<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 12 Jun 2026 18:37:56 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ ಮೇಜರ್ ಸರ್ಜರಿ,  ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ, ಎಲ್ಲೆಲ್ಲಿ ಲಭ್ಯ!]]></title>
            <link>https://kannada.asianetnews.com/state/karnataka-government-makes-biometrics-mandatory-for-the-gruhalakshmi-scheme-to-weed-out-fake-beneficiaries-gdp/articleshow-1o51ts0</link>
            <guid isPermaLink="true">https://kannada.asianetnews.com/state/karnataka-government-makes-biometrics-mandatory-for-the-gruhalakshmi-scheme-to-weed-out-fake-beneficiaries-gdp/articleshow-1o51ts0</guid>
            <pubDate>Wed, 10 Jun 2026 11:22:29 +0530</pubDate>
            <description><![CDATA[ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿನ ಅಕ್ರಮಗಳನ್ನು ತಡೆಯಲು, ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಮೃತಪಟ್ಟವರು ಮತ್ತು ತೆರಿಗೆ ಪಾವತಿದಾರರು ಸೇರಿದಂತೆ ಸಾವಿರಾರು ಅನರ್ಹರನ್ನು ಪತ್ತೆಹಚ್ಚಿದ ನಂತರ, ಅರ್ಹ ಮಹಿಳೆಯರಿಗೆ ಮಾತ್ರ ಹಣ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01h79x523y922tad5gxkfyqcvw,imgname-gruha-lakshmi-bbmp.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗ ಮೇಜರ್ ಸರ್ಜರಿಗೆ ಮುಂದಾಗಿದೆ. ಪ್ರಸ್ತುತ ಇಡೀ ರಾಜ್ಯದಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷಕ್ಕೂ ಅಧಿಕ ಮಹಿಳಾ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳ ಆರ್ಥಿಕ ನೆರವನ್ನು ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯೋಜನೆಯ ಅನುಷ್ಠಾನದಲ್ಲಿ ಕಂಡುಬಂದಿರುವ ಕೆಲವು ಗಂಭೀರ ಲೋಪದೋಷಗಳು ಹಾಗೂ ನಕಲಿ ಅರ್ಹತೆಗಳ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕಲು ಸರ್ಕಾರವು ಇನ್ಮುಂದೆ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಕಠಿಣ ನಿರ್ಧಾರ ಕೈಗೊಂಡಿದೆ.&lt;/p&gt;&lt;h2&gt;ಏನಿದು ಬಯೋಮೆಟ್ರಿಕ್ ಕಡ್ಡಾಯ ನಿಯಮ&lt;/h2&gt;&lt;p&gt;ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಮತ್ತು ಕೇವಲ ಅರ್ಹ ಮಹಿಳೆಯರಿಗೆ ಮಾತ್ರ ಸರ್ಕಾರದ ಧನಸಹಾಯ ತಲುಪುವಂತೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಈ ಹೊಸ ನಿಯಮದ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣವನ್ನು ನಿರಂತರವಾಗಿ ಪಡೆಯಲು ಪ್ರತಿಯೊಬ್ಬ ಫಲಾನುಭವಿಯು ತಮ್ಮ ಹೆಬ್ಬೆಟ್ಟಿನ ಗುರುತು, ಕಣ್ಣುಗಳ ಸ್ಕ್ಯಾನಿಂಗ್ ಅಥವಾ ಮುಖದ ಗುರುತನ್ನು ನೀಡಿ ತಮ್ಮ ಜೀವಂತಿಕೆ ಹಾಗೂ ಅರ್ಹತೆಯನ್ನು ಸಾಬೀತುಪಡಿಸಬೇಕಾಗುತ್ತದೆ.&lt;/p&gt;&lt;h2&gt;ಎಲ್ಲೆಲ್ಲಿ ಬಯೋಮೆಟ್ರಿಕ್ ಪ್ರಕ್ರಿಯೆ ಮಾಡಬಹುದು?&lt;/h2&gt;&lt;p&gt;ಫಲಾನುಭವಿಗಳ ಅನುಕೂಲಕ್ಕಾಗಿ ರಾಜ್ಯಾದ್ಯಂತ ಇರುವ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಈ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಗೆ ಒಳಪಡುವಾಗ ಪ್ರತಿಯೊಬ್ಬ ಮಹಿಳೆಯೂ ತಮ್ಮ ಆಧಾರ್ ಕಾರ್ಡ್ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಹಿಂದೆ ನೀಡಿರುವ ಗೃಹಲಕ್ಷ್ಮಿ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಇದಲ್ಲದೆ ಫಲಾನುಭವಿಗಳು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿದ್ದರೆ, ತಮ್ಮ ಅಧಿಕೃತ ಜಾತಿ ಪ್ರಮಾಣಪತ್ರದಲ್ಲಿ ನಮೂದಾಗಿರುವ ಆರ್ ಡಿ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಇಲಾಖೆಯು ನಿಗದಿಪಡಿಸಿರುವ ಈ ಸಂಪೂರ್ಣ ಫಾರ್ಮ್ ಅನ್ನು ಯಶಸ್ವಿಯಾಗಿ ಭರ್ತಿ ಮಾಡಿ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿದ ನಂತರವೇ ಮುಂದಿನ ತಿಂಗಳ ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ.&lt;/p&gt;&lt;h2&gt;ಕಠಿಣ ಕ್ರಮಕ್ಕೆ ಕಾರಣವಾದ ಅಕ್ರಮಗಳು&lt;/h2&gt;&lt;p&gt;ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನಡೆಸಿದ ಮನೆ ಮನೆ ಸಮೀಕ್ಷೆ ಮತ್ತು ಭೌತಿಕ ಪರಿಶೀಲನೆಯಲ್ಲಿ ಆಘಾತಕಾರಿ ಸತ್ಯಗಳು ಹೊರಬಂದಿವೆ. ಬೆಂಗಳೂರು ದಕ್ಷಿಣ ತಾಲೂಕಿನ ವ್ಯಾಪ್ತಿಯೊಂದರಲ್ಲೇ ಸುಮಾರು 12790 ಗೃಹಲಕ್ಷ್ಮಿಯರನ್ನು ಅನರ್ಹರೆಂದು ಗುರುತಿಸಿ ಯೋಜನೆಯಿಂದ ಹೊರದಬ್ಬಲಾಗಿದೆ. ಇಲಾಖೆಯ ಪರಿಶೀಲನೆಯಲ್ಲಿ 6624 ಫಲಾನುಭವಿಗಳು ಈಗಾಗಲೇ ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಸತತವಾಗಿ ಎರಡು ಸಾವಿರ ರೂಪಾಯಿ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ.&lt;/p&gt;&lt;p&gt;ಇದರೊಂದಿಗೆ ಆದಾಯ ತೆರಿಗೆ ಪಾವತಿದಾರರು ಮತ್ತು ಜಿಎಸ್ ಟಿ ತೆರಿಗೆ ಪಾವತಿಸುವ ಕುಟುಂಬದ 4800 ಮಹಿಳೆಯರು ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಕೊಂಡಿರುವುದು ಬೆಳಕಿಗೆ ಬಂದಿದೆ. ಹಾಗೆಯೇ ಕನಿಷ್ಠ ಆಧಾರ್ ಸೀಡಿಂಗ್ ಪ್ರಕ್ರಿಯೆಯನ್ನು ಮಾಡಿಸದ 1295 ಮಂದಿ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯುತ್ತಿದ್ದರು. ಕನಕಪುರದಲ್ಲೇ ಅತಿ ಹೆಚ್ಚು ಅಂದರೆ 3058 ಮೃತ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ದೃಢಪಟ್ಟಿದೆ. ಈಗಾಗಲೇ ಮೃತರ ಖಾತೆಗೆ ಅಕ್ರಮವಾಗಿ ಜಮೆಯಾಗಿರುವ ಹಣವನ್ನು ಕಾನೂನುಬದ್ಧವಾಗಿ ವಾಪಸ್ ಪಡೆಯಲು ಇಲಾಖೆಯು ಕಟ್ಟುನಿಟ್ಟಿನ ಕ್ರಮಗಳನ್ನು ಆರಂಭಿಸಿದೆ.&lt;/p&gt;&lt;h2&gt;ಹೊಸ ನಿಯಮದ ಕುರಿತು ರಾಜ್ಯದ ಗೃಹಲಕ್ಷ್ಮಿಯರ ಮಿಶ್ರ ಪ್ರತಿಕ್ರಿಯೆ&lt;/h2&gt;&lt;p&gt;ಈ ಹೊಸ ಆದೇಶದ ಬಗ್ಗೆ ರಾಜ್ಯದ ವಿವಿಧ ಭಾಗಗಳ ಮಹಿಳೆಯರಿಂದ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ತಿಂಗಳ ಹಣ ಸಕಾಲಕ್ಕೆ ಬಂದರೆ ಸಾಕು, ಸರ್ಕಾರ ಎಷ್ಟೇ ನಿಯಮಗಳನ್ನು ಬದಲಾಯಿಸಿದರೂ ನಾವು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅಥವಾ ಬಯೋಮೆಟ್ರಿಕ್ ನೀಡಲು ಸಿದ್ಧರಿದ್ದೇವೆ ಎಂದು ಹಲವು ಮಹಿಳೆಯರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಆದರೆ ಅದೇ ಸಮಯದಲ್ಲಿ ಮಹಿಳೆಯರು ತಮ್ಮ ದೈನಂದಿನ ಕೂಲಿ ಕೆಲಸ ಹಾಗೂ ಮನೆಗೆಲಸಗಳನ್ನು ಬಿಟ್ಟು ಗಂಟೆಗಟ್ಟಲೆ ಸೇವಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಷ್ಟದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಳ್ಳಿ ಹಾಗೂ ಪಟ್ಟಣಗಳ ಸೇವಾ ಕೇಂದ್ರಗಳಲ್ಲಿ ಅತಿಯಾದ ಜನದಟ್ಟಣೆ ಇರುವುದರಿಂದ ಸಮಯ ವ್ಯರ್ಥವಾಗುತ್ತದೆ, ಆದ್ದರಿಂದ ಸರ್ಕಾರವು ಕ್ಯೂ ನಿಲ್ಲುವ ಕಷ್ಟವನ್ನು ತಪ್ಪಿಸಲು ಮೊಬೈಲ್ ಅಪ್ಲಿಕೇಶನ್ ಮೂಲಕವೇ ಮನೆಯಲ್ಲೇ ಕುಳಿತು ಬಯೋಮೆಟ್ರಿಕ್ ಅಥವಾ ಮುಖದ ಸ್ಕ್ಯಾನ್ ಮಾಡುವ ಸುಲಭ ತಂತ್ರಜ್ಞಾನವನ್ನು ಜಾರಿಗೆ ತರಬೇಕು ಎಂದು ರಾಜ್ಯದ ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-government-makes-biometrics-mandatory-for-the-gruhalakshmi-scheme-to-weed-out-fake-beneficiaries-gdp/articleshow-1o51ts0"/>
        </item>
        <item>
            <title><![CDATA[ಗೃಹಲಕ್ಷ್ಮಿ ಹಣ ಸ್ಥಗಿತ: 4.30 ಲಕ್ಷ ಫಲಾನುಭವಿಗಳು ಪಟ್ಟಿಯಿಂದ ಔಟ್!  IT, GST ಪೈಲ್ ಮಾಡಿದ ಕುಟುಂಬಕ್ಕೆ ಶಾಕ್!]]></title>
            <link>https://kannada.asianetnews.com/state/karnataka-gruhalakshmi-scheme-scrutiny-4-3-lakh-ineligible-beneficiaries-removed-gdp/articleshow-29q239k</link>
            <guid isPermaLink="true">https://kannada.asianetnews.com/state/karnataka-gruhalakshmi-scheme-scrutiny-4-3-lakh-ineligible-beneficiaries-removed-gdp/articleshow-29q239k</guid>
            <pubDate>Thu, 11 Jun 2026 12:53:32 +0530</pubDate>
            <description><![CDATA[ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, 4.30 ಲಕ್ಷಕ್ಕೂ ಹೆಚ್ಚು ಅಪಾತ್ರ ಮಹಿಳೆಯರನ್ನು ಕೈಬಿಡಲಾಗಿದೆ. ಮೃತಪಟ್ಟವರು ಮತ್ತು ಐಟಿ/ಜಿಎಸ್&zwnj;ಟಿ ಪಾವತಿದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಇವರ ಖಾತೆಗೆ ಮಾಸಿಕ 2,000 ರೂ. ಜಮೆಯಾಗುವುದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kgw2f5ve1ezwfjehqzp4tq0q,imgname-gruha-lakshmi-scheme-1770468644717.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ &lsquo;ಗೃಹಲಕ್ಷ್ಮಿ&rsquo; ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸಬೇಕೆಂಬ ಉದ್ದೇಶದಿಂದ ಸರ್ಕಾರವು ಇತ್ತೀಚೆಗೆ ನಡೆಸಿದ ಫಲಾನುಭವಿಗಳ ಪಟ್ಟಿಯ ಪರಿಷ್ಕರಣೆ (Verification) ಪ್ರಕ್ರಿಯೆ ಪೂರ್ಣಗೊಂಡಿದ್ದು, ಬರೋಬ್ಬರಿ 4.30 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂಪಾಯಿ ಹಣ ಬರುವುದು ಸ್ಥಗಿತಗೊಳ್ಳಲಿದೆ. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಿದ್ದು, ಈ ಕ್ರಮದಿಂದಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಉಳಿತಾಯವಾಗಲಿದೆ.&lt;/p&gt;&lt;h2&gt;ಪಟ್ಟಿಯಿಂದ ಹೊರಬಿದ್ದವರು ಯಾರು?&lt;/h2&gt;&lt;p&gt;ಇಲಾಖೆಯು ನಡೆಸಿರುವ ತನಿಖೆ ಮತ್ತು ದತ್ತಾಂಶಗಳ (Data) ಪರಿಶೀಲನೆ ವೇಳೆ, ನಿಯಮಗಳನ್ನು ಮೀರಿ ಅಥವಾ ಸರ್ಕಾರದ ಗಮನಕ್ಕೆ ಬಾರದೆ ಸಾವಿರಾರು ಮೃತರ ಖಾತೆಗೆ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಈ ಕೆಳಗಿನ ಕಾರಣಗಳಿಗಾಗಿ 4.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊಕ್ ನೀಡಲಾಗಿದೆ:&lt;/p&gt;&lt;p&gt;&lt;strong&gt;ಮೃತಪಟ್ಟ ಫಲಾನುಭವಿಗಳು: &lt;/strong&gt;ಯೋಜನೆಯಡಿ ನೋಂದಣಿಯಾಗಿದ್ದ ಸುಮಾರು 1.95 ಲಕ್ಷ ಮಹಿಳೆಯರು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿತ್ತು.&lt;/p&gt;&lt;p&gt;&lt;strong&gt;ಐಟಿ ಮತ್ತು ಜಿಎಸ್&zwnj;ಟಿ ಪಾವತಿದಾರರು:&lt;/strong&gt; ಯೋಜನೆಯ ನಿಯಮಾವಳಿಗಳ ಪ್ರಕಾರ ಆದಾಯ ತೆರಿಗೆ (Income Tax) ಹಾಗೂ ಜಿಎಸ್&zwnj;ಟಿ (GST) ಫೈಲ್ ಮಾಡುವ ಕುಟುಂಬಗಳು ಈ ಯೋಜನೆಗೆ ಅರ್ಹರಲ್ಲ. ಆದಾಗ್ಯೂ, 1.96 ಲಕ್ಷಕ್ಕೂ ಹೆಚ್ಚು ಐಟಿ/ಜಿಎಸ್&zwnj;ಟಿ ಪಾವತಿದಾರರ ಕುಟುಂಬದ ಮಹಿಳೆಯರು ಈ ಹಣ ಪಡೆಯುತ್ತಿದ್ದರು. ಇವರನ್ನು ಈಗ ಪಟ್ಟಿಯಿಂದ ಕೈಬಿಡಲಾಗಿದೆ.&lt;/p&gt;&lt;p&gt;&lt;strong&gt;ಇತರೆ ತಾಂತ್ರಿಕ ಕಾರಣಗಳು: &lt;/strong&gt;ಇನ್ನುಳಿದಂತೆ ಆಧಾರ್ ಸೀಡಿಂಗ್ (Aadhaar Seeding) ಮಾಡಿಸದ 20 ಸಾವಿರಕ್ಕೂ ಹೆಚ್ಚು ಹಾಗೂ ಇ-ಕೆವೈಸಿ (E-KYC) ಪ್ರಕ್ರಿಯೆ ಪೂರ್ಣಗೊಳಿಸದ 10 ಸಾವಿರಕ್ಕೂ ಅಧಿಕ ಮಹಿಳೆಯರ ಖಾತೆಗೆ ಹಣ ಸ್ಥಗಿತಗೊಂಡಿದೆ.&lt;/p&gt;&lt;h2&gt;ಮೃತರ ಹೆಸರಲ್ಲಿ ಜಮೆಯಾಗಿದ್ದ ಹಣ ಎಟಿಎಂ ಮೂಲಕ ಡ್ರಾ!&lt;/h2&gt;&lt;p&gt;ಇಲಾಖೆಯ ತನಿಖೆಯಿಂದ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಕಳೆದ 4 ರಿಂದ 5 ತಿಂಗಳಿನಿಂದ ಮೃತಪಟ್ಟಿರುವ 1.95 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಗೃಹಲಕ್ಷ್ಮಿ ಹಣ ರವಾನೆಯಾಗುತ್ತಿತ್ತು.&lt;/p&gt;&lt;p&gt;ಈ ರೀತಿ ಮೃತರ ಖಾತೆಗೆ ಜಮೆಯಾಗಿದ್ದ ಹಣದಲ್ಲಿ ಶೇಕಡಾ 30ರಷ್ಟು ಹಣವನ್ನು ಅವರ ಕುಟುಂಬಸ್ಥರು ಅಥವಾ ಸಂಬಂಧಿಕರು ಎಟಿಎಂ (ATM) ಕಾರ್ಡ್&zwnj;ಗಳ ಮೂಲಕ ಹಾಗೂ ಇನ್ನು ಕೆಲವರು ಬ್ಯಾಂಕ್&zwnj;ಗಳಿಂದ ವಿತ್ ಡ್ರಾ (Withdrawal) ಮಾಡುವ ಮೂಲಕ ಡ್ರಾ ಮಾಡಿಕೊಂಡಿದ್ದಾರೆ ಎಂಬುದು ಪತ್ತೆಯಾಗಿದೆ.&lt;/p&gt;&lt;h2&gt;ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 80 ಕೋಟಿ ರೂ. ಉಳಿತಾಯ&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 1.31 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಇದೀಗ ಪರಿಷ್ಕರಣೆ ನಡೆಸಿ 4.30 ಲಕ್ಷ ಅಪಾತ್ರರನ್ನು ಪಟ್ಟಿಯಿಂದ ಹೊರಹಾಕಿರುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳು ಬರೋಬ್ಬರಿ 80 ಕೋಟಿ ರೂಪಾಯಿ ಉಳಿತಾಯವಾಗಲಿದೆ.&lt;/p&gt;&lt;h2&gt;120 ಕೋಟಿ ರೂ. ವಾಪಸ್ ಪಡೆಯಲು ಇಲಾಖೆ ಮುಂದು&lt;/h2&gt;&lt;p&gt;ಪ್ರಸ್ತುತ ಮೃತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳಲ್ಲೇ ಉಳಿದುಕೊಂಡಿರುವ ಸುಮಾರು 120 ಕೋಟಿ ರೂಪಾಯಿ ಹಣ ಇನ್ನೂ ಡ್ರಾ ಆಗದೇ ಹಾಗೇ ಇದೆ. ಯಾರೆಲ್ಲಾ ಇದುವರೆಗೆ ಮೃತರ ಖಾತೆಯಿಂದ ಹಣವನ್ನು ಪಡೆದಿಲ್ಲವೋ, ಅಂತಹ ಬ್ಯಾಂಕ್ ಖಾತೆಗಳಲ್ಲಿರುವ ಒಟ್ಟು 120 ಕೋಟಿ ರೂಪಾಯಿ ಮೊತ್ತವನ್ನು ಮತ್ತೆ ಸರ್ಕಾರದ ಬೊಕ್ಕಸಕ್ಕೆ ವಾಪಸ್ (Refund) ಪಡೆಯಲು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತೀರ್ಮಾನಿಸಿದೆ ಮತ್ತು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಸರ್ಕಾರದ ಈ ದಿಟ್ಟ ಪರಿಷ್ಕರಣಾ ಕ್ರಮವು ಅರ್ಹ ಬಡ ಮಹಿಳೆಯರಿಗೆ ತಲುಪಬೇಕಾದ ತೆರಿಗೆದಾರರ ಹಣ ಪೋಲಾಗುವುದನ್ನು ತಡೆದಿದೆ. ಆದರೆ, ಮೃತರ ಹೆಸರಿನಲ್ಲಿ ಹಣ ಲಪಟಾಯಿಸಿದವರ ವಿರುದ್ಧ ಇಲಾಖೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-gruhalakshmi-scheme-scrutiny-4-3-lakh-ineligible-beneficiaries-removed-gdp/articleshow-29q239k"/>
        </item>
        <item>
            <title><![CDATA[ಕಾಡುಗೋಡಿ ಮಗು ವೆನ್ನೆಲಾ ಹತ್ಯೆ ಪ್ರಕರಣ: ತಾಯಿ ಪ್ರಿಯಾಂಕ ಕೊನೆಗೂ ಸಕಲೇಶಪುರದಲ್ಲಿ ಬಂಧನ]]></title>
            <link>https://kannada.asianetnews.com/karnataka-districts/bengaluru-vennela-murder-case-kadugodi-police-arrested-mother-priyanka-in-sakleshpur-gdp/articleshow-6hrhr6v</link>
            <guid isPermaLink="true">https://kannada.asianetnews.com/karnataka-districts/bengaluru-vennela-murder-case-kadugodi-police-arrested-mother-priyanka-in-sakleshpur-gdp/articleshow-6hrhr6v</guid>
            <pubDate>Thu, 11 Jun 2026 17:42:23 +0530</pubDate>
            <description><![CDATA[ಬೆಂಗಳೂರಿನಲ್ಲಿ ಪುಟ್ಟ ಮಗು ವೆನ್ನೆಲಾಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ತಾಯಿ ಪ್ರಿಯಾಂಕಳನ್ನು, ನಾಲ್ಕು ದಿನಗಳ ಸತತ ಕಾರ್ಯಾಚರಣೆಯ ನಂತರ ಕಾಡುಗೋಡಿ ಪೊಲೀಸರು ಹಾಸನದ ಸಕಲೇಶಪುರದಲ್ಲಿ ಬಂಧಿಸಿದ್ದಾರೆ. ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಪೊಲೀಸರ ವಿರುದ್ಧ ಮಕ್ಕಳ ರಕ್ಷಣಾ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕ್ರಮಕ್ಕೆ ಆಗ್ರಹಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktp72t9f2dbwprng985g4n0y,imgname-bengaluru-child-murder-case--1--1781009574191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿಯ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪುಟ್ಟ ಮಗು ವೆನ್ನೆಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ನಾಲ್ಕು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಿ ತಲೆಮರೆಸಿಕೊಂಡಿದ್ದ ಹೆತ್ತ ತಾಯಿ ಪ್ರಿಯಾಂಕಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಸತತ ಕಾರ್ಯಾಚರಣೆ ನಡೆಸಿದ ಕಾಡುಗೋಡಿ ಪೊಲೀಸರು ಆರೋಪಿಯನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವನ್ನು ಕೊಲೆ ಮಾಡಿದ ಬಳಿಕ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಆರೋಪಿ ಪ್ರಿಯಾಂಕ ನಿರಂತರವಾಗಿ ಜಾಗ ಬದಲಾಯಿಸುತ್ತಿದ್ದಳು ಬೆಂಗಳೂರು ನಂತರ ಮೈಸೂರು ಅಲ್ಲಿಂದ ಹಾಸನ ಜಿಲ್ಲೆಯ ಸಕಲೇಶಪುರ ಹೋಗಿದ್ದಳು. ಮಾರ್ಚ್ ತಿಂಗಳಲ್ಲೇ ನಡೆದಿದ್ದ ಈ ಭೀಕರ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.&lt;/p&gt;&lt;h2&gt;ನಾಲ್ಕು ದಿನಗಳ ಸತತ ಕಾರ್ಯಾಚರಣೆ:&lt;/h2&gt;&lt;p&gt;ಬೆಂಗಳೂರಿನಲ್ಲಿ ಮಗುವನ್ನು ಹತ್ಯೆಗೈದ ವಿಷಯ ಬಹಿರಂಗವಾಗಿದ್ದೇ ತಡ ಈಕೆ ಮೊದಲು ಮೈಸೂರಿಗೆ ಓಡಿಹೋಗಿದ್ದಳು. ಪೊಲೀಸರು ತನ್ನನ್ನು ಬೆನ್ನಟ್ಟುತ್ತಿರುವ ಸುಳಿವು ಸಿಗುತ್ತಿದ್ದಂತೆ ಮೈಸೂರಿನಿಂದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ತೆರಳಿ ತಲೆಮರೆಸಿಕೊಂಡಿದ್ದಳು. ಆರೋಪಿಯ ಸುಳಿವು ಪತ್ತೆಹಚ್ಚಲು ಕಾಡುಗೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಹಗಲಿರುಳು ಸತತ ಹುಡುಕಾಟ ನಡೆಸಿದ್ದರು. ಕೊನೆಗೂ ಸಕಲೇಶಪುರದಲ್ಲಿ ಆಕೆಯನ್ನು ಬಂಧಿಸಿ, ಸದ್ಯ ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.&lt;/p&gt;&lt;h2&gt;ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಮಕ್ಕಳ ರಕ್ಷಣಾ ಆಯೋಗದ ಕೆಂಗಣ್ಣು&lt;/h2&gt;&lt;p&gt;ಈ ಪ್ರಕರಣ ಮಾಧ್ಯಮಗಳ ಮೂಲಕ ಹೊರಬರುತ್ತಿದ್ದಂತೆ, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ತೀವ್ರವಾಗಿ ಪ್ರತಿಕ್ರಿಯಿಸಿದೆ. ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ಅವರು ಪ್ರಕರಣದ ಹಾದಿ ಹಾಗೂ ಪೊಲೀಸರ ನಡೆ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.&lt;/p&gt;&lt;p&gt;ಮಾರ್ಚ್ ತಿಂಗಳಲ್ಲೇ ಮಗುವಿನ ಕೊಲೆಯಾಗಿದ್ದರೂ, ಪ್ರಕರಣ ದಾಖಲಿಸಲು ಪೊಲೀಸರು ಇಷ್ಟೊಂದು ತಡ ಮಾಡಿರುವುದು ವ್ಯವಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಮಕ್ಕಳ ವಿಷಯದಲ್ಲಿ ಇಂತಹ ಬೇಜವಾಬ್ದಾರಿತನವನ್ನು ಯಾರೂ ಸಹಿಸಬಾರದು ಎಂದು ಮಕ್ಕಳ ರಕ್ಷಣಾ ಆಯೋಗ ಅಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.&lt;/p&gt;&lt;h2&gt;ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ&lt;/h2&gt;&lt;p&gt;ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ರಕ್ಷಣಾ ಆಯೋಗವು, ತನಿಖೆಯಲ್ಲಿ ವಿಳಂಬ ಧೋರಣೆ ತಳೆದ ಅಧಿಕಾರಿಗಳಿಗೆ ಸರಿಯಾದ ಪಾಠ ಕಲಿಸಲು ಮುಂದಾಗಿದೆ. ಕಾಡುಗೋಡಿ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸಂಪೂರ್ಣ ವರದಿ ಹಾಗೂ ಮಾಹಿತಿ ಕೋರಿ ಬೆಂಗಳೂರು ನಗರ ಪೊಲೀಸ್ ಕಮಿಷನರ್&zwnj;ಗೆ ಅಧಿಕೃತವಾಗಿ ಪತ್ರ ಬರೆಯಲು ಆಯೋಗ ತೀರ್ಮಾನಿಸಿದೆ. ಮಾರ್ಚ್&zwnj;ನಲ್ಲಿ ನಡೆದ ಘಟನೆಗೆ ತಡವಾಗಿ ಎಫ್&zwnj;ಐಆರ್ ದಾಖಲಿಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಯಾರು? ಎಂಬುದನ್ನು ಪತ್ತೆಹಚ್ಚಿ, ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗವು ಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಿದೆ.&lt;/p&gt;&lt;p&gt;ಕೇವಲ ಪೊಲೀಸರಿಂದ ಮಾತ್ರವಲ್ಲದೆ, ಮೃತ ಮಗು ವೆನ್ನೆಲಾಳ ಕುಟುಂಬಸ್ಥರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಘಟನೆಗೆ ಅಸಲಿ ಕಾರಣವೇನು ಎಂಬುದರ ಬಗ್ಗೆ ಆಯೋಗವು ಸ್ವತಂತ್ರವಾಗಿ ಮಾಹಿತಿ ಕಲೆಹಾಕಲಿದೆ. ಹೆತ್ತ ಮಗುವನ್ನೇ ಕರಳು ಹರಿದ ತಾಯಿ ಕೊಂದಿರುವ ಈ ಘಟನೆ ಸಮಾಜದಲ್ಲಿ ತಾಯಿ ಎಂಬ ಪವಿತ್ರ ಸ್ಥಾನಕ್ಕೆ ಕಳಂಕ ತರುವಂತಿದೆ. ಸದ್ಯ ಆರೋಪಿ ಪ್ರಿಯಾಂಕ ಪೊಲೀಸರ ಅತಿಥಿಯಾಗಿದ್ದು, ಮಗುವಿನ ಕೊಲೆಗೆ ನಿಖರವಾದ ಕಾರಣವೇನು? ಇದರ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರಾ? ಎಂಬ ಸತ್ಯಾಂಶ ಪೊಲೀಸ್ ವಿಚಾರಣೆಯ ಬಳಿಕ ಹೊರಬರಬೇಕಿದೆ. ಆದರೆ, ಮಕ್ಕಳ ರಕ್ಷಣೆ ಮಾಡಬೇಕಾದ ಕಾನೂನು ಪಾಲಕರು (ಪೊಲೀಸರು) ಪ್ರಕರಣ ದಾಖಲಿಸಲು ವಿಳಂಬ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-vennela-murder-case-kadugodi-police-arrested-mother-priyanka-in-sakleshpur-gdp/articleshow-6hrhr6v"/>
        </item>
        <item>
            <title><![CDATA[Dharmasthala Case: ಧರ್ಮಸ್ಥಳ ಕೇಸಲ್ಲಿ ಪ್ರಕಾಶ್ ರಾಜ್ ಹೆಸರು ಕೇಳಿಬಂದಿದ್ದೇಕೆ? ಕೇರಳದಿಂದ ₹200 ಕೋಟಿ ಬಜೆಟ್‌!]]></title>
            <link>https://kannada.asianetnews.com/state/dharmasthala-burude-case-accused-chinnayya-moves-high-court-alleges-rs200-crore-conspiracy-and-names-prakash-raj-gdp/articleshow-8wgw4q6</link>
            <guid isPermaLink="true">https://kannada.asianetnews.com/state/dharmasthala-burude-case-accused-chinnayya-moves-high-court-alleges-rs200-crore-conspiracy-and-names-prakash-raj-gdp/articleshow-8wgw4q6</guid>
            <pubDate>Thu, 11 Jun 2026 17:09:11 +0530</pubDate>
            <description><![CDATA[ಧರ್ಮಸ್ಥಳದ 'ಬುರುಡೆ ಪ್ರಕರಣ'ದ ಪ್ರಮುಖ ಆರೋಪಿ ಚಿನ್ನಯ್ಯ ಹೈಕೋರ್ಟ್&zwnj;ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಕ್ಷೇತ್ರದ ವಿರುದ್ಧ 200 ಕೋಟಿ ರೂಪಾಯಿಗಳ ಬೃಹತ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾನೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳನ್ನು ಉಲ್ಲೇಖಿಸಿದ್ದು, ಎಸ್&zwnj;ಐಟಿ ತನಿಖೆಯ ವಿಳಂಬವನ್ನು ಪ್ರಶ್ನಿಸಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktv7cs02db9jh6h3rsst19yh,imgname-dharmasthala-burude-case--1--1781177672705.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧರ್ಮಸ್ಥಳ ಗ್ರಾಮದ ಬಹುಚರ್ಚಿತ &lsquo;ಬುರುಡೆ ಪ್ರಕರಣ&rsquo;ದ ತನಿಖೆಗೆ ಸಂಬಂಧಿಸಿದಂತೆ ಈಗ ಅತ್ಯಂತ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಕುಂದು ತರಲು ಬರೋಬ್ಬರಿ 200 ಕೋಟಿ ರೂಪಾಯಿಗಳ ಬಜೆಟ್ ಇಟ್ಟುಕೊಂಡು ಬೃಹತ್ ಷಡ್ಯಂತ್ರ ರೂಪಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಇಡೀ ಸಂಚಿನ ಕುರಿತು ಸಮಗ್ರ ತನಿಖಾ ವರದಿ ಸಲ್ಲಿಕೆಗೆ ಕೋರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚಿನ್ನ ಸಿ.ಎನ್. (ಚಿನ್ನಯ್ಯ) ಹೈಕೋರ್ಟ್&zwnj;ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ.&lt;/p&gt;&lt;p&gt;ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್&zwnj;ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು, ರಾಜ್ಯ ಸರ್ಕಾರ ಹಾಗೂ ವಿಶೇಷ ತನಿಖಾ ತಂಡಕ್ಕೆ (SIT) ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ತನಿಖೆಯ ಸದ್ಯದ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಎಸ್&zwnj;ಐಟಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ 29 ಕ್ಕೆ ಮುಂದೂಡಿದ್ದಾರೆ.&lt;/p&gt;&lt;h2&gt;ಸೂತ್ರಧಾರರು ಹೊರಗಿದ್ದಾರೆ, &amp;nbsp;ನಾನೊಬ್ಬನೇ ಏಕೆ ಈ ಪ್ರಕರಣದಲ್ಲಿ ಬಲಿಪಶು?&lt;/h2&gt;&lt;p&gt;ತಮ್ಮ ಅರ್ಜಿಯಲ್ಲಿ ಇಡೀ ಜಾಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಚಿನ್ನಯ್ಯ, ಎಸ್&zwnj;ಐಟಿ (SIT) ತನಿಖೆಯ ಕರ್ತವ್ಯಲೋಪವನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ನನ್ನ ಪಾಡಿಗೆ ನಾನಿದ್ದೆ, ಇವರೇ ನನ್ನನ್ನು ಒತ್ತಾಯಪೂರ್ವಕವಾಗಿ ಕರೆತಂದು ಇದರಲ್ಲಿ ಸಿಲುಕಿಸಿದ್ದಾರೆ. ಇಷ್ಟೆಲ್ಲಾ ದೊಡ್ಡ ಮಟ್ಟದ ಪ್ರಭಾವಿಗಳು ಸೇರಿ ಷಡ್ಯಂತ್ರ ಹೆಣೆದಿದ್ದರೂ, ಜೈಲಿಗೆ ಹೋಗಿದ್ದು ಪರಿಶಿಷ್ಟ ಜಾತಿಗೆ ಸೇರಿದ ನಾನೊಬ್ಬನೇ. ಅಸಲಿ ಸೂತ್ರಧಾರರು ಈಗಲೂ ಆರಾಮಾಗಿದ್ದಾರೆ ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಉಲಲೇಖಿಸಿದ್ದಾನೆ&lt;/p&gt;&lt;h2&gt;ಎಸ್&zwnj;ಐಟಿ ವಿಳಂಬ ನೀತಿ&lt;/h2&gt;&lt;p&gt;ಎಫ್&zwnj;ಐಆರ್ ಸಂಖ್ಯೆ 39/2025 ರ ತನಿಖೆ ಆರಂಭವಾಗಿ ಇಷ್ಟು ದಿನಗಳಾದರೂ ಎಸ್&zwnj;ಐಟಿ ಅಂತಿಮ ವರದಿ ಸಲ್ಲಿಸದೆ ವಿಳಂಬ ಮಾಡುತ್ತಿದೆ. ಪ್ರಾಥಮಿಕ ವರದಿಯಲ್ಲಿ ಅಸಲಿ ಆರೋಪಿಗಳ ಹೆಸರುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಅವರ ವಿರುದ್ಧ ಎಸ್&zwnj;ಐಟಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ.&lt;/p&gt;&lt;h2&gt;200 ಕೋಟಿ ರೂ. ಬಜೆಟ್ ಮತ್ತು ಕೇರಳದ ಹಣದ ಲಿಂಕ್!&lt;/h2&gt;&lt;p&gt;ಈ ಷಡ್ಯಂತ್ರದ ಹಿಂದೆ ಅಂತರರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿರುವ ಬಗ್ಗೆ ಚಿನ್ನಯ್ಯ ಕೋರ್ಟ್&zwnj;ಗೆ ಮಾಹಿತಿ ನೀಡಿದ್ದಾನೆ. ಧರ್ಮಸ್ಥಳದ ವಿರುದ್ಧ ಸುಳ್ಳು ಹಬ್ಬಿಸಲು ಒಟ್ಟು 200 ಕೋಟಿ ರೂಪಾಯಿಗಳ ಬಜೆಟ್ ಸಿದ್ಧವಾಗಿತ್ತು. ಈ ಸಂಚಿನ ಭಾಗವಾಗಿ ನನಗೆ 50 ಲಕ್ಷ ರೂಪಾಯಿ ಕೊಡುವ ಆಮಿಷವನ್ನು ಮಹೇಶ್ ಶೆಟ್ಟಿ ತಿಮರೋಡಿ ಒಡ್ಡಿದ್ದ. ಈ ಷಡ್ಯಂತ್ರಕ್ಕಾಗಿ ಕೇರಳದಿಂದ ಹಣ ಸಂದಾಯವಾಗಿದೆ. ಇದರೊಂದಿಗೆ ಚಿತ್ರದುರ್ಗದ ರಮಾ ನಾಗರಾಜ್ ಎಂಬುವವರೂ ಕೂಡ ಹಣ ನೀಡಿದ್ದಾರೆ. ತಮ್ಮ ಪತ್ನಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಹಾಗೂ ನಗದು ಹಣದ ವಹಿವಾಟಿನ ಸಂಪೂರ್ಣ ವಿವರಗಳನ್ನು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ.&lt;/p&gt;&lt;h2&gt;ನಟ ಪ್ರಕಾಶ್ ರಾಜ್ ಹೆಸರು ಪ್ರಸ್ತಾಪ&lt;/h2&gt;&lt;p&gt;ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ಯೂಟ್ಯೂಬರ್&zwnj;ಗಳ ಹೆಸರುಗಳು ಉಲ್ಲೇಖವಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಗಿರೀಶ್ ಮಟ್ಟೆಣ್ಣವರ್ ಹೇಳಿಕೊಟ್ಟಂತೆ ನೀನು ಹೇಳಿಕೆ ಕೊಡು, 29ನೇ ತಾರೀಕು ಬಂದು ನಿನ್ನನ್ನು ಅಪ್ಪಿಕೊಳ್ಳುತ್ತೇನೆ ಎಂದು ನಟ ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ತಮಗೆ ಹೇಳಿದ್ದರು ಎಂಬುದಾಗಿ ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಜೊತೆಗೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ವಿಠಲಗೌಡ, ಮತ್ತು ಜಯಂತ್ ಈ ಇಡೀ ಷಡ್ಯಂತ್ರದ ಮುಖ್ಯ ರೂವಾರಿಗಳು ಎಂದು ಹೆಸರಿಸಲಾಗಿದೆ. ಯೂಟ್ಯೂಬರ್&zwnj;ಗಳಾದ ಸಮೀರ್ ಎಂ.ಡಿ ಹಾಗೂ ಅಜಯ್ ಅಂಚನ್ ಎಂಬುವವರು ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ 30 ರಿಂದ 35 ವೀಡಿಯೋಗಳನ್ನು ಮೊದಲೇ ಮಾಡಿಕೊಂಡಿದ್ದರು. ಅವರು ತೋರಿಸಿದ ಸ್ಥಳಗಳನ್ನೇ ನಾನು ನಂತರ ಎಸ್&zwnj;ಐಟಿ ಅಧಿಕಾರಿಗಳಿಗೆ ತೋರಿಸಬೇಕಾಯಿತು ಎಂದು ಚಿನ್ನಯ್ಯ ದೂರಿದ್ದಾರೆ.&lt;/p&gt;&lt;h2&gt;ಚಾಕು ತೋರಿಸಿ ಬೆದರಿಕೆ, ಒತ್ತೆಯಾಳಾಗಿಟ್ಟಿದ್ದ ಗ್ಯಾಂಗ್!&lt;/h2&gt;&lt;p&gt;ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಹೇಳಲು ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ಆಗ ಮಹೇಶ್ ಶೆಟ್ಟಿ ತಿಮರೋಡಿ ಚಾಕುವಿನಿಂದ ನನ್ನನ್ನು ಕೊಲ್ಲಲು ಬಂದಿದ್ದ. ಹೇಳಿಕೊಟ್ಟಂತೆ ಕೇಳದಿದ್ದರೆ ನಿನ್ನ ಹೆಂಡತಿಯನ್ನು ಕೊಲ್ಲುತ್ತೇವೆ ಎಂದು ಹೆದರಿಸಿದ್ದರು. ಒಂದು ವೇಳೆ ತಪ್ಪು ಹೇಳಿಕೆ ನೀಡಿದರೆ, ಅದೇ ಜಾಗದಲ್ಲಿ ಹೂತು ಹಾಕುವುದಾಗಿ ಗ್ಯಾಂಗ್ ಬೆದರಿಕೆ ಹಾಕಿತ್ತು. ನನ್ನ ಕೈಗೆ ಬುರುಡೆ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ಸುಜಾತಾ ಭಟ್ ಎಂಬುವವರ ಜೊತೆ ದೆಹಲಿಗೆ ಕರೆದೊಯ್ದು ಕಂಡಕಂಡಲ್ಲಿ ಸಹಿ ಹಾಕಿಸಿಕೊಂಡರು. ವಕೀಲರ ಕಚೇರಿಯಲ್ಲಿ ಕೂರಿಸಿ ಹೇಗೆ ಹೇಳಿಕೆ ನೀಡಬೇಕೆಂದು ತರಬೇತಿ ನೀಡಲಾಗಿತ್ತು. ನನ್ನನ್ನು ಸಂಪೂರ್ಣವಾಗಿ ಒತ್ತೆಯಾಳುವಿನಂತೆ ಇರಿಸಿಕೊಳ್ಳಲಾಗಿತ್ತು. ನನಗೆ ಹಾಕಲಾಗಿದ್ದ ಮಾಸ್ಕ್&zwnj;ನ ಹಿಂದೆ ಹೆಡ್&zwnj;ಫೋನ್ ಇರಿಸಲಾಗಿತ್ತು. ಅದರಲ್ಲಿ ಕ್ಷಣಕ್ಷಣಕ್ಕೂ ನಾನು ಏನು ಮಾತನಾಡಬೇಕು ಎಂಬ ಸೂಚನೆಗಳು ಬರುತ್ತಿದ್ದವು. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಒಮ್ಮೆ ಆತ್ಮ*ಹ*ತ್ಯೆಗೂ ಯತ್ನಿಸಿದ್ದೆ ಎಂದು ಚಿನ್ನಯ್ಯ ಎಂದು ಚಿನ್ನಯ್ಯ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.&lt;/p&gt;&lt;p&gt;&quot;ತಪ್ಪಿತಸ್ಥರೆಲ್ಲರೂ ಹೊರಗಡೆ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಕಾನೂನು ಕ್ರಮ ಜರುಗಿಸುವುದಾದರೆ ಇಡೀ ಷಡ್ಯಂತ್ರ ರೂಪಿಸಿದ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು&quot; ಎಂದು ಚಿನ್ನಯ್ಯ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಸದ್ಯ ಹೈಕೋರ್ಟ್ ಸರ್ಕಾರ ಮತ್ತು ಎಸ್&zwnj;ಐಟಿಗೆ ನೋಟಿಸ್ ನೀಡಿರುವುದರಿಂದ, ಜೂನ್ 29ರ ಮುಂದಿನ ವಿಚಾರಣೆಯೊಳಗೆ ಎಸ್&zwnj;ಐಟಿ ಯಾವ ರೀತಿಯ ವರದಿ ಸಲ್ಲಿಸಲಿದೆ ಮತ್ತು ಈ ಹೈಪ್ರೊಫೈಲ್ ಬುರುಡೆ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ಕಾದು ನೋಡಬೇಕಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/dharmasthala-burude-case-accused-chinnayya-moves-high-court-alleges-rs200-crore-conspiracy-and-names-prakash-raj-gdp/articleshow-8wgw4q6"/>
        </item>
        <item>
            <title><![CDATA[Rain Yellow Alert: ಮುಂದಿನ 3 ಗಂಟೆ ಭಾರಿ ಎಲ್ಲೋ ಅಲರ್ಟ್‌, ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ]]></title>
            <link>https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</link>
            <guid isPermaLink="true">https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy</guid>
            <pubDate>Fri, 12 Jun 2026 18:03:12 +0530</pubDate>
            <description><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxwvsdz0hykz097kg2gb48y,imgname-bengaluru-rains--2--1781267293631.jpg" type="image/jpeg" height="390" width="690"/>
            <content:encoded><![CDATA[ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 'ಎಲ್ಲೋ ಅಲರ್ಟ್' ಘೋಷಿಸಲಾಗಿದ್ದು, ರಾಜಧಾನಿಯ ಹಲವೆಡೆ ಈಗಾಗಲೇ ಮಳೆ ಆರಂಭವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.&lt;img&gt;&lt;p&gt;ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' (Yellow Alert) ಘೋಷಿಸಿದೆ.&lt;/p&gt;&lt;img&gt;&lt;p&gt;ಮಳೆಯ ತೀವ್ರತೆ ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ Yellow Alert ನೀಡಿದೆ.&lt;/p&gt;&lt;img&gt;&lt;p&gt;ರಾಜಧಾನಿ ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ವರುಣನ ಆರ್ಭಟ ಶುರುವಾಗಿದೆ. ಪ್ರಮುಖವಾಗಿ ವಿಧಾನಸೌಧ, ವಸಂತನಗರ, ಶಿವಾಜಿನಗರ, ಕೆ.ಆರ್. ಸರ್ಕಲ್ ಪರಿಸರದಲ್ಲಿ ಭಾರಿ ಮಳೆಯಾಗುತ್ತಿರುವುದು ವರದಿಯಾಗಿದೆ.&lt;/p&gt;&lt;img&gt;&lt;p&gt;ನಗರದ ಪ್ರಮುಖ ಆಯಕಟ್ಟಿನ ಜಾಗಗಳಾದ ಕೆ.ಆರ್. ಮಾರ್ಕೆಟ್, ಚಿಕ್ಕಪೇಟೆ, ಯಶವಂತಪುರ ಹಾಗೂ ಮೆಜೆಸ್ಟಿಕ್ ಸೇರಿದಂತೆ ಸುತ್ತಮುತ್ತಲಿನ ಹಲವೆಡೆ ಮಳೆ ಸುರಿಯುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತಗೊಂಡಿದೆ.&lt;/p&gt;&lt;img&gt;&lt;p&gt;ಕಚೇರಿ ಹಾಗೂ ಇತರೆ ಕೆಲಸಗಳಿಗೆ ಹೊರಟಿದ್ದ ಸಾರ್ವಜನಿಕರು ಈ ದಿಢೀರ್ ಮಳೆಯಿಂದಾಗಿ ಪರದಾಡುವಂತಾಗಿದೆ. ರಸ್ತೆಯಲ್ಲೇ ಸಿಲುಕಿಕೊಂಡ ಬೈಕ್ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹತ್ತಿರದ ಬಸ್ ನಿಲ್ದಾಣಗಳು ಹಾಗೂ ಫ್ಲೈಓವರ್&zwnj;ಗಳ ಕೆಳಗೆ ಆಶ್ರಯ ಪಡೆದಿರುವುದು ಕಂಡುಬಂದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/bengaluru-urban/karnataka-weather-update-bengaluru-rain-yellow-alert-8-districts-next-3-hours-san-9gsnwhy"/>
        </item>
        <item>
            <title><![CDATA[ಕಾಡುಗೋಡಿ ಮಗು ಹತ್ಯೆ ಪ್ರಕರಣ: ಐಸ್‌ಕ್ರೀಂ ಕೇಳಿದ್ದಕ್ಕೆ ಕಾರಲ್ಲೇ ಒದ್ದು ಕೊಂದೆ, ಪೊಲೀಸರೆದುರು ಬಾಯಿಬಿಟ್ಟ ಪ್ರಿಯಕರ!]]></title>
            <link>https://kannada.asianetnews.com/gallery/karnataka-districts/bengaluru-kadugodi-child-vennela-murder-case-lover-confesses-to-killing-toddler-over-an-ice-cream-tantrum-gdp-dy7t6xw</link>
            <guid isPermaLink="true">https://kannada.asianetnews.com/gallery/karnataka-districts/bengaluru-kadugodi-child-vennela-murder-case-lover-confesses-to-killing-toddler-over-an-ice-cream-tantrum-gdp-dy7t6xw</guid>
            <pubDate>Tue, 09 Jun 2026 18:45:54 +0530</pubDate>
            <description><![CDATA[&lt;p&gt;ಬೆಂಗಳೂರಿನ ಕಾಡುಗೋಡಿಯಲ್ಲಿ, ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಂದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಮೋಹನ್ ಸಿಕ್ಕಿಬಿದ್ದಿದ್ದಾನೆ. ಐಸ್&zwnj;ಕ್ರೀಂಗಾಗಿ ಹಠ ಹಿಡಿದ ಮಗುವನ್ನು ಮೋಹನ್ ಕಾರಿನಲ್ಲೇ ಒದ್ದು ಕೊಂದಿದ್ದು, ನಂತರ ಇಬ್ಬರೂ ಸೇರಿ ಕೊಲೆಯನ್ನು ಮುಚ್ಚಿಹಾಕಲು ನಾಟಕವಾಡಿದ್ದರು. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktp72t9fp72qx0z3ss38mw2r,imgname-bengaluru-child-murder-case--2--1781009574191.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಕಾಡುಗೋಡಿಯಲ್ಲಿ, ಪ್ರಿಯಕರನೊಂದಿಗೆ ಸೇರಿ ಮಗಳನ್ನು ಕೊಂದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಮೋಹನ್ ಸಿಕ್ಕಿಬಿದ್ದಿದ್ದಾನೆ. ಐಸ್&zwnj;ಕ್ರೀಂಗಾಗಿ ಹಠ ಹಿಡಿದ ಮಗುವನ್ನು ಮೋಹನ್ ಕಾರಿನಲ್ಲೇ ಒದ್ದು ಕೊಂದಿದ್ದು, ನಂತರ ಇಬ್ಬರೂ ಸೇರಿ ಕೊಲೆಯನ್ನು ಮುಚ್ಚಿಹಾಕಲು ನಾಟಕವಾಡಿದ್ದರು. &amp;nbsp;&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿಯ ಕಾಡುಗೋಡಿ ವ್ಯಾಪ್ತಿಯಲ್ಲಿ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿತ್ತು. ಹೆತ್ತ ಮಗಳನ್ನೇ ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿ ಕೊಲೆಗೈದ ಆರೋಪದ ಮೇಲೆ ತಾಯಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಮೋಹನ್ ಸಿಕ್ಕಿಬಿದ್ದಿದ್ದರು. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಮೋಹನ್ ತನಿಖಾಧಿಕಾರಿಗಳ ಮುಂದೆ ಕೊಲೆಯ ಭೀಕರ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ತಾನೇ ಕಾಲಿನಿಂದ ಒದ್ದು ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ತಲೆಮರೆಸಿಕೊಂಡಿರುವ ತಾಯಿ ಪ್ರಿಯಾಂಕಾಳಿಗಾಗಿ ಹುಡುಕಾಟ ಮುಂದುವರೆದಿದೆ.&lt;/p&gt;&lt;img&gt;&lt;p&gt;ಪೊಲೀಸ್ ತನಿಖೆಯ ಪ್ರಕಾರ, ಮಾರ್ಚ್ 21 ರಂದು ಆರೋಪಿ ಮೋಹನ್ ಹಾಗೂ ಪ್ರಿಯಾಂಕಾ ತಮ್ಮ ಮಗು ವೆನ್ನಿಲ್ಲಾಳೊಂದಿಗೆ ತಮಿಳುನಾಡಿನ ಮಧುರೈಗೆ ಮೂರು ದಿನಗಳ ಕಾಲ ದೇವಸ್ಥಾನಗಳ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 24 ರಂದು ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದೇ ದಿನ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಪ್ರಿಯಾಂಕಾ ಇಂದಿರಾನಗರದಲ್ಲಿ ಶಾಪಿಂಗ್ ಮಾಡಲು ತೆರಳಿದ್ದಳು. ಈ ಸಮಯದಲ್ಲಿ ಕಾರಿನಲ್ಲಿ ಪ್ರಿಯಕರ ಮೋಹನ್ ಮತ್ತು ಮಗು ವೆನ್ನಿಲ್ಲಾ ಮಾತ್ರ ಇದ್ದರು.&lt;/p&gt;&lt;img&gt;&lt;p&gt;ಕಾರಿನಲ್ಲಿ ಕುಳಿತಿದ್ದಾಗ ಮಗು ವೆನ್ನಿಲ್ಲಾ ತನಗೆ ಐಸ್&zwnj;ಕ್ರೀಂ ಬೇಕೆಂದು ಮೋಹನ್ ಬಳಿ ಹಠ ಹಿಡಿದಿದೆ. ಮಗುವಿನ ಆಸೆಯಂತೆ ಮೋಹನ್ ಹೋಗಿ ಐಸ್&zwnj;ಕ್ರೀಂ ತಂದುಕೊಟ್ಟಿದ್ದಾನೆ. ಆದರೆ, ಈ ಐಸ್&zwnj;ಕ್ರೀಂ ಬೇಡ, ಬೇರೆ ಐಸ್&zwnj;ಕ್ರೀಂ ಬೇಕು ಎಂದು ಮಗು ಮತ್ತೆ ಪಟ್ಟು ಹಿಡಿದು ಜೋರಾಗಿ ಅಳಲು ಪ್ರಾರಂಭಿಸಿದೆ. ಇದರಿಂದ ತೀವ್ರ ಕೋಪಗೊಂಡ ಮೋಹನ್ ಕಾರಿನ ಒಳಗಡೆಯೇ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ.&lt;/p&gt;&lt;p&gt;ತನ್ನ ಕಾಲಿನಿಂದ ಮಗುವಿನ ಹೊಟ್ಟೆಯ ಭಾಗಕ್ಕೆ ಬಲವಾಗಿ ಒದ್ದಿದ್ದಾನೆ. ಇದರಿಂದ ಮಗು ನೋವು ತಡೆಯಲಾರದೆ ಜೋರಾಗಿ ಕಿರುಚಾಡಿ ಒದ್ದಾಡತೊಡಗಿದೆ. ಮಗುವಿನ ಕಿರುಚಾಟ ಕಾರಿನ ಹೊರಗಡೆ ಯಾರಿಗೂ ಕೇಳಿಸಬಾರದೆಂದು ಮೋಹನ್ ಮಗುವಿನ ಮೂಗು ಮತ್ತು ಬಾಯಿಯನ್ನು ತನ್ನ ಎರಡೂ ಕೈಗಳಿಂದ ಬಲವಾಗಿ ಒತ್ತಿ ಹಿಡಿದಿದ್ದಾನೆ. ಪರಿಣಾಮವಾಗಿ ಉಸಿರಾಡಲು ಸಾಧ್ಯವಾಗದೆ ಮಗು ಕಾರಿನಲ್ಲೇ ಕೊನೆಯುಸಿರೆಳೆದಿದೆ. ಕೋಪದಲ್ಲಿ ಮೋಹನ್ ಉದ್ದೇಶಪೂರ್ವಕವಾಗಿಯೇ ಮಗುವನ್ನು ಕೊಲೆ ಮಾಡಿದ್ದಾನೆ.&lt;/p&gt;&lt;img&gt;&lt;p&gt;ಶಾಪಿಂಗ್ ಮುಗಿಸಿ ಪ್ರಿಯಾಂಕಾ ಕಾರಿನ ಬಳಿ ವಾಪಸ್ ಬಂದಾಗ ಮೋಹನ್ ಮಗು ಮೃತಪಟ್ಟಿರುವುದನ್ನು ತಿಳಿಸಿದ್ದಾನೆ. ಅಲ್ಲದೆ, ಇದು ಆಕಸ್ಮಿಕವಾಗಿ ನಡೆದುಹೋಯಿತು ಎಂದು ಆಕೆಗೆ ನಂಬಿಸಿ ಕಥೆ ಕಟ್ಟಿದ್ದಾನೆ. ಆ ಬಳಿಕ ಇಬ್ಬರೂ ಸೇರಿ ಶವವನ್ನು ಕಾರಿನಲ್ಲಿಟ್ಟುಕೊಂಡು ಸೀದಾ ಕಾಡುಗೋಡಿಯಲ್ಲಿದ್ದ ತಮ್ಮ ವಿಲ್ಲಾಗೆ ತಂದಿದ್ದಾರೆ. ಮಗು ನಿದ್ದೆ ಮಾಡುತ್ತಿರುವಂತೆ ಕಾಣಲೆಂದು ಭುಜದ ಮೇಲೆ ಮಲಗಿಸಿಕೊಂಡು ವಿಲ್ಲಾ ಒಳಗೆ ಕರೆದೊಯ್ದಿದ್ದಾರೆ. ಅಂದು ರಾತ್ರಿಯಿಡೀ ಮಗುವಿನ ಶವವನ್ನು ಮನೆಯಲ್ಲೇ ಇಟ್ಟುಕೊಂಡು, ಪೊಲೀಸರಿಗೆ ಮತ್ತು ಮನೆಯವರಿಗೆ ಏನು ಹೇಳಬೇಕೆಂದು ಇಬ್ಬರೂ ಒಳಸಂಚು ರೂಪಿಸಿದ್ದಾರೆ.&lt;/p&gt;&lt;p&gt;ಮರುದಿನ ಬೆಳಗ್ಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದ ಇಬ್ಬರು, ಮಗು ಬೆಳಗ್ಗೆ ಎದ್ದೇಳುತ್ತಿಲ್ಲ. ಮೆಟ್ಟಿಲುಗಳ ಮೇಲಿಂದ ಕೆಳಗೆ ಬಿದ್ದಿತ್ತು, ಹಾಗಾಗಿ ಮಲಗಿಸಿದ್ದೆವು ಎಂದು ವೈದ್ಯರ ಮುಂದೆ ಸುಳ್ಳು ಕಥೆ ಹೇಳಿದ್ದಾರೆ. ಆದರೆ ಪರಿಶೀಲಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾ ತನಗೇನೂ ತಿಳಿಯದವಳಂತೆ ಆಸ್ಪತ್ರೆಯಲ್ಲೇ ಬಿದ್ದು ಒದ್ದಾಡಿ ಭೀಕರ ಹೈಡ್ರಾಮಾ ಸೃಷ್ಟಿಸಿದ್ದಾಳೆ. ತದನಂತರ ಮರಣೋತ್ತರ ಪರೀಕ್ಷೆ ಮುಗಿಸಿ ಸದ್ದಿಲ್ಲದೆ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಪಾಪದ ಕೊಡ ತುಂಬಿ ಬಂದಾಗ ಸತ್ಯ ಅಡಗಿರಲು ಸಾಧ್ಯವಿಲ್ಲ. ಮಗುವಿನ ಮರಣೋತ್ತರ ಪರೀಕ್ಷೆಯ (Post-mortem) ವರದಿ ಬರುತ್ತಿದ್ದಂತೆ ಇಡೀ ಕಥೆ ಉಲ್ಟಾ ಆಗಿದೆ. ವರದಿಯಲ್ಲಿ ಮಗುವಿನ ಸಾವು ಸಹಜವಾದುದಲ್ಲ, ಅದು ಕೊಲೆ ಎಂಬುದು ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಮಗುವಿನ ಮೂಗು ಮತ್ತು ಬಾಯಿಯನ್ನು ಬಲವಾಗಿ ಒತ್ತಿ ಹಿಡಿದಿದ್ದರಿಂದ ಉಸಿರಾಟದ ಸಮಸ್ಯೆಯಾಗಿ ಸಾವು ಸಂಭವಿಸಿದೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಒಳಗಡೆ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ವರದಿಯಲ್ಲಿ ಧೃಢಪಡಿಸಿದ್ದರು.&lt;/p&gt;&lt;img&gt;&lt;p&gt;ಈ ನಡುವೆ ಪ್ರಿಯಾಂಕಾಳ ಮೊದಲ ಪತಿ ಪ್ರವೀಣ್ ಅವರು ಹೆಂಡತಿ ಮತ್ತು ಆಕೆಯ ಪ್ರಿಯಕರನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರವೀಣ್ ಮತ್ತು ಪ್ರಿಯಾಂಕಾ ಅವರಿಗೆ ಹತ್ತೊಂಬತ್ತನೇ ವಯಸ್ಸಿನಲ್ಲಿ ಮದುವೆಯಾಗಿತ್ತು. ಆದರೆ ಮದುವೆಗೂ ಮುನ್ನವೇ ಪ್ರಿಯಾಂಕಾಗೆ ಮೋಹನ್ ಜೊತೆ ಪ್ರೇಮಸಂಬಂಧವಿತ್ತು. ಮನೆಯವರಿಗೆ ಈ ವಿಷಯ ತಿಳಿದು ಮದುವೆಗೆ ಮುಂದಾದಾಗ ಮೋಹನ್ ಜೊತೆ ಆಕೆ ಬ್ರೇಕಪ್ ಮಾಡಿಕೊಂಡಿದ್ದಳು. ಆದರೆ ವಿಚಿತ್ರವೆಂದರೆ, ಮದುವೆಯಾಗಿ ಭರ್ತಿ 19 ವರ್ಷಗಳ ನಂತರ ಪ್ರಿಯಾಂಕಾಗೆ ಮೋಹನ್ ಆಕಸ್ಮಿಕವಾಗಿ ಮತ್ತೆ ಭೇಟಿಯಾಗಿದ್ದಾನೆ. ಹಳೆಯ ಪ್ರೀತಿ ಮತ್ತೆ ಚಿಗುರೊಡೆದು ಇಬ್ಬರ ನಡುವೆ ಅಕ್ರಮ ಸಂಬಂಧ ಶುರುವಾಗಿದೆ. ಪ್ರಿಯಾಂಕಾ ತನ್ನ ಮೊಬೈಲ್&zwnj;ನಲ್ಲಿ ಮೋಹನ್ ನಂಬರ್ ಅನ್ನು ಯಾರಿಗೂ ಸಂಶಯ ಬಾರದಂತೆ 'ಅಡ್ವೋಕೇಟ್ ಸಾನ್ವಿ' (Advocate Saanvi) ಎಂದು ಸೇವ್ ಮಾಡಿಕೊಂಡು ದಿನನಿತ್ಯ ಮಾತನಾಡುತ್ತಿದ್ದಳು ಎಂಬುದು ಬಯಲಾಗಿದೆ.&lt;/p&gt;&lt;img&gt;&lt;p&gt;ಪತಿ ಪ್ರವೀಣ್ ಮಾಡಿರುವ ಮತ್ತೊಂದು ಸ್ಫೋಟಕ ಆರೋಪವೆಂದರೆ, ಪ್ರಿಯಾಂಕಾ ಮತ್ತು ಮೋಹನ್ ಇಬ್ಬರೂ ಪತಿ-ಪತ್ನಿ ಎಂದು ಹೇಳಿಕೊಂಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದಕ್ಕೆ ಐವಿಎಫ್ (IVF) ಚಿಕಿತ್ಸೆಗಾಗಿ ತೆರಳಿದ್ದರು. ನನ್ನ ಮಗುವನ್ನು ಕೊಲೆ ಮಾಡಿ, ಅವರಿಬ್ಬರ ಹೊಸ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೇ ಎಂಬ ಅನುಮಾನವನ್ನು ಪ್ರವೀಣ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೋಹನ್ ತನ್ನ ಸ್ವಂತ ಪತ್ನಿ ವಾಸವಿದ್ದ ಮನೆಯಿಂದ ಕೇವಲ 300 ಮೀಟರ್ ದೂರದಲ್ಲೇ ಪ್ರಿಯಾಂಕಾಗೆ ಪ್ರತ್ಯೇಕ ವಿಲ್ಲಾ ಕೊಡಿಸಿ ಇಟ್ಟಿದ್ದನು. ಈ ಅಕ್ರಮ ಸಂಬಂಧದ ವಿಚಾರ ತಿಳಿದ ಮೋಹನ್ ಪತ್ನಿ ವಿಲ್ಲಾ ಬಳಿ ಬಂದು ದೊಡ್ಡ ಗಲಾಟೆ ಮಾಡಿದ್ದರು. ಈ ಹಿಂದೆ ತಮಗೆ ತೊಂದರೆ ನೀಡಲು ಮಹದೇವಪುರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ಸುಳ್ಳು ಕೇಸ್ ಕೂಡ ದಾಖಲಿಸಲಾಗಿತ್ತು ಎಂದು ಪತಿ ಪ್ರವೀಣ್ ಆಳಲು ತೋಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬಂಧಿತ ಆರೋಪಿ ಮೋಹನ್ ದೊಡ್ಡ ರಿಯಲ್ ಎಸ್ಟೇಟ್ ಮತ್ತು ಬಿಲ್ಡಿಂಗ್ ಕನ್&zwnj;ಸ್ಟ್ರಕ್ಷನ್ ಬಿಸಿನೆಸ್ ಹೊಂದಿದ್ದಾನೆ. ಆತ 'Saanvipriya Buildtech Pvt Ltd' ಎಂಬ ಕಂಪನಿಯಲ್ಲಿ ಪಾರ್ಟ್ನರ್ ಶಿಪ್ ಓನರ್ ಆಗಿದ್ದು, ತನ್ನ ಸಹೋದರನ ಜೊತೆ ಸೇರಿ ಉದ್ಯಮ ನಡೆಸುತ್ತಿದ್ದಾನೆ. ಹೊಸಕೋಟೆ ರಸ್ತೆಯಲ್ಲಿರುವ ಪ್ರಿಯಾಂಕಾ ಕುಟುಂಬದ ಜಮೀನಿನ ವ್ಯಾಜ್ಯದ ಕೇಸ್ ಒಂದರ ಸರಣಿಯಲ್ಲಿ ಮೋಹನ್ ಪರಿಚಯವಾಗಿ, ಹಳೆಯ ಪ್ರೀತಿ ಮತ್ತೆ ಮುಂದುವರಿಯಲು ದಾರಿಯಾಗಿತ್ತು ಎನ್ನಲಾಗಿದೆ. ಸದ್ಯ ಕೊಲೆ ಆರೋಪಿ ಮೋಹನ್ ಪೊಲೀಸರ ಅತಿಥಿಯಾಗಿದ್ದು, ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ, ಮಗುವಿನ ತಾಯಿ ಪ್ರಿಯಾಂಕಾ ಸದ್ಯ ತಲೆಮರೆಸಿಕೊಂಡಿದ್ದಾಳೆ. ಆಕೆಗಾಗಿ ಕಾಡುಗೋಡಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸದಲ್ಲಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bengaluru-kadugodi-child-vennela-murder-case-lover-confesses-to-killing-toddler-over-an-ice-cream-tantrum-gdp-dy7t6xw"/>
        </item>
        <item>
            <title><![CDATA[ಮೇಖ್ರಿ ಸರ್ಕಲ್‌-ಗಂಗಾನಗರ ನಿವಾಸಿಗಳಿಗೆ BMRCL ಶಾಕ್: ಹೆಬ್ಬಾಳ-ಸರ್ಜಾಪುರ ಮೆಟ್ರೋ ಮಾರ್ಗದ ಪ್ರಮುಖ ನಿಲ್ದಾಣ ರದ್ದು]]></title>
            <link>https://kannada.asianetnews.com/bengaluru-urban/hebbal-sarjapur-metro-veterinary-college-station-dropped-bmrcl-cost-cut-san/articleshow-dzzoss9</link>
            <guid isPermaLink="true">https://kannada.asianetnews.com/bengaluru-urban/hebbal-sarjapur-metro-veterinary-college-station-dropped-bmrcl-cost-cut-san/articleshow-dzzoss9</guid>
            <pubDate>Fri, 12 Jun 2026 18:30:11 +0530</pubDate>
            <description><![CDATA[ವೆಚ್ಚ ಕಡಿತದ ಭಾಗವಾಗಿ, ಬೆಂಗಳೂರು ಮೆಟ್ರೋದ ಹೆಬ್ಬಾಳ-ಸರ್ಜಾಪುರ ಕಾರಿಡಾರ್&zwnj;ನಿಂದ ವೆಟರ್ನರಿ ಕಾಲೇಜು ನಿಲ್ದಾಣವನ್ನು ಕೈಬಿಡಲಾಗಿದೆ. ಪರಿಷ್ಕೃತ ₹25,999 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಬಾಕಿಯಿದ್ದು, ಡಬಲ್ ಡೆಕ್ಕರ್ ವಿನ್ಯಾಸದ ಕುರಿತ ವಿವಾದದಿಂದಾಗಿ ವಿಳಂಬವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxy7jz2zqfspay1y88r3adz,imgname-namma-metro-1781268728802.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜೂ.12): &lt;/strong&gt;ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಪಡೆಯಲು ವೆಚ್ಚವನ್ನು ಕಡಿಮೆ ಮಾಡುವ ಪ್ರಕ್ರಿಯೆಯ ಭಾಗವಾಗಿ, ಬೆಂಗಳೂರು ಮೆಟ್ರೋ (Bangalore Metro) ರೈಲು ನಿಗಮ ನಿಯಮಿತ (BMRCL) ಫೇಸ್ 3A (ರೆಡ್ ಲೈನ್) ಅಡಿಯಲ್ಲಿ ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಕಾರಿಡಾರ್&zwnj;ನಿಂದ (Hebbal-Sarjapur corridor) ಒಂದು ಮೆಟ್ರೋ ನಿಲ್ದಾಣವನ್ನು ಕೈಬಿಟ್ಟಿದೆ ಎಂದು ಮನಿಕಂಟ್ರೋಲ್&zwnj; ವರದಿ ಮಾಡಿದೆ. ಮೆಖ್ರಿ ಸರ್ಕಲ್ ಮತ್ತು ಹೆಬ್ಬಾಳ ಸಮೀಪದ ಗಂಗಾನಗರ ನಡುವೆ ಈ ಹಿಂದೆ ಯೋಜಿಸಲಾಗಿದ್ದ ಪ್ರಸ್ತಾವಿತ ವೆಟರ್ನರಿ ಕಾಲೇಜು ಅಂಡರ್&zwnj;ಗ್ರೌಂಡ್&zwnj; ಮೆಟ್ರೋ ನಿಲ್ದಾಣವನ್ನು ಪರಿಷ್ಕೃತ ವಿವರವಾದ ಯೋಜನಾ ವರದಿ (DPR) ಯಿಂದ ಕೈಬಿಡಲಾಗಿದೆ ಎಂದು ಮೂಲಗಳು ಹೇಳಿವೆ. ಈ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಾ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದ್ದು, ವೆಚ್ಚವನ್ನು ತಗ್ಗಿಸುವ ಸಲುವಾಗಿ ಇದನ್ನು ಕೈಬಿಡುವ ತೀರ್ಮಾನಕ್ಕೆ ಬರಲಾಗಿದೆ.&lt;/p&gt;&lt;p&gt;ಪ್ರಸ್ತುತ ಪರಿಷ್ಕೃತ ರೂಪದಲ್ಲಿ ಸುಮಾರು 25,999 ಕೋಟಿ ರೂ. ವೆಚ್ಚದ 37 ಕಿಲೋಮೀಟರ್ ಉದ್ದದ ಹೆಬ್ಬಾಳ-ಸರ್ಜಾಪುರ ಕಾರಿಡಾರ್&zwnj;ಗೆ ಕರ್ನಾಟಕ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಆದರೆ ಇದು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಯ ಕ್ಲಿಯರೆನ್ಸ್&zwnj;ಗಾಗಿ ಕಾಯುತ್ತಿದೆ. ಈ ಕಾರಿಡಾರ್ ಆಗ್ನೇಯ ಬೆಂಗಳೂರಿನ ಪ್ರಮುಖ ಐಟಿ ಹಬ್ ಆಗಿರುವ ಸರ್ಜಾಪುರವನ್ನು ಉತ್ತರದ ಹೆಬ್ಬಾಳಕ್ಕೆ ಸಂಪರ್ಕಿಸಲಿದ್ದು, ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಮತ್ತು ಕೋರಮಂಗಲ ಸೇರಿದಂತೆ ಪ್ರಮುಖ ನಗರ ಪ್ರದೇಶಗಳ ಮೂಲಕ ಹಾದುಹೋಗುತ್ತದೆ.&lt;/p&gt;&lt;h2&gt;&lt;strong&gt;ವೆಚ್ಚ ಪರಿಷ್ಕರಣೆ ಮತ್ತು ಡಿಪಿಆರ್ ಬದಲಾವಣೆಗಳು&lt;/strong&gt;&lt;/h2&gt;&lt;p&gt;ಫೇಸ್ 3A ಯೋಜನೆಯು ಒಟ್ಟು 37.8 ಕಿಮೀ ವ್ಯಾಪಿಸಿದ್ದು, ಇದರಲ್ಲಿ 14 ಕಿಮೀ ಭೂಗತ (Underground) ಮತ್ತು 23 ಕಿಮೀ ಎತ್ತರಿಸಿದ (Elevated) ಮಾರ್ಗ ಸೇರಿದೆ. ಕರ್ನಾಟಕ ಸರ್ಕಾರವು 2025 ಜನವರಿ 10 ರಂದು 28,405 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗೆ ಅನುಮೋದನೆ ನೀಡಿ, 2025 ಜನವರಿ 15 ರಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ (MoHUA) ಡಿಪಿಆರ್ ಸಲ್ಲಿಸಿತ್ತು.&lt;/p&gt;&lt;p&gt;ಭೂಗತ ಮಾರ್ಗದ ವೆಚ್ಚವನ್ನು ಸಮರ್ಥಿಸುವಂತೆ ಕೇಂದ್ರ ಸಚಿವಾಲಯ ಸೂಚಿಸಿದ ನಂತರ, ಬಿಎಂಆರ್&zwnj;ಸಿಎಲ್ ಫ್ರೆಂಚ್ ಸಂಸ್ಥೆ 'ಸಿಸ್ಟ್ರಾ' (SYSTRA) ಮೂಲಕ ಅಂದಾಜುಗಳನ್ನು ಪರಿಶೀಲಿಸಿತು. ಈ ಸಂಸ್ಥೆಯು ಭೂಗತ ನಿಲ್ದಾಣಗಳ ಉದ್ದವನ್ನು ಕಡಿಮೆ ಮಾಡುವ ಮೂಲಕ ಯೋಜನಾ ವೆಚ್ಚವನ್ನು 25,485 ಕೋಟಿ ರೂ.ಗೆ ಇಳಿಸಿತು (2,920 ಕೋಟಿ ರೂ. ಕಡಿತ). ತದನಂತರದ ವಿನ್ಯಾಸ ಬದಲಾವಣೆಗಳು ಮತ್ತು ಒಂದು ನಿಲ್ದಾಣವನ್ನು ಕೈಬಿಡುವ ನಿರ್ಧಾರದ ನಂತರ, ಕಾರಿಡಾರ್&zwnj;ನ ಅಂದಾಜು ವೆಚ್ಚವನ್ನು 25,999 ಕೋಟಿ ರೂ. ಗೆ ಇಳಿಸಿ 2026ರ ಏಪ್ರಿಲ್ 29 ರಂದು ಕೇಂದ್ರಕ್ಕೆ ಮರುಸಲ್ಲಿಸಲಾಗಿದೆ.&lt;/p&gt;&lt;h2&gt;&lt;strong&gt;ಡಬಲ್ ಡೆಕ್ಕರ್ ವಿನ್ಯಾಸದ ಕುರಿತು ಐಐಟಿ ರೂರ್ಕಿ ಅಧ್ಯಯನ&lt;/strong&gt;&lt;/h2&gt;&lt;p&gt;ಹೆಬ್ಬಾಳ-ಸರ್ಜಾಪುರ ಕಾರಿಡಾರ್&zwnj;ನಾದ್ಯಂತ ಸಂಪೂರ್ಣ 'ಡಬಲ್ ಡೆಕ್ಕರ್' (ಮೇಲ್ಭಾಗದಲ್ಲಿ ಮೆಟ್ರೋ ಮಾರ್ಗ ಮತ್ತು ಕೆಳಭಾಗದಲ್ಲಿ ರಸ್ತೆ ಫ್ಲೈಓವರ್) ರಚನೆಗಳನ್ನು ನಿರ್ಮಿಸುವುದರಿಂದ ಆಗುವ ಪರಿಣಾಮಗಳು ಮತ್ತು ಅದರ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಎಂಆರ್&zwnj;ಸಿಎಲ್ ಈಗ ಐಐಟಿ ರೂರ್ಕಿ (IIT Roorkee) ಸಂಸ್ಥೆಯನ್ನು ನಿಯೋಜಿಸಿದೆ.&lt;/p&gt;&lt;p&gt;ಇಡೀ ಕಾರಿಡಾರ್&zwnj;ನಲ್ಲಿ ಇಂತಹ ಡಬಲ್ ಡೆಕ್ಕರ್ ವಿನ್ಯಾಸ ತರುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು, ಖಾಸಗಿ ವಾಹನಗಳ ಬಳಕೆಗೆ ಉತ್ತೇಜನ ಸಿಗಬಹುದು ಮತ್ತು ಇಷ್ಟು ದೊಡ್ಡ ವೆಚ್ಚದ ಮೆಟ್ರೋ ಯೋಜನೆಯ ಮುಖ್ಯ ಉದ್ದೇಶವೇ ಹಳ್ಳ ಹಿಡಿಯಬಹುದು ಎಂದು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ (MoHUA) ಕಳವಳ ವ್ಯಕ್ತಪಡಿಸಿತ್ತು. ಕರ್ನಾಟಕದ ಈ ಡಬಲ್ ಡೆಕ್ಕರ್ ಮೆಟ್ರೋ ನೀತಿಯಿಂದಾಗಿಯೇ ಹೆಬ್ಬಾಳ-ಸರ್ಜಾಪುರ ಕಾರಿಡಾರ್&zwnj;ಗೆ ಕೇಂದ್ರದ ಅನುಮೋದನೆ ವಿಳಂಬವಾಗಿದೆ ಎಂದು 2026 ಫೆಬ್ರವರಿ 11 ರಂದೇ ವರದಿಯಾಗಿತ್ತು. ಐಐಟಿ ರೂರ್ಕಿ ವರದಿ ಬಂದ ನಂತರ ಕೇಂದ್ರದ ಅಂತಿಮ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಡಬಲ್ ಡೆಕ್ಕರ್ ಕಾರಿಡಾರ್&zwnj;ಗಳಿಗಾಗಿ ರಾಜ್ಯದ ಪಟ್ಟು&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ ಜಾಗದ ಕೊರತೆ ಇರುವುದರಿಂದ ಮತ್ತು ಭೂಸ್ವಾಧೀನ ವೆಚ್ಚ ಹೆಚ್ಚಾಗಿರುವುದರಿಂದ ರಸ್ತೆ ಮತ್ತು ಮೆಟ್ರೋ ಮೂಲಸೌಕರ್ಯಗಳನ್ನು ಲಂಬವಾಗಿ (Vertical) ಸಂಯೋಜಿಸುವುದು ಅನಿವಾರ್ಯ ಎಂದು ರಾಜ್ಯ ಅಧಿಕಾರಿಗಳು ವಾದಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಾದರಿಯನ್ನು ಬಲವಾಗಿ ಬೆಂಬಲಿಸುತ್ತಿದ್ದಾರೆ.&lt;/p&gt;&lt;p&gt;ನಮ್ಮ ಮೆಟ್ರೋ ಫೇಸ್ 3 ಅಡಿಯಲ್ಲಿ ಹೊರವರ್ತುಲ ರಸ್ತೆ ಪಶ್ಚಿಮ (Outer Ring Road West) ಮತ್ತು ಮಾಗಡಿ ರಸ್ತೆಯ ಸುಮಾರು 44.6 ಕಿಮೀ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಕಾರಿಡಾರ್&zwnj;ಗಳನ್ನು ಯೋಜಿಸಲಾಗುತ್ತಿದೆ. ಇದರ ಜೊತೆಗೆ 37 ಕಿಮೀ ವ್ಯಾಪ್ತಿಯ ಹೆಚ್ಚುವರಿ ಡಬಲ್ ಡೆಕ್ಕರ್ ಘಟಕಕ್ಕೆ ರಾಜ್ಯ ಸರ್ಕಾರ 9,700 ಕೋಟಿ ರೂ. ಅನುಮೋದನೆ ನೀಡಿದ್ದು, ಇದರ ಸಂಪೂರ್ಣ ವೆಚ್ಚವನ್ನು ರಾಜ್ಯವೇ ಭರಿಸಲಿದೆ.&lt;/p&gt;&lt;p&gt;ಪರಿಷ್ಕೃತ ವಿನ್ಯಾಸದ ಕಾರಣ ಇದಕ್ಕೆ ಕೇಂದ್ರದಿಂದ ಹೊಸದಾಗಿ ಅನುಮೋದನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಜನವರಿ 2026 ರಲ್ಲಿ ಫೇಸ್ 3 (ಆರೆಂಜ್ ಲೈನ್) ನ 18.5 ಕಿಮೀ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದ್ದರೂ, ಕೇಂದ್ರದ ಒಪ್ಪಿಗೆ ಸಿಗದ ಕಾರಣ ಕಾಂಟ್ರಾಕ್ಟ್ ನೀಡಲು ಸಾಧ್ಯವಾಗಿಲ್ಲ.&lt;/p&gt;&lt;h2&gt;&lt;strong&gt;ಫೇಸ್ 2 ಯೋಜನೆಯ ವೆಚ್ಚ ಹೆಚ್ಚಳ&lt;/strong&gt;&lt;/h2&gt;&lt;p&gt;ಇದೇ ವೇಳೆ ಬೆಂಗಳೂರು ಮೆಟ್ರೋ ಹಂತ 2 ರ ವೆಚ್ಚ ಪರಿಷ್ಕರಣೆಯನ್ನೂ ಕೇಂದ್ರದ ಅನುಮೋದನೆಗೆ ಸಲ್ಲಿಸಲಾಗಿದೆ. ಫೆಬ್ರವರಿ 2014 ರಲ್ಲಿ ಕೇಂದ್ರ ಸರ್ಕಾರವು ಫೇಸ್ 2 ರ 72 ಕಿಮೀ ಮಾರ್ಗಕ್ಕೆ (61 ನಿಲ್ದಾಣಗಳು) 26,405.14 ಕೋಟಿ ರೂ. ಮಂಜೂರು ಮಾಡಿತ್ತು ಮತ್ತು 5 ವರ್ಷಗಳಲ್ಲಿ ಮುಗಿಸಲು ಗಡುವು ನೀಡಿತ್ತು. ಆದರೆ, ಪ್ರಸ್ತುತ ಇದರ ಪರಿಷ್ಕೃತ ಪೂರ್ಣಗೊಳ್ಳುವ ವೆಚ್ಚವು 40,425 ಕೋಟಿ ರೂ. ಗೆ ಏರಿಕೆಯಾಗಿದೆ (14,019.8 ಕೋಟಿ ರೂ. ಹೆಚ್ಚಳ).&lt;/p&gt;&lt;p&gt;ಕರ್ನಾಟಕ ಸರ್ಕಾರ ಈಗಾಗಲೇ ಅನುಮೋದಿಸಿರುವ ಭೂಸ್ವಾಧೀನ ವೆಚ್ಚಗಳನ್ನು ಹೊರತುಪಡಿಸಿ, ನಿವ್ವಳ ಹೆಚ್ಚಳವು 9,729.90 ಕೋಟಿ ರೂ. ಆಗಿದೆ ಎಂದು ಡಿ.ಕೆ. ಶಿವಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ. 2025 ಜೂನ್ 5 ರಂದು ರಾಜ್ಯ ಸರ್ಕಾರ ಅನುಮೋದಿಸಿದ ಈ ಪರಿಷ್ಕೃತ ವೆಚ್ಚದ ಪ್ರಸ್ತಾವನೆಯನ್ನು ಜೂನ್ 9 ರಂದು ಅಂತಿಮ ಕ್ಲಿಯರೆನ್ಸ್&zwnj;ಗಾಗಿ MoHUA ಗೆ ಸಲ್ಲಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-rural</category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/hebbal-sarjapur-metro-veterinary-college-station-dropped-bmrcl-cost-cut-san/articleshow-dzzoss9"/>
        </item>
        <item>
            <title><![CDATA[ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ: ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ]]></title>
            <link>https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd</link>
            <guid isPermaLink="true">https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd</guid>
            <pubDate>Wed, 10 Jun 2026 16:51:24 +0530</pubDate>
            <description><![CDATA[ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) 2026-27ನೇ ಹಣಕಾಸು ವರ್ಷದ ಆರಂಭದಲ್ಲೇ ದಾಖಲೆಯ ₹2,949.55 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಶೇ. 5ರ ರಿಯಾಯಿತಿ ವಿಸ್ತರಣೆ ಮತ್ತು 'ಬಿ-ಟು-ಎ' ಖಾತಾ ಯೋಜನೆ ಈ ಯಶಸ್ಸಿಗೆ ಕಾರಣವಾಗಿದ್ದು, ಪ್ರಾಧಿಕಾರವು ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk82q6byytxcv8x2jjv36378,imgname-----------------------2026-03-09t064657.095-1773019044222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಪ್ರಸಕ್ತ 2026-27ನೇ ಹಣಕಾಸು ವರ್ಷದ ಆರಂಭಿಕ ತಿಂಗಳುಗಳಲ್ಲೇ ಆಸ್ತಿ ತೆರಿಗೆ ಸಂಗ್ರಹದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಜಿಬಿಎ ವ್ಯಾಪ್ತಿಯ ಐದು ನಗರ ನಿಗಮಗಳಿಂದ ಏಪ್ರಿಲ್ 1 ರಿಂದ ಜೂನ್ 9 ರವರೆಗಿನ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ ಒಟ್ಟು 2,949.55 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗಿದೆ.&lt;/p&gt;&lt;p&gt;ಪ್ರಸಕ್ತ ಹಣಕಾಸು ವರ್ಷಕ್ಕೆ ಪ್ರಾಧಿಕಾರವು ನಿಗದಿಪಡಿಸಿಕೊಂಡಿರುವ ವಾರ್ಷಿಕ ರೂ. 6,000 ಕೋಟಿ ಗುರಿಯಲ್ಲಿ ಈಗಾಗಲೇ ಶೇಕಡಾ 47 ರಿಂದ 48.8 ರಷ್ಟು ಸಾಧನೆಯಾಗಿದೆ. ವರ್ಷದ ಇನ್ನುಳಿದ ಒಂಬತ್ತು ತಿಂಗಳುಗಳು ಬಾಕಿ ಇರುವಾಗಲೇ ಗುರಿಯ ಅರ್ಧದಷ್ಟು ತೆರಿಗೆ ಸಂಗ್ರಹವಾಗಿರುವುದು ಅಧಿಕಾರಿಗಳ ಆತ್ಮವಿಶ್ವಾಸವನ್ನು ದುಪ್ಪಟ್ಟುಗೊಳಿಸಿದೆ.&lt;/p&gt;&lt;h2&gt;ತೆರಿಗೆ ಸಂಗ್ರಹದ ಭರ್ಜರಿ ಏರಿಕೆಗೆ ಪ್ರಮುಖ ಕಾರಣಗಳೇನು?&lt;/h2&gt;&lt;p&gt;ಜಿಬಿಎ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ಬಾರಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಹರಿದು ಬರಲು ಪ್ರಮುಖವಾಗಿ ಎರಡು ಕಾರಣಗಳು ಕಾರಣವಾಗಿವೆ.&lt;/p&gt;&lt;h3&gt;ಶೇ. 5 ರಷ್ಟು ಆರಂಭಿಕ ರಿಯಾಯಿತಿ ವಿಸ್ತರಣೆ:&lt;/h3&gt;&lt;p&gt;ಹಣಕಾಸು ವರ್ಷದ ಆರಂಭದಲ್ಲೇ ವಾರ್ಷಿಕ ಆಸ್ತಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸುವ ಸಾರ್ವಜನಿಕರಿಗೆ ಜಿಬಿಎ ಶೇಕಡಾ 5 ರಷ್ಟು ಪ್ರೋತ್ಸಾಹಕ ರಿಯಾಯಿತಿಯನ್ನು (Rebate) ಪ್ರಕಟಿಸಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪರಿಗಣಿಸಿ ಈ ರಿಯಾಯಿತಿ ಅವಧಿಯನ್ನು ಇತ್ತೀಚೆಗೆ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಈ ಪ್ರೋತ್ಸಾಹ ಧನದ ಸೌಲಭ್ಯವನ್ನು ಪಡೆಯಲು ನಾಗರಿಕರು ಮುಗಿಬಿದ್ದಿರುವುದು ಆರಂಭಿಕ ಸಂಗ್ರಹದ ವೇಗವನ್ನು ಹೆಚ್ಚಿಸಿದೆ.&lt;/p&gt;&lt;h3&gt;'ಬಿ-ಟು-ಎ' ಖಾತಾ ಯೋಜನೆ:&lt;/h3&gt;&lt;p&gt;ದೀರ್ಘಕಾಲದಿಂದ ತೆರಿಗೆ ಜಾಲದಿಂದ ಹೊರಗುಳಿದಿದ್ದ ಆಸ್ತಿಗಳನ್ನು ಕಾನೂನುಬದ್ಧ ವ್ಯಾಪ್ತಿಗೆ ತರಲು ಜಿಬಿಎ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಬಿ-ಟು-ಎ' ಖಾತಾ ಪರಿವರ್ತನೆ ಯೋಜನೆಯು ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಬಲ ನೀಡಿದೆ.&lt;/p&gt;&lt;h3&gt;ಐದು ನಗರ ನಿಗಮಗಳ ತೆರಿಗೆ ಪ್ರಗತಿ:&lt;/h3&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ಪ್ರಮುಖ ನಗರ ನಿಗಮಗಳ ಪೈಕಿ ತೆರಿಗೆ ಪಾವತಿಯಲ್ಲಿ ವಲಯವಾರು ತೀವ್ರ ಪೈಪೋಟಿ ಕಂಡುಬಂದಿದೆ.&lt;/p&gt;&lt;p&gt;ಬೆಂಗಳೂರು ಪೂರ್ವ ನಗರ ಪಾಲಿಕೆ (BECC): ಸುಮಾರು ₹788 ರಿಂದ ₹792 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಮೂಲಕ ಇಡೀ ಪ್ರಾಧಿಕಾರದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.&lt;/p&gt;&lt;p&gt;ಪಶ್ಚಿಮ ನಗರ ನಿಗಮ: ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದೆ.&lt;/p&gt;&lt;p&gt;ಕೇಂದ್ರ ನಗರ ನಿಗಮ: ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.&lt;/p&gt;&lt;p&gt;ದಕ್ಷಿಣ ನಗರ ನಿಗಮ: ನಾಲ್ಕನೇ ಸ್ಥಾನದಲ್ಲಿದೆ.&lt;/p&gt;&lt;p&gt;ಬೆಂಗಳೂರು ಉತ್ತರ ನಗರ ಪಾಲಿಕೆ: ಕೇವಲ ₹456 ಕೋಟಿ ಸಂಗ್ರಹದೊಂದಿಗೆ ಅತ್ಯಂತ ಕಡಿಮೆ ಆದಾಯ ದಾಖಲಿಸಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.&lt;/p&gt;&lt;h2&gt;ಬಾಕಿದಾರರಿಗೆ ಬಿಸಿ ಮುಟ್ಟಿಸುತ್ತಿರುವ ಜಿಬಿಎ: ಕಠಿಣ ಕ್ರಮದ ಎಚ್ಚರಿಕೆ&lt;/h2&gt;&lt;p&gt;ಸದ್ಯ ಪ್ರಾಧಿಕಾರವು ಪ್ರತಿ ವಾರ ಸರಾಸರಿ 10 ಕೋಟಿಯಿಂದ 13 ಕೋಟಿ ರೂಪಾಯಿಗಳವರೆಗೆ ಆಸ್ತಿ ತೆರಿಗೆಯನ್ನು ನಿರಂತರವಾಗಿ ಸಂಗ್ರಹಿಸುತ್ತಿದೆ. ಇದರ ನಡುವೆಯೂ ದೀರ್ಘಕಾಲದಿಂದ ತೆರಿಗೆ ಪಾವತಿಸದ ದೊಡ್ಡ ಮೊತ್ತದ ಬಾಕಿದಾರರ (Defaulters) ವಿರುದ್ಧ ಜಿಬಿಎ ಕಠಿಣ ಕಾನೂನು ಕ್ರಮಗಳನ್ನು ಆರಂಭಿಸಿದೆ.&lt;/p&gt;&lt;p&gt;ಈಗಾಗಲೇ ಹಲವು ಆಸ್ತಿ ಮಾಲೀಕರಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದ್ದು, ತೆರಿಗೆ ಪಾವತಿಗೆ ಅಂತಿಮ ಗಡುವು ನೀಡಲಾಗಿದೆ. ಆದಾಗ್ಯೂ ಸ್ಪಂದಿಸದ ಕೆಲವು ಗಂಭೀರ ವಾಣಿಜ್ಯ ಕಟ್ಟಡಗಳ (Commercial Buildings) ಮಾಲೀಕರಿಗೆ ಶಾಕ್ ನೀಡಿರುವ ನಾಗರಿಕ ಸಂಸ್ಥೆಗಳು, ಬಾಕಿ ವಸೂಲಾತಿಗಾಗಿ ಕಟ್ಟಡಗಳನ್ನೇ ಮುಟ್ಟುಗೋಲು ಹಾಕಿಕೊಳ್ಳುವ (Seizure) ಪ್ರಕ್ರಿಯೆಯನ್ನು ಅಧಿಕೃತವಾಗಿ ತೇಜಸ್ಗೊಳಿಸಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/greater-bengaluru-authority-records-a-massive-rs2949-crore-property-tax-collection-in-just-2-5-months-gdp/articleshow-g16g2pd"/>
        </item>
        <item>
            <title><![CDATA[ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ, ಶೀಘ್ರವೇ ಪರಿಹಾರ: ಸಂಸದ CN ಮಂಜುನಾಥ್]]></title>
            <link>https://kannada.asianetnews.com/gallery/karnataka-districts/bengaluru-rural-mp-dr-cn-manjunath-says-flyover-near-railway-gate-on-anekal-attibele-road-coming-soon-mrq-gw2st56</link>
            <guid isPermaLink="true">https://kannada.asianetnews.com/gallery/karnataka-districts/bengaluru-rural-mp-dr-cn-manjunath-says-flyover-near-railway-gate-on-anekal-attibele-road-coming-soon-mrq-gw2st56</guid>
            <pubDate>Thu, 11 Jun 2026 08:25:59 +0530</pubDate>
            <description><![CDATA[&lt;p&gt;ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರು ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಸುಮಾರು ₹70 ಕೋಟಿ ವೆಚ್ಚದ ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktt95ypr2bd9v1brprf67ecs,imgname-dr-cn-manjunath--4--1781145991896.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ಅವರು ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸೂಚಿಸಿದ್ದಾರೆ. ಸುಮಾರು ₹70 ಕೋಟಿ ವೆಚ್ಚದ ಈ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿನ ರೈಲು ಗೇಟ್ ಬಳಿ ಆದಷ್ಟು ಬೇಗ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಆನೇಕಲ್ ರೈಲು ನಿಲ್ದಾಣ ಕಾಮಗಾರಿ ವೀಕ್ಷಣೆ ಹಾಗೂ ಸಾರ್ವಜನಿಕರಿಂದ ರಸ್ತೆಯ ಅಗಲೀಕರಣ, ಸ್ಟೇಷನ್ ಉನ್ನತೀಕರಣ ಸಮಸ್ಯೆ ಆಲಿಸಿ ಮಾತನಾಡಿ, ಆನೇಕಲ್ ರೈಲು ಗೇಟ್ ರಾಜ್ಯ ಹೆದ್ದಾರಿಯಲ್ಲಿದ್ದು, ನಾನೇ ಹಲವು ಬಾರಿ ಸಮಸ್ಯೆ ಅನುಭವಿಸಿದ್ದೇನೆ. ಗೇಟ್ 112 ಬಳಿ ತಾತ್ಕಾಲಿಕವಾಗಿ ತಡೆ ಕಂಬಿ ಹಾಕಲು ಸೂಚಿಸಿದ್ದು, ವಾಹನ ಸಂಚಾರ ಸ್ವಲ್ಪ ಸುಧಾರಿಸುತ್ತದೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ಇಲ್ಲಿ ಮೇಲ್ಸೇತುವೆ ನಿರ್ಮಾಣ ಅನಿವಾರ್ಯವಾಗಿದ್ದು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮತ್ತು ರಾಜ್ಯ ಸಚಿವರಾದ ಸೋಮಣ್ಣ ಅವರ ಜೊತೆ ಚರ್ಚಿಸಿರುವೆ. ಇದಕ್ಕಾಗಿ ಅಂದಾಜು ₹70 ಕೋಟಿ ಮಂಜೂರಾಗಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಡಾ.ಮಂಜುನಾಥ್ ಮಾಹಿತಿ ನೀಡಿದರು.&lt;/p&gt;&lt;img&gt;&lt;p&gt;ಇದೇ ವೇಳೆ ಚಿಂತಲಮಡಿವಾಳ, ಗೋಟಮಾರಮ್ಮನಹಳ್ಳಿ, ಲಕ್ಷ್ಮೀನಾರಾಯಣಪುರ ಸೇರಿದಂತೆ ಸುತ್ತಮುತ್ತಲಿನ ಜನವಸತಿ ಪ್ರದೇಶಗಳಿಗೆ ಸುರಕ್ಷಿತ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಹೊಸ RUB/ROB ನಿರ್ಮಾಣದ ಸಾಧ್ಯತೆಗಳ ಬಗ್ಗೆ ಸಂಸದರು ಮಾಹಿತಿ ಪಡೆದುಕೊಂಡರು. ಆನೇಕಲ್ ರಸ್ತೆ ಮತ್ತು ಹುಸ್ಕೂರು ರೈಲ್ವೆ ನಿಲ್ದಾಣಗಳ ನಡುವಿನ ರೈಲ್ವೆ ಮೂಲಸೌಕರ್ಯಗಳ ಸಮಗ್ರ ಪರಿಶೀಲನೆ ನಡೆಸಿ, ಜನರ ಅಗತ್ಯತೆಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.&lt;/p&gt;&lt;img&gt;&lt;p&gt;ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರಾದ ಎ. ನಾರಾಯಣಸ್ವಾಮಿ , ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಹುಲ್ಲಳ್ಳಿ ಶ್ರೀನಿವಾಸ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶಿವಪ್ಪ, ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಅಶೋಕ್ ರೆಡ್ಡಿ,ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಅರವಿಂದ್ ರೆಡ್ಡಿ, ಎನ್&zwnj;ಡಿಎ ಮೈತ್ರಿಕೂಟದ ಮುಖಂಡರು ಉಪಸ್ಥಿತರಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bengaluru-rural-mp-dr-cn-manjunath-says-flyover-near-railway-gate-on-anekal-attibele-road-coming-soon-mrq-gw2st56"/>
        </item>
        <item>
            <title><![CDATA[ದಕ್ಷಿಣ ಭಾರತದ ರೈಲ್ವೆ ಅಭಿವೃದ್ಧಿಗೆ 448 ಕೋಟಿ, ಪುಣೆ-ಬೆಂಗಳೂರು-ಕನ್ಯಾಕುಮಾರಿ ಹಳಿ ಮೇಲ್ದರ್ಜೆಗೆ 162.57 ಕೋಟಿ!]]></title>
            <link>https://kannada.asianetnews.com/gallery/state/indian-railways-approves-rs448-cr-for-major-south-india-route-upgrades-including-karnatakas-bengaluru-tumakuru-gdp-hs2t0lb</link>
            <guid isPermaLink="true">https://kannada.asianetnews.com/gallery/state/indian-railways-approves-rs448-cr-for-major-south-india-route-upgrades-including-karnatakas-bengaluru-tumakuru-gdp-hs2t0lb</guid>
            <pubDate>Wed, 10 Jun 2026 18:35:55 +0530</pubDate>
            <description><![CDATA[&lt;p&gt;ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್&zwnj;ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ. &amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt31x002f35r72n6m3ej59d9,imgname-indian-railways-1780366606338.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್&zwnj;ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ. &amp;nbsp;&lt;/p&gt;&lt;img&gt;&lt;p&gt;ದಕ್ಷಿಣ ಭಾರತದ ಪ್ರಮುಖ ರೈಲ್ವೆ ಕಾರಿಡಾರ್&zwnj;ಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆ ಮತ್ತು ರೈಲು ವಿಳಂಬದ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ ಸಿಗಲಿದೆ. ದಕ್ಷಿಣ ಮಧ್ಯ ರೈಲ್ವೆ ಮತ್ತು ನೈಋತ್ಯ ರೈಲ್ವೆ ವ್ಯಾಪ್ತಿಯ ಎರಡು ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು (ಟ್ರಾಕ್ಷನ್ ಸಿಸ್ಟಮ್) ಆಧುನೀಕರಿಸಲು ಭಾರತೀಯ ರೈಲ್ವೆಯು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.&lt;/p&gt;&lt;p&gt;ದಕ್ಷಿಣ ಮಧ್ಯ ರೈಲ್ವೆಯ ಮಹಬೂಬ್&zwnj;ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಬೆಂಗಳೂರು-ತುಮಕೂರು ವಿಭಾಗಗಳು ಈ ಯೋಜನೆಯಡಿ ನವೀಕರಣಗೊಳ್ಳಲಿವೆ. ರೈಲುಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಕಾರ್ಯಾಚರಣೆಯಲ್ಲಿ ವಿಶ್ವಾಸಾರ್ಹತೆ ತರುವುದು ಮತ್ತು ಪ್ರಯಾಣಿಕ ಹಾಗೂ ಸರಕು ಸಾಗಣೆಗೆ ವೇಗ ನೀಡುವುದು ಈ ಹೆಜ್ಜೆಯ ಮುಖ್ಯ ಉದ್ದೇಶವಾಗಿದೆ.&lt;/p&gt;&lt;img&gt;&lt;p&gt;ಈ ಯೋಜನೆಯ ಮೂಲಕ ಹಳೆಯ ವಿದ್ಯುತ್ ವ್ಯವಸ್ಥೆಯ ಜಾಗದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದ್ದು, ಇದು ಭವಿಷ್ಯದ ಹೆಚ್ಚುವರಿ ಸಂಚಾರದ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಲಿದೆ.&lt;/p&gt;&lt;p&gt;ರೈಲ್ವೆ ಸಚಿವಾಲಯವು ಎರಡೂ ಮಾರ್ಗಗಳಲ್ಲಿ ಸದ್ಯ ಚಾಲ್ತಿಯಲ್ಲಿರುವ 1x25 kV ವಿದ್ಯುತ್ ಎಳೆತ ವ್ಯವಸ್ಥೆಯನ್ನು ಅತ್ಯಾಧುನಿಕ 2x25 kV ವ್ಯವಸ್ಥೆಗೆ ಮೇಲ್ದರ್ಜೆಗೇರಿಸಲು ಹಸಿರು ನಿಶಾನೆ ತೋರಿಸಿದೆ. ಇಲಾಖೆಯ ಪ್ರಕಾರ, ಈ ಹೊಸ ತಂತ್ರಜ್ಞಾನವು ರೈಲುಗಳ ಸುಗಮ ಸಂಚಾರಕ್ಕೆ ಹೆಚ್ಚು ಸ್ಥಿರ ಹಾಗೂ ದಕ್ಷತೆಯಿಂದ ಕೂಡಿದ ವಿದ್ಯುತ್ ಸರಬರಾಜನ್ನು ಖಚಿತಪಡಿಸುತ್ತದೆ.&lt;/p&gt;&lt;img&gt;&lt;p&gt;ಬೆಂಗಳೂರು-ತುಮಕೂರು ರೈಲು ವಿಭಾಗವು ಪುಣೆ-ಹುಬ್ಬಳ್ಳಿ-ಚಿಕ್ಕಜಾಜೂರು-ಬೀರೂರು-ತುಮಕೂರು-ಬೆಂಗಳೂರು-ಸೇಲಂ- ಕನ್ಯಾಕುಮಾರಿ ಕಾರಿಡಾರ್&zwnj;ನ ಪ್ರಮುಖ ಭಾಗವಾಗಿದೆ. ಇದು ದಕ್ಷಿಣದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ಅತ್ಯಂತ ಜನನಿಬಿಡ ನೆಟ್&zwnj;ವರ್ಕ್ (High Utilization Network - HUN Route-10) ಎನಿಸಿಕೊಂಡಿದೆ.&lt;/p&gt;&lt;p&gt;ಸುಮಾರು 120 ಹಳಿ ಕಿಲೋಮೀಟರ್&zwnj;ಗಳಷ್ಟು ವ್ಯಾಪಿಸಲಿರುವ ಈ ನವೀಕರಣ ಯೋಜನೆಯಿಂದಾಗಿ, ಕರ್ನಾಟಕ ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ರೈಲುಗಳ ದಟ್ಟಣೆ ಕಡಿಮೆಯಾಗಲಿದೆ. ಅಲ್ಲದೆ, ಸಾರ್ವಜನಿಕರ ಪ್ರಯಾಣ ಹಾಗೂ ಸರಕು ಸಾಗಣೆ ಮತ್ತಷ್ಟು ಸುಗಮವಾಗಲಿದೆ.&lt;/p&gt;&lt;img&gt;&lt;p&gt;ಮಹಬೂಬ್&zwnj;ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗವು ಧರ್ಮಾವರಂ, ಧೋನೆ, ಸಿಕಂದರಾಬಾದ್, ಮುದ್ಖೇಡ್, ಇಂದೋರ್ ಮತ್ತು ಅಜ್ಮೀರ್ ನಗರಗಳನ್ನು ಜೋಡಿಸುವ ಹೈ-ಡೆನ್ಸಿಟಿ ನೆಟ್&zwnj;ವರ್ಕ್ (ಅತಿ ಹೆಚ್ಚು ಜನದಟ್ಟಣೆಯ ಮಾರ್ಗ) ಆಗಿದೆ.&lt;/p&gt;&lt;p&gt;ಹೊಸ ಎಳೆತ ವ್ಯವಸ್ಥೆಯು ಈ ಮಾರ್ಗದ ಸಾಮರ್ಥ್ಯ ಮತ್ತು ದಕ್ಷತೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಇದರಿಂದ ಸರಕು ಸಾಗಣೆ ರೈಲುಗಳ ವೇಗ ಹೆಚ್ಚಲಿದ್ದು, ಈ ಭಾಗದ ವ್ಯಾಪಾರ ಮತ್ತು ಕೈಗಾರಿಕಾ ವಲಯಕ್ಕೆ ಭಾರಿ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;img&gt;&lt;p&gt;ಸ್ಥಿರ ವಿದ್ಯುತ್ ಸರಬರಾಜು: ನವೀಕೃತ 2x25 kV ವ್ಯವಸ್ಥೆಯು ರೈಲುಗಳಿಗೆ ನಿರಂತರ ಹಾಗೂ ಬಲಿಷ್ಠ ವಿದ್ಯುತ್ ಸಂಪರ್ಕವನ್ನು ಒದಗಿಸುತ್ತದೆ. ತಾಂತ್ರಿಕ ಅಡಚಣೆಗಳು ಕಡಿಮೆಯಾಗುತ್ತವೆ.&lt;/p&gt;&lt;p&gt;ಹೆಚ್ಚಿನ ರೈಲುಗಳ ಸಂಚಾರ: ಮುಂಬರುವ ದಿನಗಳಲ್ಲಿ ಈ ಮಾರ್ಗಗಳಲ್ಲಿ ರೈಲ್ವೆ ಇಲಾಖೆಗೆ ಮತ್ತಷ್ಟು ಹೊಸ ರೈಲುಗಳನ್ನು ಓಡಿಸಲು ಸಾಧ್ಯವಾಗುತ್ತದೆ.&lt;/p&gt;&lt;p&gt;ಸಮಯ ಉಳಿತಾಯ: ಕಾರ್ಯಾಚರಣೆಯ ದಕ್ಷತೆ ಹೆಚ್ಚಳದಿಂದಾಗಿ ಪ್ರಯಾಣಿಕರು ನಿಗದಿತ ಸಮಯಕ್ಕೆ ಸರಿಯಾಗಿ ತಲುಪಬಹುದು ಹಾಗೂ ಸರಕು ಸಾಗಣೆಯೂ ವೇಗವಾಗಿ ನಡೆಯುತ್ತದೆ.&lt;/p&gt;&lt;img&gt;&lt;p&gt;ದಕ್ಷಿಣ ರೈಲ್ವೆ ಅಭಿವೃದ್ಧಿಗೆ ಒಟ್ಟು ರೂ. 447.58 ಕೋಟಿ ಅಂದರೆ ಸುಮಾರು 448 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ರೈಲುಗಳ ಸಾಮರ್ಥ್ಯ, ದಕ್ಷತೆ ಮತ್ತು ಸಂಚಾರದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಬೃಹತ್ ಜಂಟಿ ಯೋಜನೆ ಇದಾಗಿದೆ&lt;/p&gt;&lt;p&gt;ಇದರಲ್ಲಿ ನೈರುತ್ಯ ರೈಲ್ವೆ ವಿಭಾಗವಾದ ಬೆಂಗಳೂರು - ತುಮಕೂರು ರೈಲು ಅಭಿವೃದ್ಧಿಗೆ ರೂ. 162.57 ಕೋಟಿ ಮೀಸಲಿಡಲಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ಆರ್ಥಿಕ ಮತ್ತು ಕೈಗಾರಿಕಾ ಕೇಂದ್ರಗಳನ್ನು ಸಂಪರ್ಕಿಸುವ ನಿರಂತರ ಕಾರ್ಯನಿರತ ಕಾರಿಡಾರ್.&lt;/p&gt;&lt;img&gt;&lt;p&gt;ಮಹಬೂಬ್&zwnj;ನಗರ - ಸಿಕಂದರಾಬಾದ್ - ಮೇಡ್ಚಲ್ ದಕ್ಷಿಣ ಮಧ್ಯ ರೈಲ್ವೆ (South Central Railway) ವಿಭಾಗಕ್ಕೆ ಸೇರಿದ್ದು, ರೂ. 285.01 ಕೋಟಿ ಹೂಡಿಕೆ ಮಾಡಲಾಗಿದೆ. ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಮಾರ್ಗವಾಗಿದ್ದು, ಭಾರೀ ಪ್ರಮಾಣದ ಪ್ರಯಾಣಿಕ ಹಾಗೂ ಸರಕು ಸಾಗಣೆ ಅವಲಂಬಿತವಾದ ಮಾರ್ಗವಾಗಿದೆ.&lt;/p&gt;&lt;p&gt;ದಿನನಿತ್ಯ ರೈಲು ಪ್ರಯಾಣ ಮಾಡುವ ಸಾರ್ವಜನಿಕರಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ರೈಲ್ವೆಯನ್ನು ನೆಚ್ಚಿಕೊಂಡಿರುವ ಉದ್ಯಮಗಳಿಗೆ ಈ ಹೂಡಿಕೆಯು ವರದಾನವಾಗಲಿದೆ. ಇದು ಮುಂಬರುವ ವರ್ಷಗಳಲ್ಲಿ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಠ ಮತ್ತು ಸುಸಜ್ಜಿತ ರೈಲ್ವೆ ಜಾಲವನ್ನು ನಿರ್ಮಿಸಲು ದಾರಿದೀಪವಾಗಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/indian-railways-approves-rs448-cr-for-major-south-india-route-upgrades-including-karnatakas-bengaluru-tumakuru-gdp-hs2t0lb"/>
        </item>
        <item>
            <title><![CDATA[ನೆಲಮಂಗಲದಲ್ಲಿ ಕೊಳಕುಮಂಡಲ ಬೆನ್ನಲ್ಲೇ ನಾಗರಹಾವಿನ ಮರಿಗಳು ಪ್ರತ್ಯಕ್ಷ: ಜನರಿಗೆ ಎಚ್ಚರಿಕೆ ಕೊಟ್ಟ ಉರಗ ತಜ್ಞರು!]]></title>
            <link>https://kannada.asianetnews.com/gallery/karnataka-districts/cobra-pups-found-after-toxic-russell-viper-snakes-nelamangala-reptile-experts-alert-people-sat-hu2p5vo</link>
            <guid isPermaLink="true">https://kannada.asianetnews.com/gallery/karnataka-districts/cobra-pups-found-after-toxic-russell-viper-snakes-nelamangala-reptile-experts-alert-people-sat-hu2p5vo</guid>
            <pubDate>Tue, 09 Jun 2026 16:11:37 +0530</pubDate>
            <description><![CDATA[ನೆಲಮಂಗಲದಲ್ಲಿ ಕೊಳಕುಮಂಡಲ ಹಾವುಗಳ ಬಳಿಕ ಇದೀಗ ನಾಗರಹಾವುಗಳ ಮರಿಗಳು ಪತ್ತೆಯಾಗಿವೆ. ಇದು ಹಾವುಗಳ ಮರಿಮಾಡುವ ಸಮಯವಾಗಿದ್ದು, ಮನೆಯ ಸುತ್ತಮುತ್ತ ಸೇರಿಕೊಳ್ಳುವ ವಿಷಕಾರಿ ಮರಿಗಳಿಂದ ಎಚ್ಚರದಿಂದಿರಲು ಉರಗ ತಜ್ಞರು ಸಲಹೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktnwkjzpystdg8v59vzkz5r1,imgname-nelamangala-cobra-snake-pups-found--2--1780998589430.jpg" type="image/jpeg" height="390" width="690"/>
            <content:encoded><![CDATA[ನೆಲಮಂಗಲದಲ್ಲಿ ಕೊಳಕುಮಂಡಲ ಹಾವುಗಳ ಬಳಿಕ ಇದೀಗ ನಾಗರಹಾವುಗಳ ಮರಿಗಳು ಪತ್ತೆಯಾಗಿವೆ. ಇದು ಹಾವುಗಳ ಮರಿಮಾಡುವ ಸಮಯವಾಗಿದ್ದು, ಮನೆಯ ಸುತ್ತಮುತ್ತ ಸೇರಿಕೊಳ್ಳುವ ವಿಷಕಾರಿ ಮರಿಗಳಿಂದ ಎಚ್ಚರದಿಂದಿರಲು ಉರಗ ತಜ್ಞರು ಸಲಹೆ ನೀಡಿದ್ದಾರೆ.&lt;img&gt;&lt;p&gt;ಕಳೆದ ಮೇ ತಿಂಗಳ 24ರಂದು ನೆಲಮಂಗಲ ಪಟ್ಟಣದಲ್ಲಿ ರಾಶಿಯಷ್ಟು ಕೊಳಕುಮಂಡಲ ಹಾವಿನ ಮರಿಗಳು ಪತ್ತೆಯಾಗಿದ್ದವು. ಅವುಗಳನ್ನು ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರಿಸಿ ಸ್ಥಳೀಯರ ಪ್ರಾಣಭಯ ದೂರು ಮಾಡಲಾಗಿತ್ತು. ಇದೀಗ ಮತ್ತೊಂದು ಭಾರೀ ವಿಷಕಾರಿ ಹಾವಿನ ಜಾತಿಗೆ ಸೇರಿದ ಮತ್ತೊಂದು ನಾಗರಹಾವಿನ ಮರಿಗಳು ಇದೀಗ ಪತ್ತೆಯಾಗಿವೆ.&lt;/p&gt;&lt;img&gt;&lt;p&gt;ಉರಗ ರಕ್ಷಕ ವಿಶ್ವನಾಥ್ ಅವರು ನೆಲಮಂಗಲ ಪಟ್ಟಣದ ಜನವಸತಿ ಪ್ರದೇಶದಲ್ಲಿದ್ದ 8ಕ್ಕೂ ಅಧಿಕ ನಾಗರಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಹಾವಿನ ಮರಿಗಳು ಮೊಟ್ಟೆಯೊಡೆದು ಹೊರಗೆ ಬರುವ ಅವಧಿಯಾಗಿದೆ. ಈ ಸಂದರ್ಭದಲ್ಲಿ ಹಾವಿನ ಮರಿಗಳು ಮನೆಯ ಕಾಂಪೌಂಡ್&zwnj; ಒಳಗೆ ಬೆಚ್ಚಗಿರುವ ಪ್ರದೇಶಗಳಿಗೆ ಬಂದು ಸೇರಿಕೊಳ್ಳುತ್ತವೆ.&amp;nbsp;&lt;/p&gt;&lt;p&gt;ಮನೆಯ ಮೆಟ್ಟಿಲುಗಳ ಕೆಳಗೆ ಇಟ್ಟಿರುವ ಅನಗತ್ಯ ವಸ್ತುಗಳಿರುವ ಜಾಗ, ಬೈಕ್&zwnj;ಗಳು, ಚಪ್ಪಲಿ ಸ್ಟ್ಯಾಂಡ್&zwnj;ಗಳು ಹಾಗೂ ಮನೆಯ ಹೊರಗೆ ಬಿಟ್ಟಿರುವ ಶೂಗಳಲ್ಲಿ ಹಾವಿನ ಮರಿಗಳು ಹೋಗಿ ಸೇರಿಕೊಳ್ಳುತ್ತವೆ.&lt;/p&gt;&lt;img&gt;&lt;p&gt;ಇನ್ನು ಈ ಬಗ್ಗೆ ತಿಳಿಯದ ಮಕ್ಕಳು ಹಾವಿರುವ ಜಾಗದಲ್ಲಿ ಹೋಗಿ ಕಚ್ಚಿಸಿಕೊಂಡು ಹಾನಿಗೊಳಗಾಗುತ್ತವೆ. ಇನ್ನು ಮನೆಯ ಹೊರಗಿಟ್ಟ ಸಿಲಿಂಡರ್ ಒಳಗೂ ಹಾವಿನ ಮರಿಗಳು ಸೇರಿಕೊಳ್ಳುತ್ತಿವೆ. ಹೀಗಾಗಿ, ಮನೆಯಲ್ಲಿ ಮಹಿಳೆಯರು ಎಚ್ಚರಿಕೆಯಿಂದ ಇರಬೇಕು.&lt;/p&gt;&lt;img&gt;&lt;p&gt;ಜೂನ್ ಹಾಗೂ ಜುಲೈ ತಿಂಗಳಲ್ಲಿ ನಮ್ಮ ದೇಶದ ಅತ್ಯಂತ ವಿಷಕಾರಿ 4 ಹಾವಿನ ಜಾತಿಗಳಾದ ನಾಗರಹಾವು ಹಾಗೂ ಕೊಳಕುಮಂಡಲ ಹಾವುಗಳು ಮರಿ ಮಾಡುವ ಅವಧಿಯಾಗಿದೆ. ಜೊತೆಗೆ ಕೇರೆ ಹಾವುಗಳು ಸೇರಿ ಇತರೆ ಜಾತಿಯ ಹಾವುಗಳೂ ಮರಿ ಹಾಕುತ್ತವೆ. ಹೀಗಾಗಿ, ಮಳೆಗಾಲ ಮುಗಿಯುವವರೆಗೆ ಹುಷಾರಾಗಿರಬೇಕು ಎಂದು ಉರಗ ತಜ್ಞರು ಸಲಹೆ ನಿಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ಕೊಳಕುಮಂಡಲ ಹಾವುಗಳು ಮೊಟ್ಟೆಯನ್ನಿಡದೇ ನೇರವಾಗಿ ಮರಿಗಳನ್ನು ಹಾಕುತ್ತವೆ. ಒಮ್ಮೆ ಕೊಳಕುಮಂಡಲ ಹಾವುಗಳು ಕನಿಷ್ಠ 40 ರಿಂದ 80 ಮರಿಗಳನ್ನು ಹಾಕುತ್ತದೆ. ಆಗ ತಾನೇ ಹುಟ್ಟಿದ ಹಾವಿನ ಮರಿಗಳೂ ಕೂಡ ಭಾರೀ ವಿಷಕಾರಿ ಆಗಿರುತ್ತವೆ. ಈ ಮರಿ ಹಾವುಗಳು ಕಚ್ಚಿದರೂ ಸಾವು ಸಂಭವಿಸುವುದು ಖಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ನೆಲಮಂಗಲದ ಫಾರ್ಮ್&zwnj;ಹೌಸ್ ಒಂದರ ಬಳಿ ಸುಮಾರು 20 ಕೊಳಕುಮಂಡಲ ಹಾವಿನ ಮರಿಗಳನ್ನು ರಕ್ಷಣೆ ಮಾಡಲಾಗಿತ್ತು. ಸುಮಾರು 45ಕ್ಕಿಂತ ಹೆಚ್ಚಿದ್ದ ಹಾವಿನ ಮರಿಗಳ ಪೈಕಿ ಕೇವಲ 20 ಮರಿಗಳನ್ನು ರಕ್ಷಣೆ ಮಾಡಿ ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿಡಲಾಗಿತ್ತು. ಇದೀಗ ಒಂದು ವಾರಗಳ ಅಂತರದಲ್ಲಿನಾಗರ ಹಾವುಗಳ ಮರಿಗಳು ಕಂಡುಬಂದಿವೆ.&lt;/p&gt;&lt;p&gt;ವಿಡಿಯೋ ನೋಡಲು &lt;strong&gt;ಇಲ್ಲಿ ಕ್ಲಿಕ್ ಮಾಡಿ&lt;/strong&gt;&lt;/p&gt;]]></content:encoded>
            <category>bengaluru-rural</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/cobra-pups-found-after-toxic-russell-viper-snakes-nelamangala-reptile-experts-alert-people-sat-hu2p5vo"/>
        </item>
        <item>
            <title><![CDATA[2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ]]></title>
            <link>https://kannada.asianetnews.com/karnataka-districts/19-year-legal-battle-ends-supreme-court-orders-rs25-lakh-compensation-to-bengaluru-auto-driver-paralyzed-in-2007-gdp/articleshow-i6kz5ko</link>
            <guid isPermaLink="true">https://kannada.asianetnews.com/karnataka-districts/19-year-legal-battle-ends-supreme-court-orders-rs25-lakh-compensation-to-bengaluru-auto-driver-paralyzed-in-2007-gdp/articleshow-i6kz5ko</guid>
            <pubDate>Fri, 12 Jun 2026 09:41:54 +0530</pubDate>
            <description><![CDATA[19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ದೀರ್ಘಕಾಲದ ಕಾನೂನು ಹೋರಾಟದ ನಂತರ, ಚಾಲಕನಿಗೆ ಬಡ್ಡಿ ಸಮೇತ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqkt7kfbsjcnj8q3g098s9es,imgname-mixcollage-02-may-2026-01-12-pm-2120-1777707765227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ&lt;/strong&gt;: 19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆಟೋದ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ಉಂಟಾದ ಅಪಘಾತದಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ 25 ಲಕ್ಷ ರು. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್&zwnj; ತೀರ್ಪು ನೀಡಿದೆ.&lt;/p&gt;&lt;p&gt;&amp;nbsp;2007ರ ಜೂ.7ರಂದು ಬೆಂಗಳೂರಿನ ಆಟೋ ಚಾಲಕ ಕೆ.ಕೆ. ಉಮೇಶ್&zwnj; ಕುಮಾರ್&zwnj; ಎನ್ನುವವರು ಮಳೆ ಬರುತ್ತಿದ್ದ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದ ಸಮೀಪದಲ್ಲಿರುವ ಹಳೆಯ ಮರದ ಬಳಿ ಆಟೋ ನಿಲ್ಲಿಸಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಮರದ ಕೊಂಬೆ ಅವರ ರಿಕ್ಷಾ ಮೇಲೆ ಬಿದ್ದು ಸಂಪೂರ್ಣ ಜಖಂ ಆಗಿತ್ತು. ಈ ವೇಳೆ ಉಮೇಶ್&zwnj; ಬೆನ್ನು ಮೂಳೆಗೆ ಪೆಟ್ಟಾಗಿತ್ತು. ಇದರಿಂದ ಅವರು ಸಂಪೂರ್ಣ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.&lt;/p&gt;&lt;h2&gt;ಹೈಕೋರ್ಟ್&zwnj; ನಲ್ಲಿ ವಜಾಗೊಂಡಿದ್ದ ಅರ್ಜಿ&lt;/h2&gt;&lt;p&gt;ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆಗಿನ ಬಿಬಿಎಂಪಿ (ಈಗಿನ ಜಿಬಿಎ) ಆಯಕ್ತರನ್ನು ಹೊಣೆಗಾರರನ್ನಾಗಿ ಮಾಡಿ ಅರ್ಜಿ ಸಲ್ಲಿಸಿ, 50 ಲಕ್ಷ ರು. ಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರು, ಆದರೆ ಕರ್ನಾಟಕ ಹೈಕೋರ್ಟ್&zwnj; ಅರ್ಜಿ ವಿಳಂಬದ ಕಾರಣ ನೀಡಿ ವಜಾಗೊಳಿಸಿತ್ತು.&lt;/p&gt;&lt;p&gt;ಬಳಿಕ ಈ ಪ್ರಕರಣ ಸುಪ್ರೀಂ ಕೋರ್ಟ್&zwnj; ಮೆಟ್ಟಿಲೇರಿತ್ತು. ಆಗ ಸರ್ವೋಚ್ಚ ನ್ಯಾಯಾಲಯ ಮತ್ತೆ ಅದನ್ನು ಹೈಕೋರ್ಟ್&zwnj;ಗೆ ವರ್ಗಾಯಿಸಿ 17.10 ಲಕ್ಷ ರು. ಪರಿಹಾರಕ್ಕೆ ಘೋಷಿಸಿತ್ತು. ಬಳಿಕ ಹೈಕೋರ್ಟ್&zwnj; ಬಿಬಿಎಂಪಿ, ತೋಟಗಾರಿಕೆ ಇಲಾಖೆ ಮತ್ತು ಆಟೋರಿಕ್ಷಾ ವಿಮಾದಾರರು ಕ್ರಮವಾಗಿ ಶೇ.25, ಶೇ.25, ಶೇ.50ರಷ್ಟು ಪರಿಹಾರ ನೀಡಬೇಕೆಂದು ಸೂಚಿಸಿತ್ತು.&lt;/p&gt;&lt;h2&gt;ಬಡ್ಡಿ ಸಮೇತ 25 ಲಕ್ಷ ರು. ನೀಡಲು ಆದೇಶ&lt;/h2&gt;&lt;p&gt;ಆದರೆ ಇದನ್ನು ಪ್ರಶ್ನಿಸಿ ಅಂದಿನ ಬಿಬಿಎಂಪಿ ಸುಪ್ರೀಂ ಮೊರೆ ಹೋಗಿತ್ತು. &lsquo;ನೈಸರ್ಗಿಕ ಘಟನೆ, ದೇವರ ಕೃತ್ಯಕ್ಕೆ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ&rsquo; ಎಂದು ನ್ಯಾಯಾಲಯದ ಗಮನಕ್ಕೆ ತಂದಿತ್ತು. ಈ ಅರ್ಜಿ ವಿಚಾರಣೆ ಕೈಗೊಂಡ ಸುಪ್ರೀಂ ದ್ವಿಸದಸ್ಯ ಪೀಠ, &lsquo;ಪ್ರತಿಯೊಂದು ಮರದ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಆದರೆ ಅಪಾಯವಾಗದಂತೆ ಮರಗಳನ್ನು ನಿರ್ವಹಿಸುವುದು ಅಧಿಕಾರಿಗಳ ಕರ್ತವ್ಯ. ಮಳೆ ಬೀಳುವುದು ನಿರೀಕ್ಷಿತ, ಹಾಗಾಗಿ ರಸ್ತೆ ಬದಿಗಳಲ್ಲಿರುವ ಮರಗಳ ಗುಣಮಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು&rsquo; ಎಂದು ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;ಜತೆಗೆ ಈ ಹಿಂದೆ ನೀಡಿದ್ದ 17.10 ಲಕ್ಷ ರು. ಪರಿಹಾರ ಮೊತ್ತವನ್ನು ಬಡ್ಡಿ ಸಮೇತ 25 ಲಕ್ಷ ರು. ಆಗಿ ಹೈಕೋರ್ಟ್&zwnj; ನಿರ್ಧರಿಸಿದ್ದ ಅನುಪಾತದಲ್ಲಿ 4 ವಾರಗಳೊಳಗೆ ಪ್ರತಿವಾದಿಯ ಬ್ಯಾಂಕ್&zwnj;ಖಾತೆಗೆ ಜಮಾ ಮಾಡಲು ಆದೇಶಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/19-year-legal-battle-ends-supreme-court-orders-rs25-lakh-compensation-to-bengaluru-auto-driver-paralyzed-in-2007-gdp/articleshow-i6kz5ko"/>
        </item>
        <item>
            <title><![CDATA[ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ: ರೈಲ್ವೆ ರಾಜ್ಯ ಸಚಿವ ಸೋಮಣ್ಣ]]></title>
            <link>https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3</link>
            <guid isPermaLink="true">https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3</guid>
            <pubDate>Wed, 10 Jun 2026 13:32:50 +0530</pubDate>
            <description><![CDATA[ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು ಮತ್ತು ತುಮಕೂರು ಭಾಗದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ, ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವನ್ನು 2028ರೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಘೋಷಿಸಿದರು. ಜೊತೆಗೆ, ತುಮಕೂರು-ರಾಯದುರ್ಗ ಯೋಜನೆ ಮತ್ತು 32 ಆರ್&zwnj;ಒಬಿ/ಆರ್&zwnj;ಯುಬಿ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01ktr8pzmb8s9xfx9jv0bed22g,imgname-v-somanna--1--1781078392458.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ಭಾಗಗಳಲ್ಲಿ ನಡೆಯುತ್ತಿರುವ ಹಾಗೂ ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳವಾರ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸಮೀಕ್ಷಾ ಸಭೆ ನಡೆಸಿದರು. ಈ ಪರಿಶೀಲನೆಯಲ್ಲಿ ರಸ್ತೆ ಮೇಲ್ಸೇತುವೆಗಳು (ROB), ರಸ್ತೆ ಕೆಳಸೇತುವೆಗಳು (RUB) ಮತ್ತು ಪಾದಚಾರಿ ಮೇಲ್ಸೇತುವೆಗಳು (FOB) ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳು ಒಳಗೊಂಡಿದ್ದವು. ಈ ವೇಳೆ ಕರ್ನಾಟಕ ಬಹುನಿರೀಕ್ಷಿತ ಹೊಸ ರೈಲು ಯೋಜನೆಯಾದ ತುಮಕೂರು ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗವು 2028ರಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ.&lt;/p&gt;&lt;h2&gt;ಸಚಿವರ ಸ್ವಕ್ಷೇತ್ರ ತುಮಕೂರಿನಲ್ಲಿ 32 ಆರ್&zwnj;ಒಬಿ, ಆರ್&zwnj;ಯುಬಿ ಕಾಮಗಾರಿ: 2026-27ರ ಗಡುವು&lt;/h2&gt;&lt;p&gt;ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 32 ROB ಮತ್ತು RUB ಕಾಮಗಾರಿಗಳು ಪ್ರಗತಿಯಲ್ಲಿದ್ದು, ಪಂಡಿತನಹಳ್ಳಿ, ಮೈದಾಳ, ಬಡ್ಡಿಹಳ್ಳಿ, ಬಟವಾಡಿ, ಹೆಗ್ಗೆರೆ, ಮಲ್ಲಸಂದ್ರ, ಬೆಂಚೆಗೆರೆ, ನಿಟ್ಟೂರು-ಮೈಸೂರು ಮಾರ್ಗ, ನಂದಿಹಳ್ಳಿ ಗೇಟ್ ಹಾಗೂ ಹಾಸನ ಮತ್ತು ಬಿದಿರೆಗುಡಿ ಕಡೆಗೆ ಬಿಎಚ್ ರಸ್ತೆಯಲ್ಲಿನ ಸೇತುವೆಗಳು ಪ್ರಮುಖವಾಗಿವೆ. ಈ ಎಲ್ಲಾ ಕಾಮಗಾರಿಗಳನ್ನು 2026&ndash;27ರೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.&lt;/p&gt;&lt;h2&gt;ರೂ. 1,801 ಕೋಟಿ ವೆಚ್ಚದ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ&lt;/h2&gt;&lt;p&gt;ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಇಲಾಖೆಯ ನಡುವೆ 50:50 ವೆಚ್ಚ ಹಂಚಿಕೆ ಮಾದರಿಯಡಿಯಲ್ಲಿ ಒಟ್ಟು 1,801 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳ್ಳುತ್ತಿರುವ 191 ಕಿ.ಮೀ. ಉದ್ದದ ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯನ್ನು ಸಚಿವರು ಸೂಕ್ಷ್ಮವಾಗಿ ಪರಿಶೀಲಿಸಿದರು. ಈ ಯೋಜನೆಯು ಮಧ್ಯ ಕರ್ನಾಟಕದ ಕನೆಕ್ಟಿವಿಟಿಗೆ ಹೊಸ ಕ್ರಾಂತಿಯನ್ನೇ ತರಲಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯಲ್ಲಿನ ಶೇ.92ಕ್ಕಿಂತ ಹೆಚ್ಚು ಭಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿರುವುದಾಗಿ ಸಚಿವರು ತಿಳಿಸಿದರು. ಉರುಕೆರೆ&ndash;ತಿಮ್ಮರಾಜನಹಳ್ಳಿ (13.31 ಕಿ.ಮೀ.) ವಿಭಾಗ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಸಿದ್ಧವಾಗಿದೆ. ಸಂಪೂರ್ಣ ಯೋಜನೆಯನ್ನು ಫೆಬ್ರವರಿ 2028ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.&lt;/p&gt;&lt;h2&gt;&amp;nbsp;ರೂ. 2,496 ಕೋಟಿ ವೆಚ್ಚದ ತುಮಕೂರು-ರಾಯದುರ್ಗ ಅಂತರರಾಜ್ಯ ಯೋಜನೆ&amp;nbsp;&lt;/h2&gt;&lt;p&gt;ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಬೆಸೆಯುವ ಅತ್ಯಂತ ಮಹತ್ವಾಕಾಂಕ್ಷೆಯ 206 ಕಿ.ಮೀ. ಉದ್ದದ ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಪ್ರಗತಿಯನ್ನು ಸಭೆಯಲ್ಲಿ ಮುನ್ನೆಲೆಗೆ ತರಲಾಯಿತು. ಈ ಬೃಹತ್ ಯೋಜನೆಗೆ ಒಟ್ಟು 2,496 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ.&lt;/p&gt;&lt;p&gt;ಈ ಯೋಜನೆಯ ಒಟ್ಟು ಉದ್ದದ ಪೈಕಿ ಈಗಾಗಲೇ 83 ಕಿ.ಮೀ. ರೈಲು ಮಾರ್ಗ ಯಶಸ್ವಿಯಾಗಿ ಕಾರ್ಯಾರಂಭ ಮಾಡಿದೆ. ಪ್ರಸ್ತುತ ಪ್ರಗತಿಯಲ್ಲಿರುವ ತುಮಕೂರು-ಉರುಕೆರೆ ವಿಭಾಗವು ಶಾಸನಬದ್ಧ ಸುರಕ್ಷತಾ ತಪಾಸಣೆಯಲ್ಲಿ (Statutory Safety Inspection) ಉತ್ತೀರ್ಣಗೊಂಡಿದ್ದು, ಪಾವಗಡ-ದೊಡ್ಡಹಳ್ಳಿ ವಿಭಾಗವು ಉದ್ಘಾಟನೆಗೆ ಸಂಪೂರ್ಣ ಸಜ್ಜಾಗಿದೆ. ಇನ್ನುಳಿದ ಮಾರ್ಗಗಳ ಕಾಮಗಾರಿಗಳು ಅತ್ಯಂತ ವೇಗವಾಗಿ ಪ್ರಗತಿಯಲ್ಲಿದ್ದು, ಶೇ. 97 ಕ್ಕೂ ಹೆಚ್ಚು ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ಉಳಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು, ರಸ್ತೆ ಮುಚ್ಚುವಿಕೆ ಮತ್ತು ತಿರುವುಗಳಿಗೆ ಸಮಯೋಚಿತ ಅನುಮೋದನೆ ಪಡೆಯಲು ಹಾಗೂ ವಿದ್ಯುತ್ ಮಾರ್ಗಗಳು, ನೀರಿನ ಪೈಪ್&zwnj;ಲೈನ್&zwnj;ಗಳು ಮತ್ತು ಅರಣ್ಯ ಅನುಮತಿಗಳಂತಹ ಉಪಯುಕ್ತತೆ ಸ್ಥಳಾಂತರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಅತ್ಯವಶ್ಯಕ ಎಂದು ಸೋಮಣ್ಣ ಒತ್ತಿ ಹೇಳಿದರು. ಈ ಸಭೆಯಲ್ಲಿ ನೈಋತ್ಯ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/v-somanna-railway-review-meeting-bengaluru-tumakuru-chitradurga-davanagere-direct-line-to-completion-by-2028-gdp/articleshow-mbk1sz3"/>
        </item>
        <item>
            <title><![CDATA[ಕಾಡುಗೋಡಿ ಮಗು ಹತ್ಯೆ ಪ್ರಕರಣ: ಕಾರಲ್ಲಿ ಮಗಳ ಹೆಣ ಇಟ್ಟುಕೊಂಡೇ ಕೋಲಾರದಲ್ಲಿ ಪ್ರಿಯಕರನೊಂದಿಗೆ ತಾಯಿಯ ಬರ್ತಡೇ ಆಚರಣೆ!]]></title>
            <link>https://kannada.asianetnews.com/karnataka-districts/kadugodi-vanilla-murder-case-lokayukta-probe-reveals-shocking-facts-inside-bangalore-child-murder-case-gdp/articleshow-ne1zgx0</link>
            <guid isPermaLink="true">https://kannada.asianetnews.com/karnataka-districts/kadugodi-vanilla-murder-case-lokayukta-probe-reveals-shocking-facts-inside-bangalore-child-murder-case-gdp/articleshow-ne1zgx0</guid>
            <pubDate>Thu, 11 Jun 2026 11:34:29 +0530</pubDate>
            <description><![CDATA[ಬೆಂಗಳೂರಿನಲ್ಲಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗಳನ್ನು ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಮಗುವಿನ ಶವವನ್ನು ಕಾರಿನಲ್ಲಿಟ್ಟುಕೊಂಡೇ ತಾಯಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮಗುವಿನ ತಂದೆ ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಮರುತನಿಖೆಯಲ್ಲಿ ಈ ಸ್ಫೋಟಕ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktp72t9fp72qx0z3ss38mw2r,imgname-bengaluru-child-murder-case--2--1781009574191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವೆನ್ನಿಲಾ ಎಂಬ ಮಗುವಿನ ನಿಗೂಢ ಕೊಲೆ ಪ್ರಕರಣವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆಂದು ಪ್ರಿಯಕರ ಮತ್ತು ತಾಯಿ ತಮ್ಮ ಸ್ವಂತ ಮಗಳನ್ನೇ ಕೊಲೆ ಮಾಡಿದ್ದರು. ಇದೀಗ ಈ ಸಂಬಂಧ ತನಿಖೆ ನಡೆಯುತ್ತಿದ್ದು ದಿನಕ್ಕೊಂದು ವಿಚಾರಗಳು ಈ ಕೊಲೆಯಲ್ಲಿ ಹೊರಬರುತ್ತಿದೆ. ಹೆತ್ತ ಮಗಳ ಶವವನ್ನು ಕಾರಿನಲ್ಲೇ ಇಟ್ಟುಕೊಂಡು, ಪ್ರಿಯಕರನೊಂದಿಗೆ ಸೇರಿ ತಾಯಿ ಬರ್ತ್ ಡೇ ಆಚರಿಸಿಕೊಂಡಿರುವ ವಿಚಾರ ತನಿಖೆ ವೇಳೆ ಬಯಲಿಗೆ ಬಂದಿದೆ.&lt;/p&gt;&lt;p&gt;ಕಳೆದ ತಿಂಗಳ 24ರಂದು ಸಂಜೆ 7:30ರ ಸುಮಾರಿಗೆ ಪ್ರಿಯಾಂಕ ಹಾಗೂ ಆಕೆಯ ಪ್ರಿಯಕರ ಮೋಹನ್ ಇಬ್ಬರೂ ಮಗುವಿನೊಂದಿಗೆ ತಮ್ಮ ವಿಲ್ಲಾದಿಂದ ಹೊರಬಂದಿದ್ದರು. 25ನೇ ತಾರೀಖು ಪ್ರಿಯಾಂಕಳ ಜನ್ಮದಿನವಿದ್ದ ಕಾರಣ, ರಾತ್ರಿಯೇ ಶಾಪಿಂಗ್ ಹಾಗೂ ಬರ್ತ್ ಡೇ ಸೆಲೆಬ್ರೇಷನ್ ಮಾಡಲು ಇಂದಿರಾನಗರಕ್ಕೆ ಬಂದಿದ್ದರು. ರಾತ್ರಿ 8:30ರ ಸುಮಾರಿಗೆ ಇಂದಿರಾನಗರದಲ್ಲಿ ಪ್ರಿಯಾಂಕ ಶಾಪಿಂಗ್ ಮಾಡಲು ತೆರಳಿದ್ದಾಗ, ಕಾರಿನಲ್ಲಿ ಮಗುವಿನೊಂದಿಗೆ ಪ್ರಿಯಕರ ಮೋಹನ್ ಮಾತ್ರ ಇದ್ದನು.&lt;/p&gt;&lt;p&gt;ಇದೇ ವೇಳೆ ಇಂದಿರಾನಗರದ 'ಬಾಸ್ಕಿನ್ ರಾಬಿನ್ಸ್' ಐಸ್&zwnj;ಕ್ರೀಂ ಪಾರ್ಲರ್&zwnj;ನಲ್ಲಿ ಮಗುವಿಗೆ ಮೋಹನ್ ಐಸ್&zwnj;ಕ್ರೀಂ ಕೊಡಿಸಿದ್ದಾನೆ. 8.30ಕ್ಕೆ ಬಿಲ್ ಮಾಡಿಸಿರೋದು ಪತ್ತೆಯಾಗಿದೆ. ಐಸ್&zwnj;ಕ್ರೀಂ ತಿಂದ ಕೇವಲ ಅರ್ಧ ಗಂಟೆಯಲ್ಲೇ ಕಾರಿನೊಳಗೆ ಮಗುವಿನ ಕೊಲೆ ನಡೆದಿದೆ. ಐಸ್&zwnj;ಕ್ರೀಂ ಬೇರೆ ಬೇಕು ಎಂದು ಮಗು ಹಠ ಮಾಡಿದ್ದಕ್ಕೆ ಆರೋಪಿ ಮೋಹನ್ ಮೊದಲು ಹೊಟ್ಟೆಯ ಭಾಗಕ್ಕೆ ಒದ್ದಿದ್ದಾನೆ. ಬಳಿಕ ಕೈಯಿಂದ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ, ಅದು ಸಾಧ್ಯವಾಗದಿದ್ದಾಗ ಕಾರಿನಲ್ಲಿದ್ದ ದಿಂಬನ್ನು ಬಳಸಿ ಮಗುವನ್ನು ಉಸಿರುಗಟ್ಟಿಸಿ ಕ್ರೂರವಾಗಿ ಕೊಂದಿದ್ದಾನೆ ಎಂದು ಶಂಕಿಸಲಾಗಿದೆ. ಮಗುವಿನ ಮರಣೋತ್ತರ ಪರೀಕ್ಷೆಯ (PM Report) ವರದಿಯಲ್ಲೂ ಮಗುವಿನ ಹೊಟ್ಟೆಯಲ್ಲಿ ಐಸ್&zwnj;ಕ್ರೀಂ ಅಂಶಗಳು ಇರುವುದು ಪತ್ತೆಯಾಗಿದೆ.&lt;/p&gt;&lt;h2&gt;ಶವದ ಜೊತೆಗೆ ಬರ್ತ್ ಡೇ ಸೆಲೆಬ್ರೇಷನ್&lt;/h2&gt;&lt;p&gt;ಶಾಪಿಂಗ್ ಮುಗಿಸಿ ಪ್ರಿಯಾಂಕ ಕಾರಿನ ಬಳಿ ವಾಪಸ್ ಬಂದಾಗ ಆಕೆಗೆ ಮಗು ಸಾವನ್ನಪ್ಪಿರುವ ವಿಷಯ ತಿಳಿದಿದೆ. ಆದರೆ, ಹೆತ್ತ ಮಗಳು ಶವವಾಗಿ ಬಿದ್ದಿದ್ದರೂ ಆ ಕಲ್ಲೆದೆಯ ತಾಯಿಯ ಮನಸ್ಸು ಕರಗಲಿಲ್ಲ. ಅಲ್ಲಿಂದ ರಾತ್ರಿ 9 ಗಂಟೆಗೆ ಇಬ್ಬರೂ ಕಾರಿನಲ್ಲಿ ಮಗುವಿನ ಶವವನ್ನು ಇಟ್ಟುಕೊಂಡೇ ಕೋಲಾರದತ್ತ ಪ್ರಯಾಣ ಬೆಳೆಸಿದ್ದಾರೆ. ಕೋಲಾರದ ಕೆಫೆ ಕಾಫಿ ಡೇನಲ್ಲಿ ಪ್ರಿಯಾಂಕ ತನ್ನ ಪ್ರಿಯಕರನೊಂದಿಗೆ ಸೇರಿ ಅತ್ಯಂತ ಸಡಗರದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾಳೆ. ರಾತ್ರಿ 1 ಗಂಟೆಯವರೆಗೂ ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ, ತಡರಾತ್ರಿ 2:30ರ ಸುಮಾರಿಗೆ ವಾಪಸ್ ವಿಲ್ಲಾಗೆ ಬಂದಿದ್ದಾರೆ. ಮರುದಿನ ಬೆಳಗ್ಗೆ 9 ಗಂಟೆಯವರೆಗೂ, ಅಂದರೆ ಸುಮಾರು 12 ಗಂಟೆಗಳ ಕಾಲ ಮಗುವಿನ ಶವದೊಂದಿಗೇ ಈ ಇಬ್ಬರು ಆರೋಪಿಗಳು ಕಾಲ ಕಳೆದಿದ್ದಾರೆ.&lt;/p&gt;&lt;h2&gt;ಕಥೆ ಕಟ್ಟಿದ ಆರೋಪಿಗಳು, ಲೋಕಾಯುಕ್ತಕ್ಕೆ ದೂರು&lt;/h2&gt;&lt;p&gt;ಬೆಳಗ್ಗೆ 9 ಗಂಟೆಯ ನಂತರ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಆರೋಪಿಗಳು, ತಮಗೇನೂ ತಿಳಿಯದಂತೆ ನಾಟಕ ಆಡಿದ್ದಾರೆ. ಅಲ್ಲದೆ ಮಗುವಿನ ಸಾವಿನ ಬಗ್ಗೆ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿ ಕಟ್ಟುಕಥೆ ಸೃಷ್ಟಿಸಿದ್ದರು. ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದ ಕಾರಣ, ಮಗುವಿನ ತಂದೆ ಪ್ರವೀಣ್ ಅವರು ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದರು.&lt;/p&gt;&lt;p&gt;ಪ್ರವೀಣ್ ನೀಡಿದ ದೂರಿನ ಮೇರೆಗೆ ಪ್ರಕರಣದ ಮರುತನಿಖೆಗೆ ಲೋಕಾಯುಕ್ತ ಅಧಿಕಾರಿಗಳು ಮುಂದಾದಾಗ ಈ ಎಲ್ಲಾ ಆಘಾತಕಾರಿ ಮತ್ತು ಸ್ಫೋಟಕ ಸತ್ಯಗಳು ಹೊರಬಂದಿವೆ. &amp;nbsp; ತನಿಖೆ ವರದಿ &amp;nbsp;ನೋಡಿದ ಲೋಕಾಯುಕ್ತ &amp;nbsp;ಲೋ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರು ಪ್ರಕರಣದ ಕುರಿತು ಕೂಲಂಕಷವಾಗಿ ಮರುತನಿಖೆ ನಡೆಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ತನಿಖೆ ತೀವ್ರಗೊಂಡ ಬೆನ್ನಲ್ಲೇ ಹೆತ್ತ ಮಗಳನ್ನೇ ಬಲಿಪಡೆದ ಪಾಪಿ ತಾಯಿ ಹಾಗೂ ಆಕೆಯ ಪ್ರಿಯಕರನ ಅಸಲಿ ಮುಖವಾಡ ಕಳಚಿಬಿದ್ದಿದೆ. ಸದ್ಯ ಮೋಹನ್ ಪೊಲೀಸ್ ಕಸ್ಟಡಿಯಲ್ಲಿದ್ದು, ತಲೆಮರೆಸಿಕೊಂಡಿರುವ ಪಾಪಿ ತಾಯಿಗಾಗಿ ಹುಡುಕಾಟ ಮುಂದುವರೆದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kadugodi-vanilla-murder-case-lokayukta-probe-reveals-shocking-facts-inside-bangalore-child-murder-case-gdp/articleshow-ne1zgx0"/>
        </item>
        <item>
            <title><![CDATA[ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಜೈಲಿಂದ ಹೊರಗಿರುವ ದರ್ಶನ್‌ ಸಹಚರರ ಜಾಮೀನು ಭವಿಷ್ಯ ಹೈಕೋರ್ಟ್‌ನಿಂದ ಇಂದು ನಿರ್ಧಾರ]]></title>
            <link>https://kannada.asianetnews.com/karnataka-districts/renukaswamy-murder-case-high-karnataka-court-order-on-bail-cancellation-plea-against-darshan-associates-due-today-gdp/articleshow-qymfeme</link>
            <guid isPermaLink="true">https://kannada.asianetnews.com/karnataka-districts/renukaswamy-murder-case-high-karnataka-court-order-on-bail-cancellation-plea-against-darshan-associates-due-today-gdp/articleshow-qymfeme</guid>
            <pubDate>Wed, 10 Jun 2026 12:39:32 +0530</pubDate>
            <description><![CDATA[ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಹಚರರಾದ ಐವರು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಇಂದು ಪ್ರಕಟಿಸಲಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಈ ಅರ್ಜಿಯ ಮೇಲಿನ ತೀರ್ಪು, ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j7bn049rc871a2qqh1ypmdrc,imgname-darshan.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್&zwnj;ವುಡ್ ನಟ ದರ್ಶನ್ ಸಹಚರರ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಇಡೀ ರಾಜ್ಯದ ಕಣ್ಣು ಹೈಕೋರ್ಟ್&zwnj;ನತ್ತ ನೆಟ್ಟಿದೆ. ಜೈಲಿನಿಂದ ಹೊರಬಂದಿರುವ ಐವರು ಪ್ರಮುಖ ಆರೋಪಿಗಳ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಮುಕ್ತಾಯಗೊಂಡಿದ್ದು, ಕರ್ನಾಟಕ ಹೈಕೋರ್ಟ್ ಬುಧವಾರವಾದ ಇಂದು ಮಧ್ಯಾಹ್ನ 2:30 ಕ್ಕೆ ತನ್ನ ಮಹತ್ವದ ಆದೇಶವನ್ನು ಪ್ರಕಟಿಸಲಿದೆ.&lt;/p&gt;&lt;h2&gt;ಸುಪ್ರೀಂಕೋರ್ಟ್ ಕಠಿಣ ಆದೇಶದ ಬೆನ್ನಲ್ಲೇ ಪ್ರಾಸಿಕ್ಯೂಷನ್ ಹೆಜ್ಜೆ&lt;/h2&gt;&lt;p&gt;ಈ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್ ತೂಗುದೀಪ ಸೇರಿದಂತೆ ಒಟ್ಟು ಏಳು ಜನ ಪ್ರಮುಖ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶಿಸಿತ್ತು. ಸದ್ಯ 7 ಮಂದಿ ಜೈಲಿನಲ್ಲಿದ್ದಾರೆ. ಸುಪ್ರೀಂಕೋರ್ಟ್&zwnj;ನ ಈ ಕಠಿಣ ತೀರ್ಪಿನ ಬೆನ್ನಲ್ಲೇ ಪ್ರಾಸಿಕ್ಯೂಷನ್, ಪ್ರಕರಣದ ಗಾಂಭೀರ್ಯತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತ್ತು ಕಾನೂನು ಪ್ರಕ್ರಿಯೆಗೆ ಯಾವುದೇ ಧಕ್ಕೆಯಾಗದಂತೆ ತಡೆಯಲು ಇತರೆ ಐವರು ಆರೋಪಿಗಳ ಜಾಮೀನನ್ನೂ ರದ್ದುಗೊಳಿಸುವಂತೆ ಕೋರಿ ಪ್ರಾಸಿಕ್ಯೂಷನ್ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;2025ರ ಆಗಸ್ಟ್ ತಿಂಗಳಲ್ಲಿ ನಟ ದರ್ಶನ್ ಮತ್ತು ಅವರ ಪ್ರಮುಖ ಸಹಚರರು ಮತ್ತೆ ಜೈಲು ಪಾಲಾದ ಬೆನ್ನಲ್ಲೇ, ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಜಾಮೀನಿನ ಮೇಲೆ ಹೊರಗಿರುವ ಉಳಿದ ಆರೋಪಿಗಳಾದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರ ಮುಕ್ತ ಓಡಾಟಕ್ಕೆ ಬ್ರೇಕ್ ಹಾಕಲು ಪ್ರಾಸಿಕ್ಯೂಷನ್ ಈ ಕಾನೂನು ಹೋರಾಟವನ್ನು ಆರಂಭಿಸಿತ್ತು.&lt;/p&gt;&lt;h2&gt;ಹೈಕೋರ್ಟ್&zwnj;ನಲ್ಲಿ ನಡೆದ ಸುದೀರ್ಘ ವಾದ-ಪ್ರತಿವಾದ&lt;/h2&gt;&lt;p&gt;ಸರ್ಕಾರದ ಪರ ವಕೀಲರು (ಪ್ರಾಸಿಕ್ಯೂಷನ್) ಹೈಕೋರ್ಟ್&zwnj;ನಲ್ಲಿ ಪ್ರಬಲ ವಾದ ಮಂಡಿಸಿದ್ದು, &quot;ಈ ಕೊಲೆ ಪ್ರಕರಣವು ಅತ್ಯಂತ ಕ್ರೂರ ಸ್ವರೂಪದ್ದಾಗಿದೆ. ಸುಪ್ರೀಂಕೋರ್ಟ್ ಈಗಾಗಲೇ ಮುಖ್ಯ ಆರೋಪಿಗಳ ಜಾಮೀನು ರದ್ದುಪಡಿಸಿರುವುದನ್ನು ಗಮನಿಸಿದರೆ, ಈ ಐವರು ಆರೋಪಿಗಳಿಗೂ ಪ್ರಕರಣದಲ್ಲಿ ಸಮಾನ ಪಾತ್ರವಿರುವುದು ಸ್ಪಷ್ಟವಾಗುತ್ತದೆ. ಇವರು ಹೊರಗಿದ್ದರೆ ಸಾಕ್ಷ್ಯ ನಾಶಪಡಿಸುವ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಸುಪ್ರೀಂಕೋರ್ಟ್ ಆದೇಶದ ಅನ್ವಯವೇ ಇವರ ಜಾಮೀನನ್ನೂ ತಕ್ಷಣವೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.&lt;/p&gt;&lt;p&gt;ಮತ್ತೊಂದೆಡೆ, ಆರೋಪಿಗಳ ಪರ ವಕೀಲರು ಈ ವಾದವನ್ನು ಬಲವಾಗಿ ವಿರೋಧಿಸಿದ್ದು, ತಮ್ಮ ಕಕ್ಷಿದಾರರು ಈಗಾಗಲೇ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಮತ್ತು ಜಾಮೀನಿನ ನಿಯಮಗಳನ್ನು ಎಲ್ಲೂ ಉಲ್ಲಂಘಿಸಿಲ್ಲ ಎಂದು ಪ್ರತಿಪಾದಿಸಿದ್ದರು. ವಾದ-ಪ್ರತಿವಾದಗಳನ್ನು ಆಲಿಸಿದ ಮಾನ್ಯ ಹೈಕೋರ್ಟ್&zwnj;ನ ನ್ಯಾಯಮೂರ್ತಿ ಎಸ್. ರಾಚಯ್ಯ ಅವರ ಏಕಸದಸ್ಯ ಪೀಠವು ತೀರ್ಪನ್ನು ಕಾಯ್ದಿರಿಸಿದೆ&lt;/p&gt;&lt;h2&gt;ಇಂದು ಮಧ್ಯಾಹ್ನ ಹೊರಬೀಳಲಿದೆ ಸುದೀರ್ಘ ಕಾಯುವಿಕೆಯ ತೀರ್ಪು&lt;/h2&gt;&lt;p&gt;ಇಡೀ ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಈ ಅರ್ಜಿಯ ಅಂತಿಮ ಆದೇಶವನ್ನು ಜಸ್ಟಿಸ್ ಎಸ್. ರಾಚಯ್ಯ ಅವರ ಪೀಠವು ಇಂದು ಮಧ್ಯಾಹ್ನ 2:30 ಕ್ಕೆ ಪ್ರಕಟಿಸಲಿದೆ. ಒಂದು ವೇಳೆ ಹೈಕೋರ್ಟ್ ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿ ಆದೇಶ ನೀಡಿದರೆ, ಸದ್ಯ ನಿರಾಳವಾಗಿದ್ದ ವಿನಯ್, ನಂದೀಶ್, ಧನರಾಜು, ಪವನ್ ಮತ್ತು ರಾಘವೇಂದ್ರ ಅವರಿಗೆ ಮತ್ತೆ ಕಠಿಣ ಜೈಲುವಾಸ ಎದುರಾಗುವುದು ಖಚಿತ. ಹೀಗಾಗಿ ಇಂದಿನ ಮಧ್ಯಾಹ್ನದ ಕೋರ್ಟ್ ಆದೇಶವು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅತ್ಯಂತ ನಿರ್ಣಾಯಕ ತಿರುವು ಪಡೆದುಕೊಳ್ಳಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-murder-case-high-karnataka-court-order-on-bail-cancellation-plea-against-darshan-associates-due-today-gdp/articleshow-qymfeme"/>
        </item>
        <item>
            <title><![CDATA[ಕೊಲೆ ನಡೆದು 2 ವರ್ಷ: ಜೈಲಿನಲ್ಲಿ ವಾರಕ್ಕೆ 3 ಪುಸ್ತಕ ಓದುತ್ತಿರುವ ದರ್ಶನ್, ಬರವಣಿಗೆಯಲ್ಲಿ ನಿರತಳಾದ ಪವಿತ್ರಾಗೌಡ!]]></title>
            <link>https://kannada.asianetnews.com/gallery/karnataka-districts/renukaswamy-case-actor-darshan-thoogudeepa-turns-to-books-pavithra-gowda-writes-autobiography-in-jail-gdp-sqimqd6</link>
            <guid isPermaLink="true">https://kannada.asianetnews.com/gallery/karnataka-districts/renukaswamy-case-actor-darshan-thoogudeepa-turns-to-books-pavithra-gowda-writes-autobiography-in-jail-gdp-sqimqd6</guid>
            <pubDate>Fri, 12 Jun 2026 08:54:16 +0530</pubDate>
            <description><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪುಸ್ತಕ ಓದುತ್ತಾ ಕಾಲ ಕಳೆದರೆ, ಪವಿತ್ರಾ ಗೌಡ ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ ಎಂದು ವರದಿಯಾಗಿದೆ. &amp;nbsp;ದರ್ಶನ್&zwnj; ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01jj91sbgrh0g3gjts3zdecwpg,imgname-darshan-pavithra.jpg" type="image/jpeg" height="390" width="690"/>
            <content:encoded><![CDATA[&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪುಸ್ತಕ ಓದುತ್ತಾ ಕಾಲ ಕಳೆದರೆ, ಪವಿತ್ರಾ ಗೌಡ ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ ಎಂದು ವರದಿಯಾಗಿದೆ. &amp;nbsp;ದರ್ಶನ್&zwnj; ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಪುಸ್ತಕದ ಮೊರೆ ಹೋಗಿದ್ದು, ಆರೋಪಿ ಪವಿತ್ರಾಗೌಡ ಬರವಣಿಗೆಯ ಮೊರೆ ಹೋಗಿದ್ದಾರೆ. ಜೈಲಿನಲ್ಲಿರುವ ದರ್ಶನ್, ಕಾಲ ಕಳೆಯಲು ಪುಸ್ತಕದ ಮೊರೆ ಹೋಗಿದ್ದಾರೆ. ಸಹ ಕೈದಿಗಳೊಡನೆ ಒಂದೇ ಬ್ಯಾರಕ್&zwnj;ನಲ್ಲಿದ್ದು, ವಾರಕ್ಕೆ 2-3 ಪುಸ್ತಕ ಓದುತ್ತಿರು ವುದಾಗಿ ಮೂಲಗಳು ತಿಳಿಸಿವೆ. ಎ1 ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಬರವಣಿಗೆಯ ಮೊರೆ ಹೋಗಿದ್ದಾರೆ. ತಮ್ಮ ಆತ್ಮಕಥೆ ಬರೆಯುತ್ತಿದ್ದಾರಂತೆ.&lt;/p&gt;&lt;img&gt;&lt;p&gt;ನಟ ದರ್ಶನ್&zwnj; ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ 2025ರ ಜೂ.11 ರಂದು ದರ್ಶನ್&zwnj;ರನ್ನು ಮೈಸೂರಿನ ಹೋಟೆಲ್&zwnj;ವೊಂದರಲ್ಲಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಜೂ.7 ರಂದು ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿನ ಆರ್&zwnj;.ಆರ್&zwnj;. ನಗರದಲ್ಲಿರುವ ಪಟ್ಟಣಗೆರೆ ಶೆಡ್&zwnj;ಗೆ ಕರೆತಂದು ಹಲ್ಲೆ ಮಾಡಿದ್ದರು. ಆರೋಪಿಗಳು ದರ್ಶನ್&zwnj; ಹೆಸರು ಬಾಯ್ಬಿಟ್ಟಿದ್ದರಿಂದ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜೈಲು ಸೇರಿದ್ದ ದರ್ಶನ್&zwnj; ಮತ್ತು ಸಹಚರರು ಹೈಕೋರ್ಟ್&zwnj;ನಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದರು. ಜಾಮೀನು ರದ್ದುಪಡಿಸುವಂತೆ ಕೋರಿ ಪೊಲೀಸರು ಸುಪ್ರೀಂ ಕೋರ್ಟ್&zwnj; ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್&zwnj; ದರ್ಶನ್&zwnj; ಮತ್ತು ಸಹಚರರ ಜಾಮೀನು ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್ ಸೇರಿ ಏಳು ಜನ ಆರೋಪಿಗಳು ಮತ್ತೆ ಜೈಲುಪಾಲಾಗಿದ್ದರು.&lt;/p&gt;&lt;img&gt;&lt;p&gt;ಇನ್ನು ಕೊಲೆ ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಟೋನಿ ಬ್ರೂಕ್&zwnj; ರೆಸ್ಟೋರೆಂಟ್&zwnj; ಮಾಲೀಕ ವಿನಯ್&zwnj; ಹಾಗೂ ಮೊದಲನೇ ಆರೋಪಿ ಪವಿತ್ರಗೌಡ ಸಹಾಯಕ ಪವನ್&zwnj; ಸೇರಿ ಐವರಿಗೆ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಪ್ರಕರಣ&zwnj;ಲ್ಲಿ ಒಂಬತ್ತನೇ ಆರೋಪಿ ವಿನಯ್&zwnj;, ಮೂರನೇ ಆರೋಪಿ ಪವನ್&zwnj;, ಚಿತ್ರದುರ್ಗದ ದರ್ಶನ್&zwnj; ಅಭಿಮಾನಿ ಬಳಗದ ಅಧ್ಯಕ್ಷನಾಗಿರುವ ನಾಲ್ಕನೇ ಆರೋಪಿ ರಾಘವೇಂದ್ರ, ಐದನೇ ಆರೋಪಿ ನಂದೀಶ್&zwnj;, ಒಂಬತ್ತನೇ ಆರೋಪಿ ಧನರಾಜ್&zwnj;ಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ 2024ರ ಡಿ. 24ರಂದು ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಕಾಮಾಕ್ಷಿಪಾಳ್ಯ ಪೊಲೀಸರು (ಪ್ರಾಸಿಕ್ಯೂಷನ್) ಹೈಕೋರ್ಟ್&zwnj;ಗೆ ಪ್ರತ್ಯೇಕ ನಾಲ್ಕು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಸ್&zwnj;.ರಾಚಯ್ಯ ಅವರ ಪೀಠ ಈ ಅರ್ಜಿಗಳ ವಿಚಾರಣೆಯನ್ನು ಏ.11ರಂದು ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿತ್ತು. ಕಾಮಾಕ್ಷಿಪಾಳ್ಯ ಪೊಲೀಸರ ಪ್ರತ್ಯೇಕ ನಾಲ್ಕು ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ. ಎಸ್.ರಾಚಯ್ಯ ಅವರ ಪೀಠ ಬುಧವಾರ ಜೂನ್ 10ಕ್ಕೆ ಆದೇಶ ಪ್ರಕಟಿಸಿದೆ.&lt;/p&gt;&lt;img&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜೂ.11ರಂದು ದರ್ಶನ್&zwnj; ಮತ್ತಿತರರನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಜೂ.22ರಿಂದ ದರ್ಶನ್&zwnj;, ನಟಿ ಪವಿತ್ರಾ ಗೌಡ ಹಾಗೂ ಅರ್ಜಿದಾರ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್&zwnj;ಗೆ ಅ. 30ರಂದು ಹೈಕೋರ್ಟ್&zwnj; ವೈದ್ಯಕೀಯ ಕಾರಣಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಅ.14ರಂದು ವಿಚಾರಣಾಧೀನ ನ್ಯಾಯಾಲಯ ದರ್ಶನ್&zwnj;, ಪವಿತ್ರಾ ಗೌಡ, ನಾಗರಾಜು ಮತ್ತು ಲಕ್ಷ್ಮಣ್&zwnj;ಗೆ ಜಾಮೀನು ನಿರಾಕರಿಸಿತ್ತು. ಎಂಟನೇ ಆರೋಪಿ ರವಿಶಂಕರ್&zwnj; ಅಲಿಯಾಸ್&zwnj; ರವಿ, 13ನೇ ಆರೋಪಿ ದೀಪಕ್&zwnj; ಕುಮಾರ್&zwnj; ಅಲಿಯಾಸ್&zwnj; ದೀಪಕ್&zwnj;, ಕಾರ್ತಿಕ್&zwnj; ಅಲಿಯಾಸ್&zwnj; ಕಪ್ಪೆ, ಕೇಶವಮೂರ್ತಿ ಮತ್ತು ನಿಖಿಲ್&zwnj; ನಾಯಕ್&zwnj;ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.&lt;/p&gt;&lt;img&gt;&lt;p&gt;2024ರ ಡಿಸೆಂಬರ್&zwnj; 13ರಂದು ದರ್ಶನ್&zwnj;, ಪವಿತ್ರಾಗೌಡ, ಆರ್&zwnj; ನಾಗರಾಜು, ಎಂ ಲಕ್ಷ್ಮಣ್, ಅನು ಕುಮಾರ್&zwnj; ಅಲಿಯಾಸ್&zwnj; ಅನು, ಜಗದೀಶ್&zwnj; ಅಲಿಯಾಸ್&zwnj; ಜಗ್ಗ, ಪ್ರದೋಷ್&zwnj; ರಾವ್&zwnj; ಅವರಿಗೆ ಹೈಕೋರ್ಟ್&zwnj; ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಿಗೇ 2024ರ ಡಿಸೆಂಬರ್&zwnj; 24ರಂದು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ಪವನ್&zwnj;, ವಿನಯ್&zwnj; ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿತ್ತು.&lt;/p&gt;&lt;p&gt;2025ರ ಆಗಸ್ಟ್&zwnj; 14ರಂದು ಸುಪ್ರೀಂ ಕೋರ್ಟ್&zwnj; 2ನೇ ಆರೋಪಿ ದರ್ಶನ್&zwnj; 1ನೇ ಆರೋಪಿ ಪವಿತ್ರಾ ಗೌಡ, 11ನೇ ಆರೋಪಿ ಆರ್&zwnj;.ನಾಗರಾಜು, 7ನೇ ಆರೋಪಿ ಅನುಕುಮಾರ್&zwnj; ಅಲಿಯಾಸ್&zwnj; ಅನು, 12ನೇ ಆರೋಪಿ ಡ್ರೈವರ್&zwnj; ಎಂ.ಲಕ್ಷ್ಮಣ್&zwnj;, 6ನೇ ಆರೋಪಿ ಜಗದೀಶ್&zwnj; ಅಲಿಯಾಸ್&zwnj; ಜಗ್ಗ, 14ನೇ ಆರೋಪಿ ಪ್ರದೋಷ್&zwnj; ಎಸ್&zwnj;. ರಾವ್&zwnj; ಅಲಿಯಾಸ್&zwnj; ಪ್ರದೋಷ್&zwnj;ಗೆ ಹೈಕೋರ್ಟ್&zwnj; ಮಂಜೂರು ಮಾಡಿದ್ದ ಜಾಮೀನು ರದ್ದುಪಡಿಸಿತ್ತು. ಇದನ್ನು ಆಧರಿಸಿ ರಾಜ್ಯ ಸರ್ಕಾರ ಪವನ್&zwnj;, ವಿನಯ್&zwnj; ಮತ್ತಿತರ ಜಾಮೀನು ರದ್ದತಿಗೆ ಮನವಿ ಮಾಡಿತ್ತು.&lt;/p&gt;&lt;img&gt;&lt;p&gt;ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್&zwnj; ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಜೂ.1ರಿಂದ ನಗರದ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/renukaswamy-case-actor-darshan-thoogudeepa-turns-to-books-pavithra-gowda-writes-autobiography-in-jail-gdp-sqimqd6"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ನಿಮ್ಮ ಮನೆ ಕಾಂಪೌಂಡ್  ಹೇಗಿದೆ? 1.5 ಮೀ.ಗಿಂತ ಎತ್ತರವಿದ್ರೆ ನೆಲಸಮ ಫಿಕ್ಸ್!]]></title>
            <link>https://kannada.asianetnews.com/gallery/karnataka-districts/greater-bengaluru-authority-to-demolish-oversized-compound-walls-vip-houses-and-tech-parks-under-scanner-gdp-txp4i2z</link>
            <guid isPermaLink="true">https://kannada.asianetnews.com/gallery/karnataka-districts/greater-bengaluru-authority-to-demolish-oversized-compound-walls-vip-houses-and-tech-parks-under-scanner-gdp-txp4i2z</guid>
            <pubDate>Fri, 12 Jun 2026 10:03:21 +0530</pubDate>
            <description><![CDATA[&lt;p&gt;ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಿಸಲಾದ 1.5 ಮೀಟರ್&zwnj;ಗಿಂತ ಎತ್ತರದ ಕಾಂಪೌಂಡ್&zwnj;ಗಳನ್ನು ಬೆಂಗಳೂರಿನಲ್ಲಿ ನೆಲಸಮಗೊಳಿಸಲು ಜಿಬಿಎ ಮುಂದಾಗಿದೆ. ಸಚಿವರ ನಿವಾಸಗಳು ಮತ್ತು ಸರ್ಕಾರಿ ಅತಿಥಿಗೃಹಗಳೂ ಸೇರಿದಂತೆ ನಿಯಮ ಮೀರಿದ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ktx15mg7rhstvjqrb8tj0dkv,imgname-benga-ru-1781238256135.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಿಸಲಾದ 1.5 ಮೀಟರ್&zwnj;ಗಿಂತ ಎತ್ತರದ ಕಾಂಪೌಂಡ್&zwnj;ಗಳನ್ನು ಬೆಂಗಳೂರಿನಲ್ಲಿ ನೆಲಸಮಗೊಳಿಸಲು ಜಿಬಿಎ ಮುಂದಾಗಿದೆ. ಸಚಿವರ ನಿವಾಸಗಳು ಮತ್ತು ಸರ್ಕಾರಿ ಅತಿಥಿಗೃಹಗಳೂ ಸೇರಿದಂತೆ ನಿಯಮ ಮೀರಿದ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಮನೆ ಸುಭದ್ರವಾಗಿರಲೆಂದು ಮುಗಿಲೆತ್ತರದ ಕಾಂಪೌಂಡ್ ನಿರ್ಮಿಸಿದ್ದರೆ ಅದು ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ನಗರದಲ್ಲಿ ಅಳತೆ ಮೀರಿ ನಿರ್ಮಿಸಿರುವ ಕಾಂಪೌಂಡ್&zwnj;ಗಳನ್ನು ನೆಲಸಮ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಆದರೆ, ನಗರದಲ್ಲಿ ಹಲವು ಸಚಿವರು, ಅಧಿಕಾರಿಗಳ ಮನೆ ಅತಿಥಿಗೃಹಗಳ ಕಾಂಪೌಂಡ್&zwnj;ಗಳೇ 8 ರಿಂದ 10 ಅಡಿ ಎತ್ತರ ನಿರ್ಮಾಣವಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಯಾವುದೇ ಮನೆ, ಅಪಾರ್ಟ್&zwnj;ಮೆಂಟ್, ಖಾಸಗಿ ಅತಿಥಿಗೃಹ, ಸರ್ಕಾರಿ ಅತಿಥಿಗೃಹ, ಹೋಟೆಲ್, ಕಲ್ಯಾಣ ಮಂಟಪ ಹೀಗೆ ಯಾವುದೇ ಕಟ್ಟಡವಿರಲಿ ಇವುಗಳ ಸುತ್ತ ಭದ್ರತೆಗಾಗಿ ನಿರ್ಮಿಸುವ ಕಾಂಪೌಂಡ್&zwnj;ಗಳ ಎತ್ತರ ರಸ್ತೆ ಮಟ್ಟಕ್ಕಿಂತ 1.5 ಮೀಟರ್ ಎತ್ತರ ಮಾತ್ರ ಇರಬೇಕು.1.5 ಮೀಟರ್ ಎತ್ತರದ ನಂತರ 0.9 ಮೀಟರ್ ಗ್ರಿಲ್ಸ್ ನಿರ್ಮಾಣ ಮಾಡಬಹುದು. ಆದರೆ, ಆ ಗ್ರಿಲ್ಸ್ ಒಳಗೆ ಗಾಳಿ ಸರಾಗವಾಗಿ ಸಂಚರಿಸುವಂತಿರಬೇಕು ಎಂದು ತಿಳಿಸಲಾಗಿದೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮಗಳನ್ನೇ ಅಧಿಕೃತವಾಗಿ ಪಾಲಿಸುತ್ತಿರುವ ಜಿಬಿಎ ಅಧಿಕಾರಿಗಳು ಮೊದಲು ಸಂಹಿತೆ ಉಲ್ಲಂಘಿಸಿದ ಕಾಂಪೌಂಡ್ ಮಾಲೀಕರಿಗೆ ನೋಟೀಸ್ ನೀಡಿ ನಂತರ ಕಾಂಪೌಂಡ್ ಕೆಡವಲು ಸೂಚಿಸುತ್ತದೆ. ಕೆಡವದಿದ್ದರೆ ಜಿಬಿಎ ಅಧಿಕಾರಿಗಳಿಗೆ ಕೆಡವುವ ಅಧಿಕಾರ ಹೊಂದಿದ್ದು, ಅದರ ವೆಚ್ಚವನ್ನು ಮಾಲೀಕರು ಭರಿಸುವಂತೆ ಮಾಡುವ ಅಧಿಕಾರವಿದೆ.&lt;/p&gt;&lt;p&gt;ಅಲ್ಲದೆ, ನಗರದ ಕುಮಾರ ಕೃಪ ಅತಿಥಿ ಗೃಹದಲ್ಲೂ 8 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಇದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಟ್ಟಡವಾಗಿದೆ. ಈ ಅತಿಥಿಗೃಹದ ಸುತ್ತಲೂ 1.5 ಮೀಟರ್ ಇದ್ದ ಎತ್ತರವನ್ನು ಈಗ 2 ಮೀಟರ್&zwnj;ಗೆ ಹೆಚ್ಚಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಈ ಎತ್ತರವನ್ನು 10 ಅಡಿಗೆ ಎತ್ತರಿಸಲು ನಿರ್ಧರಿಸಿದ್ದು, ಸದ್ಯಕ್ಕೆ 8 ಅಡಿ ಎತ್ತರಿಸಿದೆ. ಇದು ರಾಷ್ಟ್ರೀಯ ಕಟ್ಟಡ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.&lt;/p&gt;&lt;img&gt;&lt;p&gt;ಕ್ರೆಸೆಂಟ್ ರಸ್ತೆಯಲ್ಲಿರುವ ಕೆಲ ಸಚಿವರ ವಸತಿ ಕಟ್ಟಡದ ಕಾಂಪೌಂಡ್ ಸುಮಾರು 8-9 ಅಡಿ ಎತ್ತರವಿದೆ. ಇದಲ್ಲದೆ, ನಗರದ ಹಲವು ಖಾಸಗಿ ಕಟ್ಟಡಗಳ ಎತ್ತರ 10 ರಿಂದ 15 ಅಡಿ ಇದೆ. ಈಗಾಗಲೇ ಪೂರ್ವ ಪಾಲಿಕೆ ವಿಭಾಗದಲ್ಲಿ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಕಟ್ಟಡ ನೆಲಸಮ ಮಾಡಲಾಗುತ್ತಿದೆ.&lt;/p&gt;&lt;p&gt;ಈ ಸಂಬಂಧ ಹೆಚ್ಚುವರಿ ಆಯುಕ್ತ ಎಲ್.ಎಸ್.ಸುಧಾಕರ್ ಕನ್ನಡಪ್ರಭ ಜೊತೆ ಮಾತನಾಡಿ, ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ 1.5 ಎತ್ತರಕ್ಕಿಂತ ಹೆಚ್ಚಿದ್ದರೆ, ಅದು ಸರ್ಕಾರಿ ಕಟ್ಟಡವಿರಲಿ ಅಥವಾ ಖಾಸಗಿ ಕಟ್ಟಡವಿರಲಿ ನೋಟೀಸ್ ನೀಡಿ ಕೆಡವಲಾಗುವುದು. ನೀತಿ ಸಂಹಿತೆ ಎಲ್ಲರಿಗೂ ಒಂದೇ ಎಂದರು.&lt;/p&gt;&lt;p&gt;ಕುಮಾರಕೃಪ ಅತಿಥಿ ಗೃಹ ಸೇರಿದಂತೆ ನಗರದ ಸರ್ಕಾರಿ ವಸತಿಗೃಹ ಕಟ್ಟಡಗಳ ಉಸ್ತುವಾರಿ ಎಂಜಿನಿಯರ್ ನರೇಂದ್ರಕುಮಾರ್ ಅವರನ್ನು ಸಂಪರ್ಕಿಸಿದರೂ ಅವರು ಮಾಹಿತಿ ನೀಡಲಿಲ್ಲ.&lt;/p&gt;&lt;img&gt;&lt;p&gt;ಬೆಂಗಳೂರು ವ್ಯಾಪ್ತಿಯಲ್ಲಿ 98 ಟೆಕ್ ಪಾರ್ಕ್&zwnj;ಗಳು, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4500ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, 217 ಮಾಲ್ ಮತ್ತು ಮಲ್ಟಿಫ್ಲೆಕ್ಸ್&zwnj;ಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್&zwnj;ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 1,350 ಕಲ್ಯಾಣ ಮಂಟಪಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಬಹುಪಾಲು ಕಟ್ಟಡಗಳಲ್ಲಿ ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಕಾಂಪೌಂಡ್ ನಿರ್ಮಾಣವಾಗಿಲ್ಲ ಎಂದು ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/greater-bengaluru-authority-to-demolish-oversized-compound-walls-vip-houses-and-tech-parks-under-scanner-gdp-txp4i2z"/>
        </item>
        <item>
            <title><![CDATA[ಗಮನದಲ್ಲಿರಲಿ: ಯಶವಂತಪುರದಿಂದ ಹೊರಡುವ 2  ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ವಿಸ್ತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ]]></title>
            <link>https://kannada.asianetnews.com/karnataka-districts/karnataka-railways-update-yesvantpur-bikaner-special-trips-extended-jaipur-express-routinely-extended-to-khatipura-gdp/articleshow-u1xbrgq</link>
            <guid isPermaLink="true">https://kannada.asianetnews.com/karnataka-districts/karnataka-railways-update-yesvantpur-bikaner-special-trips-extended-jaipur-express-routinely-extended-to-khatipura-gdp/articleshow-u1xbrgq</guid>
            <pubDate>Fri, 12 Jun 2026 16:23:17 +0530</pubDate>
            <description><![CDATA[ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯಶವಂತಪುರದಿಂದ ಬಿಕಾನೇರ್&zwnj;ಗೆ ಸಂಚರಿಸುವ ವಿಶೇಷ ರೈಲಿನ ಅವಧಿಯನ್ನು ವಿಸ್ತರಿಸಲಾಗಿದ್ದು, ಯಶವಂತಪುರ-ಜೈಪುರ ಎಕ್ಸ್&zwnj;ಪ್ರೆಸ್ ರೈಲನ್ನು ಖತಿಪುರ ನಿಲ್ದಾಣದವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgkv34nm1s1he84ztr753mm0,imgname-railway-track-1770192474804.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೇಸಿಗೆಯ ಹಾಗೂ ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಪ್ರಯಾಣಿಕರ ದಟ್ಟಣೆ ಮನಗಂಡು, ಇದರ ಜೊತೆಗೆ ಸಾರ್ವಜನಿಕರ ಸುಗಮ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಮುಖ ರೈಲುಗಳ ಸೇವೆಗೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯು ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಯಶವಂತಪುರದಿಂದ ರಾಜಸ್ಥಾನದ ಬಿಕಾನೇರ್&zwnj;ಗೆ ಸಂಚರಿಸುವ ವಿಶೇಷ ಎಕ್ಸ್&zwnj;ಪ್ರೆಸ್ ರೈಲಿನ ಅವಧಿಯನ್ನು ವಿಸ್ತರಿಸಲಾಗಿದ್ದು, ಇದರೊಂದಿಗೆ ಯಶವಂತಪುರ-ಜೈಪುರ ಎಕ್ಸ್&zwnj;ಪ್ರೆಸ್ ರೈಲನ್ನು ಖತಿಪುರ ನಿಲ್ದಾಣದವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.&lt;/p&gt;&lt;h2&gt;ರೈಲುಗಳ ಸಂಚಾರದ ದಿನಾಂಕ, ಪರಿಷ್ಕೃತ ಸಮಯ ಹಾಗೂ ನಿಲುಗಡೆಗಳ ಸಂಪೂರ್ಣ ವರದಿ ಇಲ್ಲಿದೆ:&lt;/h2&gt;&lt;h3&gt;1. ಯಶವಂತಪುರ - ಬಿಕಾನೇರ್ - ಯಶವಂತಪುರ ವಿಶೇಷ ಎಕ್ಸ್&zwnj;ಪ್ರೆಸ್ ಅವಧಿ ವಿಸ್ತರಣೆ&lt;/h3&gt;&lt;p&gt;ಪ್ರಯಾಣಿಕರ ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ, ರೈಲು ಸಂಖ್ಯೆ 06543 / 06544 ಯಶವಂತಪುರ - ಬಿಕಾನೇರ್ - ಯಶವಂತಪುರ ಎಕ್ಸ್&zwnj;ಪ್ರೆಸ್ ವಿಶೇಷ ರೈಲಿನ ಸಂಚಾರ ಅವಧಿಯನ್ನು ತಲಾ ಎರಡು ಹೆಚ್ಚುವರಿ ಟ್ರಿಪ್&zwnj;ಗಳಿಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.&lt;/p&gt;&lt;p&gt;ರೈಲು ಸಂಖ್ಯೆ 06543 (ಯಶವಂತಪುರ - ಬಿಕಾನೇರ್ ವಿಶೇಷ ರೈಲು): ಪ್ರತಿ ಬುಧವಾರದಂದು ಯಶವಂತಪುರದಿಂದ ಹೊರಡುವ ಈ ವಿಶೇಷ ರೈಲಿನ ಸೇವೆಯನ್ನು ದಿನಾಂಕ 17.06.2026 ರಿಂದ 24.06.2026 ರವರೆಗೆ ಎರಡು ಹೆಚ್ಚುವರಿ ಟ್ರಿಪ್&zwnj;ಗಳಿಗಾಗಿ ವಿಸ್ತರಿಸಲಾಗಿದೆ.&lt;/p&gt;&lt;p&gt;ರೈಲು ಸಂಖ್ಯೆ 06544 (ಬಿಕಾನೇರ್ - ಯಶವಂತಪುರ ವಿಶೇಷ ರೈಲು): ಪ್ರತಿ ಶನಿವಾರದಂದು ಬಿಕಾನೇರ್&zwnj;ನಿಂದ ಹೊರಡುವ ಈ ಮರುಪ್ರಯಾಣದ ರೈಲಿನ ಸೇವೆಯನ್ನು ದಿನಾಂಕ 20.06.2026 ರಿಂದ 27.06.2026 ರವರೆಗೆ ಎರಡು ಹೆಚ್ಚುವರಿ ಟ್ರಿಪ್&zwnj;ಗಳಿಗಾಗಿ ವಿಸ್ತರಿಸಲಾಗಿದೆ.&lt;/p&gt;&lt;p&gt;ಈ ವಿಶೇಷ ರೈಲು ತನ್ನ ಅಸ್ತಿತ್ವದಲ್ಲಿರುವ ಹಳೆಯ ಸಮಯ (Timings), ನಿಗದಿಪಡಿಸಲಾದ ನಿಲುಗಡೆಗಳು (Stoppages) ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ (Coach Composition) ಯಥಾಸ್ಥಿತಿಯಾಗಿ ಓಡುವುದನ್ನು ಮುಂದುವರಿಸಲಿದೆ.&lt;/p&gt;&lt;h3&gt;2. ಯಶವಂತಪುರ - ಜೈಪುರ ಎಕ್ಸ್&zwnj;ಪ್ರೆಸ್ ರೈಲು ಸೇವೆ ಖತಿಪುರದವರೆಗೆ ವಿಸ್ತರಣೆ&lt;/h3&gt;&lt;p&gt;ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರದ ಮತ್ತು ಸುಲಭದ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ, ವಾಯುವ್ಯ ರೈಲ್ವೆಯು ರೈಲು ಸಂಖ್ಯೆ 20667 / 20668 ಯಶವಂತಪುರ - ಜೈಪುರ - ಯಶವಂತಪುರ ಎಕ್ಸ್&zwnj;ಪ್ರೆಸ್ ರೈಲನ್ನು ರಾಜಸ್ಥಾನದ 'ಖತಿಪುರ' (Khatipura) ನಿಲ್ದಾಣದವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ವಿಸ್ತೃತ ಸೇವೆಯು ಬೆಂಗಳೂರಿನ ಯಶವಂತಪುರ ಮತ್ತು ಖತಿಪುರ ನಡುವೆ ನೇರ ಸಂಪರ್ಕವನ್ನು ಒದಗಿಸಲಿದೆ.&lt;/p&gt;&lt;h2&gt;ಪರಿಷ್ಕೃತ ವೇಳಾಪಟ್ಟಿ ಮತ್ತು ಸಮಯದ ವಿವರ:&lt;/h2&gt;&lt;p&gt;ರೈಲು ಸಂಖ್ಯೆ 20667 (ಯಶವಂತಪುರ - ಖತಿಪುರ ಎಕ್ಸ್&zwnj;ಪ್ರೆಸ್): ದಿನಾಂಕ 18.06.2026 ರಿಂದ ಜಾರಿಗೆ ಬರುವಂತೆ ಈ ರೈಲು ಯಶವಂತಪುರದಿಂದ ಹೊರಟು ಜೈಪುರ ಮಾರ್ಗವಾಗಿ ಖತಿಪುರಕ್ಕೆ ಚಲಿಸಲಿದೆ. ಈ ರೈಲು ನಿಗದಿತ ದಿನದಂದು ಬೆಳಿಗ್ಗೆ 05:25 ಗಂಟೆಗೆ ಜೈಪುರ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿ 10 ನಿಮಿಷಗಳ ಕಾಲ ನಿಲುಗಡೆ ಪಡೆದು ಬೆಳಿಗ್ಗೆ 05:35 ಗಂಟೆಗೆ ಹೊರಡಲಿದ್ದು, ಅದೇ ದಿನ ಬೆಳಿಗ್ಗೆ 06:05 ಗಂಟೆಗೆ ತನ್ನ ಅಂತಿಮ ನಿಲ್ದಾಣವಾದ ಖತಿಪುರವನ್ನು ತಲುಪಲಿದೆ.&lt;/p&gt;&lt;p&gt;ರೈಲು ಸಂಖ್ಯೆ 20668 (ಖತಿಪುರ - ಯಶವಂತಪುರ ಎಕ್ಸ್&zwnj;ಪ್ರೆಸ್): ದಿನಾಂಕ 20.06.2026 ರಿಂದ ಜಾರಿಗೆ ಬರುವಂತೆ ಈ ರೈಲು ಜೈಪುರದ ಬದಲಾಗಿ ನೇರವಾಗಿ ಖತಿಪುರ ನಿಲ್ದಾಣದಿಂದಲೇ ತನ್ನ ಮರುಪ್ರಯಾಣವನ್ನು ಆರಂಭಿಸಲಿದೆ. ಈ ರೈಲು ರಾತ್ರಿ 21:20 (9:20 PM) ಗಂಟೆಗೆ ಖತಿಪುರದಿಂದ ಹೊರಟು, ರಾತ್ರಿ 21:50 (9:50 PM) ಗಂಟೆಗೆ ಜೈಪುರ ನಿಲ್ದಾಣವನ್ನು ತಲುಪಲಿದೆ. ಅಲ್ಲಿಂದ ರಾತ್ರಿ 22:05 (10:05 PM) ಗಂಟೆಗೆ ಯಶವಂತಪುರದ ಕಡೆಗೆ ಪ್ರಯಾಣ ಬೆಳೆಸಲಿದೆ.&lt;/p&gt;&lt;p&gt;ಯಶವಂತಪುರ ಮತ್ತು ಜೈಪುರ ನಿಲ್ದಾಣಗಳ ನಡುವಿನ ರೈಲಿನ ಅಸ್ತಿತ್ವದಲ್ಲಿರುವ ನಿಯಮಿತ ಓಡಾಟದ ಸಮಯ ಹಾಗೂ ನಿಲುಗಡೆಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಕೇವಲ ಜೈಪುರದಿಂದ ಖತಿಪುರ ನಡುವಿನ ಹೆಚ್ಚುವರಿ ಮಾರ್ಗಕ್ಕೆ ಮಾತ್ರ ಹೊಸ ಸಮಯ ಅನ್ವಯವಾಗುತ್ತದೆ. ಪ್ರಯಾಣಿಕರು ಈ ಪರಿಷ್ಕೃತ ಮಾಹಿತಿ ಹಾಗೂ ವಿಸ್ತರಿತ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕೃತ ಐಆರ್&zwnj;ಸಿಟಿಸಿ (IRCTC) ವೆಬ್&zwnj;ಸೈಟ್ ಅಥವಾ ರೈಲ್ವೆ ನಿಲ್ದಾಣದ ಕೌಂಟರ್&zwnj;ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯನ್ನು ಮಾಡಿಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railways-update-yesvantpur-bikaner-special-trips-extended-jaipur-express-routinely-extended-to-khatipura-gdp/articleshow-u1xbrgq"/>
        </item>
        <item>
            <title><![CDATA[ಬೆಂಗಳೂರಿಗೆ ಬಿಗ್‌ ಗಿಫ್ಟ್: ಈ ರಸ್ತೆಲಿ 10.3 ಕಿ.ಮೀ ಉದ್ದದ ಬೃಹತ್ ಸೈಕ್ಲಿಂಗ್ ಕಾರಿಡಾರ್ ಜೂ.27ಕ್ಕೆ ಲೋಕಾರ್ಪಣೆ?]]></title>
            <link>https://kannada.asianetnews.com/gallery/karnataka-districts/bda-builds-massive-10-3-km-dedicated-cycling-track-connecting-magadi-road-and-mysore-road-gdp-v7gwibn</link>
            <guid isPermaLink="true">https://kannada.asianetnews.com/gallery/karnataka-districts/bda-builds-massive-10-3-km-dedicated-cycling-track-connecting-magadi-road-and-mysore-road-gdp-v7gwibn</guid>
            <pubDate>Tue, 09 Jun 2026 15:31:20 +0530</pubDate>
            <description><![CDATA[&lt;p&gt;ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು &amp;nbsp;ನಗರದ ಟ್ರಾಫಿಕ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು 10.3 ಕಿ.ಮೀ ಉದ್ದದ ವಿಶೇಷ ಸೈಕ್ಲಿಂಗ್ ಕಾರಿಡಾರ್ ನಿರ್ಮಿಸುತ್ತಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ಪರಿಸರ ಸ್ನೇಹಿ ಮಾರ್ಗವು ಸೈಕಲ್ ಸವಾರರಿಗೆ ಸುರಕ್ಷಿತ ಸಂಚಾರವನ್ನು ಒದಗಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01gxt4mj2s041r1sp9pr8t9wk5,imgname-boy-cycling-11-year-old-1681283237975.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು &amp;nbsp;ನಗರದ ಟ್ರಾಫಿಕ್ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು 10.3 ಕಿ.ಮೀ ಉದ್ದದ ವಿಶೇಷ ಸೈಕ್ಲಿಂಗ್ ಕಾರಿಡಾರ್ ನಿರ್ಮಿಸುತ್ತಿದೆ. ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ಪರಿಸರ ಸ್ನೇಹಿ ಮಾರ್ಗವು ಸೈಕಲ್ ಸವಾರರಿಗೆ ಸುರಕ್ಷಿತ ಸಂಚಾರವನ್ನು ಒದಗಿಸಲಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಟ್ರಾಫಿಕ್ ಕಿರಿಕಿರಿ ಹಾಗೂ ವಾಯು ಮಾಲಿನ್ಯದಿಂದ ಹೈರಾಣಾಗಿರುವ ಸಿಲಿಕಾನ್ ಸಿಟಿ ಜನತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಭರ್ಜರಿ ಕೊಡುಗೆಯೊಂದನ್ನು ನೀಡಲು ಸಜ್ಜಾಗಿದೆ. ನಗರದ ಸೈಕಲ್ ಸವಾರರ ಬಹುದಿನಗಳ ಕನಸನ್ನು ನನಸು ಮಾಡಲು ಮುಂದಾಗಿರುವ ಬಿಡಿಎ, ಪರಿಸರ ಸ್ನೇಹಿ ಸಂಚಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬರೋಬ್ಬರಿ 10.3 ಕಿಲೋ ಮೀಟರ್ ಉದ್ದದ ವಿಶೇಷ ಸೈಕ್ಲಿಂಗ್ ಕಾರಿಡಾರ್ (Cycling Corridor) ನಿರ್ಮಿಸುತ್ತಿದೆ. ಇದು ಬೆಂಗಳೂರು ನಗರದಲ್ಲೇ ನಿರ್ಮಾಣವಾಗುತ್ತಿರುವ ಅತ್ಯಂತ ಉದ್ದದ ಮತ್ತು ಸೌಕರ್ಯಯುತ ಸೈಕಲ್ ಮಾರ್ಗಗಳಲ್ಲಿ ಒಂದಾಗಲಿದ್ದು, ಸೈಕ್ಲಿಂಗ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.&lt;/p&gt;&lt;img&gt;&lt;p&gt;ಈ ಅತ್ಯಾಧುನಿಕ ಸೈಕಲ್ ಟ್ರ್ಯಾಕ್ ಅನ್ನು ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಪರಸ್ಪರ ಸಂಪರ್ಕಿಸುವ 11 ಕಿ.ಮೀ ಉದ್ದದ ಮೇಜರ್ ಆರ್ಟೀರಿಯಲ್ ರೋಡ್ (MAR) ಯೋಜನೆಯ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಒಟ್ಟು 11 ಕಿ.ಮೀ ರಸ್ತೆ ಮಾರ್ಗದಲ್ಲಿ ಅಂಡರ್&zwnj;ಪಾಸ್ (ನೆಲದಡಿ ರಸ್ತೆ) ಬರುವ ಭಾಗಗಳನ್ನು ಹೊರತುಪಡಿಸಿ, ಇನ್ನುಳಿದ ಸುಮಾರು 10.3 ಕಿ.ಮೀ ನಷ್ಟು ಸುದೀರ್ಘ ಮಾರ್ಗದಲ್ಲಿ ಯಾವುದೇ ಅಡೆತಡೆಯಿಲ್ಲದ ನಿರಂತರ ಸೈಕಲ್ ಲೇನ್ ಲಭ್ಯವಿರಲಿದೆ.&lt;/p&gt;&lt;img&gt;&lt;p&gt;ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಚಾಲನೆ ಮಾಡುವುದು ಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಇದನ್ನು ಮನಗಂಡಿರುವ ಬಿಡಿಎ, ಸಾಮಾನ್ಯ ವಾಹನಗಳ ಸಂಚಾರ ದಟ್ಟಣೆಯಿಂದ ಸೈಕಲ್ ಸವಾರರನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲು ಈ ಟ್ರ್ಯಾಕ್ ವಿನ್ಯಾಸಗೊಳಿಸಿದೆ.&lt;/p&gt;&lt;p&gt;ಪ್ರತ್ಯೇಕ ಲೇನ್ ವ್ಯವಸ್ಥೆ: ಈ ಕಾರಿಡಾರ್&zwnj;ನಲ್ಲಿ ಸೈಕಲ್ ಸವಾರರು ಯಾವುದೇ ಕಾರು, ಬೈಕ್ ಅಥವಾ ಭಾರಿ ವಾಹನಗಳ ಭಯವಿಲ್ಲದೆ ಅತ್ಯಂತ ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಸಂಚರಿಸಬಹುದು.&lt;/p&gt;&lt;p&gt;ಪರಿಸರ ಹಾಗೂ ಆರೋಗ್ಯಕ್ಕೆ ಪೂರಕ: ಈ ವಿಶೇಷ ಸೈಕ್ಲಿಂಗ್ ಟ್ರ್ಯಾಕ್ ಬಳಕೆಯಿಂದಾಗಿ ಪಶ್ಚಿಮ ಬೆಂಗಳೂರು ಭಾಗದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ದಟ್ಟಣೆ ಗಣನೀಯವಾಗಿ ತಗ್ಗಲಿದ್ದು, ಕಾರ್ಬನ್ ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೆ, ನಾಗರಿಕರಲ್ಲಿ ದೈಹಿಕ ಆರೋಗ್ಯ ಮತ್ತು ಪರಿಸರ ಸ್ನೇಹಿ ಸಾರಿಗೆ ಸಂಸ್ಕೃತಿಯನ್ನು ಬೆಳೆಸಲು ಇದು ಪ್ರೇರಣೆಯಾಗಲಿದೆ.&lt;/p&gt;&lt;img&gt;&lt;p&gt;ಸದ್ಯ ಈ ಬೃಹತ್ ಸೈಕ್ಲಿಂಗ್ ಕಾರಿಡಾರ್&zwnj;ನ ಸಿವಿಲ್ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಬಿಡಿಎ ಅಧಿಕಾರಿಗಳು ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಲಭ್ಯವಿರುವ ನಂಬಲರ್ಹ ಮೂಲಗಳ ಪ್ರಕಾರ, ಜೂನ್ 27ರಂದು ಅದ್ಧೂರಿಯಾಗಿ ಆಚರಿಸಲಾಗುವ 'ನಾಡಪ್ರಭು ಕೆಂಪೇಗೌಡ ಜಯಂತಿ'ಯ ಶುಭ ಸಂದರ್ಭದಲ್ಲೇ ಈ ಮಹತ್ವಾಕಾಂಕ್ಷಿ ಸೈಕ್ಲಿಂಗ್ ಕಾರಿಡಾರ್ ಅನ್ನು ಸಾರ್ವಜನಿಕ ಸವಾರರ ಬಳಕೆಗೆ ಮುಕ್ತಗೊಳಿಸಿ ಉದ್ಘಾಟಿಸುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಬೆಂಗಳೂರಿನ ಪಶ್ಚಿಮ ಭಾಗದ ಕನೆಕ್ಟಿವಿಟಿಯನ್ನು ಹೆಚ್ಚಿಸುವುದರ ಜೊತೆಗೆ, ಸೈಕಲ್ ಸವಾರಿಗೆ ಹೊಸ ಆಯಾಮ ನೀಡಲಿರುವ ಈ ಕಾರಿಡಾರ್ ಉದ್ಘಾಟನೆಯನ್ನು ನಗರದ ಪರಿಸರವಾದಿಗಳು ಹಾಗೂ ಸೈಕ್ಲಿಸ್ಟ್ ಸಮೂಹ ಅತ್ಯಂತ ಸಕಾರಾತ್ಮಕವಾಗಿ ಬರಮಾಡಿಕೊಳ್ಳಲು ಕಾಯುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bda-builds-massive-10-3-km-dedicated-cycling-track-connecting-magadi-road-and-mysore-road-gdp-v7gwibn"/>
        </item>
        <item>
            <title><![CDATA[ಹಾಸನ ಲೈಂಗಿಕ ಹಗರಣಕ್ಕೆ ಭರ್ತಿ 2 ವರ್ಷ:  ಪೆನ್‌ಡ್ರೈವ್ ಸ್ಫೋಟದಿಂದ ಜೀವಾವಧಿಯವರೆಗೆ ಪ್ರಜ್ವಲ್ ರೇವಣ್ಣ ಜೈಲು ಜೀವನ]]></title>
            <link>https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9</link>
            <guid isPermaLink="true">https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9</guid>
            <pubDate>Fri, 12 Jun 2026 11:15:11 +0530</pubDate>
            <description><![CDATA[ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣವು ಪೆನ್&zwnj;ಡ್ರೈವ್ ಸ್ಫೋಟದಿಂದ ಆರಂಭವಾಗಿ, ಎಸ್&zwnj;ಐಟಿ ತನಿಖೆಯ ನಂತರ ಆರೋಪಿಗೆ ಜೀವಾವಧಿ ಶಿಕ್ಷೆಯಾಗುವುದರೊಂದಿಗೆ ಅಂತ್ಯಗೊಂಡಿದೆ. ಈ ಪ್ರಕರಣವು ರೇವಣ್ಣ ಕುಟುಂಬವನ್ನೂ ಕಾನೂನಿನ ಸುಳಿಯಲ್ಲಿ ಸಿಲುಕಿಸಿ, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01k1qv5qp1b0fpxtc1wgp2m0hh,imgname-prajwal-revanna--3--1754220650177.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಬೆಳಕಿಗೆ ಬಂದು ಭರ್ತಿ ಎರಡು ವರ್ಷಗಳು ಕಳೆದಿವೆ. ಕೇವಲ ಒಂದು ರಾಜಕೀಯ ಹಗರಣವಾಗಿ ಆರಂಭವಾದ ಈ ಪ್ರಕರಣ, ತನಿಖೆಯ ಹಂತಗಳಲ್ಲಿ ದೇಶದ ಅತ್ಯಂತ ಗಂಭೀರ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಒಂದಾಗಿ ಮಾರ್ಪಟ್ಟು, ಅಂತಿಮವಾಗಿ ಆರೋಪಿಗೆ ಜೀವಾವಧಿ ಜೈಲು ಶಿಕ್ಷೆಯಾಗುವಲ್ಲಿ ಕೊನೆಗೊಂಡಿದೆ.&lt;/p&gt;&lt;h2&gt;ಹಾಸನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಪೆನ್&zwnj;ಡ್ರೈವ್ ಸ್ಫೋಟ&lt;/h2&gt;&lt;p&gt;ಎರಡು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ಅಂತಿಮ ಹಂತದಲ್ಲಿ ಹಾಸನ ಕ್ಷೇತ್ರದಲ್ಲಿ ಅಭೂತಪೂರ್ವ ವಿದ್ಯಮಾನವೊಂದು ಜರುಗಿತು. ಹಾಸನದ ಅಂದಿನ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದವು ಎನ್ನಲಾದ ಸಾವಿರಾರು ಅಶ್ಲೀಲ ವಿಡಿಯೋಗಳು ಒಳಗೊಂಡಿದ್ದ &lsquo;ಪೆನ್&zwnj;ಡ್ರೈವ್&zwnj;&rsquo;ಗಳು ಮತದಾನಕ್ಕೆ ಕೇವಲ 24 ಗಂಟೆಗಳ ಮುನ್ನ ಜಿಲ್ಲಾದ್ಯಂತ ಹಂಚಿಕೆಯಾಗಿ ತೀವ್ರ ಸಂಚಲನ ಮೂಡಿಸಿದವು. ಈ ಘಟನೆಯಿಂದ ಇಡೀ ರಾಜ್ಯ ರಾಜಕಾರಣವೇ ಬೆಚ್ಚಿಬಿದ್ದಿತ್ತು. ಮತದಾನ ಪ್ರಕ್ರಿಯೆ ಮುಗಿದ ಕೆಲವೇ ತಾಸುಗಳಲ್ಲಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್&zwnj;ಪೋರ್ಟ್ ಬಳಸಿ ದೇಶ ತೊರೆದು ಜರ್ಮನಿಗೆ ಪರಾರಿಯಾಗಿದ್ದರು.&lt;/p&gt;&lt;h2&gt;ಎಸ್&zwnj;ಐಟಿ ರಚನೆ ಮತ್ತು ತಲೆಮರೆಸಿಕೊಂಡಿದ್ದ ಸಂಸದನ ಬಂಧನ&lt;/h2&gt;&lt;p&gt;ಸಾರ್ವಜನಿಕವಾಗಿ ವ್ಯಕ್ತವಾದ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಈ ಬೃಹತ್ ಲೈಂಗಿಕ ಹಗರಣದ ಸಮಗ್ರ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಯಿತು. ತನಿಖೆ ಚುರುಕುಗೊಳ್ಳುತ್ತಿದ್ದಂತೆ ಮಾಜಿ ಸಂಸದನ ವಿರುದ್ಧ ಸಂತ್ರಸ್ತೆಯರು ಧ್ವನಿ ಎತ್ತಲಾರಂಭಿಸಿದರು ಮತ್ತು ಒಟ್ಟು ಮೂರು ಪ್ರತ್ಯೇಕ ಅತ್ಯಾ*ಚಾರ ಪ್ರಕರಣಗಳು ದಾಖಲಾದವು. ಸುಮಾರು ಒಂದು ತಿಂಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ವಿರುದ್ಧ ಲುಕ್&zwnj;ಔಟ್ ಮತ್ತು ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಯಿತು. ಅಂತಿಮವಾಗಿ ತಾಯ್ನಾಡಿಗೆ ಮರಳಿದ ಕೂಡಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್&zwnj;ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಿಸಿದರು.&lt;/p&gt;&lt;h2&gt;ರೇವಣ್ಣ ಕುಟುಂಬಕ್ಕೆ ತಟ್ಟಿದ ಕಾನೂನು ಬಿಸಿ&lt;/h2&gt;&lt;p&gt;ಈ ಹಗರಣವು ಕೇವಲ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಸೀಮಿತವಾಗದೆ ಇಡೀ ರೇವಣ್ಣ ಕುಟುಂಬವನ್ನು ಕಾನೂನಿನ ಸುಳಿಗೆ ಸಿಲುಕಿಸಿತು. ಪುತ್ರನ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಅಪಹರಣದ ಆರೋಪದ ಮೇರೆಗೆ ಪ್ರಜ್ವಲ್ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಬಂಧನಕ್ಕೊಳಗಾಗಿ ಜೈಲು ಸೇರಬೇಕಾಯಿತು. ಸಂತ್ರಸ್ತೆಯರ ಮೇಲೆ ಪ್ರಭಾವ ಬೀರಲು ಮತ್ತು ಅಪಹರಣಕ್ಕೆ ಸಹಕರಿಸಿದ ಆರೋಪದ ಅಡಿಯಲ್ಲಿ ತಾಯಿ ಭವಾನಿ ರೇವಣ್ಣ ಅವರೂ ಸಹ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಕಾನೂನು ಹೋರಾಟ ಎದುರಿಸುವಂತಾಯಿತು.&lt;/p&gt;&lt;h2&gt;ಕೋರ್ಟ್&zwnj;ನಿಂದ ಐತಿಹಾಸಿಕ ತೀರ್ಪು: ಪ್ರಜ್ವಲ್&zwnj;ಗೆ ಜೀವಾವಧಿ ಶಿಕ್ಷೆ&lt;/h2&gt;&lt;p&gt;ಎಸ್&zwnj;ಐಟಿ ಅಧಿಕಾರಿಗಳು ಸಲ್ಲಿಸಿದ ಬಲಿಷ್ಠ ಸಾಕ್ಷ್ಯಾಧಾರಗಳು, ಸಂತ್ರಸ್ತೆಯರ ಹೇಳಿಕೆಗಳು ಹಾಗೂ ಡಿಜಿಟಲ್ ಪುರಾವೆಗಳನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತು. ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾ*ಚಾರ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಜ್ವಲ್&zwnj;ಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿತು. ಪ್ರಸ್ತುತ ಕಂಬಿ ಎಣಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವು, ಎಷ್ಟೇ ಪ್ರಭಾವಿ ರಾಜಕಾರಣಿಯಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಮತ್ತು ಸಂತ್ರಸ್ತೆಯರ ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/two-years-of-hassan-case-the-timeline-from-infamous-pen-drive-leak-to-prajwal-revanna-life-imprisonment-gdp/articleshow-yo5cdd9"/>
        </item>
    </channel>
</rss>
