<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 03 Jul 2026 14:14:51 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದ ಹಾರ್ದಿಕ್ ಪಾಂಡ್ಯ, ಆರ್‌ಸಿಬಿ ಸೇರಿಕೊಳ್ತಾರ ಆಲ್‌ರೌಂಡರ್?]]></title>
            <link>https://kannada.asianetnews.com/gallery/cricket-sports/hardik-pandya-rents-house-in-bengaluru-rcb-transfer-rumours-gather-pace-1so43mu</link>
            <guid isPermaLink="true">https://kannada.asianetnews.com/gallery/cricket-sports/hardik-pandya-rents-house-in-bengaluru-rcb-transfer-rumours-gather-pace-1so43mu</guid>
            <pubDate>Wed, 01 Jul 2026 15:59:26 +0530</pubDate>
            <description><![CDATA[&lt;p&gt;ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತೊರೆಯಲು ಸಜ್ಜಾಗಿರುವ ಹಾರ್ದಿಕ್ ಪಾಂಡ್ಯ, ಆರ್&zwnj;ಸಿಬಿ ಸೇರಿಕೊಳ್ಳುತ್ತಾರಾ?&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwek8xq1ydc43z81hxn6dcww,imgname-hardik-pandya-bengaluru-home-1782901405409.png" type="image/jpeg" height="390" width="690"/>
            <content:encoded><![CDATA[&lt;p&gt;ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಬೆಂಗಳೂರಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ತೊರೆಯಲು ಸಜ್ಜಾಗಿರುವ ಹಾರ್ದಿಕ್ ಪಾಂಡ್ಯ, ಆರ್&zwnj;ಸಿಬಿ ಸೇರಿಕೊಳ್ಳುತ್ತಾರಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಟೀಂ ಇಂಡಿಯಾ ಆಲ್&zwnj;ರೌಂಡರ್ ಮುಂಬೈನಲ್ಲಿ ಸೆಟ್ಲ್ ಆಗಿ ಹಲವು ವರ್ಷಗಳು ಉರುಳಿತ್ತು. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದೊಳಗಿನ ಒಡಕು, ಜಟಾಪಟಿ ಹಾರ್ದಿಕ್ ಪಾಂಡ್ಯ ಕರಿಯರ್&zwnj;ನಲ್ಲೂ ಬಿರುಗಾಳಿ ಎಬ್ಬಿಸಿದೆ. ಇದೀಗ ಹಾರ್ದಿಕ್ ಪಾಂಡ್ಯ ಮುಂಬೈ ತೊರೆದು ಬೆಂಗಳೂರಿಗೆ ಆಗಮಿಸಿದ್ದಾರೆ. ಇದರ ಬೆನ್ನಲ್ಲೇ ಆರ್&zwnj;ಸಿಬಿ ಚರ್ಚೆಗಳು ಶುರುವಾಗಿದೆ.&lt;/p&gt;&lt;img&gt;&lt;p&gt;ಬರೋಡಾ ಮೂಲದ ಹಾರ್ದಿಕ್ ಪಾಂಡ್ಯ ಸರಿಸುಮಾರು ಕಳೆದ 10 ವರ್ಷಗಳಿಂದ ಮುಂಬೈನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಇದೀಗ ಮುಂಬೈನ ಲೊವರ್ ಪರೇಲ್&zwnj;ನಲ್ಲಿರುವ ಮನೆ ತೊರೆದು ಇದೀಗ ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ.ಬೆಂಗಳೂರಿನ ಹೊರವಲಯದಲ್ಲಿ ಹಾರ್ದಿಕ್ ಪಾಂಡ್ಯ ಬಾಡಿಗೆ ಮನೆ ಪಡೆದುಕೊಂಡಿದ್ದಾರೆ. ಬಿಸಿಸಿಐನ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ (COE)ನಲ್ಲಿ ತರಬೇತಿ ಪಡೆಯಲು ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಮುಂಬೈ ಇಂಡಿಯನ್ಸ್ ತೊರೆಯಲು ಮುಂದಾಗಿರುವ ಹಾರ್ದಿಕ್ ಪಾಂಡ್ಯ ಇತರ ಐಪಿಎಲ್ ಫ್ರಾಂಚೈಸಿ ಸೇರಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ. ಈ ಪೈಕಿ ರಾಜಸ್ಥಾನ ರಾಯಲ್ಸ್ ಹಾಗೂ ಕೆಕೆಆರ್ ಮುಂಚೂಣಿಯಲ್ಲಿದೆ. ಇದರ ನಡುವೆ ಬೆಂಗಳೂರಿಗೆ ಬಂದಿರುವ ಕಾರಣ ಹಾರ್ದಿಕ್ ಪಾಂಡ್ಯ ಆರ್&zwnj;ಸಿಬಿ ಸೇರಿಕೊಳ್ಳುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿದೆ. ಆದರೆ ಆರ್&zwnj;ಸಿಬಿ ಸೇರಿಕೊಳ್ಳುವ ಕುರಿತು ತರೆಮರೆಯಲ್ಲೂ ಯಾವುದೇ ಮಾತುಕತೆಗಳು ನಡೆದಿಲ್ಲ.&lt;/p&gt;&lt;img&gt;&lt;p&gt;ಇಂಜರಿ ಆಟಗಾರರು ಪುನರ್ವಸತಿ, ಫಿಟ್&zwnj;ನೆಸ್ ಪರೀಕ್ಷೆ, ರಾಷ್ಟ್ರೀಯ ತರಬೇತಿ ಶಿಬಿರಗಳಿಗೆ ಬಿಸಿಸಿಆ ಕಾಂಟ್ರಾಕ್ಟ್ ಆಟಗಾರರು ಬೆಂಗಳೂರಿಗೆ ಆಗಮಿಸುತ್ತಾರೆ. ಬೆಂಗಳೂರಿನಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್&zwnj;ನಲ್ಲಿ ಪ್ರತಿ ದಿನ ಅಭ್ಯಾಸ, ಪುನರ್ವತಿ, ಫಿಟ್ನೆಸ್ ಪರೀಕ್ಷೆಗಳು ನಡೆಯಲಿದೆ. ಮುಂಬೈ ಟು ಬೆಂಗಳೂರು ಓಡಾಡುವ ಕಷ್ಟವಾಗಿರುವ ಕಾರಣ ಹಾರ್ದಿಕ್ ಪಾಂಡ್ಯ ಬೆಂಗಳೂರಿಗೆ ಸ್ಥಳಾಂತಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಟೀಂ ಇಂಡಿಯಾ, ಐಪಿಎಲ್, ದೇಶಿ ಟೂರ್ನಿಗಳು ಇಲ್ಲದಿರುವಾಗ ಹಾರ್ದಿಕ್ ಪಾಂಡ್ಯ ಇನ್ನು ಬೆಂಗಳೂರಿನಲ್ಲಿ ನೆಲೆಸಲಿದ್ದಾರೆ. ಈಗಾಗಲೇ ಪಾಂಡ್ಯ ತಮ್ಮ ವೈಯುಕ್ತಿಕ ಖರ್ಚಿನಲ್ಲಿ ಫಿಸಿಯೋಥೆರಪಿಸ್ಟ್ ಹಾಗೂ ಪರ್ಸನಲ್ ಸ್ಟ್ರಂತ್ ಕಂಡೀಷನ್ ತರಬೇತುದಾರರನ್ನು ನೇಮಕ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಹಾರ್ದಿಕ್ ಪಾಂಡ್ಯ ಮುಂದಿನ 5 ರಿಂದ 10 ವರ್ಷಗಳ ಕಾಲದ ಟೀಂ ಇಂಡಿಯಾ, ಐಪಿಎಲ್ ಟೂರ್ನಿ ಹಾಗೂ ದೇಶಿ ಕ್ರಿಕೆಟ್&zwnj;ನಲ್ಲಿ ಸಕ್ರೀಯವಾಗಲು ಬಹುದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಹಾರ್ದಿಕ್ ಪಾಂಡ್ಯ ಬೆಂಗಳೂರಿನಲ್ಲಿ ತರಬೇತಿ ಇಲ್ಲೇ ಉಳಿದುಕೊಂಡಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/hardik-pandya-rents-house-in-bengaluru-rcb-transfer-rumours-gather-pace-1so43mu"/>
        </item>
        <item>
            <title><![CDATA[ಬೆಂಗಳೂರಿಗೆ ಶಾಕ್, ನಮ್ಮ ಮೆಟ್ರೋ 3ನೇ ಹಂತದ ಡಬಲ್ ಡೆಕ್ಕರ್ ಅಪಾಯಕಾರಿ: ಐಐಎಸ್‌ಸಿ ವರದಿ]]></title>
            <link>https://kannada.asianetnews.com/karnataka-districts/big-setback-for-bengaluru-iisc-says-double-decker-road-wont-solve-traffic-gdp/articleshow-3e1nvft</link>
            <guid isPermaLink="true">https://kannada.asianetnews.com/karnataka-districts/big-setback-for-bengaluru-iisc-says-double-decker-road-wont-solve-traffic-gdp/articleshow-3e1nvft</guid>
            <pubDate>Tue, 30 Jun 2026 18:19:29 +0530</pubDate>
            <description><![CDATA[ಬೆಂಗಳೂರಿನ ನಮ್ಮ ಮೆಟ್ರೋ 3ನೇ ಹಂತದ ಜೊತೆಗಿನ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಯು ಆರ್ಥಿಕ ನಷ್ಟ, ಪರಿಸರ ಮಾಲಿನ್ಯ ಮತ್ತು ಸಂಚಾರ ದಟ್ಟಣೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಅಧ್ಯಯನ ವರದಿ ಎಚ್ಚರಿಸಿದೆ. ಈ ಯೋಜನೆಯು ಸಾರ್ವಜನಿಕ ಸಾರಿಗೆ ಬಳಕೆಯನ್ನು ಕಡಿಮೆ ಮಾಡಿ, ಖಾಸಗಿ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kg44mtwp83fbhd5g3a3bks0w,imgname--kmk4985-1769665620886.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ರೂಪಿಸಲಾಗುತ್ತಿರುವ 'ನಮ್ಮ ಮೆಟ್ರೊ' ಮೂರನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಮೆಟ್ರೊ ಮಾರ್ಗದೊಂದಿಗೆ ಡಬಲ್ ಡೆಕ್ಕರ್ (ಮೇಲ್ಸೇತುವೆ) ನಿರ್ಮಿಸುವುದರಿಂದ ಆರ್ಥಿಕವಾಗಿ ಭಾರಿ ನಷ್ಟ ಉಂಟಾಗುವುದಲ್ಲದೆ, ಪರಿಸರದ ಮೇಲೂ ಗಂಭೀರ ದುಷ್ಪರಿಣಾಮ ಬೀರಲಿದೆ ಮತ್ತು ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಿ ಸಂಚಾರ ದಟ್ಟಣೆ ಮತ್ತಷ್ಟು ಉಲ್ಬಣವಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ಸಾರಿಗೆ ಪ್ರಯೋಗಾಲಯದ ಅಧ್ಯಯನ ವರದಿ ಎಚ್ಚರಿಸಿದೆ.&lt;/p&gt;&lt;p&gt;ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕಾಗಿ ಐಐಎಸ್&zwnj;ಸಿಯ ಪ್ರೊ. ಆಶಿಶ್ ವರ್ಮಾ ನೇತೃತ್ವದಲ್ಲಿ 'ಬೆಂಗಳೂರಿನ ಚಲನಶೀಲತೆ ಮತ್ತು ಪರಿಸರದ ಮೇಲೆ ಮೆಟ್ರೊ ಡಬಲ್-ಡೆಕ್ಕರ್ ಮತ್ತು ಎತ್ತರಿಸಿದ ಕಾರಿಡಾರ್&zwnj;ಗಳ ಪರಿಣಾಮಗಳು' ಎಂಬ ತಾಂತ್ರಿಕ ಅಧ್ಯಯನ ನಡೆಸಿ ಈ ಮಹತ್ವದ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ವರದಿಯು ಕೇವಲ ಮೆಟ್ರೊ ಮಾರ್ಗ ನಿರ್ಮಿಸಿದರೆ ಏನಾಗಲಿದೆ ಮತ್ತು ಡಬಲ್ ಡೆಕ್ಕರ್ ನಿರ್ಮಾಣವಾದರೆ 2041ರ ಹೊತ್ತಿಗೆ ನಗರದ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬ ಹೋಲಿಕೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.&lt;/p&gt;&lt;h2&gt;ಸಾರ್ವಜನಿಕ ಸಾರಿಗೆ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ!&lt;/h2&gt;&lt;p&gt;ಮೆಟ್ರೊ ಜೊತೆಗೆ ರಸ್ತೆ ಸಾಮರ್ಥ್ಯವನ್ನೂ ಹೆಚ್ಚಿಸುವ ಡಬಲ್ ಡೆಕ್ಕರ್ ನಿರ್ಮಾಣವು, ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡಲಿದೆ ಎಂದು ವರದಿ ಹೇಳಿದೆ. ಕೇವಲ ಮೆಟ್ರೊ ಮಾರ್ಗವಿದ್ದರೆ 2041ರ ವೇಳೆಗೆ ಪ್ರತಿದಿನ ಸುಮಾರು 8.09 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಆದರೆ ಡಬಲ್ ಡೆಕ್ಕರ್ ನಿರ್ಮಿಸಿದರೆ ಈ ಸಂಖ್ಯೆ 7.98 ಲಕ್ಷಕ್ಕೆ ಕುಸಿಯಲಿದೆ. ಅಂದರೆ ಮೆಟ್ರೊ ಬಿಟ್ಟು ದಿನಕ್ಕೆ ಕನಿಷ್ಠ 11 ಸಾವಿರ ಪ್ರಯಾಣಿಕರು ಖಾಸಗಿ ವಾಹನಗಳತ್ತ ಮುಖ ಮಾಡಲಿದ್ದಾರೆ. ಇದರಿಂದಾಗಿ ಬಿಎಂಟಿಸಿ ಬಸ್ ಬಳಕೆ ಶೇ 6.4 ರಷ್ಟು ಮತ್ತು ಮೆಟ್ರೊ ಬಳಕೆ ಶೇ 1.4 ರಷ್ಟು ಕಡಿಮೆಯಾಗಲಿದೆ.&lt;/p&gt;&lt;h2&gt;ಖಾಸಗಿ ವಾಹನಗಳ ಬಳಕೆ ಹೆಚ್ಚಳ ಮತ್ತು ಸಂಚಾರ ದಟ್ಟಣೆ&lt;/h2&gt;&lt;p&gt;ಹೆಚ್ಚುವರಿ ರಸ್ತೆ ಸಾಮರ್ಥ್ಯವು ಪ್ರಯಾಣಿಕರನ್ನು ಸಾರ್ವಜನಿಕ ಸಾರಿಗೆಯಿಂದ ಖಾಸಗಿ ವಾಹನಗಳತ್ತ ಮುಖಮಾಡುವಂತೆ ಪ್ರೇರೇಪಿಸುತ್ತದೆ. ಡಬಲ್ ಡೆಕ್ಕರ್ ಮೇಲ್ಸೇತುವೆಗಳಲ್ಲಿ ಖಾಸಗಿ ವಾಹನಗಳನ್ನು ಬಳಸಿ ಜನರು ಓಡಾಡುವುದರಿಂದ ನಗರದಲ್ಲಿ ವಾಹನಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. ವರದಿಯ ಪ್ರಕಾರ, ಕಾರುಗಳ ಬಳಕೆ ಶೇ 3.8, ದ್ವಿಚಕ್ರ ವಾಹನಗಳು ಶೇ 1.28 ಹಾಗೂ ಆಟೋ ಮತ್ತು ಟ್ಯಾಕ್ಸಿಗಳ ಬಳಕೆ ಶೇ 2.8 ರಷ್ಟು ಹೆಚ್ಚಾಗಲಿದೆ. ಇದು ಸಾರ್ವಜನಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳ (Mass Rapid Transit) ಮೂಲ ಆಶಯಕ್ಕೆ ಧಕ್ಕೆ ತರಲಿದೆ.&lt;/p&gt;&lt;h2&gt;ಪರಿಸರ ಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮ&lt;/h2&gt;&lt;p&gt;ಖಾಸಗಿ ವಾಹನಗಳ ಸಂಚಾರ ಹೆಚ್ಚಾಗುವುದರಿಂದ ನಗರದ ವಾಯುಮಾಲಿನ್ಯದ ಮಟ್ಟ ಅಪಾಯಕಾರಿ ಹಂತ ತಲುಪಲಿದೆ. ಹೆಚ್ಚುವರಿ ವಾಹನಗಳಿಂದಾಗಿ ಪ್ರತಿದಿನ ವಾತಾವರಣಕ್ಕೆ ಬಿಡುಗಡೆಯಾಗುವ ವಿಷಕಾರಿ ಅನಿಲಗಳ ಪ್ರಮಾಣವನ್ನು ವರದಿ ಅಂದಾಜಿಸಿದೆ:&lt;/p&gt;&lt;h2&gt;ಮಾಲಿನ್ಯಕಾರಕಗಳು&lt;/h2&gt;&lt;ul&gt; &lt;li&gt;ಕಾರ್ಬನ್ ಡೈಆಕ್ಸೈಡ್ : 17,012 ಕೆ.ಜಿ ಪ್ರತಿದಿನ ಹೆಚ್ಚುವರಿಯಾಗಿ ಹೊರಸೂಸುವ ಪ್ರಮಾಣ&lt;/li&gt; &lt;li&gt;ಕಾರ್ಬನ್ ಮಾನಾಕ್ಸೈಡ್ : 85.9 ಕೆ.ಜಿ ಪ್ರತಿದಿನ ಹೆಚ್ಚುವರಿಯಾಗಿ ಹೊರಸೂಸುವ ಪ್ರಮಾಣ&lt;/li&gt; &lt;li&gt;ಸಾರಜನಕದ ಆಕ್ಸೈಡ್ : 12.6 ಕೆ.ಜಿ ಪ್ರತಿದಿನ ಹೆಚ್ಚುವರಿಯಾಗಿ ಹೊರಸೂಸುವ ಪ್ರಮಾಣ&lt;/li&gt; &lt;li&gt;ಹೈಡ್ರೋಕಾರ್ಬನ್ : 19.5 ಕೆ.ಜಿ ಪ್ರತಿದಿನ ಹೆಚ್ಚುವರಿಯಾಗಿ ಹೊರಸೂಸುವ ಪ್ರಮಾಣ&lt;/li&gt; &lt;li&gt;ಪಿಎಂ 2.5 ಕಣಗಳು (ಧೂಳು): 1.1 ಕೆ.ಜಿ ಪ್ರತಿದಿನ ಹೆಚ್ಚುವರಿಯಾಗಿ ಹೊರಸೂಸುವ ಪ್ರಮಾಣ&lt;/li&gt;&lt;/ul&gt;&lt;p&gt;ಉಸಿರಾಟದ ತೊಂದರೆಗೆ ಕಾರಣವಾಗುವ $PM_{2.5}$ ನಂತಹ ಸೂಕ್ಷ್ಮ ಕಣಗಳು ವಿಪರೀತ ಹೆಚ್ಚಾಗಲಿದ್ದು, ನಾಗರಿಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರೊಂದಿಗೆ ಪ್ರತಿದಿನ 7,000 ಲೀಟರ್ ಹೆಚ್ಚುವರಿ ಇಂಧನ ಬಳಕೆಯಾಗಲಿದ್ದು, ಇದಕ್ಕಾಗಿ ನಿತ್ಯ 6.45 ಲಕ್ಷ ರೂ. ಸಾರ್ವಜನಿಕರ ಹಣ ಪೋಲಾಗಲಿದೆ.&lt;/p&gt;&lt;h2&gt;ಕೋಟ್ಯಂತರ ರೂಪಾಯಿ ಹೆಚ್ಚುವರಿ ಬಂಡವಾಳ ವೆಚ್ಚ ಮತ್ತು ಆರ್ಥಿಕ ನಷ್ಟ&lt;/h2&gt;&lt;p&gt;ಡಬಲ್ ಡೆಕ್ಕರ್ ಯೋಜನೆಯು ಆರ್ಥಿಕ ದೃಷ್ಟಿಯಿಂದಲೂ ಅತ್ಯಂತ ನಷ್ಟದಾಯಕ ಎಂದು ಐಐಎಸ್&zwnj;ಸಿ ವರದಿ ಸ್ಪಷ್ಟಪಡಿಸಿದೆ. ಕೇವಲ ಮೆಟ್ರೊ ನಿರ್ಮಾಣಕ್ಕೆ ಹೋಲಿಸಿದರೆ ಡಬಲ್ ಡೆಕ್ಕರ್&zwnj;ಗಾಗಿ ಬರೋಬ್ಬರಿ 2,863 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ. ಬೃಹತ್ ಪಿಲ್ಲರ್&zwnj;ಗಳು, ಎತ್ತರಿಸಿದ ನಿಲ್ದಾಣಗಳು, ಆಳವಾದ ಫೌಂಡೇಶನ್ ಹಾಗೂ ಮಲ್ಟಿಮಾಡೆಲ್ ಇಂಟಿಗ್ರೇಷನ್ ವ್ಯವಸ್ಥೆಗಳು ಈ ಯೋಜನೆಯನ್ನು ಅತಿ ದುಬಾರಿಯಾಗಿಸಲಿವೆ. ಜತೆಗೆ, ಡಬಲ್ ಡೆಕ್ಕರ್&zwnj;ನಿಂದಾಗಿ ಯೋಜನೆಯ ಆಂತರಿಕ ಆರ್ಥಿಕ ಆದಾಯವು ತೀವ್ರವಾಗಿ ಕುಸಿತವಾಗಲಿದ್ದು, ಇದು ಸಂಪೂರ್ಣ ಆರ್ಥಿಕ ನಷ್ಟಕ್ಕೆ ಕಾರಣವಾಗಲಿದೆ.&lt;/p&gt;&lt;h2&gt;ಆರ್ಥಿಕ ಆಂತರಿಕ ಲಾಭದ ದರದಲ್ಲಿ (EIRR) ಭಾರಿ ಕುಸಿತ&lt;/h2&gt;&lt;p&gt;ಕೇಂದ್ರ ಸರ್ಕಾರ 2024ರಲ್ಲಿ ಮೆಟ್ರೊ 3ನೇ ಹಂತಕ್ಕೆ ಅನುಮೋದನೆ ನೀಡಿದಾಗ ಡಬಲ್ ಡೆಕ್ಕರ್ ಯೋಜನೆ ಇದರಲ್ಲಿ ಸೇರಿರಲಿಲ್ಲ. ಆಗ ಯೋಜನೆಯ ಆರ್ಥಿಕ ಆಂತರಿಕ ಲಾಭದ ದರವು (EIRR) ಶೇ 9.07 ರಷ್ಟಿತ್ತು. ಆದರೆ ಈಗ ಡಬಲ್ ಡೆಕ್ಕರ್ ಸೇರಿಸಿದ ನಂತರ ಈ ಆಂತರಿಕ ಆರ್ಥಿಕ ಆದಾಯದ ದರವು ಶೇ 5.43 ಕ್ಕೆ ಕುಸಿದಿದೆ. ಈ ದರ ಇಳಿಕೆಯು ಯೋಜನೆಯು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ.&lt;/p&gt;&lt;h2&gt;ಪ್ರಸ್ತಾವಿತ 3ನೇ ಹಂತದ ಮೆಟ್ರೊ ಮತ್ತು ಡಬಲ್ ಡೆಕ್ಕರ್ ಕಾರಿಡಾರ್&zwnj;ಗಳು&lt;/h2&gt;&lt;p&gt;ಮೆಟ್ರೊ ಮೂರನೇ ಹಂತದಲ್ಲಿ ಜೆ.ಪಿ.ನಗರ 4ನೇ ಹಂತದಿಂದ ಹೆಬ್ಬಾಳವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆ ವರೆಗೆ ಮೆಟ್ರೊ ಮಾರ್ಗ ನಿರ್ಮಾಣಗೊಳ್ಳಲಿದೆ. ಇದರೊಂದಿಗೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ (ಈಗಾಗಲೇ ಪೂರ್ಣಗೊಂಡಿದೆ), ಸರ್ಜಾಪುರದಿಂದ ಇಬ್ಬಲೂರು, ಮತ್ತು ಅಗರದಿಂದ ಕೋರಮಂಗಲ ನಡುವೆ ಡಬಲ್ ಡೆಕರ್ ನಿರ್ಮಿಸಲು ಉದ್ದೇಶಿಸಲಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಬದಲು ಖಾಸಗಿ ವಾಹನಗಳಿಗೆ ರಸ್ತೆ ಮಾಡಿಕೊಡುವ ಇಂತಹ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಗಳು ದೀರ್ಘಾವಧಿಯಲ್ಲಿ ಬೆಂಗಳೂರಿನ ಪರಿಸರ ಮತ್ತು ಆರ್ಥಿಕತೆಗೆ ಮಾರಕವಾಗಲಿವೆ ಎಂದು ಐಐಎಸ್&zwnj;ಸಿ ವರದಿಯು ಎಚ್ಚರಿಸಿದೆ. ಹೀಗಾಗಿ ಸರಕಾರ ತನ್ನ ಯೋಜನೆ ಮರುಪರಿಶೀಲನೆ ಮಾಡುವ ಅಗತ್ಯವಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/big-setback-for-bengaluru-iisc-says-double-decker-road-wont-solve-traffic-gdp/articleshow-3e1nvft"/>
        </item>
        <item>
            <title><![CDATA[Gold Rates Soar: ಎರಡು ವಾರದಲ್ಲೇ ಭಾರಿ ಏರಿಕೆ ಕಂಡ ಚಿನ್ನದ ದರ: ಬೆಂಗಳೂರಿನಲ್ಲಿ ರೇಟ್​ ಎಷ್ಟಾಗಿದೆ ನೋಡಿ]]></title>
            <link>https://kannada.asianetnews.com/gallery/business/biggest-hike-in-gold-rates-of-india-today-in-10-days-suc-3qm5gto</link>
            <guid isPermaLink="true">https://kannada.asianetnews.com/gallery/business/biggest-hike-in-gold-rates-of-india-today-in-10-days-suc-3qm5gto</guid>
            <pubDate>Fri, 03 Jul 2026 13:43:01 +0530</pubDate>
            <description><![CDATA[ಜೂನ್&zwnj;ನಲ್ಲಿ ಕುಸಿತ ಕಂಡಿದ್ದ ಚಿನ್ನದ ದರವು ಕಳೆದ ಹತ್ತು ದಿನಗಳಲ್ಲಿ ಮತ್ತೆ ಗಣನೀಯವಾಗಿ ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಹೇಳಿಕೆಯ ನಂತರ, 24, 22, ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಭಾರತದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಳವನ್ನು ಕಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwfd5ee6v62fd8d1fghqype,imgname-red-and-black-retro-landscape-youtube-thumbnail-background--4--1782293370318.jpg" type="image/jpeg" height="390" width="690"/>
            <content:encoded><![CDATA[ಜೂನ್&zwnj;ನಲ್ಲಿ ಕುಸಿತ ಕಂಡಿದ್ದ ಚಿನ್ನದ ದರವು ಕಳೆದ ಹತ್ತು ದಿನಗಳಲ್ಲಿ ಮತ್ತೆ ಗಣನೀಯವಾಗಿ ಏರಿಕೆಯಾಗಿದೆ. ಯುಎಸ್ ಫೆಡರಲ್ ರಿಸರ್ವ್ ಹೇಳಿಕೆಯ ನಂತರ, 24, 22, ಮತ್ತು 18 ಕ್ಯಾರೆಟ್ ಚಿನ್ನದ ಬೆಲೆಗಳು ಭಾರತದಾದ್ಯಂತ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಳವನ್ನು ಕಂಡಿವೆ.&lt;img&gt;&lt;p&gt;ಜೂನ್​ನಲ್ಲಿ ಶೇಕಡಾ 9ಕ್ಕಿಂತ ಹೆಚ್ಚು ಕುಸಿತ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿಯೇ ಚಿನ್ನ ಭಾರಿ ಏರಿಕೆ ಕಂಡಿದೆ. ಕಳೆದ ತಿಂಗಳಲ್ಲಿ ಹಣದುಬ್ಬರದ ಒತ್ತಡಗಳು ಕಡಿಮೆಯಾಗಿದೆ ಎಂದು ಯುಎಸ್ ಫೆಡರಲ್ ರಿಸರ್ವ್ ಹೇಳಿದ ಬೆನ್ನಲ್ಲೇ ಸ್ಪಾಟ್ ಚಿನ್ನವು 1 ಪರ್ಸೆಂಟ್​ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂನಲ್ಲಿ 37,700 ರೂ.ಗಳಷ್ಟು ಏರಿಕೆಯಾಗಿ 14,45,500 ರೂ.ಗಳಿಗೆ ತಲುಪಿದ್ದು, 10 ಗ್ರಾಂನಲ್ಲಿ 3,770 ರೂ.ಗಳಷ್ಟು ಏರಿಕೆಯಾಗಿ 1,44,550 ರೂ.ಗಳಿಗೆ ತಲುಪಿದೆ. ಅದೇ ಕ್ಯಾರೆಟ್ ಅಡಿಯಲ್ಲಿ, 8 ಗ್ರಾಂ ಚಿನ್ನದ ಬೆಲೆ ಗುರುವಾರ 3,016 ರೂ.ಗಳಷ್ಟು ಏರಿಕೆಯಾಗಿ 1,15,640 ರೂ.ಗಳಿಗೆ ತಲುಪಿದೆ ಮತ್ತು 1 ಗ್ರಾಂ ಚಿನ್ನದ ಬೆಲೆ 377 ರೂ.ಗಳಷ್ಟು ಏರಿಕೆಯಾಗಿ 14,455 ರೂ.ಗಳಿಗೆ ತಲುಪಿದೆ.&lt;/p&gt;&lt;img&gt;&lt;p&gt;ಏರಿಕೆಯ ಪ್ರವೃತ್ತಿಯ ನಂತರ, 22 ಕ್ಯಾರೆಟ್ ಚಿನ್ನದ ಬೆಲೆಯೂ ಗಮನಾರ್ಹವಾಗಿ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಚಿನ್ನದ ಬೆಲೆ 3,450 ರೂ.ಗಳಷ್ಟು ಏರಿಕೆಯಾಗಿ 1,32,500 ರೂ.ಗಳಿಗೆ ತಲುಪಿದೆ ಮತ್ತು 100 ಗ್ರಾಂ ಚಿನ್ನದ ಬೆಲೆ 34,500 ರೂ.ಗಳಷ್ಟು ಏರಿಕೆಯಾಗಿ 13.25 ಲಕ್ಷ ರೂ.ಗಳಿಗೆ ತಲುಪಿದೆ.&lt;/p&gt;&lt;img&gt;&lt;p&gt;ಇಲ್ಲಿ, 8 ಗ್ರಾಂ ಚಿನ್ನದ ಬೆಲೆ 1.06 ಲಕ್ಷ ರೂ.ಗಳಾಗಿದ್ದು, ಹಿಂದಿನ ದಿನಕ್ಕಿಂತ 2,760 ರೂ.ಗಳಷ್ಟು ಹೆಚ್ಚಾಗಿದೆ. 22 ಕ್ಯಾರೆಟ್&zwnj;ನ 1 ಗ್ರಾಂ ಚಿನ್ನದ ಬೆಲೆ 345 ರೂ.ಗಳಷ್ಟು ಏರಿಕೆಯಾಗಿ 13,250 ರೂ.ಗಳಿಗೆ ತಲುಪಿದೆ.&lt;/p&gt;&lt;img&gt;&lt;p&gt;ಇದಲ್ಲದೆ, 18 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 28,200 ರೂ.ಗಳಷ್ಟು ಏರಿಕೆಯಾಗಿ 10,84,100 ರೂ.ಗಳಿಗೆ ತಲುಪಿದೆ, 10 ಗ್ರಾಂಗೆ 2,820 ರೂ.ಗಳಷ್ಟು ಏರಿಕೆಯಾಗಿ 1,08,410 ರೂ.ಗಳಿಗೆ ತಲುಪಿದೆ, 8 ಗ್ರಾಂಗೆ 2,256 ರೂ.ಗಳಷ್ಟು ಏರಿಕೆಯಾಗಿ 86,728 ರೂ.ಗಳಿಗೆ ತಲುಪಿದೆ ಮತ್ತು 1 ಗ್ರಾಂಗೆ 282 ರೂ.ಗಳಷ್ಟು ಏರಿಕೆಯಾಗಿ 10,841 ರೂ.ಗಳಿಗೆ ತಲುಪಿದೆ&lt;/p&gt;&lt;img&gt;&lt;p&gt;ಬೆಂಗಳೂರಿನಲ್ಲಿ ಇದೀಗ 24 ಕ್ಯಾರೆಟ್​ ಚಿನ್ನದ ಬೆಲೆ ₹14,455, 22 ಕ್ಯಾರೆಟ್​ ಬೆಲೆ ₹13,250 ಹಾಗೂ 18 ಕ್ಯಾರೆಟ್​ ಬೆಲೆ ₹10,84124 ಗೆ ಏರಿಕೆಯಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Suchethana D</dc:creator>
            <atom:link href="https://kannada.asianetnews.com/gallery/business/biggest-hike-in-gold-rates-of-india-today-in-10-days-suc-3qm5gto"/>
        </item>
        <item>
            <title><![CDATA[ಬಿಡದಿ ಟೌನ್‌ಶಿಪ್ ಯೋಜನೆಗೆ ತಡೆ ಕೋರಿ ಹೈಕೋರ್ಟ್‌ಗೆ ಪಿಐಎಲ್, ಪರಿಸರ ಹಾನಿಯ ಗಂಭೀರ ಆರೋಪ]]></title>
            <link>https://kannada.asianetnews.com/karnataka-districts/pil-filed-in-karnataka-high-court-against-bidadi-township-project-gdp/articleshow-4uybp14</link>
            <guid isPermaLink="true">https://kannada.asianetnews.com/karnataka-districts/pil-filed-in-karnataka-high-court-against-bidadi-township-project-gdp/articleshow-4uybp14</guid>
            <pubDate>Wed, 01 Jul 2026 13:20:21 +0530</pubDate>
            <description><![CDATA[ಬೆಂಗಳೂರಿನ ಹೊರವಲಯದಲ್ಲಿ ಉದ್ದೇಶಿತ 'ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್&zwnj;ಶಿಪ್' (ಬಿಡದಿ ಟೌನ್&zwnj;ಶಿಪ್) ಯೋಜನೆಗಾಗಿ 516 ಎಕರೆಗೂ ಅಧಿಕ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ಪ್ರಶ್ನಿಸಿ ಹೈಕೋರ್ಟ್&zwnj;ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಈ ಅರ್ಜಿಯು ಭೂಸ್ವಾಧೀನ ಕಾಯ್ದೆಯ ಉಲ್ಲಂಘನೆ, ಪ್ರಾದೇಶಿಕ ಅಸಮತೋಲನ ಮತ್ತು ಪರಿಸರ ನಾಶದಂತಹ ಗಂಭೀರ ಆರೋಪಗಳನ್ನು ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktzqkq2dnytzchv4h38qvdcj,imgname-bidadi-township-1781328895053.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರು ನಗರದ ಹೊರವಲಯದಲ್ಲಿ ಬೃಹತ್ ಉಪನಗರ ನಿರ್ಮಿಸುವ ಉದ್ದೇಶದ &lsquo;ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್&zwnj;ಶಿಪ್&rsquo; (ಬಿಡದಿ ಟೌನ್&zwnj;ಶಿಪ್) ಯೋಜನೆ ಈಗ ಕಾನೂನು ಸಂಘರ್ಷಕ್ಕೆ ಸಿಲುಕಿದೆ. ಯೋಜನೆಗಾಗಿ ಸುಮಾರು 516 ಎಕರೆಗೂ ಅಧಿಕ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್&zwnj;ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.&lt;/p&gt;&lt;p&gt;ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜೇಶ್ ಕಂಪ್ಲಾಪುರ ಬಸವಣ್ಣ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪ್ರಮುಖ ಅರ್ಜಿಯು ಹೈಕೋರ್ಟ್&zwnj;ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ಪೀಠದ ಮುಂದೆ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರೇಟರ್ ಬೆಂಗಳೂರು ಡೆವಲಪ್&zwnj;ಮೆಂಟ್ ಅಥಾರಿಟಿ (BGDA), ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮತ್ತು ರಾಮನಗರ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ನಗರಾಭಿವೃದ್ಧಿ ಇಲಾಖೆಯು ಬಿಡದಿ ತಾಲೂಕಿನ ಮೂರು ಪ್ರಮುಖ ಗ್ರಾಮಗಳ ಒಟ್ಟು 519 ಎಕರೆ ಕೃಷಿ ಜಮೀನಿನ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದೆ. ಕೆಂಪಯ್ಯನಪಾಳ್ಯ: 384.22 ಎಕರೆ, ಮಂಡಲಹಳ್ಳಿ: 71.13 ಎಕರೆ, ವಡೇರಹಳ್ಳಿ: 63.10 ಎಕರೆ&lt;/p&gt;&lt;h2&gt;ಅರ್ಜಿದಾರರ ಪ್ರಮುಖ ಆಕ್ಷೇಪಣೆಗಳು ಮತ್ತು ಕಾನೂನು ಉಲ್ಲಂಘನೆಗಳು:&lt;/h2&gt;&lt;h3&gt;2013ರ ಭೂಸ್ವಾಧೀನ ಕಾಯ್ದೆಯ ನೇರ ಉಲ್ಲಂಘನೆ&lt;/h3&gt;&lt;p&gt;ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆಯ (LARR Act) ಪ್ರಕಾರ, ಯಾವುದೇ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ 'ಸಾಮಾಜಿಕ ಪರಿಣಾಮಗಳ ಮೌಲ್ಯಮಾಪನ' (Social Impact Assessment - SIA) ಮಾಡುವುದು ಕಡ್ಡಾಯವಾಗಿದೆ. ಆದರೆ, ರಾಜ್ಯ ಸರ್ಕಾರವು ಯಾವುದೇ ರೀತಿಯ ಮೌಲ್ಯಮಾಪನ ನಡೆಸದೆ, ಕೇವಲ 26 ಕೋಟಿ ರೂ. ವೆಚ್ಚದ ಮಾಸ್ಟರ್ ಪ್ಲಾನ್ ಕನ್ಸಲ್ಟೆಂಟ್ ನೇಮಕಾತಿಯ ಟೆಂಡರ್ ಪ್ರಕ್ರಿಯೆಯನ್ನು ಅತಿವೇಗವಾಗಿ ಮುಗಿಸಲು ಮುಂದಾಗಿದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.&lt;/p&gt;&lt;h3&gt;ಪ್ರೊ. ಎಂ. ಗೋವಿಂದ ರಾವ್ ಸಮಿತಿ ವರದಿಯ ನಿರ್ಲಕ್ಷ್ಯ&lt;/h3&gt;&lt;p&gt;ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಸಲುವಾಗಿ ರಚಿಸಲಾಗಿದ್ದ ಪ್ರೊ. ಎಂ. ಗೋವಿಂದ ರಾವ್ ಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟವು ಫೆಬ್ರವರಿ 2026 ರಲ್ಲಿ ಅಂಗೀಕರಿಸಿತ್ತು. ಈ ವರದಿಯ ಶಿಫಾರಸಿನ ಪ್ರಕಾರ, ಮುಂದಿನ ಎಲ್ಲಾ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಿಗೆ ಕೊಂಡೊಯ್ಯಬೇಕಿದೆ. ಸರ್ಕಾರವು ತನ್ನದೇ ಸಂಪುಟ ಅಂಗೀಕರಿಸಿದ ವರದಿಯನ್ನು ಸಂಪೂರ್ಣವಾಗಿ ಬದಿಗೊತ್ತಿ, ಬೆಂಗಳೂರಿನ ಸುತ್ತಮುತ್ತಲೇ 12,500 ಕೋಟಿಗೂ ಅಧಿಕ ಹಣವನ್ನು ಸುರಿಯಲು ಮುಂದಾಗಿದೆ. ಇದು ಪ್ರಾದೇಶಿಕ ಅಸಮತೋಲನವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.&lt;/p&gt;&lt;h3&gt;ಪರಿಸರ ನಾಶ ಮತ್ತು ಅಂತರ್ಜಲದ ಬಿಕ್ಕಟ್ಟು&lt;/h3&gt;&lt;p&gt;ಬೆಂಗಳೂರು ನಗರವು ಈಗಾಗಲೇ ಅತಿಯಾದ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ತೀವ್ರ ನೀರಿನ ಬಿಕ್ಕಟ್ಟು ಹಾಗೂ ಪರಿಸರ ಮಾಲಿನ್ಯವನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಹೊರವಲಯದಲ್ಲಿ ಮತ್ತೊಂದು ಬೃಹತ್ ಕಾಂಕ್ರೀಟ್ ನಗರವನ್ನು ನಿರ್ಮಿಸಿದರೆ, ಸುತ್ತಮುತ್ತಲಿನ ಹಸಿರು ವಲಯ ಸಂಪೂರ್ಣವಾಗಿ ನಾಶವಾಗುತ್ತದೆ. ಜೊತೆಗೆ ಅಂತರ್ಜಲ ವ್ಯವಸ್ಥೆಯು ಸಂಪೂರ್ಣವಾಗಿ ಕುಸಿಯಲಿದ್ದು, ಪರಿಸರ ಸಮತೋಲನ ಏರುಪೇರಾಗಲಿದೆ ಎಂಬ ಆತಂಕವನ್ನು ಅರ್ಜಿಯಲ್ಲಿ ವ್ಯಕ್ತಪಡಿಸಲಾಗಿದೆ.&lt;/p&gt;&lt;h2&gt;ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಗಳು&lt;/h2&gt;&lt;ul&gt; &lt;li&gt;ಬಿಡದಿ ಬಳಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಸಂಬಂಧ 2026ರ ಜೂನ್ 13ರಂದು ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಪಡಿಸಬೇಕು.&lt;/li&gt; &lt;li&gt;ಫಲವತ್ತಾದ ಕೃಷಿ ಭೂಮಿಯನ್ನು ನಾಶಪಡಿಸುವ ಬದಲಿಗೆ, ಉತ್ತರ ಕರ್ನಾಟಕದ ಬರಪೀಡಿತ ಅಥವಾ ಈಗಾಗಲೇ ಕೈಗಾರಿಕಾ ಭೂ ಬ್ಯಾಂಕ್&zwnj;ಗಳಿರುವ ಹಿಂದುಳಿದ ಪ್ರದೇಶಗಳಿಗೆ ಈ ಯೋಜನೆಯನ್ನು ಸ್ಥಳಾಂತರಿಸಲು (ವಿಕೇಂದ್ರೀಕರಿಸಲು) ತಜ್ಞರ ಸಮಿತಿಯನ್ನು ರಚಿಸಬೇಕು.&lt;/li&gt; &lt;li&gt;ಹೈಕೋರ್ಟ್&zwnj;ನಲ್ಲಿ ಈ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ, ಬಿಡದಿ ಟೌನ್&zwnj;ಶಿಪ್ ಯೋಜನೆಗೆ ಸಂಬಂಧಿಸಿದ ಎಲ್ಲಾ ಭೂಸ್ವಾಧೀನ ಪ್ರಕ್ರಿಯೆಗಳು ಮತ್ತು ಟೆಂಡರ್ ನಡಾವಳಿಗಳಿಗೆ ತಕ್ಷಣವೇ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.&lt;/li&gt; &lt;li&gt;ಈ ಬೃಹತ್ ಯೋಜನೆಯ ಭವಿಷ್ಯವು ಈಗ ಉನ್ನತ ನ್ಯಾಯಾಲಯದ ಅಂಗಳದಲ್ಲಿದ್ದು, ಮುಖ್ಯ ನ್ಯಾಯಮೂರ್ತಿಗಳ ಪೀಠವು ಈ ಅರ್ಜಿಯನ್ನು ಕೈಗೆತ್ತಿಕೊಂಡಾಗ ಸರ್ಕಾರದ ಮುಂದಿನ ನಡೆ ಏನೆಂಬುದು ಕುತೂಹಲ ಮೂಡಿಸಿದೆ.&lt;/li&gt;&lt;/ul&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/pil-filed-in-karnataka-high-court-against-bidadi-township-project-gdp/articleshow-4uybp14"/>
        </item>
        <item>
            <title><![CDATA[ಡಿಸಿಎಂ ಜಿ ಪರಮೇಶ್ವರ ಫೇಕ್ ಲವ್‌ ಸ್ಟೋರಿ ಕಥೆ ಕಟ್ಟಿದ ಯೂಟ್ಯೂಬರ್ ಹೆಡೆಮುರಿ ಕಟ್ಟಿದ ಪೊಲೀಸ್]]></title>
            <link>https://kannada.asianetnews.com/karnataka-districts/youtuber-arrested-in-tumakuru-for-spreading-fake-love-story-about-dcm-g-parameshwara-and-dc-gdp/articleshow-9580pr6</link>
            <guid isPermaLink="true">https://kannada.asianetnews.com/karnataka-districts/youtuber-arrested-in-tumakuru-for-spreading-fake-love-story-about-dcm-g-parameshwara-and-dc-gdp/articleshow-9580pr6</guid>
            <pubDate>Fri, 03 Jul 2026 11:00:36 +0530</pubDate>
            <description><![CDATA[ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮತ್ತು ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ವಿರುದ್ಧ ಅವಹೇಳನಕಾರಿ ಸುಳ್ಳು ಸುದ್ದಿ ಹಬ್ಬಿಸಿದ 'ಡಿಟೆಕ್ಟಿವ್ ಲೆಜೆಂಡ್' ಯೂಟ್ಯೂಬ್ ಚಾನೆಲ್&zwnj;ನ ಬ್ರಹ್ಮಾನಂದ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಣ್ಯರ ತೇಜೋವಧೆ ಮಾಡಿದ ಆರೋಪದ ಮೇಲೆ ತುಮಕೂರು ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwk77f6egr9xb0j74nebptyr,imgname-youtuber-arrested-in-tumakuru-1783056547022.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತುಮಕೂರು:&lt;/strong&gt; ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ ಹಾಗೂ ತುಮಕೂರು ಜಿಲ್ಲಾಧಿಕಾರಿ (ಡಿಸಿ) ಶುಭಾ ಕಲ್ಯಾಣ್ ಅವರ ವಿರುದ್ಧ ಸುಳ್ಳು ಹಾಗೂ ಅವಹೇಳನಕಾರಿ ಸುದ್ದಿ ಬಿತ್ತರಿಸಿದ್ದ ಯೂಟ್ಯೂಬರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 'ಡಿಟೆಕ್ಟಿವ್ ಲೆಜೆಂಡ್' (Detective Legend) ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಬ್ರಹ್ಮಾನಂದ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.&lt;/p&gt;&lt;h2&gt;17 ನಿಮಿಷಗಳ ವೀಡಿಯೋದಲ್ಲಿ ಸುಳ್ಳು ಕಥೆ!&lt;/h2&gt;&lt;p&gt;ಜುಲೈ 1 ರಂದು ತನ್ನ ಯೂಟ್ಯೂಬ್ ಚಾನೆಲ್&zwnj;ನಲ್ಲಿ ವೀಡಿಯೋ ಅಪ್&zwnj;ಲೋಡ್ ಮಾಡಿದ್ದ ಬ್ರಹ್ಮಾನಂದ ರೆಡ್ಡಿ, ಡಿಸಿಎಂ ಜಿ. ಪರಮೇಶ್ವರ್ ಮತ್ತು ಡಿಸಿ ಶುಭಾ ಕಲ್ಯಾಣ್ ಅವರ ನಡುವೆ ಪ್ರೇಮಾಂಕುರವಾಗಿದೆ ಎಂಬ ಅರ್ಥದಲ್ಲಿ ಸುಳ್ಳು ಸುದ್ದಿಯೊಂದನ್ನು ಸೃಷ್ಟಿಸಿ ಬಿತ್ತರಿಸಿದ್ದ. ಸುಮಾರು 17 ನಿಮಿಷಗಳ ಸುದೀರ್ಘ ವೀಡಿಯೋದಲ್ಲಿ ಇಬ್ಬರ ವೈಯಕ್ತಿಕ ಜೀವನ ಹಾಗೂ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ನಿರೂಪಣೆ ಮಾಡಿದ್ದ. &quot;75 ವರ್ಷದ ಡಿಸಿಎಂ ಜಿ. ಪರಮೇಶ್ವರ್ ಹಾಗೂ 42 ವರ್ಷದ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಮೇಡಂ ನಡುವೆ ಲವ್ ಆಗಿದೆ&quot; ಎಂದೆಲ್ಲ ಬೊಗಳೆ ಬಿಟ್ಟು ಕಟ್ಟುಕಥೆ ಹೆಣೆದಿದ್ದ.&lt;/p&gt;&lt;h2&gt;ಸುಮೊಟೊ ಪ್ರಕರಣ ದಾಖಲಿಸಿಕೊಂಡ ಪೊಲೀಸರು&lt;/h2&gt;&lt;p&gt;ರಾಜ್ಯದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ಉಪಮುಖ್ಯಮಂತ್ರಿಗಳು ಹಾಗೂ ಜಿಲ್ಲೆಯ ಜವಾಬ್ದಾರಿಯುತ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಈ ರೀತಿಯ ಸತ್ಯದೂರ ಮತ್ತು ಮಾನಹಾನಿಕರ ವೀಡಿಯೋ ಹರಿದಾಡುತ್ತಿದ್ದಂತೆ ತುಮಕೂರು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ.&lt;/p&gt;&lt;p&gt;ಯೂಟ್ಯೂಬರ್&zwnj;ನ ಈ ಕೃತ್ಯ ಸಮಾಜದಲ್ಲಿ ಶಾಂತಿ ಕದಡುವ ಮತ್ತು ಗಣ್ಯರ ತೇಜೋವಧೆ ಮಾಡುವ ಉದ್ದೇಶದಿಂದ ಕೂಡಿದ್ದರಿಂದ, ಹೊಸ ಬಡಾವಣೆ ಪೊಲೀಸರು ಯಾವುದೇ ದೂರಿನ ನಿರೀಕ್ಷೆ ಮಾಡದೆ ಸ್ವಯಂಪ್ರೇರಿತವಾಗಿ (Suo Moto) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಿ ಬ್ರಹ್ಮಾನಂದ ರೆಡ್ಡಿಯನ್ನು ಪತ್ತೆಹಚ್ಚಿ ಕಂಬಿ ಹಿಂದೆ ತಳ್ಳಲಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/youtuber-arrested-in-tumakuru-for-spreading-fake-love-story-about-dcm-g-parameshwara-and-dc-gdp/articleshow-9580pr6"/>
        </item>
        <item>
            <title><![CDATA[ಬೆಂಗಳೂರು ಕಲ್ಲು ಕ್ವಾರಿ ದುರಂತ: ಯಾದಗಿರಿಯ ಓರ್ವ ಸೇರಿ ಒಟ್ಟು 7 ಸಾವು, 10 ನಿಮಿಷ ತಡವಾಗಿದ್ರೆ ಎಲ್ಲರೂ ಉಳಿತಿದ್ರು ಆದ್ರೆ....!]]></title>
            <link>https://kannada.asianetnews.com/karnataka-districts/bengaluru-quarry-horror-workers-killed-as-massive-boulder-collapses-due-to-alleged-buffer-zone-encroachment-gdp/articleshow-a5pe25a</link>
            <guid isPermaLink="true">https://kannada.asianetnews.com/karnataka-districts/bengaluru-quarry-horror-workers-killed-as-massive-boulder-collapses-due-to-alleged-buffer-zone-encroachment-gdp/articleshow-a5pe25a</guid>
            <pubDate>Thu, 02 Jul 2026 12:44:27 +0530</pubDate>
            <description><![CDATA[ಬೆಂಗಳೂರಿನ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ನಡೆದ ಭೀಕರ ಬಂಡೆ ಕುಸಿತದಲ್ಲಿ 7 ಕಾರ್ಮಿಕರು ಮೃತಪಟ್ಟಿದ್ದಾರೆ. ನಿಯಮ ಉಲ್ಲಂಘಿಸಿ ಬಫರ್ ಜೋನ್ ಒತ್ತುವರಿ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwgtn0ws78mnx45y39vwjgqq,imgname-bengaluru-quarry-horror-1782976250776.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿಯ ಹೊರವಲಯದ ತಾವರೆಕೆರೆ ಸಮೀಪದ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ಈಗ ಮತ್ತಷ್ಟು ಆಘಾತಕಾರಿ ಹಾಗೂ ಸ್ಪೋಟಕ ಮಾಹಿತಿಗಳು ಹೊರಬಿದ್ದಿವೆ. ಘಟನಾ ಸ್ಥಳದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಆರು ಜನ ಮಧ್ಯಪ್ರದೇಶ ಮೂಲದವರಾಗಿದ್ದರೆ, ಮತ್ತೋರ್ವ ಕಾರ್ಮಿಕ ಕರ್ನಾಟಕದ ಯಾದಗಿರಿ ಜಿಲ್ಲೆಯವರಾಗಿದ್ದಾರೆ.&amp;nbsp;&lt;/p&gt;&lt;p&gt;ಇಂದು ಬೆಳಗ್ಗೆ 6.50ಕ್ಕೆ ಈ ದುರಂತ ನಡೆದಿದೆ. &amp;nbsp;ಬುಧವಾರ ಸಂಜೆ 4 ಗಂಟೆಗೆ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಈ ವೇಳೆ ದುರಂತ ಸಂಭವಿಸಬಹುದೆಂಬ ಮುನ್ಸೂಚನೆಯನ್ನು ಕಾರ್ಮಿಕರು ಗಮನಕ್ಕೆ ತಂದಿದ್ದರು. ರಾತ್ರಿ ಇಡೀ ಇಲ್ಲಿ ಕೆಲಸ ನಡೆದಿದೆ. ಬೆಳಗ್ಗಿನ ಜಾವ ಇನ್ನೇನು ಕೆಲಸ ನಿಲ್ಲಿಸಿ ಹೋಗಬೇಕು ಈ ವೇಳೆ ಈ ದುರಂತ ನಡೆದಿದೆ.&lt;/p&gt;&lt;h2&gt;ಬಡತನ ತಂದಿಟ್ಟ ದುರಂತ, ಬರ ಹಿನ್ನೆಲೆ ಕೂಲಿ ಅರಸಿ ಬಂದಿದ್ದ ವೃದ್ಧ ಬಲಿ!&lt;/h2&gt;&lt;p&gt;ಮೃತರ ಪೈಕಿ ಕರ್ನಾಟಕ ಮೂಲದ ಕಾರ್ಮಿಕನನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಿಹಾಳ್ ತಾಂಡದ ವೃದ್ಧ ರಾಮು ನಾಯಕ್ ಎಂದು ಗುರುತಿಸಲಾಗಿದೆ. ಯಾದಗಿರಿಯಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ರಾಮು ಅವರು ತಮ್ಮ ಇಡೀ ಕುಟುಂಬದ ಸಮೇತ ರಾಜಧಾನಿ ಬೆಂಗಳೂರಿಗೆ ವಲಸೆ ಬಂದಿದ್ದರು. ಕೂಲಿ ಕೆಲಸಕ್ಕಾಗಿ ಕಲ್ಲು ಕ್ವಾರಿಗೆ ಇಳಿದಿದ್ದ ರಾಮು ನಾಯಕ್ ಇಂದು ಶವವಾಗಿದ್ದಾರೆ. ಇತ್ತ ಸ್ವಗ್ರಾಮ ನಡಿಹಾಳದಲ್ಲಿ ರಾಮು ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;ರಾಜರಾಜೇಶ್ವರಿ (RR) ಆಸ್ಪತ್ರೆಯಲ್ಲಿ ಐವರಿಗೆ ತೀವ್ರ ನಿಗಾ: ಓರ್ವನ ಸ್ಥಿತಿ ಗಂಭೀರ&lt;/h2&gt;&lt;p&gt;ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಐವರು ಕಾರ್ಮಿಕರನ್ನು ಸದ್ಯ ಕೆಂಗೇರಿಯ ರಾಜರಾಜೇಶ್ವರಿ (RR) ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (ICU) ದಾಖಲಿಸಲಾಗಿದೆ. ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್ (30) ಎಂದು ಗುರುತಿಸಲಾಗಿದೆ. ಸದ್ಯ ಇವರಲ್ಲಿ ಓರ್ವ ಕಾರ್ಮಿಕನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಬಂಡೆ ಕುಸಿತದ ತೀವ್ರತೆ ಎಷ್ಟಿದೆ ಎಂದರೆ ಇವರ ಕೈಕಾಲು ಮತ್ತು ತಲೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಭವಿಷ್ಯದಲ್ಲಿ ದುಡಿದು ತಿನ್ನುವುದು ಕಷ್ಟ ಎನ್ನುವ ಮಟ್ಟಿಗೆ ತೀವ್ರ ಗಾಯವಾಗಿದೆ.&lt;/p&gt;&lt;h2&gt;ಬಫರ್ ಜೋನ್ ಒತ್ತುವರಿಯೇ ದುರಂತಕ್ಕೆ ಮೂಲ ಕಾರಣ?&lt;/h2&gt;&lt;p&gt;ಪ್ರಾಥಮಿಕ ವರದಿಗಳ ಪ್ರಕಾರ, ಇದೊಂದು ವ್ಯವಸ್ಥಿತ ನಿಯಮ ಉಲ್ಲಂಘನೆಯಿಂದ ನಡೆದ ದುರಂತ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಪಕ್ಕಪಕ್ಕದಲ್ಲೇ ಎರಡು ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದವು. ಒಂದು ಉದಯ್ ಶಂಕರ್ ಮಾಲೀಕತ್ವದ 'ಕಾವೇರಿ ಸಂಸ್ಥೆ'ಯ ಕ್ವಾರಿ, ಮತ್ತೊಂದು ಆನಂದ್ ಸ್ವಾಮಿ ಮಾಲೀಕತ್ವದ 'ಬಸವೇಶ್ವರ ಕ್ರಷರ್/ಕೋರೆ'. ನಿಯಮಗಳ ಪ್ರಕಾರ ಎರಡು ಕೋರೆಗಳ ನಡುವೆ ಕನಿಷ್ಠ 7.5 ಅಡಿ ಜಾಗವನ್ನು 'ಬಫರ್ ಜೋನ್' ಎಂದು ಬಿಡಬೇಕಾಗುತ್ತದೆ. ಆದರೆ ಮಾಲೀಕರು ಈ 7.5 ಅಡಿಯ ಬಫರ್ ಜೋನ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು ಎನ್ನಲಾಗಿದೆ.&lt;/p&gt;&lt;p&gt;ಆನಂದ್ ಸ್ವಾಮಿ ಅವರ ಕ್ವಾರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕೆಲಸ ಸ್ಥಗಿತಗೊಂಡಿತ್ತು. ಆದರೆ ಕಾವೇರಿ ಕ್ವಾರಿಯಲ್ಲಿ ನಿರಂತರ ಕೆಲಸ ನಡೆಯುತ್ತಿತ್ತು. ಮೇಲ್ಭಾಗದಲ್ಲಿ ಕ್ರಷರ್&zwnj;ನ ಬಂಡೆಯನ್ನು ಜರುಗಿಸುವಾಗ, ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ. ಹೀಗಾಗಿ ಒಂದು ಕ್ವಾರಿಯಲ್ಲಿನ ಬಂಡೆ ಮತ್ತೊಂದು ಕ್ವಾರಿಯಲ್ಲಿನ ಕಾರ್ಮಿಕರ ಮೇಲೆ ಬಿದ್ದಿದೆ.&lt;/p&gt;&lt;h2&gt;ಮಧ್ಯಾಹ್ನದ ಬಳಿಕ ಪರಿಹಾರ ತೀರ್ಮಾನ, ಕಠಿಣ ಕ್ರಮದ ಭರವಸೆ ನೀಡಿದ ಸಿಎಂ!&lt;/h2&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು (ಡಿಕೆ ಶಿವಕುಮಾರ್), &quot;ಮಾಗಡಿ ರಸ್ತೆಯ ಕಲ್ಲುಕ್ವಾರಿಯಲ್ಲಿ ದುರಂತ ನಡೆದು 6 ರಿಂದ 7 ಜನ ಮೃತಪಟ್ಟಿರುವ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇದು ಬ್ಲಾಸ್ಟ್ (ಸ್ಫೋಟ) ಅಲ್ಲ, ಬಂಡೆ ಕುಸಿದು ಆಗಿರುವ ದುರಂತ ಎಂದು ತಿಳಿದುಬಂದಿದೆ. ಈ ಕ್ವಾರಿ ಲೀಗಲ್ ಆಗಿದೆಯೇ ಅಥವಾ ಇಲ್ ಲೀಗಲ್ ಆಗಿದೆಯೇ ಎಂಬುದರ ಸಂಪೂರ್ಣ ವರದಿಯನ್ನು ಇಂದು ಮಧ್ಯಾಹ್ನ ತರಿಸಿಕೊಳ್ಳಲಿದ್ದೇನೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕೊಟ್ಟ ತಕ್ಷಣ ಮೃತಪಟ್ಟ ಜೀವಗಳು ವಾಪಸ್ ಬರಲ್ಲ, ಹಾಗಾಗಿ ಮಧ್ಯಾಹ್ನದ ಬಳಿಕ ವರದಿ ಪರಿಶೀಲಿಸಿ ಸೂಕ್ತ ಪರಿಹಾರ ಘೋಷಿಸುತ್ತೇನೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಸದ್ಯ ತಾವರೆಕೆರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಂಟ್ರ್ಯಾಕ್ಟ್ ತಗೆದುಕೊಂಡಿದ್ದ ಮೇಸ್ತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾವೇರಿ ಸಂಸ್ಥೆಯ ಮಾಲೀಕ ಉದಯ್ ಶಂಕರ್ ಮತ್ತು ಆನಂದ್ ಸ್ವಾಮಿ ಅವರ ವಿಚಾರಣೆ ಕೂಡ ನಡೆಯಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-quarry-horror-workers-killed-as-massive-boulder-collapses-due-to-alleged-buffer-zone-encroachment-gdp/articleshow-a5pe25a"/>
        </item>
        <item>
            <title><![CDATA[Bengaluru: ಚಪ್ಪರಿಸಿಕೊಂಡು ತಿನ್ನೋ ಬಿರಿಯಾನಿಯೇ ಇಲ್ಲಿ ಫೇಮಸ್‌, ಬೆಂಗಳೂರಿನ ಟಾಪ್‌-5 ಚಿಕನ್‌ ಬಿರಿಯಾನಿ ರೆಸ್ಟೋರೆಂಟ್‌ಗಳಿವು]]></title>
            <link>https://kannada.asianetnews.com/gallery/bengaluru-urban/top-5-biryani-hotspots-in-bengaluru-you-must-try-suh-b8w7msr</link>
            <guid isPermaLink="true">https://kannada.asianetnews.com/gallery/bengaluru-urban/top-5-biryani-hotspots-in-bengaluru-you-must-try-suh-b8w7msr</guid>
            <pubDate>Thu, 02 Jul 2026 15:26:31 +0530</pubDate>
            <description><![CDATA[&lt;p&gt;Bengaluru ಬೆಂಗಳೂರು ಬಿರಿಯಾನಿ ಪ್ರಿಯರಿಗೆ ಸ್ವರ್ಗ. ಆಂಧ್ರ ಸ್ಟೈಲ್ ಬಿರಿಯಾನಿಯಿಂದ ಹಿಡಿದು, ಸಾಂಪ್ರದಾಯಿಕ ದೊಣ್ಣೆ ಬಿರಿಯಾನಿ ತನಕ, ಬೆಂಗಳೂರಿನಲ್ಲಿ ನೀವು ಮಿಸ್ ಮಾಡಲೇಬಾರದ 5 ಪ್ರಸಿದ್ಧ ಬಿರಿಯಾನಿ ಹೋಟೆಲ್&zwnj;ಗಳ ಪಟ್ಟಿ ಇಲ್ಲಿದೆ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpfwq13vctq5s4wnjjvfje7h,imgname-gemini-generated-image-l474wfl474wfl474-1776502408315.png" type="image/jpeg" height="390" width="690"/>
            <content:encoded><![CDATA[&lt;p&gt;Bengaluru ಬೆಂಗಳೂರು ಬಿರಿಯಾನಿ ಪ್ರಿಯರಿಗೆ ಸ್ವರ್ಗ. ಆಂಧ್ರ ಸ್ಟೈಲ್ ಬಿರಿಯಾನಿಯಿಂದ ಹಿಡಿದು, ಸಾಂಪ್ರದಾಯಿಕ ದೊಣ್ಣೆ ಬಿರಿಯಾನಿ ತನಕ, ಬೆಂಗಳೂರಿನಲ್ಲಿ ನೀವು ಮಿಸ್ ಮಾಡಲೇಬಾರದ 5 ಪ್ರಸಿದ್ಧ ಬಿರಿಯಾನಿ ಹೋಟೆಲ್&zwnj;ಗಳ ಪಟ್ಟಿ ಇಲ್ಲಿದೆ!&lt;/p&gt;&lt;img&gt;&lt;p&gt;ಖಾರವಾದ ಆಂಧ್ರ ಸ್ಟೈಲ್ ಬಿರಿಯಾನಿಗೆ ಈ ರೆಸ್ಟೋರೆಂಟ್ ತುಂಬಾ ಫೇಮಸ್. ಬಾಯಲ್ಲಿ ನೀರೂರಿಸುವ ಸ್ಪೈಸಿ ಫುಡ್ ಇಷ್ಟಪಡುವವರು ಇಲ್ಲಿ ಒಮ್ಮೆ ಟ್ರೈ ಮಾಡಲೇಬೇಕು.&lt;/p&gt;&lt;p&gt;ಟ್ರೈ ಮಾಡಬೇಕಾದ ಡಿಶ್: ಚಿಕನ್ ಬೋನ್&zwnj;ಲೆಸ್ 555 ಬಿರಿಯಾನಿ (Chicken Boneless 555 Biryani), ಆಂಧ್ರ ಸ್ಟೈಲ್ ಸ್ಪೈಸಿ ಬಿರಿಯಾನಿಗಳು. ಸ್ಥಳ: ಬೆಂಗಳೂರು ನಗರದಾದ್ಯಂತ ಇದರ ಶಾಖೆಗಳಿವೆ. ಸಮಯ: ಮಧ್ಯಾಹ್ನ 11:30 ರಿಂದ ರಾತ್ರಿ 11:00 ರವರೆಗೆ.&lt;/p&gt;&lt;img&gt;&lt;p&gt;ಬೆಂಗಳೂರಿನ ಸಾಂಪ್ರದಾಯಿಕ ರುಚಿಯನ್ನು ಸವಿಯಬೇಕೆಂದರೆ, ಜಯನಗರದಲ್ಲಿರುವ ಶಿವಾಜಿ ಮಿಲಿಟರಿ ಹೋಟೆಲ್. ಇಲ್ಲಿ ಮಂದಾರ ಎಲೆಯಿಂದ ಮಾಡಿದ ದೊಣ್ಣೆಯಲ್ಲಿ ಕೊಡುವ ಬಿರಿಯಾನಿ ಪ್ರಸಿದ್ಧ.&lt;/p&gt;&lt;p&gt;ಟ್ರೈ ಮಾಡಬೇಕಾದ ಡಿಶ್: ಚಿಕನ್ ಅಥವಾ ಮಟನ್ ದೊಣ್ಣೆ ಬಿರಿಯಾನಿ (Donne Biryani). ಸ್ಥಳ: ಜಯನಗರ (Jayanagar). ಸಮಯ: ಬೆಳಗ್ಗೆ 08:00 ರಿಂದ ಮುಂಜಾನೆ 03:30 ರವರೆಗೆ (ಸೋಮವಾರ ರಜೆ).&lt;/p&gt;&lt;img&gt;&lt;p&gt;ರಾತ್ರಿ ಹೊತ್ತು ಹಸಿವಾದರೆ ಬೆಂಗಳೂರಿಗರ ಮೊದಲ ಆಯ್ಕೆಯೇ ಎಂಪೈರ್. ಸುವಾಸನಾಯುಕ್ತ ಹೈದರಾಬಾದಿ ಮತ್ತು ಉತ್ತರ ಭಾರತದ ಬಿರಿಯಾನಿಗಳಿಗೆ ಈ ರೆಸ್ಟೋರೆಂಟ್ ಹೆಸರುವಾಸಿ.&lt;/p&gt;&lt;p&gt;ಟ್ರೈ ಮಾಡಬೇಕಾದ ಡಿಶ್: ಗ್ರಿಲ್ಡ್ ಚಿಕನ್ ಬಿರಿಯಾನಿ (Grilled Chicken Biryani) ಮತ್ತು ಮಟನ್ ಬಿರಿಯಾನಿ. ಸ್ಥಳ: ನಗರದ ಪ್ರಮುಖ ಭಾಗಗಳಲ್ಲಿ ಹಲವು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸಮಯ: ಬೆಳಗ್ಗೆ 11:00 ರಿಂದ ಮುಂಜಾನೆ 02:30 ರವರೆಗೆ.&lt;/p&gt;&lt;img&gt;&lt;p&gt;ಇದು ಬೆಂಗಳೂರಿನ ಬಿರಿಯಾನಿ ಪ್ರಿಯರ 'ಆಲ್-ಟೈಮ್ ಫೇವರಿಟ್' ಸ್ಪಾಟ್. ಮಾಂಸಾಹಾರಿಗಳಷ್ಟೇ ಅಲ್ಲ, ಸಸ್ಯಾಹಾರಿಗಳಿಗೂ ಇಷ್ಟವಾಗುವಂತಹ ಅದ್ಭುತ ಬಿರಿಯಾನಿ ಆಯ್ಕೆಗಳು ಇಲ್ಲಿ ಲಭ್ಯ.&lt;/p&gt;&lt;p&gt;ಟ್ರೈ ಮಾಡಬೇಕಾದ ಡಿಶ್:: ಮೇಘನಾ ಸ್ಪೆಷಲ್ ಬಿರಿಯಾನಿ (Meghana Special), ಬೋನ್&zwnj;ಲೆಸ್ ಚಿಕನ್ ಬಿರಿಯಾನಿ, ಮತ್ತು ಸಸ್ಯಾಹಾರಿಗಳಿಗಾಗಿ ಮೇಘನಾ ಸ್ಪೆಷಲ್ ವೆಜಿಟೇಬಲ್ ಬಿರಿಯಾನಿ. ಸ್ಥಳ: ನಗರದಾದ್ಯಂತ ಇದರ ಶಾಖೆಗಳು ಹರಡಿವೆ. ಸಮಯ: ಪ್ರತಿದಿನ ಮಧ್ಯಾಹ್ನ 11:30 ರಿಂದ ರಾತ್ರಿ 01:00 ರವರೆಗೆ.&lt;/p&gt;&lt;img&gt;&lt;p&gt;ಬಿರಿಯಾನಿ ಅಂದರೆ ಹೈದರಾಬಾದ್ ದಮ್ ಬಿರಿಯಾನಿ ಎನ್ನುವವರಿಗೆ ಇದು ಹೇಳಿ ಮಾಡಿಸಿದ 'ಪ್ಯಾರಡೈಸ್'. ಬಾಸಮತಿ ಅಕ್ಕಿಯ ಸುವಾಸನೆ ಮತ್ತು ಮಸಾಲೆಗಳ ಅಸಲಿ ರುಚಿಯೇ ಇವರ ವಿಶೇಷತೆ.&lt;/p&gt;&lt;p&gt;ಟ್ರೈ ಮಾಡ ಬೇಕಾದ ಡಿಶ್:: ಹೈದರಾಬಾದ್ ಚಿಕನ್ ದಮ್ ಬಿರಿಯಾನಿ, ಹೈದರಾಬಾದ್ ಮಟನ್ ದಮ್ ಬಿರಿಯಾನಿ. ಇದರೊಂದಿಗೆ ವಿಶೇಷವಾಗಿ 'ಗುತ್ತಿ ವಂಕಾಯ ಬಿರಿಯಾನಿ' (ಬದನೆಕಾಯಿ ಬಿರಿಯಾನಿ).&lt;/p&gt;&lt;p&gt;ಸ್ಥಳ: ಜೆ.ಪಿ ನಗರ, ಎಚ್&zwnj;ಎಸ್&zwnj;ಆರ್ ಲೇಔಟ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಶಾಖೆಗಳಿವೆ.&lt;/p&gt;&lt;p&gt;ಸಮಯ: ಬೆಳಗ್ಗೆ 11:00 ರಿಂದ ರಾತ್ರಿ 11:00 ಅಥವಾ ಮಧ್ಯರಾತ್ರಿ 12:00 ರವರೆಗೆ (ಶಾಖೆಗಳನ್ನು ಅವಲಂಬಿಸಿ ಬದಲಾಗಬಹುದು).&lt;/p&gt;]]></content:encoded>
            <category>bengaluru-rural</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/bengaluru-urban/top-5-biryani-hotspots-in-bengaluru-you-must-try-suh-b8w7msr"/>
        </item>
        <item>
            <title><![CDATA[ಸಿಎಂ‌ ಡಿಕೆಶಿಯಿಂದ ಗುಡ್ ನ್ಯೂಸ್, ಬೆಂಗಳೂರು ರಸ್ತೆ ಅಭಿವೃದ್ಧಿಗೆ 2000 ಕೋಟಿ ಬಿಡುಗಡೆ, ಯಾವ ಕ್ಷೇತ್ರಕ್ಕೆ ಎಷ್ಟು?]]></title>
            <link>https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm</link>
            <guid isPermaLink="true">https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm</guid>
            <pubDate>Mon, 29 Jun 2026 18:03:42 +0530</pubDate>
            <description><![CDATA[ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರವು ಬೆಂಗಳೂರಿನ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ ₹2,000 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿದೆ. ಈ ಬೃಹತ್ ಯೋಜನೆಯಡಿ, ವಿಧಾನಸಭಾ ಕ್ಷೇತ್ರವಾರು ಅನುದಾನ ಹಂಚಿಕೆ ಮಾಡಲಾಗಿದ್ದು, ಆಡಳಿತ ಪಕ್ಷದ ಕ್ಷೇತ್ರಗಳಿಗೆ ಹೆಚ್ಚಿನ ಪಾಲು ದೊರೆತಿದೆ ಎಂಬ ಚರ್ಚೆ ನಡೆಯುತ್ತಿದೆ. ಈ ಯೋಜನೆಯು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt5a00y8g1zvdg9c2qfdge1g,imgname-----------------------2026-06-03t043419.302-1780442203080.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;/p&gt;&lt;p&gt;ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DKS) ನೇತೃತ್ವದ ರಾಜ್ಯ ಸರ್ಕಾರವು ಭರ್ಜರಿ ಗುಡ್ ನ್ಯೂಸ್ ನೀಡಿದೆ. ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ₹2,000.00 ಕೋಟಿ ವೆಚ್ಚದ ಬೃಹತ್ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಸರ್ಕಾರ ಅಧಿಕೃತವಾಗಿ ಆಡಳಿತಾತ್ಮಕ ಅನುಮೋದನೆ ನೀಡಿದೆ.&lt;/p&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವ್ಯಾಪ್ತಿಯಲ್ಲಿ ಬರುವ ವಾರ್ಡ್ ರಸ್ತೆಗಳು ಸೇರಿದಂತೆ ಒಟ್ಟಾರೆ ರಸ್ತೆಗಳ ಸಮಗ್ರ ಸುಧಾರಣೆಗೆ ಈ ಬೃಹತ್ ಕ್ರಿಯಾಯೋಜನೆಯನ್ನು ರೂಪಿಸಲಾಗಿದೆ. ಬೆಂಗಳೂರಿನ ಐದು ನಗರ ಪಾಲಿಕೆಗಳ ಆಯುಕ್ತರುಗಳಿಂದ ವಿಧಾನಸಭಾ ಕ್ಷೇತ್ರವಾರು ಪಡೆದ ಕಾಮಗಾರಿಗಳ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಬಿಎ (GBA) ಮುಖ್ಯ ಆಯುಕ್ತರು ಜೂನ್ 16, 2026 ರಂದು ಸರ್ಕಾರಕ್ಕೆ ಸಲ್ಲಿಸಿದ ವರದಿಯ ಅನ್ವಯ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.&lt;/p&gt;&lt;h2&gt;ಕ್ಷೇತ್ರವಾರು ಬಿಡುಗಡೆಯಾದ ಅನುದಾನ&lt;/h2&gt;&lt;p&gt;1. ಸಿ.ವಿ ರಾಮನ್ ನಗರ 40 ಕೋಟಿ ರೂ.&lt;/p&gt;&lt;p&gt;2. ಶಾಂತಿನಗರ 50+50 ಒಟ್ಟು 100 ಕೋಟಿ ರೂ.&lt;/p&gt;&lt;p&gt;3. ಶಿವಾಜಿನಗರ 80+20 ಒಟ್ಟು 100 ಕೋಟಿ ರೂ.&lt;/p&gt;&lt;p&gt;4. ಚಾಮರಾಜಪೇಟೆ 28.5+71.5 ಒಟ್ಟು&zwnj; 100 ಕೋಟಿ ರೂ.&lt;/p&gt;&lt;p&gt;5. ಚಿಕ್ಕಪೇಟೆ 40 ಕೋಟಿ ರೂ.&lt;/p&gt;&lt;p&gt;6. ಮಹದೇವಪುರ 50+10 ಒಟ್ಟು 60 ಕೋಟಿ ರೂ.&lt;/p&gt;&lt;p&gt;7. ಕೆ.ಆರ್.ಪುರ 60 ಕೋಟಿ ರೂ.&lt;/p&gt;&lt;p&gt;8. ಆರ್.ಆರ್ ನಗರ 47+13 ಒಟ್ಟು 60 ಕೋಟಿ ರೂ.&lt;/p&gt;&lt;p&gt;9. ಯಶವಂತಪುರ 50+25 ಒಟ್ಟು 75 ಕೋಟಿ ರೂ.&lt;/p&gt;&lt;p&gt;10. ದಾಸರಹಳ್ಳಿ 35+25 ಒಟ್ಟು 55 ಕೋಟಿ ರೂ.&lt;/p&gt;&lt;p&gt;11. ಮಹಾಲಕ್ಷ್ಮಿ ಲೇಔಟ್ 40 ಕೋಟಿ ರೂ.&lt;/p&gt;&lt;p&gt;12. ಮಲ್ಲೇಶ್ವರಂ 40 ಕೋಟಿ ರೂ.&lt;/p&gt;&lt;p&gt;13. ರಾಜಾಜಿನಗರ 40 ಕೋಟಿ ರೂ.&lt;/p&gt;&lt;p&gt;14. ಗೋವಿಂದರಾಜನಗರ 39+61 ಒಟ್ಟು 100 ಕೋಟಿ ರೂ.&lt;/p&gt;&lt;p&gt;15. ವಿಜಯನಗರ 42+58 ಒಟ್ಟು 100 ಕೋಟಿ ರೂ.16. ಬಸವನಗುಡಿ&zwnj; 40 ಕೋಟಿ ರೂ.&lt;/p&gt;&lt;p&gt;17. ಪದ್ಮನಾಭನಗರ 42+38 ಒಟ್ಟು 80 ಕೋಟಿ ರೂ.&lt;/p&gt;&lt;p&gt;18.ಬ್ಯಾಟರಾಯನಪುಟ 88.5+11.5 ಒಟ್ಟು 100 ಕೋಟಿ ರೂ.&lt;/p&gt;&lt;p&gt;19.ಸರ್ವಜ್ಞ ನಗರ 90+10 ಒಟ್ಟು 100 ಕೋಟಿ ರೂ.&lt;/p&gt;&lt;p&gt;20.ಪುಲಕೇಶಿನಗರ 95+5 ಒಟ್ಟು 100 ಕೋಟಿ ರೂ.&lt;/p&gt;&lt;p&gt;21. ಯಲಹಂಕ 55+5 ಒಟ್ಟು 55 ಕೋಟಿ ರೂ.&lt;/p&gt;&lt;p&gt;22. ಹೆಬ್ಬಾಳ 100 ಕೋಟಿ ರೂ.&lt;/p&gt;&lt;p&gt;23. ಜಯನಗರ 40 ಕೋಟಿ ರೂ.&lt;/p&gt;&lt;p&gt;24. ಬೆಂಗಳೂರು ದಕ್ಷಿಣ 60 ಕೋಟಿ ರೂ.&lt;/p&gt;&lt;p&gt;25. ಬೊಮ್ಮನಹಳ್ಳಿ 60 ಕೋಟಿ ರೂ.&lt;/p&gt;&lt;p&gt;26. ಬಿಟಿಎಂ ಲೇಔಟ್ 50+50 ಒಟ್ಟು 100 ಕೋಟಿ ರೂ.&lt;/p&gt;&lt;p&gt;27. ಆನೇಕಲ್ 45 ಕೋಟಿ ರೂ.&lt;/p&gt;&lt;p&gt;28. ಗಾಂಧಿನಗರ 73 ಕೋಟಿ ರೂ.&lt;/p&gt;&lt;h2&gt;ಅನುದಾನ ಹಂಚಿಕೆಯಲ್ಲಿ ರಾಜಕೀಯ ಲೆಕ್ಕಾಚಾರ!&lt;/h2&gt;&lt;p&gt;ಈ ಬೃಹತ್ ಅನುದಾನ ಹಂಚಿಕೆಯಲ್ಲಿ ಸ್ಪಷ್ಟ ರಾಜಕೀಯ ತಂತ್ರಗಾರಿಕೆ ಎದ್ದು ಕಾಣುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ಪಕ್ಷದ ಕ್ಷೇತ್ರಗಳಿಗೆ ಸಿಂಹಪಾಲು ಸಿಕ್ಕಿದೆ. ಆಡಳಿತಾರೂಢ ಕಾಂಗ್ರೆಸ್ ಶಾಸಕರಿರುವ ಬಹುತೇಕ ಪ್ರಮುಖ ಕ್ಷೇತ್ರಗಳಿಗೆ ತಲಾ ₹100 ಕೋಟಿಗಳ ಬೃಹತ್ ಮೊತ್ತವನ್ನು ನೀಡಲಾಗಿದೆ. ಶಿವಾಜಿನಗರ, ಶಾಂತಿನಗರ, ಬಿಟಿಎಂ ಲೇಔಟ್ ಹಾಗೂ ಹೆಬ್ಬಾಳದಂತಹ ಕ್ಷೇತ್ರಗಳು ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.&lt;/p&gt;&lt;h2&gt;ಪ್ರತಿಪಕ್ಷಗಳ ಕ್ಷೇತ್ರಗಳಿಗೆ ನಿಯಮಿತ ಅನುದಾನ:&lt;/h2&gt;&lt;p&gt;ಬಿಜೆಪಿಯ ಹಿರಿಯ ನಾಯಕ ಆರ್. ಅಶೋಕ ಪ್ರತಿನಿಧಿಸುವ ಪದ್ಮನಾಭನಗರ ಕ್ಷೇತ್ರಕ್ಕೆ ₹80 ಕೋಟಿ ಮಂಜೂರಾಗಿದ್ದರೆ, ಉಳಿದಂತೆ ಪ್ರತಿಪಕ್ಷಗಳ (ಬಿಜೆಪಿ/ಜೆಡಿಎಸ್) ಶಾಸಕರಿರುವ ಬಹುತೇಕ ಕ್ಷೇತ್ರಗಳಿಗೆ ಕೇವಲ ₹40 ರಿಂದ ₹60 ಕೋಟಿಗಳಷ್ಟು ಸಾಧಾರಣ ಅನುದಾನ ಹಂಚಿಕೆ ಮಾಡಲಾಗಿದೆ.&lt;/p&gt;&lt;p&gt;ಈ ಮಾಸ್ಟರ್ ಪ್ಲಾನ್ ಅಡಿಯಲ್ಲಿ ವಾರ್ಡ್ ಮಟ್ಟದ ರಸ್ತೆ ಗುಂಡಿಗಳ ಮುಚ್ಚುವಿಕೆ, ಮುಖ್ಯ ರಸ್ತೆಗಳ ಡಾಂಬರೀಕರಣ (ಅಸ್ಫಾಲ್ಟಿಂಗ್) ಮತ್ತು ಜಂಕ್ಷನ್&zwnj;ಗಳ ಅಭಿವೃದ್ಧಿ ಕಾಮಗಾರಿಗಳು ಶೀಘ್ರದಲ್ಲೇ ಚಾಲನೆ ಪಡೆಯಲಿವೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಬೆಂಗಳೂರಿನ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ ಜಿಬಿಎ (GBA) ಮತ್ತು ಬಿಡಿಎ (BDA) ಅಧಿಕಾರಿಗಳು ಆದಷ್ಟು ಬೇಗ ಅಭಿವೃದ್ಧಿ ಮಾಡಿದರೆ ನಗರದ ಜನರ ಪ್ರಶಂಸೆಗೆ ಕಾರಣರಾಗಲಿದ್ದಾರೆ&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/cm-dk-shivakumar-relesed-rs2000-crore-to-gba-and-bda-for-bengaluru-road-development-list-of-constituency-funds-gdp/articleshow-bekeqhm"/>
        </item>
        <item>
            <title><![CDATA[ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆಹಾಕಲೇಬೇಡಿ: ರಾಜ್ಯದ ರೈತರಿಗೆ ಸಿಎಂ ಕಿವಿಮಾತು]]></title>
            <link>https://kannada.asianetnews.com/state/karnataka-cm-advice-state-farmers-should-not-sow-any-crops-until-the-dams-are-full-rav/articleshow-bggldax</link>
            <guid isPermaLink="true">https://kannada.asianetnews.com/state/karnataka-cm-advice-state-farmers-should-not-sow-any-crops-until-the-dams-are-full-rav/articleshow-bggldax</guid>
            <pubDate>Fri, 03 Jul 2026 07:42:22 +0530</pubDate>
            <description><![CDATA[&lt;p&gt;ಜೂನ್ ತಿಂಗಳು ಕಳೆದರೂ ಈ ಬಾರಿ ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ ಕೃಷಿ ಚಟುವಟಿಕೆ ಇಲ್ಲದೆ ರೈತರು ಆತಂಕದಲ್ಲಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದ 'ಡ್ಯಾಂ ತುಂಬುವವರೆಗೆ ಯಾವ ರೈತರೂ ಬೆಳೆಹಾಕಲೇಬೇಬಾರದು ಎಂದು ರಾಜ್ಯದ ರೈತರಿಗೆ ಸಿಎಂ ಕಿವಿಮಾತು ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwjvhdsj6vw3nqyrgzcsmgyb,imgname----------------------97--1783044290354.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.3):&lt;/strong&gt; &lsquo;ತೀವ್ರ ಜಲಕ್ಷಾಮದ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ನೀರು, ವಿದ್ಯುತ್&zwnj; ಅಭಾವ ಸೃಷ್ಟಿಯಾಗಲಿದೆ. ರಾಜ್ಯಾದ್ಯಂತ ಬಹುತೇಕ ಜಲಾಶಯಗಳ ಒಳ ಹರಿವು ಶೂನ್ಯಕ್ಕೆ ಇಳಿದಿದ್ದು, ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ&rsquo; ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್&zwnj;ನಿನೊ ಪರಿಣಾಮದಿಂದ ಉಂಟಾಗಲಿರುವ ಬರದ ಸ್ಥಿತಿ ಹಾಗೂ ಪರಿಣಾಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದೆ.&lt;/p&gt;&lt;p&gt;ತಮಗೆ ವಹಿಸಿರುವ ಉಸ್ತುವಾರಿ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿ ಕುಡಿಯುವ ನೀರು, ಮೇವು ಸಿದ್ಧತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.&lt;/p&gt;&lt;p&gt;ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್&zwnj;, &lsquo;ದೇಶಾದ್ಯಂತ ಭೀಕರ ಬರಗಾಲ ಉಂಟಾಗಲಿದೆ. ವಿದ್ಯುತ್&zwnj; ಹಾಗೂ ನೀರಿನ ಅಭಾವ ಸೃಷ್ಟಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ. ಜತೆಗೆ ರಾಜ್ಯದಲ್ಲಿ ಜಲಾಶಯಗಳಲ್ಲಿ ನೀರು ಖಾಲಿಯಾಗಿದೆ. ಹೀಗಾಗಿ ಜಲಾಶಯ ನಂಬಿಕೊಂಡು ಯಾರೂ ಬೆಳೆ ಹಾಕಬೇಡಿ. ಜಲಾಶಯಗಳು ಭರ್ತಿ ಆಗುವವರೆಗೂ ಬೆಳೆ ಹಾಕುವುದು ಬೇಡ. ಮಳೆ ಬಂದರೆ ಖಂಡಿತಾ ನಿಮಗೆ ನೀರು ಒದಗಿಸುತ್ತೇವೆ. ಆದರೆ ಬೆಳೆ ಬಗ್ಗೆ ಸದ್ಯಕ್ಕೆ ಏನೂ ತೀರ್ಮಾನ ಮಾಡಬೇಡಿ&rsquo; ಎಂದು ಎಚ್ಚರಿಕೆ ನೀಡಿದರು.&lt;/p&gt;&lt;h2&gt;ಒಳ ಹರಿವು ಶೂನ್ಯಕ್ಕೆ ಇಳಿಕೆ:&lt;/h2&gt;&lt;p&gt;ರಾಜ್ಯದಲ್ಲಿ ಮಳೆ ಅಭಾವದಿಂದ ಬಹುತೇಕ ಜಲಾಶಯಗಳ ಒಳಹರಿವು ಶೂನ್ಯಕ್ಕೆ ಇಳಿದಿದ್ದು, ಕಾವೇರಿ ಕೊಳ್ಳದ ಜಲಾಶಯಗಳ ಒಳ ಹರಿವು ಶೇ.80ರಷ್ಟು ಕುಸಿದು ಶೇ.20ಕ್ಕೆ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೀರು, ವಿದ್ಯುತ್&zwnj; ಅಭಾವದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದರು.&lt;/p&gt;&lt;p&gt;ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ವಾಣಿವಿಲಾಸ ಅಣೆಕಟ್ಟುಗಳ ಒಳಹರಿವಿನ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಕಾವೇರಿ ಪಾತ್ರದಲ್ಲಿ ಮಳೆ ಪ್ರಮಾಣ ಕುಸಿದಿದೆ. ಕಳೆದ ವರ್ಷ ಈ ಸಮಯದಲ್ಲಿ ಹೇಮಾವತಿಯಲ್ಲಿ 80 ಅಡಿ ಇತ್ತು, ಈ ವರ್ಷ 40 ಅಡಿಗೆ ಕುಸಿದಿದೆ. ಕೆಆರ್&zwnj;ಎಸ್ ನಲ್ಲಿ 100 ಅಡಿ ಇದ್ದ ನೀರಿನ ಪ್ರಮಾಣ ಈಗ 22 ಅಡಿಯಷ್ಟಿದೆ. ಕಬಿನಿಯಲ್ಲಿ 79 ಅಡಿ ಇತ್ತು, ಈಗ 26 ಅಡಿಯಷ್ಟಿದೆ. ಈ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಶೇ.20 ಕ್ಕೆ ಕುಸಿದಿದೆ. ಹೀಗಾಗಿ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದರು.&lt;/p&gt;&lt;h3&gt;ವಿದ್ಯುತ್&zwnj; ಅಭಾವ ಕಾಡುವ ಸಾಧ್ಯತೆ:&lt;/h3&gt;&lt;p&gt;ದೇಶಾದ್ಯಂತ ವಿದ್ಯುತ್&zwnj; ಸಮಸ್ಯೆ ಉಂಟಾಗುವ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಜಲವಿದ್ಯುತ್&zwnj;ಗೆ ಪರ್ಯಾಯವಾಗಿ ಉಷ್ಣವಿದ್ಯುತ್&zwnj;ಗೆ ಅಗತ್ಯವಿರುವ ಕಲ್ಲಿದ್ದಲು, ತ್ಯಾಜ್ಯದಿಂದ ವಿದ್ಯುತ್&zwnj;, ಅನಿಲ ಉತ್ಪಾದಿಸುವ ಘಟಕಗಳಿಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಇಂಧನ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್&zwnj; ತಿಳಿಸಿದರು.&lt;/p&gt;&lt;p&gt;&lt;strong&gt;ನಾಲ್ಕೂ ವಲಯದಲ್ಲೂ ಸಭೆ ನಡೆಸುತ್ತೇನೆ:&lt;/strong&gt;&lt;/p&gt;&lt;p&gt;ಬರದ ಸ್ಥಿತಿ ನಿರ್ವಹಣೆಗೆ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಪ್ರವಾಸ ಮಾಡಿ ಖುದ್ದು ಸಭೆ ನಡೆಸುತ್ತೇನೆ. ಜತೆಗೆ ಹಾಲಿ ಇರುವ ಸಚಿವರಿಗೆ 2-3 ಜಿಲ್ಲೆಗಳ ಬರ ನಿರ್ವಹಣೆ ಹೊಣೆ ನೀಡಿದ್ದು, ಅವರು ಪ್ರತಿ ಜಿಲ್ಲೆಯಲ್ಲೂ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನೀರು, ಮೇವು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆ ತುರ್ತಾಗಿ ಕೊಳವೆ ಬಾವಿ ಕೊರೆಸಬೇಕು ಎಂದು ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.&lt;/p&gt;&lt;p&gt;&lt;strong&gt;ಗ್ರಾಮೀಣ ಕುಡಿಯುವ ನೀರಿಗೆ 117 ಕೋಟಿ ರು. ಬಿಡುಗಡೆ: ಈಶ್ವರ ಖಂಡ್ರೆ&lt;/strong&gt;&lt;/p&gt;&lt;p&gt;ಎಲ್&zwnj;ನಿನೋ ಪ್ರಭಾವದಿಂದ ರಾಜ್ಯದಲ್ಲಿ ಮಳೆ ಅಭಾವ ಉಂಟಾಗಲಿದೆ. ಹೀಗಾಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಿಸಲು 117 ಕೋಟಿ ರು. ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್&zwnj; ಖಂಡ್ರೆ ಹೇಳಿದ್ದಾರೆ.&lt;/p&gt;&lt;p&gt;ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ 85 ಕೋಟಿ ರು. ವೆಚ್ಚ ಮಾಡಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದ್ದು, ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಆದರೆ 24 ಗಂಟೆ ಒಳಗಾಗಿ ಪರಿಹರಿಸುವಂತೆ ಸೂಚಿಸಲಾಗಿದೆ ಎಂದರು.&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-cm-advice-state-farmers-should-not-sow-any-crops-until-the-dams-are-full-rav/articleshow-bggldax"/>
        </item>
        <item>
            <title><![CDATA[ಬರೋಬ್ಬರಿ 4 ದಶಕಗಳ ಬೆಂಗಳೂರು ಉಪನಗರ ರೈಲು ಕನಸು ನನಸಾಗೋ ಕಾಲ ಸನ್ನಿಹಿತ, 2028ಕ್ಕೆ ಮೊದಲ ಸೇವೆ ಆರಂಭ!]]></title>
            <link>https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6</link>
            <guid isPermaLink="true">https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6</guid>
            <pubDate>Mon, 29 Jun 2026 16:42:38 +0530</pubDate>
            <description><![CDATA[ಬೆಂಗಳೂರಿನ ಬಹುನಿರೀಕ್ಷಿತ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಮೆಟ್ರೋಗಿಂತ ಹೆಚ್ಚು ಸವಾಲಿನದಾದ ಈ ಯೋಜನೆಯ ಕಾರಿಡಾರ್ 2 ಮತ್ತು 4ರ ಕೆಲಸಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 2028ರ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ-ರೈಡ್ ಹೊಂದಿದೆ. ಈ ಯೋಜನೆಯು ನಗರದ ಅಭಿವೃದ್ಧಿಯನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvasaszb74r9w3rgxwceq68z,imgname-k-ride-bengaluru-suburban-rail-1781699799018.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಬಹುದಿನಗಳ ಕನಸಾದ ಉಪನಗರ ರೈಲು ಯೋಜನೆಗೆ (Bengaluru Suburban Rail Project) ಮೊದಲ ಬಾರಿಗೆ 1983 ರಲ್ಲೇ ಪ್ರಸ್ತಾಪನೆ ಸಲ್ಲಿಕೆಯಾಗಿತ್ತು. ದೀರ್ಘಕಾಲದ ಕಾಯುವಿಕೆಯ ನಂತರ, 2020 ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿತು. ತದನಂತರ, ಜೂನ್ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದರು.&lt;/p&gt;&lt;p&gt;ಒಟ್ಟು 148 ಕಿಲೋಮೀಟರ್ ಉದ್ದದ ಈ ಜಾಲವು 4 ಪ್ರಮುಖ ಕಾರಿಡಾರ್&zwnj;ಗಳನ್ನು ಒಳಗೊಂಡಿದೆ. ಆರಂಭದಲ್ಲಿ 2026 ರ ವೇಳೆಗೆ ಇಡೀ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತಾದರೂ, ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಇದುವರೆಗೆ ಒಂದೇ ಒಂದು ಕಾರಿಡಾರ್ ಕೂಡ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿಲ್ಲ.&lt;/p&gt;&lt;p&gt;ಆದರೆ, 1996 ರ ಬ್ಯಾಚ್&zwnj;ನ &lsquo;ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಇಂಜಿನಿಯರ್ಸ್&rsquo; (IRSE) ಹಿರಿಯ ಅಧಿಕಾರಿ ಲಕ್ಷ್ಮಣ್ ಸಿಂಗ್ ಅವರು ಡಿಸೆಂಬರ್ 2025 ರಲ್ಲಿ ಕೆ-ರೈಡ್ ( ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್&zwnj;ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ - K-RIDE) ಸಂಸ್ಥೆಯ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾಮಗಾರಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಯೋಜನೆಯ ಪ್ರಗತಿ, ಎದುರಾಗುತ್ತಿರುವ ಸವಾಲುಗಳು ಮತ್ತು ಹೊಸ ಗಡುವುಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;h2&gt;ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಸ್ತುತ ಸ್ಥಿತಿ ಏನು?&lt;/h2&gt;&lt;p&gt;ಪ್ರಸ್ತುತ ಯೋಜನೆ ಒಟ್ಟಾರೆಯಾಗಿ ಉತ್ತಮ ಪ್ರಗತಿ ಕಾಣುತ್ತಿದೆ. ಕಾರಿಡಾರ್ 2 ಮತ್ತು ಕಾರಿಡಾರ್ 4 ರ ಮುಖ್ಯ ರೈಲು ಮಾರ್ಗ ಹಾಗೂ ನಿಲ್ದಾಣಗಳಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಸದ್ಯ ಬಾಕಿ ಇರುವ ಭೂಸ್ವಾಧೀನವು ಕೇವಲ ಫ್ಲೈಓವರ್&zwnj;ಗಳು ಮತ್ತು ರಸ್ತೆ ಮೇಲ್ಸೇತುವೆಗಳ (ROB) ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ.&lt;/p&gt;&lt;p&gt;ಕಾರಿಡಾರ್ 4 (46 ಕಿ.ಮೀ): ಈ ಮಾರ್ಗಕ್ಕಾಗಿ ನಿಗದಿಪಡಿಸಲಾದ ನಾಲ್ಕು ಸಿವಿಲ್ ಪ್ಯಾಕೇಜ್&zwnj;ಗಳ ಪೈಕಿ ಈಗಾಗಲೇ ಎರಡು ಟೆಂಡರ್&zwnj;ಗಳನ್ನು ಕರೆಯಲಾಗಿದೆ. ಇನ್ನುಳಿದ ಎರಡು ಟೆಂಡರ್&zwnj;ಗಳನ್ನು ಮುಂದಿನ ತಿಂಗಳ ಮಧ್ಯಭಾಗದಲ್ಲಿ ಪ್ರಕಟಿಸಲಾಗುವುದು.&lt;/p&gt;&lt;p&gt;ಕಾರಿಡಾರ್ 2 (27 ಕಿ.ಮೀ): ಈ ಮಾರ್ಗದ ಮೂರು ಸಿವಿಲ್ ಪ್ಯಾಕೇಜ್&zwnj;ಗಳ ಪೈಕಿ ಎರಡನ್ನು ಈಗಾಗಲೇ ಗುತ್ತಿಗೆ ನೀಡಲಾಗಿದೆ. ಮೂರನೇ ಪ್ಯಾಕೇಜ್&zwnj;ಗೆ ಮರು ಟೆಂಡರ್ ಕರೆಯಲಾಗಿದ್ದು, ಜುಲೈ ಆರಂಭದಲ್ಲಿ ಬಿಡ್&zwnj;ಗಳನ್ನು ಮುಕ್ತಗೊಳಿಸುವ ನಿರೀಕ್ಷೆಯಿದೆ. ಪ್ರಸ್ತುತ ಎರಡೂ ಕಾರಿಡಾರ್&zwnj;ಗಳ ವ್ಯಾಪ್ತಿಗೆ ಬರುವ ಎಲ್ಲಾ ನಿಲ್ದಾಣಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಿದೆ.&lt;/p&gt;&lt;h2&gt;ಕಾರಿಡಾರ್ 1 ಮತ್ತು ಕಾರಿಡಾರ್ 3 ರ ಸ್ಥಿತಿ ಏನು?&lt;/h2&gt;&lt;p&gt;ಭಾರತೀಯ ರೈಲ್ವೆಯು ಕಾರಿಡಾರ್ 1 (ಕೆಎಸ್ಆರ್ ಬೆಂಗಳೂರಿನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಮಾರ್ಗದ ಪ್ರಕ್ರಿಯೆಗಳನ್ನು ಪರಿಶೀಲಿಸುತ್ತಿದೆ. ಇನ್ನು ಕಾರಿಡಾರ್ 3 (ಕೆಂಗೇರಿ-ವೈಟ್&zwnj;ಫೀಲ್ಡ್) ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಅದು ರದ್ದಾಗಿದೆ ಎಂಬ ವದಂತಿಗಳಿದ್ದವು. ಆದರೆ ಇದನ್ನು ಕೆ-ರೈಡ್ ಸ್ಪಷ್ಟವಾಗಿ ನಿರಾಕರಿಸಿದೆ.&lt;/p&gt;&lt;p&gt;ಅನುಮೋದಿತ ಡಿಪಿಆರ್ (DPR) ಪ್ರಕಾರ ಹಂತ ಹಂತವಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಸದ್ಯ ಸಂಸ್ಥೆಯ ಮೊದಲ ಆದ್ಯತೆ ಕಾರಿಡಾರ್ 2 ಮತ್ತು 4 ಆಗಿದ್ದು, ನಂತರದ ಗಮನ ಕಾರಿಡಾರ್ 1 ರ ಮೇಲಿರಲಿದೆ. ಕಾರಿಡಾರ್ 3 ರ ವ್ಯಾಪ್ತಿಯಲ್ಲಿ ಮೊದಲಿಗೆ ಬೆಂಗಳೂರು ಕಂಟೋನ್ಮೆಂಟ್-ಕೆಂಗೇರಿ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಬೆಂಗಳೂರು ಕಂಟೋನ್ಮೆಂಟ್-ವೈಟ್&zwnj;ಫೀಲ್ಡ್ ಮಾರ್ಗವನ್ನು ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಏಕೆಂದರೆ, ಈ ಮಾರ್ಗದಲ್ಲಿ ನೈಋತ್ಯ ರೈಲ್ವೆಯು ಈಗಾಗಲೇ ಹಳಿಗಳ ಚತುಷ್ಪಥ (ನಾಲ್ಕು ಹಳಿಗಳ) ಕಾಮಗಾರಿಯನ್ನು ನಡೆಸುತ್ತಿದ್ದು, ಇದು ಸ್ಥಳೀಯ ರೈಲು ಅಗತ್ಯತೆಗಳನ್ನು ಪೂರೈಸಲಿದೆ. ಚತುಷ್ಪಥ ಕಾಮಗಾರಿ ಮುಗಿದ ನಂತರ ಕೆ-ರೈಡ್ ಈ ಮಾರ್ಗದಲ್ಲಿ ರೈಲು ಓಡಿಸುವ ಬಗ್ಗೆ ನೈಋತ್ಯ ರೈಲ್ವೆಯ ಕಾರ್ಯಾಚರಣೆಯ ಯೋಜನೆಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದೆ.&lt;/p&gt;&lt;h2&gt;ಮೆಟ್ರೋಗಿಂತ ಉಪನಗರ ರೈಲು ನಿರ್ಮಾಣ ಏಕೆ ಹೆಚ್ಚು ಸವಾಲಿನದ್ದು?&lt;/h2&gt;&lt;p&gt;ಬೃಹತ್ ರೈಲ್ವೆ ಮೂಲಸೌಕರ್ಯ ಯೋಜನೆಗಳು ಅನಿವಾರ್ಯವಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಉದಾಹರಣೆಗೆ, ನಮ್ಮ ಬೆಂಗಳೂರು ಮೆಟ್ರೋ (Namma Metro) ಕೂಡ ಇಂದಿನ ಹಂತ ತಲುಪಲು ಸುಮಾರು ಎರಡು ದಶಕಗಳ ಕಾಲಾವಕಾಶ ತೆಗೆದುಕೊಂಡಿದೆ. ಮೆಟ್ರೋ ಸಂಸ್ಥೆಯು ಇಷ್ಟು ವರ್ಷಗಳಲ್ಲಿ ಒಟ್ಟು 96 ಕಿ.ಮೀ ಮಾರ್ಗವನ್ನು ಕಾರ್ಯಗತಗೊಳಿಸಿದ್ದರೆ, ಕೆ-ರೈಡ್ ಈಗಾಗಲೇ ಕಾರಿಡಾರ್ 2 ಮತ್ತು 4 ರಲ್ಲಿ ಒಟ್ಟಿಗೆ ಸುಮಾರು 70 ಕಿ.ಮೀ ಮಾರ್ಗದ ಕೆಲಸವನ್ನು ಏಕಕಾಲದಲ್ಲಿ ಕೈಗೆತ್ತಿಕೊಂಡಿದೆ.&lt;/p&gt;&lt;p&gt;ಸಾಮಾನ್ಯ ರಸ್ತೆಗಳ ಬದಿಯಲ್ಲಿ ನಿರ್ಮಾಣವಾಗುವ ಮೆಟ್ರೋಗಿಂತ ಉಪನಗರ ರೈಲು ಯೋಜನೆ ಅತ್ಯಂತ ಭಿನ್ನ ಮತ್ತು ಸವಾಲಿನದ್ದಾಗಿದೆ. ಇಲ್ಲಿ ಬಹುತೇಕ ಕಾಮಗಾರಿಗಳು ಪ್ರಸ್ತುತ ಚಾಲ್ತಿಯಲ್ಲಿರುವ, ಸಕ್ರಿಯವಾಗಿರುವ ರೈಲ್ವೆ ಹಳಿಗಳ ಪಕ್ಕದಲ್ಲೇ ನಡೆಯಬೇಕಿರುತ್ತದೆ. ನಿರಂತರವಾಗಿ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳು ಸಂಚರಿಸುತ್ತಿರುವುದರಿಂದ ನಮಗೆ ಜಾಗ ಮತ್ತು ಕೆಲಸದ ಸಮಯದ ಮಿತಿ ಇರುತ್ತದೆ. ಹೀಗಾಗಿ ಸುರಕ್ಷತೆಗೆ ಕಠಿಣ ಆದ್ಯತೆ ನೀಡಿ, ಸಕ್ರಿಯ ಹಳಿಗಳಿಗೆ ಧಕ್ಕೆಯಾಗದಂತೆ ಏಕಕಾಲದಲ್ಲಿ ಕೆಲಸ ಮಾಡುವುದು ದೊಡ್ಡ ಸವಾಲಾಗಿದೆ.&lt;/p&gt;&lt;h2&gt;ಮೊದಲ ಉಪನಗರ ರೈಲು ಸಂಚಾರ ಯಾವಾಗ ಆರಂಭ?&lt;/h2&gt;&lt;p&gt;ಬೆಂಗಳೂರಿನ ಸಾರ್ವಜನಿಕರು ಡಿಸೆಂಬರ್ 2028 ರ ವೇಳೆಗೆ ಮೊದಲ ಉಪನಗರ ರೈಲಿನ ಸೇವೆಗಳನ್ನು ನಿರೀಕ್ಷಿಸಬಹುದಾಗಿದೆ. ಈ ನಿಗದಿತ ಗಡುವಿನೊಳಗೆ ಸಂಪೂರ್ಣ ಕಾರಿಡಾರ್ 2 ಮಾರ್ಗವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಕೆ-ರೈಡ್ ಬದ್ಧವಾಗಿ ಕೆಲಸ ಮಾಡುತ್ತಿದೆ. ಒಂದು ವೇಳೆ ಇಡೀ ಕಾರಿಡಾರ್ ಪೂರ್ಣಗೊಳ್ಳುವುದು ವಿಳಂಬವಾದರೆ, ಮೊದಲ ಆದ್ಯತೆಯ ವಿಭಾಗವನ್ನು ಮಾತ್ರ ಕಾರ್ಯಾಚರಣೆಗೆ ತರಲಾಗುತ್ತದೆ. ಕಾರಿಡಾರ್ 2 ಅನ್ನು ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಚಿಕ್ಕಬಾಣಾವರ-ಯಶವಂತಪುರ ಆದ್ಯತಾ ವಿಭಾಗವು ಮೊದಲು ಸಿದ್ಧವಾದರೆ, ಆ ಭಾಗದಲ್ಲಿ ರೈಲು ಸಂಚಾರವನ್ನು ಮುಂಚಿತವಾಗಿಯೇ ಆರಂಭಿಸಲಾಗುತ್ತದೆ.&lt;/p&gt;&lt;h2&gt;ಭವಿಷ್ಯದ ದೃಷ್ಟಿಕೋನ ಮತ್ತು ತಾಂತ್ರಿಕತೆ&lt;/h2&gt;&lt;p&gt;ಉಪನಗರ ರೈಲು ಕೇವಲ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಬೆಂಗಳೂರಿನ ನಗರ ಅಭಿವೃದ್ಧಿಯನ್ನೇ ಮರುರೂಪಿಸಲಿದೆ. ಮೆಟ್ರೋ ಮಾರ್ಗಗಳು ಪ್ರಮುಖ ರಸ್ತೆಗಳನ್ನು ಅವಲಂಬಿಸಿದ್ದರೆ, ಉಪನಗರ ರೈಲು ನಗರದ ಸುತ್ತಲಿನ ಕಡಿಮೆ ಸಾಂದ್ರತೆಯ (ಒಂದು ಅಥವಾ ಎರಡು ಅಂತಸ್ತಿನ ಕಟ್ಟಡಗಳಿರುವ) ಅಭಿವೃದ್ಧಿಯಾಗದ ಪ್ರದೇಶಗಳ ಮೂಲಕ ಹಾದುಹೋಗುತ್ತದೆ. ಇದು ಆಯಾ ಭಾಗಗಳಲ್ಲಿ ಸಾರಿಗೆ ಆಧಾರಿತ ಅಭಿವೃದ್ಧಿ (TOD), ಮಲ್ಟಿಮೋಡಲ್ ಹಬ್&zwnj;ಗಳು ಮತ್ತು ಹೊಸ ಆರ್ಥಿಕ ಕಾರಿಡಾರ್&zwnj;ಗಳ ಸೃಷ್ಟಿಗೆ ಕಾರಣವಾಗಲಿದೆ.&lt;/p&gt;&lt;p&gt;ಇದರೊಂದಿಗೆ, ದೆಹಲಿ-ಮೀರತ್ ಮಾದರಿಯ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (RRTS) ಯೋಜನೆಗಳನ್ನು ತರುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೆ-ರೈಡ್ ಈ ಯೋಜನೆಗಳ ಅನುಷ್ಠಾನದಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಸುರಕ್ಷತೆ ಮತ್ತು ವೇಗದ ದೃಷ್ಟಿಯಿಂದ ಎಲ್ಲಾ ಕಾರಿಡಾರ್&zwnj;ಗಳಲ್ಲಿ ಅತ್ಯಾಧುನಿಕ ಯುರೋಪಿಯನ್ ರೈಲು ನಿಯಂತ್ರಣ ವ್ಯವಸ್ಥೆ (ETCS) ಸಿಗ್ನಲಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/why-bengaluru-suburban-rail-is-more-challenging-than-namma-metro-current-status-and-2028-launch-goal-gdp/articleshow-destqy6"/>
        </item>
        <item>
            <title><![CDATA[ಬರೋಬ್ಬರಿ ₹45 ಲಕ್ಷ ವೇತನ, ತಿಂಗಳ ಕೊನೆಗೆ ದಿವಾಳಿ! ಬೆಂಗಳೂರು ಟೆಕ್ಕಿಯ ವೈರಲ್ ಸ್ಟೋರಿ! ಜೀವನ ವೆಚ್ಚವೋ? ಹಣ ನಿರ್ವಹಣೆ ಲೋಪವೋ?]]></title>
            <link>https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s</link>
            <guid isPermaLink="true">https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s</guid>
            <pubDate>Mon, 29 Jun 2026 19:11:37 +0530</pubDate>
            <description><![CDATA[ವಾರ್ಷಿಕ ₹45 ಲಕ್ಷ ಸಂಬಳವಿದ್ದರೂ ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಹೇಳಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಮೆಟ್ರೋ ನಗರಗಳಲ್ಲಿನ 'ಜೀವನಶೈಲಿ ಹಣದುಬ್ಬರ' ಮತ್ತು ಕಳಪೆ ಹಣಕಾಸು ಯೋಜನೆಯ ಕುರಿತು ದೇಶಾದ್ಯಂತ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krzpqemb1f2d4a02qcdph83a,imgname-gettyimages-84380314-612x612-1779180485259.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬನ ಸುಮಾರು ಒಂದು ವರ್ಷ ಹಳೆಯದಾದ ಸಂದರ್ಶನದ ವಿಡಿಯೋ ತುಣುಕೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ದೇಶಾದ್ಯಂತ &lsquo;ಜೀವನಶೈಲಿ ಹಣದುಬ್ಬರ&rsquo; (Lifestyle Inflation), ಕಳಪೆ ಹಣಕಾಸು ಯೋಜನೆ ಹಾಗೂ ಮೆಟ್ರೋ ನಗರಗಳ ದುಬಾರಿ ಜೀವನದ ಕುರಿತು ಸಾರ್ವಜನಿಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;ಮೂಲತಃ ಮ್ಯೂಚುವಲ್ ಫಂಡ್ ಸಲಹೆಗಾರರಾದ ಅಂಶುಮಾನ್ ಶರ್ಮಾ ಅವರು ರೆಕಾರ್ಡ್ ಮಾಡಿದ್ದ ಈ ಹಳೆಯ ಸಂದರ್ಶನವನ್ನು ಇತ್ತೀಚೆಗೆ 'X' (ಟ್ವಿಟರ್) ವೇದಿಕೆಯಲ್ಲಿ ಮರುಹಂಚಿಕೊಳ್ಳಲಾಗಿದೆ. ವಾರ್ಷಿಕವಾಗಿ ಬರೊಬ್ಬರಿ ₹45 ಲಕ್ಷ ಗಳಿಸುತ್ತಿದ್ದರೂ, ತಿಂಗಳ ಕೊನೆಯಲ್ಲಿ ಉಳಿತಾಯ ಮಾಡಲು ಬಿಡಿ 1 ರೂಪಾಯಿಯೂ ಅಕೌಂಟ್&zwnj; ಇರುವುದಿಲ್ಲ ಎಂದು ಐಟಿ ಉದ್ಯೋಗಿ ಬಿಚ್ಚಿಟ್ಟ ಸತ್ಯ, ಈಗ ಸಾವಿರಾರು ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಇದು ಭಾರತದ ಸಿಲಿಕಾನ್ ಸಿಟಿಯಲ್ಲಿ ಉದ್ಯೋಗಿಗಳನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆಯನ್ನು ಮುಂಚೂಣಿಗೆ ತಂದಿದೆ. ಹೆಚ್ಚಿನ ಸಂಬಳ ನಿಜಕ್ಕೂ ಸಾಕಾಗುತ್ತಿದೆಯೇ? ಅಥವಾ ನಮ್ಮ ಮಿತಿಮೀರಿದ ಆಸೆಗಳು ನಮ್ಮ ಆದಾಯವನ್ನು ಸದ್ದಿಲ್ಲದೆ ನುಂಗಿ ಹಾಕುತ್ತಿವೆಯೇ?&lt;/p&gt;&lt;p&gt;ಸಂದರ್ಶನದಲ್ಲಿ ತಮ್ಮನ್ನು &lsquo;ಸೂರ್ಯ&rsquo; ಎಂದು ಗುರುತಿಸಿಕೊಂಡಿರುವ ಈ ಸಾಫ್ಟ್&zwnj;ವೇರ್ ವೃತ್ತಿಪರರು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಸದ್ಯ ಸಾಫ್ಟ್&zwnj;ವೇರ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರ ವಾರ್ಷಿಕ ಪ್ಯಾಕೇಜ್ ₹45 ಲಕ್ಷ ರೂಪಾಯಿಗಳು. ಎಲ್ಲಾ ತೆರಿಗೆಗಳು ಕಡಿತಗೊಂಡ ನಂತರ ಇವರ ಕೈಗೆ ಸಿಗುವ ಮಾಸಿಕ ನಿವ್ವಳ ಸಂಬಳ (Take-home salary) ಸುಮಾರು ₹2.45 ಲಕ್ಷ.&lt;/p&gt;&lt;p&gt;ಸಾಮಾನ್ಯ ಮಧ್ಯಮ ವರ್ಗದ ಜನರಿಗೆ ಇದು ಅತ್ಯಂತ ದೊಡ್ಡ ಮೊತ್ತದ ಆದಾಯವಾಗಿ ಕಂಡರೂ, ತಮಗೆ ಉಳಿತಾಯ ಮಾಡುವುದು ನಿರಂತರವಾಗಿ ಕಷ್ಟವಾಗುತ್ತಿದೆ ಎಂದು ಸೂರ್ಯ ಹೇಳಿದ್ದಾರೆ. ಈಗ ನಾನು ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ, ತಿಂಗಳ ಕೊನೆಯಲ್ಲಿ ನನ್ನ ಹಣ ಎಲ್ಲಿಗೆ ಮಾಯವಾಗುತ್ತದೆ ಎಂದೇ ತಿಳಿಯುತ್ತಿಲ್ಲ. ಸಾಮಾನ್ಯವಾಗಿ ತಿಂಗಳ ಕೊನೆಗೆ ನನ್ನ ಬ್ಯಾಂಕ್ ಖಾತೆಯಲ್ಲಿ ಏನೂ ಉಳಿದಿರುವುದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಮದುವೆಯಾಗಿ ತಂದೆಯಾದ ನಂತರ ತಮ್ಮ ಆರ್ಥಿಕ ಪರಿಸ್ಥಿತಿ ಮತ್ತು ಜವಾಬ್ದಾರಿಗಳು ಸಂಪೂರ್ಣವಾಗಿ ಬದಲಾದವು ಎಂದು ವಿವರಿಸಿದ್ದಾರೆ.&lt;/p&gt;&lt;h2&gt;ಗೃಹ ಸಾಲ, ಶಾಲಾ ಶುಲ್ಕ ಮತ್ತು ಐಷಾರಾಮಿ ಜೀವನದ ವೆಚ್ಚಗಳು&lt;/h2&gt;&lt;p&gt;ತಮ್ಮ ಮಾಸಿಕ ಖರ್ಚುಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸೂರ್ಯ, ತಮ್ಮ ಆದಾಯದ ಬಹುಪಾಲು ಹಣ ಹೋಮ್ ಲೋನ್ (ಗೃಹ ಸಾಲ) ಇಎಂಐ ಪಾವತಿಸಲು ಬಳಕೆಯಾಗುತ್ತದೆ ಎಂದು ಹೇಳಿದ್ದಾರೆ. ಅವರ ಮಾಸಿಕ ವೆಚ್ಚಗಳ ವಿವರ ಹೀಗಿದೆ:&lt;/p&gt;&lt;ul&gt; &lt;li&gt;ಗೃಹ ಸಾಲದ ಇಎಂಐ (Home Loan EMI): ₹63,000 (ಇದು ಅವರ ಒಟ್ಟು ಆದಾಯದ ಶೇ. 30 ಕ್ಕಿಂತ ಕಡಿಮೆ ಇರುವುದರಿಂದ, ಆರ್ಥಿಕ ತಜ್ಞರ ಪ್ರಕಾರ ಇದು ಸಮಂಜಸವಾದ ಮಿತಿಯಲ್ಲೇ ಇದೆ).&lt;/li&gt; &lt;li&gt;3.5 ವರ್ಷದ ಮಗನ ಶಾಲಾ ಶುಲ್ಕ ತಿಂಗಳಿಗೆ: ₹11,000&lt;/li&gt; &lt;li&gt;ಆಹಾರ ಮತ್ತು ದಿನಸಿ ಸಾಮಗ್ರಿಗಳು: ₹12,000&lt;/li&gt; &lt;li&gt;ಇತರ ಅನಿವಾರ್ಯ ವೆಚ್ಚಗಳು: ₹20,000&lt;/li&gt; &lt;li&gt;ಶಾಪಿಂಗ್, ಪ್ರವಾಸ ಮತ್ತು ರೆಸ್ಟೋರೆಂಟ್ ಊಟ: ₹32,000&lt;/li&gt;&lt;/ul&gt;&lt;p&gt;ಇಲ್ಲಿ ಮನೆ ಮತ್ತು ಮಗನ ಶಿಕ್ಷಣದ ವೆಚ್ಚಗಳ ಬಗ್ಗೆ ಯಾರಿಗೂ ಆಕ್ಷೇಪವಿಲ್ಲದಿದ್ದರೂ, ಕೇವಲ ಹೋಟೆಲ್ ಊಟ, ಶಾಪಿಂಗ್ ಹಾಗೂ ಪ್ರವಾಸದಂತಹ ಐಷಾರಾಮಿ ಹವ್ಯಾಸಗಳಿಗೆ ಪ್ರತಿ ತಿಂಗಳು ಖರ್ಚು ಮಾಡುತ್ತಿರುವ ₹32,000 ಹಣವೇ ಈಗ ಇಂಟರ್ನೆಟ್&zwnj;ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯ ವಿಷಯವಾಗಿದೆ.&lt;/p&gt;&lt;h2&gt;ಹಣಕಾಸು ನಿರ್ವಹಣೆಯ ಲೋಪವೇ? ಅಥವಾ ಹಣದುಬ್ಬರದ ಹೊಡೆತವೇ?&lt;/h2&gt;&lt;p&gt;ಅನಾಮಧೇಯ ಎಕ್ಸ್ (X) ಖಾತೆಯೊಂದು ಈ ವಿಡಿಯೋವನ್ನು ಮರುಪೋಸ್ಟ್ ಮಾಡಿ, ಇದು ದೇಶದ ಹಣದುಬ್ಬರದ ಸಮಸ್ಯೆಯಲ್ಲ, ಬದಲಿಗೆ ಕಳಪೆ ಹಣಕಾಸು ಯೋಜನೆಯ (Poor Financial Planning) ಜೀವಂತ ಉದಾಹರಣೆ ಎಂದು ಅಭಿಪ್ರಾಯಪಟ್ಟಿದೆ. ಸೂರ್ಯ ಅವರ ಬೃಹತ್ ಆದಾಯದ ಜೊತೆಗೆ ಅವರ ದುಂದುವೆಚ್ಚಗಳನ್ನು ಗಮನಿಸಿದರೆ, ಭಾರತೀಯರು ಎದುರಿಸುತ್ತಿರುವುದು ಆರ್ಥಿಕ ದುರುಪಯೋಗದ ಸಮಸ್ಯೆಯೇ ಹೊರತು ವಾತಾವರಣದ ಹಣದುಬ್ಬರವಲ್ಲ ಎಂದು ಪೋಸ್ಟರ್&zwnj;ನಲ್ಲಿ ಟೀಕಿಸಲಾಗಿದೆ. ಅವರು ಸರಿಯಾದ ಬಜೆಟ್ ರೂಪಿಸಿಕೊಂಡರೆ ದೊಡ್ಡ ಮೊತ್ತವನ್ನು ಉಳಿಸಬಹುದು ಎಂದು ಸಲಹೆ ನೀಡಲಾಗಿದೆ.&lt;/p&gt;&lt;p&gt;ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧದ ಚರ್ಚೆಗಳು ತೀವ್ರಗೊಂಡಿವೆ. ಅನೇಕರು ಈ ವಾದವನ್ನು ಒಪ್ಪಿಕೊಂಡಿದ್ದು, ಸಂಬಳ ಹೆಚ್ಚಾದಂತೆಲ್ಲಾ ಮನುಷ್ಯನ ಖರ್ಚುಗಳು ಸಮಾಂತರವಾಗಿ ಹೆಚ್ಚಾಗುತ್ತವೆ, ಹಾಗಾಗಿ ಎಷ್ಟು ಸಂಬಳ ಬಂದರೂ ಸಾಲುವುದಿಲ್ಲ ಎಂದಿದ್ದಾರೆ.&lt;/p&gt;&lt;p&gt;ಮತ್ತೊಂದೆಡೆ, ಹಲವರು ಐಟಿ ಉದ್ಯೋಗಿಯ ಬೆಂಬಲಕ್ಕೆ ನಿಂತಿದ್ದಾರೆ. ದುಡಿದ ಹಣದಲ್ಲಿ ಕುಟುಂಬದೊಂದಿಗೆ ಆರಾಮದಾಯಕವಾಗಿ ಬದುಕುವುದು ಮತ್ತು ಒಳ್ಳೆಯ ನೆನಪುಗಳಿಗಾಗಿ ಖರ್ಚು ಮಾಡುವುದನ್ನು ಕಳಪೆ ಆರ್ಥಿಕ ನಿರ್ವಹಣೆ ಎಂದು ಕರೆಯಲು ಸಾಧ್ಯವಿಲ್ಲ. ಸೂರ್ಯ ಅವರು ಮಗನ ಭವಿಷ್ಯಕ್ಕಾಗಿ ಹಾಗೂ ವಸತಿಗಾಗಿ ಈಗಾಗಲೇ ದೊಡ್ಡ ಹೂಡಿಕೆ (EMI) ಮಾಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಸಮರ್ಥಿಸಿಕೊಂಡಿದ್ದಾರೆ.&lt;/p&gt;&lt;h2&gt;ಬೃಹತ್ ಸಂಬಳ ಮತ್ತು ಆಧುನಿಕ ನಗರದ ಆರ್ಥಿಕ ಬಿಕ್ಕಟ್ಟು&lt;/h2&gt;&lt;p&gt;ಈ ಚರ್ಚೆಯು ಕೇವಲ ಒಬ್ಬ ವ್ಯಕ್ತಿಯ ಮಾಸಿಕ ಬಜೆಟ್&zwnj;ಗೆ ಸೀಮಿತವಾಗಿಲ್ಲ. ಇದು ಇಂದಿನ ಮಹಾನಗರಗಳಲ್ಲಿ ವಾಸಿಸುತ್ತಿರುವ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಜನರ ಹೊಸ ಅರ್ಥಶಾಸ್ತ್ರವನ್ನು ಪ್ರತಿಬಿಂಬಿಸುತ್ತದೆ. ನಗರಗಳಲ್ಲಿ ಆದಾಯ ಹೆಚ್ಚಾದಂತೆಲ್ಲಾ ಜೀವನದ ಗುಣಮಟ್ಟ ಮತ್ತು ವೆಚ್ಚಗಳೂ ಅಷ್ಟೇ ವೇಗವಾಗಿ ಹೆಚ್ಚಾಗುತ್ತಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/business/earns-rs45-lakh-but-saves-rs-zero-news-the-viral-story-of-a-bengaluru-it-engineer-sparking-a-national-debate-gdp/articleshow-f7ysx1s"/>
        </item>
        <item>
            <title><![CDATA[ಡೇಟ್‌ಗೆ ಹೋದ ಬೆಂಗಳೂರು ಯುವತಿಗೆ ಈಗ ಸಮಸ್ಯೆ, 4 ವರ್ಷ ಬಳಿಕ ಆನ್‌ಲೈನ್‌ನಲ್ಲಿ ಇಂಟಿಮೇಟ್ ವಿಡಿಯೋ ಪತ್ತೆ]]></title>
            <link>https://kannada.asianetnews.com/state/bengaluru-woman-discovers-her-own-video-in-online-without-consent-four-years-after-date/articleshow-lsrxsh4</link>
            <guid isPermaLink="true">https://kannada.asianetnews.com/state/bengaluru-woman-discovers-her-own-video-in-online-without-consent-four-years-after-date/articleshow-lsrxsh4</guid>
            <pubDate>Wed, 01 Jul 2026 16:38:17 +0530</pubDate>
            <description><![CDATA[&lt;p&gt;ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್&zwnj;ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್&zwnj;ಲೈನ್&zwnj;ನಲ್ಲಿ ಪತ್ತೆಯಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k6apbqr63ry7vgjnye8jg0t5,imgname-new-project--5--1759148105478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.01) &lt;/strong&gt;ಡೇಟಿಂಗ್ ಆ್ಯಪ್ ಮೂಲಕ ಪ್ರೊಫೈಲ್ ಮ್ಯಾಚ್ ಮಾಡಿ ಡೇಟ್&zwnj;ಗೆ ಹೋಗುವುದು ಹೊಸದೇನಲ್ಲ. ಹಲವು ರಿಲೇಶನ್&zwnj;ಶಿಪ್ ಶುರುವಾಗಿ ಅಂತ್ಯಗೊಳ್ಳುವುದು ಇದೇ ಡೇಟಿಂಗ್ ಆ್ಯಪ್ ಮೂಲಕ. ಆದರೆ ಡೇಟ್&zwnj;ಗೆ ಹೋಗುವಾಗ ಎಚ್ಚರ ಇರಲಿ. ಕಾರಣ ಹೀಗೆ ಡೇಟ್&zwnj;ಗೆ ಹೋಗಿ ಮೈಮರೆತ ಬೆಂಗಳೂರಿನ ಯುವತಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಬಂಬಲ್ ಡೇಟಿಂಗ್ ಆ್ಯಪ್&zwnj;ನಲ್ಲಿ ಪ್ರೊಫೈಲ್ ಮ್ಯಾಚ್ ಆಗಿ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಹೀಗೆ ಪರಿಚಯವಾದ ವ್ಯಕ್ತಿ ಜೊತೆ ಈಗೆ ಡೇಟ್ ಹೋಗಿದ್ದಾಳೆ. ಕೆಲವೇ ದಿನಗಳಲ್ಲಿ ಇವರ ರಿಲೇಶನ್&zwnj;ಶಿಪ್ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಆತ ಎಲ್ಲಾ ಸಂಪರ್ಕ ಕಡಿದುಕೊಂಡಿದ್ದ. ಸೋಶಿಯಲ್ ಮೀಡಿಯಾ ಬ್ಲಾಕ್ ಮಾಡಿದ್ದ, ಫೋನ್ ಬ್ಲಾಕ್ ಮಾಡಿದ್ದ. ಆದರೆ ನಾಲ್ಕು ವರ್ಷ ಬಳಿಕ ಯುವಕನ ಜೊತೆಗಿನ ಇಂಟಿಮೇಟ್ ವಿಡಿಯೋ ಒಂದು ಆನ್&zwnj;ಲೈನ್&zwnj;ನಲ್ಲಿ ಪತ್ತೆಯಾಗಿದೆ.&lt;/p&gt;&lt;h2&gt;ಏನಿದು ಘಟನೆ?&lt;/h2&gt;&lt;p&gt;28ರ ಹರೆಯದ ಬೆಂಗಳೂರು ಯುವತಿ ನವೆಂಬರ್ 2022ರಲ್ಲಿ ಬಂಬಲ್ ಡೇಟಿಂಗ್ ಆ್ಯಪ್&zwnj;ನಲ್ಲಿ ಸಕ್ರಿಯವಾಗಿದ್ದಳು. ಆ್ಯಪ್&zwnj;ನಲ್ಲಿ ವ್ಯಕ್ತಿ ಜೊತೆ ಪ್ರೊಫೈಲ್ ಮ್ಯಾಚ್ ಆಗಿದ್ದ ಕಾರಣ ಚಾಟಿಂಗ್ ಶುರುವಾದ ಮರು ದಿನವೇ ಇಬ್ಬರು ಡೇಟ್&zwnj;ಗೆ ಡೇಟ್ ಫಿಕ್ಸ್ ಮಾಡಿದ್ದಾರೆ. ಬಳಿಕ ಇಬ್ಬರ ಸೋಶಿಯಲ್ ಮೀಡಿಯಾ ಪ್ರೊಫೈಲ್ ಹಂಚಿಕೊಂಡಿದ್ದಾರೆ. ಎಚ್ಚರವಾಗಿದ್ದ ಯುವತಿ ಬಂಬಲ್ ಆ್ಯಪ್&zwnj;ನಲ್ಲಿರುವ ವ್ಯಕ್ತಿ ಪ್ರೊಫೈಲ್&zwnj;ನ್ನು ಇನ್&zwnj;ಸ್ಟಾಗ್ರಾಂನಲ್ಲಿ ಪರಿಶೀಲಿಸಿದ್ದಾರೆ. ಈ ಮೂಲಕ ನಕಲಿ ಪ್ರೊಫೈಲ್ ಅಲ್ಲ ಅನ್ನೋದು ಖಚಿತಪಡಿಸಿಕೊಂಡು ಡೇಟಿಂಗ್ ಶುರು ಮಾಡಿದ್ದಾಳೆ.&lt;/p&gt;&lt;h2&gt;ಭೇಟಿಯ ಮರುದಿನವೇ ಬ್ಲಾಕ್&lt;/h2&gt;&lt;p&gt;ಇಬ್ಬರು ಭೇಟಿಯಾಗಲು ದಿನಾಂಕ ಫಿಕ್ಸ್ ಮಾಡಿದ್ದರು. ಬಳಿಕ ಯುವಕ ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಭೇಟಿಯಾಗಲು ಆಹ್ವಾನ ನೀಡಿದ್ದ. ಇದರಂತೆ ಯುವತಿ ನೇರವಾಗಿ ಆತನ ಅಪಾರ್ಟ್&zwnj;ಮೆಂಟ್&zwnj;ಗೆ ತೆರಳಿದ್ದಾಳೆ. ಒಂದು ದಿನ ಯುವಕನ ಜೊತೆ ಅಪಾರ್ಟ್&zwnj;ಮೆಂಟ್&zwnj;ನಲ್ಲಿ ಕಳೆದ ಬೆಂಗಳೂರು ಯುವತಿ ಬಳಿಕ ಮರಳಿದ್ದಾಳೆ. ಮರು ದಿನ ಆತನಿಗೆ ಫೋನ್ ಮಾಡಲು ಪ್ರಯತ್ನಿಸಿದರೆ ನಂಬರ್ ಬ್ಲಾಕ್, ಸೋಶಿಯಲ್ ಮೀಡಿಯಾಗಳಲ್ಲೂ ಬ್ಲಾಕ್ ಮಾಡಲಾಗಿತ್ತು. ಆತನ ಸಂಪರ್ಕಿಸಲು ಸಾಧ್ಯವಾಗಲೇ ಇಲ್ಲ. ಭೇಟಿಯಾದ ಮರುದಿನವೇ ಆತನ ಸಂಪರ್ಕ ಕಡಿತಗೊಂಡಿತ್ತು.&lt;/p&gt;&lt;p&gt;ಕೆಲ ದಿನಗಳ ಕಾಲ ನಿರಂತರ ಪ್ರಯತ್ನಿಸಿದ ಯುವತಿ ಬಳಿಕ ಅಪಾರ್ಟ್&zwnj;ಮೆಂಟ್ ತೆರಳಿದ್ದಾಳೆ. ಈ ವೇಳೆ ಅಲ್ಲೂ ಯುವಕನ ಪತ್ತೆ ಇಲ್ಲ. ಡೇಟಿಂಗ್&zwnj;ನಿಂದ ಮೋಸ ಹೋದೆ ಎಂದು ಕೊರಗಿದ ಯುವತಿ ನಿಧಾನವಾಗಿ ಕಹಿ ಘಟನೆ ಮರೆಯಲು ಯತ್ನಿಸಿದಳು. ಹೀಗೆ ನಾಲ್ಕು ವರ್ಷಗಳು ಉರುಳಿತ್ತು. ಅಚಾನಕ್ಕಾಗಿ ಕೆಲ ನಿರ್ಬಂಧಿತ ಸೈಟ್&zwnj;ಗಳಲ್ಲಿ ನಾಲ್ಕು ವರ್ಷಗಳ ಹಿಂದಿನ ಡೇಟಿಂಗ್&zwnj;ನಲ್ಲಿ ನಡೆದ ಇಂಟಿಮೇಟ್ ವಿಡಿಯೋಗಳು ಪತ್ತೆಯಾಗಿತ್ತು. ಹಲವು ವಿಡಿಯೋಗಳು ಆನ್&zwnj;ಲೈನ್&zwnj;ನಲ್ಲಿತ್ತು. ಈ ವಿಡಿಯೋ ನೋಡಿ ಸಂಪೂರ್ಣವಾಗಿ ಮರೆತಿದ್ದ ಕಹಿ ಘಟನೆ ಮತ್ತೆ ತಲೆನೋವಿಗೆ ಕಾರಣವಾಗಿದೆ.&lt;/p&gt;&lt;h2&gt;ಪೊಲೀಸರ ಸಂಪರ್ಕಿಸಿದ ಯುವತಿ&lt;/h2&gt;&lt;p&gt;ಯುವತಿಗೆ ದಾರ ತೋಚದಂತಾಗಿದೆ. ಆಕೆಯ ಆಪ್ತರ ಸಲಹೆಯಂತೆ ಯುವತಿ ಕಳೆದ ತಿಂಗಳು ಪೊಲೀಸರ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಬಿಸಿದ್ದಾರೆ. ಸೈಬರ್ ಪೊಲೀಸರ ನೆರವಿನಿಂದ ವಿಡಿಯೋ ಡಿಲೀಟ್ ಮಾಡಲು ಸೂಚಿಸಿದ್ದಾರೆ. ಇತ್ತ ನಾಲ್ಕು ವರ್ಷಗಳ ಹಿಂದಿನ ಡೇಟಿಂಗ್ ಹೋದ ಅಪಾರ್ಟ್&zwnj;ಮೆಂಟ್, ಅಲ್ಲಿ ಉಳಿದುಕೊಂಡಿದ್ದವರ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bengaluru-rural</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/bengaluru-woman-discovers-her-own-video-in-online-without-consent-four-years-after-date/articleshow-lsrxsh4"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್‌ ನಲ್ಲಿ ಟ್ವಿಸ್ಟ್, ಕಟಕಟೆಯಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪ್ರಮುಖ ಸಾಕ್ಷಿ!]]></title>
            <link>https://kannada.asianetnews.com/karnataka-districts/renukaswamy-case-takes-new-turn-as-star-witness-claims-pressure-to-change-statement-in-court-gdp/articleshow-p6qmq8h</link>
            <guid isPermaLink="true">https://kannada.asianetnews.com/karnataka-districts/renukaswamy-case-takes-new-turn-as-star-witness-claims-pressure-to-change-statement-in-court-gdp/articleshow-p6qmq8h</guid>
            <pubDate>Wed, 01 Jul 2026 11:59:49 +0530</pubDate>
            <description><![CDATA[ದರ್ಶನ್ ಪ್ರಮುಖ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಪ್ರಮುಖ ಸಾಕ್ಷಿಯೊಬ್ಬರು ತಮಗೆ ಸಾಕ್ಷ್ಯ ತಿರುಚಲು ಅಪರಿಚಿತರಿಂದ ಒತ್ತಡ ಹೇರಲಾಗುತ್ತಿದೆ ಎಂದು ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಸಾಕ್ಷಿಗೆ ಸೂಕ್ತ ರಕ್ಷಣೆ ಒದಗಿಸಲು ಆದೇಶಿಸಿದ್ದು, ಸಾಕ್ಷ್ಯ ತಿರುಚಲು ಯತ್ನಿಸುವವರಿಗೆ ಕಠಿಣ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j12xsvh7kzq4v45bwszb259f,imgname-runukaswamy23.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸ್ಯಾಂಡಲ್&zwnj;ವುಡ್ ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಆಘಾತಕಾರಿ ತಿರುವುಗಳು ಸಿಗುತ್ತಿವೆ. ಇದೀಗ ಪ್ರಕರಣದ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯೊಬ್ಬರ ಮೇಲೆ ಪ್ರಭಾವ ಬೀರಲು ಮತ್ತು ಕೋರ್ಟ್&zwnj;ಗೆ ನೀಡುವ ಸಾಕ್ಷ್ಯವನ್ನು ತಿರುಚಲು ಅಪರಿಚಿತ ವ್ಯಕ್ತಿಗಳು ಸಂಚು ರೂಪಿಸಿರುವುದು ಸ್ವತಃ ಸಾಕ್ಷಿದಾರರಿಂದಲೇ ನ್ಯಾಯಾಲಯದಲ್ಲಿ ಬಹಿರಂಗವಾಗಿದೆ. ಸಾಕ್ಷಿಯ ಈ ಆತಂಕಕಾರಿ ಹೇಳಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಸೆಷನ್ಸ್ ಕೋರ್ಟ್ ಸಾಕ್ಷ್ಯ ತಿರುಚಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಲ್ಲದೆ, ಸಾಕ್ಷಿದಾರನಿಗೆ ತಕ್ಷಣವೇ ಸೂಕ್ತ ರಕ್ಷಣೆ ಒದಗಿಸುವಂತೆ ತನಿಖಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.&lt;/p&gt;&lt;h2&gt;ಕಟಕಟೆಯಲ್ಲಿ ನಿಂತು ಸತ್ಯ ಒಪ್ಪಿಕೊಂಡ ಪ್ರಮುಖ ಸಾಕ್ಷಿ ಸಂದೀಪ್&lt;/h2&gt;&lt;p&gt;ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಮಂಗಳವಾರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಾಸಿಕ್ಯೂಷನ್ ಸಾಕ್ಷಿಗಳ ವಿಚಾರಣೆ ನಡೆಯುತ್ತಿತ್ತು. ಪ್ರಕರಣದ 49ನೇ ಸಾಕ್ಷಿಯಾಗಿರುವ, ಚಿತ್ರದುರ್ಗದ 'ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್' ಕ್ಯಾಷಿಯರ್ ಹಾಗೂ ತುಮಕೂರಿನ ರಂಗಾಪುರ ನಿವಾಸಿ ಸಂದೀಪ್ ವಿಚಾರಣೆಗೆ ಹಾಜರಾಗಿದ್ದರು. ರೇಣುಕಾಸ್ವಾಮಿ ಹಾಗೂ ಆತನನ್ನು ಅಪಹರಿಸಿದ್ದ ಆರೋಪಿಗಳು ಇದೇ ಬಾರ್&zwnj;ನಲ್ಲಿ ಊಟ ಮಾಡಿದ್ದರಿಂದ, ಸಂದೀಪ್ ಈ ಕೇಸ್&zwnj;ನ ಪ್ರಮುಖ ಕಣ್ಣಾರೆ ಕಂಡ ಸಾಕ್ಷಿಯಾಗಿದ್ದಾರೆ.&lt;/p&gt;&lt;p&gt;ವಿಶೇಷ ಸರ್ಕಾರಿ ಅಭಿಯೋಜಕರಾದ (SPP) ಪಿ.ಪ್ರಸನ್ನ ಕುಮಾರ್ ಅವರು ಸಂದೀಪ್ ಅವರನ್ನು ಮುಖ್ಯ ಪರೀಕ್ಷೆಗೆ ಗುರಿಪಡಿಸಲು ಸಜ್ಜಾದರು. ಕಟಕಟೆಯಲ್ಲಿ ನಿಂತು ನ್ಯಾಯಾಲಯಕ್ಕೆ ಸತ್ಯವನ್ನೇ ನುಡಿಯುವುದಾಗಿ ಪ್ರಮಾಣ ಮಾಡಿದ ತಕ್ಷಣವೇ ಸಂದೀಪ್, &quot;ನಾನು ನ್ಯಾಯಾಲಯಕ್ಕೆ ಒಂದು ಮಹತ್ವದ ವಿಷಯವನ್ನು ತಿಳಿಸಲು ಬಯಸುತ್ತೇನೆ, ಅದಕ್ಕೆ ಅನುಮತಿ ನೀಡಬೇಕು&quot; ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.&lt;/p&gt;&lt;h2&gt;ನಾವು ಹೇಳಿದಂತೆ ಸಾಕ್ಷಿ ನುಡಿ ಎಂದು ಅಪರಿಚಿತರಿಂದ ಒತ್ತಡದ ಕರೆ!&lt;/h2&gt;&lt;p&gt;ನ್ಯಾಯಾಲಯದ ಅನುಮತಿ ಸಿಗುತ್ತಿದ್ದಂತೆ ಸಾಕ್ಷಿ ಸಂದೀಪ್ ತಮಗಿದ್ದ ಆತಂಕ ಮತ್ತು ಎದುರಿಸುತ್ತಿದ್ದ ಒತ್ತಡವನ್ನು ಧೈರ್ಯವಾಗಿ ಬಿಚ್ಚಿಟ್ಟರು. ನಮಗೆ ಪರಿಚಯವಿರುವ ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಕೆಲ ಅಪರಿಚಿತ ವ್ಯಕ್ತಿಗಳು ನನ್ನನ್ನು ದೂರವಾಣಿ ಕರೆಯಲ್ಲಿ ಸಂಪರ್ಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ನ್ಯಾಯಾಲಯಕ್ಕೆ ನೀಡಲಿರುವ ಸಾಕ್ಷ್ಯದ ಹೇಳಿಕೆಯ ಮಾಹಿತಿಯನ್ನು ಅವರು ಕೇಳಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ಸತ್ಯವನ್ನು ಮರೆಮಾಚಿ, ತಮಗೆ ಅನುಕೂಲವಾಗುವಂತೆ ತಾವು ಹೇಳಿಕೊಟ್ಟಂತೆಯೇ ಸಾಕ್ಷಿ ನುಡಿಯಬೇಕು ಎಂದು ನನಗೆ ತೀವ್ರ ಒತ್ತಡ ಹೇರಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.&lt;/p&gt;&lt;h2&gt;ಸಾಕ್ಷ್ಯ ತಿರುಚುವ ಯತ್ನಕ್ಕೆ ನ್ಯಾಯಾಧೀಶೆ ಸುಜಾತಾ ಸಾಂಬ್ರಾಣಿ ಗರಂ&lt;/h2&gt;&lt;p&gt;ಸಾಕ್ಷಿದಾರನ ಈ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಕೆಲಕಾಲ ಸನ್ನಿವೇಶ ಗಂಭೀರವಾಯಿತು. ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರಾದ ಸುಜಾತಾ ಎಂ. ಸಾಂಬ್ರಾಣಿ ಅವರು ತಕ್ಷಣವೇ ಆದೇಶವೊಂದನ್ನು ಬರೆಸಿದರು. ಆಕರ್ಷ್ ಎಂಬಾತನ ಮೂಲಕ ಕೆಲವು ವ್ಯಕ್ತಿಗಳು ಸಾಕ್ಷಿ ಸಂದೀಪ್ ಅವರ ಹೇಳಿಕೆಯನ್ನು ತಿರುಚಲು ಪ್ರಯತ್ನಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಅಥವಾ ಸಂಬಂಧಪಡದ ಯಾವುದೇ ವ್ಯಕ್ತಿಯಾಗಲಿ ಸಾಕ್ಷ್ಯವನ್ನು ನಾಶಪಡಿಸಲು ಅಥವಾ ತಿರುಚಲು ಯತ್ನಿಸಿದರೆ ಅದನ್ನು ನ್ಯಾಯಾಲಯವು ಕ್ಷಮಿಸುವುದಿಲ್ಲ. ಅಂತಹವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.&lt;/p&gt;&lt;h2&gt;ನ್ಯಾಯಾಲಯದ ಪ್ರಮುಖ ಆದೇಶಗಳು&lt;/h2&gt;&lt;p&gt;ತನಗೆ ಕರೆ ಮಾಡಿ ಒತ್ತಡ ಹೇರಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ, ತಾನು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತ್ಯೇಕ ಅಫಿಡವಿಟ್ (ಪ್ರಮಾಣ ಪತ್ರ) ಸಲ್ಲಿಸುವಂತೆ ಸಾಕ್ಷಿ ಸಂದೀಪ್&zwnj;ಗೆ ಕೋರ್ಟ್ ನಿರ್ದೇಶಿಸಿದೆ.&lt;/p&gt;&lt;p&gt;ಸಾಕ್ಷಿ ಸಂದೀಪ್&zwnj;ಗೆ ಯಾವುದೇ ಪ್ರಾಣಭಯ ಅಥವಾ ಬೆದರಿಕೆ ಬರದಂತೆ ವಿಚಾರಣೆ ಮುಗಿಯುವವರೆಗೂ ಅಗತ್ಯ ಪೊಲೀಸ್ ರಕ್ಷಣೆ ಒದಗಿಸುವಂತೆ ಪ್ರಕರಣದ ತನಿಖಾಧಿಕಾರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.&lt;/p&gt;&lt;h2&gt;ಭಯಪಡುವ ಅಗತ್ಯವಿಲ್ಲ, ಸತ್ಯವನ್ನೇ ಹೇಳು ಎಂದು ಧೈರ್ಯ ತುಂಬಿದ ಕೋರ್ಟ್&lt;/h2&gt;&lt;p&gt;ಒತ್ತಡದಲ್ಲಿದ್ದ ಸಾಕ್ಷಿಗೆ ನ್ಯಾಯಾಧೀಶರು ಮೌಖಿಕವಾಗಿ ಧೈರ್ಯ ತುಂಬಿದರು. &quot;ನೀನು ಯಾರಿಗೂ ಹೆದರಬೇಕಾದ ಅಥವಾ ಭಯಪಡುವ ಅವಶ್ಯಕತೆ ಇಲ್ಲ. ನ್ಯಾಯಾಲಯ ನಿನಗೆ ಸಂಪೂರ್ಣ ರಕ್ಷಣೆ ಕೊಡಲಿದ್ದು, ನಿನಗೆ ಗೊತ್ತಿರುವ ನಿಜ ಸಂಗತಿ ಏನೇ ಇದ್ದರೂ ಅದನ್ನು ಮುಕ್ತವಾಗಿ ಕೋರ್ಟ್&zwnj;ಗೆ ತಿಳಿಸು ಎಂದು ನ್ಯಾಯಾಧೀಶರು ಸೂಚಿಸಿದರು.&lt;/p&gt;&lt;p&gt;ಬುಧವಾರಕ್ಕೆ ಮುಂದೂಡಲ್ಪಟ್ಟ ವಿಚಾರಣೆಯಲ್ಲಿ ಸಂದೀಪ್ ನೀಡಲಿರುವ ಲಿಖಿತ ಪ್ರಮಾಣಪತ್ರದ ಆಧಾರದ ಮೇಲೆ, ಸಾಕ್ಷ್ಯ ತಿರುಚಲು ಯತ್ನಿಸಿದ ಆಕರ್ಷ್ ಹಾಗೂ ಆತನ ಹಿನ್ನೆಲೆಯಲ್ಲಿರುವ ಸೂತ್ರಧಾರಿಗಳ ವಿರುದ್ಧ ಪೊಲೀಸರು ಕಾನೂನು ರೀತಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ. ಈ ಬೆಳವಣಿಗೆಯು ಪ್ರಕರಣದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-takes-new-turn-as-star-witness-claims-pressure-to-change-statement-in-court-gdp/articleshow-p6qmq8h"/>
        </item>
        <item>
            <title><![CDATA[ರಸ್ತೆ ಅಪಘಾತ ಅತೀ ಹೆಚ್ಚು ಸಂಭವಿಸುತ್ತಿರುವುದರಲ್ಲಿ ಬೆಂಗಳೂರಿಗೆ ದೇಶದಲ್ಲೇ 2ನೇ ಸ್ಥಾನ!]]></title>
            <link>https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze</link>
            <guid isPermaLink="true">https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze</guid>
            <pubDate>Mon, 29 Jun 2026 21:41:33 +0530</pubDate>
            <description><![CDATA[ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 'ಭಾರತದಲ್ಲಿ ರಸ್ತೆ ಅಪಘಾತಗಳು 2024' ವರದಿಯ ಪ್ರಕಾರ, ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಅತಿ ವೇಗದ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣವಾಗಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khamczgq1phgwa0g6jhpng8s,imgname-hoskote-accident-car-and-canter-photos--2--1770957209111.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜಧಾನಿ ಬೆಂಗಳೂರು ರಸ್ತೆ ಸುರಕ್ಷತೆಯ ವಿಷಯದಲ್ಲಿ ದೇಶದಲ್ಲೇ ಅತ್ಯಂತ ಕಳವಳಕಾರಿ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ &lsquo;ಭಾರತದಲ್ಲಿ ರಸ್ತೆ ಅಪಘಾತಗಳು 2024&rsquo; ವರದಿಯ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು &amp;nbsp;ಎರಡನೇ ಸ್ಥಾನದಲ್ಲಿದೆ. ಈ ಕಪ್ಪು ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿಯು 5,657 ಅಪಘಾತಗಳು ಮತ್ತು 1,551 ಸಾವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶದ ಜಬಲ್&zwnj;ಪುರವು 3,928 ಅಪಘಾತಗಳು ಹಾಗೂ 589 ಸಾವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 2023ರ ಅಂಕಿ-ಅಂಶಗಳಿಗೆ ಹೋಲಿಸಿದರೆ 2024ರಲ್ಲಿ ಒಟ್ಟಾರೆ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದ್ದರೂ, ದೀರ್ಘಾವಧಿಯ ಅಂಕಿ-ಅಂಶಗಳು ಮಾತ್ರ ತೀವ್ರ ಆತಂಕವನ್ನು ಮೂಡಿಸುತ್ತಿವೆ.&lt;/p&gt;&lt;h2&gt;ಬೆಂಗಳೂರಿನ ಸ್ಥಿತಿಗತಿ ಮತ್ತು ದೀರ್ಘಾವಧಿಯ ಕಳವಳಕಾರಿ ಪ್ರವೃತ್ತಿ&lt;/h2&gt;&lt;p&gt;ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಅಪಘಾತಗಳು ಹಾಗೂ ಸಾವುಗಳ ಸಂಖ್ಯೆಯಲ್ಲಿ ಶೇಕಡಾ 4.1 ರಷ್ಟು ಪ್ರಗತಿ ಕಂಡುಬಂದಿದೆ. ಅಂದರೆ 2023 ರಲ್ಲಿ ಬೆಂಗಳೂರಿನಲ್ಲಿ 4,974 ಅಪಘಾತಗಳು ಮತ್ತು 915 ಸಾವುಗಳು ದಾಖಲಾಗಿದ್ದರೆ, 2024 ರಲ್ಲಿ ಒಟ್ಟು 4,769 ರಸ್ತೆ ಅಪಘಾತಗಳು ಸಂಭವಿಸಿದ್ದು, 894 ಸಾವುಗಳು ಮತ್ತು 4,022 ಗಾಯಗಳಾಗಿವೆ. ಇದು 205 ಅಪಘಾತಗಳ ಇಳಿಕೆಯನ್ನು ತೋರಿಸುತ್ತದೆ. ಪ್ರಸ್ತುತ ವರ್ಷದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ, ಕಳೆದ ನಾಲ್ಕು ವರ್ಷಗಳ ಒಟ್ಟಾರೆ ಪ್ರವೃತ್ತಿಯನ್ನು ಗಮನಿಸಿದರೆ ಅಪಘಾತಗಳ ಪ್ರಮಾಣ ತೀವ್ರವಾಗಿ ಏರಿದೆ. 2020 ರ ಸಾಲಿನಲ್ಲಿ ಕೇವಲ 3,233 ರಷ್ಟಿದ್ದ ರಸ್ತೆ ಅಪಘಾತಗಳ ಸಂಖ್ಯೆ, ಪ್ರಸ್ತುತ ವರ್ಷದ ವೇಳೆಗೆ ಬರೊಬ್ಬರಿ 4,769 ಕ್ಕೆ ತಲುಪಿರುವುದು ನಗರದ ಸಂಚಾರ ಸುರಕ್ಷತೆಯನ್ನು ಗಂಭೀರ ಪ್ರಶ್ನೆಯಾಗಿಸಿದೆ.&lt;/p&gt;&lt;h2&gt;ಅತಿ ವೇಗದ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ&lt;/h2&gt;&lt;p&gt;ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಸವಾರರ ಅತಿ ವೇಗದ ಚಾಲನೆಯೇ ಅತಿ ದೊಡ್ಡ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಅತಿ ವೇಗದ ಚಾಲನೆಗೆ ಸಂಬಂಧಿಸಿದ ಅಪಘಾತಗಳ ವಿಭಾಗದಲ್ಲಿ ಬೆಂಗಳೂರು ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಗರದಲ್ಲಿ ಕೇವಲ ಅತಿ ವೇಗದಿಂದಾಗಿ 4,290 ಅಪಘಾತಗಳು ಸಂಭವಿಸಿದ್ದು, ಇವುಗಳಲ್ಲಿ 776 ಜನರು ಜೀವ ಕಳೆದುಕೊಂಡಿದ್ದಾರೆ ಮತ್ತು 3,609 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವಿಭಾಗದಲ್ಲಿ ಜಬಲ್&zwnj;ಪುರ ನಗರವು 3,878 ಅಪಘಾತಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.&lt;/p&gt;&lt;h2&gt;ರಸ್ತೆಯ ವಿನ್ಯಾಸ ಮತ್ತು ಅಪಘಾತಗಳ ವರ್ಗೀಕರಣ&lt;/h2&gt;&lt;p&gt;ನಗರದ ರಸ್ತೆಗಳ ಸ್ಥಿತಿಗತಿ ಹಾಗೂ ವಿನ್ಯಾಸಕ್ಕೆ ಅನುಗುಣವಾಗಿ ಅಪಘಾತಗಳು ಸಂಭವಿಸುತ್ತಿರುವ ರೀತಿ ವಿಭಿನ್ನವಾಗಿದೆ. ಅಚ್ಚರಿಯೆಂದರೆ, ತಿರುವುಗಳಿಗಿಂತ ನೇರ ಮತ್ತು ಉತ್ತಮವಾಗಿರುವ ರಸ್ತೆಗಳಲ್ಲೇ ಅತಿ ಹೆಚ್ಚು ಅಪಘಾತಗಳು ಜರುಗಿವೆ. ನಗರದ ನೇರ ರಸ್ತೆಗಳಲ್ಲಿ ಒಟ್ಟು 4,161 ಅಪಘಾತಗಳು ಸಂಭವಿಸಿದ್ದು, 766 ಸಾವುಗಳು ಹಾಗೂ 3,463 ಗಾಯಗಳು ದಾಖಲಾಗಿವೆ. ಅದೇ ರೀತಿ ವಕ್ರ ಅಥವಾ ಕಡಿದಾದ ತಿರುವುಗಳಿರುವ ರಸ್ತೆಗಳಲ್ಲಿ 415 ಅಪಘಾತಗಳು ಸಂಭವಿಸಿದ್ದು, 87 ಜನರು ಮೃತಪಟ್ಟಿದ್ದಾರೆ. ಇನ್ನು ರಸ್ತೆ ಗುಂಡಿಗಳಿಂದ ಅಧಿಕೃತ ವರದಿಯ ಪ್ರಕಾರ ಕೇವಲ 2 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿ ಅಥವಾ ಹೊಸದಾಗಿ ನಿರ್ಮಾಣ ಹಂತದಲ್ಲಿರುವ ರಸ್ತೆಗಳ ಬಳಿ 21 ಅಪಘಾತಗಳು ಸಂಭವಿಸಿದ್ದು, 6 ಸಾವುಗಳು ಹಾಗೂ 30 ಗಾಯಗಳಾಗಿವೆ.&lt;/p&gt;&lt;h2&gt;ಹವಾಮಾನದ ಪ್ರಭಾವ ಮತ್ತು ಶುಭ್ರ ಆಕಾಶವಿದ್ದಾಗ ಸಂಭವಿಸುವ ದುರಂತಗಳು&lt;/h2&gt;&lt;p&gt;ಸಾಮಾನ್ಯವಾಗಿ ಮಳೆ ಅಥವಾ ಮಂಜು ಮುಸುಕಿದ ವಾತಾವರಣದಲ್ಲಿ ಅಪಘಾತಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ ಇದೆ. ಆದರೆ ಬೆಂಗಳೂರಿನಲ್ಲಿ ಇದರ ಉಲ್ಟಾ ವಾಸ್ತವ ಬಯಲಾಗಿದೆ. ಹಗಲು ಮತ್ತು ಬಿಸಿಲಿರುವ ಶುಭ್ರ ವಾತಾವರಣದಲ್ಲೇ ಅತಿ ಹೆಚ್ಚು ಅಂದರೆ 4,213 ಅಪಘಾತಗಳು ಸಂಭವಿಸಿದ್ದು, 755 ಸಾವುಗಳು ಸಂಭವಿಸಿವೆ. ರಸ್ತೆಗಳು ಖಾಲಿ ಇರುವುದು ಮತ್ತು ಚಾಲನೆಗೆ ಸೂಕ್ತ ವಾತಾವರಣ ಇರುವುದೇ ಸವಾರರ ಅತಿ ವೇಗಕ್ಕೆ ಪ್ರೇರಣೆಯಾಗುತ್ತಿದೆ ಎಂಬುದನ್ನು ಇದು ಸಾಬೀತುಪಡಿಸಿದೆ. ಇನ್ನುಳಿದಂತೆ ಮಂಜು ಮತ್ತು ಮಂಜಿನ ಪರಿಸ್ಥಿತಿಗಳು 375 ಅಪಘಾತಗಳಿಗೆ ಕಾರಣವಾಗಿದ್ದು, 97 ಸಾವುಗಳು ಮತ್ತು 355 ಗಾಯಗಳಾಗಿವೆ. ಮಳೆಯ ವಾತಾವರಣದಲ್ಲಿ 144 ಅಪಘಾತಗಳು ಸಂಭವಿಸಿದ್ದು, 32 ಸಾವುಗಳು ವರದಿಯಾಗಿವೆ.&lt;/p&gt;&lt;h2&gt;ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳೇ ಪ್ರಮುಖ ಬಲಿಪಶುಗಳು&lt;/h2&gt;&lt;p&gt;ನಗರದ ಒಟ್ಟು ಅಪಘಾತಗಳಲ್ಲಿ ಬೈಕ್ ಸವಾರರು ಮತ್ತು ಪಾದಚಾರಿಗಳದ್ದೇ ಸಿಂಹಪಾಲಾಗಿದೆ. ಅತಿ ಹೆಚ್ಚು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳು ಭಾಗಿಯಾಗಿದ್ದು, 2,175 ಅಪಘಾತಗಳಲ್ಲಿ 467 ಸಾವುಗಳು ಮತ್ತು 2,091 ಗಾಯಗಳು ಸಂಭವಿಸಿವೆ. ಪಾದಚಾರಿ ಅಪಘಾತಗಳ ಸಂಖ್ಯೆ 216 ಆಗಿದ್ದರೂ, ಸಾವಿನ ಸಂಖ್ಯೆ ಮಾತ್ರ ಅಸಮಾನವಾಗಿ ಅತಿ ಹೆಚ್ಚಿದೆ. ವಾಹನಗಳ ಡಿಕ್ಕಿಯಿಂದಾಗಿ ಬರೊಬ್ಬರಿ 241 ಪಾದಚಾರಿಗಳು ಸಾವನ್ನಪ್ಪಿದ್ದಾರೆ ಮತ್ತು 1,039 ಜನರು ಗಾಯಗೊಂಡಿದ್ದಾರೆ. ಬೈಸಿಕಲ್ ಸಂಬಂಧಿತ ಅಪಘಾತಗಳು 47 ಆಗಿದ್ದು, 13 ಸಾವುಗಳು ಮತ್ತು 36 ಗಾಯಗಳಾಗಿವೆ. ಇದರೊಂದಿಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ನಗರದಲ್ಲಿ ಒಟ್ಟು 129 ಅಪಘಾತಗಳು ಸಂಭವಿಸಿದ್ದು, 45 ಮಂದಿ ಮೃತಪಟ್ಟು, 83 ಜನರು ಗಾಯಗೊಂಡಿದ್ದಾರೆ.&lt;/p&gt;&lt;h2&gt;ಒಟ್ಟಾರೆ ಭಾರತದ ಚಿತ್ರಣ ಮತ್ತು ಮಹಾನಗರಗಳ ಪಾಲು&lt;/h2&gt;&lt;p&gt;ಭಾರತದಾದ್ಯಂತ ಪೊಲೀಸ್ ಇಲಾಖೆಗಳು ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 4,87,707 ರಸ್ತೆ ಅಪಘಾತಗಳು ವರದಿಯಾಗಿದ್ದು, 1,77,175 ಜನರು ಸಾವನ್ನಪ್ಪಿದ್ದಾರೆ ಮತ್ತು 4,71,441 ಜನರು ಗಾಯಗೊಂಡಿದ್ದಾರೆ. ವಿಶೇಷವೆಂದರೆ, ದೇಶದ ಒಟ್ಟು ಅಪಘಾತಗಳ ಪೈಕಿ ಶೇಕಡಾ 46.34 ರಷ್ಟು ಬೃಹತ್ ಪ್ರಮಾಣದ ಅಪಘಾತಗಳು ಕೇವಲ 10 ಪ್ರಮುಖ ಮಿಲಿಯನ್ ಪ್ಲಸ್ ಅಥವಾ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲೇ ಸಂಭವಿಸುತ್ತಿವೆ. ಈ ಪಟ್ಟಿಯಲ್ಲಿ ದೆಹಲಿ, ಬೆಂಗಳೂರು, ಜಬಲ್ಪುರ, ಹೈದರಾಬಾದ್, ಚೆನ್ನೈ, ಇಂದೋರ್, ಮಲಪ್ಪುರಂ, ಕೊಚ್ಚಿ, ಜೈಪುರ ಮತ್ತು ಭೋಪಾಲ್ ನಗರಗಳು ಸೇರಿವೆ. ಈ ಅಂಕಿ-ಅಂಶಗಳು ಬೆಂಗಳೂರಿನಲ್ಲಿ ತುರ್ತಾಗಿ ಕಟ್ಟುನಿಟ್ಟಿನ ಟ್ರಾಫಿಕ್ ನಿಯಮಗಳು ಹಾಗೂ ರಸ್ತೆ ಸುರಕ್ಷತಾ ಜಾಗೃತಿಯ ಅಗತ್ಯತೆಯನ್ನು ಎತ್ತಿ ತೋರಿಸುತ್ತವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-ranks-2nd-nationally-in-road-accidents-check-the-latest-morth-statistics-gdp/articleshow-q7wf2ze"/>
        </item>
        <item>
            <title><![CDATA[ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ  ಸಂಚಾರ ಮುಕ್ತ, ಆಂಧ್ರದವರೆಗೆ 100 ಕಿ.ಮೀ  ತಡೆರಹಿತ ಸಂಚಾರ!]]></title>
            <link>https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr</link>
            <guid isPermaLink="true">https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr</guid>
            <pubDate>Mon, 29 Jun 2026 15:49:52 +0530</pubDate>
            <description><![CDATA[ಬೆಂಗಳೂರು-ಚೆನ್ನೈ ಎಕ್ಸ್&zwnj;ಪ್ರೆಸ್&zwnj;ವೇಯ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಒಟ್ಟು 100 ಕಿ.ಮೀ ನಿರಂತರ ಸಂಚಾರ ಸಾಧ್ಯವಾಗಿದ್ದು, ಚೆನ್ನೈ, ತಿರುಪತಿ ಕಡೆಗಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw9e4knh3t11k7j385jw0kdh,imgname-bengaluru-chennai-expressway-1782728249009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ &lsquo;ಬೆಂಗಳೂರು-ಚೆನ್ನೈ ಎಕ್ಸ್&zwnj;ಪ್ರೆಸ್&zwnj;ವೇ&rsquo; (Bengaluru-Chennai Expressway) ಕಾಮಗಾರಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಆಂಧ್ರಪ್ರದೇಶದ ವ್ಯಾಪ್ತಿಗೆ ಒಳಪಡುವ ಬೇತಮಂಗಲದಿಂದ ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಉದ್ದದ ಹೊಸ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ.&lt;/p&gt;&lt;p&gt;ಇದರೊಂದಿಗೆ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ (ಹೊಸಕೋಟೆ) ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿಯವರೆಗೆ ಸುಮಾರು 100 ಕಿ.ಮೀ ವರೆಗೆ ಯಾವುದೇ ತಡೆಯಿಲ್ಲದೆ ನಿರಂತರವಾಗಿ ಎಕ್ಸ್&zwnj;ಪ್ರೆಸ್&zwnj;ವೇನಲ್ಲಿ ಸಂಚರಿಸಲು ವಾಹನ ಸವಾರರಿಗೆ ಅವಕಾಶ ಸಿಕ್ಕಂತಾಗಿದೆ.&lt;/p&gt;&lt;h2&gt;ಚೆನ್ನೈ, ತಿರುಪತಿ, ಚಿತ್ತೂರಿಗೆ ತೆರಳುವವರಿಗೆ ಸಮಯ ಉಳಿತಾಯ&lt;/h2&gt;&lt;p&gt;ಈ ಹಿಂದೆ 2025ರ ಆರಂಭದಲ್ಲಿ ಕರ್ನಾಟಕ ವ್ಯಾಪ್ತಿಯ ಹೊಸಕೋಟೆಯಿಂದ ಬೇತಮಂಗಲದವರೆಗಿನ 71 ಕಿ.ಮೀ ಮಾರ್ಗವನ್ನು ಮುಕ್ತಗೊಳಿಸಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬೇತಮಂಗಲ-ಬೈರೆಡ್ಡಿಪಲ್ಲಿ (25 ಕಿ.ಮೀ) ರಸ್ತೆಯೂ ಸಿದ್ಧವಾಗಿದೆ.&lt;/p&gt;&lt;p&gt;ಬೆಂಗಳೂರಿನಿಂದ ಚಿತ್ತೂರು, ತಿರುಪತಿ ಹಾಗೂ ಚೆನ್ನೈ ಕಡೆಗೆ ತೆರಳುವ ವಾಹನ ಸವಾರರು ಬೈರೆಡ್ಡಿಪಲ್ಲಿಯವರೆಗೆ ಈ ಎಕ್ಸ್&zwnj;ಪ್ರೆಸ್&zwnj;ವೇ ಬಳಸಿ, ನಂತರ ಅಲ್ಲಿಂದ ಜಿಲ್ಲಾ ರಸ್ತೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ಪ್ರಯಾಣದ ಸಮಯ ಮತ್ತು ಇಂಧನ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸದ್ಯ ಬೈರೆಡ್ಡಿಪಲ್ಲಿ ಟೋಲ್ ಪ್ಲಾಜಾದಲ್ಲಿ ಪ್ರತಿದಿನ ಸರಾಸರಿ ₹2.2 ಲಕ್ಷ ಟೋಲ್ ಸಂಗ್ರಹವಾಗುತ್ತಿದೆ.&lt;/p&gt;&lt;h2&gt;ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ: ಡಿಸೆಂಬರ್ 2026ಕ್ಕೆ ಇಡೀ ರಸ್ತೆ ಮುಕ್ತ!&lt;/h2&gt;&lt;p&gt;ಒಟ್ಟು 262 ಕಿ.ಮೀ ಉದ್ದದ ಈ ಇಡೀ ಎಕ್ಸ್&zwnj;ಪ್ರೆಸ್&zwnj;ವೇ 2026ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;ul&gt; &lt;li&gt;ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಬರುವ 85 ಕಿ.ಮೀ ಎಕ್ಸ್&zwnj;ಪ್ರೆಸ್&zwnj;ವೇ ರಸ್ತೆಯನ್ನು ಮೂರು ಪ್ಯಾಕೇಜ್&zwnj;ಗಳಾಗಿ ನಿರ್ಮಿಸಲಾಗುತ್ತಿದೆ:&lt;/li&gt; &lt;li&gt;ಬೇತಮಂಗಲದಿಂದ ಬೈರೆಡ್ಡಿಪಲ್ಲಿ (25 ಕಿ.ಮೀ): ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.&lt;/li&gt; &lt;li&gt;ಬಂಗಾರಪಾಳೆಂನಿಂದ ಗುಡಿಪಾಲ (29 ಕಿ.ಮೀ): ಈ ಕಾಮಗಾರಿಯೂ ಪೂರ್ಣಗೊಂಡಿದೆ.&lt;/li&gt;&lt;/ul&gt;&lt;p&gt;ಬೈರೆಡ್ಡಿಪಲ್ಲಿಯಿಂದ ಬಂಗಾರಪಾಳೆಂ (31 ಕಿ.ಮೀ): ಈ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅನುಮತಿ ವಿಳಂಬವಾಗಿದ್ದರಿಂದ 11 ಕಿ.ಮೀ ಕಾಮಗಾರಿ ಬಾಕಿ ಉಳಿದಿದೆ. ಇಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕಾಗಿ ಅತ್ಯಾಧುನಿಕ ಅಂಡರ್&zwnj;ಪಾಸ್ (Eco-ducts/Underpass) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.&lt;/p&gt;&lt;p&gt;ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಟೋಲ್ ದರ ಪಟ್ಟಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಅಧಿಕೃತ ಟೋಲ್ ದರಗಳನ್ನು ಪ್ರಕಟಿಸಿದೆ. ಮುಖ್ಯ ಎಕ್ಸ್&zwnj;ಪ್ರೆಸ್&zwnj;ವೇ ಮಾರ್ಗವನ್ನು ಬಳಸುವ ವಾಹನಗಳಿಗೆ ಮಾತ್ರ ಟೋಲ್ ಅನ್ವಯವಾಗಲಿದ್ದು, ಪ್ರವೇಶ (Entry) ಮತ್ತು ನಿರ್ಗಮನ (Exit) ರ್ಯಾಂಪ್&zwnj;ಗಳನ್ನು ಬಳಸುವ ವಾಹನಗಳಿಗೆ ಯಾವುದೇ ಟೋಲ್ ಇರುವುದಿಲ್ಲ ಎಂದು NHAI ಸ್ಪಷ್ಟಪಡಿಸಿದೆ.&lt;/p&gt;&lt;h3&gt;ಏಕಮುಖ ಪ್ರಯಾಣ ದರ&lt;/h3&gt;&lt;ul&gt; &lt;li&gt;ಕಾರು, ಜೀಪ್, ವ್ಯಾನ್ : 195 ರೂ&lt;/li&gt; &lt;li&gt;ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 315 ರೂ&lt;/li&gt; &lt;li&gt;ಟ್ರಕ್ ಮತ್ತು ಬಸ್ : 655 ರೂ&lt;/li&gt;&lt;/ul&gt;&lt;h3&gt;ದ್ವಿಮುಖ ಪ್ರಯಾಣ ದರ&lt;/h3&gt;&lt;ul&gt; &lt;li&gt;ಕಾರು, ಜೀಪ್, ವ್ಯಾನ್ : 290 ರೂ&lt;/li&gt; &lt;li&gt;ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 470 ರೂ&lt;/li&gt; &lt;li&gt;ಟ್ರಕ್ ಮತ್ತು ಬಸ್ : 985 ರೂ&lt;/li&gt;&lt;/ul&gt;&lt;p&gt;ನಿಯಮಿತವಾಗಿ ಸಂಚರಿಸುವವರಿಗಾಗಿ ತಿಂಗಳಿಗೆ 50 ಏಕಮುಖ ಸಂಚಾರಕ್ಕೆ ಅನ್ವಯವಾಗುವಂತೆ ₹6,465 ದರದ ವಿಶೇಷ ಪಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.&lt;/p&gt;&lt;h2&gt;ಬೆಂಗಳೂರು ಮತ್ತು ಕರ್ನಾಟಕಕ್ಕೆ ಆಗುವ ಲಾಭಗಳೇನು?&lt;/h2&gt;&lt;ul&gt; &lt;li&gt;ಈ ಎಕ್ಸ್&zwnj;ಪ್ರೆಸ್&zwnj;ವೇ ಪೂರ್ಣಗೊಳ್ಳುವುದರಿಂದ ಕರ್ನಾಟಕದ ಕೈಗಾರಿಕಾ ಮತ್ತು ಆರ್ಥಿಕ ವಲಯಕ್ಕೆ ಭಾರಿ ಉತ್ತೇಜನ ಸಿಗಲಿದೆ:&lt;/li&gt; &lt;li&gt;ಪ್ರಬೆಂಗಳೂರು ಮತ್ತು ಚೆನ್ನೈ ನಡುವಿನ ಒಟ್ಟು ಪ್ರಯಾಣದ ಅವಧಿ ಬರೋಬ್ಬರಿ 2 ರಿಂದ 3 ಗಂಟೆಗಳಷ್ಟು ತಗ್ಗಲಿದೆ.&lt;/li&gt; &lt;li&gt;ಚೆನ್ನೈ ಬಂದರಿಗೆ (Port) ಸಂಪರ್ಕ ಸುಲಭ ಮತ್ತು ವೇಗವಾಗುವುದರಿಂದ ಬೆಂಗಳೂರಿನ ಕೈಗಾರಿಕೆಗಳ ರಫ್ತು ಮತ್ತು ಆಮದು ಚಟುವಟಿಕೆಗಳು ಚುರುಕುಗೊಳ್ಳಲಿವೆ.&lt;/li&gt; &lt;li&gt;ಸರಕು ಸಾಗಣೆ ಸಮಯ ಮತ್ತು ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ.&lt;/li&gt;&lt;/ul&gt;&lt;p&gt;ಹೂಡಿಕೆಗೆ ಆಕರ್ಷಕ ಕಾರಿಡಾರ್: ಹೊಸಕೋಟೆ-ಬೆಂಗಳೂರು ಕಾರಿಡಾರ್&zwnj;ನಲ್ಲಿ ಹೊಸ ಕೈಗಾರಿಕೆಗಳು, ಬೃಹತ್ ಗೋದಾಮುಗಳು (Warehouses) ಮತ್ತು ಲಾಜಿಸ್ಟಿಕ್ಸ್ ಪಾರ್ಕ್&zwnj;ಗಳ ಸ್ಥಾಪನೆಗೆ ಹೂಡಿಕೆದಾರರು ಮುಗಿಬೀಳುತ್ತಿದ್ದಾರೆ. ಇದು ಐಟಿ, ಉತ್ಪಾದನಾ (Manufacturing) ಹಾಗೂ ಇ-ಕಾಮರ್ಸ್ ವಲಯಗಳ ವಿಸ್ತರಣೆಗೆ ಹೊಸ ದಾರಿ ತೆರೆದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-chennai-expressway-reaches-new-milestone-hoskote-to-bairedpalli-route-open-for-public-gdp/articleshow-v2swpmr"/>
        </item>
        <item>
            <title><![CDATA[ಬೆಂಗಳೂರು: ಫುಟ್ ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರ ಆಕ್ರೋಶ, ಪಾದಚಾರಿಗಳು vs ವ್ಯಾಪಾರಿಗಳ ನಡುವೆ ಜಟಾಪಟಿ!]]></title>
            <link>https://kannada.asianetnews.com/karnataka-districts/bengaluru-gba-safe-footpath-drive-sparks-heated-face-off-at-gandhi-bazaar-gdp/articleshow-v5c3kld</link>
            <guid isPermaLink="true">https://kannada.asianetnews.com/karnataka-districts/bengaluru-gba-safe-footpath-drive-sparks-heated-face-off-at-gandhi-bazaar-gdp/articleshow-v5c3kld</guid>
            <pubDate>Fri, 03 Jul 2026 10:28:27 +0530</pubDate>
            <description><![CDATA[ಬೆಂಗಳೂರಿನಲ್ಲಿ 'ಸೇಫ್ ಫುಟ್&zwnj;ಪಾತ್' ಕಾರ್ಯಾಚರಣೆ ಆರಂಭವಾಗಿದ್ದು, ಗಾಂಧಿ ಬಜಾರ್&zwnj;ನಲ್ಲಿ ಫುಟ್&zwnj;ಪಾತ್ ಒತ್ತುವರಿ ವಿಚಾರವಾಗಿ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಿಗಳ ನಡುವೆ ತೀವ್ರ ಜಟಾಪಟಿ ನಡೆದಿದೆ. ಓಡಾಡಲು ದಾರಿ ಬಿಡುವಂತೆ ಸಾರ್ವಜನಿಕರು ಪಟ್ಟು ಹಿಡಿದರೆ, ವ್ಯಾಪಾರಿಗಳು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ, ಜಿಬಿಎ ಅಧಿಕಾರಿಗಳು ಹೋಟೆಲ್ ಮುಂದಿದ್ದ ಅಕ್ರಮ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwk5ex2q6td2mex0m3ev5tkc,imgname-gba-safe-footpath-1783054693463.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಪಾದಚಾರಿಗಳಿಗೆ ಓಡಾಡಲು ಅನುವಾಗುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜುಲೈ 1 ರಿಂದ 'ಸೇಫ್ ಫುಟ್&zwnj;ಪಾತ್' (Safe Footpath) ಕಾರ್ಯಾಚರಣೆ ಆರಂಭ ಮಾಡಿದೆ. ಇದೀಗ ನಗರದಲ್ಲಿ ಫುಟ್&zwnj;ಪಾತ್ ಒತ್ತುವರಿ ವಿರುದ್ಧ ಸಾರ್ವಜನಿಕರು ಹಾಗೂ ಪಾದಚಾರಿಗಳು ಫುಟ್&zwnj;ಪಾತ್ ಮೇಲೆ ಅಂಗಡಿ ಇಟ್ಟವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಧ್ವನಿ ಎತ್ತಿದ್ದಾರೆ. &quot;ನಮಗೆ ಓಡಾಡಲು ಫುಟ್&zwnj;ಪಾತ್ ಬೇಕು. ಮೊದಲು ಪಾದಚಾರಿಗಳಿಗೆ ಜಾಗ ಬಿಟ್ಟು, ಆಮೇಲೆ ನಿಮ್ಮ ವ್ಯಾಪಾರ ಮಾಡಿಕೊಳ್ಳಿ&quot; ಎಂದು ಸಾರ್ವಜನಿಕರು ಒತ್ತುವರಿದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಸದ್ಯ ಸಾರ್ವಜನಿಕರು ಮತ್ತು ಫುಟ್&zwnj;ಪಾತ್ ವ್ಯಾಪಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ಹಾಗೂ ಜಟಾಪಟಿ ನಡೆದಿದೆ. ಈ ಘಟನೆ ನಡೆದಿರುವುದು ಬೆಂಗಳೂರಿನ ಗಾಂಧಿ ಬಜಾರ್ &zwnj;ನಲ್ಲಿ. ಇಲ್ಲಿ ಅಕ್ರಮವಾಗಿ ಸಾವಿರಾರು ಜನ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಾರೆ&lt;/p&gt;&lt;h2&gt;ನಾವು ರಸ್ತೆಯಲ್ಲಿ ನಡೆದರೆ ಬೈಯುತ್ತಾರೆ, ಫುಟ್&zwnj;ಪಾತ್&zwnj;ನಲ್ಲಿ ವಸ್ತುಗಳಿಟ್ಟರೆ ಎಲ್ಲಿ ನಡೆಯಬೇಕು?&lt;/h2&gt;&lt;p&gt;ಒತ್ತುವರಿಯಿಂದ ಬೇಸತ್ತ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದು, &quot;ನಾವು ಫುಟ್&zwnj;ಪಾತ್ ಮೇಲೆಯೇ ನಡೆಯಬೇಕು. ಅದನ್ನು ಬಿಟ್ಟು ನೀವು ಫುಟ್&zwnj;ಪಾತ್&zwnj;ನಲ್ಲಿ ಇಟ್ಟಿರುವ ವಸ್ತುಗಳ ಮೇಲೆ ನಡೆಯಲು ಸಾಧ್ಯವೇ? ತಕ್ಷಣವೇ ಫುಟ್&zwnj;ಪಾತ್ ಕ್ಲಿಯರ್ ಮಾಡಿ&quot; ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಪಾದಚಾರಿಯೊಬ್ಬರು &quot;ನಾವು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಡೆದರೆ ಆಟೋದವರು, ವಾಹನ ಚಾಲಕರು ಮನಸೋಇಚ್ಛೆ ಅಸಭ್ಯ ಪದಗಳಿಂದ ಬೈಯುತ್ತಾರೆ. 'ಸೈಡಿಗೆ ಹೋಗೋ...' ಎಂದು ನಿಂದಿಸುತ್ತಾರೆ. ತಪ್ಪು ಮಾಡದ ನಾವು ಯಾಕೆ ಅವರ ಹತ್ತಿರ ಬೈಸಿಕೊಳ್ಳಬೇಕು? ಮೊದಲು ನಮಗೆ ಓಡಾಡಲು ದಾರಿ ಬಿಡಿ.&quot; ಎಂದು ಹೇಳಿದರು&lt;/p&gt;&lt;p&gt;&quot;ಪಾದಚಾರಿಗಳಿಗೆ ದಾರಿ ಬಿಡಿ ಎಂದು ಕೇಳಿದರೆ, ವ್ಯಾಪಾರಿಗಳು 'ನಾವು ಇಲ್ಲಿ 60 ವರ್ಷಗಳಿಂದ ಅಂಗಡಿ ಇಟ್ಟುಕೊಂಡಿದ್ದೇವೆ, ಸರ್ಕಾರವೇ ನಮಗೆ ಈ ಜಾಗ ಬರೆದುಕೊಟ್ಟಿದೆ' ಎಂದು ಉಡಾಫೆಯಾಗಿ ಉತ್ತರಿಸುತ್ತಾರೆ. ನಾವೇನು ಅವರ ಅಂಗಡಿಗಳನ್ನು ಸಂಪೂರ್ಣವಾಗಿ ಖಾಲಿ ಮಾಡಿ ಎನ್ನುತ್ತಿಲ್ಲ. ಓಡಾಡಲು ದಾರಿ ಬಿಟ್ಟು ವ್ಯಾಪಾರ ಮಾಡಿ ಎಂದಿದ್ದಕ್ಕೆ ಇಷ್ಟೊಂದು ವಾದ ಮಾಡುತ್ತಾರೆ ಎಂದು ಹೇಳಿದರು.&lt;/p&gt;&lt;p&gt;ಇದೇ ವೇಳೆ ಪಾದಾಚಾರಿಯೊಬ್ಬರು ಫುಟ್&zwnj;ಫಾತ್&zwnj; ನಲ್ಲಿ ಅಂಗಡಿ ಇಟ್ಟವರನ್ನು ಪ್ರಶ್ನಿಸಿದಾಗ 'ನಾನು ಎಲ್ಲಿ ಬೇಕಾದರೂ ಅಂಗಡಿ ಇಟ್ಟುಕೊಳ್ಳುತ್ತೇನೆ, ನೀನು ಆ ಹಿಂದುಗಡೆ ಇರೋ ಜಾಗದಲ್ಲಿ ನಡಿ ಎಂದು ಹೋಗು' ಎಂದು ವ್ಯಾಪಾರಿಯೊಬ್ಬರು ಉದ್ಧಟತನದಿಂದ ಉತ್ತರ ನೀಡಿರುವ ಘಟನೆಯೂ ನಡೆದಿದೆ.&lt;/p&gt;&lt;h2&gt;ಹೋಟೆಲ್ ಮುಂಭಾಗದ ಅಕ್ರಮ ಸಿಮೆಂಟ್ ಕಟ್ಟೆ ತೆರವು&lt;/h2&gt;&lt;p&gt;ಫುಟ್&zwnj;ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯ ಭಾಗವಾಗಿ, ಹೋಟೆಲೊಂದರ ಮುಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಸಿಮೆಂಟ್ ಕಟ್ಟೆಯನ್ನು ಜಿಬಿಎ (GBA) ಅಧಿಕಾರಿಗಳು ತೆರವುಗೊಳಿಸಿದ್ದಾರೆ.&lt;/p&gt;&lt;p&gt;ಹೋಟೆಲ್ ಮಾಲೀಕರು ತಮ್ಮ ಗ್ರಾಹಕರು ಕೂರಲು ಅನುಕೂಲವಾಗುವಂತೆ ಸಾರ್ವಜನಿಕ ಫುಟ್&zwnj;ಪಾತ್ ಅನ್ನೇ ಒತ್ತುವರಿ ಮಾಡಿಕೊಂಡು ದೊಡ್ಡ ಸಿಮೆಂಟ್ ಕಟ್ಟೆಯನ್ನು ನಿರ್ಮಿಸಿದ್ದರು. ಅಧಿಕಾರಿಗಳು ಜೆಸಿಬಿ ಮೂಲಕ ಇದನ್ನು ತೆರವುಗೊಳಿಸಲು ಮುಂದಾದಾಗ, ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿಯಿಂದ ತೀವ್ರ ವಿರೋಧ ವ್ಯಕ್ತವಾಯಿತು.&lt;/p&gt;&lt;p&gt;ಆದರೆ, ಮಾಲೀಕರ ಯಾವುದೇ ವಿರೋಧಕ್ಕೆ ಮಣಿಯದ ಜಿಬಿಎ ಅಧಿಕಾರಿಗಳು, ತಕ್ಷಣವೇ ಹೋಟೆಲ್ ಬಂದ್ ಮಾಡಿಸಿ, ಫುಟ್&zwnj;ಪಾತ್ ಮೇಲಿದ್ದ ಅಕ್ರಮ ಕಟ್ಟೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳ ಈ ಕಠಿಣ ಕ್ರಮಕ್ಕೆ ಪಾದಚಾರಿಗಳಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-gba-safe-footpath-drive-sparks-heated-face-off-at-gandhi-bazaar-gdp/articleshow-v5c3kld"/>
        </item>
        <item>
            <title><![CDATA[ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!]]></title>
            <link>https://kannada.asianetnews.com/karnataka-districts/bangalore-toll-hike-nice-road-and-electronic-city-flyover-rates-increased-from-july-1st-gdp/articleshow-vbmrrn9</link>
            <guid isPermaLink="true">https://kannada.asianetnews.com/karnataka-districts/bangalore-toll-hike-nice-road-and-electronic-city-flyover-rates-increased-from-july-1st-gdp/articleshow-vbmrrn9</guid>
            <pubDate>Wed, 01 Jul 2026 09:56:01 +0530</pubDate>
            <description><![CDATA[ಬೆಂಗಳೂರಿನ ಪ್ರಮುಖ ಕಾರಿಡಾರ್&zwnj;ಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್&zwnj;ಪ್ರೆಸ್&zwnj;ವೇಯಲ್ಲಿ ಜುಲೈ 1, 2026 ರಿಂದ ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಈ ದರ ಏರಿಕೆಯು ಕಾರು, ದ್ವಿಚಕ್ರ ವಾಹನ ಸವಾರರು ಸೇರಿದಂತೆ ನಿತ್ಯ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದ್ದು, ಬಿಎಂಟಿಸಿ ಬಸ್ ಪ್ರಯಾಣ ದರವೂ ಹೆಚ್ಚಾಗುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j49xahvxt0q2x4nfyhvwhvb2,imgname-vdv.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಐಟಿ ಉದ್ಯೋಗಿಗಳು ಹಾಗೂ ನಿತ್ಯ ಪ್ರಯಾಣಿಕರ ಜೇಬಿಗೆ ಮತ್ತೊಂದು ಕತ್ತರಿ ಬಿದ್ದಿದೆ. ಬೆಂಗಳೂರಿನ ಅತ್ಯಂತ ಜನನಿಬಿಡ ಟೋಲ್ ಕಾರಿಡಾರ್&zwnj;ಗಳಾದ ಹೊಸೂರು ರಸ್ತೆಯ 'ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್&zwnj;ಪ್ರೆಸ್&zwnj;ವೇ' ಮತ್ತು 'ನೈಸ್ (NICE) ರಸ್ತೆ'ಯನ್ನು ಬಳಸುವ ಪ್ರಯಾಣಿಕರು ಜುಲೈ 1, 2026 (ಬುಧವಾರ) ರಿಂದ ಪರಿಷ್ಕೃತ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಿಂದಾಗಿ ಇಂದಿನಿಂದ ಈ ಮಾರ್ಗಗಳ ಮೂಲಕ ಸಂಚರಿಸುವ ನಿಮ್ಮ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.&lt;/p&gt;&lt;h2&gt;ನೈಸ್ ರಸ್ತೆ ಟೋಲ್ ದರ ಕನಿಷ್ಠ 10% ಹೆಚ್ಚಳ&lt;/h2&gt;&lt;p&gt;ನಂದಿ ಎಕನಾಮಿಕ್ ಕಾರಿಡಾರ್ ಎಂಟರ್&zwnj;ಪ್ರೈಸಸ್ ಲಿಮಿಟೆಡ್ (NICE), ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆ ಘಟಕಗಳ ಟೋಲ್ ಶುಲ್ಕವನ್ನು ಪರಿಷ್ಕರಿಸುವ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ. ಸೆಪ್ಟೆಂಬರ್ 4, 2000 ರಂದು ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದ ರಿಯಾಯಿತಿ ಒಪ್ಪಂದದ ಪ್ರಕಾರ ಇದು ವಾರ್ಷಿಕವಾಗಿ ನಡೆಯುವ ನಿಯಮಿತ ದರ ಪರಿಷ್ಕರಣೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ ಸಾಗುವ ಬೆಂಗಳೂರಿನ ಸೆಮಿ-ರಿಂಗ್ ರಸ್ತೆಯಾದ ಪೆರಿಫೆರಲ್ ರಸ್ತೆ 40.8 ಕಿ.ಮೀ ಉದ್ದವಿದ್ದರೆ, ಲಿಂಕ್ ರಸ್ತೆ 8.1 ಕಿ.ಮೀ ಉದ್ದವಿದೆ.&lt;/p&gt;&lt;h2&gt;ಯಾರಿಗೆ ಎಷ್ಟು ಏರಿಕೆ?&lt;/h2&gt;&lt;p&gt;ದ್ವಿಚಕ್ರ ವಾಹನಗಳು ಮತ್ತು ಕಾರು ಸವಾರರು ಸಂಚರಿಸುವ ದೂರದ ಆಧಾರದ ಮೇಲೆ ಕನಿಷ್ಠ ಶೇ. 10 ರಷ್ಟು ಹೆಚ್ಚು ಟೋಲ್ ಪಾವತಿಸಬೇಕಾಗುತ್ತದೆ. ಈ ಹೆಚ್ಚಳದ ಮೊತ್ತವನ್ನು ಮುಂದಿನ ಪೂರ್ಣ ಸಂಖ್ಯೆಗೆ (Round figure) ಹೊಂದಿಸಲಾಗುತ್ತದೆ.&lt;/p&gt;&lt;h2&gt;ಪ್ರಯಾಣಿಕರ ಮೇಲೆ ಬಿಎಂಟಿಸಿ ಬರೆ?&lt;/h2&gt;&lt;p&gt;ಬನಶಂಕರಿ, ತಾವರೆಕೆರೆ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ನೈಸ್ ರಸ್ತೆ ಮೂಲಕ ಬಸ್ ಸೇವೆ ಒದಗಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ಈ ಹೆಚ್ಚುವರಿ ಟೋಲ್ ವೆಚ್ಚದ ಹೊರೆಯನ್ನು ಪ್ರಯಾಣಿಕರ ಟಿಕೆಟ್ ದರ ಹೆಚ್ಚಳದ ಮೂಲಕ ಅವರ ಮೇಲೆಯೇ ವರ್ಗಾಯಿಸುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;h2&gt;ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಟೋಲ್ ಪರಿಷ್ಕರಣೆ&lt;/h2&gt;&lt;p&gt;ಸಿಲ್ಕ್ ಬೋರ್ಡ್ ಜಂಕ್ಷನ್&zwnj;ನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕಿಸುವ 9.98 ಕಿಮೀ ಉದ್ದದ ಎಕ್ಸ್&zwnj;ಪ್ರೆಸ್&zwnj;ವೇ ಹಾಗೂ ಸಿಲ್ಕ್ ಬೋರ್ಡ್&zwnj;ನಿಂದ ಕರ್ನಾಟಕ-ತಮಿಳುನಾಡು ಗಡಿಯವರೆಗಿನ 24.36 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 44 ರ ಟೋಲ್ ಶುಲ್ಕವನ್ನೂ ಸಹ ಹೆಚ್ಚಿಸಲಾಗಿದೆ.&lt;/p&gt;&lt;p&gt;ಬೆಂಗಳೂರು ಎಲಿವೇಟೆಡ್ ಟೋಲ್&zwnj;ವೇ ಪ್ರೈವೇಟ್ ಲಿಮಿಟೆಡ್ (BETPL) ಪ್ರಕಾರ, ಮಾರ್ಚ್ 31, 2026 ರ ಸಗಟು ಬೆಲೆ ಸೂಚ್ಯಂಕ (WPI) ಆಧರಿಸಿ ಈ ದರಗಳನ್ನು ಪರಿಷ್ಕರಿಸಲಾಗಿದ್ದು, ಇವು ಜೂನ್ 30, 2027 ರವರೆಗೆ ಜಾರಿಯಲ್ಲಿರಲಿವೆ. ನಾಲ್ಕು ಪಥಗಳನ್ನು ಹೊಂದಿರುವ ಈ ಎತ್ತರಿಸಿದ ಎಕ್ಸ್&zwnj;ಪ್ರೆಸ್&zwnj;ವೇ ಬೆಂಗಳೂರಿನ ಅತಿ ಉದ್ದದ, ಫೈಓವರ್ ಎಂಬ ಹೆಗ್ಗಳಿಕೆ ಪಡೆದಿದೆ&lt;/p&gt;&lt;h2&gt;ಹೊಸ ದರ ಪಟ್ಟಿ ಇಂತಿದೆ&lt;/h2&gt;&lt;ul&gt; &lt;li&gt;ಕಾರು / ಜೀಪ್ / ವ್ಯಾನ್ ದಿನದ ಪ್ರಯಾಣ (Multiple Trips) ಹಳೆಯ ದರ 95 , ಹೊಸ ದರ 100&lt;/li&gt; &lt;li&gt;ಕಾರು / ಜೀಪ್ / ವ್ಯಾನ್ ಮಾಸಿಕ ಪಾಸ್ (Monthly Pass) ಹಳೆಯ ದರ 1,885 , ಹೊಸ ದರ 1,960&lt;/li&gt; &lt;li&gt;ದ್ವಿಚಕ್ರ ವಾಹನಗಳು ಮಾಸಿಕ ಪಾಸ್ (Monthly Pass) ಹಳೆಯ ದರ 755, ಹೊಸ ದರ 785&lt;/li&gt; &lt;li&gt;ಅತ್ತಿಬೆಲೆ ಟೋಲ್ ಪ್ಲಾಜಾ (ಕಾರುಗಳು) ಬಹು ಪ್ರಯಾಣ (Multiple Trips) ಹಳೆಯ ದರ 55 , ಹೊಸ ದರ 60&lt;/li&gt;&lt;/ul&gt;&lt;p&gt;ರಾಷ್ಟ್ರೀಯ ಹೆದ್ದಾರಿ-44 ರ (NH-44) ಈ 24.365 ಕಿಲೋಮೀಟರ್ ಉದ್ದದ ವಿಭಾಗವನ್ನು ನಿರ್ವಹಿಸಲು ಸ್ಥಾಪಿಸಲಾದ ವಿಶೇಷ ಉದ್ದೇಶದ ವಾಹನವೇ (SPV) ಈ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಫ್ಲೈಓವರ್ (BETPL) ಆಗಿದೆ. ಮುಂಬೈ ಮೂಲದ ಗ್ಲೋಬಲ್ ಇನ್&zwnj;ಫ್ರಾಸ್ಟ್ರಕ್ಚರ್ ಪಾರ್ಟ್&zwnj;ನರ್ಸ್ (GIP) ಸಂಸ್ಥೆಯು ಇದರ ರಿಯಾಯಿತಿ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಇಂದಿನಿಂದಲೇ ಜಾರಿಗೆ ಬರುವ ಈ ದರ ಹೆಚ್ಚಳವು ದಿನನಿತ್ಯ ಆಫೀಸ್&zwnj;ಗೆ ಓಡಾಡುವ ಐಟಿ ಉದ್ಯೋಗಿಗಳಿಗೆ ಮತ್ತು ವಾಣಿಜ್ಯ ವಾಹನಗಳ ಮಾಲೀಕರಿಗೆ ಆರ್ಥಿಕ ಹೊರೆಯಾಗಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bangalore-toll-hike-nice-road-and-electronic-city-flyover-rates-increased-from-july-1st-gdp/articleshow-vbmrrn9"/>
        </item>
        <item>
            <title><![CDATA[ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್: ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ದೌಡು, ತೀವ್ರ ಆತಂಕ!]]></title>
            <link>https://kannada.asianetnews.com/state/isro-bengaluru-headquarters-receives-bomb-threat-via-email-gdp/articleshow-w0qwm7w</link>
            <guid isPermaLink="true">https://kannada.asianetnews.com/state/isro-bengaluru-headquarters-receives-bomb-threat-via-email-gdp/articleshow-w0qwm7w</guid>
            <pubDate>Thu, 02 Jul 2026 15:21:57 +0530</pubDate>
            <description><![CDATA[ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದೆ. ಇವು ಹುಸಿ ಬೆದರಿಕೆಗಳೆಂದು ಶಂಕಿಸಲಾಗಿದ್ದರೂ, ತನಿಖೆ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kepw7s5q71h59kh80vh02ht6,imgname-anvesha-satellite-1768146855095.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ದೇಶದ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಬೆಂಗಳೂರಿನ ಇಸ್ರೋ (ISRO) ಕೇಂದ್ರ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಇಡೀ ಆವರಣದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. &amp;nbsp;ಕಚೇರಿಯ ಆವರಣದಲ್ಲಿ ಸ್ಫೋಟಕಗಳನ್ನು ಇಡಲಾಗಿದ್ದು, ಯಾವುದೇ ಕ್ಷಣದಲ್ಲಾದರೂ ಬ್ಲಾಸ್ಟ್ ಮಾಡಲಾಗುವುದು ಎಂದು ಇ-ಮೇಲ್&zwnj;ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.&lt;/p&gt;&lt;h2&gt;ಇಸ್ರೋ ಕೇಂದ್ರದಲ್ಲಿ ಹೈ ಅಲರ್ಟ್&lt;/h2&gt;&lt;p&gt;ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಇಸ್ರೋ ಆಡಳಿತ ಮಂಡಳಿಯು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಘಟನಾ ಸ್ಥಳಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ, ಸ್ಥಳೀಯ ಪೊಲೀಸರು, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನ ದಳದೊಂದಿಗೆ ಧಾವಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ವಿಜ್ಞಾನಿಗಳನ್ನು ತಕ್ಷಣವೇ ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ. ಸದ್ಯ ಇಡೀ ಕಚೇರಿ ಆವರಣವನ್ನು ಪೊಲೀಸರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದು, ಪ್ರತಿಯೊಂದು ಮೂಲೆ ಮೂಲೆಯಲ್ಲೂ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದ್ದು, ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 1969ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಬಾಹ್ಯಾಕಾಶ ತಂತ್ರಜ್ಞಾನದ ಸಂಶೋಧನೆ, ಉಪಗ್ರಹಗಳ ಉಡಾವಣೆ ಮತ್ತು ಗ್ರಹಗಳ ಅನ್ವೇಷಣೆಯಲ್ಲಿ ವಿಶ್ವದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇಸ್ರೋ ಸಂಸ್ಥೆಯು ಶೂನ್ಯದಿಂದ ಆರಂಭಿಸಿ ಇಂದು ವಿಶ್ವದ ಬಲಿಷ್ಠ ಬಾಹ್ಯಾಕಾಶ ಸಂಸ್ಥೆಯಾಗಿ ಬೆಳೆದು ನಿಂತಿದೆ.&lt;/p&gt;&lt;h2&gt;ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಬ್ಲಾಸ್ಟ್ ಎಚ್ಚರಿಕೆ: ಕಲಾಪದ ಮಧ್ಯೆಯೇ ಆತಂಕ&lt;/h2&gt;&lt;p&gt;ಇತ್ತ ಕಾಫಿನಾಡು ಚಿಕ್ಕಮಗಳೂರಿನ ಹೃದಯಭಾಗದಲ್ಲಿರುವ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ಖಾತೆಗೆ ಭೀತಿ ಹುಟ್ಟಿಸುವ ಸಂದೇಶವೊಂದು ಬಂದಿದೆ. &quot;ಮಧ್ಯಾಹ್ನ 1:30 ರಿಂದ 3:30 ರ ಒಳಗಾಗಿ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗುವುದು&quot; ಎಂದು ಇ-ಮೇಲ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ನ್ಯಾಯಾಲಯದ ದೈನಂದಿನ ಕಲಾಪಗಳು ನಡೆಯುತ್ತಿದ್ದ ವೇಳೆಯಲ್ಲೇ ಈ ಮಾಹಿತಿ ಲಭ್ಯವಾಗಿದ್ದರಿಂದ ನ್ಯಾಯಾಧೀಶರು, ವಕೀಲರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ನೆರವಿನೊಂದಿಗೆ ಕೋರ್ಟ್ ಆವರಣದಲ್ಲಿ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪ್ರತಿಯೊಬ್ಬರನ್ನು ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿದೆ.&lt;/p&gt;&lt;h2&gt;ಮೈಸೂರು ಸೆಷನ್ಸ್ ಕೋರ್ಟ್&zwnj;ಗೆ ಮಧ್ಯರಾತ್ರಿ ಬಂದ ಮೇಲ್&amp;nbsp;&lt;/h2&gt;&lt;p&gt;ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜಪುರಂನಲ್ಲಿರುವ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೂ ಸಹ ಬಾಂಬ್ ಬೆದರಿಕೆ ಬಂದಿದೆ. pavala.malli@atomicmail ಎಂಬ ಇ-ಮೇಲ್ ಐಡಿಯಿಂದ ಬೆಳಗಿನ ಜಾವ 01:59 ಗಂಟೆಗೆ ನ್ಯಾಯಾಲಯದ ಅಧಿಕೃತ ಇ-ಮೇಲ್ pdjmysuru@karnataka.gov.in ಗೆ ಈ ಬೆದರಿಕೆ ಸಂದೇಶ ರವಾನೆಯಾಗಿದೆ. ಕೋರ್ಟ್ ಆವರಣದಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್&zwnj;ನಲ್ಲಿ ಬರೆಯಲಾಗಿದೆ.&lt;/p&gt;&lt;p&gt;ಬೆಳಗ್ಗೆ ಕಚೇರಿ ಆರಂಭದ ವೇಳೆ ಈ ಮೇಲ್ ಗಮನಿಸಿದ ನ್ಯಾಯಾಲಯದ ಸಿಬ್ಬಂದಿ ಕೂಡಲೇ ಮೈಸೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಎಸಿಪಿ ಕೆ.ಸಿ. ಪ್ರಕಾಶ್, ಇನ್ಸ್&zwnj;ಪೆಕ್ಟರ್ ಬಿ.ಎಸ್. ರವಿಶಂಕರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಸೂರು ನಗರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಕೋರ್ಟ್ ಆವರಣದಲ್ಲಿ ಕಣ್ಗಾವಲು ಇಟ್ಟು ತಪಾಸಣೆ ಮುಂದುವರಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆಯೂ ಇದೇ ರೀತಿ ಮೈಸೂರು ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.&lt;/p&gt;&lt;h2&gt;ಸಾರ್ವಜನಿಕರಲ್ಲಿ ಮನವಿ ಮತ್ತು ಪೊಲೀಸ್ ಕ್ರಮ&lt;/h2&gt;&lt;p&gt;ರಾಜ್ಯದ ಪ್ರಮುಖ ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಸರಣಿ ಇ-ಮೇಲ್ ಬೆದರಿಕೆಗಳು ಬಂದಿರುವುದರಿಂದ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಇವು ಹುಸಿ ಬಾಂಬ್ ಬೆದರಿಕೆಗಳು (Hoax Calls) ಇರಬಹುದು ಎಂದು ಶಂಕಿಸಲಾಗಿದ್ದರೂ, ರಕ್ಷಣಾ ದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯ ವಹಿಸದೆ ತಪಾಸಣೆ ನಡೆಸಲಾಗುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/isro-bengaluru-headquarters-receives-bomb-threat-via-email-gdp/articleshow-w0qwm7w"/>
        </item>
        <item>
            <title><![CDATA[ಹಿಂದೆ ನೋಡಬೇಡ...ನಂದಿಹಿಲ್ಸ್ ರಸ್ತೆಯಲ್ಲಿ ಬೈಕ್ ಸವಾರನಿಗೆ ಕೇಳಿಸಿದ ಆ ನಿಗೂಢ ಧ್ವನಿ ಯಾರದ್ದು?]]></title>
            <link>https://kannada.asianetnews.com/gallery/bengaluru-rural/midnight-bike-ride-mystery-call-bengaluru-nandi-ghat-paranormal-story-kannada-suh-xtr4ow4</link>
            <guid isPermaLink="true">https://kannada.asianetnews.com/gallery/bengaluru-rural/midnight-bike-ride-mystery-call-bengaluru-nandi-ghat-paranormal-story-kannada-suh-xtr4ow4</guid>
            <pubDate>Wed, 01 Jul 2026 11:19:46 +0530</pubDate>
            <description><![CDATA[&lt;p&gt;ನಂದಿಘಾಟ್&zwnj;ನಲ್ಲಿ ಮಧ್ಯರಾತ್ರಿ ಬೈಕ್ ರೈಡ್ ವೇಳೆ ಅಪರಿಚಿತ ಕರೆಗಳು, ಭಯಾನಕ ಅನುಭವಗಳು ಮತ್ತು ಮೃತ ಮಾಜಿ ಪ್ರೇಯಸಿಯ ಆತ್ಮ ಕಾಡಿದೆಯೆಂಬ ವೈರಲ್ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwe2tgfjegj9hkfvpvv0jrqa,imgname-nandi-ghat-paranormal-story-kannada-1782884155890.jpeg" type="image/jpeg" height="390" width="690"/>
            <content:encoded><![CDATA[&lt;p&gt;ನಂದಿಘಾಟ್&zwnj;ನಲ್ಲಿ ಮಧ್ಯರಾತ್ರಿ ಬೈಕ್ ರೈಡ್ ವೇಳೆ ಅಪರಿಚಿತ ಕರೆಗಳು, ಭಯಾನಕ ಅನುಭವಗಳು ಮತ್ತು ಮೃತ ಮಾಜಿ ಪ್ರೇಯಸಿಯ ಆತ್ಮ ಕಾಡಿದೆಯೆಂಬ ವೈರಲ್ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ಕರ್ನಾಟಕದ ನಂದಿ ಹಿಲ್ಸ್&zwnj; ಸಮೀಪದ ನಂದಿಘಾಟ್ ರಸ್ತೆಯಲ್ಲಿ 2025ರಲ್ಲಿ ನಡೆದಿದೆ ಎನ್ನಲಾದ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ. ಮಧ್ಯರಾತ್ರಿ ಸ್ನೇಹಿತನ ಮನೆಯಿಂದ ಬೈಕ್&zwnj;ನಲ್ಲಿ ಮನೆಗೆ ಹೊರಟಿದ್ದ ಸುಪ್ರೀತ್&zwnj;ಗೆ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆಗಳು ಬರಲು ಆರಂಭವಾಗುತ್ತವೆ. ಮೊದಲಿಗೆ ಕರೆ ಸ್ವೀಕರಿಸಿದಾಗ ಯಾವುದೇ ಉತ್ತರ ಸಿಗಲಿಲ್ಲ. ಆದರೆ ಕೆಲವೇ ಕ್ಷಣಗಳಲ್ಲಿ ಕರೆ ಬಂದಾಗ ಮಹಿಳೆಯ ಧ್ವನಿಯಲ್ಲಿ &quot;ಹಿಂದೆ ನೋಡಬೇಡ...&quot; ಎಂಬ ಮಾತು ಕೇಳಿಬಂದಿದೆ.&lt;/p&gt;&lt;img&gt;&lt;p&gt;ಭಯಗೊಂಡ ಸುಪ್ರೀತ್ ಕನ್ನಡಿಯಲ್ಲಿ ಹಿಂದೆ ನೋಡಿದಾಗ ಬೈಕ್&zwnj;ನ ಹಿಂಬದಿ ಸೀಟಿನಲ್ಲಿ ಯಾರೋ ಕುಳಿತಿರುವಂತೆ ನೆರಳು ಕಾಣಿಸಿಕೊಂಡಿತ್ತಂತೆ. ಆತ ತಿರುಗಿ ನೋಡಿದರೂ ಯಾರೂ ಇರಲಿಲ್ಲ. ಆದರೆ ಅಪರಿಚಿತ ಸಂಖ್ಯೆಯಿಂದ ಕರೆಗಳು ನಿಲ್ಲಲಿಲ್ಲ. ಕೆಲವೇ ಹೊತ್ತಿನಲ್ಲಿ ಬೈಕ್ ಕೂಡ ಏಕಾಏಕಿ ನಿಂತುಹೋಗಿದ್ದು, ಕತ್ತಲೆಯ ನಡುವೆ ಹೆಜ್ಜೆಗಳ ಶಬ್ದ ಕೇಳಿಸತೊಡಗಿದೆಯಂತೆ.&lt;/p&gt;&lt;p&gt;ಮತ್ತೊಮ್ಮೆ ಕರೆ ಸ್ವೀಕರಿಸಿದಾಗ &quot;ನಾನು ಹೇಳಿದ್ದಲ್ಲವೇ... ಹಿಂದೆ ನೋಡಬೇಡ. ನಾನು ನಿನ್ನ ಹಿಂದೆ ಕುಳಿತಿದ್ದೇನೆ&quot; ಎಂಬ ಧ್ವನಿ ಕೇಳಿಬಂದಿದೆ ಎನ್ನಲಾಗಿದೆ. ಇದರಿಂದ ಆತ ಭಯದಿಂದ ವೇಗವಾಗಿ ಬೈಕ್ ಚಲಾಯಿಸಲು ಆರಂಭಿಸಿದ್ದಾನೆ. ಇದೇ ವೇಳೆ ತನ್ನ ಭುಜದ ಮೇಲೆ ಯಾರೋ ಕೈ ಇಟ್ಟಂತೆ, ಬೈಕ್&zwnj;ನಲ್ಲಿ ಹೆಚ್ಚುವರಿ ತೂಕ ಇದ್ದಂತೆ ಹಾಗೂ ರಿಯರ್ ವ್ಯೂ ಮಿರರ್&zwnj;ಗಳು ತಾವಾಗಿಯೇ ಕೆಳಕ್ಕೆ ತಿರುಗಿದಂತೆ ಅನುಭವವಾಗಿದೆ ಎಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಪ್ರೀತ್&zwnj;ಗೆ ತಲೆ ಸುತ್ತಿ ಪ್ರಜ್ಞೆ ತಪ್ಪಿದ್ದು, ಬಳಿಕ ಆಸ್ಪತ್ರೆಯಲ್ಲಿ ಕಣ್ಣು ತೆರೆದಿದ್ದಾನೆ. ಆದರೆ ಆಸ್ಪತ್ರೆಯಲ್ಲಿಯೂ ಅದೇ ಅಪರಿಚಿತ ಸಂಖ್ಯೆಯಿಂದ ನಿರಂತರ ಕರೆಗಳು ಬರುತ್ತಿದ್ದವೆಯಂತೆ. ಮನೆಗೆ ಹಿಂತಿರುಗಿದ ಬಳಿಕ ತಾಯಿಯ ಸಲಹೆಯಂತೆ ಆಧ್ಯಾತ್ಮಿಕ ಮಾರ್ಗದರ್ಶನ ಪಡೆದಾಗ, ಕೆಲವು ದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಮಾಜಿ ಪ್ರೇಯಸಿಯ ಆತ್ಮವೇ ತನ್ನನ್ನು ಕಾಡುತ್ತಿದೆ ಎಂಬ ವಿವರಣೆ ಸಿಕ್ಕಿತ್ತೆಂದು ಕಥೆಯಲ್ಲಿ ಹೇಳಲಾಗಿದೆ.&lt;/p&gt;&lt;img&gt;&lt;p&gt;ಅದರ ನಂತರ ವಿಶೇಷ ಪೂಜೆ ಹಾಗೂ ಹವನ ನಡೆಸಿ, ಆಕೆಗೆ ಸಂಬಂಧಿಸಿದ ವಸ್ತುಗಳನ್ನು ವಿಸರ್ಜಿಸಿದ ಬಳಿಕ ಕರೆಗಳು ಮತ್ತು ವಿಚಿತ್ರ ಘಟನೆಗಳು ಸಂಪೂರ್ಣ ನಿಂತವು ಎಂದು ಸುಪ್ರೀತ್ ಹೇಳಿಕೊಂಡಿದ್ದಾನೆ.&lt;/p&gt;&lt;p&gt;ಗಮನಿಸಿ: ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ಲಭ್ಯವಾಗಿರುವ ಮಾಹಿತಿಯಾಗಿದ್ದು, ಈ ಸುದ್ದಿಗೆ ಏಷ್ಯಾನೆಟ್&zwnj; ನ್ಯೂಸ್&zwnj; ಕನ್ನಡಕ್ಕೆ ಯಾವುದೇ ಸಂಬಂಧವಿಲ್ಲ ಇದಕ್ಕೆ ವೈಜ್ಞಾನಿಕ ಅಥವಾ ಅಧಿಕೃತ ದೃಢೀಕರಣ ಲಭ್ಯವಿಲ್ಲ. ಇದನ್ನು ಮನರಂಜನೆ ಅಥವಾ ಜನಪ್ರಿಯ ನಂಬಿಕೆಗಳ ಕಥೆಯಾಗಿ ಮಾತ್ರ ಪರಿಗಣಿಸಬೇಕು.&lt;/p&gt;]]></content:encoded>
            <category>bengaluru-rural</category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/bengaluru-rural/midnight-bike-ride-mystery-call-bengaluru-nandi-ghat-paranormal-story-kannada-suh-xtr4ow4"/>
        </item>
        <item>
            <title><![CDATA[ಬೆಂಗಳೂರು ಕ್ವಾರಿ ದುರಂತ: 9 ಜೀವಗಳನ್ನು ಬಲಿ ಪಡೆದ ಬಂಡೆ! ಅಂದು ಚಿರತೆ, ಇಂದು ಅಮಾಯಕ ವಲಸೆ ಕಾರ್ಮಿಕರು ಸಾವು!]]></title>
            <link>https://kannada.asianetnews.com/karnataka-districts/bengaluru-hulavenahalli-tragedy-many-killed-in-massive-explosion-at-illegal-stone-mining-site-in-chikkanahalli-gdp/articleshow-zeh3wrq</link>
            <guid isPermaLink="true">https://kannada.asianetnews.com/karnataka-districts/bengaluru-hulavenahalli-tragedy-many-killed-in-massive-explosion-at-illegal-stone-mining-site-in-chikkanahalli-gdp/articleshow-zeh3wrq</guid>
            <pubDate>Thu, 02 Jul 2026 10:05:48 +0530</pubDate>
            <description><![CDATA[ಬೆಂಗಳೂರಿನ ಹೊರವಲಯದ ಕಾವೇರಿ ಕ್ರಷರ್ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 9 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಟ್ರ್ಯಾಕ್ಟರ್ ಮೂಲಕ ಬಂಡೆ ಸರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಸುರಕ್ಷತಾ ನಿಯಮಗಳ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwghqyjwxn5aqe8ctnc6m82n,imgname-bengaluru-hulavenahalli-tragedy--1--1782966909529.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; &amp;nbsp;ಬೆಂಗಳೂರು: ರಾಜಧಾನಿಯ ಹೊರವಲಯದ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ತಾವರೆಕೆರೆ ಹೋಬಳಿಯ ಮಾದಾಪಟ್ಟಣ ಗ್ರಾಮದ ವ್ಯಾಪ್ತಿಯಲ್ಲಿರುವ 'ಕಾವೇರಿ ಕ್ರಷರ್' ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿದ್ದ ಪರಿಣಾಮ, ಕೆಳಗೆ ಕೆಲಸ ಮಾಡುತ್ತಿದ್ದ 9 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.&lt;/p&gt;&lt;h2&gt;ಟ್ರ್ಯಾಕ್ಟರ್&zwnj;ನಲ್ಲಿ ಬಂಡೆ ಜರುಗಿಸುವಾಗ ಸಂಭವಿಸಿದ ಜವರಾಯನ ಆಟ!&lt;/h2&gt;&lt;p&gt;ಮಾಹಿತಿ ಪ್ರಕಾರ, ಇಂದು ಕಲ್ಲು ಕ್ವಾರಿಯ ಮೇಲ್ಭಾಗದಲ್ಲಿ ಟ್ರ್ಯಾಕ್ಟರ್ ಸಹಾಯದಿಂದ ಭಾರೀ ಗಾತ್ರದ ಬಂಡೆಯೊಂದನ್ನು ಜರುಗಿಸುವ (ಸರಿಸುವ) ಕೆಲಸ ನಡೆಯುತ್ತಿತ್ತು. ದುರದೃಷ್ಟವಶಾತ್, ಈ ವೇಳೆ ನಿಯಂತ್ರಣ ತಪ್ಪಿದ ಬಂಡೆಯು ನೇರವಾಗಿ ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಬಂಡೆ ಬಿದ್ದ ತೀವ್ರತೆಗೆ ಸಿಲುಕಿದ ಒಂಬತ್ತು ಜನ ಕಾರ್ಮಿಕರು ಕ್ಷಣಮಾತ್ರದಲ್ಲಿ ಜೀವಬಿಟ್ಟಿದ್ದಾರೆ. ಮೃತರನ್ನು ಬಿಹಾರ ಮತ್ತು ಅಸ್ಸಾಂ ಮೂಲದ ಕಾರ್ಮಿಕರು ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕಾವೇರಿ ಕ್ರಷರ್&zwnj;ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;ಸ್ಥಳಕ್ಕೆ ಧಾವಿಸಿದ ಪೊಲೀಸರು:&lt;/h2&gt;&lt;p&gt;ದುರಂತ ಸಂಭವಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಚೀರಾಟ, ಆಕ್ರಂದನ ಮುಗಿಲು ಮುಟ್ಟಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಸಾರ್ವಜನಿಕರು ಮತ್ತು ಇತರ ಕಾರ್ಮಿಕರು ರಕ್ಷಣಾ ಕಾರ್ಯಾಚರಣೆಗೆ ಇಳಿದಿದ್ದು, ಬಂಡೆಯಡಿ ಸಿಲುಕಿದ್ದ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನುಳಿದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ.&lt;/p&gt;&lt;p&gt;ವಿಷಯ ತಿಳಿಯುತ್ತಿದ್ದಂತೆಯೇ ತಾವರೆಕೆರೆ ಪೊಲೀಸ್ ಇನ್ಸ್&zwnj;ಪೆಕ್ಟರ್ ಮಾರುತಿ ಹಾಗೂ ಸಿಬ್ಬಂದಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದೆ. ಗುತ್ತಿಗೆದಾರ (ಮೇಸ್ತ್ರಿ) ಮತ್ತು ಕ್ರಷರ್ ಮಾಲೀಕರನ್ನು ಸ್ಥಳಕ್ಕೆ ಕರೆಸಲಾಗುತ್ತಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.&lt;/p&gt;&lt;h2&gt;ಅಂದು ಚಿರತೆ ಬಲಿ, ಇಂದು 9 ಅಮಾಯಕರ ಸಾವು!&lt;/h2&gt;&lt;p&gt;ಈ ಹಿಂದೆ ಇದೇ ಹುಲವೇನಹಳ್ಳಿ ಮತ್ತು ಮಾದಾಪಟ್ಟಣ ಭಾಗದ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆ ಸ್ಫೋಟಿಸಿದಾಗ ಕಲ್ಲು ಸಿಡಿದು ಚಿರತೆಯೊಂದು ಸಾವನ್ನಪ್ಪಿತ್ತು. ಆಗಲೇ ಈ ಭಾಗದ ಕ್ವಾರಿಗಳ ಸುರಕ್ಷತಾ ನಿಯಮಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಿಂದಾಗಿ ಇಂದು ಚಿರತೆಯ ಬೆನ್ನಲ್ಲೇ ಒಂಬತ್ತು ಮಂದಿ ಅಮಾಯಕರು ಬಲಿಯಾಗಿದ್ದಾರೆ.&lt;/p&gt;&lt;h2&gt;ಸುರಕ್ಷತಾ ನಿಯಮಗಳ ಸಂಪೂರ್ಣ ಉಲ್ಲಂಘನೆ?&lt;/h2&gt;&lt;p&gt;ಕ್ವಾರಿಯ ಮೇಲ್ಭಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಟ್ರ್ಯಾಕ್ಟರ್ ಬಳಸಿ ಬಂಡೆ ಜರುಗಿಸುವಾಗ ಕೆಳಗೆ ಕಾರ್ಮಿಕರು ಕೆಲಸ ಮಾಡಲು ಹೇಗೆ ಬಿಡಲಾಯಿತು? ಯಾವುದೇ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲವೇ? ಎಂಬ ಗಂಭೀರ ಪ್ರಶ್ನೆಗಳು ಈಗ ಎದ್ದಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-hulavenahalli-tragedy-many-killed-in-massive-explosion-at-illegal-stone-mining-site-in-chikkanahalli-gdp/articleshow-zeh3wrq"/>
        </item>
    </channel>
</rss>
