<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 01 May 2026 16:24:05 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ: 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ]]></title>
            <link>https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</link>
            <guid isPermaLink="true">https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</guid>
            <pubDate>Tue, 28 Apr 2026 17:17:52 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಹೆಚ್ಚಾಗುವ ಎಚ್ಚರಿಕೆ ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9ycepmrjkr2tep2m1hstjm,imgname-karnataka-weather-1777376574164.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (India Meteorological Department) ಎಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯ ಹಿನ್ನೆಲೆ, ಕೆಲವು ಪ್ರದೇಶಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್&lt;/h2&gt;&lt;p&gt;ಇಂದು ಮತ್ತು ನಾಳೆ ರಾಜ್ಯದ ಒಟ್ಟು 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ Kalaburagi, Vijayapura, Yadgir, Raichur, Bagalkot ಸೇರಿದಂತೆ Belagavi, Koppal, Dharwad ಮತ್ತು Gadag ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಸ್ಥಿತಿ&lt;/h2&gt;&lt;p&gt;ಇಂದು Bengaluru ನಗರಕ್ಕೆ ಯಾವುದೇ ಅಲರ್ಟ್ ನೀಡಲಾಗಿಲ್ಲ. ಆದಾಗ್ಯೂ, ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗುತ್ತಿದೆ. ನಾಳೆ ಮತ್ತು ನಾಡಿದ್ದು ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;&lt;h2&gt;ಭಾರೀ ಮಳೆಯ ಸಾಧ್ಯತೆ&lt;/h2&gt;&lt;p&gt;ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಕಡಿಮೆ ಮಟ್ಟದ ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ.&lt;/p&gt;&lt;h2&gt;ಮುನ್ನೆಚ್ಚರಿಕೆ ಸೂಚನೆ&lt;/h2&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ಮಳೆ ಹೆಚ್ಚಾಗುವ ದಿನಗಳಲ್ಲಿ ಅನಾವಶ್ಯಕ ಪ್ರಯಾಣ ತಪ್ಪಿಸುವುದು, ವಿದ್ಯುತ್ ತಂತುಗಳು ಮತ್ತು ಮರಗಳ ಸಮೀಪ ನಿಲ್ಲದಿರುವುದು, ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸೂಕ್ತ.&lt;/p&gt;&lt;p&gt;ಒಟ್ಟಿನಲ್ಲಿ, ಮುಂದಿನ ಐದು ದಿನ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು India Meteorological Department ಸೂಚಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv"/>
        </item>
        <item>
            <title><![CDATA[ಬೆಂಗಳೂರು ಉದ್ಯಮಿಗೆ  ₹1.81 ಕೋಟಿ ವಂಚಿಸಿದ ಸಿಎ! ನಕಲಿ ಚಲನ್‌ಗಳನ್ನು ಸೃಷ್ಟಿಸಿ ಹಣ ದೋಚಿದ]]></title>
            <link>https://kannada.asianetnews.com/karnataka-districts/bengaluru-ca-booked-for-rs-1-81-crore-fraud-against-businessman-gdp/articleshow-0bgxk36</link>
            <guid isPermaLink="true">https://kannada.asianetnews.com/karnataka-districts/bengaluru-ca-booked-for-rs-1-81-crore-fraud-against-businessman-gdp/articleshow-0bgxk36</guid>
            <pubDate>Fri, 24 Apr 2026 19:12:55 +0530</pubDate>
            <description><![CDATA[ಬೆಂಗಳೂರಿನ ಉದ್ಯಮಿಯೊಬ್ಬರಿಗೆ ಅವರ ಚಾರ್ಟರ್ಡ್ ಅಕೌಂಟೆಂಟ್ ₹1.81 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಆದಾಯ ತೆರಿಗೆ ಮತ್ತು ಜಿಎಸ್&zwnj;ಟಿ ಪಾವತಿ ಹೆಸರಿನಲ್ಲಿ ನಕಲಿ ಚಲನ್&zwnj;ಗಳನ್ನು ಸೃಷ್ಟಿಸಿ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಎಚ್&zwnj;ಎಸ್&zwnj;ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jajcbhjhchafgekfj6w9wwpc,imgname-thumb-5.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ ₹1.81 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ಮಾಡಿದ ಆರೋಪದ ಮೇಲೆ ಲೆಕ್ಕಪರಿಶೋಧಕ (ಚಾರ್ಟರ್ಡ್ ಅಕೌಂಟೆಂಟ್) ವಿರುದ್ಧ ಪ್ರಕರಣ ದಾಖಲಾಗಿದೆ. HSR Layout Police Stationನಲ್ಲಿ ಈ ಕುರಿತು ಎಫ್&zwnj;ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಎಚ್&zwnj;ಎಸ್&zwnj;ಆರ್ ಲೇಔಟ್ ನಿವಾಸಿಯಾಗಿರುವ ಗೋಪಾಲ್ ಕೆ.ಆರ್. ಸಲುಜಾ ಅವರು ನೀಡಿದ ದೂರಿನನ್ವಯ, ಶೇಷಾದ್ರಿಪುರಂ ನಿವಾಸಿಯಾದ ಚಾರ್ಟರ್ಡ್ ಅಕೌಂಟೆಂಟ್ ರಿಷಿ ಆರ್. ಜೈನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;ಪ್ರಕರಣದ ವಿವರ&lt;/h2&gt;&lt;p&gt;ದೂರುದಾರ ಗೋಪಾಲ್ ಸಲುಜಾ ಅವರು ಮಾನವಶಕ್ತಿ ಸಲಹಾ ಸಂಸ್ಥೆ ನಡೆಸುತ್ತಿದ್ದು, 2008ರಿಂದ ತಮ್ಮ ಸಂಸ್ಥೆಯ ಎಲ್ಲಾ ಹಣಕಾಸು ಮತ್ತು ತೆರಿಗೆ ಸಂಬಂಧಿತ ವ್ಯವಹಾರಗಳನ್ನು ನಿರ್ವಹಿಸಲು ರಿಷಿ ಜೈನ್ ಅವರನ್ನು ನೇಮಿಸಿಕೊಂಡಿದ್ದರು. ವೃತ್ತಿಪರ ತೆರಿಗೆ ಲೆಕ್ಕಾಚಾರ, ಫೈಲಿಂಗ್&zwnj;ಗಳು ಹಾಗೂ ರಿಟರ್ನ್ಸ್ ಸಲ್ಲಿಕೆ ಸೇರಿದಂತೆ ಎಲ್ಲ ಕಾರ್ಯಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ನಿಯಮಿತವಾಗಿ ಶುಲ್ಕವನ್ನು ಸಹ ಪಾವತಿಸಲಾಗುತ್ತಿತ್ತು.&lt;/p&gt;&lt;p&gt;ತೆರಿಗೆ ವಿಷಯಗಳಲ್ಲಿ ಹೆಚ್ಚಿನ ಅರಿವು ಇಲ್ಲದ ಕಾರಣ, ದೂರುದಾರರು ಸಂಪೂರ್ಣವಾಗಿ ಸಿಎ ಮೇಲೆ ಅವಲಂಬಿತರಾಗಿದ್ದರು. ಫೈಲಿಂಗ್ ಮತ್ತು ಪಾವತಿಗಳ ವಿಚಾರದಲ್ಲಿಯೂ ಅವರ ಮೇಲೆಯೇ ನಂಬಿಕೆ ಇಟ್ಟಿದ್ದರು. ವಾಟ್ಸಪ್ ಮತ್ತು ಇ-ಮೇಲ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಿಎ ಸೂಚಿಸಿದಂತೆ ಅಗತ್ಯ ದಾಖಲೆಗಳನ್ನು ಒದಗಿಸಲಾಗುತ್ತಿತ್ತು.&lt;/p&gt;&lt;p&gt;ಆದರೆ 2025ರ ಜುಲೈನಲ್ಲಿ ನಡೆದ ಲೆಕ್ಕಪರಿಶೋಧನೆ (ಆಡಿಟ್) ವೇಳೆ ಹಲವಾರು ವ್ಯತ್ಯಾಸಗಳು ಬೆಳಕಿಗೆ ಬಂದವು. ಆದಾಯ ತೆರಿಗೆ, ಜಿಎಸ್&zwnj;ಟಿ ಹಾಗೂ ಬ್ಯಾಂಕ್ ಪಾವತಿಗಳ ಹೆಸರಿನಲ್ಲಿ ನಕಲಿ ಚಲನ್&zwnj;ಗಳನ್ನು ಸೃಷ್ಟಿಸಿ, ಹಂತ ಹಂತವಾಗಿ ಒಟ್ಟು ₹1.81 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿರುವುದು ಪತ್ತೆಯಾಯಿತು.&lt;/p&gt;&lt;p&gt;ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಗೋಪಾಲ್ ಸಲುಜಾ ಅವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. &ldquo;ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ನನಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು&rdquo; ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-ca-booked-for-rs-1-81-crore-fraud-against-businessman-gdp/articleshow-0bgxk36"/>
        </item>
        <item>
            <title><![CDATA[ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬೆಂಗಳೂರು, 2 ಗಂಟೆಯಲ್ಲಿ 78MM ಮಳೆ  50ಕ್ಕೂ ಹೆಚ್ಚು ಮರ ಧರಶಾಹಿ, ಪ್ರಾಣಹಾನಿ!]]></title>
            <link>https://kannada.asianetnews.com/gallery/state/bengaluru-rains-many-dead-50-trees-uprooted-as-heavy-downpour-and-hailstorm-disrupt-city-life-gdp-0hqed16</link>
            <guid isPermaLink="true">https://kannada.asianetnews.com/gallery/state/bengaluru-rains-many-dead-50-trees-uprooted-as-heavy-downpour-and-hailstorm-disrupt-city-life-gdp-0hqed16</guid>
            <pubDate>Wed, 29 Apr 2026 19:38:08 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ 50ಕ್ಕೂ ಹೆಚ್ಚು ಮರಗಳು ಉರುಳಿ, ರಸ್ತೆಗಳು ಜಲಾವೃತಗೊಂಡಿದ್ದು, ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqcr7cd2wp8ses6kdfe90fcw,imgname-bengaluru-rains--3--1777470779810.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ 50ಕ್ಕೂ ಹೆಚ್ಚು ಮರಗಳು ಉರುಳಿ, ರಸ್ತೆಗಳು ಜಲಾವೃತಗೊಂಡಿದ್ದು, ಬೌರಿಂಗ್ ಆಸ್ಪತ್ರೆ ಬಳಿ ಗೋಡೆ ಕುಸಿದು 8 ಮಂದಿ ಮೃತಪಟ್ಟಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ನಗರದಲ್ಲಿ ಕಳೆದ ಎರಡು ಗಂಟೆಗಳ ಅವಧಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿವಿಧ ಭಾಗಗಳಲ್ಲಿ ಒಟ್ಟು 78 ಮಿ.ಮೀ ಮಳೆಯಾಗಿದ್ದು, ಹೆಚ್&zwnj;ಎಎಲ್ ಏರ್&zwnj;ಪೋರ್ಟ್ ಪ್ರದೇಶದಲ್ಲಿ ಮಾತ್ರವೇ 24.7 ಮಿ.ಮೀ ಮಳೆ ದಾಖಲಾಗಿದೆ. ಬೇಸಿಗೆಯ ಉರಿಯಾಟದಿಂದ ಕಂಗಾಲಾಗಿದ್ದ ನಗರಕ್ಕೆ ಮಳೆ ತಂಪು ನೀಡಿದರೂ, ಬಿರುಗಾಳಿ, ಆಲಿಕಲ್ಲು ಹಾಗೂ ಭಾರೀ ಮಳೆಯಿಂದ ಅನಾಹುತಗಳ ಸರಮಾಲೆ ಸಂಭವಿಸಿದೆ. ಬಿಬಿಎಂಪಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಪ್ರಕಾರ 50 ಸ್ಥಳಗಳಲ್ಲಿ ಮರಗಳು ಉರುಳಿವೆ. ಇದರ ಜತೆಗೆ ಈವರೆಗೆ 8 ಜನ ಮೃತಪಟ್ಟಿರುವ ಮಾಹಿತಿ ಲಭ್ಯವಿದೆ.&lt;/p&gt;&lt;img&gt;&lt;p&gt;ನಗರದ ಬನಶಂಕರಿ, ಸೌತ್ ಎಂಡ್ ಸರ್ಕಲ್, ಜಯನಗರ, ಶಾಂತಿನಗರ, ಯುಬಿ ಸಿಟಿ, ಕಾರ್ಪೋರೇಶನ್ ಪ್ರದೇಶ ಸೇರಿದಂತೆ ಹಲವೆಡೆ ಗುಡುಗು-ಗಾಳಿ ಸಹಿತ ಭಾರೀ ಮಳೆ ಮಾತ್ರವಕ್ಕ ಕಾಶ್ಮೀರದಲ್ಲಿ ಮಂಜು ಇರುವ ರೀತಿಯಲ್ಲಿ ಆಲಿಕಲ್ಲು ಬಿದ್ದಿದೆ. ವಿಧಾನಸೌಧ ಸುತ್ತಮುತ್ತ ಆಲಿಕಲ್ಲು ಮಳೆ ದಾಖಲಾಗಿದ್ದು, ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಆಲಿಕಲ್ಲುಗಳು ರಾಶಿಯಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದವು. ಚರ್ಚ್ ಸ್ಟ್ರೀಟ್, ಅವೆನ್ಯೂ ರೋಡ್ ಹಾಗೂ ಇಂದಿರಾನಗರ ಭಾಗದಲ್ಲೂ ಆಲಿಕಲ್ಲು ಮಳೆ ಜನರಲ್ಲಿ ಕುತೂಹಲ ಮೂಡಿಸಿದರೆ, ಕೆಲವರು ಅದರಲ್ಲಿ ಮೋಜುಮಸ್ತಿಯನ್ನೂ ನಡೆಸಿದರು.&lt;/p&gt;&lt;img&gt;&lt;p&gt;ಮಳೆಯ ತೀವ್ರತೆಗೆ ನಗರದ ಅನೇಕ ಕಡೆ ಮರಗಳು ಧರೆಗೆ ಉರುಳಿದ್ದು, ವಾಹನಗಳಿಗೆ ಹಾನಿಯಾಗಿದೆ. ಶಿವಾನಂದ ಸರ್ಕಲ್, ಕ್ರೆಸೆಂಟ್ ರಸ್ತೆ, ಜಯನಗರ ಹಾಗೂ ಇತರೆ ಪ್ರದೇಶಗಳಲ್ಲಿ ಮರ ಬಿದ್ದು ಕಾರು, ಬೈಕ್&zwnj;ಗಳು ಜಖಂಗೊಂಡಿವೆ. ಕೆಲವೆಡೆ ಒಂದೇ ರಸ್ತೆಯಲ್ಲಿ ಹಲವು ಮರಗಳು ಉರುಳಿ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಮೆಜೆಸ್ಟಿಕ್ ಕಾರ್ ಪಾರ್ಕಿಂಗ್ ಪ್ರದೇಶದಲ್ಲೂ ಬೃಹತ್ ಮರ ಬಿದ್ದು ಮೂರು ಕಾರುಗಳು ಹಾನಿಗೊಳಗಾದವು. ಅದೃಷ್ಟವಶಾತ್ ಹಲವೆಡೆ ಪ್ರಾಣಹಾನಿ ತಪ್ಪಿದರೂ, ಶಿವಾಜಿನಗರದ ಬಳಿ ಗೋಡೆ ಕುಸಿದು ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಎಷ್ಟು ಜನವೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ ಮುಂಭಾಗದಲ್ಲಿದ್ದ ಕಟೌಟ್ ಕೂಡ ಗಾಳಿಗೆ ಬಿದ್ದು ಹಾನಿಯಾಗಿದೆ.&lt;/p&gt;&lt;img&gt;&lt;p&gt;ಭಾರೀ ಮಳೆಯ ಪರಿಣಾಮ ನಗರದ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ಶಿವಾನಂದ ಸರ್ಕಲ್ ರೈಲ್ವೆ ಅಂಡರ್&zwnj;ಪಾಸ್&zwnj;ನಲ್ಲಿ ನೀರು ತುಂಬಿ ಕೆರೆಯಂತಾಗಿದೆ. ಅಂಡರ್&zwnj;ಪಾಸ್&zwnj;ನಲ್ಲಿ ದ್ವಿಚಕ್ರ ವಾಹನಗಳು ಸಿಲುಕಿಕೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಸವನಗುಡಿ ಅಂಡರ್&zwnj;ಪಾಸ್ ಕೂಡ ಸಂಪೂರ್ಣವಾಗಿ ನೀರಿನಿಂದ ತುಂಬಿ ಸಂಚಾರಕ್ಕೆ ಅಡ್ಡಿಯಾಗಿದೆ. ಎಚ್&zwnj;ಎಸ್&zwnj;ಆರ್ ಲೇಔಟ್, ಸರಜಾಪುರ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕಾಮರಾಜ ರಸ್ತೆ ಸೇರಿದಂತೆ ಹಲವೆಡೆ ವಾಹನಗಳು ಅರ್ಧ ಮುಳುಗಡೆಗೊಂಡಿವೆ.&lt;/p&gt;&lt;img&gt;&lt;p&gt;ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ಸಮೀಪ ಬಿರುಗಾಳಿಗೆ ತಗಡಿನ ತಡೆಗೋಡೆ ಕಿತ್ತು ಬಿದ್ದಿದ್ದು, ಮತ್ತಷ್ಟು ಅಪಾಯದ ಭೀತಿ ಮೂಡಿಸಿದೆ. ಲಗ್ಗೆರೆಯಲ್ಲಿ ಗಾಳಿ-ಮಳೆಗೆ ಶೆಡ್&zwnj;ಗಳು ಕಿತ್ತು ಹೋಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈಕೋರ್ಟ್ ಆವರಣದ ಅಡ್ವೋಕೇಟ್ ಜನರಲ್ ಕಚೇರಿಗೆ ಮಳೆ ನೀರು ನುಗ್ಗಿ ದಾಖಲೆಗಳಿಗೆ ಹಾನಿಯಾಗಿದೆ. ವಿಧಾನಸೌಧದ ಪಶ್ಚಿಮ ದ್ವಾರ ಹಾಗೂ ಕೆಲವು ಕಚೇರಿಗಳಲ್ಲೂ ನೀರು ಒಳನುಗ್ಗಿದ ಘಟನೆಗಳು ವರದಿಯಾಗಿವೆ.&lt;/p&gt;&lt;img&gt;&lt;p&gt;ಬೌರಿಂಗ್ ಆಸ್ಪತ್ರೆ ಸಮೀಪ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ ಮೃತ ದುರ್ಧೈವಿಗಳು ಹಳೆಯ ಗೋಡೆಗೆ ದೊಡ್ಡ ಟಾರ್ಪಲ್&zwnj; ಹಾಕಿ ವ್ಯಾಪಾರ ಮಾಡುತ್ತಿದ್ದರು. ದಿಢೀರನೆ ಮಳೆ ಜೋರಾಗಿ ಸುರಿದ ಕಾರಣ ರಕ್ಷಣೆಗೆ ವ್ಯಾಪಾರಿಗಳು ಮತ್ತು ಪಾದಾಚಾರಿಗಳು ಟಾರ್ಪಲ್&zwnj; ಆಡಿ ನಿಂತಿದ್ದಾರೆ. ಈ ವೇಳೆ ಬಿರುಗಾಳಿ ಸಹಿತ ಮಳೆಗೆ ಗೋಡೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದುರಂತದಿಂದ ಸಾವನ್ನಪ್ಪಿದ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸಿಎಂ ಸಿದ್ದರಾಮಯ್ಯ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಘಟನಾ ಸ್ಥಳದಲ್ಲಿ ಜರಸಿಬಿ ಮೂಲಕ ತೆರವು ಕಾರ್ಯಾಚರಣೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ಮೆಟ್ರೋ ಸೇವೆಯ ಮೇಲೂ ಮಳೆಯ ಪರಿಣಾಮ ಕಂಡುಬಂದಿದ್ದು, ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೂ ನೀರು ಹರಿದು ಟಿಕೆಟ್ ಕೌಂಟರ್ ಭಾಗಗಳಲ್ಲಿ ನೀರು ನಿಂತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಕಚೇರಿಗಳಿಂದ ಮನೆಗಳಿಗೆ ತೆರಳುತ್ತಿದ್ದವರು ಟ್ರಾಫಿಕ್ ಜಾಮ್&zwnj;ನಲ್ಲಿ ಸಿಲುಕಿ ಗಂಟೆಗಳ ಕಾಲ ಸಂಕಷ್ಟ ಅನುಭವಿಸಿದ್ದಾರೆ. ಕಾರ್ಪೋರೇಶನ್, ಮೆಜೆಸ್ಟಿಕ್, ಶಾಂತಿನಗರ, ಹೆಬ್ಬಾಳ ಸೇರಿದಂತೆ ಪ್ರಮುಖ ಜಂಕ್ಷನ್&zwnj;ಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ಗ್ರಾಮಾಂತರ ಭಾಗಗಳಾದ ಹೊಸಕೋಟೆ ಸುತ್ತಮುತ್ತಲೂ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಸಹಿತ ಭಾರೀ ಮಳೆ ಸುರಿದಿದೆ. ಬೇಸಿಗೆಯ ಬಿಸಿಯಿಂದ ಬಳಲುತ್ತಿದ್ದ ಜನರಿಗೆ ಈ ಮಳೆ ತಂಪು ನೀಡಿದರೂ, ಕೆಲವೆಡೆ ಹಾನಿ ಉಂಟುಮಾಡಿದೆ. ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ &lsquo;ಯೆಲ್ಲೋ ಅಲರ್ಟ್&rsquo; ಘೋಷಿಸಿದೆ. ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ, ಮಳೆರಾಯನ ಆಗಮನದಿಂದ ಬಿಸಿಲಿಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಭಾರೀ ಮಳೆಯ ಪರಿಣಾಮ ಬೆಂಗಳೂರಿನ ಜನಜೀವನ ತತ್ತರಿಸಿ ಹೋಗಿರುವುದು ಸ್ಪಷ್ಟವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/bengaluru-rains-many-dead-50-trees-uprooted-as-heavy-downpour-and-hailstorm-disrupt-city-life-gdp-0hqed16"/>
        </item>
        <item>
            <title><![CDATA[ಭಾರತದ 'ಐಸ್‌ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದ ಬೆಂಗಳೂರು! ತಣ್ಣಗಿನ ಆಹಾರಗಳಿಗೆ ರಾತ್ರಿ ಫುಲ್‌ ಡಿಮ್ಯಾಂಡ್‌!]]></title>
            <link>https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q</link>
            <guid isPermaLink="true">https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q</guid>
            <pubDate>Thu, 30 Apr 2026 15:17:09 +0530</pubDate>
            <description><![CDATA[&lt;p&gt;ಇನ್&zwnj;ಸ್ಟಾಮಾರ್ಟ್&zwnj;ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ &amp;nbsp;ಐಸ್&zwnj;ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್&zwnj;ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ &amp;nbsp;ಹೆಚ್ಚು ಐಸ್&zwnj;ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6ye27va3w6gya7x3efpprk,imgname-icecream-2-1775128479994.jpg" type="image/jpeg" height="390" width="690"/>
            <content:encoded><![CDATA[&lt;p&gt;ಇನ್&zwnj;ಸ್ಟಾಮಾರ್ಟ್&zwnj;ನ ಸಮ್ಮರ್ ಟ್ರೆಂಡ್ಸ್ 2026 ವರದಿಯ ಪ್ರಕಾರ, ಬೆಂಗಳೂರು ದೇಶದ &amp;nbsp;ಐಸ್&zwnj;ಕ್ರೀಮ್ ರಾಜಧಾನಿಯಾಗಿ ಹೊರಹೊಮ್ಮಿದೆ. ಬೇಸಿಗೆಯಲ್ಲಿ ಐಸ್&zwnj;ಕ್ರೀಮ್, ತಂಪು ಪಾನೀಯಗಳು, ಮೊಸರು ಮತ್ತು ಮಾವಿನ ಹಣ್ಣುಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದ್ದು, ರಾತ್ರಿ &amp;nbsp;ಹೆಚ್ಚು ಐಸ್&zwnj;ಕ್ರೀಮ್ ಆರ್ಡರ್ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ತಂಪಾದ ಪಾನೀಯಗಳು ಹಾಗೂ ಐಸ್&zwnj;ಕ್ರೀಮ್&zwnj;ಗಳ ಮೊರೆ ಹೋಗಿದ್ದಾರೆ. ಇದಕ್ಕೆ ಸಾಕ್ಷಿ ಪ್ರಮುಖ ಆನ್&zwnj;ಲೈನ್ ಡೆಲಿವರಿ ಪ್ಲಾಟ್&zwnj;ಫಾರ್ಮ್ 'ಇನ್&zwnj;ಸ್ಟಾಮಾರ್ಟ್' ಬಿಡುಗಡೆ ಮಾಡಿರುವ 'ಸಮ್ಮರ್ ಟ್ರೆಂಡ್ಸ್ 2026'ರ ವರದಿ. ಇದರ ಪ್ರಕಾರ, ಬೆಂಗಳೂರಿನ ಜನ ದೇಶದಲ್ಲೇ ಅತಿ ಹೆಚ್ಚು ಐಸ್&zwnj;ಕ್ರೀಮ್ ಸೇವಿಸುತ್ತಿದ್ದು, ಉದ್ಯಾನ ನಗರಿ ಈಗ 'ಭಾರತದ ಐಸ್&zwnj;ಕ್ರೀಮ್ ರಾಜಧಾನಿ'ಯಾಗಿ ಹೊರಹೊಮ್ಮಿದೆ. ಭಾರತದ ಒಟ್ಟು ಐಸ್&zwnj;ಕ್ರೀಮ್ ಬೇಡಿಕೆಯಲ್ಲಿ ಬರೋಬ್ಬರಿ ಶೇ. 14ರಷ್ಟು ಪಾಲು ಕೇವಲ ಬೆಂಗಳೂರು ನಗರವೊಂದರಿಂದಲೇ ಬರುತ್ತಿದ್ದು, ಅಚ್ಚರಿ ಮೂಡಿಸಿದೆ.&lt;/p&gt;&lt;img&gt;&lt;p&gt;ಬೇಸಿಗೆಯ ಆರಂಭದ ತಿಂಗಳುಗಳಾದ ಮಾರ್ಚ್ ಮತ್ತು ಏಪ್ರಿಲ್&zwnj;ನಲ್ಲಿ ತಂಪು ಪಾನೀಯಗಳು ಮತ್ತು ಐಸ್&zwnj;ಕ್ರೀಮ್&zwnj;ಗಳ ಆನ್&zwnj;ಲೈನ್ ಆರ್ಡರ್&zwnj;ಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇನ್&zwnj;ಸ್ಟಾಮಾರ್ಟ್ ವರದಿಯ ಪ್ರಕಾರ, ದೇಶಾದ್ಯಂತ ಹಣ್ಣುಗಳು, ತಂಪು ಪಾನೀಯಗಳು, ಕೋಲ್ಡ್ ಕಾಫಿ, ಫಿಜಿ ಡ್ರಿಂಕ್ಸ್ ಮತ್ತು ಪಾಪ್ಸಿಕಲ್&zwnj;ಗಳ ಬೇಡಿಕೆಯು ವಾರದಿಂದ ವಾರಕ್ಕೆ ಶೇ. 300ರಷ್ಟು ಏರಿಕೆಯಾಗಿದೆ. ಕೇವಲ ತಿಂಡಿ-ತಿನಿಸುಗಳು ಮಾತ್ರವಲ್ಲದೆ, ಬಿಸಿಲಿನಿಂದ ರಕ್ಷಣೆ ಪಡೆಯುವ ಸಾಧನಗಳಾದ ಫ್ಯಾನ್&zwnj;ಗಳ ಮಾರಾಟದಲ್ಲಿ ಶೇ. 280ರಷ್ಟು ಏರಿಕೆ ದಾಖಲಾಗಿದ್ದರೆ, ಸನ್&zwnj;ಗ್ಲಾಸ್&zwnj;ಗಳ ಮಾರಾಟದಲ್ಲಿ ವಾರ್ಷಿಕವಾಗಿ ಬರೋಬ್ಬರಿ ಶೇ. 650ರಷ್ಟು ವೃದ್ಧಿಯಾಗಿದೆ.&lt;/p&gt;&lt;img&gt;&lt;p&gt;ವರದಿಯಲ್ಲಿ ಉಲ್ಲೇಖಿಸಿರುವ ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ಭಾರತೀಯರು ಅತಿ ಹೆಚ್ಚು ಐಸ್&zwnj;ಕ್ರೀಮ್ ಸೇವಿಸುವ ಸಮಯ ರಾತ್ರಿ 9 ಗಂಟೆ! ಸಂಜೆ 6 ರಿಂದ 9 ಗಂಟೆಯ ನಡುವೆ ಐಸ್&zwnj;ಕ್ರೀಮ್ ಮತ್ತು ತಂಪು ಪಾನೀಯಗಳ ಬೇಡಿಕೆ ದುಪ್ಪಟ್ಟಾಗುತ್ತಿದೆ. ವಿಶೇಷವೆಂದರೆ ವಾರಾಂತ್ಯಗಳಲ್ಲಿ ಈ ಬೇಡಿಕೆ ಇನ್ನಷ್ಟು ತಾರಕಕ್ಕೇರುತ್ತದೆ. ಐಸ್&zwnj;ಕ್ರೀಮ್ ಫ್ಲೇವರ್&zwnj;ಗಳ ವಿಚಾರಕ್ಕೆ ಬಂದರೆ, 'ಚಾಕೊಲೇಟ್ ಐಸ್&zwnj;ಕ್ರೀಮ್' ದೇಶದ ಜನರ ಅಚ್ಚುಮೆಚ್ಚಿನ ಆಯ್ಕೆಯಾಗಿದ್ದು, ಒಟ್ಟು ಆರ್ಡರ್&zwnj;ಗಳಲ್ಲಿ ಶೇ. 28ರಷ್ಟು ಪಾಲನ್ನು ಇದು ಹೊಂದಿದೆ. ಜೊತೆಗೆ, ಕುಟುಂಬ ಸಮೇತ ಸವಿಯಲು ಅನುಕೂಲವಾಗುವ 'ಫ್ಯಾಮಿಲಿ-ಸೈಸ್ ಟಬ್' ಐಸ್&zwnj;ಕ್ರೀಮ್&zwnj;ಗಳಿಗೆ ಅತಿ ಹೆಚ್ಚು ಡಿಮ್ಯಾಂಡ್ ಇದೆ.&lt;/p&gt;&lt;img&gt;&lt;p&gt;ಬೇಸಿಗೆಯ ಈ ಉರಿಬಿಸಿಲಿನಲ್ಲಿ ಭಾರತೀಯರು ಕೇವಲ ಐಸ್&zwnj;ಕ್ರೀಮ್&zwnj;ಗೆ ಸೀಮಿತವಾಗಿಲ್ಲ. ಬದಲಾಗಿ, ಆರೋಗ್ಯಕರ ಮತ್ತು ದೇಶಿ ತಂಪು ಪಾನೀಯಗಳತ್ತಲೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಐಸ್&zwnj;ಕ್ರೀಮ್ ಮತ್ತು ಕೋಲ್ಡ್ ಡ್ರಿಂಕ್ಸ್&zwnj;ಗಳಿಗೆ ಸಮಾನವಾಗಿ ಮೊಸರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರು ಅತಿ ಹೆಚ್ಚು ಆರ್ಡರ್ ಮಾಡಿದ ಟಾಪ್ 10 ಉತ್ಪನ್ನಗಳ ಪೈಕಿ 6 ಉತ್ಪನ್ನಗಳು ಮೊಸರು ಆಧಾರಿತವಾಗಿವೆ. ಈ ಸೀಸನ್&zwnj;ನ ಪ್ರಮುಖ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ ಸೇರಿದಂತೆ ತಾಜಾ ಹಣ್ಣುಗಳ ಬಳಕೆಯೂ ಗಣನೀಯವಾಗಿ ಏರಿಕೆಯಾಗಿದೆ.&lt;/p&gt;&lt;img&gt;&lt;p&gt;ಇನ್ನು ಹಣ್ಣುಗಳ ರಾಜ 'ಮಾವು' ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ 'ಲಾಲ್&zwnj;ಬಾಗ್&zwnj; ಸಿಂಧೂರ ಮಾವು' ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಬಂಗನಪಲ್ಲಿ ಮತ್ತು ಕಾಯಿ ಮಾವಿನಕಾಯಿ ನಂತರದ ಸ್ಥಾನದಲ್ಲಿವೆ. ಕೇರಳದ ಕೋಳಿಕ್ಕೋಡ್&zwnj;, ತಮಿಳುನಾಡಿನ ಮದುರೈ, ತಿರುಚ್ಚಿ, ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ನೆಲ್ಲೂರು ನಗರಗಳಿಂದ ಮಾವಿಗೆ ಭಾರೀ ಬೇಡಿಕೆ ಬರುತ್ತಿವೆ. ಇದೇ ವೇಳೆ ಜೀರಾ ಮಸಾಲಾ ಸೋಡಾಕ್ಕೂ ಬೇಡಿಕೆ ಹೆಚ್ಚಾಗಿದ್ದು, ತಿಂಗಳಿಂದ ತಿಂಗಳಿಗೆ ಬರೋಬ್ಬರಿ ಶೇ. 900ರಷ್ಟು ಜಿಗಿತ ಕಂಡುಬಂದಿದೆ. ಕೋಲ್ಡ್ ಕಾಫಿ ಆರ್ಡರ್&zwnj;ಗಳಲ್ಲಿ ಶೇ. 700ರಷ್ಟು ಏರಿಕೆಯಾಗಿದ್ದರೆ, ಎಳನೀರು, ಮಜ್ಜಿಗೆ, ಲಸ್ಸಿ ಹಾಗೂ ಮಿಲ್ಕ್&zwnj;ಶೇಕ್&zwnj;ಗಳಿಗೆ ಸಂಜೆ 6 ರಿಂದ 9ರ ನಡುವೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ.&lt;/p&gt;&lt;img&gt;&lt;p&gt;ಐಸ್&zwnj;ಕ್ರೀಮ್ ಬಳಕೆಯಲ್ಲಿ ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಪುಣೆ ಮುಂಚೂಣಿಯಲ್ಲಿವೆ. ಇನ್ನು ಸೆಂಟ್ರಲ್ ಗೋವಾ, ತ್ರಿಶೂರ್&zwnj;, ತಿರುವಲ್ಲಿ, ನಾಗರ್&zwnj;ಕೋಯಿಲ್ ಮತ್ತು ಮಣಿಪಾಲದಲ್ಲಿ 'ಬಳಕೆದಾರರ ತಲಾ ಆರ್ಡರ್&zwnj;ʼಗಳ ಸಂಖ್ಯೆ ಹೆಚ್ಚಾಗಿದೆ. ಬೇಸಿಗೆಯ ವಸ್ತುಗಳಿಗಾಗಿ ಗ್ರಾಹಕರು ಭಾರಿ ಮೊತ್ತವನ್ನು ವ್ಯಯಿಸುತ್ತಿದ್ದು, ಬೆಂಗಳೂರಿನ ಗ್ರಾಹಕರೊಬ್ಬರು ಕೋಲ್ಡ್ ಕಾಫಿ, ಮಜ್ಜಿಗೆ, ಮಾವು, ಐಸ್&zwnj;ಕ್ರೀಮ್ ಮತ್ತು ಮೊಸರಿಗಾಗಿಯೇ ಬರೋಬ್ಬರಿ 11,000 ರೂ.ಗೂ ಹೆಚ್ಚು ಖರ್ಚು ಮಾಡಿದ್ದಾರೆ!&lt;/p&gt;&lt;img&gt;&lt;p&gt;ಅದೇ ರೀತಿ ಆಂಧ್ರಪ್ರದೇಶದ ಗುಂಟೂರಿನ ಗ್ರಾಹಕರೊಬ್ಬರು ಎನರ್ಜಿ ಡ್ರಿಂಕ್ಸ್ ಮತ್ತು ಮಿನಿ ಫ್ಯಾನ್&zwnj;ಗಳಿಗಾಗಿ 15,005 ಖರ್ಚು ಮಾಡಿದ್ದರೆ, ಸೆಂಟ್ರಲ್ ಗೋವಾದಲ್ಲಿ ಒಬ್ಬರು ಎಳನೀರು, ಕುಲ್ಫಿ, ಮಾವು ಮತ್ತು ತಂಪು ಪಾನೀಯಗಳಿಗಾಗಿ 11,672 ರೂ. ತೆತ್ತಿದ್ದಾರೆ. ಹೈದರಾಬಾದ್&zwnj;ನ ಗ್ರಾಹಕರೊಬ್ಬರಿಂದ ಐಸ್&zwnj;ಕ್ರೀಮ್, ಮಾವು, ತಂಪು ಪಾನೀಯಗಳು ಮತ್ತು ಮಜ್ಜಿಗೆಗಾಗಿ 11,000 ರೂ.ಗೂ ಹೆಚ್ಚಿನ ಮೊತ್ತದ ಆರ್ಡರ್ ಬಂದಿದ್ದರೆ, ಎಳನೀರು, ಮಾವು, ಮೊಸರು ಮತ್ತು ಐಸ್&zwnj;ಕ್ರೀಮ್&zwnj;ಗಾಗಿ ಕೋಲ್ಕತ್ತಾದವರೊಬ್ಬರು ಬರೋಬ್ಬರಿ 10,600 ರೂ.ಗೂ ಹೆಚ್ಚು ಹಣ ಖರ್ಚು ವ್ಯಯಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/instamart-summer-trends-2026-report-declared-bengaluru-as-india-s-ice-cream-capital-gdp-124o78q"/>
        </item>
        <item>
            <title><![CDATA[ಬೆಂಗಳೂರು ಮನಿ ಡಬಲಿಂಗ್ ವಂಚನೆ: ಎಐ ರೋಬೋಟ್ ಟ್ರೇಡಿಂಗ್, ಮೋಸ ಹೋಗಿ ಹಣ ಕಳೆದುಕೊಂಡವರು ದಕ್ಷಿಣ ಕನ್ನಡದವರೇ ಹೆಚ್ಚು!]]></title>
            <link>https://kannada.asianetnews.com/state/bengaluru-ai-trading-scam-crores-duped-in-money-doubling-fraud-linked-to-fake-robot-trading-platform-gdp/articleshow-1x6s6mx</link>
            <guid isPermaLink="true">https://kannada.asianetnews.com/state/bengaluru-ai-trading-scam-crores-duped-in-money-doubling-fraud-linked-to-fake-robot-trading-platform-gdp/articleshow-1x6s6mx</guid>
            <pubDate>Sat, 25 Apr 2026 11:46:54 +0530</pubDate>
            <description><![CDATA[ಬೆಂಗಳೂರಿನಲ್ಲಿ 'ಎಐ ರೋಬೋಟ್ ಟ್ರೇಡಿಂಗ್' ಹೆಸರಿನಲ್ಲಿ ಹಣ ಡಬಲ್ ಮಾಡುವ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ಮಾಡಲಾಗಿದೆ. ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ನೇತೃತ್ವದ ಈ ಜಾಲವು, ಕರಾವಳಿ ಭಾಗದವರನ್ನೇ ಗುರಿಯಾಗಿಸಿ ಮೋಸ ಮಾಡಿದ್ದು, ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1mcy8axtjezfn4aq7syjt2,imgname-bengaluru-ai-trading-scam-1777097668874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt; ನಗರದಲ್ಲಿ 'ಮನಿ ಡಬಲಿಂಗ್' ಎಂಬ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಎಐ (AI) ರೋಬೋಟ್ ಟ್ರೇಡಿಂಗ್ ಹೆಸರಿನಲ್ಲಿ ಜನರನ್ನು ಮರುಳು ಮಾಡಿ, ಸಂಘಟಿತವಾಗಿ ಹಣ ಸಂಗ್ರಹಿಸಿದ ಮೋಸದ ಜಾಲವು ಕಳೆದ ಎರಡು-ಮೂರು ವರ್ಷಗಳಿಂದ ಸಕ್ರಿಯವಾಗಿತ್ತು ಎಂಬ ಮಾಹಿತಿ ಹೊರಬಂದಿದೆ.&lt;/p&gt;&lt;p&gt;ಈ ವಂಚನೆ ಪ್ರಕರಣದಲ್ಲಿ ರಾಜೇಶ್ ಕಾಮತ್, ಮಧು ಮತ್ತು ನಾಗೇಶಪ್ಪ ಪ್ರಮುಖ ಆರೋಪಿಗಳಾಗಿದ್ದಾರೆ. ಕ್ರಿಸ್ಟಲ್ ಎಐ ರೋಬೋಟ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ನಕಲಿ ಹೂಡಿಕೆ ವೇದಿಕೆ ನಿರ್ಮಿಸಿ, 200 ದಿನಗಳಲ್ಲಿ ಹಣ ಡಬಲ್ ಆಗುತ್ತದೆ ಎಂಬ ಭರವಸೆ ನೀಡುತ್ತಾ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡಿದ್ದರು. ಆರಂಭದಲ್ಲಿ ಕೆಲವರಿಗೆ ಲಾಭ ನೀಡಿದಂತೆ ತೋರಿಸಿ, ಹೆಚ್ಚಿನ ಹೂಡಿಕೆಗಳಿಗೆ ಪ್ರೇರೇಪಿಸಿ ಬಳಿಕ ಸಂಪರ್ಕ ಕಡಿತಗೊಳಿಸುವುದು ಇವರ ತಂತ್ರವಾಗಿತ್ತು.&lt;/p&gt;&lt;h2&gt;ಹಣ ಕಳೆದುಕೊಂಡವರು ಕರಾವಳಿ ಭಾಗದವರೇ ಹೆಚ್ಚು&lt;/h2&gt;&lt;p&gt;ಆರೋಪಿಗಳು ಚೈನ್ ಲಿಂಕ್ ಕಂಪನಿ ಮಾದರಿಯಲ್ಲಿ ಜಾಲವನ್ನು ವಿಸ್ತರಿಸಿದ್ದು, ಸುಮಾರು 50ಕ್ಕೂ ಹೆಚ್ಚು ಜನರನ್ನು ಏಜೆಂಟ್&zwnj;ಗಳಾಗಿ ನೇಮಿಸಿಕೊಂಡು ಹೂಡಿಕೆದಾರರನ್ನು ಸೆಳೆಯುತ್ತಿದ್ದರು. ರಾಜ್ಯದ ವಿವಿಧ ಭಾಗಗಳಿಂದಲೇ ಅಲ್ಲದೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದಲೂ ಹೂಡಿಕೆ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಹಣ ಹೂಡಿಕೆ ಮಾಡಿ ಮೋಸಹೋಗಿರುವುದು ಬೆಳಕಿಗೆ ಬಂದಿದೆ.&lt;/p&gt;&lt;p&gt;ಆರಂಭದಲ್ಲಿ ಬೆಂಗಳೂರಿನ ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪ ಕಚೇರಿ ಆರಂಭಿಸಿದ್ದ ಆರೋಪಿಗಳು, ಬಳಿಕ ತಮ್ಮ ಜಾಲವನ್ನು ವಿಸ್ತರಿಸಿ ದುಬೈ ಸೇರಿದಂತೆ ವಿದೇಶಗಳಲ್ಲಿ ಕಚೇರಿಗಳನ್ನು ಹೊಂದಿರುವಂತೆ ತೋರಿಸಿ, &ldquo;ನೆಟ್&zwnj;ವರ್ಕ್ ಬಿಸಿನೆಸ್&rdquo; ಹೆಸರಿನಲ್ಲಿ ಜನರನ್ನು ಮೋಡಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಪರಿಚಯಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ, ಹೆಚ್ಚಿನ ಲಾಭದ ಆಸೆ ಮೂಡಿಸಿ ಹಣ ಸಂಗ್ರಹಿಸುವುದು ಇವರ ತಂತ್ರವಾಗಿತ್ತು.&lt;/p&gt;&lt;h2&gt;ತನಿಖೆ ಚುರುಕು&lt;/h2&gt;&lt;p&gt;ಪ್ರಕರಣ ಬೆಳಕಿಗೆ ಬಂದ ನಂತರ, ಬೆಂಗಳೂರು ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇದೀಗ ಪೊಲೀಸರು ಪ್ರಕರಣದ ಹಿನ್ನಲೆ, ಹಣದ ಹರಿವು ಮತ್ತು ಇನ್ನಷ್ಟು ಸಂಬಂಧಿತ ವ್ಯಕ್ತಿಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಆಮಿಷಕ್ಕೆ ಒಳಗಾಗಿ ಹೂಡಿಕೆ ಮಾಡಿದ ಸಾರ್ವಜನಿಕರು ತಮ್ಮ ದುಡಿಮೆ ಹಣವನ್ನು ಕಳೆದುಕೊಂಡಿದ್ದು, ಇಂತಹ ಮೋಸಗಳಿಂದ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶ ಮತ್ತೊಮ್ಮೆ ನೀಡದಂತಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-ai-trading-scam-crores-duped-in-money-doubling-fraud-linked-to-fake-robot-trading-platform-gdp/articleshow-1x6s6mx"/>
        </item>
        <item>
            <title><![CDATA[ಬೆಂಗಳೂರು:ಕಾಮುಕ ನಕಲಿ ಅಧಿಕಾರಿಗೆ ವಿವಾಹಿತ ಮಹಿಳೆಯರೇ ಬೇಕು, ಬಲೆಗೆ ಬೀಳಿಸಿ ಅಶ್ಲೀಲ ವಿಡಿಯೋ ಮಾಡಿ ಹಣಕ್ಕೆ ಬೆದರಿಕೆ!]]></title>
            <link>https://kannada.asianetnews.com/karnataka-districts/bengaluru-man-haniyuru-chandregowda-arrested-for-blackmailing-married-women-using-fake-identities-and-private-videos-gdp/articleshow-20p0h0u</link>
            <guid isPermaLink="true">https://kannada.asianetnews.com/karnataka-districts/bengaluru-man-haniyuru-chandregowda-arrested-for-blackmailing-married-women-using-fake-identities-and-private-videos-gdp/articleshow-20p0h0u</guid>
            <pubDate>Fri, 01 May 2026 13:20:40 +0530</pubDate>
            <description><![CDATA[ಬೆಂಗಳೂರಿನಲ್ಲಿ ನಕಲಿ ಗುರುತುಗಳನ್ನು ಬಳಸಿ ವಿವಾಹಿತ ಮಹಿಳೆಯರನ್ನು ಬಲೆಗೆ ಬೀಳಿಸುತ್ತಿದ್ದ ಹನಿಯೂರು ಚಂದ್ರೇಗೌಡ ಎಂಬಾತನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿದ್ದಾರೆ. ಈತ ಮಹಿಳೆಯರ ಖಾಸಗಿ ವಿಡಿಯೋಗಳನ್ನು ಬಳಸಿ ಬ್ಲ್ಯಾಕ್&zwnj;ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದ. ತನಿಖೆಯ ವೇಳೆ 20ಕ್ಕೂ ಹೆಚ್ಚು ಮಹಿಳೆಯರನ್ನು ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqh7cv0heez2mnsbc6m0wb3k,imgname-haniyuru-chandregowda-1777620904976.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಂಚನೆ ಮತ್ತು ಬ್ಲ್ಯಾಕ್&zwnj;ಮೇಲ್ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಆರ್.ಆರ್.ನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಹನಿಯೂರು ಚಂದ್ರೇಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವನು ಹಲವು ವಿವಾಹಿತ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿ ದೈಹಿಕವಾಗಿ ದುರುಪಯೋಗಪಡಿಸಿಕೊಂಡು, ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳ ಮೂಲಕ ಬೆದರಿಕೆ ಹಾಕುತ್ತಿದ್ದನೆಂಬ ಗಂಭೀರ ಆರೋಪಗಳು ಕೇಳಿಬಂದಿವೆ.&lt;/p&gt;&lt;p&gt;ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಹಿಳೆಯರನ್ನು ಸೆಳೆಯಲು ವಿಭಿನ್ನ ರೀತಿಯ ನಕಲಿ ಗುರುತುಗಳನ್ನು ಬಳಸುತ್ತಿದ್ದನು. ಕೆಲವರಿಗೆ ತಾನು ಸೀರಿಯಲ್ ಆರ್ಟಿಸ್ಟ್ ಎಂದು ಪರಿಚಯಿಸಿಕೊಂಡಿದ್ದರೆ, ಇನ್ನೂ ಕೆಲವರಿಗೆ ಮೇಕಪ್ ಆರ್ಟಿಸ್ಟ್, ಪೊಲೀಸ್ ಅಧಿಕಾರಿ, ಆರ್&zwnj;ಟಿಐ ಕಾರ್ಯಕರ್ತ ಅಥವಾ ಲೆಕ್ಚರರ್ ಎಂದು ಹೇಳಿಕೊಂಡು ವಿಶ್ವಾಸ ಗೆಲ್ಲುತ್ತಿದ್ದನು. ಬಣ್ಣ ಬಣ್ಣದ ಮಾತುಗಳಿಂದ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ, ನಂತರ ಹತ್ತಿರವಾಗುತ್ತಿದ್ದನು.&lt;/p&gt;&lt;h2&gt;ವಿವಿಧ ರೀತಿಯಲ್ಲಿ ಪರಿಚಯಿಸಕೊಂಡು ವಿಶ್ವಾಸ ಗಳಿಸುತ್ತಿದ್ದ ಕಾಮುಕ&amp;nbsp;&lt;/h2&gt;&lt;p&gt;ಒಂದು ಪ್ರಕರಣದಲ್ಲಿ, ಮೇಕಪ್ ಆರ್ಟಿಸ್ಟ್ ಆಗಿದ್ದ ವಿವಾಹಿತ ಮಹಿಳೆಯೊಬ್ಬಳಿಗೆ ತಾನು ಉತ್ತಮ ಸಂಬಳ ಹೊಂದಿರುವ ಲೆಕ್ಚರರ್ ಎಂದು ನಂಬಿಸಿ ಪರಿಚಯ ಮಾಡಿಕೊಂಡಿದ್ದಾನೆ. ಹಂತ ಹಂತವಾಗಿ ಆಕೆಯೊಂದಿಗೆ ಆತ್ಮೀಯತೆ ಸಾಧಿಸಿ ಬಳಿಕ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಖಾಸಗಿ ಕ್ಷಣಗಳ ವಿಡಿಯೋ ಹಾಗೂ ಫೋಟೋ ಗುಪ್ತವಾಗಿ ದಾಖಲಿಸಿಕೊಂಡಿದ್ದಾನೆ.&lt;/p&gt;&lt;p&gt;ನಂತರ ಈ ಖಾಸಗಿ ದೃಶ್ಯಗಳನ್ನು ಬಳಸಿ ಮಹಿಳೆಯನ್ನು ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದನು. &ldquo;ನಾನು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ&rdquo; ಎಂದು ಬೆದರಿಕೆ ಹಾಕಿ, ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆಯಿಂದ ಸುಮಾರು ಐದು ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ತಿಳಿದುಬಂದಿದೆ.&lt;/p&gt;&lt;h2&gt;ಮೊಬೈಲ್ ನೋಡಿ ಶಾಕ್ ಆದ ಸಂತೃಸ್ತೆ&lt;/h2&gt;&lt;p&gt;ಒಮ್ಮೆ ಆತನ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ, ದೂರುದಾರ ಮಹಿಳೆ ಶಾಕ್ ಆಗಿದ್ದಾಳೆ. ಆಕೆಗೆ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಆತನ ಮೊಬೈಲ್&zwnj;ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋಗಳು, ಫೋಟೋಗಳು ಹಾಗೂ ಚಾಟಿಂಗ್ ದಾಖಲೆಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ಮಹಿಳೆಯರನ್ನು ಇದೇ ರೀತಿಯಲ್ಲಿ ಬಲೆಗೆ ಬೀಳಿಸಿ ವಂಚನೆ ನಡೆಸಿರುವುದು ಸಂತೃಸ್ತೆಗೆ ದೃಢಪಟ್ಟಿದೆ.&lt;/p&gt;&lt;p&gt;ಈ ಘಟನೆಗೆ ಸಂಬಂಧಿಸಿ ಸಂತ್ರಸ್ತ ಮಹಿಳೆ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಕೈಗೊಂಡಿದ್ದಾರೆ. ತನಿಖೆಯ ವೇಳೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ನಂತರ ಹನಿಯೂರು ಚಂದ್ರೇಗೌಡನನ್ನು ಬಂಧಿಸಲಾಗಿದೆ.&lt;/p&gt;&lt;p&gt;ಇನ್ನು ಆರೋಪಿಯು ರಾಮನಗರ ಮಕ್ಕಳ ಆಯೋಗ ಸಮಿತಿಯ ಸದಸ್ಯನಾಗಿದ್ದಾನೆ ಎಂಬ ಮಾಹಿತಿ ಕೂಡ ಹೊರಬಂದಿದ್ದು, ನಕಲಿ ಐಡಿ ಕಾರ್ಡ್&zwnj;ಗಳನ್ನು ಬಳಸಿ ಹಲವರಿಗೆ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಇದೆ. ಈ ಎಲ್ಲಾ ಅಂಶಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಮಹಿಳೆಯರ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ವಂಚನೆ ಮತ್ತು ಬ್ಲ್ಯಾಕ್&zwnj;ಮೇಲ್ ನಡೆಸುತ್ತಿದ್ದ ಈ ಪ್ರಕರಣವು ಸಮಾಜದಲ್ಲಿ ಆತಂಕ ಮೂಡಿಸಿದ್ದು, ಇಂತಹ ಘಟನೆಗಳಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-man-haniyuru-chandregowda-arrested-for-blackmailing-married-women-using-fake-identities-and-private-videos-gdp/articleshow-20p0h0u"/>
        </item>
        <item>
            <title><![CDATA[ಬೆಂಗಳೂರು ಜಲಮಂಡಳಿಯಿಂದ ನಿವಾಸಿಗಳಿಗೆ ಕಾವೇರಿ ನೀರಿನ ದರ ಏರಿಕೆ ಶಾಕ್, ಮತ್ತೆ ಶೇ.3ರಷ್ಟು ಹೆಚ್ಚಳ!]]></title>
            <link>https://kannada.asianetnews.com/karnataka-districts/bengaluru-water-tariff-hike-cauvery-water-charges-increased-by-3-percent-from-april-1st-gdp/articleshow-3wgv57i</link>
            <guid isPermaLink="true">https://kannada.asianetnews.com/karnataka-districts/bengaluru-water-tariff-hike-cauvery-water-charges-increased-by-3-percent-from-april-1st-gdp/articleshow-3wgv57i</guid>
            <pubDate>Fri, 01 May 2026 16:23:58 +0530</pubDate>
            <description><![CDATA[ಬೆಂಗಳೂರು ಜಲಮಂಡಳಿ (BWSSB) ಏಪ್ರಿಲ್ 1 ರಿಂದ ಕಾವೇರಿ ನೀರಿನ ದರವನ್ನು ಶೇ 3 ರಷ್ಟು ಹೆಚ್ಚಿಸಿದೆ. ಹೆಚ್ಚುತ್ತಿರುವ ನಿರ್ವಹಣಾ ಮತ್ತು ವಿದ್ಯುತ್&zwnj; ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಪ್ರತಿ ವರ್ಷವೂ ದರ ಏರಿಕೆಯಾಗಲಿದೆ. ಈ ಏರಿಕೆಯಿಂದಾಗಿ ಗೃಹ ಮತ್ತು ವಾಣಿಜ್ಯ ಬಳಕೆದಾರರ ಮಾಸಿಕ ನೀರಿನ ಬಿಲ್&zwnj;ನಲ್ಲಿ ಹೆಚ್ಚಳವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmhrxx3y9n5d2h0krz7ckt3p,imgname----------------------25--1774418064510.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದಲ್ಲಿ ಕಾವೇರಿ ನೀರಿನ ದರ ಏರಿಕೆಯು ನಾಗರಿಕರಿಗೆ ಮತ್ತೊಂದು ಆರ್ಥಿಕ ಶಾಕ್ ನೀಡಿದ್ದು, ಇಂದಿನಿಂದಲೇ ಜೀವನ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಕಾಣುತ್ತಿದೆ. ಬೆಂಗಳೂರು ಜಲಮಂಡಳಿ (BWSSB) ಈಗಾಗಲೇ ಏಪ್ರಿಲ್ 1ರಿಂದ ನೀರಿನ ದರದಲ್ಲಿ ಶೇ 3 ರಷ್ಟು ಹೆಚ್ಚಳ ಜಾರಿಗೆ ತಂದಿದೆ.&lt;/p&gt;&lt;p&gt;ಜಲಮಂಡಳಿಯ ಪ್ರಕಾರ, ಆರ್ಥಿಕ ನಷ್ಟ, ನೀರಿನ ಸರಬರಾಜು ವೆಚ್ಚ, ನಿರ್ವಹಣಾ ವೆಚ್ಚ, ವಿದ್ಯುತ್&zwnj; ಖರ್ಚು ಹಾಗೂ ಮೂಲಸೌಕರ್ಯ ಅಭಿವೃದ್ಧಿ ವೆಚ್ಚಗಳ ಹೆಚ್ಚಳದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸಲು ಹೆಚ್ಚುವರಿ ಹಣಕಾಸು ಅಗತ್ಯವಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಪ್ರತಿ ವರ್ಷವೂ ಶೇ 3 ರಷ್ಟು ನೀರಿನ ದರವನ್ನು ಹೆಚ್ಚಿಸಲು ನಿರ್ಧಾರ&lt;/h2&gt;&lt;p&gt;ಇನ್ನೊಂದು ಮಹತ್ವದ ಅಂಶವೆಂದರೆ, ಇನ್ನು ಮುಂದೆ ಪ್ರತಿ ವರ್ಷವೂ ಶೇ 3 ರಷ್ಟು ನೀರಿನ ದರವನ್ನು ಹೆಚ್ಚಿಸಲು ಜಲಮಂಡಳಿ ತೀರ್ಮಾನಿಸಿರುವುದು. ಇದರಂತೆ, ಈ ವರ್ಷದ ಪರಿಷ್ಕೃತ ದರಗಳು ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದ್ದು, ಅದರ ಪರಿಣಾಮ ಗ್ರಾಹಕರಿಗೆ ಮೇ ತಿಂಗಳ ನೀರಿನ ಬಿಲ್&zwnj;ನಲ್ಲಿ ಕಾಣಿಸಿಕೊಳ್ಳಲಿದೆ.&lt;/p&gt;&lt;p&gt;ಪರಿಷ್ಕೃತ ದರಗಳ ಪ್ರಕಾರ, ಗೃಹ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ ಗರಿಷ್ಠ 1 ಪೈಸೆಯವರೆಗೆ ಹೆಚ್ಚಳವಾಗಲಿದೆ. ಇದರ ಪರಿಣಾಮವಾಗಿ ಮನೆಮಠಗಳಲ್ಲಿ ಮಾಸಿಕ ನೀರಿನ ಶುಲ್ಕವು ಸರಾಸರಿ 20ರಿಂದ 30 ರೂಪಾಯಿ ಹೆಚ್ಚುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ, ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆದಾರರಿಗೆ ಪ್ರತಿ ಲೀಟರ್&zwnj;ಗೆ ಗರಿಷ್ಠ 1.90 ಪೈಸೆ ಹೆಚ್ಚಳವಾಗಲಿದ್ದು, ಅವರ ಮಾಸಿಕ ಬಿಲ್&zwnj;ಗಳಲ್ಲಿ 50ರಿಂದ 60 ರೂಪಾಯಿ ಹೆಚ್ಚುವರಿ ಭಾರ ಬೀಳುವ ಸಾಧ್ಯತೆ ಇದೆ.&lt;/p&gt;&lt;h2&gt;ಕಳೆದ ವರ್ಷ ಗಣನೀಯ ಏರಿಕೆ&lt;/h2&gt;&lt;p&gt;ಗಮನಾರ್ಹವಾಗಿ, ಕಳೆದ ವರ್ಷವೇ 11 ವರ್ಷಗಳ ನಂತರ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರವನ್ನು ಗಣನೀಯವಾಗಿ ಏರಿಸಲಾಗಿತ್ತು. 2025ರಲ್ಲಿ ಜಲಮಂಡಳಿ ಕಾವೇರಿ ನೀರಿನ ಬಿಲ್&zwnj;ಗಳನ್ನು ಶೇ 27ರಿಂದ 30 ರಷ್ಟು ಹೆಚ್ಚಳ ಮಾಡಿತ್ತು. ಇದೀಗ ಅದರ ನಂತರದ ನಿರಂತರ ಏರಿಕೆ ನೀರಿನ ದರಗಳನ್ನು ಹಂತ ಹಂತವಾಗಿ ಹೆಚ್ಚಿಸುವ ನೀತಿಯ ಸೂಚನೆಯಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಶೇ 3 ರಷ್ಟು ಏರಿಕೆ ತಾತ್ಕಾಲಿಕವಾಗಿ ಕಡಿಮೆ ಎನ್ನಿಸಿದರೂ, ಪ್ರತಿ ವರ್ಷವೂ ನಡೆಯುವ ಈ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ನಾಗರಿಕರ ಮೇಲೆ ಹೆಚ್ಚಿನ ಆರ್ಥಿಕ ಭಾರ ಬೀಳುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರಿನ ಜೀವನ ವೆಚ್ಚ ಮತ್ತಷ್ಟು ಏರಿಕೆಯಾಗಲಿದ್ದು, ಸಾಮಾನ್ಯ ಜನರ ಬಜೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-water-tariff-hike-cauvery-water-charges-increased-by-3-percent-from-april-1st-gdp/articleshow-3wgv57i"/>
        </item>
        <item>
            <title><![CDATA[ಬೆಂಗಳೂರು ಮತ್ತು  ಬೆಳಗಾವಿ ನಡುವೆ ವಿಶೇಷ ರೈಲು: ವೇಳಾಪಟ್ಟಿ, ನಿಲುಗಡೆ ಬಗ್ಗೆ ಸಂಪೂರ್ಣ ಮಾಹಿತಿ]]></title>
            <link>https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3</link>
            <guid isPermaLink="true">https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3</guid>
            <pubDate>Tue, 28 Apr 2026 16:33:04 +0530</pubDate>
            <description><![CDATA[ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆ ನಿಭಾಯಿಸಲು, ನೈಋತ್ಯ ರೈಲ್ವೆಯು ಎಸ್&zwnj;ಎಂವಿಟಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ. ಈ ರೈಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿಗದಿತ ದಿನಾಂಕಗಳಂದು ಸಂಚರಿಸಲಿದ್ದು, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgkv34nm1s1he84ztr753mm0,imgname-railway-track-1770192474804.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಹುಬ್ಬಳ್ಳಿ: &lt;/strong&gt;ಬೇಸಿಗೆ ರಜೆಯ ಅವಧಿಯಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ South Western Railway ಮಹತ್ವದ ಕ್ರಮ ಕೈಗೊಂಡಿದೆ. Sir M. Visvesvaraya Terminal Bengaluru (ಎಸ್&zwnj;ಎಂವಿಟಿ ಬೆಂಗಳೂರು) ಮತ್ತು ಬೆಳಗಾವಿ ನಡುವಿನ ಮಾರ್ಗದಲ್ಲಿ ವಿಶೇಷ ಎಕ್ಸ್&zwnj;ಪ್ರೆಸ್ ರೈಲು ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.&lt;/p&gt;&lt;h2&gt;ಯಾವಾಗ?&lt;/h2&gt;&lt;p&gt;ರೈಲು ಸಂಖ್ಯೆ 06503 ವಿಶೇಷ ಎಕ್ಸ್&zwnj;ಪ್ರೆಸ್ 2026ರ ಏಪ್ರಿಲ್ 30ರಂದು ಸಂಜೆ 7:00ಕ್ಕೆ ಎಸ್&zwnj;ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 7:35ಕ್ಕೆ ಬೆಳಗಾವಿ ರೈಲು ನಿಲ್ದಾಣ ತಲುಪಲಿದೆ. ಇದು ಒಂದು ವಿಶೇಷ ಟ್ರಿಪ್ ಆಗಿದ್ದು, ಬೇಸಿಗೆ ಕಾಲದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ.&lt;/p&gt;&lt;p&gt;ಹಿಂತಿರುಗುವ ಪ್ರಯಾಣಕ್ಕಾಗಿ ರೈಲು ಸಂಖ್ಯೆ 06504 ವಿಶೇಷ ಎಕ್ಸ್&zwnj;ಪ್ರೆಸ್ ಮೇ 3ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00ಕ್ಕೆ ಎಸ್&zwnj;ಎಂವಿಟಿ ಬೆಂಗಳೂರಿಗೆ ತಲುಪಲಿದೆ. ಈ ಸೇವೆಯು ಎರಡೂ ದಿಕ್ಕುಗಳಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರದ ಅವಕಾಶ ಒದಗಿಸುತ್ತದೆ.&lt;/p&gt;&lt;h2&gt;ನಿಲುಗಡೆ ಎಲ್ಲೆಲ್ಲಿ?&lt;/h2&gt;&lt;p&gt;ಈ ವಿಶೇಷ ರೈಲು ತನ್ನ ಸಂಚಾರದಲ್ಲಿ ಹಲವಾರು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಚಿಕ್ಕಬಾಣಾವರ, ತುಮಕೂರು, ಸಂಪಿಗೆ ರೋಡ್, ಅರಸಿಕೇರಿ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಕರ್ಜಗಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಹಾಗೂ ಖಾನಾಪುರ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಧ್ಯಂತರ ಪಟ್ಟಣಗಳ ಪ್ರಯಾಣಿಕರೂ ಈ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ.&lt;/p&gt;&lt;p&gt;ರೈಲು ಒಟ್ಟು 19 ಬೋಗಿಗಳನ್ನು ಹೊಂದಿದ್ದು, ವಿವಿಧ ವರ್ಗದ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ 2 ಎಸಿ 2-ಟೈರ್, 4 ಎಸಿ 3-ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಹಾಗೂ 2 ಎಸ್&zwnj;ಎಲ್&zwnj;ಆರ್&zwnj;ಡಿ (SLRD) ಬೋಗಿಗಳು ಸೇರಿವೆ.&lt;/p&gt;&lt;p&gt;ಒಟ್ಟಿನಲ್ಲಿ, ಬೇಸಿಗೆ ರಜೆಯ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಮನಗಂಡು ನೈಋತ್ಯ ರೈಲ್ವೆ ಆರಂಭಿಸಿರುವ ಈ ವಿಶೇಷ ರೈಲು ಸೇವೆ, ಬೆಂಗಳೂರಿನಿಂದ ಬೆಳಗಾವಿ ಮತ್ತು ಮಧ್ಯಂತರ ಪ್ರದೇಶಗಳಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಮಹತ್ವದ ಅನುಕೂಲ ಒದಗಿಸಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/southwest-railway-introduces-special-train-between-smvt-bengaluru-and-belagavi-to-manage-summer-rush-gdp/articleshow-5mn6zh3"/>
        </item>
        <item>
            <title><![CDATA[ಬೆಂಗಳೂರು: ಈರುಳ್ಳಿ ಬೆಳ್ಳುಳ್ಳಿಗಾಗಿ ಹೊಡೆದಾಡಿಕೊಂಡ ದಯಾನಂದ ಸಾಗರ್ ಕಾಲೇಜಿನ ಮಹಿಳಾ ಪ್ರೊಫೆಸರ್‌ಗಳು!]]></title>
            <link>https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic</link>
            <guid isPermaLink="true">https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic</guid>
            <pubDate>Tue, 28 Apr 2026 13:28:16 +0530</pubDate>
            <description><![CDATA[ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಇಬ್ಬರು ಮಹಿಳಾ ಸಹಾಯಕ ಪ್ರಾಧ್ಯಾಪಕಿಯರ ನಡುವೆ ಗಲಾಟೆ ನಡೆದಿದೆ. ಈರುಳ್ಳಿ-ಬೆಳ್ಳುಳ್ಳಿ ಬಳಕೆಯ ಸಣ್ಣ ವಿಚಾರದಿಂದ ಆರಂಭವಾದ ಜಗಳವು, ದೈಹಿಕ ಹಲ್ಲೆಯ ಹಂತಕ್ಕೆ ತಲುಪಿದ ಅಚ್ಚರಿಯ ಘಟನೆ ಇದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-5d10a087-ea0e-4c89-9e32-d4f8505e386e,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ನಡೆದಿರುವ ಅಚ್ಚರಿಯ ಘಟನೆ ಒಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ದಯಾನಂದ ಸಾಗರ್ ಕಾಲೇಜು (Dayananda Sagar College)ಗೆ ಸಂಬಂಧಿಸಿದ ಇಬ್ಬರು ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳ ನಡುವೆ ಉಂಟಾದ ಗಲಾಟೆ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲೂ ಗಮನ ಸೆಳೆದಿದೆ. ಮಹಿಳಾ ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.&lt;/p&gt;&lt;h2&gt;ರೂಮ್&zwnj;ಮೇಟ್&zwnj;ಗಳಾಗಿರುವ ಪ್ರೊಫೆಸರ್&zwnj;ಗಳು&lt;/h2&gt;&lt;p&gt;ಜ್ಯೋತಿ ಕುಮಾರಿ ಹಾಗೂ ಪ್ರೀತಿ ಜೈನ್ ಎಂಬ ಇಬ್ಬರು ಅಸಿಸ್ಟೆಂಟ್ ಪ್ರೊಫೆಸರ್&zwnj;ಗಳು ರೂಮ್&zwnj;ಮೇಟ್&zwnj;ಗಳಾಗಿ ವಾಸಿಸುತ್ತಿದ್ದರು. ಆರಂಭದಲ್ಲಿ ಸಣ್ಣ ವಿಷಯವಾಗಿದ್ದ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಕೆಯ ಬಗ್ಗೆ ಉಂಟಾದ ಭಿನ್ನಾಭಿಪ್ರಾಯವೇ ಬಳಿಕ ದೊಡ್ಡ ಗಲಾಟೆಗೆ ಕಾರಣವಾಯಿತು ಎನ್ನಲಾಗಿದೆ. ಅಡುಗೆ ಪದ್ಧತಿ ಹಾಗೂ ವೈಯಕ್ತಿಕ ಅಭಿರುಚಿಗಳ ವಿಚಾರದಲ್ಲಿ ಉಂಟಾದ ಮಾತಿನ ಚಕಮಕಿ ಕ್ರಮೇಣ ವಾಗ್ವಾದಕ್ಕೆ ಕಾರಣವಾಗಿ ದೊಡ್ಡ ಗಲಾಟೆಯಾಗಿದೆ.&lt;/p&gt;&lt;h2&gt;ಗಲಾಟೆ ಜೋರಾಗಲು ಕಾರಣವಾದ ಲ್ಯಾಪ್&zwnj;ಟಾಪ್ ಹಾಗೂ ಮೊಬೈಲ್!&lt;/h2&gt;&lt;p&gt;ಈ ವಿವಾದ ಅಲ್ಲೇ ನಿಂತಿಲ್ಲ. ಬಳಿಕ ರೂಮ್&zwnj;ನಲ್ಲಿ ಲ್ಯಾಪ್&zwnj;ಟಾಪ್ ಹಾಗೂ ಮೊಬೈಲ್ ಸ್ಪೀಕರ್&zwnj;ಗಳನ್ನು ಜೋರಾಗಿ ಬಳಸಿ ಶಬ್ದ ಮಾಡಿರುವುದರಿಂದ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಪರಸ್ಪರ ಕಿರಿಕಿರಿ ಹೆಚ್ಚಾದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ತೀವ್ರಗೊಂಡು, ಕೊನೆಗೆ ದೈಹಿಕ ಘರ್ಷಣೆಯ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಘಟನೆಯಲ್ಲಿ ಜ್ಯೋತಿ ಕುಮಾರಿ ಮೇಲೆ ಪ್ರೀತಿ ಜೈನ್ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇನ್ನಷ್ಟು ವಿಚಾರಣೆ ನಡೆಯಬೇಕಿದೆ. ಕಾಲೇಜು ಆಡಳಿತ ಹಾಗೂ ಸಂಬಂಧಿತ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ಅಲ್ಪ ಕಾರಣಗಳಿಂದ ಆರಂಭವಾದ ಈ ಗಲಾಟೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಜೊತೆಗಿರುವ ವ್ಯಕ್ತಿಗಳು ಪರಸ್ಪರ ಗೌರವ ಮತ್ತು ಸಹನಶೀಲತೆಯಿಂದ ನಡೆದುಕೊಳ್ಳುವ ಅಗತ್ಯವನ್ನು ಈ ಘಟನೆ &amp;nbsp;ಒತ್ತಿ ಹೇಳಿದಂತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-shocker-assistant-professors-clash-over-onion-garlic-dispute-at-dayananda-sagar-college-gdp/articleshow-8r9cbic"/>
        </item>
        <item>
            <title><![CDATA[ಬೆಂಗಳೂರ ದಕ್ಷಿಣ ಜಿಲ್ಲೆಯಲ್ಲಿ  995 ಉಪಗ್ರಾಮಗಳ ರಚನೆ; ಯಾವ ತಾಲೂಕಿನಲ್ಲಿ ಎಷ್ಟು?]]></title>
            <link>https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt</link>
            <guid isPermaLink="true">https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt</guid>
            <pubDate>Wed, 29 Apr 2026 06:16:57 +0530</pubDate>
            <description><![CDATA[&lt;p&gt;ದಾಖಲೆಗಳಿಲ್ಲದ 995 ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ತರಲು ಉಪಗ್ರಾಮಗಳಾಗಿ ರಚಿಸಲಾಗುತ್ತಿದೆ. ಈ ಯೋಜನೆಯು ನಿವಾಸಿಗಳಿಗೆ ಇ-ಖಾತೆ, ನಮೂನೆ 11 ನಂತಹ ಅಧಿಕೃತ ದಾಖಲೆಗಳನ್ನು ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸುಲಭಗೊಳಿಸುವ ಗುರಿ ಹೊಂದಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqbb6dyg0h8ka9fdcwakkwb1,imgname-village-1777423562704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಒಟ್ಟು 995 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ಭರದಿಂದ ಸಾಗಿದೆ.&lt;/p&gt;&lt;p&gt;ಈ ಮೊದಲು 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಆನಂತರ ಕೇವಲ ಒಂದು ತಿಂಗಳಲ್ಲಿ ಇನ್ನೂ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ 995 ಹೊಸ ಉಪ ಗ್ರಾಮಗಳನ್ನು ರಚಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.&lt;/p&gt;&lt;p&gt;ಅತಿ ಹೆಚ್ಚು ಮಾಗಡಿ ತಾಲೂಕಿನಲ್ಲಿ 354 ಹಾಗೂ ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 67 ಉಪ ಗ್ರಾಮಗಳು ರಚನೆಯಾಗುತ್ತಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 241, ಕನಕಪುರ ತಾಲೂಕಿನಲ್ಲಿ 260 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 73 ಉಪ ಗ್ರಾಮಗಳ ರಚಿಸಲು ಉದ್ದೇಶಿಸಲಾಗಿದೆ.&lt;/p&gt;&lt;h2&gt;&lt;strong&gt;116 ಉಪ ಗ್ರಾಮಗಳ ಅಧಿಸೂಚನೆ&lt;/strong&gt;&lt;/h2&gt;&lt;p&gt;ಮೊದಲ ಹಂತದಲ್ಲಿ ಗುರುತಿಸಿದ್ದ 420 ಉಪ ಗ್ರಾಮಗಳ ಪೈಕಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ 372 ಜನವಸತಿ ಪ್ರದೇಶಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ 138 ಉಪ ಗ್ರಾಮಗಳು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 234 ಬಾಕಿ ಇವೆ. ಅಂತಿಮ ಅಧಿಸೂಚನೆ ಹೊರಡಿಸಲು 13 ಜನವಸತಿಪ್ರದೇಶಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ 116 ಉಪ ಗ್ರಾಮಗಳು ಅಂತಿಮ ಅಧಿಸೂಚನೆ ಹೊರ ಬಿದ್ದಿದೆ.&lt;/p&gt;&lt;p&gt;2026ರ ಮಾರ್ಚ್ 16ರ ನಂತರ ಗುರುತಿಸಿರುವ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಷ್ಟೇ ಪ್ರಕ್ರಿಯೆಗಳು ಪ್ರಾರಂಭಗೊಳ್ಳಬೇಕಿದೆ. 2 ಇ ಅಧಿಸೂಚನೆ, ಪ್ರಾಥಮಿಕ ಅಧಿಸೂಚನೆ ಮುಗಿದು ಅಂತಿಮ ಅಧಿಸೂಚನೆ ಹೊರ ಬೀಳಲು ಕನಿಷ್ಠ 6 ತಿಂಗಳು ಬೇಕಾಗಿದೆ.&lt;/p&gt;&lt;h3&gt;&lt;strong&gt;ಈಗ ಏನಾಗಿದೆ ?&lt;/strong&gt;&lt;/h3&gt;&lt;p&gt;ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರೂ ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಸೂಕ್ತ ದಾಖಲೆಗಳು ಇಲ್ಲದೆ ಬಹುತೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 15ರಂದು ಉಪಗ್ರಾಮಗಳ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ 420 ಗ್ರಾಮಗಳು ಉಪಗ್ರಾಮಗಳಾಗಿ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಇವುಗಳ ಜೊತೆಗೆ ಹೊಸದಾಗಿ 575 ಹೊಸ ಉಪಗ್ರಾಮಗಳನ್ನು ಗುರುತಿಸಲಾಗಿದೆ.&lt;/p&gt;&lt;p&gt;ಹಲವಾರು ವರ್ಷಗಳಿಂದಲೂ ಜನರು ಗ್ರಾಮ ಠಾಣೆಗೆ ಹೊಂದಿರುವ ಸರ್ವೆ ನಂಬರ್, ಖಾಸಗಿ ಜಮೀನುಗಳು ಸೇರಿ ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಈ ಮನೆಗಳು ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;p&gt;ಜೊತೆಗೆ ತಮ್ಮದೇ ಮನೆ ಹಾಗೂ ನಿವೇಶನಗಳಿಗೆ ನಮೂನೆ 11, ಇ-ಖಾತೆ ಪಡೆಯಲು ಆಗುತ್ತಿರಲಿಲ್ಲ. ಇದರಿಂದ ಜನರಿಗೆ ಮೂಲಸೌಲಭ್ಯ ದೊರೆಯುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಉಪಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಉಪಗ್ರಾಮಗಳ ಘೋಷಣೆ ಹೇಗೆ?&lt;/strong&gt;&lt;/h3&gt;&lt;p&gt;ಯಾವುದೇ ಒಂದು ದಾಖಲೆರಹಿತ ಜನವಸತಿ ಪ್ರದೇಶ ಮೂಲ ಗ್ರಾಮಠಾಣಾದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಇದನ್ನು ಮೂಲ ಗ್ರಾಮದ ಭಾಗವೆಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 5ರಂತೆ ಉಪಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ವೇಳೆ ಜನವಸತಿ ಪ್ರದೇಶ, ರಸ್ತೆ, ಸರ್ಕಾರಿ ಶಾಲೆಗಳು, ಖಾಸಗಿ ಸ್ವತ್ತು ಇದ್ದರೂ ಇದನ್ನು ಗ್ರಾಮಠಾಣಾ ಎಂದು ಪರಿಗಣಿಸಿ, ಉಪಗ್ರಾಮವೆಂದು ಘೋಷಣೆ ಮಾಡಲಾಗುತ್ತದೆ.&lt;/p&gt;&lt;h3&gt;&lt;strong&gt;ಅಧಿಕೃತ ದಾಖಲೆಗಳು ಲಭ್ಯ&lt;/strong&gt;&lt;/h3&gt;&lt;p&gt;ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸೂಕ್ತ ರಸ್ತೆ ಇಲ್ಲದೆ, ಮನೆಗಳಿಗೆ ಇ-ಖಾತೆ, ನಮೂನೆ 11 ಸೇರಿ ಯಾವುದೇ ದಾಖಲೆಗಳು ಇಲ್ಲದೆ ಕಷ್ಟದಲ್ಲಿಯೇ ಜೀವನ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದು ವೇಳೆ ಮನೆ /ಆಸ್ತಿ ಮಾರಾಟ ಮಾಡಬೇಕಾದರೂ ಸರ್ವೆ ನಂಬರ್ ಲೆಕ್ಕದಲ್ಲಿಯೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ. ಆದರೀಗ ಉಪಗ್ರಾಮಗಳೆಂದು ಘೋಷಣೆ ಮಾಡುವುದರಿಂದ ಇದು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡಲಿದ್ದು, ಅಧಿಕೃತ ದಾಖಲೆಗಳು ದೊರೆಯುವ ಜತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆಯಲಿದೆ.&lt;/p&gt;&lt;p&gt;ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಇದಾದ ಬಳಿಕ ಮತ್ತೆ ಹೊಸದಾಗಿ 575 ಉಪ ಗ್ರಾಮಗಳನ್ನು ಗುರುತು ಮಾಡಿದ್ದೇವೆ. ಈಗ ಒಟ್ಟು 995 ಉಪ ಗ್ರಾಮಗಳ ಪೈಕಿ 116 ಉಪ ಗ್ರಾಮಗಳ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಉಳಿದ ಉಪ ಗ್ರಾಮಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಕಾರ್ಯ ವೇಗವಾಗಿ ನಡೆದಿದೆ ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ , ಉಪನಿರ್ದೇಶಕ ಬಿ.ಆರ್.ಹನುಮೇಗೌಡ ಹೇಳುತ್ತಾರೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ತಾಲೂಕು&lt;/td&gt;   &lt;td&gt;2026-16&lt;/td&gt;   &lt;td&gt;2026-16ರ ಬಳಿಕ&lt;/td&gt;   &lt;td&gt;ಒಟ್ಟು&lt;/td&gt;  &lt;/tr&gt;  &lt;tr&gt;   &lt;td&gt;ರಾಮನಗರ&lt;/td&gt;   &lt;td&gt;69&lt;/td&gt;   &lt;td&gt;173&lt;/td&gt;   &lt;td&gt;241&lt;/td&gt;  &lt;/tr&gt;  &lt;tr&gt;   &lt;td&gt;ಕನಕಪುರ&lt;/td&gt;   &lt;td&gt;119&lt;/td&gt;   &lt;td&gt;141&lt;/td&gt;   &lt;td&gt;260&lt;/td&gt;  &lt;/tr&gt;  &lt;tr&gt;   &lt;td&gt;ಹಾರೋಹಳ್ಳಿ&lt;/td&gt;   &lt;td&gt;45&lt;/td&gt;   &lt;td&gt;22&lt;/td&gt;   &lt;td&gt;67&lt;/td&gt;  &lt;/tr&gt;  &lt;tr&gt;   &lt;td&gt;ಚನ್ನಪಟ್ಟಣ&lt;/td&gt;   &lt;td&gt;38&lt;/td&gt;   &lt;td&gt;35&lt;/td&gt;   &lt;td&gt;73&lt;/td&gt;  &lt;/tr&gt;  &lt;tr&gt;   &lt;td&gt;ಮಾಗಡಿ&lt;/td&gt;   &lt;td&gt;150&lt;/td&gt;   &lt;td&gt;204&lt;/td&gt;   &lt;td&gt;354&lt;/td&gt;  &lt;/tr&gt;  &lt;tr&gt;   &lt;td&gt;ಒಟ್ಟು&lt;/td&gt;   &lt;td&gt;420&lt;/td&gt;   &lt;td&gt;575&lt;/td&gt;   &lt;td&gt;995&lt;/td&gt;  &lt;/tr&gt; &lt;/tbody&gt;&lt;/table&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt"/>
        </item>
        <item>
            <title><![CDATA[HSR ಲೇಔಟ್: ಹೊಸ ಗೆಳೆಯ ಹಳೆ ಗೆಳೆಯನ ಮಧ್ಯೆ ಯುವತಿ ಲಾಕ್! ಬೀದಿಯಲ್ಲೇ ವಿದ್ಯಾರ್ಥಿಗಳ ರಂಪಾಟ]]></title>
            <link>https://kannada.asianetnews.com/karnataka-districts/viral-street-argument-in-bengaluru-hsr-layout-woman-caught-between-two-friends-gdp/articleshow-bomgovk</link>
            <guid isPermaLink="true">https://kannada.asianetnews.com/karnataka-districts/viral-street-argument-in-bengaluru-hsr-layout-woman-caught-between-two-friends-gdp/articleshow-bomgovk</guid>
            <pubDate>Sat, 25 Apr 2026 11:17:55 +0530</pubDate>
            <description><![CDATA[ಬೆಂಗಳೂರಿನ ಹೆಚ್&zwnj;ಎಸ್&zwnj;ಆರ್ ಲೇಔಟ್&zwnj;ನಲ್ಲಿ ಯುವತಿಯೊಬ್ಬಳು ತನ್ನ ಹಳೆ ಮತ್ತು ಹೊಸ ಗೆಳೆಯರ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವಕರ ನಡುವೆ ವಾಗ್ವಾದ ನಡೆದು, ಸ್ಥಳೀಯರು ಇದನ್ನು ಚಿತ್ರೀಕರಿಸಿದ್ದಾರೆ. ಸ್ನೇಹಿತರು ಮಧ್ಯಪ್ರವೇಶಿಸಿ ಯುವತಿಯನ್ನು ಕರೆದೊಯ್ದಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kq1hck7cdnb036nqbym7w5f7,imgname-lovers-fight-1777094511852.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ನಗರದ ಹೆಚ್&zwnj;ಎಸ್&zwnj;ಆರ್ ಲೇಔಟ್ ಪ್ರದೇಶದಲ್ಲಿ ಯುವತಿ ಹಾಗೂ ಇಬ್ಬರು ಯುವಕರ ನಡುವೆ ನಡೆದ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಹೊಸ ಗೆಳೆಯ ಮತ್ತು ಹಳೆ ಗೆಳೆಯರ ನಡುವೆ ಸಿಲುಕಿದ ಯುವತಿ, ಕೆಲಕಾಲ ಅಸಮಾಧಾನಕರ ಪರಿಸ್ಥಿತಿಯನ್ನು ಎದುರಿಸಬೇಕಾದ ಘಟನೆ ಎರಡು ದಿನದ ಹಿಂದೆ ನಡೆದಿದೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ಯುವತಿ ತನ್ನ ಹಳೆಯ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದಳು. ಇದೇ ವೇಳೆ ಅಚಾನಕ್&zwnj; ಆಗಿ ಆಕೆಯ ಹೊಸ ಗೆಳೆಯ ಸ್ಥಳಕ್ಕೆ ಆಗಮಿಸಿದ್ದಾನೆ. ಯುವತಿ ಮತ್ತೊಬ್ಬ ಯುವಕರೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಕೆರಳಿದ ಆತ, ತಕ್ಷಣವೇ ಮಧ್ಯಪ್ರವೇಶ ಮಾಡಿ ಪ್ರಶ್ನಿಸಲು ಆರಂಭಿಸಿದ್ದಾನೆ.&lt;/p&gt;&lt;h2&gt;ಯುವತಿಯನ್ನು ಅಡ್ಡಹಾಕಿ ತಡೆಯಲು ಯತ್ನ&lt;/h2&gt;&lt;p&gt;ಈ ಸಂದರ್ಭ, ಹಳೆಯ ಗೆಳೆಯ ಯುವತಿಯೊಂದಿಗೆ ಮಾತನಾಡಲು ಮುಂದಾಗುತ್ತಿದ್ದಂತೆ, ಹೊಸ ಗೆಳೆಯ ಅಡ್ಡಿಪಡಿಸಿ, &ldquo;ನಿಲ್ಲು, ಮಾತಾಡ್ಬೇಕು&rdquo; ಎಂದು ಹೇಳಿ ಯುವತಿಯ ಕೈ ಹಿಡಿದು ಎಳೆದಿದ್ದಾನೆ. ಅಲ್ಲದೆ, ಯುವತಿಗೆ ದಾರಿ ಬಿಡದೆ ನಡುರಸ್ತೆಯಲ್ಲೇ ಅಡ್ಡಹಾಕಿ ತಡೆಯಲು ಯತ್ನಿಸಿದ್ದಾನೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಈ ವೇಳೆ ಯುವತಿ ಮತ್ತು ಇಬ್ಬರು ಯುವಕರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆಯಿತು. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ವಾಗ್ವಾದ &lsquo;ಕೋಲ್ಡ್ ವಾರ್&rsquo; ರೀತಿಯಲ್ಲಿ ಕೆಲಕಾಲ ಮುಂದುವರಿದಿದ್ದು, ಸುತ್ತಮುತ್ತಲಿನ ಜನರ ಗಮನ ಸೆಳೆಯಿತು. ಸ್ಥಳೀಯರು ಈ ಘಟನೆಯನ್ನು ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.&lt;/p&gt;&lt;h2&gt;ಮಧ್ಯೆ ಪ್ರವೇಶಿಸಿದ ಸ್ನೇಹಿತರು&lt;/h2&gt;&lt;p&gt;ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಮುನ್ನವೇ, ಯುವತಿಯ ಕಾಲೇಜು ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಇದರಿಂದ ದೊಡ್ಡ ಗಲಾಟೆ ಜೋರಾಗಿ ಸಂಭವಿಸುವುದು ತಪ್ಪಿದೆ.&lt;/p&gt;&lt;p&gt;ಈ ಘಟನೆ ಹೆಚ್&zwnj;ಎಸ್&zwnj;ಆರ್ ಲೇಔಟ್ ಪ್ರದೇಶದಲ್ಲಿ ಸಾರ್ವಜನಿಕರ ಮುಂದೆ ನಡೆದಿರುವುದು, ಇಂತಹ ವೈಯಕ್ತಿಕ ವಿಚಾರಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆದಿರುವುದು ಈಗಿನ ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಬೆಳಕು ಚೆಲ್ಲುತ್ತದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/viral-street-argument-in-bengaluru-hsr-layout-woman-caught-between-two-friends-gdp/articleshow-bomgovk"/>
        </item>
        <item>
            <title><![CDATA[ನಿವೃತ್ತ ಡಿಜಿ ಓಂಪ್ರಕಾಶ್ ಹತ್ಯೆ ಪ್ರಕರಣ: ಆರೋಪಿ ಪತ್ನಿ ನೋಡಲು ಬರದ ಮಕ್ಕಳು, ವಿಚಿತ್ರ ವರ್ತನೆಗೆ ಬೇಸತ್ತ ಜೈಲಾಧಿಕಾರಿಗಳು!]]></title>
            <link>https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb</link>
            <guid isPermaLink="true">https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb</guid>
            <pubDate>Tue, 28 Apr 2026 15:17:07 +0530</pubDate>
            <description><![CDATA[ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ, ಜೈಲಿನಲ್ಲಿ ಒಂದು ವರ್ಷ ಕಳೆದಿದ್ದು, ಅವರ ವರ್ತನೆ ವಿಚಿತ್ರವಾಗಿ ಬದಲಾಗಿದೆ. ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿರುವ ಅವರು, ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳಿಗೆ ತೊಂದರೆ ನೀಡುತ್ತಿದ್ದು, ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮಾನ್ಸ್&zwnj;ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9qjs8j6hgyd0nyq0ppf4yj,imgname-former-dgp-om-prakash-murder-case-1777369441554.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಪತ್ನಿ ಪಲ್ಲವಿ ಅವರ ವರ್ತನೆ ಗಮನಾರ್ಹವಾಗಿ ಬದಲಾಗಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಹತ್ಯೆ ಪ್ರಕರಣದ ನಂತರದಿಂದಲೇ ಜೈಲಿನಲ್ಲಿ ಇರುವ ಪಲ್ಲವಿ, ಇತ್ತೀಚಿನ ತಿಂಗಳುಗಳಲ್ಲಿ ಮಾನಸಿಕವಾಗಿ ಅಸ್ಥಿರವಾಗಿ ವರ್ತಿಸುತ್ತಿರುವುದಾಗಿ ಜೈಲು ಮೂಲಗಳು ತಿಳಿಸಿವೆ.&lt;/p&gt;&lt;p&gt;ಪ್ರಕರಣ ನಡೆದು ಈಗಾಗಲೇ ಒಂದು ವರ್ಷ ಕಳೆದಿದೆ. ಆದರೆ ಈ ಅವಧಿಯಲ್ಲಿಯೇ ಪಲ್ಲವಿ ಅವರ ವರ್ತನೆ ದಿನೇದಿನೇ ವಿಚಿತ್ರವಾಗುತ್ತಿದ್ದು, ಜೈಲು ಸಿಬ್ಬಂದಿಗೆ ಅವರನ್ನು ನಿಯಂತ್ರಿಸುವುದು ಸವಾಲಿನ ಸಂಗತಿಯಾಗಿದೆ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕಿರುಚಾಟ, ಕೂಗಾಟ ನಡೆಸುವುದು ಹೆಚ್ಚಾಗಿದೆ.&lt;/p&gt;&lt;h2&gt;ವಿಚಿತ್ರ ವರ್ತನೆಗೆ ಬೇಸತ್ತಿರೋ ಭದ್ರತಾ ಸಿಬ್ಬಂದಿ&lt;/h2&gt;&lt;p&gt;ಕಳೆದ ಎರಡು ತಿಂಗಳಿಂದ ಮಾನಸಿಕವಾಗಿ ವಿಚಿತ್ರವಾಗಿ ವರ್ತನೆ ಇನ್ನಷ್ಟು ತೀವ್ರಗೊಂಡಿದ್ದು, ಪಲ್ಲವಿ ಅವರ ಮಾನಸಿಕ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಅವರ ಈ ಅಸಹಜ ನಡೆಗೆ ಬೇಸತ್ತಿರುವ ಭದ್ರತಾ ಸಿಬ್ಬಂದಿ, ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಪಲ್ಲವಿ ಜೊತೆ ಒಂದೇ ಬ್ಯಾರಕ್&zwnj;ನಲ್ಲಿ ಇರುವ ಕೆಲವು ಮಹಿಳಾ ವಿಚಾರಾಧೀನ ಕೈದಿಗಳು ಕೂಡ ಭಯಭೀತರಾಗಿದ್ದು, ಅವರನ್ನು ಬೇರೆ ಬ್ಯಾರಕ್&zwnj;ಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ, ಪಲ್ಲವಿ ಜೊತೆ ಹೊಂದಾಣಿಕೆಯಾಗುವ ಕೆಲ ಮಹಿಳಾ ಕೈದಿಗಳನ್ನು ಅವರ ಬ್ಯಾರಕ್&zwnj;ನಲ್ಲಿ ಇರಿಸಲು ಜೈಲು ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ಇದರಿಂದ ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸಮತೋಲನಗೊಳಿಸಲು ಪ್ರಯತ್ನಿಸಲಾಗುತ್ತಿದೆ.&lt;/p&gt;&lt;p&gt;ಇನ್ನೊಂದೆಡೆ, ಪಲ್ಲವಿ ಅವರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪ್ರತಿ ಹದಿನೈದು ದಿನಕ್ಕೊಮ್ಮೆ ಅವರನ್ನು ನಿಮಾನ್ಸ್ (NIMHANS) ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ವೈದ್ಯರು ಕೌನ್ಸೆಲಿಂಗ್ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದು, ಮಾನಸಿಕ ಸಮಸ್ಯೆಗಳ ಕುರಿತು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ ಕೆಲ ಸಂದರ್ಭಗಳಲ್ಲಿ ಪಲ್ಲವಿ ಆಸ್ಪತ್ರೆಗೆ ಹೋಗಲು ಸಹ ನಿರಾಕರಿಸುತ್ತಿದ್ದು, ಇದರಿಂದ ಸಿಬ್ಬಂದಿಗೆ ಮತ್ತಷ್ಟು ಸಂಕಷ್ಟ ಉಂಟಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಜೈಲು ಸಿಬ್ಬಂದಿಯೇ ಅವರನ್ನು ಮನವೊಲಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತಿದೆ.&lt;/p&gt;&lt;p&gt;ಪಲ್ಲವಿ ಅವರ ಮಾನಸಿಕ ಸ್ಥಿತಿಗೆ ಕುಟುಂಬದ ದೂರವಾಗಿರುವುದೂ ಒಂದು ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.&lt;/p&gt;&lt;h2&gt;ಹದಿನೈದು ದಿನಕ್ಕೊಮ್ಮೆ ಪಲ್ಲವಿ ನಿಮಾನ್ಸ್ ಗೆ&lt;/h2&gt;&lt;p&gt;ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ತಮ್ಮ ಮಗ ಅಥವಾ ಮಗಳನ್ನು ಭೇಟಿಯಾಗಿಲ್ಲ ಎನ್ನಲಾಗಿದ್ದು, ಕುಟುಂಬದ ಸಂಪರ್ಕವೂ ಕಡಿಮೆಯಾಗಿದೆ. ಈ ಕಾರಣದಿಂದಲೇ ಅವರು ಇನ್ನಷ್ಟು ಒಂಟಿತನಕ್ಕೆ ಒಳಗಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನೂ ಕೆಲ ಹಿರಿಯ ಐಪಿಎಸ್ ಅಧಿಕಾರಿಗಳ ಮಾನವೀಯ ಮನೋಭಾವದಿಂದ ಪಲ್ಲವಿ ಅವರ ಮಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೂ, ಕುಟುಂಬದಿಂದ ದೂರವಾಗಿರುವುದು ಪಲ್ಲವಿ ಅವರ ಮನಸ್ಥಿತಿಗೆ ಪರಿಣಾಮ ಬೀರಿರುವುದಾಗಿ ಅಂದಾಜಿಸಲಾಗಿದೆ.&lt;/p&gt;&lt;p&gt;ಒಟ್ಟಿನಲ್ಲಿ, ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪ್ರಕರಣದ ಆರೋಪಿ ಪಲ್ಲವಿ ಅವರ ಜೈಲು ಜೀವನ ಇದೀಗ ಮಾನಸಿಕ ಆರೋಗ್ಯದ ಸವಾಲುಗಳಿಂದ ಕೂಡಿದ್ದು, ಅವರನ್ನು ನಿಭಾಯಿಸುವುದು ಜೈಲು ಆಡಳಿತಕ್ಕೆ ದೊಡ್ಡ ಹೊಣೆಗಾರಿಕೆಯಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳು ಮತ್ತು ಪಲ್ಲವಿ ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/former-dgp-om-prakash-murder-case-wife-pallavi-behaviour-raises-concern-in-jail-gdp/articleshow-gt16awb"/>
        </item>
        <item>
            <title><![CDATA[ಬೆಂಗಳೂರು ಟೆಕ್ಕಿ ಪೂಜಾ ದತ್ತ ಸಾವು ಪ್ರಕರಣ: ಗೋಡೆ ಮೇಲಿದ್ದ ಆ ಪದಗಳೇ ನಿಗೂಢ ಸಾವಿಗೆ ಕಾರಣ ಹೇಳ್ತಿದೆಯಾ?]]></title>
            <link>https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</link>
            <guid isPermaLink="true">https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e</guid>
            <pubDate>Wed, 29 Apr 2026 13:41:00 +0530</pubDate>
            <description><![CDATA[ಬೆಂಗಳೂರಿನಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವು ಸಂಭವಿಸಿದೆ. ಒಂದು ವರ್ಷದ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ, ಎಲ್ಲರಿಂದ ದೂರವಾಗಿ ಒಂಟಿ ಜೀವನ ನಡೆಸುತ್ತಿದ್ದ ಅವರ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಕೊಠಡಿಯ ಗೋಡೆಗಳ ಮೇಲೆ ಅಂಟಿಸಲಾಗಿದ್ದ ವಿಚಿತ್ರ ಪದಗಳು ಮತ್ತು ಅವರ ಖಿನ್ನತೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqc4k6fnbct6vb538r0vzg5a,imgname-techie-pooja-dutta-1777450195445.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು: &lt;/strong&gt;ನಗರದಲ್ಲಿ ಟೆಕ್ಕಿ ಪೂಜಾ ದತ್ತ ಅವರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಹಲವು ಮಹತ್ವದ ಹಾಗೂ ಕುತೂಹಲಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.&lt;/p&gt;&lt;p&gt;ಜಾರ್ಖಂಡ್ ಮೂಲದ ಪೂಜಾ ದತ್ತ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್&zwnj;ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಸುಮಾರು ಒಂದು ವರ್ಷ ಹಿಂದೆ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಬಳಿಕ ಮೊಬೈಲ್ ಫೋನ್&zwnj;ನ್ನು ಆಫ್ ಮಾಡಿಕೊಂಡಿದ್ದರು. ಹಳೆಯ ಸಿಮ್ ಕಾರ್ಡ್ ತೆಗೆದು ಹೊಸ ಸಿಮ್ ಬಳಸಿದರೂ, ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕೂಡ ಕಳೆದ ಒಂದು ವರ್ಷದಿಂದ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಮೂರು ತಿಂಗಳ ಹಿಂದೆ ಅವರು ಬಳಸುತ್ತಿದ್ದ ಹೊಸ ಸಿಮ್&zwnj;ನ ವ್ಯಾಲಿಡಿಟಿ ಕೂಡ ಮುಗಿದು ಹೋಗಿದ್ದು, ಅದರ ಬಳಿಕ ಅವರ ಮೊಬೈಲ್ ಸಂಪೂರ್ಣವಾಗಿ ಆಫ್ ಆಗಿದೆ. ಕಳೆದ ಮೂರು ತಿಂಗಳಿನಿಂದ ಪೂಜಾ ದತ್ತ ಅವರು ಹೊರಗೆ ಕಾಣಿಸಿಕೊಂಡಿಲ್ಲ ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ತೀವ್ರ ಖಿನ್ನತಗೆ ಒಳಗಾಗಿ ಇದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೊಲೀಸರು ಪರಿಶೀಲಿಸಿದಾಗ, ಪೂಜಾ ದತ್ತ ಅವರ ಕೊಠಡಿಯಲ್ಲಿ ಅನೇಕ ಕಾಗದಗಳ ಮೇಲೆ &ldquo;Peace&rdquo;, &ldquo;Ego&rdquo;, &ldquo;Trust&rdquo;, &ldquo;Satisfaction&rdquo;, &ldquo;Love&rdquo;, &ldquo;Solo Love&rdquo; ಎಂಬ ಪದಗಳನ್ನು ಬರೆದು ಗೋಡೆಗಳಿಗೆ ಅಂಟಿಸಿರುವುದು ಕಂಡುಬಂದಿದೆ. ಇದು ಅವರ ಮಾನಸಿಕ ಸ್ಥಿತಿಯ ಬಗ್ಗೆ ಕೆಲವು ಸೂಚನೆಗಳನ್ನು ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಕೊಲೆ ಬಗ್ಗೆ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ&lt;/h2&gt;&lt;p&gt;ಪ್ರಸ್ತುತ ತನಿಖೆಯಲ್ಲಿ ಕೊಲೆ ನಡೆದಿರುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯಗಳು ಸಿಕ್ಕಿಲ್ಲ. ಆದರೂ ಸಾವಿನ ನಿಜಸ್ವರೂಪ ಪತ್ತೆಹಚ್ಚಲು ಪೊಲೀಸರು ವಿವಿಧ ಕೋಣಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರೀತಿ ವೈಫಲ್ಯ, ಕೌಟುಂಬಿಕ ಸಮಸ್ಯೆ ಅಥವಾ ವೈಯಕ್ತಿಕ ಕಾರಣಗಳೇನಾದರೂ ಇದಕ್ಕಿದ್ದೆಯೇ ಎಂಬುದರ ಕುರಿತು ಆಡುಗೋಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;&lt;p&gt;ಪೂಜಾ ದತ್ತ ಅವರು ಕಳೆದ ಒಂದು ವರ್ಷದಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ತಿಳಿಯಲು, ಅವರ ಮೊಬೈಲ್ ನಂಬರಿನ ಕಾಲ್ ಡೀಟೇಲ್ ರೆಕಾರ್ಡ್ (CDR) ಅನ್ನು ಒಂದು ವರ್ಷದ ಅವಧಿಗೆ ಸಂಗ್ರಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ಜೊತೆಗೆ, ಅವರು ಕೆಲಸ ಬಿಟ್ಟ ನಂತರ ಜೀವನ ನಿರ್ವಹಣೆಗೆ ಹಣ ಎಲ್ಲಿಂದ ಬರುತ್ತಿತ್ತು, ಬಾಡಿಗೆ ಹೇಗೆ ಪಾವತಿಸುತ್ತಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.&lt;/p&gt;&lt;p&gt;ಇದಕ್ಕಾಗಿ ಪೂಜಾ ದತ್ತ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದು, ಸಂಬಂಧಿತ ಬ್ಯಾಂಕ್&zwnj;ಗೆ ನೋಟಿಸ್ ನೀಡಲಾಗಿದೆ. ಕಳೆದ ಒಂದು ವರ್ಷದ ಹಣಕಾಸು ವಹಿವಾಟಿನ ವಿವರಗಳನ್ನು ಕೂಡ ಪೊಲೀಸರು ಕೇಳಿದ್ದಾರೆ. ಇದೇ ವೇಳೆ, ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಗೂ ನೋಟಿಸ್ ಜಾರಿ ಮಾಡಿದ್ದು, ಯಾವ ಕಾರಣಕ್ಕೆ ಅವರು ಕೆಲಸ ತೊರೆದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;h2&gt;ಕೊರೋನಾ ಅವಧಿಯಲ್ಲಿ ವಿವಾಹ, ಪತಿ ನಿಧನ&lt;/h2&gt;&lt;p&gt;ಇದರ ಮಧ್ಯೆ, ಪೂಜಾ ದತ್ತ ಅವರು ಕಳೆದ ನಾಲ್ಕು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸಂಗತಿ ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊರೋನಾ ಅವಧಿಯಲ್ಲಿ ಅವರ ವಿವಾಹವಾಗಿದ್ದು, ನಂತರ ಅವರ ಪತಿ ನಿಧನರಾಗಿದ್ದಾರೆ. ಪತಿಯ ಸಾವಿನ ಬಳಿಕ ಅವರು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;p&gt;ಬಳಿಕ 2023ರಲ್ಲಿ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಪೂಜಾ, ಖಾಸಗಿ ಕಂಪನಿಯಲ್ಲಿ ಕೆಲಸ ಆರಂಭಿಸಿದ್ದರು. ಆದರೂ ಕುಟುಂಬದವರೊಂದಿಗೆ ಹೆಚ್ಚು ಸಂಪರ್ಕದಲ್ಲಿರಲಿಲ್ಲ. ನಂತರ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದ್ದು, ಇದೇ ಒಂಟಿತನ ಮತ್ತು ಖಿನ್ನತೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;p&gt;ಪೂಜಾ ದತ್ತ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣವು ಮಾನಸಿಕ ಆರೋಗ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿಯುತ್ತಿದ್ದು, ಒಂಟಿತನ ಮತ್ತು ಖಿನ್ನತೆ ಎದುರಿಸುವವರಿಗೆ ಸಮಯೋಚಿತ ಸಹಾಯ ಹಾಗೂ ಬೆಂಬಲ ಅಗತ್ಯವಿದೆ ಎಂಬ ಸಂದೇಶವನ್ನು ನೀಡುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/techie-pooja-dutta-mysterious-death-in-bengaluru-police-probe-deepens-gdp/articleshow-h8eu51e"/>
        </item>
        <item>
            <title><![CDATA[ಹನಿಯೂರು ಚಂದ್ರೇಗೌಡನ ಅಶ್ಲೀಲ ವಿಡಿಯೋ ಪ್ರಕರಣ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸಿ ನಾಯಿಯಂತೆ ಬಿಂಬಿಸಿಕೊಂಡಿದ್ದ ಆಸಾಮಿ!]]></title>
            <link>https://kannada.asianetnews.com/karnataka-districts/bengaluru-haniyuru-chandregowda-case-fake-identity-accused-chandregowda-linked-to-blackmail-network-gdp/articleshow-izer39b</link>
            <guid isPermaLink="true">https://kannada.asianetnews.com/karnataka-districts/bengaluru-haniyuru-chandregowda-case-fake-identity-accused-chandregowda-linked-to-blackmail-network-gdp/articleshow-izer39b</guid>
            <pubDate>Fri, 01 May 2026 16:04:06 +0530</pubDate>
            <description><![CDATA[ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್&zwnj;ಮೇಲ್ ಆರೋಪದ ಮೇಲೆ, ಈ ಹಿಂದೆ ಪ್ರೊಫೆಸರ್ ಹಾಗೂ ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಹನಿಯೂರು ಚಂದ್ರೇಗೌಡನನ್ನು ಬಂಧಿಸಲಾಗಿದೆ. ಆತ ಆರ್&zwnj;ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಪ್ರಕರಣವೂ ಬೆಳಕಿಗೆ ಬಂದಿದ್ದು, ಇದೊಂದು ಸಂಘಟಿತ ಜಾಲವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqhhhwqekfhd9zck7hjb3pre,imgname-haniyuru-chandregowda-case-1777631556334.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt; ನಗರದಲ್ಲಿ ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್&zwnj;ಮೇಲ್ ಪ್ರಕರಣದಲ್ಲಿ ಬಂಧಿತರಾಗಿರುವ ಹನಿಯೂರು ಚಂದ್ರೇಗೌಡ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಸಾರ್ವಜನಿಕ ಜೀವನದಲ್ಲಿ ವಿವಿಧ ರೀತಿಯ ಗುರುತುಗಳನ್ನು ಕಟ್ಟಿಕೊಂಡು ಹೆಸರು ಮಾಡಿದ್ದ ಚಂದ್ರೇಗೌಡನ ನಿಜಸ್ವರೂಪ ಇದೀಗ ಬಹಿರಂಗವಾಗುತ್ತಿರುವುದು ಗಮನಾರ್ಹ.&lt;/p&gt;&lt;p&gt;ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನಿಯೂರು ಚಂದ್ರೇಗೌಡ, ತಾನು ಕನ್ನಡ ಅಸೋಸಿಯೇಟ್ ಪ್ರೊಫೆಸರ್, ಬುಡಕಟ್ಟು ಜನಪದ ಸಂಶೋಧಕ, ಕಿರುತೆರೆ ನಟ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಎಂದು ಹೇಳಿಕೊಂಡು ಮತದಾರರ ಮುಂದೆ ತನ್ನನ್ನು ಪರಿಚಯಿಸಿಕೊಂಡಿದ್ದ. ಹಣಬಲ ಮತ್ತು ತೋಳ್ಬಲದ ವಿರುದ್ಧ ವಿದ್ಯಾಬಲಕ್ಕೆ ಮತ ನೀಡಿ ಎಂಬ ಘೋಷಣೆಯೊಂದಿಗೆ ಪ್ರಚಾರ ನಡೆಸಿದ್ದ ಆತ, ತನ್ನನ್ನು ನಿಮ್ಮ ನಾಯಿ ಎಂದು ಬಿಂಬಿಸುವ ರೀತಿಯ ಪೋಸ್ಟ್&zwnj;ಗಳ ಮೂಲಕವೂ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದನು.&lt;/p&gt;&lt;p&gt;ಆದರೆ ಈಗ ಹಲವು ಮಹಿಳೆಯರೊಂದಿಗೆ ಆತ್ಮೀಯತೆ ಬೆಳೆಸಿ, ಅವರನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಂಡು ಖಾಸಗಿ ಫೋಟೋ ಹಾಗೂ ವಿಡಿಯೋಗಳ ಮೂಲಕ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದನೆಂಬ ಗಂಭೀರ ಆರೋಪಗಳಡಿ ಆತ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿದಂತೆ, ಅವನ ವಿರುದ್ಧ ಇನ್ನಷ್ಟು ಅಚ್ಚರಿ ಮೂಡಿಸುವ ಮಾಹಿತಿ ಹೊರಬರುತ್ತಿದೆ.&lt;/p&gt;&lt;h2&gt;ಚಂದ್ರೇಗೌಡ ವಿರುದ್ಧ ಬೆದರಿಕೆ ಪ್ರಕರಣ&lt;/h2&gt;&lt;p&gt;ಇದಕ್ಕೂ ಮೊದಲು ಚಂದ್ರೇಗೌಡ ವಿರುದ್ಧ ಬೆದರಿಕೆ ಪ್ರಕರಣವೂ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆ ಪ್ರಕರಣದಲ್ಲಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಎನ್&zwnj;ಎಸ್&zwnj;ಎಸ್ ಅಧಿಕಾರಿ ಪ್ರತಾಪ್ ಅವರಿಗೆ ಆತ ಬೆದರಿಕೆ ಹಾಕಿದ್ದನೆಂದು ಆರೋಪಿಸಲಾಗಿದೆ.&lt;/p&gt;&lt;p&gt;ಈ ಕುರಿತು ಪ್ರತಾಪ್ ನೀಡಿರುವ ಹೇಳಿಕೆಯಲ್ಲಿ, ಕಳೆದ ಆರು-ಏಳು ತಿಂಗಳಿಂದ ಚಂದ್ರೇಗೌಡ ಆರ್&zwnj;ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದನೆಂದು ತಿಳಿಸಿದ್ದಾರೆ. &ldquo;ಆರ್&zwnj;ಟಿಐ ಅರ್ಜಿಗಳನ್ನು ಹಾಕಿ ನಂತರ ಬೆದರಿಕೆ ಹಾಕುವುದು ಅವನ ಚಟುವಟಿಕೆಯಾಗಿತ್ತು. ನನ್ನ ಸ್ನೇಹಿತರ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದನು. ನಂತರ ನೇರವಾಗಿ ಮೆಸೇಜ್ ಕಳುಹಿಸಿ &lsquo;ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ, ನಿನ್ನ ನೇಮಕಾತಿ ಸರಿಯಿಲ್ಲ, ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ&rsquo; ಎಂದು ಬೆದರಿಕೆ ಹಾಕಿದನು&rdquo; ಎಂದು ಪ್ರತಾಪ್ ವಿವರಿಸಿದ್ದಾರೆ.&lt;/p&gt;&lt;h2&gt;ಇತರರಿಗೂ ಇದೇ ರೀತಿಯಲ್ಲಿ ಬೆದರಿಕೆ&lt;/h2&gt;&lt;p&gt;ಅಷ್ಟೇ ಅಲ್ಲದೆ, ಅವನ ವರ್ತನೆ ಕ್ರಮೇಣ ಅತಿರೇಕಕ್ಕೆ ಹೋಗಿದ್ದು, ಕಚೇರಿ ಬಳಿ ಬಂದು ಅಧಿಕಾರಿಗಳನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಹಿನ್ನೆಲೆ ಪ್ರತಾಪ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಚಂದ್ರೇಗೌಡ ಇತರರಿಗೂ ಇದೇ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.&lt;/p&gt;&lt;p&gt;ಈಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಹಿನ್ನೆಲೆಯಲ್ಲಿ, ಅವನ ಎಲ್ಲಾ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪ್ರತಾಪ್ ಒತ್ತಾಯಿಸಿದ್ದಾರೆ. ಬ್ಲ್ಯಾಕ್&zwnj;ಮೇಲ್ ಮಾಡಿ ಹಣ ಪಡೆಯುವುದು ಅವನ ಪ್ರಮುಖ ಉದ್ದೇಶವಾಗಿದ್ದು, ಇದರ ಹಿಂದೆ ಒಂದು ತಂಡವೂ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಲ್ಯಾಪ್&zwnj;ಟಾಪ್ ಹಾಗೂ ಇತರ ಸಾಧನಗಳಲ್ಲಿ ಇರುವ ಡೇಟಾವನ್ನು ಪರಿಶೀಲಿಸಬೇಕು. ಕೆಲವರು ಹಣ ನೀಡಿ ಅವನ ಮೂಲಕ ಕೆಲಸ ಮಾಡಿಸಿಕೊಂಡಿರಬಹುದು&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಹನಿಯೂರು ಚಂದ್ರೇಗೌಡ ಪ್ರಕರಣವು ಸಾಮಾನ್ಯ ಅಪರಾಧ ಪ್ರಕರಣಕ್ಕಿಂತ ಹೆಚ್ಚಾಗಿ ಸಂಘಟಿತ ವಂಚನೆ ಮತ್ತು ಬ್ಲ್ಯಾಕ್&zwnj;ಮೇಲ್ ಜಾಲದ ಸುಳಿವು ನೀಡುತ್ತಿರುವುದರಿಂದ, ಪೊಲೀಸರು ಈ ದಿಕ್ಕಿನಲ್ಲಿ ತೀವ್ರ ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-haniyuru-chandregowda-case-fake-identity-accused-chandregowda-linked-to-blackmail-network-gdp/articleshow-izer39b"/>
        </item>
        <item>
            <title><![CDATA[ಬೆಂಗಳೂರಿನ ಕನಸಿನ ಮನೆಗೆ ಕಂಟಕ, ವಸತಿ ಯೋಜನೆಯಡಿ ಫ್ಲಾಟ್ ಖರೀದಿ ಮಾಡಿದ್ದವರಿಗೆ ಶಾಕ್ ಕೊಟ್ಟ ಇಲಾಖೆ!]]></title>
            <link>https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil</link>
            <guid isPermaLink="true">https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil</guid>
            <pubDate>Wed, 29 Apr 2026 16:02:06 +0530</pubDate>
            <description><![CDATA[ಬೆಂಗಳೂರಿನ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ, ನಿಗದಿತ ಅವಧಿಯಲ್ಲಿ ಪೂರ್ಣ ಹಣ ಪಾವತಿಸದ ಫಲಾನುಭವಿಗಳ ಫ್ಲಾಟ್&zwnj;ಗಳನ್ನು ರದ್ದುಗೊಳಿಸಲು ವಸತಿ ಇಲಾಖೆ ಆದೇಶಿಸಿದೆ. ಸುಮಾರು 5 ಸಾವಿರ ಫಲಾನುಭವಿಗಳ ಹಂಚಿಕೆಯನ್ನು ರದ್ದುಗೊಳಿಸಿ, ಅವರ ಮುಂಗಡ ಹಣವನ್ನು ಹಿಂದಿರುಗಿಸಲು ಇಲಾಖೆ ನಿರ್ಧರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqcc2kvesh0sxwmbjrhj481e,imgname-bengaluru-housing-scheme-1777458040685.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಬಹು ನಿರೀಕ್ಷಿತ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಫ್ಲಾಟ್ ಖರೀದಿಸಿದ ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ಶಾಕಿಂಗ್ ಸುದ್ದಿ ಸಿಕ್ಕಿತ್ತು, ಇಲಾಖೆಯಿಂದ ಮಹತ್ವದ ಆದೇಶ ಹೊರಬಿದ್ದಿದೆ. ವಸತಿ ಯೋಜನೆಯಡಿ 1BHK ಫ್ಲಾಟ್&zwnj;ಗಳನ್ನು ಆಯ್ಕೆ ಮಾಡಿಕೊಂಡಿದ್ದರೂ, ನಿಗದಿತ ಅವಧಿಯಲ್ಲಿ ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾದ ಫಲಾನುಭವಿಗಳ ಫ್ಲಾಟ್&zwnj;ಗಳನ್ನು ರದ್ದುಗೊಳಿಸುವುದಾಗಿ ಇಲಾಖೆ ಆದೇಶ ಪ್ರಕಟಿಸಿದೆ.&lt;/p&gt;&lt;p&gt;ಈ ಯೋಜನೆಯಡಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಅನೇಕ ಫಲಾನುಭವಿಗಳು ಮುಂಗಡ ಹಣ ಪಾವತಿಸಿ ತಮ್ಮ ಆಯ್ಕೆಯ ಫ್ಲಾಟ್&zwnj;ಗಳನ್ನು ಕಾಯ್ದಿರಿಸಿದ್ದರು. ಆದರೆ, ಫ್ಲಾಟ್&zwnj;ಗಳು ಸಿದ್ಧವಾಗಿದ್ದರೂ ಬಾಕಿ ಹಣವನ್ನು ಕಾಲಮಿತಿಯೊಳಗೆ ಪಾವತಿಸದ ಹಿನ್ನೆಲೆ, ಹಂಚಿಕೆ ಮಾಡಿದ್ದ ಫ್ಲಾಟ್&zwnj;ಗಳನ್ನು ರದ್ದುಗೊಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಸತಿ ಇಲಾಖೆ ತಿಳಿಸಿದೆ.&lt;/p&gt;&lt;h2&gt;5 ಸಾವಿರ ಫಲಾನುಭವಿಗಳು ಪೂರ್ಣ&lt;/h2&gt;&lt;p&gt;ವಿಶೇಷವಾಗಿ ಸುಮಾರು 5 ಸಾವಿರ ಫಲಾನುಭವಿಗಳು ಪೂರ್ಣ ಮೊತ್ತವನ್ನು ಪಾವತಿಸಲು ವಿಫಲರಾಗಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಈ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದ್ದ ಫ್ಲಾಟ್&zwnj;ಗಳನ್ನು ರದ್ದುಗೊಳಿಸಿ, ಅದೇ ಫ್ಲಾಟ್&zwnj;ಗಳನ್ನು ಇತರ ಅರ್ಹರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಇಲಾಖೆ ಮುಂದುವರಿಸಲು ನಿರ್ಧರಿಸಿದೆ.&lt;/p&gt;&lt;p&gt;ಇನ್ನೊಂದೆಡೆ, ಈಗಾಗಲೇ ಮುಂಗಡವಾಗಿ 50 ಸಾವಿರ ರೂಪಾಯಿ ಪಾವತಿಸಿರುವ ಫಲಾನುಭವಿಗಳಿಗೆ ಅವರು ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ವಸತಿ ಇಲಾಖೆ ತೀರ್ಮಾನಿಸಿದೆ. ಇದರಿಂದಾಗಿ ಫಲಾನುಭವಿಗಳಿಗೆ ಆರ್ಥಿಕ ನಷ್ಟವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಎಸ್&zwnj;ಸಿ ಮತ್ತು ಎಸ್&zwnj;ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಕಡಿತ&lt;/h2&gt;&lt;p&gt;ಯೋಜನೆಯಡಿ 1BHK ಫ್ಲಾಟ್&zwnj;ಗಳ ದರವನ್ನು ಸಾಮಾನ್ಯ ವರ್ಗದವರಿಗೆ 10.50 ಲಕ್ಷ ರೂಪಾಯಿಯಾಗಿ ನಿಗದಿಪಡಿಸಲಾಗಿದ್ದು, ಎಸ್&zwnj;ಸಿ ಮತ್ತು ಎಸ್&zwnj;ಟಿ ವರ್ಗದವರಿಗೆ 9.70 ಲಕ್ಷ ರೂಪಾಯಿ ಎಂದು ಕಡಿತ ದರದಲ್ಲಿ ನೀಡಲಾಗಿದೆ. ಕಡಿಮೆ ದರದಲ್ಲಿ ಮನೆ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದ್ದರೂ, ಸಮಯಕ್ಕೆ ಸರಿಯಾಗಿ ಪಾವತಿ ಆಗದ ಕಾರಣ ಹಲವು ಫ್ಲಾಟ್&zwnj;ಗಳು ಖಾಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ವಸತಿ ಇಲಾಖೆ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಪಾವತಿ ಮಾಡುವ ಮಹತ್ವವನ್ನು ಒತ್ತಿಹೇಳಿದ್ದು, ಮುಂದಿನ ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ತಿಳಿಸಿದೆ. ಯೋಜನೆಯ ಯಶಸ್ಸಿಗಾಗಿ ಫಲಾನುಭವಿಗಳ ಸಹಕಾರ ಅಗತ್ಯವಾಗಿದ್ದು, ನಿಯಮ ಪಾಲನೆ ಅತ್ಯಂತ ಮುಖ್ಯವಾಗಿದೆ ಎಂದು ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-housing-scheme-flats-cancelled-for-5000-beneficiaries-over-non-payment-gdp/articleshow-kqzikil"/>
        </item>
        <item>
            <title><![CDATA[ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟನೆ]]></title>
            <link>https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</link>
            <guid isPermaLink="true">https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</guid>
            <pubDate>Tue, 28 Apr 2026 18:26:15 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಿಸಿಟಿವಿ ಸಮಸ್ಯೆಯು ಖಾಸಗಿ ಮಾರಾಟಗಾರರ ಆಂತರಿಕ ವಿವಾದವಾಗಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಯ ಭಾಗವಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಸಂಘ ಸ್ಪಷ್ಟಪಡಿಸಿದೆ. ಸಾರ್ವಜನಿಕ ಪ್ರವೇಶಕ್ಕೂ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸಂಘವು ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmg6swpj74zbndt7e2gewc04,imgname-gettyimages-2210880947-1774365504210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ಸಮಸ್ಯೆ ಎದುರಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಸಂಘ (Karnataka State Cricket Association) ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಕೆಲವು ವರದಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಂಘವು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;ಕ್ರಿಕೆಟ್&zwnj; ಅಸೋಸೊಯೇಷನ್ ಹೇಳಿಕೆಯ ಪ್ರಕಾರ, ಕ್ರೀಡಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಖಾಸಗಿ ವ್ಯವಸ್ಥೆಯ ಭಾಗವಾಗಿದ್ದು, ಅವುಗಳನ್ನು ಮಾರಾಟಗಾರರು ತಮ್ಮ ಆಂತರಿಕ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ. ಈ ಕ್ಯಾಮೆರಾಗಳು ಪೊಲೀಸ್ ಇಲಾಖೆಯ ಭದ್ರತಾ ಮೂಲಸೌಕರ್ಯದ ಭಾಗವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.&lt;/p&gt;&lt;h2&gt;ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ&lt;/h2&gt;&lt;p&gt;ಇನ್ನು, ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸ್ವತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ತೊಂದರೆ ಮಾರಾಟಗಾರ ಮತ್ತು ನೌಕರರ ನಡುವಿನ ಆಂತರಿಕ ವಿಷಯವಾಗಿದ್ದು, ಪಾವತಿ ಸಂಬಂಧಿತ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಸಂಬಂಧಪಟ್ಟ ಸರ್ವರ್ ಕೊಠಡಿಗಳು ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳು ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿದ್ದವು. ಇದರಲ್ಲಿ ಪೊಲೀಸ್ ಇಲಾಖೆ ಅಥವಾ ಕೆಎಸ್&zwnj;ಸಿಎಯ ಪ್ರಮುಖ ಭದ್ರತಾ ಚೌಕಟ್ಟಿನ ಯಾವುದೇ ಪಾತ್ರವಿಲ್ಲ ಎಂದು ಸಂಘ ತಿಳಿಸಿದೆ.&lt;/p&gt;&lt;h2&gt;ಭದ್ರತಾ ವೈಫಲ್ಯ ಉಂಟಾಗಿಲ್ಲ&lt;/h2&gt;&lt;p&gt;ಮುಖ್ಯವಾಗಿ, ಕ್ರೀಡಾಂಗಣದ ದ್ವಾರಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯುವ ಮೊದಲು ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ. ಈ ಘಟನೆಯಿಂದ ಯಾವುದೇ ಭದ್ರತಾ ವೈಫಲ್ಯ ಉಂಟಾಗಿಲ್ಲ ಹಾಗೂ ಕಾರ್ಯಾಚರಣೆಯಲ್ಲಿ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಕೆಎಸ್&zwnj;ಸಿಎ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಪ್ರೇಕ್ಷಕರು, ಆಟಗಾರರು ಅಥವಾ ಅಧಿಕಾರಿಗಳ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗಿಲ್ಲ. ಯಾವುದೇ ವಿಧ್ವಂಸಕ ಕೃತ್ಯಗಳು ನಡೆದಿಲ್ಲ ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಸಂಘ ತಿಳಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿಸಿಟಿವಿ ಸಮಸ್ಯೆ ಕುರಿತು ಹರಿದಾಡುತ್ತಿದ್ದ ಆತಂಕಗಳಿಗೆ ತೆರೆ ಎಳೆದಿರುವ ಕೆಎಸ್&zwnj;ಸಿಎ, ಕ್ರೀಡಾಂಗಣದ ಭದ್ರತಾ ವ್ಯವಸ್ಥೆ ಸದಾ ದೃಢವಾಗಿಯೇ ಇರುತ್ತದೆ ಎಂಬುದನ್ನು ಪುನರುಚ್ಚರಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte"/>
        </item>
        <item>
            <title><![CDATA[ಬೆಂಗಳೂರಿನ ರಸ್ತೆಯಲ್ಲಿ ಯುವತಿಯ ಕನಸು ನುಚ್ಚುನೂರು, ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ  ವಿದ್ಯಾರ್ಥಿನಿ ಬಲಿ!]]></title>
            <link>https://kannada.asianetnews.com/karnataka-districts/engineering-student-killed-in-bmtc-bus-accident-in-bengaluru-near-uttarahalli-gdp/articleshow-nusbefc</link>
            <guid isPermaLink="true">https://kannada.asianetnews.com/karnataka-districts/engineering-student-killed-in-bmtc-bus-accident-in-bengaluru-near-uttarahalli-gdp/articleshow-nusbefc</guid>
            <pubDate>Sat, 25 Apr 2026 17:59:33 +0530</pubDate>
            <description><![CDATA[ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ, ಬಿಎಂಟಿಸಿ ಬಸ್ ಚಕ್ರದಡಿ ಸಿಲುಕಿ ಸಿರಿಶಾ ಎಂಬ 21 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್&zwnj;ನಿಂದ ಬಿದ್ದ ಅವರ ಮೇಲೆ ಬಸ್ ಹರಿದಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfdmfv0h1yz643wxm018tanm,imgname----------------------3--1768910482449.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಅಪಘಾತಗಳು ಮರುಕಳಿಸುತ್ತಿರುವ ನಡುವೆ ಮತ್ತೊಂದು ದುರ್ಘಟನೆ ಸಂಭವಿಸಿದ್ದು, ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ.&lt;/p&gt;&lt;p&gt;ಉತ್ತರಹಳ್ಳಿ ಮುಖ್ಯ ರಸ್ತೆಯ ಶ್ರೀನಿವಾಸಪುರ ಕ್ರಾಸ್ ಸಮೀಪ ಈ ಘಟನೆ ನಡೆದಿದ್ದು, ಸಿರಿಶಾ (21) ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾಳೆ. &amp;nbsp;ಸಿರಿಶಾ ಪ್ರಯಾಣಿಸುತ್ತಿದ್ದ ಬೈಕ್ ಮತ್ತು ಬಿಎಂಟಿಸಿ ಬಸ್ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದರು. ಈ ವೇಳೆ ಬೈಕ್&zwnj;ನ ಹ್ಯಾಂಡಲ್ ಬಸ್&zwnj;ಗೆ ತಾಗಿದ ಪರಿಣಾಮ, ನಿಯಂತ್ರಣ ತಪ್ಪಿ ಸಿರಿಶಾ ರಸ್ತೆಗೆ ಬಿದ್ದಿದ್ದಾರೆ.&lt;/p&gt;&lt;h2&gt;ಸ್ಥಳದಲ್ಲೇ ಪ್ರಾಣಬಿಟ್ಟ ಯುವತಿ&lt;/h2&gt;&lt;p&gt;ಅದಾದ ನಂತರ, ಹಿಂಬದಿಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡು &amp;nbsp;ಮೃತಪಟ್ಟಿದ್ದಾರೆ. ಘಟನೆಯ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಸ್ ಚಾಲಕ ಚಂದ್ರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;&lt;p&gt;ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್.ಆರ್. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಒಟ್ಟಿನಲ್ಲಿ, ನಗರದಲ್ಲಿ ನಡೆಯುತ್ತಿರುವ ಇಂತಹ ಅಪಘಾತಗಳು ಸಾರ್ವಜನಿಕರಲ್ಲಿ ಭದ್ರತೆ ಕುರಿತು ಆತಂಕ ಹೆಚ್ಚಿಸುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕ ಸಾರಿಗೆ ಚಾಲಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂಬ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿ ಹೇಳುತ್ತಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/engineering-student-killed-in-bmtc-bus-accident-in-bengaluru-near-uttarahalli-gdp/articleshow-nusbefc"/>
        </item>
        <item>
            <title><![CDATA[ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 54 ಸಾವಿರ ಸಂಶಯ ಪಿಂಚಣಿದಾರರನ್ನು ಗುರುತಿಸಿದ ಸರ್ಕಾರ]]></title>
            <link>https://kannada.asianetnews.com/state/government-identifies-54000-suspicious-pensioners-in-bengaluru-south-district-mrq/articleshow-q24apgu</link>
            <guid isPermaLink="true">https://kannada.asianetnews.com/state/government-identifies-54000-suspicious-pensioners-in-bengaluru-south-district-mrq/articleshow-q24apgu</guid>
            <pubDate>Sat, 25 Apr 2026 07:50:19 +0530</pubDate>
            <description><![CDATA[&lt;p&gt;54,430 ಅನುಮಾನಾಸ್ಪದ ಪಿಂಚಣಿದಾರರನ್ನು ಸರ್ಕಾರ ಗುರುತಿಸಿದ್ದು, ಸುಳ್ಳು ದಾಖಲೆಗಳ ಶಂಕೆಯ ಮೇಲೆ ಭೌತಿಕ ಪರಿಶೀಲನೆಗೆ ಆದೇಶಿಸಿದೆ. ಈ ಕ್ರಮದಿಂದ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದ್ದು, ಅರ್ಹರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k0hnr8cbzdxdgfzvfqm6rr44,imgname-pension-facts-1752939897227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಗರುತಿಸಿ ರದ್ದು ಮಾಡಿದ ರಾಜ್ಯ ಸರ್ಕಾರ ಈಗ ಸಾಮಾಜಿಕ ಭದ್ರತೆ ಮಾಸಾಶನ ಯೋಜನೆಗಳಡಿ ಜಿಲ್ಲೆಯಲ್ಲಿ ಮಾಸಾಶನ ಪಡೆಯುತ್ತಿರುವವರಲ್ಲಿ ಸುಮಾರು 54,430 ಅನುಮಾನಾಸ್ಪದ ಪಿಂಚಣಿದಾರರನ್ನು ಗುರುತಿಸಿದೆ.&lt;/p&gt;&lt;p&gt;ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಸಾಮಾಜಿಕ ಭದ್ರತಾ ಪಿಂಚಣಿಯ ಪ್ರಯೋಜನ ದೊರೆಯಬೇಕು. ಆದರೆ, ಜಿಲ್ಲೆಯಲ್ಲಿ 54,430 ಮಂದಿ ಅನುಮಾನಾಸ್ಪದವಾಗಿ ಸುಳ್ಳು ದಾಖಲೆ ಸಲ್ಲಿಸಿ ಪಿಂಚಣಿ ಪಡೆಯುತ್ತಿರುವುದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.&lt;/p&gt;&lt;p&gt;ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ಮನಸ್ವಿನಿ, ವಿಶೇಷ ಚೇತನ ಪೋಷಣೆ ಭತ್ಯೆ ಸೇರಿ ಜಿಲ್ಲೆಯಲ್ಲಿ ಲಕ್ಷಾಂತರ ಜನರು ಮಾಸಿಕ 800ರಿಂದ 2000 ರು.ಗಳವರೆಗೂ ಮಾಸಾಶನ ಪಡೆಯುತ್ತಿದ್ದಾರೆ. ಅವರಲ್ಲಿ ಗುರುತಿಸಿರುವ ಅನುಮಾನಾಸ್ಪದ ಪಿಂಚಣಿದಾರರು ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಎಪಿಎಲ್ ಕಾರ್ಡ್&zwnj;ದಾರರು, ಜಿಎಸ್&zwnj;ಟಿ ನಂಬರ್ ಹೊಂದಿರುವವರು, ನಿಗದಿತ ಮಿತಿಗಿಂತ ಕಡಿಮೆ ವಯಸ್ಸಿನವರೂ ಇದ್ದಾರೆ ಎಂಬ ಅನುಮಾನ ಮೂಡಿದೆ.&lt;/p&gt;&lt;p&gt;ಹಾಗಾಗಿ ರಾಜ್ಯ ಸರ್ಕಾರ ತನ್ನ ಬಳಿ ಇರುವ ದಾಖಲೆ ಆಧರಿಸಿ ಜಿಲ್ಲೆಯಲ್ಲಿ 54,430 ಪಿಂಚಣಿದಾರರನ್ನು ಸಂದೇಹಾಸ್ಪದ ಎಂದು ಗುರುತಿಸಿದೆ. ಅತಿ ಹೆಚ್ಚು ಕನಕಪುರ ತಾಲೂಕಿನಲ್ಲಿ 16,489 ಅನುಮಾನಾಸ್ಪದ ಪ್ರಕರಣಗಳಿದ್ದರೆ, ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 4164 ಸಂದೇಹಾಸ್ಪದ ಪ್ರಕರಣಗಳಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 7511, ಮಾಗಡಿ ತಾಲೂಕಿನಲ್ಲಿ 12,056 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 14,210 ಪಿಂಚಿಣಿದಾರರನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಲಾಗಿದೆ.&lt;/p&gt;&lt;h2&gt;&lt;strong&gt;ಮಾನದಂಡಗಳು ಭೌತಿಕವಾಗಿ ಪರಿಶೀಲನೆ&lt;/strong&gt;&lt;/h2&gt;&lt;p&gt;ಈ ಫಲಾನುಭವಿಗಳ ವಿವರಗಳನ್ನು ಕುಟುಂಬದ ದತ್ತಾಂಶದ ಮಾಹಿತಿಯೊಂದಿಗೆ ವಯಸ್ಸು, ಆದಾಯ ಮಿತಿ, ಆದಾಯ ತೆರಿಗೆ ಪಾವತಿ, ಎಚ್&zwnj;ಆರ್&zwnj;ಎಂಎಸ್ ವಿವರಗಳನ್ನು ಸಂಯೋಜಿಸಿ ನೋಡಿದಾಗ ಸಂಧ್ಯಾ ಸುರಕ್ಷಾ ಯೋಜನೆ ಅಡಿಯಲ್ಲಿ ಅನರ್ಹ ಫಲಾನುಭವಿಗಳು ಇರುವುದನ್ನು ಗುರುತಿಸಲಾಗಿದೆ.&lt;/p&gt;&lt;p&gt;ಈಗಾಗಲೇ ಗ್ರಾಮವಾರು, ತಾಲೂಕುವಾರು ಮತ್ತು ಜಿಲ್ಲಾವಾರು ಫಲಾನುಭವಿಗಳ ವಿವರಗಳನ್ನು ಎಲ್ಲ ತಹಸೀಲ್ದಾರ್ ಗಳಿಗೆ ಒದಗಿಸಲಾಗಿದೆ. ಫಲಾನುಭವಿಗಳ ವಯಸ್ಸು, ಆದಾಯ ಮಿತಿ, ಎಪಿಎಲ್, ಆದಾಯ ತೆರಿಗೆ ಪಾವತಿ ಮತ್ತು ಎಚ್ಆರ್&zwnj;ಎಂಎಸ್ ಮಾನದಂಡಗಳನ್ನು ಭೌತಿಕವಾಗಿ ಪರಿಶೀಲಿಸಬೇಕು. ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ರದ್ದು ಪಡಿಸಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಆಯುಕ್ತರು ಗ್ರಾಮ ಆಡಳಿತ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;&quot;ಸಂಯೋಜನೆ'''' ಎಂಬ ಮೊಬೈಲ್ ಆ್ಯಪ್ ಮೂಲಕ ಅನುಮಾನಾಸ್ಪದ ಪಿಂಚಿಣಿದಾರರ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದ್ದು, ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಅವರ ಲಾಗಿನ್&zwnj;ನಲ್ಲಿ ಆಯಾಯ ಗ್ರಾಮಗಳಲ್ಲಿ ಸಂದೇಹಾಸ್ಪದ ಎಂದು ಗುರುತಿಸಿರುವ ಪಿಂಚಣಿದಾರರ ಪಟ್ಟಿ ಕೂಡ ಇದೆ.&lt;/p&gt;&lt;h3&gt;&lt;strong&gt;ಸರ್ಕಾರದ ಮಿತಿ ನಿಗದಿಯೇ ಗೊಂದಲಕ್ಕೆ ಕಾರಣ&lt;/strong&gt;&lt;/h3&gt;&lt;p&gt;ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವ ಕುಟುಂಬಕ್ಕೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ನೀಡುತ್ತಿದೆ. ಆದರೆ, ಪಿಂಚಣಿ ಪಡೆಯುವವರ ಕುಟುಂಬದ ಆದಾಯ ಗರಿಷ್ಠ 32 ಸಾವಿರವಾಗಿರಬೇಕು ಎಂದು ಸರ್ಕಾರ ಮಿತಿ ವಿಧಿಸಿದೆ. ಇದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಬಿಪಿಎಲ್ ಕಾರ್ಡ್ ಹೊಂದಿರುವ, ವಾಸ್ತವವಾಗಿ ಸೌಲಭ್ಯ ಪಡೆಯಲು ಅರ್ಹರಾಗಿರುವವರ ಹೆಸರೂ ಸಂದೇಹಾಸ್ಪದ ಪಟ್ಟಿಯಲ್ಲಿ ಸೇರಿಕೊಂಡಿದೆ. ಈಗ ಪರಿಶೀಲನೆಯ ನಂತರ ಅಂತಹ ಹಲವು ಕುಟುಂಬಗಳಿಗೂ ಪಿಂಚಣಿ ರದ್ದಾಗುವ ಅನುಮಾನವಿದೆ.&lt;/p&gt;&lt;p&gt;ಆಧಾರ್ ಪರಿಶೀಲನೆ ವೇಳೆಯಲ್ಲಿ ಪಿಂಚಣಿದಾರರ ವಯಸ್ಸು ಯೋಜನೆಗೆ ಅರ್ಹವಾದ ವಯಸ್ಸಿಗಿಂತ ಕಡಿಮೆ ಇರುವುದು ಕಂಡು ಬಂದಿದೆ. ಅಲ್ಲದೇ ಆರೋಗ್ಯಕರವಾಗಿರುವವರು ಕೂಡಾ ವಿಕಲಚೇತನ ಪ್ರಮಾಣ ಪತ್ರ ಪಡೆದು ವಿಕಲಚೇತನರ ಪಿಂಚಣಿ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಪ್ರಕರಣಗಳ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು. ಇದು ಸರ್ಕಾರಕ್ಕೆ ಮಾಡುವ ವಂಚನೆ ಮಾತ್ರವಲ್ಲದೇ ಸಾರ್ವಜನಿಕರಿಗೆ ಮಾಡುವ ವಂಚನೆಯಾಗಿದೆ ಎನ್ನುತ್ತಾರೆ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆ ಅಧಿಕಾರಿಗಳು.&lt;/p&gt;&lt;h3&gt;&lt;strong&gt;ನಕಲಿ ಮಾಹಿತಿ ಗುರುತಿಸುವ ವ್ಯವಸ್ಥೆಯಿಲ್ಲ&lt;/strong&gt;&lt;/h3&gt;&lt;p&gt;ಆಧಾರ್ ಕಾರ್ಡ್&zwnj; ಪ್ರಕಾರ 60 ವರ್ಷ ಆಗಿರುವುದಿಲ್ಲ. ಸುಳ್ಳು ದಾಖಲೆ ಕೊಟ್ಟು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇಲ್ಲಿ ಬಿಪಿಎಲ್ ಕಾರ್ಡ್&zwnj;, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಅರ್ಜಿ ಹಾಕುವವರ ನಿಖರ ಆದಾಯ ಅಂದಾಜು ಮಾಡುವ ವ್ಯವಸ್ಥೆ ಇಲ್ಲ. ಆದಾಯ ತೆರಿಗೆ ಪಾವತಿಸುವವವರು ಹಾಗೂ ಸರ್ಕಾರಿ ವೇತನ ಪಡೆಯುವವರು ಈ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇದು ಸರಿಯಾಗಬೇಕಾದರೆ, ನಿಖರ ಆದಾಯ ಅಂದಾಜು ಮಾಡುವ ಮೂಲಕ ಅರ್ಹರನ್ನು ಗುರುತಿಸುವ ವ್ಯವಸ್ಥೆ ಬರಬೇಕು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಾಮನಗರದ 7481 ಎಕರೆ ವಿಸ್ತೀರ್ಣದಲ್ಲಿ ಗ್ರೇಟರ್&zwnj; ಬೆಂಗಳೂರಿಗೆ ಉಪನಗರ ಯೋಜನೆ: ಚರ್ಚೆ&lt;/strong&gt;&lt;/p&gt;&lt;h3&gt;&lt;strong&gt;ಪಿಂಚಿಣಿದಾರರ ಪರ ಶಾಸಕ ಇಕ್ಬಾಲ್ ಧ್ವನಿ&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗುರುತಿಸಿರುವ 54,430 ಅನುಮಾನಾಸ್ಪದ ಪಿಂಚಣಿದಾರರ ಪರವಾಗಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಧ್ವನಿ ಎತ್ತಿದರು. ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಲ್ಲಿ ಯಾರೊಬ್ಬರು ವಂಚಿತರಾಗದಂತೆ ಕ್ರಮ ವಹಿಸಬೇಕು. ಇದಕ್ಕಾಗಿ ಗ್ರಾಮವಾರು ಪಿಂಚಿಣಿದಾರರ ಪಟ್ಟಿ ಸಿದ್ಧಪಡಿಸಿ ದಾಖಲಾತಿ ಪರಿಶೀಲಿಸುವ ಆಂದೋಲನ ನಡೆಸಲಿ. ಒಬ್ಬ ಅರ್ಹ ಫಲಾನುಭವಿ ಪಿಂಚಿಣಿಯಿಂದ ವಂಚಿತರಾದರೂ ನಾನು ಸುಮ್ಮನಿರುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕೊನೆಗೆ ಸಚಿವ ರಾಮಲಿಂಗಾರೆಡ್ಡಿರವರು ಗ್ರಾಮವಾರು ಆಂದೋಲನ ನಡೆಸುವಂತೆ ಅಪರ ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;&lt;p&gt;&lt;strong&gt;ತಾಲೂಕು ಅನುಮಾನಾಸ್ಪದ ಪಿಂಚಿಣಿದಾರರ ಸಂಖ್ಯೆ&lt;/strong&gt;&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ತಾಲೂಕು&lt;/td&gt;   &lt;td&gt;ಸಂಖ್ಯೆ&lt;/td&gt;  &lt;/tr&gt;  &lt;tr&gt;   &lt;td&gt;ಕನಕಪುರ&amp;nbsp;&lt;/td&gt;   &lt;td&gt;16,489&lt;/td&gt;  &lt;/tr&gt;  &lt;tr&gt;   &lt;td&gt;ರಾಮನಗರ&lt;/td&gt;   &lt;td&gt;7,511&lt;/td&gt;  &lt;/tr&gt;  &lt;tr&gt;   &lt;td&gt;ಮಾಗಡಿ&lt;/td&gt;   &lt;td&gt;12,056&lt;/td&gt;  &lt;/tr&gt;  &lt;tr&gt;   &lt;td&gt;ಚನ್ನಪಟ್ಟಣ&lt;/td&gt;   &lt;td&gt;14,210&lt;/td&gt;  &lt;/tr&gt;  &lt;tr&gt;   &lt;td&gt;ಹಾರೋಹಳ್ಳಿ&lt;/td&gt;   &lt;td&gt;4,164&lt;/td&gt;  &lt;/tr&gt;  &lt;tr&gt;   &lt;td&gt;ಒಟ್ಟು&lt;/td&gt;   &lt;td&gt;54,430&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;&amp;nbsp;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶೇಖಿ ಅಣ್ಣನ ಅಂಗಡಿಗೆ ಬೀಗ; ಅಕ್ಷರಗಳ ಯುಗಕ್ಕೆ ತೆರೆ ಓದುಗರ ಮನದಲ್ಲಿ ಉಳಿದ ಅಯ್ನೋರ ನೆನಪು&lt;/strong&gt;&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/government-identifies-54000-suspicious-pensioners-in-bengaluru-south-district-mrq/articleshow-q24apgu"/>
        </item>
        <item>
            <title><![CDATA[ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ]]></title>
            <link>https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</link>
            <guid isPermaLink="true">https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</guid>
            <pubDate>Tue, 28 Apr 2026 19:45:35 +0530</pubDate>
            <description><![CDATA[ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6znsmb6k7j6ems5mw84a5,imgname-umar-khalid-event-in-bengaluru-1777385592628.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;2020ರ ದೆಹಲಿ ದಂಗೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಹಿನ್ನೆಲೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಆಕ್ರೋಶ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿವೆ. ಇಷ್ಟೆಕ್ಕ ವಿವಾದ ಪ್ರತಿಭಟನೆಗಳ ನಡುವೆ ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮ ಪೊಲೀಸ್ ಭದ್ರತೆಯಲ್ಲಿ ನಡೆದಿದೆ.&lt;/p&gt;&lt;h2&gt;ಗೋಡೆ ಬರಹಗಳಿಂದ ವಿವಾದಕ್ಕೆ ಶುರು&lt;/h2&gt;&lt;p&gt;ನಗರದ ಗಾಂಧಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ &ldquo;Free Umar Khalid&rdquo;, &ldquo;Justice for Umar Khalid&rdquo;, &ldquo;India stands with Umar&rdquo; ಎಂಬ ಬರಹಗಳು ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದವು. ಈ ಬರಹಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ವಿವಾದಕ್ಕೆ ಕಾರಣವಾದವು. ಬಳಿಕ ಕೆಲವು ಬಿಜೆಪಿ ಕಾರ್ಯಕರ್ತರು ಇಂತಹ ಬರಹಗಳನ್ನು ವಿರೋಧಿಸಿ, ಗೋಡೆಗಳ ಮೇಲೆ ಕಪ್ಪು ಬಣ್ಣ ಹಚ್ಚಿ ಅವನ್ನು ಅಳಿಸಿರುವ ಘಟನೆ ನಡೆದಿದೆ. ಈ ಬರಹಗಳು ಗೋಡೆಗಳಲ್ಲಿ ಬೃಹತ್ ಮಟ್ಟದಲ್ಲಿ ಇದ್ದವು ಎನ್ನಲಾಗಿದೆ.&lt;/p&gt;&lt;h2&gt;ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ&lt;/h2&gt;&lt;p&gt;ದೊಮ್ಮಲೂರು ಪ್ರದೇಶದಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ಆ ಪರಿಸರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಗಳನ್ನು ಎರಡೂ ಬದಿ ಬಂದ್ ಮಾಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದವರ ವಿವರಗಳನ್ನು ದಾಖಲಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರತಿಯೊಬ್ಬರ ಮಾಹಿತಿ ಪಡೆದ ಪೊಲೀಸರು. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಂದಿಯ ಮೊಬೈಲ್ ನಂಬರ್ ಕೂಡ ಪಡೆದು ಹೆಸರು ನಮೂದಿಸಿಕೊಂಡರು. ಇನ್ನು ನಟ ಪ್ರಕಾಶ್ ರಾಜ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.&lt;/p&gt;&lt;h2&gt;ಪ್ರತಿಭಟನೆ ಮತ್ತು ಪೊಲೀಸ್ ಕ್ರಮ&lt;/h2&gt;&lt;p&gt;ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್ ಗೌತಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್&zwnj;ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆದಿದ್ದು, ಕೆಲವರನ್ನು ವಶಕ್ಕೂ ಪಡೆದಿದ್ದಾರೆ. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್ ಹಿಡಿದು ಪ್ರತಿಭಟನೆ. ಪ್ರತಿಭಟನಾ ಕಾರರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನೆಗೆ ಪೂರ್ವಾನುಮತಿ ಇರದ ಕಾರಣ, ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸರು ಹಿಂದೂ ಪರ ನಾಯಕರಿಗೆ ನೋಟೀಸ್ ನೀಡಿದರು.&lt;/p&gt;&lt;h2&gt;ಭದ್ರತಾ ವ್ಯವಸ್ಥೆ&lt;/h2&gt;&lt;p&gt;ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿ ಇರಲು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮ್ಟೆ ಅವರ ನೇತೃತ್ವದಲ್ಲಿ, ಒಬ್ಬ ಡಿಸಿಪಿ ಹಾಗೂ ಮೂವರು ಎಸಿಪಿಗಳ ಮೇಲ್ವಿಚಾರಣೆಯಲ್ಲಿ ಭದ್ರತೆ ಒದಗಿಸಲಾಯಿತು.&lt;/p&gt;&lt;h2&gt;ವಿವಿಧ ವಲಯಗಳಿಂದ ಪ್ರತಿಕ್ರಿಯೆ&lt;/h2&gt;&lt;p&gt;ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2020 ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಅಂತ ಮನುಷ್ಯನನ್ನ ಕರೆಸಿ ಕಾರ್ಯಕ್ರಮ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ನೀಚ ಸರ್ಕಾರ ಇಂತಹ ಕಾರ್ಯಕ್ರಮ ಮಾಡ್ತಿದ್ದಾರೆ. ಪೊಲೀಸರ ಭಧ್ರತೆಯಲ್ಲಿ ಕಾರ್ಯಕ್ರಮ ಮಾಡ್ತಿರೋದು ನಾಚಿಕೆಗೇಡು. ಬುದ್ಧಿ ಜೀವಿಗಳು ಅಂತಾರೆ ಇವರೆಲ್ಲ ನಗರ ನಕ್ಸಲರು. ಇಂತಹ ಕಾರ್ಯಕ್ರಮ ಮಾಡ್ತಿರೋದು ದುರಂತ. ಪ್ರತಿಭಟನೆ ಮಾಡುವವರನ್ನ ಬಂಧಿಸಿದ್ದಾರೆ . ಇಂತಹ ದೇಶ ವಿರೋಧಿ ಕಾರ್ಯಕ್ರಮಕ್ಕೆ ಬಂದವರು ಎಂತವರು ಅಲ್ವಾ ಎಂದು ಕಿಡಿ ಕಾರಿದರು.&lt;/p&gt;&lt;p&gt;ಒಟ್ಟಿನಲ್ಲಿ, ಉಮರ್ ಖಾಲಿದ್ ಕುರಿತ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆ, ಪ್ರತಿಭಟನೆ ಹಾಗೂ ಭದ್ರತಾ ಕಾವಲು ಹೆಚ್ಚಿದದ್ದು ಗಮನಾರ್ಹವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಉಳಿದಿದೆ.&lt;/p&gt;&lt;p&gt;&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa"/>
        </item>
        <item>
            <title><![CDATA[ಬೆಂಗಳೂರು: 10 ಲಕ್ಷ ಲಂಚಕ್ಕೆ ಡಿಮ್ಯಾಂಡ್‌, ಹಣ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ವಿಲೇಜ್ ಅಕೌಂಟೆಂಟ್]]></title>
            <link>https://kannada.asianetnews.com/karnataka-districts/village-accountant-caught-red-handed-taking-bribe-by-lokayukta-in-bengaluru-gdp/articleshow-tse66gg</link>
            <guid isPermaLink="true">https://kannada.asianetnews.com/karnataka-districts/village-accountant-caught-red-handed-taking-bribe-by-lokayukta-in-bengaluru-gdp/articleshow-tse66gg</guid>
            <pubDate>Thu, 30 Apr 2026 17:27:09 +0530</pubDate>
            <description><![CDATA[ಬೆಂಗಳೂರಿನಲ್ಲಿ ಲಂಚ ಪಡೆಯುತ್ತಿದ್ದ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಬಲೆಗೆ ಬಿದ್ದರೆ, ಗದಗದಲ್ಲಿ ಲೋಕಾಯುಕ್ತ ದಾಳಿಯಿಂದ ಮನನೊಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಎರಡೂ ಘಟನೆಗಳು ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಮಾನಸಿಕ ಒತ್ತಡದ ಎರಡು ವಿಭಿನ್ನ ಮುಖಗಳನ್ನು ತೆರೆದಿಟ್ಟಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqf3z3ghdbesjsb7fnxm2q2e,imgname-begu-village-accountant-bribe-1777550200337.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮತ್ತು ಗದಗ ಜಿಲ್ಲೆಗಳಲ್ಲಿ ಎರಡು ವಿಭಿನ್ನ ಘಟನೆಗಳು ಬೆಳಕಿಗೆ ಬಂದಿದ್ದು, ಒಂದು ಕಡೆ ಭ್ರಷ್ಟಾಚಾರದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದರೆ, ಇನ್ನೊಂದು ಕಡೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ದಾಳಿಗೆ ಮನನೊಂದು ಆತ್ಮ*ಹತ್ಯೆ ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಬೇಗೂರು ನಾಡಕಚೇರಿಯಲ್ಲಿ ಲಂಚ ಪ್ರಕರಣ: ವಿಲೇಜ್ ಅಕೌಂಟೆಂಟ್ ಟ್ರ್ಯಾಪ್&lt;/h2&gt;&lt;p&gt;ಬೆಂಗಳೂರು ನಗರದ ಬೇಗೂರು ನಾಡಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿಲೇಜ್ ಅಕೌಂಟೆಂಟ್ ಮಂಜುನಾಥ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್&zwnj;ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಪೌತಿ ಖಾತೆ (Property Account) ವರ್ಗಾವಣೆಗೆ ಸಂಬಂಧಿಸಿದಂತೆ ಮಂಜುನಾಥ್ ಅವರು ₹10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ. ಈ ಸಂಬಂಧ ಮಂಗಮ್ಮನಪಾಳ್ಯದ ನಿವಾಸಿ ಶ್ರೀ ಚೇತನ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.&lt;/p&gt;&lt;p&gt;ದೂರಿನ ಆಧಾರದ ಮೇಲೆ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು, ಮಂಜುನಾಥ್ ಅವರು ₹2 ಲಕ್ಷ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಅವರನ್ನು ಸಿಕ್ಕಿಹಾಕಿದ್ದಾರೆ. ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಎಸ್&zwnj;ಪಿ ಶಿವಪ್ರಕಾಶ್ ದೇವರಾಜ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದ್ದು, ಅಧಿಕಾರಿಗಳಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.&lt;/p&gt;&lt;h2&gt;ಗದಗದಲ್ಲಿ ಪಿಡಿಒ ಆತ್ಮ*ಹತ್ಯೆ: ಲೋಕಾ ದಾಳಿಗೆ ಮನನೊಂದು ಸಾವನ್ನಪ್ಪಿದ ಅಧಿಕಾರಿ&lt;/h2&gt;&lt;p&gt;ಇನ್ನೊಂದೆಡೆ ಗದಗ ಜಿಲ್ಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಆತ್ಮ*ಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ರೋಣ ಪಟ್ಟಣದ ಬಾಡಿಗೆ ಮನೆಯಲ್ಲಿ ಮಕ್ತುಂ ಹುಸೇನ್ ಕರಡಿಗುಡ್ಡ (46) ಎಂಬವರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಮೂಲತಃ ಧಾರವಾಡ ಜಿಲ್ಲೆಯವರಾಗಿದ್ದು, ರೋಣ ತಾಲ್ಲೂಕಿನ ಅಸೂಟಿ ಹಾಗೂ ಕೊತಬಾಳ ಗ್ರಾಮ ಪಂಚಾಯಿತಿಗಳ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳಷ್ಟೇ ಕೊತಬಾಳ ಪಂಚಾಯಿತಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದರು.&lt;/p&gt;&lt;p&gt;ಮಕ್ತುಂ ಹುಸೇನ್ ಅವರ ಮೇಲೆ 2022-23ನೇ ಸಾಲಿನಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ನಂತರ ಅವರು ಅಮಾನತ್ತುಗೊಂಡಿದ್ದರು. ಬಳಿಕ ಅವರನ್ನು ಗದಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಈ ದಾಳಿ ಮತ್ತು ವರ್ಗಾವಣೆಯ ಪರಿಣಾಮವಾಗಿ ಅವರು ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ.&lt;/p&gt;&lt;p&gt;ಮಂಗಳವಾರ ರಾತ್ರಿ ತಮ್ಮ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಕಳೆದ ಎರಡು ದಿನಗಳಿಂದ ಪತ್ನಿಯ ಕರೆಗಳಿಗೆ ಸ್ಪಂದಿಸದಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಪತ್ನಿ, ಮನೆಯ ಮಾಲೀಕರಿಗೆ ಮಾಹಿತಿ ನೀಡಿದರು. ಮಾಲೀಕರು ಮನೆಗೆ ತೆರಳಿ ಪರಿಶೀಲಿಸಿದಾಗ ಆತ್ಮ*ಹತ್ಯೆಯ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಒಂದೆಡೆ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ದಾಳಿ ನಡೆಯುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿ ಜವಾಬ್ದಾರಿತನವನ್ನು ತೋರಿಸುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಯೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವುದು ಮಾನಸಿಕ ಒತ್ತಡ ಮತ್ತು ಸೇವಾ ಪರಿಸ್ಥಿತಿಗಳ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ. ಎರಡೂ ಘಟನೆಗಳ ಕುರಿತು ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/village-accountant-caught-red-handed-taking-bribe-by-lokayukta-in-bengaluru-gdp/articleshow-tse66gg"/>
        </item>
    </channel>
</rss>
