಬ ಕಾರಣಕ್ಕೆ ಏಕಪಕ್ಷೀಯ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಹೋಗಲಿ, ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಶಾಸಕರ ಒಪ್ಪಿಗೆಯನ್ನಾದರೂ ಪಡೆಯುವುದು ಒಳಿತು.&lt;/p&gt;&lt;p&gt;ಏಕೆಂದರೆ, ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತುಮಕೂರು ರಸ್ತೆಯಲ್ಲಿ ಸ್ಥಾಪಿಸಬೇಕು ಎಂದು ಈಗಾಗಲೇ ಬಹಿರಂಗ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಎಲ್ಲಿ ಆಗಬೇಕು ಎಂಬುದನ್ನು ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಮುಕ್ತ ಚರ್ಚೆ ನಡೆಸಿದ ನಂತರ ತೀರ್ಮಾನಿಸುವುದು ಸೂಕ್ತ. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಶಾಸಕರೇ ಬಂಡೆದ್ದು ಅದೊಂದು ಎರಡನೇ ಬಿಡದಿ ಟೌನ್&zwnj;ಶಿಪ್ ಯೋಜನೆಯಂತೆ ವಿವಾದಕ್ಕೆ ಸಿಲುಕಬಾರದು.&lt;/p&gt;&lt;p&gt;ಮಾನ್ಯ ಮುಖ್ಯಮಂತ್ರಿಗಳೇ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂಥ ಯೋಜನೆ ಮುಂದಿನ ಹಲವು ದಶಕಗಳ ಕರ್ನಾಟಕದ ಆರ್ಥಿಕ, ಕೈಗಾರಿಕಾ ಮತ್ತು ಪ್ರಾದೇಶಿಕ ಅಭಿವೃದ್ಧಿಯ ದಿಕ್ಕು ನಿರ್ಧರಿಸುವ ಐತಿಹಾಸಿಕ ನಿರ್ಧಾರ. ಆದ್ದರಿಂದ ಈ ಯೋಜನೆಯನ್ನು ಕೇವಲ ಒಂದು ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದಲ್ಲ, ಇಡೀ ರಾಜ್ಯದ ಸಮತೋಲಿತ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಅಂತಿಮಗೊಳಿಸುವಂತೆ ತಮ್ಮಲ್ಲಿ ವಿನಯಪೂರ್ವಕವಾಗಿ ಆಗ್ರಹಿಸುತ್ತೇನೆ. ಕೋಟ್ಯಂತರ ಕನ್ನಡಿಗರ ಆಶಯವೂ ಇದೇ ಆಗಿದೆ ಎಂಬುದನ್ನು ವಿನಮ್ರವಾಗಿ ತಮ್ಮ ಗಮನಕ್ಕೆ ತರುತ್ತಿದ್ದೇನೆ.&lt;/p&gt;&lt;p&gt;&lt;strong&gt;-ಬಿ.ವೈ. ವಿಜಯೇಂದ್ರ&lt;/strong&gt;&lt;/p&gt;&lt;p&gt;&lt;strong&gt;ರಾಜ್ಯ ಅಧ್ಯಕ್ಷರು, ಬಿಜೆಪಿ ಕರ್ನಾಟಕ&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-2nd-airport-should-be-near-tumakuru-not-in-kanakapura-by-vijayendra-letter-to-cm-dk-shivakumar-mrq/articleshow-r452nlk"/>
        </item>
        <item>
            <title><![CDATA[Chennamma: HD ದೇವೇಗೌಡ್ರು ಜೈಲಿಗೆ ಹೋದಾಗಲೂ ಗಟ್ಟಿಯಾಗಿ ನಿಂತು ಮನೆ ನಡೆಸಿದ್ದ ಚೆನ್ನಮ್ಮ; 72 ವರ್ಷದ ದಾಂಪತ್ಯ!]]></title>
            <link>https://kannada.asianetnews.com/state/former-prime-minister-hd-devegowda-wife-chennamma-marriage/articleshow-rb4bddz</link>
            <guid isPermaLink="true">https://kannada.asianetnews.com/state/former-prime-minister-hd-devegowda-wife-chennamma-marriage/articleshow-rb4bddz</guid>
            <pubDate>Sat, 18 Jul 2026 18:05:20 +0530</pubDate>
            <description><![CDATA[&lt;p&gt;HD Deve Gowda wife Chennamma death: 'ಮಣ್ಣಿನ ಮಗ' ಎಂದೇ ಖ್ಯಾತರಾದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ಹಾಸನದ ಒಂದು ಪುಟ್ಟ ಹಳ್ಳಿಯಿಂದ ದೆಹಲಿಯ ಕೆಂಪುಕೋಟೆಯವರೆಗೆ ಬೆಳೆದ ಅವರ ರಾಜಕೀಯ ಪ್ರಯಾಣ ಅಷ್ಟು ಸುಲಭದ್ದಾಗಿರಲಿಲ್ಲ. ಹೂವಿನ ಹಾಸಿಗೆಯಂತಿರದ ಈ ಕಠಿಣ ಹಾದಿಯಲ್ಲಿ ನೆರಳಾಗಿ, ಶಕ್ತಿಯಾಗಿ ನಿಂತವರು ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ.&amp;nbsp;&lt;/p&gt;&lt;p&gt;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxtkfy87jgdfadvsa7fv2ysx,imgname-new-project--53--1784378030343.jpg" type="image/jpeg" height="390" width="690"/>
            <content:encoded><![CDATA[&lt;p&gt;HD Deve Gowda wife Chennamma death: ಎಚ್.ಡಿ. ದೇವೇಗೌಡರು ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಮುಗಿಸಿ, ಕಾಂಟ್ರಾಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದ ಹೊಸತರಲ್ಲೇ ಮದುವೆಯ ಯೋಚನೆ ಬಂದಿತ್ತು. 1954ರಲ್ಲಿ ದೇವೇಗೌಡರು ಚೆನ್ನಮ್ಮ ಅವರನ್ನು ವಿವಾಹವಾದರು. ಅಂದಿನ ಕಾಲದ ಸಂಪ್ರದಾಯದಂತೆ ಹಿರಿಯರು ನಿಶ್ಚಯಿಸಿದ ಸರಳ ವಿವಾಹವದು. ಚೆನ್ನಮ್ಮ ಅವರು ಸಾಮಾನ್ಯ ಹಳ್ಳಿಮನೆಯ ಹಿನ್ನೆಲೆಯಿಂದ ಬಂದವರು. ಮದುವೆಯಾದ ಹೊಸತರಲ್ಲಿ ದೇವೇಗೌಡರು ರಾಜಕೀಯಕ್ಕೆ ಅಷ್ಟಾಗಿ ಕಾಲಿಟ್ಟಿರಲಿಲ್ಲ. ಕಾಂಟ್ರಾಕ್ಟ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.&lt;/p&gt;&lt;h2&gt;ರಾಜಕೀಯ ಏಳುಬೀಳುಗಳ ನಡುವೆ ಧೃತಿಗೆಡದ ಸಾಥ್&lt;/h2&gt;&lt;p&gt;ಮದುವೆಯಾದ ಕೆಲವೇ ವರ್ಷಗಳಲ್ಲಿ ದೇವೇಗೌಡರು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. 1962ರಲ್ಲಿ ಮೊದಲ ಬಾರಿಗೆ ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾದರು. ಅಲ್ಲಿಂದ ಶುರುವಾದ ಅವರ ರಾಜಕೀಯ ಪಯಣ, ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ ಮತ್ತು ಅಂತಿಮವಾಗಿ ದೇಶದ ಪ್ರಧಾನಮಂತ್ರಿಯವರೆಗೆ ತಲುಪಿತು. ಈ ಸುದೀರ್ಘ ಅವಧಿಯಲ್ಲಿ ಗೌಡರು ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ವಾಸ, ರಾಜಕೀಯ ಪಿತೂರಿಗಳು, ಅಧಿಕಾರ ಕಳೆದುಕೊಂಡ ದಿನಗಳು - ಹೀಗೆ ನಾನಾ ಕಷ್ಟಗಳನ್ನು ಎದುರಿಸಿದರು.&lt;/p&gt;&lt;p&gt;ಈ ಎಲ್ಲಾ ಏಳುಬೀಳುಗಳ ನಡುವೆ ಚೆನ್ನಮ್ಮ ಅವರು ಅಚಲವಾಗಿ ಪತಿಯ ಬೆನ್ನಿಗೆ ನಿಂತರು. ದೇವೇಗೌಡರು ರಾಜಕೀಯದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ, ಜೈಲಿನಲ್ಲಿದ್ದರೂ, ಮನೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಂಡವರು ಚೆನ್ನಮ್ಮ. ಆರು ಜನ ಮಕ್ಕಳನ್ನು (ನಾಲ್ವರು ಪುತ್ರರು, ಇಬ್ಬರು ಪುತ್ರಿಯರು) ಶಿಸ್ತಿನಿಂದ ಬೆಳೆಸಿ, ಅವರಿಗೆ ಉತ್ತಮ ಶಿಕ್ಷಣ ಕೊಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ದೇವೇಗೌಡರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದಂತೆ, &quot;ನಾನು ರಾಜಕೀಯದಲ್ಲಿ ನಿಶ್ಚಿಂತೆಯಿಂದ ಇರಲು ಕಾರಣ ಚೆನ್ನಮ್ಮ ಮನೆ ನಿಭಾಯಿಸಿದ ರೀತಿ&quot;.&lt;/p&gt;&lt;h2&gt;ಸರಳತೆ ಮತ್ತು ದೈವಭಕ್ತಿ&lt;/h2&gt;&lt;p&gt;ದೇವೇಗೌಡರ ಕುಟುಂಬದ ದೊಡ್ಡ ಶಕ್ತಿಯೆಂದರೆ ಅವರ ಸರಳತೆ. ಪ್ರಧಾನಮಂತ್ರಿಯ ಪತ್ನಿಯಾಗಿದ್ದರೂ ಚೆನ್ನಮ್ಮ ಅವರು ಎಂದಿಗೂ ಆಡಂಬರಕ್ಕೆ ಮಾರುಹೋಗಲಿಲ್ಲ. ಅವರ ಉಡುಗೆ-ತೊಡುಗೆ, ಮಾತಿನ ಶೈಲಿ ಎಲ್ಲವೂ ಸಾಮಾನ್ಯ ಹಳ್ಳಿಯ ಮಹಿಳೆಯಂತೆಯೇ ಇತ್ತು. ಅವರ ದೈವಭಕ್ತಿ ಅಪಾರ. ದೇವೇಗೌಡರು ದೊಡ್ಡ ಹುದ್ದೆಗಳಲ್ಲಿದ್ದಾಗಲೂ, ಕಷ್ಟದ ಕಾಲದಲ್ಲೂ ಚೆನ್ನಮ್ಮ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ, ಪತಿಯ ಒಳಿತಿಗಾಗಿ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದರು. ಅವರ ಈ ಭಕ್ತಿ ಮತ್ತು ಸರಳತೆ ಗೌಡರ ಮೇಲೂ ಪ್ರಭಾವ ಬೀರಿತ್ತು.&lt;/p&gt;&lt;h2&gt;ಆದರ್ಶ ದಾಂಪತ್ಯ&lt;/h2&gt;&lt;p&gt;ಇಂದಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಸಂಸಾರಗಳು ಮುರಿಯುತ್ತಿರುವಾಗ, ಹೆಚ್.ಡಿ. ದೇವೇಗೌಡ ಮತ್ತು ಚೆನ್ನಮ್ಮ ಅವರ ಆರು ದಶಕಗಳ ದಾಂಪತ್ಯ ಜೀವನ ಒಂದು ದೊಡ್ಡ ಸಂದೇಶವನ್ನು ನೀಡುತ್ತದೆ. ಪರಸ್ಪರ ನಂಬಿಕೆ, ಗೌರವ, ಕಷ್ಟಕಾಲದಲ್ಲಿ ಸಾಥ್ ನೀಡುವುದು ಮತ್ತು ಸರಳ ಜೀವನ - ಇವು ಅವರ ಯಶಸ್ವಿ ಸಂಸಾರದ ರಹಸ್ಯಗಳು. ರಾಜಕೀಯದಂತಹ ಒತ್ತಡದ ಕ್ಷೇತ್ರದಲ್ಲಿ ಇದ್ದುಕೊಂಡೂ, ಕುಟುಂಬಕ್ಕೆ ಭದ್ರ ಬುನಾದಿ ಹಾಕಿ, ಆದರ್ಶ ದಂಪತಿಗಳಾಗಿ ಬಾಳಿದ ಅವರ ಜೀವನ ನಿಜಕ್ಕೂ ಅಭಿನಂದನೀಯ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Padmashree Bhat</dc:creator>
            <atom:link href="https://kannada.asianetnews.com/state/former-prime-minister-hd-devegowda-wife-chennamma-marriage/articleshow-rb4bddz"/>
        </item>
        <item>
            <title><![CDATA[ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎಂಟ್ರಿ-ಎಕ್ಸಿಟ್‌ ಪಾಯಿಂಟ್‌ ಬಂದ್: NHAI ನಿರ್ಧಾರಕ್ಕೆ ಸ್ಥಳೀಯರ ತೀವ್ರ ಆಕ್ರೋಶ!]]></title>
            <link>https://kannada.asianetnews.com/bengaluru-urban/bengaluru-mysuru-expressway-nhai-closes-entry-exit-points-protest-san/articleshow-xdvksgc</link>
            <guid isPermaLink="true">https://kannada.asianetnews.com/bengaluru-urban/bengaluru-mysuru-expressway-nhai-closes-entry-exit-points-protest-san/articleshow-xdvksgc</guid>
            <pubDate>Sun, 19 Jul 2026 10:06:12 +0530</pubDate>
            <description><![CDATA[&lt;p&gt;ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ತಪ್ಪಿಸುವುದನ್ನು ತಡೆಯಲು ಎನ್&zwnj;ಎಚ್&zwnj;ಎಐ ಹಲವು ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚಿದೆ. ಈ ನಿರ್ಧಾರದಿಂದ ಸ್ಥಳೀಯ ನಿವಾಸಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ತೀವ್ರ ಅನಾನುಕೂಲವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxwae5f3p3n5g7rxq80s8r13,imgname-bengaluru---mysuru-highway-1784435643874.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.19): &lt;/strong&gt;ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಲವು ಪ್ರವೇಶ (Entry) ಮತ್ತು ನಿರ್ಗಮನ (Exit) ದ್ವಾರಗಳನ್ನು ಬಂದ್ ಮಾಡಿದೆ. ವಾಹನ ಸವಾರರು ಟೋಲ್ ಪ್ಲಾಜಾಗಳನ್ನು ತಪ್ಪಿಸಲು ಹೆದ್ದಾರಿಯ ಪಕ್ಕದ ಸರ್ವಿಸ್ ರಸ್ತೆಗಳನ್ನು ಬಳಸುತ್ತಿರುವುದರಿಂದ ಪ್ರಾಧಿಕಾರಕ್ಕೆ ಭಾರಿ ಆದಾಯ ನಷ್ಟವಾಗುತ್ತಿದ್ದು, ಇದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್&zwnj;ಎಚ್&zwnj;ಎಐ ಸಮರ್ಥಿಸಿಕೊಂಡಿದೆ. ಆದರೆ, ಪ್ರಾಧಿಕಾರದ ಈ ದಿಢೀರ್ ನಿರ್ಧಾರಕ್ಕೆ ಸ್ಥಳೀಯರು ಹಾಗೂ ಪ್ರಯಾಣಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ.&lt;/p&gt;&lt;p&gt;ಬೆಂಗಳೂರು ಮತ್ತು ಮೈಸೂರು ನಡುವೆ ಪ್ರತಿನಿತ್ಯ ಸಂಚರಿಸುವ ಸಾವಿರಾರು ದೈನಂದಿನ ಪ್ರಯಾಣಿಕರು ಎನ್&zwnj;ಎಚ್&zwnj;ಎಐನ ಈ ಇತ್ತೀಚಿನ ನಿರ್ಧಾರದಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಿರುವುದರಿಂದ ಪ್ರಯಾಣದ ಸಮಯ ಗಣನೀಯವಾಗಿ ಹೆಚ್ಚಾಗಲಿದ್ದು, ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ಸವಾರರು ದೂರಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳೀಯರ ಆಕ್ಷೇಪ ಮತ್ತು ವ್ಯವಹಾರಗಳ ಮೇಲಿನ ಹೊಡೆತ&lt;/strong&gt;&lt;/h2&gt;&lt;p&gt;ಹೆದ್ದಾರಿಯ ಪ್ರವೇಶ ದ್ವಾರಗಳ ಬಂದ್ ಪ್ರಕ್ರಿಯೆಯು ಸುದೀರ್ಘ ಕಾಲದಿಂದ ರೂಢಿಸಿಕೊಂಡು ಬಂದಿದ್ದ ಸಂಚಾರ ಮಾದರಿಯನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ ಎಂದು ಸ್ಥಳೀಯ ನಿವಾಸಿಗಳು ವಾದಿಸಿದ್ದಾರೆ. ಅಲ್ಲದೆ, ಈ ಮಾರ್ಗಗಳನ್ನೇ ಅವಲಂಬಿಸಿರುವ ಸ್ಥಳೀಯ ವ್ಯಾಪಾರಸ್ಥರು, ಉದ್ಯಮಗಳು ಮತ್ತು ವೈಯಕ್ತಿಕ ವಾಹನ ಸವಾರರ ಮೇಲೆ ಇದು ಹೆಚ್ಚುವರಿ ಆರ್ಥಿಕ ಹೊರೆಯನ್ನು ಹೇರಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ದೂರ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ಉದಾಸೀನ&lt;/strong&gt;&lt;/h2&gt;&lt;p&gt;ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿರುವುದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಈ ಹಿಂದೆ ಭರವಸೆ ನೀಡಲಾಗಿದ್ದ 'ದೂರ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ' (Distance-Based Toll Collection System) ಜಾರಿಯಾಗದಿರುವುದು. ವಾಹನಗಳು ಚಲಿಸುವ ದೂರಕ್ಕೆ ತಕ್ಕಂತೆ ಮಾತ್ರ ಟೋಲ್ ವಿಧಿಸುವ ಈ ಸುಧಾರಿತ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೆ ಇಂತಹ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಗೆಹರಿಸಬಹುದಿತ್ತು. ಆದರೆ ಪ್ರಾಧಿಕಾರವು ಈ ಭರವಸೆಯನ್ನು ಈಡೇರಿಸದೆ ವಿಳಂಬ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.&lt;/p&gt;&lt;p&gt;ದೂರ ಆಧಾರಿತ ಟೋಲ್ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಎನ್&zwnj;ಎಚ್&zwnj;ಎಐ ಇದುವರೆಗೆ ಯಾವುದೇ ಸ್ಪಷ್ಟ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಇದರಿಂದಾಗಿ ಈ ಪ್ರವೇಶ ದ್ವಾರಗಳ ಮುಚ್ಚುವಿಕೆಯಿಂದ ದೀರ್ಘಕಾಲದವರೆಗೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಹೆದ್ದಾರಿ ಆಶ್ರಿತರು ತೀವ್ರ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯು ದೇಶದ ವಿಸ್ತರಿಸುತ್ತಿರುವ ಹೆದ್ದಾರಿ ಮೂಲಸೌಕರ್ಯದಲ್ಲಿ ಆದಾಯ ಸಂಗ್ರಹಣೆ ಹಾಗೂ ಪ್ರಯಾಣಿಕರ ಸೌಕರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಪ್ರಾಧಿಕಾರಕ್ಕೆ ಎಷ್ಟು ದೊಡ್ಡ ಸವಾಲಾಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-mysuru-expressway-nhai-closes-entry-exit-points-protest-san/articleshow-xdvksgc"/>
        </item>
        <item>
            <title><![CDATA[ಪತ್ನಿ ಚೆನ್ನಮ್ಮ ಸಾವು, ಆಸ್ಪತ್ರೆ ಎದುರಲ್ಲೇ ಕಣ್ಣೀರಿಟ್ಟು ಮೌನವಾದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ]]></title>
            <link>https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt</link>
            <guid isPermaLink="true">https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt</guid>
            <pubDate>Sat, 18 Jul 2026 21:39:58 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾದರು. 72 ವರ್ಷಗಳ ಕಾಲ ದೇವೇಗೌಡರ ನೆರಳಾಗಿದ್ದ ಪತ್ನಿಯ ಅಗಲಿಕೆಯಿಂದ ದೇವೇಗೌಡರು ಮೂಕವಿಸ್ಮಿತರಾಗಿ ಕಣ್ಣೀರು ಹಾಕಿದರು. ಕುಟುಂಬದ ಸದಸ್ಯರು ಕೂಡ ದುಃಖದಲ್ಲಿ ಮುಳುಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kxtzs0jt2jth7r5zgxze7kmq,imgname-hd-devegowda-on-chennamma-1784390910554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.18): &lt;/strong&gt;ಎಲ್ಲೇ ಹೋಗಲಿ ದೇವೇಗೌಡರ ನೆರಳಿನಂತೆ ಅವರೊಂದಿಗೆ ಹೋಗುತ್ತಿದ್ದ ಚೆನ್ನಮ್ಮ ಶನಿವಾರ ವಿಧಿವಶರಾಗಿದ್ದಾರೆ. 72 ವರ್ಷಗಳ ಕಾಲ ಸಂಸಾರದ ನೊಗ ಹೊತ್ತುಕೊಂಡು, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಆಡಿ ಬೆಳೆಸಿದ್ದ ಚೆನ್ನಮ್ಮ ಶನಿವಾರ ಸಂಜೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಸ್ವತಃ ಎಚ್&zwnj;ಡಿ ಕುಮಾರಸ್ವಾಮಿ ಹೇಳಿರುವಂತೆ, ಕಳೆದ ಒಂದು ವರ್ಷದಿಂದ ಚೆನ್ನಮ್ಮ ಅವರಿಗೆ ಅನಾರೋಗ್ಯ ಬಾಧಿಸುತ್ತಿತ್ತು. ಆಸ್ಪತ್ರೆಗೆ ಹೋಗುವುದು ಬರುವುದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಆಸ್ಪತ್ರೆಗೆ ಹೋದವರು ಬರಲೇ ಇಲ್ಲ. ತಾಯಿ ಚೇತರಿಕೆ ಕಂಡು ವಾಪಾಸ್ಸು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಮಕ್ಕಳಿಗೆ, ಪತ್ನಿ ವಾಪಾಸ್ಸು ಬರ್ತಾಳೆ ಅಂತಾ ಕಾದಿಡ್ಡ ದೊಡ್ಡಗೌಡರಿಗೆ ಸಂಜೆಯ ವೇಳೆಗೆ ಆಘಾತ ಎದುರಾಗಿತ್ತು.&lt;/p&gt;&lt;p&gt;ಇಳಿವಯಸ್ಸಲ್ಲಿ ಪತ್ನಿಯನ್ನು ಕಳೆದುಕೊಂಡು ದೇವೇಗೌಡರ ದೊಡ್ಡ ದುಃಖ ಹೇಗಿರಬಹುದು ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ಸಂಜೆಯ ವೇಳೆಗೆ ಆಸ್ಪತ್ರೆಯ ಎಲ್ಲಾ ಕಾರ್ಯಗಳನ್ನು ಮುಗಿಸಿಕೊಂಡು ಪಾರ್ಥಿವ ಶರೀರವನ್ನು ಆಂಬುಲೆನ್ಸ್&zwnj;ನಲ್ಲಿ ಇಡುವ ಮುನ್ನ ದೇವೇಗೌಡರು ಆಸ್ಪತ್ರೆಯ ಮುಂಭಾಗದಿಂದ ವೀಲ್&zwnj;ಚೇರ್&zwnj;ನಲ್ಲಿ ಹೊರಬಂದರು. ಈ ವೇಳೆಗಾಗಲೇ ಪೊಲೀಸರು, ಕಾರ್ಯಕರ್ತರು ಹಾಗೂ ಮಾಧ್ಯಮದವರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದರು. ದೇವೇಗೌಡರ ಮುಖವನ್ನು ಸೆರೆ ಹಿಡಿಯುವ ಇರಾದೆಯಲ್ಲಿ ಎಲ್ಲರೂ ಇದ್ದರು.&lt;/p&gt;&lt;p&gt;ಆರಂಭದಲ್ಲಿ ಮಾಧ್ಯಮದ ಕ್ಯಾಮೆರಾವನ್ನು ಆರಾಮವಾಗಿಯೇ ಎದುರಿಸಿದ ದೇವೇಗೌಡರ ಮುಖದಲ್ಲಿ ದುಃಖ ಇರುವುದು ಕಾಣುತ್ತಿತ್ತು. ಆದಷ್ಟು ದುಃಖವನ್ನು ತಡೆಹಿಡಿದು ನಗುವ ಪ್ರಯತ್ನ ಮಾಡಿದರಾದರೂ, ಸಾಧ್ಯವಾಗಲಿಲ್ಲ. ಕ್ಯಾಮೆರಾ ಲೆನ್ಸ್&zwnj;ಗಳು ದೇವೇಗೌಡರ ಮುಖವನ್ನು ಜೂಮ್&zwnj; ಮಾಡುತ್ತಿದ್ದಂತೆ ದೊಡ್ಡಗೌಡರ ಕಣ್ಣಾಲಿಗಳು ತೇವವಾಗಿದ್ದು ಕಂಡಿತ್ತು.&lt;/p&gt;&lt;p&gt;ಅದಾದ ಕೆಲವೇ ಹೊತ್ತಲ್ಲಿ ಪತ್ನಿ ನೆನಪು ಉಮ್ಮಳಿಸಿ ಬಂದಂತಾಗಿ ಕಣ್ಣಂಚಲ್ಲಿ ತುಂಬಿದ್ದ ನೀರು ಹೊರಬಂದಿತು. ಅದನ್ನು ಒರೆಸಿಕೊಳ್ಳುವ ಕೆಲಸಕ್ಕೂ ದೇವೇಗೌಡರು ಇಳಿಯಲಿಲ್ಲ. ಕೊನೆಗೆ ಅವರು ಹೊರಡುವ ಕಾರ್&zwnj; ಬಂದಾಗ, ಬಲಗೈಯಿಂದ ಕಣ್ಣೀರು ಒರೆಸಿಕೊಂಡು ಕಾರ್&zwnj; ಹತ್ತಿದರು. ಎಲ್ಲಿಯೂ ಅವರು ಒಂದಕ್ಷರ ಕೂಡ ಮಾತನಾಡದೇ ಮೌನವಾಗಿದ್ದರು.&lt;/p&gt;&lt;h2&gt;&lt;strong&gt;ರೇವಣ್ಣ, ನಿಖಿಲ್ ಕುಮಾರಸ್ವಾಮಿ ಕಣ್ಣೀರು&lt;/strong&gt;&lt;/h2&gt;&lt;p&gt;ಆಸ್ಪತ್ರೆಯಿಂದ ಎಚ್&zwnj;ಡಿ ರೇವಣ್ಣ ಹಾಗೂ ನಿಖಿಲ್&zwnj; ಕುಮಾರಸ್ವಾಮಿ ಹೊರಬರುವ ವೇಳೆಗೆ ಕಣ್ಣೀರು ಹಾಕುತ್ತಿದ್ದರು. ತಾಯಿಯ ಪಾರ್ಥೀವವನ್ನು ಕಂಡು ರೇವಣ್ಣ ಅತೀವ ಭಾವುಕರಾಗಿದ್ದರು. ಭಾವನಿ ರೇವಣ್ಣ ಸೇರಿದಂತೆ ಕುಟುಂಬದವರು ಮೃತದೇಹ ಶಿಫ್ಟ್&zwnj; ಮಾಡಿದ ಆಂಬುಲೆನ್ಸ್&zwnj;ನಲ್ಲಿಯೇ ಪ್ರಯಾಣ ಮಾಡಿದರೆ, ದೇವೇಗೌಡರು ಕಾರ್&zwnj;ನಲ್ಲಿ ಇದನ್ನು ಹಿಂಬಾಲಿಸಿದರು.&lt;/p&gt;&lt;h2&gt;&lt;strong&gt;ಪ್ರಧಾನಿ ಮೋದಿ ಕರೆ&lt;/strong&gt;&lt;/h2&gt;&lt;p&gt;ದೇವೇಗೌಡರ ಪತ್ನಿ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hd-deve-gowda-weeps-at-hospital-wife-chennamma-death-pm-modi-call-san/articleshow-z4f76pt"/>
        </item>
    </channel>
</rss>
