<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Tue, 01 Sep 2026 18:20:40 +0530</lastBuildDate>
        <atom:link href="https://kannada.asianetnews.com/rss/bengaluru-rural" rel="self" type="application/rss+xml"/>
        <item>
            <title><![CDATA[ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುತಿಸಲಾದ 3 ಗ್ರಾಮಗಳ ಹೆಸರು ರಿವೀಲ್; ಚಿನ್ನದ ಭೂಮಿ ಎಲ್ಲಿದೆ? ನೋಡಿ]]></title>
            <link>https://kannada.asianetnews.com/bengaluru-urban/bengaluru-second-international-airport-3-locations-shortlisted-mb-patil-assembly/articleshow-0zi5gme</link>
            <guid isPermaLink="true">https://kannada.asianetnews.com/bengaluru-urban/bengaluru-second-international-airport-3-locations-shortlisted-mb-patil-assembly/articleshow-0zi5gme</guid>
            <pubDate>Fri, 21 Aug 2026 08:26:08 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆ ನಿವಾರಿಸಲು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಹಾಗಾದರೆ, ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿ ಬರಲಿದೆ? ಕನಕಪುರ, ನೆಲಮಂಗಲ ಬಳಿ ಗುರುತಿಸಲಾದ 3 ಸ್ಥಳಗಳ ಸಂಪೂರ್ಣ ಮಾಹಿತಿ ಮತ್ತು ಸರ್ಕಾರದ ಮುಂದಿನ ಯೋಜನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01j4hjb3v4t9vmegtppqrtq91p,imgname-bengaluru-second-airport.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.21): ರಾ&lt;/strong&gt;ಜ್ಯ ರಾಜಧಾನಿ ಬೆಂಗಳೂರು ನಗರದ ಹೆಚ್ಚುತ್ತಿರುವ ವಿಮಾನಯಾನ ದಟ್ಟಣೆಯನ್ನು ನಿಯಂತ್ರಿಸಲು ಯೋಜಿಸಲಾಗಿರುವ &lsquo;ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ&rsquo; ನಿರ್ಮಾಣಕ್ಕೆ ಈಗಾಗಲೇ ಮೂರು ಪ್ರಮುಖ ಸ್ಥಳಗಳನ್ನು ಪ್ರಾಥಮಿಕವಾಗಿ ಗುರುತಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.&lt;/p&gt;&lt;p&gt;ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ನೂತನ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಹಾಗೂ ಸ್ಥಳ ಪರಿಶೀಲನೆಯ ಪ್ರಸ್ತುತ ಸ್ಥಿತಿಗತಿಯನ್ನು ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಗುರುತಿಸಲಾದ 3 ಪ್ರಮುಖ ಸ್ಥಳಗಳು ಯಾವುವು?&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರವು ಈ ಕೆಳಗಿನ ಮೂರು ಜಾಗಗಳನ್ನು ಶಾರ್ಟ್&zwnj;ಲಿಸ್ಟ್ ಮಾಡಿದೆ:&lt;/p&gt;&lt;p&gt;&lt;strong&gt;ಸೋಮನಹಳ್ಳಿ: &lt;/strong&gt;ಬೆಂಗಳೂರು ದಕ್ಷಿಣ ಜಿಲ್ಲೆ, ಕನಕಪುರ ರಸ್ತೆ.&lt;/p&gt;&lt;p&gt;&lt;strong&gt;ಚೂಡಹಳ್ಳಿ: &lt;/strong&gt;ಕನಕಪುರ ತಾಲೂಕು ವ್ಯಾಪ್ತಿ.&lt;/p&gt;&lt;p&gt;&lt;strong&gt;ಗುಡೇಮಾರನಹಳ್ಳಿ:&lt;/strong&gt; ನೆಲಮಂಗಲ - ಕುಣಿಗಲ್ ಹೆದ್ದಾರಿ ಸಮೀಪ.&lt;/p&gt;&lt;p&gt;ಇವುಗಳ ಜೊತೆಗೆ, ಕನಕಪುರ ರಸ್ತೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಆಸುಪಾಸಿನಲ್ಲೂ ಸೂಕ್ತ ಜಾಗದ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಅಂತಿಮವಾಗಿ ಒಂದು ಸ್ಥಳವನ್ನು ಅನುಮೋದಿಸಿದ ಬಳಿಕ, ಯೋಜನೆಗೆ ಅಗತ್ಯವಿರುವ ಒಟ್ಟು ಜಮೀನಿನ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೇಂದ್ರಕ್ಕೆ ಅರ್ಜಿ, ಎಎಐ ತಾಂತ್ರಿಕ ತಂಡದಿಂದ ಪರಿಶೀಲನೆ ಪೂರ್ಣ:&lt;/strong&gt;&lt;/h2&gt;&lt;p&gt;ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ಸಿದ್ಧತೆಗಳು ವೇಗವಾಗಿ ನಡೆಯುತ್ತಿದ್ದು, ಪ್ರಮುಖ ಹಂತಗಳು ಹೀಗಿವೆ:&lt;/p&gt;&lt;p&gt;&lt;strong&gt;ಸೈಟ್ ಕ್ಲಿಯರೆನ್ಸ್ ಅರ್ಜಿ: &lt;/strong&gt;ಗುರುತಿಸಲಾದ ಮೂರು ಸ್ಥಳಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸ್ಟೀರಿಂಗ್ ಕಮಿಟಿಯಿಂದ ಅನುಮತಿ (Site Clearance) ಪಡೆಯಲು ಅರ್ಜಿ ಸಲ್ಲಿಸಲಾಗಿದೆ.&lt;/p&gt;&lt;p&gt;&lt;strong&gt;ಎಎಐ ಪರಿವೀಕ್ಷಣೆ: &lt;/strong&gt;ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ತಜ್ಞ ತಾಂತ್ರಿಕ ತಂಡವು ಈ ಎಲ್ಲಾ ಜಾಗಗಳ ಸ್ಥಳ ಪರಿಶೀಲನೆ (Site Inspection) ಕಾರ್ಯವನ್ನು ಪೂರ್ಣಗೊಳಿಸಿದೆ.&lt;/p&gt;&lt;p&gt;&lt;strong&gt;ಕಾರ್ಯಸಾಧ್ಯತಾ ವರದಿ: &lt;/strong&gt;ಈ ಸ್ಥಳಗಳಿಗೆ ಸಂಬಂಧಿಸಿದಂತೆ ಪೂರ್ವ ಕಾರ್ಯಸಾಧ್ಯತಾ ವರದಿ (Pre-feasibility Study Report) ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.&lt;/p&gt;&lt;h2&gt;&lt;strong&gt;ಮುಂದಿನ ಹೆಜ್ಜೆಯೇನು?&lt;/strong&gt;&lt;/h2&gt;&lt;p&gt;ಈ ಮೂರೂ ಸ್ಥಳಗಳ ಸಮಗ್ರ ಕಾರ್ಯತಂತ್ರ, ಭೂ ಸೌಕರ್ಯ, ಸಂಪರ್ಕ ವ್ಯವಸ್ಥೆ ಮತ್ತು ತಾಂತ್ರಿಕ ಸಾಧ್ಯಾಸಾಧ್ಯತೆಗಳನ್ನು ಆಳವಾಗಿ ಅಧ್ಯಯನ ಮಾಡಲು ಅಂತಾರಾಷ್ಟ್ರೀಯ ಮಟ್ಟದ ಸಮಾಲೋಚಕರನ್ನು (Consultants) ನೇಮಿಸಲಾಗಿದೆ. ತಜ್ಞರ ಅಂತಿಮ ವರದಿ ಬಂದ ನಂತರವೇ ಬೆಂಗಳೂರಿನ ಎರಡನೇ ಏರ್&zwnj;ಪೋರ್ಟ್ ಎಲ್ಲಿ ತಲೆಯೆತ್ತಲಿದೆ ಎಂಬುದು ಅಧಿಕೃತವಾಗಿ ನಿರ್ಧಾರವಾಗಲಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-second-international-airport-3-locations-shortlisted-mb-patil-assembly/articleshow-0zi5gme"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್: ಪ್ರದೂಷ್ ಮಾಫಿ ಸಾಕ್ಷಿ ಪ್ರಕ್ರಿಯೆಯಲ್ಲಿ ಲೋಪ, ಹೈಕೋರ್ಟ್‌ನಲ್ಲಿ ಗೆಳೆಯನಿಗೆ ನಟ ದರ್ಶನ್ ಸವಾಲ್!]]></title>
            <link>https://kannada.asianetnews.com/karnataka-districts/renukaswamy-case-actor-darshan-challenges-approver-status-granted-to-a14-pradoosh-in-karnataka-high-court-gdp/articleshow-3i6shkr</link>
            <guid isPermaLink="true">https://kannada.asianetnews.com/karnataka-districts/renukaswamy-case-actor-darshan-challenges-approver-status-granted-to-a14-pradoosh-in-karnataka-high-court-gdp/articleshow-3i6shkr</guid>
            <pubDate>Tue, 01 Sep 2026 13:25:00 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್&zwnj;ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ ಸೆಷನ್ಸ್ ಕೋರ್ಟ್ ಆದೇಶವನ್ನು ನಟ ದರ್ಶನ್ ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಯಲಿರುವಾಗಲೇ, ಸೆಷನ್ಸ್ ನ್ಯಾಯಾಲಯವು ಪ್ರದೂಷ್&zwnj;ಗೆ ಸೆಪ್ಟೆಂಬರ್ 2 ರಂದು ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzaska2xpybbwahthxak587h,imgname-pradosh-darshan-renukaswamy-case-1785995044956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊ*ಲೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಪ್ರಕರಣದ 14ನೇ ಆರೋಪಿ ಪ್ರದೂಷ್&zwnj; ಎಸ್&zwnj;.ರಾವ್&zwnj;ಗೆ ಕ್ಷಮಾದಾನ ನೀಡಿ, 'ಮಾಫಿ ಸಾಕ್ಷಿ' ಯನ್ನಾಗಿ ಪರಿಗಣಿಸಿರುವ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ತೂಗುದೀಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಮಧ್ಯಾಹ್ನಕ್ಕೆ ದರ್ಶನ್ ಅರ್ಜಿ ವಿಚಾರಣೆ ನಿಗದಿಯಾಗಿದೆ.&lt;/p&gt;&lt;h2&gt;ಹೈಕೋರ್ಟ್&zwnj;ನಲ್ಲಿ ದರ್ಶನ್ ಪರ ವಕೀಲರ ವಾದ:&lt;/h2&gt;&lt;p&gt;ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆಯನ್ನು ಇಂದೇ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದರು. ಪ್ರದೂಷ್&zwnj;ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ಲೋಪಗಳಾಗಿವೆ. ಈ ಕುರಿತು ನ್ಯಾಯಾಲಯದ ಗಮನಕ್ಕೆ ತರುವ ಅಗತ್ಯವಿದೆ ಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು, ಅರ್ಜಿಯ ಪ್ರತಿಯನ್ನು ವಿಶೇಷ ಸರ್ಕಾರಿ ಅಭಿಯೋಜಕರಿಗೆ (SPP) ಹಸ್ತಾಂತರಿಸುವಂತೆ ಸೂಚಿಸಿ, ಮಧ್ಯಾಹ್ನವೇ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿದರು.&lt;/p&gt;&lt;h2&gt;ಸೆಷನ್ಸ್ ಕೋರ್ಟ್ ಆದೇಶ ಮತ್ತು ಸಮನ್ಸ್ ಜಾರಿ:&lt;/h2&gt;&lt;p&gt;ಇತ್ತ ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಧೀಶೆ ಸುಜಾತಾ ಅವರು ಮಾಫಿ ಸಾಕ್ಷಿಯಾಗಿರುವ ಪ್ರದೂಷ್&zwnj;ಗೆ ಸಮನ್ಸ್ ಜಾರಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರದೂಷ್&zwnj;ನನ್ನು ಸೆಪ್ಟೆಂಬರ್ 2 ರಂದು ಖುದ್ದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಈ ಕುರಿತು ಜೈಲು ಆಡಳಿತಕ್ಕೆ ಮಾಹಿತಿ ನೀಡುವಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾಧಿಕಾರಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಇದಕ್ಕೂ ಮುನ್ನ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು, ಸೆಷನ್ಸ್ ಕೋರ್ಟ್ ಆಂಗೀಕರಿಸಿರುವ ಮಾಫಿ ಸಾಕ್ಷಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸುತ್ತಿರುವುದರಿಂದ, ಸೆ.2ರವರೆಗೆ ಪ್ರದೂಷ್ ವಿಚಾರಣೆಯನ್ನು ಮುಂದೂಡಬೇಕೆಂದು ಕೋರಿದ್ದರು. ಆದರೆ ವಾದ-ಪ್ರತಿವಾದ ಆಲಿಸಿದ ಪೀಠವು ಸಾಕ್ಷ್ಯ ದಾಖಲಿಸಲು ಪ್ರದೂಷ್&zwnj;ಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿತು.&lt;/p&gt;&lt;h2&gt;ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ಹಾಜರಾತಿ:&lt;/h2&gt;&lt;p&gt;ಇನ್ನು ಜೈಲಿನಲ್ಲಿರುವ ಪವಿತ್ರಾ ಗೌಡ ಮತ್ತು ನಟ ದರ್ಶನ್ ಸೇರಿದಂತೆ ಪ್ರಮುಖ 6 ಆರೋಪಿಗಳನ್ನು ಸೆಪ್ಟೆಂಬರ್ 2 ರಂದು ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ನನ್ನನ್ನು ಕ್ಷಮಿಸಿ ಮಾಫಿ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿ 14ನೇ ಆರೋಪಿಯಾಗಿದ್ದ ಪ್ರದೂಷ್&zwnj;, 2026ರ ಆ.7ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.&lt;/p&gt;&lt;h2&gt;ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿಗೆ ಬೆದರಿಕೆ ಕೇಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು!&lt;/h2&gt;&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್&zwnj;ಐಆರ್ (FIR) ರದ್ದುಗೊಳಿಸುವಂತೆ ಕೋರಿ ಪ್ರಕರಣದ ಆರೋಪಿ ಸುಹಾಸ್ ಹಾಗೂ ಇತರರು ಕರ್ನಾಟಕ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು.&lt;/p&gt;&lt;p&gt;ವಾದ ಮಂಡಿಸಿದ ವಕೀಲ ಹಷ್ಮತ್ ಪಾಷಾ, &quot;ಪ್ರಕರಣದ ಸಾಕ್ಷಿ ಸಂದೀಪ್ ತನಗೆ ಯಾರೂ ಬೆದರಿಕೆ ಹಾಕಿಲ್ಲ ಎಂದು ಸ್ವತಃ ಹೇಳಿದ್ದಾನೆ. ಆತನಿಗೆ ಆರೋಪಿ ಆಕರ್ಷ್ ಪರಿಚಯವಿದ್ದರೂ, ಆತನಾಗಲಿ ಅಥವಾ ಬೇರೆ ಯಾರೇ ಆಗಲಿ ತನಗೆ ಯಾವುದೇ ರೀತಿಯ ಬೆದರಿಕೆ ಒಡ್ಡಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಅಲ್ಲದೆ, ನಾನು ಯಾರಿಗೂ ಭಯಪಟ್ಟು ಸಾಕ್ಷಿ ನುಡಿದಿಲ್ಲ ಎಂಬುದಾಗಿಯೂ ಸಾಕ್ಷಿಯೇ ತಿಳಿಸಿದ್ದಾನೆ. ಹೀಗಿರುವಾಗ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ,&quot; ಎಂದು ಪೀಠಕ್ಕೆ ವಿವರಿಸಿದರು.&lt;/p&gt;&lt;h2&gt;ವಿಶೇಷ ಸರ್ಕಾರಿ ಅಭಿಯೋಜಕರ ವಾದ:&lt;/h2&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಸರ್ಕಾರಿ ಅಭಿಯೋಜಕ (SPP) ಬಿ.ಎನ್. ಜಗದೀಶ್, ಸಾಕ್ಷಿಯೇ ನೀಡಿದ ಮಾಹಿತಿಯ ಆಧಾರದ ಮೇಲೆ ಹಾಗೂ ಪ್ರಾಥಮಿಕ ತನಿಖೆಯ ನಂತರವೇ ಎಫ್&zwnj;ಐಆರ್ ದಾಖಲಿಸಲಾಗಿದೆ. ಈ ವಿಷಯದಲ್ಲಿ ಇನ್ನೂ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.&lt;/p&gt;&lt;p&gt;ಅಲ್ಲದೆ, ಈ ಕುರಿತು ಸಂಪೂರ್ಣ ವಾದವನ್ನು ನಾಳೆ ಮಂಡಿಸುವುದಾಗಿ ಎಸ್ಪಿಪಿ ಬಿ.ಎನ್. ಜಗದೀಶ್ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಸುಹಾಸ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೆ.2ಕ್ಕೆ ಅಂದರೆ ನಾಳೆಗೆ ಮುಂದೂಡಿತು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-actor-darshan-challenges-approver-status-granted-to-a14-pradoosh-in-karnataka-high-court-gdp/articleshow-3i6shkr"/>
        </item>
        <item>
            <title><![CDATA[ಶಿವರಾಮ ಕಾರಂತ ಲೇಔಟ್ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್, ಸೈಟ್ ಬೆಲೆ ಇಳಿಸಿದ ಡಿಕೆ ಶಿವಕುಮಾರ್]]></title>
            <link>https://kannada.asianetnews.com/bengaluru-rural/good-news-for-farmers-who-gave-land-for-shivaram-karanth-layout-site-prices-cut/articleshow-8b402ct</link>
            <guid isPermaLink="true">https://kannada.asianetnews.com/bengaluru-rural/good-news-for-farmers-who-gave-land-for-shivaram-karanth-layout-site-prices-cut/articleshow-8b402ct</guid>
            <pubDate>Mon, 31 Aug 2026 16:26:52 +0530</pubDate>
            <description><![CDATA[&lt;p&gt;ಶಿವರಾಮ ಕಾರಂತ ಬಡಾವಣೆ ಮಾಡಲು ಜಾಗ ಕೊಟ್ಟ ರೈತರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟ್ ನೀಡಲು ಸಿಎಂ ಸೂಚಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1bqdv8j63d4z9hjm63h3bfk,imgname-shivaram-karanth-layout-1788173806866.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.31)&lt;/strong&gt; ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಶಿವರಾಮ ಕಾರಂತ ಬಡಾವಣೆಗೆ ಜಾಗ ಕೊಟ್ಟ ರೈತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಆದೇಶ ನೀಡಿದ್ದಾರೆ. ಜಾಗ ಕೊಟ್ಟ ರೈತರಿಗೆ ಅತೀ ಕಡಿಮೆ ಬೆಲೆಯಲ್ಲಿ ಸೈಟು ಹಂಚಿಕೆ ಮಾಡಲು ಆದೇಶ ನೀಡಲಾಗಿದೆ. ಶಿವರಾಮ ಕಾರಂತ ಬಡಾವಣೆಗೆ ಜಾಗ ನೀಡಿದ ರೈತರಿಗೆ ಪ್ರತಿ ಚದರ ಅಡಿಗೆ ಕೇವಲ 20 ರೂಪಾಯಿಯಲ್ಲಿ ನಿವೇಷನ ಹಂಚಿಕೆ ಮಾಡಲಾಗುತ್ತಿದೆ. ಮೊದಲು ನಿಗದಿ ಮಾಡಿದ್ದ ಬೆಲೆಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;h2&gt;ಪ್ರತಿ ಚದರ ಅಡಿ ವೆಚ್ಚ 20 ರೂಪಾಯಿ&lt;/h2&gt;&lt;p&gt;ಶಿವರಾಮ ಕಾರಂತ ಬಡಾವಣೆಗೆ ಬೆಂಗಳೂರು ಉತ್ತರದ ಆವಲಹಳ್ಳಿ, ರಾಮಗೊಂಡನಹಳ್ಳಿ ಸೇರಿದಂತೆ 17 ಹಳ್ಳಿಗಳ ಜಾಗ ವಶಕ್ಕೆ ಪಡೆಯಲಾಗಿತ್ತು. 3069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಾಣ ಮಾಡಲಾಗಿದೆ. 3200 ರೈತರು ಭೂಮಿ ನೀಡಿದ್ದಾರೆ. ಇದೀಗ ಈ ರೈತರಿಗೆ ಪ್ರತಿ ಚದರ ಅಡಿಗೆ 20 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲಾಗುತ್ತದೆ. ಈ ಮೂಲಕ ಭೂಮಿ ನೀಡಿದ ರೈತರು ಕೈಗೆಟುಕುವ ದರದಲ್ಲಿ ನಿವೇಷನ ಪಡೆಯಲು ಸಾಧ್ಯವಾಗಲಿದೆ.&lt;/p&gt;&lt;p&gt;ಜಾಗ ನೀಡಿದ ರೈತರಿಗೆ ಪ್ರತಿ ಚದರ ಅಡಿಗೆ 50 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲು ಬಿಡಿಎ ಮುಂದಾಗಿತ್ತು. ಆದರೆ 50 ರೂಪಾಯಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ತಮ್ಮ ಜಮೀನು ಬಿಟ್ಟುಕೊಟ್ಟು ಇದೀಗ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರ ನಡುವೆ 50 ರೂಪಾಯಿ ವೆಚ್ಚದಲ್ಲಿ ಖರೀದಿ ದುಬಾರಿಯಾಗಲಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಈ ಕುರಿತು ಬಿಡಿಎ ಅಧಿಕಾರಿಗಳು ಹಾಗೂ ರೈತರ ಜೊತೆ ಸಭೆ ಮಾಡಿದ್ದಾರೆ. ಬಳಿಕ 20 ರೂಪಾಯಿಗೆ ನಿಗದಿ ಮಾಡಿದ್ದಾರೆ. ಪ್ರತಿ ಚದರ ಅಡಿಗೆ 20 ರೂಪಾಯಿಯಂತೆ ರೈತರಿಗೆ ಸೈಟ್ ನೀಡಲು ಸೂಚನೆ ನೀಡಲಾಗಿದೆ.&lt;/p&gt;&lt;h2&gt;ಸಾರ್ವಜನಿಕರಿಗೆ ಸೈಟ್ ಖರೀದಿ ಬೆಲೆ ಎಷ್ಟು?&lt;/h2&gt;&lt;p&gt;ಭೂಮಿ ನೀಡಿದ ರೈತರಿಗೆ ಮಾತ್ರ ಪ್ರತಿ ಚದರ ಅಡಿಗೆ 20 ರೂಪಾಯಿ ವೆಚ್ಚದಲ್ಲಿ ಸೈಟ್ ನೀಡಲಾಗುತ್ತದೆ. ಆದರೆ ಖಾಸಗಿ, ಸಾರ್ವಜನಿಕರ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಾಗ ಕೊಟ್ಟ ರೈತರಿಗೆ ಮಾತ್ರ ದರ ಇಳಿಕೆ ಮಾಡಿ ನಿವೇಷ ಹಂಚಿಕೆಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರು, ಇತರ ಖಾಸಗಿ ನಿವೇಷ ಖರೀದಿಗೆ ಪ್ರತಿ ಚದರ ಅಡಿಗೆ 6000 ರೂಪಾಯಿ ನಿಗದಿ ಮಾಡಲಾಗಿದೆ. ಕಾರಂತ ಬಡಾವಣೆ ಅಭಿವೃದ್ಧಿ ಕಾಮಗಾರಿ ವೇಳೆ ಬೆಲೆ 4999 ರೂಪಾಯಿ ಇತ್ತು. ಇದೀಗ ಏರಿಕೆಯಾಗಿದೆ.&lt;/p&gt;&lt;h2&gt;18 ಸಾವಿರ ನಿಷೇಷ ರೈತರಿಗೆ ಮೀಸಲು&lt;/h2&gt;&lt;p&gt;ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3200 ರೈತರಿಗೆ 18 ಸಾವಿರ ನಿವೇಷನಗಳನ್ನು ಮೀಸಲಿಡಲಾಗಿದೆ. ಇಧೀಗ ಕಡಿಮೆ ಬೆಲೆಯಲ್ಲಿ ನಿವೇಷನ ಖರೀದಿಸುವ ಅವಕಾಶವನ್ನು ರೈತರು ಪಡೆದುಕೊಂಡಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-rural/good-news-for-farmers-who-gave-land-for-shivaram-karanth-layout-site-prices-cut/articleshow-8b402ct"/>
        </item>
        <item>
            <title><![CDATA[ಹಡಗಿನಷ್ಟೇ ಅಗ್ಗ, ವಿಮಾನದಷ್ಟೇ ವೇಗ: ನೀರಿನ ಮೇಲೆಯೇ ಲ್ಯಾಂಡಿಂಗ್, ಶಕ್ತಿಶಾಲಿ ಯುರೇಕಾಗೆ ಬೆಂಗಳೂರಿನ ಕಂಪನಿ ಚಾಲನೆ!]]></title>
            <link>https://kannada.asianetnews.com/karnataka-districts/bengaluru-startup-aspera-unveils-eureka-autonomous-amphibious-freight-aircraft-for-faster-global-cargo-gdp/articleshow-8vn25o4</link>
            <guid isPermaLink="true">https://kannada.asianetnews.com/karnataka-districts/bengaluru-startup-aspera-unveils-eureka-autonomous-amphibious-freight-aircraft-for-faster-global-cargo-gdp/articleshow-8vn25o4</guid>
            <pubDate>Sun, 30 Aug 2026 16:33:43 +0530</pubDate>
            <description><![CDATA[ಬೆಂಗಳೂರಿನ ಆಸ್ಪೆರಾ ಇಂಡಸ್ಟ್ರೀಸ್ 'ಯುರೇಕಾ' ಎಂಬ ಸ್ವಾಯತ್ತ ಉಭಯಚರ ಸರಕು ಸಾಗಣೆ ವಿಮಾನವನ್ನು ಅನಾವರಣಗೊಳಿಸಿದೆ. ಇದು ಸಮುದ್ರಕ್ಕಿಂತ ವೇಗವಾಗಿ ಮತ್ತು ಸಾಂಪ್ರದಾಯಿಕ ವಾಯು ಸಾಗಣೆಗಿಂತ ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ತಲುಪಿಸುವ ಗುರಿ ಹೊಂದಿದೆ. ನೀರನ್ನೇ ರನ್&zwnj;ವೇ ಆಗಿ ಬಳಸುವ ಈ ವಿಮಾನವು ಸಾಗಣೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m195avw8agtbz8qzhm8mqgmk,imgname-aspera-industries-eureka-drone-1788087725960.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮೂಲದ ವಾಯುಯಾನ ಸ್ಟಾರ್ಟ್&zwnj;ಅಪ್ ಆಸ್ಪೆರಾ ಇಂಡಸ್ಟ್ರೀಸ್ (Aspera Industries) ಸರಕು ಸಾಗಣೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಜ್ಜಾಗಿದೆ. ಸಾಂಪ್ರದಾಯಿಕ ವಾಯು ರವಾನೆಗಿಂತ ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಸಮುದ್ರ ಮಾರ್ಗಕ್ಕಿಂತ ಹಲವು ಪಟ್ಟು ವೇಗವಾಗಿ ಸರಕು ತಲುಪಿಸಲು ವಿನ್ಯಾಸಗೊಳಿಸಲಾದ &lsquo;ಯುರೇಕಾ&rsquo; (Eureka) ಎಂಬ ಸ್ವಾಯತ್ತ ಉಭಯಚರ ಸರಕು ಸಾಗಣೆ ವಿಮಾನವನ್ನು ಕಂಪನಿಯು ಅನಾವರಣಗೊಳಿಸಿದೆ.&lt;/p&gt;&lt;p&gt;ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಸ್ಪೆರಾ ಇಂಡಸ್ಟ್ರೀಸ್&zwnj;ನ ಸಂಸ್ಥಾಪಕಿ ಮತ್ತು ಸಿಇಒ ಖುಷಿ ಮಿತ್ತಲ್ ಈ ನವೀನ ತಂತ್ರಜ್ಞಾನವನ್ನು ಘೋಷಿಸಿದರು. ಯುರೇಕಾ ವಿಮಾನವು ನೀರಿನ ಮೇಲೆ ಸುಲಭವಾಗಿ ಹಾರಾಟ ನಡೆಸಲು ಮತ್ತು ಲ್ಯಾಂಡಿಂಗ್ ಆಗಲು ಸಾಮರ್ಥ್ಯ ಹೊಂದಿದ್ದು, ಸರಕು ತಲುಪಿಸುವ ಸಮಯವನ್ನು ವಾರಗಳಿಂದ ಕೇವಲ ಗಂಟೆಗಳಿಗೆ ಇಳಿಸುವ ಗುರಿ ಹೊಂದಿದೆ.&lt;/p&gt;&lt;h2&gt;ಜಾಗತಿಕ ವ್ಯಾಪಾರ ಮತ್ತು ಪ್ರಸ್ತುತ ಸವಾಲುಗಳು&lt;/h2&gt;&lt;p&gt;ಇಂದಿನ ಜಾಗತಿಕ ಸರಕು ಸಾಗಣೆ ವ್ಯವಸ್ಥೆಯ ಕುರಿತು ಮಾತನಾಡಿದ ಖುಷಿ ಮಿತ್ತಲ್, &quot;ವರ್ಷಗಳಿಂದ ನಾವು ವಿಮಾನಯಾನ ಕ್ಷಮತೆಯ ಮಿತಿಗಳನ್ನು ಹೆಚ್ಚಿಸುತ್ತಿದ್ದರೂ, ಸರಕು ಸಾಗಣೆಯ ವಿಷಯದಲ್ಲಿ ಇಂದಿಗೂ ಸವಾಲುಗಳು ಮುಂದುವರಿದಿವೆ. ಸಾಗರ ಮಾರ್ಗದ ಮೂಲಕ ರವಾನಿಸಿದರೆ ವಾರಗಟ್ಟಲೆ ಸಮಯ ಹಿಡಿಯುತ್ತದೆ; ಅದೇ ವಾಯು ಮಾರ್ಗವನ್ನು ಆಯ್ದುಕೊಂಡರೆ ವೆಚ್ಚ ಭಾರಿ ದುಬಾರಿಯಾಗುತ್ತದೆ,&quot; ಎಂದು ವಿವರಿಸಿದರು.&lt;/p&gt;&lt;p&gt;ವಿಶ್ವ ವ್ಯಾಪಾರದ ಸುಮಾರು ಶೇ. 80ರಷ್ಟು ಸರಕು ಪ್ರಸ್ತುತ ಸಮುದ್ರದ ಮೂಲಕವೇ ಸಾಗಣೆಯಾಗುತ್ತಿದ್ದು, ಇದು ಜಾಗತಿಕ ಜಿಡಿಪಿಯಲ್ಲಿ ಟ್ರಿಲಿಯನ್&zwnj;ಗಟ್ಟಲೆ ಡಾಲರ್ ಮೌಲ್ಯ ಹೊಂದಿದೆ. ಸಾಗಣೆ ವಿಳಂಬವನ್ನು ನಿಭಾಯಿಸಲು ಕಾರ್ಖಾನೆಗಳು 3ರಿಂದ 6 ವಾರಗಳ ಹೆಚ್ಚುವರಿ ದಾಸ್ತಾನನ್ನು (ಬಫರ್ ಸ್ಟಾಕ್) ಕಾಯ್ದಿರಿಸಬೇಕಾಗುತ್ತದೆ. ಜೊತೆಗೆ, ವಾಯು ಮಾರ್ಗದಲ್ಲಿ ಸರಕು ಸಾಗಣೆಯ ವೆಚ್ಚವು ಹಡಗಿನ ಸಾಗಣೆ ವೆಚ್ಚಕ್ಕಿಂತ ಸುಮಾರು 20 ಪಟ್ಟು ಹೆಚ್ಚಿರುತ್ತದೆ. ಈ ವೆಚ್ಚವನ್ನು ತಗ್ಗಿಸುವುದು ಒಂದು ಎಂಜಿನಿಯರಿಂಗ್ ಸವಾಲಾಗಿದೆ ಎಂದು ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;&lsquo;ಯುರೇಕಾ&rsquo; ವಿಮಾನದ ವೈಶಿಷ್ಟ್ಯಗಳು ಮತ್ತು ಸಾಗರ ಮಾರ್ಗದ ಆಯ್ಕೆ&lt;/h2&gt;&lt;p&gt;ಯುರೇಕಾವನ್ನು ಸಮುದ್ರ ಮಟ್ಟದಿಂದ 6,500 ಅಡಿ ಎತ್ತರದಲ್ಲಿ 1,000 ಕೆಜಿ (1 ಟನ್) ತೂಕದ ಪೇಲೋಡ್ ಅನ್ನು ಸ್ವಾಯತ್ತವಾಗಿ ಸಾಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಒಮ್ಮೆ ಚಲಿಸಿದರೆ 2,000 ಕಿಲೋಮೀಟರ್ ವ್ಯಾಪ್ತಿಯವರೆಗೆ ಹಾರುವ ಸಾಮರ್ಥ್ಯ ಹೊಂದಿದೆ.&lt;/p&gt;&lt;p&gt;ಪ್ರಪಂಚದ 193 ದೇಶಗಳಲ್ಲಿ 150 ದೇಶಗಳು ಸುದೀರ್ಘ ಕರಾವಳಿಯನ್ನು ಹೊಂದಿವೆ. ಅಲ್ಲದೆ, ಜಾಗತಿಕ ಪ್ರಮುಖ ನಗರಗಳು, ಬಂದರುಗಳು ಮತ್ತು ಉತ್ಪಾದನಾ ಘಟಕಗಳು ಐತಿಹಾಸಿಕವಾಗಿಯೇ ಜಲಮೂಲಗಳ ಬಳಿ ನಿರ್ಮಾಣಗೊಂಡಿವೆ. ಭೂಮಿಯ ಶೇ. 71ರಷ್ಟು ಭಾಗವನ್ನು ಆವರಿಸಿರುವ ನೀರನ್ನೇ ರನ್&zwnj;ವೇ ಆಗಿ ಬಳಸುವುದರಿಂದ ಹೊಸ ವಿಮಾನ ನಿಲ್ದಾಣಗಳು ಅಥವಾ ಹೆಚ್ಚುವರಿ ಮೂಲಸೌಕರ್ಯ ನಿರ್ಮಾಣದ ಅಗತ್ಯವಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.&lt;/p&gt;&lt;p&gt;1950ರ ದಶಕದ ಹಳೆಯ ಸೀಪ್ಲೇನ್&zwnj;ಗಳು 'ಮೆಟ್ಟಿಲು ಮಾದರಿಯ ಹಲ್&zwnj;' ಹೊಂದಿದ್ದು, ಅವು ಹಾರಾಟದ ಸಮಯದಲ್ಲಿ ಗಾಳಿಯ ಎಳೆತವನ್ನು ಹೆಚ್ಚಿಸುತ್ತಿದ್ದವು. ಯುರೇಕಾ ವಿಮಾನದಲ್ಲಿ ಈ ಲೋಪವನ್ನು ಸರಿಪಡಿಸಲಾಗಿದ್ದು, ಹಿಂತೆಗೆದುಕೊಳ್ಳಬಹುದಾದ ಹೈಡ್ರೋಫಾಯಿಲ್&zwnj; ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ವಿಮಾನವು ನೀರಿನ ಮೇಲೆ ಸುಲಭವಾಗಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಆಗಲು ನೆರವಾಗುತ್ತದೆ.&lt;/p&gt;&lt;h2&gt;ಸಾಗಣೆ ವೆಚ್ಚದಲ್ಲಿ ಭಾರಿ ಇಳಿಕೆಯ ಗುರಿ&lt;/h2&gt;&lt;p&gt;ಆಸ್ಪೆರಾ ಸಂಸ್ಥೆಯ ಪ್ರಕಾರ, ಯುರೇಕಾದ ಆರಂಭಿಕ ಹಂತದ ಹಾರಾಟದಲ್ಲೇ ಪ್ರತಿ ಟನ್-ಕಿಲೋಮೀಟರ್&zwnj;ಗೆ ಸರಕು ರವಾನೆ ವೆಚ್ಚವನ್ನು $1ಕ್ಕಿಂತ (ಸುಮಾರು ₹83) ಕಡಿಮೆ ಮಾಡುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ವಿಮಾನಗಳ ಸಂಖ್ಯೆ ಹೆಚ್ಚಿದಂತೆ ಈ ವೆಚ್ಚವು 50 ಸೆಂಟ್ಸ್&zwnj;ಗಿಂತ (ಸುಮಾರು ₹41) ಕೆಳಕ್ಕಿಳಿಯುವ ನಿರೀಕ್ಷೆಯಿದೆ.&lt;/p&gt;&lt;p&gt;ಈ ಮಟ್ಟಕ್ಕೆ ವೆಚ್ಚ ಕಡಿಮೆಯಾದರೆ, ತುರ್ತು ಔಷಧಗಳು, ಬೇಗನೆ ಹಾಳಾಗುವ ವಸ್ತುಗಳು ಮತ್ತು ದುಬಾರಿ ಸರಕುಗಳನ್ನು ತಲುಪಿಸಲು ವಾಯು ಸಾಗಣೆ ಕೇವಲ ಐಷಾರಾಮಿ ಆಯ್ಕೆಯಾಗಿ ಉಳಿಯದೆ, ಎಲ್ಲರಿಗೂ ಲಭ್ಯವಾಗುವ ಪ್ರಾಥಮಿಕ ಸಾಗಣೆ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ. &quot;ಹಾರಾಟ ನಡೆಸುವುದು ಐಷಾರಾಮಿಯಾಗುವುದಕ್ಕಿಂತ, ಹಾರಾಟ ನಡೆಸದಿರುವುದೇ ಹೆಚ್ಚು ನಷ್ಟ ಉಂಟುಮಾಡುವಂತಾಗಬೇಕು. ಆ ರೀತಿಯ ಜಾಗತಿಕ ಸಾಗಣೆ ವಾತಾವರಣ ನಿರ್ಮಿಸುವುದೇ ನಮ್ಮ ಪ್ರಮುಖ ಧ್ಯೇಯ,&quot; ಎಂದು ಖುಷಿ ಮಿತ್ತಲ್ ಹೇಳಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-startup-aspera-unveils-eureka-autonomous-amphibious-freight-aircraft-for-faster-global-cargo-gdp/articleshow-8vn25o4"/>
        </item>
        <item>
            <title><![CDATA[ಮಂತ್ರ ಮಾಂಗಲ್ಯ ಮಾದರಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ; ಪ್ರೀತಿ, ಸಮಾನತೆ, ಜವಾಬ್ದಾರಿಗಳ ಪ್ರಮಾಣ ವಚನ]]></title>
            <link>https://kannada.asianetnews.com/karnataka-districts/doddaballapur-couple-got-married-in-the-kuvempu-s-mantra-mangalya-style-mrq/articleshow-9xwk0s3</link>
            <guid isPermaLink="true">https://kannada.asianetnews.com/karnataka-districts/doddaballapur-couple-got-married-in-the-kuvempu-s-mantra-mangalya-style-mrq/articleshow-9xwk0s3</guid>
            <pubDate>Wed, 26 Aug 2026 06:40:43 +0530</pubDate>
            <description><![CDATA[&lt;p&gt;ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆಯಡಿ ಸರಳ ವಿವಾಹವೊಂದು ಜರುಗಿತು. ಈ ಪದ್ಧತಿಯು ಜಾತಿ, ಧರ್ಮ, ಆಡಂಬರಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವುದನ್ನು ಗಣ್ಯರು ವಿವರಿಸಿದರು. ಇದೇ ಸಂದರ್ಭದಲ್ಲಿ ವಧು ರಚಿಸಿದ ಕವನ ಸಂಕಲನವನ್ನೂ ಬಿಡುಗಡೆ ಮಾಡಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0xsx1m7z35m4138y7dh2hfm,imgname-mantra-mangalya-1787706640007.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೊಡ್ಡಬಳ್ಳಾಪುರ: &lt;/strong&gt;ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಮೂಢನಂಬಿಕೆ ರಹಿತ ವಿವಾಹ ಪದ್ಧತಿಯಾಗಿದೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು. ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ಸಮೀಪವಿರುವ ಮಾಡೇಶ್ವರ ಗ್ರಾಮದ ಹಳ್ಳಿ ಮಂಟಪದಲ್ಲಿ ನಡೆದ ಸಿ.ಎಚ್. ಭರತ್ ಕುಮಾರ್ ಮತ್ತು ಕೆ.ಟಿ.ಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು- ವರರಿಗೆ ಮಂತ್ರ ಮಾಂಗಲ್ಯ ಬೋಧನೆ ಮಾಡಿ ಮಾತನಾಡಿದರು.&lt;/p&gt;&lt;h2&gt;&lt;strong&gt;ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ&lt;/strong&gt;&lt;/h2&gt;&lt;p&gt;ಜಾತಿ, ಧರ್ಮ, ಅಡಂಬರ ಹಾಗೂ ಪುರೋಹಿತಶಾಹಿ ಆಚರಣೆಗಳನ್ನು ಮೀರಿ ನಿಂತ ಮಂತ್ರ ಮಾಂಗಲ್ಯ ಮದುವೆ ಪದ್ಧತಿಯು ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ವಧು-ವರರು ಕನ್ನಡದಲ್ಲೇ ಪರಸ್ಪರ ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ ಸ್ವೀಕರಿಸುವುದು ಮಂತ್ರ ಮಾಂಗಲ್ಯದ ವಿಶೇಷವಾಗಿದೆ ಎಂದರು.&lt;/p&gt;&lt;p&gt;ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮನುಷ್ಯತ್ವವೇ ದೊಡ್ಡ ಧರ್ಮವೆಂಬ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕುವೆಂಪು ಅವರ ವಿಚಾರಗಳು ದಾರಿ ಮಾಡಿಕೊಡುತ್ತದೆ ಎಂದರು.&lt;/p&gt;&lt;p&gt;ಕೆ.ಟಿ.ಲತಾ ಅವರು ರಚಿಸಿರುವ ನಿನ್ನನ್ನೇಕೆ ಆಯ್ದುಕೊಂಡೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಇಂದಿರಾ ಕೃಷ್ಣಪ್ಪ, ಕಾವ್ಯದ ಭಾಷೆ ಮತ್ತು ಭಾವವು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಿರಬೇಕು. ಸಾಮಾನ್ಯ ಜನರ ನೋವು-ನಲಿವು, ಬದುಕು ಹಾಗೂ ಸಾಮಾಜಿಕ ಸ್ಪಂದನೆಗೆ ಕನ್ನಡಿಯಾಗಬೇಕು ಎಂದರು.&lt;/p&gt;&lt;p&gt;ಬುದ್ಧ- ಬಸವ- ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ), ಲೇಖಕ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ವಧು ವರರ ಕುಟುಂಬದವರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ&lt;/strong&gt;&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/doddaballapur-couple-got-married-in-the-kuvempu-s-mantra-mangalya-style-mrq/articleshow-9xwk0s3"/>
        </item>
        <item>
            <title><![CDATA[VB-G RAM G: ಹೊಟ್ಟೆಗೆ ಹಿಟ್ಟಿಲ್ಲ, ಕೈಗೆ ಕೆಲಸವಿಲ್ಲ; ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕೂಲಿ ಕಾರ್ಮಿಕರು!]]></title>
            <link>https://kannada.asianetnews.com/karnataka-districts/vb-g-ram-g-scheme-karnataka-rural-employment-crisis-mgnrega-workers-wage-delay-bmk/articleshow-a71ch3q</link>
            <guid isPermaLink="true">https://kannada.asianetnews.com/karnataka-districts/vb-g-ram-g-scheme-karnataka-rural-employment-crisis-mgnrega-workers-wage-delay-bmk/articleshow-a71ch3q</guid>
            <pubDate>Wed, 26 Aug 2026 17:14:17 +0530</pubDate>
            <description><![CDATA[ಜುಲೈ 1 ರಿಂದ ಜಾರಿಗೆ ಬಂದ 'ವಿಕ್ಸಿತ್ ಭಾರತ್ ಉದ್ಯೋಗ ಮಿಷನ್-ಗ್ರಾಮೀಣ' ಯೋಜನೆಯು, ಹಿಂದಿನ ಉದ್ಯೋಗ ಖಾತರಿ ಯೋಜನೆಯ ಸ್ಥಾನವನ್ನು ತುಂಬುವಲ್ಲಿ ವಿಫಲವಾಗಿದೆ. ಆಡಳಿತಾತ್ಮಕ ಗೊಂದಲ, ಅನುದಾನದ ಕೊರತೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ವಲಸೆಯ ಭೀತಿ ಎದುರಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0yy2270eb3tqjqqcqzz1njv,imgname-vb-g-ram-g-1787744553184.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (MGNREGA) ಯೋಜನೆಯ ಜಾಗಕ್ಕೆ ಜುಲೈ 1 ರಿಂದ ಜಾರಿಗೆ ಬಂದಿರುವ 'ವಿಕ್ಸಿತ್ ಭಾರತ್ ಉದ್ಯೋಗ ಮತ್ತು ಆಜೀವಿಕಾ ಮಿಷನ್-ಗ್ರಾಮೀಣ' (VB-G RAM G) ಯೋಜನೆ ಕಾಗದದಲ್ಲಷ್ಟೇ ಸದ್ದು ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಅನುಷ್ಠಾನದ ಕುರಿತು ಅಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲದಿರುವುದು ಮತ್ತು ಆಡಳಿತಾತ್ಮಕ ದೌರ್ಭಲ್ಯದಿಂದಾಗಿ ಬಡ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;h2&gt;&lt;strong&gt;ದಿ ಹಿಂದೂ ವರದಿ ಪ್ರಕಾರ ಕರ್ನಾಟಕದ ಪ್ರಮುಖ ಅಂಕಿ-ಅಂಶಗಳು!&lt;/strong&gt;&lt;/h2&gt;&lt;p&gt;&lt;strong&gt;ಗ್ರಾಮ ಪಂಚಾಯತಿಗಳು: &lt;/strong&gt;5,958&lt;/p&gt;&lt;p&gt;&lt;strong&gt;ಒಟ್ಟು ಜಾಬ್ ಕಾರ್ಡ್&zwnj;ಗಳು;&lt;/strong&gt; 69.51 ಲಕ್ಷ | ಸಕ್ರಿಯ ಜಾಬ್ ಕಾರ್ಡ್&zwnj;ಗಳು: 36.94 ಲಕ್ಷ&lt;/p&gt;&lt;p&gt;&lt;strong&gt;ಒಟ್ಟು ನೋಂದಾಯಿತ ಕಾರ್ಮಿಕರು;&lt;/strong&gt; 1.44 ಕೋಟಿ | ಸಕ್ರಿಯ ಕಾರ್ಮಿಕರು: 63.62 ಲಕ್ಷ&lt;/p&gt;&lt;p&gt;&lt;strong&gt;ದೈನಂದಿನ ಸರಾಸರಿ ಕೂಲಿ;&lt;/strong&gt; ₹336.04&lt;/p&gt;&lt;p&gt;&lt;strong&gt;ದೈಹಿಕ ವಿಕಲಚೇತನ ಉದ್ಯೋಗಿಗಳು:&lt;/strong&gt; 4,151&lt;/p&gt;&lt;p&gt;&lt;strong&gt;ಪ್ರತಿ ಕುಟುಂಬಕ್ಕೆ ದೊರೆತ ಸರಾಸರಿ ಉದ್ಯೋಗ ದಿನಗಳು;&lt;/strong&gt; ಕೇವಲ 11.67 ದಿನಗಳು&lt;/p&gt;&lt;p&gt;&lt;strong&gt;ಕೈಗೆತ್ತಿಕೊಂಡ ಒಟ್ಟು ಕಾಮಗಾರಿಗಳು:&lt;/strong&gt; 4.28 ಲಕ್ಷ (ಪ್ರಗತಿಯಲ್ಲಿರುವ ಕಾಮಗಾರಿಗಳು; 4.22 ಲಕ್ಷ, ಪೂರ್ಣಗೊಂಡವು: ಕೇವಲ 6,768)&lt;/p&gt;&lt;p&gt;&lt;strong&gt;ಶೂನ್ಯ ವೆಚ್ಚ ದಾಖಲಿಸಿದ ಗ್ರಾಮ ಪಂಚಾಯತಿಗಳು:&lt;/strong&gt; 805&lt;/p&gt;&lt;h2&gt;&lt;strong&gt;ಸಾಮಾನ್ಯ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳು!&lt;/strong&gt;&lt;/h2&gt;&lt;h3&gt;&lt;strong&gt;ಕೂಲಿಯ ಅಭಾವ ಹಾಗೂ ಕಾಯುವಿಕೆ!&lt;/strong&gt;&lt;/h3&gt;&lt;p&gt;ಹಳೆಯ ಉದ್ಯೋಗ ಖಾತರಿ ಯೋಜನೆಯು ಸಂಪೂರ್ಣವಾಗಿ ಕಾರ್ಮಿಕರ ಬೇಡಿಕೆ ಆಧಾರಿತವಾಗಿತ್ತು ಎಂದು ಇಂದು ಕಾರ್ಮಿಕರು ಹೇಳುತ್ತಿದ್ದಾರೆ. ಆದರೆ ಹೊಸ ಯೋಜನೆಯಡಿ ಕೇಂದ್ರದಿಂದ ಅನುಮೋದನೆ ಮತ್ತು ನಿಧಿ ಬಿಡುಗಡೆಯಾಗುವವರೆಗೆ ಪಂಚಾಯತಿಗಳು ಕೆಲಸ ಆರಂಭಿಸುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಉದ್ಯೋಗ ಸಿಗದೆ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕಡಿಮೆ ಮಾನವ ದಿನಗಳು!&lt;/strong&gt;&lt;/h3&gt;&lt;p&gt;ಎಲ್ ನಿನೋ ಪೀಡಿತ ಬರಗಾಲದಲ್ಲೂ ಕಳೆದ ವರ್ಷ ಜುಲೈ ಮತ್ತು ಆಗಸ್ಟ್&zwnj;ನಲ್ಲಿ ರಾಜ್ಯದಲ್ಲಿ ಅನುಕ್ರಮವಾಗಿ 1.69 ಲಕ್ಷ ಹಾಗೂ 2.83 ಲಕ್ಷ ಕುಟುಂಬಗಳಿಗೆ ಕೆಲಸ ಸಿಕ್ಕಿತ್ತು. ಆದರೆ ಈ ಬಾರಿ ನೂತನ ಯೋಜನೆಯಡಿ ಜುಲೈನಲ್ಲಿ 4.95 ಲಕ್ಷ ಕುಟುಂಬಗಳು ಹಾಗೂ ಆಗಸ್ಟ್&zwnj;ನಲ್ಲಿ ಕೇವಲ 2.78 ಲಕ್ಷ ಕುಟುಂಬಗಳಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಮಾನವ ದಿನಗಳ ಸೃಷ್ಟಿ 61.48 ಲಕ್ಷದಿಂದ 17.98 ಲಕ್ಷಕ್ಕೆ ಹಾಗೂ 36.15 ಲಕ್ಷದಿಂದ 26.27 ಲಕ್ಷಕ್ಕೆ ಕುಸಿದಿದೆ.&lt;/p&gt;&lt;p&gt;ವಲಸೆಯ ಭೀತಿ: ಉದ್ಯೋಗದ ಅಭಾವದಿಂದಾಗಿ ಬೀದರ್, ಯಾದಗಿರಿ, ರಾಯಚೂರು, ಕಲಬುರಗಿಯಂತಹ ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಂದ ಬಡ ಶ್ರಮಿಕರು ಬೃಹತ್ ನಗರಗಳಿಗೆ ವಲಸೆ ಹೋಗುವ ಅನಿವಾರ್ಯತೆ ಎದುರಾಗಿದೆ.&lt;/p&gt;&lt;h2&gt;&lt;strong&gt;ಆಡಳಿತದ ದೌರ್ಭಲ್ಯ ಮತ್ತು ಲೋಪದೋಷಗಳು!&lt;/strong&gt;&lt;/h2&gt;&lt;h3&gt;&lt;strong&gt;ಅಧಿಕಾರಿಗಳ ಗೊಂದಲ ಮತ್ತು ಸಿದ್ಧತೆಯಿಲ್ಲದಿರುವಿಕೆ!&lt;/strong&gt;&lt;/h3&gt;&lt;p&gt;ಯೋಜನೆ ಜಾರಿಯಾಗಿ ಎರಡು ತಿಂಗಳಾದರೂ ಅಂತಿಮ ನಿಯಮಾವಳಿಗಳು ಹಾಗೂ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸ್ಪಷ್ಟತೆಯಿಲ್ಲ. ತಾಂತ್ರಿಕ ತೊಂದರೆಗಳು ಮತ್ತು ಸಮನ್ವಯದ ಕೊರತೆ: 'ಮಾಸ್ಟರ್ ರೋಲ್' ಸೃಷ್ಟಿಸಲು ತಾಂತ್ರಿಕ ಅಡೆತಡೆಗಳು ಎದುರಾಗುತ್ತಿವೆ. ಅಲ್ಲದೆ, ಪಂಚಾಯತ್ ರಾಜ್, ಎಂಜಿನಿಯರಿಂಗ್, ಅರಣ್ಯ ಮತ್ತು ನೀರಾವರಿ ಇಲಾಖೆಗಳ ನಡುವೆ ಸರಿಯಾದ ಸಮನ್ವಯವಿಲ್ಲ.&lt;/p&gt;&lt;h3&gt;&lt;strong&gt;ಕೇಂದ್ರ-ರಾಜ್ಯ ಅನುದಾನ ಹಂಚಿಕೆ ಗೊಂದಲ!&lt;/strong&gt;&lt;/h3&gt;&lt;p&gt;ಕೇಂದ್ರ ನತ್ತು ರಾಜ್ಯ ಸರ್ಕಾರದ ನಡುವಿನ ಅನುದಾನ ಹಂಚಿಕೆಯ ಪ್ರಮಾಣ ಬದಲಾಗಿದ್ದು, ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ. ಇದಲ್ಲದೇ ನಿಧಿ ಬಿಡುಗಡೆಯ ಹಂತದಲ್ಲಾಗುತ್ತಿರುವ ವಿಳಂಬದಿಂದಾಗಿ ದುಡಿದ ಕಾರ್ಮಿಕರಿಗೆ ಕೂಲಿ ಹಣ ಸಮಯಕ್ಕೆ ತಲುಪುತ್ತಿಲ್ಲ.&lt;/p&gt;&lt;h3&gt;&lt;strong&gt;ಕಾರ್ಮಿಕರ ಆಗ್ರಹವೇನು?&lt;/strong&gt;&lt;/h3&gt;&lt;p&gt;ಸರ್ಕಾರ ಮತ್ತು ಅಧಿಕಾರಿಗಳು ಬರೀ 'ತಾಂತ್ರಿಕ ದೋಷ' ಅಥವಾ 'ಮಾರ್ಗದರ್ಶಿ ಸೂತ್ರಗಳ ಕೊರತೆ' ಎಂದು ಸಬೂಬು ಹೇಳಿ ಕಾಲಹರಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ. ಕಾಗದದ ಮೇಲಿನ ತಾಂತ್ರಿಕ ಕಾರಣಗಳು ಬಡ ಕೂಲಿ ಕಾರ್ಮಿಕರ ಹಸಿವನ್ನುಂಗಿಸಲು ಸಾಧ್ಯವಿಲ್ಲ. ಯೋಜನೆಗಳು ಬದಲಾದಾಗ ಆರಂಭಿಕ ಸಮಸ್ಯೆಗಳು ಸಹಜವಾದರೂ, ಆಡಳಿತ ಯಂತ್ರವು ಕೇವಲ ಲೋಪಗಳನ್ನು ಎತ್ತಿ ತೋರಿಸುವ ಬದಲು ತಳಮಟ್ಟದಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಬೇಕು ಎಂದು ಕಾರ್ಮಿಕರು ಆಗ್ರಹಿಸುತ್ತಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/vb-g-ram-g-scheme-karnataka-rural-employment-crisis-mgnrega-workers-wage-delay-bmk/articleshow-a71ch3q"/>
        </item>
        <item>
            <title><![CDATA[ಬೆಂಗಳೂರು ಭೂ ಹಗರಣ: ಬರೋಬ್ಬರಿ ₹500 ಕೋಟಿ ಅಕ್ರಮ ಬಯಲು ಮಾಡಿದ ಲೋಕಾಯುಕ್ತ!]]></title>
            <link>https://kannada.asianetnews.com/karnataka-districts/bengaluru-land-scam-lokayukta-uncovers-rs-500-crore-fraud-involving-govt-software-and-digital-signature-misuse-gdp/articleshow-dr97bdh</link>
            <guid isPermaLink="true">https://kannada.asianetnews.com/karnataka-districts/bengaluru-land-scam-lokayukta-uncovers-rs-500-crore-fraud-involving-govt-software-and-digital-signature-misuse-gdp/articleshow-dr97bdh</guid>
            <pubDate>Fri, 21 Aug 2026 09:02:12 +0530</pubDate>
            <description><![CDATA[ಲೋಕಾಯುಕ್ತ ಸಂಸ್ಥೆಯು ದೇವನಹಳ್ಳಿಯಲ್ಲಿ ₹500 ಕೋಟಿ ಮೌಲ್ಯದ ಬೃಹತ್ ಭೂ ಹಗರಣವನ್ನು ಭೇದಿಸಿದೆ. ಸರ್ಕಾರಿ ಸಾಫ್ಟ್&zwnj;ವೇರ್ ಮತ್ತು ಡಿಜಿಟಲ್ ಸಹಿ ದುರ್ಬಳಕೆ ಮಾಡಿ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಎಸಿ ದುರ್ಗಾಶ್ರೀ ಪ್ರಮುಖ ಆರೋಪಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwjpwac1efee4yf0v117axvs,imgname----------------------95--1783039404417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು: &lt;/strong&gt;ಸರ್ಕಾರಿ ಸಾಫ್ಟ್&zwnj;ವೇರ್ ಹಾಗೂ ಡಿಜಿಟಲ್ ಸಹಿ ದುರ್ಬಳಕೆ ಮಾಡಿ ಬರೋಬ್ಬರಿ ₹500 ಕೋಟಿ ಮೌಲ್ಯದ 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿರುವ ಬೃಹತ್ ಭೂ ಹಗರಣವನ್ನು ಲೋಕಾಯುಕ್ತ ಸಂಸ್ಥೆ ಭೇದಿಸಿದೆ.&lt;/p&gt;&lt;p&gt;ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಶೋಧನಾ ವಾರಂಟ್ ಹೊರಡಿಸಿದ್ದರು.&lt;/p&gt;&lt;p&gt;ಲೋಕಾಯುಕ್ತ ಪೊಲೀಸ್ ಇನ್&zwnj;ಸ್ಪೆಕ್ಟರ್&zwnj;ಗಳಾದ ಉಮಾಮಹೇಶ್ ಮತ್ತು ಹಾಲಪ್ಪ ವೈ.ಬಾಲದಂಡಿ ಅವರ ತಂಡವು ದಿನಾಂಕ ಮೇ 7 ರಂದು ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ದೇವನಹಳ್ಳಿ ತಹಶೀಲ್ದಾರ್ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ದಾಖಲೆ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಮತ್ತು ಪ್ರಸನ್ನಹಳ್ಳಿ ಗ್ರಾಮಗಳಲ್ಲಿ (ಸರ್ವೇ ನಂಬರ್&zwnj; 84) 62.20 ಎಕರೆ ಖಾಸಗಿ ಜಮೀನನ್ನು ಅಕ್ರಮವಾಗಿ ಖಾತೆ ವರ್ಗಾವಣೆ ಮಾಡಿಕೊಡಲಾಗಿದೆ.&lt;/p&gt;&lt;p&gt;ಇದರ ಸರಕಾರಿ ಮೌಲ್ಯ 103.68 ಕೋಟಿ ರು. ಆದರೆ ಪ್ರಸ್ತುತ ಮಾರುಕಟ್ಟೆ ಮೌಲ್ಯ 500 ಕೋಟಿ ರು. ಆಗಿದ್ದು, ಎಕರೆಗೆ 8 ಕೋಟಿ ಬೆಲೆ ಇದೆ. ದೊಡ್ಡಬಳ್ಳಾಪುರ ಉಪವಿಭಾಗದ ಮಾಜಿ ಉಪವಿಭಾಗಾಧಿಕಾರಿ (ಎಸಿ) ದುರ್ಗಾಶ್ರೀ ಹಾಗೂ ಪ್ರಥಮ ದರ್ಜೆ ಸಹಾಯಕ ಮನೋಜ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;ಲೋಕಾಯುಕ್ತ ತನಿಖೆಯಲ್ಲಿ ಅಕ್ರಮ ಬಯಲು:&lt;/h2&gt;&lt;p&gt;ನಕಲಿ ಆದೇಶಗಳ ಸೃಷ್ಟಿಸಿ ಇ-ಆಫೀಸ್&zwnj;ನಲ್ಲಿ ಜನರೇಟ್ ಆಗದ ನಕಲಿ ಆದೇಶಗಳನ್ನು ಬೇರೆಡೆ ಸೃಷ್ಟಿಸಿ, ದೇವನಹಳ್ಳಿ ತಹಶೀಲ್ದಾರ್ ಅವರಿಗೆ &lsquo;ಭೂಮಿ&rsquo; ತಂತ್ರಾಂಶದಲ್ಲಿ ಸೇರ್ಪಡಿಸಲು ಕಳುಹಿಸಲಾಗಿತ್ತು. ಹೈಕೋರ್ಟ್ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಆ ನಕಲಿ ಆದೇಶಗಳಲ್ಲಿ ಉಲ್ಲೇಖಿಸಲಾಗಿದ್ದ ಹೈಕೋರ್ಟ್&zwnj;ನ ರಿಟ್ ಅರ್ಜಿ ಹಾಗೂ ಕೆಎಟಿ ಪ್ರಕರಣ ಸಂಖ್ಯೆಗಳು ಆನ್&zwnj;ಲೈನ್&zwnj;ನಲ್ಲಿ ಪರಿಶೀಲಿಸಿದಾಗ, ಅವು ಈ ಜಮೀನುಗಳಿಗೆ ಸಂಬಂಧಿಸಿಲ್ಲದಿರುವುದು ದೃಢಪಟ್ಟಿದೆ.&lt;/p&gt;&lt;p&gt;ಬಯೋಮೆಟ್ರಿಕ್ ಮತ್ತು ಡಿಜಿಟಲ್ ಸಹಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ವಿಷಯ ನಿರ್ವಾಹಕ ಮನೋಜ್ ತಮ್ಮ ಲಾಗಿನ್ ಮೂಲಕ ನಕಲಿ ದಾಖಲೆಗಳನ್ನು ಆರ್&zwnj;ಟಿಸಿ ಆ್ಯಪ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದ್ದ. ನಂತರ ಎಸಿ ದುರ್ಗಾಶ್ರೀ ಅವರು ತಮ್ಮ ಬಯೋಮೆಟ್ರಿಕ್ ಥಂಬ್ ಹಾಗೂ ಡಿಜಿಟಲ್ ಸಿಗ್ನೇಚರ್ ಬಳಸಿ ಅಕ್ರಮವಾಗಿ ಅನುಮೋದನೆ ನೀಡಿದ್ದರು.&lt;/p&gt;&lt;h2&gt;ಲ್ಯಾಪ್&zwnj;ಟಾಪ್ ಬಳಸಿ ಕೃತ್ಯ:&lt;/h2&gt;&lt;p&gt;ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಯಾವುದೇ ಅಧಿಕೃತ ಅರ್ಜಿ ಸ್ವೀಕೃತವಾಗದಿದ್ದರೂ ನೇರವಾಗಿ ಖಾತೆ ಬದಲಾವಣೆಗೆ ಕ್ರಮ ವಹಿಸಲಾಗಿದೆ. ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರು ಕಚೇರಿ ಕೆಲಸಗಳಿಗೆ ಅಧಿಕೃತ ಕಂಪ್ಯೂಟರ್ ಬದಲಿಗೆ ಖಾಸಗಿ ಲ್ಯಾಪ್&zwnj;ಟಾಪ್ ಬಳಸಿರುವುದು ಕಂಡುಬಂದಿದೆ.&lt;/p&gt;&lt;h2&gt;ಆರೋಪಿಗಳಿಗೆ ಖುದ್ದು ಹಾಜರಾತಿಗೆ ಆದೇಶ:&lt;/h2&gt;&lt;p&gt;ಸಾರ್ವಜನಿಕ ದಾಖಲೆಗಳನ್ನು ತಿರುಚಿ, ಸರ್ಕಾರಿ ವ್ಯವಸ್ಥೆಗೆ ಧಕ್ಕೆ ತಂದು ನೂರಾರು ಕೋಟಿ ರು. ಮೌಲ್ಯದ ಆಸ್ತಿ ಅಕ್ರಮ ವರ್ಗಾವಣೆ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿಗಳಾದ ಅಂದಿನ ಎಸಿ ದುರ್ಗಾಶ್ರೀ ಹಾಗೂ ಮನೋಜ್&zwnj;ನನ್ನು ಸೆ.22ಕ್ಕೆ ಲೋಕಾಯುಕ್ತ ಪೀಠದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ಉಪಲೋಕಾಯುಕ್ತರು ಆದೇಶಿಸಿದ್ದಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-land-scam-lokayukta-uncovers-rs-500-crore-fraud-involving-govt-software-and-digital-signature-misuse-gdp/articleshow-dr97bdh"/>
        </item>
        <item>
            <title><![CDATA[ಬೆಂಗಳೂರಿನಿಂದ 31 ಅಕ್ರಮ ಬಾಂಗ್ಲಾ ಪ್ರಜೆಗಳ ಗಡಿಪಾರು: ಎಸ್‌ಎಂವಿಟಿ ರೈಲು ಮೂಲಕ ಪ.ಬಂಗಾಳ ಗಡಿಗೆ ಸ್ಥಳಾಂತರ!]]></title>
            <link>https://kannada.asianetnews.com/gallery/bengaluru-urban/bengaluru-police-deport-31-illegal-bangladeshi-migrants-to-malda-via-smvt-train-sat-fa5e59e</link>
            <guid isPermaLink="true">https://kannada.asianetnews.com/gallery/bengaluru-urban/bengaluru-police-deport-31-illegal-bangladeshi-migrants-to-malda-via-smvt-train-sat-fa5e59e</guid>
            <pubDate>Mon, 31 Aug 2026 09:18:27 +0530</pubDate>
            <description><![CDATA[&lt;p&gt;ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು 'ಆಪರೇಷನ್ ಮುಕ್ತ' ಕಾರ್ಯಾಚರಣೆಯಡಿ ಪೊಲೀಸರು ಗಡಿಪಾರು ಮಾಡಿದ್ದಾರೆ. ಅವರನ್ನು ರೈಲಿನ ಮೂಲಕ ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಗೆ ಕಳುಹಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1aymssb7ecgnfrj7fckvtxa,imgname-bengaluru-illegal-bangladeshi-migrants-1788147820331.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು 'ಆಪರೇಷನ್ ಮುಕ್ತ' ಕಾರ್ಯಾಚರಣೆಯಡಿ ಪೊಲೀಸರು ಗಡಿಪಾರು ಮಾಡಿದ್ದಾರೆ. ಅವರನ್ನು ರೈಲಿನ ಮೂಲಕ ಪಶ್ಚಿಮ ಬಂಗಾಳದ ಬಾಂಗ್ಲಾ ಗಡಿಗೆ ಕಳುಹಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು (ಆ.31): ಬೆಂ&lt;/strong&gt;ಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸ್ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಇದರ ಭಾಗವಾಗಿ ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲ್ಪಟ್ಟಿದ್ದ ಒಟ್ಟು 31 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಇಂದು ಬೆಳಗಿನ ಜಾವ ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಗಡಿಪಾರು ಮಾಡಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ರೈಲು ಮೂಲಕ ಬಾಂಗ್ಲಾ ಗಡಿಗೆ ಸ್ಥಳಾಂತರ:&lt;/strong&gt;&lt;/p&gt;&lt;p&gt;ಬೆಂಗಳೂರಿನ ಎಸ್&zwnj;ಎಂವಿಟಿ (SMVT) ರೈಲ್ವೆ ಟರ್ಮಿನಲ್ ಮೂಲಕ ಸುಮಾರು 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ 31 ಅಕ್ರಮ ವಲಸಿಗರನ್ನು ಕರೆದೊಯ್ಯಲಾಗುತ್ತಿದೆ. ನಾಳೆ ಸಂಜೆ 5 ಗಂಟೆಗೆ ಈ ಪೊಲೀಸರ ತಂಡ ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳದ ಮಾಲ್ಡಾ ತಲುಪಲಿದೆ.&lt;/p&gt;&lt;img&gt;&lt;p&gt;ಕೇವಲ ರಾಜ್ಯದ ಗಡಿಯಿಂದ ಹೊರಹಾಕಿದರೆ ಇವರು ಪುನಃ ಬೆಂಗಳೂರಿಗೆ ಬಂದು ಸೇರಿಕೊಳ್ಳಬಹುದು ಎಂಬ ಕಾರಣಕ್ಕೆ, ಪೊಲೀಸರು ನೇರವಾಗಿ ಬಾಂಗ್ಲಾದೇಶದ ಗಡಿ ಭಾಗದವರೆಗೆ ಬಿಟ್ಟುಬರಲು ಮುಂದಾಗಿದ್ದಾರೆ. ಕಳೆದ ತಿಂಗಳು 'ಆಪರೇಷನ್ ಮುಕ್ತ' ಕಾರ್ಯಾಚರಣೆ ಆರಂಭಿಸಿದ್ದ ರಾಜ್ಯ ಪೊಲೀಸ್ ಇಲಾಖೆ, 105 ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿತ್ತು. ಸದ್ಯ ಮೊದಲ ಹಂತದಲ್ಲಿ 31 ಜನರನ್ನು ಗಡಿಪಾರು ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ:&lt;/strong&gt;&lt;/p&gt;&lt;p&gt;ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿರುವ ಕುರಿತು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ನಗರ ಒಂದರಲ್ಲೇ ಸುಮಾರು 2 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ ವ್ಯಕ್ತಪಡಿಸಿದ್ದರು. ಓಲೈಕೆ ರಾಜಕಾರಣಕ್ಕಾಗಿ ರಾಜ್ಯದ ಹಿತವನ್ನು ಬಲಿಕೊಡದೆ, ಅಕ್ರಮ ವಲಸಿಗರ ಪತ್ತೆ ಮತ್ತು ಗಡೀಪಾರಿಗೆ ತಕ್ಷಣವೇ 'ವಿಶೇಷ ಟಾಸ್ಕ್ ಫೋರ್ಸ್' ರಚನೆ ಮಾಡಬೇಕು ಎಂದು ಆರ್. ಅಶೋಕ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು.&lt;/p&gt;&lt;img&gt;&lt;p&gt;ಕಳೆದೊಂದು ಕೆಲವು ತಿಂಗಳಿಂದ ಬೆಂಗಳೂರು ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ನೂರಾರು ಶಂಕಿತ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ನಕಲಿ ಆಧಾರ್ ಕಾರ್ಡ್, ಪಾಸ್&zwnj;ಪೋರ್ಟ್ ಬಳಸಿಕೊಂಡು ಮಾನವ ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಇವರು, ಧೈರ್ಯವಾಗಿ ನ್ಯಾಯಾಲಯದಲ್ಲಿ ಜಾಮೀನು ಕೋರುತ್ತಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ ಎಂದು ಆಶೋಕ್ ಆತಂಕ ವ್ಯಕ್ತಪಡಿಸಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/bengaluru-urban/bengaluru-police-deport-31-illegal-bangladeshi-migrants-to-malda-via-smvt-train-sat-fa5e59e"/>
        </item>
        <item>
            <title><![CDATA[ಪಾಕಿಸ್ತಾನ್ ಗ್ಯಾಂಗ್‌ಸ್ಟರ್‌ಗಳ ಜೊತೆ ನಂಟು: ದೊಡ್ಡಬಳ್ಳಾಪುರದ ಎಸಿ ರಿಪೇರಿ ಮಾಡುತ್ತಿದ್ದವ ಅರೆಸ್ಟ್]]></title>
            <link>https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp</link>
            <guid isPermaLink="true">https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp</guid>
            <pubDate>Sun, 23 Aug 2026 05:28:23 +0530</pubDate>
            <description><![CDATA[&lt;p&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರದ ಸೈಯದ್ ಅಬೂಬಕರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್&zwnj;ವರ್ಕ್ ಜೊತೆ ಇನ್&zwnj;ಸ್ಟಾಗ್ರಾಂನಲ್ಲಿ ಸಂಪರ್ಕದಲ್ಲಿದ್ದ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0nxx3dsrvxpwgm2j6s6xk4c,imgname-----------------------2026-08-23t051626.671-1787442400697.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್&lt;/li&gt; &lt;li&gt;ದೊಡ್ಡಬಳ್ಳಾಪುರದಲ್ಲಿ ಎಸಿ ಮೆಕ್ಯಾನಿಕ್&zwnj;. ಬೆಂಗಳೂರಿನ ಮಸೀದಿಯೊಂದರಲ್ಲಿ ಬೋಧಕನಾಗಿ ಕೆಲಸ&lt;/li&gt; &lt;li&gt;2 ವರ್ಷದಿಂದ ಪಾಕ್&zwnj; ಗ್ಯಾಂಗ್&zwnj;ಸ್ಟರ್&zwnj; ಬುಟ್ಟಿ ನೆಟ್&zwnj;ವರ್ಕ್&zwnj; ಜತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕ&lt;/li&gt; &lt;li&gt;ಕೇರಳ, ದೆಹಲಿಗೆ ಹೋಗಿ ತರಬೇತಿ ಪಡೆದುಕೊಂಡು ಬಂದಿರುವ ಶಂಕೆ ಹಿನ್ನೆಲೆಯಲ್ಲಿ ಬಂಧನ&lt;/li&gt;&lt;/ul&gt;&lt;p&gt;--&lt;/p&gt;&lt;p&gt;&lt;strong&gt;ದೊಡ್ಡಬಳ್ಳಾಪುರ (ಆ.23) &lt;/strong&gt;ಪಾಕಿಸ್ತಾನ ಮೂಲದ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.&lt;/p&gt;&lt;p&gt;ದೊಡ್ಡಬಳ್ಳಾಪುರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ. ಕೌಂಟ&zwnj;ರ್ ಇಂಟಲಿಜೆನ್ಸ್ ಸೆಲ್ ಹಾಗೂ ಕೇಂದ್ರ ಗುಪ್ತಚರ ದಳ ಅಧಿಕಾರಿಗಳಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸೈಯದ್ ಅಬೂಬಕರ್&zwnj;ನನ್ನು ಬಂಧಿಸಿದ್ದಾರೆ.&lt;/p&gt;&lt;h2&gt;ಎರಡು ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಲಿಂಕ್&lt;/h2&gt;&lt;p&gt;ಪೊಲೀಸರ ಪ್ರಕಾರ, ಸೈಯದ್ ಅಬೂಬಕ&zwnj;ರ್ ಕಳೆದ 2 ವರ್ಷಗಳಿಂದ ಪಾಕಿಸ್ತಾನಿ ಗ್ಯಾಂಗ್&zwnj;ಸ್ಟರ್&zwnj;ಗಳ ಜೊತೆ ಇನ್&zwnj;ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಾಕಿಸ್ತಾನದ ಶಾಜದ್ ಬುಟ್ಟಿ ನೆಟ್&zwnj;ವರ್ಕ್ ಗ್ಯಾಂಗ್&zwnj;ಗೆ ಸಂಬಂಧಿಸಿದೆ ಎನ್ನಲಾದ ಇನ್&zwnj;ಸ್ಟಾಗ್ರಾಂ ಖಾತೆಯೊಂದರ ಮೂಲಕ ಆತ ಸಂಪರ್ಕ ಹೊಂದಿದ್ದ. ಗಣ್ಯ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಚಟುವಟಿಕೆಗಳಲ್ಲಿ ಈ ಪಾಕಿಸ್ತಾನಿ ಗ್ಯಾಂಗ್ ತೊಡಗಿಸಿಕೊಂಡಿದೆ ಎನ್ನಲಾಗಿದೆ.&lt;/p&gt;&lt;h2&gt;ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಮಾಡುತ್ತಿದ್ದ ಶಂಕಿತ&lt;/h2&gt;&lt;p&gt;&lsquo;Hammadmemon33320&rsquo; ಇನ್&zwnj;ಸ್ಟಾಗ್ರಾಂ ಖಾತೆಯ ಮೂಲಕ ಆರೋಪಿ ಸಂಪರ್ಕದಲ್ಲಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ತನ್ನ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳ ವಿವರಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ. ಈ ಮೂಲಕ ಪಾಕಿಸ್ತಾನದಲ್ಲಿರುವ ಗ್ಯಾಂಗ್ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆರೋಪ ಕೇಳಿಬಂದಿದೆ. ಸೈಯದ್ ಅಬೂಬಕರ್ ದೊಡ್ಡಬಳ್ಳಾಪುರದಲ್ಲಿ ಎಸಿ ರಿಪೇರಿ ಕೆಲಸ ಮಾಡಿಕೊಂಡಿದ್ದ. ಇದರ ಜೊತೆಗೆ ಬೆಂಗಳೂರಿನ ಮಸೀದಿಯೊಂದರಲ್ಲಿ ಪಾಠ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;ದೆಹಲಿ ಕೇರಳಕ್ಕೆ ತೆರಳಿ ಉಗ್ರ ತರಬೇತಿ&lt;/h3&gt;&lt;p&gt;ಗ್ಯಾಂಗ್ ಸದಸ್ಯರ ಸೂಚನೆಯಂತೆ ಆತ ಕೇರಳ ಹಾಗೂ ದೆಹಲಿಗೆ ತೆರಳಿ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ಚಟುವಟಿಕೆಗಳು ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗಿನ ಸಂಪರ್ಕದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ವಿರುದ್ಧ ಬಿಎನ್&zwnj;ಎಸ್ ಸೆಕ್ಷನ್ 113(3) ಹಾಗೂ 197(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;ಪ್ರಕರಣದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕವಿದೆಯೇ, ಆರೋಪಿ ಯಾವ ರೀತಿಯ ತರಬೇತಿ ಪಡೆದಿದ್ದ ಹಾಗೂ ಪಾಕಿಸ್ತಾನಿ ಗ್ಯಾಂಗ್&zwnj;ನೊಂದಿಗೆ ಆತನ ಸಂಪರ್ಕದ ಉದ್ದೇಶವೇನು ಎಂಬ ಬಗ್ಗೆ ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnatak-man-arrested-in-contact-pakistan-gangsters-via-instagram-links-doddaballapur-rav/articleshow-fmt3uyp"/>
        </item>
        <item>
            <title><![CDATA[ಬೆಂಗಳೂರಿನ 2  ರೈಲು ನಿಲ್ದಾಣಗಳಲ್ಲಿ 6 ಹೊಸ ಪ್ಲಾಟ್‌ಫಾರ್ಮ್, ₹560 ಕೋಟಿ ವೆಚ್ಚದ ಯೋಜನೆಗೆ ಗ್ರೀನ್ ಸಿಗ್ನಲ್!]]></title>
            <link>https://kannada.asianetnews.com/karnataka-districts/swr-approves-6-new-platforms-for-ksr-bengaluru-and-yeshwanthpur-stations-gdp/articleshow-g256z1a</link>
            <guid isPermaLink="true">https://kannada.asianetnews.com/karnataka-districts/swr-approves-6-new-platforms-for-ksr-bengaluru-and-yeshwanthpur-stations-gdp/articleshow-g256z1a</guid>
            <pubDate>Mon, 24 Aug 2026 10:33:07 +0530</pubDate>
            <description><![CDATA[ನೈಋತ್ಯ ರೈಲ್ವೆಯು ಬೆಂಗಳೂರಿನ ಕೆಎಸ್&zwnj;ಆರ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ವಿಸ್ತರಣೆಗೆ ಬೃಹತ್ ಯೋಜನೆ ರೂಪಿಸಿದೆ. ಈ ಯೋಜನೆಯಡಿ, ಕೆಎಸ್&zwnj;ಆರ್ ನಿಲ್ದಾಣದಲ್ಲಿ 2 ಮತ್ತು ಯಶವಂತಪುರದಲ್ಲಿ 4 ಹೊಸ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ನಿರ್ಮಿಸಲಾಗುವುದು, ಇದಕ್ಕೆ ರೈಲ್ವೆ ಮಂಡಳಿಯು ಅಧಿಕೃತ ಅನುಮೋದನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzbm7g4ap4k43pgd92r76vmt,imgname-ksr-bengaluru-railway-station-1786022969482.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರಾಜಧಾನಿಯ ಪ್ರಮುಖ ರೈಲ್ವೆ ನಿಲ್ದಾಣಗಳಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು ನಗರ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ನೈಋತ್ಯ ರೈಲ್ವೆ (SWR) ಬೃಹತ್ ಯೋಜನೆ ರೂಪಿಸಿದೆ. ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಹಾಗೂ ಹೊಸ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಎರಡೂ ನಿಲ್ದಾಣಗಳಲ್ಲಿ ಹೆಚ್ಚುವರಿ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ನಿರ್ಮಿಸಲು ರೈಲ್ವೆ ಮಂಡಳಿ ಅಧಿಕೃತ ಒಪ್ಪಿಗೆ ನೀಡಿದೆ.&lt;/p&gt;&lt;h2&gt;₹228 ಕೋಟಿ ವೆಚ್ಚದಲ್ಲಿ ಕೆಎಸ್&zwnj;ಆರ್ ನಿಲ್ದಾಣ ವಿಸ್ತರಣೆ&lt;/h2&gt;&lt;p&gt;ಕೆಎಸ್&zwnj;ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಮೊದಲ ಹಂತದ ಯಾರ್ಡ್ ಮರುವಿನ್ಯಾಸ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ ಎರಡನೇ ಹಂತದ ಕಾಮಗಾರಿಯ ಭಾಗವಾಗಿ ₹228 ಕೋಟಿ ಅಂದಾಜು ವೆಚ್ಚದಲ್ಲಿ 2 ಹೊಸ ಹೆಚ್ಚುವರಿ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ನಿರ್ಮಿಸಲು ನೈಋತ್ಯ ರೈಲ್ವೆ ಸಿದ್ಧತೆ ನಡೆಸಿದೆ. ಇದರಿಂದಾಗಿ ಸುದೀರ್ಘ ಅವಧಿಯಿಂದ ಎದುರಾಗುತ್ತಿದ್ದ ಪ್ಲಾಟ್&zwnj;ಫಾರ್ಮ್ ಕೊರತೆ ಸಮಸ್ಯೆಗೆ ಮುಕ್ತಿ ಸಿಗಲಿದೆ.&lt;/p&gt;&lt;p&gt;ಇದೀಗ ₹228 ಕೋಟಿ ವೆಚ್ಚದಲ್ಲಿ 11 ಮತ್ತು 12ನೇ 'ಐಲ್ಯಾಂಡ್ ಪ್ಲಾಟ್&zwnj;ಫಾರ್ಮ್&zwnj;ಗಳನ್ನು' ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ನೂತನ ಪ್ಲಾಟ್&zwnj;ಫಾರ್ಮ್&zwnj;ಗಳು ವಂದೇ ಭಾರತ್ ರೈಲುಗಳ ಅತ್ಯಾಧುನಿಕ ನಿರ್ವಹಣಾ ಸೌಲಭ್ಯ ಹಾಗೂ ವಿವಿಧ ಪ್ರಯಾಣಿಕ ಸ್ನೇಹಿ ಸವಲತ್ತುಗಳನ್ನು ಹೊಂದಿರಲಿವೆ.&lt;/p&gt;&lt;h2&gt;ಯಶವಂತಪುರಕ್ಕೆ ₹331.64 ಕೋಟಿ ವೆಚ್ಚದ ಮೆಗಾ ಪ್ಲಾನ್&lt;/h2&gt;&lt;p&gt;ಮತ್ತೊಂದೆಡೆ, ನಗರದ ಮತ್ತೊಂದು ಪ್ರಮುಖ ರೈಲ್ವೆ ಹಬ್ ಆಗಿರುವ ಯಶವಂತಪುರ ನಿಲ್ದಾಣವನ್ನು ವಿಸ್ತರಿಸಲು ₹331.64 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆಯಡಿ ಯಶವಂತಪುರದಲ್ಲಿ ಬರೋಬ್ಬರಿ 4 ಹೊಸ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ನಿರ್ಮಿಸಲಾಗುತ್ತದೆ. ಈ ವಿಸ್ತರಣೆಯಿಂದಾಗಿ ಯಶವಂತಪುರ ಮಾರ್ಗವಾಗಿ ಮೈಸೂರು ಭಾಗಕ್ಕೆ ಸಂಚರಿಸುವ ರೈಲುಗಳಿಗೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಿಲ್ದಾಣದ ಮೇಲಿನ ಒತ್ತಡ ಕೂಡ ಕಡಿಮೆಯಾಗಲಿದೆ.&lt;/p&gt;&lt;h2&gt;ಎಂಜಿ ಕಾಲೊನಿ ಭೂಸ್ವಾಧೀನ ಮತ್ತು ಮೂಲಸೌಕರ್ಯ ವೃದ್ಧಿ&lt;/h2&gt;&lt;p&gt;ಯಶವಂತಪುರ ನಿಲ್ದಾಣದ ವಿಸ್ತರಣೆಗಾಗಿ ಸಮೀಪದ 'ಎಂಜಿ ಕಾಲೊನಿ' ಪ್ರದೇಶದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಭೂಸ್ವಾಧೀನದ ಬಳಿಕ ಆ ಜಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬಹುಮಹಡಿ ಕಟ್ಟಡ ಹಾಗೂ ಪ್ರಯಾಣಿಕರ ವಾಹನಗಳ ನಿಲುಗಡೆಗಾಗಿ ವಿಶಾಲವಾದ ಬಹುಮಹಡಿ ಪಾರ್ಕಿಂಗ್ ಸಮುಚ್ಚಯವನ್ನು ನಿರ್ಮಿಸಲು ರೈಲ್ವೆ ಮಂಡಳಿ ಯೋಜನೆ ರೂಪಿಸಿದೆ.&lt;/p&gt;&lt;p&gt;ಪ್ರಸ್ತುತ ಕೆಎಸ್&zwnj;ಆರ್ ನಿಲ್ದಾಣದಲ್ಲಿ 10 ಪ್ಲಾಟ್&zwnj;ಫಾರ್ಮ್&zwnj;ಗಳು ಕಾರ್ಯನಿರ್ವಹಿಸುತ್ತಿವೆ. 2022ರಲ್ಲಿ ಬೈಯಪ್ಪನಹಳ್ಳಿಯ ಅತ್ಯಾಧುನಿಕ ಎಸ್&zwnj;ಎಂವಿಟಿ (SMVT) ರೈಲು ನಿಲ್ದಾಣ ಆರಂಭವಾದ ಬಳಿಕ, ಉತ್ತರ ಭಾರತದ ಕಡೆಗೆ ಸಂಚರಿಸುವ ಪ್ರಮುಖ ರೈಲುಗಳನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು. ಇದರಿಂದ ನಗರ ನಿಲ್ದಾಣದ ಮೇಲಿನ ದಟ್ಟಣೆ ಕೊಂಚಮಟ್ಟಿಗೆ ಕಡಿಮೆಯಾಗಿದ್ದರೂ, ರೈಲುಗಳ ಆವರ್ತನ ಹಾಗೂ ವಿಳಂಬದಂತಹ ತಾಂತ್ರಿಕ ಸಮಸ್ಯೆಗಳು ಇಂದಿಗೂ ಮುಂದುವರಿದಿದ್ದವು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/swr-approves-6-new-platforms-for-ksr-bengaluru-and-yeshwanthpur-stations-gdp/articleshow-g256z1a"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿವಾದಿತ ಪೆಪ್ಟೈಡ್ ಪಾರ್ಟಿ ರದ್ದು, ಆಯೋಜಕರಿಗೆ ಎಫ್‌ಡಿಎ ಶೋಕಾಸ್ ನೋಟಿಸ್]]></title>
            <link>https://kannada.asianetnews.com/karnataka-districts/bengaluru-peptide-party-cancelled-karnataka-fda-issues-notice-to-upsurge-labs-gdp/articleshow-hcgp1qu</link>
            <guid isPermaLink="true">https://kannada.asianetnews.com/karnataka-districts/bengaluru-peptide-party-cancelled-karnataka-fda-issues-notice-to-upsurge-labs-gdp/articleshow-hcgp1qu</guid>
            <pubDate>Sat, 29 Aug 2026 11:35:00 +0530</pubDate>
            <description><![CDATA[ಬೆಂಗಳೂರಿನ ಕೋರಮಂಗಲದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ವಿವಾದಾತ್ಮಕ 'ಪೆಪ್ಟೈಡ್ ಪಾರ್ಟಿ'ಯನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ (FDA) ತನಿಖೆಯ ನಂತರ ರದ್ದುಗೊಳಿಸಲಾಗಿದೆ. ಎಫ್&zwnj;ಡಿಎ ನೋಟಿಸ್&zwnj;ಗೆ ಉತ್ತರವಾಗಿ, ಆಯೋಜಕರಾದ ಅಪ್&zwnj;ಸರ್ಜ್ ಲ್ಯಾಬ್ಸ್ ಕಾರ್ಯಕ್ರಮವನ್ನು ರದ್ದುಪಡಿಸಿ, ದಾಖಲೆಗಳನ್ನು ಸಲ್ಲಿಸಲು ಕಾಲಾವಕಾಶ ಕೋರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m161rbye8tccg6shj6emtvf7,imgname-peptide-party-1787983310798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ನಗರದ ಕೋರಮಂಗಲದಲ್ಲಿ ಆಗಸ್ಟ್ 29 ರಂದು ಆಯೋಜಿಸಲಾಗಿದ್ದ ವಿವಾದಾತ್ಮಕ 'ಪೆಪ್ಟೈಡ್ ಪಾರ್ಟಿ'ಯನ್ನು ರದ್ದುಗೊಳಿಸಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಶುಕ್ರವಾರ ಹೊರಡಿಸಿದ ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಾರ್ಟಿಯಲ್ಲಿ ಭಾಗವಹಿಸಿಸಲು ಅನೇಕರು ತಮ್ಮ ಹೆಸರು ನೋಂದಾವಣೆ ಮಾಡಿದ್ದರು. ಪೆಪ್ಟೈಡ್ ಉತ್ಪನ್ನಗಳ ಬಳಕೆ ಮತ್ತು ವಿತರಿಸಲು ಈ ಕಾರ್ಯಕ್ರಮದಲ್ಲಿ ತೀರ್ಮಾನ ಮಾಡಲಾಗಿತ್ತು&lt;/p&gt;&lt;h2&gt;ವಿವಾದದಕ್ಕೆ ಕಾರಣವೇನು?&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಕಾರ್ಯಕ್ರಮವನ್ನು 'ಅಪ್&zwnj;ಸರ್ಜ್ ಲ್ಯಾಬ್ಸ್' ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅನುಷ್ಕಾ ಸಿಂಗ್ ಆಯೋಜಿಸಿದ್ದರು. ಭಾರತದ ಮೊದಲ ಪೆಪ್ಟೈಡ್ ಪಾರ್ಟಿ ಎಂದು ಪ್ರಚಾರ ಮಾಡಿದ್ದ ಅವರು, &quot;ಪೆಪ್ಟೈಡ್&zwnj;ಗಳ ಅಭಿರುಚಿ, ಸಂಗೀತ, ಆಹಾರ ಮತ್ತು ಆಟಗಳು ಇಲ್ಲಿರಲಿವೆ. 50 ಜನರಿಗೆ ಮಾತ್ರ ಪ್ರವೇಶವಿದ್ದು, ಇದೊಂದು ಆಸ್ಪತ್ರೆಯಲ್ಲ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.&lt;/p&gt;&lt;p&gt;ಈ ಪೋಸ್ಟ್ ವೈದ್ಯರು ಸೇರಿದಂತೆ ಸಾರ್ವಜನಿಕರ ತೀವ್ರ ಕಳವಳಕ್ಕೆ ಕಾರಣವಾಯಿತು. ನಿಯಂತ್ರಣವಿಲ್ಲದ ಸ್ಥಳಗಳಲ್ಲಿ ಪೆಪ್ಟೈಡ್ ಬಳಕೆಯ ಅಪಾಯಗಳ ಕುರಿತು ಆರೋಗ್ಯ ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ತನಿಖೆಗೆ ಮುಂದಾಯಿತು.&lt;/p&gt;&lt;h2&gt;ಎಫ್&zwnj;ಡಿಎ ಕಟ್ಟುನಿಟ್ಟಿನ ಕ್ರಮ:&lt;/h2&gt;&lt;p&gt;ವಿಚಾರಣೆ ನಡೆಸಿದ ಎಫ್&zwnj;ಡಿಎ, ಕಾರ್ಯಕ್ರಮದಲ್ಲಿ ಪ್ರಚಾರ ಮಾಡಲು ಅಥವಾ ವಿತರಿಸಲು ಉದ್ದೇಶಿಸಿದ್ದ ಪೆಪ್ಟೈಡ್&zwnj;ಗಳ ಬಗ್ಗೆ ಸಂಪೂರ್ಣ ವಿವರ ಕೋರಿ ಅಪ್&zwnj;ಸರ್ಚ್&zwnj; ಲ್ಯಾಬ್ಸ್ ಎಲ್&zwnj;ಎಲ್&zwnj;ಪಿ ಸಂಸ್ಥೆಗೆ ಮತ್ತು ಆಯೋಜಕರಿಗೆ ನೋಟಿಸ್ ನೀಡಿತು.&lt;/p&gt;&lt;p&gt;ಇವುಗಳ ಸಂಯೋಜನೆ, ಡೋಸೇಜ್, ತಯಾರಕರು, ಬ್ಯಾಚ್ ಸಂಖ್ಯೆ ಹಾಗೂ ಇವು ತನಿಖಾ ಹಂತದ ಔಷಧಿಗಳೇ ಅಥವಾ ಅನುಮೋದಿತ ಉತ್ಪನ್ನಗಳೇ ಎಂಬುದನ್ನು ಸ್ಪಷ್ಟಪಡಿಸಲು, ತೂಕ ನಷ್ಟ, ಸ್ನಾಯುಗಳ ಬೆಳವಣಿಗೆ, ವಯಸ್ಸಾಗುವಿಕೆ ತಡೆಯುವಿಕೆ, ಮಧುಮೇಹ ಹಾಗೂ ಅಥ್ಲೆಟಿಕ್ ಸಾಮರ್ಥ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೀಡಲಾದ ಚಿಕಿತ್ಸಕ ಹಕ್ಕುಗಳಿಗೆ ವೈಜ್ಞಾನಿಕ ಪುರಾವೆ ಒದಗಿಸುವಂತೆ ಇಲಾಖೆ ದಾಖಲೆ ನೀಡುವಂತೆ ಸೂಚಿಸಿದೆ.&lt;/p&gt;&lt;p&gt;ಈ ಉತ್ಪನ್ನಗಳನ್ನು ಉಚಿತವಾಗಿ ನೀಡಲಾಗುತ್ತಿದೆಯೇ ಅಥವಾ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತಿದೆಯೇ ಎಂದು ಕೇಳಿರುವ ಇಲಾಖೆ, ಸ್ಥಳದಲ್ಲಿದ್ದ ವೈದ್ಯಕೀಯ ಮೇಲ್ವಿಚಾರಣೆ, ಆರೋಗ್ಯ ವೃತ್ತಿಪರರ ವಿವರ ಹಾಗೂ ತುರ್ತು ವ್ಯವಸ್ಥೆಗಳ ಬಗ್ಗೆ ವಿವರಣೆ ಕೋರಿದೆ. ಒಂದು ವೇಳೆ ಇವುಗಳನ್ನು 'ಆಹಾರ ಪೂರಕಗಳು' (Health Supplements) ಎಂದು ಪ್ರತಿಪಾದಿಸಿದರೆ, ಸೂಕ್ತ FSSAI ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ. ಇಲಾಖೆಯ ನೋಟಿಸ್ ಬೆನ್ನಲ್ಲೇ ಕಾರ್ಯಕ್ರಮದ ಆಯೋಜಕರಾದ ಅಪ್&zwnj;ಸರ್ಜ್ ಲ್ಯಾಬ್ಸ್ ಎಲ್&zwnj;ಎಲ್&zwnj;ಪಿಯ ಅಧಿಕೃತ ಪ್ರತಿನಿಧಿಗಳು ಈವೆಂಟ್ ರದ್ದುಗೊಳಿಸಿರುವುದಾಗಿ ತಿಳಿಸಿದ್ದು, ಅಗತ್ಯ ದಾಖಲೆಗಳನ್ನು ನೀಡಲು ಮತ್ತು ವಿವರಣೆಗೆ ಕಾಲಾವಕಾಶ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.&lt;/p&gt;&lt;h2&gt;ಆಯೋಜಕರ ಸ್ಪಷ್ಟನೆ:&lt;/h2&gt;&lt;p&gt;ಘಟನೆಯ ಕುರಿತು ಸ್ಪಷ್ಟನೆ ನೀಡಿರುವ ಅಪ್&zwnj;ಸರ್ಜ್ ಲ್ಯಾಬ್ಸ್ ಸಂಸ್ಥಾಪಕ ಸೌಮ್ಯ ಜೈನ್, &quot;ಇದು ಕೇವಲ ಶೈಕ್ಷಣಿಕ ಉದ್ದೇಶದ ಸಭೆಯಾಗಿತ್ತು. ಇಲ್ಲಿ ಯಾವುದೇ ಇಂಜೆಕ್ಷನ್&zwnj;ಗಳಾಗಲಿ, ಔಷಧಿಗಳ ಮಾರಾಟವಾಗಲಿ ಅಥವಾ ಪ್ರಿಸ್ಕ್ರಿಪ್ಷನ್&zwnj;ಗಳಾಗಲಿ ಇರಲಿಲ್ಲ. ಎಫ್&zwnj;ಡಿಎ ನಿಯಂತ್ರಣಗಳನ್ನು ನಾವು ಗೌರವಿಸುತ್ತೇವೆ. ಜೈವಿಕ ತಂತ್ರಜ್ಞಾನ (Biotech) ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶ. ನಿಯಂತ್ರಕರ ನಿಯಮಾವಳಿಗಳಿಗೆ ಬದ್ಧರಾಗಿ, ಅವರೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ&quot; ಎಂದು ಹೇಳಿದ್ದಾರೆ. ಸದ್ಯಕ್ಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ಸಾರ್ವಜನಿಕರು ಈ ವಿಷಯವನ್ನು ಗಮನಿಸಬೇಕೆಂದು ಎಫ್&zwnj;ಡಿಎ ಮನವಿ ಮಾಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-peptide-party-cancelled-karnataka-fda-issues-notice-to-upsurge-labs-gdp/articleshow-hcgp1qu"/>
        </item>
        <item>
            <title><![CDATA[ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಕಿಡ್ನಾಪ್ ಕೇಸ್, ಸಹಪಾಠಿಯನ್ನು ಅಪಹರಿಸಿ ಕಾರಲ್ಲಿ ಹಲ್ಲೆಆರೋಪ!]]></title>
            <link>https://kannada.asianetnews.com/news-entertainment/complaint-registered-against-actor-duniya-vijay-s-son-samrat-accused-of-assaulting-a-college-batchmate-in-bengaluru-gdp/articleshow-hwog9yo</link>
            <guid isPermaLink="true">https://kannada.asianetnews.com/news-entertainment/complaint-registered-against-actor-duniya-vijay-s-son-samrat-accused-of-assaulting-a-college-batchmate-in-bengaluru-gdp/articleshow-hwog9yo</guid>
            <pubDate>Tue, 01 Sep 2026 18:20:32 +0530</pubDate>
            <description><![CDATA[&lt;p&gt;ನಟ ದುನಿಯಾ ವಿಜಯ್ ಪುತ್ರನ, ಕಾರು ಓವರ್&zwnj;ಟೇಕ್ ಮಾಡಿದ ವಿಚಾರಕ್ಕೆ ಸಹಪಾಠಿಯನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆರ್&zwnj;ವಿ ಯೂನಿವರ್ಸಿಟಿ ಬಳಿ ನಡೆದ ಈ ಘಟನೆ ಸಂಬಂಧ, ಹಲ್ಲೆಗೊಳಗಾದ ಮನೀಶ್ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1effgp3hqp4mv4jc5krb53x,imgname-duniya-vijay-son-samrat-1788266136259.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಪ್ರಜ್ವಲ್ ನಿಟ್ಟೂರು&lt;/p&gt;&lt;p&gt;&lt;strong&gt;ಬೆಂಗಳೂರು&lt;/strong&gt;:ಸ್ಯಾಂಡಲ್&zwnj;ವುಡ್&zwnj;ನ ಖ್ಯಾತ ನಟ 'ದುನಿಯಾ' ವಿಜಯ್ ಅವರ ಪುತ್ರನ ವಿರುದ್ಧ ಸಹಪಾಠಿಯೊಬ್ಬನನ್ನು ಕಾರಿನಲ್ಲಿ ಬಲವಂತವಾಗಿ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕಾರು ಓವರ್&zwnj;ಟೇಕ್ ಮಾಡಿದ ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ, ಕೊನೆಗೆ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ಅಂತ್ಯವಾಗಿದೆ.&lt;/p&gt;&lt;h2&gt;ಓವರ್&zwnj;ಟೇಕ್ ವಿಚಾರಕ್ಕೆ ಶುರುವಾದ ವೈಷಮ್ಯ&lt;/h2&gt;&lt;p&gt;ಮಾಹಿತಿಯ ಪ್ರಕಾರ, ನಿನ್ನೆ ಸಂಜೆ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್. ನಗರ) ಸಾಮ್ರಾಟ್ ಮತ್ತು ಅವರ ಸ್ನೇಹಿತರು ಜಿಪ್ಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಅವರ ಸ್ನೇಹಿತರು ಐ20 (i20) ಕಾರಿನಲ್ಲಿ ಬಂದು ದುನಿಯಾ ವಿಜಯ್ ಪುತ್ರನ ಕಾರನ್ನು ಓವರ್&zwnj;ಟೇಕ್ ಮಾಡಿದ್ದರೆನ್ನಲಾಗಿದೆ. ಈ ಸಣ್ಣ ವಿಚಾರ ಎರಡೂ ತಂಡದ ನಡುವೆ ಮಾತಿನ ಚಕಮಕಿಗೆ ಕಾರಣವಾಗಿತ್ತು.&lt;/p&gt;&lt;h2&gt;ಕಾಲೇಜು ಆವರಣದಿಂದಲೇ ಎಳೆದೊಯ್ದು ಹಲ್ಲೆ&lt;/h2&gt;&lt;p&gt;ನಿನ್ನೆ ಸಂಜೆಯ ಗಲಾಟೆಯ ಹಿನ್ನೆಲೆಯಲ್ಲಿ, ಇಂದು ಮಧ್ಯಾಹ್ನ ಮೈಸೂರು ರಸ್ತೆಯಲ್ಲಿರುವ ಆರ್&zwnj;ವಿ ಯೂನಿವರ್ಸಿಟಿ (RV University) ಆವರಣದ ಹೊರಗಡೆ ಸಹಪಾಠಿ ವಿದ್ಯಾರ್ಥಿ ನಿಂತಿದ್ದಾಗ, ದುನಿಯಾ ವಿಜಯ್ ಪುತ್ರ ಹಾಗೂ ಆತನ ಬೆಂಬಲಿಗರು ವಿದ್ಯಾರ್ಥಿಯನ್ನು ಬಲವಂತವಾಗಿ ತಮ್ಮ ಕಾರಿನಲ್ಲಿ ಎಳೆದೊಯ್ದಿದ್ದಾರೆ. ಚಲಿಸುವ ಕಾರಿನಲ್ಲಿಯೇ ಆತನ ಮೇಲೆ ವಿಜಯ್ ಪುತ್ರ ಮತ್ತು ಆತನ ಸ್ನೇಹಿತರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.&lt;/p&gt;&lt;h2&gt;ಪೊಲೀಸ್ ಠಾಣೆಗೆ ದೂರು ಸಲ್ಲಿಕೆ:&lt;/h2&gt;&lt;p&gt;ಹಲ್ಲೆಗೊಳಗಾದ ದಹಪಾಠಿ ಹಾಗೂ ಆರೋಪ ಎದುರಿಸುತ್ತಿರುವ ವಿಜಯ್ ಪುತ್ರ ಇಬ್ಬರೂ ಆರ್&zwnj;ವಿ ಯೂನಿವರ್ಸಿಟಿಯ ಸಹಪಾಠಿಗಳಾಗಿದ್ದಾರೆ . ಹಲ್ಲೆಯಿಂದ ಗಾಯಗೊಂಡಿರುವ ವಿದ್ಯಾರ್ಥಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳು ವಿದ್ಯಾರ್ಥಿ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದುನಿಯಾ ವಿಜಯ್ ಪುತ್ರ ಹಾಗೂ ಆತನ ಗೆಳೆಯರ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.&lt;/p&gt;&lt;p&gt;ನಟ, ನಿರ್ದೇಶಕ ದುನಿಯಾ ವಿಜಯ್&zwnj; ಅವರು ತಮ್ಮ ಮಗನ ಹುಟ್ಟುಹಬ್ಬವನ್ನ ಕಳೆದ ಜೂನ್&zwnj; ತಿಂಗಳಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಮಗನನ್ನ ನೋಡ್ತಿದ್ದಂತೆ ತಬ್ಬಿಕೊಂಡು, ಎಮೋಷನಲ್&zwnj; ಆಗಿದ್ದರು. ಈ ಸಂಬಂಧ ವಿಡಿಯೋವನ್ನು ಹಂಚಿಕೊಂಡಿದ್ದರು. ದುನಿಯಾ ವಿಜಯ್&zwnj; ಅವರಿಗೆ ಮೂವರು ಮಕ್ಕಳು. ಈಗಾಗಲೇ ಅವರ ಪುತ್ರಿಯರಾದ, ರಿತನ್ಯಾ, ಮೋನಿಕಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗನನ್ನು ಕೂಡ ಸಿನಿಮಾಗೆ ಕರೆತರುವ ಪ್ಲ್ಯಾನ್&zwnj;ನಲ್ಲಿದ್ದಾರೆ ದುನಿಯಾ ವಿಜಯ್.&zwnj;&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/news-entertainment/complaint-registered-against-actor-duniya-vijay-s-son-samrat-accused-of-assaulting-a-college-batchmate-in-bengaluru-gdp/articleshow-hwog9yo"/>
        </item>
        <item>
            <title><![CDATA[ಬೆಂಗಳೂರು ವಿಭಾಗದಲ್ಲಿನ ಎಸಿ ರೈಲು ಕೋಚ್‌ಗಳಿಗೆ ಇಲಿಗಳ ಕಾಟ, 84 ಲಕ್ಷ ವೆಚ್ಚದಲ್ಲಿ ಕೋಚ್‌ನಲ್ಲಿ ಮಾರ್ಪಾಡು]]></title>
            <link>https://kannada.asianetnews.com/karnataka-districts/swr-spends-rs-84l-to-mod-371-lhb-ac-coaches-over-rat-issues-in-bengaluru-vande-bharat-food-inspected-in-mangaluru-gdp/articleshow-pwbfxcu</link>
            <guid isPermaLink="true">https://kannada.asianetnews.com/karnataka-districts/swr-spends-rs-84l-to-mod-371-lhb-ac-coaches-over-rat-issues-in-bengaluru-vande-bharat-food-inspected-in-mangaluru-gdp/articleshow-pwbfxcu</guid>
            <pubDate>Fri, 21 Aug 2026 14:37:52 +0530</pubDate>
            <description><![CDATA[ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ರೈಲುಗಳಲ್ಲಿ ಇಲಿಗಳ ಕಾಟದಿಂದ ಎ.ಸಿ ವ್ಯವಸ್ಥೆ ಹಾಳಾಗುತ್ತಿದ್ದು, ಇದನ್ನು ತಡೆಯಲು ರೈಲ್ವೆ ಇಲಾಖೆ ಮುಂದಾಗಿದೆ. ಸುಮಾರು 371 ಎಲ್&zwnj;ಎಚ್&zwnj;ಬಿ ಎ.ಸಿ ಕೋಚ್&zwnj;ಗಳಲ್ಲಿನ ರಂಧ್ರಗಳನ್ನು ಪಾಲಿ ಕಾರ್ಬೋನೇಟ್ ಶೀಟ್&zwnj;ಗಳಿಂದ ಮುಚ್ಚುವ ಮೂಲಕ ಇಲಿಗಳ ಪ್ರವೇಶವನ್ನು ತಡೆಯಲು 84 ಲಕ್ಷ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz8356hs140dm4eydh4xrvk0,imgname-did-you-know-75-percent-discount-for-disabled-passengers-on-train-tickets-1785904405049.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ನೈರುತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದಲ್ಲಿನ ರೈಲುಗಳಲ್ಲಿ ಇಲಿಗಳ ಕಾಟದಿಂದ ಏರ್ ಕಂಡೀಷನ್ಡ್&zwnj; ಎಲ್&zwnj;ಎಚ್&zwnj;ಬಿ ಕೋಚ್&zwnj;ಗಳಲ್ಲಿ ಪದೇ ಪದೆ ಎ.ಸಿ ವ್ಯವಸ್ಥೆ ಕೈ ಕೊಡುತ್ತಿರುವ ಹಿನ್ನೆಲೆಯಲ್ಲಿ ಇಲಿಗಳ ಕಾಟ ತಡೆಯಲು 371 ಎಲ್&zwnj;ಎಚ್&zwnj;ಬಿ ಎ.ಸಿ ಕೋಚ್&zwnj;ಗಳ ಮಾರ್ಪಾಡು ಮಾಡಲು ಮುಂದಾಗಿದೆ.&lt;/p&gt;&lt;p&gt;ಸ್ವಿಚ್&zwnj; ಬೋರ್ಡ್ ಕ್ಯಾಬಿನೆಟ್ ಪ್ಯಾನೆಲ್&zwnj;ಗಳಲ್ಲಿ ಇಲಿ ಮುಂತಾದ ಸಣ್ಣ ಪ್ರಾಣಿಗಳು ಪ್ರವೇಶಿಸುವುದನ್ನು ತಡೆಯಲು ರೈಲ್ವೆ ಇಲಾಖೆ 84 ಲಕ್ಷ ರು. ವೆಚ್ಚದ ಯೋಜನೆ ರೂಪಿಸಿದೆ. ಹಳೇ ವಿನ್ಯಾಸದ ಎಲ್&zwnj;ಎಚ್&zwnj;ಬಿ ಎಸಿ ಕೋಚ್&zwnj;ಗಳಲ್ಲಿನ ಆರ್ಥಿಂಗ್ ಡಿವೈಸ್ ಮತ್ತು ಸ್ವಿಚ್&zwnj; ಪ್ಯಾನಲ್&zwnj;ಗಳ ಬಳಿ ಇರುವ ಸಣ್ಣ ರಂಧ್ರಗಳ ಮೂಲಕ ಒಳ ಪ್ರವೇಶಿಸುವ ಇಲಿಗಳು ಎ.ಸಿ ವ್ಯವಸ್ಥೆ ಮತ್ತು ಎಲೆಕ್ಟ್ರಿಕಲ್ ಕೇಬಲ್&zwnj;ಗಳನ್ನು ಕಡಿದು ಹಾಳು ಮಾಡುತ್ತಿವೆ. ಇದರಿಂದ ಅನೇಕ ಕೋಚ್&zwnj;ಗಳಲ್ಲಿನ ಎ.ಸಿ ಕೆಟ್ಟು ಹೋಗಿ ಪ್ರಯಾಣದ ವೇಳೆ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಪ್ರಯಾಣಿಕರು ರೈಲ್ವೆ ಇಲಾಖೆಯನ್ನು ದೂರುತ್ತಿದ್ದರು.ಈ ಕುರಿತು ರೈಲ್ವೆ ಇಲಾಖೆಯ &lsquo;ರಿಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟ್ಯಾಂಡರ್ಡ್ ಆರ್ಗನೈಜೇಷನ್&zwnj;&rsquo; (ಆರ್&zwnj;ಡಿಎಸ್&zwnj;ಒ) ಗಮನ ಸೆಳೆಯಲಾಗಿತ್ತು.&lt;/p&gt;&lt;p&gt;ಪರಿಶೀಲನೆ ನಡೆಸಿದ ಆರ್&zwnj;ಡಿಎಸ್&zwnj;ಒ, ಎಲ್ಲ ಕೋಚ್&zwnj;ಗಳ ರೂಪ್ ಟಾಪ್, ಸ್ವಿಚ್ ಬೋರ್ಡ್ ಕ್ಯಾಬಿನೇಟ್ ಸೇರಿ ರಂಧ್ರ ಇರುವ ಕಡೆಗಳಲ್ಲಿ ಪಾಲಿ ಕಾರ್ಬೋನೇಟ್ ಶೀಟ್ ಬಳಸಿ ಇಲಿಗಳ ಪ್ರವೇಶಿಸದಂತೆ ಮುಚ್ಚಿ ಸೀಲ್ ಮಾಡುವಂತೆ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ 371 ಹಳೇ ವಿನ್ಯಾಸದ ಎಲ್&zwnj;ಎಚ್&zwnj;ಬಿ ಎ.ಸಿ ಕೋಚ್&zwnj;ಗಳಲ್ಲಿ ಲಘು ಮಾರ್ಪಾಡುಗಳನ್ನು ಮಾಡುತ್ತಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.&lt;/p&gt;&lt;h2&gt;ವಂದೇ ಭಾರತ್ ಅಧಿಕಾರಿಗಳಿಂದ ಆಹಾರ ಗುಣಮಟ್ಟ ಪರಿಶೀಲನೆ&lt;/h2&gt;&lt;p&gt;ಮಂಗಳೂರು: ಮಂಗಳೂರು ಸೆಂಟ್ರಲ್&zwnj; ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿಗೆ ಆಹಾರ ಪೂರೈಸುವ ಕೇಟರಿಂಗ್ ವಾಹನವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು.&lt;/p&gt;&lt;p&gt;ರೈಲಿನಲ್ಲಿ ಪ್ರಯಾಣಿಕರಿಗೆ ಪೂರೈಸುವ ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಹಾರ ತಯಾರಿಕೆ ಮತ್ತು ಸಾಗಣೆ ವೇಳೆ ಪಾಲಿಸಬೇಕಾದ ಸುರಕ್ಷತಾ ನಿಯಮಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಆಹಾರವನ್ನು ಸಾಗಿಸುವ ವಾಹನದಲ್ಲಿ ಸ್ವಚ್ಛತೆ ಕಾಪಾಡಲಾಗಿದೆಯೇ, ಆಹಾರವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲಾಗಿದೆಯೇ ಹಾಗೂ ನಿಗದಿತ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಯಿತು.&lt;/p&gt;&lt;p&gt;ಆಹಾರ ಮತ್ತು ಔಷಧ ಸುರಕ್ಷತೆ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ನೀಡಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿರುವ ಬೆನ್ನಲ್ಲೇ ರೈಲ್ವೆ ಕೇಟರಿಂಗ್ ವ್ಯವಸ್ಥೆಯ ಮೇಲೂ ತಪಾಸಣೆ ವಿಸ್ತರಿಸಲಾಗಿದೆ.&lt;/p&gt;&lt;h2&gt;ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚನೆ&lt;/h2&gt;&lt;p&gt;ಇತ್ತೀಚೆಗೆ ರಾಜ್ಯಾದ್ಯಂತ ಆಹಾರ ಮತ್ತು ಔಷಧ ಸುರಕ್ಷತೆ ಕುರಿತು ವಿಶೇಷ ತಪಾಸಣೆ ನಡೆಸಲಾಗುತ್ತಿದ್ದು, ಪಿಜಿ, ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳು, ಹೊಟೇಲ್&zwnj;, ರೈಲ್ವೆ ಕ್ಯಾಂಟಿನ್&zwnj; ಹಾಗೂ ವಿಮಾನಗಳಲ್ಲಿ ಪೂರೈಸುವ ಆಹಾರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಆಹಾರ ಮತ್ತು ಔಷಧ ಸುರಕ್ಷತೆ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ನೇರವಾಗಿ ದೂರು ನೀಡಲು ಅನುಕೂಲವಾಗುವಂತೆ ಕ್ಯೂಆರ್&zwnj;ಕೋಡ್ ವ್ಯವಸ್ಥೆಯನ್ನು ಸೋಮವಾರ ಉದ್ಘಾಟಿಸಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್, ಇನ್ನು ಮುಂದೆ ಪಿಜಿ, ಹಾಸ್ಟೆಲ್, ಶಿಕ್ಷಣ ಸಂಸ್ಥೆಗಳು, ರೈಲ್ವೆ ಕ್ಯಾಂಟಿನ್&zwnj;ಗಳು, ವಿಮಾನಗಳಲ್ಲಿ ನೀಡುವ ಆಹಾರ ಸೇರಿದಂತೆ ಎಲ್ಲೆಡೆ ತಪಾಸಣೆ ವಿಸ್ತರಿಸಲಾಗುವುದು ಎಂದು ತಿಳಿಸಿದ್ದರು.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/swr-spends-rs-84l-to-mod-371-lhb-ac-coaches-over-rat-issues-in-bengaluru-vande-bharat-food-inspected-in-mangaluru-gdp/articleshow-pwbfxcu"/>
        </item>
        <item>
            <title><![CDATA[ಮಾಫಿ ಸಾಕ್ಷಿಗೆ ಯಾರ ಒತ್ತಡ ಇಲ್ಲವೆಂದ ದರ್ಶನ್‌ ಕೇಸ್‌ ಆರೋಪಿ ಪ್ರದೂಷ್‌ ಬಗ್ಗೆ ಪ್ರೊಬೇಷನ್‌ ಅಧಿಕಾರಿ ವರದಿ ಕೇಳಿದ ಕೋರ್ಟ್]]></title>
            <link>https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c</link>
            <guid isPermaLink="true">https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c</guid>
            <pubDate>Fri, 21 Aug 2026 09:58:26 +0530</pubDate>
            <description><![CDATA[&lt;p&gt;ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್&zwnj; ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzaska2xpybbwahthxak587h,imgname-pradosh-darshan-renukaswamy-case-1785995044956.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾದಾನ ನೀಡುವ ಮೂಲಕ ತನ್ನನ್ನು ಮಾಫಿ ಸಾಕ್ಷಿಯನ್ನಾಗಿಸಬೇಕು ಎಂದು ಕೋರಿ 14ನೇ ಆರೋಪಿ ಪ್ರದೂಷ್&zwnj; ಅರ್ಜಿ ಸಲ್ಲಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನಗರದ 59ನೇ ಸಿಟಿ ಸಿವಿಲ್&zwnj; ಮತ್ತು ಸೆಷನ್ಸ್&zwnj; ಕೋರ್ಟ್&zwnj;, ಕಾರಾಗೃಹದಲ್ಲಿ ಪ್ರದೂಷ್&zwnj; ಕುರಿತಂತೆ ವರದಿ ಸಲ್ಲಿಸಬೇಕು ಎಂದು ಪ್ರೊಬೆಷನ್&zwnj; ಅಧಿಕಾರಿಗೆ ನಿರ್ದೇಶಿಸಿದೆ.&lt;/p&gt;&lt;p&gt;ಪ್ರದೂಷ್&zwnj; ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಈ ಸೂಚನೆ ನೀಡಿ ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.&lt;/p&gt;&lt;p&gt;ಇದೇ ವೇಳೆ, ಪ್ರದೂಷ್&zwnj;ಗೆ ನ್ಯಾಯಾಲಯ ಗುರುವಾರ ಮತ್ತೆ ಹಲವು ಪ್ರಶ್ನೆಗಳನ್ನು ಕೇಳಿತು. ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೂಷ್&zwnj;, ನಾನು ಎಂಬಿಎ ಪದವೀಧರ. ನನಗೆ ಇಂಗ್ಲಿಷ್&zwnj; ಭಾಷೆ ಚೆನ್ನಾಗಿ ತಿಳಿದಿದೆ. ಅರ್ಜಿ ಮತ್ತು ಅದರಲ್ಲಿರುವ ಎಲ್ಲಾ ಅಂಶಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾರ ಪ್ರಭಾವ ಮತ್ತು ಒತ್ತಡಕ್ಕೆ ಒಳಗಾಗದೆ ಈ ಅರ್ಜಿ ಸಲ್ಲಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ಖಚಿತಪಡಿಸಿದರು.&lt;/p&gt;&lt;p&gt;ಪ್ರದೂಷ್&zwnj; ಅರ್ಜಿ ಕುರಿತು ಆ.18ರಂದು ವಿಚಾರಣೆ ಪೂಣರ್ಗೊಳಿಸಿದ್ದ ಗುರುವಾರ (ಆ.20ರಂದು) ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಗುರುವಾರ ಆದೇಶ ಪ್ರಕಟಿಸಲಿಲ್ಲ. ಬದಲಾಗಿ ಪ್ರದೂಷ್&zwnj; ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಪ್ರದೂಷ್&zwnj; ಅರ್ಜಿಯ ಸ್ವರೂಪ ಮತ್ತು ಅಪರಾಧ ಗಂಭೀರತೆಯಿಂದ ಕೂಡಿದೆ. ಇದರಿಂದ ಈ ಅರ್ಜಿ ಪರಿಗಣಿಸುವ ಮುನ್ನ ಪ್ರದೂಷ್&zwnj; ಕುರಿತು ಪ್ರೊಬೇಷನ್&zwnj; ಅಧಿಕಾರಿಯಿಂದ ವರದಿ ಪಡೆಯವುದು ಸೂಕ್ತವೆನಿಸುತ್ತಿದೆ. ಹಾಗಾಗಿ, ಪ್ರದೂಷ್&zwnj; ಕುರಿತು ಪ್ರೊಬೆಷನ್&zwnj; ಅಧಿಕಾರಿಯು ಆ.24ರಂದು ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸಬೇಕು. ಆ ವರದಿ ಬಂದನ ನಂತರ ಪ್ರದೂಷ್&zwnj; ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.&lt;/p&gt;&lt;h2&gt;ಯಾರು ಈ ಪ್ರೊಬೆಷನ್&zwnj; ಅಧಿಕಾರಿ?:&lt;/h2&gt;&lt;p&gt;ಪ್ರೊಬೆಷನ್&zwnj; ಅಧಿಕಾರಿಯು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಥವಾ ಸರ್ಕಾರದ ಇತರೆ ಇಲಾಖೆಯ ಉದ್ಯೋಗಿಯಾಗಿರುತ್ತಾರೆ. ಅವರು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಮೂಲಕ ಜೈಲಿನಲ್ಲಿರುವ ಪ್ರದೂಷ್&zwnj;ನನ್ನು ಭೇಟಿ ಮಾಡಿ ಸಮಾಲೋಚನೆ ಮಾಡುತ್ತಾರೆ. ಈ ವೇಳೆ ಪ್ರದೂಷ್&zwnj; ವೈಯಕ್ತಿಕ ವಿವರ, ಕುಟುಂಬದ ಹಿನ್ನೆಲೆ, ಅರ್ಜಿ ಸಲ್ಲಿಸಲು ಆತ ನೀಡುವ ಕಾರಣಗಳು, ಜೈಲಿನಲ್ಲಿನ ಆತನ ಪರಿಸ್ಥತಿ ಹಾಗೂ ಮಾನಸಿಕ ಸ್ಥಿತಿಗತಿ ಸೇರಿ ಇನ್ನಿತರ ವಿವರ ಸಂಗ್ರಹಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-court-orders-probation-report-on-accused-pradosh-seeking-approver-status-on-darshan-case-gdp/articleshow-qkfdb7c"/>
        </item>
        <item>
            <title><![CDATA[ಬೆಂಗಳೂರು ಐಐಎಂಬಿ ಹೊಸ ಹೆಜ್ಜೆ: ಶಿಕ್ಷಣ ಲೋಕದಲ್ಲಿ ಟಾಟಾ ಸಂಸ್ಥೆ ಜೊತೆಗೆ ಮೈತ್ರಿ, ಜಿಗಣಿ ಹೊಸ ಕಾಲೇಜು!]]></title>
            <link>https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr</link>
            <guid isPermaLink="true">https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr</guid>
            <pubDate>Sat, 22 Aug 2026 17:34:49 +0530</pubDate>
            <description><![CDATA[&lt;p&gt;ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIMB) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಯಶಸ್ವಿಯಾಗಿ ಪಾದಾರ್ಪಣೆ ಮಾಡಿದ್ದು, ಮೊದಲ ಬ್ಯಾಚ್&zwnj;ಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ, ಟಾಟಾ ಟ್ರಸ್ಟ್ಸ್ ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ನೂತನ ಶಾಲೆಯನ್ನು 'ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್&zwnj;ಗ್ರಾಜುಯೇಟ್ ಸ್ಟಡೀಸ್' ಎಂದು ಹೆಸರಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0mnnhv775aftgsq9f7ag2km,imgname-iim-bangalore-partners-with-tata-trusts--1--1787400210279.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು (IIM) ತನ್ನ ಪದವಿಪೂರ್ವ ಶಿಕ್ಷಣ ಕ್ಷೇತ್ರಕ್ಕೆ ಅತ್ಯಂತ ಯಶಸ್ವಿ ಹಾಗೂ ಐತಿಹಾಸಿಕವಾಗಿ ಪಾದಾರ್ಪಣೆ ಮಾಡಿದೆ. ಸಂಸ್ಥೆಯು ಹೊಸದಾಗಿ ಪರಿಚಯಿಸಿರುವ 80 ಸೀಟುಗಳ ಉದ್ಘಾಟನಾ ಬ್ಯಾಚ್&zwnj;ಗೆ ದೇಶಾದ್ಯಂತ ಬರೋಬ್ಬರಿ 12,000 ಅರ್ಜಿಗಳು ಹರಿದುಬಂದಿದ್ದು, ಅತ್ಯಂತ ಸ್ಪರ್ಧಾತ್ಮಕ ಪ್ರವೇಶ ಪ್ರಕ್ರಿಯೆಯ ಮೂಲಕ ಅಸಾಧಾರಣ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಐಐಎಂ ಬೆಂಗಳೂರಿನ ಪೂರ್ಣ ಸಮಯದ ಪದವಿಪೂರ್ವ ಶಿಕ್ಷಣಕ್ಕೆ ಬಲವಾದ ಆರಂಭ ದೊರೆತಿದ್ದು, ಈ ವಸತಿ ಶೈಕ್ಷಣಿಕ ಕಾರ್ಯಕ್ರಮಗಳು ಆಗಸ್ಟ್ 31, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿವೆ.&lt;/p&gt;&lt;p&gt;ಈ ಗಮನಾರ್ಹ ಯಶಸ್ಸಿನ ಬೆನ್ನಲ್ಲೇ, ಐಐಎಂ ಬೆಂಗಳೂರು ಮತ್ತು ಟಾಟಾ ಟ್ರಸ್ಟ್ಸ್ (ಸರ್ ದೋರಾಬ್ಜಿ ಟಾಟಾ ಟ್ರಸ್ಟ್) ನಡುವೆ ಮಹತ್ವದ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಬಿದ್ದಿದೆ. ಈ ಒಪ್ಪಂದದ ಮೂಲಕ ನೂತನ ಪದವಿಪೂರ್ವ ಶಾಲೆಯ ಅಭಿವೃದ್ಧಿಗೆ ಟಾಟಾ ಟ್ರಸ್ಟ್ಸ್ ನೀಡಲಿರುವ ಮಹತ್ವದ ಸಹಾಯದ ಕೊಡುಗೆಯನ್ನು ಅಧಿಕೃತಗೊಳಿಸಲಾಗಿದ್ದು, ಈ ಸಂಸ್ಥೆಯನ್ನು &lsquo;ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್&zwnj;ಗ್ರಾಜುಯೇಟ್ ಸ್ಟಡೀಸ್&rsquo; ಎಂದು ಹೆಸರಿಸಲಾಗುತ್ತಿದೆ.&lt;/p&gt;&lt;h2&gt;ಶೈಕ್ಷಣಿಕ ಮೂಲಸೌಕರ್ಯಕ್ಕೆ ಟಾಟಾ ಟ್ರಸ್ಟ್ಸ್ ಬೆಂಬಲ&lt;/h2&gt;&lt;p&gt;ಆಗಸ್ಟ್ 21, 2026 ರಂದು ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ಶ್ರೀ ನೋಯೆಲ್ ಟಾಟಾ ಹಾಗೂ ಐಐಎಂ ಬೆಂಗಳೂರು ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ದೇವಿ ಶೆಟ್ಟಿ ಅವರು ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಟಾಟಾ ಟ್ರಸ್ಟ್ಸ್ ಸಿಇಒ ಶ್ರೀ ಸಿದ್ಧಾರ್ಥ್ ಶರ್ಮಾ ಮತ್ತು ಐಐಎಂಬಿ ಉಸ್ತುವಾರಿ ನಿರ್ದೇಶಕರಾದ ಪ್ರೊ. ಯು. ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಈ ಒಪ್ಪಂದದ ಪ್ರಕಾರ, ಟಾಟಾ ಟ್ರಸ್ಟ್ಸ್ ಸಂಸ್ಥೆಯು ಪದವಿಪೂರ್ವ ಶಾಲೆಗೆ ಜಾಗತಿಕ ಮಟ್ಟದ ಶೈಕ್ಷಣಿಕ ಮೂಲಸೌಕರ್ಯ ನಿರ್ಮಾಣಕ್ಕೆ ಬೆಂಬಲ ನೀಡಲಿದ್ದು, ಸಂಸ್ಥೆಯ ಕಾರ್ಯತಂತ್ರ, ನೀತಿ ನಿರೂಪಣೆ ಮತ್ತು ಆಡಳಿತಾತ್ಮಕ ಮೇಲ್ವಿಚಾರಣೆಯಲ್ಲಿಯೂ ಸಕ್ರಿಯವಾಗಿ ಕೊಡುಗೆ ನೀಡಲಿದೆ.&lt;/p&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಟ್ರಸ್ಟ್ಸ್ ಅಧ್ಯಕ್ಷ ಶ್ರೀ ನೋಯೆಲ್ ಟಾಟಾ ಅವರು, ಟಾಟಾ ಟ್ರಸ್ಟ್ಸ್ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಭಾರತದ ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ ಎಂದು ಸ್ಮರಿಸಿದರು. ಭಾರತದ ಮುಂದಿನ ಹಂತದ ಬೆಳವಣಿಗೆಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ಉನ್ನತ ಶಿಕ್ಷಣ ಸಂಸ್ಥೆಗಳ ಅಗತ್ಯವಿದ್ದು, ಐಐಎಂ ಬೆಂಗಳೂರಿನೊಂದಿಗಿನ ಈ ಪಾಲುದಾರಿಕೆಯು ಪದವಿಪೂರ್ವ ಶಿಕ್ಷಣಕ್ಕೆ ಹೊಸ ಮಾನದಂಡಗಳನ್ನು ಹೊಂದಿಸುವ ಜತೆಗೆ ದೇಶಕ್ಕೆ ದೀರ್ಘಕಾಲೀನ ಕೊಡುಗೆ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಟ್ರಸ್ಟ್&zwnj;ನ ಈ ಉದಾರ ಬೆಂಬಲಕ್ಕೆ ಆಳವಾದ ಕೃತಜ್ಞತೆ ವ್ಯಕ್ತಪಡಿಸಿದ ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿ ಶೆಟ್ಟಿ ಅವರು, ಐಐಎಂ ಬೆಂಗಳೂರು ಸಾರ್ವಜನಿಕ ಸಂಸ್ಥೆಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತ ಅವಕಾಶಗಳನ್ನು ಸೃಷ್ಟಿಸಿದ ಇತಿಹಾಸವನ್ನು ಹೊಂದಿದೆ ಎಂದು ಹೇಳಿದರು. ಸಮಗ್ರತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಹೆಸರಾದ ಟಾಟಾ ಟ್ರಸ್ಟ್ಸ್ ಜೊತೆಗಿನ ಒಪ್ಪಂದವು, ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ಶಿಕ್ಷಣವನ್ನು ತಲುಪಿಸುವ ಸಂಸ್ಥೆಯ ಮಹತ್ವಾಕಾಂಕ್ಷೆಯ ಮಾದರಿಗೆ ಬಲವಾದ ಅಡಿಪಾಯ ಹಾಕಿದೆ ಎಂದು ಅವರು ಬಣ್ಣಿಸಿದರು.&lt;/p&gt;&lt;h2&gt;ಜಿಗಣಿ-ಅನೇಕಲ್&zwnj;ನಲ್ಲಿ ನೂತನ ಸುಸ್ಥಿರ ಕ್ಯಾಂಪಸ್&lt;/h2&gt;&lt;p&gt;ಜಿಗಣಿ-ಅನೇಕಲ್ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ನೂತನ ಸುಸ್ಥಿರ ಕ್ಯಾಂಪಸ್, ಬನ್ನೇರುಘಟ್ಟ ರಸ್ತೆಯಲ್ಲಿರುವ ಐಐಎಂಬಿಯ ಮುಖ್ಯ ಕ್ಯಾಂಪಸ್&zwnj;ನಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿದೆ. ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳು, ಆಧುನಿಕ ವಿದ್ಯಾರ್ಥಿ ಜೀವನ ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ವಿನ್ಯಾಸವನ್ನು ಒಳಗೊಂಡಿರುವ ಈ ಕ್ಯಾಂಪಸ್, ಅಂತರಶಿಸ್ತೀಯ ಕಲಿಕೆ ಮತ್ತು ನಾವೀನ್ಯತೆಯನ್ನು ಬೆಳೆಸುವ ವಸತಿ ವಾತಾವರಣವನ್ನು ಒದಗಿಸಲಿದೆ. ಅಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡುವ ಉದ್ದೇಶದಿಂದ ಈ ಕ್ಯಾಂಪಸ್ ಅನ್ನು ವಿಶೇಷ ಚೇತನರಿಗೆ ಸುಲಭವಾಗಿ ಪ್ರವೇಶಿಸಬಹುದಾದ ವಿನ್ಯಾಸದೊಂದಿಗೆ ರೂಪಿಸಲಾಗುತ್ತಿದೆ.&lt;/p&gt;&lt;p&gt;ಈ ನೂತನ ಶಾಲೆಯು ಆರಂಭದಲ್ಲಿ ಎರಡು ನಾಲ್ಕು ವರ್ಷಗಳ ಪೂರ್ಣ ಸಮಯದ ವಸತಿ ಪದವಿ ಕಾರ್ಯಕ್ರಮಗಳನ್ನು ನೀಡಲಿದೆ. ಅವುಗಳೆಂದರೆ, ಅರ್ಥಶಾಸ್ತ್ರ ಮೈನರ್ ಹೊಂದಿರುವ 'ದತ್ತಾಂಶ ವಿಜ್ಞಾನದಲ್ಲಿ ಬಿಎಸ್ಸಿ (ಆನರ್ಸ್)' ಮತ್ತು ದತ್ತಾಂಶ ವಿಜ್ಞಾನ ಮೈನರ್ ಹೊಂದಿರುವ 'ಅರ್ಥಶಾಸ್ತ್ರದಲ್ಲಿ ಬಿಎಸ್ಸಿ (ಆನರ್ಸ್)'. ಪ್ರಸ್ತುತ ಆಯ್ಕೆಯಾಗಿರುವ 80 ವಿದ್ಯಾರ್ಥಿಗಳ ಪೈಕಿ ಪ್ರತಿ ಕಾರ್ಯಕ್ರಮಕ್ಕೆ ತಲಾ 40 ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಲಾಗಿದೆ.&lt;/p&gt;&lt;p&gt;ತಂತ್ರಜ್ಞಾನ, ದತ್ತಾಂಶ ಹಾಗೂ ಕೃತಕ ಬುದ್ಧಿಮತ್ತೆಯ (AI) ವೇಗದ ಬೆಳವಣಿಗೆಯಿಂದ ರೂಪಿತವಾಗುತ್ತಿರುವ ಇಂದಿನ ಜಗತ್ತಿಗೆ ಯುವಜನರನ್ನು ಸಿದ್ಧಪಡಿಸುವುದು ಅತ್ಯಂತ ಅಗತ್ಯ ಎಂದು ಟಾಟಾ ಟ್ರಸ್ಟ್ಸ್ ಸಿಇಒ ಶ್ರೀ ಸಿದ್ಧಾರ್ಥ್ ಶರ್ಮಾ ತಿಳಿಸಿದರು. ಇಂದಿನ ಯುಗದಲ್ಲಿ ಕೇವಲ ಒಂದು ವಿಷಯದ ವಿಶೇಷ ಜ್ಞಾನ ಸಾಕಾಗುವುದಿಲ್ಲ; ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಯೋಚಿಸುವ, ಹೊಸ ಪ್ರಶ್ನೆಗಳನ್ನು ಕೇಳುವ ಮತ್ತು ಕಲಿತದ್ದನ್ನು ನೈಜ ಜಗತ್ತಿನ ಸವಾಲುಗಳಿಗೆ ಅನ್ವಯಿಸುವ ಸಾಮರ್ಥ್ಯವಿರಬೇಕು ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;p&gt;ಐಐಎಂಬಿ ಪ್ರಭಾರಿ ನಿರ್ದೇಶಕ ಪ್ರೊ. ದಿನೇಶ್ ಕುಮಾರ್ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆಯು ಉದ್ಯಮ, ಸರ್ಕಾರ ಹಾಗೂ ಸಮಾಜದ ಸ್ವರೂಪವನ್ನೇ ಮರುರೂಪಿಸುತ್ತಿರುವ ಈ ಸಮಯದಲ್ಲಿ ಪದವಿಪೂರ್ವ ಶಾಲೆಯನ್ನು ಆರಂಭಿಸುತ್ತಿರುವುದು ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು. ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸಂಶೋಧನಾ ಸಾಮರ್ಥ್ಯದ ಮೂಲಕ ವಿದ್ಯಾರ್ಥಿಗಳು AI-ಚಾಲಿತ ಪ್ರಪಂಚದ ಸಂಕೀರ್ಣ ಸವಾಲುಗಳನ್ನು ಎದುರಿಸಲು ಸೂಕ್ತ ಪರಿಸರ ವ್ಯವಸ್ಥೆಯನ್ನು ಐಐಎಂಬಿ ನಿರ್ಮಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು.&lt;/p&gt;&lt;p&gt;ಈ ಕೊಡುಗೆಯಿಂದಾಗಿ ಐಐಎಂ ಬೆಂಗಳೂರು ಸಂಸ್ಥೆಯು ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಅಲ್ಗಾರಿದಮಿಕ್ ವಿನ್ಯಾಸ, ಭಾರತೀಯ ಜ್ಞಾನ ವ್ಯವಸ್ಥೆಗಳು ಮತ್ತು ಅನ್ವಯಿಕ ವ್ಯವಹಾರ ಕಲಿಕೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಂಶೋಧನಾ ಕ್ಲಸ್ಟರ್&zwnj;ಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಇದು ಜಾಗತಿಕ ಮಟ್ಟದ ಅಂತರಶಿಸ್ತೀಯ ಅಧ್ಯಾಪಕರ ಬಳಗವನ್ನು ನಿರ್ಮಿಸಲು ಮತ್ತು ಸಂಸ್ಥೆಯ ದೀರ್ಘಕಾಲೀನ ಶೈಕ್ಷಣಿಕ ಉದ್ದೇಶಗಳನ್ನು ಮುನ್ನಡೆಸಲು ಪ್ರಮುಖ ಮೈಲಿಗಲ್ಲಾಗಲಿದೆ.&lt;/p&gt;&lt;p&gt;1892 ರಲ್ಲಿ ಸ್ಥಾಪನೆಗೊಂಡ ಟಾಟಾ ಟ್ರಸ್ಟ್ಸ್ ಸಂಸ್ಥೆಯು ಸಂಸ್ಥಾಪಕ ಜಮ್ಸೆಟ್ಜಿ ಟಾಟಾ ಅವರ ಮಾರ್ಗದರ್ಶನದಲ್ಲಿ ಭಾರತ ಹಾಗೂ ಏಷ್ಯಾದ ಅತ್ಯಂತ ಪ್ರಮುಖ ಲೋಕೋಪಕಾರಿ ಸಂಸ್ಥೆಯಾಗಿ ಬೆಳೆದಿದೆ. ಇನ್ನೊಂದೆಡೆ, EQUIS ಮಾನ್ಯತೆ ಪಡೆದ ಐಐಎಂ ಬೆಂಗಳೂರು ತನ್ನ 50 ವರ್ಷಗಳ ಸುದೀರ್ಘ ಪಯಣದಲ್ಲಿ 150ಕ್ಕೂ ಹೆಚ್ಚು ಹಿರಿಯ ಅಧ್ಯಾಪಕರು ಮತ್ತು 25,000ಕ್ಕೂ ಹೆಚ್ಚು ಜಾಗತಿಕ ಹಳೆಯ ವಿದ್ಯಾರ್ಥಿಗಳ ಬಲದೊಂದಿಗೆ ಭಾರತದ ಶ್ರೇಷ್ಠ ನಿರ್ವಹಣಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಈ ಎರಡೂ ಮಹಾನ್ ಸಂಸ್ಥೆಗಳು ಕೈಜೋಡಿಸಿರುವುದು ಭಾರತದ ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/education/iim-bangalore-partners-with-tata-trusts-for-undergraduate-school-new-jigani-anekal-campus-gdp/articleshow-u8fkypr"/>
        </item>
        <item>
            <title><![CDATA[ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ವಿರುದ್ಧ ಸಿಡಿದೆದ್ದ ಉದ್ಯಮಿ  ಕಿರಣ್ ಮಜುಂದಾರ್-ಶಾ!]]></title>
            <link>https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s</link>
            <guid isPermaLink="true">https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s</guid>
            <pubDate>Thu, 27 Aug 2026 20:36:59 +0530</pubDate>
            <description><![CDATA[ಬೆಂಗಳೂರಿನ ಆನೇಕಲ್ ಮತ್ತು ಹುಸ್ಕೂರು-ಸರ್ಜಾಪುರ ರಸ್ತೆಗಳ ದುಸ್ಥಿತಿಯ ಕುರಿತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಮತ್ತು ಶಾಸಕ ಬಿ. ಶಿವಣ್ಣ ನಡುವೆ ತೀವ್ರ ವಾಕ್ಸಮರ ನಡೆದಿದೆ. ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿದ್ದೇನೆ ಎಂದು ಕಿರಣ್ ಹೇಳಿದರೆ, ಮೂಲಸೌಕರ್ಯಕ್ಕೆ ಸಿಎಸ್&zwnj;ಆರ್ ನಿಧಿ ಬಳಸಲಿ ಎಂದು ಶಾಸಕರು ತಿರುಗೇಟು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m11w21vbycs8tv0kz93dj2dr,imgname-mla-b-shivanna-kiran-mazumdar-shaw-1787843118954.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಬೆಂಗಳೂರಿನ ಹೊರವಲಯದ ಪ್ರಮುಖ ಕೈಗಾರಿಕಾ ಸಮೂಹವಾದ ಆನೇಕಲ್ ಹಾಗೂ ಹುಸ್ಕೂರು-ಸರ್ಜಾಪುರ ಸಂಪರ್ಕ ರಸ್ತೆಗಳ ದುಃಸ್ಥಿತಿ ಮತ್ತು ಗುಂಡಿಗಳ ಬಗ್ಗೆ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ ಹಾಗೂ ಆನೇಕಲ್ ಕಾಂಗ್ರೆಸ್ ಶಾಸಕ ಬಿ. ಶಿವಣ್ಣ ನಡುವೆ ವಾಕ್ಸಮರ ತೀವ್ರಗೊಂಡಿದೆ.&lt;/p&gt;&lt;h2&gt;&quot;ನನ್ನನ್ನು ಕೋಟ್ಯಾಧಿಪತಿ ಎಂದು ನಿಂದಿಸಬೇಡಿ!&quot;&lt;/h2&gt;&lt;p&gt;ಆನೇಕಲ್ ಪ್ರದೇಶದ ಹಾನಿಗೊಳಗಾದ ಮೂಲಸೌಕರ್ಯದ ಬಗ್ಗೆ ಎಕ್ಸ್&zwnj;ನಲ್ಲಿ ಧ್ವನಿ ಎತ್ತಿದ್ದಕ್ಕೆ ಶಾಸಕ ಶಿವಣ್ಣ ನೀಡಿದ ಹೇಳಿಕೆಗೆ ಕಿರಣ್ ಮಜುಂದಾರ್-ಶಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ನನ್ನನ್ನು ಕೇವಲ ಕೋಟ್ಯಾಧಿಪತಿ ಎಂದು ನಿಂದಿಸಬೇಡಿ. ನಾನು ಧ್ವನಿ ಇಲ್ಲದ ಮತ್ತು ಈ ದಿನನಿತ್ಯದ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಪರವಾಗಿ ಮಾತನಾಡುತ್ತಿದ್ದೇನೆ. ಹುಸ್ಕೂರು ಮತ್ತು ಸರ್ಜಾಪುರ ರಸ್ತೆಯ ನಡುವಿನ ಹಾದಿ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಮತ್ತು ಆರೋಪ&lt;/h2&gt;&lt;p&gt;ಮೂಲಸೌಕರ್ಯಗಳ ನಿರ್ಲಕ್ಷ್ಯದ ಬಗ್ಗೆ ಆನೇಕಲ್ ಶಾಸಕ ಶಿವಣ್ಣ ಅವರಿಗೆ ಸಾರ್ವಜನಿಕರು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಸಾರ್ವಜನಿಕರಿಗೆ ಪ್ರಯೋಜನವಾಗದ ಬೇರೆ ಕಾರ್ಯಗಳಿಗೆ ಹಣವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಕಿರಣ್ ಮಜುಂದಾರ್ ಆರೋಪಿಸಿದ್ದರು. ಪ್ರತಿದಿನ ಸಾವಿರಾರು ಬಿಎಂಟಿಸಿ ಬಸ್&zwnj;ಗಳು, ಶಾಲಾ ವಾಹನಗಳು ಹಾಗೂ ಕಾರುಗಳು ಸಂಚರಿಸುವ ಈ ರಸ್ತೆಗಳು ಮಾರಕ ಅಪಘಾತಗಳಿಗೆ ಆಹ್ವಾನ ನೀಡುತ್ತಿವೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು.&lt;/p&gt;&lt;h2&gt;ಶಾಸಕ ಶಿವಣ್ಣ ನೀಡಿದ ಪ್ರತಿಕ್ರಿಯೆ:&lt;/h2&gt;&lt;p&gt;ಕಿರಣ್ ಮಜುಂದಾರ್ ಅವರ ಟೀಕೆಗೆ ತಿರುಗೇಟು ನೀಡಿದ್ದ ಶಾಸಕ ಬಿ. ಶಿವಣ್ಣ, ಅವರು ಸಾವಿರಾರು ಕೋಟಿ ಗಳಿಸುತ್ತಾರೆ. ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಮೂಲಸೌಕರ್ಯ ಸುಧಾರಣೆಗೆ ನೀಡಲಿ. ನಾನು CSR ಸಹಾಯ ಕೇಳಿ ಹಲವು ಬಾರಿ ಅವರ ಬಳಿ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.&lt;/p&gt;&lt;p&gt;ಸರ್ಕಾರದಿಂದ ಬರುವ ಅನುದಾನದ ಕೊರತೆಯ ಬಗ್ಗೆ ಮಾತನಾಡಿದ ಶಾಸಕರು, ಸರ್ಕಾರದಿಂದ ಎಷ್ಟು ಅನುದಾನ ಸಿಗಲು ಸಾಧ್ಯ? ನಾವು ಡಾಂಬರು ಹಾಕುತ್ತೇವೆ, ಆದರೆ ಮಳೆಗೆ ರಸ್ತೆ ಮತ್ತೆ ಕೊಚ್ಚಿಹೋಗುತ್ತದೆ. ಹಾಗಾಗಿ ಸಿಎಸ್&zwnj;ಆರ್ ನಿಧಿ ನೀಡುವುದು ಅವರ ಕರ್ತವ್ಯ ಎಂದು ಸಮರ್ಥಿಸಿಕೊಂಡಿದ್ದರು.&lt;/p&gt;&lt;p&gt;ಇದಕ್ಕೆ ಸ್ಪಷ್ಟನೆ ನೀಡಿದ ಮಜುಂದಾರ್-ಶಾ, ತಾವು ಕೇವಲ ಉದ್ಯಮಿಯಾಗಿ ಅಲ್ಲದೆ ಸಾರ್ವಜನಿಕರ ಧ್ವನಿಯಾಗಿ ಈ ವಿಷಯ ಎತ್ತುತ್ತಿರುವುದಾಗಿ ಪುನರುಚ್ಚರಿಸಿದ್ದಾರೆ. ನಗರದಲ್ಲಿ ಸುರಿಯುತ್ತಿರುವ ಮಧ್ಯಂತರ ಮಳೆಯಿಂದಾಗಿ ಉಂಟಾಗಿರುವ ರಸ್ತೆ ಗುಂಡಿಗಳು ಮತ್ತು ಬಿಬಿಎಂಪಿ/ಸ್ಥಳೀಯಾಡಳಿತದ ವೈಫಲ್ಯದ ವಿರುದ್ಧ ಬೆಂಗಳಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ರಾಜಕೀಯ ವಾಕ್ಸಮರ ಮುನ್ನೆಲೆಗೆ ಬಂದಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kiran-mazumdar-shaw-sparks-war-of-words-with-congress-mla-b-shivanna-over-bengaluru-roads-gdp/articleshow-uprp71s"/>
        </item>
        <item>
            <title><![CDATA[ರಜೆಯಲ್ಲಿ ರ‍್ಯಾಪಿಡೋ ಓಡಿಸಿದ BBA ವಿದ್ಯಾರ್ಥಿ.. 3 ತಿಂಗಳ ಸಂಪಾದನೆ ಎಷ್ಟು ಗೊತ್ತಾ? ಇಲ್ಲೊಂದು ಪಾಠ ಇದೆ!]]></title>
            <link>https://kannada.asianetnews.com/bengaluru-urban/bengaluru-bba-student-drives-rapido-during-vacation-reveals-3-month-earnings-gkn/articleshow-urg41rl</link>
            <guid isPermaLink="true">https://kannada.asianetnews.com/bengaluru-urban/bengaluru-bba-student-drives-rapido-during-vacation-reveals-3-month-earnings-gkn/articleshow-urg41rl</guid>
            <pubDate>Wed, 19 Aug 2026 16:51:01 +0530</pubDate>
            <description><![CDATA[&lt;p&gt;ಯಾರು ಎಷ್ಟು ದುಡಿಯುತ್ತಾರೋ ಗೊತ್ತಿಲ್ಲ. ಬೆಂಗಳೂರಲ್ಲಿ ಡೆಲಿವರಿ ಬಾಯ್ಸ್ ಮಾತ್ರ ಸಖತ್ ದುಡ್ಡು ಮಾಡ್ತಾರೆ ಅನ್ನೋರಿಗೇನೂ ಕಮ್ಮಿ ಇಲ್ಲ. ಅಂತವರು ಓದಲೇಬೇಕಾದ ಸ್ಟೋರಿ ಇದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx667dz2ksdrtzfzgmgn6fc5,imgname-zomato-delivery-boy-1783693031394.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಕಾಲೇಜು ರಜೆಯ ಮೋಜು-ಮಸ್ತಿಯನ್ನು ಬದಿಗಿಟ್ಟು ಬೆಂಗಳೂರಿನ ರಸ್ತೆಗಿಳಿದ ಬಿಬಿಎ ವಿದ್ಯಾರ್ಥಿಯೊಬ್ಬ ಡೆಲಿವರಿ ಬಾಯ್ಸ್ ಮತ್ತು ರೈಡರ್&zwnj;ಗಳ ಬದುಕಿನ ನೈಜ ಚಿತ್ರಣವನ್ನು ಸಮಾಜದ ಮುಂದಿಟ್ಟಿದ್ದಾನೆ. ಮೂರು ತಿಂಗಳ ಕಾಲ ರ&zwj;್ಯಾಪಿಡೋ ಮತ್ತು ಫುಡ್ ಡೆಲಿವರಿ ಕೆಲಸ ಮಾಡಿದ ಈ ಯುವಕ ತಾನು ಗಳಿಸಿದ ಹಣಕ್ಕಿಂತ ಹೆಚ್ಚಾಗಿ ಆ ಕೆಲಸದ ಹಿಂದಿರುವ ನೋವು ಮತ್ತು ಅನಿಶ್ಚಿತತೆಯನ್ನು ಬಿಚ್ಚಿಟ್ಟಿದ್ದಾನೆ.&lt;/p&gt;&lt;h2&gt;&lt;strong&gt;ಅಂಕಿ-ಅಂಶ ಮತ್ತು ಕಠಿಣ ಶ್ರಮ&lt;/strong&gt;&lt;/h2&gt;&lt;p&gt;ಈ ಬಿಬಿಎ ವಿದ್ಯಾರ್ಥಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ.. ಆತ ಮೇ ತಿಂಗಳಲ್ಲಿ 5,650 ರೂ., ಜೂನ್&zwnj;ನಲ್ಲಿ 16,660 ರೂ. ಹಾಗೂ ಜುಲೈನಲ್ಲಿ 14,222 ರೂ. ಗಳಿಸಿದ್ದಾನೆ. ದಿನವೊಂದಕ್ಕೆ ಸುಮಾರು 1,200 ರೂಪಾಯಿ ಸಂಪಾದನೆ ಮಾಡುವುದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು. ಈ 1,200 ರೂಪಾಯಿಯಲ್ಲಿ ಪೆಟ್ರೋಲ್ ಖರ್ಚು, ಬೈಕ್ ಸವಕಳಿ (Maintenance) ಮತ್ತು ಕೆಲಸದ ಅವಧಿಯ ಊಟದ ಖರ್ಚನ್ನು ಕಳೆಯಬೇಕು. ಇದೆಲ್ಲಾ ಕಳೆದ ನಂತರ ರೈಡರ್ ಕೈಗೆ ಸಿಗುವ ಲಾಭ ಅತ್ಯಲ್ಪ.&lt;/p&gt;&lt;h2&gt;&lt;strong&gt;ಕಾಯುವಿಕೆ ಅತಿ ದೊಡ್ಡ ಶಾಪ&lt;/strong&gt;&lt;/h2&gt;&lt;p&gt;ಒಂದು ಫುಡ್ ಆರ್ಡರ್ ಬಂದರೆ ನಾವು ಹೋಟೆಲ್ ಮುಂದೆ 20 ರಿಂದ 25 ನಿಮಿಷ ಕಾಯಬೇಕು. ಟೈಮ್ ಅಂದ್ರೆ ನಮಗೆ ಮನಿ ಎಂದು ಆ ಯುವಕ ಹೇಳಿದ್ದಾನೆ. ಈ ಕಾಯುವ ಸಮಯಕ್ಕೆ ಯಾವುದೇ ಪ್ಲಾಟ್&zwnj;ಫಾರ್ಮ್ ಹಣ ನೀಡುವುದಿಲ್ಲ. ಹೋಟೆಲ್ ಮಾಲೀಕರ ಉದಾಸೀನತೆ ಮತ್ತು ಗ್ರಾಹಕರ ತರಾತುರಿಯ ನಡುವೆ ಡೆಲಿವರಿ ಬಾಯ್ಸ್ ನಲುಗುತ್ತಿದ್ದಾರೆ. ಟ್ರಾಫಿಕ್ ಕಿರಿಕಿರಿ, ಬಿಸಿಲು, ಮಳೆಯ ನಡುವೆ ನಿರಂತರವಾಗಿ ಬೈಕ್ ಓಡಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಸತ್ಯವನ್ನು ಈ ಯುವಕನ ಅನುಭವ ಸಾರಿ ಹೇಳುತ್ತಿದೆ.&lt;/p&gt;&lt;h2&gt;&lt;strong&gt;ಗಿಗ್ ಎಕಾನಮಿಯ ಕರಾಳ ಮುಖ&lt;/strong&gt;&lt;/h2&gt;&lt;p&gt;ಇದು ಕೇವಲ ಸೈಡ್ ಹಸಲ್ (Side Hustle) ಆಗಿ ಮಾಡುವವರಿಗೆ ಚೆನ್ನಾಗಿ ಕಾಣಬಹುದು. ಇದನ್ನೇ ಜೀವನೋಪಾಯವನ್ನಾಗಿ ಮಾಡಿಕೊಂಡವರ ಸ್ಥಿತಿ ದಯನೀಯ. ಇಂದು ಆರ್ಡರ್ ಸಿಕ್ಕರೆ ಹಣ, ಇಲ್ಲದಿದ್ದರೆ ಶೂನ್ಯ. ಅಪಘಾತವಾದರೆ ಅಥವಾ ಆರೋಗ್ಯ ಕೆಟ್ಟರೆ ಈ ಕಂಪನಿಗಳು ಯಾವುದೇ ಗಟ್ಟಿಯಾದ ಸಾಮಾಜಿಕ ಭದ್ರತೆ ನೀಡುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆತ ಹೇಳಿಕೊಂಡಿರುವಂತೆ ಆಟೋ ಚಾಲಕರ ಕಣ್ಣುಗಳು ಮತ್ತು ದಾರಿಯಲ್ಲಿ ಸಿಗುವ ಜನರ ವರ್ತನೆ ಯಾವಾಗಲೂ ಇವರ ಪರವಾಗಿರುವುದಿಲ್ಲ.&lt;/p&gt;&lt;h2&gt;&lt;strong&gt;ಗ್ರಾಹಕರಿಗೆ ಒಂದು ಕಿವಿಮಾತು&lt;/strong&gt;&lt;/h2&gt;&lt;p&gt;ಈ ಯುವಕನ ಕಥೆ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕ ವಲಯದಲ್ಲಿ ಒಂದು ಚರ್ಚೆ ಶುರುವಾಗಿದೆ. ಕ್ಯಾಶ್ ಆನ್ ಡೆಲಿವರಿ ಆರ್ಡರ್ ಮಾಡುವ ಗ್ರಾಹಕರು ಡೆಲಿವರಿ ಬಾಯ್ ಬಂದ ಮೇಲೆ ಚಿಲ್ಲರೆ ಹುಡುಕುವುದು ಅಥವಾ ಬಾಗಿಲು ತೆಗೆಯಲು 5-10 ನಿಮಿಷ ಕಾಯಿಸುವುದು ಅವರ ಒಂದು ದಿನದ ಸಂಪಾದನೆಯ ಮೇಲೆ ದೊಡ್ಡ ಹೊಡೆತ ಬೀಳುವಂತೆ ಮಾಡುತ್ತದೆ.&lt;/p&gt;&lt;p&gt;ಬೆಂಗಳೂರಿನ ಈ ಬಿಬಿಎ ವಿದ್ಯಾರ್ಥಿ ತನ್ನ ರಜೆಯನ್ನು ಕೇವಲ ಹಣ ಮಾಡಲು ಬಳಸಲಿಲ್ಲ. ಬದಲಾಗಿ ಹಸಿದ ಹೊಟ್ಟೆಗೆ ಅನ್ನ ನೀಡುವ ಜನರನ್ನು ಓಡಾಡಿಸುವ 'ಡೆಲಿವರಿ ಹೀರೊಗಳ' ಜೀವನ ಎಷ್ಟು ಸಂಕಷ್ಟದಲ್ಲಿದೆ ಎಂಬುದನ್ನು ವಿಮರ್ಶಾತ್ಮಕವಾಗಿ ಜಗತ್ತಿಗೆ ತೋರಿಸಿಕೊಟ್ಟಿದ್ದಾನೆ. 1,200 ರೂಪಾಯಿ ದಿನದ ಸಂಪಾದನೆ ಎಂಬ ಹೊಳೆಯುವ ಕವಚದೊಳಗೆ ಅಡಗಿರುವುದು ಸುಸ್ತಾದ ದೇಹ ಮತ್ತು ನಾಳೆಯ ಬದುಕಿನ ಅನಿಶ್ಚಿತತೆ ಮಾತ್ರ.&lt;/p&gt;]]></content:encoded>
            <category>bengaluru-rural</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/bengaluru-bba-student-drives-rapido-during-vacation-reveals-3-month-earnings-gkn/articleshow-urg41rl"/>
        </item>
        <item>
            <title><![CDATA[ನೀಲಿ ಸಮುದ್ರದ ಸುಂದರ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ನೇರ ವಿಮಾನ: ಇಲ್ಲಿದೆ ಕಂಪ್ಲೀಟ್ ಟೂರ್ ಪ್ಯಾಕೇಜ್ ಡೀಟೇಲ್ಸ್!]]></title>
            <link>https://kannada.asianetnews.com/travel/makemytrip-partners-with-fly91-to-launch-direct-flights-from-bengaluru-to-lakshadweep-gdp/articleshow-vo3gql7</link>
            <guid isPermaLink="true">https://kannada.asianetnews.com/travel/makemytrip-partners-with-fly91-to-launch-direct-flights-from-bengaluru-to-lakshadweep-gdp/articleshow-vo3gql7</guid>
            <pubDate>Tue, 01 Sep 2026 12:34:24 +0530</pubDate>
            <description><![CDATA[ಮೇಕ್&zwnj;ಮೈಟ್ರಿಪ್ ಮತ್ತು ಫ್ಲೈ91 ಸಂಸ್ಥೆಗಳು ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕವಿರುವ ವಿಶೇಷ ಹಾಲಿಡೇ ಪ್ಯಾಕೇಜ್&zwnj;ಗಳನ್ನು ಘೋಷಿಸಿವೆ. ನವೆಂಬರ್ 2026 ರಿಂದ ಆರಂಭವಾಗುವ ಈ ಪ್ಯಾಕೇಜ್, ವಿಮಾನ ಟಿಕೆಟ್, ವಸತಿ, ಮತ್ತು ಸ್ಥಳೀಯ ಚಟುವಟಿಕೆಗಳನ್ನು ಒಳಗೊಂಡಿದ್ದು, ಪ್ರವಾಸಿಗರಿಗೆ ಸುಲಭ ಪ್ರಯಾಣದ ಅನುಭವ ನೀಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jtm800ds356w82pvjvfg4w7e,imgname-flights-to-jodhpur-bikaner-1746583683513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನೀಲಿ ಸಮುದ್ರ, ಹವಳದ ದಿಬ್ಬಗಳು ಮತ್ತು ನಿಸರ್ಗ ಸೌಂದರ್ಯಕ್ಕೆ ಹೆಸರಾದ ಲಕ್ಷದ್ವೀಪಕ್ಕೆ ಪ್ರವಾಸ ಹೋಗಲು ಬಯಸುವವರಿಗೆ ಇಲ್ಲೊಂದು ಸಿಹಿ ಸುದ್ದಿ. ಪ್ರಮುಖ ಆನ್&zwnj;ಲೈನ್ ಟ್ರಾವೆಲ್ ಸಂಸ್ಥೆ 'ಮೇಕ್&zwnj;ಮೈಟ್ರಿಪ್' ಪ್ರಾದೇಶಿಕ ವಿಮಾನಯಾನ ಸಂಸ್ಥೆ 'ಫ್ಲೈ91' ಜೊತೆ ಕೈಜೋಡಿಸಿದ್ದು, ಬೆಂಗಳೂರಿನಿಂದ ಲಕ್ಷದ್ವೀಪಕ್ಕೆ ನೇರ ವಿಮಾನ ಸಂಪರ್ಕವಿರುವ ವಿಶೇಷ ಹಾಲಿಡೇ ಪ್ಯಾಕೇಜ್&zwnj;ಗಳನ್ನು ಘೋಷಿಸಿದೆ.&lt;/p&gt;&lt;h2&gt;ನವೆಂಬರ್&zwnj;ನಿಂದ ವಿಮಾನ ಸೇವೆ ಆರಂಭ&lt;/h2&gt;&lt;p&gt;ಈ ವಿಶೇಷ ವಿಮಾನ ಸೇವೆಯು 2026ರ ನವೆಂಬರ್ 12 ರಿಂದ ಆರಂಭವಾಗಲಿದ್ದು, 2027ರ ಜನವರಿ ಮಧ್ಯದವರೆಗೆ ಲಭ್ಯವಿರಲಿದೆ. ಲಕ್ಷದ್ವೀಪಕ್ಕೆ ಭೇಟಿ ನೀಡಲು ನವೆಂಬರ್&zwnj;ನಿಂದ ಜನವರಿ ಅತ್ಯಂತ ಪ್ರಶಸ್ತವಾದ ಸಮಯ ಆಗಿರುವುದರಿಂದ, ಪ್ರತಿ ನಾಲ್ಕು ದಿನಗಳಿಗೊಮ್ಮೆ ಬೆಂಗಳೂರಿನಿಂದ ಲಕ್ಷದ್ವೀಪದ 'ಅಗತ್ತಿ' ದ್ವೀಪಕ್ಕೆ ವಿಮಾನಗಳು ಹಾರಾಟ ನಡೆಸಲಿವೆ.&lt;/p&gt;&lt;p&gt;ಬೆಂಗಳೂರು ನಗರವು ದೇಶದ ಇತರೆ ಪ್ರಮುಖ ನಗರಗಳೊಂದಿಗೆ ಅತ್ಯುತ್ತಮ ಸಂಪರ್ಕ ಹೊಂದಿರುವುದರಿಂದ, ಕೇವಲ ದಕ್ಷಿಣ ಭಾರತೀಯರಿಗೆ ಮಾತ್ರವಲ್ಲದೆ ಇಡೀ ದೇಶದ ಪ್ರವಾಸಿಗರಿಗೆ ಲಕ್ಷದ್ವೀಪ ತಲುಪಲು ಬೆಂಗಳೂರು ಮುಖ್ಯ ಹೆಬ್ಬಾಗಿಲಾಗಲಿದೆ.&lt;/p&gt;&lt;h2&gt;ಪ್ಯಾಕೇಜ್ ದರ ಎಷ್ಟು? ವಿಶೇಷತೆಗಳು ಏನು?&lt;/h2&gt;&lt;p&gt;4 ದಿನ ಮತ್ತು 3 ರಾತ್ರಿಗಳ ಈ ಪ್ರವಾಸ ಪ್ಯಾಕೇಜ್&zwnj;ನ ದರ ಒಬ್ಬರಿಗೆ 84,898 ರೂ. ರಿಂದ ಆರಂಭವಾಗುತ್ತದೆ. ಇದರಲ್ಲಿ ಬೆಂಗಳೂರಿನಿಂದ ಹೋಗಿ-ಬರುವ ನೇರ ವಿಮಾನ ಟಿಕೆಟ್, ಲಕ್ಷದ್ವೀಪ ಪ್ರವೇಶಕ್ಕೆ ಅಗತ್ಯವಿರುವ ಪರ್ಮಿಟ್ (ಅನುಮತಿ ಪತ್ರ), ಉತ್ತಮ ವಸತಿ, ಊಟೋಪಚಾರ, ಸ್ಥಳೀಯ ಚಟುವಟಿಕೆಗಳು ಹಾಗೂ ಪ್ರವಾಸಿಗರ ನೆರವಿಗೆ ಜತೆಯಲ್ಲೇ ಒಬ್ಬ ಟೂರ್ ಮ್ಯಾನೇಜರ್ ಲಭ್ಯವಿರಲಿದ್ದಾರೆ.&lt;/p&gt;&lt;p&gt;ವಿಶೇಷವೆಂದರೆ ಲಕ್ಷದ್ವೀಪ ಪ್ರವಾಸಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಒಂದೇ ಬುಕಿಂಗ್ ಅಡಿಯಲ್ಲಿ ಕಲ್ಪಿಸಲಾಗಿದೆ. ಇದು ಪ್ರವಾಸಿಗರಿಗೆ ಅತ್ಯಂತ ಅನುಕೂಲಕರವಾಗಿದೆ.&lt;/p&gt;&lt;p&gt;ಪ್ಯಾಕೇಜ್&zwnj;ನಲ್ಲಿರುವ ಸಾಮಾನ್ಯ ಚಟುವಟಿಕೆಗಳ ಜೊತೆಗೆ, ಪ್ರವಾಸಿಗರು ಹೆಚ್ಚುವರಿ ಶುಲ್ಕ ನೀಡಿ ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್, ಆಮೆಗಳ ವೀಕ್ಷಣೆ, ಕಯಾಕಿಂಗ್, ಗ್ಲಾಸ್-ಬಾಟಮ್ ಬೋಟ್ ರೈಡ್ ಹಾಗೂ ಯೋಗ-ಧ್ಯಾನದಂತಹ ಚಟುವಟಿಕೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.&lt;/p&gt;&lt;h2&gt;ಲಕ್ಷದ್ವೀಪ ಸಂಪರ್ಕ ಸಮಸ್ಯೆಗೆ ಮುಕ್ತಿ&lt;/h2&gt;&lt;p&gt;&quot;ಲಕ್ಷದ್ವೀಪಕ್ಕೆ ಭೇಟಿ ನೀಡಲು ಜನರಿಗೆ ಅಪಾರ ಆಸಕ್ತಿಯಿತ್ತು, ಆದರೆ ನೇರ ಮತ್ತು ಸುಲಭ ಪ್ರಯಾಣದ ಕೊರತೆಯಿತ್ತು. ಈ ಪಾಲುದಾರಿಕೆಯು ಆ ಕೊರತೆಯನ್ನು ನೀಗಿಸಲಿದೆ,&quot; ಎಂದು ಮೇಕ್&zwnj;ಮೈಟ್ರಿಪ್&zwnj;ನ ಚೀಫ್ ಬಿಸಿನೆಸ್ ಆಫೀಸರ್ ಜಸ್ಮೀತ್ ಸಿಂಗ್ ಹೇಳಿದ್ದಾರೆ..&lt;/p&gt;&lt;p&gt;ಫ್ಲೈ91 ಸಂಸ್ಥೆಯ ಎಂಡಿ ಮತ್ತು ಸಿಇಒ ಮನೋಜ್ ಚಾಕೋ ಮಾತನಾಡಿ, &quot;ಅಗತ್ತಿ ಭಾರತದ ಅತ್ಯಂತ ಸುಂದರ ಹಾಗೂ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ಪ್ರಯಾಣಿಕರಿಗೆ ಕೇವಲ ವಿಮಾನಯಾನ ಮಾತ್ರವಲ್ಲದೆ, ನೆನಪಿನಲ್ಲಿ ಉಳಿಯುವಂತಹ ಅದ್ಭುತ ರಜಾದಿನಗಳ ಅನುಭವವನ್ನು ನೀಡುವುದು ನಮ್ಮ ಉದ್ದೇಶ,&quot; ಎಂದು ವಿವರಿಸಿದ್ದಾರೆ.&lt;/p&gt;&lt;p&gt;ಈ ಆಕರ್ಷಕ ಲಕ್ಷದ್ವೀಪ ಹಾಲಿಡೇ ಪ್ಯಾಕೇಜ್&zwnj;ಗಳನ್ನು ಮೇಕ್&zwnj;ಮೈಟ್ರಿಪ್&zwnj;ನ ಆ್ಯಪ್, ಅಧಿಕೃತ ವೆಬ್&zwnj;ಸೈಟ್ ಅಥವಾ ಅದರ ಫ್ರಾಂಚೈಸಿ ಕೇಂದ್ರಗಳ ಮೂಲಕ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/travel/makemytrip-partners-with-fly91-to-launch-direct-flights-from-bengaluru-to-lakshadweep-gdp/articleshow-vo3gql7"/>
        </item>
        <item>
            <title><![CDATA[ಓಣಂ ಹಬ್ಬಕ್ಕೆ ಕೇರಳಕ್ಕೆ ಹೊರಟ ಪ್ರಯಾಣಿಕರಿಗೆ ಆಘಾತ: ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ 6 ಗಂಟೆ ವಿಳಂಬ!]]></title>
            <link>https://kannada.asianetnews.com/karnataka-districts/onam-rush-chaos-bengaluru-ernakulam-vande-bharat-express-delayed-passengers-protest-over-technical-snag-updates-gdp/articleshow-z3kgbgw</link>
            <guid isPermaLink="true">https://kannada.asianetnews.com/karnataka-districts/onam-rush-chaos-bengaluru-ernakulam-vande-bharat-express-delayed-passengers-protest-over-technical-snag-updates-gdp/articleshow-z3kgbgw</guid>
            <pubDate>Mon, 24 Aug 2026 13:26:42 +0530</pubDate>
            <description><![CDATA[ಓಣಂ ಹಬ್ಬದಂದು ಬೆಂಗಳೂರಿನಿಂದ ಎರ್ನಾಕುಲಂಗೆ ಹೊರಟಿದ್ದ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲು 'ಹಾಟ್ ಆಕ್ಸಲ್' ತಾಂತ್ರಿಕ ದೋಷದಿಂದಾಗಿ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಯಿತು. ಈ ಘಟನೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದು, ಈ ಮಾರ್ಗಕ್ಕೆ ಹೆಚ್ಚುವರಿ ರೈಲಿನ (ರೇಕ್) ಅವಶ್ಯಕತೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqf8eprz47dvdamqfzsw10tw,imgname-untitled-design---2026-04-30t184002.165-1777554905887.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಓಣಂ ಹಬ್ಬದ ಪ್ರಯುಕ್ತ ಸ್ವಗ್ರಾಮಕ್ಕೆ ತೆರಳಲು ಸಜ್ಜಾಗಿದ್ದ ನೂರಾರು ಕೇರಳ ಮೂಲದ ಪ್ರಯಾಣಿಕರಿಗೆ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ತಾಂತ್ರಿಕ ದೋಷ ಭಾರಿ ನಿರಾಸೆ ಮೂಡಿಸಿದೆ. ಕೆಎಸ್&zwnj;ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಬೆಳಿಗ್ಗೆ 5:10 ಕ್ಕೆ ಹೊರಡಬೇಕಿದ್ದ ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ರೈಲು ಆರು ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿ, ಅಂತಿಮವಾಗಿ ಬೆಳಿಗ್ಗೆ 11:45 ಕ್ಕೆ ಪಯಣ ಬೆಳೆಸಿತು.&lt;/p&gt;&lt;h2&gt;ತಾಂತ್ರಿಕ ದೋಷ&lt;/h2&gt;&lt;p&gt;ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕಾರಿಗಳ ಪ್ರಕಾರ, ರೈಲಿನಲ್ಲಿ 'ಹಾಟ್ ಆಕ್ಸಲ್' (Hot Axle) ತಾಂತ್ರಿಕ ದೋಷ ಪತ್ತೆಯಾಗಿದ್ದೇ ಈ ವಿಳಂಬಕ್ಕೆ ಪ್ರಮುಖ ಕಾರಣ. ಕೋಚ್&zwnj;ನ ಆಕ್ಸಲ್ ಘರ್ಷಣೆ, ಕಳಪೆ ನಯಗೊಳಿಸುವಿಕೆ (Lubrication) ಅಥವಾ ಯಾಂತ್ರಿಕ ವೈಫಲ್ಯದಿಂದ ಅತಿಯಾಗಿ ಬಿಸಿಯಾದಾಗ ಈ ಸಮಸ್ಯೆ ಎದುರಾಗುತ್ತದೆ. ಇದನ್ನು ತಕ್ಷಣ ಸರಿಪಡಿಸದಿದ್ದರೆ ರೈಲು ಹಳಿತಪ್ಪುವಿಕೆ ಅಥವಾ ಬೆಂಕಿ ಅವಘಡ ಸಂಭವಿಸುವ ಅಪಾಯವಿರುತ್ತದೆ. ಹೀಗಾಗಿ ಸುರಕ್ಷತೆಯ ಹಿತದೃಷ್ಟಿಯಿಂದ ರೈಲು ಪ್ರಯಾಣವನ್ನು ಮುಂದೂಡಲಾಯಿತು.&lt;/p&gt;&lt;h2&gt;ಪ್ರಯಾಣಿಕರ ಆಕ್ರೋಶ :&lt;/h2&gt;&lt;p&gt;ರೈಲ್ವೆ ಇಲಾಖೆಯಿಂದ ನಿಖರ ಮಾಹಿತಿ ಸಿಗದೆ ಕೆಎಸ್&zwnj;ಆರ್ ಬೆಂಗಳೂರು ಹಾಗೂ ಕೆ.ಆರ್. ಪುರಂ ನಿಲ್ದಾಣಗಳಲ್ಲಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಯಾಣಕ್ಕೆ ಕೇವಲ ಒಂದು ಗಂಟೆ ಮುಂಚಿತವಾಗಿ ವಿಳಂಬದ ಸಂದೇಶ ತಲುಪಿತ್ತು. ಬೆಳಿಗ್ಗೆ 5:30 ರ ಸುಮಾರಿಗೆ ರೈಲು 8:45 ಕ್ಕೆ ಹೊರಡಲಿದೆ ಎಂದು ತಿಳಿಸಲಾಯಿತಾದರೂ, ನಂತರ 11:10 ಹಾಗೂ ಅಂತಿಮವಾಗಿ 11:45 ಕ್ಕೆ ಸಮಯವನ್ನು ಬದಲಾಯಿಸಲಾಯಿತು.&lt;/p&gt;&lt;h2&gt;ಕೆ.ಆರ್. ಪುರಂ ನಿಲ್ದಾಣದಲ್ಲಿ ಪರದಾಟ&lt;/h2&gt;&lt;p&gt;ಮೆಜೆಸ್ಟಿಕ್&zwnj;ನಲ್ಲಿ ಕಾಯುತ್ತಿದ್ದ ಪ್ರಯಾಣಿಕರಿಗೆ 3 ಗಂಟೆಯ ನಂತರ ಉಚಿತ ಉಪಹಾರ ಒದಗಿಸಲಾಯಿತು. ಆದರೆ ಸೂಕ್ತ ವೇಟಿಂಗ್ ರೂಮ್&zwnj;ಗಳಿಲ್ಲದ ಕೆ.ಆರ್. ಪುರಂ ನಿಲ್ದಾಣದಲ್ಲಿ ಸಣ್ಣ ಮಕ್ಕಳೊಂದಿಗೆ ಕಾಯುತ್ತಿದ್ದ ಕುಟುಂಬಗಳು ತೀವ್ರ ತೊಂದರೆ ಅನುಭವಿಸಿದವು.&lt;/p&gt;&lt;h2&gt;ಮರು-ಆಯೋಜಿತ ಸಮಯ ಹಾಗೂ ರಿಟರ್ನ್ ಸೇವೆ ಮೇಲೆ ಪರಿಣಾಮ:&lt;/h2&gt;&lt;p&gt;ಬೆಳಿಗ್ಗೆ 11:45 ಕ್ಕೆ ಹೊರಟ ರೈಲು ರಾತ್ರಿ 8:00 ಗಂಟೆಯ ನಂತರ ಎರ್ನಾಕುಲಂ ತಲುಪಿತು. ಇದರಿಂದಾಗಿ ರಾತ್ರಿ 8:30 ಕ್ಕೆ ಎರ್ನಾಕುಲಂನಿಂದ ಹೊರಡಬೇಕಿದ್ದ ರಿಟರ್ನ್ ಸೇವೆಯಲ್ಲೂ ವ್ಯತ್ಯಯ ಉಂಟಾಯಿತು. ಈ ವಿಳಂಬವನ್ನು ಸರಿಹೊಂದಿಸಲು ಮರುದಿನ ಬೆಂಗಳೂರಿನಿಂದ ಹೊರಡುವ ಸಮಯವನ್ನು ಬೆಳಿಗ್ಗೆ 8:00 ಗಂಟೆಗೆ ಮರು ನಿಗದಿಪಡಿಸಲಾಯಿತು.&lt;/p&gt;&lt;h2&gt;ಎರಡನೇ ರೇಕ್ (Rake) ಪೂರೈಕೆಗೆ ಹೆಚ್ಚಿದ ಬೇಡಿಕೆ:&lt;/h2&gt;&lt;p&gt;ಬೆಳೆಯುತ್ತಿರುವ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಈ ಮಾರ್ಗಕ್ಕೆ ಮತ್ತೊಂದು ಹೆಚ್ಚುವರಿ ರೇಕ್ ಒದಗಿಸಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ಪ್ರಸ್ತುತ ಒಂದೇ ರೇಕ್ ದಿನವಿಡೀ ಎರಡೂ ನಗರಗಳ ನಡುವೆ ಸಂಚರಿಸುತ್ತಿರುವುದರಿಂದ, ಸಣ್ಣ ತಾಂತ್ರಿಕ ದೋಷ ಎದುರಾದರೂ ಇಡೀ ವೇಳಾಪಟ್ಟಿ ಅಸ್ತವ್ಯಸ್ತಗೊಳ್ಳುತ್ತಿದೆ. ಕಳೆದ ಜೂನ್&zwnj;ನಲ್ಲೂ ಹಳಿ ದ್ವಿಗುಣಗೊಳಿಸುವ ಕಾಮಗಾರಿಯಿಂದಾಗಿ ಈ ರೈಲು ಸತತವಾಗಿ ವಿಳಂಬವಾಗಿತ್ತು. ಆಗಸ್ಟ್ 17, 2024 ರಂದು ಬೋಗಿಗಳ ಸಂಖ್ಯೆಯನ್ನು 8 ರಿಂದ 16 ಕ್ಕೆ (1,128 ಆಸನಗಳು) ಹೆಚ್ಚಿಸಲಾಗಿದ್ದರೂ, ಕಾರ್ಯಾಚರಣೆಯ ನಿಖರತೆ ಹಾಗೂ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವುದು ರೈಲ್ವೇ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/onam-rush-chaos-bengaluru-ernakulam-vande-bharat-express-delayed-passengers-protest-over-technical-snag-updates-gdp/articleshow-z3kgbgw"/>
        </item>
        <item>
            <title><![CDATA[ಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ: ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ]]></title>
            <link>https://kannada.asianetnews.com/business/nclt-orders-dissolution-of-infotech-hal-joint-venture-between-hal-and-cyient-closed-gdp/articleshow-zmngyzq</link>
            <guid isPermaLink="true">https://kannada.asianetnews.com/business/nclt-orders-dissolution-of-infotech-hal-joint-venture-between-hal-and-cyient-closed-gdp/articleshow-zmngyzq</guid>
            <pubDate>Thu, 20 Aug 2026 19:04:38 +0530</pubDate>
            <description><![CDATA[ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಎಚ್&zwnj;ಎಎಲ್ ಮತ್ತು ಸೈಯಂಟ್ ನಡುವಿನ ನಿಷ್ಕ್ರಿಯ ಜಂಟಿ ಉದ್ಯಮ 'ಇನ್ಫೋಟೆಕ್ HAL ಲಿಮಿಟೆಡ್' ಅನ್ನು ವಿಸರ್ಜಿಸಲು ಆದೇಶಿಸಿದೆ. ಈ ಬೆಳವಣಿಗೆಯು ಎಚ್&zwnj;ಎಎಲ್&zwnj;ನ ಪ್ರಮುಖ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಸಂಸ್ಥೆಯು ಉತ್ತಮ ಆರ್ಥಿಕ ಸಾಧನೆ ಮತ್ತು ಸರ್ಕಾರದ ದೇಶೀಕರಣ ನೀತಿಗಳಿಂದಾಗಿ ಸದೃಢವಾಗಿ ಮುನ್ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jw9a00jxm6cpdrfhffszpcap,imgname-1487147612-83-1748364165725.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಬೆಂಗಳೂರು ಪೀಠವು 'ಇನ್ಫೋಟೆಕ್ HAL ಲಿಮಿಟೆಡ್' ಅನ್ನು ಔಪಚಾರಿಕವಾಗಿ ವಿಸರ್ಜಿಸಲು ಆದೇಶಿಸಿದೆ. ಈ ಕುರಿತು ಪ್ರಮುಖ ರಕ್ಷಣಾ ವಲಯದ ಪಿಎಸ್&zwnj;ಯು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಷೇರು ವಿನಿಮಯ ಕೇಂದ್ರಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದೆ.&lt;/p&gt;&lt;p&gt;'ಇನ್ಫೋಟೆಕ್ HAL' ಎಂಬುದು ಎಚ್&zwnj;ಎಎಲ್ (HAL) ಮತ್ತು ತಂತ್ರಜ್ಞಾನ ಸಂಸ್ಥೆ 'ಸೈಯಂಟ್' (Cyient) ನಡುವಿನ 50:50 ಪಾಲಿನ ಜಂಟಿ ಉದ್ಯಮವಾಗಿತ್ತು . ಹಲವು ದಿನಗಳಿಂದ ನಿಷ್ಕ್ರಿಯವಾಗಿದ್ದ ಈ ಘಟಕದ ಮುಕ್ತಾಯ ಪ್ರಕ್ರಿಯೆಯು ಮಾರ್ಚ್ 2024 ರಲ್ಲಿ ಪ್ರಾರಂಭವಾಗಿತ್ತು. ಎನ್&zwnj;ಸಿಎಲ್&zwnj;ಟಿ ಬೆಂಗಳೂರು ಪೀಠವು ಆಗಸ್ಟ್ 17, 2026 ರಂದು ವಿಸರ್ಜನಾ ಆದೇಶವನ್ನು ಹೊರಡಿಸಿದ್ದು, ಎಚ್&zwnj;ಎಎಲ್ ಸಂಸ್ಥೆಯು ಆಗಸ್ಟ್ 20, 2026 ರಂದು ಈ ಆದೇಶದ ಪ್ರತಿಯನ್ನು ಸ್ವೀಕರಿಸಿದೆ.&lt;/p&gt;&lt;h2&gt;ಸೆಬಿ ನಿಯಮಾವಳಿ ಮತ್ತು ಆರ್ಥಿಕ ಸ್ಥಿತಿಗತಿ&lt;/h2&gt;&lt;p&gt;ಸೆಬಿ (SEBI LODR, 2015) ನಿಯಮಗಳ ಅಡಿಯಲ್ಲಿ ಎಚ್&zwnj;ಎಎಲ್ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಜಂಟಿ ಸಂಸ್ಥೆಯು ದೀರ್ಘಕಾಲದಿಂದ ಯಾವುದೇ ಕಾರ್ಯಾಚರಣೆ ನಡೆಸದೆ ನಿಷ್ಕ್ರಿಯವಾಗಿದ್ದರಿಂದ, ಇದರ ವಿಸರ್ಜನೆಯು ಎಚ್&zwnj;ಎಎಲ್&zwnj;ನ ಪ್ರಸ್ತುತ ಸಕ್ರಿಯ ಬ್ಯಾಲೆನ್ಸ್ ಶೀಟ್ ಅಥವಾ ನಡೆಯಲ್ಲಿರುವ ರಕ್ಷಣಾ ಯೋಜನೆಗಳ ಮೇಲೆ ಯಾವುದೇ ವಿಪರೀತ ಪರಿಣಾಮ ಬೀರುವುದಿಲ್ಲ. ಜಂಟಿ ಉದ್ಯಮವು ಔಪಚಾರಿಕವಾಗಿ ಮುಕ್ತಾಯಗೊಂಡಿರುವುದನ್ನು ಹೊರತುಪಡಿಸಿ, ಇದರಿಂದಾಗುವ ಅಂತಿಮ ಹಣಕಾಸು ಲೆಕ್ಕಪತ್ರ ಪ್ರಕ್ರಿಯೆಗಳು ನಿಯಮಾವಳಿಗಳಂತೆ ಪೂರ್ಣಗೊಳ್ಳಲಿವೆ.&lt;/p&gt;&lt;h2&gt;ಸ್ವಾವಲಂಬಿ ರಕ್ಷಣಾ ವಲಯ ಮತ್ತು ಎಚ್&zwnj;ಎಎಲ್ ಪಾತ್ರ&lt;/h2&gt;&lt;p&gt;ರಕ್ಷಣಾ ಕ್ಷೇತ್ರದಲ್ಲಿ ದೇಶೀಕರಣವನ್ನು ಉತ್ತೇಜಿಸಲು ಭಾರತ ಸರ್ಕಾರವು ಕೈಗೊಳ್ಳುತ್ತಿರುವ ಪ್ರಮುಖ ಕ್ರಮಗಳ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ. ಇತ್ತೀಚೆಗೆ ರಕ್ಷಣಾ ಉತ್ಪಾದನಾ ಇಲಾಖೆಯು ಸುಮಾರು ₹3,070 ಕೋಟಿ ವ್ಯಾಪಾರ ಮೌಲ್ಯ ಹೊಂದಿರುವ 405 ಸಾಮರಸ್ಯ ಆಧಾರಿತ ರಕ್ಷಣಾ ವಸ್ತುಗಳ 'ಆರನೇ ಸಕಾರಾತ್ಮಕ ದೇಶೀಕರಣ ಪಟ್ಟಿ'ಯನ್ನು ಬಿಡುಗಡೆ ಮಾಡಿದೆ. ಆಮದು ಅವಲಂಬನೆ ಕಡಿಮೆ ಮಾಡಿ ಎಚ್&zwnj;ಎಎಲ್ ನಂತಹ ಸ್ವದೇಶಿ ತಯಾರಕರಿಗೆ ಹೆಚ್ಚಿನ ಅವಕಾಶ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.&lt;/p&gt;&lt;p&gt;ಇದರ ಜೊತೆಗೆ, ಭಾರತೀಯ ವಾಯುಪಡೆಗಾಗಿ ಸುಮಾರು ₹1 ಲಕ್ಷ ಕೋಟಿ ($10 ಬಿಲಿಯನ್) ಮೌಲ್ಯದ 60 ಬಹು-ಪಾತ್ರ ಸಾರಿಗೆ ವಿಮಾನಗಳ ಪೂರೈಕೆಗೆ ಜಾಗತಿಕ ಪ್ರಸ್ತಾವನೆ (RFP) ಆಹ್ವಾನಿಸಲಾಗಿದೆ. ಜಾಗತಿಕ ಮೂಲ ಸಲಕರಣೆ ತಯಾರಕರ (OEM) ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲು ಎಚ್&zwnj;ಎಎಲ್, ಟಾಟಾ ಮತ್ತು ಮಹೀಂದ್ರಾ ನಂತಹ ಪ್ರಮುಖ ಭಾರತೀಯ ಕಂಪನಿಗಳಿಗೆ ಟೆಂಡರ್&zwnj;ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.&lt;/p&gt;&lt;h2&gt;ಉತ್ತಮ ಆರ್ಥಿಕ ಸಾಧನೆ ತಂದ ಪ್ರಗತಿ&lt;/h2&gt;&lt;p&gt;ಇತ್ತೀಚಿನ ಜೂನ್ ತ್ರೈಮಾಸಿಕದಲ್ಲಿ ಎಚ್&zwnj;ಎಎಲ್ ನಿರೀಕ್ಷೆಗೂ ಮೀರಿದ ಬಲವಾದ ಆರ್ಥಿಕ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ.&lt;/p&gt;&lt;p&gt;&lt;strong&gt;ನಿವ್ವಳ ಲಾಭ:&lt;/strong&gt; ವರ್ಷದಿಂದ ವರ್ಷಕ್ಕೆ ಶೇ. 14.7 ರಷ್ಟು ಏರಿಕೆಯಾಗಿ ₹1,580 ಕೋಟಿಗೆ ತಲುಪಿದೆ.&lt;/p&gt;&lt;p&gt;&lt;strong&gt;ಕಾರ್ಯಾಚರಣೆ ಆದಾಯ:&lt;/strong&gt; ಶೇ. 14.4 ರಷ್ಟು ವೃದ್ಧಿಸಿ ₹5,515 ಕೋಟಿ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇಬಿಐಟಿಡಿಎ (EBITDA): &lt;/strong&gt;ಶೇ. 18.8 ರಷ್ಟು ಹೆಚ್ಚಾಗಿ ₹1,529 ಕೋಟಿ ತಲುಪಿದ್ದು, ಲಾಭದ ಪ್ರಮಾಣವು (EBITDA Margin) ಶೇ. 27.7 ಕ್ಕೆ ಹಿಗ್ಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ನಿಷ್ಕ್ರಿಯ ಜಂಟಿ ಉದ್ಯಮದ ನಿರ್ಗಮನವು ಎಚ್&zwnj;ಎಎಲ್&zwnj;ನ ಕೋರ್ ಕಾರ್ಯಾಚರಣೆಗಳಿಗೆ ಯಾವುದೇ ಅಡೆತಡೆ ಉಂಟುಮಾಡುವುದಿಲ್ಲ. ದೇಶೀಯ ರಕ್ಷಣಾ ಉತ್ಪಾದನೆಯ ಬಲವರ್ಧನೆ ಮತ್ತು ವಿಸ್ತರಣೆಯ ಹಾದಿಯಲ್ಲಿ ಸಂಸ್ಥೆಯು ದೃಢವಾಗಿ ಮುನ್ನಡೆಯುತ್ತಿದೆ.&lt;/p&gt;]]></content:encoded>
            <category>bengaluru-rural</category>
            <dc:creator>Gowthami K</dc:creator>
            <atom:link href="https://kannada.asianetnews.com/business/nclt-orders-dissolution-of-infotech-hal-joint-venture-between-hal-and-cyient-closed-gdp/articleshow-zmngyzq"/>
        </item>
    </channel>
</rss>
