<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 10 Apr 2026 19:15:18 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ಮಹಿಳಾ ರೌಡಿ ಶೀಟರ್‌ ಗೆ ಇನ್ಸ್‌ಪೆಕ್ಟರ್ ಪಾಪಣ್ಣ ಲೈಂಗಿಕ ಕಿರುಕುಳ, ತನಿಖೆಗೆ ಆದೇಶಿಸಿದ ಬೆಂಗಳೂರು ಪೊಲೀಸ್ ಆಯುಕ್ತ]]></title>
            <link>https://kannada.asianetnews.com/karnataka-districts/bengaluru-police-inspector-accused-of-harassment-departmental-inquiry-ordered-rowdy-sheeter-yashaswini-complaint-gdp/articleshow-0kdwhdt</link>
            <guid isPermaLink="true">https://kannada.asianetnews.com/karnataka-districts/bengaluru-police-inspector-accused-of-harassment-departmental-inquiry-ordered-rowdy-sheeter-yashaswini-complaint-gdp/articleshow-0kdwhdt</guid>
            <pubDate>Thu, 26 Mar 2026 08:45:49 +0530</pubDate>
            <description><![CDATA[ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್&zwnj;ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಮೇಲೆ ಮಹಿಳಾ ರೌಡಿ ಶೀಟರ್ ಯಶಸ್ವಿನಿ ದೂರು ನೀಡಿದ್ದಾರೆ. ಆಡಿಯೋ ಸಾಕ್ಷ್ಯಗಳ ಸಹಿತ ದೂರು ನೀಡಲಾಗಿದ್ದು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmm221c2jda1qe5tsawtyfba,imgname-d-1774494745986.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕೋಣನಕುಂಟೆ ಪೊಲೀಸ್ ಠಾಣೆ ಇನ್ಸ್&zwnj;ಪೆಕ್ಟರ್ ಪಾಪಣ್ಣ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ರೌಡಿ ಶೀಟರ್&zwnj; ಯಶಸ್ವಿನಿ ದೂರು ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಪಾಪಣ್ಣ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.&lt;/p&gt;&lt;h2&gt;ದೂರಿನಲ್ಲಿ ಏನಿದೆ?&lt;/h2&gt;&lt;p&gt;ದೂರುದಾರೆಯಾಗಿರುವ ಮಹಿಳಾ ರೌಡಿಶೀಟರ್, ಹಲವು ದಿನಗಳಿಂದ ನನಗೆ ಇನ್ಸ್&zwnj;ಪೆಕ್ಟರ್ ಪಾಪಣ್ಣ ಕಿರುಕುಳ ನೀಡುತ್ತಿದ್ದಾರೆ. ಪ್ರತಿ ದಿನ ಮೊಬೈಲ್&zwnj;ಗೆ ನಿರಂತರವಾಗಿ ಕರೆ ಮಾಡುವುದು ಹಾಗೂ ಅಶ್ಲೀಲ ಸಂದೇಶ ಕಳುಹಿಸುವುದು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಇನ್ಸ್&zwnj;ಪೆಕ್ಟರ್ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಯಶಸ್ವಿನಿ ಆರೋಪಿಸಿದ್ದರು. ಮಾತ್ರವಲ್ಲ ವಾಟ್ಸ್ಆಪ್ ಮೂಲಕ ಕಳುಹಿಸಿದ್ದ ಸಂದೇಶಗಳು ಹಾಗೂ ಫೋನ್ ಸಂಭಾಷಣೆಯ ಆಡಿಯೋ ದಾಖಲೆಗಳನ್ನು ಸಹ ಸಾಕ್ಷ್ಯವಾಗಿ ಒದಗಿಸಿದ್ದರು.&lt;/p&gt;&lt;p&gt;ನನ್ನ ಸರ್ ಅಂತ ಕರೆಯಬೇಡ. ನಾನು ನಿನಗೆ ಇನ್ಸ್&zwnj;ಪೆಕ್ಟರ್&zwnj; ಅಲ್ಲ. ಬಾಯ್ ಫ್ರೆಂಡ್ ಎಂದು ಪಾಪಣ್ಣ ಹೇಳುತ್ತಾರೆ. ನನ್ನ ಮೇಲೆ ಬಸವನಗುಡಿ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದೆ. ಹೀಗಿರುವಾಗ ನನ್ನ ಜತೆ ಇನ್ಸ್&zwnj;ಪೆಕ್ಟರ್&zwnj;ಗೆ ಯಾವ ರೀತಿಯ ಸ್ನೇಹ ಇರಲು ಸಾಧ್ಯವಿದೆ? ಎಂದು ದೂರಿನಲ್ಲಿ ಪ್ರಶ್ನಿಸಿದ್ದರು.&lt;/p&gt;&lt;p&gt;2017ರಲ್ಲಿ ಬಸವನಗುಡಿ ಠಾಣೆ ಇನ್ಸ್&zwnj;ಪೆಕ್ಟರ್ ಆಗಿದ್ದಾಗ ನನಗೆ ಪಾಪಣ್ಣ ಪರಿಚಯವಾಗಿದ್ದರು. ಆಗಲೂ ನನ್ನನ್ನು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈಗ ಕೋಣನಕುಂಟೆ ಠಾಣೆಗೆ ವರ್ಗಾವಣೆಯಾದ ಬಳಿಕವು ನನಗೆ ಅವರಿಂದ ಕಿರುಕುಳ ತಪ್ಪಿಲ್ಲ. ಪ್ರತಿ ದಿನ ಕರೆ ಮಾಡಿ ನಿಮ್ಮ ಮನೆಗೆ ಬರುತ್ತೇನೆ. ಏಕಾಂತವಾಗಿ ಸಮಯ ಕಳೆಯಬೇಕು ಎಂದೆಲ್ಲ ಪಾಪಣ್ಣ ಮಾತನಾಡುತ್ತಾರೆ. ಈ ಹಿಂಸೆ ಸಹಿಸಲಾರದೆ ನ್ಯಾಯ ಕೋರಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಕೂಡಲೇ ಇನ್ಸ್&zwnj;ಪೆಕ್ಟರ್ ಪಾಪಣ್ಣ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಯಶಸ್ವಿನಿ ಆಗ್ರಹಿಸಿದ್ದರು.&lt;/p&gt;&lt;h2&gt;ಆಡಿಯೋ ವೈರಲ್&lt;/h2&gt;&lt;p&gt;ಈ ಆರೋಪಗಳು ಗಂಭೀರವಾಗಿರುವುದರಿಂದ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತರು ಹಿರಿಯ ಪೊಲೀಸ್ ಅಧಿಕಾರಿಗೆ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ. ಆರೋಪಿತ ಇನ್ಸ್&zwnj;ಪೆಕ್ಟರ್ ಮತ್ತು ದೂರುದಾರೆಯ ನಡುವೆ ನಡೆದಿರಬಹುದಾದ ಸಂಭಾಷಣೆಯ ಕೆಲವು ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದೂ ಪ್ರಕರಣಕ್ಕೆ ಮತ್ತಷ್ಟು ಗಮನ ಸೆಳೆಯುತ್ತಿದೆ.&lt;/p&gt;&lt;p&gt;ಇದೀಗ, ಈ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಇಲಾಖಾ ಮಟ್ಟದಲ್ಲಿ ತನಿಖೆ ಪ್ರಾರಂಭವಾಗಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಆರೋಪಗಳು ಸಾಬೀತಾದಲ್ಲಿ, ಸಂಬಂಧಿತ ಅಧಿಕಾರಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-police-inspector-accused-of-harassment-departmental-inquiry-ordered-rowdy-sheeter-yashaswini-complaint-gdp/articleshow-0kdwhdt"/>
        </item>
        <item>
            <title><![CDATA['ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ?..' ಯುವತಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಕಿಡಿಗೇಡಿಗಳು ಅರೆಸ್ಟ್]]></title>
            <link>https://kannada.asianetnews.com/crime/five-arrested-foro-young-woman-assaults-varthuru-bengaluru-rav/articleshow-3l2yfgg</link>
            <guid isPermaLink="true">https://kannada.asianetnews.com/crime/five-arrested-foro-young-woman-assaults-varthuru-bengaluru-rav/articleshow-3l2yfgg</guid>
            <pubDate>Tue, 07 Apr 2026 10:49:42 +0530</pubDate>
            <description><![CDATA[ಬೆಂಗಳೂರಿನ ವರ್ತೂರಿನಲ್ಲಿ ಯುವತಿಯೊಬ್ಬಳ ಮೇಲೆ ಅನುಮಾನಗೊಂಡು ಗುಂಪೊಂದು ಅಮಾನವೀಯವಾಗಿ ಹಲ್ಲೆ ನಡೆಸಿದೆ. ಯುವತಿ ನೀಡಿದ ದೂರಿನ ಮೇರೆಗೆ ಐವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knk61rz5rs7d2zvf4xtmnqgw,imgname----------------------81--1775539119077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಏ.7): &lt;/strong&gt;ಯುವತಿಯೊಬ್ಬಳ ಮೇಲೆ ಅನುಮಾನ ವ್ಯಕ್ತಪಡಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ವರ್ತೂರು ಪೊಲೀಸ್ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.&lt;/p&gt;&lt;p&gt;ವರ್ತೂರು ನಿವಾಸಿಯಾದ 20 ವರ್ಷದ ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಬಾಪುನ್&zwnj;, ಪತಾಯ್, ಸುಕ್ಷಪರ್ ಖಾತುನ್, ಸೀಮಾ, ಅಸುರಾ ಖಾತುನ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಗಳಾದ ಜಂಶಿದ್, ಟೂಕೋನ್ ಮತ್ತು ನೂರ್ ಎಂಬುವರು ತಲೆಮರಿಸಿಕೊಂಡಿದ್ದು ಅವರ ಪತ್ತೆಗೆ ಶೋಧ ನಡೆಸಲಾಗಿದೆ.&lt;/p&gt;&lt;p&gt;ಯುವತಿಯು ಮನೆಯಲ್ಲಿ ಯುವಕನೋರ್ವನ ಜತೆಗಿದ್ದಾಳೆ ಎಂಬ ಶಂಕೆಯ ಮೇರೆಗೆ ಆಕೆಯನ್ನು ಮನೆಯಿಂದ ಹೊರಗೆ ಎಳೆದು ತಂದು ಅಮಾನವೀಯವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಯುವತಿಯ ಮನೆಗೆ ನುಗ್ಗಿದ್ದ ಆರೋಪಿಗಳು ನಮ್ಮ ಊರಿಗೆ ಬಂದು ವೇಶ್ಯಾವಾಟಿಕೆ ನಡೆಸುತ್ತೀರಾ? ಎಂದು ಕಿರುಚುತ್ತಾ ದಾಳಿ ಮಾಡಿದ್ದಾರೆ. ಯುವತಿಯನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆ ಪಡೆದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.&lt;/p&gt;&lt;h2&gt;ದೂರಿನಲ್ಲಿ ಏನಿದೆ?&lt;/h2&gt;&lt;p&gt;ತಾನು ಲೇಬರ್ ಶೆಡ್&zwnj;ನಲ್ಲಿ ವಾಸವಾಗಿದ್ದು, ಕೆಲಸಕ್ಕೆ ಹೋಗುವಾಗ ಬರುವಾಗ ಮನೆಯ ಹತ್ತಿರದ ಕೆಲವು ಹುಡುಗರು ತನ್ನನ್ನು ಹಿಂಬಾಲಿಸುತ್ತಿದ್ದು ಅವರಿಗೆ ಹಿಂಬಾಲಿಸದಂತೆ ಎಚ್ಚರಿಕೆ ನೀಡಿದ್ದೆ. ಅವರು ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಶುಕ್ರವಾರ 9.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದೆ. ರಾತ್ರಿ 10.30ರ ಸುಮಾರಿಗೆ ತನ್ನ ಮನೆಯ ಹತ್ತಿರ ಬಂದ ಜಂಶಿದ್, ಟುಕೋನ್, ಬಾಪುನ್, ನೂರ್ ಅವರು ತಮ್ಮ ಜತೆ ಇತರೆ ಕೆಲವು ಮಂದಿಯನ್ನು ಕರೆದುಕೊಂಡು ಬಂದು ಏಕಾಏಕಿ ತನ್ನ ಮೇಲೆ ಜಗಳ ತೆಗೆದು ಕೈಗೆ ಸಿಕ್ಕ ದೊಣ್ಣೆ ಮತ್ತು ಕೋಲುಗಳಿಂದ ಹಿಗ್ಗಾ ಮಗ್ಗ ಹೊಡೆದಿದ್ದಾರೆ. ನನಗೆ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/crime/five-arrested-foro-young-woman-assaults-varthuru-bengaluru-rav/articleshow-3l2yfgg"/>
        </item>
        <item>
            <title><![CDATA[ಕನ್ನಡ ಪರ ಹೋರಾಟಗಾರನ ಬಂಧನಕ್ಕೆ ಇಂಗ್ಲಿಷ್‌ ವಾರಂಟ್, ಒಪ್ಪದ ವಾಟಾಳ್‌ರನ್ನು ರಿಕ್ಷಾದಲ್ಲಿ ಎತ್ತಾಕ್ಕೊಂಡು ಹೋದ ಪೊಲೀಸರು!]]></title>
            <link>https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp</link>
            <guid isPermaLink="true">https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp</guid>
            <pubDate>Wed, 08 Apr 2026 15:37:17 +0530</pubDate>
            <description><![CDATA[ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. 2021ರಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ 42ನೇ ಎಸಿಎಂಎಂ ನ್ಯಾಯಾಲಯವು ಅರೆಸ್ಟ್ ವಾರಂಟ್ ಹೊರಡಿಸಿತ್ತು. ಬಂಧನದ ವೇಳೆ ಪೊಲೀಸರು ಮತ್ತು ವಾಟಾಳ್ ನಡುವೆ ವಾಗ್ವಾದ ನಡೆದು, ಹೈಡ್ರಾಮ ಸೃಷ್ಟಿಯಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01knp8wwbbj32qc516twsq3m8f,imgname-vatal-nagaraj-arrest-1775642767723.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯ ಅರೆಸ್ಟ್ ವಾರಂಟ್ ಹೊರಡಿಸಿದ ಹಿನ್ನೆಲೆ, ಬಸವೇಶ್ವರನಗರ ಪೊಲೀಸರು ಅವರನ್ನು ಬಂಧಿಸಿದ ಘಟನೆ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಎಸ್&zwnj;ಎಸ್&zwnj;ಎಲ್&zwnj;ಸಿ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕೆಂದು ಆಗಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ನಿವಾಸದ ಮುಂದೆ 2021ರಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;p&gt;ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಕೋರ್ಟ್ ಹಿಯರಿಂಗ್&zwnj;ಗಳಿಗೆ ಹಾಜರಾಗದೆ ಇದ್ದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ. ಇದನ್ನು ಜಾರಿಗೊಳಿಸಲು ಬಸವೇಶ್ವರನಗರ ಪೊಲೀಸರು ಅವರ ಮನೆಗೆ ತೆರಳಿದ ವೇಳೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು.&lt;/p&gt;&lt;p&gt;ಪೊಲೀಸರು ವಾರಂಟ್&zwnj;ನ ಸಾಫ್ಟ್ ಕಾಪಿಯನ್ನು ತೋರಿಸಿದಾಗ, ಹಾರ್ಡ್ ಕಾಪಿ ಇಲ್ಲದೆ ನಾನು ನಿಮ್ಮ ಜೊತೆ ಬರುವುದಿಲ್ಲ ಎಂದು ವಾಟಾಳ್ ಆಕ್ಷೇಪ ವ್ಯಕ್ತಪಡಿಸಿದರು. ನನ್ನನ್ನು ಬಂಧಿಸಲು ನಿಮ್ಮ ಬಳಿ ಸರಿಯಾದ ವಾರಂಟ್ ಇದೆಯೇ? ಯಾವ ಪ್ರಕರಣದಲ್ಲಿ ಬಂಧಿಸುತ್ತಿದ್ದೀರಿ ಹೇಳಿ ಎಂದು ಪ್ರಶ್ನಿಸಿದರು. ನಾನು ಓಡಿ ಹೋಗಬೇಕೆಂದಿದ್ದರೆ ನಿನ್ನೆನೇ ಹೋಗುತ್ತಿದ್ದೆ. ಆರು ವರ್ಷಗಳ ಹಿಂದೆ ನಾನು ಒಬ್ಬನೇ ಪ್ರತಿಭಟನೆ ನಡೆಸಿದ್ದೆ. ಯಾವುದೇ ಗಲಾಟೆ, ದರೋಡೆ ಮಾಡಿಲ್ಲ. ಕೊರೊನಾ ಸಮಯದಲ್ಲಿ ರಾಜ್ಯದ ಮಕ್ಕಳಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಹೋರಾಟ ನಡೆಸಿದ್ದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಇಂಗ್ಲಿಷ್&zwnj;ನಲ್ಲಿ ವಾರಂಟ್ ತಂದಿದ್ದಕ್ಕೆ ವಾಟಾಳ್ ಅಸಮಾಧಾನ&lt;/h2&gt;&lt;p&gt;ಇದೇ ವೇಳೆ, ವಾರಂಟ್ ಇಂಗ್ಲಿಷ್&zwnj;ನಲ್ಲಿ ತಂದಿರುವುದಕ್ಕೂ ವಾಟಾಳ್ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಪರ ಹೋರಾಟಗಾರನನ್ನು ಬಂಧಿಸಲು ಇಂಗ್ಲಿಷ್&zwnj;ನಲ್ಲಿ ವಾರಂಟ್ ತರುತ್ತೀರಾ? ಕನ್ನಡದಲ್ಲಿ ವಾರಂಟ್ ತೆಗೆದುಕೊಂಡು ಬನ್ನಿ ಎಂದು ಅವರು ಪೊಲೀಸರ ವಿರುದ್ಧ ಗರಂ ವ್ಯಕ್ತಪಡಿಸಿದರು.&lt;/p&gt;&lt;h2&gt;ಆಟೋ ವ್ಯವಸ್ಥೆ ಮಾಡಿ ಕೋರ್ಟ್ ಗೆ ಕರೆದೊಯ್ದ ಪೊಲೀಸರು&lt;/h2&gt;&lt;p&gt;ಆದರೂ, ನಂತರ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ಬಂಧಿಸಿ ಕರೆದೊಯ್ದರು. ಪೊಲೀಸ್ ವಾಹನದಲ್ಲಿ ಹೋಗುವುದಕ್ಕೆ ನಿರಾಕರಿಸಿದ ಕಾರಣ, ಪೊಲೀಸರು ಆಟೋ ವ್ಯವಸ್ಥೆ ಮಾಡಿ ಅವರನ್ನು ಕೋರ್ಟ್&zwnj;ಗೆ ಕರೆದೊಯ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಂಧನದ ನಂತರ, ವಾಟಾಳ್ ನಾಗರಾಜ್ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಟ್ಟಾರೆ, ಈ ಘಟನೆ ನಗರದಲ್ಲಿ ಸಣ್ಣ ಮಟ್ಟಿನ ಹೈಡ್ರಾಮಕ್ಕೆ ಕಾರಣವಾಗಿದ್ದು, ವಾಟಾಳ್ ನಾಗರಾಜ್ ಬಂಧನವು ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/pro-kannada-activist-vatal-nagaraj-arrested-after-court-issues-warrant-in-bengaluru-gdp/articleshow-3y311vp"/>
        </item>
        <item>
            <title><![CDATA[ರನ್ಯಾ ರಾವ್ ಬಳಿಕ ಮತ್ತೊಂದು ಸ್ಮಗ್ಲಿಂಗ್, ಬೆಂಗಳೂರು ಏರ್ಪೋರ್ಟ್‌ನಲ್ಲಿ 5 ಕೋಟಿ ಮೌಲ್ಯದ ಚಿನ್ನ ಸಹಿತ ಆರೋಪಿಗಳು ವಶಕ್ಕೆ!]]></title>
            <link>https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um</link>
            <guid isPermaLink="true">https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um</guid>
            <pubDate>Tue, 07 Apr 2026 21:25:07 +0530</pubDate>
            <description><![CDATA[ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್&zwnj;ಐ ಅಧಿಕಾರಿಗಳು ಸುಮಾರು 5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐವರನ್ನು ಬಂಧಿಸಲಾಗಿದ್ದು, ಆರೋಪಿಗಳು ದೇಹದ ಖಾಸಗಿ ಭಾಗಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದರು. ಈ ಜಾಲದಲ್ಲಿ ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knma8epg3jfgg0d3vvybmw14,imgname-tumakuru-hero-stone-inscription--2--1775577086671.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAL) ಭಾರೀ ಪ್ರಮಾಣದ ಚಿನ್ನದ ಕಳ್ಳಸಾಗಣೆ ಜಾಲವನ್ನು ಭೇದಿಸಿ, ಸುಮಾರು 5 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 356 ಗ್ರಾಂ ಶುದ್ಧ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಸೇರಿ ಒಟ್ಟು ಐದು ಮಂದಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;ರನ್ಯಾ ರಾವ್ ಪ್ರಕರಣದ ಬಳಿಕ ಮತ್ತೊಂದು ದೊಡ್ಡ ಸ್ಮಗ್ಲಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, DRI ಅಧಿಕಾರಿಗಳ ಕಾರ್ಯಾಚರಣೆ ಗಮನಸೆಳೆಯುತ್ತಿದೆ. ಗುಪ್ತಚರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಟರ್ಮಿನಲ್-2 ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;ಚಿನ್ನ ಸಾಗಾಟದ ಹೊಸ ತಂತ್ರಗಳು ಬಯಲು&lt;/h2&gt;&lt;p&gt;ತನಿಖೆಯಲ್ಲಿ ಆರೋಪಿಗಳು ಚಿನ್ನವನ್ನು ಕ್ಯಾಪ್ಸುಲ್ ಹಾಗೂ ಪೇಸ್ಟ್ ರೂಪದಲ್ಲಿ ಪರಿವರ್ತಿಸಿ ದೇಹದ ಖಾಸಗಿ ಭಾಗಗಳಲ್ಲಿ ಅಡಗಿಸಿಕೊಂಡು ಸಾಗಾಟ ಮಾಡುತ್ತಿದ್ದರೆಂಬ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ವಿಮಾನ ನಿಲ್ದಾಣದ ಶೌಚಾಲಯಗಳು ಮತ್ತು ಧೂಮಪಾನ ವಲಯಗಳಲ್ಲಿ ಈ ಚಿನ್ನವನ್ನು ಪರಸ್ಪರ ಹಸ್ತಾಂತರ ಮಾಡಲಾಗುತ್ತಿತ್ತು.&lt;/p&gt;&lt;p&gt;ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ವಿಶೇಷ ಪಾಸ್&zwnj;ಕೋಡ್&zwnj;ಗಳನ್ನು ಬಳಸಿಕೊಂಡು ಸಂಪರ್ಕ ಸಾಧಿಸುತ್ತಿದ್ದರು. ಇನ್ನು ಸಂವಹನಕ್ಕಾಗಿ ಎನ್&zwnj;ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಡಿಸಪಿಯರ್ ಚಾಟ್&zwnj;ಗಳನ್ನೂ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;h2&gt;ಏರ್ಪೋರ್ಟ್ ಸಿಬ್ಬಂದಿಯ ಪಾತ್ರದ ಶಂಕೆ&lt;/h2&gt;&lt;p&gt;ಈ ಕಳ್ಳಸಾಗಣೆ ಜಾಲವು ಸಿಂಡಿಕೇಟ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಧ್ಯತೆ ಇದ್ದು, ನಿರ್ಬಂಧಿತ ವಲಯಗಳಿಗೆ ಅಧಿಕೃತ ಪ್ರವೇಶ ಹೊಂದಿದ್ದ ವ್ಯಕ್ತಿಗಳ ಸಹಕಾರವೂ ಇದರಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು DRI ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.&lt;/p&gt;&lt;h2&gt;ಬಾಂಗ್ಲಾದೇಶ ಮೂಲದ ಜಾಲದ ಸುಳಿವು&lt;/h2&gt;&lt;p&gt;ಪ್ರಾಥಮಿಕ ತನಿಖೆಯಲ್ಲಿ ಈ ಕಳ್ಳಸಾಗಣೆ ಜಾಲದ ಹಿಂದೆ ಬಾಂಗ್ಲಾದೇಶ ಮೂಲದ ವ್ಯಕ್ತಿಗಳ ಸಂಪರ್ಕ ಇರುವುದಾಗಿ ತಿಳಿದುಬಂದಿದೆ. ಜೊತೆಗೆ ಬೆಂಗಳೂರಿನ ಕೆಲವರ ಸಹ ಭಾಗಿತ್ವವೂ ಇರುವ ಶಂಕೆ ವ್ಯಕ್ತವಾಗಿದೆ. ಆದರೆ ಈ ಜಾಲದ ಪ್ರಮುಖ ಮಾಸ್ಟರ್&zwnj;ಮೈಂಡ್&zwnj;ಗಳು (Kingpins) ಇನ್ನೂ ಪತ್ತೆಯಾಗಿಲ್ಲ.&lt;/p&gt;&lt;h2&gt;ತನಿಖೆ ಮುಂದುವರಿಕೆ&lt;/h2&gt;&lt;p&gt;ಪ್ರಸ್ತುತ ಪ್ರಕರಣದ ಕುರಿತು DRI ಅಧಿಕಾರಿಗಳು ಸವಿಸ್ತಾರ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ. ಈ ಘಟನೆ ಬೆಂಗಳೂರು ಏರ್ಪೋರ್ಟ್&zwnj;ನಲ್ಲಿ ಭದ್ರತಾ ಕ್ರಮಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/gold-smuggling-busted-at-bengaluru-airport-dri-seizes-rs-5-crore-gold-5-bangladeshi-nationals-arrested-gdp/articleshow-4g3s9um"/>
        </item>
        <item>
            <title><![CDATA[ಬೆಂಗಳೂರು: ರೈಲ್ವೆ ಹಳಿಗಳ ಬಳಿಯ ಮನೆಗಳ್ಳನಿಂದ ಅರ್ಧ ಕೆಜಿ ಚಿನ್ನ ಜಪ್ತಿ! ಖತರ್ನಾಕ್ ಕಳ್ಳನ ಕರಾಮತ್ತು ಕೇಳಿ!]]></title>
            <link>https://kannada.asianetnews.com/karnataka-districts/bengaluru-burglary-case-police-seize-rs-79-lakh-gold-from-accused-using-railway-tracks-to-evade-cctv-gdp/articleshow-66eyqeo</link>
            <guid isPermaLink="true">https://kannada.asianetnews.com/karnataka-districts/bengaluru-burglary-case-police-seize-rs-79-lakh-gold-from-accused-using-railway-tracks-to-evade-cctv-gdp/articleshow-66eyqeo</guid>
            <pubDate>Wed, 25 Mar 2026 15:42:01 +0530</pubDate>
            <description><![CDATA[ಬೆಂಗಳೂರಿನ ರಾಮಮೂರ್ತಿನಗರ ಪೊಲೀಸರು, ರೈಲು ಹಳಿಗಳನ್ನೇ ಬಳಸಿ ಸಿಸಿಟಿವಿ ಕಣ್ತಪ್ಪಿಸಿ ಸರಣಿ ಮನೆಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು ₹79 ಲಕ್ಷ ಮೌಲ್ಯದ 527 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಈ ಹಿಂದೆಯೂ ಇದೇ ಮಾದರಿಯ ಕೃತ್ಯಕ್ಕಾಗಿ ಬಂಧಿತನಾಗಿದ್ದನು.]]></description>
            <media:content url="https://static.asianetnews.com/images/w-1280,h-720,format-jpg,imgid-01kmj7fes5na8m4gdmvw0kzj8e,imgname-bengaluru-house-theft-case-1774433319717.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು &lt;/strong&gt;ನಗರದ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಯಿಂದ ಪೊಲೀಸರು ಮತ್ತೊಮ್ಮೆ ಭಾರೀ ಪ್ರಮಾಣದ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ರೈಲು ಹಳಿಗಳ ಸುತ್ತಮುತ್ತ ಇರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ, ಸುಮಾರು 527 ಗ್ರಾಂ ತೂಕದ ಚಿನ್ನಾಭರಣವನ್ನು (ಅಂದಾಜು ₹79 ಲಕ್ಷ ಮೌಲ್ಯ) ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಬಂಧಿತನನ್ನು ಚಿಕ್ಕಬಾಣವಾರದ ಅಬ್ಬಿಗೆರೆ ನಿವಾಸಿ ಡಿ. ರಾಜ (46) ಎಂದು ಗುರುತಿಸಲಾಗಿದೆ. ಮೂಲತಃ ದಾವಣಗೆರೆ ಜಿಲ್ಲೆಯವನಾದ ಈತ, ನಗರದಲ್ಲಿ ಸಿಸಿಟಿವಿ ನಿಗಾವಳಿಯನ್ನು ತಪ್ಪಿಸಲು ವಿಶಿಷ್ಟ ರೀತಿಯಲ್ಲಿ ಕಳವು ನಡೆಸುತ್ತಿದ್ದನು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಹಿಂದೆಯೇ ಬಂಧನ &ndash; ಮತ್ತೆ ಚಿನ್ನ ಪತ್ತೆ&lt;/h2&gt;&lt;p&gt;ಕೆಲ ದಿನಗಳ ಹಿಂದೆಯೇ ಇದೇ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆಗಲೂ ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಇದೀಗ ರಾಮಮೂರ್ತಿನಗರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿದ್ದ ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮತ್ತೊಮ್ಮೆ ಅರ್ಧ ಕೆಜಿ ಚಿನ್ನಾಭರಣ ಪತ್ತೆಯಾಗಿದೆ.&lt;/p&gt;&lt;h2&gt;ರೈಲ್ವೇ ಟ್ರ್ಯಾಕ್&zwnj; ಮೂಲಕ ಕಳ್ಳತನದ ಮಾಸ್ಟರ್ ಪ್ಲಾನ್&lt;/h2&gt;&lt;p&gt;ಪೊಲೀಸರ ಪ್ರಕಾರ, ಆರೋಪಿ ರಾಜ ರೈಲು ಹಳಿಗಳನ್ನೇ ತನ್ನ ಓಡಾಟದ ಮಾರ್ಗವನ್ನಾಗಿ ಬಳಸುತ್ತಿದ್ದ. ನಗರದ ಒಳಭಾಗಗಳಲ್ಲಿ ಸಂಚರಿಸಿದರೆ ಸಿಸಿಟಿವಿಯಲ್ಲಿ ಸಿಕ್ಕಿಬೀಳುವ ಸಾಧ್ಯತೆ ಇರುವುದರಿಂದ, ಆತ ರೈಲ್ವೇ ಟ್ರ್ಯಾಕ್&zwnj;ಗಳ ಮೇಲೆಯೇ ನಡೆದುಕೊಂಡು ಹೋಗಿ ಗುರಿ ಮನೆಗಳನ್ನು ಆಯ್ಕೆ ಮಾಡುತ್ತಿದ್ದನು.&lt;/p&gt;&lt;p&gt;ರೈಲು ಹಳಿಗಳ ಪಕ್ಕದ ಮನೆಗಳ ಬಾಗಿಲುಗಳನ್ನು ಮುರಿದು ಕಳವು ಕಳ್ಳತನದ ನಂತರ ಕೂಡಲೇ ಸ್ಥಳ ತೊರೆಯದೆ, ಕೆಲವು ಗಂಟೆಗಳ ಕಾಲ ಅಲ್ಲೇ ಅಡಗಿ ಕುಳಿತುಕೊಳ್ಳುವುದು ಪೊಲೀಸರು ಸಿಸಿಟಿವಿ ಟೈಮ್&zwnj;ಲೈನ್ ಪರಿಶೀಲನೆ ಮಾಡುವುದನ್ನು ತಪ್ಪಿಸಲು ಯತ್ನ ಈ ರೀತಿಯ ಚಾತುರ್ಯದಿಂದ ಹಲವು ಕಳವು ಪ್ರಕರಣಗಳನ್ನು ಈತ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಪೊಲೀಸರ ಸೂಕ್ಷ್ಮ ತನಿಖೆ ಫಲಿತಾಂಶ&lt;/h2&gt;&lt;p&gt;ಸಿಸಿಟಿವಿ ದೃಶ್ಯಗಳು ಹಾಗೂ ಸಮಯದ ಆಧಾರದ ಮೇಲೆ ಪೊಲೀಸರ ತಂಡ ತನಿಖೆ ನಡೆಸಿ, ಆರೋಪಿ ಸಂಚರಿಸಿದ ಮಾರ್ಗಗಳನ್ನು ಪತ್ತೆಹಚ್ಚಿತು. ಬಳಿಕ ಕ್ರಮಬದ್ಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.&lt;/p&gt;&lt;p&gt;ರೈಲು ಹಳಿಗಳನ್ನು ಬಳಸಿಕೊಂಡು ಕಳವು ನಡೆಸುತ್ತಿದ್ದ ಆರೋಪಿಯ ಕುತಂತ್ರವನ್ನು ಪೊಲೀಸರು ಭೇದಿಸಿ, ದೊಡ್ಡ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡಿರುವುದು ಗಮನಾರ್ಹವಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ರಾಮಮೂರ್ತಿನಗರ ಪೊಲೀಸರು ಇನ್ನಷ್ಟು ವಿಚಾರಣೆ ಮುಂದುವರಿಸಿದ್ದು, ಇನ್ನೂ ಹೆಚ್ಚಿನ ಪ್ರಕರಣಗಳ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-burglary-case-police-seize-rs-79-lakh-gold-from-accused-using-railway-tracks-to-evade-cctv-gdp/articleshow-66eyqeo"/>
        </item>
        <item>
            <title><![CDATA[ಬೆಂಗಳೂರು:ಗೂಗಲ್ ಮ್ಯಾಪ್ ಅವಾಂತರ, ನಿಂತಿದ್ದ ಕಾರಿಗೆ ಲೋಡ್‌ ತುಂಬಿದ ಲಾರಿ ಗುದ್ದಿ ನಿದ್ದೆಯಲ್ಲಿದ್ದ ಯುವಕ ಸಜೀವ ದಹನ!]]></title>
            <link>https://kannada.asianetnews.com/karnataka-districts/bengaluru-tragic-accident-youth-dies-after-truck-rams-car-sparks-massive-fire-in-kurubarahalli-gdp/articleshow-9ydh30h</link>
            <guid isPermaLink="true">https://kannada.asianetnews.com/karnataka-districts/bengaluru-tragic-accident-youth-dies-after-truck-rams-car-sparks-massive-fire-in-kurubarahalli-gdp/articleshow-9ydh30h</guid>
            <pubDate>Fri, 27 Mar 2026 09:56:12 +0530</pubDate>
            <description><![CDATA[ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೂಗಲ್ ಮ್ಯಾಪ್ ಅನುಸರಿಸಿ ಬಂದ ಓವರ್&zwnj;ಲೋಡ್ ಲಾರಿಯೊಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಕಾರಿನಲ್ಲೇ ಮಲಗಿದ್ದ 23 ವರ್ಷದ ಕ್ಯಾಬ್ ಚಾಲಕ ಸಜೀವ ದಹನವಾಗಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯು ನಿಷೇಧಿತ ಮಾರ್ಗಗಳಲ್ಲಿ ಭಾರೀ ವಾಹನಗಳ ಸಂಚಾರದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmprk4ex9s5g4y39ajn627k9,imgname-kurubarahalli-1774585483741.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಕುರುಬರಹಳ್ಳಿ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಲಾರಿಯ ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾತ್ರಿ ಸುಮಾರು 1.30ರ ಸುಮಾರಿಗೆ ನಡೆದಿದೆ. ಆಂಧ್ರ ಪ್ರದೇಶದಿಂದ ಸುಂಕದಕಟ್ಟೆ ಕಡೆಗೆ ಕಬ್ಬಿಣ ತುಂಬಿಕೊಂಡು ಬರುತ್ತಿದ್ದ ಲಾರಿ, ಗೂಗಲ್ ಮ್ಯಾಪ್ ಮಾರ್ಗದರ್ಶನದಂತೆ ಕುರುಬರಹಳ್ಳಿ ಮಾರ್ಗವಾಗಿ ಸಾಗುತ್ತಿತ್ತು. ಆದರೆ ಈ ಮಾರ್ಗದಲ್ಲಿ ಇಳಿಜಾರು ರಸ್ತೆ ಇರುವುದರಿಂದ, ಈಗಾಗಲೇ ಓವರ್&zwnj;ಲೋಡ್ ಆಗಿದ್ದ ಲಾರಿ ನಿಯಂತ್ರಣ ತಪ್ಪಿದೆ.&lt;/p&gt;&lt;h2&gt;ಗೂಗಲ್ ಮ್ಯಾಪ್ ತಂದ ಅವಾಂತರ&lt;/h2&gt;&lt;p&gt;ಚಾಲಕ ಗೂಗಲ್ ಮ್ಯಾಪ್ ನೋಡಿಕೊಂಡು ಬರುತ್ತಿದ್ದ, ಗೂಗಲ್ ಮ್ಯಾಪ್ನಲ್ಲಿ ಕುರುಬರಹಳ್ಳಿ ಮುಖಾಂತರ ದಾರಿ ತೋರಿಸಿತ್ತು. ಕುರುಬರಹಳ್ಳಿ ಬಳಿಯಲ್ಲಿ ಬಹುತೇಕ ಇಳಿಜಾರು ರಸ್ತೆ ಇದೆ. ಹೀಗಾಗಿ ಇಳಿಜಾರಿನಲ್ಲಿ ಲೋಡ್ ತುಂಬಿದ ಲಾರಿ ಕಂಟ್ರೋಲ್&zwnj; ಗೆ ಸಿಗದೆ ನಿಯಂತ್ರಣ ತಪ್ಪಿ, ಮನೆ ಮುಂದೆ ನಿಲ್ಲಿಸಲಾಗಿದ್ದ ಸಿಎನ್&zwnj;ಜಿ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ತೀವ್ರತೆಯಿಂದ ಕಾರನ್ನು ಸುಮಾರು 50ರಿಂದ 100 ಮೀಟರ್ ದೂರವರೆಗೆ ಎಳೆದೊಯ್ದಿದೆ. ನಂತರ ಕಾರು ಸಮೀಪದಲ್ಲಿದ್ದ ಸ್ಕ್ರಾಪ್ ಗೋಡೌನ್&zwnj;ಗೆ ನುಗ್ಗಿದ್ದು, ಡಿಕ್ಕಿಯಿಂದ ಉಂಟಾದ ಸ್ಪಾರ್ಕ್&zwnj;ನಿಂದ ಕಾರು ಹಾಗೂ ಸ್ಕ್ರಾಪ್ ಸಾಮಗ್ರಿಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಾರು ಮತ್ತು ಲಾರಿ ಎರಡೂ ಹೊತ್ತಿ ಉರಿದಿವೆ.&lt;/p&gt;&lt;h2&gt;ಕಲಬುರಗಿ ಮೂಲದ ಯುವಕ ಮೃತ್ಯು&lt;/h2&gt;&lt;p&gt;ಘಟನೆಯ ಸಮಯದಲ್ಲಿ ಕಾರಿನೊಳಗೆ ಮಲಗಿದ್ದ ಕಲಬುರಗಿ ಮೂಲದ ಅಂಬದಾಸ್ (23) ಎಂಬ ಯುವಕ ಬೆಂಕಿಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರತೆಗೆದಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಐದಾರು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು.&lt;/p&gt;&lt;p&gt;ಲಾರಿ ಚಾಲಕ ಶರ್ಮಾ ಅಪಘಾತ ಸಂಭವಿಸುತ್ತಿದ್ದಂತೆಯೇ ಲಾರಿಯಿಂದ ಜಿಗಿದು ಸಮೀಪದ ರಾಜಾಕಾಲುವೆಗೆ ಹಾರಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಸಂಬಂಧ ರಾಜಾಜಿನಗರ ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.&lt;/p&gt;&lt;p&gt;ಮೃತ ಅಂಬದಾಸ್ ಕುರುಬರಹಳ್ಳಿಯಲ್ಲೇ ಕುಟುಂಬ ಸಮೇತ ವಾಸವಾಗಿದ್ದು, ಡಿಗ್ರಿ ಪೂರ್ಣಗೊಳಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ನಂತರ ಸ್ವಂತವಾಗಿ ಕ್ಯಾಬ್&zwnj; ಖರೀದಿಸಿ ಡ್ರೈವಿಂಗ್ ವೃತ್ತಿಗೆ ಇಳಿದಿದ್ದನು. ಲೋನ್ ಪಡೆದು ಕಾರು ಖರೀದಿಸಿದ್ದರಿಂದ ಪ್ರತಿ ತಿಂಗಳು ₹25 ಸಾವಿರ ಇಎಮ್&zwnj;ಐ ಕಟ್ಟಬೇಕಾಗಿತ್ತು. ಹಗಲು-ರಾತ್ರಿ ದುಡಿದು ಸಾಲ ತೀರಿಸಲು ಶ್ರಮಿಸುತ್ತಿದ್ದನು.&lt;/p&gt;&lt;h2&gt;ಏರ್ಪೋರ್ಟ್ ಡ್ಯೂಟಿ ಬರಬಹುದು ಎಂಬ ನಿರೀಕ್ಷೆದ್ದ ಚಾಲಕ&lt;/h2&gt;&lt;p&gt;ಘಟನೆ ನಡೆದ ರಾತ್ರಿ ಕೂಡ ಒಂದು ಡ್ಯೂಟಿ ಮುಗಿಸಿ ಮತ್ತೊಂದು ಡ್ಯೂಟಿಗಾಗಿ ಕಾಯುತ್ತಾ ಕಾರಿನಲ್ಲೇ ಮಲಗಿದ್ದಾಗ ಈ ದುರ್ಘಟನೆ ನಡೆದಿದೆ. ಮನೆಯ ಬಳಿಯೇ ಕಾರು ನಿಲ್ಲಿಸಿಕೊಂಡಿದ್ದರೂ, ಏರ್ಪೋರ್ಟ್ ಡ್ಯೂಟಿ ಬರಬಹುದು ಎಂಬ ನಿರೀಕ್ಷೆಯಲ್ಲಿ ಹೊರಗೆ ಹೋಗದೆ ಕಾರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.&lt;/p&gt;&lt;p&gt;ಈ ವರ್ಷವೇ ಮಗನ ಮದುವೆ ಮಾಡುವ ಯೋಜನೆ ಮಾಡಿಕೊಂಡಿದ್ದ ಕುಟುಂಬಸ್ಥರು, ಮುಂದಿನ ತಿಂಗಳು ಹೆಣ್ಣು ನೋಡಲು ಮಾತುಕತೆ ನಡೆಸಿದ್ದರು. ಆದರೆ ಈ ದುರಂತದಿಂದ ಅವರ ಎಲ್ಲಾ ಕನಸುಗಳು ಚೂರುಚೂರಾಗಿವೆ.&lt;/p&gt;&lt;p&gt;ಮೃತನ ತಾಯಿ ಶಾಂತಾಬಾಯಿ ದುಃಖ ತಡೆಯಲಾಗದೆ ಕಣ್ಣೀರಿಡುತ್ತಾ, &ldquo;ನನ್ನ ಮಗ ಡಿಗ್ರಿ ಓದಿ ಕೆಲಸ ಮಾಡುತ್ತಿದ್ದ. ಆದರೆ ಡ್ರೈವಿಂಗ್ ಮಾಡಬೇಕು ಎಂದು ಕ್ಯಾಬ್ ತೆಗೆದುಕೊಂಡ. ಒಂದು ಡ್ಯೂಟಿ ಮುಗಿಸಿ ಇನ್ನೊಂದು ಕಾಯುತ್ತಿದ್ದ. ರಾತ್ರಿ ಒಂದು ಗಂಟೆ ಸುಮಾರಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ನನ್ನ ಮಗನ ದೇಹವೇ ಪತ್ತೆಯಾಗುತ್ತಿಲ್ಲ, ಏನು ಮಾಡಬೇಕು&rdquo; ಎಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಅಪಘಾತದ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ನಿಷೇಧಿತ ಮಾರ್ಗಗಳಲ್ಲಿ ಓವರ್&zwnj;ಲೋಡ್ ವಾಹನಗಳ ಸಂಚಾರದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.&lt;/p&gt;&lt;p&gt;ಒಟ್ಟಾರೆ, ಗೂಗಲ್ ಮ್ಯಾಪ್ ಮಾರ್ಗದರ್ಶನ, ಓವರ್&zwnj;ಲೋಡ್ ಲಾರಿ ಹಾಗೂ ಇಳಿಜಾರು ರಸ್ತೆಯ ಸಂಯೋಗದಿಂದ ಸಂಭವಿಸಿದ ಈ ದುರಂತ, ಅಮಾಯಕ ಯುವಕನ ಪ್ರಾಣವನ್ನು ಬಲಿ ಪಡೆದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-tragic-accident-youth-dies-after-truck-rams-car-sparks-massive-fire-in-kurubarahalli-gdp/articleshow-9ydh30h"/>
        </item>
        <item>
            <title><![CDATA[ಬೆಂಗಳೂರಲ್ಲಿ ಸಡನ್ ಮಳೆ, ವಾಪಸಾದ ವಿಮಾನಗಳು! ರಾಜ್ಯಪಾಲರಿದ್ದ ವಿಮಾನ ಲ್ಯಾಂಡಿಂಗ್ ಆಗದೆ ಮಂಗಳೂರಿಗೆ ವಾಪಸ್!]]></title>
            <link>https://kannada.asianetnews.com/karnataka-districts/heavy-rain-disrupts-flight-operations-at-bengaluru-airport-flights-diverted-amid-sudden-showers-gdp/articleshow-acekwo2</link>
            <guid isPermaLink="true">https://kannada.asianetnews.com/karnataka-districts/heavy-rain-disrupts-flight-operations-at-bengaluru-airport-flights-diverted-amid-sudden-showers-gdp/articleshow-acekwo2</guid>
            <pubDate>Fri, 10 Apr 2026 18:42:28 +0530</pubDate>
            <description><![CDATA[ಬೆಂಗಳೂರಿನಲ್ಲಿ ಅಕಸ್ಮಿಕವಾಗಿ ಸುರಿದ ಮಳೆಯು ಜನರಿಗೆ ತಂಪು ನೀಡಿದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ. ಪ್ರತಿಕೂಲ ಹವಾಮಾನದಿಂದಾಗಿ ಮಂಗಳೂರು, ಚೆನ್ನೈ ಮತ್ತು ಮುಂಬೈನಿಂದ ಬಂದ ನಾಲ್ಕು ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ತಮ್ಮ ಮೂಲ ನಗರಗಳಿಗೆ ಹಿಂತಿರುಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwcjrmt19eyyc1xsx5xpfhq1,imgname-vdv-1748474024769.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದಲ್ಲಿ ಅಕಸ್ಮಿಕವಾಗಿ ಸುರಿದ ಮಳೆಯು ಜನರಿಗೆ ತಂಪು ತಂದಿದ್ದರೂ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ವಿಮಾನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ. ಮಳೆ ಹಾಗೂ &amp;nbsp;ವಾತಾವರಣ ದುರ್ಬಲ ಹಿನ್ನೆಲೆಯಲ್ಲಿ ರನ್&zwnj;ವೇ ಮೇಲೆ ಲ್ಯಾಂಡ್ ಆಗಬೇಕಿದ್ದ ನಾಲ್ಕು ವಿಮಾನಗಳನ್ನು &amp;nbsp;ಮತ್ತೆ ಬಂದಲ್ಲಿಗೆ ಅವುಗಳನ್ನು &amp;nbsp; ಹಿಂತಿರುಗಿಸಲಾಗಿದೆ.&lt;/p&gt;&lt;p&gt;ಮಂಗಳೂರುನಿಂದ ಬಂದ ಒಂದು ವಿಮಾನ, ಚೆನ್ನೈಯಿಂದ ಬಂದ ಎರಡು ವಿಮಾನಗಳು ಹಾಗೂ ಮುಂಬೈಯಿಂದ ಬಂದ ಒಂದು ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೆ ಮತ್ತೆ ತಮ್ಮ ತಮ್ಮ ನಗರಗಳಿಗೆ ವಾಪಸ್ ಹೋಗಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಶೇಷವಾಗಿ ಮಂಗಳೂರಿನಿಂದ 4.30ಕ್ಕೆ ಹೊರಟ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸುತ್ತಿದ್ದ ವಿಮಾನವೂ ಲ್ಯಾಂಡ್ ಆಗಲು ಸಾಧ್ಯವಾಗದೆ ಹಿಂತಿರುಗಿರುವ ಬಗ್ಗೆ ವರದಿಯಾಗಿದೆ.&lt;/p&gt;&lt;h2&gt;ಬೆಂಗಳೂರಿನ ಜನರಿಗೆ ಮಳೆಯ ಸಿಂಚನ&lt;/h2&gt;&lt;p&gt;ಇತ್ತ, ಹಲವು ದಿನಗಳಿಂದ ನಗರವನ್ನು ಕಾಡುತ್ತಿದ್ದ ಉಷ್ಣತೆಯಿಂದ ಬಳಲುತ್ತಿದ್ದ ಬೆಂಗಳೂರಿನ ಜನರಿಗೆ ಮಳೆಯ ಸಿಂಚನ ಸ್ವಲ್ಪ ಮಟ್ಟಿಗೆ ನೆಮ್ಮದಿ ನೀಡಿದೆ. ಮಲ್ಲೇಶ್ವರಂ, ಗಾಂಧಿನಗರ, ವಿಧಾನಸೌಧ, ಮೆಜೆಸ್ಟಿಕ್, ಯಶವಂತಪುರ, ವಸಂತನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಕೆಲವೆಡೆ ಭಾರೀ ಮಳೆಯೂ ಸುರಿದಿದ್ದು, ರಸ್ತೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೂ &amp;nbsp;ಅಡಚಣೆ ಉಂಟಾಗಿದೆ.&lt;/p&gt;&lt;h2&gt;ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ&lt;/h2&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿಯೂ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮಳೆ ಕಾರಣದಿಂದ ತಾಪಮಾನದಲ್ಲಿ ಇಳಿಕೆ ಕಂಡುಬಂದಿದ್ದು, ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನರಿಗೆ ಇದು ತಂಪಿನ ಅನುಭವ ನೀಡಿದೆ. ಆದರೆ, ಇದೇ ವೇಳೆ ವಿಮಾನ ಸಂಚಾರ ಸೇರಿದಂತೆ ನಗರ ಮೂಲಸೌಕರ್ಯಗಳ ಮೇಲೆ ಮಳೆಯ ಪರಿಣಾಮ ಹೇಗೆ ಬೀಳಬಹುದು ಎಂಬುದರ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾವಹಿಸಿದ್ದಾರೆ. ಮಳೆ ನಗರಕ್ಕೆ ತಂಪು ತಂದಿದ್ದರೂ, ವಿಮಾನ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಪ್ರಯಾಣಿಕರು ಕೆಲಕಾಲ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/heavy-rain-disrupts-flight-operations-at-bengaluru-airport-flights-diverted-amid-sudden-showers-gdp/articleshow-acekwo2"/>
        </item>
        <item>
            <title><![CDATA[ಬೆಂಗಳೂರಿನ ಭವಿಷ್ಯ ಬರೆಯಲಿದೆಯೇ ₹20,000 ಕೋಟಿ ಬಜೆಟ್, ಮಾ 27, 28 ಎರಡು ದಿನ ಜಿಬಿಎ ಬಜೆಟ್‌ ಮಂಡನೆ!]]></title>
            <link>https://kannada.asianetnews.com/karnataka-districts/bengaluru-five-civic-bodies-budget-2026-gba-to-present-rs-20000-crore-plan-on-march-27-and-28-gdp/articleshow-br89y76</link>
            <guid isPermaLink="true">https://kannada.asianetnews.com/karnataka-districts/bengaluru-five-civic-bodies-budget-2026-gba-to-present-rs-20000-crore-plan-on-march-27-and-28-gdp/articleshow-br89y76</guid>
            <pubDate>Wed, 25 Mar 2026 10:50:31 +0530</pubDate>
            <description><![CDATA[ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ, ನಗರದ ಐದು ಹೊಸ ನಗರ ಪಾಲಿಕೆಗಳು ಮಾರ್ಚ್ 27 ಮತ್ತು 28 ರಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿವೆ. ಒಟ್ಟು ₹20,000 ಕೋಟಿಗೂ ಅಧಿಕ ಗಾತ್ರದ ಈ ಬಜೆಟ್&zwnj;ನಲ್ಲಿ ಮೂಲಸೌಕರ್ಯ, ಸಾರ್ವಜನಿಕ ಸೇವೆಗಳ ಸುಧಾರಣೆ ಮತ್ತು ಮುನ್ಸಿಪಲ್ ಬಾಂಡ್&zwnj;ಗಳಂತಹ ಹೊಸ ಆದಾಯ ಮೂಲಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k482wfeckmyvrnzgsvnweskq,imgname-greater-bengaluru-authority-chief-commissioners-1756913089995.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt; ನಗರದ ಆಡಳಿತದಲ್ಲಿ ಮಹತ್ವದ ಬದಲಾವಣೆಯಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ಬಳಿಕ, ನಗರದ ಐದು ನಗರ ಪಾಲಿಕೆಗಳ ಚೊಚ್ಚಲ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 27 ಮತ್ತು 28ರಂದು ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳ ಪ್ರತ್ಯೇಕ ಬಜೆಟ್&zwnj;ಗಳನ್ನು ಮಂಡಿಸಲು ಸಿದ್ಧತೆಗಳು ಪೂರ್ಣಗೊಂಡಿವೆ.&lt;/p&gt;&lt;p&gt;ಪ್ರತಿ ಪಾಲಿಕೆಯ ಬಜೆಟ್ ಗಾತ್ರವು ಸುಮಾರು ₹4,000 ರಿಂದ ₹4,200 ಕೋಟಿ ನಡುವಿರಬಹುದೆಂದು ಅಂದಾಜಿಸಲಾಗಿದ್ದು, ಐದು ಪಾಲಿಕೆಗಳ ಒಟ್ಟು ಬಜೆಟ್ ಗಾತ್ರ ₹20,000 ಕೋಟಿಗೂ ಅಧಿಕವಾಗುವ ಸಾಧ್ಯತೆ ಇದೆ. ಪ್ರಸ್ತುತ ಪಾಲಿಕೆಗಳಲ್ಲಿ ಜನಪ್ರತಿನಿಧಿಗಳಿಲ್ಲದ ಹಿನ್ನೆಲೆ, ಸಂಬಂಧಿತ ಪಾಲಿಕೆ ಆಯುಕ್ತರೇ ಬಜೆಟ್ ಮಂಡಿಸಲಿದ್ದಾರೆ.&lt;/p&gt;&lt;h2&gt;ಬಜೆಟ್ ಮಂಡನೆ ದಿನಾಂಕಗಳು&lt;/h2&gt;&lt;p&gt;ಮಾರ್ಚ್ 27: ಪೂರ್ವ ನಗರ ಪಾಲಿಕೆ ಮತ್ತು ಕೇಂದ್ರ ನಗರ ಪಾಲಿಕೆ&lt;/p&gt;&lt;p&gt;ಮಾರ್ಚ್ 28: ಉತ್ತರ, ಪಶ್ಚಿಮ ಮತ್ತು ದಕ್ಷಿಣ ನಗರ ಪಾಲಿಕೆ&lt;/p&gt;&lt;h2&gt;ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು&lt;/h2&gt;&lt;p&gt;ಈ ಬಜೆಟ್&zwnj;ನಲ್ಲಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಸ್ತೆ ಗುಂಡಿ ಮುಚ್ಚುವಿಕೆ, ರಾಜಕಾಲುವೆಗಳ ನಿರ್ಮಾಣ ಮತ್ತು ಅಭಿವೃದ್ಧಿ, ಹೊಸ ಫುಟ್&zwnj;ಪಾತ್ ಹಾಗೂ ಸ್ಕೈವಾಕ್ ನಿರ್ಮಾಣ, ಉದ್ಯಾನವನಗಳ ಸುಧಾರಣೆ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಬಲಪಡಿಸುವ ಕಾರ್ಯಗಳಿಗೆ ಸಿಂಹಪಾಲು ಮೀಸಲಿಡಲಾಗುವ ನಿರೀಕ್ಷೆ ಇದೆ.&lt;/p&gt;&lt;h2&gt;ನಗರ ಸೇವೆಗಳ ಸುಧಾರಣೆಗೂ ಒತ್ತು&lt;/h2&gt;&lt;p&gt;ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಗಳ ಅಭಿವೃದ್ಧಿಗೂ ವಿಶೇಷ ಗಮನ ಹರಿಸಲಾಗುತ್ತಿದೆ. &ldquo;ನಮ್ಮ ಕ್ಲಿನಿಕ್&rdquo; ಮತ್ತು ಪಾಲಿಕೆ ಆಸ್ಪತ್ರೆಗಳ ಅಭಿವೃದ್ಧಿ, ಪ್ರಮುಖ ಜಂಕ್ಷನ್&zwnj;ಗಳ ಸುಂದರೀಕರಣ, ಹೊಸ ಬೀದಿ ದೀಪಗಳ ಅಳವಡಿಕೆ ಹಾಗೂ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಗಾಗಿ ಅನುದಾನ ಮೀಸಲಿಡುವ ಸಾಧ್ಯತೆ ಇದೆ.&lt;/p&gt;&lt;h2&gt;ಇಂದಿರಾ ಕ್ಯಾಂಟಿನ್&zwnj;ಗಳಿಗೆ ಹೊಸ ರೂಪ&lt;/h2&gt;&lt;p&gt;ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟಿನ್&zwnj;ಗಳಲ್ಲಿ ಮೆನು ಸುಧಾರಣೆ ಮಾಡಲು ಹಾಗೂ ಹೊಸ ಯೋಜನೆಗಳನ್ನು ಪರಿಚಯಿಸಲು ಬಜೆಟ್&zwnj;ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ.&lt;/p&gt;&lt;h2&gt;ಮುನ್ಸಿಪಲ್ ಬಾಂಡ್ ಬಿಡುಗಡೆ:&lt;/h2&gt;&lt;p&gt;ಪಾಲಿಕೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗುವ ಗುರಿಯನ್ನು ಹೊಂದಿದ್ದು, ಈ ಬಜೆಟ್&zwnj;ನಲ್ಲಿ ಹೊಸ ಆದಾಯ ಮೂಲಗಳನ್ನು ಅನ್ವೇಷಿಸುವತ್ತ ಗಮನ ಹರಿಸಲಾಗಿದೆ. ರಾಜ್ಯ ಬಜೆಟ್&zwnj;ನಲ್ಲಿ ಉಲ್ಲೇಖಿಸಿದಂತೆ, ಮುನ್ಸಿಪಲ್ ಬಾಂಡ್ ಬಿಡುಗಡೆ ಮೂಲಕ ಹಣ ಸಂಗ್ರಹಿಸುವ ಯೋಜನೆಗೆ ಬಜೆಟ್&zwnj;ನಲ್ಲಿ ಘೋಷಣೆ ಆಗುವ ನಿರೀಕ್ಷೆ ಇದೆ.&lt;/p&gt;&lt;p&gt;ಇದಲ್ಲದೆ, ಕಳೆದ ಆರು ತಿಂಗಳಲ್ಲಿ ನಿರೀಕ್ಷಿತ ಮಟ್ಟದ ತೆರಿಗೆ ಸಂಗ್ರಹಣೆ ಆಗದ ಹಿನ್ನೆಲೆ, ಆಸ್ತಿ ತೆರಿಗೆ, ಜಾಹೀರಾತು ಶುಲ್ಕ ಮತ್ತು ಪಾರ್ಕಿಂಗ್ ಶುಲ್ಕಗಳ ಸಂಗ್ರಹಣೆಗೆ ಕಠಿಣ ಕ್ರಮಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.&lt;/p&gt;&lt;h2&gt;ಒಟ್ಟು ಚಿತ್ರ&lt;/h2&gt;&lt;p&gt;ಒಟ್ಟಾರೆ, ಜಿಬಿಎ ವ್ಯಾಪ್ತಿಯ ಪಂಚ ಪಾಲಿಕೆಗಳ ಈ ಚೊಚ್ಚಲ ಬಜೆಟ್&zwnj;ನಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸಾರ್ವಜನಿಕ ಸೇವೆಗಳ ಗುಣಮಟ್ಟ ಹೆಚ್ಚಿಸುವುದು ಹಾಗೂ ಆರ್ಥಿಕ ಸಂಪನ್ಮೂಲಗಳ ವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ₹20,000 ಕೋಟಿಗೂ ಅಧಿಕ ಮೊತ್ತದ ಈ ಬಜೆಟ್ ನಗರದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-five-civic-bodies-budget-2026-gba-to-present-rs-20000-crore-plan-on-march-27-and-28-gdp/articleshow-br89y76"/>
        </item>
        <item>
            <title><![CDATA[ಬೆಂಗಳೂರು: ಜೀವ ಹೋಗುವ ಭಯದಲ್ಲಿ 9ನೇ ತರಗತಿ ಹುಡುಗನಿಂದ 107 ಗ್ರಾಂ ಚಿನ್ನ ಸುಲಿಗೆ! ಮನೆಯಿಂದಲೇ ಕದ್ದ ಬಾಲಕ]]></title>
            <link>https://kannada.asianetnews.com/karnataka-districts/engineering-student-arrested-for-threatening-school-boy-and-robbing-gold-worth-rs-4-59-lakh-in-bengaluru-gdp/articleshow-de98sbb</link>
            <guid isPermaLink="true">https://kannada.asianetnews.com/karnataka-districts/engineering-student-arrested-for-threatening-school-boy-and-robbing-gold-worth-rs-4-59-lakh-in-bengaluru-gdp/articleshow-de98sbb</guid>
            <pubDate>Fri, 10 Apr 2026 18:15:35 +0530</pubDate>
            <description><![CDATA[ಬೆಂಗಳೂರಿನಲ್ಲಿ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಮತ್ತು ಆತನ ಸಹಚರನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಶಾಲಾ ಪ್ರಾಂಶುಪಾಲರು ವಿದ್ಯಾರ್ಥಿಯ ವರ್ತನೆಯಲ್ಲಿನ ಬದಲಾವಣೆಯನ್ನು ಗಮನಿಸಿ ಪೋಷಕರಿಗೆ ತಿಳಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kntvxchbzeg3x97njpqkem6c,imgname-mumbai-airport-gold-smuggling-37-crore-24-women-arrested-dri-operation-dhahabu-blitz-kenya-racket-1775796924971.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸೇರಿದಂತೆ ಇಬ್ಬರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಅರುಣ್ ಕುಮಾರ್ ಹಾಗೂ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಬಂಧಿತರಾಗಿದ್ದು, ಆರೋಪಿಗಳಿಂದ ₹14.59 ಲಕ್ಷ ಮೌಲ್ಯದ 107 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ವಿದ್ಯಾರ್ಥಿ ಶಂಕಾಸ್ಪದ ವರ್ತನೆ ಕಂಡು ಆತನ ಪೋಷಕರಿಗೆ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದರು. ಆಗ ಬಾಲಕನನ್ನು ಪೋಷಕರು ವಿಚಾರಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಮತ್ತಿಕೆರೆಯಲ್ಲಿ ಸಂತ್ರಸ್ತ ವಿದ್ಯಾರ್ಥಿ ಹಾಗೂ ಆರೋಪಿಗಳು ವಾಸವಾಗಿದ್ದಾರೆ. ಮೋಜು ಮಸ್ತಿಗೆ ಖಯಾಲಿಗೆ ಬಿದ್ದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ, ಇದಕ್ಕೆ ಸುಲಭವಾಗಿ ಹಣ ಸಂಪಾದನೆಗೆ ಸುಲಿಗೆ ಕೃತ್ಯಕ್ಕಿಳಿದಿದ್ದಾನೆ. ಅಂತೆಯೇ 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಮನೆಯಿಂದ ಆತ ಚಿನ್ನಾಭರಣ ಕಳವು ಮಾಡಿಸಿದ್ದಾನೆ. ಬಳಿಕ ಈ ಚಿನ್ನಾಭರಣಗಳನ್ನು ಅರುಣ್ ಮೂಲಕ ಅಡಮಾನವಿಟ್ಟು ಹಣವನ್ನು ಎಂಜಿನಿಯರಿಂಗ್ ವಿದ್ಯಾರ್ಥಿ ಪಡೆದಿದ್ದ. ತಾನು ಆಭರಣ ಅಡಮಾನವಿಡಲು ಮುಂದಾದರೆ ವ್ಯಾಪಾರಿಗಳಿಗೆ ಶಂಕೆ ಬಂದು ಸಿಕ್ಕಿ ಬೀಳುತ್ತೇನೆ ಎಂದು ಊಹಿಸಿ ಆತ ಜಾಗ್ರತೆವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಅರ್ಚಕ ವೃತ್ತಿ:&lt;/h2&gt;&lt;p&gt;ಅರುಣ್&zwnj; ಅರ್ಚಕರ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಹಣದಾಸೆಗೆ ಬಿದ್ದು ಈ ಸುಲಿಗೆ ಕೃತ್ಯಕ್ಕೆ ವಿದ್ಯಾರ್ಥಿಗೆ ಸಾಥ್ ಕೊಟ್ಟಿದ್ದಾನೆ. ಒಂದೇ ಪ್ರದೇಶದಲ್ಲಿ ನಿವಾಸಿಗಳಾಗಿದ್ದರಿಂದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಅರುಣ್&zwnj;ಗೆ ಪರಿಚಯಸ್ಥರಾಗಿದ್ದರು. ಎಂದು ಪೊಲೀಸರು ಹೇಳಿದ್ದಾರೆ.&lt;/p&gt;&lt;h2&gt;ಚಿನ್ನಾಭರಣ ಕಳ್ಳತನ, ಹೆತ್ತವರಿಗೆ ಅರಿವಿಲ್ಲ&lt;/h2&gt;&lt;p&gt;ಖಾಸಗಿ ಕಂಪನಿಯಲ್ಲಿ ಸಂತ್ರಸ್ತನ ತಂದೆ-ತಾಯಿ ಉದ್ಯೋಗಲಿದ್ದಾರೆ. ವಿದ್ಯಾರ್ಥಿ ವರ್ತನೆಯಲ್ಲಿ ಬಲಾವಣೆ ಕಂಡು ಪೋಷಕರಿಗೆ ಶಾಲಾ ಪ್ರಾಂಶುಪಾಲು ಮಾಹಿತಿ ನೀಡಿದ್ದರು. ಆಗಲೇ ತಮ್ಮ ಮನೆಯಲ್ಲಿ ಚಿನ್ನಾಭರಣ ನಾಪತ್ತೆ ಸಂಗತಿ ಅವರ ಅರಿವಿಗೆ ಬಂದಿದೆ. ಇನ್ನು ಎಂಜಿನಿಯರಿಂಗ್ ವಿದ್ಯಾರ್ಥಿ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಮಗನನ್ನು ಕೂಲಿನಾಲಿ ಮಾಡಿ ಆತನ ತಾಯಿ ಓದಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/engineering-student-arrested-for-threatening-school-boy-and-robbing-gold-worth-rs-4-59-lakh-in-bengaluru-gdp/articleshow-de98sbb"/>
        </item>
        <item>
            <title><![CDATA[ಬೆಂಗಳೂರು: ಸಲೂನ್ ನಲ್ಲಿ ಕೆಲಸಕ್ಕಿದ್ದ ಬ್ಯೂಟಿಷಿಯನ್ ಗೆ ಬಿಸ್ಕೆಟ್ ನೀಡಿ ಮಾಲೀಕ ಪ್ರಫೋಸ್, ಹಿಗ್ಗಾಮುಗ್ಗಾ ಥಳಿತ]]></title>
            <link>https://kannada.asianetnews.com/karnataka-districts/salon-brawl-in-aavalahalli-owner-accused-of-proposing-to-beautician-husband-assaults-with-gang-gdp/articleshow-fr4v234</link>
            <guid isPermaLink="true">https://kannada.asianetnews.com/karnataka-districts/salon-brawl-in-aavalahalli-owner-accused-of-proposing-to-beautician-husband-assaults-with-gang-gdp/articleshow-fr4v234</guid>
            <pubDate>Sat, 04 Apr 2026 12:14:13 +0530</pubDate>
            <description><![CDATA[ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್&zwnj;ನಲ್ಲಿ, ಮಾಲೀಕನ ಪ್ರಪೋಸಲ್ ನಿರಾಕರಿಸಿದ ಬ್ಯೂಟಿಷಿಯನ್&zwnj;ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪದ ಮೇಲೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಬ್ಯೂಟಿಷಿಯನ್ ಪತಿ ಮತ್ತು ಆತನ ಸ್ನೇಹಿತರು ಸಲೂನ್ ಮಾಲೀಕ ಹಾಗೂ ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knbkmrpf7adtd4czy00j2wj2,imgname-bengaluru-salon-attack-1775284937421.jpg" type="image/jpeg" height="390" width="690"/>
            <content:encoded><![CDATA[&lt;p&gt;ಆವಲಹಳ್ಳಿ ಪ್ರದೇಶದಲ್ಲಿ ಇರುವ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್&zwnj;ನಲ್ಲಿ ನಡೆದ ಗಲಾಟೆ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಸಲೂನ್&zwnj;ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್&zwnj;ಗೆ ಮಾಲೀಕರು ಪ್ರಪೋಸ್ ಮಾಡಿದರೆಂಬ ಆರೋಪ, ಅದನ್ನು ಒಪ್ಪಿಕೊಳ್ಳದ ಹಿನ್ನೆಲೆ ಕೆಲಸದಿಂದ ತೆಗೆದುಹಾಕಿದರೆಂಬ ವಿವಾದ, ಬಳಿಕ ನಡೆದ ಹಲ್ಲೆ ಎಲ್ಲಾ ಸೇರಿ ಈ ಘಟನೆ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ಆವಲಹಳ್ಳಿಯ ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್&zwnj;ನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮಾ ಅವರಿಗೆ ಸಲೂನ್ ಮಾಲೀಕ ಮೋಹನ್ ಕುಮಾರ್ ಪ್ರಪೋಸ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ, ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದನೆಂಬ ಮಾತುಗಳು ಕೂಡ ಸ್ಥಳೀಯವಾಗಿ ಹರಿದಾಡುತ್ತಿವೆ. ಆದರೆ, ಈ ಪ್ರಪೋಸಲ್ ಅನ್ನು ಸುಷ್ಮಾ ಒಪ್ಪಿಕೊಳ್ಳಲಿಲ್ಲವೆಂದು ಹೇಳಲಾಗಿದೆ.&lt;/p&gt;&lt;h2&gt;ಮನಸ್ಸೋ ಇಚ್ಛೆ ಹಲ್ಲೆ&lt;/h2&gt;&lt;p&gt;ಈ ಹಿನ್ನೆಲೆಯಲ್ಲಿ ಸುಷ್ಮಾಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಪರಿಣಾಮವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಈ ವಿಚಾರವು ಮತ್ತಷ್ಟು ತೀವ್ರಗೊಂಡು, ಸುಷ್ಮಾ ಪತಿ ಹಾಗೂ ಅವರ ಬೆಂಬಲಿಗರು ಸಲೂನ್&zwnj;ಗೆ ಬಂದು ಗಲಾಟೆ ನಡೆಸಿದರೆಂದು ಆರೋಪಿಸಲಾಗಿದೆ. ಸುಷ್ಮಾ ಪತಿ ನಾಲ್ಕೈದು ಜನರ ಗುಂಪು ಕಟ್ಟಿಕೊಂಡು ಸಲೂನ್&zwnj;ಗೆ ಬಂದು, ಮಾಲೀಕ ಮೋಹನ್ ಕುಮಾರ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದರೆಂದು ತಿಳಿದು ಬಂದಿದೆ. ಗಲಾಟೆ ತಡೆಯಲು ಮುಂದಾದ ಮೋಹನ್ ಕುಮಾರ್ ಅವರ ಪತ್ನಿ ಶ್ರೀಜಾ ಅವರ ಮೇಲೂ ದಾಳಿ ನಡೆದಿದ್ದು, ಕುತ್ತಿಗೆಗೆ ಕೈ ಹಾಕಿ ಹಲ್ಲೆ ಮಾಡಿದರೆಂದು ಆರೋಪಿಸಲಾಗಿದೆ.&lt;/p&gt;&lt;h2&gt;ಸಿಸಿಟಿವಿ ಪ್ರಮುಖ ಸಾಕ್ಷಿ&lt;/h2&gt;&lt;p&gt;ಸ್ಥಳದಲ್ಲಿದ್ದವರು ತಡೆಯಲು ಪ್ರಯತ್ನಿಸಿದರೂ, ಬಂದ ಗುಂಪಿನವರು ಹಲ್ಲೆ ಮುಂದುವರಿಸಿದರೆಂದು ಹೇಳಲಾಗಿದೆ. ಈ ಹಲ್ಲೆಯ ದೃಶ್ಯಗಳು ಸಲೂನ್&zwnj;ನ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಇದೀಗ ಪ್ರಮುಖ ಸಾಕ್ಷ್ಯವಾಗಿವೆ. ಘಟನೆ ಬಳಿಕ ಸುಷ್ಮಾ, ಆಕೆಯ ಪತಿ ಹಾಗೂ ಅವರ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ. ಈ ಘಟನೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ, ವೈಯಕ್ತಿಕ ಗೌರವ ಹಾಗೂ ವೃತ್ತಿಪರ ನಡವಳಿಕೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/salon-brawl-in-aavalahalli-owner-accused-of-proposing-to-beautician-husband-assaults-with-gang-gdp/articleshow-fr4v234"/>
        </item>
        <item>
            <title><![CDATA[ಬೆಂಗಳೂರು: ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಗೆ ಉಗ್ರನ ಪಟ್ಟ ಕಟ್ಟಿ ಅವಮಾನಿಸಿದ ಪ್ರೊಫೆಸರ್!]]></title>
            <link>https://kannada.asianetnews.com/karnataka-districts/bengaluru-professor-dismissed-for-calling-muslim-student-terrorist-gdp/articleshow-h9pyybw</link>
            <guid isPermaLink="true">https://kannada.asianetnews.com/karnataka-districts/bengaluru-professor-dismissed-for-calling-muslim-student-terrorist-gdp/articleshow-h9pyybw</guid>
            <pubDate>Sat, 28 Mar 2026 13:41:57 +0530</pubDate>
            <description><![CDATA[ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ, ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ಅವರು ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು 'ಭಯೋತ್ಪಾದಕ' ಎಂದು ಕರೆದು ಅವಮಾನಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಆರೋಪಿ ಪ್ರೊಫೆಸರ್&zwnj;ನನ್ನು ಸೇವೆಯಿಂದ ವಜಾಗೊಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmsqs6a6afk5tbyszdpdre5z,imgname-bengaluru-professor-1774685296966.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಪ್ರೊಫೆಸರ್ ಒಬ್ಬರು ಮುಸ್ಲಿಂ ವಿದ್ಯಾರ್ಥಿಯನ್ನು &lsquo;ಭಯೋತ್ಪಾದಕ&rsquo; ಎಂದು ಕರೆಯುವ ಮೂಲಕ ಅವಮಾನ ಮಾಡಿದ ಆರೋಪಕ್ಕೆ ಗುರಿಯಾಗಿ, ವಿವಾದದ ನಡುವೆಯೇ ಅವರನ್ನು ಸೇವೆಯಿಂದ ವಜಾಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಆರೋಪಿಯಾಗಿರುವವರು ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ. ಮಾರ್ಚ್ 24ರಂದು ನಡೆದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದ ಮೂಲಕ ಬಹಿರಂಗವಾಗಿದ್ದು, ವಿದ್ಯಾರ್ಥಿ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಅವಮಾನ&lt;/h2&gt;&lt;p&gt;ಮಾಹಿತಿಯ ಪ್ರಕಾರ, ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಪ್ರೊಫೆಸರ್ ಕೋಪಗೊಂಡು, ಅಫ್ಫಾನ್ ಎಂಬ ಮುಸ್ಲಿಂ ವಿದ್ಯಾರ್ಥಿಯನ್ನು ಎಲ್ಲರ ಎದುರೇ &lsquo;ಭಯೋತ್ಪಾದಕ&rsquo; (ಟೆರರಿಸ್ಟ್) ಎಂದು ಕರೆಯುವ ಮೂಲಕ ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಾಕ್ಷಿಯಾಗಿ ಕೆಲ ವಿದ್ಯಾರ್ಥಿಗಳು ಮೊಬೈಲ್&zwnj;ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ವಿಡಿಯೊ ಹೊರಬಂದ ತಕ್ಷಣ ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ (NSUI) ವತಿಯಿಂದ ಪ್ರೊಫೆಸರ್ ವಿರುದ್ಧ ಅಧಿಕೃತ ದೂರು ದಾಖಲಿಸಲಾಗಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.&lt;/p&gt;&lt;p&gt;ಆಡಳಿತ ಮಂಡಳಿ ತುರ್ತು ಸಭೆ, ಪ್ರೊಫೆಸರ್ ವಜಾ&lt;/p&gt;&lt;p&gt;ವಿವಾದ ತೀವ್ರಗೊಳ್ಳುತ್ತಿದ್ದಂತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಪ್ರಾಥಮಿಕ ತನಿಖೆ ಕೈಗೊಂಡಿದೆ. ತನಿಖೆಯಲ್ಲಿ ಆರೋಪ ಗಂಭೀರವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಪ್ರೊಫೆಸರ್ ಡಾ. ಮುರಳಿಧರ ದೇಶಪಾಂಡೆ ಅವರನ್ನು ಮೊದಲು ಅಮಾನತುಗೊಳಿಸಿ, ಬಳಿಕ ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಈ ಘಟನೆ ಕ್ಯಾಂಪಸ್&zwnj;ನಲ್ಲಿ ಭದ್ರತೆ ಮತ್ತು ಸಮಾನತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದ್ದು, ವಿದ್ಯಾರ್ಥಿಗಳ ನಡುವೆ ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯವು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.&lt;/p&gt;&lt;p&gt;ಒಟ್ಟಾರೆ, ಶಿಕ್ಷಣ ಸಂಸ್ಥೆಯಲ್ಲಿಯೇ ವಿದ್ಯಾರ್ಥಿಯೊಬ್ಬನನ್ನು ಧರ್ಮದ ಆಧಾರದ ಮೇಲೆ ಅವಮಾನಿಸಿದ ಘಟನೆ ಸಮಾಜದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇಂತಹ ನಡೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯವಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-professor-dismissed-for-calling-muslim-student-terrorist-gdp/articleshow-h9pyybw"/>
        </item>
        <item>
            <title><![CDATA[ಲಾಲ್‌ಬಾಗ್ ಸುರಂಗ ರಸ್ತೆ ಮಾರ್ಗ ಕುರಿತು ಜಿಎಸ್‌ಐ ತಜ್ಞರ  ಭೌಗೋಳಿಕ ಮತ್ತು ತಾಂತ್ರಿಕ  ಪರಿಶೀಲನೆ]]></title>
            <link>https://kannada.asianetnews.com/karnataka-districts/lalbagh-tunnel-road-project-gsi-expert-team-conducts-geological-inspection-in-bengaluru-gdp/articleshow-hwd9nx0</link>
            <guid isPermaLink="true">https://kannada.asianetnews.com/karnataka-districts/lalbagh-tunnel-road-project-gsi-expert-team-conducts-geological-inspection-in-bengaluru-gdp/articleshow-hwd9nx0</guid>
            <pubDate>Sat, 04 Apr 2026 16:00:56 +0530</pubDate>
            <description><![CDATA[ಬೆಂಗಳೂರಿನ ಪ್ರಸ್ತಾಪಿತ ಸುರಂಗ ರಸ್ತೆ ಯೋಜನೆಗಾಗಿ, ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ (ಜಿಎಸ್&zwnj;ಐ) ತಜ್ಞರ ಸಮಿತಿಯು ಲಾಲ್&zwnj;ಬಾಗ್&zwnj;ನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಲಾಲ್&zwnj;ಬಾಗ್ ಬೆಟ್ಟದ ಕೆಳಗೆ ಸುರಂಗ ಹಾದುಹೋಗುವುದರಿಂದ ಉಂಟಾಗಬಹುದಾದ ಭೌಗೋಳಿಕ ಮತ್ತು ಪರಿಸರ ಪರಿಣಾಮಗಳ ಕುರಿತು ತಂಡವು ಅಧ್ಯಯನ ನಡೆಸಿ, ವರದಿ ಸಲ್ಲಿಸಲಿದೆ. ಈ ವರದಿಯು ಯೋಜನೆಯ ಮುಂದಿನ ಹಂತಗಳನ್ನು ನಿರ್ಧರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kaj998fwcd4htq588z6zrrh2,imgname-----------------------2025-11-21t093257.233-1763697795580.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಪ್ರಸ್ತಾಪಿತ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್&zwnj;ಐ) ರಚಿಸಿದ ತಜ್ಞರ ಸಮಿತಿ ಲಾಲ್&zwnj;ಬಾಗ್&zwnj;ನಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಐವರು ಸದಸ್ಯರಿರುವ ಈ ತಜ್ಞರ ತಂಡವು ಇತ್ತೀಚೆಗೆ ಲಾಲ್&zwnj;ಬಾಗ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೌಗೋಳಿಕ ಹಾಗೂ ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿದೆ.&lt;/p&gt;&lt;h2&gt;ಭೌಗೋಳಿಕ ಮಹತ್ವದ ಹಿನ್ನೆಲೆ ಪರಿಶೀಲನೆ&lt;/h2&gt;&lt;p&gt;ಲಾಲ್&zwnj;ಬಾಗ್&zwnj; ಪ್ರದೇಶವು ಭೌಗೋಳಿಕವಾಗಿ ಪಾರಂಪರಿಕ ಮಹತ್ವ ಹೊಂದಿರುವುದರಿಂದ, ಸುರಂಗ ಮಾರ್ಗ ನಿರ್ಮಾಣದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಪರಿಶೀಲನೆ ಕೈಗೊಳ್ಳಲಾಗಿದೆ. ವಿಶೇಷವಾಗಿ ಲಾಲ್&zwnj;ಬಾಗ್ ಬೆಟ್ಟ ಹಾಗೂ ಅದರ ಸುತ್ತಲಿನ ಭೂವಿನ್ಯಾಸದ ಸ್ಥಿತಿಗತಿಗಳನ್ನು ತಜ್ಞರು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದಾರೆ.&lt;/p&gt;&lt;h2&gt;ಡಿಪಿಆರ್ ಅಧ್ಯಯನ ಮತ್ತು ಸ್ಥಳ ವೀಕ್ಷಣೆ&lt;/h2&gt;&lt;p&gt;ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಯ ಭಾಗವಾಗಿ, ಲಾಲ್&zwnj;ಬಾಗ್ ಆವರಣದಲ್ಲಿ ಖಾಸಗಿ ಕನ್ಸಲ್ಟೆಂಟ್&zwnj;ಗಳು ಅಗೆದಿರುವ ಸ್ಥಳಗಳನ್ನು ಸಮಿತಿ ಸದಸ್ಯರು ವೀಕ್ಷಿಸಿದರು.&lt;/p&gt;&lt;p&gt;ಇದಲ್ಲದೆ, ಸಿಲ್ಕ್ ಬೋರ್ಡ್&zwnj;ನಿಂದ ಹೆಬ್ಬಾಳವರೆಗೆ ಸಂಪರ್ಕ ಕಲ್ಪಿಸುವ ಆರು ಲೇನ್&zwnj;ಗಳ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಡಿಪಿಆರ್&zwnj;ನಲ್ಲಿನ ತಾಂತ್ರಿಕ ಅಂಶಗಳನ್ನು ಕೂಡ ತಜ್ಞರು ಪರಿಶೀಲಿಸಿದ್ದಾರೆ.&lt;/p&gt;&lt;h2&gt;ತಜ್ಞರ ವರದಿ ಸಲ್ಲಿಕೆ&lt;/h2&gt;&lt;p&gt;ಲಾಲ್&zwnj;ಬಾಗ್&zwnj;ನೊಳಗಿನ ಬೆಟ್ಟದ ಕೆಳಭಾಗದಲ್ಲಿ ಸುರಂಗ ಮಾರ್ಗ ಹಾದುಹೋಗುವ ಹಿನ್ನೆಲೆಯಲ್ಲಿ, ಇದರಿಂದ ಉಂಟಾಗಬಹುದಾದ ಪರಿಸರ ಹಾಗೂ ಭೌಗೋಳಿಕ ಪರಿಣಾಮಗಳ ಬಗ್ಗೆ ತಜ್ಞರ ತಂಡವು ಸವಿಸ್ತಾರ ವರದಿ ಸಿದ್ಧಪಡಿಸಲಿದೆ. ಈ ವರದಿಯನ್ನು ಜಿಎಸ್&zwnj;ಐ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕರಿಗೆ ಸಲ್ಲಿಸಲಾಗುವುದು.&lt;/p&gt;&lt;p&gt;ಈ ಸಮಿತಿಗೆ ಜಿಎಸ್&zwnj;ಐನ ಹಿರಿಯ ಅಧಿಕಾರಿ ಕೆ.ವಿ. ಮಾರುತಿ ನೇತೃತ್ವ ವಹಿಸಿದ್ದು, ಭೌಗೋಳಿಕ ಹಾಗೂ ಇಂಜಿನಿಯರಿಂಗ್ ಕ್ಷೇತ್ರದ ಪರಿಣಿತರು ತಂಡದಲ್ಲಿ ಸೇರಿದ್ದಾರೆ.&lt;/p&gt;&lt;h2&gt;ಸುರಂಗ ನಿರ್ಮಾಣಕ್ಕೆ ಅಗತ್ಯವಿರುವ ಜಾಗ&lt;/h2&gt;&lt;p&gt;ಡಿಪಿಆರ್ ಪ್ರಕಾರ, ಸುರಂಗ ಮಾರ್ಗವು ಲಾಲ್&zwnj;ಬಾಗ್ ಕೆಳಭಾಗದಲ್ಲಿ ಹಾದುಹೋಗಲಿದ್ದು, ನಿರ್ಮಾಣ ಕಾರ್ಯಗಳಿಗಾಗಿ ತಾತ್ಕಾಲಿಕವಾಗಿ ಸುಮಾರು 6 ಎಕರೆ ಜಾಗ ಮತ್ತು ಶಾಶ್ವತವಾಗಿ 1 ಎಕರೆ ಜಾಗ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಐತಿಹಾಸಿಕ ತಾಣದ ಸಂರಕ್ಷಣೆ ಕುರಿತು ಕಳವಳ&lt;/h2&gt;&lt;p&gt;ಸುರಂಗ ಯೋಜನೆಯಿಂದ ಲಾಲ್&zwnj;ಬಾಗ್&zwnj;ನಂತಹ ಐತಿಹಾಸಿಕ ಹಾಗೂ ಪರಿಸರ ಮಹತ್ವದ ತಾಣಕ್ಕೆ ಹಾನಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಕಳೆದ ವರ್ಷ ಜಿಎಸ್&zwnj;ಐಗೆ ಪತ್ರ ಬರೆದು ವೈಜ್ಞಾನಿಕ ಅಧ್ಯಯನ ನಡೆಸುವಂತೆ ಮನವಿ ಮಾಡಿದ್ದರು.&lt;/p&gt;&lt;h2&gt;ಮುಂದಿನ ಕ್ರಮಗಳು&lt;/h2&gt;&lt;p&gt;ತಜ್ಞರ ಸಮಿತಿಯ ವರದಿ ಆಧರಿಸಿ ಸುರಂಗ ರಸ್ತೆ ಯೋಜನೆಯ ಮುಂದಿನ ಹಂತಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಲಾಲ್&zwnj;ಬಾಗ್&zwnj;ನ ಸಂರಕ್ಷಣೆ ಹಾಗೂ ನಗರಾಭಿವೃದ್ಧಿ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದೆ ದೊಡ್ಡ ಸವಾಲಾಗಿದ್ದು, ಈ ವರದಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/lalbagh-tunnel-road-project-gsi-expert-team-conducts-geological-inspection-in-bengaluru-gdp/articleshow-hwd9nx0"/>
        </item>
        <item>
            <title><![CDATA[ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲಿಗಲ್ಲು, ವಿದೇಶಿ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ!]]></title>
            <link>https://kannada.asianetnews.com/karnataka-districts/indias-first-bengaluru-airport-tests-end-to-end-biometric-travel-no-passport-no-boarding-pass-needed-gdp/articleshow-k72qy56</link>
            <guid isPermaLink="true">https://kannada.asianetnews.com/karnataka-districts/indias-first-bengaluru-airport-tests-end-to-end-biometric-travel-no-passport-no-boarding-pass-needed-gdp/articleshow-k72qy56</guid>
            <pubDate>Thu, 09 Apr 2026 19:42:58 +0530</pubDate>
            <description><![CDATA[ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ 'ಡಿಜಿ ಯಾತ್ರಾ' ಅಡಿಯಲ್ಲಿ ಬಯೋಮೆಟ್ರಿಕ್ ಆಧಾರಿತ ಸ್ಪರ್ಶರಹಿತ ಪ್ರಯಾಣ ಸೌಲಭ್ಯವನ್ನು ಒದಗಿಸಲು ಸಜ್ಜಾಗಿದೆ. ಭಾರತದಲ್ಲೇ ಮೊದಲ ಬಾರಿಗೆ ಈ ತಾಂತ್ರಿಕ ಪ್ರಯೋಗ ಯಶಸ್ವಿಯಾಗಿದ್ದು, ಇದು ಪ್ರಯಾಣದ ಸಮಯವನ್ನು ಉಳಿಸಿ, ಭದ್ರತೆಯನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkqp65gajvyjv1vdc2gvfpg4,imgname-1-1773542774282.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ 'ಡಿಜಿ ಯಾತ್ರಾ' ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (ಬಯೋಮೆಟ್ರಿಕ್) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ.&lt;/p&gt;&lt;p&gt;ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (ಐಎಟಿಎ) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್&zwnj;ನಿಂದ ಹಿಡಿದು ಬೋರ್ಡಿಂಗ್&zwnj;ವರೆಗಿನ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.&lt;/p&gt;&lt;h2&gt;ಭಾರತದಲ್ಲಿ ಇದೇ ಮೊದಲು!&lt;/h2&gt;&lt;p&gt;ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆಯಾಗಿದೆ.&lt;/p&gt;&lt;p&gt;ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು, ಪ್ರಯಾಣಿಕರ ದತ್ತಾಂಶ ಸುರಕ್ಷತೆಗಾಗಿ 'ಸೆಲ್ಫ್-ಸೋವರಿನ್ ಐಡೆಂಟಿಟಿ' (ಎಸ್&zwnj;ಎಸ್&zwnj;ಐ) ಎಂಬ ಸ್ವಯಂ-ಗುರುತು ವ್ಯವಸ್ಥೆ ಹಾಗೂ ಬೋರ್ಡಿಂಗ್ ಪಾಸ್&zwnj;ಗಳನ್ನು ಸುಲಭವಾಗಿ ವರ್ಗಾಯಿಸಲು 'ಆ್ಯಪ್-ಟು-ಆ್ಯಪ್' ತಂತ್ರಜ್ಞಾನವನ್ನು ಪರಿಚಯಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಇದೀಗ ಬಿಐಎಎಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸಿ, ಅದರ ಕಾರ್ಯಸಾಧ್ಯತೆಯನ್ನು ಯಶಸ್ವಿಯಾಗಿ ಸಾಬೀತುಪಡಿಸಲಾಗಿದೆ.&lt;/p&gt;&lt;h2&gt;ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡ ಭಾರತದ ಏಕೈಕ ವಿಮಾನ ನಿಲ್ದಾಣ ಕೆಐಎ&lt;/h2&gt;&lt;p&gt;ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಭದ್ರತೆಯನ್ನೂ ಹೆಚ್ಚಿಸಲಿದೆ. ವಿಶೇಷವೆಂದರೆ, ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರುವ ಈ ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುರುತಿಸಿಕೊಂಡಿದೆ.&lt;/p&gt;&lt;p&gt;ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬಿಐಎಎಲ್&zwnj;ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫಾಂಥೋಮ್, &quot;ಪ್ರಯಾಣಿಕರಿಗೆ ಅತ್ಯಂತ ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತ ಸುಗಮ ಅನುಭವ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಈ ತಾಂತ್ರಿಕ ಪ್ರಯೋಗವು ಮೈಲಿಗಲ್ಲಾಗಿದೆ&quot; ಎಂದಿದ್ದಾರೆ.&lt;/p&gt;&lt;p&gt;ಇಂಡಿಗೋದ ಡಿಜಿಟಲ್ ಮತ್ತು ಐಟಿ ವಿಭಾಗದ ಮುಖ್ಯಸ್ಥ ನೀತನ್ ಚೋಪ್ರಾ ಮಾತನಾಡಿ, &quot;ಡಿಜಿಟಲ್ ಗುರುತು ಮತ್ತು ಬಯೋಮೆಟ್ರಿಕ್ ಮೂಲಕ ಭವಿಷ್ಯದ ಪ್ರಯಾಣವನ್ನು ರೂಪಿಸುವಲ್ಲಿ ಈ ಪ್ರಯೋಗವು ಅತ್ಯಂತ ಮಹತ್ವದ ಸಾಧನೆ&quot; ಎಂದು ಬಣ್ಣಿಸಿದ್ದಾರೆ.&lt;/p&gt;&lt;p&gt;ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ಕಿಮ್ ಮಕಾಲೇ ಅವರು ಪ್ರತಿಕ್ರಿಯಿಸಿ, &quot;ಡಿಜಿಟಲ್ ಪ್ರಯಾಣ ವ್ಯವಸ್ಥೆಯಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು, ಈ ಸಹಭಾಗಿತ್ವವು ಜಗತ್ತಿಗೇ ಒಂದು ಉತ್ತಮ ಮಾದರಿಯಾಗಿದೆ&quot; ಎಂದು ಶ್ಲಾಘಿಸಿದ್ದಾರೆ.&lt;/p&gt;&lt;p&gt;ಡಿಜಿ ಯಾತ್ರಾ ಪ್ರತಿಷ್ಠಾನದ ಸಿಇಒ ಸುರೇಶ್ ಖಡಕ್&zwnj;ಭಾವಿ, &quot;ಪ್ರಯಾಣಿಕರ ಗುರುತನ್ನು ಮುಂಚಿತವಾಗಿಯೇ ದೃಢೀಕರಿಸಿ, ಮುಖದ ಗುರುತಿನ ಮೂಲಕವೇ ಸಂಪೂರ್ಣ ಪ್ರಯಾಣ ಪ್ರಕ್ರಿಯೆ ಮುಗಿಸುವ ಈ ವ್ಯವಸ್ಥೆಯು ಸುರಕ್ಷತೆ, ವೇಗ ಮತ್ತು ಸುಗಮ ಪ್ರಯಾಣದ ಭವಿಷ್ಯದ ಪ್ರತೀಕವಾಗಿದೆ&quot; ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಮುಂಬರುವ ದಿನಗಳಲ್ಲಿ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಇನ್ನಷ್ಟು ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/indias-first-bengaluru-airport-tests-end-to-end-biometric-travel-no-passport-no-boarding-pass-needed-gdp/articleshow-k72qy56"/>
        </item>
        <item>
            <title><![CDATA[ಓದಿದ ಶಾಲೆಗೆ 25 ವರ್ಷದ ಬಳಿಕ ಮರಳಿದ  1999-2001 ಬ್ಯಾಚ್‌ನ ವಿದ್ಯಾರ್ಥಿಗಳು: ಭಾವನಾತ್ಮಕ ಸಮಾರಂಭ]]></title>
            <link>https://kannada.asianetnews.com/state/sarjapur-koogur-village-government-high-school-students-of-1999-2001-batch-returned-to-their-school-after-25-years-mrq/articleshow-nr0tnwi</link>
            <guid isPermaLink="true">https://kannada.asianetnews.com/state/sarjapur-koogur-village-government-high-school-students-of-1999-2001-batch-returned-to-their-school-after-25-years-mrq/articleshow-nr0tnwi</guid>
            <pubDate>Sat, 04 Apr 2026 09:04:31 +0530</pubDate>
            <description><![CDATA[&lt;p&gt;1999-2001ನೇ ಸಾಲಿನ ಹಳೆ ವಿದ್ಯಾರ್ಥಿಗಳು ತಮ್ಮ 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಆಚರಿಸಿದರು. ಈ ಭಾವನಾತ್ಮಕ ಸಮಾರಂಭದಲ್ಲಿ ಹಳೆಯ ಸ್ನೇಹಿತರು ಮತ್ತು ಗುರುಗಳನ್ನು ಭೇಟಿಯಾಗಿ, ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಈ ವೇಳೆ ಶಿಕ್ಷಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01knb8c110t46wxcwgk7bnee43,imgname-school-reunion-1775273116704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೊಮ್ಮಸಂದ್ರ: &lt;/strong&gt;ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮಗಳು ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುವುದಷ್ಟೇ ಅಲ್ಲದೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಕಲಿತ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿ ಕೃತಜ್ಞತಾ ಮನೋಭಾವನೆಯನ್ನು ಮೆರೆಯಬೇಕು ಎಂದು ಶಿಕ್ಷಕ ಕೃಷ್ಣಾರೆಡ್ಡಿ ತಿಳಿಸಿದರು.&lt;/p&gt;&lt;p&gt;ಅವರು ಸರ್ಜಾಪುರ ಸಮೀಪದ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1999 ರಿಂದ 2001ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.&lt;/p&gt;&lt;h2&gt;&lt;strong&gt;25 ವರ್ಷಗಳ ನಂತರದ ಭೇಟಿ&lt;/strong&gt;&lt;/h2&gt;&lt;p&gt;ಹಳೆ ವಿದ್ಯಾರ್ಥಿನಿ ಶಿಲ್ಪ ಮಾತನಾಡಿ, ಈ ಶಾಲೆಯು ನೀಡಿದ ಶಿಕ್ಷಣ ಮತ್ತು ಮೌಲ್ಯಗಳು ಎಂದಿಗೂ ಮರೆಯಲಾರವು. ಇಂದು 25 ವರ್ಷಗಳ ನಂತರ ಮತ್ತೆ ಇದೇ ಶಾಲಾ ಆವರಣದಲ್ಲಿ ಸ್ನೇಹಿತರನ್ನೂ, ಶಿಕ್ಷಕರನ್ನೂ ಭೇಟಿ ಮಾಡುತ್ತಿರುವುದು ತುಂಬಾ ಭಾವನಾತ್ಮಕ ಕ್ಷಣವಾಗಿದ್ದು. ಶಾಲಾ ದಿನಗಳಲ್ಲಿ ನಾವು ಹಂಚಿಕೊಂಡ ಸ್ನೇಹ, ಆಟಗಳು, ತರಗತಿಯ ನೆನಪುಗಳು ಎಲ್ಲವೂ ಇಂದು ಮತ್ತೆ ಮನಸ್ಸಿನಲ್ಲಿ ಮೂಡುತ್ತಿವೆ ಎಂದರು.&lt;/p&gt;&lt;p&gt;ಇದೇ ವೇಳೆ ಶಿಕ್ಷಕರಾದ ರಾಘವ ಹೊಳ್ಳ, ಕೃಷ್ಣಾರೆಡ್ಡಿ, ಮುತ್ತಪ್ಪ ಹಂಜಗಿರ, ಮುನಿರಾಜು, ಸುಧಾಮಣಿ, ಪ್ರಭಾವತಿ, ಸುನೀತಾ ನಾಯಕ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮತ್ತು ಹಳೆ ವಿದ್ಯಾರ್ಥಿಗಳಿಂದ ಗಾಯನ, ನೃತ್ಯ ಸೇರಿ ಹಲವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು..&lt;/p&gt;&lt;p&gt;ಕಾರ್ಯಕ್ರ&zwnj;ಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ನರೇಂದ್ರ, ಸೋಮಶೇಖರ್, ಬಾಲಾಜಿ ಹಾಗೂ ಮತ್ತಿತರರು ಹಾಜರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್ ವೀಡಿಯೋದ ಅಸಲಿಯತ್ತು ಇದು: ನೆಟ್ಟಿಗರಿಂದ ತೀವ್ರ ತರಾಟೆ&lt;/strong&gt;&lt;/p&gt;&lt;h3&gt;&lt;strong&gt;25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ&lt;/strong&gt;&lt;/h3&gt;&lt;p&gt;ಸರ್ಜಾಪುರ ಸಮೀಪದ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1999 ರಿಂದ 2001ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;1962-65ರ ಬ್ಯಾಚಿನಲ್ಲಿ ಓದಿದ್ದ ಸಹಪಾಠಿಗಳು 60 ವರ್ಷಗಳ ನಂತರ ತಮ್ಮ 85-86ರ ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾಗಿದ್ದಾರೆ.#Dharwad #Students https://t.co/FJf5doSe2q&lt;/p&gt;&lt;p&gt;&mdash; Asianet Suvarna News (@AsianetNewsSN) March 30, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/sarjapur-koogur-village-government-high-school-students-of-1999-2001-batch-returned-to-their-school-after-25-years-mrq/articleshow-nr0tnwi"/>
        </item>
        <item>
            <title><![CDATA[ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಾಧ್ಯಾಪಕನ ಕೆಟ್ಟ ಪ್ರಪೋಸ್‌, ಕಾಲೇಜಾಯ್ತು ರಣರಂಗ!]]></title>
            <link>https://kannada.asianetnews.com/karnataka-districts/minister-dr-g-parameshwara-owned-bengaluru-siddhartha-medical-college-prof-accused-misconduct-assaulted-by-students-gdp/articleshow-p3ne4kp</link>
            <guid isPermaLink="true">https://kannada.asianetnews.com/karnataka-districts/minister-dr-g-parameshwara-owned-bengaluru-siddhartha-medical-college-prof-accused-misconduct-assaulted-by-students-gdp/articleshow-p3ne4kp</guid>
            <pubDate>Thu, 26 Mar 2026 09:54:42 +0530</pubDate>
            <description><![CDATA[ನೆಲಮಂಗಲದ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ, ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಗೆ ಅಸಭ್ಯವಾಗಿ ಪ್ರಪೋಸ್ ಮಾಡಿದ್ದಾರೆಂಬ ಆರೋಪದ ಮೇಲೆ ದೊಡ್ಡ ಗಲಾಟೆ ನಡೆದಿದೆ. ಆಕ್ರೋಶಗೊಂಡ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿ ಪ್ರಾಧ್ಯಾಪಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಗೃಹ ಸಚಿವ ಜಿ. ಪರಮೇಶ್ವರ್ ಅವರ ಒಡೆತನದ ಕಾಲೇಜಿನಲ್ಲಿ ನಡೆದ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmm649mwxcxgnz45ajxtdxna,imgname-chaos-at-siddhartha-medical-college-1774499014300.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆೊಂದು ದೊಡ್ಡ ಗಲಾಟೆಗೆ ಕಾರಣವಾಗಿದ್ದು, ಕ್ಯಾಂಪಸ್&zwnj;ದಲ್ಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರ ಒಡೆತನದ ಈ ಕಾಲೇಜಿನಲ್ಲಿ ನಡೆದ ಘಟನೆ ಇದೀಗ ಸಾರ್ವಜನಿಕ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;ಘಟನೆ ವಿವರ&lt;/h2&gt;&lt;p&gt;ಮಾಹಿತಿಯ ಪ್ರಕಾರ, ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್ ಅವರು ತರಗತಿ ಕೊಠಡಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಅಸಭ್ಯವಾಗಿ ವರ್ತಿಸಿ ಪ್ರಪೋಸ್ ಮಾಡಿದರೆಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಚಾಕಲೇಟ್ ನೀಡಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದರೆಂದು ಹೇಳಲಾಗುತ್ತಿದೆ. ಈ ವರ್ತನೆಗೆ ಆಕ್ರೋಶಗೊಂಡ ವಿದ್ಯಾರ್ಥಿನಿ ತಕ್ಷಣವೇ ಅದನ್ನು ತಿರಸ್ಕರಿಸಿದ್ದು, ಇದರಿಂದ ತರಗತಿಯಲ್ಲೇ ಮಾತಿನ ಚಕಮಕಿ ಆರಂಭವಾಗಿ ಗಲಾಟೆಗೆ ತಿರುಗಿದೆ.&lt;/p&gt;&lt;h2&gt;ವಿದ್ಯಾರ್ಥಿಗಳ ಆಕ್ರೋಶ&lt;/h2&gt;&lt;p&gt;ಘಟನೆಯ ವಿಷಯ ತಿಳಿದ ಕೂಡಲೇ ಇತರ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. &ldquo;ಸ್ತ್ರೀ ಕುಲಕ್ಕೆ ಗೌರವ ಇಲ್ಲವೇ?&rdquo; ಎಂದು ಪ್ರಶ್ನಿಸುತ್ತಾ, ಆರೋಪಿತ ಪ್ರಾಧ್ಯಾಪಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕ್ಷಣಾರ್ಧದಲ್ಲಿ ಹದಗೆಟ್ಟು, ಕೆಲ ವಿದ್ಯಾರ್ಥಿಗಳು ಪ್ರಾಧ್ಯಾಪಕ ಅಬ್ದುಲ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.&lt;/p&gt;&lt;p&gt;ವಿದ್ಯಾರ್ಥಿನಿಯೂ ಸಹ ಆಕ್ರೋಶದಿಂದ ಪ್ರಾಧ್ಯಾಪಕನನ್ನು ಚಪ್ಪಲಿಯಿಂದ ಥಳಿಸಿದರೆಂದು ತಿಳಿದುಬಂದಿದೆ. ಇನ್ನು ಕೆಲ ವಿದ್ಯಾರ್ಥಿಗಳು ಕಾಲಿನಿಂದ ಹೊಡೆದು, ಕಾಲೇಜು ಕ್ಯಾಂಪಸ್&zwnj;ನಲ್ಲೇ ಅಟ್ಟಾಡಿಸಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಪ್ರಾಧ್ಯಾಪಕನನ್ನು ಕಾರಿನ ಬಳಿ ಹಿಂಬಾಲಿಸಿ ಮತ್ತೆ ಹಲ್ಲೆ ನಡೆಸಿದರೆಂದು ಹೇಳಲಾಗುತ್ತಿದೆ.&lt;/p&gt;&lt;h2&gt;ಪ್ರಾಧ್ಯಾಪಕ ಪರಾರಿಯಾಗಿರುವ ಮಾಹಿತಿ&lt;/h2&gt;&lt;p&gt;ಹಲ್ಲೆಯಿಂದ ಗಾಯಗೊಂಡ ಪ್ರಾಧ್ಯಾಪಕ ಅಬ್ದುಲ್, ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಸ್ಥಳದಿಂದ ಓಡಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ನಂತರ ಕಾಲೇಜು ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;h2&gt;ಪೊಲೀಸ್ ಕ್ರಮ&lt;/h2&gt;&lt;p&gt;ಈ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಘಟನೆಯ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.&lt;/p&gt;&lt;h2&gt;ವ್ಯಾಪಕ ಚರ್ಚೆಗೆ ಕಾರಣ&lt;/h2&gt;&lt;p&gt;ಗೃಹ ಸಚಿವರ ಒಡೆತನದ ಕಾಲೇಜಿನಲ್ಲೇ ಇಂತಹ ಘಟನೆ ನಡೆದಿರುವುದು ರಾಜ್ಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆ, ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕತೆ ಮತ್ತು ಪ್ರಾಧ್ಯಾಪಕರ ನಡೆ-ನುಡಿಗಳ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.&lt;/p&gt;&lt;p&gt;ಈ ಘಟನೆ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರ ಗೌರವ ಮತ್ತು ಭದ್ರತೆಯನ್ನು ಖಚಿತಪಡಿಸಬೇಕೆಂಬ ಬೇಡಿಕೆ ಮತ್ತೊಮ್ಮೆ ಕೇಳಿಬಂದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/minister-dr-g-parameshwara-owned-bengaluru-siddhartha-medical-college-prof-accused-misconduct-assaulted-by-students-gdp/articleshow-p3ne4kp"/>
        </item>
        <item>
            <title><![CDATA[ಪತ್ನಿಯಿಂದ ಬೇರೆಯಾದ ನಂತರವೂ ಒತ್ತಾಯದ  ದೈಹಿಕ ಸಂಪರ್ಕ, ಪತಿಯ ವಿರುದ್ಧ ಕೇಸ್ ರದ್ದುಪಡಿಸಲು ಹೈಕೋರ್ಟ್ ನಕಾರ]]></title>
            <link>https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg</link>
            <guid isPermaLink="true">https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg</guid>
            <pubDate>Wed, 08 Apr 2026 14:38:50 +0530</pubDate>
            <description><![CDATA[ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿದ್ದ ಪತಿಯೊಬ್ಬ, ತನ್ನ ಮೇಲಿನ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಆರೋಪಗಳು ವಿಚಾರಣೆಗೆ ಅರ್ಹವಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k8n4h9682whm9q01h82faa0s,imgname-karnataka-high-court-1761645995208.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ, ಒತ್ತಾಯದ ದೈಹಿಕ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿರುವ ಪತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ. ಈ ಮೂಲಕ, ಆರೋಪಗಳ ಕುರಿತು ವಿಚಾರಣೆ ನಡೆಯಬೇಕೆಂಬ ಮಹತ್ವದ ಸಂದೇಶವನ್ನು ನ್ಯಾಯಾಲಯ ನೀಡಿದೆ.&lt;/p&gt;&lt;p&gt;ದಾಂಪತ್ಯ ವೈಮನಸ್ಸು ಹಿನ್ನೆಲೆಯಲ್ಲಿ ದಂಪತಿ 2019ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ 2021ರಲ್ಲಿ ಪತಿ ಪತ್ನಿಯ ಮನೆಗೆ ಭೇಟಿ ನೀಡಿದ್ದು, ಆ ವೇಳೆ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಒತ್ತಾಯದ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪ ಇದೆ. ಈ ಹಿನ್ನೆಲೆ, ಪತ್ನಿ ತನ್ನ ಪತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.&lt;/p&gt;&lt;h2&gt;ದೈಹಿಕ ಸಂಪರ್ಕ ನಡೆದಿಲ್ಲ ಎಂಬ ವಾದ&lt;/h2&gt;&lt;p&gt;ಇದನ್ನು ಪ್ರಶ್ನಿಸಿದ ಪತಿ, ತನ್ನ ವಿರುದ್ಧ ದಾಖಲಾಗಿರುವ ಎಫ್&zwnj;ಐಆರ್ ಹಾಗೂ ಮುಂದಿನ ಕಾನೂನು ಕ್ರಮಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದನು. ಪತಿ ಪರ ವಕೀಲರು, ಪತ್ನಿಯೇ ರಾಜಿ ಸಂಧಾನಕ್ಕಾಗಿ ಮನೆಗೆ ಆಹ್ವಾನಿಸಿದ್ದಳು ಮತ್ತು ಆ ದಿನ ಯಾವುದೇ ದೈಹಿಕ ಸಂಪರ್ಕ ನಡೆದಿಲ್ಲ ಎಂದು ವಾದ ಮಂಡಿಸಿದರು.&lt;/p&gt;&lt;h2&gt;ಪತಿ ವಿರುದ್ಧ ಪತ್ನಿಯೇ ವಾದ ಮಂಡನೆ&lt;/h2&gt;&lt;p&gt;ಇದರ ವಿರುದ್ಧವಾಗಿ, ಪತ್ನಿಯೇ ಸ್ವತಃ ನ್ಯಾಯಾಲಯದಲ್ಲಿ ಹಾಜರಾಗಿ ತನ್ನ ಪರವಾಗಿ ವಾದ ಮಂಡಿಸಿ, ಪತಿಯ ಅರ್ಜಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. ತನ್ನ ಮೇಲೆ ನಡೆದಿರುವ ಘಟನೆ ಗಂಭೀರವಾಗಿದ್ದು, ಪ್ರಕರಣವನ್ನು ರದ್ದುಪಡಿಸಬಾರದು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.&lt;/p&gt;&lt;p&gt;ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು, ಈ ಹಂತದಲ್ಲಿ ಪ್ರಕರಣವನ್ನು ರದ್ದುಪಡಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಪ್ರಕರಣದಲ್ಲಿ ಹೊರಹೊಮ್ಮಿರುವ ಆರೋಪಗಳು ವಿಚಾರಣೆಗೆ ಒಳಪಟ್ಟಿರಬೇಕು ಎಂದು ಹೇಳಿ, ಪತಿಯ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.&lt;/p&gt;&lt;p&gt;ಈ ತೀರ್ಪು, ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿಗಳ ನಡುವೆ ಸಹ ಒತ್ತಾಯದ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದ ಆರೋಪಗಳನ್ನು ನ್ಯಾಯಾಂಗವು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-high-court-refuses-to-dismiss-case-against-husband-over-forced-physical-relationship-allegation-gdp/articleshow-th7lpeg"/>
        </item>
        <item>
            <title><![CDATA[ಲ್ಯಾಂಬೋರ್ಗಿನಿ ಚಾಲಕನ ದರ್ಪಕ್ಕೆ ಹೈಕೋರ್ಟ್‌ನಿಂದ ರಸ್ತೆ ಪಾಠ, ಅದೇ ಕಾರಲ್ಲಿ ಹೋಗಿ ರಸ್ತೆ ಗುಡಿಸುವಂತೆ ಆದೇಶ!]]></title>
            <link>https://kannada.asianetnews.com/karnataka-districts/bengaluru-lamborghini-driver-ordered-by-high-court-to-sweeps-road-as-community-service-gdp/articleshow-tioyxzy</link>
            <guid isPermaLink="true">https://kannada.asianetnews.com/karnataka-districts/bengaluru-lamborghini-driver-ordered-by-high-court-to-sweeps-road-as-community-service-gdp/articleshow-tioyxzy</guid>
            <pubDate>Fri, 10 Apr 2026 19:13:34 +0530</pubDate>
            <description><![CDATA[ಅತಿವೇಗ ಹಾಗೂ ಅಜಾಗರೂಕ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರು ಚಾಲಕನಿಗೆ ಕರ್ನಾಟಕ ಹೈಕೋರ್ಟ್ ಅಪರೂಪದ ಸಮುದಾಯ ಸೇವಾ ಶಿಕ್ಷೆ ವಿಧಿಸಿದೆ. ಆರೋಪಿಯು ತನ್ನದೇ ಹಸಿರು ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ, ಸ್ವಚ್ಛತಾ ಕಾರ್ಯ ನಡೆಸಬೇಕೆಂದು ನ್ಯಾಯಾಲಯ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knvsy57ht48f93t1v320hzp9,imgname-bengaluru-lamborghini-1775828407537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅತಿವೇಗ ಹಾಗೂ ಅಜಾಗರೂಕ ಚಾಲನೆ ಮಾಡಿದ ಲ್ಯಾಂಬೋರ್ಗಿನಿ ಕಾರು ಚಾಲಕನಿಗೆ ಕರ್ನಾಟಕ ಹೈಕೋರ್ಟ್ ಅಪರೂಪದ ರೀತಿಯ ಸಮುದಾಯ ಸೇವಾ ಶಿಕ್ಷೆಯನ್ನು ವಿಧಿಸಿದೆ. ಹಸಿರು ಬಣ್ಣದ ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ, ಸ್ವಚ್ಛತಾ ಕಾರ್ಯ ನಡೆಸಿ, ಅದೇ ಕಾರಿನಲ್ಲಿ ವಾಪಸ್ ಬರಬೇಕು ಎಂದು ಹೈಕೋರ್ಟ್ ಪೀಠ ಆದೇಶ ನೀಡಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;ಜನವರಿ 20ರಂದು ಆರೋಪಿಯಾಗಿರುವ ಚಿರಂತನ್ ಎಂಬಾತ ಲ್ಯಾಂಬೋರ್ಗಿನಿ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾವಣೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281 ಹಾಗೂ ಐಎಂವಿ ಕಾಯ್ದೆಯ ಸೆಕ್ಷನ್ 177 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.&lt;/p&gt;&lt;h2&gt;ಆರೋಪಿ ಪರ ವಕೀಲರ ವಾದವೇನಿತ್ತು?&lt;/h2&gt;&lt;p&gt;ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ಶುಕ್ರವಾರ ಹೈಕೋರ್ಟ್&zwnj;ನಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ನಡೆಯಿತು. ವಿಚಾರಣೆ ವೇಳೆ ಆರೋಪಿ ಪರ ವಕೀಲರು, ತಮ್ಮ ಕ್ಲೈಂಟ್&zwnj;ಗೆ ತನ್ನ ತಪ್ಪಿನ ಬಗ್ಗೆ ಅರಿವಾಗಿ ಪಶ್ಚಾತ್ತಾಪ ಉಂಟಾಗಿದೆ ಎಂದು ತಿಳಿಸಿ, ಬಿಎನ್&zwnj;ಎಸ್ ಕಾಯ್ದೆಯಡಿ ಇರುವ ಅವಕಾಶಗಳನ್ನು ಪರಿಗಣಿಸಿ ಸಮುದಾಯ ಸೇವೆ ಪ್ರಕಾರ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡ್ತಾರೆ. ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲು ಸಿದ್ಧನಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.&lt;/p&gt;&lt;h2&gt;ಉಲ್ಲಂಘನೆ ಮಾಡಿದ ವ್ಯಕ್ತಿಯೇ ಮಕ್ಕಳಿಗೆ ಪಾಠ ಮಾಡುವುದು ಎಷ್ಟು ಸರಿ?: ಎಸ್&zwnj;ಪಿಪಿ&lt;/h2&gt;&lt;p&gt;ಆದರೆ ಸರ್ಕಾರದ ಪರ ವಕೀಲರಾದ ಎಸ್&zwnj;ಪಿಪಿ ಅವರು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯೇ ಮಕ್ಕಳಿಗೆ ಪಾಠ ಮಾಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಎತ್ತಿದರು. ಬದಲಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಗಿಡಗಳನ್ನು ನೆಡುವಂತಹ ಕಾರ್ಯಗಳಲ್ಲಿ ತೊಡಗಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.&lt;/p&gt;&lt;p&gt;ಎರಡೂ ಕಡೆಯವರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ವಿಭಿನ್ನ ರೀತಿಯ ಶಿಕ್ಷೆಯನ್ನು ವಿಧಿಸುವ ಮೂಲಕ ಗಮನ ಸೆಳೆದಿದೆ. ಆರೋಪಿಗೆ ತನ್ನದೇ ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಗುಡಿಸಿ ಸ್ವಚ್ಛತಾ ಕಾರ್ಯ ನಡೆಸುವಂತೆ ಸೂಚಿಸಿದ್ದು, ಅದೇ ಕಾರಿನಲ್ಲಿ ಹಿಂದಿರುಗುವಂತೆ ಆದೇಶ ನೀಡಿದೆ. ಈ ಮೂಲಕ, ವೈಭವದ ಜೀವನಶೈಲಿ ಮತ್ತು ಸಾರ್ವಜನಿಕ ಜವಾಬ್ದಾರಿಯ ನಡುವಿನ ವ್ಯತ್ಯಾಸವನ್ನು ಅರಿಯುವಂತ ಸಂದೇಶ ನೀಡಲಾಗಿದೆ.&lt;/p&gt;&lt;p&gt;ಹೈಕೋರ್ಟ್ ಈ ಶಿಕ್ಷೆಯನ್ನು ಮೌಖಿಕವಾಗಿ ಘೋಷಿಸಿದ್ದು, ಸಮುದಾಯ ಸೇವೆ ನೆರವೇರಿಸಬೇಕಾದ ದಿನಾಂಕ ಮತ್ತು ಸಮಯವನ್ನು ಆದೇಶ ಪತ್ರದಲ್ಲಿ ವಿವರವಾಗಿ ಉಲ್ಲೇಖಿಸುವುದಾಗಿ ತಿಳಿಸಿದೆ. ಈ ಪ್ರಕರಣವು ಸಂಚಾರ ನಿಯಮ ಉಲ್ಲಂಘನೆಗೆ ವಿರುದ್ಧವಾಗಿ ಕಠಿಣ ಮತ್ತು ಸೃಜನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಮತ್ತೊಮ್ಮೆ ಹೈಲೈಟ್ ಮಾಡಿದ್ದು, ಸಾರ್ವಜನಿಕರಲ್ಲಿ ಕಾನೂನು ಪಾಲನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಸಂದೇಶ ನೀಡಿದೆ. ಜೊತೆಗೆ ಶ್ರೀಮಂತಿಕೆಯ ದರ್ಪದಲ್ಲಿ ಮರೆಯುವವರಿಗೆ ಜನಸಾಮಾನ್ಯರ ಜೀವನ ಅರ್ಥ ಮಾಡಿಸುವ ಒಂದು ಉತ್ತಮ ಕಾರ್ಯ ಇದಾಗಿದೆ ಎಂಬ ಅಭಿಪ್ರಾಯವಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-lamborghini-driver-ordered-by-high-court-to-sweeps-road-as-community-service-gdp/articleshow-tioyxzy"/>
        </item>
        <item>
            <title><![CDATA[Bengaluru ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ]]></title>
            <link>https://kannada.asianetnews.com/gallery/crime/four-members-of-the-same-family-attempt-suicide-two-die-two-others-are-in-critical-condition-attibele-bengaluru-mrq-wbod287</link>
            <guid isPermaLink="true">https://kannada.asianetnews.com/gallery/crime/four-members-of-the-same-family-attempt-suicide-two-die-two-others-are-in-critical-condition-attibele-bengaluru-mrq-wbod287</guid>
            <pubDate>Sun, 29 Mar 2026 07:27:08 +0530</pubDate>
            <description><![CDATA[&lt;p&gt;ಬೆಂಗಳೂರಿನ ಆನೇಕಲ್ ಬಳಿ ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kmvmg2ynesvfyca5mkse8q42,imgname-bengaluru-suicide--2--1774748961749.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಆನೇಕಲ್ ಬಳಿ ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&amp;nbsp;&lt;/p&gt;&lt;img&gt;&lt;p&gt;ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಆತ್ಮ *ಹತ್ಯೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ಮನೆಯಲ್ಲಿ ಮೃತರಾಗಿದ್ದು, ಇಬ್ಬರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಆಶಾ (55), ವರ್ಷಿತಾ (34) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೋಹನ್ ಗೌಡ (32) ಮತ್ತು ಮಯಾಂಕ್ (11) ಗಂಭೀರವಾಗಿ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಸಾಲಗಾರರ ಕಾಟ ತಾಳಲಾರದೆ ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೃತರು ವಿಡಿಯೋ ಮಾಡಿ ಕೆಲವರೊಂದಿಗೆ ಶೇರ್ ಮಾಡಿಕೊಂಡಿದ್ದರು.&lt;/p&gt;&lt;img&gt;&lt;p&gt;ಈ ವಿಡಿಯೋ ನೋಡಿದ ಸಂಬಂಧಿಕರು ಮನೆ ಬಳಿ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮೋಹನ್ ಗೌಡ ಮತ್ತು ಮಯಾಂಕ್&zwnj;ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಮೋಹನ್ ಎಂ ಆರ್ ಬಾಗಿಲನ್ನು ಹಾಕಿಕೊಂಡು ತನ್ನ ತಾಯಿಯಾದ ಶ್ರೀಮತಿ ಆಶಾ, ಅಕ್ಕ. ವರ್ಷಿತ, ಅಕ್ಕನ ಮಗ ಮಯಾಂಕ್ 11 ವರ್ಷ ರವರನ್ನು ಚಾಕುವಿನಿಂದ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡಿರುತ್ತಾನೆ. ಸ್ಥಳದಲ್ಲಿ ತಾಯಿ ಆಶಾ ಮತ್ತು ಅಕ್ಕ ವರ್ಷಿತ ಮೃತಪಟ್ಟಿದ್ದು ಮೋಹನ್ ಮತ್ತು ಮಯಾಂಕ್ ತೀವ್ರ ಸ್ವರೂಪದ ರಕ್ತ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಅಕ್ಕ ಪಕ್ಕದ ಮನೆಯವರು ಕಿರುಚಾಡುವ ಶಬ್ದ ಕೇಳಿ ಬಂದು ಬಾಗಿಲು ಹೊಡೆದು ನೋಡಲಾಗಿ ತಾಯಿ ಮತ್ತು ಮಗಳು ಮೃತಪಟ್ಟಿದ್ದು ಗಾಯಾಳುಗಳಾದ ಮೋಹನ್ ಮತ್ತು ಮಯಂಕ್ ರವರನ್ನು ಅತ್ತಿಬೆಲೆಯ ಎಲೈಟ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಮೋಹನ್ ರವರ ಅಕ್ಕ ವರ್ಷಿತ ಈಗ್ಗೆ ಸುಮಾರು ಒಂದುವರೆ ವರ್ಷಗಳಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು ಕೋಮ ಹಂತದಲ್ಲಿರುತ್ತಾರೆ. ಇವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಾಲ ಮಾಡಿಕೊಂಡಿದ್ದು ಸಾಲದ ಹೊರೆ ತಡೆಯಲಾರದೆ ಈ ರೀತಿ ಮೋಹನ್ ಚಾಕುವಿನಿಂದ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡು ಆತ್ಮ*ಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/crime/four-members-of-the-same-family-attempt-suicide-two-die-two-others-are-in-critical-condition-attibele-bengaluru-mrq-wbod287"/>
        </item>
        <item>
            <title><![CDATA[20 ವರ್ಷಗಳಿಂದ ಸ್ಥಗಿತಗೊಂಡಿದ್ದ ಸೇವೆಗೆ ಮರುಜೀವ; ಮೆಜೆಸ್ಟಿಕ್‌ಗೆ ಡೈರೆಕ್ಟ್ 4 ಬಸ್]]></title>
            <link>https://kannada.asianetnews.com/karnataka-districts/ksrtc-bus-services-from-kanakapura-to-kempegowda-bus-station-in-bengaluru-have-resumed-mrq/articleshow-wqzwthw</link>
            <guid isPermaLink="true">https://kannada.asianetnews.com/karnataka-districts/ksrtc-bus-services-from-kanakapura-to-kempegowda-bus-station-in-bengaluru-have-resumed-mrq/articleshow-wqzwthw</guid>
            <pubDate>Mon, 06 Apr 2026 09:02:12 +0530</pubDate>
            <description><![CDATA[&lt;p&gt;ಸುಮಾರು 20 ವರ್ಷಗಳ ನಂತರ, ಕನಕಪುರದಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರ ಪುನರಾರಂಭಿಸಲಾಗಿದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಿಗ್ಗೆ ಮತ್ತು ಸಂಜೆ ನಿರ್ದಿಷ್ಟ ಸಮಯಗಳಲ್ಲಿ ನಾಲ್ಕು ಬಸ್&zwnj;ಗಳ ಸೇವೆಯನ್ನು ಕಲ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kngdee7v47tbcjwvr5d2t81c,imgname-ksrtc-1775446210811.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ದಕ್ಷಿಣ:&lt;/strong&gt; ಕನಕಪುರದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್&zwnj; ಸಂಚಾರ ಪುನರಾರಂಭವಾಗಿದೆ. 2003ರಲ್ಲಿ ಕಾರಣಾಂತರದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರದ ಸಂಪರ್ಕಕ್ಕಾಗಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಸಾರ್ವಜನಿಕರ ಹಿತಾಸಕ್ತಿಯಿಂದ ನಿಗಮಕ್ಕೆ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಅಧಿಕಾರಿಗಳು ಈ ಮಾರ್ಗದಲ್ಲಿ ಬಸ್&zwnj;ಗಳ ಸಂಚಾರ ಆರಂಭಿಸಿರುವುದು ಸಾರ್ವಜನಿಕರಲ್ಲಿ ಹರ್ಷ ತಂದಿದೆ.&lt;/p&gt;&lt;p&gt;ಕನಕಪುರ-ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಅವರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಾಲ್ಕು ಬಸ್&zwnj; ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದೆ.&amp;nbsp;&lt;/p&gt;&lt;h2&gt;&lt;strong&gt;ಬಸ್&zwnj;ಗಳ ಸಮಯ ಈ ರೀತಿಯಾಗಿದೆ&lt;/strong&gt;&lt;/h2&gt;&lt;p&gt;ಬೆಳಿಗ್ಗೆ 6.30, 7.30, 8.00, 9.00 ಗಂಟೆ ಹಾಗೂ ಸಂಜೆ 5.30, 6.30, 8.30 ಗಂಟೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮತ್ತು ಬೆಂಗಳೂರಿನಿಂದ ಕನಕಪುರದತ್ತ ರಾತ್ರಿ ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸಾರ್ವಜನಿಕರಿಗೆ ಮತ್ತಷ್ಟು ಸಹಾಯಕವಾಗಲಿದೆ.&lt;/p&gt;&lt;h3&gt;&lt;strong&gt;ಮನವಿಗೆ ಸ್ಪಂದಿಸಿದ್ದಕ್ಕೆ ದನ್ಯವಾದ&lt;/strong&gt;&lt;/h3&gt;&lt;p&gt;ಕನಕಪುರದಿಂದ ಬೆಂಗಳೂರು ಕಡೆಗೆ ಪ್ರತಿದಿನ ನೂರಾರು ಜನ ಉದ್ಯೋಗ, ಶಿಕ್ಷಣ, ವ್ಯಾಪಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ಪ್ರಯಾಣಿಸಲಿದ್ದು ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿತ್ತು. ಸಾರಿಗೆ ನಿಗಮದ ಅಧಿಕಾರಿಗಳು ನನ್ನ ಮನವಿಗೆ ಸ್ಪಂದಿಸಿ ಬಸ್ ಸಂಚಾರ ಆರಂಭಿಸಿರುವುದು ಸಂತೋಷವಾಗಿದೆ. ಇಲಾಖೆ ಡಿಸಿ ಪುರುಷೋತ್ತಮರು ಜನರ ಬೇಡಿಕೆಗೆ ಸ್ಪಂದಿಸಿ ಕೈಗೊಂಡಿರುವ ಈ ಕ್ರಮಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಹೇಳಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ksrtc-bus-services-from-kanakapura-to-kempegowda-bus-station-in-bengaluru-have-resumed-mrq/articleshow-wqzwthw"/>
        </item>
        <item>
            <title><![CDATA[ಬಳ್ಳಾರಿ: ಮದುವೆಯಾದ ತಿಂಗಳಲ್ಲೇ ಮರೆಯಾದ ನವಜೋಡಿ: ಜಾತ್ರೆಗೆಂದು ಹೊರಟವರಿಗೆ ಕಾದಿತ್ತು ಕರಾಳ ವಿಧಿ!]]></title>
            <link>https://kannada.asianetnews.com/karnataka-districts/ballari-couple-died-in-road-accident-doddaballapur-newlyweds-tragedy-san/articleshow-x4q9egx</link>
            <guid isPermaLink="true">https://kannada.asianetnews.com/karnataka-districts/ballari-couple-died-in-road-accident-doddaballapur-newlyweds-tragedy-san/articleshow-x4q9egx</guid>
            <pubDate>Fri, 03 Apr 2026 13:29:34 +0530</pubDate>
            <description><![CDATA[ಕಳೆದ ತಿಂಗಳಷ್ಟೇ ಮದುವೆಯಾಗಿದ್ದ ಬೆಂಗಳೂರಿನ ಪವನ್ ಮತ್ತು ಬಳ್ಳಾರಿಯ ರಕ್ಷಿತಾ, ಊರ ಜಾತ್ರೆಗೆಂದು ಕಾರಿನಲ್ಲಿ ಬರುವಾಗ ದೊಡ್ಡಬಳ್ಳಾಪುರ ಬಳಿ ನಡೆದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತ ಘಟನೆಯು ಎರಡೂ ಕುಟುಂಬಗಳಲ್ಲಿ ಮತ್ತು ಗ್ರಾಮದಲ್ಲಿ తీవ్ర ಶೋಕವನ್ನುಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kn95dnxk772x9zdxt6svm6yw,imgname-ballari-death--2--1775202916275.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಏ.3): &lt;/strong&gt;ಬದುಕಿನ ಹೊಸ ಕನಸುಗಳನ್ನು ಹೊತ್ತು ಮದುವೆಯಾದ ತಿಂಗಳಲ್ಲೇ ನವಜೋಡಿಯೊಂದು ಭೀಕರ ರಸ್ತೆ ಅಪಘಾತದಲ್ಲಿ ಅಸುನೀಗಿರುವ ಘಟನೆ ಸಂಭವಿಸಿದೆ. ಈ ಸಾವು ಕುಟುಂಬಸ್ಥರ ಪಾಲಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಬಳ್ಳಾರಿ ತಾಲೂಕಿನ ಜೋಳದ ರಾಶಿ ಗ್ರಾಮದ ರಕ್ಷಿತಾ (24) ಮತ್ತು ಬೆಂಗಳೂರಿನ ಪವನ್ (29) ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ಮೊದಲ ಜಾತ್ರೆಗಾಗಿ ತಮ್ಮ ಊರಿಗೆ ಬರಲು ದಂಪತಿ ನಿರ್ಧರಿಸಿದ್ದರು. ಅದರಂತೆ ಬೆಂಗಳೂರಿನಿಂದ ಬಳ್ಳಾರಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗ, ದೊಡ್ಡಬಳ್ಳಾಪುರದ ಬಳಿ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.&lt;/p&gt;&lt;p&gt;ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಪವನ್ ಮತ್ತು ರಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರೂ ಯುವಕ-ಯುವತಿಯರಾಗಿದ್ದು, ಬದುಕಿ ಬಾಳಬೇಕಾದ ಜೋಡಿ ಹೀಗೆ ಅರ್ಧದಲ್ಲೇ ಇಹಲೋಕ ತ್ಯಜಿಸಿದ್ದು ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.&lt;/p&gt;&lt;h2&gt;&lt;strong&gt;ಮುಗಿಲು ಮುಟ್ಟಿದ ಆಕ್ರಂದನ&lt;/strong&gt;&lt;/h2&gt;&lt;p&gt;ಜಾತ್ರೆಗೆಂದು ಸಂಭ್ರಮದಿಂದ ಊರಿಗೆ ಮರಳಿ ಬರಬೇಕಾಗಿದ್ದ ನವಜೋಡಿ, ಮರಳಿ ಬಾರದ ಲೋಕಕ್ಕೆ ಪಯಣಿಸಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಜೋಳದ ರಾಶಿ ಗ್ರಾಮದಲ್ಲಿ ಮೃತದೇಹಗಳು ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ. ಸಂತೋಷದ ದಿನಗಳಲ್ಲಿ ಬರಬೇಕಾಗಿದ್ದ ದಂಪತಿಗಳು ಶವವಾಗಿ ಮನೆಗೆ ಬಂದ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-rural</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/ballari-couple-died-in-road-accident-doddaballapur-newlyweds-tragedy-san/articleshow-x4q9egx"/>
        </item>
    </channel>
</rss>
