<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 14 Sep 2026 13:47:19 +0530</lastBuildDate>
        <atom:link href="https://kannada.asianetnews.com/rss/ballari" rel="self" type="application/rss+xml"/>
        <item>
            <title><![CDATA[Ballari: ಕಠಿಣ ಶಾಪದ ಎಚ್ಚರಿಕೆ ನೀಡಿರುವ ಶಾಸನ ಪತ್ತೆ; ಮಲ್ಲಿಕಾರ್ಜುನ ದೇಗುಲ ಮಾಹಿತಿ]]></title>
            <link>https://kannada.asianetnews.com/karnataka-districts/ballari-sandur-inscription-warning-of-severe-curse-discovered-mallikarjuna-temple-information-dodda-antapura-mrq/articleshow-12cgsx9</link>
            <guid isPermaLink="true">https://kannada.asianetnews.com/karnataka-districts/ballari-sandur-inscription-warning-of-severe-curse-discovered-mallikarjuna-temple-information-dodda-antapura-mrq/articleshow-12cgsx9</guid>
            <pubDate>Tue, 28 Jul 2026 08:44:10 +0530</pubDate>
            <description><![CDATA[ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ವಿಜಯನಗರೋತ್ತರ ಕಾಲದ ದಾನ ಶಾಸನವೊಂದು ಪತ್ತೆಯಾಗಿದೆ. ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿ ದಾನ ಮಾಡಿದ ವಿವರಗಳನ್ನು ಹೊಂದಿರುವ ಈ ಶಾಸನವು, ದಾನವನ್ನು ನಿಲ್ಲಿಸಿದವರಿಗೆ ಕಠಿಣ ಶಾಪದ ಎಚ್ಚರಿಕೆಯನ್ನೂ ನೀಡುತ್ತದೆ. ಈ ಸಂಶೋಧನೆಯು ಗ್ರಾಮದ ಮರೆತುಹೋದ ಇತಿಹಾಸದ ಮೇಲೆ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykb01fvqwsgzz80k5w5matk,imgname-sandur-1785207981563.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದ ಚಂದ್ರಶೇಖರ ಅವರ ಹೊಲದ ಬದುವಿನ ಉತ್ತರಾಭಿಮುಖವಾಗಿ ಇರುವ ಹುಟ್ಟು ಬಂಡೆಯ ಮೇಲೆ ಕೆತ್ತಲಾಗಿರುವ ದಳವಾಯಿ-ಗೌಡರ ದಾನ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಹಚ್ಚಿದೆ.&lt;/p&gt;&lt;p&gt;ಸಂಶೋಧನಾ ತಂಡದ ಪ್ರೊ.ಎಚ್. ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣೇಗೌಡ, ಸಂಶೋಧಕರಾದ ಎಚ್.ರವಿ, ಅಶೋಕ ನಾಯಕ್ ದಿದ್ದಿಗಿ, ಇಸ್ಮಾಯಿಲ್ ಸಿದ್ದೀಕಿ ಹಾಗೂ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ಮಾರುತಿ ಜಿ.ವಿ. ಹಾಗೂ ತಾಯಪ್ಪ ಅವರು ಸ್ಥಳೀಯರಾದ ತಾಯಪ್ಪ, ರಾಗಿ ಶಿವರಾಮಪ್ಪ, ಬಂಡ್ರಿ ಪಾಪಯ್ಯ, ಬಾಬಣ್ಣ ಅವರ ಸಹಕಾರದಿಂದ ಪತ್ತೆ ಹಚ್ಚಿದ್ದಾರೆ.&lt;/p&gt;&lt;p&gt;ದಾನ ಶಾಸನವು ವಿಜಯನಗರೋತ್ತರ ಕಾಲದ ಗ್ರಾಮೀಣ ಆಡಳಿತ, ಧಾರ್ಮಿಕ ವ್ಯವಸ್ಥೆ, ದಾನ ಸಂಸ್ಕೃತಿಯ ಕುರಿತು ಮಹತ್ವದ ಮಾಹಿತಿ ನೀಡುವ ಅಪರೂಪದ ಶಾಸನವಾಗಿದೆ. ಇದು ಕೇವಲ ಒಂದು ಶಾಸನದ ಪತ್ತೆಯಲ್ಲ. ಒಂದು ಗ್ರಾಮದ ಮರೆತುಹೋದ ಇತಿಹಾಸವನ್ನು ಮರುಜೀವಗೊಳಿಸಿದ ಮಹತ್ವದ ಸಂಶೋಧನೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.&lt;/p&gt;&lt;h2&gt;&lt;strong&gt;ಶಾಸನದ ಶಿಲ್ಪಕಲೆ ಹಾಗೂ ಭಕ್ತಿ ಕಲೆಯ ಸಂಗಮ&lt;/strong&gt;&lt;/h2&gt;&lt;p&gt;ಈ ಶಾಸನವು ಸುಮಾರು ೪ ಅಡಿ ಎತ್ತರ ಹಾಗೂ ಮೂರು ಅಡಿ ಅಗಲವಾಗಿರುವ ಗ್ರಾನೈಟ್ ಬಂಡೆಯ ಮೇಲೆ ಕೆತ್ತಲಾಗಿದೆ. ಶಾಸನದ ಎಡ ಭಾಗದಲ್ಲಿ ಚಂದ್ರ, ಬಲಬದಿಗೆ ಸೂರ್ಯನ ಚಿಹ್ನೆಗಳನ್ನು ಕೆತ್ತಲಾಗಿದೆ. ಮಧ್ಯದಲ್ಲಿ ಶಿವಲಿಂಗದ ಎದುರು ಭಕ್ತಿಭಾವದಿಂದ ಕುಳಿತಿರುವ ನಂದಿಯ ಸುಂದರ ಶಿಲ್ಪವನ್ನು ಕೆತ್ತಲಾಗಿದೆ. ಅದರ ಕೆಳಭಾಗದಲ್ಲಿ ದೊಡ್ಡ ಗಾತ್ರದ ಶಿವಲಿಂಗವನ್ನು ಕೆತ್ತಿರುವುದು ಈ ಶಾಸನದ ಧಾರ್ಮಿಕ ಮಹತ್ವವನ್ನು ಎತ್ತಿ ಹಿಡಿಯುತ್ತದೆ. ಶಾಸನವನ್ನು ಬರೆಸಿದವರು ಶೈವ ಧರ್ಮದವರೆಂದು ತಿಳಿದು ಬರುತ್ತದೆ.&lt;/p&gt;&lt;h3&gt;&lt;strong&gt;ನಿತ್ಯಪೂಜೆ ಮತ್ತು ಅಮೃತ ಪಡಿ ನೈವೇದ್ಯ&lt;/strong&gt;&lt;/h3&gt;&lt;p&gt;ಶಾಸನವನ್ನು ಕನ್ನಡ ಭಾಷೆಯ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಒಟ್ಟು ಎಂಟು ಸಾಲುಗಳನ್ನು ಒಳಗೊಂಡಿವೆ. ಶುಭಮಸ್ತು ಎಂಬ ಮಂಗಳ ಪದದಿಂದ ಆರಂಭವಾಗುವ ಈ ಶಾಸನದಲ್ಲಿ ಅಂತಾಪುರದ ದಳವಾಯಿ ತಿರುಮಲಯ್ಯ ಮತ್ತು ಗೌಡ ಹನುಮಿನಾಯಕರು ಮಲ್ಲಿಕಾರ್ಜುನ ದೇವಾಲಯಕ್ಕೆ ಭೂಮಿಯನ್ನು ದಾನವಾಗಿ ನೀಡಿದ ವಿಷಯವನ್ನು ದಾಖಲಿಸಲಾಗಿದೆ. ಈ ಭೂಮಿಯಿಂದ ಬರುವ ಆದಾಯದಿಂದ ದೇವರಿಗೆ ನಿತ್ಯಪೂಜೆ ಮತ್ತು ಅಮೃತ ಪಡಿ ನೈವೇದ್ಯ ನಿರಂತರವಾಗಿ ನಡೆಯಬೇಕು ಎಂಬ ಸ್ಪಷ್ಟ ಉಲ್ಲೇಖವಿದೆ ಎಂದು ಹಂಪಿ ಕನ್ನಡ ವಿವಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಪ್ರಾಧ್ಯಾಪಕ ಡಾ. ಗೋವೀಂದ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತೆಕ್ಕಲಕೋಟೆಯಲ್ಲಿ ಅಪರೂಪದ ಹುಲಿ ಬೇಟೆಯ ವೀರಗಲ್ಲು ಪತ್ತೆ; ಪರಾಕ್ರಮದ ವಿಶೇಷ ಕೆತ್ತನೆ&lt;/strong&gt;&lt;/p&gt;&lt;p&gt;ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಎಚ್. ತಿಪ್ಪೇಸ್ವಾಮಿ, ಈ ಶಾಸನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ, ಅದರ ಕೊನೆಯಲ್ಲಿ ಕಂಡುಬರುವ ಶಾಪಾಶಯ. ದಾನವು ನಿರಂತರವಾಗಿ ಮುಂದುವರೆಯಬೇಕು. ಯಾರಾದರೂ ಈ ದಾನವನ್ನು ನಿಲ್ಲಿಸಿದರೆ ಅಥವಾ ಶಾಸನವನ್ನು ನಾಶಪಡಿಸಿದರೆ, ಅವರು ವಾರಣಾಸಿಯಲ್ಲಿ ತಮ್ಮ ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗುತ್ತಾರೆ ಎಂಬ ಕಠಿಣ ಎಚ್ಚರಿಕೆ ದಾಖಲಿಸಲಾಗಿದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ&lt;/strong&gt;&lt;/p&gt;&lt;p&gt;&amp;nbsp;&lt;/p&gt;&lt;p&gt;ಜಮೀನಿಗೆ ತೆರಳಲು ಸ್ವಂತ ಹಣದಲ್ಲಿ 3.5 ಕಿ.ಮೀ. ಉದ್ದದ ರಸ್ತೆ ನಿರ್ಮಿಸಿಕೊಂಡ ರೈತರುhttps://t.co/21DL2nvX6z#Ballari #Farmers pic.twitter.com/fIX4cwR9Lp&lt;/p&gt;&lt;p&gt;&mdash; Asianet Suvarna News (@AsianetNewsSN) June 22, 2026&lt;/p&gt;&lt;p&gt;&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ballari-sandur-inscription-warning-of-severe-curse-discovered-mallikarjuna-temple-information-dodda-antapura-mrq/articleshow-12cgsx9"/>
        </item>
        <item>
            <title><![CDATA[ಹಂಪಿಯ ನಿಷೇಧಿತ, ಬಫರ್ ವಲಯದಲ್ಲಿ ಅಕ್ರಮ ಹೋಮ್‌ಸ್ಟೇ: 53ಕ್ಕೂ ಹೆಚ್ಚು ಅಧಿಕಾರಿಗಳಿಗೆ ಉಪಲೋಕಾಯುಕ್ತರ ಬಿಗ್ ಶಾಕ್!]]></title>
            <link>https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</link>
            <guid isPermaLink="true">https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u</guid>
            <pubDate>Fri, 07 Aug 2026 10:07:42 +0530</pubDate>
            <description><![CDATA[&lt;p&gt;ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯ ಸಂರಕ್ಷಿತ ವಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzd81zbyhbw7g9mw5d1022jn,imgname-hampi-1786077314430.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸಪೇಟೆ (ಆ.7): &lt;/strong&gt;ಯುನೆಸ್ಕೋ (UNESCO) ಜಾಗತಿಕ ಪಾರಂಪರಿಕ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಯ ಸಂರಕ್ಷಿತ, ಬಫರ್ ಹಾಗೂ ಪರಿಧಿ ವಲಯಗಳಲ್ಲಿ (Core, Buffer and Peripheral Zones) ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ 250ಕ್ಕೂ ಹೆಚ್ಚು ಅನಧಿಕೃತ ಹೋಮ್&zwnj;ಸ್ಟೇಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ನಿಷೇಧಿತ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಡೆಸಲು ಅನುಮತಿ ನೀಡಿರುವುದನ್ನು ಉಪಲೋಕಾಯುಕ್ತರು ತಮ್ಮ ದೂರಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ.&lt;/p&gt;&lt;p&gt;ನಿಯಮ ಉಲ್ಲಂಘನೆ ಹಾಗೂ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಉಪಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದು, ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;53ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ತನಿಖೆಯ ಬಿಸಿ&lt;/strong&gt;&lt;/h2&gt;&lt;p&gt;ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಜೆಸ್ಕಾಂ (GESCOM), ಕಂದಾಯ, ಪ್ರವಾಸೋದ್ಯಮ ಮತ್ತು 'ಹವಾಮಾ' (HWHAMA) ಸೇರಿದಂತೆ ವಿವಿಧ ಇಲಾಖೆಗಳ 53ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ವಿರುದ್ಧ ಈ ದೂರು ಒಳಗೊಂಡಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&quot;ಹಂಪಿಯ ಅತ್ಯಂತ ಸಂರಕ್ಷಿತ (Core) ವಲಯದಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ನಿರ್ದೇಶನ ನೀಡಿದೆ. ಆದರೂ, ನನ್ನ ಭೇಟಿಯ ಸಂದರ್ಭದಲ್ಲಿ ಇಂತಹ ಹಲವು ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ,&quot; ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ನೀಡಲಾದ ಅನುಮತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹವಾಮಾ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಹೆಚ್ಚು ಅಕ್ರಮ ಹೋಮ್&zwnj;ಸ್ಟೇಗಳು, ರೆಸಾರ್ಟ್&zwnj;ಗಳು, ಹೋಟೆಲ್&zwnj;ಗಳು, ಲಾಡ್ಜ್&zwnj;ಗಳು ಮತ್ತು ಅಂಗಡಿಗಳು ಕಾರ್ಯಾಚರಿಸುತ್ತಿರಬಹುದು ಎಂದು ಅವರು ಅಂದಾಜಿಸಿದ್ದಾರೆ.&lt;/p&gt;&lt;h2&gt;&lt;strong&gt;ಯುನೆಸ್ಕೋ ಮಾರ್ಗಸೂಚಿಗಳ ಉಲ್ಲಂಘನೆ&lt;/strong&gt;&lt;/h2&gt;&lt;p&gt;ಹಂಪಿಯ ಸಾಂಸ್ಕೃತಿಕ ಮತ್ತು ಪುರಾತತ್ತ್ವ ಪ್ರಾಮುಖ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅದರ ಸಂರಕ್ಷಿತ ಮತ್ತು ಬಫರ್ ವಲಯಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್&zwnj;ಗಳು ಮತ್ತು ಹೋಮ್&zwnj;ಸ್ಟೇಗಳನ್ನು ಯುನೆಸ್ಕೋ ಮಾರ್ಗಸೂಚಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದಷ್ಟೇ ಅಲ್ಲದೆ, ಕೆಲ ಪ್ರಕರಣಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯನ್ನೂ ನೀಡಿದ್ದಾರೆ ಎಂದು ಉಪಲೋಕಾಯುಕ್ತರು ಚಾಟಿ ಬೀಸಿದ್ದಾರೆ.&lt;/p&gt;&lt;p&gt;ಹಂಪಿಯಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜುಲೈ 25 ರಂದು ಹಂಪಿಗೆ ಅಧಿಕೃತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಕ್ಷಿತ ಪ್ರದೇಶದಲ್ಲಿ ಅಣಬೆಯಂತೆ ಬೆಳೆದು ನಿಂತಿರುವ ಅನಧಿಕೃತ ಹೋಮ್&zwnj;ಸ್ಟೇಗಳ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;p&gt;ಪರಿಶೀಲನೆಯ ವೇಳೆ, ಪಂಚಾಯತ್ ಅಥವಾ ಹವಾಮಾದಿಂದ ಕಡ್ಡಾಯ ಅನುಮೋದನೆ ಅಥವಾ ಪರವಾನಗಿ ಪಡೆಯದೆ ಕನಿಷ್ಠ 250 ಅಕ್ರಮ ಹೋಮ್&zwnj;ಸ್ಟೇಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ಅವರ ಗಮನಕ್ಕೆ ತಂದಿದ್ದರು. ಇದರಿಂದ ಕೆರಳಿದ ಉಪಲೋಕಾಯುಕ್ತರು, ಶಾಸನಬದ್ಧ ಅನುಮತಿಗಳೇ ಇಲ್ಲದೆ ಇಷ್ಟೊಂದು ಬೃಹತ್ ಸಂಖ್ಯೆಯ ಉದ್ಯಮಗಳು ಕಾರ್ಯಾಚರಿಸಲು ಹೇಗೆ ಸಾಧ್ಯವಾಯಿತು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.&lt;/p&gt;&lt;h2&gt;&lt;strong&gt;ಗ್ರಾಮ ಪಂಚಾಯಿತಿಗಳ ವಿರುದ್ಧ ಆಕ್ರೋಶ&lt;/strong&gt;&lt;/h2&gt;&lt;p&gt;ಈ ವಿಚಾರವಾಗಿ ಪ್ರತಿಕ್ರಿಯಿಸಿದ 'ಹವಾಮಾ'ದ ಮಾಜಿ ಹಿರಿಯ ಅಧಿಕಾರಿಯೊಬ್ಬರು, &quot;ಹೋಮ್&zwnj;ಸ್ಟೇ ಅಥವಾ ಇತರ ವಾಣಿಜ್ಯ ಮಳಿಗೆಗಳಿಗೆ ಅನುಮೋದನೆ ನೀಡುವ ಯಾವುದೇ ಅಧಿಕಾರ ನಮಗಿಲ್ಲ. ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಮ್&zwnj;ಸ್ಟೇಗಳನ್ನು ಸ್ಥಾಪಿಸಲು ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ಈ ಅಕ್ರಮ ಹೋಮ್&zwnj;ಸ್ಟೇಗಳ ಹಾವಳಿ ವ್ಯಾಪಕವಾಗಿದ್ದು, ನಾವು ಈ ಹಿಂದೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್&zwnj;ಗಳನ್ನು ನೀಡಿದ್ದೆವು,&quot; ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/hampi-illegal-homestays-upa-lokayukta-notice-53-officials-san/articleshow-2av239u"/>
        </item>
        <item>
            <title><![CDATA[Ballari  ಕೋಳೂರಿನಲ್ಲಿ ಜೈನ ಧರ್ಮದ 4 ಅಪರೂಪದ ಜಿನಮೂರ್ತಿ ಶಿಲ್ಪ ಪತ್ತೆ, ಇದು ಸಲ್ಲೇಖನ ಪ್ರತಿಜ್ಞೆ ಸಂಕೇತ]]></title>
            <link>https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp</link>
            <guid isPermaLink="true">https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp</guid>
            <pubDate>Fri, 14 Aug 2026 11:35:22 +0530</pubDate>
            <description><![CDATA[ಬಳ್ಳಾರಿಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಕೃಷಿ ಹೊಲಗಳಲ್ಲಿ, ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಂಡವು ಜೈನರ 'ಸಲ್ಲೇಖನ ವ್ರತ' ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ನಾಲ್ಕು ಅಪರೂಪದ ಗ್ರಾನೈಟ್ ಶಿಲ್ಪಗಳನ್ನು ಪತ್ತೆಹಚ್ಚಿದೆ. ಕಲ್ಯಾಣಿ ಚಾಲುಕ್ಯರ ಕಾಲದ ಶಾಸನದಿಂದ ಪ್ರೇರಿತವಾದ ಈ ಶೋಧವು, ಈ ಪ್ರದೇಶದ ಜೈನ ಧರ್ಮದ ಐತಿಹಾಸಿಕ ಮಹತ್ವದ ಮೇಲೆ ಹೊಸ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzdntchkbjjpec0m2zmqv7s,imgname-jain-sculptures-1786687187345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುರುಗೋಡು: &lt;/strong&gt;ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಕೃಷಿ ಹೊಲಗಳಲ್ಲಿ ಜೈನ ಧರ್ಮದ &lsquo;ಸಲ್ಲೇಖನ ವ್ರತ&rsquo; ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ನಾಲ್ಕು ಅಪರೂಪದ ಗ್ರಾನೈಟ್ ಶಿಲ್ಪಗಳನ್ನು ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಿರುಗಾಟ ತಂಡವು ಪತ್ತೆಹಚ್ಚಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಅವರ ನೇತೃತ್ವದ ಅಧ್ಯಯನ ತಂಡವು ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಪ್ರಮುಖ ಐತಿಹಾಸಿಕ ಕುರುಹುಗಳು ಬೆಳಕಿಗೆ ಬಂದಿದೆ.&lt;/p&gt;&lt;h2&gt;ಶಾಸನಗಳ ಅಧ್ಯಯನದಿಂದ ಶುರುವಾದ ಶೋಧ&lt;/h2&gt;&lt;p&gt;ಕೋಳೂರು ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸೂರ್ಯನಾರಾಯಣ ದೇವಸ್ಥಾನದಲ್ಲಿ ಲಭ್ಯವಿರುವ ಬೃಹತ್ ಶಾಸನವು ಈ ಮಹತ್ವದ ಶೋಧಕ್ಕೆ ಮೂಲ ಪ್ರೇರಣೆಯಾಗಿದೆ. ಈ ದೇವಾಲಯದಲ್ಲಿರುವ 103 ಸಾಲುಗಳ ಬೃಹತ್ ಕಲ್ಲಿನ ಶಾಸನವನ್ನು ಕನ್ನಡ ಲಿಪಿಯಲ್ಲಿ ಸಂಸ್ಕೃತ ಭಾಷೆಯ ಮೂಲಕ ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯರ ದೊರೆ ಜಗದೇಕಮಲ್ಲನ ಕಾಲದಲ್ಲಿ ಪಾಳೆಗಾರನಾಗಿದ್ದ (ಸಾಮಂತ) ಇಮ್ಮಡಿ ಭೀಮರಸನಿಗೆ ಸೇರಿದ ಈ ಶಾಸನವು ಈಗಾಗಲೇ ಬಳ್ಳಾರಿ ಜಿಲ್ಲಾ ಶಾಸನ ಸಂಪುಟದಲ್ಲಿ ಪ್ರಕಟಗೊಂಡಿದೆ. ಈ ಶಾಸನದಲ್ಲಿ ಪ್ರಾಚೀನ ನಂದ ಮತ್ತು ಮೌರ್ಯ ರಾಜವಂಶಗಳ ಉಲ್ಲೇಖವಿರುವುದನ್ನು ಗಮನಿಸಿದ ಸಂಶೋಧಕರ ತಂಡ, ಗ್ರಾಮದ ಸುತ್ತಮುತ್ತ ಆ ಕಾಲದ ಹೆಚ್ಚಿನ ಐತಿಹಾಸಿಕ ಆಧಾರಗಳು ಸಿಗಬಹುದು ಎಂಬ ನಿರೀಕ್ಷೆಯಿಂದ ತಪಾಸಣೆ ಕೈಗೊಂಡಿತು. ಅದರಂತೆ ಕೃಷಿ ಭೂಮಿಯ ಆಗ್ನೇಯ, ಈಶಾನ್ಯ, ನೈಋತ್ಯ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಸಮೀಕ್ಷೆ ನಡೆಸಿದಾಗ ಈ ಸುಂದರ ಜೀನಮೂರ್ತಿ ಶಿಲ್ಪಗಳು ಕಂಡುಬಂದವು.&lt;/p&gt;&lt;h2&gt;ಜಿನಮೂರ್ತಿಗಳ ಕಲಾತ್ಮಕ ವಿನ್ಯಾಸ ಮತ್ತು ವಿಶೇಷತೆ&lt;/h2&gt;&lt;p&gt;ಪತ್ತೆಯಾಗಿರುವ ನಾಲ್ಕು ಜಿನಮೂರ್ತಿ ಶಿಲ್ಪಗಳನ್ನು ಗಟ್ಟಿ ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಇವು ಜೈನ ಮುನಿಗಳು ಕೈಗೊಳ್ಳುತ್ತಿದ್ದ ಸಲ್ಲೇಖನ ಪ್ರತಿಜ್ಞೆ ಹಾಗೂ ಪೂಜಾ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಈ ಪೈಕಿ ಒಂದು ಬೃಹತ್ ಶಿಲ್ಪವು ಸುಮಾರು 7 ಅಡಿ ಎತ್ತರ ಮತ್ತು 3 ಅಡಿ ಅಗಲವಿದ್ದು, ಇದರ ಒಂದು ಸಣ್ಣ ಭಾಗ ಹಾನಿಗೊಳಗಾಗಿದೆ. ಉಳಿದ ಮೂರು ಶಿಲ್ಪಗಳು ತಲಾ 5 ಅಡಿ ಎತ್ತರ ಹಾಗೂ 3 ಅಡಿ ಅಗಲವನ್ನು ಹೊಂದಿವೆ. ನಾಲ್ಕೂ ಶಿಲ್ಪಗಳಲ್ಲಿ ಜಿನ ಮುನಿಗಳನ್ನು ಮೂರು ಹಂತದ ಮೇಲಾವರಣದ (ಮುಕ್ಕೊಡೆ) ಕೆಳಗೆ ಪದ್ಮಾಸನ ಭಂಗಿಯಲ್ಲಿ ಪ್ರಶಾಂತವಾಗಿ ಕುಳಿತಿರುವಂತೆ ಚಿತ್ರಿಸಲಾಗಿದೆ.&lt;/p&gt;&lt;h2&gt;ಸೂರ್ಯ-ಚಂದ್ರ ಹಾಗೂ ಶಾಪಾಶಯದ ಕೆತ್ತನೆ&lt;/h2&gt;&lt;p&gt;ಜಿನಮೂರ್ತಿಗಳ ಮೇಲ್ಭಾಗದ ಎಡಬದಿಯಲ್ಲಿ ಚಂದ್ರ ಮತ್ತು ಬಲಬದಿಯಲ್ಲಿ ಸೂರ್ಯನ ಚಿತ್ರಗಳನ್ನು ಕೆತ್ತಲಾಗಿದ್ದು, ಇವು ಸೂರ್ಯ-ಚಂದ್ರರಿರುವವರೆಗೆ ಈ ಧರ್ಮ ಹಾಗೂ ಕೀರ್ತಿ ಸ್ಥಿರವಾಗಿರಲಿ ಎಂಬುದನ್ನು ಸೂಚಿಸುತ್ತವೆ. ಇನ್ನು ಶಿಲ್ಪದ ತಳಭಾಗದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಈ ಪವಿತ್ರ ಶಿಲ್ಪಗಳಿಗೆ ಹಾನಿ ಮಾಡುವವರು ಅಥವಾ ನಾಶಪಡಿಸುವವರು ಹಸುವನ್ನು ಕೊಂದ ಮಹಾಪಾಪಕ್ಕೆ ಗುರಿಯಾಗುತ್ತಾರೆ ಎಂಬ ಎಚ್ಚರಿಕೆಯ ಸಂಕೇತ ಇದಾಗಿದೆ.&lt;/p&gt;&lt;p&gt;ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ್ ಅವರು ನೀಡಿರುವ ಮಾಹಿತಿಯಂತೆ, ಈ ಶಿಲ್ಪಗಳಲ್ಲಿ ಯಾವುದೇ ರೀತಿಯ ಲಿಪಿ ಅಥವಾ ಅಕ್ಷರಗಳು ಕೆತ್ತಲ್ಪಟ್ಟಿಲ್ಲ. ಆದರೂ, ಇವುಗಳ ಶೈಲಿ, ಕಲಾತ್ಮಕ ಲಕ್ಷಣಗಳು , ಕುರುಹುಗಳು ಇವು ಜೈನ ಧರ್ಮಕ್ಕೆ ಸಂಪೂರ್ಣವಾಗಿ ಸಂಬಂಧಿಸಿದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಪ್ರದೇಶದಲ್ಲಿ ಈ ಹಿಂದೆ ಜೈನಧರ್ಮದವರು ವಾಸವಾಗಿದ್ದರು ಎನ್ನುವುದಕ್ಕೆ ಈ ನಾಲ್ಕು ಶಿಲ್ಪಗಳು ಸಾಕ್ಷಿಯಾಗಿ ನಿಂತಿವೆ.&lt;/p&gt;&lt;h2&gt;ಸ್ಥಳೀಯರ ಆರಾಧನೆ ಮತ್ತು ಧಾರ್ಮಿಕ ಪರಿವರ್ತನೆ&lt;/h2&gt;&lt;p&gt;ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಅವರು ತಿಳಿಸಿರುವಂತೆ, ಈ ಭಾಗದಲ್ಲಿ ಹಿಂದೆ ಜೈನ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು ಮತ್ತು ಜೈನ ಸಂಸ್ಕೃತಿ ಪ್ರಭಾವಶಾಲಿಯಾಗಿತ್ತು ಎಂಬುದಕ್ಕೆ ಈ ನಾಲ್ಕು ಶಿಲ್ಪಗಳೇ ಜ್ವಲಂತ ಸಾಕ್ಷಿಯಾಗಿವೆ. ಆದರೆ ಕಾಲಕ್ರಮೇಣ ಈ ಶಿಲ್ಪಗಳ ನೈಜ ಐತಿಹಾಸಿಕ ಹಿನ್ನೆಲೆಯ ಅರಿವಿಲ್ಲದೆ, ಸ್ಥಳೀಯ ಗ್ರಾಮಸ್ಥರು ಇವುಗಳನ್ನು ಬೇರೆ ಬೇರೆ ದೇವತೆಗಳ ಹೆಸರಿನಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಈ ಶಿಲ್ಪಗಳಲ್ಲಿ ಒಂದನ್ನು 'ವೀರಭದ್ರ' ಎಂದು ಕರೆದರೆ, ಉಳಿದ ಮೂರು ಶಿಲ್ಪಗಳನ್ನು 'ಖಾಜಾಪಿರ್', 'ದೊಡ್ಡ ಸಂಕ್ರಮಣ' ಮತ್ತು 'ಸಣ್ಣ ಸಂಕ್ರಮಣ' ಎಂಬ ವಿಭಿನ್ನ ಹೆಸರುಗಳಿಂದ ಆರಾಧಿಸಲಾಗುತ್ತಿದೆ.&lt;/p&gt;&lt;h2&gt;ಸಂಶೋಧನಾ ತಂಡ ಮತ್ತು ಮುಂದಿನ ನಿರೀಕ್ಷೆಗಳು&lt;/h2&gt;&lt;p&gt;ಈ ಮಹತ್ವದ ಪತ್ತೆಯ ಕಾರ್ಯದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ್, ಡಾ. ಕೃಷ್ಣೇಗೌಡ ಅವರೊಂದಿಗೆ ಸಂಶೋಧಕರಾದ ದಾದಾ ಖಲಂದರ್, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿಡ್ಡಿಗಿ, ಕೆ. ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಭಾಗವಹಿಸಿದ್ದರು. ಕ್ಷೇತ್ರ ಅಧ್ಯಯನದ ಸಮಯದಲ್ಲಿ ಸ್ಥಳೀಯ ವಕೀಲರಾದ ಕೆ. ಲಕ್ಷ್ಮಣ್ ಮತ್ತು ಮಲ್ಲಿಕಾರ್ಜುನ ಅವರು ಸಂಶೋಧನಾ ತಂಡಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ನೆರವು ನೀಡಿದರು.&lt;/p&gt;&lt;p&gt;ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸಮಗ್ರ ಉತ್ಖನನ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡರೆ, ಬಳ್ಳಾರಿ ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆ, ರಾಜ್ಯಶ್ರಯ ಮತ್ತು ಧಾರ್ಮಿಕ ಸಹವಾಳದ ಕುರಿತು ಇನ್ನಷ್ಟು ಅಪರೂಪದ ಐತಿಹಾಸಿಕ ಸಾಕ್ಷ್ಯಾಧಾರಗಳು ಬೆಳಕಿಗೆ ಬರಲಿವೆ ಎಂದು ಪ್ರೊ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp"/>
        </item>
        <item>
            <title><![CDATA[Hampi Excavation: ಹಂಪಿ ಉತ್ಖನನ ವೇಳೆ ಅಪರೂಪದ ವಿಗ್ರಹಗಳು ಪತ್ತೆ; ಏನಿದರ ವಿಶೇಷತೆ?]]></title>
            <link>https://kannada.asianetnews.com/news/rare-garuda-and-naga-shilpa-idols-discovered-during-hampi-excavation-what-is-their-significance-sns/articleshow-clwylfg</link>
            <guid isPermaLink="true">https://kannada.asianetnews.com/news/rare-garuda-and-naga-shilpa-idols-discovered-during-hampi-excavation-what-is-their-significance-sns/articleshow-clwylfg</guid>
            <pubDate>Mon, 10 Aug 2026 12:16:10 +0530</pubDate>
            <description><![CDATA[&lt;p&gt;ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ವಿಜಯನಗರ ಕಾಲದ ಅಪರೂಪದ ಶಿಲ್ಪಗಳು ಪತ್ತೆಯಾಗಿವೆ. ಮಾನವ ಮತ್ತು ಹಾವಿನ ಲಕ್ಷಣಗಳಿರುವ ನಾಗಿಣಿ ಶಿಲ್ಪ ಹಾಗೂ ಗರುಡ ಶಿಲ್ಪ ಇದರಲ್ಲಿ ಸೇರಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzn6ern1fqj3867anzfr0kvx,imgname-hampi--1786344071841.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಉತ್ಖನನ ಕಾರ್ಯವನ್ನು ನಡೆಸುತ್ತಿದೆ. ಈ ಉತ್ಖನನ ವೇಳೆ ಮಾನವ ಮತ್ತು ಹಾವಿನ ಲಕ್ಷಣಗಳನ್ನು ಹೊಂದಿರುವ ಸ್ತ್ರೀ ರಕ್ಷಕ ರೂಪದ ನಾಗಿಣಿ ಶಿಲ್ಪ ಹಾಗೂ ಗಡುರ ಶಿಲ್ಪ ಪತ್ತೆಯಾಗಿದೆ. ಸದ್ಯ ಈ ವಿಗ್ರಹಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.&lt;/p&gt;&lt;h2&gt;ವಿಜಯನಗರ ಸಾಮ್ರಾಜ್ಯದ ಇತಿಹಾಸ ಇನ್ನಷ್ಟು ಸಮೃದ್ಧ&lt;/h2&gt;&lt;p&gt;ನಾಗಿಣಿ ಶಿಲ್ಪ ಸುಮಾರು30 ಸೆಂ.ಮೀ ಅಗಲ, 51 ಸೆಂ.ಮೀ ಉದ್ದವಿದೆ. ಗರುಡ ಶಿಲ್ಪಕ್ಕೆ ತಲೆ ಇಲ್ಲದೆ ಸಿಕ್ಕಿದ್ದು, ಇದು 32 ಸೆಂ.ಮೀ ಅಗಲ, 37 ಸೆಂ.ಮೀ ಉದ್ದವಿದೆ. ಸದ್ಯ ಪತ್ತೆಯಾಗಿರುವ ಶಿಲ್ಪಗಳನ್ನು ಸರಿಯಾಗಿ ದಾಖಲಿಸಿ, ಅವುಗಳನ್ನನು ಸಂರಕ್ಷಣೆ ಮಾಡುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದು, ಇದು ವಿಜಯನಗರ ಸಾಮ್ರಾಜ್ಯದ ಕುರಿತ ಇತಿಹಾಸ ಇನ್ನಷ್ಟು ಸಮೃದ್ಧಗೊಳಿಸುತ್ತದೆ.&lt;/p&gt;&lt;p&gt;ವಿಜಯನಗರ ಸಾಮ್ರಾಜ್ಯದ ಕಾಲ 14 ಮತ್ತು 15ನೇ ಶತಮಾನದ ಅತ್ಯಾಧುನಿಕ ನೀರು ನಿರ್ವಹಣೆ, ಹಿಂದೂ-ಜೈನ ಸಹಬಾಳ್ವೆ, ವಾಸ್ತುಕಲೆಯನ್ನು ಈ ಉತ್ಖನನಗಳು ಎತ್ತಿತೋರಿಸುತ್ತವೆ. ಈ ಹಿಂದಿನ ಉತ್ಖನನದ ವೇಳೆಯೂ ಪ್ರಾಚೀನ ಜೈನ ದೇವಾಲಯದ ಛಾವಣಿ, ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದ ಕಟ್ಟಡದ ಭಾಗಗಳು ಪತ್ತೆಯಾಗಿತ್ತು. ಜೊತೆಗೆ ನಾಶಗೊಳಿಸಲಾಗಿದ್ದ ಆಳ್ವಾರ್ ವಿಗ್ರಹ, ಕಲ್ಲಿನ ಕಾಲುವೆ ಕೂಡ ಇತಿಹಾಸ ಆಸಕ್ತರ ಗಮನ ಸೆಳೆದಿದ್ದವು.&lt;/p&gt;&lt;h2&gt;ಇನ್ನಷ್ಟು ಹೆಚ್ಚಿನ ಅಧ್ಯಯನ ನಡೆಯುತ್ತದೆ&lt;/h2&gt;&lt;p&gt;ಸದ್ಯ ಹಂಚಿ ಜೈನ ದೇಗುಲದ ಸಂಕೀರ್ಣದ ಸುತ್ತಮುತ್ತ ಹಾಗೂ ರಾಮ ದೇವಸ್ಥಾನ ಬಳಿ ಎಎಸ್&zwnj;ಐ ನಿರಂತರವಾಗಿ ಉತ್ಖನನ ನಡೆಸುತ್ತಿದ್ದು, ಈ ಬಗ್ಗೆ ಎಎಸ್&zwnj;ಐ ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ತಜ್ಞ ಕೆ ರಾಮಕೃಷ್ಣ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಸದ್ಯ ಪತ್ತೆಯಾಗಿರುವ ಶಿಲ್ಪಗಳು ವಿವಿಧ ಧಾರ್ಮಿಕ ಮತ್ತು ಕಲಾ ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ಶಿಲ್ಪಗಳ ಲಕ್ಷಣ, ಅವುಗಳು ಪತ್ತೆಯಾದ ಸ್ಥಳ ಬಗ್ಗೆ ವಿವರವಾದ ಅಧ್ಯಯನ ನಡೆಯಲಿದೆ. ಇವು ವಿಜಯನಗರ ಸಾಮ್ರಾಜ್ಯ ಕಾಲದ ಧಾರ್ಮಿಕ ಸಹಿಷ್ಣುತೆ, ವಾಸ್ತು ಶಿಲ್ಪ ಮತ್ತು ಸಾಂಸ್ಕೃತಿಕ ಸೌಹಾರ್ದತೆಯ ಬಗ್ಗೆ ದೊರೆತಿರುವ ಮಹತ್ವ ಸುಳಿವು ಎಂದು ಬಣ್ಣಿಸಿರುವ ರಾಮಕೃಷ್ಣ ರೆಡ್ಡಿ ಅವರು, ಇವುಗಳ ಇನ್ನಷ್ಟು ವಿವರವಾದ ಅಧ್ಯಯನ ಮಾಡಿ ಸುತ್ತಮುತ್ತಿನ ರಚನೆಗಳೊಂದಿಗೆ ಇರುವ ಸಂಬಂಧವನ್ನು ಅರ್ಥಮಾಡಿಕೊಂಡು ವಿವರಣೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಕರ್ನಾಟಕದ ಹಂಪಿ ವಿಜಯನಗರ ಸಾಮಾಜ್ಯದ ರಾಜಧಾನಿ ಆಗಿತ್ತು. ದಕ್ಷಿಣ ಭಾರತದ ಅತ್ಯಂತ ಪ್ರಬಲ ಸಾಮ್ರಾಜ್ಯಗಳಲ್ಲಿ ಒಂದಾಗಿರುವ ಇದನ್ನು ಕರ್ನಾಟ ಸಾಮ್ರಾಜ್ಯ ಎಂದು ಕರೆಯಲಾಗುತ್ತದೆ. ದೆಹಲಿ ಸುಲ್ತಾನರ ಆಕ್ರಣಗಳಿಂದ ದಕ್ಷಿಣ ಭಾರತವನ್ನು ರಕ್ಷಣೆ ಮಾಡುವಲ್ಲಿ ಈ ಸಾಮ್ರಾಜ್ಯ ಪ್ರಮುಖ ಪಾತ್ರವಹಿಸಿತ್ತು ಎಂದು ಇತಿಹಾಸ ತಜ್ಞರು ಹೇಳಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Sumanth SN</dc:creator>
            <atom:link href="https://kannada.asianetnews.com/news/rare-garuda-and-naga-shilpa-idols-discovered-during-hampi-excavation-what-is-their-significance-sns/articleshow-clwylfg"/>
        </item>
        <item>
            <title><![CDATA[ಹಗರಿಬೊಮ್ಮನಹಳ್ಳಿಯಲ್ಲಿ ಹಳೆಗನ್ನಡ ಶಾಸನವಿರುವ ಅಪರೂಪದ ವೀರಗಲ್ಲು ಪತ್ತೆ, ನಿಧಿಗಾಗಿ ಕಿಡಿಗೇಡಿಗಳ ಹುಡುಕಾಟ!]]></title>
            <link>https://kannada.asianetnews.com/vijayanagara/rare-ancient-hero-stone-discovered-with-halegannada-script-near-hagaribommanahalli-at-vijayanagara-gdp/articleshow-e084h9a</link>
            <guid isPermaLink="true">https://kannada.asianetnews.com/vijayanagara/rare-ancient-hero-stone-discovered-with-halegannada-script-near-hagaribommanahalli-at-vijayanagara-gdp/articleshow-e084h9a</guid>
            <pubDate>Mon, 14 Sep 2026 13:47:13 +0530</pubDate>
            <description><![CDATA[ಹಗರಿಬೊಮ್ಮನಹಳ್ಳಿ ಸಮೀಪದ ನಾಣ್ಯಾಪುರದಲ್ಲಿ ಹಳೆಗನ್ನಡ ಶಾಸನವಿರುವ ಅಪರೂಪದ ವೀರಗಲ್ಲು ಪತ್ತೆಯಾಗಿದೆ. ಐತಿಹಾಸಿಕ ಮಹತ್ವದ ಈ ಸ್ಮಾರಕಕ್ಕೆ ನಿಧಿಗಳ್ಳರಿಂದ ಹಾನಿಯಾಗುವ ಭೀತಿ ಎದುರಾಗಿದ್ದು, ಇದರ ಸಂರಕ್ಷಣೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2fftxd2p9zggj0ghdde521d,imgname-ancient-hero-stone-discovery-in-vijayanagara-1789373805984.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಗರಿಬೊಮ್ಮನಹಳ್ಳಿ:&lt;/strong&gt; ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಕೇಂದ್ರದಿಂದ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿರುವ ನಾಣ್ಯಾಪುರ ಗ್ರಾಮದ ಬಳಿ ಪ್ರಾಚೀನ ಕಾಲದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ಈ ಪುರಾತನ ಸ್ಮಾರಕಕ್ಕೆ ನಿಧಿಗಳ್ಳರಿಂದ ಹಾನಿಯಾಗುವ ಭೀತಿ ಎದುರಾಗಿದ್ದು, ಪುರಾತತ್ವ ಇಲಾಖೆ ತಕ್ಷಣವೇ ಸ್ಥಳಕ್ಕಾಗಮಿಸಿ ಇದನ್ನು ಸಂರಕ್ಷಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.&lt;/p&gt;&lt;h2&gt;ಶಾಸನ ಮತ್ತು ವೀರಗಲ್ಲಿನ ವೈಶಿಷ್ಟ್ಯ&lt;/h2&gt;&lt;p&gt;ಸುಮಾರು 3 ಅಡಿ ಎತ್ತರ ಹಾಗೂ 3 ಅಡಿ ಸುತ್ತಳತೆಯ ಕಾಡುಗಲ್ಲಿನಲ್ಲಿ ಈ ವೀರಗಲ್ಲನ್ನು ಕೆತ್ತಲಾಗಿದೆ. ಇದರಲ್ಲಿ ಶೂರ ವೀರನ ಸುಂದರವಾದ ಚಿತ್ರಣವಿದ್ದು, ಅದರ ಪಕ್ಕದಲ್ಲೇ ಸುಲಭವಾಗಿ ಅರ್ಥವಾಗದ ಪುರಾತನ 'ಹಳೆಗನ್ನಡ'ದ ಶಾಸನ ಲಿಪಿಯನ್ನು ಕೆತ್ತಲಾಗಿದೆ. ಈ ವೀರಗಲ್ಲನ್ನು ಸ್ಥಳೀಯವಾಗಿ ಕೆಲವರು &lsquo;ಆಂಜನೇಯ ದೇವರು&rsquo; ಎಂದು ಪೂಜಿಸುತ್ತಿದ್ದರೆ, ಇನ್ನು ಕೆಲವರು &lsquo;ವೀರಪ್ಪ&rsquo; ಎಂದು ಕರೆಯುತ್ತಿದ್ದಾರೆ. ಈ ಪ್ರದೇಶದಲ್ಲಿ ಇಂತಹ ಐತಿಹಾಸಿಕ ಸ್ಮಾರಕವಿರುವುದು ಹಲವು ವರ್ಷಗಳಿಂದ ತಿಳಿದಿದ್ದರೂ, ಇತ್ತೀಚಿನ ದಿನಗಳಲ್ಲಿ ಇದು ವಿಶಾಲ ಸಾರ್ವಜನಿಕ ವಲಯದ ಗಮನಕ್ಕೆ ಬಂದಿದೆ.&lt;/p&gt;&lt;h2&gt;ನಿಧಿಗಳ್ಳರ ಹಾವಳಿ, ಐತಿಹಾಸಿಕ ಕುರುಹಿಗೆ ಹಾನಿ&lt;/h2&gt;&lt;p&gt;ಪ್ರಸ್ತುತ ನಾಣ್ಯಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ನಿಧಿಗಳ್ಳರ ಹಾವಳಿ ತೀವ್ರಗೊಂಡಿದೆ. ಈ ಅಪರೂಪದ ವೀರಗಲ್ಲಿನ ಅಡಿಯಲ್ಲಿ ನಿಧಿ ಇರಬಹುದೆಂಬ ಭ್ರಮೆಯಿಂದ ಕಳ್ಳರು ಇದನ್ನು ಹಾನಿಗೊಳಿಸಲು ಯತ್ನಿಸಿರುವುದು ಕೂಡ ಬೆಳಕಿಗೆ ಬಂದಿದೆ. ಐತಿಹಾಸಿಕ ಮೌಲ್ಯವಿರುವ ಈ ಸ್ಮಾರಕಕ್ಕೆ ಈಗಾಗಲೇ ನಿಧಿಗಳ್ಳರಿಂದ ಹಾನಿಯಾಗಿದ್ದು, ಸೂಕ್ತ ಭದ್ರತೆ ಕಲ್ಪಿಸದಿದ್ದರೆ ಸಂಪೂರ್ಣವಾಗಿ ನಾಶವಾಗುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.&lt;/p&gt;&lt;h2&gt;ಅಧಿಕಾರಿಗಳ ಭೇಟಿಗೆ ಗ್ರಾಮಸ್ಥರ ಪಟ್ಟು&lt;/h2&gt;&lt;p&gt;ನಿಧಿಗಳ್ಳರ ಅಕ್ರಮ ಕೃತ್ಯವನ್ನು ಖಂಡಿಸಿರುವ ನಾಣ್ಯಾಪುರ ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ತಕ್ಷಣವೇ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಸ್ಥಳೀಯ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪುರಾತತ್ವ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಅಧಿಕಾರಿಗಳು ಈ ಹಳೆಗನ್ನಡ ಶಾಸನವನ್ನು ಅಧ್ಯಯನ ಮಾಡಿ, ವೀರಗಲ್ಲನ್ನು ಸುಪರ್ದಿಗೆ ಪಡೆದು ವೈಜ್ಞಾನಿಕವಾಗಿ ಸಂರಕ್ಷಿಸಬೇಕು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಿಧಿ ಹುಡುಕಾಟ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ನಾಣ್ಯಾಪುರ ಗ್ರಾಮದ ರೈತರು ಆಗ್ರಹಿಸಿದ್ದಾರೆ. ಸರ್ಕಾರ ಈ ಬಗ್ಗೆ ಚಿತ್ತ ಹರಿಸುವುದು ಅಗತ್ಯವಾಗಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/vijayanagara/rare-ancient-hero-stone-discovered-with-halegannada-script-near-hagaribommanahalli-at-vijayanagara-gdp/articleshow-e084h9a"/>
        </item>
        <item>
            <title><![CDATA[B Nagendra: ವಾಲ್ಮೀಕಿ ನಿಗಮ ಹಗರಣ: ಬಿ ನಾಗೇಂದ್ರ ಪರ  ನಿಂತ ಬಳ್ಳಾರಿ ವಾಲ್ಮೀಕಿ ಸಂಘಟನೆ ಜಿಲ್ಲಾ ಮುಖಂಡ!]]></title>
            <link>https://kannada.asianetnews.com/politics/valmiki-corporation-scam-b-nagendra-supporters-press-conference-at-ballari-rav/articleshow-eq7ol7b</link>
            <guid isPermaLink="true">https://kannada.asianetnews.com/politics/valmiki-corporation-scam-b-nagendra-supporters-press-conference-at-ballari-rav/articleshow-eq7ol7b</guid>
            <pubDate>Wed, 12 Aug 2026 14:39:05 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಅವರ ಮೇಲಿನ ಆರೋಪಗಳನ್ನು ಅವರ ಬೆಂಬಲಿಗರು ತಳ್ಳಿಹಾಕಿದ್ದಾರೆ. ಬಿಜೆಪಿ ನಾಯಕರು ವಿನಾಕಾರಣ ಟೀಕೆ ಮಾಡುತ್ತಿದ್ದು, ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztkdre8rjwvbqh9s3p1f1sq,imgname-----------------------2026-08-12t142816.307-1786525442504.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಳ್ಳಾರಿ: ಬಳ್ಳಾರಿ ಬಿಜೆಪಿ ನಾಯಕರು ವಿನಾಕಾರಣ ಟೀಕೆ ಮಾಡ್ತದಿದ್ದಾರೆ. ವಾಲ್ಮೀಕಿ ಪ್ರಕರಣದಲ್ಲಿ ಎಸ್&zwnj;ಐಟಿ ಕ್ಲೀನ್&zwnj;ಚಿಟ್ ನೀಡಿದೆ ಅದದ್ರೆ ಇಡಿ, ಸಿಬಿಐನವರು ಬಿಜೆಪಿ ದುರ್ಬಳಕೆ ಮಾಡ್ಕೊಂಡು ವಿನಾಕಾರಣ ಆರೋಪ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಬಿ ನಾಗೇಂದ್ರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ಬಳ್ಳಾರಿ ಬಿಜೆಪಿ ನಾಯಕರ ಮೇಲೆ ಕೇಸ್ ಇಲ್ವಾ?&lt;/h2&gt;&lt;p&gt;ಇಂದು ವಾಲ್ಮೀಕಿ ಹಗರಣ ಆರೋಪ ಕುರಿತಂತೆ ನಾಗೇಂದ್ರ ಬೆಂಬಲಿಗರು, ವಾಲ್ಮೀಕಿ ಸಂಘ ಜಿಲ್ಲಾಧ್ಯಕ್ಷ ರಾಮಪ್ರಸಾದ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶ್ರೀರಾಮುಲು, ಜನಾರ್ದನ ರೆಡ್ಡಿ ಮೇಲೆ ಕೇಸ್ ಇಲ್ವಾ? ಎಂದು ಪ್ರಶ್ನಿಸಿದ ಬೆಂಬಲಿಗರು ದಲಿತ ಯುವಕನೊಬ್ಬ ಬೆಳೆಯುತ್ತಿರೋದು ಸಹಿಸೋಕೆ ಅಗ್ತಿಲ್ಲ. ಚುನಾವಣೆಗಳಲ್ಲಿ ಸೋತು ಹೋಗಿರೋ ಬಿಜೆಪಿ ನಾಯಕರು ಏನು ಮಾಡೋಕೆ ಅಗ್ತಿಲ್ಲ.. ಶ್ರೀರಾಮುಲು ಎರಡು ಬಾರಿ ಸೋತು ಹತಾಶರಾಗಿ ಏನೇನೋ ಮಾತಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h3&gt;ನಾಗೇಂದ್ರ ಆರೋಪಿ ಹೊರತು ಅಪರಾಧಿ ಅಲ್ಲ:&lt;/h3&gt;&lt;p&gt;ವಾಲ್ಮೀಕಿ ನಿಗಮ ಹಗರಣ ಸಂಬಂಧ ಬಿ ನಾಗೇಂದ್ರ ಅವರ ಮೇಲೆ ಆರೋಪಗಳಿವೆ. ಆದರೆ ಅವರು ಅಪರಾಧಿ ಅಲ್ಲ. ನಮ್ಮ ನಾಯಕರು ನ್ಯಾಯಾಲಯದ ತಿರ್ಮಾನಕ್ಕೆ ಬದ್ಧರಾಗಿರುತ್ತಾರೆ. ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಎಲ್ಲಾ ನಾಯಕರು ನಾಗೇಂದ್ರ ಅವರ ಪರವಾಗಿದ್ದಾರೆ ಎಂದರು.&lt;/p&gt;&lt;h3&gt;ಬಿಜೆಪಿ ನಾಯಕರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ&lt;/h3&gt;&lt;p&gt;ಬಳ್ಳಾರಿ ಜಿಲ್ಲೆಯ ಬಿಜೆಪಿಯ ಎಲ್ಲ ನಾಯಕರ ಮೇಲೆ ಯಾವ್ಯಾವ ಆರೋಪಗಳಿವೆ ಎಂಬುದು ಜಗತ್ತಿಗೆ ಗೊತ್ತಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಅಮಿತ್ ಶಾ, ಜನಾರ್ದನರೆಡ್ಡಿ, ಶ್ರೀರಾಮುಲು ಈ ಎಲ್ಲ ಮುಖಂಡರ ಮೇಲೆ ಕೇಸ್&zwnj;ಗಳಿಲ್ವ? ಇದು ನಾಗೇಂದ್ರ ಅವರನ್ನು ಸಮರ್ಥಿಸಿ ಈ ಮಾತು ಹೇಳುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದೆ ತೀರ್ಪು ಏನೇ ಬರಲಿ ನ್ಯಾಯಾಲಯದ ತೀರ್ಮಾನಕ್ಕೆ ನಮ್ಮ ನಾಯಕರು ಬದ್ಧರಾಗಿರುತ್ತಾರೆ. ಆದರೆ ಬಿಜೆಪಿ ನಾಯಕರು ಸುಖಾಸುಮ್ಮನೆ ಆರೋಪ ಮಾಡಿದಾರೆ ನಾವು ಇನ್ಮುಂದೆ ಸುಮ್ಮನೆ ಇರೋಕಾಗಲ್ಲ. ಬಿಜೆಪಿ ನಾಯಕರ ವಿರುದ್ಧ ಕಾನೂನು ಹೋರಾಟ ಮಾಡ್ತೇವೆ ಎಚ್ಚರಿಸಿದರು. ಈಗ ಬಿ ನಾಗೇಂದ್ರರಿಗೆ ಸಚಿವ ಸ್ಥಾನ ನೀಡಿದರೆ ಬಿಜೆಪಿ ನಾಯಕರು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಾವು ಬಿಜೆಪಿ ಹೋರಾಟಕ್ಕೆ ಪ್ರತ್ಯುತ್ತರ ನೀಡುತ್ತೇವೆ ಎಂದು ನಾಗೇಂದ್ರ ಪರ ವಾಲ್ಮೀಕಿ ಮುಖಂಡರು ಸವಾಲು ಹಾಕಿದರು.&lt;/p&gt;&lt;p&gt;ಸದ್ಯ ಈ ಬಿ ನಾಗೇಂದ್ರ ಬಿಜೆಪಿ ನಾಯಕರ ನಡುವಿನ ಈ ಬೆಳವಣಿಗೆ ಬಳ್ಳಾರಿ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಬಿ ನಾಗೇಂದ್ರಗೆ ಸಚಿವ ಸ್ಥಾನ ಸಿಗುತ್ತಾ? ಬಿಜೆಪಿ ನಾಯಕರ ಹೋರಾಟ ತೀವ್ರಗೊಳ್ಳುತ್ತಾ ಕಾದು ನೋಡಬೇಕು.&lt;/p&gt;]]></content:encoded>
            <category>ballari</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/valmiki-corporation-scam-b-nagendra-supporters-press-conference-at-ballari-rav/articleshow-eq7ol7b"/>
        </item>
        <item>
            <title><![CDATA[Ballari Politics:  ಮತ್ತೆ ರಾಜ್ಯದ ಗಮನ ಸೆಳೆದ ಬಳ್ಳಾರಿ ರಾಜಕೀಯ; ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮೇಲ್ಮನೆ, ಕೆಳಮನೆಯಲ್ಲೂ ಗದ್ದಲ!]]></title>
            <link>https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86</link>
            <guid isPermaLink="true">https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86</guid>
            <pubDate>Fri, 21 Aug 2026 11:53:43 +0530</pubDate>
            <description><![CDATA[&lt;p&gt;ಬಳ್ಳಾರಿ ರಾಜಕಾರಣವು ಗಣಿ ವಿವಾದಗಳಿಂದ ಹಿಡಿದು ಸಚಿವ ನಾಗೇಂದ್ರರ ರಾಜೀನಾಮೆ ಒತ್ತಾಯದವರೆಗೆ ಸದಾ ವಿವಾದಗಳ ಕೇಂದ್ರವಾಗಿದೆ. ರೆಡ್ಡಿ ಸಹೋದರರ ಪ್ರಭಾವ, 'ಆಪರೇಷನ್ ಕಮಲ', ವಾಲ್ಮೀಕಿ ನಿಗಮದ ಹಗರಣದಂತಹ ಘಟನೆಗಳು ರಾಜ್ಯ ರಾಜಕೀಯದಲ್ಲಿ ಬಳ್ಳಾರಿಯನ್ನು ಪ್ರಮುಖ ಹಾಗೂ ವಿವಾದಾತ್ಮಕ ಶಕ್ತಿಕೇಂದ್ರವಾಗಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0hf9z9sjcvb8mjrs3csfkmk,imgname-----------------------2026-08-21t114133.033-1787292876089.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;ಬಳ್ಳಾರಿ: ಒಂದಿಲ್ಲೊಂದು ವಿವಾದಗಳಿಗೆ ಸದಾ ಸುದ್ದಿಯಲ್ಲಿರುವ ಬಳ್ಳಾರಿ ರಾಜಕಾರಣ ಇದೀಗ ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಒತ್ತಾಯಿಸಿ ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ನಡೆಯುತ್ತಿರುವ ಹೋರಾಟದಿಂದ ಮತ್ತೊಮ್ಮೆ ಸುದ್ದಿಯಲ್ಲಿದೆ.&lt;/p&gt;&lt;p&gt;ರಾಜ್ಯ ರಾಜಕಾರಣದ ಮೇಲೆ ತನ್ನದೇ ಆದ ಪ್ರಭಾವ ಬೀರಿರುವ ಬಳ್ಳಾರಿ, ಕಳೆದ ಎರಡು ದಶಕಗಳಿಂದ ಹಲವು ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಇದೀಗ ಸಚಿವ ಬಿ. ನಾಗೇಂದ್ರ ಅವರ ರಾಜಿನಾಮೆ ಪ್ರಹಸನ ಬಳ್ಳಾರಿಯ ರಾಜಕೀಯ ರಾಜ್ಯಮಟ್ಟದ ಚರ್ಚೆಗೆ ಮುನ್ನೆಲೆಗೆ ಬಂದಿದೆ.&lt;/p&gt;&lt;h2&gt;ಅಂದು ರೆಡ್ಡಿ ಸಹೋದರರು, ಇಂದು ನಾಗೇಂದ್ರ&lt;/h2&gt;&lt;p&gt;ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಸಹೋದರರ ಅಕ್ರಮ ಗಣಿಗಾರಿಕೆ ಆರೋಪಗಳು ಬಳ್ಳಾರಿಯನ್ನು ದೇಶದ ಗಮನ ಸೆಳೆಯುವಂತೆ ಮಾಡಿದ್ದವು. 2010ರ ಅವಧಿಯಲ್ಲಿ ಈ ವಿಚಾರ ವಿಧಾನಸಭೆ ಹಾಗೂ ವಿಧಾನಪರಿಷತ್&zwnj;ನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರೋಪ-ಪ್ರತ್ಯಾರೋಪ, ಮಾತಿನ ಚಕಮಕಿ ಹಾಗೂ ಬಳ್ಳಾರಿಯ ಬಿಜೆಪಿ ಶಾಸಕರ ವರ್ತನೆ ಕುರಿತು ನಡೆದ ರಾಜಕೀಯ ವಿಶ್ಲೇಷಣೆಗಳು ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದವು. ಅದೇ ಸಂದರ್ಭದಲ್ಲಿ ಸವಾಲೊಂದನ್ನು ಸ್ವೀಕರಿಸಿದ್ದ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಸುವ ಮೂಲಕ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದ್ದರು. ಅಷ್ಟೇ ಅಲ್ಲ; ಬಳ್ಳಾರಿ ಪಾದಯಾತ್ರೆಯಿಂದಾಗಿಯೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯೂ ಆದರು. ಆಗ ರಾಜ್ಯ ರಾಜಕಾರಣದಲ್ಲಿ ಬಳ್ಳಾರಿ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿತ್ತು.&lt;/p&gt;&lt;p&gt;ಇದಕ್ಕೂ ಮುನ್ನವೇ ಬಳ್ಳಾರಿಯ ರೆಡ್ಡಿ ಸಹೋದರರ ರಾಜಕೀಯ ಪ್ರಭಾವ ರಾಜ್ಯದಲ್ಲಿ ಚರ್ಚಿತವಾಗಿತ್ತು. &lsquo;ಆಪರೇಷನ್ ಕಮಲ&rsquo;ದ ಬೆಳವಣಿಗೆಗಳೊಂದಿಗೆ ರೆಡ್ಡಿ ಸಹೋದರರ ಹೆಸರು ಮುನ್ನೆಲೆಗೆ ಬಂದಿತ್ತು. ಸರ್ಕಾರ ರಚನೆ ಹಾಗೂ ಅಧಿಕಾರದ ರಾಜಕೀಯದಲ್ಲಿ ಬಳ್ಳಾರಿಯ ಪಾತ್ರದ ಕುರಿತು ರಾಜ್ಯದಾದ್ಯಂತ ಚರ್ಚೆ ನಡೆದಿತ್ತು. ಇದರಿಂದ ಜಿಲ್ಲೆ ಕೇವಲ ಗಣಿಗಾರಿಕೆಯ ಕಾರಣಕ್ಕಷ್ಟೇ ಅಲ್ಲ, ರಾಜಕೀಯ ಶಕ್ತಿಕೇಂದ್ರವಾಗಿಯೂ ಗುರುತಿಸಿಕೊಂಡಿತು.&lt;/p&gt;&lt;h3&gt;ಬಳ್ಳಾರಿ ರಾಜಕಾರಣ ಮತ್ತೊಂದು ಮಹತ್ವದ ಪ್ರಕರಣಕ್ಕೆ ಸಾಕ್ಷಿ&lt;/h3&gt;&lt;p&gt;ಮುಂದಿನ ವರ್ಷಗಳಲ್ಲಿ ಬಳ್ಳಾರಿ ರಾಜಕಾರಣ ಮತ್ತೊಂದು ಮಹತ್ವದ ಪ್ರಕರಣಕ್ಕೆ ಸಾಕ್ಷಿಯಾಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೂರಾರು ಕೋಟಿ ರುಪಾಯಿ ಮೌಲ್ಯದ ಮಹರ್ಷಿ ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಬೆಳಕಿಗೆ ಬಂದಿತು. ಪ್ರಕರಣದ ರಾಜಕೀಯ ಪರಿಣಾಮವಾಗಿ ಅಂದಿನ ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು. ಪ್ರಕರಣ ರಾಜ್ಯದಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಕಾರಣವಾಯಿತು.&lt;/p&gt;&lt;p&gt;ಇದೀಗ ಅದೇ ಬಿ. ನಾಗೇಂದ್ರ ಅವರು ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೊಮ್ಮೆ ಅವರ ವಿರುದ್ಧ ರಾಜಕೀಯ ಸಮರಕ್ಕೆ ಮುಂದಾಗಿದೆ. ನಾಗೇಂದ್ರ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಸದನದ ಒಳಗೂ ಹೊರಗೂ ಪ್ರತಿಭಟನೆ, ಹೋರಾಟ ನಡೆಸುತ್ತಿದೆ. ಪರಿಣಾಮವಾಗಿ ಬಳ್ಳಾರಿಯ ರಾಜಕೀಯ ಮತ್ತೊಮ್ಮೆ ಮುನ್ನಲೆಗೆ ಬಂದಿದ್ದು, ಬಳ್ಳಾರಿಯ ಜನರ ಬಗ್ಗೆ ರಾಜ್ಯದ ಜನರು ನಾನಾ ಬಗೆಯಲ್ಲಿ ವಿಶ್ಲೇಷಿಸುವಂತಾಗಿದೆ.&lt;/p&gt;&lt;p&gt;ಇದರ ನಡುವೆ 2026ರ ಜನವರಿ 1ರಂದು ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಹಾಗೂ ಓರ್ವ ವ್ಯಕ್ತಿಯ ಸಾವಿನ ಪ್ರಕರಣವೂ ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ವಾತಾವರಣದ ಕುರಿತು ರಾಜ್ಯದ ಗಮನ ಸೆಳೆಯಿತು. ಈ ಘಟನೆ ಬಳ್ಳಾರಿಯ ರಾಜಕೀಯ ವೈಖರಿ ಹಾಗೂ ಇಲ್ಲಿನ ಜನಜೀವನದ ಕುರಿತು ಹಲವು ಚರ್ಚೆಗಳಿಗೆ ಕಾರಣವಾಯಿತು.&lt;/p&gt;&lt;p&gt;ಗಣಿಗಾರಿಕೆ ವಿವಾದದಿಂದ ಆರಂಭಿಸಿ &lsquo;ಆಪರೇಷನ್ ಕಮಲ&rsquo;, ಸಚಿವರ ರಾಜಿನಾಮೆ, ಭ್ರಷ್ಟಾಚಾರ ಆರೋಪ, ರಾಜಕೀಯ ಸಂಘರ್ಷ ಹಾಗೂ ಇತ್ತೀಚಿನ ಘಟನೆಗಳ ವರೆಗೆ ಬಳ್ಳಾರಿ ಒಂದಲ್ಲ ಒಂದು ಕಾರಣಕ್ಕೆ ರಾಜ್ಯದ ರಾಜಕೀಯ ನಕ್ಷೆಯಲ್ಲಿ ತನ್ನ ಛಾಪು ಮೂಡಿಸುತ್ತಲೇ ಬಂದಿದೆ. ಅಧಿಕಾರದ ಆಟದಲ್ಲಿ ಬಳ್ಳಾರಿಯ ಪ್ರಭಾವ ಕಡಿಮೆಯಾಗಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿಯಾಗಿದ್ದು, ರಾಜಕೀಯ ವಿವಾದಗಳ ಜಿಲ್ಲೆ ಎಂಬ ಕುಖ್ಯಾತಿಗೂ ಬಳ್ಳಾರಿ ಒಳಗಾಗಿರುವುದು ಈ ಭಾಗದ ಜನರ ಬೇಸರಕ್ಕೂ ಕಾರಣವಾಗಿಸಿದೆ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-bjp-protest-and-demandig-b-nagendra-resignation-rav/articleshow-foqii86"/>
        </item>
        <item>
            <title><![CDATA[ಬಿಜೆಪಿ ಪಾದಯಾತ್ರೆಗೆ ತಿರುಗೇಟು ನೀಡಲು ಕೈ ಬಿಗ್ ಪ್ಲಾನ್! ಈ ಒಂದು ಕಾರ್ಯಕ್ರಮಕ್ಕೆ ಇಡೀ ಸಚಿವ ಸಂಪುಟವೇ ಬಳ್ಳಾರಿಗೆ?]]></title>
            <link>https://kannada.asianetnews.com/politics/ballari-politics-cabinet-approves-unveiling-valmiki-statue-shortly-after-bjp-padayatra-rav/articleshow-fra2gzh</link>
            <guid isPermaLink="true">https://kannada.asianetnews.com/politics/ballari-politics-cabinet-approves-unveiling-valmiki-statue-shortly-after-bjp-padayatra-rav/articleshow-fra2gzh</guid>
            <pubDate>Fri, 04 Sep 2026 12:19:37 +0530</pubDate>
            <description><![CDATA[&lt;p&gt;ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ವಾಲ್ಮೀಕಿ ನಿಗಮ ಹಗರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಪ್ರತಿಯಾಗಿ, ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಬೃಹತ್ ಶಕ್ತಿ ಪ್ರದರ್ಶನವನ್ನಾಗಿ ಮಾಡಲು ಸಜ್ಜಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1nj9nsdxw1vkdevzg0q42h7,imgname-ballari-politics-1788503971629.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ. ಬಳ್ಳಾರಿ&lt;/strong&gt;&lt;/p&gt;&lt;p&gt;&lt;strong&gt;ಬಳ್ಳಾರಿ (ಸೆ.4):&lt;/strong&gt; ಬಳ್ಳಾರಿ ನಗರದ ಎಸ್ಪಿ ವೃತ್ತದಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ರಾಜ್ಯ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿದ್ದು, ಇದನ್ನು ಅದ್ಧೂರಿ ಕಾರ್ಯಕ್ರಮವನ್ನಾಗಿ ರೂಪಿಸುವ ಮೂಲಕ ಬಿಜೆಪಿಯ ಪಾದಯಾತ್ರೆಗೆ ರಾಜಕೀಯವಾಗಿ ತಿರುಗೇಟು ನೀಡಲು ಕಾಂಗ್ರೆಸ್&zwnj; ಸಜ್ಜಾಗಿದೆ.&lt;/p&gt;&lt;p&gt;ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಧೋರಣೆ ಖಂಡಿಸಿ ಬಿಜೆಪಿ ರಾಯಚೂರಿನಿಂದ ಬಳ್ಳಾರಿಯವರೆಗೆ ನಡೆಸುತ್ತಿರುವ ಪಾದಯಾತ್ರೆ ಸೆ. 10ರಂದು ಬಳ್ಳಾರಿಗೆ ತಲುಪಲಿರುವ ಹಿನ್ನೆಲೆಯಲ್ಲಿ ಪುತ್ಥಳಿ ಅನಾವರಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಗಣಿನಾಡಿನ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ವಾಲ್ಮೀಕಿ ನಿಗಮ ಹಗರಣದಿಂದ ಕಾಂಗ್ರೆಸ್-ಬಿಜೆಪಿ ನಡುವೆ ರಾಜಕೀಯ ಸಂಘರ್ಷ&lt;/h2&gt;&lt;p&gt;ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದ ಬಳಿಕ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್&zwnj;-ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿದೆ. ಉಭಯ ಪಕ್ಷಗಳ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪ, ವಾಕ್ಸಮರ ನಡೆಸುತ್ತಿದ್ದು, ಮಾಜಿ ಸಚಿವ ಹಾಗೂ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಜಿದ್ದಾಜಿದ್ದು ಮತ್ತಷ್ಟು ಹೆಚ್ಚಾಗಿದೆ.&lt;/p&gt;&lt;p&gt;ಇದೀಗ ಬಿಜೆಪಿಯ ಪಾದಯಾತ್ರೆಗೆ ಪ್ರತಿಯಾಗಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಬೃಹತ್&zwnj; ಪ್ರಮಾಣದಲ್ಲಿ ಆಯೋಜಿಸಲು ಕಾಂಗ್ರೆಸ್&zwnj; ಚಿಂತನೆ ನಡೆಸಿದೆ. ಸುಮಾರು 50 ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸುವ ಉದ್ದೇಶ ಹೊಂದಿದ್ದು, ಕಾರ್ಯಕ್ರಮದ ದಿನಾಂಕ ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತಿದೆ.&lt;/p&gt;&lt;h3&gt;ಸಚಿವ ಸಂಪುಟವೇ ಬಳ್ಳಾರಿಗೆ ಆಗಮಿಸುವ ಸಾಧ್ಯತೆ!&lt;/h3&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಸೇರಿದಂತೆ ಇಡೀ ಸಚಿವ ಸಂಪುಟವೇ ಬಳ್ಳಾರಿಗೆ ಆಗಮಿಸುವ ಸಾಧ್ಯತೆ ಇದ್ದು, ಕಾರ್ಯಕ್ರಮವನ್ನು ಪಕ್ಷದ ಶಕ್ತಿ ಪ್ರದರ್ಶನದ ವೇದಿಕೆಯಾಗುವುದು ನಿಚ್ಚಳವಾಗಿದೆ.&lt;/p&gt;&lt;h3&gt;&lt;strong&gt;ಬ್ಯಾನರ್&zwnj; ಗಲಾಟೆ ಕಹಿ ನೆನಪು:&lt;/strong&gt;&lt;/h3&gt;&lt;p&gt;ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಸಂಬಂಧಿಸಿದಂತೆ ಬ್ಯಾನರ್&zwnj; ಅಳವಡಿಸುವ ವಿಚಾರದಲ್ಲಿ 2026ರ ಜನವರಿಯಲ್ಲಿ ಕಾಂಗ್ರೆಸ್&zwnj; ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಜಿಲ್ಲೆಯಲ್ಲಿ ರಾಜಕೀಯ ಬಿಸಿ ಹೆಚ್ಚಿಸಿತ್ತು. ಘಟನೆಯಲ್ಲಿ ಕಾಂಗ್ರೆಸ್&zwnj; ಕಾರ್ಯಕರ್ತ ರಾಜಶೇಖರ ಎಂಬಾತ ಖಾಸಗಿ ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಬಲಿಯಾಗಿದ್ದ. ಘಟನೆ ಬಳಿಕ ಶಾಸಕ ನಾರಾ ಭರತ್&zwnj; ರೆಡ್ಡಿ ಅವರನ್ನು ಬಂಧಿಸಬೇಕು ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗ್ರಹಿಸಿದ್ದರು. ಪ್ರಕರಣ ಸಂಬಂಧ ಉಭಯ ಪಕ್ಷಗಳ ನಾಯಕರ ನಡುವೆ ತೀವ್ರ ವಾಕ್ಸಮರವೂ ನಡೆದಿತ್ತು.&lt;/p&gt;&lt;p&gt;ಬ್ಯಾನರ್&zwnj; ಗಲಾಟೆಗೆ ಸಂಬಂಧಿಸಿದಂತೆ ಬ್ರೂಸ್&zwnj;ಪೇಟೆ ಪೊಲೀಸ್&zwnj; ಠಾಣೆಯಲ್ಲಿ ಆರು ಪ್ರಕರಣಗಳು ದಾಖಲಾಗಿದ್ದು, ಗನ್&zwnj;ಮ್ಯಾನ್&zwnj;ಗಳಾದ ಗುರುಚರಣ್&zwnj; ಸಿಂಗ್&zwnj;, ಬಲ್ಜಿತ್&zwnj; ಸಿಂಗ್&zwnj; ಹಾಗೂ ಮಹೇಂದ್ರ ಸಿಂಗ್&zwnj; ಸೇರಿದಂತೆ ಕಾಂಗ್ರೆಸ್&zwnj;ನ 10 ಮತ್ತು ಬಿಜೆಪಿಯ 11 ಕಾರ್ಯಕರ್ತರು ಸೇರಿ ಒಟ್ಟು 26 ಮಂದಿಯನ್ನು ಬಂಧಿಸಲಾಗಿತ್ತು.&lt;/p&gt;&lt;p&gt;ಬಳಿಕ ನ್ಯಾಯಾಲಯ 25 ಜನ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಬ್ಯಾನರ್ ಗಲಾಟೆ, ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ, ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜಿನಾಮೆ ಈ ಎಲ್ಲ ರಾಜಕೀಯ ಬೆಳವಣಿಗೆಯಿಂದ ಬಳ್ಳಾರಿ ಜಿಲ್ಲೆ ರಾಜ್ಯಮಟ್ಟದಲ್ಲಿ ಹೆಚ್ಚು ಸದ್ದು ಮಾಡಿತ್ತು. ಏತನ್ಮಧ್ಯೆ ಪ್ರತಿಪಕ್ಷ ಬಿಜೆಪಿ ನಾಗೇಂದ್ರ ರಾಜಿನಾಮೆಗೆ ಒತ್ತಾಯಿಸಿ ಸದನದಲ್ಲಿ ಹೋರಾಟ ನಡೆಸಿದ ಫಲಿತ ಎಂಬಂತೆ ಸಚಿವ ಸ್ಥಾನಕ್ಕೆ ಶಾಸಕ ಬಿ. ನಾಗೇಂದ್ರ ರಾಜಿನಾಮೆಗೆ ನೀಡಿದ್ದು, ಇದು ಸರ್ಕಾರಕ್ಕೂ ಒಂದಷ್ಟು ಮುಜುಗರ ತಂದಂತಾಗಿದೆ.&lt;/p&gt;&lt;p&gt;ಈ ಎಲ್ಲ ಬೆಳವಣಿಗೆಗಳ ನಡುವೆಯೇ ನಡೆಯಲಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಇದೀಗ ಬಳ್ಳಾರಿ ರಾಜಕೀಯದ ಮುಂದಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗುವ ಲಕ್ಷಣಗಳಿವೆ.&lt;/p&gt;&lt;p&gt;ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣಕ್ಕೆ ಬೃಹತ್ ಕಾರ್ಯಕ್ರಮ ಆಯೋಜಿಸುತ್ತೇವೆ. 50 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಅರ್ಥಪೂರ್ಣ ಸಮಾರಂಭ ಹಮ್ಮಿಕೊಳ್ಳಲಾಗುವುದು. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/ballari-politics-cabinet-approves-unveiling-valmiki-statue-shortly-after-bjp-padayatra-rav/articleshow-fra2gzh"/>
        </item>
        <item>
            <title><![CDATA['ಏಯ್ ನಾಗೇಂದ್ರ, ನಿನ್ನದು ಕರ್ಮದ ಕಣ್ಣೀರು ಕಣೋ..' ವಾಲ್ಮೀಕಿ ಹಗರಣ, ಚಾರ್ಜ್‌ಶೀಟ್ ಇಟ್ಟುಕೊಂಡು ರೆಡ್ಡಿ ವಾಗ್ದಾಳಿ!]]></title>
            <link>https://kannada.asianetnews.com/politics/janardana-reddy-slams-b-nagendra-over-resignation-in-valmiki-corporation-scam-rav/articleshow-glinq72</link>
            <guid isPermaLink="true">https://kannada.asianetnews.com/politics/janardana-reddy-slams-b-nagendra-over-resignation-in-valmiki-corporation-scam-rav/articleshow-glinq72</guid>
            <pubDate>Sat, 29 Aug 2026 12:47:25 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗೇಂದ್ರ ರಾಜೀನಾಮೆ ವೇಳೆ ಹಾಕಿದ್ದು 'ಕರ್ಮದ ಕಣ್ಣೀರು' ಎಂದಿರುವ ಅವರು, ಹಗರಣದ ಹಣದಲ್ಲಿಯೇ ವೈಯಕ್ತಿಕ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m166133b9cfgyay34kshj3fd,imgname-----------------------2026-08-29t124033.977-1787987790955.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.29): &lt;/strong&gt;ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಒಂದೇ ಖಾತೆಗೆ ಎರಡು ಬಾರಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;h2&gt;ನಿಮಗೂ ಮುಂಬೈ ಮೂಲದವರಿಗೂ ಏನು ಸಂಬಂಧ?&lt;/h2&gt;&lt;p&gt;ವಾಲ್ಮೀಕಿ ನಿಗಮದ ಖಾತೆಯಿಂದಲೇ ನೇರವಾಗಿ ಮುಂಬೈ ಮೂಲದ ಮೂವರಿಗೆ ಹಣ ವರ್ಗಾವಣೆಯಾಗಿದೆ. ಹಾಗಾದರೆ ನಿಮಗೂ(ಬಿ ನಾಗೇಂದ್ರ) ಇವರಿಗೂ ಇರೋ ಸಂಬಂಧ ಏನು? ಈ ಬಗ್ಗೆ ಬಳ್ಳಾರಿಯ ಮುಸ್ಲಿಂ ಮುಖಂಡರಿಗೆ ಸ್ಪಷ್ಟಪಡಿಸಲಿ. ಈ ಪ್ರಕರಣದಲ್ಲಿ 24 ಜನರು ನೇರವಾಗಿ ಭಾಗಿಯಾಗಿದ್ದಾರೆ. ಆರು ನೂರು ಅಕೌಂಟ್ ಗೆ ಹಣ ವರ್ಗಾವಣೆಯಾಗಿ ಅಲ್ಲಿಂದ ಡ್ರಾ ಮಾಡಿಕೊಳ್ಳಲಾಗಿದೆ. ಅದೇ ಹಣದಿಂದ ನಾಗೇಂದ್ರ ಕಾರು, ಬಂಗಾರ, ಮನೆ ಎಲ್ಲವನ್ನೂ ತೆಗೆದುಕೊಂಡಿದ್ದಾನೆ.. ಇ.ಡಿ.ಚಾರ್ಜ್&zwnj;ಶೀಟ್ ಇಟ್ಟುಕೊಂಡು ವಾಗ್ದಾಳಿ ನಡೆಸಿದರು.&lt;/p&gt;&lt;h3&gt;ನಾಗೇಂದ್ರನ ಮುಟ್ಟಿದ್ರೆ ಒಂದು ಲಕ್ಷ ನಾಗೇಂದ್ರ ಹುಟ್ತಾರೆ:&lt;/h3&gt;&lt;p&gt;ಹುಚ್ಚುಚ್ಚಾಗಿ ಮಾತಾಡೋ ನಾಗೇಂದ್ರ ಕಲಿಯುಗದ ಶಂಬೂಕನಿದ್ದಂತೆ. ನಾಗೇಂದ್ರನ ಮುಟ್ಟಿದ್ರೆ ಒಂದು ಲಕ್ಷ ಜನ ನಾಗೇಂದ್ರ ಬರ್ತಾರೆ ಎಂಬ ಹೇಳಿಕೆ ಉಲ್ಲೇಖಿಸಿ ವಾಗ್ದಾಳಿ ನಡೆಸಿದ ಜನಾರ್ದನ ರೆಡ್ಡಿ ಅವರು, 'ಏಯ್ ನಾಗೇಂದ್ರ, ಏಯ್ ಮೂರ್ಖ, ಸೊಕ್ಕಿನಿಂದ ಮಾತಾಡ್ತೀಯಾ? ದುರಹಂಕಾರ ತೋರಿಸ್ತಿಯಾ? ಹುಡುಗ ಆಗಿದ್ದಾಗ ನಿನ್ನನ್ನು ಬೆಳೆಸಿರುವೆ, ನಿನ್ನ ಅಣು ಅಣುವೂ ನನಗೆ ಗೊತ್ತು. ನಮಗೆ ಚಾಲೆಂಜ್ ಮಾಡ್ತಿಯಾ? ಈಗ ರಾಜೀನಾಮೆ ಕೊಡುವಾಗ ಕಣ್ಣೀರು ಹಾಕ್ತಿಯಲ್ಲ ಅದು ಕರ್ಮದ ಕಣ್ಣೀರು. ಮೂರು ಲಕ್ಷ ವಾಲ್ಮೀಕಿ ಸಮುದಾಯಕ್ಕೆ ಸೇರಬೇಕಾದ ಕೋಟ್ಯಂತರ ಹಣವನ್ನು ದುರುಪಯೋಗ ಮಾಡಿಕೊಂಡಿದ್ದರ ಕರ್ಮ ಈಗ ಸುತ್ತಿಕೊಂಡಿದೆ. ಸತ್ತ ಚಂದ್ರಶೇಖರ್ ಆತ್ಮದ ಕರ್ಮ ನಿನ್ನನ್ನು ಸುಮ್ಮನೆ ಬಿಡೋಲ್ಲ.. ಕೆಟ್ಟ ಕರ್ಮದ ಕಣ್ಣೀರು ಇನ್ನೂ ಹಾಕಬೇಕಿದೆ ಎಂದು ಎಚ್ಚರಿಸಿದರು.&lt;/p&gt;&lt;p&gt;ನಮ್ಮನ್ನು ರಿಜಕ್ಟ್ ಪೀಸ್ ಅಂತಾನೆ ಇವ್ನು. ಶ್ರೀರಾಮುಲು ಮತ್ತು ನನ್ನ ಹೆಸರನ್ನ ಪದೇಪದೆ ಉಲ್ಲೇಖ ಮಾಡ್ತಾನೆ. ಸಿದ್ದರಾಮಯ್ಯ, ಯಡಿಯೂರಪ್ಪ, ವಾಜಪೇಯಿ, ಎಸ್&zwnj;ಎಂ ಕೃಷ್ಣ ಎಲ್ಲರೂ ಸೋತು ಗೆದ್ದವರೇ. ಶ್ರೀರಾಮುಲು ಸೋತಿರೋ ಬಗ್ಗೆ ಮಾತಾಡ್ತಿಯಾ? ಖರ್ಗೆ ಸೋತಿಲ್ವ? ಅವರು ರಿಜಕ್ಟ್ ಪೀಸ್ ಅಲ್ವ? ಕಲಬುರಗಿಯಲ್ಲಿ ಸೋತ ಬಳಿಕ ಎಐಸಿಸಿ ಅಧ್ಯಕ್ಷ ಮಾಡಿಲ್ವ? ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ. ನೀನು ಗೆದ್ದಾದರೂ ಮಾಡಿದ್ದೇನು? ವಾಲ್ಮೀಕಿ ನಿಗಮ ಹಗರಣ ಮಾಡಿದ್ದು ಸಾಧನೆ. ಸಿದ್ದರಾಮಯ್ಯ ಯಾಕೆ ನಿನ್ನ ರಾಜೀನಾಮೆ ಪಡೆದ್ರು? ಈಗ ಡಿಕೆ ಶಿವಕುಮಾರ್ ಯಾಕೆ ರಾಜೀನಾಮೆ ಪಡೆದ್ರು? ಮೊದಲಸಲ ಸದನದಲ್ಲೇ ಸಿದ್ದರಾಮಯ್ಯರೇ ಹಗರಣ ನಡೆದಿರೋದು ಒಪ್ಪಿಕೊಂಡ್ರು. ಹಗರಣ ಮಾಡಿಲ್ಲ ಅಂತಾದ್ರೆ ಸಿದ್ದರಾಮಯ್ಯ ಯಾಕೆ ರಾಜೀನಾಮೆ ಪಡೆದ್ರು? ಡಿಕೆ ಶಿವಕುಮಾರ್ಗೆ ಆಗಲಿ, ಸಿದ್ದರಾಮಯ್ಯರಿಗೆ ಆಗಲಿ ಇಬ್ಬರ ಆಯ್ಕೆ ನೀನಲ್ಲ. ನೀನಿವತ್ತು ರಾಜೀನಾಮೆ ಕೊಟ್ಟಿದ್ದಕ್ಕೆ ಚಂದ್ರಶೇಖರ್ ಆತ್ಮ ಖುಷಿ ಪಟ್ಟಿರುತ್ತದೆ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ತಾಕತ್ ಬಗ್ಗೆ ಮಾತಾಡ್ತೀಯಾ ಏಯ್ ನಾಗೇಂದ್ರ ನೀನು ನಿನ್ನ ಕಾಂಗ್ರೆಸ್ ಪಕ್ಷ ವಾಲ್ಮೀಕಿ ಹಗರಣದಲ್ಲಿ ತುಕಾರಾಂ ಗೆದ್ದಿರೋದು ಕಣೋ, ನಿನಗೆ ತಾಕತ್ತು ಇದ್ರೆ ಮೊದಲು ತುಕಾರಾಂ ರಾಜೀನಾಮೆ ಕೊಡಿಸು ನೋಡೋಣ. ಯಾರ್ಯಾರಿಗೆ ಎಷ್ಟು ಹಣ ಕೊಟ್ಟು ತುಕಾರಾಂ ಸಂಸದರಾಗಿದ್ದಾರೆ ಎಂದು ನನಗೆ ಗೊತ್ತಿದೆ. ತುಕಾರಾಂ ಸಮೇತ ಅಖಂಡ ಬಳ್ಳಾರಿ ಜಿಲ್ಲೆಯ ಹತ್ತು ಶಾಸಕರ ರಾಜೀನಾಮೆ ಕೊಡಿಸಿ ಚುನಾವಣೆ ನಿಲ್ಲು ನಾನು ರೆಡಿ, ನಾನು ಬಳ್ಳಾರಿಗೆ ಬಂದಿದ್ದೇನೆ.. ನಾಗೇಂದ್ರನ ಸವಾಲಿಗೆ ಪ್ರತಿಸವಾಲು ಹಾಕಿದ ಜನಾರ್ದನ ರೆಡ್ಡಿ!&lt;/p&gt;&lt;p&gt;ಮುಂದಿನ ಚುನಾವಣೆಯಲ್ಲಿ ಬಳ್ಳಾರಿಯ ಅಖಂಡ ಜಿಲ್ಲೆಯ ಹತ್ತಕ್ಕೆ ಹತ್ತು ಕ್ಷೇತ್ರ ಸೇರಿದಂತೆ ಬಳ್ಳಾರಿ ಲೋಕಸಭಾ ಗೆಲ್ತೇವೆ ಎಂದು ಚಾಲೆಂಜ್ ಮಾಡಿದ ಜನಾರ್ದನ ರೆಡ್ಡಿ, 'ನಾವು ಓಪನ್ ಚಾಲೆಂಜ್ ಮಾಡ್ತೇವೆ ಬನ್ನಿ ಕಾಂಗ್ರೆಸ್ ನಾಯಕರೇ ನಾಗೇಂದ್ರ ಚಾಲೆಂಜ್ ಒಪ್ಪಿಕೊಂಡು ಬನ್ನಿ ಎಂದು ಸವಾಲು ಹಾಕಿದರು.&lt;/p&gt;&lt;p&gt;&lt;strong&gt;ಕಾಂಗ್ರೆಸ್ ಪಕ್ಷಕ್ಕೆ ತಲೆತಗ್ಗಿಸೋ ಪರಿಸ್ಥಿತಿ&lt;/strong&gt;&lt;/p&gt;&lt;p&gt;ಸಿದ್ದರಾಮಯ್ಯ ಸಂಪುಟದಿಂದ ನಾಗೇಂದ್ರನ ತೆಗೆದುಹಾಕಿದಾಗ ಹಗರಣ ನಡೆದಿರಲಿಲ್ಲವ? ಕಾಂಗ್ರೆಸ್ ಪಕ್ಷ ನಾಗೇಂದ್ರನಿಂದಾಗಿ ತಲೆತಗ್ಗಿಸೋ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ರಾಜೀನಾಮೆ ಪಡೆದಿದ್ದಾರೆ. ಹಗರಣ ನಡೆದಿದ್ದು ಬಿಟ್ಟು ಕಣ್ಣೀರು ಹಾಕೋದೇನು, ಚಾಲೆಂಜ್ ಮಾಡೋದೇನು, ಮನುಸ್ಮೃತಿ, ದಲಿತ.. ಏನೇನೋ ಸಂಬಂಧವಿಲ್ಲದ್ದು ಮಾತನಾಡಿ ಜನರ ದಿಕ್ಕುತಪ್ಪಿಸೋ ಕೆಲಸ ಮಾಡೋ ನಾಗೇಂದ್ರ ನಿಮ್ಮ ಮಾತು ಈಗ ಯಾರೂ ನಂಬುವುದಿಲ್ಲ. ಹಗರಣ ನಡೆದಿದ್ದು ಚಾರ್ಜ್ ಶೀಟ್&zwnj;ನಲ್ಲೇ ದಾಖಲಾಗಿದೆ. ಈಗ ದಲಿತ, ಮನುಸ್ಮೃತಿ ಮಾತು ಕೇಳಿದ್ರೆ ಇದೆಲ್ಲ ನಂಬೋಕೆ ಜನರೇನು ಮೂರ್ಖರಾ? ಈಗ ಎಲ್ಲರಿಗೂ ರಾಜಕೀಯ ತಿಳಿವಳಿಕೆ ಇದೆ, ನಿನ್ನ ಮಾತುಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು.&lt;/p&gt;&lt;p&gt;&lt;strong&gt;ತುಕಾರಾಂ ಕುಟುಂಬಕ್ಕೆ ಮಂತ್ರಿ ಸಿಕ್ಕರೆ ನಮ್ಮ ಹೋರಾಟ ಮುಂದುವರಿಯುತ್ತೆ&lt;/strong&gt;&lt;/p&gt;&lt;p&gt;ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ರಾಜೀನಾಮೆ ಪಡೆದ್ರೆ ಎಲ್ಲ ಮುಗಿದಂತಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವವರಿಗೆ ನಾವು ಹೋರಾಟ ಮುಂದುವರಿಸುತ್ತೇವೆ. ನಾಳೆ ನಾಗೇಂದ್ರನ ಸ್ಥಾನಕ್ಕೆ ತುಕಾರಾಂ ಕುಟುಂಬದ ಸದಸ್ಯರು ಮಂತ್ರಿಯಾದರೂ ನಮ್ಮ ಹೋರಾಟ ನಡೆಯುತ್ತೆ ಎಂದು ಎಚ್ಚರಿಸಿದರು.&lt;/p&gt;&lt;p&gt;&lt;strong&gt;ವಾಲ್ಮೀಕಿ ಹಗರಣದ ದುಡ್ಡಲ್ಲೇ ತುಕಾರಾಂ ಪತ್ನಿ ಶಾಸಕಿ&lt;/strong&gt;&lt;/p&gt;&lt;p&gt;ವಾಲ್ಮೀಕಿ ಹಗರಣ ದುಡ್ಡನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಅದೇ ಹಣದಲ್ಲಿ ಸಂಸದ ತುಕಾರಾಂ ಪತ್ನಿ ಚುನಾವಣೆಯಲ್ಲಿ ಗೆದ್ದು ಶಾಸಕಿಯಾಗಿದ್ದಾರೆ. ಇಂಥವರನ್ನು ಈಗ ಮಂತ್ರಿಯಾಗಿ ಮಾಡಿದ್ರೆ ನಮ್ಮ ಹೋರಾಟ ನಿಶ್ಚಿತ. ಈ ಬಗ್ಗೆ ನಮ್ಮ ನಾಯಕರಾದ ವಿಜಯೇಂದ್ರ, ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಪಾದಯಾತ್ರೆ ನಿಲ್ಲೋದಿಲ್ಲ. ವಾಲ್ಮೀಕಿ ಹಗರಣದಲ್ಲಿ ಭಾಗಿಯಾಗದ ಯಾರೇ ಮಂತ್ರಿಯಾದರೂ ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ ಜನಾರ್ದನ ರೆಡ್ಡಿ ಅವರು, ನಾಗೇಂದ್ರ ಒಂದು ವಿಷಯ ಮಾತ್ರ; ರಾಜೀನಾಮೆ ಬಳಿಕವೂ ನಮ್ಮ ಪಾದಯಾತ್ರೆ ಮುಂದುವರಿಯುತ್ತದೆ ಎಂದರು.&lt;/p&gt;]]></content:encoded>
            <category>ballari</category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/janardana-reddy-slams-b-nagendra-over-resignation-in-valmiki-corporation-scam-rav/articleshow-glinq72"/>
        </item>
        <item>
            <title><![CDATA[ಬಾಕಿ ವಸೂಲಿಯಾಗದಿದ್ದರೂ KSMCL ಕಂಪನಿಗೆ ಜಾಕ್‌ಪಾಟ್: ಬಳ್ಳಾರಿಯಲ್ಲಿ 47 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್!]]></title>
            <link>https://kannada.asianetnews.com/karnataka-districts/ksmcl-gets-approval-for-47-acres-forest-diversion-in-ballari-despite-fdt-dues-san/articleshow-kei5ecw</link>
            <guid isPermaLink="true">https://kannada.asianetnews.com/karnataka-districts/ksmcl-gets-approval-for-47-acres-forest-diversion-in-ballari-despite-fdt-dues-san/articleshow-kei5ecw</guid>
            <pubDate>Mon, 27 Jul 2026 18:13:22 +0530</pubDate>
            <description><![CDATA[&lt;p&gt;ರಾಜ್ಯ ಸರ್ಕಾರದ KSMCL ಸಂಸ್ಥೆಯು ₹136 ಕೋಟಿಗೂ ಅಧಿಕ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದರೂ, ಬಳ್ಳಾರಿಯಲ್ಲಿ ಕನ್ವೇಯರ್ ಬೆಲ್ಟ್ ನಿರ್ಮಾಣಕ್ಕೆ 47 ಎಕರೆ ಅರಣ್ಯ ಭೂಮಿ ಬಳಸಲು ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kyhsdzgc636n4254fax54j1e,imgname-ksmcl-1785156009484.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.27): &lt;/strong&gt;ರಾಜ್ಯ ಸರ್ಕಾರದ ಒಡೆತನದ 'ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ' (KSMCL) ಸಂಸ್ಥೆಯು ಕಳೆದ 25 ವರ್ಷಗಳಿಂದ ಅರಣ್ಯ ಅಭಿವೃದ್ಧಿ ತೆರಿಗೆ (FDT) ರೂಪದಲ್ಲಿ ಪಾವತಿಸಬೇಕಿದ್ದ ಬರೋಬ್ಬರಿ ₹136 ಕೋಟಿಯಿಂದ ₹350 ಕೋಟಿವರೆಗಿನ ಬಾಕಿ ಮೊತ್ತವನ್ನು ಪಾವತಿಸದಿದ್ದರೂ, ಬಳ್ಳಾರಿ ಜಿಲ್ಲೆಯ ಸಂಶೋಧಿತ ಅರಣ್ಯ ಪ್ರದೇಶದಲ್ಲಿ 47 ಎಕರೆಗೂ ಹೆಚ್ಚು ಅರಣ್ಯ ಭೂಮಿಯನ್ನು ಇತರ ಉದ್ದೇಶಕ್ಕೆ ಬಳಸಲು ಕೇಂದ್ರ ಪರಿಸರ ಸಚಿವಾಲಯವು ಅನುಮೋದನೆ ನೀಡಿದೆ.&lt;/p&gt;&lt;p&gt;ತನ್ನ 1,536 ಎಕರೆ ವಿಸ್ತೀರ್ಣದ ಕಬ್ಬಿಣದ ಅದಿರು ಗಣಿಯಿಂದ ಅದಿರನ್ನು ಸಾಗಿಸಲು ಕನ್ವೇಯರ್ ಬೆಲ್ಟ್ (Conveyor Belt) ನಿರ್ಮಿಸುವ ಸಲುವಾಗಿ, ಕೆಎಸ್&zwnj;ಎಂಸಿಎಲ್ ಸಂಸ್ಥೆಯು 2020 ರಲ್ಲೇ ಅರಣ್ಯ ಭೂಮಿ ಬಳಕೆಗೆ ಪ್ರಸ್ತಾಪವನ್ನು ಸಲ್ಲಿಸಿತ್ತು. ರಸ್ತೆ ಸಾರಿಗೆಯನ್ನು ತಪ್ಪಿಸುವ ಮೂಲಕ ಕನ್ವೇಯರ್ ಬೆಲ್ಟ್&zwnj;ಗಳು ಮಾಲಿನ್ಯವನ್ನು ಕಡಿಮೆ ಮಾಡುತ್ತವೆಯಾದರೂ, 2000-2008 ಮತ್ತು 2008-2013 ರ ಅವಧಿಯಲ್ಲಿ ನಡೆದ ಗಣಿಗಾರಿಕೆ ಮತ್ತು ಅದಿರು ರಫ್ತಿಗೆ ಸಂಬಂಧಿಸಿದಂತೆ ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಪಾವತಿಸದಿರುವ ಬಗ್ಗೆ ಅರಣ್ಯ ಇಲಾಖೆಯು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಕಳವಳ ವ್ಯಕ್ತಪಡಿಸುತ್ತಲೇ ಇತ್ತು.&lt;/p&gt;&lt;h2&gt;&lt;strong&gt;ಸುಪ್ರೀಂ ಕೋರ್ಟ್ ಆದೇಶವೇ ಕಂಪನಿಗೆ ವರವಾಯ್ತು&lt;/strong&gt;&lt;/h2&gt;&lt;p&gt;ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ವರ್ಷಕ್ಕೆ ಒಂದು ಮಿಲಿಯನ್ ಟನ್&zwnj;ಗಿಂತಲೂ ಹೆಚ್ಚು ಅದಿರು ತೆಗೆಯುವ ಎಲ್ಲಾ ಗಣಿಗಾರಿಕೆ ಕಂಪನಿಗಳು ಕನ್ವೇಯರ್ ಬೆಲ್ಟ್&zwnj;ಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಸ್ಪಷ್ಟ ನಿರ್ದೇಶನವೇ ಕೆಎಸ್&zwnj;ಎಂಸಿಎಲ್ ಸಂಸ್ಥೆಗೆ ಬಾಕಿ ಹಣ ಪಾವತಿಸದಿದ್ದರೂ ಅನುಮತಿ ಸಿಗಲು ಪ್ರಮುಖ ಕಾರಣವಾಗಿದೆ ಎಂದು ಹಿರಿಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;&quot;ಈ ಪ್ರಸ್ತಾಪವು ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆಯನ್ನು ಒಳಗೊಂಡಿರುವುದರಿಂದ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ನೆರವಾಗುವುದರಿಂದ, ಪ್ರಸ್ತಾಪಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEF&amp;amp;CC) ಶಿಫಾರಸು ಮಾಡಲು ನಿರ್ಧರಿಸಲಾಯಿತು&quot; ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ತೆರವು) ಮಹೇಶ್ ಬಿ. ಶಿರೂರ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;₹350 ಕೋಟಿಯಿಂದ ₹135 ಕೋಟಿಗೆ ಇಳಿದ ಬಾಕಿ ಮೊತ್ತ&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯು ಸುಮಾರು ಎರಡು ವರ್ಷಗಳ ಹಿಂದೆ ಎಫ್&zwnj;ಡಿಟಿ (FDT) ಬಾಕಿಯನ್ನು ಮೊದಲ ಬಾರಿಗೆ ಲೆಕ್ಕ ಹಾಕಿತ್ತು. ಆಗ ಚಾಲ್ತಿಯಲ್ಲಿದ್ದ ಬೆಂಚ್&zwnj;ಮಾರ್ಕ್ ದರಗಳ ಆಧಾರದ ಮೇಲೆ, ಕೆಎಸ್&zwnj;ಎಂಸಿಎಲ್ ₹350.61 ಕೋಟಿ ಬಾಕಿ ಪಾವತಿಸದೇ ಗಣಿಗಾರಿಕೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಸರ್ಕಾರದ ನಿರ್ದೇಶನದ ನಂತರ, ಕಂಪನಿಯು ಸಲ್ಲಿಸಿದ ಇನ್&zwnj;ವಾಯ್ಸ್&zwnj;ಗಳನ್ನು ಆಧರಿಸಿ ಇಲಾಖೆಯು ಲೆಕ್ಕಾಚಾರವನ್ನು ಮರುಪರಿಶೀಲಿಸಿತು. ಇದರಿಂದಾಗಿ ಬಾಕಿ ಎಫ್&zwnj;ಡಿಟಿ ಮೊತ್ತವನ್ನು ₹135.94 ಕೋಟಿಗೆ ಪರಿಷ್ಕರಿಸಿ ಇಳಿಸಲಾಯಿತು.&lt;/p&gt;&lt;p&gt;ಹಿಂದೆ 'ಮೈಸೂರು ಮಿನರಲ್ಸ್ ಲಿಮಿಟೆಡ್' (MML) ಎಂದು ಕರೆಯಲ್ಪಡುತ್ತಿದ್ದ ಈ ಕಂಪನಿಯು ದಾಖಲೆಗಳನ್ನು ನಕಲಿ (Fudged Documents) ಮಾಡಿದ ಆರೋಪಗಳನ್ನು ಎದುರಿಸಿತ್ತು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ನೆನಪಿಸಿಕೊಂಡಿದ್ದಾರೆ. &quot;2018 ರಲ್ಲೇ ಕಂಪನಿಯು ದಾಖಲೆಗಳನ್ನು ತಿರುಚಿದ್ದನ್ನು ಸರ್ಕಾರ ಒಪ್ಪಿಕೊಂಡಿತ್ತು. ಆದರೂ ಈ ವರೆಗೆ ಕಂಪನಿಯ ವಿರುದ್ಧ ಯಾವುದೇ ಸೂಕ್ತ ತನಿಖೆ ನಡೆದಿಲ್ಲ. ಗಣಿಗಾರಿಕೆ ಕಾರ್ಯಾಚರಣೆಗೆ ಅವಕಾಶ ನೀಡುವ ಮೊದಲು ಅವರಿಂದ ಬಾಕಿ ಹಣವನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕಿತ್ತು&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಅರಣ್ಯ ಭೂಮಿ ಬಳಕೆಯ ಪ್ರಸ್ತಾಪವನ್ನು ಸಲ್ಲಿಸುವ ಮುಂಚಿನಿಂದಲೂ ಕಂಪನಿಗೆ ಬಾಕಿ ಹಣ ಪಾವತಿಸುವಂತೆ ಸಾಲು ಸಾಲು ನೋಟಿಸ್&zwnj;ಗಳನ್ನು ನೀಡಲಾಗಿತ್ತು. ಆದರೆ, ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯು (Stay Order) ಸರ್ಕಾರದ ಕೈಗಳನ್ನು ಕಟ್ಟಿಹಾಕಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.&lt;/p&gt;&lt;p&gt;&quot;ಈ ಹಣವು ಅರಣ್ಯ ಅಭಿವೃದ್ಧಿಗೆ ಬಳಸಬೇಕಾದ ನಿಧಿಯಾಗಿದೆ. ಇಲಾಖೆಯ ಅಧಿಕಾರಿಗಳು ಹಲವು ವರ್ಷಗಳಿಂದ ಕಂಪನಿಗೆ ಪತ್ರ ಬರೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಲಾಖೆ ಮತ್ತು ಕೆಎಸ್&zwnj;ಎಂಸಿಎಲ್ ಜಂಟಿಯಾಗಿ ಪರಿಶೀಲನೆ ನಡೆಸಿದ ನಂತರ ₹139 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಹೀಗಾಗಿ ಅನುಮೋದನೆ ಪಡೆಯುವ ಮುನ್ನ ನಿಯಮ ಪಾಲಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಪ್ರಸ್ತುತ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿದೆ&quot; ಎಂದು ಮೂಲಗಳು ಸ್ಪಷ್ಟಪಡಿಸಿವೆ.&lt;/p&gt;&lt;p&gt;ಇತ್ತೀಚೆಗೆ ಕೇಂದ್ರ ಪರಿಸರ ಸಚಿವಾಲಯವು ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆಯಾದರೂ, ಕಂಪನಿಯು ಗಣಿಗಳ ವಿಸ್ತರಣೆಗೆ ಹೊಸ ಪ್ರಸ್ತಾಪ ಸಲ್ಲಿಸಿದಾಗ ಈ ಎಫ್&zwnj;ಡಿಟಿ ಬಾಕಿ ಹಣದ ವಿಚಾರವನ್ನು ಕಡ್ಡಾಯವಾಗಿ ಪ್ರಸ್ತಾಪಿಸಲಾಗುವುದು ಎಂದು ಮೂಲಗಳು ಹೇಳಿವೆ.&lt;/p&gt;&lt;p&gt;&lt;/p&gt;]]></content:encoded>
            <category>ballari</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/ksmcl-gets-approval-for-47-acres-forest-diversion-in-ballari-despite-fdt-dues-san/articleshow-kei5ecw"/>
        </item>
        <item>
            <title><![CDATA[ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಅಂತಾ  ರಾಮಾಯಣದ ಮೇಲೆ ನಾಗೇಂದ್ರ  ಪ್ರಮಾಣ ಮಾಡಲಿ: ಶ್ರೀರಾಮುಲು]]></title>
            <link>https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb</link>
            <guid isPermaLink="true">https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb</guid>
            <pubDate>Sat, 22 Aug 2026 07:16:10 +0530</pubDate>
            <description><![CDATA[&lt;p&gt;ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ, ಸಚಿವ ಬಿ.ನಾಗೇಂದ್ರ ಅವರು ರಾಮಾಯಣ ಕೃತಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ. ನಾಗೇಂದ್ರ ರಾಜೀನಾಮೆ ನೀಡುವವರೆಗೂ ತಮ್ಮ ಹೋರಾಟ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0khxfsg1mr3a0v1gxpem0vs,imgname-----------------------2026-08-22t070824.567-1787362721584.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22):&lt;/strong&gt; ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂಬುದಾಗಿ ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ರಚಿಸಿದ ರಾಮಾಯಣ ಕೃತಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಶ್ರೀರಾಮುಲು ಸವಾಲು ಎಸೆದಿದ್ದಾರೆ.&lt;/p&gt;&lt;p&gt;ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಗೇಂದ್ರ ಯಾವ ಮಟ್ಟಿಗೂ ಹೋಗಬಲ್ಲರು. ರಾಮಾಯಣದ ಮೇಲೂ, ಮಹರ್ಷಿ ವಾಲ್ಮೀಕಿ ಮೇಲೂ ಆಣೆ ಇಡೋದಕ್ಕೂ ಅವರು ಸೈ. ನಾಗೇಂದ್ರ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಯಾವ ರೀತಿ ನಾವು ಹೋರಾಟ ಮಾಡಬೇಕು ಎಂಬ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದರು.&lt;/p&gt;&lt;p&gt;ಮಾನ ಮರ್ಯಾದೆ ಯಾವುದೂ ಇಲ್ಲದ ಕಾಂಗ್ರೆಸ್ ಪಕ್ಷ ನದಿ ಉಗಮವಾಗಿ ಹರಿಯುವಂತೆ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುತ್ತಲೇ ಬಂದಿದೆ. ನೆಹರು ಕುಟುಂಬದ ರಾಹುಲ್ ಗಾಂಧಿವರೆಗೆ ಭ್ರಷ್ಟಾಚಾರ ನಡೆಸುತ್ತಲೇ ಇದೆ ಎಂದು ಆಪಾದಿಸಿದರು.&lt;/p&gt;&lt;p&gt;ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ, ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾದಾಗಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಲೇ ಬಂದಿದೆ.&lt;/p&gt;&lt;h2&gt;ಭ್ರಷ್ಟಾಚಾರಕ್ಕೆ ಜಾತಿ ಇಲ್ಲ:&lt;/h2&gt;&lt;p&gt;ದಲಿತನಾದ ಕಾರಣಕ್ಕೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂಬ ಮಾತನ್ನು ಸಚಿವ ನಾಗೇಂದ್ರ ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಚರಿತ್ರೆ ಹಾಗೂ ಮುಖ ಇಲ್ಲ. ನಿಗಮದ ಮೂಲಕ ಹಲವಾರು ಕಾರ್ಯಕ್ರಮ ಜಾರಿ ಮಾಡಲು ಹಣ ಬಳಸಬೇಕಿತ್ತು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನಿಗಮದ ಹಣ ಬಳಸುವ ಬದಲು ಅವರ ಭವಿಷ್ಯವನ್ನೇ ಬಾಡುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ನಿಗಮದ ಹಣ ಕೊಳ್ಳೆ ಹೊಡೆದು ರಾಹುಲ್ ಗಾಂಧಿ ಅವರ ದೆಹಲಿ ಮನೆಗೆ ಕಳುಹಿಸಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಲಪಟಾಯಿಸಿದರು. ಇದು ಇಡೀ ಸಮಾಜ ತಲೆತಗ್ಗಿಸುವ ವಿಚಾರ. ವಾಲ್ಮೀಕಿ ಸಮುದಾಯಕ್ಕೆ ನೋವು ಮಾಡಿದ್ದಾರೆ. ಸರ್ಕಾರದ ಖಜಾನೆಯಲ್ಲಿದ್ದ ಹಣವನ್ನು ಸಾವಿರಾರು ಖಾತೆಗಳಿಗೆ ವರ್ಗಾಯಿಸಿದ್ದಾರೆ. ಐಷಾರಾಮಿ ಕಾರು ಖರೀದಿ, ಚಿನ್ನ ಖರೀದಿ ಮಾಡಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದು ಸೇರಿದಂತೆ ಎಲ್ಲವೂ ದಾಖಲೆಯಲ್ಲಿದೆ ಎಂದು ಶ್ರೀರಾಮುಲು ವಿವರಿಸಿದರು.&lt;/p&gt;&lt;h3&gt;ಸಚಿವ ಸ್ಥಾನ ಉಳಿಸಲು ಜಾತಿ ನೆಪ:&lt;/h3&gt;&lt;p&gt;ಆತ್ಮಸಾಕ್ಷಿ ಇದ್ದಿದ್ದರೆ ನಾಗೇಂದ್ರ ಅವರು ಸಚಿವರಾಗಿ ಇರುತ್ತಿರಲಿಲ್ಲ. ಇಷ್ಟೊಂದು ಹಗರಣ ಮಾಡಿ ಹಣ ತಿಂದೂ ಸದನದಲ್ಲಿ ಸಂವಿಧಾನ ಪ್ರತಿ ಹಿಡಿದು ಓಡಾಡುತ್ತಾರೆ. ಬಾಬಾ ಸಾಹೇಬರು ಭ್ರಷ್ಟಾಚಾರಿಗಳನ್ನು ರಕ್ಷಿಸಲು ಸಂವಿಧಾನ ಮಾಡಿಲ್ಲ ಎಂದರು.&lt;/p&gt;&lt;p&gt;ದಲಿತ ಸಮುದಾಯದ ಮಕ್ಕಳ ಭವಿಷ್ಯವನ್ನು ಕಸಿಯವ ವೇಳೆ ನೆನಪಾಗಿಲ್ಲ. ನಾಗೇಂದ್ರ ಅವರಿಗೆ ಆಗ ಜಾತಿ ಕಂಡಿಲ್ಲ. ಸಚಿವ ಸ್ಥಾನ ಉಳಿಸಿಕೊಳ್ಳಲು ಅವರಿಗೆ ಜಾತಿ ನೆನಪಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸುವುದೇ ಆದರೆ ನಾಗೇಂದ್ರ ಅವರನ್ನು ಕೈಬಿಟ್ಟು ಇದೇ ಸಮುದಾಯದ ಬೇರೆಯವರನ್ನು ಸಚಿವರನ್ನಾಗಿ ನೇಮಿಸಲಿ. ಕಳಂಕಿತ ನಾಗೇಂದ್ರ ಮಾತ್ರ ಸಚಿವರಾಗಿ ಇರಬಾರದು. ಅವರನ್ನು ಕ್ಷಮಿಸಲಾಗದು ಎಂದು ಹೇಳಿದರು.&lt;/p&gt;&lt;p&gt;ಪತ್ರಿಕಾಗೋಷ್ಠಿಯಲ್ಲ ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ, ಎಸ್&zwnj;ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಶಿವನಗೌಡ ನಾಯಕ ಉಪಸ್ಥಿತರಿದ್ದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-if-nagendra-didnt-corruption-let-swear-on-ramayan-says-sriramulu-rav/articleshow-m0vl2fb"/>
        </item>
        <item>
            <title><![CDATA[Ballari: ನಾಗೇಂದ್ರ ರಾಜೀನಾಮೆ ಕೇಳೋರಿಗೆ ಮರ್ಯಾದೆ ಇದೆಯೇನ್ರಿ? - ಸಚಿವ ಖಂಡ್ರೆ]]></title>
            <link>https://kannada.asianetnews.com/politics/nagendra-s-resignation-politics-minister-eshwar-khandre-salms-sriramulu-and-janardana-reddy-rav/articleshow-os2ilt3</link>
            <guid isPermaLink="true">https://kannada.asianetnews.com/politics/nagendra-s-resignation-politics-minister-eshwar-khandre-salms-sriramulu-and-janardana-reddy-rav/articleshow-os2ilt3</guid>
            <pubDate>Mon, 10 Aug 2026 08:03:08 +0530</pubDate>
            <description><![CDATA[ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ವಿರುದ್ಧ ಸಚಿವ ಈಶ್ವರ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ರಿಪಬ್ಲಿಕ್ ಆಫ್ ಬಳ್ಳಾರಿ' ಮಾಡಿ ಬಳ್ಳಾರಿಗೆ ಕುಖ್ಯಾತಿ ತಂದವರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hn609mh069pn8afcxvh5rps5,imgname-ddbfb.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಆ.10): &lt;/strong&gt;ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಿದ ಶಾಸಕರಾದ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರಿಗೆ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇಳಲು ಯಾವ ನೈತಿಕತೆ ಇದೆ? ಬಳ್ಳಾರಿಗೆ ಕುಖ್ಯಾತಿ ತಂದಿರುವ ಅವರಿಗೆ ಮಾನ, ಮರ್ಯಾದೆ ಇದೆಯಾ ಎಂದು ಸಚಿವ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;ರಾಜೀನಾಮೆ ಕೇಳುವ ನೈತಿಕತೆ ಆದ್ರೂ ಇದೆಯಾ?&lt;/h2&gt;&lt;p&gt;ಸಚಿವ ನಾಗೇಂದ್ರ ರಾಜೀನಾಮೆ ನೀಡುವಂತೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ನೀಡಿದ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಹತಾಶೆಯಿಂದ ಕೆಳಮಟ್ಟದ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್&zwnj;ನ ಜನಪ್ರಿಯತೆ ಹೆಚ್ಚಾಗುತ್ತಿದೆ. 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್&zwnj; ಜಯಭೇರಿ ಬಾರಿಸಲಿದೆ. ಇದನ್ನು ಸಹಿಸಲು ಸಾಧ್ಯವಾಗದೆ ರೆಡ್ಡಿ, ಶ್ರೀರಾಮುಲು ಹಾಗೆ ಮಾತನಾಡುತ್ತಿದ್ದಾರೆ. ರಿಪಬ್ಲಿಕ್&zwnj; ಆಫ್&zwnj; ಬಳ್ಳಾರಿ ಮಾಡಿದವರಿಗೆ ರಾಜೀನಾಮೆ ಕೇಳುವ ನೈತಿಕತೆಯಾದರೂ ಎಲ್ಲಿಂದ ಬಂತು ಎಂದು ಕೇಳಿದರು.&lt;/p&gt;&lt;h3&gt;ಶ್ರೀರಾಮುಲು ಕೇಂದ್ರದ ವಿರುದ್ಧ ಮಾತಾಡಲಿ:&lt;/h3&gt;&lt;p&gt;ನಾಗೇಂದ್ರ ಅವರ ರಾಜೀನಾಮೆ ಕೇಳುವ ಶ್ರೀರಾಮುಲು ಹಾಗೂ ಬಿಜೆಪಿಯವರು ಕೇಂದ್ರದಲ್ಲಿ ಪೊಲೀಸರ ದುರ್ಬಳಕೆ, ವಿದ್ಯಾರ್ಥಿಗಳನ್ನು ನಡೆಸಿಕೊಂಡಿರುವ ರೀತಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲಿ. ಕೇಂದ್ರದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡುವಂತೆ ಮೊದಲು ಒತ್ತಾಯಿಸಲಿ ಎಂದು ಸವಾಲು ಹಾಕಿದರು.&lt;/p&gt;&lt;p&gt;ರಾಜ್ಯ ಸರ್ಕಾರದಲ್ಲಿ ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಮಹಿಳೆಯರಿಗೂ ಪ್ರಾತಿನಿಧ್ಯ ನೀಡಲಿದೆ. ಎಲ್ಲರಿಗೂ ಸರಿಸಮನಾಗಿ ಅಧಿಕಾರ ಹಂಚಿಕೆ ಮಾಡಿ, ರಾಜ್ಯದಲ್ಲಿ ಕಾಂಗ್ರೆಸ್&zwnj; ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂದು ಖಂಡ್ರೆ ತಿಳಿಸಿದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/nagendra-s-resignation-politics-minister-eshwar-khandre-salms-sriramulu-and-janardana-reddy-rav/articleshow-os2ilt3"/>
        </item>
        <item>
            <title><![CDATA[ಬಳ್ಳಾರಿಯಲ್ಲಿ ಇಮ್ಮಡಿ ಹರಿಹರನ ಕಾಲದ 2 ಅಪರೂಪದ ಜಿನ ಶಾಸನಗಳು ಪತ್ತೆ! ವಿಜಯನಗರ ಕಾಲದ ಭೂಮಿ ದಾನ ಉಲ್ಲೇಖ]]></title>
            <link>https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm</link>
            <guid isPermaLink="true">https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm</guid>
            <pubDate>Fri, 28 Aug 2026 15:01:51 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ, 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಇಮ್ಮಡಿ ಹರಿಹರನ ಕಾಲದ ಎರಡು ಅಪರೂಪದ, ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ರೈತರ ಕೃಷಿ ಜಮೀನಿನಲ್ಲಿ ದೊರೆತ ಈ ಶಾಸನಗಳು, ಶ್ರೀ ಕುಂಥು ತೀರ್ಥಂಕರರಿಗೆ ಭೂಮಿಯನ್ನು ದಾನವಾಗಿ ನೀಡಿದ ಐತಿಹಾಸಿಕ ವಿವರಗಳನ್ನು ಒಳಗೊಂಡಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13v4ncpnagsd91vf4c58wt3,imgname-sandur-jain-inscription-1787909264790.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಡೂರು : &lt;/strong&gt;ಬಳ್ಳಾರಿ-ವಿಜಯನಗರ ವಲಯದ ಸಾಂಸ್ಕೃತಿಕ ಇತಿಹಾಸ ಅಧ್ಯಯನದಲ್ಲಿ ತೊಡಗಿರುವ 'ವಿಜಯನಗರ ತಿರುಗಾಟ' ಸಂಶೋಧನಾ ತಂಡವು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೊಡ್ಡ ಅಂತಾಪುರ ಗ್ರಾಮದಲ್ಲಿ ಇಮ್ಮಡಿ ಹರಿಹರನ ಕಾಲಕ್ಕೆ ಸೇರಿದ 2 ಅತ್ಯಂತ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ಪತ್ತೆ ಮಾಡಿದೆ. ಗ್ರಾಮದ ರೈತರಾದ ಹರಿಜನ ಹುಲಿಗೆಮ್ಮ ಮತ್ತು ಹಟ್ಟಿ ರಮೇಶ ಎಂಬುವವರ ಕೃಷಿ ಜಮೀನಿನಲ್ಲಿ ಈ ಐತಿಹಾಸಿಕ ಸಾಕ್ಷ್ಯಗಳು ದೊರೆತಿವೆ.&lt;/p&gt;&lt;h2&gt;ಸಂಡೂರು ವಲಯದಲ್ಲಿ ಜೈನ ಧರ್ಮದ ಹೆಜ್ಜೆಗುರುತು&lt;/h2&gt;&lt;p&gt;ಕೆಲ ದಿನಗಳ ಹಿಂದೆಯಷ್ಟೇ ಸಂಶೋಧನಾ ತಂಡವು ಇದೇ ಗ್ರಾಮದಲ್ಲಿ ಜೈನ ಧರ್ಮದ 17ನೇ ತೀರ್ಥಂಕರರಾದ ಶ್ರೀ ಕುಂಥುನಾಥರ ಹೆಸರನ್ನು ಉಲ್ಲೇಖಿಸುವ ಪ್ರಮುಖ ದಾನ ಶಾಸನವೊಂದನ್ನು ಶೋಧಿಸಿತ್ತು. ಅದರ ಮುಂದುವರಿದ ಅಧ್ಯಯನದ ಭಾಗವಾಗಿ ಈಗ ಮತ್ತೂ ಎರಡು ಜಿನ ಶಾಸನಗಳು ಪತ್ತೆಯಾಗಿರುವುದು, ಸಂಡೂರು ಪ್ರದೇಶವು ಪ್ರಾಚೀನ ಕಾಲದಲ್ಲಿ ಜೈನ ಧರ್ಮದ ಪ್ರಮುಖ ಶ್ರದ್ಧಾಕೇಂದ್ರವಾಗಿತ್ತು ಎಂಬುದಕ್ಕೆ ಬಲವಾದ ಪುಷ್ಟಿ ನೀಡಿದೆ.&lt;/p&gt;&lt;h2&gt;ಶಾಸನಗಳ ದೃಶ್ಯ ಶೈಲಿ ಮತ್ತು ಕೆತ್ತನೆ ವಿವರ&lt;/h2&gt;&lt;p&gt;ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ಅವರು ಶಾಸನಗಳ ರಚನಾ ಶೈಲಿಯ ಬಗ್ಗೆ ಮಾಹಿತಿ ನೀಡಿ, &quot;ಐದು ಅಡಿ ಎತ್ತರ ಹಾಗೂ ಒಂದೂವರೆ ಅಡಿ ಅಗಲವಿರುವ ಈ ಶಾಸನಗಳನ್ನು ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾಗಿದೆ. ಪೂರ್ಣವಾಗಿ ಕನ್ನಡ ಭಾಷೆ ಮತ್ತು ಲಿಪಿಯಲ್ಲೇ ಇರುವ ಈ ಶಿಲಾಶಾಸನಗಳ ಮೇಲ್ಭಾಗದ ಬಲಬದಿಯಲ್ಲಿ ಸೂರ್ಯ, ಎಡಬದಿಯಲ್ಲಿ ಚಂದ್ರನ ಚಿತ್ರಗಳಿವೆ. ಪ್ರಭಾವಳಿಯ ಕೆಳಗೆ, ಮುಕ್ಕೊಡೆಯ ಅಡಿಯಲ್ಲಿ ಪದ್ಮಾಸನ ಭಂಗಿಯಲ್ಲಿ ಕುಳಿತಿರುವ ಜಿನ ಮೂರ್ತಿಯ ಸುಂದರ ಕೆತ್ತನೆ ಇವುಗಳಲ್ಲಿದೆ,&quot; ಎಂದು ವಿವರಿಸಿದರು.&lt;/p&gt;&lt;h2&gt;ಶಾಸನದಲ್ಲಿ ಏನಿದೆ?&lt;/h2&gt;&lt;p&gt;ಹೊಸದಾಗಿ ಪತ್ತೆಯಾದ ಶಾಸನಗಳಲ್ಲಿ ಒಂದರಲ್ಲಿ 7 ಸಾಲು ಹಾಗೂ ಮತ್ತೊಂದರಲ್ಲಿ 8 ಸಾಲುಗಳ ಬರಹವಿದೆ. ವಿಜಯನಗರದ ದೊರೆ ಇಮ್ಮಡಿ ಹರಿಹರರಾಯರು ಶ್ರೀ ಕುಂಥು ತೀರ್ಥಂಕರರಿಗೆ ದೊಡ್ಡ ಅಂತಾಪುರದ ಗದ್ದೆಯ ಕೆಳಭಾಗದಲ್ಲಿ ಹನ್ನೆರಡು ಕೊಳಗದಷ್ಟು ಬೆಳೆಯಬಹುದಾದ 'ಜಿಜವರಿ' ಭೂಮಿಯನ್ನು ದಾನವಾಗಿ ನೀಡಿರುವುದನ್ನು ಈ ಎರಡೂ ಶಾಸನಗಳು ಸ್ಪಷ್ಟಪಡಿಸುತ್ತವೆ.&lt;/p&gt;&lt;p&gt;ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಮಾತನಾಡಿ, &quot;ಈ ಶಾಸನಗಳು ಕೇವಲ ಭೂದಾನದ ದಾಖಲೆಗಳಲ್ಲ. ವಿಜಯನಗರ ಕಾಲದಲ್ಲಿ ಧಾರ್ಮಿಕ ಸಂಸ್ಥೆಗಳು ಆರ್ಥಿಕವಾಗಿ ಹೇಗೆ ನಿರ್ವಹಿಸಲ್ಪಡುತ್ತಿದ್ದವು ಮತ್ತು ರಾಜಮನೆತನವು ಧಾರ್ಮಿಕ ಕೇಂದ್ರಗಳೊಂದಿಗೆ ಹೊಂದಿದ್ದ ಸಾಮರಸ್ಯ ಹಾಗೂ ಬಾಂಧವ್ಯ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಇವು ಅತ್ಯಂತ ಮಹತ್ವದ ಆಧಾರಗಳಾಗಿವೆ,&quot; ಎಂದರು.&lt;/p&gt;&lt;h2&gt;ಐತಿಹಾಸಿಕ ಮುಕ್ತಕಗಳ ರಕ್ಷಣೆಗೆ ಮನವಿ&lt;/h2&gt;&lt;p&gt;ನೂರಾರು ವರ್ಷಗಳ ಇತಿಹಾಸವಿರುವ ಈ ಅಪರೂಪದ ಅಪ್ರಕಟಿತ ಜಿನ ಶಾಸನಗಳನ್ನು ತಕ್ಷಣವೇ ಸಂರಕ್ಷಿಸುವ ಅಗತ್ಯವಿದೆ ಎಂದು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಒತ್ತಾಯಿಸಿದ್ದಾರೆ. ಸೂಕ್ತ ರಕ್ಷಣೆ ನೀಡುವುದರಿಂದ ಭವಿಷ್ಯದ ಸಂಶೋಧಕರಿಗೆ ಹಾಗೂ ಸ್ಥಳೀಯ ಇತಿಹಾಸ ಪ್ರೇಮಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗಲಿದೆ. ಸ್ಥಳೀಯ ನಿವಾಸಿಗಳಾದ ತಾಯಪ್ಪ, ರಾಗಿ ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಅವರ ಸಹಕಾರದೊಂದಿಗೆ ಈ ಕ್ಷೇತ್ರಕಾರ್ಯ ಕೈಗೊಳ್ಳಲಾಗಿತ್ತು. ಈ ಸಂಶೋಧನಾ ತಂಡದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ, ಡಾ. ಕೃಷ್ಣೇಗೌಡ, ಸಂಶೋಧಕರಾದ ಎಚ್. ರವಿ, ಮಾರುತಿ, ಇಸ್ಮಾಯಿಲ್ ಸಿದ್ದಿಕಿ ಹಾಗೂ ಅಶೋಕ್ ನಾಯಕ್ ದಿದ್ದಿಗಿ ಈ ವೇಳೆ ಜೊತೆಗಿದ್ದರು.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/two-inscriptions-of-harihara-ii-discovered-in-sandur-ballari-district-vijayanagara-empire-history-gdp/articleshow-p66p1qm"/>
        </item>
        <item>
            <title><![CDATA[BJP Padayatra: ಜನಬೆಂಬಲ ಕಂಡು ಕಂಪ್ಲೀಲಿ ಕರೆಂಟ್‌ ಕಟ್‌, ಬಳ್ಳಾರಿ ಸಮಾವೇಶಕ್ಕೆ ಅಡ್ಡಿ; ಸರ್ಕಾರಕ್ಕೆ ವಿಜಯೇಂದ್ರ ಹಾಕಿದ ಸವಾಲೇನು?]]></title>
            <link>https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b</link>
            <guid isPermaLink="true">https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b</guid>
            <pubDate>Wed, 09 Sep 2026 06:19:18 +0530</pubDate>
            <description><![CDATA[&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಗೆ ದೊರೆತ ಜನಬೆಂಬಲದಿಂದ ಹತಾಶಗೊಂಡಿರುವ ಕಾಂಗ್ರೆಸ್ ಸರ್ಕಾರವು ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣ ಮತ್ತು ಬೆಲೆ ಏರಿಕೆ ವಿರುದ್ಧ ಕಿಡಿಕಾರಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m21spq1hfa8enhw40d4kye1w,imgname-by-vijayendra-1788914392113.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬಳ್ಳಾರಿ (ಸೆ.9) &lt;/strong&gt;ರಾಜ್ಯ ಸರ್ಕಾರದ ವಿರುದ್ಧ ನಡೆಸುತ್ತಿರುವ ನಮ್ಮ ಹೋರಾಟಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕಿದೆ. ಇದರಿಂದ ಹತಾಶೆಗೊಂಡು ಬಿಜೆಪಿಯ ಪಾದಯಾತ್ರೆಯನ್ನು ಹತ್ತಿಕ್ಕಲು ಕಾಂಗ್ರೆಸ್&zwnj; ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಅಲ್ಲದೆ, ಈ ಸರ್ಕಾರ ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆ ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರಿಗೆ ಆಹ್ವಾನ ನೀಡಿದ್ದಾರೆ.&lt;/p&gt;&lt;h2&gt;ಬಿಜೆಪಿಗೆ ಸಿಕ್ಕಿರೋ ಜನಬೆಂಬಲ ಕಂಡು ಕರೆಂಟ್ ಕಟ್ ಮಾಡಿದೆ&lt;/h2&gt;&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ.ವಾಪಸ್&zwnj;ಗೆ ಆಗ್ರಹಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ &lsquo;ಬಳ್ಳಾರಿ ಚಲೋ&rsquo; ಪಾದಯಾತ್ರೆ ಮಂಗಳವಾರ 8ನೇ ದಿನಕ್ಕೆ ಕಾಲಿಟ್ಟಿತು. ಬಳ್ಳಾರಿ ಜಿಲ್ಲೆಯ ಹಳೆದರೋಜಿಯಿಂದ ಕುಡುತಿನಿವರೆಗೆ 17 ಕಿಮೀ.ದೂರ ಕ್ರಮಿಸಿತು. ಕುಡತಿನಿಯಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್&zwnj; ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯದ ವಿವಿಧ ಮೂಲೆಯಿಂದ ಬಂದು ಜನರು ನಮ್ಮ ಪಾದಯಾತ್ರೆಯನ್ನು ಬೆಂಬಲಿಸಿದ್ದಾರೆ. ನಮ್ಮ ಪಾದಯಾತ್ರೆಗೆ ಸಿಕ್ಕ ಜನಬೆಂಬಲ ನೋಡಿ ಹತಾಶೆಗೊಂಡಿರುವ ಸರ್ಕಾರ, ಬಿಜೆಪಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ. ಕಂಪ್ಲಿಗೆ ಪಾದಯಾತ್ರೆ ಬಂದಾಗ ಕರೆಂಟ್ ಕಟ್&zwnj; ಮಾಡಿದ್ರು. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಸಮಾವೇಶ ಮಾಡಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಿದ್ರು. ಅನುಮತಿ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶ ಮಾಡ್ತೇವೆ ಎಂದಾಗ ಅನುಮತಿ ಕೊಟ್ಟರು ಎಂದು ಆರೋಪಿಸಿದರು.&lt;/p&gt;&lt;h3&gt;ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ&lt;/h3&gt;&lt;p&gt;ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ. ಗೃಹಲಕ್ಷಿ ಹಣ ನೀಡ್ತಿಲ್ಲ. ಹಳ್ಳಿ,ಹಳ್ಳಿಯಲ್ಲಿ ಹೆಂಡ ಸಿಗ್ತಿದೆ. ಇಸ್ಪೀಟು ದಂಧೆ ಎಲ್ಲೆಡೆ ಪ್ರಾರಂಭವಾಗಿದೆ. ಎಲ್ಲೆಡೆ ಡ್ರಗ್&zwnj; ಮಾಫಿಯಾ ಜೋರಾಗಿದ್ದು, ಕರ್ನಾಟಕ ಉಡ್ತಾ ಪಂಚಾಬ್ ಆಗ್ತಿದೆ. ವಾಲ್ಮೀಕಿ ಹಣ ಲೂಟಿ ಹೊಡೆದ್ರು. ಲೂಟಿ ಹೊಡೆದ ನಾಗೇಂದ್ರ ಅವರನ್ನು ಮಂತ್ರಿ ಮಾಡಿದ್ರು. ಬಳಿಕ, ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದ್ರು ಎಂದು ದೂರಿದರು.&lt;/p&gt;&lt;p&gt;&lsquo;ನಿವೀಗ ನೂರು ದಿನದ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ, ಯಾವ ಪುರುಷಾರ್ಥಕ್ಕೆ ನಿಮ್ಮ ಸಂಭ್ರಮಾಚರಣೆ&rsquo; ಎಂದು ಡಿಕೆಶಿಯನ್ನು ಪ್ರಶ್ನಿಸಿದ ವಿಜಯೇಂದ್ರ, &lsquo;ರಾಜ್ಯದ ಜನತೆಯ ವಿಶ್ವಾಸ ಕಳೆದುಕೊಂಡಿದ್ದೀರಿ. ಕಾಲ ಮಿಂಚಿದೆ. ಜನರು ದಂಗೆ ಏಳುವ ಮುನ್ನ ವಿಧಾನಸಭೆಯನ್ನು ವಿಸರ್ಜಿಸಿ, ಜನತಾ ನ್ಯಾಯಾಲಯಕ್ಕೆ ಬನ್ನಿ&rsquo; ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;ಗೆ ಆಹ್ವಾನ ನೀಡಿದರು.&lt;/p&gt;&lt;h3&gt;ಇಂದು ಕುಡುತಿನಿಯಿಂದ ರಾಮೇಶ್ವರನಗರಕ್ಕೆ ಯಾತ್ರೆ:&lt;/h3&gt;&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಿಂದ ರಾಯಚೂರು ಜಿಲ್ಲೆ ಲಿಂಗಸುಗೂರಿನಿಂದ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ ಅಂತಿಮ ಹಂತಕ್ಕೆ ತಲುಪಿದ್ದು, ಬುಧವಾರ ಕುಡುತಿನಿಯಿಂದ ಬಳ್ಳಾರಿಯ ರಾಮೇಶ್ವರನಗರಕ್ಕೆ ಆಗಮಿಸಲಿದೆ. ಸೆ.10ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಯನ್ನು ಪೂರ್ಣಗೊಳಿಸಲಾಗುತ್ತದೆ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-state-president-slams-congress-government-over-power-cut-in-kample-during-bjp-padayatre-rav/articleshow-qlcgi5b"/>
        </item>
        <item>
            <title><![CDATA[B Nagendra Resign: ವಾಲ್ಮೀಕಿ ನಿಗಮದ ಹಗರಣದಲ್ಲಿ ನನ್ನ ಪಾತ್ರ ಇಲ್ಲ ಎಂದು ಗಳಗಳನೇ  ಅತ್ತ ಸಚಿವ ನಾಗೇಂದ್ರ!]]></title>
            <link>https://kannada.asianetnews.com/karnataka-districts/valmiki-corporation-scam-minister-nagendra-denies-role-in-scam-bmk/articleshow-ss1x0pk</link>
            <guid isPermaLink="true">https://kannada.asianetnews.com/karnataka-districts/valmiki-corporation-scam-minister-nagendra-denies-role-in-scam-bmk/articleshow-ss1x0pk</guid>
            <pubDate>Fri, 28 Aug 2026 18:43:11 +0530</pubDate>
            <description><![CDATA[ಸಚಿವ ಬಿ. ನಾಗೇಂದ್ರ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ, ಇದು ದಲಿತ ನಾಯಕನ ವಿರುದ್ಧದ ಷಡ್ಯಂತ್ರ ಎಂದು ಆರೋಪಿಸಿ ತಮ್ಮ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಕ್ಕೆ ಮುಜುಗರವಾಗಬಾರದೆಂಬ ಕಾರಣಕ್ಕೆ ಸ್ವ-ಇಚ್ಛೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13jdpt156bkcqr0d1zffy5m,imgname-screenshot-2026-08-28-121605-1787900123967.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು; ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದ ನನ್ನ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ನಡೆದಿದೆ&quot; ಎಂದು ತೀವ್ರ ಭಾವುಕರಾಗಿ ಕಣ್ಣೀರಿಡುತ್ತಲೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇಷ್ಟೇ ಅಲ್ಲದೆ, ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ಅವರು, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ತಮ್ಮಿಂದ ಯಾವುದೇ ರೀತಿಯ ಮುಜುಗರ ಉಂಟಾಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ದಲಿತ ಸಚಿವನ ವಿರುದ್ಧ ಬಿಜೆಪಿ ಕುತಂತ್ರ: ನಾಗೇಂದ್ರ ವೀಕ್ಷಣೆ!&lt;/strong&gt;&lt;/h2&gt;&lt;p&gt;ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಅಳಲನ್ನು ತೋಡಿಕೊಂಡ ನಾಗೇಂದ್ರ, &quot;ಒಬ್ಬ ದಲಿತ ನಾಯಕ ಬೆಳೆದು ಸಚಿವನಾಗುವುದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಒಬ್ಬ ದಲಿತ ಸಚಿವ ಅಧಿಕಾರದಲ್ಲಿ ಮುಂದುವರಿಯಬಾರದು ಎಂಬ ಏಕೈಕ ದುರುದ್ದೇಶದಿಂದ ಪ್ರತಿಪಕ್ಷ ಬಿಜೆಪಿ ನನ್ನ ವಿರುದ್ಧ ಸಾಲು ಸಾಲು ಕುತಂತ್ರಗಳನ್ನು ಹೆಣೆದಿದೆ&quot; ಎಂದು ಗಂಭೀರ ಆರೋಪ ಮಾಡಿದರು. &quot;ನಾನು ಯಾವುದೇ ಅಕ್ರಮ ಎಸಗಿಲ್ಲ. ನನ್ನ ವಿರುದ್ಧ ಸೃಷ್ಟಿಸಲಾಗಿರುವ ಆರೋಪಗಳೆಲ್ಲವೂ ಆಧಾರರಹಿತ. ಈ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ,&quot; ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h3&gt;&lt;strong&gt;ಬಿಜೆಪಿ ಪಾದಯಾತ್ರೆ ಜನರ ದಿಕ್ಕು ತಪ್ಪಿಸುವ ತಂತ್ರ!&lt;/strong&gt;&lt;/h3&gt;&lt;p&gt;ಪ್ರತಿಪಕ್ಷದ ಪಾದಯಾತ್ರೆ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ ನಾಗೇಂದ್ರ, &quot;ನೈಜ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸಲು ಬಿಜೆಪಿ ಈ ಪಾದಯಾತ್ರೆಯನ್ನು ಘೋಷಣೆ ಮಾಡಿದೆ. ರಾಜಕೀಯ ಲಾಭಕ್ಕಾಗಿ ನನ್ನ ಹೆಸರನ್ನು ಬಳಸಿಕೊಂಡು ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸಲಾಗುತ್ತಿದೆ,&quot; ಎಂದು ಸವಾಲೆಸೆದರು.&lt;/p&gt;&lt;h3&gt;&lt;strong&gt;ಸ್ವ-ಇಚ್ಛೆಯಿಂದ ರಾಜೀನಾಮೆ !&lt;/strong&gt;&lt;/h3&gt;&lt;p&gt;ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ ಅವರು, &quot;ಯಾರ ಒತ್ತಡಕ್ಕೂ ಮಣಿದು ನಾನು ಈ ನಿರ್ಧಾರ ತಗೆದುಕೊಂಡಿಲ್ಲ. ನನ್ನ ಸ್ವ-ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ವಿರುದ್ಧ ಎದ್ದಿರುವ ಆರೋಪಗಳಿಂದ ಸರ್ಕಾರಕ್ಕೆ ಅಥವಾ ನನ್ನ ಪಕ್ಷಕ್ಕೆ ಮುಜುಗರವಾಗುವುದು ನನಗೆ ಇಷ್ಟವಿಲ್ಲ. ಆದ್ದರಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ, ಎಂದು ಹೇಳಿದರು.&lt;/p&gt;&lt;h3&gt;&lt;strong&gt;ನಾಗೇಂದ್ರ ಸವಾಲ್&zwnj; ಏನು?&lt;/strong&gt;&lt;/h3&gt;&lt;p&gt;ಮಾತು ಮುಕ್ತಾಯಗೊಳಿಸುವ ಮುನ್ನ ಪ್ರತಿಪಕ್ಷ ಹಾಗೂ ಮನುವಾದಿ ಚಿಂತನೆಗಳಿಗೆ ಖಡಕ್ ಸವಾಲ್ ಎಸೆದ ನಾಗೇಂದ್ರ, &quot;ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿರುವ ಮನುವಾದಿಗಳಿಗೆ ನಾನು ಮುಕ್ತ ಸವಾಲು ಹಾಕುತ್ತಿದ್ದೇನೆ. ನಿಮಗೇನಾದರೂ ನಿಜವಾಗಿಯೂ ತಾಕತ್ತಿದ್ದರೆ, ಹಿಂಬಾಗಿಲ ರಾಜಕೀಯ ಮಾಡುವುದನ್ನು ಬಿಟ್ಟು ನೇರವಾಗಿ ಚುನಾವಣೆ ಕಣಕ್ಕೆ ಬನ್ನಿ. ಜನಾದೇಶದ ಮೂಲಕವೇ ಯಾರು ಏನು ಎಂಬುದನ್ನು ತೀರ್ಮಾನಿಸೋಣ,&quot; ಎಂದು ಆಕ್ರೋಶ ಹೊರಹಾಕಿದರು.&lt;/p&gt;&lt;h3&gt;&lt;strong&gt;ರಾಜಕೀಯ ವಲಯದಲ್ಲಿ ಸಂಚಲನ!&lt;/strong&gt;&lt;/h3&gt;&lt;p&gt;ಬಿ. ನಾಗೇಂದ್ರ ಅವರ ಈ ದಿಢೀರ್ ರಾಜೀನಾಮೆ ಹಾಗೂ ಶಾಸಕ ಸ್ಥಾನವನ್ನೂ ತ್ಯಜಿಸುವ ನಿರ್ಧಾರ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಒಬ್ಬ ಪ್ರಭಾವಿ ದಲಿತ ನಾಯಕ ಕಣ್ಣೀರಿಟ್ಟು ರಾಜೀನಾಮೆ ನೀಡಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹೊಸ ವಾಕ್ಸಮರಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category>ballari</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/valmiki-corporation-scam-minister-nagendra-denies-role-in-scam-bmk/articleshow-ss1x0pk"/>
        </item>
        <item>
            <title><![CDATA[Tailoring: ಖಾಸಗಿ ಶಾಲೆಗಳೇ ಸಮವಸ್ತ್ರ ಪೂರೈಕೆ: ಟೈಲರ್‌ಗಳ ಬದುಕು ಅಯೋಮಯ! ಆದಾಯ ಕುಸಿತ]]></title>
            <link>https://kannada.asianetnews.com/karnataka-districts/ballari-private-schools-are-selling-uniforms-directly-there-is-a-direct-impact-on-the-income-of-traditional-tailors-mrq/articleshow-ufreulp</link>
            <guid isPermaLink="true">https://kannada.asianetnews.com/karnataka-districts/ballari-private-schools-are-selling-uniforms-directly-there-is-a-direct-impact-on-the-income-of-traditional-tailors-mrq/articleshow-ufreulp</guid>
            <pubDate>Wed, 19 Aug 2026 05:49:47 +0530</pubDate>
            <description><![CDATA[&lt;p&gt;ಖಾಸಗಿ ಶಾಲೆಗಳು ನೇರವಾಗಿ ಸಮವಸ್ತ್ರಗಳನ್ನು ಮಾರಾಟ ಮಾಡುತ್ತಿರುವುದರಿಂದ, ಸಾಂಪ್ರದಾಯಿಕ ಟೈಲರ್&zwnj;ಗಳ ಆದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕಳೆದ ಐದು ವರ್ಷಗಳಿಂದ ಈ ಪದ್ಧತಿಯು ಜಾರಿಯಲ್ಲಿದ್ದು, ಶಾಲಾ ಸಮವಸ್ತ್ರ ಹೊಲಿಗೆಯನ್ನೇ ನಂಬಿದ್ದ ನೂರಾರು ಟೈಲರ್&zwnj;ಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೃಷಿ ಹಿನ್ನಡೆ ಮತ್ತು ಸಿದ್ಧ ಉಡುಪುಗಳ ಹೆಚ್ಚಳವು ಅವರ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0bp4fzhzb9tenf6zw783ws9,imgname-tailors-1787098710001.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;&lt;strong&gt;ಬಳ್ಳಾರಿ: &lt;/strong&gt;ಶಾಲಾ ಸಮವಸ್ತ್ರದಲ್ಲೂ ಲಾಭ ಗಳಿಸುವ ಉದ್ದೇಶದಿಂದ ಕಳೆದ ಐದು ವರ್ಷಗಳಿಂದ ಬಹುತೇಕ ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ತಾವೇ ಸಮವಸ್ತ್ರ ಪೂರೈಸುತ್ತಿದ್ದು, ಇದರಿಂದ ಸಾಂಪ್ರದಾಯಿಕವಾಗಿ ಶಾಲಾ ಮಕ್ಕಳ ಬಟ್ಟೆ ಹೊಲಿಯುವ ವೃತ್ತಿಯನ್ನೇ ಅವಲಂಬಿಸಿರುವ ನೂರಾರು ಟೈಲರ್&zwnj;ಗಳ ಆದಾಯಕ್ಕೆ ಪೆಟ್ಟು ಬಿದ್ದಿದೆ.&lt;/p&gt;&lt;p&gt;ಪ್ರತಿವರ್ಷ ಶಾಲೆಗಳು ಆರಂಭವಾಗುವ ಜೂನ್&zwnj;ನಿಂದ ಆಗಸ್ಟ್&zwnj; ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಸಮವಸ್ತ್ರ ಹೊಲಿಗೆ ಕೆಲಸ ದೊರೆಯುತ್ತಿತ್ತು. ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನ ಪೋಷಕರು ಮಕ್ಕಳಿಗೆ ಸಮವಸ್ತ್ರದ ಬಟ್ಟೆ ಖರೀದಿಸಿ, ಟೈಲರ್&zwnj;ಗಳ ಬಳಿ ಅಳತೆ ನೀಡಿ ಹೊಲಿಸಿಕೊಳ್ಳುತ್ತಿದ್ದರು. ಇದರಿಂದ ಮೂರು ತಿಂಗಳ ಅವಧಿಯಲ್ಲಿ ಉತ್ತಮ ಆದಾಯ ಬರುತ್ತಿತ್ತು. ಆದರೆ, ಖಾಸಗಿ ಶಾಲೆಗಳು ಸಮವಸ್ತ್ರವನ್ನೇ ಸಿದ್ಧಪಡಿಸಿ ಮಾರಾಟ ಮಾಡುವ ವ್ಯವಸ್ಥೆ ಅಳವಡಿಸಿಕೊಂಡ ಬಳಿಕ ಈ ಅವಕಾಶವೂ ಬಹುತೇಕ ಇಲ್ಲದಂತಾಗಿದೆ. ಶಾಲೆಗಳು ನಿರ್ದಿಷ್ಟ ಅಂಗಡಿ ಅಥವಾ ಸಂಸ್ಥೆಯ ಮೂಲಕ ಸಮವಸ್ತ್ರ ತಯಾರಿಸಿ, ಪೋಷಕರಿಗೆ ನಿಗದಿತ ದರದಲ್ಲಿ ಮಾರಾಟ ಮಾಡುತ್ತಿವೆ. ಕೆಲವೆಡೆ ಶಾಲೆಯ ಆವರಣದಲ್ಲಿಯೇ ಸಮವಸ್ತ್ರ ಮಾರಾಟ ಮಾಡುವ ವ್ಯವಸ್ಥೆಯೂ ಇದೆ. ಪರಿಣಾಮ ಪೋಷಕರು ಸ್ಥಳೀಯ ಟೈಲರ್&zwnj;ಗಳ ಬಳಿ ಹೊಲಿಸುವ ಅವಕಾಶ ಕಳೆದುಕೊಂಡಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಯ ಹಣದ ಹಪಾಹಪಿಯಿಂದಾಗಿ ಅನೇಕ ವರ್ಷಗಳಿಂದ ಟೈಲರ್ ವೃತ್ತಿಯ ಅವಲಂಬಿಸಿದವರ ಬದುಕು ಅಯೋಮಯವಾಗಿದೆ. ವಿಕಲಚೇತನ ಟೈಲರ್&zwnj;ಗಳ ಪರಿಸ್ಥಿತಿಯಂತೂ ಹೇಳತೀರದಾಗಿದೆ.&lt;/p&gt;&lt;h2&gt;&lt;strong&gt;ಕೃಷಿ ಸಂಕಷ್ಟದ ಪರಿಣಾಮ&lt;/strong&gt;&lt;/h2&gt;&lt;p&gt;ಜಿಲ್ಲೆಯ ರೈತರ ಕೃಷಿ ಪ್ರಗತಿಗೂ ಕಳೆದ ಮೂರು ವರ್ಷಗಳಿಂದ ಹಿನ್ನಡೆಯಾಗಿದ್ದು, ಈ ಬಾರಿಯ ಮುಂಗಾರು ಕೂಡ ನಿರೀಕ್ಷಿತ ಮಟ್ಟದಲ್ಲಿ ಕೈಹಿಡಿಯದಿರುವುದು ಗ್ರಾಮೀಣ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ರೈತರ ಆದಾಯ ಕುಸಿದಿರುವುದರಿಂದ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೂ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ಬಟ್ಟೆ ಹೊಲಿಗೆ ಕೆಲಸ ಹೆಚ್ಚಾಗಬೇಕಿದ್ದ ಸಮಯದಲ್ಲೂ ಟೈಲರ್&zwnj;ಗಳಿಗೆ ನಿರೀಕ್ಷಿತ ಪ್ರಮಾಣದ ಕೆಲಸ ಸಿಗುತ್ತಿಲ್ಲ. ಇದೂ ಟೈಲರ್&zwnj;ಗಳ ವೃತ್ತಿಯ ಮೇಲೆ ಪರಿಣಾಮ ಬೀರಿದೆ ಎಂದು ಟೈಲರ್&zwnj;ಗಳು ಅಳಲು ತೋಡಿಕೊಳ್ಳುತ್ತಾರೆ.&lt;/p&gt;&lt;h3&gt;&lt;strong&gt;ವೃತ್ತಿಯನ್ನೇ ನಂಬಿದವರ ಗೋಳು&lt;/strong&gt;&lt;/h3&gt;&lt;p&gt;ಬಳ್ಳಾರಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಣ್ಣ ಪ್ರಮಾಣದಲ್ಲಿ ಟೈಲರಿಂಗ್&zwnj; ಅಂಗಡಿಗಳನ್ನು ನಡೆಸುತ್ತಿರುವ ಅನೇಕರು ಇದೇ ವೃತ್ತಿಯನ್ನೇ ಜೀವನಾಧಾರ ಮಾಡಿಕೊಂಡಿದ್ದಾರೆ. ಬಳ್ಳಾರಿ ನಗರದಲ್ಲಿ ಜೀನ್ಸ್&zwnj; ಟೈಲರಿಂಗ್ ಹೊರತುಪಡಿಸಿ ಸಾಂಪ್ರದಾಯಿಕ ಉಡುಪುಗಳನ್ನು ಹೊಲಿಯುವ ಟೈಲರ್&zwnj;ಗಳು 1 ಸಾವಿರಕ್ಕೂ ಅಧಿಕ ಜನರಿದ್ದಾರೆ. ಜಿಲ್ಲೆಯಲ್ಲಿ 3 ಸಾವಿರಕ್ಕೂ ಅಧಿಕ ಜನರು ಟೈಲರ್&zwnj; ವೃತ್ತಿಯ ಮೇಲೆಯೇ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಮದುವೆ, ಹಬ್ಬ, ಶಾಲಾ ಸಮವಸ್ತ್ರ ಸೇರಿದಂತೆ ವಿವಿಧ ಬಟ್ಟೆಗಳ ಹೊಲಿಗೆ ಕೆಲಸವೇ ಅವರ ಪ್ರಮುಖ ಆದಾಯದ ಮೂಲವಾಗಿತ್ತು. ಆದರೆ, ಸಿದ್ಧ ಉಡುಪುಗಳ ಬಳಕೆ ಹೆಚ್ಚಳ, ಆನ್&zwnj;ಲೈನ್&zwnj; ಖರೀದಿ ಹಾಗೂ ಶಾಲೆಗಳೇ ಸಮವಸ್ತ್ರ ಪೂರೈಸುತ್ತಿರುವುದರಿಂದ ಸಾಂಪ್ರದಾಯಿಕ ಟೈಲರ್&zwnj; ವೃತ್ತಿಗೆ ಹೊಡೆತ ಬಿದ್ದಿದೆ.&lt;/p&gt;&lt;p&gt;&lsquo;ಶಾಲೆಗಳು ಸಮವಸ್ತ್ರ ಪೂರೈಸುವುದನ್ನು ನಿಲ್ಲಿಸಿ, ಪೋಷಕರು ತಮ್ಮ ಇಷ್ಟದ ಟೈಲರ್&zwnj; ಬಳಿ ಹೊಲಿಸಿಕೊಳ್ಳಲು ಅವಕಾಶ ನೀಡಬೇಕು. ಇದರಿಂದ ಸ್ಥಳೀಯ ಸಣ್ಣ ವೃತ್ತಿದಾರರಿಗೆ ಕೆಲಸ ಸಿಗಲಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮಂತೆಯೇ ಬೇರೆಯವರದ್ದೂ ಬದುಕು ಇದೆ ಎಂಬ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಎಂದು ಟೈಲರ್&zwnj;ಗಳು ಮನವಿ ಮಾಡುತ್ತಿದ್ದಾರೆ. ಇವರ ಸಮಸ್ಯೆಗಳ ನಿವಾರಣೆಗೆ ಪೂರಕ ಕ್ರಮದ ಅಗತ್ಯವಿದೆ.&lt;/p&gt;&lt;p&gt;ಕಳೆದ ಐದು ವರ್ಷಗಳಿಂದ ಕೆಲಸವಿಲ್ಲದೆ ಒದ್ದಾಡುತ್ತಿದ್ದೇನೆ. ಸಮವಸ್ತ್ರಗಳನ್ನು ಶಾಲೆಯಲ್ಲಿಯೇ ವಿತರಣೆ ಮಾಡುತ್ತಿರುವುದರಿಂದ ನಮಗೆ ಕಷ್ಟವಾಗಿದೆ. ಬದುಕು ನಿರ್ವಹಣೆಗೂ ಪರದಾಡುವಂತಾಗಿದೆ. ನಮ್ಮ ಕಷ್ಟ ಯಾರ ಮುಂದೆ ಹೇಳಿಕೊಳ್ಳಬೇಕು ಎಂಬುದೇ ತಿಳಿಯದಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಬಳ್ಳಾರಿಯ ಪಾರ್ವತಿನಗರದ ವಿಕಲಚೇತನ ಟೈಲರ್ ನಾಗರಾಜ್ ಅವರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ballari-private-schools-are-selling-uniforms-directly-there-is-a-direct-impact-on-the-income-of-traditional-tailors-mrq/articleshow-ufreulp"/>
        </item>
        <item>
            <title><![CDATA[ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ಬಿಗ್ ಪ್ಲಾನ್! ಬಳ್ಳಾರಿ ಪಾದಯಾತ್ರೆ ದಿನಾಂಕ, ಆರಂಭ ಸ್ಥಳದ ಬಗ್ಗೆ ಶೀಘ್ರ ಘೋಷಣೆ?]]></title>
            <link>https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg</link>
            <guid isPermaLink="true">https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg</guid>
            <pubDate>Sat, 22 Aug 2026 05:56:08 +0530</pubDate>
            <description><![CDATA[&lt;p&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಪರಿಶಿಷ್ಟ ಪಂಗಡದ ನಾಯಕರ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು, ನಾಗೇಂದ್ರ ಅವರ ಕ್ಷೇತ್ರವಾದ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಪ್ಲಾನ್!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kztkdre8rjwvbqh9s3p1f1sq,imgname-----------------------2026-08-12t142816.307-1786525442504.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.22): &lt;/strong&gt;ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಬೃಹತ್ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದು, ಬರುವ ಸೋಮವಾರ ಅಥವಾ ಮಂಗಳವಾರದ ಹೊತ್ತಿಗೆ ಅಧಿಕೃತವಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ.&lt;/p&gt;&lt;p&gt;ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ಪಕ್ಷದ ನಾಯಕರು ಪಾದಯಾತ್ರೆ ನಡೆಸಲು ಉತ್ಸುಕರಾಗಿದ್ದು, ಅದರ ರೂಪುರೇಷೆಗಳ ಬಗ್ಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ದಿನಾಂಕ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಸದ್ಯ ವಿಧಾನಮಂಡಲ ಅಧಿವೇಶನದ ಒಳಗೆ ಮತ್ತು ಹೊರಗೆ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಸತತವಾಗಿ ಧರಣಿ, ಪ್ರತಿಭಟನೆ ನಡೆಸಲಾಗುತ್ತಿದೆ. ಹೀಗಾಗಿ, ತಕ್ಷಣಕ್ಕೆ ಪಾದಯಾತ್ರೆ ಘೋಷಣೆ ಮಾಡುವ ಬದಲು ಅಧಿವೇಶನ ಮುಕ್ತಾಯಗೊಳ್ಳುವ ಹಂತದಲ್ಲಿ ಘೋಷಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ರಾಜ್ಯ ನಾಯಕರು ಹೊಂದಿದ್ದಾರೆ. ಅಧಿವೇಶನ ಈ ತಿಂಗಳ 27ರಂದು ಮುಕ್ತಾಯಗೊಳ್ಳಲಿದ್ದು, 24 ಅಥವಾ 25ರಂದು (ಸೋಮವಾರ ಅಥವಾ ಮಂಗಳವಾರ) ಅಧಿಕೃತವಾಗಿ ಘೋಷಣೆ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.&lt;/p&gt;&lt;h2&gt;ಬಿಜೆಪಿ ಪಾದಯಾತ್ರೆ ಎಲ್ಲಿಂದ ಎಲ್ಲಿಯವರೆಗೆ?&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 15 ಪರಿಶಿಷ್ಟ ಪಂಗಡ (ಎಸ್&zwnj;ಟಿ) ಮೀಸಲು ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಬಹುತೇಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಯಾದಗಿರಿ ಜಿಲ್ಲೆಗಳಲ್ಲೇ ಇವೆ. ಹೀಗಾಗಿ, ಪಾದಯಾತ್ರೆ ಈ ಜಿಲ್ಲೆಗಳನ್ನು ಹಾದು ಹೋಗುವಂತೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪಾದಯಾತ್ರೆ ಯಾವುದೇ ಜಿಲ್ಲೆಯಿಂದ ಆರಂಭಗೊಂಡರೂ ಅಂತಿಮವಾಗಿ ನಾಗೇಂದ್ರ ಅವರು ಪ್ರತಿನಿಧಿಸುವ ಬಳ್ಳಾರಿಯಲ್ಲಿ ಅಂತ್ಯಗೊಳ್ಳುವಂತೆ ಮಾರ್ಗ ನಿಗದಿಪಡಿಸಲಾಗುತ್ತಿದೆ.&lt;/p&gt;&lt;h3&gt;ಪಾದಯಾತ್ರೆ ರದ್ದಾಗಿಲ್ಲ-ರಾಮುಲು:&lt;/h3&gt;&lt;p&gt;ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಪಾದಯಾತ್ರೆ ರದ್ದಾಗಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ನಮ್ಮ ಪಕ್ಷದ ನಾಯಕರು ಸದನದಲ್ಲಿ ಹೋರಾಟ ಮಾಡುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ಗೊಂದಲ ಆಗಬಾರದು ಎಂಬ ಕಾರಣಕ್ಕಾಗಿ ಹಂತ ಹಂತದ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.&lt;/p&gt;&lt;p&gt;ಪಾದಯಾತ್ರೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಚರ್ಚೆ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರೇ ಅದರ ಬಗ್ಗೆ ಮುಂದೆ ತಿಳಿಸುತ್ತಾರೆ. ಪಾದಯಾತ್ರೆ ರದ್ದಾಗಿಲ್ಲ. ಅದರ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಪಕ್ಷದ ನಾಯಕರ ಜತೆ ಚರ್ಚಿಸಿ ರಾಜ್ಯಾಧ್ಯಕ್ಷರು ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/bjp-big-plan-nagendra-s-resignation-ballari-padayatra-date-place-announcement-soon-rav/articleshow-uidb8pg"/>
        </item>
        <item>
            <title><![CDATA[ಬಿಜೆಪಿ ‘ಬಳ್ಳಾರಿ ಚಲೋ’ಗೆ 3ನೇ ದಿನವೂ ಭರ್ಜರಿ ಸ್ಪಂದನೆ, ರೈತರ 5 ಲಕ್ಷ ರು.ವರೆಗಿನ ಸಾಲಮನ್ನಾಗೆ ಬಿವೈವಿ ಪಟ್ಟು]]></title>
            <link>https://kannada.asianetnews.com/state/bjp-ballari-chalo-padayatra-day-3-by-vijayendra-sindhanur-san/articleshow-wwxynw0</link>
            <guid isPermaLink="true">https://kannada.asianetnews.com/state/bjp-ballari-chalo-padayatra-day-3-by-vijayendra-sindhanur-san/articleshow-wwxynw0</guid>
            <pubDate>Fri, 04 Sep 2026 06:53:42 +0530</pubDate>
            <description><![CDATA[&lt;p&gt;ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ 'ಬಳ್ಳಾರಿ ಚಲೋ' ಪಾದಯಾತ್ರೆ ನಡೆದಿದ್ದು, ಬರಪೀಡಿತ ರೈತರ ₹5 ಲಕ್ಷದವರೆಗಿನ ಬೆಳೆ ಸಾಲ ಮನ್ನಾಕ್ಕೆ ಆಗ್ರಹಿಸಲಾಗಿದೆ. ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಲಾಯಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1n03r2bz3qhn6y0gkszr8sa,imgname-by-vijayendra-1788484902987.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಮಸ್ಕಿ (ರಾಯಚೂರು)&lt;/strong&gt;&lt;/p&gt;&lt;p&gt;ರಾಜ್ಯದ ಸುಮಾರು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರಪೀಡಿತ ಪ್ರದೇಶಗಳ ರೈತರ ಬೆಳೆ ಸಾಲವನ್ನು ₹5 ಲಕ್ಷದವರೆಗೆ ಮನ್ನಾ ಮಾಡಿ. ರೈತರ ಸಮಸ್ಯೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.&lt;/p&gt;&lt;p&gt;ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು.ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್&zwnj; ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ &lsquo;ಬಳ್ಳಾರಿ ಚಲೋ&rsquo; ಪಾದಯಾತ್ರೆ ಗುರುವಾರ 3ನೇ ದಿನ ಪೂರೈಸಿತು.ಈ ಯಾತ್ರೆ ವೇಳೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;&lt;strong&gt;ರೈತರಿಗೆ ಏನು ಮಾಡಿದ್ದೀರಿ?&lt;/strong&gt;&lt;/h2&gt;&lt;p&gt;ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈಗ ಆ ಪ್ರೋತ್ಸಾಹಧನ ಕೂಡ ಬಿಡುಗಡೆಯಾಗುತ್ತಿಲ್ಲ ಎಂದು ಬಿವೈವಿ ಆರೋಪಿಸಿದರು.&lt;/p&gt;&lt;p&gt;ನಾಡಿನ ರೈತರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. 31 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಸಮಾನಾಂತರ ಹಂಚಿಕೆ ವ್ಯವಸ್ಥೆಗೆ ನವಲಿ ಜಲಾಶಯಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3,655 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ 937 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 295, ರಾಯಚೂರು ಜಿಲ್ಲೆಯಲ್ಲಿ 169, ಬೀದರ್&zwnj;ನಲ್ಲಿ 220 ಹಾಗೂ ಕೊಪ್ಪಳದಲ್ಲಿ 80ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಈ ಅಂಕಿ-ಅಂಶಗಳು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರಿಯಾಂಕ್ ಖರ್ಗೆ ಅವರೇ, ಕಲಬುರಗಿ ಜಿಲ್ಲೆಯಲ್ಲೇ 295 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು. ಅನ್ನದಾತನ ಸಂಕಷ್ಟಕ್ಕೆ ಸರ್ಕಾರ ಮಿಡಿಯುವ ಕಾಳಜಿ ತೋರಬೇಕು ಎಂದು ಹೇಳಿದರು.&lt;/p&gt;&lt;p&gt;ಬಿಜೆಪಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಬೇಕು ಎಂಬ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾದಯಾತ್ರೆಯನ್ನು ತಡೆಯುವುದಾದರೆ ತಡೆಯಿರಿ. ನಮ್ಮನ್ನು ಗಲ್ಲಿಗೇರಿಸಿದರೂ ಪರವಾಗಿಲ್ಲ. ಆದರೆ, ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಬಿಜೆಪಿ ಪಾದಯಾತ್ರೆಗೆ ಕಪ್ಪು ಬಾವುಟ ತೋರಿಸುವುದಕ್ಕಿಂತ ಮೊದಲು ರೈತರ ಕಣ್ಣೀರು ಒರೆಸುವ ಕೆಲಸ ಮಾಡಿ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ನಿಮಗೆ ಉತ್ತರ ನೀಡುತ್ತಾರೆ ಎಂದು ಕಿಡಿ ಕಾರಿದರು.&lt;/p&gt;&lt;h2&gt;&lt;strong&gt;ಜಿಟಿಜಿಟಿ ಮಳೆಯಲ್ಲೇ ಯಾತ್ರೆ&lt;/strong&gt;&lt;/h2&gt;&lt;p&gt;ಯಾತ್ರೆ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜಿಟಿಜಿಟಿ ಮಳೆ ಶುರುವಾಯಿತು. ಮಳೆಯಲ್ಲಿಯೇ ಹೆಜ್ಜೆ ಹಾಕಿದ ಬಿಜೆಪಿ ನಾಯಕರು ಕುನ್ನಟಗಿ ಕ್ಯಾಂಪ್&zwnj; ಗೆ ಆಗಮಿಸಿದರು. ಕ್ಯಾಂಪಿನ ಜಮೀನೊಂದರಲ್ಲಿ ಕುಳಿತು ರೈತ ಮಹಿಳೆಯರು, ರೈತರೊಂದಿಗೆ ಸೇರಿ ನೆಲದ ಮೇಲೆ ಹಾಸಿದ ಚಾಪೆ ಮೇಲೆ ಕುಳಿತು ಮಧ್ಯಾಹ್ನದ ಭೋಜನ ಸವಿದರು. ಪಲ್ಯ, ರೊಟ್ಟಿ, ಚಪಾತಿ, ಅನ್ನಸಾಂಬಾರ್&zwnj; ತಿಂದು, ರೈತ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ಬಳಿಕ, ಯಾತ್ರೆ ಸಿಂಧನೂರು ನಗರಕ್ಕೆ ಆಗಮಿಸಿತು. ನಗರದ ಗಾಂಧಿ ಚೌಕ್&zwnj;ನಲ್ಲಿ ಕಾರ್ನರ್&zwnj; ಸಮಾವೇಶದೊಂದಿಗೆ ಮೂರನೇ ದಿನದ ಯಾತ್ರೆ ಮುಕ್ತಾಯಗೊಂಡಿತು. ಈ ವೇಳೆ, ನೆರೆದಿದ್ದ ಜನಸ್ತೋಮ ಮೊಬೈಲ್&zwnj; ಟಾರ್ಚ್&zwnj; ಹಾಕಿ ಯಾತ್ರೆಯನ್ನು ಬೆಂಬಲಿಸಿದುದು ವಿಶೇಷವಾಗಿತ್ತು.&lt;/p&gt;&lt;h2&gt;&lt;strong&gt;3ನೇ ದಿನ 23 ಕಿ.ಮೀ. ಸಾಗಿದ ಪಾದಯಾತ್ರೆ&lt;/strong&gt;&lt;/h2&gt;&lt;p&gt;&lt;strong&gt;ಮಸ್ಕಿ/ಸಿಂಧನೂರು: &lt;/strong&gt;ಮೂರನೇ ದಿನವಾದ ಗುರುವಾರ ರಾಯಚೂರು ಜಿಲ್ಲೆ ಮಸ್ಕಿ ಬಳಿಯ ಗುಡದೂರಿನಿಂದ ಪಾದಯಾತ್ರೆ ಆರಂಭವಾಯಿತು. ಬಳಿಕ ಜಿಟಿ ಜಿಟಿ ಮಳೆ, ಬಿಸಿಲನ್ನೂ ಲೆಕ್ಕಿಸದೇ 23 ಕಿ.ಮೀ.ದೂರ ಸಾಗಿತು ಹಾಗೂ ಸಂಜೆ ಸಿಂಧನೂರಿನಲ್ಲಿ ಅಂತ್ಯಗೊಂಡಿತು. ಮೂರನೇ ದಿನದ ಅಂತ್ಯಕ್ಕೆ ಯಾತ್ರೆ 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 55 ಕಿ.ಮೀ. ಸಾಗಿದಂತಾಗಿದೆ.&lt;/p&gt;&lt;h2&gt;&lt;strong&gt;ಭತ್ತದ ನಾಟಿ ಮಾಡಿ ಬಂಡಿ ಏರಿದ ಬಿವೈವಿ&lt;/strong&gt;&lt;/h2&gt;&lt;p&gt;ಬೆಳಗ್ಗೆ 10 ಗಂಟೆಗೆ ಗುಡದೂರಿನ ಕರಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನೇಗಿಲ ಹೊತ್ತು, ಜೋಡೆತ್ತಿನ ಬಂಡಿ ಏರಿದ ವಿಜಯೇಂದ್ರ, 3ನೇ ದಿನದ ಪಾದಯಾತ್ರೆ ಆರಂಭಿಸಿದರು. ನಂತರ ಯಾತ್ರೆ ಪಾಂಡುರಂಗಾಪುರ ಕ್ಯಾಂಪಿಗೆ ಬರುತ್ತಿದ್ದಂತೆ ಕೃಷಿಕರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಕಂಡರು. ಆಗ ವಿಜಯೇಂದ್ರ ಹಾಗೂ ಶ್ರೀರಾಮುಲು, ಕೆಸರಿನ ಗದ್ದೆಗಿಳಿದು ಭತ್ತದ ಸಸಿ ಮಡಿಗಳನ್ನು ಕೈಯಲ್ಲಿ ಹಿಡಿದು ನಾಟಿ ಮಾಡಿದರು. ಮಧ್ಯಾಹ್ನ ಕುನ್ನಟಗಿ ಕ್ಯಾಂಪ್&zwnj;ನಲ್ಲಿ ರೈತರ ಜತೆ ಹೊಲದಲ್ಲೇ ಭೋಜನ ಸವಿದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bjp-ballari-chalo-padayatra-day-3-by-vijayendra-sindhanur-san/articleshow-wwxynw0"/>
        </item>
        <item>
            <title><![CDATA[ಕೈಕೊಟ್ಟ ಮುಂಗಾರು ಮಳೆ; 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕಜೋಳ ಬೆಳೆ ನಾಶಪಡಿಸಿದ ರೈತ]]></title>
            <link>https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8</link>
            <guid isPermaLink="true">https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8</guid>
            <pubDate>Sat, 08 Aug 2026 08:16:51 +0530</pubDate>
            <description><![CDATA[ಕುರುಗೋಡು ತಾಲೂಕಿನಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲವಾದ ಕಾರಣ, ಎಚ್.ವೀರಾಪುರ ಗ್ರಾಮದ ರೈತರೊಬ್ಬರು ತಮ್ಮ ಐದು ಎಕರೆ ಮೆಕ್ಕೆಜೋಳ ಬೆಳೆಯನ್ನು ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದ್ದಾರೆ. ಕೊಳವೆಬಾವಿ ಇದ್ದರೂ, ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕುಸಿತದಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzfkyg0jjhayg5xzxxab74cv,imgname-farmer-1786156892178.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಎಚ್.ವೀರಾಪುರ ಗ್ರಾಮದ ರೈತ ರಾಜಾಸಾಬ್ ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಗುರುವಾರ ಟ್ರ್ಯಾಕ್ಟರ್ ಬಳಸಿ ನಾಶಪಡಿಸಿದರು.&lt;/p&gt;&lt;p&gt;ಮುಂಗಾರು ಪೂರ್ವ ಮಳೆಯಿಂದ ಪುಳಕಿತರಾಗಿದ್ದ ರೈತ ರಾಜಾಸಾಬ್ ಮೂರು ಎಕರೆ ಕೊಳವೆಬಾವಿ ಆಶ್ರಿತ ಭೂಮಿ ಮತ್ತು ಎರಡು ಎಕರೆ ಮಳೆಯಾಶ್ರಿತ ಭೂಮಿ ಸೇರಿ ಒಟ್ಟು ಐದು ಎಕರೆಯಲ್ಲಿ ಮೆಕ್ಕಜೋಳ ಬೆಳೆಯುವ ಪ್ರಯತ್ನ ಮಾಡಿದ್ದರು. ನಂತರ ದಿನಗಳಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿದೆ. ಬೆಳೆಯನ್ನು ಉಳಿಸಿಕೊಳ್ಳಲು ಕೊಳವೆ ಬಾವಿಯ ನೀರು ಹರಿಸಲು ಪ್ರಯತ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕುಸಿತ&lt;/strong&gt;&lt;/h2&gt;&lt;p&gt;ಅನಿಯಮಿತ ವಿದ್ಯುತ್ ಕಡಿತ ಮತ್ತು ಅಂತರ್ಜಲ ಕೃಷಿಯಿಂದ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೈಗೆಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉಳಿಸಿಕೊಳ್ಳಲು ದಾರಿ ಕಾಣದೆ ಬೆಳೆಯನ್ನು ಟ್ರ್ಯಾಕ್ಟರ್ ಸಹಾಯ ದಿಂದ ನಾಶ ಮಾಡಿದ್ದಾರೆ.15 ದಿನಗಳ ಹಿಂದೆ ಮಳೆ ಬಂದಿದ್ದರೆ ಫಸಲು ಸಮೃದ್ಧವಾಗಿ ಬೆಳೆದು ಆಗಸ್ಟ್ ತಿಂಗಳ ಅಂತ್ಯದಲ್ಲಿ ಕಟಾವಿಗೆ ಬರುತ್ತಿತ್ತು.&lt;/p&gt;&lt;p&gt;ಎಕರೆಗೆ 50 ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿತ್ತು. ಕನಿಷ್ಠ ₹5 ಲಕ್ಷ ಮೌಲ್ಯದ ಮೆಕ್ಕೆಜೋಳ ದೊರೆಯುತ್ತಿತ್ತು. ಮಳೆ ಬಾರದ ಪರಿಣಾಮ ವೆಚ್ಚ ಮಾಡಿದ ₹2 ಲಕ್ಷದ ಜತೆಗೆ ಸಮಯ ಮತ್ತು ಶ್ರಮ ವ್ಯರ್ಥವಾಗಿದೆ ಎನ್ನುತ್ತಾರೆ ರೈತ ರಾಜಾ ಸಾಬ್.&lt;/p&gt;&lt;h3&gt;&lt;strong&gt;ರೈತರಿಗೆ ಕೃಷಿ ನಿರ್ದೇಶಕರ ಸಲಹೆ&lt;/strong&gt;&lt;/h3&gt;&lt;p&gt;ಬೆಳೆ ಆ್ಯಪ್&zwnj;ನಲ್ಲಿ ರೈತರು ಸ್ವಯಂ ಬೆಳೆ ಸಮೀಕ್ಷೆ ಮಾಡಿಕೊಂಡರೆ ಮಾತ್ರ, ಅದರ ಆದಾರದಲ್ಲಿ ಬೆಳೆನಷ್ಟ ಪರಿಹಾರ ದೊರೆಯುತ್ತದೆ. ರೈತರು ಬೆಳೆನಾಶ ಮಾಡುವ ಮೊದಲು ಬೆಳೆ ಆ್ಯಪ್&zwnj;ನಲ್ಲಿ ಸ್ವಯಂ ಸಮೀಕ್ಷೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗರ್ಜೆಪ್ಪ ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ballari-lack-of-monsoon-rains-h-veerapur-village-s-farmer-destroys-5-acres-of-maize-crop-in-kurugodu-taluk-mrq/articleshow-xo9ycx8"/>
        </item>
        <item>
            <title><![CDATA[ಬಳ್ಳಾರಿ ಚಲೋ ಬಿಜೆಪಿ ಯಾತ್ರೆಗೆ ತೆರೆ: ನಾಗೇಂದ್ರನ ಬಿಟ್ಟು ಕಾಂಗ್ರೆಸ್ ಬುಡಕ್ಕೆ ಕೈ ಹಾಕಿದ ಬಿ.ವೈ.ವಿಜಯೇಂದ್ರ]]></title>
            <link>https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b</link>
            <guid isPermaLink="true">https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b</guid>
            <pubDate>Fri, 11 Sep 2026 06:46:06 +0530</pubDate>
            <description><![CDATA[ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಯು ಬೃಹತ್ ಸಮಾವೇಶದೊಂದಿಗೆ ಸಮಾರೋಪಗೊಂಡಿದೆ. ಇದು ಭ್ರಷ್ಟಾಚಾರದ ವಿರುದ್ಧದ ಯುದ್ಧದ ಆರಂಭವಾಗಿದ್ದು, ರಾಜ್ಯದ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವುದಾಗಿ ವಿಜಯೇಂದ್ರ ಗುಡುಗಿದ್ದಾರೆ. ಅಲ್ಲದೆ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27037tyth64jytrb9vxcv27,imgname-ballari-chalo-bjp-by-vijayendra-1789088866140.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬಳ್ಳಾರಿ&lt;/strong&gt;&lt;/p&gt;&lt;p&gt;ನಮ್ಮ ಈ ಪಾದಯಾತ್ರೆಯ ಸಮಾರೋಪ ಹೋರಾಟದ ಅಂತ್ಯವಲ್ಲ, ಭ್ರಷ್ಟಾಚಾರದ ವಿರುದ್ಧದ ನಮ್ಮ ಯುದ್ಧದ ಆರಂಭ ಎಂದು ಅಬ್ಬರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮನೆಯಲ್ಲಿ ಕೂರುವ ಪ್ರಶ್ನೆಯೇ ಇಲ್ಲ, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಪರ್ಯಟನೆ ಮಾಡುತ್ತೇವೆ. ಈ ದರಿದ್ರ, ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುತ್ತೇವೆ ಎಂದು ಗುಡುಗಿದ್ದಾರೆ.&lt;/p&gt;&lt;p&gt;ಉರಿಬಿಸಿಲಿನ ತಾಪಕ್ಕೆ ಹೆಸರಾಗಿರುವ ಗಣಿನಾಡು ಬಳ್ಳಾರಿ ಗುರುವಾರ ಸಂಜೆ ನಡೆದ ಬೃಹತ್ ರಾಜಕೀಯ ಸಮಾವೇಶಕ್ಕೆ ಸಾಕ್ಷಿಯಾಯಿತು. ವಾಲ್ಮೀಕಿ ನಿಗಮದ 187 ಕೋಟಿ ರು. ವಾಪಸ್&zwnj;ಗೆ ಆಗ್ರಹಿಸಿ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ರಾಯಚೂರು ಜಿಲ್ಲೆಯಲ್ಲಿ ಆರಂಭಗೊಂಡ ಬಳ್ಳಾರಿ ಚಲೋ ಪಾದಯಾತ್ರೆ, 187 ಕಿ.ಮೀ. ಕ್ರಮಿಸಿ 3 ಜಿಲ್ಲೆಗಳನ್ನು ಹಾದು ಸೆ.9ರಂದು ಬಳ್ಳಾರಿ ತಲುಪಿತ್ತು. ಗುರುವಾರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆದ ಅದ್ಧೂರಿ ಸಮಾರೋಪದೊಂದಿಗೆ ತೆರೆ ಕಂಡಿತು.&lt;/p&gt;&lt;p&gt;ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಆರಂಭಿಸಿರುವ ಹೋರಾಟ ಮುಂದುವರಿಯಲಿದ್ದು, ರಣರಂಗದಲ್ಲಿ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ&lt;/strong&gt;&lt;/h2&gt;&lt;p&gt;ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಸಮಾವೇಶದ ಮೂಲಕ ಮೊದಲ ಹಂತದ ಹೋರಾಟ ಅಂತ್ಯಗೊಂಡಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮುಂದಿನ ದಿನಗಳಲ್ಲಿಯೂ ಜನರ ಪರ ಹೋರಾಟ ನಡೆಸಲಾಗುವುದು. ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸಲು ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿಯ ಸಮರ ಆರಂಭವಾಗಿದ್ದು, ಇದನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ವಿಜಯೇಂದ್ರ ಹೇಳಿದರು.&lt;/p&gt;&lt;p&gt;ರಾಜ್ಯದಲ್ಲಿ ಡ್ರಗ್ಸ್&zwnj; ಮಾಫಿಯಾ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಮುಖ್ಯಮಂತ್ರಿಗಳೇ ಹೇಳಿಕೊಳ್ಳುವಂತೆ ಅವರು, ಶೇ.90ರಷ್ಟು ಬಿಜಿನೆಸ್ ಮ್ಯಾನ್, ಶೇ.10ರಷ್ಟು ಮಾತ್ರ ರಾಜಕಾರಣಿಯಾಗಿದ್ದಾರೆ. ಒಬ್ಬ ಬಿಜಿನೆಸ್ ಮ್ಯಾನ್&zwnj;ನಿಂದ ರಾಜ್ಯದ ಕಲ್ಯಾಣ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.&lt;/p&gt;&lt;p&gt;ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಿಲ್ಲ. ಇಡೀ ರಾಜ್ಯದ ಪ್ರಗತಿ ಹಿನ್ನಡೆಯತ್ತ ಮುಖ ಮಾಡಿದೆ. ಹೀಗಾಗಿ, ರಾಜ್ಯದ ಪ್ರಗತಿಯ ದೃಷ್ಟಿಯಿಂದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹200 ಕೋಟಿ ಬಿಡುಗಡೆ ಮಾಡಬೇಕು. ಎಸ್ಸಿಟಿಎಸ್ಪಿ ಹಣ ಬಳಕೆ ಕುರಿತು ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.&lt;/p&gt;&lt;h2&gt;&lt;strong&gt;ಸಾಲ ಮನ್ನಾ, 3 ಫೇಸ್ ನಿರಂತರ ವಿದ್ಯುತ್&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕಾಂಗ್ರೆಸ್ ಸರ್ಕಾರ ಕೂಡಲೇ ನಾಡಿನ ಎಲ್ಲ ರೈತರ ₹5 ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು. ತ್ರಿಫೇಸ್ ವಿದ್ಯುತ್ ಇಲ್ಲದೆ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಬೋರ್ಡ್&zwnj;ಗಳಿಗೆ ₹2 ಸಾವಿರ ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.&lt;/p&gt;&lt;p&gt;ರೈತರ ಸಾಲ ಮನ್ನಾ ಮಾಡಿ ಎಂದರೆ ಮೋದಿ ಹತ್ತಿರ ಹೋಗೋಣ ಅಂತಾರೆ. ಆದರೆ, ಹಿಂದೆ ಯಡಿಯೂರಪ್ಪ ಇದ್ದಾಗ ರಾಜ್ಯದಿಂದಲೇ ಪರಿಹಾರ ಕೊಟ್ರು. ರೈತರ ಸಾಲ ಮನ್ನಾ ಮಾಡಿದ್ರು. ಈಗ ಮಹಾರಾಷ್ಟ್ರ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲವೇ? ಸಾಲ ಮನ್ನಾ ಮಾಡದಿದ್ದರೆ ರೈತರೇ ಬೀದಿಗಿಳಿಯಲಿದ್ದಾರೆ ಎಂದು ಎಚ್ಚರಿಸಿದರು.&lt;/p&gt;]]></content:encoded>
            <category>ballari</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bjp-ballari-chalo-padayatra-concludes-by-vijayendra-attacks-congress-govt-after-nagendra-sat/articleshow-ziv326b"/>
        </item>
    </channel>
</rss>
