<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Thu, 23 Jul 2026 15:15:39 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ಬೆಂಗಳೂರು ಜನಗಳೇ, ಅಲರ್ಟ್‌.. ಇವತ್ತು ಈ ಏರಿಯಾಗಳಲ್ಲಿ ಕರೆಂಟ್ ಇರೋದಿಲ್ಲ..!]]></title>
            <link>https://kannada.asianetnews.com/bengaluru-rural/people-of-bengaluru-alert-there-will-be-no-power-in-these-areas-today-gkn/articleshow-0uc8p9e</link>
            <guid isPermaLink="true">https://kannada.asianetnews.com/bengaluru-rural/people-of-bengaluru-alert-there-will-be-no-power-in-these-areas-today-gkn/articleshow-0uc8p9e</guid>
            <pubDate>Mon, 20 Jul 2026 08:23:29 +0530</pubDate>
            <description><![CDATA[ಕೆಪಿಟಿಸಿಎಲ್&zwnj;ನ ತುರ್ತು ನಿರ್ವಹಣಾ ಕಾಮಗಾರಿಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಾಲಹಳ್ಳಿ, ಸಹಕಾರನಗರ, ಜಕ್ಕೂರು ಸೇರಿದಂತೆ ವಸತಿ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxyq125h87k6hwqv2ez00283,imgname-power-cut-in-begaluru-1784515954865.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಕರ್ನಾಟಕ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ಹಮ್ಮಿಕೊಳ್ಳಲಾಗಿರುವ ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.&lt;/p&gt;&lt;h2&gt;&lt;strong&gt;ಯಾವ ಸಮಯದಲ್ಲಿ ಎಲ್ಲೆಲ್ಲಿ ಪವರ್ ಕಟ್?&lt;/strong&gt;&lt;/h2&gt;&lt;p&gt;ಕೆಪಿಟಿಸಿಎಲ್ ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ವಿವಿಧ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ಸಮಯ ನಿಗದಿಪಡಿಸಲಾಗಿದೆ.&lt;/p&gt;&lt;p&gt;&lt;strong&gt;ವೆಲ್&zwnj;ಕಾಸ್ಟ್ ಉಪಕೇಂದ್ರ ವ್ಯಾಪ್ತಿ: &lt;/strong&gt;ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ&lt;/p&gt;&lt;p&gt;&lt;strong&gt;ಬ್ಯಾಟರಾಯನಪುರ ಉಪಕೇಂದ್ರ ವ್ಯಾಪ್ತಿ&lt;/strong&gt;: ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.&lt;/p&gt;&lt;h2&gt;&lt;strong&gt;ಎಲ್ಲೆಲ್ಲಿ ತೊಂದರೆ..?&lt;/strong&gt;&lt;/h2&gt;&lt;ul&gt; &lt;li&gt;ರವೀಂದ್ರನಗರ&lt;/li&gt; &lt;li&gt;ಜಾಲಹಳ್ಳಿ ವೆಸ್ಟ್&lt;/li&gt; &lt;li&gt;ತ್ರಿವೇಣಿ ನಗರ&lt;/li&gt; &lt;li&gt;ಅಮೃತಹಳ್ಳಿ&lt;/li&gt; &lt;li&gt;ಸಹಕಾರನಗರ&lt;/li&gt; &lt;li&gt;ಜಕ್ಕೂರು&lt;/li&gt; &lt;li&gt;ತಿಂದ್ಲು ಮತ್ತು ಸುತ್ತಮುತ್ತಲಿನ ಪ್ರದೇಶಗಳು.&lt;/li&gt;&lt;/ul&gt;&lt;h2&gt;&lt;strong&gt;ಕೈಗಾರಿಕಾ ಪ್ರದೇಶಗಳಿಗೂ ಬಿಸಿ&lt;/strong&gt;&lt;/h2&gt;&lt;p&gt;ಕೇವಲ ವಸತಿ ಪ್ರದೇಶಗಳಷ್ಟೇ ಅಲ್ಲದೆ, ಕೈಗಾರಿಕಾ ವಲಯಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ. ಪ್ರಮುಖವಾಗಿ ವೋಲ್ವೋ (Volvo), ಐಟಿಸಿ (ITC), ವಿಪ್ರೋ ವೆಲ್&zwnj;ಕಾಸ್ಟ್ (Wipro Wellcast) ಸೇರಿದಂತೆ ಹಲವು ಕೈಗಾರಿಕಾ ಘಟಕಗಳಲ್ಲಿ ಉತ್ಪಾದನೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಬೆಸ್ಕಾಂ ಮನವಿ&lt;/strong&gt;&lt;/h2&gt;&lt;p&gt;ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ತಕ್ಷಣವೇ ವಿದ್ಯುತ್ ಪೂರೈಕೆಯನ್ನು ಪುನಾರಂಭಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಮತ್ತು ಉದ್ದಿಮೆದಾರರು ಸಹಕರಿಸಬೇಕು ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/people-of-bengaluru-alert-there-will-be-no-power-in-these-areas-today-gkn/articleshow-0uc8p9e"/>
        </item>
        <item>
            <title><![CDATA[ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ ಸಾರಿಗೇತರ ಆದಾಯಕ್ಕೆ ಭಾರಿ ಕತ್ತರಿ: ವಾಣಿಜ್ಯ ವ್ಯಾಪ್ತಿ ಶೇ. 58ರಷ್ಟು ಕುಸಿತ!]]></title>
            <link>https://kannada.asianetnews.com/karnataka-districts/bmrcl-namma-metro-red-line-commercial-revenue-slashed-by-58-percent-in-revised-dpr-gdp/articleshow-1rc40br</link>
            <guid isPermaLink="true">https://kannada.asianetnews.com/karnataka-districts/bmrcl-namma-metro-red-line-commercial-revenue-slashed-by-58-percent-in-revised-dpr-gdp/articleshow-1rc40br</guid>
            <pubDate>Thu, 23 Jul 2026 11:57:21 +0530</pubDate>
            <description><![CDATA[ಹೆಬ್ಬಾಳ-ಸರ್ಜಾಪುರ 'ನಮ್ಮ ಮೆಟ್ರೋ' ಕೆಂಪು ಮಾರ್ಗದ ಪರಿಷ್ಕೃತ ಯೋಜನಾ ವರದಿಯಲ್ಲಿ, ಆಸ್ತಿ ಅಭಿವೃದ್ಧಿ ವಿಸ್ತೀರ್ಣವನ್ನು ಶೇ. 58 ರಷ್ಟು ಕಡಿತಗೊಳಿಸಲಾಗಿದೆ. ಇದರಿಂದಾಗಿ ಟಿಕೆಟ್ ದರ ಹೊರತಾದ ಆದಾಯದಲ್ಲಿ ₹3,528 ಕೋಟಿ ನಷ್ಟವಾಗುವ ಅಂದಾಜಿದ್ದು, ಇದು ಭವಿಷ್ಯದಲ್ಲಿ ಪ್ರಯಾಣ ದರ ಏರಿಕೆಗೆ ಕಾರಣವಾಗುವ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khbr53ty0gm86893qngbtnq8,imgname-metro-1770994700126.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಹೆಬ್ಬಾಳ ಮತ್ತು ಸರ್ಜಾಪುರವನ್ನು ಸಂಪರ್ಕಿಸುವ ಪ್ರಸ್ತಾವಿತ 'ನಮ್ಮ ಮೆಟ್ರೋ' ಕೆಂಪು ಮಾರ್ಗ (Red Line) ಯೋಜನೆಯ ಭವಿಷ್ಯದ ಆದಾಯದ ಮೂಲಗಳಿಗೆ ದೊಡ್ಡ ಹಿನ್ನಡೆಯಾಗಿದೆ. 2024 ಮತ್ತು 2026 ರ ಪರಿಷ್ಕೃತ ವಿವರವಾದ ಯೋಜನಾ ವರದಿಗಳ (DPR) ಹೋಲಿಕೆಯ ಪ್ರಕಾರ, ಈ ಕಾರಿಡಾರ್&zwnj;ನಲ್ಲಿ ಆಸ್ತಿ ಅಭಿವೃದ್ಧಿಗೆ (Property Development) ಮೀಸಲಿಟ್ಟಿದ್ದ ವಿಸ್ತೀರ್ಣವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಪರಿಣಾಮವಾಗಿ, ಮೆಟ್ರೋಗೆ ಟಿಕೆಟ್ ದರ ಹೊರತಾದ (ನಾನ್-ಫೇರ್&zwnj;ಬಾಕ್ಸ್) ಆದಾಯದ ನಿರೀಕ್ಷೆಯೂ ಶೇ. 58 ರಷ್ಟು ಕುಸಿದಿದೆ. ಕೇಂದ್ರ ಸರ್ಕಾರದ ಅಂತಿಮ ಅನುಮೋದನೆಗಾಗಿ ಕಾಯುತ್ತಿರುವ ಈ ಪರಿಷ್ಕೃತ ಯೋಜನಾ ವರದಿಯು ಬಿಎಂಆರ್&zwnj;ಸಿಎಲ್ (BMRCL) ಸಂಸ್ಥೆಗೆ ವಾಣಿಜ್ಯ ಆಸ್ತಿ ಅಭಿವೃದ್ಧಿಯಿಂದ ಬರಲಿದ್ದ ಭಾರಿ ಲಾಭಕ್ಕೆ ಕತ್ತರಿ ಹಾಕಿದೆ.&lt;/p&gt;&lt;h2&gt;ವಾಣಿಜ್ಯ ಅಭಿವೃದ್ಧಿ ವಿಸ್ತೀರ್ಣದಲ್ಲಿ ಭಾರಿ ಕಡಿತ&lt;/h2&gt;&lt;p&gt;2024 ರ ಆರಂಭಿಕ ಡಿಪಿಆರ್&zwnj;ನಲ್ಲಿ ನಮ್ಮ ಮೆಟ್ರೋ ಕೆಂಪು ಮಾರ್ಗದ ವ್ಯಾಪ್ತಿಯಲ್ಲಿ ವಾಣಿಜ್ಯ ಆಸ್ತಿ ಅಭಿವೃದ್ಧಿಗಾಗಿ ಒಟ್ಟು 1,33,110 ಚದರ ಮೀಟರ್ ಪ್ರದೇಶವನ್ನು ಗುರುತಿಸಲಾಗಿತ್ತು. ಆದರೆ, ಈಗ ಸಿದ್ಧಪಡಿಸಲಾಗಿರುವ 2026 ರ ಪರಿಷ್ಕೃತ ಡಿಪಿಆರ್&zwnj;ನಲ್ಲಿ ಈ ವಿಸ್ತೀರ್ಣವನ್ನು ಕೇವಲ 55,070 ಚದರ ಮೀಟರ್&zwnj;ಗೆ ಇಳಿಸಲಾಗಿದೆ. ಅಂದರೆ ಆಸ್ತಿ ಅಭಿವೃದ್ಧಿಯ ಒಟ್ಟು ವಿಸ್ತೀರ್ಣದಲ್ಲಿ ಬರೋಬ್ಬರಿ ಶೇ. 58 ರಷ್ಟು ಕಡಿತಗೊಳಿಸಲಾಗಿದೆ. ಇದರೊಂದಿಗೆ, ವಾಣಿಜ್ಯ ಚಟುವಟಿಕೆಗಳಿಗೆ ಸೂಕ್ತವೆಂದು ಯೋಜಿಸಲಾಗಿದ್ದ ಒಟ್ಟು ತಾಣಗಳ ಸಂಖ್ಯೆಯೂ ಸಹ 17 ರಿಂದ 11 ಕ್ಕೆ ಇಳಿದಿದೆ.&lt;/p&gt;&lt;h2&gt;ಆದಾಯದಲ್ಲಿ ₹3,528 ಕೋಟಿ ನಷ್ಟದ ಅಂದಾಜು&lt;/h2&gt;&lt;p&gt;ಯೋಜಿತ ವಾಣಿಜ್ಯ ಪ್ರದೇಶದ ವಿಸ್ತೀರ್ಣದಲ್ಲಿ ಆಗಿರುವ ಈ ಭಾರಿ ಕಡಿತವು ಮೆಟ್ರೋದ ಅಂದಾಜು ಆದಾಯದ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಿದೆ.&lt;/p&gt;&lt;p&gt;&lt;strong&gt;2024 ರ ಡಿಪಿಆರ್ ಅಂದಾಜು: &lt;/strong&gt;ಆಸ್ತಿ ಅಭಿವೃದ್ಧಿಯ ಮೂಲಕ ಮೆಟ್ರೋ ಸಂಸ್ಥೆಯು ಬರೋಬ್ಬರಿ ₹6,053 ಕೋಟಿ ಆದಾಯ ಗಳಿಸುವ ಗುರಿ ಹೊಂದಿತ್ತು.&lt;/p&gt;&lt;p&gt;&lt;strong&gt;2026 ರ ಡಿಪಿಆರ್ ಅಂದಾಜು: &lt;/strong&gt;ಪರಿಷ್ಕೃತ ನಿಯಮಗಳ ಅನ್ವಯ ಈ ಆದಾಯದ ನಿರೀಕ್ಷೆ ಕೇವಲ ₹2,525 ಕೋಟಿಗೆ ಬಂದು ತಲುಪಿದೆ.&lt;/p&gt;&lt;p&gt;ಈ ಹಠಾತ್ ಬದಲಾವಣೆಯಿಂದಾಗಿ ಮೆಟ್ರೋ ಸಂಸ್ಥೆಯು ಸಾರಿಗೇತರ ಮೂಲಗಳಿಂದ ಗಳಿಸಬಹುದಾಗಿದ್ದ ಸುಮಾರು ₹3,528 ಕೋಟಿಗಳಷ್ಟು (ಶೇ. 58 ರಷ್ಟು ಕುಸಿತ) ಬೃಹತ್ ಆದಾಯವನ್ನು ಕಳೆದುಕೊಳ್ಳುವಂತಾಗಿದೆ.&lt;/p&gt;&lt;h2&gt;ವೆಟರ್ನರಿ ಕಾಲೇಜು ನಿಲ್ದಾಣ ಕೈಬಿಟ್ಟಿರುವುದೇ ದೊಡ್ಡ ಹೊಡೆತ!&lt;/h2&gt;&lt;p&gt;ಪರಿಷ್ಕೃತ ಡಿಪಿಆರ್&zwnj;ನಲ್ಲಿ ಮಾಡಲಾಗಿರುವ ಅತ್ಯಂತ ಪ್ರಮುಖ ಬದಲಾವಣೆಯೆಂದರೆ, ಈ ಹಿಂದೆ ಯೋಜಿಸಲಾಗಿದ್ದ 'ಪಶುವೈದ್ಯಕೀಯ ಕಾಲೇಜು' (Veterinary College) ಮೆಟ್ರೋ ನಿಲ್ದಾಣವನ್ನು ಯೋಜನೆಯಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.&lt;/p&gt;&lt;p&gt;ಈ ನಿಲ್ದಾಣವು ಕೆಂಪು ಮಾರ್ಗದ ಪ್ರಮುಖ ವಾಣಿಜ್ಯ ಕೇಂದ್ರವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿತ್ತು. ಇಲ್ಲಿ ಸುಮಾರು 15,000 ಚದರ ಮೀಟರ್&zwnj;ನಷ್ಟು ವಿಶಾಲವಾದ ಪ್ರದೇಶದಲ್ಲಿ ವಾಣಿಜ್ಯ ಆಸ್ತಿ ಅಭಿವೃದ್ಧಿ ಮಾಡಲು ಬಲವಾದ ಅವಕಾಶವಿತ್ತು. ಈ ನಿಲ್ದಾಣವನ್ನೇ ಈಗ ರದ್ದುಗೊಳಿಸಿರುವುದರಿಂದ ಯೋಜನೆಯ ಒಟ್ಟಾರೆ ವಾಣಿಜ್ಯ ಸಾಮರ್ಥ್ಯಕ್ಕೆ ಚೇತರಿಸಿಕೊಳ್ಳಲಾಗದ ದೊಡ್ಡ ಹೊಡೆತ ಬಿದ್ದಿದೆ.&lt;/p&gt;&lt;h2&gt;ಪ್ರಮುಖ ತಾಣಗಳ ಸಂಖ್ಯೆಯೂ ಕ್ಷೀಣ:&lt;/h2&gt;&lt;p&gt;ಹಳೆಯ ಡಿಪಿಆರ್&zwnj;ನಲ್ಲಿ 15,000 ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿ ಅಭಿವೃದ್ಧಿ ಸಾಮರ್ಥ್ಯ ಹೊಂದಿದ್ದ ಕನಿಷ್ಠ ಐದು ಪ್ರಮುಖ ತಾಣಗಳನ್ನು ಗುರುತಿಸಲಾಗಿತ್ತು. ಆದರೆ, 2026 ರ ಹೊಸ ವರದಿಯಲ್ಲಿ ಕೇವಲ ಎರಡು ಸ್ಥಳಗಳು ಮಾತ್ರ ಈ ಪಟ್ಟಿಯಲ್ಲಿ ಉಳಿದುಕೊಂಡಿವೆ.&lt;/p&gt;&lt;p&gt;ಕೋರಮಂಗಲ 2 ನೇ ಬ್ಲಾಕ್ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ ಸದ್ಯ ಈ ಎರಡು ನಿಲ್ದಾಣಗಳ ವ್ಯಾಪ್ತಿಯಲ್ಲಿ ಮಾತ್ರ ತಲಾ 15,000 ಚದರ ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಅಭಿವೃದ್ಧಿ ಮಾಡುವ ಸಾಮರ್ಥ್ಯ ಉಳಿದುಕೊಂಡಿದೆ.&lt;/p&gt;&lt;h2&gt;ಸಾರ್ವಜನಿಕರ ಮೇಲಾಗಲಿದೆಯೇ ಪ್ರಯಾಣ ದರದ ಬರೆ?&lt;/h2&gt;&lt;p&gt;ಯಾವುದೇ ಒಂದು ಬೃಹತ್ ಮೆಟ್ರೋ ಯೋಜನೆಯು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಕೇವಲ ಪ್ರಯಾಣಿಕರ ಟಿಕೆಟ್ ಆದಾಯವನ್ನು (Fare-box Revenue) ನಂಬಿಕೊಳ್ಳಲು ಸಾಧ್ಯವಿಲ್ಲ. ಬದಲಿಗೆ ಆಸ್ತಿ ಅಭಿವೃದ್ಧಿ, ಮಳಿಗೆಗಳ ಬಾಡಿಗೆ ಹಾಗೂ ಜಾಹೀರಾತುಗಳಂತಹ ಸಾರಿಗೇತರ (Non-farebox) ಮೂಲಗಳಿಂದ ಗರಿಷ್ಠ ಆದಾಯ ಗಳಿಸುವುದು ಅತ್ಯಂತ ಅತ್ಯಗತ್ಯವಾಗಿದೆ.&lt;/p&gt;&lt;p&gt;ಈ ಹಿಂದೆ ದೇಶದ ಮೆಟ್ರೋ ದರ ನಿಗದಿ ಸಮಿತಿಯು (FFC - Fare Fixation Committee) ತನ್ನ ವರದಿಯಲ್ಲಿ ಬಿಎಂಆರ್&zwnj;ಸಿಎಲ್&zwnj;ಗೆ ಮಹತ್ವದ ಶಿಫಾರಸನ್ನು ಮಾಡಿತ್ತು. ಮೆಟ್ರೋ ಸಂಸ್ಥೆಯು ತನ್ನ ಸಾರಿಗೇತರ ಆದಾಯವನ್ನು ಗರಿಷ್ಠ ಮಟ್ಟದಲ್ಲಿ ಗಳಿಸಬೇಕು, ಹಾಗೆ ಮಾಡಿದಾಗ ಮಾತ್ರ ಸಾರ್ವಜನಿಕರಿಗೆ ನಿತ್ಯದ ಪ್ರಯಾಣ ದರವನ್ನು ಕೈಗೆಟುಕುವ ದರದಲ್ಲಿ (Affordable) ಇಡಲು ಸಾಧ್ಯವಾಗುತ್ತದೆ ಎಂದು ಸಮಿತಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿತ್ತು.&lt;/p&gt;&lt;p&gt;ಆದರೆ, ಈಗ ಕೆಂಪು ಮಾರ್ಗದ ವಾಣಿಜ್ಯ ವ್ಯಾಪ್ತಿ ಮತ್ತು ಆದಾಯದ ನಿರೀಕ್ಷೆ ಎರಡೂ ತೀವ್ರವಾಗಿ ಕುಗ್ಗಿರುವುದರಿಂದ, ಭವಿಷ್ಯದಲ್ಲಿ ಮೆಟ್ರೋ ನಿರ್ವಹಣಾ ವೆಚ್ಚವನ್ನು ಸರಿದೂಗಿಸಲು ಪ್ರಯಾಣ ದರವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾದರೂ ಅಚ್ಚರಿಯಿಲ್ಲ. ಇದು ಹೆಬ್ಬಾಳ-ಸರ್ಜಾಪುರ ಮಾರ್ಗದ ನಿತ್ಯದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಆತಂಕವನ್ನು ಸೃಷ್ಟಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bmrcl-namma-metro-red-line-commercial-revenue-slashed-by-58-percent-in-revised-dpr-gdp/articleshow-1rc40br"/>
        </item>
        <item>
            <title><![CDATA[ಆರ್ಟ್ ಆಫ್ ಲಿವಿಂಗ್ ವಿರುದ್ಧ ಭೂ ಒತ್ತುವರಿ ಆರೋಪ, ರಾಜ್ಯ ಸರ್ಕಾರದಿಂದ ತನಿಖೆಗೆ SIT ರಚನೆ, ಸ್ವಾಗತಿಸಿದ ಸಂಸ್ಥೆ]]></title>
            <link>https://kannada.asianetnews.com/state/art-of-living-land-encroachment-allegations-karnataka-govt-forms-sit-gdp/articleshow-5x4eun6</link>
            <guid isPermaLink="true">https://kannada.asianetnews.com/state/art-of-living-land-encroachment-allegations-karnataka-govt-forms-sit-gdp/articleshow-5x4eun6</guid>
            <pubDate>Wed, 22 Jul 2026 13:28:49 +0530</pubDate>
            <description><![CDATA[ಬೆಂಗಳೂರಿನ ಕಗ್ಗಲಿಪುರ ಬಳಿ 'ದಿ ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿದೆ ಎಂಬ ಗಂಭೀರ ಆರೋಪದ ಮೇಲೆ ರಾಜ್ಯ ಸರ್ಕಾರ 11 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಗುತ್ತಿಗೆ ನಿಯಮ ಉಲ್ಲಂಘನೆ, ದಲಿತರ ಭೂಮಿ ಒತ್ತುವರಿ ಮತ್ತು ಸಾರ್ವಜನಿಕ ಆಸ್ತಿ ದುರ್ಬಳಕೆ ಸೇರಿದಂತೆ ಹಲವು ಆರೋಪಗಳ ಕುರಿತು ಈ ತಂಡವು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky4cybpe1jrhrepb3x3cw3tm,imgname-art-of-living-1784706707150.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲಿಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ &lsquo;ದಿ ಆರ್ಟ್ ಆಫ್ ಲಿವಿಂಗ್&rsquo; (Art of Living) ಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳು ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರವು ಉನ್ನತ ಮಟ್ಟದ 11 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಜುಲೈ 17 ರಂದು ಅಧಿಕೃತ ಆದೇಶ ಹೊರಡಿಸಿದೆ.&lt;/p&gt;&lt;p&gt;ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯ ಆಧಾರದ ಮೇಲೆ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಂತಯ್ಯ ಎಸ್. ಹೊಸಮಠ ಈ ಆದೇಶ ಹೊರಡಿಸಿದ್ದು, ತನಿಖೆಯನ್ನು ಪೂರ್ಣಗೊಳಿಸಿ ಗರಿಷ್ಠ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಎಸ್&zwnj;ಐಟಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಮತ್ತು ಒತ್ತುವರಿ ಆರೋಪಗಳು&lt;/h2&gt;&lt;p&gt;1981ರಲ್ಲಿ ಸ್ಥಾಪಿತವಾದ 'ದಿ ಆರ್ಟ್ ಆಫ್ ಲಿವಿಂಗ್' ಟ್ರಸ್ಟ್ ಮತ್ತು ಅದರ ಅಂಗಸಂಸ್ಥೆಗಳಾದ ವೇದ ವಿಜ್ಞಾನ ಮಹಾ ವಿದ್ಯಾಪೀಠ ಇನ್&zwnj;ಸ್ಟಿಟ್ಯೂಟ್, ಸುಮೇರು ಗ್ಲೋಬಲ್ ಸಪೋರ್ಟ್ ಸಲ್ಯೂಷನ್ಸ್ ಪ್ರೈ.ಲಿ. ಹಾಗೂ ಸುಮೇರು ರಿಯಾಲ್ಟಿ ಪ್ರೈ.ಲಿ. ಸೇರಿದಂತೆ ಇನ್ನು ಕೆಲವು ವ್ಯಕ್ತಿಗಳು ಕಗ್ಗಲಿಪುರದ ಸರ್ವೇ ನಂಬರ್ 46 ಹಾಗೂ ಸುತ್ತಮುತ್ತಲಿನ ಬಿ.ಎಂ. ಕಾವಲ್, ಅಗ್ರ ಮತ್ತು ಉತ್ತರಿ ಗ್ರಾಮಗಳಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;ಪ್ರಮುಖ ಆರೋಪಗಳು:&lt;/h2&gt;&lt;p&gt;ಗುತ್ತಿಗೆ ನಿಯಮಗಳ ಉಲ್ಲಂಘನೆ: ಕಗ್ಗಲಿಪುರದ ಸರ್ವೇ ನಂ. 46 ರಲ್ಲಿನ 41 ಎಕರೆ ಸರ್ಕಾರಿ ಗೋಮಾಳ ಜಮೀನನ್ನು 1985ರಲ್ಲಿ ವಾರ್ಷಿಕ ಎಕರೆಗೆ ಕೇವಲ 500 ರೂ. ದರದಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ಗುತ್ತಿಗೆ ಅವಧಿಯು 2015 ರಲ್ಲೇ ಮುಕ್ತಾಯಗೊಂಡಿದ್ದರೂ, ಸಂಸ್ಥೆಯು ಅಕ್ರಮವಾಗಿ ಜಮೀನನ್ನು ತನ್ನ ವಶದಲ್ಲೇ ಇಟ್ಟುಕೊಂಡು ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ.&lt;/p&gt;&lt;p&gt;ದಲಿತರ ಭೂಮಿ ಒತ್ತುವರಿ ಆರೋಪ: ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕಂದಾಯ ಸಚಿವ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, &quot;ಆರ್ಟ್ ಆಫ್ ಲಿವಿಂಗ್ ಅಧೀನದಲ್ಲಿರುವ ಒಟ್ಟು 270 ಎಕರೆ ಭೂಮಿಯ ಪೈಕಿ 150 ಎಕರೆ ಭೂಮಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ (SC/ST) ಸೇರಿದ ಜಮೀನಾಗಿದೆ ಎಂದು ದಲಿತ ಸಂಘಟನೆಗಳ ಸಭೆಯಲ್ಲಿ ದೂರುಗಳು ಬಂದಿವೆ. ಈ ಎಲ್ಲ ದೂರುಗಳ ಸತ್ಯಾಸತ್ಯತೆ ತಿಳಿಯಲು ತನಿಖೆ ಅಗತ್ಯ&quot; ಎಂದಿದ್ದಾರೆ.&lt;/p&gt;&lt;p&gt;ಸರ್ವೆ ವರದಿಯ ಆಘಾತಕಾರಿ ಅಂಶಗಳು: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಅಕ್ಟೋಬರ್ 2025 ರಲ್ಲಿ ಸಹಾಯಕ ಭೂದಾಖಲೆಗಳ ನಿರ್ದೇಶಕರು ನಡೆಸಿದ ಜಂಟಿ ಸಮೀಕ್ಷೆಯಲ್ಲಿ, ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಭೂಮಿಯನ್ನು ಬಳಸಿರುವುದು ಮತ್ತು ಭೂ ಬಳಕೆ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿರುವ ಅಂಶಗಳು ಬೆಳಕಿಗೆ ಬಂದಿವೆ.&lt;/p&gt;&lt;h2&gt;ಹೈಕೋರ್ಟ್&zwnj;ನ ಹಿಂದಿನ ನಡೆ&lt;/h2&gt;&lt;p&gt;ಗಮನಾರ್ಹವಾಗಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಶ್ರೀ ಶ್ರೀ ರವಿಶಂಕರ್ ಅವರ ವಿರುದ್ಧ ದಾಖಲಾಗಿದ್ದ ಎಫ್&zwnj;ಐಆರ್ (FIR) ಅನ್ನು ರದ್ದುಗೊಳಿಸಿತ್ತು. ಅವರ ವಿರುದ್ಧ ವೈಯಕ್ತಿಕವಾಗಿ ಯಾವುದೇ ನೇರ ಆರೋಪಗಳಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆದರೆ, ಈಗ ಸರ್ಕಾರವು ವ್ಯಕ್ತಿಗತ ಆರೋಪಗಳಿಗಿಂತ ಹೆಚ್ಚಾಗಿ ಒಟ್ಟಾರೆ ಭೂ ಅತಿಕ್ರಮಣ, ರಾಜಕಾಲುವೆ, ಕೆರೆ ಮತ್ತು ಸಾರ್ವಜನಿಕ ಆಸ್ತಿಗಳ ದುರ್ಬಳಕೆಯ ಸಮಗ್ರ ಪರಿಶೀಲನೆಗಾಗಿ ಕಂದಾಯ ಕಾಯ್ದೆಯಡಿ ಈ ಪ್ರತ್ಯೇಕ ಎಸ್&zwnj;ಐಟಿಯನ್ನು ರಚಿಸಿದೆ.&lt;/p&gt;&lt;h2&gt;ವಿಶೇಷ ತನಿಖಾ ತಂಡದಲ್ಲಿ (SIT) ಯಾರೆಲ್ಲಾ ಇದ್ದಾರೆ?&lt;/h2&gt;&lt;p&gt;ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಅಮ್ಲನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ 11 ಸದಸ್ಯರ ಬಲಿಷ್ಠ ತಂಡವನ್ನು ರಚಿಸಲಾಗಿದೆ. ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಜೆ. ಗದ್ಯಾಲ್, ವಿಶೇಷ ಜಿಲ್ಲಾಧಿಕಾರಿ-1 ಜಯಮಾಧವ್, ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ನಿಸಾರ್ ಅಹಮದ್, ಜಿಬಿಎ ಸಹಾಯಕ ಆಯುಕ್ತ ಗಿರೀಶ್ ನಂದನ್, ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವಿಶ್ವನಾಥ್, ಯಲಹಂಕ ತಹಸೀಲ್ದಾರ್ ಕಲೀಮುಲ್ಲಾ, ಮತ್ತು ಶಿರಸ್ತೇದಾರ್&zwnj;ಗಳಾದ ಶಶಾಂಕ್ ಹಾಗೂ ಚರಣ್ ರಾಜ್. ಕಂದಾಯ ಇಲಾಖೆಯ ಕಾನೂನು ಸಲಹೆಗಾರ ಹಾಗೂ ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರಾದ ನೇಗಿನಹಾಳ್. ಪ್ರಾದೇಶಿಕ ಆಯುಕ್ತರ ಕಚೇರಿಯ ತಹಸೀಲ್ದಾರ್ ಸುಮಂತ್.&lt;/p&gt;&lt;h2&gt;ಎಸ್&zwnj;ಐಟಿಗೆ ನೀಡಿರುವ ಪ್ರಮುಖ ಜವಾಬ್ದಾರಿಗಳು&lt;/h2&gt;&lt;p&gt;ವಿಶೇಷ ತನಿಖಾ ತಂಡಕ್ಕೆ ತನಿಖೆಗಾಗಿ ಸರ್ಕಾರವು ವಿಸ್ತಾರವಾದ ಮಾರ್ಗಸೂಚಿಗಳನ್ನು ನೀಡಿದ್ದು, ಈ ಕೆಳಗಿನ ಅಂಶಗಳ ಮೇಲೆ ಬೆಳಕು ಚೆಲ್ಲಲು ಸೂಚಿಸಿದೆ.&lt;/p&gt;&lt;h2&gt;ದಾಖಲೆಗಳ ಪರಿಶೀಲನೆ&lt;/h2&gt;&lt;p&gt;ಜಮೀನು ಮಂಜೂರಾತಿ ದಾಖಲೆಗಳು, ಮೂಲ ವಾರಸುದಾರರ ವಿವರಗಳನ್ನು ಪರಿಶೀಲಿಸುವುದು ಮತ್ತು ಭೂ ದಾಖಲೆಗಳಲ್ಲಿ ನಕಲಿ ದಸ್ತಾವೇಜು ಸೃಷ್ಟಿ ಅಥವಾ ವಂಚನೆ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚುವುದು.&lt;/p&gt;&lt;h2&gt;ಸಾರ್ವಜನಿಕ ಆಸ್ತಿಗಳ ಸಮೀಕ್ಷೆ&lt;/h2&gt;&lt;p&gt;ಸಾರ್ವಜನಿಕ ರಸ್ತೆಗಳು, ರಾಜಕಾಲುವೆಗಳು, ಕೆರೆ-ಜಲಮೂಲಗಳು, ಗುಡ್ಡಗಳು ಹಾಗೂ 'ಬಂಡೆ ಖರಾಬು' ಜಮೀನುಗಳ ಗಡಿಗಳನ್ನು ನಿಖರವಾಗಿ ಗುರುತಿಸಿ, ಅಲ್ಲಿ ನಡೆದಿರುವ ಅಕ್ರಮ ನಿರ್ಮಾಣಗಳನ್ನು ಪತ್ತೆ ಮಾಡುವುದು.&lt;/p&gt;&lt;h2&gt;ಉಪಗ್ರಹ ದತ್ತಾಂಶ ಬಳಕೆ&lt;/h2&gt;&lt;p&gt;ಇಸ್ರೋ ಅಥವಾ ಇತರ ಉಪಗ್ರಹ ದತ್ತಾಂಶಗಳನ್ನು (Satellite Data) ಬಳಸಿಕೊಂಡು ಪರಿಸರದ ಮೇಲೆ ಉಂಟಾಗಿರುವ ಹಾನಿಯನ್ನು ಅಂದಾಜಿಸುವುದು ಮತ್ತು ಸ್ಥಳೀಯ ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು.&lt;/p&gt;&lt;h2&gt;ನ್ಯಾಯಸಮ್ಮತ ಅವಕಾಶ&lt;/h2&gt;&lt;p&gt;ತನಿಖೆಯ ವೇಳೆ ಕಂಡುಬರುವ ಅಂಶಗಳಿಗೆ ಉತ್ತರಿಸಲು ಆರೋಪಿತ ಸಂಸ್ಥೆಯಾದ ಆರ್ಟ್ ಆಫ್ ಲಿವಿಂಗ್ ಮತ್ತು ಇತರ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ, ತಮ್ಮ ವಿವರಣೆ ನೀಡಲು ಸೂಕ್ತ ಅವಕಾಶ ಒದಗಿಸುವುದು.&lt;/p&gt;&lt;h2&gt;ಸರ್ಕಾರದ ತನಿಖಾ ಆದೇಶಕ್ಕೆ ಆರ್ಟ್ ಆಫ್ ಲಿವಿಂಗ್ ಪ್ರತಿಕ್ರಿಯೆ&lt;/h2&gt;&lt;p&gt;ರಾಜ್ಯ ಸರ್ಕಾರದ ಈ ಆದೇಶವನ್ನು ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಮುಕ್ತವಾಗಿ ಸ್ವಾಗತಿಸಿದೆ. ಸಂಸ್ಥೆಯ ಅಧಿಕೃತ ವಕ್ತಾರರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, &quot;ನಾವು ಸರ್ಕಾರದ ಎಸ್&zwnj;ಐಟಿ ರಚನೆಯ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯು ಸತ್ಯಾಂಶಗಳನ್ನು ಇಡೀ ಪ್ರಪಂಚದ ಮುಂದೆ ತರಲಿದ್ದು, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ವಿವಾದಕ್ಕೆ ಒಂದು ನಿರ್ಣಾಯಕ ಹಾಗೂ ಶಾಶ್ವತ ಅಂತ್ಯವನ್ನು ನೀಡುತ್ತದೆ ಎಂಬ ನಂಬಿಕೆ ನಮಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/art-of-living-land-encroachment-allegations-karnataka-govt-forms-sit-gdp/articleshow-5x4eun6"/>
        </item>
        <item>
            <title><![CDATA[ಬೆಂಗಳೂರು ಉಪನಗರ ರೈಲು ಯೋಜನೆಗೆ ಬೂಸ್ಟ್: ಮತ್ತಿಕೆರೆ to ಯಶವಂತಪುರ ₹199 ಕೋಟಿ ವೆಚ್ಚದ ‘ಡಬಲ್ ಡೆಕ್ಕರ್’ ಕಾರಿಡಾರ್!]]></title>
            <link>https://kannada.asianetnews.com/karnataka-districts/bengaluru-suburban-rail-k-ride-invites-rs-199-crore-tender-for-mathikere-double-decker-corridor-gdp/articleshow-67vb6fu</link>
            <guid isPermaLink="true">https://kannada.asianetnews.com/karnataka-districts/bengaluru-suburban-rail-k-ride-invites-rs-199-crore-tender-for-mathikere-double-decker-corridor-gdp/articleshow-67vb6fu</guid>
            <pubDate>Tue, 21 Jul 2026 14:42:34 +0530</pubDate>
            <description><![CDATA[ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಉಪನಗರ ರೈಲು ಯೋಜನೆಯಡಿ (BSRP) ಮತ್ತಿಕೆರೆ ಮತ್ತು ಯಶವಂತಪುರ ನಡುವೆ 'ಡಬಲ್ ಡೆಕ್ಕರ್' ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ವಿಶಿಷ್ಟ ಮಾದರಿಯಲ್ಲಿ ರಸ್ತೆ ಮೇಲ್ಸೇತುವೆಯ ಮೇಲೆ ಉಪನಗರ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೆ-ರೈಡ್ ₹199 ಕೋಟಿ ವೆಚ್ಚದ ಹೊಸ ಟೆಂಡರ್ ಆಹ್ವಾನಿಸಿದೆ. ಈ ಯೋಜನೆಯು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kncj7pn94kbwtgvahgc8hj8z,imgname-double-decker-flyover-1775317015208.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ (BSRP) ಮಹತ್ವದ ಹೆಜ್ಜೆ ಇಟ್ಟಿದೆ. 'ನಮ್ಮ ಮೆಟ್ರೋ' ಮಾದರಿಯಲ್ಲೇ ರಸ್ತೆ ಮತ್ತು ರೈಲು ಸಾರಿಗೆಯನ್ನು ಸಂಯೋಜಿಸುವ 'ಡಬಲ್ ಡೆಕ್ಕರ್' (Double-Decker) ಮೂಲಸೌಕರ್ಯ ವ್ಯವಸ್ಥೆಯನ್ನು ಉಪನಗರ ರೈಲಿಗೂ ಅಳವಡಿಸಿಕೊಳ್ಳಲು ಸಜ್ಜಾಗಿದ್ದು, ಇದಕ್ಕಾಗಿ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಬೃಹತ್ ಯೋಜನೆ ರೂಪಿಸಿದೆ. ಉಪನಗರ ರೈಲು ಯೋಜನೆಯ ಕಾರಿಡಾರ್-2 (ಮಲ್ಲಿಗೆ ಮಾರ್ಗ) ರ ಭಾಗವಾಗಿ ಮತ್ತಿಕೆರೆ ಮತ್ತು ಯಶವಂತಪುರ ನಡುವೆ 1.2 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣಕ್ಕೆ ಕೆ-ರೈಡ್ ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ.&lt;/p&gt;&lt;h2&gt;ಸೀಮಿತ ಜಾಗದ ಗರಿಷ್ಠ ಬಳಕೆ: ಏನಿದು ಡಬಲ್ ಡೆಕ್ಕರ್ ಮಾದರಿ?&lt;/h2&gt;&lt;p&gt;ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಮತ್ತಿಕೆರೆ-ಯಶವಂತಪುರ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಸವಾಲುಗಳನ್ನು ಎದುರಿಸಲು ಈ ವಿಶಿಷ್ಟ ಇಂಜಿನಿಯರಿಂಗ್ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ನೆಲಮಟ್ಟ (Ground Level):&lt;/strong&gt; ಪ್ರಸ್ತುತ ಇರುವ ಮೋಹನ್ ಕುಮಾರ್ ರಸ್ತೆಯು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.&lt;/p&gt;&lt;p&gt;&lt;strong&gt;ಮೊದಲ ಹಂತ (Level 1): &lt;/strong&gt;ರಸ್ತೆ ವಾಹನಗಳ ಸಂಚಾರಕ್ಕಾಗಿ ಎತ್ತರಿಸಿದ ಫ್ಲೈಓವರ್ (ರಸ್ತೆ ಮೇಲ್ಸೇತುವೆ) ನಿರ್ಮಾಣವಾಗಲಿದೆ.&lt;/p&gt;&lt;p&gt;&lt;strong&gt;ಎರಡನೇ ಹಂತ (Level 2): &lt;/strong&gt;ಈ ರಸ್ತೆ ಮೇಲ್ಸೇತುವೆಯ ಮೇಲ್ಭಾಗದಲ್ಲಿ ಎತ್ತರಿಸಿದ ಉಪನಗರ ರೈಲು ಮಾರ್ಗ (Elevated Rail Track) ಹಾದುಹೋಗಲಿದೆ.&lt;/p&gt;&lt;p&gt;ಈ ಯೋಜನೆಯು ಈಗ ಇರುವ ರಸ್ತೆ ಹಕ್ಕಿನ ಜಾಗದಲ್ಲೇ (Right of Way - ROW) ಹಾದುಹೋಗುವುದರಿಂದ ಹೆಚ್ಚುವರಿ ಭೂಸ್ವಾಧೀನದ ಸಮಸ್ಯೆ ತಪ್ಪಲಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸಾರಿಗೆ ಸಂಪರ್ಕ ಬಲಗೊಳ್ಳಲಿದೆ.&lt;/p&gt;&lt;h2&gt;₹199 ಕೋಟಿ ವೆಚ್ಚದ ಹೊಸ ಟೆಂಡರ್; ಎಲ್ ಆ್ಯಂಡ್ ಟಿ ನಿರ್ಗಮನ&lt;/h2&gt;&lt;p&gt;ಇದಕ್ಕೂ ಮುನ್ನ ಮಲ್ಲಿಗೆ ಮಾರ್ಗದ ಒಪ್ಪಂದದ ಅಡಿಯಲ್ಲಿ ಈ ಫ್ಲೈಓವರ್ ನಿರ್ಮಾಣದ ಹೊಣೆಯನ್ನು ಲಾರ್ಸೆನ್ &amp;amp; ಟೂಬ್ರೊ (L&amp;amp;T) ಕಂಪನಿಗೆ ವಹಿಸಲಾಗಿತ್ತು. ಆದರೆ ಕಂಪನಿಯು ಹೆಚ್ಚುವರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿ, ಗುತ್ತಿಗೆಯಿಂದ ಅರ್ಧದಲ್ಲೇ ಹೊರನಡೆದಿತ್ತು. ಹೀಗಾಗಿ ಕೆ-ರೈಡ್ ಈಗ ಇಡೀ ಯೋಜನೆಯನ್ನು ಮರುಸಂಘಟಿಸಿ ಹೊಸ ಟೆಂಡರ್ ಕರೆದಿದೆ.&lt;/p&gt;&lt;p&gt;ಮತ್ತಿಕೆರೆ ಎಲಿವೇಟೆಡ್ ನಿಲ್ದಾಣ ಮತ್ತು ಫ್ಲೈಓವರ್ ಅನ್ನು ಮೇಲ್ಮೈ ರಸ್ತೆಗಳಿಗೆ ಸಂಪರ್ಕಿಸುವ ಇಳಿಜಾರು (Ramp) ನಿರ್ಮಾಣ ಕಾಮಗಾರಿಗೆ ₹199 ಕೋಟಿ ಅಂದಾಜು ವೆಚ್ಚದ ಟೆಂಡರ್ ಕರೆಯಲಾಗಿದೆ. ಇದು ಕಾರಿಡಾರ್-2 ರ ಒಟ್ಟು ₹671.64 ಕೋಟಿ ಯೋಜನಾ ಪ್ಯಾಕೇಜ್&zwnj;ನ ಭಾಗವಾಗಿದೆ ಎಂದು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಮತ್ತಿಕೆರೆ ನಿಲ್ದಾಣದ ಕಾನ್&zwnj;ಕಾರ್ಸ್, ಪ್ಲಾಟ್&zwnj;ಫಾರ್ಮ್ ಹಂತದ ಗರ್ಡರ್&zwnj;ಗಳು, ಪ್ರವೇಶ/ನಿರ್ಗಮನ ದ್ವಾರ ಮತ್ತು ಉಕ್ಕಿನ ಸ್ಕೈವಾಕ್ ಕಾಮಗಾರಿಗಳಿಗಾಗಿ ಹೆಚ್ಚುವರಿಯಾಗಿ ₹40.22 ಕೋಟಿ ಮೀಸಲಿಡಲಾಗಿದೆ. ಈ ಬೃಹತ್ ರಚನೆಯನ್ನು ಪ್ರಸ್ತುತ ಇರುವ ಶ್ಯಾಮ ಪ್ರಸಾದ್ ಮುಖರ್ಜಿ ಫ್ಲೈಓವರ್ ಬಳಿ ಯೋಜಿಸಲಾಗಿದೆ.&lt;/p&gt;&lt;h2&gt;ಮೂರು ಹಂತಗಳಲ್ಲಿ ಮಲ್ಲಿಗೆ ಮಾರ್ಗದ ಕಾಮಗಾರಿ ಅನುಷ್ಠಾನ&lt;/h2&gt;&lt;p&gt;ಕೆ-ರೈಡ್ ಸಂಸ್ಥೆಯು ಕಾರಿಡಾರ್-2 ರ ಬಾಕಿ ಉಳಿದಿರುವ ಕಾಮಗಾರಿಗಳನ್ನು ಒಟ್ಟು ಮೂರು ಪ್ರತ್ಯೇಕ ಹಂತಗಳಲ್ಲಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿದೆ:&lt;/p&gt;&lt;p&gt;&lt;strong&gt;ಮೊದಲ ಹಂತ (ಗಡುವು: 24 ತಿಂಗಳು):&lt;/strong&gt; ಬೆನ್ನಿಗಾನಹಳ್ಳಿ ಮತ್ತು ಶೆಟ್ಟಿಹಳ್ಳಿ ನಡುವಿನ 7.795 ಕಿ.ಮೀ ಉದ್ದದ ರೈಲು ಮಾರ್ಗ, ಮತ್ತಿಕೆರೆ ಡಬಲ್ ಡೆಕ್ಕರ್ ವಿಭಾಗ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣದ ಬಾಕಿ ಕಾಮಗಾರಿಗಳು. (ಚಿಕ್ಕಬಾಣಾವರದಿಂದ ಯಶವಂತಪುರವರೆಗಿನ ಈ ಮಾರ್ಗವನ್ನು ಮುಂಬರುವ ಒಂದು ವರ್ಷದೊಳಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ).&lt;/p&gt;&lt;p&gt;&lt;strong&gt;ಎರಡನೇ ಹಂತ (ಗಡುವು: 18 ತಿಂಗಳು):&lt;/strong&gt; ಬೆನ್ನಿಗಾನಹಳ್ಳಿಯಿಂದ ಬಾಣಸವಾಡಿಯ ಮೂಲಕ ಹೆಬ್ಬಾಳದವರೆಗಿನ 11.59 ಕಿ.ಮೀ ಉದ್ದದ ರೈಲು ಮಾರ್ಗ. ಇದು ನಾಗವಾರ ಮತ್ತು ಕನಕನಗರ ನಿಲ್ದಾಣಗಳನ್ನು ಒಳಗೊಂಡಿರುತ್ತದೆ.&lt;/p&gt;&lt;p&gt;&lt;strong&gt;ಮೂರನೇ ಹಂತ (ಗಡುವು: 18 ತಿಂಗಳು):&lt;/strong&gt; ಯಶವಂತಪುರ ಮತ್ತು ಚಿಕ್ಕಬಾಣಾವರ ನಡುವಿನ 5.8 ಕಿ.ಮೀ ಉದ್ದದ ನೆಲಮಟ್ಟದ ರೈಲು ಮಾರ್ಗ ಹಾಗೂ 185 ಮೀಟರ್ ಉದ್ದದ ಎತ್ತರಿಸಿದ ಮಾರ್ಗ.&lt;/p&gt;&lt;p&gt;ಒಟ್ಟಾರೆಯಾಗಿ 29 ತಿಂಗಳ ಅಂತಿಮ ಗಡುವಿನೊಂದಿಗೆ 2029 ರ ವೇಳೆಗೆ ಇಡೀ ಕಾರಿಡಾರ್-2 (ಮಲ್ಲಿಗೆ ಮಾರ್ಗ) ರಲ್ಲಿ ಪೂರ್ಣ ಪ್ರಮಾಣದ ಉಪನಗರ ರೈಲು ಸಂಚಾರ ಆರಂಭವಾಗಲಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಎರಡು ಮಾದರಿಯ ಡಬಲ್ ಡೆಕ್ಕರ್ ರಚನೆ!&lt;/h2&gt;&lt;p&gt;ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಎರಡು ವಿಭಿನ್ನ ಇಂಜಿನಿಯರಿಂಗ್ ಮಾದರಿಯ ಡಬಲ್ ಡೆಕ್ಕರ್ ರಚನೆಗಳು ನಿರ್ಮಾಣವಾಗುತ್ತಿರುವುದು ವಿಶೇಷ.&lt;/p&gt;&lt;p&gt;&lt;strong&gt;ರಸ್ತೆ-ರೈಲು ಮಾದರಿ (ಮಲ್ಲಿಗೆ ಮಾರ್ಗ): &lt;/strong&gt;ಮತ್ತಿಕೆರೆ ವಿಭಾಗದಲ್ಲಿ ಕೆಳಗೆ ರಸ್ತೆ ಫ್ಲೈಓವರ್ ಮತ್ತು ಅದರ ಮೇಲೆ ಉಪನಗರ ರೈಲು ಮಾರ್ಗ ಇರಲಿದೆ.&lt;/p&gt;&lt;p&gt;&lt;strong&gt;ರೈಲು-ಮೇಲೆ-ರೈಲು ಮಾದರಿ (ಕನಕ ಮಾರ್ಗ/ಕಾರಿಡಾರ್-4): &lt;/strong&gt;ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ, ಬೆನ್ನಿಗಾನಹಳ್ಳಿ ಬಳಿ ನಮ್ಮ ಮೆಟ್ರೋದ ನೀಲಿ ಮಾರ್ಗದ (Blue Line) ಮೇಲ್ಭಾಗದಲ್ಲಿ ಉಪನಗರ ರೈಲು ಮಾರ್ಗವು ಹಾದುಹೋಗಲಿದೆ.&lt;/p&gt;&lt;p&gt;ಈ ಮಹತ್ವಾಕಾಂಕ್ಷಿ ಯೋಜನೆಗಳು ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಗೆ ಹೊಸ ವೇಗ ನೀಡಲಿದ್ದು, ನಗರದ ಸಾರಿಗೆ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಲಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-suburban-rail-k-ride-invites-rs-199-crore-tender-for-mathikere-double-decker-corridor-gdp/articleshow-67vb6fu"/>
        </item>
        <item>
            <title><![CDATA[ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಭೀಕರ ಅನಾಹುತ.. ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, 10 ಮಂದಿಗೆ ಗಂಭೀರ]]></title>
            <link>https://kannada.asianetnews.com/bengaluru-rural/bengaluru-anekal-cylinder-balst-ten-people-injured-gkn/articleshow-6g43bzd</link>
            <guid isPermaLink="true">https://kannada.asianetnews.com/bengaluru-rural/bengaluru-anekal-cylinder-balst-ten-people-injured-gkn/articleshow-6g43bzd</guid>
            <pubDate>Thu, 23 Jul 2026 08:58:30 +0530</pubDate>
            <description><![CDATA[ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದ ಪಿಜಿಯೊಂದರಲ್ಲಿ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡು 10ಕ್ಕೂ ಹೆಚ್ಚು ಅನ್ಯರಾಜ್ಯದ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6g7n2d1jt26nt5n2nrdjyw,imgname-cylinder-blast-1784777266253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್: &lt;/strong&gt;ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಇಂದು ಮುಂಜಾನೆ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಮುಂಜಾನೆ 6 ಗಂಟೆಗೆ ದುರ್ಘಟನೆ&lt;/strong&gt;&lt;/h2&gt;&lt;p&gt;ಬೊಮ್ಮಸಂದ್ರದ ನಾಗರಾಜ್ ರೆಡ್ಡಿ ಎಂಬುವರಿಗೆ ಸೇರಿದ ಪಿಜಿಯಲ್ಲಿ (PG) ಈ ಅವಘಡ ನಡೆದಿದೆ. ಈ ಪಿಜಿಯನ್ನು ನಾಗರಾಜ್ ರೆಡ್ಡಿ ಅವರು ಬೇರೆಯವರಿಗೆ ಲೀಸ್ ನೀಡಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಸುಮಾರು 6 ಗಂಟೆಯ ಸುಮಾರಿಗೆ ಕಾರ್ಮಿಕರು ಎದ್ದೇಳುವ ಸಮಯದಲ್ಲಿ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಪಿಜಿಯಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.&lt;/p&gt;&lt;h2&gt;&lt;strong&gt;ಅನ್ಯರಾಜ್ಯದ ಕಾರ್ಮಿಕರಿಗೆ ಗಾಯ&lt;/strong&gt;&lt;/h2&gt;&lt;p&gt;ಈ ಪಿಜಿಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಕೆಲಸಕ್ಕಾಗಿ ಬಂದಿದ್ದ 10ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದರು. ಗಾಯಗೊಂಡವರೆಲ್ಲರೂ ಹೊರರಾಜ್ಯದವರಾಗಿದ್ದು, ಎಲ್ಲರಿಗೂ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ&lt;/strong&gt;&lt;/h2&gt;&lt;p&gt;ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡದ ಭಾಗಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಈ ಘಟನೆಯಿಂದಾಗಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಆತಂಕ ಮನೆಮಾಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/bengaluru-anekal-cylinder-balst-ten-people-injured-gkn/articleshow-6g43bzd"/>
        </item>
        <item>
            <title><![CDATA[ಬೆಂಗಳೂರು ಬೀದಿಲಿ ಕಿತ್ತಾಡಿಕೊಂಡ ಬಿಜೆಪಿ-ಕಾಂಗ್ರೆಸ್, ಬಿಪಿ ಹರೀಶ್‌ಗೆ ಮೊಟ್ಟೆ ಎಸೆದ ಕಾರ್ಯಕರ್ತ! ಆರ್.ಅಶೋಕ್ ಬಂಧನ]]></title>
            <link>https://kannada.asianetnews.com/politics/neet-protest-high-drama-in-bengaluru-congress-activists-egg-attack-against-mla-bp-harish-near-kpcc-office-gdp/articleshow-7olreyf</link>
            <guid isPermaLink="true">https://kannada.asianetnews.com/politics/neet-protest-high-drama-in-bengaluru-congress-activists-egg-attack-against-mla-bp-harish-near-kpcc-office-gdp/articleshow-7olreyf</guid>
            <pubDate>Wed, 22 Jul 2026 17:04:59 +0530</pubDate>
            <description><![CDATA[ದೆಹಲಿಯ ನೀಟ್ ಪರೀಕ್ಷೆ ಅಕ್ರಮದ ಕಿಡಿ ಬೆಂಗಳೂರಿಗೂ ವ್ಯಾಪಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆಯಲಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky4sgkqzvp5yj7ycq0axwkbn,imgname-bjp-mla-bp-harish-egged-1784719888127.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ದೆಹಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ &lsquo;ನೀಟ್&rsquo; (NEET) ಪರೀಕ್ಷೆ ಅಕ್ರಮದ ಕಿಡಿ ಈಗ ಸಿಲಿಕಾನ್ ಸಿಟಿ ಬೆಂಗಳೂರಿಗೂ ವ್ಯಾಪಿಸಿದೆ. ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿರೋಧ ಪಕ್ಷವಾದ ಬಿಜೆಪಿಯ ಕಾರ್ಯಕರ್ತರ ನಡುವೆ ಬುಧವಾರ ರಾಜಧಾನಿಯ ರಸ್ತೆಗಳಲ್ಲಿ ಭಾರಿ ಗದ್ದಲ, ತಳ್ಳಾಟ-ನೂಟಾಟ ಹಾಗೂ ಹೈಡ್ರಾಮಾ ನಡೆದಿದೆ. ಪ್ರತಿಭಟನೆಯ ವೇಳೆ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ಎಸೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಎರಡೂ ಪಕ್ಷಗಳ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ದೆಹಲಿ ಸಂಘರ್ಷದ ಪ್ರತಿಫಲನ: ಮಲ್ಲೇಶ್ವರಂ ಬಿಜೆಪಿ ಕಚೇರಿಗೆ &lsquo;ಕೈ&rsquo; ಮುತ್ತಿಗೆ&lt;/h2&gt;&lt;p&gt;ದೆಹಲಿಯ ಜಂತರ್ ಮಂತರ್&zwnj;ನಲ್ಲಿ ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದನ್ನು ವಿರೋಧಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.&lt;/p&gt;&lt;p&gt;ರಾಹುಲ್ ಗಾಂಧಿ ಅವರ ಬಂಧನವನ್ನು ಖಂಡಿಸಿ, ಬೆಂಗಳೂರಿನ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಲಾಯಿತು. ಈ ವೇಳೆ ಬಿಜೆಪಿ ಕಚೇರಿ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡರು.&lt;/p&gt;&lt;h2&gt;ಕೆಪಿಸಿಸಿ ಕಚೇರಿಗೆ ಬಿಜೆಪಿ ಪ್ರತಿ-ಮುತ್ತಿಗೆ: ರಣರಂಗವಾದ ರಸ್ತೆ&lt;/h2&gt;&lt;p&gt;ಕಾಂಗ್ರೆಸ್&zwnj;ನ ಈ ನಡೆಗೆ ಪ್ರತ್ಯುತ್ತರ ನೀಡಲು ಸಜ್ಜಾದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ಪಡೆ, ತಕ್ಷಣವೇ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ (KPCC) ಕಚೇರಿಗೆ ಮುತ್ತಿಗೆ ಹಾಕಲು ಮುಂದಾಯಿತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಕಚೇರಿಯತ್ತ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು. ಈ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ಘರ್ಷಣೆ ಮತ್ತು ಗದ್ದಲ ಏರ್ಪಟ್ಟಿತು.&lt;/p&gt;&lt;h2&gt;ಪ್ಲೇವುಡ್ ಅಂಗಡಿಯಲ್ಲಿ ಶಾಸಕನಿಗೆ ಆಶ್ರಯ!&lt;/h2&gt;&lt;p&gt;ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರು ಕೆಪಿಸಿಸಿ ಕಚೇರಿ ಬಳಿ ಕಾರಿನಿಂದ ಇಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು 'ಬಿಜೆಪಿಗೆ ಧಿಕ್ಕಾರ' ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಹರೀಶ್ ಅವರು 'ಕಾಂಗ್ರೆಸ್&zwnj;ಗೆ ಧಿಕ್ಕಾರ' ಎಂದು ಕೂಗಿದಾಗ ಕೆರಳಿದ ಕೈ ಕಾರ್ಯಕರ್ತರು, ಶಾಸಕರು ಹಾಗೂ ಅವರಿದ್ದ ಕಾರಿನ ಮೇಲೆ ದಿಢೀರನೆ ಮೊಟ್ಟೆ ಎಸೆದರು. ತಕ್ಷಣ ಎಚ್ಚೆತ್ತ ಪೊಲೀಸರು ಬಿ.ಪಿ. ಹರೀಶ್ ಅವರ ರಕ್ಷಣೆಗೆ ಧಾವಿಸಿ, ಅವರನ್ನು ರಸ್ತೆಯ ಪಕ್ಕದಲ್ಲಿದ್ದ ಪ್ಲೇವುಡ್ ಅಂಗಡಿಯೊಂದರ ಒಳಗೆ ಕರೆದೊಯ್ದು ಕೂರಿಸಿದರು. ಆದರೆ, ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಆ ಅಂಗಡಿಯೊಳಗೂ ನುಗ್ಗಲು ಯತ್ನಿಸಿದಾಗ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು, ಶಾಸಕರನ್ನು ಪೊಲೀಸ್ ಜೀಪ್ ಮೂಲಕ ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದರು. ಸ್ಥಳದಲ್ಲಿ ಐದಾರು ಮೊಟ್ಟೆಗಳು ಪತ್ತೆಯಾಗಿದ್ದು, ಶಾಸಕನ ಮೇಲೆ ಮೊಟ್ಟೆ ಎಸೆದ 'ಪುಣ್ಯೇಶ್' ಎಂಬ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ವರದಿ ತಿಳಿಸಿದೆ.&lt;/p&gt;&lt;h2&gt;ಆರ್. ಅಶೋಕ್ ಸೇರಿದಂತೆ ಪ್ರಮುಖ ನಾಯಕರ ಬಂಧನ&lt;/h2&gt;&lt;p&gt;ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಶಾಸಕರು ಮತ್ತು ನೂರಾರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಇತ್ತ ಮಲ್ಲೇಶ್ವರಂ ಹಾಗೂ ಅತ್ತ ಕ್ವೀನ್ಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.&lt;/p&gt;&lt;h2&gt;ಕಮಿಷನರ್ ಕಚೇರಿಗೆ ಬಿಜೆಪಿ ಪಾದಯಾತ್ರೆ: ಆಯುಕ್ತರಿಗೆ ದೂರು&lt;/h2&gt;&lt;p&gt;ಪೊಲೀಸ್ ವಶದಿಂದ ಬಿಡುಗಡೆಯಾದ ಬಳಿಕ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಗೆ ಪಾದಯಾತ್ರೆಯ ಮೂಲಕ ಆಗಮಿಸಿತು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗುತ್ತಾ ಕಮಿಷನರ್ ಕಚೇರಿ ಮುಂಭಾಗದಲ್ಲೇ ಜಮಾಯಿಸಿದ ನಾಯಕರು, ತಮಗೆ ರಕ್ಷಣೆ ನೀಡಲು ವಿಫಲರಾದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರದ ವಿರುದ್ಧ ಕಿಡಿಕಾರಿದರು. ತದನಂತರ ಬಿಜೆಪಿ ನಿಯೋಗವು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ಶಾಸಕರ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಅಧಿಕೃತ ದೂರು ಸಲ್ಲಿಸಿತು.&lt;/p&gt;&lt;h2&gt;ನನ್ನ ಮೇಲೆ ದಾಳಿ ನಡೆದಿದ್ದು ಹೀಗೆ: ಶಾಸಕ ಬಿ.ಪಿ. ಹರೀಶ್ ಹೇಳಿಕೆ&lt;/h2&gt;&lt;p&gt;&quot;ನಾನು ಪ್ರತಿಭಟನೆಗಾಗಿ ಕಾಂಗ್ರೆಸ್ ಕಚೇರಿ ಬಳಿ ಇಳಿದಾಗ, ಅವರು ಬಿಜೆಪಿಗೆ ಧಿಕ್ಕಾರ ಎನ್ನುತ್ತಿದ್ದರು. ನಾನು ಕೂಡ ಕಾಂಗ್ರೆಸ್&zwnj;ಗೆ ಧಿಕ್ಕಾರ ಎಂದು ಕೂಗಿದೆ. ಈ ವೇಳೆ ಹತಾಶರಾದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಮೇಲೆ ಮೊಟ್ಟೆ ಎಸೆದು ದಾಳಿ ನಡೆಸಿದರು. ಪೊಲೀಸರು ಸಕಾಲದಲ್ಲಿ ಬಂದು ನನ್ನನ್ನು ರಕ್ಷಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಈ ಗೂಂಡಾವರ್ತನೆಯನ್ನು ನಾವು ಸಹಿಸುವುದಿಲ್ಲ,&quot; ಎಂದು ಕಮಿಷನರ್ ಕಚೇರಿಯಲ್ಲಿ ಶಾಸಕ ಬಿ.ಪಿ. ಹರೀಶ್ ಆಕ್ರೋಶ ಹೊರಹಾಕಿದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/politics/neet-protest-high-drama-in-bengaluru-congress-activists-egg-attack-against-mla-bp-harish-near-kpcc-office-gdp/articleshow-7olreyf"/>
        </item>
        <item>
            <title><![CDATA[ಬ್ರ್ಯಾಂಡ್ ಬೆಂಗಳೂರಿನ ಮಾನ, ಮರ್ಯಾದೆ ಪಬ್ಲಿಕ್ ಟಾಯ್ಲೆಟ್‌ನಲ್ಲಿ ಹರಾಜಾಯ್ತು! ಇಲ್ಲಿದೆ ಶಾಕಿಂಗ್ ರಿಪೋರ್ಟ್]]></title>
            <link>https://kannada.asianetnews.com/bengaluru-urban/bengaluru-public-toilets-in-poor-shape-1-in-4-non-functional-audit-suh/articleshow-bp4y5o6</link>
            <guid isPermaLink="true">https://kannada.asianetnews.com/bengaluru-urban/bengaluru-public-toilets-in-poor-shape-1-in-4-non-functional-audit-suh/articleshow-bp4y5o6</guid>
            <pubDate>Wed, 22 Jul 2026 15:53:30 +0530</pubDate>
            <description><![CDATA[&lt;p&gt;ದೇಶದ ಪ್ರಮುಖ ಟೆಕ್ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನ ಸಾರ್ವಜನಿಕ ಮೂಲಸೌಕರ್ಯದ ಬಗ್ಗೆ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ನಗರದಾದ್ಯಂತ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿಗಳ ಕುರಿತು ನಾಗರಿಕರ ನೇತೃತ್ವದಲ್ಲಿ ನಡೆದ ಲೆಕ್ಕಪರಿಶೋಧನೆಯಲ್ಲಿ, ನಾಲ್ಕು ಸಾರ್ವಜನಿಕ ಶೌಚಾಲಯಗಳಲ್ಲಿ ಒಂದಕ್ಕಿಂತ ಹೆಚ್ಚು ಶೌಚಾಲಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky4ne283528406jcf6xw3m9q,imgname-bengaluru-public-toilets-in-poor-shape-1-in-4-non-functional-audit-1784715610371.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ದೇಶದ ಪ್ರಮುಖ ಟೆಕ್ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನ ಸಾರ್ವಜನಿಕ ಮೂಲಸೌಕರ್ಯದ ಬಗ್ಗೆ ಮತ್ತೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ನಗರದಾದ್ಯಂತ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿಗಳ ಕುರಿತು ನಾಗರಿಕರ ನೇತೃತ್ವದಲ್ಲಿ ನಡೆದ ಲೆಕ್ಕಪರಿಶೋಧನೆಯಲ್ಲಿ, ನಾಲ್ಕು ಸಾರ್ವಜನಿಕ ಶೌಚಾಲಯಗಳಲ್ಲಿ ಒಂದಕ್ಕಿಂತ ಹೆಚ್ಚು ಶೌಚಾಲಯಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ.&lt;/p&gt;&lt;p&gt;ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (BPAC) ಬಿಡುಗಡೆ ಮಾಡಿರುವ ಬೆಂಗಳೂರು ಸಾರ್ವಜನಿಕ ಶೌಚಾಲಯ ಲೆಕ್ಕಪರಿಶೋಧನಾ ವರದಿ 2026 ನಗರದ ನೈರ್ಮಲ್ಯ ಮೂಲಸೌಕರ್ಯದ ಕಳವಳಕಾರಿ ಚಿತ್ರಣವನ್ನು ತೆರೆದಿಟ್ಟಿದೆ.&lt;/p&gt;&lt;h2&gt;142 ಸಾರ್ವಜನಿಕ ಶೌಚಾಲಯಗಳ ಆಡಿಟ್&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಒಟ್ಟು 142 ಸಾರ್ವಜನಿಕ ಶೌಚಾಲಯಗಳನ್ನು ಈ ಆಡಿಟ್&zwnj;ನಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಡಿಟ್ ನಡೆಸಲಾಗಿದ್ದು, ಸಾರ್ವಜನಿಕ ಶೌಚಾಲಯಗಳ ಕಾರ್ಯನಿರ್ವಹಣೆ, ಸ್ವಚ್ಛತೆ, ಪ್ರವೇಶಸಾಧ್ಯತೆ, ಸುರಕ್ಷತೆ ಮತ್ತು ಒಟ್ಟಾರೆ ಬಳಕೆದಾರರ ಅನುಭವ ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗಿದೆ.&lt;/p&gt;&lt;p&gt;ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ದಾಟಿದ್ದರೂ, ನಗರದ ತ್ವರಿತ ಬೆಳವಣಿಗೆಗೆ ತಕ್ಕಂತೆ ಸಾರ್ವಜನಿಕ ನೈರ್ಮಲ್ಯ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ ಎಂದು ವರದಿ ಹೇಳಿದೆ.&lt;/p&gt;&lt;p&gt;ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಪ್ರಸ್ತುತ ಸುಮಾರು 800ರಿಂದ 900 ಸಾರ್ವಜನಿಕ ಶೌಚಾಲಯಗಳಿವೆ. ಈ ಪೈಕಿ 479 ಶೌಚಾಲಯಗಳು GBA ಅಡಿಯಲ್ಲಿ ಅಧಿಕೃತವಾಗಿ ಪಟ್ಟಿಮಾಡಲ್ಪಟ್ಟಿವೆ. ಇದರರ್ಥ ನಗರದಲ್ಲಿ ಸರಾಸರಿ 25,000ರಿಂದ 30,000 ಜನರಿಗೆ ಕೇವಲ ಒಂದು ಸಾರ್ವಜನಿಕ ಶೌಚಾಲಯ ಲಭ್ಯವಿರುವಂತಾಗಿದೆ.&lt;/p&gt;&lt;h2&gt;4ರಲ್ಲಿ 1 ಶೌಚಾಲಯ ಕಾರ್ಯನಿರ್ವಹಿಸುತ್ತಿಲ್ಲ!&lt;/h2&gt;&lt;p&gt;ಆಡಿಟ್ ನಡೆಸಿದ 142 ಸಾರ್ವಜನಿಕ ಶೌಚಾಲಯಗಳ ಪೈಕಿ 37 ಶೌಚಾಲಯಗಳು, ಅಂದರೆ ಸುಮಾರು 26 ಪ್ರತಿಶತ, ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಇನ್ನು ಸ್ವಚ್ಛತೆಯ ವಿಚಾರದಲ್ಲೂ ಪರಿಸ್ಥಿತಿ ಆತಂಕಕಾರಿಯಾಗಿದೆ. ಸಮೀಕ್ಷೆಗೊಳಗಾದ ಶೌಚಾಲಯಗಳಲ್ಲಿ ಕೇವಲ 6 ಶೌಚಾಲಯಗಳು, ಅಂದರೆ ಶೇ.4.2ರಷ್ಟು ಮಾತ್ರ ಅತ್ಯಂತ ಸ್ವಚ್ಛವಾಗಿವೆ ಎಂದು ರೇಟಿಂಗ್ ಪಡೆದಿವೆ. ಮತ್ತೊಂದೆಡೆ, ಶೇ.58ರಷ್ಟು ಶೌಚಾಲಯಗಳಲ್ಲಿ ನಿರಂತರ ದುರ್ವಾಸನೆ ಕಂಡುಬಂದಿದೆ.&lt;/p&gt;&lt;h2&gt;ನೀರು, ಸೋಪ್, ಕಸದ ಬುಟ್ಟಿ ಇಲ್ಲ!&lt;/h2&gt;&lt;p&gt;ಕಾರ್ಯನಿರ್ವಹಿಸುತ್ತಿರುವ ಶೌಚಾಲಯಗಳಲ್ಲಿಯೂ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಿದೆ. ಸಮೀಕ್ಷೆ ನಡೆಸಿದ ಕಾರ್ಯನಿರ್ವಹಣೆಯಲ್ಲಿರುವ ಶೌಚಾಲಯಗಳಲ್ಲಿ ಕೇವಲ ಶೇ.40ರಷ್ಟು ಶೌಚಾಲಯಗಳಲ್ಲಿ ಮಾತ್ರ ನೀರಿನ ಲಭ್ಯತೆ ಇತ್ತು. ಇನ್ನಷ್ಟು ಆಘಾತಕಾರಿ ಸಂಗತಿಯೆಂದರೆ, ಸಮೀಕ್ಷೆ ನಡೆಸಿದ ಯಾವುದೇ ಶೌಚಾಲಯದಲ್ಲಿ ಸೋಪ್ ಡಿಸ್ಪೆನ್ಸರ್ ಅಥವಾ ಕಸದ ಬುಟ್ಟಿ ಇರಲಿಲ್ಲ ಎಂದು ವರದಿ ತಿಳಿಸಿದೆ. ಇದರಿಂದ ಶೌಚಾಲಯಗಳನ್ನು ನಿರ್ಮಿಸುವುದಷ್ಟೇ ಸಾಕಾಗುವುದಿಲ್ಲ. ಅವುಗಳಲ್ಲಿ ನಿರಂತರವಾಗಿ ನೀರು, ಸ್ವಚ್ಛತೆ ಮತ್ತು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಕೂಡ ಅಷ್ಟೇ ಮುಖ್ಯ ಎಂಬ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.&lt;/p&gt;&lt;h2&gt;ಮಹಿಳೆಯರ ಸುರಕ್ಷತೆಗೂ ಆತಂಕ&lt;/h2&gt;&lt;p&gt;ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯ ಕೊರತೆ ಸ್ವಚ್ಛತೆಯ ಸಮಸ್ಯೆಯಷ್ಟೇ ಅಲ್ಲ, ಸುರಕ್ಷತೆಯ ವಿಚಾರದಲ್ಲಿಯೂ ಆತಂಕ ಮೂಡಿಸಿದೆ. ಆಡಿಟ್ ಪ್ರಕಾರ, ಕೇವಲ ಶೇ.56ರಷ್ಟು ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಸಾಕಷ್ಟು ಬೆಳಕಿನ ವ್ಯವಸ್ಥೆ ಇದೆ. ಇದರಿಂದ ವಿಶೇಷವಾಗಿ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಮಹಿಳೆಯರು ಈ ಶೌಚಾಲಯಗಳನ್ನು ಬಳಸುವಾಗ ಅಸುರಕ್ಷಿತ ಭಾವನೆ ಎದುರಿಸುವ ಸಾಧ್ಯತೆ ಇದೆ. ಇನ್ನು ಶೌಚಾಲಯಗಳ ನಿರ್ವಹಣೆಯಲ್ಲಿ ಮಹಿಳಾ ಸಿಬ್ಬಂದಿಯ ಪಾಲ್ಗೊಳ್ಳುವಿಕೆಯೂ ಕಡಿಮೆ ಇದೆ. ಕೇರ್&zwnj;ಟೇಕರ್&zwnj;ಗಳಲ್ಲಿ ಕೇವಲ ಶೇ.15ರಷ್ಟು ಮಂದಿ ಮಾತ್ರ ಮಹಿಳೆಯರು ಎಂದು ವರದಿ ಹೇಳಿದೆ.&lt;/p&gt;&lt;h2&gt;ಅಂಗವಿಕಲರಿಗೆ ಶೇ.94ರಷ್ಟು ಶೌಚಾಲಯಗಳು ಪ್ರವೇಶಯೋಗ್ಯವಲ್ಲ!&lt;/h2&gt;&lt;p&gt;ಸಾರ್ವಜನಿಕ ಶೌಚಾಲಯಗಳ ಪ್ರವೇಶಸಾಧ್ಯತೆ ಕೂಡ ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಆಡಿಟ್&zwnj;ನಲ್ಲಿ ಸಮೀಕ್ಷೆ ನಡೆಸಿದ 142 ಶೌಚಾಲಯಗಳ ಪೈಕಿ ಕೇವಲ 9 ಶೌಚಾಲಯಗಳಲ್ಲಿ ಮಾತ್ರ ಇಳಿಜಾರು (ರ್ಯಾಂಪ್) ವ್ಯವಸ್ಥೆ ಕಂಡುಬಂದಿದೆ. ಇದರ ಪರಿಣಾಮವಾಗಿ ಸುಮಾರು ಶೇ.94ರಷ್ಟು ಶೌಚಾಲಯಗಳು ಅಂಗವಿಕಲರಿಗೆ ಸುಲಭವಾಗಿ ಪ್ರವೇಶಿಸಲಾಗದ ಸ್ಥಿತಿಯಲ್ಲಿವೆ ಎಂದು ವರದಿ ತಿಳಿಸಿದೆ. ಇದು ನಗರದಲ್ಲಿ ಎಲ್ಲರಿಗೂ ಸಮಾನವಾಗಿ ಲಭ್ಯವಾಗಬೇಕಾದ ಸಾರ್ವಜನಿಕ ಸೌಲಭ್ಯಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;/p&gt;&lt;h2&gt;ಪಾರದರ್ಶಕತೆಯ ಕೊರತೆಯೂ ಸಮಸ್ಯೆ&lt;/h2&gt;&lt;p&gt;ಶೌಚಾಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಯಾರು, ಬಳಕೆದಾರರಿಂದ ಎಷ್ಟು ಶುಲ್ಕ ಪಡೆಯಲಾಗುತ್ತದೆ ಎಂಬಂತಹ ಮಾಹಿತಿಗಳೂ ಸಾರ್ವಜನಿಕರಿಗೆ ಸ್ಪಷ್ಟವಾಗಿ ಲಭ್ಯವಿಲ್ಲದಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಕೊರತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.&lt;/p&gt;&lt;h2&gt;&lsquo;ಶೌಚಾಲಯ ನಿರ್ಮಾಣ ಮಾತ್ರ ಸಾಕಾಗುವುದಿಲ್ಲ&rsquo;&lt;/h2&gt;&lt;p&gt;ಬೆಂಗಳೂರಿನ ನೈರ್ಮಲ್ಯ ಸಮಸ್ಯೆ ಈಗ ಕೇವಲ ಹೆಚ್ಚಿನ ಸಂಖ್ಯೆಯಲ್ಲಿ ಶೌಚಾಲಯಗಳನ್ನು ನಿರ್ಮಿಸುವುದಕ್ಕೆ ಸೀಮಿತವಾಗಿಲ್ಲ. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ, ಸ್ವಚ್ಛವಾಗಿರುವಂತೆ, ಎಲ್ಲರಿಗೂ ಪ್ರವೇಶಯೋಗ್ಯವಾಗಿರುವಂತೆ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ವರದಿ ಒತ್ತಿಹೇಳಿದೆ.&lt;/p&gt;&lt;p&gt;ಈ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು BPAC ಹಲವು ಶಿಫಾರಸುಗಳನ್ನು ಮಾಡಿದೆ.&lt;/p&gt;&lt;h2&gt;BPAC ಪ್ರಮುಖ ಶಿಫಾರಸುಗಳು:&lt;/h2&gt;&lt;p&gt;ಕಾರ್ಯನಿರ್ವಹಿಸದ ಎಲ್ಲಾ ಸಾರ್ವಜನಿಕ ಶೌಚಾಲಯಗಳನ್ನು 30 ದಿನಗಳ ತುರ್ತು ದುರಸ್ತಿ ಅಭಿಯಾನದ ಮೂಲಕ ಪುನಃಸ್ಥಾಪಿಸಬೇಕು. ಯೋಜನೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪ್ರತ್ಯೇಕ ಸಾರ್ವಜನಿಕ ಶೌಚಾಲಯ ನಿರ್ವಹಣಾ ಕೋಶ ರಚಿಸಬೇಕು. ಕೇವಲ ನಿರ್ಮಾಣಕ್ಕೆ ಆದ್ಯತೆ ನೀಡುವ ಒಪ್ಪಂದಗಳ ಬದಲು, ಕಟ್ಟುನಿಟ್ಟಾದ ಕಾರ್ಯಕ್ಷಮತೆ ಮೇಲ್ವಿಚಾರಣೆಯೊಂದಿಗೆ ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (O&amp;amp;M) ಒಪ್ಪಂದಗಳನ್ನು ಜಾರಿಗೆ ತರಬೇಕು. ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು 1,000ಕ್ಕೂ ಹೆಚ್ಚು ಹೆಚ್ಚುವರಿ ಆಧುನಿಕ ಸಾರ್ವಜನಿಕ ಶೌಚಾಲಯಗಳನ್ನು ತುರ್ತಾಗಿ ನಿರ್ಮಿಸಬೇಕು. ಸರ್ಕಾರಿ ಹಣಕಾಸು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಗಳ ಮೂಲಕ ಹೊಸ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು.&lt;/p&gt;]]></content:encoded>
            <category>bengaluru-rural</category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/bengaluru-public-toilets-in-poor-shape-1-in-4-non-functional-audit-suh/articleshow-bp4y5o6"/>
        </item>
        <item>
            <title><![CDATA[ಬೆಂಗಳೂರಿನ 8 ಕಡೆ ಇಡಿ ದಾಳಿ: ಐಸಿಸ್ ಉಗ್ರ ಸಂಘಟನೆಗೆ ಫಂಡಿಂಗ್ ಜಾಲ ಪತ್ತೆ, ವಿದೇಶದಲ್ಲಿ ಲೆಕ್ಕವಿಲ್ಲದಷ್ಟು ಆಸ್ತಿ!]]></title>
            <link>https://kannada.asianetnews.com/state/ed-cracks-down-on-alleged-isis-funding-network-raids-8-locations-across-bengaluru-gdp/articleshow-byxd4og</link>
            <guid isPermaLink="true">https://kannada.asianetnews.com/state/ed-cracks-down-on-alleged-isis-funding-network-raids-8-locations-across-bengaluru-gdp/articleshow-byxd4og</guid>
            <pubDate>Tue, 21 Jul 2026 11:48:22 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ಐಸಿಸ್&zwnj;ಗೆ ಹಣಕಾಸು ನೆರವು ನೀಡುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ್ದಾರೆ. ಎನ್&zwnj;ಐಎ ತನಿಖೆಯ ಆಧಾರದ ಮೇಲೆ, 'ಇಕ್ರಾ ವೆಲ್ಫೇರ್ ಟ್ರಸ್ಟ್' ಮತ್ತು 'ಜಿಎಫ್&zwnj;ಎಂ ಟ್ರಸ್ಟ್' ಮೂಲಕ ಸಿರಿಯಾದಲ್ಲಿರುವ ಐಸಿಸ್ ಶಿಬಿರಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky1n1w0t1feb48zmtqb98c9h,imgname-ed-raids-8-locations-in-bengaluru-1784614547480.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಸಿರಿಯಾದ 'ಐಸಿಸ್' (ISIS) ಶಿಬಿರಗಳಿಗೆ ಭಾರತದಿಂದ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಹಾಗೂ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದ ಜಾಲವನ್ನು ಬೆನ್ನಟ್ಟಿರುವ ಇಡಿ ಅಧಿಕಾರಿಗಳು, ನಗರದ ಒಟ್ಟು 8 ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್&zwnj;ಐಆರ್ (FIR) ಮತ್ತು ತನಿಖಾ ವರದಿಯ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಈ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದೆ.&lt;/p&gt;&lt;h2&gt;ಟ್ರಸ್ಟ್&zwnj;ಗಳ ಹೆಸರಲ್ಲಿ ಐಸಿಸ್&zwnj;ಗೆ ಹಣ ವರ್ಗಾವಣೆ&lt;/h2&gt;&lt;p&gt;ಎನ್&zwnj;ಐಎ ತನಿಖೆಯ ವೇಳೆ ಅತ್ಯಂತ ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬೆಂಗಳೂರಿನಲ್ಲಿ ಸಕ್ರಿಯವಾಗಿದ್ದ 'ಇಕ್ರಾ ವೆಲ್ಫೇರ್ ಟ್ರಸ್ಟ್' (Ikra Welfare Trust) ಮತ್ತು 'ಜಿಎಫ್&zwnj;ಎಂ ಟ್ರಸ್ಟ್' (GFM Trust) ಎಂಬ ಎರಡು ಸಂಸ್ಥೆಗಳ ಮೂಲಕ ಸಿರಿಯಾದಲ್ಲಿರುವ ಐಸಿಸ್ ಉಗ್ರರ ಶಿಬಿರಗಳಿಗೆ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಮುಗ್ಧ ಮುಸ್ಲಿಂ ಯುವಕರನ್ನು ಬ್ರೈನ್ ವಾಶ್ ಮಾಡಿ, ಅವರನ್ನು ಐಸಿಸ್ ಸಂಘಟನೆಗೆ ನೇಮಕ ಮಾಡಿಕೊಳ್ಳಲು ಹಾಗೂ ಅವರಿಗೆ ಬೇಕಾದ ಹಣಕಾಸಿನ ನೆರವು ಒದಗಿಸಲು ಈ ಎರಡು ಟ್ರಸ್ಟ್&zwnj;ಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಳ್ಳಲಾಗಿತ್ತು ಎಂಬ ಅಂಶ ಬಹಿರಂಗವಾಗಿದೆ.&lt;/p&gt;&lt;h2&gt;ಪ್ರಮುಖ ಅಡಿಟರ್ ಶಬೀರ್ ಖಾನ್ ನಿವಾಸದ ಮೇಲೆ ದಾಳಿ&lt;/h2&gt;&lt;p&gt;ಈ ಇಡೀ ಹಣಕಾಸು ಜಾಲದ ಪ್ರಮುಖ ಕೊಂಡಿಯಾಗಿದ್ದ ಜಿಎಫ್&zwnj;ಎಂ ಟ್ರಸ್ಟ್&zwnj;ನ ಅಧಿಕೃತ ಅಡಿಟರ್ ಶಬೀರ್ ಖಾನ್ ಎಂಬಾತನನ್ನು ಗುರಿಯಾಗಿಸಿಕೊಂಡು ಇಡಿ ದಾಳಿ ನಡೆಸಿದೆ. ಫ್ರೇಜರ್ ಟೌನ್&zwnj;ನಲ್ಲಿರುವ 'ಟಾಸ್ಕಿನ್ ಅಪಾರ್ಟ್ಮೆಂಟ್'ನಲ್ಲಿರುವ ಶಬೀರ್ ಖಾನ್ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ತಡರಾತ್ರಿಯವರೆಗೂ ಹಣಕಾಸಿನ ದಾಖಲೆಗಳ ತೀವ್ರ ಪರಿಣಾಮಕಾರಿ ಪರಿಶೀಲನೆ ನಡೆಸಿದ್ದಾರೆ. ವಿದೇಶಗಳಿಂದ ಟ್ರಸ್ಟ್&zwnj;ಗೆ ಬಂದಿರುವ ದೇಣಿಗೆ ಹಾಗೂ ಅವುಗಳು ಎಲ್ಲೆಲ್ಲಿಗೆ ವರ್ಗಾವಣೆಯಾಗಿವೆ ಎಂಬ ಬ್ಯಾಂಕ್ ಸ್ಟೇಟ್&zwnj;ಮೆಂಟ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;2012ರ ಸಿರಿಯಾ ಉಗ್ರರ ಜಾಲಕ್ಕೆ ಬಿಗ್ ಟ್ವಿಸ್ಟ್&lt;/h2&gt;&lt;p&gt;ಪ್ರಕರಣದ ಹಿನ್ನೆಲೆಯನ್ನು ಕೆದಕಿದಾಗ, ಈ ಜಾಲವು 2012 ರಿಂದಲೇ ಸಕ್ರಿಯವಾಗಿರುವುದು ಕಂಡುಬಂದಿದೆ. ಬೆಂಗಳೂರಿನಿಂದ ಒಟ್ಟು 6 ಯುವಕರನ್ನು ಆರ್ಥಿಕ ಸಹಾಯ ನೀಡಿ ಸಿರಿಯಾದಲ್ಲಿರುವ ಐಸಿಸ್ ಶಿಬಿರಕ್ಕೆ ಕಳುಹಿಸಿಕೊಡಲಾಗಿತ್ತು. ಈ 6 ಯುವಕರಲ್ಲಿ ಇಬ್ಬರು ಸಿರಿಯಾ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ್ದು, ಉಳಿದ ನಾಲ್ವರು ತೀವ್ರವಾಗಿ ಗಾಯಗೊಂಡು ಅಲ್ಲಿಯೇ ವಾಸವಾಗಿದ್ದರು. ಈ ಸರಣಿ ದೇಶದ್ರೋಹದ ಚಟುವಟಿಕೆಗೆ ಸಂಬಂಧಿಸಿದಂತೆ 2013 ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಎನ್&zwnj;ಐಎ ಅಧಿಕಾರಿಗಳು ಭಾರಿ ತನಿಖೆ ನಡೆಸಿದ್ದರು.&lt;/p&gt;&lt;h2&gt;ನಾಲ್ವರು ಆರೋಪಿಗಳು ಜೈಲಿಗೆ, ಲಂಡನ್-ದುಬೈನಲ್ಲಿ ಆಸ್ತಿ ಪತ್ತೆ&lt;/h2&gt;&lt;p&gt;ಎನ್&zwnj;ಐಎ ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇರ್ಫಾನ್ ನಾಸೀರ್, ಮೊಹಮದ್ ತಾಕೀರ್, ಜುಹೈಬ್ ಮನ್ನ ಮತ್ತು ಅಬ್ದುಲ್ ಖಾದಿರ್ ಎಂಬ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ. ಸದ್ಯ ಈ ನಾಲ್ವರೂ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ಟ್ರಯಲ್ ನಡೆಯುತ್ತಿದೆ.&lt;/p&gt;&lt;p&gt;ಬಂಧಿತ ಆರೋಪಿಗಳ ಮನೆಗಳು ಮತ್ತು ಟ್ರಸ್ಟ್ ಕಚೇರಿಗಳ ಮೇಲೆ ಇಡಿ ಈಗ ದಾಳಿ ಮುಂದುವರಿಸಿದೆ. ಈ ಟ್ರಸ್ಟ್&zwnj;ಗಳು ಮತ್ತು ಆರೋಪಿಗಳು ಯುಎಇ (UAE), ಲಂಡನ್ ಮತ್ತು ದುಬೈ ಸೇರಿದಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳನ್ನು ಹೊಂದಿರುವುದನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/ed-cracks-down-on-alleged-isis-funding-network-raids-8-locations-across-bengaluru-gdp/articleshow-byxd4og"/>
        </item>
        <item>
            <title><![CDATA[ಮಹಾರಾಷ್ಟ್ರವನ್ನು ಹಿಂದಿಕ್ಕಿ  ಕರ್ನಾಟಕ ನಂ.1: ಎಫ್‌ಡಿಐಹೂಡಿಕೆ ಪ್ರಮಾಣ ಬರೋಬ್ಬರಿ 13 ಬಿಲಿಯನ್‌ ಡಾಲರ್‌ ಜಿಗಿತ!]]></title>
            <link>https://kannada.asianetnews.com/business/karnataka-dethrones-maharashtra-in-fdi-race-inflows-double-to-13-billion-doller-driven-by-tech-and-gccs-gdp/articleshow-f8m6lbi</link>
            <guid isPermaLink="true">https://kannada.asianetnews.com/business/karnataka-dethrones-maharashtra-in-fdi-race-inflows-double-to-13-billion-doller-driven-by-tech-and-gccs-gdp/articleshow-f8m6lbi</guid>
            <pubDate>Thu, 23 Jul 2026 15:15:32 +0530</pubDate>
            <description><![CDATA[ವಿದೇಶಿ ನೇರ ಹೂಡಿಕೆ (FDI) ಆಕರ್ಷಣೆಯಲ್ಲಿ ಕರ್ನಾಟಕವು ಮಹಾರಾಷ್ಟ್ರವನ್ನು ಹಿಂದಿಕ್ಕಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯವು ಸುಮಾರು $13 ಬಿಲಿಯನ್ ಬಂಡವಾಳವನ್ನು ಸೆಳೆದಿದ್ದು, ತಂತ್ರಜ್ಞಾನ ಮತ್ತು ಸೇವಾ ವಲಯಗಳು ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಮೂಲಕ ಕರ್ನಾಟಕವು ಜಾಗತಿಕ ಹೂಡಿಕೆದಾರರ ಪ್ರಮುಖ ತಾಣವಾಗಿ ಹೊರಹೊಮ್ಮಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hnvxd5vt4d7v84mxvct4d8ym,imgname-s-1707112568698.JPG" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ನವದೆಹಲಿ: &lt;/strong&gt;ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿಯಾಗಿರುವ ಕರ್ನಾಟಕವು ವಿದೇಶಿ ನೇರ ಹೂಡಿಕೆಯನ್ನು (FDI) ಆಕರ್ಷಿಸುವಲ್ಲಿ ದೇಶದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ತಂತ್ರಜ್ಞಾನ ಹೂಡಿಕೆದಾರರು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಬೆಂಗಳೂರಿನತ್ತ ಮುಖ ಮಾಡಿರುವುದರಿಂದ ಕಳೆದ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಹರಿದುಬಂದ ಎಫ್&zwnj;ಡಿಐ ಪ್ರಮಾಣವು ಸರಿಸುಮಾರು ದ್ವಿಗುಣಗೊಂಡಿದ್ದು, ಬರೋಬ್ಬರಿ $13 ಬಿಲಿಯನ್ (ಸುಮಾರು ₹1.25 ಲಕ್ಷ ಕೋಟಿ) ತಲುಪಿದೆ.&lt;/p&gt;&lt;p&gt;ಕೇಂದ್ರ ಸರ್ಕಾರವು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿರುವ ಇತ್ತೀಚಿನ ಅಧಿಕೃತ ದತ್ತಾಂಶಗಳು ಈ ಮಹತ್ವದ ಬೆಳವಣಿಗೆಯನ್ನು ಬಹಿರಂಗಪಡಿಸಿವೆ. ವಿಶೇಷವೆಂದರೆ, ಕಳೆದ ಎರಡು ವರ್ಷಗಳಿಂದ ಎಫ್&zwnj;ಡಿಐ ಹರಿವಿನಲ್ಲಿ ಮುಂಚೂಣಿಯಲ್ಲಿದ್ದ ಪ್ರಮುಖ ಕೈಗಾರಿಕಾ ತಾಣ ಮಹಾರಾಷ್ಟ್ರವನ್ನು ಕರ್ನಾಟಕವು ಈ ಬಾರಿ ಹಿಂದಿಕ್ಕಿದೆ. ಮಹಾರಾಷ್ಟ್ರದಲ್ಲಿ ಈ ಅವಧಿಯಲ್ಲಿ ಒಳಹರಿವು ಶೇಕಡಾ 6 ರಷ್ಟು ಕುಸಿತ ಕಂಡಿದೆ.&lt;/p&gt;&lt;h2&gt;ಹೂಡಿಕೆಯಲ್ಲಿ ರಾಜ್ಯಗಳ ಏರಿಳಿತ&lt;/h2&gt;&lt;p&gt;ಕರ್ನಾಟಕಕ್ಕೆ ಶೇ.95 ರಷ್ಟು ವೃದ್ಧಿ 2025ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಸುಮಾರು ₹62,000 ಕೋಟಿಗಳಷ್ಟು ವಿದೇಶಿ ಹೂಡಿಕೆಯನ್ನು ಆಕರ್ಷಿಸಿತ್ತು. ಆದರೆ, 2026ನೇ ಹಣಕಾಸು ವರ್ಷದ ವೇಳೆಗೆ ಈ ಪ್ರಮಾಣವು ಬರೋಬ್ಬರಿ ಶೇಕಡಾ 95 ರಷ್ಟು ಜಿಗಿತ ಕಂಡು ದಾಖಲೆಯ ಮಟ್ಟವನ್ನು ತಲುಪಿದೆ.&lt;/p&gt;&lt;p&gt;ದೇಶದ ಒಟ್ಟಾರೆ ಈಕ್ವಿಟಿ ಒಳಹರಿವು ಕೂಡ ಕಳೆದ ವರ್ಷ ಶೇಕಡಾ 17.6 ರಷ್ಟು ಚೇತರಿಕೆ ಕಂಡು $58 ಬಿಲಿಯನ್&zwnj;ಗೆ ತಲುಪಿದೆ. ಕರ್ನಾಟಕದ ಜೊತೆಗೆ ಹರ್ಯಾಣ, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಆಂಧ್ರಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವು ಗಣನೀಯವಾಗಿ ಹೆಚ್ಚಾಗಿದೆ. ಆದರೆ, ನೆರೆಯ ತೆಲಂಗಾಣದಲ್ಲಿ ಮಾತ್ರ ಎಫ್&zwnj;ಡಿಐ ಹರಿವು ಶೇಕಡಾ 25 ರಷ್ಟು ಭಾರಿ ಕುಸಿತ ಕಂಡಿದೆ. ಇನ್ನು ಗುಜರಾತ್ ರಾಜ್ಯವು ಸುಮಾರು $5.7 ಬಿಲಿಯನ್ (ಅಂದಾಜು ₹55,000 ಕೋಟಿ) ಹೂಡಿಕೆಯೊಂದಿಗೆ ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.&lt;/p&gt;&lt;p&gt;ತಂತ್ರಜ್ಞಾನ ಮತ್ತು ಸೇವಾ ವಲಯಕ್ಕೆ ಒಲವು ರಾಜ್ಯ ಹಾಗೂ ದೇಶಕ್ಕೆ ಹರಿದು ಬಂದಿರುವ ವಿದೇಶಿ ಹೂಡಿಕೆಯಲ್ಲಿ ಸಿಂಹಪಾಲು ತಂತ್ರಜ್ಞಾನ ಆಧಾರಿತ ಕಂಪನಿಗಳಿಗೆ ಸಂದಿದೆ. ವಿಶೇಷವಾಗಿ ಡೇಟಾ ಸೆಂಟರ್&zwnj;ಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs) ಹಾಗೂ ಅಮೆಜಾನ್ ಮತ್ತು ಫ್ಲಿಪ್&zwnj;ಕಾರ್ಟ್&zwnj;ನಂತಹ ಇ-ಕಾಮರ್ಸ್ ದೈತ್ಯ ಸಂಸ್ಥೆಗಳು ಭಾರಿ ಪ್ರಮಾಣದ ಬಂಡವಾಳವನ್ನು ಸೆಳೆದಿವೆ.&lt;/p&gt;&lt;h2&gt;&lt;strong&gt;ಕ್ಷೇತ್ರವಾರು ಹೂಡಿಕೆಯ ಪ್ರಮುಖ ವಿವರಗಳು ಇಲ್ಲಿವೆ:&lt;/strong&gt;&lt;/h2&gt;&lt;p&gt;ಕಂಪ್ಯೂಟರ್ ಸಾಫ್ಟ್&zwnj;ವೇರ್ ಮತ್ತು ಹಾರ್ಡ್&zwnj;ವೇರ್: ಈ ವಲಯವು ದೇಶಾದ್ಯಂತ ಅತ್ಯಧಿಕ ಅಂದರೆ $13.9 ಬಿಲಿಯನ್ (ಸುಮಾರು ₹1.34 ಲಕ್ಷ ಕೋಟಿ) ಹೂಡಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;p&gt;&lt;strong&gt;ಸೇವಾ ವಲಯ (Service Sector): &lt;/strong&gt;ಬ್ಯಾಂಕಿಂಗ್, ಹಣಕಾಸು ಮತ್ತು ವಿಮೆ ಒಳಗೊಂಡ ಈ ಕ್ಷೇತ್ರವು $10 ಬಿಲಿಯನ್ (ಸುಮಾರು ₹96,000 ಕೋಟಿ) ಹೂಡಿಕೆಯನ್ನು ಆಕರ್ಷಿಸಿದೆ. ಭಾರತಕ್ಕೆ ಬಂದ ಒಟ್ಟು ಎಫ್&zwnj;ಡಿಐನ ಸರಿಸುಮಾರು ಶೇಕಡಾ 40 ರಷ್ಟು ಭಾಗ ಈ ವಲಯಕ್ಕೆ ಸೇರಿದ್ದಾಗಿದೆ.&lt;/p&gt;&lt;p&gt;ಆಹಾರ ಸಂಸ್ಕರಣೆಯಲ್ಲಿ 6 ಪಟ್ಟು ಜಿಗಿತ; ವಾಯುಯಾನ ವಲಯದಲ್ಲಿ ಹಿನ್ನಡೆ ಉಳಿದಂತೆ ಇತರ ಉತ್ಪಾದನಾ ಮತ್ತು ಪ್ರಮುಖ ಕ್ಷೇತ್ರಗಳೂ ಕೂಡ ವಿದೇಶಿ ಹೂಡಿಕೆದಾರರನ್ನು ಸೆಳೆಯುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಆದಾಗ್ಯೂ, ಕೆಲವು ನಿರ್ದಿಷ್ಟ ವಲಯಗಳು ಹಿನ್ನಡೆಯನ್ನು ಅನುಭವಿಸಿವೆ.&lt;/p&gt;&lt;p&gt;&lt;strong&gt;ಆಹಾರ ಸಂಸ್ಕರಣೆ ಮತ್ತು ಇತರ ಉದ್ದಿಮೆಗಳು:&lt;/strong&gt; ಆಹಾರ ಸಂಸ್ಕರಣಾ ಉದ್ಯಮದಲ್ಲಿ ವಿದೇಶಿ ಹೂಡಿಕೆಯು ಅಭೂತಪೂರ್ವ ಬೆಳವಣಿಗೆ ಕಂಡಿದ್ದು, ಸುಮಾರು ಆರು ಪಟ್ಟು ಹೆಚ್ಚಳದೊಂದಿಗೆ $3 ಬಿಲಿಯನ್ (ಸುಮಾರು ₹28,000 ಕೋಟಿ) ತಲುಪಿದೆ.&lt;/p&gt;&lt;p&gt;&lt;strong&gt;ಆಟೋಮೊಬೈಲ್ ಮತ್ತು ಫಾರ್ಮಾ: &lt;/strong&gt;ವಾಹನ ತಯಾರಿಕಾ ವಲಯವು $2.5 ಬಿಲಿಯನ್ (₹24,000 ಕೋಟಿ), ಔಷಧ ಕ್ಷೇತ್ರವು $1.9 ಬಿಲಿಯನ್ (₹18,000 ಕೋಟಿ) ಹಾಗೂ ಶಿಕ್ಷಣ ಕ್ಷೇತ್ರವು $1.3 ಬಿಲಿಯನ್ (₹12,000 ಕೋಟಿ) ಹೂಡಿಕೆ ಆಕರ್ಷಿಸಿ ಬಲವಾದ ಬೆಳವಣಿಗೆ ದಾಖಲಿಸಿವೆ.&lt;/p&gt;&lt;p&gt;&lt;strong&gt;ಕುಸಿತ ಕಂಡ ಕ್ಷೇತ್ರಗಳು: &lt;/strong&gt;ತಾಂತ್ರಿಕ ಬೆಳವಣಿಗೆಗಳ ನಡುವೆಯೂ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಎಫ್&zwnj;ಡಿಐ ಹರಿವು ಸುಮಾರು ಅರ್ಧದಷ್ಟು ಕುಸಿದು $1.1 ಬಿಲಿಯನ್ (₹10,000 ಕೋಟಿ) ಗೆ ತಲುಪಿದೆ. ಇದಕ್ಕಿಂತಲೂ ಹೆಚ್ಚಾಗಿ ವಾಯು ಸಾರಿಗೆ (Aviation) ವಲಯವು ಶೇಕಡಾ 70 ರಷ್ಟು ಭಾರಿ ಹಿನ್ನಡೆ ಅನುಭವಿಸಿದ್ದು, ಹೂಡಿಕೆಯು ಕೇವಲ $383 ಮಿಲಿಯನ್ (ಸುಮಾರು ₹3,600 ಕೋಟಿ) ಗೆ ಇಳಿಕೆಯಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಕರ್ನಾಟಕವು ತನ್ನ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಬಲದಿಂದಾಗಿ ಜಾಗತಿಕ ಹೂಡಿಕೆದಾರರ ಪಾಲಿಗೆ ದೇಶದ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/business/karnataka-dethrones-maharashtra-in-fdi-race-inflows-double-to-13-billion-doller-driven-by-tech-and-gccs-gdp/articleshow-f8m6lbi"/>
        </item>
        <item>
            <title><![CDATA[ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಡೀಪ್‌ಫೇಕ್ ವಿಡಿಯೊ ಬಳಸಿ ಬೆಂಗಳೂರಿನ ಹಿರಿಯ ನಾಗರಿಕನಿಗೆ ₹6.88 ಲಕ್ಷ ದೋಖಾ!]]></title>
            <link>https://kannada.asianetnews.com/karnataka-districts/bengaluru-cyber-fraud-senior-citizen-conned-of-rs-6-88-lakh-by-finance-minister-nirmala-sitharaman-deepfake-video-gdp/articleshow-gwyguf9</link>
            <guid isPermaLink="true">https://kannada.asianetnews.com/karnataka-districts/bengaluru-cyber-fraud-senior-citizen-conned-of-rs-6-88-lakh-by-finance-minister-nirmala-sitharaman-deepfake-video-gdp/articleshow-gwyguf9</guid>
            <pubDate>Tue, 21 Jul 2026 13:28:35 +0530</pubDate>
            <description><![CDATA[ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಡೀಪ್&zwnj;ಫೇಕ್ ವಿಡಿಯೋ ಬಳಸಿ ಸೈಬರ್ ವಂಚಕರು ಬೆಂಗಳೂರಿನ ಹಿರಿಯ ನಾಗರಿಕರೊಬ್ಬರಿಗೆ ₹6.88 ಲಕ್ಷ ವಂಚಿಸಿದ್ದಾರೆ. ಫೇಸ್&zwnj;ಬುಕ್&zwnj;ನಲ್ಲಿ ಕಂಡ ನಕಲಿ ಹೂಡಿಕೆ ಯೋಜನೆಯನ್ನು ನಂಬಿ ಹಣ ಕಳೆದುಕೊಂಡ ಸಂತ್ರಸ್ತರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgckwvwv3f8zamnsb67kejy8,imgname-nirmala-sitharaman--2--1769950048155.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ದುರ್ಬಳಕೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಮತ್ತೊಂದು ಜೀವಂತ ಸಾಕ್ಷಿ ಎಂಬಂತೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮುಖ ಮತ್ತು ಧ್ವನಿಯನ್ನು ಹೊಂದಿರುವ &lsquo;ಡೀಪ್&zwnj;ಫೇಕ್&rsquo; (Deepfake) ವಿಡಿಯೊ ಬಳಸಿದ ಸೈಬರ್ ಕಳ್ಳರು, ಬೆಂಗಳೂರಿನ ಹಿರಿಯ ನಾಗರಿಕರೊಬ್ಬರಿಗೆ ಬರೋಬ್ಬರಿ 6.88 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. ಈ ಕುರಿತು ನಗರದ ನಾರಾಯಣಪುರ ನಿವಾಸಿಯಾದ 66 ವರ್ಷದ ಸಂತ್ರಸ್ತ ವೃದ್ಧರು ನೀಡಿದ ದೂರಿನ ಮೇರೆಗೆ, ಬೆಂಗಳೂರಿನ ಈಶಾನ್ಯ ವಿಭಾಗದ ಸೈಬರ್ ಕ್ರೈಂ (CEN) ಠಾಣೆ ಪೊಲೀಸರು ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;h2&gt;ಫೇಸ್&zwnj;ಬುಕ್&zwnj;ನಲ್ಲಿ ಹರಿದಾಡಿದ ನಕಲಿ ಹೂಡಿಕೆ ವಿಡಿಯೊ&lt;/h2&gt;&lt;p&gt;ಕೆಲ ತಿಂಗಳ ಹಿಂದೆ ಸೈಬರ್ ಖದೀಮರು ಫೇಸ್&zwnj;ಬುಕ್&zwnj;ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಡೀಪ್&zwnj;ಫೇಕ್ ವಿಡಿಯೊ ಒಂದನ್ನು ಹರಿಬಿಟ್ಟಿದ್ದರು. ಅದರಲ್ಲಿ ಕೇಂದ್ರ ಸರ್ಕಾರ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜಂಟಿಯಾಗಿ ಅತ್ಯಾಕರ್ಷಕ ಹೂಡಿಕೆ ಯೋಜನೆಯೊಂದನ್ನು ಆರಂಭಿಸಿದ್ದು, ಸಾರ್ವಜನಿಕರು ಇದರಲ್ಲಿ ಹೂಡಿಕೆ ಮಾಡಿದರೆ ಅತಿ ಕಡಿಮೆ ಅವಧಿಯಲ್ಲಿ ಭಾರಿ ಲಾಭ ಗಳಿಸಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ವತಃ ಮಾತನಾಡಿ ಘೋಷಿಸುತ್ತಿರುವಂತೆ ಎಐ ತಂತ್ರಜ್ಞಾನದ ಮೂಲಕ ನಕಲಿ ದೃಶ್ಯಾವಳಿಗಳನ್ನು ಸೃಷ್ಟಿಸಲಾಗಿತ್ತು.&lt;/p&gt;&lt;h2&gt;ಬ್ರಿಟನ್ ನಂಬರ್&zwnj;ನಿಂದ ವಾಟ್ಸ್&zwnj;ಆಪ್ ಕರೆ, ಕೆವೈಸಿ ಲಾಗಿನ್!&lt;/h2&gt;&lt;p&gt;ಅಧಿಕೃತ ಸರ್ಕಾರಿ ಯೋಜನೆ ಇರಬೇಕೆಂದು ನಂಬಿದ ದೂರುದಾರರು, ವಿಡಿಯೊದ ಕೆಳಗಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ಆ ಲಿಂಕ್ ಓಪನ್ ಆದ ಬೆನ್ನಲ್ಲೇ ತಮ್ಮ ಕೆವೈಸಿ (KYC) ಸೇರಿದಂತೆ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು ಅಲ್ಲಿ ದಾಖಲಿಸಿದ್ದರು. ಡೇಟಾ ಕದ್ದ ತಕ್ಷಣವೇ ವಂಚಕರು ಸಂತ್ರಸ್ತ ವೃದ್ಧರನ್ನು ಸಂಪರ್ಕಿಸಿದ್ದಾರೆ. ಬ್ರಿಟನ್ ದೇಶದ ಕೋಡ್ ಹೊಂದಿರುವ (+44) ವಾಟ್ಸ್&zwnj;ಆಪ್ ಸಂಖ್ಯೆಯಿಂದ ಕರೆ ಮಾಡಿದ ಸೈಬರ್ ಖದೀಮರು, ಮೊದಲು ₹22,000 ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದಾರೆ. ಆ ನಂತರ, &quot;ನೀವು 6 ಲಕ್ಷ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದರೆ, ಕೇವಲ 10 ದಿನಗಳಲ್ಲಿ ಬರೋಬ್ಬರಿ 15 ಲಕ್ಷ ರೂಪಾಯಿ ರಿಟರ್ನ್ಸ್ ಸಿಗಲಿದೆ&quot; ಎಂದು ಸುಳ್ಳು ಹೇಳಿ ಸಂಪೂರ್ಣವಾಗಿ ಬ್ರೈನ್ ವಾಶ್ ಮಾಡಿದ್ದಾರೆ.&lt;/p&gt;&lt;h2&gt;₹15 ಲಕ್ಷದ ಆಸೆಗೆ ಬಿದ್ದು ₹6.88 ಲಕ್ಷ ಕಳೆದುಕೊಂಡ ವೃದ್ಧ&lt;/h2&gt;&lt;p&gt;ಕೇಂದ್ರ ಹಣಕಾಸು ಸಚಿವರೇ ಹೇಳಿರುವುದರಿಂದ ಇದು ನೂರಕ್ಕೆ ನೂರು ಸುರಕ್ಷಿತ ಎಂದು ಭಾವಿಸಿದ ನಾರಾಯಣಪುರ ನಿವಾಸಿಯು, ಕಳೆದ ಮಾರ್ಚ್ ತಿಂಗಳಿನಿಂದ ಜೂನ್ ಅವಧಿಯವರೆಗೆ ಹಂತ-ಹಂತವಾಗಿ ಒಟ್ಟು 6.88 ಲಕ್ಷ ರೂಪಾಯಿ ಹಣವನ್ನು ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಆದರೆ ತಿಂಗಳುಗಳು ಉರುಳಿದರೂ ಯಾವುದೇ ಲಾಭಾಂಶವಾಗಲಿ ಅಥವಾ ಅಸಲು ಹಣವಾಗಲಿ ವಾಪಸ್ ಬರಲಿಲ್ಲ. ಇದರಿಂದ ಅನುಮಾನಗೊಂಡು ತಮಗೆ ಪರಿಚಯವಿರುವವರ ಬಳಿ ವಿಚಾರಿಸಿದಾಗ, ತಾವು ಭೀಕರ ಸೈಬರ್ ವಂಚನೆ ಜಾಲಕ್ಕೆ ಸಿಲುಕಿರುವುದು ವೃದ್ಧರಿಗೆ ಮನವರಿಕೆಯಾಗಿದೆ. ಹೀಗಾಗಿ ತಡವಾಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.&lt;/p&gt;&lt;h2&gt;ಗಣ್ಯರ ಮುಖಬಳಕೆಯ ಜಾಲ: ಸಾರ್ವಜನಿಕರಿಗೆ ಪೊಲೀಸ್ ಎಚ್ಚರಿಕೆ&lt;/h2&gt;&lt;p&gt;ಈ ಪ್ರಕರಣದ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಸೈಬರ್ ಅಪರಾಧಿಗಳು ಈಗ ರಾಜಕಾರಣಿಗಳು, ಆರ್&zwnj;ಬಿಐ ಗವರ್ನರ್, ಚಲನಚಿತ್ರ ನಟರು ಹಾಗೂ ಗಣ್ಯರ ಮುಖ ಮತ್ತು ಧ್ವನಿಯನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ನಕಲಿಸಿ ಡೀಪ್&zwnj;ಫೇಕ್ ವಿಡಿಯೊಗಳನ್ನು ಸೃಷ್ಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೊಗಳು ಕಂಡರೆ ನಾಗರಿಕರು ತಕ್ಷಣ ನಂಬಬಾರದು. ಆನ್&zwnj;ಲೈನ್&zwnj;ನಲ್ಲಿ ಹಣ ಹೂಡಿಕೆಗೆ ಪ್ರೇರೇಪಿಸುವ ಜಾಹೀರಾತುಗಳ ಅಧಿಕೃತತೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಸೆಬಿಯಿಂದ (SEBI) ಮಾನ್ಯತೆ ಪಡೆದ ಅಧಿಕೃತ ಷೇರು ಮಾರುಕಟ್ಟೆ ಕಂಪನಿಗಳ ಮೂಲಕ ಮಾತ್ರವೇ ಹೂಡಿಕೆ ಮಾಡಬೇಕು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-cyber-fraud-senior-citizen-conned-of-rs-6-88-lakh-by-finance-minister-nirmala-sitharaman-deepfake-video-gdp/articleshow-gwyguf9"/>
        </item>
        <item>
            <title><![CDATA[ಬೆಂಗಳೂರಲ್ಲಿ 25 ಲಕ್ಷದ ಗಡಿ ದಾಟಿದ ಖಾಸಗಿ ಕಾರುಗಳು; ವಿಶ್ವದ 2ನೇ ಅತಿ ದೊಡ್ಡ ಸಂಚಾರ ದಟ್ಟಣೆ ನಗರದ ಕಹಿ ವಾಸ್ತವಳು!]]></title>
            <link>https://kannada.asianetnews.com/karnataka-districts/bengaluru-private-car-registration-hit-25-lakh-amid-mounting-traffic-crisis-gdp/articleshow-hcsbi0s</link>
            <guid isPermaLink="true">https://kannada.asianetnews.com/karnataka-districts/bengaluru-private-car-registration-hit-25-lakh-amid-mounting-traffic-crisis-gdp/articleshow-hcsbi0s</guid>
            <pubDate>Mon, 20 Jul 2026 18:57:56 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಖಾಸಗಿ ಕಾರುಗಳ ಸಂಖ್ಯೆ ಐತಿಹಾಸಿಕವಾಗಿ 25 ಲಕ್ಷದ ಗಡಿ ದಾಟಿದ್ದು, ನಗರದ ಒಟ್ಟು ವಾಹನಗಳ ಸಂಖ್ಯೆ 1.28 ಕೋಟಿಗೆ ತಲುಪಿದೆ. ಸಾರ್ವಜನಿಕ ಸಾರಿಗೆಯ ಕೊರತೆ, &amp;nbsp;ಮೆಟ್ರೋ ವಿಳಂಬ ಮತ್ತು ಬಿಎಂಟಿಸಿ ಬಸ್&zwnj;ಗಳ ಸಂಖ್ಯೆ ಇಳಿಕೆಯು ಈ ಅಪಾಯಕಾರಿ ಪ್ರವೃತ್ತಿಗೆ ಮುಖ್ಯ ಕಾರಣವೆಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಸುರಂಗ ರಸ್ತೆಗಳ ಬದಲು ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವುದೇ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzk0ed7ed6rp6s441ja1ec8,imgname-traffic-rules--2--1779176585639.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೈಯಕ್ತಿಕ ವಾಹನಗಳ ಮೇಲಿನ ಅವಲಂಬನೆ ಅಭೂತಪೂರ್ವ ಮಟ್ಟಕ್ಕೆ ತಲುಪಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ನೋಂದಣಿಯಾದ ಖಾಸಗಿ ಕಾರುಗಳ ಒಟ್ಟು ಸಂಖ್ಯೆ 25 ಲಕ್ಷದ ಗಡಿಯನ್ನು ದಾಟಿದೆ. ಇದು ಜಾಗತಿಕವಾಗಿ ಎರಡನೇ ಅತ್ಯಂತ ಜನದಟ್ಟಣೆಯ ನಗರವಾಗಿರುವ ಬೆಂಗಳೂರಿನ ನಿವಾಸಿಗಳು ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ವೈಯಕ್ತಿಕ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಜನನಿಬಿಡ ಪ್ರದೇಶಗಳಿಗೆ ಮೆಟ್ರೋ ಜಾಲವನ್ನು ವಿಸ್ತರಿಸುವಲ್ಲಿನ ವಿಳಂಬ ಮತ್ತು ಸಾರ್ವಜನಿಕ ಬಸ್ ಸೇವೆಗಳ ಅಸಮರ್ಪಕತೆಯೇ ಈ ಅಪಾಯಕಾರಿ ಪ್ರವೃತ್ತಿಗೆ ಮುಖ್ಯ ಕಾರಣ ಎಂದು ನಗರ ಚಲನಶೀಲತೆ ತಜ್ಞರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಸಾರಿಗೆ ಇಲಾಖೆಯ ಇತ್ತೀಚಿನ ಅಧಿಕೃತ ಮಾಹಿತಿ&lt;/h2&gt;&lt;p&gt;ಜೂನ್ 30, 2026 ರ ಹೊತ್ತಿಗೆ ಕರ್ನಾಟಕದ ರಾಜಧಾನಿಯಲ್ಲಿ ಒಟ್ಟು ಖಾಸಗಿ ಕಾರುಗಳ ಸಂಖ್ಯೆ 25.2 ಲಕ್ಷಕ್ಕೆ ಏರಿಕೆಯಾಗಿದೆ. ಜೂನ್ ತಿಂಗಳೊಂದರಲ್ಲೇ 13,519 ಹೊಸ ಕಾರುಗಳು ರಸ್ತೆಗಿಳಿದಿದ್ದು, ಇದರ ಜೊತೆಗೆ ಸುಮಾರು ಮೂರು ಲಕ್ಷ ಹಳದಿ ಬೋರ್ಡ್ ಟ್ಯಾಕ್ಸಿಗಳು ಕೂಡ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಸುಮಾರು ಐದು ಲಕ್ಷ ಖಾಸಗಿ ಕಾರುಗಳು ಅಂದರೆ ಸರಾಸರಿ ಪ್ರತಿ ವರ್ಷ ಒಂದು ಲಕ್ಷ ಹೊಸ ಕಾರುಗಳು ಸೇರ್ಪಡೆಯಾಗಿವೆ. ಜೂನ್ ತಿಂಗಳಿನಲ್ಲಿ ನಗರದಲ್ಲಿ ಒಟ್ಟು 78,084 ವಾಹನಗಳು ನೋಂದಣಿಯಾಗಿದ್ದು, ಇದು ಜಿಎಸ್&zwnj;ಟಿ ತರ್ಕಬದ್ಧಗೊಳಿಸುವಿಕೆಯಿಂದಾಗಿ ಅಕ್ಟೋಬರ್ 2025 ರಲ್ಲಿ ನಡೆದ 86,014 ನೋಂದಣಿ ಹಾಗೂ ಜನವರಿ 2026 ರ 78,461 ನೋಂದಣಿಗಳ ನಂತರ ಒಂದು ತಿಂಗಳಲ್ಲಿ ದಾಖಲಾದ ಮೂರನೇ ಅತಿ ಹೆಚ್ಚು ವಾಹನ ನೋಂದಣಿಯಾಗಿದೆ.&lt;/p&gt;&lt;h2&gt;ಈಗ 1.28 ಕೋಟಿ ತಲುಪಿದ ವಾಹನಗಳ ಸಂಖ್ಯೆ&lt;/h2&gt;&lt;p&gt;ನಗರದಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹದಗೆಡುತ್ತಿರುವ ಬೆನ್ನಲ್ಲೇ ಈ ವಾಹನಗಳ ಸಂಖ್ಯೆಯೂ ಬೆಳೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಜಾಗತಿಕ ಟಾಮ್ ಟಾಮ್ ಸಂಚಾರ ಸೂಚ್ಯಂಕವು ಬೆಂಗಳೂರನ್ನು ಮೆಕ್ಸಿಕೋ ನಗರದ ನಂತರ ಮತ್ತು ಡಬ್ಲಿನ್&zwnj;ಗಿಂತ ಮುಂಚಿತವಾಗಿ ವಿಶ್ವದ ಎರಡನೇ ಅತ್ಯಂತ ಜನದಟ್ಟಣೆಯ ನಗರವೆಂದು ಗುರುತಿಸಿದೆ. ಬೆಂಗಳೂರಿನಲ್ಲಿ ಕೇವಲ 10 ಕಿಲೋಮೀಟರ್ ಪ್ರಯಾಣಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತಿದ್ದು, 2025 ರ ಗರಿಷ್ಠ ಅವಧಿಯಲ್ಲಿ ಚಾಲಕರು ಸರಾಸರಿ 168 ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲೇ ಸಮಯ ಕಳೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆ ವಾಹನಗಳ ಸಂಖ್ಯೆಯೂ ಬೆಳೆಯುತ್ತಲೇ ಇದ್ದು, ಈಗ 1.28 ಕೋಟಿಯನ್ನು ತಲುಪಿದೆ. ನಗರದಲ್ಲಿ ದ್ವಿಚಕ್ರ ವಾಹನಗಳು ಪ್ರಮುಖ ಸಾರಿಗೆ ವಿಧಾನವಾಗಿ ಉಳಿದಿದ್ದು, ನೋಂದಾಯಿಸಲಾದ ಪ್ರತಿ 10 ವಾಹನಗಳಲ್ಲಿ ಸುಮಾರು ಏಳು ವಾಹನಗಳು ಅಂದರೆ ಒಟ್ಟು 87 ಲಕ್ಷ ದ್ವಿಚಕ್ರ ವಾಹನಗಳು ಇಲ್ಲಿ ಕಂಡುಬರುತ್ತವೆ. ನಗರದ ಕಾರು ಮತ್ತು ದ್ವಿಚಕ್ರ ವಾಹನಗಳ ಈ ಸಂಖ್ಯೆಯು ಇಡೀ ದೇಶದಲ್ಲೇ ಅತಿ ಹೆಚ್ಚಾಗಿದೆ.&lt;/p&gt;&lt;h2&gt;ನವದೆಹಲಿಯಲ್ಲಿ 1.5 ಕೋಟಿಗೂ ಹೆಚ್ಚು ನೋಂದಾಯಿತ ವಾಹನ&lt;/h2&gt;&lt;p&gt;ಇದಕ್ಕೆ ಹೋಲಿಸಿದರೆ, ನವದೆಹಲಿಯು 1.5 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳನ್ನು ಹೊಂದಿದ್ದರೂ ಅಲ್ಲಿ ಹೆಚ್ಚು ವಿಸ್ತಾರವಾದ ಮೆಟ್ರೋ ಜಾಲವಿರುವುದರಿಂದ ಸಾರಿಗೆ ವ್ಯವಸ್ಥೆ ಸಮರ್ಥವಾಗಿದೆ. ದೆಹಲಿಯು 2025-26ರಲ್ಲಿ ಸುಮಾರು 60 ಲಕ್ಷ ದ್ವಿಚಕ್ರ ವಾಹನಗಳು ಮತ್ತು 22 ಲಕ್ಷ ಕಾರುಗಳನ್ನು ಹೊಂದಿತ್ತು. ಮತ್ತೊಂದೆಡೆ, ಮುಂಬೈನಲ್ಲಿ ಕೇವಲ 15 ಲಕ್ಷ ಖಾಸಗಿ ಕಾರುಗಳಿದ್ದು, ಅಲ್ಲಿನ ಪ್ರಯಾಣಿಕರಲ್ಲಿ ಗಮನಾರ್ಹ ಪಾಲು ನಗರದ ಉಪನಗರ ರೈಲ್ವೆ ಜಾಲವನ್ನು ಅವಲಂಬಿಸಿದೆ. ಆದರೆ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಯು ಹಂತ 3 ಮತ್ತು ಹಂತ 3A ಜೋಡಣೆಯಲ್ಲಿ ಡಬಲ್ ಡೆಕ್ಕರ್ ಮತ್ತು ಸುರಂಗ ಕಾರಿಡಾರ್&zwnj;ಗಳನ್ನು ನಿರ್ಮಿಸುವ ನಿರ್ಧಾರ ಹಾಗೂ ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ ಪದೇ ಪದೇ ಗಡುವನ್ನು ತಪ್ಪಿಸಿಕೊಂಡಿದೆ. ಇದಲ್ಲದೆ, ಕಳೆದ ನಾಲ್ಕುವರೆ ವರ್ಷಗಳಲ್ಲಿ ಯಾವುದೇ ಹೊಸ ಮೆಟ್ರೋ ಮಾರ್ಗದ ನಿರ್ಮಾಣ ಕಾರ್ಯವೂ ಸಹ ಪ್ರಾರಂಭವಾಗಿಲ್ಲ.&lt;/p&gt;&lt;h2&gt;ನಾಲ್ಕು ವರ್ಷಗಳಲ್ಲಿ ಬಿಎಂಟಿಸಿ ಬಸ್&zwnj;ಗಳ ಸಂಖ್ಯೆ ಗಣನೀಯ ಕಡಿಮೆ&lt;/h2&gt;&lt;p&gt;ಕುಗ್ಗುತ್ತಿರುವ ಸಾರ್ವಜನಿಕ ಸಾರಿಗೆ ಜಾಲವೇ ಹೆಚ್ಚಿನ ಜನರನ್ನು ಖಾಸಗಿ ವಾಹನಗಳತ್ತ ತಳ್ಳುತ್ತಿದೆ ಎಂದು ನಗರ ಚಲನಶೀಲತೆ ತಜ್ಞ ಸತ್ಯ ಅರಿಕುತರಂ ಹೇಳಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಬಿಎಂಟಿಸಿ ಬಸ್&zwnj;ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಸ್ವಾಭಾವಿಕವಾಗಿ ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇಂದು ನಾವು 10 ಸ್ಥಳಗಳಲ್ಲಿ ಗರಿಷ್ಠ ದಟ್ಟಣೆಯನ್ನು ಎದುರಿಸುತ್ತಿದ್ದರೆ, ಸಾರ್ವಜನಿಕ ಸಾರಿಗೆಯ ಕ್ಷೀಣತೆಯಿಂದಾಗಿ ಅದು ಅಂತಿಮವಾಗಿ 20 ಅಥವಾ ಅದಕ್ಕಿಂತ ಹೆಚ್ಚು ಸ್ಥಳಗಳಿಗೆ ಹರಡುತ್ತದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಚಾರ ದಟ್ಟಣೆಯನ್ನು ನಿವಾರಿಸಲು ಸುರಂಗ ರಸ್ತೆಗಳು ಸೇರಿದಂತೆ 1.5 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಕಾಮಗಾರಿಗಳನ್ನು ಘೋಷಿಸಿದ್ದಾರೆ. ಆದರೆ, ಸುರಂಗಗಳು ಮತ್ತು ಎತ್ತರದ ರಸ್ತೆಗಳಲ್ಲಿ ಪ್ರಸ್ತಾವಿತ 1.5 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಾರ್ವಜನಿಕ ಸಾರಿಗೆಯ ವ್ಯಾಪ್ತಿಯನ್ನು ವಿಸ್ತರಿಸುವ ಮತ್ತು ಜನರು ನಡೆಯಲು ಯೋಗ್ಯವಾದ ಪಾದಚಾರಿ ಮಾರ್ಗಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಮಾತ್ರವೇ ಈ ಸಂಚಾರ ದಟ್ಟಣೆಯನ್ನು ಶಾಶ್ವತವಾಗಿ ಪರಿಹರಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಸರ್ಕಾರ ರಚಿಸಿರುವ ಬ್ರಾಂಡ್ ಬೆಂಗಳೂರು ಸಮಿತಿಯ ಸದಸ್ಯರಾದ ವಿ. ರವಿಚಂದರ್ ಅವರು, ಬೆಂಗಳೂರಿನ ಹೊರವಲಯಗಳು ಸಾಕಷ್ಟು ಬೀದಿ ಗ್ರಿಡ್ ಇಲ್ಲದೆ ಅಭಿವೃದ್ಧಿ ಹೊಂದುತ್ತಿರುವುದು ಸಮಸ್ಯೆಯ ಒಂದು ಪ್ರಮುಖ ಭಾಗವಾಗಿದೆ ಎಂದಿದ್ದಾರೆ. ವೈಟ್&zwnj;ಫೀಲ್ಡ್, ಸರ್ಜಾಪುರ ಮತ್ತು ಇತರ ಹೊರವಲಯದ ಪ್ರದೇಶಗಳನ್ನು ಈಗ ಹೇಗೆ ನವೀಕರಿಸುವುದು ಎಂಬುದು ದೊಡ್ಡ ಸವಾಲಾಗಿದ್ದು, ಅಲ್ಲಿನ ಸಂಚಾರವು ಹೆಚ್ಚಾಗಿ ಕೆಲವು ಪ್ರಮುಖ ಟ್ರಂಕ್&zwnj; ರಸ್ತೆಗಳ ಮೇಲಷ್ಟೇ ಅವಲಂಬಿತವಾಗಿದೆ. ಸುರಂಗಗಳು ಮತ್ತು ಎತ್ತರದ ಕಾರಿಡಾರ್&zwnj;ಗಳಂತಹ ಯೋಜನೆಗಳು ಈ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿಗೆ ಸಾರ್ವಜನಿಕ ಸಾರಿಗೆಯ ಬಳಕೆಯನ್ನು ವ್ಯಾಪಕವಾಗಿ ಪ್ರೋತ್ಸಾಹಿಸುವ ಮತ್ತು ಖಾಸಗಿ ವಾಹನಗಳ ಮೇಲಿನ ಅತಿಯಾದ ಅವಲಂಬನೆಯನ್ನು ಹಂತಹಂತವಾಗಿ ನಿರುತ್ಸಾಹಗೊಳಿಸುವ ಸಮಗ್ರ ತಂತ್ರದ ಅಗತ್ಯವಿದೆ. ಇದರರ್ಥ ಸಾರ್ವಜನಿಕ ಸಾರಿಗೆಯ ಲಭ್ಯತೆ ಮತ್ತು ಗುಣಮಟ್ಟವನ್ನು ಉತ್ತಮಗೊಳಿಸುವುದು, ದರಗಳನ್ನು ಜನಸಾಮಾನ್ಯರಿಗೆ ಕೈಗೆಟುಕುವಂತೆ ಮಾಡುವುದು ಮತ್ತು ನಗರದ ಪ್ರಮುಖ ವಲಯಗಳಲ್ಲಿ ಪಾರ್ಕಿಂಗ್ ಶುಲ್ಕಗಳನ್ನು ಕಡ್ಡಾಯವಾಗಿ ಜಾರಿಗೆ ತರುವುದು ಅತ್ಯಗತ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-private-car-registration-hit-25-lakh-amid-mounting-traffic-crisis-gdp/articleshow-hcsbi0s"/>
        </item>
        <item>
            <title><![CDATA[ಕರ್ಣಾಟಕ ಬ್ಯಾಂಕ್‌ಗೆ ಕಾನೂನು ಕವಚ:  ನಿರ್ದೇಶಕರಾಗಿ ಹಿರಿಯ ವಕೀಲ ಡಾ. ಅರುಣಾ ಶ್ಯಾಮ್ ನೇಮಕ]]></title>
            <link>https://kannada.asianetnews.com/business/karnataka-bank-appoints-veteran-senior-advocate-dr-m-aruna-shyam-as-director-gdp/articleshow-kmu4f8u</link>
            <guid isPermaLink="true">https://kannada.asianetnews.com/business/karnataka-bank-appoints-veteran-senior-advocate-dr-m-aruna-shyam-as-director-gdp/articleshow-kmu4f8u</guid>
            <pubDate>Mon, 20 Jul 2026 19:21:23 +0530</pubDate>
            <description><![CDATA[ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್, ಹಿರಿಯ ವಕೀಲರಾದ ಡಾ. ಎಂ. ಅರುಣಾ ಶ್ಯಾಮ್ ಅವರನ್ನು ತನ್ನ ಮಂಡಳಿಯ ಹೆಚ್ಚುವರಿ ನಿರ್ದೇಶಕರನ್ನಾಗಿ (ಕಾರ್ಯನಿರ್ವಾಹಕೇತರ, ಸ್ವತಂತ್ರ) ನೇಮಿಸಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದ ಕಾನೂನು ಅನುಭವ ಮತ್ತು ಈ ಹಿಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಅವರ ಪರಿಣತಿಯು ಬ್ಯಾಂಕಿನ ಆಡಳಿತ ಮತ್ತು ಕಾರ್ಯತಂತ್ರದ ನಿರ್ಧಾರಗಳನ್ನು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzw4fwmkwqd4nve05bre2j6,imgname-aruna-shyam-karnataka-bank-1784554864532.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್&zwnj;ಗಳಲ್ಲಿ ಒಂದಾದ ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್ ಲಿಮಿಟೆಡ್, ಹಿರಿಯ ವಕೀಲರಾದ ಡಾ. ಎಂ. ಅರುಣಾ ಶ್ಯಾಮ್ ಅವರನ್ನು ತನ್ನ ಮಂಡಳಿಯ ಹೆಚ್ಚುವರಿ ನಿರ್ದೇಶಕರನ್ನಾಗಿ (ಕಾರ್ಯನಿರ್ವಾಹಕೇತರ, ಸ್ವತಂತ್ರ) ನೇಮಕ ಮಾಡಿದೆ. ಜುಲೈ 18, 2026 ರಿಂದ ಜಾರಿಗೆ ಬರುವಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಈ ಮಹತ್ವದ ನೇಮಕಾತಿ ನಡೆದಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರಕ್ರಿಯೆಯು ಸೆಬಿ (SEBI LODR) ನಿಯಮಗಳು, 2015 ಮತ್ತು ಕಂಪನಿಗಳ ಕಾಯ್ದೆ, 2013 ರ ಅನ್ವಯವಾಗುವ ಕಟ್ಟುನಿಟ್ಟಿನ ನಿಬಂಧನೆಗಳ ಪ್ರಕಾರ ಬ್ಯಾಂಕಿನ ಷೇರುದಾರರ ಅಂತಿಮ ಅನುಮೋದನೆಗೆ ಒಳಪಟ್ಟಿರುತ್ತದೆ. ಡಾ. ಎಂ. ಅರುಣಾ ಶ್ಯಾಮ್ ಅವರ ಜಂಟಿ ಸೇರ್ಪಡೆಯು ಬ್ಯಾಂಕಿನ ಸಾಂಸ್ಥಿಕ ನಿರ್ವಹಣೆ ಮತ್ತು ಕಾನೂನು ಘನತೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲಿದೆ ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.&lt;/p&gt;&lt;h2&gt;ಪ್ರಸಿದ್ದ ವಕೀಲ&lt;/h2&gt;&lt;p&gt;ಡಾ. ಎಂ. ಅರುಣಾ ಶ್ಯಾಮ್ ಅವರು ಅತ್ಯುನ್ನತ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದು, ವ್ಯವಹಾರ ಕಾನೂನಿನಲ್ಲಿ (Business Law) ಸ್ನಾತಕೋತ್ತರ ಪದವಿ ಹಾಗೂ ಸಂವಿಧಾನ ಮತ್ತು ಕ್ರಿಮಿನಲ್ ಕಾನೂನು ವಿಭಾಗದಲ್ಲಿ ಡಾಕ್ಟರೇಟ್ (Ph.D) ಪದವಿ ಪಡೆದಿದ್ದಾರೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಅಂದರೆ 2004 ರಿಂದಲೇ ಅವರು ಸಕ್ರಿಯ ಕಾನೂನು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸುದೀರ್ಘ ಅವಧಿಯಲ್ಲಿ ಅವರು ಸಿವಿಲ್ ನ್ಯಾಯಾಲಯಗಳು, ಸಾಲ ವಸೂಲಾತಿ ನ್ಯಾಯಮಂಡಳಿಗಳು (DRT), ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT), ಕರ್ನಾಟಕ ಹೈಕೋರ್ಟ್ ಹಾಗೂ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಮುಂದೆ ಅತ್ಯಂತ ಸಂಕೀರ್ಣವಾದ ಕೇಸುಗಳಲ್ಲಿ ಹಾಜರಾಗಿದ್ದಾರೆ. ನಾಗರಿಕ, ಅಪರಾಧ, ಸಾಂವಿಧಾನಿಕ, ಸಹಕಾರಿ, ಕಾರ್ಪೊರೇಟ್, ಬ್ಯಾಂಕಿಂಗ್, ಕಾರ್ಮಿಕ, ವಿಮೆ ಮತ್ತು ಸೇವಾ ಕಾಯ್ದೆಗಳು ಸೇರಿದಂತೆ ಕಾನೂನಿನ ವಿವಿಧ ಶಾಖೆಗಳಲ್ಲಿ ಅವರು ಹೊಂದಿರುವ ವ್ಯಾಪಕ ಅನುಭವ ಮತ್ತು ಪರಿಣತಿಯು ಬ್ಯಾಂಕಿಂಗ್ ಕ್ಷೇತ್ರದ ಆಡಳಿತ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ.&lt;/p&gt;&lt;h2&gt;ಹಿರಿಯ ಕಾನೂನು ಸಲಹೆಗಾರ&lt;/h2&gt;&lt;p&gt;ಅವರ ಸುದೀರ್ಘ ವೃತ್ತಿಜೀವನದಲ್ಲಿ ಹಲವು ಪ್ರಮುಖ ಮೈಲಿಗಲ್ಲುಗಳಿದ್ದು, 2020 ರಿಂದ 2023 ರವರೆಗೆ ಅವರು ಕರ್ನಾಟಕ ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ (Additional Advocate General) ಆಗಿ ಅತ್ಯಂತ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಹೈಕೋರ್ಟ್ ಸೇರಿದಂತೆ ದೇಶದ ಪ್ರಮುಖ ನ್ಯಾಯಾಂಗ ವೇದಿಕೆಗಳ ಮುಂದೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಸಾಂವಿಧಾನಿಕ, ಶಾಸನಬದ್ಧ ಮತ್ತು ಸಾರ್ವಜನಿಕ ಕಾನೂನು ವಿಷಯಗಳಲ್ಲಿ ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸಿ ಗಮನ ಸೆಳೆದಿದ್ದರು. ಅವರ ಸುದೀರ್ಘ ಕಾವಲು ಮತ್ತು ಕಾನೂನು ನಿಪುಣತೆಯನ್ನು ಗುರುತಿಸಿ ಡಿಸೆಂಬರ್ 14, 2021 ರಂದು ಕರ್ನಾಟಕದ ಗೌರವಾನ್ವಿತ ಹೈಕೋರ್ಟ್ ಅವರಿಗೆ 'ಹಿರಿಯ ವಕೀಲರು' (Senior Advocate) ಎಂಬ ಅತ್ಯುನ್ನತ ಗೌರವಪೂರ್ವಕ ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಅವರು ದೇಶಾದ್ಯಂತ ವಿವಿಧ ಹೈಕೋರ್ಟ್&zwnj;ಗಳಲ್ಲಿ ಅತ್ಯಂತ ಸಂಕೀರ್ಣ ಹಾಗೂ ಬಿಕ್ಕಟ್ಟಿನ ಕಾರ್ಪೊರೇಟ್ ಮೊಕದ್ದಮೆಗಳಲ್ಲಿ ಪ್ರಮುಖ ಕಕ್ಷಿದಾರರಿಗೆ ಮತ್ತು ಸಾಂಸ್ಥಿಕ ಸಂಸ್ಥೆಗಳಿಗೆ ಹಿರಿಯ ಕಾನೂನು ಸಲಹೆಗಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.&lt;/p&gt;&lt;p&gt;ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಡಾ. ಎಂ. ಅರುಣಾ ಶ್ಯಾಮ್ ಅವರಂತಹ ಹಿರಿಯ ಕಾನೂನು ತಜ್ಞರನ್ನು ಕಾರ್ಯನಿರ್ವಾಹಕೇತರ ಮತ್ತು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿಕೊಂಡಿರುವುದು ಬ್ಯಾಂಕಿನ ಆಡಳಿತ ಮಂಡಳಿಗೆ ದೊರೆತ ದೊಡ್ಡ ಶಕ್ತಿಯಾಗಿದೆ. ಬ್ಯಾಂಕಿಂಗ್ ನಿಯಮಾವಳಿಗಳು, ಕಂಪನಿ ವ್ಯವಹಾರಗಳು ಹಾಗೂ ಸಾಲ ವಸೂಲಾತಿಯಂತಹ ಸೂಕ್ಷ್ಮ ವಿಷಯಗಳಲ್ಲಿ ಅವರ ಶ್ರೀಮಂತ ವೃತ್ತಿಪರ ಅನುಭವವು ಬ್ಯಾಂಕ್ ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳಲಿರುವ ಪ್ರಮುಖ ಕಾರ್ಯತಂತ್ರದ ನಿರ್ಧಾರಗಳಿಗೆ ಮತ್ತು ಹೂಡಿಕೆದಾರರ ಹಿತರಕ್ಷಣೆ ಕಾಪಾಡುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/business/karnataka-bank-appoints-veteran-senior-advocate-dr-m-aruna-shyam-as-director-gdp/articleshow-kmu4f8u"/>
        </item>
        <item>
            <title><![CDATA[ಬೆಂಗಳೂರು ಫುಟ್‌ಪಾತ್ ಮೇಲೆ ಬೈಕ್ ಚಲಾಯಿಸಿದರೆ ₹5,000 ದಂಡ; ಸಿಗ್ನಲ್‌, ಜಂಕ್ಷನ್‌ ಬಳಿ ಬಸ್ ನಿಲ್ದಾಣ ಇರುವಂತಿಲ್ಲ]]></title>
            <link>https://kannada.asianetnews.com/karnataka-districts/bengaluru-footpath-riding-fine-set-to-jump-to-rs-5000-minister-krishna-byre-gowda-proposes-strict-penalty-hike-gdp/articleshow-mv55i7r</link>
            <guid isPermaLink="true">https://kannada.asianetnews.com/karnataka-districts/bengaluru-footpath-riding-fine-set-to-jump-to-rs-5000-minister-krishna-byre-gowda-proposes-strict-penalty-hike-gdp/articleshow-mv55i7r</guid>
            <pubDate>Thu, 23 Jul 2026 11:22:11 +0530</pubDate>
            <description><![CDATA[ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರಿಗೆ ವಿಧಿಸುವ ದಂಡವನ್ನು ₹5,000ಕ್ಕೆ ಹೆಚ್ಚಿಸಲು ಸಚಿವ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ಮತ್ತು 'ನಡೆಯುವ ಹಕ್ಕನ್ನು' ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು ಪರ್ಯಾಯ ಪಾರ್ಕಿಂಗ್ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೂ ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6qzbqqhdrhn1tgttgg44xp,imgname-krishna-byre-gowda--1--1784785383159.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಸಿಲಿಕಾನ್ ಸಿಟಿಯ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಜಿಬಿಎ) ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಪಾದಚಾರಿ ಮಾರ್ಗದಲ್ಲಿ (ಫುಟ್&zwnj;ಪಾತ್) ಮೋಟಾರು ವಾಹನಗಳನ್ನು ಚಲಾಯಿಸುವ ಸವಾರರಿಗೆ ವಿಧಿಸುವ ದಂಡದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಸಾರಿಗೆ ಸಚಿವ ಬೈರತಿ ಸುರೇಶ್ ಅವರಿಗೆ ಅಧಿಕೃತ ಪತ್ರ ಬರೆದು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬೆಂಗಳೂರು ನಗರದ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ &amp;nbsp;ಜಿಬಿಎ ಉನ್ನತಾಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಉನ್ನತ ಮಟ್ಟದ ಪರಿಶೀಲನಾ ಸಭೆಯ ಬಳಿಕ ಸಚಿವರು ಈ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ.&lt;/p&gt;&lt;h2&gt;₹500 ರಿಂದ ₹5,000ಕ್ಕೆ ದಂಡದ ಮೊತ್ತ ಏರಿಕೆಗೆ ಪ್ರಸ್ತಾವನೆ&lt;/h2&gt;&lt;p&gt;ನಗರದಲ್ಲಿ ಸದ್ಯ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವವರಿಗೆ ಚಾಲ್ತಿಯಲ್ಲಿರುವ ದಂಡದ ಮೊತ್ತ ಕೇವಲ ₹500 ಆಗಿದ್ದು, ಇದು ಸವಾರರಲ್ಲಿ ಯಾವುದೇ ಭಯ ಹುಟ್ಟಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ದಂಡಾಸ್ತ್ರವನ್ನು ಬಲಪಡಿಸಲು ಸಚಿವರು ಮುಂದಾಗಿದ್ದಾರೆ. &quot;ಸಾರ್ವಜನಿಕರ ನಡೆಯುವ ಹಕ್ಕನ್ನು (Right to Walk) ರಕ್ಷಿಸುವ ಸಲುವಾಗಿ ಸುಪ್ರೀಂಕೋರ್ಟ್ ನೀಡಿದ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಬೆಂಗಳೂರಿನ ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸುಮಾರು 2.9 ಕಿ.ಮೀ ವ್ಯಾಪ್ತಿಯ ಫುಟ್&zwnj;ಪಾತ್ ಒತ್ತುವರಿಯನ್ನು ಈಗಾಗಲೇ ಮುಕ್ತಗೊಳಿಸಲಾಗಿದ್ದು, ಸಾರ್ವಜನಿಕರಿಂದಲೂ ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಹೀಗೆ ಬೀದಿಬದಿ ವ್ಯಾಪಾರಿಗಳಿಂದ ಕಷ್ಟಪಟ್ಟು ಮುಕ್ತಗೊಳಿಸಿದ ಜಾಗದಲ್ಲಿ ಬೈಕ್ ಸವಾರರು ಯಾವುದೇ ಭಯವಿಲ್ಲದೆ ವಾಹನಗಳನ್ನು ಚಲಾಯಿಸುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ. ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ&quot; ಎಂದು ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಬೇಸರ ಹೊರಹಾಕಿದರು.&lt;/p&gt;&lt;h2&gt;ಪಾದಚಾರಿಗಳಿಗೆ ಅಪಘಾತವಾದರೆ ಕಠಿಣ ಕಾನೂನು ಕ್ರಮ&lt;/h2&gt;&lt;p&gt;ಫುಟ್&zwnj;ಪಾತ್&zwnj;ಗಳ ಮೇಲೆ ವಾಹನ ಓಡಿಸುವುದರಿಂದ ಪಾದಚಾರಿಗಳ ಜೀವಕ್ಕೆ ನಿರಂತರ ಅಪಾಯ ಎದುರಾಗುತ್ತಿದೆ. &quot;ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವಾಗ ಏನಾದರೂ ಅನಾಹುತ ಅಥವಾ ಅಪಘಾತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ?&quot; ಎಂದು ಪ್ರಶ್ನಿಸಿದ ಸಚಿವರು, ಇಂತಹ ಬೇಜವಾಬ್ದಾರಿ ಕೃತ್ಯಗಳಲ್ಲಿ ತೊಡಗುವ ಸವಾರರ ವಿರುದ್ಧ ಸಂಚಾರ ಪೊಲೀಸರು ತಕ್ಷಣವೇ ಕಠಿಣ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಮತ್ತು ದಂಡದ ಮೊತ್ತವನ್ನು ₹5,000ಕ್ಕೆ ಹೆಚ್ಚಿಸಿದರೆ ಮಾತ್ರ ಇಂತಹ ಅಪರಾಧಗಳಿಗೆ ಬ್ರೇಕ್ ಹಾಕಲು ಸಾಧ್ಯ ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಸಚಿವರ ಖಡಕ್ ಸೂಚನೆಗಳು&lt;/h2&gt;&lt;p&gt;ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಕೆಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು:&lt;/p&gt;&lt;h3&gt;1. ಸಿಗ್ನಲ್&zwnj; ಹಾಗೂ ಜಂಕ್ಷನ್&zwnj;ಗಳ ಬಳಿ ಬಸ್ ನಿಲ್ದಾಣಗಳಿಗೆ ನಿಷೇಧ&lt;/h3&gt;&lt;p&gt;ಟ್ರಾಫಿಕ್ ಸಿಗ್ನಲ್&zwnj;ಗಳ ತೀರಾ ಹತ್ತಿರದಲ್ಲೇ ಬಿಎಂಟಿಸಿ ಬಸ್ ಸೇರಿದಂತೆ ಇತರೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ವಾಹನ ದಟ್ಟಣೆ ಮತ್ತಷ್ಟು ಉಲ್ಬಣಿಸುತ್ತಿದೆ. ನಿಯಮಗಳ ಪ್ರಕಾರ, ಯಾವುದೇ ಬಸ್ ನಿಲ್ದಾಣಗಳು ಅಥವಾ ಬಸ್ ಆಶ್ರಯ ತಾಣಗಳು (Bus Shelters) ಸಿಗ್ನಲ್&zwnj;ಗಳಿಂದ 75 ಮೀಟರ್ ಹಾಗೂ ಜಂಕ್ಷನ್&zwnj;ಗಳಿಂದ 50 ಮೀಟರ್ ಅಂತರದ ಒಳಗಡೆ ಇರುವಂತಿಲ್ಲ. ನಿಯಮ ಮೀರಿ ಅಂತರದ ಒಳಗಿರುವ ಬಸ್ ನಿಲ್ದಾಣಗಳನ್ನು ತಕ್ಷಣವೇ ಪರ್ಯಾಯ ಸ್ಥಳಗಳಿಗೆ ಸ್ಥಳಾಂತರಿಸಲು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.&lt;/p&gt;&lt;h3&gt;2. ಪರ್ಯಾಯ (ಒನ್-ಸೈಡ್) ಪಾರ್ಕಿಂಗ್ ನಿಯಮ ಕಡ್ಡಾಯ ಪಾಲನೆ&lt;/h3&gt;&lt;p&gt;ನಗರದ ಮುಖ್ಯ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ (ಆರ್ಟೆರಿಯಲ್ ಮತ್ತು ಸಬ್ ಆರ್ಟೆರಿಯಲ್ ರಸ್ತೆಗಳು) ವಾಹನ ನಿಲುಗಡೆಗೆ ಸಂಪೂರ್ಣವಾಗಿ ಅವಕಾಶ ನೀಡಬಾರದು ಎಂಬುದು ಸರ್ಕಾರದ ಅಭಿಪ್ರಾಯವಾಗಿದ್ದರೂ, ಪ್ರಾಯೋಗಿಕವಾಗಿ ಇದು ಕಷ್ಟಸಾಧ್ಯ. ಆದರೆ, ಪ್ರಸ್ತುತ ಚಾಲ್ತಿಯಲ್ಲಿರುವ 'ಪರ್ಯಾಯ ದಿನಗಳ ಪಾರ್ಕಿಂಗ್' (Alternate Parking) ಅಥವಾ 'ಒಂದು ಬದಿಯ ನಿಲುಗಡೆ' (One-side Parking) ನಿಯಮಗಳನ್ನಾದರೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದರು.&lt;/p&gt;&lt;h2&gt;ಪೊಲೀಸ್ ಅಧಿಕಾರಿಗಳ ಗಮನಕ್ಕೆ:&lt;/h2&gt;&lt;p&gt;&quot;ಈಗಾಗಲೇ ಜಾರಿಯಲ್ಲಿರುವ ಪಾರ್ಕಿಂಗ್ ನಿಯಮಗಳ ಅನುಷ್ಠಾನಕ್ಕೆ ಹೊಸದಾಗಿ ಯಾವುದೇ ಅಧಿಸೂಚನೆ (Notification) ಹೊರಡಿಸುವ ಅಗತ್ಯವಿಲ್ಲ. ತಿಂಗಳ ಎಲ್ಲ ದಿನಗಳೂ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಪರ್ಯಾಯ ಪಾರ್ಕಿಂಗ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ರಸ್ತೆಯ ಒಂದು ಬದಿಯಲ್ಲಿ ಕನಿಷ್ಠ 7 ರಿಂದ 8 ಅಡಿಯಷ್ಟು ಜಾಗ ಉಳಿಯಲಿದ್ದು, ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ&quot; ಎಂದು ಸಚಿವರು ವಿವರಿಸಿದರು.&lt;/p&gt;&lt;p&gt;ನಗರದ ರಸ್ತೆ ಸಾರಿಗೆ ನಿಯಮಗಳ ಸುಧಾರಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಾರ್ವಜನಿಕರಲ್ಲಿ ಅರಿವು ಮೂಡಿಸದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಪಾರ್ಕಿಂಗ್ ನಿಯಮಗಳ ಕುರಿತು ಜನರಲ್ಲಿ ಮೊದಲು ಜಾಗೃತಿ ಮೂಡಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.&lt;/p&gt;&lt;p&gt;ಈ ಮಹತ್ವದ ಉನ್ನತ ಮಟ್ಟದ ಸಭೆಯಲ್ಲಿ ಸಂಚಾರ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಜಿಬಿಎ ಅಪರ ಆಯುಕ್ತರಾದ ಆರ್. ಲತಾ, ಲೋಖಂಡೆ ಸ್ನೇಹಲ್ ಸುಧಾಕರ್, ಕವಿತಾ ರಾಜಾರಾಂ, ವೆಂಕಟಾಚಲಪತಿ, ಮುಖ್ಯ ಅಭಿಯಂತರರಾದ ನವೀನ್ ಕುಮಾರ್ ರಾಜು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-footpath-riding-fine-set-to-jump-to-rs-5000-minister-krishna-byre-gowda-proposes-strict-penalty-hike-gdp/articleshow-mv55i7r"/>
        </item>
        <item>
            <title><![CDATA[ನಮ್ಮ ಮೆಟ್ರೋ ಪ್ರಯಾಣಿಕರ ಸುಲಿಗೆಗೆ BMRCL ಹೊಸ ಮಾರ್ಗ, ಬೆಂಗಳೂರು ಮೆಟ್ರೋ ದರ ಏರಿಕೆಗೆ ಪ್ರಸ್ತಾವನೆ!]]></title>
            <link>https://kannada.asianetnews.com/karnataka-districts/namma-metro-fare-revision-row-bmrcl-annual-percent-5-hike-vs-3-year-percent-12-hike-proposes-in-phase-3a-dpr-gdp/articleshow-pg99v8r</link>
            <guid isPermaLink="true">https://kannada.asianetnews.com/karnataka-districts/namma-metro-fare-revision-row-bmrcl-annual-percent-5-hike-vs-3-year-percent-12-hike-proposes-in-phase-3a-dpr-gdp/articleshow-pg99v8r</guid>
            <pubDate>Wed, 22 Jul 2026 17:42:41 +0530</pubDate>
            <description><![CDATA[ಬೆಂಗಳೂರಿನ 'ನಮ್ಮ ಮೆಟ್ರೋ' ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎರಡು ಭಿನ್ನ ಪ್ರಸ್ತಾವನೆಗಳು ಚರ್ಚೆಗೆ ಗ್ರಾಸವಾಗಿವೆ. ವಾರ್ಷಿಕ 5% ಹೆಚ್ಚಳದ ಹಳೆಯ ನಿಯಮ ಮತ್ತು ಪ್ರತಿ ಮೂರು ವರ್ಷಕ್ಕೊಮ್ಮೆ 12% ಹೆಚ್ಚಳದ ಹೊಸ ಡಿಪಿಆರ್ ಪ್ರಸ್ತಾವನೆಯ ನಡುವೆ ಗೊಂದಲ ಸೃಷ್ಟಿಯಾಗಿದೆ. ಆದರೆ, ಅಂತಿಮ ನಿರ್ಧಾರವು ದರ ನಿರ್ಧಾರ ಸಮಿತಿಯ ಶಿಫಾರಸಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಬಿಎಂಆರ್&zwnj;ಸಿಎಲ್ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky26w4bwf1hkqxp8svswwb1e,imgname-namma-metro-pink-line-1784633233788.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನ &lsquo;ನಮ್ಮ ಮೆಟ್ರೋ&rsquo;ದ ಪ್ರಸ್ತಾವಿತ ಪ್ರಯಾಣ ದರ ಹೆಚ್ಚಳದ ನಿರ್ಧಾರವು ಈಗ ಹೊಸದೊಂದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮೆಟ್ರೋ ಹಂತ 3ಎ (Phase 3A) ಯೋಜನೆಗಾಗಿ ಸಿದ್ಧಪಡಿಸಲಾದ ಪರಿಷ್ಕೃತ ಸಮಗ್ರ ಯೋಜನಾ ವರದಿಯು (DPR) ಮುಂಬರುವ ವರ್ಷಗಳಲ್ಲಿ ದರಗಳನ್ನು ಹೆಚ್ಚಿಸಲು ಭಿನ್ನವಾದ ಸೂತ್ರವನ್ನು ಪ್ರಸ್ತಾಪಿಸಿದೆ. ಇದು ಪ್ರಸ್ತುತ ಜಾರಿಯಲ್ಲಿರುವ ವಾರ್ಷಿಕ ದರ ಹೆಚ್ಚಳದ ನಿಯಮಾವಳಿ ಹಾಗೂ ಹೊಸ ಪ್ರಸ್ತಾವನೆಯ ನಡುವೆ ಲೆಕ್ಕಾಚಾರದ ಜಟಾಪಟಿಗೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ.&lt;/p&gt;&lt;h2&gt;ಎರಡು ಭಿನ್ನ ಮಾದರಿಗಳ ನಡುವೆ ತೀವ್ರ ವ್ಯತ್ಯಾಸ&lt;/h2&gt;&lt;p&gt;ಮೆಟ್ರೋ ಸಂಸ್ಥೆಯು ತನ್ನ ಭವಿಷ್ಯದ ಆದಾಯ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಎರಡು ಪ್ರತ್ಯೇಕ ಮಾದರಿಗಳನ್ನು ಮುಂಭಾಗದಲ್ಲಿಟ್ಟುಕೊಂಡಿದೆ. ಈ ಎರಡೂ ಮಾದರಿಗಳ ನಡುವಿನ ವ್ಯತ್ಯಾಸ ಹೀಗಿದೆ.&lt;/p&gt;&lt;h3&gt;ಮೊದಲ ದರ ನಿರ್ಧಾರ ಸಮಿತಿ (FFC) ಮಾದರಿ&lt;/h3&gt;&lt;p&gt;ಈ ಸಮಿತಿಯ ಶಿಫಾರಸಿನ ಪ್ರಕಾರ, ಮೆಟ್ರೋ ಕಾರ್ಯಾಚರಣೆಯ ಅನುಪಾತವನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಒಮ್ಮೆಗೇ ಭಾರಿ ದರ ಏರಿಕೆಯ ಬಿಸಿ ತಟ್ಟುವುದನ್ನು ತಪ್ಪಿಸಲು ಪ್ರತಿ ವರ್ಷ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ಶೇಕಡ 5ರಷ್ಟು (ಅಥವಾ ಕಾರ್ಯಾಚರಣೆ ವೆಚ್ಚದ ಏರಿಕೆ, ಇದರಲ್ಲಿ ಯಾವುದು ಕಡಿಮೆಯೋ ಅದು) ದರ ಹೆಚ್ಚಿಸಬೇಕು.&lt;/p&gt;&lt;h3&gt;ಹಂತ 3ಎ ಪರಿಷ್ಕೃತ ಡಿಪಿಆರ್ ಮಾದರಿ&lt;/h3&gt;&lt;p&gt;ಈ ಹೊಸ ವರದಿಯ ಪ್ರಕಾರ, ವಾರ್ಷಿಕ ಹೆಚ್ಚಳದ ಬದಲಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಯಾಣ ದರವನ್ನು ಶೇಕಡ 12ರಷ್ಟು ಒಟ್ಟಿಗೆ ಹೆಚ್ಚಳ ಮಾಡಲು ಊಹಿಸಲಾಗಿದೆ.&lt;/p&gt;&lt;h3&gt;ಭವಿಷ್ಯದ ದರದ ಅಂದಾಜು&lt;/h3&gt;&lt;p&gt;ಒಂದು ವೇಳೆ ಹೊಸ ಡಿಪಿಆರ್ ಪ್ರಸ್ತಾವನೆಯನ್ನು ಅಳವಡಿಸಿಕೊಂಡರೆ, ಹಂತ 3ಎ ಯೋಜನೆ ಪೂರ್ಣಗೊಳ್ಳುವ ಅಂದಾಜು 2033ರ ವೇಳೆಗೆ ಮೆಟ್ರೋದ ಕನಿಷ್ಠ ದರವು ಈಗಿರುವ ₹10ರಿಂದ ₹14ಕ್ಕೆ ಹಾಗೂ ಗರಿಷ್ಠ ದರವು ₹90ರಿಂದ ₹126ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.&lt;/p&gt;&lt;h2&gt;ಹಂತ 3ಎ ಪರಿಷ್ಕೃತ ಡಿಪಿಆರ್ ಹಿನ್ನೆಲೆ&lt;/h2&gt;&lt;p&gt;ಬಿಎಂಆರ್&zwnj;ಸಿಎಲ್ (BMRCL) ನೇಮಿಸಿದ್ದ &lsquo;ರಿನಾ&rsquo; ಸಂಸ್ಥೆಯು 37.8 ಕಿಲೋಮೀಟರ್ ಉದ್ದದ ಸರ್ಜಾಪುರ-ಹೆಬ್ಬಾಳ ಮಾರ್ಗದ (ಹಂತ 3ಎ) ವಿವರವಾದ ಯೋಜನಾ ವರದಿಯನ್ನು ಜೂನ್ 2024ರಲ್ಲಿ ಸಿದ್ಧಪಡಿಸಿತ್ತು. ಇದನ್ನು ಫೆಬ್ರುವರಿ 2026ರಲ್ಲಿ ಪರಿಷ್ಕರಿಸಲಾಗಿತ್ತು. ತದನಂತರ ಏಪ್ರಿಲ್&zwnj;ನಲ್ಲಿ ಈ ವರದಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಲಾಯಿತು. ಈ ವರದಿಯಲ್ಲೇ ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12ರಷ್ಟು ದರ ಹೆಚ್ಚಿಸುವ ಲೆಕ್ಕಾಚಾರವನ್ನು ಉಲ್ಲೇಖಿಸಲಾಗಿದ್ದು, ಇದು ಸದ್ಯ ಚಾಲ್ತಿಯಲ್ಲಿರುವ ನಿಯಮಗಳಿಗಿಂತ ಭಿನ್ನವಾಗಿದೆ.&lt;/p&gt;&lt;h2&gt;'ದರ ಸಮಿತಿಯ ಶಿಫಾರಸೇ ಅಂತಿಮ': ಬಿಎಂಆರ್&zwnj;ಸಿಎಲ್ ಸ್ಪಷ್ಟನೆ&lt;/h2&gt;&lt;p&gt;ಪರಿಷ್ಕೃತ ಯೋಜನಾ ವರದಿಯಲ್ಲಿ ಭಿನ್ನ ಲೆಕ್ಕಾಚಾರಗಳಿದ್ದರೂ, ಬಿಎಂಆರ್&zwnj;ಸಿಎಲ್&zwnj;ನ ಉನ್ನತ ಮೂಲಗಳು ಈ ಕುರಿತು ಮಹತ್ವದ ಸ್ಪಷ್ಟನೆ ನೀಡಿವೆ.&lt;/p&gt;&lt;p&gt;&quot;ಪರಿಷ್ಕೃತ ಯೋಜನಾ ವರದಿಯ (DPR) ಅಂದಾಜುಗಳು ಕೇವಲ ಆರ್ಥಿಕ ಊಹೆಗಳ ಆಧಾರದ ಮೇಲಿರುವ ದಾಖಲೆಯಷ್ಟೆ. ಅಂತಿಮವಾಗಿ ದರ ನಿರ್ಧಾರ ಸಮಿತಿಯ (FFC) ಶಿಫಾರಸುಗಳೇ ನಿರ್ಣಾಯಕವಾಗಿರುತ್ತವೆ,&quot; ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002'ರ ಅಡಿಯಲ್ಲಿ ರಚನೆಯಾಗಿರುವ ಈ ಸಮಿತಿಯ ತೀರ್ಮಾನಗಳಿಗೆ ಕಾನೂನುಬದ್ಧ ಬದ್ಧತೆ ಇರುತ್ತದೆ.&lt;/p&gt;&lt;p&gt;ಇದೇ ವರ್ಷದ ಫೆಬ್ರುವರಿಯಲ್ಲಿ ಕೈಗೊಳ್ಳಬೇಕಿದ್ದ ದರ ಪರಿಷ್ಕರಣೆಯನ್ನು ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸದ್ಯಕ್ಕೆ ರದ್ದುಪಡಿಸಲಾಗಿದೆ. ಕನಿಷ್ಠ ದರವನ್ನು ₹11ಕ್ಕೆ ಹಾಗೂ ಗರಿಷ್ಠ ದರವನ್ನು ₹95ಕ್ಕೆ ಹೆಚ್ಚಿಸಲು ಬಿಎಂಆರ್&zwnj;ಸಿಎಲ್ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ಸದ್ಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಬಿಎಂಆರ್&zwnj;ಸಿಎಲ್ ಮಂಡಳಿಯ ಪರಿಶೀಲನೆಗೆ ವಹಿಸಲಾಗಿದೆ. ಈವರೆಗೂ ಯಾವುದೇ ಹೊಸ ದರ ಏರಿಕೆಗೆ ಅಧಿಕೃತ ಅನುಮೋದನೆ ದೊರೆತಿಲ್ಲ.&lt;/p&gt;&lt;h2&gt;ತೀವ್ರ ವಿರೋಧ ಮತ್ತು ತಜ್ಞರ ಆಕ್ಷೇಪ&lt;/h2&gt;&lt;p&gt;ಬೆಂಗಳೂರು ಮೆಟ್ರೋ ಈಗಾಗಲೇ ದೇಶದ ಅತ್ಯಂತ ದುಬಾರಿ ಮೆಟ್ರೋ ಸೇವೆಗಳಲ್ಲಿ ಒಂದಾಗಿದೆ. ಫೆಬ್ರುವರಿ 2025ರಲ್ಲಿ ಟಿಕೆಟ್ ಬೆಲೆಗಳನ್ನು ಸರಾಸರಿ ಶೇಕಡ 51.55ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿತ್ತು. ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಕಾರಣ ಬಿಎಂಆರ್&zwnj;ಸಿಎಲ್ ತಕ್ಷಣವೇ ಶೇಕಡ 5ರಷ್ಟು ದರ ಇಳಿಕೆ ಮಾಡಿತ್ತಾದರೂ, ಪ್ರಯಾಣಿಕರ ಮೇಲಿನ ಹೊರೆ ತಗ್ಗಿಲ್ಲ. ನಗರ ಸಾರಿಗೆ ತಜ್ಞರು ಬಿಎಂಆರ್&zwnj;ಸಿಎಲ್&zwnj;ನ ಈ ದರ ನೀತಿಯನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ.&lt;/p&gt;&lt;p&gt;&quot;ಕಳೆದ ವರ್ಷ ಫೆಬ್ರುವರಿಯಲ್ಲಿ ದರವನ್ನು ಏಕಾಏಕಿ ಅಷ್ಟೊಂದು ಪ್ರಮಾಣದಲ್ಲಿ ಹೆಚ್ಚಿಸಿದ್ದೇ ತಪ್ಪು ನಿರ್ಧಾರವಾಗಿತ್ತು. ದರ ಪರಿಷ್ಕರಣೆಯ ಹೊಸ ಹಾಗೂ ಹಳೆಯ ಲೆಕ್ಕಾಚಾರಗಳ ವ್ಯತ್ಯಾಸದ ಬಗ್ಗೆ ಬಿಎಂಆರ್&zwnj;ಸಿಎಲ್ ಸಾರ್ವಜನಿಕರಿಗೆ ಪಾರದರ್ಶಕ ಸ್ಪಷ್ಟನೆ ನೀಡಬೇಕು. ನಾವು ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಎನ್ನುತ್ತಿಲ್ಲ, ಆದರೆ ಸಾಮಾನ್ಯ ಜನರಿಗೆ ಹೊರೆಯಾಗದಂತೆ ವೈಜ್ಞಾನಿಕ ಮತ್ತು ಸರಿಯಾದ ರೀತಿಯಲ್ಲಿ ದರ ಪರಿಷ್ಕರಣೆ ಮಾಡಬೇಕಷ್ಟೇ,&quot; ಎಂದು ನಗರ ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಬೆಂಗಳೂರು ನಗರದ ಸಹಸ್ರಾರು ದೈನಂದಿನ ಪ್ರಯಾಣಿಕರಿಗೆ ದರ ಕೈಗೆಟುಕುವಿಕೆಯು ಅತಿ ದೊಡ್ಡ ಸಮಸ್ಯೆಯಾಗಿದೆ. ಹಂತ 3ಎ ಯೋಜನೆ ಮುಂದುವರಿಯುತ್ತಿದ್ದಂತೆ, ಅಧಿಕಾರಿಗಳು ಈ ದರ ಪರಿಷ್ಕರಣೆಯ ಗೊಂದಲಕ್ಕೆ ಶೀಘ್ರದಲ್ಲೇ ತೆರೆ ಎಳೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/namma-metro-fare-revision-row-bmrcl-annual-percent-5-hike-vs-3-year-percent-12-hike-proposes-in-phase-3a-dpr-gdp/articleshow-pg99v8r"/>
        </item>
        <item>
            <title><![CDATA[ಬೈಯಪ್ಪನಹಳ್ಳಿ ಮೇಲ್ಸೇತುವೆ: ಸರ್ಕಾರ-ರೈಲ್ವೆ ಸಂಘರ್ಷ, ಬಿ-ಸ್ಟೈಲ್ ತಾತ್ಕಾಲಿಕ ಶೆಡ್ ನೆಲಸಮ ಮಾಡಿದ ನೈಋತ್ಯ ರೈಲ್ವೆ!]]></title>
            <link>https://kannada.asianetnews.com/karnataka-districts/bengaluru-flyover-row-south-western-railway-demolishes-b-style-structure-at-baiyappanahalli-gdp/articleshow-qdrig3m</link>
            <guid isPermaLink="true">https://kannada.asianetnews.com/karnataka-districts/bengaluru-flyover-row-south-western-railway-demolishes-b-style-structure-at-baiyappanahalli-gdp/articleshow-qdrig3m</guid>
            <pubDate>Wed, 22 Jul 2026 14:48:06 +0530</pubDate>
            <description><![CDATA[ಬೆಂಗಳೂರಿನ ಬೈಯಪ್ಪನಹಳ್ಳಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಯೋಜನೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್&zwnj;ಗಳನ್ನು ನೈಋತ್ಯ ರೈಲ್ವೆ ಇಲಾಖೆ ದಿಢೀರ್ ತೆರವುಗೊಳಿಸಿದ್ದು, ಇದು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವೆ ಹೊಸ ವಿವಾದಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky4hvamwzt35wb1rbqmjtj0a,imgname-baiyappanahalli-flyover-project-1784711850651.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಯಾದ ಬೈಯಪ್ಪನಹಳ್ಳಿ ಎಲಿವೇಟೆಡ್&zwnj; ರೋಟರಿ ಮೇಲ್ಸೇತುವೆ (ಫ್ಲೈಓವರ್&zwnj;) ನಿರ್ಮಾಣ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ಯೋಜನೆಗಾಗಿ ಸ್ಥಾಪಿಸಲಾಗಿದ್ದ ತಾತ್ಕಾಲಿಕ ಶೆಡ್&zwnj;ಗಳು ಅನ್ನು ನೈಋತ್ಯ ರೈಲ್ವೆ (SWR) ಅಧಿಕಾರಿಗಳು ಮಂಗಳವಾರ ದಿಢೀರ್ ಎಂದು ಕೆಡವಿ ಹಾಕಿದ್ದಾರೆ. ರೈಲ್ವೆ ಇಲಾಖೆಯ ಈ ಕ್ರಮವು ಬೆಂಗಳೂರು ಸ್ಮಾರ್ಟ್ ಇನ್&zwnj;ಫ್ರಾಸ್ಟ್ರಕ್ಟರ್ ಲಿಮಿಟೆಡ್ (ಬಿ-ಸ್ಟೈಲ್) ಮತ್ತು ರೈಲ್ವೆ ಇಲಾಖೆಯ ನಡುವಿನ ಸಮನ್ವಯದ ಕೊರತೆಯನ್ನು ಎತ್ತಿ ತೋರಿಸಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ.&lt;/p&gt;&lt;h2&gt;ವಿವಾದಕ್ಕೆ ಕಾರಣವೇನು?&lt;/h2&gt;&lt;p&gt;ದಟ್ಟಣೆಯಿಂದ ಕೂಡಿರುವ ಐಒಸಿ ಜಂಕ್ಷನ್&zwnj;ನಲ್ಲಿ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ಈ ವರ್ಷದ ಏಪ್ರಿಲ್&zwnj;ನಲ್ಲಿ ರಾಜ್ಯ ಸರ್ಕಾರವು ಬೈಯಪ್ಪನಹಳ್ಳಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಮತ್ತು ಹೆಚ್ಚುವರಿ ಎರಡು ಪಥದ ರೈಲು ಓವರ್&zwnj;ಬ್ರಿಡ್ಜ್ (ಆರ್&zwnj;ಒಬಿ) ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಸುಮಾರು 436.44 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಯೋಜನೆಯ ಕಾಮಗಾರಿಗಾಗಿ ರೈಲ್ವೆ ಜಮೀನಿನಲ್ಲಿ ತಾತ್ಕಾಲಿಕ ಫ್ಯಾಬ್ರಿಕೇಶನ್ ಯಾರ್ಡ್ ಅನ್ನು ನಿರ್ಮಿಸಲಾಗಿತ್ತು. ಇದು ರೈಲ್ವೆ ಭೂಮಿಯಾಗಿದ್ದರಿಂದ, ನಿಯಮಾವಳಿಗಳ ನೆಪವೊಡ್ಡಿ ನೈಋತ್ಯ ರೈಲ್ವೆ ಅಧಿಕಾರಿಗಳು ಇದನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಬಿ-ಸ್ಟೈಲ್ ಅಧಿಕಾರಿಗಳ ತೀವ್ರ ಆಕ್ಷೇಪ&lt;/h2&gt;&lt;p&gt;ರೈಲ್ವೆ ಇಲಾಖೆಯ ಈ ಕ್ರಮಕ್ಕೆ ಬೆಂಗಳೂರು ಸ್ಮಾರ್ಟ್ ಇನ್&zwnj;ಫ್ರಾಸ್ಟ್ರಕ್ಟರ್ ಲಿಮಿಟೆಡ್ (ಬಿ-ಸ್ಟೈಲ್) ಅಧಿಕಾರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್&zwnj;ಗೆ ಸರಿಯಾದ ರಸ್ತೆ ಸಂಪರ್ಕವಿಲ್ಲದ ಕಾರಣ, ಅಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವಂತೆ ಸ್ವತಃ ರೈಲ್ವೆ ಇಲಾಖೆಯೇ ವಿನಂತಿಸಿತ್ತು. ಆ ಕೋರಿಕೆಯ ಮೇರೆಗೇ ಈ ಇಡೀ ಯೋಜನೆಯನ್ನು ರೂಪಿಸಲಾಗಿತ್ತು ಎಂದು ಬಿ-ಸ್ಟೈಲ್ ವಾದಿಸಿದೆ.&lt;/p&gt;&lt;p&gt;&quot;ಈ ಯೋಜನೆಯ ಪರಿಕಲ್ಪನೆಯನ್ನು ಸಿದ್ಧಪಡಿಸುವಾಗ ಎಲ್ಲಾ ಪಾಲುದಾರ ಇಲಾಖೆಗಳನ್ನು ಒಳಗೊಂಡಂತೆ ಹಲವು ಸುತ್ತಿನ ಸಭೆಗಳು ನಡೆದಿದ್ದವು. ರೈಲ್ವೆ ಇಲಾಖೆಯು ಇದರ ವಿನ್ಯಾಸವನ್ನು ಒಪ್ಪಿಕೊಂಡಿತ್ತು. ರಚನೆಯ ಕೆಲವು ಭಾಗಗಳು ರೈಲ್ವೆ ಭೂಮಿಯ ಮೇಲೆಯೇ ಹಾದುಹೋಗುವುದರಿಂದ ಅಲ್ಲಿ ತಾತ್ಕಾಲಿಕ ಶೆಡ್&zwnj;ಗಳನ್ನು ನಿರ್ಮಿಸಲಾಗಿತ್ತು. ಆದರೆ ಈಗ ದಿಢೀರನೆ ಇವುಗಳನ್ನು ಧ್ವಂಸಗೊಳಿಸಿರುವುದು ಪ್ರಗತಿಯಲ್ಲಿದ್ದ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಮಾಡಿದೆ,&quot; ಎಂದು ಬಿ-ಸ್ಟೈಲ್ ಹಿರಿಯ ಅಧಿಕಾರಿಯೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಶಂಕುಸ್ಥಾಪನೆಗೆ ಸಿದ್ಧತೆಯ ನಡುವೆ ಗೊಂದಲ&lt;/h2&gt;&lt;p&gt;ಸರ್ಕಾರದ ಅನುಮೋದನೆ ಸಿಕ್ಕ ತಕ್ಷಣ ಗುತ್ತಿಗೆದಾರರು ಮಣ್ಣಿನ ಪರೀಕ್ಷೆ ಸೇರಿದಂತೆ ಪ್ರಾಥಮಿಕ ಕಾಮಗಾರಿಗಳನ್ನು ಚುರುಕಿನಿಂದ ಆರಂಭಿಸಿದ್ದರು. ಮುಂದಿನ ವಾರವಷ್ಟೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಗೆ ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿರುವಾಗಲೇ, ಯೋಜನಾ ಸ್ಥಳದಲ್ಲಿದ್ದ ಅಗತ್ಯ ನಿರ್ಮಾಣಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಿರುವುದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಲ್ಲಿ ಭಾರಿ ಗೊಂದಲ ಸೃಷ್ಟಿಸಿದೆ.&lt;/p&gt;&lt;h2&gt;ಮೌನಕ್ಕೆ ಶರಣಾದ ರೈಲ್ವೆ ಇಲಾಖೆ&lt;/h2&gt;&lt;p&gt;ನೈಋತ್ಯ ರೈಲ್ವೆಯ ಉನ್ನತ ಅಧಿಕಾರಿಯೊಬ್ಬರ ಆದೇಶದ ಮೇರೆಗೇ ಈ ತೆರವು ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇಲಾಖೆಗಳ ನಡುವೆ ಸಭೆ ನಡೆದು ಒಪ್ಪಿಗೆ ಸಿಕ್ಕಿದ್ದರೂ ಈ ಕ್ರಮ ಕೈಗೊಳ್ಳಲು ನಿಖರ ಕಾರಣ ಏನೆಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಲು ವಿಭಾಗೀಯ ರೈಲ್ವೆ ಮೌನವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-flyover-row-south-western-railway-demolishes-b-style-structure-at-baiyappanahalli-gdp/articleshow-qdrig3m"/>
        </item>
        <item>
            <title><![CDATA[ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣ ಮತ್ತಷ್ಟು ದುಬಾರಿ: ಮೂರೇ ತಿಂಗಳಲ್ಲಿ ಎರಡನೇ ಬಾರಿ ಟೋಲ್ ದರ ಏರಿಕೆ!]]></title>
            <link>https://kannada.asianetnews.com/state/bengaluru-mysuru-expressway-toll-hiked-again-just-three-months-after-last-revision-gdp/articleshow-qy7b9bg</link>
            <guid isPermaLink="true">https://kannada.asianetnews.com/state/bengaluru-mysuru-expressway-toll-hiked-again-just-three-months-after-last-revision-gdp/articleshow-qy7b9bg</guid>
            <pubDate>Wed, 22 Jul 2026 17:59:58 +0530</pubDate>
            <description><![CDATA[ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಬೆಂಗಳೂರು-ಮೈಸೂರು ಎಕ್ಸ್&zwnj;ಪ್ರೆಸ್&zwnj;ವೇಯಲ್ಲಿ ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ಹೆಚ್ಚಿಸಿದೆ. ಕನಿಮಿನಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಜಾರಿಗೆ ಬಂದಿರುವ ಈ ಹೊಸ ದರ ಏರಿಕೆಯು ಕಾರುಗಳಿಂದ ಹಿಡಿದು ಭಾರಿ ವಾಹನಗಳವರೆಗೆ ಎಲ್ಲ ಸವಾರರ ಮೇಲೆ ಪರಿಣಾಮ ಬೀರಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gv81hz0qp3833hvfw8jzgh0m,imgname-p4-1678528543767.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಂಚರಿಸುವ ವಾಹನ ಸವಾರರ ಜೇಬಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಮ್ಮೆ ಭಾರಿ ಮೊತ್ತದ ಕತ್ತರಿ ಹಾಕಿದೆ. ಇತ್ತೀಚೆಗಷ್ಟೇ ಅಂದರೆ ಕಳೆದ ಏಪ್ರಿಲ್ 1 ರಂದು ತನ್ನ ವಾರ್ಷಿಕ ಟೋಲ್ ದರ ಪರಿಷ್ಕರಣೆ ಜಾರಿಗೆ ತಂದಿದ್ದ ಹೆದ್ದಾರಿ ಪ್ರಾಧಿಕಾರ, ಇದೀಗ ಕೇವಲ ಮೂರು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಟೋಲ್ ದರವನ್ನು ದಿಢೀರ್ ಹೆಚ್ಚಳ ಮಾಡಿದೆ. ಈ ಅನಿರೀಕ್ಷಿತ ದರ ಏರಿಕೆಯು ಹೆದ್ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ವಾಣಿಜ್ಯ ವಾಹನ ಮಾಲೀಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಕನಿಮಿನಿಕೆ, ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಅನ್ವಯ&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ 275 (NH-275) ರ ಬೆಂಗಳೂರು-ನಿಡಘಟ್ಟ ನಡುವಿನ ಆರು ಪಥಗಳ (ಸಿಕ್ಸ್ ಲೈನ್) ಎಕ್ಸ್&zwnj;ಪ್ರೆಸ್&zwnj;ವೇ ಬಳಸುವ ವಾಹನಗಳಿಗೆ ಈ ಹೊಸ ದರ ಹೆಚ್ಚಳ ಅನ್ವಯವಾಗಲಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಕನಿಮಿನಿಕೆ ಟೋಲ್ ಪ್ಲಾಜಾ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ಶುಲ್ಕವನ್ನು ಜಾರಿಗೆ ತರಲಾಗಿದೆ.&lt;/p&gt;&lt;h2&gt;ಕಾರು, ಜೀಪ್ ಪ್ರಯಾಣಿಕರಿಗೆ ಇನ್ನು ₹185 ಭಾರ&lt;/h2&gt;&lt;p&gt;ಕಳೆದ ಏಪ್ರಿಲ್ 1ರ ವಾರ್ಷಿಕ ದರ ಪರಿಷ್ಕರಣೆಯ ವೇಳೆ ಕಾರುಗಳ ಟೋಲ್ ಶುಲ್ಕವನ್ನು ₹175 ರಿಂದ ₹180 ಕ್ಕೆ ಏರಿಸಲಾಗಿತ್ತು. ಆದರೆ ಈಗ ಕೇವಲ ಮೂರು ತಿಂಗಳಲ್ಲಿ ಮತ್ತೊಮ್ಮೆ ದರ ಪರಿಷ್ಕರಿಸಲಾಗಿದ್ದು, ಕಾರು, ಜೀಪ್, ವ್ಯಾನ್ ಹಾಗೂ ಇತರೆ ಹಗುರ ವಾಹನಗಳ ಒಂದು ಬಾರಿಯ (ಸಿಂಗಲ್ ಜರ್ನಿ) ಟೋಲ್ ಶುಲ್ಕವನ್ನು ₹180 ರಿಂದ ₹185 ಕ್ಕೆ ಹೆಚ್ಚಿಸಲಾಗಿದೆ. ಇನ್ನು ನಿಗದಿತ ಅವಧಿಯೊಳಗಿನ ರಿಟರ್ನ್ ಜರ್ನಿ (ರಾಷ್ಟ್ರೀಯ ನಿಯಮಾವಳಿಗಳ ಅನ್ವಯದ ಒಟ್ಟು ದರ) ಒಟ್ಟು ಶುಲ್ಕವನ್ನು ₹275 ಕ್ಕೆ ಏರಿಸಲಾಗಿದೆ.&lt;/p&gt;&lt;h2&gt;ಮಾಸಿಕ ಪಾಸ್ ದರವೂ ದುಬಾರಿ; ಸ್ಥಳೀಯರಿಗೆ ಮಾತ್ರ ವಿನಾಯಿತಿ&lt;/h2&gt;&lt;p&gt;ಪ್ರತಿ ತಿಂಗಳು 50 ಬಾರಿ ಪ್ರಯಾಣಿಸಲು ಅವಕಾಶವಿರುವ ನಿಯಮಿತ ಮಾಸಿಕ ಪಾಸ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಈ ಮುಂಚೆ ₹5,940 ಇದ್ದ ಮಾಸಿಕ ಪಾಸ್ ಬೆಲೆ ಈಗ ₹6,100 ಕ್ಕೆ ತಲುಪಿದೆ. ಆದರೆ, ಟೋಲ್ ಪ್ಲಾಜಾದ ಸುತ್ತಮುತ್ತಲಿನ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ನಿವಾಸಿಗಳಿಗೆ ನೀಡಲಾಗುವ ಸ್ಥಳೀಯ ಮಾಸಿಕ ಪಾಸ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಮುಂಚೆ ಇದ್ದ ₹360 ರ ದರವೇ ಮುಂದೆಯೂ ಮುಂದುವರಿಯಲಿದೆ ಎಂದು ಪ್ರಾಧಿಕಾರ ತಿಳಿಸಿದೆ.&lt;/p&gt;&lt;h2&gt;ವಿವಿಧ ವಾಹನಗಳ ಹೊಸ ಟೋಲ್ ದರ ಪಟ್ಟಿ (ಒಂದು ಬಾರಿಯ ಪ್ರಯಾಣಕ್ಕೆ)&lt;/h2&gt;&lt;p&gt;ವಾಣಿಜ್ಯ ಹಾಗೂ ಭಾರಿ ಸರಕು ಸಾಗಣೆ ವಾಹನಗಳ ಟೋಲ್ ದರದಲ್ಲೂ ಭಾರಿ ಹೆಚ್ಚಳವಾಗಿದ್ದು, ಪರಿಷ್ಕೃತ ಪಟ್ಟಿ ಈ ಕೆಳಗಿನಂತಿದೆ:&lt;/p&gt;&lt;p&gt;ಲಘು ವಾಣಿಜ್ಯ ವಾಹನಗಳು, ಮಿನಿ ಬಸ್ ಹಾಗೂ ಲಘು ಸರಕು ವಾಹನಗಳು: ₹295&lt;/p&gt;&lt;p&gt;ಟ್ರಕ್ ಮತ್ತು ಬಸ್&zwnj;ಗಳು (ಡಬಲ್ ಆಕ್ಸಲ್): ₹620&lt;/p&gt;&lt;p&gt;ಮೂರು ಆಕ್ಸಲ್ ಇರುವ ವಾಣಿಜ್ಯ ವಾಹನಗಳು: ₹675&lt;/p&gt;&lt;p&gt;ಭಾರೀ ನಿರ್ಮಾಣ ಯಂತ್ರೋಪಕರಣಗಳು ಮತ್ತು ಬಹು-ಆಕ್ಸಲ್ ವಾಹನಗಳು (4 ರಿಂದ 6 ಆಕ್ಸಲ್): ₹970&lt;/p&gt;&lt;p&gt;ಅತಿ ದೊಡ್ಡ ವಾಹನಗಳು (7 ಅಥವಾ ಅದಕ್ಕಿಂತ ಹೆಚ್ಚು ಆಕ್ಸಲ್): ₹1,180&lt;/p&gt;&lt;p&gt;ವರ್ಷಕ್ಕೆ ಒಮ್ಮೆ ಟೋಲ್ ದರ ಪರಿಷ್ಕರಣೆ ಮಾಡುವುದು ಸಾಮಾನ್ಯ ನಿಯಮ. ಆದರೆ, ಏಪ್ರಿಲ್&zwnj;ನಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ, ಜುಲೈ ಅವಧಿಯಲ್ಲಿ ಅಂದರೆ ಕೇವಲ 90 ದಿನಗಳ ಅಂತರದಲ್ಲಿ ಮತ್ತೊಮ್ಮೆ ಶುಲ್ಕವನ್ನು ಪರಿಷ್ಕರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಪದೇ ಪದೇ ದರ ಹೆಚ್ಚಳ ಮಾಡುತ್ತಿರುವುದರಿಂದ ಸರಕು ಸಾಗಣೆ ವೆಚ್ಚ ಅಧಿಕವಾಗಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಭೀತಿಯೂ ಎದುರಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/bengaluru-mysuru-expressway-toll-hiked-again-just-three-months-after-last-revision-gdp/articleshow-qy7b9bg"/>
        </item>
        <item>
            <title><![CDATA[Bengaluru: 2ನೇ ಏರ್‌ಪೋರ್ಟ್ ಸರ್ವೇಗೆ ಬಂದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ ರೈತರು]]></title>
            <link>https://kannada.asianetnews.com/bengaluru-rural/bengaluru-rural-farmers-send-back-officials-who-came-for-the-2nd-airport-survey-mrq/articleshow-ro0sevd</link>
            <guid isPermaLink="true">https://kannada.asianetnews.com/bengaluru-rural/bengaluru-rural-farmers-send-back-officials-who-came-for-the-2nd-airport-survey-mrq/articleshow-ro0sevd</guid>
            <pubDate>Wed, 22 Jul 2026 10:17:26 +0530</pubDate>
            <description><![CDATA[&lt;p&gt;ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ ನಡೆಸಲು ಬಂದಿದ್ದ ಭೂ ಸರ್ವೇ ಕಾರ್ಯವನ್ನು ಸ್ಥಳೀಯ ರೈತರು ತಡೆದು ನಿಲ್ಲಿಸಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೆ ರಹಸ್ಯವಾಗಿ ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನು ಮುತ್ತಿಗೆ ಹಾಕಿ, ತೀವ್ರ ವಿರೋಧ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky42b6r079mbtey6rp2dzhes,imgname-bengaluru-2nd-airport-1784695593728.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾಬಸ್&zwj;ಪೇಟೆ: &lt;/strong&gt;ಬೆಂಗಳೂರಿನ 2ನೇ ಹಂತದ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ನಡೆಸಲು ಬಂದ ಭೂ ಸರ್ವೇ ಕಾರ್ಯಕ್ಕೆ ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯ ಮೋಟಗಾನಹಳ್ಳಿ ಸುತ್ತಮುತ್ತಲ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ವೇ ಕಾರ್ಯವನ್ನು ತಡೆದು ನಿಲ್ಲಿಸಿದ್ದಾರೆ.&lt;/p&gt;&lt;p&gt;ಸೋಲೂರು ಹೋಬಳಿ ವ್ಯಾಪ್ತಿಯ ಮೋಟಗಾನಹಳ್ಳಿ, ಕೆಂಪಚಿಕ್ಕನಹಳ್ಳಿ, ಕೋಡಿಹಳ್ಳಿ, ಪೆಮ್ಮನಹಳ್ಳಿ, ದಾಸೇಗೌಡನಪಾಳ್ಯ ಮತ್ತು ಶೆಟ್ಟಿಪಾಳ್ಯ. ಶ್ರೀರಾಮಪುರ ಕಾಲೋನಿ, ಬಸವೇನಹಳ್ಳಿ, ಭಾಗದ ಕೃಷಿ ಜಮೀನುಗಳಲ್ಲಿ ಯಾವುದೇ ಪೂರ್ವ ಮಾಹಿತಿ ನೀಡದೆ ರಹಸ್ಯವಾಗಿ ಸರ್ವೇ ನಡೆಸಲು ಬಂದಿದ್ದ ಸಿಬ್ಬಂದಿಯನ್ನು ರೈತರು ಮತ್ತು ಸಾರ್ವಜನಿಕರು ಒಟ್ಟಾಗಿ ಮುತ್ತಿಗೆ ಹಾಕಿ ವಾಪಸ್ ಕಳುಹಿಸಿದ್ದಾರೆ.&lt;/p&gt;&lt;h2&gt;&lt;strong&gt;ರೈತರ ವಿರೋಧ&lt;/strong&gt;&lt;/h2&gt;&lt;p&gt;ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರಗಳಂದು ಬೆಂಗಳೂರಿನಿಂದ ಬಂದಿದ್ದ ಸರ್ವೇ ಸಿಬ್ಬಂದಿ ಸೋಲೂರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಡ್ರೋನ್ ಹಾಗೂ ಟೋಟಲ್ ಸ್ಟೇಷನ್ ಯಂತ್ರಗಳ ಮೂಲಕ ಅಳತೆ ಕಾರ್ಯ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ರೈತರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಸರ್ವೇಯನ್ನು ತೀವ್ರವಾಗಿ ವಿರೋಧಿಸಿದರು. ಸರ್ವೇ ಮಾಡಲು ಬಂದಿದ್ದ ಸಿಬ್ಬಂದಿಗೆ ಕನ್ನಡ ಭಾಷೆ ತಿಳಿಯದ ಕಾರಣ ಅವರು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತನಾಡಲು ಮುಂದಾದರು.&lt;/p&gt;&lt;h3&gt;&lt;strong&gt;ಸರ್ವೆ ಕಾರ್ಯಕ್ಕೆ ಅರ್ಧಕ್ಕೆ ಮೊಡಕು&lt;/strong&gt;&lt;/h3&gt;&lt;p&gt;ಇದರಿಂದ ಮತ್ತಷ್ಟು ಅಸಮಾಧಾನಗೊಂಡ ರೈತರು ಕೂಡಲೇ ಸರ್ವೇ ನಿಲ್ಲಿಸುವಂತೆ ಒತ್ತಾಯಿಸಿ, ಸಿಬ್ಬಂದಿ ತಂದಿದ್ದ ಡ್ರೋನ್ ಹಾಗೂ ಟೋಟಲ್ ಸ್ಟೇಷನ್ ಉಪಕರಣಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಹೆದರಿದ ಸಿಬ್ಬಂದಿ ತಮ್ಮ ಉಪಕರಣಗಳನ್ನು ತರಾತುರಿಯಲ್ಲಿ ಬಾಕ್ಸ್ ನಲ್ಲಿ ಮುಚ್ಚಿಟ್ಟುಕೊಂಡು ಸರ್ವೇ ಕಾರ್ಯವನ್ನು ಅರ್ಧದಲ್ಲೇ ನಿಲ್ಲಿಸಿ ಬೆಂಗಳೂರಿನತ್ತ ಕಾಲ್ಕಿತ್ತಿದ್ದಾರೆ.&lt;/p&gt;&lt;p&gt;ಈಗಾಗಲೇ ಮೋಟಗಾನಹಳ್ಳಿ, ಕೆಂಪಚಿಕ್ಕನಹಳ್ಳಿ, ಕೋಡಿಹಳ್ಳಿ, ಪೆಮ್ಮನಹಳ್ಳಿ, ದಾಸೆಗೌಡನಪಾಳ್ಯ ಹಾಗೂ ಶೆಟ್ಟಿಪಾಳ್ಯ ಭಾಗದ ಜಮೀನುಗಳಲ್ಲಿ ಚೌಕಾಕಾರದ ಗುರುತುಗಳನ್ನು ಹಾಕಿ (ಜಿಸಿಪಿ43) ಅಳತೆ ಕಾರ್ಯ ನಡೆಸಲಾಗಿದ್ದು, ಇದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಸರ್ವೆ ಕಾರ್ಯ ನಿಲ್ಲಿಸದಿದ್ದರೆ ಪ್ರತಿಭಟನೆ&lt;/strong&gt;&lt;/h3&gt;&lt;p&gt;ರಾಜ್ಯ ಸರ್ಕಾರ ರೈತರ ಒಪ್ಪಿಗೆ ಪಡೆದು ಮಾತ್ರ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದಾಗಿ ಹೇಳಿಕೆ ನೀಡುತ್ತಿದ್ದರೂ, ಯಾವುದೇ ಪೂರ್ವ ಮಾಹಿತಿ ನೀಡದೆ ಕೃಷಿ ಜಮೀನು ಹಾಗೂ ತೋಟಗಳಿಗೆ ನುಗ್ಗಿ ರಹಸ್ಯವಾಗಿ ಸರ್ವೇ ನಡೆಸುತ್ತಿರುವುದು ಸರಿಯಲ್ಲ ಎಂದು ಸ್ಥಳೀಯ ರೈತರು ಮತ್ತು ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ, ಮತ್ತೆ ನಾಲ್ಕು ಸಾವಿರ ಎಕರೆಗೂ ಹೆಚ್ಚು ಭೂಸ್ವಾಧೀನಕ್ಕೆ ಮುಂದಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.&amp;nbsp;&lt;/p&gt;&lt;p&gt;ಮುಂದಿನ ದಿನಗಳಲ್ಲಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವೇ ಮುಂದುವರಿಸಿದರೆ ಮಹಿಳೆಯರು ಕೋಲು, ದೊಣ್ಣೆ ಹಾಗೂ ಪೊರಕೆಗಳೊಂದಿಗೆ ಉಗ್ರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ರೈತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೋಟಗಾನಹಳ್ಳಿ ಮತ್ತು ಸೋಲೂರು ಸುತ್ತಮುತ್ತಲಿನ ಭಾಗದಲ್ಲಿ ಸರ್ವೇ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.&lt;/p&gt;&lt;h3&gt;&lt;strong&gt;ಉಗ್ರ ಹೋರಾಟದ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಯಾವುದೇ ಪೂರ್ವ ಸೂಚನೆ ನೀಡದೆ, ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೃಷಿ ಜಮೀನುಗಳಲ್ಲಿ ಈ ರೀತಿ ರಹಸ್ಯವಾಗಿ ಸರ್ವೇ ನಡೆಸುವುದು ಸರಿಯಾದ ಕ್ರಮವಲ್ಲ. ಹಗಲಿರುಳು ಕಷ್ಟಪಟ್ಟು ದುಡಿಯುವ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಿಮಾನ ನಿಲ್ದಾಣದ ಹೆಸರಿನಲ್ಲಿ ಕಸಿದುಕೊಳ್ಳಲು ನಾವು ಬಿಡುವುದಿಲ್ಲ. ಸರ್ಕಾರದ ಈ ಏಕಪಕ್ಷೀಯ ಧೋರಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಇದನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು.&lt;/p&gt;&lt;p&gt;-ಚಿಕ್ಕಹನುಮೇಗೌಡ, ಮಾಲೀಕರು, ಕುಮುದ್ವತಿ ಸಂಸ್ಥೆ&lt;/p&gt;&lt;p&gt;ರೈತರ ಒಪ್ಪಿಗೆಯಿಲ್ಲದೆ ಅವರ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಅನ್ನ ನೀಡುವ ಕೃಷಿ ಭೂಮಿಯನ್ನು ರಕ್ಷಿಸಲು ರೈತರು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಸರ್ಕಾರದ ಈ ಅಕ್ರಮ ಸರ್ವೇ ಮತ್ತು ಬಲವಂತದ ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ನಾವು ನ್ಯಾಯಾಲಯದಲ್ಲೂ ಕಾನೂನಾತ್ಮಕವಾಗಿ ಹೋರಾಟ ನಡೆಸಲಿದ್ದೇವೆ. ನಮ್ಮ ಜಮೀನನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.&lt;/p&gt;&lt;p&gt;-ಗಿರೀಶ್, ರೈತ ಮುಖಂಡರು, ವಕೀಲರು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;2ನೇ ಏರ್&zwnj;ಪೋರ್ಟ್ ತುಮಕೂರು ಜಿಲ್ಲೆಯಲ್ಲಾಗಲಿ: 3 ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ&lt;/strong&gt;&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-rural/bengaluru-rural-farmers-send-back-officials-who-came-for-the-2nd-airport-survey-mrq/articleshow-ro0sevd"/>
        </item>
        <item>
            <title><![CDATA[ರಾಜ್ಯ ಸರ್ಕಾರಕ್ಕೆ ಬೇಡವಾಯ್ತಾ ಎಲೆಕ್ಟ್ರಿಕ್‌ ಬಸ್!? ಬೆಂಗಳೂರಿಗೆ ಮಂಜೂರಾಗಿದ್ದ 4,500 ಇ-ಬಸ್‌ಗಳು ಕೈತಪ್ಪುವ ಭೀತಿ!]]></title>
            <link>https://kannada.asianetnews.com/karnataka-districts/bmtc-offline-on-electric-buses-bengaluru-risks-losing-rs1505-crore-central-subsidy-for-4500-electric-buses-gdp/articleshow-x1otn1o</link>
            <guid isPermaLink="true">https://kannada.asianetnews.com/karnataka-districts/bmtc-offline-on-electric-buses-bengaluru-risks-losing-rs1505-crore-central-subsidy-for-4500-electric-buses-gdp/articleshow-x1otn1o</guid>
            <pubDate>Tue, 21 Jul 2026 10:55:59 +0530</pubDate>
            <description><![CDATA[ಕೇಂದ್ರ ಸರ್ಕಾರದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರಿಗೆ ಮಂಜೂರಾಗಿದ್ದ 4,500 ಎಲೆಕ್ಟ್ರಿಕ್ ಬಸ್&zwnj;ಗಳು, ರಾಜ್ಯ ಸರ್ಕಾರದ ವಿಳಂಬ ನೀತಿ ಮತ್ತು ಅನುಮೋದನೆಯ ಕೊರತೆಯಿಂದಾಗಿ ಬೇರೆ ರಾಜ್ಯಗಳ ಪಾಲಾಗುವ ಆತಂಕ ಎದುರಿಸುತ್ತಿವೆ. ಬಿಎಂಟಿಸಿ ಇನ್ನೂ ಕಾರ್ಯಾದೇಶ ನೀಡದ ಕಾರಣ, ಕೋಟ್ಯಂತರ ರೂಪಾಯಿ ಸಬ್ಸಿಡಿ ಸಹಿತ ಈ ಬೃಹತ್ ಯೋಜನೆ ಕೈತಪ್ಪುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvs0pk3gazma9y58pd308atf,imgname----------------------55--1782177287280.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಲಿಕಾನ್ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಪರಿಸರಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ಬರೋಬ್ಬರಿ 4,500 ಎಲೆಕ್ಟ್ರಿಕ್ ಬಸ್&zwnj;ಗಳು ಈಗ ರಾಜ್ಯ ಸರ್ಕಾರದ ಉದಾಸೀನತೆಯಿಂದಾಗಿ ಬೇರೆ ರಾಜ್ಯಗಳ ಪಾಲಾಗುವ ಆತಂಕ ಎದುರಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ 'ಪಿಎಂ ಇ-ಡ್ರೈವ್' ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ಈ ಬಸ್&zwnj;ಗಳನ್ನು ಮಂಜೂರು ಮಾಡಲಾಗಿತ್ತಾದರೂ, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಇಡೀ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.&lt;/p&gt;&lt;h2&gt;ಕೇಂದ್ರದ ಟೆಂಡರ್ ಮುಗಿದರೂ ಬಿಎಂಟಿಸಿ ಮೌನ&lt;/h2&gt;&lt;p&gt;ಕೇಂದ್ರ ಸರ್ಕಾರವು ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ 2025ರಲ್ಲೇ ಟೆಂಡರ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆದರೆ, ಟೆಂಡರ್ ಮುಗಿದು ತಿಂಗಳುಗಳು ಕಳೆದರೂ ಬಿಎಂಟಿಸಿ ಇಂದಿಗೂ ತಯಾರಕ ಕಂಪನಿಗಳಿಗೆ ಕಾರ್ಯಾದೇಶ (Work Order) ನೀಡಲು ಮುಂದಾಗಿಲ್ಲ. ರಾಜ್ಯ ಸಚಿವ ಸಂಪುಟದಿಂದ (Cabinet) ಇನ್ನೂ ಅಧಿಕೃತ ಅನುಮೋದನೆ ಸಿಗದ ಕಾರಣ ಬಿಎಂಟಿಸಿ ಹಿರಿಯ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ.&lt;/p&gt;&lt;h2&gt;ಇತರ ರಾಜ್ಯಗಳ ಪಾಲಾಗುತ್ತಾ ಬೆಂಗಳೂರಿನ ಬಸ್&zwnj;ಗಳು?&lt;/h2&gt;&lt;p&gt;ಕರ್ನಾಟಕ ಸರ್ಕಾರದ ಈ ಆಮೆಗತಿಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ನೆರೆರಾಜ್ಯಗಳು ಬೆಂಗಳೂರಿಗೆ ಹಂಚಿಕೆಯಾಗಿರುವ ಬಸ್&zwnj;ಗಳನ್ನು ತಮ್ಮದಾಗಿಸಿಕೊಳ್ಳಲು ಹೊಂಚು ಹಾಕುತ್ತಿವೆ. ಹೈದರಾಬಾದ್, ಸೂರತ್ ಹಾಗೂ ಅಹಮದಾಬಾದ್&zwnj;ನಂತಹ ಪ್ರಮುಖ ನಗರಗಳ ಸಾರಿಗೆ ಸಂಸ್ಥೆಗಳು ಈಗಾಗಲೇ ತಮ್ಮ ಪಾಲಿನ ಕಾರ್ಯಾದೇಶವನ್ನು ನೀಡಿ ಇ-ಬಸ್&zwnj;ಗಳನ್ನು ರಸ್ತೆಗಿಳಿಸಲು ಸಜ್ಜಾಗಿವೆ. ಆದರೆ ತಾಂತ್ರಿಕವಾಗಿ ಮುಂಚೂಣಿಯಲ್ಲಿರಬೇಕಾದ ಬೆಂಗಳೂರು ಮಾತ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹಿನ್ನಡೆ ಅನುಭವಿಸುತ್ತಿದೆ.&lt;/p&gt;&lt;h2&gt;ಕೋಟ್ಯಂತರ ರೂಪಾಯಿ ಸಬ್ಸಿಡಿ ಸಿಕ್ಕರೂ ನಿರಾಸಕ್ತಿ&lt;/h2&gt;&lt;p&gt;ಈ ಯೋಜನೆಯಡಿ ಕೇಂದ್ರ ಸರ್ಕಾರವು ಬೆಂಗಳೂರಿಗೆ ಬರೋಬ್ಬರಿ 1,505 ಕೋಟಿ ರೂಪಾಯಿಗಳ ಬೃಹತ್ ಸಹಾಯಧನವನ್ನು (Subsidy) ನೀಡಲು ಒಪ್ಪಿಕೊಂಡಿದೆ. ಕೇಂದ್ರದಿಂದ ಇಷ್ಟೊಂದು ದೊಡ್ಡ ಮೊತ್ತದ ಆರ್ಥಿಕ ನೆರವು ಸಿಗುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ. ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ತನ್ನ ಪಾಲಿನ 500 ರಿಂದ 850 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಬೇಕಾಗಿದ್ದು, ಈ ಹಣಕಾಸಿನ ಹಂಚಿಕೆಗೆ ಮಂಜೂರಾತಿ ನೀಡಲು ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಕೇಂದ್ರ ಸರ್ಕಾರದ ತೀವ್ರ ಅಸಮಾಧಾನ&lt;/h2&gt;&lt;p&gt;ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಸರ್ಕಾರ ತೋರುತ್ತಿರುವ ಬೇಜವಾಬ್ದಾರಿತನ ಮತ್ತು ವಿಳಂಬ ಧೋರಣೆಗೆ ಕೇಂದ್ರ ಸಾರಿಗೆ ಸಚಿವಾಲಯ ತೀವ್ರ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ ನಿಯಮಾವಳಿಗಳ ಪ್ರಕಾರ ನಿಗದಿತ ಅವಧಿಯೊಳಗೆ ಕಾರ್ಯಾದೇಶ ನೀಡದಿದ್ದರೆ, ಈ 4,500 ಬಸ್&zwnj;ಗಳನ್ನು ತಕ್ಷಣವೇ ಬೇಡಿಕೆ ಇರುವ ಇತರ ರಾಜ್ಯಗಳಿಗೆ ವರ್ಗಾಯಿಸುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.&lt;/p&gt;&lt;h2&gt;ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ ಏನು ಹೇಳ್ತೀರಿ?&lt;/h2&gt;&lt;p&gt;ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತು ವಾಯು ಮಾಲಿನ್ಯವನ್ನು ತಡೆಗಟ್ಟಲು ಇಂತಹ ಬೃಹತ್ ಎಲೆಕ್ಟ್ರಿಕ್ ಬಸ್&zwnj;ಗಳ ಅಗತ್ಯತೆ ತುರ್ತಾಗಿದೆ. ಪರಿಸ್ಥಿತಿ ಹೀಗಿರುವಾಗ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಈ ವಿಷಯದಲ್ಲಿ ಇಷ್ಟೊಂದು ಉದಾಸೀನತೆ ತೋರುತ್ತಿರುವುದು ಏಕೆ ಎಂಬ ಪ್ರಶ್ನೆ ಎದ್ದಿದೆ. ಇನ್ನಾದರೂ ರಾಜ್ಯ ಸರ್ಕಾರ ಮತ್ತು ಸಾರಿಗೆ ಸಚಿವರು ತಕ್ಷಣ ಎಚ್ಚೆತ್ತುಕೊಂಡು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆದು ಕಾರ್ಯಾದೇಶ ಹೊರಡಿಸಬೇಕಿದೆ. ಇಲ್ಲದಿದ್ದರೆ ಸಿಲಿಕಾನ್ ಸಿಟಿಯ ಪಾಲಾಗಬೇಕಿದ್ದ ಸಾವಿರಾರು ಇ-ಬಸ್&zwnj;ಗಳು ನೆರೆರಾಜ್ಯಗಳ ಹೈದರಾಬಾದ್ ಅಥವಾ ಸೂರತ್ ನಗರಗಳ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bmtc-offline-on-electric-buses-bengaluru-risks-losing-rs1505-crore-central-subsidy-for-4500-electric-buses-gdp/articleshow-x1otn1o"/>
        </item>
        <item>
            <title><![CDATA[ವೈದ್ಯಕೀಯ ರಂಗಕ್ಕೇ ಸವಾಲೊಡ್ಡಿ ಸಾವನ್ನು ಗೆದ್ದಿದ್ದ ಚೆನ್ನಮ್ಮ: ಕನ್ನಡಿಗೂ ಚಾಲೆಂಜ್ ಹಾಕಿದ್ದ ದೇವೇಗೌಡರ ಪತ್ನಿ]]></title>
            <link>https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b</link>
            <guid isPermaLink="true">https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b</guid>
            <pubDate>Mon, 20 Jul 2026 12:26:28 +0530</pubDate>
            <description><![CDATA[ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ನಿಧನದ ನಂತರ, 2001ರಲ್ಲಿ ಅವರ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ನಡೆದ ರಾಜಕೀಯ ಪ್ರೇರಿತ ಆ್ಯಸಿಡ್ ದಾಳಿಯ ಘೋರ ಘಟನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದಾಳಿಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಗೆದ್ದ ಅವರ ಧೈರ್ಯದ ಕಥೆಯನ್ನು ಅವರ ಅಳಿಯ ಡಾ.ಸಿ.ಎನ್. ಮಂಜುನಾಥ್ ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz4yr61evy8bt4m03jrjnqv,imgname-chennamma-1784530559169.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸರ್ವಸ್ವ ಆಗಿದ್ದ, ಅವರ ಬದುಕನ್ನು ರೂಪಿಸಿದ್ದ ರೂವಾರಿ ಚೆನ್ನಮ್ಮ (Chennamma Deve Gowda) ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ.ಅವರ ನಿಧನದ ಬಳಿಕ ಅವರ ಬದುಕಿನ ಹಲವಾರು ರೋಚಕ ಘಟನೆಗಳು, ಅಪರೂಪದ ಘಟನೆಗಳು, ನೋವಿನ ದಿನಗಳ ಬಗ್ಗೆ ಅವರ ಸಂಬಂಧಿಕರು ಒಂದೊಂದೇ ವಿಷಯವನ್ನು ಬಿಚ್ಚಿಡುತ್ತಿದ್ದಾರೆ. ಅದರಲ್ಲಿಯೂ 2001ರ ಫೆಬ್ರವರಿ 21ರ ಮಹಾಶಿವರಾತ್ರಿಯ ವೇಳೆ ನಡೆದ ಘಟನೆ ಮಾತ್ರ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಅದು ಕೌಟುಂಬಿಕ ವೈಷಮ್ಯ ಮತ್ತು ರಾಜಕೀಯ ಪ್ರೇರಣೆಯಿಂದ ಆಗಿದ್ದ ಆ್ಯಸಿಡ್​ ದಾಳಿ.&lt;/p&gt;&lt;p&gt;ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಈಶ್ವರ ದೇವಸ್ಥಾನಕ್ಕೆ ದೇವೇಗೌಡರ ಕುಟುಂಬವು ವಿಶೇಷ ಪೂಜೆ ಸಲ್ಲಿಸಲು ತೆರಳಿತ್ತು. ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಪೂಜೆ ಮುಗಿಸಿಕೊಂಡು ಹೊರಬರುತ್ತಿದ್ದಾಗ, ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಅವರ ಸೊಸೆ ಭವಾನಿ ರೇವಣ್ಣ (ಎಚ್.ಡಿ. ರೇವಣ್ಣ ಅವರ ಪತ್ನಿ) ಅವರ ಮೇಲೆ ಏಕಾಏಕಿ ಆಸಿಡ್ ಎರಚಲಾಯಿತು. ಈ ಘೋರ ಕೃತ್ಯದಲ್ಲಿ ಚನ್ನಮ್ಮ ಹಾಗೂ ಭವಾನಿ ರೇವಣ್ಣ ಇಬ್ಬರೂ ತೀವ್ರವಾಗಿ ಸುಟ್ಟು ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಬೇಕಾಯಿತು. ಈ ಬಗ್ಗೆ ದೇವೇಗೌಡರು ಸತ್ಯಾಂಶವನ್ನು ಬಹಿರಂಗಪಡಿಸಿದ್ದರು. ವೀಕೆಂಡ್​ ವಿತ್​ ರಮೇಶ್​ ಕಾರ್ಯಕ್ರಮದಲ್ಲಿ ಅವರು, 'ನನ್ನ ತಮ್ಮನ ಮಗನೇ ಆಸಿಡ್ ಹಾಕಿದ್ದು ನಿಜ. ಆದರೆ, ಆತನ ಹಿಂದೆ ರಾಜಕೀಯ ಮುಖಂಡರ ಪ್ರೇರಣೆ ಇತ್ತು. ವಾಸ್ತವವಾಗಿ ಅವರ ಸಂಚು ಇದ್ದದ್ದು ನನ್ನ ಮಗ ಹೆಚ್.ಡಿ. ರೇವಣ್ಣನ ಮೇಲೆ ಆಸಿಡ್ ಹಾಕುವುದಾಗಿತ್ತು. ನಾವೆಲ್ಲ ಮಹಾದೇಶ್ವರ ಬೆಟ್ಟಕ್ಕೆ ಹೋದಾಗ ರೇವಣ್ಣ ಬಂದಿರಲಿಲ್ಲ, ಹೀಗಾಗಿ ನನ್ನ ಪತ್ನಿ ಮತ್ತು ಸೊಸೆಯ ಮೇಲೆ ದಾಳಿ ನಡೆಯಿತು' ಎಂದು ಹೇಳಿದ್ದರು. ಇದೀಗ ಆ ಘಟನೆಯ ಬಗ್ಗೆ ಅವರ ಅಳಿಯ ಡಾ.ಸಿ.ಎನ್ ಮಂಜುನಾಥ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.&lt;/p&gt;&lt;h2&gt;&lt;strong&gt;ವೈದ್ಯಕೀಯಕ್ಕೇ ಸವಾಲು&lt;/strong&gt;&lt;/h2&gt;&lt;p&gt;ಆಗ ಆ್ಯಸಿಡ್ ದಾಳಿಯಾದಾಗ ಶೇಕಡಾ 2ರಷ್ಟು ಮಾತ್ರ ಬದುಕುಳಿಯುತ್ತಾರೆ ಎಂದಿದ್ದರು, ಆದರೆ ಅವರ ಧೈರ್ಯಗುಂದಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಸಾವನ್ನು ಗೆದ್ದಿದ್ದರು. ಮುಖಕ್ಕೆ ಆ್ಯಸಿಡ್ ಬಿದ್ದಿದ್ದಕ್ಕೆ, ಮುಖ ನೋಡಿಕೊಳ್ಳಬಾರದು ಅಂತ ಕನ್ನಡಿಗೆ ಕವರ್ ಹಾಕಿದ್ದೆವು. ಆದರೆ ಅದಕ್ಕೂ ಚಾಲೆಂಜ್​ ಹಾಕಿದ್ದ ಚೆನ್ನಮ್ಮ ನಾನು ಇದನ್ನು ಅಕ್ಸೆಪ್ಟ್ ಮಾಡುತ್ತೇನೆ, ಕವರ್ ತೆಗೆಯಿರಿ ಎಂದಿದ್ದರು. ಅಂಥ ಗಟ್ಟಿಗಿತ್ತಿಯಾಗಿದ್ದ ಚೆನ್ನಮ್ಮ ಅವರನ್ನು 40 ವರ್ಷಗಳಿಂದ ನೋಡಿದ್ದೇನೆ ಎಂದು ಡಾ.ಮಂಜುನಾಥ್​ ಭಾವುಕರಾದರು.&lt;/p&gt;&lt;h3&gt;&lt;strong&gt;ದಂಪತಿ ಒಡನಾಟ&lt;/strong&gt;&lt;/h3&gt;&lt;p&gt;ಚೆನ್ನಮ್ಮ ದೇವೇಗೌಡರಿಗಾಗಿ ಊಟ ಮಾಡದೇ ಕಾಯುತ್ತಿದ್ದರು. ಅವರಿಗಾಗಿ ಇವರು ಕಾಯುತ್ತಿದ್ದರು, ಇವರಿಗಾಗಿ ಅವರು ಕಾಯುತ್ತಿದ್ದರು ಎಂದು ಘಟನೆಯನ್ನು ನೆನಪಿಸಿಕೊಂಡರು. ಅವರಿಗೆ ಒಂದು ವರ್ಷದಿಂದ ಉಸಿರಾಟದ ಸಮಸ್ಯೆಯಿತ್ತು. ಏಳು ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದೆವು. ಆಗ ಚೇತರಿಸಿಕೊಂಡಿದ್ದರು. ಆದರೂ ಆಗಾಗ ಮತ್ತೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಪದ್ಮನಾಭನಗರದ ಅತ್ತಿಗೆ ಮನೆಯಲ್ಲಿ ಐಸಿಯು ಮಾಡಿದ್ದೆವು. ಅಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದೆವು. ಸ್ಟಾಫ್ ನರ್ಸ್ ಕೂಡ ಇದ್ದರು. ಚೆನ್ನಮ್ಮ ವೀಲ್ ಚೇರ್&zwnj;ನಲ್ಲಿಯೇ ಪೂಜೆ ಮಾಡುತ್ತಿದ್ದರು, ಓಡಾಡುತ್ತಿದ್ದರು ಎಂದು ಹೇಳಿದರು.&lt;/p&gt;&lt;p&gt;&lt;/p&gt;]]></content:encoded>
            <category>bengaluru-rural</category>
            <dc:creator>Suchethana D</dc:creator>
            <atom:link href="https://kannada.asianetnews.com/relationship/chennamma-devegowda-defeated-death-during-acid-attack-says-dr-manjunath-suc/articleshow-xn2x92b"/>
        </item>
        <item>
            <title><![CDATA[Bengaluru: ಸಮಗ್ರ ಅಭಿವೃದ್ಧಿ ಟೆಂಡರ್ ರದ್ದು, ಶೀಘ್ರದಲ್ಲೇ ಔಟರ್ ರಿಂಗ್ ರೋಡ್ ಒತ್ತುವರಿ ತೆರವಿಗೆ ಜಿಬಿಎ ಸಿದ್ಧತೆ]]></title>
            <link>https://kannada.asianetnews.com/karnataka-districts/bengaluru-outer-ring-road-encroachment-gba-to-clean-up-it-corridor-chokepoints-before-redevelopment-gdp/articleshow-zfhtkl4</link>
            <guid isPermaLink="true">https://kannada.asianetnews.com/karnataka-districts/bengaluru-outer-ring-road-encroachment-gba-to-clean-up-it-corridor-chokepoints-before-redevelopment-gdp/articleshow-zfhtkl4</guid>
            <pubDate>Tue, 21 Jul 2026 15:18:09 +0530</pubDate>
            <description><![CDATA[ಬೆಂಗಳೂರಿನ ಹೊರವರ್ತುಲ ರಸ್ತೆಯ ಸಮಗ್ರ ಅಭಿವೃದ್ಧಿ ಟೆಂಡರ್&zwnj; ರದ್ದುಗೊಂಡಿದ್ದು, ಮೊದಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಜಿಬಿಎ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ ಮತ್ತು ಪ್ರವಾಹಕ್ಕೆ ಕಾರಣವಾದ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದ ನಂತರವೇ ಹೊಸ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01fvgdv30km0ax56z9m6sjsje7,imgname-asdads.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಹಲವು ಟೆಕ್&zwnj;ಪಾರ್ಕ್&zwnj;ಗಳು, ಸಾವಿರಾರು ಐಟಿ-ಬಿಟಿ ಕಂಪನಿಗಳು ಇರುವ ಹೊರವರ್ತುಲ ರಸ್ತೆಯನ್ನು ಮಾದರಿ ಹಾಗೂ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮುನ್ನ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಬಿಎ ಸಿದ್ಧತೆ ಮಾಡಿಕೊಳ್ಳುತ್ತಿದೆ.&lt;/p&gt;&lt;p&gt;ಇತ್ತೀಚೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಈ ರಸ್ತೆಯಲ್ಲಿ ಪರಿಶೀಲನೆಗೆ ತೆರಳಿದ್ದ ವೇಳೆ ರಸ್ತೆ ಒತ್ತುವರಿ ವಿಚಾರ ಚರ್ಚೆಯಾಗಿತ್ತು. ಸಾರ್ವಜನಿಕರು ಕೂಡ ಅನೇಕ ಕಡೆ ರಸ್ತೆ, ರಾಜಕಾಲುವೆ ಅತಿಕ್ರಮಣ ಮತ್ತು ಒತ್ತುವರಿಯಾಗಿರುವ ಕುರಿತು ಮಾಹಿತಿ ನೀಡಿದ್ದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವಿನ ನಂತರವೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಹೊರವರ್ತುಲ ರಸ್ತೆ ಸಮಗ್ರ ಅಭಿವೃದ್ಧಿಗೆ ಕರೆಯಲಾಗಿದ್ದ ಟೆಂಡರ್&zwnj;ನ್ನು ಬೆಂಗಳೂರು ಸ್ಮಾರ್ಟ್&zwnj; ಇನ್&zwnj;ಫ್ರಾಸ್ಟ್ರಕ್ಚರ್&zwnj; ಲಿ. (ಬಿ-ಸ್ಮೈಲ್&zwnj;) ರದ್ದುಪಡಿಸಿದೆ. ಒತ್ತುವರಿ ತೆರವಿನ ನಂತರ ಈ ಪ್ರದೇಶಗಳ ನಿವಾಸಿಗಳು, ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿದ ನಂತರವೇ ಹೊಸದಾಗಿ ಯೋಜನೆ ರೂಪಿಸಿ ಹೊಸ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಕಾಡುಬೀಸನಹಳ್ಳಿ, ದೇವರಬೀಸನಹಳ್ಳಿ ವ್ಯಾಪ್ತಿಯಲ್ಲಿ ಅನೇಕ ಅಂಗಡಿ, ಕಚೇರಿಗಳು ಹೊರ ವರ್ತುಲ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿವೆ. ಇದರಿಂದಾಗಿ ಅನೇಕ ಕಡೆಗಳಲ್ಲಿ ರಸ್ತೆಯ ವಿಸ್ತೀರ್ಣ ಹೆಚ್ಚು ಕಮ್ಮಿಯಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲು ಜಿಬಿಎ ಯೋಜಿಸಿದೆ.&lt;/p&gt;&lt;h2&gt;ಸುಳಿವು ಕೊಟ್ಟ ಮಳೆ ನೀರು:&lt;/h2&gt;&lt;p&gt;ಜೂನ್ ಮೊದಲ ವಾರದಲ್ಲಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ರಿಂಗ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ರಾಜಕಾಲುವೆ ತುಂಬಿ ಹರಿದಿರುವುದು, ರಾಜಕಾಲುವೆಯಿಂದ ನೀರು ರಸ್ತೆಗೆ ವಾಪಸ್ ಹರಿದಿರುವ ಘಟನೆಗಳು ವರದಿಯಾಗಿದ್ದವು. ಅದರಲ್ಲೂ ಕೆ.ಆರ್. ಪುರ ಮತ್ತು ಇಬ್ಬಲೂರು ಜಂಕ್ಷನ್ ನಡುವಿನ ಮಾರತ್ತಹಳ್ಳಿ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಒತ್ತುವರಿಯಾಗಿದೆ. ಈ ಪ್ರದೇಶದಲ್ಲಿನ ರಸ್ತೆಗಳು ಮಳೆಗಾಲದಲ್ಲಿ ಜಲಾವೃತವಾಗುತ್ತಿರುವುದಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗಿದ್ದು, ಕ್ರಮ ಕೈಗೊಳ್ಳುವುದು ಬಾಕಿ ಇದೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;ಫುಟ್ಪಾತಲ್ಲಿ ನಿರ್ಮಿಸಿರುವ ಅಕ್ರಮ ಮಳಿಗೆ 2 ವಾರದಲ್ಲಿ ಖಾಲಿ ಮಾಡದಿದ್ರೆ ನೆಲಸಮ&lt;/h2&gt;&lt;p&gt;ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶದ ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಳಿಗೆಗಳ ಜಾಗವನ್ನು ಸ್ವಯಂ ಪ್ರೇರಿತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ನೀಡಲು ಮಳಿಗೆಗಳ ಮಾಲೀಕರಿಗೆ 2 ವಾರ ಕಾಲಾವಕಾಶ ನೀಡಿರುವ ಹೈಕೋರ್ಟ್, ನಿಗದಿಪಡಿಸಿರುವ ಸಮಯದಲ್ಲಿ ಜಾಗವನ್ನು ಬಿಟ್ಟುಕೊಡದೇ ಹೋದರೆ, ಜಿಬಿಎ ನೋಟಿಸ್ ನೀಡದೆಯೇ ಮಳಿಗೆಗಳನ್ನು ನೆಲಸಮಗೊಳಿಸಬಹುದು ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ನಗರದ ಕೆ.ಆರ್.ಮಾರುಕಟ್ಟೆಯ ಮೇಲ್ಸೇತುವೆ ಕೆಳಭಾಗದ ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ನಿರ್ಮಿಸಿದ ಮಳಿಗೆಗಳ ತೆರವು ಕಾರ್ಯಾಚರಣೆ ಕೈಗೊಂಡ ಜಿಬಿಎ ಕ್ರಮ ಪ್ರಶ್ನಿಸಿ ಸ್ಯಾಮ್ಯುಯಲ್ ಮತ್ತಿತರ ಮಳಿಗೆ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್&zwnj;ಪ್ರಸಾದ್&zwnj; ಅವರ ನ್ಯಾಯಪೀಠ ಈ ಸೂಚನೆ ನೀಡಿದೆ.&lt;/p&gt;&lt;p&gt;ವಿಚಾರಣೆ ವೇಳೆ ಜಿಬಿಎ ಪ್ರಮಾಣಪತ್ರ ಸಲ್ಲಿಸಿ, ಮಳಿಗೆಗಳಿಗೆ ಹಿಂದಿನ ಬಿಬಿಎಂಪಿ ಪರವಾನಗಿ &zwnj;ನೀಡಿದೆ. ಬೆಸ್ಕಾಂ ಸಹ ವಿದ್ಯುತ್ ಸಂಪರ್ಕ&zwnj; ಕಲ್ಪಿಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ&zwnj;, ಪರವಾನಿಗೆಯಲ್ಲಿರುವ ಸಹಿ ಸಂಬಂಧಪಟ್ಟ ಕಂದಾಯ ಅಧಿಕಾರಿಯ ಸಹಿ ಅಲ್ಲ, ಕಂದಾಯ ಅಧಿಕಾರಿ ಪರವಾನಿಗೆಗಳಿಗೆ ಸಹಿ ಮಾಡಿಲ್ಲ ಎಂದು ತಿಳಿಸಿತು.&lt;/p&gt;&lt;p&gt;ಅರ್ಜಿದಾರರ ಪರ ವಕೀಲರು&zwnj; ಅಂಗಡಿ ಜಾಗವನ್ನು ಜಿಬಿಎಗೆ ಬಿಟ್ಟು ಕೊಡಲಾಗುವುದು, ಮಳಿಗೆಗೆ ಅಳವಡಿಸಲಾಗಿರುವ ವಿದ್ಯುತ್ ಮೀಟರ್ ಅನ್ನು ಬೆಸ್ಕಾಂಗೆ ಹಿಂದಿರುಗಿಸಿ ಠೇವಣಿ ಹಣ ಹಿಂಪಡೆಯಲಾಗುವುದು. ಮಳಿಗೆಗಳಿಗೆ ಬದಲಿ ಜಾಗ ಕಲ್ಪಿಸಲು ಕೋರಿ ಜಿಬಿಎಗೆ ಮನವಿ ಪತ್ರ ಸಲ್ಲಿಸಲಾಗುವುದು.&zwnj; ಅದಕ್ಕೆ ಎರಡು ವಾರ ಕಾಲಾವಕಾಶ ನೀಡಬೇಕು ಎಂದು&zwnj; ನ್ಯಾಯಪೀಠವನ್ನು ಕೋರಿದರು.&lt;/p&gt;&lt;p&gt;ರಾಜ್ಯ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಜರಾಗಿ,&zwnj;ಅರ್ಜಿದಾರರು ಮಳಿಗೆಗಳಿಗೆ ಬದಲಿ ಜಾಗ ಕೋರಿ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಕಾನೂನು ಪ್ರಕಾರ ಪರಿಗಣಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ತಮ್ಮ ಮಳಿಗೆಗಳಿಗೆ ಬೀಗ ಹಾಕಿ, ಜಾಗದ ಸ್ವಾಧೀನವನ್ನು ಎರಡು ವಾರದಲ್ಲಿ ಜಿಬಿಎಗೆ ಬಿಟ್ಟುಕೊಡಬೇಕು. ಎರಡು ವಾರದಲ್ಲಿ ಜಾಗದ ಸ್ವಾಧೀನ ಬಿಟ್ಟುಕೊಡದೇ ಹೋದರೆ, ಅರ್ಜಿದಾರರಿಗೆ ಯಾವುದೇ ನೋಟಿಸ್ ನೀಡದೆಯೇ ಅವರ ಮಳಿಗೆಗಳನ್ನು ನೆಲಸಮಗೊಳಿಸಲು ಜಿಬಿಎ ಮುಕ್ತವಾಗಿದೆ.&zwnj; ಮಳಿಗೆಗಳಿಗೆ ಬದಲಿ ಜಾಗ ಒದಗಿಸಲು ಕೋರಿ ಅರ್ಜಿದಾರರು 4 ವಾರದಲ್ಲಿ ಜಿಬಿಎ ಟೌನ್ ವೆಂಡಿಂಗ್ ಕಮಿಟಿಗೆ ಮನವಿ ಪತ್ರ ಸಲ್ಲಿಸಬಹುದು. ಆ ಮನವಿಯನ್ನು ಜಿಬಿಎ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥ ಮಾಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-outer-ring-road-encroachment-gba-to-clean-up-it-corridor-chokepoints-before-redevelopment-gdp/articleshow-zfhtkl4"/>
        </item>
    </channel>
</rss>
