<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 16 Sep 2026 08:57:14 +0530</lastBuildDate>
        <atom:link href="https://kannada.asianetnews.com/rss/belagavi" rel="self" type="application/rss+xml"/>
        <item>
            <title><![CDATA[Belagavi: ಹಬ್ಬದ ಸಂಭ್ರಮವನ್ನೇ ಕಸಿದ ಫ್ರಿಡ್ಜ್ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ]]></title>
            <link>https://kannada.asianetnews.com/karnataka-districts/fridge-explosion-shatters-festive-joy-four-members-of-same-family-dead-two-in-critical-condition-belagavi-sns/articleshow-359p7fq</link>
            <guid isPermaLink="true">https://kannada.asianetnews.com/karnataka-districts/fridge-explosion-shatters-festive-joy-four-members-of-same-family-dead-two-in-critical-condition-belagavi-sns/articleshow-359p7fq</guid>
            <pubDate>Tue, 15 Sep 2026 09:58:32 +0530</pubDate>
            <description><![CDATA[&lt;p&gt;ಗಣೇಶ ಚತುರ್ಥಿ ಹಬ್ಬದ ದಿನವೇ ಬೆಳಗಾವಿಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಮತ್ತೊಂದು ದುರಂತದಲ್ಲಿ, ಮಂಡ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದು, ಹಬ್ಬದ ಸಂಭ್ರಮದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hn38tjy7v02shpzn4jsdwq,imgname-fridge-blast-1789446431570.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ನಾಡಿನ ಎಲ್ಲಡೆ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿದೆ. ಆದರೆ ಗಣೇಶ ಚತುರ್ಥಿ ವೇಳೆಯೇ ಬೆಳಗಾವಿಯಲ್ಲಿ ದೊಡ್ಡ ದುರಂತ ಸಂಭವಿಸಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದ್ದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಮನೆಯಲ್ಲಿದ್ದ ಫ್ರಿಡ್ಲ್ ಬ್ಲಾಸ್ಟ್ ಆಗಿ ಇಡೀ ಮನೆ ಬೆಂಕಿಗೆ ಅಹುತಿಯಾಗಿ, ಒಂದೇ ಕುಟುಂಬ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನು ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಸಿಲಾಗುತ್ತಿದೆ.&lt;/p&gt;&lt;h2&gt;ಹಬ್ಬದ ದಿನವೇ ದುರಂತ!&lt;/h2&gt;&lt;p&gt;ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾವ್ಹಾಟ್ ಗಲ್ಲಿಯಲ್ಲಿ ತಡರಾತ್ರಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಗಜಾನನ ದಮೋನೆ ಸೇರಿ ನಾಲ್ವರ ಸಾವನ್ನಪ್ಪಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬದಲ್ಲಿ ಗಣೇಶ ಚತುರ್ಥಿ ದಿನವೇ ಭೀಕರ ದುರ್ಘಟನೆ ನಡೆದಿದೆ. ಮನೆಯಲ್ಲಿ ಹೊತ್ತಿಕೊಂಡ ಬೆಂಕಿಗೆ ಕುಟುಂಬವೇ ಸುಟ್ಟು ಭಸ್ಮವಾಗಿದೆ.&lt;/p&gt;&lt;h2&gt;ಇಬ್ಬರ ಸ್ಥಿತಿ ಗಂಭೀರ&lt;/h2&gt;&lt;p&gt;ದುರ್ಘಟನೆಯಲ್ಲಿ ಕೊನೆಯುಸಿರೆಳೆದವರನ್ನು ಶಾರಧಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50), ಪ್ರಿಯಾ ಗಜಾನನ ದಮೋನೆ (28) ಗಂಗಾ ಗಜಾನನ ದಮೋನೆ (25) ಎಂದು ಗುರುತಿಸಲಾಗಿದೆ. ಇನ್ನು, ರೋಷನ್ ದಮೋನೆ (21) ಗಜಾನನ ದಮೋನೆ (61) ಗಂಭೀರ ಗಾಯಗೊಂಡಿದ್ದು, ಗಾಯಾಳುಗಳಿಗೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ಹೆಚ್ಚಿನ ತನಿಖೆ ನಡೆಸಿದ್ದಾರೆ.&lt;/p&gt;&lt;h2&gt;ಹಬ್ಬಕ್ಕೆ ಹೋಗಿದ್ದ ಯುವಕರ ದುರಂತ ಅಂತ್ಯ&lt;/h2&gt;&lt;p&gt;ಇನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಸಾವನ್ಪಪಿದ್ದಾರೆ. ಕೊಪ್ಪ ನಿವಾಸಿಗಳಾದ ಕಾವ್ಯ, ಮುತ್ತುರಾಜ್, ಕೀರ್ತನ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಸ್ಕೂಟರ್ ಗೆ ಹಾಲಿನ ಟ್ಯಾಂಕರ್ ಡಿಕ್ಕಿಯಾಗಿ, ಈ ವೇಳೆ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ. ನಿನ್ನೆ ಹಬ್ಬಕ್ಕೆ ಅಂತ ಸ್ವತಃ ಊರಿಗೆ ಹೋಗಿದ್ದ ಯುವಕರು ಹಬ್ಬ ಮುಗಿಸಿ ಇಂದು ಬೆಳಗ್ಗಿನ ಜಾವ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/fridge-explosion-shatters-festive-joy-four-members-of-same-family-dead-two-in-critical-condition-belagavi-sns/articleshow-359p7fq"/>
        </item>
        <item>
            <title><![CDATA[Belagavi: ಕಾಡಿನಲ್ಲೊಂದು ಗುರುದೀಪ: ಅಕ್ಷರ ಸಂತ ನಿಂಗಪ್ಪ ಮೇಷ್ಟ್ರು, 29 ವರ್ಷಗಳಿಂದ ಸೇವೆ]]></title>
            <link>https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6</link>
            <guid isPermaLink="true">https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6</guid>
            <pubDate>Sat, 05 Sep 2026 14:21:11 +0530</pubDate>
            <description><![CDATA[ಬೆಳಗಾವಿಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದ ಅಮಗಾಂವ ಗ್ರಾಮದಲ್ಲಿ ಶಿಕ್ಷಕ ನಿಂಗಪ್ಪ ಬಾಳೇಕುಂದ್ರಿಗಿ ಅವರು ಕಳೆದ 29 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಸವಾಲುಗಳನ್ನು ಎದುರಿಸಿ, ಗ್ರಾಮಸ್ಥರ ಪ್ರೀತಿ ಗಳಿಸಿ, ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ವರ್ಗಾವಣೆ ಬಯಸದೆ ಅದೇ ಶಾಲೆಯಲ್ಲಿ ನಿವೃತ್ತರಾಗುವ ಇಂಗಿತ ಹೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1rbs3mvmccaz8zm430c0022,imgname-belagavi-teacher-ningappa-1788597800603.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: ನ&lt;/strong&gt;ಗರ ಪ್ರದೇಶದ ಶಾಲೆಗಳಿಗೆ ನೇಮಕವಾಗಲು ಬಯಸುವ ಶಿಕ್ಷಕರ ನಡುವೆ, ಕಳೆದ 29 ವರ್ಷಗಳಿಂದ ದಟ್ಟ ಕಾನನದ ಮಕ್ಕಳಿಗೆ ಅಕ್ಷರ ಸಂತರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ನಿಂಗಪ್ಪ ಬಾಳೇಕುಂದ್ರಿಗಿ ಅವರು. ಶಿಕ್ಷಕ ವೃತ್ತಿಯನ್ನು ಹೀಗೂ ಮಾಡಬಹುದು ಎಂಬ ಹೆಗ್ಗುರತನ್ನು ಮಾಡಿಕೊಟ್ಟಿದ್ದಾರೆ ಇವರು.ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯ ಪ್ರದೇಶದ ಅಮಗಾಂವ ಗ್ರಾಮದ ಸರ್ಕಾರಿ ಮರಾಠಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಅವರು, 1997ರ ಜನವರಿ 6ರಂದು ಇದೇ ಶಾಲೆಯಲ್ಲಿ ಸೇವೆ ಆರಂಭಿಸಿದ್ದರು.&lt;/p&gt;&lt;p&gt;ನೆಟ್&zwnj;ವರ್ಕ್, ಬಸ್ ಸಂಪರ್ಕವಿಲ್ಲದ ಹಾಗೂ ಅತಿಹೆಚ್ಚು ಮಳೆ ಬೀಳುವ ಅಮಗಾಂವದಲ್ಲೇ ತಮ್ಮ ಸೇವೆಯ 29 ವರ್ಷಗಳನ್ನು ಕಳೆದಿದ್ದಾರೆ. ಮುಂದಿನ ಐದು ವರ್ಷಗಳ ಬಳಿಕ ಇದೇ ಶಾಲೆಯಲ್ಲಿ ನಿವೃತ್ತರಾಗುವ ಉದ್ದೇಶ ಮತ್ತು ಇಂಗಿತ ಹೊಂದಿದ್ದಾರೆ.&lt;/p&gt;&lt;h2&gt;&lt;strong&gt;1997ರಿಂದ ಅಮಗಾಂವದಲ್ಲೇ ಸೇವೆ&lt;/strong&gt;&lt;/h2&gt;&lt;p&gt;1997ರಲ್ಲಿ ಶಿಕ್ಷಕರಾಗಿ ನೇಮಕವಾದಾಗ ಅಮಗಾಂವ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಚಿಕಲೆಯಿಂದ ಸುಮಾರು 12 ಕಿಮೀ ನಡೆದುಕೊಂಡು ಸಂಜೆ ಗ್ರಾಮ ತಲುಪಿದ್ದೆ. ಆಗ ಶಾಲೆಯಲ್ಲಿ ಇಬ್ಬರು ಮರಾಠಿ ಶಿಕ್ಷಕರಿದ್ದರು. ನನಗೆ ಮರಾಠಿ ಬರುತ್ತಿರಲಿಲ್ಲ. ಕನ್ನಡದಲ್ಲೇ ಗ್ರಾಮಸ್ಥರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಮಕ್ಕಳಿಗೆ ಚಾಕೋಲೇಟ್ ಕೊಟ್ಟು ಆತ್ಮೀಯನಾದೆ. ಅಂದಿನಿಂದ ಆರಂಭವಾದ ಸೇವೆ ಇಂದಿಗೂ ಮುಂದುವರಿದಿದೆ ಎಂದು ನಿಂಗಪ್ಪ ಮೇಷ್ಟ್ರು ನೆನಪಿಸಿಕೊಳ್ಳುತ್ತಾರೆ.&lt;/p&gt;&lt;p&gt;ಶಿಕ್ಷಕರಾಗಿ ಮಕ್ಕಳಿಗೆ ಪಾಠ ಹೇಳುವುದರ ಜತೆಗೆ ಗ್ರಾಮಸ್ಥರ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಇವರು, ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಕ್ಕಾಗಿ ಅಧಿಕಾರಿಗಳ ಗಮನ ಸೆಳೆಯುವುದಲ್ಲದೆ, ಗ್ರಾಮದಲ್ಲಿನ ತಂಟೆ-ತಕರಾರುಗಳನ್ನೂ ಬಗೆಹರಿಸಿದ್ದಾರೆ.&lt;/p&gt;&lt;h3&gt;&lt;strong&gt;ವಾರಕ್ಕೊಮ್ಮೆ ಮಾತ್ರ ಊರಿಗೆ ತೆರಳುವ ಶಿಕ್ಷಕ ನಿಂಗಪ್ಪ&lt;/strong&gt;&lt;/h3&gt;&lt;p&gt;ಕಾಡಿನ ನಡುವೆ ಸೇವೆ ಸಲ್ಲಿಸುವುದು ನಿಂಗಪ್ಪ ಅವರಿಗೆ ಹಲವು ಸವಾಲುಗಳನ್ನು ತಂದಿದೆ. ಹುಲಿ, ಚಿರತೆ, ಕರಡಿ, ಕಾಡುಹಂದಿ ಸೇರಿದಂತೆ ಹಲವು ವನ್ಯಪ್ರಾಣಿಗಳನ್ನು ಕಂಡಿರುವ ಅವರು, ಒಮ್ಮೆ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿಸಿಕೊಂಡು ಗ್ರಾಮಸ್ಥರ ನೆರವಿನಿಂದ ಬದುಕುಳಿದಿದ್ದಾರೆ.&lt;/p&gt;&lt;p&gt;ಬೈಕ್&zwnj;ನಲ್ಲಿ ಸಂಚರಿಸುವಾಗ ಹಲವು ಬಾರಿ ಬಿದ್ದು ಗಾಯಗೊಂಡರೂ ಊರು ಬಿಟ್ಟಿಲ್ಲ. ಗ್ರಾಮಸ್ಥರು ತಮ್ಮ ಪ್ರೀತಿ ಮತ್ತು ಗೌರವದಿಂದ ಅವರಿಗಾಗಿ ಉಚಿತವಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. 29 ವರ್ಷಗಳ ಸೇವೆಯಲ್ಲಿ ಒಮ್ಮೆಯೂ ವರ್ಗಾವಣೆಗೆ ಅರ್ಜಿ ಸಲ್ಲಿಸಿಲ್ಲ. ಪ್ರತಿ ಶನಿವಾರ ಹಾಗೂ ರಜಾ ದಿನಗಳಲ್ಲಿ ಮಾತ್ರ ಬೆಳಗಾವಿಯಲ್ಲಿರುವ ಕುಟುಂಬದ ಬಳಿಗೆ ತೆರಳುವ ಇವರು, ಉಳಿದ ದಿನಗಳನ್ನು ಅಮಗಾಂವದಲ್ಲೇ ಕಳೆಯುತ್ತಾರೆ.&lt;/p&gt;&lt;p&gt;ಬೆಳಗಾವಿಯ ವಡಗಾವಿಯಲ್ಲಿ ಪತ್ನಿ ರತ್ನಾ ಹಾಗೂ ಮಕ್ಕಳೊಂದಿಗೆ ಕುಟುಂಬ ಹೊಂದಿರುವ ನಿಂಗಪ್ಪ ಅವರಿಗೆ ಕುಟುಂಬದ ಸಂಪೂರ್ಣ ಬೆಂಬಲವಿದ್ದು, ಅಮಗಾಂವದ ಜನರ ಪ್ರೀತಿ, ಗೌರವವೇ ನನ್ನನ್ನು ಇಲ್ಲಿಯೇ ಉಳಿಸಿದೆ ಎನ್ನುತ್ತಾರೆ ಅವರು.&lt;/p&gt;&lt;p&gt;--------&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-teacher-ningappa-balekundrigi-serving-29-years-in-amagam-village-of-bhimgad-sanctuary-khanapura-mrq/articleshow-3lniog6"/>
        </item>
        <item>
            <title><![CDATA[ಕೋಟ್ಯಂತರ ರೂ. ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಬೆಳಗಾವಿಯ 80ರ ಕಿಲಾಡಿ ಅಜ್ಜಿ ಅಂದರ್​]]></title>
            <link>https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6</link>
            <guid isPermaLink="true">https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6</guid>
            <pubDate>Thu, 03 Sep 2026 21:13:12 +0530</pubDate>
            <description><![CDATA[ಬೆಳಗಾವಿಯಲ್ಲಿ 80 ವರ್ಷದ ವೃದ್ಧೆಯೊಬ್ಬಳು, ಇತರರ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ. ಜಮೀನಿನ ನಿಜವಾದ ಮಾಲೀಕರು ದೂರು ನೀಡಿದ ನಂತರ ಈಕೆಯ ವಂಚನೆಯ ಜಾಲ ಬಯಲಾಗಿದ್ದು, ಪೊಲೀಸರು ಆರೋಪಿ ವೃದ್ಧೆಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1kyzvhkcqgmbjqmrsj5c12a,imgname-mandakini-1788450172467.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ: ವಯಸ್ಸು ಎನ್ನೋದು ದೇಹಕ್ಕೇ ವಿನಾ ಮನಸ್ಸಿಗಲ್ಲ ಎನ್ನುವ ಮಾತಿದೆ. ಇದನ್ನು ಸಾಧನೆ ಮಾಡುವವರಿಗೆ ಹೆಚ್ಚಾಗಿ ಹೇಳುವ ಮಾತು. ಆದರೆ ಬೆಳಗಾವಿಯ 80 ವರ್ಷದ ಅಜ್ಜಿ ಇದೀಗ ಪರರ ಜಮೀನುಗಳನ್ನು ತನ್ನದೇ ಜಮೀನು ಎಂದು ನಕಲಿ ದಾಖಲೆಯನ್ನು ಸೃಷ್ಟಿಸಿ ಹಲವಾರು ಮಂದಿಗೆ ವಂಚಿಸಿ ಈಗ ಅಂದರ್​ ಆಗಿರೋ ಘಟನೆ ನಡೆದಿದೆ. ಮೋಸ ಹೋಗುವವರು ಇರುವವರೆಗೂ, ವಯಸ್ಸಿನ ಅಡ್ಡಿಯಿಲ್ಲದೇ ಮೋಸ ಮಾಡುವವರು ಇರುತ್ತಾರೆ ಎನ್ನುವುದಕ್ಕೆ ಈ ಕಿಲಾಡಿ ಅಜ್ಜಿಯೇ ಸಾಕ್ಷಿಯಾಗಿದ್ದಾಳೆ.&lt;/p&gt;&lt;p&gt;ವಡಗಾಂವ ಗಣೇಶ ಕಾಲೋನಿ ನಿವಾಸಿ ಮಂದಾಕಿನಿ ಪರಿಶವಾಡಕರ್​ ಎನ್ನುವ ವೃದ್ಧೆ ತನ್ನ ಗ್ರಾಮದಲ್ಲಿ ಇರುವ ಅಕ್ಕ-ಪಕ್ಕದ ಜಮೀನುಗಳ ಒಡತಿ ತಾನೇ ಎಂದು ಬಿಂಬಿಸಿ, ಅದರ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಮಾರಾಟ ಮಾಡಿದ್ದಾಳೆ. ಈ ಮೂಲಕ ಕೋಟ್ಯಂತರ ರೂಪಾಯಿ ಕಮಾಯಿಯನ್ನೂ ಮಾಡಿದ್ದಾಳೆ. ಮೋಸ ಮಾಡುವವರು ಎಷ್ಟು ಎಂದು ಮಾಡಿಯಾರು? ಕೊನೆಗೆ ಜಮೀನಿನ ಮಾಲೀಕರೊಬ್ಬರು ಸಲ್ಲಿಸಿದ ಕಂಪ್ಲೇಂಟ್​ ಆಧಾರದ ಮೇಲೆ ಪೊಲೀಸರು ಈಕೆಯ ಜಾತಕ ಬಿಚ್ಚಿದಾಗ, ಒಂದೊಂದೇ ಬಯಲಿಗೆ ಬಂದಿದೆ. ಸದ್ಯ ಈಕೆ ಮಾರ್ಕೆಟ್ ಠಾಣೆ ಪೊಲೀಸರ ಅತಿಥಿಯಾಗಿದ್ದಾಳೆ.&lt;/p&gt;&lt;h2&gt;&lt;strong&gt;ಪ್ರಕರಣ ಬೆಳಕಿಗೆ ಬಂದದ್ದು ಹೇಗೆ&lt;/strong&gt;&lt;/h2&gt;&lt;p&gt;ಕಣಬರ್ಗಿ ರಸ್ತೆಯ ಮಹಾಂತೇಶ ನಗರದಲ್ಲಿರುವ ಪ್ಲಾಟ್ ನಂ.2313 ಹಾಗೂ ಸಿಟಿಎಸ್ ನಂ.944ರ ಜಾಗ ರತ್ನಾ ಯಶವಂತ ಮಲ್ಯೂಕರ ಎನ್ನುವವರ ಹೆಸರಿನಲ್ಲಿತ್ತು. ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡುವ ಉದ್ದೇಶದಿಂದ ಮಂದಾಕಿವಿ, ರತ್ನಾ ಅವರಂತೆ ನಟನೆ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಳು. ಕೊನೆಗೆ ಸಾಲದು ಎನ್ನುವುದಕ್ಕೆ 2003ರಲ್ಲಿ ಬೆಳಗಾವಿ ಉತ್ತರ ಉಪನೋಂದಣಾಧಿಕಾರಿ ಕಚೇರಿಗೆ ತೆರಳಿದ ಆರೋಪಿ ಈಕೆ, ಅವರದ್ದೇ ಹೆಸರಿನಲ್ಲಿ ವೆಬ್ ಕ್ಯಾಮೆರಾದಲ್ಲಿ ಫೋಟೊ ತೆಗೆಸಿಕೊಂಡಿದ್ದಳು. ಮಾತ್ರವಲ್ಲದೇ, ಅವರ ಹೆಸರಿನಲ್ಲಿ ಹೆಬ್ಬೆರಳು ಗುರುತು ಹಾಗೂ ಸಹಿ ನೀಡಿ ಜಾಗವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಳು.&lt;/p&gt;&lt;h3&gt;&lt;strong&gt;ಕಿತಾಪತಿ ಬಯಲಿಗೆ&lt;/strong&gt;&lt;/h3&gt;&lt;p&gt;ಇದು ಕೊನೆಗೆ ಮಾಲೀಕರ ಗಮನಕ್ಕೆ ಬಂದಾಗ, ಈಕೆಯ ಒಂದೊಂದೇ ಕಿತಾಪತಿ ಬಯಲಿಗೆ ಬಂದಿದೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂದಾಕಿನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಅಂಶಗಳು ಬಹಿರಂಗಗೊಂಡಿವೆ. ಪ್ರಕರಣದಲ್ಲಿ ಕೃತ್ಯಕ್ಕೆ ಸಹಕರಿಸಿದ ಆರೋಪದಡಿ ರಾಹುಲ್ ಅನೀಲ ಮಗದುಮ್ ಎಂಬಾತನ ವಿರುದ್ಧವೂ ಪ್ರಕರಣ ದಾಟಲಾಗಿದೆ. ರಾಹುಲ್ ಈಗಾಗಲೇ ದಾಖಲಾಗಿರುವ ಇನ್ನೆರಡು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ರಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Suchethana D</dc:creator>
            <atom:link href="https://kannada.asianetnews.com/crime/crores-of-rupees-worth-of-land-created-fake-documents-and-sold-80-yr-old-woman-arrest-in-belgaum-suc/articleshow-4oas4g6"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಕರಾವಳಿಗೆ ವಿಶೇಷ ರೈಲು ಸಂಚಾರ!]]></title>
            <link>https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</link>
            <guid isPermaLink="true">https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux</guid>
            <pubDate>Thu, 10 Sep 2026 10:32:25 +0530</pubDate>
            <description><![CDATA[ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ, ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಹಾಗೂ ಕರಾವಳಿ-ಮಲೆನಾಡು ಭಾಗದ ಮಡಗಾಂವ್&zwnj;ಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಯಶವಂತಪುರ ಮತ್ತು ಎಸ್&zwnj;ಎಂವಿಟಿ ಬೆಂಗಳೂರು ನಿಲ್ದಾಣಗಳಿಂದ ಹೊರಡಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24txkxevn7x4m86q3eyrgya,imgname-ganesh-chaturthi-special-train--1--1789016330158.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ ಹಾಗೂ ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳಿಗೆ ವಿಶೇಷ ಎಕ್ಸ್&zwnj;ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಬಂಟ್ವಾಳ ಹಾಗೂ ಉಡುಪಿ ಮಾರ್ಗವಾಗಿ ವಿಶೇಷ ರೈಲು ಸೇವೆ ಇರಲಿದೆ. ಇನ್ನು ವಿಜಯಪುರಕ್ಕೆ ತುಮಕೂರು ಮಾರ್ಗವಾಗಿ ಬಾಗಲಕೋಟೆ ಮೂಲಕ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇನ್ನು ಬೆಳಗಾವಿಗೆ ತುಮಕೂರು ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿ ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;h2&gt;ರೈಲು ಸಂಖ್ಯೆ 06591 ಯಶವಂತಪುರ - ಮಡಗಾಂವ್&zwnj;&lt;/h2&gt;&lt;p&gt;ಯಶವಂತಪುರದಿಂದ ಮಡಗಾಂವ್&zwnj;ಗೆ ಸಂಚರಿಸಲಿರುವ ರೈಲು ಸಂಖ್ಯೆ 06591 ವಿಶೇಷ ರೈಲು ಸೆಪ್ಟೆಂಬರ್ 11, 2026ರ ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಡಲಿದೆ. ಈ ರೈಲು ಮಾರನೇ ದಿನ ಬೆಳಿಗ್ಗೆ 5:00 ಗಂಟೆಗೆ ಹಾಸನ, 5:55ಕ್ಕೆ ಸಕಲೇಶಪುರ, 8:50ಕ್ಕೆ ಸುಬ್ರಹ್ಮಣ್ಯ ರೋಡ್, 9:45ಕ್ಕೆ ಕಬಕ ಪುತ್ತೂರು, 10:15ಕ್ಕೆ ಬಂಟ್ವಾಳ, ಮಧ್ಯಾಹ್ನ 1:10ಕ್ಕೆ ಉಡುಪಿ, 1:40ಕ್ಕೆ ಕುಂದಾಪುರ, 2:08ಕ್ಕೆ ಬೈಂದೂರು, 2:38ಕ್ಕೆ ಭಟ್ಕಳ, 3:18ಕ್ಕೆ ಮುರ್ಡೇಶ್ವರ, ಸಂಜೆ 4:00 ಗಂಟೆಗೆ ಕುಮಟಾ, 4:20ಕ್ಕೆ ಗೋಕರ್ಣ ರೋಡ್, 4:32ಕ್ಕೆ ಅಂಕೋಲಾ, 4:50ಕ್ಕೆ ಕಾರವಾರ, 5:20ಕ್ಕೆ ಕಣಕೋಣ ತಲುಪಿ, ಸಂಜೆ 6:10ಕ್ಕೆ ಅಂತಿಮವಾಗಿ ಮಡಗಾಂವ್ ತಲುಪಲಿದೆ.&lt;/p&gt;&lt;h2&gt;ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ&lt;/h2&gt;&lt;p&gt;ಮರಳಿ ಪ್ರಯಾಣ ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ ವಿಶೇಷ ರೈಲು ಸೆಪ್ಟೆಂಬರ್ 14, 2026ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್&zwnj;ನಿಂದ ಹೊರಡಲಿದೆ. ಮಾರ್ಗಮಧ್ಯೆ ಈ ರೈಲು ಬೆಳಿಗ್ಗೆ 11:28ಕ್ಕೆ ಕಣಕೋಣ, 11:58ಕ್ಕೆ ಕಾರವಾರ, ಮಧ್ಯಾಹ್ನ 12:23ಕ್ಕೆ ಅಂಕೋಲಾ, 12:33ಕ್ಕೆ ಗೋಕರ್ಣ ರೋಡ್, 12:50ಕ್ಕೆ ಕುಮಟಾ, 1:03ಕ್ಕೆ ಹೊನ್ನಾವರ, 1:38ಕ್ಕೆ ಮುರ್ಡೇಶ್ವರ, 1:53ಕ್ಕೆ ಭಟ್ಕಳ, 2:12ಕ್ಕೆ ಬೈಂದೂರು, 2:40ಕ್ಕೆ ಕುಂದಾಪುರ, 2:55ಕ್ಕೆ ಬಾರ್ಕೂರು, 3:30ಕ್ಕೆ ಉಡುಪಿ, 3:58ಕ್ಕೆ ಮುಲ್ಕಿ, ಸಂಜೆ 4:12ಕ್ಕೆ ಸುರತ್ಕಲ್, 5:15ಕ್ಕೆ ತೋಕೂರು, 6:00 ಗಂಟೆಗೆ ಬಂಟ್ವಾಳ, 6:28ಕ್ಕೆ ಕಬಕ ಪುತ್ತೂರು, ರಾತ್ರಿ 7:45ಕ್ಕೆ ಸುಬ್ರಹ್ಮಣ್ಯ ರೋಡ್, 10:30ಕ್ಕೆ ಸಕಲೇಶಪುರ, 11:30ಕ್ಕೆ ಹಾಸನ ತಲುಪಿ, ಅಂತಿಮವಾಗಿ ಮರುದಿನ ಬೆಳಗಿನ ಜಾವ 3:00 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.&lt;/p&gt;&lt;h2&gt;1. ಯಶವಂತಪುರ &ndash; ವಿಜಯಪುರ &ndash; ಯಶವಂತಪುರ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 06561/06562)&lt;/h2&gt;&lt;p&gt;ಯಶವಂತಪುರ ಮತ್ತು ವಿಜಯಪುರ ನಡುವೆ ಓಡಾಡಲಿರುವ 'ರೈಲು ಸಂಖ್ಯೆ 06561' ವಿಶೇಷ ರೈಲು ಸೆಪ್ಟೆಂಬರ್ 11 ಮತ್ತು 13, 2026ರಂದು (ಶುಕ್ರವಾರ ಮತ್ತು ಭಾನುವಾರ) ಯಶವಂತಪುರದಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15ಕ್ಕೆ ವಿಜಯಪುರ ತಲುಪಲಿದೆ.&lt;/p&gt;&lt;p&gt;ಮರುಮಾರ್ಗದಲ್ಲಿ 'ರೈಲು ಸಂಖ್ಯೆ 06562' ವಿಶೇಷ ರೈಲು ಸೆಪ್ಟೆಂಬರ್ 12 ಮತ್ತು 14, 2026ರಂದು (ಶನಿವಾರ ಮತ್ತು ಸೋಮವಾರ) ವಿಜಯಪುರದಿಂದ ಸಂಜೆ 5:00 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4:45ಕ್ಕೆ ಯಶವಂತಪುರವನ್ನು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಗದಗ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ದಿವ್ಯಾಂಗಜನ್ ಅನುಕೂಲವುಳ್ಳ 2 ಎಸ್&zwnj;ಎಲ್&zwnj;ಆರ್&zwnj;ಡಿ ಬೋಗಿಗಳು ಸೇರಿವೆ.&lt;/p&gt;&lt;h2&gt;2. ಎಸ್&zwnj;ಎಂವಿಟಿ ಬೆಂಗಳೂರು &ndash; ಬೆಳಗಾವಿ &ndash; ಎಸ್&zwnj;ಎಂವಿಟಿ ಬೆಂಗಳೂರು ಎಕ್ಸ್&zwnj;ಪ್ರೆಸ್ (ವಿಶೇಷ ರೈಲುಗಳು)&lt;/h2&gt;&lt;p&gt;ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ ನಡುವೆ ಎರಡು ಪ್ರತ್ಯೇಕ ಟ್ರಿಪ್&zwnj;ಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.&lt;/p&gt;&lt;h3&gt;&lt;strong&gt;ಮೊದಲ ಟ್ರಿಪ್ (ರೈಲು ಸಂಖ್ಯೆ: 06563/06564):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06563' ಸೆಪ್ಟೆಂಬರ್ 11, 2026ರ ಶುಕ್ರವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06564' ಸೆಪ್ಟೆಂಬರ್ 12, 2026ರ ಶನಿವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;h3&gt;&lt;strong&gt;ಎರಡನೇ ಟ್ರಿಪ್ (ರೈಲು ಸಂಖ್ಯೆ: 06583/06584):&lt;/strong&gt;&lt;/h3&gt;&lt;p&gt;'ರೈಲು ಸಂಖ್ಯೆ 06583' ಸೆಪ್ಟೆಂಬರ್ 13, 2026ರ ಭಾನುವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06584' ಸೆಪ್ಟೆಂಬರ್ 14, 2026ರ ಸೋಮವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.&lt;/p&gt;&lt;p&gt;&lt;strong&gt;ನಿಲುಗಡೆಗಳು: &lt;/strong&gt;ಈ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್&zwnj;ಎಮ್&zwnj;ಎಮ್ ಹಾವೇರಿ, ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.&lt;/p&gt;&lt;p&gt;&lt;strong&gt;ಬೋಗಿಗಳ ವಿವರ:&lt;/strong&gt; ಈ ರೈಲುಗಳು 1 ಫಸ್ಟ್ ಕ್ಲಾಸ್ ಎಸಿ, 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್&zwnj;ಎಲ್&zwnj;ಆರ್&zwnj;ಡಿ ಸೇರಿದಂತೆ ಒಟ್ಟು 20 ಕೋಚ್&zwnj;ಗಳನ್ನು ಒಳಗೊಂಡಿರುತ್ತವೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/south-western-railway-ganesh-chaturthi-special-trains-bengaluru-to-madgaon-vijayapura-and-belagavi-routes-timings-gdp/articleshow-7y6xxux"/>
        </item>
        <item>
            <title><![CDATA[ಬೆಳಗಾವಿ: ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಡಿಸಿ ಮೊಹಮ್ಮದ್ ರೋಷನ್]]></title>
            <link>https://kannada.asianetnews.com/gallery/karnataka-districts/belagavi-dc-mohammad-roshan-installs-lord-ganesha-idol-and-spreads-message-of-communal-harmony-rav-95tgt01</link>
            <guid isPermaLink="true">https://kannada.asianetnews.com/gallery/karnataka-districts/belagavi-dc-mohammad-roshan-installs-lord-ganesha-idol-and-spreads-message-of-communal-harmony-rav-95tgt01</guid>
            <pubDate>Tue, 15 Sep 2026 07:26:52 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭಕ್ತಿಯಿಂದ ಕಚೇರಿ, ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಶ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಗೆ ಹಿಂದೂಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋ ಗ್ಯಾಲರಿ ನೋಡಿ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hc4xkta02zypa7cd0d0g28,imgname-belagavi-dc-mohammad-roshan-installs-lord-ganesha-idol-1789437048442.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭಕ್ತಿಯಿಂದ ಕಚೇರಿ, ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಶ ಪೂಜೆ ಸಲ್ಲಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಗೆ ಹಿಂದೂಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೋಟೋ ಗ್ಯಾಲರಿ ನೋಡಿ.&lt;/p&gt;&lt;img&gt;&lt;p&gt;ಕಳೆದ ವರ್ಷದಂತೆ ಈ ಬಾರಿಯೂ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ವಿಚಾರವಾಗಿ ಕಾನೂನು ಸಂಘರ್ಷ, ರಾಜಕೀಯ ಸ್ವರೂಪ ಪಡೆದು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಮು ಗಲಾಟೆ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮನೆ, ಕಚೇರಿಯಲ್ಲಿ ಭಕ್ತಿಯಿಂದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದು ಹಿಂದೂ-ಮುಸ್ಲಿಂ ಬಾಂಧವರಿಗೆ ಸೌಹಾರ್ದತೆಯ ಸಂದೇಶ ಸಾರಿದ್ದಾರೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲಾಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು ಕಚೇರಿಯಲ್ಲಷ್ಟೇ ಅಲ್ಲದೆ ತಮ್ಮ ಮನೆಯಲ್ಲೂ ಗಣಪತಿ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗುವ ಮೂಲಕ ವಿಘ್ನ ವಿನಾಶಕನನ್ನು ಭಕ್ತಿಯಿಂದ ಬರಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಡಿಸಿ ಮೊಹಮ್ಮದ್ ರೋಷನ್ ಅವರು ಇದಕ್ಕೂ ಮುನ್ನ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋದರು. ಅಲ್ಲಿ ಗಣಪತಿಗೆ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಹೊತ್ತು ನಡೆದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೂಡ ಭಾಗವಹಿಸಿದರು.&lt;/p&gt;&lt;img&gt;&lt;p&gt;ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗಣಪತಿ ಮೂರ್ತಿಯನ್ನು ಹೊತ್ತು ಸಿಬ್ಬಂದಿಯೊಂದಿಗೆ ಡಿಸಿ ರೋಷನ್ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಕಚೇರಿ ಸಿಬ್ಬಂದಿ ಕೂಡ ಭಕ್ತಿಯಿಂದ ಪಾಲ್ಗೊಂಡು ಪಟಾಕಿ ಸಿಡಿಸಿ ಸಂಭ್ರಮಿಸಿದರು.&lt;/p&gt;&lt;img&gt;&lt;p&gt;ಗಣಪತಿ ದೇವರಿಗೆ ಆರತಿ ಬೆಳಗಿದರು. ಗಣಪತಿಗೆ ಭಕ್ತಿಯಿಂದ ನಮಿಸಿ ಹಣೆಗೆ ತಿಲಕ ಹಚ್ಚಿದರು. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಈ ನಡೆ ಸೌಹರ್ದತೆ, ಭಾವೈಕ್ಯತೆಯ ಸಂದೇಶ ಸಾರುವಂತಿತ್ತು. ಗಣೇಶ ಹಬ್ಬದ ವಿಚಾರವಾಗಿ ಅಲ್ಲಲ್ಲಿ ಕೋಮು ಸೌಹರ್ದತೆ ಹದಗೆಡುತ್ತಿರುವ ಹೊತ್ತಲ್ಲಿ ಹಿಂದೂ ಮುಸ್ಲಿಂ ಬೇರೆಯಲ್ಲ, ದೇವರು ಒಬ್ಬನೇ ನಾಮ ಹಲವು ಎಂದು ಸಾರಿದರು.&lt;/p&gt;&lt;img&gt;&lt;p&gt;ಭಾರತೀಯರು ಧರ್ಮ, ಜಾತಿ-ಭೇದವಿಲ್ಲದೆ ಎಲ್ಲರೊಂದಾಗಿ ಇರಬೇಕಾದ ರೀತಿ ಇದು ಎಂಬುದನ್ನ ಬೆಳಗಾವಿ ಡಿಸಿ ಮಾತಾಡದೆ ಆಚರಿಸಿ ತೋರಿಸಿದ್ದಾರೆ. ಇನ್ನಾದರೂ ಹಿಂದೂ-ಮುಸ್ಲಿಂ ಗಲಾಟೆ ಮಾಡುವುದು ಬಿಟ್ಟು ಭಾವೈಕ್ಯತೆಯಿಂದ ಹಿಂದೂ-ಮುಸ್ಲಿಮರಿಬ್ಬರೂ ಒಟ್ಟಾಗಿ ಹಬ್ಬಗಳು ಆಚರಿಸಿದರೆ ಭಾರತ ಸರ್ವಜನಾಂಗದ ಶಾಂತಿಯ ತೋಟವಾಗಲಿದೆ.&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/belagavi-dc-mohammad-roshan-installs-lord-ganesha-idol-and-spreads-message-of-communal-harmony-rav-95tgt01"/>
        </item>
        <item>
            <title><![CDATA[North Karnataka: ಉತ್ತರಕ್ಕೆ ಮತ್ತೆ ಮೋಸ? 43 ತಾಲೂಕುಗಳಿಗೆ ನ್ಯಾಯ ಎಲ್ಲಿದೆ? ಇಲ್ಲಿ ಬರ ಘೋಷಣೆ ಏಕೆ ಅನಿವಾರ್ಯ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್]]></title>
            <link>https://kannada.asianetnews.com/karnataka-districts/north-karnataka-drought-43-backward-taluks-govindarao-committee-report-farmers-crisis-regional-imbalance-karnataka-bmk/articleshow-9nzqtw0</link>
            <guid isPermaLink="true">https://kannada.asianetnews.com/karnataka-districts/north-karnataka-drought-43-backward-taluks-govindarao-committee-report-farmers-crisis-regional-imbalance-karnataka-bmk/articleshow-9nzqtw0</guid>
            <pubDate>Mon, 14 Sep 2026 22:43:25 +0530</pubDate>
            <description><![CDATA[ಉತ್ತರ ಕರ್ನಾಟಕದ 43 ತಾಲೂಕುಗಳು ತೀವ್ರ ಬರಗಾಲ ಮತ್ತು ಆಡಳಿತಾತ್ಮಕ ವೈಫಲ್ಯದಿಂದ ಸಂಕಷ್ಟದಲ್ಲಿವೆ. ಡಾ. ಎಂ. ಗೋವಿಂದರಾವ್ ಸಮಿತಿ ವರದಿಯು ಈ ಹಿಂದುಳಿದಿರುವಿಕೆಯನ್ನು ದೃಢಪಡಿಸಿದ್ದು, ಸ್ವಾಭಿಮಾನಿ ರೈತರು ಜೀವನೋಪಾಯಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವಂತಾಗಿದೆ. ಈ ವರದಿಯು ಸರ್ಕಾರದ ವಿಳಂಬ ನೀತಿ ಮತ್ತು ರೈತರಿಗೆ ಬೇಕಾದ ತಕ್ಷಣದ ಪರಿಹಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ge2c80zvj135hjpck73h3n,imgname-uttar-karnataka-1789405507840.jpg" type="image/jpeg" height="390" width="690"/>
            <content:encoded><![CDATA[&lt;p&gt;ಐದು ವರ್ಷಕ್ಕೊಮ್ಮೆ ಪ್ರಕಟವಾಗುವ ಬಣ್ಣ ಬಣ್ಣದ ಪ್ರಣಾಳಿಕೆಗಳಲ್ಲಿ ಉತ್ತರ ಕರ್ನಾಟಕ ನಮಗೆ ಎರಡು ಕಣ್ಣುಗಳಿದ್ದಂತೆ ಎಂದು ಸರ್ಕಾರಗಳು ಬರೆಯುತ್ತವೆ. ಆದರೆ ಇವತ್ತು ಅದೇ ಕಣ್ಣುಗಳಿಂದ ರಕ್ತದ ಕಣ್ಣೀರು ಸುರಿಯುತ್ತಿದ್ದರೂ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಫೈಲುಗಳನ್ನು ತಿರುವುತ್ತಿರುವ ವ್ಯವಸ್ಥೆಗೆ ಆ ಕಣ್ಣೀರು ಕಾಣಿಸುತ್ತಿಲ್ಲ. ಎಕರೆಗಟ್ಟಲೆ ಜಮೀನಿಗೆ ಒಡೆಯನಾಗಿದ್ದ ಸ್ವಾಭಿಮಾನಿ ರೈತ, ಇವತ್ತು ಬೆಂಗಳೂರಿನಂತಹ ಮಹಾನಗರಗಳ ರಸ್ತೆ ಬದಿಯಲ್ಲಿ ಸಿಮೆಂಟ್ ಮೂಟೆ ಹೊರಬೇಕಾಗಿ ಬಂದಿದೆ. ಇದಕ್ಕೆ ಕೇವಲ ಪ್ರಕೃತಿಯ ವಿಕೋಪ ಕಾರಣವಲ್ಲ, ಬದಲಾಗಿ ಈ ಭಾಗವನ್ನು ಕೇವಲ ಮತಗಳ ಲೆಕ್ಕಾಚಾರಕ್ಕೆ ಬಳಸಿಕೊಳ್ಳುವ ಆಡಳಿತಾತ್ಮಕ ವೈಫಲ್ಯವೇ ಪ್ರಮುಖ ಕಾರಣ ಎನ್ನಲಾಗಿದೆ. ಈ ಕುರಿತು ಕಂಪ್ಲೀಟ್&zwnj; ರಿಪೋರ್ಟ್ ಇಲ್ಲಿದೆ.&lt;/p&gt;&lt;h2&gt;&lt;strong&gt;ಜಿಲ್ಲಾ ರಿಪೋರ್ಟ್!&lt;/strong&gt;&lt;/h2&gt;&lt;p&gt;ಸ್ವಾಭಿಮಾನದ ಹೋರಾಟಗಳು ಹುಟ್ಟಿದ ನರಗುಂದ ಮತ್ತು ಗದಗ ಭಾಗದ ಜನ ಇಂದು ಹನಿ ನೀರಿಗೂ ವ್ಯವಸ್ಥೆಯ ಮುಂದೆ ಕೈಚಾಚುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದ ಗ್ರಾಮೀಣ ಭಾಗದಲ್ಲಿ ಬೆಣ್ಣಿಹಳ್ಳದ ಸುತ್ತಮುತ್ತಲಿನ ಹಳ್ಳಿಗಳು ನೀರಿಲ್ಲದೆ ಬಿಕೋ ಎನ್ನುತ್ತಿವೆ. ಬ್ಯಾಡಗಿ ಮೆಣಸಿನಕಾಯಿಯ ಖಾರಕ್ಕೆ ಹೆಸರಾದ ಹಾವೇರಿ ಹಾಗೂ ಬಾಗಲಕೋಟೆಯ ಒಣ ಭೂಮಿಯಲ್ಲಿ ಬಿತ್ತಿದ ಬೀಜಗಳು ಮಣ್ಣಿನಲ್ಲೇ ಕರಗಿಹೋಗಿವೆ. ಸಕ್ಕರೆ ನಾಡು, ಭತ್ತದ ಕಣಜ, ಗಣಿನಾಡು ಎಂದು ಸರ್ಕಾರಿ ಕಡತಗಳಲ್ಲಿ ಬಿರುದು ಪಡೆದಿರುವ ಬೆಳಗಾವಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಕೃಷ್ಣೆ ನದಿ ಹರಿಯುತ್ತಾಳೆ, ಆದರೆ ಕಾಗದದ ಮೇಲೆ ಮಾತ್ರ! ಹೊಲದಲ್ಲಲ್ಲ!&lt;/p&gt;&lt;h3&gt;&lt;strong&gt;ಏನು ಹೇಳುತ್ತೆ ಡಾ. ಎಂ. ಗೋವಿಂದರಾವ್ ಸಮಿತಿ ವರದಿ!&lt;/strong&gt;&lt;/h3&gt;&lt;p&gt;'The Hindu' ಪತ್ರಿಕೆಯ ಇತ್ತೀಚಿನ ವರದಿ ಮತ್ತು ಡಾ. ಎಂ. ಗೋವಿಂದರಾವ್ ಸಮಿತಿಯ ವರದಿ ಪ್ರಕಾರ, ರಾಜ್ಯದ ಒಟ್ಟು 236 ತಾಲೂಕುಗಳಲ್ಲಿ 177 ತಾಲೂಕುಗಳು ತೀವ್ರ ಹಿಂದುಳಿದಿವೆ. ಅದರಲ್ಲಿ ಅತ್ಯಂತ ಹೆಚ್ಚು ಹಿಂದುಳಿದಿರುವ 59 ತಾಲೂಕುಗಳ ಪೈಕಿ 43 ತಾಲೂಕುಗಳು ಕೇವಲ ಉತ್ತರ ಕರ್ನಾಟಕದಲ್ಲೇ ಇ.! ಕಳೆದ ಎರಡು ದಶಕಗಳಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ₹35,380 ಕೋಟಿ ಖರ್ಚು ಮಾಡಲಾಗಿದೆ ಎಂದು ಬಜೆಟ್ ಪುಸ್ತಕಗಳು ಹೇಳುತ್ತವೆ, ಆದರೆ ಆ ಕೋಟಿಗಳು ಕೃಷಿ ಭೂಮಿಗೆ ತಲುಪುವಷ್ಟರಲ್ಲಿ ಕರಗಿ ಹೋಗಿವೆ.&lt;/p&gt;&lt;h3&gt;&lt;strong&gt;ವಲಸೆಗೆ ಕಾರಣವೇನು?&amp;nbsp;&lt;/strong&gt;&lt;/h3&gt;&lt;p&gt;ತಮ್ಮ ಊರಿನಲ್ಲಿ ರಾಜನಂತೆ ಬದುಕಬೇಕಾಗಿದ್ದ ಸ್ವಾಭಿಮಾನಿ ರೈತ ಇವತ್ತು ಇಡೀ ಕುಟುಂಬದೊಂದಿಗೆ ಬೆಂಗಳೂರಿನ ಫ್ಲೈಓವರ್&zwnj;ಗಳ ಕೆಳಗೆ, ರಸ್ತೆ ಬದಿಯ ಮರದ ಕೊಂಬೆಗೆ ಹರಿದ ಸೀರೆಯ ಜೋಳಿಗೆ ಕಟ್ಟಿ ಹಸುಗೂಸನ್ನು ಮಲಗಿಸಿ, ಸಿಮೆಂಟ್ ಧೂಳಿನ ಮಧ್ಯೆ ದಿನಗೂಲಿಗಾಗಿ ಬೆವರು ಸುರಿಸುತ್ತಿದ್ದಾನೆ. ಈ ಜಿಲ್ಲೆಗಳನ್ನು 'ಬರಪೀಡಿತ' ಎಂದು ಅಧಿಕೃತವಾಗಿ ಘೋಷಿಸಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ರೈತನಿಗೆ ಬೆಳೆ ಹಾನಿ ಪರಿಹಾರ ಸಿಗುತ್ತಿಲ್ಲ, ಬ್ಯಾಂಕ್&zwnj;ಗಳು ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿವೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಸರ್ಕಾರ ಮಾಡಬೇಕಾದ ತಕ್ಷಣದ ಪರಿಹಾರಗಳು!&lt;/strong&gt;&lt;/h3&gt;&lt;p&gt;&lt;strong&gt;ಮಧ್ಯಂತರ ಪರಿಹಾರ ಜಮೆ&lt;/strong&gt;: ವಿಪತ್ತು ನಿಧಿಯಿಂದ ತಕ್ಷಣವೇ ಪ್ರತಿ ರೈತನ ಖಾತೆಗೆ ಮಧ್ಯಂತರ ಪರಿಹಾರದ ಹಣ ಜಮೆ ಮಾಡಬೇಕು.&lt;/p&gt;&lt;p&gt;ಉದ್ಯೋಗ ಖಾತರಿ ದಿನಗಳ ಹೆಚ್ಚಳ; ವಲಸೆ ತಡೆಯಲು VG ಕೆಲಸದ ದಿನಗಳನ್ನು 100 ರಿಂದ 150 ಕ್ಕೆ ಏರಿಸಿ, ಸ್ಥಳೀಯವಾಗಿಯೇ ಕೆಲಸ ನೀಡಬೇಕು.&lt;/p&gt;&lt;p&gt;&lt;strong&gt;ಸಾಲ ವಸೂಲಾತಿಗೆ ತಡೆ: &lt;/strong&gt;ಕೃಷಿ ಸಾಲಗಳ ಬಡ್ಡಿಯನ್ನು ತಕ್ಷಣವೇ ಮನ್ನಾ ಮಾಡಿ, ಬ್ಯಾಂಕ್&zwnj;ಗಳ ಕಿರುಕುಳಕ್ಕೆ ಕಟ್ಟುನಿಟ್ಟಿನ ತಡೆ ನೀಡಬೇಕು.&lt;/p&gt;&lt;p&gt;&lt;strong&gt;ಮೇವು ಮತ್ತು ನೀರು:&lt;/strong&gt; ಪ್ರತಿಯೊಂದು ಪಂಚಾಯಿತಿಯಲ್ಲೂ ಉಚಿತ ಮೇವು ಬ್ಯಾಂಕ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.&lt;/p&gt;&lt;h3&gt;&lt;strong&gt;ಅನ್ನದಾತನ ಆಶಯವೇನು?&lt;/strong&gt;&lt;/h3&gt;&lt;p&gt;ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಳಸಾ-ಬಂಡೂರಿ ಯೋಜನೆಗಳ ಹೆಸರಿನಲ್ಲಿ ಕಾಗದದ ಮೇಲೆ ಯೋಜನೆಗಳನ್ನು ಸೃಷ್ಟಿಸುತ್ತಿರುವ ವ್ಯವಸ್ಥೆಗೆ ನೆನಪಿರಲಿ, ಉತ್ತರ ಕರ್ನಾಟಕದ ರೈತರು ಭಿಕ್ಷುಕರಲ್ಲ, ಅವರು ಈ ರಾಜ್ಯದ ಆಧಾರಸ್ತಂಭ. ಅವರಿಗೆ ಬಣ್ಣದ ಭರವಸೆಗಳ ಪ್ಯಾಕೇಜ್ ಬೇಡ, ಇವತ್ತು ಬದುಕಲು ತಕ್ಷಣದ ಆಸರೆ ಬೇಕು ಎನ್ನುವುದ ಅನ್ನದಾತನ ಆಶಯವಾಗಿದೆ.&lt;/p&gt;]]></content:encoded>
            <category>belagavi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/north-karnataka-drought-43-backward-taluks-govindarao-committee-report-farmers-crisis-regional-imbalance-karnataka-bmk/articleshow-9nzqtw0"/>
        </item>
        <item>
            <title><![CDATA[Belagavi: 53 ವರ್ಷಗಳ ಬಳಿಕ ನಡೆಯಲಿದೆ ಉತ್ಸವ; ಗಣೇಶೋತ್ಸವ ಸಂಭ್ರಮಕ್ಕೆ ಬೆಳಗಾವಿ ಸಜ್ಜು]]></title>
            <link>https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</link>
            <guid isPermaLink="true">https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</guid>
            <pubDate>Sat, 12 Sep 2026 06:18:44 +0530</pubDate>
            <description><![CDATA[&lt;p&gt;ಗಣೇಶ ಚತುರ್ಥಿಗೆ ಮುನ್ನವೇ ಬೆಳಗಾವಿ ನಗರವು ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಸಾರ್ವಜನಿಕ ಮಂಟಪಗಳಲ್ಲಿ ಬೃಹತ್ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಹಾಗೂ ಮನೆಮನೆಗಳಲ್ಲಿ ಗಣಪನ ಸ್ವಾಗತಕ್ಕೆ ಸಿದ್ಧತೆಗಳು ಜೋರಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m29hc6vy587k213yk295yfgn,imgname-belagavi-1789174094718.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರವೆಲ್ಲ ಗಣಪನೇ ಗಣಪ. ಬೀದಿಗಿಳಿದರೆ ಕಿವಿಗೆ ಬೀಳುವುದು ಡೊಳ್ಳು, ತಾಷಾ, ಗಣೇಶನ ಘೋಷಣೆ. ಮಾರುಕಟ್ಟೆಗೆ ಕಾಲಿಟ್ಟರೆ ಕಣ್ಣಿಗೆ ಬೀಳುವುದು ಬಣ್ಣಬಣ್ಣದ ಗಣೇಶ ಮೂರ್ತಿಗಳು. ಅಂಗಡಿಗಳ ಮುಂದೆ ಅಲಂಕಾರಿಕ ಸಾಮಗ್ರಿಗಳ ರಾಶಿ. ಕೈಚೀಲ ಹಿಡಿದು ಹಬ್ಬದ ಖರೀದಿಗೆ ಬಂದ ಮಹಿಳೆಯರು. ತಮಗಿಷ್ಟವಾದ ಗಣಪನನ್ನು ಮನೆಗೆ ಕೊಂಡೊಯ್ಯಬೇಕೆಂದು ಹಠ ಹಿಡಿದ ಮಕ್ಕಳು. ಮಂಟಪಗಳ ಮುಂದೆ ಬೃಹತ್ ಗಣೇಶ ಮೂರ್ತಿಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು.&lt;/p&gt;&lt;p&gt;ಗಣೇಶ ಚತುರ್ಥಿಗೆ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಬೆಳಗಾವಿ ನಗರ ಸಂಪೂರ್ಣ ಹಬ್ಬದ ಗುಂಗಿನಲ್ಲಿ ಮುಳುಗಿದೆ. ವಿಘ್ನವಿನಾಶಕನನ್ನು ಮನೆಗೆ ಬರಮಾಡಿಕೊಳ್ಳಲು ಮನೆಮನೆಗಳಲ್ಲಿ ಸಿದ್ಧತೆ ಚುರುಕುಗೊಂಡಿದ್ದರೆ, ಸಾರ್ವಜನಿಕ ಗಣೇಶ ಮಂಡಳಿಗಳು ಈಗಾಗಲೇ ಬೃಹತ್ ಮೂರ್ತಿಗಳನ್ನು ಮಂಟಪಗಳಿಗೆ ತಂದು ಪ್ರತಿಷ್ಠಾಪನೆಯ ಸಿದ್ಧತೆಯಲ್ಲಿ ತೊಡಗಿವೆ. ಹೀಗಾಗಿ ಗಣೇಶ ಚತುರ್ಥಿ ಆರಂಭಕ್ಕೂ ಮುನ್ನವೇ ನಗರದಲ್ಲಿ ಹಬ್ಬದ ವಾತಾವರಣ ಗರಿಗೆದರಿದೆ.&lt;/p&gt;&lt;h2&gt;&lt;strong&gt;ಗಣಪನಿಗಾಗಿಯೇ ಮಾರುಕಟ್ಟೆ&lt;/strong&gt;&lt;/h2&gt;&lt;p&gt;ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಖಡೇಬಜಾರ್&zwnj;, ಶನಿವಾರಕೂಟ, ಕಾಕತಿವೇಸ್&zwnj;, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬಾಪಟ ಗಲ್ಲಿ, ಕೋನ್ವಾಳ ಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳು ಇದೀಗ ಗಣೇಶೋತ್ಸವದ ಮಾರುಕಟ್ಟೆಗಳಾಗಿ ಮಾರ್ಪಟ್ಟಿವೆ. ವಿವಿಧ ಗಾತ್ರ, ಆಕಾರ ಮತ್ತು ವಿನ್ಯಾಸದ ಗಣೇಶ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪುಟ್ಟ ಗಣಪನಿಂದ ಹಿಡಿದು ಬೃಹದಾಕಾರದ ಮೂರ್ತಿಗಳವರೆಗೆ ಸಾಲಾಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.&lt;/p&gt;&lt;p&gt;ಮನೆಯ ಗಣಪನನ್ನು ಆಯ್ಕೆ ಮಾಡಿಕೊಳ್ಳಲು ಕುಟುಂಬಗಳು ಮೂರ್ತಿಗಳ ಮುಂದೆ ನಿಂತು ಚರ್ಚಿಸುತ್ತಿದ್ದರೆ, ಮಕ್ಕಳ ಕಣ್ಣು ಮಾತ್ರ ಬಣ್ಣಬಣ್ಣದ ಮೂರ್ತಿಗಳ ಮೇಲೆಯೇ. ಯಾವ ಗಣಪ ಸುಂದರ, ಯಾವ ಗಣಪ ಮನೆಗೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದ್ದರೆ, ವ್ಯಾಪಾರಿಗಳು ಗ್ರಾಹಕರ ಆಯ್ಕೆಗೆ ತಕ್ಕಂತೆ ಮೂರ್ತಿಗಳನ್ನು ತೋರಿಸುತ್ತಿದ್ದಾರೆ.&lt;/p&gt;&lt;p&gt;ಗಣೇಶ ಮಂಟಪಗಳ ಅಲಂಕಾರಕ್ಕೆ ಬೇಕಾಗುವ ಹೂವಿನ ಮಾಲೆಗಳು, ಕೃತಕ ಹೂವುಗಳು, ತೋರಣಗಳು, ಬಣ್ಣಬಣ್ಣದ ಪರದೆಗಳು, ಅಲಂಕಾರಿಕ ವಸ್ತುಗಳು ಹಾಗೂ ವಿದ್ಯುತ್ ದೀಪಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸರಣಿ ದೀಪ, ಎಲ್&zwnj;ಇಡಿ ದೀಪ ಸೇರಿದಂತೆ ಹೊಸ ವಿನ್ಯಾಸದ ಬೆಳಕಿನ ಅಲಂಕಾರಿಕ ಸಾಮಗ್ರಿಗಳ ಖರೀದಿ ಹೆಚ್ಚಾಗಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು, ಗಂಧ, ಕುಂಕುಮ, ಅರಿಶಿನ, ಅಗರಬತ್ತಿ, ಕರ್ಪೂರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯೂ ಚುರುಕಾಗಿದೆ. ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಈ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ.&lt;/p&gt;&lt;p&gt;ಹಬ್ಬದ ಖರೀದಿಯ ಮತ್ತೊಂದು ಭಾಗ ಬಟ್ಟೆ ಅಂಗಡಿಗಳಲ್ಲಿದೆ. ಮಕ್ಕಳಿಗೆ ಹೊಸ ಉಡುಪು, ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್, ಪ್ಯಾಂಟ್, ಕುರ್ತಾಗಳ ಖರೀದಿ ನಡೆಯುತ್ತಿದೆ. ಮನೆಗಳಲ್ಲಿ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬೇಕಾದ ಪದಾರ್ಥಗಳು ಹಾಗೂ ಸಿಹಿ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.&lt;/p&gt;&lt;h3&gt;&lt;strong&gt;ಬೆಳಗಾವಿಯ ರಾಜಾನ ಅದ್ಧೂರಿ ಆಗಮನ&lt;/strong&gt;&lt;/h3&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ಬೆಳಗಾವಿ, 10 ದಿನ ಮೊದಲೇ ಮತ್ತೊಂದು ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು. ಚವ್ಹಾಟ ಗಲ್ಲಿಯ ಬೆಳಗಾವಿಯ ರಾಜಾ ಎಂಬ ಖ್ಯಾತಿ ಹೊಂದಿದ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಹೀಗೆ ನಾನಾ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬೃಹತ್&zwnj; ಗಾತ್ರದ ಗಣೇಶ ಮೂರ್ತಿಗಳನ್ನು ವಿರಾಜಮಾನಗೊಂಡಿವೆ. ಡೊಳ್ಳು, ಡೋಲ್-ತಾಷಾ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಮೇಳಗಳ ನಿನಾದದ ನಡುವೆ ಟ್ರಾಲಿಯಲ್ಲಿ ಆಗಮಿಸಿದ ಬೃಹದಾಕಾರದ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯಿತು. ಜೈ ಗಣೇಶ ಘೋಷಣೆಗಳು ಮುಗಿಲು ಮುಟ್ಟಿದವು. ಯುವಕರು ಕುಣಿದು ಕುಪ್ಪಳಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯ ಸಂಭ್ರಮವನ್ನು ಹೆಚ್ಚಿಸಿದರು.&lt;/p&gt;&lt;p&gt;ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆಗಮಿಸಿದ ಬೆಳಗಾವಿಯ ರಾಜಾನನ್ನು ಸ್ವಾಗತಿಸಲು ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.&lt;/p&gt;&lt;p&gt;&lt;strong&gt;53 ವರ್ಷಗಳ ಪರಂಪರೆ&lt;/strong&gt;&lt;/p&gt;&lt;p&gt;ಬೆಳಗಾವಿಯ ಗಣೇಶೋತ್ಸವ ಎಂದರೆ ಕೇವಲ ಹಬ್ಬವಲ್ಲ. ಅದು ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಪರಂಪರೆ. 53 ವರ್ಷಗಳ ಬಳಿಕ ಈ ಬಾರಿ 12 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿರುವುದು ವಿಶೇಷ.&lt;/p&gt;&lt;p&gt;ನಗರದ ವಿವಿಧ ಭಾಗಗಳಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಲವು ಮಂಡಳಿಗಳು ಗಣೇಶ ಚತುರ್ಥಿಗೆ ಒಂದು ವಾರ ಮುಂಚೆಯೇ ಮೂರ್ತಿಗಳನ್ನು ಮಂಟಪಗಳಿಗೆ ತಂದು ಅಲಂಕಾರ ಕಾರ್ಯ ಆರಂಭಿಸಿವೆ. ಕೆಲ ಮಂಟಪಗಳಲ್ಲಿ ಧಾರ್ಮಿಕ ವಾತಾವರಣಕ್ಕೆ ಒತ್ತು ನೀಡಲಾಗಿದ್ದರೆ, ಇನ್ನು ಕೆಲವೆಡೆ ಕಲಾತ್ಮಕ ಅಲಂಕಾರ, ಸಾಮಾಜಿಕ ಸಂದೇಶ ಹಾಗೂ ವಿವಿಧ ವಿಷಯಾಧಾರಿತ ವಿನ್ಯಾಸಗಳಿಗೆ ಆದ್ಯತೆ ನೀಡಲಾಗುತ್ತಿದೆ.&lt;/p&gt;&lt;p&gt;12 ದಿನಗಳ ಕಾಲ ಬೆಳಗಾವಿಯತ್ತ ಭಕ್ತರ ಹರಿವು ಹೆಚ್ಚಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಜನರು ಗಣೇಶ ಮೂರ್ತಿಗಳ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಸರ್ಜನಾ ಮೆರವಣಿಗೆ ವೇಳೆ ಲಕ್ಷಾಂತರ ಜನರು ಭಾಗವಹಿಸುವುದು ಬೆಳಗಾವಿಯ ಗಣೇಶೋತ್ಸವದ ವೈಭವಕ್ಕೆ ಸಾಕ್ಷಿಯಾಗಲಿದೆ.&lt;/p&gt;&lt;p&gt;ಮುಂಬೈ, ಪುಣೆ ಹೊರತುಪಡಿಸಿದರೆ ದೇಶದಲ್ಲೇ ಅತ್ಯಂತ ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯುವ ನಗರಗಳಲ್ಲಿ ಬೆಳಗಾವಿಗೂ ಪ್ರಮುಖ ಸ್ಥಾನವಿದೆ. ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆಗೆ ಬೆಳಗಾವಿಯೇ ಮುನ್ನುಡಿ ಬರೆದಿದೆ ಎಂಬ ಹೆಗ್ಗಳಿಕೆಯೂ ನಗರದ ಗಣೇಶೋತ್ಸವಕ್ಕಿದೆ.&lt;/p&gt;&lt;p&gt;&lt;strong&gt;ಮನೆಮನೆಗೂ ಗಣಪನ ಸ್ವಾಗತ&lt;/strong&gt;&lt;/p&gt;&lt;p&gt;ಸಾರ್ವಜನಿಕ ಮಂಟಪಗಳ ಸಿದ್ಧತೆ ಒಂದು ಕಡೆಯಾದರೆ, ಮನೆಮನೆಗಳಲ್ಲಿಯೂ ಗಣಪನ ಸ್ವಾಗತಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಮನೆ ಸ್ವಚ್ಛತೆ, ಮಂಟಪ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ತೊಡಗಿದ್ದಾರೆ.&lt;/p&gt;&lt;p&gt;ಕೆಲವರು ಸರಳ ಮಂಟಪಕ್ಕೆ ಆದ್ಯತೆ ನೀಡಿದರೆ, ಮತ್ತೆ ಕೆಲವರು ಕಲಾತ್ಮಕ ವಿನ್ಯಾಸದ ಮಂಟಪ ನಿರ್ಮಿಸಿ ಗಣಪನಿಗೆ ವಿಶೇಷ ಅಲಂಕಾರ ಮಾಡಲು ಸಜ್ಜಾಗಿದ್ದಾರೆ. ಮನೆಯ ಹಿರಿಯರಿಂದ ಮಕ್ಕಳವರೆಗೆ ಎಲ್ಲರೂ ಸಿದ್ಧತೆಯಲ್ಲಿ ಭಾಗಿಯಾಗಿರುವುದು ಹಬ್ಬದ ಕೌಟುಂಬಿಕ ಸಂಭ್ರಮವನ್ನು ಹೆಚ್ಚಿಸಿದೆ.&lt;/p&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶವೂ ಅಗತ್ಯ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದೆ. ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ, ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶೋತ್ಸವ ಆಚರಿಸುವುದು ನಗರದ ಪರಂಪರೆಗೆ ಮತ್ತಷ್ಟು ಗೌರವ ತಂದುಕೊಡಲಿದೆ.&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd"/>
        </item>
        <item>
            <title><![CDATA[Belagavi: ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್‌ರಿಂದ ಸೌಹಾರ್ದ ಸಂದೇಶ]]></title>
            <link>https://kannada.asianetnews.com/gallery/karnataka-districts/belagavi-collector-mohammad-roshan-ganesha-chaturthi-celebrations-friendly-message-from-dc-sns-efwq67k</link>
            <guid isPermaLink="true">https://kannada.asianetnews.com/gallery/karnataka-districts/belagavi-collector-mohammad-roshan-ganesha-chaturthi-celebrations-friendly-message-from-dc-sns-efwq67k</guid>
            <pubDate>Tue, 15 Sep 2026 12:23:51 +0530</pubDate>
            <description><![CDATA[ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್&zwnj; ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪರಿಸರ ಸ್ನೇಹಿ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2hxf9e9dwsyeepr4166c6te,imgname-belagavi-dc--6--1789455214025.jpg" type="image/jpeg" height="390" width="690"/>
            <content:encoded><![CDATA[ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್&zwnj; ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪರಿಸರ ಸ್ನೇಹಿ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.&lt;img&gt;&lt;p&gt;ಬೆಳಗಾವಿ: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬೆಳಗಾವಿಯಲ್ಲೂ ಅದ್ದೂರಿಯಾಗಿ ಹಬ್ಬದ ಆಚರಣೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್&zwnj; ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಂದೇಶ ಸಾರಿದ್ದಾರೆ.&lt;/p&gt;&lt;img&gt;&lt;p&gt;ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಅದ್ದೂರಿಯಾಗಿ ಪೂಜೆ ಸಲ್ಲಿಸಿದರು. ಆ ಮೂಲಕ ಜನರಿಗೆ ಸೌಹಾರ್ದ ಸಂದೇಶ ಸಾರಿದರು.&lt;/p&gt;&lt;img&gt;&lt;p&gt;ಬೆಳಗಾವಿ ಚೆನ್ನಮ್ಮ ವೃತ್ತದ ಗಣೇಶ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ಬಳಿಕ ಗಣೇಶ ಮೂರ್ತಿ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅದರಲ್ಲಿಯೂ ಪರಿಸರ ಸ್ನೇಹಿ ಗಣೇಶನಿಗೆ ಭಕ್ತಿ ನಮನ ಸಲ್ಲಿಕೆ ಮಾಡಿದರು.&lt;/p&gt;&lt;img&gt;&lt;p&gt;ಜಿಲ್ಲಾಡಳಿತ ಸಿಬ್ಬಂದಿಯೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆರತಿ ಬೆಳಗಿ ವಿಘ್ನ ವಿನಾಶಕನನ್ನು ಬರಮಾಡಿಕೊಂಡ ಜಿಲ್ಲಾಧಿಕಾರಿ, ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಗಣೇಶನನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.&lt;/p&gt;&lt;img&gt;&lt;p&gt;ಬೆಳಗಾವಿಯ ಹಲವು ಕಡೆ ಗಣೇಶ ಹಬ್ಬದ ಸಂಭ್ರಮಾಚರಣೆ ಜೋರಾಗಿತ್ತು. ವಿಶೇಷ ಪೂಜೆ ಮಾಡೋ ಮೂಲಕ ಭಕ್ತರು ಗಣೇಶ ಬರಮಾಡಿಕೊಂಡರು. ನಗರ ಹಲವು ಗಲ್ಲಿ ಗಲ್ಲಿಯಲ್ಲಿ ವಿವಿಧ ಆಕಾರ, ವಿನ್ಯಾಸಗಳಲ್ಲಿ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ನೆರವೇರಿಸಿದ್ದರು.&lt;/p&gt;&lt;img&gt;&lt;p&gt;ಮನೆ, ಬಡಾವಣೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗಣೇಶ ಮೂರ್ತಿಗಳ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಗಣೇಶೋತ್ಸವಕ್ಕಾಗಿ ವಿವಿಧ ಸಂಘಟನೆಗಳಿಂದ ವಿದ್ಯುತ್ ದೀಪಾಲಂಕಾರ, ಅಲಂಕಾರಗಳಿಂದ ಗಣೇಶ ಪೆಂಡಾಲ್ ಗಳು ಕಂಗೊಳಿಸುತ್ತಿದ್ದವು. ಭಕ್ತಿಯಿಂದ ವಿಘ್ನ ನಿವಾರಕ ಗಣೇಶನ ಆರಾಧನೆ ನಡೆಯಿತು.&lt;/p&gt;]]></content:encoded>
            <category>belagavi</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/belagavi-collector-mohammad-roshan-ganesha-chaturthi-celebrations-friendly-message-from-dc-sns-efwq67k"/>
        </item>
        <item>
            <title><![CDATA[ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕ ₹2 ಕೋಟಿ ನಗದು ಜಪ್ತಿ ಮಾಡಿ ಇ.ಡಿ; ಹಣದ ಮೂಲ ಬಿಚ್ಚಿಟ್ಟ ಸಚಿವರು!]]></title>
            <link>https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3</link>
            <guid isPermaLink="true">https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3</guid>
            <pubDate>Fri, 11 Sep 2026 05:56:32 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ನಡೆಸಿದ್ದು, ಸುಮಾರು 2 ಕೋಟಿ ರೂ. ನಗದು ಪತ್ತೆಯಾಗಿದೆ. ಇದು ನಮ್ಮದೇ ಹಣ, ದಾಖಲೆ ನೀಡುತ್ತೇವೆ ಎಂದಿರುವ ಜಾರಕಿಹೊಳಿ, ಈ ದಾಳಿಯ ಹಿಂದೆ ರಾಜಕೀಯ ವಾಸನೆ ಇದೆ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m26xhweqx745b71hdcm1jswe,imgname-satish-jarkiholi-ed-raid-1789086200278.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): ಜಾ&lt;/strong&gt;ರಿ ನಿರ್ದೇಶನಾಲಯ (ಇ.ಡಿ) ಶೋಧದ ವೇಳೆ ನಮ್ಮ ಮನೆಯಲ್ಲಿ ಸುಮಾರು 2 ಕೋಟಿ ರು. ನಗದು ಸಿಕ್ಕಿದೆ. ಅದು ನಮ್ಮದೇ ಹಣ. ನೋಟಿಸ್&zwnj; ನೀಡಿದ ಬಳಿಕ ದಾಖಲೆ ಕೊಡುತ್ತೇವೆ ಎಂದು ಸಚಿವ ಸತೀಶ್&zwnj; ಜಾರಕಿಹೊಳಿ ತಿಳಿಸಿದ್ದಾರೆ.&lt;/p&gt;&lt;p&gt;ಗುರುವಾರ ರಾತ್ರಿ ಇ.ಡಿ.ದಾಳಿ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡಿದ್ದೇನೆ. ಏನಾದರೂ ಅನುಮಾನಗಳಿದ್ದಲ್ಲಿ ನೋಟಿಸ್&zwnj; ಕೊಟ್ಟರೆ ಅದಕ್ಕೂ ಉತ್ತರ ಕೊಡುತ್ತೇನೆ. ಗೊತ್ತಿರುವುದಕ್ಕೆ ಉತ್ತರ ನೀಡಿದ್ದೇನೆ. ಗೊತ್ತಿಲ್ಲದ್ದಕ್ಕೆ ಗೊತ್ತಿಲ್ಲ ಎಂದಿದ್ದೇನೆ. ಇದು ದಾಳಿ ಅಲ್ಲ, ಕೇವಲ ಶೋಧ. ಅವರು ಕೆಲ ದಾಖಲೆ ತಂದಿದ್ದರು. ನಮ್ಮ ಕಡೆಯಿಂದ ಕೆಲ ದಾಖಲೆ ತೆಗೆದುಕೊಂಡು ಹೋಗಿದ್ದಾರೆ ಎಂದರು.&lt;/p&gt;&lt;p&gt;ಫೆಮಾ ಕಾಯ್ದೆಯಡಿ ನೋಟಿಸ್&zwnj; ನೀಡಿ ಕೆಲ ದಾಖಲೆ ತೋರಿಸಿ ವಿಚಾರಣೆ ಮಾಡಿದರು. ವಿದೇಶದಲ್ಲಿ ಹೂಡಿಕೆ ಮಾಡಿದ್ದೀರಾ? ಎಂದು ಕೇಳಿದರು. ಇನ್ನೂ ಹೂಡಿಕೆ ಮಾಡಿಲ್ಲ. ಹೂಡಿಕೆ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದು ಹೇಳಿದ್ದೇನೆ. ಇನ್ನು ಕಾನೂನು ಅನುಮತಿ, ಆರ್&zwnj;ಬಿಐ ಅನುಮತಿ ಸೇರಿ ಕೆಲ ಅನುಮತಿ ಪಡೆಯಬೇಕು ಎಂದಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ಗೊತ್ತಿರುವ ಉತ್ತರವಷ್ಟೇ ನೀಡಿದ್ದೇನೆ. ನೋಟಿಸ್&zwnj; ಕೊಟ್ಟರೆ ಹೆಚ್ಚಿನ ಉತ್ತರ ಕೊಡುತ್ತೇನೆ ಎಂದರು.&lt;/p&gt;&lt;h2&gt;&lt;strong&gt;ದಾಳಿ ಹಿಂದೆ ರಾಜಕೀಯ ವಾಸನೆ:&lt;/strong&gt;&lt;/h2&gt;&lt;p&gt;ನೋಟಿಸ್&zwnj; ಕೊಟ್ಟಿದ್ದರೆ ಉತ್ತರ ಕೊಡಬಹುದಿತ್ತು. ದಾಳಿ ಮಾಡುವ ಅಗತ್ಯವಿರಲಿಲ್ಲ. ದೇಶದಲ್ಲಿ ಇದಕ್ಕಿಂತ ದೊಡ್ಡವರು ಇದ್ದಾರೆ. ಇದು ಚರ್ಚೆಗೆ ಆಸ್ಪದವಾಗಿದೆ. ಈ ದಾಳಿ ಹಿಂದೆ ರಾಜಕೀಯದ ವಾಸನೆ ಬರುತ್ತಿದೆ. ಸದ್ಯಕ್ಕೆ ಶೋಧ ನಡೆಸಿ ಹೋಗಿದ್ದಾರೆ. ಅವರು ಎಷ್ಟು ತೃಪ್ತರಾಗಿದ್ದರೋ ಗೊತ್ತಿಲ್ಲ. ಮುಂದೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇ.ಡಿ.ಅಧಿಕಾರಿಗಳು ಬೆಂಗಳೂರು, ಗೋಕಾಕ, ಬೆಳಗಾವಿ ಸೇರಿ ಕೆಲ ಕಡೆ ಶೋಧಿಸಿದ್ದಾರೆ. ಅವರು ನಮಗೆ ಸಹಕರಿಸಿದರು. ನಾವೂ ಅವರಿಗೆ ಸಹರಿಸಿದ್ದೇವೆ. ಮತ್ತೆ ಅವರು ನೋಟಿಸ್&zwnj; ಕೊಟ್ಟಾಗ ವಿಚಾರಣೆಗೆ ಹೋಗುತ್ತೇವೆ ಎಂದು ಸಚಿವ ಸತೀಶ್&zwnj; ಜಾರಕಿಹೊಳಿ ಹೇಳಿದರು.&lt;/p&gt;&lt;h2&gt;&lt;strong&gt;ಬಿಜೆಪಿಯಲ್ಲಿ ದೊಡ್ಡ ಮೀನುಗಳಿವೆ:&lt;/strong&gt;&lt;/h2&gt;&lt;p&gt;ಇ.ಡಿ. ಕಾಂಗ್ರೆಸ್&zwnj; ನಾಯಕರನ್ನು ಟಾರ್ಗೆಟ್&zwnj; ಮಾಡಿದೆ ಎಂದು ನಮ್ಮ ಮುಖ್ಯಮಂತ್ರಿ ಪದೇ ಪದೆ ಹೇಳುತ್ತಿದ್ದರು. ನಾವು ಕೊನೆಯ ಟಾರ್ಗೆಟ್&zwnj; ಎಂದುಕೊಂಡಿದ್ದೆ. ಆದರೆ, ಮೊದಲ ಸರದಿ ನಮಗೆ ಬಂದಿದೆ. ನಾವು ಸಣ್ಣ ತಪ್ಪು ಮಾಡಿರಬಹುದು. ನೂರಕ್ಕೆ ನೂರಷ್ಟು ಸರಿ ಯಾರೂ ಇರುವುದಿಲ್ಲ. ಆದರೆ, ನನಗಿಂತ ದೊಡ್ಡ ತಪ್ಪು ಮಾಡಿದವರು ಬಿಜೆಪಿಯಲ್ಲಿ ಸಾಕಷ್ಟು ಜನ ಇದ್ದಾರೆ. ದೊಡ್ಡ ಮೀನುಗಳನ್ನು ಬಿಟ್ಟು ಸಣ್ಣ ಮೀನುಗಳ ಮೇಲೆ ಬಿದ್ದಿದ್ದಾರೆ. ದೇಶದಲ್ಲಿ ಕಾಂಗ್ರೆಸ್&zwnj; ನಾಯಕರು, ಪ್ರಾದೇಶಿಕ ಪಕ್ಷಗಳ ನಾಯಕರ ಮೇಲೆ ಈ ಇ.ಡಿ. ಐಟಿ, ಸಿಬಿಐ ದಾಳಿಯಾಗುತ್ತಿವೆ. ಇದೇ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.&lt;/p&gt;&lt;h2&gt;&lt;strong&gt;ಇ.ಡಿ ಬಳಿ 8 ಮಂದಿಯ ಟಾರ್ಗೆಟ್&zwnj; ಲಿಸ್ಟ್&zwnj;:&lt;/strong&gt;&lt;/h2&gt;&lt;p&gt;ಇ.ಡಿ. ಈಗಷ್ಟೇ ಪ್ರಾರಂಭಿಸಿದೆ. ಇದನ್ನು ಎಲ್ಲಿಯವರೆಗೆ ಕೊಂಡೊಯ್ಯಲಿದೆ ಎಂದು ನೋಡೋಣ. ಚುನಾವಣೆ ವರೆಗೋ ಅಥವಾ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಲಿದೆಯೋ ಕಾದು ನೋಡೋಣ. ಈಗ ತನಿಖೆ ಹೇಗೆ ಮಾಡುತ್ತಾರೆ ಎಂಬುದನ್ನೂ ನೋಡೋಣ. ನಮ್ಮ ಪಕ್ಷದ ಅಧ್ಯಕ್ಷರು ಬಂದಿದ್ದರು. ಇ.ಡಿ. ಪಟ್ಟಿಯಲ್ಲಿ 8 ಜನ ಇದ್ದಾರೆ ಎಂದು ಹೇಳುತ್ತಿದ್ದರು. ಮುಂದೆ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಸಚಿವ ಸತೀಶ್&zwnj; ಜಾರಹೊಳಿ ಪ್ರತಿಕ್ರಿಯಿಸಿದರು.&lt;/p&gt;&lt;p&gt;ಇ.ಡಿ. ಅಧಿಕಾರಿಗಳಿಂದ ನೋ ಡ್ರಿಲ್&zwnj;, ನೋ ಗ್ರಿಲ್&zwnj;. ಆರಾಮವಾಗಿದ್ದೆ. ಇದು ಇನ್ನು ಪ್ರಾಥಮಿಕ ಹಂತ. ಇ.ಡಿ ನ್ಯಾಯಬದ್ಧವಾಗಿ ತನಿಖೆ ಮಾಡುವ ನಂಬಿಕೆ ಇದೆ. ಮುಂದೆ ವಿಚಾರಣೆ ಮಾಡಿದರೆ ಉತ್ತರ ಕೊಡುತ್ತೇನೆ&lt;/p&gt;&lt;p&gt;&lt;strong&gt;- ಸತೀಶ್&zwnj; ಜಾರಕಿಹೊಳಿ, ಲೋಕೋಪಯೋಗಿ ಸಚಿವ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/ed-search-satish-jarkiholi-residence-2-crore-cash-fema-karnataka-sat/articleshow-ez9gkt3"/>
        </item>
        <item>
            <title><![CDATA[ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ: ಮುಂದೇನಾಯ್ತು ಗೊತ್ತಾ?]]></title>
            <link>https://kannada.asianetnews.com/karnataka-districts/belagavi-gold-treasure-labourers-find-14-ancient-coins-worth-8-27-lakh-are-they-from-the-ganga-era-gvd/articleshow-f5qd25z</link>
            <guid isPermaLink="true">https://kannada.asianetnews.com/karnataka-districts/belagavi-gold-treasure-labourers-find-14-ancient-coins-worth-8-27-lakh-are-they-from-the-ganga-era-gvd/articleshow-f5qd25z</guid>
            <pubDate>Fri, 04 Sep 2026 22:28:46 +0530</pubDate>
            <description><![CDATA[&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1pnghwgk27q394d5rjd6jgd,imgname-whatsapp-image-2026-09-04-at-10.09.09-pm-1788540897168.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ (ಸೆ.04): &lt;/strong&gt;ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಂಗರ ಕಾಲಕ್ಕೆ ಸೇರಿವೆ ಎನ್ನಲಾದ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯಲ್ಲಿ ಈ ನಾಣ್ಯಗಳು ದೊರೆತಿದ್ದು, ಇದೀಗ ತಾಲೂಕಿನಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;p&gt;&lt;strong&gt;ಗಡಿಗೆಯಲ್ಲಿ ಪತ್ತೆಯಾದ 14 ಚಿನ್ನದ ನಾಣ್ಯಗಳು&lt;/strong&gt;&lt;/p&gt;&lt;p&gt;ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗಡಿಗೆಯೊಂದು ಸಿಕ್ಕಿದ್ದು, ಪರಿಶೀಲಿಸಿದಾಗ ಅದರೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಒಟ್ಟು 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.&lt;/p&gt;&lt;p&gt;&lt;strong&gt;ಅಧಿಕಾರಿಗಳಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಕಾರ್ಮಿಕರು&lt;/strong&gt;&lt;/p&gt;&lt;p&gt;ನಾಣ್ಯಗಳು ಸಿಕ್ಕ ಕೂಡಲೇ ಕೂಲಿ ಕಾರ್ಮಿಕರು ಅವುಗಳನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ನಾಣ್ಯಗಳನ್ನು ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಹಸ್ತಾಂತರಿಸಲಾಯಿತು. ಬಳಿಕ ತಹಶೀಲ್ದಾರ್ ಅವರು ಎಲ್ಲ ನಾಣ್ಯಗಳನ್ನು ಖಜಾಂಚಿಗೆ ಒಪ್ಪಿಸಿದ್ದಾರೆ.&lt;img&gt;&lt;/p&gt;&lt;p&gt;&lt;strong&gt;ನಾಣ್ಯಗಳ ಮೇಲೆ ಆನೆಯ ಚಿತ್ರ!&lt;/strong&gt;&lt;/p&gt;&lt;p&gt;ಪತ್ತೆಯಾಗಿರುವ ಚಿನ್ನದ ನಾಣ್ಯಗಳ ಮೇಲ್ಭಾಗದಲ್ಲಿ ಆನೆಯ ಚಿತ್ರ ಇರುವುದಾಗಿ ತಿಳಿದುಬಂದಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿತ್ತು. ಹೀಗಾಗಿ ಪತ್ತೆಯಾಗಿರುವ ನಾಣ್ಯಗಳು ಗಂಗರ ಕಾಲಕ್ಕೆ ಸಂಬಂಧಿಸಿದ್ದಾಗಿರಬಹುದು ಎಂಬ ಕುತೂಹಲ ಮೂಡಿದೆ.&lt;/p&gt;&lt;p&gt;&lt;strong&gt;10ರಿಂದ 15ನೇ ಶತಮಾನದ ನಾಣ್ಯಗಳೇ?&lt;/strong&gt;&lt;/p&gt;&lt;p&gt;ಪತ್ತೆಯಾದ ಚಿನ್ನದ ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿವೆ ಎಂಬ ಮಾಹಿತಿ ಲಭ್ಯವಾಗಿದೆ. ನಾಣ್ಯಗಳ ನಿಖರ ಕಾಲಘಟ್ಟ ಹಾಗೂ ಐತಿಹಾಸಿಕ ಹಿನ್ನೆಲೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಹೆಚ್ಚಿನ ಪರಿಶೀಲನೆ ನಡೆಯಬೇಕಿದೆ.&lt;img&gt;&lt;/p&gt;&lt;h2&gt;&lt;strong&gt;ಪ್ರಾಮಾಣಿಕತೆಗೆ ತಾಲೂಕಾಡಳಿತದ ಮೆಚ್ಚುಗೆ&lt;/strong&gt;&lt;/h2&gt;&lt;p&gt;ಕೈಗೆ ಸಿಕ್ಕ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳನ್ನು ತಮ್ಮದಾಗಿಸಿಕೊಳ್ಳದೆ ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಸವದತ್ತಿ ತಾಲೂಕಾಡಳಿತ ಪ್ರಶಂಸೆ ವ್ಯಕ್ತಪಡಿಸಿದೆ. ಈ ಘಟನೆ ಇದೀಗ ಇಂಚಲ ಗ್ರಾಮ ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಯಲ್ಲೂ ಗಮನ ಸೆಳೆದಿದೆ.&lt;/p&gt;]]></content:encoded>
            <category>belagavi</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/belagavi-gold-treasure-labourers-find-14-ancient-coins-worth-8-27-lakh-are-they-from-the-ganga-era-gvd/articleshow-f5qd25z"/>
        </item>
        <item>
            <title><![CDATA[Belagavi: 756 ಎಕ್ರೆಯ ಪ್ರದೇಶದಲ್ಲಿ ಪಾಲಿಕೆಗೆ ಕಂಟೋನ್ಮೆಂಟ್‌ ಕೊಡೋದೆಷ್ಟು ಜಾಗ?]]></title>
            <link>https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</link>
            <guid isPermaLink="true">https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</guid>
            <pubDate>Sun, 13 Sep 2026 07:47:35 +0530</pubDate>
            <description><![CDATA[ಬೆಳಗಾವಿ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚರ್ಚೆಯಲ್ಲಿದೆ. 756 ಎಕರೆ ಪೂರ್ಣ ಪ್ರದೇಶದ ಬದಲು 112 ಎಕರೆ ಮಾತ್ರ ಹಸ್ತಾಂತರಿಸುವ ಪ್ರಸ್ತಾಪದಿಂದ ಗೊಂದಲ ಉಂಟಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2c8t73v0wcwe7we7526afq7,imgname-belagavi-cantonment-1789265779835.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರದ ಹೃದಯಭಾಗದಲ್ಲಿದ್ದು, ಇತಿಹಾಸ, ಹಸಿರು ಪರಿಸರ, ಶಿಕ್ಷಣ ಹಾಗೂ ಸೇನಾ ಪರಂಪರೆಯನ್ನು ತನ್ನೊಳಗೆ ಕಟ್ಟಿಕೊಂಡಿರುವ ಬೆಳಗಾವಿ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಯ ತೆಕ್ಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. 756 ಎಕರೆ ನಾಗರಿಕ ಪ್ರದೇಶದ ಹಸ್ತಾಂತರಕ್ಕೆ 70 ಪುಟಗಳ ಸಮಗ್ರ ವರದಿ ಸಿದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯೂ ಇದೆ. ರಾಜ್ಯ ಸರ್ಕಾರದ ಹಂತದಲ್ಲೂ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೂ ಅಂತಿಮ ಹಸ್ತಾಂತರಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.&lt;/p&gt;&lt;h2&gt;&lt;strong&gt;ಕಡತದ ಪಯಣ ಇನ್ನೂ ಮುಗಿದಿಲ್ಲ&lt;/strong&gt;&lt;/h2&gt;&lt;p&gt;ಕಂಟೋನ್ಮೆಂಟ್ ವ್ಯಾಪ್ತಿಯ ನಾಗರಿಕ ವಸಾಹತುಗಳನ್ನು ಆಯಾ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸುವ ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯಡಿ ಬೆಳಗಾವಿಯ 756 ಎಕರೆ ನಾಗರಿಕ ಪ್ರದೇಶದ ಕುರಿತು ವರದಿ ಸಿದ್ಧಪಡಿಸಲಾಗಿದೆ. ಆದರೆ ವರದಿ ಸಿದ್ಧವಾಗುವುದೇ ಹಸ್ತಾಂತರವಲ್ಲ. ಭೂ ಮಾಲೀಕತ್ವದ ಹಕ್ಕುಗಳು, ಸ್ವತ್ತುಗಳ ವರ್ಗಾವಣೆ, ಬಾಕಿ ಇರುವ ಹೊಣೆಗಾರಿಕೆಗಳು, ಸಿಬ್ಬಂದಿ, ರಸ್ತೆ, ನೀರು, ಒಳಚರಂಡಿ ಹಾಗೂ ಇತರೆ ನಾಗರಿಕ ಮೂಲಸೌಕರ್ಯಗಳ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳು ಇನ್ನೂ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಸದ್ಯ ಪ್ರಸ್ತಾವನೆ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಪರಿಗಣನೆಯಲ್ಲಿದೆ. ರಾಜ್ಯಮಟ್ಟದ ಪರಿಶೀಲನೆ ಬಳಿಕ ಸಚಿವ ಸಂಪುಟ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಚರ್ಚಿಸಿ ಮುಂದಿನ ಹಂತಕ್ಕೆ ಕಳುಹಿಸಬೇಕಿದೆ.&lt;/p&gt;&lt;p&gt;ಹಸ್ತಾಂತರದ ಪ್ರಸ್ತಾವನೆಯಲ್ಲಿ 112 ಎಕರೆ ಅಂಶ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಕಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ 112 ಎಕರೆ ನಾಗರಿಕ ಪ್ರದೇಶವನ್ನು ಮಾತ್ರ ಹಸ್ತಾಂತರಿಸಲು ಪ್ರಸ್ತಾಪಿಸಿದ್ದಾರೆ. ಆದರೆ 756 ಎಕರೆ ನಾಗರಿಕ ಪ್ರದೇಶದ ಕುರಿತು ಸಮಗ್ರ ವರದಿ ಸಿದ್ಧವಾಗಿರುವಾಗ 112 ಎಕರೆ ಮಾತ್ರ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಹಾಗಾದರೆ ಉಳಿದ ಪ್ರದೇಶದ ಸ್ಥಿತಿ ಏನು? ನಾಗರಿಕ ಪ್ರದೇಶದ ಗಡಿ ಯಾವ ಆಧಾರದ ಮೇಲೆ ನಿಗದಿಯಾಗಲಿದೆ? ಅಂತಿಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಎಷ್ಟು ಪ್ರದೇಶ ಬರಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.&lt;/p&gt;&lt;p&gt;ಕೇಂದ್ರ ರಕ್ಷಣಾ ಸಚಿವಾಲಯದ ಹೊಸ ಮಾರ್ಗಸೂಚಿಗಳು ಮಾತ್ರ ಈ ಪ್ರಕ್ರಿಯೆಗೆ ಹೊಸ ತಿರುವು ನೀಡಿವೆ. ಕಂಟೋನ್ಮೆಂಟ್ ಮಿತಿಯೊಳಗಿನ ನಾಗರಿಕ ವಸಾಹತುಗಳನ್ನು ಸ್ಥಳೀಯ ಪುರಸಭೆ ಸಂಸ್ಥೆಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಿರುವುದರಿಂದ, ಅಂತಿಮವಾಗಿ ಗುರುತಿಸಲಾದ ಸಂಪೂರ್ಣ ನಾಗರಿಕ ಪ್ರದೇಶವೇ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಮೂಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಇದ್ದರೂ, ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರದ ಅಂತಿಮ ಒಪ್ಪಿಗೆ ಇಲ್ಲದೆ ಹಸ್ತಾಂತರ ಸಾಧ್ಯವಿಲ್ಲ.&lt;/p&gt;&lt;p&gt;ಪಾಲಿಕೆಗೆ ಸೇರಿದರೆ ಏನು ಬದಲಾಗಲಿದೆ?:ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಸೇರಿದರೆ ಅಲ್ಲಿನ ನಿವಾಸಿಗಳ ದೈನಂದಿನ ಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ನೀರು ಪೂರೈಕೆ, ರಸ್ತೆ ನಿರ್ವಹಣೆ, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಕಟ್ಟಡ ಪರವಾನಗಿ ಸೇರಿದಂತೆ ಹಲವು ಮೂಲಸೌಲಭ್ಯಗಳು ಪಾಲಿಕೆಯ ವ್ಯಾಪ್ತಿಗೆ ಬರಬಹುದು. ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ. ಕಂಟೋನ್ಮೆಂಟ್&zwnj;ನ ಆಸ್ತಿಗಳು ಯಾರ ಪಾಲಾಗಲಿವೆ? ಸಿಬ್ಬಂದಿಯ ಗತಿ ಏನು? ರಸ್ತೆ, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ವಹಣೆ ಯಾರ ಹೊಣೆ? ಬಾಕಿ ಇರುವ ಆರ್ಥಿಕ ಹೊಣೆಗಾರಿಕೆಗಳನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬುದಕ್ಕೆ ಹಸ್ತಾಂತರಕ್ಕೂ ಮುನ್ನ ಸ್ಪಷ್ಟ ಉತ್ತರ ಬೇಕಿದೆ.&lt;/p&gt;&lt;h3&gt;&lt;strong&gt;ಎರಡ್ಮೂರು ತಿಂಗಳು ಬೇಕು&lt;/strong&gt;&lt;/h3&gt;&lt;p&gt;ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ ಕಡತದ ಹಂತಗಳು ಇನ್ನೂ ಹಲವು ಇರುವುದರಿಂದ ಎರಡು&ndash;ಮೂರು ತಿಂಗಳ ನಂತರವೇ ನಿಜವಾದ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಕಂಟೋನ್ಮೆಂಟ್&zwnj; ಇತಿಹಾಸ&lt;/strong&gt;&lt;/h3&gt;&lt;p&gt;ಬೆಳಗಾವಿ ಕಂಟೋನ್ಮೆಂಟ್&zwnj;ಗೆ ಎರಡು ಶತಮಾನಗಳ ಇತಿಹಾಸವಿದೆ. 1832ರಲ್ಲಿ ಸ್ಥಾಪನೆಯಾದ ಕಂಟೋನ್ಮೆಂಟ್, ಮುಖ್ಯ ಕಂಟೋನ್ಮೆಂಟ್ ಮತ್ತು ಕೋಟೆ ವಲಯ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಕಂಟೋನ್ಮೆಂಟ್ ಎಂದರೆ ಕೇವಲ ಸೇನಾ ನೆಲೆ ಎಂಬ ಕಲ್ಪನೆಗೆ ಮೀರಿದ ಹಲವು ಆಯಾಮಗಳು ಇಲ್ಲಿವೆ. ವಿಶಾಲವಾದ ಹಸಿರು ಪ್ರದೇಶ, ಮರಗಳ ಸಾಲು, ಅಚ್ಚುಕಟ್ಟಾದ ರಸ್ತೆಗಳು ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ವಾತಾವರಣದಿಂದ ಇದು ಬೆಳಗಾವಿಯ ಹಸಿರು ಶ್ವಾಸಕೋಶದಂತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ಜನರಿಗೆ ಇದು ನೆಚ್ಚಿನ ತಾಣ. ಅಲ್ಲದೇ, ಇದು ರಾಜ್ಯದ ಏಕೈಕ ಕಂಟೋನ್ಮೆಂಟ್&zwnj; ಎಂಬ ಹೆಗ್ಗಳಿಕೆಯೂ ಇದೆ.&lt;/p&gt;&lt;p&gt;ಮರಾಠಾ ಲಘು ಪದಾತಿದಳದ ರೆಜಿಮೆಂಟಲ್ ಕೇಂದ್ರ, ಕಿರಿಯ ನಾಯಕರ ತರಬೇತಿ ವಿಭಾಗ ಸೇರಿದಂತೆ ಹಲವು ಪ್ರಮುಖ ಸೇನಾ ಸ್ಥಾಪನೆಗಳು ಕಂಟೋನ್ಮೆಂಟ್&zwnj;ನಲ್ಲಿವೆ. ಹೀಗಾಗಿ ಸೇನಾ ನೆಲೆ, ನಾಗರಿಕ ವಸಾಹತು, ಶಿಕ್ಷಣ ಕೇಂದ್ರ, ಐತಿಹಾಸಿಕ ತಾಣ ಹಾಗೂ ಹಸಿರು ಪ್ರದೇಶಗಳ ಅಪರೂಪದ ಸಂಗಮವೇ ಬೆಳಗಾವಿ ಕಂಟೋನ್ಮೆಂಟ್. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿವೆ.&lt;/p&gt;&lt;p&gt;ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವ ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. 756 ಎಕರೆ ಹಸ್ತಾಂತರದ ಪ್ರಸ್ತಾವನೆಗೆ ಡಿಒ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪವಿದೆ. ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯದ್ದಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಮಂಚಲವಾರ ಸುದಾಮ ಹರಿವಿಜಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೆಳಗಾವಿ ದಂಡುಮಂಡಳಿ&lt;/strong&gt;&lt;/p&gt;&lt;p&gt;ದಂಡುಮಂಡಳಿಯ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನೂ ಅಂತಿಮ ಹಂತ ತಲುಪಿಲ್ಲ. 756 ಎಕರೆ ಪ್ರದೇಶದ ಕುರಿತು ಪ್ರಸ್ತಾವ ಪರಿಶೀಲನೆಯಲ್ಲಿದೆ. ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ಅಂತಿಮ ಒಪ್ಪಿಗೆಯ ಬಳಿಕವೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ವಿಶ್ವಾಸವಿದೆ.&lt;/p&gt;&lt;p&gt;&lt;strong&gt;- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp"/>
        </item>
        <item>
            <title><![CDATA[Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!]]></title>
            <link>https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</link>
            <guid isPermaLink="true">https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</guid>
            <pubDate>Sat, 12 Sep 2026 20:37:41 +0530</pubDate>
            <description><![CDATA[ಬೆಳಗಾವಿಯ ಅಥಣಿಯಲ್ಲಿ, ಎಐ ಕ್ಯಾಮೆರಾದ ತಾಂತ್ರಿಕ ದೋಷದಿಂದಾಗಿ ಕಾರು ಚಾಲಕನಿಗೆ 'ಹೆಲ್ಮೆಟ್ ಇಲ್ಲ' ಎಂದು ದಂಡ ವಿಧಿಸಲಾಗಿದೆ. ಈ ವಿಚಿತ್ರ ದಂಡವನ್ನು ವಿರೋಧಿಸಿ, ಮಾಲೀಕರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ ಪ್ರತಿಭಟಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2fgtjft4x5ff76fp98nqv,imgname-belagavi-ai-camara-1789225583442.jpg" type="image/jpeg" height="390" width="690"/>
            <content:encoded><![CDATA[&lt;p&gt;ತಂತ್ರಜ್ಞಾನ ಬೆಳೆದಂತೆ ಕೆಲಸಗಳು ಸುಲಭವಾಗುತ್ತವೆ ಎಂಬ ನಂಬಿಕೆಯಿದೆ. ಆದರೆ ಅದೇ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡದಿದ್ದರೆ ಎಂಥಾ ಅವಾಂತರ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನು ಹಿಡಿಯಲು ಪೊಲೀಸರು ಅಳವಡಿಸಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಕ್ಯಾಮೆರಾವೊಂದು ಭಾರಿ ಎಡವಟ್ಟು ಮಾಡಿದ್ದು, ಕಾರ್ ಮಾಲೀಕನಿಗೆ &quot;ನೋ ಹೆಲ್ಮೆಟ್&quot; ದಂಡ ವಿಧಿಸಿ ಶಾಕ್ ನೀಡಿದೆ!&lt;/p&gt;&lt;h2&gt;&lt;strong&gt;ಅಷ್ಟಕ್ಕೂ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯಾದ ಸುಭಾಷ್ ಬೋಜನೆ ಎಂಬುವವರು ತಮ್ಮ ಕಾರಿನಲ್ಲಿ ಪಟ್ಟಣದ ಪ್ರಮುಖ ವೃತ್ತವಾದ ಅಂಬೇಡ್ಕರ್ ಸರ್ಕಲ್ ಮೂಲಕ ಪ್ರಯಾಣಿಸುತ್ತಿದ್ದರು. ಕಾರು ಚಾಲನೆ ಮಾಡುವಾಗ ಅವರು ಸೀಟ್ ಬೆಲ್ಟ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸುತ್ತಿದ್ದರೂ, ಅಲ್ಲಿ ಅಳವಡಿಸಲಾಗಿದ್ದ ಎಐ ಸಂಚಾರ ಕ್ಯಾಮೆರಾ ಕಾರನ್ನು ಗುರುತಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು ದಾಖಲಿಸಿಕೊಂಡಿದೆ.&lt;/p&gt;&lt;h3&gt;&lt;strong&gt;ಬಂತು 500 ರೂ., ದಂಡ!&lt;/strong&gt;&lt;/h3&gt;&lt;p&gt;ಸ್ವಲ್ಪ ಸಮಯದ ನಂತರ ಸುಭಾಷ್ ಅವರ ವಾಟ್ಸಾಪ್&zwnj;ಗೆ ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರಿಂದ ಸಂದೇಶವೊಂದು ಬಂದಿದೆ. ಅದನ್ನು ತೆರೆದು ನೋಡಿದಾಗ ಸುಭಾಷ್ ಸಂಪೂರ್ಣವಾಗಿ ತಬ್ಬಿಬ್ಬಾಗಿದ್ದಾರೆ. ಏಕೆಂದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ &quot;ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕಾಗಿ&quot; 500 ರೂಪಾಯಿ ದಂಡ ವಿಧಿಸಲಾಗಿತ್ತು!&lt;/p&gt;&lt;h3&gt;&lt;strong&gt;ಕಾರ್ ಮಾಲೀಕನ ವಿಭಿನ್ನ ಪ್ರತಿಭಟನೆ!&lt;/strong&gt;&lt;/h3&gt;&lt;p&gt;ಕಾರಿಗೆ ಹೆಲ್ಮೆಟ್ ದಂಡ ಬಿದ್ದಿದ್ದನ್ನು ನೋಡಿ ಮೊದಲಿಗೆ ದಿಗ್ಭ್ರಮೆಗೊಂಡ ಸುಭಾಷ್, ನಂತರ ಈ ಎಐ ತಂತ್ರಜ್ಞಾನದ ಅವಾಂತರವನ್ನು ಸಾರ್ವಜನಿಕರಿಗೆ ತೋರಿಸಲು ವಿಭಿನ್ನ ಹಾದಿ ತುಳಿದರು. ಸ್ವತಃ ತಾವೇ ತಲೆಗೆ ಹೆಲ್ಮೆಟ್ ಧರಿಸಿಕೊಂಡು, ಕಾರಿನಲ್ಲಿ ಕುಳಿತು ಚಾಲನೆ ಮಾಡುತ್ತಾ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಪೊಲೀಸರ ಎಐ ಕ್ಯಾಮೆರಾ ಪ್ರಕಾರ ನಾವು ಕಾರು ಓಡಿಸಬೇಕಾದರೂ ಹೆಲ್ಮೆಟ್ ಧರಿಸಬೇಕು ಅನಿಸುತ್ತೆ! ಹೀಗಾಗಿ ಫೈನ್&zwnj;ನಿಂದ ತಪ್ಪಿಸಿಕೊಳ್ಳಲು ನಾನು ಕಾರಿನಲ್ಲೇ ಹೆಲ್ಮೆಟ್ ಹಾಕಿಕೊಂಡು ಓಡಾಡುತ್ತಿದ್ದೇನೆ&quot; ಎಂದು ಅವರು ವಿಡಿಯೋದಲ್ಲಿ ಹಾಸ್ಯಸ್ಪಂದನವಾಗಿ ಪೊಲೀಸರ ಎಡವಟ್ಟನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!&lt;/strong&gt;&lt;/h3&gt;&lt;p&gt;ಸುಭಾಷ್ ಬೋಜನೆ ಅವರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಟ್ರಾಫಿಕ್ ಪೊಲೀಸರು ಮತ್ತು ಎಐ ಕ್ಯಾಮೆರಾದ ತಾಂತ್ರಿಕ ಲೋಪದೋಷವನ್ನು ಕಂಡು ತೀವ್ರವಾಗಿ ಕಾಲೆಳೆಯುತ್ತಿದ್ದಾರೆ. &quot;ಮುಂದಿನ ದಿನಗಳಲ್ಲಿ ಸೈಕಲ್&zwnj;ಗೂ ಹೆಲ್ಮೆಟ್ ಫೈನ್ ಹಾಕ್ತಾರೇನೋ!&quot; ಎಂದು ನೆಟ್ಟಿಗರು ತಮಾಷೆಯ ಕಮೆಂಟ್&zwnj;ಗಳನ್ನು ಮಾಡುತ್ತಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಂಚಾರ ವಿಭಾಗದ ಎಐ ವ್ಯವಸ್ಥೆಯಲ್ಲಿರುವ ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿದೆ. ತಂತ್ರಜ್ಞಾನದ ಆಧಾರದ ಮೇಲೆ ದಂಡ ವಿಧಿಸುವಾಗ ಪೊಲೀಸರು ಒಮ್ಮೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category>belagavi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041"/>
        </item>
        <item>
            <title><![CDATA[Belagavi: ಗೋವಾದಿಂದ ಬಂದ ಅಧಿಕಾರಿ, ಲ್ಯಾಪ್‌ಟಾಪ್‌ನಲ್ಲಿ ಬಯಲಾಯ್ತಾ ಸೀಕ್ರೆಟ್? ಸಚಿವ ಸತೀಶ ಸಹೋದರ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/satish-jarkiholi-ed-raid-lakhan-jarkiholi-statement-business-investment-foreign-investment-allegations-belagavi-ed-bmk/articleshow-nslyv7o</link>
            <guid isPermaLink="true">https://kannada.asianetnews.com/karnataka-districts/satish-jarkiholi-ed-raid-lakhan-jarkiholi-statement-business-investment-foreign-investment-allegations-belagavi-ed-bmk/articleshow-nslyv7o</guid>
            <pubDate>Wed, 09 Sep 2026 16:03:50 +0530</pubDate>
            <description><![CDATA[&lt;p&gt;ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮತ್ತೊಂದೆಡೆ ಬೆಳಗಾವಿಯಲ್ಲಿ ಇಡಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮಂಜುನಾಥ್ ಅವರ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ghe3xkh4afjywhtrxcbph7f4,imgname-satish-jarakiholi-with-congress.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಅವರ ನಿಕಟವರ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ದಾಳಿ ಮತ್ತು ವಿಚಾರಣೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಠಾತ್ ಬೆಳವಣಿಗೆಯ ಕುರಿತು ಗೋಕಾಕ್&zwnj;ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ (ಎಮ್&zwnj;ಎಲ್&zwnj;ಸಿ) ಲಖನ್ ಜಾರಕಿಹೊಳಿ ಅವರು ಪ್ರಮುಖ ಪ್ರತಿಕ್ರಿಯೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ರಾಜಕೀಯ ಷಡ್ಯಂತ್ರವಿಲ್ಲ, ಉದ್ಯಮದ ಹಿನ್ನೆಲೆ ದಾಳಿ!&lt;/strong&gt;&lt;/h2&gt;&lt;p&gt;ಕಾಂಗ್ರೆಸ್ ನಾಯಕರು ಈ ಇಡಿ ದಾಳಿಯನ್ನು ಪರಿಶಿಷ್ಟ ಪಂಗಡದ (ಎಸ್.ಟಿ) ನಾಯಕರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ರಾಜಕೀಯ ಷಡ್ಯಂತ್ರ ಎಂದು ಆರೋಪಿಸುತ್ತಿರುವುದಕ್ಕೆ ಲಖನ್ ಜಾರಕಿಹೊಳಿ ನೇರವಾಗಿ ತಿರುಗೇಟು ನೀಡಿದ್ದಾರೆ. ಈ ದಾಳಿಯ ಹಿಂದೆ ಯಾವುದೇ ರೀತಿಯ ರಾಜಕೀಯ ಷಡ್ಯಂತ್ರ ಅಥವಾ ದುರುದ್ದೇಶವಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರು ವಿವಿಧ ಉದ್ಯಮಗಳಲ್ಲಿ ಸಕ್ರಿಯರಾಗಿದ್ದು, ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡಿದ್ದಾರೆ. ಉದ್ಯಮ ನಡೆಸುವವರ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುವುದು ಮತ್ತು ಪರಿಶೀಲನೆ ಮಾಡುವುದು ಒಂದು ಸಹಜ ಹಾಗೂ ನಿರಂತರ ಪ್ರಕ್ರಿಯೆಯಾಗಿದೆ, ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ದಾಖಲೆಗಳ ಸಲ್ಲಿಕೆ ಮತ್ತು ಸ್ಪಷ್ಟನೆ!&lt;/strong&gt;&lt;/h3&gt;&lt;p&gt;ವಿದೇಶದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೂಡಿಕೆ ಮಾಡಿರುವ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿದ ಲಖನ್, &quot;ವಿದೇಶಿ ಹೂಡಿಕೆಗಳ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ತಮ್ಮ ಉದ್ಯಮ ಹಾಗೂ ಹೂಡಿಕೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ದಾಖಲೆಗಳು ಸಚಿವ ಸತೀಶ್ ಜಾರಕಿಹೊಳಿ ಅವರ ಬಳಿ ಭದ್ರವಾಗಿವೆ. ಇಡಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಮತ್ತು ಆರೋಪಗಳಿಗೆ ಸಚಿವರೇ ಸೂಕ್ತ ದಾಖಲೆಗಳ ಸಹಿತ ಕಾನೂನಾತ್ಮಕವಾಗಿ ಸ್ಪಷ್ಟನೆ ನೀಡಲಿದ್ದಾರೆ,&quot; ಎಂದು ಸೋದರನ ಬೆಂಬಲಕ್ಕೆ ನಿಂತಿದ್ದಾರೆ.&lt;/p&gt;&lt;h3&gt;&lt;strong&gt;ಬೆಳಗಾವಿಯಲ್ಲಿ ಮುಂದುವರಿದ ಇಡಿ ವಿಚಾರಣೆ!&lt;/strong&gt;&lt;/h3&gt;&lt;p&gt;ಮತ್ತೊಂದೆಡೆ ಬೆಳಗಾವಿಯಲ್ಲಿ ಇಡಿ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಮೈದ ಮಂಜುನಾಥ್ ಅವರ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬೆಳಗಾವಿಯ ಟಿವಿ ಸೆಂಟರ್ ಪ್ರದೇಶದಲ್ಲಿರುವ ಮಂಜುನಾಥ್ ಅವರ ಮನೆಗೆ ಗೋವಾದಿಂದ ವಿಶೇಷ ಇಡಿ ಅಧಿಕಾರಿಯೊಬ್ಬರು ಆಗಮಿಸಿದ್ದಾರೆ.&lt;/p&gt;&lt;h3&gt;&lt;strong&gt;ಮುಂದುವರೆದ ವಿಚಾರಣೆ!&lt;/strong&gt;&lt;/h3&gt;&lt;p&gt;ಲ್ಯಾಪ್&zwnj;ಟಾಪ್ ಮತ್ತು ಪ್ರಮುಖ ಕಡತಗಳೊಂದಿಗೆ ಆಗಮಿಸಿರುವ ಅಧಿಕಾರಿಗಳು, ಪ್ರಸ್ತುತ ಮನೆಯಲ್ಲೇ ಇರುವ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಆರ್ಥಿಕ ವಹಿವಾಟುಗಳು, ಉದ್ಯಮದ ಹೂಡಿಕೆಗಳು ಹಾಗೂ ಸಚಿವರ ಉದ್ಯಮದೊಂದಿಗಿನ ಸಂಪರ್ಕದ ಕುರಿತು ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.&lt;/p&gt;&lt;p&gt;&lt;strong&gt;ಜೋರಾದ ಆರೋಪ ಮತ್ತು ಪ್ರತ್ಯಾರೋಪ!&lt;/strong&gt;&lt;/p&gt;&lt;p&gt;ಇಡಿ ದಾಳಿಯ ಸುತ್ತ ರಾಜಕೀಯ ಆರೋಪ-ಪ್ರತ್ಯಾರೋಪಗಳು ಜೋರಾಗಿದ್ದರೂ, ಜಾರಕಿಹೊಳಿ ಕುಟುಂಬವು ಇದನ್ನು ಕೇವಲ ಒಂದು 'ಉದ್ಯಮಕ್ಕೆ ಸಂಬಂಧಿಸಿದ ಸಾಮಾನ್ಯ ಕಾನೂನಾತ್ಮಕ ಪ್ರಕ್ರಿಯೆ' ಎಂಬಂತೆ ಬಿಂಬಿಸಲು ಯತ್ನಿಸುತ್ತಿದೆ ಎನ್ನಲಾಗಿದೆ. ಆದರೆ ಇಡಿ ಅಧಿಕಾರಿಗಳ ಮುಂದಿನ ನಡಾವಳಿ ಮತ್ತು ಸಚಿವರಿಂದ ಬರುವ ಅಧಿಕೃತ ಸ್ಪಷ್ಟನೆ ಈಗ ಕೂತುಹಲ ಸೃಷ್ಟಿಸಿದೆ.&lt;/p&gt;]]></content:encoded>
            <category>belagavi</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/satish-jarkiholi-ed-raid-lakhan-jarkiholi-statement-business-investment-foreign-investment-allegations-belagavi-ed-bmk/articleshow-nslyv7o"/>
        </item>
        <item>
            <title><![CDATA[Yatnal: 'ವಿಜಯಪುರದಲ್ಲಿ 1 ಲಕ್ಷ 20 ಸಾವಿರ ಜನ ಪಾಕಿಸ್ತಾನಿಗಳು'; ಯತ್ನಾಳ್ ಭಾಷಣದಲ್ಲಿ ಶಾಕಿಂಗ್ ಹೇಳಿಕೆ!]]></title>
            <link>https://kannada.asianetnews.com/politics/basanagouda-patil-yatnal-controversial-speech-in-chikkodi-lord-ganesh-idol-installed-rav/articleshow-oo87gbt</link>
            <guid isPermaLink="true">https://kannada.asianetnews.com/politics/basanagouda-patil-yatnal-controversial-speech-in-chikkodi-lord-ganesh-idol-installed-rav/articleshow-oo87gbt</guid>
            <pubDate>Tue, 15 Sep 2026 09:15:48 +0530</pubDate>
            <description><![CDATA[&lt;p&gt;ಚಿಕ್ಕೋಡಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳಲ್ಲಿ ಜಾಗೃತಿ ಮೂಡಿರುವುದರಿಂದಲೇ ತಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇನೆ ಎಂದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2hjgrc1jybekt6d3dbvqrah,imgname-basanagouda-patil-yatnal-controversial-speech-1789443727745.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ (ಸೆ.15): &lt;/strong&gt;ಹಿಂದೂಗಳಲ್ಲಿ ಜಾಗೃತಿ ಬಂದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಗುಡುಗಿದ್ದಾರೆ.&lt;/p&gt;&lt;p&gt;ಚಿಕ್ಕೋಡಿ ತಾಲ್ಲೂಕಿನ ಚಂದೂರ ಗ್ರಾಮದಲ್ಲಿ ಬಾಲ ಗಜಾನನ ಯುವಕ ಮಂಡಳಿಯ ಶ್ರೀ ಗಣೇಶ ಮೂರ್ತಿ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.&lt;/p&gt;&lt;h2&gt;ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿದ ಯತ್ನಾಳ್&lt;/h2&gt;&lt;p&gt;ಬಸನಗೌಡ ಪಾಟೀಲ್ ಯತ್ನಾಳ್ ವಿಘ್ನ ನಿವಾರಕನಿಗೆ ಪೂಜೆ ಸಲ್ಲಿಸಿದ ಬಳಿಕ ಅದ್ದೂರಿ ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಅವರು ವಿಜಯಪುರದಲ್ಲಿ 1 ಲಕ್ಷ 20 ಸಾವಿರ ಜನ ಪಾಕಿಸ್ತಾನಿಗಳಿದ್ದಾರೆ. ಆದರೂ ನಾನು ಪ್ರತಿ ಬಾರಿ ವಿಜಯಪುರದಿಂದ ಹೇಗೆ ಗೆದ್ದು ಬರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದ ಯತ್ನಾಳ್ ಆ ಮೂಲಕ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.&lt;/p&gt;&lt;h3&gt;ಹಿಂದೂಗಳು ಜಾಗೃತರಾಗಬೇಕು&lt;/h3&gt;&lt;p&gt;ವಿಜಯಪುರದಲ್ಲಿ ವೋಟಿನ ಮಹತ್ವ ಹಿಂದೂಗಳು ತೋರಿಸಿದ್ದಾರೆ. 1.20 ಸಾವಿರ ಜನ ಪಾಕಿಸ್ತಾನಿ ಬೆಂಬಲಿಗರಿದ್ದರೂ ನಾನು ಗೆಲ್ಲುತ್ತೇನೆ. ಅದಕ್ಕೆ ಕಾರಣ ಹಿಂದೂಗಳಲ್ಲಾಗಿರುವ ಜಾಗೃತಿ. ಹಿಂದೂಗಳು ಜಾಗೃತಿಯಾದರೆ ಯಾರು ಏನೂ ಮಾಡಲಾಗುವುದಿಲ್ಲ. ಕಳೆದ ಚುನಾವಣೆಯಲ್ಲಿ ನನ್ನನ್ನ ಸೋಲಿಸಲು ಶಿವಮೊಗ್ಗ, ಬೆಳಗಾವಿ ಹಾಗೂ ಬಾಗಲಕೋಟೆ ಮುಖಂಡರು ಹಣ ಕಳಿಸಿದ್ದರು. ಆದರೂ ನಾನು ಗೆದ್ದಿದ್ದೇನೆ. ಅದಕ್ಕೆ ಕಾರಣ ಹಿಂದೂಗಳು ಜಾಗೃತರಾಗಿರುವುದು ಎಂದಿದ್ದಾರೆ.&lt;/p&gt;&lt;p&gt;ಭಾಷಣದ ವೇಳೆ ಯತ್ನಾಳ್ ವಿಜಯಪುರದಲ್ಲಿನ ಮುಸ್ಲಿಂ ಸಮುದಾಯವನ್ನ ಪಾಕಿಸ್ತಾನಿಗಳಿಗೆ ಹೋಲಿಸಿದ್ದಾರೆ ಎಂಬ ಆರೋಪಕ್ಕೆ ಇದೀಗ ಆಕ್ರೋಶಗಳು ಕೇಳಿಬಂದಿವೆ. ವಿಜಯಪುರದಲ್ಲಿ ನಿಜವಾಗಿಯೂ ಪಾಕಿಸ್ತಾನಿಗಳಿದ್ದಾರಾ? ಪಾಕಿಸ್ತಾನದ ಬೆಂಬಲಿಗರಿದ್ದಾರಾ? ಯತ್ನಾಳ್ ಹೇಳಿಕೆಗೆ ಸಮುದಾಯ ಹೇಗೆ ಪ್ರತಿಕ್ರಿಯಿಸಲಿದೆ ಕಾದು ನೋಡಬೇಕು.&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/basanagouda-patil-yatnal-controversial-speech-in-chikkodi-lord-ganesh-idol-installed-rav/articleshow-oo87gbt"/>
        </item>
        <item>
            <title><![CDATA[ಬೆಳಗಾವಿ ಚಿನ್ನದ ನಿಧಿಯಲ್ಲಿ ರೋಚಕ ಟ್ವಿಸ್ಟ್: ನಿಧಿಯನ್ನು ಮನೆಗೆ ಕೊಂಡೊಯ್ದಿದ್ದ ಕಾರ್ಮಿಕ ಹೇಳಿದ್ದೇನು?]]></title>
            <link>https://kannada.asianetnews.com/gallery/karnataka-districts/belagavi-savadatti-inchal-labourer-returns-gold-coins-treasure-to-govt-pdo-case-twist-sat-qla8aqg</link>
            <guid isPermaLink="true">https://kannada.asianetnews.com/gallery/karnataka-districts/belagavi-savadatti-inchal-labourer-returns-gold-coins-treasure-to-govt-pdo-case-twist-sat-qla8aqg</guid>
            <pubDate>Sat, 05 Sep 2026 14:11:18 +0530</pubDate>
            <description><![CDATA[&lt;p&gt;ಬೆಳಗಾವಿಯ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ 8.27 ಲಕ್ಷ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿದೆ. ಆದರೆ, ಈ ಬಗ್ಗೆ ಮಾತನಾಡಿದ ಕಾರ್ಮಿಕ ಲಕ್ಕುಂಡಿ ನಿಧಿ ಪ್ರಕರಣದ ಅರಿವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಚಿನ್ನದ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1ravkx3bya0r45bty0qe6yx,imgname-belagavi-gold-treasure-1788596834211.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕನೊಬ್ಬನಿಗೆ 8.27 ಲಕ್ಷ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳ ನಿಧಿ ಸಿಕ್ಕಿದೆ. ಆದರೆ, ಈ ಬಗ್ಗೆ ಮಾತನಾಡಿದ ಕಾರ್ಮಿಕ ಲಕ್ಕುಂಡಿ ನಿಧಿ ಪ್ರಕರಣದ ಅರಿವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮೂಲಕ ಚಿನ್ನದ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.&lt;/p&gt;&lt;img&gt;&lt;p&gt;ಬೆಳಗಾವಿಯ ಇಂಚಲ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಬಂಗಾರದ ನಾಣ್ಯಗಳ ನಿಧಿ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೂಲಿ ಕೆಲಸ ಮಾಡುವ ವೇಳೆ ಮಣ್ಣಿನ ಗಡಿಗೆಯಲ್ಲಿ ಸಿಕ್ಕ ಬರೋಬ್ಬರಿ 8.27 ಲಕ್ಷ ರೂಪಾಯಿ ಮೌಲ್ಯದ ಪುರಾತನ ಚಿನ್ನದ ನಾಣ್ಯಗಳನ್ನು ಕೂಲಿಕಾರ್ಮಿಕನೊಬ್ಬ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಆದರೆ, ಇದರ ಹಿಂದೆ ಲಕ್ಕುಂಡಿ ಪ್ರಕರಣದ ಅರಿವಿನ ಬಗ್ಗೆ ಸುವರ್ಣ ನ್ಯೂಸ್ ಮುಂದೆ ಮಾಹಿತಿ ಬಿಚ್ಚಿಟ್ಟಿದ್ದಾನೆ.&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಕೂಲಿಕಾರ್ಮಿಕ ಯಲ್ಲಪ್ಪ ಕರಿಗಾರ ಎಂಬುವವರೇ ಈ ಅಪರೂಪದ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈ ಕುರಿತು ಅವರು &lsquo;ಏಷ್ಯಾನೆಟ್ ಸುವರ್ಣ ನ್ಯೂಸ್&rsquo; ಜೊತೆ ಮಾತನಾಡಿ ಸಂಪೂರ್ಣ ಘಟನೆಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;h2&gt;&lt;strong&gt;ಮಣ್ಣಿನ ಗಡಿಗೆಯಲ್ಲಿ ಸಿಕ್ಕಿತ್ತು 14 ಬಂಗಾರದ ನಾಣ್ಯಗಳು!&lt;/strong&gt;&lt;/h2&gt;&lt;p&gt;ಕಳೆದ ಆಗಸ್ಟ್ 29 ರಂದು ಇಂಚಲ ಗ್ರಾಮದ ಗೋಮಾಳ ಜಮೀನಿನಲ್ಲಿ ವಿಬಿಜಿ ರಾಮ್ ಜೀ (ಗ್ರಾಮೀಣ ಕಾಮಗಾರಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಯಲ್ಲಪ್ಪ ಕರಿಗಾರ ಸೇರಿದಂತೆ ನಾಲ್ವರು ಕೂಲಿಕಾರ್ಮಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಜಮೀನು ಅಗೆಯುವ ಸಂದರ್ಭದಲ್ಲಿ ಹಳೆಯ ಕಾಲದ ಮಣ್ಣಿನ ಪುಟ್ಟ ಗಡಿಗೆಯೊಂದು ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪುರಾತನ ಕಾಲದ 14 ಚಿನ್ನದ ನಾಣ್ಯಗಳಿರುವುದು ಕಂಡುಬಂದಿತ್ತು. ಈ ನಾಣ್ಯಗಳ ಅಂದಾಜು ಮೌಲ್ಯ ಬರೋಬ್ಬರಿ 8.27 ಲಕ್ಷ ರೂಪಾಯಿ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಮನೆಗೆ ತಂದಿದ್ದ ಯಲ್ಲಪ್ಪ; ಮನಸ್ಸು ಬದಲಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ನಿಧಿ ಸಿಕ್ಕ ತಕ್ಷಣ ಏನು ಮಾಡಬೇಕೆಂದು ದಿಕ್ಕು ತೋಚದೆ ಯಲ್ಲಪ್ಪ ಆ ಮಣ್ಣಿನ ಗಡಿಗೆಯನ್ನು ಮನೆಗೆ ಕೊಂಡೊಯ್ದು ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ &lt;strong&gt;ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ&lt;/strong&gt; ವಿಚಾರ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ವೇಳೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದ ಯಲ್ಲಪ್ಪ ಅವರಿಗೆ, &lsquo;&lt;strong&gt;ಭೂಮಿಯಲ್ಲಿ ಸಿಗುವ ಯಾವುದೇ ಪ್ರಾಚೀನ ನಿಧಿ ಅಥವಾ ಸಂಪತ್ತು ಸರ್ಕಾರದ ಸ್ವತ್ತು&lt;/strong&gt;&rsquo; ಎಂಬ ಅರಿವು ಉಂಟಾಗಿದೆ.&lt;/p&gt;&lt;p&gt;ದುರಾಸೆಗೆ ಬೀಳದೆ ಸತ್ಯದ ಹಾದಿ ಹಿಡಿದ ಯಲ್ಲಪ್ಪ, ಕೂಡಲೇ ಇಂಚಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿ ಮಾಡಿ, ತನಗೆ ಸಿಕ್ಕಿದ್ದ ಎಲ್ಲಾ 14 ಚಿನ್ನದ ನಾಣ್ಯಗಳಿದ್ದ ಗಡಿಗೆಯನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ.&lt;/p&gt;&lt;img&gt;&lt;h2&gt;&lt;strong&gt;ಸರ್ವತ್ರ ಪ್ರಶಂಸೆ; ಸುವರ್ಣ ನ್ಯೂಸ್&zwnj;ಗೆ ಯಲ್ಲಪ್ಪ ಹೇಳಿದ್ದೇನು?&lt;/strong&gt;&lt;/h2&gt;&lt;p&gt;'ನಿಧಿ ಸಿಕ್ಕಾಗ ಒಂದು ಕ್ಷಣ ಭಯ ಮತ್ತು ಆಶ್ಚರ್ಯವಾಗಿತ್ತು. ಹೀಗಾಗಿ ಮನೆಗೆ ತೆಗೆದುಕೊಂಡು ಹೋಗಿದ್ದೆ. ಆದರೆ ಲಕ್ಕುಂಡಿ ಘಟನೆಯ ಬಳಿಕ ಇದು ಸಾರ್ವಜನಿಕ ಆಸ್ತಿ, ಸರ್ಕಾರಕ್ಕೆ ಸೇರಿದ್ದು ಎಂದು ತಿಳಿಯಿತು. ಆದ್ದರಿಂದ ಯಾವುದೇ ಆಸೆ ಪಡದೆ ಪಿಡಿಒ ಸಾಹೇಬರಿಗೆ ಒಪ್ಪಿಸಿದೆ. ಅಧಿಕಾರಿಗಳು ಮತ್ತು ಊರಿನ ಜನ ನನ್ನ ಪ್ರಾಮಾಣಿಕತೆಯನ್ನು ಮೆಚ್ಚಿ ಪ್ರಶಂಸಿಸುತ್ತಿದ್ದಾರೆ. ನನಗೆ ತುಂಬಾ ನೆಮ್ಮದಿ ಮತ್ತು ಖುಷಿಯಾಗಿದೆ' ಎಂದು ಯಲ್ಲಪ್ಪ ಕರಿಗಾರ ಸುವರ್ಣ ನ್ಯೂಸ್ ಎದುರು ಹರ್ಷ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಬಡತನದಲ್ಲಿದ್ದರೂ ಕೋಟ್ಯಂತರ ಆಸೆಯ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ಸರ್ಕಾರಕ್ಕೆ ಮರಳಿಸಿದ ಯಲ್ಲಪ್ಪನ ಪ್ರಾಮಾಣಿಕತೆಗೆ ಇಡೀ ಜಿಲ್ಲೆಯಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></content:encoded>
            <category>belagavi</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/belagavi-savadatti-inchal-labourer-returns-gold-coins-treasure-to-govt-pdo-case-twist-sat-qla8aqg"/>
        </item>
        <item>
            <title><![CDATA[ಕೆಪಿಎಸ್‌ಸಿ ಮತ್ತೊಂದು ಹಗರಣ ಬಯಲಿಗೆ: ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರಕುಮಾರ್‌ಗೆ ಮತ್ತೊಂದು ಸಂಕಷ್ಟ!]]></title>
            <link>https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</link>
            <guid isPermaLink="true">https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</guid>
            <pubDate>Sat, 12 Sep 2026 12:18:04 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (KPSC) ಸಹಾಯಕ ನಿಯಂತ್ರಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶ ವಿಳಂಬ, ಅಪೂರ್ಣ ಅಂಕಗಳ ವಿವರ ಮತ್ತು ಶಂಕಾಸ್ಪದ ರ&zwj;್ಯಾಂಕಿಂಗ್ ಸರಣಿಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ಮತ್ತೊಂದು ಕೆಪಿಎಸ್&zwnj;ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದ ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ (AC) ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಜ್ಞಾನೇಂದ್ರಕುಮಾರ್ ಅವರ ಅವಧಿಯಲ್ಲಿ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಸೇರಿದಂತೆ ಹಲವು ಅಭ್ಯರ್ಥಿಗಳು ಪ್ರಶ್ನಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;&lt;h2&gt;ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಲೋಪಗಳ ಆರೋಪ&lt;/h2&gt;&lt;p&gt;2025ರ ಏಪ್ರಿಲ್&zwnj;ನಲ್ಲಿ ಎಸಿ-ಎಸ್&zwnj;ಎಎಡಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಸುಮಾರು 17 ತಿಂಗಳುಗಳ ಕಾಲ ಫಲಿತಾಂಶವನ್ನು ವಿಳಂಬಗೊಳಿಸಿ, ಇತ್ತೀಚೆಗೆ ಸೆಪ್ಟೆಂಬರ್ 3ರಂದು 1:3 ಪ್ರಮಾಣದ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಅಕ್ರಮಗಳ ವಾಸನೆ ಹೊಡೆಯುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.&lt;/p&gt;&lt;p&gt;&lt;strong&gt;ಅಂಕ ಹಾಗೂ ಕಟ್-ಆಫ್ ವಿವರ ಅಪೂರ್ಣ: &lt;/strong&gt;ಪ್ರಿಲಿಮ್ಸ್ ಪರೀಕ್ಷೆಯ ಕಟ್-ಆಫ್ ಅಂಕಗಳು ಮತ್ತು ವರ್ಗವಾರು ವಿವರಗಳನ್ನು ಪ್ರಕಟಿಸಿಲ್ಲ. ಜೊತೆಗೆ ಆಯ್ಕೆಯಾಗದ ಅಭ್ಯರ್ಥಿಗಳ ಅಂಕಗಳು ಮತ್ತು ವರ್ಗವಾರು ಮಾಹಿತಿಗಳನ್ನು ಬಹಿರಂಗಪಡಿಸದೆ, ಕೇವಲ ಆಯ್ಕೆಯಾದವರ ವಿವರಗಳನ್ನು ಮಾತ್ರ ಪ್ರಕಟಿಸಲಾಗಿದೆ.&lt;/p&gt;&lt;p&gt;&lt;strong&gt;ಶಂಕಾಸ್ಪದ ಪತ್ರಿಕಾ ಪ್ರಕಟಣೆ&lt;/strong&gt;: ಮೌಲ್ಯಮಾಪನ ಮುಗಿದು ಎರಡು ತಿಂಗಳು ಕಳೆದ ನಂತರ, ಅಂದರೆ ಸೆಪ್ಟೆಂಬರ್ 9ರಂದು &quot;ಅಭ್ಯರ್ಥಿಯೊಬ್ಬರು ನಿಯಮ ಉಲ್ಲಂಘಿಸಿದ್ದಾರೆ&quot; ಎಂದು ಕೆಪಿಎಸ್&zwnj;ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;p&gt;&lt;strong&gt;ರ&zwj;್ಯಾಂಕಿಂಗ್ ಸರಣಿಯಲ್ಲಿ ವ್ಯತ್ಯಾಸ:&lt;/strong&gt; ಆಯ್ಕೆಯಾದವರ ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಅಭ್ಯರ್ಥಿಗಳ ರ&zwj;್ಯಾಂಕ್ ಸೀರಿಯಲ್ ನಂಬರ್ ಸರಣಿ ಒಂದೇ ರೀತಿಯಲ್ಲಿರುವುದು ದೊಡ್ಡ ಮಟ್ಟದ ಅಕ್ರಮದ ಶಂಕೆಗೆ ಕಾರಣವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಗಳ ಪಾಲನೆ ಹಾಗೂ ಫಲಿತಾಂಶ ವಿಳಂಬದ ಕುರಿತು ಸ್ವತಂತ್ರ ತನಿಖೆಯಾಗಬೇಕು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಅಭ್ಯರ್ಥಿ ಚೇತನ್ ಚೋಪಡೆ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಇನ್ನೊಂದೆಡೆ ಕೆಪಿಎಸ್&zwnj;ಸಿ ಹಗರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಸುದೀರ್ಘ ವಿಚಾರಣೆ&lt;/h2&gt;&lt;p&gt;ಇದೇ ವೇಳೆ, ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಞಾನೇಂದ್ರಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.&lt;/p&gt;&lt;p&gt;ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ 6 ಗಂಟೆಗಳ ಕಾಲ ನಡೆದಿರುವ ಈ ವಿಚಾರಣೆಯಲ್ಲಿ, ನೇಮಕಾತಿ ಅಕ್ರಮದಲ್ಲಿ ನಡೆದಿದೆಯನ್ನಲಾದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಕಲೆಹಾಕಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಂದೂ ಕೂಡ ಇಡಿ ಅಧಿಕಾರಿಗಳು ಜೈಲಿಗೆ ತೆರಳಿ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil"/>
        </item>
        <item>
            <title><![CDATA[ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ, ಸಹೋದರನ ಪರ ನಿಂತ ಬಾಲಚಂದ್ರ ಜಾರಕಿಹೊಳಿ]]></title>
            <link>https://kannada.asianetnews.com/karnataka-districts/when-it-comes-to-family-matters-we-are-all-one-balachandra-jarkiholi-on-satish-jarkiholi-ed-raid/articleshow-th2t9pi</link>
            <guid isPermaLink="true">https://kannada.asianetnews.com/karnataka-districts/when-it-comes-to-family-matters-we-are-all-one-balachandra-jarkiholi-on-satish-jarkiholi-ed-raid/articleshow-th2t9pi</guid>
            <pubDate>Thu, 10 Sep 2026 21:06:06 +0530</pubDate>
            <description><![CDATA[&lt;p&gt;ರಾಜ್ಯ ರಾಜಕಾರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಇಡಿ ದಾಳಿ ವಿಚಾರ ಭಾರೀ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ ಸಹೋದರ ಬಾಲಚಂದ್ರ ಜಾರಕಿಹೊಳಿ, ಸತೀಶ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಏನಂದ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m25zb0z6b4dm94czm8nc95ka,imgname-balachandra-jarakiholi-on-satish-jarakiholi-1789054518246.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ&lt;/strong&gt;: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಅವರ ಸಹೋದರ ಹಾಗೂ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ್&zwnj;ನಲ್ಲಿರುವ ಸತೀಶ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.&lt;/p&gt;&lt;p&gt;ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ.. ಇಡಿ ದಾಳಿ, ವಿದೇಶಿ ಹೂಡಿಕೆ ಹಾಗೂ ಹಣ ಜಪ್ತಿ ವಿಚಾರಗಳ ಕುರಿತು ಹಬ್ಬಿರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡುವ ಮೂಲಕ ಸಹೋದರ ಸತೀಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ.&lt;/p&gt;&lt;h2&gt;&lt;strong&gt;ರಾಜಕಾರಣ ಬೇರೆ, ಕುಟುಂಬವೇ ಬೇರೆ&lt;/strong&gt;&lt;/h2&gt;&lt;p&gt;ನಾನು ಇಲ್ಲಿಗೆ ಬಿಜೆಪಿ ಶಾಸಕನಾಗಿ ಬಂದಿಲ್ಲ. ಒಬ್ಬ ಸಹೋದರನಾಗಿ ಕುಟುಂಬಕ್ಕೆ ಧೈರ್ಯ ತುಂಬಲು ಬಂದಿದ್ದೇನೆ. ರಾಜಕಾರಣವೇ ಬೇರೆ, ಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ. ಸಚಿವ ಸತೀಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಜನರು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ನಮ್ಮ ಕುಟುಂಬದ ಹೆಸರನ್ನು ಕೆಡಿಸಬೇಡಿ ಎಂದು ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.&lt;/p&gt;&lt;h2&gt;&lt;strong&gt;₹770 ಕೋಟಿ ಹೂಡಿಕೆ ಸತ್ಯಕ್ಕೆ ದೂರ&lt;/strong&gt;&lt;/h2&gt;&lt;p&gt;ವಿದೇಶದಲ್ಲಿ ₹770 ಕೋಟಿ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ವಿದೇಶದಲ್ಲಿ ಸತೀಶ್ ಜಾರಕಿಹೊಳಿ ಅವರ ಯಾವುದೇ ಹೂಡಿಕೆ ಇಲ್ಲ. ಅವರ ಮಕ್ಕಳಾದ ರಾಹುಲ್ ಜಾರಕಿಹೊಳಿ ₹25 ಸಾವಿರ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ₹25 ಸಾವಿರ ಹಾಗೂ ಸಹೋದರಿ ಮಹಾದೇವಿ ₹25 ಸಾವಿರ ರೂಪಾಯಿಯ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಅಷ್ಟೇ. ಇಷ್ಟು ಸಣ್ಣ ಮೊತ್ತದ ಹೂಡಿಕೆಗೆ ಇಡಿ ಅಧಿಕಾರಿಗಳು ರೇಡ್ ಮಾಡಿರುವುದು ನಮಗೂ ಆಶ್ಚರ್ಯ ತಂದಿದೆ ಎಂದರು.&lt;/p&gt;&lt;h2&gt;&lt;strong&gt;ಅದಕ್ಕೆ ಪಕ್ಕಾ ಲೆಕ್ಕವಿದೆ!&lt;/strong&gt;&lt;/h2&gt;&lt;p&gt;ಇಡಿ ದಾಳಿಯಲ್ಲಿ ಸಿಕ್ಕ ನಗದಿನ ಬಗ್ಗೆ ವಿವರಣೆ ನೀಡಿದ ಬಾಲಚಂದ್ರ ಜಾರಕಿಹೊಳಿ, ಗೋಕಾಕ್ ನಿವಾಸದಲ್ಲಿ ಅಧಿಕಾರಿಗಳು ಒಟ್ಟು ₹1 ಕೋಟಿ 73 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಬರುವಾಗ ಎರಡು ಟ್ರಂಕ್&zwnj;ಗಳನ್ನು ತಂದಿದ್ದರು, ಆದರೆ ಹಣವನ್ನು ಕೇವಲ ಒಂದೇ ಟ್ರಂಕ್&zwnj;ನಲ್ಲಿ ತುಂಬಿ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಕಡೆಗಳಲ್ಲಿ ಹಣ ಸೀಜ್ ಆಗಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸೀಜ್ ಮಾಡಲಾದ ಈ ₹1.73 ಕೋಟಿ ಹಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಂಪೂರ್ಣ ಲೆಕ್ಕವಿದೆ. ಆದಾಯ ತೆರಿಗೆ ಇಲಾಖೆಗೆ ಸೂಕ್ತ ಲೆಕ್ಕ ಕೊಟ್ಟು ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ದಾಳಿಯ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿದೆ ಎಂಬ ವದಂತಿಗಳಿಗೆ ಬಾಲಚಂದ್ರ ಜಾರಕಿಹೊಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ದಾಳಿಯ ಹಿಂದೆ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ತಪ್ಪು ಸಂದೇಶ ಹರಡಲಾಗುತ್ತಿದೆ. ಕಳೆದ 30 ವರ್ಷಗಳ ಅವರ ಗೆಳೆತನದಲ್ಲಿ ಹತ್ತು ಬಾರಿ ಜಗಳವಾಡಿಕೊಂಡಿರಬಹುದು ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಸಂಬಂಧ ಕೆಡಿಸುವ ಕೆಲಸ ಯಾರೂ ಮಾಡಬೇಡಿ. ಸಿದ್ದರಾಮಯ್ಯ ಮತ್ತು ಸತೀಶ್ ಅಹಿಂದ ಸಂಘಟನೆಯ ಎರಡು ಕಣ್ಣುಗಳಿದ್ದಂತೆ. ಆ ಎರಡು ಕಣ್ಣುಗಳಿಗೆ ಪೆಟ್ಟು ಬಿದ್ದರೆ ಅಹಿಂದ ಚಳವಳಿಗೆ ಪೆಟ್ಟು ಬೀಳುತ್ತದೆ. ಅವರಿಬ್ಬರ ಬಾಂಧವ್ಯ ಇನ್ನೂ ಗಟ್ಟಿಯಾಗಿರಲಿ ಎಂದು ಆಶಿಸಿದರು.&lt;/p&gt;&lt;h2&gt;&lt;strong&gt;ರೇಡ್ ಹಿಂದಿನ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಮೇ ತಿಂಗಳಲ್ಲಿ ಇಡಿಗೆ ಯಾರೋ ದೂರು (ಅಲಿಗೇಷನ್) ನೀಡಿದ್ದರು. ಅದರ ಆಧಾರದ ಮೇಲೆ ಜೂನ್ ತಿಂಗಳಲ್ಲಿ ಸತೀಶ್ ಅವರ ಬಾಮೈದ ಮಂಜುನಾಥ್ ಮನೆ ಮೇಲೆ ರೇಡ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಸತೀಶ್ ಜಾರಕಿಹೊಳಿ ಮನೆ ಮೇಲೂ ದಾಳಿ ನಡೆದಿದೆ. ಇದೊಂದು ರೊಟೀನ್ ತನಿಖೆ ಅಷ್ಟೇ. ಇದಕ್ಕೆ ಯಾವುದೇ ರಾಜಕೀಯ ಬಣ್ಣ ಕೊಡುವುದು ಬೇಡ. ಇದನ್ನು ರಾಜಕೀಯ ಪ್ರೇರಿತ ಎನ್ನಲಾಗದು. ಇಡಿ ಅಧಿಕಾರಿಗಳು ರಾಹುಲ್ ಜಾರಕಿಹೊಳಿ ಅವರ ಹೇಳಿಕೆ ಪಡೆದು ಹೋಗಿದ್ದಾರೆಯೇ ಹೊರತು ವಿಚಾರಣೆಗೆ ಹಾಜರಾಗಲು ಯಾವುದೇ ನೋಟಿಸ್ ನೀಡಿಲ್ಲ. ಇಡಿ ದಾಳಿ ವಿಚಾರವಾಗಿ ಸತೀಶ್ ಅವರು ಕಾನೂನಾತ್ಮಕವಾಗಿ ಕೋರ್ಟ್&zwnj;ನಲ್ಲಿ ಹೋರಾಟ ನಡೆಸಲಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ವಿವರಿಸಿದರು.&lt;/p&gt;]]></content:encoded>
            <category>belagavi</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/when-it-comes-to-family-matters-we-are-all-one-balachandra-jarkiholi-on-satish-jarkiholi-ed-raid/articleshow-th2t9pi"/>
        </item>
        <item>
            <title><![CDATA[ಕಾರು ಮಾಲೀಕರೇ ಎಚ್ಚರ: ಟ್ರಾಫಿಕ್ ಪೊಲೀಸರಿಂದ ನಿಮಗೂ ಬರಬಹುದು ಹೆಲ್ಮೆಟ್ ನೋಟಿಸ್!]]></title>
            <link>https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65</link>
            <guid isPermaLink="true">https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65</guid>
            <pubDate>Sun, 13 Sep 2026 11:33:46 +0530</pubDate>
            <description><![CDATA[ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ, ಕಾರು ಚಾಲಕನೊಬ್ಬನಿಗೆ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿದ ವಿಚಿತ್ರ ಘಟನೆ ನಡೆದಿದೆ. ಎಐ ಕ್ಯಾಮೆರಾದಿಂದಾದ ಈ ಎಡವಟ್ಟಿನಿಂದಾಗಿ, ಸಂಚಾರ ಪೊಲೀಸರು ಪರಿಶೀಲಿಸದೆ 500 ರೂಪಾಯಿ ದಂಡದ ನೋಟಿಸ್ ಅನ್ನು ವಾಟ್ಸಪ್&zwnj;ಗೆ ಕಳುಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cn8ktrr3jbcmz2rknvrxem,imgname-belagavi-traffic-ai-cam-mistakes-1789278834520.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಿಕ್ಕೋಡಿ (ಸೆ.13):&lt;/strong&gt; ಬೈಕ್ ಓಡಿಸುವಾಗ ಅಷ್ಟೇ ಅಲ್ಲ, ಇನ್ಮುಂದೆ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಿ! ಇಲ್ಲದಿದ್ರೆ ನಿಮ್ಮ ವಾಟ್ಸಪ್&zwnj;ಗೆ ಬರುತ್ತೆ ಹೆಲ್ಮೆಟ್ ಹಾಕದ್ದಕ್ಕೆ ದಂಡ! ಕಾರಿನಲ್ಲಿ ಹೆಲ್ಮೆಟ್&zwnj; ಹಾಕಿಲ್ಲವೆಂದು ಕಾರು ಮಾಲೀಕರಿಗೆ ದಂಡ ವಿಧಿಸಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.&lt;/p&gt;&lt;h2&gt;ಅಥಣಿ ಟ್ರಾಫಿಕ್ ಪೊಲೀಸರ ಎಐ ಎಡವಟ್ಟು!&lt;/h2&gt;&lt;p&gt;ಅಥಣಿ ಪಟ್ಟಣದ ಕಾರು ಮಾಲೀಕ ಸುಭಾಷ್ ಬೋಜನೆ ಎಂಬುವವರ ವಾಟ್ಸಪ್ ಸಂಖ್ಯೆಗೆ ಹೆಲ್ಮೆಟ್ ಧರಿಸದೆ ಕಾರು ಓಡಿಸಿದ್ದಕ್ಕೆ ನೋಟಿಸ್ ಬಂದಿದೆ. ನೋಟಿಸ್ ಕಂಡು ಕಾರು ಮಾಲೀಕ ಶಾಕ್ ಆಗಿದ್ದಾರೆ. ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸಬೇಕಾ? ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರ ಈ ಹೊಸ ನಿಯಮ ಜಾರಿಗೆ ತಂದಿರೋದು ನಮಗೆ ಗೊತ್ತಿಲ್ಲ ಎಂದು ತಬ್ಬಿಬ್ಬು ಆಗಿದ್ದಾರೆ.&lt;/p&gt;&lt;h2&gt;ಆಗಿದ್ದೇನು?&lt;/h2&gt;&lt;p&gt;ಕಾರ್ ಮಾಲೀಕರು ಇತ್ತೀಚೆಗೆ ಕಾರಿನಲ್ಲಿ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾರೆ. ಪಟ್ಟಣದ ಅಂಬೇಡ್ಕರ್ ಸರ್ಕಲ್&zwnj;ನಲ್ಲಿ ಹೋಗುವಾಗ ಟ್ರಾಫಿಕ್ನಲ್ಲಿ ಕಾರು ಗಮನಿಸಿದ ಎಐ ಕ್ಯಾಮೆರಾ ಕಾರಿನಲ್ಲಿರುವ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು ನೋಟಿಸ್ ಕಳಿಸಿದೆ! ಇದನ್ನ ಪರಿಶೀಲಿಸದ ಸಂಚಾರ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದಾರೆ. ವಾಟ್ಸಪ್ ನೋಟಿಸ್ ಕಂಡು ಕಾರು ಮಾಲೀಕ ಸುಭಾಷ್ ಶಾಕ್ ಆಗಿದ್ದಾರೆ. ಕಾರಿನಲ್ಲಿ ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರೋದು ಇಡೀ ದೇಶದಲ್ಲಿ ಇದೇ ಮೊದಲು ಇರಬೇಕು. ಹೊಸ ನಿಯಮವೇನಾದರೂ ಜಾರಿಗೆ ತಂದ್ರಾ ಬೆಳಗಾವಿ ಸಂಚಾರಿ ಪೊಲೀಸರು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಹೆಲ್ಮೆಟ್ ಹಾಕಿಕೊಂಡು ಕಾರು ಓಡಿಸಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಎಐನಿಂದ ಹೇಗೆಲ್ಲ ಎಡವಟ್ಟುಗಳಾಗುತ್ತೆ ಅಂತಾ ಬಯಲು ಮಾಡಿದ್ದಾರೆ.&lt;/p&gt;&lt;p&gt;ಸದ್ಯ ಈ ಘಟನೆ ಸಂಬಂಧ ಕಾರ್ ಮಾಲೀಕ ಸುಭಾಷ್ ಭೋಜನೆ ವಿಡಿಯೋ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.&lt;/p&gt;]]></content:encoded>
            <category>belagavi</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/traffic-ai-camera-fines-car-owner-for-not-wearing-a-helmet-by-belagavi-traffic-police-rav/articleshow-tqmwg65"/>
        </item>
        <item>
            <title><![CDATA[Belagavi: ದುರಂತದ ಬೆನ್ನಲ್ಲೇ ಸಚಿವರಿಂದ ಮಹತ್ವದ ಘೋಷಣೆ!  50 ಸಾವಿರ ನಿವೇಶನ ಯೋಜನೆ]]></title>
            <link>https://kannada.asianetnews.com/karnataka-districts/belagavi-minister-satish-jarkiholi-scheme-to-provide-50000-housing-sites-to-the-homeless-in-the-district-mrq/articleshow-vwsk3gp</link>
            <guid isPermaLink="true">https://kannada.asianetnews.com/karnataka-districts/belagavi-minister-satish-jarkiholi-scheme-to-provide-50000-housing-sites-to-the-homeless-in-the-district-mrq/articleshow-vwsk3gp</guid>
            <pubDate>Wed, 16 Sep 2026 08:57:09 +0530</pubDate>
            <description><![CDATA[&lt;p&gt;ಬೆಳಗಾವಿಯ ಚವ್ಹಾಟಗಲ್ಲಿಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಜಿಲ್ಲೆಯಲ್ಲಿ ವಸತಿಹೀನರಿಗೆ 50 ಸಾವಿರ ನಿವೇಶನ ನೀಡುವ ಯೋಜನೆಯ ಕುರಿತು ಅವರು ಮಹತ್ವದ ಭರವಸೆ ನೀಡಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2m3wad9vqkk6g9mhcnrbn92,imgname-satish-jarkiholi-1789529041321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ನೀಡುವ ಯೋಜನೆ ರೂಪಿಸಲಾಗುತ್ತಿದೆ. ಸರ್ಕಾರ ಮನೆ ನಿರ್ಮಿಸಿಕೊಟ್ಟರೂ ಇಲ್ಲಿನ ಜನರು ಬೇರೆಡೆ ತೆರಳಿ ವಾಸಿಸಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಮನೆ ಇಲ್ಲದವರಿಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.&lt;/p&gt;&lt;h2&gt;&lt;strong&gt;ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ&lt;/strong&gt;&lt;/h2&gt;&lt;p&gt;ನಗರದ ಚವ್ಹಾಟಗಲ್ಲಿಯ ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚವ್ಹಾಟಗಲ್ಲಿಯಲ್ಲಿ ಸಂಭವಿಸಿದ ದುರಂತದ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಘಟನೆಯಲ್ಲಿ ಸಂಭವಿಸಿದ ಜೀವಹಾನಿ, ಗಾಯಗೊಂಡವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಪರಿಹಾರದ ಕುರಿತು ಚರ್ಚಿಸಲಾಗುವುದು. ಅಲ್ಲದೆ, ಘಟನೆಗೆ ನಿಖರ ಕಾರಣವೇನು ಮತ್ತು ಇದಕ್ಕೆ ಯಾರು ಹೊಣೆ ಎಂಬುವುದರ ಕುರಿತು ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಕುಟುಂಬದ ಸದಸ್ಯರೊಂದಿಗೆ ಮಾತುಕತೆ&lt;/strong&gt;&lt;/h3&gt;&lt;p&gt;ಚವ್ಹಾಟಗಲ್ಲಿಗೆ ಆಗಮಿಸಿದ ಸಚಿವರು ದುರಂತದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಏರ್&zwnj;ಪೋರ್ಟ್&zwnj; ಸಮೀಪದ 8 ಕೋಟಿ ಮೌಲ್ಯದ 1.80 ಎಕ್ರೆ ಭೂಮಿಯನ್ನು ದಾನ ಮಾಡಿದ ಅಲಿ ಕುಟುಂಬ&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ, ಮೇಯರ್ ಪ್ರೀತಿ ಕಾಮಕರ್ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕುಂದಗೋಳ: ಬಾಗಿಲಲ್ಲಿ ಯಾರೋ ತಂದಿಟ್ಟ ಗಣೇಶನನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ ಮುಸ್ಲಿಂ ಕುಟುಂಬ&lt;/strong&gt;&lt;/p&gt;]]></content:encoded>
            <category>belagavi</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-minister-satish-jarkiholi-scheme-to-provide-50000-housing-sites-to-the-homeless-in-the-district-mrq/articleshow-vwsk3gp"/>
        </item>
        <item>
            <title><![CDATA[ಕಾವೇರಿ-2.0 ತಾಂತ್ರಿಕ ದೋಷ ನೆಪ ಹೇಳಿ ಆಸ್ತಿ ಹಕ್ಕು ಕಸಿಯುವಂತಿಲ್ಲ, ಮ್ಯಾನುವಲ್ ನೋಂದಾವಣೆಗೆ ಹೈಕೋರ್ಟ್ ಖಡಕ್ ಸೂಚನೆ]]></title>
            <link>https://kannada.asianetnews.com/belagavi/software-glitch-can-not-block-property-sale-karnataka-high-court-directs-kaveri-2-0-portal-update-gdp/articleshow-xo72yut</link>
            <guid isPermaLink="true">https://kannada.asianetnews.com/belagavi/software-glitch-can-not-block-property-sale-karnataka-high-court-directs-kaveri-2-0-portal-update-gdp/articleshow-xo72yut</guid>
            <pubDate>Tue, 15 Sep 2026 10:50:34 +0530</pubDate>
            <description><![CDATA[ಕಾವೇರಿ-2.0 ತಂತ್ರಾಂಶದ ತಾಂತ್ರಿಕ ದೋಷದಿಂದಾಗಿ ಶಾಶ್ವತ ಗುತ್ತಿಗೆ ಜಾಗದಲ್ಲಿನ ಫ್ಲಾಟ್&zwnj;ಗಳ ನೋಂದಣಿಗೆ ಉಂಟಾಗಿದ್ದ ಅಡಚಣೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಎರಡು ತಿಂಗಳೊಳಗೆ ತಂತ್ರಾಂಶ ಸರಿಪಡಿಸುವಂತೆ ಅಥವಾ ಮ್ಯಾನುವಲ್ ಆಗಿ ನೋಂದಣಿ ಮಾಡುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಂತ್ರಾಂಶದ ಮಿತಿಗಳು ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01h2ye3q7thgpepzadhtx7kjcc,imgname-Karnataka-High-Court-1686796098810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಕಾವೇರಿ-2.0 ನೋಂದಣಿ ತಂತ್ರಾಂಶದಲ್ಲಿದ್ದ ತಾಂತ್ರಿಕ ದೋಷದಿಂದಾಗಿ, ಶಾಶ್ವತ ಗುತ್ತಿಗೆ (Permanent Lease) ಆಧಾರಿತ ಜಾಗದಲ್ಲಿ ನಿರ್ಮಿಸಲಾದ ಫ್ಲಾಟ್&zwnj;ಗಳ ಮಾರಾಟ ನೋಂದಣಿಗೆ ಎದುರಾಗಿದ್ದ ಅಡಚಣೆಯನ್ನು ತೆರವುಗೊಳಿಸಲು ಕರ್ನಾಟಕ ಹೈಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ. ಸಾಫ್ಟ್&zwnj;ವೇರ್&zwnj;ನ ಪರಿಮಿತಿಗಳು ಕಾನೂನುಬದ್ಧವಾಗಿ ಲಭ್ಯವಿರುವ ಗುತ್ತಿಗೆ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿರುವ ನ್ಯಾಯಾಲಯ, ಎರಡು ತಿಂಗಳೊಳಗೆ ತಂತ್ರಾಂಶವನ್ನು ನವೀಕರಿಸಬೇಕು. ಇಲ್ಲವಾದಲ್ಲಿ ಮ್ಯಾನುವಲ್ ಆಗಿ ಮಾರಾಟ ಪತ್ರಗಳನ್ನು ನೋಂದಾಯಿಸಬೇಕು ಎಂದು ಸೂಚನೆ ನೀಡಿದೆ.&lt;/p&gt;&lt;h2&gt;ಸಮಸ್ಯೆಯ ಹಿನ್ನೆಲೆ ಏನು?&lt;/h2&gt;&lt;p&gt;ಬೆಳಗಾವಿಯ &lsquo;ಕ್ರಿಶ್ ಜೀವನ್ ಅಪಾರ್ಟ್&zwnj;ಮೆಂಟ್&rsquo; ನಿರ್ಮಾತೃ ಮತ್ತು ಡೆವಲಪರ್ ಗೋಪಾಲರಾವ್ ಅವರು ಶಾಶ್ವತ ಗುತ್ತಿಗೆ ಹಕ್ಕಿನಡಿ ಹೊಂದಿದ್ದ ಜಾಗದಲ್ಲಿ 34 ಫ್ಲಾಟ್&zwnj;ಗಳನ್ನು ನಿರ್ಮಿಸಿದ್ದರು. ಕಾವೇರಿ-2.0 ಪೋರ್ಟಲ್ ಜಾರಿಗೆ ಬರುವ ಮುನ್ನವೇ 21 ಫ್ಲಾಟ್&zwnj;ಗಳ ಮಾರಾಟ ಪತ್ರಗಳು ಯಾವುದೇ ಅಡೆತಡೆಯಿಲ್ಲದೆ ನೋಂದಣಿಯಾಗಿದ್ದವು.&lt;/p&gt;&lt;p&gt;ಆದರೆ, ಕಾವೇರಿ-2.0 ಜಾರಿಯಾದ ನಂತರ ಉಳಿದ 13 ಫ್ಲಾಟ್&zwnj;ಗಳ ನೋಂದಣಿಗೆ ತಾಂತ್ರಿಕ ಸಮಸ್ಯೆ ಉಂಟಾಯಿತು. ನಗರಾಡಳಿತ ಹಾಗೂ &lsquo;ಇ-ಆಸ್ತಿ&rsquo; ದಾಖಲೆಗಳಲ್ಲಿ ಮೂಲ ಗುತ್ತಿಗೆದಾರನನ್ನು ಮಾಲೀಕ ಎಂದು ಹಾಗೂ ಗೋಪಾಲರಾವ್ ಅವರನ್ನು ಕೇವಲ ತೆರಿಗೆ ಪಾವತಿದಾರ ಎಂದು ತೋರಿಸಲಾಗಿತ್ತು. ಪುರಸಭೆಯ ಡೇಟಾವನ್ನು ಕಾವೇರಿ-2.0 ವ್ಯವಸ್ಥೆಗೆ ಮ್ಯಾಪ್ ಮಾಡುವಾಗ ಉಂಟಾದ ಲೋಪದಿಂದಾಗಿ ಮಾರಾಟ ಪತ್ರಗಳ ಪ್ರಕ್ರಿಯೆ ಸ್ಥಗಿತಗೊಂಡಿತು. ಇದನ್ನು ಪ್ರಶ್ನಿಸಿ ಗೋಪಾಲರಾವ್ ಹೈಕೋರ್ಟ್ ಮೆಟ್ಟಿಲೇರಿದ್ದರು.&lt;/p&gt;&lt;h2&gt;ನ್ಯಾಯಾಲಯದ ಗಮನಿಸಿದ ಅಂಶಗಳೇನು?&lt;/h2&gt;&lt;p&gt;ಬೆಳಗಾವಿಯಲ್ಲಿ ಶಾಶ್ವತ ಗುತ್ತಿಗೆ ಆಸ್ತಿಗಳ ವಿಷಯದಲ್ಲಿ ಇಂತಹ ಸಮಸ್ಯೆ ಇರುವುದನ್ನು ಸರ್ಕಾರಿ ಅಧಿಕಾರಿಗಳೇ ಒಪ್ಪಿಕೊಂಡಿದ್ದು, ಸಾಫ್ಟ್&zwnj;ವೇರ್ ಮ್ಯಾಪಿಂಗ್&zwnj;ನಲ್ಲಿ ಬದಲಾವಣೆ ಮಾಡುವುದು ಅತ್ಯಗತ್ಯ ಎಂಬುದನ್ನು ನ್ಯಾಯಾಲಯ ಗಮನಿಸಿತು.&lt;/p&gt;&lt;p&gt;ಆಸ್ತಿ ವರ್ಗಾವಣೆ ಕಾಯ್ದೆಯಡಿ, ಗುತ್ತಿಗೆ ಎಂಬುದು ಕೇವಲ ಜಾಗವನ್ನು ಬಳಸಿಕೊಳ್ಳುವ ಹಕ್ಕಷ್ಟೇ ಅಲ್ಲ. ಅದು ವರ್ಗಾಯಿಸಬಹುದಾದ ಮೌಲ್ಯಯುತ ಕಾನೂನುಬದ್ಧ ಹಿತಾಸಕ್ತಿಯನ್ನು ಕೂಡ ಒಳಗೊಂಡಿದೆ ಎಂಬುದನ್ನು ಕೋರ್ಟ್ ಹೇಳಿತು..&lt;/p&gt;&lt;p&gt;ಸಾಫ್ಟ್&zwnj;ವೇರ್ ಪೋರ್ಟಲ್ ಎಂಬುದು ಕಾನೂನನ್ನು ಜಾರಿಗೊಳಿಸುವ ಒಂದು ಮಾಧ್ಯಮವಷ್ಟೇ ಹೊರತು, ಅದೇ ಒಂದು ಶಾಸನವಲ್ಲ. ತಂತ್ರಾಂಶದ ಕಾರಣಕ್ಕೆ ಕಾನೂನಿನಲ್ಲಿ ಇಲ್ಲದಿರುವ ನಿರ್ಬಂಧಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಪೀಠವು ಹೇಳಿತು.&lt;/p&gt;&lt;h2&gt;ಹೈಕೋರ್ಟ್ ನೀಡಿದ ಆದೇಶವೇನು?&lt;/h2&gt;&lt;p&gt;ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠವು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ಪೌರಾಡಳಿತ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, 'ಫಾರ್ಮ್ ಸಂಖ್ಯೆ 2/ಇ-ಆಸ್ತಿ' ದಾಖಲೆಗಳ ಮ್ಯಾಪಿಂಗ್ ಮತ್ತು API ಇಂಟರ್ಫೇಸ್&zwnj;ನಲ್ಲಿ ಅಗತ್ಯ ಮಾರ್ಪಾಡು ಮಾಡಬೇಕು.&lt;/p&gt;&lt;p&gt;ಹೊಸ ವ್ಯವಸ್ಥೆಯು ಮೂಲ ಜಮೀನುದಾರನ ಮಾಲೀಕತ್ವ ಮತ್ತು ಗುತ್ತಿಗೆದಾರನ ವರ್ಗಾಯಿಸಬಹುದಾದ ಗುತ್ತಿಗೆ ಹಕ್ಕನ್ನು ಪ್ರತ್ಯೇಕವಾಗಿ ಗುರುತಿಸುವಂತಿರಬೇಕು. ಈ ಪ್ರಕ್ರಿಯೆಯನ್ನು ಆದೇಶದ ಪ್ರತಿ ಸಿಕ್ಕ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು.&lt;/p&gt;&lt;p&gt;ಒಂದು ವೇಳೆ ನಿಯಮಿತ 2 ತಿಂಗಳೊಳಗೆ ತಾಂತ್ರಿಕ ಸಮಸ್ಯೆಗಳು ಪೂರ್ಣಗೊಳ್ಳದಿದ್ದರೆ, ಸಂಬಂಧಪಟ್ಟ ಉಪ-ನೋಂದಣಿದಾರರು (Sub-Registrar) ಶಾಸನಬದ್ಧ ನಿಯಮಗಳಿಗೆ ಒಳಪಟ್ಟು ಮಾರಾಟ ಪತ್ರಗಳನ್ನು ಹಸ್ತಚಾಲಿತವಾಗಿ ಸ್ವೀಕರಿಸಿ ನೋಂದಾಯಿಸಿಕೊಡಬೇಕು.&lt;/p&gt;&lt;p&gt;ಈ ತೀರ್ಪು ಅರ್ಜಿದಾರರನ್ನು ಮೂಲ ಭೂಮಿಯ ಸಂಪೂರ್ಣ ಮಾಲೀಕರನ್ನಾಗಿ ಮಾಡುವುದಿಲ್ಲ, ಬದಲಾಗಿ ಕಾನೂನು ಹಾಗೂ ಗುತ್ತಿಗೆ ನಿಯಮಗಳ ವ್ಯಾಪ್ತಿಯಲ್ಲಿ ಅವರ ಶಾಶ್ವತ ಗುತ್ತಿಗೆ ಹಕ್ಕನ್ನು ಮಾತ್ರ ನೋಂದಾಯಿಸಬಹುದಾದ ಶೀರ್ಷಿಕೆ ಎಂದು ಗುರುತಿಸುತ್ತದೆ ಎಂದು ಕೋರ್ಟ್ ಹೇಳಿದೆ.&lt;/p&gt;]]></content:encoded>
            <category>belagavi</category>
            <dc:creator>Gowthami K</dc:creator>
            <atom:link href="https://kannada.asianetnews.com/belagavi/software-glitch-can-not-block-property-sale-karnataka-high-court-directs-kaveri-2-0-portal-update-gdp/articleshow-xo72yut"/>
        </item>
    </channel>
</rss>
