<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 26 Aug 2026 06:55:01 +0530</lastBuildDate>
        <atom:link href="https://kannada.asianetnews.com/rss/belagavi" rel="self" type="application/rss+xml"/>
        <item>
            <title><![CDATA[ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್; ಅ.ನಲ್ಲಿ 3 ರೈಲುಗಳ ಸಂಚಾರ ಬಂದ್]]></title>
            <link>https://kannada.asianetnews.com/karnataka-districts/trial-run-of-the-vande-bharat-express-train-between-sakleshpur-subrahmanya-route-will-be-held-from-august-18-to-22-mrq/articleshow-0ye1urb</link>
            <guid isPermaLink="true">https://kannada.asianetnews.com/karnataka-districts/trial-run-of-the-vande-bharat-express-train-between-sakleshpur-subrahmanya-route-will-be-held-from-august-18-to-22-mrq/articleshow-0ye1urb</guid>
            <pubDate>Wed, 12 Aug 2026 07:45:58 +0530</pubDate>
            <description><![CDATA[ಮೈಸೂರು ವಿಭಾಗದಲ್ಲಿ ಹಳಿ ನಿರ್ವಹಣೆ ಕಾಮಗಾರಿಯಿಂದಾಗಿ ಅಕ್ಟೋಬರ್ ಮತ್ತು ನವೆಂಬರ್&zwnj;ನಲ್ಲಿ ಮಂಗಳೂರು-ಬೆಂಗಳೂರು ನಡುವಿನ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ, ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzsvxmpme1qkz9hdg33davq9,imgname-vande-bharat-express-railway-1786500797140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಮೈಸೂರು ವಿಭಾಗದ ಸಿರಿಬಾಗಿಲು ಮತ್ತು ಯಡಕುಮೇರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಗಾಗಿ ಲೈನ್ ಬ್ಲಾಕ್ ಇರುವುದರಿಂದ ಮಂಗಳೂರು-ಬೆಂಗಳೂರು (Bengaluru To Mangaluru Trains) ನಡುವೆ ಅಕ್ಟೋಬರ್&zwnj;, ನವೆಂಬರ್&zwnj;ನಲ್ಲಿ ಮೂರು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರದ್ದುಗೊಂಡಿರುವ ಮೂರು ರೈಲುಗಳ ಮಾಹಿತಿ&lt;/strong&gt;&lt;/h2&gt;&lt;p&gt;&lt;strong&gt;ರೈಲು ಸಂಖ್ಯೆ 16575&lt;/strong&gt; ಯಶವಂತಪುರ - ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 4, 6, 8, 11, 13, 15, 22, 25, 27, 29, ನವೆಂಬರ್&zwnj; 1, 3ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 5, 7, 9, 12, 14, 16, 23, 26, 28, 30, ನವೆಂಬರ್&zwnj; 2, 4 ರಂದು (ಒಟ್ಟು 12 ದಿನಗಳು) ರದ್ದುಗೊಳ್ಳಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 16515&lt;/strong&gt; ಯಶವಂತಪುರ - ಕಾರವಾರ ಟ್ರೈ-ವೀಕ್ಲಿ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 5, 7, 9, 12, 14, 21, 23, 26, 28, 30, ನವೆಂಬರ್&zwnj; 2ರಂದು ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16516 ಕಾರವಾರ - ಯಶವಂತಪುರ ಟ್ರೈ-ವೀಕ್ಲಿ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 6, 8, 10, 13, 15, 22, 24, 27, 29, 31, ನವೆಂಬರ್&zwnj; 3ರಂದು (ಒಟ್ಟು 11 ದಿನಗಳು) ರದ್ದುಗೊಳ್ಳಲಿದೆ.&lt;/p&gt;&lt;p&gt;&lt;strong&gt;ರೈಲು ಸಂಖ್ಯೆ 16539&lt;/strong&gt; ಯಶವಂತಪುರ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 10, 24 ಮತ್ತು 31 ರಂದು (3 ದಿನಗಳು) ರಂದು ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ - ಯಶವಂತಪುರ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ ರೈಲು ಅಕ್ಟೋಬರ್&zwnj; 11, 25, ನವೆಂಬರ್&zwnj; 1ರಂದು (3 ದಿನಗಳು) ರಂದು ರದ್ದುಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;18 ರಿಂದ &lsquo;ವಂದೇ ಭಾರತ್&zwnj; ರೈಲು&rsquo;ಪ್ರಾಯೋಗಿಕ ಸಂಚಾರ&lt;/strong&gt;&lt;/h3&gt;&lt;p&gt;ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗ (Sakleshpur-Subrahmanya) ನಡುವೆ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲಿನ ಪ್ರಾಯೋಗಿಕ ಸಂಚಾರ ಆ.18ರಿಂದ 22ರ ವರೆಗೆ ನಡೆಯಲಿದೆ. ಈ ಮಾರ್ಗದಲ್ಲಿ ಹಾದುಹೋಗುವ ಘಾಟ್&zwnj; ಪ್ರದೇಶದಲ್ಲಿ ಗಂಟೆಗೆ 10 ಕಿ.ಮೀ. ಅಥವಾ ಅದಕ್ಕಿಂತ ತುಸು ಹೆಚ್ಚಿನ ವೇಗದಲ್ಲಿ ವಂದೇ ಭಾರತ್&zwnj; ರೈಲು ಸಂಚರಿಸಲು ಪ್ರಯತ್ನಿಸಲಾಗುತ್ತದೆ. ಇದು ಪರೀಕ್ಷಾರ್ಥ ರೈಲು ಓಡಾಟ ಆಗಿರುವುದರಿಂದ ರೈಲ್ವೆ ಸುರಕ್ಷತಾ ಆಯುಕ್ತರು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು ಅಧಿಕೃತ ಓಡಾಟ ಆರಂಭಿಸಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಆ.11ರಿಂದ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್, 57 ಸುರಂಗ, 226 ಸೇತುವೆ 108 ವಕ್ರಾಕೃತಿ ತಿರುವು ದಾಟಲಿದೆ ರೈಲು!&lt;/strong&gt;&lt;/p&gt;&lt;p&gt;ಮೂಲಗಳ ಪ್ರಕಾರ ವಂದೇ ಭಾರತ್&zwnj; ಎಕ್ಸ್&zwnj;ಪ್ರೆಸ್&zwnj; ರೈಲು (Vande Bharat Express Railway) ಸಕಲೇಶಪುರದಿಂದ ಮಂಗಳೂರು ಸೆಂಟ್ರಲ್&zwnj; ವರೆಗೆ ಸಂಚರಿಸುವ ಸಾಧ್ಯತೆ ಇದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಿಲ್ಲ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರೈಲು ಪ್ರಯಾಣಿಕರ ಗಮನಕ್ಕೆ: ಹಳಿ ನಿರ್ವಹಣೆ ನಿಮಿತ್ತ ಬೆಂಗಳೂರಿನ ಹಲವು ರೈಲುಗಳ ಸಂಚಾರ ಭಾಗಶಃ ರದ್ದು!&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/trial-run-of-the-vande-bharat-express-train-between-sakleshpur-subrahmanya-route-will-be-held-from-august-18-to-22-mrq/articleshow-0ye1urb"/>
        </item>
        <item>
            <title><![CDATA[ನಾಶದ ಅಂಚಿನಲ್ಲಿದ್ದ ಐತಿಹಾಸಿಕ ಕಲ್ಯಾಣಿಗೆ ಮರುಜೀವ: 300 ವರ್ಷಗಳ ಹಳೆಯ ಶಿವಲಿಂಗದಾಕಾರದ ಬಾವಿ ಕಂಡು ಬೆರಗಾದ ಜನ!]]></title>
            <link>https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii</link>
            <guid isPermaLink="true">https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii</guid>
            <pubDate>Sun, 26 Jul 2026 13:47:03 +0530</pubDate>
            <description><![CDATA[&lt;p&gt;ಬೆಳಗಾವಿಯ ಮುತಗಾ ಗ್ರಾಮದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯನ್ನು ಸ್ವಯಂಸೇವಕರು 30 ವರ್ಷಗಳ ಬಳಿಕ ಕಸ ಮತ್ತು ಹೂಳಿನಿಂದ ಹೊರತೆಗೆದು ಪುನಃಸ್ಥಾಪಿಸಿದ್ದಾರೆ. 80 ಅಡಿ ಆಳ, 53 ಕಲ್ಲಿನ ಮೆಟ್ಟಿಲುಗಳು ಹಾಗೂ ಶಿವಲಿಂಗದಂತಿರುವ ವಿನ್ಯಾಸ ಈ ಐತಿಹಾಸಿಕ ಬಾವಿಯನ್ನು ಹೊಸ ಪ್ರವಾಸಿ ಆಕರ್ಷಣೆಯನ್ನಾಗಿ ಮಾಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyeq7z1tb5eejpwq8kfx33kv,imgname-the-well-is-nearly-300-years-old-1785053051962.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ನಾಟಕದ ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದಲ್ಲಿ ಸುಮಾರು 300 ವರ್ಷಗಳಷ್ಟು ಹಳೆಯದಾದ ಮೆಟ್ಟಿಲುಬಾವಿಯೊಂದು ಸ್ವಯಂಸೇವಕರ ನಿರಂತರ ಪರಿಶ್ರಮದಿಂದ ಮತ್ತೆ ತನ್ನ ಮೂಲ ರೂಪದಲ್ಲಿ ಹೊರಹೊಮ್ಮಿದೆ. ಸುಮಾರು ಮೂರು ದಶಕಗಳಿಂದ ಕಸ, ಮಣ್ಣು, ಹೂಳು ಮತ್ತು ನಿರ್ಮಾಣ ತ್ಯಾಜ್ಯದಡಿ ಹೂತುಹೋಗಿದ್ದ ಈ ಐತಿಹಾಸಿಕ ಬಾವಿ ಈಗ ಸ್ಥಳೀಯರಷ್ಟೇ ಅಲ್ಲ, ಇತಿಹಾಸಾಸಕ್ತರ ಗಮನವನ್ನೂ ಸೆಳೆಯುತ್ತಿದೆ.&lt;/p&gt;&lt;p&gt;&lt;strong&gt;ಮೂರು ದಶಕಗಳ ಬಳಿಕ ಮರುಜೀವ ಪಡೆದ ಮೆಟ್ಟಿಲುಬಾವಿ:&lt;/strong&gt;&lt;/p&gt;&lt;p&gt;ಮುತಗಾ ಗ್ರಾಮದ ಕಾಂಚವೀರ ನಗರದಲ್ಲಿರುವ ಈ ಮೆಟ್ಟಿಲುಬಾವಿ ಹಲವು ವರ್ಷಗಳ ನಿರ್ಲಕ್ಷ್ಯದಿಂದ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಸ್ಥಳೀಯ ಸ್ವಯಂಸೇವಕರು, ಪ್ಯಾಸ್ ಫೌಂಡೇಶನ್, ರಾಷ್ಟ್ರೀಯ ಸೇವಾ ಯೋಜನೆ (NSS) ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕೈಜೋಡಿಸಿ ಬಾವಿಯೊಳಗಿನ ಕಸ, ಹೂಳು ಮತ್ತು ಅವಶೇಷಗಳನ್ನು ತೆರವುಗೊಳಿಸಿದರು. ಹಲವು ದಿನಗಳ ಶ್ರಮದ ನಂತರ ಬಾವಿಯ ಮೂಲ ವಿನ್ಯಾಸ ಮತ್ತೆ ಗೋಚರಿಸಿತು.&lt;/p&gt;&lt;p&gt;&lt;strong&gt;53 ಮೆಟ್ಟಿಲು, 80 ಅಡಿ ಆಳ... ಅಚ್ಚರಿ ಮೂಡಿಸಿದ ರಚನೆ!&lt;/strong&gt;&lt;/p&gt;&lt;p&gt;ಈ ಐತಿಹಾಸಿಕ ಬಾವಿ ಸುಮಾರು 80 ಅಡಿ ಆಳವಿದ್ದು, ಅದರೊಳಗೆ ಇಳಿಯಲು 53 ಕಲ್ಲಿನ ಮೆಟ್ಟಿಲುಗಳಿವೆ. ಸ್ವಚ್ಛತಾ ಕಾರ್ಯದ ವೇಳೆ ಬಾವಿಯ ತಳದಲ್ಲಿ ನೈಸರ್ಗಿಕ ನೀರಿನ ಬುಗ್ಗೆಗಳು ಪತ್ತೆಯಾಗಿದ್ದು, ಇಂದು ಮತ್ತೆ ಶುದ್ಧ ನೀರು ಹರಿಯುತ್ತಿದೆ. ಕಲ್ಲಿನ ಕಂಬಗಳು, ಕಮಾನುಗಳು ಮತ್ತು ಕೆತ್ತನೆಗಳು ಆ ಕಾಲದ ಶಿಲ್ಪಕಲೆಯ ವೈಭವವನ್ನು ಅನಾವರಣಗೊಳಿಸುತ್ತವೆ.&lt;/p&gt;&lt;p&gt;&lt;strong&gt;ಮೇಲಿನಿಂದ ನೋಡಿದರೆ ಶಿವಲಿಂಗದ ಆಕಾರ!&lt;/strong&gt;&lt;/p&gt;&lt;p&gt;ಡ್ರೋನ್ ದೃಶ್ಯಗಳಲ್ಲಿ ಈ ಮೆಟ್ಟಿಲುಬಾವಿಯ ವಿನ್ಯಾಸ ಶಿವಲಿಂಗದ ಆಕಾರವನ್ನು ಹೋಲುತ್ತದೆ ಎಂಬುದು ಅನೇಕರ ಗಮನ ಸೆಳೆದಿದೆ. ಈ ವಿಶಿಷ್ಟ ವಿನ್ಯಾಸವೇ ಈಗ ಪ್ರವಾಸಿಗರು ಮತ್ತು ಛಾಯಾಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.&lt;/p&gt;&lt;p&gt;&lt;strong&gt;ನೀರಿನ ಸಂರಕ್ಷಣೆಯ ಐತಿಹಾಸಿಕ ಪರಂಪರೆ:&lt;/strong&gt;&lt;/p&gt;&lt;p&gt;ಇತಿಹಾಸಕಾರರ ಪ್ರಕಾರ, ಈ ಬಾವಿ ಆದಿಲ್ ಶಾಹಿ ಅಥವಾ ಆರಂಭಿಕ ಮರಾಠಾ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಗಿರಬಹುದು. ಅಂದಿನ ದಿನಗಳಲ್ಲಿ ಮೆಟ್ಟಿಲುಬಾವಿಗಳು ಕೇವಲ ನೀರಿನ ಮೂಲವಾಗಿರದೆ, ಸಮುದಾಯದ ಸಭೆ, ವಿಶ್ರಾಂತಿ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದ್ದವು. ಭಾರತದ ಅನೇಕ ಭಾಗಗಳಲ್ಲಿ ಇಂತಹ ಬಾವಿಗಳು ನೀರಿನ ಸಂರಕ್ಷಣೆ ಹಾಗೂ ಮಳೆನೀರು ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವು.&lt;/p&gt;&lt;p&gt;&lt;strong&gt;ಪರಂಪರೆ ಉಳಿಸುವಲ್ಲಿ ಸ್ವಯಂಸೇವಕರ ಪಾತ್ರ ಮಾದರಿ..!&lt;/strong&gt;&lt;/p&gt;&lt;p&gt;ಈ ಪುನಃಸ್ಥಾಪನೆ ಸರ್ಕಾರದ ಯೋಜನೆಯಷ್ಟೇ ಅಲ್ಲ, ಸ್ಥಳೀಯ ಸಮುದಾಯದ ಒಗ್ಗಟ್ಟಿನ ಶ್ರಮಕ್ಕೂ ಉತ್ತಮ ಉದಾಹರಣೆಯಾಗಿದೆ. ಇಂತಹ ಐತಿಹಾಸಿಕ ಕಟ್ಟಡಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಬಹುದು ಎಂಬ ಸಂದೇಶವನ್ನು ಈ ಕಾರ್ಯ ನೀಡಿದೆ.&lt;/p&gt;&lt;p&gt;&lt;strong&gt;ಭಾರತದಾದ್ಯಂತ ಮೆಟ್ಟಿಲುಬಾವಿಗಳ ಪುನರುಜ್ಜೀವನ..!&lt;/strong&gt;&lt;/p&gt;&lt;p&gt;ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರಾಚೀನ ಮೆಟ್ಟಿಲುಬಾವಿಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ಹೊಸ ಚೈತನ್ಯ ಸಿಕ್ಕಿದೆ. ನೀರಿನ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಪರಂಪರೆ ರಕ್ಷಣೆಯ ದೃಷ್ಟಿಯಿಂದ ಇವುಗಳಿಗೆ ಮತ್ತೆ ಮಹತ್ವ ದೊರೆಯುತ್ತಿದೆ.&lt;/p&gt;]]></content:encoded>
            <category>belagavi</category>
            <dc:creator>Chandrashekar GS</dc:creator>
            <atom:link href="https://kannada.asianetnews.com/karnataka-districts/300-year-old-stepwell-unearthed-in-karnataka-belagavi-after-decades-under-garbage/articleshow-28ugvii"/>
        </item>
        <item>
            <title><![CDATA[Belagavi: ಚಿಕ್ಕೋಡಿಯಲ್ಲಿ ಶವ ತೆಗೆಯಲು ಕೋಳಿ ಬಲಿ ನೀಡಲು ಮುಂದಾದ್ರಾ ಅಧಿಕಾರಿಗಳು?]]></title>
            <link>https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois</link>
            <guid isPermaLink="true">https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois</guid>
            <pubDate>Fri, 14 Aug 2026 12:47:11 +0530</pubDate>
            <description><![CDATA[ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾದ ವ್ಯಕ್ತಿಯ ಶವವನ್ನು ಹೊರತೆಗೆಯುವ ಮೊದಲು ಅಧಿಕಾರಿಗಳು ಕೋಳಿ ಬಲಿ ನೀಡಲು ಮುಂದಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಾಗ ಈ ಪ್ರಯತ್ನವನ್ನು ಕೈಬಿಡಲಾಗಿದ್ದು, ಈ ಘಟನೆಯು ಸರ್ಕಾರಿ ಕಾರ್ಯಾಚರಣೆಯಲ್ಲಿನ ಮೂಢನಂಬಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzj2678jedqm0y2cczs8d4k,imgname-chikkodi-1786691786984.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಹೊರತೆಗೆಯುವ ಕಾರ್ಯಾಚರಣೆಗೆ ಮುನ್ನ ಕೋಳಿ ಬಲಿ ನೀಡಲು ಪೊಲೀಸರು ಮತ್ತು ತಾಲೂಕಾಡಳಿತ ಮುಂದಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ ನೇತೃತ್ವದಲ್ಲಿ ಹೂತಿದ್ದ ಶವ ಹೊರತೆಗೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿತ್ತು.&lt;/p&gt;&lt;h2&gt;&lt;strong&gt;ಕೋಳಿ ಬಲಿ ನೀಡಲು ಮುಂದಾದ ಆರೋಪ&lt;/strong&gt;&lt;/h2&gt;&lt;p&gt;ಈ ವೇಳೆ ಶವ ಅಗೆಯುವ ಮೊದಲು ಕೋಳಿ ಬಲಿ ನೀಡಲು ಮುಂದಾಗಿದ್ದು, ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಬಳಿಕ ಕೋಳಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ರಾಘು ಗಾವಡೆ (40) ಅವರನ್ನು ಕೊಲೆ ಮಾಡಿ ಅವರದೇ ಜಮೀನಿನಲ್ಲಿ ಹೂತು ಹಾಕಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಶವ ಹೊರತೆಗೆಯುವ ಕಾರ್ಯ ಕೈಗೊಳ್ಳಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಳಗಾವಿ: ಸುಮಾರು 9 km ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಆಗ್ರಹ&lt;/strong&gt;&lt;/p&gt;&lt;p&gt;ವೈಜ್ಞಾನಿಕ ತನಿಖೆ ಮತ್ತು ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಸರ್ಕಾರಿ ಇಲಾಖೆಯ ಕಾರ್ಯಾಚರಣೆ ವೇಳೆ ಪ್ರಾಣಿ ಬಲಿ ನೀಡುವಂತಹ ಮೂಢನಂಬಿಕೆಗೆ ಮೊರೆ ಹೋಗಲು ಯತ್ನಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್&zwnj;ಗಳಿಗೆ ಚಾಲನೆ; ಸಮಯ ಈ ರೀತಿ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois"/>
        </item>
        <item>
            <title><![CDATA[ಬೆಳಗಾವಿ: ಪಟಾಕಿಯ ಸದ್ದಿಗೆ ಹೆದರಿ ಕಾಲುವೆಗೆ ಬಿದ್ದು 80 ಕುರಿಗಳ ಸಾವು! ಘಟನೆ ನಡೆದಿದ್ದು ಹೇಗೆ?]]></title>
            <link>https://kannada.asianetnews.com/karnataka-districts/belagavi-80-sheep-die-after-falling-into-a-canal-frightened-by-the-sound-of-firecrackers-rav/articleshow-41v3rfl</link>
            <guid isPermaLink="true">https://kannada.asianetnews.com/karnataka-districts/belagavi-80-sheep-die-after-falling-into-a-canal-frightened-by-the-sound-of-firecrackers-rav/articleshow-41v3rfl</guid>
            <pubDate>Wed, 26 Aug 2026 06:54:56 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ಶ್ರೀ ಕುರಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ವೇಳೆ ಪಟಾಕಿ ಸದ್ದಿಗೆ ಬೆದರಿದ ಸುಮಾರು 80 ಕುರಿಗಳು ಸಮೀಪದ ಕಾಲುವೆಗೆ ಹಾರಿ ದಾರುಣವಾಗಿ ಸಾವನ್ನಪ್ಪಿವೆ. ಈ ದುರ್ಘಟನೆಯಿಂದ ಕುರಿಗಾಹಿಗಳಿಗೆ ಸುಮಾರು ₹20 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0xtkny4183t0fj2vrhyvem3,imgname-----------------------2026-08-26t064748.512-1787707381700.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೂಡಲಗಿ(ಆ.26): &lt;/strong&gt;ಪಟಾಕಿ ಸದ್ದಿಗೆ ಬೆದರಿ ಕಾಲುವೆಗೆ ಹಾರಿ 80 ಕುರಿಗಳು ದಾರುಣ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದಿದೆ.&lt;/p&gt;&lt;h2&gt;ಶ್ರೀ ಕುರಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದಲ್ಲಿ ನಡೆದ ದುರ್ಘಟನೆ&lt;/h2&gt;&lt;p&gt;ಶ್ರಾವಣ ಮಾಸದ ಪ್ರಯುಕ್ತ ಭಾನುವಾರ ರಾತ್ರಿ ಪ್ರತಿವರ್ಷದಂತೆ ಈ ವರ್ಷವೂ ಕುರಿಗಾಹಿಗಳು ಒಟ್ಟಾಗಿ ಸೇರಿ ಶ್ರೀ ಕುರಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಿದ್ದರು.ಜಾತ್ರೆಯ ಸಂದರ್ಭದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಒಟ್ಟಿಗೆ ಸೇರಿಸಿಕೊಂಡಿದ್ದರು. ಈ ವೇಳೆ ಪಟಾಕಿ ಸಿಡಿಸಿದ ಪರಿಣಾಮ ಕುರಿಗಳು ಭಯಭೀತಗೊಂಡು ದಿಕ್ಕಾಪಾಲಾಗಿ ಓಡಿದವು. ಅಲ್ಲದೆ, ಸಮೀಪದಲ್ಲಿದ್ದ ಕಾಲುವೆಗೆ ಕುರಿಗಳು ಬಿದ್ದು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಸುಮಾರು ₹20 ಲಕ್ಷ ಮೌಲ್ಯದ 75 ಕುರಿಗಳು ಹಾಗೂ 5 ಕುರಿಮರಿ ಮೃತಪಟ್ಟಿವೆ ಎನ್ನಲಾಗಿದೆ.&lt;/p&gt;&lt;p&gt;ನೋಡ ನೋಡುತ್ತಿದ್ದಂತೆ ನಡೆದ ಈ ದುರಂತ ಘಟನೆಯಲ್ಲಿ ಕುರಿಗಾಹಿಗಳು ಆಘಾತಕ್ಕೊಳಗಾಗಿದ್ದಾರೆ. ಈ ಹಿಂದೆ ಎಂದೂ ಈ ರೀತಿ ಆಗಿರಲಿಲ್ಲ. ಪಟಾಕಿ ಸದ್ದಿ ಕುರಿಗಳು ಹೆದರಿ ಕಾಲುವೆಗೆ ಹಾರಿ ಮೃತಪಟ್ಟಿರುವುದು ಕುರಿಗಾಹಿಗಳಿಗೆ ಅಪಾರ ನಷ್ಟ ಸಂಭವಿಸಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-80-sheep-die-after-falling-into-a-canal-frightened-by-the-sound-of-firecrackers-rav/articleshow-41v3rfl"/>
        </item>
        <item>
            <title><![CDATA[ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್‌ಗಳಿಗೆ ಚಾಲನೆ; ಸಮಯ  ಈ ರೀತಿ]]></title>
            <link>https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk</link>
            <guid isPermaLink="true">https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk</guid>
            <pubDate>Mon, 03 Aug 2026 08:30:16 +0530</pubDate>
            <description><![CDATA[ಶಾಸಕ ವಿಶ್ವಾಸ ವೈದ್ಯ ಅವರು ಸವದತ್ತಿಯಿಂದ ಬೆಂಗಳೂರಿಗೆ ಪ್ರಯಾಣಿಸುವ ನೂತನ 'ಪಲ್ಲಕ್ಕಿ' ನಾನ್ ಎಸಿ ಸ್ಲೀಪರ್ ಬಸ್&zwnj;ಗಳಿಗೆ ಚಾಲನೆ ನೀಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವೆಯನ್ನು ಆರಂಭಿಸಲಾಗಿದ್ದು, ಇದು ಸುರಕ್ಷಿತ ಹಾಗೂ ಸುಖಕರ ಪ್ರಯಾಣವನ್ನು ಒದಗಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz2s0zbcrg5pg3gv39r9035e,imgname-nwkrtc-1785726008684.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ರಾಜ್ಯ ರಾಜಧಾನಿ ಬೆಂಗಳೂರಿಗೆ ಸವದತ್ತಿಯಿಂದ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ನೂತನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.&lt;/p&gt;&lt;h2&gt;&lt;strong&gt;ನೂತನ ಪಲ್ಲಕ್ಕಿ ಎರಡು ಬಸ್&zwnj;ಗಳಿಗೆ ಪೂಜೆ&lt;/strong&gt;&lt;/h2&gt;&lt;p&gt;ನಗರದ ಸಾರಿಗೆ ಘಟಕದಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ನೂತನ ಪಲ್ಲಕ್ಕಿ ಎರಡು ಬಸ್&zwnj;ಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು. ಸುರಕ್ಷಿತ ಹಾಗೂ ಸುಖಕರ ಪ್ರಯಾಣದ ಹಿತದೃಷ್ಠಿಯಿಂದ ಪ್ರಯಾಣಿಕರಿಗೆ ಈ ನೂತನ ಪಲ್ಲಕ್ಕಿ ಬಸ್&zwnj;ಗಳನ್ನು ಸವದತ್ತಿ ಘಟಕಕ್ಕೆ ನೀಡಲಾಗಿದ್ದು, ನಿತ್ಯ ಬೆಂಗಳೂರಿಗೆ ಪ್ರಯಾಣಿಸುವ ಈ ಬಸ್&zwnj;ಗಳ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳಬೇಕೆಂದರು.&lt;/p&gt;&lt;p&gt;ಸಾರಿಗೆ ಘಟಕ ವ್ಯವಸ್ಥಾಪಕ ಅರುಣ ಕಿಟಕಿ ಮಾತನಾಡಿ, ಸವದತ್ತಿ ಘಟಕಕ್ಕೆ ಹೊಸದಾಗಿ ಸ್ಲೀಪರ್ ಬಸ್&zwnj;ಗಳು ಬಂದಿರುವುದು ಸಂತಸದ ವಿಷಯವಾಗಿದ್ದು, ಪ್ರತಿನಿತ್ಯ ಸವದತ್ತಿಯಿಂದ ರಾತ್ರಿ ೯ ಗಂಟೆಗೆ ಬೆಂಗಳೂರಿಗೆ ಬಿಡಲಾಗುತ್ತಿದ್ದು, ಬೆಂಗಳೂರಿನಿಂದ ರಾತ್ರಿ ೧೦ ಗಂಟೆಗೆ ಬಿಟ್ಟು ಸವದತ್ತಿಗೆ ಬೆಳಿಗ್ಗೆ ತಲುಪುತ್ತವೆ. ಈ ಭಾಗದಲ್ಲಿನ ಸಾರ್ವಜನಿಕರ ಬೇಡಿಕೆಯಂತೆ ನೂತನ ಬಸ್&zwnj;ಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Exclusive: ಕರಾವಳಿ ವಿವಾದದಿಂದ ಕಲಿತ ಪಾಠ ಏನು? ಪ್ರಜ್ವಲ್ ದೇವರಾಜ್ ಮನದಾದಳ ಮಾತು&lt;/strong&gt;&lt;/p&gt;&lt;p&gt;ಗಿರೀಶ ಮುನವಳ್ಳಿ, ಡಾ.ವೈ.ಎಮ್.ಯಾಕೊಳ್ಳಿ, ಮಲ್ಲಿಕಾರ್ಜುನ ಬೇವೂರ, ಬಿ.ಎನ್.ಪ್ರಭುನವರ, ಪ್ರವೀಣ ರಾಮಪ್ಪನವರ, ಉಮೇಶ ಗೌಡರ, ಆಸೀಫ್ ಬಾಗೋಜಿಕೊಪ್ಪ, ಎಟಿಎಸ್ ಹನಮಂತ ಭೋವಿ, ಗೌರಮ್ಮ ಬೀಟಕ್ಕನವರ, ನಿಂಗಪ್ಪ ನಡಕಟ್ಟಿನ, ಬಸವರಾಜ ಹಂಚಿನಾಳ ಹಾಗೂ ಸಾರಿಗೆ ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉಳುಮೆ ಮಾಡವಾಗ ಪತ್ತೆಯಾಯ್ತು ಪಾಳೇಗಾರರ ಕಾಲದ ಅಪರೂಪದ ಶಾಸನ; ಆಕಳು ಕೊಂದ ಪಾಪದ ಉಲ್ಲೇಖ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mla-vishwas-vaidya-flagged-off-the-new-pallakki-non-ac-sleeper-buses-that-will-travel-from-savadatti-to-bengaluru-mrq/articleshow-4fg9tnk"/>
        </item>
        <item>
            <title><![CDATA[ಹಿಡಕಲ್‌ ಡ್ಯಾಂ ಭರ್ತಿ: 10 ಗೇಟ್‌ ಮೂಲಕ ನೀರು ಹೊರಕ್ಕೆ, ಕುಡಿಯುವ ನೀರಿನ ಆತಂಕ ದೂರ]]></title>
            <link>https://kannada.asianetnews.com/karnataka-districts/belagavi-s-hidakal-reservoir-is-completely-filled-due-to-continuous-rains-in-the-western-ghats-mrq/articleshow-4ia5oze</link>
            <guid isPermaLink="true">https://kannada.asianetnews.com/karnataka-districts/belagavi-s-hidakal-reservoir-is-completely-filled-due-to-continuous-rains-in-the-western-ghats-mrq/articleshow-4ia5oze</guid>
            <pubDate>Tue, 18 Aug 2026 07:14:29 +0530</pubDate>
            <description><![CDATA[ಪಶ್ಚಿಮ ಘಟ್ಟಗಳಲ್ಲಿನ ನಿರಂತರ ಮಳೆಯಿಂದಾಗಿ ಬೆಳಗಾವಿಯ ಹಿಡಕಲ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ, ಜಲಾಶಯದ 10 ಗೇಟ್&zwnj;ಗಳನ್ನು ತೆರೆದು ಘಟಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m098jk26bkrjd5fj0san8atd,imgname-hidakal-dam-1787017382982.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಸಮೀಪದ ಹಿಡಕಲ್ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಜಲಾಶಯದ ಎಲ್ಲ 10 ಗೇಟ್&zwnj;ಗಳನ್ನು ತೆರೆದು, ಒಟ್ಟು 5 ಸಾವಿರ ಕ್ಯೂಸೆಕ್ ನೀರನ್ನು ಘಟಪ್ರಭಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಘಟಪ್ರಭಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ&lt;/strong&gt;&lt;/h2&gt;&lt;p&gt;ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಘಟಪ್ರಭಾ ನದಿಗೆ ಹಿಡಕಲ್ ಜಲಾಶಯ ಪ್ರಮುಖ ನೀರಿನ ಮೂಲವಾಗಿದೆ. ಸುಮಾರು 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಈ ಬಾರಿ ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಭರ್ತಿಯಾಗಲು ತಡವಾಗಿತ್ತು.&lt;/p&gt;&lt;h3&gt;&lt;strong&gt;ಕುಡಿಯುವ ನೀರಿನ ಆತಂಕ ದೂರ&lt;/strong&gt;&lt;/h3&gt;&lt;p&gt;ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಘಟಪ್ರಭಾ ನದಿ ಹಾಗೂ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಇದೀಗ ಜಲಾಶಯ ಭರ್ತಿಯಾಗಿದೆ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಎದುರಾಗಬಹುದಾಗಿದ್ದ ಕುಡಿಯುವ ನೀರಿನ ಆತಂಕವೂ ದೂರವಾಗಿದೆ. ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು, ರೈತರು ಹಾಗೂ ಜಾನುವಾರುಗಳನ್ನು ನದಿಗೆ ಇಳಿಸದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/belagavi-s-hidakal-reservoir-is-completely-filled-due-to-continuous-rains-in-the-western-ghats-mrq/articleshow-4ia5oze"/>
        </item>
        <item>
            <title><![CDATA[triplets born ಬೆಳಗಾವಿಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 20 ವರ್ಷದ ಯುವತಿ!]]></title>
            <link>https://kannada.asianetnews.com/karnataka-districts/a-woman-name-of-renuka-ganachari-from-belagavi-has-given-birth-to-triplets-rav/articleshow-968ioe3</link>
            <guid isPermaLink="true">https://kannada.asianetnews.com/karnataka-districts/a-woman-name-of-renuka-ganachari-from-belagavi-has-given-birth-to-triplets-rav/articleshow-968ioe3</guid>
            <pubDate>Wed, 12 Aug 2026 05:45:03 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮದ 20 ವರ್ಷದ ರೇಣುಕಾ ಗಣಾಚಾರಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzsmts42jghgync3astdkgnw,imgname-----------------------2026-08-12t052924.820-1786493363330.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಆ.12):&lt;/strong&gt; ಮಹಿಳೆಯೊಬ್ಬರು ಏಕಕಾಲಕ್ಕೆ ಮೂರು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.&lt;/p&gt;&lt;p&gt;ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದಾರೆ. ಮೂಡಲಗಿ ತಾಲೂಕಿನ ಸಂಗನಕೇರಿ ಗ್ರಾಮ(Sanganakeri village)ದ 20 ವರ್ಷದ ರೇಣುಕಾ ಗಣಾಚಾರಿ(Renuka ganachari) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ಗೋಕಾಕ ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ.ಶ್ವೇತಾ ನಾಯಿಕ ಹಾಗೂ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿ ಹೆರಿಗೆ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;ತ್ರಿವಳಿಗೆ ಜನ್ಮ ನೀಡಿದ 5 ವರ್ಷದ ನಂತರ 4 ಮಕ್ಕಳಿಗೆ ಒಮ್ಮೆಗೆ ಜನ್ಮ ನೀಡಿದ ಗಾರೆ ಕೆಲಸ ಮಾಡ್ತಿದ್ದ ತಾಯಿ&lt;/p&gt;&lt;p&gt;ಹೆರಿಗೆಯ ಬಳಿಕ ತಾಯಿ ಹಾಗೂ ಮೂವರು ಮಕ್ಕಳು ಆರೋಗ್ಯವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ತ್ರಿವಳಿ ಮಕ್ಕಳ ಜನನದಿಂದ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;62ರ ಪ್ರಾಯದಲ್ಲಿ ತ್ರಿಬಲ್ ಧಮಾಕ: ತ್ರಿವಳಿಗೆ ಜನ್ಮ ನೀಡಿದ 2ನೇ ಪತ್ನಿ!&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-woman-name-of-renuka-ganachari-from-belagavi-has-given-birth-to-triplets-rav/articleshow-968ioe3"/>
        </item>
        <item>
            <title><![CDATA[ಉತ್ತರ ಕರ್ನಾಟಕ ಮಂದಿಗೆ ಮಸ್ತ್ ಸುದ್ದಿ.. ಮಿಸ್ ಮಾಡ್ದೇ ಓದಲೇಬೇಕಾದ ಸ್ಟೋರಿ ಇದು..!]]></title>
            <link>https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2</link>
            <guid isPermaLink="true">https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2</guid>
            <pubDate>Mon, 03 Aug 2026 17:20:27 +0530</pubDate>
            <description><![CDATA[ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 'ರಾಜರಥ' ಹೆಸರಿನ ನೂತನ ಐಷಾರಾಮಿ ಎಸಿ ಸ್ಲೀಪರ್ ಬಸ್&zwnj;ಗಳನ್ನು ಪರಿಚಯಿಸಿದೆ. ಈ ಬಸ್&zwnj;ಗಳು ಬೆಳಗಾವಿ-ಥಾಣೆ ಮತ್ತು ಚಿಕ್ಕೋಡಿ-ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿದ್ದು, ಖಾಸಗಿ ಬಸ್&zwnj;ಗಳಿಗೆ ಪೈಪೋಟಿ ನೀಡುವ ಮೂಲಕ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz3q7rt657xfcffey4fkwhph,imgname-ksrtc-spl-bus--1--1785757688646.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ/ಚಿಕ್ಕೋಡಿ: &lt;/strong&gt;ಉತ್ತರ ಕರ್ನಾಟಕದ ಸಾರಿಗೆ ಸಂಪರ್ಕದಲ್ಲಿ ಮತ್ತೊಂದು ಕ್ರಾಂತಿ ಆರಂಭವಾಗಿದೆ. ಐರಾವತ ಮತ್ತು ಪಲ್ಲಕ್ಕಿ ಬಸ್&zwnj;ಗಳ ಯಶಸ್ಸಿನ ಬೆನ್ನಲ್ಲೇ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಅತ್ಯಂತ ಐಷಾರಾಮಿ 'ರಾಜರಥ' ಎಸಿ ಸ್ಲೀಪರ್ ಕೋಚ್ ಬಸ್ ಸೇವೆಗೆ ಚಾಲನೆ ನೀಡಿದೆ. ಈ ನೂತನ ಬಸ್&zwnj;ಗಳು ಬೆಳಗಾವಿ, ಚಿಕ್ಕೋಡಿ ಹಾಗೂ ಹುಬ್ಬಳ್ಳಿ ಭಾಗದ ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿವೆ.&lt;/p&gt;&lt;h2&gt;&lt;strong&gt;ಚಿಕ್ಕೋಡಿ ಘಟಕಕ್ಕೆ ನೂತನ ಬಸ್&zwnj;ಗಳ ಸೇರ್ಪಡೆ&lt;/strong&gt;&lt;/h2&gt;&lt;p&gt;ವಾಯುವ್ಯ ಸಾರಿಗೆ ಸಂಸ್ಥೆಯ ಚಿಕ್ಕೋಡಿ ಘಟಕಕ್ಕೆ ಸದ್ಯ ಎರಡು ಅತ್ಯಾಧುನಿಕ 'ರಾಜರಥ' ಬಸ್&zwnj;ಗಳನ್ನು ಸೇರಿಸಲಾಗಿದೆ. ಈ ಪೈಕಿ ಒಂದು ಬಸ್ ಚಿಕ್ಕೋಡಿಯಿಂದ ಬೆಂಗಳೂರಿಗೆ ಕಾರ್ಯನಿರ್ವಹಿಸಿದರೆ, ಮತ್ತೊಂದು ಬಸ್ ಬೆಳಗಾವಿಯಿಂದ ಮಹಾರಾಷ್ಟ್ರದ ಪ್ರಮುಖ ನಗರವಾದ ಥಾಣೆಗೆ ಸಂಪರ್ಕ ಕಲ್ಪಿಸಲಿದೆ. ಸಂಪೂರ್ಣ ಹವಾನಿಯಂತ್ರಿತ (AC) ಮತ್ತು ಆರಾಮದಾಯಕ ಸ್ಲೀಪರ್ ಸೌಲಭ್ಯ ಹೊಂದಿರುವ ಈ ಬಸ್&zwnj;ಗಳು ಖಾಸಗಿ ಬಸ್&zwnj;ಗಳಿಗೆ ಪೈಪೋಟಿ ನೀಡುವಂತಿವೆ.&lt;/p&gt;&lt;h2&gt;&lt;strong&gt;ಬಸ್ ವೇಳಾಪಟ್ಟಿ ಇಲ್ಲಿದೆ&lt;/strong&gt;&lt;/h2&gt;&lt;h3&gt;&lt;strong&gt;ಬೆಳಗಾವಿ - ಥಾಣೆ (ಮಹಾರಾಷ್ಟ್ರ) ಮಾರ್ಗ&lt;/strong&gt;&lt;/h3&gt;&lt;ul&gt; &lt;li&gt;ಬೆಳಗಾವಿಯಿಂದ ಥಾಣೆಗೆ: ಪ್ರತಿದಿನ ರಾತ್ರಿ 8.15ಕ್ಕೆ ಹೊರಟು, ಮರುದಿನ ಮುಂಜಾನೆ 6.30ಕ್ಕೆ ಥಾಣೆ ತಲುಪುತ್ತದೆ.&lt;/li&gt; &lt;li&gt;ಥಾಣೆಯಿಂದ ಬೆಳಗಾವಿಗೆ: ಪ್ರತಿದಿನ ರಾತ್ರಿ 8.00ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6.15ಕ್ಕೆ ಬೆಳಗಾವಿ ತಲುಪುತ್ತದೆ.&lt;/li&gt;&lt;/ul&gt;&lt;h3&gt;&lt;strong&gt;ಚಿಕ್ಕೋಡಿ - ಬೆಂಗಳೂರು ಮಾರ್ಗ&lt;/strong&gt;&lt;/h3&gt;&lt;ul&gt; &lt;li&gt;ಚಿಕ್ಕೋಡಿಯಿಂದ ಬೆಂಗಳೂರಿಗೆ: ಸಂಜೆ 7.00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 6.45ಕ್ಕೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್) ತಲುಪುತ್ತದೆ.&lt;/li&gt; &lt;li&gt;ಬೆಂಗಳೂರಿನಿಂದ ಚಿಕ್ಕೋಡಿಗೆ: ರಾತ್ರಿ 9.55ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಚಿಕ್ಕೋಡಿ ತಲುಪುತ್ತದೆ.&lt;/li&gt;&lt;/ul&gt;&lt;h2&gt;&lt;strong&gt;ಟಿಕೆಟ್ ದರ ಮತ್ತು ಬುಕ್ಕಿಂಗ್&lt;/strong&gt;&lt;/h2&gt;&lt;p&gt;ಈ ಐಷಾರಾಮಿ ರಾಜರಥ ಬಸ್&zwnj;ನಲ್ಲಿ ಪ್ರಯಾಣಿಸಲು ತಲಾ ಒಬ್ಬರಿಗೆ 1357 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಕೆಎಸ್&zwnj;ಆರ್&zwnj;ಟಿಸಿಯ ಅಧಿಕೃತ ವೆಬ್&zwnj;ಸೈಟ್ www.ksrtc.in ಮೂಲಕ ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ದೂರದ ಪ್ರಯಾಣ ಮಾಡುವವರಿಗೆ ಸುಸ್ತಾಗದಂತೆ ಸಕಲ ಸೌಲಭ್ಯಗಳನ್ನು ಈ ರಾಜರಥ ಬಸ್&zwnj;ಗಳಲ್ಲಿ ಅಳವಡಿಸಲಾಗಿದೆ. ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ಹಾಗೂ ಅತ್ಯುತ್ತಮ ಗುಣಮಟ್ಟದ ಸೀಟುಗಳನ್ನು ಇದು ಹೊಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಚರಿಸುವ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಈ ಸೇವೆ ವರದಾನವಾಗಲಿದೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/good-news-for-north-karnataka-people-from-ksrtc-gkn/articleshow-98v36q2"/>
        </item>
        <item>
            <title><![CDATA[ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್‌ಗೆ ಬಿಗ್‌ ಶಾಕ್;  2110 ಕೋಟಿ ರಹಸ್ಯ]]></title>
            <link>https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn</link>
            <guid isPermaLink="true">https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn</guid>
            <pubDate>Sat, 15 Aug 2026 08:55:48 +0530</pubDate>
            <description><![CDATA[&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01krzvgexpt4bdd8gcn5zk079s,imgname-shivanand-neelannavar-1779185499030.jpg" type="image/jpeg" height="390" width="690"/>
            <content:encoded><![CDATA[&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಸಾರ್ವಜನಿಕರಿಂದ ಅಸಾಮಾನ್ಯ ಆದಾಯದ ಭರವಸೆ ನೀಡಿ ಸುಮಾರು 2,110.97 ಕೋಟಿ ರೂ. ಸಂಗ್ರಹಿಸಿದ ಆರೋಪದ ಮೇಲೆ ಈ ಬಂಧನ ನಡೆದಿದೆ.&lt;/p&gt;&lt;img&gt;&lt;p&gt;ಶಿವಂ ಅಸೋಸಿಯೇಟ್ ಕಂಪೆನಿಯ ವಂಚನೆಯ ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ್&zwnj;ನನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದುಕೊಂಡಿದ್ದು, ಮಂಗಳೂರಿನ ಜೆಎಂಎಫ್&zwnj;ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.&lt;/p&gt;&lt;img&gt;&lt;p&gt;ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಆ.24ರ ವರೆಗೆ ಅಂದರೆ 12 ದಿನಗಳ ಕಾಲ ಇಡಿ ವಶಕ್ಕೆ ಒಪ್ಪಿಸಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಕಲಂ 19ರ ಅಡಿಯಲ್ಲಿ ಆ.13ರಂದು ಬಂಧಿಸಲಾಗಿದೆ.&lt;/p&gt;&lt;img&gt;&lt;p&gt;ಬೆಳಗಾವಿ ನಗರದ ಮಲಮಾರುತಿ ಪೊಲೀಸ್ ಠಾಣೆಯಲ್ಲಿ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ-2004ರ ಅಡಿಯಲ್ಲಿ ದಾಖಲಾಗಿದ್ದ ಎಫ್&zwnj;ಐಆರ್ ಆಧರಿಸಿ ಇ.ಡಿ ತನಿಖೆ ಆರಂಭಿಸಿತ್ತು. ಸಾರ್ವಜನಿಕರಿಗೆ ಅಸಾಮಾನ್ಯ ಪ್ರಮಾಣದ ಹಾಗೂ ಖಾತರಿಪಡಿಸಿದ ಆದಾಯದ ಭರವಸೆ ನೀಡಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಲಾಗಿತ್ತು ಎಂಬ ಆರೋಪ ಎಫ್&zwnj;ಐಆರ್&zwnj;ನಲ್ಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಖರ್ಗೆ ಕುಟುಂಬದ ಟ್ರಸ್ಟ್&zwnj;ಗೆ ಬಿಡಿಎ ನಿವೇಶನ ವಿವಾದಕ್ಕೆ ಬಿಗ್ ಟ್ವಿಸ್ಟ್: ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್!&lt;/strong&gt;&lt;/p&gt;&lt;img&gt;&lt;p&gt;ತನಿಖೆಯಲ್ಲಿ &lsquo;ಶಿವಂ ಅಸೋಸಿಯೇಟ್ಸ್&rsquo; ಸಂಸ್ಥೆಯು ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಛತ್ತೀಸ್&zwnj;ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯವಸ್ಥಿತ ಜಾಲದ ಮೂಲಕ ಸಾರ್ವಜನಿಕರಿಂದ 2,110.97 ಕೋಟಿ ರು. ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಶಿವಾನಂದ ನೀಲಣ್ಣನವರ್ 5 ಕೋಟಿ ಮೌಲ್ಯದ ನಾಲ್ಕು ಐಷಾರಾಮಿ ಕಾರು ಸೀಜ್, ಬೆಳಗಾವಿ ವಂಚನೆ ಕೇಸ್&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/dakshina-kannada/shivam-associates-fraud-case-enforcement-directorate-has-taken-into-custody-owner-of-company-shivananda-neelannavar-mrq-db67rgn"/>
        </item>
        <item>
            <title><![CDATA[kavalesad point tragedy: ಮಹಾರಾಷ್ಟ್ರದ ಕವಲೇಸಾದ್‌ ಪಾಯಿಂಟ್‌ ವೀಕ್ಷಣೆಗೆ ಹೋದ ಬೆಳಗಾವಿಯ ವ್ಯಕ್ತಿ ಕಣ್ಮರೆ!]]></title>
            <link>https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3</link>
            <guid isPermaLink="true">https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3</guid>
            <pubDate>Wed, 05 Aug 2026 12:10:36 +0530</pubDate>
            <description><![CDATA[&lt;p&gt;ಮಹಾರಾಷ್ಟ್ರದ ಅಂಬೋಲಿ ಬಳಿಯ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಿವಾಸಿ ಅಯೂಬ್ ಸಯ್ಯದ್ ಎಂಬುವವರು ಕಣ್ಮರೆಯಾಗಿದ್ದಾರೆ. ರಭಸದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಪ್ರತಿಕೂಲ ಹವಾಮಾನದ ನಡುವೆಯೂ ಅಂಬೋಲಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz8aah5pqbn0ekyfwztnacrp,imgname-----------------------2026-08-05t120822.848-1785911919798.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ (ಆ.5): &lt;/strong&gt;ಮಹಾರಾಷ್ಟ್ರದಲ್ಲಿ ಭೀಕರ ಮಳೆಯಾಗುತ್ತಿದೆ. ಈ ನಡುವೆ ಸಿಂಧುದುರ್ಗ ಜಿಲ್ಲೆಯ ಅಂಬೋಲಿ ಬಳಿ ಇರುವ ಕವಲೇಸಾದ್ ಪಾಯಿಂಟ್, ಕವಲೇದುರ್ಗ ವೀಕ್ಷಣೆ ಹೋಗಿದ್ದ ಕರ್ನಾಟಕ ಮೂಲದ ವ್ಯಕ್ತಿ ಕಣ್ಮರೆಯಾದ ಘಟನೆ ನಡೆದಿದೆ.&lt;/p&gt;&lt;h2&gt;ಗೆಳೆಯರ ಜೊತೆ ವೀಕ್ಷಣೆಗೆ ತೆರಳಿದ್ದ ಅಯೂಬ್ ಸಯ್ಯದ್&lt;/h2&gt;&lt;p&gt;ಅಯೂಬ್ ಸಯ್ಯದ್(50) ಕಂದಕಕ್ಕೆ ಬಿದ್ದು ಕಣ್ಮರೆಯಾಗಿರುವ ವ್ಯಕ್ತಿ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ನಿವಾಸಿಯಾಗಿರುವ ಅಯೂಬ್, ಗೆಳೆಯರೊಂದಿಗೆ ಕವಲೇಸಾದ್ ಪಾಯಿಂಟ್ ವೀಕ್ಷಣೆಗೆ ತೆರಳಿದ್ದರು. ವೀಕ್ಷಣೆ ವೇಳೆ ರಭಸವಾದ ಗಾಳಿಗೆ ಕಂದಕಕ್ಕೆ ಬಿದ್ದಿರುವ ಶಂಕೆಯಿದೆ. ಸದ್ಯ ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಅಂಬೋಲಿ ಪೊಲೀಸರು&lt;/p&gt;&lt;h3&gt;ಪೊಲೀಸರ ಕಾರ್ಯಾಚರಣೆಗೆ ಮಳೆ ಅಡ್ಡಿ&lt;/h3&gt;&lt;p&gt;ಘಟನಾ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿರುವ ಅಂಬೋಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ದಟ್ಟವಾದ ಮಂಜು, ಗಾಳಿ, ಈ ನಡುವೆ ಭಾರೀ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿನ್ನೆ ಕಣ್ಮರೆಯಾಗಿರುವ ಅಯೂಬ್&zwnj;ಗಾಗಿ ಇಂದು ಸಹ ಪೊಲೀಸರು ಶೋಧ ಕಾರ್ಯ ಮುಂದುರಿಸಿದ್ದಾರೆ. ಘಟನೆ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/kavalesad-point-tragedy-belagavi-tourist-missing-wile-sightseeing/articleshow-gewcwn3"/>
        </item>
        <item>
            <title><![CDATA[ಪತ್ರಕರ್ತರ ಸೋಗಿನಲ್ಲಿ ಸುಲಿಗೆ; ಬೆಳಗಾವಿಯಲ್ಲಿ ನಾಲ್ವರು ಯೂಟ್ಯೂಬರ್‌ಗಳು ಅರೆಸ್ಟ್!]]></title>
            <link>https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2</link>
            <guid isPermaLink="true">https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2</guid>
            <pubDate>Sun, 26 Jul 2026 09:08:04 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್&zwnj;ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kye7zrnhsqfcqwvkgveh8sze,imgname-belagavi-youtubers-1785037054641.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಪತ್ರಕರ್ತರೆಂದು ಹೇಳಿಕೊಂಡು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಯೂಟ್ಯೂಬರ್ಸ್ ಗ್ಯಾಂಗ್&zwnj;ಗೆ ಬೆಳಗಾವಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಗಾಂಜಾ ನೀಡಿ, ಅದನ್ನೇ ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್&zwnj;ಮೇಲ್ ಮಾಡುತ್ತಿದ್ದ ನಾಲ್ವರು ಯೂಟ್ಯೂಬರ್&zwnj;ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಈ ಸಿನಿಮಾ ಮಾದರಿಯ ಸುಲಿಗೆ ನಡೆದಿದೆ. ಗ್ರಾಮದ ಮೆಹಬೂಬ್ ಜಮಾದಾರ್ ಎಂಬುವವರೇ ಈ ಖದೀಮರ ಜಾಲಕ್ಕೆ ಬಲಿಯಾದವರು. ಈ ಯೂಟ್ಯೂಬರ್ಸ್ ಗ್ಯಾಂಗ್ ಮೊದಲು ಮೆಹಬೂಬ್ ಅವರಿಗೆ ತಾವೇ ಗಾಂಜಾ ಪ್ಯಾಕೆಟ್ ನೀಡಿದ್ದಾರೆ. ಮೆಹಬೂಬ್ ಕೈಗೆ ಗಾಂಜಾ ಸಿಗುತ್ತಿದ್ದಂತೆ, ಪೊಲೀಸರ ಹೆಸರಿನಲ್ಲಿ ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಬ್ಲ್ಯಾಕ್&zwnj;ಮೇಲ್ ತಂತ್ರ&lt;/strong&gt;&lt;/h2&gt;&lt;p&gt;ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ನಿನ್ನನ್ನು ಅರೆಸ್ಟ್ ಮಾಡಿಸುತ್ತೇವೆ ಎಂದು ಧಮ್ಕಿ ಹಾಕಿದ ಈ ಗ್ಯಾಂಗ್, ಗಾಂಜಾ ಪ್ಯಾಕೆಟ್ ನೀಡುವ ದೃಶ್ಯವನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡಿತ್ತು. ಈ ವಿಡಿಯೋ ಇಟ್ಟುಕೊಂಡು ಪೊಲೀಸ್ ಕೇಸ್ ಹಾಕದಂತೆ ಇರಲು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಭಯಭೀತರಾದ ಮೆಹಬೂಬ್ ಅಂದು ತಮ್ಮ ಬಳಿಯಿದ್ದ 60 ಸಾವಿರ ರೂಪಾಯಿಗಳನ್ನು ಇವರಿಗೆ ನೀಡಿದ್ದಾರೆ.&lt;/p&gt;&lt;p&gt;ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದ ಈ ಯೂಟ್ಯೂಬರ್ಸ್, ಮೆಹಬೂಬ್ ಹಣ ನೀಡದಿದ್ದಾಗ ಆ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದ್ದಾರೆ. ಇದರಿಂದ ಕಂಗೆಟ್ಟ ಮೆಹಬೂಬ್ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ವಸೂಲಿ ಜಾಲ ಬಯಲಾಗಿದೆ.&lt;/p&gt;&lt;h3&gt;&lt;strong&gt;ಬಂಧಿತರ ವಿವರ&lt;/strong&gt;&lt;/h3&gt;&lt;p&gt;ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲಪ್ಪ ಮಾಳಾಜ್, ಮಲ್ಲಿಕಾರ್ಜುನ ಜುಲಫಿ, ಪೃಥ್ವಿರಾಜ್ ಚೌಹಾಣ, ಡೇವಿಡ್ ತಂಗೇರಾಳ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಮೊಬೈಲ್ ಫೋನ್&zwnj;ಗಳು ಹಾಗೂ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪತ್ರಕರ್ತರ ಹೆಸರಿನಲ್ಲಿ ಸಮಾಜದಲ್ಲಿ ದರೋಡೆಗೆ ಇಳಿದಿದ್ದ ಈ ಗ್ಯಾಂಗ್ ಈಗ ಜೈಲು ಪಾಲಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/belagavi-breaking-extortion-in-the-guies-of-journalists-four-youtubers-arrested-gkn/articleshow-itwr0p2"/>
        </item>
        <item>
            <title><![CDATA['ರಾಯರೇ ಅವಳಿಂದ ನನ್ನನ್ನು ಕಾಪಾಡು..! ಹುಡುಗಿ ಕಾಟಕ್ಕೆ ಬೇಸತ್ತು ರಾಘವೇಂದ್ರ ಸ್ವಾಮೀಗಳ ಮೊರೆ ಹೋದ ಭಕ್ತ, ವೈರಲ್ ಆಯ್ತು ಪತ್ರ]]></title>
            <link>https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1</link>
            <guid isPermaLink="true">https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1</guid>
            <pubDate>Wed, 05 Aug 2026 10:28:46 +0530</pubDate>
            <description><![CDATA[ಬೆಳಗಾವಿಯ ಯುವಕನೊಬ್ಬ ಯುವತಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ರಾಮದುರ್ಗದ ರಾಘವೇಂದ್ರ ಸ್ವಾಮಿ ಮಠದ ಹುಂಡಿಯಲ್ಲಿ 'ರಾಯರೇ, ಆ ಹುಡುಗಿಯಿಂದ ನನ್ನನ್ನು ಕಾಪಾಡು' ಎಂದು ಬರೆದಿದ್ದ ಅನಾಮಧೇಯ ಪತ್ರವೊಂದು ಪತ್ತೆಯಾಗಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz84bsrff6asnctenb2an3t3,imgname-----------------------2026-08-05t102138.456-1785905669903.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಆ.5): &lt;/strong&gt;ಹುಡುಗನ ಕಾಟಕ್ಕೆ ಬೇಸತ್ತು ಯುವತಿ ಸಾವು, ಪತಿ ಕಿರುಕುಳಕ್ಕೆ ನೊಂದ ಪತ್ನಿ ಸಾವು, ಕಾಲೇಜು ಯುವತಿಗೆ ಪಾಗಲ್ ಪ್ರೇಮಿ ಕಾಟ.. ಸಾಮಾನ್ಯವಾಗಿ ಇಂಥ ಸುದ್ದಿಗಳನ್ನ ದಿನನಿತ್ಯ ಪತ್ರಿಕೆ, ಮಾಧ್ಯಮಗಳಲ್ಲಿ ಕೇಳುತ್ತಿರುತ್ತೇವೆ. ಆದರೆ ಇದಕ್ಕೆ ತದ್ವಿರುದ್ಧವಾದ, ವಿಚಿತ್ರ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಯುವತಿ ಅಲ್ಲ, ಯುವಕನೇ ಹುಡುಗಿಯ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿದ್ದಾನೆ!&lt;/p&gt;&lt;h2&gt;ಹುಡುಗಿಯ ಕಾಟಕ್ಕೆ ಬೇಸತ್ತು ರಾಯರ ಮೊರೆ ಹೋದ ಯುವಕ!&lt;/h2&gt;&lt;p&gt;ಹೌದು. ಹುಡುಗಿಯ ಕಾಟಕ್ಕೆ ಬೇಸತ್ತು ಬೆಳಗಾವಿ ಯುವಕ ರಾಯರ ಮೊರೆ ಹೋಗಿದ್ದಾನೆ. 'ರಾಯರೇ, ನಿಮ್ಮ ದಮ್ಮಯ್ಯ ಹುಡುಗಿಯಿಂದ ನನ್ನ ಕಾಪಾಡು' ಎಂದು ದೇವರಿಗೆ ಮನವಿ ಪತ್ರ ಬರೆದಿರುವುದು ಈಗ ಸೋಷಿಯಲ್ ಮೀಡಿಯಾದ್ಲಲಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h3&gt;ಹುಂಡಿಯಲ್ಲಿ ವಿಚಿತ್ರ ಹರಕೆ ಪತ್ರ!&lt;/h3&gt;&lt;p&gt;ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾಲ ಕಾಲಕ್ಕೆ ಹುಂಡಿ ಎಣಿಕೆ ಕಾರ್ಯ ನಡೆಯುತ್ತೆ. ಇತ್ತೀಚೆಗೆ ಮಠದ ಸಿಬ್ಬಂದಿ ಹುಂಡಿ ಎಣಿಕೆ ಮಾಡಿದ್ದರು. ಈ ವೇಳೆ ಹುಂಡಿಯಲ್ಲಿ ಹಣದೊಂದಿಗೆ ಒಂದು ವಿಚಿತ್ರ ಪತ್ರ ಪತ್ತೆಯಾಗಿದೆ. ಭಕ್ತರು ಬರೆದ ಸಾಮಾನ್ಯ ಹರಕೆ ಪತ್ರ ಇರಬಹುದೆಂದು ಭಾವಿಸಿದ್ದ ಸಿಬ್ಬಂದಿ ಕುತೂಹಲದಿಂದ ತೆರೆದು ಓದಿದ ಮೇಲೆ ಶಾಕ್ ಆಗಿದ್ದಾರೆ.&lt;/p&gt;&lt;h3&gt;'ರಾಯರೇ ಹುಡುಗಿಯಿಂದ ನನ್ನನ್ನು ಕಾಪಾಡು..'&lt;/h3&gt;&lt;p&gt;ಪತ್ರದಲ್ಲಿ 'ಶ್ರೀ ಗಣಪತಿಯೇ ನಮಃ ಅಂತಾ ಯುವಕ ಮೊದಲಿಗೆ ವಿಘ್ನನಿವಾರಕನ ಸ್ಮರಣೆ ಮಾಡಿದ್ದಾನೆ. ನಂತರ ಸಾಲಿನಲ್ಲಿ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಬರೆದಿರುವ ಯುವಕ ಮುಂದಿನ ಸಾಲುಗಳಲ್ಲಿ 'ರಾಯರೇ, ನಮ್ಮನ್ನ ಆ ವಿಷದಿಂದ ಕಾಪಾಡು. ಆ ಹುಡುಗಿಯಿಂದ ನನ್ನ ಕಾಪಾಡು. ಈ ಕಷ್ಟದಿಂದ ಹೇಗಾದರೂ ನಮ್ಮನ್ನು ಪಾರು ಮಾಡು ಎಂದು ಯುವಕ ಬೇಡಿಕೊಂಡಿದ್ದಾನೆ.&lt;/p&gt;&lt;p&gt;ನಮ್ಮನೊಂದಿಗೆ ರಾಯರು ಇದ್ದಾರೆ ಎಂದು ನಂಬಿದ್ದೇನೆ. ಹೀಗಾಗಿ ರಾಯರಲ್ಲಿ ನನ್ನ ಕಷ್ಟ ಹೇಳಿಕೊಂಡು ಈ ಪತ್ರ ಬರೆದಿದ್ದೇನೆ. ನನ್ನ ಕಷ್ಟ ರಾಯರು ಕೇಳಿಸಿಕೊಳ್ಳುತ್ತಿದ್ದಾರೆಂದು ನನ್ನ ನಂಬಿಕೆ. ಗುರುಗಳೇ ಆದಿಶಕ್ತಿ ದೇವಿ, ತಂದೆ ತಾಯಿ ಕಾಪಾಡು ಎಂದು ಯುವಕ ಬೇಡಿಕೊಂಡಿದ್ದಾನೆ.&lt;/p&gt;&lt;p&gt;ಆದರೆ ಇಷ್ಟೆಲ್ಲ ಬರೆದಿರುವ ಯುವಕ, ಇಡೀ ಪತ್ರದಲ್ಲಿ ಎಲ್ಲಿಯೂ ತನ್ನ ಹೆಸರು, ಗುರುತು ಪತ್ರದಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಪತ್ರ ಯಾರು ಬರೆದರು. ಆ ಹುಡುಗನಿಗೆ ಕಾಟ ಕೊಡ್ತಿರೊ ಆ ಖತರ್ನಾಕ್ ಹುಡುಗಿ ಯಾರು ಅನ್ನೋದು ಆ ಹುಡುಗನಿಗೂ ರಾಯರಿಗೂ ಇಬ್ಬರಿಗೆ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಿಲ್ಲ!&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/belagavi-young-man-pray-raghavendra-swami-to-save-him-from-girl-s-harassment-shocking-letter-found-in-hundi-rav/articleshow-k76s8z1"/>
        </item>
        <item>
            <title><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಭೂಸ್ವಾಧೀನ ಕ್ಷಿಪ್ರಗತಿಯಲ್ಲಿ ಮುಗಿಸಲು, ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಸೂಚನೆ]]></title>
            <link>https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</link>
            <guid isPermaLink="true">https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g</guid>
            <pubDate>Wed, 29 Jul 2026 07:43:57 +0530</pubDate>
            <description><![CDATA[ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಯ ಭೂಸ್ವಾಧೀನ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ. ಮತ್ತೊಂದೆಡೆ, ಲೋಂಡಾ ಯಾರ್ಡ್&zwnj;ನಲ್ಲಿನ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ 12 ರೈಲುಗಳು ತಡವಾಗಿ ಸಂಚರಿಸಿದ್ದು, ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxz1z8x5tsce76phwyt24182,imgname-indian-railways-1-1784527430565.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಧಾರವಾಡ-ಬೆಳಗಾವಿ ರೈಲು ಮಾರ್ಗ ಅಭಿವೃದ್ಧಿ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಮುಗಿಸಬೇಕಾಗಿದೆ. ಹೀಗಾಗಿ ಬಾಕಿಯಿರುವ ಭೂಸ್ವಾಧೀನ ಸೇರಿ ಇನ್ನಿತರ ವಿಚಾರಗಳ ಕುರಿತ ಸಮಸ್ಯೆ ನಿವಾರಿಸಲು ಖುದ್ದು ಭೇಟಿ ನೀಡುವಂತೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಅವರಿಗೆ ಸಚಿವ ಎಂ.ಬಿ. ಪಾಟೀಲ್&zwnj; ಸೂಚಿಸಿದ್ದಾರೆ.&lt;/p&gt;&lt;p&gt;ಖನಿಜ ಭವನದಲ್ಲಿ ಮಂಗಳವಾರ ರಾಜ್ಯದ ರೈಲ್ವೆ, ವಿಮಾನ ನಿಲ್ದಾಣ ಸೇರಿ ಇನ್ನಿತರ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಎಂ.ಬಿ. ಪಾಟೀಲ್&zwnj;, ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಧಾರವಾಡದ ಮಮ್ಮಿಗಟ್ಟಿ ಸಮೀಪ ಭೂಸ್ವಾಧೀನ ಸಮಸ್ಯೆಯಿದೆ. ಅದನ್ನು ಶೀಘ್ರ ಬಗೆಹರಿಸಿ ಭೂಸ್ವಾಧೀನ ಮಾಡಿಕೊಂಡು ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಹೀಗಾಗಿ ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಕಾರ್ಯದರ್ಶಿ ಆರ್&zwnj;. ವಿಶಾಲ್&zwnj; ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶಿಸಿದರು.&lt;/p&gt;&lt;h2&gt;ರೈಲ್ವೆ ಕಾಮಗಾರಿಯಿಂದ ಬ್ಲಾಕ್&zwnj; ಬರ್ಸ್ಟ್&zwnj;: 12 ರೈಲು ವಿಳಂಬ&lt;/h2&gt;&lt;p&gt;ಹುಬ್ಬಳ್ಳಿ: ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿಯಿಂದಾಗಿ ಅನಿರೀಕ್ಷಿತವಾಗಿ ಬ್ಲಾಕ್&zwnj; ಬರ್ಸ್ಟ್&zwnj; ಆದಕಾರಣ ಈ ಮಾರ್ಗವಾಗಿ ಸಂಚರಿಸಬೇಕಾದ ಬರೋಬ್ಬರಿ 12 ರೈಲುಗಳು ತಡವಾಗಿ ಚಲಿಸಿವೆ.&lt;/p&gt;&lt;p&gt;ಲೋಂಡಾ ಯಾರ್ಡ್&zwnj;ನಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಈ ಮೊದಲು ಎರಡಿದ್ದ ಫ್ಲಾರ್ಟ್&zwnj;ಫಾರ್ಮ್&zwnj;ನ್ನು ಮೂರಕ್ಕೇರಿಸಲಾಗುತ್ತಿದೆ. ನಿಗದಿತ ಕಾಮಗಾರಿ ವೇಳೆ ಅನಿರೀಕ್ಷಿತವಾಗಿ 8 ಗಂಟೆ ತಡವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಹಲವು ರೈಲುಗಳು ಅಲ್ಲಲ್ಲಿ ನಿಲುಗಡೆಯಾಗಿದ್ದರೆ, ಮತ್ತೆ ಕೆಲ ರೈಲುಗಳ ವೇಳಾಪಟ್ಟಿಯನ್ನೇ ಬದಲಾಯಿಸಲಾಗಿದೆ.&lt;/p&gt;&lt;h2&gt;12 ರೈಲುಗಳ ವಿಳಂಬ:&lt;/h2&gt;&lt;p&gt;ನಿಜಾಮುದ್ದೀನ್&zwnj;-ವಾಸ್ಕೋಡಿಗಾಮಾ ಎಕ್ಸ್&zwnj;ಪ್ರೆಸ್- 221 ನಿಮಿಷ, ದಾದರ-ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್- 221 ನಿಮಿಷ, ಬೆಂಗಳೂರು-ಬೆಳಗಾವಿ ಎಕ್ಸ್&zwnj;ಪ್ರೆಸ್-355 ನಿಮಿಷ, ಬೆಂಗಳೂರು-ಸಾಂಗ್ಲಿ ಎಕ್ಸ್&zwnj;ಪ್ರೆಸ್ -222 ನಿಮಿಷ, ಬೆಂಗಳೂರು-ಜೋಧಪುರ ಎಕ್ಸ್&zwnj;ಪ್ರೆಸ್- 237 ನಿಮಿಷ, ಮೈಸೂರು-ಬೆಳಗಾವಿ -245 ನಿಮಿಷ, ದಾದರ-ಪುದುಚೇರಿ ಎಕ್ಸ್&zwnj;ಪ್ರೆಸ್ -165 ನಿಮಿಷ, ಮಿರಜ್&zwnj;- ಹುಬ್ಬಳ್ಳಿ ಪ್ಯಾಸೆಂಜರ್&zwnj;-147 ನಿಮಿಷ, ಸಿಕಂದರಾಬಾದ್&zwnj;- ಬೆಳಗಾವಿ -222 ನಿಮಿಷ, ವಾಸ್ಕೋಡಿಗಾಮಾ-ಶಾಲಿಮಾರ್&zwnj; ಎಕ್ಸ್&zwnj;ಪ್ರೆಸ್ -123 ನಿಮಿಷ, ತಿರುಪತಿ-ಛತ್ರಪತಿ ಶಾಹು ಮಹಾರಾಜ ಟರ್ಮಿನಲ್&zwnj; ಎಕ್ಸ್&zwnj;ಪ್ರೆಸ್ -184 ನಿಮಿಷ, ಅಜ್ಮೀರ್&zwnj;-ಬೆಂಗಳೂರು ಎಕ್ಸ್&zwnj;ಪ್ರೆಸ್- 158 ನಿಮಿಷ ತಡೆ ಹಿಡಿಯಲಾಗಿತ್ತು.&lt;/p&gt;&lt;p&gt;ಇದಲ್ಲದೇ, ಬೆಳಗಾವಿ-ಬೆಂಗಳೂರು ಎಕ್ಸ್&zwnj;ಪ್ರೆಸ್&zwnj; ರೈಲನ್ನು -150 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿಯಿಂದ -192 ನಿಮಿಷ ತಡವಾಗಿ ಚಲಿಸಿತು. ಬೆಳಗಾವಿ-ಮೈಸೂರು ಎಕ್ಸ್&zwnj;ಪ್ರೆಸ್ ರೈಲು ಬೆಳಗಾವಿಯಿಂದಲೇ -235 ನಿಮಿಷ ತಡವಾಗಿ ಚಲಿಸಿತು.&lt;/p&gt;&lt;h2&gt;ರದ್ದತಿ:&lt;/h2&gt;&lt;p&gt;ಈ ನಡುವೆ ಸೋಲ್ಲಾಪುರ- ಧಾರವಾಡ ಪ್ಯಾಸೆಂಜರ್&zwnj;ನ್ನು ನವಲೂರು ಮತ್ತು ಧಾರವಾಡ ನಡುವೆ ಭಾಗಶಃ ರದ್ದುಗೊಳಿಸಿದ್ದರೆ, ಪಂಡರಾಪುರ-ಧಾರವಾಡ ರೈಲನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಮಧ್ಯಾಹ್ನದ ನಂತರ ಸುಗಮ ಸಂಚಾರ ಶುರುವಾಯಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railway-updates-direct-dharwad-belagavi-rail-project-fast-tracked-londa-yard-work-delays-12-trains-gdp/articleshow-lrete5g"/>
        </item>
        <item>
            <title><![CDATA[ಬೆಲೆ ಕುಸಿತ: ಟೊಮ್ಯಾಟೋ 1 ರೂ, ಕೊತ್ತಂಬರಿ 3 ರೂ, ಲೋಡ್‌ ತಂದು ರಸ್ತೆಗೆ ಎಸೆದ ರೈತ!]]></title>
            <link>https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</link>
            <guid isPermaLink="true">https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y</guid>
            <pubDate>Mon, 24 Aug 2026 07:15:51 +0530</pubDate>
            <description><![CDATA[ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಬೆಲೆ ಕುಸಿತದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿದಿದ್ದರಿಂದ ಬೆಳಗಾವಿಯಲ್ಲಿ ರೈತರು ಬೆಳೆಯನ್ನು ರಸ್ತೆಗೆ ಎಸೆದರೆ, ದಾವಣಗೆರೆಯಲ್ಲಿ ಟೊಮ್ಯಾಟೋಗೆ ಕೆಜಿಗೆ ಕೇವಲ 1 ರೂ. ಸಿಕ್ಕಿದ್ದರಿಂದ ಕಟಾವು ಮಾಡದೆ ಗಿಡದಲ್ಲೇ ಬಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0rphwne24j3veesfw9h2c98,imgname-kottabmari-1787535356589.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ/ ದಾವಣಗೆರೆ: ಹಾಕಿದ ಬಂಡವಾಳವೂ ಬಾರದೆ ರೈತರು ತಾವು ಬೆಳೆದ ಕೊತ್ತಂಬರಿ ಸೊಪ್ಪು ಮತ್ತು ಟೊಮ್ಯಾಟೋ ಬೆಳೆಯನ್ನು ರಸ್ತೆ ಬಿಸಾಡಿದ ಘಟನೆಯು ಭಾನುವಾರ ನಡೆದಿದೆ.&lt;/p&gt;&lt;p&gt;ಬೆಳಗಾವಿಯ ರಾಯಭಾಗದಲ್ಲಿ 2 ದಿನಗಳ ಹಿಂದೆ ಕಟ್ಟಿಗೆ 10ರಿಂದ 15 ರು.ವರೆಗೆ ಮಾರಾಟವಾಗುತ್ತಿದ್ದ ಕೊತ್ತಂಬರಿ ಸೊಪ್ಪಿಗೆ ಶನಿವಾರ ಸಂಜೆ 10 ರು.ಗೆ ಮೂರು ಕಟ್ಟುಗಳು ಮಾರಾಟವಾಗುತ್ತಿದ್ದವು. ಆದರೆ ಭಾನುವಾರ 3ರಿಂದ 5 ರು.ಗೆ ಕುಸಿತವಾಗಿದೆ. ಪರಿಣಾಮ ಖರ್ಚು ಮಾಡಿದ್ದ ಮೊತ್ತವೂ ಬಾರದ ಹಿನ್ನೆಲೆ ಅಸಮಾಧಾನದಿಂದ ರೈತರು, ಸೊಪ್ಪನ್ನು ರಸ್ತೆ ಬಿಸಾಡಿದ್ದಾರೆ.&lt;/p&gt;&lt;h2&gt;ಟೊಮ್ಯಾಟೋ ಕೇಜಿಗೆ ₹1:&lt;/h2&gt;&lt;p&gt;ಮತ್ತೊಂದೆಡೆ ದಾವಣಗೆರೆಯಲ್ಲಿ ಟೊಮ್ಯಾಟೋ ಬೆಲೆ ದಿಢೀರ್&zwnj; ಕುಸಿತವು ತುಂಬಲಾರದ ನಷ್ಟವಾಗಿ ಪರಿಣಮಿಸಿದೆ. ಕೇಜಿಗೆ ಕೇವಲ 1 ರು.ಗೆ ಕುಸಿತದಿಂದಾಗಿ 80 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ಬಂಡವಾಳ ಹೂಡಿದ್ದ ಕಿಂಚಿತ್ತೂ ಮೊತ್ತ ದೊರೆಯದ ಕಾರಣ ಕಟಾವು ಮಾಡದೆ ಗಿಡಗಳಲ್ಲಿಯೇ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಟೊಮ್ಯಾಟೋ ಫಸಲು ಮಣ್ಣುಪಾಲಾಗುತ್ತಿದೆ. ದಾವಣಗೆರೆ, ಚನ್ನಗಿರಿ, ಹೊನ್ನಾಳಿ ತಾಲೂಕುಗಳಲ್ಲಿ ರೈತರಿಗೆ ದಿಕ್ಕು ತೋಚದಂತಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-tomato-and-coriander-price-crash-farmers-dump-crops-amid-severe-losses-gdp/articleshow-n15b15y"/>
        </item>
        <item>
            <title><![CDATA[ಒಂದು ಹುಡುಗಿ ಕತೆ.. ಬೆಳಗಾವಿಯಲ್ಲಿ ಎರಡು ಗ್ರಾಮಗಳ ಯುವಕರಿಂದ ನಡು ರಸ್ತೆಯಲ್ಲಿ ಹೊಡೆದಾಟ..!]]></title>
            <link>https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf</link>
            <guid isPermaLink="true">https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf</guid>
            <pubDate>Fri, 24 Jul 2026 15:05:34 +0530</pubDate>
            <description><![CDATA[&lt;p&gt;ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್&zwnj;ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ky9qn9bndar8n9tqmr40a8j5,imgname-belagavi-fight-for-girl-1784885716341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್&zwnj;ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಬಸ್&zwnj;ನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ವಿಚಾರಕ್ಕೆ ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ನಡೆದ 'ಬೆಲ್ಟ್ ಸಮರ' ಈಗ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.&lt;/p&gt;&lt;h2&gt;&lt;strong&gt;ಬಸ್ಸನಲ್ಲೇ ಡಿಶುಂ ಡಿಶುಂ&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ಈ ಹೈಡ್ರಾಮಾ ನಡೆದಿದೆ. ಜಕ್ಕಬಾಳ ಮತ್ತು ಬಸರಗಿ ಗ್ರಾಮದ ವಿದ್ಯಾರ್ಥಿಗಳು ಅದೇ ಬಸ್&zwnj;ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಜಕ್ಕಬಾಳ ಗ್ರಾಮದ ಕೆಲವು ಯುವಕರು, ಬಸರಗಿ ಗ್ರಾಮದ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಬಸ್ ಚಲಿಸುತ್ತಿದ್ದಂತೆಯೇ ಆರಂಭವಾದ ಈ ಮಾತುಕತೆ, ಅತಿ ಶೀಘ್ರದಲ್ಲೇ ವಾಗ್ವಾದಕ್ಕೆ ತಿರುಗಿದೆ.&lt;/p&gt;&lt;h2&gt;&lt;strong&gt;ನಡುರಸ್ತೆಯಲ್ಲಿ 'ಬೆಲ್ಟ್-ಬಡಿಗೆ' ಸಮರ!&lt;/strong&gt;&lt;/h2&gt;&lt;p&gt;ತಮ್ಮ ಗ್ರಾಮದ ಹುಡುಗಿಯರಿಗೆ ಕಿರುಕುಳ ನೀಡಿದ್ದನ್ನು ಕಂಡು ರೊಚ್ಚಿಗೆದ್ದ ಬಸರಗಿ ಗ್ರಾಮದ ಯುವಕರು ಮತ್ತು ಜಕ್ಕಬಾಳದ ಯುವಕರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ಆರಂಭವಾಗಿದೆ. ಒಬ್ಬರಿಗೊಬ್ಬರು ಬಡಿಗೆ ಮತ್ತು ಕೈಯಲ್ಲಿದ್ದ ಬೆಲ್ಟ್&zwnj;ಗಳನ್ನು ಬಿಚ್ಚಿ ಹಿಗ್ಗಾಮುಗ್ಗಾ ಬಾರಿಸಿಕೊಂಡಿದ್ದಾರೆ. ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ರಣಕಾಳಿಗಳಂತೆ ಬಡಿದಾಡಿಕೊಳ್ಳುವುದನ್ನು ಕಂಡು ದಾರಿಹೋಕರು ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಾಯುವ್ಯ ಸಾರಿಗೆ ಇಲಾಖೆಯ (NWKRTC) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಿತ್ತಾಡುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಬಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ, ಇಂತಹ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;ಸದ್ಯ ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದು ಸಣ್ಣ ಚುಡಾಯಿಸುವಿಕೆ ಹೇಗೆ ಎರಡು ಹಳ್ಳಿಗಳ ನಡುವಿನ ಜಗಳಕ್ಕೆ ನಾಂದಿ ಹಾಡಿತು ಎಂಬುದು ಈಗ ಎಲ್ಲರ ಚರ್ಚೆಯ ವಿಷಯವಾಗಿದೆ. ಬಸ್&zwnj;ಗಳಲ್ಲಿ ವಿದ್ಯಾರ್ಥಿನಿಯರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/belagavi/road-brawl-in-belagavi-youths-from-two-villages-clash-over-a-girl-gkn/articleshow-qiecstf"/>
        </item>
        <item>
            <title><![CDATA[ಶಿವಭಕ್ತರ ಅನುಕೂಲಕ್ಕಾಗಿ Athani ಸಾರಿಗೆ ಘಟಕದಿಂದ 2 ನೂತನ ಬಸ್; ವೇಳಾಪಟ್ಟಿ ಹೀಗಿದೆ]]></title>
            <link>https://kannada.asianetnews.com/karnataka-districts/two-new-bus-services-have-been-started-from-athani-transport-unit-to-srisailam-mallikarjuna-temple-mrq/articleshow-qwhfpm1</link>
            <guid isPermaLink="true">https://kannada.asianetnews.com/karnataka-districts/two-new-bus-services-have-been-started-from-athani-transport-unit-to-srisailam-mallikarjuna-temple-mrq/articleshow-qwhfpm1</guid>
            <pubDate>Wed, 12 Aug 2026 07:15:33 +0530</pubDate>
            <description><![CDATA[ಶಿವಭಕ್ತರ ಅನುಕೂಲಕ್ಕಾಗಿ ಅಥಣಿ ಸಾರಿಗೆ ಘಟಕದಿಂದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಎರಡು ನೂತನ ಬಸ್ ಸೇವೆಗಳನ್ನು ಆರಂಭಿಸಲಾಗಿದೆ. ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಈ ಸೇವೆಗೆ ಚಾಲನೆ ನೀಡಿದ್ದು, ಬಸ್&zwnj;ನ ಸಮಯ, ಮಾರ್ಗ ಮತ್ತು ₹938 ಟಿಕೆಟ್ ದರದ ಬಗ್ಗೆ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzst70262e7t869t47fj4zh3,imgname-athani-1786499006534.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ಶಿವಭಕ್ತರ ಶಕ್ತಿಪೀಠ ಎಂದು ಕರೆಯಲ್ಪಡುವ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ಹೋಗುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅಥಣಿ ಸಾರಿಗೆ ಘಟಕದಿಂದ ಎರಡು ನೂತನ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಬಸ್&zwnj; ಸೇವೆಗೆ ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.&lt;/p&gt;&lt;p&gt;ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಭೌಗೋಳಿಕವಾಗಿ ಆಂಧ್ರ ಪ್ರದೇಶದಲ್ಲಿದ್ದರೂ ಭಾವನಾತ್ಮಕವಾಗಿ ಕರ್ನಾಟಕದ ಭಕ್ತರೇ ಅಪಾರ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಿಂದ ಅಪಾರ ಭಕ್ತರು ಬರುತ್ತಾರೆ. ಪ್ರತಿ ತಾಲೂಕಿನಿಂದ ಶ್ರೀಶೈಲಕ್ಕೆ ಸಾರಿಗೆ ಸೇವೆ ಆರಂಭಿಸಿರುವುದು ಸಂತೋಷದ ಸಂಗತಿ. ಶ್ರಾವಣ ಮಾಸ ಅತ್ಯಂತ ಪವಿತ್ರವಾದದ್ದು, ಈ ಸಂದರ್ಭದಲ್ಲಿ ಶ್ರೀ ಶೈಲಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಥಣಿ ಘಟಕದಿಂದ ೨ ಬಸ್ ಸೇವೆ ಆರಂಭಿಸಿದ್ದು ಮಾದರಿಯಾಗಿದೆ ಎಂದರು.&lt;/p&gt;&lt;h2&gt;&lt;strong&gt;ಆ.16 ರಿಂದ ಸೆಪ್ಟೆಂಬರ್ 11ರವರೆಗೆ ಜಗದ್ಗುರುಗಳ ಅನುಷ್ಠಾನ&lt;/strong&gt;&lt;/h2&gt;&lt;p&gt;ಶ್ರಾವಣ ಪ್ರಯುಕ್ತ ಪ್ರವಚನ: ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.16 ರಿಂದ ಸೆಪ್ಟೆಂಬರ್ 11ರವರೆಗೆ ಜಗದ್ಗುರುಗಳ ಅನುಷ್ಠಾನ, ಇಷ್ಟಲಿಂಗ ಪೂಜೆ ಜರುಗಲಿವೆ. ನಿತ್ಯ ಸಂಜೆ ಶಿವಶರಣೆ ಅಕ್ಕಮಹಾದೇವಿ ಕುರಿತು ಪ್ರವಚನ ಮತ್ತು ಪುರಾಣ ಜರುಗಲಿವೆ. ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.&lt;/p&gt;&lt;h3&gt;&lt;strong&gt;ಬಸ್ ಸಮಯ ಮತ್ತು ಟಿಕೆಟ್ ದರ&lt;/strong&gt;&lt;/h3&gt;&lt;p&gt;ಚಿಕ್ಕೋಡಿ ವಾಯವ್ಯ ಸಾರಿಗೆ ವಿಭಾಗಾಧಿಕಾರಿ ಮಹಾದೇವ ಮುಂಜಿ ಮಾತನಾಡಿ, ನಿತ್ಯ ಸಂಜೆ 5.30ಕ್ಕೆ ಅಥಣಿಯಿಂದ ಜಮಖಂಡಿ, ಬಾಗಲಕೋಟೆ, ರಾಯಚೂರು ಮಾರ್ಗವಾಗಿ ಹೊರಡುವ ಬಸ್&zwnj; ಮರುದಿನ ಬೆಳಗ್ಗೆ 9ಕ್ಕೆ ಶ್ರೀಶೈಲ ತಲುಪಲಿದೆ. ಮರಳಿ ಸಂಜೆ 5.30ಕ್ಕೆ ವಾಪಸ್&zwnj; ತೆರಳಲಿದೆ. ಟಿಕೆಟ್ ದರ ₹ 938 ಇದ್ದು, ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲವೆಂದರು.&lt;/p&gt;&lt;p&gt;ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಝಂಜರವಾಡದ ಬಸವರಾಜ ದೇವರು, ಗ್ಯಾರಂಟಿ ಯೋಜನೆ ಅಥಣಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಘಟಕ ವ್ಯವಸ್ಥಾಪಕ ಎಸ್&zwnj;.ಬಿ.ಗಸ್ತಿ, ಅಧಿಕಾರಿಗಳಾದ ಎ.ಆ&zwnj;ರ್.ಛಬ್ಬಿ, ಬಿ.ಬಿ.ಜಗದಾಳೆ, ಎಸ್.ಪಿ.ಕಂಕನವಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಹಂಪಿಯಲ್ಲಿ 200ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇ ಹಾವಳಿ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಉಪಲೋಕಾಯುಕ್ತ ಗರಂ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/two-new-bus-services-have-been-started-from-athani-transport-unit-to-srisailam-mallikarjuna-temple-mrq/articleshow-qwhfpm1"/>
        </item>
        <item>
            <title><![CDATA[ಬೆಳಗಾವಿ: ಸುಮಾರು 9 km ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಆಗ್ರಹ]]></title>
            <link>https://kannada.asianetnews.com/karnataka-districts/mp-prof-m-nagaraj-s-letter-to-construct-an-elevated-railway-track-of-about-9-km-in-belagavi-mrq/articleshow-v1669fx</link>
            <guid isPermaLink="true">https://kannada.asianetnews.com/karnataka-districts/mp-prof-m-nagaraj-s-letter-to-construct-an-elevated-railway-track-of-about-9-km-in-belagavi-mrq/articleshow-v1669fx</guid>
            <pubDate>Wed, 12 Aug 2026 07:27:35 +0530</pubDate>
            <description><![CDATA[&lt;p&gt;ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಅವರು ಬೆಳಗಾವಿ ನಗರದ ನಿರಂತರ ಸಂಚಾರ ದಟ್ಟಣೆ ಮತ್ತು ರೈಲ್ವೆ ಗೇಟ್&zwnj;ಗಳಿಂದಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿ, ಸುಮಾರು 9 ಕಿ.ಮೀ ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzstxn1k4mg124xbvm1e0d8j,imgname-belagavi-1786499748915.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ&lt;/strong&gt;: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ರೈಲ್ವೆ ಗೇಟ್&zwnj;ಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರದ ಹೃದಯಭಾಗದಲ್ಲಿ ಸುಮಾರು 9 ಕಿ.ಮೀ ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಿಸಬೇಕು ಎಂದು ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.&lt;/p&gt;&lt;p&gt;ನವದೆಹಲಿಯಲ್ಲಿ ಸೋಮವಾರ ನಡೆದ ರಾಜ್ಯಸಭೆ ಅಧಿವೇಶನದಲ್ಲಿ ಬೆಳಗಾವಿ ನಗರದ ಸಂಚಾರ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ನಗರದ ಮಧ್ಯಭಾಗದಲ್ಲಿ ಹಾದುಹೋಗಿರುವ ರೈಲ್ವೆ ಮಾರ್ಗದಿಂದಾಗಿ ಲೆವೆಲ್ ಕ್ರಾಸಿಂಗ್&zwnj;ಗಳಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ದೀರ್ಘಕಾಲದ ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.&lt;/p&gt;&lt;h2&gt;&lt;strong&gt;ಸುಮಾರು 9 ಕಿ.ಮೀ. ಉದ್ದದ ರೈಲ್ವೆ ಮಾರ್ಗ&lt;/strong&gt;&lt;/h2&gt;&lt;p&gt;ನಗರದ ಹೃದಯಭಾಗದಲ್ಲಿ ಸುಮಾರು 9 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ವೈಯಾಡಕ್ಟ್&zwnj;ಗಳ ಮೇಲೆ ಎತ್ತರಿಸಿ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ಆಗಿ ಅಭಿವೃದ್ಧಿಪಡಿಸಿದರೆ, ನಗರದೊಳಗಿನ ಲೆವೆಲ್ ಕ್ರಾಸಿಂಗ್&zwnj;ಗಳಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬಹುದು. ಅಲ್ಲದೆ, ಈಗಿರುವ ರೈಲ್ವೆ ಮೇಲ್ಸೇತುವೆಗಳ ಸುತ್ತ ಉಂಟಾಗುವ ಸಂಚಾರ ದಟ್ಟಣೆಯನ್ನೂ ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.&lt;/p&gt;&lt;p&gt;ಎಲಿವೇಟೆಡ್ ರೈಲ್ವೆ ಯೋಜನೆ ಜಾರಿಯಾದರೆ ರೈಲ್ವೆ ಗೇಟ್&zwnj;ಗಳಲ್ಲಿ ವಾಹನಗಳು ಕಾಯುವ ಪರಿಸ್ಥಿತಿ ತಪ್ಪಲಿದೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕ ಸುರಕ್ಷತೆ ಹೆಚ್ಚುವುದರ ಜತೆಗೆ ಭಾರೀ ವಾಹನಗಳ ಸಂಚಾರ ಹಾಗೂ ನಗರದ ವಿವಿಧ ಪ್ರದೇಶಗಳ ನಡುವಿನ ಸಂಪರ್ಕ ವ್ಯವಸ್ಥೆಯೂ ಸುಧಾರಿಸಲಿದೆ ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;triplets born ಬೆಳಗಾವಿಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 20 ವರ್ಷದ ಯುವತಿ!&lt;/strong&gt;&lt;/p&gt;&lt;h3&gt;&lt;strong&gt;ರಾಜ್ಯಸಭೆಯಲ್ಲಿ ಪ್ರೊ.ಎಂ.ನಾಗರಾಜ ಆಗ್ರಹ&lt;/strong&gt;&lt;/h3&gt;&lt;p&gt;ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಯ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅನುಮೋದನೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಪ್ರೊ.ಎಂ.ನಾಗರಾಜ ಆಗ್ರಹಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಥಣಿ: ಶಿವಭಕ್ತರ ಅನುಕೂಲಕ್ಕಾಗಿ Athani ಸಾರಿಗೆ ಘಟಕದಿಂದ 2 ನೂತನ ಬಸ್; ವೇಳಾಪಟ್ಟಿ, ಟಿಕೆಟ್ ದರ ಈ ರೀತಿಯಾಗಿದೆ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/karnataka-districts/mp-prof-m-nagaraj-s-letter-to-construct-an-elevated-railway-track-of-about-9-km-in-belagavi-mrq/articleshow-v1669fx"/>
        </item>
        <item>
            <title><![CDATA[ಪ್ರತ್ಯೇಕ ಘಟನೆ; ನಾಗರ ಪಂಚಮಿಯಂದೆ ದುರಂತ, ಹಾವು ಕಡಿದು ವಾಟರ್‌ಮ್ಯಾನ್, ಮಹಿಳೆ ಸಾವು!]]></title>
            <link>https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</link>
            <guid isPermaLink="true">https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n</guid>
            <pubDate>Tue, 18 Aug 2026 10:41:05 +0530</pubDate>
            <description><![CDATA[&lt;p&gt;ಬೀದರ್ ಜಿಲ್ಲೆಯ ಸೋಲದಾಬಕಾ ಗ್ರಾಮದಲ್ಲಿ, ನೀರಿನ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದ ವಾಟರ್&zwnj;ಮ್ಯಾನ್ ಭೀಮ ಜಾಧವ್ (48) ಮೃತಪಟ್ಟಿದ್ದಾರೆ. ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m09mep030ksn0769k2n5gj9x,imgname-snake-bite--1787029837827.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್: &lt;/strong&gt;ನಾಗರ ಪಂಚಮಿ ಹಬ್ಬದ ದಿನವೇ ಹಾವು ಕಡಿದು ವಾಟರ್&zwnj;ಮ್ಯಾನ್ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಸೋಲದಾಬಕಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು 48 ವರ್ಷದ ಭೀಮ ಜಾಧವ್ ಎಂದು ಗುರುತಿಸಲಾಗಿದೆ. ನೀರಿನ ಟ್ಯಾಂಕ್ ಬಳಿ ನೀರು ಬಂದ್ ಮಾಡಲು ತೆರಳಿದ ಸಂದರ್ಭದಲ್ಲಿ ಹಾವು ಕಡಿದು ಭೀಮ ಸಾವನ್ನಪ್ಪಿದ್ದಾರೆ.&lt;/p&gt;&lt;h2&gt;ಕುಟುಂಬಸ್ಥರ ಆಕ್ರಂದನ&lt;/h2&gt;&lt;p&gt;ಹಾವು ಕಡಿದ ಪರಿಣಾಮ ಸ್ಥಳದಲ್ಲೇ ಭೀಮ ಜಾಧವ್ ಸಾವನ್ನಪ್ಪಿದ್ದು, ನೀರಿನ ಟ್ಯಾಂಕ್ ಸುತ್ತಮುತ್ತ ಹುಲ್ಲು-ಕಡ್ಡಿ ಬೆಳೆದಿದ್ದೇ ಅವಘಡಕ್ಕೆ ಕಾರಣ ಎಂದು ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹುಲ್ಲು ಕಟಾವು ಮಾಡುವಂತೆ ಗ್ರಾಮ ಪಂಚಾಯಿತಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಸೋಲದಾಬಕಾ ಹೊರವಲಯದ ಹಾಲಹಳ್ಳಿ ರಸ್ತೆ ಬಳಿಯ ಮಹದೇವ ಮಂದಿರದ ಸಮೀಪ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಹುಲಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.&lt;/p&gt;&lt;h2&gt;ಹಾವು ಕಚ್ಚಿದಂತೆ ಕನಸು, ಮರುದಿನವೇ ಸಾವು!&lt;/h2&gt;&lt;p&gt;ಇತ್ತ ಚಿಕ್ಕೋಡಿಯಲ್ಲಿ ನಾಗರ ಪಂಚಮಿಯ ದಿನವೇ ಹಾವು ಕಡಿತದು ಮಹಿಳೆ ಇಹಲೋಕ ತ್ಯಜಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಭಾಗ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು 43 ವರ್ಷದ ಸತ್ಯವ್ವ ಶಿವಾನಂದ ಶಿಂಗೆ ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಸತ್ಯವ್ವ ಅವರಿಗೆ ನಾಗರ ಪಂಚಮಿಯ ಇಂದಿನ ದಿನವೇ ಹಾವು ಕಚ್ಚಿದಂತೆ ಕನಸು ಬಂದಿತ್ತಂತೆ. ಇದನ್ನು ಕೂಲಿ ಕೆಲಸಕ್ಕೆ ಹೋದಾಗ ತಮ್ಮ ಸಹಪಾಠಿಗಳೊಂದಿಗೆ ಮಹಿಳೆ ಹಂಚಿಕೊಂಡಿದ್ದರಂತೆ. ಆದರೆ ಇದಾದ ಮರುದಿನವೇ ಹಾವು ಕಚ್ಚಿಯೇ ಮಹಿಳೆ ಸತ್ಯವ್ವ ಸಾವನ್ನಪ್ಪಿದ್ದಾರೆ. ಕಾಕತಾಳೀಯ ಎಂಬಂತೆ ಪಂಚಮಿಯ ದಿನವೇ ಹಾವು ಹಚ್ಚಿ ಮಹಿಳೆ ಸಾವನ್ನಪ್ಪಿದ್ದು, ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.&lt;/p&gt;]]></content:encoded>
            <category>belagavi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/separate-incidents-tragedy-strikes-on-nagara-panchami-waterman-and-woman-die-after-being-bitten-by-snakes-sns/articleshow-w303m5n"/>
        </item>
        <item>
            <title><![CDATA[ಬಾತ್‌ರೂಮ್‌ನಲ್ಲೇ ಅಡಗಿದ್ದ ಚಿರತೆ, ಸಾವಿನ ದವಡೆಯಿಂದ ಪಾರಾದ ಬೆಳಗಾವಿ ಮಹಿಳೆ!]]></title>
            <link>https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg</link>
            <guid isPermaLink="true">https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg</guid>
            <pubDate>Mon, 27 Jul 2026 21:17:32 +0530</pubDate>
            <description><![CDATA[&lt;p&gt;ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ, ಮನೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅಡಗಿದ್ದ ಚಿರತೆಯೊಂದು ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆ ದಾಳಿಗೆ ಯತ್ನಿಸಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyj42423z1yjkkh9dv8bpm6k,imgname-leopard-hides-in-bathroom-1785167155267.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಜು.27): &lt;/strong&gt;ಖಾನಾಪುರ ತಾಲೂಕಿನ ಗುಂಜಿ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ನಿರಂತರವಾಗಿ ಅಡ್ಡಾಡುತ್ತಿದ್ದ ಚಿರತೆಯೊಂದು ರಾತ್ರೋರಾತ್ರಿ ಮನೆಯೊಂದರ ಒಳಗೆ ಅಡಗಿ ಕುಳಿತು, ಭಾನುವಾರ ಬೆಳಿಗ್ಗೆ ಮಹಿಳೆಯೊಬ್ಬರ ಮೇಲೆಯೇ ದಾಳಿಗೆ ಯತ್ನಿಸಿದ ಭೀಕರ ಘಟನೆ ನಡೆದಿದೆ. ಅದೃಷ್ಟವಶಾತ್ ಮಹಿಳೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ತೀವ್ರವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಗುಂಜಿ ಗ್ರಾಮದ ಸ್ಟೇಷನ್ ರಸ್ತೆಯಲ್ಲಿರುವ ಪ್ರಸಾದ್ ಗಾಡಿ ಎಂಬುವವರ ಮನೆಗೆ ಸೇರಿಕೊಂಡಿದ್ದ ಹೊಸದಾಗಿ ನಿರ್ಮಿಸಲಾದ ಬಾತ್&zwnj;ರೂಮ್&zwnj; ಒಳಗೆ ರಾತ್ರಿ ವೇಳೆಯಲ್ಲಿ ನುಗ್ಗಿದ್ದ ಚಿರತೆ, ಬೆಳಗಿನವರೆಗೂ ಅಲ್ಲೇ ಯಾರಿಗೂ ತಿಳಿಯದಂತೆ ಅಡಗಿಕೊಂಡಿತ್ತು. ಚಿರತೆ ಅಡಗಿರುವುದು ತಿಳಿಯದ ಕುಟುಂಬಸ್ಥರು ತಮ್ಮ ನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಬೆಳಿಗ್ಗೆ ಸುಮಾರು 6 ಗಂಟೆಗೆ ಪ್ರಸಾದ್ ಗಾಡಿ ಅವರು ಕೊಟ್ಟಿಗೆಯಲ್ಲಿದ್ದ ಹಸು ಹಾಗೂ ಎಮ್ಮೆಗಳನ್ನು ಹೊರಗೆ ತಂದು ಕಟ್ಟಿದ್ದರು. ಈ ವೇಳೆ ಕುಟುಂಬದ ಸದಸ್ಯರು, ನೆರೆಹೊರೆಯವರು ಹಾಗೂ ಮಕ್ಕಳು ಮನೆಯ ಅಂಗಳದಲ್ಲೇ ಓಡಾಡುತ್ತಿದ್ದರು. ಕೆಲವು ಮಕ್ಕಳು ಚಿರತೆ ಅಡಗಿದ್ದ ಜಾಗದಿಂದ ಕೇವಲ ಕೆಲವೇ ಅಡಿಗಳ ಅಂತರದಲ್ಲಿ ಬಟ್ಟೆ ತೊಳೆಯುತ್ತಿದ್ದರು ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕೂದಲೆಳೆಯ ಅಂತರದಲ್ಲಿ ಪಾರಾದ ಗೃಹಿಣಿ!&lt;/strong&gt;&lt;/h2&gt;&lt;p&gt;ಬೆಳಿಗ್ಗೆ ಸುಮಾರು 8 ಗಂಟೆಯ ವೇಳೆಗೆ ಪ್ರಸಾದ್ ಗಾಡಿ ಅವರ ಪತ್ನಿ ಹುಲ್ಲು ತರಲು ಶೌಚಾಲಯದ ಬಳಿ ಹೋದಾಗ ಭಾರಿ ದುರಂತವೊಂದು ತಪ್ಪಿದೆ. ಮಹಿಳೆ ಒಳಗೆ ಕೈಚಾಚುತ್ತಿದ್ದಂತೆಯೇ ಅಡಗಿದ್ದ ಚಿರತೆ ಏಕಾಏಕಿ ಗುರ್ Gurr ಎಂದು ಘರ್ಜಿಸಿ, ಆಕೆಯತ್ತ ಪಂಜ ಚಾಚಿ ದಾಳಿಗೆ ಯತ್ನಿಸಿದೆ. ತಕ್ಷಣವೇ ಸಮಯಪ್ರಜ್ಞೆಯಿಂದ ಹಿಂದೆ ಜಿಗಿದ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಕೂಡಲೇ ಮನೆಯವರನ್ನು ಮತ್ತು ನೆರೆಹೊರೆಯವರನ್ನು ಎಚ್ಚರಿಸಿದ್ದಾರೆ. ತಕ್ಷಣವೇ ಶೌಚಾಲಯದಿಂದ ಹೊರಬಂದ ಚಿರತೆ, ಕಾಂಪೌಂಡ್ ಗೋಡೆ ಜಿಗಿದು ಹತ್ತಿರದ ಪೊದೆಗಳೊಳಗೆ ಓಡಿ ಕಣ್ಮರೆಯಾಗಿದೆ.&lt;/p&gt;&lt;p&gt;ಹಸು, ಎಮ್ಮೆ ಹಾಗೂ ಕರುಗಳನ್ನು ಕಟ್ಟಿದ್ದ ತೆರೆದ ಕೊಟ್ಟಿಗೆಯ ಪಕ್ಕದಲ್ಲೇ ಇಡೀ ರಾತ್ರಿ ಕಳೆದಿದ್ದರೂ, ಚಿರತೆ ಯಾವುದೇ ಜಾನುವಾರುಗಳ ಮೇಲೆ ದಾಳಿ ನಡೆಸದಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಚಿರತೆ ತುಂಬಾ ಕ್ಷೀಣವಾಗಿ ಹಾಗೂ ನಿಶಕ್ತವಾಗಿ ಕಂಡುಬಂದಿದ್ದು, ಕಾಂಪೌಂಡ್ ಗೋಡೆ ಏರುವಾಗ ತೂರಾಡಿದೆ. ಹೀಗಾಗಿ ಚಿರತೆಗೆ ಗಾಯಗಳಾಗಿರಬಹುದು ಅಥವಾ ಅನಾರೋಗ್ಯದಿಂದ ಬಳಲುತ್ತಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೋನು ಅಳವಡಿಸಿದ ಅರಣ್ಯ ಇಲಾಖೆ&lt;/strong&gt;&lt;/h2&gt;&lt;p&gt;ಕಳೆದ ಹದಿನೈದು ದಿನಗಳಿಂದ ಗುಂಜಿ ಗ್ರಾಮದ ಮೌಳಿ ದೇವಸ್ಥಾನ ಹಾಗೂ ಗ್ರಾಮ ಪಂಚಾಯತಿ ಕಚೇರಿ ಸೇರಿದಂತೆ ವಿವಿಧೆಡೆ ಈ ಚಿರತೆ ಪದೇ ಪದೆ ಕಾಣಿಸಿಕೊಳ್ಳುತ್ತಿತ್ತು. ಈಗಾಗಲೇ ಇದು ಕೆಲವು ಬೀದಿ ನಾಯಿಗಳನ್ನು ಕೊಂದಿದ್ದು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಅಪಾಯವನ್ನುಂಟುಮಾಡಬಹುದು ಎಂದು ಗ್ರಾಮಸ್ಥರು ಭೀತಿ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಚಿರತೆಯನ್ನು ತಕ್ಷಣವೇ ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಬಸವರಾಜ ವಲದ ಪ್ರತಿಕ್ರಿಯಿಸಿ, &quot;ಸ್ಥಳದಲ್ಲಿ ಗಸ್ತು ಪಡೆಯನ್ನು ನಿಯೋಜಿಸಲಾಗಿದೆ, ಕಣ್ಗಾವಲು ಹೆಚ್ಚಿಸಲಾಗಿದ್ದು ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸಲಾಗಿದೆ,&quot; ಎಂದು ತಿಳಿಸಿದ್ದಾರೆ. ಅಲ್ಲದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಮತ್ತು ಚಿರತೆ ಮತ್ತೆ ಎಲ್ಲಾದರೂ ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಇಲಾಖೆ ಮನವಿ ಮಾಡಿದೆ.&lt;/p&gt;]]></content:encoded>
            <category>belagavi</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/leopard-hiding-in-bathroom-attacks-woman-in-belagavi-khanapur-gunji-san/articleshow-x0ygvrg"/>
        </item>
        <item>
            <title><![CDATA[ಸವದತ್ತಿ ರೈತನ ಖೋವಾ ಸಾಮ್ರಾಜ್ಯ; 600 ltr ಹಾಲು,  ₹240ಯಂತೆ 150 kg ಖೋವಾ ಮಾರಾಟ]]></title>
            <link>https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5</link>
            <guid isPermaLink="true">https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5</guid>
            <pubDate>Sun, 23 Aug 2026 12:42:47 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0ppw89chv7xrqzf5wtb62ne,imgname-dairy-farmimg-with-khoa--2--1787468587308.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಎಂಬ ರೈತ, ತಮ್ಮ ಗ್ರಾಮದಲ್ಲಿಯೇ ಹೈನುಗಾರಿಕೆಯನ್ನು ಬಳಸಿ ಖೋವಾ ತಯಾರಿಸುವ ಉದ್ಯಮವನ್ನು ಆರಂಭಿಸಿದ್ದಾರೆ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಉದ್ಯಮವು ಇಂದು ಉತ್ತರ ಕರ್ನಾಟಕದಾದ್ಯಂತ ಜನಪ್ರಿಯವಾಗಿದೆ.&lt;/p&gt;&lt;img&gt;&lt;p&gt;ಉದ್ಯಮಿಯಾಗಲು ತುಂಬಾನೇ ಕಷ್ಟಪಡಬೇಕು ಎಂಬ ಮಾತನ್ನು ಸುಳ್ಳು ಮಾಡಿದವರು ನಮ್ಮ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್. ಇವರು ತಮ್ಮೂರಿನಲ್ಲಿಯೇ ಆರಂಭಿಸಿದ ಉದ್ಯಮ ಇಂದು ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರಿಯಗೊಂಡಿದೆ. ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್ ಅವರು ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದವರು.&lt;/p&gt;&lt;img&gt;&lt;p&gt;ಕಾರಿಮನಿ ರೈತರು ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಉಪಕಸಬುನ್ನಾಗಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿಯ ಹೈನುಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮಲ್ಲಿಕಾರ್ಜುನ್ ಅವರು ತಾವೇ ಹಾಲು ಸಂಗ್ರಹಣೆ ಮಾಡಿಕೊಳ್ಳಲು ಆರಂಭಿಸಿದರು. ಈ ಹಾಲಿನಿಂದ ತಮ್ಮ ಜಮೀನಿನಲ್ಲಿ ಸೌದೆ ಒಲೆ ಮಾಡಿಕೊಂಡು ಖೋವಾ (Khoa) ತಯಾರಿಸಲು ಆರಂಭಿಸಿದರು. ನಂತರದ ದಿನಗಳಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಂಡು ಖೋವಾ ತಯಾರಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಯುಟ್ಯೂಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಲ್ಲಿಕಾರ್ಜುನ್ ಬಸಪ್ಪ ವಗ್ಗರ್, ಆರಂಭದ ದಿನಗಳಲ್ಲಿ ಖೋವಾ ತಯಾರಿಸಿ ಧಾರವಾಡಕ್ಕೆ ಕಳುಹಿಸಲಾಗುತ್ತಿತ್ತು. ಇದೀಗ ನಾವೇ ಶುದ್ದ ಖೋವಾ ಮತ್ತು ಅದರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಜನರೇ ನಮ್ಮ ಉತ್ಪನ್ನದ ಪ್ರಚಾರ ಮಾಡಿದ್ದರಿಂದ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ ಎಂದು ತಿಳಿಸಿದರು.&lt;/p&gt;&lt;img&gt;&lt;p&gt;ಮಲ್ಲಿಕಾರ್ಜುನ್ ಅವರ ಡೈರಿಯಲ್ಲಿ ದಿನಕ್ಕೆ ಅಂದಾಜು 600 ಲೀಟರ್&zwnj;ನಷ್ಟು ಹಾಲು ಸಂಗ್ರಹವಾಗುತ್ತದೆ. ಈ 600 ಲೀಟರ್ ಹಾಲಿನಿಂದ 150 ಕೆಜಿಯಷ್ಟು ಸಿದ್ದವಾಗುತ್ತದೆ. 1 ಕೆಜಿ ಖೋವಾ ಬೆಲೆ 240 ರೂಪಾಯಿ ಆಗಿದೆ. ಗ್ರಾಹಕರಿದ್ದ ಸ್ಥಳಕ್ಕೆ ಖೋವಾ ರವಾನಿಸಲು ಹೆಚ್ಚುವರಿಯಾಗಿ ಸಾರಿಗೆ ವೆಚ್ಚ ಸೇರಿಸಲಾಗುತ್ತದೆ. ಖೋವಾ ಜೊತೆ ಮಿಲ್ಕ್ ಕೇಕ್, ಪೇಡಾ, ಕಲಾಕಂದ್ ಮತ್ತು ಲಾಡುಗಳನ್ನು ಸಹ ತಯಾರಿಸಲಾಗುತ್ತದೆ.&lt;/p&gt;&lt;img&gt;&lt;p&gt;ತಮ್ಮ 5 ಎಕರೆ ಕೃಷಿಭೂಮಿಯಲ್ಲಿ ಉದ್ಯಮ ಕಟ್ಟಿಕೊಂಡಿರುವ ಮಲ್ಲಿಕಾರ್ಜುನ್ ಅವರು ಕಬ್ಬು, ಮೆಕ್ಕೆಜೋಳ ಸಹ ಬೆಳೆಯುತ್ತಾರೆ. ಮೂವರು ಕಾರ್ಮಿಕರು ಇವರ ಬಳಿ ಕೆಲಸ ಮಾಡುತ್ತಿದ್ದು, ಮಲ್ಲಿಕಾರ್ಜುನ್ ವಗ್ಗರ್ ಅವರ ಡೈರಿಯಿಂದಾಗಿ ಕಾರಿಮನಿ ಗ್ರಾಮದಲ್ಲಿ ಬಹುತೇಕ ರೈತರೆಲ್ಲರೂ ಹೈನುಗಾರಿಕೆ ಆರಂಭಿಸಿದ್ದಾರೆ. ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟೆ, ಗದಗ, ಇಳಕಲ್, ಜಮಖಂಡಿ ಸೇರಿದಂತೆ ಸುತ್ತಲಿನ ನಗರಗಳಿಗೆಲ್ಲಾ ಇಲ್ಲಿಯ ಖೋವಾ ರವಾನೆಯಾಗುತ್ತದೆ.&lt;/p&gt;]]></content:encoded>
            <category>belagavi</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/farmer-from-savadatti-taluk-in-belagavi-has-started-khoa-making-business-using-dairy-farming-in-his-karimani-village-mrq-z0l0zx5"/>
        </item>
    </channel>
</rss>
