<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 19 May 2026 22:58:02 +0530</lastBuildDate>
        <atom:link href="https://kannada.asianetnews.com/rss/bengaluru-urban" rel="self" type="application/rss+xml"/>
        <item>
            <title><![CDATA[ಗ್ಯಾರಂಟಿ ಕೊಟ್ಟು ಸಾಲ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ: ಸಂಸದ ಬೊಮ್ಮಾಯಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/basavaraj-bommai-slams-congress-government-over-guarantees-debt-gvd/articleshow-h0iosee</link>
            <guid isPermaLink="true">https://kannada.asianetnews.com/karnataka-districts/basavaraj-bommai-slams-congress-government-over-guarantees-debt-gvd/articleshow-h0iosee</guid>
            <pubDate>Tue, 19 May 2026 22:57:57 +0530</pubDate>
            <description><![CDATA[&lt;p&gt;ಕಾಂಗ್ರೆಸ್&zwnj; ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಹೆಸರಲ್ಲಿ ಆರಂಭದಿಂದಲೇ ವಿದ್ಯುತ್ ದರ, ಸ್ಟ್ಯಾಂಪ್&zwnj; ಡ್ಯೂಟಿ, ಪೆಟ್ರೊಲ್, ಡಿಸೇಲ್ ದರ, ನೀರಿನ ದರ ಹೆಚ್ಚಳ ಮಾಡಿಯೂ ರಾಜ್ಯದ ಸಾಲ ಹೆಚ್ಚಳ ಮಾಡಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jzwk7yjavq1xz4dvxvgjtya8,imgname-former-karnataka-cm-and-bjp-mp-basavaraj-bommai--photoani--1752232622666.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.19): &lt;/strong&gt;ಕಾಂಗ್ರೆಸ್&zwnj; ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಹೆಸರಲ್ಲಿ ಆರಂಭದಿಂದಲೇ ವಿದ್ಯುತ್ ದರ, ಸ್ಟ್ಯಾಂಪ್&zwnj; ಡ್ಯೂಟಿ, ಪೆಟ್ರೊಲ್, ಡಿಸೇಲ್ ದರ, ನೀರಿನ ದರ ಹೆಚ್ಚಳ ಮಾಡಿಯೂ ರಾಜ್ಯದ ಸಾಲ ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.&lt;/p&gt;&lt;p&gt;ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಹೊಸ ಮನೆ ನೀಡಿಲ್ಲ, ಹೊಸ ರಸ್ತೆ ನಿರ್ಮಿಸಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಸಿಗುತ್ತಿಲ್ಲ, ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಿಲ್ಲ. ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಮಹಿಳೆಯರು, ಶಾಲಾ ವಿದ್ಯಾರ್ಥಿನಿಯರು ಮನೆಯಿಂದ ಹೊರ ಹೋದರೆ ಸಂಜೆ ಮನೆಗೆ ಬರುತ್ತಾರೋ ಇಲ್ಲವೋ ಎನ್ನುವ ನಂಬಿಕೆ ಇಲ್ಲದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಒಸಿ, ಮಟಕಾ ಇಸ್ಪೀಟ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಪೊಲೀಸ್&zwnj; ಠಾಣೆಗಳು ವಸೂಲಿ ಕೇಂದ್ರಗಳಾಗಿವೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಕುರ್ಚಿ ಉಳಿಸಿಕೊಳ್ಳಲು ಶಕ್ತಿ ಪ್ರದರ್ಶನ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರದ ಆರಂಭದಿಂದಲೂ ಕುರ್ಚಿ ಉಳಿಸಿಕೊಳ್ಳಲು ಮತ್ತು ಕಸಿದುಕೊಳ್ಳಲು ನಿರಂತರ ಪೈಪೋಟಿ ನಡೆಯುತ್ತಿದ್ದು, ಈ ಸಮಾವೇಶ ಕುರ್ಚಿ ಉಳಿಸಿಕೊಳ್ಳುವ ಶಕ್ತಿ ಪ್ರದರ್ಶನದ ಸಮಾವೇಶವಾ ಎನ್ನುವ ಅನುಮಾನ ರಾಜ್ಯದ ಜನರಲ್ಲಿ ಮೂಡಿದೆ. ಈ ಸರ್ಕಾರದ ನಾಯಕರ ಕುರ್ಚಿ ಕಚ್ಚಾಟ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಜನರು ಈ ಕೆಟ್ಟ ಸರ್ಕಾರ ಯಾವಾಗ ತೊಲಗುತ್ತದೆ ಎಂದು ಕಾಯುತ್ತಿದ್ದಾರೆ. ಈ ಸರ್ಕಾರದ ಅಂತ್ಯ ಈ ಸಮಾವೇಶದಿಂದಲೇ ಆರಂಭವಾಗುವ ಸಾಧ್ಯತೆ ಕಾಣಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಮ್ಮ ಎಕ್ಸ್&zwnj; ಖಾತೆಯಲ್ಲಿ ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basavaraj-bommai-slams-congress-government-over-guarantees-debt-gvd/articleshow-h0iosee"/>
        </item>
        <item>
            <title><![CDATA[ಆಸ್ತಿ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ: ಸಚಿವ ಚಲುವರಾಯಸ್ವಾಮಿ ತಿರುಗೇಟು]]></title>
            <link>https://kannada.asianetnews.com/karnataka-districts/minister-n-chalvarayaswamy-slams-hd-kumaraswamy-white-paper-assets-row-gvd/articleshow-txrcb7y</link>
            <guid isPermaLink="true">https://kannada.asianetnews.com/karnataka-districts/minister-n-chalvarayaswamy-slams-hd-kumaraswamy-white-paper-assets-row-gvd/articleshow-txrcb7y</guid>
            <pubDate>Tue, 19 May 2026 22:27:12 +0530</pubDate>
            <description><![CDATA[&lt;p&gt;ಯಾರ್&zwj;ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ಎಚ್&zwnj;.ಡಿ.ಕುಮಾರಸ್ವಾಮಿ ಅವರಿಗೆ ಸಚಿವ ಎನ್&zwnj;.ಚಲುವರಾಯಸ್ವಾಮಿ ತಿರುಗೇಟು ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jwme81vf0haf7r987hrkefck,imgname-vdv-1748737722223.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.19): &lt;/strong&gt;ಯಾರ್&zwj;ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ಕೇಂದ್ರ ಸಚಿವ ಎಚ್&zwnj;.ಡಿ.ಕುಮಾರಸ್ವಾಮಿ ಅವರಿಗೆ ಕೃಷಿ ಸಚಿವ ಎನ್&zwnj;.ಚಲುವರಾಯಸ್ವಾಮಿ ತಿರುಗೇಟು ನೀಡಿದರು.&lt;/p&gt;&lt;p&gt;ಬೆಂಗಳೂರು ಸುತ್ತಮುತ್ತ 20 ಸಾವಿರ ಎಕರೆ ಯಾರ ಹೆಸರಿನಲ್ಲಿದೆ ಎಂದು ಪರೀಕ್ಷಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರಲ್ವಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದಂತೆ ಕೇಳುತ್ತಾರೆ. ಆದ್ದರಿಂದ ಯಾರ್&zwj;ಯಾರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇದೆ ಎಂದು ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಲಿ, ರಾಜ್ಯ ಸರ್ಕಾರವೂ ಶ್ವೇತಪತ್ರ ಹೊರಡಿಸುತ್ತದೆ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಸರ್ಕಾರ ಬ್ರೋಕರ್&zwnj; ಕೆಲಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿಗಿಂತ ಬ್ರೋಕರ್&zwnj; ಕೆಲಸವನ್ನು ಯಾರೂ ಮಾಡುವುದಿಲ್ಲ. ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ಕುಮಾರಸ್ವಾಮಿ ಅವರದ್ದು. ಈಗ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ತಪ್ಪು. ಯೋಜನೆಯಲ್ಲಿ ಏನೇ ತಪ್ಪಾಗಿದ್ದರೂ ಅದಕ್ಕೆ ಕುಮಾರಸ್ವಾಮಿಯೇ ಕಾರಣ. ಅವರ ಹತ್ತಿರ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ಟೀಕಿಸಿದರು.&lt;/p&gt;&lt;p&gt;ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಬಿಡದಿ ಟೌನ್&zwnj;ಶಿಪ್&zwnj; ಯೋಜನೆ ಕೈಗೆತ್ತಿಕೊಂಡಿದ್ದು, ಇದು ಜನಪರ ಯೋಜನೆ. ಶಿವಕುಮಾರ್&zwnj; ಅವರು ರೈತರ ಮನವೊಲಿಸುತ್ತೇನೆ ಎಂದು ಹೇಳಿದ್ದಾರೆ. ರೈತರು ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂಬ ದುಃಖ ನಮಗೂ ಇದೆ. ಆದರೆ ಅಭಿವೃದ್ಧಿಗಾಗಿ ಯೋಜನೆ ಮಾಡಬೇಕಿದೆ. ಒಬ್ಬರಿಗೆ ತೊಂದರೆ ಆದರೆ ಹತ್ತು ಜನರಿಗೆ ಅನುಕೂಲವಾಗುತ್ತದೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ಬಿಜೆಪಿ, ಜೆಡಿಎಸ್&zwnj;ನವರಿಗೆ ಮೊದಲು ಹೇಳಲಿ&lt;/strong&gt;&lt;/h2&gt;&lt;p&gt;ಮಿತವ್ಯಯದ ಬಗ್ಗೆ ಪ್ರಧಾನಿ ಮೋದಿ ಅವರು ಮೊದಲು ರಾಜ್ಯದ ಬಿಜೆಪಿ ಮತ್ತು ಜೆಡಿಎಸ್&zwnj; ಸ್ನೇಹಿತರಿಗೆ ಹೇಳಲಿ. ನಾವು ಸಮಯ, ಸಂದರ್ಭ ನೋಡಿಕೊಂಡು ಕೇಳುವ ಹಂತದಲ್ಲಿ ಕೇಳುತ್ತೇವೆ ಎಂದು ಚಲುವರಾಯಸ್ವಾಮಿ ಟಾಂಗ್&zwnj; ನೀಡಿದರು.ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದು ಪ್ರಧಾನಿ ಸೂಚನೆ ಅನುಸರಿಸುವ ಸಂದರ್ಭದಲ್ಲಿ ಕೇಳುತ್ತೇವೆ. ಆದರೆ ಬಿಜೆಪಿ, ಜೆಡಿಎಸ್&zwnj;ನವರು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-n-chalvarayaswamy-slams-hd-kumaraswamy-white-paper-assets-row-gvd/articleshow-txrcb7y"/>
        </item>
        <item>
            <title><![CDATA[ನೀ ತಾನೇ ನನ್ನ ಜೀವ.. ಎಂದು ಪತ್ನಿ-ಮಗನನ್ನು ಅಪ್ಪಿ ಹಣೆಗೆ ಮುತ್ತಿಟ್ಟ ಕೊಲೆ ಆರೋಪಿ ದರ್ಶನ್‌]]></title>
            <link>https://kannada.asianetnews.com/bengaluru-urban/actor-darshan-meets-wife-vijayalakshmi-son-vineesh-parappana-agrahara-jail-news-san/articleshow-gqqhqsr</link>
            <guid isPermaLink="true">https://kannada.asianetnews.com/bengaluru-urban/actor-darshan-meets-wife-vijayalakshmi-son-vineesh-parappana-agrahara-jail-news-san/articleshow-gqqhqsr</guid>
            <pubDate>Tue, 19 May 2026 16:45:14 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, 8 ತಿಂಗಳ ನಂತರ ಮೊದಲ ಬಾರಿಗೆ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. 23ನೇ ಮದುವೆ ವಾರ್ಷಿಕೋತ್ಸವದಂದು ನಡೆದ ಈ ವಿಶೇಷ ಮುಖಾಮುಖಿಗೆ ಅವಕಾಶ ನೀಡಲಾಗಿತ್ತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzyy50g02wbt87gzzn3065b,imgname-vijayalakshmi-darshan-1779189093392.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.19):&lt;/strong&gt; ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿರುವ ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಬದುಕಿನಲ್ಲಿ ಇಂದು ಅತ್ಯಂತ ಭಾವುಕ ಕ್ಷಣ ದಾಖಲಾಗಿದೆ. ಸುಪ್ರೀಂ ಕೋರ್ಟ್&zwnj;ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ತೀವ್ರ ಮಾನಸಿಕ ತೊಳಲಾಟಕ್ಕೆ ಸಿಲುಕಿ, ಅಕ್ಷರಶಃ ಕುಗ್ಗಿಹೋಗಿದ್ದ ನಟ ದರ್ಶನ್ ಅವರನ್ನು ಭೇಟಿಯಾಗಲು ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಮಂಗಳವಾರ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಕಳೆದ ಎಂಟು ತಿಂಗಳ ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಕುಟುಂಬದವರನ್ನು ನೇರವಾಗಿ ಮುಖಾಮುಖಿ ಭೇಟಿಯಾದ ದರ್ಶನ್, ಪತ್ನಿ ಮತ್ತು ಮಗನನ್ನು ನೋಡಿದ ಕೂಡಲೇ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.&lt;/p&gt;&lt;h2&gt;&lt;strong&gt;23ನೇ ವಾರ್ಷಿಕೋತ್ಸವಕ್ಕೆ ವಿಶೇಷ ಭೇಟಿ; ಕರಗಿದ ಜೈಲಿನ ನಿಯಮ&lt;/strong&gt;&lt;/h2&gt;&lt;p&gt;ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ 23ನೇ ಮದುವೆ ವಾರ್ಷಿಕೋತ್ಸವದ ಕಾರಣಕ್ಕಾಗಿ ಈ ಅಪರೂಪದ ಭೇಟಿಗೆ ಅವಕಾಶ ನೀಡಲಾಗಿತ್ತು. ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯುತ್ತಿರುವ ದರ್ಶನ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಕಾರಣ ನೀಡಿ ಕುಟುಂಬಸ್ಥರು ನೇರ ಭೇಟಿಗೆ ವಿನಂತಿಸಿದ್ದರು. ಕೊಲೆ ಆರೋಪಿ ದರ್ಶನ್ ಅವರ ಈ ವಿಶೇಷ ಮನವಿಯನ್ನು ಪುರಸ್ಕರಿಸಿದ ಜೈಲಿನ ಮುಖ್ಯ ಅಧೀಕ್ಷಕ ಅನ್ಶುಕುಮಾರ್ ಅವರು, ಕುಟುಂಬದವರೊಂದಿಗೆ ಮುಖಾಮುಖಿ ಮಾತನಾಡಲು ವಿಶೇಷ ಅನುಮತಿ ನೀಡಿದ್ದರು.&lt;/p&gt;&lt;h2&gt;&lt;strong&gt;ರೇಂಜ್ ರೋವರ್ ಕಾರಿನಲ್ಲಿ ಜೈಲಿಗೆ ಎಂಟ್ರಿ ಕೊಟ್ಟ ಕುಟುಂಬ&lt;/strong&gt;&lt;/h2&gt;&lt;p&gt;ಇಂದು ಮಧ್ಯಾಹ್ನ ತಮ್ಮ ಐಷಾರಾಮಿ ರೇಂಜ್ ರೋವರ್ (Range Rover) ಕಾರಿನಲ್ಲಿ ಜೈಲಿನ ಬಳಿ ಆಗಮಿಸಿದ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೊತೆಯಲ್ಲಿ ಮತ್ತೊಬ್ಬ ಅಪರಿಚಿತ ಮಹಿಳೆಯೂ ಇದ್ದರು. ಭದ್ರತಾ ಕಾರಣಗಳಿಗಾಗಿ ಕಾರನ್ನು ಜೈಲಿನ ಹೊರಗೇ ನಿಲ್ಲಿಸಲಾಗಿತ್ತು. ಅಲ್ಲಿಂದ ಜೈಲಿನ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ಮತ್ತು ವಿನೀಶ್ ನಡೆದುಕೊಂಡೇ ಒಳಗೆ ಸಾಗಿದರು. ಇವರ ಜೊತೆಗೆ ಆಗಮಿಸಿದ್ದ ದರ್ಶನ್ ಮ್ಯಾನೇಜರ್ ನಾಗರಾಜ್ ಅವರು ನಟನಿಗಾಗಿ ಕೇವಲ ಹಣ್ಣುಗಳನ್ನು ಮಾತ್ರ ಕೈಯಲ್ಲಿ ಕೊಂಡೊಯ್ದಿದ್ದರು.&lt;/p&gt;&lt;h2&gt;&lt;strong&gt;ಅಪ್ಪಿಕೊಂಡು ಹಣೆಗೆ ಮುತ್ತಿಟ್ಟ ದಚ್ಚು; ಮುಖದಲ್ಲಿ ಮಂದಹಾಸ&lt;/strong&gt;&lt;/h2&gt;&lt;p&gt;ಸಂಜೆ ಸುಮಾರು 4 ಗಂಟೆಯ ವೇಳೆಗೆ ಜೈಲಿನ ವಿಶೇಷ ಭೇಟಿ ಕೊಠಡಿಯಲ್ಲಿ ಈ ಮುಖಾಮುಖಿ ಸಾಧ್ಯವಾಯಿತು. ಕಳೆದ 8 ತಿಂಗಳಿನಿಂದ ಕೇವಲ ಕಂಬಿಗಳ ಹಿಂದಿನಿಂದ ಅಥವಾ ಸಿಸಿಟಿವಿ ಪರದೆಯ ಮೂಲಕ ನೋಡುತ್ತಿದ್ದ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರನ್ನು ನೇರವಾಗಿ ಕಂಡ ತಕ್ಷಣ ದರ್ಶನ್ ಮುಖದಲ್ಲಿ ಮಂದಹಾಸ ಮೂಡಿದೆ.&lt;/p&gt;&lt;p&gt;ತಮ್ಮ ದುಃಖವನ್ನು ತಡೆದುಕೊಳ್ಳಲಾರದ ದರ್ಶನ್, ತಕ್ಷಣವೇ ಪತ್ನಿ ಮತ್ತು ಮಗನನ್ನು ಗಟ್ಟಿಯಾಗಿ ಅಪ್ಪಿಕೊಂಡು ಭಾವುಕರಾಗಿದ್ದಾರೆ. ಇಷ್ಟು ದಿನಗಳ ಕಾಲ ಅನುಭವಿಸಿದ ಕಷ್ಟದ ನಡುವೆಯೂ ತನಗಾಗಿ ಶ್ರಮಿಸುತ್ತಿರುವ ಪತ್ನಿ ವಿಜಯಲಕ್ಷ್ಮಿ ಅವರನ್ನ ಅಪ್ಪಿಕೊಂಡ ದರ್ಶನ್, ಅವರ ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸುತ್ತಾ ತಮ್ಮ ಆಪ್ತ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಜಾಮೀನು ಸಿಗದೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿ ಜೈಲಿನಲ್ಲೇ ದಿನ ದೂಡುತ್ತಿರುವ ದರ್ಶನ್ ಅವರಿಗೆ, ಈ ಮದುವೆ ವಾರ್ಷಿಕೋತ್ಸವದ ದಿನದಂದು ಪತ್ನಿ ಮತ್ತು ಮಗ ನೀಡಿದ ಭೇಟಿ ದೊಡ್ಡ ಮಟ್ಟದ ಮಾನಸಿಕ ಧೈರ್ಯ ತುಂಬಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/actor-darshan-meets-wife-vijayalakshmi-son-vineesh-parappana-agrahara-jail-news-san/articleshow-gqqhqsr"/>
        </item>
        <item>
            <title><![CDATA[ಯುರೋಪ್‌ ಈಗ ಮತ್ತಷ್ಟು ಹತ್ತಿರ: ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ]]></title>
            <link>https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</link>
            <guid isPermaLink="true">https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap</guid>
            <pubDate>Tue, 19 May 2026 16:48:15 +0530</pubDate>
            <description><![CDATA[ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್, 2026ರ ಅಕ್ಟೋಬರ್&zwnj;ನಿಂದ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಐದು ದಿನ ಲಭ್ಯವಿರುವ ಈ ಸೇವೆಯು, ದಕ್ಷಿಣ ಭಾರತದ ಪ್ರಯಾಣಿಕರಿಗೆ ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸುಲಭ ಸಂಪರ್ಕ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzz4qf07z9434f01b6wnmpx,imgname-swiss-air-1779189308895.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದಕ್ಷಿಣ ಭಾರತದ ಪ್ರಯಾಣಿಕರಿಗೆ, ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನ ನಗರಿ ಬೆಂಗಳೂರಿಗರಿಗೆ ಸ್ವಿಸ್ ಇಂಟರ್&zwnj;ನ್ಯಾಷನಲ್ ಏರ್&zwnj;ಲೈನ್ಸ್ (ಸ್ವಿಸ್&zwnj;) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಭಾರತ ಮತ್ತು ಸ್ವಿಟ್ಜರ್&zwnj;ಲ್ಯಾಂಡ್ ನಡುವಿನ ವಿಮಾನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ, ಬೆಂಗಳೂರು ಹಾಗೂ ಸ್ವಿಸ್&zwnj;ನ ಪ್ರಮುಖ ನಗರ ಜ್ಯೂರಿಕ್ ನಡುವೆ ಹೊಸದಾಗಿ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಸಂಸ್ಥೆ ಘೋಷಿಸಿದೆ.&lt;/p&gt;&lt;p&gt;2026ರ ಅಕ್ಟೋಬರ್&zwnj;ನಿಂದ ಈ ಹೊಸ ಮಾರ್ಗದಲ್ಲಿ ವಿಮಾನ ಹಾರಾಟ ಶುರುವಾಗಲಿದ್ದು, ವಾರದಲ್ಲಿ ಐದು ದಿನ ಈ ಸೇವೆ ಲಭ್ಯವಿರಲಿದೆ. ಇದರಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ಜ್ಯೂರಿಕ್ ತಲುಪುವುದು ಮಾತ್ರವಲ್ಲದೆ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನಜಾಲದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.&lt;/p&gt;&lt;h2&gt;ಬೆಂಗಳೂರನ್ನೇ ಆಯ್ದುಕೊಂಡಿದ್ದೇಕೆ ಸ್ವಿಸ್&zwnj;?&lt;/h2&gt;&lt;p&gt;ಭಾರತದಲ್ಲಿ ಸ್ವಿಸ್ ಏರ್&zwnj;ಲೈನ್ಸ್&zwnj;ನ ಹೊಸ ತಾಣವಾಗಿ ಈಗ ಬೆಂಗಳೂರು ಸೇರ್ಪಡೆಯಾಗಿದೆ. ಕಾರ್ಪೊರೇಟ್ ಪ್ರಯಾಣಿಕರು, ಐಟಿ ತಂತ್ರಜ್ಞರು, ಪ್ರೀಮಿಯಂ ಪ್ರವಾಸಿಗರು ಮತ್ತು ಯುರೋಪ್-ಅಮೆರಿಕಾಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರಿಂದ ದಿನೇ ದಿನೇ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಈ ಹೊಸ ಮಾರ್ಗವನ್ನು ಪರಿಚಯಿಸಲಾಗಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ಸ್ವಿಸ್&zwnj;ನ ಮಾಲೀಕ ಸಂಸ್ಥೆ ಲುಫ್ತಾನ್ಸಾ ಗ್ರೂಪ್&zwnj;ನ ದಕ್ಷಿಣ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, ಲುಫ್ತಾನ್ಸಾ ಗ್ರೂಪ್&zwnj;ಗೆ ಭಾರತವು ಅತ್ಯಂತ ಪ್ರಮುಖ ಮಾರುಕಟ್ಟೆಯಾಗಿದೆ. ಜಾಗತಿಕ ಟೆಕ್ ಹಬ್ ಆಗಿರುವ ಬೆಂಗಳೂರಿನಿಂದ ಸ್ವಿಸ್ ಏರ್ ಲೈನ್ಸ್ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಜರ್ಮನಿಯ ಫ್ರಾಂಕ್&zwnj;ಫರ್ಟ್ ಮತ್ತು ಮ್ಯೂನಿಕ್ ನಗರಗಳ ಬಳಿಕ, ಬೆಂಗಳೂರಿನಿಂದ ಲುಫ್ತಾನ್ಸಾ ಗ್ರೂಪ್&zwnj;ನ ಮೂರನೇ ಪ್ರಮುಖ ಮಾರ್ಗ ಇದಾಗಲಿದೆ. ಪ್ರಯಾಣಿಕರು ಫಸ್ಟ್ ಕ್ಲಾಸ್ ಸೇರಿದಂತೆ ಅತ್ಯುತ್ತಮ ಸ್ವಿಸ್ ಆತಿಥ್ಯದ ಅನುಭವ ಪಡೆಯಲಿದ್ದಾರೆ ಎಂದು ತಿಳಿಸಿದರು.&lt;/p&gt;&lt;p&gt;ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್&zwnj;) ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಪ್ರತಿಕ್ರಿಯಿಸಿ, ಭಾರತದ ಸಿಲಿಕಾನ್ ಸಿಟಿಯನ್ನು ಜಾಗತಿಕ ಆರ್ಥಿಕ ಕೇಂದ್ರವಾದ ಜ್ಯೂರಿಕ್ ಜೊತೆ ಬೆಸೆಯುವ ಈ ಸೇವೆ, ನಮ್ಮ ಮಾರುಕಟ್ಟೆಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78 ನಗರಗಳಿಗೆ ಕನೆಕ್ಷನ್ ಇರುವುದರಿಂದ, ಟಯರ್-2 ಹಾಗೂ ಟಯರ್-3 ನಗರಗಳಿಂದ ಬರುವವರಿಗೂ ಒಂದೇ ಟಿಕೆಟ್&zwnj;ನಲ್ಲಿ ಯುರೋಪ್&zwnj;ಗೆ ಸುಲಭ ಸಂಪರ್ಕ ಸಿಗಲಿದೆ ಎಂದರು.&lt;/p&gt;&lt;h2&gt;ಅತ್ಯುತ್ತಮ ಸೌಲಭ್ಯ&lt;/h2&gt;&lt;p&gt;ಬೆಂಗಳೂರು-ಜ್ಯೂರಿಕ್ ನಡುವಿನ ಈ ವಿಮಾನದಲ್ಲಿ ಪ್ರಯಾಣಿಕರು ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಹಾಗೂ ಎಕಾನಮಿ ಕ್ಲಾಸ್ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅತ್ಯುತ್ತಮ ಊಟ, ಪ್ರೀಮಿಯಂ ಲೌಂಜ್ ಸೇರಿದಂತೆ ಉತ್ತಮ ಆತಿಥ್ಯವನ್ನು ಸಂಸ್ಥೆ ನೀಡಲಿದೆ. ಹೊಸ ಮಾರ್ಗದ ಟಿಕೆಟ್ ಬುಕ್ಕಿಂಗ್ ಇಂದಿನಿಂದಲೇ ಸ್ವಿಸ್ ಸಂಸ್ಥೆಯ ಅಧಿಕೃತ ವೆಬ್&zwnj;ಸೈಟ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಮೂಲಕ ಲಭ್ಯವಿದೆ.&lt;/p&gt;&lt;p&gt;ಇನ್ನು ಈ ವಿಮಾನಯಾನ ಸೇವೆಯನ್ನು ನೀಡುತ್ತಿರುವ ಲುಫ್ತಾನ್ಸಾ ಜಗತ್ತಿನ ಮುಂಚೂಣಿ ವಿಮಾನಯಾನ ಸಮೂಹವಾಗಿದ್ದು, 164 ದೇಶಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಸಂಸ್ಥೆ ಕೇವಲ 2025ರಲ್ಲಿ 13.5 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದ್ದು 39.6 ಬಿಲಿಯನ್ ಯುರೋ (ಸರಿಸುಮಾರು 3.6 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ. ಪ್ರಯಾಣಿಕರ ಸೇವೆ ಮಾತ್ರವಲ್ಲದೆ ಲಾಜಿಸ್ಟಿಕ್ಸ್, ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ (ಎಂಆರ್&zwnj;ಒ) ಕ್ಷೇತ್ರಗಳಲ್ಲೂ ಈ ಸಂಸ್ಥೆ ಬಲಿಷ್ಠವಾಗಿದೆ. ಸ್ವಿಸ್ ಏರ್&zwnj;ಲೈನ್ಸ್ ಕೂಡ ಲುಫ್ತಾನ್ಸಾ ಗ್ರೂಪ್&zwnj;ನ ಪ್ರಮುಖ ಅಂಗಸಂಸ್ಥೆಯಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/business/direct-to-europe-swiss-air-launches-bengaluru-to-zurich-direct-flights-gdp/articleshow-abrheap"/>
        </item>
        <item>
            <title><![CDATA[ಬೆಂಗಳೂರು ಲಾಡ್ಜ್‌ನಲ್ಲಿ ಅಮೇರಿಕನ್ ಬುಲೆಟ್: ಹುಡುಗಿಯೊಂದಿಗೆ ಬಂದ ಸೈನಿಕನ ಸಂಚು ಏನಿತ್ತು?]]></title>
            <link>https://kannada.asianetnews.com/state/bengaluru-shocked-ex-us-army-man-fools-customs-caught-with-live-bullets-at-jayamahal-palace-lodge-sat/articleshow-oeiipdd</link>
            <guid isPermaLink="true">https://kannada.asianetnews.com/state/bengaluru-shocked-ex-us-army-man-fools-customs-caught-with-live-bullets-at-jayamahal-palace-lodge-sat/articleshow-oeiipdd</guid>
            <pubDate>Tue, 19 May 2026 16:05:07 +0530</pubDate>
            <description><![CDATA[&lt;p&gt;ಅಮೇರಿಕಾದಿಂದ ಅಕ್ರಮವಾಗಿ ಜೀವಂತ ಗುಂಡುಗಳು ಮತ್ತು ಗನ್ ಮ್ಯಾಗಝೀನ್ ತಂದಿದ್ದ ಅಮೇರಿಕಾ ಸೇನೆಯ ಮಾಜಿ ಸೈನಿಕ ಮುತ್ತಾರ್ ಅರ್ಮಾನ್&zwnj;ನನ್ನು ಬೆಂಗಳೂರಿನ ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ. ಜಯಮಹಲ್ ಪ್ಯಾಲೇಸ್ ಲಾಡ್ಜ್&zwnj;ನಲ್ಲಿ ತಂಗಿದ್ದ ಈತ, ರೂಂ ಖಾಲಿ ಮಾಡಿದ ನಂತರ ಬುಲೆಟ್&zwnj;ಗಳನ್ನು ಮರೆತು ಹೋಗಿದ್ದನು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzwtjqbdzv5qrfdk00b1tyg,imgname-bengaluru-lodge-gun-bullets-1779186879210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: ಅಂ&lt;/strong&gt;ತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಕಠಿಣ ಸುರಕ್ಷತಾ ತಪಾಸಣೆ ಹಾಗೂ ಉಭಯ ದೇಶಗಳ ಕಸ್ಟಮ್ಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ, ಅಮೇರಿಕಾದಿಂದ ಅತ್ಯಂತ ಅಪಾಯಕಾರಿ ಜೀವಂತ ಗುಂಡುಗಳು ಮತ್ತು ಗನ್ ಮ್ಯಾಗಝೀನ್ ಅನ್ನು ಸಿಲಿಕಾನ್ ಸಿಟಿಗೆ ತಂದಿದ್ದ ಅಮೇರಿಕಾ ಆರ್ಮಿಯ ಮಾಜಿ ಸೈನಿಕನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಬಂಧಿತ ಆರೋಪಿಯನ್ನು ಮುತ್ತಾರ್ ಅರ್ಮಾನ್ (ಮುತ್ತಾರ್ ರೆಹಮಾನ್) ಎಂದು ಗುರುತಿಸಲಾಗಿದೆ. ಈತ ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ 'ಜಯಮಹಲ್ ಪ್ಯಾಲೇಸ್' ಲಾಡ್ಜ್&zwnj;ನಲ್ಲಿ ತಂಗಿದ್ದಾಗ ಈ ಇಡೀ ಹೈಡ್ರಾಮಾ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತಳ್ಳಲಾಗಿದೆ.&lt;/p&gt;&lt;h3&gt;&lt;strong&gt;ಮೂಲತಃ ಭಾರತದವನು, ಈಗ ಅಮೇರಿಕಾ ಸಿಟಿಜನ್!&lt;/strong&gt;&lt;/h3&gt;&lt;p&gt;ಬಂಧಿತ ಮುತ್ತಾರ್ ಅರ್ಮಾನ್ ಕುರಿತು ಪೊಲೀಸರು ತನಿಖೆ ನಡೆಸಿದಾಗ ಹಲವು ರೋಚಕ ಸಂಗತಿಗಳು ಹೊರಬಿದ್ದಿವೆ. ಈತ ಮೂಲತಃ ಭಾರತದವನೇ ಆಗಿದ್ದು, ವರ್ಷಗಳ ಹಿಂದೆ ಅಮೇರಿಕಾಕ್ಕೆ ವಲಸೆ ಹೋಗಿ ಅಲ್ಲಿನ ಪೌರತ್ವ (US Citizenship) ಪಡೆದುಕೊಂಡಿದ್ದನು. ಅಮೇರಿಕಾದಲ್ಲಿ ನೆಲೆಸಿದ ಬಳಿಕ ಅಲ್ಲಿನ ಪ್ರತಿಷ್ಠಿತ ಅಮೇರಿಕಾ ಆರ್ಮಿಯಲ್ಲೂ (US Army) ಸೈನಿಕನಾಗಿ ಕೆಲಸ ನಿರ್ವಹಿಸಿದ್ದನು. ಆದರೆ, ಸದ್ಯ ಈತ ಆರ್ಮಿ ಕೆಲಸದಲ್ಲಿ ಮುಂದುವರಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.&lt;/p&gt;&lt;h3&gt;&lt;strong&gt;ಲಾಡ್ಜ್ ರೂಂನಲ್ಲಿ ಮರೆತುಹೋಗಿದ್ದ ಮ್ಯಾಗಝೀನ್ ಮತ್ತು ಬುಲೆಟ್!&lt;/strong&gt;&lt;/h3&gt;&lt;p&gt;ಕೆಲ ದಿನಗಳ ಹಿಂದೆ ಮುತ್ತಾರ್ ಅರ್ಮಾನ್ ಯುವತಿಯೊಬ್ಬಳ ಜೊತೆ ಜಯಮಹಲ್ ಪ್ಯಾಲೇಸ್ ಲಾಡ್ಜ್&zwnj;ಗೆ ಬಂದು ರೂಮ್ ಬುಕ್ ಮಾಡಿದ್ದನು. ರೂಮ್ ಪಡೆಯಲು ತನ್ನ ಅಮೇರಿಕಾ ಪಾಸ್&zwnj;ಪೋರ್ಟ್ ಹಾಗೂ ಇತರೆ ದಾಖಲೆಗಳನ್ನು ನೀಡಿದ್ದನು. ಕೆಲವು ದಿನಗಳ ವಾಸ್ತವ್ಯದ ನಂತರ ಈತ ಯುವತಿಯೊಂದಿಗೆ ರೂಮ್ ಖಾಲಿ ಮಾಡಿ (ಚೆಕ್ ಔಟ್) ಹೊರಟು ಹೋಗಿದ್ದನು.&lt;/p&gt;&lt;p&gt;ಆದರೆ, ಲಾಡ್ಜ್&zwnj;ನಿಂದ ಹೊರಟ ಸ್ವಲ್ಪ ಸಮಯದ ಬಳಿಕ ಲಾಡ್ಜ್ ಮ್ಯಾನೇಜರ್&zwnj;ಗೆ ಸ್ವತಃ ಮುತ್ತಾರ್ ಅರ್ಮಾನ್ ಕರೆ ಮಾಡಿದ್ದಾನೆ. &quot;ನನ್ನ ರೂಂನಲ್ಲಿ ಕೆಲವು ಬುಲೆಟ್&zwnj;ಗಳನ್ನು ಮರೆತು ಇಟ್ಟಿದ್ದೇನೆ, ದಯವಿಟ್ಟು ಅದನ್ನು ಸುರಕ್ಷಿತವಾಗಿ ಎತ್ತಿಡಿ. ಎರಡು ದಿನಗಳ ಬಳಿಕ ಬಂದು ನಾನೇ ಅದನ್ನು ತೆಗೆದುಕೊಂಡು ಹೋಗುತ್ತೇನೆ,&quot; ಎಂದು ಮ್ಯಾನೇಜರ್ ಬಳಿ ಹೇಳಿದ್ದಾನೆ.&lt;/p&gt;&lt;h2&gt;&lt;strong&gt;ಸರ್ಚ್ ಮಾಡಿದಾಗ ಬೆಚ್ಚಿಬಿದ್ದ ಲಾಡ್ಜ್ ಸಿಬ್ಬಂದಿ!&lt;/strong&gt;&lt;/h2&gt;&lt;p&gt;ಗ್ರಾಹಕನ ಕರೆಯಿಂದ ಅನುಮಾನಗೊಂಡ ಲಾಡ್ಜ್ ಮ್ಯಾನೇಜರ್ ತಕ್ಷಣವೇ ಸಿಬ್ಬಂದಿಯೊಂದಿಗೆ ಆತ ತಂಗಿದ್ದ ರೂಮ್&zwnj;ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಲ್ಲಿ ಅಮೇರಿಕಾ ನಿರ್ಮಿತ ಅತ್ಯಾಧುನಿಕ ಗನ್ ಮ್ಯಾಗಝೀನ್ ಹಾಗೂ ಅದರಲ್ಲಿದ್ದ ಜೀವಂತ ಗುಂಡುಗಳು (Live Bullets) ಪತ್ತೆಯಾಗಿವೆ. ಎರಡು ದಿನ ಕಳೆದರೂ ಆರೋಪಿ ಮುತ್ತಾರ್ ಬುಲೆಟ್ ಪಡೆಯಲು ವಾಪಸ್ ಬಾರದಿದ್ದಾಗ ಆತಂಕಗೊಂಡ ಲಾಡ್ಜ್ ಮ್ಯಾನೇಜರ್ ತಕ್ಷಣವೇ ಜೆ.ಸಿ. ನಗರ ಪೊಲೀಸ್ ಠಾಣೆಗೆ ತೆರಳಿ ಮ್ಯಾಗಝೀನ್ ಒಪ್ಪಿಸಿ ದೂರು ದಾಖಲಿಸಿದ್ದಾರೆ.&lt;/p&gt;&lt;h3&gt;&lt;strong&gt;ವಿಚಾರಣೆ ವೇಳೆ ಕಸ್ಟಮ್ಸ್ ಭದ್ರತಾ ಲೋಪ ಬಯಲು!&lt;/strong&gt;&lt;/h3&gt;&lt;p&gt;ಪ್ರಕರಣ ದಾಖಲಿಸಿಕೊಂಡ ಜೆ.ಸಿ. ನಗರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಆರೋಪಿ ಮುತ್ತಾರ್ ಅರ್ಮಾನ್&zwnj;ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಶಪಡಿಸಿಕೊಳ್ಳಲಾದ ಗುಂಡುಗಳು ಸಂಪೂರ್ಣವಾಗಿ 'ಅಮೇರಿಕಾ ಮೇಡ್' (US Made Bullets) ಆಗಿರುವುದು ದೃಢಪಟ್ಟಿದೆ.&lt;/p&gt;&lt;p&gt;ಆದರೆ, ಯಾವುದೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ಭದ್ರತಾ ತಪಾಸಣೆ ಹಾಗೂ ಸ್ಕ್ಯಾನಿಂಗ್ ಇರುತ್ತದೆ. ಇಷ್ಟಿದ್ದರೂ ಅಮೇರಿಕಾದಿಂದ ಭಾರತಕ್ಕೆ ಬರುವಾಗ ಮುತ್ತಾರ್ ಅರ್ಮಾನ್ ಎರಡು ದೇಶಗಳ ಏರ್&zwnj;ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳನ್ನು ಯಾಮಾರಿಸಿ ಈ ಜೀವಂತ ಗುಂಡುಗಳನ್ನು ತಂದಿದ್ದು ಹೇಗೆ? ಎಂಬುದು ಪೊಲೀಸರಿಗೂ ದೊಡ್ಡ ಆಶ್ಚರ್ಯ ಮೂಡಿಸಿದೆ. ಏರ್&zwnj;ಪೋರ್ಟ್ ಸುರಕ್ಷತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿರುವ ಈ ತಾಂತ್ರಿಕ ಲೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಸದ್ಯ ಕಾನೂನುಬಾಹಿರವಾಗಿ ಯುದ್ಧ ಸಾಮಗ್ರಿಗಳನ್ನು ಹೊಂದಿದ್ದ ಆರೋಪದಡಿ ಮುತ್ತಾರ್ ಅರ್ಮಾನ್&zwnj;ನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದಾರೆ. ಈತ ಈ ಬುಲೆಟ್&zwnj;ಗಳನ್ನು ಬೆಂಗಳೂರಿಗೆ ತಂದಿದ್ದರ ಹಿಂದೆ ಬೇರೆನಾದರೂ ಕರಾಳ ಸಂಚಿತ್ತೇ ಅಥವಾ ಕೇವಲ ನಿರ್ಲಕ್ಷ್ಯವೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bengaluru-shocked-ex-us-army-man-fools-customs-caught-with-live-bullets-at-jayamahal-palace-lodge-sat/articleshow-oeiipdd"/>
        </item>
        <item>
            <title><![CDATA[ರಾಜ್ಯದಲ್ಲಿ 60 ಕಿ.ಮೀ ವೇಗದ ಸುಂಟರಗಾಳಿ ಅಬ್ಬರ, ಈ 5 ಜಿಲ್ಲೆಗಳ ಜನರೇ ಎಚ್ಚರ; ಹವಾಮಾನ ಇಲಾಖೆ 'ಡೇಂಜರ್' ಅಲರ್ಟ್!]]></title>
            <link>https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</link>
            <guid isPermaLink="true">https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21</guid>
            <pubDate>Tue, 19 May 2026 15:41:05 +0530</pubDate>
            <description><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krztsbbp092nn12as0can513,imgname-screenshot-2026-05-17-202159-1779184741749.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಬಿರುಸುಗೊಂಡಿದ್ದು, ಮೇ 26ರ ಸುಮಾರಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: ರಾ&lt;/strong&gt;ಜ್ಯದಲ್ಲಿ ಮುಂಗಾರು ಪೂರ್ವ ಮಳೆ (Pre-monsoon Rain) ಬಿರುಸುಗೊಂಡಿದ್ದು, ಜನತೆಗೆ ತಂಪಾದ ಅನುಭವದ ಜೊತೆಗೆ ಆತಂಕವೂ ಎದುರಾಗಿದೆ. ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ನೈರುತ್ಯ ಮುಂಗಾರು (Southwest Monsoon) ಮಾರುತಗಳು ವೇಗವಾಗಿ ಚಲಿಸುತ್ತಿದ್ದು, ಮೇ 26ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಗುಡುಗು ಸಹಿತ ಮಳೆ ಮತ್ತು ಅತಿ ವೇಗದ ಗಾಳಿ ಬೀಸುವ ಕುರಿತು ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ.&lt;/p&gt;&lt;img&gt;&lt;p&gt;ಹವಾಮಾನ ಇಲಾಖೆಯ ವರದಿಯಂತೆ, ಇಂದು (ಮೇ 19) ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕರಾವಳಿ ಭಾಗದಲ್ಲಿ ಗಾಳಿಯ ವೇಗ 40 ರಿಂದ 50 ಕಿ.ಮೀ ಇರಲಿದೆ. ಗುಡುಗು ಸಿಂಚನದ ಜೊತೆಗೆ ಈ ಬಲವಾದ ಗಾಳಿಯು ಮರಗಳು ಮತ್ತು ವಿದ್ಯುತ್ ಕಂಬಗಳಿಗೆ ಹಾನಿ ಮಾಡುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.&lt;/p&gt;&lt;img&gt;&lt;p&gt;ಇಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ (Heavy Rainfall) ಮುನ್ಸೂಚನೆಯಿದೆ. ವಿಶೇಷವಾಗಿ &lt;strong&gt;ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು&lt;/strong&gt; ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಗಂಟೆಗೆ 50-60 ಕಿ.ಮೀ ವೇಗದ ಗಾಳಿ ಬೀಸಲಿದೆ.&amp;nbsp;&lt;/p&gt;&lt;p&gt;ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಉತ್ತರ ಒಳನಾಡಿನ ಜಿಲ್ಲೆಗಳಾದ &lt;strong&gt;ಬೆಳಗಾವಿ, ಧಾರವಾಡ, ಗದಗ, ಕಲಬುರಗಿ ಮತ್ತು ಹಾವೇರಿ&lt;/strong&gt; ಜಿಲ್ಲೆಗಳಲ್ಲಿ ಇಂದು ಚದುರಿದಂತೆ ಮಳೆಯಾಗಲಿದ್ದು, ಇಲ್ಲಿಯೂ ಕೂಡ 50-60 ಕಿ.ಮೀ ವೇಗದ ಗಾಳಿ ಬೀಸುವ ಸಾಧ್ಯತೆಯಿದೆ. ವಿಜಯಪುರ, ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ವ್ಯಾಪಕವಾಗಿ ಮಳೆಯಾಗಲಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರಲಿದೆ. ಮೀನುಗಾರರು ಮತ್ತು ಪ್ರವಾಸಿಗರು ಜಾಗರೂಕರಾಗಿರಲು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಮಧ್ಯಾಹ್ನ ಅಥವಾ ಸಂಜೆಯ ನಂತರ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಗರದ ಗರಿಷ್ಠ ತಾಪಮಾನ 33&deg;C ಹಾಗೂ ಕನಿಷ್ಠ ತಾಪಮಾನ 21&deg;C ದಾಖಲಾಗುವ ಸಂಭವವಿದೆ.&lt;/p&gt;&lt;img&gt;&lt;p&gt;ಸದ್ಯ ಮುಂಗಾರು ಮಾರುತಗಳು ಆಗ್ನೇಯ ಅರಬ್ಬೀ ಸಮುದ್ರ, ಅಂಡಮಾನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಹಲವು ಭಾಗಗಳಲ್ಲಿ ಆವರಿಸಿವೆ. ಮುಂದಿನ 3-4 ದಿನಗಳಲ್ಲಿ ಇವು ಕೇರಳದ ಕಡೆಗೆ ಮುನ್ನಡೆಯಲು ಪೂರಕವಾದ ವಾತಾವರಣವಿದೆ. ಉತ್ತರ ಪ್ರದೇಶದಿಂದ ಕೇರಳದವರೆಗೆ ಹರಡಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಮಳೆ ಮುಂದುವರಿಯಲಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-weather-report-60-kmph-wind-and-heavy-rain-alert-for-interior-5-districts-sat-2sd2i21"/>
        </item>
        <item>
            <title><![CDATA[ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ]]></title>
            <link>https://kannada.asianetnews.com/state/petition-to-the-high-court-objecting-to-the-strike-of-transport-employees-rav/articleshow-y5t2yw2</link>
            <guid isPermaLink="true">https://kannada.asianetnews.com/state/petition-to-the-high-court-objecting-to-the-strike-of-transport-employees-rav/articleshow-y5t2yw2</guid>
            <pubDate>Tue, 19 May 2026 12:07:17 +0530</pubDate>
            <description><![CDATA[&lt;p&gt;ಕೆಎಸ್&zwnj;ಆರ್&zwnj;ಟಿಸಿ ಸಿಬ್ಬಂದಿ ಕರೆ ನೀಡಿರುವ ಸಾರಿಗೆ ಮುಷ್ಕರಕ್ಕೆ ಆಕ್ಷೇಪಿಸಿ ಹೈಕೋರ್ಟ್&zwnj;ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಮುಷ್ಕರದಿಂದ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jx1fyj757rjgjw8dshgv43hf,imgname-----------------------2025-06-06t073756.140-1749175716069.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಕೋರ್ಟ್&zwnj;ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ&lt;/li&gt; &lt;li&gt;ಇಂದು ವಿಭಾಗೀಯ ಪೀಠದ ಮುಂದೆ ವಿಚಾರಣೆ&lt;/li&gt;&lt;/ul&gt;&lt;p&gt;&lt;strong&gt;&amp;nbsp;ಬೆಂಗಳೂರು (ಮೇ.19) &lt;/strong&gt;ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್&zwnj;ಆರ್&zwnj;ಟಿಸಿ) ಸಿಬ್ಬಂದಿ ಟ್ರೇಡ್&zwnj; ಯೂನಿಯನ್&zwnj;ಗಳ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್&zwnj;ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.&lt;/p&gt;&lt;p&gt;ಮನೆಕೆಲಸ ಮಾಡುತ್ತಿರುವ ಬೆಂಗಳೂರಿನ ಸಿ.ವೇದಾವತಿ ಹಾಗೂ ಕಟ್ಟಡ ಕಾರ್ಮಿಕ ಎಚ್&zwnj;.ವಿ&zwnj;.ಶ್ರೀಧರ ಎಂಬುವರು ಈ ಅರ್ಜಿ ಸಲ್ಲಿಸಿದ್ದು, ಕೂಡಲೇ ಮುಷ್ಕರ ಹಿಂಪಡೆಯಲು ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ. ಅರ್ಜಿ ಮಂಗಳವಾರ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.&lt;/p&gt;&lt;p&gt;ಕೆಎಸ್&zwnj;ಆರ್&zwnj;ಟಿಸಿ ಜಂಟಿ ಕ್ರಿಯಾ ಸಮಿತಿ ಮೇ 20ರಿಂದ ಕರೆದಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಆಕ್ಷೇಪಿಸಿ ಅರ್ಜಿದಾರರು, 2025ರ ಏ.1ರಂದು ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿ ವೇತನದಲ್ಲಿ ಶೇ 12.5ರಷ್ಟು ಪರಿಷ್ಕರಿಸಿದ್ದು, 1,271.92 ಕೋಟಿ ರುಪಾಯಿ ಹಂಚಿಕೆ ಮಾಡಿದೆ.&lt;/p&gt;&lt;p&gt;ಮೊದಲ ವಂತಿಗೆ ರೂಪದಲ್ಲಿ 450 ಕೋಟಿ ರು. ಬಿಡುಗಡೆ ಮಾಡಿದೆ. ಈ ಬಗ್ಗೆ ನೌಕರರ ಟ್ರೇಡ್ ಯೂನಿಯನ್ ಮತ್ತು ಸರ್ಕಾರದ ನಡುವೆ ಸಂಧಾನ ಸಂಬಂಧಿತ ವಿಚಾರಣೆ ಐದು ದಿನ ಇರುವ ಸಂದರ್ಭದಲ್ಲಿ ಪ್ರಸ್ತಾವಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.&lt;/p&gt;&lt;h2&gt;ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ತೊಂದರೆ:&lt;/h2&gt;&lt;p&gt;ರಾಜ್ಯ ಸರ್ಕಾರವು &lsquo;ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯ್ದೆ ಅಡಿ 2026ರ ಜ.1ರಿಂದ ಜೂನ್ 30ರವರೆಗೆ ಮುಷ್ಕರ ನಿಷೇಧಿಸಿದೆ. ಹೀಗಿದ್ದರೂ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಬಸ್&zwnj;ಗಳಲ್ಲಿ ಪ್ರತಿದಿನ 1.20 ಕೋಟಿ ಮಂದಿ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಈ ಪೈಕಿ ಶೇ. 60 ಮಂದಿ ಮಹಿಳೆಯರಾಗಿದ್ದಾರೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಚಾಲ್ತಿಯಲ್ಲಿರುವುದರಿಂದ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ&rsquo; ಎಂದು ಅರ್ಜಿದಾರರು ತಿಳಿಸಿದ್ದಾರೆ.&lt;/p&gt;&lt;p&gt;ಅಲ್ಲದೇ, ಪ್ರಸ್ತಾಪಿತ ಮುಷ್ಕರವು ಮೇ 20ರಿಂದ ನಡೆಯುವ ಸಂದರ್ಭದಲ್ಲಿ ಎಸ್&zwnj;ಎಸ್&zwnj;ಎಲ್&zwnj;ಸಿ ಪೂರಕ ಪರೀಕ್ಷೆಗಳು ಮೇ 18ರಿಂದ 25ರವರೆಗೆ ನಡೆಯಲಿವೆ. ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸಾರ್ವಜನಿಕ ಬಸ್&zwnj;ಗಳನ್ನೇ ಅವಲಂಬಿಸಿದ್ದಾರೆ. ದಿನಗೂಲಿಯವರು, ರೋಗಿಗಳು, ವಯಸ್ಸಾದವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರು ಸಹ ಸಾರ್ವಜನಿಕ ಬಸ್&zwnj; ಅವಲಂಬಿಸಿದ್ದಾರೆ. ಮುಷ್ಕರದಿಂದ ಅವರೆಲ್ಲರಿಗೂ ಸಮಸ್ಯೆಯಾಗಲಿದೆ ಎಂದು ಆಕ್ಷೇಪಿಸಲಾಗಿದೆ.&lt;/p&gt;&lt;p&gt;ಅದ್ದರಿಂದ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಟ್ರೇಡ್&zwnj; ಯೂನಿಯನ್&zwnj;ಗಳ ಜಂಟಿ ಕ್ರಿಯಾ ಸಮಿತಿಗೆ ಮುಷ್ಕರ ನಡೆಸದಂತೆ ನಿರ್ದೇಶಿಸಬೇಕು. ಯಾವುದೇ ಮುಷ್ಕರ ನಡೆಯದಂತೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಮತ್ತು ಸಾರಿಗೆ ನಿಮಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/petition-to-the-high-court-objecting-to-the-strike-of-transport-employees-rav/articleshow-y5t2yw2"/>
        </item>
        <item>
            <title><![CDATA[ಕನ್ನಡಿಗರೇ, ಕನ್ನಡದ ಮೊದಲ ಹಲ್ಮಿಡಿ ಶಾಸನ ನೋಡಬೇಕೆ? ಕೇವಲ 5 ದಿನ ಅವಕಾಶವಿದೆ, ತಪ್ಪದೇ ಇಲ್ಲಿಗೆ ಭೇಟಿ ನೀಡಿ!]]></title>
            <link>https://kannada.asianetnews.com/state/visit-venkatappa-art-gallery-in-bengaluru-to-see-the-first-kannada-halmidi-inscription-rav/articleshow-37zaz2s</link>
            <guid isPermaLink="true">https://kannada.asianetnews.com/state/visit-venkatappa-art-gallery-in-bengaluru-to-see-the-first-kannada-halmidi-inscription-rav/articleshow-37zaz2s</guid>
            <pubDate>Tue, 19 May 2026 08:12:05 +0530</pubDate>
            <description><![CDATA[ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ವೆಂಕಟಪ್ಪ ಚಿತ್ರಶಾಲೆಯಲ್ಲಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ಕರ್ನಾಟಕದ ಪ್ರಾಚೀನ ದೇವಾಲಯಗಳ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಮೇ ೨೪ರವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯವಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krz1qr4jze5dvn8fw7wenq78,imgname-----------------------2026-05-19t081041.980-1779158474898.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಮೇ.19): ನಗರದ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಚಿತ್ರಶಾಲೆಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನಾಚರಣೆ ಅಂಗವಾಗಿ ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನ ಹಾಗೂ ಕರ್ನಾಟಕದ ಪ್ರಾಚೀನ ಐತಿಹಾಸಿಕ ದೇವಾಲಯಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಸೋಮವಾರ ಚಾಲನೆ ನೀಡಲಾಯಿತು.&lt;/p&gt;&lt;p&gt;ಪ್ರದರ್ಶನ ಉದ್ಘಾಟಿಸಿದ ಮಾತನಾಡಿದ ಪ್ರೊ.ಮುನಿಯಪ್ಪ, &lsquo;ನಾಡಿನ ಐತಿಹಾಸಿಕ ಮತ್ತು ಪ್ರಾಚೀನ ಪರಂಪರೆಯ ಹಿನ್ನೆಲೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಂತ ಕಾರ್ಯಗಳು ನಡೆಯಬೇಕು. ಇಂತಹ ಪ್ರದರ್ಶನಗಳಿಗೆ ವಿದ್ಯಾರ್ಥಿ ವೃಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಾಸನಗಳ ಬಗ್ಗೆ ತಿಳಿಯಬೇಕು&rsquo; ಎಂದು ತಿಳಿಸಿದರು.&lt;/p&gt;&lt;p&gt;ಇಲಾಖೆಯ ವಸ್ತು ಸಂಗ್ರಹಾಲಯಗಳ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ ಮಾತನಾಡಿ, ಪ್ರಸ್ತುತ ಸರ್ಕಾರಿ ವಸ್ತು ಸಂಗ್ರಹಾಲಯವು ನವೀಕರಣದ ಹಂತದಲ್ಲಿರುವುದರಿಂದ, ಹಲ್ಮಿಡಿ ಶಾಸನದ ವೀಕ್ಷಣೆಯು ಸಾರ್ವಜನಿಕರಿಗೆ ಲಭ್ಯವಿರಲಿಲ್ಲ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಸಂಶೋಧಕರು, ಇತಿಹಾಸದ ಕುರಿತು ಆಸಕ್ತಿಯಿರುವ ಹಲ್ಮಿಡಿ ಶಾಸನವನ್ನು ವೀಕ್ಷಿಸುವ ಬಗ್ಗೆ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಹಾಗಾಗಿ ವಸ್ತು ಸಂಗ್ರಹಾಲಯದ ದಿನಾಚರಣೆಯ ನಿಮಿತ್ತ ಹಲ್ಮಿಡಿ ಶಾಸನವನ್ನು ಹಾಗೂ ಪ್ರಾಚೀನ ದೇವಾಲಯಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಯಿತು ಎಂದರು.&lt;/p&gt;&lt;p&gt;&lsquo;ಕನ್ನಡ ಶಾಸನಗಳಲ್ಲಿ ಸಾಂಸ್ಕೃತಿಕ ಐಕ್ಯತೆ&rsquo; ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಶಾಸನ ತಜ್ಞರಾದ ಡಾ.ಕೆ.ಆರ್.ಗಣೇಶ, ಕರ್ನಾಟಕದ ಅರಸರು ತಾವು ಆಳ್ವಿಕೆ ನಡೆಸಿದ ಪ್ರದೇಶಗಳಲ್ಲೆಲ್ಲಾ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಾಮರಸ್ಯವನ್ನು ಕಾಪಾಡಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಕರ್ನಾಟಕದ ಬಹುತೇಕ ರಾಜರು ಸಾಂಸ್ಕೃತಿಕ ರಾಯಭಾರಿಗಳಾಗಿ ಸಂಘರ್ಷಗಳನ್ನು ಶಮನಗೊಳಿಸಲು ಪ್ರಯತ್ನಿಸುತ್ತಿದ್ದರು&rsquo; ಎಂದು ಹಲವಾರು ಶಾಸನಗಳನ್ನು ಉದಾಹರಿಸಿ ಪ್ರಾತ್ಯಕ್ಷಿಕೆಯ ಮೂಲಕ ಉಪನ್ಯಾಸ ನೀಡಿದರು.&lt;/p&gt;&lt;p&gt;ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಛಾಯಾಚಿತ್ರ ಕಲಾವಿದ ಟಿ. ಕೆಂಪಣ್ಣ ಅವರು ತಾವು ಸೆರೆಹಿಡಿದಿದ್ದ ಕರ್ನಾಟಕದ ಪ್ರಾಚೀನ ದೇವಾಲಯಗಳ ಛಾಯಾಚಿತ್ರಗಳ ಬಗ್ಗೆ ಮಾತನಾಡಿ, ಕರ್ನಾಟಕದ ದೇವಾಲಯಗಳು ಶ್ರೀಮಂತ ವಾಸ್ತು ಶೈಲಿಯನ್ನು ಹೊಂದಿವೆ. ತಾವು ಈ ಕ್ಷೇತ್ರಕ್ಕೆ ಬರಲು ಕರ್ನಾಟಕದ ವಿಭಿನ್ನ, ವೈವಿಧ್ಯಮಯ ದೇವಾಲಯಗಳೇ ಮುಖ್ಯವಾದ ಕಾರಣ&rsquo; ಎಂದು ತಿಳಿಸಿದರು.&lt;/p&gt;&lt;p&gt;ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಹಲ್ಮಿಡಿ ಶಾಸನದ ಪ್ರದರ್ಶನವು ಮೇ ೨೪ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಎಲ್ಲರಿಗೂ ಉಚಿತ ಪ್ರವೇಶ ನೀಡಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/visit-venkatappa-art-gallery-in-bengaluru-to-see-the-first-kannada-halmidi-inscription-rav/articleshow-37zaz2s"/>
        </item>
        <item>
            <title><![CDATA[ಲೀಸ್ ಹಣ ನಮಗೆ ಕೊಡಿ, ಪ್ರತಿ ತಿಂಗಳೂ ಬಾಡಿಗೆ ನಾವು ಕಟ್ಟುತ್ತೇವೆ ಎಂದು 200 ಕ್ಕೂ ಹೆಚ್ಚು ಜನರಿಗೆ ಕಂಪನಿ ಮೋಸ!]]></title>
            <link>https://kannada.asianetnews.com/crime/bengaluru-company-cheats-over-200-people-in-rental-lease-scam-give-us-money-we-pay-rent-rav/articleshow-3hrgqrq</link>
            <guid isPermaLink="true">https://kannada.asianetnews.com/crime/bengaluru-company-cheats-over-200-people-in-rental-lease-scam-give-us-money-we-pay-rent-rav/articleshow-3hrgqrq</guid>
            <pubDate>Tue, 19 May 2026 05:53:56 +0530</pubDate>
            <description><![CDATA[ಬೆಂಗಳೂರಿನಲ್ಲಿ, ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್ ಎಂಬ ಸಂಸ್ಥೆಯು ಭೋಗ್ಯದ ಹಣ ಪಡೆದು ಬಾಡಿಗೆ ಪಾವತಿಸುವುದಾಗಿ ನಂಬಿಸಿ ಸುಮಾರು 200 ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದೆ. ಈ ಸಂಬಂಧ ಸಂಸ್ಥೆಯ ಎಂಡಿ ಸ್ಟೀಫನ್ ಅರ್ಥರ್ ಜೋನ್ಸ್ ವಿರುದ್ಧ ದೂರು ದಾಖಲಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krysvx21x9h65nn16hbxm0hx,imgname-----------------------2026-05-19t055301.184-1779150222401.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.19): &lt;/strong&gt;ಭೋಗ್ಯದ ಹಣ ನಮಗೆ ನೀಡಿ ನಿಮ್ಮ ಮನೆಯ ಬಾಡಿಗೆ ನಾವು ಕಟ್ಟುತ್ತೇವೆ ಎಂದು ನಂಬಿಸಿ ಸುಮಾರು 200 ಮಂದಿಗೆ ಕೋಟ್ಯಂತರ ರು.ವಂಚನೆ ಮಾಡಿರುವ ಖಾಸಗಿ ಸಂಸ್ಥೆಯೊಂದರ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.&lt;/p&gt;&lt;p&gt;ಕ್ಲಿಫರ್ಡ್ ರಾಯನ್ ಸೇರಿ ಇತರರು ನೀಡಿದ ದೂರಿನನ್ವಯ ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್ ಸಂಸ್ಥೆಯ ಎಂ.ಡಿ ಸ್ಟೀಫನ್ ಅರ್ಥರ್ ಜೋನ್ಸ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಹೆಣ್ಣೂರು ಮುಖ್ಯರಸ್ತೆಯ ನಿವಾಸಿ ಕ್ಲಿಫರ್ಡ್ ರಾಯನ್ ಎಂಬುವರು 2025ರ ಜೂನ್&zwnj;ನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್ ಎಂಬ ಸಂಸ್ಥೆ ಸಂಪರ್ಕಕ್ಕೆ ಬಂದು ನಿಮಗೆ ಮನೆ ಕೊಡಿಸುವುದಾಗಿ ಹೇಳಿದ್ದರು. ಲೀಸ್&zwnj; ಹಣ ನಮಗೆ ಕೊಡಿ ನಿಮ್ಮ ಮನೆಯ ಬಾಡಿಗೆ ಹಣ ನಾವು ಕಟ್ಟುತ್ತೇವೆ ಎಂದು ನಂಬಿಸಿದ್ದಾರೆ.&lt;/p&gt;&lt;p&gt;ನಂತರ ಸಂಸ್ಥೆಯ ಉದ್ಯೋಗಿ ಅಬ್ದುಲ್ ಮತ್ತು ಮ್ಯಾನೇಜರ್ ಸವಿತಾ ಎಂಬುವರು ಕಂಪನಿಯ ನಿಯಮಗಳನ್ನು ವಿವರಿಸಿದ್ದಾರೆ. ನಂತರ ರಾಯನ್&zwnj; ಅವರು ವಿವಿಧ ಹಂತಗಳಲ್ಲಿ ಆನ್&zwnj;ಲೈನ್ ಮೂಲಕ 21 ಲಕ್ಷ ಹಣವನ್ನು ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್&zwnj;ನ ಬ್ಯಾಂಕ್&zwnj; ಖಾತೆಗೆ ಹಣ ಪಾವತಿಸಿದ್ದಾರೆ.&lt;/p&gt;&lt;p&gt;ಆ.12 ರಂದು ಒಪ್ಪಂದ ಮಾಡಿಕೊಂಡು ಮನೆಯಲ್ಲಿ ವಾಸವಿದ್ದರು. ಮನೆಯ ಅಸಲಿ ಮಾಲೀಕರಾದ ರಾಜು ಬೆನೆಡಿಕ್ಟ್ ಅವರಿಗೆ ಬಾಡಿಗೆ ಹಣ ನೀಡುವುದಾಗಿ ಈ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. 2026 ಮೇ 1ರಂದು ಮಾಲೀಕರು ಕರೆ ಮಾಡಿ 6 ತಿಂಗಳಿನಿಂದ ಬಾಡಿಗೆ ನೀಡಿರುವುದಿಲ್ಲ, ತಕ್ಷಣ ಮನೆ ಖಾಲಿ ಮಾಡುವಂತೆ ಕ್ಷಿಫರ್ಡ್ ರಾಯನ್ ಅವರಿಗೆ ತಿಳಿಸಿದ್ದಾರೆ.&lt;/p&gt;&lt;p&gt;ಇದರಿಂದ ಆತಂಕಗೊಂಡ ರಾಯನ್&zwnj; ಅವರು ಲೀಸ್ ಹಣ ವಾಪಸ್ ಕೊಡುವಂತೆ ಆ ಸಂಸ್ಥೆಗೆ ಕೇಳಿಕೊಂಡಾಗ ಅವರು ಹಣ ವಾಪಸ್ ನೀಡದೇ, ಫೋನ್ ಕರೆಗೂ ಸ್ಪಂದಿಸದಿದ್ದಾಗ ರಾಯನ್ ಅವರು ಜೋನ್ಸ್ ಪ್ರಾಪರ್ಟ್ ಸಂಸ್ಥೆಗೆ ಭೇಟಿ ನೀಡಿದಾಗ ತಮ್ಮಂತೆಯೇ ಹಲವರಿಗೆ ಲಕ್ಷಾಂತರ ರು. ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಂಸ್ಥೆಯ ಎಂ.ಡಿ ಸ್ಟೀಫನ್ ಅರ್ಥರ್ ಜೋನ್ ಹಾಗೂ ಇತರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಭೋಗ್ಯದ ಹಣ ವಾಪಸ್ ಕೊಡಿಸುವಂತೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಪ್ರಕರಣ ಸಿಐಡಿಗೆ ವರ್ಗಾವಣೆ!&amp;nbsp;&lt;/h2&gt;&lt;p&gt;ಸ್ಟೀಫನ್ ಜೋನ್ಸ್ ವಿರುದ್ಧ 2021ರಲ್ಲಿ ಚಂದ್ರಲೇಔಟ್&zwnj; ಪೊಲೀಸ್&zwnj; ಠಾಣೆಯಲ್ಲಿಯೂ 1 ಎಫ್&zwnj;ಐಆರ್&zwnj; ದಾಖಲಾಗಿತ್ತು. ಹೂಡಿಕೆ ಹೆಸರಿನಲ್ಲಿ ಚಂದ್ರಲೇಔಟ್&zwnj; ನಿವಾಸಿ ಸತೀಶ್&zwnj; ಎಂಬುವರಿಗೆ ಲಕ್ಷಾಂತರ ರು.ವಂಚಿಸಿದ್ದರು. ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್ ಕಂಪನಿಯು ಸುಮಾರು 300 ಮಂದಿಗೆ 200 ಕೋಟಿಗೂ ಅಧಿಕ ವಂಚನೆ ಮಾಡಿದೆ. ಕೋಟ್ಯಂತರ ರು. ವಂಚನೆ ಪ್ರಕರಣವಾಗಿರುವುದರಿಂದ ಸಿಐಡಿಗೆ ಈ ಪ್ರಕರಣ ವರ್ಗಾವಣೆಯಾಗಲಿದೆ.&lt;/p&gt;&lt;h3&gt;ವಂಚನೆ ಹೇಗೆ?&lt;/h3&gt;&lt;p&gt;ಭೋಗ್ಯಕ್ಕೆ (ಲೀಸ್&zwnj;) ಮನೆ ಹುಡುಕುತ್ತಿರುವವರನ್ನು ಜೋನ್ಸ್ ಪ್ರಾಪರ್ಟಿ ಮ್ಯಾನೇಜ್&zwnj;ಮೆಂಟ್ ಕಂಪನಿಯು ಟಾರ್ಗೆಟ್ ಮಾಡುತ್ತಿತ್ತು. ನಿಮ್ಮ ಲೀಸ್&zwnj; ಹಣ ನಮಗೆ ಕೊಡಿ, ಪ್ರತಿ ತಿಂಗಳು ನಿಮ್ಮ ಮನೆಯ ಬಾಡಿಗೆ ನಾವು ಕಟ್ಟುತ್ತೇವೆ ಎಂದು ಬಾಡಿಗೆದಾರರನ್ನು ನಂಬಿಸಿ ಅಗ್ರಿಮೆಂಟ್&zwnj; ಕೂಡ ಮಾಡಿ ಕೊಡುತ್ತಿದ್ದರು. ಆರಂಭದಲ್ಲಿ ಕೆಲ ತಿಂಗಳು ಬಾಡಿಗೆ ನೀಡುತ್ತಿದ್ದ ಕಂಪನಿಯು ನಂತರ ಬಾಡಿಗೆ ನೀಡದೆ ವಂಚಿಸಿದೆ. ವಂಚನೆ ಪ್ರಕರಣದಲ್ಲಿ ಈ ಹಿಂದೆ ಸಿಸಿಬಿ ಸ್ಟೀಫನ್&zwnj;ನನ್ನು ಬಂಧನ ಮಾಡಿತ್ತು ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/bengaluru-company-cheats-over-200-people-in-rental-lease-scam-give-us-money-we-pay-rent-rav/articleshow-3hrgqrq"/>
        </item>
        <item>
            <title><![CDATA[ಸರ್ಕಾರದ ಸಾಧನಾ ರ್‍ಯಾಲಿಗೆ ತುಮಕೂರು ಸಜ್ಜು; 2 ಲಕ್ಷ ಜನರು ಭಾಗಿ, ರಾಜ್ಯ ಸರ್ಕಾರಕ್ಕೆ ನಾಳೆ 3: ಇಂದು ‘ಗಿನ್ನೆಸ್‌ ದಾಖಲೆ’ಯ ಸಮಾವೇಶ!]]></title>
            <link>https://kannada.asianetnews.com/state/tumakuru-ready-for-govt-s-achievement-rally-2-lakh-to-attend-tomorrow-guinness-record-convention-today-rav/articleshow-74rpcr9</link>
            <guid isPermaLink="true">https://kannada.asianetnews.com/state/tumakuru-ready-for-govt-s-achievement-rally-2-lakh-to-attend-tomorrow-guinness-record-convention-today-rav/articleshow-74rpcr9</guid>
            <pubDate>Tue, 19 May 2026 04:24:08 +0530</pubDate>
            <description><![CDATA[&lt;p&gt;ಕಾಂಗ್ರೆಸ್&zwnj; ಸರ್ಕಾರದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತುಮಕೂರಿನಲ್ಲಿ 'ಸಾಧನಾ ಸಮಾವೇಶ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krykxn78m5gb045qwyyvpvxa,imgname-----------------------2026-05-19t040925.768-1779143988456.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು (ಮೇ.19): &lt;/strong&gt;ರಾಜ್ಯದಲ್ಲಿ ಕಾಂಗ್ರೆಸ್&zwnj; ಸರ್ಕಾರ ರಚನೆಯಾಗಿ ಬುಧವಾರ (ಮೇ 20ಕ್ಕೆ) ಮೂರು ವರ್ಷಗಳು ತುಂಬಲಿವೆ. ಆ ಸಂಭ್ರಮ ಆಚರಿಸಲು ತುಮಕೂರಿನಲ್ಲಿ ಮಂಗಳವಾರವೇ ಸಾಧನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಸರ್ಕಾರಿ ಜೂನಿಯರ್&zwnj; ಕಾಲೇಜು ಮೈದಾನದಲ್ಲಿ ನಡೆಯುವ ಈ ಬೃಹತ್&zwnj; ರ್&zwj;ಯಾಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು, ಮುಖಂಡರ ದಂಡೇ ಭಾಗಿಯಾಗಲಿದೆ.&lt;/p&gt;&lt;p&gt;ಸಮಾವೇಶದ ಸಂದರ್ಭದಲ್ಲಿ 1.52 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್&zwnj; ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರವನ್ನು ಪ್ರದಾನ ಮಾಡಲು ಇಂಗ್ಲೆಂಡ್&zwnj;ನಿಂದ ಗಿನ್ನೆಸ್&zwnj; ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ತುಮಕೂರಿಗೆ ಆಗಮಿಸುತ್ತಿರುವುದು ವಿಶೇಷ ಎಂದು ಗೃಹ ಸಚಿವ ಡಾ। ಪರಮೇಶ್ವರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;ಸಮಾವೇಶದಲ್ಲಿ ಕಂದಾಯ ಇಲಾಖೆಯ 60 ಸಾವಿರ, ಗ್ರಾಮೀಣಾಭಿವೃದ್ಧಿ ಇಲಾಖೆಯ 80 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಒಟ್ಟಾರೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ.&lt;/p&gt;&lt;p&gt;ಕಾರ್ಯಕ್ರಮ ನಡೆಯಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿನ ಪೂರ್ವ ಸಿದ್ಧತೆಯನ್ನು ಗೃಹ ಸಚಿವ ಡಾ। ಜಿ.ಪರಮೇಶ್ವರ್&zwnj; ಅವರು ಸೋಮವಾರ ವೀಕ್ಷಿಸಿದರು.&lt;/p&gt;&lt;p&gt;&lt;strong&gt;ಗಿನ್ನೆಸ್ ದಾಖಲೆ:&lt;/strong&gt;&lt;/p&gt;&lt;p&gt;ಒಮ್ಮೆಗೇ 1.50 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಯು ದಾಖಲೆ ಆಗಿದೆ. ತುಮಕೂರು ಜಿಲ್ಲೆಯ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ- 1.6 ಲಕ್ಷ, ದರಖಾಸ್ತು ಪೋಡಿ - 24,256, ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ - 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಟ್ಟು 600 ಹುದ್ದೆಗಳ ನೇಮಕಾತಿ ಆದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.&lt;/p&gt;&lt;p&gt;ಇದೇ ವೇಳೆ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕರು, ಉಪ ತಹಶೀಲ್ದಾರರು, ತಹಶೀಲ್ದಾರರು ಹಾಗೂ ಭೂಮಾಪನಾ ಇಲಾಖೆಯ ಸರ್ವೆಯರ್&zwnj;ಗಳು, ಸಹಾಯಕ ಭೂ ದಾಖಲೆಗಳ ಉಪನಿರ್ದೇಶಕರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಗುತ್ತದೆ.&lt;/p&gt;&lt;p&gt;&lt;strong&gt;2 ಲಕ್ಷ ಜನ:&lt;/strong&gt;&lt;/p&gt;&lt;p&gt;ಕಂದಾಯ ಇಲಾಖೆ ಹಾಗೂ ಪಂಚಾಯಿತಿ ಹಂತದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು 3 ಸಾವಿರ ಬಸ್ಸುಗಳಲ್ಲಿ ಫಲಾನುಭವಿಗಳು ಆಗಮಿಸುತ್ತಿದ್ದು, ಬಸ್ಸು ಹೊರಡುವ ಜಾಗದಲ್ಲಿಯೇ ಫಲಾನುಭವಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಫಲಾನುಭವಿಗಳ ಸುರಕ್ಷತೆ ದೃಷ್ಟಿಯಿಂದ ಕರೆತರಲು ಮತ್ತು ವಾಪಸ್ ಕರೆದುಕೊಂಡು ಹೋಗಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಬಸ್&zwnj; ಹೊರಡುವ ಜಾಗದಿಂದ ಜಿಪಿಎಸ್ ವ್ಯವಸ್ಥೆ ಮೂಲಕ ಮಾರ್ಗದ ಮೇಲೆ ನಿಗಾವಹಿಸಲು ಸೂಚಿಸಲಾಗಿದೆ.&lt;/p&gt;&lt;p&gt;ಚುನಾವಣಾ ಪ್ರಣಾಳಿಕೆಯನ್ನು ನನ್ನ ಅಧ್ಯಕ್ಷತೆಯಲ್ಲಿಯೇ ಮಾಡಲಾಗಿತ್ತು. ಐದು ಗ್ಯಾರಂಟಿ ಸೇರಿ ಆದ್ಯತಾ ವಿಷಯಗಳನ್ನು ಈಡೇರಿಸುವ ಬಗ್ಗೆ ಜನರಿಗೆ ಆಶ್ವಾಸನೆ ನೀಡಲಾಗಿತ್ತು. ಕಳೆದ 3 ವರ್ಷಗಳು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ರಾಜ್ಯದ ಜನತೆಗೆ ಅರ್ಪಿಸಲಾಗಿದೆ. ಈ ಸುಸಂದರ್ಭದಲ್ಲಿ ಉತ್ತರದಾಯಿತ್ವವಾಗಿ ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಆಗಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಕ್ರಮವನ್ನು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ಆಗಿರುವ ಪ್ರಗತಿಯು ಗಿನ್ನಿಸ್&zwnj; ದಾಖಲೆಗೆ ಸೇರಲಿದೆ.&lt;/p&gt;&lt;p&gt;&lt;strong&gt;-ಡಾ। ಜಿ.ಪರಮೇಶ್ವರ್&zwnj;, ಗೃಹ ಸಚಿವ.&lt;/strong&gt;&lt;/p&gt;&lt;h2&gt;1,52,492 ಮಂದಿಗೆ ಹಕ್ಕುಪತ್ರ ವಿತರಣೆ&lt;/h2&gt;&lt;p&gt;ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ಇ-ಪೌತಿ ಆಂದೋಲನಾ- 1.6 ಲಕ್ಷ, ದರಖಾಸ್ತು ಪೋಡಿ - 24,256, ಕಂದಾಯ ಗ್ರಾಮ ಹಕ್ಕು ಪತ್ರ - 20,666 ಮತ್ತು ಪೋಡಿ ಮುಕ್ತ ಅಭಿಯಾನ - 1570 ಸೇರಿದಂತೆ ಒಟ್ಟು 1,52,492 ಫಲಾನುಭವಿಗಳಿಗೆ ಹಕ್ಕು ಪತ್ರ/ಆದೇಶ ಪತ್ರಗಳನ್ನು ಸಮಾವೇಶದಲ್ಲಿ ವಿತರಣೆ ಮಾಡಲಾಗುತ್ತಿದೆ.&lt;/p&gt;&lt;h3&gt;ತುಮಕೂರಿಗೆ ಇಂದು ಗಿನ್ನೆಸ್&zwnj; ದಾಖಲೆ ತಂಡ&lt;/h3&gt;&lt;p&gt;ರಾಜ್ಯದ ಇತಿಹಾಸದಲ್ಲಿ ಒಂದೇ ಕಾರ್ಯಕ್ರಮದಲ್ಲಿ ಇಷ್ಟೊಂದು ಮಂದಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿರುವುದು ಇದೇ ಮೊದಲು. ಈ ಸಾಧನೆ ಗಿನ್ನೆಸ್&zwnj; ದಾಖಲೆಗೆ ಸೇರಲಿದೆ. ಆ ಕುರಿತು ಪ್ರಮಾಣ ಪತ್ರವನ್ನು ಪ್ರದಾನ ಮಾಡಲು ಇಂಗ್ಲೆಂಡ್&zwnj;ನಿಂದ ಗಿನ್ನೆಸ್&zwnj; ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ತುಮಕೂರಿಗೆ ಬರಲಿದ್ದಾರೆ ಎಂದು ಗೃಹ ಸಚಿವ ಡಾ। ಪರಮೇಶ್ವರ್&zwnj; ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/tumakuru-ready-for-govt-s-achievement-rally-2-lakh-to-attend-tomorrow-guinness-record-convention-today-rav/articleshow-74rpcr9"/>
        </item>
        <item>
            <title><![CDATA[ಚುನಾವಣೆ ಗೆಲ್ಲುವುದಾಕ್ಕಾಗಿಯೇ ಎಸ್‌ಐಆರ್‌ ಜಾರಿ: ಸಚಿವ ಪ್ರಿಯಾಂಕ್‌ ಖರ್ಗೆ ಟೀಕೆ]]></title>
            <link>https://kannada.asianetnews.com/karnataka-districts/priyank-kharge-on-voter-list-sir-revision-and-election-rights-gvd/articleshow-yfq3wb0</link>
            <guid isPermaLink="true">https://kannada.asianetnews.com/karnataka-districts/priyank-kharge-on-voter-list-sir-revision-and-election-rights-gvd/articleshow-yfq3wb0</guid>
            <pubDate>Mon, 18 May 2026 22:55:37 +0530</pubDate>
            <description><![CDATA[&lt;p&gt;ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್&zwnj; ರಾಜ್&zwnj; ಸಚಿವ ಪ್ರಿಯಾಂಕ್&zwnj; ಖರ್ಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ಸಂವಿಧಾನ ಹಕ್ಕುಗಳಿಗೆ ಧಕ್ಕೆ ಆಗಬಾರದು ಎಂದು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk67zh6mptcmb3mr46h0kb1y,imgname----------------------95--1772957451476.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.18): &lt;/strong&gt;ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್&zwnj;ಐಆರ್&zwnj;) ಮಾಡಲು ಹೊರಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್&zwnj; ರಾಜ್&zwnj; ಸಚಿವ ಪ್ರಿಯಾಂಕ್&zwnj; ಖರ್ಗೆ ಟೀಕಿಸಿದ್ದಾರೆ. ಹೊಸ ನಿಯಮ ಜಾರಿಗೆ ತಂದು ಯಾರನ್ನು ಬೇಕಾದರೂ ಮತದಾನ ಪಟ್ಟಿಯಿಂದ ತೆಗೆಯಬಹುದು ಎಂದರೆ ಅದನ್ನು ಸಂವಿಧಾನದ ಪ್ರಕಾರ ನಡೆಯುತ್ತಿದೆ ಎನ್ನಲು ಆಗುತ್ತದೆಯೇ. ಎಸ್&zwnj;ಐಆರ್&zwnj; ಮಾಡಬೇಡಿ ಎಂದು ನಾವು ಹೇಳುವುದಿಲ್ಲ.&lt;/p&gt;&lt;p&gt;ಆದರೆ ಅದನ್ನು ಸರಿಯಾಗಿ ಮಾಡಬೇಕು, ಒಬ್ಬ ನಾಗರಿಕನಿಗೂ ತೊಂದರೆಯಾಗದಂತೆ ಸಂವಿಧಾನದ ಹಕ್ಕನ್ನು ನೀಡಬೇಕು ಎಂದರು.ನನ್ನ ಹೆಸರು ಪ್ರಿಯಾಂಕ್&zwnj; ಎಂದಿದೆ. ಈ ಹೆಸರಿನಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಮತದಾರ ಪಟ್ಟಿಯಿಂದ ಹೆಸರು ತೆಗೆಯಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಒಬ್ಬ ಅಭ್ಯರ್ಥಿಯ ಹೆಸರನ್ನೇ ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ವೈಸ್&zwnj; ಅಡ್ಮಿರಲ್&zwnj; ಅವರ ಹೆಸರನ್ನು ತೆಗೆಯಲಾಗಿದೆ ಎಂದರು.&lt;/p&gt;&lt;p&gt;ಎಸ್&zwnj;ಐಆರ್&zwnj; ವಿಷಯದಲ್ಲಿ ರಾಜ್ಯ ಸರ್ಕಾರದ ನಿಲುವು ಸ್ಪಷ್ಟವಾಗಿದೆ. ಈಗಾಗಲೇ ನಡೆದಿರುವ ಮತದಾರರ ಮ್ಯಾಪಿಂಗ್&zwnj; ಸರಿಯಾಗಿದೆಯೇ ಇಲ್ಲವೇ ಎಂಬುದನ್ನು ಚುನಾವಣೆ ಆಯೋಗ ಪರಿಶೀಲಿಸಲಿ, ಲೋಪಗಳಿದ್ದರೆ ಪಾರದರ್ಶಕವಾಗಿ ತಿದ್ದುಪಡಿ ಮಾಡಲಿ, ಜೊತೆಗೆ ಈ ಸಂಬಂಧ ಜನರಿಂದ ಬಂದ ದೂರುಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬಹಳಷ್ಟು ಜನರನ್ನು ಸಂವಿಧಾನದ ಹಕ್ಕಿನಿಂದ ದೂರ ಇಟ್ಟದಂತಾಗುತ್ತೆ. ಇದರ ವಿರುದ್ದ ನ್ಯಾಯಾಂಗ ಹೋರಾಟವನ್ನಪಕ್ಷ ಹಾಗೂ ಸರ್ಕಾರದಿಂದ ಮಾಡುತ್ತೇವೆ ಎಂದರು.&lt;/p&gt;&lt;h2&gt;&lt;strong&gt;ವೆಚ್ಚ ಕಡಿತ-ಸಂಪುಟದಲ್ಲಿ ಚರ್ಚೆ&lt;/strong&gt;&lt;/h2&gt;&lt;p&gt;ಖರ್ಚು ಕಡಿಮೆ ಮಾಡಲು ಸಚಿವರ ಬೆಂಗಾವಲು ವಾಹನಗಳ ಕಡಿತ ಮಾಡುವ ಬಗ್ಗೆ ಮೇ 21 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಕೇವಲ ಒಂದು ಬೆಂಗಾವಲು ವಾಹನ ಕಡಿತ ಮಾಡುವುದು, ಸೈಕಲ್&zwnj;, ಮೆಟ್ರೋ ರೈಲು ಬಳಸುವುದು ಸರಿಯಲ್ಲ. ಬಿಜೆಪಿಯವರು ಮೆಟ್ರೋ ಪ್ರಯಾಣ ಮಾಡಿರುವುದು ನಾಟಕ ಅಷ್ಟೇ. ಅವರು ಪ್ರತಿ ದಿನ ಮೆಟ್ರೋ, ಬಿಎಂಟಿಸಿ ಬಸ್&zwnj; ಹತ್ತಲಿ ಎಂದು ಪ್ರಿಯಾಂಕ್&zwnj; ಹೇಳಿದರು.&lt;/p&gt;]]></content:encoded>
            <category>bengaluru-urban</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/priyank-kharge-on-voter-list-sir-revision-and-election-rights-gvd/articleshow-yfq3wb0"/>
        </item>
        <item>
            <title><![CDATA[ಕಾರಲ್ಲಿ ಎಸಿ ಹಾಕ್ಕೊಂಡು ಮಲಗುವ ಮುನ್ನ ಎಚ್ಚರ! ಬೆಂಗಳೂರಲ್ಲಿ ಗ್ಲಾಸ್ ಏರಿಸಿ ಮಲಗಿದ್ದ ಕ್ಯಾಬ್ ಚಾಲಕ ಕುಳಿತಲ್ಲೇ ಸಾವು]]></title>
            <link>https://kannada.asianetnews.com/gallery/state/bengaluru-cab-driver-dies-while-sleeping-in-ac-car-with-windows-rolled-up-peenya-sat-bzc6q84</link>
            <guid isPermaLink="true">https://kannada.asianetnews.com/gallery/state/bengaluru-cab-driver-dies-while-sleeping-in-ac-car-with-windows-rolled-up-peenya-sat-bzc6q84</guid>
            <pubDate>Mon, 18 May 2026 19:22:02 +0530</pubDate>
            <description><![CDATA[ಬೆಂಗಳೂರಿನಲ್ಲಿ, ಕಾರಿನ ಎಸಿ ಆನ್ ಮಾಡಿ ಕಿಟಕಿಗಳನ್ನು ಮುಚ್ಚಿ ಮಲಗಿದ್ದ ಕ್ಯಾಬ್ ಚಾಲಕನೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೃದಯಾಘಾತ ಅಥವಾ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಸೇವನೆಯಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಪೀಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krxn80re17k7vpxrv6k1030t,imgname-bengaluru-driver-sleeping-in-ac-car-1779111822094.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನಲ್ಲಿ, ಕಾರಿನ ಎಸಿ ಆನ್ ಮಾಡಿ ಕಿಟಕಿಗಳನ್ನು ಮುಚ್ಚಿ ಮಲಗಿದ್ದ ಕ್ಯಾಬ್ ಚಾಲಕನೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೃದಯಾಘಾತ ಅಥವಾ ಕಾರ್ಬನ್ ಮಾನಾಕ್ಸೈಡ್ ವಿಷಾನಿಲ ಸೇವನೆಯಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಪೀಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ಸಂಭವಿಸಿದೆ. ಕಾರಿನ ಎಸಿ (AC) ಆನ್ ಮಾಡಿ, ಗಾಜುಗಳನ್ನು ಪೂರ್ತಿಯಾಗಿ ಏರಿಸಿ ಮಲಗಿದ್ದ ಕ್ಯಾಬ್ ಚಾಲಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗೆದರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಚಾಲಕನ ಸಾವಿನ ಸುದ್ದಿ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;img&gt;&lt;p&gt;ಮೃತಪಟ್ಟ ವ್ಯಕ್ತಿ ಖಾಸಗಿ ಕಂಪನಿಯೊಂದರಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ನೆಲಗೆದರಹಳ್ಳಿಯ ರಸ್ತೆ ಪಕ್ಕದಲ್ಲಿ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಬಿಸಿಲು ಹೆಚ್ಚಿದ್ದರಿಂದಲೋ ಅಥವಾ ಸುಸ್ತು ಎನಿಸಿದ್ದರಿಂದಲೋ ಚಾಲಕನು ಕಾರಿನ ಎಸಿ ಆನ್ ಮಾಡಿ, ಕಿಟಕಿ ಗಾಜುಗಳನ್ನು ಪೂರ್ತಿಯಾಗಿ ಮುಚ್ಚಿ ಒಳಗೆ ಮಲಗಿದ್ದರು.&lt;/p&gt;&lt;img&gt;&lt;p&gt;ಬೆಳಿಗ್ಗೆಯಿಂದ ಸುಮಾರು ಎರಡು ಗಂಟೆಗಳ ಕಾಲ ಕಾರು ಒಂದೇ ಕಡೆ ನಿಂತಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಬಂದಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೆಲವರು ಕಾರಿನ ಹತ್ತಿರ ಹೋಗಿ ಪರಿಶೀಲಿಸಿದಾಗ ಚಾಲಕ ಸೀಟಿನಲ್ಲಿ ಮಲಗಿರುವುದು ಕಂಡುಬಂದಿದೆ.&lt;/p&gt;&lt;img&gt;&lt;p&gt;ಎಷ್ಟೇ ಕೂಗಿದರೂ, ಕಾರಿನ ಮೇಲೆ ತಟ್ಟಿದರೂ ಒಳಗಿದ್ದ ಚಾಲಕ ಪ್ರತಿಕ್ರಿಯೆ ನೀಡಲಿಲ್ಲ. ಅನಿವಾರ್ಯವಾಗಿ ಸ್ಥಳೀಯರು ಕಲ್ಲಿನಿಂದ ಕಾರಿನ ಕಿಟಕಿ ಗಾಜನ್ನು ಒಡೆದು ಬಾಗಿಲು ತೆರೆದಿದ್ದಾರೆ. ಆದರೆ, ಅಷ್ಟರಲ್ಲೇ ಚಾಲಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.&lt;/p&gt;&lt;img&gt;&lt;p&gt;ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರು ಸೇರಿ ಚಾಲಕನನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಾಲಕನನ್ನು ಪರೀಕ್ಷಿಸಿದ ವೈದ್ಯರು, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನು ಹೃದಯಾಘಾತದಿಂದ (Heart Attack) ಮೃತಪಟ್ಟಿರಬಹುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.&amp;nbsp;&lt;/p&gt;&lt;p&gt;ಆದಾಗ್ಯೂ, ಕಾರಿನೊಳಗೆ ಎಸಿ ಹಾಕಿ ಗಾಜುಗಳನ್ನು ಪೂರ್ತಿ ಮುಚ್ಚಿ ಮಲಗಿದಾಗ ಉಂಟಾಗುವ ಆಮ್ಲಜನಕದ ಕೊರತೆ ಅಥವಾ ಕಾರ್ಬನ್ ಮಾನಾಕ್ಸೈಡ್ ಅನಿಲದ ಪರಿಣಾಮದ ಬಗ್ಗೆಯೂ ಸಂಶಯಗಳು ವ್ಯಕ್ತವಾಗುತ್ತಿವೆ.&lt;/p&gt;&lt;img&gt;&lt;p&gt;ಮೃತ ಚಾಲಕ ಯಾರು? ಎಲ್ಲಿಯವನು? ಎಂಬ ಬಗ್ಗೆ ಪೀಣ್ಯ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರು ಯಾವ ಕಂಪನಿಗೆ ಸೇರಿದ ಕಾರು ಓಡಿಸುತ್ತಿದ್ದರು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದೆ.&lt;/p&gt;&lt;img&gt;&lt;p&gt;ನಿಂತಿರುವ ಕಾರಿನಲ್ಲಿ ಎಸಿ ಆನ್ ಮಾಡಿ, ಗಾಜುಗಳನ್ನು ಪೂರ್ತಿಯಾಗಿ ಮುಚ್ಚಿ ಮಲಗುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಕಾರಿನ ಇಂಜಿನ್&zwnj;ನಿಂದ ಹೊರಬರುವ ವಿಷಕಾರಿ ಕಾರ್ಬನ್ ಮಾನಾಕ್ಸೈಡ್ ಅನಿಲವು ಎಸಿ ಮೂಲಕ ಕಾರಿನೊಳಗೆ ಸೇರಿಕೊಳ್ಳಬಹುದು.&lt;/p&gt;&lt;p&gt;ಇದು ಗೊತ್ತಿಲ್ಲದೆಯೇ ಉಸಿರಾಟದ ಮೂಲಕ ದೇಹ ಸೇರಿ ವ್ಯಕ್ತಿ ಪ್ರಜ್ಞೆ ತಪ್ಪುವಂತೆ ಮಾಡುತ್ತದೆ ಮತ್ತು ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಚಾಲಕರು ಸುಸ್ತು ಎನಿಸಿದಾಗ ಕಾರಿನ ಗಾಜುಗಳನ್ನು ಸ್ವಲ್ಪ ಇಳಿಸಿ ಗಾಳಿ ಆಡುವಂತೆ ನೋಡಿಕೊಳ್ಳುವುದು ಸುರಕ್ಷಿತ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/bengaluru-cab-driver-dies-while-sleeping-in-ac-car-with-windows-rolled-up-peenya-sat-bzc6q84"/>
        </item>
        <item>
            <title><![CDATA[ಯುವ ಕಾಂಗ್ರೆಸ್‌ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಟಾರ್ಗೆಟ್‌ ಮಾಡಲಾಗುತ್ತಿದೆ: ದೀಪಿಕಾ ರೆಡ್ಡಿ ಗಂಭೀರ ಆರೋಪ!]]></title>
            <link>https://kannada.asianetnews.com/gallery/bengaluru-urban/deepika-reddy-alleges-harassment-by-youth-congress-president-hs-manjunath-san-3u54cl5</link>
            <guid isPermaLink="true">https://kannada.asianetnews.com/gallery/bengaluru-urban/deepika-reddy-alleges-harassment-by-youth-congress-president-hs-manjunath-san-3u54cl5</guid>
            <pubDate>Mon, 18 May 2026 16:03:19 +0530</pubDate>
            <description><![CDATA[&lt;p&gt;ಯುವ ಕಾಂಗ್ರೆಸ್&zwnj;ನಲ್ಲಿ ತಮ್ಮ ಹುದ್ದೆಯನ್ನು ತಡೆಹಿಡಿದಿರುವುದನ್ನು ವೈಯಕ್ತಿಕ ಸೇಡಿನ ಕ್ರಮ ಎಂದು ದೀಪಿಕಾ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ &amp;nbsp;ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krxa0qqnnta5fvv9k9btfe4w,imgname-kpycc-action-congress-1779100049141.jpg" type="image/jpeg" height="390" width="690"/>
            <content:encoded><![CDATA[&lt;p&gt;ಯುವ ಕಾಂಗ್ರೆಸ್&zwnj;ನಲ್ಲಿ ತಮ್ಮ ಹುದ್ದೆಯನ್ನು ತಡೆಹಿಡಿದಿರುವುದನ್ನು ವೈಯಕ್ತಿಕ ಸೇಡಿನ ಕ್ರಮ ಎಂದು ದೀಪಿಕಾ ರೆಡ್ಡಿ ಆರೋಪಿಸಿದ್ದಾರೆ. ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರು, ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ &amp;nbsp;ಎಂದಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಹುದ್ದೆಯನ್ನು ತಡೆಹಿಡಿದಿರುವ ಯುವ ಕಾಂಗ್ರೆಸ್ ನಿರ್ಧಾರದ ವಿರುದ್ಧ ದೀಪಿಕಾ ರೆಡ್ಡಿ ಅಧಿಕೃತ ಪ್ರೆಸ್&zwnj;ನೋಟ್ ಬಿಡುಗಡೆ ಮಾಡುವ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ. &quot;ನನ್ನ ಹುದ್ದೆಯನ್ನು ತಡೆಹಿಡಿದಿರುವುದು ಕಾನೂನುಬಾಹಿರ ಹಾಗೂ ಪ್ರತೀಕಾರದ ಕ್ರಮವಾಗಿದೆ. ಇದು ಪಕ್ಷದ ಯಾವುದೇ ಶಿಸ್ತಿನ ಕ್ರಮವಲ್ಲ, ಬದಲಿಗೆ ನನ್ನ ವಿರುದ್ಧ ಮಾಡಲಾಗಿರುವ ವೈಯಕ್ತಿಕ ಸೇಡಿನ ರಾಜಕೀಯ&quot; ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.&lt;/p&gt;&lt;img&gt;&lt;p&gt;ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಾವು ಗಳಿಸಿದ ಜನಾದೇಶವನ್ನು ಉಲ್ಲೇಖಿಸಿರುವ ದೀಪಿಕಾ ರೆಡ್ಡಿ, &quot;ನಾನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಬರೋಬ್ಬರಿ 2.95 ಲಕ್ಷ ಮತಗಳನ್ನು ಪಡೆದಿದ್ದೇನೆ. ಇಡೀ ದೇಶದಲ್ಲೇ ಅತಿ ಹೆಚ್ಚು ಮತಗಳನ್ನು ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ನಾನು ಕೂಡ ಒಬ್ಬಳಾಗಿದ್ದೇನೆ. ಪುರುಷ ಪ್ರಾಬಲ್ಯದ ರಾಜಕೀಯ ವಾತಾವರಣದಲ್ಲೂ ನಾನು ಅವರ ವಿರುದ್ಧ ಧೈರ್ಯವಾಗಿ ಹೋರಾಟ ನಡೆಸಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷದ ಸಂಘಟನೆಗಾಗಿ ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ&quot; ಎಂದು ತಮ್ಮ ಸಾಧನೆಯನ್ನು ನೆನಪಿಸಿದ್ದಾರೆ.&lt;/p&gt;&lt;img&gt;&lt;p&gt;ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ದೀಪಿಕಾ, &quot;ಅಧ್ಯಕ್ಷ ಮಂಜುನಾಥ್ ಅವರು ತೀವ್ರ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ನನಗಿರುವ ಸಾರ್ವಜನಿಕ ಬೆಂಬಲವನ್ನು ನೋಡಿ ಸಹಿಸಲಾರದೆ, ನನ್ನನ್ನು ಬೆದರಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಚುನಾವಣೆಯ ಮುಕ್ತಾಯದ ನಂತರವೂ ನನ್ನ ವಿರುದ್ಧ ನಿರಂತರವಾಗಿ ರಾಜಕೀಯ ಪಿತೂರಿ ನಡೆಸಲಾಗುತ್ತಿದ್ದು, ತೀವ್ರ ಮಾನಸಿಕ ಕಿರುಕುಳ ನೀಡಲಾಗಿದೆ&quot; ಎಂದು ಕಿಡಿಕಾರಿದ್ದಾರೆ.&lt;/p&gt;&lt;img&gt;&lt;p&gt;ಯುವ ಕಾಂಗ್ರೆಸ್&zwnj;ನಲ್ಲಿ ಮಹಿಳಾ ನಾಯಕಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, &quot;ಮಂಜುನಾಥ್ ಗೌಡ ನೇತೃತ್ವದ ಯುವ ಕಾಂಗ್ರೆಸ್&zwnj;ನಲ್ಲಿ ಮಹಿಳಾ ನಾಯಕಿಯರನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವ ಕಾಂಗ್ರೆಸ್ ಕಚೇರಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ವಾತಾವರಣವಾಗಿ ನಿರ್ಮಾಣಗೊಂಡಿದೆ. ಈ ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯದ ವಿರುದ್ಧ ನಾನು ಯಾವುದೇ ಕಾರಣಕ್ಕೂ ಮೌನವಾಗಿ ಕೂರುವುದಿಲ್ಲ&quot; ಎಂದು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಸ್ಪಷ್ಟನೆ ನೀಡಿರುವ ದೀಪಿಕಾ ರೆಡ್ಡಿ, &quot;ಇಂತಹ ಯಾವುದೇ ದ್ವೇಷದ ಕ್ರಮಗಳು ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ಲಕ್ಷಾಂತರ ಯುವ ಜನತೆ ನನಗೆ ನೀಡಿರುವ ಜನಾದೇಶವನ್ನು ಇಂತಹ ಯಾವುದೇ ಕಾನೂನುಬಾಹಿರ ಆದೇಶಗಳು ಅಳಿಸಿಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಹಾಗೂ ಹೈಕಮಾಂಡ್ ಮೇಲಿನ ನನ್ನ ನಿಷ್ಠೆ ಎಂದಿಗೂ ಅಚಲವಾಗಿರುತ್ತದೆ. ನನ್ನ ವಿರುದ್ಧ ನಡೆದಿರುವ ಈ ಇಡೀ ಅನ್ಯಾಯದ ವಿಚಾರವನ್ನು ನಾನು ಶೀಘ್ರದಲ್ಲೇ ದೆಹಲಿಯ ರಾಷ್ಟ್ರೀಯ ನಾಯಕರ ಮುಂದೆ ತೆಗೆದುಕೊಂಡು ಹೋಗಿ ನ್ಯಾಯ ಕೇಳಲಿದ್ದೇನೆ&quot; ಎಂದು ಪ್ರೆಸ್&zwnj;ನೋಟ್&zwnj;ನಲ್ಲಿ ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/deepika-reddy-alleges-harassment-by-youth-congress-president-hs-manjunath-san-3u54cl5"/>
        </item>
        <item>
            <title><![CDATA[ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿದ ಮಹಿಳೆಯಿಂದ ಸಂಘಟನೆ ಮುಖ್ಯಸ್ಥೆ ಎಂದು ಜೀವ ಬೆದರಿಕೆ!]]></title>
            <link>https://kannada.asianetnews.com/karnataka-districts/bengaluru-woman-threatens-real-estate-businessman-demands-rs10-lakh-in-alleged-extortion-case-gdp/articleshow-5khec0x</link>
            <guid isPermaLink="true">https://kannada.asianetnews.com/karnataka-districts/bengaluru-woman-threatens-real-estate-businessman-demands-rs10-lakh-in-alleged-extortion-case-gdp/articleshow-5khec0x</guid>
            <pubDate>Mon, 18 May 2026 12:39:44 +0530</pubDate>
            <description><![CDATA[ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ, ತನ್ನನ್ನು ಸಂಘಟನೆಯ ಮುಖ್ಯಸ್ಥೆ ಎಂದು ಹೇಳಿಕೊಂಡ ಸಂಗೀತ ರಾಮ್ ಎಂಬ ಮಹಿಳೆ ಜೀವ ಬೆದರಿಕೆ ಹಾಕಿದ್ದಾರೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿ ಕಚೇರಿಗೆ ನುಗ್ಗಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krwykt546ptgag2wj6vv7eyd,imgname-bengaluru-woman-threatens-real-estate-businessman-1779088091299.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ಮಹಿಳೆಯೊಬ್ಬರು ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರಕರಣವು ನಗರದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂಗೀತ ರಾಮ್ ಎಂಬ ಮಹಿಳೆ, ತಾನು &ldquo;ಕರ್ನಾಟಕ ಯುವಸೇನೆ ಮುಖ್ಯಸ್ಥೆ&rdquo; ಹಾಗೂ &ldquo;ಮಹಿಳಾ ಸಂಘದ ಅಧ್ಯಕ್ಷೆ&rdquo; ಎಂದು ಹೇಳಿಕೊಂಡು ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಅವರಿಗೆ ಧಮ್ಕಿ ಹಾಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಆಕೆಯೊಂದಿಗೆ ಇಬ್ಬರು ಪುರುಷರು ಕೂಡ ಇದ್ದರು ಎನ್ನಲಾಗಿದ್ದು, ಮೂವರು ಸೇರಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ದೂರುದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ರಿಯಲ್ ಎಸ್ಟೇಟ್ ಕಚೇರಿಗೆ ನುಗ್ಗಿ ಗಲಾಟೆ&lt;/h2&gt;&lt;p&gt;ಕೊತ್ತನೂರು ಸಮೀಪದ ಸಂಜಯನಗರದಲ್ಲಿರುವ ವೆಂಕಟರಾಜು ಅವರ ರಿಯಲ್ ಎಸ್ಟೇಟ್ ಕಚೇರಿಗೆ ನುಗ್ಗಿದ ಆರೋಪಿಗಳು, ಶಿವಾಜಿನಗರದಲ್ಲಿ ನಡೆದಿದ್ದ ಜಮೀನು ವ್ಯವಹಾರದ ವಿಚಾರವನ್ನು ಮುಂದಿಟ್ಟುಕೊಂಡು ಗಲಾಟೆ ನಡೆಸಿದ್ದಾರೆ. ವೆಂಕಟರಾಜು ಅವರು ಶಿವಾಜಿನಗರದಲ್ಲಿ ಸೈಟ್&zwnj; ಒಂದನ್ನು ಅಗ್ರಿಮೆಂಟ್ ಮಾಡಿಕೊಂಡಿದ್ದು, ಅದೇ ವಿಚಾರಕ್ಕೆ ಸಂಬಂಧಿಸಿ ಈ ಬೆದರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ನೀನು ಅಗ್ರಿಮೆಂಟ್ ಮಾಡಿಕೊಂಡಿದ್ದೀಯಾ, ಆದರೆ ಆ ಜಾಗಕ್ಕೆ ಹೋಗಬಾರದು. ನಮ್ಮ ತಂಟೆಗೆ ಬರಬಾರದೆಂದರೆ 10 ಲಕ್ಷ ರೂಪಾಯಿ ನೀಡಬೇಕು ಎಂದು ಆರೋಪಿಗಳು ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, ಹಣ ನೀಡದಿದ್ದರೆ 15ರಿಂದ 20 ಜನರನ್ನು ಸೇರಿಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ.&lt;/p&gt;&lt;h2&gt;ಸಂಗೀತ ರಾಮ್ ಸೇರಿದಂತೆ ಮೂವರ ವಿರುದ್ಧ ತನಿಖೆ&lt;/h2&gt;&lt;p&gt;ಇದಲ್ಲದೆ, ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕಚೇರಿಗೆ ನುಗ್ಗಿ ಹಲ್ಲೆ ನಡೆಸುವುದಾಗಿ ಸಹ ಎಚ್ಚರಿಕೆ ನೀಡಿರುವುದಾಗಿ ತಿಳಿದುಬಂದಿದೆ. ಈ ರೀತಿಯ ಜೀವ ಬೆದರಿಕೆಯಿಂದ ಆತಂಕಗೊಂಡ ವೆಂಕಟರಾಜು ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂಗೀತ ರಾಮ್ ಸೇರಿದಂತೆ ಮೂವರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ಗುರುತು ಮತ್ತು ಹಿನ್ನೆಲೆ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದ್ದು, ಉದ್ಯಮಿಗಳು ಭಯಭೀತರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-woman-threatens-real-estate-businessman-demands-rs10-lakh-in-alleged-extortion-case-gdp/articleshow-5khec0x"/>
        </item>
        <item>
            <title><![CDATA[ಕೆಪಿಸಿಸಿ ಕಚೇರಿಯಲ್ಲಿ 'ಕೈ' ಕಾರ್ಯಕರ್ತರ ರಣರಂಗ: ಯೂತ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಗದ್ದಲ, ತಳ್ಳಾಟ-ನೂಕಾಟ!]]></title>
            <link>https://kannada.asianetnews.com/gallery/state/karnataka-youth-congress-clash-at-kpcc-office-bengaluru-manjunath-vs-deepika-reddy-sat-8fxsddk</link>
            <guid isPermaLink="true">https://kannada.asianetnews.com/gallery/state/karnataka-youth-congress-clash-at-kpcc-office-bengaluru-manjunath-vs-deepika-reddy-sat-8fxsddk</guid>
            <pubDate>Mon, 18 May 2026 14:48:41 +0530</pubDate>
            <description><![CDATA[ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕರೆದಿದ್ದ ಸಭೆಯು ಗದ್ದಲ, ಗಲಾಟೆಯಲ್ಲಿ ಅಂತ್ಯಗೊಂಡಿದೆ. ಹುದ್ದೆಯಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿದಾಗ ಎರಡು ಬಣಗಳ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01krx5a2zg91ybfz0w889rmegt,imgname-screenshot-2026-05-18-140056-1779095112688.png" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಕರೆದಿದ್ದ ಸಭೆಯು ಗದ್ದಲ, ಗಲಾಟೆಯಲ್ಲಿ ಅಂತ್ಯಗೊಂಡಿದೆ. ಹುದ್ದೆಯಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿದಾಗ ಎರಡು ಬಣಗಳ ನಡುವೆ ತೀವ್ರ ವಾಗ್ವಾದ, ತಳ್ಳಾಟ-ನೂಕಾಟ ನಡೆದು, ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.&lt;img&gt;&lt;p&gt;&lt;strong&gt;ಬೆಂಗಳೂರು (ಮೇ 18): ರಾ&lt;/strong&gt;ಜ್ಯ ರಾಜಕಾರಣದ ಕೇಂದ್ರಬಿಂದುವಾಗಿರುವ ಬೆಂಗಳೂರಿನ ಕೆಪಿಸಿಸಿ (KPCC) ಕಚೇರಿ ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿತ್ತು. ಕಾಂಗ್ರೆಸ್ ಪಕ್ಷದ ರಾಜ್ಯ ಕಚೇರಿ ಆವರಣದಲ್ಲೇ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಪರಸ್ಪರ ಕಿತ್ತಾಡಿಕೊಂಡ ಪ್ರಸಂಗ ನಡೆದಿದೆ. ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಅವರ ನಂತರ ಜವಾಬ್ದಾರಿ ವಹಿಸಿಕೊಂಡಿರುವ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಗದ್ದಲಕ್ಕೆ ಸಾಕ್ಷಿಯಾಯಿತು.&lt;/p&gt;&lt;img&gt;&lt;p&gt;ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಅವರು ಇಂದು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕರೆದಿದ್ದರು. ಸಂಘಟನೆಯ ಬಲವರ್ಧನೆ ಮತ್ತು ಮುಂದಿನ ಹೋರಾಟಗಳ ಬಗ್ಗೆ ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆ ಆರಂಭವಾಗುತ್ತಿದ್ದಂತೆಯೇ ಅಸಮಾಧಾನದ ಜ್ವಾಲೆ ಸ್ಫೋಟಿಸಿತು. ಇದಕ್ಕೆ ಪ್ರಮುಖ ಕಾರಣ, ಇತ್ತೀಚೆಗಷ್ಟೇ ಮಂಜುನಾಥ್ ಅವರು ಕೆಲ ಪದಾಧಿಕಾರಿಗಳನ್ನು ಅವರ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದರು. ಇದು ಅನೇಕ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು.&lt;/p&gt;&lt;img&gt;&lt;p&gt;ಪಕ್ಷದ ಹುದ್ದೆಯಿಂದ ಮುಕ್ತಗೊಳಿಸಲ್ಪಟ್ಟಿದ್ದ ಪ್ರಮುಖ ಪದಾಧಿಕಾರಿಗಳಲ್ಲಿ ಒಬ್ಬರಾದ ದೀಪಿಕಾ ರೆಡ್ಡಿ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ನಡೆಯುತ್ತಿದ್ದ ವೇಳೆ ಎದ್ದು ನಿಂತ ದೀಪಿಕಾ ರೆಡ್ಡಿ, 'ಯಾವ ಆಧಾರದ ಮೇಲೆ ನಮ್ಮನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ? ಪಕ್ಷಕ್ಕಾಗಿ ದುಡಿದ ನಮಗೆ ಈ ರೀತಿ ಅವಮಾನ ಮಾಡುವುದು ಸರಿಯೇ?' ಎಂದು ನೇರವಾಗಿ ಅಧ್ಯಕ್ಷ ಮಂಜುನಾಥ್ ಅವರನ್ನು ಪ್ರಶ್ನಿಸಿದರು. ದೀಪಿಕಾ ರೆಡ್ಡಿ ಅವರ ಬೆಂಬಲಕ್ಕೆ ನಿಂತ ಇತರ ಪದಾಧಿಕಾರಿಗಳು ಕೂಡ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.&lt;/p&gt;&lt;img&gt;&lt;p&gt;ಪ್ರಶ್ನೆ ಮಾಡಿದವರನ್ನು ಮಂಜುನಾಥ್ ಬೆಂಬಲಿಗರು ತಡೆಯಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಎರಡೂ ಬಣಗಳ ನಡುವೆ ತೀವ್ರ ವಾಕ್ಸಮರ ನಡೆದು, ನಂತರ ಅದು ತಳ್ಳಾಟ-ನೂಕಾಟಕ್ಕೆ ತಿರುಗಿತು. ಕೆಪಿಸಿಸಿ ಕಚೇರಿಯ ಒಳಗೆ ಪದಾಧಿಕಾರಿಗಳು ಪರಸ್ಪರ ಕಿರುಚಾಡುತ್ತಾ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.&lt;/p&gt;&lt;img&gt;&lt;p&gt;ಕಚೇರಿಯಲ್ಲಿದ್ದ ಚೇರುಗಳನ್ನು ಎತ್ತಿ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ನಾಯಕರು ಕಚೇರಿಯಲ್ಲಿದ್ದರೂ ಲೆಕ್ಕಿಸದ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು. ಇದರಿಂದ ಕಚೇರಿಯ ಇಡೀ ವಾತಾವರಣ ಹಾಳಾಯಿತು.&lt;/p&gt;&lt;img&gt;&lt;p&gt;ಈ ಘಟನೆಯಿಂದಾಗಿ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಶಿಸ್ತು ಸಮಿತಿಯ ಎಚ್ಚರಿಕೆಯ ನಡುವೆಯೂ ಪದಾಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಗಲಾಟೆ ಮಾಡಿಕೊಂಡಿರುವುದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ. 'ಪದಾಧಿಕಾರಿಗಳ ಬದಲಾವಣೆ ನಿಯಮದಂತೆ ನಡೆದಿದೆ' ಎಂದು ಒಂದು ಬಣ ವಾದಿಸಿದರೆ, 'ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ' ಎಂದು ದೀಪಿಕಾ ರೆಡ್ಡಿ ಬಣ ಆಕ್ರೋಶ ವ್ಯಕ್ತಪಡಿಸಿದೆ. ಒಟ್ಟಾರೆಯಾಗಿ, ಯೂತ್ ಕಾಂಗ್ರೆಸ್&zwnj;ನಲ್ಲಿನ ಆಂತರಿಕ ಅಸಮಾಧಾನ ಈಗ ಬೀದಿಗೆ ಬಂದಂತಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-youth-congress-clash-at-kpcc-office-bengaluru-manjunath-vs-deepika-reddy-sat-8fxsddk"/>
        </item>
        <item>
            <title><![CDATA[ಮಹಿಳಾ ಕಸ್ಟಮ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಂಚನೆ, ಆರೋಪಿ ಕೃಪಲಾನಿ ವಿರುದ್ಧ FIR]]></title>
            <link>https://kannada.asianetnews.com/gallery/state/woman-customs-officer-in-bengaluru-accuses-man-of-assault-and-financial-fraud-c35pr0z</link>
            <guid isPermaLink="true">https://kannada.asianetnews.com/gallery/state/woman-customs-officer-in-bengaluru-accuses-man-of-assault-and-financial-fraud-c35pr0z</guid>
            <pubDate>Mon, 18 May 2026 08:43:17 +0530</pubDate>
            <description><![CDATA[&lt;p&gt;ಹಲಸೂರು ಠಾಣೆಯಲ್ಲಿ ಆರೋಪಿ ಕೃಪಲಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಲಂಗ್ಲಿಂಗ್ ಆರೋಪಿಯಾಗಿದ್ದ ಕೃಪಲಾನಿ ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದೆ ಆರೋಪ ಕೇಳಿಬಂದಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krwgx3pv86j46f3jzamht4wn,imgname-fir-filed-against-kripalani-1779073715930.png" type="image/jpeg" height="390" width="690"/>
            <content:encoded><![CDATA[&lt;p&gt;ಹಲಸೂರು ಠಾಣೆಯಲ್ಲಿ ಆರೋಪಿ ಕೃಪಲಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸ್ಲಂಗ್ಲಿಂಗ್ ಆರೋಪಿಯಾಗಿದ್ದ ಕೃಪಲಾನಿ ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದೆ ಆರೋಪ ಕೇಳಿಬಂದಿದೆ&lt;/p&gt;&lt;img&gt;&lt;p&gt;ಸ್ಲಂಗ್ಲಿಂಗ್ ಪ್ರಕರಣದಲ್ಲಿ ತಗ್ಲಾಕೊಂಡಿದ್ದ ಆರೋಪಿ ಕೃಪಲಾನಿ ವಿರುದ್ದ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಬಾರಿ ಮಹಿಳಾ ಕಸ್ಟಮ್ ಅಧಿಕಾರಿಗೆ ವಂಚನೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ದಾಖಲಾಗಿದೆ. ಇಷ್ಟು ದಿನ ಕಳ್ಳಸಾಗಾಣೆ ಆರೋಪ ಹೊತ್ತಿದ್ದ ಆರೋಪಿ ಕೃಪಲಾನಿ ಇದೀಗ ಗಂಭೀರ ಪ್ರಕರಣದಲ್ಲಿ ಸಿಲುಕಿ ರಾದ್ದಾಂತ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಆರೋಪಿ ಕೃಪಾಲಾನಿ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಸ್ಟಮ್ಸ್ ಅಧಿಕಾರಿ ಆಂತೋನಿ ಎಂಬುವವರಿಂದ ದೂರು ದಾಖಲಿಸಿದ್ದಾರೆ. ಕೃಪಲಾನಿ ರಂಪಾಟ ಮಾಡಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.&lt;/p&gt;&lt;img&gt;&lt;p&gt;ಮಂಗಳೂರಿನಲ್ಲಿ ಕಸ್ಟಮ್ಸ್ ಸೂಪರಿಡೆಂಟ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಡಿ.ಆಂತೋನಿ ದೂರು ದಾಖಲಿಸಿದ್ದಾರೆ. ಈ ಹಿಂದೆ ಸ್ಮಗ್ಲಿಂಗ್ ಕೇಸ್ ಒಂದರಲ್ಲಿ ಕೃಪಲಾನಿ ಸಿಲುಕಿಕೊಂಡಿದ್ದ. ಕಸ್ಟಮ್ಸ್ ಚಾರ್ಜ್ ತಪ್ಪಿಸಲು ಸ್ಮಗ್ಲಿಂಗ್ ಹಾದಿ ಹಿಡಿದಿದ್ದ. ಈ ಸಂಬಂಧ ಕೃಪಲಾನಿಗೆ ಅಧಿಕಾರಿ ಅಂತೋನಿ ಸುಮಾರು 8.50 ಲಕ್ಷದಷ್ಟು ದಂಡ ವಿಧಿಸಿದ್ದರು.&lt;/p&gt;&lt;img&gt;&lt;p&gt;ದಂಡ ವಿಧಿಸಿದ್ದ ಅಂತೋನಿ ವಿರುದ್ದ ಸೇಡು ತೀರಿಸಿಕೊಳ್ಳಲು ಇದೀಗ ಮಹಿಳಾ ಕಸ್ಟಮ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಹಾಗೂ ವಂಚಿಸಿದ್ದಾನೆ ಅನ್ನೋ ಆರೋಪಗಳು ಕೇಳಿಬಂದಿದೆ. ಆಂತೋನಿ ಅವರ ಸಹೋದ್ಯೋಗಿ ಗೆ ಕರೆ ಮಾಡಿ ಧಮಕಿ ಹಾಕಿದ್ದ ಅನ್ನೋ ಆೋಪವೂ ಕೇಳಿಬಂದಿದೆ.&lt;/p&gt;&lt;img&gt;&lt;p&gt;ಅಂತೋನಿ ದಂಡ ವಿಧಿಸಿದ ಕಾರಣ ಕೆರಳಿದ ಕೃಪಲಾನಿ, ನಿನ್ನನ್ನು ನಿನ್ನ ಹೆಂಡತಿ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬಿದರಿಕೆ ಹಾಕಿದ್ದ. ಇದೀಗ ಅಂತೋನಿ ದೂರು ದಾಖಲಿಸಿ ಕೃಪಲಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. BNS ಸೆಕ್ಷನ್ 308/4, 351/3, 351/1 ನ ಅಡಿಯಲ್ಲಿ ಕೇಸ್ ದಾಖಲಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/state/woman-customs-officer-in-bengaluru-accuses-man-of-assault-and-financial-fraud-c35pr0z"/>
        </item>
        <item>
            <title><![CDATA[ಯೋಜನೆಯ ಗುತ್ತಿಗೆ ಅಂತಿಮಗೊಳ್ಳುವ ಮುನ್ನವೇ ಸರ್ವೇ ಕಾರ್ಯ ಆರಂಭಿಸಿದ ಅದಾನಿ ಸಂಸ್ಥೆ]]></title>
            <link>https://kannada.asianetnews.com/bengaluru-urban/adani-group-company-started-survey-work-even-before-the-project-contract-was-finalized-mrq/articleshow-eg77nv7</link>
            <guid isPermaLink="true">https://kannada.asianetnews.com/bengaluru-urban/adani-group-company-started-survey-work-even-before-the-project-contract-was-finalized-mrq/articleshow-eg77nv7</guid>
            <pubDate>Mon, 18 May 2026 05:32:53 +0530</pubDate>
            <description><![CDATA[ಬೆಂಗಳೂರಿನ ಬಹುಚರ್ಚಿತ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಗುತ್ತಿಗೆ ಅಂತಿಮಗೊಳ್ಳುವ ಮುನ್ನವೇ, ಅತಿ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿರುವ ಅದಾನಿ ಸಂಸ್ಥೆಯು ನಗರದಲ್ಲಿ ಪ್ರಾಥಮಿಕ ಭೂ ಸಮೀಕ್ಷೆ ಮತ್ತು ಮಣ್ಣು ಪರೀಕ್ಷೆ ಆರಂಭಿಸಿದೆ. ಯೋಜನೆಯ ವಿನ್ಯಾಸ ಮತ್ತು ಸವಾಲುಗಳನ್ನು ಮುಂಚಿತವಾಗಿ ಅರಿಯಲು ಈ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸರ್ಕಾರದೊಂದಿಗಿನ ಮಾತುಕತೆಗಳು ಇನ್ನೂ ಮುಂದುವರಿದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krw64n3evk787xynja2anw2w,imgname-tunnel-1779062428782.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&amp;nbsp;&lt;/strong&gt; ನಗರದ ಬಹುಚರ್ಚಿತ, ವಿವಾದಿತ ಬೃಹತ್ ಯೋಜನೆಯಾಗಿರುವ ಸುರಂಗ ರಸ್ತೆ ನಿರ್ಮಾಣ ಯೋಜನೆಯ ಬಿಡ್ಡಿಂಗ್ ಅಂತಿಮಗೊಳಿಸುವ ಮಾತುಕತೆ ನಡೆಯುತ್ತಿರುವ ನಡುವೆ ಅದಾನಿ ಸಂಸ್ಥೆಯು ನಗರದಲ್ಲಿ ಸುರಂಗ ಮಾರ್ಗದ ಸರ್ವೇ ಕಾರ್ಯ ಆರಂಭಿಸಿದೆ.&lt;/p&gt;&lt;p&gt;ಯೋಜನೆ ಅನುಷ್ಠಾನಗೊಳಿಸಲು ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿರುವ ಅದಾನಿ ಎಂಟರ್&zwnj;ಪ್ರೈಸಸ್ ಲಿಮಿಟೆಡ್ ಸುರಂಗ ಮಾರ್ಗ ಸಾಗುವ ಪ್ರದೇಶದಲ್ಲಿ ಪ್ರಾಥಮಿಕ ಭೂ ಸಮೀಕ್ಷೆ ಮತ್ತು ಮಣ್ಣು ಪರೀಕ್ಷೆ ಸೇರಿದಂತೆ ಹತ್ತು ಹಲವು ಪರೀಕ್ಷೆಗಳನ್ನು ಆರಂಭಿಸಿದೆ.&lt;/p&gt;&lt;h2&gt;&lt;strong&gt;ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ&lt;/strong&gt;&lt;/h2&gt;&lt;p&gt;ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆಗೆ ಅದಾನಿ ಸಂಸ್ಥೆ 22,267 ಕೋಟಿ ರು. ಬಿಡ್ಡಿಂಗ್ ಮಾಡಿದೆ. ಸರ್ಕಾರದ ಅಂದಾಜು 17,698 ಕೋಟಿ ರು.ಗಿಂತ ಹೆಚ್ಚು ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ಡಿಂಗ್ ಮಾಡಿದೆ. ಹೀಗಾಗಿ, ಅಂತಿಮ ಗುತ್ತಿಗೆಯನ್ನು ಅಧಿಕೃತವಾಗಿ ನೀಡುವ ಕುರಿತು ಮಾತುಕತೆ ನಡೆಯುತ್ತಿವೆ. ಅದಕ್ಕೂ ಮೊದಲೇ ಸುರಂಗದ ವಿನ್ಯಾಸ ಮತ್ತು ಯೋಜನೆಯ ಸವಾಲುಗಳನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳಲು ಅದಾನಿ ಸಂಸ್ಥೆಯು ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ತಾಂತ್ರಿಕ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಸುರಂಗ ಮಾರ್ಗದ ವಿನ್ಯಾಸ, ವೆಚ್ಚದ ಅಂದಾಜುಗಳು, ನಿರ್ಮಾಣ ವಿಧಾನ, ಬಳಸಬೇಕಾದ ಸುರಂಗ ಕೊರೆಯುವ ಯಂತ್ರಗಳ ಪ್ರಕಾರ ಮತ್ತು ಕೆಲಸದ ಅನುಷ್ಠಾನಕ್ಕೆ ಅಗತ್ಯವಿರುವ ಇತರ ನಿರ್ಮಾಣ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಈ ಸರ್ವೇ ನೆರವಾಗಲಿದೆ. ಈ ಸರ್ವೇ ವರದಿಯನ್ನು ಸರ್ಕಾರಕ್ಕೆ ಒದಗಿಸಬೇಕು ಎನ್ನುವ ಷರತ್ತು ಗುತ್ತಿಗೆ ಪಡೆಯುವ ಸಂಸ್ಥೆಗಳಿಗೆ ವಿಧಿಸಲಾಗಿದೆ.&lt;/p&gt;&lt;h3&gt;&lt;strong&gt;ತಾಂತ್ರಿಕ ಸಮೀಕ್ಷೆಗಳು ಅತ್ಯಗತ್ಯ&lt;/strong&gt;&lt;/h3&gt;&lt;p&gt;ಯಾವುದೇ ಬೃಹತ್ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಇಂತಹ ತಾಂತ್ರಿಕ ಸಮೀಕ್ಷೆಗಳು ಅತ್ಯಗತ್ಯ. ನಗರದ ಭೌಗೋಳಿಕ ಪರಿಸ್ಥಿತಿ ಮತ್ತು ಎದುರಾಗಬಹುದಾದ ಸವಾಲುಗಳನ್ನು ಅರಿಯಲು ಬಿಡ್&zwnj;ದಾರರು ಈ ಪರೀಕ್ಷೆಗಳನ್ನು ನಡೆಸಬಹುದಾಗಿದೆ. ಆದರೆ, ಯೋಜನೆಗೆ ಸಂಬಂಧಿಸಿದ ಅಂತಿಮ ಒಪ್ಪಂದ ಇನ್ನೂ ಆಗಿಲ್ಲ. ಮಾತುಕತೆಗಳು ಮುಂದುವರಿದಿವೆ ಎಂದು ಯೋಜನೆ ಮೇಲ್ವಿಚಾರಣೆ ನಡೆಸುತ್ತಿರುವ &lsquo;ಬಿ-ಸ್ಮೈಲ್&rsquo;ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಹೇಳಿದ್ದಾರೆ.&lt;/p&gt;&lt;p&gt;ಒಟ್ಟು ನಾಲ್ಕು ಸಂಸ್ಥೆಗಳು ಮಣ್ಣು ಪರೀಕ್ಷೆ, ಭೂಮಿಯ ಮೇಲ್ಮೈ, ಸುರಂಗ ಮಾರ್ಗದ ಪ್ರದೇಶಗಳು, ನೆಲದಡಿಯ ಪೈಪ್&zwnj;, ವೈರ್&zwnj;ಗಳು ಮತ್ತಿತರ ತಾಂತ್ರಿಕ ವಿಚಾರಗಳ ಕುರಿತು ಸರ್ವೇ ನಡೆಸುತ್ತಿವೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/adani-group-company-started-survey-work-even-before-the-project-contract-was-finalized-mrq/articleshow-eg77nv7"/>
        </item>
        <item>
            <title><![CDATA[Bengaluru: ಹೊಸಕೋಟೆ ಬಿರಿಯಾನಿ ತಿನ್ನಲು ಹೋಗ್ತಿದ್ದ ಬಿಬಿಎ ವಿದ್ಯಾರ್ಥಿಗೆ ಚಾಕು ಇರಿತ]]></title>
            <link>https://kannada.asianetnews.com/gallery/karnataka-districts/bengaluru-bba-student-stabbed-while-on-his-way-to-eat-hosakote-biryani-mrq-ithlazx</link>
            <guid isPermaLink="true">https://kannada.asianetnews.com/gallery/karnataka-districts/bengaluru-bba-student-stabbed-while-on-his-way-to-eat-hosakote-biryani-mrq-ithlazx</guid>
            <pubDate>Mon, 18 May 2026 10:05:04 +0530</pubDate>
            <description><![CDATA[ಹೊಸಕೋಟೆ ಬಿರಿಯಾನಿ ತಿನ್ನಲು ಬೆಳಗಿನ ಜಾವ ಹೊರಟಿದ್ದ ವಿದ್ಯಾರ್ಥಿ ಧೀರಜ್ ಮೇಲೆ ರಾಮಮೂರ್ತಿ ನಗರದಲ್ಲಿ ಚಾಕು ಇರಿತ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಪೊಲೀಸರು ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krwng6ay8qf4gyn42nshq6t1,imgname-stab--2--1779078535518.jpg" type="image/jpeg" height="390" width="690"/>
            <content:encoded><![CDATA[ಹೊಸಕೋಟೆ ಬಿರಿಯಾನಿ ತಿನ್ನಲು ಬೆಳಗಿನ ಜಾವ ಹೊರಟಿದ್ದ ವಿದ್ಯಾರ್ಥಿ ಧೀರಜ್ ಮೇಲೆ ರಾಮಮೂರ್ತಿ ನಗರದಲ್ಲಿ ಚಾಕು ಇರಿತ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದು, ಪೊಲೀಸರು ಅಪ್ರಾಪ್ತ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.&lt;img&gt;&lt;p&gt;ಬೆಳಗಿನ ಜಾವ ಹೊಸಕೋಟೆಯ ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ರಾಮಮೂರ್ತಿ ನಗರದ ಬಂಜಾರ ಲೇಔಟ್&zwnj;ನಲ್ಲಿ ನಡೆದಿದೆ. ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು 21 ವರ್ಷದ ಧೀರಜ್ ಎಂದು ಗುರುತಿಸಲಾಗಿದೆ.&lt;/p&gt;&lt;img&gt;&lt;p&gt;ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ಈ ಘಟನೆ ನಡೆದಿದೆ. ಬೈಕ್ ಅಡ್ಡ ಬಂದ ವಿಚಾರಕ್ಕೆ ಧೀರಜ್ ಮತ್ತು ಆರೋಪಗಳ ನಡುವೆ ಗಲಾಟೆ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಆರೋಪಿಗಳು ಧೀರಜ್&zwnj;ಗೆ ಚಾಕು ಇರಿದಿದ್ದಾರೆ.&lt;/p&gt;&lt;img&gt;&lt;p&gt;ಧೀರಜ್&zwnj;ನ ಬೆನ್ನಿಗೆ ಹಾಗೂ ತೊಡೆ ಭಾಗಕ್ಕೆ ಚಾಕು ಇರಿಯಲಾಗಿದೆ. ಧೀರಜ್ ಬಿಬಿಎ ಓದುತ್ತಾ ಫ್ಲಿಫ್ಕಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಘಟನೆ ಸಂಬಂಧ ಪೊಲೀಸರು ಭುವನ್, ಮಿಥುನ್ ಸೇರಿ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.&lt;/p&gt;&lt;img&gt;&lt;p&gt;ಧೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಹಿನ್ನಲೆ ಕಲೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ.&lt;/p&gt;]]></content:encoded>
            <category>bengaluru-urban</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-bba-student-stabbed-while-on-his-way-to-eat-hosakote-biryani-mrq-ithlazx"/>
        </item>
        <item>
            <title><![CDATA[ಮತ್ತೆ ಶೆಲ್ ಪೆಟ್ರೋಲ್ ದರ ಏರಿಕೆ, ಲೀಟರ್‌ಗೆ 135.51 ರೂ ಹೆಚ್ಚಳದಿಂದ ಕಂಗಾಲಾದ ಜನ]]></title>
            <link>https://kannada.asianetnews.com/gallery/business/shell-petrol-price-hiked-again-rate-touches-rs-122-per-litre-bengaluru-kbffmyg</link>
            <guid isPermaLink="true">https://kannada.asianetnews.com/gallery/business/shell-petrol-price-hiked-again-rate-touches-rs-122-per-litre-bengaluru-kbffmyg</guid>
            <pubDate>Mon, 18 May 2026 09:17:09 +0530</pubDate>
            <description><![CDATA[&lt;p&gt;ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಶೆಲ್ ಪೆಟ್ರೋಲ್ ಇದೀಗ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬಲು ದುಬಾರಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnvdbsm3w8qtm1vj5tjkjrm,imgname-petrol-price--4--1778849853236.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ ಶೆಲ್ ಪೆಟ್ರೋಲ್ ಇದೀಗ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಇದರಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬಲು ದುಬಾರಿಯಾಗಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮದ್ಯಪ್ರಾಚ್ಯದ ಯುದ್ಧದಿಂದ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಯ ಕೊರತೆ ಸೇರಿದಂತೆ ಆರ್ಥಿಕ ಸಮಸ್ಯೆಗಳಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್&zwnj;ಗೆ ಮೂರು ರೂಪಾಯಿ ಏರಿಕೆ ಮಾಡಲಾಗಿದೆ. ದೇಶದ ಎಲ್ಲೆಡೆ ಬೆಲೆ ಏರಿಕೆಯಾಗಿದೆ. ಇದೀಗ ಶೆಲ್ ಪೆಟ್ರೋಲ್ ಮತ್ತೆ ಮೂರು ರೂಪಾಯಿ ಏರಿಕೆ ಮಾಡಿದೆ. ಶೆಲ್ ಪೆಟ್ರೋಲ್ 2ನೇ ಬಾರಿಗೆ ಇಂಧನ ದರ ಏರಿಸಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಶೆಲ್ ಪೆಟ್ರೋಲ್ ದರ ಮತ್ತೆ ಏರಿಕೆಯಾಗಿದೆ. 128 ರೂಪಾಯಿ ಇದ್ದ ಪೆಟ್ರೋಲ್ ದರ ಇದೀಗ136.5 ರೂಪಾಯಿಗೆ ಏರಿಕೆಯಾಗಿದೆ. ಮತ್ತೆ ಮೂರು ರೂಪಾಯಿ ಏರಿಕೆಯಾಗಿದೆ. ಇದರಿಂದ ಶೆಲ್ ಪೆಟ್ರೋಲ್ ಬಲು ದುಬಾರಿಯಾಗಿದ್ದು, ಜನರು ಕಂಗಾಲಾಗಿದ್ದಾರೆ.&amp;nbsp;&lt;/p&gt;&lt;ul&gt; &lt;li&gt;ಶಲ್ ಪ್ರೀಮಿಯಂ ಪೆಟ್ರೋಲ್ ಪ್ರತಿ&zwnj; ಲೀಟರ್ ಗೆ 136.51 ಪೈಸೆ&lt;/li&gt; &lt;li&gt;ವಿ ಪವರ್ ಪೆಟ್ರೋಲ್ ಪ್ರತಿ ಲೀಟರ್ - 132. 85 ಪೈಸೆ&lt;/li&gt; &lt;li&gt;ಶಲ್ ಪ್ರೀಮಿಯಂ ಡಿಸೇಲ್ ಪ್ರತಿ ಲೀಟರ್ - 136.51 ಪೈಸೆ&lt;/li&gt;&lt;/ul&gt;&lt;img&gt;&lt;p&gt;ಬೆಂಗಳೂರಿನ ಶೆಲ್ ಪೆಟ್ರೋಲ್ ಬಂಕ್&zwnj;ಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 123 ರೂಪಾಯಿಯಿಂದ 126 ರೂಪಾಯಿಗೆ ಏರಿಕೆಯಾಗಿದೆ. ಈಗಾಗಲೇ ಜನಸಾಮಾನ್ಯರ ಬದುಕಿಗೆ ಇಂಧನ ದರ ಏರಿಕೆ ಹೊಡೆತ ನೀಡಿದೆ. ಇದರ ಬೆನ್ನಲ್ಲೇ ಹಲವರು ಶೆಲ್ ಪೆಟ್ರೋಲ್ ಗ್ರಾಹಕರಾಗಿದ್ದು, ದಿಢೀಕರ್ ಮತ್ತೆ ಏರಿಕೆಯಿಂದ ಕಂಗಾಲಾಗಿದ್ದಾರೆ.&lt;/p&gt;&lt;img&gt;&lt;p&gt;ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬೆನ್ನಲ್ಲೇ ಸಾರಿಗೆ, ಅಗತ್ಯ ವಸ್ತುಗಳು ಬೆಲೆಯೂ ಏರಿಕೆಯಾಗಿದೆ. ರಾಜ್ಯದಲ್ಲಿ ಇದೀಗ ಅಕ್ಕಿ ದರದಲ್ಲಿ ಭಾರಿ ಏರಿಕೆಯಾಗಿದೆ. ತೊಗರಿಬೇಳೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ ಮೊದಲೇ ದೇಶದ ಜನತೆಗೆ ಮನವಿ ಮಾಡಿದ್ದರು. ಪೆಟ್ರೋಲ್ ಡೀಸೆಲ್ ಮಿತಿ ಬಳಕೆ, ಅನಗತ್ಯ ಪ್ರಯಾಣ ಕಡಿತ, ಸಾರಿಗೆ ವಾಹನ ಬಳಕೆ, ಎಲೆಕ್ಟ್ರಿಕ್ ವಾಹನ ಬಳಕೆಗೆ ಮನವಿ ಮಾಡಿದ್ದಾರೆ. ಈ ಮೂಲಕ ವಿದೇಶಿ ಅವಲಂಬನೆ ಕಡಿಮೆ ಮಾಡಲು ಸೂಚಿಸಿದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/shell-petrol-price-hiked-again-rate-touches-rs-122-per-litre-bengaluru-kbffmyg"/>
        </item>
        <item>
            <title><![CDATA[ಬೆಂಗಳೂರು ಸಬರ್ಬನ್ ರೈಲು  4 ಕಾರಿಡಾರ್ ಯೋಜನೆ,  ನಗರದಲ್ಲಿ ಇನ್ನು ಲೆವೆಲ್ ಕ್ರಾಸಿಂಗ್ ಇರಲ್ಲ: ಅಶ್ವಿನಿ ವೈಷ್ಣವ್‌]]></title>
            <link>https://kannada.asianetnews.com/gallery/karnataka-districts/bengaluru-to-get-major-rail-connectivity-boost-under-suburban-project-and-no-level-crossings-in-two-years-gdp-q9iqsdp</link>
            <guid isPermaLink="true">https://kannada.asianetnews.com/gallery/karnataka-districts/bengaluru-to-get-major-rail-connectivity-boost-under-suburban-project-and-no-level-crossings-in-two-years-gdp-q9iqsdp</guid>
            <pubDate>Mon, 18 May 2026 14:30:06 +0530</pubDate>
            <description><![CDATA[ಬೆಂಗಳೂರಿನಾದ್ಯಂತ ರೈಲು ಸಂಪರ್ಕವನ್ನು ಸುಧಾರಿಸಲು 4 ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಭೂಸ್ವಾಧೀನ, ನಿಲ್ದಾಣ ನಿರ್ಮಾಣ, ವಿದ್ಯುದೀಕರಣ ಮತ್ತು ಲೆವೆಲ್ ಕ್ರಾಸಿಂಗ್&zwnj;ಗಳನ್ನು ತೆಗೆದುಹಾಕುವಂತಹ ಪ್ರಮುಖ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krx3xrtvbk7aved3x7v2cp7q,imgname-karnataka-railway-project-1779093660507.jpg" type="image/jpeg" height="390" width="690"/>
            <content:encoded><![CDATA[ಬೆಂಗಳೂರಿನಾದ್ಯಂತ ರೈಲು ಸಂಪರ್ಕವನ್ನು ಸುಧಾರಿಸಲು 4 ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಭೂಸ್ವಾಧೀನ, ನಿಲ್ದಾಣ ನಿರ್ಮಾಣ, ವಿದ್ಯುದೀಕರಣ ಮತ್ತು ಲೆವೆಲ್ ಕ್ರಾಸಿಂಗ್&zwnj;ಗಳನ್ನು ತೆಗೆದುಹಾಕುವಂತಹ ಪ್ರಮುಖ ಕಾಮಗಾರಿಗಳು ವೇಗವಾಗಿ ಸಾಗುತ್ತಿವೆ.&lt;img&gt;&lt;p&gt;ಬೆಂಗಳೂರು: ನಗರಾದ್ಯಂತ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ 4 ಕಾರಿಡಾರ್ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರಗತಿಯಲ್ಲಿವೆ&zwnj; ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಬೆಂಗಳೂರು ಎಸ್ಎಂವಿಟಿ ಮತ್ತು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್&zwnj; ನಡುವೆ ನೂತನ ದ್ವಿಸಾಪ್ತಾಹಿಕ ರೈಲಿಗೆ ಭಾನುವಾರ ವರ್ಚುವಲ್&zwnj; ವಿಧಾನದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.&lt;/p&gt;&lt;img&gt;&lt;p&gt;ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್&zwnj;ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣದ ಕೆಲಸ ನಡೆಯುತ್ತಿದೆ. ಕೆಎಸ್ಆರ್ ಬೆಂಗಳೂರು- ದೇವನಹಳ್ಳಿ ಕಾರಿಡಾರ್&zwnj; ವಿನ್ಯಾಸವನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಅನುಮೋದಿಸಿ, ಭೂತಾಂತ್ರಿಕ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಕೆಂಗೇರಿ- ವೈಟ್&zwnj;ಫೀಲ್ಡ್ ಕಾರಿಡಾರ್&zwnj; ಯೋಜನೆಯನ್ನು ಇತ್ತೀಚೆಗೆ ಅನುಮೋದಿಸಲಾಗಿದ್ದು, ಶೀಘ್ರ ಸರ್ವೇ ಕಾರ್ಯ ಆರಂಭವಾಗಲಿದೆ ಎಂದರು.&lt;/p&gt;&lt;img&gt;&lt;p&gt;ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ, ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ 3840 ಕಿ.ಮೀ. ಉದ್ದದ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುದ್ದೀಕರಣ ಕಾಮಗಾರಿ ಶೇ.97ರಷ್ಟು (3747 ಕಿ.ಮೀ.) ಮುಗಿದಿದೆ. 707ರಷ್ಟು ರೈಲ್ವೆ ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿವೆ. 2,160 ಕೋಟಿ ರು. ವೆಚ್ಚದಲ್ಲಿ 62 ರೈಲು ನಿಲ್ದಾಣಗಳ ಅಭಿವೃದ್ಧಿ ಕೆಲಸ ನಡೆಯುತ್ತಿದೆ ಎಂದು ಹೇಳಿದರು.&amp;nbsp;&lt;/p&gt;&lt;img&gt;&lt;p&gt;ಮುಂದಿನ ಮೂರು ವರ್ಷಗಳಲ್ಲಿ ರೈಲ್ವೆ ಲೆವೆಲ್&zwnj; ಕ್ರಾಸಿಂಗ್ ಇರಬಾರದೆಂಬ ಪ್ರಧಾನಿ ಮೋದಿ ಸೂಚನೆಯಂತೆ ಕಾರ್ಯೋನ್ಮುಖರಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ನೆರಡು ವರ್ಷಗಳಲ್ಲಿ ಯಾವುದೇ ಲೆವೆಲ್&zwnj; ಕ್ರಾಸಿಂಗ್&zwnj; ಇರಲ್ಲ. ಪ್ರಸ್ತುತ 47 ಮೇಲ್ಸೇತುವೆ, ಕೆಳಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಉಳಿದೆಡೆ ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ವಿ.ಸೋಮಣ್ಣ ತಿಳಿಸಿದರು.&lt;/p&gt;&lt;img&gt;&lt;p&gt;ಬೆಂಗಳೂರು ಸೆಂಟ್ರಲ್&zwnj; ಸಂಸದ ಪಿ.ಸಿ. ಮೋಹನ್, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್ ಸಿರೋಯಾ ಇದ್ದರು. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಇದ್ದರು.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-to-get-major-rail-connectivity-boost-under-suburban-project-and-no-level-crossings-in-two-years-gdp-q9iqsdp"/>
        </item>
        <item>
            <title><![CDATA[ರಾಜ್ಯದ ಆ ಒಂದು ಯೋಜನೆ ಅನುಷ್ಠಾನಕ್ಕೆ ಮುನ್ನವೇ ಕನಕಪುರ-ನೆಲಮಂಗಲ ಸುತ್ತಮುತ್ತ ಭೂಮಿ ಬೆಲೆ ಗಗನಕ್ಕೆ, ಹೂಡಿಕೆ ಹೆಚ್ಚಳ!]]></title>
            <link>https://kannada.asianetnews.com/karnataka-districts/bengaluru-second-airport-buzz-triggers-land-price-hike-south-andwest-corridors-kanakapura-and-nelamangala-see-spike-gdp/articleshow-vxi5ows</link>
            <guid isPermaLink="true">https://kannada.asianetnews.com/karnataka-districts/bengaluru-second-airport-buzz-triggers-land-price-hike-south-andwest-corridors-kanakapura-and-nelamangala-see-spike-gdp/articleshow-vxi5ows</guid>
            <pubDate>Mon, 18 May 2026 19:06:28 +0530</pubDate>
            <description><![CDATA[ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಊಹಾಪೋಹಗಳಿಂದ ಕನಕಪುರ, ಹಾರೋಹಳ್ಳಿ, ನೆಲಮಂಗಲದಂತಹ ಹೊರವಲಯಗಳಲ್ಲಿ ಭೂ ಚಟುವಟಿಕೆ ಹೆಚ್ಚಾಗಿದೆ. ಕನಕಪುರ ರಸ್ತೆಯಲ್ಲಿ ಭೂಮಿ ಬೆಲೆ ದ್ವಿಗುಣಗೊಂಡಿದ್ದು, ತಜ್ಞರು ಇದು ದೀರ್ಘಾವಧಿಯ ಹೂಡಿಕೆಗೆ ಸೂಕ್ತವೆಂದು ಸಲಹೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knmfwj4sdvsm1w2ztaa0pqhf,imgname-real-estate--2--1775582988441.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳವನ್ನು ಕರ್ನಾಟಕ ಸರ್ಕಾರ ಇನ್ನೂ ಅಧಿಕೃತವಾಗಿ ಅಂತಿಮಗೊಳಿಸದಿದ್ದರೂ, ಈ ಮಹತ್ವಾಕಾಂಕ್ಷಿ ಯೋಜನೆಯ ಸುತ್ತ ಹುಟ್ಟಿಕೊಂಡಿರುವ ಊಹಾಪೋಹಗಳು ಈಗಾಗಲೇ ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನ ಹೊರವಲಯಗಳಲ್ಲಿ ಭೂ ಚಟುವಟಿಕೆಯನ್ನು ಗಂಭೀರವಾಗಿ ಹೆಚ್ಚಿಸಿವೆ. ಕನಕಪುರ ರಸ್ತೆ, ಹಾರೋಹಳ್ಳಿ, ನೆಲಮಂಗಲ ಮತ್ತು ಕುಣಿಗಲ್ ಪ್ರದೇಶಗಳಲ್ಲಿ ಹೂಡಿಕೆದಾರರು, ಭೂಸಂಗ್ರಹಕಾರರು ಹಾಗೂ ಡೆವಲಪರ್&zwnj;ಗಳು ಸಕ್ರಿಯವಾಗಿ ಭೂಮಿ ಖರೀದಿಗೆ ಮುಂದಾಗಿದ್ದು, ಇದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಕ್ಕೂ ಮುನ್ನ ದೇವನಹಳ್ಳಿಯಲ್ಲಿ ಕಂಡುಬಂದ ಪ್ರಾರಂಭಿಕ ಮಾನ್ಯತೆಯನ್ನು ತೋರಿಸುತ್ತದೆ.&lt;/p&gt;&lt;p&gt;ಆದರೆ, ಪ್ರಸ್ತುತ ಕಂಡುಬರುತ್ತಿರುವ ಈ ಚಟುವಟಿಕೆ ಬಹುತೇಕ ಊಹಾಪೋಹ ಮತ್ತು ಭಾವನೆ ಆಧಾರಿತವಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಎಚ್ಚರಿಸಿದ್ದಾರೆ. ದೊಡ್ಡ ಮಟ್ಟದ ವಸತಿ ಯೋಜನೆಗಳಿಗಿಂತ ಕೃಷಿಭೂಮಿ ವ್ಯವಹಾರಗಳು, ಯೋಜಿತ ಅಭಿವೃದ್ಧಿಗಳು ಮತ್ತು ಭೂ ಬ್ಯಾಂಕಿಂಗ್ ಚಟುವಟಿಕೆಗಳೇ ಹೆಚ್ಚು ಗಮನ ಸೆಳೆಯುತ್ತಿವೆ.&lt;/p&gt;&lt;h2&gt;ಕನಕಪುರ-ಹಾರೋಹಳ್ಳಿ ಕಾರಿಡಾರ್&zwnj;ಗೆ ಭಾರಿ ಬೇಡಿಕೆ&lt;/h2&gt;&lt;p&gt;ಹೊಸವಾಗಿ ಗಮನ ಸೆಳೆಯುತ್ತಿರುವ ಕಾರಿಡಾರ್&zwnj;ಗಳಲ್ಲಿ ಕನಕಪುರ ರಸ್ತೆ-ಹಾರೋಹಳ್ಳಿ ಭಾಗವು ಅತ್ಯಂತ ವೇಗವಾಗಿ ಬೆಳವಣಿಗೆ ಕಂಡಿದೆ. ಉತ್ತಮ ವಸತಿ ಮೂಲಸೌಕರ್ಯ, ಮೆಟ್ರೋ ಸಂಪರ್ಕ ಮತ್ತು ಅಭಿವೃದ್ಧಿಯಾದ ಪ್ರದೇಶಗಳು ಈ ಭಾಗಕ್ಕೆ ಪ್ರಮುಖ ಬಲವಾಗಿದೆ.&lt;/p&gt;&lt;p&gt;ಕಳೆದ 6ರಿಂದ 8 ತಿಂಗಳಲ್ಲಿ ಕನಕಪುರ ರಸ್ತೆಯುದ್ದಕ್ಕೂ ಭೂಮಿಯ ಬೆಲೆಗಳು ದ್ವಿಗುಣಗೊಂಡಿರುವುದು ಗಮನಾರ್ಹ. ಚೂಡಹಳ್ಳಿ, ಸೋಮನಹಳ್ಳಿ ಮತ್ತು ಕಗ್ಗಲಿಪುರದಂತಹ ಪ್ರದೇಶಗಳಲ್ಲಿ ಕಡಿಮೆ ಬೆಲೆ ಮತ್ತು ದೊಡ್ಡ ಭೂ ವ್ಯವಹಾರಗಳ ಲಭ್ಯತೆ ಹೂಡಿಕೆದಾರರನ್ನು ಸೆಳೆಯುತ್ತಿದೆ. ವಿಶೇಷವಾಗಿ ಎನ್&zwnj;ಆರ್&zwnj;ಐಗಳು ಮತ್ತು ಹೆಚ್ಚಿನ ಮೌಲ್ಯದ ಹೂಡಿಕೆದಾರರು ದೀರ್ಘಾವಧಿಯ ಹೂಡಿಕೆ ದೃಷ್ಟಿಯಿಂದ ಇಲ್ಲಿ ಭೂಮಿ ಖರೀದಿಸುತ್ತಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಡೆವಲಪರ್&zwnj;ಗಳು ಭೂಸ್ವಾಧೀನ ಮತ್ತು ಜಂಟಿ ಅಭಿವೃದ್ಧಿ ಒಪ್ಪಂದಗಳ ಮೂಲಕ ಸದ್ದಿಲ್ಲದೆ ಭೂ ಬ್ಯಾಂಕ್&zwnj;ಗಳನ್ನು ನಿರ್ಮಿಸುತ್ತಿದ್ದಾರೆ. ಇದು ಕೆಐಎ ಆರಂಭಿಕ ಹಂತದಲ್ಲಿ ಉತ್ತರ ಬೆಂಗಳೂರಿನಲ್ಲಿ ಕಂಡುಬಂದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ಕನಕಪುರ-ರಾಮನಗರ ಭಾಗದಲ್ಲಿ ವಿಲ್ಲಾ ಹಾಗೂ ವಾರಾಂತ್ಯದ ಮನೆಗಳ ಯೋಜನೆಗಳಿಗೂ ಬೇಡಿಕೆ ಹೆಚ್ಚುತ್ತಿದೆ.&lt;/p&gt;&lt;h2&gt;ನೆಲಮಂಗಲ-ಕುಣಿಗಲ್: ಲಾಜಿಸ್ಟಿಕ್ಸ್ ಹಬ್ ಆಗುವ ಸಾಧ್ಯತೆ&lt;/h2&gt;&lt;p&gt;ಇನ್ನೊಂದೆಡೆ, ನೆಲಮಂಗಲ-ಕುಣಿಗಲ್ ಕಾರಿಡಾರ್ ವಿಭಿನ್ನ ರೀತಿಯ ಬೆಳವಣಿಗೆಯನ್ನು ಕಾಣುತ್ತಿದೆ. ಈ ಪ್ರದೇಶವು ವಸತಿ ಅಭಿವೃದ್ಧಿಗಿಂತ ಹೆಚ್ಚು ಲಾಜಿಸ್ಟಿಕ್ಸ್ ಮತ್ತು ಕೈಗಾರಿಕಾ ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಯಿಂದ ಸಂಪರ್ಕ ಸುಧಾರಣೆಯಾಗುತ್ತಿರುವುದರಿಂದ ಕೈಗಾರಿಕಾ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಹಾರೋಹಳ್ಳಿ ಮತ್ತು ನೆಲಮಂಗಲ ಸುತ್ತಮುತ್ತ ಇರುವ ಉತ್ಪಾದನಾ ಕ್ಲಸ್ಟರ್&zwnj;ಗಳು ಹಾಗೂ ಕೆಐಎಡಿಬಿ ಕೈಗಾರಿಕಾ ವಲಯಗಳು ಸಾಂಸ್ಥಿಕ ಹೂಡಿಕೆದಾರರ ಗಮನ ಸೆಳೆಯುತ್ತಿವೆ. ತಜ್ಞರ ಪ್ರಕಾರ, ಕನಕಪುರ ಕಾರಿಡಾರ್ ಮಧ್ಯಮಾವಧಿಯ ವಸತಿ ಹೂಡಿಕೆಗಳಿಗೆ ಸೂಕ್ತವಾಗಿದ್ದರೆ, ನೆಲಮಂಗಲ-ಕುಣಿಗಲ್ ದೀರ್ಘಾವಧಿಯ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ಆಧಾರಿತ ಹೂಡಿಕೆಗಳಿಗೆ ಹೆಚ್ಚು ಅನುಕೂಲಕರವಾಗಿದೆ.&lt;/p&gt;&lt;h2&gt;ದೇವನಹಳ್ಳಿ ಮಾದರಿ ಪುನರಾವರ್ತನೆ ಆಗುತ್ತದೆಯೇ?&lt;/h2&gt;&lt;p&gt;ಈ ಬೆಳವಣಿಗೆಗಳನ್ನು ದೇವನಹಳ್ಳಿಯೊಂದಿಗೆ ಹೋಲಿಸಲಾಗುತ್ತಿದೆ. 2005ರಲ್ಲಿ ವಿಮಾನ ನಿಲ್ದಾಣ ಘೋಷಣೆಗೊಂಡು 2008ರಲ್ಲಿ ಕಾರ್ಯಾರಂಭವಾದ ಬಳಿಕ ಉತ್ತರ ಬೆಂಗಳೂರಿನಲ್ಲಿ ಭೂಮಿಯ ಬೆಲೆಗಳು ಶೇ.40ರಿಂದ 86ರವರೆಗೆ ಏರಿಕೆ ಕಂಡಿದ್ದವು. ಆದರೆ, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರಿನಲ್ಲಿ ಅದೇ ರೀತಿಯ ಬೆಳವಣಿಗೆ ಮರುಕಳಿಸುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ಪ್ರದೇಶಗಳು ವಿಭಜಿತವಾಗಿದ್ದು, ಸಾಮಾಜಿಕ ಮೂಲಸೌಕರ್ಯ ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ಜೊತೆಗೆ, ಇಂದಿನ ಸಂಘಟಿತ ರಿಯಲ್ ಎಸ್ಟೇಟ್ ಮಾರುಕಟ್ಟೆ ಪರಿಸ್ಥಿತಿ ಬೆಲೆ ಏರಿಕೆಯನ್ನು ವೇಗಗೊಳಿಸಿರುವುದರಿಂದ ಆರಂಭಿಕ ಹೂಡಿಕೆದಾರರಿಗೆ ಲಾಭಗಳು ಕಡಿಮೆ.&lt;/p&gt;&lt;h2&gt;ದೀರ್ಘಾವಧಿ ಹೂಡಿಕೆ ದೃಷ್ಟಿ ಅಗತ್ಯ&lt;/h2&gt;&lt;p&gt;ಮುಖ್ಯವಾಗಿ, ಎರಡನೇ ವಿಮಾನ ನಿಲ್ದಾಣ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಸ್ಥಳ ಆಯ್ಕೆ ಮತ್ತು ಅನುಮೋದನೆ ಪ್ರಕ್ರಿಯೆಗಳು ಇನ್ನೂ ಚರ್ಚೆಯ ಹಂತದಲ್ಲೇ ಇದೆ. ಆದ್ದರಿಂದ ತಜ್ಞರು ಹೂಡಿಕೆದಾರರಿಗೆ ಇದನ್ನು ಅಲ್ಪಾವಧಿಯ ಲಾಭಕ್ಕಾಗಿ ಅಲ್ಲ, 7ರಿಂದ 10 ವರ್ಷಗಳ ದೀರ್ಘಾವಧಿಯ ಹೂಡಿಕೆಯಾಗಿ ಪರಿಗಣಿಸುವಂತೆ ಸಲಹೆ ನೀಡಿದ್ದಾರೆ. ಒಟ್ಟಾರೆ, ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ಈಗಾಗಲೇ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಿಸಿದರೂ, ಭವಿಷ್ಯದ ಲಾಭಕ್ಕಾಗಿ ಯುಕ್ತಿಯುತ ಮತ್ತು ಸಹನೆಯ ಹೂಡಿಕೆ ಅಗತ್ಯವೆಂಬುದು ಸ್ಪಷ್ಟವಾಗಿದೆ.&lt;/p&gt;]]></content:encoded>
            <category>bengaluru-urban</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-second-airport-buzz-triggers-land-price-hike-south-andwest-corridors-kanakapura-and-nelamangala-see-spike-gdp/articleshow-vxi5ows"/>
        </item>
    </channel>
</rss>
