<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 09 Apr 2026 12:02:19 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಶಾಲೆಗಳಲ್ಲಿ 'ವಂದೇ ಮಾತರಂ' ಕಡ್ಡಾಯ ವಿರೋಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಿರಾಕರಿಸಿದ  ಹೈಕೋರ್ಟ್]]></title>
            <link>https://kannada.asianetnews.com/state/karnataka-hc-refuses-to-hear-petition-filed-against-mandatory-vande-mataram-in-schools/articleshow-29qggl8</link>
            <guid isPermaLink="true">https://kannada.asianetnews.com/state/karnataka-hc-refuses-to-hear-petition-filed-against-mandatory-vande-mataram-in-schools/articleshow-29qggl8</guid>
            <pubDate>Thu, 09 Apr 2026 12:00:46 +0530</pubDate>
            <description><![CDATA[&lt;p&gt;ಶಾಲೆಗಳಲ್ಲಿ 'ವಂದೇ ಮಾತರಂ' ಗೀತೆಯ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರದ ಮಾರ್ಗಸೂಚಿಯನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01h2ye3q7thgpepzadhtx7kjcc,imgname-Karnataka-High-Court-1686796098810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9): &lt;/strong&gt;ಶಾಲೆಗಳಲ್ಲಿ ಪ್ರತಿದಿನ 'ವಂದೇ ಮಾತರಂ' ಗೀತೆಯ ಆರೂ ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಶಿಷ್ಟಾಚಾರ ಮಾರ್ಗಸೂಚಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ನೇತೃತ್ವದ ವಿಭಾಗೀಯ ಪೀಠವು ಈ ಅರ್ಜಿಯನ್ನು ವಜಾಗೊಳಿಸಿದೆ.&lt;/p&gt;&lt;h2&gt;ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲೇಖ&lt;/h2&gt;&lt;p&gt;ಈ ಹಿಂದೆಯೇ ಇದೇ ರೀತಿಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿ ವಜಾಗೊಳಿಸಿತ್ತು. ಸುಪ್ರೀಂ ಕೋರ್ಟ್&zwnj;ನ ತೀರ್ಪು ಪರಿಗಣಿಸಿ ಇದೀಗ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ನಿರಾಕರಿಸಿದೆ. ಕೇಂದ್ರದ ಮಾರ್ಗಸೂಚಿಗಳು ಅಸಾಂವಿಧಾನಿಕ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಲು ನ್ಯಾಯಾಲಯ ಒಪ್ಪಲಿಲ್ಲ.&lt;/p&gt;&lt;h3&gt;ವಂದೇ ಮಾತರಂ ಉಗಮದ ಹಿನ್ನೆಲೆ&lt;/h3&gt;&lt;p&gt;ವಂದೇ ಮಾತರಂ ಗೀತೆಯನ್ನು ಖ್ಯಾತ ಸಾಹಿತಿ ಬಂಕಿಮ್ ಚಂದ್ರ ಚಟರ್ಜಿ ಅವರು ನವೆಂಬರ್ 7, 1875 ರಂದು ರಚಿಸಿದರು. ಇದು ಮೊದಲು 'ಬಂಗದರ್ಶನ್' ಎಂಬ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ನಂತರ 1882 ರಲ್ಲಿ ಹೊರಬಂದ ಅವರ ಪ್ರಸಿದ್ಧ ಕಾದಂಬರಿ &lsquo;ಆನಂದಮಠ&rsquo;ದಲ್ಲಿ ಈ ಗೀತೆಯನ್ನು ಸೇರಿಸಲಾಯಿತು. ಇದು ಕೇವಲ ಹಾಡಲ್ಲ, ಭಾರತದ ಏಕತೆ ಮತ್ತು ಅಖಂಡತೆಯ ಪ್ರತೀಕವಾಗಿದೆ.&lt;/p&gt;&lt;p&gt;&lt;strong&gt;ವಂದೇ ಮಾತರಂ ಗೀತೆಯ ರೋಚಕ ಇತಿಹಾಸ&lt;/strong&gt;&lt;/p&gt;&lt;p&gt;ಬ್ರಿಟಿಷ್ ಆಡಳಿತಗಾರರು ಪ್ರತಿ ಸಮಾರಂಭದಲ್ಲಿ ಇಂಗ್ಲೆಂಡ್ ರಾಣಿಗೆ ಗೌರವ ಸಲ್ಲಿಸಲು &lsquo;ಸೇವ್ ದಿ ಕ್ವೀನ್&rsquo; ಹಾಡುವುದನ್ನು ಕಡ್ಡಾಯಗೊಳಿಸಿದ್ದರು. ಈ ಗುಲಾಮಗಿರಿಯ ಮನಸ್ಥಿತಿಯನ್ನು ವಿರೋಧಿಸಿ ಬಂಕಿಮ್ ಚಂದ್ರ ಚಟರ್ಜಿ ಅವರು 1874ರಲ್ಲಿಯೇ ಈ ಗೀತೆಯನ್ನು ಸಿದ್ಧಪಡಿಸಿದ್ದರು. ಭಾರತದ ಭೂಮಿಯನ್ನು 'ತಾಯಿ' ಎಂದು ಸಂಬೋಧಿಸುವ ಮೂಲಕ ದೇಶಪ್ರೇಮದ ಕಿಚ್ಚು ಹಚ್ಚುವುದು ಇದರ ಉದ್ದೇಶವಾಗಿತ್ತು.&lt;/p&gt;&lt;p&gt;&lt;strong&gt;ವಂದೇ ಮಾತರಂ ಮೊದಲ ಬಾರಿಗೆ ಹಾಡಿದ್ದು ಎಲ್ಲಿ?&lt;/strong&gt;&lt;/p&gt;&lt;p&gt;1896 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಈ ಹಾಡನ್ನು ಹಾಡಲಾಯಿತು. ಅಂದಿನಿಂದ ಇದು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಕ್ರಾಂತಿಕಾರಿಗಳ, ಸಾಮಾನ್ಯ ಜನರ ನೆಚ್ಚಿನ ಘೋಷಣೆಯಾಗಿ ಮಾರ್ಪಟ್ಟಿತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಮಾತನಾಡಿ, 1937 ರಲ್ಲಿ ಈ ಗೀತೆಯ ಪ್ರಮುಖ ಚರಣಗಳನ್ನು ಕೈಬಿಟ್ಟಿದ್ದು ದೇಶದ ವಿಭಜನೆಗೆ ಪರೋಕ್ಷ ಕಾರಣವಾಯಿತು ಎಂದು ಅಭಿಪ್ರಾಯಪಟ್ಟಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/karnataka-hc-refuses-to-hear-petition-filed-against-mandatory-vande-mataram-in-schools/articleshow-29qggl8"/>
        </item>
        <item>
            <title><![CDATA[ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ: ಹಸೆಮಣೆ ಏರಬೇಕಾದ ಯುವಕ ಮಸಣಕ್ಕೆ]]></title>
            <link>https://kannada.asianetnews.com/state/groom-died-in-accident-who-went-to-distribute-marriage-invitation/articleshow-ddsdugt</link>
            <guid isPermaLink="true">https://kannada.asianetnews.com/state/groom-died-in-accident-who-went-to-distribute-marriage-invitation/articleshow-ddsdugt</guid>
            <pubDate>Thu, 09 Apr 2026 11:31:06 +0530</pubDate>
            <description><![CDATA[&lt;p&gt;Groom died in Accident:ಮದ್ವೆ ಆಹ್ವಾನ ಪತ್ರಿಕೆ ನೀಡುವುದಕ್ಕೆಂದು ಹೋದ ಯುವಕ ಮಸಣ ಸೇರಿದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ. 28 ವರ್ಷದ ಅಕ್ಷತ್ ಮೃತಪಟ್ಟ ಯುವಕ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knrcs2vxpzk17z3sqgt7vf7b,imgname-accident-death-1775713946493.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಮದುವೆ ಕಾಗದ ಹಂಚಲು ಹೋದಾಗ ಟ್ರ್ಯಾಕ್ಟರ್ ಡಿಕ್ಕಿ&lt;/strong&gt;&lt;/h2&gt;&lt;p&gt;ಬೆಂಗಳೂರು: ಮದ್ವೆ ಆಹ್ವಾನ ಪತ್ರಿಕೆ ನೀಡುವುದಕ್ಕೆಂದು ಹೋದ ಯುವಕ ಮಸಣ ಸೇರಿದಂತಹ ಆಘಾತಕಾರಿ ಘಟನೆ ಬೆಂಗಳೂರಿನ ಹುಳಿಮಾವು ಬಳಿ ನಡೆದಿದೆ. 28 ವರ್ಷದ ಅಕ್ಷತ್ ಮೃತಪಟ್ಟ ಯುವಕ. ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ನಡೆದಿತ್ತು. ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದ ಅಕ್ಷತ್ ಅವರು ಇಲ್ಲಿಗೆ ಬಂದಿದ್ದು, ಬ್ರಹ್ಮರಥೋತ್ಸವದ ಪಲ್ಲಕ್ಕಿಗಳನ್ನು ನೋಡುತ್ತಾ ನಿಂತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.&lt;/p&gt;&lt;h3&gt;&lt;strong&gt;ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ದುರಂತ&lt;/strong&gt;&lt;/h3&gt;&lt;p&gt;ಅಕ್ಷತ್ ಅವರ ಮದುವೆ ನಿಗದಿಯಾಗಿದ್ದು, ಮದುವೆ ಕಾಗದ ಹಂಚುವುದರಲ್ಲಿ ಅವರು ಬ್ಯುಸಿಯಾಗಿದ್ದರು. ಇದರ ನಡುವೆ ಕೋದಂಡರಾಮ ಬ್ರಹ್ಮರಥೋತ್ಸವಕ್ಕೆ ಬಂದಿದ್ದ ಅವರು ಅಲ್ಲಿ ಜಾತ್ರೆ ನೋಡಲು ನಿಂತಿದ್ದಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ಇಷ್ಟೊಂದು ದೊಡ್ಡ ದುರ್ಘಟನೆ ನಡೆದ್ರೂ ಸ್ಥಳಕ್ಕೆ ದೇವಾಲಯದ ಟ್ರಸ್ಟಿಗಳು ಬಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ಟ್ರಾಫಿಕ್ ಚಲನ್ ಮೂಲಕ ಸಿಕ್ಕಿಬಿದ್ದ ಕಳ್ಳ: ಬೈಕ್ ಕಳವಾದ 3 ತಿಂಗಳ ಬಳಿಕ ಮನೆಗೆ ಬಂತು ಕಳ್ಳನ ಫೋಟೋ!&lt;/p&gt;&lt;p&gt;ಮುಂಜಾನೆ ಪಲ್ಲಕ್ಕಿಗಳನ್ನ ತೆರೆವುಗೊಳಿಸಲು ಪೊಲೀಸರ ಒತ್ತಡ ಹೆಚ್ಚಾದ ಚಾಲಕನಲ್ಲದವನು ಟ್ರ್ಯಾಕ್ಟರ್ ತೆಗೆಯಲು ಹೋದಾಗ ಈ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿಸಿಪಿ ಗೋಪಾಲ್ ಬ್ಯಾಕೋಡ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಹಸೆಮಣೆ ಏರಬೇಕಾದ ಯುವಕನೇ ಈಗ ಅಪಘಾತದಿಂದಾಗಿ ಸಾವನ್ನಪ್ಪಿರುವುದರಿಂದ ಮದುವೆ ಸಂಭ್ರಮವಿರಬೇಕಾದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೇಸಿಗೆ ಸೆಖೆಗೆ ಮನೆ ಹೊರಗೆ ಮಲಗಿದ್ದವರ ಮೇಲೆ 'ಸೈಕೋ' ದಾಳಿ: ಆರು ಜನರ ತಲೆ ಒಡೆದ ಮಾನಸಿಕ ಅಸ್ವಸ್ಥ!&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Anusha Kb</dc:creator>
            <atom:link href="https://kannada.asianetnews.com/state/groom-died-in-accident-who-went-to-distribute-marriage-invitation/articleshow-ddsdugt"/>
        </item>
        <item>
            <title><![CDATA[ವಿನಯ ಕುಲಕರ್ಣಿ ವಿರುದ್ಧದ ಕೊಲೆ ಕೇಸ್‌ ತೀರ್ಪು ಇಂದು, ಯೋಗೇಶ್‌ಗೌಡ ಕೊಲೆ: ಕೈ ಶಾಸಕಗೆ ಡವಡವ - 8 ವರ್ಷಗಳಿಂದ ನಡೆಯುತ್ತಿದ್ದ ಕೇಸ್‌ ವಿಚಾರಣೆ]]></title>
            <link>https://kannada.asianetnews.com/state/vinay-kulkarni-murder-case-verdict-today-fate-of-congress-mla-to-be-decided-after-8-years-rav/articleshow-0r5per7</link>
            <guid isPermaLink="true">https://kannada.asianetnews.com/state/vinay-kulkarni-murder-case-verdict-today-fate-of-congress-mla-to-be-decided-after-8-years-rav/articleshow-0r5per7</guid>
            <pubDate>Thu, 09 Apr 2026 04:57:32 +0530</pubDate>
            <description><![CDATA[ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಲಿದೆ. 8 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8n721mvjbazkf3cffhf800v,imgname-vinay-kulkarni-1761648641690.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9): &lt;/strong&gt;ಮಾಜಿ ಸಚಿವ ಹಾಗೂ ಶಾಸಕ ವಿನಯ್ ಕುಲಕರ್ಣಿ ಅವರೂ ಆರೋಪಿಯಾಗಿರುವ ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಅಂತಿಮ ತೀರ್ಪು ಪ್ರಕಟಿಸಲಿದೆ.&lt;/p&gt;&lt;p&gt;ವಿನಯ್&zwnj; ಕುಲಕರ್ಣಿ ಸೇರಿ ಒಟ್ಟು 21 ಮಂದಿ ಆರೋಪಿಗಳ ಭವಿಷ್ಯ ನಿರ್ಧಾರವಾಗಲಿದೆ. ಸುಮಾರು 8 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮ ಆದೇಶ ನೀಡಲಿದೆ.&lt;/p&gt;&lt;h2&gt;ಯೋಗೇಶ್ ಗೌಡ ಕೊಲೆ ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಧಾರವಾಡದ ಜಿಪಂ ಮಾಜಿ ಸದಸ್ಯ ಯೋಗೇಶ್&zwnj; ಗೌಡ ಅವರನ್ನು 2016ರ ಜೂ.15ರಂದು ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ತನಿಖೆ ನಡೆಸಿ, ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡುವೆ, ಕೊಲೆಯಾದ ಯೋಗೇಶ್&zwnj; ಗೌಡ ಕುಟುಂಬದ ಸದಸ್ಯರ ಒತ್ತಾಯ ಮೇರೆಗೆ 2019ರ ಸೆಪ್ಟೆಂಬರ್&zwnj;ನಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು.&lt;/p&gt;&lt;p&gt;ಈ ಸಂಬಂಧ ಮಾಜಿ ಸಚಿವ &lt;strong&gt;ವಿನಯ್&zwnj; ಕುಲಕರ್ಣಿ&lt;/strong&gt; ಅವರನ್ನು 2020ರ ನ.5ರಂದು ಸಿಬಿಐ ಬಂಧಿಸಿತ್ತು. ಬಳಿಕ ವಿಚಾರಣೆ ನಡೆಸಿ ಈ ಪ್ರಕರಣ ಸಂಬಂಧ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿತ್ತು. ಪ್ರಸ್ತುತ ಪ್ರಮುಖ ಆರೋಪಿ ವಿನಯ್&zwnj; ಕುಲಕರ್ಣಿ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂದಿನ ನ್ಯಾಯಾಲಯದ ತೀರ್ಪಿನ ಮೇಲೆ ಈ 21 ಆರೋಪಿಗಳ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/vinay-kulkarni-murder-case-verdict-today-fate-of-congress-mla-to-be-decided-after-8-years-rav/articleshow-0r5per7"/>
        </item>
        <item>
            <title><![CDATA[BJP vs Congress: ಬ್ರಾಹ್ಮಣನೆಂಬ ಅಹಂಕಾರದಿಂದ  ದಲಿತ ನಾಯಕ ಖರ್ಗೆ ವಿರುದ್ಧ ಬಿಸ್ವಾ ಹೇಳಿಕೆ: ಪ್ರಿಯಾಂಕ್ ಕಿಡಿ]]></title>
            <link>https://kannada.asianetnews.com/politics/minister-priyank-kharge-slams-assam-cm-s-statement-against-mallikarjun-kharge-rav/articleshow-hovgv58</link>
            <guid isPermaLink="true">https://kannada.asianetnews.com/politics/minister-priyank-kharge-slams-assam-cm-s-statement-against-mallikarjun-kharge-rav/articleshow-hovgv58</guid>
            <pubDate>Thu, 09 Apr 2026 05:15:09 +0530</pubDate>
            <description><![CDATA[&lt;p&gt;ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ನೀಡಿದ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶರ್ಮಾ ಅವರು ಬ್ರಾಹ್ಮಣ ಎಂಬ ಹಕ್ಕಿನಿಂದ ಮತ್ತು ಆರ್&zwnj;ಎಸ್&zwnj;ಎಸ್ ತರಬೇತಿಯಿಂದ ಈ ರೀತಿ ಕೀಳಾಗಿ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knqqr55q7nar8m2c833p8zpa,imgname-----------------------2026-04-09t051424.170-1775691895991.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.9): &lt;/strong&gt;&lsquo;ಅಸ್ಸಾಂ ಮುಖ್ಯಮಂತ್ರಿ ಹಿಮಂತ್&zwnj; ಬಿಸ್ವಾ ಶರ್ಮಾ ಅವರು ತಾನೊಬ್ಬ ಬ್ರಾಹ್ಮಣ ಎಂಬ ಹಕ್ಕಿನೊಂದಿಗೆ, ಆರ್&zwnj;ಎಸ್ಎಸ್ ತರಬೇತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಪ್ರಧಾನಮಂತ್ರಿ ಮೋದಿ ಇದೆಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆಯೇ?&rsquo; ಎಂದು ಸಚಿವ ಪ್ರಿಯಾಂಕ್&zwnj; ಖರ್ಗೆ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಿಸಿ ಹಿಮಂತ್&zwnj; ಬಿಸ್ವಾ ಶರ್ಮಾ ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್&zwnj; ಖರ್ಗೆ, &lsquo;ಹಿಮಂತ್ ಬಿಸ್ವಾ ಶರ್ಮಾ ಹಾಗೂ ಬಿಜೆಪಿಯವರು ಹತಾಶರಾಗಿದ್ದಾರೆ. ಹಿಮಂತ್&zwnj; ಬಿಸ್ವಾ ಅವರು ಬ್ರಾಹ್ಮಣರಲ್ಲವೇ? ಆ ಹಕ್ಕಿನೊಂದಿಗೇ ಮಾತನಾಡಿದ್ದಾರೆ. ಅವರು ದಲಿತರು, ದಲಿತ ನಾಯಕರ ಬಗ್ಗೆ ಏನು ಬೇಕಾದರೂ ಮಾತನಾಡಬಹುದು. ಕಾಂಗ್ರೆಸ್&zwnj; ಬಿಟ್ಟು ಬಿಜೆಪಿಗೆ ಸೇರಿದ ಮೇಲೆ ಆರ್&zwnj;ಎಸ್&zwnj;ಎಸ್&zwnj;ನವರು ಇದನ್ನೇ ಅವರಿಗೆ ಕಲಿಸಿರುವುದಲ್ಲವೇ? ಅವರು ಚಾತುರ್ವರ್ಣ ಪದ್ಧತಿಯಿಂದ ಹೊರ ಬಂದಿಲ್ಲ ಎಂದು ಕಿಡಿಕಾರಿದರು.&lt;/p&gt;&lt;h2&gt;ಖರ್ಗೆ ಕೇಳುತ್ತಿರುವ ಪ್ರಶ್ನೆಗೆ ಉತ್ತರ ಇಲ್ಲ:&lt;/h2&gt;&lt;p&gt;ಬಿಜೆಪಿಯವರ ಬಳಿ ಮಲ್ಲಿಕಾರ್ಜುನ ಖರ್ಗೆ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಇಲ್ಲ. ರಾಜ್ಯಸಭೆ ಹಾಗೂ ಹೊರಗಡೆ ಅವರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಹಿಮಂತ್&zwnj; ಅವರಿಗೆ ಜಾತಿಯ ಹಿರಿಮೆ ತಲೆಯಲ್ಲಿ ಕುಳಿತುಬಿಟ್ಟಿದೆ. ಬಿಜೆಪಿಯ ಪ್ರಬುದ್ಧ ಸಮಾಜದವರು ಬೇರೆ ಸಮಾಜದವರಿಗೆ ಈ ರೀತಿ ಮಾತನಾಡಬಹುದು ಎನಿಸುತ್ತದೆ. ಇದು ಪ್ರಮುಖ ವಿಷಯ. ಇದರ ಬಗ್ಗೆ ಮೋದಿ ಅವರು ಏನು ಹೇಳುತ್ತಾರೆ? ಇದನ್ನೂ ಸಮರ್ಥಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.&lt;/p&gt;&lt;p&gt;ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ದೂರು, ಪ್ರತಿಭಟನೆ ವಿಚಾರವಾಗಿ ಮಾತಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಹಾಗೂ ಆರ್&zwnj;ಎಸ್&zwnj;ಎಸ್ ನವರು ಈಗ ಸ್ವಾಮಿ ನಿಷ್ಠೆ ತೋರಿಸಲೇ ಬೇಕಲ್ಲವೇ? ಯಾವುದು ವಿಷಭರಿತ ಸರ್ಪ ಇರುತ್ತದೆಯೋ ಏನ್ ಮಾಡಬೇಕೋ ಮಾಡಿ ಎಂದು ಹೇಳಿದ್ದಾರೆ. ವಿಷ ಸರ್ಪ ನೋಡಿದರೆ ಸ್ನೇಕ್&zwnj; ಶ್ಯಾಮ್&zwnj; ಅವರನ್ನು ಕರೆಯುತ್ತೀರಿ. ಅವರು ಸಿಗದಿದ್ದರೆ ನೀವೇ ಓಡಿಸುತ್ತೀರಿ. ಹಾಗಾದರೆ ಇವರು ಯಾವುದಕ್ಕೆ ಕರೆ ಕೊಟ್ಟಂತೆ? ಎಂದು ಕಿಡಿಕಾರಿದರು.&lt;/p&gt;&lt;p&gt;ನಮ್ಮ ಸಮಾಜದಲ್ಲಿ ಕೋಮು ವಿಷ ತುಂಬುತ್ತಿರುವುದು ಯಾರು? ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಆದಿವಾಸಿಗಳು ಇವರು ಯಾರಿಗೂ ಕೂಡ ದೇಶದಲ್ಲಿ ಜಾಗವಿಲ್ಲ. ಮನುಸ್ಮೃತಿ ನಂಬುವ ಇವರ ಮುಂದೆ ಮಹಿಳೆಯರಿಗೂ ಜಾಗವಿಲ್ಲ ಎಂದು ಹೇಳಿದರು.&lt;/p&gt;&lt;p&gt;ಆರ್&zwnj;ಎಸ್&zwnj;ಎಸ್&zwnj; ದೂರು ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಆರ್&zwnj;ಎಸ್&zwnj;ಎಸ್ ಹೇಗೆ ಕೊಡಲು ಸಾಧ್ಯ? ಅವರು ನೋಂದಣಿಯೇ ಆಗದ ಸಂಸ್ಥೆ. ಯಾವ ಲೆಟರ್&zwnj;ಹೆಡ್&zwnj;ನಲ್ಲಿ ಕೊಡುತ್ತಾರೆ. ನನ್ನ ಹಾಗೂ ದಿನೇಶ್ ಗುಂಡೂರಾವ್&zwnj; ಮೇಲೆ ಪ್ರಕರಣ ನಡೆಯುತ್ತಿರುವುದು ಬೇರೆ ವಿಚಾರ. ಆರ್&zwnj;ಎಸ್&zwnj;ಎಸ್&zwnj;ನವರು ದೂರು ನೀಡಿದ್ದರೆ ಪ್ರತಿ ನೀಡಲಿ ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/minister-priyank-kharge-slams-assam-cm-s-statement-against-mallikarjun-kharge-rav/articleshow-hovgv58"/>
        </item>
        <item>
            <title><![CDATA[ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ  ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ]]></title>
            <link>https://kannada.asianetnews.com/state/minister-eshwar-khandre-says-that-karnataka-govt-considering-de-fertilization-of-wild-animals-rav/articleshow-yup7k71</link>
            <guid isPermaLink="true">https://kannada.asianetnews.com/state/minister-eshwar-khandre-says-that-karnataka-govt-considering-de-fertilization-of-wild-animals-rav/articleshow-yup7k71</guid>
            <pubDate>Thu, 09 Apr 2026 05:29:06 +0530</pubDate>
            <description><![CDATA[&lt;p&gt;ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಯಲು, ಆಯ್ದ ವನ್ಯಜೀವಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಪ್ರಸ್ತಾವನೆಯನ್ನು ಸರ್ಕಾರ ಚಿಂತಿಸುತ್ತಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇದು ಸದ್ಯಕ್ಕೆ ಪ್ರಸ್ತಾವನೆಯ ಹಂತದಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k9es3asmbdr2q8bxc24xnxzw,imgname-eshwar-khandre-1762506418996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9): &lt;/strong&gt;ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಮಾಡುವ ಅಥವಾ ಅವುಗಳಿಗೆ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್&zwnj; ಖಂಡ್ರೆ ತಿಳಿಸಿದ್ದಾರೆ.&lt;/p&gt;&lt;p&gt;ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್&zwnj; ಖಂಡ್ರೆ, ಮಾನವ-ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ, ಕೆಲ ಆಯ್ದ ವನ್ಯಜೀವಿಗಳ ಸಂಖ್ಯೆಯಲ್ಲೂ ಭಾರೀ ಹೆಚ್ಚಳವಾಗುತ್ತಿದೆ. ಅವುಗಳ ಸಂಖ್ಯೆಗೆ ಕಡಿವಾಣ ಹಾಕುವ ಅಗತ್ಯ ಕಂಡು ಬರುತ್ತಿದೆ ಮತ್ತು ಆ ವನ್ಯಜೀವಿಗಳ ಸಂರಕ್ಷಣೆಯೂ ಆಗಬೇಕಿದೆ. ಇನ್ನು, ಜನರ ಜೀವಹಾನಿಯೂ ತಪ್ಪಬೇಕು. ಅದಕ್ಕಾಗಿ ಆಯ್ದ ವನ್ಯಜೀವಿಗಳ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದು ಪ್ರಸ್ತಾವ ಮಾತ್ರ, ನಿರ್ಧಾರ ಆಗಿಲ್ಲ ಎಂದರು.&lt;/p&gt;&lt;p&gt;ವನ್ಯಜೀವಿಗಳಿಗೆ ಕಡಿವಾಣ ಹಾಕುವ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್&zwnj;ನಲ್ಲಿದೆ. ಅದಕ್ಕಾಗಿ ಸಂತಾನ ಶಕ್ತಿ ಹರಣ ಅಥವಾ ಚುಚ್ಚುಮದ್ದು ನೀಡುವ ವಿಚಾರವಾಗಿ ತಜ್ಞರು ಮತ್ತು ಕಾನೂನು ಪಂಡಿತರೊಂದಿಗೆ ಚರ್ಚಿಸಿ ನಿರ್ಧರಿಸಬೇಕು. ನಂತರ ಸುಪ್ರೀಂ ಕೋರ್ಟ್&zwnj;ಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ಯಾವ ಭಾಗದಲ್ಲಿ ಯಾವ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆಯೋ ಅಲ್ಲಿ ಒಂದೆರಡು ವರ್ಷ ವನ್ಯಜೀವಿಗಳನ್ನು ನಿಯಂತ್ರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬೇರೆ ರಾಜ್ಯಗಳಲ್ಲೂ ಈ ರೀತಿಯ ಆಲೋಚನೆಗಳಿವೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆದು ತೀರ್ಮಾನಿಸಬೇಕಿದೆ. ಇನ್ನು, ಸ್ವ-ಇಚ್ಛೆಯಿಂದ ಅರಣ್ಯದಿಂದ ಹೊರಬರಲು ಮುಂದಾದರೆ ಅಂತಹ ಅರಣ್ಯವಾಸಿಗಳ ಸ್ಥಳಾಂತರದ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಅದಕ್ಕಾಗಿ ಸ್ವಯಂ ಪ್ರೇರಿತವಾಗಿ ಕಾಡಿನಿಂದ ಹೊರಬರಲು ಇಚ್ಛಿಸುವವರ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಿದ್ದು, ಪಟ್ಟಿ ಸಿದ್ಧವಾದ ಬಳಿಕ ಎಷ್ಟು ಅನುದಾನದ ಅಗತ್ಯವಿದೆ ಎಂಬ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.&lt;/p&gt;&lt;p&gt;ಆನೆ ದಾಳಿ ಸಮಸ್ಯೆ ಪರಿಹರಿಸಲು ಆನೆ ವಿಹಾರ ಧಾಮ ಮಾಡುವ ಕುರಿತು ಸರ್ಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವಲ್ಲಿ ಸಮಸ್ಯೆಯಾಗಿದೆ. ಅದನ್ನು ಪರಿಹರಿಸಿ ಆನೆಧಾಮ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ವಿವರಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/minister-eshwar-khandre-says-that-karnataka-govt-considering-de-fertilization-of-wild-animals-rav/articleshow-yup7k71"/>
        </item>
        <item>
            <title><![CDATA[ಬೆಂಗಳೂರು: ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ! ಸಿಸಿಟಿವಿ ದೃಶ್ಯ ನೋಡಿದ್ರೆ ಕಣ್ಣೀರು ಬರುತ್ತೆ]]></title>
            <link>https://kannada.asianetnews.com/bengaluru-urban/bengaluru-toddler-falls-from-third-floor-in-nayandahalli-cctv-footage-viral-san/articleshow-d4aheb0</link>
            <guid isPermaLink="true">https://kannada.asianetnews.com/bengaluru-urban/bengaluru-toddler-falls-from-third-floor-in-nayandahalli-cctv-footage-viral-san/articleshow-d4aheb0</guid>
            <pubDate>Thu, 09 Apr 2026 09:49:01 +0530</pubDate>
            <description><![CDATA[&lt;p&gt;ಬೆಂಗಳೂರಿನ ನಾಯಂಡಹಳ್ಳಿಯಲ್ಲಿ, ಒಂದೂವರೆ ವರ್ಷದ ಮಗುವೊಂದು ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿರುವ ಮಗು ಸದ್ಯ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knr54r49qh90psz8rc8ckeyg,imgname-banglore-baby-1775705940105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9): &lt;/strong&gt;ಸಿಲಿಕಾನ್ ಸಿಟಿಯಲ್ಲಿ ಪೋಷಕರ ಎದೆನಡುಗಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಮನೆಯೊಳಗೆ ಆಟವಾಡುತ್ತಿದ್ದ ಪುಟ್ಟ ಮಗುವೊಂದು ಆಯತಪ್ಪಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದು, ಪ್ರಸ್ತುತ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ನಾಯಂಡಹಳ್ಳಿಯಲ್ಲಿ ವಾಸವಾಗಿರುವ ನವೀನ್ ಮತ್ತು ಜಯಶ್ರೀ ದಂಪತಿಯ ಒಂದೂವರೆ ವರ್ಷದ ಪುತ್ರಿ ಸಹನಾ ಏಪ್ರಿಲ್ 6ರಂದು ಮನೆಯಲ್ಲಿ ಆಟವಾಡುತ್ತಿದ್ದಳು. ಆಟದ ಭರದಲ್ಲಿ ಮನೆಯ ಮುಖ್ಯ ಬಾಗಿಲು ದಾಟಿ ಹೊರಬಂದ ಮಗು, ವರಾಂಡದಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿದೆ.&lt;/p&gt;&lt;h2&gt;&lt;strong&gt;ಕಣ್ಣಮುಂದೆಯೇ ಬಿತ್ತು ಮಗು; ಮೂರ್ಛೆ ಹೋದ ತಾಯಿ&lt;/strong&gt;&lt;/h2&gt;&lt;p&gt;ಮಗು ಮೇಲೆಂದ ಕೆಳಕ್ಕೆ ಬೀಳುತ್ತಿದ್ದಂತೆಯೇ ತಲೆಗೆ ಗಂಭೀರ ಗಾಯಗಳಾಗಿವೆ. ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ತಾಯಿ ಜಯಶ್ರೀ, ಆಘಾತ ತಾಳಲಾರದೆ ರಸ್ತೆಯಲ್ಲೇ ಮೂರ್ಛೆ ಹೋಗಿದ್ದಾರೆ. ಈ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್&zwnj;ಗೆ ಲಭ್ಯವಾಗಿದೆ.&lt;/p&gt;&lt;h2&gt;&lt;strong&gt;ಆಸ್ಪತ್ರೆಯಲ್ಲಿ ಚಿಕಿತ್ಸೆ&lt;/strong&gt;&lt;/h2&gt;&lt;p&gt;ಮಗುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಬಸವನಗುಡಿಯ ರಂಗದೊರೈ ಆಸ್ಪತ್ರೆಯ ಐಸಿಯು (ICU) ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಪೋಷಕರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ದಂಪತಿಗೆ ಸಹನಾ ಏಕೈಕ ಪುತ್ರಿ. ಪ್ರಸ್ತುತ ಮಗುವಿನ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;h2&gt;&lt;strong&gt;ಆಕಸ್ಮಿಕವಾಗಿ ಆದ ಘಟನೆ, ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದ ಪತಿ&lt;/strong&gt;&lt;/h2&gt;&lt;p&gt;ಘಟನೆಯ ಕುರಿತು ಮಗುವಿನ ತಂದೆ ನವೀನ್&zwnj; ಮಾತನಾಡಿದ್ದು, 'ಮನೆಯ ಮೊದಲನೇ ಮಹಡಿಯಿಂದ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಮಗು ಬಿದ್ದ ತಕ್ಷಣ ಅದರ ತಲೆಗೆ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅದೃಷ್ಟವಶಾತ್ ತಲೆಯನ್ನು ಹೊರತುಪಡಿಸಿ ದೇಹದ ಬೇರೆ ಯಾವುದೇ ಭಾಗಕ್ಕೆ ಪೆಟ್ಟಾಗಿಲ್ಲ. ಮಗುವಿನ ತಲೆಗೆ ಮೂರು ಹೊಲಿಗೆಗಳನ್ನು (Stitches) ಹಾಕಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಮಗು ಈಗ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ಭರವಸೆ ನೀಡಿದ್ದಾರೆ&quot; ಎಂದು ಆಟೋ ಚಾಲಕರಾಗಿರುವ ನವೀನ್ ತಿಳಿಸಿದ್ದಾರೆ.&lt;/p&gt;&lt;p&gt;ಘಟನೆ ನಡೆದ ಸಮಯದ ಬಗ್ಗೆ ವಿವರಿಸಿದ ಅವರು, &quot;ನನ್ನ ಪತ್ನಿ ಅಡುಗೆ ಮನೆಯಲ್ಲಿ ಹಾಲು ಕಾಯಿಸಲು ಇಟ್ಟಿದ್ದರು. ಹಾಲಿನ ಉರಿ ಕಡಿಮೆ ಮಾಡಲು ಅವರು ಅಡುಗೆ ಮನೆಗೆ ಹೋದ ಕೆಲವೇ ಕ್ಷಣಗಳಲ್ಲಿ ಈ ಅನಾಹುತ ಸಂಭವಿಸಿದೆ. ಮನೆಯ ಹೊರಗಡೆ ಒಂದು ಕುರ್ಚಿ ಇತ್ತು, ಮಗು ಆಟವಾಡುತ್ತಾ ಆ ಕುರ್ಚಿಯ ಮೇಲೆ ಹತ್ತಿದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ನಮಗೆ ಇರುವುದು ಇದೊಂದೇ ಮಗು. ಮಗು ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ನನ್ನ ಪತ್ನಿಗೆ ಆಘಾತವಾಗಿ, ಬಿಪಿ ಕಡಿಮೆಯಾಗಿ ರಸ್ತೆಯಲ್ಲೇ ಕುಸಿದು ಬಿದ್ದಿದ್ದರು. ಈಗ ಪತ್ನಿ ಮತ್ತು ಮಗು ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಆಕಸ್ಮಿಕವಾಗಿ ನಡೆದ ಘಟನೆ ಇದು&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Could This Have Been Prevented? Questions Raised Over Parental SupervisionA deeply distressing incident has occurred in the Nayandahalli area of Bengaluru. A one-and-a-half-year-old baby girl, who was playing at home, accidentally stepped out through the main door and fell from&hellip; pic.twitter.com/8DAJMg3Mnm&lt;/p&gt;&lt;p&gt;&mdash; Karnataka Portfolio (@karnatakaportf) April 9, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-toddler-falls-from-third-floor-in-nayandahalli-cctv-footage-viral-san/articleshow-d4aheb0"/>
        </item>
        <item>
            <title><![CDATA[Karnataka By-election 2026: ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರ ಕೇಳಿದ ಚುನಾವಣಾ ಆಯೋಗದ ನಡೆಗೆ ಸಿಎಂ ಕಚೇರಿ ಕಿಡಿ]]></title>
            <link>https://kannada.asianetnews.com/politics/karnataka-by-election-2026-cm-slams-bjp-election-commission-for-notice-about-guarantee-schemes/articleshow-1z3eddb</link>
            <guid isPermaLink="true">https://kannada.asianetnews.com/politics/karnataka-by-election-2026-cm-slams-bjp-election-commission-for-notice-about-guarantee-schemes/articleshow-1z3eddb</guid>
            <pubDate>Thu, 09 Apr 2026 08:25:04 +0530</pubDate>
            <description><![CDATA[&lt;p&gt;ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರ ಕೇಳಿರುವ ಚುನಾವಣಾ ಆಯೋಗದ ಕ್ರಮವನ್ನು ಮುಖ್ಯಮಂತ್ರಿಗಳ ಕಚೇರಿ ಖಂಡಿಸಿದೆ. ಇದು ಬಿಜೆಪಿ ಪ್ರೇರಿತ ರಾಜಕೀಯ ದಾಳಿಯಾಗಿದ್ದು, ಆಯೋಗವು ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kjh6cdyp4ctd2hcjcaa601pg,imgname-cm-siddaramaiah--1772251133910.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9):&lt;/strong&gt; ರಾಜ್ಯದ ಗ್ಯಾರಂಟಿ ಯೋಜನೆ ಗುರಿಯಾಗಿಸಿ ಬಿಜೆಪಿ ಮಾಡುತ್ತಿರುವುದು ರಾಜಕೀಯ ದಾಳಿಯಲ್ಲ. ಬಡವರ, ಮಹಿಳೆಯರ ಹಾಗೂ ಕರ್ನಾಟಕ ರಾಜ್ಯದ ವಿರುದ್ಧ ನಡೆಸುತ್ತಿರುವ ಪರೋಕ್ಷ ದಾಳಿ. ಈ ವಿಚಾರದಲ್ಲಿ ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಆಕ್ರೋಶ ವ್ಯಕ್ತಪಡಿಸಿದೆ.&lt;/p&gt;&lt;p&gt;ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಭಾರತದ ಚುನಾವಣಾ ಆಯೋಗವು, ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳಡಿ ಬಿಡುಗಡೆಯಾದ ನಿಧಿಗಳ ವಿವರ ಕೇಳಿದೆ.&lt;/p&gt;&lt;p&gt;ಈ ಬಗ್ಗೆ ಮಾಧ್ಯಮ ಹೇಳಿಕೆ ಮೂಲಕ ಆಕ್ರೋಶ ಹೊರ ಹಾಕಿರುವ ಮುಖ್ಯಮಂತ್ರಿಗಳ ಕಚೇರಿ, &lsquo;ನಮ್ಮ ಗ್ಯಾರಂಟಿ ಯೋಜನೆಗಳು ಈ ಉಪಚುನಾವಣೆ ಸಮಯದಲ್ಲಿ ಜಾರಿಯಾದವುಗಳಲ್ಲ, 2023ರಿಂದಲೂ ಈ ಯೋಜನೆಗಳಡಿ ರಾಜ್ಯದ ಎಲ್ಲ ಫಲಾನುಭವಿಗಳ ಖಾತೆಗಳಿಗೆ ನಿಯಮಿತವಾಗಿ, ಪಾರದರ್ಶಕವಾಗಿ ಹಣ ವರ್ಗಾವಣೆಯಾಗುತ್ತಿದೆ. ಈ ಯೋಜನೆಗಳು ಆಡಳಿತದ ಭಾಗವೇ ಹೊರತು, ಮತದಾರರನ್ನು ಸೆಳೆಯುವ ಕಾರ್ಯಕ್ರಮಗಳಲ್ಲ&rsquo; ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಬಿಜೆಪಿಯದ್ದು ಇಬ್ಗಗೆಯ ನೀತಿ:&lt;/h2&gt;&lt;p&gt;ಬಿಜೆಪಿ ಗ್ಯಾರಂಟಿ ಯೋಜನೆಗಳ ಬಗ್ಗೆ ಇಬ್ಬಗೆ ನೀತಿಯ ಧೋರಣೆ ಹೊಂದಿದೆ. ಒಂದು ಕಡೆ ರಾಜ್ಯದ ಗ್ಯಾರಂಟಿಗಳನ್ನು &lsquo;ಬಿಟ್ಟಿ ಭಾಗ್ಯ&rsquo; ಎನ್ನುವ ಅದೇ ಬಿಜೆಪಿ ಬೇರೆ ರಾಜ್ಯಗಳಲ್ಲಿ ನಮ್ಮ ಗ್ಯಾರಂಟಿಗಳನ್ನು ಅನುಸರಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಲಾಗಿದೆ.&lt;/p&gt;&lt;h3&gt;ಆಯೋಗದ ನಡೆ ಅನುಮಾನಾಸ್ಪದ:&lt;/h3&gt;&lt;p&gt;ಈ ವಿಚಾರವಾಗಿ ಚುನಾವಣಾ ಆಯೋಗ ಅನುಸರಿಸುತ್ತಿರುವ ನೀತಿ ಅನುಮಾನಾಸ್ಪದವಾಗಿದೆ. ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನ ನಗದು ವರ್ಗಾವಣೆ ಯೋಜನೆ ಪ್ರಕಟಿಸಿ ಅನುಷ್ಠಾನಗೊಳಿಸಿದ್ದಾರೆ. ಬಹಿರಂಗವಾಗಿ ಮತದಾರರಿಗೆ ನೇರವಾಗಿ ಯೋಜನೆಗಳ ಲಾಭವನ್ನು ವರ್ಗಾವಣೆ ಮಾಡಲಾಗಿದೆ.&lt;/p&gt;&lt;p&gt;ಆದರೂ ಚುನಾವಣಾ ಆಯೋಗ ಮೌನವಹಿಸಿ ಕಣ್ಣು ಮುಚ್ಚಿಕೊಂಡಿತ್ತು. ಅದೇ ರಾಜ್ಯದಲ್ಲಿ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ಈ ಇಬ್ಬಗೆಯ ನೀತಿ ಚುನಾವಣಾ ಆಯೋಗದ ಪಕ್ಷಪಾತವನ್ನು ಬಯಲು ಮಾಡುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ಕಿಡಿಕಾರಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-by-election-2026-cm-slams-bjp-election-commission-for-notice-about-guarantee-schemes/articleshow-1z3eddb"/>
        </item>
        <item>
            <title><![CDATA[ಬಿಜೆಪಿ ಆರೆಸ್ಸೆಸ್ ಬಗ್ಗೆ ವಿಷಕಾರುವ ಅಪ್ಪ-ಮಗ ಇಬ್ಬರನ್ನೂ  ದ್ವೇಷ ಭಾಷಣ ಕಾಯ್ದೆಯಡಿ ತಿಹಾರ್‌ ಜೈಲ್‌ಗೆ ಕಳಿಸಬೇಕು: ಛಲವಾದಿ ಕಿಡಿ]]></title>
            <link>https://kannada.asianetnews.com/politics/aicc-president-mallikarjun-kharge-s-mental-health-is-not-good-says-chalawadi-narayanaswamy-rav/articleshow-6zgqrpf</link>
            <guid isPermaLink="true">https://kannada.asianetnews.com/politics/aicc-president-mallikarjun-kharge-s-mental-health-is-not-good-says-chalawadi-narayanaswamy-rav/articleshow-6zgqrpf</guid>
            <pubDate>Thu, 09 Apr 2026 07:52:12 +0530</pubDate>
            <description><![CDATA[ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಚೋದನಾಕಾರಿ ಹೇಳಿಕೆಯನ್ನು ಖಂಡಿಸಿರುವ ಛಲವಾದಿ ನಾರಾಯಣಸ್ವಾಮಿ, ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದಿದ್ದಾರೆ. ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ಇಬ್ಬರನ್ನೂ ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmseaqcqq4kf4akb52qx4a4f,imgname-chalavadi-narayanaswamy-1774675385751.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.9): &lt;/strong&gt;ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾನಸಿಕ ಆರೋಗ್ಯ ಸರಿ ಇಲ್ಲ. ಅವರು ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತೀಕ್ಷ್ಮವಾಗಿ ಹೇಳಿದ್ದಾರೆ.&lt;/p&gt;&lt;p&gt;ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಅರಳು-ಮರುಳು ರೀತಿ ಮಾತನಾಡಬಾರದು. ಇವರ ವಿರುದ್ಧ ದೇಶದಾದ್ಯಂತ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಕೊಲ್ಲಲು ಪ್ರಚೋದನೆ ನೀಡುವುದು ಸರಿ ಅಲ್ಲ ಎಂದರು.&lt;/p&gt;&lt;p&gt;&lt;strong&gt;ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ&lt;/strong&gt;ಗೆ ಅಂಗೀಕಾರ ದೊರೆತಿದೆ. ಆ ಮಸೂದೆ ಅನ್ವಯ ಖರ್ಗೆ ಅವರ ರೀತಿ ಪ್ರಚೋದನಾಕಾರಿಯಾಗಿ ಮಾತನಾಡಿದರೆ ಪ್ರಕರಣ ದಾಖಲು ಮಾಡಬಹುದು. ಹೀಗಾಗಿ ಬಿಜೆಪಿ ದೂರು ನೀಡಿದೆ. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.&lt;/p&gt;&lt;h2&gt;ಬೇವಿನ ಕಾಯಿಗೆ ಹಾಗಲ ಕಾಯಿ ಸಾಕ್ಷಿ&lt;/h2&gt;&lt;p&gt;ರಜಾಕರಿಂದ ತಮ್ಮ ಕುಟುಂಬದ ಮೇಲೆ ದಾಳಿ ನಡೆದಿದೆ ಎಂದು ಖರ್ಗೆ ಅವರೇ ಹೇಳಿದ್ದಾರೆ. ತಮ್ಮ ಮನೆತನ ಹಾಳು ಮಾಡಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಬಿಜೆಪಿ ಮತ್ತು ಆರ್&zwnj;ಎಸ್&zwnj;ಎಸ್&zwnj; ವಿರುದ್ಧ ಮಾತನಾಡುತ್ತಿದ್ದಾರೆ. ಇವರ ಹೇಳಿಕೆಗೆ ಮಗ ಪ್ರಿಯಾಂಕ್&zwnj; ಖರ್ಗೆ ಬೆಂಬಲ ನೀಡಿದ್ದಾರೆ. ಇದು ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಇದ್ದಂತೆ. ಇವರಿಬ್ಬರ ಮನಸ್ಥಿತಿ ಒಂದೇ ಆಗಿದೆ ಎಂದು ಇದೇ ವೇಳೆ ಛಲವಾದಿ ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ಅಪ್ಪ-ಮಗ ತಿಹಾರ್&zwnj; ಜೈಲಿಗೆ:&lt;/h3&gt;&lt;p&gt;ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಕಾಂಗ್ರೆಸ್&zwj;ನಿಂದ ಯಾರೂ ಬಂದಿಲ್ಲ. ಪ್ರಿಯಾಂಕ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್&zwj;ನಲ್ಲಿ ಇಬ್ಬರೂ ಮೂಲೆಗುಂಪಾಗಿದ್ದಾರೆ. ಅಪ್ಪ ಮತ್ತು ಮಗನ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇದೆ. ಈ ಬ್ಬರ ವಿರುದ್ಧ ಕೇಂದ್ರ ಸರ್ಕಾರವು ಸ್ವಯಂಪ್ರೇರಿತ ದೂರು ದಾಖಲಿಸಿ ತಿಹಾರ್ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;h3&gt;ಜಾತಿ ಬಿಟ್ಟು ಮಾತನಾಡಿ:&lt;/h3&gt;&lt;p&gt;ವಯಸ್ಸಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಶ್ರಾಂತಿ ಅವಶ್ಯಕತೆ ಇದೆ. ಜೈಲಿಗೆ ಹಾಕಿದರೆ ವಿಶ್ರಾಂತಿ ಸಿಗಲಿದೆ. ಮಗ ಅಲ್ಲೇ ಇದ್ದರೆ ಸಹಾಯವಾಗುತ್ತೆ. ಮಾತೆತ್ತಿದರೆ ತಾವು ದಲಿತರು ಅಂತ ಖರ್ಗೆ ಹೇಳುತ್ತಾರೆ. ದಲಿತ ಅನ್ನೋ ಕಾರಣಕ್ಕೇ ಏನು ಬೇಕಾದರೂ ಮಾತನಾಡಬಾರದು. ಬೇರೆಯವರು ನಿಂದಿಸಿದರೆ ನೀವು ದಲಿತ ಕಾರ್ಡ್ ಚಲಾವಣೆ ಮಾಡುತ್ತೀರಿ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಮೇಲೆ ಜಾತಿ ಬಿಟ್ಟು ಮಾತನಾಡಬೇಕು. ಜಾತಿ ಟ್ಯಾಗ್ ಮಾಡಿಕೊಂಡು ಮಾತನಾಡಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/aicc-president-mallikarjun-kharge-s-mental-health-is-not-good-says-chalawadi-narayanaswamy-rav/articleshow-6zgqrpf"/>
        </item>
        <item>
            <title><![CDATA[ರಾಜ್ಯದ 2 ಕ್ಷೇತ್ರಕ್ಕೆ ಇಂದು ಉಪಕದನ - ದಾವಣಗೆರೆ, ಬಾಗಲಕೋಟೇಲಿ ಮತದಾನ । ಮೇ 4ಕ್ಕೆ ಫಲಿತಾಂಶ , ಕಾಂಗ್ರೆಸ್‌- ಬಿಜೆಪಿ ನಡುವೆ ಭರ್ಜರಿ ಪೈಪೋಟಿ]]></title>
            <link>https://kannada.asianetnews.com/politics/karnataka-by-election-2026-south-davanagere-bagalkot-by-elections-who-will-be-lucky/articleshow-dd59p4o</link>
            <guid isPermaLink="true">https://kannada.asianetnews.com/politics/karnataka-by-election-2026-south-davanagere-bagalkot-by-elections-who-will-be-lucky/articleshow-dd59p4o</guid>
            <pubDate>Thu, 09 Apr 2026 04:37:16 +0530</pubDate>
            <description><![CDATA[&lt;p&gt;ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಕಾಂಗ್ರೆಸ್ ಹಿರಿಯ ನಾಯಕರ ನಿಧನದಿಂದ ತೆರವಾದ ಈ ಕ್ಷೇತ್ರಗಳಲ್ಲಿ, ಅನುಕಂಪದ ಅಲೆ ಮತ್ತು ಸರ್ಕಾರದ ಗ್ಯಾರಂಟಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರಲಿವೆಯೇ?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knph43z5be0cakf189wa2a9r,imgname-karnataka-bye-election-2026--1775651393509.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ/ಬಾಗಲಕೋಟೆ (ಏ.9): &lt;/strong&gt;ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.&lt;/p&gt;&lt;p&gt;ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಪೊಲೀಸ್&zwnj; ಬಂದೋಬಸ್ತ್&zwnj; ಏರ್ಪಡಿಸಲಾಗಿದೆ. ಮೇ 4ರಂದು ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶಕ್ಕಾಗಿ ಸುಮಾರು 1 ತಿಂಗಳು ಕಾಯಬೇಕಿದೆ.&lt;/p&gt;&lt;h2&gt;ಕಾಂಗ್ರೆಸ್&zwnj; ವರ್ಸಸ್&zwnj; ಬಿಜೆಪಿ:&lt;/h2&gt;&lt;p&gt;ಕಾಂಗ್ರೆಸ್&zwnj;ನ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣಕ್ಕೆ, ಎಚ್&zwnj;.ವೈ.ಮೇಟಿ ಅವರ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಎರಡೂ ಕಡೆ ಕಾಂಗ್ರೆಸ್&zwnj; ಹಾಗೂ ಬಿಜೆಪಿ ನಡುವೆ ನೇರಾನೇರ ಸ್ಪರ್ಧೆಯಿದ್ದು, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್&zwnj;ನ ಸಮರ್ಥ ಎಂ.ಶಾಮನೂರು ಹಾಗೂ ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ನಡುವೆ ಜಿದ್ದಾಜಿದ್ದಿ ಕಾಳಗ ಏರ್ಪಟ್ಟಿದೆ.&lt;/p&gt;&lt;p&gt;ಬಾಗಲಕೋಟೆಯಲ್ಲಿ ಕಾಂಗ್ರೆಸ್&zwnj;ನ ಉಮೇಶ್&zwnj; ಮೇಟಿ ಹಾಗೂ ಬಿಜೆಪಿಯ ವೀರಣ್ಣ ಚರಂತಿಮಠ ನಡುವೆ ನೇರ ಫೈಟ್&zwnj; ನಡೆಯಲಿದೆ. ದಾವಣಗೆರೆ ದಕ್ಷಿಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಹಾಗೂ ಬಾಗಲಕೋಟೆಯಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 13 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಾಂಗ್ರೆಸ್&zwnj;ಗೆ ಬಂಡಾಯವಾಗಿ ಪಕ್ಷೇತರರಾಗಿ ಕಣದಲ್ಲಿ ಇರುವುದು ವಿಶೇಷ. ಇಲ್ಲಿ ಕಾಂಗ್ರೆಸ್&zwnj; ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್&zwnj; ಪೈಲ್ವಾನ್&zwnj; ಅವರು ಕಣದಿಂದ ನಿವೃತ್ತಿ ಘೋಷಿಸಿದ್ದರೂ ಇವಿಎಂನಲ್ಲಿ ಅವರ ಹೆಸರು ಇರಲಿದೆ.&lt;/p&gt;&lt;p&gt;ದಾವಣಗೆರೆ ದಕ್ಷಿಣದಲ್ಲಿ ಒಟ್ಟು 2,31,072 ಮತದಾರರಿದ್ದು, ಆ ಪೈಕಿ 1,13,399 ಪುರುಷರು, 1,17,690 ಮಹಿಳೆಯರು ಹಾಗೂ 43 ಇತರರು. ಕ್ಷೇತ್ರದಾದ್ಯಂತ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆಯಲ್ಲಿ ಒಟ್ಟು 2,59,797 ಮತದಾರರಿದ್ದು, ಆ ಪೈಕಿ 1,26,233 ಪುರುಷರು, 1,31,863 ಮಹಿಳೆಯರು ಹಾಗೂ 2973 ಇತರರು. ಒಟ್ಟು 332 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ&lt;/p&gt;&lt;h3&gt;ರಾಜಕೀಯ ಪ್ರತಿಷ್ಠೆಯ ಕಣ:&lt;/h3&gt;&lt;p&gt;ಕಾಂಗ್ರೆಸ್&zwnj;ನಲ್ಲಿ ಈ ಉಪಚುನಾವಣೆ ಕೊಂಚ ಗೊಂದಲಕ್ಕೆ ಕಾರಣವಾಗಿದ್ದುದು ಟಿಕೆಟ್ ಹಂಚಿಕೆಯ ವಿಚಾರದಲ್ಲಿ. ಬಾಗಲಕೋಟೆಯಲ್ಲಿ ಮೇಟಿ ಅವರ ಮಕ್ಕಳೇ, ಟಿಕೆಟ್&rsquo;ಗಾಗಿ ಫೈಟ್ ಮಾಡುತ್ತಿದ್ದರು. ಇನ್ನೊಂದು ಕಡೆ, ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಬೇಕೆಂದು ದೊಡ್ಡ ಡ್ರಾಮಾವೇ ನಡೆದು ಹೋಯಿತು. ಕೊನೆಗೆ, ಎರಡೂ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ, ಆಯಾಯ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಯಿತು.&lt;/p&gt;&lt;p&gt;ಈ ಮಧ್ಯೆ, ಮುನಿಸು ಮರೆತು ಸಚಿವ ಜಮೀರ್&zwnj; ಪ್ರಚಾರ ನಡೆಸಿರುವುದು, ಸಿದ್ದು-ಡಿಕೆಶಿಯಾದಿಯಾಗಿ ಇಡೀ ಸಂಪುಟದ ಸದಸ್ಯರು ಪ್ರಚಾರ ನಡೆಸಿರುವುದು, ಸರ್ಕಾರದ ಗ್ಯಾರಂಟಿ ಯೋಜನೆಗಳು, ಆಡಳಿತ ಪಕ್ಷಕ್ಕಿರುವ ಲಾಭಗಳು ಕಾಂಗ್ರೆಸ್ ಜಯಕ್ಕೆ ಕಾರಣವಾಗಲಿವೆ ಎಂಬುದು ಕಾಂಗ್ರೆಸ್&zwnj; ನಾಯಕರ ಆಶಯ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪ, ಪ್ರಹ್ಲಾದ್&zwnj; ಜೋಶಿ ಸೇರಿ ಬಿಜೆಪಿಯ ಹಿರಿಯ ನಾಯಕರು ಪ್ರಚಾರ ನಡೆಸಿರುವುದು, ಜೆಡಿಎಸ್&zwnj; ನಾಯಕ, ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಪ್ರಚಾರಕ್ಕೆ ಆಗಮಿಸಿರುವುದು, ಬಾಗಲಕೋಟೆಯಲ್ಲಿ ಅಭ್ಯರ್ಥಿ ಚರಂತಿಮಠ, ಪಿ.ಎಚ್&zwnj;.ಪೂಜಾರ ಮುನಿಸು ಮರೆತು ಒಂದಾಗಿರುವುದು, ಚರಂತಿಮಠ ಪರ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ ಪ್ರಚಾರ ನಡೆಸಿರುವುದು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್&zwnj; ವಿರುದ್ಧ ಮುನಿಸಿಕೊಂಡಿರುವುದು ಗೆಲುವಿಗೆ ಸಹಕಾರಿ ಎಂಬುದು ಬಿಜೆಪಿ ನಾಯಕರ ಆಶಯ.&lt;/p&gt;&lt;p&gt;ಚುನಾವಣಾ ಫಲಿತಾಂಶ ಸರ್ಕಾರದ ಉಳಿವಿಗಿಂತ ಹೆಚ್ಚಾಗಿ ರಾಜಕೀಯ ಪ್ರತಿಷ್ಠೆಯ ಕಣವಾಗಿದ್ದು, ಗ್ಯಾರಂಟಿ ಅಲೆ ಹಾಗೂ ಅನುಕಂಪದ ನಡುವೆ ಮತದಾರ ಪ್ರಭು ಯಾರಿಗೆ ಜೈ ಎನ್ನುತ್ತಾನೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;p&gt;ಮತದಾನದ ಸಮಯ: ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ.&lt;/p&gt;&lt;p&gt;ಮತ ಎಣಿಕೆ: ಮೇ 4.&lt;/p&gt;&lt;p&gt;&lt;strong&gt;ಕ್ಷೇತ್ರ: ದಾವಣಗೆರೆ ದಕ್ಷಿಣ.&lt;/strong&gt;&lt;/p&gt;&lt;p&gt;ಒಟ್ಟು ಅಭ್ಯರ್ಥಿಗಳು : 25&lt;/p&gt;&lt;p&gt;&lt;strong&gt;ಬಿಜೆಪಿ: ಶ್ರೀನಿವಾಸ ದಾಸ ಕರಿಯಪ್ಪ.&lt;/strong&gt;&lt;/p&gt;&lt;p&gt;&lt;strong&gt;ಕಾಂಗ್ರೆಸ್&zwnj; : ಸಮರ್ಥ ಎಂ. ಶಾಮನೂರು.&lt;/strong&gt;&lt;/p&gt;&lt;p&gt;ಒಟ್ಟು ಮತದಾರರು: 2,31,072.&lt;/p&gt;&lt;p&gt;1,13,399 ಪುರುಷರು , 1,17,690 ಮಹಿಳೆಯರು ಹಾಗೂ 43 ಇತರರು.&lt;/p&gt;&lt;p&gt;ಮತಗಟ್ಟೆ: 284.&lt;/p&gt;&lt;p&gt;+++++++&lt;/p&gt;&lt;p&gt;&lt;strong&gt;ಕ್ಷೇತ್ರ : ಬಾಗಲಕೋಟೆ.&lt;/strong&gt;&lt;/p&gt;&lt;p&gt;ಒಟ್ಟು ಅಭ್ಯರ್ಥಿಗಳು : 9&lt;/p&gt;&lt;p&gt;ಬಿಜೆಪಿ: ವೀರಣ್ಣ ಚರಂತಿಮಠ.&lt;/p&gt;&lt;p&gt;ಕಾಂಗ್ರೆಸ್&zwnj; : ಉಮೇಶ್&zwnj; ಮೇಟಿ.&lt;/p&gt;&lt;p&gt;ಒಟ್ಟು ಮತದಾರರು: 2,59,797.&lt;/p&gt;&lt;p&gt;ಒಟ್ಟು ಮತದಾರರು: 2,58,118.&lt;/p&gt;&lt;p&gt;1,26,233 ಪುರುಷರು, 1,31,863 ಮಹಿಳೆಯರು ಹಾಗೂ 2973 ಇತರರು.&lt;/p&gt;&lt;p&gt;ಮತಗಟ್ಟೆ: 332.&lt;/p&gt;&lt;p&gt;--&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-by-election-2026-south-davanagere-bagalkot-by-elections-who-will-be-lucky/articleshow-dd59p4o"/>
        </item>
        <item>
            <title><![CDATA[ಕಣ್ಣೆದುರೇ ಮಗ ನೀರುಪಾಲು, ರಕ್ಷಿಸಲು ಹೋದವರೂ ಮರಳಲೇ ಇಲ್ಲ: ಭೂತನಾಳ ಕೆರೆಯಲ್ಲಿ ಬೆಂಗಳೂರು ಕುಟುಂಬದ ಮೂವರ ಜಲಸಮಾಧಿ!]]></title>
            <link>https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7</link>
            <guid isPermaLink="true">https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7</guid>
            <pubDate>Wed, 08 Apr 2026 21:09:31 +0530</pubDate>
            <description><![CDATA[ವಿಜಯಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಐತಿಹಾಸಿಕ ಭೂತನಾಳ ಕೆರೆಯಲ್ಲಿ ದುರಂತಕ್ಕೆ ಈಡಾಗಿದೆ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ಇಬ್ಬರು ಸೇರಿದಂತೆ ಒಟ್ಟು ಮೂವರು ಜಲಸಮಾಧಿಯಾಗಿದ್ದಾರೆ. ಈ ಘಟನೆಯು ಪ್ರವಾಸದ ಸಂತಸವನ್ನು ಶೋಕದಲ್ಲಿ ಮುಳುಗಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knpvvs9sjtsysmcegwwsv42p,imgname-bengaluru-family-trip-end-tragedy-1775662654777.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.08): ಐ&lt;/strong&gt;ತಿಹಾಸಿಕ ನಗರಿ ವಿಜಯಪುರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ ಕುಟುಂಬವೊಂದು ಜಲಸಮಾಧಿಯಾದ ದಾರುಣ ಘಟನೆ ಸಂಭವಿಸಿದೆ. ನಗರದ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆ ವೀಕ್ಷಿಸಲು ತೆರಳಿದ್ದ ವೇಳೆ, ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಇಬ್ಬರು ಪುರುಷರು ಸೇರಿದಂತೆ ಒಟ್ಟು ಮೂವರು ಜೀವ ಕಳೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಪ್ರವಾಸದ ಖುಷಿ ತಂದ ದುರಂತ:&lt;/strong&gt;&lt;/h3&gt;&lt;p&gt;ಮೃತಪಟ್ಟವರು ಬೆಂಗಳೂರಿನ ಆರ್.ಟಿ. ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಮೊಹಮ್ಮದ್ ಹಯಾತ್ (12), ಹೈದರ್ ಪಾಶಾ (32) ಮತ್ತು ಅಬ್ದುಲ್ ಖುದ್ದುಸ್ (35) ಮೃತಪಟ್ಟ ದುರ್ದೈವಿಗಳು. ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಒಟ್ಟು 14 ಜನರ ತಂಡ ಪ್ರವಾಸಕ್ಕಾಗಿ ವಿಜಯಪುರಕ್ಕೆ ಆಗಮಿಸಿತ್ತು. ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಾ ಭೂತನಾಳ ಕೆರೆಯ ಬಳಿ ಬಂದಾಗ ಈ ಘೋರ ಅಚಾತುರ್ಯ ನಡೆದಿದೆ.&lt;/p&gt;&lt;h2&gt;&lt;strong&gt;ರಕ್ಷಣೆಗೆ ಹೋಗಿ ಪ್ರಾಣ ಕಳೆದುಕೊಂಡರು:&lt;/strong&gt;&lt;/h2&gt;&lt;p&gt;ಕೆರೆಯ ದಂಡೆಯ ಮೇಲೆ ಕುಟುಂಬಸ್ಥರೆಲ್ಲಾ ಸಂಭ್ರಮಿಸುತ್ತಿದ್ದಾಗ, 12 ವರ್ಷದ ಬಾಲಕ ಮೊಹಮ್ಮದ್ ಹಯಾತ್ ಆಟವಾಡುತ್ತಾ ಕೆರೆಯ ನೀರಿನಲ್ಲಿ ಇಳಿದಿದ್ದಾನೆ. ಆದರೆ ನೀರಿನ ಆಳ ತಿಳಿಯದ ಕಾರಣ ಆತ ಮುಳುಗಲು ಪ್ರಾರಂಭಿಸಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಹೈದರ್ ಪಾಶಾ ಮತ್ತು ಅಬ್ದುಲ್ ಖುದ್ದುಸ್ ಬಾಲಕನನ್ನು ರಕ್ಷಿಸಲು ಕೆರೆಗೆ ಧುಮುಕಿದ್ದಾರೆ. ದುರದೃಷ್ಟವಶಾತ್, ನೀರಿನ ಸೆಳೆತಕ್ಕೆ ಸಿಲುಕಿ ಈ ಮೂವರೂ ಜಲಸಮಾಧಿಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳಕ್ಕೆ ಧಾವಿಸಿದ ಪೊಲೀಸ್ ಮತ್ತು ಅಗ್ನಿಶಾಮಕ ದಳ:&lt;/strong&gt;&lt;/h3&gt;&lt;p&gt;ಘಟನೆ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕುಟುಂಬಸ್ಥರ ಆರ್ತನಾದ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಕೂಡಲೇ ಆದರ್ಶ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದರು. ಸತತ ಪ್ರಯತ್ನದ ನಂತರ ಮೂವರ ದೇಹಗಳನ್ನು ನೀರಿನಿಂದ ಹೊರತೆಗೆಯಲಾಯಿತು.&lt;/p&gt;&lt;h2&gt;&lt;strong&gt;ಮಾರ್ಗ ಮಧ್ಯೆ ಕೊನೆಯುಸಿರು:&lt;/strong&gt;&lt;/h2&gt;&lt;p&gt;ನೀರಿನಿಂದ ಹೊರತೆಗೆದಾಗ ಬಾಲಕ ಮೊಹಮ್ಮದ್ ಹಯಾತ್ ಹಾಗೂ ಹೈದರ್ ಪಾಶಾ ಈಗಾಗಲೇ ಮೃತಪಟ್ಟಿದ್ದರು. ಆದರೆ ಅಬ್ದುಲ್ ಖುದ್ದುಸ್ ಅವರಲ್ಲಿ ಸ್ವಲ್ಪ ಉಸಿರಾಟವಿದ್ದ ಕಾರಣ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಸದ್ಯ ಮೂವರ ಮೃತದೇಹಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ:&lt;/strong&gt;&lt;/h3&gt;&lt;p&gt;ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೆದುರೇ ಕುಟುಂಬದ ಮೂವರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ನೋಡಲು ಅಸಾಧ್ಯವಾಗಿತ್ತು. ಪ್ರವಾಸದ ಸವಿನೆನಪುಗಳು ಇಡೀ ಕುಟುಂಬಕ್ಕೆ ಮರೆಯಲಾಗದ ನೋವಾಗಿ ಉಳಿದಿವೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vijayapura-bhutnal-lake-drowning-three-member-same-family-bengaluru-tourists-dead-sat/articleshow-x5hthn7"/>
        </item>
        <item>
            <title><![CDATA[ಇದು ಬೆಂಗಳೂರಲ್ಲಿ ಮಾತ್ರ, ಸಿಗ್ನಲ್‌ನಲ್ಲಿ ನಿಂತಾಗ ಆಟೋ ಚಾಲಕನಿಂದ ಕ್ರಿಪ್ಟೋ ಟ್ರೇಡಿಂಗ್]]></title>
            <link>https://kannada.asianetnews.com/karnataka-districts/meters-to-markets-bengaluru-auto-driver-crypto-trading-at-traffic-signal/articleshow-z5vgm38</link>
            <guid isPermaLink="true">https://kannada.asianetnews.com/karnataka-districts/meters-to-markets-bengaluru-auto-driver-crypto-trading-at-traffic-signal/articleshow-z5vgm38</guid>
            <pubDate>Wed, 08 Apr 2026 15:53:11 +0530</pubDate>
            <description><![CDATA[&lt;p&gt;ಇದು ಬೆಂಗಳೂರಲ್ಲಿ ಮಾತ್ರ, ಸಿಗ್ನಲ್&zwnj;ನಲ್ಲಿ ನಿಂತಾದ ಆಟೋ ಚಾಲಕನಿಂದ ಕ್ರಿಪ್ಟೋ ಟ್ರೇಡಿಂಗ್, ಹಲವು ಬಾರಿ ಬೆಂಗಳೂರಿನ ಆಟೋ ಚಾಲಕರು ಟೆಕ್, ಆ್ಯಪ್ ಸೇರಿದಂತೆ ಹಲವು ಕಾರಣಗಳಿಂದ ಭಾರಿ ಸುದ್ದಿಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knp9tfts6tw0b0dp34qj8dsp,imgname-peak-bengaluru-1775643737945.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.08) &lt;/strong&gt;ಪೀಕ್ ಬೆಂಗಳೂರು ಮೂವ್ಮೆಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಗಳಿಸಿದೆ. ಬೆಂಗಳೂರಿನಲ್ಲಿ ನಡೆಯುವ ಹಲವು ಘಟನೆಗಳು, ವಿಶೇಷ ಸಂದರ್ಭಗಳ ವಿಡಿಯೋ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇತರ ನಗರಗಳಲ್ಲಿ ಆಟೋ ಚಾಲಕರಿಗಿಂತ ಬೆಂಗಳೂರು ಆಟೋ ಚಾಲಕರು ತಂತ್ರಜ್ಞಾನ ಸೇರಿದಂತೆ ಎಲ್ಲಾ ವಿಚಾರದಲ್ಲಿ ಮುಂದಿದಿದ್ದಾರೆ. ಹಲವು ಬಾರಿ ಇದು ಪೀಕ್ ಬೆಂಗಳೂರು ವೂವ್ಮೆಂಟ್ ಅಡಿಯಲ್ಲಿ ಸಾಬೀತಾಗಿದೆ. ಇದೀಗ ಬೆಂಗಳೂರಿನ ಆಟೋ ಚಾಲಕ ರೆಡ್ ಸಿಗ್ನಲ್ ಬಿದ್ದಾಗ ಮೊಬೈಲ್&zwnj;ನಲ್ಲಿ ಕ್ರಿಪ್ಟೋ ಟ್ರೇಡಿಂಗ್ ನಡೆಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಹಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, ಬೆಂಗಳೂರಿನ ಆಟೋ ಚಾಲಕರು ನೆಕ್ಸ್ಟ್ ಲೆವೆಲ್ ಎಂದಿದ್ದಾರೆ.&lt;/p&gt;&lt;p&gt;ಶ್ರೀನಿಧಿ ಅನ್ನೋ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಶ್ರೀನಿಧಿ ಬೆಂಗಳೂರಿನ ರಸ್ತೆ ಪ್ರಯಾಣದ ನಡುವೆ ವಿಶೇಷ ಹಾಗೂ ಕುತೂಹಲ ವಿಚಾರ ಕಣ್ಣಿಗೆ ಬಿದ್ದಿದೆ. ತಕ್ಷಣವೆ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಗೆ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.&lt;/p&gt;&lt;h2&gt;ಒಂದು ಕಡೆ ಟ್ಯಾಕ್ಸಿ ಮತ್ತೊಂದೆಡೆ ಟ್ರೇಡಿಂಗ್&lt;/h2&gt;&lt;p&gt;ವೆಗಾ ಸಿಟಿ ಮಾಲ್ ಬಳಿ ಸಿಗ್ನಲ್&zwnj;ನಲ್ಲಿ ರಾತ್ರಿ 8 ಗಂಟೆ ವೇಳೆಗೆ ಆಟೋ ಚಾಲಕ ಟ್ರೇಡಿಂಗ್&zwnj;ನಲ್ಲಿ ಬ್ಯೂಸಿಯಾಗಿರುವುದು ಪತ್ತೆಯಾಯಿತು ಎಂದು ಪೋಸ್ಟ್&zwnj;ನಲ್ಲಿ ಹೇಳಿಕೊಂಡಿದ್ದಾರೆ. ಆಟೋ ಚಾಲಕ ಉಬರ್ ಹಾಗೂ ಓಲಾ ಆ್ಯಪ್ ಮೂಲಕ ಬಾಡಿಗೆ ತೆರಳುತ್ತಿದ್ದಾನೆ. ಹೀಗಾಗಿ ತನ್ನ ಮೊಬೈಲ್&zwnj;ನಲ್ಲಿ ಸ್ಕ್ರೀನ್&zwnj;ನನ್ನು ಸ್ಪ್ಲಿಟ್ ಮಾಡಿದ್ದಾನೆ. ಅರ್ಧ ಭಾಗ ಟ್ಯಾಕ್ಸಿ ನೋಟಿಫಿಕೇಶನ್ ಮತ್ತೊಂದು ಅರ್ಧ ಭಾಗದಲ್ಲಿ ಕ್ಪಿಪ್ಟೊ ಕರೆನ್ಸಿ ಟ್ರೇಡಿಂಗ್ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.&lt;/p&gt;&lt;p&gt;ಶ್ರೀನಿಧಿ ತಮ್ಮ ಮೊಬೈಲ್&zwnj;ನಿಂದ ಈ ಕುತೂಹಲ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಮಧ್ಯಮ ವಯಸ್ಸಿನ ಆಟೋ ಚಾಲಕ ಸಿಗ್ನಲ್ ರೆಡ್ ಬಿದ್ದಾಗ ಇರುವ ಸಣ್ಣ ನಿಮಿಷಗಳ ಸಮಯದಲ್ಲಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್&zwnj;ನಲ್ಲಿ ತೊಡಗಿಸಿಕೊಂಡಿದ್ದಾನೆ. ವಯಸ್ಸು ಕೇವಲ ನಂಬರ್ ಮಾತ್ರ. ಸಿಲಿಕಾನ್ ಸಿಟಿಯ ಟ್ರಾಫಿಕ್ ನಡುವೆ ಆಟೋ ಚಾಲಕ ಜಾಗತಿಕ ಕ್ರಿಪ್ಟೋ ಮಾರುಕಟ್ಟೆ ಕಡೆಯೂ ಗಮನ ನೀಡಿದ್ದಾನೆ.&lt;/p&gt;&lt;p&gt;ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಹೊಸಬರಿಗಲ್ಲ. ಇಲ್ಲಿ ಪ್ರೋ ಆಗಿರಬೇಕು. ಇಲ್ಲದಿದ್ದರೆ ನೀವು ಶತಮಾನಗಳು ಹಳೆಯದಾಗುತ್ತೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಆಟೋ ಚಾಲಕರು ಇತರ ಎಲ್ಲರಿಗಿಂತ ಮುಂದಿದ್ದಾರೆ. ಇದಕ್ಕೆ ಹಲವು ಉದಾಹರಣೆಗಳ ಪೈಕಿ ಇದೂ ಒಂದು ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/meters-to-markets-bengaluru-auto-driver-crypto-trading-at-traffic-signal/articleshow-z5vgm38"/>
        </item>
        <item>
            <title><![CDATA[ಕನ್ನಡ ಪರ ಹೋರಾಟಗಾರನ ಬಂಧನಕ್ಕೆ ಇಂಗ್ಲಿಷ್‌ ವಾರಂಟ್, ಒಪ್ಪದ ವಾಟಾಳ್‌ರನ್ನು ರಿಕ್ಷಾದಲ್ಲಿ ಎತ್ತಾಕ್ಕೊಂಡು ಹೋದ ಪೊಲೀಸರು!]]></title>
            <link>https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp</link>
            <guid isPermaLink="true">https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp</guid>
            <pubDate>Wed, 08 Apr 2026 15:37:17 +0530</pubDate>
            <description><![CDATA[ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯವು ಅರೆಸ್ಟ್ ವಾರಂಟ್ ಹೊರಡಿಸಿತ್ತು. ಬಂಧನದ ವೇಳೆ ಪೊಲೀಸರು ಮತ್ತು ವಾಟಾಳ್ ನಡುವೆ ವಾಗ್ವಾದ ನಡೆದು, ಹೈಡ್ರಾಮ ಸೃಷ್ಟಿಯಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01knp8wwbbj32qc516twsq3m8f,imgname-vatal-nagaraj-arrest-1775642767723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆ, ಬಸವೇಶ್ವರನಗರ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ 2021ರಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಕೋರ್ಟ್ ಹಿಯರಿಂಗ್&zwnj;ಗಳಿಗೆ ಹಾಜರಾಗದೆ ಇದ್ದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಇದನ್ನು ಜಾರಿಗೊಳಿಸಲು ಬಸವೇಶ್ವರನಗರ ಪೊಲೀಸರು ಅವರ ಮನೆಗೆ ತೆರಳಿದ ವೇಳೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.&lt;/p&gt;&lt;p&gt;ಪೊಲೀಸರು ವಾರಂಟ್&zwnj;ನ ಸಾಫ್ಟ್ ಕಾಪಿಯನ್ನು ತೋರಿಸಿದಾಗ, ಹಾರ್ಡ್ ಕಾಪಿ ಇಲ್ಲದೆ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದರು. ನನ್ನನ್ನು ಬಂಧಿಸಲು ನಿಮ್ಮ ಬಳಿ ಸರಿಯಾದ ವಾರಂಟ್ ಇದೆಯೇ? ಯಾವ ಪ್ರಕರಣದಲ್ಲಿ ಬಂಧಿಸುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ನಾನು ಓಡಿ ಹೋಗಬೇಕೆಂದಿದ್ದರೆ ನಿನ್ನೆನೇ ಹೋಗುತ್ತಿದ್ದೆ. ಆರು ವರ್ಷಗಳ ಹಿಂದೆ ನಾನು ಒಬ್ಬನೇ ಪ್ರತಿಭಟನೆ ನಡೆಸಿದ್ದೆ. ಯಾವುದೇ ಗಲಾಟೆ, ದರೋಡೆ ಮಾಡಿಲ್ಲ. ಕೊರೊನಾ ಸಮಯದಲ್ಲಿ ರಾಜ್ಯದ ಮಕ್ಕಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಇಂಗ್ಲಿಷ್&zwnj;ನಲ್ಲಿ ವಾರಂಟ್ ತಂದಿದ್ದಕ್ಕೆ ವಾಟಾಳ್ ಅಸಮಾಧಾನ&lt;/h2&gt;&lt;p&gt;ಇದೇ ವೇಳೆ, ವಾರಂಟ್ ಇಂಗ್ಲಿಷ್&zwnj;ನಲ್ಲಿ ತಂದಿರುವುದಕ್ಕೂ ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಪರ ಹೋರಾಟಗಾರನನ್ನು ಬಂಧಿಸಲು ಇಂಗ್ಲಿಷ್&zwnj;ನಲ್ಲಿ ವಾರಂಟ್ ತರುತ್ತೀರಾ? ಕನ್ನಡದಲ್ಲಿ ವಾರಂಟ್ ತೆಗೆದುಕೊಂಡು ಬನ್ನಿ ಎಂದು ಅವರು ಪೊಲೀಸರ ವಿರುದ್ಧ ಗರಂ ವ್ಯಕ್ತಪಡಿಸಿದರು.&lt;/p&gt;&lt;h2&gt;ಆಟೋ ವ್ಯವಸ್ಥೆ ಮಾಡಿ ಕೋರ್ಟ್ ಗೆ ಕರೆದೊಯ್ದ ಪೊಲೀಸರು&lt;/h2&gt;&lt;p&gt;ಆದರೂ, ನಂತರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿ ಕರೆದೊಯ್ದರು. ಪೊಲೀಸ್ ವಾಹನದಲ್ಲಿ ಹೋಗುವುದಕ್ಕೆ ನಿರಾಕರಿಸಿದ ಕಾರಣ, ಪೊಲೀಸರು ಆಟೋ ವ್ಯವಸ್ಥೆ ಮಾಡಿ ಅವರನ್ನು ಕೋರ್ಟ್&zwnj;ಗೆ ಕರೆದೊಯ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧನದ ನಂತರ, ವಾಟಾಳ್ ನಾಗರಾಜ್ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟಾರೆ, ಈ ಘಟನೆ ನಗರದಲ್ಲಿ ಸಣ್ಣ ಮಟ್ಟಿನ ಹೈಡ್ರಾಮಕ್ಕೆ ಕಾರಣವಾಗಿದ್ದು, ವಾಟಾಳ್ ನಾಗರಾಜ್ ಬಂಧನವು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp"/>
        </item>
        <item>
            <title><![CDATA[ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ  ದೈಹಿಕ ಸಂಪರ್ಕ, ಪತಿಯ ವಿರುದ್ಧ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ]]></title>
            <link>https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg</link>
            <guid isPermaLink="true">https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg</guid>
            <pubDate>Wed, 08 Apr 2026 14:38:50 +0530</pubDate>
            <description><![CDATA[ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿದ್ದ ಪತಿಯೊಬ್ಬ, ತನ್ನ ಮೇಲಿನ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಆರೋಪಗಳು ವಿಚಾರಣೆಗೆ ಅರ್ಹವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8n4h9682whm9q01h82faa0s,imgname-karnataka-high-court-1761645995208.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಒತ್ತಾಯದ ದೈಹಿಕ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿರುವ ಪತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ, ಆರೋಪಗಳ ಕುರಿತು ವಿಚಾರಣೆ ನಡೆಯಬೇಕೆಂಬ ಮಹತ್ವದ ಸಂದೇಶವನ್ನು ನ್ಯಾಯಾಲಯ ನೀಡಿದೆ.&lt;/p&gt;&lt;p&gt;ದಾಂಪತ್ಯ ವೈಮನಸ್ಸು ಹಿನ್ನೆಲೆಯಲ್ಲಿ ದಂಪತಿ 2019ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ 2021ರಲ್ಲಿ ಪತಿ ಪತ್ನಿಯ ಮನೆಗೆ ಭೇಟಿ ನೀಡಿದ್ದು, ಆ ವೇಳೆ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಒತ್ತಾಯದ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಇದೆ. ಈ ಹಿನ್ನೆಲೆ, ಪತ್ನಿ ತನ್ನ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.&lt;/p&gt;&lt;h2&gt;ದೈಹಿಕ ಸಂಪರ್ಕ ನಡೆದಿಲ್ಲ ಎಂಬ ವಾದ&lt;/h2&gt;&lt;p&gt;ಇದನ್ನು ಪ್ರಶ್ನಿಸಿದ ಪತಿ, ತನ್ನ ವಿರುದ್ಧ ದಾಖಲಾಗಿರುವ ಎಫ್&zwnj;ಐಆರ್ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದನು. ಪತಿ ಪರ ವಕೀಲರು, ಪತ್ನಿಯೇ ರಾಜಿ ಸಂಧಾನಕ್ಕಾಗಿ ಮನೆಗೆ ಆಹ್ವಾನಿಸಿದ್ದಳು ಮತ್ತು ಆ ದಿನ ಯಾವುದೇ ದೈಹಿಕ ಸಂಪರ್ಕ ನಡೆದಿಲ್ಲ ಎಂದು ವಾದ ಮಂಡಿಸಿದರು.&lt;/p&gt;&lt;h2&gt;ಪತಿ ವಿರುದ್ಧ ಪತ್ನಿಯೇ ವಾದ ಮಂಡನೆ&lt;/h2&gt;&lt;p&gt;ಇದರ ವಿರುದ್ಧವಾಗಿ, ಪತ್ನಿಯೇ ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ ತನ್ನ ಪರವಾಗಿ ವಾದ ಮಂಡಿಸಿ, ಪತಿಯ ಅರ್ಜಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. ತನ್ನ ಮೇಲೆ ನಡೆದಿರುವ ಘಟನೆ ಗಂಭೀರವಾಗಿದ್ದು, ಪ್ರಕರಣವನ್ನು ರದ್ದುಪಡಿಸಬಾರದು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.&lt;/p&gt;&lt;p&gt;ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಹೊರಹೊಮ್ಮಿರುವ ಆರೋಪಗಳು ವಿಚಾರಣೆಗೆ ಒಳಪಟ್ಟಿರಬೇಕು ಎಂದು ಹೇಳಿ, ಪತಿಯ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.&lt;/p&gt;&lt;p&gt;ಈ ತೀರ್ಪು, ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿಗಳ ನಡುವೆ ಸಹ ಒತ್ತಾಯದ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದ ಆರೋಪಗಳನ್ನು ನ್ಯಾಯಾಂಗವು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg"/>
        </item>
        <item>
            <title><![CDATA[ಬೆಂಗಳೂರು STRR: ಕೇವಲ 54 ಮೀಟರ್ ರೈಲ್ವೆ ಗರ್ಡರ್ ವಿಳಂಬದಿಂದ ಎರಡು ವರ್ಷ 21 ಕಿ.ಮೀ ರಸ್ತೆ ಸಂಚಾರಕ್ಕೆ ಬ್ರೇಕ್!]]></title>
            <link>https://kannada.asianetnews.com/bengaluru-urban/bengaluru-strr-project-delay-54-meter-railway-girder-stalls-21km-stretch-san/articleshow-zaqakob</link>
            <guid isPermaLink="true">https://kannada.asianetnews.com/bengaluru-urban/bengaluru-strr-project-delay-54-meter-railway-girder-stalls-21km-stretch-san/articleshow-zaqakob</guid>
            <pubDate>Wed, 08 Apr 2026 14:35:04 +0530</pubDate>
            <description><![CDATA[&lt;p&gt;ಬೆಂಗಳೂರಿನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯ ಹೊಸಕೋಟೆ ಭಾಗವು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ನೈಋತ್ಯ ರೈಲ್ವೆ ನಡುವಿನ ರೈಲ್ವೆ ಮೇಲ್ಸೇತುವೆ ಅನುಮೋದನೆ ವಿವಾದದಿಂದಾಗಿ ಅಪೂರ್ಣಗೊಂಡಿದೆ. .&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k3p1pxpvaqhezf30wk5dwhz3,imgname-maxresdefault-1756307879643.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8): &lt;/strong&gt;ಒಟ್ಟು 280.8 ಕಿ.ಮೀ ಉದ್ದದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (NH-948A) ಯೋಜನೆಯಡಿ ಹೊಸಕೋಟೆಯಿಂದ ತಮಿಳುನಾಡು ಗಡಿಯವರೆಗಿನ 20.9 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಉಳಿದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ನೈಋತ್ಯ ರೈಲ್ವೆ (SWR) ನಡುವಿನ ಅನುಮೋದನೆಗಳ ಜಟಾಪಟಿಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದ ಮೇಲೆ ಅಳವಡಿಸಬೇಕಾದ 54 ಮೀಟರ್ ಉದ್ದದ 'ಬೌಸ್ಟ್ರಿಂಗ್ ಗರ್ಡರ್' (Bowstring Girder) ಕಾಮಗಾರಿ ವಿಳಂಬವೇ ಈ ಒಟ್ಟು 20.9 ಕಿ.ಮೀ ರಸ್ತೆ ಬಳಕೆಗೆ ಮುಕ್ತವಾಗದಿರಲು ಕಾರಣ. ಈ ಯೋಜನೆಯನ್ನು 2022ರಲ್ಲಿ ಎಸ್ ಅಂಡ್ ಪಿ ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಮತ್ತು ಸ್ಕೈಲಾರ್ಕ್ ಇನ್ಫ್ರಾ ಇಂಜಿನಿಯರಿಂಗ್ ಜಂಟಿ ಸಂಸ್ಥೆಗೆ ನೀಡಲಾಗಿತ್ತು. ರಸ್ತೆಯ ಬಹುತೇಕ ಭಾಗ ಪೂರ್ಣಗೊಂಡಿದ್ದರೂ, ರೈಲ್ವೆ ಮೇಲ್ಸೇತುವೆಯ (ROB) ಒಂದು ಸಣ್ಣ ಭಾಗ ನಾಲ್ಕು ವರ್ಷಗಳಿಂದ ಅಪೂರ್ಣವಾಗಿದೆ.&lt;/p&gt;&lt;h2&gt;&lt;strong&gt;ಟ್ರಾಫಿಕ್ ಸಮಸ್ಯೆ ಮುಂದುವರಿಕೆ&lt;/strong&gt;&lt;/h2&gt;&lt;p&gt;ಈ ರಸ್ತೆ ಪೂರ್ಣಗೊಳ್ಳದ ಕಾರಣ, ಬೆಂಗಳೂರಿನ ಹೊಸೂರು ರಸ್ತೆ ಮತ್ತು ತುಮಕೂರು ರಸ್ತೆಯಲ್ಲಿ ಸಂಚರಿಸಬೇಕಾದ ಭಾರಿ ಟ್ರಕ್&zwnj;ಗಳು ಇಂದಿಗೂ ನಗರದ ಒಳಗಿನ ರಸ್ತೆಗಳ ಮೂಲಕವೇ ಹಾದುಹೋಗುತ್ತಿವೆ. ಇದರಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತಿಲ್ಲ. &quot;ನಾವು ಈ ವಿಭಾಗದ 20.25 ಕಿ.ಮೀ ಕಾಮಗಾರಿ ಮುಗಿಸಿದ್ದೇವೆ, ಕೇವಲ ರೈಲ್ವೆ ಸ್ಪ್ಯಾನ್ ಕೆಲಸವಷ್ಟೇ ಬಾಕಿಯಿದೆ,&quot; ಎಂದು NHAI ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನುಮೋದನೆಗಳ ಜಟಾಪಟಿ&lt;/strong&gt;&lt;/h2&gt;&lt;p&gt;2024ರ ಏಪ್ರಿಲ್ 5ರಂದು ಸೇತುವೆಯ ವಿನ್ಯಾಸದ (GAD) ಪರಿಷ್ಕೃತ ನಕ್ಷೆಗೆ ಅನುಮೋದನೆ ಸಿಕ್ಕಿತ್ತು., ಏಪ್ರಿಲ್ 2ರಂದು ಗರ್ಡರ್ ಅಳವಡಿಕೆಯ ವಿಧಾನದ (TAD) ನಕ್ಷೆಯನ್ನು ಸಲ್ಲಿಕೆ ಮಾಡಲಾಗಿತ್ತು. 2026ರ ಜನವರಿ 29ರಂದು ನೈಋತ್ಯ ರೈಲ್ವೆಯಿಂದ ಇದಕ್ಕೆ ಕೇವಲ ತಾತ್ವಿಕ ಅನುಮೋದನೆ ಸಿಕ್ಕಿದೆ, ಆದರೆ ಅಂತಿಮ ಅನುಮೋದನೆ ಇನ್ನೂ ಬಾಕಿಯಿದೆ ಎಂದು NHAI ಅಧಿಕಾರಿಗಳು ಹೇಳಿದ್ದಾರೆ. ಅನುಮೋದನೆ ಸಿಕ್ಕರೂ ಸಹ, ರೈಲು ಸಂಚಾರವನ್ನು ನಿಲ್ಲಿಸಿ ಗರ್ಡರ್ ಅಳವಡಿಸಲು ಪ್ರತ್ಯೇಕ 'ಬ್ಲಾಕ್' ಸಮಯವನ್ನು ರೈಲ್ವೆಯಿಂದ ಪಡೆಯಬೇಕಾಗುತ್ತದೆ. ಇದು ಕಾಮಗಾರಿಯನ್ನು ಮತ್ತಷ್ಟು ವಿಳಂಬಗೊಳಿಸುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;NHAI ವಿರುದ್ಧ ರೈಲ್ವೆ ಪ್ರತ್ಯುತ್ತರ&lt;/strong&gt;&lt;/h2&gt;&lt;p&gt;NHAI ಆರೋಪಗಳನ್ನು ನೈಋತ್ಯ ರೈಲ್ವೆ ನಿರಾಕರಿಸಿದೆ. ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್ ಕಣಮಡಿ ಮಾತನಾಡಿ, &quot;ಸೇತುವೆ ಕಾಮಗಾರಿ ನಡೆಸುವ ಸ್ಥಳ ಇನ್ನೂ ಸಿದ್ಧವಾಗಿಲ್ಲ. TAD ಅನುಮೋದನೆಯಾಗಿಲ್ಲ ಏಕೆಂದರೆ ಅದನ್ನು ತಾಂತ್ರಿಕ ಪರಿಶೀಲನೆಗಾಗಿ ಇತ್ತೀಚೆಗಷ್ಟೇ ಬೆಂಗಳೂರು ವಿಭಾಗಕ್ಕೆ ಸಲ್ಲಿಸಲಾಗಿದೆ. ಗರ್ಡರ್ ಜೋಡಿಸುವ ಕೆಲಸ ಪೂರ್ಣಗೊಂಡಿಲ್ಲ, ಆದ್ದರಿಂದ RDSO ತಪಾಸಣೆ ಬಾಕಿಯಿದೆ,&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;STRR-ವೆಸ್ಟ್ ಕಾಮಗಾರಿಯೂ ಅನಿಶ್ಚಿತ&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಕೇಂದ್ರ ಸರ್ಕಾರವು ಭಾರತ್&zwnj;ಮಾಲಾ ಪರಿಯೋಜನೆಯಡಿ ವಿಳಂಬ ಮತ್ತು ವೆಚ್ಚ ಹೆಚ್ಚಳದ ಕಾರಣ ನೀಡಿ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಿರುವುದರಿಂದ STRR ಪಶ್ಚಿಮ ವಿಭಾಗದ ಕಾಮಗಾರಿಯೂ ಅನಿಶ್ಚಿತತೆಯಲ್ಲಿದೆ. ಸೆಪ್ಟೆಂಬರ್ 2024ರಲ್ಲಿ ನೀಡಲಾಗಿದ್ದ 4,750 ಕೋಟಿ ರೂ.ಗಳ ಟೆಂಡರ್&zwnj;ಗಳನ್ನು ಜನವರಿ 2025ರಲ್ಲಿ ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಆಹ್ವಾನಿಸಲಾಗಿದೆ. ಆದರೆ ಈವರೆಗೂ ಬಿಡ್&zwnj;ಗಳು ಓಪನ್ ಆಗಿಲ್ಲ.&lt;/p&gt;&lt;h2&gt;&lt;strong&gt;STRR ಉದ್ದೇಶವೇನು?&lt;/strong&gt;&lt;/h2&gt;&lt;p&gt;280 ಕಿ.ಮೀ ಉದ್ದದ ಈ ಎಕ್ಸ್&zwnj;ಪ್ರೆಸ್&zwnj;ವೇ ಬೆಂಗಳೂರಿನ ಸುತ್ತಮುತ್ತಲಿನ 12 ಸ್ಯಾಟಲೈಟ್ ಟೌನ್&zwnj;ಗಳನ್ನು (ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಮಾಗಡಿ ಇತ್ಯಾದಿ) ಸಂಪರ್ಕಿಸುತ್ತದೆ. ನಗರದ ಒಳಗೆ ಬರುವ ಸರಕು ಸಾಗಣೆ ವಾಹನಗಳನ್ನು ಹೊರವಲಯದಲ್ಲೇ ಸಂಚರಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶ. ಈ ಯೋಜನೆಗೆ 2005ರಲ್ಲಿ ಪ್ರಸ್ತಾವನೆ ಸಲ್ಲಿಸಿ, 2022ರಲ್ಲಿ ಪ್ರಧಾನಿ ಮೋದಿಯವರು ಶಂಕುಸ್ಥಾಪನೆ ಮಾಡಿದ್ದರು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-strr-project-delay-54-meter-railway-girder-stalls-21km-stretch-san/articleshow-zaqakob"/>
        </item>
        <item>
            <title><![CDATA[ಕೃತಿಕಾ ರೆಡ್ಡಿ ಕೊ*ಲೆ ಪ್ರಕರಣ: ಲವರ್‌ಗೆ ಮಹೇಂದ್ರ ರೆಡ್ಡಿ ಕಳಿಸಿದ 'ಆ' ಮೆಸೇಜ್‌ಗಳೇ ಈಗ ಆತನಿಗೆ ಮುಳ್ಳು!]]></title>
            <link>https://kannada.asianetnews.com/relationship/dr-krithika-reddy-murder-case-mahendra-reddy-shocking-messages-revealed-san/articleshow-gxaqpvz</link>
            <guid isPermaLink="true">https://kannada.asianetnews.com/relationship/dr-krithika-reddy-murder-case-mahendra-reddy-shocking-messages-revealed-san/articleshow-gxaqpvz</guid>
            <pubDate>Wed, 08 Apr 2026 12:53:57 +0530</pubDate>
            <description><![CDATA[&lt;p&gt;ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ, ಎಫ್&zwnj;ಎಸ್&zwnj;ಎಲ್ ತಜ್ಞರು ಆರೋಪಿ ಪತಿ ಮಹೇಂದ್ರ ರೆಡ್ಡಿಯ ಫೋನ್&zwnj;ನಿಂದ ಡಿಲೀಟ್ ಮಾಡಲಾಗಿದ್ದ ಡಿಜಿಟಲ್ ದಾಖಲೆಗಳನ್ನು ಮರುಸಂಪಾದಿಸಿದ್ದಾರೆ. ಈ ದಾಖಲೆಗಳಲ್ಲಿ, ಆತ ತನ್ನ ಮತ್ತೊಬ್ಬ ಪ್ರಿಯತಮೆಗೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಸಂದೇಶಗಳು ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knnzdqbq87keqg3tskpp0qnp,imgname-krithika-reddy-case-1775632833911.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8):&lt;/strong&gt; ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿ ಮಹೇಂದ್ರ ರೆಡ್ಡಿಯ ಕರಾಳ ಮುಖ ಬಯಲಾಗಿದೆ. ಎಫ್&zwnj;ಎಸ್&zwnj;ಎಲ್ (FSL) ತಂಡವು ಆರೋಪಿಯ ಡಿಜಿಟಲ್ ಫೈಲ್&zwnj;ಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು, ಮಹೇಂದ್ರ ರೆಡ್ಡಿ ತನ್ನ ಮತ್ತೊಬ್ಬ ಪ್ರಿಯತಮೆಗೆ ಕಳುಹಿಸಿದ್ದ ಶಾಕಿಂಗ್ ಮೆಸೇಜ್&zwnj;ಗಳು ತನಿಖೆಯ ದಿಕ್ಕನ್ನೇ ಬದಲಿಸಿವೆ.&lt;/p&gt;&lt;p&gt;ಎಫ್&zwnj;ಎಸ್&zwnj;ಎಲ್ ತಜ್ಞರು ಮಹೇಂದ್ರನ ಫೋನ್&zwnj;ನಿಂದ ಸುಮಾರು 485 ಫೋನ್&zwnj;ಪೇ (PhonePe) ಚಾಟ್&zwnj;ಗಳು ಮತ್ತು ಅಳಿಸಿಹಾಕಿದ್ದ ಡಿಜಿಟಲ್ ದಾಖಲೆಗಳನ್ನು ಮರುಸಂಪಾದಿಸಿದ್ದಾರೆ. ಈ ಸಂದೇಶಗಳು ಆರೋಪಿಯ ತಪ್ಪೊಪ್ಪಿಗೆಯಂತಿದ್ದು, ಆತ ಕೃತಿಕಾಳನ್ನು ಕೊಲೆ ಮಾಡಿದ ಬಳಿಕ ಆಕೆಯ ಸ್ಥಿತಿಯ ಬಗ್ಗೆ ಮತ್ತು ತನ್ನ ಭವಿಷ್ಯದ ಬಗ್ಗೆ ಪ್ರಿಯತಮೆಗೆ ಸುದೀರ್ಘವಾಗಿ ವಿವರಿಸಿದ್ದ.&lt;/p&gt;&lt;h2&gt;&lt;strong&gt;ಮೆಸೇಜ್&zwnj;ಗಳಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಆರೋಪಿ ಮಹೇಂದ್ರ ರೆಡ್ಡಿ ತನ್ನ ಪ್ರಿಯತಮೆಗೆ ಕಳುಹಿಸಿದ್ದ ಸಂದೇಶಗಳು ಅತ್ಯಂತ ಭೀಕರವಾಗಿವೆ. 'ನಾನು ಕೃತಿಕಾಳನ್ನು ಕೊಂದಿದ್ದೇನೆ. ಶೀಘ್ರದಲ್ಲೇ ಹೋಗಿ ನನ್ನ ಮತ್ತು ಅವಳ ಹೆತ್ತವರಿಗೆ ವಿಷಯ ತಿಳಿಸುತ್ತೇನೆ. ನಾನು ಕಂಬಿಗಳ ಹಿಂದೆ ಹೋಗುತ್ತೇನೆ, ಆಗ ನೀವೂ ಸೇರಿದಂತೆ ಎಲ್ಲರೂ ಸಂತೋಷವಾಗಿರುತ್ತೀರಿ ಎಂದು ಭಾವಿಸುತ್ತೇನೆ' ಎಂದು ಬರೆದಿದ್ದಾರೆ.&quot;ನಾನು ಕೊಲೆಗಾರನಂತೆ ಜೀವನ ನಡೆಸುತ್ತೇನೆ. ಕೊಲೆಗಾರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಪೊಲೀಸರು ನಿಮಗೆ ಕರೆ ಮಾಡಿದರೆ, ನಾವು ಕೇವಲ ಸ್ನೇಹಿತರು ಎಂದು ಹೇಳಿ. ಬೇರೆ ಏನನ್ನೂ ಮಾತನಾಡಬೇಡಿ&quot; ಎಂದು ಆತ ತನ್ನ ಪ್ರಿಯತಮೆಗೆ ಸೂಚನೆ ನೀಡಿ ಸಂದೇಶ ಕೂಡ ಕಳಿಸಿದ್ದ.&lt;/p&gt;&lt;h2&gt;&lt;strong&gt;ಜಾಮೀನು ಅರ್ಜಿ ವಜಾ&lt;/strong&gt;&lt;/h2&gt;&lt;p&gt;ಈಗಾಗಲೇ ಸೆಷನ್ಸ್ ಕೋರ್ಟ್&zwnj;ನಲ್ಲಿ ಜಾಮೀನು ಪಡೆಯಲು ಮಹೇಂದ್ರ ರೆಡ್ಡಿ ಹರಸಾಹಸ ಪಟ್ಟಿದ್ದ. ಆದರೆ, ಎಫ್&zwnj;ಎಸ್&zwnj;ಎಲ್ ರಿಪೋರ್ಟ್ ಮೂಲಕ ಬಹಿರಂಗವಾಗಿರುವ ಈ ನಿರ್ಣಾಯಕ ಡಿಜಿಟಲ್ ಪುರಾವೆಗಳನ್ನು ಪರಿಗಣಿಸಿದ ನ್ಯಾಯಾಲಯ, ಮಂಗಳವಾರ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ತನಿಖಾ ತಂಡವು ಅತ್ಯಂತ ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಡಿಜಿಟಲ್ ಫೈಲ್&zwnj;ಗಳನ್ನು ಹೊರತೆಗೆದಿರುವುದು, ಪ್ರಕರಣದಲ್ಲಿ ಮಹೇಂದ್ರ ರೆಡ್ಡಿಯ ದೋಷಿ ಸಾಬೀತಾಗುವ ಸಾಧ್ಯತೆಯನ್ನು ಬಲಪಡಿಸಿದೆ.&lt;/p&gt;&lt;h2&gt;&lt;strong&gt;ಚರ್ಮರೋಗ ತಜ್ಞೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ 2025ರ ಏಪ್ರಿಲ್&zwnj;ನಲ್ಲಿ ನಡೆದ ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣವು ವೈದ್ಯಕೀಯ ಲೋಕವನ್ನು ಬೆಚ್ಚಿಬೀಳಿಸಿತ್ತು. ವೃತ್ತಿಯಲ್ಲಿ ಸರ್ಜನ್ ಆಗಿದ್ದ ಮಹೇಂದ್ರ ರೆಡ್ಡಿ, ತನ್ನ ಪತ್ನಿ ಕೃತಿಕಾ ಅವರಿಗೆ ಅತಿಯಾದ ಪ್ರಮಾಣದಲ್ಲಿ 'ಪ್ರೊಪೋಫೋಲ್' (Propofol) ಎಂಬ ಅರಿವಳಿಕೆ ಔಷಧವನ್ನು ನೀಡುವ ಮೂಲಕ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಕೊಲೆಯ ಬಳಿಕ ಇದೊಂದು ಸಹಜ ಸಾವು ಎಂದು ಬಿಂಬಿಸಲು ಆತ ಹರಸಾಹಸ ಪಟ್ಟಿದ್ದ. ಕೃತಿಕಾ ನಿಧನರಾದ ಸಂದರ್ಭದಲ್ಲಿ, ಯಾವುದೇ ಅನುಮಾನ ಬಾರದಂತೆ ಮರಣೋತ್ತರ ಪರೀಕ್ಷೆ (Post-mortem) ಮಾಡದಂತೆ ತಡೆಯಲು ಆರೋಪಿ ಪ್ರಯತ್ನಿಸಿದ್ದ. ಆದರೆ, ಶವಪರೀಕ್ಷೆಯಲ್ಲಿ ದೇಹದಲ್ಲಿ ಅತಿಯಾದ ಪ್ರಮಾಣದ ಅರಿವಳಿಕೆ ಔಷಧದ ಅಂಶ ಪತ್ತೆಯಾಗಿದ್ದೇ ಪ್ರಕರಣದಲ್ಲಿನ ದೊಡ್ಡ ತಿರುವಾಗಿತ್ತು.ತನಿಖೆಯ ಪ್ರಕಾರ, ಆರೋಪಿಯು ತನ್ನ ಇತರ ಪ್ರಿಯತಮೆಯರೊಂದಿಗಿನ ಅಕ್ರಮ ಸಂಬಂಧಕ್ಕಾಗಿ ಮತ್ತು ಕೃತಿಕಾಳ ಆಸ್ತಿಯನ್ನು ವಶಪಡಿಸಿಕೊಳ್ಳುವ ದುರಾಸೆಯಿಂದ ಈ ಕೃತ್ಯ ಎಸಗಿದ್ದ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/dr-krithika-reddy-murder-case-mahendra-reddy-shocking-messages-revealed-san/articleshow-gxaqpvz"/>
        </item>
        <item>
            <title><![CDATA[ನನ್ನ ಅಣ್ಣ ಸಿಎಂ ಆಗಬೇಕೆಂಬ ಆಸೆ ಇದೆ, ಈಗಲೇ ಆಗ್ತಾನೆ ಅಂತಾ ನಾನು ಹೇಳಿಲ್ಲ: ಡಿಕೆ ಸುರೇಶ್]]></title>
            <link>https://kannada.asianetnews.com/politics/i-did-not-say-that-dks-will-become-cm-right-now-brother-dk-suresh-responds-rav/articleshow-yl6sos6</link>
            <guid isPermaLink="true">https://kannada.asianetnews.com/politics/i-did-not-say-that-dks-will-become-cm-right-now-brother-dk-suresh-responds-rav/articleshow-yl6sos6</guid>
            <pubDate>Wed, 08 Apr 2026 09:08:13 +0530</pubDate>
            <description><![CDATA[ನನ್ನ ಅಣ್ಣ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂಬ ಆಸೆಯಿದೆ, ಆದರೆ ಈಗಲೇ ಅಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnj7j64xhk4dkhs64pqz267,imgname----------------------95--1775619000516.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.8): &lt;/strong&gt;ಮುಖ್ಯಮಂತ್ರಿ ಸ್ಥಾನದ ಕುರಿತಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್&zwnj; ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು. ನನ್ನ ಅಣ್ಣ (ಡಿ.ಕೆ. ಶಿವಕುಮಾರ್&zwnj;) ಒಮ್ಮೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಿದೆ. ಆದರೆ, ಈಗಲೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಲ್ಲ ಎಂದು ಬಮುಲ್&zwnj; ಅಧ್ಯಕ್ಷ ಡಿ.ಕೆ. ಸುರೇಶ್&zwnj; ಹೇಳಿದರು.&lt;/p&gt;&lt;p&gt;ಮುಂದಿನ ಎರಡು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಡಾ. ಪರಮೇಶ್ವರ್&zwnj; ನೀಡಿರುವ ಹೇಳಿಕೆ ಕುರಿತಂತೆ ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್&zwnj;, &lsquo;ಡಾ. ಪರಮೇಶ್ವರ್&zwnj; ಅವರ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು. ಆದರೂ ಗೃಹ ಸಚಿವರು ಅಧಿಕೃತವಾಗಿ ಹೇಳಿದ್ದಾರೆ. ಅವರು ಹೇಗೆ ಹೇಳುತ್ತಾರೋ ಹಾಗೆ ಕೇಳಬೇಕು. ಇನ್ನು, ನನ್ನ ಅಣ್ಣ ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿಲ್ಲ ಎಂದು ನಾನು ಹೇಳಿಲ್ಲ. ಈಗಲೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿಲ್ಲವಲ್ಲ. ಆಸೆಯಿದೆ ಎಂದು ಹೇಳಿದ್ದೇನೆ&rsquo; ಎಂದರು.&lt;/p&gt;&lt;p&gt;ಎರಡು ಕ್ಷೇತ್ರಗಳ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿ, ಬಾಗಲಕೋಟೆ, ದಾವಣಗೆರೆ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್&zwnj; ಗೆಲ್ಲಲಿದೆ. ಗ್ಯಾರಂಟಿಗಳನ್ನು ನೀಡಿದ್ದೇವೆ. ಆ ಭಾಗದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಸ್ಪಂದಿಸಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇನ್ನು, ಬಾಗಲಕೋಟೆಯಲ್ಲಿ ಸೋಲಾಗಲಿದೆ ಎಂಬುದೆಲ್ಲ ಊಹಾಪೋಹ. ಅತ್ಯಧಿಕ ಮತಗಳಿಂದ ಗೆಲ್ಲಲಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;ಎಂಪಿ ಕ್ಷೇತ್ರ ಹೆಚ್ಚಳದಿಂದ ರಾಜ್ಯಕ್ಕೆ ಅನ್ಯಾಯ:&lt;/h2&gt;&lt;p&gt;ಲೋಕಸಭೆ, ವಿಧಾನಸಭೆ ಕ್ಷೇತ್ರಗಳ ಮರು ವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಲಿದೆ. ಅದರಿಂದಾಗಿ ನಮ್ಮ ತೆರಿಗೆ ಹಣ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಹಂಚಿಕೆಯಾಗಲಿದ್ದು, ದಕ್ಷಿಣ ರಾಜ್ಯಗಳು ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಬಮುಲ್&zwnj; ಅಧ್ಯಕ್ಷ ಡಿ.ಕೆ. ಸುರೇಶ್&zwnj; ತಿಳಿಸಿದರು.&lt;/p&gt;&lt;p&gt;ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್&zwnj;, ಈ ಹಿಂದಿನಿಂದಲೂ ಕ್ಷೇತ್ರ ಮರುವಿಂಗಡಣೆ ಕುರಿತಂತೆ ಹೇಳುತ್ತಲೇ ಬಂದಿದ್ದೇನೆ. ಕ್ಷೇತ್ರ ಮರು ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದ್ದು, ಅದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಏ. 16ರಂದು ಲೋಕಸಭೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ವಿಧೇಯಕ ತರಲಿದೆ ಎಂಬುದನ್ನು ನೋಡಬೇಕು. ಒಟ್ಟಾರೆ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ತೆಗೆದುಕೊಂಡು ಹೋಗುವ ಹುನ್ನಾರ ಇದಾಗಿದೆ ಎಂದರು.&lt;/p&gt;&lt;p&gt;2011ರ ಜನಗಣತಿಯಂತೆ ವಿಂಗಡಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, 2011ರ ಜನಗಣತಿಯಂತೆ ಬೆಂಗಳೂರಿನಲ್ಲಿ 60ರಿಂದ 70 ಲಕ್ಷ ಜನಸಂಖ್ಯೆಯಿತ್ತು. ಈಗ 1.40 ಕೋಟಿಗೆ ತಲುಪಿದೆ. ಕರ್ನಾಟಕದ ಜನಸಂಖ್ಯೆ ಐದು ಕೋಟಿಯಿತ್ತು, ಈಗ ಏಳು ಕೋಟಿಗೂ ಮೀರಿದೆ. ಈ ಬಗ್ಗೆ ಎಲ್ಲ ಪಕ್ಷಗಳು ಚಿಂತನೆ ನಡೆಸಬೇಕು. ಕ್ಷೇತ್ರಗಳ ಸಂಖ್ಯೆಯಲ್ಲಿ ಅನ್ಯಾಯವಾಗುವುದರ ಜತೆಗೆ ಆರ್ಥಿಕ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ ಎಂದರು.&lt;/p&gt;&lt;p&gt;ದೇಶದಲ್ಲಿನ ಸಮಸ್ಯೆ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್&zwnj;, ಯುದ್ಧದಿಂದ ಸಾಕಷ್ಟು ಸಮಸ್ಯೆಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಅದರ ಬಗ್ಗೆ ಕೇಂದ್ರ ಸರ್ಕಾರ ತನ್ನ ಮೌನವನ್ನು ಮುರಿದಿಲ್ಲ. ಜನರಿಗೆ ಪ್ರಧಾನಿ ಅವರು ಬೇರೆ ಸಂದರ್ಭದಲ್ಲಿ ಸಂದೇಶ ನೀಡುತ್ತಾರೆ. ಆದರೆ, ಈವರೆಗೆ ಪ್ರಧಾನಿ ಸೇರಿದಂತೆ ಕೇಂದ್ರದ ಯಾವುದೇ ಸಚಿವರು ಪರಿಸ್ಥಿತಿ ಎದುರಿಸುವ ಬಗ್ಗೆ ಮಾತನಾಡಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರಧಾನಿ ಅವರೇ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡಿದರೆ ಯಾವುದೂ ಸರಿಯಿಲ್ಲ ಎನ್ನವ ಅನುಮಾನ ಉಂಟಾಗುತ್ತಿದೆ. ಬೆಲೆ ಏರಿಕೆಯಾಗಿದೆ, ಹಲವು ವಸ್ತುಗಳ ಅಭಾವ ಉಂಟಾಗಿದೆ. ಈ ರೀತಿ ಆದಾಗ ಕೃತಕವಾಗಿ ಸೃಷ್ಟಿಯಾಗಿರುವುದೇ ಅಥವಾ ಬೇರೆ ವಿಚಾರವಿದೆಯೇ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಕೇಂದ್ರ ಸರ್ಕಾರ ಎಚ್ಚರಿಕೆಯ ನಡೆಯನ್ನಿಡಬೇಕು ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/i-did-not-say-that-dks-will-become-cm-right-now-brother-dk-suresh-responds-rav/articleshow-yl6sos6"/>
        </item>
        <item>
            <title><![CDATA[ಲೋಕಾಯುಕ್ತ ದಾಳಿ: ಬಳ್ಳಾರಿ ಅಧಿಕಾರಿ ಬಳಿ 44 ಎಕರೆ, 14 ಸೈಟ್‌, 3 ಮನೆ!]]></title>
            <link>https://kannada.asianetnews.com/state/lokayukta-raids-corrupt-officials-bellary-official-owns-44-acres-14-sites-3-houses-rav/articleshow-hn2bk2r</link>
            <guid isPermaLink="true">https://kannada.asianetnews.com/state/lokayukta-raids-corrupt-officials-bellary-official-owns-44-acres-14-sites-3-houses-rav/articleshow-hn2bk2r</guid>
            <pubDate>Wed, 08 Apr 2026 09:36:55 +0530</pubDate>
            <description><![CDATA[ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ರಾಜ್ಯದ 8 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಒಟ್ಟು 36.92 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚರ ಹಾಗೂ ಸ್ಥಿರಾಸ್ತಿ ಪತ್ತೆಯಾಗಿದ್ದು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnkykqwbjswxbmn536z3d2c,imgname----------------------96--1775620804348.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.8): &lt;/strong&gt;ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆ ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ಪತ್ತೆ ಹಚ್ಚಿದ್ದಾರೆ.&lt;/p&gt;&lt;p&gt;ಕೊಡಗು, ಬೆಳಗಾವಿ, ಬೀದರ್&zwnj;, ಮೈಸೂರು, ಶಿವಮೊಗ್ಗ, ಮಂಗಳೂರು, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 35 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಕೃಷಿ ಜಮೀನು, ನಿವೇಶನ, ಐಷಾರಾಮಿ ಮನೆಗಳು, ದುಬಾರಿ ವಸ್ತುಗಳು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 36.92 ಕೋಟಿ ರು. ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ 8 ಮಂದಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಯಾ ಜಿಲ್ಲಾ ಲೋಕಾಯುಕ್ತ ಪೊಲೀಸ್&zwnj; ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಯಾವ ಅಧಿಕಾರಿ ಬಳಿ ಎಷ್ಟು ಆಸ್ತಿ?&lt;/h2&gt;&lt;p&gt;\\B1. ಜಿ.ಕೆ.ರೇವಣ್&zwnj; ಕುಮಾರ್&zwnj; ( ಸಹಾಯ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ, ಲೋಕೋಪಯೋಗಿ ಇಲಾಖೆ, ಉಪ ವಿಭಾಗ, ಮೈಸೂರು):\\B 3 ಕಡೆ ದಾಳಿ, 4 ಸೈಟ್&zwnj;, 1 ಮನೆ, 2 ಎಕರೆ ಕೃಷಿ ಜಮೀನು, 2.96 ಕೋಟಿ ರು.ನ ಚಿನ್ನಾಭರಣ, 42.22 ಲಕ್ಷ ರು. ಮೌಲ್ಯದ ವಾಹನ ಸೇರಿ ಒಟ್ಟು 4.27 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;. ಅಜಯ್&zwnj; ಸಿಂಗ್&zwnj; (ಸಹಾಯಕ ಕಾರ್ಯಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿ ಕಚೇರಿ, ಬೆಳಗಾವಿ): 7 ಕಡೆ ದಾಳಿ, 7 ಸೈಟ್&zwnj;, 3 ಮನೆ, 12 ಎಕರೆ ಕೃಷಿ ಜಮೀನು, 6.22 ಲಕ್ಷ ರು. ನಗದು, 54.32 ಲಕ್ಷ ರು. ಮೌಲ್ಯದ ಚಿನ್ನಾಭರಣ, 19 ಲಕ್ಷ ರು.ನ ವಾಹನ, 2.35 ಕೋಟಿ ರು. ಬ್ಯಾಂಕ್&zwnj; ಠೇವಣಿ ಸೇರಿದಂತೆ ಒಟ್ಟು 5.81 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;. ಬಿ.ಎನ್&zwnj;.ಬಾಬು (ಸಹಾಯಕ ಔಷಧ ನಿಯಂತ್ರಕ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು):\\B 6 ಕಡೆ ದಾಳಿ, 4 ಸೈಟ್&zwnj;, 5 ಮನೆ, 1.20 ಎಕರೆ ಕೃಷಿ ಜಮೀನು, 25.96 ಲಕ್ಷ ರು. ನಗದು, 1.66 ಕೋಟಿ ರು. ಬ್ಯಾಂಕ್&zwnj; ಠೇವಣಿ ಸೇರಿ ಒಟ್ಟು 4.40 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;.ಎಚ್&zwnj;.ಜಿ.ಸುಶೀಲಮ್ಮ (ಸಹಾಯಕ ಲೆಕ್ಕಾಧಿಕಾರಿ, ನಿರ್ಮಿತಿ ಕೇಂದ್ರ, ಚಿತ್ರದುರ್ಗ ಜಿಲ್ಲೆ ):\\B 2 ಕಡೆ ದಾಳಿ, 13 ಸೈಟ್&zwnj;, 6 ಮನೆ, 1 ಕಾಂಪ್ಲೆಕ್ಸ್&zwnj;, 34.2 ಎಕರೆ ಕೃಷಿ ಜಮೀನು, 85.90 ಲಕ್ಷ ರು. ಮೌಲ್ಯದ ಇತರೆ ವಸ್ತು ಸೇರಿ ಒಟ್ಟು 8.32 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;. ಕೆ.ಆರ್&zwnj;.ಶೋಭಾ (ಜಿಲ್ಲಾ ಅಧಿಕಾರಿ, ಅರಸು ಹಿಂ. ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ):\\B 6 ಕಡೆ ದಾಳಿ, 2 ಸೈಟ್&zwnj;, 1 ಮನೆ, 4.8 ಎಕರೆ ಕೃಷಿ ಜಮೀನು, 57.40 ಲಕ್ಷ ರು.ನ ಚಿನ್ನಾಭರಣ, 1.23 ಕೋಟಿ ರು.ನ ವಾಹನ, ಸೇರಿ ಒಟ್ಟು 3.88 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;6.ಶಿವಣ್ಣ (ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ, ಬಳ್ಳಾರಿ):\\B 5 ಕಡೆ ದಾಳಿ, 14 ಸೈಟ್&zwnj;, 3 ಮನೆ, 44 ಎಕರೆ ಕೃಷಿ ಜಮೀನು, 28 ಲಕ್ಷ ರು. ನಗದು ಸೇರಿ ಒಟ್ಟು 2.82 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;7. ಕೆ.ಎಲ್&zwnj;.ಸುರೇಶ್&zwnj; (ಹಣಕಾಸು ನಿಯಂತ್ರಕ(ನಿವೃತ್ತ), ಕರ್ನಾಟಕ ಪಶು ವಿಜ್ಞಾನ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯ ಬೀದರ್&zwnj;):\\B 2 ಕಡೆ ದಾಳಿ, 2 ಸೈಟ್&zwnj;, 2 ಮನೆ, 3.34 ಎಕರೆ ಕೃಷಿ ಜಮೀನು ಸೇರಿ ಒಟ್ಟು 4.38 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;8. ಐ.ಕೆ.ಪುಟ್ಟಸ್ವಾಮಿ (ಸಹಾಯಕ ಕಾರ್ಯಪಾಲಕ ಅಭಿಯಂತರ, ಹಾರಂಗಿ ಉಪ ವಿಭಾಗ, ಕಾವೇರಿ ನೀರಾವರಿ ನಿಗಮ, ಹಾರಂಗಿ ಪುನರ್ವಸತಿ ವಿಭಾಗ ಕಚೇರಿ, ಕುಶಾಲನಗರ):\\B 4 ಕಡೆ ದಾಳಿ, 6 ಸೈಟ್&zwnj;, 1 ಮನೆ, 51.30 ಲಕ್ಷ ರು.ನ ಚಿನ್ನಾಭರಣ ಸೇರಿ ಒಟ್ಟು 2.99 ಕೋಟಿ ರು. ಮೌಲ್ಯದ ಆಸ್ತಿ.&lt;/p&gt;&lt;p&gt;&lt;strong&gt;ಪತ್ತೆಯಾದ ಅಕ್ರಮ ಆಸ್ತಿ ವಿವರ&lt;/strong&gt;&lt;/p&gt;&lt;p&gt;* 21.71 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಪತ್ತೆ&lt;/p&gt;&lt;p&gt;* 15.21 ಕೋಟಿ ರು. ಮೌಲ್ಯದ ಚರಾಸ್ತಿ ಪತ್ತೆ&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/lokayukta-raids-corrupt-officials-bellary-official-owns-44-acres-14-sites-3-houses-rav/articleshow-hn2bk2r"/>
        </item>
        <item>
            <title><![CDATA[ಬೇಸಿಗೆ ಸೆಕೆ ಅಂತಾ ಬಾಗಿಲು ತೆರೆದು ಮಲಗ್ತೀರಾ ಎಚ್ಚರ, ತಾಳಿ ಬಿಚ್ಚಿಟ್ಟು ಮಲಗಿದ್ದ ಮಹಿಳೆ ಬೆಳಗ್ಗೆ ನೋಡಿದಾಗ ಶಾಕ್!]]></title>
            <link>https://kannada.asianetnews.com/state/thieves-theft-gold-mangalasutra-while-woman-sleeping-opens-door-for-summer-heat-rav/articleshow-zoeyxvz</link>
            <guid isPermaLink="true">https://kannada.asianetnews.com/state/thieves-theft-gold-mangalasutra-while-woman-sleeping-opens-door-for-summer-heat-rav/articleshow-zoeyxvz</guid>
            <pubDate>Wed, 08 Apr 2026 08:50:23 +0530</pubDate>
            <description><![CDATA[ಬೆಂಗಳೂರಿನಲ್ಲಿ ಬೇಸಿಗೆಯ ಸೆಕೆಯಿಂದಾಗಿ ರಾತ್ರಿ ಮನೆಯ ಬಾಗಿಲು ತೆರೆದು ಮಲಗಿದ್ದ ಮಹಿಳೆಯ ಮನೆಯೊಳಗೆ ನುಗ್ಗಿದ ಕಳ್ಳರು, ಚಿನ್ನದ ತಾಳಿ ಹಾಗೂ ಎರಡು ಮೊಬೈಲ್&zwnj;ಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್&zwnj; ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knnheaghvkr9xfpbpebymhzf,imgname-image-23c76899-1775618173457.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8):&lt;/strong&gt; ಬೇಸಿಗೆಯ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರಿ ಮನೆಯ ಬಾಗಿಲು ತೆರೆದಿಟ್ಟು ನಿದ್ರಿಸಿದ್ದ ಮಹಿಳೆಗೆ ಕಳ್ಳರು ದುಬಾರಿ ಪಾಠ ಕಲಿಸಿದ್ದಾರೆ. ಮನೆಯೊಳಗೆ ನುಗ್ಗಿದ ಅಪರಿಚಿತರು ಬಂಗಾರದ ಸರ ಹಾಗೂ ಮೊಬೈಲ್&zwnj;ಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಅಶೋಕನಗರ ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.&lt;/p&gt;&lt;p&gt;ಆನೆಪಾಳ್ಯದ 38 ವರ್ಷದ ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಕಳೆದ ಮಾ.3ರ ರಾತ್ರಿ 1.30 ರ ಸುಮಾರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾತ್ರೆಯನ್ನು ನುಂಗಿ ಮಲಗಲು ಮುಂದಾಗಿದೆ. ಈ ವೇಳೆ ನನ್ನ ಕೊರಳಿನಲ್ಲಿದ್ದ ಚಿನ್ನದ ತಾಳಿ, ನನ್ನ ಮೊಬೈಲ್&zwnj; ಹಾಗೂ ಪತಿಯ ಮೊಬೈಲ್&zwnj;ಗಳನ್ನು ನೆಲದ ಮೇಲೆ ಇಟ್ಟಿದೆ. ಆ ಸಮಯದಲ್ಲಿ ಹೆಚ್ಚಿನ ಸೆಕೆಯಾಗುತ್ತಿದ್ದ ಕಾರಣ ಮನೆಯ ಬಾಗಿಲನ್ನು ತೆರೆದಿಟ್ಟು ಮಲಗಿದೆ. ನಂತರ ಬೆಳಿಗ್ಗೆ 6 ಗಂಟೆಗೆ ಎಚ್ಚರವಾಗಿ ನೋಡಿದ್ದಾಗ ಎರಡು ಮೊಬೈಲ್&zwnj; ಮತ್ತು 18 ಗ್ರಾಂ ತಾಳಿ ಮತ್ತು 4 ತಾಳಿ ಗುಂಡುಗಳು ಕಂಡುಬರಲಿಲ್ಲ. ಹೀಗಾಗಿ ತಾನು ಮಲಗಿದ್ದ ವೇಳೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/thieves-theft-gold-mangalasutra-while-woman-sleeping-opens-door-for-summer-heat-rav/articleshow-zoeyxvz"/>
        </item>
        <item>
            <title><![CDATA[ಸಂಸ್ಕೃತ ಭಾರತದ ಶ್ರೀಮಂತ ಭಾಷೆ: ದೀಕ್ಷಾಂತ ಘಟಿಕೋತ್ಸವದಲ್ಲಿ ರಾಜ್ಯಪಾಲರ ಮಾತು]]></title>
            <link>https://kannada.asianetnews.com/state/sanskrit-is-the-richest-language-of-india-karnataka-governor-s-speech-at-the-convocation-rav/articleshow-usrnezn</link>
            <guid isPermaLink="true">https://kannada.asianetnews.com/state/sanskrit-is-the-richest-language-of-india-karnataka-governor-s-speech-at-the-convocation-rav/articleshow-usrnezn</guid>
            <pubDate>Wed, 08 Apr 2026 08:02:00 +0530</pubDate>
            <description><![CDATA[&lt;p&gt;ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ, ರಾಜ್ಯಪಾಲ ಥಾವರ್&zwnj;ಚಂದ್ ಗೆಹಲೋತ್ ಸಂಸ್ಕೃತದ ಜ್ಞಾನವನ್ನು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸಲು ಕರೆ ನೀಡಿದರು. ಸಾಕ್ಷರತೆ ಹೆಚ್ಚಾದಂತೆ ನೈತಿಕ ಮೌಲ್ಯಗಳು ಕುಸಿಯುತ್ತಿವೆ ಎಂದು ಡಾ.ಸಿ.ಎನ್.ಮಂಜುನಾಥ್ ಕಳವಳ ವ್ಯಕ್ತಪಡಿಸಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knnepq44eajx56vf6fp4vpsg,imgname----------------------94--1775615302788.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8): &lt;/strong&gt;ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಅದರಲ್ಲಿರುವ ಜ್ಞಾನಭಂಡಾರವನ್ನು ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸುವ ಕೆಲಸಗಳು ಆಗಬೇಕಿದೆ ಎಂದು ರಾಜ್ಯಪಾಲ ಥಾವರ್&zwnj;ಚಂದ್ ಗೆಹಲೋತ್ ಹೇಳಿದ್ದಾರೆ.&lt;/p&gt;&lt;p&gt;ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಯ 12 ಮತ್ತು 13ನೇ ದೀಕ್ಷಾಂತ ಘಟಿಕೋತ್ಸವದಲ್ಲಿ ಮಾತನಾಡಿ, ಸಂಸ್ಕೃತ ಭಾಷೆ ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳ ಜನನಿ. ಜಗತ್ತಿನ ಹಲವು ಸಮಸ್ಯೆಗಳಿಗೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ ಎಂದರು.&lt;/p&gt;&lt;p&gt;ಘಟಿಕೋತ್ಸವ ಭಾಷಣ ಮಾಡಿದ ಖ್ಯಾತ ಹೃದ್ರೋಗ ತಜ್ಞ, ಸಂಸದ ಡಾ.ಸಿ.ಎನ್.ಮಂಜುನಾಥ್, ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ನೈತಿಕ ಮೌಲ್ಯ ಹಾಗೂ ಸಿದ್ಧಾಂತ ಕುಸಿಯುತ್ತಿವೆ. ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತೆ ಪ್ರಮಾಣ ಶೇ.30ರಷ್ಟಿತ್ತು. ಆದರೆ ನೈತಿಕತೆ ಶೇ.100 ರಷ್ಟಿತ್ತು. ಆದರೀಗ ಸಾಕ್ಷರತೆ ಶೇ.85ರಷ್ಟಿದ್ದರೆ ನೈತಿಕ ಮೌಲ್ಯ ಶೇ.30ಕ್ಕೆ ಕುಸಿದಿದೆ ಎಂದರು.&lt;/p&gt;&lt;p&gt;ವಿವಿಯ ಕುಲಪತಿ ಪ್ರೊ.ಅಹಲ್ಯಾ ಎಸ್.ಮಾತನಾಡಿದರು. ಘಟಿಕೋತ್ಸವದಲ್ಲಿ ಭಿಕ್ಕು ಆನಂದ ಥೇರೊ, ಡಾ.ಪುಷ್ಪಾ ದೀಕ್ಷಿತ್, ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಪ್ರೊ.ತಿಂಗಪ್ಪ ಎಚ್. ಎಂ., ಪ್ರೊ. ಸುಕಾಂತ್ ಕುಮಾರ್ ಸೇನಾಪತಿ ಅವರಿಗೆ ಗೌರವ ಡಿ.ಲಿಟ್ ಪದವಿ ಪ್ರದಾನ ಮಾಡಲಾಯಿತು. ಕುಲಸಚಿವ ಪ್ರೊ. ವಿ. ಗಿರೀಶ್ ಚಂದ್ರ ಪಾಲ್ಗೊಂಡಿದ್ದರು.&lt;/p&gt;&lt;h2&gt;917 ವಿದ್ಯಾರ್ಥಿಗಳಿಗೆ ಪದವಿ: 26 ಮಂದಿಗೆ ಚಿನ್ನ&lt;/h2&gt;&lt;p&gt;ಘಟಿಕೋತ್ಸವದಲ್ಲಿ ಒಟ್ಟು 917 ವಿದ್ಯಾರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಲಾಯಿತು. 2023-24 ರ ಸಾಲಿನಲ್ಲಿ ರ್&zwj;ಯಾಂಕ್&zwnj; ಪಡೆದ ಒಟ್ಟು 21 ವಿದ್ಯಾರ್ಥಿಗಳು ನಗದು ಬಹುಮಾನ, 26 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. 2024-25ರ ಸಾಲಿನಲ್ಲಿ 21 ಮಂದಿ ನಗದು ಬಹುಮಾನ, 27 ವಿದ್ಯಾರ್ಥಿಗಳು ಸ್ವರ್ಣ ಪದಕಕ್ಕೆ ಭಾಜನರಾದರು. 36 ಮಂದಿ ಪಿಎಚ್.ಡಿ-ವಿದ್ಯಾವಾರಿಧಿ&rsquo; ಪದವಿಯನ್ನು ಸ್ವೀಕರಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/sanskrit-is-the-richest-language-of-india-karnataka-governor-s-speech-at-the-convocation-rav/articleshow-usrnezn"/>
        </item>
        <item>
            <title><![CDATA[Nadoja award controversy: ಡಾಕ್ಟರೆಟ್‌ ಕೊಡುವ ವಿಚಾರದಲ್ಲಿ ವಿವಿಗಳು ಸ್ವತಂತ್ರ, ಹಸ್ತಕ್ಷೇಪ ಮಾಡೋಲ್ಲ ಎಂದ ಹೈಕೋರ್ಟ್‌]]></title>
            <link>https://kannada.asianetnews.com/state/universities-are-free-to-award-doctorates-says-karnaaka-high-court-rav/articleshow-avv8738</link>
            <guid isPermaLink="true">https://kannada.asianetnews.com/state/universities-are-free-to-award-doctorates-says-karnaaka-high-court-rav/articleshow-avv8738</guid>
            <pubDate>Wed, 08 Apr 2026 07:12:28 +0530</pubDate>
            <description><![CDATA[&lt;p&gt;ಡಾ. ಎಚ್.ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ ನಾಡೋಜ ಪದವಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪದವಿ ಪ್ರದಾನದಂತ ವಿಷಯಗಳಲ್ಲಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿವೆ ಮತ್ತು ಆಧಾರರಹಿತ ಆರೋಪ ಸಲ್ಲ ಎಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k5xvrhbtf3jycpmrdj3gwwck,imgname-karnataka-high-court-1758717560186.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8): &lt;/strong&gt;ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು, ಈಗ&zwnj; ನಿವೃತ್ತಿ ಹೊಂದಿರುವ ಡಾ.&zwnj;ಎಚ್&zwnj;.ಸಿ. ಸತ್ಯನ್ ಅವರಿಗೆ ಹಂಪಿ&zwnj; ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿ ಪ್ರದಾ&zwnj;ನ ಮಾಡಿರುವುದನ್ನು ಪ್ರಶ್ನಿಸಿ&zwnj;&zwnj; ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.&lt;/p&gt;&lt;p&gt;ಈ ಕುರಿತಂತೆ ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ &zwnj;ಸಂಸ್ಥೆಯ ಅಧ್ಯಕ್ಷ ಎಸ್.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ&zwnj; ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ವಿಚಾರಣೆ ವೇಳೆ&zwnj; ಅರ್ಜಿದಾರರ ಪರ ವಕೀಲರು, ಸತ್ಯನ್&zwnj; ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಭ್ರಷ್ಟಾಚಾರ ಸಾಬೀತಾಗಿದೆಯೇ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ಆಗ ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.&lt;/p&gt;&lt;p&gt;ಅಲ್ಲದೇ, ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾ&zwnj;ನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ&zwnj; ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.&lt;/p&gt;&lt;p&gt;2026ರ ಫೆ.24ರಂದು ನಡೆದಿದ್ದ ಹಂಪಿ &zwnj;ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಡಾ.ಎಚ್.ಸಿ&zwnj;.ಸತ್ಯನ್ ಅವರಿಗೆ ನಾಡೋಜ ಪ್ರದಾ&zwnj;ನ ಮಾಡಿದ್ದರು.&zwnj; ಅದನ್ನು ಅರ್ಜಿದಾರರು ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/universities-are-free-to-award-doctorates-says-karnaaka-high-court-rav/articleshow-avv8738"/>
        </item>
        <item>
            <title><![CDATA[Mallikarjun Kharge: ಬಿಜೆಪಿ, ಆರೆಸ್ಸೆಸ್‌ ಅನ್ನು ವಿಷ ಸರ್ಪಕ್ಕೆ ಹೋಲಿಸಿದ ಕೇಸ್‌: ಖರ್ಗೆ ಬಂಧನಕ್ಕೆ ರಾಜ್ಯ ಬಿಜೆಪಿ ದೂರು]]></title>
            <link>https://kannada.asianetnews.com/politics/karnataka-bjp-fir-against-mallikarjun-kharge-for-alleged-provocative-speech-rav/articleshow-dfntoox</link>
            <guid isPermaLink="true">https://kannada.asianetnews.com/politics/karnataka-bjp-fir-against-mallikarjun-kharge-for-alleged-provocative-speech-rav/articleshow-dfntoox</guid>
            <pubDate>Wed, 08 Apr 2026 06:40:54 +0530</pubDate>
            <description><![CDATA[&lt;p&gt;ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ಡಿಜಿ-ಐಜಿಪಿಗೆ ದೂರು ನೀಡಿದ್ದಾರೆ. ಜೊತೆಗೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಾಹೀರಾತು ವೆಚ್ಚ ಅಭ್ಯರ್ಥಿಗಳ ಖಾತೆಗೆ ಸೇರಿಸುವಂತೆ ಚುನಾವಣಾ ಆಯೋಗಕ್ಕೂ ದೂರು&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knn9qhnpns3jgyf2ttb39nnk,imgname----------------------91--1775610087094.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.8): &lt;/strong&gt;ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಾಯಕರು ರಾಜ್ಯ ಪೊಲೀಸ್&zwnj; ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ.&lt;/p&gt;&lt;p&gt;ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್&zwnj;.ಮುನಿರಾಜು, ಅಸ್ಸಾಂನಲ್ಲಿ ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣಾ ಭಾಷಣದ ವೇಳೆ ನಮಾಜ್&zwnj; ಮಾಡುವಾಗ ವಿಷ ಸರ್ಪ ಬಂದರೆ ನೀವು ನಮಾಜ್&zwnj; ನಿಲ್ಲಿಸಿ ಅದನ್ನು ಕೊಲ್ಲಿ. ನಮಾಜ್&zwnj; ಮಾಡುವಾಗ ಬಿಜೆಪಿ, ಆರ್&zwnj;ಎಸ್&zwnj;ಎಸ್&zwnj;ನವರು ಬಂದರೂ ನಮಾಜ್&zwnj; ನಿಲ್ಲಿಸಿ ಅವರನ್ನೂ ಕೊಲ್ಲಿ. ಇದು ಕುರಾನ್&zwnj;ನಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ. ಇದು ಬೆಂಕಿ ಹೆಚ್ಚುವ ಕೆಲಸ ಎಂದು ಟೀಕಿಸಿದರು.&lt;/p&gt;&lt;p&gt;ಕೋಮುಗಲಭೆ ಹರಡುವ ಸಂದರ್ಭಗಳು ಬರಬಹುದು. ದೇಶದ್ರೋಹಿಗಳು, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಿವು. ಇದರ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಈ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಬಂಧನಕ್ಕೆ ಆಗ್ರಹಿಸಿ ರಾಜ್ಯ ಪೊಲೀಸ್&zwnj; ಮಹಾನಿರ್ದೇಶಕರಿಗೆ ದೂರು ನೀಡಲಾಗಿದೆ ಎಂದರು.&lt;/p&gt;&lt;h2&gt;ಚುನಾವಣಾ ಆಯೋಗಕ್ಕೆ ದೂರು:&lt;/h2&gt;&lt;p&gt;ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಮೂರು ದಿನಗಳಿಂದ ನೀಡುತ್ತಿರುವ ಪತ್ರಿಕಾ ಜಾಹೀರಾತುಗಳನ್ನು ಈ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಖರ್ಚು ಲೆಕ್ಕಕ್ಕೆ ಸೇರಿಸುವಂತೆ ಬಿಜೆಪಿ ನಾಯಕರು ಮಂಗಳವಾರ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bjp-fir-against-mallikarjun-kharge-for-alleged-provocative-speech-rav/articleshow-dfntoox"/>
        </item>
        <item>
            <title><![CDATA[1 ಐಪಿಎಲ್ ಟಿಕೆಟ್ ₹20,000! ಬ್ಲ್ಯಾಕ್‌ ಟಿಕೆಟ್  ಮಾರುತ್ತಿದ್ದ 11 ಮಂದಿ ಅರೆಸ್ಟ್]]></title>
            <link>https://kannada.asianetnews.com/state/11-people-arrested-for-selling-ipl-black-tickets-at-chinnaswamy-stadium-bengaluru-rav/articleshow-713gv6y</link>
            <guid isPermaLink="true">https://kannada.asianetnews.com/state/11-people-arrested-for-selling-ipl-black-tickets-at-chinnaswamy-stadium-bengaluru-rav/articleshow-713gv6y</guid>
            <pubDate>Wed, 08 Apr 2026 06:17:42 +0530</pubDate>
            <description><![CDATA[&lt;p&gt;ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್&zwnj;ಸಿಬಿ ಮತ್ತು ಸಿಎಸ್&zwnj;ಕೆ ಪಂದ್ಯದ ಐಪಿಎಲ್ ಟಿಕೆಟ್&zwnj;ಗಳನ್ನು ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ 11 ಮಂದಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆನ್&zwnj;ಲೈನ್ ಟಿಕೆಟ್ ವರ್ಗಾವಣೆ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕೃತ್ಯ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knn8je0me4m1vf3ez4yaqdpg,imgname----------------------90--1775608870932.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.8) &lt;/strong&gt;ಮೊಬೈಲ್ ಕಳ್ಳತನ ಕೃತ್ಯಗಳು ನಡೆದ ಬೆನ್ನಲ್ಲೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಳ ಸಂತೆಯಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕಿಳಿದಿದ್ದ 11 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮಧ್ಯಪ್ರದೇಶದ ಸುಪ್ರಿಯಾ ಫಡ್ಕೆ, ಇವರ ಸ್ನೇಹಿತ ನಿತಿನ್&zwnj;, ಮೋಹನ್&zwnj; ಗೌಡ, ಯಾದಗಿರಿಯ ಮಂಜುನಾಥ, ಪೀಣ್ಯದ ಪುನೀತ್&zwnj;, ಲಿಖಿತ್&zwnj;, ನೆಲಮಂಗಲದ ಹರ್ಷಾ ರವಿ, ವಿನಯ್&zwnj;ಗೌಡ, ಜಗದೀಶ್&zwnj;, ಸತ್ಯನಾರಾಯಣ, ದಿನೇಶ್&zwnj;ರಾವ್&zwnj; ಬಂಧಿತರು.&lt;/p&gt;&lt;p&gt;ಕಳೆದ ಭಾನುವಾರ ನಡೆದ ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್&zwnj;ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್&zwnj;ಕೆ) ತಂಡಗಳ ಪಂದ್ಯದ ವೇಳೆ ಅಕ್ರಮವಾಗಿ ದುಬಾರಿ ಬಲೆಗೆ ಟಿಕೆಟ್ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 28 ಟಿಕೆಟ್&zwnj;ಗಳು ಹಾಗೂ 8 ಮೊಬೈಲ್ ಸೇರಿದಂತೆ ₹4.53 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಕಳೆದ ಪಂದ್ಯದ ವೇಳೆ 75 ಮೊಬೈಲ್&zwnj;ಗಳನ್ನು ಕಳವು ಮಾಡಿದ್ದ ಜಾರ್ಖಂಡ್ ತಂಡವನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದರು. ಈಗ ಕಾಳ ಸಂತೆಯಲ್ಲಿ ಟಿಕೆಟ್ ಮಾರಾಟಗಾರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.&lt;/p&gt;&lt;h2&gt;ಟಿಕೆಟ್ ಮಾರಾಟ ಹೇಗೆ:&lt;/h2&gt;&lt;p&gt;ಆನ್&zwnj;ಲೈನ್&zwnj;ನಲ್ಲಿ 4 ಟಿಕೆಟ್&zwnj;ಗಳನ್ನು ಒಬ್ಬರು ಖರೀದಿಸಬಹುದು. ಹೀಗೆ ಕೊಂಡ ಟಿಕೆಟ್&zwnj;ಗಳನ್ನು ಬೇರೆಯವರಿಗೆ ವರ್ಗಾಯಿಸಲು ಒಂದು ಬಾರಿಗೆ ಅವಕಾಶವಿದೆ. ಲಿಂಕ್ ಶೇರ್ ಮಾಡಿ ಓಟಿಪಿ ಹಾಕಿದರೆ ಬೇರೆಯವರ ಹೆಸರಿನಲ್ಲಿ ಖರೀದಿಸಿದ್ದ ಟಿಕೆಟ್ ಅನ್ನು ಪಡೆಯಬಹುದು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಆರೋಪಿಗಳು ಹಣ ಸಂಪಾದನೆಗೆ ಯತ್ನಿಸಿದ್ದರು.&lt;/p&gt;&lt;p&gt;ತಮ್ಮ ಹೆಸರಿನಲ್ಲಿ 4 ಟಿಕೆಟ್&zwnj;ಗಳನ್ನು ಖರೀದಿಸಿದ್ದರು. ಪಂದ್ಯ ವೀಕ್ಷಣೆಗೆ ಕ್ರೀಡಾಂಗಣ ಬಳಿ ಬಂದು ಟಿಕೆಟ್ ಸಿಗದೆ ನಿಂತಿದ್ದವರ ಬಳಿ ತೆರಳಿ ಆರೋಪಿಗಳು ಟಿಕೆಟ್ ಮಾರಾಟ ಮಾಡುತ್ತಿದ್ದರು. ತಲಾ ಟಿಕೆಟ್ ₹10 ರಿಂದ 20 ಸಾವಿರಕ್ಕೆ ಮಾರುತ್ತಿದ್ದರು. ಈ ಆರೋಪಿಗಳ ಪೈಕಿ ಬಹುತೇಕರು ಖಾಸಗಿ ಕಂಪನಿಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಸುಲಭವಾಗಿ ಹಣ ಸಂಪಾದನೆಗೆ ಈ ದಂಧೆಗಿಳಿದು ಈಗ ಜೈಲು ಸೇರುವಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/11-people-arrested-for-selling-ipl-black-tickets-at-chinnaswamy-stadium-bengaluru-rav/articleshow-713gv6y"/>
        </item>
        <item>
            <title><![CDATA[ಏ.15 ಕ್ಕೆ ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಈ ದಿನ ಭಕ್ತರಿಗೆ ನಿರ್ಬಂಧ]]></title>
            <link>https://kannada.asianetnews.com/state/pm-modi-to-visit-adichunchanagiri-mutt-on-april-15-rav/articleshow-rrzyg6t</link>
            <guid isPermaLink="true">https://kannada.asianetnews.com/state/pm-modi-to-visit-adichunchanagiri-mutt-on-april-15-rav/articleshow-rrzyg6t</guid>
            <pubDate>Wed, 08 Apr 2026 06:00:55 +0530</pubDate>
            <description><![CDATA[ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ನಿರ್ಮಿಸಿರುವ ಶ್ರೀ ಬಾಲಗಂಗಾಧರನಾಥ ಶ್ರೀಗಳ ನೂತನ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಏ.15 ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಮಠ ಮತ್ತು ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knn7twzhbpt3gkh9z0qwp25n,imgname----------------------89--1775608099825.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;- ಅಂದು ಬಾಲಗಂಗಾಧರನಾಥರ ಮಂದಿರ ಉದ್ಘಾಟನೆ&lt;/li&gt; &lt;li&gt;- ಆ ದಿನ ಮಠ, ದೇವಾಲಯಕ್ಕೆ ಭಕ್ತರಿಗಿಲ್ಲ ಪ್ರವೇಶ&lt;/li&gt;&lt;/ul&gt;&lt;p&gt;&lt;strong&gt;&amp;nbsp;ನಾಗಮಂಗಲ (ಏ.8): &lt;/strong&gt;ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪುಣ್ಯ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಏ.15ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಮೋದಿ ಭೇಟಿ ಹಿನ್ನೆಲೆಯಲ್ಲಿ ಏ.15ರಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.&lt;/p&gt;&lt;p&gt;ಶ್ರೀಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿ ಡಾ.ಬಾಲಗಂಗಾಧರನಾಥ ಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಏ.10ರಿಂದ 15ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಏ.15ರಂದು ಬೆಳಗ್ಗೆ ಶ್ರೀಗುರು ಭೈರವೈಕ್ಯ ಮಂದಿರವನ್ನು ಮೋದಿ ಉದ್ಘಾಟಿಸಲಿದ್ದಾರೆ. ಬಳಿಕ, ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.&lt;/p&gt;&lt;p&gt;ಶ್ರೀಗಳ ಆಶಯದಂತೆ 175 *150 ಅಡಿ ವಿಸ್ತೀರ್ಣದಲ್ಲಿ ಕೆಂಪು ಶಿಲೆ ಮತ್ತು ವಿವಿಧ ಬಗೆಯ ಶಿಲಾ ಕಲ್ಲುಗಳಿಂದ ಶ್ರೀಗುರು ಭೈರವೈಕ್ಯ ಮಂದಿರ ನಿರ್ಮಾಣಗೊಂಡಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/pm-modi-to-visit-adichunchanagiri-mutt-on-april-15-rav/articleshow-rrzyg6t"/>
        </item>
        <item>
            <title><![CDATA[₹3 ಕೋಟಿ ನೀಡದ್ದಕ್ಕೆ ಸುಳ್ಳು ಆರೋಪ: ಮಹಿಳೆ ವಿರುದ್ಧ ಮಾಜಿ ಕೂಡಲ ಶ್ರೀಗಳ ದೂರು, ಹಣಕ್ಕೆ ಪೀಡಿಸಿ, ಕಾರು ಅಡ್ಡಗಟ್ಟಿ ಹಲ್ಲೆ ಆರೋಪ]]></title>
            <link>https://kannada.asianetnews.com/state/false-allegations-for-refusing-rs3-crore-former-koodala-seer-files-complaint-against-woman-rav/articleshow-hp9qc1g</link>
            <guid isPermaLink="true">https://kannada.asianetnews.com/state/false-allegations-for-refusing-rs3-crore-former-koodala-seer-files-complaint-against-woman-rav/articleshow-hp9qc1g</guid>
            <pubDate>Wed, 08 Apr 2026 05:07:25 +0530</pubDate>
            <description><![CDATA[&lt;p&gt;ಕೂಡಲಸಂಗಮ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೆಂಗಳೂರಿನ ಮಹಿಳೆಯೊಬ್ಬಳು ತಮಗೆ 3 ಕೋಟಿ ರೂ.ಗೆ ಬೇಡಿಕೆ ಇಟ್ಟು, ಹಣ ನೀಡದಿದ್ದಕ್ಕೆ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knn4ew90xxrfqys5caa4xt6e,imgname----------------------87--1775604560160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.8): &lt;/strong&gt;ಬೆಂಗಳೂರು ಮೂಲದ ಮಹಿಳೆಯೊಬ್ಬಳು ತಮಗೆ 3 ಕೋಟಿ ರು.ಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಕ್ಕೆ ಫೆಬ್ರವರಿ 11ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಮಾಜಿ ಪೀಠಾಧಿಕಾರಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದು, ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏ.4ರಂದು ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;ಪಂಚಮಸಾಲಿ ಹೋರಾಟಕ್ಕೆ ಸಾಥ್ ನೀಡುತ್ತೇನೆಂದು ಪರಿಚಯ:&lt;/h2&gt;&lt;p&gt;ಬೆಂಗಳೂರು ಮೂಲದ ಮಹಿಳೆ, ಪೃಥ್ವಿಗೌಡ, ಯಶವಂತ ಹಾಗೂ ಎಂ.ಡಿ.ವೀರೇಶ ಎಂಬುವವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದಾರೆ. &lsquo;2-3 ವರ್ಷಗಳ ಹಿಂದೆ ಮಹಿಳೆ ಬೆಂಗಳೂರಿನಲ್ಲಿ ತನ್ನ ಸಹೋದರನೊಂದಿಗೆ ಭೇಟಿಯಾಗಿದ್ದಳು. ತಾನು ಲಿಂಗಾಯತ ಸಮಾಜದವಳು, ಫೌಂಡೇಶನ್ ವೊಂದರ ಮುಖ್ಯಸ್ಥೆ ಎಂದು ಪರಿಚಯ ಮಾಡಿಕೊಂಡಿದ್ದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ. ಪಂಚಮಸಾಲಿ ಹೋರಾಟಕ್ಕೂ ಸಾಥ್ ನೀಡುತ್ತೇನೆ ಎಂದು ಹೇಳಿದ್ದಳು.&lt;/p&gt;&lt;h3&gt;ಪೌಂಡೇಶನ್&zwnj;ಗೆ ಹಣ ನೀಡುವಂತೆ ಒತ್ತಾಯ&lt;/h3&gt;&lt;p&gt;ನಂತರ, ಫೌಂಡೇಶನ್ ಗೆ ಹಣ ನೀಡುವಂತೆ ಒತ್ತಾಯಿಸಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ಆಕೆಗೆ ಭರವಸೆ ನೀಡಿದ್ದೆ. ನಂತರ, ಆಕೆ ಹಣಕ್ಕಾಗಿ ನನ್ನನ್ನು ಪೀಡಿಸಲು ಆರಂಭಿಸಿದಳು. ಹಣ ನೀಡದ ಕಾರಣ, ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ಬ್ಲ್ಯಾಕ್&zwnj;ಮೇಲ್&zwnj; ಮಾಡಿದ್ದಾಳೆ&lsquo; ಎಂದು ಸ್ವಾಮೀಜಿ ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lsquo;ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ನನ್ನ ವಾಹನ ಅಡ್ಡಗಟ್ಟಿ, ಬೆದರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ನೀಡದ ಕಾರಣ ನನ್ನ ಹಲ್ಲೆ ನಡೆಸಿದ್ದಾರೆ. ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಈ ವೇಳೆ, ನನ್ನ ಬೆಂಗಾವಲು ಸಿಬ್ಬಂದಿ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಬಳಿಕ, ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿಸಿದರು. ಬಳಿಕ, ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಇಂತಹ ಸುದ್ದಿ ಪ್ರಸಾರಕ್ಕೆ ನಾನು ತಡೆಯಾಜ್ಞೆ ತಂದರೂ, ಖಾಸಗಿ ವಾಹಿನಿಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿಸಿದ್ದಾಳೆ.&amp;nbsp;&lt;/p&gt;&lt;p&gt;ಬಳಿಕ, ನನ್ನ ಶಿಷ್ಯ ರಾಜಕುಮಾರ ಸಿ.ಎಂ.ಎಂಬುವರಿಗೆ ಕರೆ ಮಾಡಿ, ₹3 ಕೋಟಿಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡಿ, ನನ್ನ ವಿರುದ್ಧ ಅಪಪ್ರಚಾರ ನಡೆಸುವುದಾಗಿ, ಅತ್ಯಾ೧ಚಾರದ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ. ಪಂಚಮಸಾಲಿ ಹೋರಾಟ ಹತ್ತಿಕ್ಕಲು, ನನ್ನ ತೇಜೋವಧೆ ಮಾಡಲು ಆಕೆ ಇಂತಹ ಕೆಲಸ ಮಾಡುತ್ತಿದ್ದಾಳೆ. ಹೀಗಾಗಿ, ಆಕೆ ಹಾಗೂ ಆಕೆಯ ಈ ಕೃತ್ಯಕ್ಕೆ ಸಹಕರಿಸುತ್ತಿರುವ ಮೂವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ&lsquo; ಎಂದು ಸ್ವಾಮೀಜಿ ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/false-allegations-for-refusing-rs3-crore-former-koodala-seer-files-complaint-against-woman-rav/articleshow-hp9qc1g"/>
        </item>
        <item>
            <title><![CDATA[ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!]]></title>
            <link>https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um</link>
            <guid isPermaLink="true">https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um</guid>
            <pubDate>Tue, 07 Apr 2026 21:25:07 +0530</pubDate>
            <description><![CDATA[ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್&zwnj;ಐ ಅಧಿಕಾರಿಗಳು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ದೇಹದ ಖಾಸಗಿ ಭಾಗಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಜಾಲದಲ್ಲಿ ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knma8epg3jfgg0d3vvybmw14,imgname-tumakuru-hero-stone-inscription--2--1775577086671.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಭಾರೀ ಪ್ರಮಾಣದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಸುಮಾರು 5 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 356 ಗ್ರಾಂ ಶುದ್ಧ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;ರನ್ಯಾ ರಾವ್ ಪ್ರಕರಣದ ಬಳಿಕ ಮತ್ತೊಂದು ದೊಡ್ಡ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, DRI ಅಧಿಕಾರಿಗಳ ಕಾರ್ಯಾಚರಣೆ ಗಮನಸೆಳೆಯುತ್ತಿದೆ. ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಟರ್ಮಿನಲ್-2 ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;ಚಿನ್ನ ಸಾಗಾಟದ ಹೊಸ ತಂತ್ರಗಳು ಬಯಲು&lt;/h2&gt;&lt;p&gt;ತನಿಖೆಯಲ್ಲಿ ಆರೋಪಿಗಳು ಚಿನ್ನವನ್ನು ಕ್ಯಾಪ್ಸುಲ್ ಹಾಗೂ ಪೇಸ್ಟ್ ರೂಪದಲ್ಲಿ ಪರಿವರ್ತಿಸಿ ದೇಹದ ಖಾಸಗಿ ಭಾಗಗಳಲ್ಲಿ ಅಡಗಿಸಿಕೊಂಡು ಸಾಗಾಟ ಮಾಡುತ್ತಿದ್ದರೆಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ವಿಮಾನ ನಿಲ್ದಾಣದ ಶೌಚಾಲಯಗಳು ಮತ್ತು ಧೂಮಪಾನ ವಲಯಗಳಲ್ಲಿ ಈ ಚಿನ್ನವನ್ನು ಪರಸ್ಪರ ಹಸ್ತಾಂತರ ಮಾಡಲಾಗುತ್ತಿತ್ತು.&lt;/p&gt;&lt;p&gt;ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ವಿಶೇಷ ಪಾಸ್&zwnj;ಕೋಡ್&zwnj;ಗಳನ್ನು ಬಳಸಿಕೊಂಡು ಸಂಪರ್ಕ ಸಾಧಿಸುತ್ತಿದ್ದರು. ಇನ್ನು ಸಂವಹನಕ್ಕಾಗಿ ಎನ್&zwnj;ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಡಿಸಪಿಯರ್ ಚಾಟ್&zwnj;ಗಳನ್ನೂ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;h2&gt;ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಶಂಕೆ&lt;/h2&gt;&lt;p&gt;ಈ ಕಳ್ಳಸಾಗಣೆ ಜಾಲವು ಸಿಂಡಿಕೇಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಧ್ಯತೆ ಇದ್ದು, ನಿರ್ಬಂಧಿತ ವಲಯಗಳಿಗೆ ಅಧಿಕೃತ ಪ್ರವೇಶ ಹೊಂದಿದ್ದ ವ್ಯಕ್ತಿಗಳ ಸಹಕಾರವೂ ಇದರಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು DRI ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.&lt;/p&gt;&lt;h2&gt;ಬಾಂಗ್ಲಾದೇಶ ಮೂಲದ ಜಾಲದ ಸುಳಿವು&lt;/h2&gt;&lt;p&gt;ಪ್ರಾಥಮಿಕ ತನಿಖೆಯಲ್ಲಿ ಈ ಕಳ್ಳಸಾಗಣೆ ಜಾಲದ ಹಿಂದೆ ಬಾಂಗ್ಲಾದೇಶ ಮೂಲದ ವ್ಯಕ್ತಿಗಳ ಸಂಪರ್ಕ ಇರುವುದಾಗಿ ತಿಳಿದುಬಂದಿದೆ. ಜೊತೆಗೆ ಬೆಂಗಳೂರಿನ ಕೆಲವರ ಸಹ ಭಾಗಿತ್ವವೂ ಇರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಜಾಲದ ಪ್ರಮುಖ ಮಾಸ್ಟರ್&zwnj;ಮೈಂಡ್&zwnj;ಗಳು (Kingpins) ಇನ್ನೂ ಪತ್ತೆಯಾಗಿಲ್ಲ.&lt;/p&gt;&lt;h2&gt;ತನಿಖೆ ಮುಂದುವರಿಕೆ&lt;/h2&gt;&lt;p&gt;ಪ್ರಸ್ತುತ ಪ್ರಕರಣದ ಕುರಿತು DRI ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ. ಈ ಘಟನೆ ಬೆಂಗಳೂರು ಏರ್ಪೋರ್ಟ್&zwnj;ನಲ್ಲಿ ಭದ್ರತಾ ಕ್ರಮಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um"/>
        </item>
        <item>
            <title><![CDATA[ಡಿಗ್ರಿ ಇಲ್ಲದಿದ್ದರೂ ಕೈತುಂಬಾ ಸಂಪಾದನೆ:  45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌]]></title>
            <link>https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</link>
            <guid isPermaLink="true">https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg</guid>
            <pubDate>Tue, 07 Apr 2026 18:09:30 +0530</pubDate>
            <description><![CDATA[&lt;p&gt;&lt;strong&gt;high demand blue collar jobs: &lt;/strong&gt;ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್&zwnj;ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್&zwnj;, ಪ್ಲಂಬರ್&zwnj;ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkdz9cmbra0cr2n110c198v,imgname-gettyimages-1391182652-1775547426196.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು&lt;/strong&gt;&lt;/h2&gt;&lt;p&gt;ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಿಂದಾಗಿ ಇಂದು ಹಲವು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಇದರ ಪರಿಣಾಮ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಾಮೂಹಿಕ ಉದ್ಯೋಗ ಕಡಿತದಿಂದಾಗಿ ವೈಟ್&zwnj; ಕಾಲರ್ ಉದ್ಯೋಗಿಳೆಂದೇ ಕರೆಯಲ್ಪಡುವ ಸಾಫ್ಟ್&zwnj;ವೇರ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಇತ್ತ ಎಐ ಟಚ್ ಮಾಡಲು ಕೂಡ ಸಾಧ್ಯವಿಲ್ಲದ ಉದ್ಯೋಗಗಳನ್ನು ಮಾಡುತ್ತಿರುವ ಹೆಚ್ಚೇನು ಓದದ ಉದ್ಯೋಗಿಗಳು ದಿನಕ್ಕೆ ಗಂಟೆಗೆ ಸಾವಿರಾರು ರೂಪಾಯಿಗಳನ್ನು ದುಡಿಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಸಾಫ್ಟ್&zwnj;ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್&zwnj;ಗಳೇ ಈಗ 'ಕಿಂಗ್&lt;/strong&gt;&lt;/h3&gt;&lt;p&gt;ಹೌದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಈ ಬ್ಲೂ ಕಾಲರ್ ಜಾಬ್ ಉದ್ಯೋಗಿಗಳ ಕೆಲಸ ಹಾಗೂ ಸಂಪಾದನೆಯ ಬಗ್ಗೆ ಬರೆದುಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಹೌದು ಕಾರ್&zwnj;ಪೆಂಟರ್&zwnj;ಗಳು(ಮರದ ಕೆಲಸ ಮಾಡುವ ಬಡಗಿ) ಪ್ಲಂಬರ್&zwnj;ಗಳು, ವೈರಿಂಗ್ ಮಾಡುವವರಿಗೆ ನಗರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನಗರಗಳಲ್ಲಿ ಅವರನ್ನು ಹುಡುಕುವುದೇ ಒಂದು ದೊಡ್ಡ ಕೆಲಸ ಇದರ ಜೊತೆಗೆ ಅವರಿಗೆ ಕೇವಲ ಕೆಲ ಗಂಟೆಗಳ ಕೆಲಸಕ್ಕೆ ಸಾಕಷ್ಟು ಮೊತ್ತದ ಹಣ ನೀಡಬೇಕಾಗುತ್ತದೆ. ಹಾಗೆಯೇ ಇಲ್ಲಿ ಈ ಉದ್ಯೋಗದ ಬಗ್ಗೆ ಹೇಳಿಕೊಂಡಿದ್ದು ಅವರ ಪೋಸ್ಟ್&zwnj; ಎಕ್ಸ್&zwnj;ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.&lt;/p&gt;&lt;h3&gt;&lt;strong&gt;ವೈರಲ್ ಪೋಸ್ಟ್ ಬಿಚ್ಚಿಟ್ಟ ಅಚ್ಚರಿಯ ಸತ್ಯ!&lt;/strong&gt;&lt;/h3&gt;&lt;p&gt;@GurugramDeals ಎಂಬುವವರು ಈ ಪೋಸ್ಟ್ ಮಾಡಿದ್ದು, ತಮ್ಮ ಪೋಸ್ಟ್&zwnj;ನಲ್ಲಿ ಹೀಗೆ ಬರೆದಿದ್ದಾರೆ. ಕೆಲವು ಕಪಾಟುಗಳನ್ನು ಅಳವಡಿಸುವ ಮತ್ತು ಒಂದೆರಡು ಪೇಟಿಂಗ್ ಚಿತ್ರಗಳನ್ನು ನೇತುಹಾಕುವ 45 ನಿಮಿಷಗಳ ಕೆಲಸಕ್ಕೆ ಬಡಗಿಗೆ 900 ರೂ. ಪಾವತಿಸಲಾಯಿತು. ಬ್ಲೂ ಕಾಲರ್ ಉದ್ಯೋಗಕ್ಕೆ ಭವಿಷ್ಯವಿದೆ, ಯುವಕರಿಗೆಇತರ ಬಳಕೆಯಲ್ಲಿಲ್ಲದ ಪದವಿಗಳಿಗಿಂತ ಕೌಶಲ್ಯ ಆಧಾರಿತ ತರಬೇತಿಗೆಆದ್ಯತೆ ನೀಡಬೇಕು. ಇವುಗಳಿಗೆ ಎಐನಿಂದ ಯಾವುದೇ ಬೆದರಿಕೆ ಇರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಜೊತೆಗೆ ಅನೇಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಗಂಟೆಯ ಕೆಲಸಕ್ಕೆ ಸಾವಿರಗಳಲ್ಲಿ ಸಂಭಾವನೆ&lt;/strong&gt;&lt;/p&gt;&lt;p&gt;ನಿಜ ಫಾಲ್ಸ್ ಸೀಲಿಂಗ್ ಎಲೆಕ್ಟ್ರಿಕ್ ವೈರಿಂಗ್&zwnj;ಗಾಗಿ ಸುಮಾರು 30000 ರೂಪಾಯಿ ಪಾವತಿಸಬೇಕಾಯಿತು ಮತ್ತು ಅವನು ಮಾಡಿದ ಕೆಲಸವನ್ನು ನೋಡಿ ನಾನು ಮೋಡಿಗೊಂಡೆ, ನನಗೂ ಅದನ್ನು ಮಾಡಬೇಕು ಎನಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಳೆದ ತಿಂಗಳು, ಮುಂಬೈನ ವ್ಯಕ್ತಿಯೊಬ್ಬರು ತಮ್ಮ ಸೊಸೈಟಿಯ ಪ್ಲಂಬರ್ ಮೀರಾ ರಸ್ತೆ, ಬೋರಿವಲಿ ಮತ್ತು ಕಂಡಿವಲಿ ಪಟ್ಟಣಗಳಲ್ಲಿ ಕೆಲಸ ಮಾಡುತ್ತಾ ವರ್ಷಕ್ಕೆ 18 ಲಕ್ಷ ರೂ. (LPA) ಗಳಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ಪ್ಲಂಬರ್ ಚೆನ್ನಾಗಿ ಸಂಪಾದಿಸುತ್ತಿದ್ದಿದ್ದಲ್ಲದೆ, ದುಬಾರಿ ಕಾರು ಖರೀದಿಸಿದ್ದರು, ಮನೆ ಕಟ್ಟಿದ್ದರು ಮತ್ತು ಕೃಷಿಭೂಮಿಯನ್ನು ಸಹ ಖರೀದಿಸಿದ್ದರು, ಇವೆಲ್ಲವನ್ನೂ ಅವರ ಸ್ವಂತ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು ಎಂದು ಅವರು ಹೇಳಿಕೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;21ನೇ ವಯಸ್ಸಿಗೆ ಅಕ್ಷರಾಭ್ಯಾಸ: ಏರ್&zwnj;ಪೋರ್ಟ್ ಸ್ಟಾಫ್ ಆಗಿ ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ನೀವು ಯಾವುದೇ ಎಲೆಕ್ಟ್ರಿಷಿಯನ್/ಬಡಗಿ/ಪ್ಲಂಬರ್&zwnj;ನ್ನು ಕರೆಯುತ್ತೀರಿ. ಅವರು 1-2 ಗಂಟೆಗಳ ಕೆಲಸಕ್ಕೆ 1000-2000 ಕೇಳುತ್ತಾರೆ. ಅದರ ಮೇಲೆ, ಅವರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಲ್ಲ, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜನರು ಬ್ಲೂ-ಕಾಲರ್ ಕೆಲಸ ಹಾಗೂ ಕೆಲಸಗಾರರನ್ನು ಗೌರವಿಸಲು ಪ್ರಾರಂಭಿಸಿದರೆ ಅದು ಉತ್ತಮ ಆಯ್ಕೆಯಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ&lt;/strong&gt;&lt;/p&gt;&lt;p&gt;ನಮಗೆ ಹೋಲಿಸಿದರೆ ವಿಯೆಟ್ನಾಂ ಉತ್ಪಾದನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ. ಅವರು ದೊಡ್ಡ ದೊಡ್ಡ ಡಿಗ್ರಿಯ ಉನ್ನತ ಶಿಕ್ಷಣದ ಬದಲು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯತ್ತ ಹೆಚ್ಚಿನ ಗಮನಹರಿಸಿದರು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಬ್ಲೂ ಕಾಲರ್ ಜಾಬ್&zwnj;ಗಳಿಗೆ ಇರುವ ಉದ್ಯೋಗವಕಾಶಗಳು ನಗರಗಳಲ್ಲಿ ಧಾರಾಳವಾಗಿದ್ದಲ್ಲದೇ ಅವರ ಸಂಪಾದನೆಯೂ ಚೆನ್ನಾಗಿರುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Paid the carpenter Rs. 900 for a 45 minute job installing some shelves and hanging a couple of paintings. Blue collar jobs are the future, skill based training for the youth should be prioritised over other obsolete degrees. No threat from AI either.&lt;/p&gt;&lt;p&gt;&mdash; Bhandari ka Vyang (@GurugramDeals) April 5, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Anusha Kb</dc:creator>
            <atom:link href="https://kannada.asianetnews.com/jobs/no-ai-threat-these-jobs-better-than-software-jobs-hourly-work-pays-in-thousands/articleshow-qpezcgg"/>
        </item>
        <item>
            <title><![CDATA[ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವ: ರಾಜ್ಯಪಾಲರಿಂದ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಪ್ರದಾನ]]></title>
            <link>https://kannada.asianetnews.com/karnataka-districts/shantamallikarjuna-swamy-phd-karnataka-sanskrit-university-convocation-gehlot-gvd/articleshow-evggv4r</link>
            <guid isPermaLink="true">https://kannada.asianetnews.com/karnataka-districts/shantamallikarjuna-swamy-phd-karnataka-sanskrit-university-convocation-gehlot-gvd/articleshow-evggv4r</guid>
            <pubDate>Tue, 07 Apr 2026 16:13:13 +0530</pubDate>
            <description><![CDATA[&lt;p&gt;ಥಾವರ್ ಚಂದ್&amp;nbsp;ಗೆಹ್ಲೋಟ್&zwnj;ರವರಿಂದ&amp;nbsp;ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್&zwnj;ಡಿ) ಪದವಿ ಪ್ರಮಾಣಪತ್ರ ಪಡೆದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkrktf74bx1d17e8sfkw905,imgname-hvjv-1775558584807.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.07):&lt;/strong&gt; ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ&amp;nbsp;ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ&amp;nbsp;12&amp;nbsp;ಮತ್ತು 13ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್&amp;nbsp;ಗೆಹ್ಲೋಟ್&zwnj;ರವರಿಂದ&amp;nbsp;ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್&zwnj;ಡಿ) ಪದವಿ ಪ್ರಮಾಣಪತ್ರ ಪಡೆದರು.&lt;/p&gt;&lt;p&gt;ಪೂಜ್ಯರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧೀಪತಿಗಳು ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ&amp;nbsp;ಅಂಶುಮದಾಗಮಮ್ ಸಂಪಾದನಾತ್ಮಕ ಅಧ್ಯಯನಮ್ ಎಂಬ&amp;nbsp;ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.&lt;/p&gt;&lt;h2&gt;&lt;strong&gt;ಜೀವನದ ಸಾರ್ಥಕತೆಗೆ ಶಿಕ್ಷಣದ ಪಾತ್ರ ಮಹತ್ವದ್ದು&lt;/strong&gt;&lt;/h2&gt;&lt;p&gt;ಕಲಿಕೆಗೆ ಅಂತ್ಯವಿಲ್ಲ, ಅದು ನಿರಂತರವಾಗಿರುತ್ತದೆ. ಜೀವನದ ಸಾರ್ಥಕತೆಗೆ ಶಿಕ್ಷಣ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್&zwnj;ಚಂದ್ ಗೆಹಲೋತ್ ಹೇಳಿದರು.&lt;/p&gt;&lt;p&gt;ನಿಮ್ಮ ಪರಿಶ್ರಮದ ಫಲವಾಗಿ ಇಂದು ನೀವು ಪದಕ ಪಡೆದಿದ್ದೀರಿ. ಜ್ಞಾನಮಂದಿರದಿಂದ ಕರ್ಮ ಕ್ಷೇತ್ರ ಪ್ರವೇಶ ಮಾಡುತ್ತೀದ್ದೀರಿ. ನಿಮ್ಮ ಕನಸು ಹಾಗೂ ಗುರಿ ದೊಡ್ಡದಿರಲಿ. ನಿರಂತರ ಶ್ರಮದಿಂದ ಗುರಿ ತಲುಪಲು ಸಾಧ್ಯ. ಶಿಕ್ಷಣ ಉದ್ಯೋಗ ಹುಡುಕಲು ಅಲ್ಲ, ಉದ್ಯೋಗ ಸೃಷ್ಟಿಯಾಗಲಿ. ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯ, ವಿಧೇಯತೇ ಇರಲಿ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ ನಮ್ಮ ಜೀವನ ಶೈಲಿ ಬದಲು ಮಾಡಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಹೇಳಿದರು.&lt;/p&gt;&lt;p&gt;ಕರ್ನಾಟಕದ ಭೂಮಿ ಪರಂಪರೆ ಮತ್ತು ಜ್ಞಾನದ ಸಮೃದ್ಧಿಯಾಗಿದೆ. ಈ ನಾಡಿನಲ್ಲಿ ಅನೇಕ ಸಂತರು, ವಿದ್ವಾಂಸರು, ವಿಚಾರವಾದಿಗಳು ಜನಿಸಿ ಮಾರ್ಗದರ್ಶನ ನೀಡಿದ್ದಾರೆ. ಹಾವೇರಿ ವಿವಿ ಸ್ಥಾಪನೆಯಿಂದ ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದ ವಿಕಾಸವಾಗುತ್ತಿದೆ. ಬರುವ ದಿನಗಳಲ್ಲಿ ಈ ವಿವಿ ಇನ್ನಷ್ಟು ಉತ್ಕೃಷ್ಟವಾಗಿ ಬೆಳೆಯಲಿ. ಗೌರವ ಡಾಕ್ಟರೇಟ್ ಪಡೆದ ಸದಾಶಿವ ಸ್ವಾಮೀಜಿ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರು ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/shantamallikarjuna-swamy-phd-karnataka-sanskrit-university-convocation-gehlot-gvd/articleshow-evggv4r"/>
        </item>
        <item>
            <title><![CDATA[ಸ್ನ್ಯಾಪ್‌ಚಾಟ್ ಮೂಲಕ ಮಹಿಳೆ ಬಲೆಗೆ ಬೀಳಿಸಿದ್ದ ಹ್ಯಾಂಡ್ಸಮ್ ಹುಡುಗ: 40 ಲಕ್ಷ ಹಣ, 1 ಕೆಜಿ ಚಿನ್ನ ಲೂಟಿ!]]></title>
            <link>https://kannada.asianetnews.com/crime/snapchat-fraud-case-woman-cheated-blackmail-bengaluru-mahesh-arrest-gvd/articleshow-ygazlgi</link>
            <guid isPermaLink="true">https://kannada.asianetnews.com/crime/snapchat-fraud-case-woman-cheated-blackmail-bengaluru-mahesh-arrest-gvd/articleshow-ygazlgi</guid>
            <pubDate>Tue, 07 Apr 2026 15:29:38 +0530</pubDate>
            <description><![CDATA[&lt;p&gt;ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkp3vv6jwe2cse3wj9a6h1v,imgname-chchc-1775555964774.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಏ.07): &lt;/strong&gt;ಹೆಣ್ಣು ಮಕ್ಕಳೇ ಸೋಷಿಯಲ್ ಮೀಡಿಯಾದಲ್ಲಿ ಯಾರನ್ನಾದರೂ ಪರಿಚಯ ಮಾಡಿಕೊಳ್ಳುವ ಮುನ್ನ ಎಚ್ಚರ. ಅದರಲ್ಲೂ ಅಪರಿಚಿತ ಹುಡುಗ ಹ್ಯಾಂಡ್ಸಮ್ ಆಗಿದ್ದಾನೆ ಅಂತಾ ಮರುಳಾದ್ರೆ ನಿಮ್ಮ ಕಥೆ ಗೋವಿಂದ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಸ್ನ್ಯಾಪ್ ಚಾಟ್ ಮೂಲಕ ಪರಿಚಯವಾದವರು ಮಹಿಳೆಯನ್ನು ಹೇಗೆಲ್ಲಾ ಆಟ ಆಡಿಸಿದ್ರು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.&lt;/p&gt;&lt;p&gt;ಈತನ ಹೆಸರು ಚೆನ್ನೂರು ಮಹೇಶ್ ಅಂತಾ. ಈತನ ಲುಕ್ ಗೆ ಎಂತವರು ಫಿದಾ ಆಗೋದು ಗ್ಯಾರಂಟಿ. ಈಗ ಮತ್ತೊಂದು ಫೋಟೋ ತೋರುಸ್ತೀವಿ ನೋಡಿ. ಈ ಫೋಟೋದಲ್ಲಿರೋದು ಇದೇ ಮಹೇಶ. ಅರೇ ಇದೇನ್ನಪ್ಪ ಒಂದೇ ಹೆಸರು ಬೇರೆ ಬೇರೆ ವ್ಯಕ್ತಿಗಳು ಅಂತಾ ಕನ್ಫ್ಯೂಸ್ ಆಗಬೇಡಿ. ಇಂಗು ತಿಂದ ಮಂಗನಂತಿರುವ ಇವನು ಹೆಣ್ ಮಕ್ಕಳನ್ನು ಪಟಾಯಿಸೋಕೆ ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡಿದ್ದಾನೆ.&lt;/p&gt;&lt;p&gt;ಸೋಷಿಯಲ್ ಮೀಡಿಯಾ ಅನ್ನೋದು ಎಷ್ಟು ಉಪಯೋಗವೋ. ಅಷ್ಟೇ ಅಪಾಯಕಾರಿ ಅನ್ನೋದಕ್ಕೆ ಈ ಕೇಸ್ ಉತ್ತಮ ಉದಾಹರಣೆ. ಸುಮಾರು ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್&zwnj;ನಲ್ಲಿ ಮಹಿಳೆಯೊಬ್ಬರಿಗೆ ಪರಿಚಯವಾಗಿದ್ದ ಆರೋಪಿಗಳು, ಮೆಲ್ಲಗೆ ಆಕೆಯ ನಂಬರ್ ಎಕ್ಸ್ಚೇಂಜ್ ಮಾಡಿಕೊಂಡಿದ್ದರು. ನಂತರ ವಾಟ್ಸ್ ಆ್ಯಪ್ ವಿಡಿಯೋ ಕಾಲ್ ಮಾಡುವಾಗ ಮಹಿಳೆಗೆ ತಿಳಿಯದಂತೆ ಸ್ಕ್ರೀನ್ ಶಾಟ್ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿಸಿಕೊಂಡು ಅಸಲಿ ಆಟ ಶುರು ಮಾಡಿದ್ದರು.&lt;/p&gt;&lt;p&gt;ನಿನ್ನ ಖಾಸಗಿ ಫೋಟೋಗಳನ್ನು ಗಂಡನಿಗೆ ಕಳಿಸುತ್ತೇವೆ. ಸೋಶಿಯಲ್ ಮೀಡಿಯಾದಲ್ಲಿ ಹಾಕ್ತೇವೆ ಅಂತ ಬೆದರಿಸಿದ ಕಿರಾತಕರು, ಹಂತಹಂತವಾಗಿ ಮಹಿಳೆಯಿಂದ 40 ಲಕ್ಷ ಕ್ಯಾಶ್ ಮತ್ತು 1 ಕೆಜಿ ಚಿನ್ನಾಭರಣ ಪೀಕಿದ್ದಾರೆ. ಆರೋಪಿಗಳ ಕಾಟ ತಾಳಲಾರದೆ ಮಹಿಳೆ ಕೊನೆಗೆ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ.ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಆಂಧ್ರಪ್ರದೇಶದ ಮೂಲದ ಚೆನ್ನೂರು ಮಹೇಶ್ ಮತ್ತು ವನ್ನೂರು ಸ್ವಾಮಿಯನ್ನು ಹೆಡೆಮುರಿ ಕಟ್ಟಿದ್ದಾರೆ.&lt;/p&gt;&lt;p&gt;ಇನ್ನೂ ಈ ವನ್ನೂರು ಸ್ವಾಮಿ ಸಹ ಮಹೇಶನ ಮುಖಾಂತರ ಮಹಿಳೆಗೆ ಪರಿಚಯವಾಗಿದ್ದನಂತೆ. ಯಾವಾಗ ಮಹೇಶನ ಬಳಿ ಫೋಟೋ,ವಿಡಿಯೋಗಳು ಇರುವ ಬಗ್ಗೆ ಗೊತ್ತಾಯ್ತು ಈತನೂ ಮಹೇಶನ ಜೊತೆ ಸೇರಿಕೊಂಡು ಮಹಿಳೆಗೆ ಬೆದರಿಸಿ ಹಣ, ಚಿನ್ನಾಭರಣ ಪೀಕಿದ್ದ. ಸದ್ಯ ​ಬಂಧಿತರಿಂದ ಬರೋಬ್ಬರಿ 571 ಗ್ರಾಂ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಇನ್ನು ಆರೋಪಿಗಳು ಆನ್ಲೈನ್ ಬಟ್ಟಿಂಗ್ ಸಾಕಷ್ಟು ಹಣ ಕಳೆದುಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರೇ ಶಾಕ್&lt;/strong&gt;&lt;/h2&gt;&lt;p&gt;ಮತ್ತೊಂದು ಕಡೆ ಇಬ್ಬರ ಮೊಬೈಲ್ ಪರಿಶೀಲಿಸಿದ ಪೊಲೀಸರೇ ಶಾಕ್ ಆಗಿದ್ದಾರೆ. ಯಾಕಂದ್ರೆ ಕೇವಲ ಈ ಮಹಿಳೆ ಮಾತ್ರವಲ್ಲ, ಇನ್ನು ಅನೇಕ ಯುವತಿಯರ ಮತ್ತು ಮಹಿಳೆಯರ ಖಾಸಗಿ ಫೋಟೋಗಳು ಫೋನ್&zwnj;ನಲ್ಲಿ ಪತ್ತೆಯಾಗಿವೆ. ಸದ್ಯ ಪೊಲೀಸರು ಈ ಇಬ್ಬರು ಅಂತರ್ರಾಜ್ಯ ವಂಚಕರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅದೆನೇ ಹೇಳಿ ಸುಂದರ ಸಂಸಾರವಿದ್ರು ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಸಿಕ್ಕವರ ಜೊತೆ ಚಾಟ್ ಮಾಡುವ ಹೆಣ್ ಮಕ್ಕಳು ಇನ್ನಾದ್ರೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದಿದ್ರೆ ನಿಮ್ಮ ಬದುಕು ಮೂರಾಬಟ್ಟೆಯಾಗೋದಂತೂ ಗ್ಯಾರಂಟಿ.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/snapchat-fraud-case-woman-cheated-blackmail-bengaluru-mahesh-arrest-gvd/articleshow-ygazlgi"/>
        </item>
        <item>
            <title><![CDATA[ಬೆಂಗಳೂರು ಹಾಸ್ಟೆಲ್‌ನ 9ನೇ ಮಹಡಿಯಿಂದ ಜಿಗಿದು 'ಪಿಯುಸಿ ವಿದ್ಯಾರ್ಥಿ' ದಾರುಣ ಸಾವು! ರಾಂಚಿ ಮೂಲದ ಯುವಕನ ಅಂತ್ಯ!]]></title>
            <link>https://kannada.asianetnews.com/state/bengaluru-ranchi-native-puc-student-jumps-from-9th-floor-hostel-at-yalahanka-sat/articleshow-wmcfui8</link>
            <guid isPermaLink="true">https://kannada.asianetnews.com/state/bengaluru-ranchi-native-puc-student-jumps-from-9th-floor-hostel-at-yalahanka-sat/articleshow-wmcfui8</guid>
            <pubDate>Tue, 07 Apr 2026 15:42:47 +0530</pubDate>
            <description><![CDATA[&lt;p&gt;ಬೆಂಗಳೂರಿನ ಯಲಹಂಕದಲ್ಲಿ ಜಾರ್ಖಂಡ್ ಮೂಲದ 21 ವರ್ಷದ ಪಿಯುಸಿ ವಿದ್ಯಾರ್ಥಿ ಲಕ್ಷ್ಮ ಮಿಶ್ರಾ, ಹಾಸ್ಟೆಲ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ನಸುಕಿನ ಜಾವ ನಡೆದ ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkpvpqn3mxjjn5v03ysg59t,imgname-bengaluru-news--1--1775556745973.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.07): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. ವಿದ್ಯಾಭ್ಯಾಸಕ್ಕಾಗಿ ದೂರದ ಊರಿನಿಂದ ಬಂದಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಿಂದ ಸಹಪಾಠಿಗಳು ಹಾಗೂ ಕಾಲೇಜು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;h3&gt;&lt;strong&gt;ಮೃತ ವಿದ್ಯಾರ್ಥಿಯ ಹಿನ್ನೆಲೆ:&lt;/strong&gt;&lt;/h3&gt;&lt;p&gt;ಮೃತ ವಿದ್ಯಾರ್ಥಿಯನ್ನುಲಕ್ಷ್ಮ ಮಿಶ್ರಾ (21) ಎಂದು ಗುರುತಿಸಲಾಗಿದೆ. ಈತ ಮೂಲತಃ ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿಯಾಗಿದ್ದು, ಉನ್ನತ ಶಿಕ್ಷಣದ ಕನಸು ಹೊತ್ತು ಬೆಂಗಳೂರಿಗೆ ಬಂದಿದ್ದನು. ಸದ್ಯ ಯಲಹಂಕದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ (2nd PUC) ವ್ಯಾಸಂಗ ಮಾಡುತ್ತಿದ್ದನು. ಪಿಯುಸಿ ಪರೀಕ್ಷೆಗಳ ತಯಾರಿಯಲ್ಲಿ ತೊಡಗಿದ್ದ ವಿದ್ಯಾರ್ಥಿ, ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;h2&gt;&lt;strong&gt;ನಸುಕಿನ ಜಾವ ನಡೆದ ದುರಂತ:&lt;/strong&gt;&lt;/h2&gt;&lt;p&gt;ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಂದು ನಸುಕಿನ ಜಾವ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ವಿದ್ಯಾರ್ಥಿ ತಂಗಿದ್ದ ಹಾಸ್ಟೆಲ್ ಕಟ್ಟಡದ 9ನೇ ಮಹಡಿಯಿಂದ ಆತ ಕೆಳಕ್ಕೆ ಜಿಗಿದಿದ್ದಾನೆ. ದೊಡ್ಡ ಶಬ್ದ ಕೇಳಿ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಹಾಗೂ ಇತರೆ ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದಾಗ ಲಕ್ಷ್ಮ ಮಿಶ್ರಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತೀವ್ರವಾಗಿ ಗಾಯಗೊಂಡಿದ್ದ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ತನಿಖೆ ಕೈಗೆತ್ತಿಕೊಂಡ ಪೊಲೀಸರು:&lt;/strong&gt;&lt;/h3&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಯಲಹಂಕ ನ್ಯೂ ಟೌನ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ವಿದ್ಯಾರ್ಥಿಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಓದಿನ ಒತ್ತಡವೇ? ವೈಯಕ್ತಿಕ ಕಾರಣಗಳೇ? ಅಥವಾ ಬೇರೆನಾದರೂ ಘಟನೆಗಳು ಈ ಆತ್ಮಹತ್ಯೆಗೆ ಪ್ರೇರೇಪಿಸಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯ ಮೊಬೈಲ್ ಫೋನ್ ಮತ್ತು ಆತ ಬರೆದಿಟ್ಟಿರಬಹುದಾದ ಡೆತ್ ನೋಟ್ ಬಗ್ಗೆಯೂ ಹುಡುಕಾಟ ನಡೆಸಲಾಗುತ್ತಿದೆ.&lt;/p&gt;&lt;h3&gt;&lt;strong&gt;ಪೋಷಕರಿಗೆ ಮಾಹಿತಿ:&lt;/strong&gt;&lt;/h3&gt;&lt;p&gt;ಘಟನೆಯ ಬಗ್ಗೆ ಜಾರ್ಖಂಡ್&zwnj;ನಲ್ಲಿರುವ ಲಕ್ಷ್ಮ ಮಿಶ್ರಾ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಮಗನ ಸಾವಿನ ಸುದ್ದಿ ಕೇಳಿ ಅವರು ಆಘಾತಕ್ಕೊಳಗಾಗಿದ್ದಾರೆ. ದೂರದ ಊರಿನಿಂದ ಮಗನನ್ನು ಓದಿಸಲು ಕಳುಹಿಸಿದ್ದ ಪೋಷಕರು ಈಗ ಆತನ ಮೃತದೇಹವನ್ನು ಪಡೆಯಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಹಾಸ್ಟೆಲ್&zwnj;ನಲ್ಲಿ ವಿದ್ಯಾರ್ಥಿಗಳ ಭದ್ರತೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-ranchi-native-puc-student-jumps-from-9th-floor-hostel-at-yalahanka-sat/articleshow-wmcfui8"/>
        </item>
        <item>
            <title><![CDATA[Bengaluru: ಪತ್ನಿಯನ್ನು ಕೊಲ್ಲುವ ಮೊದಲು ಊರಿಗೆ ಬಂದು ಬಾಡೂಟ ಹಾಕಿಸಿದ ಗಂಡ!]]></title>
            <link>https://kannada.asianetnews.com/gallery/crime/bengaluru-husband-arrested-for-murdering-wife-who-prevented-him-from-entering-politics-mrq-56q8l0a</link>
            <guid isPermaLink="true">https://kannada.asianetnews.com/gallery/crime/bengaluru-husband-arrested-for-murdering-wife-who-prevented-him-from-entering-politics-mrq-56q8l0a</guid>
            <pubDate>Tue, 07 Apr 2026 13:06:39 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಪತ್ನಿ ಕಾವ್ಯಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ದನಿಯಪ್ಪನನ್ನು ಬಂಧಿಸಲಾಗಿದೆ. ರಾಜಕೀಯ ಪ್ರವೇಶಿಸಲು ಬೆಂಗಳೂರಿನ ಆಸ್ತಿ ಮಾರಾಟ ಮಾಡಲು ದನಿಯಪ್ಪ ಮುಂದಾಗಿದ್ದು, ಇದಕ್ಕೆ ಪತ್ನಿ ಒಪ್ಪದ ಕಾರಣ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkde0rw1cxf0xbx4zta7gsz,imgname-bengaluru-wife-murder--2--1775546860316.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಪತ್ನಿ ಕಾವ್ಯಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ದನಿಯಪ್ಪನನ್ನು ಬಂಧಿಸಲಾಗಿದೆ. ರಾಜಕೀಯ ಪ್ರವೇಶಿಸಲು ಬೆಂಗಳೂರಿನ ಆಸ್ತಿ ಮಾರಾಟ ಮಾಡಲು ದನಿಯಪ್ಪ ಮುಂದಾಗಿದ್ದು, ಇದಕ್ಕೆ ಪತ್ನಿ ಒಪ್ಪದ ಕಾರಣ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ.&amp;nbsp;&lt;/p&gt;&lt;img&gt;&lt;p&gt;ಬೆಂಗಳೂರಿನ ಮಹಿಳೆಯ ಸಾವಿನ ಸಂಬಂಧ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಕಾವ್ಯಾ ಕೊಲೆಯಾದ ಮಹಿಳೆ. ಬೆಳಗಾವಿ ಮೂಲದ ದನಿಯಪ್ಪನಿಗೆ ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಆಸೆ ಇತ್ತು. ಆದ್ರೆ ದನಿಯಪ್ಪನ ಕನಸಿಗೆ ಕಾವ್ಯಾ ಆಡ್ಡಿಯಾಗಿದ್ದರು. ಇದೇ ಕಾರಣಕ್ಕೆ ಕಾವ್ಯಾ ಕೊ*ಲೆಯಾಗಿರುವ ಅನುಮಾನಗಳು ವ್ಯಕ್ತವಾಗಿವೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲೆಯ ಅಥಣಿಯ ನಿವಾಸಿಯಾಗಿರುವ ದನಿಯಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದನು. ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ವ್ಯವಹಾರ (Construction Business) ಮಾಡಿಕೊಂಡಿದ್ದ, ಧನಿಯಪ್ಪ ಒಂದಿಷ್ಟು ಹಣ ಮಾಡಿಕೊಂಡಿದ್ದನು. ಬೆಂಗಳೂರಿನ ಪೀಣ್ಯಾದಲ್ಲಿ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಕಟ್ಟಿಕೊಂಡಿದ್ದನು. ಆದ್ರೆ ಈ ಮನೆ ಪತ್ನಿ ಕಾವ್ಯಾ ಹೆಸರಿನಲ್ಲಿತ್ತು. ಇನ್ನುಳಿದ ಆಸ್ತಿ ತಾಯಿ ಹೆಸರಿನಲ್ಲಿತ್ತು.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿರುವ ಎಲ್ಲಾ ಆಸ್ತಿಯನ್ನು ಮಾರಾಟ ಮಾಡಿ ಸ್ವಂತ ಊರಿಗೆ ತೆರಳಿ ರಾಜಕೀಯದಲ್ಲಿ ಬದುಕು ಕಟ್ಟಿಕೊಳ್ಳಲು ಧನಿಯಪ್ಪ ಪ್ಲಾನ್ ಮಾಡಿದ್ದನು. ಬೆಂಗಳೂರಿನ ಮನೆ ಮಾರಾಟ ಮಾಡಲು ಕಾವ್ಯಾ ಒಪ್ಪಿರಲಿಲ್ಲ. ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುವ ಇಂಗಿತ ವ್ಯಕ್ತಪಡಿಸಿದ್ದರು.&lt;/p&gt;&lt;img&gt;&lt;p&gt;ಕಾವ್ಯಾ ಕೊ*ಲೆಗೂ ಮುನ್ನ ಅಥಣಿಯಲ್ಲಿ ಊರಿನ ಎಲ್ಲಾ ಜನರಿಗೆ ಭರ್ಜರಿಯಾಗಿ ಬಾಡೂಟ ಹಾಕಿಸಿ, ಸೋಮವಾರ ಬೆಂಗಳೂರಿಗೆ ಬಂದಿದ್ದನು. ಬಾಡೂಟದ ಮೂಲಕ ರಾಜಕೀಯದಲ್ಲಿ ಕಾಣಿಸಿಕೊಳ್ಳಲು ಧನಿಯಪ್ಪ ಮೊದಲ ಹೆಜ್ಜೆಯನ್ನಿಟ್ಟಿದ್ದನು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪಂಚಮಸಾಲಿ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಬೆಂಗಳೂರು ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ, ಮಹಿಳಾ ಆಯೋಗಕ್ಕೆ ದೂರು&lt;/strong&gt;&lt;/p&gt;&lt;img&gt;&lt;p&gt;ಗಂಡ ಬರುತ್ತಿದ್ದಂತೆ ಬೆಂಗಳೂರು ಬಿಟ್ಟು ಹೋಗೋದು ಬೇಡ. ಆಸ್ತಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಕಾವ್ಯಾ ಹೇಳಿದ್ದಾರೆ. ಮಕ್ಕಳು ಶಾಲೆಗೆ ಹೋದ ಬಳಿಕ ಗಲಾಟೆ ತೆಗೆದು ಪತ್ನಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ಈ ಪ್ರಕರಣ ಸಂಬಂಧ ಧನಿಯಪ್ಪನನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; Bengaluru: ಹ್ಯಾಂಡ್&zwnj;ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/crime/bengaluru-husband-arrested-for-murdering-wife-who-prevented-him-from-entering-politics-mrq-56q8l0a"/>
        </item>
        <item>
            <title><![CDATA[ಭೌತಿಕ ಸುಖ ಮುಖ್ಯವಲ್ಲ ಎಂದು 36 ಲಕ್ಷ ಸಂಬಳ ಬಿಟ್ಟಿದ್ದ IIT Babaಗೆ ಲವ್​ ಶುರುವಾದದ್ದು ಹೇಗೆ? ಇಲ್ಲಿದೆ ಸ್ಟೋರಿ]]></title>
            <link>https://kannada.asianetnews.com/gallery/relationship/love-story-of-iit-baba-who-gave-up-36-lakhs-salary-saying-material-happiness-is-not-imp-suc-0fztemx</link>
            <guid isPermaLink="true">https://kannada.asianetnews.com/gallery/relationship/love-story-of-iit-baba-who-gave-up-36-lakhs-salary-saying-material-happiness-is-not-imp-suc-0fztemx</guid>
            <pubDate>Tue, 07 Apr 2026 12:20:45 +0530</pubDate>
            <description><![CDATA[&lt;p&gt;35 ಲಕ್ಷ ರೂಪಾಯಿ ಸಂಬಳ ತ್ಯಜಿಸಿ ಆಧ್ಯಾತ್ಮದ ಹಾದಿ ಹಿಡಿದು ವೈರಲ್ ಆಗಿದ್ದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ಇವರ ಲವ್​ ಸ್ಟೋರಿ ಶುರುವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkb0qmqfyv2tqf2bdcdpage,imgname-iit-baba-1775544327831.jpg" type="image/jpeg" height="390" width="690"/>
            <content:encoded><![CDATA[&lt;p&gt;35 ಲಕ್ಷ ರೂಪಾಯಿ ಸಂಬಳ ತ್ಯಜಿಸಿ ಆಧ್ಯಾತ್ಮದ ಹಾದಿ ಹಿಡಿದು ವೈರಲ್ ಆಗಿದ್ದ ಐಐಟಿ ಬಾಬಾ ಖ್ಯಾತಿಯ ಅಭಯ್ ಸಿಂಗ್, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ಇವರ ಲವ್​ ಸ್ಟೋರಿ ಶುರುವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್​&lt;/p&gt;&lt;img&gt;&lt;p&gt;ಕಳೆದ ವರ್ಷ ನಡೆದಿದ್ದ ಮಹಾಕುಂಭ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಈಚೆಗೆ ವೈರಲ್​ ಲೇಡಿ ಮೊನಾಲಿಸಾ ಮುಸ್ಲಿಂ ಯುವಕನನ್ನು ಮದುವೆಯಾಗಿ ಭಾರಿ ಸುದ್ದಿ ಮಾಡಿದ್ದರೆ, ಇದೀಗ 35 ಲಕ್ಷ ರೂಪಾಯಿ ಸಂಬಳ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದಿದ್ದ, ವೈರಲ್​ ಐಐಟಿ ಬಾಬಾ ಬೆಂಗಳೂರು ಯುವತಿಯನ್ನು ಮದುವೆಯಾಗಿದ್ದು, ಅದೀಗ ಭಾರಿ ಸದ್ದು ಮಾಡುತ್ತಿದೆ. ಐಐಟಿ ಬಾಂಬೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ, ಹರಿಯಾಣದ ಝಜ್ಜರ್ ನಿವಾಸಿಯಾಗಿರುವ ಐಐಟಿ ಬಾಬಾ ಅಭಯ್ ಸಿಂಗ್ ಅವರ ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿದ್ದರು. ಮಹಾಕುಂಭಕ್ಕೆ ಆಗಮಿಸಿದ್ದ ಅಭಯ್ ಸಿಂಗ್ ಅವರನ್ನು ಮಾಧ್ಯಮವೊಂದು ಮಾತನಾಡಿಸಿತ್ತು. ಈ ವೇಳೆ ತಾನೋರ್ವ ಐಐಟಿ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದರು. ನಂತರ ಅಭಯ್ ಸಿಂಗ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿತ್ತು. ಭೌತಿಕ ಜಗತ್ತು ತ್ಯಜಿಸಿರುವ ಅಭಯ್ ಸಿಂಗ್, ಆಂತರಿಕ, ಆತ್ಮಾವಲೋಕನದ ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ಮುಂದುವರಿದಿದ್ದರು. ಅಭಯ್ ಸಿಂಗ್ ಉರ್ಫ್ ಬಾಬಾ ಅವರ ಜೀವನ ಜನರ ಗಮನ ಸೆಳೆದಿತ್ತು.&lt;/p&gt;&lt;img&gt;&lt;p&gt;ಇದೇ ವೇಳೆ ಅಭಯ್ ಸಿಂಗ್ ಅವರು 10 ಮತ್ತು 12ನೇ ಕ್ಲಾಸ್&zwnj;ನಲ್ಲಿ ತೆಗೆದುಕೊಂಡ ಅಂಕ ವೈರಲ್​ ಆಗಿತ್ತು. ಅವರು 10ನೇ ಕ್ಲಾಸ್ ಬೋರ್ಡ್ ಎಕ್ಸಾಂನಲ್ಲಿ ಶೇ.93 ಮತ್ತು 12ನೇ ಕ್ಲಾಸ್&zwnj;ನಲ್ಲಿ ಶೇ.92.4ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಗಳು ಅಭಯ್ ಸಿಂಗ್ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ತಿಳಿಸಿದ್ದಾರೆ. ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಬಾಂಬೆ ಐಐಟಿಯಲ್ಲಿ ಅಭಯ್ ಸಿಂಗ್ ಸೀಟ್ ಪಡೆದುಕೊಂಡಿದ್ದರು. 2008ರ ಐಐಟಿ ಪ್ರವೇಶ ಪರೀಕ್ಷೆ IIT-JEEಯಲ್ಲಿ 731ನೇ (All India Rank -AIR) ಸ್ಥಾನ ಪಡೆದುಕೊಂಡಿದ್ದರು. ಏರೋಸ್ಪೇಸ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡಿದ್ದ ಅಭಯ್ ಸಿಂಗ್, ಮೂರು ವರ್ಷ ಕೆನಾಡದಲ್ಲಿ ಕೆಲಸ ಮಾಡಿದ್ದರು. ಈ ವೇಳೆ ಅಭಯ್ ಸಿಂಗ್ ವಾರ್ಷಿಕವಾಗಿ 36 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದರು. ಆದರೆ ಅವರು ಅಧ್ಯಾತ್ಮದ ಕಡೆಗೆ ಒಲಿದಿದ್ದರು.&lt;/p&gt;&lt;img&gt;&lt;p&gt;ಮೂರು ವರ್ಷ ಕೆಲಸ ಮಾಡಿದ ಬಳಿಕ ಅಜಯ್ ಸಿಂಗ್, ಆಧ್ಯಾತ್ಮದತ್ತ ಆಕರ್ಷಿತರಾಗಿದ್ದರು. ಬಾಹ್ಯ ಅಥವಾ ಭೌತಿಕ ಸುಖ, ಸಂಪತ್ತು ಆಂತರಿಕ ತೃಪ್ತಿಯನ್ನು ನೀಡಲ್ಲ. ಹಾಗಾಗಿ ಎಲ್ಲವನ್ನು ತೊರೆದು ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳುವ ಕೆಲಸವನ್ನು ಮಾಡುತ್ತಿರೋದಾಗಿ ಆಭಯ್ ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.&lt;/p&gt;&lt;img&gt;&lt;p&gt;ಆದರೆ, ಇದೀಗ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಬೆಂಗಳೂರಿನ ನಿವಾಸಿ ಪ್ರತೀಕಾ ಎನ್ನುವ ಎಂಜಿನಿಯರ್​ ಅವರನ್ನು ಮದುವೆಯಾಗಿದ್ದಾರೆ. ಹಾಗಿದ್ದರೆ ಇವರು ಭೇಟಿಯಾದದ್ದು ಎಲ್ಲಿ, ಲವ್​ ಶುರುವಾಗಿದ್ದು ಹೇಗೆ ಎನ್ನುವ ಕುತೂಹಲ ಹಲವರದ್ದು. ಈ ಕುರಿತು ಜೋಡಿಯೇ ಈಗ ಉತ್ತರ ಕೊಟ್ಟಿದೆ. ಇವರಿಬ್ಬರ ಭೇಟಿಯಾದದ್ದು ಕಳೆದ ವರ್ಷ. ಅಂದರೆ 2025 ರ ಆರಂಭದಲ್ಲಿ ಕೊಯಮತ್ತೂರಿನ ಸದ್ಗುರುಗಳ ಆದಿಯೋಗಿ ಆಶ್ರಮದಲ್ಲಿ ಭೇಟಿಯಾದರು. ಆಧ್ಯಾತ್ಮಿಕ ದೃಷ್ಟಿಕೋನವನ್ನು ಹೊಂದಿರುವ ಇವರು ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರ ಪ್ರೀತಿಯಲ್ಲಿ ಸಿಲುಕಿದರು.&lt;/p&gt;&lt;img&gt;&lt;p&gt;ಕಳೆದ ಫೆಬ್ರವರಿ 15ರಂದು ಹಿಮಾಚಲ ಪ್ರದೇಶದಲ್ಲಿ ಮಹಾಶಿವರಾತ್ರಿಯಂದು ಮದುವೆಯಾಗಿದೆ ಜೋಡಿ. ಎಂಟು ತಿಂಗಳ ತಮ್ಮ ಲವ್​ಸ್ಟೋರಿಯನ್ನು ಮದುವೆಯವರೆಗೂ ಕರೆತಂದಿರೋ ಜೋಡಿ, ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಅಭಯ್ ಸಿಂಗ್ ಅವರ ಪತ್ನಿ ಪ್ರತೀಕಾ, ಅಭಯ್ ತುಂಬಾ ಸರಳ ಸ್ವಭಾವದವರು ಎಂದು ಹೇಳಿದರು. ಅವರು ತುಂಬಾ ಪ್ರಾಮಾಣಿಕ ಮತ್ತು ಸತ್ಯವಂತ ವ್ಯಕ್ತಿ. ಈಗ, ನಾವು ಸನಾತನ ಧರ್ಮವನ್ನು ಪ್ರಚಾರ ಮಾಡಲು ಕೆಲಸ ಮಾಡುತ್ತೇವೆ. ಭವಿಷ್ಯದಲ್ಲಿ, ನಾವು ಸನಾತನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಶ್ರೀ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತೀಕಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಈ ವಿಶ್ವವಿದ್ಯಾಲಯವು ಲೌಕಿಕ ಜ್ಞಾನವನ್ನು ಆಧ್ಯಾತ್ಮಿಕ ಅಭ್ಯಾಸ ಮತ್ತು ವಿವಿಧ ರೀತಿಯ ಆಧ್ಯಾತ್ಮಿಕ ಅಭ್ಯಾಸಗಳೊಂದಿಗೆ ಸಂಯೋಜಿಸುತ್ತದೆ. ಜ್ಞಾನವನ್ನು ಸಂಪೂರ್ಣವಾಗಿ ಸಂಯೋಜಿಸಲಾಗುವುದು ಎಂದು ಅವರು ಹೇಳಿದರು. ಬೋಧನೆಯ ಜ್ಞಾನ ಮತ್ತು ಆಧ್ಯಾತ್ಮಿಕ ಅಭ್ಯಾಸದ ಜ್ಞಾನ ಎರಡನ್ನೂ ಇಲ್ಲಿ ಕೆಲಸ ಮಾಡಲಾಗುತ್ತದೆ. ಮದುವೆಯಾದ ನಂತರ, ಐಐಟಿ ಬಾಬಾ ತಮ್ಮ ಪತ್ನಿ ಪ್ರತೀಕ ಅವರೊಂದಿಗೆ ಜಜ್ಜರ್&zwnj;ನಲ್ಲಿರುವ ತಮ್ಮ ಮನೆಗೆ ಮರಳುತ್ತಾರೆ. ನಂತರ, ಅವರ ತಾಯಿ ಸೊಸೆಗೆ ಸಿಹಿತಿಂಡಿಗಳನ್ನು ತಿನ್ನಿಸಿ ಆರತಿ ಮಾಡಿದರು. ಮನೆ ಜನರಿಂದ ತುಂಬಿತ್ತು, ಅವರನ್ನು ನೋಡಲು ಮತ್ತು ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಹಲವಾರು ಜನರು ಬರುತ್ತಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/love-story-of-iit-baba-who-gave-up-36-lakhs-salary-saying-material-happiness-is-not-imp-suc-0fztemx"/>
        </item>
        <item>
            <title><![CDATA[Bengaluru: ಹ್ಯಾಂಡ್‌ಸಮ್ ಹುಡುಗ ಅಂತ ಪರಿಚಯ ಮಾಡಿಕೊಳ್ಳುವ ಮುನ್ನ ಈ ಸುದ್ದಿ ಓದಿ!]]></title>
            <link>https://kannada.asianetnews.com/gallery/state/bengaluru-kr-puram-arrest-of-men-who-were-blackmailing-women-for-money-gold-by-showing-them-private-photo-videos-kdq1nm3</link>
            <guid isPermaLink="true">https://kannada.asianetnews.com/gallery/state/bengaluru-kr-puram-arrest-of-men-who-were-blackmailing-women-for-money-gold-by-showing-them-private-photo-videos-kdq1nm3</guid>
            <pubDate>Tue, 07 Apr 2026 12:19:21 +0530</pubDate>
            <description><![CDATA[&lt;p&gt;ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 571 ಗ್ರಾಂ ಚಿನ್ನ ಮತ್ತು 25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkatry3nh79jthas92myzbc,imgname-bengaluru-blackmail-case-1775544132546.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಳಸಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 571 ಗ್ರಾಂ ಚಿನ್ನ ಮತ್ತು 25 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರ ನ*ಗ್ನ ಫೋಟೋ ಮತ್ತು ಖಾಸಗಿ ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್&zwnj;ಮೇಲ್ ಮಾಡ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಕೆಆರ್ ಪುರಂ ಪೊಲೀಸರು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಮಹಿಳೆಯರನ್ನು ಇವರು ಪರಿಚಯ ಮಾಡಿಕೊಳ್ಳುತ್ತಿದ್ದರು.&lt;/p&gt;&lt;img&gt;&lt;p&gt;ಮಹಿಳೆಯ ದೂರು ಆಧರಿಸಿ ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್, ವನ್ನೂರು ಸ್ವಾಮಿ ಎಂಬವರನ್ನು ಕೆಆರ್&zwnj; ಪುರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ವಿವಾಹಿತ ಮಹಿಳೆಗೆ ಇಬ್ಬರು ಬೆದರಿಕೆ ಹಾಕುತ್ತಿದ್ದರು ಎಂದು ತಿಳಿದು ಬಂದಿ&lt;/p&gt;&lt;img&gt;&lt;p&gt;ಒಂದೂವರೆ ವರ್ಷದ ಹಿಂದೆ ಮಹಿಳೆಗೆ ಸ್ನ್ಯಾಪ್&zwnj; ಚಾಟ್ ಮೂಲಕ ಆರೋಪಿಗಳು ಪರಿಚಯವಾಗಿದ್ದರು. ನಂತರ ಪರಸ್ಪರ ಮೊಬೈಲ್&zwnj; ನಂಬರ್ ಬದಲಾಯಿಸಿಕೊಂಡು ಮಾತುಕತೆ ಆರಂಭಿಸಿದ್ದರು. ವಾಟ್ಸಪ್ ವಿಡಿಯೋ ಕಾಲಿಂಗ್ ವೇಳೆ ಸ್ಕ್ರೀನ್ ಶಾಟ್ ತಗೆದಿಟ್ಟುಕೊಂಡಿದ್ದರು.&lt;/p&gt;&lt;img&gt;&lt;p&gt;ಈ ಸ್ಕ್ರೀನ್ ಶಾಟ್&zwnj;ಗಳನ್ನು ತೋರಿಸಿ ನಿನ್ನ ಗಂಡ, ಫ್ಯಾಮಿಲಿ, ಸೋಷಿಯಲ್ ಮಿಡೀಯಾದಲ್ಲಿ ಫೊಟೋ, ವಿಡಿಯೋ ಪೋಸ್ಟ್ ಮಾಡಿಕೊಳ್ಳುತ್ತವೆ. ಫೋಟೋ, ವಿಡಿಯೋಗಳು ಲೀಕ್ ಆಗಬಾರದು ಅಂದ್ರೆ ಕೇಳಿದಷ್ಟು ಹಣ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಆರೋಪಿಗಳು ಬ್ಲ್ಯಾಕ್ ಮೇಲ್ ಮಾಡಿ ಹಂತಹಂತವಾಗಿ ಚಿನ್ನಾಭರಣ, ಹಣ ಪಡೆದುಕೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿಯನ್ನು ಕೊನೆಯ ಬಾರಿಯೂ ನೋಡಲು ಬಿಡದ ಕ್ರೂರ ವಿಧಿ: ಪತಿ ದುರ್ಮರಣ, ಮಕ್ಕಳು ಅನಾಥ&lt;/strong&gt;&lt;/p&gt;&lt;img&gt;&lt;p&gt;ಆರೋಪಿಗಳು ಪದೇ ಪದೇ ಹಣಕ್ಕೆ ಡಿಮ್ಯಾಂಡ್&zwnj; ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ 571 ಗ್ರಾಂ ಚಿನ್ನಾಭರಣ ಮತ್ತು 25 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ನಲ್ಲಿ ಹಲವು ಮಹಿಳೆಯರು, ಯುವತಿಯರ ಫೋಟೋ, ವಿಡಿಯೋಗಳ ಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;40 ವರ್ಷದ ಗಂಡ ಬೇಡ, ಪ್ರಿಯತಮ ಬೇಕು: ಯುವತಿ ಕೋರಿಕೆಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು&lt;/strong&gt;&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/bengaluru-kr-puram-arrest-of-men-who-were-blackmailing-women-for-money-gold-by-showing-them-private-photo-videos-kdq1nm3"/>
        </item>
        <item>
            <title><![CDATA[Karnataka 2nd PUC result 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಕ್ಕೆ ದಿನಾಂಕ ಫಿಕ್ಸ್, ರಿಸಲ್ಟ್ ನೋಡೋದು ಸುಲಭ, ಇಲ್ಲಿದೆ ಲಿಂಕ್]]></title>
            <link>https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq</link>
            <guid isPermaLink="true">https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq</guid>
            <pubDate>Tue, 07 Apr 2026 12:14:18 +0530</pubDate>
            <description><![CDATA[&lt;p&gt;2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವು ಏಪ್ರಿಲ್ 9 ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ, ಮೌಲ್ಯನಿರ್ಣಯ ಮಂಡಳಿ ಖಚಿತಪಡಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್&zwnj;ಸೈಟ್ karresults.nic.in ನಲ್ಲಿ ತಮ್ಮ ರಿಜಿಸ್ಟ್ರೇಶನ್ ನಂಬರ್ ಬಳಸಿ ಫಲಿತಾಂಶವನ್ನು ವೀಕ್ಷಿಸಬಹುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knkacbby3vrrvffjpjjtsnt8,imgname-whatsapp-image-2026-04-07-at-12.01.33-pm-1775543659902.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಏ.7): &lt;/strong&gt;ಲಕ್ಷಾಂತರ ವಿದ್ಯಾರ್ಥಿಗಳು ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಗೆ ಮುಹೂರ್ತ ನಿಗದಿಯಾಗಿದ್ದು, ಏಪ್ರಿಲ್ 9ರಂದು ಅಧಿಕೃತವಾಗಿ ಫಲಿತಾಂಶ ಹೊರಬೀಳಲಿದೆ.&lt;/p&gt;&lt;p&gt;ಹೌದು, ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಹಿರಿಯ ಅಧಿಕಾರಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ exclusive ಮಾಹಿತಿ ನೀಡಿದ್ದಾರೆ. ಅಂದು ಬೆಳಿಗ್ಗೆ ಮಂಡಳಿಯು ಸುದ್ದಿಗೋಷ್ಠಿ ನಡೆಸಿದ ಬಳಿಕ ವೆಬ್&zwnj;ಸೈಟ್&zwnj;ನಲ್ಲಿ ಫಲಿತಾಂಶ ಲಭ್ಯವಾಗಲಿದೆ.&lt;/p&gt;&lt;h2&gt;ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಪಿಯು ಪರೀಕ್ಷೆ&lt;/h2&gt;&lt;p&gt;ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಇದೀಗ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;h3&gt;ಫಲಿತಾಂಶ ನೋಡುವುದು ಹೇಗೆ?&lt;/h3&gt;&lt;p&gt;ವಿದ್ಯಾರ್ಥಿಗಳು ಪರೀಕ್ಷೆ ಫಲಿತಾಂಶ ತಿಳಿಯಲು ಕಾಲೇಜಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಫಲಿತಾಂಶ ತಿಳಿಯಬಹುದಾಗಿದೆ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ಆನ್&zwnj;ಲೈನ್&zwnj;ನಲ್ಲಿ ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದು.&lt;/p&gt;&lt;p&gt;&lt;strong&gt;ಹಂತ 1:&lt;/strong&gt; ಮೊದಲು ಅಧಿಕೃತ ವೆಬ್&zwnj;ಸೈಟ್ karresults.nic.in ಗೆ ಭೇಟಿ ನೀಡಿ.&lt;/p&gt;&lt;p&gt;&lt;strong&gt;ಹಂತ 2:&lt;/strong&gt; ಮುಖಪುಟದಲ್ಲಿ ಕಾಣಿಸುವ &lsquo;Karnataka 2nd PUC Result 2026&rsquo; ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;&lt;strong&gt;ಹಂತ 3:&lt;/strong&gt; ನಿಮ್ಮ ರಿಜಿಸ್ಟ್ರೇಶನ್ ನಂಬರ್ (Registration Number) ಮತ್ತು ಜನ್ಮ ದಿನಾಂಕವನ್ನು (Date of Birth) ನಿಖರವಾಗಿ ನಮೂದಿಸಿ.&lt;/p&gt;&lt;p&gt;&lt;strong&gt;ಹಂತ 4:&lt;/strong&gt; ಮಾಹಿತಿ ಭರ್ತಿ ಮಾಡಿದ ನಂತರ &lsquo;Submit&rsquo; ಬಟನ್ ಒತ್ತಿರಿ.&lt;/p&gt;&lt;p&gt;&lt;strong&gt;ಹಂತ 5: &lt;/strong&gt;ತಕ್ಷಣವೇ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಲಿದೆ. ಇದನ್ನು ಡೌನ್&zwnj;ಲೋಡ್ ಮಾಡಿಕೊಂಡು ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.&lt;/p&gt;&lt;p&gt;ಮೌಲ್ಯಮಾಪನ ಪ್ರಕ್ರಿಯೆಯು ಸಮರೋಪಾದಿಯಲ್ಲಿ ನಡೆದಿದ್ದು, ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ಫಲಿತಾಂಶ ನೀಡಲು ಮಂಡಳಿ ಸಜ್ಜಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Ravi Janekal</dc:creator>
            <atom:link href="https://kannada.asianetnews.com/state/karnataka-2nd-puc-result-2026-date-announced-on-april-9th-rav/articleshow-z0l0fgq"/>
        </item>
    </channel>
</rss>
