<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 12 Aug 2026 20:26:06 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ರೇಣುಕಾಸ್ವಾಮಿ ಕೇಸ್: ಸಾಕ್ಷಿಗೆ ಬೆದರಿಕೆ ಪ್ರಕರಣದಲ್ಲಿ FSLನಿಂದ ಸ್ಫೋಟಕ ಸತ್ಯ, ಪ್ರಭಾವಿ ಮಹಿಳೆಯ ಹೆಸರು ಬೆಳಕಿಗೆ!]]></title>
            <link>https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96</link>
            <guid isPermaLink="true">https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96</guid>
            <pubDate>Tue, 11 Aug 2026 14:56:26 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್&zwnj;ಎಸ್&zwnj;ಎಲ್ ವರದಿಯು ಸ್ಫೋಟಕ ಸತ್ಯಗಳನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಇದರ ಹಿಂದೆ ಪ್ರಭಾವಿ ಮಹಿಳೆಯೊಬ್ಬಳ ಕೈವಾಡವಿರುವುದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಇದೀಗ ಪ್ರಕರಣದ ಪ್ರಮುಖ ಆರೋಪಿಗಳ ಬಂಧನಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwp36b1jv3gq4p2t66ddzp7w,imgname-drashan-renukaswamy--1--1783152978994.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರ ತನಿಖೆ ಮುಂದುವರಿದಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.&lt;/p&gt;&lt;h2&gt;ಕಿಡ್ನಾಪ್ ಮಾಡಿ ಜೀವ ಬೆದರಿಕೆ&lt;/h2&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದ 49ನೇ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್ ಆವರಣದಲ್ಲೇ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಸಂದೀಪ್ ನೀಡಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ನಟ ದರ್ಶನ್ ಕುಟುಂಬಕ್ಕೆ ಅತ್ಯಾಪ್ತನಾಗಿದ್ದುಕೊಂಡು ಸಾಕ್ಷಿಗೆ ಬೆದರಿಕೆ ಹಾಕಿದ್ದ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಬಂಧಿಸಿದ್ದರು. ಪುನೀತ್ ತನ್ನ ತಂಡದ ಮೂಲಕ ಸಾಕ್ಷಿ ಸಂದೀಪ್&zwnj; ಅವರನ್ನು ಕಿಡ್ನಾಪ್ ಮಾಡಿ ಜೀವ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ದೃಢಪಟ್ಟಿತ್ತು.&lt;/p&gt;&lt;h2&gt;FSL ವರದಿಯಲ್ಲಿ ಬಯಲಾಯ್ತು ಸ್ಫೋಟಕ ಸತ್ಯ&lt;/h2&gt;&lt;p&gt;ಸಂಶಯಾಸ್ಪದ ಕೃತ್ಯ ನಡೆದ ಸಮಯದಲ್ಲಿ ವಾಟ್ಸಾಪ್ ಕಾನ್ಫರೆನ್ಸ್ ಕಾಲ್ ಮೂಲಕ ಬೆದರಿಕೆ ಹಾಕಲಾಗಿತ್ತು. FSL ವರದಿಯ ಆಧಾರದ ಮೇಲೆ, ಈ ಕಾನ್ಫರೆನ್ಸ್ ಕಾಲ್&zwnj;ನಲ್ಲಿ ಕಿರಣ್ ಮತ್ತು ಗೌರವ್ ಶೆಟ್ಟಿ ಎಂಬಿಬ್ಬರು ಸಕ್ರಿಯರಾಗಿದ್ದುದು ಪತ್ತೆಯಾಗಿದೆ. ಇವರಿಬ್ಬರೂ ಕಾಲ್&zwnj;ನಲ್ಲಿದ್ದುಕೊಂಡೇ ಪುನೀತ್ ಹಾಗೂ ಆತನ ತಂಡಕ್ಕೆ ಸಾಕ್ಷಿಯನ್ನು ಬೆದರಿಸುವ ಕುರಿತು ಮಾರ್ಗದರ್ಶನ ನೀಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;ಹಿಂದಿದೆಯಾ ಪ್ರಭಾವಿ ಮಹಿಳೆಯ ಕೈವಾಡ?&lt;/h2&gt;&lt;p&gt;ಈ ಇಡೀ ಜಾಲದ ಹಿಂದೆ ಓರ್ವ ಪ್ರಭಾವಿ ಮಹಿಳೆ ಇರುವುದು ತನಿಖೆಯಲ್ಲಿ ಕಂಡುಬಂದಿದೆ. ಬೆದರಿಕೆ ಕೃತ್ಯಕ್ಕೂ ಮುನ್ನ ಪುನೀತ್&zwnj;ಗೆ ಈ ಪ್ರಭಾವಿ ಮಹಿಳೆಯಿಂದ ಕರೆ ಬಂದಿದ್ದು, ಗೌರವ್ ಶೆಟ್ಟಿ ಹೇಳಿದಂತೆ ನಡೆದುಕೊ ಎಂದು ಆಕೆಯೇ ಸೂಚನೆ ನೀಡಿದ್ದಳು ಎಂಬ ಮಾಹಿತಿ ಎಫ್&zwnj;ಎಸ್&zwnj;ಎಲ್ ವರದಿಯಿಂದ ಬಯಲಾಗಿದೆ. ಈ ಮಹಿಳೆಯೇ ಗೌರವ್ ಶೆಟ್ಟಿ, ಕಿರಣ್ ಹಾಗೂ ಪುನೀತ್ ಪಡೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಸಾಕ್ಷಿಗಳಿಗೆ ಬೆದರಿಕೆ ಹಾಕಿಸುತ್ತಿದ್ದಳು ಎಂಬುದು ಪೊಲೀಸ್ ತನಿಖೆಯಿಂದ ಧೃಡಪಟ್ಟಿದೆ.&lt;/p&gt;&lt;h2&gt;ಕಾನೂನು ಕ್ರಮಕ್ಕೆ ಪೊಲೀಸರ ಸಿದ್ಧತೆ:&lt;/h2&gt;&lt;p&gt;ಪ್ರಕರಣದಲ್ಲಿ ಕಿರಣ್ ಹಾಗೂ ಗೌರವ್ ಶೆಟ್ಟಿ ಕೈವಾಡ ಸ್ಪಷ್ಟವಾಗಿರುವುದರಿಂದ ಅವರಿಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲು ಹಾಗೂ ಕಾನೂನು ಕ್ರಮ ಜರುಗಿಸಲು ಕಾಮಾಕ್ಷಿಪಾಳ್ಯ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ತಾಂತ್ರಿಕ ವರದಿ ಬರಬೇಕಿದ್ದು, ಆ ವರದಿ ಸಿಕ್ಕ ಬಳಿಕ ಈ ಪ್ರಕರಣದ ಹಿಂದಿರುವ ಪ್ರಭಾವಿ ಮಹಿಳೆ ಯಾರು ಹಾಗೂ ಆಕೆಯ ನಿಜವಾದ ಪಾತ್ರವೇನು ಎಂಬ ಸಂಪೂರ್ಣ ಸತ್ಯ ಹೊರಬರಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-fsl-report-exposes-actor-darshan-fan-influential-woman-hand-in-witness-threat-gdp/articleshow-02i8g96"/>
        </item>
        <item>
            <title><![CDATA[ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ದಾಳಿ, ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆ!]]></title>
            <link>https://kannada.asianetnews.com/state/android-phone-and-pen-drive-found-in-prajwal-revanna-cell-during-ccb-raid-at-parappana-agrahara-gdp/articleshow-1g7y6y9</link>
            <guid isPermaLink="true">https://kannada.asianetnews.com/state/android-phone-and-pen-drive-found-in-prajwal-revanna-cell-during-ccb-raid-at-parappana-agrahara-gdp/articleshow-1g7y6y9</guid>
            <pubDate>Wed, 12 Aug 2026 08:57:29 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1t1zxyxwh2vgp07apbq2spx,imgname-prajwal-revanna-1754294908890.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್&zwnj;ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್, ಪೆನ್&zwnj;ಡ್ರೈವ್, ಡೈರಿ ಪತ್ತೆಯಾಗಿದೆ. ಮಂಗಳವಾರ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರು ನಡೆಸಿದ ದಿಢೀರ್ ದಾಳಿಯ ವೇಳೆ ಈ ಅಕ್ರಮ ಬಯಲಾಗಿದೆ.&lt;/p&gt;&lt;h2&gt;ಸಿಸಿಬಿಯಿಂದ ಇಂಚಿಂಚೂ ತಪಾಸಣೆ&lt;/h2&gt;&lt;p&gt;ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ ಹಾಗೂ ಡಿಸಿಪಿಗಳಾದ ಶ್ರೀಹರಿಬಾಬು, ರಾಜಾ ಇಮಾಮ್ ಕಾಸಿಂ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸತತವಾಗಿ ನಡೆದ ಶೋಧ ಕಾರ್ಯದಲ್ಲಿ ಪ್ರತಿಯೊಂದು ಬ್ಯಾರಕ್ ಅನ್ನು ಇಂಚಿಂಚಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಬಟ್ಟೆಗಳ ನಡುವೆ ಅಡಗಿಸಿ ಇಟ್ಟುಕೊಂಡಿದ್ದ ಆಂಡ್ರಾಯ್ಡ್ ಫೋನ್, ಪೆನ್&zwnj;ಡ್ರೈವ್&zwnj; ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿದಂತೆ ಪ್ರಮುಖ ರೌಡಿಗಳು ಹಾಗೂ ವಿಐಪಿ ಕೈದಿಗಳ ಬ್ಯಾರಕ್&zwnj;ಗಳಲ್ಲೂ ಶೋಧ ಕಾರ್ಯ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.&lt;/p&gt;&lt;h2&gt;ಸೈಲೆಂಟ್&zwnj; ಇದ್ದ ಪ್ರಜ್ವಲ್: ತನಿಖೆಗೆ ಮುಂದಾದ ಪೊಲೀಸರು&lt;/h2&gt;&lt;p&gt;ಪ್ರಜ್ವಲ್ ರೇವಣ್ಣ ಅವರೊಂದಿಗೆ ಮತ್ತೊಬ್ಬ ಸಜಾಬಂಧಿ ಕೈದಿ ಪ್ರತಾಪ್ ರೈ ಎಂಬಾತ ಕೂಡ ಅದೇ ಬ್ಯಾರಕ್&zwnj;ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮೊಬೈಲ್ ಪತ್ತೆಯಾದಾಗ ಪ್ರಜ್ವಲ್ ರೇವಣ್ಣ ತಮಗೇನೂ ತಿಳಿಯದಂತೆ ತಟಸ್ಥರಾಗಿ ಕುಳಿತಿದ್ದರೆನ್ನಲಾಗಿದೆ. ಆದರೆ, ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ವಿಐಪಿ ಬ್ಯಾರಕ್&zwnj;ಗೆ ಆಂಡ್ರಾಯ್ಡ್ ಫೋನ್ ತಂದುಕೊಟ್ಟವರು ಯಾರು? ಎಷ್ಟು ದಿನಗಳಿಂದ ಇದನ್ನು ಬಳಕೆ ಮಾಡಲಾಗುತ್ತಿತ್ತು? ಎಂಬ ಪ್ರಶ್ನೆಗಳು ಮೂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಜ್ವಲ್ ಇದ್ದ ಜೈಲಿನಲ್ಲಿ ವಸ್ತುಗಳು ಪತ್ತೆಯಾದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಪ್ರಜ್ವಲ್ ಜೊತೆಗೆ ಬ್ಯಾರಕ್ ನಲ್ಲಿ ಪ್ರತಾಪ್ ರೈ ಎಂಬ ಕೈದಿ ವಿರುದ್ಧವೂ ಪ್ರಕರಣ ದಾಖಲಾಗಿದೆ. ಇಬ್ಬರ ವಿರುದ್ಧವೂ ಎಫ್&zwnj;ಐಆರ್ ದಾಖಲಾಗಿದ್ದು ಪ್ರಜ್ವಲ್ ಎ1 ಮಾಡಲಾಗಿದೆ.&lt;/p&gt;&lt;p&gt;ಮಂಗಳವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸಂಕೀರ್ಣದ ಮೇಲೆ ದಿಢೀರ್ ದಾಳಿ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ, ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್&zwnj;ನಲ್ಲಿ ರೆಡ್&zwnj; ಮಿ ಮೊಬೈಲ್&zwnj; ಪತ್ತೆಯಾಗಿದೆ. ಅತ್ಯಂತ ಬಿಗಿ ಭದ್ರತೆ ಹೊಂದಿರುವ ಕೇಂದ್ರ ಕಾರಾಗೃಹದಲ್ಲಿ ಹೈಪ್ರೊಫೈಲ್ ಕೈದಿಯೊಬ್ಬರ ಬಳಿ ಮೊಬೈಲ್ ಫೋನ್ ಪತ್ತೆಯಾಗಿರುವುದು ಜೈಲಿನ ಭದ್ರತಾ ವ್ಯವಸ್ಥೆಯ ಮೇಲೆಯೇ ಸಾಲು ಸಾಲು ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆ ಕೂಡ ಇದೇ ಜೈಲಿನಲ್ಲಿ ಪ್ರಭಾವಿ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ನಟ ದರ್ಶನ್ ಪ್ರಕರಣದಲ್ಲಿ ಕೂಡ ಇದೇ ರೀತಿ ಸೌಲಭ್ಯ ಪಡೆದ ಆರೋಪ ಕೇಳಿಬಂದಿತ್ತು.&lt;/p&gt;&lt;h2&gt;ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ಸಲ್ಲಿಕೆ&lt;/h2&gt;&lt;p&gt;ಜೈಲು ನಿಯಮಗಳ ಉಲ್ಲಂಘನೆ ಹಾಗೂ ಅಕ್ರಮವಾಗಿ ಮೊಬೈಲ್ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿಸಿಬಿ ಕ್ರಮ ಕೈಗೊಂಡಿದೆ. ಜೈಲು ಮುಖ್ಯಸ್ಥರಾಗಿ ಡಿಜಿಪಿ ಅಲೋಕ್ ಕುಮಾರ್ ನಿಯೋಜನೆಗೊಂಡ ನಂತರ ಜೈಲಿನಲ್ಲಿ ಬಿಗಿ ಭದ್ರತೆ ವಹಿಸಲಾಗಿದ್ದು, ಈವರೆಗೆ 120ಕ್ಕೂ ಹೆಚ್ಚು ಮೊಬೈಲ್&zwnj;ಗಳನ್ನು ಜಪ್ತಿ ಮಾಡಲಾಗಿದೆ. ಆದಾಗ್ಯೂ, ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಫೋನ್ ಪತ್ತೆಯಾಗಿರುವುದು ಜೈಲು ಸಿಬ್ಬಂದಿಯ ಕರ್ತವ್ಯ ಲೋಪವನ್ನು ಎತ್ತಿ ತೋರಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/android-phone-and-pen-drive-found-in-prajwal-revanna-cell-during-ccb-raid-at-parappana-agrahara-gdp/articleshow-1g7y6y9"/>
        </item>
        <item>
            <title><![CDATA[ಬೆಂಗಳೂರಲ್ಲಿ ಇತ್ತು 40 ಎಕರೆ ಬಂಜರು ಭೂಮಿ..  ಜೈ ಶಾ, VVS ಜೋಡೆತ್ತುಗಳಾಗಿ 'ಕ್ರಿಕೆಟ್ ಅರಮನೆ' ಕಟ್ಟಿದ ರೋಚಕ ಸ್ಟೋರಿ]]></title>
            <link>https://kannada.asianetnews.com/cricket-sports/story-about-bcci-centre-of-excellence-in-bengaluru-and-jay-shah-and-vvs-laxman/articleshow-2ud2hyt</link>
            <guid isPermaLink="true">https://kannada.asianetnews.com/cricket-sports/story-about-bcci-centre-of-excellence-in-bengaluru-and-jay-shah-and-vvs-laxman/articleshow-2ud2hyt</guid>
            <pubDate>Mon, 10 Aug 2026 22:40:14 +0530</pubDate>
            <description><![CDATA[&lt;p&gt;ಬೆಂಗಳೂರಿನ 40 ಎಕರೆ ಬಂಜರು ಭೂಮಿಯನ್ನು ವಿಶ್ವದರ್ಜೆಯ 'ಸೆಂಟರ್ ಆಫ್ ಎಕ್ಸಲೆನ್ಸ್' ಆಗಿ ಪರಿವರ್ತಿಸಿದ ಜೈ ಶಾ ಮತ್ತು ವಿವಿಎಸ್ ಲಕ್ಷ್ಮಣ್ ಅವರ ದೃಢ ಸಂಕಲ್ಪಕ್ಕೆ ಈಗ ಜಯ ಸಿಕ್ಕಿದೆ. ಈ ಬೃಹತ್ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲಿ ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವ ಮೂಲಕ ಭಾರತೀಯ ಕ್ರಿಕೆಟ್ ಮೂಲಸೌಕರ್ಯದಲ್ಲಿ ಹೊಸ ಕ್ರಾಂತಿ ಮಾಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzpa7hz8jnq56vf48s5rz51m,imgname-bcci-centre-of-excellence--3--1786381584360.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಟೀಮ್ ಇಂಡಿಯಾ ಕ್ರಿಕೆಟ್&zwnj;ನ ಭವಿಷ್ಯವನ್ನು ಬದಲಿಸಬಲ್ಲ ಅತ್ಯಾಧುನಿಕ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಈಗ ಬೆಂಗಳೂರಿನಲ್ಲಿ ತಲೆ ಎತ್ತಿ ನಿಂತಿದೆ. ಆದರೆ, ಇಂದು ನಾವು ನೋಡುತ್ತಿರುವ ಅದ್ಭುತ ಕ್ರೀಡಾ ಸಂಕೀರ್ಣದ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ ಜೈ ಶಾ ಮತ್ತು ಕ್ರಿಕೆಟ್ ದಿಗ್ಗಜ ವಿವಿಎಸ್ ಲಕ್ಷ್ಮಣ್ ಅವರ ಹಗಲಿರುಳಿನ ಪರಿಶ್ರಮವಿದೆ. ಬರೋಬ್ಬರಿ 40 ಎಕರೆ ಬಂಜರು ಭೂಮಿ ಇಂದು ವಿಶ್ವದರ್ಜೆಯ ಕ್ರಿಕೆಟ್ ತಾಣವಾಗಿ ಬದಲಾದ ರೋಚಕ ಕಥೆ ಇಲ್ಲಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;40 ಎಕರೆ ಬಂಜರು ಭೂಮಿ..!&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ ಬಿಸಿಸಿಐಗೆ ಸೇರಿದ 40 ಎಕರೆ ಭೂಮಿ ವರ್ಷಗಟ್ಟಲೆ ಯಾವುದೇ ಬಳಕೆಯಿಲ್ಲದೆ ಬಿದ್ದಿತ್ತು. ಭೂಮಿ ಖಾಲಿ ಇರುವುದನ್ನು ಕಂಡು ಅನೇಕರು ಅದನ್ನು ವಶಪಡಿಸಿಕೊಳ್ಳಲು ಸಂಚು ರೂಪಿಸಿದ್ದರು. ಭೂಮಿಯನ್ನು ಉಳಿಸಿಕೊಳ್ಳುವುದೇ ಬಿಸಿಸಿಐಗೆ ದೊಡ್ಡ ಸವಾಲಾಗಿತ್ತು. ಅಂತಹ ಸಮಯದಲ್ಲಿ ಎಂಟ್ರಿ ಕೊಟ್ಟವರು ಜೈ ಶಾ. ಹಳೆಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಇನ್ನು ಸಾಕು, ಭಾರತಕ್ಕೆ ವಿಶ್ವದರ್ಜೆಯ ಸುಸಜ್ಜಿತ ಅಕಾಡೆಮಿ ಬೇಕೇ ಬೇಕು ಎಂದು ಜೈ ಶಾ ಹಠಕ್ಕೆ ಬಿದ್ದರು.&lt;/p&gt;&lt;h2&gt;&lt;strong&gt;ಯುದ್ಧೋಪಾದಿಯಲ್ಲಿ ಶುರುವಾದ ಕೆಲಸ&lt;/strong&gt;&lt;/h2&gt;&lt;p&gt;ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೆನಪಿಸಿಕೊಳ್ಳುವಂತೆ, ಜೈ ಶಾ ಈ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಂಡರು. 2022ರ ಫೆಬ್ರವರಿ 14ರಂದು ಕೆಲಸ ಆರಂಭಿಸುವ ಮೊದಲು ನೂರಾರು ಕಾನೂನು ತೊಡಕುಗಳಿದ್ದವು. ಜೈ ಶಾ ಸ್ವತಃ ಬೆಂಗಳೂರಿಗೆ ಹಲವಾರು ಬಾರಿ ಭೇಟಿ ನೀಡಿ, ಅಧಿಕಾರಿಗಳ ಜೊತೆ ಮಾತನಾಡಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಭೂಮಿಯನ್ನು ರೆಗ್ಯುಲರೈಸ್ ಮಾಡುವುದು ಹಿಮಾಲಯದಷ್ಟೇ ದೊಡ್ಡ ಸವಾಲಾಗಿತ್ತು, ಆದರೆ ಜೈ ಶಾ ಅದರಲ್ಲಿ ಜಯಗಳಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಬೆಂಗಳೂರಿಗೆ ಬಂದ ವಿವಿಎಸ್ ಲಕ್ಷ್ಮಣ್&lt;/strong&gt;&lt;/h2&gt;&lt;p&gt;2021ರ ಡಿಸೆಂಬರ್&zwnj;ನಲ್ಲಿ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿ ಹೋದಾಗ ಅಕಾಡೆಮಿಯ ಹೊಣೆಯನ್ನು ವಿವಿಎಸ್ ಲಕ್ಷ್ಮಣ್ ಹೆಗಲಿಗೆ ಹಾಕಲಾಯಿತು. ಜೈ ಶಾ ಮತ್ತು ಸೌರವ್ ಗಂಗೂಲಿ ಅವರ ಆಹ್ವಾನದ ಮೇರೆಗೆ ಲಕ್ಷ್ಮಣ್ ಬೆಂಗಳೂರಿಗೆ ಬಂದರು. ಕೇವಲ ಎರಡೇ ವರ್ಷಗಳಲ್ಲಿ ಇಡೀ ಇನ್ಫ್ರಾಸ್ಟ್ರಕ್ಚರ್ ಸಿದ್ಧವಾದದ್ದು ನಂಬಲಸಾಧ್ಯ. ವಾಸ್ತುಶಿಲ್ಪಿಗಳು ಮತ್ತು ಎಲ್&zwnj; ಅಂಡ್&zwnj; ಟಿ (L&amp;amp;T) ತಂಡದ ಜೊತೆ ಜೈ ಶಾ ನಡೆಸುತ್ತಿದ್ದ ಸುದೀರ್ಘ ಸಭೆಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಪ್ರತಿಯೊಂದು ಸಣ್ಣ ವಿಚಾರದಲ್ಲೂ ಅವರು ಆಸಕ್ತಿ ವಹಿಸುತ್ತಿದ್ದರು ಎಂದು ಲಕ್ಷ್ಮಣ್ ಜೈ ಶಾ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.&lt;/p&gt;&lt;h2&gt;&lt;strong&gt;ನನಸಾದ ಕನಸು&lt;/strong&gt;&lt;/h2&gt;&lt;p&gt;ನವೆಂಬರ್ 2024ರಲ್ಲಿ ಈ ಸೆಂಟರ್ ಆಫ್ ಎಕ್ಸಲೆನ್ಸ್ ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದೆ. ಬರೀ ಐಡಿಯಾ ಆಗಿದ್ದ ಒಂದು ಯೋಜನೆ ಇಂದು ಸಾವಿರಾರು ಯುವ ಕ್ರಿಕೆಟಿಗರ ಭವಿಷ್ಯ ರೂಪಿಸುವ ತಾಣವಾಗಿ ಮಾರ್ಪಟ್ಟಿದೆ. 40 ಎಕರೆ ಬಂಜರು ಭೂಮಿಯಲ್ಲಿ ಇಂದು ಕ್ರಿಕೆಟ್&zwnj;ನ 'ಅರಮನೆ' ಮಿನುಗುತ್ತಿದೆ.&lt;/p&gt;&lt;p&gt;Two Impactful Years&amp;nbsp;Spread over 40 acres 3 full-sized cricket grounds 40 nets pitches and 33 centre wickets 3 different soil types an 8-lane indoor practice area ️a 16,000 sq. ft. High Performance Gym and upskilling of professionals &amp;nbsp;Centre of Excellence -&hellip; pic.twitter.com/0L7KpY88kh&lt;/p&gt;&lt;p&gt;&mdash; BCCI (@BCCI) August 10, 2026&lt;/p&gt;&lt;p&gt;&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/story-about-bcci-centre-of-excellence-in-bengaluru-and-jay-shah-and-vvs-laxman/articleshow-2ud2hyt"/>
        </item>
        <item>
            <title><![CDATA[ಬೆಂಗಳೂರು: ಆ.15ರ ಒಳಗೆ ಖಾಲಿ ನಿವೇಶನ ಸ್ವಚ್ಛ ಮಾಡದಿದ್ರೆ ಮಾಲೀಕರಿಗೆ ಸೈಟ್‌ ಗಾತ್ರದಂತೆ  ದುಪ್ಪಟ್ಟು ದಂಡ]]></title>
            <link>https://kannada.asianetnews.com/karnataka-districts/greater-bengaluru-authority-warning-clear-vacant-plot-waste-by-aug-15-or-pay-up-to-rs-1-74-lakh-gdp/articleshow-a4w19ne</link>
            <guid isPermaLink="true">https://kannada.asianetnews.com/karnataka-districts/greater-bengaluru-authority-warning-clear-vacant-plot-waste-by-aug-15-or-pay-up-to-rs-1-74-lakh-gdp/articleshow-a4w19ne</guid>
            <pubDate>Tue, 11 Aug 2026 11:19:12 +0530</pubDate>
            <description><![CDATA[ಬೆಂಗಳೂರಿನಲ್ಲಿ ಖಾಲಿ ನಿವೇಶನಗಳಲ್ಲಿನ ಕಸವನ್ನು ಆ.15ರೊಳಗೆ ಸ್ವತಃ ತೆರವುಗೊಳಿಸುವಂತೆ ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಾಲೀಕರಿಗೆ ಗಡುವು ನೀಡಿದೆ. ತಪ್ಪಿದಲ್ಲಿ, ಪಾಲಿಕೆಯೇ ಸ್ವಚ್ಛಗೊಳಿಸಿ ನಿವೇಶನದ ಅಳತೆಗನುಗುಣವಾಗಿ ₹25,900 ರಿಂದ ₹1.74 ಲಕ್ಷದವರೆಗೆ ದಂಡ ವಿಧಿಸಲಿದ್ದು, ಈ ಮೊತ್ತವನ್ನು ಆಸ್ತಿ ತೆರಿಗೆಗೆ ಸೇರಿಸಿ ವಸೂಲಿ ಮಾಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j4h58rk8nyzbybbc9qbfmjcx,imgname-bbmp-vacant-plots-fines.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಖಾಲಿ ನಿವೇಶನಗಳಲ್ಲಿ ಬಿದ್ದಿರುವ ಕಸವನ್ನು ಆ.15ರ ಒಳಗೆ ಮಾಲೀಕರು ಸ್ವತಃ ತೆರವುಗೊಳಿಸದಿದ್ದರೆ ಪಾಲಿಕೆಯಿಂದಲೇ ಸ್ವಚ್ಛಗೊಳಿಸಿ, ಸಾಗಣೆ ಮಾಡಲು ಕನಿಷ್ಟ 25,900 ರು.ಗಳಿಂದ ಗರಿಷ್ಠ 1.74 ಲಕ್ಷ ರು.ವರೆಗೆ ದರ ನಿಗದಿಪಡಿಸಿ ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರ (ಜಿಬಿಎ) ಆದೇಶಿಸಿದೆ.&lt;/p&gt;&lt;p&gt;ನಗರವನ್ನು ಸ್ವಚ್ಛ, ಸುಂದರ ಹಾಗೂ ವಾಸಯೋಗ್ಯ ನಗರವನ್ನಾಗಿಸುವ ಉದ್ದೇಶದಿಂದ ಆರಂಭಿಸಿರುವ &lsquo;ತ್ಯಾಜ್ಯದಿಂದ ಸ್ವಾತಂತ್ರ್ಯ&rsquo; ಅಭಿಯಾನ ಅಂಗವಾಗಿ ನಗರದಾದ್ಯಂತ ಐದು ಪಾಲಿಕೆಗಳಿಂದ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. ಖಾಸಗಿ ಜಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಸ ಬಿದ್ದಿದೆ. ಕೆಲವು ಕಡೆ ಖಾಲಿ ಜಾಗಗಳು ಡಂಪಿಂಗ್ ಯಾರ್ಡ್ ಆಗಿವೆ. ಹೀಗಾಗಿ, ಸ್ವತಃ ಸ್ವಚ್ಛಗೊಳಿಸಿಕೊಳ್ಳುವಂತೆ ಆ.15ರವರೆಗೆ ಗಡುವು ನೀಡಲಾಗಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;ಮಾಲೀಕರು ಸ್ವಚ್ಛಗೊಳಿಸಿ ನಗರ ಪಾಲಿಕೆಯಿಂದ ಗುರುತಿಸಿರುವ ನಿಗದಿತ ಐದು ಸ್ಥಳಗಳಲ್ಲಿ ಕಸ ವಿಲೇವಾರಿ&zwnj; ಮಾಡಬೇಕು. ಅಗತ್ಯವಿದ್ದರೆ ಸ್ವಚ್ಛತೆಗಾಗಿ ಆಯಾ ನಗರ ಪಾಲಿಕೆಗಳು ಸೂಚಿಸಿರುವ ಸೇವಾದಾರರ ಸೇವೆಯನ್ನು ಸಹ ಪಡೆಯಬಹುದು. ಇಲ್ಲದಿದ್ದರೆ ಪಾಲಿಕೆಯಿಂದಲೇ ಆ.16ರಿಂದ ತೆರವು ಕಾರ್ಯ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಖಾಲಿ&zwnj; ನಿವೇಶನ ಸ್ವಚ್ಚತೆ ಮತ್ತು ಸಾಗಣೆ ದರಪಟ್ಟಿ&lt;/h2&gt;&lt;p&gt;ನಿವೇಶನ ಅಳತೆ ಸ್ವಚ್ಛತೆ ವೆಚ್ಚ(ತಡೆಗೋಡೆ ಇಲ್ಲದ/ ತಡೆಗೋಡೆ ಇರುವ) ಸಾಗಣೆ ವೆಚ್ಚ&lt;/p&gt;&lt;p&gt;20&times;30 6,700 ರು./ 7,700 ರು. 19,200 ರು.&lt;/p&gt;&lt;p&gt;30&times;40 13,400 ರು./ 14,400 ರು. 38,400 ರು.&lt;/p&gt;&lt;p&gt;30&times;50 16,750 ರು./ 14,750 ರು. 48,000 ರು.&lt;/p&gt;&lt;p&gt;40&times;60 26,800 ರು./ 27,800 ರು. 76,800 ರು.&lt;/p&gt;&lt;p&gt;50&times;80 46,700 ರು./ 47,700 ರು. 1,28,000 ರು.&lt;/p&gt;&lt;p&gt;(ಇದಕ್ಕಿಂತಲೂ ಹೆಚ್ಚು, ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ, ವಿಸ್ತೀರ್ಣಕ್ಕೆ ಅನುಗುಣವಾಗಿ ವೆಚ್ಚವನ್ನು ವಿಧಿಸಲಾಗುತ್ತದೆ)&lt;/p&gt;&lt;p&gt;ನಿವೇಶನದಲ್ಲಿನ ಕಸ ಸ್ವಚ್ಛಗೊಳಿಸಿ ಸಾಗಿಸಿದ ನಂತರ ನಿಗದಿತ ವೆಚ್ಚವನ್ನು ನಿವೇಶನ ಮಾಲೀಕರ ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುತ್ತದೆ.&lt;/p&gt;&lt;p&gt;- ಮಹೇಶ್ವರ ರಾವ್, ಮುಖ್ಯ ಆಯುಕ್ತ, ಜಿಬಿಎ&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/greater-bengaluru-authority-warning-clear-vacant-plot-waste-by-aug-15-or-pay-up-to-rs-1-74-lakh-gdp/articleshow-a4w19ne"/>
        </item>
        <item>
            <title><![CDATA[ಕರ್ನಾಟಕವನ್ನು ಕಾಡುತ್ತಿರುವ 'ಚಡ್ಡಿ ಗ್ಯಾಂಗ್' ಬೆಂಗಳೂರಿಗೆ ಎಂಟ್ರಿ; ಜನರ ಜೀವಕ್ಕೆ ಬೆಲೆ ಕೊಡದ ದರೋಡೆಕೊರರು!]]></title>
            <link>https://kannada.asianetnews.com/karnataka-districts/karnataka-notorious-chaddi-gang-enters-bengaluru-anekal-burglary-attempt-cctv/articleshow-almmgxp</link>
            <guid isPermaLink="true">https://kannada.asianetnews.com/karnataka-districts/karnataka-notorious-chaddi-gang-enters-bengaluru-anekal-burglary-attempt-cctv/articleshow-almmgxp</guid>
            <pubDate>Mon, 10 Aug 2026 09:14:44 +0530</pubDate>
            <description><![CDATA[&lt;p&gt;ಕರ್ನಾಟಕದಲ್ಲಿ ಸರಣಿ ದರೋಡೆ ನಡೆಸುತ್ತಿದ್ದ ಕುಖ್ಯಾತ 'ಚಡ್ಡಿ ಗ್ಯಾಂಗ್' ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಪ್ರತ್ಯಕ್ಷವಾಗಿದೆ. ಲೇಔಟ್ ಒಂದರಲ್ಲಿ ದರೋಡೆಗೆ ಯತ್ನಿಸಿದಾಗ, ಮಹಿಳೆಯೊಬ್ಬರ ಜಾಗರೂಕತೆಯಿಂದ ಪ್ರಯತ್ನ ವಿಫಲವಾಗಿದೆ. ಈ ಹಿಂಸಾತ್ಮಕ ಗ್ಯಾಂಗ್&zwnj;ನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ, ಜನರಿಗೆ ಜಾಗರೂಕರಾಗಿರಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzmw6yjx927jthwtq14cysz1,imgname-karnataka-chaddi-gang-in-bengaluru-1786333330013.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು ಗ್ರಾಮಾಂತರ (ಆ.10): &lt;/strong&gt;ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ, ಜನರ ನಿದ್ದೆಗೆಡಿಸಿದ್ದ ಕರುಳಬಳ್ಳಿ ಕದೀಮರ &lsquo;ಚಡ್ಡಿ ಗ್ಯಾಂಗ್&rsquo; (Chaddi Gang) ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಬಂದು ನಿಂತಿದೆ! ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿರುವ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.&lt;/p&gt;&lt;h2&gt;&lt;strong&gt;ಆನೇಕಲ್&zwnj;ನ ಲೇಔಟ್&zwnj;ನಲ್ಲಿ ಭೀತಿ:&lt;/strong&gt;&lt;/h2&gt;&lt;p&gt;ಆನೇಕಲ್ ತಾಲೂಕಿನ ಕುಂಬಾರನಹಳ್ಳಿ ಬಳಿ ಇರುವ &lsquo;ಸೆಲಬ್ರಿಟಿ ಎಕೋ ಫ್ರಂಟ್&rsquo; ಬಡಾವಣೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಒಳ ಉಡುಪು (ಚಡ್ಡಿ) ಧರಿಸಿ, ಮುಖಕ್ಕೆ ಬಟ್ಟೆ ಕಟ್ಟುಕೊಂಡು ಬಂದಿದ್ದ ನಾಲ್ವರು ಕದೀಮರ ತಂಡ, ಸ್ಥಳೀಯ ನಿವಾಸಿಗಳಾದ ಚಂದ್ರಶೇಖರ್ ಮತ್ತು ರಾಮರೆಡ್ಡಿ ಎಂಬುವವರ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಂಚು ರೂಪಿಸಿತ್ತು.&lt;/p&gt;&lt;h2&gt;&lt;strong&gt;ಮಹಿಳೆಯ ಜಾಗರೂಕತೆಯಿಂದ ತಪ್ಪಿದ ಅನಾಹುತ:&lt;/strong&gt;&lt;/h2&gt;&lt;p&gt;ದರೋಡೆಕೋರರ ಪೈಕಿ ಇಬ್ಬರು ಕದೀಮರು ರಸ್ತೆಯಲ್ಲಿ ಕಾವಲು ನಿಂತಿದ್ದರೆ, ಉಳಿದಿಬ್ಬರು ಮನೆಯ ಕಾಂಪೌಂಡ್ ಏರಿ ಒಳ ನುಗ್ಗಿದ್ದರು. ಕಾಂಪೌಂಡ್ ಗೇಟ್ ಕಟ್ ಮಾಡಿ ಮನೆ ಒಳಗೆ ನುಗ್ಗಲು ಯತ್ನಿಸುತ್ತಿದ್ದಾಗ ಉಂಟಾದ ಶಬ್ದವನ್ನು ಕೇಳಿಸಿಕೊಂಡು ಲೇಔಟ್&zwnj;ನ ಮಹಿಳೆಯೊಬ್ಬರು ಕಿಟಕಿಯಿಂದ ಹೊರಗೆ ನೋಡಿದ್ದಾರೆ. ಈ ವೇಳೆ ಕದೀಮರ ಚಲನವಲನ ಕಂಡು ಬೆಚ್ಚಿಬಿದ್ದ ಆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. ಮಹಿಳೆಯ ಚೀರಾಟ ಕೇಳಿ ಸೌಂಡ್ ಮಾಡುತ್ತಲೇ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ.&lt;/p&gt;&lt;h2&gt;&lt;strong&gt;ಜೀವ ತೆಗೆಯಲು ಹಿಂಜರಿಯದ ದರೋಡೆಕೋರರು!&lt;/strong&gt;&lt;/h2&gt;&lt;p&gt;ಈ ಚಡ್ಡಿ ಗ್ಯಾಂಗ್ ಸಾಮಾನ್ಯ ಕಳ್ಳರಲ್ಲ. ಧಾರವಾಡ, ಹುಬ್ಬಳ್ಳಿ, ಹಾಸನ ಸೇರಿದಂತೆ ಕರ್ನಾಟಕದ ಭಾಗಗಳಲ್ಲಿ ಬಾಗಿಲು ಒಡೆದು ಕಳ್ಳತನ ಮಾಡುವುದು ಇವರ ಕಾಯಕ. ಕಳ್ಳತನದ ವೇಳೆ ಮನೆಯಲ್ಲಿ ಯಾರಾದರೂ ಅಡ್ಡ ಬಂದರೆ ಅಥವಾ ಎಚ್ಚರಗೊಂಡರೆ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಸಹ ಈ ಗ್ಯಾಂಗ್ ಹಿಂಜರಿಯುವುದಿಲ್ಲ. ಜನರ ಜೀವಕ್ಕೆ ಬೆಲೆಯೇ ಕೊಡದ ಈ ದರೋಡೆಕೋರರ ಎಂಟ್ರಿಯಿಂದಾಗಿ ಆನೇಕಲ್ ಹಾಗೂ ಜಿಗಣಿ ಭಾಗದ ಜನರು ತೀವ್ರ ಭೀತಿಯಲ್ಲಿದ್ದಾರೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ರಾತ್ರಿ ವೇಳೆ ಜಾಗರೂಕರಾಗಿರುವಂತೆ ಪೊಲೀಸರು ಸೂಚಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-notorious-chaddi-gang-enters-bengaluru-anekal-burglary-attempt-cctv/articleshow-almmgxp"/>
        </item>
        <item>
            <title><![CDATA[ಪ್ರಜ್ವಲ್ ರೇವಣ್ಣಗೆ ಮೊಬೈಲ್ ಕೊಟ್ಟಿದ್ಯಾರೆಂದು ಮಧ್ಯಾಹ್ನದ ಒಳಗೆ ತಿಳಿಸುವಂತೆ ತಾಕೀತು, ಜೈಲಾಧಿಕಾರಿ ಅಮಾನತು]]></title>
            <link>https://kannada.asianetnews.com/karnataka-districts/prajwal-revanna-mobile-seizure-parappana-agrahara-jail-official-suspended-sp-issued-show-cause-notice-gdp/articleshow-ganx2n3</link>
            <guid isPermaLink="true">https://kannada.asianetnews.com/karnataka-districts/prajwal-revanna-mobile-seizure-parappana-agrahara-jail-official-suspended-sp-issued-show-cause-notice-gdp/articleshow-ganx2n3</guid>
            <pubDate>Wed, 12 Aug 2026 10:20:48 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಸಿಸಿಬಿ ದಾಳಿ ವೇಳೆ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜೈಲಿನ ಸಹಾಯಕ ಅಧೀಕ್ಷಕರನ್ನು ಅಮಾನತುಗೊಳಿಸಲಾಗಿದ್ದು, ಎಸ್&zwnj;ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಅಕ್ರಮದ ಬಗ್ಗೆ ಎಫ್&zwnj;ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k1sd0b4hc577dd40n7mnb108,imgname-prajwal-revanna-1754272902289.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್, ಪೆನ್&zwnj;ಡ್ರೈವ್ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಜೈಲು ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪ್ರಜ್ವಲ್ ಗೆ ಮೊಬೈಲ್ ಯಾರು ಕೊಟ್ಟಿದ್ದು ಅನ್ನೊ ಬಗ್ಗೆ ಮಧ್ಯಾಹ್ನದ ಒಳಗೆ ತಿಳಿಸಬೇಕೆಂದು ತಾಕೀತು ಮಾಡಿ ಜೈಲಿನ ಸಹಾಯಕ ಅಧೀಕ್ಷಕ (ಅಸಿಸ್ಟೆಂಟ್ ಸೂಪರಿಂಡೆಂಟ್) ಈರಣ್ಣ ರಂಗಾಪುರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಕೇಂದ್ರ ಕಾರಾಗೃಹದ ಎಸ್&zwnj;ಪಿ ಅಂಶುಕುಮಾರ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.&lt;/p&gt;&lt;h2&gt;ಹಾಸಿಗೆ ಕೆಳಗೆ ಅಡಗಿಸಿಟ್ಟಿದ್ದ ಫೋನ್ ಸೀಜ್&lt;/h2&gt;&lt;p&gt;ಆಗಸ್ಟ್ 11, 2026ರಂದು ಮಧ್ಯಾಹ್ನ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಅಧಿಕಾರಿಗಳು ಪರಪ್ಪನ ಅಗ್ರಹಾರದ ಹೈ ಸೆಕ್ಯುರಿಟಿ ಬ್ಯಾರಕ್&zwnj;ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದರು. ದರ್ಶನ್, ಪವಿತ್ರ ಗೌಡ ಹಾಗೂ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ವಿಐಪಿ ಕೈದಿಗಳ ಬ್ಯಾರಕ್&zwnj;ಗಳನ್ನು ಸತತ 5 ರಿಂದ 6 ಗಂಟೆಗಳ ಕಾಲ ಇಂಚಿಂಚಾಗಿ ಶೋಧ ನಡೆಸಲಾಯ್ತು. ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಬ್ಯಾರಕ್&zwnj;ನ ಹಾಸಿಗೆ ಕೆಳಗೆ ಅಡಗಿಸಿಟ್ಟಿದ್ದ ಆಂಡ್ರಾಯ್ಡ್ ಮೊಬೈಲ್ ಫೋನ್ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ಜಪ್ತಿ ಮಾಡಿದ್ದಾರೆ.&lt;/p&gt;&lt;h2&gt;ಪೊಲೀಸ್ ಕಾರ್ಯಾಚರಣೆಯ ಬೆಳವಣಿಗೆಗಳು:&lt;/h2&gt;&lt;p&gt;&lt;strong&gt;ಅಧಿಕಾರಿ ಅಮಾನತು:&lt;/strong&gt; ದಕ್ಷಿಣ ವಲಯದ ಡಿಐಜಿ ನೀಡಿದ ವಿವರವಾದ ವರದಿ ಆಧಾರದ ಮೇಲೆ, ಕರ್ತವ್ಯ ಲೋಪವೆಸಗಿದ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.&lt;/p&gt;&lt;p&gt;&lt;strong&gt;ಎಸ್&zwnj;ಪಿಗೆ ನೋಟಿಸ್: &lt;/strong&gt;ಕಾರಾಗೃಹದ ಎಸ್&zwnj;ಪಿ ಅಂಶುಕುಮಾರ್ ಅವರಿಗೆ ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪದ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ.&lt;/p&gt;&lt;p&gt;&lt;strong&gt;ಹಿಂದಿನ ಶೋಧದಲ್ಲಿ ಸಿಕ್ಕಿರಲಿಲ್ಲ:&lt;/strong&gt; ಆಗಸ್ಟ್ 6, 2026 ರಂದು ಜೈಲು ಅಧಿಕಾರಿಗಳು ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಶೋಧ ನಡೆಸಿದಾಗ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರಲಿಲ್ಲ. ಹೀಗಾಗಿ ಕಳೆದ ಕೆಲವೇ ದಿನಗಳಲ್ಲಿ ಈ ಮೊಬೈಲ್ ಒಳಗೆ ಬಂದಿರುವುದು ಸ್ಪಷ್ಟವಾಗಿದೆ.&lt;/p&gt;&lt;p&gt;&lt;strong&gt;ಖಡಕ್ ಸೂಚನೆ: &lt;/strong&gt;ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಫೋನ್ ತಂದುಕೊಟ್ಟವರು ಯಾರು ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಇಲ್ಲವಾದಲ್ಲಿ ಅವರನ್ನು ತಕ್ಷಣವೇ ಬೇರೆ ಬ್ಯಾರಕ್&zwnj;ಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.&lt;/p&gt;&lt;h2&gt;ಎಫ್&zwnj;ಐಆರ್ ದಾಖಲು:&lt;/h2&gt;&lt;p&gt;ಈ ಅಕ್ರಮದ ಕುರಿತು ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ನೀಡಿದ್ದು, ಜೈಲು ನಿಯಮಗಳ ಉಲ್ಲಂಘನೆಯಡಿ ಎಫ್&zwnj;ಐಆರ್ (FIR) ದಾಖಲಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಬಿ ಮತ್ತು ಕಾರಾಗೃಹ ಇಲಾಖೆ ತೀವ್ರ ತನಿಖೆ ಮುಂದುವರಿಸಿವೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/prajwal-revanna-mobile-seizure-parappana-agrahara-jail-official-suspended-sp-issued-show-cause-notice-gdp/articleshow-ganx2n3"/>
        </item>
        <item>
            <title><![CDATA[ಮನುಷ್ಯಳೇ ಅಲ್ಲದ ಸುಂದರಿ ಜೊತೆ  ಮಾಡಬಾರದ್ದೆಲ್ಲಾ ಮಾಡಿ 2 ಲಕ್ಷ ಕಳಕೊಂಡ ಬೆಂಗಳೂರು ಯುವಕ]]></title>
            <link>https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</link>
            <guid isPermaLink="true">https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9</guid>
            <pubDate>Fri, 07 Aug 2026 17:12:12 +0530</pubDate>
            <description><![CDATA[ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಯುವತಿಯನ್ನು ಪ್ರೀತಿಸಿದ ಯುವಕನೊಬ್ಬ ಬ್ಲ್ಯಾಕ್&zwnj;ಮೇಲ್&zwnj;ಗೆ ಒಳಗಾಗಿದ್ದಾನೆ. ತನ್ನ ನಗ್ನ ವಿಡಿಯೋ ಕಳುಹಿಸಿದ ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಾಗ, ಆತ ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆಯ ವೇಳೆ ಆ ಯುವತಿ ಮನುಷ್ಯಳಲ್ಲ, ಬದಲಿಗೆ ಸೈಬರ್ ವಂಚನೆಗೆ ಬಳಸಲಾದ ಕೃತಕ ಬುದ್ಧಿಮತ್ತೆಯ (AI) ಅವತಾರ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kze0dwcjcw4y1qvx28k344yc,imgname-dating-fraud-1786102870418.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತಿದೆ. ಅದರಲ್ಲಿಯೂ ಡೇಟಿಂಗ್​ ಆ್ಯಪ್​, ಸೈಬರ್​ ಕ್ರೈಮ್​ಗಳಲ್ಲಿ ಮೋಸ ಹೋಗುವವರು ಹೈಲಿ ಎಜುಕೇಟೆಡ್​ ಎನ್ನುವವರೇ ಎನ್ನುವುದು ಮಾತ್ರ ಸೋಜಿಗ. ಡೇಟಿಂಗ್​ ಆ್ಯಪ್​ಗಳಲ್ಲಂತೂ ಮೋಸ ಹೋದವರಿಗೆ ಲೆಕ್ಕವೇ ಇಲ್ಲ. ಹೀಗೆ ಮೋಸ ಹೋದವರು, ಮರ್ಯಾದೆಗೆ ಅಂಜಿ ಕಂಪ್ಲೇಂಟ್​ ಕೊಡಲ್ಲ ಎನ್ನುವುದು ತಿಳಿಯುವ ಕಾರಣದಿಂದಲೇ ಚಾಲಾಕಿಗಳು ಇಂಥವರನ್ನೇ ಗಾಳ ಹಾಕ್ತಾರೆ. ಅಂಥದ್ದೇ ಒಂದು ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.&lt;/p&gt;&lt;p&gt;ಆತನೋ 26 ವರ್ಷದ ಸುಂದರ. ಒಬ್ಬ ಸುಂದರಿಯ ಹುಡುಕಾಟದಲ್ಲಿದ್ದ. ಇದಕ್ಕಾಗಿ ಆತ ಡೇಟಿಂಗ್​ ಅಪ್ಲಿಕೇಷನ್​ ಮೊರೆ ಹೋದ. ಅಲ್ಲೊಬ್ಬಳು ಸುಂದರಿ ಕಂಡಳು. ಪರಿಚಯವಾಯ್ತು, ಅವಳೇ ಇಶಾನಿ. ಆ ಆ್ಯಪ್​ ಮೂಲಕವೇ ಮಾತು ಬೆಳೆದು ಲವ್ವೂ ಆಗೋಯ್ತು. ಇನ್ನೇನು, ಆ ಸುಂದರಿಯ ಬುಟ್ಟಿಗೆ ಈ ಯುವಕ ಬಿದ್ದಾಗಿತ್ತು. ತಾನು ಏನು ಹೇಳಿದ್ರೂ ಅವನು ಕೇಳ್ತಾನೆ ಎನ್ನುವ ಮಟ್ಟಿಗೆ ಇಶಾನಿ ಬಂದಳು. ಸಾಮಾನ್ಯವಾಗಿ, ಇಂಥ ಪ್ರಕರಣಗಳಲ್ಲಿ ಹೆಣ್ಣುಮಕ್ಕಳಿಗೆ ಐಷಾರಾಮಿ ಜೀವನದ ರುಚಿ ತೋರಿಸಿ, ಕೊನೆಗೆ, ನಿನ್ನ ನಗ್ನ ಫೋಟೋ ಕಳುಹಿಸು, ನಗ್ನ ದೇಹದ ವಿಡಿಯೋ ಮಾಡಿ ಕಳುಹಿಸು ಎಂದೆಲ್ಲಾ ಹೇಳುವುದು, ಐಷಾರಾಮಿ ಜೀವನದ ರುಚಿ ಕಂಡಾಕೆ ಹಾಗೆ ಮಾಡುವುದು, ಕೊನೆಗೆ ಆತ ಬ್ಲ್ಯಾಕ್​ಮೇಲ್​ ಮಾಡುವುದು... ಇವೆಲ್ಲಾ ಮಾಮೂಲು. ಆದರೆ ಈ ಸ್ಟೋರಿಯಲ್ಲಿ ಸ್ವಲ್ಪ ಟ್ವಿಸ್ಟ್​ ಇದೆ.&lt;/p&gt;&lt;h2&gt;&lt;strong&gt;ಬಟ್ಟೆ ಕಳಚಿದ ಸುಂದರಿ&lt;/strong&gt;&lt;/h2&gt;&lt;p&gt;ಅದೇನೆಂದರೆ, ಈ ಯುವಕನನ್ನು ಬುಟ್ಟಿಗೆ ಹಾಕಿಕೊಂಡ ಮೇಲೆ ಆ ಸುಂದರಿ ವಿಡಿಯೋ ಕಾಲ್​ ಮಾಡಿ ತನ್ನೆಲ್ಲಾ ಬಟ್ಟೆಗಳನ್ನು ಕಳಚಿ ತೋರಿಸಿದ್ದಾಳೆ. ಯುವಕನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು. ನಂತರ ಆಕೆ, ನಿನ್ನ ನಗ್ನ ಫೋಟೋ, ವಿಡಿಯೋ ಕಳುಹಿಸುವಂತೆ ಕೇಳಿದ್ದಾಳೆ. ಯುವಕ ಹಿರಿಹಿರಿ ಹಿಗ್ಗಿದ್ದಾನೆ. ಇನ್ನೇನು ತನ್ನ ಆಸೆಯೆಲ್ಲವೂ ನೆರವೇರಿತು ಎಂದುಕೊಂಡಿದ್ದಾನೆ. ಮುಂದೆ ಏನೇನು ಆಗಬಹುದು ಎಂದು ಸುಂದರ ಕನಸು ಕಂಡು, ಕನಸಿನಲ್ಲಿಯೇ ತೇಲಾಡಿದ್ದಾನೆ. ಇಶಾನಿ ಹೇಳಿದಂತೆ ತನ್ನ ಫೋಟೋ, ವಿಡಿಯೋ ಎಲ್ಲಾ ವಿವಿಧ ಭಂಗಿಗಳಲ್ಲಿ ಕಳುಹಿಸಿದ್ದಾನೆ. ಆದರೆ, ಇಷ್ಟಾಗುತ್ತಿದ್ದಂತೆಯೇ, ಆ ಸುಂದರಿ ತನ್ನ ಆಟ ಶುರು ಮಾಡಿದ್ದಾಳೆ. ಈ ವಿಡಿಯೋ, ಫೋಟೋ ಹಿಡಿದುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ ಆಕೆ, 2 ಲಕ್ಷ ಕೊಡದಿದ್ದರೆ, ಇದನ್ನು ಲೀಕ್​ ಮಾಡೋದಾಗಿ ಹೇಳಿದ್ದಾಳೆ. ಆಗಲೇ ಯುವಕನಿಗೆ ತಾನು ಮೋಸ ಹೋಗಿದ್ದು ತಿಳಿದಿದೆ.&lt;/p&gt;&lt;p&gt;ವಿಧಿಯಿಲ್ಲದೇ ದುಡ್ಡನ್ನು ಕಳುಹಿಸಿದ್ದಾನೆ. ಬ್ಲ್ಯಾಕ್​ಮೇಲ್​ ಮಾಡುವವರು ಸುಮ್ಮನೇ ಇರ್ತಾರೆ. ಮತ್ತೊಂದಿಷ್ಟು ದುಡ್ಡು ಕೇಳಿದ್ದಾಳೆ ಸುಂದರಿ. ಆಗ ಎಚ್ಚೆತ್ತುಕೊಂಡ ಯುವಕ, ಆಗಿದ್ದು ಆಗಲಿ, ಮರ್ಯಾದೆ ಹೋದರೆ ಹೋಗಲಿ ಎಂದು ಆ ಸುಂದರಿ ವಿರುದ್ಧ ದೂರು ದಾಖಲಿಸಿದ್ದಾನೆ. ಹಣಕ್ಕಾಗಿ ಪದೇ ಪದೇ ಬೇಡಿಕೆ ಇಟ್ಟ ನಂತರ, ಯುವಕ ಬೆಂಗಳೂರಿನ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ನೀಡದಿದ್ದರೆ ತನ್ನ ನಗ್ನ ವೀಡಿಯೊವನ್ನು ಪ್ರಕಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.&lt;/p&gt;&lt;h3&gt;&lt;strong&gt;ಬೆಚ್ಚಿಬಿದ್ದ ಪೊಲೀಸರು&lt;/strong&gt;&lt;/h3&gt;&lt;p&gt;ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಬೆಚ್ಚಿಬಿದ್ದರು. ಏಕೆಂದರೆ, ಇಶಾನಿ ಹೆಸರಿನ ಆಕೆ, ಸುಂದರಿಯೂ ಅಲ್ಲ, ಹೋಗ್ಲಿ ಎಂದರೆ ಮನುಷ್ಯಳೇ ಅಲ್ಲ ಎನ್ನೋದು ಗೊತ್ತಾಯ್ತು. ಅವಳು ಕೃತಕ ಬುದ್ಧಿಮತ್ತೆ (AI) ಹೆಣ್ಣು. ಅಪರಾಧ ಮಾಡಲು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಸ್ತ್ರೀ ಅವತಾರವನ್ನು ಬಳಸಕಾಗಿದೆ. ಇದು ದೊಡ್ಡ ಸೈಬರ್ ಸುಲಿಗೆ ಜಾಲದ ಭಾಗವಾಗಿದೆ ಎಂದು ಪೊಲೀಸರು ಕಂಡುಹೊಂದರು. ಸದ್ಯ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ಯಾಂಕ್ ವಹಿವಾಟುಗಳು, UPI ಮತ್ತು ಡಿಜಿಟಲ್ ಹೆಜ್ಜೆಗುರುತುಗಳ ಮೂಲಕ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.&lt;/p&gt;&lt;h3&gt;&lt;strong&gt;ಅಪ್ಲಿಕೇಶನ್ ಬಳಕೆದಾರರಿಗೆ ಪೊಲೀಸ್ ಎಚ್ಚರಿಕೆ&lt;/strong&gt;&lt;/h3&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಅಪರಿಚಿತರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಲು ತನಿಖಾಧಿಕಾರಿಗಳು ಡೇಟಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಒತ್ತಾಯಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, &quot;ಅಪರಿಚಿತ ವ್ಯಕ್ತಿಗಳೊಂದಿಗೆ ನಿಕಟ ವಿಡಿಯೋ ಕರೆಗಳಲ್ಲಿ ತೊಡಗಬೇಡಿ ಮತ್ತು ಖಾಸಗಿ ವಿಷಯವನ್ನು ಎಂದಿಗೂ ಹಂಚಿಕೊಳ್ಳಬೇಡಿ. ಒಮ್ಮೆ ರೆಕಾರ್ಡ್ ಮಾಡಿದ ನಂತರ, ಅಂತಹ ವಿಷಯವು ಬ್ಲ್ಯಾಕ್&zwnj;ಮೇಲ್ ಮಾಡುವ ಸಾಧನವಾಗುತ್ತದೆ&quot; ಎಂದು ಹೇಳಿದರು. ಈ ಪ್ರಕರಣವು ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಸಂಖ್ಯೆಗೆ ಮತ್ತೊಂದು ಕೊಂಡಿಯಾಗಿ ಸೇರಿಸುತ್ತದೆ, ಅಲ್ಲಿ ಕೃತಕ ಬುದ್ಧಿಮತ್ತೆಯನ್ನು ವ್ಯಕ್ತಿಗಳಂತೆ ನಟಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ, ಸಂತ್ರಸ್ತರಿಗೆ ತಿಳಿಯುವ ಹೊತ್ತಿಗೆ ವಿಳಂಬವಾಗಿ ವಂಚನೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ ಎಂದಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Suchethana D</dc:creator>
            <atom:link href="https://kannada.asianetnews.com/crime/bengaluru-man-loses-rs-2-lakh-in-ai-dating-scam-after-intimated-video-blackmail-suc/articleshow-gi9smt9"/>
        </item>
        <item>
            <title><![CDATA[ಪರಪ್ಪನ ಅಗ್ರಹಾರ: ಸತ್ಯ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ, ಬ್ಯಾರಕ್‌ ನಲ್ಲಿ ಸಿಕ್ಕ ಮೊಬೈಲ್‌ನಲ್ಲಿ ಏನೇನಿತ್ತು ಗೊತ್ತಾ?]]></title>
            <link>https://kannada.asianetnews.com/karnataka-districts/parappana-agrahara-jail-prajwal-revanna-barrack-pen-drive-ott-apps-found-in-seized-mobile-phone-ccb-files-fir-gdp/articleshow-gw8xge7</link>
            <guid isPermaLink="true">https://kannada.asianetnews.com/karnataka-districts/parappana-agrahara-jail-prajwal-revanna-barrack-pen-drive-ott-apps-found-in-seized-mobile-phone-ccb-files-fir-gdp/articleshow-gw8xge7</guid>
            <pubDate>Wed, 12 Aug 2026 12:02:20 +0530</pubDate>
            <description><![CDATA[ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಮೊಬೈಲ್ ಫೋನ್, ಪೆನ್&zwnj;ಡ್ರೈವ್ ಪತ್ತೆಯಾಗಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಇನ್ನೊಬ್ಬ ಕೈದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಜೈಲಾಧಿಕಾರಿಯನ್ನು ಅಮಾನತು ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hz5q8zzm0hfpwy4mr0ysy7jd,imgname-prajwal-revanna-arrest-in-bengaluru.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಅಪರಾಧಿ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್&zwnj;ನಲ್ಲಿ ಮೊಬೈಲ್ ಫೋನ್, ಪೆನ್&zwnj;ಡ್ರೈವ್, ಡೈರಿ, ಚಾರ್ಜರ್ ಪತ್ತೆಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ. ಈ ಸಂಬಂಧ ಸಿಸಿಬಿ ) ಪೊಲೀಸ್ ಇನ್ಸ್&zwnj;ಪೆಕ್ಟರ್ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಇಬ್ಬರು ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ಜಂಟಿ ತನಿಖೆ ಕೈಗೊಂಡಿದ್ದಾರೆ. ಮಾತ್ರವಲ್ಲ ಘಟನೆ ಸಂಬಂಧ ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಭದ್ರತಾ ವಿಭಾಗ-3ರ ಮೊದಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 4ರಲ್ಲಿ ಸಿಸಿಬಿ ಪೊಲೀಸರು ದಿಢೀರ್ ಪರಿಶೀಲನೆ ನಡೆಸಿದಾಗ ನೀಲಿ ಬಣ್ಣದ 'ರೆಡ್&zwnj;ಮಿ 5G' ಮೊಬೈಲ್ ಫೋನ್, ಬಿಳಿ ಬಣ್ಣದ ಚಾರ್ಜರ್, ನೀಲಿ ಬಣ್ಣದ ಪಾಕೆಟ್ ನೋಟ್&zwnj;ಬುಕ್ ಹಾಗೂ ಒಂದು 'ಸ್ಯಾನ್&zwnj;ಡಿಸ್ಕ್' ಪೆನ್&zwnj;ಡ್ರೈವ್ ಪತ್ತೆಯಾಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿ ಪ್ರತಾಪ್ ರಾಯ್ ಅವರನ್ನು ಮೊದಲ ಆರೋಪಿ (A1) ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎರಡನೇ ಆರೋಪಿ (A2) ಎಂದು ಎಫ್&zwnj;ಐಆರ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;ಜಪ್ತಿಯಾದ ಮೊಬೈಲ್ ಫೋನ್&zwnj;ನಲ್ಲಿ ಫೇಸ್&zwnj;ಬುಕ್, ಇನ್&zwnj;ಸ್ಟಾಗ್ರಾಮ್&zwnj; ಸಾಮಾಜಿಕ ಜಾಲತಾಣಗಳು ಆ್ಯಪ್&zwnj;ಗಳು ಹಾಗೂ ನೆಟ್&zwnj;ಫ್ಲಿಕ್ಸ್, ಪ್ರೈಮ್ ವೀಡಿಯೊದಂತಹ ಒಟಿಟಿ ಆ್ಯಪ್&zwnj;ಗಳು ಇರುವುದು ಪತ್ತೆಯಾಗಿದೆ. ಆದರೆ, ಈ ಆ್ಯಪ್&zwnj;ಗಳ ಅಕೌಂಟ್ ಪಾಸ್&zwnj;ವರ್ಡ್&zwnj;ಗಳು ತಮಗೆ ತಿಳಿದಿಲ್ಲ ಎಂದು ಇಬ್ಬರು ಕೈದಿಗಳು ಕೂಡ ವಿಚಾರಣೆ ವೇಳೆ ತಿಳಿಸಿದ್ದು, ಫೋನ್ ಎಲ್ಲಿಂದ ಬಂತು ಎಂಬ ಬಗ್ಗೆ ಬಾಯಿ ಬಿಟ್ಟಿಲ್ಲ.&lt;/p&gt;&lt;h2&gt;ಲಾಯರ್ ಮತ್ತು ಸಂಬಂಧಿಗಳಿಗೆ ಕರೆ ಮಾಡುತ್ತಿದ್ದ ಪ್ರಜ್ವಲ್ ರೇವಣ್ಣ&lt;/h2&gt;&lt;p&gt;ವಿಚಾರಣೆ ವೇಳೆ ಆರೋಪಿ ಪ್ರತಾಪ್ ರಾಯ್, ಈ ಮೊಬೈಲ್ ಫೋನ್ ತನಗೇ ಸೇರಿದ್ದು ಎಂದು ಒಪ್ಪಿಕೊಂಡಿದ್ದು, ವಕೀಲರು ಹಾಗೂ ಸಂಬಂಧಿಕರಿಗೆ ಕರೆ ಮಾಡಲು ಬಳಸುತ್ತಿದ್ದುದಾಗಿ ಹೇಳಿದ್ದಾನೆ. ಇತ್ತ ಅಪರಾಧಿ ಪ್ರಜ್ವಲ್ ರೇವಣ್ಣ ಕೂಡ ಪ್ರತಾಪ್&zwnj;ನಿಂದ ಮೊಬೈಲ್ ಪಡೆದು ತಮ್ಮ ವಕೀಲರು ಮತ್ತು ಸಂಬಂಧಿಕರಿಗೆ ಕರೆ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರ ದೂರಿನ ಕಾಫಿಯಲ್ಲಿ ಉಲ್ಲೇಖವಾಗಿದೆ.&lt;/p&gt;&lt;p&gt;ಪ್ರಸ್ತುತ ಪರಪ್ಪನ ಅಗ್ರಹಾರ ಮತ್ತು ಸಿಸಿಬಿ ಪೊಲೀಸರು ಈ ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಹಾಗೂ ಯಾರ ಜೊತೆಗೆಲ್ಲಾ ಸಂವಹನ ನಡೆಸಲಾಗಿದೆ ಎಂದು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಧ್ಯಾಹ್ನದೊಳಗೆ ಮೊಬೈಲ್ ಜೈಲಿನ ಒಳಗೆ ಹೇಗೆ ಬಂತು ಎಂಬುದರ ಬಗ್ಗೆ ತಿಳಿಸಬೇಕೆಂದು ಜೈಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನೋಟೀಸ್ ಕೊಟ್ಟು ಅಮಾನತು ಮಾಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಹಾಗೂ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/parappana-agrahara-jail-prajwal-revanna-barrack-pen-drive-ott-apps-found-in-seized-mobile-phone-ccb-files-fir-gdp/articleshow-gw8xge7"/>
        </item>
        <item>
            <title><![CDATA[ವಿಶ್ವದರ್ಜೆಯ ಎಐ ಸಿಟಿಯಾಗಿ ಬಿಡದಿ ಅಭಿವೃದ್ಧಿ: ಮುಖ್ಯಮಂತ್ರಿ ಡಿಕೆಶಿ, ರೈತರಿಗೆ ಬಂಪರ್ ಆಫರ್!]]></title>
            <link>https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5</link>
            <guid isPermaLink="true">https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5</guid>
            <pubDate>Mon, 10 Aug 2026 09:11:55 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್&zwnj;ಶಿಪ್&zwnj; ಯೋಜನೆಯನ್ನು ವಿಶ್ವದರ್ಜೆಯ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kww8fr199rqc444bvyh4z0yt,imgname-bj-1783359856680.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಿಡದಿ ಟೌನ್&zwnj;ಶಿಪ್&zwnj; ವಿರುದ್ಧ ಜೆಡಿಎಸ್, ಬಿಜೆಪಿ ನಾಯಕರು ಪಾದಯಾತ್ರೆ, ರೈತರಿಂದ ಪ್ರತಿಭಟನೆ ಆರಂಭಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರು ಈ ಟೌನ್&zwnj;ಶಿಪ್&zwnj; ಅನ್ನು ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಈ ಸಂಬಂಧ ಮುಖ್ಯಮಂತ್ರಿ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಸಂದೇಶ ನೀಡಿರುವ ಅವರು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್&zwnj;ಶಿಪ್&zwnj; ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಬೆಂಗಳೂರು ದಕ್ಷಿಣದ ಚಿತ್ರಣ ಬದಲು:&lt;/h2&gt;&lt;p&gt;ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣದ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿ ರು.ಗಳಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಹಣದ ಬದಲು ಭೂಮಿ ಬಯಸುವ ರೈತರಿಗೆ ಶೇ.50 ಅಭಿವೃದ್ಧಿಪಡಿಸಿದ ಜಾಗ ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ ಎಂದು ರೈತರ ಬಳಿ ಮನವಿ ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ಪಾದಯಾತ್ರೆಯ ಮಾಡಲು ದಳಕ್ಕೆ ಹಕ್ಕು ಇದೆ: ಸಿಎಂ&lt;/h2&gt;&lt;p&gt;ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಅಧಿವೇಶನದಲ್ಲಿ ಬಂದು ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ, ಪಾದಯಾತ್ರೆ ಮಾಡುವ ಹಕ್ಕಿದೆ. ಅವರು ಏನು ಬೇಕಾದರೂ ಮಾಡಲಿ. ಅಧಿವೇಶನದಲ್ಲಿ ಬಂದು ಮಾತನಾಡಲಿ. ಎಲ್ಲೆಲ್ಲಿ ದೂರು ನೀಡುತ್ತಾರೋ ನೀಡಲಿ, ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ತಿಳಿಸಿದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/bidadi-township-project-to-become-world-class-ai-city-says-dk-shivakumar-promises-rs-3-crore-land-compensation-gdp/articleshow-hwcl0z5"/>
        </item>
        <item>
            <title><![CDATA[ಪ್ರಜ್ವಲ್ ರೇವಣ್ಣಗೆ ಮೊದಲೇ ವಾರ್ನ್‌ ಮಾಡಿದ್ವಿ - ಅಲೋಕ್ ಕುಮಾರ್ ಬಿಚ್ಚಿಟ್ರು ಅಸಲಿ ಸತ್ಯ]]></title>
            <link>https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g</link>
            <guid isPermaLink="true">https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g</guid>
            <pubDate>Wed, 12 Aug 2026 19:35:34 +0530</pubDate>
            <description><![CDATA[&lt;p&gt;ಎಚ್ಚರಿಕೆ ನೀಡಿದ ಹೊರತಾಗಿಯೂ ಪ್ರಜ್ವಲ್ ರೇವಣ್ಣ ಕಡ್ಡಾಯವಾದ ಬಿಳಿ ಸಮವಸ್ತ್ರ ಧರಿಸಲು ನಿರಾಕರಿಸುವ ಮೂಲಕ ಜೈಲಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಡಿಜಿಪಿ ಅಲೋಕ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅವರ ಬ್ಯಾರೆಕ್&zwnj;ನಲ್ಲಿ ಮೊಬೈಲ್ ಪತ್ತೆಯಾದ ಸಿಸಿಬಿ ದಾಳಿಯ ಬೆನ್ನಲ್ಲೇ, ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಜೈಲು ಎಸ್ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv4mhkc6fwcm7jt3mx7e3z0,imgname-dgp-alok-kumar-on-prajwal-revanna-1786543490668.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧಿಯಾಗಿರುವ ಜೈಲಿನ ಕೊಠಡಿಯಲ್ಲಿ ಮೊಬೈಲ್ ಪತ್ತೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿ, ಪ್ರಜ್ವಲ್ ರೇವಣ್ಣ ಜೈಲಿನ ಕಟ್ಟುನಿಟ್ಟಿನ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಕಡ್ಡಾಯವಾಗಿ ಧರಿಸಬೇಕಾದ ಬಿಳಿ ಸಮವಸ್ತ್ರವನ್ನು ಧರಿಸಲು ಪ್ರಜ್ವಲ್ ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;p&gt;ಮಾಧ್ಯಮಗಳ ಜೊತೆ ಮಾತನ್ನಾಡಿರುವ ಅಲೋಕ್ ಕುಮಾರ್, ಜೈಲಿನ ನಿಯಮಾವಳಿ ಪ್ರಕಾರ ಪ್ರತಿಯೊಬ್ಬ ಕೈದಿಯೂ ಬಿಳಿ ಬಟ್ಟೆಯನ್ನು ಧರಿಸಬೇಕು. ಆದರೆ ಪ್ರಜ್ವಲ್ ರೇವಣ್ಣ ಬಿಳಿ ವಸ್ತ್ರ ಧರಿಸಿಲ್ಲ. ಈ ಬಗ್ಗೆ ನಾವು ಈಗಾಗಲೇ ವಾರ್ನ್ ಮಾಡಿದ್ದೆವು. ಆದರೂ ಆತ ಸಮವಸ್ತ್ರ ಧರಿಸದೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ರೇಡ್ ವೇಳೆ ಸಿಕ್ಕ ಮೊಬೈಲ್&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಗೃಹ ಸಚಿವರ ಸೂಚನೆಯಂತೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರೆಕ್&zwnj;ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಜೈಲಿನ ಅತ್ಯಂತ ಸುರಕ್ಷಿತ ವಲಯದಲ್ಲಿರುವ ಪ್ರಜ್ವಲ್ ಕೈಗೆ ಮೊಬೈಲ್ ಫೋನ್ ಸಿಕ್ಕಿದ್ದು ಹೇಗೆ? ಇದಕ್ಕೆ ಯಾರು ಸಹಕರಿಸಿದರು ಎಂಬ ಬಗ್ಗೆ ಈಗ ಸಿಸಿಬಿ ಮತ್ತು ಕಾರಾಗೃಹ ಇಲಾಖೆ ತೀವ್ರ ತನಿಖೆ ನಡೆಸುತ್ತಿದೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ವಿರುದ್ಧ ಕ್ರಮದ ಅಸ್ತ್ರ&lt;/strong&gt;&lt;/h2&gt;&lt;p&gt;ಈ ಗಂಭೀರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾರಾಗೃಹ ಎಸ್ಪಿ ಅನ್ಶುಕುಮಾರ್&zwnj;ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜೈಲಿನ ಉಸ್ತುವಾರಿ ವಹಿಸಿರುವ ಎಸ್ಪಿಗೆ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ನಮ್ಮ ಅಧಿಕಾರಿಗಳಿಗೆ ತೊಂದರೆ ಕೊಡುವುದು ನನ್ನ ಉದ್ದೇಶವಲ್ಲ. ಆದರೆ ವ್ಯವಸ್ಥೆ ಸರಿಯಾಗಬೇಕೆಂದರೆ ಕಠಿಣ ಕ್ರಮ ಅನಿವಾರ್ಯ. ಯಾರೇ ಆಗಿರಲಿ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಲೇಬೇಕು ಎಂದು ಡಿಜಿಪಿ ತಿಳಿಸಿದ್ದಾರೆ. ಪ್ರಜ್ವಲ್ ಬ್ಯಾರೆಕ್&zwnj;ಗೆ ಮೊಬೈಲ್ ಸರಬರಾಜು ಮಾಡಿದವರು ಯಾರು? ಜೈಲಿನ ಸಿಬ್ಬಂದಿಯೇ ಇದಕ್ಕೆ ಸಾಥ್ ನೀಡಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೈಲಿನ ನಿಯಮಗಳನ್ನೇ ಲೆಕ್ಕಿಸದ ಪ್ರಜ್ವಲ್ ರೇವಣ್ಣ ಅವರ ನಡೆ ಈಗ ಜೈಲು ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g"/>
        </item>
        <item>
            <title><![CDATA[ಆ.12ರ ಯುರೋಪ್ ಸೂರ್ಯಗ್ರಹಣಕ್ಕೆ ಕರೋನ ಮುನ್ಸೂಚನೆ ನೀಡಿದ ಭಾರತೀಯ ವಿಜ್ಞಾನಿಗಳು, ಬೆಂಗಳೂರಿನ RRIನಲ್ಲಿ ಸಂಶೋಧನೆ!]]></title>
            <link>https://kannada.asianetnews.com/science/august-12-solar-eclipse-indian-scientists-from-raman-research-institute-bengaluru-predict-sun-corona-structure-gdp/articleshow-m4kg1av</link>
            <guid isPermaLink="true">https://kannada.asianetnews.com/science/august-12-solar-eclipse-indian-scientists-from-raman-research-institute-bengaluru-predict-sun-corona-structure-gdp/articleshow-m4kg1av</guid>
            <pubDate>Wed, 12 Aug 2026 16:00:54 +0530</pubDate>
            <description><![CDATA[ಆಗಸ್ಟ್ 12 ರಂದು ಯುರೋಪಿನಲ್ಲಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕರೋನಾವು ಸಂಕೀರ್ಣ ರಚನೆಯನ್ನು ಹೊಂದಲಿದೆ ಎಂದು ಬೆಂಗಳೂರಿನ ರಾಮನ್ ಸಂಶೋಧನಾ ಸಂಸ್ಥೆಯ ನೇತೃತ್ವದ ಭಾರತೀಯ ಸೌರ ಭೌತಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದಾರೆ. ಈ ಅಧ್ಯಯನವು ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಭೂಮಿಯ ಮೇಲಿನ ಅದರ ಪರಿಣಾಮಗಳನ್ನು ಊಹಿಸಲು ನಿರ್ಣಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jqdqr4snhkwpzv3x64xjnzgv,imgname-4k-solar-eclipse-ring-of-fire-4252-sbi-351584037--2-.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 12 ರಂದು ಯುರೋಪಿನ ಹಲವು ಭಾಗಗಳಲ್ಲಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣಕ್ಕೂ ಮುನ್ನ, ಭಾರತೀಯ ಸೌರ ಭೌತಶಾಸ್ತ್ರಜ್ಞರು ಸೂರ್ಯನ ಅತಿ ಹೆಚ್ಚು ತಾಪಮಾನ ಹೊಂದಿರುವ 'ಮಿಲಿಯನ್ ಡಿಗ್ರಿ ಕರೋನಾ'ದ (Corona) ಸಂಕೀರ್ಣ ರಚನೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ಸೂರ್ಯ-ಭೂಮಿ ಲ್ಯಾಗ್ರೇಂಜ್ ಪಾಯಿಂಟ್ 1 (L1) ನಲ್ಲಿರುವ ಹಾಲೋ ಕಕ್ಷೆಯಿಂದ ಸೂರ್ಯನ ಹೊರಗಿನ ಪದರಕ್ಕೆ ಕರೋನಾ ಎನ್ನಲಾಗುತ್ತದೆ.&lt;/p&gt;&lt;p&gt;ಬೆಂಗಳೂರಿನ ಪ್ರಸಿದ್ಧ ರಾಮನ್ ಸಂಶೋಧನಾ ಸಂಸ್ಥೆ (RRI) ನೇತೃತ್ವದ ಸಂಶೋಧಕರ ತಂಡವು ಸೂರ್ಯನ ಹೊರ ವಾತಾವರಣದಲ್ಲಿ ಮೂಡಲಿರುವ ಬೃಹತ್ ದಳಗಳಂತಹ ಆಕಾರಗಳು ಮತ್ತು ಉದ್ದನೆಯ ಪ್ಲಾಸ್ಮಾ ಸ್ಟ್ರೀಮರ್&zwnj;ಗಳ (Streamers) ಬಗ್ಗೆ ಭವಿಷ್ಯ ನುಡಿದಿದೆ. ಆಗಸ್ಟ್ 10 ರವರೆಗೆ ಲಭ್ಯವಿದ್ದ ಸೌರ ವೀಕ್ಷಣಾ ದತ್ತಾಂಶಗಳನ್ನು ಬಳಸಿಕೊಂಡು, ಸೂರ್ಯನ ಕಾಂತಕ್ಷೇತ್ರದ ಎರಡು ವಿಭಿನ್ನ ಕಂಪ್ಯೂಟೇಶನಲ್ ಮಾದರಿಗಳ (Computational Models) ಆಧಾರದ ಮೇಲೆ ಈ ನಿಖರ ಅಂದಾಜನ್ನು ಮಾಡಲಾಗಿದೆ&lt;/p&gt;&lt;h2&gt;ಗ್ರಹಣದ ಸಮಯ ಮತ್ತು ಗೋಚರತೆ&lt;/h2&gt;&lt;p&gt;ಭಾರತೀಯ ಕಾಲಮಾನದ ಪ್ರಕಾರ ಆಗಸ್ಟ್ 12 ರ ರಾತ್ರಿ 9:04 ಕ್ಕೆ ಗ್ರಹಣ ಪ್ರಾರಂಭವಾಗಲಿದೆ. ಚಂದ್ರನ ನೆರಳು ಸೂರ್ಯನನ್ನು ಸುಮಾರು 2 ನಿಮಿಷ 18 ಸೆಕೆಂಡುಗಳ ಕಾಲ ಸಂಪೂರ್ಣವಾಗಿ ಆವರಿಸಿದೆ. ಭಾರತದಲ್ಲಿ ಈ ಸಮಯದಲ್ಲಿ ರಾತ್ರಿಯಾಗಿರುವುದರಿಂದ ಈ ಗ್ರಹಣವು ನಮಗೆ ಗೋಚರಿಸುವುದಿಲ್ಲ. ಸ್ಪೇನ್&zwnj; ದೇಶದ ಹೆಚ್ಚಿನ ಭಾಗಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿದರೆ, ಪಶ್ಚಿಮ ಯುರೋಪ್, ವಾಯುವ್ಯ ಆಫ್ರಿಕಾ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ.&lt;/p&gt;&lt;h2&gt;ಗ್ರಹಣದ ಸಂದರ್ಭದಲ್ಲಿ ಕರೋನಾ ಅಧ್ಯಯನದ ಮಹತ್ವ&lt;/h2&gt;&lt;p&gt;ಸಾಮಾನ್ಯ ದಿನಗಳಲ್ಲಿ ಸೂರ್ಯನ ಪ್ರಖರವಾದ ಗೋಚರ ಮೇಲ್ಮೈಗಿಂತ (Photosphere) ಅದರ ಹೊರ ವಾತಾವರಣವಾದ ಕರೋನಾ ರೇಖೆಗಳು ಅತ್ಯಂತ ಮಸುಕಾಗಿರುವುದರಿಂದ ಅದನ್ನು ಬರಿಗಣ್ಣಿನಿಂದ ಅಥವಾ ಸಾಮಾನ್ಯ ಟೆಲಿಸ್ಕೋಪ್&zwnj;ಗಳಿಂದ ವೀಕ್ಷಿಸುವುದು ಅಸಾಧ್ಯ. ಆದರೆ ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯನ ಪ್ರಕಾಶಮಾನವಾದ ಡಿಸ್ಕ್ ಅನ್ನು ಸಂಪೂರ್ಣವಾಗಿ ಮರೆಮಾಚಿದಾಗ, ಕರೋನದ ಬೆರಗುಗೊಳಿಸುವ ರಚನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.&lt;/p&gt;&lt;p&gt;ಸಾಮಾನ್ಯ ದಿನಗಳಲ್ಲಿ ಕರೋನಾವನ್ನು ಅಧ್ಯಯನ ಮಾಡಲು ವಿಜ್ಞಾನಿಗಳು 'ಕರೋನಾಗ್ರಾಫ್&zwnj;ಗಳನ್ನು' (Artificial Disks) ಬಳಸುತ್ತಾರೆ. ಭಾರತದ ಆದಿತ್ಯ-L1 (Aditya-L1) ಉಪಗ್ರಹ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) SOHO ಮತ್ತು ಪ್ರೋಬಾ-3 (Proba-3) ಕಾರ್ಯಾಚರಣೆಗಳು ಇಂತಹ ಕೃತಕ ತಂತ್ರಜ್ಞಾನದ ಮೂಲಕವೇ ಕರೋನಾವನ್ನು ಮೇಲ್ವಿಚಾರಣೆ ಮಾಡುತ್ತವೆ. ಪ್ರೋಬಾ-3 ಯೋಜನೆಯನ್ನು ಇಸ್ರೋ ಉಡಾವಣೆ ಮಾಡಿರುವುದು ಭಾರತಕ್ಕೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ.&lt;/p&gt;&lt;h2&gt;ಬಾಹ್ಯಾಕಾಶ ಹವಾಮಾನ ಮತ್ತು ಭೂಮಿಯ ಮೇಲಿನ ಪರಿಣಾಮ&lt;/h2&gt;&lt;p&gt;ಕರೋನಾದ ಆಳವಾದ ಅಧ್ಯಯನವು ಅತ್ಯಂತ ಅಗತ್ಯವಾಗಿದೆ, ಏಕೆಂದರೆ ಅಲ್ಲಿನ ಕಾಂತಕ್ಷೇತ್ರದಲ್ಲಿ ಉಂಟಾಗುವ ಸಣ್ಣ ಬದಲಾವಣೆಗಳೂ ಸಹ ಬೃಹತ್ ಸೌರ ಜ್ವಾಲೆಗಳು (Solar Flares), ಸೌರ ಬಿರುಗಾಳಿಗಳು ಮತ್ತು ಕರೋನಲ್ ಮಾಸ್ ಎಜೆಕ್ಷನ್&zwnj;ಗಳಿಗೆ (CMEs) ಕಾರಣವಾಗುತ್ತವೆ. ಸೂರ್ಯನಿಂದ ಚಿಮ್ಮುವ ಅತ್ಯಂತ ಶಕ್ತಿಯುತವಾದ ಕಣಗಳು ಭೂಮಿಯ ಕಡೆಗೆ ಬಂದಾಗ ಭೂಮಿಯ ಕಕ್ಷೆಯಲ್ಲಿರುವ ಉಪಗ್ರಹಗಳ ಕಾರ್ಯಾಚರಣೆಗೆ ಅಡಚಣೆಯಾಗಬಹುದು, ಜಿಪಿಎಸ್ (GPS), ಉಪಗ್ರಹ ಸಂವಹನ ಮತ್ತು ವಿದ್ಯುತ್ ಗ್ರಿಡ್&zwnj;ಗಳು ಸ್ಥಗಿತಗೊಳ್ಳುವ ಅಪಾಯವಿರುತ್ತದೆ. ಜೊತೆಗೆ ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳು ಅಪಾಯಕಾರಿ ವಿಕಿರಣಗಳಿಗೆ (Radiation) ಈಡಾಗುವ ಸಾಧ್ಯತೆಯೂ ಇರುತ್ತದೆ.&lt;/p&gt;&lt;h2&gt;ಸಂಶೋಧನಾ ತಂಡ ಮತ್ತು ಮುನ್ಸೂಚನೆ ಮಾದರಿ&lt;/h2&gt;&lt;p&gt;ಆರ್&zwnj;ಆರ್&zwnj;ಐ ಹಿರಿಯ ಪ್ರಾಧ್ಯಾಪಕ ದಿಬ್ಯೇಂದು ನಂದಿ ಅವರ ನೇತೃತ್ವದ ತಂಡವು, ಇಂತಹ ಸಂಕೀರ್ಣ ಸಿಮ್ಯುಲೇಶನ್ ಮುನ್ಸೂಚನೆಗಳನ್ನು ನೀಡುವ ಸಾಮರ್ಥ್ಯ ಹೊಂದಿರುವ ಜಾಗತಿಕ ಮಟ್ಟದ ಐದು ಪ್ರಮುಖ ಸಂಶೋಧನಾ ಗುಂಪುಗಳಲ್ಲಿ ಒಂದಾಗಿದೆ. 2026ರ ಗ್ರಹಣಕ್ಕಾಗಿ, ಈ ತಂಡವು ಸೂರ್ಯನ ಮೇಲ್ಮೈ ಕಾಂತೀಯ ಕ್ಷೇತ್ರವನ್ನು ಊಹಿಸಲು ಹಲವು ವರ್ಷಗಳ ದತ್ತಾಂಶಗಳನ್ನು ಆಧರಿಸಿದ ಡೇಟಾ-ಚಾಲಿತ ಮಾದರಿಯನ್ನು ಬಳಸಿದೆ.&lt;/p&gt;&lt;p&gt;&quot;ನಮ್ಮ ಸಿಮ್ಯುಲೇಟೆಡ್ ಭವಿಷ್ಯವಾಣಿಗಳನ್ನು ನೈಜ ವೀಕ್ಷಣೆಗಳೊಂದಿಗೆ ಹೋಲಿಸುವ ಮೂಲಕ ಮಾದರಿಗಳನ್ನು ನಿರಂತರವಾಗಿ ಸುಧಾರಿಸುತ್ತೇವೆ. ಯಾವುದೇ ಸೈದ್ಧಾಂತಿಕ ಮಾದರಿಗೆ ಸೌರ ಗ್ರಹಣವೇ ಅತ್ಯುತ್ತಮ ಪರೀಕ್ಷಾ ವೇದಿಕೆಯಾಗಿದೆ&quot; ಎಂದು ಪ್ರೊ. ನಂದಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಅಧ್ಯಯನ ತಂಡದಲ್ಲಿ RRI ಯ ಸಾಗ್ನಿಕ್ ಸಹಾ, IISER ಕೋಲ್ಕತ್ತಾದ ಬಾಹ್ಯಾಕಾಶ ವಿಜ್ಞಾನ ಭಾರತದ ಶ್ರೇಷ್ಠತಾ ಕೇಂದ್ರದ ಪ್ರಿಯಾಂಶ್ ಜಸ್ವಾಲ್, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ತಾಂತ್ರಿಕ ಶಿಕ್ಷಣ ಇಲಾಖೆಯ ಶಾನ್ವಿತಾ ಪಾಲ್, US ರಾಷ್ಟ್ರೀಯ ಸೌರ ವೀಕ್ಷಣಾಲಯದ ಸೌಮ್ಯರಂಜನ್ ಡ್ಯಾಶ್ ಮತ್ತು UK ಯ ರೀಡಿಂಗ್ ವಿಶ್ವವಿದ್ಯಾಲಯದ ಚಿತ್ರದೀಪ್ ಸಹಾ ಭಾಗವಹಿಸಿದ್ದಾರೆ. ಗ್ರಹಣದ ಸಂದರ್ಭದಲ್ಲಿ ದೊರೆಯುವ ನೈಜ ಚಿತ್ರಗಳೊಂದಿಗೆ ಈ ಮುನ್ಸೂಚನೆಯನ್ನು ಹೋಲಿಸುವ ಮೂಲಕ, ಭವಿಷ್ಯದಲ್ಲಿ ಬಾಹ್ಯಾಕಾಶ ಹವಾಮಾನ ವೈಪರೀತ್ಯಗಳನ್ನು ಮತ್ತಷ್ಟು ನಿಖರವಾಗಿ ಊಹಿಸಲು ಸಾಧ್ಯವಾಗಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/science/august-12-solar-eclipse-indian-scientists-from-raman-research-institute-bengaluru-predict-sun-corona-structure-gdp/articleshow-m4kg1av"/>
        </item>
        <item>
            <title><![CDATA[ಬೆಂಗಳೂರು ಕಂಠೀರವ ಸ್ಟುಡಿಯೋ ಬಳಿ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು!]]></title>
            <link>https://kannada.asianetnews.com/karnataka-districts/bengaluru-underpass-collapse-migrant-workers-killed-many-injured-near-kanteerava-studio-gdp/articleshow-p5g1uya</link>
            <guid isPermaLink="true">https://kannada.asianetnews.com/karnataka-districts/bengaluru-underpass-collapse-migrant-workers-killed-many-injured-near-kanteerava-studio-gdp/articleshow-p5g1uya</guid>
            <pubDate>Tue, 11 Aug 2026 14:39:36 +0530</pubDate>
            <description><![CDATA[ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಬಿಡಿಎ ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಇಬ್ಬರು ಹೊರರಾಜ್ಯದ ಕಾರ್ಮಿಕರು ಮೃತಪಟ್ಟಿದ್ದಾರೆ. ಭಾರಿ ಮಳೆಯಿಂದಾಗಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzr16116vc0qdb55s26bfyrw,imgname-bengaluru-underpass-collapse-1786439205925.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿಯ ಕಂಠೀರವ ಸ್ಟುಡಿಯೋ ಬಳಿಯ ಡಾ. ರಾಜ್&zwnj;ಕುಮಾರ್ ಪುಣ್ಯಭೂಮಿ ರಸ್ತೆಯಲ್ಲಿ ಬಿಡಿಎ (BDA) ನಡೆಸುತ್ತಿದ್ದ ಅಂಡರ್ ಪಾಸ್ ಕಾಮಗಾರಿ ಸ್ಥಳದಲ್ಲಿ ಆಗಸ್ಟ್ 11ರ ಬೆಳಿಗ್ಗೆ ಭೀಕರ ದುರಂತ ಸಂಭವಿಸಿದೆ. ಸುಮಾರು 20 ಅಡಿ ಆಳದ ಗುಂಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಮಣ್ಣಿನ ತಡೆಗೋಡೆ (ಮಡ್ ವಾಲ್) ಕುಸಿದುಬಿದ್ದ ಪರಿಣಾಮ, ಮಣ್ಣಿನಡಿ ಸಿಲುಕಿ ಇಬ್ಬರು ಹೊರರಾಜ್ಯದ ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ.&lt;/p&gt;&lt;h2&gt;ಘಟನೆಯ ವಿವರ:&lt;/h2&gt;&lt;p&gt;ಬೆಳಿಗ್ಗೆ 11:19 ರ ಸುಮಾರಿಗೆ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಮಗಾರಿ ಸ್ಥಳದಲ್ಲಿ ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೀರು ಹೊರ ಎತ್ತುವ ಕಾರ್ಯದಲ್ಲಿ ತೊಡಗಿದ್ದಾಗ, ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮೇಲ್ಭಾಗದಲ್ಲಿ ಶೇಖರಣೆಯಾಗಿದ್ದ ಡೆಬ್ರಿಸ್ (ಕಟ್ಟಡ ತ್ಯಾಜ್ಯ) ಭಾರಕ್ಕೆ ಏಕಾಏಕಿ ಮಣ್ಣು ರಭಸವಾಗಿ ಕುಸಿದುಬಿದ್ದಿದೆ. ಸ್ವಲ್ಪ ಸಮಯದ ಮುಂಚೆಯಷ್ಟೇ ಕೆಲವು ಕಾರ್ಮಿಕರು ತಿಂಡಿ ತಿನ್ನಲು ಹೊರಗೆ ಬಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಆದಾಗ್ಯೂ, ತಳಭಾಗದಲ್ಲಿದ್ದ ಐವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡರು.&lt;/p&gt;&lt;h2&gt;ಇಬ್ಬರು ಮೃತ, ಹಲವರಿಗೆ ಗಾಯ&lt;/h2&gt;&lt;p&gt;ದುರಂತದಲ್ಲಿ ಒಡಿಶಾ ಮೂಲದ ಸೋನಾರಾಮ್ (26) ಹಾಗೂ ಜಾರ್ಖಂಡ್ ಮೂಲದ ಪರಿಮಳ್ (31) ಎಂಬುವವರು ಮಣ್ಣಿನಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಗಾಯಗೊಂಡ ಸದಾನಂದ್, ಸುನೀಲ್ ಹಾಗೂ ಇರ್ಮಿಯಾಜ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳು ಒಡಿಶಾ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದುಬಂದಿದೆ.&lt;/p&gt;&lt;h2&gt;ಸವಾಲಾದ ರಕ್ಷಣಾ ಕಾರ್ಯಾಚರಣೆ:&lt;/h2&gt;&lt;p&gt;ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸೋನಾರಾಮ್ ಅವರ ಮೃತದೇಹವನ್ನು ತಕ್ಷಣವೇ ಹೊರತೆಗೆಯಲಾಯಿತು. ಆದರೆ ಪರಿಮಳ್ ಅವರ ಮೃತದೇಹವನ್ನು ಹೊರತೆಗೆಯುವಾಗ ಮತ್ತೆ ಮಣ್ಣು ಕುಸಿದು ಬಿದ್ದಿದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಉಂಟಾಯಿತು. ಅಗ್ನಿಶಾಮಕ ಸಿಬ್ಬಂದಿ ಸತತ ಪರಿಶ್ರಮವಹಿಸಿ ಅಂತಿಮವಾಗಿ ಮೃತದೇಹವನ್ನು ಹೊರತೆಗೆದಿದ್ದಾರೆ.&lt;/p&gt;&lt;h2&gt;ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಪ್ರತಿಕ್ರಿಯೆ:&lt;/h2&gt;&lt;p&gt;ಬಿಡಿಎ ಆಯುಕ್ತ ಕ್ಯಾಪ್ಟನ್ ಮನಿವಣ್ಣನ್ ಮಾತನಾಡಿ, ಘಟನೆಯ ಕುರಿತು ತಕ್ಷಣವೇ ತನಿಖೆಗೆ ಆದೇಶಿಸಲಾಗಿದೆ. ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ಗುತ್ತಿಗೆದಾರರು 24 ಗಂಟೆಯೊಳಗೆ ಮೃತರ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.&lt;/p&gt;&lt;p&gt;ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ. ಗೋಪಾಲಯ್ಯ, ನಿನ್ನೆಯ ಮಳೆಯಿಂದಾಗಿ ಡೆಬ್ರಿಸ್ ತುಂಬಿಕೊಂಡಿದ್ದೇ ಮಣ್ಣು ಕುಸಿಯಲು ಕಾರಣ. ಈ ಅಜಾಗರೂಕತೆಗೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.&lt;/p&gt;&lt;p&gt;ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೇಗೌಡ ಸ್ಥಳ ಪರಿಶೀಲನೆ ನಡೆಸಿದ್ದು, ಬಿಡಿಎ ಕಾಮಗಾರಿಯ ಸುರಕ್ಷತಾ ನಿಯಮಗಳ ಲೋಪದೋಷಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-underpass-collapse-migrant-workers-killed-many-injured-near-kanteerava-studio-gdp/articleshow-p5g1uya"/>
        </item>
        <item>
            <title><![CDATA[ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಏಕೆ ಕರೆಯುತ್ತಾರೆ? ಈ ನಗರ ದೇಶದ ಐಟಿ ಹಬ್ ಆಗಿದ್ದು ಹೇಗೆ?]]></title>
            <link>https://kannada.asianetnews.com/karnataka-districts/why-bengaluru-is-called-the-silicon-valley-of-india-it-capital-explained-gdp/articleshow-q2fopsy</link>
            <guid isPermaLink="true">https://kannada.asianetnews.com/karnataka-districts/why-bengaluru-is-called-the-silicon-valley-of-india-it-capital-explained-gdp/articleshow-q2fopsy</guid>
            <pubDate>Mon, 10 Aug 2026 16:51:51 +0530</pubDate>
            <description><![CDATA[ಬೆಂಗಳೂರು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಪ್ರಸಿದ್ಧವಾಗಿದೆ. ಐಟಿ, ನವೋದ್ಯಮ, ಮತ್ತು ಸಂಶೋಧನೆಯ ಕೇಂದ್ರವಾಗಿರುವ ಈ ನಗರದ ಬೆಳವಣಿಗೆಯು, ಐತಿಹಾಸಿಕ ಶೈಕ್ಷಣಿಕ ಅಡಿಪಾಯ ಮತ್ತು ಜಾಗತಿಕ ಕಂಪನಿಗಳ ಆಗಮನದಿಂದ ಸಾಧ್ಯವಾಗಿದೆ. ಇದು ಇಂದು ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಜಾಗತಿಕ ಮನ್ನಣೆ ಗಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kznpcz2ajf98z1ntqymh16hh,imgname-bengaluru-silicon-valley--1--1786360790088.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ತನ್ನ ಹಿತಕರ ವಾತಾವರಣ ಮತ್ತು ಉದ್ಯಾನವನಗಳಿಗೆ ಮಾತ್ರವಲ್ಲದೆ, ತಂತ್ರಜ್ಞಾನ ವಲಯದಲ್ಲಿ ಸಾಧಿಸಿರುವ ಅಭೂತಪೂರ್ವ ಕ್ರಾಂತಿಗಾಗಿಯೂ ಜಗತ್ಪ್ರಸಿದ್ಧವಾಗಿದೆ. ಇಂದು ಜಾಗತಿಕ ಭೂಪಟದಲ್ಲಿ &lsquo;ಭಾರತದ ಸಿಲಿಕಾನ್ ವ್ಯಾಲಿ&rsquo; (Silicon Valley of India) ಮತ್ತು &lsquo;ಭಾರತದ ಐಟಿ ರಾಜಧಾನಿ&rsquo; ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು, ಮಾಹಿತಿ ತಂತ್ರಜ್ಞಾನ (IT), ನವೋದ್ಯಮ (Startup), ವೈಜ್ಞಾನಿಕ ಸಂಶೋಧನೆ ಹಾಗೂ ನಾವೀನ್ಯತೆಗಳ ಬೃಹತ್ ಸಂಗಮ ಕೇಂದ್ರವಾಗಿದೆ.&lt;/p&gt;&lt;h2&gt;ಬೆಂಗಳೂರನ್ನು 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಕರೆಯುವುದೇಕೆ?&lt;/h2&gt;&lt;p&gt;ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 'ಸಿಲಿಕಾನ್ ವ್ಯಾಲಿ' ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿದೆ. ಅದೇ ಮಾದರಿಯಲ್ಲಿ ಭಾರತದ ತಂತ್ರಜ್ಞಾನ ಕ್ರಾಂತಿಗೆ ಬೆಂಗಳೂರು ಮುಖ್ಯ ಚಾಲಕ ಶಕ್ತಿಯಾಗಿ ರೂಪುಗೊಂಡಿರುವುದರಿಂದ ಈ ಅಡ್ಡಹೆಸರು ಬಂದಿದೆ.&lt;/p&gt;&lt;p&gt;ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ನೆಲೆ: ವಿಶ್ವದ ಮುಂಚೂಣಿ ಮಲ್ಟಿನೇಷನಲ್ ಕಂಪನಿಗಳು (MNCs) ತಮ್ಮ ಬೃಹತ್ ಕ್ಯಾಂಪಸ್&zwnj;ಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಿವೆ.&lt;/p&gt;&lt;p&gt;ಐಟಿ ಕಂಪನಿಗಳ ಸಾಂದ್ರತೆ: ದೇಶದಲ್ಲೇ ಅತ್ಯಂತ ಹೆಚ್ಚು ಐಟಿ ಕಂಪನಿಗಳು ಹಾಗೂ ತಾಂತ್ರಿಕ ನುರಿತ ಉದ್ಯೋಗಿಗಳು ನೆಲೆಸಿರುವ ನಗರವಿದು.&lt;/p&gt;&lt;p&gt;ಪ್ರಮುಖ ಕಚೇರಿಗಳ ಕೇಂದ್ರ: ಭಾರತೀಯ ತಂತ್ರಜ್ಞಾನ ರಂಗದ ದೈತ್ಯ ಸಂಸ್ಥೆಗಳು ತಮ್ಮ ಜಾಗತಿಕ ಪ್ರಧಾನ ಕಚೇರಿ (Headquarters) ಅಥವಾ ಪ್ರಮುಖ ಕಾರ್ಯಾಚರಣೆ ಕೇಂದ್ರಗಳನ್ನು ಇಲ್ಲಿಯೇ ಹೊಂದಿವೆ.&lt;/p&gt;&lt;h2&gt;ಬೆಂಗಳೂರು 'ಐಟಿ ಹಬ್' ಆಗಿ ಬೆಳೆದು ಬಂದ ಹಾದಿ&lt;/h2&gt;&lt;p&gt;ಬೆಂಗಳೂರು ಒಂದೇ ರಾತ್ರಿಯಲ್ಲಿ ತಂತ್ರಜ್ಞಾನ ರಾಜಧಾನಿಯಾಗಲಿಲ್ಲ. ಇದರ ಹಿಂದೆ ದಶಕಗಳ ದೀರ್ಘ ಇತಿಹಾಸ ಹಾಗೂ ವ್ಯವಸ್ಥಿತ ಶೈಕ್ಷಣಿಕ ಮತ್ತು ಕೈಗಾರಿಕಾ ಅಡಿಪಾಯವಿದೆ:&lt;/p&gt;&lt;p&gt;ಬಲವಾದ ಶೈಕ್ಷಣಿಕ ಹಾಗೂ ಸಂಶೋಧನಾ ಅಡಿಪಾಯ: ಭಾರತೀಯ ವಿಜ್ಞಾನ ಸಂಸ್ಥೆ (IISc), ಹೆಚ್&zwnj;ಎಎಲ್ (HAL), ಇಸ್ರೋ (ISRO), ಮತ್ತು ಬಿಇಎಲ್ (BEL) ನಂತಹ ಸರ್ಕಾರಿ ಸಂಶೋಧನಾ ಹಾಗೂ ಸಾರ್ವಜನಿಕ ವಲಯದ ದೈತ್ಯ ಸಂಸ್ಥೆಗಳು ನಗರದಲ್ಲಿ ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ವಾತಾವರಣವನ್ನು ಮೊದಲೇ ನಿರ್ಮಿಸಿದ್ದವು.&lt;/p&gt;&lt;p&gt;ಮುಂಚೂಣಿ ಕಂಪನಿಗಳ ಆಗಮನ: 1980 ಮತ್ತು 90ರ ದಶಕದಲ್ಲಿ ಇನ್ಫೋಸಿಸ್, ವಿಪ್ರೋದಂತಹ ಭಾರತೀಯ ಸಂಸ್ಥೆಗಳು ಹಾಗೂ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್&zwnj;ನಂತಹ ಜಾಗತಿಕ ಸಂಸ್ಥೆಗಳು ಬೆಂಗಳೂರನ್ನು ತಮ್ಮ ಕಾರ್ಯಾಚರಣೆ ಕೇಂದ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಐಟಿ ಕ್ರಾಂತಿಗೆ ಬಲವಾದ ಮುನ್ನುಡಿ ಬರೆಯಿತು.&lt;/p&gt;&lt;p&gt;ಬಂಡವಾಳ ಹೂಡಿಕೆ ಮತ್ತು ಉದ್ಯಮ ಸ್ನೇಹಿ ವಾತಾವರಣ: ಜಾಗತಿಕ ಸಾಹಸೋದ್ಯಮ ಬಂಡವಾಳ (Venture Capital) ಹರಿವು ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹದಾಯಕ ಐಟಿ ನೀತಿಗಳು ನಗರವನ್ನು ವಿಶ್ವಮಟ್ಟದ ತಂತ್ರಜ್ಞಾನ ಕೇಂದ್ರವಾಗಿ ಮಾರ್ಪಡಿಸಿದವು.&lt;/p&gt;&lt;h2&gt;ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರಮುಖ ಐಟಿ ದೈತ್ಯರು&lt;/h2&gt;&lt;p&gt;ವಿಶ್ವದ ಪ್ರಸಿದ್ಧ ಭಾರತೀಯ ಹಾಗೂ ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಬೃಹತ್ ಉಪಸ್ಥಿತಿಯನ್ನು ಹೊಂದಿವೆ. ಅವುಗಳಲ್ಲಿ ಪ್ರಮುಖವಾದವು:&lt;/p&gt;&lt;p&gt;&lt;strong&gt;ಭಾರತೀಯ ಐಟಿ ಸಂಸ್ಥೆಗಳು:&lt;/strong&gt; ಇನ್ಫೋಸಿಸ್ (Infosys), ವಿಪ್ರೋ (Wipro), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS).&lt;/p&gt;&lt;p&gt;&lt;strong&gt;ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು: &lt;/strong&gt;ಮೈಕ್ರೋಸಾಫ್ಟ್ (Microsoft), ಗೂಗಲ್ (Google), ಐಬಿಎಂ (IBM), ಅಮೆಜಾನ್ (Amazon), ಆಪಲ್ (Apple) ಮತ್ತು ಮೆಟಾ (Meta).&lt;/p&gt;&lt;h2&gt;ನಗರದ ತಂತ್ರಜ್ಞಾನ ರಂಗ ವಿಸ್ತರಿಸಿರುವ ಪ್ರಮುಖ ಕ್ಷೇತ್ರಗಳು&lt;/h2&gt;&lt;p&gt;ಬೆಂಗಳೂರಿನ ತಂತ್ರಜ್ಞಾನ ಪರಿಸರ ವ್ಯವಸ್ಥೆಯು (Eco-system) ಕೇವಲ ಸಾಫ್ಟ್&zwnj;ವೇರ್ ಸೇವೆಗಳಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಆಧುನಿಕ ತಂತ್ರಜ್ಞಾನದ ವಿವಿಧ ಶಾಖೆಗಳಲ್ಲಿ ವಿಸ್ತರಿಸಿದೆ&lt;/p&gt;&lt;h2&gt;ಕಾರ್ಯನಿರ್ವಹಿಸುವ ಪ್ರಮುಖ ಕ್ಷೇತ್ರಗಳು&lt;/h2&gt;&lt;ul&gt; &lt;li&gt;&lt;strong&gt;ಆಧುನಿಕ ಸಾಫ್ಟ್&zwnj;ವೇರ್: &lt;/strong&gt;ಸಾಫ್ಟ್&zwnj;ವೇರ್ ಅಭಿವೃದ್ಧಿ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ&lt;/li&gt; &lt;li&gt;&lt;strong&gt;ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: &lt;/strong&gt;ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML), ಡೇಟಾ ಅನಾಲಿಟಿಕ್ಸ್&lt;/li&gt; &lt;li&gt;&lt;strong&gt;ಹಣಕಾಸು ಮತ್ತು ವಾಣಿಜ್ಯ:&lt;/strong&gt; ಫಿನ್&zwnj;ಟೆಕ್ (Fintech), ಇ-ಕಾಮರ್ಸ್ ಡಿಜಿಟಲ್ ಪಾವತಿ ವ್ಯವಸ್ಥೆಗಳು&lt;/li&gt; &lt;li&gt;&lt;strong&gt;ಹೈ-ಟೆಕ್ ಎಂಜಿನಿಯರಿಂಗ್: &lt;/strong&gt;ಸೆಮಿಕಂಡಕ್ಟರ್ ವಿನ್ಯಾಸ, ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್ ತಂತ್ರಜ್ಞಾನ&lt;/li&gt; &lt;li&gt;&lt;strong&gt;ಜೈವಿಕ ವಿಜ್ಞಾನ:&lt;/strong&gt; ಜೈವಿಕ ತಂತ್ರಜ್ಞಾನ (Biotechnology) ಮತ್ತು ಫಾರ್ಮಾ ಸಂಶೋಧನೆ&lt;/li&gt;&lt;/ul&gt;&lt;h2&gt;ಜಾಗತಿಕ ನವೋದ್ಯಮ (Startup) ಮತ್ತು ಯುನಿಕಾರ್ನ್ ನಗರ&lt;/h2&gt;&lt;p&gt;ತಂತ್ರಜ್ಞಾನದ ಜೊತೆಗೆ ಬೆಂಗಳೂರು &quot;ಭಾರತದ ನವೋದ್ಯಮ ರಾಜಧಾನಿ&quot; (Startup Capital of India) ಎಂದೂ ಪ್ರಸಿದ್ಧವಾಗಿದೆ.&lt;/p&gt;&lt;p&gt;&lt;strong&gt;ಯುನಿಕಾರ್ನ್ ಕಂಪನಿಗಳ ತವರು: &lt;/strong&gt;1 ಶತಕೋಟಿ ಡಾಲರ್&zwnj;ಗಿಂತ ಹೆಚ್ಚು ಮೌಲ್ಯದ 'ಯುನಿಕಾರ್ನ್' (Unicorn) ನವೋದ್ಯಮಗಳಲ್ಲಿ ಗಣನೀಯ ಭಾಗವು ಬೆಂಗಳೂರಿನಲ್ಲೇ ಜನ್ಮತಾಳಿವೆ ಅಥವಾ ತಮ್ಮ ಪ್ರಮುಖ ಕಾರ್ಯಾಚರಣೆಗಳನ್ನು ಇಲ್ಲಿ ವಿಸ್ತರಿಸಿವೆ.&lt;/p&gt;&lt;p&gt;&lt;strong&gt;ಹೂಡಿಕೆದಾರರ ನೆಚ್ಚಿನ ತಾಣ: &lt;/strong&gt;ಜಾಗತಿಕ ಮತ್ತು ದೇಶೀಯ ಸಾಹಸೋದ್ಯಮ ಬಂಡವಾಳಶಾಹಿಗಳು (Venture Capitalists) ಹೆಚ್ಚು ಹೂಡಿಕೆ ಮಾಡುವ ನಗರಗಳಲ್ಲಿ ಬೆಂಗಳೂರು ವಿಶ್ವದಲ್ಲೇ ಅಗ್ರ ಸಾಲಿನಲ್ಲಿ ನಿಲ್ಲುತ್ತದೆ.&lt;/p&gt;&lt;p&gt;&lt;strong&gt;ಆವಿಷ್ಕಾರಗಳ ಗೂಡು: &lt;/strong&gt;ಕೃತಕ ಬುದ್ಧಿಮತ್ತೆಯಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನದವರೆಗಿನ ನೂತನ ನವೋದ್ಯಮಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಮೂಲಸೌಕರ್ಯವನ್ನು ಒದಗಿಸುವ ನಾವೀನ್ಯತಾ ಕೇಂದ್ರವಾಗಿ ಬೆಂಗಳೂರು ಬೆಳೆದಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಬೆಂಗಳೂರು ತನ್ನ ಸುಸಜ್ಜಿತ ಮಾನವ ಸಂಪನ್ಮೂಲ, ಉದ್ಯಮ ಸ್ನೇಹಿ ವಾತಾವರಣ ಮತ್ತು ಸದಾ ನಾವೀನ್ಯತೆಗೆ ತೆರೆದುಕೊಳ್ಳುವ ಸಂಸ್ಕೃತಿಯಿಂದಾಗಿ 'ಭಾರತದ ಸಿಲಿಕಾನ್ ವ್ಯಾಲಿ' ಎಂಬ ಹೆಗ್ಗಳಿಕೆಯನ್ನು ಸಾರ್ಥಕಪಡಿಸಿಕೊಂಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/why-bengaluru-is-called-the-silicon-valley-of-india-it-capital-explained-gdp/articleshow-q2fopsy"/>
        </item>
        <item>
            <title><![CDATA[ಹಸುಗಳಿಂದ ಬೆಂಗಳೂರಲ್ಲಿ ಭಾರೀ ಟ್ರಾಫಿಕ್ ಜಾಮ್ ಆರೋಪ - ಗೋವುಗಳ ಮಾಲೀನ ವಿರುದ್ಧ ಎಫ್‌ಐಆರ್..!]]></title>
            <link>https://kannada.asianetnews.com/bengaluru-rural/cows-blamed-for-massive-traffic-jam-in-bengaluru-fir-against-cattle-owners-gkn/articleshow-u174wn4</link>
            <guid isPermaLink="true">https://kannada.asianetnews.com/bengaluru-rural/cows-blamed-for-massive-traffic-jam-in-bengaluru-fir-against-cattle-owners-gkn/articleshow-u174wn4</guid>
            <pubDate>Tue, 11 Aug 2026 17:14:30 +0530</pubDate>
            <description><![CDATA[&lt;p&gt;ಬೆಂಗಳೂರಲ್ಲಿ ಒಂದು ಅಪರೂಪದ ಪ್ರಕರಣ ದಾಖಲಾಗಿದೆ. ಟ್ರಾಫಿಕ್ ಜಾಮ್ ಮಾಡಿದ ಹಸುಗಳ ಮಾಲೀಕನ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzra69vngp37dve89zknrezf,imgname-bengaluru-cow-fir-1786448652149.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಹಸುಗಳನ್ನು ಅಡ್ಡಾದಿಡ್ಡಿಯಾಗಿ ಬಿಟ್ಟು ಸಂಚಾರಕ್ಕೆ ಅಡಚಣೆ ಉಂಟುಮಾಡುವ ಮಾಲೀಕರ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಮಾರತಹಳ್ಳಿಯ ಕಳಾಮಂದಿರ ರಸ್ತೆಯಲ್ಲಿ ಹಸುಗಳಿಂದಾಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ, ಹಸುಗಳ ಮಾಲೀಕನ ವಿರುದ್ಧ ಏರ್ ಪೋರ್ಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ (FIR) ದಾಖಲಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಆಗಸ್ಟ್ 10 ರಂದು ಬೆಳಗ್ಗೆ 10:00 ರಿಂದ 12:00 ಗಂಟೆಯ ಸುಮಾರಿಗೆ ಮಾರತಹಳ್ಳಿಯ ಕಳಾಮಂದಿರ ಸಮೀಪದ ಹೊರವರ್ತುಲ ರಸ್ತೆಯಲ್ಲಿ (ORR) ಸುಮಾರು 9 ರಿಂದ 10 ಹಸುಗಳು ರಸ್ತೆಯ ಮಧ್ಯೆ ಅಡ್ಡಾದಿಡ್ಡಿಯಾಗಿ ಓಡಾಡುತ್ತಿದ್ದವು. ಈ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಭಾರೀ ಅಡಚಣೆಯುಂಟಾಗಿತ್ತು. ಕರ್ತವ್ಯದಲ್ಲಿದ್ದ ಹೆಚ್.ಎ.ಎಲ್ ಏರ್ ಪೋರ್ಟ್ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿ ನಾಗೇಂದ್ರ ಎನ್. ಅವರು ಇದನ್ನು ಗಮನಿಸಿ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;p&gt;ರಸ್ತೆಯಲ್ಲಿ ಹಸುಗಳನ್ನು ಬಿಟ್ಟು ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಹಸುಗಳ ಮಾಲೀಕ ಸಂತೋಷ್ ಇ. (ಬಿನ್ ಈರಪ್ಪ) ಎಂಬುವವರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಸಂತೋಷ್ ಅವರು ಅಶ್ವತ್ಥನಗರದ ನಿವಾಸಿಯಾಗಿದ್ದು, ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 285 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.&lt;/p&gt;&lt;h2&gt;&lt;strong&gt;ಎಫ್&zwnj;ಐಆರ್&zwnj;ನಲ್ಲಿ ಏನಿದೆ?&lt;/strong&gt;&lt;/h2&gt;&lt;ul&gt; &lt;li&gt;ಅಪರಾಧ ಸಂಖ್ಯೆ: 126/2026&lt;/li&gt; &lt;li&gt;ಸ್ಥಳ: ಕಳಾಮಂದಿರ ಸಮೀಪ, ಹೊರವರ್ತುಲ ರಸ್ತೆ, ಮಾರತಹಳ್ಳಿ.&lt;/li&gt; &lt;li&gt;ಆರೋಪಿ: ಸಂತೋಷ್ ಇ (40 ವರ್ಷ).&lt;/li&gt; &lt;li&gt;ದೂರುದಾರರು: ನಾಗೇಂದ್ರ ಎನ್ (ಪೊಲೀಸ್ ಅಧಿಕಾರಿ).&lt;/li&gt; &lt;li&gt;ಕಾಯ್ದೆ: ಬಿಎನ್ಎಸ್ (BNS) ಸೆಕ್ಷನ್ 285 (ಸಾರ್ವಜನಿಕ ರಸ್ತೆಯಲ್ಲಿ ಅಪಾಯ ಅಥವಾ ಅಡಚಣೆ ಉಂಟುಮಾಡುವುದು).&lt;/li&gt;&lt;/ul&gt;&lt;p&gt;ನಿರ್ಲಕ್ಷ್ಯತನದಿಂದ ಹಸುಗಳನ್ನು ರಸ್ತೆಗೆ ಬಿಟ್ಟಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜಾನುವಾರುಗಳ ಹಾವಳಿ ಹೆಚ್ಚಾಗುತ್ತಿದ್ದು, ಈ ಎಫ್&zwnj;ಐಆರ್ ಇತರ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡಿದಂತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-rural/cows-blamed-for-massive-traffic-jam-in-bengaluru-fir-against-cattle-owners-gkn/articleshow-u174wn4"/>
        </item>
        <item>
            <title><![CDATA[ಅಮೃತ್ ಭಾರತ್ ಯೋಜನೆ: ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ]]></title>
            <link>https://kannada.asianetnews.com/state/amrit-bharat-scheme-only-12-railway-stations-completed-in-karnataka-railway-minister-ashwini-vaishnaw-gdp/articleshow-umk0n3y</link>
            <guid isPermaLink="true">https://kannada.asianetnews.com/state/amrit-bharat-scheme-only-12-railway-stations-completed-in-karnataka-railway-minister-ashwini-vaishnaw-gdp/articleshow-umk0n3y</guid>
            <pubDate>Mon, 10 Aug 2026 16:17:13 +0530</pubDate>
            <description><![CDATA[&lt;p&gt;ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಗುರುತಿಸಲಾದ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ದೇಶಾದ್ಯಂತ ಕೇವಲ ಶೇ. 19ರಷ್ಟು ಮಾತ್ರ ಪೂರ್ಣಗೊಂಡಿದೆ. ಕರ್ನಾಟಕದಲ್ಲಿ 61 ನಿಲ್ದಾಣಗಳ ಪೈಕಿ 12 ಪೂರ್ಣಗೊಂಡಿದ್ದು, ಬೆಂಗಳೂರಿನ ಪ್ರಮುಖ ನಿಲ್ದಾಣಗಳಲ್ಲಿ ಕಾಮಗಾರಿ ಬಾಕಿ ಇದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kf82s3p2spafmszwa2wp9kcf,imgname-india-expands-amrit-bharat-network-9-new-trains-routes-details-hindi-05-1768724139714.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತ್ ಭಾರತ್ ಸ್ಟೇಷನ್ ಯೋಜನೆ (ಎಬಿಎಸ್ ಎಸ್) ಅಡಿಯಲ್ಲಿ ಅಭಿವೃದ್ಧಿಗೆ ಗುರುತಿಸಲಾದ ರೈಲು ನಿಲ್ದಾಣಗಳಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಕೇವಲ ಶೇ. 19 ರಷ್ಟು ನಿಲ್ದಾಣಗಳ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.&lt;/p&gt;&lt;p&gt;ರಾಜ್ಯಸಭೆಯಲ್ಲಿ ಸಂಸದ ಮನ್ಸೂರ್ ಆಲಿ ಖಾನ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಬಿಎಸ್&zwnj;ಎಸ್ ಅಡಿಯಲ್ಲಿ ಅಭಿವೃದ್ಧಿಗೆ ಗುರುತಿಸಲಾದ ರಾಜ್ಯದ 61 ನಿಲ್ದಾಣಗಳ ಪೈಕಿ 12 ಹಾಗೂ ದೇಶಾದ್ಯಂತ 1,340 ನಿಲ್ದಾಣಗಳ ಪೈಕಿ 261 ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;2022 ರ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿದ್ದರೂ ಅನುಷ್ಠಾನ ನಿರೀಕ್ಷಿತ ವೇಗಕ್ಕಿಂತ ಬಹಳ ನಿಧಾನವಾಗಿ ಸಾಗುತ್ತಿದೆ ಎಂಬುದು ಸಚಿವರ ಉತ್ತರದಿಂದ ಬಹಿರಂಗವಾಗಿದೆ ಎಂದು ಮನ್ಸೂರ್ ಆಲಿ ಖಾನ್ ಹೇಳಿದ್ದಾರೆ.&lt;/p&gt;&lt;p&gt;ರಾಜ್ಯದ ಅಳ್ನಾವರ, ಬಾದಾಮಿ, ಬಾಗಲಕೋಟೆ, ಬಂಟ್ವಾಳ, ಧಾರವಾಡ, ಗದಗ, ಗೋಕಾಕ್ ರೋಡ್, ಹೊಸಪೇಟೆ, ಕೊಪ್ಪಳ, ಮುನಿರಾಬಾದ್, ರಾಣಿಬೆನ್ನೂರು ಮತ್ತು ಸುಬ್ರಹ್ಮಣ್ಯ ರೋಡ್ ಪೂರ್ಣಗೊಂಡ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಸೇರಿವೆ.&lt;/p&gt;&lt;p&gt;ಬೆಂಗಳೂರಿನ ಪ್ರಮುಖ ಎರಡು ನಿಲ್ದಾಣಗಳಾದ ಕ್ಯಾಂಟೋನ್ಮೆಂಟ್ ಮತ್ತು ಯಶವಂತಪುರದಲ್ಲಿ ಹೊಸ ನಿಲ್ದಾಣ ಕಟ್ಟಡಗಳು ಸೇರಿದಂತೆ ಎಬಿಎಸ್&zwnj;ಎಸ್ ಅಡಿಯಲ್ಲಿ ಪ್ರಮುಖ ಕಾಮಗಾರಿಗಳು ಇನ್ನೂ ಬಾಕಿ ಇವೆ. ಕೆಎಸ್&zwnj;ಆರ್ ಬೆಂಗಳೂರು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳು ಮರುಅಭಿವೃದ್ಧಿಗೆ ಗುರುತಿಸಲಾದ ಪಟ್ಟಿಯಲ್ಲಿದ್ದರೂ ಸಚಿವರು ಉತ್ತರದಲ್ಲಿ ಈ ನಿಲ್ದಾಣಗಳ ಕಾಮಗಾರಿಯ ಪ್ರಗತಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂದು ಮನ್ಸೂರ್ ಆಲಿಖಾನ್ ತಿಳಿಸಿದ್ದಾರೆ.&lt;/p&gt;&lt;h2&gt;ಅರಸಾಳು ರೈಲು ನಿಲ್ದಾಣಕ್ಕೆ ಸೌಲಭ್ಯ ಒದಗಿಸಲು ಸೂಚನೆ&lt;/h2&gt;&lt;p&gt;ರಿಪ್ಪನ್&zwj;ಪೇಟೆ: ಸಮೀಪದ ಅರಸಾಳು ರೈಲ್ವೆ ನಿಲ್ದಾಣಕ್ಕೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಶನಿವಾರ ಭೇಟಿ ನೀಡಿ ನಿಲ್ದಾಣದ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸುವುದರೊಂದಿಗೆ ನಿಲ್ದಾಣದ ಬಳಿಯಲ್ಲಿರುವ ಮಾಲ್ಗುಡಿ ಮ್ಯೂಸಿಯಂ ವೀಕ್ಷಿಸಿದರು.&lt;/p&gt;&lt;p&gt;ಅರಾಳು ರೈಲ್ವೆ ನಿಲ್ದಾಣದಲ್ಲಿನ ಶುಚಿತ್ವ. ಪ್ರಯಾಣಿಕರಿಗೆ ಕುಡಿಯುವ ನೀರು, ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುದಿತ್ ಮಿತ್ತಲ್ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ಸಂಬಂಧಪಟ್ಟ ಆಧಿಕಾರಿಗಳಿಗೆ ಕೂಡಲೇ ಪರಿಹರಿಸುವಂತೆ ಅದೇಶಿಸಲಾಗಿದೆ. ಆದಷ್ಟು ಬೇಗ ರೈಲ್ವೆ ಪ್ರಯಾಣಿಕರ ಮೂಲ ಸಮಸ್ಯೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.&lt;/p&gt;&lt;p&gt;ಮಲೆನಾಡಿನ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿರುವ ಆರಸಾಳು ನಿಲ್ದಾಣ ಮತ್ತು ಮಾಲ್ಗುಡಿ ಮ್ಯೂಸಿಯಂನಲ್ಲಿ ಸಮರ್ಪಕ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಮ್ಯೂಸಿಯಂ ಅಭಿವೃದ್ದಿಗೆ ರೈಲ್ವೆ ಇಲಾಖೆ ಹೆಚ್ಚಿನ ಅಧ್ಯತೆ ನೀಡದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮಾಲ್ಗುಡಿ ಮ್ಯೂಸಿಯಂ ಅಭಿವೃದ್ಧಿಗಾಗಿ ಅಗತ್ಯ ಹೆಚ್ಚಿನ ಆನುದಾನದ ಬೇಡಿಕೆಯನ್ನು ಈಗಾಗಲೇ ಸಲ್ಲಿಸಲಾಗಿದೆ.ಅನುದಾನ ಬಿಡುಗಡೆಯಾದ ಬಳಿಕ ಮ್ಯೂಸಿಯಂಯನ್ನು ಅಗತ್ಯ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ರೈಲ್ವೆ ಇಲಾಖೆಯ ಮುಖ್ಯ ಕಾರ್ಯ ರೈಲುಗಳ ಸಂಚಾರವನ್ನು ನಿರ್ವಹಿಸುವುದಾಗಿದೆ.ಸೇರಿದಂತೆ ಇತರೆ ಸ್ಥಳೀಯ ಅಭಿವೃದ್ದಿ ಕಾರ್ಯಗಳ ಬಗ್ಗೆ ರಾಜ್ಯ ಸರ್ಕಾರಗಳು ಹಾಗೂ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಚಿಂತಿಸಿ ಕ್ರಮ ಕೈಗೊಳ್ಳಬೇಕು ಇಲಾಖೆಯು ಸಹಕರಿಸಲಿದೆ ಎಂದು ಆಭಿಪ್ರಾಯಪಟ್ಟರು.&lt;/p&gt;&lt;p&gt;ನಂತರ ಅರಸಾಳು ರೈಲ್ವೆ ನಿಲ್ದಾಣದ ಪರಿಶೀಲಿಸಿದ ಮುದಿತ್ ಮುತ್ತಲ್ ನಿಲ್ದಾಣದಲ್ಲಿರುವ ಮಾಲ್ಗುಡಿ ಚಾಯ್ ಕೇಂದ್ರಕ್ಕೆ ಭೇಟಿ ಚಹಾ ಸವಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಆರ್.ಪಿ.ಎಫ್, ಉಸ್ತುವಾರಿ ಕೊಂಡರೆಡ್ಡಿ, ಜಗದೀಶ್, ಮೂರ್ತಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಹಾಜರಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/state/amrit-bharat-scheme-only-12-railway-stations-completed-in-karnataka-railway-minister-ashwini-vaishnaw-gdp/articleshow-umk0n3y"/>
        </item>
        <item>
            <title><![CDATA[ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ತಂದಿಟ್ಟ ಪ್ರಜ್ವಲ್ ರೇವಣ್ಣ -ಏರ್‍‌ಟೆಲ್ ಕಂಪನಿಗೆ ಅಲೋಕ್ ಕುಮಾರ್ ಎಚ್ಚರಿಕೆ]]></title>
            <link>https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti</link>
            <guid isPermaLink="true">https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti</guid>
            <pubDate>Wed, 12 Aug 2026 20:26:00 +0530</pubDate>
            <description><![CDATA[&lt;p&gt;ಜೈಲಿನ ಜಾಮರ್&zwnj;ಗಳನ್ನು ಮೀರಿ ಆಂಧ್ರ ಮೂಲದ 5ಜಿ ಸಿಮ್&zwnj;ಗಳನ್ನು ಅಕ್ರಮವಾಗಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ರೇವಣ್ಣ ಮೊಬೈಲ್ ಪತ್ತೆ ಪ್ರಕರಣದಲ್ಲಿ ಏರ್&zwnj;ಟೆಲ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅವರನ್ನು 'ಸಹ ಆರೋಪಿ' ಎಂದು ಹೆಸರಿಸಲು ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzv7hct6wpxd1rr8zccnh799,imgname-dgp-alok-kumar-on-prajwal-revanna--1--1786546533190.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರೆಕ್&zwnj;ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಈಗ ಮೊಬೈಲ್ ನೆಟ್&zwnj;ವರ್ಕ್ ಕಂಪನಿಗಳ ಬುಡಕ್ಕೆ ಬಂದಿದೆ. ಈ ಅಕ್ರಮದಲ್ಲಿ ನೆಟ್&zwnj;ವರ್ಕ್ ಒದಗಿಸುತ್ತಿರುವ ಏರ್&zwnj;ಟೆಲ್ (Airtel) ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಕಂಪನಿಯನ್ನು ಈ ಪ್ರಕರಣದಲ್ಲಿ 'ಸಹ ಆರೋಪಿ' (Co-accused) ಮಾಡಲು ಸೂಚನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಏರ್&zwnj;ಟೆಲ್&zwnj; ಮೇಲೆ ಡಿಜಿಪಿ ಗರಂ ಆಗಿದ್ದೇಕೆ?&lt;/strong&gt;&lt;/h2&gt;&lt;p&gt;ಜೈಲಿನಲ್ಲಿ ಮೊಬೈಲ್ ಬಳಕೆ ತಡೆಯಲು ಜಾಮರ್&zwnj;ಗಳನ್ನು ಅಳವಡಿಸಲಾಗಿದೆ. ಆದರೆ ಈ ಜಾಮರ್&zwnj;ಗಳ ನಡುವೆಯೂ ಏರ್&zwnj;ಟೆಲ್ ನೆಟ್&zwnj;ವರ್ಕ್ ಮಾತ್ರ ಲಭ್ಯವಾಗುತ್ತಿದೆ ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಡಿಜಿಪಿ ಅಲೋಕ್ ಕುಮಾರ್ .. ಪ್ರಜ್ವಲ್ ಬ್ಯಾರೆಕ್&zwnj;ನಲ್ಲಿ ಸಿಕ್ಕ ಮೊಬೈಲ್&zwnj;ನಲ್ಲಿ ಆಂಧ್ರಪ್ರದೇಶ ಮೂಲದ ಏರ್&zwnj;ಟೆಲ್ ಸಿಮ್ ಬಳಸಲಾಗಿದೆ. ಜೈಲಿನಲ್ಲಿ ಬೇರೆ ಯಾವುದೇ ನೆಟ್&zwnj;ವರ್ಕ್ ಸಿಗದಿದ್ದರೂ ಏರ್&zwnj;ಟೆಲ್ 5G ನೆಟ್&zwnj;ವರ್ಕ್ ಮಾತ್ರ ಲಭ್ಯವಾಗುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಏರ್&zwnj;ಟೆಲ್ ಸಂಸ್ಥೆಯವರು ಜೈಲಿನೊಳಗೆ ನೆಟ್&zwnj;ವರ್ಕ್ ಸಿಗದಂತೆ ಕ್ರಮ ವಹಿಸುತ್ತಿಲ್ಲ. ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್ ಕಳೆದ ಮಾರ್ಚ್ ತಿಂಗಳಿನಿಂದಲೇ ಬಳಕೆಯಲ್ಲಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾ ಬಳಕೆ&lt;/strong&gt;&lt;/h2&gt;&lt;p&gt;ಜೈಲಿನ ಒಳಗೆ ವೈಫೈ (WiFi) ಆಫ್ ಮಾಡಿಸಿದ್ದರೂ ಏರ್&zwnj;ಟೆಲ್ 5G ನೆಟ್&zwnj;ವರ್ಕ್ ವೇಗವಾಗಿ ಸಿಗುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಸೋಷಿಯಲ್ ಮೀಡಿಯಾ ಕೂಡ ಬಳಕೆ ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ನೆಟ್&zwnj;ವರ್ಕ್ ಸಿಗುತ್ತಿರುವ ಕಾರಣ ಅವರು ಸಾಮಾಜಿಕ ಜಾಲತಾಣ ಬಳಸಿರಬಹುದು. ಹೀಗಾಗಿ ನಾವು ಏರ್&zwnj;ಟೆಲ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಪಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಅಕ್ರಮದಲ್ಲಿ ಜೈಲಾಧಿಕಾರಿಗಳ ಶಾಮೀಲಾಗಿರುವ ಸಾಧ್ಯತೆಯೂ ದಟ್ಟವಾಗಿದೆ. ಭದ್ರತಾ ಲೋಪದ ಬಗ್ಗೆ ವಿವರಣೆ ನೀಡುವಂತೆ ಜೈಲು ಎಸ್ಪಿಗೆ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಸಂಬಂಧಪಟ್ಟ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ವಿಶೇಷವೆಂದರೆ ಈ ಅಧಿಕಾರಿಯನ್ನು ನಿನ್ನೆ ಬೆಳಗ್ಗೆಯಷ್ಟೇ ವರ್ಗಾವಣೆ ಮಾಡಲಾಗಿತ್ತು ಸಂಜೆ ರೇಡ್ ನಡೆದಾಗ ಅಕ್ರಮ ಬಯಲಾಗಿದೆ ಎಂದರು.&lt;/p&gt;&lt;p&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದರು. ನಮ್ಮ ವ್ಯವಸ್ಥೆ ಸರಿಯಾಗಬೇಕು ಎಂದರೆ ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಯಾರೇ ಆಗಿರಲಿ ಕಾನೂನು ಕ್ರಮ ಎದುರಿಸಲೇಬೇಕು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಜೈಲಿನೊಳಗೆ ಆಂಧ್ರದ ಸಿಮ್&zwnj;ಗಳು ಹೇಗೆ ಬರುತ್ತವೆ? ಜಾಮರ್ ಇದ್ದರೂ ಏರ್&zwnj;ಟೆಲ್ ಸಿಗ್ನಲ್ ಹೇಗೆ ಲಭ್ಯವಾಗುತ್ತಿದೆ? ಎಂಬ ಬಗ್ಗೆ ಈಗ ಆಳವಾದ ತನಿಖೆ ಆರಂಭವಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti"/>
        </item>
        <item>
            <title><![CDATA[ನೀಲಿ ಮತ್ತು ಕಿತ್ತಳೆ ಲೈನ್​ ಮೆಟ್ರೋ ಬಗ್ಗೆ BMRCL ಬಿಗ್​ ಅಪ್​ಡೇಟ್: ಇವುಗಳ ಕಾರ್ಯಾರಂಭ ಯಾವಾಗ]]></title>
            <link>https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</link>
            <guid isPermaLink="true">https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx</guid>
            <pubDate>Sat, 08 Aug 2026 12:29:15 +0530</pubDate>
            <description><![CDATA[ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ನೀಲಿ ಮಾರ್ಗದ ಕಾಮಗಾರಿ ಶೇ. 72.75ರಷ್ಟು ಪೂರ್ಣಗೊಂಡಿದ್ದು, 2026-27ರ ನಡುವೆ ಹಂತ ಹಂತವಾಗಿ ತೆರೆಯುವ ನಿರೀಕ್ಷೆಯಿದೆ. ಆದರೆ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ 3ನೇ ಹಂತದ ಆರೆಂಜ್ ಮಾರ್ಗವು ಕೇವಲ ಶೇ. 3.6ರಷ್ಟು ಪ್ರಗತಿ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzg2nqqd1adtxhws5p9sy497,imgname-namma-metro-1786172333804.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರು ಮೆಟ್ರೋದ ಸಿಲ್ಕ್ ಬೋರ್ಡ್ ಅನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ನೀಲಿ ಮಾರ್ಗದ ಕಾಮಗಾರಿ ಸದ್ಯ ಶೇಕಡಾ 72.75 ರಷ್ಟು ಪೂರ್ಣಗೊಂಡಿದ್ದು, ನಿಗದಿತ ವೇಳಾಪಟ್ಟಿಯ ಪ್ರಕಾರ ಮುಂದುವರೆದಿದೆ ಎಂದು BMRCL ಹೇಳಿದೆ. ವಿಮಾನ ನಿಲ್ದಾಣ ಕಾರಿಡಾರ್ 2026 ರ ಅಂತ್ಯದಿಂದ 2027 ರ ಅಂತ್ಯದ ನಡುವೆ ಹಂತಗಳಲ್ಲಿ ತೆರೆಯುವ ನಿರೀಕ್ಷೆಯಿದ್ದರೂ, ಪ್ರಸ್ತಾವಿತ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆಗಳು ಬಾಕಿ ಇರುವುದರಿಂದ 3 ನೇ ಹಂತದ ಆರೆಂಜ್ ಮಾರ್ಗವು ಕೇವಲ 3.6% ಪ್ರಗತಿಯನ್ನು ಸಾಧಿಸಿದೆ ಎಂದಿದೆ.&lt;/p&gt;&lt;p&gt;ಬಿಎಂಆರ್&zwnj;ಸಿಎಲ್ ವೇಳಾಪಟ್ಟಿಯ ಪ್ರಕಾರ, ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗವು 2026 ರ ಅಂತ್ಯದ ವೇಳೆಗೆ, ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 2027 ರ ಮಧ್ಯಭಾಗದಲ್ಲಿ ಮತ್ತು ಕೆಆರ್ ಪುರಂ-ಹೆಬ್ಬಾಳ ವಿಭಾಗವು 2027 ರ ಅಂತ್ಯದ ವೇಳೆಗೆ ತೆರೆಯುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋದ 58.19 ಕಿ.ಮೀ. ಹಂತಗಳನ್ನು ಒಳಗೊಂಡಿರುವ 2ಎ ಮತ್ತು 2ಬಿ ಹಂತಗಳು ಜೂನ್ ವೇಳೆಗೆ ಶೇ. 72.75 ಪೂರ್ಣಗೊಂಡಿದ್ದು, 72.09 ಕಿ.ಮೀ. ಹಂತ 2 ಯೋಜನೆಯು ಶೇ. 95.70 ಪೂರ್ಣಗೊಂಡಿದೆ. 14,788 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2ಎ ಮತ್ತು 2ಬಿ ಹಂತಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ 58 ಕಿ.ಮೀ. ಬ್ಲೂ ಲೈನ್ ಕಾರಿಡಾರ್ ನಿರ್ಮಾಣ ಪ್ರಾರಂಭವಾದಾಗಿನಿಂದ ಕಾಮಗಾರಿಯಲ್ಲಿ ವಿಳಂಬ ಆಗುತ್ತಿದೆ. ಸಿಲ್ಕ್ ಬೋರ್ಡ್-ಕೆಆರ್ ಪುರಂ ಎಲಿವೇಟೆಡ್ ವಿಭಾಗದ ಕೆಲಸವು ಆಗಸ್ಟ್ 2021 ರಲ್ಲಿ ಪ್ರಾರಂಭವಾಯಿತು, ಆದರೆ ಕೆಆರ್ ಪುರಂ-ವಿಮಾನ ನಿಲ್ದಾಣದ ನಿರ್ಮಾಣವು 2022 ರ ಆರಂಭದಲ್ಲಿ ಪ್ರಾರಂಭವಾಯಿತು.&lt;/p&gt;&lt;h2&gt;&lt;strong&gt;ಸವಾಲಾಗಿರುವ ಕಾಮಗಾರಿ&lt;/strong&gt;&lt;/h2&gt;&lt;p&gt;ಭೂಸ್ವಾಧೀನ ಸಮಸ್ಯೆಗಳು, ಮರಗಳ ತೆರವು ವಿಳಂಬ, ಹೊರ ವರ್ತುಲ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಣೆ, ಬಾಕಿ ಇರುವ ಅನುಮೋದನೆಗಳು ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕೆಆರ್ ಪುರಂ-ಹೆಬ್ಬಾಳ ವಿಭಾಗವು ಅತ್ಯಂತ ಸವಾಲಿನ ವಿಭಾಗವಾಗಿ ಮುಂದುವರೆದಿದೆ. ಜನವರಿ 2023 ರಲ್ಲಿ ಪಿಯರ್ ಕುಸಿದು ಮಹಿಳೆ ಮತ್ತು ಅವರ ಚಿಕ್ಕ ಮಗನ ಪ್ರಾಣ ಕಳೆದುಕೊಂಡ ನಂತರ ನಿರ್ಮಾಣ ಕಾರ್ಯದ ಮೇಲೂ ಪರಿಣಾಮ ಬೀರಿದೆ. ಬಿಎಂಆರ್ ಸಿಎಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ವಿಭಾಗದಲ್ಲಿ ಅಕ್ಟೋಬರ್&zwnj;ನಲ್ಲಿ ಪ್ರಾಯೋಗಿಕ ಸಂಚಾರಗಳನ್ನು ಪ್ರಾರಂಭಿಸಲು ಯೋಜಿಸಿದ್ದರೂ, ಬೈಯಪ್ಪನಹಳ್ಳಿಗೆ ಡಿಪೋ ಸಂಪರ್ಕ ಮತ್ತು ಸಿಲ್ಕ್ ಬೋರ್ಡ್, ಇಬ್ಲೂರು ಮತ್ತು ಮಾರತಹಳ್ಳಿಯಂತಹ ನಿಲ್ದಾಣಗಳಲ್ಲಿ ನಾಗರಿಕ ನಿರ್ಮಾಣ ಸೇರಿದಂತೆ ಪ್ರಮುಖ ಕಾರ್ಯಗಳು ಇನ್ನೂ ಬಾಕಿ ಉಳಿದಿವೆ.&lt;/p&gt;&lt;h3&gt;&lt;strong&gt;ಅಡೆತಡೆ ಮೀರಿ ಆರಂಭ&lt;/strong&gt;&lt;/h3&gt;&lt;p&gt;ಈ ಅಡೆತಡೆಗಳ ಹೊರತಾಗಿಯೂ, ಯೋಜನೆಯ ಸಮಯವು ಬದಲಾಗದೆ ಉಳಿದಿದೆ ಎಂದು ಬಿಎಂಆರ್ ಸಿಎಲ್ ವಕ್ತಾರರು ತಿಳಿಸಿದ್ದಾರೆ. ಏತನ್ಮಧ್ಯೆ, 3ನೇ ಹಂತದ ಅಡಿಯಲ್ಲಿ 45 ಕಿಮೀ ಆರೆಂಜ್ ಲೈನ್ ಕೇವಲ ಶೇ. 3.6ರಷ್ಟು ಭೌತಿಕ ಪ್ರಗತಿಯನ್ನು ಸಾಧಿಸಿದೆ. ಎರಡು ವರ್ಷಗಳ ಹಿಂದೆ ಅಂದಾಜು ರೂ. 15,611 ಕೋಟಿ ವೆಚ್ಚದಲ್ಲಿ ಅನುಮೋದನೆ ಪಡೆದ ಈ ಕಾರಿಡಾರ್, ಕೆಂಪಾಪುರವನ್ನು ಜೆಪಿ ನಗರದಿಂದ ಹೊರ ವರ್ತುಲ ರಸ್ತೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕಿಸುತ್ತದೆ. ಕರ್ನಾಟಕ ಸರ್ಕಾರದ ಪ್ರಸ್ತಾವಿತ ರೂ. 9,700 ಕೋಟಿ ವೆಚ್ಚದ, ಮೆಟ್ರೋ ಜೋಡಣೆಯ ಕೆಲವು ಭಾಗಗಳ ಮೇಲೆ ಯೋಜಿಸಲಾದ 37 ಕಿಮೀ ಡಬಲ್ ಡೆಕ್ಕರ್ ಫ್ಲೈಓವರ್&zwnj;ಗೆ ಅನುಮೋದನೆ ಬಾಕಿ ಇರುವುದರಿಂದ ಆರೆಂಜ್ ಲೈನ್&zwnj;ನ ಕೆಲಸವು ಪ್ರಾಥಮಿಕವಾಗಿ ವಿಳಂಬವಾಗಿದೆ. ಮೂರು ನಿರ್ಮಾಣ ಪ್ಯಾಕೇಜ್&zwnj;ಗಳಿಗೆ ಈಗಾಗಲೇ ಟೆಂಡರ್&zwnj;ಗಳನ್ನು ಕರೆಯಲಾಗಿದ್ದರೂ, ಪ್ರಸ್ತಾವನೆಗೆ ಅನುಮತಿ ಸಿಗುವವರೆಗೆ ಅನುಷ್ಠಾನವು ಸ್ಥಗಿತಗೊಂಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/bmrcl-big-update-on-blue-and-orange-line-metro-when-will-these-be-operational-suc/articleshow-vyur9bx"/>
        </item>
        <item>
            <title><![CDATA[ಶಿವಗಂಗೆ ಬೆಟ್ಟಕ್ಕೆ ಬಂದಿದ್ದ 31ರ ಹರೆಯದ ಉದ್ಯಮಿ ಪುತ್ರ ನಾಪತ್ತೆ, ಶಾಂತಲಾ ಡ್ರಾಪ್‌ನಲ್ಲಿ ಶೋಧ]]></title>
            <link>https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</link>
            <guid isPermaLink="true">https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs</guid>
            <pubDate>Sat, 08 Aug 2026 19:49:16 +0530</pubDate>
            <description><![CDATA[&lt;p&gt;ದಕ್ಷಿಣ ಕಾಶಿ ಎಂದೇ ಗುರುತಿಸಿಕೊಂಡಿರುವ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದಿದ್ದ ಉದ್ಯಮಿಯ ಪುತ್ರ ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟದ ಶಾಂತಾಲಾ ಡ್ರಾಪ್ ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು, ಇಲ್ಲಿ ಶೋಧ ಕಾರ್ಯ ನಡೆಯುತ್ತಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvvb07haza741cm465qcaa,imgname-entrepreneur-son-missing-at-shivagange-1786198731776.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.08) &lt;/strong&gt;ದಕ್ಷಿಣ ಕಾಶಿ ಶಿವಗಂಗೆ ಬೆಟ್ಟ ಅತ್ಯಂತ ಸುಂದರ ಪ್ರಕೃತಿ ತಾಣ. ಈ ಬೆಟ್ಟ ಹತ್ತಲು ಪ್ರತಿ ದಿನ ಹಲವು ಸಾಹಸಿಗಳು ಆಗಮಿಸುತ್ತಾರೆ. ಸುರಕ್ಷತಾ ಮಾರ್ಗದರ್ಶನಗಳ ಜೊತೆಗೆ ಬೆಟ್ಟ ಹತ್ತುತ್ತಾರೆ. ಹೀಗೆ ಖ್ಯಾತ ಉದ್ಯಮಿಯ ಪುತ್ರ 31ರ ಹರೆಯದ ಪ್ರತೀಕ್ ಉಪಾದ್ಯಾ ಶಿವಗಂಗೆ ಬೆಟ್ಟಕ್ಕೆ ಟ್ರಕ್ಕಿಂಗ್ ಬಂದು ನಾಪತ್ತೆಯಾದ ಘಟನೆ ನಡೆದಿದೆ. ಬೆಟ್ಟ ಹತ್ತುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಪ್ರತೀಕ್ ಉಪದ್ಯಾಯನ ಸುಳಿವಿಲ್ಲ. ಪೊಲೀಸರು ಡ್ರೋನ್ ಬಳಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.&lt;/p&gt;&lt;h2&gt;ಬುಲೆಟ್ ಬೈಕ್ ಪಾರ್ಕ್ ಮಾಡಿ ಬೆಟ್ಟ ಹತ್ತಿದ್ದ ಪ್ರತೀಕ್&lt;/h2&gt;&lt;p&gt;ಐದು ದಿನಗಳ ಹಿಂದೆ ವೈಟ್ ಫೀಲ್ಡ್&zwnj;&zwj;ನಲ್ಲಿ ಬುಲೆಟ್ ಬೈಕ್ ಬಾಡಿಗೆ ಪಡೆದಿದ್ದ ಪ್ರತೀಕ್ ಉಪಾದ್ಯಾಯ ಒಂದಷ್ಟು ಕಡೆ ಸುತ್ತಾಡಿದ್ದಾನೆ. ನಿನ್ನೆ (ಆ.07) ನೆಲಮಂಗಲ ತಾಲೂಕಿನಲ್ಲಿರುವ ಶಿವಗಂಗೆ ಬೆಟ್ಟ ಹತ್ತಲು ಆಗಮಿಸಿದ್ದಾನೆ. ಶಿವಗಂಗೆಗೆ ಬೈಕ್ ಮೂಲಕ ಬಂದ ಪ್ರತೀಕ್ ಉಪಾದ್ಯಾಯ, ಪಾರ್ಕಿಂಗ್ ಸ್ಥಳದಲ್ಲಿ ಬುಲೆಟ್ ಬೈಕ್ ಪಾರ್ಕ್ ಮಾಡಿದ್ದಾನೆ. ಬಳಿಕ ಬೆಟ್ಟ ಹತ್ತಲು ಆರಂಭಿಸಿದ್ದಾನೆ. ಈತ ಪಾರ್ಕಿಂಗ್ ಮಾಡಿ ಬೆಟ್ಟ ಹತ್ತುವ ಕೆಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.&lt;/p&gt;&lt;h2&gt;ನಾಪತ್ತೆ ಹಿಂದೆ ಸಾಕಷ್ಟು ಅನುಮಾನ&lt;/h2&gt;&lt;p&gt;ಪ್ರತೀಕ್ ಉಪಾದ್ಯಾಯ ವಾಪಸ್ ಮರಳಿರುವ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿಲ್ಲ. ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.ಪ್ರತೀಕ್ ಉಪಾದ್ಯಾಯನ ಫೋನ್ ಬೇರೆ ಕಡೆ ಸ್ವಿಚ್ ಆಗಿದೆ. ಪ್ರತೀಕ್ ಉಪಾದ್ಯಾಯ ನಾಪತ್ತೆಯಾಗಿರುವ ಸ್ಥಳಕ್ಕೂ ಫೋನ್ ಸ್ವೀಚ್ ಆಗಿರುವ ಲೋಕೇಶನ್ ಬೇರೆ ಬೇರೆಯಾಗಿದೆ. ಇತ್ತ ಐದು ದಿನಗಳ ಹಿಂದೆ ಬೈಕ್ ಬಾಡಿಗೆ ಪಡೆದು ಸುತ್ತಾಟ ಆರಂಭಿಸಿದ ಹಿಂದೆಯೂ ಕೆಲ ಅನುಮಾನಗಳು ವ್ಯಕ್ತವಾಗಿದೆ.&lt;/p&gt;&lt;p&gt;ಶಿವಗಂಗೆ ಬೆಟ್ಟ ಸಮುದ್ರದ ಮಟ್ಟದಿಂದ 4800 ಅಡಿ ಎತ್ತರದಲ್ಲಿರುವ ಬೆಟ್ಟ . ಜೊತೆಗೆ ಹಲವು ಕಡೆ ಅತ್ಯಂತ ಅಪಾಯಕಾರಿಯಾಗಿದೆ. ಈ ಪೈಕಿ ಶಾಂತಲಾ ಡ್ರಾಪ್ ಅತೀ ಎಚ್ಚರವಹಿಸಬೇಕಾದ ಸ್ಥಳ. ಮರಗಿಡಗಳು ಕಲ್ಲು ಬಂಡೆಗಳಿಂದ ಕೂಡಿರುವ ಶಾಂತಲಾ ಡ್ರಾಪ್ ಬಳಿ ಹಲವು ಸೂಚನಾ ಫಲಕಗಳು ಇವೆ. ಇದೀಗ ಪೊಲೀಸರು ಡ್ರೋನ್ ಬಳಸಿ ಶಾಂತಲಾ ಡ್ರಾಪ್ ಬಳಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಪ್ರತೀಕ್ ಉಪಾದ್ಯಾಯ ನಾಪತ್ತೆ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-rural/businessman-31-year-old-son-goes-missing-after-shivagange-trekking-search-launched/articleshow-y9mxugs"/>
        </item>
        <item>
            <title><![CDATA[ಒಂದೂ ಡ್ಯಾಮ್​ ಕಟ್ಟದೆ, ಬೆಂಗಳೂರಿನ 14 ಕೆರೆಗೆ ಜೀವ ತಂದ ಯೋಧನ ರೋಚಕ ಸ್ಟೋರಿ; ಆ ನಕ್ಷೆಯೇ ಶ್ರೀರಕ್ಷೆ]]></title>
            <link>https://kannada.asianetnews.com/karnataka-districts/cap-santosh-kumar-a-retired-indian-army-officer-restored-nearly-4-km-of-bengalurus-ancient-raja-kaluve-suc/articleshow-yigfhuq</link>
            <guid isPermaLink="true">https://kannada.asianetnews.com/karnataka-districts/cap-santosh-kumar-a-retired-indian-army-officer-restored-nearly-4-km-of-bengalurus-ancient-raja-kaluve-suc/articleshow-yigfhuq</guid>
            <pubDate>Mon, 10 Aug 2026 12:08:25 +0530</pubDate>
            <description><![CDATA[ನಿವೃತ್ತ ಸೇನಾ ಕ್ಯಾಪ್ಟನ್ ಸಂತೋಷ್ ಕುಮಾರ್, ಬ್ರಿಟಿಷ್ ಕಾಲದ ನಕ್ಷೆಗಳ ಸಹಾಯದಿಂದ ಬೆಂಗಳೂರಿನ ಆನೇಕಲ್ ಬಳಿ ಅತಿಕ್ರಮಣಗೊಂಡಿದ್ದ ರಾಜಕಾಲುವೆಗಳನ್ನು ಪತ್ತೆಹಚ್ಚಿದರು. ಸ್ಥಳೀಯರ ಸಹಕಾರದೊಂದಿಗೆ ಸುಮಾರು 4 ಕಿ.ಮೀ. ರಾಜಕಾಲುವೆಯನ್ನು ಪುನಶ್ಚೇತನಗೊಳಿಸಿ, ಬತ್ತಿಹೋಗಿದ್ದ 14 ಕೆರೆಗಳಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzn68pejck213ykde0tkxjvs,imgname-cap-santosh-kumar-1786343872978.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2008ರಲ್ಲಿ ಭಾರತೀಯ ಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ಸಂತೋಷ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಸಮೀಪದ ಮುತ್ತನಲ್ಲೂರಿಗೆ ಬಂದಾಗ ಒಂದು ವಿಚಿತ್ರ ಸಂಗತಿಯನ್ನು ಗಮನಿಸಿದರು. ಭಾರಿ ಮಳೆಯಾಗುತ್ತಿದ್ದರೂ ಕೆರೆಗಳು ತುಂಬುತ್ತಿರಲಿಲ್ಲ. ಆದರೆ ರಸ್ತೆಗಳು ಮಾತ್ರ ನದಿಗಳಾಗುತ್ತಿದ್ದವು. ಇದು ಅವರಿಗೆ ಕುತೂಹಲ ಮೂಡಿಸಿತು. ಬಹುತೇಕ ಮಂದಿ ಇದನ್ನು ಗಮನಿಸುತ್ತಿದ್ದರೂ ಯಾರೂ ಈ ಬಗ್ಗೆ ಚಿಂತಿಸುತ್ತಲೇ ಇರಲಿಲ್ಲ. ಆದರೆ ಕ್ಯಾಪ್ಟನ್​ ಸಂತೋಷ್​ ಕುಮಾರ್​ ಹಾಗೆ ಮಾಡಲಿಲ್ಲ. ಅವರು, 1923ರಲ್ಲಿ ಬ್ರಿಟಿಷ್ ಆಡಳಿತ ಸಿದ್ಧಪಡಿಸಿದ್ದ ಬೆಂಗಳೂರಿನ ಹಳೆಯ ಸರ್ವೆ ನಕ್ಷೆಗಳನ್ನು ಅಧ್ಯಯನ ಮಾಡಿದರು. ಇದು ನಡೆದದ್ದು, 2017&ndash;2019ರ ಅವಧಿಯಲ್ಲಿ, ಆ ನಕ್ಷೆಗಳಲ್ಲಿ ಕಾಣುತ್ತಿದ್ದ ರಾಜಕಾಲುವೆಗಳು ನೆಲದಲ್ಲಿ ಕಾಣುತ್ತಿರಲಿಲ್ಲ. ಸರ್ವೇ ನಡೆಸಿದಾಗ ಕೆಲವು ಕಾಲುವೆಗಳು ಕಟ್ಟಡಗಳ ಕೆಳಗೆ ಹೋಗಿದ್ದವು. ಕೆಲವು ಸಂಪೂರ್ಣವಾಗಿ ನಶಿಸಿಯೇ ಹೋಗಿದ್ದವು.&lt;/p&gt;&lt;h2&gt;&lt;strong&gt;ನೂರು ವರ್ಷಗಳ ಹಿಂದಿನ ನಕ್ಷೆ&lt;/strong&gt;&lt;/h2&gt;&lt;p&gt;ಕ್ಯಾಪ್ಟನ್ ಸಂತೋಷ್ ಕುಮಾರ್ ಅವರು ಭಾರತೀಯ ಸೇನೆಯ ನಿವೃತ್ತ ಯೋಧರು. ಇವರು, ಕೆರೆಗಳ ಸ್ಥಿತಿ ಕಂಡು, ಬೆಂಗಳೂರಿನ ಹಳೆಯ ಜಲಮಾರ್ಗಗಳನ್ನು ಪತ್ತೆ ಹಚ್ಚಲು ಬ್ರಿಟಿಷ್ ಕಾಲದ ಹಳೆಯ ನಕ್ಷೆಗಳನ್ನು ಇನ್ನಷ್ಟು ಅಧ್ಯಯನ ಮಾಡಿದರು. ಸ್ಥಳೀಯ ನಿವಾಸಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಕಾರದೊಂದಿಗೆ ಮುತಾನಲ್ಲೂರು ಮತ್ತು ಬಿಡರಗುಪ್ಪೆ ಕೆರೆಗಳ ನಡುವಿನ ರಾಜಕಾಲುವೆಗಳನ್ನು ಗುರುತಿಸಿ ತೆರವುಗೊಳಿಸಿದರು. ಸುಮಾರು 4 ಕಿ.ಮೀ ಉದ್ದದ ರಾಜಕಾಲುವೆಯನ್ನು ಪುನಶ್ಚೇತನಗೊಳಿಸಿ, ಬತ್ತಿಹೋಗಿದ್ದ ಒಟ್ಟು 14 ಕೆರೆಗಳಿಗೆ ಮಳೆನೀರು ಹರಿಯುವಂತೆ ಮಾಡಿದರು.&lt;/p&gt;&lt;p&gt;ಅವರೇ ಹೇಳುವಂತೆ, ಇಂದು ರಾಜಕಾಲುವೆಗಳನ್ನು ಮುಚ್ಚಿ ಕಟ್ಟಡ ನಿರ್ಮಾಣ ಯಥೇಚ್ಛವಾಗಿ ನಡೆಯುತ್ತಿದೆ. ಆದರೆ, ರಾಜಕಾಲುವೆಗಳನ್ನು ಮುಚ್ಚಿದರೆ, ಮಳೆ ಬಂದಾಗ ನೀರು ತನ್ನ ಹಳೆಯ ದಾರಿಯನ್ನೇ ಹುಡುಕುತ್ತದೆ. ಪ್ರವಾಹ ತಡೆಯಲು ಹೊಸದಾಗಿ ದೊಡ್ಡ ಮೂಲಸೌಕರ್ಯ ನಿರ್ಮಿಸುವ ಅಗತ್ಯವಿಲ್ಲ. ನಮ್ಮ ಹಿರಿಯರು ರೂಪಿಸಿದ್ದ ನೈಸರ್ಗಿಕ ರಾಜಕಾಲುವೆಗಳನ್ನು ರಕ್ಷಿಸಿ ಅತಿಕ್ರಮಣ ತೆರವುಗೊಳಿಸಿದರೆ ಸಾಕು ಬೆಂಗಳೂರಿಗಷ್ಟೇ ಅಲ್ಲ, ದೇಶದ ಎಲ್ಲ ನಗರಗಳಿಗೂ ಅನ್ವಯಿಸುತ್ತದೆ ಎನ್ನುತ್ತಲೇ ಕೆರೆಗಳಿಗೆ ಅವರು, ಮರುಜೀವ ತುಂಬಿದರು.&lt;/p&gt;&lt;h3&gt;&lt;strong&gt;ರಾಜಕಾಲುವೆ ತೆರವು&lt;/strong&gt;&lt;/h3&gt;&lt;p&gt;ರಾಜಕಾಲುವೆಗಳಿಗೆ ಮರುಜೀವ ನೀಡುವುದರ ಮೂಲಕ ಕೆರೆಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡಿ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಹಾಗೂ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ತಡೆಗೆ ಪ್ರಮುಖ ಕಾರಣರಾಗಿದ್ದಾರೆ. ಕ್ಯಾಪ್ಟನ್​ ಸಂತೋಷ್ ಕುಮಾರ್ ಸ್ಥಳೀಯರ ಸಹಕಾರ, ಜಿಲ್ಲಾಡಳಿತ, ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿಗಳ ನೆರವಿನಿಂದ ಸುಮಾರು 4 ಕಿ.ಮೀ. ಉದ್ದದ ರಾಜಕಾಲುವೆಯನ್ನು ಪುನಃ ತೆರೆಸಿದರು. ಅದನ್ನು ಬಟ್ಟಲಕೆರೆಗೆ ಸಂಪರ್ಕಿಸಲಾಯಿತು. ಇದರಿಂದ ಮುಂದಿನ ಮಳೆಗಾಲದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂತು. ಅವರ ಸಾಧನೆಯ ಫಲವಾಗಿ ಮಳೆನೀರು ರಸ್ತೆಯ ಬದಲು ಕೆರೆಗೆ ಹರಿಯಿತು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಕಡಿಮೆಯಾಯಿತು, ಅಂತರ್ಜಲ ಮಟ್ಟ ಸುಧಾರಿಸಿತು.&lt;/p&gt;]]></content:encoded>
            <category>bengaluru-rural</category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/cap-santosh-kumar-a-retired-indian-army-officer-restored-nearly-4-km-of-bengalurus-ancient-raja-kaluve-suc/articleshow-yigfhuq"/>
        </item>
        <item>
            <title><![CDATA[ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಕ್ರೂರ ಕೃತ್ಯ.. ಇಬ್ಬರು ಮದ್ದಾದ ಮಕ್ಕಳ ಜೀವ ತೆಗೆದ ಅಪ್ಪ]]></title>
            <link>https://kannada.asianetnews.com/bengaluru-urban/bengaluru-taj-hotel-father-kills-daughters-aged-5-and-10-gkn/articleshow-zl6u13c</link>
            <guid isPermaLink="true">https://kannada.asianetnews.com/bengaluru-urban/bengaluru-taj-hotel-father-kills-daughters-aged-5-and-10-gkn/articleshow-zl6u13c</guid>
            <pubDate>Mon, 10 Aug 2026 21:57:35 +0530</pubDate>
            <description><![CDATA[&lt;p&gt;ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್&zwnj;ನಲ್ಲಿ ಘೋರ ಕೃತ್ಯವೊಂದು ನಡೆದಿದೆ. ಪಾಪಿ ತಂದೆಯೊಬ್ಬ ತನ್ನಿಬ್ಬರು ಹೆಣ್ಮಕ್ಕಳನ್ನು ಬರ್ಬರವಾಗಿ ಜೀವ ತೆಗೆದಿದ್ದಾನೆ. ಆತ ಯಾಕೆ ಹಾಗೆ ಮಾಡಿದ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzp7x4x4dtb1778y3qvc47cs,imgname-bengalurus-taj-hotel-1786379146148.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಿಲಿಕಾನ್ ಸಿಟಿಯ ಪ್ರತಿಷ್ಠಿತ ತಾಜ್ ಹೋಟೆಲ್&zwnj;ನಲ್ಲಿ ಸೋಮವಾರ ಸಂಜೆ ಮನಕಲಕುವ ಘಟನೆಯೊಂದು ನಡೆದಿದೆ. ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ ತಂದೆ, ಬಳಿಕ ತಾನೂ ಆತ್ಮ*ತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿ ತಂದೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಮಕ್ಕಳನ್ನು ಶೇಖ್ ಜೆಹ್ರಾ (5) ಮತ್ತು ಶೇಖ್ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ ಎಸ್&zwnj;.ಜಿ. ಇಮ್ರಾನ್ (40) ಎಂಬಾತನೇ ಈ ಕೃತ್ಯ ಎಸಗಿರುವ ಶಂಕೆಯಿದೆ. ಇಮ್ರಾನ್ ಉತ್ತರ ಬೆಂಗಳೂರಿನ ನಾಗವಾರ ಮುಖ್ಯರಸ್ತೆಯ ನಿವಾಸಿಯಾಗಿದ್ದು, ಸೋಮವಾರ ಹೋಟೆಲ್&zwnj;ನಲ್ಲಿ ಈ ಘಟನೆ ಸಂಭವಿಸಿದೆ.&lt;/p&gt;&lt;p&gt;ಸೋಮವಾರ ಸಂಜೆ ಹೋಟೆಲ್&zwnj;ನ ಕೊಠಡಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಹೋಟೆಲ್&zwnj;ನ ಭದ್ರತಾ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಕೊಠಡಿ ತೆರೆದಾಗ ಇಬ್ಬರು ಮಕ್ಕಳು ಶವವಾಗಿ ಬಿದ್ದಿದ್ದರು. ಇಮ್ರಾನ್ ಕೊಠಡಿಯ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು. ತಕ್ಷಣವೇ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಪೊಲೀಸರಿಗೆ ಸ್ಥಳದಲ್ಲಿ ಒಂದು ಡೆತ್ ನೋಟ್ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ.. ಇಮ್ರಾನ್ ಮತ್ತು ಆತನ ಪತ್ನಿಯ ನಡುವೆ ದಾಂಪತ್ಯ ಕಲಹವಿತ್ತು ಎನ್ನಲಾಗಿದೆ. ತನ್ನ ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಇಮ್ರಾನ್ ನೋಟ್&zwnj;ನಲ್ಲಿ ಆರೋಪಿಸಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಆರೋಪಕ್ಕೆ ಪೂರಕವಾದ ಕೆಲವು ಪುರಾವೆಗಳ ಬಗ್ಗೆಯೂ ಆತ ನೋಟ್&zwnj;ನಲ್ಲಿ ಉಲ್ಲೇಖಿಸಿದ್ದಾನೆ ಎನ್ನಲಾಗಿದೆ.&lt;/p&gt;&lt;p&gt;ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಇಮ್ರಾನ್ ಚೇತರಿಸಿಕೊಳ್ಳುತ್ತಿದ್ದಾನೆ. ಆತ ನೀಡಿದ ನೋಟ್&zwnj;ನಲ್ಲಿರುವ ಅಂಶಗಳನ್ನು ನಾವು ಪರಿಶೀಲಿಸುತ್ತಿದ್ದೇವೆ. ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಷ್ಠಿತ ಹೋಟೆಲ್&zwnj;ನಲ್ಲಿ ನಡೆದ ಈ ಘಟನೆ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/bengaluru-taj-hotel-father-kills-daughters-aged-5-and-10-gkn/articleshow-zl6u13c"/>
        </item>
    </channel>
</rss>
