<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 05 Jun 2026 19:23:31 +0530</lastBuildDate>
        <atom:link href="https://kannada.asianetnews.com/rss/ballari" rel="self" type="application/rss+xml"/>
        <item>
            <title><![CDATA[ರಕ್ಷಕರೇ ಭಕ್ಷಕರು, ಅಕ್ರಮ ಅಕ್ಕಿ ಸಾಗಣೆದಾರರಿಂದ ವಸೂಲಿ ದಂಧೆ, ಬಳ್ಳಾರಿ ಎಸ್‌ಪಿ ಸುಮನ್ ಪನ್ನೇಕರ್ ಗನ್‌ಮ್ಯಾನ್ ಬಂಧನ!]]></title>
            <link>https://kannada.asianetnews.com/karnataka-districts/ballari-sp-suman-pennaker-personal-gunman-arrested-for-extorting-rs-3-lakh-from-ration-rice-smuggler-gdp/articleshow-312qci6</link>
            <guid isPermaLink="true">https://kannada.asianetnews.com/karnataka-districts/ballari-sp-suman-pennaker-personal-gunman-arrested-for-extorting-rs-3-lakh-from-ration-rice-smuggler-gdp/articleshow-312qci6</guid>
            <pubDate>Fri, 08 May 2026 12:40:50 +0530</pubDate>
            <description><![CDATA[ಬಳ್ಳಾರಿಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಿಸುತ್ತಿದ್ದವರಿಂದ 'ಎಸ್ಪಿ ಸ್ಕ್ವಾಡ್' ಎಂದು ಹೇಳಿಕೊಂಡು ಹಣ ವಸೂಲಿ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗನ್&zwnj;ಮ್ಯಾನ್ ದೇವರಾಜ್ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣವು ಪೊಲೀಸ್ ಇಲಾಖೆಗೆ ಮುಜುಗರ ತಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr369xa5w7nty0xb356yw689,imgname-ballari-sp-suman-pennaker-personal-gunman-1778223740229.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಜಿಲ್ಲೆಯಲ್ಲಿನ ಅಕ್ರಮ ಪಡಿತರ ಅಕ್ಕಿ ಸಾಗಣೆ ವಿರುದ್ಧ ಪೊಲೀಸರು ನಿರಂತರವಾಗಿ ಕಠಿಣ ಕ್ರಮ ಕೈಗೊಳ್ಳುತ್ತಿರುವ &amp;nbsp;ಮಧ್ಯೆಯೇ ಪೊಲೀಸರೇ ಹಣ ವಸೂಲಿ ಮಾಡಿದ ಘಟನೆ &amp;nbsp;ಈಗ ಬಯಲಾಗಿದೆ. ಈ ಸಂಬಂಧ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸುಮನ್ ಪನ್ನೇಕರ್ ಅವರ ಗನ್ ಮ್ಯಾನ್ ಆಗಿದ್ದ ದೇವರಾಜ್ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖುದ್ದು ಸುಮನ್ ಪನ್ನೇಕರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆಂದು ತಿಳಿದುಬಂದಿದೆ.&lt;/p&gt;&lt;h2&gt;ಆಂಧ್ರಪ್ರದೇಶದತ್ತ ಅಕ್ರಮವಾಗಿ ಅಕ್ಕಿ ತುಂಬಿ ಹೊರಟಿದ್ದ ಲಾರಿ&lt;/h2&gt;&lt;p&gt;ಶರಭಯ್ಯ ಎಂಬ ವ್ಯಕ್ತಿ ಅಕ್ರಮ ಪಡಿತರ ಅಕ್ಕಿ ಸಾಗಣೆದಾರನಾಗಿದ್ದು, ಆಂಧ್ರಪ್ರದೇಶದತ್ತ ಅಕ್ಕಿ ತುಂಬಿದ ಎರಡು ಲಾರಿಗಳೊಂದಿಗೆ ಪ್ರಯಾಣಿಸುತ್ತಿದ್ದ. ಈ ವೇಳೆ &amp;nbsp;ಎಸ್&zwnj;ಪಿ ಗನ್&zwnj;ಮ್ಯಾನ್ ದೇವರಾಜ್ ಮತ್ತು ಆತನ ತಂಡ ಲಾರಿಗಳನ್ನು ಅಡ್ಡಗಟ್ಟಿ ತಾವು &lsquo;ಎಸ್ಪಿ ಸ್ಕ್ವಾಡ್&rsquo; ಸದಸ್ಯರು ಎಂದು ಹೇಳಿಕೊಂಡು &amp;nbsp;ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಟ್ಟರೆ ಪ್ರಕರಣ ದಾಖಲಿಸದೇ ಬಿಡುವುದಾಗಿ ಹೇಳಿ 5 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಷ್ಟು ಕೊಡಲು ನನ್ನಲ್ಲಿ ಇಲ್ಲ ಎಂದು ಶರಭಯ್ಯ ಹೇಳಿದ್ದು ಬಳಿಕ ಮಾತುಕತೆಯ ಮೂಲಕ 3 ಲಕ್ಷ ರೂ.ಗಳಿಗೆ ಒಪ್ಪಂದ ಮಾಡಿಕೊಂಡು. ಆ ಹಣವನ್ನು ಆರೋಪಿಗಳು ಶರಭಯ್ಯನಿಂದ ವಸೂಲಿ ಮಾಡಿದ್ದಾರೆ.&lt;/p&gt;&lt;h2&gt;3 ಲಕ್ಷ ಕೊಟ್ಟು ದೂರು ಕೊಟ್ಟ ಶರಭಯ್ಯ&lt;/h2&gt;&lt;p&gt;3 ಲಕ್ಷ ಕೊಟ್ಟು ಕಂಗೆಟ್ಟ ಶರಭಯ್ಯ ಮೋಕಾ ಪೊಲೀಸ್ ಠಾಣೆಗೆ ದೂರು ನೀಡಿದರು. ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆಂದಯ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೇವರಾಜ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್ಪಿ ಸ್ಕ್ವಾಡ್ ಹೆಸರಿನಲ್ಲಿ ಹಣ ವಸೂಲಿ ನಡೆಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನವಾಗಿದೆ.&lt;/p&gt;&lt;p&gt;ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ಸುಮನ್ ಪನ್ನೇಕರ್ ಸ್ವತಃ ಮೋಕಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಶಾಕಿಂಗ್ ಸಂಗತಿಯೆಂದರೆ, ಜಿಲ್ಲೆಯಲ್ಲಿನ ಅಕ್ರಮ ಪಡಿತರ ಅಕ್ಕಿ ದಂಧೆ ವಿರುದ್ಧ ಈಗಾಗಲೇ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ನೂರಾರು ಪ್ರಕರಣಗಳು ದಾಖಲಾಗಿವೆ. ಇಂತಹ ಸಂದರ್ಭದಲ್ಲಿ, ಪೊಲೀಸ್ ಸಿಬ್ಬಂದಿಯೇ ದಂಧೆಕೋರರಿಂದ ಹಣ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿರುವುದು ಇಲಾಖೆಗೆ ಮುಜುಗರ ತಂದಿಟ್ಟ ಪ್ರಕರಣವಾಗಿದೆ.&lt;/p&gt;&lt;p&gt;ಈ ಘಟನೆ ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದ್ದು, ಪೊಲೀಸರ ಕಾರ್ಯ ವೈಖರಿ ಬಗ್ಗೆ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದ್ದು, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/ballari-sp-suman-pennaker-personal-gunman-arrested-for-extorting-rs-3-lakh-from-ration-rice-smuggler-gdp/articleshow-312qci6"/>
        </item>
        <item>
            <title><![CDATA[ಬಳ್ಳಾರಿ: ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಉರುಳಿದ ಕಾರು]]></title>
            <link>https://kannada.asianetnews.com/gallery/state/bellary-driver-loses-control-of-car-and-falls-off-bridge-3gfy8ra</link>
            <guid isPermaLink="true">https://kannada.asianetnews.com/gallery/state/bellary-driver-loses-control-of-car-and-falls-off-bridge-3gfy8ra</guid>
            <pubDate>Tue, 21 Apr 2026 10:00:54 +0530</pubDate>
            <description><![CDATA[&lt;p&gt;Andral Ballari road accident: ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಏಕೈಕ ವ್ಯಕ್ತಿಯಾದ ಚಾಲಕನನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpq4cyym9q6pzgtyethscne5,imgname-ballari-accident--3--1776745348052.jpg" type="image/jpeg" height="390" width="690"/>
            <content:encoded><![CDATA[&lt;p&gt;Andral Ballari road accident: ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ. ಕಾರಿನಲ್ಲಿದ್ದ ಏಕೈಕ ವ್ಯಕ್ತಿಯಾದ ಚಾಲಕನನ್ನು ಸ್ಥಳೀಯರು ರಕ್ಷಿಸಿ, ಚಿಕಿತ್ಸೆಗಾಗಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಬಳ್ಳಾರಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹಳ್ಳಕ್ಕೆ ಉರುಳಿದ ಘಟನೆ ನಡೆದಿದೆ.&lt;/p&gt;&lt;img&gt;&lt;p&gt;ಬಳ್ಳಾರಿಯ ಅಂದ್ರಾಳ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಾರಿನಲ್ಲಿ ಕೇವಲ ಚಾಲಕ ಮಾತ್ರ ಇದ್ದು, ಆತನನ್ನು ಸ್ಥಳೀಯರು ರಕ್ಷಿಸಿ ವೀಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕಾರು ಕಣೆಕಲ್ಲು ಬಸ್ ನಿಲ್ದಾಣದ ಕಡೆಯಿಂದ ಅಂದ್ರಳ್ ಕಡೆಗೆ ಚಲಿಸುತ್ತಿತ್ತು. ವೇಗವಾಗಿ ಸಾಗುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಸೇತುವೆಯಿಂದ ಹಳ್ಳಕ್ಕೆ ಉರುಳಿದೆ.&amp;nbsp;&lt;/p&gt;&lt;img&gt;&lt;p&gt;ಅಂದ್ರಳ್ ಬಳಿ ಇರುವ ಬೃಹತ್ ಹಳ್ಳಕ್ಕೆ ಕಾರು ಬಿದ್ದಿದ್ದು, ಕೂಡಲೇ ಸ್ಥಳೀಯರು ಕಾರು ಚಾಲಕನನ್ನು ರಕ್ಷಿಸಿ ಜೀವ ಉಳಿಸಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/bellary-driver-loses-control-of-car-and-falls-off-bridge-3gfy8ra"/>
        </item>
        <item>
            <title><![CDATA[ಬಳ್ಳಾರಿ: ಏರುತ್ತಿರುವ ಬಿಸಿಲ ತಾಪದ ನಡುವೆ: ರಸ್ತೆ ಅಗಲೀಕರಣಕ್ಕಾಗಿ 30ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಏಟು]]></title>
            <link>https://kannada.asianetnews.com/state/bellary-amid-rising-heat-over-30-trees-cutoff-for-road-widening/articleshow-5egx6lv</link>
            <guid isPermaLink="true">https://kannada.asianetnews.com/state/bellary-amid-rising-heat-over-30-trees-cutoff-for-road-widening/articleshow-5egx6lv</guid>
            <pubDate>Fri, 24 Apr 2026 13:05:03 +0530</pubDate>
            <description><![CDATA[&lt;p&gt;ಬಿಸಿಲ ನಾಡು ಬಳ್ಳಾರಿಯಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಗುತ್ತಿಗೆದಾರನೊಬ್ಬ 234 ಮರಗಳನ್ನು ಕಡಿಯಲು ಮುಂದಾಗಿದ್ದಾನೆ. ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದರೂ ಮರಗಳ ಕಡಿದಿದ್ದು ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpz5pb7v99zz0bknm39ge0yy,imgname-tree-cutting-in-ballary-1777015139579.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಸ್ತೆ ಅಗಲೀಕರಣಕ್ಕಾಗಿ ಮರಗಳ ಮಾರಣಹೋಮ&lt;/strong&gt;&lt;/h2&gt;&lt;p&gt;ಬಳ್ಳಾರಿ: ಬೇಸಿಗೆಯ ಬಿಸಿಲಿನ ದಾಹ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲ ನಾಡು ಬಳ್ಳಾರಿಯಲ್ಲಿ ಬಿರು ಬೇಸಿಗೆಯ ಬಿಸಿಲ ತಾಪದಿಂದ ಮನೆಯೊಳಗೂ ಕೂರಲಾರದಂತಹ ಸ್ಥಿತಿ ಇದೆ. ಹೀಗಿರುವಾಗ ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆ ಬದಿ ಇದ್ದ 30ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ರಸ್ತೆ ಅಗಲೀಕರಣಕ್ಕೆ ಅಡ್ಡವಾಗಿದೆ ಎಂದು 234 ಮರಗಳನ್ನು ಗುತ್ತಿಗೆದಾರ ಕಡಿಯಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರಸ್ತೆ ಬದಿ ಇದ್ದ ಈ ಸಾಲು ಮರಗಳನ್ನು ಕಡಿಯುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;p&gt;&lt;strong&gt;30ಕ್ಕೂ ಹೆಚ್ಚು ಮರಗಳಿಗೆ ಕತ್ತರಿ&lt;/strong&gt;&lt;/p&gt;&lt;p&gt;ಬಿಸಿಲ ದಾಹದಿಂದ ತತ್ತರಿಸಿರುವ ಗಣಿನಾಡು ಬಳ್ಳಾರಿಯಲ್ಲಿ ಮರಗಳನ್ನು ನಡಬೇಕು ಎಂದು ಜಾಗೃತಿ ಮೂಡಿಸಬೇಕಾದ ಸಮಯದಲ್ಲಿ ಮರಗಳನ್ನು ಕಡಿದು ಹಾಕಲಾಗುತ್ತಿದೆ.&lt;/p&gt;&lt;p&gt;ರಸ್ತೆ ಅಗಲೀಕರಣದ ನೆಪದಲ್ಲಿ ಗುತ್ತಿಗೆದಾರನೊಬ್ಬ ನೂರಾರು ಮರಗಳಿಗೆ ಕೊಡಲಿ ಪೆಟ್ಟು ಹಾಕಿದ್ದಾನೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಿಂದ ಕೊಳಗಲ್ ಗ್ರಾಮದ ರಸ್ತೆಯವರೆಗೆ ರಸ್ತೆ ಅಗಲೀಕರಣ ಮಾಡಲಾಗ್ತಿದೆ. ಇದಕ್ಕೆ ಅಡ್ಡವಾಗಿದೆ ಎಂದು 234 ಮರಗಳನ್ನು ಕಡಿಯಲು ಗುತ್ತಿಗೆದಾರ ಮುಂದಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಸ್ನೇಹಿತರ ಜೊತೆ ಪ್ರವಾಸ ಹೋಗಿ ಬರುವ ವೇಳೆ ಯುವಕ ರೈಲಿನಿಂದ ಬಿದ್ದು ಯುವಕ ನಿಗೂಢ ಸಾವು&lt;/strong&gt;&lt;/p&gt;&lt;p&gt;&lt;strong&gt;ಅರಣ್ಯ ಇಲಾಖೆ ವಿರೋಧದ ನಡುವೆಯೂ ಮರಗಳಿಗೆ ಕತ್ತರಿ:&lt;/strong&gt;&lt;/p&gt;&lt;p&gt;ಇದರ ಭಾಗವಾಗಿ ನಿನ್ನೆ ತಡರಾತ್ರಿ ನಾಲ್ಕಾರು ಮರಗಳನ್ನು ಕಡಿದಿದ್ದಾರೆ. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಅಡ್ಡಿಪಡಿಸಿದಾಗ ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮರಗಳ ಕಡಿಯುತ್ತಿರೋ ವಿಡಿಯೋ ಮಾಡಿದ ಹಿನ್ನೆಲೆ ಅರಣ್ಯ ಇಲಾಖೆಯ ಸಿಬ್ಬಂದಿಯ ಮೊಬೈಲ್ ಫೋನ್ ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿ ಮರ ಕಡಿಯಲು ಮುಂದಾಗಿರೋದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಅರಣ್ಯ ಇಲಾಖೆ ಮರ ಕಡಿಯುವುದಕ್ಕೆ ಅನುಮತಿ ನಿರಾಕರಿಸಿದೆ. ಆದ್ರೂ ರಸ್ತೆ ಅಗಲೀಕರಣ ನೆಪದಲ್ಲಿ ಮರಗಳನ್ನು ಕಡಿಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಶಿವಮೊಗ್ಗ: ವೃದ್ಧೆಯ ಮನೆ ದರೋಡೆ, ಕೈ ಕಟ್ಟಿ ಬಾಯಿಗೆ ಬಟ್ಟೆ ತುರುಕಿ 18 ಲಕ್ಷದ ಚಿನ್ನಾಭರಣದೊಂದಿಗೆ ಪರಾರಿ&lt;/strong&gt;&lt;/p&gt;]]></content:encoded>
            <category>ballari</category>
            <dc:creator>Anusha Kb</dc:creator>
            <atom:link href="https://kannada.asianetnews.com/state/bellary-amid-rising-heat-over-30-trees-cutoff-for-road-widening/articleshow-5egx6lv"/>
        </item>
        <item>
            <title><![CDATA[ನಿಮ್ಮ ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಲೈಬ್ರರಿ ಇದೆಯೇ? ಬಳ್ಳಾರಿಯಲ್ಲಿ ನೋಡಿದರೆ ಅಚ್ಚರಿ ಆಗುತ್ತದೆ!]]></title>
            <link>https://kannada.asianetnews.com/state/ballari-bus-stand-library-knowledge-center-passengers-student-rav/articleshow-63x27et</link>
            <guid isPermaLink="true">https://kannada.asianetnews.com/state/ballari-bus-stand-library-knowledge-center-passengers-student-rav/articleshow-63x27et</guid>
            <pubDate>Fri, 22 May 2026 08:36:20 +0530</pubDate>
            <description><![CDATA[&lt;p&gt;ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಪ್ರಯಾಣಿಕರು, ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಸ್ಥಾಪಿಸಿದೆ. ಬಸ್&zwnj;ಗಾಗಿ ಕಾಯುವ ಸಮಯವನ್ನು ಜ್ಞಾನಾರ್ಜನೆಗೆ ಬಳಸಿಕೊಳ್ಳಲು ಇದು ಸಹಕಾರಿಯಾಗಿದ್ದು, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವವರಿಗೆ ವರದಾನವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks6t1h68prwbbj2np04rymw1,imgname-----------------------2026-05-22t082450.823-1779418842312.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಜುನಾಥ ಕೆ.ಎಂ.&lt;/strong&gt;&lt;/p&gt;&lt;p&gt;ಬಳ್ಳಾರಿ: ಸಾಮಾನ್ಯವಾಗಿ ಬಸ್ ನಿಲ್ದಾಣ ಎಂದರೆ ಜನಜಂಗುಳಿ, ಗದ್ದಲ, ಪ್ರಯಾಣದ ತವಕ, ಬಸ್&zwnj;ಗಳ ಓಡಾಟ ಮತ್ತು ಸಮಯ ಕಳೆಯಲು ಮೊಬೈಲ್&zwnj;ನಲ್ಲಿ ಮುಳುಗಿರುವ ಪ್ರಯಾಣಿಕರ ದೃಶ್ಯ ಕಣ್ಣಿಗೆ ಬೀಳುತ್ತದೆ. ಆದರೆ, ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಗರ ಕೇಂದ್ರ ಗ್ರಂಥಾಲಯ ಪ್ರಯಾಣಿಕರಿಗೆ ಕೇವಲ ಸಮಯ ಕಳೆಯುವ ಸ್ಥಳವಾಗಿರದೇ, ಜ್ಞಾನಾರ್ಜನೆಗೆ ದಾರಿ ತೆರೆದಿದೆ.&lt;/p&gt;&lt;h2&gt;ಜನರಲ್ಲಿ ಓದು ಸಂಸ್ಕೃತಿ ಬೆಳೀಬೇಕು&lt;/h2&gt;&lt;p&gt;ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಾರಿಗೆ ತಂದಿರುವ ಯೋಜನೆಯ ಭಾಗವಾಗಿ ಜನಸಂಚಾರ ಹೆಚ್ಚಿರುವ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಆರಂಭಿಸಿದೆ.&lt;/p&gt;&lt;p&gt;ಬಸ್&zwnj;ಗಾಗಿ ಕಾಯುವ ಸಮಯ ಬಹುತೇಕ ಜನರಿಗೆ ನಿರರ್ಥಕವಾಗುತ್ತದೆ. ಕೆಲವರು ಮೊಬೈಲ್&zwnj;ನಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ಸುಮ್ಮನೆ ಸಮಯ ಕಳೆಯುತ್ತಾರೆ. ಆದರೀಗ ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪುಸ್ತಕ, ದಿನಪತ್ರಿಕೆ, ವಾರಪತ್ರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ.&lt;/p&gt;&lt;p&gt;ಸಾಹಿತ್ಯ, ಇತಿಹಾಸ, ವಿಜ್ಞಾನ, ಕೃಷಿ, ಆರೋಗ್ಯ, ಮಕ್ಕಳ ಕಥೆಗಳು, ಕಾದಂಬರಿಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ವ್ಯವಸ್ಥಿತವಾಗಿ ಇಲ್ಲಿ ಇಡಲಾಗಿದೆ. ಅಲ್ಲದೆ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಜೊತೆಗೆ ಹಲವು ಮಾಸಪತ್ರಿಕೆಗಳೂ ಲಭ್ಯವಿದ್ದು, ಪ್ರಯಾಣಿಕರು ಆಸಕ್ತಿಯಿಂದ ಓದುತ್ತಿದ್ದಾರೆ.&lt;/p&gt;&lt;p&gt;&lt;strong&gt;ವಿದ್ಯಾರ್ಥಿಗಳಿಗೆ ನೆರವು&lt;/strong&gt;&lt;/p&gt;&lt;p&gt;ಬಸ್ ನಿಲ್ದಾಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬಳ್ಳಾರಿಗೆ ಬರುತ್ತಾರೆ. ತರಗತಿಗಳಿಗೆ ತೆರಳುವ ಮುನ್ನ ಅಥವಾ ಮನೆಗೆ ಮರಳುವ ವೇಳೆಯಲ್ಲಿ ಅವರು ಇಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಉಪಯುಕ್ತ ಮಾಹಿತಿಯನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ಈ ಗ್ರಂಥಾಲಯ ಹೆಚ್ಚು ಅನುಕೂಲಕರವಾಗಿದೆ. ಕೆಲ ವಿದ್ಯಾರ್ಥಿಗಳು ಪ್ರತಿದಿನ ಬಸ್ ಬರುವ ವರೆಗೂ ಇಲ್ಲೇ ಕುಳಿತು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಓದುವ ಸಂಸ್ಕೃತಿಗೆ ಉತ್ತೇಜನ&lt;/strong&gt;&lt;/p&gt;&lt;p&gt;ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬ ಆತಂಕದ ನಡುವೆ, ಸಾರ್ವಜನಿಕ ಸ್ಥಳದಲ್ಲೇ ಗ್ರಂಥಾಲಯ ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ನಡುವೆ ಸಿಲುಕಿರುವ ಇಂದಿನ ತಲೆಮಾರಿಗೆ ಪುಸ್ತಕಗಳ ಮಹತ್ವವನ್ನು ಪರಿಚಯಿಸುವ ಈ ಕಾರ್ಯ ಗಮನ ಸೆಳೆದಿದೆ.&lt;/p&gt;&lt;p&gt;ಈ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಇನ್ನಷ್ಟು ಪುಸ್ತಕಗಳು ಹಾಗೂ ಓದುಗರಿಗೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಕೇಳಿಬರುತ್ತಿದೆ. ಈಗಿರುವ ಗ್ರಂಥಾಲಯ ಜಾಗ ಕಿಷ್ಕಿಂಧೆಯಂತಿದ್ದು ವಿಶಾಲವಾದ ಜಾಗದಲ್ಲಿ ಗ್ರಂಥಾಲಯ ನಿರ್ಮಿಸಿದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಓದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎನ್ನುವುದು ಸಾರ್ವಜನಿಕರ ಆಗ್ರಹ. 2012ರಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಗ್ರಂಥಾಲಯ ಸ್ಥಾಪಿಸಲಾಗಿದ್ದು, ನಿತ್ಯ 100ಕ್ಕೂ ಅಧಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ನಗರದಲ್ಲಿ 10 ಶಾಖಾ ಗ್ರಂಥಾಲಯಗಳು ಇವೆ. ಎಲ್ಲೆಡೆ ಉತ್ತಮ ಸ್ಪಂದನೆ ಇದೆ ಎನ್ನುತ್ತಾರೆ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ನರಸಣ್ಣ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/ballari-bus-stand-library-knowledge-center-passengers-student-rav/articleshow-63x27et"/>
        </item>
        <item>
            <title><![CDATA['ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..' ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ]]></title>
            <link>https://kannada.asianetnews.com/karnataka-districts/ballari-kampli-housewife-aishwarya-self-death-note-doctor-pradeep-arrest-news-san/articleshow-7ko80e4</link>
            <guid isPermaLink="true">https://kannada.asianetnews.com/karnataka-districts/ballari-kampli-housewife-aishwarya-self-death-note-doctor-pradeep-arrest-news-san/articleshow-7ko80e4</guid>
            <pubDate>Tue, 19 May 2026 20:48:26 +0530</pubDate>
            <description><![CDATA[&lt;p&gt;ಬಳ್ಳಾರಿಯ ಕಂಪ್ಲಿಯಲ್ಲಿ, ಪತಿ ಮತ್ತು ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಐಶ್ವರ್ಯ ಎಂಬ ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದರೂ, ನಿರಂತರ ಗೃಹಹಿಂಸೆಯಿಂದ ನೊಂದು ತವರುಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್&zwnj;ನೋಟ್ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0ctz2jsb1154mqycanrspb,imgname-ballari-death-1779203669074.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಮೇ.19): &lt;/strong&gt;ಪತಿ ಹಾಗೂ ಅತ್ತೆಯ ಅತಿಯಾದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬರು ತವರು ಮನೆಯಲ್ಲಿ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ನಡೆದಿದೆ. ಕಂಪ್ಲಿಯ ನಿವಾಸಿ ಐಶ್ವರ್ಯ (24) ಆ*ತ್ಮಹ*ತ್ಯೆ ಮಾಡಿಕೊಂಡ ದುರ್ದೈವಿ ಗೃಹಿಣಿ. ಘಟನೆಗೆ ಸಂಬಂಧಿಸಿದಂತೆ ಕಂಪ್ಲಿ ಠಾಣೆಯ ಪೊಲೀಸರು ಪತಿ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯನ್ನು ತಕ್ಷಣವೇ ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರೀತಿಸಿ ಮದುವೆಯಾಗಿದ್ದ ಪಶುವೈದ್ಯ ಪ್ರದೀಪ್&lt;/strong&gt;&lt;/h2&gt;&lt;p&gt;ಮೃತ ಐಶ್ವರ್ಯಳನ್ನು ಕಂಪ್ಲಿ ಪಟ್ಟಣದ ನಿವಾಸಿಯಾದ ಪ್ರದೀಪ್ ಕುಮಾರ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ. ಪ್ರದೀಪ್ ಕುಮಾರ್ ಪಶುಸಂಗೋಪನೆ ಇಲಾಖೆಯಲ್ಲಿ ವೈದ್ಯನಾಗಿ (Veterinary Doctor) ಕಾರ್ಯನಿರ್ವಹಿಸುತ್ತಿದ್ದಾನೆ. ಪ್ರೀತಿಸಿ ಹಸೆಮಣೆ ಏರಿದ್ದರೂ ಸಹ, ಮದುವೆಯಾದ ಮೊದಲ ದಿನದಿಂದಲೇ ಐಶ್ವರ್ಯಳಿಗೆ ಗಂಡನ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಅತ್ತೆಯ ಕಿರುಕುಳಕ್ಕೆ ಮೂಕಪ್ರೇಕ್ಷಕನಾಗಿದ್ದ ಪತಿ&lt;/strong&gt;&lt;/h2&gt;&lt;p&gt;ಮದುವೆಯಾದ ದಿನದಿಂದಲೂ ಅತ್ತೆ ಹಾಗೂ ಪತಿ ಪ್ರದೀಪ್ ಕುಮಾರ್ ಸೇರಿಕೊಂಡು ಐಶ್ವರ್ಯಳಿಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಕಿರಿಕಿರಿ ಮಾಡುತ್ತಾ ಮಾನಸಿಕವಾಗಿ ಹಿಂಸಿಸುತ್ತಿದ್ದರೂ, ಪ್ರೀತಿಯಿಂದ ಕೈಹಿಡಿದಿದ್ದ ಪತಿ ಪ್ರದೀಪ್ ಮಾತ್ರ ಪತ್ನಿಯ ಬೆಂಬಲಕ್ಕೆ ನಿಲ್ಲದೆ ಮೂಕಪ್ರೇಕ್ಷಕನಾಗಿದ್ದನು. ಇದರಿಂದಾಗಿ ಐಶ್ವರ್ಯ ತೀವ್ರ ಆಘಾತ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ದಿನದಿಂದ ದಿನಕ್ಕೆ ಹೆಚ್ಚಾದ ಈ ಗೃಹಹಿಂಸೆಯನ್ನು ಸಹಿಸಲಾರದೇ ಕೊನೆಗೆ ಅವರು ಆ*ತ್ಮಹ*ತ್ಯೆಯ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.&lt;/p&gt;&lt;h2&gt;&lt;strong&gt;ತವರು ಮನೆಗೆ ಬಂದು ಆ*ತ್ಮಹ*ತ್ಯೆ; ಡೆತ್&zwnj;ನೋಟ್&zwnj;ನಲ್ಲಿ ಕಣ್ಣೀರಿನ ಕಥೆ&lt;/strong&gt;&lt;/h2&gt;&lt;p&gt;ಗಂಡನ ಮನೆಯ ಕಿರುಕುಳ ತಾಳಲಾರದೆ ಐಶ್ವರ್ಯ ಇತ್ತೀಚೆಗೆ ಕಂಪ್ಲಿಯಲ್ಲೇ ಇರುವ ತಮ್ಮ ತವರು ಮನೆಗೆ ಬಂದಿದ್ದರು. ಅಲ್ಲಿಯೇ ತೀವ್ರವಾಗಿ ಮನನೊಂದ ಅವರು ಸೋಮವಾರ ನೇಣಿಗೆ ಶರಣಾಗಿದ್ದಾರೆ. ಆ*ತ್ಮಹ*ತ್ಯೆಗೂ ಮುನ್ನ ಐಶ್ವರ್ಯ ಬರೆದಿಟ್ಟಿರುವ ಡೆತ್&zwnj;ನೋಟ್ ಈಗ ಲಭ್ಯವಾಗಿದ್ದು, ಅದರಲ್ಲಿ ತಮ್ಮ ಸಾವಿಗೆ ಅತ್ತೆ ಮತ್ತು ಗಂಡನೇ ನೇರ ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&quot;ನನಗೆ ನನ್ನ ಗಂಡನನ್ನು ಬಿಟ್ಟು ಬದುಕುವುದಕ್ಕೆ ಆಗುತ್ತಿಲ್ಲ. ಹಾಗಂತ ನಿರಂತರ ಕಿರುಕುಳ ನೀಡುವ ಅವರ ಮನೆಗೆ ಮರಳಿ ಹೋಗಲು ಸಾಧ್ಯವಿಲ್ಲ. ಇತ್ತ ಶಾಶ್ವತವಾಗಿ) ತವರು ಮನೆಯಲ್ಲಿ ಇರಲೂ ಸಹ ನನ್ನ ಮನಸ್ಸು ಒಪ್ಪುತ್ತಿಲ್ಲ&quot; ಎಂದು ಐಶ್ವರ್ಯ ತಮ್ಮ ಡೆತ್&zwnj;ನೋಟ್&zwnj;ನಲ್ಲಿ ಕಣ್ಣೀರು ಕೋಡಿ ಹರಿಸಿದ್ದಾರೆ..&lt;/p&gt;&lt;h2&gt;&lt;strong&gt;ಕಿರುಕುಳ ನೀಡಿದ ಪತಿ ಹಾಗೂ ಅತ್ತೆ ಕಂಪ್ಲಿ ಪೊಲೀಸರ ವಶಕ್ಕೆ&lt;/strong&gt;&lt;/h2&gt;&lt;p&gt;ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಂಪ್ಲಿ ಠಾಣೆಯ ಪೊಲೀಸರು ಐಶ್ವರ್ಯ ಬರೆದಿದ್ದ ಡೆತ್&zwnj;ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಮೃತರ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪಶುವೈದ್ಯ ಪ್ರದೀಪ್ ಕುಮಾರ್ ಹಾಗೂ ಆತನ ತಾಯಿಯ ವಿರುದ್ಧ ಆ*ತ್ಮಹ*ತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ಬಂಧಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>ballari</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/ballari-kampli-housewife-aishwarya-self-death-note-doctor-pradeep-arrest-news-san/articleshow-7ko80e4"/>
        </item>
        <item>
            <title><![CDATA[KAAMS app for teachers: ಕರ್ನಾಟಕದ ಸರ್ಕಾರಿ ಶಿಕ್ಷಕರಿಗೆ ಹೊಸ ಹಾಜರಾತಿ ನಿಯಮ; ಫೇಸ್‌, ಲೊಕೇಶನ್‌ ಹಾಜರಾತಿ ಕಡ್ಡಾಯ!]]></title>
            <link>https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</link>
            <guid isPermaLink="true">https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k</guid>
            <pubDate>Sun, 31 May 2026 09:07:58 +0530</pubDate>
            <description><![CDATA[&lt;p&gt;ರಾಜ್ಯ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ಲೊಕೇಶನ್ ಮತ್ತು ಫೇಸ್ ಆಧರಿತ 'ಕೆಎಎಎಂಎಸ್&zwnj;' ಆ್ಯಪ್ ಹಾಜರಾತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ನಿಯಮದ ಪ್ರಕಾರ, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದಿದ್ದರೆ ಅಥವಾ ಬೇಗ ನಿರ್ಗಮಿಸಿದರೆ, ಅದನ್ನು ರಜೆ ಎಂದು ಪರಿಗಣಿಸಿ ಕಠಿಣ ಕ್ರಮ!&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksy16s2112m6fz4vydev1qbg,imgname-----------------------2026-05-31t085645.476-1780198106177.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಜುನಾಥ ಕೆ.ಎಂ.&lt;/p&gt;&lt;p&gt;&lt;strong&gt;&amp;nbsp;ಬಳ್ಳಾರಿ (ಮೇ.31): &lt;/strong&gt;ಇನ್ನು ಮುಂದೆ ಸರ್ಕಾರಿ ಶಾಲೆ ಶಿಕ್ಷಕರು, ಸಿಬ್ಬಂದಿ ನಾನಾ ಕಾರಣವೊಡ್ಡಿ ಶಾಲೆಗೆ ತಡವಾಗಿ ಬರುವಂತಿಲ್ಲ. ಶಾಲೆಗೆ ಚಕ್ಕರ್ ಹೊಡೆದು ಅಲ್ಲಲ್ಲಿ ಓಡಾಡುವಂತಿಲ್ಲ.&lt;/p&gt;&lt;p&gt;ರಾಜ್ಯ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದಿಂದ ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಿದೆ. ನಿರ್ದಿಷ್ಟ ಸಮಯ ಮೀರಿ ಶಾಲೆಗೆ ಹಾಜರಾದರೆ ಆ ದಿನ ಆಕಸ್ಮಿಕ ರಜೆಯೆಂದೇ ಪರಿಗಣಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕರ್ನಾಟಕ ಅಡ್ವಾನ್ಸ್&zwnj; ಅಟೆಂಡೆನ್ಸ್ ಮ್ಯಾನೇಜ್&zwnj;ಮೆಂಟ್ ಸಿಸ್ಟಮ್ (ಕೆಎಎಎಂಎಸ್&zwnj;) ಆ್ಯಪ್&zwnj; ರೂಪಿಸಲಾಗಿದೆ.&lt;/p&gt;&lt;p&gt;ಶುಕ್ರವಾರದಿಂದಲೇ ರಾಜ್ಯಾದ್ಯಂತ ಈ ನಿಯಮ ಜಾರಿಗೊಂಡಿದೆ. ಇನ್ಮುಂದೆ ಸರ್ಕಾರಿ ಶಾಲೆ ಶಿಕ್ಷಕರು ನಿರ್ದಿಷ್ಟ ಅವಧಿಯೊಳಗೆ ಶಾಲೆಗೆ ಹಾಜರಾಗಿ ದಿನಕ್ಕೆರೆಡು ಬಾರಿ ಲೊಕೇಶನ್, ಫೇಸ್ ಆಧರಿತ ಹಾಜರಾತಿ ಹಾಕಬೇಕಾಗಿದೆ. ಸರ್ಕಾರದ ಈ ನಿಲುವನ್ನು ಪೋಷಕರು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರ ವಲಯ ಸ್ವಾಗತಿಸಿದೆ. ಇನ್ನೊಂದು ತಿಂಗಳಲ್ಲಿ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಹಾಜರಾತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;ಹೊಂದಾಣಿಕೆಗೆ ಕುತ್ತು:&lt;/h2&gt;&lt;p&gt;ಸರ್ಕಾರಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ಪೈಕಿ ಕೆಲವರು ಶಾಲೆಗೆ ಹಾಜರಾಗದೆ ಹಾಜರಾತಿ ಪಡೆದುಕೊಂಡು ಸಂಬಳ ಮಾಡಿಕೊಳ್ಳುತ್ತಿದ್ದರು. ಕೆಲವರು ಮುಖ್ಯಗುರುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹಾಜರಾತಿ ಪಡೆದುಕೊಂಡರೆ, ಇನ್ನು ಕೆಲವರು ಸಂಘಟನೆ ಹೆಸರಿನಲ್ಲಿ ಓಡಾಡಿಕೊಂಡು ಶಾಲೆಗೆ ಗೈರಾಗುತ್ತಿದ್ದರು. ಶಾಲೆಗೆ ಗೈರಾಗುವುದನ್ನೇ ಕಾಯಕ ಮಾಡಿಕೊಂಡ ಅನೇಕ ಶಿಕ್ಷಕರು ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು.&lt;/p&gt;&lt;h3&gt;ಬೇಗ ಹೋದರು ತೊಂದರೆ:&lt;/h3&gt;&lt;p&gt;ಶಿಕ್ಷಕರ ಕಡ್ಡಾಯ ಹಾಜರಾತಿ ಸಂಬಂಧ ಕೈಗೊಂಡ ತಂತ್ರಜ್ಞಾನ ಆಧರಿತ ಹಾಜರಾತಿ ಬಗ್ಗೆ ನಿರ್ಲಕ್ಷಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಗದಿತ ಶಾಲಾ ಅವಧಿ ಮುಗಿಯುವ ಮುನ್ನವೇ ಚೆಕ್&zwnj;ಔಟ್ ಆದಲ್ಲಿ ಆರಂಭಿಕ ನಿರ್ಗಮನ (Early Departure) ಎಂದು ಪರಿಗಣಿಸಿ, ಅದನ್ನು ಕರ್ತವ್ಯದ ಅವಗಣನೆ ಅಥವಾ ಕರ್ತವ್ಯ ಲೋಪ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಅರ್ಧ ದಿನದ ರಜೆ ಕಡಿತವಾಗಲಿದೆ.&lt;/p&gt;&lt;p&gt;ಶಾಲೆಯ ಅಧಿಕೃತ ಮುಕ್ತಾಯದ ಸಮಯಕ್ಕಿಂತ ತೀರಾ ಮುಂಚಿತವಾಗಿ (ಉದಾಹರಣೆಗೆ ಮಧ್ಯಾಹ್ನದ ಅವಧಿಯಲ್ಲಿ) ಯಾವುದೇ ಪೂರ್ವಾನುಮತಿ ಇಲ್ಲದೇ ಚೆಕ್&zwnj;ಔಟ್ ಆದರೆ ಆ ದಿನದ ದ್ವಿತೀಯಾರ್ಧವನ್ನು ಅರ್ಧ ದಿನದ ರಜೆ, ಅರ್ಧದಿನದ ಆಕಸ್ಮಿಕ ರಜೆ (ಸಿಎಲ್) ಎಂದು ಪರಿಗಣಿಸಲಾಗುವುದು. ರಜೆಯ ಖಾತೆಯಲ್ಲಿ ಆಕಸ್ಮಿಕ ರಜೆ ಬಾಕಿ ಇಲ್ಲದಿದ್ದರೆ, ಅದನ್ನು ಗಳಿಕೆ ರಜೆ (ಇಎಲ್) ಅಥವಾ ವೇತನ ರಹಿತ ರಜೆ ಎಂದು ಬದಲಾಯಿಸಲಾಗುತ್ತದೆ.&lt;/p&gt;&lt;p&gt;&lt;strong&gt;ಬಿಇಒ ನೋಟಿಸ್:&lt;/strong&gt;&lt;/p&gt;&lt;p&gt;ಒಂದು ತಿಂಗಳಲ್ಲಿ ಮೂರು ಬಾರಿ ತಡವಾಗಿ ಬರುವುದು ಮತ್ತು ಬೇಗ ಹೋಗುವುದು ಮಾಡಿದಲ್ಲಿ 1 ದಿನದ ಆಕಸ್ಮಿಕ ರಜೆ ಕಡಿತಗೊಳಿಸಲಾಗುವುದು. ​ಯಾವುದೇ ಮುನ್ಸೂಚನೆ ಅಥವಾ ಅನುಮತಿ ಇಲ್ಲದೇ ಬೇಗ ಚೆಕ್&zwnj;ಔಟ್ ಆಗುವುದು ಸತತ ಕಂಡುಬಂದಲ್ಲಿ ಅದನ್ನು &lsquo;ಅನಧಿಕೃತ ಗೈರುಹಾಜರಿ&rsquo; ಎಂದು ಪರಿಗಣಿಸಿ, ಬಿಇಒ ಅಥವಾ ಡಿಡಿಪಿಐ ಮಟ್ಟದಲ್ಲಿ ಕಾರಣ ಕೇಳುವ ನೋಟಿಸ್ ನೀಡಲಾಗುತ್ತದೆ. ​ಇದು ಸೇವಾ ವರದಿ ಮತ್ತು ವಾರ್ಷಿಕ ವೇತನ ಬಡ್ತಿ ಮೇಲೆಯೂ ಪ್ರಭಾವ ಬೀರಲಿದೆ.&lt;/p&gt;&lt;p&gt;&lt;strong&gt;ರಿಯಾಯಿತಿ ದರ ಅರ್ಧ ಗಂಟೆಗೆ ಹೆಚ್ಚಿಸಲಿ:&lt;/strong&gt;&lt;/p&gt;&lt;p&gt;ಶಾಲೆ ಬೆಳಗ್ಗೆ 9:45ಕ್ಕೆ ಆರಂಭ ಆಗುವುದಾದರೆ, 9:55 ಅಥವಾ 10 ಗಂಟೆ ಒಳಗೆ Check-in ಮಾಡಲು ಅವಕಾಶವಿದೆ. ಆದರೆ, ಸಾರಿಗೆ ವ್ಯವಸ್ಥೆಯಿಲ್ಲದ ಹಳ್ಳಿಗಳಿಗೆ ಶಿಕ್ಷಕರು ತಲುಪುವುದು ಕಷ್ಟವಾಗಲಿದೆ. 15 ನಿಮಿಷಗಳ ರಿಯಾಯಿತಿ ಸಮಯ ಅರ್ಧಗಂಟೆಗೆ ಹೆಚ್ಚಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ.&lt;/p&gt;&lt;p&gt;----&lt;/p&gt;&lt;p&gt;&lt;strong&gt;ಕ್ರಮ ಎದುರಿಸಿ&lt;/strong&gt;&lt;/p&gt;&lt;p&gt;ಶಿಕ್ಷಕರಿಗೆ ಲೊಕೇಶನ್, ಫೇಸ್ ಆಧರಿತ ಹಾಜರಾತಿ ವ್ಯವಸ್ಥೆ ಅಳವಡಿಸಲಾಗಿದೆ. ಶಿಕ್ಷಕರು ಇಲಾಖೆಯ ಸೂಚನೆಯಂತೆ ನಿಗದಿತ ಸಮಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲದಿದ್ದರೆ ಇಲಾಖೆ ಕ್ರಮ ಎದುರಿಸಬೇಕು.&lt;/p&gt;&lt;p&gt;-ಬಿ.ಉಮಾದೇವಿ, ಡಿಡಿಪಿಐ ಬಳ್ಳಾರಿ.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/karnataka-teacher-facial-recognition-and-location-attendance-mandatory/articleshow-9goxu4k"/>
        </item>
        <item>
            <title><![CDATA[ಮನೆಬಿಟ್ಟು ಹೋಗಿದ್ದ ಯುವಕ 20 ವರ್ಷ ಬಳಿಕ ಗುಜರಾತ್‌ನ ಕಾಳಿಕದೇವಿ ಮಠದ ಸ್ವಾಮೀಜಿಯಾಗಿ ಪತ್ತೆ!]]></title>
            <link>https://kannada.asianetnews.com/karnataka-districts/missing-ballari-man-shankarachari-found-as-swamiji-after-20-years-rav/articleshow-a3s16dp</link>
            <guid isPermaLink="true">https://kannada.asianetnews.com/karnataka-districts/missing-ballari-man-shankarachari-found-as-swamiji-after-20-years-rav/articleshow-a3s16dp</guid>
            <pubDate>Tue, 26 May 2026 12:49:15 +0530</pubDate>
            <description><![CDATA[&lt;p&gt;ಬಳ್ಳಾರಿಯ ಕುರುಗೋಡು ಪಟ್ಟಣದಿಂದ ಸುಮಾರು 20 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ಶಂಕರಾಚಾರಿ ಎಂಬ ಯುವಕ, ಇದೀಗ ಗುಜರಾತ್&zwnj;ನ ಅಹ್ಮದಾಬಾದ್&zwnj;ನಲ್ಲಿರುವ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಪತ್ತೆಯಾಗಿದ್ದಾರೆ. ಪೋಷಕರ ಕೋರಿಕೆಯ ಮೇರೆಗೆ ಹುಟ್ಟೂರಿಗೆ ಮರಳುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kshj8pzs1b8zrkwqzavayvj3,imgname-----------------------2026-05-26t124610.678-1779779787769.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಮೇ.26):&lt;/strong&gt; ಸುಮಾರು ಎರಡು ದಶಕಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಯುವಕನೊಬ್ಬ ಇದೀಗ ಗುಜರಾತ್ ರಾಜ್ಯದ ಅಹ್ಮದಾಬಾದ್&zwnj; ಸಮೀಪದ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಪತ್ತೆಯಾಗಿದ್ದು, ತಂದೆ-ತಾಯಿ ಒತ್ತಾಸೆಯಂತೆ ತನ್ನ ಹುಟ್ಟೂರಿಗೆ ಮರಳುತ್ತಿರುವ ಸ್ವಾಮೀಜಿಯ ಬದುಕಿನ ಪಯಣ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;p&gt;ಜಿಲ್ಲೆಯ ಕುರುಗೋಡು ಪಟ್ಟಣದ ನಿವಾಸಿಗಳಾದ ಚಂದ್ರಶೇಖರ ಆಚಾರಿ ಹಾಗೂ ಚಂದ್ರಕಲಾ ದಂಪತಿಯ ಏಕೈಕ ಪುತ್ರ ಶಂಕರಾಚಾರಿ ಎಂಟನೇ ತರಗತಿ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ. ಆರ್ಥಿಕ ಸಂಕಷ್ಟದ ಹಿನ್ನೆಲೆ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಕೆಲ ವರ್ಷದ ಬಳಿಕ ಬಳ್ಳಾರಿಗೆ ಮರಳಿ ಬಂದು ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ. ನಂತರ ಮತ್ತೆ ಬೆಂಗಳೂರಿಗೆ ಕೆಲಸಕ್ಕಾಗಿ ತೆರಳುವುದಾಗಿ ಹೇಳಿ ಮನೆಬಿಟ್ಟು ಹೋದ ಆತ, ಬಳಿಕ ಕುಟುಂಬದ ಸಂಪರ್ಕದಿಂದ ಸಂಪೂರ್ಣ ದೂರವಾದ. ಪೋಷಕರು ಮೊದ ಮೊದಲು ಬೆಂಗಳೂರಿನಲ್ಲಿ ಹುಡುಕಾಡಿದ್ದಾರೆ. ಮಗನ ಸುಳಿವು ಸಿಗದೇ ಕೊನೆಗೆ ಸುಮ್ಮನಾಗಿದ್ದಾರೆ.&lt;/p&gt;&lt;p&gt;ಇದೀಗ ಎರಡು ದಶಕಗಳ ಬಳಿಕ ಆತ ಗುಜರಾತ್ ರಾಜ್ಯದ ಅಹ್ಮದಾಬಾದ್&zwnj; ಬಳಿಯ ಕಾಳಿಕಾದೇವಿ ಮಠದ ಸ್ವಾಮೀಜಿಯಾಗಿ ಬದಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.&lt;/p&gt;&lt;p&gt;ಕುರುಗೋಡು ಭಾಗದ ವ್ಯಕ್ತಿಯೋರ್ವ ಗುಜರಾತ್&zwnj;ಗೆ ಹೋದ ವೇಳೆ ಆಕಸ್ಮಿಕವಾಗಿ ಶಂಕರಾಚಾರಿ ಇರುವ ಮಠಕ್ಕೆ ಭೇಟಿ ನೀಡಿದ್ದು, ಅವರ ಜೊತೆ ಮಾತನಾಡುವಾಗ ಸ್ವಾಮೀಜಿ ತಮ್ಮೂರಿನ ಶಂಕರಚಾರಿ ಎಂದು ಖಚಿತವಾಗಿದೆ. ಕೂಡಲೇ ಈತನ ಬಗ್ಗೆ ತಂದೆ-ತಾಯಿ ಗಮನಕ್ಕೆ ತಂದಿದ್ದು, ಪೋಷಕರು ಹಾಗೂ ಊರಿನವರು ಸಂತಸಗೊಂಡಿದ್ದಾರೆ. ಊರಿಗೊಮ್ಮೆ ಬಂದು ಹೋಗುವಂತೆ ಮನವಿ ಮಾಡಿಕೊಂಡಿದ್ದಾರೆ. ಅಂತೆಯೇ ಶಂಕರಚಾಚಾರಿ ಕುರುಗೋಡಿಗೆ ಬರಲು ಒಪ್ಪಿಕೊಂಡಿದ್ದು, ಮೇ 26ರಂದು ಕುರುಗೋಡಿಗೆ ಆಗಮಿಸುವ ಸ್ವಾಮೀಜಿಯ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆದಿದೆ.&lt;/p&gt;&lt;p&gt;ಶಂಕರಚಾರಿ ಬದುಕಿನ ಮಧ್ಯಂತರದ ಪಯಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆತ ಗುಜರಾತ್&zwnj;ಗೆ ಹೇಗೆ ತಲುಪಿದ? ಅಲ್ಲಿನ ಯಾವ ಗುರುಗಳ ಸಂಪರ್ಕಕ್ಕೆ ಹೇಗೆ ಬಂದ? ಮಠ ನಿರ್ಮಾಣದಲ್ಲಿ ಯಾರ ಪಾತ್ರವಿತ್ತು? ಸಾಮಾನ್ಯ ಕಾರ್ಮಿಕ ಜೀವನದಿಂದ ಧಾರ್ಮಿಕ ಕ್ಷೇತ್ರದ ಪ್ರಮುಖ ಸ್ಥಾನಕ್ಕೇರಿದ ಹಿನ್ನೆಲೆ ಏನು? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಶಂಕರಚಾರಿ ಊರು ಬಿಟ್ಟು 20 ವರ್ಷಗಳಾಗಿರುವುದರಿಂದ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತಿಲ್ಲ. ಹಿಂದಿ, ಇಂಗ್ಲೀಷ್&zwnj;ನಲ್ಲಿಯೇ ಸಂಭಾಷಣೆ ಮಾಡುತ್ತಾರೆ ಎಂದು ಶಂಕರಾಚಾರಿಯ ಸಂಬಂಧಿಕ ಶ್ರೀಧರಗಡ್ಡೆ ಗ್ರಾಮದ ಚಂದ್ರ ಆಚಾರಿ ಕನ್ನಡಪ್ರಭಕ್ಕೆ ತಿಳಿಸಿದರು.&lt;/p&gt;&lt;p&gt;ಎರಡು ದಶಕಗಳ ಬಳಿಕ ತಮ್ಮ ಏಕೈಕ ಪುತ್ರನನ್ನು ಕಾಣಲಿರುವ ತಂದೆ-ತಾಯಿ ಕಾತುರದಿಂದ ಕಾಯುತ್ತಿದ್ದಾರೆ. ಮಗನ ನೆನಪಿನಲ್ಲೇ ವರ್ಷಗಳನ್ನು ಕಳೆದಿದ್ದ ಕುಟುಂಬವೀಗ ಸಂತಸದ ಕ್ಷಣದಲ್ಲಿದೆ. ತಂದೆ-ತಾಯಿ ದರ್ಶನ ಮಾಡಿಕೊಂಡು ಶಂಕರಾಚಾರಿ ಮತ್ತೆ ಗುಜರಾತಿಗೆ ವಾಪಸಾಗಲಿದ್ದಾರೆ ಎನ್ನಲಾಗಿದೆ. ಶಂಕರಾಚಾರಿಯ ಜೀವನಗಾಥೆ ಕುರಿತ ಹೆಚ್ಚಿನ ಮಾಹಿತಿಯ ತೀವ್ರ ಕುತೂಹಲವಿದೆ.&lt;/p&gt;&lt;p&gt;ಕುರುಗೋಡಿನ ಚಂದ್ರಶೇಖರ ಆಚಾರಿ, ಚಂದ್ರಕಲಾ ದಂಪತಿಯ ಒಬ್ಬನೇ ಮಗನಾಗಿದ್ದ ಶಂಕರಾಚಾರಿ 18 ವರ್ಷನವನಿದ್ದಾಗ ಊರುಬಿಟ್ಟು ಹೋಗಿದ್ದ. ಗುಜರಾತ್&zwnj;ನಲ್ಲಿ ಕಾಳಿದೇವಿಯ ಮಠದ ಸ್ವಾಮೀಜಿಯಾಗಿ ಬದಲಾಗಿರುವ ಮಾಹಿತಿ 20 ವರ್ಷಗಳ ಬಳಿಕ ಗೊತ್ತಾಯಿತು. ಆತನನ್ನು ಸಂಪರ್ಕ ಮಾಡಿ ಊರಿಗೆ ಬರುವಂತೆ ಮನವಿ ಮಾಡಿಕೊಳ್ಳಲಾಗಿದೆ. ಮಂಗಳವಾರ ಕುರುಗೋಡಿಗೆ ಬರುತ್ತಿದ್ದು, ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚಂದ್ರ ಆಚಾರಿ, ಶಂಕರಾಚಾರಿ ಸಂಬಂಧಿಕ, ಶ್ರೀಧರಗಡ್ಡೆ ಗ್ರಾಮ, ಬಳ್ಳಾರಿ ತಾಲೂಕು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/missing-ballari-man-shankarachari-found-as-swamiji-after-20-years-rav/articleshow-a3s16dp"/>
        </item>
        <item>
            <title><![CDATA[ಫುಡ್  ಜೊತೆಗೆ ಡ್ರಗ್ಸ್ ಸಪ್ಲೈ: ಡೆಲಿವರಿ ಬಾಯ್ಸ್‌ ಮೇಲೆ ಹದ್ದಿನ ಕಣ್ಣಿಟ್ಟ ಬಳ್ಳಾರಿ ಪೊಲೀಸ್, ಸ್ವಿಗ್ಗಿ, ಝೋಮ್ಯಾಟೊಗೆ ಖಡಕ್ ಸೂಚನೆ]]></title>
            <link>https://kannada.asianetnews.com/state/ballari-police-mandates-verification-delivery-staff-details-of-swiggy-zomato-must-be-submitted-to-stations-rav/articleshow-cyg45fg</link>
            <guid isPermaLink="true">https://kannada.asianetnews.com/state/ballari-police-mandates-verification-delivery-staff-details-of-swiggy-zomato-must-be-submitted-to-stations-rav/articleshow-cyg45fg</guid>
            <pubDate>Wed, 22 Apr 2026 10:49:02 +0530</pubDate>
            <description><![CDATA[&lt;p&gt;ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಿಗ್ಗಿ, ಝೋಮ್ಯಾಟೊ ಸೇರಿದಂತೆ ವಿವಿಧ ಇ-ಸೇವಾ ಸಂಸ್ಥೆಗಳು ತಮ್ಮ ಸಿಬ್ಬಂದಿಯ ಸಂಪೂರ್ಣ ವಿವರಗಳನ್ನು ಪೊಲೀಸ್ ಠಾಣೆಗೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾದಕ ವಸ್ತುಗಳ ಸಾಗಾಟ ತಡೆಗಟ್ಟುವಿಕೆ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpssj2mc6ypjxksqdbym2yej,imgname-----------------------2026-04-22t104021.318-1776834644620.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಏ.22):&lt;/strong&gt; ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್, ಬ್ಲಿಂಕಿಟ್ ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಪ್ರತಿ ಸಿಬ್ಬಂದಿಯ ಪೂರ್ಣ ವಿವರಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯ ಎಂದು ಎಸ್ಪಿ ಡಾ.ಸುಮನ್ ಡಿ.ಪೆನ್ನೇಕರ್ ಹೇಳಿದರು.&lt;/p&gt;&lt;p&gt;ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡೆಲಿವರಿ ಸಮಯದಲ್ಲಿ ಮಾದಕ ವಸ್ತು ಸೇರಿದಂತೆ ಇನ್ನಿತರ ನಿಷೇಧಿತ ವಸ್ತುಗಳನ್ನು ಸಾಗಟ ಮಾಡುವುದನ್ನು ತಡೆಯಲು ಹಾಗೂ ಪ್ರತಿನಿತ್ಯದ ಚಟವಟಿಕೆಗಳ ಮೇಲೆ ನಿಗಾವಣೆ ಇಡಲು, ಗ್ರಾಹಕರ ಹಿತದೃಷ್ಟಿಯಿಂದ ವಿವಿಧ ಇ-ಸೇವಾ ವಲಯಗಳ ಮುಖ್ಯಸ್ಥರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.&lt;/p&gt;&lt;p&gt;ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂಚೆ ಇಲಾಖೆ, ರೈಲ್ವೆ ಪೊಲೀಸ್, ಇ-ಕಾಮರ್ಸ್ ಸಂಸ್ಥೆಗಳು, ಆಹಾರ ವಿತರಣಾ ಸಂಸ್ಥೆಗಳು ಮತ್ತು ಖಾಸಗಿ ಟ್ರಾವೆಲ್ಸ್ ಏಜೆನ್ಸಿಗಳು ತಮ್ಮ ಸಿಬ್ಬಂದಿಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ತಮ್ಮ ಪ್ರತಿ ಸಿಬ್ಬಂದಿ ತಮ್ಮ ಆಧಾರ್ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರಬೇಕು. ಹೊಸದಾಗಿ ಕೆಲಸಕ್ಕೆ ಸೇರುವ ಮತ್ತು ಈಗಾಗಲೇ ಕೆಲಸದಲ್ಲಿರುವ ಸಿಬ್ಬಂದಿ ಕಡ್ಡಾಯವಾಗಿ ಪೊಲೀಸ್ ಪರಿಶೀಲನಾ ಪ್ರಮಾಣಪತ್ರ ಹೊಂದಿರಬೇಕು. ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಿಟ್ಟು ಹೋದರೆ ಅಥವಾ ಹೊಸದಾಗಿ ಸೇರಿದ ಸಿಬ್ಬಂದಿಯ ಮಾಹಿತಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.&lt;/p&gt;&lt;p&gt;ಮುಖ್ಯವಾಗಿ ಡೆಲಿವರಿ ಬಾಯ್ಸ್ ಮತ್ತು ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸದಂತೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು. ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.&lt;/p&gt;&lt;p&gt;ವಸ್ತುಗಳ ದಾಸ್ತಾನು ಹಾಗೂ ಪ್ಯಾಕಿಂಗ್ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ, ಬುಕ್ಕಿಂಗ್ ರಿಜಿಸ್ಟರ್ ನಿರ್ವಹಣೆ, ಸಂಸ್ಥೆಗಳು ಕಡ್ಡಾಯವಾಗಿ ಲೈಸೆನ್ಸ್ ಹೊಂದಿರಬೇಕು, ಡೆಲಿವರಿ ಬಾಯ್ಸ್ ಗಳ ನೊಂದಣಿ ಕಡ್ಡಾಯ, ವಾಹನ ಚಾಲನಾ ಲೈಸನ್ಸ್ ಹೊಂದಿದ ಡೆಲಿವರಿ ಬಾಯ್ಸ್ ಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲು, ಡೆಲಿವರಿ ಬಾಯ್ಸ್ ಗಳ ಆಧಾರ್ ಕಾರ್ಡ, ಪಾನ್ ಕಾರ್ಡಗಳನ್ನು ಸಂಸ್ಥೆಗಳ ಆಡಳಿತ ಮಂಡಳಿಯವರು ನೇಮಕಾತಿ ಪೂರ್ವದಲ್ಲಿ ಕಡ್ಡಾಯವಾಗಿ ಪಡೆಯಬೇಕು. ಡೆಲಿವರಿ ಬಾಯ್ಸ್ ಹಾಗೂ ಕಚೇರಿ ಸಿಬ್ಬಂದಿಯವರ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು.&lt;/p&gt;&lt;p&gt;ಕೆಲವು ಡೆಲಿವರಿ ಸಂದರ್ಭದಲ್ಲಿ ಗ್ರಾಹಕರಿಗೆ ಆರ್ಡರ್ ಮಾಡಿದ ವಸ್ತುಗಳ ತಲುಪಿಸುವ ಜೊತೆಯಲ್ಲಿಯೇ ಇನ್ನಿತರ ವಸ್ತುಗಳನ್ನು (ಮಾದಕ) ತಲುಪಿಸುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ವಿಳಂಬವಾಗಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಬಾಯ್ಸ್ ಗಳ ಮಾಹಿತಿಯನ್ನು ಕಡ್ಡಾಯವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಸಲ್ಲಿಸಬೇಕು. ಡೆಲಿವರಿ ಪಾರ್ಸಲ್ ಗಳನ್ನು ಗ್ರಾಹಕರಿಗೆ ತಲುಪಿಸುವ ಸಮಯದಲ್ಲಿ, ವಸ್ತುಗಳ ಬಗ್ಗೆ ಅನುಮಾನ ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ಪೋಸ್ಟಲ್ ಇಲಾಖೆ, ಡೊಮಿನೋಸ್, ಕೆಎಫ್&zwnj;ಸಿ, ಡಿಟಿಡಿಸಿ ಕೊರಿಯರ್, ಟ್ರಾವೆಲ್ಸ್ ಏಜೆನ್ಸಿಗಳು ಸೇರಿದಂತೆ ಎಲ್ಲಾ ಖಾಸಗಿ ಮತ್ತು ಸಾರ್ವಜನಿಕ ಸೇವಾ ಸಂಸ್ಥೆಗಳು ಈ ಸುರಕ್ಷತಾ ಕ್ರಮಗಳಿಗೆ ಸಹಕರಿಸಬೇಕು ಎಂದು ಎಸ್ಪಿ ಪನ್ನೇಕರ್ ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್.ಎಸ್, ಬಳ್ಳಾರಿ ನಗರ ಉಪವಿಭಾಗದ ಡಿಎಸ್&zwnj;ಪಿ ಎಂ.ಗೋವಿಂದ್ ರಾಜ್ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಇದ್ದರು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/ballari-police-mandates-verification-delivery-staff-details-of-swiggy-zomato-must-be-submitted-to-stations-rav/articleshow-cyg45fg"/>
        </item>
        <item>
            <title><![CDATA[ಬಳ್ಳಾರಿ ಪಾಲಿಕೆಗೆ ಲೋಕಾಯುಕ್ತ ಶಾಕ್:  4 ತಂಡಗಳಾಗಿ ದಾಳಿ, ಬಯಲಾಗಲಿದೆಯೇ ಭ್ರಷ್ಟಾಚಾರ?]]></title>
            <link>https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t</link>
            <guid isPermaLink="true">https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t</guid>
            <pubDate>Sat, 30 May 2026 13:23:57 +0530</pubDate>
            <description><![CDATA[ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಅಕ್ರಮ 'ಬಿ-ಖಾತೆ' ವಿತರಣೆಯ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಎಸ್&zwnj;ಪಿ ವಾಸುದೇವರಾವ್ ನೇತೃತ್ವದ ತಂಡಗಳು ಪಾಲಿಕೆಯ ಕಚೇರಿಗಳಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksvxmaaxhh0z6php828hbhr2,imgname-lokayukta-raids-1780127246685.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ:&lt;/strong&gt; ಬಳ್ಳಾರಿ ಮಹಾನಗರ ಪಾಲಿಕೆ (BMC) ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದ ಭ್ರಷ್ಟಾಚಾರ ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ಪಾಲಿಕೆಯ ಕಚೇರಿಗಳ ಮೇಲೆ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ. ನಾಗರಿಕ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಹಾಗೂ ಅಕ್ರಮವಾಗಿ 'ಬಿ-ಖಾತೆ' ಮತ್ತು 'ಫಾರಂ-2' ವಿತರಣೆ ಮಾಡುತ್ತಿರುವ ಗಂಭೀರ ದೂರುಗಳ ಆಧಾರದ ಮೇಲೆ ಈ ಬೃಹತ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.&lt;/p&gt;&lt;p&gt;ಲೋಕಾಯುಕ್ತ ಎಸ್&zwnj;ಪಿ (SP) ವಾಸುದೇವರಾವ್ ಅವರ ನೇರ ನೇತೃತ್ವದಲ್ಲಿ ಇಡೀ ಕಾರ್ಯಾಚರಣೆ ನಡೆದಿದ್ದು, ಪಾಲಿಕೆಯ ಇತಿಹಾಸದಲ್ಲೇ ಇದು ಅತ್ಯಂತ ಪ್ರಮುಖ ದಾಳಿಗಳಲ್ಲಿ ಒಂದಾಗಿದೆ.&lt;/p&gt;&lt;h2&gt;4 ಪ್ರತ್ಯೇಕ ತಂಡಗಳಿಂದ ಏಕಕಾಲಕ್ಕೆ ದಾಳಿ&lt;/h2&gt;&lt;p&gt;ತೀವ್ರ ಪರಿಶೀಲನೆ ಬಳ್ಳಾರಿ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಮಾತ್ರವಲ್ಲದೆ, ನಗರದ ವಿವಿಧೆಡೆ ಇರುವ ವಲಯ ಕಚೇರಿಗಳ (Zone Offices) ಮೇಲೂ ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದಲೇ ದಾಳಿ ಆರಂಭಿಸಿದ್ದಾರೆ. ಒಟ್ಟು ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಅಧಿಕಾರಿಗಳು ಕಚೇರಿಗಳಿಗೆ ನುಗ್ಗಿದ್ದು, ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.&lt;/p&gt;&lt;p&gt;ಬೆಳಗ್ಗಿನಿಂದಲೇ ಆರಂಭವಾದ ಈ ಸುದೀರ್ಘ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ತಂಡಗಳು ಪ್ರಮುಖವಾಗಿ ಆಸ್ತಿ ದಾಖಲೆಗಳು, ಬಿ-ಖಾತೆ ಮತ್ತು ಫಾರಂ-2 ಅರ್ಜಿಗಳು, ವಿಳಂಬವಾಗಿರುವ ಕಡತಗಳು, ಜೊತೆಗೆ ಅಕ್ರಮ ಹಣದ ಬೇಡಿಕೆ ಮತ್ತು ಭ್ರಷ್ಟಾಚಾರ. ಕಳೆದ ಕೆಲವು ತಿಂಗಳುಗಳಿಂದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕರ ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಮತ್ತು ಪ್ರತಿಯೊಂದು ನಾಗರಿಕ ಸೇವೆಗೂ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮಧ್ಯವರ್ತಿಗಳ ಮೂಲಕ ಭಾರಿ ಪ್ರಮಾಣದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿದ್ದವು.&lt;/p&gt;&lt;p&gt;ವಿಶೇಷವಾಗಿ, ಅನಧಿಕೃತ ಲೇಔಟ್&zwnj;ಗಳು ಹಾಗೂ ನಿಯಮಬಾಹಿರ ಆಸ್ತಿಗಳಿಗೆ ಅಕ್ರಮವಾಗಿ 'ಬಿ-ಖಾತೆ' ಮತ್ತು 'ಫಾರಂ-2'ಗಳನ್ನು ಸೃಷ್ಟಿಸಿ ವಿತರಿಸಲು ಕಂದಾಯ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಅಕ್ರಮ ಹಣದ ಬೇಡಿಕೆ ಇಡುತ್ತಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ತಲುಪಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್&zwnj;ಪಿ ವಾಸುದೇವರಾವ್ ಅವರು ರಹಸ್ಯ ಕಾರ್ಯಾಚರಣೆ ನಡೆಸಿ, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.&lt;/p&gt;&lt;p&gt;ಮಹತ್ವದ ದಾಖಲೆಗಳು ಲೋಕಾಯುಕ್ತ ವಶಕ್ಕೆ ದಾಳಿಯ ವೇಳೆ ಕಂದಾಯ ಮತ್ತು ನಗರಾಭಿವೃದ್ಧಿ ಶಾಖೆಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದಕ್ಕೆ ಪ್ರಥಮ ದೃಷ್ಟಿಯಲ್ಲೇ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ. ಕಚೇರಿಯ ಕಂಪ್ಯೂಟರ್ ಹಾರ್ಡ್ ಡಿಸ್ಕ್, ಲಾಗ್ ಬುಕ್ ಹಾಗೂ ನಿಯಮ ಉಲ್ಲಂಘಿಸಿ ಅನುಮೋದನೆ ಪಡೆದುಕೊಂಡಿದ್ದ ನೂರಾರು ಮಹತ್ವದ ಕಡತಗಳನ್ನು ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ಅಧಿಕಾರಿಗಳು, &quot;ಸಾರ್ವಜನಿಕರ ದೂರುಗಳ ಅನ್ವಯ ಈ ದಿಢೀರ್ ದಾಳಿ ನಡೆಸಲಾಗಿದೆ. ವಶಪಡಿಸಿಕೊಳ್ಳಲಾದ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಕರ್ತವ್ಯ ಲೋಪ ಎಸಗಿದ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು,&quot; ಎಂದು ಎಚ್ಚರಿಸಿದ್ದಾರೆ.&lt;/p&gt;&lt;p&gt;ಲೋಕಾಯುಕ್ತರ ಈ ದಿಢೀರ್ ಭೇಟಿಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳು ಹಾಗೂ ಲಂಚದ ದಂಧೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳಲ್ಲಿ ನಡುಕ ಹುಟ್ಟಿದೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/lokayukta-raids-ballari-city-corporation-over-massive-illegal-b-khata-and-form-2-property-scam-gdp/articleshow-d7un96t"/>
        </item>
        <item>
            <title><![CDATA[ಸಿಲಿಂಡರ್‌ಗೆ ಮಧ್ಯರಾತ್ರಿಯಿಂದ್ಲೇ ಕ್ಯೂ, ಪೆಟ್ರೋಲ್‌ ‘ನೋ ಸ್ಟಾಕ್‌’! ಭಾಲ್ಕಿ, ಬಳ್ಳಾರಿಯಲ್ಲಿ ಜನರ ಪರದಾಟ]]></title>
            <link>https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug</link>
            <guid isPermaLink="true">https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug</guid>
            <pubDate>Mon, 18 May 2026 06:04:12 +0530</pubDate>
            <description><![CDATA[&lt;p&gt;ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ರಾಜ್ಯದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಬೀದರ್&zwnj;ನ ಭಾಲ್ಕಿಯಲ್ಲಿ ಗ್ಯಾಸ್&zwnj; ಸಿಲಿಂಡರ್&zwnj;ಗಳಿಗಾಗಿ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್&zwnj;ಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kr3rwv0hk7vmf4gw4kkkdtwq,imgname-save-gas-cylinder-life--1--1778243234833.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾಲ್ಕಿ/ಬಳ್ಳಾರಿ: &lt;/strong&gt;ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ಇಂಧನ ಹಾಗೂ ಎಲ್&zwnj;ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಬೀದರ್&zwnj; ಜಿಲ್ಲೆಯ ಭಾಲ್ಕಿಯಲ್ಲಿ ಗ್ಯಾಸ್&zwnj; ಸಿಲಿಂಡರ್&zwnj;ಗೆ ಹಾಗೂ ಬಳ್ಳಾರಿಯಲ್ಲಿ ಪೆಟ್ರೋಲ್&zwnj;ಗಾಗಿ ಜನರು ಪರದಾಡುವಂತಾಗಿದೆ.&lt;/p&gt;&lt;h2&gt;&lt;strong&gt;ಸುಮಾರು 1 ಕಿಲೋ ಮೀಟರ್&zwnj; ಸಾಲು&lt;/strong&gt;&lt;/h2&gt;&lt;p&gt;ಗ್ಯಾಸ್&zwnj; ಸಿಲಿಂಡರ್ ಸಿಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ಭಾನುವಾರ ಬೆಳ್ಳಂ ಬೆಳಗ್ಗೆ ಭಾಲ್ಕಿ ಪಟ್ಟಣದ ಭಾರತ್&zwnj; ಗ್ಯಾಸ್&zwnj; ಏಜೆನ್ಸಿಯ ಕಚೇರಿ ಮುಂದೆ ನೂರಾರು ಗ್ರಾಹಕರು ಜಮಾಯಿಸಿದ್ದು, ಗ್ಯಾಸ್&zwnj; ಸಿಲಿಂಡರ್&zwnj;ಗಳನ್ನು ಕ್ಯೂನಲ್ಲಿ ಇಟ್ಟಿದ್ದರು. ಸುಮಾರು 1 ಕಿಲೋ ಮೀಟರ್&zwnj; ದೂರದವರೆಗೆ ಸಿಲಿಂಡರ್&zwnj;ಗಳು ಸರತಿ ಸಾಲಿನಲ್ಲಿಟ್ಟಿದ್ದು ಕಂಡು ಬಂತು.&lt;/p&gt;&lt;p&gt;ಹಲವರು ಮಧ್ಯರಾತ್ರಿಯಿಂದಲೇ ಸಿಲಿಂಡರ್&zwnj; ಪಡೆಯಲು ಸಾಲುಗಟ್ಟಿ ನಿಂತ&zwnj;ರೆ, ಮಹಿಳೆಯರು, ವೃದ್ಧರು ತಮ್ಮ, ತಮ್ಮ ಖಾಲಿ ಸಿಲಿಂಡರ್&zwnj; ಮೇಲೆಯೇ ಕುಳಿತುಕೊಂಡು ಸಮಯ ಕಳೆದಿದ್ದಾರೆ. ಭಾಲ್ಕಿಯಲ್ಲಿ ಭಾರತ್&zwnj; ಗ್ಯಾಸ್&zwnj;ನ ಒಂದೇ ಒಂದು ಏಜೆನ್ಸಿ ಇರುವ ಕಾರಣ ಸಿಲಿಂಡರ್&zwnj; ಕೊರತೆಯಿಂದ ಜನರು ಪರದಾಡುವಂತಾಗಿದೆ. ನೂರಾರು ಜನ ಸೇರಿದ್ದರಿಂದ ಪೊಲೀಸರನ್ನು ಕರೆಸಿ, ಎಲ್ಲರಿಗೂ ಸಿಲಿಂಡರ್&zwnj; ಸಿಗುವಂತೆ ಮಾಡಲಾಯಿತು.&lt;/p&gt;&lt;h3&gt;&lt;strong&gt;ಹೊಸ ಬೈಕ್&zwnj;ಗೂ ಸಿಗಲಿಲ್ಲ ಪೆಟ್ರೋಲ್&lt;/strong&gt;&lt;/h3&gt;&lt;p&gt;ಬಳ್ಳಾರಿಯ ಎಚ್&zwnj;.ಪಿ.ಪೆಟ್ರೋಲ್&zwnj; ಬಂಕ್&zwnj;ನಲ್ಲಿ ಪೆಟ್ರೋಲ್&zwnj; ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಹೊಸ ಬೈಕ್&zwnj; ಖರೀದಿಸಿದ್ದ ಗ್ರಾಹಕನೊಬ್ಬ ಪೆಟ್ರೋಲ್&zwnj; ಸಿಗದೆ ಸುಮಾರು 2 ಕಿ.ಮೀ. ದೂರ ಬೈಕ್&zwnj; ತಳ್ಳಿಕೊಂಡು ಬಂದಿದ್ದ. ಭಾನುವಾರ ಬೆಳಗ್ಗೆಯಿಂದಲೇ ಸ್ಟಾಕ್&zwnj; ಇಲ್ಲದೆ, ಬಂಕನ್ನು ಬಂದ್&zwnj; ಮಾಡಲಾಗಿತ್ತು.&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/queues-for-cylinders-since-midnight-petrol-no-stock-people-s-procession-in-bhalki-ballari-mrq/articleshow-e6c1lug"/>
        </item>
        <item>
            <title><![CDATA[Karnataka News Live: ಗ್ರೇಟರ್ ರಾಜಾಸೀಟು ಕಾಮಗಾರಿಯಲ್ಲಿ ಹಣ ದುರುಪಯೋಗ - ಲೋಕಾಯುಕ್ತದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ]]></title>
            <link>https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey</link>
            <guid isPermaLink="true">https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey</guid>
            <pubDate>Thu, 07 May 2026 20:55:18 +0530</pubDate>
            <description><![CDATA[&lt;p&gt;&lt;strong&gt;ತೆಕ್ಕಲಕೋಟೆ (ಬಳ್ಳಾರಿ):&lt;/strong&gt; 6ರಿಂದ 7ನೇ ಶತಮಾನಕ್ಕೆ ಸೇರಿದ ಅಪ್ರಕಟಿತ ಬಂಡೆಗಲ್ಲು ಶಾಸನವೊಂದು ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ನಿಟ್ಟೂರಿನ ಹೊಲದಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆ ಆದ ಸ್ಥಳದಿಂದ 1 ಕಿ.ಮೀ. ದೂರದಲ್ಲಿರುವ ಬಂಡೆಗಲ್ಲು ಶಾಸನವನ್ನು ಸಂಶೋಧನಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ, ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಗಮನಕ್ಕೆ ತಂದರು. ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನವು ಸುಮಾರು ಏಳುಸಾಲುಗಳನ್ನು ಒಳಗೊಂಡಿದೆ. ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು. ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಲ್ಲಿ ಸುಮಾರು 6ರಿಂದ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.&lt;/p&gt;&lt;p&gt;&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01hdz6g0fv3v334y6r6baa16zp,imgname-lokayukta.png" type="image/jpeg" height="390" width="690"/>
            <category>ballari</category>
            <dc:creator>Asianet News</dc:creator>
            <atom:link href="https://kannada.asianetnews.com/state/karnataka-news-live-7-may-2026-6th-7th-century-rock-inscription-found-in-bellary-s-tekkalakote-field-mrq/liveblog-updates-mmo8sey"/>
        </item>
        <item>
            <title><![CDATA[Ballari: ರಸ್ತೆ ಕಾಮಗಾರಿ ಗುಂಡಿಗೆ ಬೈಕ್ ಬಿದ್ದು ನರ್ಸ್ ಸಾವು: ಪತಿ ಗಂಭೀರ, ನಿರ್ಲಕ್ಷ್ಯ ಆರೋಪ]]></title>
            <link>https://kannada.asianetnews.com/crime/ballari-road-work-pit-bike-accident-nurse-manjula-death-siruguppa-gvd/articleshow-msq37lg</link>
            <guid isPermaLink="true">https://kannada.asianetnews.com/crime/ballari-road-work-pit-bike-accident-nurse-manjula-death-siruguppa-gvd/articleshow-msq37lg</guid>
            <pubDate>Thu, 04 Jun 2026 21:54:46 +0530</pubDate>
            <description><![CDATA[&lt;p&gt;ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ ಬೈಕ್&zwnj; ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ..&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kt9q6smqncw0jyynwgh0k7wj,imgname-cxh-1780590274199.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಜೂ.04): &lt;/strong&gt;ರಸ್ತೆ ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ ಬೈಕ್&zwnj; ಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್&zwnj; ಸಮೀಪದ ರಾಜ್ಯ ಹೆದ್ದಾರಿ-63ರಲ್ಲಿ ನಡೆದಿದೆ.&lt;/p&gt;&lt;p&gt;ಮೃತರನ್ನು ಮಂಜುಳ (36) ಎಂದು ಗುರುತಿಸಲಾಗಿದ್ದು, ಅವರು ತಾಲೂಕಿನ ರಾವಿಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅವರ ಪತಿ ಚಂದ್ರಶೇಖರ (46) ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಜಿಲ್ಲಾ ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;p&gt;ಮಾಹಿತಿಯ ಪ್ರಕಾರ, ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ, ಎಚ್ಚರಿಕೆ ಫಲಕಗಳು ಹಾಗೂ ಮಾರ್ಗಸೂಚಿ ಬೋರ್ಡ್&zwnj;ಗಳನ್ನು ಅಳವಡಿಸದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ರಾತ್ರಿ ವೇಳೆ ರಸ್ತೆ ಸ್ಪಷ್ಟವಾಗಿ ಕಾಣದ ಕಾರಣ ಬೈಕ್&zwnj; ಸವಾರರು ಕಾಮಗಾರಿಗಾಗಿ ತೆಗೆಯಲಾಗಿದ್ದ ಗುಂಡಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಪ್ರಕರಣ ದಾಖಲು&lt;/strong&gt;&lt;/h2&gt;&lt;p&gt;ಘಟನೆಯ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.&lt;/p&gt;]]></content:encoded>
            <category>ballari</category>
            <dc:creator>Govindaraj S</dc:creator>
            <atom:link href="https://kannada.asianetnews.com/crime/ballari-road-work-pit-bike-accident-nurse-manjula-death-siruguppa-gvd/articleshow-msq37lg"/>
        </item>
        <item>
            <title><![CDATA[ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಲದಲ್ಲಿ ಮುಳುಗಿದೆ: ಸಚಿವ ಸಂತೋಷ್ ಲಾಡ್]]></title>
            <link>https://kannada.asianetnews.com/karnataka-districts/india-debt-225-lakh-crore-santosh-lad-attack-modi-sandur-gvd/articleshow-oanuxpb</link>
            <guid isPermaLink="true">https://kannada.asianetnews.com/karnataka-districts/india-debt-225-lakh-crore-santosh-lad-attack-modi-sandur-gvd/articleshow-oanuxpb</guid>
            <pubDate>Mon, 27 Apr 2026 18:27:01 +0530</pubDate>
            <description><![CDATA[&lt;p&gt;ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kn4n9wm657f0b59qkxwg9k61,imgname-minister-santosh-lad-1775051797126.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂಡೂರು (ಏ.27): &lt;/strong&gt;ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ತಾಲೂಕಿನ ತಾಳೂರು ಗ್ರಾಮದಲ್ಲಿ ತಾಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ವಾರ್ಷಿಕ 2 ಕೋಟಿ ಉದ್ಯೊಗ ನೀಡುವ, ರೈತರ ಸಾಲಮನ್ನಾ ಮಾಡುವ ಭರವಸೆಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಇದೇ ಕೇಂದ್ರ ಸರ್ಕಾರ ಉದ್ದಿಮೆದಾರರ ₹16.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ದೇಶದ ವಾರ್ಷಿಕ ಬಜೆಟ್ ₹50 ಲಕ್ಷ ಕೋಟಿ ಇದ್ದರೆ, ಅದಾನಿ ಅಂಬಾನಿಯವರ ವಾರ್ಷಿಕ ವಹಿವಾಟು ₹30 ಲಕ್ಷ ಕೋಟಿ ಇದೆ. 2016ರಲ್ಲಿ ಅದಾನಿಯ ಆದಾಯ ₹50 ಸಾವಿರ ಕೋಟಿ ಇದ್ದದ್ದು, ಇಂದು ₹15 ಲಕ್ಷ ಕೋಟಿಗೆ ಹೆಚ್ಚಿದೆ. ದೇಶದಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಿವೆ. ದೇಶದ ಕೇವಲ ಶೇ. 1ರಷ್ಟು ಜನರ ಕೈಯಲ್ಲಿ ಶೇ. 40ರಷ್ಟು ಆಸ್ತಿ ಇದೆ ಎಂದು ದೂರಿದರು.&lt;/p&gt;&lt;h2&gt;&lt;strong&gt;₹60 ಸಾವಿರ ಕೋಟಿ ಖರ್ಚು&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ವಾರ್ಷಿಕ ₹60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇಲ್ಲಿವರೆಗೆ 65-0 ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆ ಬಸ್&zwnj;ಗಳಲ್ಲಿ ಸಂಚಾರ ಮಾಡಿದ್ದಾರೆ. ವಿವಿಧ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಮನೆಗೆ ಸರಾಸರಿ 7-8 ಸಾವಿರ ತಲುಪುತ್ತಿದೆ. ದೇಶದಲ್ಲಿ ಆಶಾ, ಬಿಸಿಯೂಟ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಎಂದರು.&lt;/p&gt;&lt;p&gt;ಸಂಸದ ಈ. ತುಕಾರಾಂ ಮಾತನಾಡಿ, ಎಂ.ವೈ. ಘೋರ್ಪಡೆ, ಸಂತೋಷ್ ಲಾಡ್ ಆದಿಯಾಗಿ ಇಲ್ಲಿವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಎಲ್ಲ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲಾಗಿದೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕ್ಷೇತ್ರದಲ್ಲಿ ಮಾದರಿಯಾಗಿ ಆರಂಭಿಸಿದ ಕ್ಲಿನಿಕ್ ಆನ್ ವೀಲ್ ಮೂಲಕ ಇಲ್ಲಿಯವರೆಗೆ 1.60 ಲಕ್ಷ ಜನರಿಗೆ ಅವರ ಮನೆ ಬಾಗಿಲ ಬಳಿ ಚಿಕಿತ್ಸೆ ನೀಡಲಾಗಿದೆ ಎಂದರು.&lt;/p&gt;&lt;p&gt;ಶಾಸಕಿ ಅನ್ನಪೂರ್ಣಾ ಈ. ತುಕಾರಾಂ ಮಾತನಾಡಿದರು. ಸಮಾವೇಶದಲ್ಲಿ ರಾಜ್ಯ ಮೋಟಾರ್ ಸಾರಿಗೆ ಮತ್ತು ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್&zwnj;ಕಾರ್ಡ್&zwnj;ಗನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.&lt;/p&gt;]]></content:encoded>
            <category>ballari</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/india-debt-225-lakh-crore-santosh-lad-attack-modi-sandur-gvd/articleshow-oanuxpb"/>
        </item>
        <item>
            <title><![CDATA[Ballari shock: ಬಕ್ರೀದ್‌ಗಾಗಿ ಗೋವುಗಳ ಕೂಡಿಹಾಕಿದ ಆರೋಪ: ಬಳ್ಳಾರಿ ಹಳೇ ಬೈಪಾಸ್‌ನಲ್ಲಿ ಪೊಲೀಸರ ದಾಳಿ; 50ಕ್ಕೂ ಹೆಚ್ಚು ಗೋವುಗಳ ರಕ್ಷಣೆ]]></title>
            <link>https://kannada.asianetnews.com/karnataka-districts/over-50-cows-rescued-in-ballari-amid-suspicion-of-illegal-transport/articleshow-q6rh9b5</link>
            <guid isPermaLink="true">https://kannada.asianetnews.com/karnataka-districts/over-50-cows-rescued-in-ballari-amid-suspicion-of-illegal-transport/articleshow-q6rh9b5</guid>
            <pubDate>Tue, 26 May 2026 10:04:41 +0530</pubDate>
            <description><![CDATA[&lt;p&gt;ಬಳ್ಳಾರಿಯ ಕೊಟ್ಟಿಗೆಯೊಂದರಲ್ಲಿ 50ಕ್ಕೂ ಹೆಚ್ಚು ಗೋವುಗಳನ್ನು ಕೂಡಿಹಾಕಿದ್ದನ್ನು ಹಿಂದೂ ಸಂಘಟನೆಗಳ ಮಾಹಿತಿಯ ಮೇರೆಗೆ ಪೊಲೀಸರು ಪತ್ತೆಹಚ್ಚಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕಸಾಯಿಖಾನೆಗೆ ಸಾಗಿಸಲು ಇವುಗಳನ್ನು ಸಂಗ್ರಹಿಸಿಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ksh8z7asty2zbmvtcst5ad0n,imgname-----------------------2026-05-26t093922.069-1779770039641.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಮೇ.26):&lt;/strong&gt; ಬಳ್ಳಾರಿಯಲ್ಲಿ ಐವತ್ತಕ್ಕೂ ಹೆಚ್ಚು ಗೋವುಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಳಕಿಗೆ ಬಂದಿದೆ. ಹಳೇ ಬೈಪಾಸ್&zwnj;ನ ಗೋಲಬಡಿ ರಸ್ತೆಯಲ್ಲಿರುವ ಕೊಟ್ಟಿಗೆಯಲ್ಲಿ ಗೋವುಗಳನ್ನು ಇರಿಸಲಾಗಿತ್ತು. ಈ ಬಗ್ಗೆ ಹಿಂದೂ ಸಂಘಟನೆಗಳಿಗೆ ಸುಳಿವು ಸಿಗುತ್ತಿದ್ದಂತೆ ಎಚ್ಚತ್ತ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಗೋವುಗಳಿರುವುದು ಪತ್ತೆಹಚ್ಚಿದ್ದಾರೆ. ಬಳಿಕ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.&lt;/p&gt;&lt;h2&gt;ಹಿಂದೂ ಸಂಘಟನೆ ಮಾಹಿತಿ ಮೇಲೆ ಪೊಲೀಸರ ದಾಳಿ&lt;/h2&gt;&lt;p&gt;ಹಿಂದೂ ಸಂಘಟನೆಯ ಮುಖಂಡರು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಕೌಲಬಜಾರ್ ಪೊಲೀಸರು ಗೋವುಗಳನ್ನ ಕೂಡಿಹಾಕಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ದೊಡ್ಡ ಸಂಖ್ಯೆಯಲ್ಲಿ ಗೋವುಗಳು ಪತ್ತೆಯಾಗಿವೆ.&lt;/p&gt;&lt;h3&gt;ಗೋವುಗಳನ್ನು ಏಕೆ ಸಂಗ್ರಹಿಸಿದ್ದರು?&lt;/h3&gt;&lt;p&gt;ಇಷ್ಟೊಂದು ಪ್ರಮಾಣದ ಗೋವುಗಳನ್ನು ಕೊಟ್ಟಿಗೆಯಲ್ಲಿ ಯಾಕೆ ಸಂಗ್ರಹಿಸಿಡಲಾಗಿತ್ತು ಎಂಬ ಪ್ರಶ್ನೆಗೆ ಸ್ಥಳದಲ್ಲಿದ್ದವರು ಸ್ಪಷ್ಟವಾದ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಗೋವು ಕೂಡಿಹಾಕಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಬಕ್ರೀದ್ ಹಿನ್ನೆಲೆ ಆರೋಪ&lt;/strong&gt;&lt;/p&gt;&lt;p&gt;ಹಿಂದೂ ಸಂಘಟನೆಗಳು ಆರೋಪಿಸುವಂತೆ, ಬಕ್ರೀದ್ ಹಬ್ಬದ ಹಿನ್ನೆಲೆ ಗೋವುಗಳನ್ನ ಕಸಾಯಿಖಾನೆಗೆ ಸಾಗಿಸಲು ಸಂಗ್ರಹಿಸಲಾಡಲಾಗಿತ್ತು ಎಂದು ಗಂಭೀರ ಆರೋಪ ಮಾಡಿವೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;p&gt;&lt;strong&gt;ವಶಕ್ಕೆ ಪಡೆದ ಗೋವುಗಳು ಗೋಶಾಲೆಗೆ&lt;/strong&gt;&lt;/p&gt;&lt;p&gt;ಸದ್ಯ ಪತ್ತೆಯಾದ ಎಲ್ಲ ಗೋವುಗಳನ್ನು ಸುರಕ್ಷಿತವಾಗಿ ಗೋಶಾಲೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಕ್ರಮ ಗೋವುಗಳ ಸಾಗಾಟ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದರೂ ರಾಜ್ಯಾದ್ಯಂತ ಅವ್ಯಹತವಾಗಿ ಅಕ್ರಮ ಗೋ ಸಾಗಾಟ ನಡೆಯುತ್ತಿರುವುದು ದುರಂತವೇ ಸರಿ.&lt;/p&gt;]]></content:encoded>
            <category>ballari</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/over-50-cows-rescued-in-ballari-amid-suspicion-of-illegal-transport/articleshow-q6rh9b5"/>
        </item>
        <item>
            <title><![CDATA[ಮೀಸಲಾತಿ ಹೆಚ್ಚಳಕ್ಕೆ 9ನೇ ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಬಳಿ ನಿಯೋಗ: ವಿ.ಎಸ್.ಉಗ್ರಪ್ಪ]]></title>
            <link>https://kannada.asianetnews.com/karnataka-districts/vs-ugrappa-sc-st-obc-reservation-protest-warning-karnataka-gvd/articleshow-qfvogi6</link>
            <guid isPermaLink="true">https://kannada.asianetnews.com/karnataka-districts/vs-ugrappa-sc-st-obc-reservation-protest-warning-karnataka-gvd/articleshow-qfvogi6</guid>
            <pubDate>Mon, 20 Apr 2026 17:23:42 +0530</pubDate>
            <description><![CDATA[&lt;p&gt;ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್&zwnj;ಗೆ ಸೇರಿಸಲು ಪ್ರಯತ್ನಿಸಬೇಕು ಎಂದು ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-eb5f40e5-a75e-44b5-bdbd-60ab59c2a3d6,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಏ.20): &lt;/strong&gt;ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ಹೆಚ್ಚಿಸುವ ಸಂಬಂಧ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಸರ್ವ ಪಕ್ಷಗಳ ನಿಯೋಗದೊಂದಿಗೆ ಪ್ರಧಾನಮಂತ್ರಿ ಭೇಟಿ ಮಾಡಿ ಒಂಬತ್ತನೇ ಶೆಡ್ಯೂಲ್&zwnj;ಗೆ ಸೇರಿಸಲು ಪ್ರಯತ್ನಿಸಬೇಕು. ಜೂನ್ ವೇಳೆಗೆ ರಾಜ್ಯ ಸರ್ಕಾರ ನಿಯೋಗ ತೆರಳದಿದ್ದರೆ ರಾಜ್ಯವ್ಯಾಪಿ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಎಚ್ಚರಿಸಿದರು.&lt;/p&gt;&lt;p&gt;ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಗಳ ಮೀಸಲಾತಿ ಹೆಚ್ಚಳ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮುಖ್ಯಮಂತ್ರಿ ಸಹ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರದ ಬಳಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದು ನಿಜ ಎಂದರು.&lt;/p&gt;&lt;p&gt;&lt;strong&gt;ಎಸ್&zwnj; ಆರ್&zwnj; ನೋ ಎಂದು ಹೇಳಲಿ:&lt;/strong&gt; ಮುಖ್ಯಮಂತ್ರಿ ನಿಯೋಗ ಕರೆದುಕೊಂಡು ಹೋಗುವ ವಿಚಾರದಲ್ಲಿ ಎಸ್ ಅಥವಾ ನೋ ಎಂಬುದನ್ನಷ್ಟೇ ಹೇಳಲಿ. ವಿನಾಕಾರಣ ಮುಂದೂಡುವುದನ್ನು ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡರೆ ಹೋರಾಟದ ಮೂಲಕ ಉತ್ತರ ನೀಡುತ್ತೇವೆ ಎಂದು ವಿ.ಎಸ್.ಉಗ್ರಪ್ಪ ತಿಳಿಸಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಎಸ್ಟಿ ಸಮುದಾಯಕ್ಕೆ ಶೇ.3ರಿಂದ 7 ಮತ್ತು ಎಸ್ಸಿ ಸಮುದಾಯಕ್ಕೆ ಶೇ.15ರಿಂದ 17ಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಒಟ್ಟಾರೆಯಾಗಿ ಶೇ.50 ಇದ್ದ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದರು.&lt;/p&gt;&lt;p&gt;ಆದರೆ, ಸಾಂವಿಧಾನಿಕ ಸಿಂಧುತ್ವ ಕೊಡಿಸುವ ಯಾವ ಮಾರ್ಗಗಳನ್ನು ಅನುಸರಿಸಲಿಲ್ಲ. ಅವರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಶೇ.56 ಮೀಸಲಾತಿಯನ್ನು ಒಂಬತ್ತನೇ ಶೆಡ್ಯೂಲ್&zwnj;ಗೆ ಸೇರಿಸಿ, ಮೀಸಲಾತಿಗೆ ಸಾಂವಿಧಾನಿಕ ಸಿಂಧುತ್ವ ದೊರಕಿಸಲು ಮುತುವರ್ಜಿ ವಹಿಸಲಿಲ್ಲ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್&zwnj; ಸರ್ಕಾರಕ್ಕೆ ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬರೀ ಮುಂದೂಡುವ ಕೆಲಸವಷ್ಟೇ ಆಯಿತು ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;p&gt;&lt;strong&gt;ಕುಲಶಾಸ್ತ್ರ ಅಧ್ಯಯನವಾದರೆ ಎಸ್ಟಿಗೆ ಸೇರ್ಪಡೆ:&lt;/strong&gt; ಕುರುಬ, ಗೊಲ್ಲ, ಕೋಳಿ ಸಮುದಾಯ ಸೇರಿದಂತೆ ಅನೇಕ ಸಮುದಾಯಗಳು ಎಸ್ಟಿಗೆ ಸೇರಿಸುವ ಕುರಿತು ಸರ್ಕಾರಕ್ಕೆ ಮನವಿ ಮಾಡಿವೆ. ಅರ್ಹತೆಯಿರುವ ಸಮುದಾಯಗಳನ್ನು ಎಸ್ಟಿಗೆ ಸೇರಿಸಲು ನಮ್ಮದು ಯಾವ ಅಭ್ಯಂತರವಿಲ್ಲ. ಆದರೆ, ಆಯಾ ಸಮುದಾಯದ ಕುಲಶಾಸ್ತ್ರ ಅಧ್ಯಯನ ಆಗಬೇಕು ಎಂದು ವಿ.ಎಸ್&zwnj;.ಉಗ್ರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜೋಳದರಾಶಿ ತಿಮ್ಮಪ್ಪ, ನರಸಿಂಹಯ್ಯ, ಕೆ.ಆರ್&zwnj;.ರಾಜಪ್ಪ, ರಾಜಣ್ಣ, ವೆಂಕಟೇಶ್&zwnj; ನಾಯಕ, ಲೋಕೇಶ್&zwnj; ನಾಯಕ, ಜಗನ್&zwnj;, ಕಲ್ಲುಕಂಬ ಪಂಪಾಪತಿ, ವೆಂಕಟೇಶ್&zwnj; ಹೆಗಡೆ, ಎರ್ರಿಸ್ವಾಮಿ, ಹನುಮಂತರಾಯಪ್ಪ ಇತರರಿದ್ದರು.&lt;/p&gt;&lt;h2&gt;&lt;strong&gt;ಎ ರೆಡ್ಡಿ-ಬಿ ರೆಡ್ಡಿ ಸಮಾಜಕ್ಕೆ ಮಾಡಿದ್ದೇನು?&lt;/strong&gt;&lt;/h2&gt;&lt;p&gt;ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಸಂಬಂಧಿಸಿ ನಡೆದ ಬ್ಯಾನರ್&zwnj; ಗಲಾಟೆ ಮಾಡಿದ &quot;ಎ&quot; ರೆಡ್ಡಿ ಮತ್ತು &quot;ಬಿ&quot;ರೆಡ್ಡಿ ವಾಲ್ಮೀಕಿ ಸಮಾಜಕ್ಕೆ ನೀಡಿದ ಕೊಡುಗೆ ಏನು? ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು. ಈ ಇಬ್ಬರು ರೆಡ್ಡಿಗಳು ನಮ್ಮ ಸಮಾಜದ ಜನರಿಗೆ ಏನಾದರೂ ಸಹಾಯ ಮಾಡಿದ್ದಾರಾ? ವಿಧಾನಸಭೆಗಳಲ್ಲಿ ಮೀಸಲಾತಿ ಹೆಚ್ಚಿಸುವ ಸಂಬಂಧ 9ನೇ ಶೆಡ್ಯೂಲ್ ಕುರಿತು ಪ್ರಸ್ತಾಪ ಮಾಡಿದ್ದಾರಾ? ಯಾರಿಗಾದರೂ ಟ್ರ್ಯಾಕ್ಟರ್ ಕೊಡಿಸಿದ್ದಾರಾ? ಮಕ್ಕಳಿಗೆ ಸ್ಕಾಲರ್&zwnj;ಶಿಪ್&zwnj; ನೀಡಿದ್ದಾರಾ? ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು.&lt;/p&gt;]]></content:encoded>
            <category>ballari</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vs-ugrappa-sc-st-obc-reservation-protest-warning-karnataka-gvd/articleshow-qfvogi6"/>
        </item>
        <item>
            <title><![CDATA[ಬಿಜೆಪಿ ಶುದ್ಧೀಕರಣವಾಗಲೆಂದು ಹೊರ ಬಂದೆ, ಇನ್ನೂ ಶುದ್ಧೀಕರಣವಾಗಿಲ್ಲ: ಕೆ.ಎಸ್.ಈಶ್ವರಪ್ಪ]]></title>
            <link>https://kannada.asianetnews.com/karnataka-districts/ks-eshwarappa-on-bjp-cleanup-karnataka-politics-gvd/articleshow-qhzrnay</link>
            <guid isPermaLink="true">https://kannada.asianetnews.com/karnataka-districts/ks-eshwarappa-on-bjp-cleanup-karnataka-politics-gvd/articleshow-qhzrnay</guid>
            <pubDate>Fri, 24 Apr 2026 20:12:37 +0530</pubDate>
            <description><![CDATA[&lt;p&gt;ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ. ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01g975x17kzyppr01r9h4rdkry,imgname-ks-eshwarappa.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ (ಏ.24): &lt;/strong&gt;ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಪಕ್ಷದಿಂದ ಹೊರಗೆ ಬಂದೆ. ಆದರೆ, ಇನ್ನೂ ಶುದ್ಧೀಕರಣವಾಗಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬೆಲೆ ಇದೆಯೇ ಹೊರತು ಹಿಂದುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಈ ಕಾರಣಕ್ಕಾಗಿಯೇ ನಾನು ಪಕ್ಷದಿಂದ ಹೊರ ಬಂದೆ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಹೊಸ ಪಕ್ಷ ಕಟ್ಟಲ್ಲ.&lt;/p&gt;&lt;p&gt;ಶುದ್ಧೀಕರಣ ಬಳಿಕ ಬಿಜೆಪಿಗೆ ವಾಪಸಾಗುತ್ತೇನೆ. ಬಿಜೆಪಿ ಶುದ್ಧೀಕರಣವಾಗುವ ವಿಶ್ವಾಸ ನನಗಿದೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈಶ್ವರಪ್ಪ ಸ್ಪಷ್ಟಪಡಿಸಿದರು. ಇನ್ನು ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಸಿಎಂ, ಡಿಸಿಎಂ ಅವರ ಎರಡು ಗುಂಪುಗಳಿವೆ. ಇದರಿಂದ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಎರಡು ಗುಂಪುಗಳು ಪ್ರತ್ಯೇಕ ಸಭೆ ಮಾಡುತ್ತಿವೆ.&lt;/p&gt;&lt;p&gt;ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಅನೇಕ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಪಕ್ಷದಲ್ಲಿ ಅತೃಪ್ತಿ ಹೊಗೆಯಾಡುತ್ತಿದ್ದು ಶೀಘ್ರವೇ ಸ್ಫೋಟಗೊಳ್ಳಲಿದೆ. ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆಯಾಗಲಿದೆ ಎಂದರು. ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸಿಗರೇ ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ್ದಾರೆ. ಪಕ್ಷದ ಮುಸ್ಲಿಂ ನಾಯಕರನ್ನು ಕಿತ್ತು ಹಾಕಲಾಗಿದೆ.&lt;/p&gt;&lt;h2&gt;&lt;strong&gt;ಕಾಂಗ್ರೆಸ್&zwnj;ನ ಸ್ಥಿತಿ ಅಷ್ಟು ಉತ್ತಮವಾಗಿಲ್ಲ&lt;/strong&gt;&lt;/h2&gt;&lt;p&gt;ಉಚ್ಚಾಟಿತರನ್ನು ವಾಪಸ್ ಪಡೆಯಿರಿ ಎಂದು ಮುಸ್ಲಿಂ ಗುರುಗಳು ತಾಕೀತು ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್&zwnj;ನ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು. ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು. ಮೋದಿ ಮಾತ್ರವಲ್ಲದೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.&lt;/p&gt;]]></content:encoded>
            <category>ballari</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/ks-eshwarappa-on-bjp-cleanup-karnataka-politics-gvd/articleshow-qhzrnay"/>
        </item>
        <item>
            <title><![CDATA[ಜಮೀನಿನಲ್ಲಿ ಇತಿಹಾಸದ 'ನಿಧಿ' ಪತ್ತೆ: ಅಶೋಕನ ಶಿಲಾಶಾಸನದ ಬಳಿಯೇ ಅಡಗಿದ್ದ ಆ 'ಏಳು ಸಾಲು'ಗಳ ರಹಸ್ಯವೇನು?]]></title>
            <link>https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327</link>
            <guid isPermaLink="true">https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327</guid>
            <pubDate>Wed, 06 May 2026 19:58:56 +0530</pubDate>
            <description><![CDATA[&lt;p&gt;ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ ಎನ್ನಲಾದ 7 ಸಾಲುಗಳ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ಅಶೋಕ ಶಿಲಾಶಾಸನದ ಬಳಿಯೇ ಸಿಕ್ಕಿರುವ ಈ ಶಾಸನದ ಮಾಹಿತಿ ಇಲ್ಲಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kqyv0yfy1pqe2td44z1166h1,imgname-screenshot-2026-05-06-194117-1778077694462.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: ಗ&lt;/strong&gt;ಣಿನಾಡು ಬಳ್ಳಾರಿ ಜಿಲ್ಲೆ ಇತಿಹಾಸ ಸಂಶೋಧಕರ ಪಾಲಿನ ಅಕ್ಷಯ ಪಾತ್ರೆಯಾಗುತ್ತಲೇ ಇದೆ. ಮೌರ್ಯ ಸಾಮ್ರಾಜ್ಯದ ಕುರುಹುಗಳನ್ನು ಹೊಂದಿರುವ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಇದೀಗ ಮತ್ತೊಂದು ಅಪರೂಪದ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಇತಿಹಾಸ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.&lt;/p&gt;&lt;h3&gt;&lt;strong&gt;ಪತ್ತೆಯಾದ ಸ್ಥಳ:&lt;/strong&gt;&lt;/h3&gt;&lt;p&gt;ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಹೊಸ ಬಂಡೆಗಲ್ಲು ಶಾಸನ ಪತ್ತೆಯಾಗಿದೆ. ವಿಶೇಷವೆಂದರೆ, ಇದೇ ನಿಟ್ಟೂರು ಗ್ರಾಮವು ಈ ಹಿಂದೆ ಪತ್ತೆಯಾಗಿದ್ದ ಪ್ರಖ್ಯಾತ 'ಅಶೋಕ ಶಿಲಾಶಾಸನ'ದಿಂದಾಗಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಈಗ ಪತ್ತೆಯಾಗಿರುವ ಹೊಸ ಶಾಸನವು ಅಶೋಕ ಶಿಲಾಶಾಸನವಿರುವ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂಬುದು ಗಮನಾರ್ಹ.&lt;/p&gt;&lt;h2&gt;&lt;strong&gt;ಶಾಸನದ ಲಕ್ಷಣಗಳು:&lt;/strong&gt;&lt;/h2&gt;&lt;p&gt;ಹೊಲದಲ್ಲಿರುವ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳನ್ನು ಬರೆಯಲಾಗಿದೆ. ಶಾಸನದ ಲಿಪಿ ಮತ್ತು ಸ್ವರೂಪವನ್ನು ಗಮನಿಸಿದರೆ, ಇದು 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ ಇತಿಹಾಸವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಪ್ರದೇಶವು ಮೌರ್ಯರ ಕಾಲದ ಆಳ್ವಿಕೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ, ಈ ಶಾಸನವು ಹಲವು ಮಹತ್ವದ ಐತಿಹಾಸಿಕ ಕೊಂಡಿಗಳನ್ನು ಬೆಸೆಯುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ತಜ್ಞರ ತಂಡದಿಂದ ಅಧ್ಯಯನ:&lt;/strong&gt;&lt;/h3&gt;&lt;p&gt;ಧಾರವಾಡದ ಖ್ಯಾತ ಲಿಪಿತಜ್ಞ ಮಾರುತಿ ಭಜಂತ್ರಿ ನೇತೃತ್ವದ ತಂಡವು ಈ ಬಂಡೆಗಲ್ಲು ಶಾಸನವನ್ನು ಪತ್ತೆಹಚ್ಚಿದೆ. ಪ್ರಸ್ತುತ ಗಂಗಾವತಿಯ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಈ ಶಾಸನದ ಲಿಪಿಯನ್ನು ಓದುವ ಮತ್ತು ಅದರ ಕಾಲಘಟ್ಟವನ್ನು ನಿಖರವಾಗಿ ಗುರುತಿಸುವ ಅಧ್ಯಯನ ನಡೆಯುತ್ತಿದೆ.&lt;/p&gt;&lt;p&gt;ನಿಟ್ಟೂರು ಪ್ರದೇಶವು ಮೌರ್ಯರು, ಚಾಲುಕ್ಯರು ಮತ್ತು ರಾಷ್ಟ್ರಕೂಟರ ಸಂಸ್ಕೃತಿಗಳ ಸಂಗಮವಾಗಿರುವುದರಿಂದ, ಈ ಹೊಸ ಶಾಸನವು ಅಂದಿನ ಕಾಲದ ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಸ್ಥಿತಿಗತಿಗಳ ಮೇಲೆ ಹೊಸ ಬೆಳಕು ಚೆಲ್ಲುವ ನಿರೀಕ್ಷೆಯಿದೆ. ಈ ಶಾಸನ ಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಬೆಟ್ಟದ ಹೊಲಕ್ಕೆ ಬಂದು ಶಾಸನವನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category>ballari</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-rare-ancient-rock-inscription-found-nittur-ballari-history-discovery-sat/articleshow-ramx327"/>
        </item>
        <item>
            <title><![CDATA[ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರ ಕೊಲ್ಕತ್ತಾದ ರಾಮಕೃಷ್ಣ ಮಿಷನ್‌ಗೆ ಹಸ್ತಾಂತರ]]></title>
            <link>https://kannada.asianetnews.com/karnataka-districts/sri-ramakrishna-vivekananda-kendra-ballari-handed-over-to-ramakrishna-mission-kolkata-mrq/articleshow-sv2rkic</link>
            <guid isPermaLink="true">https://kannada.asianetnews.com/karnataka-districts/sri-ramakrishna-vivekananda-kendra-ballari-handed-over-to-ramakrishna-mission-kolkata-mrq/articleshow-sv2rkic</guid>
            <pubDate>Wed, 22 Apr 2026 08:27:29 +0530</pubDate>
            <description><![CDATA[&lt;p&gt;ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಅಧಿಕೃತವಾಗಿ ರಾಮಕೃಷ್ಣ ಮಿಷನ್&zwnj;ಗೆ ಹಸ್ತಾಂತರಿಸಲಾಗಿದೆ. ಆಶ್ರಮದ ಮೂಲಕ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲು ಯೋಜಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kpshnbed29w34zsy1zhsa723,imgname-ballari-1776826363341.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಉತ್ತರ ಕರ್ನಾಟಕದ ಬೇಲೂರು ಮಠವಾಗಬೇಕು. ಪಶ್ಚಿಮಬಂಗಾಳದ ಬೇಲೂರು ಮಠದಲ್ಲಿ ಜರುಗುವ ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆ ಬಳ್ಳಾರಿಯ ಆಶ್ರಮದಲ್ಲೂ ನಿರಂತರವಾಗಿ ನಡೆಯುವಂತಾಗಬೇಕು ಎಂದು ಬೇಲೂರು ಮಠದ ಸಹ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರು ತಿಳಿಸಿದರು.&lt;/p&gt;&lt;p&gt;ಇಲ್ಲಿನ ಗಾಂಧಿನಗರದ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್&zwnj;ಗೆ ಹಸ್ತಾಂತರಿಸುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.&lt;/p&gt;&lt;h2&gt;&lt;strong&gt;ಆಶ್ರಮದ ಬೆಳವಣಿಗೆ&lt;/strong&gt;&lt;/h2&gt;&lt;p&gt;ಬಳ್ಳಾರಿಯ ಶ್ರೀ ರಾಮಕೃಷ್ಣ ಆಶ್ರಮ ಬೇಲೂರು ಮಠಕ್ಕೆ ಹಸ್ತಾಂತರಗೊಂಡಿರುವುದು ಅತ್ಯಂತ ಸಂತಸ ತಂದಿದೆ. ಅಲ್ಲಂ ಕರಿಬಸಪ್ಪ, ಎಚ್&zwnj;. ಸೀತಾರಾಮ ರೆಡ್ಡಿಯವರು ಸೇರಿದಂತೆ ಈ ಊರಿನ ಅನೇಕರು ಆಶ್ರಮದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಆ ಎಲ್ಲ ಮಹನೀಯರ ಸೇವಾ ಕೈಂಕರ್ಯ ಸದಾ ಸ್ಮರಣೀಯ. ರಾಮಕೃಷ್ಣ ಮಿಷನ್ ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯದಲ್ಲೂ ತೊಡಗಿಸಿಕೊಳ್ಳುತ್ತದೆ. ಬಳ್ಳಾರಿಯ ಆಶ್ರಮದ ಮೂಲಕ ಸಹ ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಲಿ. ಈ ಭಾಗದ ಜನರ ಕಲ್ಯಾಣಕ್ಕಾಗಿ ಆಶ್ರಮ ಹೆಚ್ಚು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದು ಆಶಿಸಿದರು.&lt;/p&gt;&lt;p&gt;ಭಾರತದ ಕಲ್ಯಾಣದಲ್ಲಿ ಜಗತ್ತಿನ ಕಲ್ಯಾಣವಿದೆ. ಭಾರತ ಉಳಿದರೆ ಜಗತ್ತು ಉಳಿಯುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಸಮಾಜದ ಕಲ್ಯಾಣವೇ ರಾಷ್ಟ್ರದ ಕಲ್ಯಾಣ. ಆತ್ಮದರ್ಶನ, ಆತ್ಮಜ್ಞಾನವೇ ನಮ್ಮೆಲ್ಲರ ಗುರಿಯಾಗಿದೆ. ಗೃಹಸ್ಥಾಶ್ರಮವಾಗಲೀ, ಸನ್ಯಾಸಾಶ್ರಮವಾಗಲೀ ನಾವೆಲ್ಲರೂ ಆತ್ಮಜ್ಞಾನಿಗಳಾಗಬೇಕು. ಯೋಗಿಗಳಾಗಬೇಕು ಎಂದರು.&lt;/p&gt;&lt;p&gt;ಭಾರತದಲ್ಲಿ ಜನಿಸಿದ ಪ್ರತಿಯೊಬ್ಬರೂ ಅನಂತ ಶಕ್ತಿಯುಳ್ಳವರು. ತ್ಯಾಗ ಮತ್ತು ಸೇವೆಯ ಮೂಲಕ ನಮ್ಮೊಳಗಿನ ಅನಂತತೆಯನ್ನು ವೃದ್ಧಿಸಿಕೊಳ್ಳಬೇಕು. ನಾನು ಭಗವಂತನ ಮಗು. ಅತುಲ ಆತ್ಮವಿಶ್ವಾಸದ ಆಗರ. ಎಲ್ಲವನ್ನೂ ಧೈರ್ಯದಿಂದ ಎದುರಿಸಬಲ್ಲೆ. ನನ್ನ ದೇವರು ನನ್ನನ್ನು ಎಂದೂ ಕೈಬಿಡುವುದಿಲ್ಲ ಎಂಬ ನಂಬಿಕೆಯನ್ನು ಇಟ್ಟುಕೊಳ್ಳಬೇಕು ಎಂದು ಶ್ರೀ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ತಿಳಿಸಿದರು.&lt;/p&gt;&lt;h3&gt;&lt;strong&gt;ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್ ಮಾತು&lt;/strong&gt;&lt;/h3&gt;&lt;p&gt;ರಾಮಕೃಷ್ಣ ಮಿಷನ್ ಬಳ್ಳಾರಿಯ ಶಾಖೆಯ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜೀ ಮಹಾರಾಜ್ ಮಾತನಾಡಿ, ಈ ಹಿಂದಿನಿಂದಲೂ ಭಾರತದಲ್ಲಿ ಸಂಘಟನೆಯ ಕೊರತೆಯಿದೆ. ಸಂಘಟನೆ ನ್ಯೂನತೆ ಸರಿಪಡಿಸಲು ಸ್ವಾಮಿ ವಿವೇಕಾನಂದರು 1897ರಲ್ಲಿ ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಮಿಷನ್&zwnj; ಅಡಿಯಲ್ಲಿ ಪ್ರಪಂಚದಲ್ಲಿ 1600 ಸ್ವಾಮೀಜಿಗಳಿದ್ದು, ಶ್ರೀ ರಾಮಕೃಷ್ಣ ಪರಮಹಂಸರ ತತ್ವಗಳ ಪ್ರಚಾರ ಹಾಗೂ ನಿಸ್ವಾರ್ಥದಿಂದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್&zwnj;ಗೆ ಹಸ್ತಾಂತರಿಸಿದ ಬಳಿಕ ನನ್ನನ್ನು ಸೇವಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಧಾರ್ಮಿಕ ಉಪನ್ಯಾಸ ಶುರುಗೊಳಿಸಲಾಗಿದ್ದು ಭಜನೆ, ಸಮ್ಮರ್ ಕ್ಲಾಸ್, ಸ್ಟಡಿ ಸರ್ಕಲ್ ಮತ್ತಿತರ ಚಟುವಟಿಕೆಗಳನ್ನು ಶುರು ಮಾಡಲಿದ್ದೇವೆ ಎಂದು ತಿಳಿಸಿದರು. ಬೆಂಗಳೂರು ಶಿವನಹಳ್ಳಿ ಆಶ್ರಮದ ಮಹಾವಾಕ್ಯಾನಂದ ಮಹಾರಾಜ್ ಉಪಸ್ಥಿತರಿದ್ದರು.&lt;/p&gt;&lt;p&gt;ಸಮಾರಂಭದಲ್ಲಿ ಹಾಜರಿದ್ದ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅವರು ಆಧ್ಯಾತ್ಮಿಕ ಹಾಗೂ ಸೇವಾ ವಿಚಾರದಲ್ಲಿ ಬಳ್ಳಾರಿಯ ಎಲ್ಲ ಪಕ್ಷದವರು ಒಂದಾಗಿ ಕೆಲಸ ಮಾಡುತ್ತೇವೆ. ರಾಮಕೃಷ್ಣ ಮಿಷನ್&zwnj;ಗೆ ಬೇಕಾದ ಅಗತ್ಯ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದರು. ಶಾಸಕ ನಾರಾ ಭರತ್ ರೆಡ್ಡಿ ಅವರು ₹10 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರು ಬದಲಾಗುತ್ತಿರುವ ಯುವಕರ ಆದ್ಯತೆ ಹಾಗೂ ದುಶ್ಚಟಗಳಿಂದ ತಪ್ಪಿಸಲು ಬಳ್ಳಾರಿಯ ರಾಮಕೃಷ್ಣ ಮಿಷನ್&zwnj;ನ ಪಾತ್ರ ಕುರಿತು ತಿಳಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಸೆಂಟ್ರಲ್ ಜೈಲು ಖೈದಿಗೆ ಫಸ್ಟ್ ಕ್ಲಾಸ್, ಶೇ.81 ಫಲಿತಾಂಶ&lt;/strong&gt;&lt;/p&gt;&lt;p&gt;ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ ಮಾದರಿಯಲ್ಲಿ ಬಳ್ಳಾರಿಯಲ್ಲೂ ಶಾಲೆ ಆರಂಭಿಸುವಂತಾಗಲಿ, ಬೇಕಾದ ನೆರವು ನೀಡಲಾಗುವುದು ಎಂದು ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಮನವಿ ಮಾಡಿದರು.&lt;/p&gt;&lt;p&gt;ಮೇಯರ್ ಪಿ. ಗಾದೆಪ್ಪ ಮಾತನಾಡಿ, ರಾಮಕೃಷ್ಣ ಮಿಷನ್ ನ ಆಶ್ರಮ ಇರುವ ಈ ಹಿಂದೆಯೇ ನಾಮಕರಣಗೊಂಡಿರುವ ರಸ್ತೆಗೆ ಶ್ರೀರಾಮಕೃಷ್ಣ ವಿವೇಕಾನಂದ ರಸ್ತೆಗೆ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದರು. ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷ ಶ್ರೀಧರ ಬೋನಗೇರಿ, ಕಾರ್ಯದರ್ಶಿ ಜಗನ್ನಾಥ, ಪೃಥ್ವಿರಾಜ್ ಭೂಪಾಲ್ ಸೇರಿದಂತೆ ಆಶ್ರಮದ ಭಕ್ತರು ಉಪಸ್ಥಿತರಿದ್ದರು. ಚಿಲ್ಕರಾಯಿ ಎರಿಸ್ವಾಮಿ, ರಾಜಶೇಖರ್ ಹಾಗೂ ಗಡಗಿ ರಾಕೇಶ್ ಅವರು ಕಾರ್ಯಕ್ರಮ ನಿರ್ವಹಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ತುಂಗಾಭದ್ರ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಇಳಿಕೆ: ಹಲವು ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ&lt;/strong&gt;&lt;/p&gt;]]></content:encoded>
            <category>ballari</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/sri-ramakrishna-vivekananda-kendra-ballari-handed-over-to-ramakrishna-mission-kolkata-mrq/articleshow-sv2rkic"/>
        </item>
        <item>
            <title><![CDATA[ವದಂತಿಗಳಿಂದ ಪೋಷಕರ ಹಿಂದೇಟು, ಗರ್ಭಕಂಠ ಕ್ಯಾನ್ಸರ್ ಲಸಿಕೆ ಎಚ್‌ಪಿವಿ ನೀಡಿಕೆಗೆ ಭಾರೀ ಹಿನ್ನೆಡೆ!]]></title>
            <link>https://kannada.asianetnews.com/karnataka-districts/low-hpv-vaccination-coverage-in-ballari-only-5658-of-16495-girls-vaccinated-amid-rising-cervical-cancer-concerns-gdp/articleshow-ua0r7my</link>
            <guid isPermaLink="true">https://kannada.asianetnews.com/karnataka-districts/low-hpv-vaccination-coverage-in-ballari-only-5658-of-16495-girls-vaccinated-amid-rising-cervical-cancer-concerns-gdp/articleshow-ua0r7my</guid>
            <pubDate>Tue, 12 May 2026 21:03:13 +0530</pubDate>
            <description><![CDATA[ಬಳ್ಳಾರಿ ಜಿಲ್ಲೆಯಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ನೀಡಲಾಗುತ್ತಿರುವ ಉಚಿತ ಎಚ್.ಪಿ.ವಿ. ಲಸಿಕೆ ಅಭಿಯಾನಕ್ಕೆ ಭಾರೀ ಹಿನ್ನಡೆಯಾಗಿದೆ. ವದಂತಿಗಳು ಹಾಗೂ ತಪ್ಪು ಮಾಹಿತಿಯಿಂದಾಗಿ ಪೋಷಕರು ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಿದ್ದು, ನಿಗದಿತ ಗುರಿ ತಲುಪಲು ಆರೋಗ್ಯ ಇಲಾಖೆ ಸವಾಲು ಎದುರಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kred338en3xdpf6wwbqy452p,imgname-low-hpv-vaccination-coverage-in-ballari-1778599955726.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಳ್ಳಾರಿ: &lt;/strong&gt;ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್.ಪಿ.ವಿ. (ಹ್ಯೂಮನ್ ಪ್ಯಾಪಿಲೋಮ್ ವೈರಸ್) ಲಸಿಕೆ ನೀಡಿಕೆಗೆ ಜಿಲ್ಲೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಜಿಲ್ಲೆಯ 16,495 ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿಯಲ್ಲಿ ಈ ವರೆಗೆ 5,658 ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ.&lt;/p&gt;&lt;p&gt;ಈ ಅಭಿಯಾನ ಮಾರ್ಚ್ 11ರಿಂದ ಪ್ರಾರಂಭವಾಗಿದ್ದು, ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಎಲ್ಲಾ ಹೆಣ್ಣು ಮಕ್ಕಳು ಈ ಲಸಿಕೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಸಮಾಧಾನಕರವಾಗಿಲ್ಲ ಎಂಬುದು ಅಂಕಿ ಸಂಖ್ಯೆಗಳೇ ಬಹಿರಂಗಪಡಿಸುತ್ತವೆ.&lt;/p&gt;&lt;p&gt;ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಎಚ್.ಪಿ.ವಿ. ಸೋಂಕು ಕಾಲಕ್ರಮೇಣ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಇದನ್ನು ತಡೆಯಲು 14 ವರ್ಷದ ಹರೆಯದಲ್ಲೇ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ. ಪೋಷಕರು ನಾನಾ ವದಂತಿಗಳಿಗೆ ಕಿವಿಗೊಟ್ಟು ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದು ಜಿಲ್ಲೆಯ ಪ್ರಗತಿಯ ಗುರಿಗೆ ಹಿನ್ನಡೆಯಾಗಿದೆ.&lt;/p&gt;&lt;h2&gt;ತಾಲೂಕುವಾರು ವಿವರ:&lt;/h2&gt;&lt;p&gt;ಬಳ್ಳಾರಿ ತಾಲೂಕಿನಲ್ಲಿ 7,578 ಹೆಣ್ಣು ಮಕ್ಕಳ ಗುರಿ ಹೊಂದಲಾಗಿದ್ದು, ಇದು ವರೆಗೆ 2,324 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಅದರಂತೆ, ಸಂಡೂರು ತಾಲೂಕಿನಲ್ಲಿ 2,840 ಮಕ್ಕಳಲ್ಲಿ 881 ಮಕ್ಕಳಿಗೆ ಹಾಕಲಾಗಿದೆ. ಸಿರುಗುಪ್ಪ ತಾಲೂಕಿನಲ್ಲಿ 3,054 ಮಕ್ಕಳಲ್ಲಿ 1,453 ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ 1,543 ಮಕ್ಕಳಲ್ಲಿ 630 ಮಂದಿಗೆ ಲಸಿಕೆ ನೀಡಲಾಗಿದೆ ಹಾಗೂ ಕಂಪ್ಲಿ ತಾಲೂಕಿನ 1,480 ಹೆಣ್ಣು ಮಕ್ಕಳಲ್ಲಿ 370 ಹೆಣ್ಣು ಲಸಿಕೆ ನೀಡಲಾಗಿದೆ.&lt;/p&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಮಹತ್ವದ ಯೋಜನೆಯಿಂದ ಮಹಿಳೆಯರು ದೂರು ಉಳಿಯುತ್ತಿರುವುದು ಕಂಡು ಬಂದಿದ್ದು, ಇದು ಗುರಿಮುಟ್ಟುವ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.&lt;/p&gt;&lt;p&gt;ಕ್ಯಾನ್ಸರ್ ಮುಕ್ತ ನಾಳೆಗಾಗಿ ಹೆಣ್ಣು ಮಕ್ಕಳಿಗೆ ಲಸಿಕೆಯು ಸುರಕ್ಷಾ ಕವಚವಾಗಿದ್ದು, ಪೋಷಕರು ತಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಲಸಿಕೆ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಮನವಿ ಮಾಡಿದ್ದಾರೆ.&lt;/p&gt;&lt;p&gt;ವದಂತಿಗಳಿಂದಾಗಿ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಇದುವರೆಗೆ ಲಸಿಕೆ ಪಡೆದವರಲ್ಲಿ ಯಾರಲ್ಲೂ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹೀಗಾಗಿ ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತಾಗಬೇಕು.&lt;/p&gt;&lt;p&gt;ಡಾ.ಹನುಮಂತಪ್ಪ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ, ಬಳ್ಳಾರಿ ಜಿಲ್ಲೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/low-hpv-vaccination-coverage-in-ballari-only-5658-of-16495-girls-vaccinated-amid-rising-cervical-cancer-concerns-gdp/articleshow-ua0r7my"/>
        </item>
        <item>
            <title><![CDATA[ಬೆಂಗಳೂರು: ಹಲಸಿನ ಹಣ್ಣಿನ ಆಸೆಗಾಗಿ ಮರ ಹತ್ತಿದ ಪ್ರಶಸ್ತಿ ವಿಜೇತ ಬಳ್ಳಾರಿ ಮೂಲದ ಜಿಕೆವಿಕೆ ಕೃಷಿ ವಿದ್ಯಾರ್ಥಿ ಸಾವು!]]></title>
            <link>https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2</link>
            <guid isPermaLink="true">https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2</guid>
            <pubDate>Fri, 05 Jun 2026 19:23:22 +0530</pubDate>
            <description><![CDATA[ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತಿದ್ದ ಎಂ.ಎಸ್ಸಿ ವಿದ್ಯಾರ್ಥಿ ಆಕಾಶ್, ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ರಾಷ್ಟ್ರಪತಿ ಪ್ರಶಸ್ತಿ ವಿಜೇತ, ಪ್ರತಿಭಾವಂತನಾಗಿದ್ದ ಈ ಯುವಕನ ಅಕಾಲಿಕ ಮರಣವು ಎಲ್ಲೆಡೆ ಶೋಕವನ್ನುಂಟುಮಾಡಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktc0sy7h38bppqeh4p624w1w,imgname-msc-agriculture-student-akash-dies-1780667447537.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಕೆಳಗೆ ಬಿದ್ದ ಕೃಷಿ ವಿಶ್ವವಿದ್ಯಾಲಯದ ಎಂ.ಎಸ್ಸಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿಯಾಗಿದ್ದಾನೆ.&lt;/p&gt;&lt;p&gt;ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಸರ್ಕಾರಿ ಸೀಟು ಪಡೆದುಕೊಂಡು ಬೆಂಗಳೂರಿನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವುದು ಇಡೀ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ.&lt;/p&gt;&lt;h2&gt;ಮಧ್ಯರಾತ್ರಿ ನಡೆದಿದ್ದೇನು?&lt;/h2&gt;&lt;p&gt;ಪೊಲೀಸ್ ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ನಡೆದಿದೆ. ನಿನ್ನೆ ರಾತ್ರಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ಜಿಕೆವಿಕೆ ಆವರಣದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ. ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.&lt;/p&gt;&lt;p&gt;ಘಟನೆಯ ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.&lt;/p&gt;&lt;h2&gt;ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!&lt;/h2&gt;&lt;p&gt;ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು. ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ &quot;ಉತ್ತಮ ಸ್ವಯಂಸೇವಕ&quot; ಪ್ರಶಸ್ತಿ ಲಭಿಸಿತ್ತು. ಅಷ್ಟೇ ಅಲ್ಲದೆ, 2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್&zwnj;ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು. ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಹೆಮ್ಮೆಯಾಗಿದ್ದನು. ಆತನ ಅಕಾಲಿಕ ಮರಣವು ಕುಟುಂಬದ ದೊಡ್ಡ ಶಕ್ಷಿಯನ್ನೇ ಕಳೆದುಕೊಂಡಂತಾಗಿದೆ.&lt;/p&gt;&lt;h2&gt;ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು&lt;/h2&gt;&lt;p&gt;ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಿಕೆವಿಕೆ ಆವರಣದಲ್ಲಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಯಲಹಂಕ ಪೊಲೀಸರು ಮಾಹಿತಿ ರವಾನಿಸಿದ್ದಾರೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.&lt;/p&gt;]]></content:encoded>
            <category>ballari</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/award-winning-gkvk-bengaluru-msc-agriculture-student-akash-dies-falling-from-tree-gdp/articleshow-zydgxy2"/>
        </item>
    </channel>
</rss>
