<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 16 May 2026 11:26:45 +0530</lastBuildDate>
        <atom:link href="https://kannada.asianetnews.com/rss/belagavi" rel="self" type="application/rss+xml"/>
        <item>
            <title><![CDATA[ಪ್ರತಿ ದಿನ ಲೈಬ್ರರಿಯಲ್ಲಿ ಅಧ್ಯಯನ, IFS ಪರೀಕ್ಷೆಯಲ್ಲಿ ದೇಶಕ್ಕೆ ಮೊದಲ ರ‍್ಯಾಂಕ್ ಪಡೆದ ರೈತನ ಮಗ]]></title>
            <link>https://kannada.asianetnews.com/karnataka-districts/savadi-farmer-son-secures-india-rank-1-in-ifs-exam-through-library-study/articleshow-1kl0llf</link>
            <guid isPermaLink="true">https://kannada.asianetnews.com/karnataka-districts/savadi-farmer-son-secures-india-rank-1-in-ifs-exam-through-library-study/articleshow-1kl0llf</guid>
            <pubDate>Sat, 09 May 2026 23:16:26 +0530</pubDate>
            <description><![CDATA[&lt;p&gt;ಕರ್ನಾಟಕದ ಸವದಿ ಗ್ರಾಮದ ಯುವಕನ ಸಾಧನೆಗೆ ದೇಶವೆ ಸಲಾಂ ಹೇಳಿದೆ. ಪ್ರತಿ ದಿನ ಲೈಬ್ರರಿಗೆ ತೆರಳಿ ಅಧ್ಯಯನ ಮಾಡುತ್ತಾ ಐಎಫ್ ಪರೀಕ್ಷೆ ಬರೆದ ರೈತನ ಮಗ, ಇದೀಗ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ&zwj;್ಯಾಂಕ್ ಪಡೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr6xhbbs3cwm99k7eqhdqs4x,imgname-basavaraj-kempawad-1778348764537.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ.08) &lt;/strong&gt;ಬಡತನ, ಕಷ್ಟ, ಸೋಲು, ಗೆಲುವು ಎಲ್ಲವನ್ನು ನೋಡಿ ಬೆಳೆದ ರೈತನ ಮಗನ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾನೆ. ಅಥಣಿ ತಾಲೂಕಿನ ಸವದಿ ಗ್ರಾಮದ ರೈತನ ಮಗ 25ರ ಹರೆಯದ ಬಸವರಾಜ್ ಕೆಂಪವದ್ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ ( ಯುಪಿಎಸ್&zwnj;ಸಿ) ನಡೆಸಿದ ಪರೀಕ್ಷೆಯಲ್ಲಿ ಬಸವರಾಜ್ ಸಾಧನೆ ನೋಡಿ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಕೋಚಿಂಗ್ ಸೆಂಟರ್ ಸೇರದ ಬಸವರಾಜ್&lt;/h2&gt;&lt;p&gt;ವಿದ್ಯಾಭ್ಯಾಸ ಮುಗಿಸಿ ನೇರವಾಗಿ ಬೆಂಗಳೂರು ಬಂದ ಬಸವರಾಜ್ ಬಳಿಕ ಸಣ್ಣ ರೂಂ ಬಾಡಿಗೆ ಪಡೆದು ಅಧ್ಯಯನ ಆರಂಭಿಸಿದ್ದ. ಬಹುತೇಕರು ಕೋಚಿಂಗ್ ಸೆಂಟರ್ ಸೇರಿ ಅಧ್ಯಯನ ಆರಂಭಿಸುತ್ತಾರೆ. ಇದು ಬಸವರಾಜ್&zwnj;ಗೆ ಹೊರೆಯಾಗಿತ್ತು. ಹೀಗಾಗಿ ಯಾವುದೇ ಕೋಚಿಂಗ್ ಸೆಂಟರ್ ಸೇರದ ಬಸವರಾಜ್ ಪ್ರತಿ ದಿನ 10 ಗಂಟೆಗೆ ಲೈಬ್ರರಿಗೆ ಹಾಜರಾಗುತ್ತಿದ್ದ. ಲೈಬ್ರರಿ ಬಾಗಿಲು ಮುಚ್ಚುವವರೆಗೆ ಅಲ್ಲೇ ಅಧ್ಯಯನ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಬಸವರಾಜ್ ಕೆಂಪವದ್ ಒಂದು ದಿನ ಲೈಬ್ರರಿ ತಪ್ಪಿಸಿಲ್ಲ. ಒಂದು ದಿನ ಅಧ್ಯಯನ ನಿಲ್ಲಿಸಿಲ್ಲ. ಇದರ ಫಲ ಇದೀಗ ಫಲಿತಾಂಶದಲ್ಲಿ ಸ್ಪಷ್ವವಾಗಿ ಗೋಚರಿಸಿದೆ.&lt;/p&gt;&lt;p&gt;ಬಸವರಾಜ್ ಮೊದಲ ಪ್ರಯತ್ನದಲ್ಲಿ ಐಎಫ್ಎಸ್ ಪರೀಕ್ಷೆಯ ಪ್ರಿಲಿಮಿನರಿ ಪರೀಕ್ಷೆ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಆಧರೆ ಛಲ ಬಿಡದ ಬಸವರಾಜ್ ಅಧ್ಯಯನ ತೀವ್ರಗೊಳಿಸಿದ್ದರು. ಪರೀಕ್ಷಾ ಮಾದರಿಯನ್ನು ಅರಿತುಕೊಂಡು ಅದರಂತೆ ಅಧ್ಯಯನ ಆರಂಭಿಸಿದ್ದರು. ಹೀಗಾಗಿ ಎರಡನೇ ಪ್ರಯತ್ನದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಲು ಸಾಧ್ಯವಾಗಿದೆ.&lt;/p&gt;&lt;p&gt;ಕೃಷಿ ಕುಟುಂಬದಿಂದ ಬಂದ ಬಸವರಾಜ್&zwnj;ಗೆ ಪರಿಸರ, ಪ್ರಕೃತಿ ಮೇಲೆ ವಿಶೇಷ ಪ್ರೀತಿ ಹಾಗೂ ಕಾಳಜಿ ಇದೆ. ಹೀಗಾಗಿ ತಾನು ಅರಣ್ಯ ಇಲಾಖೆಯಲ್ಲಿ ಸೇವೆ ಮಾಡಲು ನಿರ್ಧರಿಸಿದ್ದರು. ತನ್ನ ಜ್ಞಾನ, ಹೊಸ ತಂತ್ರಜ್ಞಾನ ಬಳಕೆ ಮೂಲಕ ಅರಣ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಬಿಎಸ್&zwnj;ಸಿ ಫಾರೆಸ್ಟ್ರಿ ಪದವಿ ಮುಗಿಸಿರುವ ಬಸವರಾಜ್&zwnj;ಗೆ ಬಳಿಕ ಗ್ರಂಥಾಲಯಗಳೇ ನೆರವಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>belagavi</category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/savadi-farmer-son-secures-india-rank-1-in-ifs-exam-through-library-study/articleshow-1kl0llf"/>
        </item>
        <item>
            <title><![CDATA[ಬೆಳಗಾವಿಯ ಅಥಣಿಗೆ ಬರಲಿದೆ ಕವರ್ಡ್ ಕಂಡಕ್ಟರ್ ಕೇಬಲ್‌: ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್]]></title>
            <link>https://kannada.asianetnews.com/karnataka-districts/covered-conductor-cable-to-come-to-athani-in-belagavi-hescom-s-new-master-plan-mrq/articleshow-2itqkf3</link>
            <guid isPermaLink="true">https://kannada.asianetnews.com/karnataka-districts/covered-conductor-cable-to-come-to-athani-in-belagavi-hescom-s-new-master-plan-mrq/articleshow-2itqkf3</guid>
            <pubDate>Wed, 06 May 2026 05:28:14 +0530</pubDate>
            <description><![CDATA[ಅಥಣಿ ಪಟ್ಟಣದಲ್ಲಿ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಮತ್ತು ನಿರಂತರ ವಿದ್ಯುತ್ ಪೂರೈಸಲು ಹೆಸ್ಕಾಂ ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ಶಾಸಕ ಲಕ್ಷ್ಮಣ ಸವದಿ ಅವರ ಪ್ರಯತ್ನದಿಂದ, ಹಳೆಯ ವಿದ್ಯುತ್ ತಂತಿಗಳನ್ನು ತೆಗೆದು, ಸುರಕ್ಷಿತವಾದ ಕವರ್ಡ್ ಕಂಡಕ್ಟರ್ ಕೇಬಲ್&zwnj;ಗಳನ್ನು ಅಳವಡಿಸುವ ಮಹತ್ವದ ಯೋಜನೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqx95mr2hspsz0beggqg788h,imgname-laxman-savadi-1778025419522.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಣ್ಣಾಸಾಬ ತೆಲಸಂಗ&lt;/strong&gt;&lt;/p&gt;&lt;p&gt;ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ತಾಲೂಕು ಅಥಣಿ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಪಟ್ಟಣದ ಪುರಸಭೆ ಕೂಡ ಇತ್ತೀಚಿಗೆ ನಗರಸಭೆಯಾಗಿ ಘೋಷಣೆಯಾಗಿದೆ. ಪಟ್ಟಣದಲ್ಲಿ ಹೆಚ್ಚಾಗುತ್ತಿರುವ ಬಡಾವಣೆ ಹಾಗೂ ಜನದಟ್ಟಣೆಗೆ ತಕ್ಕಂತೆ ವಿದ್ಯುತ್ ಬೆಳಕಿನ ವ್ಯವಸ್ಥೆ ಹಾಗೂ ಮೇಲಿಂದ ಮೇಲೆ ಉಂಟಾಗುತ್ತಿರುವ ವಿದ್ಯುತ್ ಅವಘಡ ಹಾಗೂ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಸ್ಕಾಂ ಇಲಾಖೆಯಿಂದ ಮಾಸ್ಟರ್ ಪ್ಲಾನ್ ಮಾಡಲಾಗಿದೆ.&lt;/p&gt;&lt;p&gt;ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಪದೇ ಪದೇ ಉಂಟಾಗುತ್ತಿದ್ದ ವಿದ್ಯುತ್ ಅವಘಡಗಳಿಗೆ ಬ್ರೇಕ್ ಹಾಕಲು ಹಾಗೂ ನಾಗರಿಕರಿಗೆ ಗುಣಮಟ್ಟದ ವಿದ್ಯುತ್ ಒದಗಿಸಲು ಶಾಸಕ ಲಕ್ಷ್ಮಣ ಸವದಿ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಅಥಣಿ ಪಟ್ಟಣಕ್ಕೆ ಮಂಜೂರು ಮಾಡಿಸಿದ್ದಾರೆ. ಅಥಣಿ ಪಟ್ಟಣದಾದ್ಯಂತ ಇರುವ ಹಳೆಯ ವಿದ್ಯುತ್ ವೈರ್&zwnj;ಗಳನ್ನು ತೆರವುಗೊಳಿಸಿ, ಅವುಗಳ ಬದಲಿಗೆ ಅತ್ಯಾಧುನಿಕ ತಾಂತ್ರಿಕ ಗುಣಮಟ್ಟದ ಕವರ್ಡ್ ಕಂಡಕ್ಟರ್ ಕೇಬಲ್ (Covered Conductor Cables) ಅಳವಡಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ದೊರಕಲಿದೆ.&lt;/p&gt;&lt;h2&gt;&lt;strong&gt;ಏನಿದು ಮಹತ್ವದ ಯೋಜನೆ?&lt;/strong&gt;&lt;/h2&gt;&lt;p&gt;ಅಥಣಿಯ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಮಿನಿ ವಿಧಾನಸೌಧಕ್ಕೆ ಈಗಾಗಲೇ ಸುರಕ್ಷತಾ ಕೇಬಲ್ ಅಳವಡಿಸಿ ದಿನದ 24 ಗಂಟೆ ವಿದ್ಯುತ್ ವ್ಯವಸ್ಥೆ ಒದಗಿಸಲಾಗುತ್ತಿದೆ. ಅದೇ ನಿಟ್ಟಿನಲ್ಲಿ ಪಟ್ಟಣದ 27 ವಾರ್ಡ್&zwnj;ಗಳಲ್ಲಿ, ಪಟ್ಟಣದ ಪ್ರಮುಖ ಮಾರುಕಟ್ಟೆಯಲ್ಲಿ, ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಮತ್ತು ಯಾವುದೇ ಅವಗಡ ಸಂಭವಿಸದಂತೆ ಹೊಸ ತಂತ್ರಜ್ಞಾನದ ಈ ಕೇಬಲ್&zwnj;ಗಳನ್ನು ಅಳವಡಿಸಲಾಗುವುದು. ಇವುಗಳು ಸಂಪೂರ್ಣವಾಗಿ ಕವಚವನ್ನು ಹೊಂದಿರುವುದರಿಂದ ಮಳೆ-ಗಾಳಿಯ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುವುದನ್ನು ತಡೆಯುತ್ತವೆ. ಇದರಿಂದ ಸಾರ್ವಜನಿಕರ ಪ್ರಾಣಾಪಾಯದ ಭೀತಿ ದೂರವಾಗಲಿದೆ.&lt;/p&gt;&lt;h3&gt;&lt;strong&gt;ದಿನವಿಡಿ ನಿರಂತರ ವಿದ್ಯುತ್&lt;/strong&gt;&lt;/h3&gt;&lt;p&gt;ಹಳೆಯ ವೈರ್&zwnj;ಗಳಿಂದಾಗಿ ವೋಲ್ಟೇಜ್ ಏರುಪೇರಾಗುವ ಸಮಸ್ಯೆ ಇತ್ತು. ಆದರೆ ಹೊಸ ತಂತ್ರಜ್ಞಾನದ ಕೇಬಲ್&zwnj;ಗಳಿಂದಾಗಿ ಗ್ರಾಹಕರಿಗೆ ನಿರಂತರವಾಗಿ ಹಾಗೂ ಉತ್ತಮ ವೋಲ್ಟೇಜ್&zwnj;ನೊಂದಿಗೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗಲಿದೆ.&lt;/p&gt;&lt;p&gt;ಪಟ್ಟಣದ ಕಿರಿದಾದ ಗಲ್ಲಿಗಳಲ್ಲಿ ಹಾಗೂ ಜನನಿಬಿಡ ಸ್ಥಳಗಳಲ್ಲಿ ಸ್ಫನ್ ಪೋಲ್ (Spun Poles) ಗಳನ್ನು ಅಳವಡಿಸಿ, ಅಲ್ಲಿಯೇ ವಿದ್ಯುತ್ ಪರಿವರ್ತಕಗಳನ್ನು (TC) ಸ್ಥಾಪಿಸುವ ಮೂಲಕ ಸ್ಥಳಾವಕಾಶದ ಸಮಸ್ಯೆಯನ್ನು ನೀಗಿಸಲಾಗುವುದು. ಈಗಾಗಲೇ ಈ ಯೋಜನೆಗೆ ಅಗತ್ಯವಿರುವ ಕೇಬಲ್&zwnj;ಗಳ ದೊಡ್ಡ ಸಂಗ್ರಹವೇ ಅಥಣಿಗೆ ಪೂರೈಕೆಯಾಗಿದ್ದು, ಕಾಮಗಾರಿ ಕಾರ್ಯ ತ್ವರಿತಗತಿಯಲ್ಲಿ ನಡೆಯಲು ಸಜ್ಜಾಗಿದೆ. ಎಲ್ಲ ಪರಿಕರಗಳ ಪೂರೈಕೆಯ ನಂತರ ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.&lt;/p&gt;&lt;h3&gt;&lt;strong&gt;ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ&lt;/strong&gt;&lt;/h3&gt;&lt;p&gt;ಹಳೆಯ ಮತ್ತು ಅಪಾಯಕಾರಿ ವಿದ್ಯುತ್ ಲೈನ್&zwnj;ಗಳನ್ನು ಬದಲಾಯಿಸುವುದು ಪಟ್ಟಣದ ನಿವಾಸಿಗಳು ಮತ್ತು ವ್ಯಾಪಾರಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಈ ಯೋಜನೆಯು ಪಟ್ಟಣದ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೆ ಪೂರಕವಾಗಲಿದ್ದು, ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಕಡಿತಕ್ಕೆ ಶಾಶ್ವತ ಪರಿಹಾರ ಸಿಗಲಿದೆ. ಈ ವಿನೂತನ ಯೋಜನೆಯಿಂದಾಗಿ ಅಥಣಿ ಪಟ್ಟಣದ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಆದಂತಾಗಲಿದೆ ಎಂಬುವುದು ಸಾರ್ವಜನಿಕರ ಹರ್ಷ.&lt;/p&gt;&lt;p&gt;ಅಥಣಿ ನಗರವನ್ನು ಸುಂದರ ಹಾಗೂ ಅಭಿವೃದ್ಧಿ ಮಾಡುವುದೇ ನನ್ನ ಮೊದಲ ಆದ್ಯತೆ. ಪುರಸಭೆ ಆಡಳಿತದ ಸಹಕಾರದೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಪಟ್ಟಣದ ಜನರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ನೀಡಲಾಗಿದ್ದು, ಹಳೆಯ ವಿದ್ಯುತ್ ತಂತಿಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಆಧುನಿಕ ಕೇಬಲ್ ಅಳವಡಿಕೆ ಯೋಜನೆ ಜಾರಿಗೆ ತರಲಾಗುತ್ತಿದೆ. ಇದರಿಂದ ಪಟ್ಟಣದ ವ್ಯಾಪಾರಸ್ಥರಿಗೆ ಮತ್ತು ನಿವಾಸಿಗಳಿಗೆ ಸುರಕ್ಷತೆಯೊಂದಿಗೆ ನಿರಂತರ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಜಿ.ವಿ.ಸಂಪಣ್ಣವರ, ಕಾರ್ಯಪಾಲಕ ಅಭಿಯಂತರ, ಹೆಸ್ಕಾಂ ಉಪ ವಿಭಾಗ ಅಥಣಿ.&lt;/strong&gt;&lt;/p&gt;&lt;p&gt;ಅಥಣಿ ಪಟ್ಟಣದ ಸು.200 ಕಿ.ಮೀ ವ್ಯಾಪ್ತಿಯಲ್ಲಿ ಸು.70 ಪರಿವರ್ತಕಗಳಿಗೆ ಸಂಪರ್ಕ ಹೊಂದಿಸುವ ಆಧುನಿಕ ತಂತ್ರಜ್ಞಾನದ ಕವಚ ಹೊಂದಿರುವ ಕೇಬಲ್&zwnj;ಗಳನ್ನು ಅಳವಡಿಸಲಾಗುವುದು. ಶಾಸಕರ ಪ್ರಯತ್ನದಿಂದ ನಮ್ಮ ಹೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳು ಸುಮಾರು ₹6 ಕೋಟಿ ಮೌಲ್ಯದ ಕೇಬಲ್ ಮತ್ತು ಇನ್ನಿತರ ಪರಿಕರಗಳನ್ನು ಪೂರೈಸಿದ್ದಾರೆ. ಶೀಘ್ರದಲ್ಲಿಯೇ ಹಳೆಯ ತಂತಿಯನ್ನು ಬದಲಿಸಿ ಕೇಬಲ್ ಅಳವಡಿಸಲಾಗುವುದು. ಇದರಿಂದ ಪಟ್ಟಣದ ನಾಗರಿಕರಿಗೆ, ವ್ಯಾಪಾರಸ್ಥರಿಗೆ ಸುರಕ್ಷತೆಯ ಜೊತೆಗೆ ನಿರಂತರ ವಿದ್ಯುತ್ ದೊರಕಲಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/covered-conductor-cable-to-come-to-athani-in-belagavi-hescom-s-new-master-plan-mrq/articleshow-2itqkf3"/>
        </item>
        <item>
            <title><![CDATA[ಪೊಲೀಸಪ್ಪನ ಜೊತೆಗೆ ಮದುವೆ ನಿಶ್ಚಿತಾರ್ಥ; ಹುಟ್ಟುಹಬ್ಬದಂದೇ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ!]]></title>
            <link>https://kannada.asianetnews.com/gallery/karnataka-districts/belagavi-bsc-student-kaveri-self-death-on-birthday-hostel-incident-engage-with-police-sat-30cro08</link>
            <guid isPermaLink="true">https://kannada.asianetnews.com/gallery/karnataka-districts/belagavi-bsc-student-kaveri-self-death-on-birthday-hostel-incident-engage-with-police-sat-30cro08</guid>
            <pubDate>Mon, 11 May 2026 19:00:45 +0530</pubDate>
            <description><![CDATA[&lt;p&gt;ಬೆಳಗಾವಿಯ ಹಾಸ್ಟೆಲ್&zwnj;ನಲ್ಲಿ ಬಿಎಸ್&zwnj;ಸಿ ವಿದ್ಯಾರ್ಥಿನಿ ಕಾವೇರಿ, ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿದ್ದಾಳೆ. ಪೊಲೀಸ್ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಈಕೆಯ ಸಾವಿಗೆ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krbk7bses1y9s4hb4cmxt376,imgname-belagavi-kaveri-death-1778505723693.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯ ಹಾಸ್ಟೆಲ್&zwnj;ನಲ್ಲಿ ಬಿಎಸ್&zwnj;ಸಿ ವಿದ್ಯಾರ್ಥಿನಿ ಕಾವೇರಿ, ತನ್ನ ಹುಟ್ಟುಹಬ್ಬದಂದೇ ನೇಣಿಗೆ ಶರಣಾಗಿದ್ದಾಳೆ. ಪೊಲೀಸ್ ಪೇದೆಯೊಂದಿಗೆ ಮದುವೆ ನಿಶ್ಚಯವಾಗಿದ್ದ ಈಕೆಯ ಸಾವಿಗೆ ಕಾರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಜೀವನದ ಸಂಭ್ರಮದ ದಿನವಾಗಬೇಕಿದ್ದ ಹುಟ್ಟುಹಬ್ಬದಂದೇ ವಿದ್ಯಾರ್ಥಿನಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ನಗರದ ಅಜಂ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಬಿಎಸ್&zwnj;ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.&lt;/p&gt;&lt;img&gt;&lt;p&gt;ಮೃತ ವಿದ್ಯಾರ್ಥಿನಿಯನ್ನು ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ ನಾಯಕ (21) ಎಂದು ಗುರುತಿಸಲಾಗಿದೆ. ಇಂದು ಕಾವೇರಿಯ ಜನ್ಮದಿನವಾಗಿತ್ತು. ಮನೆಯವರು ಮತ್ತು ಗೆಳತಿಯರು ಶುಭಾಶಯ ಕೋರಬೇಕಿದ್ದ ದಿನದಂದೇ ಕಾವೇರಿ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವುದು ಎಲ್ಲರಿಗೂ ಆಘಾತ ತಂದಿದೆ. ಕಾವೇರಿ ಬೆಳಗಾವಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಎಸ್&zwnj;ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು.&lt;/p&gt;&lt;img&gt;&lt;p&gt;ಕಾವೇರಿಯ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿತ್ತು. ಕೇವಲ ಮೂರು ತಿಂಗಳ ಹಿಂದಷ್ಟೇ ಕಾವೇರಿಗೆ ಎಂಗೆಜ್ಮೆಂಟ್ (ನಿಶ್ಚಿತಾರ್ಥ) ಮಾಡಲಾಗಿತ್ತು. ಪೊಲೀಸ್ ಪೇದೆಯೊಬ್ಬರ ಜೊತೆಗೆ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳಲ್ಲಿ ಸಂಭ್ರಮದ ವಾತಾವರಣವಿತ್ತು. ಶಿಕ್ಷಣ ಮುಗಿದ ನಂತರ ಮದುವೆ ಮಾಡಿಕೊಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಮದುವೆಯ ಕನಸು ಕಾಣಬೇಕಿದ್ದ ಯುವತಿ ಮಸಣ ಸೇರಿರುವುದು ಪೋಷಕರ ಆಕ್ರಂದನಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ವಿದ್ಯಾರ್ಥಿನಿಯ ಆತ್ಮ*ಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಉತ್ತಮವಾಗಿ ಓದುತ್ತಿದ್ದ, ಮದುವೆ ನಿಶ್ಚಯವಾಗಿದ್ದ ಕಾವೇರಿ ಈ ರೀತಿ ತೀವ್ರ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಏನಾದರೂ ಮಾನಸಿಕ ಒತ್ತಡವಿತ್ತೇ? ಅಥವಾ ವೈಯಕ್ತಿಕ ಸಮಸ್ಯೆಗಳೇನಾದರೂ ಇದ್ದವೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಸ್ಟೆಲ್&zwnj;ನಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.&lt;/p&gt;&lt;img&gt;&lt;p&gt;ಘಟನೆ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/belagavi-bsc-student-kaveri-self-death-on-birthday-hostel-incident-engage-with-police-sat-30cro08"/>
        </item>
        <item>
            <title><![CDATA[ಶಿವಾನಂದ ನೀಲಣ್ಣವರ್ ಅರೆಸ್ಟ್: ಬಂಧಿಸಿ ಜಡ್ಜ್ ಮನೆಗೆ ಕರೆದೊಯ್ಯುವಾಗಲೂ 'ಓಂ ನಮಃ ಶಿವಾಯ' ಎಂದ ಆಸಾಮಿ!]]></title>
            <link>https://kannada.asianetnews.com/gallery/state/businessman-shivanand-neelannavar-arrested-chants-om-namah-shivaya-at-judge-s-house-7m3khqg</link>
            <guid isPermaLink="true">https://kannada.asianetnews.com/gallery/state/businessman-shivanand-neelannavar-arrested-chants-om-namah-shivaya-at-judge-s-house-7m3khqg</guid>
            <pubDate>Sat, 16 May 2026 07:19:31 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ಸದ್ದಿಲ್ಲದೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಉದ್ಯಮಿ ಶಿವಾನಂದ ನೀಲಣ್ಣವರ ಬಂಧನ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೆಡೆ ಕಾನೂನು ಉಲ್ಲಂಘನೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹವಾ! ಈ ಇಡೀ ಹೈಡ್ರಾಮಾದ ರೋಚಕ ಫೋಟೋ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krq6v6qjmyhmb0ewyft377bp,imgname-----------------------2026-05-16t064523.353-1778895395570.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯಲ್ಲಿ ಸದ್ದಿಲ್ಲದೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದ ಉದ್ಯಮಿ ಶಿವಾನಂದ ನೀಲಣ್ಣವರ ಬಂಧನ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಒಂದೆಡೆ ಕಾನೂನು ಉಲ್ಲಂಘನೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋಗಳ ಹವಾ! ಈ ಇಡೀ ಹೈಡ್ರಾಮಾದ ರೋಚಕ ಫೋಟೋ ಸ್ಟೋರಿ ಇಲ್ಲಿದೆ.&lt;/p&gt;&lt;img&gt;&lt;p&gt;ದಶಕಗಳಿಂದ ಬೆಳಗಾವಿಯಲ್ಲಿ ಸದ್ದಿಲ್ಲದೆ ವ್ಯವಹಾರ ನಡೆಸುತ್ತಿದ್ದ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ಇತ್ತೀಚಿನವರೆಗೂ ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಆದರೆ, ಕಡೂರಿನ ಕಾರ್ಯಕ್ರಮವೊಂದರಲ್ಲಿ ಅವರು ಆಡಿದ ಮಾತುಗಳು ಅವರ ಇಡೀ ಸಾಮ್ರಾಜ್ಯವೇ ಅಲುಗಾಡಿಸಿದೆ. &lsquo;ನನ್ನ ಬಳಿ 15 ಸಾವಿರ ಬಂದೂಕುಗಳಿವೆ, ನಾವೂ ಯಾರಿಗೂ ಹೆದರಲ್ಲ&rsquo; ಎಂದಿದ್ದ ಇವರ ಭಾಷಣದ ವಿಡಿಯೋ ಭಾರಿ ವೈರಲ್ ಆಗಿತ್ತು. ಆ ಮಾತುಗಳೇ ಈಗ ಕಂಟಕವಾಗಿ ಪರಿಣಮಿಸಿವೆ.&lt;/p&gt;&lt;img&gt;&lt;p&gt;ವೈರಲ್ ವಿಡಿಯೋದಿಂದ ರಾಜ್ಯಮಟ್ಟದಲ್ಲಿ ಪ್ರಸಿದ್ಧಿ ಪಡೆದ ಬೆನ್ನಲ್ಲೇ, ಮೇ 17ರಂದು ಸುಮಾರು 20 ಸಾವಿರ ಜನರನ್ನು ಸೇರಿಸಿ ಬೆಳಗಾವಿ ನಗರ ಸ್ವಚ್ಛತೆ ಮಾಡಲು ನೀಲಣ್ಣವರ ಮುಂದಾಗಿದ್ದರು. ಇದಕ್ಕಾಗಿ ನಗರದಾದ್ಯಂತ ಅವರ ದೊಡ್ಡ ದೊಡ್ಡ ಕಟೌಟ್&zwnj;ಗಳು ರಾರಾಜಿಸಲು ಆರಂಭಿಸಿದವು. ಆದರೆ, ಈ ಅತಿಯಾದ ಪ್ರಚಾರವೇ ಅವರಿಗೆ ಒಂದೊಂದಾಗಿ ಕಂಟಕ ತರಲು ವೇದಿಕೆ ಸಿದ್ಧ ಮಾಡಿತು.&lt;/p&gt;&lt;img&gt;&lt;p&gt;ನಿಯಮ ಬಾಹಿರವಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಪಡೆದ ಆರೋಪ ಕೇಳಿಬರುತ್ತಿದ್ದಂತೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ಕುಮಾರ್ ನೇತೃತ್ವದ ತಂಡ ಶಿವಾನಂದ ಅವರ ಕಚೇರಿ ಮತ್ತು ನಿವಾಸದ ಮೇಲೆ ಹಠಾತ್ ದಾಳಿ ನಡೆಸಿತು. ಬರೋಬ್ಬರಿ 20 ಗಂಟೆಗಳ ಕಾಲ ನಿರಂತರವಾಗಿ ನಡೆದ ಈ ತಪಾಸಣೆಯಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಜಾಲಾಡಲಾಯಿತು.&lt;/p&gt;&lt;img&gt;&lt;p&gt;ಜಿಲ್ಲಾಧಿಕಾರಿಗಳ (DC) ಆಜ್ಞೆಯಂತೆ ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಗಳಿಗೆ ದೊಡ್ಡ ಶಾಕ್ ಕಾದಿತ್ತು. ಶಿವಂ ಅಸೋಸಿಯೇಟ್ಸ್&zwnj;ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೈಡ್&zwnj;ಲೈನ್ಸ್ ಸಂಪೂರ್ಣ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಸದ್ಯಕ್ಕೆ ಠೇವಣಿದಾರರಿಂದ ಯಾವುದೇ ಲಿಖಿತ ದೂರು ಬಂದಿಲ್ಲವಾದರೂ, ಮೌಖಿಕವಾಗಿ ಹೇಳಿಕೊಂಡಿದ್ದಾರೆ.&amp;nbsp;&lt;/p&gt;&lt;p&gt;ಸಾರ್ವಜನಿಕರಿಂದ 'ಲೋನ್' ರೂಪದಲ್ಲಿ ಹಣ ಪಡೆದು ಆ್ಯಪ್ ಮೂಲಕ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದ್ದು, ಮುಂದೆ ಆಗುವ ದೊಡ್ಡ ಅನಾಹುತ ತಡೆಯಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಫ್&zwnj;ಐಆರ್ ದಾಖಲಾಗುತ್ತಿದ್ದಂತೆ ಆಕ್ಷನ್ ಮೂಡ್&zwnj;ಗೆ ಇಳಿದ ಮಾಳಮಾರುತಿ ಠಾಣೆ ಪೊಲೀಸರು ಅಕ್ರಮ ಹೂಡಿಕೆ ಆರೋಪದಡಿ ಶಿವಾನಂದ ನೀಲಣ್ಣವರನ್ನು ಶಿವಬಸವ ನಗರದ ನಿವಾಸದಲ್ಲಿ ಬಂಧಿಸಿದರು. ವಿಶೇಷ ಎಂದರೆ, ಪೊಲೀಸರು ತನ್ನನ್ನು ಬಂಧಿಸಿ ಜಡ್ಜ್ ನಿವಾಸಕ್ಕೆ ಕರೆದೊಯ್ಯುವ ಸನ್ನಿವೇಶದಲ್ಲೂ ಶಿವಾನಂದ ಧೃತಿಗೆಡದೆ &lsquo;ಓಂ ನಮಃ ಶಿವಾಯ&rsquo; ಹೇಳಿ ನಮಸ್ಕರಿಸಿದರು. ಈ ವಿಡೀಯೋ ತುಣುಕು ಕೂಡ ವೈರಲ್ ಆಗಿದೆ.&amp;nbsp;&lt;/p&gt;&lt;img&gt;&lt;p&gt;&lsquo;ಕೋಟ್ಯಂತರ ರೂಪಾಯಿ ವಂಚನೆ ಆರೋಪ ಕೇಳಿಬರುತ್ತಿದೆಯಲ್ಲ? ಎಂದು ಮಾಧ್ಯಮಗಳು ಪ್ರಶ್ನಿಸಿದಾಗ, ಶಿವಾನಂದ ನೀಲಣ್ಣವರ್, ಯಾವುದೇ ಆತಂಕವಿಲ್ಲದೆ, ಅತ್ಯಂತ ಕೂಲ್ ಆಗಿಯೇ &rsquo;ಅದು ಸತ್ಯನೋ, ಸುಳ್ಳೋ ನನಗೆ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಖುಷಿ ಸಿಗಲಿ' ಭಾರತದ ಜನತೆಗೆ ಒಳ್ಳೆಯದಾಗಲಿ' ಎಂದು ಕೈಮುಗಿದು, ಮತ್ತೊಮ್ಮೆ 'ಓಂ ನಮಃ ಶಿವಾಯ' ಎನ್ನುತ್ತಾ ಸಾಗಿದರು. ಅಧಿಕಾರಿಗಳು ಸದ್ಯ ಇಡೀ ಪ್ರಕರಣವನ್ನ ಚುರುಕಾಗಿ ತನಿಖೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/businessman-shivanand-neelannavar-arrested-chants-om-namah-shivaya-at-judge-s-house-7m3khqg"/>
        </item>
        <item>
            <title><![CDATA[ಶಾಲಾ ಬಾಲಕಿಯ ಪ್ರಾಣ ತೆಗೆದ ಸ್ಕಿಪ್ಪಿಂಗ್ ಹಗ್ಗ! ವಿದ್ಯುತ್ ತಗುಲಿ 9 ವರ್ಷದ ಸಾನ್ವಿ ಕಾಂಬಳೆ ದುರ್ಮರಣ]]></title>
            <link>https://kannada.asianetnews.com/karnataka-districts/belagavi-9-year-old-girl-dies-of-electric-shock-in-chikkodi-ingali-village-sat/articleshow-9wywegm</link>
            <guid isPermaLink="true">https://kannada.asianetnews.com/karnataka-districts/belagavi-9-year-old-girl-dies-of-electric-shock-in-chikkodi-ingali-village-sat/articleshow-9wywegm</guid>
            <pubDate>Tue, 05 May 2026 22:32:58 +0530</pubDate>
            <description><![CDATA[ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ, ಮನೆಯ ಮಾಳಿಗೆ ಮೇಲೆ ಆಟವಾಡುತ್ತಿದ್ದ 9 ವರ್ಷದ ಬಾಲಕಿ ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದಾಳೆ. ಸ್ಕಿಪ್ಪಿಂಗ್ ಹಗ್ಗವು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದು, ಅದನ್ನು ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ, ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqwhd2karqtfvs9qcag3e674,imgname-belagavi-sanvi-kambale-1778000497257.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಮೇ 05): ಆ&lt;/strong&gt;ಟವಾಡುತ್ತಾ ನಲಿದಾಡಬೇಕಿದ್ದ ಮನೆಯ ಅಂಗಳದಲ್ಲಿ ಈಗ ನೀರವ ಮೌನ ಆವರಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದ ಮನಕಲಕುವ ಘಟನೆಯಲ್ಲಿ, 9 ವರ್ಷದ ಪುಟ್ಟ ಬಾಲಕಿಯೊಬ್ಬಳು ವಿದ್ಯುತ್ ಅವಘಡಕ್ಕೆ ಬಲಿಯಾಗಿದ್ದಾಳೆ. ಸ್ಕಿಪ್ಪಿಂಗ್ ಹಗ್ಗವನ್ನು ತೆಗೆಯಲು ಹೋದ ಬಾಲಕಿ, ವಿದ್ಯುತ್ ತಂತಿ ತಗುಲಿ ಮನೆಯ ಮೇಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಇಂಗಳಿ ಗ್ರಾಮದ ನಿವಾಸಿ ಸಾನ್ವಿ ಕಾಂಬಳೆ (9) ಮೃತಪಟ್ಟ ದುರ್ದೈವಿ ಬಾಲಕಿ. ಈಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿದಿನದಂತೆ ನಿನ್ನೆ ಸಂಜೆ ಶಾಲೆಯಿಂದ ಬಂದ ನಂತರ ಸಾನ್ವಿ ತನ್ನ ಮನೆಯ ಮಾಳಿಗೆಯ ಮೇಲೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಆಟವಾಡುತ್ತಿದ್ದ ಸ್ಕಿಪ್ಪಿಂಗ್ ಹಗ್ಗವು ಅಕಸ್ಮಾತ್ ಮನೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ.&lt;/p&gt;&lt;h2&gt;&lt;strong&gt;ಯಮ ಪಾಶವಾದ ಆಟದ ಹಗ್ಗ:&lt;/strong&gt;&lt;/h2&gt;&lt;p&gt;ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಸ್ಕಿಪ್ಪಿಂಗ್ ಹಗ್ಗವನ್ನು ಕೆಳಕ್ಕೆ ತೆಗೆಯಲು ಸಾನ್ವಿ ಪ್ರಯತ್ನಿಸಿದ್ದಾಳೆ. ಈ ವೇಳೆ ಹಗ್ಗದ ಮೂಲಕ ವಿದ್ಯುತ್ ಪ್ರವಹಿಸಿ ಸಾನ್ವಿಗೆ ತೀವ್ರವಾಗಿ ಶಾಕ್ ಹೊಡೆದಿದೆ. ವಿದ್ಯುತ್ ಸ್ಪರ್ಶದ ರಭಸಕ್ಕೆ ಆಕೆ ಮನೆಯ ಮೇಲ್ಭಾಗದಿಂದ ಕೆಳಕ್ಕೆ ಬಿದ್ದಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ತಕ್ಷಣವೇ ಪೋಷಕರು ಮತ್ತು ಗ್ರಾಮಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಬಾಲಕಿಯ ದೇಹಕ್ಕೆ ವಿದ್ಯುತ್ ತಗುಲಿದ್ದರಿಂದ ಮತ್ತು ಎತ್ತರದಿಂದ ಬಿದ್ದಿದ್ದರಿಂದ ತೀವ್ರ ಒಳಪೆಟ್ಟುಗಳಾಗಿದ್ದವು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾನ್ವಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.&lt;/p&gt;&lt;h3&gt;&lt;strong&gt;ಶೋಕಸಾಗರದಲ್ಲಿ ಇಂಗಳಿ ಗ್ರಾಮ:&lt;/strong&gt;&lt;/h3&gt;&lt;p&gt;ಒಂಬತ್ತು ವರ್ಷದ ಸಾನ್ವಿ ಅತ್ಯಂತ ಚುರುಕಾದ ಬಾಲಕಿಯಾಗಿದ್ದಳು. ಶಾಲೆಯಲ್ಲಿ ಮತ್ತು ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವಳಾಗಿದ್ದ ಈಕೆಯ ಅಕಾಲಿಕ ಮರಣದಿಂದ ಇಂಗಳಿ ಗ್ರಾಮದ ಜನರು ಕಂಬನಿ ಮಿಡಿಯುತ್ತಿದ್ದಾರೆ. ಮನೆಯ ಮೇಲ್ಭಾಗದಲ್ಲಿ ಹತ್ತಿರದಲ್ಲಿಯೇ ಹಾದುಹೋಗಿರುವ ವಿದ್ಯುತ್ ತಂತಿಗಳ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಮನೆಯ ಮಾಳಿಗೆಯ ಮೇಲೆ ಆಟವಾಡಲು ಬಿಡುವಾಗ ಎಚ್ಚರಿಕೆ ವಹಿಸಬೇಕು ಎಂದು ಈ ಘಟನೆ ಎಚ್ಚರಿಸಿದೆ.&lt;/p&gt;&lt;p&gt;ಘಟನೆಗೆ ಸಂಬಂಧಿಸಿದಂತೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ಪುಟ್ಟ ಮಗಳ ಸಾವಿನಿಂದ ತಂದೆ-ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/belagavi-9-year-old-girl-dies-of-electric-shock-in-chikkodi-ingali-village-sat/articleshow-9wywegm"/>
        </item>
        <item>
            <title><![CDATA[ಬೆಳಗಾವಿ ಮಳೆಯ ರೌದ್ರಾವತಾರ: ಸಂಬರಗಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ಧ್ವಂಸ, ಬೀದಿಗೆ ಬಿದ್ದ ಕುಟುಂಬಗಳು!]]></title>
            <link>https://kannada.asianetnews.com/gallery/karnataka-districts/belagavi-athani-sambargi-heavy-rain-many-houses-destroyed-7-days-alert-sat-b9fbxvy</link>
            <guid isPermaLink="true">https://kannada.asianetnews.com/gallery/karnataka-districts/belagavi-athani-sambargi-heavy-rain-many-houses-destroyed-7-days-alert-sat-b9fbxvy</guid>
            <pubDate>Wed, 13 May 2026 21:24:59 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸುಂಟರಗಾಳಿ ಸಹಿತ ಸುರಿದ ಭಾರಿ ಮಳೆಗೆ 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಈ ಪ್ರಾಕೃತಿಕ ವಿಕೋಪದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ದವಸ ಧಾನ್ಯಗಳು ನಾಶವಾಗಿವೆ ಮತ್ತು ಲಕ್ಷಾಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krh091cpgcy3zxdwhdj3dbm7,imgname-screenshot-2026-05-13-205434-1778687182230.png" type="image/jpeg" height="390" width="690"/>
            <content:encoded><![CDATA[ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸುಂಟರಗಾಳಿ ಸಹಿತ ಸುರಿದ ಭಾರಿ ಮಳೆಗೆ 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಈ ಪ್ರಾಕೃತಿಕ ವಿಕೋಪದಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ದವಸ ಧಾನ್ಯಗಳು ನಾಶವಾಗಿವೆ ಮತ್ತು ಲಕ್ಷಾಂತರ ರೂಪಾಯಿ ಆಸ್ತಿಪಾಸ್ತಿ ಹಾನಿಯಾಗಿದೆ.&lt;img&gt;&lt;p&gt;&lt;strong&gt;ಬೆಳಗಾವಿ: ರಾ&lt;/strong&gt;ಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ರೌದ್ರ ನರ್ತನಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕೇವಲ ಒಂದು ಗಂಟೆಯ ಕಾಲ ಸುರಿದ ಭೀಕರ ಗಾಳಿ-ಮಳೆಗೆ ಗ್ರಾಮದ 20ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ನೂರಾರು ಕುಟುಂಬಗಳು ಆಸರೆಯಿಲ್ಲದೆ ಬೀದಿಗೆ ಬಿದ್ದಿವೆ.&lt;/p&gt;&lt;img&gt;&lt;p&gt;ಇಂದು ಸಂಜೆ ದಿಢೀರನೆ ಅಪ್ಪಳಿಸಿದ ಸುಂಟರಗಾಳಿ ಸಹಿತ ಮಳೆ ಸಂಬರಗಿ ಗ್ರಾಮಸ್ಥರನ್ನು ಕಂಗಾಲಾಗಿಸಿದೆ. ಗಾಳಿಯ ರಭಸ ಎಷ್ಟಿತ್ತೆಂದರೆ, ಬೃಹತ್ ಗಾತ್ರದ ತಗಡಿನ ಶೆಡ್&zwnj;ವೊಂದು ಸುಮಾರು 100 ಅಡಿ ದೂರಕ್ಕೆ ಹಾರಿ ಹೋಗಿ ಬಿದ್ದಿದೆ. ಗ್ರಾಮದ ಪ್ರಮುಖ ರಸ್ತೆ ಮತ್ತು ಹೆದ್ದಾರಿಗಳ ಮೇಲೆ ಮನೆಗಳ ಮೇಲ್ಛಾವಣಿಗಳು ಹಾರಿ ಬಿದ್ದ ಪರಿಣಾಮ ಸಂಚಾರವೂ ಕೆಲಕಾಲ ಸ್ಥಗಿತಗೊಂಡಿತ್ತು.&lt;/p&gt;&lt;img&gt;&lt;p&gt;ಈ ಮಳೆ ಮತ್ತು ಗಾಳಿಯ ಆರ್ಭಟಕ್ಕೆ ಗ್ರಾಮದ ನೂರಾರು ಮರಗಳು ಧರಾಶಾಹಿಯಾಗಿವೆ. ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಗ್ರಾಮ ಕತ್ತಲೆಯಲ್ಲಿ ಮುಳುಗಿದೆ.&lt;/p&gt;&lt;img&gt;&lt;p&gt;ಮನೆಯಲ್ಲಿದ್ದ ದವಸ ಧಾನ್ಯ, ದಿನಸಿ ಸಾಮಗ್ರಿಗಳು ಮಳೆಗೆ ನೆನೆದು ಹಾನಿಯಾಗಿದ್ದು, ಬಡ ಕುಟುಂಬಗಳು ಮುಂದಿನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಒಂದೇ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.&lt;/p&gt;&lt;img&gt;&lt;p&gt;ತಲೆ ಮೇಲೆ ಸೂರು ಕಳೆದುಕೊಂಡ 20ಕ್ಕೂ ಹೆಚ್ಚು ಕುಟುಂಬಗಳು ಈಗ ದಿಕ್ಕುತೋಚದಂತಾಗಿವೆ. &lsquo;ಬದುಕು ಕಟ್ಟಿಕೊಂಡಿದ್ದ ಮನೆ ಕಣ್ಣೆದುರೇ ಕುಸಿದು ಬಿತ್ತು, ಈಗ ನಾವು ಎಲ್ಲಿಗೆ ಹೋಗಬೇಕು?&rsquo; ಎಂದು ಸಂತ್ರಸ್ತರು ಕಣ್ಣೀರಿಡುತ್ತಿದ್ದಾರೆ. ಮಳೆಯ ಆರ್ಭಟಕ್ಕೆ ಕೇವಲ ಮನೆಗಳಷ್ಟೇ ಅಲ್ಲದೆ, ಗದ್ದೆಗಳಲ್ಲಿದ್ದ ಬೆಳೆಗಳಿಗೂ ಹಾನಿಯಾಗಿದೆ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಮತ್ತು ನೊಂದ ಕುಟುಂಬಗಳಿಗೆ ತಕ್ಷಣವೇ ಸರ್ಕಾರದಿಂದ ಪರಿಹಾರ ಘೋಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕೃತಿಯ ವಿಕೋಪಕ್ಕೆ ತತ್ತರಿಸಿದ ಸಂಬರಗಿ ಗ್ರಾಮ ಈಗ ಚೇತರಿಸಿಕೊಳ್ಳಲು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/belagavi-athani-sambargi-heavy-rain-many-houses-destroyed-7-days-alert-sat-b9fbxvy"/>
        </item>
        <item>
            <title><![CDATA[ಬಿಸಿಲಿನಿಂದ ರಕ್ಷಣೆಗಾಗಿ ಸವಾರರಿಗೆ ಬಂತು ಟ್ರಾಫಿಕ್‌ ಸಿಗ್ನಲ್‌ನಲ್ಲಿ ನೆರಳಿನ ಟೆಂಟ್‌]]></title>
            <link>https://kannada.asianetnews.com/karnataka-districts/belagavi-a-shady-canopy-at-the-traffic-signal-has-been-installed-to-protect-riders-from-the-sunlight-mrq/articleshow-e52gvn6</link>
            <guid isPermaLink="true">https://kannada.asianetnews.com/karnataka-districts/belagavi-a-shady-canopy-at-the-traffic-signal-has-been-installed-to-protect-riders-from-the-sunlight-mrq/articleshow-e52gvn6</guid>
            <pubDate>Wed, 06 May 2026 10:23:19 +0530</pubDate>
            <description><![CDATA[ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ವಾಹನ ಸವಾರರನ್ನು ರಕ್ಷಿಸಲು, ರಾಣಿ ಚನ್ನಮ್ಮ ವೃತ್ತದ ಸಿಗ್ನಲ್&zwnj;ನಲ್ಲಿ ನೆರಳಿನ ಟೆಂಟ್&zwnj;ಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ಜಂಟಿ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಇತರ ಭಾಗಗಳಿಗೂ ವಿಸ್ತರಿಸಲು ಬೇಡಿಕೆ ಹೆಚ್ಚಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqxsyrzvasqg460rckzvyac2,imgname-belagavi-1778043020283.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿ ನಗರದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದು, ಸದ್ಯ ನಿತ್ಯ 36ರಿಂದ 38 ಡಿಗ್ರಿ ಸೆಲ್ಸಿಯಸ್&zwnj;ವರೆಗೆ ದಾಖಲಾಗುತ್ತಿದೆ. ಮಧ್ಯಾಹ್ನದ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚಾರ ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವೃತ್ತದ ಸಿಗ್ನಲ್&zwnj; ಪಾಯಿಂಟ್&zwnj;ನಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಟೆಂಟ್&zwnj;ಗಳನ್ನು (ನೆರಳಿನ ಪರದೆಗಳನ್ನು) ಅಳವಡಿಸಲಾಗಿದೆ.&lt;/p&gt;&lt;h2&gt;&lt;strong&gt;ತಾತ್ಕಾಲಿಕ ಶೆಡ್&zwnj; ನಿರ್ಮಾಣ&lt;/strong&gt;&lt;/h2&gt;&lt;p&gt;ನಗರದಲ್ಲಿ ಇದೇ ಮೊದಲ ಬಾರಿಗೆ ಕೈಗೊಳ್ಳಲಾದ ಈ ಕ್ರಮವನ್ನು ಬೆಳಗಾವಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ಪೊಲೀಸ್&zwnj; ಇಲಾಖೆ ಸಂಯುಕ್ತವಾಗಿ ಜಾರಿಗೊಳಿಸಿವೆ. ಸಿಗ್ನಲ್&zwnj;ಗಾಗಿ ಕಾಯುವ ವೇಳೆ ಬಿಸಿಲಿನ ತಾಪದಿಂದ ಬಳಲುತ್ತಿದ್ದ ವಾಹನ ಸವಾರರಿಗೆ ತಾತ್ಕಾಲಿಕ ಶೆಡ್&zwnj;ಗಳ ಮೂಲಕ ಕೆಲ ಸಮಯದವರೆಗೆ ರಕ್ಷಣೆ ಒದಗಿಸಲಿದೆ. ಕಾಕತಿವೇಸ್&zwnj; ರಸ್ತೆಯ ಭಾಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.&lt;/p&gt;&lt;p&gt;ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಹಿರಿಯ ನಾಗರಿಕರು ಮತ್ತು ಮಹಿಳೆಯರು ಈ ನೆರಳಿನ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ತೀವ್ರ ಬಿಸಿಲಿನಲ್ಲಿ ನಿಲ್ಲುವುದು ಕಷ್ಟವಾಗುತ್ತಿದ್ದಾಗ ಈ ಟೆಂಟ್&zwnj;ಗಳು ಅವರಿಗೆ ತಾತ್ಕಾಲಿಕ ವಿಶ್ರಾಂತಿ ನೀಡುವಂತಾಗಿವೆ. ಸಿಗ್ನಲ್&zwnj;ನಲ್ಲಿ ಕೆಲವು ನಿಮಿಷಗಳಾದರೂ ತಂಪಿನ ಅನುಭವ ಸಿಗುತ್ತಿರುವುದರಿಂದ ಸಾರ್ವಜನಿಕರಿಂದ ಈ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;h3&gt;&lt;strong&gt;ವಿಜಯಪುರದಲ್ಲಿ ಯಶಸ್ವಿ&lt;/strong&gt;&lt;/h3&gt;&lt;p&gt;ಈ ಯೋಜನೆ ಈಗಾಗಲೇ ವಿಜಯಪುರದಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದು, ಅದನ್ನು ಆಧರಿಸಿ ಅದೇ ಮಾದರಿಯಾಗಿ ತೆಗೆದುಕೊಂಡು ಬೆಳಗಾವಿಯಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ನಗರದಲ್ಲಿ ಉಷ್ಣಾಂಶ ಏರಿಕೆಯಿಂದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವಾಗ ಇಂತಹ ಸಣ್ಣದಾದರೂ ಪರಿಣಾಮಕಾರಿ ಕ್ರಮಗಳು ಜನರಿಗೆ ಬಹಳ ನೆರವಾಗುತ್ತಿವೆ ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಪ್ರಸ್ತುತ ಈ ವ್ಯವಸ್ಥೆ ಒಂದು ಭಾಗದಲ್ಲಷ್ಟೇ ಕಲ್ಪಿಸಲಾಗಿದೆ. ಇದರಿಂದ ನಗರದ ನಾಲ್ಕೂ ದಿಕ್ಕಿನ ರಸ್ತೆ ಮಾರ್ಗಗಳಲ್ಲಿಯೂ ಇದೇ ರೀತಿಯ ನೆರಳಿನ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಈ ಕ್ರಮವನ್ನು ವಿಸ್ತರಿಸಿದರೆ ಹೆಚ್ಚಿನ ಜನರಿಗೆ ಉಪಯೋಗವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಮುಂದಿನ ದಿನಗಳಲ್ಲಿ ನಗರದ ಇತರೆ ಪ್ರಮುಖ ವೃತ್ತಗಳು ಮತ್ತು ಟ್ರಾಫಿಕ್&zwnj; ಸಿಗ್ನಲ್&zwnj;ಗಳಲ್ಲಿಯೂ ಈ ಮಾದರಿಯ ತಾತ್ಕಾಲಿಕ ಶೆಡ್&zwnj;ಗಳನ್ನು ಅಳವಡಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-a-shady-canopy-at-the-traffic-signal-has-been-installed-to-protect-riders-from-the-sunlight-mrq/articleshow-e52gvn6"/>
        </item>
        <item>
            <title><![CDATA[ಯಾವುದೇ ಕೋಚಿಂಗ್ ಇಲ್ಲದೆ IFS ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್; ಬೆಳಗಾವಿ ರೈತನ ಮಗನ ಪರೀಕ್ಷೆ ತಯಾರಿ ನಡೆಸಿದ್ದು ಹೇಗಿತ್ತು?]]></title>
            <link>https://kannada.asianetnews.com/karnataka-districts/belagavi-farmer-s-son-basavaraj-dhareppa-secures-rank-1-in-ifs-exam-across-india-rav/articleshow-er2al65</link>
            <guid isPermaLink="true">https://kannada.asianetnews.com/karnataka-districts/belagavi-farmer-s-son-basavaraj-dhareppa-secures-rank-1-in-ifs-exam-across-india-rav/articleshow-er2al65</guid>
            <pubDate>Sun, 10 May 2026 10:10:31 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತ ಕುಟುಂಬದ ಬಸವರಾಜ ಕೆಂಪವಾಡ ಅವರು ಭಾರತೀಯ ಅರಣ್ಯ ಸೇವೆ (ಐಎಫ್&zwnj;ಎಸ್&zwnj;) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್&zwj;ಯಾಂಕ್ ಗಳಿಸಿದ್ದಾರೆ. ಯಾವುದೇ ಕೋಚಿಂಗ್ ಪಡೆಯದೆ, ಬಡತನದ ನಡುವೆಯೂ ಸತತ ಪರಿಶ್ರಮದಿಂದ ಈ ಐತಿಹಾಸಿಕ ಸಾಧನೆ ಮಾಡಿ ಯುವಕರಿಗೆ ಸ್ಫೂರ್ತಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr82qa8jh92pd3atk0prsra5,imgname-----------------------2026-05-10t100426.686-1778387757329.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಥಣಿ (ಬೆಳಗಾವಿ) : &lt;/strong&gt;ಕೇಂದ್ರ ಲೋಕಸೇವಾ ಆಯೋಗ ನಡೆಸುವ ಭಾರತೀಯ ಅರಣ್ಯ ಸೇವೆ (ಐಎಫ್&zwnj;ಎಸ್&zwnj;) ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಯುವಕ ಬಸವರಾಜ ಧರೆಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ್&zwj;ಯಾಂಕ್ ಪಡೆದಿದ್ದಾರೆ. ಈ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನೇ ಹೆಚ್ಚಿಸಿದ್ದಾರೆ.&lt;/p&gt;&lt;p&gt;ಬಸವರಾಜ ಕೆಂಪವಾಡ ಅವರಿಗೆ ಕೇವಲ 25 ವರ್ಷ. 2025ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದರು. ಆದರೆ, ಆಗ ಯಶಸ್ವಿಯಾಗಿರಲಿಲ್ಲ. ಆದರೆ, ಛಲ ಬಿಡದೇ, ಯಾವುದೇ ಕೋಚಿಂಗ್&zwnj; ಕೂಡ ಪಡೆಯದೇ ನಿತ್ಯ ಓದುತ್ತಲೇ 2026ರಲ್ಲಿ ದೇಶಕ್ಕೆ ಐಎಫ್&zwnj;ಎಸ್&zwnj;ನಲ್ಲಿ ಪ್ರಥಮ ರ್&zwj;ಯಾಂಕ್&zwnj; ಪಡೆದಿದ್ದಾರೆ. ಈ ಮೂಲಕ ಕೋಚಿಂಗ್&zwnj;ಗಿಂತಲೂ ಸಾಧಿಸಬೇಕು ಎಂಬ ಛಲ ಎಲ್ಲರಲ್ಲಿಯೂ ಇರಬೇಕು. ಸೋತಾಗ ನೋವು ಪಟ್ಟುಕೊಳ್ಳದೇ ಮುನ್ನುಗ್ಗಬೇಕು. ಗೆಲುವಿನ ದಾರಿ ಕಂಡುಕೊಳ್ಳಬೇಕು ಎನ್ನುವುದು ಬಸವರಾಜ ಕೆಂಪವಾಡ ಅವರ ನುಡಿ.&lt;/p&gt;&lt;h2&gt;ಮೊರಾರ್ಜಿ ಶಾಲೆಯಲ್ಲಿ ಕಲಿತ ಹುಡುಗ:&lt;/h2&gt;&lt;p&gt;ಬಸವರಾಜ ಕೆಂಪವಾಡ ಅವರ ತಂದೆ ಧರೆಪ್ಪ ಕೆಂಪವಾಡ ಅವರಿಗೆ ಇರುವುದು ಕೇವಲ ಒಂದೂವರೆ ಎಕರೆ ಜಮೀನು. ರೈತರಾಗಿದ್ದುಕೊಂಡೇ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಕೃಷಿಯಲ್ಲಿಯೇ ಬದುಕು ಕಟ್ಟಿಕೊಂಡಿದ್ದ ಬಸವರಾಜ ಅವರ ತಂದೆ ತಾಯಿ ಅದರಲ್ಲಿ ಬಂದ ಹಣದಿಂದಲೇ ನಾಲ್ವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಬಸವರಾಜ ಅವರು 1ರಿಂದ 5ನೇ ತರಗತಿಯನ್ನು ಸವದಿಯಲ್ಲಿ ಓದಿ, ನಂತರ 6 ರಿಂದ 10ನೇ ತರಗತಿಯನ್ನು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಳಗವಾಡಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡರು. ನಂತರ ಪಿಯುನಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿಎಸ್&zwnj;ಸಿ ಫಾರೆಸ್ಟ್&zwnj;ನಲ್ಲಿ ಪದವಿಯನ್ನು ಪಡೆದು 2023ರಲ್ಲಿ ತೇರ್ಗಡೆಯಾದರು.&lt;/p&gt;&lt;h3&gt;ಸತತ ಪರಿಶ್ರಮ, ಕಠಿಣ ಓದು:&lt;/h3&gt;&lt;p&gt;ಪದವಿ ಪಡೆದ ನಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡ ಬಸವರಾಜ ಅವರು ಯುಪಿಎಸ್&zwnj;ಸಿ ಪರೀಕ್ಷೆ ಎದುರಿಸಿದರು. ಆದರೆ, ವಿಫಲವಾದರೂ ಪ್ರಯತ್ನ ಬಿಡಲಿಲ್ಲ. ನಂತರ 2026ರಲ್ಲಿ ಐಎಫ್&zwnj;ಎಸ್&zwnj;ನಲ್ಲಿ ರಾಷ್ಟ್ರಕ್ಕೆ ಮೊದಲ ರ್&zwj;ಯಾಂಕ್&zwnj; ಪಡೆದು ಅದ್ವಿತೀಯ ಸಾಧನೆ ಮಾಡಿದರು. ಈ ಅದ್ವಿತೀಯ ಸಾಧನೆ ಅವರ ಹುಟ್ಟೂರು ಸವದಿಯಲ್ಲಿ ಸಂಭ್ರಮ ಮನೆ ಮಾಡಿದೆ.&lt;/p&gt;&lt;p&gt;&lt;strong&gt;ಬಡತನ ಅಡ್ಡಿ ಅಲ್ಲ:&lt;/strong&gt;&lt;/p&gt;&lt;p&gt;ನಾನು ಯಾವುದೇ ವಿಶೇಷ ಕೋರ್ಸ್&zwnj;, ಕೋಚಿಂಗ್ ಮೊರೆ ಹೋಗದೆ ಹಿರಿಯರ ನಿರಂತರ ಮಾರ್ಗದರ್ಶನದಂತೆ ಓದಿ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಸಾಧ್ಯವಾಯಿತು. ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ, ಮೊರಾರ್ಜಿ ವಸತಿ ಶಾಲೆಯಲ್ಲಿ ಕಲಿತ ನಾನು, ಓರ್ವ ರೈತನ ಮಗನಾಗಿ ಈ ಹಂತಕ್ಕೆ ತಲುಪಿದ್ದು ಅತೀವ ಹೆಮ್ಮೆ ಮತ್ತು ಸಂತಸ ತಂದಿದೆ. ಸಾಧಿಸುವ ಛಲವಿದ್ದರೆ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ನಾನೇ ಸಾಕ್ಷಿ.&lt;/p&gt;&lt;p&gt;&lt;strong&gt;-ಬಸವರಾಜ ಧರೆಪ್ಪ ಕೆಂಪವಾಡ, ಯುಪಿಎಸ್ಸಿ ಟಾಪರ್.ಶಿಕ್ಷಣಕ್ಕೆ ಇರಲಿಲ್ಲ ಕೊರತೆ&lt;/strong&gt;&lt;/p&gt;&lt;p&gt;ರಾಷ್ಟ್ರಮಟ್ಟದಲ್ಲಿ ಉನ್ನತ ಸಾಧನೆ ಮಾಡಿರುವುದು ನಮ್ಮೆಲ್ಲರಿಗೆ ಸಂತೋಷ ತಂದಿದೆ. ನಮಗೆ ಜಮೀನು ಕಡಿಮೆ ಇದ್ದರೂ ಮಕ್ಕಳ ಶಿಕ್ಷಣಕ್ಕೆ ಯಾವುದೇ ಕೊರತೆ ಮಾಡಿಲ್ಲ. ನಾನು ಬೇರೆಯವರ ಜಮೀನುಗಳನ್ನು ಸಮಪಾಲಿನ ರೂಪದಲ್ಲಿ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಿದ್ದೇನೆ. ನನ್ನ ಶ್ರಮಕ್ಕೆ ಈ ಭೂತಾಯಿ ಮತ್ತು ಆ ದೇವರು ಕೃಪೆ ತೋರಿದ್ದಾನೆ. ಮಗ ಬಸವರಾಜು ಮಾಡಿರುವ ಸಾಧನೆ ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಗ್ರಾಮವೇ ಹೆಮ್ಮೆ ಮತ್ತು ಸಂತಸ ತಂದಿದೆ.&lt;/p&gt;&lt;p&gt;&lt;strong&gt;-ಧರೆಪ್ಪ ಸಿದ್ದಪ್ಪ ಕೆಂಪವಾಡ, ಬಸವರಾಜ ತಂದೆ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-farmer-s-son-basavaraj-dhareppa-secures-rank-1-in-ifs-exam-across-india-rav/articleshow-er2al65"/>
        </item>
        <item>
            <title><![CDATA[Belagavi: ಪತಿ ಮನೆಯಲ್ಲೇ ಕಳ್ಳತನ ಮಾಡಿ ಪ್ರಿಯಕರನೊಂದಿಗೆ ತಗ್ಲಾಕೊಂಡ ನವವಿವಾಹಿತೆ]]></title>
            <link>https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0</link>
            <guid isPermaLink="true">https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0</guid>
            <pubDate>Sun, 10 May 2026 07:43:17 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr7t87qwy2vwb3hyvk0mzmd9,imgname-arrested--1--1778378874620.jpg" type="image/jpeg" height="390" width="690"/>
            <content:encoded><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ, ಪತಿಯ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ 48 ಗಂಟೆಗಳಲ್ಲಿ ಆರೋಪಿಗಳನ್ನು ಸೆರೆಹಿಡಿದು, ಕಳವಾದ ಸಂಪೂರ್ಣ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;img&gt;&lt;p&gt;ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೋಟಿ ಗ್ರಾಮದಲ್ಲಿ ಪತಿಯ ಮನೆಯಲ್ಲಿ ಕಳವು ಮಾಡಿದ ಆರೋಪದ ಮೇಲೆ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಹಣಮಂತ ಮಾರಾಪೂರ ಮತ್ತು ಹಸೀನಾ ನದಾಫ್ ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;&lt;img&gt;&lt;p&gt;ಮೂಲತಃ ಮೂಡಲಗಿ ತಾಲೂಕಿನ ನಿವಾಸಿಯಾಗಿರುವ ಹಸೀನಾ ನದಾಫ್ ಅವರು ಕಳೆದೆರಡು ತಿಂಗಳ ಹಿಂದೆ ಹೊಸಕೋಟಿ ಗ್ರಾಮದ ಶರೀಫ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರವೂ ಹಣಮಂತ ಮಾರಾಪೂರ ಅವರೊಂದಿಗೆ ಸಂಪರ್ಕದಲ್ಲಿದ್ದ ಹಸೀನಾ, ಆತನೊಂದಿಗೆ ಸೇರಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;img&gt;&lt;p&gt;ಹೊಸಕೋಟಿ ಗ್ರಾಮದ ಶರೀಫ್ ಎಂಬುವರ ಮನೆಯಲ್ಲಿ 154.6 ಗ್ರಾಂ ತೂಕದ, ₹21 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 45 ಗ್ರಾಂ ತೂಕದ, ₹11 ಸಾವಿರ ಮೌಲ್ಯದ ಬೆಳ್ಳಿ ಆಭರಣ ಕಳುವಾಗಿತ್ತು. ಈ ಸಂಬಂಧ ದಿಲಶಾನ್ ನದಾಫ್ ಅವರು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.&lt;/p&gt;&lt;img&gt;&lt;p&gt;ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹಾಗೂ ಪಿಎಸೈ ಬಸವರಾಜ್ ಕೊಣ್ಣೂರೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಕೃತ್ಯ ನಡೆದ 48 ಗಂಟೆಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಕಳವಾದ ಎಲ್ಲ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ರಾಮದುರ್ಗ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/belagavi-theft-at-husbands-house-wife-lover-arrested-hosakoti-ramadurga-mrq-f48bkg0"/>
        </item>
        <item>
            <title><![CDATA[Belagavi: ಗಂಡನಿರುವಾಗಲೇ ಪತ್ನಿಗೆ ಮತ್ತೊಂದು ಮದುವೆಯ ಸಂಚು? ದೂರು ದಾಖಲಿಸಿದ ಪತಿ]]></title>
            <link>https://kannada.asianetnews.com/gallery/karnataka-districts/belagavi-husband-files-complaint-against-planning-another-marriage-while-husband-is-still-alive-mrq-ida5rr0</link>
            <guid isPermaLink="true">https://kannada.asianetnews.com/gallery/karnataka-districts/belagavi-husband-files-complaint-against-planning-another-marriage-while-husband-is-still-alive-mrq-ida5rr0</guid>
            <pubDate>Wed, 13 May 2026 09:12:21 +0530</pubDate>
            <description><![CDATA[&lt;p&gt;ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn6aadr5jpkj4fkw0jep2x39,imgname-madhya-pradesh-gwalior-wedding-violence-no-alcohol-guest-attack-bride-groom-family-crime-news-india-1-1775107389189.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಬೆಳಗಾವಿ:ತಾನು ಬದುಕಿರುವಾಗಲೇ ತನ್ನ ಪತ್ನಿಗೆ ಮತ್ತೊಬ್ಬರೊಂದಿಗೆ ಮದುವೆ ಮಾಡಲು ಪತ್ನಿಯ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಮನವಿ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.&amp;nbsp;&lt;/p&gt;&lt;p&gt;ಬೆಳಗಾವಿ ಮೂಲದ ವೆಂಕಟೇಶ ರಾಠೋಡ ಎಂಬಾತ, 2022ರಲ್ಲಿ ಬೆಳಗಾವಿ ತಾಲೂಕಿನ ಯುವತಿಯೊಬ್ಬಳೊಂದಿಗೆ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಮದುವೆಯ ಬಳಿಕ ಪತ್ನಿಗೆ ಮನೆ ಖರೀದಿ ಮಾಡಿಕೊಟ್ಟಿದ್ದು, ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಹಣ ಸಹ ನೀಡಿದ್ದೇನೆ ಎಂದು ಹೇಳಿದರು.&lt;/p&gt;&lt;img&gt;&lt;p&gt;ಹಿರೇಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ ಹಂಚಿನಮನಿ ಅವರು ತಮ್ಮ ಪತ್ನಿ ಮಂಜುಳಾ ಹಂಚಿನಮನಿಯನ್ನು ಮನೆಯಲ್ಲೇ ಕೂಡಿ ಹಾಕಿ ಇಟ್ಟಿದ್ದಾರೆ. ಬಲವಂತವಾಗಿ ಆಕೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವೆಂಕಟೇಶ ರಾಠೋಡ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ನಾನು ಬದುಕಿರುವಾಗಲೇ ಪತ್ನಿಗೆ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ. ಈ ಮದುವೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.&lt;/p&gt;&lt;img&gt;&lt;p&gt;ಪತ್ನಿಯ ಮನೆಯವರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡಿದ್ದೇನೆ. ನನ್ನಿಂದ ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡ ಬಳಿಕ ಈಗ ನನ್ನ ಗಮನಕ್ಕೆ ತರದೇ ಮತ್ತೊಂದು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.&lt;/p&gt;&lt;img&gt;&lt;p&gt;ಕೆಲ ದಿನಗಳ ಹಿಂದೆ ಹಿರೇಬಾಗೇವಾಡಿ ಪ್ರದೇಶದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಬೇಕು. ನನ್ನ ಪತ್ನಿಯ ಮತ್ತೊಂದು ಮದುವೆಯನ್ನು ತಡೆಯಬೇಕು ಎಂದು ವೆಂಕಟೇಶ ರಾಠೋಡ ಅವರು ಮನವಿ ಮಾಡಿಕೊಂಡಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/karnataka-districts/belagavi-husband-files-complaint-against-planning-another-marriage-while-husband-is-still-alive-mrq-ida5rr0"/>
        </item>
        <item>
            <title><![CDATA[ಬೆಳಗಾವಿಯನ್ನು ನಡುಗಿಸಿದ ಶಿವಂ ಅಸೋಸಿಯೇಟ್‌ನ 4600 ಕೋಟಿ ವಂಚನೆ ಪ್ರಕರಣ, ಕಚೇರಿ ಮೇಲೆ ದಾಳಿ ಹಣ ಹಾಕಿದವ್ರಿಗೆ ಚಿಂತೆ!]]></title>
            <link>https://kannada.asianetnews.com/gallery/karnataka-districts/belagavi-shivam-associates-owner-shivanand-s-neelannavar-under-probe-in-alleged-multi-crore-investment-scam-gdp-lr7x7q5</link>
            <guid isPermaLink="true">https://kannada.asianetnews.com/gallery/karnataka-districts/belagavi-shivam-associates-owner-shivanand-s-neelannavar-under-probe-in-alleged-multi-crore-investment-scam-gdp-lr7x7q5</guid>
            <pubDate>Fri, 15 May 2026 16:44:11 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ಜನರಿಗೆ 4,600 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್&zwnj;ಗೆ ಸೇರಿದ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 45,000 ಹೂಡಿಕೆದಾರರಲ್ಲಿ ಆತಂಕ ಸೃಷ್ಟಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krnmvt24419rxr1exp3va6jd,imgname-shivam-associates-shivanand-neelannavar--6--1778842986563.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯಲ್ಲಿ ಜನರಿಗೆ 4,600 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್&zwnj;ಗೆ ಸೇರಿದ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 45,000 ಹೂಡಿಕೆದಾರರಲ್ಲಿ ಆತಂಕ ಸೃಷ್ಟಿ.&lt;/p&gt;&lt;img&gt;&lt;p&gt;ಬೆಳಗಾವಿ: ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಬೆಳಗಾವಿಯಲ್ಲಿ 4,600ಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್&zwnj;ಗೆ ಸೇರಿದ ಕಚೇರಿಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಜಿಲ್ಲಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದರೆ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.&lt;/p&gt;&lt;img&gt;&lt;p&gt;ನಿನ್ನೆ ಮಧ್ಯರಾತ್ರಿ ಎರಡು ಗಂಟೆವರೆಗೂ ದಾಳಿ ನಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮೇ 15ರ ಸಂಜೆ ವೇಳೆಗೆ ಬೆಳಗಾವಿ ಎಸಿ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದೆ. 45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ ಆಗಿದ್ದು, RBI ನಿಯಮಗಳನ್ನ ಗಾಳಿಗೆ ತೂರಿ ಕೋಟ್ಯಾಂತರ ರುಪಾಯಿ ಹೂಡಿಕೆ ಮಾಡಿದ ಆರೋಪವಿದೆ. ಡಿಸಿ ಮೊಹಮ್ಮದ್ ರೋಷನ್ ಆದೇಶ ಮೇರೆಗೆ ಈ ದಾಳಿ ನಡೆದಿತ್ತು.ಕಂದಾಯ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ಬ್ಯಾಂಕ್ ಅಕೌಂಟ್, ಎರಡು ಕಚೇರಿ, ಒಂದು ಅಪಾರ್ಟ್ಮೆಂಟ್ ನಿವಾಸ, ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಇದೀಗ 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಬೆಳಗಾವಿ ಎಸಿ ಶ್ರವಣಕುಮಾರ ಇಂದೇ ಡಿಸಿಗೆ ವರದಿ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂಬ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದೇ ಭಾಷಣದಲ್ಲಿ 2028ರಲ್ಲಿ ಒಂದೇ ಸಲ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂಬ ರಾಜಕೀಯ ಹೇಳಿಕೆಯೂ ವ್ಯಾಪಕ ಗಮನ ಸೆಳೆದಿತ್ತು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾಷಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟವೆಯೇ ಅಥವಾ ಅದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಡಳಿತಾತ್ಮಕ ವಲಯದಲ್ಲೂ ಚರ್ಚೆ ಆರಂಭವಾಗಿತ್ತು.&lt;/p&gt;&lt;img&gt;&lt;p&gt;ಶಿವಾನಂದ ನೀಲಣ್ಣನವರ್ ನೇತೃತ್ವದಲ್ಲಿ ಮೇ 17ರಂದು ಸ್ವಚ್ಛ ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಸುಮಾರು 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಲಾಗಿತ್ತು. ಸರ್ದಾರ್ಸ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದ್ದು, ನಗರಾದ್ಯಂತ ಭಾರೀ ಪ್ರಮಾಣದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್&zwnj;ಗಳನ್ನು ಅಳವಡಿಸಲಾಗಿತ್ತು. ಆದರೆ, ಅಗತ್ಯ ಆಡಳಿತಾತ್ಮಕ ಅನುಮತಿ, ಭದ್ರತಾ ಕ್ರಮಗಳು ಹಾಗೂ ಕಾನೂನು ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯೂ ಅನುಮತಿ ಇಲ್ಲದೇ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್&zwnj;ಗಳನ್ನು ತೆರವುಗೊಳಿಸಿತು.&lt;/p&gt;&lt;img&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಪ್ರಭಾವ, ದೊಡ್ಡ ಮಟ್ಟದ ಹಣಕಾಸು ವ್ಯವಹಾರ, ಸಾವಿರಾರು ಜನರನ್ನು ಸೇರಿಸುವ ಪ್ರಯತ್ನ ಹಾಗೂ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಈಗ ಶಿವಂ ಅಸೋಸಿಯೇಟ್ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೂಡಿಕೆ ಸಂಗ್ರಹ ಕಾನೂನು ಬದ್ಧವಾಗಿತ್ತೇ?, ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ?, ಸಾರ್ವಜನಿಕರಿಗೆ ನೀಡಿದ ಭರವಸೆಗಳ ಸ್ವರೂಪ ಏನು? ಎಂಬ ಅಂಶಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.&lt;/p&gt;&lt;img&gt;&lt;p&gt;ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಹಲವರಲ್ಲಿ ಈಗ ಆತಂಕ ಮನೆ ಮಾಡಿದೆ. ಕೆಲವು ಹೂಡಿಕೆದಾರರು ತಮ್ಮ ಹಣದ ಭದ್ರತೆ ಬಗ್ಗೆ ಪ್ರಶ್ನೆ ಕೇಳತೊಡಗಿದ್ದು, ಇನ್ನೂ ಕೆಲವರು ಪರಿಸ್ಥಿತಿ ಗಮನಿಸುತ್ತಿದ್ದಾರೆ. ಅಧಿಕಾರಿಗಳ ತನಿಖೆಯ ಬಳಿಕವೇ ಶಿವಂ ಅಸೋಸಿಯೇಟ್&zwnj;ನ ನಿಜಸ್ವರೂಪ ಮತ್ತು ಹಣಕಾಸು ಚಟುವಟಿಕೆಗಳ ಕುರಿತು ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ. 46,000ಸಾವಿರ ಜನರಿಂದ&zwnj; ಹಣ ಹೂಡಿಕೆ ತನಿಖೆಯಲ್ಲಿ ಬಯಲಾಗಿದ್ದು, ಅಂದಾಜು 4,500ಕೋಟಿಗೂ ಅಧಿಕ ಹಣ ಹೂಡಿಕೆಯಾಗಿರುವ ಬಗ್ಗೆ ಶಂಕೆ ಇದ್ದು ನೀಲಣ್ಣವರ್ ಗೆ ಸೇರಿದ ನಾಲ್ಕು ಅಕೌಂಟ್ ಗಳನ್ನ&zwnj; ಫ್ರೀಜ್ ಮಾಡಲಾಗಿದೆ. ಪ್ರತಿಯೊಂದು ಅಕೌಂಟ್ ನಲ್ಲಿ 50ಕೋಟಿ, 120ಕೋಟಿ ಹಣ ಕೂಡ ಪತ್ತೆಯಾಗಿದೆ.&lt;/p&gt;&lt;img&gt;&lt;p&gt;ಶಿವಂ ಅಸೋಸಿಯೇಟ್ ಸಂಸ್ಥೆ ಹೆಸರಿನಲ್ಲಿ ಶಿವಾನಂದ ನೀಲಣ್ಣವರ್ ಹೆಚ್ಚಿನ ಬಡ್ಡಿ ದರ ಕೊಡುವುದಾಗಿ ನಂಬಿಸಿ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಮಾಜಿ ಸೈನಿಕರು, ಯುವಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಾವಿರಾರು ಕೋಟಿ ರುಪಾಯಿ ಹೂಡಿಕೆ ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಣದ ಬಳಕೆ ಹಾಗೂ ವ್ಯವಹಾರಗಳ ಕುರಿತು ಈಗ ತನಿಖೆ ಆರಂಭವಾಗಿದೆ.ಕೆಲವು ಹೂಡಿಕೆದಾರರು ಸಂಸ್ಥೆಯ ಮೇಲಿನ ನಂಬಿಕೆಯಿಂದ ಹಣ ಹೂಡಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪ್ರಚಾರದ ವಿಡಿಯೋಗಳು ಮತ್ತು ಸಾರ್ವಜನಿಕ ಸಭೆಗಳಿಂದ ಪ್ರಭಾವಿತರಾಗಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಂಸ್ಥೆಯ ಕಾರ್ಯವೈಖರಿ, ಹಣಕಾಸು ಮೂಲಗಳು ಹಾಗೂ ವಹಿವಾಟಿನ ಪಾರದರ್ಶಕತೆ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿದೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/belagavi-shivam-associates-owner-shivanand-s-neelannavar-under-probe-in-alleged-multi-crore-investment-scam-gdp-lr7x7q5"/>
        </item>
        <item>
            <title><![CDATA[ಬೆಳಗಾವಿಯ 4500 ಕೋಟಿ ವಂಚನೆ ಪ್ರಕರಣ, ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್]]></title>
            <link>https://kannada.asianetnews.com/state/belagavi-scam-case-shocking-audio-of-accused-shivanand-neelannavar-goes-viral/articleshow-mby4kwq</link>
            <guid isPermaLink="true">https://kannada.asianetnews.com/state/belagavi-scam-case-shocking-audio-of-accused-shivanand-neelannavar-goes-viral/articleshow-mby4kwq</guid>
            <pubDate>Sat, 16 May 2026 11:26:39 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಹೂಡಿಕೆ ಮಾಡಿ ಬರೋಬ್ಬರಿ 4500 ಕೋಟಿ ರೂ ವಂಚನೆ ಪ್ರಕರಣದಲ್ಲಿ ನೀಲಣ್ಣವರ್ ಸಿಲುಕಿದ್ದಾರೆ. ಬಂಧಿತ ನೀಲಣ್ಣವರ್ ಸ್ಫೋಟಕ ಆಡಿಯೋ ರಿಲೀಸ್ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krqnpdkra9xtmy9c6as2ebaj,imgname-neelannavar-1778910967416.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಮೇ.16) &lt;/strong&gt;ಹೆಚ್ಚಿನ ಬಡ್ಡಿ ನೀಡುವುದಾಗಿ ಜನಸಾಮಾನ್ಯರಿಂದ ಹೂಡಿಕೆ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದಡಿ ಶಿವಂ ಅಸೋಸಿಯೇಟ್ ಮುಖ್ಯಸ್ಥ ನೀಲಣ್ಣವರ್ ಅರೆಸ್ಟ್ ಆಗಿದ್ದಾರೆ. ಬೆಳಗಾವಿಯಲ್ಲಿ ಕೋಲಾಹಲ ಸೃಷ್ಟಿಸಿದ ಈ ಪ್ರಕರಣದ ತನಿಖೆ ನಡೆಸುತ್ತಿದ್ದಂತೆ ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಶಿವಂ ಅಸೋಸಿಯೇಟ್, ಮುಖ್ಯಸ್ಥ ಶಿವಾನಂದ್ ನೀಲಣ್ಣವರ್ (Shivanand Neelannavar) ಕಚೇರಿ, ಮನೆ, ಅಪಾರ್ಟ್&zwnj;ಮೆಂಟ್ ಮೇಲೆ ಎಸಿ, ಸಹಕಾರ ಇಲಾಕೆ ಅಧಿಕಾರಿಗಳ ದಾಳಿ ನಡೆಸಿ ಪ್ರರಕರಣ ಬಯಲಿಗೆಳೆದಿದ್ದಾರೆ. ಇದೀಗ ಬಂಧಿತ ನೀಲಣ್ಣವರ್ ಆಡಿಯೋ ರಿಲೀಸ್ ಮಾಡಿದ್ದಾರೆ.&lt;/p&gt;&lt;p&gt;ನೀಲಣ್ಣನವರ್ ಬಂಧನ ಬಳಿಕ ಬೆಳಗಾವಿಯಲ್ಲಿ (Belagavi) ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಇತ್ತ ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. ಹಲವರು ಹೆಚ್ಚಿನ ಬಡ್ಡಿ ಆಸೆಗೆ ಸಾಲ ಮಾಡಿ ಹೂಡಿಕೆ ಮಾಡಿದ್ದಾರೆ. ಬಂಧನದಿಂದ ಹೂಡಿಕೆದಾರು ತಮ್ಮ ಹೂಡಿಕೆ ಹಣದ ಬಗ್ಗೆ ತೀವ್ರ ಕಳವಳ ವ್ಯಕ್ಕಪಡಿಸಿದ್ದಾರೆ.&lt;/p&gt;&lt;h2&gt;ನೀಲಣ್ಣವರ್ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?&lt;/h2&gt;&lt;p&gt;ನೀಲಣ್ಣವರ್ ಕಚೇರಿ ಮೇಲೆ ದಾಳಿ ಬಳಿಕ ಖುದ್ದು ಶಿವಾನಂದ್ ನೀಲಣ್ಣವರ್ ಆಡಿಯೋ (Shivanand Neelannavar Audio) ರಿಲೀಸ್ ಮಾಡಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ಶಿವಾನಂದ್ ನೀಲಣ್ಣವರ್ ಮನೆಯಲ್ಲಿ ನಾನು ಅರಾಮ ಇದೀನಿ ಎಂದಿದ್ದಾರೆ. ಮೊದಲು ಹೇಗಿತ್ತು ಇನ್ನೆರಡು ದಿನದಲ್ಲಿ ಹಾಗೇ ಇರುತ್ತೆ. ಯಾರು ಕೂಡ ತಲೆ ಕೆಡಸಿಕೊಳ್ಳಬೇಡಿ, ಭಯಪಡುವ ಅಗತ್ಯವಿಲ್ಲ, ಅರಾಮಗಿರಿ. ನಾನು ಇದ್ದೇನೆ, ಯಾರು ಒತ್ತಡ ತೆಗೆದುಕೊಳ್ಳಬೇಡಿ. ಮುಖ್ಯವಾಗಿ ಹೆದರಬೇಡಿ ಗಟ್ಟಿಯಾಗಿರಿ ಎಂದು ಸಂದೇಶ ರವಾನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮವಾಗಿ ಸಂಸ್ಥೆ ನಡೆಸುತ್ತೇವೆ ಎಂದು ನೀಲಣ್ಣನವರ್ ತಮ್ಮ ಹೂಡಿಕೆದಾರರಿಗೆ ಸಂದೇಶ ರವಾನಿಸಿದ್ದಾರೆ.&lt;/p&gt;&lt;h2&gt;ಶಿವಾನಂದ ಕಚೇರಿಯಲ್ಲಿ ಪೊಲೀಸರಿಂದ ಇಂಚಿಂಚೂ ಶೋಧ&lt;/h2&gt;&lt;p&gt;ಬೆಳಗಾವಿ ವಂಚನೆ ಪ್ರಕರಣ ಸಂಬಂಧ ಶಿವಾನಂದ ಕಚೇರಿಯಲ್ಲಿ ಪೊಲೀಸರಿಂದ ಇಂಚಿಂಚೂ ಶೋಧ ನಡೆಸಿದ್ದಾರೆ. ಕಚೇರಿಯಲ್ಲಿ ಬಾಂಡ್ ಪೇಪರ್, ಚೆಕ್ ಕಂಡು ಪೊಲೀಸರು ದಂಗಾಗಿದ್ದಾರೆ. ಒಂದೇ ವಾರದಲ್ಲಿ 50 ಕೋಟಿ ರೂಪಾಯಿ ಹೂಡಿಕೆ ಆಗಬೇಕಿತ್ತು. ಹೂಡಿಕೆ ಮಾಡುವವರಿಗೆ ನೀಡಬೇಕಿದ್ದ ಚೆಕ್, ಬಾಂಡ್ ಪೇಪರ್ ಪತ್ತೆಯಾಗಿದೆ. 3700 ಚೆಕ್ ಮತ್ತು ಬಾಂಡ್ ಪೇಪರ್ ಪತ್ತೆಯಾಗಿದೆ. ಹೊಸದಾಗಿ ಹೂಡಿಕೆ ಮಾಡೋರಿಗೆ ಸಹಿ ಮಾಡಿ ರೆಡಿ ಇಟ್ಟಿದ್ದ ಚೆಕ್ ಮತ್ತು ಬಾಂಡ್ ಪೇಪರ್ ಶೋಧ ಕಾರ್ಯದಲ್ಲಿ ಪತ್ತೆಯಾಗಿದೆ.&lt;/p&gt;&lt;h2&gt;ಪೊಲೀಸ್ ವಶದಲ್ಲಿ ನೀಲಣ್ಣವರ್ ಹೇಳಿದ್ದೇನು&lt;/h2&gt;&lt;p&gt;ಪೊಲೀಸ್ ವಶದಲ್ಲಿರುವಾಗ ನೀಲಣ್ಣವರ್ ಇದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲರಿಗೂ ಖುಷಿ ಸಿಗಲಿ.ಭಾರತದ ಜನತೆಗೆ ಒಳ್ಳೆಯದಾಗಲಿ , ಓಂನಮಃ ಶಿವಾಯ ಎಂದು ನೀಲಣ್ಣವರ್ ಕೈಮುಗಿದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>belagavi</category>
            <dc:creator>Chethan Kumar</dc:creator>
            <atom:link href="https://kannada.asianetnews.com/state/belagavi-scam-case-shocking-audio-of-accused-shivanand-neelannavar-goes-viral/articleshow-mby4kwq"/>
        </item>
        <item>
            <title><![CDATA[Nitin Gadkari threat call case : ನಿತೀನ್ ಗಡ್ಕರಿಗೆ ಜೀವ ಬೆದರಿಕೆ, 100 ಕೋಟಿಗೆ ಬೇಡಿಕೆ ಇಟ್ಟಿದ್ದ ಜಯೇಶ್ ಪೂಜಾರಿಗೆ ಶಿಕ್ಷೆ]]></title>
            <link>https://kannada.asianetnews.com/state/belagavi-man-who-threatened-minister-niitin-gadkari-demanded-rs-100-crores-sentenced-rav/articleshow-nhypwbx</link>
            <guid isPermaLink="true">https://kannada.asianetnews.com/state/belagavi-man-who-threatened-minister-niitin-gadkari-demanded-rs-100-crores-sentenced-rav/articleshow-nhypwbx</guid>
            <pubDate>Sat, 16 May 2026 04:13:31 +0530</pubDate>
            <description><![CDATA[&lt;p&gt;ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ ₹100 ಕೋಟಿ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ, ಬೆಳಗಾವಿಯ ಹಿಂಡಲಗಾ ಜೈಲಿನ ಕೈದಿ ಜಯೇಶ್ ಪೂಜಾರಿಗೆ ನಾಗಪುರ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೈಲಿನಲ್ಲಿದ್ದೇ ಮೊಬೈಲ್ ಬಳಸಿ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ದೃಢ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kfak5rhcbyj9m4xptw4evn70,imgname-nitin-gadkari-1768808440364.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಮೇ.16): &lt;/strong&gt;ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿ ₹100 ಕೋಟಿ ಬೇಡಿಕೆ ಇಟ್ಟ ಪ್ರಕರಣದಲ್ಲಿ ಅಪರಾಧಿ ಜಯೇಶ ಪೂಜಾರಿಗೆ ನಾಗಪುರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಜಯೇಶ್ ಪೂಜಾರಿ ನಾಗಪುರದ ನಿತಿನ್ ಗಡ್ಕರಿ ಕಚೇರಿಗೆ ಕರೆ ಮಾಡಿ ₹100 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ಬಾಂಬ್ ಸ್ಫೋಟ ನಡೆಸಿ ಗಡ್ಕರಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.&lt;/p&gt;&lt;p&gt;ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿ, ಕರ್ನಾಟಕದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾನೆ. ಜೈಲಿನಲ್ಲಿದ್ದಾಗಲೇ ಮೊಬೈಲ್ ಬಳಸಿ ಗಡ್ಕರಿ ಕಚೇರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.&lt;/p&gt;&lt;p&gt;ಪೊಲೀಸ್ ತನಿಖೆ ವೇಳೆ ಜಯೇಶ್ ಪೂಜಾರಿಯಿಂದ ಒಂದು ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗಡ್ಕರಿ ಕಚೇರಿಯ ದೂರವಾಣಿ ಸಂಖ್ಯೆಗಳು ದಾಖಲಾಗಿದ್ದವು. ಈ ಸಂಖ್ಯೆಯನ್ನು ಆತನ ಸ್ನೇಹಿತೆ ಮಂಜುಳಾ ನೀಡಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಜಯೇಶ ಪೂಜಾರಿ ಹೆಸರು ಮಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಕೇಳಿಬಂದಿದೆ. ವಿವಿಧ ಕಲಂಗಳ ಅಡಿ ತಪ್ಪಿತಸ್ಥನೆಂದು ತೀರ್ಪು ನೀಡಿದ ನಾಗಪುರ ನ್ಯಾಯಾಲಯ, ಜಯೇಶ್ ಪೂಜಾರಿಗೆ 5 ವರ್ಷಗಳ ಶಿಕ್ಷೆ ವಿಧಿಸಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/belagavi-man-who-threatened-minister-niitin-gadkari-demanded-rs-100-crores-sentenced-rav/articleshow-nhypwbx"/>
        </item>
        <item>
            <title><![CDATA[ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಬೆಳಗಾವಿ - ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಖಾಯಂ!]]></title>
            <link>https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r</link>
            <guid isPermaLink="true">https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r</guid>
            <pubDate>Thu, 14 May 2026 20:21:50 +0530</pubDate>
            <description><![CDATA[&lt;p&gt;ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕವನ್ನು ಬಲಪಡಿಸಲು, ಚರ್ಲಪಲ್ಲಿ &ndash; ಬೆಳಗಾವಿ ನಡುವೆ ಸಂಚರಿಸುತ್ತಿದ್ದ ವಿಶೇಷ ವಾರಕ್ಕೊಮ್ಮೆ ಎಕ್ಸ್&zwnj;ಪ್ರೆಸ್ ರೈಲನ್ನು ರೈಲ್ವೆ ಮಂಡಳಿ ಖಾಯಂಗೊಳಿಸಿದೆ. ಈ ರೈಲು (17075/17076) ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krkf4pgtkqtym9st7j84f764,imgname-belagavi-charlapalli-weekly-express-train-1778769877529.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಕರ್ನಾಟಕ ಮತ್ತು ತೆಲಂಗಾಣ ನಡುವಿನ ಸಂಪರ್ಕವನ್ನು ಬಲಪಡಿಸಲು, ಚರ್ಲಪಲ್ಲಿ &ndash; ಬೆಳಗಾವಿ ನಡುವೆ ಸಂಚರಿಸುತ್ತಿದ್ದ ವಿಶೇಷ ವಾರಕ್ಕೊಮ್ಮೆ ಎಕ್ಸ್&zwnj;ಪ್ರೆಸ್ ರೈಲನ್ನು ರೈಲ್ವೆ ಮಂಡಳಿ ಖಾಯಂಗೊಳಿಸಿದೆ. ಈ ರೈಲು (17075/17076) ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಸಂಚರಿಸಲಿದೆ.&lt;/p&gt;&lt;img&gt;&lt;p&gt;ಬೆಳಗಾವಿ/ಹುಬ್ಬಳ್ಳಿ (ಮೇ 14): ಉತ್ತರ ಕರ್ನಾಟಕದ ಜನತೆಗೆ ತೆಲಂಗಾಣ ರಾಜಧಾನಿ ಹೈದರಾಬಾದ್ ಸಮೀಪದ ಚರ್ಲಪಲ್ಲಿಗೆ ಸಂಚರಿಸಲು ಈಗ ರೈಲ್ವೆ ಇಲಾಖೆಯು ಸುಗಮ ಹಾದಿ ಮಾಡಿಕೊಟ್ಟಿದೆ. ಇದುವರೆಗೆ ವಿಶೇಷ ರೈಲಾಗಿ ಸಂಚರಿಸುತ್ತಿದ್ದ ಚರ್ಲಪಲ್ಲಿ &ndash; ಬೆಳಗಾವಿ &ndash; ಚರ್ಲಪಲ್ಲಿ ವಾರಕ್ಕೊಮ್ಮೆ ಸಂಚರಿಸುವ ಎಕ್ಸ್&zwnj;ಪ್ರೆಸ್ ರೈಲನ್ನು (Weekly Express) ರೈಲ್ವೆ ಮಂಡಳಿಯು ಅಧಿಕೃತವಾಗಿ ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದಾಗಿ ಉಭಯ ರಾಜ್ಯಗಳ ನಡುವಿನ ರೈಲು ಸಂಪರ್ಕ ಮತ್ತಷ್ಟು ಬಲಗೊಂಡಿದೆ.&lt;/p&gt;&lt;img&gt;&lt;p&gt;ರೈಲ್ವೆ ಇಲಾಖೆಯ ಮಾಹಿತಿಯ ಪ್ರಕಾರ, ರೈಲು ಸಂಖ್ಯೆ 17075 (ಚರ್ಲಪಲ್ಲಿ - ಬೆಳಗಾವಿ) ಮೇ 16, 2026 ರಿಂದ ಜಾರಿಗೆ ಬರುವಂತೆ ವಾರಕ್ಕೊಮ್ಮೆ ಸಂಚರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 17076 (ಬೆಳಗಾವಿ - ಚರ್ಲಪಲ್ಲಿ) ಮೇ 17, 2026 ರಿಂದ ಖಾಯಂ ಆಗಿ ಸಂಚರಿಸಲಿದೆ. ಈ ರೈಲು ಒಟ್ಟು 24 ಬೋಗಿಗಳನ್ನು (Coaches) ಹೊಂದಿರಲಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಈ ರೈಲು ಕರ್ನಾಟಕದ ಪ್ರಮುಖ ನಗರಗಳಾದ ಯಾದಗಿರಿ, ರಾಯಚೂರು, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಮತ್ತು ಲೋಂಡಾ ಮಾರ್ಗವಾಗಿ ಸಂಚರಿಸುತ್ತದೆ. ಅಲ್ಲದೆ, ಧಾರ್ಮಿಕ ಕೇಂದ್ರವಾದ ಮಂತ್ರಾಲಯಕ್ಕೂ ಈ ರೈಲಿನ ಸಂಪರ್ಕ ಇರುವುದರಿಂದ ಭಕ್ತಾದಿಗಳಿಗೆ ಭಾರಿ ಅನುಕೂಲವಾಗಲಿದೆ.&lt;/p&gt;&lt;img&gt;&lt;p&gt;ಚರ್ಲಪಲ್ಲಿಯಿಂದ ಬೆಳಗಾವಿಗೆ (17075): ಸಂಜೆ 4:00 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಬೆಳಗ್ಗೆ 10:30ಕ್ಕೆ ಬೆಳಗಾವಿ ತಲುಪಲಿದೆ.&lt;/p&gt;&lt;p&gt;ಬೆಳಗಾವಿಯಿಂದ ಚರ್ಲಪಲ್ಲಿಗೆ (17076): ಮಧ್ಯಾಹ್ನ 1:00 ಗಂಟೆಗೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಗ್ಗೆ 08:45ಕ್ಕೆ ಚರ್ಲಪಲ್ಲಿ ತಲುಪಲಿದೆ.&lt;/p&gt;&lt;img&gt;&lt;p&gt;ಬೆಳಗಾವಿ, ಧಾರವಾಡ ಮತ್ತು ಹುಬ್ಬಳ್ಳಿ ಭಾಗದ ಜನರು ಹೈದರಾಬಾದ್ ಕಡೆಗೆ ಹೋಗಲು ಈ ರೈಲು ಅತ್ಯಂತ ಸಹಕಾರಿಯಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ಸಂಚರಿಸುವವರಿಗೆ ಇದು ವರದಾನವಾಗಲಿದೆ. ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಈ ರೈಲಿನ ಖಾಯಂ ಸೇವೆಯಿಂದಾಗಿ ನಿರಂತರವಾಗಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ದೊರೆಯಲಿದೆ.&lt;/p&gt;&lt;p&gt;ಪ್ರಯಾಣಿಕರು ರೈಲಿನ ಹೆಚ್ಚಿನ ವಿವರಗಳು ಮತ್ತು ನಿಖರವಾದ ವೇಳಾಪಟ್ಟಿಗಾಗಿ ಅಧಿಕೃತ ವೆಬ್&zwnj;ಸೈಟ್ www.enquiry.indianrail.gov.in ಅಥವಾ NTES ಆಪ್ ಅನ್ನು ಬಳಸಬಹುದು. ನೈಋತ್ಯ ರೈಲ್ವೆಯ ಈ ಜನಸ್ನೇಹಿ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/indian-railways-good-news-to-north-karnataka-belagavi-charlapalli-weekly-express-train-regularised-sat-nnqhq4r"/>
        </item>
        <item>
            <title><![CDATA[ರಾಜ್ಯದಲ್ಲಿ ವರುಣನ ಅಬ್ಬರ: ಧಾರವಾಡ, ಬೆಳಗಾವಿ, ಮಲೆನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ! ಎಲ್ಲೆಲ್ಲಿ ಎಷ್ಟು? ವಿವರ ನೋಡಿ]]></title>
            <link>https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1</link>
            <guid isPermaLink="true">https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1</guid>
            <pubDate>Tue, 12 May 2026 22:29:11 +0530</pubDate>
            <description><![CDATA[&lt;p&gt;ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಧಾರವಾಡ, ಬೆಳಗಾವಿ, ಮತ್ತು ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ಎಷ್ಟು ಮಳೆಯಾಗಿದೆ ವಿರ ನೋಡಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krehex85a05kq26aw93yw8fb,imgname-screenshot-2026-05-12-211856-1778604537093.png" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಧಾರವಾಡ, ಬೆಳಗಾವಿ, ಮತ್ತು ಮಲೆನಾಡು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಹಲವೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಲ್ಲಿ ಎಷ್ಟು ಮಳೆಯಾಗಿದೆ ವಿರ ನೋಡಿ..&lt;/p&gt;&lt;img&gt;&lt;p&gt;ರಾಜ್ಯದಾದ್ಯಂತ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ. ಮಂಗಳವಾರ ಸಂಜೆ ಧಾರವಾಡ, ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಧಾರವಾಡ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಭಾರಿ ಮಳೆಯಾಗಿದೆ. ಇದರಿಂದಾಗಿ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಆದರೆ, ಬಿರುಗಾಳಿಯ ರಭಸಕ್ಕೆ ನಗರದ ಹಲವೆಡೆ ಮರಗಳು ಉರುಳಿ ಬಿದ್ದಿವೆ.&amp;nbsp;&lt;/p&gt;&lt;p&gt;ಮುಖ್ಯವಾಗಿ ಉಪ್ಪಿನ ಬೆಟಗೇರಿ ರಸ್ತೆಯಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಮರವನ್ನು ತೆರವುಗೊಳಿಸಿದರು. ಹವಾಮಾನ ಇಲಾಖೆಯ ವರದಿಯ ಪ್ರಕಾರ ಧಾರವಾಡದಲ್ಲಿ 15 ಮಿ.ಮೀ ಮಳೆಯಾಗಿದೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲೆಯಲ್ಲೂ ವರುಣನ ಅಬ್ಬರ ಜೋರಾಗಿತ್ತು. ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದವು. ವಾಹನ ಸವಾರರು ಮಳೆ ನೀರಿನಲ್ಲೇ ಸಂಚರಿಸಲು ಹರಸಾಹಸ ಪಟ್ಟರು.&lt;/p&gt;&lt;img&gt;&lt;p&gt;ಇನ್ನು ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಭಯಾನಕ ಬಿರುಗಾಳಿ ಸಹಿತ ಮಳೆಯಾಗಿದೆ. ಬಿರುಗಾಳಿಯ ರಭಸಕ್ಕೆ ಗಿಡಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕಚ್ಚಿವೆ. ಈ ಭಯಾನಕ ದೃಶ್ಯಗಳು ಸ್ಥಳೀಯರ ಮೊಬೈಲ್&zwnj;ನಲ್ಲಿ ಸೆರೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕೋಡಿ ಪಟ್ಟಣದಲ್ಲಿ ತಡರಾತ್ರಿವರೆಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು.&lt;/p&gt;&lt;img&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಇಂದು ಕೂಡ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮತ್ತು ಆಲ್ದೂರು ಸುತ್ತಮುತ್ತ ಭಾರಿ ಗಾಳಿ-ಸಿಡಿಲಿನ ಜೊತೆ ಮಳೆ ಸುರಿದಿದೆ. ನಿನ್ನೆಯಷ್ಟೇ ಜಿಲ್ಲೆಯ ಹಲವೆಡೆ ಮಳೆಯಿಂದ ಅನಾಹುತಗಳು ಸಂಭವಿಸಿದ್ದವು, ಇಂದು ಕೂಡ ಅದೇ ಆರ್ಭಟ ಮುಂದುವರಿದಿದೆ. ಬಿರುಗಾಳಿಯ ಜೊತೆ ಮಳೆ ಸುರಿಯುತ್ತಿರುವುದರಿಂದ ಕಾಫಿ ತೋಟಗಳಿಗೆ ಹಾನಿಯಾಗುವ ಭೀತಿ ಎದುರಾಗಿದೆ.&lt;/p&gt;&lt;img&gt;&lt;p&gt;ಬೆಂಗಳೂರು ಹವಾಮಾನ ಕೇಂದ್ರದ ವರದಿಯ ಪ್ರಕಾರ ರಾಜ್ಯದ ವಿವಿಧೆಡೆ ದಾಖಲಾದ ಮಳೆಯ ವಿವರ ಇಲ್ಲಿದೆ (ಮೇ 12, ರಾತ್ರಿ 9:30ರವರೆಗೆ):&lt;/p&gt;&lt;ul&gt; &lt;li&gt;ಧಾರವಾಡ: 15.0 ಮಿ.ಮೀ&lt;/li&gt; &lt;li&gt;ಸಿರ್ಸಿ (ಉತ್ತರ ಕನ್ನಡ): 11.5 ಮಿ.ಮೀ&lt;/li&gt; &lt;li&gt;ಆಗುಂಬೆ (ಶಿವಮೊಗ್ಗ): 8.0 ಮಿ.ಮೀ&lt;/li&gt; &lt;li&gt;ಗದಗ: 3.2 ಮಿ.ಮೀ&lt;/li&gt; &lt;li&gt;ಮುದಿಗೆರೆ (ಚಿಕ್ಕಮಗಳೂರು): 4.0 ಮಿ.ಮೀ&lt;/li&gt; &lt;li&gt;ಮಂಗಳೂರು: 1.0 ಮಿ.ಮೀ&lt;/li&gt;&lt;/ul&gt;&lt;img&gt;&lt;p&gt;ಬೆಳಗಾವಿ, ಚಿತ್ರದುರ್ಗ ಮತ್ತು ಕಲಬುರಗಿಯಲ್ಲಿ ಸಂಜೆ ವೇಳೆ ಗುಡುಗು ಸಹಿತ ಮೋಡಗಳು (CB clouds) ಕಂಡುಬಂದಿದ್ದು, ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಇದೇ ರೀತಿಯ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಟ್ಟಾರೆಯಾಗಿ ವರುಣನ ಆಗಮನ ಬಿಸಿಲಿನಿಂದ ಮುಕ್ತಿ ನೀಡಿದ್ದರೂ, ಅನಿರೀಕ್ಷಿತ ಬಿರುಗಾಳಿ ಜನರಲ್ಲಿ ಆತಂಕ ಮೂಡಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ರಾಜ್ಯದಲ್ಲಿ 8 ಜಿಲ್ಲೆಗೆ ಆರೆಂಟ್ ಅಲರ್ಟ್; ಮುಂದಿನ 5 ದಿನ ಈ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಮುನ್ಸೂಚನೆ!&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/state/karnataka-rain-update-dharwad-belagavi-chikkamagaluru-heavy-rainfall-damage-orange-alert-sat-prkl4g1"/>
        </item>
        <item>
            <title><![CDATA[ಗ್ರಾಮದೇವಿ ಜಾತ್ರಾ ಉತ್ಸವಕ್ಕೆ 2 ದಿನದಲ್ಲಿ 50 ಟನ್ ಭಂಡಾರ ಪೂರೈಕೆ;  ಇಡೀ ಊರು ಭಂಡಾರಮಯ]]></title>
            <link>https://kannada.asianetnews.com/karnataka-districts/belagavi-district-savadatti-50-tons-of-food-supplies-supplied-in-2-days-for-grama-devi-jatra-festival-mrq/articleshow-r2q0zvc</link>
            <guid isPermaLink="true">https://kannada.asianetnews.com/karnataka-districts/belagavi-district-savadatti-50-tons-of-food-supplies-supplied-in-2-days-for-grama-devi-jatra-festival-mrq/articleshow-r2q0zvc</guid>
            <pubDate>Thu, 07 May 2026 07:24:01 +0530</pubDate>
            <description><![CDATA[&lt;p&gt;ಸವದತ್ತಿ ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆಯ ಸಂಭ್ರಮ ಹೆಚ್ಚಾಗಿದ್ದು, ದೇವಿಯರನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿವೆ. ಮಂಗಳವಾರ, ದೇವಿಯರು ಗೌಡರು, ಕುಲಕರ್ಣಿಗಳು ಸೇರಿದಂತೆ 16 ಮನೆತನಗಳಿಂದ ಉಡಿ ತುಂಬಿಸಿಕೊಂಡಿದ್ದು, ಊರೆಲ್ಲಾ 50 ಟನ್&zwnj;ಗೂ ಅಧಿಕ ಭಂಡಾರದಿಂದ ಹಳದಿಮಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr0253t3sxyzr2gb02xr46kp,imgname-savadatti-jatre-1778118725443.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಸವದತ್ತಿ ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆಯ ದಿನದಿಂದ ದಿನಕ್ಕೆ ಸಂಭ್ರಮ ಜೋರಾಗಿದೆ. ದೇವಿಯರ ಪುರಪ್ರವೇಶ ಹಾಗೂ ಗ್ರಾಮದೇವಿಯರನ್ನು ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ ನಂತರ ಮಂಗಳವಾರ ಸಾಂಪ್ರದಾಯಿಕ ಪೂಜಾ ಪದ್ಧತಿಗಳು ಪ್ರಾರಂಭಗೊಂಡಿವೆ.&lt;/p&gt;&lt;p&gt;ದೇವಿಯ ಪ್ರತಿಷ್ಠಾಪಣೆಯ ಮಾರನೇ ದಿನ ಗ್ರಾಮ ದೇವಿಯರು ಊರಿನ ಗೌಡರು, ಕುಲಕರ್ಣಿಯರು ಸೇರಿದಂತೆ 16 ಮನೆಯ ರೈತರ ಮನೆಗಳಿಗೆ ಹೋಗಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮಂಗಳವಾರ ಬೆಳಿಗ್ಗೆ5 ಗಂಟೆಗೆಯಿಂದ ದೇವಿಯ ಕಟ್ಟಿಯ ಮುಂದೆ ಹೋಮ ಹವನ ಸೇರಿದಂತೆ ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.&lt;/p&gt;&lt;h2&gt;&lt;strong&gt;ಪಲ್ಲಕ್ಕಿಯ ಆಗಮನ&lt;/strong&gt;&lt;/h2&gt;&lt;p&gt;ಉಭಯ ಗ್ರಾಮದೇವಿಯರ ಪಲ್ಲಕ್ಕಿಗಳು ಊರಿನ ಗೌಡರಾದ ಶಂಕರಗೌಡ ಪಾಟೀಲ, ಕಮತಮನಿ, ಕುಲಕರ್ಣಿ, ಶಾನಬೋಗ, ಮೇಟಿಯವರ ಮನೆಗೆ ಹೋಗಿ ಉಡಿ ತುಂಬಿಸಿಕೊಂಡು ಆನಿ ಅಗಸಿ ಮುಖಾಂತರ ಗ್ರಾಮದ ಬಂಡಿ ಓಣಿಯ ಪ್ರಮುಖ ರೈತರಾದ ವಿರುಪಾಕ್ಷ ಕರಬಸಪ್ಪ ಮಾಮನಿ, ಅಡಿವೆಪ್ಪ ಗಂಗಪ್ಪ ಬೀಳಗಿ, ವಿರುಪಾಕ್ಷಪ್ಪ ಹೆರಕಲ್, ಅಶೋಕ ಹೊಂಗಲ, ಗೂಳಪ್ಪ ರುದ್ರಾಪುರ, ಅಜ್ಜಪ್ಪ ಕೊಣ್ಣೂರ, ವೀರಭದ್ರಪ್ಪ ತುಪ್ಪದರವ ಮನೆಗೆ ಹೋಗಿ ಆರತಿಯೊಂದಿಗೆ ದೇವಿಯರಿಗೆ ಉಡಿ ತುಂಬಲಾಯಿತು. ನಂತರ ಪ್ರಭುನವರ ಮತ್ತು ಒಕ್ಕಲತನ ಓಣಿಯ ರೈತರ ಮಹಾದೇವಪ್ಪ ದೊಡ್ಡಹುಬ್ಬಳ್ಳಿ, ಸತ್ಯಪ್ಪ ಸೋಮಣ್ಣವರ, ಭರಮಪ್ಪ ಅಣ್ಣಿಗೇರಿ, ನಿಂಗಪ್ಪ ಮೊರಬದ(ಶಿರಹಟ್ಟಿ), ಜೀವಪ್ಪ ಮಜ್ಜಗಿ (ಮಡ್ಲಿ), ಸಂತೋಷ ಗೋಡಿ (ಮುತಗೊಂಡ), ಚನಬಸಪ್ಪ ನವಲಗುಂದ, ಮಲ್ಲಿಕಾರ್ಜುನ ಹನಸಿ, ಗದಿಗೆಪ್ಪ ದಾನಗೊಂಡರವರ ಮನೆಗಳಲ್ಲಿ ಉಡಿ ತುಂಬಿದ ಬಳಿಕ ಮತ್ತೆ ಗ್ರಾಮದೇವಿಯರು ಕಟ್ಟಿಗೆ ಪಲ್ಲಕ್ಕಿಗಳು ಆಗಮಿಸಿದವು.&lt;/p&gt;&lt;h3&gt;&lt;strong&gt;ಭಂಡಾರಮಯ&lt;/strong&gt;&lt;/h3&gt;&lt;p&gt;ಜಾತ್ರೆ ಪ್ರಾರಂಭಗೊಂಡ ಎರಡೇ ದಿನದಲ್ಲಿ 50 ಟನ್&zwnj;ಗೂ ಅಧಿಕ ಭಂಡಾರವನ್ನು ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಜಾತ್ರೆಗೆ ಮೆರವಣಿಗೆಗೆ ಪೂರೈಕೆ ಮಾಡಿದ್ದಾರೆ. ಪಟ್ಟಣವೆಲ್ಲ ಹಳದಿವರ್ಣದಿಂದ ರಂಗೇರಿದ್ದು, ಎಲ್ಲ ಭಂಡಾರಮಯವಾಗಿದೆ. ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಸರ್ವರೂ ಭಂಡಾರ ಎರಚುತ್ತ ಶ್ರೀದೇವಿಯ ಕೃಪೆಗೆ ಪಾತ್ರರಾದರು.&lt;/p&gt;&lt;p&gt;ಸಾರ್ವಜನಿಕರಿಂದ ಉಡಿ ತುಂಬಿಸುವ ಕಾರ್ಯಕ್ರಮ ಗುರುವಾರ ಮತ್ತೆ ಪ್ರಾರಂಭವಾಗಲಿದ್ದು, ಮೇ.7ರಂದು ಗೃಹ ಮಂಡಳಿ ಭಾಗ, ಮೇಗಿನಗೇರಿ ಓಣಿ (ಜನತಾಪ್ಲಾಟ್), ಇನಾಮತಿ ಪ್ಲಾಟ್, ಛತ್ರಪತಿ ಶಿವಾಜಿ ಮಹಾರಾಜ ಸರ್ಕಲ್ ಭಾಗ, ಆಶೀರ್ವಾದ ನಗರ, ಹಣಗಮೇರಿ ಓಣಿ, ಗಡೇಕಾರ ಪ್ಲಾಟ್, ಬಸವೇಶ್ವರ ಸರ್ಕಲ್&zwnj;ದಿಂದ ಬೀರದೇವರ ದೇವಸ್ಥಾನದ ಮಾರ್ಗವಾಗಿ ಹೆಡ್ ಪೋಸ್ಟ್ ಆಫೀಸ್&zwnj;ವರೆಗೆ, ಹುಡೇದ ಓಣಿ, ಬೇವಿನಕಟ್ಟಿ ಓಣಿ, ದೇಸಾಯಿ ಓಣಿ, ಕಟ್ಟಿ ಓಣಿ, ಬೆಣ್ಣಿ ಕಟ್ಟಿ ಓಣಿಯ ನಾಗರಿಕರಿಗೆ ಉಡಿ ತುಂಬಲು ಅವಕಾಶ ಕಲ್ಪಿಸಲಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-district-savadatti-50-tons-of-food-supplies-supplied-in-2-days-for-grama-devi-jatra-festival-mrq/articleshow-r2q0zvc"/>
        </item>
        <item>
            <title><![CDATA[Belagavi: ವಿಡಿಯೋ ಕಾಲ್‌ನಲ್ಲಿ ಮಗುವಿನ ಮುಖ ತೋರಿಸದ ಅತ್ತೆಗೆ ಚಾಕು ಇರಿದ ಪಾಪಿ ಅಳಿಯ]]></title>
            <link>https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t</link>
            <guid isPermaLink="true">https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t</guid>
            <pubDate>Tue, 05 May 2026 09:37:02 +0530</pubDate>
            <description><![CDATA[&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqv4mampjkrs8eyzesm4e3e3,imgname-belagavi-crime-news--4--1777953548950.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಳಿಯನೊಬ್ಬ ತನ್ನ ಅತ್ತೆಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯ ನಂತರ ಆರೋಪಿ ಅರವಿಂದ್ ಗವಳಿಯನ್ನು ಪೊಲೀಸರು ಬಂಧಿಸಿದ್ದು, ಗಾಯಾಳು ಮಹಾದೇವಿ ಕರಿಗಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿಡಿಯೋ ಕಾಲ್&zwnj;ನಲ್ಲಿ ಮಗುವಿನ ಮುಖ ತೋರಿಸಿಲ್ಲ ಎಂಬ ಕಾರಣಕ್ಕೆ ಅತ್ತೆಗೆ ಅಳಿಯ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಚಾಕು ಇರಿದ ಅಳಿಯನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.&lt;/p&gt;&lt;img&gt;&lt;p&gt;ಅರವಿಂದ್ ಗವಳಿ(26) ಎಂಬಾತನೇ ಅತ್ತೆಗೆ ಚಾಕು ಇರಿದ ಅಳಿಯ. ಚಾಕು ಇರಿತಕ್ಕೊಳಗಾದ ಅತ್ತೆ ಮಹಾದೇವಿ ಕರಿಗಾರ (45) ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತವರಿನಲ್ಲಿದ್ದ ಪತ್ನಿಗೆ ಅರವಿಂದ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ಒಂದೂವರೆ ವರ್ಷದ ಹಿಂದೆ ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಅರವಿಂದ್ ಎಂಬಾತನೊಂದಿಗೆ ಮಹಾದೇವಿ ಮಗಳ ಮದುವೆ ಮಾಡಿಸಿದ್ದರು. ಎರಡು ತಿಂಗಳ ಹಿಂದೆಯಷ್ಟೇ ಮಗಳಿಗೆ ಹೆರಿಗೆಯಾಗಿತ್ತು. ಹೀಗಾಗಿ ಅರವಿಂದ್ ಪತ್ನಿ ತವರಿನಲ್ಲಿದ್ದರು. ಪತ್ನಿ ತವರಿನಲ್ಲಿದ್ರೂ ಅರವಿಂದ್ ಪದೇ ಪದೇ ವಿಡಿಯೋ ಕಾಲ್ ಮಾಡಿ ಹೆಂಡ್ತಿ ಮತ್ತು ಮಗುವಿನ ಮುಖ ತೋರಿಸುವಂತೆ ಕಿರುಕುಳ ನೀಡ್ತಿದ್ದನಂತೆ.&lt;/p&gt;&lt;img&gt;&lt;p&gt;ಅಳಿಯನ ಪದೇ ಪದೇ ವಿಡಿಯೋ ಕಾಲ್&zwnj;ಗೆ ಬೇಸತ್ತ ಅತ್ತೆ ಮಹಾದೇವಿ, ಕೆಲಸ ಬಿಟ್ಟು ಮೊಬೈಲ್ ಹಿಡಿದುಕೊಂಡು ಕುಳಿತುಕೊಳ್ಳಲು ಆಗಲ್ಲ. ದಿನಕ್ಕೆ ಒಂದು ಬಾರಿ ಮಾತ್ರ ವಿಡಿಯೋ ಕಾಲ್ ಮಾಡುವಂತೆ ಹೇಳಿದ್ದರು. ಈ ವೇಳೆ ಕೋಪಗೊಂಡ ಅರವಿಂದ್, ಅತ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ನಮ್ಮೂರಿಗೆ ಬಂದ್ರೆ ನಿನ್ನನ್ನು ಸುಮ್ಮನೇ ಬಿಡಲ್ಲ ಎಂದು ಮಹಾದೇವಿ ಗದರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Dharwad: ಮುಂಡಗೋಡ ಮೂಲದ ಬೌದ್ಧ ಸನ್ಯಾಸಿ ಕೊಲೆ ರಹಸ್ಯ: ಒಂದೇ ಸುಳಿವು ಬಿಚ್ಚಿಟ್ಟ ಸತ್ಯ!&lt;/strong&gt;&lt;/p&gt;&lt;img&gt;&lt;p&gt;ಈ ಜಗಳದಿಂದ ಕೆರಳಿದ ಅರವಿಂದ್ ಗ್ರಾಮಕ್ಕೆ ಬಂದು ಅತ್ತೆಗೆ ಚಾಕು ಇರಿದು ಪರಾರಿಯಾಗಿ, ಇಂದು ಜೈಲು, ನಾಳೆ ಬೆಲ್ ನಿನ್ನ ಬಿಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನು. ಇನ್ನು ಚಾಕು ಇರಿತಕ್ಕೊಳಗಾಗಿದ್ದ ಮಹಾದೇವಿ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/belagavi-son-in-law-stabs-mother-in-law-for-not-showing-child-s-face-on-video-call-mrq-razs52t"/>
        </item>
        <item>
            <title><![CDATA[ಅನ್ಯಾಯ ಮಾಡಲು ಬಂದವ್ರನ್ನ ಸುಮ್ನೆ ಬಿಡಲ್ಲ: ವಿರೋಧಿಗಳ ವಿರುದ್ಧ ಗುಡುಗಿದ ಲಕ್ಷ್ಮಣ ಸವದಿ]]></title>
            <link>https://kannada.asianetnews.com/karnataka-districts/mla-laxman-savadi-slams-ramesh-jarkiholi-athani-gvd/articleshow-tutq9bd</link>
            <guid isPermaLink="true">https://kannada.asianetnews.com/karnataka-districts/mla-laxman-savadi-slams-ramesh-jarkiholi-athani-gvd/articleshow-tutq9bd</guid>
            <pubDate>Mon, 11 May 2026 21:54:51 +0530</pubDate>
            <description><![CDATA[&lt;p&gt;ನಾನು ಹಳ್ಳಿಯಲ್ಲಿ ಚಿನ್ನಿದಾಂಡು ಆಡುತ್ತ, ಕನ್ನಡ ಶಾಲೆಯಲ್ಲಿ ಕಲಿತು ಬೆಳೆದಿದ್ದೇನೆ, ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ ಎಂದು ಶಾಸಕ ಲಕ್ಷ್ಮಣ ಸವದಿ ವೇದಿಕೆಯ ಮೇಲೆ ವಿರೋಧಿಗಳ ವಿರುದ್ಧ ಗುಡುಗಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ke2d1m9c430pz6e9a1jev3d1,imgname-----------------------2026-01-03t223341.266-1767459836204.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಥಣಿ (ಬೆಳಗಾವಿ) (ಮೇ.11):&lt;/strong&gt; ನಾನು ಹಳ್ಳಿಯಲ್ಲಿ ಚಿನ್ನಿದಾಂಡು ಆಡುತ್ತ, ಕನ್ನಡ ಶಾಲೆಯಲ್ಲಿ ಕಲಿತು ಬೆಳೆದಿದ್ದೇನೆ, ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ, ಟ್ರ್ಯಾಕ್ಟರ್ ಕೂಡ ಹೊಡಿತೀನಿ, ಪ್ರಸಂಗ ಬಂದ್ರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದ ಹೊಡಿತೀನಿ ಎಂದು ಶಾಸಕ ಲಕ್ಷ್ಮಣ ಸವದಿ ವೇದಿಕೆಯ ಮೇಲೆ ವಿರೋಧಿಗಳ ವಿರುದ್ಧ ಗುಡುಗಿದರು.&lt;/p&gt;&lt;p&gt;ಅಥಣಿ ಮತಕ್ಷೇತ್ರದ ತೆಲಸಂಗ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ನನ್ನ ಪ್ರೀತಿಯ ಸ್ನೇಹಿತ ಎಂದು ಹೇಳುವ ಮೂಲಕ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಅಥಣಿ ಮತಕ್ಷೇತ್ರಕ್ಕೆ ಆಗಮಿಸಿದ್ದ ರಮೇಶ ಜಾರಕಿಹೊಳಿ ಲಕ್ಷ್ಮಣ ಸವದಿಯನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ಟ್ರ್ಯಾಕ್ಟರ್ ಓಡಿಸಲು ಕಳಿಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದರು.&lt;/p&gt;&lt;p&gt;ಈ ಅತಿರೇಕದ ಮಾತಿಗೆ ತಿರುಗೇಟು ನೀಡಿದ ಶಾಸಕ ಲಕ್ಷ್ಮಣ ಸವದಿ ಸಾರ್ವಜನಿಕ ವೇದಿಕೆಯಲ್ಲಿಯೇ ನಾನೊಬ್ಬ ರೈತನ ಮಗ, ಎತ್ತು-ಟ್ರ್ಯಾಕ್ಟರ್ ಓಡಿಸೋದು ನನ್ನ ಬದುಕು, ನನ್ನ ಸ್ವಾಭಿಮಾನಕ್ಕೆ ಮತ್ತು ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ನಾನು ರೈತನ ಮಗ ಆಗಿರುವುದರಿಂದ ನೇಗಿಲು ಹೊಡಿತೀನಿ, ಟ್ರ್ಯಾಕ್ಟರ್ ಕೂಡ ಹೊಡಿತೀನಿ, ಪ್ರಸಂಗ ಬಂದ್ರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದ ಹೊಡಿತೀನಿ ಎಂದು ಗುಡುಗಿದರು.&lt;/p&gt;&lt;p&gt;ತಮ್ಮ ತಾಲೂಕಿನಂತೆ ಅಥಣಿ ತಾಲೂಕನ್ನು ಮಾಡುವ ಕನಸು ಕಾಣುವವರಿಗೆ ಇಲ್ಲಿ ಅವಕಾಶ ಇಲ್ಲ. ಇಲ್ಲಿ ಕೇವಲ ರೈತರಲ್ಲ, ವಿಜ್ಞಾನಿಗಳು ಇದ್ದಾರೆ, ಪ್ರಜ್ಞಾವಂತರು ಇದ್ದಾರೆ. ಶಿವಯೋಗಿಗಳು ನಾಡಿನ ಜನ ಎಂದಿಗೂ ಅನ್ಯಾಯದ ಪರ ನಿಲ್ಲುವುದಿಲ್ಲ. ಅಧಿಕ ಪ್ರಸಂಗದ ಮಾತುಗಳನ್ನು ಆಡುವ ಜನರಿಗೆ ಕ್ಷೇತ್ರದ ಜನರೇ ತಕ್ಕ ಉತ್ತರ ನೀಡುತ್ತಾರೆ. ನಾನು ಅವರಂತೆ ಮಾತನಾಡಬಲ್ಲೆ, ಆದರೆ ಅವರಿಗೂ ನಮಗೂ ಯಾವುದೇ ವ್ಯತ್ಯಾಸವಿರುವುದಿಲ್ಲ, ಕ್ಷೇತ್ರದ ಜನರು ಇದನ್ನು ಸೂಕ್ಷ್ಮವಾಗಿ ಆಲಿಸುತ್ತಿರುತ್ತಾರೆ.&lt;/p&gt;&lt;h2&gt;&lt;strong&gt;ಯಾವಾಗಲೂ ಶ್ರೀರಕ್ಷೆ&lt;/strong&gt;&lt;/h2&gt;&lt;p&gt;ಇವತ್ತು ಹೇಳುವ ಪ್ರಸಂಗ ಬಂದಿದೆ, ಆದ್ದರಿಂದ ಈ ಎಚ್ಚರಿಕೆಯ ಮಾತನ್ನು ನಾನು ಹೇಳುತ್ತಿದ್ದೇನೆ. ಕ್ಷೇತ್ರದ ಜನರು ನನಗೆ ಯಾವಾಗಲೂ ಶ್ರೀರಕ್ಷೆಯಾಗಿದ್ದಾರೆ. ನಾನು ಯುದ್ಧಕ್ಕೆ ಹೊರಡುವಾಗ ಯಾವುದೇ ಡಾಲ್ ಮತ್ತು ಕವಚ ಹಾಕಿಕೊಳ್ಳದೆ ರಣರಂಗಕ್ಕೆ ಇಳಿಯುತ್ತೇನೆ. ನನ್ನ ಕ್ಷೇತ್ರದ ಮತದಾರರೇ ನನಗೆ ಶ್ರೀರಕ್ಷೆ ಮತ್ತು ಕವಚವಾಗಿದ್ದಾರೆ. ವಿರೋಧಿಗಳ ಯಾವುದೇ ಕುತಂತ್ರ ಇಲ್ಲಿ ನಡೆಯುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.&lt;/p&gt;]]></content:encoded>
            <category>belagavi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mla-laxman-savadi-slams-ramesh-jarkiholi-athani-gvd/articleshow-tutq9bd"/>
        </item>
        <item>
            <title><![CDATA[ಶಿವಾನಂದ ನೀಲಣ್ಣವರ: ಅಂದು ಐಸ್‌ಕ್ರೀಮ್‌ ಮಾರುತ್ತಿದ್ದವ ಸಾಮ್ರಾಜ್ಯ ಕಟ್ಟಿದ!]]></title>
            <link>https://kannada.asianetnews.com/state/shivanand-neelannavar-how-a-former-ice-cream-seller-built-a-business-empire-rav/articleshow-udenhd4</link>
            <guid isPermaLink="true">https://kannada.asianetnews.com/state/shivanand-neelannavar-how-a-former-ice-cream-seller-built-a-business-empire-rav/articleshow-udenhd4</guid>
            <pubDate>Sat, 16 May 2026 06:36:21 +0530</pubDate>
            <description><![CDATA[ವೈರಲ್ ವಿಡಿಯೋದಿಂದ ಪ್ರಸಿದ್ಧಿಗೆ ಬಂದ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ, ಅಕ್ರಮ ಠೇವಣಿ ಆರೋಪದ ಮೇಲೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಅವರ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡು, ಅವರನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krq4yxgfzrpnf4gbcr9vfdmm,imgname-----------------------2026-05-16t063327.134-1778893420047.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಮೇ.16): &lt;/strong&gt;ನಿಯಮ ಬಾಹಿರವಾಗಿ ಠೇವಣಿ ಪಡೆದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಉಪವಿಭಾಗಾಧಿಕಾರಿ ನೇತೃತ್ವದ ತಂಡ 20 ಗಂಟೆಗಳ ಕಾಲ ನಿರಂತರ ಸಂಸ್ಥೆಯ ಮಾಲೀಕ &lt;strong&gt;ಶಿವಾನಂದ ನೀಲಣ್ಣವರ&lt;/strong&gt; ಕಚೇರಿ ಮತ್ತು ಮನೆಯಲ್ಲಿ ತಪಾಸಣೆ ನಡೆಸಿದರು. ಈ ವೇಳೆ ಹಣದ ವಹಿವಾಟಿಗೆ ಸಂಬಂಧಿಸಿದ ನೂರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ.&lt;/p&gt;&lt;p&gt;ಶಿವಾನಂದ ನೀಲಣ್ಣವರ ಇತ್ತೀಚೆಗೆ ವೈರಲ್ ವಿಡಿಯೋ ಮೂಲಕ ರಾಜ್ಯಮಟ್ಟದಲ್ಲಿ ಪ್ರಸಿದ್ಧಿಗೆ ಬಂದಿದ್ದರು. ದಶಕಗಳಿಂದ ಹೂಡಿಕೆ ವ್ಯವಹಾರ ನಡೆಸುತ್ತಿದ್ದರೂ ಯಾರ ಗಮನಕ್ಕೂ ಇಲ್ಲದೇ ತಮ್ಮ ಕೆಲಸ ತಾವು ಮಾಡಿಕೊಂಡಿದ್ದರು. ಆದರೆ, ಕಡೂರ ಕಾರ್ಯಕ್ರಮದಲ್ಲಿ ಆಡಿದ ಮಾತುಗಳೇ ಆವರಿಗೆ ಕಂಟಕವಾಗಿ ಪರಿಣಮಿಸಿವೆ.&amp;nbsp;&lt;/p&gt;&lt;p&gt;ಈ ಕಾರ್ಯಕ್ರಮದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ. ಯಾರಿಗೂ ಹೆದರಲ್ಲ, ಜನರನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ. ನನ್ನ ಬಳಿ 15 ಸಾವಿರ ಬಂದೂಕುಗಳಿವೆ ಎಂದೆಲ್ಲ ಹೇಳಿಕೊಂಡಿದ್ದರು. ಈ ಭಾಷಣದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದರ, ಬೆನ್ನಲ್ಲೇ 20 ಸಾವಿರ ಜನರನ್ನು ಸೇರಿಸಿ ಮೇ.17ರಂದು ಬೆಳಗಾವಿ ನಗರದ ಸ್ವಚ್ಛತೆಗೆ ಮುಂದಾಗಿದ್ದರು. ಇದರ ಕಟೌಟ್&zwnj;ಗಳು ನಗರದಲ್ಲಿ ರಾರಾಜಿಸಲು ಆರಂಭಿಸಿದ ಬಳಿಕವೇ, ನೀಲಣ್ಣವರಗೆ ಒಂದೊಂದೆ ಕಂಟಕ ಎದುರಾದವು.&amp;nbsp;&lt;/p&gt;&lt;p&gt;ಗುರುವಾರ ಬೆಳಗ್ಗೆ ನಗರದಲ್ಲಿನ ಎಲ್ಲ ಕಟೌಟ್, ಬ್ಯಾನರ್&zwnj;ಗಳನ್ನು ಮಹಾನಗರ ಪಾಲಿಕೆ ತೆರವುಗೊಳಿಸಿತ್ತು. ಮಧ್ಯಾಹ್ನದ ಹೊತ್ತಿಗೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಅದು ಶುಕ್ರವಾರ ಮಧ್ಯಾಹ್ನಕ್ಕೆ ಮುಗಿದಿದೆ.ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ನೀಲಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಅಲ್ಲದೇ, ಗುರುವಾರ ಶಿವಂ ಅಸೋಸಿಯೇಟ್ ಕಚೇರಿ ಮೇಲೆ ಎಸಿ, ಸಹಕಾರ ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ್ದು, ಶುಕ್ರವಾರ ಕಚೇರಿ, ಮನೆ, ಅಪಾರ್ಟ್ಮೆಂಟ್&zwnj;ನ್ನು ಸೀಜ್ ಮಾಡಲಾಗಿದ್ದು, ಶಿವಾನಂದನನ್ನು ಶಿವಬಸವ ನಗರದ ಆತನ ಮನೆಯಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಹುಬ್ಬಳ್ಳಿಯಿಂದ ಬಂದು ಬದುಕು ಕಟ್ಟಿಕೊಂಡಿದ್ದ&lt;/h2&gt;&lt;p&gt;ಹುಬ್ಬಳ್ಳಿ ಬಳಿಯಿರುವ ಉಣಕಲ್&zwnj; ಶಿವಾನಂದ ನೀಲಣ್ಣವರ ಅವರ ಮೂಲ ಊರು. ತಂದೆ ಸೇನೆಯಲ್ಲಿದ್ದರು. ನಿವೃತ್ತಿಯಾದ ಬಳಿಕ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಿಧನರಾದರು. ಆ ನೌಕರಿ ಶಿವಾನಂದ ಸೋದರನಿಗೆ ಸಿಕ್ಕಿತ್ತು. ಬಳಿಕ, ಅವರಿಗೆ ಬೆಳಗಾವಿಗೆ ವರ್ಗವಣೆಯಾದ ಹಿನ್ನಲೆಯಲ್ಲಿ ಇಡೀ ಕುಟುಂಬ ಬೆಳಗಾವಿಗೆ ಬಂದು ನೆಲೆಸಿತ್ತು. ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿರುವ ಶಿವಾನಂದ ನೀಲಣ್ಣವರ, ಆರಂಭದಲ್ಲಿ ರೂರಲ್ ಮೆಡಿಕಲ್ ಕಾಲೇಜಿನಲ್ಲಿ ಸಿಪಾಯಿ ಕೆಲಸ ಮಾಡಿದ್ದಾರೆ.&amp;nbsp;&lt;/p&gt;&lt;p&gt;2004ರಿಂದ 2006ರವೆಗೆ ಆಟೋದಲ್ಲಿ ಫ್ರಿಜ್ ಇಟ್ಟುಕೊಂಡು ಐಸಕ್ರೀಮ್ ಮಾರಿದ್ದರು. ಅದಕ್ಕಾಗಿಯೇ ಐಸಕ್ರೀಮ್ ಫ್ಯಾಕ್ಟರಿ ಹಾಕಿದ್ದರು. 2012ರಲ್ಲಿ ಷೇರು ಪೇಟೆಯಲ್ಲಿ ಹೂಡಿಕೆ ಆರಂಭಿಸಿದ್ದರು. ಆದರೆ, ಅದು ಶಿವಾನಂದ ನೀಲಣ್ಣವರ ಕೈ ಹಿಡಿದಿರಲಿಲ್ಲ. ಆಗ ತಾನೇ ಯಾಕೆ ಇಂತಹ ಒಂದು ಹೂಡಿಕೆ ಸಂಸ್ಥೆ ಆರಂಭಿಸಬಾರದೆಂದು ವಿಚಾರಿಸಿ ಅಕ್ಯೂಮೆನ್ ಆ್ಯಪ್&zwnj;ವೊಂದನ್ನು ಅಭಿವೃದ್ಧಿಪಡಿಸಿ, ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿ ಕೊಳ್ಳಲು ಶುರು ಮಾಡಿದ್ದರು. ಈ ಆ್ಯಪ್ ಮೂಲಕ ನೂರಾರು ಕೋಟಿ ಹೂಡಿಕೆಯಾಗಿದೆ. ಇನ್ನು, ಇತ್ತೀಚೆಗೆ ಶಿವಂ ಅಸೊಸಿಯೇಟ್ಸ್ ಮೂಲಕ ಸಮಾಜಮುಖಿ ಕಾರ್ಯಗಳನ್ನು ಆರಂಭಿಸಿದ್ದರು. ಇದರಿಂದಲೇ ಅವರು ಪ್ರಸಿದ್ಧಿಗೆ ಬಂದಿದ್ದರು. ಸಾರ್ವಜನಿಕ ವೇದಿಕೆಗಳಲ್ಲಿ ಆಡುತ್ತಿದ್ದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚರಿಯನ್ನು ಸೃಷ್ಟಿ ಮಾಡಿದ್ದವು.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/shivanand-neelannavar-how-a-former-ice-cream-seller-built-a-business-empire-rav/articleshow-udenhd4"/>
        </item>
        <item>
            <title><![CDATA[ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು ಹರಿಹರ ನಿಲ್ದಾಣದಲ್ಲಿ ದುರಂತ, ಯಶಸ್ವಿ ಅಣಕು ಪ್ರದರ್ಶನ]]></title>
            <link>https://kannada.asianetnews.com/karnataka-districts/mysuru-belagavi-express-railway-disaster-mock-drill-conducted-davanagere-harihar-station-emergency-response-gdp/articleshow-yq0pn93</link>
            <guid isPermaLink="true">https://kannada.asianetnews.com/karnataka-districts/mysuru-belagavi-express-railway-disaster-mock-drill-conducted-davanagere-harihar-station-emergency-response-gdp/articleshow-yq0pn93</guid>
            <pubDate>Fri, 15 May 2026 15:24:01 +0530</pubDate>
            <description><![CDATA[ಹರಿಹರ ಸಮೀಪ, ಮೈಸೂರು-ಬೆಳಗಾವಿ ಎಕ್ಸ್&zwnj;ಪ್ರೆಸ್&zwnj; ರೈಲು ಹಳಿತಪ್ಪಿದ ಭೀಕರ ಅಪಘಾತದ ಸನ್ನಿವೇಶವನ್ನು ಆಧರಿಸಿ ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. ಎನ್&zwnj;ಡಿಆರ್&zwnj;ಎಫ್, ಎಸ್&zwnj;ಡಿಆರ್&zwnj;ಎಫ್ ಸೇರಿದಂತೆ ವಿವಿಧ ಇಲಾಖೆಗಳು ಸಂಯೋಜಿತ ಕಾರ್ಯಾಚರಣೆ ನಡೆಸಿ, ಒಂದು ಗಂಟೆಯೊಳಗೆ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾದವು.]]></description>
            <media:content url="https://static.asianetnews.com/images/w-1280,h-720,format-jpg,imgid-01krngn59zc93e76anagay5qv0,imgname-railway-disaster-mock-drill-1778838574399.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಿಹರ: ಮೈಸೂರು&ndash;ಬೆಳಗಾವಿ ನಡುವೆ ಸಂಚರಿಸುತ್ತಿದ್ದ ಮೈಸೂರು&ndash;ಬೆಳಗಾವಿ ಬೇಸಿಗೆ ವಿಶೇಷ ಸೂಪರ್ ಎಕ್ಸ್&zwnj;ಪ್ರೆಸ್&zwnj; (ರೈಲು ಸಂಖ್ಯೆ 06285) ಹಳಿತಪ್ಪಿದ ಪರಿಣಾಮ ಸಂಭವಿಸುವ ಭೀಕರ ಅಪಘಾತದ ಪರಿಸ್ಥಿತಿಯನ್ನು ಆಧರಿಸಿ, ಹರಿಹರ ಸಮೀಪ ವಾರ್ಷಿಕ ವಿಪತ್ತು ನಿರ್ವಹಣೆಯ ಪೂರ್ಣ ಪ್ರಮಾಣದ ಅಣಕು ಅಭ್ಯಾಸ (ಮಾಕ್&zwnj; ಡ್ರಿಲ್&zwnj;) ಯಶಸ್ವಿಯಾಗಿ ನಡೆಸಲಾಯಿತು.&lt;/p&gt;&lt;h2&gt;ಅಪಘಾತದ ತೀವ್ರತೆ ನೈಜ ಪರಿಸ್ಥಿತಿಗೆ ಸಮಾನ&lt;/h2&gt;&lt;p&gt;ಈ ಅಣಕು ಪ್ರದರ್ಶನದಲ್ಲಿ ಅಪಘಾತದ ತೀವ್ರತೆಯನ್ನು ನೈಜ ಪರಿಸ್ಥಿತಿಗೆ ಸಮಾನವಾಗಿ ಚಿತ್ರಿಸಲಾಯಿತು. ಅಪಘಾತದ ರಭಸಕ್ಕೆ ಒಂದು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇನ್ನೊಂದು ಬೋಗಿ ಅದರ ಮೇಲೇರಿದ ಸ್ಥಿತಿಯಲ್ಲಿ ಇದ್ದರೆ, ಮತ್ತೊಂದು ಬೋಗಿ ಗಂಭೀರವಾಗಿ ಜಖಂಗೊಂಡಂತೆ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿ ತಕ್ಷಣ ಸಮೀಪದ ನಿಲ್ದಾಣಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.&lt;/p&gt;&lt;p&gt;ಮಾಹಿತಿ ತಲುಪುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್&zwnj;ಡಿಆರ್&zwnj;ಎಫ್), ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (ಎಸ್&zwnj;ಡಿಆರ್&zwnj;ಎಫ್), ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ತಂಡಗಳು ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದವು. ಸಂಯೋಜಿತ ಕಾರ್ಯಾಚರಣೆಯ ಮೂಲಕ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ಅವರಿಗೆ ಧೈರ್ಯ ತುಂಬಿ, ಪ್ರಥಮ ಚಿಕಿತ್ಸೆ ನೀಡಿ, ಅಗತ್ಯವಿದ್ದವರನ್ನು ಆಂಬ್ಯುಲೆನ್ಸ್&zwnj;ಗಳ ಮೂಲಕ ಸಮೀಪದ ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಕೇವಲ ಒಂದು ಗಂಟೆಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.&lt;/p&gt;&lt;h2&gt;ಜೀವದ ಹಂಗನ್ನು ಲೆಕ್ಕಿಸದೆ ಪ್ರಯಾಣಿಕರ ರಕ್ಷಣೆ&lt;/h2&gt;&lt;p&gt;ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವತಿಯಿಂದ ಗುರುವಾರ ಹರಿಹರ ರೈಲು ನಿಲ್ದಾಣದಲ್ಲಿ ಈ ವಾರ್ಷಿಕ ಅಭ್ಯಾಸ ಆಯೋಜಿಸಲಾಗಿತ್ತು. ಬೆಂಕಿಗಾಹುತಿಯಾದ ಬೋಗಿಗಳೊಳಗೆ ಆಕ್ಸಿಜನ್&zwnj; ಉಪಕರಣಗಳೊಂದಿಗೆ ಪ್ರವೇಶಿಸಿದ ಸಿಬ್ಬಂದಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ಪ್ರಯಾಣಿಕರ ರಕ್ಷಣೆಯಲ್ಲಿ ತೊಡಗಿರುವ ದೃಶ್ಯ ಗಮನಾರ್ಹವಾಗಿತ್ತು. ಪ್ರಯಾಣಿಕರ ಜೀವ ರಕ್ಷಣೆ ಮಾತ್ರವಲ್ಲದೆ, ಅವರ ಬೆಲೆಬಾಳುವ ವಸ್ತುಗಳು ಹಾಗೂ ಸರಂಜಾಮುಗಳನ್ನು ಕೂಡ ಸುರಕ್ಷಿತವಾಗಿ ಹೊರತೆಗೆದು, ಅವುಗಳನ್ನು ಯಾವ ಬೋಗಿಗೆ ಸೇರಿವೆ ಎಂಬುದನ್ನು ಲಿಖಿತವಾಗಿ ದಾಖಲಿಸುವ ಕ್ರಮವೂ ಕೈಗೊಳ್ಳಲಾಯಿತು.&lt;/p&gt;&lt;p&gt;ಇದೇ ವೇಳೆ, ಮೈಸೂರು ವಿಭಾಗದ ಮಿನಿ ರೈಲು ಘಟಕದಿಂದ ಹೆಚ್ಚುವರಿ ಸ್ಟ್ರೆಚರ್&zwnj;ಗಳು, ತುರ್ತು ಚಿಕಿತ್ಸಾ ಸಾಮಗ್ರಿಗಳು ಹಾಗೂ ಲೋಹ ಕತ್ತರಿಸುವ ಯಂತ್ರೋಪಕರಣಗಳನ್ನು ಒದಗಿಸುವ ಮೂಲಕ ತುರ್ತು ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲು ತಾವು ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಲಾಯಿತು.&lt;/p&gt;&lt;p&gt;ಈ ಸಮಗ್ರ ಅಣಕು ಅಭ್ಯಾಸದ ವೇಳೆ ಸಂವಹನ ವ್ಯವಸ್ಥೆಯ ಪರಿಣಾಮಕಾರಿತ್ವ, ವಿವಿಧ ಇಲಾಖೆಗಳ ನಡುವಿನ ಸಮನ್ವಯ, ರಕ್ಷಣಾ ಕಾರ್ಯಾಚರಣೆಯ ವೇಗ, ವೈದ್ಯಕೀಯ ಸೇವೆಗಳ ಸ್ಪಂದನೆ, ಜನಸಂದಣಿ ನಿಯಂತ್ರಣ ಹಾಗೂ ಪುನಃಸ್ಥಾಪನಾ ಸಿದ್ಧತೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಅಭ್ಯಾಸದ ಅಂತ್ಯದಲ್ಲಿ ಸಂಬಂಧಿತ ಅಧಿಕಾರಿಗಳಿಂದ ವಿಮರ್ಶಾ ಸಭೆ ನಡೆಸಿ, ಕಾರ್ಯಾಚರಣೆಯ ವಿವಿಧ ಅಂಶಗಳ ಕುರಿತು ವಿಶ್ಲೇಷಣೆ ಮಾಡಲಾಯಿತು.&lt;/p&gt;&lt;p&gt;ಇಂತಹ ಅಣಕು ಅಭ್ಯಾಸಗಳನ್ನು ರೈಲ್ವೆ ಸಚಿವಾಲಯದ ಮಾರ್ಗಸೂಚಿಗಳಂತೆ ನಿಯಮಿತವಾಗಿ ನಡೆಸಲಾಗುತ್ತಿದ್ದು, ವಿಪತ್ತು ಸಿದ್ಧತೆಯನ್ನು ಬಲಪಡಿಸುವುದರ ಜೊತೆಗೆ ತುರ್ತು ಸಂದರ್ಭಗಳಲ್ಲಿ ವೇಗವಾದ ಮತ್ತು ಸಮನ್ವಯಿತ ಪ್ರತಿಕ್ರಿಯೆಯನ್ನು ಖಚಿತಪಡಿಸುತ್ತದೆ.&lt;/p&gt;&lt;p&gt;ಪೃಥ್ವಿ ಎಸ್ ಹುಲ್ಲತ್ತಿ ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ.&lt;/p&gt;&lt;p&gt;ಅಣಕು ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಸಮಗ್ರವಾಗಿ ಮೇಲ್ವಿಚಾರಣೆ ಮಾಡಿದರು. ಮೈಸೂರು ವಿಭಾಗದ ವಿಭಾಗೀಯ ರೈಲು ವ್ಯವಸ್ಥಾಪಕ ಮುದಿತ್ ಮಿಟ್ಟಲ್, ನೈರುತ್ಯ ರೈಲ್ವೆಯ ಮುಖ್ಯ ಸುರಕ್ಷತಾ ಅಧಿಕಾರಿ ರಾಮಕೃಷ್ಣ, ಹಾಗೂ ಮುಖ್ಯ ಯಾಂತ್ರಿಕ ಎಂಜಿನಿಯರ್ ಬಾಲಸುಂದರ್ ಪಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ನಾಗರಿಕ ಆಡಳಿತದ ಪ್ರತಿನಿಧಿಗಳು ಹಾಜರಿದ್ದರು&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/mysuru-belagavi-express-railway-disaster-mock-drill-conducted-davanagere-harihar-station-emergency-response-gdp/articleshow-yq0pn93"/>
        </item>
    </channel>
</rss>
