<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 29 Apr 2026 18:57:31 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಒಂದೇ ಮಳೆಗೆ ಹಾಳೂರಾದ ಬೆಂಗಳೂರು, 7 ಸಾವು, ಸಂಪೂರ್ಣ ಅಸ್ತವ್ಯಸ್ತಕ್ಕೆ ಯಾರು ಹೊಣೆ?]]></title>
            <link>https://kannada.asianetnews.com/state/bengaluru-crisis-7-killed-as-heavy-rain-causes-massive-disruption-who-is-responsible/articleshow-7ls14wr</link>
            <guid isPermaLink="true">https://kannada.asianetnews.com/state/bengaluru-crisis-7-killed-as-heavy-rain-causes-massive-disruption-who-is-responsible/articleshow-7ls14wr</guid>
            <pubDate>Wed, 29 Apr 2026 18:57:25 +0530</pubDate>
            <description><![CDATA[&lt;p&gt;ಒಂದೇ ಮಳೆಗೆ ಹಾಳೂರಾದ ಬೆಂಗಳೂರು, 7 ಸಾವು, ಸಂಪೂರ್ಣ ಅಸ್ತವ್ಯಸ್ತಕ್ಕೆ ಯಾರು ಹೊಣೆ? ಕಾಂಪೌಂಡ್ ಕುಸಿತ, ಧರೆಗುರುಳಿದ ಮರಗಳು, ವಾಹನಗಳ ಮೇಲೆ ಬಿದ್ದ ಮರ ಸೇರಿದಂತೆ ಒಂದು ಮಳೆ ಬೆಂಗಳೂರಲ್ಲಿ ಅವಾಂತರ ಸೃಷ್ಟಿಸಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcpred40vp6rtwqvey0e5t8,imgname-bengaluru-rain-crisis-1777469241762.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29)&lt;/strong&gt; ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಉರಿ ಬಿಸಿಲ ಬೇಗೆ ನಡುವೆ ಸುರಿದ ಮಳೆ ತಂಪರೆಯುವ ಬದಲು ಆತಂಕ ಹೆಚ್ಚಿಸಿದೆ. ಒಂದು ಮಳೆಗೆ ಬೆಂಗಳೂರು ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಬೆಂಗಳೂರಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶಿವಾಜಿನಗರ ಬೌರಿಂಗ್ ಆಸ್ಪತ್ರೆ ಬಳಿಯ ಕಾಂಪೌಂಡ್ ಕುಸಿದು 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇನ್ನು 50ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ವಾಹನಗಳು ಜಖಂಗೊಂಡಿದೆ. ಅರ್ಧ ಗಂಟೆ ಸುರಿದ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿದೆ. ಬೆಂಗಳೂರಿನ ಈ ಸ್ಥಿತಿಗೆ ಹೊಣೆ ಯಾರು, ಮಳೆರಾಯನೋ ಅಥವಾ ನಮ್ಮ ಆಡಳಿತವೋ?&lt;/p&gt;&lt;h2&gt;ದುರ್ಬಲ ಗೋಡೆಗಳ ಕುರಿತು ಆಡಳಿತಕ್ಕೆ ಗೊತ್ತಿರಲಿಲ್ಲವೇ?&lt;/h2&gt;&lt;p&gt;ಸಾಮಾನ್ಯವಾಗಿ ಎಪ್ರಿಲ್ ತಿಂಗಳ ಆರಂಭದಿಂದಲೇ ಬೆಂಗಳೂರಿನಲ್ಲಿ ಮಳೆಯಾಗುತ್ತದೆ. ಈ ಬಾರಿ ಎಪ್ರಿಲ್ ಕೊನೆಯ ಹಂತದವರಗೆ ಮಳೆಗಾಗಿ ಕಾಯುವ ಪರಿಸ್ಥಿತಿಯಾಗಿತ್ತು. ಪ್ರತಿ ಬಾರಿ ಬೆಂಗಳೂರಲ್ಲಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಅವಾಂತರಗಳು ಸೃಷ್ಟಿಯಾಗುತ್ತದೆ. ಈ ಬಾರಿ ಪರಿಸ್ಥಿತಿಯನ್ನು ಮೊದಲೇ ಗ್ರಹಿಸಿ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ವಿಫಲಗೊಂಡಿತಾ? ದುರ್ಬಲ ಕಾಂಪೌಂಡ್, ತಡೆಗೋಡೆ, ಕಟ್ಟಡಗಳ ಕುರಿತು ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲವೇ ಅನ್ನೋ ಪ್ರಶ್ನೆಗಳು ಉದ್ಭವಿಸಿದೆ.&lt;/p&gt;&lt;h2&gt;ಮರಗಳು ಧರೆಗುರುಳುತ್ತಿರುವುದೇಕೆ?&lt;/h2&gt;&lt;p&gt;ಬೆಂಗಳೂರಿನಲ್ಲಿ ಸಣ್ಣ ಮಳೆಯಾದರೂ ಹಲವು ಮರಗಳು ಧರೆಗುರುಳುತ್ತದೆ. ಈ ಪೈಕಿ ಮರದ ರೆಂಬೆ ಕೊಂಬೆಗಳು ಬಿದ್ದು ವಾಹನಗಳು ಜಖಂ, ಸಾರ್ವಜನಿಕರ ಮೇಲೆ ಮರಗಳು ಬಿದ್ದು ಪ್ರಾಣಕ್ಕೆ ಹಾನಿಯಾದ ಘಟನೆಗಳಿವೆ. ಈ ಬಾರಿ ಹಲವು ಮರಘಳು ಧರೆಗುರುಳಿದೆ. ಈ ಕುರಿತು ಮೊದಲೇ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲವೇ? ಮರದ ರೆಂಬೆ ಕಡಿಯುವ, ಒಣಗಿದ ಮರಗಳನ್ನು ತೆರುವುಗೊಳಿಸುವ, ಇರುವ ಮರಗಳ ಬುಡಗಳ ರಕ್ಷಣೆ ಮಾಡುವ ಕೆಲಸ ಕಾರ್ಯಕ್ಕೆ ಅಧಿಕಾರಿಗಳು ಮಂದಾಗುತ್ತಿಲ್ಲವೇ? ಇಲ್ಲೂ ಕೂಡ ನಿರೀಕ್ಷೆಗೂ ಮೀರಿದ ಗಾಳಿ ಮಳೆ ಅನ್ನೋ ಉತ್ತರವೇ? ಬೆಂಗಳೂರಿನ ಅಸ್ತವ್ಯಸ್ತ ಕುರಿತು ಸಾರ್ವಜನಿಕರು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ.&lt;/p&gt;&lt;p&gt;ಆನಂದ ರಾವ್ ಸರ್ಕಲ್, ಓಲ್ಡ್ ಏರ್ಪೋರ್ಟ್ ರೋಡ್,ಎಂ ಜಿ ರೋಡ್,ವಸಂತ್ ನಗರ,ಗಿಬಿಎ ಸ್ಮಾರ್ಟ್ ಸಿಟಿ, ನೃಪತುಂಗ ರಸ್ತೆ, ಸಿ ಎಂ ಮನೆ ರಸ್ತೆ, ಶಿವಾನಂದ ಸರ್ಕಲ್ ಸೇರಿದಂತೆ ಹಲವು ಭಾಗದಲ್ಲಿ ಮರಗಳು ಧರೆಗುರುಳಿದೆ. ಶಿವಾನಂದ ಸರ್ಕಲ್ ಬಳಿಯ ಕ್ರೆಸೆಂಟ್ ರಸ್ತೆಯಲ್ಲಿ ಮಳೆಗೆ&zwnj; ಮರ ಧರೆಗುರುಳಿದೆ. 3 ಬೈಕ್, 1 ಕಾರು ಜಖಂ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾ ಹಾನಿ&zwnj; ಆಗಿಲ್ಲ. ಭಾರಿ ಮಳೆಯಿಂದ ಬನಶಂಕರಿ ಮೆಟ್ರೊ ನಿಲ್ದಾಣಕ್ಕೂ ನೀರು ನುಗ್ಗಿದೆ.&lt;/p&gt;&lt;h2&gt;ಬೆಂಗಳೂರಲ್ಲಿ 78 ಮಿ.ಮಿ ಮಳೆ&lt;/h2&gt;&lt;p&gt;ಕಳೆದ ಎರಡು ಗಂಟೆಯಲ್ಲಿ ಬೆಂಗಳೂರು ಸಿಟಿಯಲ್ಲಿ 78 ಮಿ.ಮಿ ಮಳೆಯಾಗಿದೆ. ಹೆಚ್ ಎಎಲ್ ಏರ್ ಪೋರ್ಟ್ ನಲ್ಲಿ 24. 7ಮಿಮಿ ಮಳೆಯಾಗಿದೆ. ಆಲಿಕಲ್ಲು ಸಹಿತ ಮಳೆ ಆತಂಕ ಪ್ರಮಾಣ ಹೆಚ್ಚಿಸಿದೆ.&lt;/p&gt;&lt;h2&gt;ರಸ್ತೆ ಮೇಲೆ ನೀರು ಮಳೆಯ ಸಮಸ್ಯೆಯೇ, ಚರಂಡಿ ಸಮಸ್ಯೆಯೋ?&lt;/h2&gt;&lt;p&gt;ಇಂದು ಸುರಿದ ಭಾರಿ ಮಳೆಗೆ ಬೆಂಗಳೂರಿನ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಹಲೆವೆಡೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿದೆ. ಇದು ಪ್ರತಿ ಮಳೆಗೂ ಬೆಂಗಳೂರಿನಲ್ಲಿ ಎದುರಾಗುವ ಸಮಸ್ಯೆ. ಆದರೆ ಚರಂಡಿಯಲ್ಲಿ ಸರಾಗವಾಗಿ ನೀರು ಹರಿದರೆ ರಸ್ತೆ ಮೇಲೆ ನೀರು ಹರಿಯಲು ಸಾಧ್ಯವಿಲ್ಲ. ಆದರೆ ಚರಂಡಿಯಲ್ಲಿ ಕಸಕಡ್ಡಿಗಳೇ ತುಂಬಿಹೋಗಿದೆ. ಮಳೆಗಾಲಕ್ಕೂ ಮೊದಲು ಚರಂಡಿಗಳ ದುರಸ್ತಿ ಕಾರ್ಯಗಳು ಸಂಪೂರ್ಣವಾಗಿ ನಡೆದಿಲ್ಲ. ಇದಕ್ಕೆ ಹೊಣೆ ಯಾರು? ಗ್ರೇಟರ್ ಬೆಂಗಳೂರು ಪ್ರಾಧಿಕಾರ ಏನು ಮಾಡುತ್ತಿದೆ? ಸರ್ಕಾರದ ಜವಾಬ್ದಾರಿ ಏನು? ಬಲಿಯಾದವರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುವುದು ಬೆಂಗಳೂರಿನ ಸಮಸ್ಯೆಗೆ ಪರಿಹಾರವಲ್ಲ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-crisis-7-killed-as-heavy-rain-causes-massive-disruption-who-is-responsible/articleshow-7ls14wr"/>
        </item>
        <item>
            <title><![CDATA[ಬೆಂಗಳೂರು ಮಹಾಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!]]></title>
            <link>https://kannada.asianetnews.com/karnataka-districts/bengaluru-rain-tragedy-many-dead-bowring-hospital-wall-collapse-shivajinagar-sat/articleshow-flhye2b</link>
            <guid isPermaLink="true">https://kannada.asianetnews.com/karnataka-districts/bengaluru-rain-tragedy-many-dead-bowring-hospital-wall-collapse-shivajinagar-sat/articleshow-flhye2b</guid>
            <pubDate>Wed, 29 Apr 2026 18:45:14 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು, ಮೂವರು ಮಕ್ಕಳು ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತ ನಗರದಲ್ಲಿ ಆಘಾತವನ್ನುಂಟು ಮಾಡಿದ್ದು, ಹಳೆಯ ಗೋಡೆಯ ನಿರ್ವಹಣೆ ಕೊರತೆಯೇ ಘಟನೆಗೆ ಕಾರಣವೆಂದು ಸ್ಥಳೀಯರು ಆರೋಪಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcnvr4maatk0zvf616a49pv,imgname-shivajingara-wall-collapse-7-death-1777468301460.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಮಳೆ ಮೃತ್ಯುರೂಪಿಯಾಗಿ ಅಪ್ಪಳಿಸಿದೆ. ವರುಣನ ಆರ್ಭಟಕ್ಕೆ ರಾಜಧಾನಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಿಂದ ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮೃತರ ಕುಟುಂಬಗಳಲ್ಲಿ ಮಡುಗಟ್ಟಿದ ಶೋಕ ಆವರಿಸಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ನಗರದಲ್ಲಿ ಸುರಿದ ಅನಿರೀಕ್ಷಿತ ಮಹಾಮಳೆಯಿಂದಾಗಿ ಶಿವಾಜಿನಗರದ ರಸೆಲ್ ಮಾರ್ಕೆಟ್ ಮತ್ತು ಬೌರಿಂಗ್ ಆಸ್ಪತ್ರೆಯ ಸುತ್ತಮುತ್ತ ನೀರು ತುಂಬಿಕೊಂಡಿತ್ತು. ಈ ವೇಳೆ ಆಸ್ಪತ್ರೆಯ ಹಳೆಯದಾದ ಕಾಂಪೌಂಡ್ ಗೋಡೆಯು ಮಳೆಯ ಹೊಡೆತಕ್ಕೆ ಸಿಲುಕಿ ಏಕಾಏಕಿ ಕುಸಿದು ಬಿದ್ದಿದೆ. ದುರದೃಷ್ಟವಶಾತ್, ಈ ಕಾಂಪೌಂಡ್ ಗೋಡೆಯ ಪಕ್ಕದಲ್ಲೇ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳು ಮತ್ತು ಅಲ್ಲಿ ಆಶ್ರಯ ಪಡೆದಿದ್ದವರ ಮೇಲೆ ಬೃಹತ್ ಕಾಂಪೌಂಡ್ ಬಿದ್ದಿದೆ.&lt;/p&gt;&lt;h2&gt;&lt;strong&gt;ಏಳು ಮಂದಿ ಸಾವು, ಮೂವರು ಮಕ್ಕಳು ಬಲಿ:&lt;/strong&gt;&lt;/h2&gt;&lt;p&gt;ಗೋಡೆ ಕುಸಿದ ರಭಸಕ್ಕೆ ಅದರ ಅಡಿಯಲ್ಲಿ ಸಿಲುಕಿದ್ದ ಏಳು ಜನರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಪೈಕಿ ಮೂವರು ಪುಟ್ಟ ಮಕ್ಕಳು ಸೇರಿರುವುದು ಘಟನೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವ್ಯಾಪಾರ ನಂಬಿ ಬಂದಿದ್ದ ಬಡ ಜೀವಗಳು ಮಳೆಯಿಂದ ರಕ್ಷಿಸಿಕೊಳ್ಳಲು ಗೋಡೆಯ ಪಕ್ಕ ನಿಂತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯನ್ನು ಕಂಡ ಸ್ಥಳೀಯರು ಬೆಕ್ಕಸ ಬೆರಗಾಗಿದ್ದು, ಕ್ಷಣಾರ್ಧದಲ್ಲಿ ನಡೆದ ಈ ರಕ್ತಪಾತಕ್ಕೆ ಮೂಕವಿಸ್ಮಿತರಾಗಿದ್ದಾರೆ.&lt;/p&gt;&lt;h2&gt;&lt;strong&gt;ಪೊಲೀಸರ ಹರಸಾಹಸ:&lt;/strong&gt;&lt;/h2&gt;&lt;p&gt;ಘಟನೆ ನಡೆದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಶಿವಾಜಿನಗರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗೋಡೆಯ ಅವಶೇಷಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಮಳೆಯ ನಡುವೆಯೇ ಜೆಸಿಬಿ ಮತ್ತು ಕಟರ್&zwnj;ಗಳನ್ನು ಬಳಸಿ ಕಲ್ಲುಗಳನ್ನು ಸರಿಸಲಾಯಿತು. ಆದರೆ, ಸಿಕ್ಕಿಬಿದ್ದವರ ಪೈಕಿ ಯಾರೊಬ್ಬರನ್ನೂ ಜೀವಂತವಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ.&lt;/p&gt;&lt;h3&gt;&lt;strong&gt;ಸ್ಥಳೀಯರಲ್ಲಿ ಆಕ್ರೋಶ ಮತ್ತು ಕಣ್ಣೀರು:&lt;/strong&gt;&lt;/h3&gt;&lt;p&gt;ಬೌರಿಂಗ್ ಆಸ್ಪತ್ರೆಯ ಈ ಕಾಂಪೌಂಡ್ ಗೋಡೆ ಹಳೆಯದಾಗಿತ್ತು ಮತ್ತು ದುರ್ಬಲಗೊಂಡಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದೆ ಮತ್ತು ಮಳೆಯ ಒತ್ತಡದಿಂದಾಗಿ ಈ ಗೋಡೆ ಕುಸಿದಿದೆ ಎನ್ನಲಾಗಿದೆ. ಕಣ್ಣೆದುರೇ ಆಟವಾಡುತ್ತಿದ್ದ ಮಕ್ಕಳು ಮತ್ತು ವ್ಯಾಪಾರ ಮಾಡುತ್ತಿದ್ದವರು ಮಣ್ಣಿನ ಪಾಲಾದುದನ್ನು ಕಂಡು ಸ್ಥಳೀಯರು ಕಣ್ಣೀರಿಟ್ಟರು.&lt;/p&gt;&lt;p&gt;ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಬೆಂಗಳೂರಿನಲ್ಲಿ ಈ ವರ್ಷದ ಮೊದಲ ಪ್ರಮುಖ ಮಳೆಯಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಪ್ರಾಣಹಾನಿಯಾಗಿರುವುದು ಆಡಳಿತ ಮಂಡಳಿಯ ಮತ್ತು ಪಾಲಿಕೆಯ ವೈಫಲ್ಯವನ್ನು ಎತ್ತಿ ತೋರಿಸಿದೆ. ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಬೇಕು ಮತ್ತು ಇಂತಹ ದುರ್ಬಲ ಗೋಡೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ನಗರದ ಹಲವೆಡೆ ಇನ್ನೂ ಮಳೆ ಮುಂದುವರಿಯುತ್ತಿದ್ದು, ಹಳೆಯ ಕಟ್ಟಡ ಮತ್ತು ಗೋಡೆಗಳ ಪಕ್ಕ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-rain-tragedy-many-dead-bowring-hospital-wall-collapse-shivajinagar-sat/articleshow-flhye2b"/>
        </item>
        <item>
            <title><![CDATA[ಆಲಿಕಲ್ಲು ಮಳೆಗೆ ಬೆಂಗಳೂರು ಅಸ್ತವ್ಯಸ್ತ: ದರೆಗುರುಳಿದ ಮರ, ವಿವಿಧೆಡೆ ಜಲಾವೃತ; ರಾಜ್ಯದಲ್ಲಿ ಮುಂದಿನ 7 ದಿನವೂ ಮಳೆ!]]></title>
            <link>https://kannada.asianetnews.com/karnataka-districts/bengaluru-hailstorm-rain-damage-karnataka-weather-forecast-next-7-days-alert-sat/articleshow-q2s5ph7</link>
            <guid isPermaLink="true">https://kannada.asianetnews.com/karnataka-districts/bengaluru-hailstorm-rain-damage-karnataka-weather-forecast-next-7-days-alert-sat/articleshow-q2s5ph7</guid>
            <pubDate>Wed, 29 Apr 2026 18:08:49 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಭಾರೀ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹವಾಮಾನ ಇಲಾಖೆಯು ಮುಂದಿನ 7 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯ ಮುನ್ಸೂಚನೆ ನೀಡಿದೆ. ನಾಳೆಯೂ ಬೆಂಗಳೂರಿಗೆ ಆಲಿಕಲ್ಲು ಮಳೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqckkjgby4axdt0ej1egw0jy,imgname-karnataka-rain-1777465936394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): ಕ&lt;/strong&gt;ಳೆದೊಂದು ತಿಂಗಳಿನಿಂದ ಬಿಸಿಲಿನಿಂದ ಕಾದು ಕೆಂಡವಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುಧವಾರ ಸಂಜೆ ಭಾರೀ ಗಾಳಿ, ಗುಡುಗು-ಸಿಡಿಲು ಸಹಿತ ಭರ್ಜರಿ ಆಲಿಕಲ್ಲು ಮಳೆಯಾಗಿದೆ. ಇದರಿಂದ ನೂರಾರು ಮರಗಳು ಧರೆಗುರುಳಿವೆ. ಹಲವು ಅಂಡರ್&zwnj;ಪಾಸ್&zwnj;ಗಳು ಜಲಾವೃತವಾಗಿವೆ. ಹಲವು ಕಚೇರಿಗಳಿಗೆ, ಮನೆಗಳು ಮಳೆ ನೀರು ನುಗ್ಗಿ ಹಾನಿಗೀಡಾಗಿವೆ. ಇದರ ಜೊತೆಗೆ, ಮುಂದಿನ 7 ದಿನಗಳ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ (Hailstorm) ಹಾಗೂ ಭಾರಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.&lt;/p&gt;&lt;h2&gt;&lt;strong&gt;ಏಪ್ರಿಲ್ 29 ಮತ್ತು 30: ಭಾರಿ ಮಳೆಯ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಮುಂದಿನ ಎರಡು ದಿನಗಳು ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಿಗೆ ಅತ್ಯಂತ ನಿರ್ಣಾಯಕವಾಗಿವೆ.&lt;/p&gt;&lt;p&gt;&lt;strong&gt;ದಕ್ಷಿಣ ಒಳನಾಡು: &lt;/strong&gt;ಹಾಸನ, ತುಮಕೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಜನಜೀವನಕ್ಕೆ ಅಡ್ಡಿಯಾಗಬಹುದು. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಮುನ್ಸೂಚನೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಉತ್ತರ ಒಳನಾಡು:&lt;/strong&gt; ಧಾರವಾಡ, ಗದಗ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಹಿತ ಮಳೆಯಾಗಲಿದೆ. ರಾಯಚೂರು, ಯಾದಗಿರಿ ಮತ್ತು ಕಲಬುರಗಿಯಲ್ಲಿ ಕೂಡ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;p&gt;ಕರಾವಳಿ: ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಲಘು ಮಳೆಯಾಗಲಿದ್ದರೂ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಉಷ್ಣಾಂಶ ಹೆಚ್ಚಿರಲಿದ್ದು, ಸೆಖೆಯ ವಾತಾವರಣ ಮುಂದುವರಿಯಲಿದೆ.&lt;/p&gt;&lt;h3&gt;&lt;strong&gt;ಬೆಂಗಳೂರಿನಲ್ಲಿ ಹೇಗಿರಲಿದೆ ಹವಾಮಾನ?&lt;/strong&gt;&lt;/h3&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ (ನಗರ ಮತ್ತು ಗ್ರಾಮಾಂತರ) ಏಪ್ರಿಲ್ 29 ರಿಂದ ಮೇ 2 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಏಪ್ರಿಲ್ 30 ರಂದು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದಾಗಿ ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ತಾಪಮಾನದಲ್ಲಿ ಗಣನೀಯ ಇಳಿಕೆಯಾಗಲಿದೆ.&lt;/p&gt;&lt;h2&gt;&lt;strong&gt;ಮೇ 1 ರಿಂದ ಮೇ 5 ರವರೆಗೆ ಮಳೆ ಮುಂದುವರಿಕೆ:&lt;/strong&gt;&lt;/h2&gt;&lt;p&gt;ಮೇ ತಿಂಗಳ ಆರಂಭದಲ್ಲೂ ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಮೇ 1 ಮತ್ತು 2: &lt;/strong&gt;ಉತ್ತರ ಕರ್ನಾಟಕದಲ್ಲಿ ಮಳೆ ಕ್ಷೀಣಿಸಲಿದ್ದರೂ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಮಳೆ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಮೇ 3 ರಿಂದ 5: &lt;/strong&gt;ಕರಾವಳಿ ಮತ್ತು ಉತ್ತರ ಒಳನಾಡು ಬಹುತೇಕ ಒಣ ಹವೆಯಿಂದ ಕೂಡಿರಲಿದೆ. ಆದರೆ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಲಘುವಾದ ಮಳೆ ಮುಂದುವರಿಯುವ ಲಕ್ಷಣಗಳಿವೆ.&lt;/p&gt;&lt;h3&gt;&lt;strong&gt;ರೈತರಿಗೆ ಮತ್ತು ಸಾರ್ವಜನಿಕರಿಗೆ ಸೂಚನೆ:&lt;/strong&gt;&lt;/h3&gt;&lt;p&gt;ಮಳೆಯ ಜೊತೆಗೆ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿರುವುದರಿಂದ ಹಳೆಯ ಕಟ್ಟಡಗಳ ಕೆಳಗೆ ಅಥವಾ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಸೂಚಿಸಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ರೈತರು ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಗುಡುಗು ಮಿಂಚಿನ ಸಂದರ್ಭದಲ್ಲಿ ವಿದ್ಯುತ್ ಕಂಬಗಳಿಂದ ದೂರವಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-hailstorm-rain-damage-karnataka-weather-forecast-next-7-days-alert-sat/articleshow-q2s5ph7"/>
        </item>
        <item>
            <title><![CDATA[ಬೆಂಗಳೂರು ಮಾಂಸ ಪ್ರಿಯರ ಗಮನಕ್ಕೆ: ಮೇ 1 ರಂದು ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ!]]></title>
            <link>https://kannada.asianetnews.com/karnataka-districts/bengaluru-meat-sale-slaughter-ban-buddha-purnima-may-1-greater-bengaluru-authority-order-sat/articleshow-wkpkdyv</link>
            <guid isPermaLink="true">https://kannada.asianetnews.com/karnataka-districts/bengaluru-meat-sale-slaughter-ban-buddha-purnima-may-1-greater-bengaluru-authority-order-sat/articleshow-wkpkdyv</guid>
            <pubDate>Wed, 29 Apr 2026 17:34:12 +0530</pubDate>
            <description><![CDATA[&lt;p&gt;ಮೇ 1 ರಂದು 'ಬುದ್ಧ ಪೂರ್ಣಿಮೆ' ಪ್ರಯುಕ್ತ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ನಗರದಾದ್ಯಂತ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಆದೇಶವು ಪ್ರಾಧಿಕಾರದ ಎಲ್ಲಾ ವಲಯಗಳಿಗೂ ಅನ್ವಯಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jz24g8pac5p9863q9x2xsx95,imgname-meat-1751344751306.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): ರಾ&lt;/strong&gt;ಜ್ಯ ರಾಜಧಾನಿ ಬೆಂಗಳೂರಿನ ಮಾಂಸ ಪ್ರಿಯರಿಗೆ ಹಾಗೂ ವ್ಯಾಪಾರಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಮೇ 1 ರಂದು 'ಬುದ್ಧ ಪೂರ್ಣಿಮೆ' ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಆದೇಶ ಹೊರಡಿಸಿದೆ.&lt;/p&gt;&lt;h3&gt;&lt;strong&gt;ಪ್ರಾಧಿಕಾರದ ಕಟ್ಟುನಿಟ್ಟಿನ ಆದೇಶ:&lt;/strong&gt;&lt;/h3&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶುಪಾಲನಾ ವಿಭಾಗದ ಉಪ ನಿರ್ದೇಶಕರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ದಿನಾಂಕ 01-05-2026ರ ಶುಕ್ರವಾರದಂದು ಬುದ್ಧ ಪೂರ್ಣಿಮೆಯ ಪವಿತ್ರ ದಿನವಾಗಿದೆ. ಅಹಿಂಸೆಯ ಸಂದೇಶ ಸಾರಿದ ಬುದ್ಧನ ಜನ್ಮದಿನದ ಗೌರವಾರ್ಥವಾಗಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆಯನ್ನು ನಿಷೇಧಿಸಲಾಗಿದೆ. ಜೊತೆಗೆ, ಮಳಿಗೆಗಳಲ್ಲಿ ಅಥವಾ ಯಾವುದೇ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ಅನ್ವಯಿಸುತ್ತದೆ?&lt;/strong&gt;&lt;/h2&gt;&lt;p&gt;ಈ ಆದೇಶವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಗೆ ಬರುವ ಎಲ್ಲಾ ವಲಯಗಳಿಗೂ ಅನ್ವಯಿಸುತ್ತದೆ. ಬೆಂಗಳೂರು ನಗರದ ಪ್ರಮುಖ ಮಾರುಕಟ್ಟೆಗಳು, ಮಾಂಸದ ಅಂಗಡಿಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ಅಂದು ವ್ಯಾಪಾರ ಮಾಡುವಂತಿಲ್ಲ. ಸರ್ಕಾರದ ನಿಯಮದಂತೆ ಬುದ್ಧ ಪೂರ್ಣಿಮೆಯ ದಿನದಂದು ಮಾಂಸ ಮಾರಾಟದ ಮೇಲೆ ಈ ಹಿಂದಿನಿಂದಲೂ ನಿಷೇಧ ಹೇರಲಾಗುತ್ತಿದ್ದು, ಈ ವರ್ಷವೂ ಅದನ್ನು ಮುಂದುವರಿಸಲಾಗಿದೆ. ಸಾರ್ವಜನಿಕರು ಹಾಗೂ ಮಾಂಸದ ಅಂಗಡಿ ಮಾಲೀಕರು ಈ ಆದೇಶಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ಅಹಿಂಸೆಯ ದಿನದ ಮಹತ್ವ:&lt;/strong&gt;&lt;/h3&gt;&lt;p&gt;ಗೌತಮ ಬುದ್ಧನು ಅಹಿಂಸೆ ಮತ್ತು ಶಾಂತಿಯ ಹರಿಕಾರ. ಅವರ ಜನ್ಮದಿನ, ಜ್ಞಾನೋದಯ ಮತ್ತು ಮಹಾಪರಿನಿರ್ವಾಣ ಹೊಂದಿದ ದಿನವನ್ನೇ 'ಬುದ್ಧ ಪೂರ್ಣಿಮೆ' ಎಂದು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಜೀವಿಯ ಹತ್ಯೆ ನಡೆಯಬಾರದು ಎಂಬ ಉದ್ದೇಶದಿಂದ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರಗಳು ಈ ನಿಷೇಧಾಜ್ಞೆಯನ್ನು ಜಾರಿಗೊಳಿಸುತ್ತವೆ. ಬೆಂಗಳೂರು ನಗರದ ನಿವಾಸಿಗಳು ಮೇ 1 ರಂದು ಮಾಂಸ ಲಭ್ಯವಿರುವುದಿಲ್ಲ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-meat-sale-slaughter-ban-buddha-purnima-may-1-greater-bengaluru-authority-order-sat/articleshow-wkpkdyv"/>
        </item>
        <item>
            <title><![CDATA[ಬೆಂಗಳೂರಿನ ಕನಸಿನ ಮನೆಗೆ ಕಂಟಕ, ವಸತಿ ಯೋಜನೆಯಡಿ ಫ್ಲಾಟ್ ಖರೀದಿ ಮಾಡಿದ್ದವರಿಗೆ ಶಾಕ್ ಕೊಟ್ಟ ಇಲಾಖೆ!]]></title>
            <link>https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil</link>
            <guid isPermaLink="true">https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil</guid>
            <pubDate>Wed, 29 Apr 2026 16:02:06 +0530</pubDate>
            <description><![CDATA[ಬೆಂಗಳೂರಿನ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ, ನಿಗದಿತ ಅವಧಿಯಲ್ಲಿ ಪೂರ್ಣ ಹಣ ಪಾವತಿಸದ ಫಲಾನುಭವಿಗಳ ಫ್ಲಾಟ್&zwnj;ಗಳನ್ನು ರದ್ದುಗೊಳಿಸಲು ವಸತಿ ಇಲಾಖೆ ಆದೇಶಿಸಿದೆ. ಸುಮಾರು 5 ಸಾವಿರ ಫಲಾನುಭವಿಗಳ ಹಂಚಿಕೆಯನ್ನು ರದ್ದುಗೊಳಿಸಿ, ಅವರ ಮುಂಗಡ ಹಣವನ್ನು ಹಿಂದಿರುಗಿಸಲು ಇಲಾಖೆ ನಿರ್ಧರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcc2kvesh0sxwmbjrhj481e,imgname-bengaluru-housing-scheme-1777458040685.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಬಹು ನಿರೀಕ್ಷಿತ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಫ್ಲಾಟ್ ಖರೀದಿಸಿದ ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ಶಾಕಿಂಗ್ ಸುದ್ದಿ ಸಿಕ್ಕಿತ್ತು, ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ವಸತಿ ಯೋಜನೆಯಡಿ 1BHK ಫ್ಲಾಟ್&zwnj;ಗಳನ್ನು ಆಯ್ಕೆ ಮಾಡಿಕೊಂಡಿದ್ದರೂ, ನಿಗದಿತ ಅವಧಿಯಲ್ಲಿ ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾದ ಫಲಾನುಭವಿಗಳ ಫ್ಲಾಟ್&zwnj;ಗಳನ್ನು ರದ್ದುಗೊಳಿಸುವುದಾಗಿ ಇಲಾಖೆ ಆದೇಶ ಪ್ರಕಟಿಸಿದೆ.&lt;/p&gt;&lt;p&gt;ಈ ಯೋಜನೆಯಡಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಅನೇಕ ಫಲಾನುಭವಿಗಳು ಮುಂಗಡ ಹಣ ಪಾವತಿಸಿ ತಮ್ಮ ಆಯ್ಕೆಯ ಫ್ಲಾಟ್&zwnj;ಗಳನ್ನು ಕಾಯ್ದಿರಿಸಿದ್ದರು. ಆದರೆ, ಫ್ಲಾಟ್&zwnj;ಗಳು ಸಿದ್ಧವಾಗಿದ್ದರೂ ಬಾಕಿ ಹಣವನ್ನು ಕಾಲಮಿತಿಯೊಳಗೆ ಪಾವತಿಸದ ಹಿನ್ನೆಲೆ, ಹಂಚಿಕೆ ಮಾಡಿದ್ದ ಫ್ಲಾಟ್&zwnj;ಗಳನ್ನು ರದ್ದುಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಸತಿ ಇಲಾಖೆ ತಿಳಿಸಿದೆ.&lt;/p&gt;&lt;h2&gt;5 ಸಾವಿರ ಫಲಾನುಭವಿಗಳು ಪೂರ್ಣ&lt;/h2&gt;&lt;p&gt;ವಿಶೇಷವಾಗಿ ಸುಮಾರು 5 ಸಾವಿರ ಫಲಾನುಭವಿಗಳು ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾಗಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಈ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದ ಫ್ಲಾಟ್&zwnj;ಗಳನ್ನು ರದ್ದುಗೊಳಿಸಿ, ಅದೇ ಫ್ಲಾಟ್&zwnj;ಗಳನ್ನು ಇತರ ಅರ್ಹರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಇಲಾಖೆ ಮುಂದುವರಿಸಲು ನಿರ್ಧರಿಸಿದೆ.&lt;/p&gt;&lt;p&gt;ಇನ್ನೊಂದೆಡೆ, ಈಗಾಗಲೇ ಮುಂಗಡವಾಗಿ 50 ಸಾವಿರ ರೂಪಾಯಿ ಪಾವತಿಸಿರುವ ಫಲಾನುಭವಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ವಸತಿ ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಫಲಾನುಭವಿಗಳಿಗೆ ಆರ್ಥಿಕ ನಷ್ಟವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಎಸ್&zwnj;ಸಿ ಮತ್ತು ಎಸ್&zwnj;ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಕಡಿತ&lt;/h2&gt;&lt;p&gt;ಯೋಜನೆಯಡಿ 1BHK ಫ್ಲಾಟ್&zwnj;ಗಳ ದರವನ್ನು ಸಾಮಾನ್ಯ ವರ್ಗದವರಿಗೆ 10.50 ಲಕ್ಷ ರೂಪಾಯಿಯಾಗಿ ನಿಗದಿಪಡಿಸಲಾಗಿದ್ದು, ಎಸ್&zwnj;ಸಿ ಮತ್ತು ಎಸ್&zwnj;ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಎಂದು ಕಡಿತ ದರದಲ್ಲಿ ನೀಡಲಾಗಿದೆ. ಕಡಿಮೆ ದರದಲ್ಲಿ ಮನೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದರೂ, ಸಮಯಕ್ಕೆ ಸರಿಯಾಗಿ ಪಾವತಿ ಆಗದ ಕಾರಣ ಹಲವು ಫ್ಲಾಟ್&zwnj;ಗಳು ಖಾಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ವಸತಿ ಇಲಾಖೆ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಪಾವತಿ ಮಾಡುವ ಮಹತ್ವವನ್ನು ಒತ್ತಿಹೇಳಿದ್ದು, ಮುಂದಿನ ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ತಿಳಿಸಿದೆ. ಯೋಜನೆಯ ಯಶಸ್ಸಿಗಾಗಿ ಫಲಾನುಭವಿಗಳ ಸಹಕಾರ ಅಗತ್ಯವಾಗಿದ್ದು, ನಿಯಮ ಪಾಲನೆ ಅತ್ಯಂತ ಮುಖ್ಯವಾಗಿದೆ ಎಂದು ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಸರ್ಕಾರಿ ಕಟ್ಟಡಗಳಿಂದಲೇ ₹472 ಕೋಟಿ ತೆರಿಗೆ ಬಾಕಿ: ವಿಧಾನಸೌಧ, ರಾಜಭವನಕ್ಕೂ ಜಿಬಿಎ ಬಿಸಿ!]]></title>
            <link>https://kannada.asianetnews.com/karnataka-districts/bengaluru-vidhana-soudha-include-government-buildings-service-tax-arrears-472-crore-gba-notice-sat/articleshow-b4ehvr6</link>
            <guid isPermaLink="true">https://kannada.asianetnews.com/karnataka-districts/bengaluru-vidhana-soudha-include-government-buildings-service-tax-arrears-472-crore-gba-notice-sat/articleshow-b4ehvr6</guid>
            <pubDate>Wed, 29 Apr 2026 15:19:57 +0530</pubDate>
            <description><![CDATA[ಬೆಂಗಳೂರಿನ ವಿಧಾನಸೌಧ, ರಾಜಭವನ ಸೇರಿದಂತೆ ಪ್ರಮುಖ ಸರ್ಕಾರಿ ಕಟ್ಟಡಗಳು ಸುಮಾರು ₹472.66 ಕೋಟಿ ಸೇವಾ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಬಾಕಿ ವಸೂಲಿಗಾಗಿ 'ಸ್ಪೆಷಲ್ ಡ್ರೈವ್' ಆರಂಭಿಸಿದ್ದು, ತೆರಿಗೆಗಳ್ಳ ಇಲಾಖೆಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqca7jhdjy5vbb34zdcy08d1,imgname-greater-bengaluru-govt-building-tax-1777456106029.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.29): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಮಾನ್ಯ ಜನರಿಂದ ತೆರಿಗೆ ವಸೂಲಿ ಮಾಡುವ ಸರ್ಕಾರಿ ಇಲಾಖೆಗಳೇ ಈಗ ತೆರಿಗೆಗಳ್ಳರ ಪಟ್ಟಿಗೆ ಸೇರಿವೆ! ಹೌದು, ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಕಟ್ಟಡಗಳಿಂದ ಸುಮಾರು 472.66 ಕೋಟಿ ರೂಪಾಯಿಗಳಿಗೂ ಅಧಿಕ ಸೇವಾ ತೆರಿಗೆ (Service Tax) ಬಾಕಿ ಉಳಿದಿದ್ದು, ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಈ ಬಾಕಿ ವಸೂಲಿಗೆ 'ಸ್ಪೆಷಲ್ ಡ್ರೈವ್' ಆರಂಭಿಸಿದೆ.&lt;/p&gt;&lt;h3&gt;&lt;strong&gt;ವಿಧಾನಸೌಧ, ರಾಜಭವನವೂ ಬಾಕಿ ಪಟ್ಟಿಯಲ್ಲಿ!&lt;/strong&gt;&lt;/h3&gt;&lt;p&gt;ಆಶ್ಚರ್ಯವೆಂದರೆ, ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧ ಮತ್ತು ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನ ಕೂಡ ತೆರಿಗೆ ಪಾವತಿಸುವಲ್ಲಿ ಹಿಂದೆ ಬಿದ್ದಿವೆ. ವಿಧಾನಸೌಧದಿಂದ 2.15 ಕೋಟಿ ರೂ., ವಿಕಾಸಸೌಧದಿಂದ 4.24 ಕೋಟಿ ರೂ. ಹಾಗೂ ಬಹುಮಹಡಿ ಕಟ್ಟಡದಿಂದ 3.38 ಕೋಟಿ ರೂ. ತೆರಿಗೆ ಬಾಕಿ ಬರಬೇಕಿದೆ. ಅಷ್ಟೇ ಏಕೆ, ಈ ಕಟ್ಟಡಗಳ ಒಳಗಿರುವ ಕ್ಯಾಂಟೀನ್&zwnj;ಗಳೂ ಸಹ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ.&lt;/p&gt;&lt;h2&gt;&lt;strong&gt;ಜಿಬಿಎ ಕಠಿಣ ಸೂಚನೆ:&lt;/strong&gt;&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮನೀಶ್ ಮೌದ್ಗಿಲ್ ಅವರು ಈ ಬಗ್ಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಲವು ವರ್ಷಗಳಿಂದ ತೆರಿಗೆ ಪಾವತಿಸದೆ ಜಿಬಿಎ ಅಥವಾ ಬಿಬಿಎಂಪಿಗೆ ವಂಚಿಸುತ್ತಿರುವ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಸೂಚಿಸಿದ್ದಾರೆ. ಇಲಾಖೆಗಳ ಮುಖ್ಯಸ್ಥರಿಗೆ ತಕ್ಷಣವೇ &quot;ಬೇಡಿಕೆ ನೋಟೀಸ್&quot; ಜಾರಿಗೊಳಿಸಲು ಮತ್ತು ಬಾಕಿ ಹಣ ವಸೂಲಿ ಮಾಡಲು 5 ನಗರ ಪಾಲಿಕೆಗಳ ವ್ಯಾಪ್ತಿಯ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಯಾವ ವಲಯದಿಂದ ಎಷ್ಟು ಬಾಕಿ? (ಕೋಟಿ ರೂ.ಗಳಲ್ಲಿ):&lt;/strong&gt;&lt;/h3&gt;&lt;ul&gt; &lt;li&gt;ನಗರದ ವಿವಿಧ ವಲಯಗಳಲ್ಲಿ ಸರ್ಕಾರಿ ಕಟ್ಟಡಗಳು ಕೋಟ್ಯಂತರ ರೂಪಾಯಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ:&lt;/li&gt; &lt;li&gt;ಪೂರ್ವ ವಲಯ: ₹246.39 ಕೋಟಿ (ಅತಿ ಹೆಚ್ಚು)&lt;/li&gt; &lt;li&gt;ಯಲಹಂಕ ವಲಯ: ₹67.48 ಕೋಟಿ&lt;/li&gt; &lt;li&gt;ರಾಜರಾಜೇಶ್ವರಿ ನಗರ ವಲಯ: ₹57.52 ಕೋಟಿ&lt;/li&gt; &lt;li&gt;ಮಹದೇವಪುರ ವಲಯ: ₹39.13 ಕೋಟಿ&lt;/li&gt; &lt;li&gt;ದಕ್ಷಿಣ ವಲಯ: ₹33.70 ಕೋಟಿ&lt;/li&gt; &lt;li&gt;ಬೊಮ್ಮನಹಳ್ಳಿ ವಲಯ: ₹5.68 ಕೋಟಿ&lt;/li&gt; &lt;li&gt;ದಾಸರಹಳ್ಳಿ ವಲಯ: ₹4.17 ಕೋಟಿ&lt;/li&gt; &lt;li&gt;ಪಶ್ಚಿಮ ವಲಯ: ₹3.61 ಕೋಟಿ&lt;/li&gt;&lt;/ul&gt;&lt;h2&gt;&lt;strong&gt;ಪ್ರಮುಖ ಕಟ್ಟಡಗಳ ಬಾಕಿ ವಿವರ:&lt;/strong&gt;&lt;/h2&gt;&lt;ul&gt; &lt;li&gt;ವಿಕಾಸಸೌಧ: ₹4,24,28,393&lt;/li&gt; &lt;li&gt;ಬಹು ಮಹಡಿ ಕಟ್ಟಡ (MS Building): ₹3,38,65,524&lt;/li&gt; &lt;li&gt;ಕುಮಾರ ಕೃಪ ಅತಿಥಿ ಗೃಹ: ₹3,01,27,355&lt;/li&gt; &lt;li&gt;ವಿಧಾನಸೌಧ: ₹2,15,28,345&lt;/li&gt; &lt;li&gt;ರಾಜ ಭವನ: ₹1,89,97,265&lt;/li&gt; &lt;li&gt;ವಿಕಾಸಸೌಧ ಕ್ಯಾಂಟೀನ್: ₹17,65,698&lt;/li&gt;&lt;/ul&gt;&lt;h2&gt;&lt;strong&gt;ಮರುಪರಿಶೀಲನೆ ಮತ್ತು ಕಠಿಣ ಕ್ರಮ:&lt;/strong&gt;&lt;/h2&gt;&lt;p&gt;ಅನೇಕ ಕಟ್ಟಡಗಳಿಗೆ ತೆರಿಗೆಯನ್ನು ಕಡಿಮೆ ನಿಗದಿಪಡಿಸಿರುವ ದೂರುಗಳೂ ಕೇಳಿಬಂದಿದ್ದು, ಅಂತಹ ಪ್ರಕರಣಗಳನ್ನು ಮರುಪರಿಶೀಲಿಸಲು ಆಯುಕ್ತರು ಸೂಚಿಸಿದ್ದಾರೆ. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸರ್ಕಾರಿ ಸ್ವತ್ತುಗಳನ್ನು ಗುರುತಿಸಿ ಅವುಗಳಿಗೂ ತೆರಿಗೆ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಸರ್ಕಾರಿ ಸ್ವತ್ತಿಗೆ ಪ್ರತ್ಯೇಕ ದಾಖಲೆ (DCB - Demand Collection Balance) ನಿರ್ವಹಿಸುವುದು ಈಗ ಕಡ್ಡಾಯವಾಗಿದೆ. ತೆರಿಗೆ ಪಾವತಿಸಲು ವಿಳಂಬ ಮಾಡುವ ಇಲಾಖೆಗಳ ಮುಖ್ಯಸ್ಥರನ್ನು ಅಧಿಕಾರಿಗಳು ನೇರವಾಗಿ ಭೇಟಿ ಮಾಡಿ ವಸೂಲಿ ಮಾಡುವಂತೆ ಸೂಚಿಸಲಾಗಿದೆ. 2025-26ರ ಸಾಲಿನ ತೆರಿಗೆಯನ್ನು ಸೇರಿಸಿದರೆ ಈ ಬಾಕಿ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಸಾಮಾನ್ಯ ಜನರಿಗೆ ತೆರಿಗೆ ಬರೆ ಎಳೆಯುವ ಸರ್ಕಾರಿ ವ್ಯವಸ್ಥೆ, ತನ್ನದೇ ಕಟ್ಟಡಗಳ ತೆರಿಗೆಯನ್ನು ಯಾವಾಗ ಪಾವತಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-vidhana-soudha-include-government-buildings-service-tax-arrears-472-crore-gba-notice-sat/articleshow-b4ehvr6"/>
        </item>
        <item>
            <title><![CDATA[ಬೆಂಗಳೂರು ಟೆಕ್ಕಿ ಪೂಜಾ ದತ್ತ ಸಾವು ಪ್ರಕರಣ: ಗೋಡೆ ಮೇಲಿದ್ದ ಆ ಪದಗಳೇ ನಿಗೂಢ ಸಾವಿಗೆ ಕಾರಣ ಹೇಳ್ತಿದೆಯಾ?]]></title>
            <link>https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</link>
            <guid isPermaLink="true">https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</guid>
            <pubDate>Wed, 29 Apr 2026 13:41:00 +0530</pubDate>
            <description><![CDATA[ಬೆಂಗಳೂರಿನಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವು ಸಂಭವಿಸಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ, ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಕೊಠಡಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದ ವಿಚಿತ್ರ ಪದಗಳು ಮತ್ತು ಅವರ ಖಿನ್ನತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc4k6fnbct6vb538r0vzg5a,imgname-techie-pooja-dutta-1777450195445.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು: &lt;/strong&gt;ನಗರದಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವು ಮಹತ್ವದ ಹಾಗೂ ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.&lt;/p&gt;&lt;p&gt;ಜಾರ್ಖಂಡ್ ಮೂಲದ ಪೂಜಾ ದತ್ತ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್&zwnj;ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಸುಮಾರು ಒಂದು ವರ್ಷ ಹಿಂದೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಬಳಿಕ ಮೊಬೈಲ್ ಫೋನ್&zwnj;ನ್ನು ಆಫ್ ಮಾಡಿಕೊಂಡಿದ್ದರು. ಹಳೆಯ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಬಳಸಿದರೂ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕೂಡ ಕಳೆದ ಒಂದು ವರ್ಷದಿಂದ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಮೂರು ತಿಂಗಳ ಹಿಂದೆ ಅವರು ಬಳಸುತ್ತಿದ್ದ ಹೊಸ ಸಿಮ್&zwnj;ನ ವ್ಯಾಲಿಡಿಟಿ ಕೂಡ ಮುಗಿದು ಹೋಗಿದ್ದು, ಅದರ ಬಳಿಕ ಅವರ ಮೊಬೈಲ್ ಸಂಪೂರ್ಣವಾಗಿ ಆಫ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಪೂಜಾ ದತ್ತ ಅವರು ಹೊರಗೆ ಕಾಣಿಸಿಕೊಂಡಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ತೀವ್ರ ಖಿನ್ನತಗೆ ಒಳಗಾಗಿ ಇದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೊಲೀಸರು ಪರಿಶೀಲಿಸಿದಾಗ, ಪೂಜಾ ದತ್ತ ಅವರ ಕೊಠಡಿಯಲ್ಲಿ ಅನೇಕ ಕಾಗದಗಳ ಮೇಲೆ &ldquo;Peace&rdquo;, &ldquo;Ego&rdquo;, &ldquo;Trust&rdquo;, &ldquo;Satisfaction&rdquo;, &ldquo;Love&rdquo;, &ldquo;Solo Love&rdquo; ಎಂಬ ಪದಗಳನ್ನು ಬರೆದು ಗೋಡೆಗಳಿಗೆ ಅಂಟಿಸಿರುವುದು ಕಂಡುಬಂದಿದೆ. ಇದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಕೊಲೆ ಬಗ್ಗೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ&lt;/h2&gt;&lt;p&gt;ಪ್ರಸ್ತುತ ತನಿಖೆಯಲ್ಲಿ ಕೊಲೆ ನಡೆದಿರುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೂ ಸಾವಿನ ನಿಜಸ್ವರೂಪ ಪತ್ತೆಹಚ್ಚಲು ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರೀತಿ ವೈಫಲ್ಯ, ಕೌಟುಂಬಿಕ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳೇನಾದರೂ ಇದಕ್ಕಿದ್ದೆಯೇ ಎಂಬುದರ ಕುರಿತು ಆಡುಗೋಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪೂಜಾ ದತ್ತ ಅವರು ಕಳೆದ ಒಂದು ವರ್ಷದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ತಿಳಿಯಲು, ಅವರ ಮೊಬೈಲ್ ನಂಬರಿನ ಕಾಲ್ ಡೀಟೇಲ್ ರೆಕಾರ್ಡ್ (CDR) ಅನ್ನು ಒಂದು ವರ್ಷದ ಅವಧಿಗೆ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜೊತೆಗೆ, ಅವರು ಕೆಲಸ ಬಿಟ್ಟ ನಂತರ ಜೀವನ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತಿತ್ತು, ಬಾಡಿಗೆ ಹೇಗೆ ಪಾವತಿಸುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಇದಕ್ಕಾಗಿ ಪೂಜಾ ದತ್ತ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದು, ಸಂಬಂಧಿತ ಬ್ಯಾಂಕ್&zwnj;ಗೆ ನೋಟಿಸ್ ನೀಡಲಾಗಿದೆ. ಕಳೆದ ಒಂದು ವರ್ಷದ ಹಣಕಾಸು ವಹಿವಾಟಿನ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ. ಇದೇ ವೇಳೆ, ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೂ ನೋಟಿಸ್ ಜಾರಿ ಮಾಡಿದ್ದು, ಯಾವ ಕಾರಣಕ್ಕೆ ಅವರು ಕೆಲಸ ತೊರೆದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;h2&gt;ಕೊರೋನಾ ಅವಧಿಯಲ್ಲಿ ವಿವಾಹ, ಪತಿ ನಿಧನ&lt;/h2&gt;&lt;p&gt;ಇದರ ಮಧ್ಯೆ, ಪೂಜಾ ದತ್ತ ಅವರು ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಅವಧಿಯಲ್ಲಿ ಅವರ ವಿವಾಹವಾಗಿದ್ದು, ನಂತರ ಅವರ ಪತಿ ನಿಧನರಾಗಿದ್ದಾರೆ. ಪತಿಯ ಸಾವಿನ ಬಳಿಕ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;p&gt;ಬಳಿಕ 2023ರಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೂ ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ. ನಂತರ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದ್ದು, ಇದೇ ಒಂಟಿತನ ಮತ್ತು ಖಿನ್ನತೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೂಜಾ ದತ್ತ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣವು ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯುತ್ತಿದ್ದು, ಒಂಟಿತನ ಮತ್ತು ಖಿನ್ನತೆ ಎದುರಿಸುವವರಿಗೆ ಸಮಯೋಚಿತ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e"/>
        </item>
        <item>
            <title><![CDATA[ದರ್ಶನ್‌ಗೆ ಮತ್ತೆ ಸಿಗುತ್ತಾ ರಿಲೀಫ್? ಜಾಮೀನಿಗೆ ಅರ್ಜಿ ಸಲ್ಲಿಸ್ತಿರೋದು ಇದು ಎಷ್ಟನೇ ಬಾರಿ]]></title>
            <link>https://kannada.asianetnews.com/cine-world/will-darshan-get-relief-again-how-many-times-has-darshan-applied-for-bail/articleshow-u0zz9bu</link>
            <guid isPermaLink="true">https://kannada.asianetnews.com/cine-world/will-darshan-get-relief-again-how-many-times-has-darshan-applied-for-bail/articleshow-u0zz9bu</guid>
            <pubDate>Wed, 29 Apr 2026 11:42:41 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ತೂಗುದೀಪ, ಇದೀಗ ಮತ್ತೊಮ್ಮೆ ಜಾಮೀನು ಕೋರಿ ಸುಪ್ರೀಂಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ. &amp;nbsp;ಈ ಪ್ರಕರಣದಲ್ಲಿ ಇದುವರೆಗೆ ದರ್ಶನ್ ಎಷ್ಟನೇ ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಡಿಟೇಲ್ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kdsg5xqhmmk0cx9mm2ftebsk,imgname-darshan-thoogudeepa-renukaswamy-1767161132785.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮತ್ತೆ ಸುಪ್ರೀಂ ಮೊರೆ ಹೋದ ನಟ ದರ್ಶನ್:&lt;/strong&gt;&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ಆರೋಪಿ ದರ್ಶನ್ ತೂಗುದೀಪ ಅವರು ಇಂದು ಜಾಮೀನು ಕೋರಿ ಸುಪ್ರೀಂಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಬಂದಿದೆ. ವಕೀಲ ರಂಜಿತ್ ರೋಹ್ಟಗಿ ಅವರ ಮೂಲಕ ದರ್ಶನ್ ಅವರು ಇಂದು ಸುಪ್ರೀಂಕೋರ್ಟ್&zwnj;ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ಹಾಗಿದ್ದರೆ ಈ ಪ್ರಕರಣದಲ್ಲಿ ದರ್ಶನ್ ಎಷ್ಟು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;h3&gt;&lt;strong&gt;ಮತ್ತೆ ಸುಪ್ರೀಂ ಕದ ತಟ್ಟಿದ ದರ್ಶನ್; ಮೇ 4ಕ್ಕೆ ಭವಿಷ್ಯ ನಿರ್ಧಾರ!&lt;/strong&gt;&lt;/h3&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರು ಹಲವು ಬಾರಿ ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ದರ್ಶನ್ ಅವರನ್ನು 2024 ಜೂನ್&zwnj; 11ರಂದು ಮೊದಲ ಬಾರಿಗೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. ಮೈಸೂರಿನ ಜಿಮ್&zwnj;ನಲ್ಲಿ ಬಂಧಿಸಿ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿತ್ತು. 2024ರ ಆಕ್ಟೋಬರ್ ತಿಂಗಳಲ್ಲಿ ಅವರು ವೈದ್ಯಕೀಯ ಕಾರಣ ನೀಡಿ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನಂತರ ಅವರಿಗೆ ಡಿಸೆಂಬರ್&zwnj; 2024ರಲ್ಲಿ ಜಾಮೀನು ಸಿಕ್ಕಿತ್ತು.&amp;nbsp;&lt;/p&gt;&lt;p&gt;ಆದರೆ ಇದನ್ನು ರಾಜ್ಯ ಸರ್ಕಾರ ಡಿಸೆಂಬರ್&zwnj;ನಲ್ಲೇ ಪ್ರಶ್ನೆ ಮಾಡಿದ್ದರಿಂದ 2025ರಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿತ್ತು, ಹೀಗಾಗಿ ಅವರು ಮತ್ತೆ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಗಿದ್ದ ನಟ ದರ್ಶನನ್ನು ಸುಪ್ರೀಂ ಆದೇಶದಂತೆ ಪೊಲೀಸರು 14 ಆಗಸ್ಟ್ 2025ರಂದು ಬಂಧನ ಮಾಡಿ ಪರಪ್ಪನ ಅಗ್ರಹಾರಕ್ಕೆ ಬಿಟ್ಟಿದ್ದರು. ಈ ಸಮಯದಲ್ಲೇ ಅವರು ತಮ್ಮ ಡೆವಿಲ್ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದ್ದರು.&lt;/p&gt;&lt;h3&gt;&lt;strong&gt;ಪರಪ್ಪನ ಅಗ್ರಹಾರದಿಂದ ಹೊರಬರಲು ದರ್ಶನ್ ಕಸರತ್ತು&lt;/strong&gt;&lt;/h3&gt;&lt;p&gt;ಆದರೆ ಈಗ ಮತ್ತೆ ಸುಪ್ರೀಂಕೋರ್ಟ್&zwnj;ಗೆ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್&zwnj;ಗೆ ಜಾಮೀನು ಸಿಕ್ಕಿತ್ತು. ಇದಾದ ಬಳಿಕ ಜಾಮೀನು ರದ್ದಾದ ಹಿನ್ನೆಲೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿತ್ತು. ಪರಪ್ಪನ ಅಗ್ರಹಾರ ಸೇರಿ ಸುಮಾರು ಎಂಟೂವರೆ ತಿಂಗಳಾಗಿದ್ದು,ಇದೀಗ ಜಾಮೀನಿಗಾಗಿ ವಕೀಲ ರಂಜಿತ್ ರೋಹಟಗಿ ಮೂಲಕ ಸುಪ್ರೀಂಕೋರ್ಟ್&zwnj;ಗೆ ದರ್ಶನ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮೇ 4ರಂದು ದರ್ಶನ್ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆಗೆ ಬರಲಿದೆ. ಅರ್ಜಿಯಲ್ಲಿ ಜಾಮೀನಿಗಾಗಿ ಮಾಡಿರುವ ಮನವಿ ಅಂಶಗಳು ಇನ್ನಷ್ಟೇ ಹೊರ ಬರಬೇಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೊದಲ ಸ್ಯಾಲರಿ ಸಿಪ್ ತೋರಿಸಿದ ಬ್ಯಾಂಕ್ ಆಫ್ ಬರೋಡಾ ಪ್ರೊಬೇಷನರಿ ಅಧಿಕಾರಿ: ಆಮೇಲೇನಾಯ್ತು?&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Anusha Kb</dc:creator>
            <atom:link href="https://kannada.asianetnews.com/cine-world/will-darshan-get-relief-again-how-many-times-has-darshan-applied-for-bail/articleshow-u0zz9bu"/>
        </item>
        <item>
            <title><![CDATA[ಬಿಸಿಲಿಗೆ ಬಳಲಿರೋ ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್ : ಬೆಂಗಳೂರಿಗೆ ಬರಲಿದೆ ಮಳೆ]]></title>
            <link>https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09</link>
            <guid isPermaLink="true">https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09</guid>
            <pubDate>Wed, 29 Apr 2026 08:57:24 +0530</pubDate>
            <description><![CDATA[ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jx4ch71vtbcbtewbf1w11z7p,imgname-----------------------2025-06-07t103613.555-1749272796219.jpg" type="image/jpeg" height="390" width="690"/>
            <content:encoded><![CDATA[ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ.&lt;img&gt;&lt;p&gt;ಈ ಬಾರಿಯ ಬೇಸಿಗೆಯ ಬಿಸಿಲು ಸಿಲಿಕಾನ್ ಸಿಟಿ ಜನರನ್ನು ಅಕ್ಷರಶಃ ಬಿಸಿಯಿಂದ ಬೇಯುವಂತೆ ಮಾಡಿದೆ. ಜನರು ಸೆಖೆಯ ಧಗೆ ತಾಳಲಾರದೇ ಗೋಳಾಡುತ್ತಿದ್ದಾರೆ. ರಾತ್ರಿ ಸೆಖೆಗೆ ನಿದ್ದೇನೇ ಬರ್ತಿಲ್ಲ ಎಂಬುದು ಅನೇಕರ ಗೋಳು. ಹೀಗಿರುವಾಗ ಸೆಖೆಯಿಂದ ಬೆಂದ ಗಾರ್ಡನ್ ಸಿಟಿ ಜನರಿಗೆ ಒಂದು ಗುಡ್ ನ್ಯೂಸ್ ಇದೆ.&lt;/p&gt;&lt;img&gt;&lt;p&gt;ಇಂದಿನಿಂದ ನಾಲ್ಕು ದಿನ ಬೆಂಗಳೂರಿನಲ್ಲಿ ಚೆನ್ನಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ಬಿಸಿಲ ತಾಪಕ್ಕೆ ಕಂಗೆಟ್ಟ ಜನರಿಗೆ ಕೊಂಚ ನೆಮ್ಮದಿ ನೀಡಿದೆ.&lt;/p&gt;&lt;img&gt;&lt;p&gt;ಇಂದಿನಿಂದ&amp;nbsp;ನಾಲ್ಕು ದಿನ ಬೆಂಗಳೂರಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಇವತ್ತು 26 ಜಿಲ್ಲೆಗಳಿಗೆ ಎಲ್ಲೋ ಆಲರ್ಟ್ ನೀಡಿದ್ದು, ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಸೇರಿದಂತೆ 26 ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ,&lt;/p&gt;&lt;p&gt;ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ &amp;amp; ದಕ್ಷಿಣ ಕನ್ನಡ, ಚಿಕ್ಕ ಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>bengaluru-urban</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09"/>
        </item>
        <item>
            <title><![CDATA[ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ..! ₹20,000 ಕೋಟಿ ಟಿಡಿಆರ್‌ ಕೇಸ್‌ ದಾಖಲೆ ನಾಪತ್ತೆ! ಇ.ಡಿಗೆ ದೂರು]]></title>
            <link>https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364</link>
            <guid isPermaLink="true">https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364</guid>
            <pubDate>Wed, 29 Apr 2026 08:52:44 +0530</pubDate>
            <description><![CDATA[ಬೆಂಗಳೂರಿನಲ್ಲಿ 20 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಟಿಡಿಆರ್&zwnj; ಹಗರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ಕಚೇರಿಯಿಂದ 2014-17ರ ಅವಧಿಯ ಮಹತ್ವದ ದಾಖಲೆಗಳು ನಾಪತ್ತೆಯಾಗಿವೆ. ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್&zwnj;.ಆರ್&zwnj;.ರಮೇಶ್&zwnj; ಅವರು ಇ.ಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khd48xyqnbss7jh7fyewr9x4,imgname-----------------------2026-02-14t091852.923-1771040962519.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಸುಮಾರು 20 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಟಿಡಿಆರ್&zwnj; ಹಗರಣ ಸಂಬಂಧ ಮೂರು ವರ್ಷಗಳ ಅವಧಿಯ ಮಹತ್ವದ ದಾಖಲೆಗಳು ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರದ (ಜಿಬಿಎ) ಭೂಸ್ವಾಧೀನ ಮತ್ತು ಟಿಡಿಆರ್&zwnj; ವಿಭಾಗದ ಕಚೇರಿಯಿಂದ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮಹತ್ವದ ದಾಖಲೆಗಳ ನಾಪತ್ತೆ ಹಿಂದಿರುವ ಬಿಬಿಎಂಪಿ ಭ್ರಷ್ಟ ಅಧಿಕಾರಿಗಳು ಹಾಗೂ ಟಿಡಿಆರ್&zwnj; ಮಾಫಿಯಾ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಲೋಕಾಯುಕ್ತಕ್ಕೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್&zwnj;.ಆರ್&zwnj;.ರಮೇಶ್&zwnj; ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಟಿಡಿಆರ್&zwnj; ಮಾಫಿಯಾ:&amp;nbsp;&lt;/strong&gt;&lt;/h2&gt;&lt;p&gt;ಈ ಟಿಡಿಆರ್&zwnj; ನಿಯಮಗಳಲ್ಲಿನ ಸಣ್ಣ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್&zwnj; ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈ ಟಿಡಿಆರ್&zwnj; ಮಾಫಿಯಾಗಳು ಜನ್ಮ ತಾಳಿ ಬಿಬಿಎಂಪಿ ಮತ್ತು ಬಿಡಿಎ ಭ್ರಷ್ಟ ಅಧಿಕಾರಿಗಳ ಕಾನೂನು ಬಾಹಿರ ಸಹಕಾರದಿಂದ ಬೆಂಗಳೂರು ಮಹಾನಗರವೊಂದರಲ್ಲಿಯೇ ಸುಮಾರು 50 ಸಾವಿರ ಕೋಟಿ ರು.ಗೂ ಹೆಚ್ಚು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಹಲವು ಪ್ರಕರಣ ತನಿಖಾ ಹಂತದಲ್ಲಿ:&lt;/strong&gt;&lt;/h3&gt;&lt;p&gt;2007-08 ರಿಂದ 2017ರ ಮಾರ್ಚ್&zwnj;ವರೆಗೆ ಬಿಬಿಎಂಪಿ ಅಧೀನದಲ್ಲಿದ್ದ ಟಿಡಿಆರ್&zwnj; ವಿಭಾಗವು 2017ರ ಏ.1ರಿಂದ ಬಿಡಿಎಗೆ ಹಸ್ತಾಂತರ ಮಾಡಿ ರಾಜ್ಯ ಸರ್ಕಾರವು ಆದೇಶಿಸಿತ್ತು. ಭೂಮಿಯ ಬೆಲೆ ಹೆಚ್ಚಿರುವ ಹಿಂದಿನ ಮಹದೇವಪುರ ವಲಯ, ಯಲಹಂಕ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಪೂರ್ವ ವಲಯಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಟಿಡಿಆರ್&zwnj; ಅಕ್ರಮಗಳು ನಡೆದಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಲ್ಲಿ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ತನಿಖಾ/ ವಿಚಾರಣಾ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಮೂರು ವರ್ಷಗಳ ದಾಖಲೆ ನಾಪತ್ತೆ!:&lt;/strong&gt;&lt;/h3&gt;&lt;p&gt;2026ರ ಮಾ.6ರಂದು ಆರ್&zwnj;ಟಿಐ ಅರ್ಜಿ ಸಲ್ಲಿಸಿ 2010 ಏ.1ರಿಂದ 2017 ಮಾ.31ರ ವರೆಗಿನ ಅವಧಿಯಲ್ಲಿ ಬಿಬಿಎಂಪಿಯಿಂದ ನೀಡಲಾಗಿರುವ ಟಿಡಿಆರ್&zwnj;/ಡಿಆರ್&zwnj;ಸಿಗಳ ಪ್ರತಿ/ಮಾಹಿತಿ ಒದಗಿಸುವಂತೆ ಭೂಸ್ವಾಧೀನ ಮತ್ತು ಟಿಡಿಆರ್&zwnj; ವಿಭಾಗದ ಉಪ ಆಯುಕ್ತರಿಗೆ ಮನವಿ ಮಾಡಿದ್ದೆ. ಇದಕ್ಕೆ 2014ರ ಮಾ.31ರ ವರೆಗೆ ಮಾತ್ರ ಮಾಹಿತಿ ನೀಡಿದ್ದು, 2014 ಏ.1ರಿಂದ 2017 ಮಾ.31ರ ವರೆಗಿನ ಮೂರು ವರ್ಷಗಳ ಟಿಡಿಆರ್&zwnj;/ಡಿಆರ್&zwnj;ಸಿ ದಾಖಲೆಗಳು ಲಭ್ಯವಿಲ್ಲ ಎಂದು ಲಿಖಿತ ಮಾಹಿತಿ ನೀಡಿದ್ದಾರೆ. ಈ ಮೂರು ವರ್ಷ ಅವಧಿಯಲ್ಲೇ ಭಾರೀ ಪ್ರಮಾಣದ ಟಿಡಿಆರ್&zwnj;/ಡಿಆರ್&zwnj;ಸಿ ಅಕ್ರಮಗಳು ನಡೆದಿದ್ದು, ಅದೇ ಅವಧಿಯ ದಾಖಲೆಗಳೇ ಮಾಯವಾಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ.&lt;/p&gt;&lt;p&gt;ಈ ಟಿಡಿಆರ್&zwnj; ಹಗರಣದ ತನಿಖೆ/ವಿಚಾರಣೆ ಅಂತಿಮ ಹಂತ ತಲುಪಿರುವ ಈ ಸಂದರ್ಭದಲ್ಲಿ ಮೂರು ವರ್ಷಗಳ ದಾಖಲೆಗಳು ಕಾಣೆಯಾಗಿವೆ. ಇದರ ಹಿಂದಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಮೇಶ್&zwnj; ಆಗ್ರಹಿಸಿದ್ದಾರೆ.&lt;/p&gt;&lt;p&gt;ನ್ಯಾಯಾಂಗ ಅಥವಾ ಸಿಐಡಿ ತನಿಖೆಗೆ ಆಗ್ರಹ: ಈ ಟಿಡಿಆರ್&zwnj; ಹಗರಣ ಸಂಬಂಧ ಮೂರು ವರ್ಷಗಳ ದಾಖಲೆಗಳ ನಾಪತ್ತೆ ಸಂಬಂಧ ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್&zwnj; ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದಾಖಲೆಗಳ ಸಹಿತ ಪತ್ರ ಬರೆದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364"/>
        </item>
        <item>
            <title><![CDATA[ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯೆಂದು ಅಪ್ರಾಪ್ತೆ ಮೇಲೆ ಹಲ್ಲೆ: ಕೈ ಮುಖಂಡನ ಸೆರೆ!]]></title>
            <link>https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw</link>
            <guid isPermaLink="true">https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw</guid>
            <pubDate>Wed, 29 Apr 2026 08:31:14 +0530</pubDate>
            <description><![CDATA[ಬೆಂಗಳೂರಿನ ಕಾಂಗ್ರೆಸ್ ಮುಖಂಡ ಆನಂದ್ ಪಿ. ಎಂಬುವವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ವ್ಯಕ್ತಿಯೊಬ್ಬರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಅವರ ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೂರುದಾರರ ಮೇಲೆ ಹಲ್ಲೆ ನಡೆಸಿ ಆಸ್ತಿ ಕಬಳಿಸಿದ ಗಂಭೀರ ಆರೋಪಗಳು ಆತನ ಮೇಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kcc2vc689z6q8067y7mdcsnt,imgname-congress-flag-1765637206216.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ವ್ಯಕ್ತಿಯೊಬ್ಬರ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆತನ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಗರದ ಕಾಂಗ್ರೆಸ್&zwnj; ಮುಖಂಡನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮಾಳಗಾಳದ ನಿವಾಸಿಯಾದ 40 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿ ಆನಂದ್&zwnj; ಪಿ. (ಆನಂದ್ ನಾಯ್ಡು) ಎಂಬುವರನ್ನು ಬಂಧಿಸಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;ದೂರುದಾರರು 2008ರಲ್ಲಿ ಪರಿಚಯವಾದ ಯುವತಿಯೊಬ್ಬರನ್ನು ಮದುವೆ ಆಗಿದ್ದರು. ಆದರೆ, ಆಕೆ ತನಗೆ ಈಗಾಗಲೇ ಮದುವೆಯಾಗಿ ಒಂದು ಹೆಣ್ಣು ಮಗು ಇರುವುದನ್ನು ಮುಚ್ಚಿಟ್ಟು ನನ್ನನ್ನು ವಿವಾಹವಾಗಿ ವಂಚಿಸಿದ್ದರು. ಆದರೂ ತಾನು ಆಕೆ ಜತೆ ಸಂಸಾರ ಮಾಡುತ್ತಿದ್ದೆ. ಈ ಮಧ್ಯೆ ತಮಗೆ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ತಂದೆಯ ವ್ಯಾಪಾರ ನೋಡಿಕೊಳ್ಳಲು ಆರಂಭಿಸಿದ್ದು, ಮಾಳಗಾಳದಲ್ಲಿ ನಿವೇಶನ ಖರೀದಿಸಿ ಹೊಸ ಮನೆ ಕಟ್ಟಿದ್ದೆ. ಆದರೆ, ಪತ್ನಿ 2016ರಲ್ಲಿ ಜಿಮ್&zwnj;ವೊಂದಕ್ಕೆ ಸೇರಿಕೊಂಡಿದ್ದರು. ನಂತರ ಜಿಮ್&zwnj; ಟ್ರೈನರ್&zwnj; ಪ್ರಶಾಂತ್ ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ 2018ರಲ್ಲಿ ಮತ್ತೊಂದು ಜಿಮ್&zwnj;ಗೆ ಸೇರಿಕೊಂಡು ಉಮೇಶ್&zwnj; ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ ಸುಂಕದಕಟ್ಟೆ ಶಿವು ಎಂಬಾತನ ಜತೆಯೂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ಪ್ರಶ್ನಿಸಿದಾಗ ತನ್ನ ಹತ್ಯೆಗೆ ಸಂಚು ರೂಪಿಸಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ನನ್ನ ಆಸ್ತಿ ಕಬಳಿಕೆ ಆಗಿದೆ:&lt;/strong&gt;&lt;/h2&gt;&lt;p&gt;2022ರಲ್ಲಿ ಹಣಕಾಸಿನ ವಿಚಾರವಾಗಿ ಆನಂದ್&zwnj; ಎಂಬಾತನ ಪರಿಚಯವಾಗಿತ್ತು. ನಂತರ ಆತ ನನ್ನ ಪತ್ನಿಯನ್ನು ಪರಿಚಯಿಸಿಕೊಂಡು ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೇವೆ ಎಂದು ತನಗೂ ಹಾಗೂ ನನ್ನ ಮಕ್ಕಳ ಮೇಲೆ ಇಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಅಲ್ಲದೆ, ಆನಂದ್&zwnj; ತನ್ನ ಅಪ್ರಾಪ್ತ ಪುತ್ರಿ ಜತೆ ಅನುಚಿತವಾಗಿ ವರ್ತಿಸಿದ್ದ. ಅದರೊಂದಿಗೆ ತನಗೆ ಪ್ರಾಣ ಬೆದರಿಕೆ ಹಾಕಿ, ನನ್ನಿಂದ ಆಸ್ತಿಯ ಹಕ್ಕು ಬಿಡುಗಡೆ ಪತ್ರ ಮತ್ತು ದಾನಪತ್ರವನ್ನು ಬರೆಸಿಕೊಂಡಿದ್ದಾರೆ. ನಂತರ ತನ್ನನ್ನು ಮನೆಯಿಂದ ಹೊರಗಡೆ ಹಾಕಿದರು. ಆ ಬಳಿಕವೂ ತನ್ನ ಮಕ್ಕಳ ನೋಡಲು ಬರುತ್ತಿದ್ದಾಗ, ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡರು. ಹೀಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಆನಂದ್&zwnj; ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;&lt;strong&gt;ಪತ್ನಿಯ ವಿಚಾರಣೆ ನಡೆಸಿರುವ ಪೊಲೀಸರು:&amp;nbsp;&lt;/strong&gt;&lt;/h3&gt;&lt;p&gt;ದೂರಿನ ಹಿನ್ನೆಲೆಯಲ್ಲಿ ಆನಂದ್&zwnj; ಸೇರಿ ಮಹಿಳೆಯ ವಿರುದ್ಧ ಪೋಕ್ಸೋ ಹಾಗೂ ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ದೂರುದಾರರ ಪತ್ನಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆನಂದ್ ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw"/>
        </item>
        <item>
            <title><![CDATA[ಅಮಿತ್‌ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವೈದ್ಯನಿಗೆ 2.70 ಕೋಟಿ ರು. ವಂಚನೆ]]></title>
            <link>https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu</link>
            <guid isPermaLink="true">https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu</guid>
            <pubDate>Wed, 29 Apr 2026 06:57:30 +0530</pubDate>
            <description><![CDATA[&lt;p&gt;ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ, ಆರೋಪಿ ಎಚ್&zwnj;.ಎನ್&zwnj;.ಸುಜಯೇಂದ್ರ ವಿರುದ್ಧ ವಿಜಯನಗರ ಠಾಣೆ ಪೊಲೀಸರು ದೋಷಾರೋಪಟ್ಟಿ ಸಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbdja8qdae2d2074pexc9yt,imgname-cheating-1777426049303.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರೊಬ್ಬರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರು. ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಜಯನಗರ ಠಾಣೆ ಪೊಲೀಸರು, ಆರೋಪಿ ಎಚ್&zwnj;.ಎನ್&zwnj;.ಸುಜಯೇಂದ್ರ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದಾರೆ.&lt;/p&gt;&lt;p&gt;ವಿಜಯನಗರದ ಆರ್&zwnj;ಪಿಸಿ ಲೇಔಟ್&zwnj; ನಿವಾಸಿ ಆಗಿರುವ ಆರೋಪಿ ಸುಜಯೇಂದ್ರ ಮಲ್ಲೇಶ್ವರ ಯದುಗಿರಿ ಯತಿರಾಜ ಮಠದ ಭಕ್ತನಾಗಿ ಬಳಿಕ ಮಠದ ಅಭಿವೃದ್ಧಿಗೆ ಧನಸಹಾಯ ಮಾಡುತ್ತಾ ಸ್ವಾಮೀಜಿ ನಂಬಿಕೆ ಗಿಟ್ಟಿಸಿದ್ದ. ಸ್ವಾಮೀಜಿ ಅವರು ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಈತನನ್ನು ಕರೆದೊಯ್ಯುತ್ತಿದ್ದರು.&lt;/p&gt;&lt;h2&gt;&lt;strong&gt;ಪ್ರಭಾವಿಗಳ ಸಂಪರ್ಕವಿದೆ ಎಂದು ಫೋಸು&lt;/strong&gt;&lt;/h2&gt;&lt;p&gt;ಈ ವೇಳೆ ಪ್ರಭಾವಿ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಸಚಿವರು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಬೆಳೆಸುತ್ತಿದ್ದ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಇದನ್ನೇ ದಾಳವಾಗಿ ಮಾಡಿಕೊಂಡು ಮಠಕ್ಕೆ ಬರುವ ಭಕ್ತರಿಗೆ ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಫೋಟೋ ತೋರಿಸಿ ತಾನೂ ಸಹ ಪ್ರಭಾವಿ ಎಂದು ಬಿಂಬಿಸಿಕೊಳ್ಳುತ್ತಿದ್ದ.&lt;/p&gt;&lt;p&gt;ಅದರಂತೆ 2021ನೇ ಸಾಲಿನಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಯದುಗಿರಿ ಯತಿರಾಜ ಮಠದ ಶಾಖೆಗೆ ಹೋಗಿದ್ದಾಗ ಮಠದ ಭಕ್ತ ವೈದ್ಯ ಡಾ.ರಾಜಾ ಲಂಗರ್&zwnj; ಅವರನ್ನು ಪರಿಚಯಿಸಿಕೊಂಡಿದ್ದ. ಲಂಗರ್&zwnj; ಅವರು ಕುಟುಂಬ ಸಮೇತ ಬೆಂಗಳೂರಿನ ಮಠಕ್ಕೂ ಬರುತ್ತಿದ್ದರು. ಈ ವೇಳೆ ಆರೋಪಿಯು ನಾನು ಮಠದ ಸೇವೆ ಜೊತೆಗೆ ರಿಯಲ್&zwnj; ಎಸ್ಟೇಟ್&zwnj; ವ್ಯವಹಾರ ನಡೆಸುತ್ತೇನೆ. ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಪುಸಲಾಯಿಸಿದ್ದ.&lt;/p&gt;&lt;p&gt;2023ನೇ ಸಾಲಿನಲ್ಲಿ ಡಾ.ರಾಜಾ ಲಂಗರ್&zwnj; ಬೆಂಗಳೂರಿನ ಯತಿರಾಜ ಮಠಕ್ಕೆ ಬಂದಾಗ, ಮನೆಗೆ ಕೊರೆದೊಯ್ದಿದ್ದ ಆರೋಪಿಯು ಬೆಂಗಳೂರು ಏರ್&zwnj;ಪೋರ್ಟ್&zwnj; ಸಮೀಪ ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದ ಜಮೀನು ಇದ್ದು, ಆ ಜಮೀನನ್ನು ಹೆರಿಟೇಜ್&zwnj; ಹೋಮ್ಸ್ ಆಗಿ ಅಭಿವೃದ್ಧಿಪಡಿಸಿ 1.50 ಕೋಟಿ ರು.ಗೆ ಮಾರಾಟ ಮಾಡುತ್ತೇನೆ. ಇದನ್ನು ಮುಂದೆ ಹೆಚ್ಚಿನ ಲಾಭಕ್ಕೆ ಮಾರಬಹುದು ಎಂದಿದ್ದ. ಹೀಗಾಗಿ ನೀವೇ ಖರೀದಿಸಿ ಎಂದು ಪುಸಲಾಯಿಸಿದ್ದ.&lt;/p&gt;&lt;h3&gt;&lt;strong&gt;ಕಂಪನಿ ಖಾತೆಗೆ ಹಣ ವರ್ಗಾವಣೆ&lt;/strong&gt;&lt;/h3&gt;&lt;p&gt;ಈತನ ಮಾತು ನಂಬಿದ್ದ ಡಾ.ರಾಜಾ ಲಂಗರ್&zwnj; 40/60 ವಿಸ್ತೀರ್ಣದ ನಿವೇಶನ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಆರೋಪಿ ಮಾಲೀಕನಾಗಿರುವ ಶ್ರೀನಿವಾಸ ಕನ್&zwnj;ಸ್ಟ್ರಕ್ಷನ್&zwnj; ಕಂಪನಿ ಬ್ಯಾಂಕ್ ಖಾತೆಗೆ ಡಾ.ರಾಜಾ ಲಂಗರ್&zwnj; 1.50 ಕೋಟಿ ರು. ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಯು ನಿವೇಶನ ಕೊಡಿಸದೆ ಸುಮ್ಮನಿದ್ದ. ಕೆಲ ದಿನಗಳ ಬಳಿಕ ಪ್ರಶ್ನೆ ಮಾಡಿದಾಗ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದ. ಮತ್ತೆ ಕೇಳಿದಾಗ ಹೆಚ್ಚುರಿಯಾಗಿ 1.20 ಕೋಟಿ ರು. ಕೊಡುವಂತೆ ಕೇಳಿದ್ದ. ಇಲ್ಲವಾದರೆ, 1.50 ಕೋಟಿ ರು. ವಾಪಾಸ್&zwnj; ನೀಡುವುದಿಲ್ಲ ಎಂದು ಹೆದರಿಸಿದ್ದ. ಹೀಗಾಗಿ ಅವರು ಆರೋಪಿ ಕಂಪನಿ ಖಾತೆಗೆ 1.20 ಕೋಟಿ ರು. ವರ್ಗಾಯಿಸಿದ್ದರು.&lt;/p&gt;&lt;h3&gt;&lt;strong&gt;5 ಚೆಕ್&zwnj; ಬೌನ್ಸ್&zwnj;&lt;/strong&gt;&lt;/h3&gt;&lt;p&gt;ಬಳಿಕ ಆರೋಪಿಯು ನಾನು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ನಿಮಗೆ ಮತ್ತು ನಿಮ್ಮ ತಂದೆ ಉನ್ನತ ಸ್ಥಾನಮಾನ ಕೊಡಿಸುವುದಾಗಿ ಡಾ.ರಾಜಾ ಲಂಗರ್&zwnj;ಗೆ ನಂಬಿಸಿದ್ದ. ಕೆಲ ದಿನಗಳ ಬಳಿಕ ನಿವೇಶನ ನೋಂದಣಿ ಮಾಡಿಕೊಡವಂತೆ ಕೇಳಿದಾಗ ನಿವೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಹಣ ವಾಪಾಸ್&zwnj; ಕೊಡುವುದಾಗಿ ಹೇಳಿ ಕಾಲ ದೂಡುತ್ತಿದ್ದ. ಇದರಿಂದ ಗಾಬರಿಗೊಂಡ ಡಾ.ರಾಜಾ ಲಂಗರ್&zwnj;, ಮಠದ ಸ್ವಾಮೀಜಿ ಮತ್ತು ಆಡಳಿತಾಧಿಕಾರಿಯನ್ನು ಭೇಟಿಯಾಗಿ ಕೇಳಿದಾಗ, ಅವರು ನಮಗೇನು ಗೊತ್ತಿಲ್ಲ ಎಂದಿದ್ದರು. ಆಗ ರಾಜಾ ಲಂಗರ್ ಈ ಬಗ್ಗೆ ದೂರು ನೀಡುವುದಾಗಿ ಹೇಳಿದಾಗ, ಆರೋಪಿ ಸುಜಯೇಂದ್ರ 2.70 ಕೋಟಿ ರು.ಗೆ 5 ಚೆಕ್&zwnj; ನೀಡಿದ್ದ. ಬಳಿಕ ಆ ಚೆಕ್&zwnj;ಗಳು ಬೌನ್ಸ್&zwnj; ಆಗಿದ್ದವು. ಬಳಿಕ ರಾಜಾ ಲಂಗರ್&zwnj; ಅವರು ಆರೋಪಿ ಸುಜಯೇಂದ್ರ, ಮಠದ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಜಾರ್ಜ್&zwnj;ಶಿಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಕೇಂದ್ರ, ರಾಜ್ಯ ಸರ್ಕಾರದ ಸೀಲುಗಳ ದುರುಪಯೋಗ&lt;/strong&gt;&lt;/h3&gt;&lt;p&gt;ಆರೋಪಿ ಸುಜಯೇಂದ್ರ ವಂಚಿಸುವ ಉದ್ದೇಶದಿಂದಲೇ ಡಾ.ರಾಜಾ ಲಂಗರ್&zwnj; ಅವರಿಂದ ಹಣ ಪಡೆದಿದ್ದ. ಆರೋಪಿಯು ಯತಿರಾಜಮಠದ ಟ್ರಸ್ಟಿಯಾದ ಬಳಿಕ ಕೇಂದ್ರ ಗೃಹ ಸಚಿವಾಲಯದ ಸೀಲುಗಳು, ರಾಜ್ಯ ಸರ್ಕಾರ ಸೀಲುಗಳನ್ನು ನಕಲು ಮಾಡಿ, ಸರ್ಕಾರದ ಉನ್ನತಾಧಿ ಕಾರಿಯಂತೆ ನಕಲಿ ಲೆಟರ್&zwnj; ಹೆಡ್&zwnj;ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಯತಿರಾಜ ಮಠದ ಹೆಸರಿನಲ್ಲಿ ಮಠದ ನಿವೇಶನ ಮತ್ತು ಜಮೀನು ಅಭಿವೃದ್ಧಿಪಡಿಸಿ ಮಾರಾಟ ಮಾಡುವುದಾಗಿ ನಂಬಿಸಿ ಹಲವರಿಗೆ ವಂಚನೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಾರ್ಜ್&zwnj; ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu"/>
        </item>
        <item>
            <title><![CDATA[Bengaluru: ರಾಜಧಾನಿಯ ಮೂಲಸೌಕರ್ಯ ನಿರ್ವಹಣೆಗೆ 1 ದಿನಕ್ಕೆ ₹100 ಕೋಟಿ, ವರ್ಷಕ್ಕೆ 38,455 ಕೋಟಿ]]></title>
            <link>https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz</link>
            <guid isPermaLink="true">https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz</guid>
            <pubDate>Wed, 29 Apr 2026 06:31:18 +0530</pubDate>
            <description><![CDATA[&lt;p&gt;ಬೆಂಗಳೂರಿನ ಮೂಲಸೌಕರ್ಯ ನಿರ್ವಹಣೆಗೆ ವಾರ್ಷಿಕವಾಗಿ 38,455 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತಿದೆ ಎಂದು ಜನಾಗ್ರಹ ಸಂಸ್ಥೆ ವರದಿ ಮಾಡಿದೆ. ಈ ಅಪಾರ ಪ್ರಮಾಣದ ಸಾರ್ವಜನಿಕ ಹಣದ ಖರ್ಚಿನ ಬಗ್ಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಜನರಿಗೆ ಯಾವುದೇ ಸೂಕ್ತ ಮಾಹಿತಿ ಅಥವಾ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpzank4tnxvrzpf8z8df7kt4,imgname-bengaluru-real-estate-1777020357786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ನಗರದ ಮೂಲಸೌಕರ್ಯ ನಿರ್ವಹಣೆಗೆ ದಿನಕ್ಕೆ ಸುಮಾರು 100 ಕೋಟಿ ರು.ನಂತೆ ವರ್ಷಕ್ಕೆ 38,455 ಕೋಟಿ ರು.ಗೂ ಹೆಚ್ಚು ಹಣ ಖರ್ಚಾಗುತ್ತಿದ್ದು, ಅದರ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಎಂದು ಸರ್ಕಾರೇತರ ಸಂಸ್ಥೆ ಜನಾಗ್ರಹ ಆರೋಪಿಸಿದೆ.&lt;/p&gt;&lt;p&gt;ಅತಿಯಾದ ಟ್ರಾಫಿಕ್ ಜಾಮ್, ಪ್ರವಾಹ ಪರಿಸ್ಥಿತಿ, ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ, ಅಸಮರ್ಪಕ ಸಮೂಹ ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನಗರ ಬಳಲುತ್ತಿದೆ. ಇದಕ್ಕೆ ನಿತ್ಯ ನೂರಾರು ಕೋಟಿ ರು. ವಿನಿಯೋಗಿಸಲಾಗುತ್ತಿದೆ. ಆದರೆ, ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಕುರಿತು ತೆರಿಗೆದಾರರಿಗೆ, ನಗರದ ಪ್ರಜೆಗಳಿಗೆ ಯಾವುದೇ ಲೆಕ್ಕವನ್ನು ನೀಡುತ್ತಿಲ್ಲ.&lt;/p&gt;&lt;p&gt;2021-22ನೇ ಸಾಲಿನಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಸೇರಿದಂತೆ 13 ಇಲಾಖೆಗಳಿಂದ ಸುಮಾರು 70ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲನೆ ನಡೆಸಿ ಲೆಕ್ಕ ಹಾಕಲಾಗಿದೆ ಎಂದು ಜನಾಗ್ರಹ ತಿಳಿಸಿದೆ.&lt;/p&gt;&lt;h2&gt;&lt;strong&gt;ಬಿಬಿಎಂಪಿಯಿಂದ ಶೇ.20ರಷ್ಟು ಖರ್ಚು&lt;/strong&gt;&lt;/h2&gt;&lt;p&gt;ಒಟ್ಟಾರೆ 38,455 ಕೋಟಿ ರು. ಖರ್ಚಿನಲ್ಲಿ ಜನಪ್ರತಿನಿಧಿಗಳು ಇಲ್ಲದ ಬಿಬಿಎಂಪಿಯೇ ಶೇ.20ರಷ್ಟು ಹಣವನ್ನು ಖರ್ಚು ಮಾಡಿವೆ. ಉಳಿದ ಶೇ.80ರಷ್ಟು ಹಣವೂ ಜನಪ್ರತಿನಿಧಿಗಳು ಎಂದಿಗೂ ಇರದ ಸರ್ಕಾರದ ಬೇರೆ ಬೇರೆ ಇಲಾಖೆಗಳು ಖರ್ಚು ಮಾಡಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜನಾಗ್ರಹ ಸಂಸ್ಥೆ ಹೇಳಿದೆ.&lt;/p&gt;&lt;h3&gt;&lt;strong&gt;ಎಲ್ಲಾ ಸಂಸ್ಥೆಗಳು ಲೆಕ್ಕಪತ್ರ ನೀಡಲಿ&lt;/strong&gt;&lt;/h3&gt;&lt;p&gt;ಹಾಲಿ ಪಾಲಿಕೆಗಳು ಮಾತ್ರ ಬಜೆಟ್ ರೀತಿಯಲ್ಲಿ ಲೆಕ್ಕ ನೀಡುತ್ತಿವೆ. ಅದೇ ರೀತಿ ಸರ್ಕಾರದ ಎಲ್ಲಾ ಸಂಸ್ಥೆಗಳು ಪ್ರತಿ ವರ್ಷ ಆರ್ಥಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾದ ಅಗತ್ಯವಿದೆ. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2003 ಅನ್ನು ಬಲಪಡಿಸುವ ಮೂಲಕ ಎಲ್ಲಾ ಸಂಸ್ಥೆಗಳು ಲೆಕ್ಕ ಪತ್ರವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಬೇಕು. ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ತನ್ನ ವಾರ್ಷಿಕ ಲೆಕ್ಕಪತ್ರ ನೀಡಬೇಕು. ನಿಯಮಿತವಾಗಿ ತಾತ್ಕಾಲಿಕ ಲೆಕ್ಕಪತ್ರಗಳು, ಲೆಕ್ಕಪರಿಶೋಧನೆ ಹಣಕಾಸು ಸ್ಟೇಟ್&zwnj;ಮೆಂಟ್ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಸೇವಾ ಕಾರ್ಯಕ್ಷಮತೆಯ ವರದಿಯನ್ನು ನೀಡಬೇಕು ಎಂದು ಜನಾಗ್ರಹ ಒತ್ತಾಯಿಸಿದೆ.&lt;/p&gt;&lt;h3&gt;&lt;strong&gt;ನಗರ ಸಂಸ್ಥೆಗಳಿಗೆ ಜನರ ಆಗ್ರಹ ಏನು?&amp;nbsp;&lt;/strong&gt;&lt;/h3&gt;&lt;p&gt;*ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಹಂತಗಳು, ಟೆಂಡರ್ ವಿವರಗಳು, ಅನುಷ್ಠಾನದ ಸ್ಥಿತಿ ಮತ್ತು ಹೆಚ್ಚುವರಿ ವೆಚ್ಚಗಳ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರ ಹಣ ಎಲ್ಲಿಗೆ ಹೋಗುತ್ತಿದೆ ಎಂದು ನಾಗರಿಕರು ತಿಳಿಯಬಹುದು&lt;/p&gt;&lt;p&gt;*ವಲಯವಾರು ಮತ್ತು ವಾರ್ಡ್&zwnj;ವಾರು ಖರ್ಚು ಮಾಡಿದ ಹಣದ ದತ್ತಾಂಶವನ್ನು ಆಯಾ ವಲಯಗಳ (ನೀರು, ಸಾರಿಗೆ, ರಸ್ತೆಗಳು, ತ್ಯಾಜ್ಯ) ಆಧಾರದ ಮೇಲೆ ಮತ್ತು ವಾರ್ಡ್&zwnj;ವಾರು ಲಭ್ಯವಾಗುವಂತೆ ಮಾಡಬೇಕು. ಇದರಿಂದ ನಿವಾಸಿಗಳಿಗೆ ತಮ್ಮ ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಹುದು.&lt;/p&gt;&lt;p&gt;*ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡಿದ ಹಣಕ್ಕೆ ತಕ್ಕಂತೆ ಯೋಜನೆಗಳು, ಕೆಲಸಗಳು ಜಾರಿಯಾಗಿವೆಯೇ? ಎಂಬುದರ ಲೆಕ್ಕ ಇಡಬೇಕು. ರಸ್ತೆಯ ಗುಣಮಟ್ಟ, ಪ್ರಯಾಣದ ಸಮಯ ಮತ್ತು ನೀರು ಸರಬರಾಜು, ಕಸ ಸಂಗ್ರಹಣೆಯಲ್ಲಿ ದಕ್ಷತೆಯ ವಿವರಗಳನ್ನು ಜನರಿಗೆ ನೀಡಬೇಕು&lt;/p&gt;&lt;p&gt;*ಎಲ್ಲಾ ಬಜೆಟ್&zwnj;ಗಳು, ಟೆಂಡರ್&zwnj;ಗಳು ಮತ್ತು ಯೋಜನೆಯ ದತ್ತಾಂಶಗಳನ್ನು ಒಂದೇ ವೆಬ್&zwnj;ಸೈಟ್&zwnj;ನಲ್ಲಿ ಕ್ರೋಢೀಕರಿಸಿ ಒದಗಿಸಬೇಕು. ಜನಪ್ರತಿನಿಧಿಗಳ ಸಭೆಗಳಲ್ಲಿ ಚರ್ಚೆಯಾಗಬೇಕು&lt;/p&gt;&lt;h3&gt;&lt;strong&gt;ಯಾವ ಸಂಸ್ಥೆಯಿಂದ ಎಷ್ಟು ಖರ್ಚ ಆಗುತ್ತಿದೆ?&lt;/strong&gt;&lt;/h3&gt;&lt;table&gt; &lt;tbody&gt;  &lt;tr&gt;   &lt;td&gt;ಸಾರ್ವಜನಿಕ ಸಂಸ್ಥೆ&lt;/td&gt;   &lt;td&gt;ಪಾಲು&lt;/td&gt;  &lt;/tr&gt;  &lt;tr&gt;   &lt;td&gt;ಬೆಸ್ಕಾಂ&lt;/td&gt;   &lt;td&gt;ಶೇ.47.30&lt;/td&gt;  &lt;/tr&gt;  &lt;tr&gt;   &lt;td&gt;ಬಿಬಿಎಂಪಿ&lt;/td&gt;   &lt;td&gt;ಶೇ.19.60&lt;/td&gt;  &lt;/tr&gt;  &lt;tr&gt;   &lt;td&gt;ಬಿಎಂಆರ್&zwnj;ಸಿಎಲ್&lt;/td&gt;   &lt;td&gt;ಶೇ.13.40&lt;/td&gt;  &lt;/tr&gt;  &lt;tr&gt;   &lt;td&gt;ಜಲಮಂಡಳಿ&lt;/td&gt;   &lt;td&gt;ಶೇ.8.80&lt;/td&gt;  &lt;/tr&gt;  &lt;tr&gt;   &lt;td&gt;ಬಿಎಂಟಿಸಿ&lt;/td&gt;   &lt;td&gt;ಶೇ.6.30&lt;/td&gt;  &lt;/tr&gt;  &lt;tr&gt;   &lt;td&gt;ಬೆಂಗಳೂರು ಪೊಲೀಸ್&lt;/td&gt;   &lt;td&gt;ಶೇ.2.40&lt;/td&gt;  &lt;/tr&gt;  &lt;tr&gt;   &lt;td&gt;ಇತರೆ&lt;/td&gt;   &lt;td&gt;ಶೇ.2.30&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz"/>
        </item>
        <item>
            <title><![CDATA[ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ: ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27</link>
            <guid isPermaLink="true">https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27</guid>
            <pubDate>Tue, 28 Apr 2026 21:48:55 +0530</pubDate>
            <description><![CDATA[&lt;p&gt;ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್&zwnj; (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpd4e4reqsw40dzqxj6zwhga,imgname-----------------------2026-04-17t124020.451-1776409842446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): &lt;/strong&gt;ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್&zwnj; (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು. ಹೀಗಾಗಿ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಜನರ ಸಮಸ್ಯೆಗಳನ್ನು ಅರಿತು ನಿವಾರಿಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ಕೆಎಎಸ್&zwnj; ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಪ್ರಭುಗಳಲ್ಲ. ಆದರೆ, ನಾವೆಲ್ಲರೂ ಪ್ರಜೆಗಳಿಗಾಗಿಯೇ ಕೆಲಸ ಮಾಡಬೇಕು. ನಮ್ಮನ್ನು ಪ್ರತಿನಿಧಿಗಳಾಗಿ ಅವರು ಆಯ್ಕೆ ಮಾಡಿದರೆ, ನಿಮ್ಮನ್ನು ಸೇವಕರಾಗಿ ನೇಮಕ ಮಾಡಲಾಗಿರುತ್ತದೆ. ಆದರೆ, ನಾವು ಒಟ್ಟಾಗಿ ಜನರ ಹಿತ ಕಾಪಾಡುತ್ತಾ ಕೆಲಸ ಮಾಡಬೇಕು. ನಾವು ಕೆಲಸ ಮಾಡಲು ಪ್ರತಿ 5 ವರ್ಷಗಳಲ್ಲಿ ನವೀಕರಿಸಿಕೊಳ್ಳಬೇಕು.&lt;/p&gt;&lt;p&gt;ಆದರೆ, ಕೆಎಎಸ್&zwnj; ಸೇರಿದಂತೆ ಸರ್ಕಾರಿ ಅಧಿಕಾರಿಗಳು ಒಮ್ಮೆ ಕೆಲಸಕ್ಕೆ ಸೇರಿದರೆ 30 ರಿಂದ 35 ವರ್ಷಗಳವರೆಗೆ ಕೆಲಸ ಮಾಡುತ್ತಿರಬಹುದು. ಅದನ್ನು ಬಳಸಿಕೊಂಡು ಆತ್ಮಸಾಕ್ಷಿಗೆ ಒಪ್ಪಿಗೆಯಾಗುವಂತೆ ಜನರ ಸೇವೆ ಮಾಡಬೇಕು ಎಂದರು. ಅಧಿಕಾರಿಗಳು ತಮ್ಮ ಕೆಲಸ ಮಾಡಲು ಕಾನೂನಿನ ಅರಿವಿರಬೇಕು. ಅದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜ್ಞಾನ ಇರಬೇಕು. ಸಮಾಜ ಏನು ಎಂಬುದನ್ನು ಅರಿತಿರಬೇಕು. ಯಾರಿಗೆ ಸಮಾಜದ ಅರಿವಿರುವುದಿಲ್ಲವೋ ಅವರು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸಮಾಜದ ಬಗ್ಗೆ ಅರ್ಥವಾಗಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಕೆಎಎಸ್&zwnj; ಅಧಿಕಾರಿಗಳ ಬಳಿ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುತ್ತಾರೆ.&lt;/p&gt;&lt;p&gt;ಅವರು ಅಧಿಕಾರಿಗಳ ಬಳಿ ಮಾತನಾಡಲು ಹೆದರುತ್ತಾರೆ. ಹೀಗಾಗಿ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆ ಅರಿತು ನಿವಾರಿಸುವ ಕೆಲಸ ಮಾಡಬೇಕು. ಆಗ ಅವರು ನಿಮ್ಮನ್ನು ಯಾವಾಗಲೂ ಮರೆಯುವುದಿಲ್ಲ ಎಂದು ಹೇಳಿದರು. ಸಾರಿಗೆ ಇಲಾಖೆಯ ಆರ್&zwnj;ಟಿಒ ಕಚೇರಿಗಳಲ್ಲಿ ಹೆಚ್ಚಾಗಿ ಮಧ್ಯವರ್ತಿಗಳ ಹಾವಳಿಯಿದೆ. ಅವರಿಲ್ಲದೆ ಯಾವುದೇ ಕೆಲಸವೂ ಆಗುವುದಿಲ್ಲ. ಮಧ್ಯವರ್ತಿಗಳಿಗೆ ಯಾವುದೇ ರೀತಿಯಲ್ಲೂ ಅವಕಾಶ ನೀಡಬಾರದು. ಅಧಿಕಾರಿಗಳು ಮಧ್ಯವರ್ತಿಗಳನ್ನು ಕಚೇರಿಗೆ ಬಿಟ್ಟುಕೊಳ್ಳದೆ ಹೊರಗೆ ಕಳುಹಿಸಬೇಕು. ಸರ್ಕಾರ ರೂಪಿಸುವ ಯೋಜನೆಗಳ ಅನುಷ್ಠಾನ ಮತ್ತು ರೂಪಿಸುವ ನೀತಿಗಳನ್ನು ಸಮರ್ಪಕ ಜಾರಿ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಮಾಡಬೇಕು ಎಂದರು.&lt;/p&gt;&lt;h2&gt;&lt;strong&gt;ಲೋಹಿಯಾ ಅಭಿಪ್ರಾಯಕ್ಕೆ ನನ್ನ ಸಹಮತ&lt;/strong&gt;&lt;/h2&gt;&lt;p&gt;ರಾಮಮನೋಹರ್&zwnj; ಲೋಹಿಯಾ ಅವರು ಐಎಎಸ್&zwnj; ಅಧಿಕಾರಿಗಳ ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಆಗಲೇ ರಾಜ್ಯ ಅಧಿಕಾರಿಗಳ ಹುದ್ದೆ ಸೃಷ್ಟಿಯಾಯಿತು. ಲೋಹಿಯಾ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ಆಡಳಿತದಲ್ಲಿ ಐಎಎಸ್&zwnj; ಅಧಿಕಾರಿಗಳೇ ಬೇಡ ಎಂದು ಹೇಳಲಾಗದು. ಅವರ ಅವಶ್ಯಕತೆ ಅತ್ಯಗತ್ಯ. ಇನ್ನು, ಕೆಎಎಸ್&zwnj; ಅಧಿಕಾರಿಗಳಿಗೆ ಜನರ ಕೆಲಸ ಮಾಡುವ ಅವಕಾಶ ನಿಮಗೆ ದೊರೆತಿದೆ. ಅದರಿಂದ ಆತ್ಮತೃಪ್ತಿ ಸಿಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಲು ನೀವು ಮಾಡುವ ಸೇವೆ ತೃಪ್ತಿಕರವಾಗಿರಬೇಕು. ಜನರ ಕೆಲಸದಲ್ಲಿ ವಿಳಂಬ ಮಾಡಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27"/>
        </item>
        <item>
            <title><![CDATA[ಬೆಂಗಳೂರು ಎಂ.ಜಿ. ರಸ್ತೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಗೆ 'ರೇ*ಪ್' ಬೆದರಿಕೆ; ಬಟ್ಟೆ ಹರಿಯಲು ಯತ್ನ!]]></title>
            <link>https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6</link>
            <guid isPermaLink="true">https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6</guid>
            <pubDate>Tue, 28 Apr 2026 19:48:06 +0530</pubDate>
            <description><![CDATA[ಬೆಂಗಳೂರಿನ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್&zwnj;ನಲ್ಲಿ ಊಟಕ್ಕೆ ಬಂದಿದ್ದ ಯುವತಿಯೊಬ್ಬರಿಗೆ ಮ್ಯಾನೇಜರ್ ರೇಪ್ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದ್ದು, ಹೋಟೆಲ್ ಆಡಳಿತ ಮಂಡಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಿದೆ ಎಂಬ ಆರೋಪ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6y46rc2vcyr62jffhq2pv,imgname-bengaluru-mg-road-hotel-crime-1777385541848.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಮತ್ತು ಪ್ರತಿಷ್ಠಿತ ಪ್ರದೇಶವಾದ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್&zwnj;ವೊಂದರಲ್ಲಿ ಯುವತಿಯೊಬ್ಬರ ಮೇಲೆ ಹೋಟೆಲ್ ಮ್ಯಾನೇಜರ್ ದರ್ಪ ತೋರಿರುವ ಘಟನೆ ನಡೆದಿದೆ. ಊಟಕ್ಕೆ ಬಂದಿದ್ದ ಯುವತಿಗೆ ನಿನ್ನ ರೇ*ಪ್ ಮಾಡೋದಾಗಿ ಬೆದರಿಕೆ ಹಾಕಿ, ಹಲ್ಲೆ ನಡೆಸಿರುವ ಆರೋಪದ ಮೇಲೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಕೀರ್ತಿ ಎಂಬ ಯುವತಿ ತಮ್ಮ ಸ್ನೇಹಿತರೊಂದಿಗೆ ಎಂ.ಜಿ. ರಸ್ತೆಯಲ್ಲಿರುವ 'ಖಾಸಗಿ ಹೋಟೆಲ್&zwnj;ಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಹೋಟೆಲ್&zwnj;ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜರ್ ರವಿ ಎಂಬಾತ ಯುವತಿಯೊಂದಿಗೆ ಕಿರಿಕ್ ತೆಗೆದಿದ್ದಾನೆ. ಯಾವುದೇ ಕಾರಣವಿಲ್ಲದೆ ಏಕವಚನದಲ್ಲಿ ಮಾತನಾಡಲು ಶುರು ಮಾಡಿದ್ದಾನೆ.&lt;/p&gt;&lt;h3&gt;&lt;strong&gt;'ನಿನ್ನನ್ನ ರೇ*ಪ್ ಮಾಡ್ತೀನಿ' ಎಂದು ಬೆದರಿಕೆ:&lt;/strong&gt;&lt;/h3&gt;&lt;p&gt;ಮ್ಯಾನೇಜರ್&zwnj;ನ ಅಸಭ್ಯ ವರ್ತನೆಯನ್ನು ಕೀರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಆರೋಪಿ ರವಿ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, 'ನಿನ್ನನ್ನು ರೇಪ್ ಮಾಡ್ತೀನಿ' ಎಂದು ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಯುವತಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿ, ಆಕೆಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯ ಕೈಗೆ ಗಾಯಗಳಾಗಿವೆ.&lt;/p&gt;&lt;h2&gt;&lt;strong&gt;ಸಿಸಿಟಿವಿ ಪುರಾವೆ ನಾಶಕ್ಕೆ ಯತ್ನ?&lt;/strong&gt;&lt;/h2&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆಯೇ ಹೋಟೆಲ್ ಆಡಳಿತ ಮಂಡಳಿಯು ಅಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು (CCTV Footage) ಡಿಲೀಟ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮ್ಯಾನೇಜರ್ ಮಾಡಿರುವ ಕೃತ್ಯವನ್ನು ಮುಚ್ಚಿ ಹಾಕಲು ಈ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ ಚುರುಕು:&lt;/strong&gt;&lt;/h3&gt;&lt;p&gt;ಯುವತಿಯ ದೂರಿನ ಅನ್ವಯ ಹಲಸೂರು ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್&zwnj;ಗಳ ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಿದ್ದಾರೆ. ಹೋಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದು, ತಾಂತ್ರಿಕವಾಗಿ ಡಿಲೀಟ್ ಮಾಡಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಹೋಟೆಲ್&zwnj;ನಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6"/>
        </item>
        <item>
            <title><![CDATA[ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ]]></title>
            <link>https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</link>
            <guid isPermaLink="true">https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</guid>
            <pubDate>Tue, 28 Apr 2026 19:45:35 +0530</pubDate>
            <description><![CDATA[ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6znsmb6k7j6ems5mw84a5,imgname-umar-khalid-event-in-bengaluru-1777385592628.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;2020ರ ದೆಹಲಿ ದಂಗೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಹಿನ್ನೆಲೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಆಕ್ರೋಶ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿವೆ. ಇಷ್ಟೆಕ್ಕ ವಿವಾದ ಪ್ರತಿಭಟನೆಗಳ ನಡುವೆ ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮ ಪೊಲೀಸ್ ಭದ್ರತೆಯಲ್ಲಿ ನಡೆದಿದೆ.&lt;/p&gt;&lt;h2&gt;ಗೋಡೆ ಬರಹಗಳಿಂದ ವಿವಾದಕ್ಕೆ ಶುರು&lt;/h2&gt;&lt;p&gt;ನಗರದ ಗಾಂಧಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ &ldquo;Free Umar Khalid&rdquo;, &ldquo;Justice for Umar Khalid&rdquo;, &ldquo;India stands with Umar&rdquo; ಎಂಬ ಬರಹಗಳು ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದವು. ಈ ಬರಹಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ವಿವಾದಕ್ಕೆ ಕಾರಣವಾದವು. ಬಳಿಕ ಕೆಲವು ಬಿಜೆಪಿ ಕಾರ್ಯಕರ್ತರು ಇಂತಹ ಬರಹಗಳನ್ನು ವಿರೋಧಿಸಿ, ಗೋಡೆಗಳ ಮೇಲೆ ಕಪ್ಪು ಬಣ್ಣ ಹಚ್ಚಿ ಅವನ್ನು ಅಳಿಸಿರುವ ಘಟನೆ ನಡೆದಿದೆ. ಈ ಬರಹಗಳು ಗೋಡೆಗಳಲ್ಲಿ ಬೃಹತ್ ಮಟ್ಟದಲ್ಲಿ ಇದ್ದವು ಎನ್ನಲಾಗಿದೆ.&lt;/p&gt;&lt;h2&gt;ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ&lt;/h2&gt;&lt;p&gt;ದೊಮ್ಮಲೂರು ಪ್ರದೇಶದಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ಆ ಪರಿಸರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಗಳನ್ನು ಎರಡೂ ಬದಿ ಬಂದ್ ಮಾಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದವರ ವಿವರಗಳನ್ನು ದಾಖಲಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರತಿಯೊಬ್ಬರ ಮಾಹಿತಿ ಪಡೆದ ಪೊಲೀಸರು. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಂದಿಯ ಮೊಬೈಲ್ ನಂಬರ್ ಕೂಡ ಪಡೆದು ಹೆಸರು ನಮೂದಿಸಿಕೊಂಡರು. ಇನ್ನು ನಟ ಪ್ರಕಾಶ್ ರಾಜ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.&lt;/p&gt;&lt;h2&gt;ಪ್ರತಿಭಟನೆ ಮತ್ತು ಪೊಲೀಸ್ ಕ್ರಮ&lt;/h2&gt;&lt;p&gt;ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್ ಗೌತಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್&zwnj;ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆದಿದ್ದು, ಕೆಲವರನ್ನು ವಶಕ್ಕೂ ಪಡೆದಿದ್ದಾರೆ. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್ ಹಿಡಿದು ಪ್ರತಿಭಟನೆ. ಪ್ರತಿಭಟನಾ ಕಾರರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನೆಗೆ ಪೂರ್ವಾನುಮತಿ ಇರದ ಕಾರಣ, ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸರು ಹಿಂದೂ ಪರ ನಾಯಕರಿಗೆ ನೋಟೀಸ್ ನೀಡಿದರು.&lt;/p&gt;&lt;h2&gt;ಭದ್ರತಾ ವ್ಯವಸ್ಥೆ&lt;/h2&gt;&lt;p&gt;ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿ ಇರಲು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮ್ಟೆ ಅವರ ನೇತೃತ್ವದಲ್ಲಿ, ಒಬ್ಬ ಡಿಸಿಪಿ ಹಾಗೂ ಮೂವರು ಎಸಿಪಿಗಳ ಮೇಲ್ವಿಚಾರಣೆಯಲ್ಲಿ ಭದ್ರತೆ ಒದಗಿಸಲಾಯಿತು.&lt;/p&gt;&lt;h2&gt;ವಿವಿಧ ವಲಯಗಳಿಂದ ಪ್ರತಿಕ್ರಿಯೆ&lt;/h2&gt;&lt;p&gt;ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2020 ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಅಂತ ಮನುಷ್ಯನನ್ನ ಕರೆಸಿ ಕಾರ್ಯಕ್ರಮ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ನೀಚ ಸರ್ಕಾರ ಇಂತಹ ಕಾರ್ಯಕ್ರಮ ಮಾಡ್ತಿದ್ದಾರೆ. ಪೊಲೀಸರ ಭಧ್ರತೆಯಲ್ಲಿ ಕಾರ್ಯಕ್ರಮ ಮಾಡ್ತಿರೋದು ನಾಚಿಕೆಗೇಡು. ಬುದ್ಧಿ ಜೀವಿಗಳು ಅಂತಾರೆ ಇವರೆಲ್ಲ ನಗರ ನಕ್ಸಲರು. ಇಂತಹ ಕಾರ್ಯಕ್ರಮ ಮಾಡ್ತಿರೋದು ದುರಂತ. ಪ್ರತಿಭಟನೆ ಮಾಡುವವರನ್ನ ಬಂಧಿಸಿದ್ದಾರೆ . ಇಂತಹ ದೇಶ ವಿರೋಧಿ ಕಾರ್ಯಕ್ರಮಕ್ಕೆ ಬಂದವರು ಎಂತವರು ಅಲ್ವಾ ಎಂದು ಕಿಡಿ ಕಾರಿದರು.&lt;/p&gt;&lt;p&gt;ಒಟ್ಟಿನಲ್ಲಿ, ಉಮರ್ ಖಾಲಿದ್ ಕುರಿತ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆ, ಪ್ರತಿಭಟನೆ ಹಾಗೂ ಭದ್ರತಾ ಕಾವಲು ಹೆಚ್ಚಿದದ್ದು ಗಮನಾರ್ಹವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಉಳಿದಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa"/>
        </item>
        <item>
            <title><![CDATA[ಪಾದರಾಯನಪುರ ಅಪ್ರಾಪ್ತ ಓಡಿಸುವ ಸ್ಕೂಟರ್‌ನಲ್ಲಿ 6 ಜನ ಮಕ್ಕಳ ಸವಾರಿ; ಟ್ವೀಟ್ ಬೆನ್ನಲ್ಲೇ ಪೊಲೀಸ್ ಕೇಸ್!]]></title>
            <link>https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob</link>
            <guid isPermaLink="true">https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob</guid>
            <pubDate>Tue, 28 Apr 2026 19:12:45 +0530</pubDate>
            <description><![CDATA[ಬೆಂಗಳೂರಿನ ಪಾದರಾಯನಪುರದಲ್ಲಿ ಅಪ್ರಾಪ್ತರು ಸ್ಕೂಟರ್ ಚಲಾಯಿಸುತ್ತಿದ್ದ ಫೋಟೋವನ್ನು ನಾಗರಿಕರೊಬ್ಬರು ಟ್ವೀಟ್ ಮಾಡಿದ ನಂತರ, ಸಂಚಾರಿ ಪೊಲೀಸರು ತಕ್ಷಣವೇ ಎಫ್&zwnj;ಐಆರ್ ದಾಖಲಿಸಿದ್ದಾರೆ. ಈ ಘಟನೆಯು ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa56ek0ss78z0z7adc0aha5,imgname-bengaluru-minor-boy-scooter-ride-1777383717469.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಹಾಗೂ ಅಪಾಯಕಾರಿ ರೈಡಿಂಗ್&zwnj;ಗೆ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪಾದರಾಯನಪುರದಲ್ಲಿ ಮಕ್ಕಳು ಸ್ಕೂಟರ್ ಚಲಾಯಿಸುತ್ತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಬೆಂಗಳೂರು ಸಂಚಾರಿ ಪೊಲೀಸರು ಎಫ್&zwnj;ಐಆರ್ (FIR) ದಾಖಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಏಪ್ರಿಲ್ 26, 2026ರ ಶನಿವಾರ ಬೆಳಿಗ್ಗೆ ಸುಮಾರು 10:45ಕ್ಕೆ ಪಾದರಾಯನಪುರ ಮುಖ್ಯರಸ್ತೆಯ ಗೌರಿಪಾಳ್ಯ ಸಮೀಪದ ಹೊಸ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಕೆಎ 05 ಜೆಜೆಡ್ 9065 (KA05JZ9065) ಸಂಖ್ಯೆಯ ಸ್ಕೂಟರ್&zwnj;ನಲ್ಲಿ ಅಪ್ರಾಪ್ತ ಮಕ್ಕಳು ಕಾನೂನುಬಾಹಿರವಾಗಿ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿದ ಶ್ರೇಯಸ್ ಎಂಬ ಜಾಗೃತ ನಾಗರಿಕರು ತಕ್ಷಣವೇ ಫೋಟೋ ತೆಗೆದು ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.&lt;/p&gt;&lt;h2&gt;&lt;strong&gt;ಟ್ವೀಟ್ ಬೆನ್ನಲ್ಲೇ ಪೊಲೀಸರ ಆಕ್ಷನ್:&lt;/strong&gt;&lt;/h2&gt;&lt;p&gt;ಶ್ರೇಯಸ್ ಅವರ ಟ್ವೀಟ್&zwnj;ಗೆ ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರು, ಈ ಕುರಿತು ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಿದ ವಾಹನ ಮಾಲೀಕರು ಅಥವಾ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.&lt;/p&gt;&lt;h3&gt;&lt;strong&gt;ಜಾಗೃತ ನಾಗರಿಕನಿಗೆ ಪ್ರಶಂಸೆ:&lt;/strong&gt;&lt;/h3&gt;&lt;p&gt;ಪೊಲೀಸರ ಈ ತ್ವರಿತ ಕ್ರಮಕ್ಕೆ ಶ್ರೇಯಸ್ ಅಭಿನಂದನೆ ಸಲ್ಲಿಸಿದ್ದಾರೆ. 'ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರಿಗೆ ಧನ್ಯವಾದಗಳು. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮವಾಗಲಿ' ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುರಳಿ ಎಂಬುವವರು, 'ಇದು ಉತ್ತಮ ಹೆಜ್ಜೆ. ಇಂತಹ ಅಕ್ರಮಗಳನ್ನು ಕಂಡಾಗ ಫೋಟೋ ತೆಗೆದು ಪೊಲೀಸರಿಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಶ್ಲಾಘಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೋಷಕರಿಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರು ಅಥವಾ ಪೋಷಕರಿಗೆ ದಂಡ ಮಾತ್ರವಲ್ಲದೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಅಲ್ಲದೆ, ಅಪ್ರಾಪ್ತರು ಚಲಾಯಿಸಿದ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವೂ ಪೊಲೀಸರಿಗಿದೆ. ನಿಮ್ಮ ಮಕ್ಕಳ ಪ್ರಾಣ ಹಾಗೂ ನಿಮ್ಮ ಕಾನೂನು ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;This is haappend on today 26/04/2026 morning 10:45 am those kid's illegally ridding scooter No. ( KA05JZ9065 ) on location ( Padarayanapura main road near gowripalya on opposite of total engineer auto gas ) new Bridge. please take necessary. @BlrCityPolice @blrcitytraffic pic.twitter.com/S4rrOE8vbD&lt;/p&gt;&lt;p&gt;&mdash; Shreyas Shreyu (@Shreyas35240282) April 26, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob"/>
        </item>
        <item>
            <title><![CDATA[ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟನೆ]]></title>
            <link>https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</link>
            <guid isPermaLink="true">https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</guid>
            <pubDate>Tue, 28 Apr 2026 18:26:15 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಿಸಿಟಿವಿ ಸಮಸ್ಯೆಯು ಖಾಸಗಿ ಮಾರಾಟಗಾರರ ಆಂತರಿಕ ವಿವಾದವಾಗಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಯ ಭಾಗವಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಸಂಘ ಸ್ಪಷ್ಟಪಡಿಸಿದೆ. ಸಾರ್ವಜನಿಕ ಪ್ರವೇಶಕ್ಕೂ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸಂಘವು ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmg6swpj74zbndt7e2gewc04,imgname-gettyimages-2210880947-1774365504210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ಸಮಸ್ಯೆ ಎದುರಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಸಂಘ (Karnataka State Cricket Association) ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಕೆಲವು ವರದಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಂಘವು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;ಕ್ರಿಕೆಟ್&zwnj; ಅಸೋಸೊಯೇಷನ್ ಹೇಳಿಕೆಯ ಪ್ರಕಾರ, ಕ್ರೀಡಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಖಾಸಗಿ ವ್ಯವಸ್ಥೆಯ ಭಾಗವಾಗಿದ್ದು, ಅವುಗಳನ್ನು ಮಾರಾಟಗಾರರು ತಮ್ಮ ಆಂತರಿಕ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ. ಈ ಕ್ಯಾಮೆರಾಗಳು ಪೊಲೀಸ್ ಇಲಾಖೆಯ ಭದ್ರತಾ ಮೂಲಸೌಕರ್ಯದ ಭಾಗವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.&lt;/p&gt;&lt;h2&gt;ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ&lt;/h2&gt;&lt;p&gt;ಇನ್ನು, ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸ್ವತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ತೊಂದರೆ ಮಾರಾಟಗಾರ ಮತ್ತು ನೌಕರರ ನಡುವಿನ ಆಂತರಿಕ ವಿಷಯವಾಗಿದ್ದು, ಪಾವತಿ ಸಂಬಂಧಿತ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಸಂಬಂಧಪಟ್ಟ ಸರ್ವರ್ ಕೊಠಡಿಗಳು ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳು ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿದ್ದವು. ಇದರಲ್ಲಿ ಪೊಲೀಸ್ ಇಲಾಖೆ ಅಥವಾ ಕೆಎಸ್&zwnj;ಸಿಎಯ ಪ್ರಮುಖ ಭದ್ರತಾ ಚೌಕಟ್ಟಿನ ಯಾವುದೇ ಪಾತ್ರವಿಲ್ಲ ಎಂದು ಸಂಘ ತಿಳಿಸಿದೆ.&lt;/p&gt;&lt;h2&gt;ಭದ್ರತಾ ವೈಫಲ್ಯ ಉಂಟಾಗಿಲ್ಲ&lt;/h2&gt;&lt;p&gt;ಮುಖ್ಯವಾಗಿ, ಕ್ರೀಡಾಂಗಣದ ದ್ವಾರಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯುವ ಮೊದಲು ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ. ಈ ಘಟನೆಯಿಂದ ಯಾವುದೇ ಭದ್ರತಾ ವೈಫಲ್ಯ ಉಂಟಾಗಿಲ್ಲ ಹಾಗೂ ಕಾರ್ಯಾಚರಣೆಯಲ್ಲಿ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಕೆಎಸ್&zwnj;ಸಿಎ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಪ್ರೇಕ್ಷಕರು, ಆಟಗಾರರು ಅಥವಾ ಅಧಿಕಾರಿಗಳ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗಿಲ್ಲ. ಯಾವುದೇ ವಿಧ್ವಂಸಕ ಕೃತ್ಯಗಳು ನಡೆದಿಲ್ಲ ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಸಂಘ ತಿಳಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿಸಿಟಿವಿ ಸಮಸ್ಯೆ ಕುರಿತು ಹರಿದಾಡುತ್ತಿದ್ದ ಆತಂಕಗಳಿಗೆ ತೆರೆ ಎಳೆದಿರುವ ಕೆಎಸ್&zwnj;ಸಿಎ, ಕ್ರೀಡಾಂಗಣದ ಭದ್ರತಾ ವ್ಯವಸ್ಥೆ ಸದಾ ದೃಢವಾಗಿಯೇ ಇರುತ್ತದೆ ಎಂಬುದನ್ನು ಪುನರುಚ್ಚರಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte"/>
        </item>
        <item>
            <title><![CDATA[ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ: 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ]]></title>
            <link>https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</link>
            <guid isPermaLink="true">https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</guid>
            <pubDate>Tue, 28 Apr 2026 17:17:52 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಹೆಚ್ಚಾಗುವ ಎಚ್ಚರಿಕೆ ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9ycepmrjkr2tep2m1hstjm,imgname-karnataka-weather-1777376574164.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (India Meteorological Department) ಎಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯ ಹಿನ್ನೆಲೆ, ಕೆಲವು ಪ್ರದೇಶಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್&lt;/h2&gt;&lt;p&gt;ಇಂದು ಮತ್ತು ನಾಳೆ ರಾಜ್ಯದ ಒಟ್ಟು 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ Kalaburagi, Vijayapura, Yadgir, Raichur, Bagalkot ಸೇರಿದಂತೆ Belagavi, Koppal, Dharwad ಮತ್ತು Gadag ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಸ್ಥಿತಿ&lt;/h2&gt;&lt;p&gt;ಇಂದು Bengaluru ನಗರಕ್ಕೆ ಯಾವುದೇ ಅಲರ್ಟ್ ನೀಡಲಾಗಿಲ್ಲ. ಆದಾಗ್ಯೂ, ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗುತ್ತಿದೆ. ನಾಳೆ ಮತ್ತು ನಾಡಿದ್ದು ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;&lt;h2&gt;ಭಾರೀ ಮಳೆಯ ಸಾಧ್ಯತೆ&lt;/h2&gt;&lt;p&gt;ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಕಡಿಮೆ ಮಟ್ಟದ ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ.&lt;/p&gt;&lt;h2&gt;ಮುನ್ನೆಚ್ಚರಿಕೆ ಸೂಚನೆ&lt;/h2&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ಮಳೆ ಹೆಚ್ಚಾಗುವ ದಿನಗಳಲ್ಲಿ ಅನಾವಶ್ಯಕ ಪ್ರಯಾಣ ತಪ್ಪಿಸುವುದು, ವಿದ್ಯುತ್ ತಂತುಗಳು ಮತ್ತು ಮರಗಳ ಸಮೀಪ ನಿಲ್ಲದಿರುವುದು, ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸೂಕ್ತ.&lt;/p&gt;&lt;p&gt;ಒಟ್ಟಿನಲ್ಲಿ, ಮುಂದಿನ ಐದು ದಿನ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು India Meteorological Department ಸೂಚಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv"/>
        </item>
        <item>
            <title><![CDATA[ಬೆಂಗಳೂರು ಮತ್ತು  ಬೆಳಗಾವಿ ನಡುವೆ ವಿಶೇಷ ರೈಲು: ವೇಳಾಪಟ್ಟಿ, ನಿಲುಗಡೆ ಬಗ್ಗೆ ಸಂಪೂರ್ಣ ಮಾಹಿತಿ]]></title>
            <link>https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3</link>
            <guid isPermaLink="true">https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3</guid>
            <pubDate>Tue, 28 Apr 2026 16:33:04 +0530</pubDate>
            <description><![CDATA[ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್&zwnj;ಎಂವಿಟಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿತ ದಿನಾಂಕಗಳಂದು ಸಂಚರಿಸಲಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgkv34nm1s1he84ztr753mm0,imgname-railway-track-1770192474804.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಹುಬ್ಬಳ್ಳಿ: &lt;/strong&gt;ಬೇಸಿಗೆ ರಜೆಯ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ South Western Railway ಮಹತ್ವದ ಕ್ರಮ ಕೈಗೊಂಡಿದೆ. Sir M. Visvesvaraya Terminal Bengaluru (ಎಸ್&zwnj;ಎಂವಿಟಿ ಬೆಂಗಳೂರು) ಮತ್ತು ಬೆಳಗಾವಿ ನಡುವಿನ ಮಾರ್ಗದಲ್ಲಿ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.&lt;/p&gt;&lt;h2&gt;ಯಾವಾಗ?&lt;/h2&gt;&lt;p&gt;ರೈಲು ಸಂಖ್ಯೆ 06503 ವಿಶೇಷ ಎಕ್ಸ್&zwnj;ಪ್ರೆಸ್ 2026ರ ಏಪ್ರಿಲ್ 30ರಂದು ಸಂಜೆ 7:00ಕ್ಕೆ ಎಸ್&zwnj;ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 7:35ಕ್ಕೆ ಬೆಳಗಾವಿ ರೈಲು ನಿಲ್ದಾಣ ತಲುಪಲಿದೆ. ಇದು ಒಂದು ವಿಶೇಷ ಟ್ರಿಪ್ ಆಗಿದ್ದು, ಬೇಸಿಗೆ ಕಾಲದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ.&lt;/p&gt;&lt;p&gt;ಹಿಂತಿರುಗುವ ಪ್ರಯಾಣಕ್ಕಾಗಿ ರೈಲು ಸಂಖ್ಯೆ 06504 ವಿಶೇಷ ಎಕ್ಸ್&zwnj;ಪ್ರೆಸ್ ಮೇ 3ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00ಕ್ಕೆ ಎಸ್&zwnj;ಎಂವಿಟಿ ಬೆಂಗಳೂರಿಗೆ ತಲುಪಲಿದೆ. ಈ ಸೇವೆಯು ಎರಡೂ ದಿಕ್ಕುಗಳಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರದ ಅವಕಾಶ ಒದಗಿಸುತ್ತದೆ.&lt;/p&gt;&lt;h2&gt;ನಿಲುಗಡೆ ಎಲ್ಲೆಲ್ಲಿ?&lt;/h2&gt;&lt;p&gt;ಈ ವಿಶೇಷ ರೈಲು ತನ್ನ ಸಂಚಾರದಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಚಿಕ್ಕಬಾಣಾವರ, ತುಮಕೂರು, ಸಂಪಿಗೆ ರೋಡ್, ಅರಸಿಕೇರಿ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರ್ಜಗಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯಂತರ ಪಟ್ಟಣಗಳ ಪ್ರಯಾಣಿಕರೂ ಈ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ.&lt;/p&gt;&lt;p&gt;ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ವಿವಿಧ ವರ್ಗದ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 2 ಎಸಿ 2-ಟೈರ್, 4 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಎಸ್&zwnj;ಎಲ್&zwnj;ಆರ್&zwnj;ಡಿ (SLRD) ಬೋಗಿಗಳು ಸೇರಿವೆ.&lt;/p&gt;&lt;p&gt;ಒಟ್ಟಿನಲ್ಲಿ, ಬೇಸಿಗೆ ರಜೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಮನಗಂಡು ನೈಋತ್ಯ ರೈಲ್ವೆ ಆರಂಭಿಸಿರುವ ಈ ವಿಶೇಷ ರೈಲು ಸೇವೆ, ಬೆಂಗಳೂರಿನಿಂದ ಬೆಳಗಾವಿ ಮತ್ತು ಮಧ್ಯಂತರ ಪ್ರದೇಶಗಳಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಮಹತ್ವದ ಅನುಕೂಲ ಒದಗಿಸಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3"/>
        </item>
        <item>
            <title><![CDATA[ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆ ಪ್ರಕರಣ: ಆರೋಪಿ ಪತ್ನಿ ನೋಡಲು ಬರದ ಮಕ್ಕಳು, ವಿಚಿತ್ರ ವರ್ತನೆಗೆ ಬೇಸತ್ತ ಜೈಲಾಧಿಕಾರಿಗಳು!]]></title>
            <link>https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb</link>
            <guid isPermaLink="true">https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb</guid>
            <pubDate>Tue, 28 Apr 2026 15:17:07 +0530</pubDate>
            <description><![CDATA[ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ, ಜೈಲಿನಲ್ಲಿ ಒಂದು ವರ್ಷ ಕಳೆದಿದ್ದು, ಅವರ ವರ್ತನೆ ವಿಚಿತ್ರವಾಗಿ ಬದಲಾಗಿದೆ. ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಅವರು, ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳಿಗೆ ತೊಂದರೆ ನೀಡುತ್ತಿದ್ದು, ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮಾನ್ಸ್&zwnj;ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9qjs8j6hgyd0nyq0ppf4yj,imgname-former-dgp-om-prakash-murder-case-1777369441554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಪತ್ನಿ ಪಲ್ಲವಿ ಅವರ ವರ್ತನೆ ಗಮನಾರ್ಹವಾಗಿ ಬದಲಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಹತ್ಯೆ ಪ್ರಕರಣದ ನಂತರದಿಂದಲೇ ಜೈಲಿನಲ್ಲಿ ಇರುವ ಪಲ್ಲವಿ, ಇತ್ತೀಚಿನ ತಿಂಗಳುಗಳಲ್ಲಿ ಮಾನಸಿಕವಾಗಿ ಅಸ್ಥಿರವಾಗಿ ವರ್ತಿಸುತ್ತಿರುವುದಾಗಿ ಜೈಲು ಮೂಲಗಳು ತಿಳಿಸಿವೆ.&lt;/p&gt;&lt;p&gt;ಪ್ರಕರಣ ನಡೆದು ಈಗಾಗಲೇ ಒಂದು ವರ್ಷ ಕಳೆದಿದೆ. ಆದರೆ ಈ ಅವಧಿಯಲ್ಲಿಯೇ ಪಲ್ಲವಿ ಅವರ ವರ್ತನೆ ದಿನೇದಿನೇ ವಿಚಿತ್ರವಾಗುತ್ತಿದ್ದು, ಜೈಲು ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಸವಾಲಿನ ಸಂಗತಿಯಾಗಿದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕಿರುಚಾಟ, ಕೂಗಾಟ ನಡೆಸುವುದು ಹೆಚ್ಚಾಗಿದೆ.&lt;/p&gt;&lt;h2&gt;ವಿಚಿತ್ರ ವರ್ತನೆಗೆ ಬೇಸತ್ತಿರೋ ಭದ್ರತಾ ಸಿಬ್ಬಂದಿ&lt;/h2&gt;&lt;p&gt;ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ವಿಚಿತ್ರವಾಗಿ ವರ್ತನೆ ಇನ್ನಷ್ಟು ತೀವ್ರಗೊಂಡಿದ್ದು, ಪಲ್ಲವಿ ಅವರ ಮಾನಸಿಕ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಅವರ ಈ ಅಸಹಜ ನಡೆಗೆ ಬೇಸತ್ತಿರುವ ಭದ್ರತಾ ಸಿಬ್ಬಂದಿ, ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪಲ್ಲವಿ ಜೊತೆ ಒಂದೇ ಬ್ಯಾರಕ್&zwnj;ನಲ್ಲಿ ಇರುವ ಕೆಲವು ಮಹಿಳಾ ವಿಚಾರಾಧೀನ ಕೈದಿಗಳು ಕೂಡ ಭಯಭೀತರಾಗಿದ್ದು, ಅವರನ್ನು ಬೇರೆ ಬ್ಯಾರಕ್&zwnj;ಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ಪಲ್ಲವಿ ಜೊತೆ ಹೊಂದಾಣಿಕೆಯಾಗುವ ಕೆಲ ಮಹಿಳಾ ಕೈದಿಗಳನ್ನು ಅವರ ಬ್ಯಾರಕ್&zwnj;ನಲ್ಲಿ ಇರಿಸಲು ಜೈಲು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸಮತೋಲನಗೊಳಿಸಲು ಪ್ರಯತ್ನಿಸಲಾಗುತ್ತಿದೆ.&lt;/p&gt;&lt;p&gt;ಇನ್ನೊಂದೆಡೆ, ಪಲ್ಲವಿ ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಅವರನ್ನು ನಿಮಾನ್ಸ್ (NIMHANS) ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ವೈದ್ಯರು ಕೌನ್ಸೆಲಿಂಗ್ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದು, ಮಾನಸಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ಕೆಲ ಸಂದರ್ಭಗಳಲ್ಲಿ ಪಲ್ಲವಿ ಆಸ್ಪತ್ರೆಗೆ ಹೋಗಲು ಸಹ ನಿರಾಕರಿಸುತ್ತಿದ್ದು, ಇದರಿಂದ ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜೈಲು ಸಿಬ್ಬಂದಿಯೇ ಅವರನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತಿದೆ.&lt;/p&gt;&lt;p&gt;ಪಲ್ಲವಿ ಅವರ ಮಾನಸಿಕ ಸ್ಥಿತಿಗೆ ಕುಟುಂಬದ ದೂರವಾಗಿರುವುದೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;h2&gt;ಹದಿನೈದು ದಿನಕ್ಕೊಮ್ಮೆ ಪಲ್ಲವಿ ನಿಮಾನ್ಸ್ ಗೆ&lt;/h2&gt;&lt;p&gt;ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ತಮ್ಮ ಮಗ ಅಥವಾ ಮಗಳನ್ನು ಭೇಟಿಯಾಗಿಲ್ಲ ಎನ್ನಲಾಗಿದ್ದು, ಕುಟುಂಬದ ಸಂಪರ್ಕವೂ ಕಡಿಮೆಯಾಗಿದೆ. ಈ ಕಾರಣದಿಂದಲೇ ಅವರು ಇನ್ನಷ್ಟು ಒಂಟಿತನಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಮಾನವೀಯ ಮನೋಭಾವದಿಂದ ಪಲ್ಲವಿ ಅವರ ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೂ, ಕುಟುಂಬದಿಂದ ದೂರವಾಗಿರುವುದು ಪಲ್ಲವಿ ಅವರ ಮನಸ್ಥಿತಿಗೆ ಪರಿಣಾಮ ಬೀರಿರುವುದಾಗಿ ಅಂದಾಜಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ ಅವರ ಜೈಲು ಜೀವನ ಇದೀಗ ಮಾನಸಿಕ ಆರೋಗ್ಯದ ಸವಾಲುಗಳಿಂದ ಕೂಡಿದ್ದು, ಅವರನ್ನು ನಿಭಾಯಿಸುವುದು ಜೈಲು ಆಡಳಿತಕ್ಕೆ ದೊಡ್ಡ ಹೊಣೆಗಾರಿಕೆಯಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಮತ್ತು ಪಲ್ಲವಿ ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಎನ್ವಿಡಿಯಾ ಬೃಹತ್ ಹೂಡಿಕೆ: 1,230 ಕೋಟಿ ರೂ. ಮೊತ್ತದ ಡೀಲ್; 7.6 ಲಕ್ಷ ಚದರಡಿ ಕಚೇರಿ ಬಾಡಿಗೆಗೆ!]]></title>
            <link>https://kannada.asianetnews.com/bengaluru-urban/nvidia-bengaluru-office-lease-bagmane-capital-1230-crore-deal-ai-expansion-san/articleshow-5bzk2y1</link>
            <guid isPermaLink="true">https://kannada.asianetnews.com/bengaluru-urban/nvidia-bengaluru-office-lease-bagmane-capital-1230-crore-deal-ai-expansion-san/articleshow-5bzk2y1</guid>
            <pubDate>Tue, 28 Apr 2026 14:51:25 +0530</pubDate>
            <description><![CDATA[ಎಐ ದೈತ್ಯ ಎನ್ವಿಡಿಯಾ, ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್&zwnj;ನಲ್ಲಿ 7.6 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆದು ಐತಿಹಾಸಿಕ ಒಪ್ಪಂದ ಮಾಡಿಕೊಂಡಿದೆ. 10 ವರ್ಷಗಳ ಈ ಒಪ್ಪಂದದ ಮೌಲ್ಯ ಸುಮಾರು 1,230 ಕೋಟಿ ರೂಪಾಯಿಗಳಾಗಿದ್ದು, ಇದು ಭಾರತದ ಎಐ ಪರಿಸರ ವ್ಯವಸ್ಥೆಗೆ ದೊಡ್ಡ ಉತ್ತೇಜನ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jz7qxb9m95d4gjff5mk882jp,imgname-whatsapp-image-2025-07-03-at-2.23.51-pm-1751532875060.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): &lt;/strong&gt;ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಐ (AI) ದೈತ್ಯ ಕಂಪನಿ 'ಎನ್ವಿಡಿಯಾ' (NVIDIA), ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಭರ್ಜರಿ ಹೆಜ್ಜೆ ಇಟ್ಟಿದೆ. ಬೆಂಗಳೂರಿನ 'ಬಾಗ್ಮನೆ ಕ್ಯಾಪಿಟಲ್'ನಲ್ಲಿ ಬರೋಬ್ಬರಿ 7.6 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ಸ್ಥಳವನ್ನು ಬಾಡಿಗೆಗೆ ಪಡೆಯುವ ಮೂಲಕ ಎನ್ವಿಡಿಯಾ ಇತಿಹಾಸದಲ್ಲೇ ಅತಿದೊಡ್ಡ ಕಚೇರಿ ಒಪ್ಪಂದಕ್ಕೆ ಸಹಿ ಹಾಕಿದೆ. 10 ವರ್ಷಗಳ ಅವಧಿಯ ಈ ಒಪ್ಪಂದದ ಒಟ್ಟು ಮೌಲ್ಯ ಅಂದಾಜು 1,230 ಕೋಟಿ ರೂಪಾಯಿ.&lt;/p&gt;&lt;p&gt;ಬೆಂಗಳೂರಿನ ಬಾಗ್ಮನೆ ಕ್ಯಾಪಿಟಲ್&zwnj;ನ ಮೆಮಫಿಸ್ ಸೌತ್ ಟವರ್ (Memphis South Tower)ನಲ್ಲಿ ಎನ್ವಿಡಿಯಾ ಬಾಡಿಗೆಗೆ ಪಡೆದಿದೆ. ಒಟ್ಟು 12 ಮಹಡಿಗಳಲ್ಲಿ ಹರಡಿರುವ 7,60,000 ಚದರ ಅಡಿ ಪ್ರದೇಶದ ವಿಸ್ತೀರ್ಣ ಹೊಂದಿದೆ. ಇದಕ್ಕಾಗಿ ಕಂಪನಿ ಪ್ರತಿ ತಿಂಗಳಿಗೆ 8.59 ಕೋಟಿ ರೂಪಾಯಿ ಬಾಡಿಗೆ ನೀಡಲಿದೆ. ಅಂದರೆ ಪ್ರತಿ ಚದರ ಅಡಿಗೆ ತಿಂಗಳಿಗೆ 113 ರೂ. ನಿಗದಿಪಡಿಸಲಾಗಿದೆ. ಎನ್ವಿಡಿಯಾ ಗ್ರಾಫಿಕ್ಸ್ ಪ್ರೈವೇಟ್ ಲಿಮಿಟೆಡ್ ಈಗಾಗಲೇ 34.35 ಕೋಟಿ ರೂ.ಗಳನ್ನು ಸೆಕ್ಯೂರಿಟಿ ಡಿಪಾಸಿಟ್ ಆಗಿ ಪಾವತಿಸಿದೆ. ಏಪ್ರಿಲ್ 1, 2026 ರಿಂದ ಜಾರಿಗೆ ಬರುವಂತೆ 10 ವರ್ಷಗಳ ಅವಧಿಗೆ ಈ ಗುತ್ತಿಗೆ ನೀಡಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬಾಡಿಗೆಯಲ್ಲಿ ಶೇ. 15 ರಷ್ಟು ಏರಿಕೆಯಾಗಲಿದೆ.&lt;/p&gt;&lt;h2&gt;&lt;strong&gt;ಭಾರತದ ಎಐ ಪರಿಸರ ವ್ಯವಸ್ಥೆಗೆ ಬಲ&lt;/strong&gt;&lt;/h2&gt;&lt;p&gt;&quot;ಎನ್ವಿಡಿಯಾ ಇತ್ತೀಚೆಗಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ 5 ಟ್ರಿಲಿಯನ್ ಡಾಲರ್ ಮೌಲ್ಯದ ಮೈಲಿಗಲ್ಲು ದಾಟಿದೆ. ಈಗ ಬೆಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಹೂಡಿಕೆ ಮಾಡಿರುವುದು ಜಾಗತಿಕ ಎಐ ಕ್ಷೇತ್ರದಲ್ಲಿ ಭಾರತದ ಪಾತ್ರ ಎಷ್ಟು ದೊಡ್ಡದು ಎಂಬುದಕ್ಕೆ ಸಾಕ್ಷಿ&quot; ಎಂದು ಪ್ರೋಪ್&zwnj;ಸ್ಟಾಕ್ ಸಹ-ಸಂಸ್ಥಾಪಕ ರಾಜಾ ಸೀತಾರಾಮನ್ ತಿಳಿಸಿದ್ದಾರೆ. ಇದು ಬೆಂಗಳೂರನ್ನು ಸೆಮಿಕಂಡಕ್ಟರ್ ಮತ್ತು ಹೈ-ಎಂಡ್ ತಂತ್ರಜ್ಞಾನದ ರಾಜಧಾನಿಯಾಗಿ ಮತ್ತಷ್ಟು ಬಲಪಡಿಸಿದೆ.&lt;/p&gt;&lt;h2&gt;&lt;strong&gt;ಬೆಂಗಳೂರಿನ ಇತರ ಪ್ರಮುಖ ರಿಯಲ್ ಎಸ್ಟೇಟ್ ಡೀಲ್&zwnj;ಗಳು&lt;/strong&gt;&lt;/h2&gt;&lt;p&gt;&lt;strong&gt;ಆಪಲ್ (Apple) ವಿಸ್ತರಣೆ&lt;/strong&gt;: ಫೆಬ್ರವರಿ 2026 ರಲ್ಲಿ ಆಪಲ್ ಕಂಪನಿಯು ಬೆಂಗಳೂರಿನ ಎಂಬಸಿ ಜೆನಿತ್&zwnj;ನಲ್ಲಿ (Embassy Zenith) ಹೆಚ್ಚುವರಿ 1.21 ಲಕ್ಷ ಚದರ ಅಡಿ ಜಾಗವನ್ನು ಬಾಡಿಗೆಗೆ ಪಡೆದಿದೆ. ಇದರೊಂದಿಗೆ ಆಪಲ್&zwnj;ನ ಒಟ್ಟು ಕಚೇರಿ ವಿಸ್ತೀರ್ಣ 3.89 ಲಕ್ಷ ಚದರ ಅಡಿಯಾಗಿದ್ದು, 10 ವರ್ಷಗಳ ಅವಧಿಗೆ ಒಟ್ಟು 1,333 ಕೋಟಿ ರೂ. ಬಾಡಿಗೆ ಬದ್ಧತೆಯನ್ನು ಹೊಂದಿದೆ. ಆಪಲ್ ಪ್ರತಿ ಚದರ ಅಡಿಗೆ ತಿಂಗಳಿಗೆ 235 ರೂ. ಬಾಡಿಗೆ ಪಾವತಿಸುತ್ತಿದೆ.&lt;/p&gt;&lt;p&gt;&lt;strong&gt;ಮೊರ್ಗಾನ್ ಸ್ಟಾನ್ಲಿ (Morgan Stanley):&lt;/strong&gt; ಕಳೆದ ವರ್ಷ ಮುಂಬೈನ ಗೋರೆಗಾಂವ್&zwnj;ನಲ್ಲಿ ಮೊರ್ಗಾನ್ ಸ್ಟಾನ್ಲಿ ಕಂಪನಿಯು 10.01 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 9 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿತ್ತು. ಇದರ ಆರಂಭಿಕ ಮಾಸಿಕ ಬಾಡಿಗೆ 15.96 ಕೋಟಿ ರೂಪಾಯಿಗಳಾಗಿತ್ತು.&lt;/p&gt;&lt;p&gt;&lt;strong&gt;ಕ್ವಾಲ್ಕಾಮ್ (Qualcomm): &lt;/strong&gt;ಪ್ರಮುಖ ಸೆಮಿಕಂಡಕ್ಟರ್ ಕಂಪನಿ ಕ್ವಾಲ್ಕಾಮ್ ಇಂಡಿಯಾ ಕೂಡ ಬೆಂಗಳೂರಿನ ಬಾಗ್ಮನೆ ಡೆವಲಪರ್ಸ್&zwnj;ನ ಕಾನ್&zwnj;ಸ್ಟೆಲೇಷನ್ ಬಿಸಿನೆಸ್ ಪಾರ್ಕ್&zwnj;ನಲ್ಲಿ 2.56 ಲಕ್ಷ ಚದರ ಅಡಿ ಜಾಗವನ್ನು 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಇದರ ಒಟ್ಟು ಮೌಲ್ಯ 184 ಕೋಟಿ ರೂಪಾಯಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/nvidia-bengaluru-office-lease-bagmane-capital-1230-crore-deal-ai-expansion-san/articleshow-5bzk2y1"/>
        </item>
        <item>
            <title><![CDATA[SSLC ಲೀ ಹಳಗನ್ನಡ ನಡುಗನ್ನಡ: ಮಕ್ಕಳು ಗಡಗಡ! ಕನ್ನಡ ವಿಷಯದಲ್ಲೂ ಫೇಲ್ ಆಗಲು ಇದೇ ಕಾರಣವೇ?]]></title>
            <link>https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3</link>
            <guid isPermaLink="true">https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3</guid>
            <pubDate>Tue, 28 Apr 2026 13:38:16 +0530</pubDate>
            <description><![CDATA[&lt;p&gt;ಎಸ್ಸೆಸ್ಸೆಲ್ಸಿ ಕನ್ನಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅನುತ್ತೀರ್ಣರಾಗಲು ಪಠ್ಯಪುಸ್ತಕದಲ್ಲಿನ ಅಧಿಕ ವ್ಯಾಕರಣದ ಹೊರೆ ಮತ್ತು ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಪ್ರಮುಖ ಕಾರಣವೆಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq9hv608pbygn414p3qfx6xf,imgname--------------------------------33--1777363425287.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಿಂಗರಾಜು ಕೋರಾ&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಏ.28): &lt;/strong&gt;ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಹೆಚ್ಚು ಅಧ್ಯಾಯಗಳ ಹೊರೆ, ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲು ಪ್ರಮುಖ ಕಾರಣ ಎನ್ನುವುದು ಸ್ವತಃ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಶಿಕ್ಷಕರ ಅಭಿಪ್ರಾಯ.&lt;/p&gt;&lt;p&gt;ಅಲ್ಲದೆ, ಶಾಲಾ ಹಂತದಲ್ಲಿ ಭಾಷೆಯನ್ನು ಭಾಷೆಯಾಗಿ ಕಲಿಸುವ ಪಠ್ಯ ವಿಷಯಗಳಿಗಿಂತ ದೀರ್ಘವಾದ ಸಾಹಿತ್ಯಕ ಗದ್ಯಗಳು, ಭಾಷಾ ವಿದ್ವತ್&zwnj;ಗೆ ಸಂಬಂಧಿಸಿದ ಅಂಶಗಳನ್ನು ಹೆಚ್ಚು ಅಡಕವಾಗಿಸಿರುವುದು ಕೂಡ ಮಕ್ಕಳಿಗೆ ಹೊರೆಯಾಗುತ್ತಿದೆ. ಜೊತೆಗೆ ಕಲಿಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ವಿಷಯ ತಜ್ಞರು.&lt;/p&gt;&lt;p&gt;ಸುಮಾರು 180 ಪುಟಗಳ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಎಂಟು ಗದ್ಯ, ಎಂಟು ಪದ್ಯ, ಆರು ಪೂರಕ ಅಧ್ಯಯನ ಪಾಠಗಳಿವೆ. ಇವುಗಳಲ್ಲಿ ಹಳಗನ್ನಡ, ನಡುಗನ್ನಡಕ್ಕೆ ಸಂಬಂಧಿಸಿದ ಕೆಲ ಅಧ್ಯಾಯಗಳು ಕಠಿಣವಾಗಿವೆ ಎನ್ನುವುದು ಬಿಟ್ಟರೆ ಶಿಕ್ಷರ ಬೇರೆ ಆಕ್ಷೇಪವಿಲ್ಲ. ಆದರೆ, ಈ ಗದ್ಯ, ಪದ್ಯ ವಿಷಯಗಳಿಗಿಂತ ಸಂಧಿ, ಸಮಾಸ, ರಗಳೆ, ಛಂದಸ್ಸು, ಅಲಂಕಾರ, ಷಟ್ಪದಿ, ವಿಭಕ್ತಿ ಪ್ರತ್ಯಯ, ತತ್ಸಮ ತದ್ಭವ, ವೃತ್ತಗಳು, ತದ್ಧಿತಾಂತಗಳು, ವಾಕ್ಯಪ್ರಕಾರ ಹೀಗೆ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯಗಳು ದೊಡ್ಡದಾಗಿವೆ. ಪ್ರೌಢ ಶಾಲೆಯಲ್ಲಿ 8, 9 ಮತ್ತು 10 ಈ ಮೂರೂ ತರಗತಿಯಲ್ಲಿ ನಿಯಮಿತವಾಗಿ ಕಲಿಸಬೇಕಾದ ಎಲ್ಲಾ ವ್ಯಾಕರಣಗಳನ್ನೂ ಒಟ್ಟಾಗಿ 10ನೇ ತರಗತಿಗೇ ತಂದಿಟ್ಟಿರುವುದು ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ.&lt;/p&gt;&lt;p&gt;ಒಂದೊಂದೂ ವ್ಯಾಕರಣಗಳನ್ನು ಅರ್ಥ ಮಾಡಿಕೊಳ್ಳುವವರೆಗೆ ಬಹಳ ಕಷ್ಟದಾಯಕ. ಕೆಲವೊಂದು ವ್ಯಾಕರಣಗಳು ಶಿಕ್ಷಕರಿಗೇ ತಿಳಿದಿರುವುದಿಲ್ಲ. ಅವುಗಳನ್ನು ಮೊದಲು ತಾವು ಅರ್ಥಮಾಡಿಕೊಂಡು ಬೋಧಿಸುವುದು ಒಂದು ಸವಾಲಾದರೆ, ಮಕ್ಕಳಿಗೆ ಅರ್ಥವಾಗಿಸುವುದು, ಕಲಿಸುವುದು ಇನ್ನೂ ದೊಡ್ಡ ಸವಾಲಾಗಿದೆ. ವ್ಯಾಕರಣ ಭಾಗದಲ್ಲಿ ಅಭ್ಯಾಸಕ್ಕೆ ಅಗತ್ಯಕ್ಕಿಂತ ಹೆಚ್ಚು ಅಂಶಗಳನ್ನು ನೀಡಲಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಶಾಲೆಯೊಂದರ ಹೆಸರೇಳಲಿಚ್ಛಿಸದ ಕನ್ನಡ ವಿಷಯ ಶಿಕ್ಷಕ.&lt;/p&gt;&lt;h2&gt;ಕಠಿಣ ವ್ಯಾಕರಣಕ್ಕೆ 19 ಅಂಕ:&amp;nbsp;&lt;/h2&gt;&lt;p&gt;ಒಂದೆಡೆ 10ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ವ್ಯಾಕರಣಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇರಿಸಲಾಗಿದೆ. ಗದ್ಯ, ಪದ್ಯ ವಿಷಯಗಳ ಅಧ್ಯಯನಕ್ಕಿಂತ ಹೆಚ್ಚು ಸಮಯವನ್ನು ಮಕ್ಕಳು ಈ ಹತ್ತಾರು ವ್ಯಾಕರಣಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಕಳೆಯುತ್ತಾರೆ. ಅದರಲ್ಲೂ ಕಲಿಕಾ ಮಟ್ಟ ಕಡಿಮೆ ಇರುವವರಿಗೆ ಅಥವಾ ಹಿಂದುಳಿದವರಿಗೆ ಇವುಗಳು ಅರ್ಥವಾಗುವುದೇ ಕಷ್ಟ. ಕೊನೆಗೆ ಇಷ್ಟೆಲ್ಲಾ ವ್ಯಾಕರಣ ಓದಿಕೊಂಡಿದ್ದಕ್ಕೆ ಪರೀಕ್ಷೆಯಲ್ಲಿ ಮಕ್ಕಳಿಗೆ ಕೇವಲ 19 ಅಂಕಗಳಿಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉಳಿದಂತೆ ಗದ್ಯ ಮತ್ತು ಪದ್ಯ ಪಾಠಗಳಿಗೆ ತಲಾ 28 ಅಂಕ, ಪೂರಕ ಅಧ್ಯಯನದ ಅಧ್ಯಾಯಗಳಿಗೆ 9 ಅಂಕ, ಅಪಠಿತ ಗದ್ಯಕ್ಕೆ 4, ಪತ್ರ ಬರವಣಿಗೆ, ಪ್ರಬಂಧ ರಚನೆಗೆ ತಲಾ 5 ಅಂಕ ಸೇರಿ ಅಧ್ಯಾಯವಾರು 100 ಅಂಕಗಳಿಗೆ ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ.&lt;/p&gt;&lt;p&gt;ಇನ್ನು, ಮಕ್ಕಳು ಕನ್ನಡಲ್ಲಿ ಫೇಲಾಗುತ್ತಿರುವುದಕ್ಕೆ ಶಿಕ್ಷಕರು ನೀಡುವ ಇನ್ನಿತರೆ ಕಾರಣಗಳ ಪೈಕಿ ಹಿಂದಿ, ಇಂಗ್ಲೀಷ್&zwnj; ಭಾಷಾ ವಿಷಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯ ಪಠ್ಯಪುಸ್ತಕ ಅಷ್ಟು ಸರಳವಾಗಿಲ್ಲದಿರುವುದು. ಘಟಕ ಪರೀಕ್ಷೆ ಬದಲಾಗಿ ಪಾಠ ಆಧಾರಿತ ಮೌಲ್ಯಾಂಕನ ಮಾಡುವುದು. ದೀರ್ಘವಾದ ಗದ್ಯಗಳು ಮತ್ತು ಪ್ರಶ್ನೋತ್ತರಗಳು, ಪಠ್ಯದ ಪುಟಗಳ ಸಂಖ್ಯೆಯೇ ದೊಡ್ಡದಿರುವುದು ಕೂಡ ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ ಹುಟ್ಟಿಸುತ್ತಿದೆ ಎಂಬ ಅಭಿಪ್ರಾಯಗಳು ಸೇರಿವೆ. ಜೊತೆಗೆ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಕನ್ನಡ ಬೋಧನೆ ಆಗುತ್ತಿಲ್ಲ. ವಿಷಯ ಶಿಕ್ಷಕರ ಕೊರತೆಯೂ ಇದಕ್ಕೆ ಕಾರಣ ಎನ್ನುವುದು ಶಿಕ್ಷಕರ ಅಭಿಪ್ರಾಯ.&lt;/p&gt;&lt;p&gt;--&lt;/p&gt;&lt;p&gt;ಪ್ರೌಢ ಶಾಲಾ ಹಂತದ ಕನ್ನಡ ಭಾಷಾ ಪಠ್ಯದಲ್ಲಿ ಪಠ್ಯಕ್ರಮ ಹೆಚ್ಚೇನೂ ಇಲ್ಲ. ಆದರೆ, ವಿಷಯಗಳಲ್ಲಿ ಕಠಿಣತೆಯ ಮಟ್ಟ ಜಾಸ್ತಿ ಇದೆ. ಹಳಗನ್ನಡ, ನಡುಗನ್ನಡವೇ ಶೇ.50ರಿಂದ 60ರಷ್ಟಿದೆ. ಹೊಸಗನ್ನಡ ಶೇ.20ರಿಂದ 30ಕ್ಕೆ ಸೀಮಿತ ಮಾಡಿದ್ದಾರೆ. ಸಾಹಿತ್ಯ ಸರಳವಾಗಿ ಹಾಗೂ ಹೊಸಗನ್ನಡದಲ್ಲಿ ಇದ್ದರೆ ಮಕ್ಕಳಿಗೆ ಕಲಿಯಲು ಸಾಧ್ಯವಾಗುತ್ತದೆ. ಆಡು ಭಾಷೆಗಿಂತ ಹೆಚ್ಚು ಕಠಿಣ ಭಾಷೆ ಇಟ್ಟಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಕೆಲವು ವಿಷಯಗಳನ್ನು ಶಿಕ್ಷಕರೇ ಅಥೈಸಲಾಗದಷ್ಟು ಕಠಿಣವಾಗಿವೆ. ಹಾಗಾಗಿ ಕನ್ನಡದಲ್ಲಿ ಹೆಚ್ಚು ಮಕ್ಕಳು ಫೇಲಾಗುತ್ತಿದ್ದಾರೆ ಎನ್ನುವುದು ನನ್ನ ಭಾವನೆ.&lt;/p&gt;&lt;p&gt;ಮಂಜುನಾಥ್&zwnj;, ಪ್ರೌಢ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಭಾಷಾ ಶಿಕ್ಷಕರು&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/modern-students-vs-ancient-scripts-the-challenge-of-reading-old-kannada-in-sslc-exams-rav/articleshow-7a8dug3"/>
        </item>
        <item>
            <title><![CDATA[ಬೆಂಗಳೂರು: ಈರುಳ್ಳಿ ಬೆಳ್ಳುಳ್ಳಿಗಾಗಿ ಹೊಡೆದಾಡಿಕೊಂಡ ದಯಾನಂದ ಸಾಗರ್ ಕಾಲೇಜಿನ ಮಹಿಳಾ ಪ್ರೊಫೆಸರ್‌ಗಳು!]]></title>
            <link>https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic</link>
            <guid isPermaLink="true">https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic</guid>
            <pubDate>Tue, 28 Apr 2026 13:28:16 +0530</pubDate>
            <description><![CDATA[ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಇಬ್ಬರು ಮಹಿಳಾ ಸಹಾಯಕ ಪ್ರಾಧ್ಯಾಪಕಿಯರ ನಡುವೆ ಗಲಾಟೆ ನಡೆದಿದೆ. ಈರುಳ್ಳಿ-ಬೆಳ್ಳುಳ್ಳಿ ಬಳಕೆಯ ಸಣ್ಣ ವಿಚಾರದಿಂದ ಆರಂಭವಾದ ಜಗಳವು, ದೈಹಿಕ ಹಲ್ಲೆಯ ಹಂತಕ್ಕೆ ತಲುಪಿದ ಅಚ್ಚರಿಯ ಘಟನೆ ಇದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-5d10a087-ea0e-4c89-9e32-d4f8505e386e,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವ ಅಚ್ಚರಿಯ ಘಟನೆ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ದಯಾನಂದ ಸಾಗರ್ ಕಾಲೇಜು (Dayananda Sagar College)ಗೆ ಸಂಬಂಧಿಸಿದ ಇಬ್ಬರು ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳ ನಡುವೆ ಉಂಟಾದ ಗಲಾಟೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲೂ ಗಮನ ಸೆಳೆದಿದೆ. ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.&lt;/p&gt;&lt;h2&gt;ರೂಮ್&zwnj;ಮೇಟ್&zwnj;ಗಳಾಗಿರುವ ಪ್ರೊಫೆಸರ್&zwnj;ಗಳು&lt;/h2&gt;&lt;p&gt;ಜ್ಯೋತಿ ಕುಮಾರಿ ಹಾಗೂ ಪ್ರೀತಿ ಜೈನ್ ಎಂಬ ಇಬ್ಬರು ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳು ರೂಮ್&zwnj;ಮೇಟ್&zwnj;ಗಳಾಗಿ ವಾಸಿಸುತ್ತಿದ್ದರು. ಆರಂಭದಲ್ಲಿ ಸಣ್ಣ ವಿಷಯವಾಗಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಯ ಬಗ್ಗೆ ಉಂಟಾದ ಭಿನ್ನಾಭಿಪ್ರಾಯವೇ ಬಳಿಕ ದೊಡ್ಡ ಗಲಾಟೆಗೆ ಕಾರಣವಾಯಿತು ಎನ್ನಲಾಗಿದೆ. ಅಡುಗೆ ಪದ್ಧತಿ ಹಾಗೂ ವೈಯಕ್ತಿಕ ಅಭಿರುಚಿಗಳ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿ ಕ್ರಮೇಣ ವಾಗ್ವಾದಕ್ಕೆ ಕಾರಣವಾಗಿ ದೊಡ್ಡ ಗಲಾಟೆಯಾಗಿದೆ.&lt;/p&gt;&lt;h2&gt;ಗಲಾಟೆ ಜೋರಾಗಲು ಕಾರಣವಾದ ಲ್ಯಾಪ್&zwnj;ಟಾಪ್ ಹಾಗೂ ಮೊಬೈಲ್!&lt;/h2&gt;&lt;p&gt;ಈ ವಿವಾದ ಅಲ್ಲೇ ನಿಂತಿಲ್ಲ. ಬಳಿಕ ರೂಮ್&zwnj;ನಲ್ಲಿ ಲ್ಯಾಪ್&zwnj;ಟಾಪ್ ಹಾಗೂ ಮೊಬೈಲ್ ಸ್ಪೀಕರ್&zwnj;ಗಳನ್ನು ಜೋರಾಗಿ ಬಳಸಿ ಶಬ್ದ ಮಾಡಿರುವುದರಿಂದ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪರಸ್ಪರ ಕಿರಿಕಿರಿ ಹೆಚ್ಚಾದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ತೀವ್ರಗೊಂಡು, ಕೊನೆಗೆ ದೈಹಿಕ ಘರ್ಷಣೆಯ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಘಟನೆಯಲ್ಲಿ ಜ್ಯೋತಿ ಕುಮಾರಿ ಮೇಲೆ ಪ್ರೀತಿ ಜೈನ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇನ್ನಷ್ಟು ವಿಚಾರಣೆ ನಡೆಯಬೇಕಿದೆ. ಕಾಲೇಜು ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಅಲ್ಪ ಕಾರಣಗಳಿಂದ ಆರಂಭವಾದ ಈ ಗಲಾಟೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜೊತೆಗಿರುವ ವ್ಯಕ್ತಿಗಳು ಪರಸ್ಪರ ಗೌರವ ಮತ್ತು ಸಹನಶೀಲತೆಯಿಂದ ನಡೆದುಕೊಳ್ಳುವ ಅಗತ್ಯವನ್ನು ಈ ಘಟನೆ &amp;nbsp;ಒತ್ತಿ ಹೇಳಿದಂತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic"/>
        </item>
        <item>
            <title><![CDATA[ರಸ್ತೆಗೆ ಮೊಳೆ ಎಸೆದೇ ಲಕ್ಷ ಲಕ್ಷ ದುಡೀತಾರೆ ಇವ್ರು! Nail Trap Mafia ಜಾಲಕ್ಕೆ ಹೈರಾಣಾದ ವಾಹನ ಸವಾರರು]]></title>
            <link>https://kannada.asianetnews.com/crime/motorists-allege-puncture-mafia-in-bengaluru-as-nail-traps-resurface-suc/articleshow-15n57cc</link>
            <guid isPermaLink="true">https://kannada.asianetnews.com/crime/motorists-allege-puncture-mafia-in-bengaluru-as-nail-traps-resurface-suc/articleshow-15n57cc</guid>
            <pubDate>Mon, 27 Apr 2026 19:10:18 +0530</pubDate>
            <description><![CDATA[ಬೆಂಗಳೂರಿನಲ್ಲಿ ರಸ್ತೆ ಮೇಲೆ ಮೊಳೆ ಎಸೆದು ವಾಹನಗಳ ಟೈಯರ್ ಪಂಕ್ಚರ್ ಮಾಡುವ ಮಾಫಿಯಾ ಸಕ್ರಿಯವಾಗಿದೆ. ಬಳಿಕ ಸಮೀಪದಲ್ಲೇ ಪಂಕ್ಚರ್ ಅಂಗಡಿ ಇಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದವರಿಂದಲೇ ಲಕ್ಷಗಟ್ಟಲೆ ಹಣ ದೋಚುತ್ತಿದ್ದಾರೆ. ಹೆಬ್ಬಾಳದಂತಹ ಪ್ರದೇಶಗಳಲ್ಲಿ ಇದು ಅವ್ಯಾಹತವಾಗಿದ್ದರೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ರಮ ಕೈಗೊಳ್ಳುವುದು ಕಷ್ಟಕರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq7jnwszskempwyz202re49g,imgname-nail-trap-mafia-1777297191743.jpg" type="image/jpeg" height="390" width="690"/>
            <content:encoded><![CDATA[&lt;p&gt;ದುಡ್ಡು ಮಾಡುವವರಿಗೆ ದಾರಿ ಹಲವು. ಕೆಲವರು ಒಳ್ಳೆಯ ಮಾರ್ಗದಿಂದ ಸಂಪಾದನೆ ಮಾಡಿದರೆ, ಮತ್ತೆ ಕೆಲವರಿಗೆ ಬೇರೆಯವರನ್ನು ದೋಚಿಯೇ ಸಂಪಾದನೆ ಮಾಡುವಲ್ಲಿ ನಿಸ್ಸೀಮರು. ಕೆಲವು ಕ್ಷೇತ್ರದವರು ಜನರನ್ನು ಲೂಟಿ ಲೂಟಿ ಮಾಡಿ ಕೋಟಿಗಟ್ಟಲೆ ಹಣ ಬಾಚಿ, ತಮ್ಮ ನಾಲ್ಕೈದು ಪೀಳಿಗೆಯವರು ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಿದರೆ, ಮತ್ತೆ ಕೆಲವರಿಗೆ, ಮೋಸದಿಂದಲೇ ಒಂದಿಷ್ಟು ಸಂಪಾದನೆ ಮಾಡುವ ಆಸೆ, ಅದು ಹುಟ್ಟುಗುಣ ಕೂಡ. ಅಂಥದ್ದೇ ಒಂದು ಮಾಫಿಯಾ ಬಹಳ ವರ್ಷಗಳಿಂದಲೂ ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಚಾಲ್ತಿಯಲ್ಲಿ ಇದೆ. ಆದರೆ ಇದುವರೆಗೂ ಅವರು ನೆಮ್ಮದಿಯಿಂದ ತಮ್ಮ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ.&lt;/p&gt;&lt;h2&gt;&lt;strong&gt;ಮೊಳೆ ಎಸೆದು ಲಕ್ಷ ಲಕ್ಷ ಸಂಪಾದನೆ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಏನಿದು ಎಂದು ನೋಡುವುದಾದರೆ, ರಸ್ತೆಯ ಮೇಲೆ ಮೊಳೆಯನ್ನು ಎಸೆದೇ ಲಕ್ಷ ಲಕ್ಷ ಸಂಪಾದನೆ ಮಾಡುವ ಕಾಯಕ ಇವರದ್ದು. ಇದನ್ನು ಅನುಭವಿಸಿದವರ ಪಾಡು ಮಾತ್ರ ಹೇಳತೀರದು. ಕೆಲವೊಂದು ಏರಿಯಾಗಳಲ್ಲಿ ಈ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ರಸ್ತೆಯ ಮೇಲೆ ಮೊಳೆ ಹಾಕಿ ವಾಹನಗಳ ಟೈಯರ್​ ಪಂಕ್ಚರ್​ ಮಾಡುವುದು ಇವರ ಕಾಯಕ. ಸಮೀಪದಲ್ಲಿಯೇ ಇವರ ಪಂಕ್ಚರ್​ ಅಂಗಡಿ ಇರುತ್ತದೆ. ತಾವು ಮೋಸ ಹೋಗಿರುವುದು ತಿಳಿಯದ ವಾಹನ ಸವಾರರು, ಸಮೀಪದಲ್ಲಿಯೇ ಅಂಗಡಿ ಇದ್ದುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟು ದೇವರೇ ನಮಗೆ ಕರುಣೆ ತೋರಿದ ಎಂದು ಖುಷಿಯಿಂದ ಆ ಅಂಗಡಿಗೆ ಹೋಗಿ ಟೈಯರ್​ ರಿಪೇರಿ ಮಾಡಿಸಿಕೊಂಡು ಬರುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಮಾಫಿಯಾ ಎಂದು ತಿಳಿದರೂ ಏನೂ ಮಾಡಲು ಆಗ್ತಿಲ್ಲ&lt;/strong&gt;&lt;/h3&gt;&lt;p&gt;ಆದರೆ, ದಿನನಿತ್ಯ ಈ ಭಾಗಗಳಲ್ಲಿ ಸಂಚಾರ ಮಾಡುವವರಿಗೆ ಮಾತ್ರ ಇದು ದೊಡ್ಡ ಮಾಫಿಯಾ ಎನ್ನುವುದು ತಿಳಿದಿದೆ. ಬೆಂಗಳೂರಿನ ಹೆಬ್ಬಾಳ ಸೇರಿದಂತೆ ಕೆಲವೆಡೆಗಳಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಿರುವುದಾಗಿ ವಾಹನ ಸವಾರರು ಹೇಳುತ್ತಾರೆ. ಆದರೆ ದೂರು ಕೊಟ್ಟರೆ ಕೇಳುವವರು ಯಾರು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ. ಮೊಳೆ ಹಾಕಿರುವುದು ಇಂಥವರೇ ಎನ್ನುವುದು ಪೊಲೀಸರಿಗೆ ಏನೂ ತಿಳಿಯದ ವಿಷಯವಲ್ಲ ಬಿಡಿ. ಆದರೆ ದೂರು ಕೊಡಲು ಹೋಗುವ ಬಡಪಾಯಿಗಳಿಗೆ ಸಾಕ್ಷಿ ಕೇಳಿದರೆ ಅವರು ಎಲ್ಲಿಂದ ತಂದಾರು?&lt;/p&gt;&lt;h3&gt;&lt;strong&gt;ಬೆಂಕಿಗೆ ಗಂಟೆ ಕಟ್ಟಿದ್ರೂ...&lt;/strong&gt;&lt;/h3&gt;&lt;p&gt;ಇದಾಗಲೇ ಸೋಷಿಯಲ್​ ಮೀಡಿಯಾಗಳಲ್ಲಿ ಹಲವಾರು ವರ್ಷಗಳಿಂದ ಕೆಲವರು ಇದರ ವಿಡಿಯೋ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸರ್ಕಾರದ ಗಮನಕ್ಕೂ ತಂದಿದ್ದಾರೆ (?). ಆದರೆ ಇವರದ್ದು ಅರಣ್ಯರೋಧನ. ಕಚೇರಿಗೋ, ಇನ್ನೆಲ್ಲಿಗೋ ಹೋಗುವ ಸಮಯದಲ್ಲಿ ಪದೇ ಪದೇ ಇದೇ ರೀತಿ ಟೈಯರ್​ ಪಂಕ್ಚರ್​ ಆಗುತ್ತಾ ಇದ್ದರೆ, ವಾಹನ ಸವಾರರ ಪಾಡು ಹೇಗಿರಬೇಡ? ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು, ಹಾಗೊಮ್ಮೆ ಗಂಟೆ ಕಟ್ಟಿದರೂ ಮುಂದೆ ಆ ಗಂಟೆ ಬಾರಿಸುತ್ತದೆಯೇ ಎನ್ನುವ ಅನುಮಾನ ಎನ್ನುವಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. Karnataka Portfolio ಎನ್ನುವ ಎಕ್ಸ್ ಖಾತೆಯಲ್ಲಿ ಇದರ ವಿಡಿಯೋ ಮಾಡಿದ್ದಾರೆ ನೋಡಿ.&lt;/p&gt;&lt;p&gt;&amp;nbsp;&lt;/p&gt;&lt;p&gt;Nail Trap Mafia Back in Bengaluru? Are Roads Being Turned into Profit Zones for Puncture RacketsThe menace of puncture gangs appears to be resurfacing in Bengaluru, raising serious concerns about public safety and law enforcement. Fresh reports are emerging from the stretch&hellip; pic.twitter.com/Rfp1rHzhYQ&lt;/p&gt;&lt;p&gt;&mdash; Karnataka Portfolio (@karnatakaportf) April 26, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/crime/motorists-allege-puncture-mafia-in-bengaluru-as-nail-traps-resurface-suc/articleshow-15n57cc"/>
        </item>
        <item>
            <title><![CDATA[ರಾಜ್ಯದಲ್ಲಿ ಮಳೆ ಆರ್ಭಟ, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್; ಮುಂಡರಗಿ ಟವರ್ ಢಮಾರ್, ಯಾದಗಿರಿ ಸಿಡಿಲಿಗೆ 50 ಕುರಿ ಬಲಿ!]]></title>
            <link>https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</link>
            <guid isPermaLink="true">https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah</guid>
            <pubDate>Mon, 27 Apr 2026 20:15:43 +0530</pubDate>
            <description><![CDATA[&lt;p&gt;ಹವಾಮಾನ ಇಲಾಖೆಯು ಕರ್ನಾಟಕದ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಯಾದಗಿರಿಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗದಲ್ಲಿ ಬಿರುಗಾಳಿಗೆ ಮೊಬೈಲ್ ಟವರ್ ಕುಸಿದುಬಿದ್ದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq7pcmhj9phzabq7y5zf6te3,imgname-karnataka-rain-orange-alert-1777301082673.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು/ಗದಗ/ಯಾದಗಿರಿ (ಏ.27): ರಾ&lt;/strong&gt;ಜ್ಯದಲ್ಲಿ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನತೆಗೆ ಹವಾಮಾನ ಇಲಾಖೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂದಿನ ಮೂರು ಗಂಟೆಗಳಲ್ಲಿ ರಾಜ್ಯದ ಒಟ್ಟು ಎಂಟು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವ ಯಾವ ಜಿಲ್ಲೆಗಳಲ್ಲಿ ಮಳೆ?&lt;/strong&gt;&lt;/h2&gt;&lt;p&gt;ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ರಾಜ್ಯದ ಎರಡು ಪ್ರತ್ಯೇಕ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ:&lt;/p&gt;&lt;p&gt;&lt;strong&gt;ಹೆಚ್ಚಿನ ತೀವ್ರತೆಯ ಮಳೆ (ಗಂಟೆಗೆ 40-50 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಿಕ್ಕಮಗಳೂರು, ಹಾಸನ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ಇರಲಿದ್ದು, ಗುಡುಗು ಸಹಿತ ಮಿಂಚಿನ ಅಬ್ಬರ ಜೋರಾಗಿರಲಿದೆ.&lt;/p&gt;&lt;p&gt;&lt;strong&gt;ಸಾಧಾರಣ ಮಳೆ (ಗಂಟೆಗೆ 30-40 ಕಿ.ಮೀ ವೇಗದ ಗಾಳಿ):&lt;/strong&gt;&lt;/p&gt;&lt;p&gt;ಚಾಮರಾಜನಗರ, ಮೈಸೂರು, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಲ್ಲಿ ಗಾಳಿಯು ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.&lt;/p&gt;&lt;p&gt;ರಾಜ್ಯದ ಹಲವು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಧಾರಾಕಾರ ಮಳೆ ಮತ್ತು ಬಿರುಗಾಳಿ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ಸಿಡಿಲು ಬಡಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದರೆ, ಗದಗ ಜಿಲ್ಲೆಯಲ್ಲಿ ಬೃಹತ್ ಮೊಬೈಲ್ ಟವರ್ ನೆಲಕ್ಕಪ್ಪಳಿಸಿದೆ. ಈ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.&lt;/p&gt;&lt;h2&gt;&lt;strong&gt;ಯಾದಗಿರಿ: ಕುರಿಗಾಹಿಗಳ ಬದುಕು ಬೀದಿಗೆ&lt;/strong&gt;&lt;/h2&gt;&lt;p&gt;ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ರೈತರು ತತ್ತರಿಸಿದ್ದಾರೆ. ಕುರಿಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಮಲ್ಲಪ್ಪ, ಆಶಪ್ಪ, ಜಾಲ್ಲಪ್ಪ, ಲಕ್ಸಮಪ್ಪ ಮತ್ತು ಹನುಮಂತ ಎಂಬ ರೈತರಿಗೆ ಸೇರಿದ 50ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ತಮ್ಮ ಜೀವನಾಧಾರವಾಗಿದ್ದ ಕುರಿಗಳ ಮಾರಣಹೋಮ ಕಂಡು ಕುರಿಗಾಹಿಗಳು ಕಣ್ಣೀರು ಹಾಕುತ್ತಿದ್ದಾರೆ. ನೊಂದ ರೈತರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸ್ಥಳೀಯ ಹೋರಾಟಗಾರರು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಗದಗ: ಗಾಳಿ ಮಳೆಗೆ ಉರುಳಿದ ಮೊಬೈಲ್ ಟವರ್&lt;/strong&gt;&lt;/h2&gt;&lt;p&gt;ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಜಾಗೃತಿ ಸರ್ಕಲ್ ಬಳಿ ಬಿರುಗಾಳಿ ಮಳೆಯ ರಭಸಕ್ಕೆ ಏರ್&zwnj;ಟೆಲ್ ಮೊಬೈಲ್ ಟವರ್&zwnj;ವೊಂದು ಬಿಲ್ಡಿಂಗ್ ಮೇಲಿಂದ ಕೆಳಕ್ಕೆ ಬಿದ್ದಿದೆ. ಸವಣೂರು ಎಂಬುವವರಿಗೆ ಸೇರಿದ ಕಟ್ಟಡದ ಮೇಲೆ ಈ ಟವರ್ ಅಳವಡಿಸಲಾಗಿತ್ತು. ಅದೃಷ್ಟವಶಾತ್ ಟವರ್ ಬೀಳುವ ಸಮಯದಲ್ಲಿ ಜನಸಂಚಾರ ವಿರಳವಾಗಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಸ್ಥಳಕ್ಕೆ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಸಂಭವನೀಯ ಹಾನಿಗಳು:&lt;/strong&gt;&lt;/h2&gt;&lt;ul&gt; &lt;li&gt;ಈ ಹಠಾತ್ ಹವಾಮಾನ ಬದಲಾವಣೆಯಿಂದ ಕೆಲವು ಸಮಸ್ಯೆಗಳು ಎದುರಾಗಬಹುದು ಎಂದು ಇಲಾಖೆ ಎಚ್ಚರಿಸಿದೆ:&lt;/li&gt; &lt;li&gt;ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು.&lt;/li&gt; &lt;li&gt;ರಸ್ತೆಗಳಲ್ಲಿ ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ಮರಗಳ ಕೊಂಬೆಗಳು ಮುರಿದು ಬೀಳುವ ಸಾಧ್ಯತೆಯಿದೆ.&lt;/li&gt; &lt;li&gt;ದುರ್ಬಲವಾದ ಕಟ್ಟಡಗಳು ಅಥವಾ ಕಚ್ಚಾ ಮನೆಗಳಿಗೆ ಹಾನಿಯಾಗಬಹುದು.&lt;/li&gt; &lt;li&gt;ವಿಶೇಷವಾಗಿ ರೈತರು ಕೊಯ್ಲು ಮಾಡಿ ತೆರೆದ ಜಾಗದಲ್ಲಿಟ್ಟಿರುವ ಬೆಳೆಗಳಿಗೆ ಹಾನಿಯಾಗುವ ಸಂಭವವಿದೆ.&lt;/li&gt; &lt;li&gt;ಸಾರ್ವಜನಿಕರಿಗೆ ಸೂಚನೆಗಳು:&lt;/li&gt; &lt;li&gt;ಮಳೆಯ ಸಮಯದಲ್ಲಿ ಸುರಕ್ಷಿತವಾಗಿರಲು ಹವಾಮಾನ ಇಲಾಖೆಯು ಕೆಲವು ಕ್ರಮಗಳನ್ನು ಸೂಚಿಸಿದೆ:&lt;/li&gt; &lt;li&gt;ಮಳೆಯ ಸಂದರ್ಭದಲ್ಲಿ ಮನೆಯೊಳಗೆ ಇರಿ, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿಡಿ.&lt;/li&gt; &lt;li&gt;ಸಾಧ್ಯವಾದರೆ ಪ್ರಯಾಣವನ್ನು ಮುಂದೂಡಿ. ಒಂದು ವೇಳೆ ಪ್ರಯಾಣಿಸುವುದು ಅನಿವಾರ್ಯವಾದರೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ.&lt;/li&gt; &lt;li&gt;ಗುಡುಗು ಸಿಡಿಲು ಇರುವಾಗ ಮರಗಳ ಕೆಳಗೆ ಆಶ್ರಯ ಪಡೆಯಬೇಡಿ.&lt;/li&gt; &lt;li&gt;ಮನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್&zwnj;ಪ್ಲಗ್ (Unplug) ಮಾಡಿ.&lt;/li&gt; &lt;li&gt;ಜಲಮೂಲಗಳಿಂದ (ಕೆರೆ, ನದಿ) ತಕ್ಷಣ ಹೊರಬನ್ನಿ ಮತ್ತು ವಿದ್ಯುತ್ ಕಂಬಗಳಿಂದ ದೂರವಿರಿ.&lt;/li&gt; &lt;li&gt;ರೈತರು ತಮ್ಮ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಿ.&lt;/li&gt; &lt;li&gt;ಮುಂದಿನ ಮೂರು ಗಂಟೆಗಳ ಕಾಲ ಈ ಜಿಲ್ಲೆಗಳ ಜನರು ಜಾಗರೂಕರಾಗಿರಬೇಕು ಎಂದು ಹವಾಮಾನ ಇಲಾಖೆಯ ಕರ್ತವ್ಯನಿರತ ಅಧಿಕಾರಿಗಳು ತಿಳಿಸಿದ್ದಾರೆ.&lt;/li&gt;&lt;/ul&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-rain-update-yadagir-lightning-50-sheeps-death-gadag-airtel-tower-collapse-sat/articleshow-3s61bah"/>
        </item>
        <item>
            <title><![CDATA[ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ: ಹೈಕಮಾಂಡ್ ಬಗ್ಗೆ ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ!]]></title>
            <link>https://kannada.asianetnews.com/politics/will-there-be-a-change-in-cm-post-minister-kn-rajanna-breaks-silence-on-congress-leadership-rav/articleshow-9u8zis0</link>
            <guid isPermaLink="true">https://kannada.asianetnews.com/politics/will-there-be-a-change-in-cm-post-minister-kn-rajanna-breaks-silence-on-congress-leadership-rav/articleshow-9u8zis0</guid>
            <pubDate>Tue, 28 Apr 2026 12:46:33 +0530</pubDate>
            <description><![CDATA[&lt;p&gt;ಮಾಜಿ ಸಚಿವ ಕೆ.ಎನ್. ರಾಜಣ್ಣ ರಾಜ್ಯ ರಾಜಕಾರಣದ ಗೊಂದಲಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದು, ಹೈಕಮಾಂಡ್ ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕೆಂದು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದು, ಪದತ್ಯಾಗಕ್ಕೂ ಸಿದ್ಧರಿದ್ದಾರೆ ಎಂದು ರಾಜಣ್ಣ ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k2cbnzqjkvez4rtcaf6b0xwv,imgname-kn-rajanna-resigns-1754909048561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಏ.28):&lt;/strong&gt; ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಮತ್ತು ಗೊಂದಲಗಳ ಕುರಿತು ಚರ್ಚೆ ಜೋರಾಗಿರುವ ಬೆನ್ನಲ್ಲೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಮತ್ತು ಪಕ್ಷದ ಭವಿಷ್ಯದ ದೃಷ್ಟಿಯಿಂದ ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಹೈಕಮಾಂಡ್ ಗೊಂದಲಕ್ಕೆ ತೆರೆ ಎಳೆಯಲಿ&lt;/h2&gt;&lt;p&gt;ರಾಜ್ಯದಲ್ಲಿ ನಮ್ಮ ಸರ್ಕಾರವಿದೆ. ಇನ್ನೂ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ. ಪ್ರಸ್ತುತ ನಡೆಯುತ್ತಿರುವ ಗೊಂದಲಗಳನ್ನು ನಿವಾರಿಸಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಹೈಕಮಾಂಡ್ ಈ ಗೊಂದಲ ಮುಂದುವರಿಯಲು ಅವಕಾಶ ನೀಡಬಾರದು. ಗೊಂದಲಗಳು ದೀರ್ಘಕಾಲ ಮುಂದುವರಿದಷ್ಟು ಪಕ್ಷಕ್ಕೆ ಹೆಚ್ಚಿನ ಹಾನಿಯಾಗಲಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜಣ್ಣ ಆಗ್ರಹಿಸಿದರು.&lt;/p&gt;&lt;h3&gt;ರಾಹುಲ್ ಗಾಂಧಿ ಹೇಳಿದಂತೆ ಕೇಳಲು ಸಿದ್ದರಾಮಯ್ಯ ಸಿದ್ಧ&lt;/h3&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಿಂದ ಇದ್ದಾರೆ. ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರು ನೀಡುವ ಪ್ರತಿಯೊಂದು ಸೂಚನೆಯನ್ನು ಪಾಲಿಸಲು ತಾವು ಬದ್ಧ ಎಂದು ಸಿಎಂ ತಿಳಿಸಿದ್ದಾರೆ. 'ರಾಹುಲ್ ಗಾಂಧಿ ಅವರ ತೀರ್ಮಾನದಂತೆ ನಾನು ನಡೆದುಕೊಳ್ಳುತ್ತೇನೆ, ಆ ಸಮಯದಲ್ಲಿ ನಿಮ್ಮೆಲ್ಲರ ಸಹಕಾರ ನನಗೆ ಇರಲಿ' ಎಂದು ಸಿದ್ದರಾಮಯ್ಯ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ರಾಜಣ್ಣ ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;ಅಧಿಕಾರದಲ್ಲಿ ಮುಂದುವರಿಯಲೂ ಸಿದ್ಧ ಪದತ್ಯಾಗಕ್ಕೂ ಸಿದ್ಧ&lt;/h3&gt;&lt;p&gt;ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯಲು ಸಿದ್ಧರಾಗಿದ್ದಾರೆ ಮತ್ತು ಹೈಕಮಾಂಡ್ ಸೂಚಿಸಿದರೆ ಪದತ್ಯಾಗಕ್ಕೂ ಸಿದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ, ಏಕೆಂದರೆ ಪಕ್ಷದ ಭವಿಷ್ಯ ಇದರ ಮೇಲೆ ಅಡಗಿದೆ. ಮಾನಸಿಕ ಸ್ಥಿರತೆ ಕಾಯ್ದುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಿದೆ. ಅಧಿಕಾರ ಎಂಬುದು ಶಾಶ್ವತವಲ್ಲ, ಅದನ್ನು ಕಳೆದುಕೊಂಡವರು ಮತ್ತೆ ಗಳಿಸಬಹುದು ಎಂಬ ವಾಸ್ತವ ಸಿಎಂಗೆ ತಿಳಿದಿದೆ ಎಂದು ಅವರು ವಿವರಿಸಿದರು.&lt;/p&gt;&lt;p&gt;&lt;strong&gt;ದಲಿತ ಸಿಎಂ ಪರ ರಾಜಣ್ಣ ಪಟ್ಟು&lt;/strong&gt;&lt;/p&gt;&lt;p&gt;ದಲಿತರು ಮುಖ್ಯಮಂತ್ರಿಯಾಗಬೇಕು ಎಂಬ ನನ್ನ ನಿಲುವಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ಅಹಿಂದ ವರ್ಗದ ಜನರಲ್ಲಿ ಪ್ರಸ್ತುತ ಸಮಾಧಾನವಿಲ್ಲ. ನಾವು ನೀಡಿದ ಭರವಸೆಗಳು ಸರಿಯಾಗಿ ಫಲಪ್ರದವಾಗುತ್ತಿಲ್ಲ ಎಂಬ ಅಸಮಾಧಾನ ಆ ವರ್ಗದಲ್ಲಿದೆ. ಸಿದ್ದರಾಮಯ್ಯ ಅವರು ಮುಂದುವರಿಯಬೇಕು ಎಂಬ ನಮ್ಮ ಅಭಿಪ್ರಾಯವನ್ನು ನಾವು ಹೈಕಮಾಂಡ್ ಮುಂದಿಟ್ಟಿದ್ದೇವೆ, ಅಂತಿಮವಾಗಿ ಅವರೇ ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಅಂದಿನ ಸಿದ್ದರಾಮಯ್ಯಗೂ ಈಗಿನ ಸಿದ್ದರಾಮಯ್ಯಗೂ ವ್ಯತ್ಯಾಸವಿದೆ&lt;/strong&gt;&lt;/p&gt;&lt;p&gt;2013-18ರ ಅವಧಿಯಲ್ಲಿದ್ದ ಸಿದ್ದರಾಮಯ್ಯ ಅವರಿಗೂ ಮತ್ತು ಈಗಿನ ಸಿದ್ದರಾಮಯ್ಯ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಮುಂದಿನ ಚುನಾವಣೆಗಳಿಗೆ ಇನ್ನೂ ಎರಡು ವರ್ಷ ಬಾಕಿ ಇದೆ. ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ.ಬಹಳಷ್ಟು ನೀರು ಹರಿಬೇಕಾದ ಸಮಯವೂ ಇದೆ. ಮುಂದಿನ ರಾಜಕೀಯ ಬೆಳವಣಿಗೆಗಳು ಹೇಗಿರಲಿವೆ ಎಂದು ಈಗಲೇ ಊಹಿಸಲು ಸಾಧ್ಯವಿಲ್ಲ ಎಂದು ರಾಜಣ್ಣ ಮಾರ್ಮಿಕವಾಗಿ ನುಡಿದರು.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/will-there-be-a-change-in-cm-post-minister-kn-rajanna-breaks-silence-on-congress-leadership-rav/articleshow-9u8zis0"/>
        </item>
        <item>
            <title><![CDATA[ಕಾಂಗ್ರೆಸ್ಸಲ್ಲಿ ಅಹಿಂದ ದಂಗಲ್‌: ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲು ಒಂದು ಬಣ ಸಿದ್ಧತೆ]]></title>
            <link>https://kannada.asianetnews.com/politics/ahinda-politics-resurfaces-congress-faction-set-to-hold-major-rally-in-hubballi-amid-leadership-buzz-rav/articleshow-ap9gg12</link>
            <guid isPermaLink="true">https://kannada.asianetnews.com/politics/ahinda-politics-resurfaces-congress-faction-set-to-hold-major-rally-in-hubballi-amid-leadership-buzz-rav/articleshow-ap9gg12</guid>
            <pubDate>Tue, 28 Apr 2026 07:35:00 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ಉದ್ದೇಶಿಸಿರುವ ಅಹಿಂದ ಸಮಾವೇಶವು ರಾಜ್ಯ ಕಾಂಗ್ರೆಸ್&zwnj;ನಲ್ಲಿ ಎರಡು ಬಣಗಳನ್ನು ಸೃಷ್ಟಿಸಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಬಣವು ಪಕ್ಷಕ್ಕೆ ಲಾಭವೆಂದು ಸಮಾವೇಶಕ್ಕೆ ಒತ್ತಾಯಿಸಿದರೆ, ಮತ್ತೊಂದು ಬಣ ಪಕ್ಷಕ್ಕೆ ಹಾನಿಕರ ಎಂದು ವಿರೋಧ. ಈ ಗೊಂದಲ ಇದೀಗ ಹೈಕಮಾಂಡ್ ಅಂಗಳ ತಲುಪಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8x9t3hp7s5pgry5tw7fevb,imgname--------------------------------25--1777341884529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.28): &lt;/strong&gt;ರಾಜ್ಯ ಕಾಂಗ್ರೆಸ್&zwnj;ನಲ್ಲಿ ನಾಯಕತ್ವ ವಿಚಾರ ಕುರಿತ ಗೊಂದಲಗಳ ನಡುವೆಯೇ ಅಹಿಂದ ನಾಯಕರು ಹುಬ್ಬಳ್ಳಿಯಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್&zwnj; ಅಹಿಂದ ಸಮಾವೇಶ ಹೊಸ ತಳಮಳ ಹುಟ್ಟು ಹಾಕಿದೆ.&lt;/p&gt;&lt;p&gt;ಮೂಲಗಳ ಪ್ರಕಾರ, ಅಹಿಂದ ಸಮಾವೇಶಕ್ಕೆ ಅವಕಾಶ ಬೇಡ ಎಂದು ಹೈಕಮಾಂಡ್&zwnj; ಮೇಲೆ ಒಂದು ಬಣ ಒತ್ತಡ ನಿರ್ಮಾಣ ಮಾಡಿದ್ದರೆ, ಸಚಿವ ಸತೀಶ್&zwnj; ಜಾರಕಿಹೊಳಿ ನೇತೃತ್ವದ ಮತ್ತೊಂದು ಬಣ ಸಮಾವೇಶಕ್ಕೆ ಅವಕಾಶ ನೀಡಲೇಬೇಕು ಎಂದು ಹೈಕಮಾಂಡ್&zwnj; ಮನವೊಲಿಸಲು ಮುಂದಾಗಿದೆ.&lt;/p&gt;&lt;p&gt;ಈ ಉದ್ದೇಶಕ್ಕಾಗಿಯೇ ಸೋಮವಾರ ನವದೆಹಲಿಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್&zwnj; ಸುರ್ಜೇವಾಲಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಸಚಿವರಾದ ಸತೀಶ್&zwnj; ಜಾರಕಿಹೊಳಿ ಹಾಗೂ ಡಾ. ಎಚ್.ಸಿ. ಮಹಾದೇವಪ್ಪ ಅವರು ಅಹಿಂದ ಸಮಾವೇಶದ ಉದ್ದೇಶ ಮತ್ತು ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಕಾಂಗ್ರೆಸ್&zwnj; ಪಕ್ಷದ ಮೂಲಕವೇ ಸಮಾವೇಶ ಆಯೋಜಿಸುತ್ತಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ಕೋರಿದರು ಎನ್ನಲಾಗಿದೆ.&lt;/p&gt;&lt;h2&gt;ಒತ್ತಡಕ್ಕೆ ಮಣಿಯಬೇಡಿ:&lt;/h2&gt;&lt;p&gt;ಈ ರೀತಿ ಹಿರಿಯ ಸಚಿವರೇ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಅಹಿಂದ ಸಮಾವೇಶಕ್ಕಾಗಿ ಒತ್ತಡ ಹಾಕಲು ಕಾರಣ- ಕಾಂಗ್ರೆಸ್&zwnj;ನ ಮತ್ತೊಂದು ಬಣ ಇಂತಹ ಸಮಾವೇಶಕ್ಕೆ ಅವಕಾಶ ನೀಡಬಾರದು ಎಂದು ಹೈಕಮಾಂಡ್&zwnj;ಗೆ ಒತ್ತಡ ಹಾಕಿರುವುದು ಎನ್ನಲಾಗಿದೆ.&lt;/p&gt;&lt;p&gt;ಈ ಬಣವು, &lsquo;ದಲಿತ ನಾಯಕರು ಚಿತ್ರದುರ್ಗದಲ್ಲಿ ದಲಿತ ಸಮಾವೇಶ ನಡೆಸಲು ಪ್ರಯತ್ನ ನಡೆಸಿದ್ದರು. ಅದಕ್ಕೆ ಹೈಕಮಾಂಡ್&zwnj; ಬ್ರೇಕ್ ಹಾಕಿತ್ತು. ಅದೇ ರೀತಿ ಅಹಿಂದ ಸಮಾವೇಶಕ್ಕೂ ಬ್ರೇಕ್ ಹಾಕಬೇಕು. ಈ ರೀತಿ ಜಾತಿ ಸಮಾವೇಶಗಳಿಗೆ ಅನುಮತಿ ನೀಡಿದರೆ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಏನೇ ನಡೆದರೂ ಅದನ್ನು ಪಕ್ಷದ ವತಿಯಿಂದಲೇ ನಡೆಸಬೇಕು&rsquo; ಎಂದು ಹೈಕಮಾಂಡ್&zwnj;ಗೆ ಒತ್ತಡ ಹಾಕಿದೆ ಎನ್ನಲಾಗಿದೆ.&lt;/p&gt;&lt;p&gt;ಈ ಮಾಹಿತಿ ದೊರೆತ ಬೆನ್ನಲ್ಲೇ, ಅಹಿಂದ ನಾಯಕರು ಏಕೆ ಅಹಿಂದ ಸಮಾವೇಶ ಮುಖ್ಯ ಎಂದು ಹೈಕಮಾಂಡ್&zwnj;ಗೆ ಮನದಟ್ಟು ಮಾಡಿಕೊಡಲು ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ 2005ರಲ್ಲಿ ದೊಡ್ಡ ಮಟ್ಟದ ಅಹಿಂದ ಸಮಾವೇಶ ನಡೆಸಲಾಗಿತ್ತು. ಅದರಿಂದಾಗಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್&zwnj; ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆಗ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಅಹಿಂದ ವರ್ಗ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿತ್ತು. ಅದಾದ ನಂತರ ಸತೀಶ್ ಜಾರಕಿಹೊಳಿ, ಡಾ. ಎಚ್&zwnj;.ಸಿ.ಮಹದೇವಪ್ಪ, ಬಿ.ಆರ್&zwnj;. ಪಾಟೀಲ್&zwnj; ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್&zwnj; ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.&lt;/p&gt;&lt;p&gt;ಇದರಿಂದ ಕಾಂಗ್ರೆಸ್&zwnj;ಗೆ ದೊಡ್ಡ ಬಲ ಬಂದಿದ್ದು, ನಂತರ ಸಿದ್ದರಾಮಯ್ಯ ಕಾಂಗ್ರೆಸ್&zwnj;ನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದರು.ಇದೀಗ 2028 ಚುನಾವಣೆ ಗುರಿಯಿಟ್ಟುಕೊಂಡು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಹಿಂದ ವರ್ಗವನ್ನು ಕಾಂಗ್ರೆಸ್&zwnj; ಕಡೆಗೆ ಸೆಳೆಯುವ ಉದ್ದೇಶದೊಂದಿಗೆ ಅಹಿಂದ ಸಮಾವೇಶವನ್ನು ಏರ್ಪಡಿಸಲಾಗಿದೆ. ಇದರಿಂದ ಪಕ್ಷಕ್ಕೆ ಲಾಭ ಎಂದು ಹೈಕಮಾಂಡ್&zwnj; ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಲಾಗಿದೆ ಎಂದು ಮೂಲಗಳು ಹೇಳುತ್ತವೆ.&lt;/p&gt;&lt;p&gt;ದಿಲ್ಲಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವರಾದ ಎಚ್&zwnj;.ಸಿ. ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಮಾಡಿದರು. ಅಧಿಕಾರ ಹಂಚಿಕೆ ಗೊಂದಲದ ಬಗ್ಗೆ ಹೈಕಮಾಂಡ್ &zwnj;ಮಧ್ಯಪ್ರವೇಶ ಮಾಡಬೇಕು ಎಂದು ಕೋರಿದರು.&lt;/p&gt;&lt;h3&gt;ಸಿಎಂ ಬದಲಾವಣೆ ಗೊಂದಲ ನಿಲ್ಲಲಿ&lt;/h3&gt;&lt;p&gt;ಸಿಎಂ ಬದಲಾವಣೆ ಹೈಕಮಾಂಡ್&zwnj; ನಿರ್ಧಾರಕ್ಕೆ ಬಿಟ್ಟ ವಿಚಾರ. ಆದರೆ, ಈ ಕುರಿತ ಗೊಂದಲ ಶೀಘ್ರ ಬಗೆಹರಿಯಬೇಕಿದೆ. ಈ ಕುರಿತ ಚರ್ಚೆ ನಿಲ್ಲಲೇಬೇಕು. ಗೊಂದಲಕ್ಕೆ ಹೈಕಮಾಂಡ್&zwnj; ನಾಯಕರೇ ಪರಿಹಾರ ಹುಡುಕಬೇಕು.&lt;/p&gt;&lt;p&gt;&lt;strong&gt;- ಸತೀಶ ಜಾರಕಿಹೊಳಿ, ಸಚಿವ&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/ahinda-politics-resurfaces-congress-faction-set-to-hold-major-rally-in-hubballi-amid-leadership-buzz-rav/articleshow-ap9gg12"/>
        </item>
        <item>
            <title><![CDATA[ಒಂದು ರಸ್ತೆ ಗುಂಡಿ ಮುಚ್ಚಲು ₹1 ಲಕ್ಷ ಖರ್ಚು; ಗುಂಡಿಗಳ ಹೆಸರಲ್ಲಿ ಜನರ ಹಣ ಗುಳುಂ ಮಾಡಿತೇ ಬೆಂಗಳೂರು ಪ್ರಾಧಿಕಾರ!]]></title>
            <link>https://kannada.asianetnews.com/state/bengaluru-pothole-filling-scam-rs-33-crore-spent-chamarajpet-1-lakh-per-pothole-fixing-sat/articleshow-dfpr168</link>
            <guid isPermaLink="true">https://kannada.asianetnews.com/state/bengaluru-pothole-filling-scam-rs-33-crore-spent-chamarajpet-1-lakh-per-pothole-fixing-sat/articleshow-dfpr168</guid>
            <pubDate>Tue, 28 Apr 2026 13:09:12 +0530</pubDate>
            <description><![CDATA[ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕಳೆದ ಆರು ತಿಂಗಳಲ್ಲಿ ₹33.85 ಕೋಟಿ ಖರ್ಚು ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಹಿರಂಗವಾಗಿದೆ. ಚಾಮರಾಜಪೇಟೆಯಲ್ಲಿ ಒಂದು ಗುಂಡಿಗೆ 1 ಲಕ್ಷ ರೂಪಾಯಿ ಖರ್ಚು ಮಾಡಿರುವುದು ಸಾರ್ವಜನಿಕರ ತೆರಿಗೆ ಹಣದ ಲೂಟಿಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9g4sksqspne1haeky6nbr4,imgname-greater-bengaluru-authority-potholefixing-rate-1777361643129.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಿ ಜನ ಸಾಕಾಗಿದ್ದಾರೆ. ಆದರೆ, ಇದೇ ಗುಂಡಿಗಳನ್ನು ಮುಚ್ಚುವ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಹೇಗೆ ಲೂಟಿಯಾಗುತ್ತಿದೆ ಎಂಬ ಆಘಾತಕಾರಿ ಅಂಶ ಈಗ ವಿಧಾನಸಭೆಯಲ್ಲಿ ಬಹಿರಂಗವಾಗಿದೆ. ಕಳೆದ ಆರು ತಿಂಗಳಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಜಿಬಿಎ (GBA) ಬರೋಬ್ಬರಿ ₹33.85 ಕೋಟಿ ಖರ್ಚು ಮಾಡಿದೆ! ಇದರಲ್ಲಿ ಅತಿ ದೊಡ್ಡ ಆಶ್ಚರ್ಯವೆಂದರೆ, ಚಾಮರಾಜಪೇಟೆ ಕ್ಷೇತ್ರದಲ್ಲಿ ಕೇವಲ ಒಂದು ಗುಂಡಿ ಮುಚ್ಚಲು ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ.&lt;/p&gt;&lt;h3&gt;&lt;strong&gt;ವಿಧಾನಸಭೆಯಲ್ಲಿ ಬಯಲಾದ &lsquo;ದುಬಾರಿ&rsquo; ಕಾಮಗಾರಿ:&lt;/strong&gt;&lt;/h3&gt;&lt;p&gt;ಮಾಜಿ ಸಚಿವ ಹಾಗೂ ಶಾಸಕ ಅಶ್ವಥ್ ನಾರಾಯಣ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅಂಕಿಅಂಶಗಳನ್ನು ನೀಡಿದ್ದಾರೆ. ಈ ಅಂಕಿಅಂಶಗಳನ್ನು ಗಮನಿಸಿದರೆ ಇದು ರಸ್ತೆ ರಿಪೇರಿಯೋ ಅಥವಾ ರಸ್ತೆಗೆ ಚಿನ್ನದ ಲೇಪನವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.&lt;/p&gt;&lt;h2&gt;&lt;strong&gt;ಅಂಕಿಅಂಶಗಳ ಕಿರುನೋಟ:&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಒಟ್ಟು ಗುಂಡಿಗಳು: 41,150&lt;/strong&gt;&lt;/li&gt; &lt;li&gt;&lt;strong&gt;ಮುಚ್ಚಲಾದ ಗುಂಡಿಗಳು: 39,887&lt;/strong&gt;&lt;/li&gt; &lt;li&gt;&lt;strong&gt;ಒಟ್ಟು ವೆಚ್ಚ: ₹33.85 ಕೋಟಿ&lt;/strong&gt;&lt;/li&gt; &lt;li&gt;&lt;strong&gt;ಬಾಕಿ ಉಳಿದಿರುವ ಗುಂಡಿಗಳು: 1,263&lt;/strong&gt;&lt;/li&gt;&lt;/ul&gt;&lt;h3&gt;&lt;strong&gt;ಕ್ಷೇತ್ರದಿಂದ ಕ್ಷೇತ್ರಕ್ಕೆ ದರ ವ್ಯತ್ಯಾಸ: ಭ್ರಷ್ಟಾಚಾರದ ವಾಸನೆ?&lt;/strong&gt;&lt;/h3&gt;&lt;p&gt;ಬೆಂಗಳೂರಿನ ಒಂದೇ ನಗರದಲ್ಲಿ, ಒಂದೇ ರೀತಿಯ ಗುಂಡಿಗಳನ್ನು ಮುಚ್ಚಲು ಜಿಬಿಎ ಅಧಿಕಾರಿಗಳು ಬೇರೆ ಬೇರೆ ದರಗಳನ್ನು ನಿಗದಿಪಡಿಸಿದ್ದಾರೆ. ಇದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.&lt;/p&gt;&lt;p&gt;&lt;strong&gt;ಚಾಮರಾಜಪೇಟೆ (ಅತ್ಯಂತ ದುಬಾರಿ): &lt;/strong&gt;ಇಲ್ಲಿ 140 ಗುಂಡಿಗಳನ್ನು ಮುಚ್ಚಲು 1.40 ಕೋಟಿ ರೂ. ಖರ್ಚು ಮಾಡಲಾಗಿದೆ. ಅಂದರೆ ಒಂದು ಗುಂಡಿಗೆ ಸರಾಸರಿ 1 ಲಕ್ಷ ರೂಪಾಯಿ!&lt;/p&gt;&lt;p&gt;&lt;strong&gt;ಶಿವಾಜಿನಗರ: &lt;/strong&gt;ಇಲ್ಲಿ ಒಂದು ಗುಂಡಿಗೆ ₹60,344 ವೆಚ್ಚ ಮಾಡಲಾಗಿದೆ. ಇಲ್ಲಿ 232 ಗುಂಡಿಗಳಿಗೆ 1.40 ಕೋಟಿ ಬಿಲ್ ಮಾಡಲಾಗಿದೆ.&lt;/p&gt;&lt;p&gt;&lt;strong&gt;ಗೋವಿಂದರಾಜನಗರ: &lt;/strong&gt;ಒಂದು ಗುಂಡಿಗೆ ₹49,180 ವೆಚ್ಚ.&lt;/p&gt;&lt;p&gt;&lt;strong&gt;ವಿಜಯನಗರ:&lt;/strong&gt; ಒಂದು ಗುಂಡಿಗೆ ₹47,120 ವೆಚ್ಚ.&lt;/p&gt;&lt;p&gt;&lt;strong&gt;ಜಯನಗರದ ಅಚ್ಚರಿ: &lt;/strong&gt;ಇಡೀ ನಗರದಲ್ಲಿ ಕೋಟಿ ಕೋಟಿ ಲೂಟಿಯಾಗುತ್ತಿದ್ದರೆ, ಜಯನಗರದಲ್ಲಿ ಮಾತ್ರ 565 ಗುಂಡಿಗಳನ್ನು &lsquo;ಶೂನ್ಯ&rsquo; ವೆಚ್ಚದಲ್ಲಿ ಮುಚ್ಚಲಾಗಿದೆ ಎಂದು ವರದಿ ಹೇಳುತ್ತಿದೆ. ಇದು ಹೇಗೆ ಸಾಧ್ಯ ಎಂಬುದು ಈಗ ಯಕ್ಷಪ್ರಶ್ನೆ.&lt;/p&gt;&lt;h3&gt;&lt;strong&gt;ರಿಯಾಲಿಟಿ ಚೆಕ್&zwnj;ನಲ್ಲಿ ಬಯಲಾದ ಕಳಪೆ ಕಾಮಗಾರಿ:&lt;/strong&gt;&lt;/h3&gt;&lt;p&gt;ಈ ಭಾರಿ ವೆಚ್ಚದ ಕಾಮಗಾರಿಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ &lsquo;ರಿಯಾಲಿಟಿ ಚೆಕ್&rsquo;ನಲ್ಲಿ ಕರಾಳ ಸತ್ಯ ಹೊರಬಿದ್ದಿದೆ. ಶಿವಾಜಿನಗರದ ಬಂಬೂ ಬಜಾರ್ ರಸ್ತೆಯಲ್ಲಿ 60 ಸಾವಿರ ಖರ್ಚು ಮಾಡಿ ಮುಚ್ಚಿದ ಗುಂಡಿಗಳು ಮೂರೇ ತಿಂಗಳಲ್ಲಿ ಮತ್ತೆ ಬಾಯಿ ಬಿಟ್ಟಿವೆ. ಚಾಮರಾಜಪೇಟೆಯಲ್ಲಿ ಲಕ್ಷಾಂತರ ರೂಪಾಯಿ ಬಿಲ್ ಮಾಡಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸಿಲ್ಲ.&lt;/p&gt;&lt;h3&gt;&lt;strong&gt;ಜನರ ಆಕ್ರೋಶ ಮತ್ತು ತನಿಖೆಗೆ ಒತ್ತಾಯ:&lt;/strong&gt;&lt;/h3&gt;&lt;p&gt;ಕೆಲವು ಕ್ಷೇತ್ರಗಳಲ್ಲಿ ₹5,000 ಕ್ಕಿಂತ ಕಡಿಮೆ ವೆಚ್ಚದಲ್ಲಿ ಗುಂಡಿ ಮುಚ್ಚಿದ್ದರೆ, ಇನ್ನು ಕೆಲವು ಕಡೆ ಲಕ್ಷಾಂತರ ರೂಪಾಯಿ ಏಕೆ? ಬೆಂಗಳೂರು ದಕ್ಷಿಣದಲ್ಲಿ ₹5,209 ಕ್ಕೆ ಒಂದು ಗುಂಡಿ ಮುಚ್ಚಲು ಸಾಧ್ಯವಿರುವಾಗ, ಚಾಮರಾಜಪೇಟೆಯಲ್ಲಿ 1 ಲಕ್ಷ ಏಕೆ ಬೇಕು? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಸಾರ್ವಜನಿಕರ ಹಣ ದುರ್ಬಳಕೆ ಆಗುತ್ತಿದ್ದು, ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-pothole-filling-scam-rs-33-crore-spent-chamarajpet-1-lakh-per-pothole-fixing-sat/articleshow-dfpr168"/>
        </item>
        <item>
            <title><![CDATA[NTPC: ಕೈಗಾ ಅಷ್ಟೇ ಅಲ್ಲ, ರಾಜ್ಯದಲ್ಲಿ ಮತ್ತೆ 5 ಪರಮಾಣು ಸ್ಥಾವರ ನಿರ್ಮಾಣ ಪ್ರಸ್ತಾವ!]]></title>
            <link>https://kannada.asianetnews.com/state/nuclear-energy-expansion-karnataka-considers-proposal-for-5-new-reactors-to-boost-power-grid-rav/articleshow-hus9z3s</link>
            <guid isPermaLink="true">https://kannada.asianetnews.com/state/nuclear-energy-expansion-karnataka-considers-proposal-for-5-new-reactors-to-boost-power-grid-rav/articleshow-hus9z3s</guid>
            <pubDate>Tue, 28 Apr 2026 05:14:35 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕೈಗಾ ಅಣುಸ್ಥಾವರದ ಜೊತೆಗೆ, ಎನ್&zwnj;ಟಿಪಿಸಿ ಇನ್ನೂ 5 ಹೊಸ ಪರಮಾಣು ಸ್ಥಾವರಗಳ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕಾಗಿ ಉತ್ತರ ಕನ್ನಡ, ಶಿವಮೊಗ್ಗ, ವಿಜಯಪುರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಂಭಾವ್ಯ ಜಾಗವನ್ನು ಗುರುತಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8msmprgwphqa7hd3rp5vh0,imgname--------------------------------18--1777332966104.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಸಂತಕುಮಾರ್ ಕತಗಾಲ&amp;nbsp;&lt;/strong&gt;&lt;/p&gt;&lt;p&gt;&lt;strong&gt;ಕಾರವಾರ (ಏ.28): &lt;/strong&gt;ರಾಜ್ಯದಲ್ಲಿ ಈಗಾಗಲೇ ಕೈಗಾ ಅಣುಸ್ಥಾವರ ಇದೆ. ಇದರ ಇದೇ ವೇಳೆ, ಇನ್ನೂ 5 \Bಪರಮಾಣು ಸ್ಥಾವರ ನಿರ್ಮಾಣಕ್ಕೆ ರಾಜ್ಯದ 5 ಜಿಲ್ಲೆಗಳಲ್ಲಿನ ಸಂಭಾವ್ಯ ಜಾಗದಲ್ಲಿ ಸ್ಥಳ ಸೂಕ್ತತೆ, ಭೂ ವೈಜ್ಞಾನಿಕ ಅಧ್ಯಯನಕ್ಕೆ ಎನ್&zwnj;ಟಿಪಿಸಿ (ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಷನ್) ಮುಂದಾಗಿದೆ.&lt;/p&gt;&lt;p&gt;ಈ ಪರಮಾಣು ಸ್ಥಾವರಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಭಾವಿಕೇರಿ, ಶಿವಮೊಗ್ಗ ಜಿಲ್ಲೆಯ ಬೇಸೂರು, ವಿಜಯಪುರ ಜಿಲ್ಲೆಯ ಮಣ್ಣೂರು, ಕೊಪ್ಪಳ ಜಿಲ್ಲೆಯ ಬನ್ನಿಕುಂಟ, ರಾಯಚೂರು ಜಿಲ್ಲೆಯ ಹಲ್ಕವಟಗಿಗಳಲ್ಲಿ ಸಂಭಾವ್ಯ ಜಾಗ ಗುರುತಿಸಲಾಗಿದೆ.&lt;/p&gt;&lt;p&gt;2000 ಮೆಗಾ ವ್ಯಾಟ್&zwnj;ಗೆ 1200 ಎಕರೆ, 4000 ಮೆಗಾ ವ್ಯಾಟ್&zwnj;ಗೆ 1600 ಎಕರೆ ಮತ್ತು 6000 ಮೆಗಾ ವ್ಯಾಟ್&zwnj;ಗೆ 2000 ಎಕರೆ ಹಾಗೂ ಕಾಲನಿ ಸ್ಥಾಪಿಸಲು ಹೆಚ್ಚುವರಿಯಾಗಿ 100-150 ಎಕರೆ ಭೂಮಿಯ ಅವಶ್ಯಕತೆ ಇದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.&lt;/p&gt;&lt;p&gt;ಆದರೆ ಇದಕ್ಕೆ ಸ್ಥಳೀಯರ ವಿರೋಧ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಬಾವಿಕೇರಿಯಲ್ಲಿ ಸ್ಥಾವರ ಸೂಕ್ತ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.&lt;/p&gt;&lt;h2&gt;ಜಿಲ್ಲಾಧಿಕಾರಿಗಳ ಸಭೆ:&lt;/h2&gt;&lt;p&gt;ಪರಮಾಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಎನ್&zwnj;ಟಿಪಿಸಿ ಗುರುತಿಸಿರುವ ಸಂಭಾವ್ಯ ಜಾಗಗಳಲ್ಲಿ ಸ್ಥಳ ಸೂಕ್ತತೆ ತಿಳಿದುಕೊಳ್ಳಲು ಪ್ರಾಥಮಿಕ ಅಧ್ಯಯನ ಹಾಗೂ ಬೋರ್ ಹೋಲ್ ಕೊರೆಯುವ ಮೂಲಕ ಭೂ ವೈಜ್ಞಾನಿಕ ತನಿಖೆ ಕೈಗೊಳ್ಳುವ ಪ್ರಸ್ತಾವನೆ ಬಗ್ಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಂದಾಯ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಫೆ.3ರಂದು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು.&lt;/p&gt;&lt;p&gt;ಅಂಕೋಲಾ ತಾಲೂಕಿನ ಬಾವಿಕೇರಿ ಸಮೀಪ ಐಎನ್&zwnj;ಎಸ್ ಕದಂಬ ನೌಕಾನೆಲೆ ಇದೆ. ಬೇಲೆಕೇರಿ ಬಂದರು ಇದೆ. ಜೊತೆಗೆ ಉದ್ದೇಶಿತ ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣ ಸ್ಥಳವೂ ಇದೆ. ಬಾವಿಕೇರಿ ಅಂಕೋಲಾ ಪಟ್ಟಣದ ಸಮೀಪ ಇರುವ ಜನವಸತಿ ಪ್ರದೇಶವಾಗಿದೆ. ಇಷ್ಟೊಂದು ಯೋಜನೆಗಳು ಸುತ್ತುವರಿದಿರುವ ಜನವಸತಿ ಪ್ರದೇಶದಲ್ಲಿ ಸಂಭಾವ್ಯ ಸ್ಥಳ ಗುರುತಿಸಲಾಗಿದೆ. ಇಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ನಡೆಸುವ ಪೂರ್ವಭಾವಿ ಕ್ರಮಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.&lt;/p&gt;&lt;p&gt;ಈಗಾಗಲೆ ಕಾರವಾರ ತಾಲೂಕಿನ ಕೈಗಾದಲ್ಲಿ ಅಣು ವಿದ್ಯುತ್&zwnj;ನ 4 ಘಟಕಗಳಿವೆ. ತಲಾ 700 ಮೆಗಾ ವ್ಯಾಟ್&zwnj;ನ 5 ಹಾಗೂ 6ನೇ ಘಟಕ ನಿರ್ಮಾಣ ಕಾರ್ಯ ಆರಂಭವಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈಗ ಅದೇ ಪಕ್ಕದ ತಾಲೂಕಿನಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸ್ಥಳ ಸೂಕ್ತತೆ ಗುರುತಿಸಲು ಇಂಧನ ಇಲಾಖೆ ಪ್ರಸ್ತಾಪಿಸಿದೆ.&lt;/p&gt;&lt;p&gt;ಯಾವ ಊರಲ್ಲಿ ಸ್ಥಾವರ?&lt;/p&gt;&lt;p&gt;1. ಬಾವಿಕೇರಿ (ಅಂಕೋಲಾ ತಾಲೂಕು)&lt;/p&gt;&lt;p&gt;2. ಬೇಸೂರು (ಶಿವಮೊಗ್ಗ ಜಿಲ್ಲೆ)&lt;/p&gt;&lt;p&gt;3. ಮಣ್ಣೂರು (ವಿಜಯಪುರ ಜಿಲ್ಲೆ)&lt;/p&gt;&lt;p&gt;4, ಬನ್ನಿಕುಂಟ (ಕೊಪ್ಪಳ ಜಿಲ್ಲೆ)&lt;/p&gt;&lt;p&gt;5. ಹಲ್ಕವಟಗಿ (ರಾಯಚೂರು ಜಿಲ್ಲೆ)&lt;/p&gt;&lt;h3&gt;ಉತ್ತರ ಕನ್ನಡ ಸೂಕ್ತ ಅಲ್ಲ&lt;/h3&gt;&lt;p&gt;ಬಾವಿಕೇರಿಯಲ್ಲಿ 1200-1500 ಎಕರೆ ಭೂಮಿ ಲಭ್ಯತೆ ಬಗ್ಗೆ ಎನ್&zwnj;ಟಿಪಿಸಿಯಿಂದ ವಿನಂತಿ ಪತ್ರ ಬಂದಿತ್ತು. ಆದರೆ ಅಲ್ಲಿ ಕಂದಾಯ ಭೂಮಿ ಇಲ್ಲ. ಭೂಮಿ ಬೇಕಾದರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕು. ಜೊತೆಗೆ ಪಕ್ಕದಲ್ಲಿ ನೌಕಾನೆಲೆ ಇದೆ. ಶಸ್ತ್ರಾಸ್ತ್ರ ಸಂಗ್ರಹಣಾಗಾರ ಇದೆ. ಬೇರೆ ಬೇರೆ ಯೋಜನೆಗಳೂ ಬರುತ್ತಿವೆ. ಹೀಗಾಗಿ ಬಾವಿಕೇರಿ ಅಣು ವಿದ್ಯುತ್ ಯೋಜನೆಗೆ ಸೂಕ್ತ ಅಲ್ಲ ಎಂದು ತಿಳಿಸಲಾಗಿದೆ. ಕಂದಾಯ ಇಲಾಖೆಯಿಂದ ಕೂಡ ಇದೇ ರೀತಿ ವರದಿ ಹೋಗಿದೆ. ಹಾಗಾಗಿ ಈ ಯೋಜನೆ ಡ್ರಾಪ್ ಆಗಲಿದೆ.&lt;/p&gt;&lt;h3&gt;- ಲಕ್ಷ್ಮೀಪ್ರಿಯಾ, ಉತ್ತರ ಕನ್ನಡ ಜಿಲ್ಲಾಧಿಕಾರಿ&lt;/h3&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/nuclear-energy-expansion-karnataka-considers-proposal-for-5-new-reactors-to-boost-power-grid-rav/articleshow-hus9z3s"/>
        </item>
        <item>
            <title><![CDATA[Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ]]></title>
            <link>https://kannada.asianetnews.com/gallery/karnataka-districts/bengaluru-semi-decomposed-body-of-a-young-woman-from-jharkhand-found-naked-mrq-kw3ncm8</link>
            <guid isPermaLink="true">https://kannada.asianetnews.com/gallery/karnataka-districts/bengaluru-semi-decomposed-body-of-a-young-woman-from-jharkhand-found-naked-mrq-kw3ncm8</guid>
            <pubDate>Tue, 28 Apr 2026 08:04:57 +0530</pubDate>
            <description><![CDATA[&lt;p&gt;ಜಾರ್ಖಂಡ್ ಮೂಲದ ಪೂಜಾ ದತ್ತಾ ಎಂಬ ಯುವತಿಯ ಮೃತದೇಹವು ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಕೊ*ಲೆಯೋ ಅಥವಾ ಆತ್ಮ*ಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq8ykrvm08a1a57qc3tm9rrp,imgname-murder--2--1777343259508.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಾರ್ಖಂಡ್ ಮೂಲದ ಪೂಜಾ ದತ್ತಾ ಎಂಬ ಯುವತಿಯ ಮೃತದೇಹವು ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ದುರ್ವಾಸನೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇದು ಕೊ*ಲೆಯೋ ಅಥವಾ ಆತ್ಮ*ಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿಲಿಕಾನ್ ಸಿಟಿಯಲ್ಲಿ ಜಾರ್ಖಂಡ್ ಮೂಲದ ಯುವತಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಬೆಂಗಳೂರಿನ ಆಡುಗೋಡಿ&zwnj;&zwnj; ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವತಿಯನ್ನು ಪೂಜಾ ದತ್ತಾ (34) ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಪೂಜಾ ದತ್ತಾ ಮೃತದೇಹ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಿಂದ ವಾಸನೆ ಬಂದ ಹಿನ್ನೆಲೆ ಬಾಗಿಲು ತೆಗೆದು ನೋಡಿದಾಗ ಶವ ಪತ್ತೆಯಾಗಿದೆ. ಕೂಡಲೇ ಮನೆಯ ಮಾಲೀಕರು ಆಡುಗೋಡಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷಗೆಗಾಗಿ ರವಾನಿಸಿದ್ದಾರೆ.&lt;/p&gt;&lt;img&gt;&lt;p&gt;ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೂಜಾ ಕೆಲಸ ಬಿಟ್ಟಿದ್ದರು. ಕೆಲ ದಿನಗಳಿಂದ ಯಾವ ಕೆಲಸಕ್ಕೂ ಹೋಗುತ್ತಿರಲಿಲ್ಲ. ಮನೆಯಲ್ಲಿ ಐಡಿ ಕಾರ್ಡ್ ಸಿಕ್ಕಿದ್ದು, ಬೆತ್ತಲೆ ಸ್ಥಿತಿಯಲ್ಲಿ ಶವ ಕಂಡು ಬಂದಿರೋದರಿಂದ ಇದು ಕೊಲೆಯೋ? ಆತ್ಮ*ಹತ್ಯೆಯೋ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೆಯೇ ಕೋಣೆಯ ತುಂಬೆಲ್ಲಾ ಪೇಪರ್&zwnj;ಗಳು ಬಿದ್ದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಈ ಪೇಪರ್&zwnj;ಗಳ ಮೇಲೆ ಪ್ರೇಮಿಯ ಹೆಸರು ಬರೆದಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಖಚಿತಪಡಿಸಿಲ್ಲ. ಶವ ಕೊಳೆತ ಸ್ಥಿತಿಗೆ ಬಂದ ನಂತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಮನೆಯನ್ನು ಜಾಲಾಡುತ್ತಿದ್ದಾರೆ. ಹಾಗೆಯೇ ಪೂಜಾ ದತ್ತಾ ಕುಟುಂಬಸ್ಥರನ್ನು ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ.&lt;/p&gt;&lt;img&gt;&lt;p&gt;ಪೂಜಾ ದತ್ತಾ ವಾಸವಾಗಿದ್ದ ಮನೆಯ ಒಡತಿ ಜಾನಕಮ್ಮಾ ಪ್ರತಿಕ್ರಿಯಿಸಿದ್ದು, ಮೂರು ವರ್ಷಗಳಿಂದ ಯುವತಿ ಇಲ್ಲಿ ವಾಸವಾಗಿದ್ದಳು. ಮೂರು ವರ್ಷದಿಂದ ನಮ್ಮ ಮನೆಯಲ್ಲಿ ಇದ್ಲು. ಸ್ವಲ್ಪ ಕೋಪಿಷ್ಟೆ, ಒಬ್ಬ ಹುಡುಗ ಬಂದು ಹೋಗ್ತಿದ್ದ. ಗುರುವಾರ ಯಾರೋ ಬಾಗಿಲು ತಟ್ಟುತ್ತಿದ್ದಾರೆ ಅಂತ ಹೇಳುತ್ತಿದ್ದಳು. ಇಂದು ಸಂಜೆ ಪಕ್ಕದ ಮನೆ ಹುಡುಗರು ವಾಸನೆ ಅಂತ ಹೇಳಿದ್ರು. ಆಗಬಾಗಿಲು ತೆಗೆದಾಗ ಘಟನೆ ಗೊತ್ತಾಗಿದೆ. ಆ ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-semi-decomposed-body-of-a-young-woman-from-jharkhand-found-naked-mrq-kw3ncm8"/>
        </item>
        <item>
            <title><![CDATA[RCB ಪಂದ್ಯಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂ 200 ಸಿಸಿಟಿವಿ ಆಫ್ ಮಾಡಿದ್ದ ಇಬ್ಬರು ಅರೆಸ್ಟ್ ! ಉದ್ದೇಶ ಏನಿತ್ತು?]]></title>
            <link>https://kannada.asianetnews.com/state/bengaluru-police-two-arrested-for-tampering-with-cctv-cameras-at-chinnaswamy-stadium-ahead-of-high-stakes-match-rav/articleshow-m4q8qpp</link>
            <guid isPermaLink="true">https://kannada.asianetnews.com/state/bengaluru-police-two-arrested-for-tampering-with-cctv-cameras-at-chinnaswamy-stadium-ahead-of-high-stakes-match-rav/articleshow-m4q8qpp</guid>
            <pubDate>Tue, 28 Apr 2026 06:53:39 +0530</pubDate>
            <description><![CDATA[ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್&zwnj;ಸಿಬಿ ಪಂದ್ಯದ ವೇಳೆ 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ ಇಬ್ಬರು ಖಾಸಗಿ ಸಂಸ್ಥೆಯ ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ಕಂಪನಿಯು ವೇತನ ಬಾಕಿ ಉಳಿಸಿಕೊಂಡಿದ್ದರಿಂದ ಕೋಪಗೊಂಡು ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq8tsm9kh8p6fftcjdfa9rwd,imgname--------------------------------21--1777339257139.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28) &lt;/strong&gt;ಭದ್ರತೆ ನಿರ್ವಹಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ ಆರೋಪದ ಮೇರೆಗೆ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಐವಿಎಸ್&zwnj; ಡಿಜಿಟಲ್&zwnj; ಸಲ್ಯೂಷನ್&zwnj; ಸಂಸ್ಥೆಯ ಸಿಬ್ಬಂದಿಯಾದ ಚಿತ್ರದುರ್ಗ ಮೂಲದ ಮಂಜುನಾಥ್ ಮತ್ತು ಉತ್ತರಪ್ರದೇಶ ಮೂಲದ ಅಬ್ದುಲ್&zwnj; ಕಲಾಂ ಬಂಧಿತರು. ಆರೋಪಿಗಳು ಏ.24ರಂದು ಆರ್&zwnj;ಸಿಬಿ ಮತ್ತು ಗುಜರಾತ್&zwnj; ಟೈಟಾನ್ಸ್&zwnj; ಪಂದ್ಯದ ವೇಳೆ ಸುಮಾರು 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಏ.24ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವಿತ್ತು. ಆ ದಿನ ಕ್ರೀಡಾಂಗಣದಲ್ಲಿ ಭದ್ರತೆಯ ಮೇಲ್ವಿಚಾರಣೆಗಾಗಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳ ಸಂಪರ್ಕ ಬೆ&zwj;ಳಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ ಏಕಾಏಕಿ ಕಡಿತವಾಗಿತ್ತು. ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿರುವಾಗ ಸಿಸಿ ಕ್ಯಾಮೆರಾಗಳಲ್ಲಿ ಲೋಪವಾಗಿರುವುದು ಪೊಲೀಸರ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ನಂತರ ಪರಿಶೀಲಿಸಿದಾಗ ಇಬ್ಬರು ವ್ಯಕ್ತಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿತ್ತು.&lt;/p&gt;&lt;p&gt;\\Bವೇತನ ಬಾಕಿ ಉಳಿಸಿಕೊಂಡಿದಕ್ಕೆ ಕೃತ್ಯ: \\B&lt;/p&gt;&lt;p&gt;ಆರೋಪಿಗಳು ತಮಗೆ ನೀಡಿದ್ದ ಪಾಸ್&zwnj;ಗಳನ್ನು ಬಳಸಿಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿ ನೆಟ್&zwnj;ವರ್ಕ್ ವಿಡಿಯೋ ರೆಕಾರ್ಡರ್ (ಎನ್&zwnj;ವಿಆರ್) ಮತ್ತು ಫೈಬರ್ ಸಂಪರ್ಕಗಳನ್ನು ಕಡಿತ ಮಾಡಿದ್ದಾರೆ. ಅದರಿಂದ ಪ್ರವೇಶ ದ್ವಾರಗಳ ಕ್ಯಾಮೆರಾಗಳು, ಕ್ರೀಡಾಂಗಣದ ಸುತ್ತ-ಮುತ್ತಲಿನ ಕ್ಯಾಮೆರಾಗಳು, ಡಿ ಕಾರ್ಪೊರೇಟ್ ಸ್ಟ್ಯಾಂಡ್&zwnj; ಹಾಗೂ ಇತರೆ ಭಾಗಗಳ ದೃಶ್ಯಾವಳಿಗಳ ಫೀಡ್ ಸ್ಥಗಿತವಾಗಿತ್ತು. ಅದನ್ನು ನಿಗಾ ವಹಿಸುತ್ತಿದ್ದ ಪೊಲೀಸರ ತಂಡ ಈ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದೆ. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಕಂಪನಿ ತಮಗೆ ನೀಡಬೇಕಿದ್ದ ವೇತನ ಬಾಕಿ ಉಳಿಸಿಕೊಂಡಿದ್ದರಿಂದ ಈ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ಸಂಸ್ಥೆಯ ಮೇಲಿನ ಸಿಟ್ಟಿಗೆ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿ ಪೊಲೀಸರ ತಲೆ ಬಿಸಿ ಮಾಡಿದ್ದಾರೆ.&lt;/p&gt;&lt;p&gt;ಸಿಸಿ ಕ್ಯಾಮೆರಾಗಳ ನಿರ್ವಹಣೆಯಯನ್ನು ಸ್ಟ್ಯಾಕ್ ಎಂಬ ಕಂಪನಿಗೆ ನೀಡಲಾಗಿದೆ. ಈ ಕಂಪನಿಯು ಐ&zwj;ವಿಎಸ್&zwnj; ಡಿಜಿಟಲ್&zwnj; ಸಲ್ಯೂಷನ್&zwnj; ಎಂಬ ಸಂಸ್ಥೆಗೆ ಉಪಗುತ್ತಿಗೆ ನೀಡಿದೆ. ಆದರೆ, ಆ ಕಂಪನಿಯು ಆರೋಪಿಗಳಿಗೆ ಬಾಕಿ ವೇತನ ಉಳಿಸಿಕೊಂಡಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡು ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗಿದೆ.&lt;/p&gt;&lt;p&gt;ಇನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇವಲ 1 ಗಂಟೆಯಲ್ಲೇ ಇಡೀ ಸಿಸಿ ಕ್ಯಾಮೆರಾ ವ್ಯವಸ್ಥೆಯನ್ನು ಸರಿಪಡಿಸಲಾಗಿತ್ತು. ಹೀಗಾಗಿ ಯಾವುದೇ ತೊಂದರೆ ಉಂಟಾಗಿಲ್ಲ. ಈ ಸಂಬಂಧ ಐ&zwj;ವಿಎಸ್&zwnj; ಡಿಜಿಟಲ್&zwnj; ಸಲ್ಯೂಷನ್&zwnj;ನ ಗುತ್ತಿಗೆದಾರರಾದ ಆದಿತ್ಯ ಭಟ್&zwnj; ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಮಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-police-two-arrested-for-tampering-with-cctv-cameras-at-chinnaswamy-stadium-ahead-of-high-stakes-match-rav/articleshow-m4q8qpp"/>
        </item>
        <item>
            <title><![CDATA['ಬಜೆಟ್ ₹15 ಸಾವಿರ, ಬಾಡಿಗೆ ₹25 ಸಾವಿರದಿಂದ ಪ್ರಾರಂಭ'.. ಮನೆ ಹುಡುಕಲು ಯುವತಿ ಪಟ್ಟ ಪಾಡು ಇನ್‌ಸ್ಟಾಗ್ರಾಂನಲ್ಲಿ ವೈರಲ್]]></title>
            <link>https://kannada.asianetnews.com/life/house-hunting-in-bengaluru-a-fulltime-job-with-high-rents-and-heavy-deposits/articleshow-yeib0p9</link>
            <guid isPermaLink="true">https://kannada.asianetnews.com/life/house-hunting-in-bengaluru-a-fulltime-job-with-high-rents-and-heavy-deposits/articleshow-yeib0p9</guid>
            <pubDate>Tue, 28 Apr 2026 11:17:47 +0530</pubDate>
            <description><![CDATA[&lt;p&gt;&lt;strong&gt;Bengaluru House Hunting: &lt;/strong&gt;ಬೆಂಗಳೂರಿನಲ್ಲಿ ಮನೆ ಹುಡುಕುವುದು ಎಷ್ಟು ಕಷ್ಟ ಮತ್ತು ಅಲ್ಲಿನ ಬಾಡಿಗೆ ದರಗಳು ಹೇಗಿವೆ ಎಂಬ ಬಗ್ಗೆ ಯುವತಿಯೊಬ್ಬರು ಇನ್&zwnj;ಸ್ಟಾಗ್ರಾಂನಲ್ಲಿ ಹಂಚಿಕೊಂಡ ಆಘಾತಕಾರಿ ಸತ್ಯದ ವರದಿ ಇಲ್ಲಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kq99rz07d17bkz8c43wv1s89,imgname-thumbnail---2026-04-28t110833.422-1777354963975.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂ&lt;/strong&gt;ಗಳೂರಿನಲ್ಲಿ ಮನೆ ಹುಡುಕುವುದು ಎಂದರೆ ಸಾಮಾನ್ಯ ಕೆಲಸವಲ್ಲ, ಅದೊಂದು ದೊಡ್ಡ ಸಾಹಸ ಎಂಬುದು ಮತ್ತೊಮ್ಮೆ ಪ್ರೂವ್ ಆಗಿದೆ. ರಾಜೇಶ್ವರಿ ಗುಪ್ತಾ ಎಂಬ ಯುವತಿಯೊಬ್ಬರು ಎಚ್&zwnj;ಎಸ್&zwnj;ಆರ್ (HSR) ಲೇಔಟ್&zwnj;ನಲ್ಲಿ ತನಗಾಗಿ ಒಂದು ಪುಟ್ಟ ಮನೆಯನ್ನು ಹುಡುಕಲು ಪಟ್ಟ ಪಾಡು ಮತ್ತು ಅಲ್ಲಿನ ಅತಿಯಾದ ಬಾಡಿಗೆ ದರದ ಬಗ್ಗೆ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಇಂಟರ್ನೆಟ್&zwnj;ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಡಿಯೋ ಬೆಂಗಳೂರಿನ ಪ್ರಸ್ತುತ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಕಹಿ ಸತ್ಯವನ್ನು ಬಿಚ್ಚಿಟ್ಟಿದೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಆಗಿದ್ದೇನು?&lt;/strong&gt;&lt;/h2&gt;&lt;p&gt;ರಾಜೇಶ್ವರಿ ಅವರು ಪ್ರಸ್ತುತ ವಾಸವಿರುವ ಮನೆಯನ್ನು ಮಾಲೀಕರ ಸೂಚನೆಯಂತೆ ಖಾಲಿ ಮಾಡಲು ಕೇವಲ 20 ದಿನಗಳಷ್ಟೇ ಸಮಯವಿದೆ. ಈ ತುರ್ತು ಹಿನ್ನೆಲೆಯಲ್ಲಿ, ತಮ್ಮ ಜಿಮ್&zwnj;ಗೆ ಹತ್ತಿರವಾಗಲಿ ಮತ್ತು ದಿನನಿತ್ಯದ ಪ್ರಯಾಣದ ಸಮಯ ಉಳಿಯಲಿ ಎಂಬ ಉದ್ದೇಶದಿಂದ ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ಮನೆ ಹುಡುಕಲು ನಿರ್ಧರಿಸಿದರು. ಅವರ ಬಜೆಟ್ ತಿಂಗಳಿಗೆ ಸುಮಾರು ₹15,000 ಆಗಿತ್ತು ಮತ್ತು ಅವರ ನಿರೀಕ್ಷೆ ಕೇವಲ ಒಂದು ಸಾಧಾರಣ 1BHK ಮನೆಯಾಗಿತ್ತು. ಆದರೆ, ವಾಸ್ತವವು ಅವರ ನಿರೀಕ್ಷೆಗಿಂತ ಸಂಪೂರ್ಣ ಭಿನ್ನವಾಗಿತ್ತು.&lt;/p&gt;&lt;h3&gt;&lt;strong&gt;1BHK ಮನೆ ಬಾಡಿಗೆ ಕನಿಷ್ಠ ₹25,000&lt;/strong&gt;&lt;/h3&gt;&lt;p&gt;&quot;ಎಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ಸಾಧಾರಣ 1BHK ಮನೆಗಳ ಬಾಡಿಗೆ ಕೂಡ ಕನಿಷ್ಠ ₹25,000 ರಿಂದ ಆರಂಭವಾಗುತ್ತದೆ. ಒಂದು ವೇಳೆ ಮನೆ ಸಂಪೂರ್ಣವಾಗಿ ಪೀಠೋಪಕರಣಗಳಿಂದ ಕೂಡಿದ್ದರೆ (Fully Furnished), ಅದರ ಬಾಡಿಗೆ ಆರಾಮವಾಗಿ ₹50,000 ವರೆಗೆ ತಲುಪುತ್ತದೆ. ಇನ್ನು ಸೆಕ್ಯೂರಿಟಿ ಡೆಪಾಸಿಟ್ ವಿಷಯಕ್ಕೆ ಬಂದರೆ, ಅದು ಬಾಡಿಗೆಯಂತೆ ಕಾಣದೆ ಒಂದು ದೊಡ್ಡ ಹೂಡಿಕೆಯಂತೆ ಭಾಸವಾಗುತ್ತದೆ. ಅಂತಿಮವಾಗಿ ಈ ಹೂಡಿಕೆಯಿಂದ ನಮಗೆ ಸಿಗುವ ಲಾಭ ಶೂನ್ಯ ಅಥವಾ ನೆಗೆಟಿವ್ ಆಗಿರುತ್ತದೆ&quot; ಎಂದು ಅವರು ವಿಡಿಯೋದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಮಾನಸಿಕವಾಗಿ ಡ್ಯಾಮೇಜ್ ಮಾಡುತ್ತೆ&lt;/strong&gt;ಬ್ರೋಕರ್&zwnj;ಗಳ ಹೆಚ್ಚಿನ ಕಮಿಷನ್ ಮತ್ತು ಬೇಡಿಕೆಗಳಿಂದ ಬೇಸತ್ತು, ರಾಜೇಶ್ವರಿ ತಾವೇ ಖುದ್ದಾಗಿ ಸ್ಕೂಟರ್ ಏರಿ ಬೆಂಗಳೂರಿನ ಸುಡುವ ಬಿಸಿಲಿನಲ್ಲಿ ಗಲ್ಲಿ ಗಲ್ಲಿ ಅಲೆದಿದ್ದಾರೆ. &quot;ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು 'ಪೂರ್ಣಾವಧಿಯ ಕೆಲಸ' (Full-time job) ಇದ್ದಂತೆ. ಇದು ಕೇವಲ ದೈಹಿಕ ಶ್ರಮವಲ್ಲ, ನಮ್ಮನ್ನು ಮಾನಸಿಕವಾಗಿ ಜರ್ಜರಿತಗೊಳಿಸುವ ಪ್ರಕ್ರಿಯೆ. ನನಗೆ ಬೇಕಿರುವುದು ಕೇವಲ ಉತ್ತಮ ಗಾಳಿ, ಬೆಳಕು ಇರುವ ಮನೆ ಮತ್ತು ಜೀವನ ನಡೆಸಲು ಉಳಿಯುವ ಅಲ್ಪ ಹಣ. ಆದರೆ ಈಗಿನ ಸ್ಥಿತಿ ನೋಡಿದರೆ ನಾನು ಬರೀ ಸ್ಕೂಟರ್&zwnj;ನಲ್ಲಿ ತಿರುಗಾಡಿ ಮ್ಯಾರಥಾನ್ ಓಡುತ್ತಿದ್ದೇನೋ ಎಂದು ಅನ್ನಿಸುತ್ತಿದೆ&quot; ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಬೆಂಬಲ&lt;/strong&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾವಿರಾರು ನೆಟ್ಟಿಗರು ತಮ್ಮ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. &quot;ಬೆಂಗಳೂರಿನಲ್ಲಿ ಮನೆ ಮುಂಗಡ ಹಣ (Deposit) ಪಡೆಯುವ ಪದ್ಧತಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು&quot; ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು &quot;ಮನೆ ಹುಡುಕಾಟವು ನಿಮ್ಮ ಹಣ ಮತ್ತು ನೆಮ್ಮದಿ ಎರಡನ್ನೂ ಕಸಿದುಕೊಳ್ಳುತ್ತದೆ&quot; ಎಂದಿದ್ದಾರೆ. ಒಟ್ಟಾರೆಯಾಗಿ ರಾಜೇಶ್ವರಿ ಅವರ ಈ ವಿಡಿಯೋ ಬೆಂಗಳೂರಿನ ಐಟಿ ಉದ್ಯೋಗಿಗಳು ಮತ್ತು ಮಧ್ಯಮ ವರ್ಗದ ಜನರ ವಸತಿ ಸಮಸ್ಯೆಯನ್ನು ಕನ್ನಡಿಯಂತೆ ಹಿಡಿದಿದೆ. ಅತಿಯಾದ ಬಾಡಿಗೆ ಮತ್ತು ಡೆಪಾಸಿಟ್ ಹಣವು ಜನಸಾಮಾನ್ಯರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿರುವುದು ಈ ಮೂಲಕ ಸ್ಪಷ್ಟವಾಗಿದೆ.&lt;/p&gt;&lt;p&gt;ಕೇವಲ ಎಚ್&zwnj;ಎಸ್&zwnj;ಆರ್ ಲೇಔಟ್ ಮಾತ್ರವಲ್ಲದೆ, ಇಂದಿರಾನಗರ, ಕೋರಮಂಗಲ ಮತ್ತು ಸರ್ಜಾಪುರದಂತಹ ಪ್ರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಐಟಿ ಕಂಪನಿಗಳ ಸಾಮೀಪ್ಯದಿಂದಾಗಿ ಮನೆ ಮಾಲೀಕರು ಬಾಡಿಗೆ ಬೆಲೆ ಏರಿಸುತ್ತಿದ್ದಾರೆ. ಮನೆ ಸಿಗುವುದು ಎಷ್ಟು ಕಷ್ಟವಾಗಿದೆಯೆಂದರೆ, ಕೆಲವು ಕಡೆಗಳಲ್ಲಿ ಬಾಡಿಗೆದಾರರ 'ಲಿಂಕ್ಡ್&zwnj;ಇನ್ ಪ್ರೊಫೈಲ್' ಅಥವಾ ಸಂದರ್ಶನವನ್ನೂ ಮಾಲೀಕರು ಕೇಳುತ್ತಿರುವುದು ಬೆಂಗಳೂರಿನ ರಿಯಲ್ ಎಸ್ಟೇಟ್&zwnj;ನ ವಿಚಿತ್ರ ವಾಸ್ತವಕ್ಕೆ ಸಾಕ್ಷಿಯಾಗಿದೆ.&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Rajeshwari Gupta (@hustling_rajeshwari)&lt;/p&gt;]]></content:encoded>
            <category>bengaluru-urban</category>
            <dc:creator>Ashwini HR</dc:creator>
            <atom:link href="https://kannada.asianetnews.com/life/house-hunting-in-bengaluru-a-fulltime-job-with-high-rents-and-heavy-deposits/articleshow-yeib0p9"/>
        </item>
    </channel>
</rss>
