<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 05 Aug 2026 13:22:15 +0530</lastBuildDate>
        <atom:link href="https://kannada.asianetnews.com/rss/belagavi" rel="self" type="application/rss+xml"/>
        <item>
            <title><![CDATA[Loan: ₹16 ಲಕ್ಷ ಸಾಲಕ್ಕೆ ₹36 ಲಕ್ಷ ವಸೂಲಿ: ಸಂಕೇಶ್ವರದ ಚಕ್ರಬಡ್ಡಿ ದಂಧೆಕೋರನ ಬಂಧನ]]></title>
            <link>https://kannada.asianetnews.com/karnataka-districts/belagavi-sankeshwar-man-arrested-for-collecting-rs-36-lakh-against-a-loan-of-rs-16-lakh-mrq/articleshow-0fszvg6</link>
            <guid isPermaLink="true">https://kannada.asianetnews.com/karnataka-districts/belagavi-sankeshwar-man-arrested-for-collecting-rs-36-lakh-against-a-loan-of-rs-16-lakh-mrq/articleshow-0fszvg6</guid>
            <pubDate>Thu, 23 Jul 2026 05:54:12 +0530</pubDate>
            <description><![CDATA[&lt;p&gt;₹16.16 ಲಕ್ಷ ಸಾಲಕ್ಕೆ ಪ್ರತಿಯಾಗಿ ₹36.77 ಲಕ್ಷ ವಸೂಲಿ ಮಾಡಿ, ಇನ್ನೂ ಹೆಚ್ಚಿನ ಹಣಕ್ಕಾಗಿ ಜೀವ ಬೆದರಿಕೆ ಹಾಕುತ್ತಿದ್ದ ಚಕ್ರಬಡ್ಡಿ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ದೂರುದಾರರ ದೂರಿನ ಮೇರೆಗೆ, ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky65n4d62mynvgeeknrb06fb,imgname-belagavi-1784766173606.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;₹16.16 ಲಕ್ಷ ಸಾಲಕ್ಕೆ ₹36.77 ಲಕ್ಷ ವಸೂಲಿ ಮಾಡಿದ್ದಲ್ಲದೆ, ಇನ್ನೂ ₹4.64 ಲಕ್ಷ ಬಡ್ಡಿ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚಕ್ರಬಡ್ಡಿ ದಂಧೆ ಕೋರನನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂಕೇಶ್ವರದ ಸದಾನಂದ ಭೀಮರಾವ ಹಲಗೆ (47) ಬಂಧಿತ ಆರೋಪಿ.&lt;/p&gt;&lt;p&gt;ಹುಕ್ಕೇರಿ ತಾಲೂಕಿನ ಸ್ನೇಹಾ ವಿಕಾಸ ಮೇಲಗೇರಿ ಅವರು ಜುಲೈ 20ರಂದು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.&lt;/p&gt;&lt;h2&gt;&lt;strong&gt;ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ&lt;/strong&gt;&lt;/h2&gt;&lt;p&gt;ದೂರಿನ ಪ್ರಕಾರ 2022 ರಿಂದ 2026ರ ಅವಧಿಯಲ್ಲಿ ತಾವು ಹಾಗೂ ತಮ್ಮ ಪತಿ ಸದಾನಂದ ಹಲಗೆ ಅವರಿಂದ ಒಟ್ಟು ₹16,16,580 ಸಾಲ ಪಡೆದಿದ್ದರು. ಬಳಿಕ ಅಸಲು ಮತ್ತು ಬಡ್ಡಿ ಸೇರಿ ಫೋನ್&zwnj; ಫೇ ಹಾಗೂ ಆರ್&zwnj;ಟಿಜಿಎಸ್&zwnj; ಮೂಲಕ ಒಟ್ಟು ₹36,77,607 ಪಾವತಿಸಿದ್ದರೂ, ಇನ್ನೂ ₹4,64,000 ಹೆಚ್ಚುವರಿ ಬಡ್ಡಿ ನೀಡುವಂತೆ ಆರೋಪಿ ಒತ್ತಾಯಿಸಿದ್ದಾನೆ. ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.&amp;nbsp;&lt;/p&gt;&lt;h3&gt;&lt;strong&gt;ನ್ಯಾಯಾಂಗ ಬಂಧನಕ್ಕೆ ಆರೋಪಿ&lt;/strong&gt;&lt;/h3&gt;&lt;p&gt;ಈ ಸಂಬಂಧ ಬಿಎನ್&zwnj;ಎಸ್&zwnj;-2023ರ ಕಲಂ 351(2), 352 ಹಾಗೂ ಕರ್ನಾಟಕ ಮೈಕ್ರೋ ಮತ್ತು ಸಣ್ಣ ಸಾಲ (ದೌರ್ಜನ್ಯ ತಡೆ) ಕಾಯ್ದೆ-2025ರ ಕಲಂ 8 ಮತ್ತು 13ರ ಅಡಿಯಲ್ಲಿ ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಕಣಗಲಾ ಗ್ರಾಮದ ಬಳಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;p&gt;ಆರೋಪಿಯನ್ನು ಬಂಧಿಸುವಲ್ಲಿ ಪಿಐ ಜಿ.ಬಿ.ಕೊಂಗನೊಳ್ಳಿ, ಪಿಎಸೈಗಳಾದ ವಿ.ಐ.ನಾಯಿಕ, ಯು.ಎಸ್.ಶೆಟ್ಟೆನ್ನವರ, ಎಎಸ್&zwnj;ಐ ಎಲ್.ಎಸ್.ಖೋತ, ಸಿಬ್ಬಂದಿಯರಾದ ಬಿ.ಕೆ.ನಾಗನೂರಿ, ಎಸ್.ಎಲ್.ಗಳತಗಿ, ವಿ.ಬಿ.ಮುರ್ಕಿಭಾವಿ, ಎಸ್.ಎಂ.ಯಕ್ಸಂಬಿ, ವಿ.ಜಿ.ಕುಡ್ಡಗೋಳ ಹಾಗೂ ಟೆಕ್ನಿಕಲ್ ಸೆಲ್&zwnj;ನ ವಿನೋದ ಠಕ್ಕನ್ನವರ ಮತ್ತು ಸಚಿನ್ ಪಾಟೀಲ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿನಂದಿಸಿದ್ದಾರೆ.&lt;/p&gt;&lt;p&gt;ಜಿಲ್ಲೆಯಲ್ಲಿ ಅಕ್ರಮ ಚಕ್ರಬಡ್ಡಿ ದಂಧೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೌರ್ಜನ್ಯ ಅಥವಾ ಬೆದರಿಕೆಗೆ ಒಳಗಾಗಿರುವ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇಂತಹ ದಂಧೆಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್&zwnj;ಪಿ ಕೆ. ರಾಮರಾಜನ್ ಹೇಳಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-sankeshwar-man-arrested-for-collecting-rs-36-lakh-against-a-loan-of-rs-16-lakh-mrq/articleshow-0fszvg6"/>
        </item>
        <item>
            <title><![CDATA[ನಾಶದ ಅಂಚಿನಲ್ಲಿದ್ದ ಐತಿಹಾಸಿಕ ಕಲ್ಯಾಣಿಗೆ ಮರುಜೀವ: 300 ವರ್ಷಗಳ ಹಳೆಯ ಶಿವಲಿಂಗದಾಕಾರದ ಬಾವಿ ಕಂಡು ಬೆರಗಾದ ಜನ!]]></title>
            <link>https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii</link>
            <guid isPermaLink="true">https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii</guid>
            <pubDate>Sun, 26 Jul 2026 13:47:03 +0530</pubDate>
            <description><![CDATA[&lt;p&gt;ಬೆಳಗಾವಿಯ ಮುತಗಾ ಗ್ರಾಮದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯನ್ನು ಸ್ವಯಂಸೇವಕರು 30 ವರ್ಷಗಳ ಬಳಿಕ ಕಸ ಮತ್ತು ಹೂಳಿನಿಂದ ಹೊರತೆಗೆದು ಪುನಃಸ್ಥಾಪಿಸಿದ್ದಾರೆ. 80 ಅಡಿ ಆಳ, 53 ಕಲ್ಲಿನ ಮೆಟ್ಟಿಲುಗಳು ಹಾಗೂ ಶಿವಲಿಂಗದಂತಿರುವ ವಿನ್ಯಾಸ ಈ ಐತಿಹಾಸಿಕ ಬಾವಿಯನ್ನು ಹೊಸ ಪ್ರವಾಸಿ ಆಕರ್ಷಣೆಯನ್ನಾಗಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyeq7z1tb5eejpwq8kfx33kv,imgname-the-well-is-nearly-300-years-old-1785053051962.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯೊಂದು ಸ್ವಯಂಸೇವಕರ ನಿರಂತರ ಪರಿಶ್ರಮದಿಂದ ಮತ್ತೆ ತನ್ನ ಮೂಲ ರೂಪದಲ್ಲಿ ಹೊರಹೊಮ್ಮಿದೆ. ಸುಮಾರು ಮೂರು ದಶಕಗಳಿಂದ ಕಸ, ಮಣ್ಣು, ಹೂಳು ಮತ್ತು ನಿರ್ಮಾಣ ತ್ಯಾಜ್ಯದಡಿ ಹೂತುಹೋಗಿದ್ದ ಈ ಐತಿಹಾಸಿಕ ಬಾವಿ ಈಗ ಸ್ಥಳೀಯರಷ್ಟೇ ಅಲ್ಲ, ಇತಿಹಾಸಾಸಕ್ತರ ಗಮನವನ್ನೂ ಸೆಳೆಯುತ್ತಿದೆ.&lt;/p&gt;&lt;p&gt;&lt;strong&gt;ಮೂರು ದಶಕಗಳ ಬಳಿಕ ಮರುಜೀವ ಪಡೆದ ಮೆಟ್ಟಿಲುಬಾವಿ:&lt;/strong&gt;&lt;/p&gt;&lt;p&gt;ಮುತಗಾ ಗ್ರಾಮದ ಕಾಂಚವೀರ ನಗರದಲ್ಲಿರುವ ಈ ಮೆಟ್ಟಿಲುಬಾವಿ ಹಲವು ವರ್ಷಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಸ್ಥಳೀಯ ಸ್ವಯಂಸೇವಕರು, ಪ್ಯಾಸ್ ಫೌಂಡೇಶನ್, ರಾಷ್ಟ್ರೀಯ ಸೇವಾ ಯೋಜನೆ (NSS) ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೈಜೋಡಿಸಿ ಬಾವಿಯೊಳಗಿನ ಕಸ, ಹೂಳು ಮತ್ತು ಅವಶೇಷಗಳನ್ನು ತೆರವುಗೊಳಿಸಿದರು. ಹಲವು ದಿನಗಳ ಶ್ರಮದ ನಂತರ ಬಾವಿಯ ಮೂಲ ವಿನ್ಯಾಸ ಮತ್ತೆ ಗೋಚರಿಸಿತು.&lt;/p&gt;&lt;p&gt;&lt;strong&gt;53 ಮೆಟ್ಟಿಲು, 80 ಅಡಿ ಆಳ... ಅಚ್ಚರಿ ಮೂಡಿಸಿದ ರಚನೆ!&lt;/strong&gt;&lt;/p&gt;&lt;p&gt;ಈ ಐತಿಹಾಸಿಕ ಬಾವಿ ಸುಮಾರು 80 ಅಡಿ ಆಳವಿದ್ದು, ಅದರೊಳಗೆ ಇಳಿಯಲು 53 ಕಲ್ಲಿನ ಮೆಟ್ಟಿಲುಗಳಿವೆ. ಸ್ವಚ್ಛತಾ ಕಾರ್ಯದ ವೇಳೆ ಬಾವಿಯ ತಳದಲ್ಲಿ ನೈಸರ್ಗಿಕ ನೀರಿನ ಬುಗ್ಗೆಗಳು ಪತ್ತೆಯಾಗಿದ್ದು, ಇಂದು ಮತ್ತೆ ಶುದ್ಧ ನೀರು ಹರಿಯುತ್ತಿದೆ. ಕಲ್ಲಿನ ಕಂಬಗಳು, ಕಮಾನುಗಳು ಮತ್ತು ಕೆತ್ತನೆಗಳು ಆ ಕಾಲದ ಶಿಲ್ಪಕಲೆಯ ವೈಭವವನ್ನು ಅನಾವರಣಗೊಳಿಸುತ್ತವೆ.&lt;/p&gt;&lt;p&gt;&lt;strong&gt;ಮೇಲಿನಿಂದ ನೋಡಿದರೆ ಶಿವಲಿಂಗದ ಆಕಾರ!&lt;/strong&gt;&lt;/p&gt;&lt;p&gt;ಡ್ರೋನ್ ದೃಶ್ಯಗಳಲ್ಲಿ ಈ ಮೆಟ್ಟಿಲುಬಾವಿಯ ವಿನ್ಯಾಸ ಶಿವಲಿಂಗದ ಆಕಾರವನ್ನು ಹೋಲುತ್ತದೆ ಎಂಬುದು ಅನೇಕರ ಗಮನ ಸೆಳೆದಿದೆ. ಈ ವಿಶಿಷ್ಟ ವಿನ್ಯಾಸವೇ ಈಗ ಪ್ರವಾಸಿಗರು ಮತ್ತು ಛಾಯಾಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.&lt;/p&gt;&lt;p&gt;&lt;strong&gt;ನೀರಿನ ಸಂರಕ್ಷಣೆಯ ಐತಿಹಾಸಿಕ ಪರಂಪರೆ:&lt;/strong&gt;&lt;/p&gt;&lt;p&gt;ಇತಿಹಾಸಕಾರರ ಪ್ರಕಾರ, ಈ ಬಾವಿ ಆದಿಲ್ ಶಾಹಿ ಅಥವಾ ಆರಂಭಿಕ ಮರಾಠಾ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿರಬಹುದು. ಅಂದಿನ ದಿನಗಳಲ್ಲಿ ಮೆಟ್ಟಿಲುಬಾವಿಗಳು ಕೇವಲ ನೀರಿನ ಮೂಲವಾಗಿರದೆ, ಸಮುದಾಯದ ಸಭೆ, ವಿಶ್ರಾಂತಿ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದ್ದವು. ಭಾರತದ ಅನೇಕ ಭಾಗಗಳಲ್ಲಿ ಇಂತಹ ಬಾವಿಗಳು ನೀರಿನ ಸಂರಕ್ಷಣೆ ಹಾಗೂ ಮಳೆನೀರು ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವು.&lt;/p&gt;&lt;p&gt;&lt;strong&gt;ಪರಂಪರೆ ಉಳಿಸುವಲ್ಲಿ ಸ್ವಯಂಸೇವಕರ ಪಾತ್ರ ಮಾದರಿ..!&lt;/strong&gt;&lt;/p&gt;&lt;p&gt;ಈ ಪುನಃಸ್ಥಾಪನೆ ಸರ್ಕಾರದ ಯೋಜನೆಯಷ್ಟೇ ಅಲ್ಲ, ಸ್ಥಳೀಯ ಸಮುದಾಯದ ಒಗ್ಗಟ್ಟಿನ ಶ್ರಮಕ್ಕೂ ಉತ್ತಮ ಉದಾಹರಣೆಯಾಗಿದೆ. ಇಂತಹ ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಬಹುದು ಎಂಬ ಸಂದೇಶವನ್ನು ಈ ಕಾರ್ಯ ನೀಡಿದೆ.&lt;/p&gt;&lt;p&gt;&lt;strong&gt;ಭಾರತದಾದ್ಯಂತ ಮೆಟ್ಟಿಲುಬಾವಿಗಳ ಪುನರುಜ್ಜೀವನ..!&lt;/strong&gt;&lt;/p&gt;&lt;p&gt;ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಾಚೀನ ಮೆಟ್ಟಿಲುಬಾವಿಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ಹೊಸ ಚೈತನ್ಯ ಸಿಕ್ಕಿದೆ. ನೀರಿನ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಪರಂಪರೆ ರಕ್ಷಣೆಯ ದೃಷ್ಟಿಯಿಂದ ಇವುಗಳಿಗೆ ಮತ್ತೆ ಮಹತ್ವ ದೊರೆಯುತ್ತಿದೆ.&lt;/p&gt;]]></content:encoded>
            <category>belagavi</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii"/>
        </item>
        <item>
            <title><![CDATA[Belagavi: ಜುಲೈ 22ರಿಂದ 28ರವರೆಗೆ ಹಲವು ರೈಲುಗಳು ಭಾಗಶಃ ರದ್ದು, ಸಂಚಾರದಲ್ಲಿ ಬದಲಾವಣೆ]]></title>
            <link>https://kannada.asianetnews.com/karnataka-districts/belagavi-indian-railways-several-trains-partially-cancelled-traffic-changes-from-july-22-to-28-mrq/articleshow-4aorisl</link>
            <guid isPermaLink="true">https://kannada.asianetnews.com/karnataka-districts/belagavi-indian-railways-several-trains-partially-cancelled-traffic-changes-from-july-22-to-28-mrq/articleshow-4aorisl</guid>
            <pubDate>Thu, 16 Jul 2026 09:29:47 +0530</pubDate>
            <description><![CDATA[ಲೊಂಡಾ ರೈಲು ನಿಲ್ದಾಣದಲ್ಲಿ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಜು.22ರಿಂದ 28ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಿರಜ್-ಲೊಂಡಾ ಮತ್ತು ಮಿರಜ್-ಕ್ಯಾಸಲ್ ರಾಕ್ ಮಾರ್ಗದ ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmh7seymfkh1fybe7tkdq2m,imgname-indian-railways-belagavi-1784174339550.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಲೊಂಡಾ ರೈಲು ನಿಲ್ದಾಣದ ಯಾರ್ಡ್&zwnj;ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜು.22ರಿಂದ 28ರವರೆಗೆ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಎರಡು ರೈಲುಗಳ ಸಂಚಾರವನ್ನು ವಿಳಂಬಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಜು.24ರಿಂದ 27ರವರೆಗೆ ರೈಲು ಸಂಖ್ಯೆ 56931 ಮಿರಜ್ ಲೊಂಡಾ ಡೈಲಿ ಪ್ಯಾಸೆಂಜರ್ ರೈಲು ಬೆಳಗಾವಿ ಮತ್ತು ಲೊಂಡಾ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಲೊಂಡಾಕ್ಕೆ ತೆರಳದೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಜು.25ರಿಂದ 28ರವರೆಗೆ ರೈಲು ಸಂಖ್ಯೆ 56932 ಲೊಂಡಾ ಮಿರಜ್ ಡೈಲಿ ಪ್ಯಾಸೆಂಜರ್ ರೈಲು ಲೊಂಡಾ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ.&lt;/p&gt;&lt;h2&gt;&lt;strong&gt;ಮಿರಜ್ ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್&lt;/strong&gt;&lt;/h2&gt;&lt;p&gt;ಜು. 25ರಿಂದ 27ರವರೆಗೆ ರೈಲು ಸಂಖ್ಯೆ 17333 ಮಿರಜ್ ಕ್ಯಾಸಲ್ ರಾಕ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಳಗಾವಿ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ.&lt;/p&gt;&lt;p&gt;ಇದೇ ಅವಧಿಯಲ್ಲಿ ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ ಮಿರಜ್ ಡೈಲಿ ಎಕ್ಸ್ ಪ್ರೆಸ್ ರೈಲು ಕ್ಯಾಸಲ್ ರಾಕ್ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ.&lt;/p&gt;&lt;h3&gt;&lt;strong&gt;ಲೋಕಮಾನ್ಯ ತಿಲಕ್ ಟರ್ಮಿನಸ್ ಎಸ್ ಎಂ ವಿಟಿ ಬೆಂಗಳೂರು ದ್ವಿಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು&lt;/strong&gt;&lt;/h3&gt;&lt;p&gt;ಜು. 22ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್ ಎಸ್ ಎಂ ವಿಟಿ ಬೆಂಗಳೂರು ದ್ವಿಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯೆ 40 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಜು. 26 ಮತ್ತು 27ರಂದು ಕೆ ಎಸ್ ಆರ್ ಬೆಂಗಳೂರುದಿಂದ ಹೊರಡುವ ರೈಲು ಸಂಖ್ಯೆ 20653 ಕೆ ಎಸ್ ಆರ್ ಬೆಂಗಳೂರು ಬೆಳಗಾವಿ ಡೈಲಿ ಎಕ್ಸ್ ಪ್ರೆಸ್ ರೈಲು ಕ್ರಮವಾಗಿ 30 ನಿಮಿಷ ಹಾಗೂ 60 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ರೈಲುಗಳ ವೇಳಾಪಟ್ಟಿಯನ್ನು ಪರಿಶೀಲಿಸಿ ಪ್ರಯಾಣ ಕೈಗೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-indian-railways-several-trains-partially-cancelled-traffic-changes-from-july-22-to-28-mrq/articleshow-4aorisl"/>
        </item>
        <item>
            <title><![CDATA[ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ  ಈ ರೀತಿ]]></title>
            <link>https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk</link>
            <guid isPermaLink="true">https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk</guid>
            <pubDate>Mon, 03 Aug 2026 08:30:16 +0530</pubDate>
            <description><![CDATA[ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್&zwnj;ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz2s0zbcrg5pg3gv39r9035e,imgname-nwkrtc-1785726008684.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ರಾಜ್ಯ ರಾಜಧಾನಿ ಬೆಂಗಳೂರಿಗೆ ಸವದತ್ತಿಯಿಂದ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.&lt;/p&gt;&lt;h2&gt;&lt;strong&gt;ನೂತನ ಪಲ್ಲಕ್ಕಿ ಎರಡು ಬಸ್&zwnj;ಗಳಿಗೆ ಪೂಜೆ&lt;/strong&gt;&lt;/h2&gt;&lt;p&gt;ನಗರದ ಸಾರಿಗೆ ಘಟಕದಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ನೂತನ ಪಲ್ಲಕ್ಕಿ ಎರಡು ಬಸ್&zwnj;ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಸುರಕ್ಷಿತ ಹಾಗೂ ಸುಖಕರ ಪ್ರಯಾಣದ ಹಿತದೃಷ್ಠಿಯಿಂದ ಪ್ರಯಾಣಿಕರಿಗೆ ಈ ನೂತನ ಪಲ್ಲಕ್ಕಿ ಬಸ್&zwnj;ಗಳನ್ನು ಸವದತ್ತಿ ಘಟಕಕ್ಕೆ ನೀಡಲಾಗಿದ್ದು, ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಈ ಬಸ್&zwnj;ಗಳ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದರು.&lt;/p&gt;&lt;p&gt;ಸಾರಿಗೆ ಘಟಕ ವ್ಯವಸ್ಥಾಪಕ ಅರುಣ ಕಿಟಕಿ ಮಾತನಾಡಿ, ಸವದತ್ತಿ ಘಟಕಕ್ಕೆ ಹೊಸದಾಗಿ ಸ್ಲೀಪರ್ ಬಸ್&zwnj;ಗಳು ಬಂದಿರುವುದು ಸಂತಸದ ವಿಷಯವಾಗಿದ್ದು, ಪ್ರತಿನಿತ್ಯ ಸವದತ್ತಿಯಿಂದ ರಾತ್ರಿ ೯ ಗಂಟೆಗೆ ಬೆಂಗಳೂರಿಗೆ ಬಿಡಲಾಗುತ್ತಿದ್ದು, ಬೆಂಗಳೂರಿನಿಂದ ರಾತ್ರಿ ೧೦ ಗಂಟೆಗೆ ಬಿಟ್ಟು ಸವದತ್ತಿಗೆ ಬೆಳಿಗ್ಗೆ ತಲುಪುತ್ತವೆ. ಈ ಭಾಗದಲ್ಲಿನ ಸಾರ್ವಜನಿಕರ ಬೇಡಿಕೆಯಂತೆ ನೂತನ ಬಸ್&zwnj;ಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Exclusive: ಕರಾವಳಿ ವಿವಾದದಿಂದ ಕಲಿತ ಪಾಠ ಏನು? ಪ್ರಜ್ವಲ್ ದೇವರಾಜ್ ಮನದಾದಳ ಮಾತು&lt;/strong&gt;&lt;/p&gt;&lt;p&gt;ಗಿರೀಶ ಮುನವಳ್ಳಿ, ಡಾ.ವೈ.ಎಮ್.ಯಾಕೊಳ್ಳಿ, ಮಲ್ಲಿಕಾರ್ಜುನ ಬೇವೂರ, ಬಿ.ಎನ್.ಪ್ರಭುನವರ, ಪ್ರವೀಣ ರಾಮಪ್ಪನವರ, ಉಮೇಶ ಗೌಡರ, ಆಸೀಫ್ ಬಾಗೋಜಿಕೊಪ್ಪ, ಎಟಿಎಸ್ ಹನಮಂತ ಭೋವಿ, ಗೌರಮ್ಮ ಬೀಟಕ್ಕನವರ, ನಿಂಗಪ್ಪ ನಡಕಟ್ಟಿನ, ಬಸವರಾಜ ಹಂಚಿನಾಳ ಹಾಗೂ ಸಾರಿಗೆ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk"/>
        </item>
        <item>
            <title><![CDATA[ಕೃಷ್ಣಾ ನದಿಗೆ ಕೊಲ್ಹಾಪುರ ಜಿಲ್ಲೆಯಲ್ಲಿ ಇನ್ನೊಂದು ಅಣೆಕಟ್ಟು, ಕನ್ನಡ ಸಂಘಸಂಸ್ಥೆಗಳ ವಿರೋಧ]]></title>
            <link>https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq</link>
            <guid isPermaLink="true">https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq</guid>
            <pubDate>Tue, 21 Jul 2026 22:24:34 +0530</pubDate>
            <description><![CDATA[&lt;p&gt;ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣ ಸುಮಾರು 4 ಟಿಎಂಸಿ ಯಷ್ಟು ಕಡಿಮೆಯಾಗಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky2sfr6aefp2r79pg3qp86m0,imgname-krishna-river-dam-in-kollapur-1784652751050.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ/ಬೆಂಗಳೂರು (ಜು.21):&lt;/strong&gt; ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಇದರಿಂದ ಕರ್ನಾಟಕಕ್ಕೆ ಹರಿದುಬರುವ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯದ ಯೋಜನೆಯನ್ನು ತಕ್ಷಣವೇ ವಿರೋಧಿಸಿ ಕಾನೂನುಬದ್ಧ ಆಕ್ಷೇಪಣೆ ಸಲ್ಲಿಸುವಂತೆ ಕನ್ನಡ ಪರ ಸಂಘಟನೆಗಳು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.&lt;/p&gt;&lt;p&gt;&quot;ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಇತ್ತೀಚೆಗೆ ಇಚಲಕರಂಜಿಯಲ್ಲಿ ನಡೆದ ಸಮಾರಂಭದಲ್ಲಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಆಣೆಕಟ್ಟು ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿರುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಿಂದ ಕೃಷ್ಣಾ ನದಿಯ ಸುಮಾರು 4 ಟಿಎಂಸಿ (tmcft) ನೀರನ್ನು ಮಹಾರಾಷ್ಟ್ರ ಬಳಸಿಕೊಳ್ಳಲಿದೆ. ಇದರಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣದಲ್ಲಿ ಅಷ್ಟೇ ಪ್ರಮಾಣದ ಕೊರತೆಯಾಗಲಿದ್ದು, ರಾಜ್ಯದ ಪ್ರಮುಖ ಹಿಪ್ಪರಗಿ ಬ್ಯಾರೇಜ್ ಹಾಗೂ ಆಲಮಟ್ಟಿ ಜಲಾಶಯಕ್ಕೆ ಬಂದು ಸೇರುವ ನೀರಿನ ಹರಿವು ತೀವ್ರವಾಗಿ ಕುಸಿಯಲಿದೆ. ಇದನ್ನು ಯಾವುದೇ ಕಾರಣಕ್ಕೂ ಅನುಮತಿಸದೆ ತಕ್ಷಣವೇ ತಡೆಯಬೇಕಾಗಿದೆ&quot; ಎಂದು ಕನ್ನಡ ಸಂಘಟನೆಗಳ ಕೇಂದ್ರ ಸಮಿತಿಯ ಸಂಚಾಲಕ ಅಶೋಕ್ ಚಂದರಗಿ ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಡಿಕೆ ಶಿವಕುಮಾರ್ ಅವರಿಗೆ ಪತ್ರ&lt;/strong&gt;&lt;/h2&gt;&lt;p&gt;ಈ ವಿಷಯವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅಶೋಕ್ ಚಂದರಗಿ, &quot;ಅಂತರರಾಜ್ಯ ನದಿಗಳ ವಿಷಯದಲ್ಲಿ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯಗಳೊಂದಿಗೆ ಸಮಾಲೋಚಿಸದೆ ಯಾವುದೇ ಹೊಸ ಯೋಜನೆಗಳನ್ನು ಏಕಪಕ್ಷೀಯವಾಗಿ ಘೋಷಿಸುವಂತಿಲ್ಲ. ಮಹಾರಾಷ್ಟ್ರ ಸರ್ಕಾರದ ಈ ನಡೆ ಕೇವಲ ಅಂತರರಾಜ್ಯ ನದಿ ನೀರು ಹಂಚಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲದೆ, ನೈಸರ್ಗಿಕ ನ್ಯಾಯದ ತತ್ವಗಳಿಗೂ ವಿರುದ್ಧವಾಗಿದೆ&quot; ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಅಗತ್ಯ ಅನುದಾನ ಘೋಷಣೆ ಮಾಡಿರುವ ಫಡ್ನವಿಸ್&zwnj;&lt;/strong&gt;&lt;/h2&gt;&lt;p&gt;ಕೊಲ್ಹಾಪುರದ ಇಚಲಕರಂಜಿ ನಗರಕ್ಕೆ ಶುದ್ಧ ಹಾಗೂ ಹೇರಳವಾದ ಕುಡಿಯುವ ನೀರು ಪೂರೈಸಲು ಶಿರೋಳ ತಾಲೂಕಿನ 'ಜೂನೆ ದಾನವಾಡ' ಬಳಿ ರಾಧಾಕೃಷ್ಣ ನೀರು ಪೂರೈಕೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಸಂಪೂರ್ಣ ಅನುದಾನವನ್ನು ಸರ್ಕಾರ ಒದಗಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶನಿವಾರ ಘೋಷಣೆ ಮಾಡಿದ್ದರು. ಕಳೆದ ಹಲವು ವರ್ಷಗಳಿಂದ ಇಚಲಕರಂಜಿ ನಗರಕ್ಕೆ ಶಾಶ್ವತ ನೀರು ಪೂರೈಕೆ ಯೋಜನೆ ಜಾರಿಗೆ ತರಲು ಹಲವು ತೊಡಕುಗಳು ಎದುರಾಗಿದ್ದವು. ಈ ಹಿಂದೆ ಕೆಲವು ಯೋಜನೆಗಳ ಮೂಲಕ ನೀರು ಪೂರೈಸಲು ಪ್ರಯತ್ನಿಸಲಾಗಿತ್ತಾದರೂ, ಅವುಗಳನ್ನು ರದ್ದುಗೊಳಿಸಬೇಕಾಯಿತು ಎಂದಿದ್ದರು.&lt;/p&gt;&lt;p&gt;ಪ್ರಸ್ತುತ ಇಚಲಕರಂಜಿ ನಗರಕ್ಕೆ ಕೃಷ್ಣಾ ಮತ್ತು ಪಂಚಗಂಗಾ ಯೋಜನೆಗಳ ಮೂಲಕ ನೀರು ಪೂರೈಸಲಾಗುತ್ತಿದೆಯಾದರೂ, ಪಂಪ್ ಮಾಡುವ ನೀರು ಮತ್ತು ತಲುಪುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸವಿರುವುದರಿಂದ ನಿತ್ಯ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹಾಗೂ 2054ನೇ ಇಸವಿಯ ಇಚಲಕರಂಜಿ ನಗರದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಿರೋಧವಿಲ್ಲದ ಯೋಜನೆಯನ್ನು ರೂಪಿಸಲು ವರ್ಷದಿಂದ ಪ್ರಯತ್ನ ನಡೆಸಲಾಗಿತ್ತು. ಅದರ ಫಲವಾಗಿ ಕರ್ನಾಟಕದ ಗಡಿಭಾಗದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್&zwnj;ಗಿಂತ ಒಂದೂವರೆ ಕಿಲೋಮೀಟರ್ ಮುಂಚಿತವಾಗಿರುವ ಜೂನೆ ದಾನವಾಡ ಗ್ರಾಮದ ಗಡಿಯಲ್ಲಿರುವ ಪುರಾತನ ರಾಧಾಕೃಷ್ಣ ದೇವಾಲಯದ ಆವರಣದ ಸ್ಥಳವನ್ನು ಅಂತಿಮಗೊಳಿಸಲಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category>belagavi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/maharashtra-new-dam-krishna-river-radha-krishna-project-karnataka-protest-san/articleshow-79lg5yq"/>
        </item>
        <item>
            <title><![CDATA[ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!]]></title>
            <link>https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2</link>
            <guid isPermaLink="true">https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2</guid>
            <pubDate>Mon, 03 Aug 2026 17:20:27 +0530</pubDate>
            <description><![CDATA[ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 'ರಾಜರಥ' ಹೆಸರಿನ ನೂತನ ಐಷಾರಾಮಿ ಎಸಿ ಸ್ಲೀಪರ್ ಬಸ್&zwnj;ಗಳನ್ನು ಪರಿಚಯಿಸಿದೆ. ಈ ಬಸ್&zwnj;ಗಳು ಬೆಳಗಾವಿ-ಥಾಣೆ ಮತ್ತು ಚಿಕ್ಕೋಡಿ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿದ್ದು, ಖಾಸಗಿ ಬಸ್&zwnj;ಗಳಿಗೆ ಪೈಪೋಟಿ ನೀಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3q7rt657xfcffey4fkwhph,imgname-ksrtc-spl-bus--1--1785757688646.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ/ಚಿಕ್ಕೋಡಿ: &lt;/strong&gt;ಉತ್ತರ ಕರ್ನಾಟಕದ ಸಾರಿಗೆ ಸಂಪರ್ಕದಲ್ಲಿ ಮತ್ತೊಂದು ಕ್ರಾಂತಿ ಆರಂಭವಾಗಿದೆ. ಐರಾವತ ಮತ್ತು ಪಲ್ಲಕ್ಕಿ ಬಸ್&zwnj;ಗಳ ಯಶಸ್ಸಿನ ಬೆನ್ನಲ್ಲೇ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಅತ್ಯಂತ ಐಷಾರಾಮಿ 'ರಾಜರಥ' ಎಸಿ ಸ್ಲೀಪರ್ ಕೋಚ್ ಬಸ್ ಸೇವೆಗೆ ಚಾಲನೆ ನೀಡಿದೆ. ಈ ನೂತನ ಬಸ್&zwnj;ಗಳು ಬೆಳಗಾವಿ, ಚಿಕ್ಕೋಡಿ ಹಾಗೂ ಹುಬ್ಬಳ್ಳಿ ಭಾಗದ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.&lt;/p&gt;&lt;h2&gt;&lt;strong&gt;ಚಿಕ್ಕೋಡಿ ಘಟಕಕ್ಕೆ ನೂತನ ಬಸ್&zwnj;ಗಳ ಸೇರ್ಪಡೆ&lt;/strong&gt;&lt;/h2&gt;&lt;p&gt;ವಾಯುವ್ಯ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕಕ್ಕೆ ಸದ್ಯ ಎರಡು ಅತ್ಯಾಧುನಿಕ 'ರಾಜರಥ' ಬಸ್&zwnj;ಗಳನ್ನು ಸೇರಿಸಲಾಗಿದೆ. ಈ ಪೈಕಿ ಒಂದು ಬಸ್ ಚಿಕ್ಕೋಡಿಯಿಂದ ಬೆಂಗಳೂರಿಗೆ ಕಾರ್ಯನಿರ್ವಹಿಸಿದರೆ, ಮತ್ತೊಂದು ಬಸ್ ಬೆಳಗಾವಿಯಿಂದ ಮಹಾರಾಷ್ಟ್ರದ ಪ್ರಮುಖ ನಗರವಾದ ಥಾಣೆಗೆ ಸಂಪರ್ಕ ಕಲ್ಪಿಸಲಿದೆ. ಸಂಪೂರ್ಣ ಹವಾನಿಯಂತ್ರಿತ (AC) ಮತ್ತು ಆರಾಮದಾಯಕ ಸ್ಲೀಪರ್ ಸೌಲಭ್ಯ ಹೊಂದಿರುವ ಈ ಬಸ್&zwnj;ಗಳು ಖಾಸಗಿ ಬಸ್&zwnj;ಗಳಿಗೆ ಪೈಪೋಟಿ ನೀಡುವಂತಿವೆ.&lt;/p&gt;&lt;h2&gt;&lt;strong&gt;ಬಸ್ ವೇಳಾಪಟ್ಟಿ ಇಲ್ಲಿದೆ&lt;/strong&gt;&lt;/h2&gt;&lt;h3&gt;&lt;strong&gt;ಬೆಳಗಾವಿ - ಥಾಣೆ (ಮಹಾರಾಷ್ಟ್ರ) ಮಾರ್ಗ&lt;/strong&gt;&lt;/h3&gt;&lt;ul&gt; &lt;li&gt;ಬೆಳಗಾವಿಯಿಂದ ಥಾಣೆಗೆ: ಪ್ರತಿದಿನ ರಾತ್ರಿ 8.15ಕ್ಕೆ ಹೊರಟು, ಮರುದಿನ ಮುಂಜಾನೆ 6.30ಕ್ಕೆ ಥಾಣೆ ತಲುಪುತ್ತದೆ.&lt;/li&gt; &lt;li&gt;ಥಾಣೆಯಿಂದ ಬೆಳಗಾವಿಗೆ: ಪ್ರತಿದಿನ ರಾತ್ರಿ 8.00ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6.15ಕ್ಕೆ ಬೆಳಗಾವಿ ತಲುಪುತ್ತದೆ.&lt;/li&gt;&lt;/ul&gt;&lt;h3&gt;&lt;strong&gt;ಚಿಕ್ಕೋಡಿ - ಬೆಂಗಳೂರು ಮಾರ್ಗ&lt;/strong&gt;&lt;/h3&gt;&lt;ul&gt; &lt;li&gt;ಚಿಕ್ಕೋಡಿಯಿಂದ ಬೆಂಗಳೂರಿಗೆ: ಸಂಜೆ 7.00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6.45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್) ತಲುಪುತ್ತದೆ.&lt;/li&gt; &lt;li&gt;ಬೆಂಗಳೂರಿನಿಂದ ಚಿಕ್ಕೋಡಿಗೆ: ರಾತ್ರಿ 9.55ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಚಿಕ್ಕೋಡಿ ತಲುಪುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ಟಿಕೆಟ್ ದರ ಮತ್ತು ಬುಕ್ಕಿಂಗ್&lt;/strong&gt;&lt;/h2&gt;&lt;p&gt;ಈ ಐಷಾರಾಮಿ ರಾಜರಥ ಬಸ್&zwnj;ನಲ್ಲಿ ಪ್ರಯಾಣಿಸಲು ತಲಾ ಒಬ್ಬರಿಗೆ 1357 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್ www.ksrtc.in ಮೂಲಕ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ದೂರದ ಪ್ರಯಾಣ ಮಾಡುವವರಿಗೆ ಸುಸ್ತಾಗದಂತೆ ಸಕಲ ಸೌಲಭ್ಯಗಳನ್ನು ಈ ರಾಜರಥ ಬಸ್&zwnj;ಗಳಲ್ಲಿ ಅಳವಡಿಸಲಾಗಿದೆ. ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ಹಾಗೂ ಅತ್ಯುತ್ತಮ ಗುಣಮಟ್ಟದ ಸೀಟುಗಳನ್ನು ಇದು ಹೊಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಚರಿಸುವ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ಸೇವೆ ವರದಾನವಾಗಲಿದೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2"/>
        </item>
        <item>
            <title><![CDATA[ಬೆಳಗಾವಿ ಮಳೆ ಆರ್ಭಟ: ನದಿಗಳು ಉಕ್ಕಿ, 5 ಸೇತುವೆ ಜಲಾವೃತ, ಖಾನಾಪುರದಲ್ಲಿಯೂ ವರುಣನ ಅಬ್ಬರ]]></title>
            <link>https://kannada.asianetnews.com/karnataka-districts/belagavi-rain-update-sudden-rise-in-water-levels-of-krishna-vedaganga-dudhganga-rivers-in-chikkodi-nippani-taluks-mrq/articleshow-ckhenzw</link>
            <guid isPermaLink="true">https://kannada.asianetnews.com/karnataka-districts/belagavi-rain-update-sudden-rise-in-water-levels-of-krishna-vedaganga-dudhganga-rivers-in-chikkodi-nippani-taluks-mrq/articleshow-ckhenzw</guid>
            <pubDate>Thu, 23 Jul 2026 06:05:17 +0530</pubDate>
            <description><![CDATA[ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಐದು ಕೆಳಹಂತದ ಸೇತುವೆಗಳು ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ, ಆದರೆ ಖಾನಾಪುರದಲ್ಲಿನ ಮಳೆ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky6638fyk0ab3waxaq7qrbws,imgname-belagavi-rain-1784766636542.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯಾರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಸಂಜೆ ನಂತರ ಉತ್ತಮ ಮಳೆಯಾಗಿದೆ. ಕೆಲವೆಡೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.&lt;/p&gt;&lt;h2&gt;&lt;strong&gt;ಕೃಷ್ಣಾ ನದಿಗೆ ಪ್ರಸ್ತುತ ಸುಮಾರು 65 ಸಾವಿರ ಕ್ಯೂಸೆಕ್ ನೀರು&lt;/strong&gt;&lt;/h2&gt;&lt;p&gt;ಕಳೆದ ಕೆಲವು ಗಂಟೆಗಳಲ್ಲಿ ನದಿಗಳ ನೀರಿನ ಮಟ್ಟ ಸುಮಾರು ಎರಡು ಅಡಿಗಳಷ್ಟು ಹೆಚ್ಚಳವಾಗಿದೆ. ನದಿ ತೀರದ ಗ್ರಾಮಗಳ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ನದಿಗಳ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳು ಹಾಗೂ ನದಿಗಳಿಂದ ಕಲ್ಲೋಳ ಬಳಿಯ ಕೃಷ್ಣಾ ನದಿಗೆ ಪ್ರಸ್ತುತ ಸುಮಾರು 65 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಜಲಾನಯನ ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.&lt;/p&gt;&lt;p&gt;ಇದರಿಂದ ಸಹಜವಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ.&lt;/p&gt;&lt;p&gt;ಯಡೂರ-ಕಲ್ಲೋಳ, ಬಾವನಸೌಂದತ್ತಿ-ಮಾಂಜರಿ, ಬಾರವಾಡ-ಕುನ್ನೂರ, ಕಾರದಗಾ-ಭೋಜ ಹಾಗೂ ಭೋಜ-ಶಿವಾಪೂರವಾಡಿ ನಡುವಿನ ಕೆಳಹಂತದ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಈ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸೇತುವೆಗಳ ಎರಡೂ ಬದಿಯಲ್ಲಿ ಮುನ್ನೆಚ್ಚರಿಕೆಯಾಗಿ ಸಂಚಾರ ನಿರ್ಬಂಧಿಸುವ ಅಗತ್ಯ ಎದುರಾಗಿದೆ.&lt;/p&gt;&lt;p&gt;ಕೆಳಹಂತದ ಸೇತುವೆಗಳು ಮುಳುಗಡೆಯಾಗಿರುವುದರಿಂದ ಗ್ರಾಮಸ್ಥರು ದಿನನಿತ್ಯದ ಕೆಲಸ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹಾಗೂ ಮಾರುಕಟ್ಟೆಗಳಿಗೆ ತೆರಳಲು ಪರದಾಡುವಂತಾಗಿದೆ. ಕೆಲವು ಗ್ರಾಮಗಳ ಜನರು ಹಲವು ಕಿಲೋಮೀಟರ್ ಸುತ್ತುವರಿದು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.&lt;/p&gt;&lt;p&gt;ನದಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಹೊಲಗಳಿಗೆ ನೀರು ನುಗ್ಗುವ ಆತಂಕವೂ ರೈತರನ್ನು ಕಾಡುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಕೃಷಿಕರು ನದಿಯ ಹರಿವಿನ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ತಾಲೂಕು ಆಡಳಿತಗಳು ನದಿ ತೀರದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಜಲಾವೃತ ಸೇತುವೆಗಳ ಮೇಲೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.&lt;/p&gt;&lt;h3&gt;&lt;strong&gt;ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮತ್ತೆ ಮುಂಗಾರು ಚುರುಕು&lt;/strong&gt;&lt;/h3&gt;&lt;p&gt;ಖಾನಾಪುರ: ಕಳೆದ ಹಲವು ದಿನಗಳಿಂದ ಮಾಯವಾಗಿದ್ದ ಮಳೆ ಮಂಗಳವಾರದಿಂದ ಇತ್ತೀಚೆಗೆ ಕಾಣಿಸಿಕೊಳ್ಳುವ ಮೂಲಕ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ತಾಲೂಕಿನ ಭೀಮಗಡ ವನ್ಯಧಾಮ ಸೇರಿದಂತೆ ಕಣಕುಂಬಿ, ಜಾಂಬೋಟಿ, ಅಮಗಾಂವ, ಗವ್ವಾಳಿ, ಕೃಷ್ಣಾಪುರ, ಜಾಮಗಾಂವ, ಹೆಮ್ಮಡಗಾ, ಗುಂಜಿ, ಲೋಂಡಾ, ನಾಗರಗಾಳಿ, ಹಲಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಕೃಷಿ ಜಮೀನುಗಳಲ್ಲಿ ಭತ್ತದ ಗದ್ದೆಗಳಲ್ಲಿ ನೀರು ಶೇಖರಣೆಯಾಗಿದ್ದರಿಂದ ಭತ್ತದ ಪೈರುಗಳ ನಾಟಿ ಕಾರ್ಯ ಚುರುಕುಗೊಂಡಿದೆ. ಮಳೆ ಮಾಯವಾಗಿದ್ದರಿಂದ ರೈತರಲ್ಲಿ ಮನೆಮಾಡಿದ್ದ ಆತಂಕವನ್ನು ಕಳೆದ ಎರಡು ದಿನಗಳಲ್ಲಿ ಸುರಿದ ಮಳೆ ಕಡಿಮೆಗೊಳಿಸಿದೆ. ಮಲಪ್ರಭಾ ನದಿಪಾತ್ರದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಸತತಧಾರೆಯಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ವೃದ್ಧಿಸಿದೆ.&lt;/p&gt;&lt;p&gt;ಪಟ್ಟಣ ಸೇರಿದಂತೆ ಪಾರಿಶ್ವಾಡ, ಇಟಗಿ, ಗಂದಿಗವಾಡ, ಬೀಡಿ ಭಾಗದಲ್ಲಿ ಬುಧವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಆರಂಭಗೊಂಡಿದ್ದ ಮಳೆ ಬುಧವಾರ ಇಡೀ ದಿನವೂ ಸುರಿದಿದ್ದು, ಬುಧವಾರ ಸಂಜೆಯ ನಂತರವೂ ಸತತವಾಗಿ ಸುರಿಯುತ್ತಿದೆ&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-rain-update-sudden-rise-in-water-levels-of-krishna-vedaganga-dudhganga-rivers-in-chikkodi-nippani-taluks-mrq/articleshow-ckhenzw"/>
        </item>
        <item>
            <title><![CDATA[ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಆರ್‌ಎಸ್‌ಎಸ್‌ ಪ್ರಚಾರಕರ ಸಭೆ, ಯಾರಾರು ಆಗಮಿಸಲಿದ್ದಾರೆ? ಸಭೆಯ ಚರ್ಚೆಗಳೇನು?]]></title>
            <link>https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu</link>
            <guid isPermaLink="true">https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu</guid>
            <pubDate>Fri, 10 Jul 2026 06:42:21 +0530</pubDate>
            <description><![CDATA[&lt;p&gt;ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ನಡೆಯಲಿದ್ದು, ಸರಸಂಘಚಾಲಕ ಡಾ.ಮೋಹನ್&zwnj; ಭಾಗವತ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಮೂರು ದಿನಗಳ ಸಭೆಯಲ್ಲಿ ನಡೆಯಲಿರುವ ಚರ್ಚೆಗಳೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwwy1h6424ewvjc66pvxn5qs,imgname-----------------------2026-07-07t053029.416-1783382459588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.10): &lt;/strong&gt;ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆಗೆ ಬೆಳಗಾವಿ ಸಜ್ಜುಗೊಂಡಿದೆ. ಶುಕ್ರವಾರದಿಂದ ಮೂರು ದಿನ ನಡೆಯಲಿರುವ ಸಭೆಯಲ್ಲಿ ಸಂಘದ ಸರಸಂಘಚಾಲಕ ಡಾ.ಮೋಹನ್&zwnj; ಭಾಗವತ್ ಸೇರಿ ಉನ್ನತ ನಾಯಕತ್ವ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರಚಾರಕರು ಪಾಲ್ಗೊಳ್ಳಲಿದ್ದಾರೆ.&lt;/p&gt;&lt;h2&gt;ಆರ್&zwnj;ಎಸ್&zwnj;ಎಸ್&zwnj; ಸಭೆ ನಡೆಯುವ ಸ್ಥಳ&lt;/h2&gt;&lt;p&gt;ಅನಗೋಳದ ಸಂತ ಮೀರಾ ಶಾಲೆ, ಶಾಸ್ತ್ರಿನಗರದಲ್ಲಿರುವ ಸಂಘದ ಕಚೇರಿ ಹಾಗೂ ಉದ್ಯಮಬಾಗದ ಫೌಂಡ್ರಿ ಕ್ಲಸ್ಟರ್&zwnj;ನಲ್ಲಿ ವಿವಿಧ ಹಂತದ ಸಭೆಗಳು ನಡೆಯಲಿವೆ. ಪ್ರಮುಖ ಚರ್ಚೆಗಳು ಸಂತ ಮೀರಾ ಶಾಲೆಯಲ್ಲೇ ನಡೆಯಲಿದ್ದು, ಸಭಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆಹ್ವಾನಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.&lt;/p&gt;&lt;h3&gt;ಯಾರಾರು ಆಗಮಿಸಲಿದ್ದಾರೆ&lt;/h3&gt;&lt;p&gt;ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಹ ಸರಕಾರ್ಯವಾಹರಾದ ಡಾ। ಕೃಷ್ಣಗೋಪಾಲ, ಸಿ.ಆರ್.ಮುಕುಂದ, ಅರುಣಕುಮಾರ, ರಾಮದತ್ತ, ಆಲೋಕ ಕುಮಾರ ಹಾಗೂ ಅತುಲ್ ಲಿಮಯೆ ಸೇರಿದಂತೆ ಸಂಘದ ಹಿರಿಯ ಪದಾಧಿಕಾರಿಗಳು ಈಗಾಗಲೇ ಬೆಳಗಾವಿಗೆ ಆಗಮಿಸಿದ್ದಾರೆ.&lt;/p&gt;&lt;p&gt;ಅಲ್ಲದೆ 11 ಕ್ಷೇತ್ರಗಳು, 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಸಂಘಪ್ರೇರಿತ 32 ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.&lt;/p&gt;&lt;p&gt;ಗುರುವಾರ ಸಂತ ಮೀರಾ ಶಾಲೆಯಲ್ಲಿ ಸಭೆಯ ಪೂರ್ವಸಿದ್ಧತಾ ಸಭೆಗಳು ನಡೆದವು. ವಸತಿ, ಭದ್ರತೆ ಹಾಗೂ ಸಭೆಯ ಸಂಘಟನಾ ವ್ಯವಸ್ಥೆಗಳ ಕುರಿತು ಅಂತಿಮ ಸಿದ್ಧತೆಗಳನ್ನು ಪೂರ್ಣಗೊಳಿಸಲಾಯಿತು. ಕಳೆದ ಮಾರ್ಚ್&zwnj;ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಮುಂದುವರಿದ ಭಾಗವಾಗಿ ಈ ಸಭೆ ನಡೆಯುತ್ತಿದೆ. ಸಂಘಟನಾ ವಿಸ್ತರಣೆ, ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳು, ತರಬೇತಿ ವರ್ಗಗಳ ಪರಿಶೀಲನೆ ಹಾಗೂ ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಲಾಗಿದೆ.&lt;/p&gt;&lt;p&gt;ರಾಮಮಂದಿರ ಮತ್ತು ಬದರಿನಾಥ ದೇವಸ್ಥಾನಗಳ ಹುಂಡಿ ಸಂಬಂಧಿತ ಬೆಳವಣಿಗೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂಬ ಮಾಹಿತಿ ಕೆಲವು ಮೂಲಗಳಿಂದ ವ್ಯಕ್ತವಾಗಿದ್ದರೂ, ಈ ಕುರಿತು ಸಂಘದಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/rss-pracharak-meeting-in-belagavi-for-three-days-starting-today-rav/articleshow-e2nycuu"/>
        </item>
        <item>
            <title><![CDATA[ಅಣಬೆ ಪ್ರಿಯರೇ ಎಚ್ಚರ! ಅಣಬೆ ತಿಂದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ; ಅಸಲಿಗೆ ಆಗಿದ್ದೇನು?]]></title>
            <link>https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41</link>
            <guid isPermaLink="true">https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41</guid>
            <pubDate>Fri, 10 Jul 2026 13:04:05 +0530</pubDate>
            <description><![CDATA[&lt;p&gt;ಹೊಲದಲ್ಲಿ ರಾಶಿ ರಾಶಿ ಅಣಬೆಗಳು ಕಂಡ ಮಾಲೀಕರು ಖುಷಿಯಿಂದ ಅವುಗಳನ್ನ ಮನೆಗೆ ತಂದು ಸಂಬಾರ್ ಮಾಡಿದ್ದರು. ಅದನ್ನು ಸೇವಿಸಿದ್ದ 9 ಮಂದಿ ಸಾವು, ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾರೆ. ಅಷ್ಟಕ್ಕೂ ಅಸಲಿಗೆ ಆಗಿದ್ದೇನು? ಇಲ್ಲಿದೆ ಮಾಹಿತಿ..&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx5f3yt7s0evgvqz0gjpe8wg,imgname-belagavi-mushroom--1--1783668800327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಹೇಳಿ ಕೇಳಿ ಇದು ಮಳೆಗಾಲ. ಮಳೆ ಆರಂಭವಾಗುತ್ತಿದ್ದಂತೆಯೇ ಹಳ್ಳಿಗಳಲ್ಲಿ ಹೊಲ, ಗದ್ದೆ ಹಾಗೂ ಬಯಲು ಪ್ರದೇಶಗಳಲ್ಲಿ ಅಣಬೆಗಳು (Mushrooms) ಏಳುವುದು ಸಾಮಾನ್ಯ. ಈ ಅಪರೂಪದ ಅಣಬೆಗಳನ್ನು ಕಂಡ ತಕ್ಷಣ ಜನರು ಅದನ್ನು ಮನೆಗೆ ತಂದು ಅಡುಗೆ ಮಾಡಿ ಸವಿಯುತ್ತಾರೆ. ಆದರೆ, ಹೀಗೆ ಅಣಬೆ ತಿನ್ನುವ ಮೊದಲು ಒಮ್ಮೆ ಎಚ್ಚರಿಕೆ ವಹಿಸುವುದು ಉತ್ತಮ. ಇಲ್ಲದಿದ್ದರೆ ನಿಮ್ಮ ಜೀವಕ್ಕೇ ಅಪಾಯ ಬಂದೊದಗಬಹುದು!&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಇಂತಹದ್ದೇ ಒಂದು ಆತಂಕಕಾರಿ ಘಟನೆ ನಡೆದಿದ್ದು, ವಿಷಪೂರಿತ ಅಣಬೆ ಸೇವಿಸಿ ಒಂದೇ ಕುಟುಂಬದ 9 ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.&lt;/p&gt;&lt;h2&gt;&lt;strong&gt;ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಉಮರಾಣಿ ಗ್ರಾಮದ ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುವಾಗ, ಅಲ್ಲಿ ಬೆಳೆದಿದ್ದ ಅಣಬೆಗಳನ್ನು ಕಿತ್ತು ತಂದಿದ್ದರು. ಅಣಬೆ ಕಂಡ ಖುಷಿಯಲ್ಲಿ ಮನೆಯಲ್ಲಿ ಅಡುಗೆ ಮಾಡಿ ಎಲ್ಲರೂ ಸವಿದಿದ್ದರು. ಆದರೆ, ಊಟ ಮಾಡಿದ ಕೆಲವೇ ಹೊತ್ತಿನಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡು ಮನೆಯಲ್ಲೇ ನರಳಾಡತೊಡಗಿದ್ದಾರೆ.&lt;/p&gt;&lt;h3&gt;&lt;strong&gt;ಕಾರಣವೇನು?&lt;/strong&gt;&lt;/h3&gt;&lt;p&gt;ವರದಿಗಳ ಪ್ರಕಾರ, ಅಣಬೆ ಬೆಳೆದಿದ್ದ ಹೊಲಕ್ಕೆ ಅದರ ಮಾಲೀಕರು ಕ್ರಿಮಿನಾಶಕ ಔಷಧಿಯನ್ನು ಸಿಡಿಸಿದ್ದರು. ಔಷಧಿ ಹೊಡೆದ ವಿಷಯ ತಿಳಿಯದ ಕುಟುಂಬದ ಸದಸ್ಯರು ಆ ಅಣಬೆಯನ್ನು ಕಿತ್ತು ತಂದು ಸೇವಿಸಿದ್ದಾರೆ. ಕೀಟನಾಶಕದ ಅಂಶ ಅಣಬೆಯೊಳಗೆ ಸೇರಿದ ಪರಿಣಾಮ ಅದು ವಿಷವಾಗಿ ಮಾರ್ಪಟ್ಟು ಇಡೀ ಕುಟುಂಬ ಅಸ್ವಸ್ಥಗೊಳ್ಳಲು ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಆಸ್ಪತ್ರೆಗೆ ದಾಖಲು&lt;/strong&gt;&lt;/h3&gt;&lt;p&gt;ತೀವ್ರ ಅಸ್ವಸ್ಥಗೊಂಡ 9 ಜನರನ್ನು ತಕ್ಷಣವೇ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಲ್ಲಿ ಒಬ್ಬರು ಗರ್ಭಿಣಿ ಮಹಿಳೆಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಇರಲಿ ಎಚ್ಚರ&lt;/strong&gt;&lt;/h3&gt;&lt;ul&gt; &lt;li&gt;ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಬೆಳೆಯುವ ಅಣಬೆಗಳ ಬಗ್ಗೆ ಜಾಗ್ರತೆ ಇರಲಿ&lt;/li&gt; &lt;li&gt;ಹೊಲಗಳಲ್ಲಿ ಬೆಳೆಯುವ ಅಣಬೆಗಳ ಮೇಲೆ ಕ್ರಿಮಿನಾಶಕಗಳು ಬಿದ್ದಿರುವ ಸಾಧ್ಯತೆ ಹೆಚ್ಚಿರುತ್ತದೆ&lt;/li&gt; &lt;li&gt;ಕೆಲವು ಜಾತಿಯ ಅಣಬೆಗಳು ನೈಸರ್ಗಿಕವಾಗಿಯೇ ವಿಷಕಾರಿಯಾಗಿರುತ್ತವೆ. ಅವುಗಳನ್ನು ಗುರುತಿಸುವುದು ಕಷ್ಟ&lt;/li&gt; &lt;li&gt;ಅಣಬೆ ತರುವ ಮುನ್ನ ಅವು ಬೆಳೆದ ಜಾಗ ಮತ್ತು ಅವುಗಳ ವಿಧದ ಬಗ್ಗೆ ಖಚಿತ ಮಾಹಿತಿ ಇರಲಿ&lt;/li&gt; &lt;li&gt;ಅಪರಿಚಿತ ಅಣಬೆಗಳನ್ನು ತಿಂದು ಜೀವಕ್ಕೆ ಸಂಚಕಾರ ತಂದುಕೊಳ್ಳಬೇಡಿ&lt;/li&gt;&lt;/ul&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/mushroom-lovers-beware-9-people-from-the-same-family-fell-ill-after-eating-mushrooms-gkn/articleshow-emv0k41"/>
        </item>
        <item>
            <title><![CDATA[kavalesad point tragedy: ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!]]></title>
            <link>https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3</link>
            <guid isPermaLink="true">https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3</guid>
            <pubDate>Wed, 05 Aug 2026 12:10:36 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz8aah5pqbn0ekyfwztnacrp,imgname-----------------------2026-08-05t120822.848-1785911919798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ (ಆ.5): &lt;/strong&gt;ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿದೆ. ಈ ನಡುವೆ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಬಳಿ ಇರುವ ಕವಲೇಸಾದ್ ಪಾಯಿಂಟ್, ಕವಲೇದುರ್ಗ ವೀಕ್ಷಣೆ ಹೋಗಿದ್ದ ಕರ್ನಾಟಕ ಮೂಲದ ವ್ಯಕ್ತಿ ಕಣ್ಮರೆಯಾದ ಘಟನೆ ನಡೆದಿದೆ.&lt;/p&gt;&lt;h2&gt;ಗೆಳೆಯರ ಜೊತೆ ವೀಕ್ಷಣೆಗೆ ತೆರಳಿದ್ದ ಅಯೂಬ್ ಸಯ್ಯದ್&lt;/h2&gt;&lt;p&gt;ಅಯೂಬ್ ಸಯ್ಯದ್(50) ಕಂದಕಕ್ಕೆ ಬಿದ್ದು ಕಣ್ಮರೆಯಾಗಿರುವ ವ್ಯಕ್ತಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನಿವಾಸಿಯಾಗಿರುವ ಅಯೂಬ್, ಗೆಳೆಯರೊಂದಿಗೆ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದರು. ವೀಕ್ಷಣೆ ವೇಳೆ ರಭಸವಾದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆಯಿದೆ. ಸದ್ಯ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಅಂಬೋಲಿ ಪೊಲೀಸರು&lt;/p&gt;&lt;h3&gt;ಪೊಲೀಸರ ಕಾರ್ಯಾಚರಣೆಗೆ ಮಳೆ ಅಡ್ಡಿ&lt;/h3&gt;&lt;p&gt;ಘಟನಾ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿರುವ ಅಂಬೋಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಟ್ಟವಾದ ಮಂಜು, ಗಾಳಿ, ಈ ನಡುವೆ ಭಾರೀ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿನ್ನೆ ಕಣ್ಮರೆಯಾಗಿರುವ ಅಯೂಬ್&zwnj;ಗಾಗಿ ಇಂದು ಸಹ ಪೊಲೀಸರು ಶೋಧ ಕಾರ್ಯ ಮುಂದುರಿಸಿದ್ದಾರೆ. ಘಟನೆ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3"/>
        </item>
        <item>
            <title><![CDATA[ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!]]></title>
            <link>https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</link>
            <guid isPermaLink="true">https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</guid>
            <pubDate>Fri, 10 Jul 2026 14:41:12 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್&zwnj;ನ 25 ವರ್ಷ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ₹42 ಕೋಟಿ ವೆಚ್ಚದಲ್ಲಿ ಹೊಸ, ಆಧುನಿಕ ಸ್ಟೀಲ್ ಗೇಟ್&zwnj;ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದಿದೆ. ಶಾಸಕ ಸಿದ್ದು ಸವದಿ ಅವರ ನಿರಂತರ ಒತ್ತಾಯದ ಫಲವಾಗಿ, ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತ ಕಾಯುವ ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5mb0xt1zpvah6y4gydy91b,imgname-hipparagi-barrage--1--1783674274744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಬಕವಿ-ಬನಹಟ್ಟಿ:&lt;/strong&gt; ಬಾಗಲಕೋಟೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ 25 ವರ್ಷಗಳಿಂದ ಸತತವಾಗಿ ಯಾವ ಬದಲಾವಣೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಹಿಪ್ಪರಗಿ ಬ್ಯಾರೇಜ್&zwnj;ನ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ಹೊಸ ಆಧುನಿಕ ತಂತ್ರಜ್ಞಾನದ ಸ್ಟೀಲ್ ಕ್ರಸ್ಟ್&zwnj;ಗೇಟ್&zwnj;ಗಳನ್ನು ಅಳವಡಿಸುವ ಮಹತ್ವದ ಕಾಮಗಾರಿಗೆ ಕರ್ನಾಟಕ ನೀರಾವರಿ ನಿಗಮವು ₹ 42 ಕೋಟಿ.ಗಳ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿದೆ. ಜನವರಿಯಲ್ಲಿ ಬ್ಯಾರೇಜ್&zwnj;ನ 22ನೇಕ್ರಸ್ ಗೇಟ್ ನೀರಿನ ಒತ್ತಡಕ್ಕೆ ಮುರಿದು ಅಪಾರ ನೀರು ಪೋಲಾಗಿತ್ತು. ಬಳಿಕ ಅಂದಾಜು 1.60 ಲಕ್ಷ ರೂ.ದಲ್ಲಿ ಹೊಸ ಗೇಟ್ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ ಈಗ ಉಳಿದಿರುವ 21 ಹೊಸ ಗೇಟ್&zwnj;ಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.&lt;/p&gt;&lt;p&gt;ಹಿಪ್ಪರಗಿ ಬ್ಯಾರೇಜ್&zwnj;ನ ಕ್ರೆಸ್ಟ್ಗೇಟ್&zwnj;ಗಳು ಸವಕಳಿಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ನವೀಕರಿಸಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ವಿಧಾನಸಭೆಯಲ್ಲಿ ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಅವರ ಪತ್ರ ನೀಡಿದ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿದ್ದು ಸವದಿ, 2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj;ಗೆ ಕಬ್ಬಿಣದ ಕ್ರೆಸ್ಟ್ಗೇಟ್&zwnj;ಗಳನ್ನು ಅಳವಡಿಸಲಾಗಿತ್ತು. ಹೈದರಾಬಾದ್&zwnj;ನಿಂದ ಬಂದ ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷಗಳಷ್ಟೇ ಇದ್ದರೂ, ಹೆಚ್ಚುವರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಅವು ಕಾರ್ಯನಿರ್ವಹಿಸಿವೆ. ಆದರೆ, ಕಳೆದ ಜನವರಿಯಲ್ಲಿ 22ನೇ ಗೇಟ್&zwnj;ನಲ್ಲಿ ಸಂಭವಿಸಿದ ಅವಘಡ ಗೇಟ್&zwnj;ಗಳ ಸ್ಥಿತಿಗತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು ಎಂದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಎಲ್ಲ ಕ್ರೆಸ್ಟ್ಗೇಟ್&zwnj;ಗಳನ್ನು ಹೊಸದಾಗಿ ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಇದೀಗ ಕಾಮಗಾರಿಗೆ ಟೆಂಡರ್ ಕರೆಯಲಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ಬಾರಿ ಕಬ್ಬಿಣದ ಬದಲಿಗೆ ಉಕ್ಕಿನಿಂದ (ಸ್ಟೀಲ್) ಕ್ರೆಸ್ಟ್ಗೇಟ್&zwnj;ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳ ಬಾಳಿಕೆ ಸುಮಾರು 50 ವರ್ಷಗಳವರೆಗೆ ಇರಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಒಟ್ಟು 22 ಗೇಟ್&zwnj;ಗಳ ಪೈಕಿ 21 ಗೇಟ್&zwnj;ಗಳನ್ನು ನವೀಕರಿಸಲಾಗುತ್ತದೆ. ಪ್ರಸಕ್ತ ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಳೆಗಾಲದ ವೇಳೆಗೆ ಹೊಸ ಕ್ರೆಸ್ಟ್ಗೇಟ್&zwnj;ಗಳ ಮೂಲಕವೇ ಬ್ಯಾರೇಜ್&zwnj;ನಲ್ಲಿ ನೀರು ತಡೆಹಿಡಿಯುವ ವ್ಯವಸ್ಥೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.&lt;/p&gt;&lt;h2&gt;ತಜ್ಞರ ತಂಡದ ವರದಿಗೆ ಮನ್ನಣೆ:&lt;/h2&gt;&lt;p&gt;ಕಳೆದ ಮೇ ತಿಂಗಳಲ್ಲಿ ಹೈದರಾಬಾದ್&zwnj;ನ ತಜ್ಞರ ವಿಶೇಷ ತಂಡ ಬ್ಯಾರೇಜ್&zwnj;ಗೆ ಭೇಟಿ ನೀಡಿ ಕ್ರೆಸ್ಟ್ಗೇಟ್&zwnj;ಗಳ ಸಮಗ್ರ ಪರಿಶೀಲನೆ ನಡೆಸಿತ್ತು. ಪರಿಶೀಲನೆಯಲ್ಲಿ ಬಹುತೇಕ ಎಲ್ಲ ಗೇಟ್&zwnj;ಗಳು ಸವಕಳಿಗೊಂಡಿರುವುದು ದೃಢಪಟ್ಟಿದ್ದು, ಅವುಗಳನ್ನು ಸಂಪೂರ್ಣವಾಗಿ ನವೀಕರಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಸುಮಾರು ₹ 42 ಕೋಟಿಗಳ ಅಂದಾಜು ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶಾಸಕ ಸವದಿ ನಿರಂತರ ಆಗ್ರಹದಿಂದ ನೂತನ ಗೇಟ್&zwnj;ಗಳು ಅಳವಡಿಕೆಯಾಗುತ್ತಿದ್ದು, ಶಾಸಕರನ್ನು ಧುರೀಣರಾದ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಆನಂದ ಕಂಪು ಮೊದಲಾದವರು ಅಭಿನಂದಿಸಿದ್ದಾರೆ.&lt;/p&gt;&lt;p&gt;2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj; ಗೆ ಕ್ರಸ್ಟ್&zwnj; ಗೇಟ್ ಅಳವಡಿಸಲಾಗಿತ್ತು. ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷ. ಆದರೆ ಹೆಚ್ಚುವರಿಯಾಗಿ 10 ವರ್ಷ ಕಾರ್ಯನಿರ್ವಹಿಸಿವೆ. ಹೊಸಗೇಟ್ ಅಳವಡಿಕೆಗೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು.ಹಿಪ್ಪರಗಿ ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.&lt;/p&gt;&lt;p&gt;-ಸಿದ್ದು ಸವದಿ ತೇರದಾಳ ಶಾಸಕ&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1"/>
        </item>
        <item>
            <title><![CDATA[ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!]]></title>
            <link>https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2</link>
            <guid isPermaLink="true">https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2</guid>
            <pubDate>Sun, 26 Jul 2026 09:08:04 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್&zwnj;ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye7zrnhsqfcqwvkgveh8sze,imgname-belagavi-youtubers-1785037054641.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್&zwnj;ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಗಾಂಜಾ ನೀಡಿ, ಅದನ್ನೇ ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್&zwnj;ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಗ್ರಾಮದ ಮೆಹಬೂಬ್ ಜಮಾದಾರ್ ಎಂಬುವವರೇ ಈ ಖದೀಮರ ಜಾಲಕ್ಕೆ ಬಲಿಯಾದವರು. ಈ ಯೂಟ್ಯೂಬರ್ಸ್ ಗ್ಯಾಂಗ್ ಮೊದಲು ಮೆಹಬೂಬ್ ಅವರಿಗೆ ತಾವೇ ಗಾಂಜಾ ಪ್ಯಾಕೆಟ್ ನೀಡಿದ್ದಾರೆ. ಮೆಹಬೂಬ್ ಕೈಗೆ ಗಾಂಜಾ ಸಿಗುತ್ತಿದ್ದಂತೆ, ಪೊಲೀಸರ ಹೆಸರಿನಲ್ಲಿ ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಬ್ಲ್ಯಾಕ್&zwnj;ಮೇಲ್ ತಂತ್ರ&lt;/strong&gt;&lt;/h2&gt;&lt;p&gt;ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ನಿನ್ನನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ ಈ ಗ್ಯಾಂಗ್, ಗಾಂಜಾ ಪ್ಯಾಕೆಟ್ ನೀಡುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿತ್ತು. ಈ ವಿಡಿಯೋ ಇಟ್ಟುಕೊಂಡು ಪೊಲೀಸ್ ಕೇಸ್ ಹಾಕದಂತೆ ಇರಲು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಭಯಭೀತರಾದ ಮೆಹಬೂಬ್ ಅಂದು ತಮ್ಮ ಬಳಿಯಿದ್ದ 60 ಸಾವಿರ ರೂಪಾಯಿಗಳನ್ನು ಇವರಿಗೆ ನೀಡಿದ್ದಾರೆ.&lt;/p&gt;&lt;p&gt;ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದ ಈ ಯೂಟ್ಯೂಬರ್ಸ್, ಮೆಹಬೂಬ್ ಹಣ ನೀಡದಿದ್ದಾಗ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದ್ದಾರೆ. ಇದರಿಂದ ಕಂಗೆಟ್ಟ ಮೆಹಬೂಬ್ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಸೂಲಿ ಜಾಲ ಬಯಲಾಗಿದೆ.&lt;/p&gt;&lt;h3&gt;&lt;strong&gt;ಬಂಧಿತರ ವಿವರ&lt;/strong&gt;&lt;/h3&gt;&lt;p&gt;ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ, ಡೇವಿಡ್ ತಂಗೇರಾಳ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್&zwnj;ಗಳು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರಕರ್ತರ ಹೆಸರಿನಲ್ಲಿ ಸಮಾಜದಲ್ಲಿ ದರೋಡೆಗೆ ಇಳಿದಿದ್ದ ಈ ಗ್ಯಾಂಗ್ ಈಗ ಜೈಲು ಪಾಲಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2"/>
        </item>
        <item>
            <title><![CDATA['ರಾಯರೇ ಅವಳಿಂದ ನನ್ನನ್ನು ಕಾಪಾಡು..! ಹುಡುಗಿ ಕಾಟಕ್ಕೆ ಬೇಸತ್ತು ರಾಘವೇಂದ್ರ ಸ್ವಾಮೀಗಳ ಮೊರೆ ಹೋದ ಭಕ್ತ, ವೈರಲ್ ಆಯ್ತು ಪತ್ರ]]></title>
            <link>https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1</link>
            <guid isPermaLink="true">https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1</guid>
            <pubDate>Wed, 05 Aug 2026 10:28:46 +0530</pubDate>
            <description><![CDATA[ಬೆಳಗಾವಿಯ ಯುವಕನೊಬ್ಬ ಯುವತಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ರಾಮದುರ್ಗದ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 'ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು' ಎಂದು ಬರೆದಿದ್ದ ಅನಾಮಧೇಯ ಪತ್ರವೊಂದು ಪತ್ತೆಯಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz84bsrff6asnctenb2an3t3,imgname-----------------------2026-08-05t102138.456-1785905669903.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಆ.5): &lt;/strong&gt;ಹುಡುಗನ ಕಾಟಕ್ಕೆ ಬೇಸತ್ತು ಯುವತಿ ಸಾವು, ಪತಿ ಕಿರುಕುಳಕ್ಕೆ ನೊಂದ ಪತ್ನಿ ಸಾವು, ಕಾಲೇಜು ಯುವತಿಗೆ ಪಾಗಲ್ ಪ್ರೇಮಿ ಕಾಟ.. ಸಾಮಾನ್ಯವಾಗಿ ಇಂಥ ಸುದ್ದಿಗಳನ್ನ ದಿನನಿತ್ಯ ಪತ್ರಿಕೆ, ಮಾಧ್ಯಮಗಳಲ್ಲಿ ಕೇಳುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವಾದ, ವಿಚಿತ್ರ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಯುವತಿ ಅಲ್ಲ, ಯುವಕನೇ ಹುಡುಗಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿದ್ದಾನೆ!&lt;/p&gt;&lt;h2&gt;ಹುಡುಗಿಯ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಯುವಕ!&lt;/h2&gt;&lt;p&gt;ಹೌದು. ಹುಡುಗಿಯ ಕಾಟಕ್ಕೆ ಬೇಸತ್ತು ಬೆಳಗಾವಿ ಯುವಕ ರಾಯರ ಮೊರೆ ಹೋಗಿದ್ದಾನೆ. 'ರಾಯರೇ, ನಿಮ್ಮ ದಮ್ಮಯ್ಯ ಹುಡುಗಿಯಿಂದ ನನ್ನ ಕಾಪಾಡು' ಎಂದು ದೇವರಿಗೆ ಮನವಿ ಪತ್ರ ಬರೆದಿರುವುದು ಈಗ ಸೋಷಿಯಲ್ ಮೀಡಿಯಾದ್ಲಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ!&lt;/h3&gt;&lt;p&gt;ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಲ ಕಾಲಕ್ಕೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತೆ. ಇತ್ತೀಚೆಗೆ ಮಠದ ಸಿಬ್ಬಂದಿ ಹುಂಡಿ ಎಣಿಕೆ ಮಾಡಿದ್ದರು. ಈ ವೇಳೆ ಹುಂಡಿಯಲ್ಲಿ ಹಣದೊಂದಿಗೆ ಒಂದು ವಿಚಿತ್ರ ಪತ್ರ ಪತ್ತೆಯಾಗಿದೆ. ಭಕ್ತರು ಬರೆದ ಸಾಮಾನ್ಯ ಹರಕೆ ಪತ್ರ ಇರಬಹುದೆಂದು ಭಾವಿಸಿದ್ದ ಸಿಬ್ಬಂದಿ ಕುತೂಹಲದಿಂದ ತೆರೆದು ಓದಿದ ಮೇಲೆ ಶಾಕ್ ಆಗಿದ್ದಾರೆ.&lt;/p&gt;&lt;h3&gt;'ರಾಯರೇ ಹುಡುಗಿಯಿಂದ ನನ್ನನ್ನು ಕಾಪಾಡು..'&lt;/h3&gt;&lt;p&gt;ಪತ್ರದಲ್ಲಿ 'ಶ್ರೀ ಗಣಪತಿಯೇ ನಮಃ ಅಂತಾ ಯುವಕ ಮೊದಲಿಗೆ ವಿಘ್ನನಿವಾರಕನ ಸ್ಮರಣೆ ಮಾಡಿದ್ದಾನೆ. ನಂತರ ಸಾಲಿನಲ್ಲಿ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಬರೆದಿರುವ ಯುವಕ ಮುಂದಿನ ಸಾಲುಗಳಲ್ಲಿ 'ರಾಯರೇ, ನಮ್ಮನ್ನ ಆ ವಿಷದಿಂದ ಕಾಪಾಡು. ಆ ಹುಡುಗಿಯಿಂದ ನನ್ನ ಕಾಪಾಡು. ಈ ಕಷ್ಟದಿಂದ ಹೇಗಾದರೂ ನಮ್ಮನ್ನು ಪಾರು ಮಾಡು ಎಂದು ಯುವಕ ಬೇಡಿಕೊಂಡಿದ್ದಾನೆ.&lt;/p&gt;&lt;p&gt;ನಮ್ಮನೊಂದಿಗೆ ರಾಯರು ಇದ್ದಾರೆ ಎಂದು ನಂಬಿದ್ದೇನೆ. ಹೀಗಾಗಿ ರಾಯರಲ್ಲಿ ನನ್ನ ಕಷ್ಟ ಹೇಳಿಕೊಂಡು ಈ ಪತ್ರ ಬರೆದಿದ್ದೇನೆ. ನನ್ನ ಕಷ್ಟ ರಾಯರು ಕೇಳಿಸಿಕೊಳ್ಳುತ್ತಿದ್ದಾರೆಂದು ನನ್ನ ನಂಬಿಕೆ. ಗುರುಗಳೇ ಆದಿಶಕ್ತಿ ದೇವಿ, ತಂದೆ ತಾಯಿ ಕಾಪಾಡು ಎಂದು ಯುವಕ ಬೇಡಿಕೊಂಡಿದ್ದಾನೆ.&lt;/p&gt;&lt;p&gt;ಆದರೆ ಇಷ್ಟೆಲ್ಲ ಬರೆದಿರುವ ಯುವಕ, ಇಡೀ ಪತ್ರದಲ್ಲಿ ಎಲ್ಲಿಯೂ ತನ್ನ ಹೆಸರು, ಗುರುತು ಪತ್ರದಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಪತ್ರ ಯಾರು ಬರೆದರು. ಆ ಹುಡುಗನಿಗೆ ಕಾಟ ಕೊಡ್ತಿರೊ ಆ ಖತರ್ನಾಕ್ ಹುಡುಗಿ ಯಾರು ಅನ್ನೋದು ಆ ಹುಡುಗನಿಗೂ ರಾಯರಿಗೂ ಇಬ್ಬರಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಿಲ್ಲ!&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1"/>
        </item>
        <item>
            <title><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ]]></title>
            <link>https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</link>
            <guid isPermaLink="true">https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</guid>
            <pubDate>Wed, 29 Jul 2026 07:43:57 +0530</pubDate>
            <description><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ. ಮತ್ತೊಂದೆಡೆ, ಲೋಂಡಾ ಯಾರ್ಡ್&zwnj;ನಲ್ಲಿನ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ 12 ರೈಲುಗಳು ತಡವಾಗಿ ಸಂಚರಿಸಿದ್ದು, ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz1z8x5tsce76phwyt24182,imgname-indian-railways-1-1784527430565.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧಾರವಾಡ-ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಮುಗಿಸಬೇಕಾಗಿದೆ. ಹೀಗಾಗಿ ಬಾಕಿಯಿರುವ ಭೂಸ್ವಾಧೀನ ಸೇರಿ ಇನ್ನಿತರ ವಿಚಾರಗಳ ಕುರಿತ ಸಮಸ್ಯೆ ನಿವಾರಿಸಲು ಖುದ್ದು ಭೇಟಿ ನೀಡುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ.&lt;/p&gt;&lt;p&gt;ಖನಿಜ ಭವನದಲ್ಲಿ ಮಂಗಳವಾರ ರಾಜ್ಯದ ರೈಲ್ವೆ, ವಿಮಾನ ನಿಲ್ದಾಣ ಸೇರಿ ಇನ್ನಿತರ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಂ.ಬಿ. ಪಾಟೀಲ್&zwnj;, ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧಾರವಾಡದ ಮಮ್ಮಿಗಟ್ಟಿ ಸಮೀಪ ಭೂಸ್ವಾಧೀನ ಸಮಸ್ಯೆಯಿದೆ. ಅದನ್ನು ಶೀಘ್ರ ಬಗೆಹರಿಸಿ ಭೂಸ್ವಾಧೀನ ಮಾಡಿಕೊಂಡು ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಹೀಗಾಗಿ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಆರ್&zwnj;. ವಿಶಾಲ್&zwnj; ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶಿಸಿದರು.&lt;/p&gt;&lt;h2&gt;ರೈಲ್ವೆ ಕಾಮಗಾರಿಯಿಂದ ಬ್ಲಾಕ್&zwnj; ಬರ್ಸ್ಟ್&zwnj;: 12 ರೈಲು ವಿಳಂಬ&lt;/h2&gt;&lt;p&gt;ಹುಬ್ಬಳ್ಳಿ: ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್&zwnj; ಬರ್ಸ್ಟ್&zwnj; ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.&lt;/p&gt;&lt;p&gt;ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೊದಲು ಎರಡಿದ್ದ ಫ್ಲಾರ್ಟ್&zwnj;ಫಾರ್ಮ್&zwnj;ನ್ನು ಮೂರಕ್ಕೇರಿಸಲಾಗುತ್ತಿದೆ. ನಿಗದಿತ ಕಾಮಗಾರಿ ವೇಳೆ ಅನಿರೀಕ್ಷಿತವಾಗಿ 8 ಗಂಟೆ ತಡವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳು ಅಲ್ಲಲ್ಲಿ ನಿಲುಗಡೆಯಾಗಿದ್ದರೆ, ಮತ್ತೆ ಕೆಲ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ.&lt;/p&gt;&lt;h2&gt;12 ರೈಲುಗಳ ವಿಳಂಬ:&lt;/h2&gt;&lt;p&gt;ನಿಜಾಮುದ್ದೀನ್&zwnj;-ವಾಸ್ಕೋಡಿಗಾಮಾ ಎಕ್ಸ್&zwnj;ಪ್ರೆಸ್- 221 ನಿಮಿಷ, ದಾದರ-ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್- 221 ನಿಮಿಷ, ಬೆಂಗಳೂರು-ಬೆಳಗಾವಿ ಎಕ್ಸ್&zwnj;ಪ್ರೆಸ್-355 ನಿಮಿಷ, ಬೆಂಗಳೂರು-ಸಾಂಗ್ಲಿ ಎಕ್ಸ್&zwnj;ಪ್ರೆಸ್ -222 ನಿಮಿಷ, ಬೆಂಗಳೂರು-ಜೋಧಪುರ ಎಕ್ಸ್&zwnj;ಪ್ರೆಸ್- 237 ನಿಮಿಷ, ಮೈಸೂರು-ಬೆಳಗಾವಿ -245 ನಿಮಿಷ, ದಾದರ-ಪುದುಚೇರಿ ಎಕ್ಸ್&zwnj;ಪ್ರೆಸ್ -165 ನಿಮಿಷ, ಮಿರಜ್&zwnj;- ಹುಬ್ಬಳ್ಳಿ ಪ್ಯಾಸೆಂಜರ್&zwnj;-147 ನಿಮಿಷ, ಸಿಕಂದರಾಬಾದ್&zwnj;- ಬೆಳಗಾವಿ -222 ನಿಮಿಷ, ವಾಸ್ಕೋಡಿಗಾಮಾ-ಶಾಲಿಮಾರ್&zwnj; ಎಕ್ಸ್&zwnj;ಪ್ರೆಸ್ -123 ನಿಮಿಷ, ತಿರುಪತಿ-ಛತ್ರಪತಿ ಶಾಹು ಮಹಾರಾಜ ಟರ್ಮಿನಲ್&zwnj; ಎಕ್ಸ್&zwnj;ಪ್ರೆಸ್ -184 ನಿಮಿಷ, ಅಜ್ಮೀರ್&zwnj;-ಬೆಂಗಳೂರು ಎಕ್ಸ್&zwnj;ಪ್ರೆಸ್- 158 ನಿಮಿಷ ತಡೆ ಹಿಡಿಯಲಾಗಿತ್ತು.&lt;/p&gt;&lt;p&gt;ಇದಲ್ಲದೇ, ಬೆಳಗಾವಿ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj; ರೈಲನ್ನು -150 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿಯಿಂದ -192 ನಿಮಿಷ ತಡವಾಗಿ ಚಲಿಸಿತು. ಬೆಳಗಾವಿ-ಮೈಸೂರು ಎಕ್ಸ್&zwnj;ಪ್ರೆಸ್ ರೈಲು ಬೆಳಗಾವಿಯಿಂದಲೇ -235 ನಿಮಿಷ ತಡವಾಗಿ ಚಲಿಸಿತು.&lt;/p&gt;&lt;h2&gt;ರದ್ದತಿ:&lt;/h2&gt;&lt;p&gt;ಈ ನಡುವೆ ಸೋಲ್ಲಾಪುರ- ಧಾರವಾಡ ಪ್ಯಾಸೆಂಜರ್&zwnj;ನ್ನು ನವಲೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಿದ್ದರೆ, ಪಂಡರಾಪುರ-ಧಾರವಾಡ ರೈಲನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಸುಗಮ ಸಂಚಾರ ಶುರುವಾಯಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g"/>
        </item>
        <item>
            <title><![CDATA[ಜಾತ್ರೆಗೆ ಹೋಗುವ ವಿಚಾರಕ್ಕೆ ಪತಿ ಜೊತೆ ಜಗಳ; ಅದೇ ಸಿಟ್ಟಿನಲ್ಲಿ ದೂಧಗಂಗಾ ನದಿಗೆ ಹಾರಿದ ಪತ್ನಿ!]]></title>
            <link>https://kannada.asianetnews.com/belagavi/fight-with-husband-over-fair-visit-wife-jumps-into-dudhganga-river-in-anger-gkn/articleshow-m7ags02</link>
            <guid isPermaLink="true">https://kannada.asianetnews.com/belagavi/fight-with-husband-over-fair-visit-wife-jumps-into-dudhganga-river-in-anger-gkn/articleshow-m7ags02</guid>
            <pubDate>Thu, 23 Jul 2026 15:07:30 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ದಂಪತಿ ನಡುವಿನ ಸಣ್ಣ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜಾತ್ರೆಗೆ ಹೋಗುವ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಮನನೊಂದು ನದಿಗೆ ಹಾರಿದ್ದಾಳೆ. ಅಷ್ಟಕ್ಕೂ ಆಗಿದ್ದೇನು? ಸ್ಟೋರಿ ಓದಿ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky75bdamzzg7apkfj6d1kaak,imgname-chikkodi-wife-doodhganga-river-1784799409492.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ: &lt;/strong&gt;ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ದಂಪತಿ ನಡುವಿನ ಸಣ್ಣ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಜಾತ್ರೆಗೆ ಹೋಗುವ ವಿಚಾರವಾಗಿ ಗಂಡನೊಂದಿಗೆ ಜಗಳವಾಡಿದ ಪತ್ನಿಯೊಬ್ಬಳು ಮನನೊಂದು ನದಿಗೆ ಹಾರಿರುವ ಹೃದಯವಿದ್ರಾವಕ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಜಾತ್ರೆಗಾಗಿ ಜಗಳ&lt;/strong&gt;&lt;/h2&gt;&lt;p&gt;ಸದಲಗಾ ಪಟ್ಟಣದ ನಿವಾಸಿ ಮಂಜುಳಾ ವಂಜೀರೆ (25) ನದಿಗೆ ಹಾರಿದ ಗೃಹಿಣಿ. ಮಂಜುಳಾ ಹಾಗೂ ಆಕೆಯ ಪತಿ ಅನಿಲ್ ನಡುವೆ ಕಳೆದ ಕೆಲವು ದಿನಗಳಿಂದ ಜಾತ್ರೆಗೆ ಹೋಗುವ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಈ ವಿಚಾರವಾಗಿ ಭಾರಿ ಜಗಳ ನಡೆದಿದೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಹೇಳದೆ ಕೇಳದೆ ನದಿಗೆ ಜಿಗಿತ&lt;/strong&gt;&lt;/h2&gt;&lt;p&gt;ಪತಿಯೊಂದಿಗೆ ಜಗಳವಾಡಿದ ಮಂಜುಳಾ, ತೀವ್ರ ಆಕ್ರೋಶ ಮತ್ತು ಬೇಸರದಿಂದ ಮನೆಯಿಂದ ಹೊರಬಂದಿದ್ದಾರೆ. ಬಳಿಕ ಪಟ್ಟಣದ ಹೊರವಲಯದಲ್ಲಿ ಹರಿಯುವ ದೂದಗಂಗಾ ನದಿಯ ಬಳಿ ತೆರಳಿ, ಯಾರಿಗೂ ತಿಳಿಸದೆ ನದಿಗೆ ಹಾರಿದ್ದಾರೆ. ನದಿಯ ದಡದಲ್ಲಿ ಮಂಜುಳಾ ಅವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಎನ್&zwnj;ಡಿಆರ್&zwnj;ಎಫ್ (NDRF) ತಂಡ ಧಾವಿಸಿದ್ದು, ದೂಧಗಂಗಾ ನದಿಯ ಆಳವಾದ ನೀರಿನಲ್ಲಿ ಮಂಜುಳಾ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಯುತ್ತಿದ್ದರೂ ಸಹ ನೀರಿನ ಹರಿವು ಹೆಚ್ಚಿರುವುದರಿಂದ ಮಹಿಳೆಯ ಪತ್ತೆಯಾಗಿಲ್ಲ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಅನಿಲ್&zwnj;ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಣ್ಣ ವಿಚಾರಕ್ಕೆ ಗೃಹಿಣಿ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಕುಟುಂಬಸ್ಥರಲ್ಲಿ ಹಾಗೂ ಪಟ್ಟಣದಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/fight-with-husband-over-fair-visit-wife-jumps-into-dudhganga-river-in-anger-gkn/articleshow-m7ags02"/>
        </item>
        <item>
            <title><![CDATA[ಬೆಳಗಾವಿಯಲ್ಲಿ ಕನ್ನಡಿಗರ SIR ಫಾರ್ಮ್ ಮರಾಠಿಯಲ್ಲಿ ಕೊಡಬೇಕಂತೆ; ಎಂಇಎಸ್ ಪುಂಡಾಟಿಕೆಗೆ ಶಿವಸೇನೆ ಸಂಸದನ ಸಾಥ್!]]></title>
            <link>https://kannada.asianetnews.com/karnataka-districts/belagavi-sir-voter-list-marathi-form-controversy-shiv-sena-mp-arvind-sawant/articleshow-nc5dii9</link>
            <guid isPermaLink="true">https://kannada.asianetnews.com/karnataka-districts/belagavi-sir-voter-list-marathi-form-controversy-shiv-sena-mp-arvind-sawant/articleshow-nc5dii9</guid>
            <pubDate>Mon, 20 Jul 2026 14:20:23 +0530</pubDate>
            <description><![CDATA[ಬೆಳಗಾವಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ಮರಾಠಿ ಭಾಷೆಯಲ್ಲೇ ಅರ್ಜಿ ನೀಡಬೇಕೆಂದು ಶಿವಸೇನೆ ಸಂಸದರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಎಂಇಎಸ್ ಪುಂಡರು ಕೂಡ ಇದೇ ವಿಚಾರವಾಗಿ ಕಿರಿಕ್ ಮಾಡುತ್ತಿದ್ದು, ಇದು ಗಡಿಭಾಗದಲ್ಲಿ ಭಾಷಾ ವಿವಾದವನ್ನು ಮತ್ತೆ ಕೆರಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxzb9k1rqbh1ve217ckmya9w,imgname-belagavi-sir-farm-marathi-mes-demand-1784537205816.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.20): ಕುಂ&lt;/strong&gt;ದಾನಗರಿ ಬೆಳಗಾವಿಯಲ್ಲಿ (Belagavi) ಭಾಷಾ ವಿವಾದದ ಕಿಚ್ಚು ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (Special Summary Revision - SIR) ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಶಿವಸೇನೆ (Shiv Sena) ಸಂಸದ ಅರವಿಂದ ಸಾವಂತ್ (Arvind Sawant) ಹೊಸ ಕ್ಯಾತೆ ತೆಗೆದಿದ್ದಾರೆ.&lt;/p&gt;&lt;h2&gt;&lt;strong&gt;ಮರಾಠಿಯಲ್ಲೇ ಅರ್ಜಿ ಬೇಕು ಎಂಬ ಹಠ:&lt;/strong&gt;&lt;/h2&gt;&lt;p&gt;ಕರ್ನಾಟಕದ ಮರಾಠಿ ಪ್ರಾಬಲ್ಯದ ಪ್ರದೇಶಗಳಲ್ಲಿ ಎಸ್&zwnj;ಐಆರ್ (SIR) ಫಾರಂಗಳನ್ನು ಹಾಗೂ ಸ್ವೀಕೃತಿ ಪತ್ರಗಳನ್ನು ಮರಾಠಿ ಭಾಷೆಯಲ್ಲೇ ನೀಡಬೇಕು ಎಂದು ಸಂಸದ ಅರವಿಂದ ಸಾವಂತ್ ಆಗ್ರಹಿಸಿದ್ದಾರೆ. ಈ ಕುರಿತು ಅವರು ಕೇಂದ್ರ ಚುನಾವಣಾ ಆಯೋಗಕ್ಕೆ (Central Election Commission) ಪತ್ರ ಬರೆದಿದ್ದು, ಕೂಡಲೇ ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿದ್ದಾರೆ. ಇದು ಗಡಿ ಭಾಗದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;h2&gt;&lt;strong&gt;ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್:&lt;/strong&gt;&lt;/h2&gt;&lt;p&gt;ಕೇವಲ ಶಿವಸೇನೆ ಮಾತ್ರವಲ್ಲದೆ, ಇತ್ತ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಕೂಡ ಪದೇ ಪದೇ ಕಿರಿಕ್ ಮಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆಗೆ (City Corporation) ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಎಂಇಎಸ್ ಕಾರ್ಯಕರ್ತರು, ಭಾಷಾ ಸಾಮರಸ್ಯ ಕದಡುವ ಪ್ರಯತ್ನ ನಡೆಸಿದ್ದರು. ಈಗ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲೂ ಮರಾಠಿ ಭಾಷೆಯದ್ದೇ ಜಪ ಮಾಡುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಬಿಎಲ್&zwnj;ಒಗಳಿಗೆ ಕಿರುಕುಳ (Harassment of BLOs):&lt;/strong&gt;&lt;/h2&gt;&lt;p&gt;ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಿಸುತ್ತಿರುವ ಬಿಎಲ್&zwnj;ಒ (Booth Level Officers) ಗಳಿಗೂ ಮರಾಠಿ ಪುಂಡರು ಕಿರುಕುಳ ನೀಡುತ್ತಿರುವ ದೂರುಗಳು ಕೇಳಿಬರುತ್ತಿವೆ. &quot;ಕನ್ನಡ ಬಿಟ್ಟು ಮರಾಠಿಯಲ್ಲೇ ಅರ್ಜಿ ಕೊಡಿ&quot; ಎಂದು ಕೆಲವರು ಹಠ ಹಿಡಿಯುತ್ತಿದ್ದಾರೆ. ಈ ಮೂಲಕ ಸರ್ಕಾರಿ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದ್ದಾರೆ.&lt;/p&gt;&lt;p&gt;ಕರ್ನಾಟಕದ ಭೂಪ್ರದೇಶದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಸರ್ಕಾರದ ಪ್ರಕ್ರಿಯೆಗಳು ಅಧಿಕೃತ ಭಾಷೆಯಲ್ಲೇ ನಡೆಯುತ್ತವೆ. ಆದರೆ, ಮಹಾರಾಷ್ಟ್ರದ ರಾಜಕಾರಣಿಗಳು ಮತ್ತು ಸ್ಥಳೀಯ ಎಂಇಎಸ್ ಪುಂಡರು ಉದ್ದೇಶಪೂರ್ವಕವಾಗಿ ಇಂತಹ ವಿವಾದಗಳನ್ನು ಸೃಷ್ಟಿಸಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎನ್ನುವ ಆಕ್ರೋಶ ಕನ್ನಡಿಗ ವಲಯದಲ್ಲಿ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ಚುನಾವಣಾ ಆಯೋಗವು ಈ ಪತ್ರಕ್ಕೆ ಹೇಗೆ ಪ್ರತಿಕ್ರಿಯಿಸಲಿದೆ ಮತ್ತು ರಾಜ್ಯ ಸರ್ಕಾರ ಈ ಭಾಷಾ ಕಿರಿಕ್ ಅನ್ನು ಹೇಗೆ ಹತ್ತಿಕ್ಕಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/belagavi-sir-voter-list-marathi-form-controversy-shiv-sena-mp-arvind-sawant/articleshow-nc5dii9"/>
        </item>
        <item>
            <title><![CDATA[ಬೆಳಗಾವಿ ಕಸದ ತಿಪ್ಪೆಯಿಂದ ಕೇಳಿಬಂತು ಹಸುಗೂಸು ಅರ್ತನಾದ! ಕುರಿಗಾಹಿಯಿಂದ ಗಂಡು ಮಗುವಿನ ರಕ್ಷಣೆ]]></title>
            <link>https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r</link>
            <guid isPermaLink="true">https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r</guid>
            <pubDate>Thu, 09 Jul 2026 13:21:30 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ, ಹೆತ್ತ ತಾಯಿಯೇ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದ ಅಮಾನವೀಯ ಘಟನೆ ನಡೆದಿದೆ. ಕುರಿಗಾಹಿಯೊಬ್ಬರು ಮಗುವನ್ನು ರಕ್ಷಿಸಿದ್ದು, ಸದ್ಯ ಮಗು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದೆ. ಪೊಲೀಸರು ನಿರ್ದಯಿ ತಾಯಿಗಾಗಿ ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwxh3nrnrze4560rw8fhd61b,imgname-newborn-baby-found-in-belagavi-1783402452757.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಹೆತ್ತ ತಾಯಿಯೇ ಮಮತೆಯನ್ನೇ ಮರೆತು, ತಾನು ಜನ್ಮ ನೀಡಿದ ಹಸುಗೂಸನ್ನು ಕಸದ ತಿಪ್ಪೆಗೆ ಎಸೆದು ಪರಾರಿಯಾಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದಲ್ಲಿ ತಿಪ್ಪೆಯಲ್ಲಿ ಮಗು ಪತ್ತೆಯಾಗಿದೆ.&lt;/p&gt;&lt;h2&gt;ಸೇತುವೆ ಕೆಳಗೆ ಪತ್ತೆಯಾದ ಗಂಡು ಮಗು&lt;/h2&gt;&lt;p&gt;ಕಿತ್ತೂರು-ನರಗುಂದ ರಸ್ತೆಯ ಬಸವಣಕಟ್ಟಿ ಸೇತುವೆಯ ಕೆಳಭಾಗದಲ್ಲಿ ಅನಾಥವಾಗಿ ಬಿದ್ದಿದ್ದ ಗಂಡು ಮಗುವಿನ ಅಳುವಿನ ಧ್ವನಿ ಕೇಳಿ, ಆ ಭಾಗದಲ್ಲಿ ಕುರಿ ಮೇಯಿಸುತ್ತಿದ್ದ ಕುರಿಗಾಹಿಯೊಬ್ಬರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲಿ ಮಗು ಅಸಹಾಯಕ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು, ತಡಮಾಡದೇ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.&lt;/p&gt;&lt;h2&gt;ಮಾನವೀಯತೆ ಮೆರೆದ ಕುರಿಗಾಹಿ&lt;/h2&gt;&lt;p&gt;ಮಗುವನ್ನು ರಕ್ಷಿಸಿದ ತಕ್ಷಣವೇ ಜಾಗರೂಕರಾದ ಕುರಿಗಾಹಿ, ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ತಕ್ಷಣವೇ ಮಗುವನ್ನು ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಸವದತ್ತಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗುವಿಗೆ ವೈದ್ಯರ ಉಸ್ತುವಾರಿಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ&lt;/h2&gt;&lt;p&gt;ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸವದತ್ತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸುರೇಬಾನ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ರಾಮದುರ್ಗ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಎಸೆದು ಹೋದ ನಿರ್ದಯಿ ತಾಯಿ ಯಾರು? ಈ ಕೃತ್ಯದ ಹಿಂದಿನ ಕಾರಣವೇನು? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.&lt;/p&gt;&lt;p&gt;ಶಿಶುವನ್ನು ಕಸಕ್ಕೆ ಎಸೆದು ಹೋಗಿರುವ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಹಿತಿ ಹಾಗೂ ಲಭ್ಯವಿರುವ ಸುಳಿವುಗಳ ಆಧಾರದ ಮೇಲೆ ಪರಿಶೀಲನೆ ಮುಂದುವರಿದಿದೆ. ಪ್ರಕರಣವು ರಾಮದುರ್ಗ ತಾಲೂಕಿನ ಸುರೇಬಾನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪಿಎಸ್&zwnj;ಐ ಗುರುರಾಜ ಕಲಬುರ್ಗಿ ಮುಂದಿನ ತನಿಖೆ ಕೈಗೊಂಡಿದ್ದಾರೆ.&amp;nbsp;&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/newborn-boy-found-in-belagavi-under-bridge-ramdurga-kittur-village-infant-rescue-gdp/articleshow-ogzmv3r"/>
        </item>
        <item>
            <title><![CDATA[ಒಂದು ಹುಡುಗಿ ಕತೆ.. ಬೆಳಗಾವಿಯಲ್ಲಿ ಎರಡು ಗ್ರಾಮಗಳ ಯುವಕರಿಂದ ನಡು ರಸ್ತೆಯಲ್ಲಿ ಹೊಡೆದಾಟ..!]]></title>
            <link>https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf</link>
            <guid isPermaLink="true">https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf</guid>
            <pubDate>Fri, 24 Jul 2026 15:05:34 +0530</pubDate>
            <description><![CDATA[&lt;p&gt;ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್&zwnj;ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9qn9bndar8n9tqmr40a8j5,imgname-belagavi-fight-for-girl-1784885716341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್&zwnj;ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಬಸ್&zwnj;ನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ವಿಚಾರಕ್ಕೆ ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ನಡೆದ 'ಬೆಲ್ಟ್ ಸಮರ' ಈಗ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಬಸ್ಸನಲ್ಲೇ ಡಿಶುಂ ಡಿಶುಂ&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ಈ ಹೈಡ್ರಾಮಾ ನಡೆದಿದೆ. ಜಕ್ಕಬಾಳ ಮತ್ತು ಬಸರಗಿ ಗ್ರಾಮದ ವಿದ್ಯಾರ್ಥಿಗಳು ಅದೇ ಬಸ್&zwnj;ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಜಕ್ಕಬಾಳ ಗ್ರಾಮದ ಕೆಲವು ಯುವಕರು, ಬಸರಗಿ ಗ್ರಾಮದ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಬಸ್ ಚಲಿಸುತ್ತಿದ್ದಂತೆಯೇ ಆರಂಭವಾದ ಈ ಮಾತುಕತೆ, ಅತಿ ಶೀಘ್ರದಲ್ಲೇ ವಾಗ್ವಾದಕ್ಕೆ ತಿರುಗಿದೆ.&lt;/p&gt;&lt;h2&gt;&lt;strong&gt;ನಡುರಸ್ತೆಯಲ್ಲಿ 'ಬೆಲ್ಟ್-ಬಡಿಗೆ' ಸಮರ!&lt;/strong&gt;&lt;/h2&gt;&lt;p&gt;ತಮ್ಮ ಗ್ರಾಮದ ಹುಡುಗಿಯರಿಗೆ ಕಿರುಕುಳ ನೀಡಿದ್ದನ್ನು ಕಂಡು ರೊಚ್ಚಿಗೆದ್ದ ಬಸರಗಿ ಗ್ರಾಮದ ಯುವಕರು ಮತ್ತು ಜಕ್ಕಬಾಳದ ಯುವಕರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ಆರಂಭವಾಗಿದೆ. ಒಬ್ಬರಿಗೊಬ್ಬರು ಬಡಿಗೆ ಮತ್ತು ಕೈಯಲ್ಲಿದ್ದ ಬೆಲ್ಟ್&zwnj;ಗಳನ್ನು ಬಿಚ್ಚಿ ಹಿಗ್ಗಾಮುಗ್ಗಾ ಬಾರಿಸಿಕೊಂಡಿದ್ದಾರೆ. ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ರಣಕಾಳಿಗಳಂತೆ ಬಡಿದಾಡಿಕೊಳ್ಳುವುದನ್ನು ಕಂಡು ದಾರಿಹೋಕರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಾಯುವ್ಯ ಸಾರಿಗೆ ಇಲಾಖೆಯ (NWKRTC) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಿತ್ತಾಡುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಬಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ, ಇಂತಹ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಸದ್ಯ ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದು ಸಣ್ಣ ಚುಡಾಯಿಸುವಿಕೆ ಹೇಗೆ ಎರಡು ಹಳ್ಳಿಗಳ ನಡುವಿನ ಜಗಳಕ್ಕೆ ನಾಂದಿ ಹಾಡಿತು ಎಂಬುದು ಈಗ ಎಲ್ಲರ ಚರ್ಚೆಯ ವಿಷಯವಾಗಿದೆ. ಬಸ್&zwnj;ಗಳಲ್ಲಿ ವಿದ್ಯಾರ್ಥಿನಿಯರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf"/>
        </item>
        <item>
            <title><![CDATA[ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿ ತಗ್ಲಾಕೊಂಡ ಮಾಲೀಕ ಕೃಷ್ಣಾನಂದ ಹಿಂಡಲಗಾ ಜೈಲಿಗೆ ಶಿಫ್ಟ್]]></title>
            <link>https://kannada.asianetnews.com/gallery/karnataka-districts/belagavi-police-have-arrested-owner-of-gold-shop-krishnananda-vernekar-mrq-w2a8eno</link>
            <guid isPermaLink="true">https://kannada.asianetnews.com/gallery/karnataka-districts/belagavi-police-have-arrested-owner-of-gold-shop-krishnananda-vernekar-mrq-w2a8eno</guid>
            <pubDate>Tue, 21 Jul 2026 09:17:36 +0530</pubDate>
            <description><![CDATA[ಬೆಳಗಾವಿಯಲ್ಲಿ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕ ಕೃಷ್ಣಾನಂದ ವೇರ್ಣೇಕರ್&zwnj;ನನ್ನು ಪೊಲೀಸರು ಬಂಧಿಸಿದ್ದಾರೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಳ್ಳತನದ ನಾಟಕವಾಡಿದ್ದು, ಆತನ ಸ್ಕೂಟಿಯಲ್ಲೇ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky1c89q9p9472fyf8458e79x,imgname-belagavi--2--1784605320937.jpg" type="image/jpeg" height="390" width="690"/>
            <content:encoded><![CDATA[ಬೆಳಗಾವಿಯಲ್ಲಿ ತನ್ನದೇ ಚಿನ್ನದಂಗಡಿಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದ ಮಾಲೀಕ ಕೃಷ್ಣಾನಂದ ವೇರ್ಣೇಕರ್&zwnj;ನನ್ನು ಪೊಲೀಸರು ಬಂಧಿಸಿದ್ದಾರೆ. ಜನರಿಗೆ ಮೋಸ ಮಾಡುವ ಉದ್ದೇಶದಿಂದ ಕಳ್ಳತನದ ನಾಟಕವಾಡಿದ್ದು, ಆತನ ಸ್ಕೂಟಿಯಲ್ಲೇ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.&lt;img&gt;&lt;p&gt;ತನ್ನದೇ ಚಿನ್ನದಂಗಡಿಗೆ ಕನ್ನ ಹಾಕಿದ್ದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣಾನಂದ ವೇರ್ಣೇಕರ್ ಬಂಧಿತ ಚಿನ್ನದ ವ್ಯಾಪಾರಿ. ಕೃಷ್ಣಾನಂದ ವೇರ್ಣೇಕರ್ ಎಂಬಾತ ಬೆಳಗಾವಿ ರಾಮದೇವ ಗಲ್ಲಿಯಲ್ಲಿ ಚಿನ್ನದಂಗಡಿ ಹೊಂದಿದ್ದು, ಚಿನ್ನದ ಸಾಲ ನೀಡುವ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಜುಲೈ 17ರಂದು ಖಡೇಬಜಾರ್ ಪೊಲೀಸ್ ಠಾಣೆಗೆ ಬಂದ ಕೃಷ್ಣಾನಂದ್, 376 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಮತ್ತು ನಗದು ಕಳ್ಳತನವಾಗಿದೆ ಎಂದು ದೂರು ದಾಖಲಿಸಿದ್ದನು. ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಶ್ವಾನದಳದ ಜೊತೆ ತೆರಳಿದ್ದರು. ಹಾಗೆಯೇ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದೆ. ಪೊಲೀಸರ ಆರಂಭದ ತನಿಖೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಕಾರ್ಪಿಯೋ ಕಾರ್ ಅಂಗಡಿ ಬಳಿ ಆಗಮಿಸಿರೋದು ಪತ್ತೆಯಾಗಿತ್ತು.&lt;/p&gt;&lt;img&gt;&lt;p&gt;ಪೊಲೀಸರ ತನಿಖೆಯಲ್ಲಿ ಕೃಷ್ಣಾನಂದ ವೇರ್ಣೇಕರ್ ಸ್ಕೂಟಿಯಲ್ಲಿಯೇ ಚಿನ್ನಾಭರಣ ಪತ್ತೆಯಾಗಿದೆ. ಆರೋಪಿಯಿಂದ 45 ಸಾವಿರ ಮೌಲ್ಯದ ಬೈಕ್, 62 ಲಕ್ಷ ಮೌಲ್ಯದ 519.8 ಗ್ರಾಂ ಚಿನ್ನಾಭರಣ, 6000 ಮೌಲ್ಯದ 31 ಗ್ರಾಂ ಬೆಳ್ಳಿ ಆಭರಣ, 2,83,010 ರೂಪಾಯಿ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಪ್ರಕರಣದ ಕುರಿತು ಮಾಹಿತಿ ನೀಡಿರುವ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ, ಆರೋಪಿಯು ಕಳೆದ ಕೆಲವು ವರ್ಷಗಳಿಂದ ಚಿನ್ನದಂಗಡಿ ನಡೆಸುತ್ತಿದ್ದನು. ಜನರಿಂದ ಚಿನ್ನ ಪಡೆದು ಸಾಲ ನೀಡುವ ಬಡ್ಡಿ ವ್ಯವಹಾರ ನಡೆಸುತ್ತಿದ್ದನು. ಚಿನ್ನ-ಬೆಳ್ಳಿ ಕಳ್ಳತನವಾಗಿದೆ ಎಂದು ಜನರಿಗೆ ಮೋಸ ಮಾಡುವ ಸಂಚು ರೂಪಿಸಿರುವ ಅನುಮಾನಗಳಿವೆ.&lt;/p&gt;&lt;img&gt;&lt;p&gt;ಇನ್ನು ಅಂದು ರಾತ್ರಿ ಮಳಿಗೆ ಬಳಿ ಬಂದ ಸ್ಕಾರ್ಪಿಯೋ ಕಾರ್ ಯಾರದ್ದು? ಕಾರ್&zwnj;ನಲ್ಲಿ ಬಂದವರು ಯಾರು ಎಂಬುದನ್ನು ಶೀಘ್ರದಲ್ಲಿಯೇ ಪತ್ತೆ ಮಾಡಲಾಗುವುದು. ದೂರು ದಾಖಲಿಸಿದ್ದ ಕೃಷ್ಣಾನಂದ ವೇರ್ಣೇಕರ್ ವಿರುದ್ಧ ಚಾರ್ಜ್&zwnj;ಶೀಟ್ ಫೈಲ್ ಮಾಡಲಾಗುತ್ತದೆ ಎಂದು ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/belagavi-police-have-arrested-owner-of-gold-shop-krishnananda-vernekar-mrq-w2a8eno"/>
        </item>
        <item>
            <title><![CDATA[ಬಾತ್‌ರೂಮ್‌ನಲ್ಲೇ ಅಡಗಿದ್ದ ಚಿರತೆ, ಸಾವಿನ ದವಡೆಯಿಂದ ಪಾರಾದ ಬೆಳಗಾವಿ ಮಹಿಳೆ!]]></title>
            <link>https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg</link>
            <guid isPermaLink="true">https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg</guid>
            <pubDate>Mon, 27 Jul 2026 21:17:32 +0530</pubDate>
            <description><![CDATA[&lt;p&gt;ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ, ಮನೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅಡಗಿದ್ದ ಚಿರತೆಯೊಂದು ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj42423z1yjkkh9dv8bpm6k,imgname-leopard-hides-in-bathroom-1785167155267.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.27): &lt;/strong&gt;ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಅಡ್ಡಾಡುತ್ತಿದ್ದ ಚಿರತೆಯೊಂದು ರಾತ್ರೋರಾತ್ರಿ ಮನೆಯೊಂದರ ಒಳಗೆ ಅಡಗಿ ಕುಳಿತು, ಭಾನುವಾರ ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆಯೇ ದಾಳಿಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ತೀವ್ರವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಗುಂಜಿ ಗ್ರಾಮದ ಸ್ಟೇಷನ್ ರಸ್ತೆಯಲ್ಲಿರುವ ಪ್ರಸಾದ್ ಗಾಡಿ ಎಂಬುವವರ ಮನೆಗೆ ಸೇರಿಕೊಂಡಿದ್ದ ಹೊಸದಾಗಿ ನಿರ್ಮಿಸಲಾದ ಬಾತ್&zwnj;ರೂಮ್&zwnj; ಒಳಗೆ ರಾತ್ರಿ ವೇಳೆಯಲ್ಲಿ ನುಗ್ಗಿದ್ದ ಚಿರತೆ, ಬೆಳಗಿನವರೆಗೂ ಅಲ್ಲೇ ಯಾರಿಗೂ ತಿಳಿಯದಂತೆ ಅಡಗಿಕೊಂಡಿತ್ತು. ಚಿರತೆ ಅಡಗಿರುವುದು ತಿಳಿಯದ ಕುಟುಂಬಸ್ಥರು ತಮ್ಮ ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರಸಾದ್ ಗಾಡಿ ಅವರು ಕೊಟ್ಟಿಗೆಯಲ್ಲಿದ್ದ ಹಸು ಹಾಗೂ ಎಮ್ಮೆಗಳನ್ನು ಹೊರಗೆ ತಂದು ಕಟ್ಟಿದ್ದರು. ಈ ವೇಳೆ ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಮಕ್ಕಳು ಮನೆಯ ಅಂಗಳದಲ್ಲೇ ಓಡಾಡುತ್ತಿದ್ದರು. ಕೆಲವು ಮಕ್ಕಳು ಚಿರತೆ ಅಡಗಿದ್ದ ಜಾಗದಿಂದ ಕೇವಲ ಕೆಲವೇ ಅಡಿಗಳ ಅಂತರದಲ್ಲಿ ಬಟ್ಟೆ ತೊಳೆಯುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕೂದಲೆಳೆಯ ಅಂತರದಲ್ಲಿ ಪಾರಾದ ಗೃಹಿಣಿ!&lt;/strong&gt;&lt;/h2&gt;&lt;p&gt;ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಪ್ರಸಾದ್ ಗಾಡಿ ಅವರ ಪತ್ನಿ ಹುಲ್ಲು ತರಲು ಶೌಚಾಲಯದ ಬಳಿ ಹೋದಾಗ ಭಾರಿ ದುರಂತವೊಂದು ತಪ್ಪಿದೆ. ಮಹಿಳೆ ಒಳಗೆ ಕೈಚಾಚುತ್ತಿದ್ದಂತೆಯೇ ಅಡಗಿದ್ದ ಚಿರತೆ ಏಕಾಏಕಿ ಗುರ್ Gurr ಎಂದು ಘರ್ಜಿಸಿ, ಆಕೆಯತ್ತ ಪಂಜ ಚಾಚಿ ದಾಳಿಗೆ ಯತ್ನಿಸಿದೆ. ತಕ್ಷಣವೇ ಸಮಯಪ್ರಜ್ಞೆಯಿಂದ ಹಿಂದೆ ಜಿಗಿದ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಕೂಡಲೇ ಮನೆಯವರನ್ನು ಮತ್ತು ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ. ತಕ್ಷಣವೇ ಶೌಚಾಲಯದಿಂದ ಹೊರಬಂದ ಚಿರತೆ, ಕಾಂಪೌಂಡ್ ಗೋಡೆ ಜಿಗಿದು ಹತ್ತಿರದ ಪೊದೆಗಳೊಳಗೆ ಓಡಿ ಕಣ್ಮರೆಯಾಗಿದೆ.&lt;/p&gt;&lt;p&gt;ಹಸು, ಎಮ್ಮೆ ಹಾಗೂ ಕರುಗಳನ್ನು ಕಟ್ಟಿದ್ದ ತೆರೆದ ಕೊಟ್ಟಿಗೆಯ ಪಕ್ಕದಲ್ಲೇ ಇಡೀ ರಾತ್ರಿ ಕಳೆದಿದ್ದರೂ, ಚಿರತೆ ಯಾವುದೇ ಜಾನುವಾರುಗಳ ಮೇಲೆ ದಾಳಿ ನಡೆಸದಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಿರತೆ ತುಂಬಾ ಕ್ಷೀಣವಾಗಿ ಹಾಗೂ ನಿಶಕ್ತವಾಗಿ ಕಂಡುಬಂದಿದ್ದು, ಕಾಂಪೌಂಡ್ ಗೋಡೆ ಏರುವಾಗ ತೂರಾಡಿದೆ. ಹೀಗಾಗಿ ಚಿರತೆಗೆ ಗಾಯಗಳಾಗಿರಬಹುದು ಅಥವಾ ಅನಾರೋಗ್ಯದಿಂದ ಬಳಲುತ್ತಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೋನು ಅಳವಡಿಸಿದ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕಳೆದ ಹದಿನೈದು ದಿನಗಳಿಂದ ಗುಂಜಿ ಗ್ರಾಮದ ಮೌಳಿ ದೇವಸ್ಥಾನ ಹಾಗೂ ಗ್ರಾಮ ಪಂಚಾಯತಿ ಕಚೇರಿ ಸೇರಿದಂತೆ ವಿವಿಧೆಡೆ ಈ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿತ್ತು. ಈಗಾಗಲೇ ಇದು ಕೆಲವು ಬೀದಿ ನಾಯಿಗಳನ್ನು ಕೊಂದಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಪಾಯವನ್ನುಂಟುಮಾಡಬಹುದು ಎಂದು ಗ್ರಾಮಸ್ಥರು ಭೀತಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಚಿರತೆಯನ್ನು ತಕ್ಷಣವೇ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಬಸವರಾಜ ವಲದ ಪ್ರತಿಕ್ರಿಯಿಸಿ, &quot;ಸ್ಥಳದಲ್ಲಿ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ, ಕಣ್ಗಾವಲು ಹೆಚ್ಚಿಸಲಾಗಿದ್ದು ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸಲಾಗಿದೆ,&quot; ಎಂದು ತಿಳಿಸಿದ್ದಾರೆ. ಅಲ್ಲದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಮತ್ತು ಚಿರತೆ ಮತ್ತೆ ಎಲ್ಲಾದರೂ ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>belagavi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg"/>
        </item>
    </channel>
</rss>
