<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 17 Jul 2026 16:57:07 +0530</lastBuildDate>
        <atom:link href="https://kannada.asianetnews.com/rss/ballari" rel="self" type="application/rss+xml"/>
        <item>
            <title><![CDATA[Brahmani Steels: 18 ವರ್ಷ ಬಳಿಕ ಜನಾರ್ದನ ರೆಡ್ಡಿಯ14000 ಎಕ್ರೆ ಆಂಧ್ರ ಸರ್ಕಾರ ವಶಕ್ಕೆ!]]></title>
            <link>https://kannada.asianetnews.com/karnataka-districts/14k-acres-of-land-allotted-to-brahmani-steels-owned-by-janardhan-reddy-taken-back-by-ap-govt-rav/articleshow-1vblhx7</link>
            <guid isPermaLink="true">https://kannada.asianetnews.com/karnataka-districts/14k-acres-of-land-allotted-to-brahmani-steels-owned-by-janardhan-reddy-taken-back-by-ap-govt-rav/articleshow-1vblhx7</guid>
            <pubDate>Sun, 12 Jul 2026 05:53:42 +0530</pubDate>
            <description><![CDATA[&lt;p&gt;Bramhani industries limited ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gaali janardana reddy) ಒಡೆತನದ ಬ್ರಾಹ್ಮಣಿ ಸ್ಟೀಲ್ಸ್&zwnj;ಗೆ ಮಂಜೂರಾಗಿದ್ದ ಸುಮಾರು 14 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು 18 ವರ್ಷ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಆಂಧ್ರಪ್ರದೇಶ ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx9tdddwfdf0wn9pj46wrhhr,imgname-----------------------2026-07-12t053720.943-1783814862268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜು.೧೨):&lt;/strong&gt; ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Gaali janardana reddy) ಒಡೆತನದ ಬ್ರಾಹ್ಮಣಿ ಸ್ಟೀಲ್ಸ್&zwnj;ಗೆ ಮಂಜೂರಾಗಿದ್ದ ಸುಮಾರು 14 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು 18 ವರ್ಷ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಆಂಧ್ರಪ್ರದೇಶ ಸರ್ಕಾರ ಮತ್ತೆ ತನ್ನ ವಶಕ್ಕೆ ಪಡೆದಿದೆ.&amp;nbsp;&lt;/p&gt;&lt;h2&gt;ಭೂಮಿ ಬಳಕೆಯಾಗದ್ದಕ್ಕೆ ಈ ಕ್ರಮ?&lt;/h2&gt;&lt;p&gt;ಉದ್ದೇಶಿತ ಕೈಗಾರಿಕಾ ಯೋಜನೆಗಳನ್ನು ಜಾರಿಗೊಳಿಸದೆ ಭೂಮಿಯನ್ನು ಬಳಕೆ ಆಗದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ವೈಎಸ್&zwnj;ಆರ್ ಕಡಪ ಜಿಲ್ಲೆಯ ಜಮ್ಮಲಮಡುಗು ಮಂಡಲದ ಅಂಬಾವರಂ ಗ್ರಾಮದಲ್ಲಿ 2007ರಲ್ಲಿ ಮೆಗಾ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕಾಗಿ 10,700 ಎಕರೆ, ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಯೋಜನೆಗಳಿಗಾಗಿ 3,115 ಎಕರೆ ಭೂಮಿಯನ್ನು ಬ್ರಾಹ್ಮಣಿ ಸ್ಟೀಲ್ಸ್&zwnj;ಗೆ ಮಂಜೂರು ಮಾಡಲಾಗಿತ್ತು. ಈ ಭೂಮಿಯ ಪ್ರಸ್ತುತ ಮೌಲ್ಯ ಸುಮಾರು ₹5,000 ಕೋಟಿ ಎಂದು ಅಂದಾಜಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಸರ್ಕಾರವು ಈ ಹಿಂದೆ 2011 ರಲ್ಲಿ ಭೂಮಿಯನ್ನು ಮರಳಿ ಪಡೆಯಲು ಆದೇಶಗಳನ್ನು ಹೊರಡಿಸಿದ್ದರೂ, ನಿಜವಾದ ಸ್ವಾಧೀನ ನಡೆದಿರಲಿಲ್ಲ. ಕಾನೂನು ವಿವಾದಗಳನ್ನು ಪರಿಹರಿಸಲು ಮತ್ತು ಭೂಮಿಯನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಶ್ರೀಧರ್ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.&lt;/p&gt;&lt;h2&gt;ವಿಮಾನ ನಿಲ್ದಾಣಕ್ಕೆ ಬಳಕೆಯಾಗದ ಭೂಮಿ&lt;/h2&gt;&lt;p&gt;2008 ರಲ್ಲಿ, ಆಗಿನ ಸರ್ಕಾರವು ವಾಣಿಜ್ಯ ವಿಮಾನ ನಿಲ್ದಾಣ, ಫ್ಲೈಯಿಂಗ್ ಅಕಾಡೆಮಿ ಮತ್ತು ವಾಯುಯಾನ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗಾಗಿ ಬ್ರಹ್ಮಣಿ ಇಂಡಸ್ಟ್ರೀಸ್&zwnj;ಗೆ ಎಕರೆಗೆ ₹25,000 ದರದಲ್ಲಿ 3,115.64 ಎಕರೆ ಭೂಮಿಯನ್ನು ಮಂಜೂರು ಮಾಡಿತು. ಭೂಮಿಯನ್ನು ಹಸ್ತಾಂತರಿಸಲಾಗಿದ್ದರೂ, ಯಾವುದೇ ನಿರ್ಮಾಣ ಚಟುವಟಿಕೆಯನ್ನು ಪ್ರಾರಂಭಿಸಲಾಗಿಲ್ಲ. ಪ್ರಸ್ತುತ, ಇಡೀ ಪ್ರದೇಶವು ಬಳಕೆಯಾಗದೆ ಉಳಿದಿದೆ.&lt;/p&gt;&lt;p&gt;&lt;strong&gt;ಕಂಪನಿ ವಿವರಣೆ ನೀಡಲು ವಿಫಲ&lt;/strong&gt;&lt;/p&gt;&lt;p&gt;ಕಂಪನಿಯು ವಿವರಣೆ ನೀಡಲು ವಿಫಲವಾದ ಕಾರಣ, ಹಂಚಿಕೆಯನ್ನು ರದ್ದುಗೊಳಿಸಿ ನಿಯಮಾವಳಿಗಳ ಪ್ರಕಾರ ಭೂಮಿಯನ್ನು ಮರಳಿ ಪಡೆಯಲು ನಿರ್ಧರಿಸಲಾಯಿತು. ಜಿಲ್ಲಾಧಿಕಾರಿಗಳು ಜಮ್ಮಲಮಡುಗು ತಹಶೀಲ್ದಾರ್ ಅವರಿಗೆ 48 ಗಂಟೆಗಳ ಒಳಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ನಿರ್ದೇಶಿಸಿದರು. ಅಂದಿನಿಂದ ಈ ಭೂಮಿಯನ್ನು ವೆಬ್&zwnj;ಲ್ಯಾಂಡ್, ಅಡಂಗಲ್ ಮತ್ತು 1-ಬಿ ದಾಖಲೆಗಳಲ್ಲಿ ಸರ್ಕಾರಿ ಆಸ್ತಿಯಾಗಿ ಮರು ದಾಖಲಿಸಲಾಗಿದೆ. ಈ ಭೂಮಿಯಲ್ಲಿ ಯಾವುದೇ ನೋಂದಣಿ ಅಥವಾ ಗುತ್ತಿಗೆ ಒಪ್ಪಂದಗಳನ್ನು ತಡೆಯಲು ಜಿಲ್ಲಾ ನೋಂದಣಾಧಿಕಾರಿಗೆ ಸೂಚನೆಗಳನ್ನು ನೀಡಲಾಗಿದೆ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/14k-acres-of-land-allotted-to-brahmani-steels-owned-by-janardhan-reddy-taken-back-by-ap-govt-rav/articleshow-1vblhx7"/>
        </item>
        <item>
            <title><![CDATA[Bidadi Township: ಬಿಡದಿ ರೈತ ಹೋರಾಟಕ್ಕೆ ಬಿಜೆಪಿ ಎಂಟ್ರಿ! ನಾಳೆ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ!]]></title>
            <link>https://kannada.asianetnews.com/politics/karnataka-bjp-joins-bidadi-farmers-protest-massive-protest-in-bengaluru-tomorrow-rav/articleshow-45bs2qc</link>
            <guid isPermaLink="true">https://kannada.asianetnews.com/politics/karnataka-bjp-joins-bidadi-farmers-protest-massive-protest-in-bengaluru-tomorrow-rav/articleshow-45bs2qc</guid>
            <pubDate>Thu, 16 Jul 2026 10:11:22 +0530</pubDate>
            <description><![CDATA[&lt;p&gt;ಬಿಡದಿ ಟೌನ್&zwnj;ಶಿಪ್&zwnj; ಕೈಬಿಡುವಂತೆ ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxmk5rn666nxe6m5qmfjsg6v,imgname-----------------------2026-07-16t100230.240-1784176370341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜು.16) &lt;/strong&gt;ಬಿಡದಿ ಟೌನ್&zwnj;ಶಿಪ್&zwnj; ಕೈಬಿಡುವಂತೆ ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.&lt;/p&gt;&lt;p&gt;ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರು ಪೊರಕೆ ಹಿಡಿದು ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಲು ಸಿಎಂ ಡಿ.ಕೆ.ಶಿವಕುಮಾರ್ ಅವರ ರೈತ ವಿರೋಧಿ ಆಡಳಿತವೇ ಕಾರಣ. ರಾಜ್ಯದಲ್ಲಿ ಬಡವರ, ರೈತ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಡಿಕೆಶಿ ಅವರಿಗೆ ರಿಯಲ್&zwnj; ಎಸ್ಟೇಟ್&zwnj; ಆದ್ಯತೆಯಾಗಿದೆ ಹೊರತು ರೈತರಲ್ಲ. ರೈತರ ಜತೆ ಸಿಎಂ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಬಿಡದಿ ಟೌನ್&zwnj;ಶಿಪ್&zwnj; ಬಗ್ಗೆ ಹೋರಾಟ ಮಾಡುತ್ತಿರುವ ರೈತರು ಹಾಗೂ ಸಂಘಟನೆಯ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಡಿಕೆಶಿ ಅವರು ಸಿಎಂ ಆಗಿ ಆಯ್ಕೆಯಾದ 24 ಗಂಟೆಗಳಲ್ಲಿ ಬಿಡದಿ ಟೌನ್&zwnj;ಶಿಪ್&zwnj; ಬಗ್ಗೆ ಆದೇಶ ಮಾಡಿದ್ದಾರೆ. ರೈತರು ಹಾಗೂ ಕೃಷಿ ಕಾರ್ಮಿಕರ ಬಗ್ಗೆ ಈ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ. ಈ ಸರ್ಕಾರಕ್ಕೆ ದುಡಿವ ಜನರಿಗಿಂತ ತಮ್ಮ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದರು.&lt;/p&gt;&lt;p&gt;ಟೌನ್&zwnj;ಶಿಪ್&zwnj; ಕೈಬಿಡಬೇಕು ಎಂದು ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್&zwnj;ನಲ್ಲಿ ಬಿಜೆಪಿ ಧರಣಿ ಮಾಡುತ್ತದೆ. ಬಿಡದಿ ಸೇರಿದಂತೆ ರೈತ ವಿರೋಧಿ ನಿಲುವಿನ ವಿರುದ್ಧ, ಅಧಿವೇಶನದಲ್ಲೂ ಬಿಜೆಪಿ ಜೆಡಿಎಸ್&zwnj;ನಿಂದ ಜಂಟಿಯಾಗಿ ಹೋರಾಟ ನಡೆಸಲಾಗುವುದು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್&zwnj; ಅವರು ನೀರಾವರಿ ಸಚಿವರಾಗಿದ್ದ ವೇಳೆ ತುಂಗಭದ್ರಾ ಜಲಾಶಯದ ಕ್ರಸ್ಟ್&zwnj; ಗೇಟ್&zwnj; ದುರಸ್ತಿ ಮಾಡಲು 24 ತಿಂಗಳು ಬೇಕಾಯಿತು. ಇದರಿಂದಾಗಿ ರೈತರು ಎರಡನೇ ಬೆಳೆಯಿಂದ ವಂಚಿತರಾಗಿದ್ದರು. ಹೀಗೆ ಸಾಕಷ್ಟು ರೈತ ವಿರೋಧಿ ನೀತಿಗಳಿವೆ. ರಾಜ್ಯ ಸರ್ಕಾರ ಜನವಿರೋಧಿಯಾಗಿ ವರ್ತಿಸಿದರೆ ಕೇಳುವುದಿಲ್ಲ. ರೈತರ ಹಿತಾಸಕ್ತಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ. ಹೋರಾಟದ ಮೂಲಕ ಸೂಕ್ತ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.&lt;/p&gt;&lt;h2&gt;ಕೃಷಿ ಸಚಿವರು ಯಾರು?&lt;/h2&gt;&lt;p&gt;ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಹೀಗಾಗಿ, ಸಿಎಂ ಡಿಕೆಶಿ ಅವರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳಿಸಬೇಕು ಎಂದು ಉಲ್ಲೇಖ ಮಾಡಿದ್ದಾರೆ. ಕರ್ನಾಟಕದಲ್ಲಿ ಏನಾದರೂ ರಾಷ್ಟ್ರಪತಿ ಆಡಳಿತ ಹೇರಿದ್ದಾರಾ ಎನ್ನುವ ಅನುಮಾನ ಮೂಡಿಸಿದೆ. ಇಂಥ ಪರಿಸ್ಥಿತಿಯಲ್ಲಿ ಸಿಎಂ ಹಾಗೂ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರಾಜ್ಯದಲ್ಲಿ ಕೃಷಿ ಸಚಿವರಿಲ್ಲದಿರುವುದು ಇದಕ್ಕಿಂತ ದುರ್ದೈವ ಇನ್ನೊಂದಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ವ್ಯವಧಾನ ಕಾಂಗ್ರೆಸ್&zwnj; ಸರಕಾರಕ್ಕಿಲ್ಲ ಎಂದರು.&lt;/p&gt;&lt;h3&gt;ಕೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಟೌನ್&zwnj;ಶಿಪ್: ವಿಜಯೇಂದ್ರ&lt;/h3&gt;&lt;p&gt;ಹೊಸಪೇಟೆ: ಕಾಂಗ್ರೆಸ್ ಹೈಕಮಾಂಡ್&zwnj;ನ ಹೊಟ್ಟೆ ತುಂಬಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಡದಿ ಬಳಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ಟೌನ್&zwnj;ಶಿಪ್ ಯೋಜನೆಗೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೊಶ ವ್ಯಕ್ತಪಡಿಸಿದರು.&lt;/p&gt;&lt;p&gt;ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್&zwnj;ಐಆರ್) ಕುರಿತ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ರೈತರಿಗೆ ಮರಣಶಾಸನವಾಗಲಿರುವ ಬಿಡದಿ ಟೌನ್ ಶಿಪ್ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ. ಆ ಭಾಗದ ರೈತರ ಧ್ವನಿಯಾಗಲು ಬಿಜೆಪಿ ಹೋರಾಟ ನಡೆಸಲಿದೆ. ಅಲ್ಲದೇ, ಮುಂಗಾರು ವಿಧಾನ ಮಂಡಲ ಅಧಿವೇಶನದ ಬಳಿಕ ರಾಜ್ಯ ಪ್ರವಾಸ ನಡೆಸುವುದಾಗಿ ಅವರು ತಿಳಿಸಿದರು.&lt;/p&gt;&lt;p&gt;ರಾಜ್ಯದಲ್ಲಿ ಮಳೆ ಇಲ್ಲದೇ ತೀವ್ರ ಬರಗಾಲ ಎದುರಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಹಾಗೂ ಬಿತ್ತನೆ ಕಾರ್ಯಕ್ಕೆ ಸಾಕಷ್ಟು ಸಾಲ ಶೂಲ ಮಾಡಿ ಬಿತ್ತನೆ ಮಾಡಿ ಅನೇಕ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಬರ ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-bjp-joins-bidadi-farmers-protest-massive-protest-in-bengaluru-tomorrow-rav/articleshow-45bs2qc"/>
        </item>
        <item>
            <title><![CDATA[ನಿನ್ನೆ ಆರತಕ್ಷತೆ, ರಾತ್ರಿ ಮದುಮಗನ ಭೀಕರ ಹತ್ಯೆ; ಬೆಚ್ಚಿಬಿದ್ದ ಬಳ್ಳಾರಿ.. ಆಗಿದ್ದೇನು?]]></title>
            <link>https://kannada.asianetnews.com/ballari/yesterday-was-the-reception-at-night-the-groom-was-brutally-murdered-ballari-shocked-gkn/articleshow-4cf7g7e</link>
            <guid isPermaLink="true">https://kannada.asianetnews.com/ballari/yesterday-was-the-reception-at-night-the-groom-was-brutally-murdered-ballari-shocked-gkn/articleshow-4cf7g7e</guid>
            <pubDate>Fri, 17 Jul 2026 11:21:01 +0530</pubDate>
            <description><![CDATA[ಬಳ್ಳಾರಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಅವರ ಆರತಕ್ಷತೆಯ ಮರುದಿನವೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂದು ಬಲವಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqa0x0cx5mg1h1v0wf9pt6d,imgname-ballari-lovers-marriage---2--1784267437068.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆಯ ಶಂಕೆಯೊಂದು ದಟ್ಟವಾಗಿ ಹರಡಿದ್ದು, ಪ್ರೀತಿಸಿ ಮದುವೆಯಾಗಿದ್ದ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಳ್ಳಾರಿ ನಗರದ ಬಟ್ಟಿ ಏರಿಯಾದಲ್ಲಿ ಕೃತ್ಯ ಘಟನೆ ನಡೆದಿದ್ದು ಇಡೀ ಗ್ರಾಮವೇ ಆಘಾತಕ್ಕೆ ಒಳಗಾಗಿದೆ.&lt;/p&gt;&lt;h2&gt;&lt;strong&gt;ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ&lt;/strong&gt;&lt;/h2&gt;&lt;p&gt;ಹತ್ಯೆಯಾದ ಯುವಕನನ್ನು ನಭೀ ರಸೂಲ್ ಎಂದು ಗುರುತಿಸಲಾಗಿದೆ. ನಭೀ ರಸೂಲ್ ಯುವತಿಯೊಬ್ಬರನ್ನು ಪ್ರೀತಿಸಿ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ನಿನ್ನೆಯಷ್ಟೇ ಯುವಕನ ಮನೆಯಲ್ಲಿ ಅದ್ಧೂರಿಯಾಗಿ ಆರತಕ್ಷತೆ (Reception) ಕಾರ್ಯಕ್ರಮ ನಡೆದಿತ್ತು. ಸಂಬಂಧಿಕರು, ಸ್ನೇಹಿತರ ನಗು-ನಲಿವಿನಿಂದ ತುಂಬಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.&lt;/p&gt;&lt;h3&gt;&lt;strong&gt;ಏನಿದು ಘಟನೆ?&lt;/strong&gt;&lt;/h3&gt;&lt;p&gt;ಆರತಕ್ಷತೆ ಮುಗಿದ ನಂತರ, ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ನಭೀ ರಸೂಲ್ ಮನೆಯಿಂದ ಹೊರಗೆ ಹೋಗಿದ್ದರು. ಆದರೆ, ರಾತ್ರಿ ಕಳೆದರೂ ಅವರು ಮನೆಗೆ ವಾಪಸ್ ಬಂದಿರಲಿಲ್ಲ. ಇಂದು ಬೆಳಿಗ್ಗೆ ಅವರು ಭೀಕರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;&lt;p&gt;ನಭೀ ರಸೂಲ್ ಅವರ ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧವಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಯುವತಿಯ ಕಡೆಯವರು ಈ ಕೃತ್ಯ ಎಸಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಪ್ರೀತಿಯನ್ನು ನಂಬಿ ಬಂದಿದ್ದ ನವವಿವಾಹಿತೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.&lt;/p&gt;&lt;h3&gt;&lt;strong&gt;ಸ್ಥಳಕ್ಕೆ ಎಸ್ ಪಿ ಭೇಟಿ&lt;/strong&gt;&lt;/h3&gt;&lt;p&gt;ಘಟನೆ ನಡೆದ ಸ್ಥಳಕ್ಕೆ ಬಳ್ಳಾರಿ ಎಸ್ ಪಿ ಸುಮನ್ ಡಿ. ಪನ್ನೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ದುಃಖ ಮುಡುಗಟ್ಟಿದ್ದು, ಜನರು ಭೀತಿ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/ballari/yesterday-was-the-reception-at-night-the-groom-was-brutally-murdered-ballari-shocked-gkn/articleshow-4cf7g7e"/>
        </item>
        <item>
            <title><![CDATA[ಬಳ್ಳಾರಿ RDPR ಎಇಇ ತಿಪ್ಪೇಸ್ವಾಮಿಗೆ ಲೋಕಾಯುಕ್ತ ಶಾಕ್! ನಗದು, ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಸೈಟ್‌ಗಳು ಪತ್ತೆ!]]></title>
            <link>https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx</link>
            <guid isPermaLink="true">https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx</guid>
            <pubDate>Tue, 23 Jun 2026 12:23:47 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvskzdds2r3fkjcj1zx6a270,imgname-lokayukta-raids-ballari-rdpr-aee-thippeswamy-1782197499321.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಭ್ರಷ್ಟ ಅಧಿಕಾರಿಯೊಬ್ಬರಿಗೆ ಬಿಸಿ ಮುಟ್ಟಿಸಿದ್ದಾರೆ. ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ತಿಪ್ಪೇಸ್ವಾಮಿ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;ಮೂರು ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ&lt;/h2&gt;&lt;p&gt;ಲೋಕಾಯುಕ್ತ ಎಸ್&zwnj;ಪಿ ವಾಸುದೇವ್ ಅವರ ಖುದ್ದು ನೇತೃತ್ವದಲ್ಲಿ ಇಡೀ ಕಾರ್ಯಾಚರಣೆ ನಡೆದಿದೆ. ಎಇಇ ತಿಪ್ಪೇಸ್ವಾಮಿ ಅಕ್ರಮವಾಗಿ ಕೋಟ್ಯಂತರ ಆಸ್ತಿ ಸಂಪಾದಿಸಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಅಧಿಕಾರಿಗಳು ಪ್ರತ್ಯೇಕ ಮೂರು ತಂಡಗಳನ್ನು ರಚಿಸಿಕೊಂಡು ದಾಳಿ ನಡೆಸಿದ್ದಾರೆ.&lt;/p&gt;&lt;p&gt;ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ಪ್ರಧಾನ ನಿವಾಸ, ಕುಡತಿನಿ ಪಟ್ಟಣದಲ್ಲಿರುವ ಅವರ ಮತ್ತೊಂದು ನಿವಾಸ, ಸಿರುಗುಪ್ಪದಲ್ಲಿರುವ ಅವರ ಅಧಿಕೃತ ಆರ್&zwnj;ಡಿಪಿಆರ್ ಕಚೇರಿ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;ಮನೆಯಲ್ಲಿ ಸಿಕ್ಕ ಅಕ್ರಮ ಸಂಪತ್ತು ಎಷ್ಟು?&lt;/h2&gt;&lt;p&gt;ಬಳ್ಳಾರಿಯ ಹನುಮಾನ್ ನಗರದಲ್ಲಿರುವ ತಿಪ್ಪೇಸ್ವಾಮಿ ಅವರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಪ್ರಾಥಮಿಕ ತಪಾಸಣೆಯ ಅವಧಿಯಲ್ಲೇ ಅಧಿಕಾರಿಗಳು ಈ ಕೆಳಗಿನ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಂಡು ದಾಖಲೆ ಪರಿಶೀಲಿಸುತ್ತಿದ್ದಾರೆ.&lt;/p&gt;&lt;p&gt;ಸುಮಾರು 300 ಗ್ರಾಂ ತೂಕದ ಚಿನ್ನದ ಆಭರಣಗಳು, 800 ಗ್ರಾಂ ತೂಕದ ಬೆಳ್ಳಿ ಆಭರಣ ಹಾಗೂ ಸಾಮಗ್ರಿಗಳು, ಮನೆಯಲ್ಲಿ ಗಂಟು ಕಟ್ಟಿ ಇಡಲಾಗಿದ್ದ 1 ಲಕ್ಷ ರೂಪಾಯಿ ನಗದು ಹಣ. ವಿವಿಧೆಡೆ ಖರೀದಿಸಲಾಗಿರುವ ಬರೋಬ್ಬರಿ 6 ಸೈಟ್&zwnj;ಗಳಿಗೆ (ನಿವೇಶನ) ಸಂಬಂಧಿಸಿದ ಪ್ರಮುಖ ದಸ್ತಾವೇಜುಗಳು ಪತ್ತೆಯಾಗಿದೆ.&lt;/p&gt;&lt;h2&gt;ಬ್ಯಾಂಕ್ ಖಾತೆ ಸೀಜ್ ಮಾಡಿದ ಅಧಿಕಾರಿಗಳು&lt;/h2&gt;&lt;p&gt;ಕೇವಲ ಭೌತಿಕ ಆಸ್ತಿ ಮಾತ್ರವಲ್ಲದೆ ತಿಪ್ಪೇಸ್ವಾಮಿ ಅವರ ಬ್ಯಾಂಕ್ ವಹಿವಾಟುಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಾಥಮಿಕ ತನಿಖೆಯ ಭಾಗವಾಗಿ ತಿಪ್ಪೇಸ್ವಾಮಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ತಕ್ಷಣವೇ ಜಪ್ತಿ (Freeze) ಮಾಡಿದ್ದಾರೆ. ಇವರ ಹೆಸರಿನಲ್ಲಿರುವ ಇತರೆ ಬ್ಯಾಂಕ್ ಲಾಕರ್&zwnj;ಗಳು ಹಾಗೂ ಹೂಡಿಕೆಗಳ ಬಗ್ಗೆಯೂ ತನಿಖೆ ಮುಂದುವರೆದಿದೆ.&lt;/p&gt;&lt;p&gt;ಸದ್ಯ ಹನುಮಾನ್ ನಗರದ ನಿವಾಸ ಹಾಗೂ ಇತರೆಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಸುದೀರ್ಘ ಪರಿಶೀಲನೆ ಮತ್ತು ದಾಖಲೆಗಳ ತಪಾಸಣೆ ಕಾರ್ಯ ಮುಂದುವರೆದಿದೆ. ಸರ್ಕಾರದ ಪ್ರಮುಖ ಇಲಾಖೆಯಲ್ಲಿದ್ದುಕೊಂಡು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಗಳಿಸಿರುವ ಈ ಅಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಾಖಲೆಗಳ ಪರಿಶೀಲನೆ ಮುಂದುವರೆದಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-lokayukta-raids-ballari-rdpr-engineer-aee-thippeswamy-gold-cash-and-sites-seized-gdp/articleshow-4i1yxvx"/>
        </item>
        <item>
            <title><![CDATA[ಬಳ್ಳಾರಿಯ ಹೊಲದಲ್ಲಿ 14ನೇ ಶತಮಾನದ ವಿಜಯನಗರ ಕಾಲದ ಅಪರೂಪದ ಜೈನ ದಾನ ಶಾಸನ ಪತ್ತೆ! ಹಂಪಿಯ ನಂಟು ಉಲ್ಲೇಖ]]></title>
            <link>https://kannada.asianetnews.com/karnataka-districts/rare-14th-century-vijayanagara-inscription-discovered-in-ballari-farmer-s-field-gdp/articleshow-5ce59nv</link>
            <guid isPermaLink="true">https://kannada.asianetnews.com/karnataka-districts/rare-14th-century-vijayanagara-inscription-discovered-in-ballari-farmer-s-field-gdp/articleshow-5ce59nv</guid>
            <pubDate>Fri, 17 Jul 2026 14:19:35 +0530</pubDate>
            <description><![CDATA[ಬಳ್ಳಾರಿಯ ಡಿ.ಅಂತಾಪುರ ಗ್ರಾಮದ ರೈತರೊಬ್ಬರ ಹೊಲದಲ್ಲಿ, ವಿಜಯನಗರ ತಿರುಗಾಟ ಸಂಶೋಧನಾ ತಂಡವು ವಿಜಯನಗರ ಸಾಮ್ರಾಜ್ಯದ ದೊರೆ ಎರಡನೇ ಹರಿಹರನ ಕಾಲದ (ಕ್ರಿ.ಶ. 1395) ಅಪರೂಪದ ಜೈನ ದಾನ ಶಾಸನವನ್ನು ಪತ್ತೆಹಚ್ಚಿದೆ. 17ನೇ ತೀರ್ಥಂಕರ ಕುಂಥುನಾಥರ ಹೆಸರಿನಲ್ಲಿ ಭೂಮಿಯನ್ನು ದಾನ ಮಾಡಿದ ಈ ಶಾಸನವು, ಹಂಪಿಯ ಜೈನ ಪರಂಪರೆಯ ಮೇಲೆ ಹೊಸ ಬೆಳಕು ಚೆಲ್ಲಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqm0jf9p7z5ntmyb7b581mw,imgname-vijayanagara-inscription-discovered-in-ballari-1784277912041.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರು ಭಾನುವಾರ ತಾಲೂಕಿನ ಡಿ.ಅಂತಾಪುರ (ದೊಡ್ಡ ಅಂತಾಪುರ) ಗ್ರಾಮದ ಗ್ಯಾನಪ್ಪ ಎಂಬ ರೈತನ ಹೊಲದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ ಅಪ್ರಕಟಿತ, ಅಪರೂಪದ ಜೈನ ದಾನ ಶಾಸನವೊಂದನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;p&gt;ಈ ಸಂಶೋಧನೆಯು ವಿಜಯನಗರ ಅರಸರ ಕಾಲದ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡದ ಪ್ರೊ. ಎಚ್.ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್.ರವಿ, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿದ್ದಿಗಿ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ವಿದ್ಯಾರ್ಥಿಗಳಾದ ಮಾರುತಿ, ಶ್ರೀಕಾಂತ, ಸ್ಥಳೀಯರಾದ ರಾಗಿ ಶಿವರಾಮಪ್ಪ, ಪಾಪಯ್ಯ, ತಾಯಪ್ಪ ಅವರ ಸಹಕಾರದೊಂದಿಗೆ ಈ ಶಾಸನವನ್ನು ಪತ್ತೆ ಹಚ್ಚಿದ್ದಾರೆ.&lt;/p&gt;&lt;h2&gt;ದಾನ ಶಾಸನ:&lt;/h2&gt;&lt;p&gt;ವಿಜಯನಗರ ಸಾಮ್ರಾಜ್ಯದ ದೊರೆ ಎರಡನೇ ಹರಿಹರನ ಆಳ್ವಿಕೆಯ ಕಾಲದ ದಾನ ಶಾಸನ ಇದಾಗಿದೆ. ಈ ಶಾಸನವು ಕ್ರಿ.ಶ. ೧೩೯೫ (ಶಕ ೧೩೧೭, ಕ್ರೋಧ ಸಂವತ್ಸರ)ಕ್ಕೆ ಸೇರಿದ್ದಾಗಿದೆ. ಶಾಸನದ ಪ್ರಕಾರ ವಿಜಯನಗರದ ಚಿಕ್ಕೋಡೆಯರಂಗಡಿ ಬಸದಿಯಲ್ಲಿದ್ದ ೧೭ನೇ ಜೈನ ತೀರ್ಥಂಕರರಾದ ಕುಂಥುನಾಥರ ಹೆಸರಿನಲ್ಲಿ ಆವಿನಮಡುವಿನ ಅಂತಾಪುರದಲ್ಲಿನ ಹನ್ನೆರಡು ಕೊಳಗ ಬೀಜ ಬಿತ್ತಬಹುದಾದಷ್ಟು ಭೂಮಿಯನ್ನು ತೆರಿಗೆ ವಿನಾಯಿತಿಯೊಂದಿಗೆ ಜೈನ ಬಸದಿಗೆ ದಾನವಾಗಿ ನೀಡಲಾಗಿದೆ.&lt;/p&gt;&lt;p&gt;ಶಾಸನದ ಎಡ ಭಾಗದಲ್ಲಿ ಸೂರ್ಯ, ಬಲ ಭಾಗದಲ್ಲಿ ಚಂದ್ರ, ಮಧ್ಯದಲ್ಲಿ ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಆಸೀನರಾಗಿರುವ ಜೀನಮೂರ್ತಿಯ ಶಿಲ್ಪವಿದೆ. ಸುಮಾರು ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನದಲ್ಲಿ ಒಟ್ಟು ೧೩ ಸಾಲುಗಳಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಕೆತ್ತಲಾಗಿದೆ.&lt;/p&gt;&lt;h2&gt;ಹಂಪಿಯ ಜೈನ ಪರಂಪರೆಗೆ ನಂಟು:&lt;/h2&gt;&lt;p&gt;ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ, ಶಾಸನದಲ್ಲಿ ಉಲ್ಲೇಖಿಸಿರುವ ಕುಂಥುನಾಥರು ೧೭ನೇ ತೀರ್ಥಂಕರರಾಗಿದ್ದು, ಹಂಪಿಯಲ್ಲಿರುವ ದ್ರಾವಿಡ ಶೈಲಿಯ ಗಾಣಿಗಿತ್ತಿ ಜಿನಾಲಯಕ್ಕೂ ಇವರ ಹೆಸರಿನ ನಂಟಿದೆ. ವಿಜಯನಗರದ ದಂಡನಾಯಕ ಇರುಗಪ್ಪನು ಆ ಜಿನಾಲಯವನ್ನು ನಿರ್ಮಿಸಿ, ಅಭಯಾರಣ್ಯವನ್ನು ಕುಂಥುನಾಥರಿಗೆ ದಾನವಾಗಿ ನೀಡಿದ್ದಾನೆ ಎಂಬುದನ್ನು ಅಲ್ಲಿಯ ಶಾಸನಗಳು ದೃಢಪಡಿಸುತ್ತಿವೆ ಎಂದು ತಿಳಿಸಿದರು.&lt;/p&gt;&lt;h2&gt;ಕುಂಥುನಾಥ ತೀರ್ಥಂಕರರ ಹೆಸರಿನ ಇನ್ನೆರಡು ಶಾಸನ ಪತ್ತೆ:&lt;/h2&gt;&lt;p&gt;ವಿಜಯನಗರ ತಿರುಗಾಟ ಸಂಶೋಧನಾ ತಂಡವು ಇದೇ ಸ್ಥಳದಲ್ಲಿ ಕುಂಥುನಾಥ ತೀರ್ಥಂಕರರ ಹೆಸರಿನ ಇನ್ನೂ ಎರಡು ಶಾಸನಗಳನ್ನು ಪತ್ತೆ ಹಚ್ಚಿದೆ. ದೃಶ್ಯಕಲಾ ವಿಭಾಗದ ಡಾ.ಕೃಷ್ಣೇಗೌಡ ಅವರ ಪ್ರಕಾರ ಇಂತಹ ಅಪರೂಪದ ಶಾಸನಗಳನ್ನು ಪುರಾತತ್ವ ಇಲಾಖೆ ವೈಜ್ಞಾನಿಕವಾಗಿ ಸಂರಕ್ಷಿಸಿ, ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.&lt;/p&gt;&lt;h2&gt;ಮತ್ತಷ್ಟು ಸಂಶೋಧನೆಗೆ ಅವಕಾಶ:&lt;/h2&gt;&lt;p&gt;ಪ್ರಸ್ತುತ ಗ್ರಾಮದಲ್ಲಿ ಯಾವುದೇ ಜೈನ ಬಸದಿ ಕಾಣಿಸದಿದ್ದರೂ ಇಲ್ಲಿನ ಮಲ್ಲಿಕಾರ್ಜುನ ದೇವಾಲಯದಲ್ಲಿರುವ ಪ್ರಕಟಿತ ಶಾಸನದಲ್ಲಿ ಅನಂತಾಪುರ ಎಂದು ಉಲ್ಲೇಖವಾಗಿರುವ ಗ್ರಾಮವನ್ನು ಹೊಸದಾಗಿ ಪತ್ತೆ ಹಚ್ಚಲಾಗಿರುವ ಶಾಸನದಲ್ಲಿ ಅಂತಾಪುರ ಎಂದು ದಾಖಲಿಸಿರುವುದು ಗಮನಾರ್ಹವಾಗಿದೆ. ಈ ವ್ಯತ್ಯಾಸ ಹಾಗೂ ಹೊಸ ಶಾಸನಗಳ ಅಧ್ಯಯನದಿಂದ ಗ್ರಾಮದ ಇತಿಹಾಸದ ಕುರಿತು ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-14th-century-vijayanagara-inscription-discovered-in-ballari-farmer-s-field-gdp/articleshow-5ce59nv"/>
        </item>
        <item>
            <title><![CDATA[Carbon Dating ಪ್ರಕ್ರಿಯೆಯಲ್ಲಿ ಗೊತ್ತಾಯ್ತು ಸಂಡೂರು ಗುಹೆ ಇತಿಹಾಸ, ಭಾರತದಲ್ಲಿಯೇ ಅತ್ಯಂತ ಹಳೇ ಮಾನವ ವಾಸಸ್ಥಾನ ಎಂದ ತಜ್ಞರು!]]></title>
            <link>https://kannada.asianetnews.com/ballari/sandur-caves-karnataka-carbon-dating-oldest-human-habitat-san/articleshow-8pxxkdi</link>
            <guid isPermaLink="true">https://kannada.asianetnews.com/ballari/sandur-caves-karnataka-carbon-dating-oldest-human-habitat-san/articleshow-8pxxkdi</guid>
            <pubDate>Fri, 17 Jul 2026 16:56:07 +0530</pubDate>
            <description><![CDATA[&lt;p&gt;ಬಳ್ಳಾರಿಯ ಸಂಡೂರು ಅರಣ್ಯದಲ್ಲಿ 10,000 ವರ್ಷಗಳಷ್ಟು ಹಳೆಯದಾದ ಶಿಲಾಯುಗದ ಗುಹೆ ವಾಸಸ್ಥಾನ ಪತ್ತೆಯಾಗಿದೆ. ಕಾರ್ಬನ್ ಡೇಟಿಂಗ್ ಮೂಲಕ ಇದು ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ ಭಾರತದ ಅತ್ಯಂತ ಹಳೆಯ ಗುಹಾ ವಾಸಸ್ಥಾನವೆಂದು ದೃಢಪಟ್ಟಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxqx3vdpqjnf49zdyv2sf7z4,imgname-ballari-sandur-cave-1784287456694.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಡೂರು (ಬಳ್ಳಾರಿ):&lt;/strong&gt; ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದಲ್ಲಿರುವ ಗುಹೆಯೊಂದು ದೇಶದಲ್ಲೇ ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹಳೆಯ ಗುhe ವಾಸಸ್ಥಾನ (Oldest Cave Habitat) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಬನ್ ಡೇಟಿಂಗ್ (Carbon Dating) ತಂತ್ರಜ್ಞಾನದ ಮೂಲಕ ಈ ಗುಹೆಯು ಶಿಲಾಯುಗದ (Stone Age) ಕಾಲದ್ದಾಗಿದ್ದು, ಇಲ್ಲಿ ಆದಿಮಾನವರು ವಾಸಿಸುತ್ತಿದ್ದರು ಎಂಬ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪುರಾತತ್ವಶಾಸ್ತ್ರಜ್ಞರು ಘೋಷಿಸಿದ್ದಾರೆ.&lt;/p&gt;&lt;p&gt;ಖ್ಯಾತ ಪುರಾತತ್ವಶಾಸ್ತ್ರಜ್ಞ ರವಿ ಕೋರಿಸೆಟ್ಟರ್ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, &quot;ಗುಹೆಯ ಮೇಲ್ಮೈ ಭಾಗದಲ್ಲಿ ದೊರೆತ ಮಾನವನ ಮೂಳೆಯ ತುಣುಕು ಹಾಗೂ ಸೂಕ್ಷ್ಮ ಶಿಲಾ ಉಪಕರಣದ (Microlith) ಮೇಲೆ ಅಹಮದಾಬಾದ್&zwnj;ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (PRL) ಮತ್ತು ಐಐಟಿ ಗಾಂಧಿನಗರದ ಆರ್ಕಿಯಾಲಜಿ ಸೈನ್ಸ್ ಸೆಂಟರ್ ಸಹಯೋಗದೊಂದಿಗೆ ರೇಡಿಯೋಕಾರ್ಬನ್ ಡೇಟಿಂಗ್ ನಡೆಸಲಾಯಿತು. ಈ ಪರೀಕ್ಷೆಯಿಂದ ಈ ಮಾನವ ವಾಸಸ್ಥಾನವು ಬರೋಬ್ಬರಿ 10,000 ವರ್ಷಗಳಷ್ಟು ಹಳೆಯದು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;2024ರಲ್ಲಿ ಬೆಳಕಿಗೆ ಬಂದಿದ್ದ 'ರಶೀದ್ ಪಾಡಿ' ಗುಹೆ&lt;/strong&gt;&lt;/h2&gt;&lt;p&gt;ಸ್ಥಳೀಯ ತಪಸ್ವಿಯೊಬ್ಬರ ಹೆಸರನ್ನಿಡಲಾಗಿರುವ ಈ ಗುಹೆಯನ್ನು 'ರಶೀದ್ ಪಾಡಿ' ಎಂದು ಕರೆಯಲಾಗುತ್ತದೆ. 2024 ರಲ್ಲಿ ರವಿ ಕೋರಿಸೆಟ್ಟರ್ ನೇತೃತ್ವದ ಪುರಾತತ್ವ ಆಸಕ್ತರ ತಂಡ, ಪರಿಸರವಾದಿ ಸಮದ್ ಕೊಟ್ಟೂರು, ಬಳ್ಳಾರಿ ಹೆರಿಟೇಜ್ ಟ್ರಸ್ಟ್&zwnj;ನ ಸದಸ್ಯರು ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯದ ಸಹವರ್ತಿಗಳು ಜಂಟಿಯಾಗಿ ಈ ತಾಣವನ್ನು ಸಾರ್ವಜನಿಕರ ಗಮನಕ್ಕೆ ತಂದಿದ್ದರು.&lt;/p&gt;&lt;p&gt;ಸಾಮಾನ್ಯವಾಗಿ ಭಾರತದಲ್ಲಿ ಕಂಡುಬರುವ ಬಹುತೇಕ ಗುಹೆಗಳು ಸುಣ್ಣದ ಕಲ್ಲುಗಳಿಂದ (Limestones) ರೂಪುಗೊಂಡಿರುತ್ತವೆ. ಆದರೆ ಸಂಡೂರು ಅರಣ್ಯದ ಈ ಗುಹೆಗಳು ವಿಭಿನ್ನವಾಗಿವೆ. ಇವು ಸುಣ್ಣದ ಕಲ್ಲಿನಿಂದ ನಿರ್ಮಾಣವಾಗಿಲ್ಲ; ಬದಲಿಗೆ, ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಒಳಗಿನ ಟೆಕ್ಟೋನಿಕ್ ತಲ್ಲಣಗಳು ಹಾಗೂ ಬಂಡೆಗಳ ಮೇಲ್ಮುಖ ಉಬ್ಬುವಿಕೆಯಿಂದ (Tectonic Uplift) ನೈಸರ್ಗಿಕವಾಗಿ ಸೃಷ್ಟಿಯಾಗಿವೆ ಎಂದು ಪ್ರೊ. ಕೋರಿಸೆಟ್ಟರ್ ವಿವರಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಭಾರತದಲ್ಲೇ ಇಂತಹ ಮತ್ತೊಂದು ತಾಣವಿಲ್ಲ ಎಂದ ತಜ್ಞರು&lt;/strong&gt;&lt;/h2&gt;&lt;p&gt;ರಶೀದ್ ಪಾಡಿಯಲ್ಲಿ ಆದಿಮಾನವರ ವಸಾಹತು ಇತ್ತು ಎಂಬುದಕ್ಕೆ ಪ್ರಬಲ ಪುರಾವೆಗಳು ಸಿಕ್ಕಿವೆ. ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ ಈ ತಾಣವು ಸಂಪೂರ್ಣವಾಗಿ ದಟ್ಟ ಅರಣ್ಯದಿಂದ ಆವೃತವಾಗಿದೆ. ಭಾರತದ ಇತಿಹಾಸದಲ್ಲೇ ಇಷ್ಟು ಎತ್ತರದ ಹೈ-ಆಲ್ಟಿಟ್ಯೂಡ್ ಪ್ರದೇಶದಲ್ಲಿ ಆದಿಮಾನವ ನೆಲೆಸಿದ್ದ ಉದಾಹರಣೆ ಬೇರೆಲ್ಲೂ ಇಲ್ಲ. ಈ ಗುಹೆಯು ಸುಮಾರು 100 ಅಡಿ ಎತ್ತರವಿದ್ದು, ಗುಹೆಯ ತಳಭಾಗವು 45 ಅಡಿ ವಿಸ್ತಾರವಾಗಿದೆ. ಇಲ್ಲಿ ಪತ್ತೆಯಾಗಿರುವ ಹಲವಾರು ಶಿಲಾ ಉಪಕರಣಗಳು ಮತ್ತು ಪ್ರಾಣಿಗಳ ಮೂಳೆಗಳು ನಮ್ಮ ವಾದಕ್ಕೆ ದೃಢವಾದ ಬೆಂಬಲ ನೀಡುತ್ತವೆ,&quot; ಎಂದು ಕೋರಿಸೆಟ್ಟರ್ ಹೇಳಿದ್ದಾರೆ.&lt;/p&gt;&lt;p&gt;ಸಂಡೂರಿನ ದಟ್ಟ ಅರಣ್ಯದ ಮಧ್ಯೆ ಇರುವ ಈ ಗುಹೆಗಳನ್ನು ಅನ್ವೇಷಿಸುವುದು ಸಂಶೋಧನಾ ತಂಡಕ್ಕೆ ಅತ್ಯಂತ ಕಠಿಣವಾದ ಸವಾಲಾಗಿತ್ತು. ಆದರೂ ತಂಡವು ಸಂಡೂರು ಕಾಡಿನ ವಿವಿಧ ಗುಹೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ತಾರಾನಗರದ ಸಮೀಪವಿರುವ ರಶೀದ್ ಪಾಡಿ, ದೇವಧಾರಿ ಪಾಡಿ, ರಾಮ ಪಾಡಿ, ಭೈರವ ತೀರ್ಥ ಪಾಡಿ ಹಾಗೂ ಕುಮಾರಸ್ವಾಮಿ ದೇವಾಲಯದ ಸಮೀಪವಿರುವ ಭೀಮ ತೀರ್ಥ, ಹರಿಶಂಕರ ತೀರ್ಥ, ನವಿಲು ತೀರ್ಥ ಮತ್ತು ಕಪ್ಪರ ಗುಪ್ಪರ ಸ್ವಾಮಿ ಪಾಡಿ ಮುಂತಾದ ಗುಹಾ ತಾಣಗಳನ್ನು ತಂಡವು ಕೂಲಂಕಷವಾಗಿ ಪರಿಶೋಧಿಸಿದೆ.&lt;/p&gt;&lt;h2&gt;&lt;strong&gt;ಮುಂದುವರಿದ ಸಂಶೋಧನೆ - ಆದಿಮಾನವರ ಜೀವನ ಶೈಲಿ ಪತ್ತೆ&lt;/strong&gt;&lt;/h2&gt;&lt;p&gt;ಇಲ್ಲಿ ದೊರೆತಿರುವ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಮಧ್ಯಶಿಲಾಯುಗದ (Mesolithic Period) ಸಂಸ್ಕೃತಿಯನ್ನು ಹೋಲುತ್ತವೆ. ಹಾಗೆಯೇ ಇಲ್ಲಿ ಸಿಕ್ಕಿರುವ ಮೂಳೆಗಳು ಸಾಕುಪ್ರಾಣಿಗಳದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಇದರೊಂದಿಗೆ ಕಾಡು ಪ್ರಾಣಿಗಳ ಮೂಳೆ ಹಾಗೂ ಹಲ್ಲುಗಳ ಅವಶೇಷಗಳೂ ಪತ್ತೆಯಾಗಿದ್ದು, ಇವುಗಳನ್ನು ಮುಂದಿನ ಹಂತದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.&lt;/p&gt;&lt;p&gt;&quot;2024ರಲ್ಲಿ ಈ ಗುಹೆಗಳು ಪತ್ತೆಯಾದಾಗ, ಆದಿಮಾನವನು ಸಸ್ಯಹಾರಿ ಆಹಾರ, ಬೇಟೆಯಾಡಲು ಪ್ರಾಣಿಗಳು ಮತ್ತು ಕಲ್ಲಿನ ಉಪಕರಣಗಳನ್ನು ತಯಾರಿಸಲು ಸೂಕ್ತವಾದ ಬಂಡೆಗಳನ್ನು ಹುಡುಕುತ್ತಾ ಈ ದುರ್ಗಮ ಪ್ರದೇಶಕ್ಕೆ ಯಾವಾಗ ಪ್ರವೇಶಿಸಿದ ಎಂಬ ಯಕ್ಷಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಆ ಪ್ರಶ್ನೆಗೆ ಈಗ ಕಾರ್ಬನ್ ಡೇಟಿಂಗ್ ಮೂಲಕ ನಿಖರ ಉತ್ತರ ಸಿಕ್ಕಿದೆ,&quot; ಎಂದು ಕೋರಿಸೆಟ್ಟರ್ ಸಂಶೋಧನೆಯ ಮಹತ್ವವನ್ನು ವಿವರಿಸಿದ್ದಾರೆ.&lt;/p&gt;&lt;p&gt;&lt;/p&gt;]]></content:encoded>
            <category>ballari</category>
            <dc:creator>Santosh Naik</dc:creator>
            <atom:link href="https://kannada.asianetnews.com/ballari/sandur-caves-karnataka-carbon-dating-oldest-human-habitat-san/articleshow-8pxxkdi"/>
        </item>
        <item>
            <title><![CDATA[ಅಬಕಾರಿ ಅಧಿಕಾರಿಯ ಅಕ್ರಮ ಸಾಮ್ರಾಜ್ಯಕ್ಕೆ ಇಡಿ ಶಾಕ್, ಜಾರಕಿಹೊಳಿ ಭಾವ ಮಂಜುನಾಥ್ ವಶಕ್ಕೆ, ಲೆಕ್ಕವಿಲ್ಲದ ಬೇನಾಮಿ ಬಾರ್ ಲೈಸೆನ್ಸ್!]]></title>
            <link>https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</link>
            <guid isPermaLink="true">https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt</guid>
            <pubDate>Wed, 24 Jun 2026 14:44:49 +0530</pubDate>
            <description><![CDATA[ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲೆ ಅಕ್ರಮ ಆಸ್ತಿ ಮತ್ತು ಹವಾಲಾ ಆರೋಪದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ನಡೆದ ಶೋಧಕಾರ್ಯದಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಪತ್ತೆಯಾಗಿದ್ದು, ಅಧಿಕಾರಿ ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ರಾಜ್ಯ ಅಬಕಾರಿ ಇಲಾಖೆಯಲ್ಲಿ ದೊಡ್ಡ ಹಗರಣವನ್ನು ಬಯಲುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvwebjrzd71hqnf1qes1avxc,imgname-karnataka-excise-scam-y-manjunath-1782292269854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು / ಬೆಳಗಾವಿ: &lt;/strong&gt;ರಾಜ್ಯ ಅಬಕಾರಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಹಗರಣವೊಂದು ಬೆಳಕಿಗೆ ಬಂದಿದ್ದು, ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ (Additional Commissioner) ವೈ. ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿ ಪತಿ ಹಾಗೂ ಬಳ್ಳಾರಿಯ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿರುವ ವೈ. ಮಂಜುನಾಥ್ ಅವರನ್ನು ಕೊನೆಗೂ ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ವಿದೇಶಿ ಅಕ್ರಮ ಹಣಕಾಸು ವ್ಯವಹಾರ, ಹವಾಲಾ ಲಿಂಕ್ ಹಾಗೂ ಅಕ್ರಮ ಆಸ್ತಿ ಸಂಪಾದನೆ (Disproportionate Assets) ಆರೋಪದ ಹಿನ್ನೆಲೆಯಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ. ಕರ್ನಾಟಕ, ಗೋವಾ ಮತ್ತು ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳ ಇಡಿ ಅಧಿಕಾರಿಗಳನ್ನೊಳಗೊಂಡ ಜಂಟಿ ಪಡೆಗಳು, 10ಕ್ಕೂ ಹೆಚ್ಚು ಅರೆಸೇನಾ ಪಡೆ (CRPF) ಸಿಬ್ಬಂದಿಗಳ ಬಿಗಿ ಭದ್ರತೆಯಲ್ಲಿ ಈ ದಾಳಿ ನಡೆಸಿವೆ.&lt;/p&gt;&lt;h2&gt;ರಾಜ್ಯದ 6 ಪ್ರಮುಖ ಕೇಂದ್ರಗಳಲ್ಲಿ ಏಕಕಾಲಕ್ಕೆ ಇಡಿ ರೇಡ್!&lt;/h2&gt;&lt;p&gt;ಬೆಳ್ಳಂಬೆಳಗ್ಗೆ 5:30ರ ಸುಮಾರಿಗೆ ಇಡಿ ಅಧಿಕಾರಿಗಳು ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿ ವೈ. ಮಂಜುನಾಥ್ ಹಾಗೂ ಅವರ ಆಪ್ತ ಜಾಲವನ್ನು ಗುರಿಯಾಗಿಸಿಕೊಂಡು ಬೆಂಗಳೂರು, ಬೆಳಗಾವಿ, ಮೈಸೂರು, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಮತ್ತು ಅಥಣಿ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರು:&lt;/strong&gt; ರೇಸ್&zwnj;ಕೋರ್ಸ್ ರಸ್ತೆಯ (ಸ್ಯಾಂಕಿ ರಸ್ತೆ) ಪ್ರತಿಷ್ಠಿತ 'ದಿ ಸಮ್ಮಿಟ್' ಅಪಾರ್ಟ್&zwnj;ಮೆಂಟ್&zwnj;ನಲ್ಲಿರುವ ಮಂಜುನಾಥ್ ಅವರ ಐಷಾರಾಮಿ ಫ್ಲಾಟ್ ಮೇಲೆ ಮಹಿಳಾ ಇಡಿ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಅಲ್ಲಿಯೇ ಇದ್ದ ಮಂಜುನಾಥ್ ಅವರನ್ನು ಸುದೀರ್ಘ ವಿಚಾರಣೆಯ ಬಳಿಕ ವಶಕ್ಕೆ ಪಡೆದಿದೆ.&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ಮಂಜುನಾಥ್ ಅವರ ಮುಖ್ಯ ನಿವಾಸದ ಮೇಲೆ ದಾಳಿ ನಡೆದಿದೆ. ಮಹತ್ವದ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಡಿವೈಎಸ್&zwnj;ಪಿ (DySP) ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಸ್ಥಳಕ್ಕೆ ದೌಡಾಯಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಜಯನಗರ (ಅರಸೀಕೆರೆ):&lt;/strong&gt; ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರಿಗೆ ಸೇರಿದ ಎರಡು ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.&lt;/p&gt;&lt;p&gt;&lt;strong&gt;ಮೈಸೂರು:&lt;/strong&gt; ದಟ್ಟಗಳ್ಳಿ 3ನೇ ಹಂತದ 5ನೇ ಕ್ರಾಸ್&zwnj;ನಲ್ಲಿರುವ #3638 'ಸ್ವಯಂಭು' ನಿವಾಸದ ಮೇಲೆ ದಾಳಿ ನಡೆದಿದೆ. ಇದು ಕೂಡ ಮಂಜುನಾಥ್ ಅವರ ಆಸ್ತಿಯಾಗಿದ್ದು, ಇಲ್ಲಿ ಅವರ ಆತ್ಮೀಯ ಸ್ನೇಹಿತೆ ಹಾಗೂ ಪ್ರಸ್ತುತ ಅಬಕಾರಿ ಇಲಾಖೆ ಇನ್ಸ್&zwnj;ಪೆಕ್ಟರ್ ಆಗಿರುವ ಯಮುನಾ ಮತ್ತು ಅವರ ತಾಯಿ ಸುಲೋಚನಾ ವಾಸವಾಗಿದ್ದರು. ಇಡಿ ಅಧಿಕಾರಿಗಳು ತೀವ್ರ ದಾಖಲೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ಯಮುನಾ ಅವರನ್ನು ಮುಖ ಮುಚ್ಚಿಕೊಂಡು ವಾಹನದಲ್ಲಿ ಕರೆದೊಯ್ದಿದ್ದಾರೆ.&lt;/p&gt;&lt;h2&gt;ಮಂಜುನಾಥ್ ಆಪ್ತ ಅಧಿಕಾರಿಗಳಿಗೂ ಇಡಿ ಶಾಕ್!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮ ಜಾಲದಲ್ಲಿ ಶಾಮೀಲಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಅವರ ಆಪ್ತ ವಲಯದ ಇತರ ಅಧಿಕಾರಿಗಳ ಮೇಲೂ ಇಡಿ ಅಧಿಕಾರಿಗಳು ಮುಗಿಬಿದ್ದಿದ್ದಾರೆ:&lt;/p&gt;&lt;p&gt;ಸತೀಶ್ ಶಿವಶಂಕರ ಕಾಗಲೆ (ಎಸ್ಪಿ, ತುಮಕೂರು ಅಬಕಾರಿ ಇಲಾಖೆ): ಮಂಜುನಾಥ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಬೆಳಗಾವಿಯ ಶ್ರೀನಗರದಲ್ಲಿರುವ ಅಪಾರ್ಟ್&zwnj;ಮೆಂಟ್ ಹಾಗೂ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿರುವ ನಿವಾಸಗಳ ಮೇಲೆ ಐದಾರು ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.&lt;/p&gt;&lt;p&gt;ವಿಶ್ವನಾಥ್ ಗಾಣಿಗೇರ (ಡಿವೈಎಸ್ಪಿ, ಚಿಕ್ಕೋಡಿ ಅಬಕಾರಿ ಇಲಾಖೆ): ಬೆಳಗಾವಿ ನಗರದ ಬಸವ ಕಾಲೋನಿಯಲ್ಲಿರುವ ಇವರ ನಿವಾಸದ ಮೇಲೂ ದಾಳಿ ನಡೆದಿದ್ದು, ಇವರೂ ಸಹ ಅಕ್ರಮ ವ್ಯವಹಾರಕ್ಕೆ ಸಾಥ್ ನೀಡಿದ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;h2&gt;ದಾಳಿ ವೇಳೆ ಪತ್ತೆಯಾದವು ನೂರಾರು 'ಬೇನಾಮಿ ಬಾರ್ ಲೈಸೆನ್ಸ್'ಗಳು!&lt;/h2&gt;&lt;p&gt;ಇಡಿ ನಡೆಸಿದ ಸುದೀರ್ಘ ಪರಿಶೀಲನೆಯ ವೇಳೆ ಮಂಜುನಾಥ್ ಅವರ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ನಿವಾಸಗಳಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್&zwnj;ಗಳು ಹಾಗೂ ಅವುಗಳ ಅಗ್ರಿಮೆಂಟ್&zwnj; ಬಾಂಡ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಅಕ್ರಮದ ನೆಟ್&zwnj;ವರ್ಕ್: ಮಂಜುನಾಥ್ ಅವರು ಬೆಳಗಾವಿ, ದಾವಣಗೆರೆ, ಬಳ್ಳಾರಿ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬೇನಾಮಿ ಹೆಸರಿನಲ್ಲಿ ದೊಡ್ಡ ಪ್ರಮಾಣದ ಬಾರ್ ಮತ್ತು ರೆಸ್ಟೋರೆಂಟ್&zwnj;ಗಳನ್ನು ಸ್ಥಾಪಿಸಿದ್ದರು. ಈ ಬೇನಾಮಿ ಬಾರ್&zwnj;ಗಳಿಂದ ಬರುತ್ತಿದ್ದ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಇವರು ವಿದೇಶಗಳಿಗೆ ಅಕ್ರಮವಾಗಿ ವರ್ಗಾವಣೆ (ಹವಾಲಾ ದಂಧೆ) ಮಾಡಿ, ಅಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.&lt;/p&gt;&lt;h2&gt;2013ರ ಲೋಕಾಯುಕ್ತ ಕೇಸ್; ಪ್ರಭಾವ ಬಳಸಿ ಹುದ್ದೆ ಸೃಷ್ಟಿ!&lt;/h2&gt;&lt;p&gt;ವೈ. ಮಂಜುನಾಥ್ ಅವರ ಅಕ್ರಮಗಳ ಇತಿಹಾಸ ಇಂದಿನದ್ದಲ್ಲ. ಈ ಹಿಂದೆ 2013ರಲ್ಲಿ ಮೈಸೂರು ಅಬಕಾರಿ ಡಿಸಿ (DC) ಆಗಿದ್ದಾಗ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಬಾರ್ ಲೈಸೆನ್ಸ್ ನವೀಕರಣದಲ್ಲಿ (Renewal) ಕೋಟ್ಯಂತರ ರೂಪಾಯಿ ಲಂಚ ಹಾಗೂ ಸಂಬಳಕ್ಕಿಂತ ಹೆಚ್ಚಿನ ಅಕ್ರಮ ಆಸ್ತಿ ಗಳಿಕೆ (Disproportionate Assets) ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಇಲಾಖಾ ತನಿಖೆ (DE) ನಡೆದು ಪ್ರಸ್ತುತ ಅದು ಮುಚ್ಚಲ್ಪಟ್ಟಿತ್ತಾದರೂ, ಲೋಕಾಯುಕ್ತದ ಅದೇ ಅಕ್ರಮ ಆಸ್ತಿ ಗಳಿಕೆಯ ಮೂಲ ಕೇಸ್ ಅನ್ನು ಆಧರಿಸಿ ಈಗ ಇಡಿ ಅಖಾಡಕ್ಕಿಳಿದಿದೆ.&lt;/p&gt;&lt;h2&gt;ರಾಜಕೀಯ ಪ್ರಭಾವದ ಆರೋಪ:&amp;nbsp;&lt;/h2&gt;&lt;p&gt;ಈ ಹಿಂದೆ ಅಬಕಾರಿ ಇಲಾಖೆಯಲ್ಲಿ ಕೇವಲ ಬೆಂಗಳೂರು ರೇಂಜ್ ಮಾತ್ರ ಇತ್ತು. ಆದರೆ ಮಂಜುನಾಥ್ ಅವರು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿ ವಿಶೇಷವಾಗಿ 'ಬೆಳಗಾವಿ ಅಬಕಾರಿ ರೇಂಜ್' ಅನ್ನು ಸೃಷ್ಟಿಸಿಕೊಂಡಿದ್ದರು. ಇದರ ಮೂಲಕ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಅಬಕಾರಿ ನಿಯಂತ್ರಣದ ಸರ್ವಾಧಿಕಾರವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡು, ಕರಾವಳಿ ಮತ್ತು ಗಡಿ ಭಾಗದಲ್ಲಿ ವ್ಯಾಪಕ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಸದ್ಯ ಇಡಿ ಅಧಿಕಾರಿಗಳ ವಶದಲ್ಲಿರುವ ವೈ. ಮಂಜುನಾಥ್ ಹಾಗೂ ವಶಪಡಿಸಿಕೊಳ್ಳಲಾದ ಲೈಸೆನ್ಸ್ ದಾಖಲೆಗಳಿಂದ ಇಲಾಖೆಯ ಇನ್ನೂ ಹಲವು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಡುಕ ಶುರುವಾಗಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/state/mega-ed-raid-minister-satish-jarkiholi-relative-and-excise-additional-commissioner-manjunath-arrested-in-hawala-case-gdp/articleshow-cc6u5zt"/>
        </item>
        <item>
            <title><![CDATA[ಕೊಲ್ಲಿ ಯುದ್ಧದಿಂದ ಡಾಂಬರ್‌ ದರ ದುಪ್ಪಟ್ಟು ದುಬಾರಿ: ಕರ್ನಾಟಕದ ಹಲವು ಕಡೆ ರಸ್ತೆ ಕೆಲಸ ಸ್ಥಗಿತ]]></title>
            <link>https://kannada.asianetnews.com/gallery/state/middle-east-conflict-hits-karnataka-roads-bitumen-prices-skyrocket-to-rs1lakh-ton-halting-projects-gdp-dlw3a39</link>
            <guid isPermaLink="true">https://kannada.asianetnews.com/gallery/state/middle-east-conflict-hits-karnataka-roads-bitumen-prices-skyrocket-to-rs1lakh-ton-halting-projects-gdp-dlw3a39</guid>
            <pubDate>Mon, 15 Jun 2026 16:29:11 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್&zwnj;ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv5dymax9871aah463jzv40h,imgname-roads-bitumen-prices-1781520093533.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಡಾಂಬರ್ ಬೆಲೆ ಪ್ರತಿ ಟನ್&zwnj;ಗೆ ₹45 ಸಾವಿರದಿಂದ ₹1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ಹೂವಿನಹಡಗಲಿ ತಾಲೂಕಿನ ಹಲವು ರಸ್ತೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಗುತ್ತಿಗೆದಾರರು ಜೆಲ್ಲಿಕಲ್ಲು ಹಾಕಿ ಕಾಮಗಾರಿ ನಿಲ್ಲಿಸಿದ್ದಾರೆ.&lt;/p&gt;&lt;img&gt;&lt;p&gt;ವರದಿ: ಚಂದ್ರು ಕೊಂಚಿಗೇರಿ&lt;/p&gt;&lt;p&gt;ಹೂವಿನಹಡಗಲಿ: ಮಧ್ಯಪ್ರಾಚ್ಯದ ಯುದ್ಧದ ಈಗ ರಸ್ತೆ ಮೇಲೂ ಪರಿಣಾಮ ಬೀರಿದೆ. ಪ್ರತಿ ಟನ್&zwnj; ಡಾಂಬರ್&zwnj; ಬೆಲೆ ₹45 ಸಾವಿರದಿಂದ ₹ 1 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದ ರಸ್ತೆ ಅಭಿವೃದ್ಧಿಗೂ ಕುತ್ತು ಬಂದಿದೆ. ಟೆಂಡರ್&zwnj; ಪಡೆದ ಗುತ್ತಿಗೆದಾರರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಯುದ್ಧಕ್ಕೂ ಮುನ್ನವೇ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಒಪ್ಪಂದದ ಪ್ರಕಾರ ವಿಧಿ ಇಲ್ಲದೇ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈಗ ಡಾಂಬರ್&zwnj; ಖರೀದಿಸಲು ಹೋದರೆ ಸಿಕ್ಕಾಪಟ್ಟೆ ಬೆಲೆ ಏರಿಕೆಯಾಗಿದೆ. ಇನ್ನು ಸ್ವಲ್ಪ ದಿನ ತಡೆದರೆ ಬೆಲೆ ಇಳಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಗುತ್ತಿಗೆದಾರರು, ಹೂವಿನಹಡಗಲಿಯ ಹಲವು ರಸ್ತೆಗಳ ಮೇಲೆ ಜೆಲ್ಲಿ ಕಲ್ಲು ಹಾಕಿ ಬಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಹೌದು, ತಾಲೂಕಿನ ಮೈಲಾರ-ತೋರಣಗಲ್ಲು, ಅರಭಾವಿ-ಚಳಕೇರಿ ರಾಜ್ಯ ಹೆದ್ದಾರಿ ಸೇರಿದಂತೆ ಇನ್ನಿತರ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆ ಟೆಂಡರ್&zwnj; ಕರೆದು, ಕಾಮಗಾರಿ ಆದೇಶ ನೀಡಿದೆ. ಗುತ್ತಿಗೆದಾರರು ಟೆಂಡರ್&zwnj; ನಿಯಮಗಳಂತೆ ಕಾಮಗಾರಿ ಆರಂಭಿಸಿ, ರಸ್ತೆಗೆ ಇನ್ನು ಡಾಂಬರೀಕರಣ ಹಾಕಬೇಕು ಎನ್ನುವಷ್ಟರಲ್ಲಿ ಮಧ್ಯಪ್ರಾಚ್ಯ ಯುದ್ಧ ಶುರುವಾಗಿತ್ತು. ಇದರ ಪರಿಣಾಮದಿಂದ ಡಾಂಬರ್&zwnj; ಬೆಲೆ ಗಗನಕ್ಕೇರಿದೆ. ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯನ್ನು ಆಯ್ದ ಮೂರು ಕಡೆಗಳಲ್ಲಿ ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಕಲ್ಲಿನ ಪುಡಿ ಮಿಶ್ರಿತ ಜೆಲ್ಲಿ ಕಲ್ಲು ಹಾಕಿದ್ದಾರೆ. ವಾಹನಗಳ ಓಡಾಟದಿಂದ ರಸ್ತೆಗೆ ಹಾಕಿದ್ದ ಜೆಲ್ಲಿ ಕಲ್ಲು ಕಿತ್ತು ಹೋಗುತ್ತಿವೆ. ಜತೆಗೆ ರಸ್ತೆ ತುಂಬೆಲ್ಲ ಧೂಳು ಎಗರುತ್ತಿದೆ. ದೊಡ್ಡ ವಾಹನಗಳ ಹಿಂದೆ ಬೈಕ್&zwnj; ಸವಾರರು ಧೂಳು ಮೆತ್ತಿಕೊಂಡು ಹೋಗುವ ಸ್ಥಿತಿ ಇದೆ.&lt;/p&gt;&lt;img&gt;&lt;p&gt;ತಾಲೂಕಿನ ಉತ್ತಂಗಿ ಬಳಿ ಅರಭಾವಿ-ಚಳಕೇರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ನಡೆಯುತ್ತಿದೆ. ರಸ್ತೆಗೆ ಜೆಲ್ಲಿಕಲ್ಲು ಹಾಕಿದ್ದಾರೆ. ಸಾಕಷ್ಟು ಕಡೆ ಕಲ್ಲು ಕಿತ್ತು ಹೋಗಿ ಗುಂಡಿಗಳಾಗಿವೆ. ಕಾಮಗಾರಿ ಪ್ರಗತಿಯಲ್ಲಿ ಇರುವಾಗಲೇ ರಸ್ತೆ ಕಿತ್ತು ಹೋಗಿದೆ. ಈ ರಾಜ್ಯ ಹೆದ್ದಾರಿಯಲ್ಲಿ ಒಂದೇ ತಿಂಗಳಿನಲ್ಲಿ ಮೂರು ರಸ್ತೆ ಅಪಘಾತಗಳು ಉಂಟಾಗಿವೆ. ತಾಲೂಕಿನಲ್ಲಿ ಒಟ್ಟಾರೆ 10 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಎಲ್ಲ ಕಡೆಗೂ ಪರಿಸ್ಥಿತಿ ಹೀಗೆ ಇದೆ. ರಸ್ತೆ ಧೂಳು ಮುಕ್ತ ಮಾಡಲು ತಿಳಿದಾಗೊಮ್ಮೆ ನೀರು ಸಿಂಪರಣೆ ಮಾಡುತ್ತಾರೆ.&lt;/p&gt;&lt;p&gt;&lt;strong&gt;ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಡಾಂಬರ್&zwnj; ಬೆಲೆ ಏರಿಕೆಯಿಂದ ಗುತ್ತಿಗೆದಾರರಿಗೆ ತೊಂದರೆಯಾಗಿದೆ. ಅಗ್ರಿಮೆಂಟ್&zwnj; ಪ್ರಕಾರ ಅವರೇ ಕೆಲಸ ಪೂರ್ಣಗೊಳಿಸಬೇಕು. ಧೂಳು ಮುಕ್ತ ಮಾಡಲು ನೀರು ಸಿಂಪರಣೆ ಮಾಡಲಾಗುತ್ತಿದೆ.&lt;/strong&gt;&lt;/p&gt;&lt;p&gt;&lt;strong&gt;-ನಾಗೇಶ, ಲೋಕೋಪಯೋಗಿ ಇಲಾಖೆಯ ಎಇಇ&lt;/strong&gt;&lt;/p&gt;&lt;img&gt;&lt;p&gt;ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಕಲ್ಲಿನ ಪುಡಿ, ಜೆಲ್ಲಿ ಕಲ್ಲು ಹಾಕಿದ್ದಾರೆ. ಮೈಲಾರಕ್ಕೆ ಬರುವ ಭಕ್ತರು ಧೂಳು ಮೆತ್ತಿಕೊಂಡೇ ಬರುತ್ತಾರೆ. ದೊಡ್ಡ ವಾಹನದ ಹಿಂದೆ ಹೋದರೆ ದಾರಿಯೇ ಕಾಣುತ್ತಿಲ್ಲ. ಅಷ್ಟೊಂದು ಧೂಳು ಇದೆ. ಸಂಬಂಧ ಪಟ್ಟವರು ಬೇಗನೆ ಕಾಮಗಾರಿ ಪೂರ್ಣಗೊಳಿಸಲಿ.&lt;/p&gt;&lt;p&gt;-ಮೈಲಾರ ಗ್ರಾಮಸ್ಥರು.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/state/middle-east-conflict-hits-karnataka-roads-bitumen-prices-skyrocket-to-rs1lakh-ton-halting-projects-gdp-dlw3a39"/>
        </item>
        <item>
            <title><![CDATA[Ballari News: ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡಿ ರೇಣುಕಾಸ್ವಾಮಿಯಂತೆ ಕಾಲುವೆ ಪಕ್ಕದಲ್ಲಿ ಬೀದಿ ಹೆಣವಾದ ಬಸವನಗೌಡ!]]></title>
            <link>https://kannada.asianetnews.com/gallery/karnataka-districts/ballari-moka-police-arrest-shweta-husband-for-burning-man-body-like-renukaswamy-case-fpgo6bb</link>
            <guid isPermaLink="true">https://kannada.asianetnews.com/gallery/karnataka-districts/ballari-moka-police-arrest-shweta-husband-for-burning-man-body-like-renukaswamy-case-fpgo6bb</guid>
            <pubDate>Sun, 14 Jun 2026 20:37:00 +0530</pubDate>
            <description><![CDATA[&lt;p&gt;ಬಳ್ಳಾರಿಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು, ಆ ಮಹಿಳೆ ತನ್ನ ಪತಿ ಮತ್ತು ಸಹೋದರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆಯೇ ಇರುವ ಈ ಘಟನೆಯಲ್ಲಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv3ab3krtp04w293wgyh6h1j,imgname-ballari-basavanagowda-murder-1781449199223.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಳ್ಳಾರಿಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು, ಆ ಮಹಿಳೆ ತನ್ನ ಪತಿ ಮತ್ತು ಸಹೋದರನೊಂದಿಗೆ ಸೇರಿ ಹತ್ಯೆ ಮಾಡಿದ್ದಾಳೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಂತೆಯೇ ಇರುವ ಈ ಘಟನೆಯಲ್ಲಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಡಲಾಗಿದೆ.&lt;/p&gt;&lt;img&gt;&lt;p&gt;ಬಳ್ಳಾರಿ (ಜೂ.14):ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮಾಸುವ ಮುನ್ನವೇ, ಬಳ್ಳಾರಿಯಲ್ಲಿ ಅಂತಹದ್ದೇ ಒಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಯುವಕನನ್ನು ಆಕೆ ತನ್ನ ಪತಿ ಮತ್ತು ಸೋದರನ ಜೊತೆ ಸೇರಿ ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ಸುಟ್ಟಿರುವ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;&lt;strong&gt;ಘಟನೆಯ ಹಿನ್ನೆಲೆ:&lt;/strong&gt;&lt;/p&gt;&lt;p&gt;ಖಾಸಗಿ ಲ್ಯಾಬ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಪಾಟೀಲ್ ಬಸವನಗೌಡ (26) ಎಂಬ ಯುವಕ ಜೂನ್ 7ರಂದು ನಾಪತ್ತೆಯಾಗಿದ್ದನು. ಮರುದಿನ ಬೆಳಿಗ್ಗೆ ಎಲ್&zwnj;ಎಲ್&zwnj;ಸಿ (LLC) ಕಾಲುವೆಯ ನಿರ್ಜನ ಪ್ರದೇಶದಲ್ಲಿ ಈತನ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮೋಕಾ ಠಾಣೆಯ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಆಘಾತಕಾರಿ ಸತ್ಯಗಳು ಹೊರಬಿದ್ದಿವೆ.&lt;/p&gt;&lt;img&gt;&lt;p&gt;&lt;strong&gt;ಅಶ್ಲೀಲ ಸಂದೇಶವೇ ಸಾವಿಗೆ ಮುನ್ನುಡಿ:&lt;/strong&gt;&lt;/p&gt;&lt;p&gt;ಕೊಲೆಯಾದ ಬಸವನಗೌಡನಿಗೆ ದೂರದ ಸಂಬಂಧದಲ್ಲಿ ಅತ್ತಿಗೆಯಾಗುವ ಶ್ವೇತಾ ಎಂಬಾಕೆಯ ಪರಿಚಯವಿತ್ತು. ಸುಮಾರು ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಪರಿಚಯವಾಗಿದ್ದ ಇವರಿಬ್ಬರ ನಡುವೆ ಮಾತುಕತೆ ನಡೆದಿತ್ತು. ಆದರೆ, ಬಸವನಗೌಡ ಇದನ್ನು ತಪ್ಪಾಗಿ ಬಳಸಿಕೊಂಡಿದ್ದನು.&lt;/p&gt;&lt;img&gt;&lt;p&gt;ಕಳೆದ ಒಂದು ವರ್ಷದಿಂದ ಶ್ವೇತಾಗೆ ಅಶ್ಲೀಲ ಫೋಟೋಗಳು ಮತ್ತು ವಿಕೃತ ಸಂದೇಶಗಳನ್ನು ಕಳುಹಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದನು. ತನ್ನ ಕಾಮದ ತೃಷೆ ತೀರಿಸಿಕೊಳ್ಳಲು ಶ್ವೇತಾಗೆ ನಿರಂತರವಾಗಿ ಪೀಡಿಸುತ್ತಿದ್ದನು ಎಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಹತ್ಯೆಯ ಸ್ಕೆಚ್ ಮತ್ತು ಮೃತದೇಹ ದಹನ:&lt;/strong&gt;&lt;/p&gt;&lt;p&gt;ಬಸವನಗೌಡನ ಅತಿಯಾದ ಕಿರುಕುಳದಿಂದ ಬೇಸತ್ತ ಶ್ವೇತಾ, ಈ ವಿಷಯವನ್ನು ತನ್ನ ಪತಿ ದೊಡ್ಡಬಸವನಗೌಡ ಹಾಗೂ ಸೋದರ ವಿಜಯ್&zwnj;ಗೆ ತಿಳಿಸಿದ್ದಳು. ಇವನ ಕಾಟಕ್ಕೆ ಮುಕ್ತಿ ಹಾಡಲೇಬೇಕು ಎಂದು ನಿರ್ಧರಿಸಿದ ಮೂವರು ಹತ್ಯೆಗೆ ಸಂಚು ರೂಪಿಸಿದ್ದರು. ಜೂನ್ 7ರಂದು ಶ್ವೇತಾ ತಾನೇ ಕರೆ ಮಾಡಿ ಬಸವನಗೌಡನನ್ನು ನಿರ್ಜನ ಪ್ರದೇಶಕ್ಕೆ ಬರುವಂತೆ ಮಾಡಿದ್ದಾಳೆ. ಅಲ್ಲಿ ಬಂದ ಬಸವನಗೌಡನನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಹತ್ತು ಕಿಲೋಮೀಟರ್ ದೂರದ ಕಾಲುವೆಯ ಪಕ್ಕಕ್ಕೆ ಸಾಗಿಸಿ, ಅಲ್ಲಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದರು.&lt;/p&gt;&lt;img&gt;&lt;p&gt;&lt;strong&gt;ಪೊಲೀಸರ ಬಲೆಗೆ ಬಿದ್ದ ಆರೋಪಿಗಳು:&lt;/strong&gt;&lt;/p&gt;&lt;p&gt;ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಪತ್ತೆಹಚ್ಚಿದ ಮೋಕಾ ಠಾಣೆ ಪೊಲೀಸರು, ಮೊಬೈಲ್ ಕರೆಗಳ ವಿವರ (CDR) ಆಧಾರದ ಮೇಲೆ ತನಿಖೆ ನಡೆಸಿ ಶ್ವೇತಾ, ಆಕೆಯ ಪತಿ ಮತ್ತು ಸೋದರನನ್ನು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಗೆಳತಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಕೊಲೆಯಾಗಿರುವ ರೀತಿಯಲ್ಲಿಯೇ, ಇಲ್ಲಿಯೂ ಕೂಡ ಮಹಿಳೆಯ ಕಿರುಕುಳದ ದೂರು ಕೊಲೆಯಲ್ಲಿ ಅಂತ್ಯವಾಗಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ.&lt;/p&gt;]]></content:encoded>
            <category>ballari</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/ballari-moka-police-arrest-shweta-husband-for-burning-man-body-like-renukaswamy-case-fpgo6bb"/>
        </item>
        <item>
            <title><![CDATA[Football: ಗ್ರಾಮೀಣ ಫುಟ್ಬಾಲ್ ಪ್ರತಿಭೆಗಳಿಗೆ ಸ್ಥಾಪಿಸಿದ್ದ ಬಳ್ಳಾರಿ ಕ್ರೀಡಾ ವಸತಿ ನಿಲಯ ಬೆಂಗಳೂರಿಗೆ ಶಿಫ್ಟ್!]]></title>
            <link>https://kannada.asianetnews.com/sports/bellary-football-dormitory-shift-to-bengaluru-kalyana-karnataka-students-outraged-rav/articleshow-gmovt3y</link>
            <guid isPermaLink="true">https://kannada.asianetnews.com/sports/bellary-football-dormitory-shift-to-bengaluru-kalyana-karnataka-students-outraged-rav/articleshow-gmovt3y</guid>
            <pubDate>Sat, 13 Jun 2026 12:14:04 +0530</pubDate>
            <description><![CDATA[ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಬಳ್ಳಾರಿಯ ಹಿರಿಯರ ಫುಟ್&zwnj;ಬಾಲ್ ಕ್ರೀಡಾ ವಸತಿ ನಿಲಯವನ್ನು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ನಿರ್ಧಾರವು ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಮತ್ತು ಬಡ ಕ್ರೀಡಾಪಟುಗಳ ಭವಿಷ್ಯಕ್ಕೆ ಕುತ್ತು ತಂದಿದ್ದು, ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktzvct0bgm0bmmcvz98r4k80,imgname-----------------------2026-06-13t115251.037-1781332862987.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;ಬಳ್ಳಾರಿ (ಜೂ.13): ರಾಜ್ಯ, ರಾಷ್ಟ್ರಮಟ್ಟದ ಫುಟ್&zwnj;ಬಾಲ್ ಕ್ರೀಡೆಯಲ್ಲಿ ನಿರಂತರ ಸಾಧನೆ ಮೂಲಕ ಉತ್ತರ ಕರ್ನಾಟಕ(north Karnataka), ಕಲ್ಯಾಣ ಕರ್ನಾಟಕ(Kalyana karnataka) ಭಾಗಕ್ಕೆ ಹೆಮ್ಮೆ ತಂದಿರುವ ಬಳ್ಳಾರಿ(Ballari)ಯ ಹಿರಿಯರ ಫುಟ್&zwnj;ಬಾಲ್ ಕ್ರೀಡಾ ವಸತಿ ನಿಲಯವನ್ನು ಏಕಾಏಕಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಸ್ಥಳೀಯ ಕ್ರೀಡಾಪ್ರೇಮಿಗಳಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಬಳ್ಳಾರಿಯ ಫುಟ್&zwnj;ಬಾಲ್ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ವಿದ್ಯಾನಗರದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಪ್ರವೇಶ ಪಡೆದುಕೊಳ್ಳುವಂತೆ ಕ್ರೀಡಾ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.&lt;/p&gt;&lt;h2&gt;ಸ್ಥಳಾಂತರ ಏಕೆ?&lt;/h2&gt;&lt;p&gt;ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳ ಫುಟ್&zwnj;ಬಾಲ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ 2018ರಲ್ಲಿ ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಕ್ರೀಡಾ ವಸತಿ ನಿಲಯವನ್ನು ಆರಂಭಿಸಲಾಗಿತ್ತು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ಕೇಂದ್ರವಿತ್ತು. ಪದವಿಪೂರ್ವ ಶಿಕ್ಷಣ ಹಂತದ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿತ್ತು. ಕಳೆದ ಎಂಟು ವರ್ಷಗಳಲ್ಲಿ ಈ ಕೇಂದ್ರವು ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ರೂಪಿಸಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ.&lt;/p&gt;&lt;p&gt;ವಸತಿ ನಿಲಯದ ತಂಡವು ವಿವಿಧ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 5 ಚಿನ್ನ, 2 ಬೆಳ್ಳಿ ಪದಕಗಳನ್ನು ಗೆದ್ದಿದೆ. ಕರ್ನಾಟಕ ರಾಜ್ಯ ಫುಟ್&zwnj;ಬಾಲ್ ಸಂಸ್ಥೆ (ಕೆಎಸ್&zwnj;ಎಫ್&zwnj;ಎ) ಆಶ್ರಯದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 'ಬಿ'ವಿಭಾಗದಿಂದ ಪ್ರತಿಷ್ಠಿತ 'ಎ ' ವಿಭಾಗಕ್ಕೆ ಪದೋನ್ನತಿ ಹೊಂದಿರುವುದು ಇದರ ಸಾಧನೆಗೆ ಸಾಕ್ಷಿಯಾಗಿದೆ. ಇಲ್ಲಿನ ಕ್ರೀಡಾಪಟುಗಳು ಖೇಲೋ ಇಂಡಿಯಾ ಯೂತ್ ಗೇಮ್ಸ್ (ಯು-20), ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಫುಟ್&zwnj;ಬಾಲ್ ಚಾಂಪಿಯನ್&zwnj;ಶಿಪ್, ಆಲ್ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಷ್ಟಾಗಿಯೂ ಕ್ರೀಡಾ ವಸತಿ ನಿಲಯವನ್ನು ಬೆಂಗಳೂರಿಗೆ ಎತ್ತಂಗಡಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;h3&gt;ನಿಷ್ಕಾಳಜಿಯೂ ಕಾರಣ:&lt;/h3&gt;&lt;p&gt;ಕ್ರೀಡಾ ವಸತಿ ಕೇಂದ್ರ ಬಲಪಡಿಸುವ ಬದಲು ಸ್ಥಳಾಂತರಕ್ಕೆ ಮುಂದಾಗಿರುವ ಕ್ರೀಡಾ ಇಲಾಖೆಯ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಧ್ವನಿ ಎತ್ತದ ಜಿಲ್ಲೆಯ ಜನಪ್ರತಿನಿಧಿಗಳ ನಿಷ್ಕಾಳಜಿಯೇ ಇದಕ್ಕೆ ಕಾರಣ ಎಂದು ಜನಾಕ್ರೋಶ ವ್ಯಕ್ತವಾಗಿದೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್ ಹಾಗೂ ಇತರ ಹಿಂದುಳಿದ ಜಿಲ್ಲೆಗಳ ಗ್ರಾಮೀಣ ಯುವಕರಿಗೆ ಈ ಕೇಂದ್ರ ಸುಲಭವಾಗಿ ತಲುಪಬಹುದಾದ ತರಬೇತಿ ತಾಣವಾಗಿತ್ತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು ಕಡಿಮೆ ವೆಚ್ಚದಲ್ಲಿ ಇಲ್ಲಿ ತರಬೇತಿ ಪಡೆದು ತಮ್ಮ ಪ್ರತಿಭೆ ಬೆಳೆಸಿಕೊಳ್ಳುತ್ತಿದ್ದರು. ಬೆಂಗಳೂರು ಮಾದರಿಯ ಮಹಾನಗರದಲ್ಲಿ ವಾಸ, ಪ್ರಯಾಣ, ಇತರ ವೆಚ್ಚಗಳನ್ನು ಭರಿಸುವುದು ಗ್ರಾಮೀಣ ಬಡ ಕುಟುಂಬಗಳಿಗೆ ಕಷ್ಟಸಾಧ್ಯ. ಇದರಿಂದ ಅನೇಕ ಪ್ರತಿಭೆಗಳು ಆರಂಭದಲ್ಲೇ ಕ್ರೀಡಾ ಕ್ಷೇತ್ರದಿಂದ ದೂರ ಉಳಿಯುವ ಸಾಧ್ಯತೆ ಇದೆ. ಕ್ರೀಡಾ ಅವಕಾಶಗಳ ವಿಕೇಂದ್ರೀಕರಣದ ಬದಲು ಎಲ್ಲ ಸೌಲಭ್ಯಗಳನ್ನು ರಾಜಧಾನಿಗೆ ಕೇಂದ್ರೀಕರಿಸುವ ಕ್ರಮವು ಪ್ರಾದೇಶಿಕ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಜಿಲ್ಲೆಗೆ ಅನ್ಯಾಯವಾಗುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಇವರಿಗೆ ಜಿಲ್ಲೆಯ ಕ್ರೀಡಾಪಟುಗಳಿಗೆ ಕಾಳಜಿ ಇಲ್ಲವೇ? ಎಂದು ಸ್ಥಳೀಯ ಯುವ ಕ್ರೀಡಾಪಟುಗಳಾದ ಸೂರಜಕುಮಾರ್, ರಾಜೇಶ್ ಪ್ರಶ್ನಿಸುತ್ತಾರೆ.&lt;/p&gt;&lt;p&gt;ಜಿಲ್ಲೆಯ ಜನಪ್ರತಿನಿಧಿಗಳು, ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರೀಡಾಪಟುಗಳ ಭವಿಷ್ಯದ ಹಿತದೃಷ್ಟಿಯಿಂದ ಫುಟ್&zwnj;ಬಾಲ್ ಕ್ರೀಡಾ ವಸತಿ ನಿಲಯವನ್ನು ಬಳ್ಳಾರಿಯಲ್ಲಿಯೇ ಮುಂದುವರಿಸುವ ಕುರಿತು ಪೂರಕ ಕ್ರಮ ವಹಿಸಬೇಕಾಗಿದೆ.&lt;/p&gt;&lt;p&gt;ಫುಟ್&zwnj;ಬಾಲ್ ಕ್ರೀಡಾ ವಸತಿ ನಿಲಯ ಬೆಂಗಳೂರಿಗೆ ಸ್ಥಳಾಂತರಗೊಳಿಸಿರುವ ನಿಲುವಿನಿಂದ ಈ ಭಾಗದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು ಎನ್ನುತ್ತಾರೆ ಕಲ್ಯಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಆರ್&zwnj;. ಸಂತೋಷ್&zwnj; ರೆಡ್ಡಿ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/bellary-football-dormitory-shift-to-bengaluru-kalyana-karnataka-students-outraged-rav/articleshow-gmovt3y"/>
        </item>
        <item>
            <title><![CDATA[TB Dam: ರೈತರಿಗೆ ಶುಭ ಸುದ್ದಿ, ತುಂಗಭದ್ರೆಗೆ ಒಳಹರಿವು ಹೆಚ್ಚಳ! ಜಲಾಶಯದ ಇಂದಿನ ನೀರಿನ ಮಟ್ಟ ಎಷ್ಟು?]]></title>
            <link>https://kannada.asianetnews.com/karnataka-districts/tungabhadra-water-inflow-increase-what-is-the-reservoirs-water-level-today-rav/articleshow-htwnv7c</link>
            <guid isPermaLink="true">https://kannada.asianetnews.com/karnataka-districts/tungabhadra-water-inflow-increase-what-is-the-reservoirs-water-level-today-rav/articleshow-htwnv7c</guid>
            <pubDate>Wed, 08 Jul 2026 08:43:19 +0530</pubDate>
            <description><![CDATA[ಕಳೆದ ಎರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ, ಸೊರಗಿದ್ದ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಇದರಿಂದಾಗಿ ಮುಂಗಾರು ಬೆಳೆ ಕೈತಪ್ಪುವ ಭೀತಿಯಲ್ಲಿದ್ದ ಬಳ್ಳಾರಿ, ಕೊಪ್ಪಳ, ರಾಯಚೂರು ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwztj8027kn10ge23zrxtwcr,imgname-----------------------2026-07-08t082726.529-1783479476226.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;&lt;strong&gt;ಬಳ್ಳಾರಿ (ಜು.8):&lt;/strong&gt; ನೀರಿನ ಕೊರತೆಯಿಂದ ಸೊರಗಿದ್ದ ತುಂಗಭದ್ರಾ ಜಲಾಶಯ(Tungabhadra Reservoir)ಕ್ಕೆ ಕಳೆದ ಎರಡು ದಿನಗಳಿಂದ ಒಳಹರಿವು ಹೆಚ್ಚಿದ್ದು, ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಸೇರಿದಂತೆ ತುಂಗಭದ್ರಾ ಎಡ ಹಾಗೂ ಬಲದಂಡೆ ಕಾಲುವೆಗಳನ್ನು ಅವಲಂಬಿಸಿರುವ ಲಕ್ಷಾಂತರ ರೈತರಲ್ಲಿ ಹೊಸ ಆಶಾಕಿರಣ ಮೂಡಿಸಿದೆ.&lt;/p&gt;&lt;p&gt;ಈ ಬಾರಿ ಮುಂಗಾರು ಹಂಗಾಮಿನ ಬೆಳೆ ಕೈತಪ್ಪುವ ಭೀತಿ ಎದುರಿಸುತ್ತಿದ್ದ ರೈತರು ಈಗ ಜಲಾಶಯ ಭರ್ತಿಯಾಗಿ ಕಾಲುವೆಗಳಿಗೆ ನೀರು ಹರಿಯುವ ವಿಶ್ವಾಸದಲ್ಲಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ವಾರಗಳಿಂದ ಜಲಾಶಯದ ನೀರಿನ ಮಟ್ಟ ಕುಸಿದಿದ್ದರಿಂದ ಭತ್ತ, ಮೆಕ್ಕೆಜೋಳ, ಹತ್ತಿ ಹಾಗೂ ಇತರೆ ಮುಂಗಾರು ಬೆಳೆಗಳ ಬಿತ್ತನೆಗೆ ರೈತರು ಆತಂಕದಲ್ಲಿದ್ದರು. ಜಮೀನು ಹದಗೊಳಿಸುವುದು, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ನೀರಿನ ಅಭಾವದಿಂದ ಕೃಷಿ ಚಟುವಟಿಕೆ ಆರಂಭಿಸುವಲ್ಲಿ ಹಿಂಜರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಭತ್ತ ಹಾಗೂ ಒಣ ಮೆಣಸಿನಕಾಯಿ ಬೆಳೆಗಾರರು ಜಲಾಶಯದ ಕಾಲುವೆ ನೀರನ್ನೇ ಅವಲಂಬಿಸಿದ್ದು, ಈ ಬಾರಿ ಮಳೆ ತೀವ್ರ ಅಭಾವದಿಂದ ಮುಂಗಾರು ಬೆಳೆ ಕೈ ಕೊಟ್ಟಿತು ಎಂದೇ ಭಾವಿಸಿದ್ದರು. ಆದರೆ, ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಪರಿಣಾಮ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.&lt;/p&gt;&lt;p&gt;ಬಳ್ಳಾರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ತುಂತುರು ಮಳೆ ಸುರಿಯುತ್ತಿರುವುದು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ರೀತಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಲಿದೆ. ಶೀಘ್ರದಲ್ಲೇ ಕಾಲುವೆಗಳಿಗೆ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ. ಕಳೆದ ಎರಡು ದಿನಗಳಿಂದ ಗಣಿ ಜಿಲ್ಲೆಯ ಬಳ್ಳಾರಿಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.&lt;/p&gt;&lt;p&gt;ತುಂಗಭದ್ರಾ ಜಲಾಶಯದ ನೀರನ್ನೇ ಅವಲಂಬಿಸಿರುವ ಕೃಷಿ ಪ್ರದೇಶಗಳಲ್ಲಿ ಈಗ ರೈತರು ಪ್ರತಿದಿನ ಜಲಾಶಯದ ನೀರಿನ ಮಟ್ಟ ಹಾಗೂ ಮಲೆನಾಡಿನ ಮಳೆಯ ಮಾಹಿತಿಯನ್ನು ಕಾತರದಿಂದ ಗಮನಿಸುತ್ತಿದ್ದಾರೆ. ಜಲಾಶಯಕ್ಕೆ ನಿರಂತರವಾಗಿ ಒಳಹರಿವು ಮುಂದುವರಿದರೆ ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಕೃಷಿ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ಆದ್ಯಾಗೂ ಕೇವಲ ಆರಂಭಿಕ ಮಳೆಯ ಆಧಾರದಲ್ಲಿ ನಿರಾಳರಾಗಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ. ಮಲೆನಾಡಿನಲ್ಲಿ ನಿರಂತರವಾಗಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯ ಸಮರ್ಪಕವಾಗಿ ಭರ್ತಿಯಾಗಿ, ಸಂಪೂರ್ಣ ಮುಂಗಾರು ಹಂಗಾಮಿಗೆ ನೀರಿನ ಭದ್ರತೆ ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ರೈತರ ಕಣ್ಣು ಈಗ ಆಕಾಶದತ್ತ ಮಾತ್ರವಲ್ಲ, ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯತ್ತ ನೆಟ್ಟಿದೆ.&lt;/p&gt;&lt;p&gt;ಕಳೆದ ವರ್ಷ ಜಲಾಶಯದ ನೀರಿನ ಒಳಹರಿವು ಹಾಗೂ ಸದ್ಯದ ನೀರಿನ ಒಳಹರಿವು ಪ್ರಮಾಣ ಹೋಲಿಸಿದರೆ ಭಾರೀ ಪ್ರಮಾಣದ ವ್ಯತ್ಯಾಸವಿದೆ. ಇನ್ನು ಐದಾರು ದಿನ ಮಲೆನಾಡಿನಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯ ಭರ್ತಿಯಾಗಿ ಬೆಳೆಗಳಿಗೆ ನೀರು ದಕ್ಕುವ ಸಾಧ್ಯತೆಯಿದೆ. ಇಲ್ಲದೇ ಹೋದರೆ ಈ ಬಾರಿ ಮುಂಗಾರು ಹಂಗಾಮಿನ ಬೆಳೆಯಿಂದ ರೈತರು ವಂಚಿತರಾಗುವ ಆಸ್ಪದವಿದೆ ಎಂದು ರೈತ ಸಂಘಟನೆಗಳ ಮುಖಂಡರು ಹೇಳುತ್ತಾರೆ.&lt;/p&gt;&lt;p&gt;ಜುಲೈ1 ರಿಂದ 4ರವರೆಗೆ ಜಿಲ್ಲೆಯಲ್ಲಿ ಸಾಮಾನ್ಯ 150.8 ಮಿ.ಮೀ. ಮಳೆಯಾಗಬೇಕಿತ್ತು. 142 ಮಿ.ಮೀ. ಮಳೆಯಾಗಿದೆ. ಜುಲೈ 5 ಮತ್ತು 6ರಂದು ಜಿಲ್ಲೆಯ ವಿವಿಧೆಡೆ ಸಾಮಾನ್ಯ ಮಳೆಯಾಗಿರುವುದರಿಂದ ಬಿತ್ತನೆಗೆ ಭೂಮಿ ಹದಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.&lt;/p&gt;&lt;p&gt;ಈ ಹಿಂದೆ ಜಲಾಶಯದಲ್ಲಿ 14 ಟಿಎಂಸಿ ಸಂಗ್ರಹವಾಗುತ್ತಿದ್ದಂತೆಯೇ ರೈತರ ಬೆಳೆಗಳಿಗೆ ನೀರು ಬಿಡಲಾಗುತ್ತಿತ್ತು. ಆದರೆ, ಕೈಗಾರಿಕೆಗಳಿಗೆ ನೀರು ಒದಗಿಸಲು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಲಾಶಯಕ್ಕೆ ಕನಿಷ್ಠ 65 ಟಿಎಂಸಿ ಸಂಗ್ರಹವಾದರೆ ಮಾತ್ರ ಕಾಲುವೆಗಳಿಗೆ ನೀರು ಬಿಡಲಿದ್ದಾರೆ. ಕಳೆದ ವರ್ಷ 80 ಟಿಎಂಸಿ ಆಗುವವರೆಗೆ ನೀರು ಹರಿಸಲಿಲ್ಲ. ಮಲೆನಾಡಿನ ಮಳೆಯ ಮೇಲೆ ರೈತರ ಬೆಳೆಯ ಅಳಿವು-ಉಳಿವು ನಿಂತಿದೆ ಎನ್ನುತ್ತಾರೆ ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು.&lt;/p&gt;&lt;p&gt;ನೀರಿನ&zwnj;ಮಟ್ಟ:&lt;/p&gt;&lt;p&gt;ಗರಿಷ್ಠ ನೀರಿನ ಮಟ್ಟ: 1,633 ಅಡಿಇಂದಿನ ಮಟ್ಟ: 1,588.37 ಅಡಿಒಟ್ಟು ಸಾಮರ್ಥ್ಯ: 105.788 ಟಿಎಂಸಿಇಂದಿನ ನೀರಿನ ಮಟ್ಟ: 9.72 ಟಿಎಂಸಿಕಳೆದ ವರ್ಷದ ನೀರಿನ ಮಟ್ಟ: 76.71 ಟಿಎಂಸಿಈ ವರ್ಷದ ಒಟ್ಟು ಸಂಗ್ರಹ: 0.52 ಟಿಎಂಸಿಕಳೆದ ವರ್ಷದ ಒಟ್ಟು ಸಂಗ್ರಹ: 75.34 ಟಿಎಂಸಿಇಂದಿನ ಒಳಹರಿವು: 4,188 ಕ್ಯುಸೆಕ್ಕಳೆದ ವರ್ಷದ ಒಳಹರಿವು: 54,550 ಕ್ಯುಸೆಕ್ಇಂದಿನ ಹೊರಹರಿವು: 140 ಕ್ಯುಸೆಕ್&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/tungabhadra-water-inflow-increase-what-is-the-reservoirs-water-level-today-rav/articleshow-htwnv7c"/>
        </item>
        <item>
            <title><![CDATA[Vijayanagara: ಧರ್ಮಸಾಗರದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಾಸನ ಪತ್ತೆ, ಆದಿಮಾನವರ ವಾಸಸ್ಥಾನದ ಕುರುಹು ಪತ್ತೆ!]]></title>
            <link>https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</link>
            <guid isPermaLink="true">https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3</guid>
            <pubDate>Sat, 27 Jun 2026 17:32:56 +0530</pubDate>
            <description><![CDATA[ಹೊಸಪೇಟೆಯ ಧರ್ಮಸಾಗರ ಗ್ರಾಮದಲ್ಲಿ ಸಂಶೋಧನಾ ತಂಡವೊಂದು ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನ, ಆದಿಮಾನವರು ಬಳಸುತ್ತಿದ್ದ ಕಲ್ಲುಗೊಡಲಿಗಳು ಮತ್ತು 101 ಲಿಂಗಗಳಿರುವ ವಿಶಿಷ್ಟ ಗುಡಿಯನ್ನು ಪತ್ತೆಹಚ್ಚಿದೆ. ಈ ಅನ್ವೇಷಣೆಯು ವಿಜಯನಗರ ಕಾಲದ ಇತಿಹಾಸ ಮತ್ತು ಪ್ರಾಗೈತಿಹಾಸಿಕ ಕುರುಹುಗಳ ಮೇಲೆ ಹೊಸ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw4f9zpp7zkb7bhc4xxpg44s,imgname-vijayanagara-inscription-1782561701590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ:&lt;/strong&gt; ಜಿಲ್ಲೆಯ ಐತಿಹಾಸಿಕ ಶ್ರೀಮಂತಿಕೆಗೆ ಮತ್ತೊಂದು ಗರಿ ಎಂಬಂತೆ, ಹೊಸಪೇಟೆಯಿಂದ ಬಳ್ಳಾರಿಗೆ ಹಾದು ಹೋಗುವ ಮಾರ್ಗದಲ್ಲಿರುವ ಧರ್ಮಸಾಗರ ಗ್ರಾಮದಲ್ಲಿ ಅಪರೂಪದ ಕಪ್ಪು ಕಲ್ಲಿನ ಶಿಲಾಶಾಸನವೊಂದು ಪತ್ತೆಯಾಗಿದೆ. ಈ ಗ್ರಾಮವು ಕೇವಲ ಐತಿಹಾಸಿಕ ತಾಣವಷ್ಟೇ ಅಲ್ಲದೆ, ಆದಿಮಾನವನು ಇಲ್ಲಿ ವಾಸವಿದ್ದನು ಎನ್ನುವುದಕ್ಕೆ ಸ್ಪಷ್ಟ ಕುರುಹುಗಳನ್ನು ಒದಗಿಸುವ ಮೂಲಕ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ 'ವಿಜಯನಗರ ತಿರುಗಾಟ ಸಂಶೋಧನ ತಂಡ'ವು ಧರ್ಮಸಾಗರ ಗ್ರಾಮದ ನಿವಾಸಿ ಶಂಕರ ಅವರ ನೆರವಿನೊಂದಿಗೆ ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಮಹತ್ವದ ಅನ್ವೇಷಣೆ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ ಮತ್ತು ದಾನಶಾಸನಗಳು ಧರ್ಮಸಾಗರ ಗ್ರಾಮದ ಪಕ್ಕದಲ್ಲೇ ಇರುವ ಪಾಪಿನಾಯಕನಹಳ್ಳಿಯನ್ನು ವಿಜಯನಗರದ ಕಾಲಾವಧಿಯಲ್ಲಿ 'ಪಾಪನಾಯಕ' ಎಂಬ ಪಾಳೆಯಗಾರ ಆಳುತ್ತಿದ್ದನು ಎಂಬ ಮಾಹಿತಿ ಲಭ್ಯವಿದೆ. ಇದಕ್ಕೆ ಪೂರಕವಾಗಿ ಆ ಗ್ರಾಮದ ಚಾವಡಿಯ ಬಳಿ ಹಾಗೂ ಹೊರವಲಯದ ಅಂಕಾಲಮ್ಮ ದೇಗುಲದ ಕಂಬದ ಮೇಲಿರುವ ಶಿಲಾಶಾಸನಗಳು ಸಾಕ್ಷ್ಯ ನುಡಿಯುತ್ತವೆ.&lt;/p&gt;&lt;p&gt;ಇದರೊಂದಿಗೆ, ಸಮೀಪದ ಬೈಲುವದ್ದಿಗೆರೆ ಗ್ರಾಮದ ಆಂಜನೇಯ ದೇಗುಲದ ಬಳಿ ಪತ್ತೆಯಾಗಿರುವ ಗ್ರಾನೈಟ್ ಕಲ್ಲಿನ ಶಾಸನವು ವಿಜಯನಗರ ಸಾಮ್ರಾಜ್ಯದ ಇಮ್ಮಡಿ ದೇವರಾಯನ ಕಾಲದ್ದಾಗಿದೆ. ಇಮ್ಮಡಿ ದೇವರಾಯನ ಪತ್ನಿ ಅಟಣಲಾದೇವಿಯ ನೆನಪಿಗಾಗಿ 'ಅಂಣಲಾಪುರ' ಎಂಬ ಊರನ್ನು ಹಿತ್ತಿಲ ಬಾಗಿಲ ಮಲ್ಲದೇವರು ನಿರ್ಮಿಸಿ, ಆತನ ಹೆಸರಲ್ಲೇ ದಾನ ನೀಡಿದ ವಿವರಗಳು ಈ ಅಪ್ರಕಟಿತ ಶಾಸನದಲ್ಲಿವೆ.&lt;/p&gt;&lt;h2&gt;&lt;strong&gt;ಭಾಷಾ ಸಾಮರಸ್ಯಕ್ಕೆ ಸಾಕ್ಷಿ:&lt;/strong&gt;&lt;/h2&gt;&lt;p&gt;&lt;strong&gt;&amp;nbsp;&lt;/strong&gt;ಕೃಷ್ಣದೇವರಾಯನ ಕಾಲದ ಕೆರೆ ಶಾಸನ ಧರ್ಮಸಾಗರ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಹಾಸು ಬಂಡೆಕಲ್ಲಿನ ಮೇಲೆ ಕೃಷ್ಣದೇವರಾಯನ ಕಾಲದ ಮತ್ತೊಂದು ಪ್ರಕಟಿತ ಶಾಸನವಿದೆ. ಇದು ಕನ್ನಡ ಲಿಪಿಯಲ್ಲಿದ್ದರೂ, ತೆಲುಗು ಮಿಶ್ರಿತ ಭಾಷೆಯಲ್ಲಿದೆ. &quot;ಈ ದಾನಶಾಸನವು ವಿಜಯನಗರದ ಅರಸರು ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ, ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಿಗೆ ಸಮಾನ ಗೌರವ ನೀಡುತ್ತಿದ್ದರು ಎಂಬುದಕ್ಕೆ ಭದ್ರ ಪುರಾವೆಯಾಗಿದೆ&quot; ಎಂದು ಸಂಶೋಧನ ತಂಡದ ಪ್ರಮುಖರಾದ ಪ್ರೊ. ತಿಪ್ಪೇಸ್ವಾಮಿ ಎಚ್. ತಿಳಿಸಿದ್ದಾರೆ.&lt;/p&gt;&lt;p&gt;'ಕರೆಕಲ್ಲು ಮಾಗಣಿ' ಮತ್ತು ಆದಿಮಾನವರ ಕಾಲದ ಕಲ್ಲುಗೊಡಲಿಗಳು ಧರ್ಮಸಾಗರದಲ್ಲಿ ಆದಿಮಾನವನು ನೆಲೆಸಿದ್ದಕ್ಕೆ ಸಾಕ್ಷಿಯಾಗಿ ತಜ್ಞರು ಇಲ್ಲಿನ ಗುಡ್ಡದ ಮೆಟ್ಟಿಲು ಕಲ್ಲುಗಳ ರಚನೆಯನ್ನು ಗುರುತಿಸಿದ್ದಾರೆ. ಭೂವೈಜ್ಞಾನಿಕವಾಗಿ ಇವುಗಳನ್ನು 'ಡೊಲರೈಟ್ ಡೈಕ್' (ಕಪ್ಪು ಶಿಲೆ) ಮಾದರಿ ಎಂದು ಕರೆಯಲಾಗುತ್ತದೆ.&lt;/p&gt;&lt;p&gt;&lt;strong&gt;ಸ್ಥಳೀಯರ ನಂಬಿಕೆ: &lt;/strong&gt;ಶ್ರೀರಾಮ, ಲಕ್ಷ್ಮಣ ಮತ್ತು ಸೀತೆಯು ವನವಾಸದ ಸಂದರ್ಭದಲ್ಲಿ ಈ ಕಲ್ಲುಗುಡ್ಡದ ಮೇಲೆ ನಡೆದುಕೊಂಡು ಹೋಗಿದ್ದರಿಂದ ಇಲ್ಲಿನ ಕಲ್ಲುಗಳು ಕಪ್ಪಾಗಿವೆ ಎಂಬುದು ಗ್ರಾಮಸ್ಥರ ಗಾಢ ನಂಬಿಕೆಯಾಗಿದೆ. ಹೀಗಾಗಿಯೇ ಈ ಕಪ್ಪು ಗುಂಡುಕಲ್ಲುಗಳ ಸಮೂಹಕ್ಕೆ ಜನರು 'ಕರೆಕಲ್ಲು ಮಾಗಣಿ' ಎಂದು ಕರೆಯುತ್ತಾರೆ.&lt;/p&gt;&lt;p&gt;&lt;strong&gt;ಪುರಾತತ್ವ ಪುರಾವೆ:&lt;/strong&gt; ಕ್ಷೇತ್ರಕಾರ್ಯದ ವೇಳೆ ಇಲ್ಲಿ ಆದಿಮಾನವ ಬಳಸುತ್ತಿದ್ದ ಎನ್ನಲಾದ ಅತ್ಯಂತ ನುಣುಪಾದ ಕೆತ್ತನೆಯುಳ್ಳ ಕಲ್ಲುಗೊಡಲಿಗಳು (Stone Axes) ದೊರೆತಿವೆ.&lt;/p&gt;&lt;p&gt;ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವಿಂದ ಅವರ ಪ್ರಕಾರ, &quot;ಸ್ಥಳೀಯರ ಮಾಹಿತಿಯಂತೆ ಈ ಗುಡ್ಡದ ಇಳಿಜಾರಿನಲ್ಲಿ ಹಿಂದೆ 'ಹಳೆ ಊರು' ಇತ್ತು. ಅದಕ್ಕೆ ಪೂರಕವಾಗಿ ಅಲ್ಲಿ ವಾಸದ ಮನೆಗಳ ಹಳೆಯ ತಳಪಾಯದ ರಚನೆಗಳು, ಅನತಿ ದೂರದಲ್ಲೇ ಕೆರೆ ಹಾಗೂ ಕೆರೆಯ ತೂಬುಗಳು ಇಂದಿಗೂ ಕಾಣಸಿಗುತ್ತವೆ. ಆದರೆ, ಪ್ರಸ್ತುತ ಈ ಹಳೆಯ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ&quot; ಎಂದಿದ್ದಾರೆ.&lt;/p&gt;&lt;p&gt;ರಹಸ್ಯಮಯ 101 ಲಿಂಗಗಳ ಗುಡಿ ಗ್ರಾಮದ ಹೊರವಲಯದಲ್ಲಿ ಪೂರ್ವಭಿಮುಖವಾಗಿ ನಿರ್ಮಿಸಲಾದ ಒಂದು ಸಣ್ಣ ವಿಶಿಷ್ಟ ಗುಡಿಯಿದೆ. ಈ ಗರ್ಭಗುಡಿಯ ಗೋಡೆಗೆ ಶಿವಲಿಂಗದ ಆಕಾರ ಹೋಲುವ ಗುಂಡುಕಲ್ಲುಗಳಿವೆ. ಇದರ ಎಡ ಮತ್ತು ಬಲ ಬದಿಯಲ್ಲಿರುವ ಸಣ್ಣ ಹಾಗೂ ದೊಡ್ಡದಾದ ಒಟ್ಟು 101 ಗುಂಡುಕಲ್ಲುಗಳನ್ನೇ ಶಿವಲಿಂಗಗಳೆಂದು ಭಾವಿಸಿ ಇಲ್ಲಿನ ಭಕ್ತರು ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಮಹಾಶಿವರಾತ್ರಿಯ ಜಾಗರಣೆಯ ದಿನದಂದು ಈ ಗುಡಿಯಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ.&lt;/p&gt;&lt;p&gt;&lt;strong&gt;ಸಂಶೋಧಕರ ಅಪೀಲು: &lt;/strong&gt;&quot;ಧರ್ಮಸಾಗರದಲ್ಲಿ ದೊರೆತಿರುವ ಈ ಅಪರೂಪದ ಶಾಸನಗಳು, ಕಲ್ಲುಗೊಡಲಿಗಳು ಹಾಗೂ 101 ಲಿಂಗಗಳ ಗುಡಿಯಂತಹ ಐತಿಹಾಸಿಕ ಮತ್ತು ಪ್ರಾಗೈತಿಹಾಸಿಕ ಸ್ಮಾರಕಗಳನ್ನು ಸಂಬಂಧಪಟ್ಟ ಪುರಾತತ್ವ ಇಲಾಖೆಯು ತಕ್ಷಣವೇ ರಕ್ಷಿಸಬೇಕು. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸೂಕ್ತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು&quot; ಎಂದು ಸಂಶೋಧಕ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಈ ಯಶಸ್ವಿ ಕ್ಷೇತ್ರಕಾರ್ಯದಲ್ಲಿ ಸಂಶೋಧನ ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ಎಚ್, ಡಾ. ಗೋವಿಂದ, ಡಾ. ಕೃಷ್ಣೇಗೌಡ ಹಾಗೂ ಸಂಶೋಧಕರಾದ ಎಚ್. ರವಿ, ಅಶೋಕ್ ನಾಯಕ್ ದಿದ್ದಿಗಿ ಮತ್ತು ಇಸ್ಮಾಯಿಲ್ ಸಿದ್ದಿಕ್ ಪಾಲ್ಗೊಂಡಿದ್ದರು.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/vijayanagara-inscription-and-prehistoric-stone-axes-discovered-in-hosapete-dharmasagara-gdp/articleshow-ioh5pm3"/>
        </item>
        <item>
            <title><![CDATA[ಶಿಕ್ಷಕ ವೃತ್ತಿಗೆ ಮಸಿ ಬಳಿದ ರವಿಕಿರಣ್ ಲೆಕ್ಚರ್; ಪಿಯು ವಿದ್ಯಾರ್ಥಿನಿಗೆ ಮೋಸ ಮಾಡಿ ಪೊಲೀಸರಿಗೆ ಅಂದರ್!]]></title>
            <link>https://kannada.asianetnews.com/karnataka-districts/ballari-private-college-lecturer-arrested-for-allegedly-exploiting-student-under-pretext-of-marriage/articleshow-nyb3p2c</link>
            <guid isPermaLink="true">https://kannada.asianetnews.com/karnataka-districts/ballari-private-college-lecturer-arrested-for-allegedly-exploiting-student-under-pretext-of-marriage/articleshow-nyb3p2c</guid>
            <pubDate>Thu, 02 Jul 2026 23:40:03 +0530</pubDate>
            <description><![CDATA[ಬಳ್ಳಾರಿಯ ಖಾಸಗಿ ಕಾಲೇಜಿನ ಉಪನ್ಯಾಸಕ ರವಿಕಿರಣ್, ತನ್ನ ಪಿಯುಸಿ ವಿದ್ಯಾರ್ಥಿನಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿದ್ದಾನೆ. ತಾನು ವಿವಾಹಿತನೆಂಬ ಸತ್ಯ ಮುಚ್ಚಿಟ್ಟು, ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದೀಗ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwj07xbtehpm3tvc6cr9hsbs,imgname-ballari-lecturer-ravikiran-arrest-1783015667066.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: ವಿ&lt;/strong&gt;ದ್ಯಾ ದೇಗುಲದಲ್ಲಿ ಪಾಠ ಹೇಳಿಕೊಡಬೇಕಾದ ಗುರುವೊಬ್ಬ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಯ ಜಾಲಕ್ಕೆ ಬೀಳಿಸಿ, ನಂಬಿಕೆ ದ್ರೋಹ ಎಸಗಿದ ಘಟನೆ ಗಣಿ ನಾಡು ಬಳ್ಳಾರಿಯಲ್ಲಿ ಸಂಚಲನ ಮೂಡಿಸಿದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಸುಮ್ಮನಿರದ ಈ ಕಾಮುಕ ಉಪನ್ಯಾಸಕ, ತನ್ನ ಶಿಷ್ಯೆಯನ್ನೇ ದೈಹಿಕವಾಗಿ ಬಳಸಿಕೊಂಡು ಈಗ ಪೊಲೀಸರ ಅತಿಥಿಯಾಗಿದ್ದಾನೆ.&lt;/p&gt;&lt;h3&gt;&lt;strong&gt;ನಂಬಿಕೆ ದ್ರೋಹ!&lt;/strong&gt;&lt;/h3&gt;&lt;p&gt;ಬಳ್ಳಾರಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ಸಸ್ಯಶಾಸ್ತ್ರ (Botany) ವಿಭಾಗದ ಉಪನ್ಯಾಸಕ ರವಿಕಿರಣ್ (45) ಬಂಧಿತ ಆರೋಪಿ. ಈತ ಕಾಲೇಜಿನಲ್ಲಿ ಸಭ್ಯನಂತೆ ನಟಿಸುತ್ತಾ ವಿದ್ಯಾರ್ಥಿನಿಯರ ಮೇಲೆ ಕಣ್ಣಿಟ್ಟಿದ್ದ ಎನ್ನಲಾಗಿದೆ. 2025ರಲ್ಲಿ ಈತ ಮತ್ತು ಪಿಯುಸಿ ವಿದ್ಯಾರ್ಥಿನಿಯ ನಡುವೆ ಸ್ನೇಹ (Friendship) ಆರಂಭವಾಗಿತ್ತು. ಈ ಸ್ನೇಹವನ್ನೇ ಬಂಡವಾಳ ಮಾಡಿಕೊಂಡ ರವಿಕಿರಣ್, ತಾನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಪ್ರೇಮಪಾಶಕ್ಕೆ (Love Trap) ಸಿಲುಕಿಸಿದ್ದಾನೆ.&lt;/p&gt;&lt;h2&gt;&lt;strong&gt;ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿಕೃತಿ!&lt;/strong&gt;&lt;/h2&gt;&lt;p&gt;ಸಂತ್ರಸ್ತ ವಿದ್ಯಾರ್ಥಿನಿಯ ದೂರಿನ ಪ್ರಕಾರ, 2026ರ ಹೊತ್ತಿಗೆ ಇವರ ಸ್ನೇಹ ಗಾಢವಾಗಿತ್ತು. ಮದುವೆಯಾಗುತ್ತೇನೆ ಎಂದು ಪದೇ ಪದೇ ಆಕೆಗೆ ನಂಬಿಕೆ ದ್ರೋಹ ಎಸಗಿದ ರವಿಕಿರಣ್, ವಿದ್ಯಾರ್ಥಿನಿಯ ವಿರೋಧವಿದ್ದರೂ ಸಹ ಪದೇ ಪದೇ ನಿರ್ಜನ ಪ್ರದೇಶಗಳಿಗೆ (Isolated Areas) ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ತನಗೆ ಈಗಾಗಲೇ ಮದುವೆಯಾಗಿ ಮಕ್ಕಳಿರುವುದನ್ನು ಮುಚ್ಚಿಟ್ಟು ಅಥವಾ ಗೊತ್ತಿದ್ದರೂ ಸಹ ಮದುವೆಯಾಗುವೆ ಎಂಬ ಆಸೆ ತೋರಿಸಿ ಈ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;&lt;strong&gt;ಜೈಲು ಸೇರಿದ ಉಪನ್ಯಾಸಕ:&lt;/strong&gt;&lt;/h2&gt;&lt;p&gt;ಸದ್ಯ ಪದವಿ ಪೂರ್ವ ಶಿಕ್ಷಣ ಮುಗಿಸಿರುವ ವಿದ್ಯಾರ್ಥಿನಿ, ಉಪನ್ಯಾಸಕನ ನಿಜರೂಪ ತಿಳಿದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮುಕ ಉಪನ್ಯಾಸಕ ರವಿಕಿರಣ್&zwnj;ನನ್ನು ಅರೆಸ್ಟ್ ಮಾಡಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/ballari-private-college-lecturer-arrested-for-allegedly-exploiting-student-under-pretext-of-marriage/articleshow-nyb3p2c"/>
        </item>
        <item>
            <title><![CDATA[ಫೇಸ್-ಲೊಕೇಶನ್ ಹಾಜರಾತಿ ಎಫೆಕ್ಟ್‌: ನಿಗದಿತ ಸಮಯಕ್ಕೆ ಶಾಲೆ ಅಂಗಳದಲ್ಲಿ ಶಿಕ್ಷಕರು ಹಾಜರ್]]></title>
            <link>https://kannada.asianetnews.com/karnataka-districts/ai-based-face-location-attendance-system-effect-teachers-present-in-government-school-yard-at-the-scheduled-time-mrq/articleshow-oenw7qy</link>
            <guid isPermaLink="true">https://kannada.asianetnews.com/karnataka-districts/ai-based-face-location-attendance-system-effect-teachers-present-in-government-school-yard-at-the-scheduled-time-mrq/articleshow-oenw7qy</guid>
            <pubDate>Wed, 17 Jun 2026 08:06:30 +0530</pubDate>
            <description><![CDATA[ಬಳ್ಳಾರಿಯಲ್ಲಿ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಎಐ ಆಧಾರಿತ ಫೇಸ್-ಲೊಕೇಶನ್ ಹಾಜರಾತಿ ವ್ಯವಸ್ಥೆಯಿಂದಾಗಿ, ಶಿಕ್ಷಕರು ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗುತ್ತಿದ್ದಾರೆ. ಈ ಹೊಸ ನಿಯಮವು ಶಿಕ್ಷಕರ ಸಮಯಪ್ರಜ್ಞೆಯನ್ನು ಹೆಚ್ಚಿಸಿದ್ದು, ತಡವಾಗಿ ಬರುವ ಪ್ರವೃತ್ತಿಗೆ ಕಡಿವಾಣ ಹಾಕಿದೆ. ಇದೇ ವ್ಯವಸ್ಥೆಯನ್ನು ಶೀಘ್ರದಲ್ಲೇ ವಿದ್ಯಾರ್ಥಿಗಳಿಗೂ ಜಾರಿಗೊಳಿಸಲು ಇಲಾಖೆ ಮುಂದಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv9pw63bv5w7dj4qe8s3ekcx,imgname-teachers-1781663668331.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;&lt;strong&gt;ಬಳ್ಳಾರಿ: &lt;/strong&gt;ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್ ಲೊಕೇಶನ್ ಹಾಜರಾತಿ ಆದೇಶ ಗಣಿಜಿಲ್ಲೆ ಬಳ್ಳಾರಿಯಲ್ಲಿ ಯಶಸ್ವಿಯಾಗಿದ್ದು, ಸಮಯವಾಗುತ್ತಿದ್ದಂತೆಯೇ ಶಿಕ್ಷಕರು ಶಾಲೆಯತ್ತ ತರಾತುರಿಯಲ್ಲಿ ಓಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.&lt;/p&gt;&lt;p&gt;ಜೂ.1ರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಎಐ ಆಧರಿತ ಫೇಸ್ ಲೊಕೇಶನ್&zwnj; ಹಾಜರಾತಿ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಇಲಾಖೆಯ ಆದೇಶದನ್ವಯ ನಿಗದಿತ ಸಮಯ ಮೀರಿ ಶಾಲೆಗೆ ಬರುವ ಶಿಕ್ಷಕ ಸಿಬ್ಬಂದಿಗೆ ಆಕಸ್ಮಿಕ ರಜೆ ಎಂದು ಪರಿಗಣಿಸುತ್ತಿರುವುದರಿಂದ ಶಿಕ್ಷಕರು ತಡ ಮಾಡದೆ ಶಾಲೆಯತ್ತ ತರಾತುರಿಯ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದೆ.&lt;/p&gt;&lt;p&gt;ನೂತನ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಿದ ಬಳಿಕ ಶೇ.95 ಸಿಬ್ಬಂದಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಕೆಲವೆಡೆ ತಾಂತ್ರಿಕ ಸಮಸ್ಯೆಗಳಿದ್ದು, ಕ್ರಮೇಣವಾಗಿ ಸರಿಪಡಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.&lt;/p&gt;&lt;h2&gt;&lt;strong&gt;ಲೊಕೇಶನ್ ಹಾಜರಾತಿ ಕಡ್ಡಾಯ ಯಾಕಾಯ್ತು?&lt;/strong&gt;&lt;/h2&gt;&lt;p&gt;ಸರ್ಕಾರಿ ಶಾಲೆ ಶಿಕ್ಷಕರ ಪೈಕಿ ಶೇ.15ರಷ್ಟು ಜನರು ಸರಿಯಾದ ಸಮಯಕ್ಕೆ ಹಾಜರಾಗುತ್ತಿರಲಿಲ್ಲ. ಈ ಪೈಕಿ ಶೇ.5ರಷ್ಟು ಮಂದಿ ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು. ಶಿಕ್ಷಕರ ಸಂಘಟನೆ ಕೆಲಸ ನೆಪದಲ್ಲಿ ಹೊರಗಡೆ ಇರುತ್ತಿದ್ದರು. ಇನ್ನು ಶಾಲೆಗೆ ಹಾಜರಾಗುವ ಶಿಕ್ಷಕರು ಸಹ ತಡವಾಗಿ ಶಾಲೆಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಇನ್ನು ಮುಖ್ಯ ಶಿಕ್ಷಕರನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಡಿಡಿಪಿಐ ಕಚೇರಿ ಕೆಲಸ, ಬಿಇಒ ಕಚೇರಿ ಕೆಲಸ ಎಂದು ಹೇಳಿಕೊಂಡು ಶಾಲೆಯಿಂದ ಹೊರಗಡೆಯೇ ಹೆಚ್ಚಾಗಿ ಕಾಲ ಕಳೆಯುತ್ತಾರೆ ಎಂಬ ಆರೋಪಗಳಿದ್ದವು. ಲೋಕೇಶನ್ ಹಾಜರಾತಿ ಕಡ್ಡಾಯಗೊಳಿಸಿದ ಬಳಿಕ ಮುಖ್ಯಶಿಕ್ಷಕರು ಸೇರಿದಂತೆ ಶಾಲಾ ಸಿಬ್ಬಂದಿ ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ನಿತ್ಯ ದರ್ಶನ ನೀಡುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಕೆಲವರಿಗೆ ನುಂಗದ ತುತ್ತಾದ ಆದೇಶ&lt;/strong&gt;&lt;/h3&gt;&lt;p&gt;ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್ ಲೊಕೇಶನ್ ಹಾಜರಾತಿ ಆದೇಶದಿಂದ ಪೋಷಕರಿಗೆ ಸಂತಸವಾಗಿದ್ದರೆ ನಿರ್ದಿಷ್ಟ ಸಮಯಕ್ಕೆ ಶಾಲೆಗೆ ಬರದೆ, ರಾಜಕೀಯ ಮಾಡಿಕೊಂಡು ಓಡಾಡುವ, ಮುಖ್ಯ ಶಿಕ್ಷಕರ ಜೊತೆ ಹೊಂದಾಣಿಕೆ ಮಾಡಿಕೊಂಡು ತಡವಾಗಿ ಶಾಲೆಗೆ ತೆರಳುವ ಬೋಧಕರು ಹಾಗೂ ಕ್ಲರ್ಕ್ ಮತ್ತಿತರ ಸಿಬ್ಬಂದಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ನಿತ್ಯ ನಿಗದಿತ ಸಮಯದೊಳಗೆ ಶಾಲೆಗೆ ಆಗಮಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಂತೂ ಸರ್ಕಾರದ ಆದೇಶದಿಂದ ಸಂತಸಗೊಂಡಿದ್ದಾರೆ. ಶಾಲೆಗೆ ಕೆಲಸಕ್ಕೆ ಕಚೇರಿಗೆ ಹೋಗುವ ಮುಖ್ಯ ಶಿಕ್ಷಕರು ಒಒಡಿ (ಅನ್ಯತಾ ಕಾರ್ಯ) ಎಂದು ಕಡ್ಡಾಯವಾಗಿ ನಮೂದಿಸುತ್ತಿದ್ದಾರೆ.&lt;/p&gt;&lt;p&gt;ಫೇಸ್&zwnj;, ಲೊಕೇಶನ್ ಆಧಾರಿತ ಹಾಜರಾತಿ ಕುರಿತಂತೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ.ಎಂ. ತಿಪ್ಪೇಸ್ವಾಮಿ, ಸರ್ಕಾರದ ಆದೇಶ ಎಲ್ಲ ಕಡೆ ಜಾರಿಯಾಗಿದೆ. ಕೆಲವೆಡೆ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿರಬಹುದು. ಅದನ್ನು ನಿವಾರಿಸುವ ಕೆಲಸವೂ ನಡೆದಿದೆ ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಮಕ್ಕಳ ಫೇಸ್&zwnj; ಹಾಜರಾತಿ ಪ್ರಕ್ರಿಯೆಗೆ ಚಾಲನೆ&lt;/strong&gt;&lt;/h3&gt;&lt;p&gt;ಶಿಕ್ಷಕರ ಫೇಸ್&zwnj;-ಲೊಕೇಶನ್ ಹಾಜರಾತಿ ಅನುಷ್ಠಾನ ಬೆನ್ನಲ್ಲೇ ಮಕ್ಕಳ ಫೇಸ್ ಹಾಜರಾತಿ ಕಾರ್ಯಕ್ಕೂ ಶಿಕ್ಷಣ ಇಲಾಖೆ ಚಾಲನೆ ನೀಡಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಶುರುಗೊಳಿಸಲಾಗಿದ್ದು ಜುಲೈ 1 ರಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಫೇಸ್ ರಿಕಗ್ನಿಷನ್ ಹಾಜರಾತಿ ವ್ಯವಸ್ಥೆ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಖಚಿತಪಡಿಸಿದ್ದಾರೆ. ಇದರಿಂದ ಮೊಟ್ಟೆ, ಹಾಲು, ಬಿಸಿಯೂಟ ಯೋಜನೆಗೆ ವಿದ್ಯಾರ್ಥಿಗಳ ಸಂಖ್ಯೆಯ ಕಳ್ಳಲೆಕ್ಕ ತೋರಿಸುತ್ತಿದ್ದ ಕೆಲವು ಮುಖ್ಯಶಿಕ್ಷಕರ &quot;ಕಾರ್ಯ&quot; ವೈಖರಿಗೆ ಕಡಿವಾಣ ಬೀಳಲಿದೆ.&amp;nbsp;&lt;/p&gt;&lt;p&gt;ಬಳ್ಳಾರಿ ಜಿಲ್ಲೆಯ 720 ಸರ್ಕಾರಿ ಶಾಲೆಗಳಲ್ಲಿ 3271 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ai-based-face-location-attendance-system-effect-teachers-present-in-government-school-yard-at-the-scheduled-time-mrq/articleshow-oenw7qy"/>
        </item>
        <item>
            <title><![CDATA[ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ]]></title>
            <link>https://kannada.asianetnews.com/karnataka-districts/information-about-village-donations-to-hampi-temple-found-in-vijayanagara-era-inscription-in-kampli-ballari-mrq/articleshow-okyocdu</link>
            <guid isPermaLink="true">https://kannada.asianetnews.com/karnataka-districts/information-about-village-donations-to-hampi-temple-found-in-vijayanagara-era-inscription-in-kampli-ballari-mrq/articleshow-okyocdu</guid>
            <pubDate>Sun, 14 Jun 2026 07:38:56 +0530</pubDate>
            <description><![CDATA[&lt;p&gt;ವಿಜಯನಗರ ಸಾಮ್ರಾಜ್ಯದ 16ನೇ ಶತಮಾನದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kv1xtbacy1h22yaasd3cxynk,imgname-kampli-1781402512716.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಅವಧಿಗೆ ಸೇರಿದ ಮಹತ್ವದ ಶಾಸನವೊಂದು ಪತ್ತೆಯಾಗಿದೆ. ಈ ಪ್ರದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆಯ ಅಧ್ಯಯನಕ್ಕೆ ಹೊಸ ಬೆಳಕು ಚೆಲ್ಲಿದೆ.&lt;/p&gt;&lt;p&gt;ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;h2&gt;&lt;strong&gt;ಶಾಸನದಲ್ಲಿರುವ ಮಾಹಿತಿ ಏನು?&lt;/strong&gt;&lt;/h2&gt;&lt;p&gt;ಸುಮಾರು ಎಂಟು ಅಡಿ ಉದ್ದ, ಎರಡೂವರೆ ಅಡಿ ಅಗಲದ ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಶಾಸನವು ಆರು ಸಾಲುಗಳ ಬರಹವನ್ನು ಹೊಂದಿದೆ. ಪ್ರಾಚೀನ ಕನ್ನಡ ಲಿಪಿಯಲ್ಲಿ ಕೆತ್ತಲಾದ ಈ ಶಾಸನವು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದೆ. ಆ ಕಾಲದ ಆಡಳಿತ, ಧಾರ್ಮಿಕ ನಂಬಿಕೆ, ದಾನ ಧರ್ಮದ ವ್ಯವಸ್ಥೆಗಳ ಕುರಿತು ಮಹತ್ವದ ಮಾಹಿತಿ ಒಳಗೊಂಡಿದೆ.&lt;/p&gt;&lt;p&gt;ಶಾಸನದ ಮೇಲ್ಭಾಗದಲ್ಲಿ ತ್ರಿಶೂಲ, ಈಶ್ವರ, ನಂದಿ, ಸೂರ್ಯ, ಚಂದ್ರರ ಆಕೃತಿಗಳನ್ನು ಕೆತ್ತಲಾಗಿದೆ. ಇವು ವಿಜಯನಗರ ಕಾಲದ ಧಾರ್ಮಿಕ ಸಂಕೇತಗಳಾಗಿವೆ. ದೇವಾಲಯಗಳಿಗೆ ಸಂಬಂಧಿಸಿದ ದಾನ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶಗಳಾಗಿವೆ. ಶಾಸನದ ಕೆಳಭಾಗದಲ್ಲಿ ಗೋವಿನ ಚಿತ್ರವನ್ನು ಕೆತ್ತಲಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಆ ಚಿತ್ರ ಬಹುತೇಕ ಅಳಿಸಿಹೋಗಿದೆ.&lt;/p&gt;&lt;p&gt;ಇತಿಹಾಸ ಉಪನ್ಯಾಸಕ ಜೀರಿಗನೂರಿನ ಕೆ. ಆಂಜಿನೇಯ್ಯ ಮಾಹಿತಿ ನೀಡಿ, ಈ ಶಾಸನವು ಈಗಾಗಲೇ ಪುರಾತತ್ವ ಇಲಾಖೆಯ ದಾಖಲೆಗಳಲ್ಲಿ ಪ್ರಕಟಿತಗೊಂಡಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಮೈಸೂರಿನ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಪ್ರಕಟಿಸಿದ ಇನ್&zwnj;ಸ್ಕ್ರಿಪ್ಷನ್ಸ್ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಕೃತಿಯಲ್ಲಿ ಈ ಶಾಸನದ ಪಠ್ಯ ದಾಖಲೆಯಾಗಿದೆ ಎಂದರು.&lt;/p&gt;&lt;h3&gt;&lt;strong&gt;ಎಚ್ಚರಿಕೆ ಸಂದೇಶವುಳ್ಳ ಶಾಸನ&lt;/strong&gt;&lt;/h3&gt;&lt;p&gt;ಶಾಸನದ ವಿಷಯದ ಪ್ರಕಾರ, ಅಂದಿನ ಗೊನಹಾಳ (ಈಗಿನ ಗೋನಾಳ) ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ದಾನವಾಗಿ ನೀಡಲಾಗಿತ್ತು. ದೇವಾಲಯಕ್ಕೆ ಸಲ್ಲಿಕೆಯಾಗಿದ್ದ ಗ್ರಾಮದ ಹಕ್ಕುಗಳು ಮತ್ತು ಆಸ್ತಿಯನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು ಎಂಬ ಎಚ್ಚರಿಕೆಯ ಸಂದೇಶವನ್ನು ಈ ಶಾಸನದಲ್ಲಿ ದಾಖಲಿಸಲಾಗಿದೆ. ದೇವಾಲಯಗಳ ಆರ್ಥಿಕ ಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಇಂತಹ ಶಾಸನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುತ್ತಿತ್ತು ಎಂದು ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ. ಇದೇ ಗ್ರಾಮದಲ್ಲಿ ಇನ್ನೊಂದು ಶಾಸನ ದೊರೆತಿರುವ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದ್ದು, ಅದು ಪ್ರಸ್ತುತ ಮಣ್ಣಿನಡಿ ಹೂತುಹೋಗಿರುವ ಸಾಧ್ಯತೆ ಇದೆ. ಆ ಶಾಸನವನ್ನು ಪತ್ತೆಹಚ್ಚಿ ಸಂರಕ್ಷಿಸುವ ಅಗತ್ಯವಿದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಲಕ್ಕುಂಡಿ ಮಣ್ಣಲ್ಲಿ ಅಡಗಿದ್ದ ಚಾಲುಕ್ಯರ ರಹಸ್ಯ ಪತ್ತೆ! 13 ಸಾಲುಗಳಲ್ಲಿ ಕನ್ನಡ ಶಾಸನ, ಜಗದೇಕಮಲ್ಲನ ಆಳ್ವಿಕೆ ಉಲ್ಲೇಖ&lt;/strong&gt;&lt;/p&gt;&lt;p&gt;ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಮಾತನಾಡಿ, ಗೊನಹಾಳ ಗ್ರಾಮವನ್ನು ಹಂಪಿಯ ವಿರೂಪಾಕ್ಷ ದೇವರಿಗೆ ದಾನವಾಗಿ ನೀಡಿರುವುದನ್ನು ದಾಖಲಿಸುವ ಉದ್ದೇಶದಿಂದ ಈ ಶಾಸನವನ್ನು ಸ್ಥಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದು ಒಂದು ರೀತಿಯ ನಾಮಫಲಕ ಅಥವಾ ಗಡಿ ಗುರುತು ಶಾಸನವಾಗಿದ್ದು, ದೇವಾಲಯದ ಆಸ್ತಿಯ ರಕ್ಷಣೆಗೆ ಸಂಬಂಧಿಸಿದ ಮಹತ್ವದ ದಾಖಲೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕನ್ನಡಿಗರೇ, ಕನ್ನಡದ ಮೊದಲ ಹಲ್ಮಿಡಿ ಶಾಸನ ನೋಡಬೇಕೆ? ಕೇವಲ 5 ದಿನ ಅವಕಾಶವಿದೆ, ತಪ್ಪದೇ ಇಲ್ಲಿಗೆ ಭೇಟಿ ನೀಡಿ!&lt;/strong&gt;&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/information-about-village-donations-to-hampi-temple-found-in-vijayanagara-era-inscription-in-kampli-ballari-mrq/articleshow-okyocdu"/>
        </item>
        <item>
            <title><![CDATA[ಬಳ್ಳಾರಿಯಲ್ಲಿ ಸಿಕ್ಕ ಬಂಡೆಯಲ್ಲಿ ಬಯಲಾಯ್ತು 17ನೇ ಶತಮಾನದ ನಿಗೂಢ ರಹಸ್ಯ, 8 ಸಾಲಿನ ಅಪರೂಪದ ಶಾಸನ ಪತ್ತೆ!]]></title>
            <link>https://kannada.asianetnews.com/karnataka-districts/karnataka-news-17th-century-palegar-era-inscription-found-in-somasamudra-ballari-gdp/articleshow-qtgwwr1</link>
            <guid isPermaLink="true">https://kannada.asianetnews.com/karnataka-districts/karnataka-news-17th-century-palegar-era-inscription-found-in-somasamudra-ballari-gdp/articleshow-qtgwwr1</guid>
            <pubDate>Fri, 12 Jun 2026 13:01:54 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಕೃಷಿ ಜಮೀನೊಂದರಲ್ಲಿ 17ನೇ ಶತಮಾನಕ್ಕೆ ಸೇರಿದ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದೆ. ಪಾಳೆಗಾರರ ಕಾಲದ್ದೆಂದು ಅಂದಾಜಿಸಲಾದ ಈ ಶಾಸನವು, ಸ್ಥಳೀಯ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಮಹತ್ವದ ದಾಖಲೆಯಾಗಿದ್ದು, ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxbrt1jah4ad1e014kr31hj,imgname-inscription-found-in-somasamudra-1781249370162.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ 17ನೇ ಶತಮಾನಕ್ಕೆ ಸೇರಿದ ಅತ್ಯಂತ ಅಪರೂಪದ ಶಿಲಾಶಾಸನವೊಂದು ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳು ಹಾಗೂ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸ್ಥಳೀಯ ಇತಿಹಾಸವನ್ನು ಪುನರ್ ನಿರ್ಮಿಸುವ ದೃಷ್ಟಿಯಿಂದ ಈ ಶಾಸನವು ಅತ್ಯಂತ ಮಹತ್ವದ ಮತ್ತು ಮೌಲ್ಯಯುತ ದಾಖಲೆಯಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h2&gt;ಜಮೀನಿನ ಹಾಸು ಬಂಡೆಯ ಮೇಲೆ ಪತ್ತೆಯಾದ ಶಾಸನ&lt;/h2&gt;&lt;p&gt;ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ವೀರಾಂಜನೇಯ ಕ್ಯಾಂಪ್&zwnj;ಗೆ ಹೊಂದಿಕೊಂಡಿರುವ ಸಿದ್ದನಗೌಡ ಎಂಬುವವರಿಗೆ ಸೇರಿದ ಕೃಷಿ ಜಮೀನಿನಲ್ಲಿ ಬುಧವಾರ ಈ ಶಾಸನ ಪತ್ತೆಯಾಗಿದೆ. ಜಮೀನಿನಲ್ಲಿದ್ದ ದೊಡ್ಡದೊಂದು ಹಾಸು ಬಂಡೆಯ ಮೇಲೆ ಈ ಐತಿಹಾಸಿಕ ದಾಖಲೆಯನ್ನು ಕೆತ್ತಲಾಗಿದೆ. ಬಂಡೆಯ ಮೇಲೆ ಸುಂದರವಾದ ನಂದಿ ಮೂರ್ತಿಯ ಶಿಲ್ಪವನ್ನು ಕೆತ್ತಲಾಗಿದ್ದು, ಆ ಶಿಲ್ಪದ ಸುತ್ತಲೂ ಹಾಗೂ ಕೆಳಭಾಗದಲ್ಲಿ 8 ಸಾಲುಗಳಿರುವ ಸುದೀರ್ಘ ಶಾಸನವನ್ನು ಬರೆಯಲಾಗಿದೆ.&lt;/p&gt;&lt;h2&gt;ಪಾಳೆಗಾರರ ಕಾಲದ ಇತಿಹಾಸಕ್ಕೆ ಸಾಕ್ಷಿ&lt;/h2&gt;&lt;p&gt;ಈ ಶಾಸನದ ಲಿಪಿಯ ವಿಕಾಸ ಮತ್ತು ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು 17ನೇ ಶತಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಜ್ಞರು ಪ್ರಾಥಮಿಕ ಅಂದಾಜು ಮಾಡಿದ್ದಾರೆ. ಆ ಕಾಲಘಟ್ಟದಲ್ಲಿ ಬಳ್ಳಾರಿ ಮತ್ತು ಕುರುಗೋಡು ಸುತ್ತಮುತ್ತಲಿನ ಭಾಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದ ಸ್ಥಳೀಯ ಪಾಳೆಗಾರರ ರಾಜವಂಶ ಅಥವಾ ಅವರ ಆಡಳಿತಾವಧಿಗೆ ಈ ಶಾಸನವು ಸಂಬಂಧಿಸಿರಬಹುದು ಎಂದು ಹೇಳಲಾಗಿದೆ.&lt;/p&gt;&lt;p&gt;ಈ ಕುರಿತು ಮೈಸೂರು ಪ್ರಾಚ್ಯವಸ್ತು ಇಲಾಖೆಯ ಸಹಾಯಕ ಅಧೀಕ್ಷಕರು ಹಾಗೂ ಶಾಸನ ತಜ್ಞರಾದ ಅನಿಲಕುಮಾರ್ ಅವರು ಮಾತನಾಡಿ, ಸದ್ಯ ಮಣ್ಣಿನಲ್ಲಿ ಹೂತುಹೋಗಿರುವ ಇಂತಹ ಹಳೆಯ ಶಾಸನಗಳನ್ನು ಸಂಪೂರ್ಣವಾಗಿ ಹೊರತೆಗೆದು, ಸ್ವಚ್ಛಗೊಳಿಸಿ ಆಳವಾದ ಅಧ್ಯಯನಕ್ಕೆ ಒಳಪಡಿಸಿದರೆ, ಈ ಭಾಗದ ಸ್ಥಳೀಯ ಇತಿಹಾಸ, ಸಂಸ್ಕೃತಿ ಮತ್ತು ಅಂದಿನ ಆಡಳಿತ ವ್ಯವಸ್ಥೆಯ ಕುರಿತು ಮತ್ತಷ್ಟು ರೋಚಕ ಹಾಗೂ ಮಹತ್ವದ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸ್ಥಳೀಯರ ಒತ್ತಾಯ&lt;/h2&gt;&lt;p&gt;ತಮ್ಮ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿರುವ ಈ ಅಪರೂಪದ ಐತಿಹಾಸಿಕ ಸಂಕೇತವನ್ನು ಸಂರಕ್ಷಿಸಬೇಕು ಎಂಬ ಧ್ವನಿ ಈಗ ಸ್ಥಳೀಯವಾಗಿ ಬಲವಾಗಿ ಕೇಳಿಬರುತ್ತಿದೆ. ಈ ಶಾಸನವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ಅಡಗಿರುವ ಇತಿಹಾಸದ ಸತ್ಯಗಳನ್ನು ಸಾರ್ವಜನಿಕರ ಮುಂದೆ ತರಲು ಜಿಲ್ಲಾಡಳಿತ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ಗ್ರಾಮದ ಪ್ರಮುಖರಾದ ಎರಿಸ್ವಾಮಿ, ಶ್ರೀನಿವಾಸ, ಸೋಮಶೇಖರ್, ಸಿದ್ದನಗೌಡ, ಗಾದಿಲಿಂಗನಗೌಡ ಮತ್ತು ಗಣೇಶ್ ಜಂಟಿಯಾಗಿ ಒತ್ತಾಯಿಸಿದ್ದಾರೆ. ಇತಿಹಾಸದ ಕೊಂಡಿಯಾಗಿರುವ ಈ ಶಾಸನವು ಮುಂದಿನ ದಿನಗಳಲ್ಲಿ ಕುರುಗೋಡು ತಾಲೂಕಿನ ಸಾಂಸ್ಕೃತಿಕ ಹಿನ್ನೆಲೆಗೆ ಹೊಸ ಆಯಾಮ ನೀಡುವ ಸಾಧ್ಯತೆ ದಟ್ಟವಾಗಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-news-17th-century-palegar-era-inscription-found-in-somasamudra-ballari-gdp/articleshow-qtgwwr1"/>
        </item>
        <item>
            <title><![CDATA[ಜಮೀನಿಗೆ ತೆರಳಲು ಸ್ವಂತ ಹಣದಲ್ಲಿ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿಕೊಂಡ ರೈತರು]]></title>
            <link>https://kannada.asianetnews.com/karnataka-districts/ballari-farmers-built-a-3-pointc5-km-long-road-with-their-own-money-to-reach-their-farms-mrq/articleshow-rr9puf3</link>
            <guid isPermaLink="true">https://kannada.asianetnews.com/karnataka-districts/ballari-farmers-built-a-3-pointc5-km-long-road-with-their-own-money-to-reach-their-farms-mrq/articleshow-rr9puf3</guid>
            <pubDate>Mon, 22 Jun 2026 06:20:00 +0530</pubDate>
            <description><![CDATA[ಕುರುಗೋಡಿನ ಮುಷ್ಟಗಟ್ಟೆ ಕಾಲುವೆ ವ್ಯಾಪ್ತಿಯ ರೈತರು, ತಮ್ಮ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆ ಹಾಳಾಗಿದ್ದರಿಂದ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ಸ್ವಯಂ ಪ್ರೇರಿತರಾಗಿದ್ದಾರೆ. ಸುಮಾರು 150 ರೈತರು ಒಟ್ಟಾಗಿ ₹3 ಲಕ್ಷ ಸಂಗ್ರಹಿಸಿ, 3.5 ಕಿ.ಮೀ. ಉದ್ದದ ರಸ್ತೆಯನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಂಡು ಮಾದರಿಯಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvpcpv94x1mgmgmzch42dd4r,imgname-ballari-farmers--1782089215268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುರುಗೋಡು: &lt;/strong&gt;ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ಬರುವ ಮುಷ್ಟಗಟ್ಟೆ ಕಾಲುವೆ ವ್ಯಾಪ್ತಿಯ ರೈತರು ತಮ್ಮ ಜಮೀನುಗಳಿಗೆ ಹೋಗುವ ಸರ್ವಿಸ್ ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿ ಇಲಾಖೆಯ ಗಮನ ಸೆಳೆದಿದ್ದಾರೆ.&lt;/p&gt;&lt;p&gt;ಈ ಕಾಲುವೆ ಇರುವ ಮೂರೂವರೆ ಕಿ.ಮೀ. ರಸ್ತೆ ದಾಟಿ ಹೋದರೆ 500 ಎಕರೆ ಕೃಷಿ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಿದೆ. ಕಾಲುವೆಗೆ ಹೊಂದಿಕೊಂಡು ನಿರ್ಮಿಸಿರುವ ಸರ್ವಿಸ್ ರಸ್ತೆಯಲ್ಲಿ ಮೊಣಕಾಲೆತ್ತರದ ಗುಂಡಿಗಳು ನಿರ್ಮಾಣವಾಗಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ಸಂಗ್ರಹವಾಗಿ ರಸ್ತೆ ಕಾಣದಂತಾಗುತ್ತಿತ್ತು. ಗ್ರಾಮದ ರೈತರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಜಮೀನುಗಳಿಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿತ್ತು. ಕೃಷಿ ಚಟುವಟಿಕೆಗಾಗಿ ನಿತ್ಯ ಓಡಾಡುವ ರೈತರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಘಟನೆಗಳು ಜರುಗಿವೆ.&lt;/p&gt;&lt;h2&gt;&lt;strong&gt;150 ರೈತರಿಂದ 3 ಲಕ್ಷ ಹಣ ಸಂಗ್ರಹ&lt;/strong&gt;&lt;/h2&gt;&lt;p&gt;ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ರೈತರು ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. 150 ರೈತರು ಎಕರೆಗೆ ₹2000ದಂತೆ ಹಣ ಹಾಕಿ ಒಟ್ಟು ₹3 ಲಕ್ಷ ಸಂಗ್ರಹಿಸಿದ್ದಾರೆ. ಟ್ರ್ಯಾಕ್ಟರ್, ಜೆಸಿಬಿ ಯಂತ್ರಗಳ ನೆರವಿನಿಂದ ಗ್ರಾವೆಲ್ ಬಳಸಿ ೩.೫ ಕಿ.ಮೀ ರಸ್ತೆ ದುರಸ್ತಿ ಮಾಡಿ ಮಾದರಿಯಾಗಿದ್ದಾರೆ.&lt;/p&gt;&lt;p&gt;ಕಳೆದ ಮೂರು ವರ್ಷಗಳ ಹಿಂದೆ ನಾವೇ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿಕೊಂಡಿದ್ದೆವು. ಕಳೆದ ವರ್ಷ ಸುರಿದ ಭಾರಿ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿ ನಿರ್ಮಾಣವಾಗಿದ್ದವು. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸದ ಕಾರಣ ನಾವೇ ದುರಸ್ತಿಗೆ ಮುಂದಾಬೇಕಾಯಿತು ಎನ್ನುತ್ತಾರೆ ಇಲ್ಲಿನ ರೈತರು.&lt;/p&gt;&lt;p&gt;ಈ ವೇಳೆ ರೈತರಾದ ತಂಗಿ ಸುರೇಶಪ್ಪ, ಬಸವರಾಜ, ಕರೆಪ್ಪ, ನಾಗರಾಜ, ಮೂರುಣ್ಣೆ ಬಸವರಾಜ, ಪೂಜಾರಿ ಸಿದ್ದಬಸಪ್ಪ, ಪೂಜಾರಿ ಗಂಗಾಧರ, ಶೀಲಪ್ಪನವರ ವೀರೇಶ, ಟಿ.ಮಲ್ಲಿಕಾರ್ಜುನ, ಗೊಲ್ಲರ ನಾಗರಾಜ ಮತ್ತಿತರರಿದ್ದರು.&lt;/p&gt;&lt;h3&gt;&lt;strong&gt;ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯ&lt;/strong&gt;&lt;/h3&gt;&lt;p&gt;ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ತಕ್ಷಣವೇ ಇತ್ತ ಕಡೆ ಗಮನಹರಿಸಿರಲಿಲ್ಲ. ರೈತರು ಸ್ವಂತ ಹಣದಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದೇವೆ ಎನ್ನುತ್ತಾರೆ ರೈತ ಕರೆಪ್ಪನವರ ಲೋಕೇಶ.&lt;/p&gt;&lt;p&gt;ರೈತರ ಜಮೀನುಗಳಿಗೆ ತೆರಳುವ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ರಸ್ತೆ ದುರಸ್ತಿ ಮಾಡಿಸಲಾಗುವುದು ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆಯ ಎಇಇ ಜಿ.ರಾಮರೆಡ್ಡಿ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ballari-farmers-built-a-3-pointc5-km-long-road-with-their-own-money-to-reach-their-farms-mrq/articleshow-rr9puf3"/>
        </item>
        <item>
            <title><![CDATA[ಕಾಪಾಡಿ, ಕಾಪಾಡಿ ಎಂದು ಕಂಬದ ಮೇಲೆಯೇ ಪ್ರಾಣಬಿಟ್ಟ ಕಾರ್ಮಿಕ ; ಹೃದಯ ವಿದ್ರಾವಕ ಘಟನೆ]]></title>
            <link>https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n</link>
            <guid isPermaLink="true">https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n</guid>
            <pubDate>Thu, 09 Jul 2026 12:05:55 +0530</pubDate>
            <description><![CDATA[&lt;p&gt;ಬಳ್ಳಾರಿಯ ಸಂಗನಕಲ್ ಗ್ರಾಮದ ಬಳಿ, ಜೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ಹುಲಗಪ್ಪ ಎಂಬ 22 ವರ್ಷದ ಯುವಕ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಸುರಕ್ಷತಾ ಕ್ರಮಗಳಿಲ್ಲದೆ, ಲೈನ್ ಕ್ಲಿಯರೆನ್ಸ್ ಪಡೆಯದೆ ಕಂಬ ಹತ್ತಿಸಿದ್ದರಿಂದ, ಆತ ಸುಮಾರು 15 ನಿಮಿಷಗಳ ಕಾಲ ನರಳಾಡಿ ಪ್ರಾಣ ಬಿಟ್ಟಿದ್ದಾನೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx2s9c77bq4pwezqz9d0jewn,imgname-ballari-lineman-1783578800359.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಳ್ಳಾರಿ: ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿಯಾಗಿದೆ. &amp;nbsp;&quot;ಕಾಪಾಡಿ.. ಕಾಪಾಡಿ..&quot; ಎಂದು ಕಂಬದ ಮೇಲೆಯೇ ನರಳಾಡುತ್ತಾ, ಜೀವ ಉಳಿಸಿಕೊಳ್ಳಲು ಹೋರಾಡಿದ ಯುವಕನೊಬ್ಬ ಆಸರೆಯಿಲ್ಲದೆ ಕಂಬದ ಮೇಲೆಯೇ ನೇತಾಡಿ ಪ್ರಾಣಬಿಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ಬಳಿ ನಡೆದಿದೆ.&lt;/p&gt;&lt;h2&gt;&lt;strong&gt;ಹೃದಯ ವಿದ್ರಾವಕ ಸಾವು&lt;/strong&gt;&lt;/h2&gt;&lt;p&gt;ಬಳ್ಳಾರಿ ಜಿಲ್ಲೆಯ ಯರ್ರಗುಡಿ ಗ್ರಾಮದ ನಿವಾಸಿ ಹುಲಗಪ್ಪ (22) ಮೃತಪಟ್ಟ ದುರ್ದೈವಿ. ಬಡತನದ ಹಿನ್ನೆಲೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಈ ಯುವಕನಿಗೆ ಸಾವು ಇಷ್ಟು ಭೀಕರವಾಗಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸಂಗನಕಲ್ ಗ್ರಾಮದ ಧ್ಯಾನ ಮಂದಿರದ ಬಳಿ ವಿದ್ಯುತ್ ಲೈನ್ ಸರಿಪಡಿಸಲು ಈತನನ್ನು ಕಂಬ ಹತ್ತಿಸಲಾಗಿತ್ತು.&lt;/p&gt;&lt;h3&gt;&lt;strong&gt;15 ನಿಮಿಷಗಳ ಕಾಲ ಸಾವಿನ ಕಿರುಚಾಟ!&lt;/strong&gt;&lt;/h3&gt;&lt;p&gt;ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಹೈವೋಲ್ಟೇಜ್ ಕರೆಂಟ್ ತಗುಲಿದ ಪರಿಣಾಮ ಹುಲಗಪ್ಪ ಕಂಬದ ಮೇಲೆಯೇ ಸಿಲುಕಿಕೊಂಡಿದ್ದಾನೆ. ಮೈ ನಡುಗಿಸುವ ಈ ದೃಶ್ಯ ನೋಡುಗರ ಎದೆ ಒಡೆಯುವಂತಿತ್ತು. ಸುಮಾರು 15 ನಿಮಿಷಗಳ ಕಾಲ ಹುಲಗಪ್ಪ ನನ್ನನ್ನು ಉಳಿಸಿ.. ಯಾರಾದರೂ ಕಾಪಾಡಿ ಎಂದು ಕಿರುಚಾಡಿದ್ದಾನೆ. ಆದರೆ ಕೆಳಗೆ ನಿಂತಿದ್ದ ಇತರ ಕಾರ್ಮಿಕರು ಅಸಹಾಯಕರಾಗಿ ನೋಡುತ್ತಿದ್ದರೇ ಹೊರತು, ಆತನನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಸರಿಯಾದ ಸುರಕ್ಷತಾ ಸಾಧನಗಳಿಲ್ಲದೆ, ಅಧಿಕಾರಿಗಳ ಮಾರ್ಗದರ್ಶನವಿಲ್ಲದೆ ಆ ಯುವಕ ನರಳಾಡಿ ನರಳಾಡಿ ಕಂಬದ ಮೇಲೆಯೇ ಶವವಾಗಿದ್ದಾನೆ.&lt;/p&gt;&lt;h3&gt;&lt;strong&gt;ಜೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ&lt;/strong&gt;&lt;/h3&gt;&lt;p&gt;ಈ ಸಾವಿಗೆ ಜೆಸ್ಕಾಂ (JESCOM) ಅಧಿಕಾರಿಗಳು ಮತ್ತು ಲೇಬರ್ ಗುತ್ತಿಗೆದಾರನ ನೇರ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಲೈನ್ ಸರಿಪಡಿಸುವ ಮೊದಲು ಲೈನ್ ಕ್ಲಿಯರೆನ್ಸ್ (LC - Line Clearance) ಪಡೆಯುವುದು ಕಡ್ಡಾಯ. ಆದರೆ ಅಧಿಕಾರಿಗಳು ಎಲ್&zwnj;ಸಿ ಪಡೆಯದೆಯೇ ಹುಲಗಪ್ಪನನ್ನು ಕಂಬ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೆ, ಅಪಾಯಕಾರಿ ಕೆಲಸ ನಡೆಯುವಾಗ ಸ್ಥಳದಲ್ಲಿ ಯಾವುದೇ ಲೈನ್ ಮ್ಯಾನ್ ಅಥವಾ ಜವಾಬ್ದಾರಿಯುತ ಅಧಿಕಾರಿ ಇರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;p&gt;ಮೃತ ಹುಲಗಪ್ಪನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ಯುವಕ, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹೆಣವಾಗಿ ಮನೆಗೆ ಮರಳಿದ್ದಾನೆ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಡವರ ಜೀವಕ್ಕೆ ಬೆಲೆಯೇ ಇಲ್ಲವೇ? ಎಂದು ಸಾರ್ವಜನಿಕರು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/ballari/heart-touching-incident-in-ballari-worker-died-on-electric-poll-due-to-power-shocked/articleshow-t5p330n"/>
        </item>
        <item>
            <title><![CDATA[ಊರಿಗೆ ಶುದ್ಧ ನೀರು ಕೊಟ್ಟ ಕೆರೆಗೆ ಸಿಕ್ಕಿದ್ದು ತ್ಯಾಜ್ಯ! ತಿಪ್ಪೆಗುಂಡಿಯಾದ ಸಿರಿಗೆರೆ ಪುರಾತನ ಕೆರೆ!]]></title>
            <link>https://kannada.asianetnews.com/karnataka-districts/ancient-lake-in-sirigeri-become-polluted-due-to-neglect-ballari-district-rav/articleshow-tnmt15y</link>
            <guid isPermaLink="true">https://kannada.asianetnews.com/karnataka-districts/ancient-lake-in-sirigeri-become-polluted-due-to-neglect-ballari-district-rav/articleshow-tnmt15y</guid>
            <pubDate>Thu, 18 Jun 2026 13:17:47 +0530</pubDate>
            <description><![CDATA[&lt;p&gt;ಕುರುಗೋಡು ತಾಲೂಕಿನ ಸಿರಿಗೇರಿ ಗ್ರಾಮದ ಪುರಾತನ ಕೆರೆಯು ತ್ಯಾಜ್ಯ ಮತ್ತು ಗಿಡಗಂಟಿಗಳಿಂದ ತುಂಬಿ, ದುರ್ವಾಸನೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಈ ಹಿಂದೆ ಇಬ್ಬರು ಮಕ್ಕಳು ಮೃತಪಟ್ಟಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯಕ್ಕೆಗ್ರಾಮಸ್ಥರು ಕಿಡಿಕಾರಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvctg0qsbybq74szq07tdpm5,imgname----------------------1--1781768127224.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಎನ್.ಪಂಪನಗೌಡ ಬಾದನಹಟ್ಟಿ&lt;/strong&gt;&lt;/p&gt;&lt;p&gt;&lt;strong&gt;ಕುರುಗೋಡು&lt;/strong&gt;: ತಾಲೂಕಿನ ಪುರಾತನ ಕಾಲದ ಐತಿಹಾಸಿಕ ಮಹತ್ವದ ಕೆರೆ ತಿಪ್ಪೇಗುಂಡಿಯಂತಾಗಿದೆ. ಸಮೀಪದ ಸಿರಿಗೇರಿ ಗ್ರಾಮ(sirigeri)ದ ಹೃದಯ ಭಾಗದಲ್ಲಿರುವ ಪುರಾತನ ಕಾಲದ ಕೆರೆ(Ancient Lake)ಯು ತ್ಯಾಜ್ಯ ಹಾಗೂ ಗಿಡ-ಗಂಟಿ ಬೆಳೆದು ಬಿಡಾಡಿ ದನ, ಹಂದಿ, ನಾಯಿಗಳ ಆಶ್ರಯ ತಾಣವಾಗಿದೆ.&lt;/p&gt;&lt;p&gt;ಗ್ರಾಮದ ನಿವಾಸಿಗಳು ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿರುವುದರಿಂದ ದಾರಿಹೋಕರು, ಸುತ್ತಲಿನ ನಿವಾಸಿಗಳು, ಕೂಗಳತೆ ದೂರದ ಅಂಗನವಾಡಿ ಕೇಂದ್ರದ ಮಕ್ಕಳು ನಿತ್ಯ ದುರ್ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ಸಾಲದಿದ್ದಕ್ಕೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸರಿಸೃಪಗಳ ಉಪಟಳದಿಂದ ಶಾಲಾ-ಕಾಲೇಜಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಸ್ವಚ್ಛತೆ ಮರೀಚಿಕೆಯಾಗಿರುವ ಈ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಮಳೆ ನೀರು ಸಂಗ್ರಹವಾಗಿದ್ದ ಗುಂಡಿಯಲ್ಲಿ ಇಬ್ಬರು ಮಕ್ಕಳು ಬಿದ್ದು ಅಸುನೀಗಿದ ಅವಘಡವೂ ನಡೆದಿತ್ತು. ಗುಂಡಿ ಮುಚ್ಚುವಂತೆ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.&lt;/p&gt;&lt;p&gt;ಪುರಾತನ ಕಾಲದ ಕೆರೆ ಅಭಿವೃದ್ಧಿ ಮಾಡುವುದು ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎನ್ನುತ್ತಾರೆ ವಕೀಲ ರಾಮ್&zwnj;ಬಾಬು.&lt;/p&gt;&lt;p&gt;ಕೆರೆಯಲ್ಲಿ ಕಸ-ಕಡ್ಡಿ, ತ್ಯಾಜ್ಯ ಎಸೆಯುವುದರಿಂದ ದುರ್ವಾಸನೆ ಬೀರುತ್ತಿದೆ. ಕೆರೆ ಸ್ವಚ್ಛಗೊಳಿಸಿ, ತಂತಿ ಕಂಬವನ್ನು ಅಳವಡಿಸಬೇಕು. ಶಾಸಕರು ಕೂಡಲೇ ಅನುದಾನ ಒದಗಿಸಿ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಸಿರಿಗೇರಿ ಗ್ರಾಪಂ ಮಾಜಿ ಸದಸ್ಯ ಗೋಡೆ ಚೆನ್ನಪ್ಪ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ancient-lake-in-sirigeri-become-polluted-due-to-neglect-ballari-district-rav/articleshow-tnmt15y"/>
        </item>
        <item>
            <title><![CDATA[ಬಳ್ಳಾರಿಯಲ್ಲಿ ಡಬಲ್ ಮರ್ಡರ್: ಪತ್ನಿ-ಮಾವನನ್ನು ಚಾಕುವಿನಿಂದ ಕೊಂದ ಪತಿರಾಯ!]]></title>
            <link>https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3</link>
            <guid isPermaLink="true">https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3</guid>
            <pubDate>Tue, 07 Jul 2026 18:51:33 +0530</pubDate>
            <description><![CDATA[&lt;p&gt;ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ನಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwybsmgzr844qkyw26nyyc73,imgname-cghc-1783430435359.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜು.07):&lt;/strong&gt; ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಪತಿಯೊಬ್ಬ, ರಾಜೀ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹ*ತ್ಯೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಗುಗ್ಗರಹಟ್ಟಿಯಲ್ಲಿ ನಡೆದಿದೆ. ಮೃತರನ್ನು ನಾಗಲಕ್ಷ್ಮಿ (24) ಮತ್ತು ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಆರೋಪಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ (50) ಈ ದ್ವಿಹ*ತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾರೆ.&lt;/p&gt;&lt;p&gt;ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ತೇಜಾ ತನ್ನ ಪತ್ನಿ ನಾಗಲಕ್ಷ್ಮಿ ಮೇಲೆ ಅನುಮಾನ ಪಟ್ಟು ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ರಾಜೀ ಸಂಧಾನ ನಡೆಸಲು ಶ್ರೀನಿವಾಸ ಸ್ಥಳಕ್ಕೆ ಬಂದಿದ್ದರು. ಆದರೆ ಮಾತುಕತೆ ವೇಳೆ ವಾಗ್ವಾದ ತಾರಕಕ್ಕೇರಿ, ಆರೋಪಿ ತೇಜಾ ಹಾಗೂ ಆತನ ತಂದೆ ಸೇರಿ ನಾಗಲಕ್ಷ್ಮಿ ಮತ್ತು ಶ್ರೀನಿವಾಸ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಕೌಟುಂಬಿಕ ಕಲಹವೇ ದುರಂತಕ್ಕೆ ಕಾರಣ?&lt;/strong&gt;&lt;/h2&gt;&lt;p&gt;ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರೋಪಿಗಳು ದೋಬಿ (ಇಸ್ತ್ರಿ) ಕೆಲಸ ಮಾಡಿಕೊಂಡಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದ್ವಿಹ*ತ್ಯೆಗೆ ನಿಖರ ಕಾರಣವೇನು ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಏನು ಎಂಬುದರ ಕುರಿತು ಎಪಿಎಂಸಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/husband-kills-wife-and-father-in-law-in-ballari-gvd/articleshow-yssqmt3"/>
        </item>
    </channel>
</rss>
