<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sat, 27 Jun 2026 16:24:26 +0530</lastBuildDate>
        <atom:link href="https://kannada.asianetnews.com/rss/bagalkot" rel="self" type="application/rss+xml"/>
        <item>
            <title><![CDATA[ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್‌ಗೆ ಡಿಮ್ಯಾಂಡ್]]></title>
            <link>https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f</link>
            <guid isPermaLink="true">https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f</guid>
            <pubDate>Sun, 24 May 2026 16:02:36 +0530</pubDate>
            <description><![CDATA[&lt;p&gt;ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕರ ಸಭೆಯಲ್ಲಿ, ರಾಜ್ಯಸಭಾ ಸಂಸದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ರೈಲು ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಬೇಡಿಕೆಗಳನ್ನು ಮಂಡಿಸಿದರು. ಹೊಸ ವಂದೇ ಭಾರತ್, ಬಾಗಲಕೋಟೆ-ಕುಡಚಿ ಮಾರ್ಗ, ಮತ್ತು ವಿಜಯಪುರ-ತಿರುಪತಿ ರೈಲು ಸೇರಿದಂತೆ ಹಲವು ಯೋಜನೆಗಳ ಕುರಿತು ಚರ್ಚಿಸಲಾಗಿದ್ದು, ಈ ಯೋಜನೆಗಳು ಪ್ರಾದೇಶಿಕ ಸಂಪರ್ಕ ಮತ್ತು ಆರ್ಥಿಕ ಬೆಳವಣಿಗೆಗೆ ಪೂರಕವಾಗಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kk9bp62qv9cthntcjy9jaten,imgname-chittur-railway-station-1773062002775.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಕುರಿತು ಮಹತ್ವದ ಸಭೆಯು ಹುಬ್ಬಳ್ಳಿಯಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕರೊಂದಿಗೆ ಶುಕ್ರವಾರ ನಡೆಯಿತು.&lt;/p&gt;&lt;p&gt;ಹುಬ್ಬಳ್ಳಿಯಲ್ಲಿ ಮಹಾ ವ್ಯವಸ್ಥಾಪಕ ಪಿ.ಅನಂತ್ ಅವರೊಂದಿಗೆ ಉತ್ತರ ಕರ್ನಾಟಕದ ರೈಲು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹೊಸ ರೈಲು ಸೇವೆಗಳ ವಿಸ್ತರಣೆ ಕುರಿತು ಮಹತ್ವದ ಚರ್ಚೆ ಸಭೆ ನಡೆಯಿತು. ಸಭೆಯಲ್ಲಿ ಮುಖ್ಯ ಇಂಜಿನಿಯರ್ ಹಾಗೂ ಹೆಚ್ಚುವರಿ ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು. ರಾಜ್ಯಸಭಾ ಸಂಸದರಾದ ನಾರಾಯಣಸಾ ಭಾಂಡಗೆ ಅವರು ಉತ್ತರ ಕರ್ನಾಟಕದ ಪ್ರಮುಖ ರೈಲು ಯೋಜನೆಗಳು ಮತ್ತು ಸಾರ್ವಜನಿಕ ಬೇಡಿಕೆಗಳಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಮಂಡಿಸಿದರು.&lt;/p&gt;&lt;h2&gt;ಹಲವು ರೈಲುಗಳ ವೆಚ್ಚ&lt;/h2&gt;&lt;p&gt;ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು, ಗದಗ-ಮುಂಬೈ ನಡುವೆ ಬಾಗಲಕೋಟೆ-ಸೊಲ್ಲಾಪುರ ಮಾರ್ಗವಾಗಿ ಹೊಸ ವಂದೇ ಭಾರತ್ ಎಕ್ಸಪ್ರೆಸ್&zwnj; ಆರಂಭಿಸುವುದು, ವಿಜಯಪುರ-ತಿರುಪತಿ ನೇರ ರೈಲು ಸೇವೆ ಆರಂಭಿಸುವ ಕುರಿತು, ಗೋಲ್ ಗುಂಬಜ್ ಎಕ್ಸ್ಪ್ರೆಸ್ (16535/16536) ರೈಲಿನ ವೇಗ ಹೆಚ್ಚಿಸುವುದು, ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣ, ಹುಬ್ಬಳ್ಳಿ-ಹಜ್ರತ್ ನಿಜಾಮುದ್ದೀನ್ ಎಕ್ಸಪ್ರೆಸ್&zwnj; (20647) ಸೇವೆಯನ್ನು ವಾರಕ್ಕೆ ಎರಡು ಬಾರಿ ವಿಸ್ತರಿಸುವುದು, ಬಸವ ಎಕ್ಸಪ್ರೆಸ್&zwnj; ರೈಲನ್ನು ಲೋಕಾಪುರವರೆಗೆ ವಿಸ್ತರಿಸುವುದು, ಬಾಗಲಕೋಟೆ ರೈಲು ನಿಲ್ದಾಣದ ಪ್ಲಾಟ್&zwnj; ಫಾರ್ಮ್&zwnj; ಸಂಖ್ಯೆ 2 ಮತ್ತು 3ರಲ್ಲಿ ಲಿಫ್ಟ್ ಅಳವಡಿಸುವ ಕುರಿತು ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ ಅವರು ಮಾತನಾಡಿದರು.&lt;/p&gt;&lt;h2&gt;ಪ್ರಯಾಣಿಕರ ಸೌಲಭ್ಯ ವೃದ್ಧಿಗೆ ಮಹತ್ವದ ಪಾತ್ರ&lt;/h2&gt;&lt;p&gt;ಈ ಯೋಜನೆಗಳು ಉತ್ತರ ಕರ್ನಾಟಕದ ಪ್ರಾದೇಶಿಕ ಸಂಪರ್ಕ, ಆರ್ಥಿಕ ಬೆಳವಣಿಗೆ, ಕೈಗಾರಿಕೆ ಅಭಿವೃದ್ಧಿ ಹಾಗೂ ಪ್ರಯಾಣಿಕರ ಸೌಲಭ್ಯ ವೃದ್ಧಿಗೆ ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು. ದಕ್ಷಿಣ ಪಶ್ಚಿಮ ರೈಲ್ವೆ ಮಹಾ ವ್ಯವಸ್ಥಾಪಕ ಪಿ. ಅನಂತ್ ಅವರು ಮಂಡಿಸಲಾದ ಪ್ರಸ್ತಾವನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/north-karnataka-railway-upgrades-and-gadag-mumbai-vande-bharat-proposed-gdp/articleshow-01rx96f"/>
        </item>
        <item>
            <title><![CDATA[ಸಿಎಂ ಘೋಷಿಸಿದ್ರೂ ವಿದ್ಯಾರ್ಥಿಗಳಿಗಿಲ್ಲ ಉಚಿತ ಪ್ರಯಾಣದ ಸೌಲಭ್ಯ! ಬಾರದ ಅಧಿಕೃತ ಸುತ್ತೋಲೆ]]></title>
            <link>https://kannada.asianetnews.com/karnataka-districts/despite-cm-dk-shivakumar-s-announcement-students-do-not-have-free-travel-facility-official-circular-yet-to-arrive-mrq/articleshow-3zswfuz</link>
            <guid isPermaLink="true">https://kannada.asianetnews.com/karnataka-districts/despite-cm-dk-shivakumar-s-announcement-students-do-not-have-free-travel-facility-official-circular-yet-to-arrive-mrq/articleshow-3zswfuz</guid>
            <pubDate>Tue, 09 Jun 2026 09:02:09 +0530</pubDate>
            <description><![CDATA[ರಾಜ್ಯ ಸರ್ಕಾರದ ಉಚಿತ ಬಸ್ ಪಾಸ್ ಘೋಷಣೆ ಇನ್ನೂ ಜಾರಿಗೆ ಬಂದಿಲ್ಲ. ಅಧಿಕೃತ ಸುತ್ತೋಲೆ ಬಾರದಿರುವುದರಿಂದ, ವಿದ್ಯಾರ್ಥಿಗಳು ಶುಲ್ಕ ಪಾವತಿಸಿ ಪಾಸ್ ಪಡೆಯುವಂತಾಗಿದ್ದು, ಇದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktn6wjgx150sdje0m51z7b9e,imgname-free-bus-service-for-karnataka-male-students-1780975815197.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ&lt;/strong&gt;: &amp;nbsp;ಜೂನ್&zwnj; 3ರಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಸಂಪುಟ ಸಭೆಯಲ್ಲಿ 6 ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದ್ದ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಘೋಷಣೆಯ ವಿದ್ಯಾರ್ಥಿಗಳಿಗೆ ಉಚಿತ ಬಸ್&zwnj; ಪಾಸ್&zwnj; ಯೋಜನೆ ಅನುಷ್ಠಾನಕ್ಕೆ ಬಾರದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.&amp;nbsp;&lt;/p&gt;&lt;p&gt;ಸಾರಿಗೆ ಇಲಾಖೆಗೆ ಇನ್ನೂ ಅಧಿಕೃತವಾಗಿ ಸುತ್ತೋಲೆ ಬಾರದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಹೀಗಾಗಿ ಈ ಕೂಡಲೇ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣದ ಭರವಸೆ ನೀಡಿರುವ ಮುಖ್ಯಮಂತ್ರಿಗಳ ಭರವಸೆಯನ್ನು ಅನುಷ್ಠಾನಕ್ಕೆ ತರುವಂತೆ ಪೋಷಕರು ಕೂಡ ಒತ್ತಾಯಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;6 ನಿರ್ಣಯ ಘೋಷಿಸಿರುವ ಸಿಎಂ ಡಿಕೆ ಶಿವಕುಮಾರ್&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಯುವ ಯುಗ ಪ್ರಾರಂಭಿಸಲಾಗುವುದು, ಯುವ ಕೇಂದ್ರಿತ ಸೇರಿ ಒಟ್ಟು 6 ನಿರ್ಣಯಗಳನ್ನು ಘೋಷಿಸಿದ್ದರು. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್&zwnj; ಪಾಸ್&zwnj;, ರಾಜ್ಯಾದ್ಯಂತ ಹತ್ತು ಸಾವಿರ ಯುವ ಸಂಘಗಳ ರಚನೆ, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಬಿ ಖಾತಾ ದಿಂದ ಎ ಖಾತಾಗೆ ಬದಲಾವಣೆ, ಒಸಿ, ಸಿಸಿ ಇಲ್ಲದಿದ್ದರೂ ನೀರು ಮತ್ತು ವಿದ್ಯುತ್&zwnj; ಸಂಪರ್ಕ ಕಲ್ಪಿಸುವುದು ಸೇರಿ ಬೆಂಗಳೂರು ರಸ್ತೆಗಳಿಗೆ ₹ 2,000 ಕೋಟಿ ಅನುದಾನದ 6 ಹೊಸ ಯೋಜನೆಗಳನ್ನು ಘೋಷಿಸಿದ್ದರು. ಆದರೆ, ಘೋಷಣೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬಡ ವಿದ್ಯಾರ್ಥಿಗಳ ಪಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ರಾಜ್ಯದಲ್ಲಿ ಸ್ತ್ರೀಶಕ್ತಿ ಯೋಜನೆ ಜಾರಿಯಲ್ಲಿರುವುದರಿಂದ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಅವಕಾಶವಿದೆ. ಇನ್ನು ಹೊಸ ಯೋಜನೆ ಘೋಷಣೆಯಿಂದಾಗಿ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣದ ಪಾಸ್&zwnj; ವಿಸ್ತರಣೆಯಾಗುತ್ತದೆ ಎಂದು ನಂಬಲಾಗಿತ್ತು. ಆದರೆ, 6 ದಿನಗಳಾದರೂ ವಿದ್ಯಾರ್ಥಿಗಳಿಗೆ ಉಚಿತ ಬಸ್&zwnj; ಪಾಸ್&zwnj;ಗಳು ದೊರಕುತ್ತಿಲ್ಲ.&amp;nbsp;&lt;/p&gt;&lt;p&gt;ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ₹ 1050 ಹಣವನ್ನು ಭರಿಸಿ ಬಸ್&zwnj; ಪಾಸ್&zwnj; ಪಡೆಯಬಹುದಾಗಿದ್ದು, ಪ್ರೌಢಶಾಲೆ ವಿದ್ಯಾರ್ಥಿಗಳು ₹ 750 ಶುಲ್ಕದೊಂದಿಗೆ ಪಾಸ್&zwnj; ಪಡೆಯುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಯೋಜನೆಯಿಂದ ರಾಜ್ಯದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ, ಇದಕ್ಕಾಗಿ ₹ 1,700 ಕೋಟಿ ವೆಚ್ಚ ಹಾಗೂ ಉಚಿತ ವಿದ್ಯುತ್&zwnj; ರೀತಿ ಸ್ಕೀಮ್&zwnj; ಸಾರಾಸಗಟಾಗಿ ಎಲ್ಲ ವಿದ್ಯಾರ್ಥಿಗಳಿಗೆ ಲಾಭವಾಗಲಿದ್ದು, ಅರ್ಜಿ ಸಲ್ಲಿಸಿದವರಿಗೆ ಮಾತ್ರ ಯೋಜನೆಯ ಲಾಭ ಸಿಗಲಿದೆ ಎಂದೆಲ್ಲ ಸರ್ಕಾರ ಹೇಳಿತ್ತು. ಆದರೆ, ಇದು ವರೆಗೂ ಯೋಜನೆ ಜಾರಿಗೆ ಅಧಿಕೃತ ಆದೇಶ ಹೊರ ಬರದ ಕಾರಣ ಶುಲ್ಕ ಪಾವತಿಸಿ ಪಾಸ್&zwnj;ಗಳನ್ನು ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳು ಏನು ಹೇಳ್ತಾರೆ?&lt;/strong&gt;&lt;/h3&gt;&lt;p&gt;ಸರ್ಕಾರದ ಅಧಿಕೃತ ಆದೇಶ (ಸುತ್ತೋಲೆ) ಇನ್ನೂ ಬಂದಿಲ್ಲ. ಆದ್ದರಿಂದ ಮೊದಲಿನಂತೆ ಕಾಲೇಜು ವಿದ್ಯಾರ್ಥಿಗಳಿಗೆ ₹ 1050 ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ₹ 750 ಶುಲ್ಕ ಭರಿಸಿ ಬಸ್&zwnj; ಪಾಸ್&zwnj;ಗಳನ್ನು ಪಡೆಯಬಹುದಾಗಿದೆ. ಸರ್ಕಾರದಿಂದ ಸಧ್ಯದಲ್ಲೇ ಆದೇಶ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಆದೇಶ ಹೊರ ಬಂದ ನಂತರ ಪಾಲನೆಯಾಗಲಿದೆ. ಈಗಾಗಲೇ ಬಸ್&zwnj; ಪಾಸ್&zwnj;ಗಳನ್ನು ಪಡೆದ ವಿದ್ಯಾರ್ಥಿಗಳು ಸರ್ಕಾರದ ಆದೇಶ ವಿದ್ದಲ್ಲಿ ತುಂಬಿದ ಹಣವನ್ನು ಮರು ಪಾವತಿ ಮಾಡಲಾಗುವುದು ಎಲ್ಲದಕ್ಕೂ ಮೊದಲು ಸುತ್ತೋಲೆ ಬರಬೇಕು ಎಂದು ಡಿಪೋ ಮ್ಯಾನೇಜರ್ ಎಸ್.ಬಿ.ಗಸ್ತಿ ಹೇಳುತ್ತಾರೆ.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/despite-cm-dk-shivakumar-s-announcement-students-do-not-have-free-travel-facility-official-circular-yet-to-arrive-mrq/articleshow-3zswfuz"/>
        </item>
        <item>
            <title><![CDATA[ಕರ್ನಾಟಕದಿಂದ ಸೋಲಾಪುರ ಮಾರ್ಗವಾಗಿ ಹೋಗುವ ಹಲವು ರೈಲು ಸಂಚಾರ ನಿರ್ಬಂಧ, ಜೂ. 5ರಿಂದ10ರವರೆಗೆ ಹಲವು ಟ್ರೈನ್ ರದ್ದು!]]></title>
            <link>https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</link>
            <guid isPermaLink="true">https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep</guid>
            <pubDate>Fri, 05 Jun 2026 12:14:53 +0530</pubDate>
            <description><![CDATA[ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ನಡೆಯುತ್ತಿರುವ ಮೇಲ್ದರ್ಜೆ ಕಾಮಗಾರಿಯಿಂದಾಗಿ ಕೇಂದ್ರ ರೈಲ್ವೆಯು ಜೂನ್ 5 ರಿಂದ 10 ರವರೆಗೆ ಹಲವು ರೈಲುಗಳ ಸಂಚಾರವನ್ನು ನಿರ್ಬಂಧಿಸಿದೆ. ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರ ನಿಯಂತ್ರಣ, ಮಾರ್ಗ ಬದಲಾವಣೆ ಹಾಗೂ ಸೋಲಾಪುರ-ಕಲಬುರಗಿ ವಿಶೇಷ ರೈಲು ರದ್ದತಿಯಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ks4rgymmydvxhdywfct5zw88,imgname-indian-railways--2--1779350141588.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ಸೋಲಾಪುರ ಬಳಿಯ ಟಿಕೇಕರವಾಡಿ ಯಾರ್ಡ್&zwnj;ನಲ್ಲಿ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಇಂಟರ್&zwnj;ಲಾಕಿಂಗ್&zwnj;ನ್ನು ನಿಯೋಜಿಸಲು ಪೂರ್ವ-ಇಂಟರ್&zwnj;ಲಾಕಿಂಗ್ ಅಲ್ಲದ ಮತ್ತು ಇಂಟರ್&zwnj;ಲಾಕಿಂಗ್ ಅಲ್ಲದ ಕೆಲಸದಿಂದಾಗಿ ಜೂನ್ 5ರಿಂದ 10ರವರೆಗೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಹಲವು ರೈಲುಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಿದೆ.&lt;/p&gt;&lt;h2&gt;ನಿಯಂತ್ರಣ ಯಾವ ರೈಲುಗಳ ಮೇಲೆ ?&lt;/h2&gt;&lt;p&gt;ಜೂನ್&zwnj; 5 ರಂದು ರೈಲು ಸಂಖ್ಯೆ 11311 ಸೋಲಾಪುರ-ಹಾಸನ ಎಕ್ಸ್&zwnj;ಪ್ರೆಸ್ ಹಾಗೂ ರೈಲು ಸಂಖ್ಯೆ 17308 ಬಾಗಲಕೋಟೆ- ಮೈಸೂರು ಬಸವಾ ಎಕ್ಸ್&zwnj;ಪ್ರೆಸ್ ಸಂಚಾರದ ಮೇಲೆ 45 ನಿಮಿಷಗಳ ನಿಯಂತ್ರಣವಿರಲಿದೆ. ಜೂ. 8 ರಂದು ರೈಲು ಸಂಖ್ಯೆ 18520 ಎಲ್&zwnj;ಟಿಟಿ ಮುಂಬೈ- ವಿಶಾಖಪಟ್ಟಣ ಎಕ್ಸ್&zwnj;ಪ್ರೆಸ್ಜೂ 2 ಗಂಟೆ, ರೈಲು ಸಂಖ್ಯೆ 01465 ಸೋಲಾಪುರ-ಕಲಬುರಗಿ ವಿಶೇಷ 1 ಗಂಟೆ 30 ನಿಮಿಷ, ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ 30 ನಿಮಿಷ, ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 30 ನಿಮಿಷ ನಿಯಂತ್ರಣದಲ್ಲಿರಲಿವೆ.&lt;/p&gt;&lt;p&gt;ಜೂನ್&zwnj; 9 ರಂದು ರೈಲು ಸಂಖ್ಯೆ 16382 ಕನ್ಯಾಕುಮಾರಿ-ಪುಣೆ ಎಕ್ಸ್&zwnj;ಪ್ರೆಸ್ 1 ಗಂಟೆ 15 ನಿಮಿಷ, ರೈಲು ಸಂಖ್ಯೆ 11020 ಭುವನೇಶ್ವರ- ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ 40 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.&lt;/p&gt;&lt;h2&gt;ಕೆಲವು ರೈಲು ಮಾರ್ಗ ಬದಲಾವಣೆ:&lt;/h2&gt;&lt;p&gt;ರೈಲು ಸಂಖ್ಯೆ 57662 ವಿಜಯಪುರ-ರಾಯಚೂರು ಪ್ಯಾಸೆಂಜರ್ ಜೂ. 5 ರಿಂದ 10 ರ ವರೆಗೆ ವಿಜಯಪುರ-ಹೋಟ್ಗಿ-ವಾಡಿ ಮಾರ್ಗ, ರೈಲು ಸಂಖ್ಯೆ 57661 ರಾಯಚೂರು-ವಿಜಯಪುರ ಪ್ಯಾಸೆಂಜರ್ ವಾಡಿ-ಹೋಟ್ಗಿ-ವಿಜಯಪುರ ಮೂಲಕ ಮಾರ್ಗ ಬದಲಾವಣೆ ಮಾಡಲಾಗುತ್ತದೆ.&lt;/p&gt;&lt;p&gt;ಕೆಳಗಿನ ರೈಲುಗಳನ್ನು ನಿರ್ದಿಷ್ಟಪಡಿಸಿದಂತೆ ಮರುಹೊಂದಿಸಲಾಗುತ್ತದೆ. ರೈಲು ಸಂಖ್ಯೆ 16536 ಪಂಢರಪುರ-ಮೈಸೂರು ಗೋಲ್ಗುಂಬಜ್ ಎಕ್ಸ್&zwnj;ಪ್ರೆಸ್ ಜೂ. 10 ರಂದು 2 ಗಂಟೆ 20 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 11301 ಸಿಎಸ್&zwnj;ಎಂಟಿ ಮುಂಬೈ-ಕೆಎಸ್&zwnj;ಆರ್ ಬೆಂಗಳೂರು ಉದ್ಯಾನ ಎಕ್ಸ್&zwnj;ಪ್ರೆಸ್ 2 ಗಂಟೆ 15 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 01465 ಸೋಲಾಪುರ- ಕಲಬುರಗಿ ಮತ್ತು ರೈಲು ಸಂಖ್ಯೆ 01466 ಕಲಬುರಗಿ- ಸೋಲಾಪುರ ಈ ರೈಲು ಜೂ. 10 ರಂದು ರದ್ದು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/solapur-division-rail-traffic-hit-kalaburagi-vijayapura-sections-check-schedule-changes-for-golgumbaz-express-trains-gdp/articleshow-61dg8ep"/>
        </item>
        <item>
            <title><![CDATA[ಕಲಾದಗಿಯ 2004-05ನೇ ಸಾಲಿನ SSLC ವಿದ್ಯಾರ್ಥಿಗಳಿಂದ ಅಪೂರ್ವ ಗುರುವಂದನೆ & ಸ್ನೇಹ ಸಮ್ಮಿಲನ]]></title>
            <link>https://kannada.asianetnews.com/karnataka-districts/bagalkote-kaladagi-a-unique-guru-vandana-and-friendship-gathering-by-sslc-students-of-2004-and-2000-mrq/articleshow-6hyt6i0</link>
            <guid isPermaLink="true">https://kannada.asianetnews.com/karnataka-districts/bagalkote-kaladagi-a-unique-guru-vandana-and-friendship-gathering-by-sslc-students-of-2004-and-2000-mrq/articleshow-6hyt6i0</guid>
            <pubDate>Mon, 18 May 2026 10:50:49 +0530</pubDate>
            <description><![CDATA[ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ತಮಗೆ ಜ್ಞಾನ ನೀಡಿದ ಗುರುಗಳನ್ನು ಗೌರವಿಸಲು ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01krwr517dtvsss8dbhxyra6dv,imgname-sslc-students-1779081315565.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಅಕ್ಷರ ಜ್ಞಾನ ಕಲಿಸಿದ ಗುರುಗಳನ್ನು ಜೀವಮಾನಪೂರ್ತಿ ಮರೆಯಲು ಸಾಧ್ಯವಿಲ್ಲ. ಅಂತಹ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಕಿರು ಗುರುಕಾಣಿಕೆ ನೀಡಿ ಗೌರವಿಸಿ ಸನ್ಮಾನ ಮಾಡಿರುವುದು ಅಭೂತಪೂರ್ವ ಕಾರ್ಯಕ್ರಮ ಎಂದು ಹಣ್ಣು ಬೆಳೆಗಾರರ ಸಂಘದ ಉಪಾಧ್ಯಕ್ಷ ಎಸ್.ಬಿ. ಅಂಗಡಿ ಅಭಿಪ್ರಾಯಪಟ್ಟರು.&lt;/p&gt;&lt;p&gt;ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ 2004-05ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.&lt;/p&gt;&lt;p&gt;ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಟಿ.ಪಾಟೀಲ, ಕಾರ್ಯದರ್ಶಿ ವಿ.ಜಿ.ದೇಶಪಾಂಡೆ, ಶಿಕ್ಷಕ ಎಂ.ಆರ್.ದೇಶಪಾಂಡೆ, ಶಿಕ್ಷಕ ಬಿ.ಎಲ್. ವಾಸನದ, ಎಸ್.ಎಂ. ಸೂಳಿಕೇರಿ, ಟಿ.ವಿ. ನರಸನ್ನವರ, ಎಂ.ವೈ. ಹುಲ್ಲಿಕೇರಿ, ಯು.ಎಲ್. ಕಾಂಬಳೆ, ಎಂ.ಕೆ. ಧಾರವಾಡ ಮಾತನಾಡಿದರು.&lt;/p&gt;&lt;p&gt;ಹಣ್ಣು ಬೆಳೆಗಾರರ ಸಂಘದ .ಕಾರ್ಯದರ್ಶಿ ಎಸ್.ಆರ್. ವಾಘ್, ಕೋಶಾಧ್ಯಕ್ಷ ಕೆ.ಎಲ್. ಬಿಲಕೇರಿ, ಹ.ಬೆ.ವಿ.ಸಂ ಅಧ್ಯಕ್ಷ ಕೆ.ಟಿ.ಪಾಟೀಲ, ಮುಖ್ಯಶಿಕ್ಷಕ ಆರ್.ವಿ.ಜಾಧವ, ಶ್ರೀಕಾಂತ ಕೆರಕಲಮಟ್ಟಿ, ಶಿಕ್ಷಕ ಆರ್.ಪಿ.ಜೋಶಿ, ಎಸ್.ಎಂ.ಕಲವಾರ್, ಪಿ.ಎಚ್.ಕವಡಿಮಟ್ಟಿ, ಯು.ಎಸ್.ರಾಜನಾಳ, ಕೆ.ಆರ್.ಜೋಶಿ, ಜಿ.ಆರ್.ಹಂಜಾಟೆ, ಜಿ.ಕೆ.ಹೊಸಮನಿ, ವಾಯ್.ಆರ್.ಮಕಾಣಿ, ಪಿ.ಆಯ್.ಕುಲಕರ್ಣಿ, ಎ.ಜಿ.ಅಚನೂರ, ಐ.ಕೆ.ಪತ್ತಾರ, ಬಿ.ಎಂ.ತೆಗ್ಗಿ, ಎಂ.ಎಂ.ಮಂಟೂರು, ಆರ್.ವಾಯ್.ವಾಸನದ ಇನ್ನಿತರರು ಇದ್ದರು.&lt;/p&gt;&lt;h2&gt;&lt;strong&gt;ಮುಧೋಳ: .ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ&lt;/strong&gt;&lt;/h2&gt;&lt;p&gt;ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರ ಜನ್ಮ ಜಯಂತಿ ನಿಮಿತ್ತ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಮಿತಿ ಮುಧೋಳ ವತಿಯಿಂದ ಭಾನುವಾರ ನಗರದ ಲಕ್ಷ್ಮೀ ದೇವಸ್ಥಾನದ ಸಭಾಭವನದಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಎಂಜಿನಿಯರಿಂಗ್ ಮತ್ತಿತರ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಓದಿದ ಶಾಲೆಗೆ 25 ವರ್ಷದ ಬಳಿಕ ಮರಳಿದ 1999-2001 ಬ್ಯಾಚ್&zwnj;ನ ವಿದ್ಯಾರ್ಥಿಗಳು: ಭಾವನಾತ್ಮಕ ಸಮಾರಂಭ&lt;/strong&gt;&lt;/p&gt;&lt;p&gt;ಮುಖ್ಯ ವಕ್ತಾರರಾಗಿದ್ದ ನಂದು ಗಾಯಕವಾಡ, ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ಸೇವಾ ಸಮಿತಿ ಮುಧೋಳ ಘಟಕದ ಅಧ್ಯಕ್ಷ ರಾಜೇಶ ಗೋರ್ಪಡೆ, ಉಪಾಧ್ಯಕ್ಷ ಪರಶುರಾಮ ನಿಗಡೆ, ಕಿಶೋರ ಕೋರ್ಪಡೆ, ವಿಠ್ಠಲ ಜಾಂಬ್ರೆ, ವಿಠ್ಠಲ ಕುಡೆ, ಪರಶುರಾಮ ಕದಂ, ಗೋವಿಂದ ಕೂಡಗ, ವಿಜಯ ಶಿಂಧೆ, ಸತೀಶ ಗೋರ್ಪಡೆ, ಸುರೇಶ ಪವಾರ್, ಸಂಜು ನಿಗಡೆ, ಸಂಜು ಗೋರ್ಪಡೆ, ಸಚಿನ್ ಗೋರ್ಪಡೆ, ಸುರೇಶ ಕೋಡಗ, ದೇವಾ ತೋರತ್&zwnj; ಹಾಗೂ ಮಾತೆಯರು, ಹಿರಿಯರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-kaladagi-a-unique-guru-vandana-and-friendship-gathering-by-sslc-students-of-2004-and-2000-mrq/articleshow-6hyt6i0"/>
        </item>
        <item>
            <title><![CDATA[ಗಮನಿಸಿ, ಮೇ 20 ರಿಂದ ಜೂನ್ 2ರವರೆಗೆ ಮಂಗಳೂರಿನಿಂದ ಹೊರಡುವ ಎಲ್ಲಾ ರೈಲುಗಳ ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ!]]></title>
            <link>https://kannada.asianetnews.com/state/mangaluru-train-service-changes-and-diversions-important-update-for-passengers-gdp/articleshow-crgr4np</link>
            <guid isPermaLink="true">https://kannada.asianetnews.com/state/mangaluru-train-service-changes-and-diversions-important-update-for-passengers-gdp/articleshow-crgr4np</guid>
            <pubDate>Tue, 19 May 2026 14:30:18 +0530</pubDate>
            <description><![CDATA[ನೈಋತ್ಯ ರೈಲ್ವೆಯ ತಿರುವನಂತಪುರಂ ವಿಭಾಗದಲ್ಲಿ ಹಳಿ ನಿರ್ವಹಣೆ ಹಿನ್ನೆಲೆ, ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ವಿಜಯಪುರ ಎಕ್ಸ್&zwnj;ಪ್ರೆಸ್ ಭಾಗಶಃ ರದ್ದಾಗಿದ್ದು, ಅಂತ್ಯೋದಯ ಮತ್ತು ಮಾವೇಲಿ ಎಕ್ಸ್&zwnj;ಪ್ರೆಸ್ ಸೇರಿದಂತೆ ಇತರ ರೈಲುಗಳನ್ನು ಬೇರೆ ಮಾರ್ಗದಲ್ಲಿ ಓಡಿಸಲಾಗುವುದು ಅಥವಾ ನಿರ್ಬಂಧಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01krz88fbv14wssd5ty2r0k3xs,imgname-2-1779165314427.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ನೈಋತ್ಯ ರೈಲ್ವೆಯ ತಿರುವನಂತಪುರಂ ವಿಭಾಗದಲ್ಲಿ ವಿವಿಧ ದಿನಗಳಲ್ಲಿ ಹಳಿ ನಿರ್ವಹಣಾ ಕಾರ್ಯಗಳಿಗೆ ಅನುಕೂಲವಾಗುವಂತೆ, ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್&zwnj;ನಿಂದ ಮೇ 20ರಂದು ಹೊರಡುವ ರೈಲು ಸಂಖ್ಯೆ 17378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್&zwnj;ಪ್ರೆಸ್ ಪ್ರಯಾಣವನ್ನು ಬಾಗಲಕೋಟೆಯಲ್ಲಿ ಅಲ್ಪಾವಧಿಗೆ ಸ್ಥಗಿತಗೊಳಿಸಲಾಗುವುದು. ಈ ರೈಲು ಸೇವೆಯನ್ನು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗುವುದು.&lt;/p&gt;&lt;h2&gt;ವಿಜಯಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದು&lt;/h2&gt;&lt;p&gt;ಮೇ 21 ರಂದು ವಿಜಯಪುರದಿಂದ ಹೊರಡುವ ರೈಲು ಸಂಖ್ಯೆ 17377 ವಿಜಯಪುರ - ಮಂಗಳೂರು ಸೆಂಟ್ರಲ್ ಎಕ್ಸ್&zwnj;ಪ್ರೆಸ್ ಪ್ರಯಾಣವು ಸಂಜೆ 5ಗಂಟೆಗೆ ಬಾಗಲಕೋಟೆಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಈ ರೈಲು ಸೇವೆಯನ್ನು ವಿಜಯಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದುಗೊಳಿಸಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.&lt;/p&gt;&lt;p&gt;ತಿರುವನಂತಪುರಂ ಉತ್ತರದಿಂದ ಮೇ 28 ಮತ್ತು 30ರಂದು ಹೊರಡುವ ರೈಲು ಸಂಖ್ಯೆ 16355 ತಿರುವನಂತಪುರಂ ಉತ್ತರ - ಮಂಗಳೂರು ಜಂಕ್ಷನ್ ಅಂತ್ಯೋದಯ ಎಕ್ಸ್&zwnj;ಪ್ರೆಸ್ ಅನ್ನು ಆಲಪ್ಪುಳ ಮತ್ತು ಎರ್ನಾಕುಲಂ ಜಂಕ್ಷನ್&zwnj;ನಲ್ಲಿ ನಿಲುಗಡೆಗಳನ್ನು ಬಿಟ್ಟು ಕೊಟ್ಟಾಯಂ ಮೂಲಕ ಓಡಿಸಲಾಗುತ್ತದೆ. ಚೆಂಗನ್ನೂರು, ಕೊಟ್ಟಾಯಂ ಮತ್ತು ಎರ್ನಾಕುಲಂ ಪಟ್ಟಣದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗುತ್ತದೆ.&lt;/p&gt;&lt;h2&gt;ಮಾವೇಲಿ ಎಕ್ಸ್&zwnj;ಪ್ರೆಸ್ ರೈಲು&lt;/h2&gt;&lt;p&gt;ಮೇ 29 ರಂದು ಹೊರಡುವ ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್ ರೈಲು, ಆಲಪ್ಪುಳ, ಅಂಬಲಪ್ಪುಳ ಮತ್ತು ಹರಿಪಾಡ್&zwnj;ನಲ್ಲಿ ನಿಲುಗಡೆಗಳನ್ನು ಬಿಟ್ಟು ಕೊಟ್ಟಾಯಂ ಮೂಲಕ ಓಡಿಸಲಾಗುತ್ತದೆ. ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಶ್ಶೇರಿ, ತಿರುವಲ್ಲಾ ಮತ್ತು ಚೆಂಗನ್ನೂರ್&zwnj;ನಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗುತ್ತದೆ.&lt;/p&gt;&lt;p&gt;ಮೇ 29 ರಂದು ಹೊರಡುವ ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ನಿಂದ ವಾರಕ್ಕೆ ಎರಡು ಬಾರಿ ಪ್ರಯಾಣಿಸುವ ರೈಲು ಸಂಖ್ಯೆ 22207 ಡಾ.ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ ಅನ್ನು ಎರ್ನಾಕುಲಂ ಜಂಕ್ಷನ್ ಮತ್ತು ಆಲಪ್ಪುಳದಲ್ಲಿ ನಿಲುಗಡೆಗಳನ್ನು ಬಿಟ್ಟು ಕೊಟ್ಟಾಯಂ ಮೂಲಕ ಓಡಿಸಲಾಗುತ್ತದೆ. ಎರ್ನಾಕುಲಂ ಟೌನ್, ಕೊಟ್ಟಾಯಂ ಮತ್ತು ಚೆಂಗನ್ನೂರಿನಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಒದಗಿಸಲಾಗುತ್ತದೆ.&lt;/p&gt;&lt;h2&gt;40 ನಿಮಿಷಗಳ ಕಾಲ ನಿರ್ಬಂಧ&lt;/h2&gt;&lt;p&gt;ಮಂಗಳೂರು ಸೆಂಟ್ರಲ್ ನಿಂದ ಮೇ 27, 28, 30 ಮತ್ತು ಜೂನ್ 1, 2ರಂದು ಹೊರಡುವ ರೈಲು ಸಂಖ್ಯೆ 16603 ಮಂಗಳೂರು ಸೆಂಟ್ರಲ್ - ತಿರುವನಂತಪುರಂ ಸೆಂಟ್ರಲ್ ಮಾವೇಲಿ ಎಕ್ಸ್&zwnj;ಪ್ರೆಸ್, ಮಾರ್ಗದಲ್ಲಿ 40 ನಿಮಿಷಗಳ ಕಾಲ ನಿರ್ಬಂಧಿಸಲಾಗುತ್ತದೆ.&lt;/p&gt;&lt;p&gt;ರೈಲು ಸಂಖ್ಯೆ 16356 ಮಂಗಳೂರು ಜಂಕ್ಷನ್ - ತಿರುವನಂತಪುರಂ ಉತ್ತರ ಎರಡು ವಾರಗಳ ಅಂತ್ಯೋದಯ ಎಕ್ಸ್&zwnj;ಪ್ರೆಸ್, ಮೇ 29ರಂದು ಮಂಗಳೂರು ಜಂಕ್ಷನ್&zwnj;ನಿಂದ ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 30 ನಿಮಿಷಗಳ ಕಾಲ ನಿರ್ಬಂಧಿಸಲಾಗುವುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/state/mangaluru-train-service-changes-and-diversions-important-update-for-passengers-gdp/articleshow-crgr4np"/>
        </item>
        <item>
            <title><![CDATA[ರೈಲು ಪ್ರಯಾಣಿಕರೇ ಗಮನಿಸಿ: ಜೂನ್ 1ರಿಂದ ಕಲಬುರಗಿ, ಗಾಣಗಾಪುರ ಮಾರ್ಗದ ಪ್ರಮುಖ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ!]]></title>
            <link>https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</link>
            <guid isPermaLink="true">https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao</guid>
            <pubDate>Sat, 30 May 2026 19:39:57 +0530</pubDate>
            <description><![CDATA[ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಕಲಬುರಗಿ, ಗಾಣಗಾಪುರ ರಸ್ತೆ, ಮತ್ತು ಹೊಟ್ಲಿ ನಿಲ್ದಾಣಗಳ ಮೂಲಕ ಹಾದುಹೋಗುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ. ಈ ಹೊಸ ವೇಳಾಪಟ್ಟಿಯು ಜೂನ್ 1 ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ನವೀಕೃತ ಸಮಯವನ್ನು ಪರಿಶೀಲಿಸಲು ಸೂಚಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knzr06zeea1hqff78krd0yts,imgname-indian-railways-2026-reforms-vande-bharat-sleeper-hydrogen-train-ticket-refund-cancellation-board-change-policy-2-1775960595438.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ: &lt;/strong&gt;ರೈಲು ಪ್ರಯಾಣಿಕರ ಅನುಕೂಲತೆ, ಕಟ್ಟುನಿಟ್ಟಿನ ಸಮಯಪಾಲನೆ ಹಾಗೂ ರೈಲು ಕಾರ್ಯಾಚರಣೆಯ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ವಲಯದ ವ್ಯಾಪ್ತಿಗೆ ಬರುವ ಕಲಬುರಗಿ, ಗಾಣಗಾಪುರ ರಸ್ತೆ ಹಾಗೂ ಹೊಟ್ಲಿ ರೈಲು ನಿಲ್ದಾಣಗಳ ಮಾರ್ಗವಾಗಿ ಸಂಚರಿಸುವ ಕೆಲವು ಪ್ರಮುಖ ಎಕ್ಸ್&zwnj;ಪ್ರೆಸ್ ಮತ್ತು ಸಾಪ್ತಾಹಿಕ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.&lt;/p&gt;&lt;p&gt;ಈ ನೂತನ ಪರಿಷ್ಕೃತ ವೇಳಾಪಟ್ಟಿಯು ಜೂನ್ 1ರಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ಈ ಕೆಳಗಿನ ಬದಲಾವಣೆಗಳನ್ನು ಕಡ್ಡಾಯವಾಗಿ ಗಮನಿಸಬೇಕಿದೆ.&lt;/p&gt;&lt;h2&gt;ನಿಲ್ದಾಣವಾರು ಪರಿಷ್ಕೃತ ವೇಳಾಪಟ್ಟಿಯ ಸಂಪೂರ್ಣ ವಿವರಗಳು:&lt;/h2&gt;&lt;p&gt;ವಿವಿಧ ರೈಲು ನಿಲ್ದಾಣಗಳಲ್ಲಿ ರೈಲುಗಳ ಆಗಮನ (Arrival) ಮತ್ತು ನಿರ್ಗಮನ (Departure) ಸಮಯವನ್ನು ಬದಲಾಯಿಸಲಾಗಿದ್ದು, ಅದರ ಅಧಿಕೃತ ಮಾಹಿತಿ ಇಲ್ಲಿದೆ.&lt;/p&gt;&lt;h3&gt;1. ಹೊಟ್ಲಿ ರೈಲು ನಿಲ್ದಾಣ (Hotgi Station)&lt;/h3&gt;&lt;p&gt;ಬಾಗಲಕೋಟೆ - ಮೈಸೂರು ಬಸವ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17308): ಈ ರೈಲಿನ ಸಂಚಾರ ಸಮಯವನ್ನು 10 ನಿಮಿಷಗಳಷ್ಟು ಮುಂಚಿತಗೊಳಿಸಲಾಗಿದೆ. ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಸಂಜೆ 6:18ಕ್ಕೆ ಹೊಟ್ಲಿ ನಿಲ್ದಾಣಕ್ಕೆ ಆಗಮಿಸಿ, 6:20ಕ್ಕೆ ಮೈಸೂರಿನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ.&lt;/p&gt;&lt;h3&gt;2. ಗಾಣಗಾಪುರ ರಸ್ತೆ ನಿಲ್ದಾಣ (Ganagapur Road Station)&lt;/h3&gt;&lt;p&gt;ಹೈದರಾಬಾದ್ - ಎಸ್&zwnj;ಎಸ್&zwnj;ಎಸ್ ಹುಬ್ಬಳ್ಳಿ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 17050): ದತ್ತಾತ್ರೇಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರಮುಖವಾಗಿರುವ ಈ ರೈಲಿನ ಸಮಯದಲ್ಲೂ ಮಾರ್ಪಾಡು ಮಾಡಲಾಗಿದೆ. ಜೂನ್ 1ರಿಂದ ಈ ರೈಲು ರಾತ್ರಿ 8:28ಕ್ಕೆ ನಿಲ್ದಾಣಕ್ಕೆ ಆಗಮಿಸಲಿದ್ದು, ರಾತ್ರಿ 8:30ಕ್ಕೆ ಹುಬ್ಬಳ್ಳಿಯ ಕಡೆಗೆ ಹೊರಡಲಿದೆ.&lt;/p&gt;&lt;h3&gt;3. ಕಲಬುರಗಿ ರೈಲು ನಿಲ್ದಾಣ (Kalaburagi Junction)&lt;/h3&gt;&lt;p&gt;ಕಲಬುರಗಿ ನಿಲ್ದಾಣದ ಮೂಲಕ ಹಾದುಹೋಗುವ ಹಲವು ದೂರಪ್ರಯಾಣದ ಮತ್ತು ಸಾಪ್ತಾಹಿಕ ಪ್ರೀಮಿಯಂ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ:&lt;/p&gt;&lt;ul&gt; &lt;li&gt;ಚೆನ್ನೈ ಸೆಂಟ್ರಲ್ - ಸಿಎಸ್&zwnj;ಎಂಟಿ ಮುಂಬೈ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22160): ಜೂನ್ 1ರಿಂದ ಅನ್ವಯವಾಗುವಂತೆ ಈ ರೈಲು ಮಧ್ಯರಾತ್ರಿ ನಂತರ 1:50ಕ್ಕೆ ಕಲಬುರಗಿ ನಿಲ್ದಾಣಕ್ಕೆ ಆಗಮಿಸಿ, 1:53ಕ್ಕೆ ಮುಂಬೈ ಕಡೆಗೆ ಹೊರಡಲಿದೆ.&lt;/li&gt; &lt;li&gt;ಚೆನ್ನೈ ಸೆಂಟ್ರಲ್ - ಸಾಯಿನಗರ ಶಿರಡಿ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22601): ಈ ಸಾಪ್ತಾಹಿಕ ರೈಲಿನ ಹೊಸ ಸಮಯವು ಜೂನ್ 3 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ನಿರ್ಗಮಿಸಲಿದೆ.&lt;/li&gt; &lt;li&gt;ಯಶವಂತಪುರ - ಜೈಪುರ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 20667): ಈ ರೈಲಿನ ಪರಿಷ್ಕೃತ ಸಮಯವು ಜೂನ್ 4 ರಿಂದ ಜಾರಿಗೆ ಬರಲಿದ್ದು, ರಾತ್ರಿ 1:45ಕ್ಕೆ ಕಲಬುರಗಿಗೆ ಆಗಮಿಸಿ, 1:48ಕ್ಕೆ ಜೈಪುರದ ಕಡೆಗೆ ಸಂಚರಿಸಲಿದೆ.&lt;/li&gt; &lt;li&gt;ಯಶವಂತಪುರ - ಅಹಮದಾಬಾದ್ ಸಾಪ್ತಾಹಿಕ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ: 22690): ಈ ರೈಲಿನ ವೇಳಾಪಟ್ಟಿಯು ಜೂನ್ 7 ರಿಂದ ಬದಲಾಗಲಿದ್ದು, ರಾತ್ರಿ 1:45ಕ್ಕೆ ನಿಲ್ದಾಣಕ್ಕೆ ಬಂದು 1:48ಕ್ಕೆ ಅಹಮದಾಬಾದ್ ಕಡೆಗೆ ತನ್ನ ಪ್ರಯಾಣ ಮುಂದುವರಿಸಲಿದೆ.&lt;/li&gt;&lt;/ul&gt;&lt;h2&gt;ಇತರೆ ನಿಲ್ದಾಣಗಳಲ್ಲಿ ಬದಲಾವಣೆ ಇಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ&lt;/h2&gt;&lt;p&gt;ಈ ನಿರ್ದಿಷ್ಟ ರೈಲುಗಳ ವೇಳಾಪಟ್ಟಿಯು ಕೇವಲ ಸೂಚಿಸಲಾದ ನಿಲ್ದಾಣಗಳಲ್ಲಿ ಮಾತ್ರ ಬದಲಾಗಲಿದ್ದು, ಉಳಿದ ಯಾವುದೇ ನಿಲ್ದಾಣಗಳ ವೇಳಾಪಟ್ಟಿಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಸೋಲಾಪುರ ವಿಭಾಗದ ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಪ್ರಯಾಣಿಕರಿಗೆ ಪ್ರಮುಖ ಸಲಹೆ&lt;/h2&gt;&lt;p&gt;ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ನಿಮಿಷಗಳ ವ್ಯತ್ಯಾಸವಿರುವುದರಿಂದ ಪ್ರಯಾಣಿಕರು ಯಾವುದೇ ಗೊಂದಲಕ್ಕೆ ಒಳಗಾಗಬಾರದು. ನಿಲ್ದಾಣಕ್ಕೆ ಹೊರಡುವ ಮುನ್ನ ಅಧಿಕೃತ ರೈಲ್ವೆ ಮಾಹಿತಿ ಕೇಂದ್ರಗಳ ಮೂಲಕ ಅಥವಾ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ (NTES) ಮೊಬೈಲ್ ಆ್ಯಪ್ ಹಾಗೂ ಐಆರ್&zwnj;ಸಿಟಿಸಿ (IRCTC) ಪೋರ್ಟಲ್ ಮೂಲಕ ರೈಲುಗಳ ನವೀಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳುವಂತೆ ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ವಿನಂತಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-railways-solapur-division-revises-train-timetables-at-kalaburagi-ganagapur-road-hotgi-stations-from-june1-gdp/articleshow-dx152ao"/>
        </item>
        <item>
            <title><![CDATA[ಕಣ್ಮರೆಯಾದ ಹುಬ್ಬಳ್ಳಿ-ಬಾದಾಮಿ-ಗುಳೇದಗುಡ್ಡ-ಇಳಕಲ್‌ ತಲುಪವ ಬಸ್; ಪ್ರಯಾಣಿಕರ ಪರದಾಟ]]></title>
            <link>https://kannada.asianetnews.com/karnataka-districts/last-bus-service-from-hubballi-to-ilakal-from-guledagudda-depot-has-been-suspended-for-two-months-mrq/articleshow-fu1dgnx</link>
            <guid isPermaLink="true">https://kannada.asianetnews.com/karnataka-districts/last-bus-service-from-hubballi-to-ilakal-from-guledagudda-depot-has-been-suspended-for-two-months-mrq/articleshow-fu1dgnx</guid>
            <pubDate>Tue, 26 May 2026 20:03:23 +0530</pubDate>
            <description><![CDATA[ಹುಬ್ಬಳ್ಳಿಯಿಂದ ಇಳಕಲ್&zwnj;ಗೆ ರಾತ್ರಿ ಸಂಚರಿಸುತ್ತಿದ್ದ ಗುಳೇದಗುಡ್ಡ ಡಿಪೋದ ಕೊನೆಯ ಬಸ್ ಸಂಚಾರವನ್ನು ಎರಡು ತಿಂಗಳಿಂದ ಕಾರಣವಿಲ್ಲದೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ, ವಿಶೇಷವಾಗಿ ವ್ಯಾಪಾರಸ್ಥರು ಮತ್ತು ತಡವಾಗಿ ಪ್ರಯಾಣಿಸುವವರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಬಸ್ ಸೇವೆಯನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksjana05660zvr2vcx5f2f0r,imgname-guleaddagudda-bus-stand--1779805366277.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಹುಬ್ಬಳ್ಳಿಯಿಂದ ಇಳಕಲ್ಲಗೆ ರಾತ್ರಿ ಸಂಚರಿಸುತ್ತಿದ್ದ ಗುಳೇದಗುಡ್ಡ ಡಿಪೋದ ಕೊನೆಯ ಬಸ್ ಸಂಚಾರ ಬಂದ್ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹಲವು ವರ್ಷಗಳಿಂದ ಸಂಚರಿಸುತ್ತಿದ್ದ ಹುಬ್ಬಳ್ಳಿ-ಇಳಕಲ್ಲ ಬಸ್ ಎರಡು ತಿಂಗಳಿಂದ ಕಾರಣವಿಲ್ಲದೇ ಬಂದ್ ಮಾಡಿದ್ದಾರೆ. ಇದರಿಂದ ಕೆಲಸ ಮುಗಿಸಿಕೊಂಡು ತಡವಾಗಿ ಬರುತ್ತಿದ್ದ ಹಲವು ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ಪುನಃ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೇಳಿದರೆ ಯಾರೊಬ್ಬರೂ ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ಪ್ರಯಾಣಿಕರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಬಸ್ ಸಮಯ ಈ ರೀತಿಯಾಗಿತ್ತು!&lt;/strong&gt;&lt;/h2&gt;&lt;p&gt;ಗುಳೇದಗುಡ್ಡ ಡಿಪೋದಿಂದ ಹೊರಡುವ ಬಸ್ ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿಗೆ ತಲುಪಿ ರಾತ್ರಿ 8 ಗಂಟೆಗೆ ಹುಬ್ಬಳ್ಳಿಯಿಂದ ರಾತ್ರಿ 11.30ಕ್ಕೆ ಗುಳೇದಗುಡ್ಡಕ್ಕೆ ತಲುಪಿ, ಮುಂದೆ ಇಳಕಲ್ ಗೆ ತೆರಳುತ್ತಿತ್ತು. ಹುಬ್ಬಳ್ಳಿ ಮಾರ್ಗದ ಈ ಬಸ್ ನಿಂದ ಇಳಕಲ್ಲ ನಗರದಿಂದ ಬಾದಾಮಿ ಮಾರ್ಗದವರಿಗೆ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಅದರಲ್ಲೂ ಇಳಕಲ್ಲ, ಗುಳೇದಗುಡ್ಡ ಪಟ್ಟಣಗಳ ವ್ಯಾಪಾರಸ್ಥರಿಗೆ ರಾತ್ರಿ ಸಮಯದಲ್ಲಿ ಬರಲು ಸಹಾಯಕವಾಗಿತ್ತು. ಆದರೆ, ಬಸ್ ಬಂದ್ ಮಾಡಿದ್ದರ ಪರಿಣಾಮ ವ್ಯಾಪಾರಸ್ಥರು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.&lt;/p&gt;&lt;p&gt;ಬಸ್ ಬಂದ್ ಮಾಡಿದ್ದರಿಂದ ಹುಬ್ಬಳ್ಳಿ ಘಟಕದಿಂದ ಬಸ್ ಓಡಿಸಲು ಆರಂಭಿಸಲಾಯಿತು. ಆದರೆ, ಇಳಕಲ್ಲ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಇಳಕಲ್ಲದಿಂದ ವಾಪಸ್ ತೆರಳಲು ಸಮಯ ನೀಡದ ಕಾರಣ ಆ ಬಸ್ ಸಹ ಸ್ಥಗಿತಗೊಳಿಸಲಾಗಿದೆ. ಕೂಡಲೇ ಅಧಿಕಾರಿಗಳು ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆ ಬರುತ್ತಿದ್ದ ಬಸ್ ಪುನಃ ಆರಂಭಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳು ಹೇಳಿದ್ದೇನು? ಸಾರ್ವಜನಿಕರ ಒತ್ತಾಯ ಏನು?&lt;/strong&gt;&lt;/h3&gt;&lt;p&gt;ಈ ಬಗ್ಗೆ ಸಾರಿಗೆ ಇಲಾಖೆ ಜಿಲ್ಲಾ ಅಧಿಕಾರಿಗಳನ್ನು ದೂರವಾಣಿ ಮೂಲಕ ಕೇಳಿದಾಗ, ಹುಬ್ಬಳ್ಳಿ ಮಾರ್ಗದ ಬಸ್ ಬಂದ್ ಆಗಿರುವ ಬಗ್ಗೆ ಜಿಟಿಒ ಅವರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಾಗಲಕೋಟೆ: ಭ್ರೂಣಲಿಂಗ ಪತ್ತೆ, ಗರ್ಭಿಣಿ ಸಾವು ಪ್ರಕರಣ, ದೆಹಲಿ ವಿಶೇಷ ಅಧಿಕಾರಿಗಳ ತಂಡದಿಂದ ದಾಳಿ&lt;/strong&gt;&lt;/p&gt;&lt;p&gt;ಗುಳೇದಗುಡ್ಡದಿಂದ ಹುಬ್ಬಳ್ಳಿಗೆ ರಾತ್ರಿ ಸಂಚರಿಸುತ್ತಿದ್ದ ಬಸ್ ನಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ಅದನ್ನು ಬಂದ್ ಮಾಡಿದ್ದು ಸರಿಯಲ್ಲ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದ್ದು, ಕೂಡಲೇ ಈ ರೂಟ್ ಬಸ್ ಆರಂಭಿಸಬೇಕು ಎಂದು ಗುಳೇದಗುಡ್ಡ ನಗರ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ಅಶೋಕ ಹೆಗಡೆ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಹುಬ್ಬಳ್ಳಿಯಿಂದ ರಾತ್ರಿ ಬರುತ್ತಿದ್ದ ಬಸ್ ನಿಂದ ವ್ಯಾಪಾರಸ್ಥರಿಗೆ, ದೂರು ಊರುಗಳಿಗೆ ತೆರಳುತ್ತಿದ್ದ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಅದನ್ನು ಬಂದ್ ಮಾಡಿದ್ದರಿಂದ ವ್ಯಾಪಾರಸ್ಪರಿಗೆ ತೊಂದರೆಯಾಗಿದ್ದು, ಅಧಿಕಾರಿಗಳು ಪುನಃ ಹುಬ್ಬಳ್ಳಿಯಿಂದ ರಾತ್ರಿ 8 ಗಂಟೆಗೆ ಬಸ್ ಆರಂಭಿಸಬೇಕು ಪುರಸಭೆ ಮಾಜಿ ಉಪಾಧ್ಯಕ್ಷರಾದ ಶ್ರೀಕಾಂತ ಹುನಗುಂದ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;100 ವರ್ಷದಿಂದ ಸಿಗದ ಮನೆ ಅಡಿಸ್ಥಳದ ಹಕ್ಕು ಪತ್ರ: 16 ಕುಟುಂಬ, ಮೂರು ತಲೆಮಾರಿನ ಹೋರಾಟ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/last-bus-service-from-hubballi-to-ilakal-from-guledagudda-depot-has-been-suspended-for-two-months-mrq/articleshow-fu1dgnx"/>
        </item>
        <item>
            <title><![CDATA[ಬಾದಾಮಿ ಗುಹಾಂತರ ದೇವಾಲಯದ ಒಳಗೆ ಚಪ್ಪಲಿ ಧರಿಸಿ ಬಂದ ಮುಸ್ಲಿಂ ಮಹಿಳೆ, ತರಾಟೆ ತೆಗೆದುಕೊಂಡ ಟೂರಿಸ್ಟ್‌!]]></title>
            <link>https://kannada.asianetnews.com/karnataka-districts/badami-cave-temple-viral-video-tourist-hijab-woman-footwear-asi-karnataka-news-san/articleshow-gwwz3xr</link>
            <guid isPermaLink="true">https://kannada.asianetnews.com/karnataka-districts/badami-cave-temple-viral-video-tourist-hijab-woman-footwear-asi-karnataka-news-san/articleshow-gwwz3xr</guid>
            <pubDate>Tue, 19 May 2026 18:17:39 +0530</pubDate>
            <description><![CDATA[&lt;p&gt;ಬಾಗಲಕೋಟೆಯ ಪ್ರಸಿದ್ಧ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿದ್ದ ಮುಸ್ಲಿಂ ಮಹಿಳೆಯನ್ನು ಇನ್ನೊಬ್ಬ ಮಹಿಳಾ ಪ್ರವಾಸಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks0478yjgf1frd9px46fd7zc,imgname-badami-cave-temple-1779194635218.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಮೇ.19):&lt;/strong&gt; ಕರ್ನಾಟಕದ ಹೆಮ್ಮೆಯ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯ ತಾಣವಾಗಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹಾಂತರ ದೇವಾಲಯದ (Badami Cave Temples) ಆವರಣದಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಪವಿತ್ರ ದೇವಾಲಯದ ಸಂಕೀರ್ಣದ ಒಳಗೆ ಚಪ್ಪಲಿ ಧರಿಸಿ ಓಡಾಡುತ್ತಿದ್ದ ಮುಸ್ಲಿಂ ಮಹಿಳೆಯೊಬ್ಬರನ್ನು ಮಹಿಳಾ ಟೂರಿಸ್ಟ್&zwnj; ಒಬ್ಬರು ಸ್ಥಳದಲ್ಲೇ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಮಹಿಳೆಯರ ನಡುವೆ ನಡೆದ ತೀವ್ರ ವಾಗ್ವಾದದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.&lt;/p&gt;&lt;p&gt;ಎಕ್ಸ್&zwnj;ನಲ್ಲಿ'@gharkekalesh' ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಇಂಟರ್ನೆಟ್&zwnj;ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ, ಹಸಿರು ಬಣ್ಣದ ಉಡುಪು ಮತ್ತು ಹಿಜಾಬ್ ಧರಿಸಿರುವ ಮಹಿಳೆಯ ಜೊತೆ ಮಹಿಳಾ ಪ್ರವಾಸಿಗರೊಬ್ಬರು ತೀವ್ರವಾಗಿ ಜಗಳವಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಾರಂಪರಿಕ ತಾಣ ಹಾಗೂ ಪವಿತ್ರ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ನಿಯಮ ಉಲ್ಲಂಘಿಸಿರುವುದನ್ನು ಕಂಡು ಆ ಪ್ರವಾಸಿಗ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;'ನಾನು ಇಲ್ಲಿನ ಸ್ಟಾಫ್' ಎಂದ ಮಹಿಳೆ; ಪ್ರವಾಸಿಗಳ ಆರೋಪ&lt;/strong&gt;&lt;/h2&gt;&lt;p&gt;ಆಕ್ಷೇಪ ಎತ್ತಿದ ಮಹಿಳಾ ಪ್ರವಾಸಿಗರು, ಚಪ್ಪಲಿ ಧರಿಸಿದ್ದ ಮಹಿಳೆಯ ಹೆಸರು 'ರೋಷ್ನಿ ಮುಸ್ತಾಫಿ' ಎಂದು ಹೇಳಿದ್ದಾರೆ. ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವುದನ್ನು ಪ್ರಶ್ನಿಸಿದಾಗ, ಆ ರೋಷ್ನಿ ಎಂಬಾಕೆ ತಾನು ಅಲ್ಲಿನ ಸಿಬ್ಬಂದಿ ಎಂದು ಹೇಳಿದ್ದಾಳೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ನೀವು ಸಿಬ್ಬಂದಿ ಆಗಿದ್ದರೆ, ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ಓಡಾಡಬಹುದೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.&lt;/p&gt;&lt;p&gt;ಆದರೆ, ಈ ವೈರಲ್ ವಿಡಿಯೋ ಹಾಗೂ ಘಟನೆಗೆ ಸಂಬಂಧಿಸಿದಂತೆ ಈ ವರದಿ ಪ್ರಕಟವಾಗುವವರೆಗೂ ಇತಿಹಾಸ ಪ್ರಸಿದ್ಧ ಸ್ಮಾರಕಗಳ ಉಸ್ತುವಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI - Archaeological Survey of India) ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣವನ್ನು ನೀಡಿಲ್ಲ.&lt;/p&gt;&lt;h2&gt;&lt;strong&gt;ಟ್ವಿಟರ್&zwnj;ನಲ್ಲಿ ಜನಾಕ್ರೋಶ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಈ ವಿಡಿಯೋ ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಅಪ್&zwnj;ಲೋಡ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ಕಮೆಂಟ್&zwnj;ಗಳು ಹರಿದು ಬರುತ್ತಿವೆ. ಒಬ್ಬ ಯೂಸರ್&zwnj; ಆಕ್ರೋಶ ವ್ಯಕ್ತಪಡಿಸಿ, &quot;ಇದೇನು ನಿಮಗೊಂದು ನಿಯಮ, ಬೇರೆಯವರಿಗೊಂದು ನಿಯಮವೇ? ಇದು ಬರೀ ಸಾರ್ವಜನಿಕ ಕಾರಿಡಾರ್ ಅಲ್ಲ, ಇದು 6 ನೇ ಶತಮಾನದ ಭವ್ಯ ಹಿಂದೂ ದೇವಾಲಯದ ಪವಿತ್ರ ತಾಣ. ನೀವು ಎಎಸ್&zwnj;ಐ (ASI) ಸಿಬ್ಬಂದಿಯೇ ಆಗಿದ್ದರೂ ಸಹ, ಪ್ರತಿಯೊಬ್ಬ ಭಕ್ತ ಹಾಗೂ ಪ್ರವಾಸಿಗರಿಂದ ನಿರೀಕ್ಷಿಸುವ ಕನಿಷ್ಠ ಗೌರವ ಮತ್ತು ಸೌಜನ್ಯವನ್ನು ನೀವೂ ಪಾಲಿಸಬೇಕು ಹಾಗೂ ಚಪ್ಪಲಿಗಳನ್ನು ಹೊರಗಿಡಬೇಕು. ಕೇವಲ ಫೋನ್ ಕಾಲ್&zwnj;ಗಳು ನಿಮ್ಮನ್ನು ಈ ಮೂಲಭೂತ ನಿಯಮದಿಂದ ಮುಕ್ತಗೊಳಿಸುವುದಿಲ್ಲ. ಧರ್ಮದ ಪಾವಿತ್ರ್ಯತೆ ಪರವಾಗಿ ಧ್ವನಿ ಎತ್ತಿದ ಮಹಿಳಾ ಟೂರಿಸ್ಟ್&zwnj;ನ ಬಗ್ಗೆ ಹೆಮ್ಮೆಯಿದೆ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;ಆದರೆ, ಮತ್ತೊಬ್ಬ ಮಹಿಳೆ ಸಿಬ್ಬಂದಿ ಪರವಾಗಿ ಬ್ಯಾಟ್ ಬೀಸಿದ್ದು, &quot;ಅಷ್ಟಕ್ಕೂ ಯಾಕೆ ಇಷ್ಟೊಂದು ಗಲಾಟೆ? ಬಿಸಿಲ ಧಗೆಯಿಂದ ಆಕೆಯ ಪಾದಗಳನ್ನು ರಕ್ಷಿಸಲು ನೀವು ಹೋಗುತ್ತೀರಾ?&quot; ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಾದಾಮಿ ನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರವಾಸಿಗರು&lt;/strong&gt;&lt;/h2&gt;&lt;p&gt;ಇದೇ ವೇಳೆ ಬಾದಾಮಿ ಮತ್ತು ಭೂತನಾಥ ದೇವಾಲಯದ ಕಳಪೆ ನಿರ್ವಹಣೆಯ ಬಗ್ಗೆಯೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು ತಮ್ಮ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಾ, &quot;ಇಲ್ಲಿನ ಮ್ಯಾನೇಜ್&zwnj;ಮೆಂಟ್ ಅತ್ಯಂತ ಕೆಟ್ಟದಾಗಿದೆ. ನಾನು 6 ವರ್ಷಗಳ ಹಿಂದೆ ಬಾದಾಮಿ ಗುಹೆಗಳು ಮತ್ತು ಭೂತನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ಬಹುತೇಕ ಎಲ್ಲಾ ಗುಹೆಗಳು ಹಾಗೂ ಗರ್ಭಗುಡಿಯ ಆವರಣದಲ್ಲಿ ಮೂತ್ರದ ವಾಸನೆ ಬರುತ್ತಿತ್ತು. ನಾನು ಆ ಸಮಯದಲ್ಲಿ ಈ ಬಗ್ಗೆ ದೂರನ್ನು ಸಹ ಎತ್ತಿದ್ದೆ, ಆದರೆ ಈಗೇನಾದರೂ ಬದಲಾಗಿದೆಯೇ ಎಂಬುದು ತಿಳಿಯುತ್ತಿಲ್ಲ&quot; ಎಂದು ಬೇಸರ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;Badami Caves: A lady tourist gets into a heated argument with a hijab-wearing ASI staff member (named Roshani) for walking inside the temple with slippers on. The staff is on the phone defending herself while the visitor keeps questioning her. pic.twitter.com/KnJ3sjRrSb&lt;/p&gt;&lt;p&gt;&mdash; Ghar Ke Kalesh (@gharkekalesh) May 19, 2026&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/badami-cave-temple-viral-video-tourist-hijab-woman-footwear-asi-karnataka-news-san/articleshow-gwwz3xr"/>
        </item>
        <item>
            <title><![CDATA[ಮುಧೋಳ-ನಿಪ್ಪಾಣಿ ಹೆದ್ದಾರಿ: ವರವಾಗೋ ಬದಲು ಶಾಪವಾಗಿ ಪರಿಣಮಿಸಿದ ಮಹಾಲಿಂಗಪುರದ ರಸ್ತೆ ವಿಭಜಕ]]></title>
            <link>https://kannada.asianetnews.com/karnataka-districts/bagalkot-accidents-occurred-due-to-the-lack-of-proper-signage-lights-mudhol-nippani-highway-mahalingapur-mrq/articleshow-huwpg4r</link>
            <guid isPermaLink="true">https://kannada.asianetnews.com/karnataka-districts/bagalkot-accidents-occurred-due-to-the-lack-of-proper-signage-lights-mudhol-nippani-highway-mahalingapur-mrq/articleshow-huwpg4r</guid>
            <pubDate>Mon, 25 May 2026 05:25:18 +0530</pubDate>
            <description><![CDATA[ಮಹಾಲಿಂಗಪುರದ ಮುಧೋಳ-ನಿಪ್ಪಾಣಿ ಹೆದ್ದಾರಿಯಲ್ಲಿರುವ ರಸ್ತೆ ವಿಭಜಕಕ್ಕೆ ಸೂಕ್ತ ಸೂಚನಾ ಫಲಕ ಮತ್ತು ದೀಪಗಳಿಲ್ಲದೆ ನೂರಾರು ಅಪಘಾತಗಳು ಸಂಭವಿಸಿವೆ. ಇದರಿಂದಾಗಿ ಅನೇಕರು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಜನರ ಜೀವಕ್ಕೆ ಕುತ್ತು ತಂದಿದೆ. ಇತ್ತೀಚಿನ ಅಪಘಾತದ ನಂತರ, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksdd68n8gcj8464qgqwf4djm,imgname-mahalingapur-1779640246951.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶೇಷ ವರದಿ&lt;/strong&gt;&lt;/p&gt;&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಮಹಾಲಿಂಗಪುರ&lt;/strong&gt;&lt;/p&gt;&lt;p&gt;ಜನರಿಗೆ ವರವಾಗಬೇಕಿದ್ದ ರಸ್ತೆ ವಿಭಜಕ ಶಾಪವಾಗಿ ಪರಿಣಮಿಸಿದ್ದು, ಇದುವರೆಗೂ ನೂರಾರು ಅಪಘಾತಗಳು ಸಂಭವಿಸಿ ಸಾಕಷ್ಟು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರೂ ಇಲಾಖೆ ಅಧಿಕಾರಿಗಳು ಜಾಣಮೌನ ವಹಿಸಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.&lt;/p&gt;&lt;p&gt;ಮುಧೋಳದಿಂದ ರಬಕವಿ ಬನಹಟ್ಟಿ ಮುಖಾಂತರ ಸಾಂಗ್ಲಿ, ಮಿರಜ್ ಹಾಗೂ ಜಮಖಂಡಿ, ವಿಜಯಪುರ ಮತ್ತು ಗೋಕಾಕ, ಘಟಪ್ರಭಾ, ಬೆಳಗಾವಿ, ಕೊಲ್ಲಾಪುರ, ನಿಪ್ಪಾಣಿ ಕಡೆ ನಿತ್ಯವೂ ನೂರಾರು ವಾಹನಗಳು ಚಲಿಸುವ ಮುಧೋಳ-ನಿಪ್ಪಾಣಿ ಹೆದ್ದಾರಿಯಲ್ಲಿ ಸ್ಥಳೀಯ ಅಷ್ಟಗಿ ಚಿತ್ರಮಂದಿರದ ಮುಂಭಾಗದಲ್ಲಿ ಅಫೋಲೋ ಮೆಡಿಕಲ್ ಸ್ಟೋರ್ ಎದುರು ಆರಂಭವಾಗುವ ರಸ್ತೆ ವಿಭಜಕಕ್ಕೆ ಯಾವುದೇ ರೀತಿಯ ಸೂಚನಾ ಫಲಕವಾಗಲಿ, ವಿದ್ಯುತ್ ದೀಪಗಳಿಂದ ರಸ್ತೆ ವಿಭಜಕದ ತಿಳಿವಳಿಕೆಯಾಗಲಿ ಮಾಡದಿರುವುದರಿಂದ ಈ ಮಾರ್ಗದಲ್ಲಿ ಬರುವ ವಾಹನ ಸವಾರರಿಗೆ ರಸ್ತೆ ವಿಭಜಕ ಗೊತ್ತಾಗದೇ ಈವರೆಗೆ ನೂರಾರು ಟ್ರ್ಯಾಕ್ಟರ್, ಕಾರು, ಲಾರಿ, ಬೈಕ್ ಮತ್ತಿತರ ವಾಹನಗಳು ಡಿಕ್ಕಿ ಹೊಡೆದು ಸಾಕಷ್ಟು ಅವಘಡಗಳು ಸಂಭವಿಸಿವೆ.&amp;nbsp;&lt;/p&gt;&lt;h2&gt;&lt;strong&gt;ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣ&lt;/strong&gt;&lt;/h2&gt;&lt;p&gt;ಕೆಲವು ಅಪಘಾತಗಳು ಜನರ ಶಾಶ್ವತ ಅಂಗ ವೈಕಲ್ಯಕ್ಕೆ ಕಾರಣವಾಗಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಶನಿವಾರ ರಾತ್ರಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಅಪೋಲೋ ಮೆಡಿಕಲ್ಸ್ ಪಕ್ಕದಲ್ಲಿ ಅಪ್ಪಳಿಸಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಮೆಡಿಕಲ್ ಸ್ಟೋರ್ ಒಳಗೆ ನುಗ್ಗಿ ದೊಡ್ಡ ಅನಾಹುತ ಆಗುವ ಸಂಭವವಿತ್ತು.&lt;/p&gt;&lt;p&gt;ಇಲ್ಲಿ ಎಂಎಸ್ಐಎಲ್ ಬಾರ್, ಮೆಡಿಕಲ್ ಸ್ಟೋರ್ಸ್, ಕಟಿಂಗ್ ಶಾಪ್, ಖಾನಾವಳಿಗಳು, ಬಟ್ಟೆ ಅಂಗಡಿಗಳು ಮುಂತಾದ ವ್ಯಾಪಾರ ಮಳಿಗೆಗಳಿದ್ದು, ಮಹಾಲಿಂಗಪುರದ ಮುಖ್ಯ ಮಾರುಕಟ್ಟೆಯಾದ ಜವಳಿ ಬಜಾರ್ ಗೆ ಹೋಗುವ ದಾರಿಯೂ ಇದೇ ಆಗಿರುವುದರಿಂದ ಇಲ್ಲಿ ಯಾವಾಗಲೂ ಸಾಕಷ್ಟು ಜನಸಂದಣಿ ಇರುತ್ತದೆ. ಜನರು ಕೈಯಲ್ಲಿ ಜೀವ ಹಿಡಿದು ಪ್ರಾಣಭಯದಿಂದ ಓಡಾಡುವಂತಾಗಿದೆ. ಹೀಗಿದ್ದರೂ ಇಲ್ಲಿ ರಸ್ತೆ ವಿಭಜಕ ಸೂಚನಾ ಫಲಕ ಹಾಕದೆ ಸಾಕಷ್ಟು ಅಪಘಾತಗಳು ಸಂಭವಿಸಿದ್ದು ಅದೃಷ್ಟವಶಾತ್ ಇದುವರೆಗೂ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕಬ್ಬು ಸಾಗಣೆ ಸಂದರ್ಭದಲ್ಲಿ ಸಾಕಷ್ಟು ಟ್ರ್ಯಾಕ್ಟರ್&zwnj;ಗಳು ಸಹ ಈ ವಿಭಜಕಕ್ಕೆ ಢಿಕ್ಕಿ ಹೊಡೆದಿವೆ. ಇಷ್ಟೆಲ್ಲ ಅನಾಹುತ ಸಂಭವಿಸಿದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತು ಜಾಣ ಕುರುಡುತನ ಪ್ರದರ್ಶಿಸುತ್ತ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.&lt;/p&gt;&lt;h3&gt;ಅಧಿಕಾರಿಗಳು ಏನ್ ಹೇಳ್ತಾರೆ?&lt;/h3&gt;&lt;p&gt;ಶನಿವಾರ ನಡೆದ ಅಪಘಾತಕ್ಕೆ ರಸ್ತೆ ವಿಭಜಕದ ಸೂಚನೆಗಳು ಇಲ್ಲದಿರುವುದು ಕಾರಣ ಎಂದು ಗೊತ್ತಾಗಿದ್ದು, ಸ್ಥಳಕ್ಕೆ ಖುದ್ದು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಮಖಂಡಿಯ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳುತ್ತಾರೆ.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkot-accidents-occurred-due-to-the-lack-of-proper-signage-lights-mudhol-nippani-highway-mahalingapur-mrq/articleshow-huwpg4r"/>
        </item>
        <item>
            <title><![CDATA[ಸಂಪ್‌ಗೆ ಬಿದ್ದು 18 ತಿಂಗಳ ಮಗು ಸಾವು: ಮೃತದೇಹ ಉಪ್ಪಿನಲ್ಲಿಟ್ಟು, ಕುರಾನ್‌ ಪಠಿಸಿ ಬದುಕಿಸಲು ಯತ್ನಿಸಿದ ಪೋಷಕರು!]]></title>
            <link>https://kannada.asianetnews.com/karnataka-districts/bagalkot-18-month-old-baby-dies-in-sump-parents-keep-body-in-salt-to-revive-san/articleshow-kccpvw7</link>
            <guid isPermaLink="true">https://kannada.asianetnews.com/karnataka-districts/bagalkot-18-month-old-baby-dies-in-sump-parents-keep-body-in-salt-to-revive-san/articleshow-kccpvw7</guid>
            <pubDate>Mon, 08 Jun 2026 19:14:05 +0530</pubDate>
            <description><![CDATA[ಬಾಗಲಕೋಟೆಯ ನವನಗರದಲ್ಲಿ 18 ತಿಂಗಳ ಹೆಣ್ಣು ಮಗುವೊಂದು ನೀರಿನ ಟ್ಯಾಂಕ್&zwnj;ಗೆ ಬಿದ್ದು ಮೃತಪಟ್ಟಿದೆ. ಆದರೆ, ಮಗುವನ್ನು ಬದುಕಿಸಬಹುದು ಎಂಬ ಮೂಢನಂಬಿಕೆಯಿಂದ, ಪೋಷಕರು ಆಕೆಯ ದೇಹವನ್ನು ಗಂಟೆಗಟ್ಟಲೆ ಉಪ್ಪಿನಲ್ಲಿ ಮುಳುಗಿಸಿಟ್ಟು ವಿಫಲ ಪ್ರಯತ್ನ ನಡೆಸಿದ ದಾರುಣ ಘಟನೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktkq9pz6h97jprxq7jfqq5bf,imgname-bagalkot-child-death--2--1780925914086.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜೂ.8): &lt;/strong&gt;ಎದುರಿನ ಮನೆಯ ನೀರಿನ ಟ್ಯಾಂಕ್&zwnj;ಗೆ ಬಿದ್ದು 18 ತಿಂಗಳ ಹೆಣ್ಣು ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38 ರಲ್ಲಿ ನಡೆದಿದೆ. ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ. ಆದರೆ, ಮಗುವಿನ ಸಾವಿನ ನಂತರ ಆಕೆಯನ್ನು ಬದುಕಿಸಲು ಪೋಷಕರು ನಡೆಸಿದ ವಿಲಕ್ಷಣ ಪ್ರಯತ್ನ ಮತ್ತು ಮೂಢನಂಬಿಕೆಯ ನಡೆ ಈಗ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್&zwnj;ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;h2&gt;&lt;strong&gt;ಉಪ್ಪಿನಲ್ಲಿ ಮುಳುಗಿಸಿದರೆ ಮಗು ಬದುಕುತ್ತದೆ ಎಂಬ ನಂಬಿಕೆ!&lt;/strong&gt;&lt;/h2&gt;&lt;p&gt;ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂಬ ಬಲವಾದ ನಂಬಿಕೆ ಅವರದ್ದಾಗಿತ್ತು. ಹೀಗಾಗಿ, ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದಾರೆ.&lt;/p&gt;&lt;p&gt;ಮಗುವಿನ ಶವವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದ ಮೇಲೂ ಪೋಷಕರ ಈ ಪ್ರಯತ್ನ ನಿಂತಿರಲಿಲ್ಲ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್&zwnj;ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲೇ ನಡೆದ ಈ ದೃಶ್ಯವನ್ನು ನೋಡಿ ಅಲ್ಲಿದ್ದವರು ಮರುಕ ವ್ಯಕ್ತಪಡಿಸಿದ್ದಾರೆ. ಮಗುವಿಗೆ ಮತ್ತೆ ಜೀವ ಬರಬಹುದು ಎಂಬ ಆಸೆಯಿಂದ ಪೋಷಕರು ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪವಾಡಗಳು ನಡೆಯದಿದ್ದಾಗ ಮತ್ತು ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದಿದ್ದಾಗ ಪೋಷಕರು ನಿರಾಶೆಗೊಂಡಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಕೊನೆಗೆ ವೈದ್ಯರ ಸಲಹೆ ಮೇರೆಗೆ ಶವ ಹೊರಕ್ಕೆ&lt;/strong&gt;&lt;/h2&gt;&lt;p&gt;ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿ, ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ವೈದ್ಯರ ಮಾತನ್ನು ಕೇಳಿದ ಕುಟುಂಬಸ್ಥರು ಕೊನೆಗೂ ಮಗುವಿನ ದೇಹವನ್ನು ಉಪ್ಪಿನಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆಗೆ (Post-Mortem) ಒಪ್ಪಿಗೆ ಸೂಚಿಸಿದ್ದು, ತಂದಿದ್ದ ಉಪ್ಪನ್ನು ಹೊರಗಡೆ ಎಸೆದಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಶವಪರೀಕ್ಷೆ ಕಾರ್ಯ ನಡೆದಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/bagalkot-18-month-old-baby-dies-in-sump-parents-keep-body-in-salt-to-revive-san/articleshow-kccpvw7"/>
        </item>
        <item>
            <title><![CDATA[ಗಂಡ, ಇಬ್ಬರು ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ ಬಂದಿದ್ದ ಮಹಿಳೆ ನಿಗೂಢ ಕೊ*; ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ!]]></title>
            <link>https://kannada.asianetnews.com/karnataka-districts/jigani-akshata-death-case-nana-saheb-suspect-police-search-anekal-san/articleshow-kkilpgm</link>
            <guid isPermaLink="true">https://kannada.asianetnews.com/karnataka-districts/jigani-akshata-death-case-nana-saheb-suspect-police-search-anekal-san/articleshow-kkilpgm</guid>
            <pubDate>Sat, 27 Jun 2026 16:24:18 +0530</pubDate>
            <description><![CDATA[&lt;p&gt;ಬೆಂಗಳೂರಿನ ಜಿಗಣಿಯಲ್ಲಿ, ಪತಿ-ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಅಕ್ಷತಾ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊ* ಮಾಡಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊ* ಬಳಿಕ ಪ್ರಿಯಕರ ನಾನಾ ಸಾಹೇಬ್ ಪರಾರಿಯಾಗಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kw4b6025jcmjwb46r6ya2r4n,imgname-anekal-akshata-deacth-case-1782557376581.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್(ಜೂ.7)&lt;/strong&gt;: ಬೆಂಗಳೂರು ಹೊರವಲಯದ ಜಿಗಣಿಯ ಪಟಾಲಮ್ಮ ಬಡಾವಣೆಯಲ್ಲಿ ಭೀಕರ ಕೊ* ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಮನೆಯೊಳಗೇ ಬಿಟ್ಟು ಪ್ರಿಯಕರ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಇಳಕಲ್ ಮೂಲದ ಅಕ್ಷತಾ (30) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಸದ್ಯ ಕೊಲೆಗೈದು ಪರಾರಿಯಾಗಿರುವ ಶಂಕಿತ ಆರೋಪಿ ನಾನಾ ಸಾಹೇಬ್ ಪತ್ತೆಗಾಗಿ ಜಿಗಣಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.&lt;/p&gt;&lt;p&gt;ಇದೇ ತಿಂಗಳ (ಜೂನ್) 20ರಂದು ಜಿಗಣಿಯ ಪಟಾಲಮ್ಮ ಬಡಾವಣೆಯ ಬಾಡಿಗೆ ಮನೆಯೊಂದರಿಂದ ವಿಪರೀತ ದುರ್ವಾಸನೆ ಬರಲಾರಂಭಿಸಿತ್ತು. ಇದರಿಂದ ಸಂಶಯಗೊಂಡ ಮನೆ ಮಾಲೀಕರು ಕಿಟಕಿ ತೆರೆದು ನೋಡಿದಾಗ ಅಕ್ಷತಾ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರಂಭದಲ್ಲಿ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದರು.&lt;/p&gt;&lt;p&gt;ಆದರೆ, ಅಕ್ಷತಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ. ಯಾರೋ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ವರದಿಯ ಆಧಾರದ ಮೇಲೆ ಪೊಲೀಸರು ಸದ್ಯ ಇದನ್ನು ಕೊ* ಪ್ರಕರಣವಾಗಿ ಪರಿವರ್ತಿಸಿ, ತನಿಖೆಯನ್ನು ತೇಜಸ್ವಿಗೊಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪತಿ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಬಂದಿದ್ದ ಅಕ್ಷತಾ!&lt;/strong&gt;&lt;/h2&gt;&lt;p&gt;ಮೃತ ಅಕ್ಷತಾಗೆ ಈ ಹಿಂದೆ ಮದುವೆಯಾಗಿತ್ತು. 2014ರಲ್ಲಿ ಆಕೆ ಕೃಷ್ಣ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಕೂಡ ಇದೆ. ಪತಿ ಕೃಷ್ಣ ವುಡ್ ವರ್ಕ್ (ಮರದ ಕೆಲಸ) ಮಾಡುತ್ತಿದ್ದರೆ, ಮೃತ ಅಕ್ಷತಾ ಸೀರೆ ನೇಯ್ಗೆ ಕೆಲಸ ಮಾಡುತ್ತಿದ್ದಳು. ಈ ನೇಯ್ಗೆ ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ನಾನಾ ಸಾಹೇಬ್ ಎಂಬಾತನ ಪರಿಚಯ ಅಕ್ಷತಾಗೆ ಆಗಿತ್ತು. ದಿನ ಕಳೆದಂತೆ ಇವರಿಬ್ಬರ ಪರಿಚಯ ಅಕ್ರಮ ಪ್ರೇಮಸಂಬಂಧಕ್ಕೆ ತಿರುಗಿತ್ತು. ಪ್ರಿಯಕರನ ವ್ಯಾಮೋಹಕ್ಕೆ ಬಿದ್ದ ಅಕ್ಷತಾ, ತನ್ನ ಇಬ್ಬರು ಮಕ್ಕಳು ಹಾಗೂ ಪತಿಯನ್ನು ತೊರೆದು ನಾನಾ ಸಾಹೇಬ್ ಜೊತೆ ಓಡಿ ಬಂದಿದ್ದಳು.&lt;/p&gt;&lt;h2&gt;&lt;strong&gt;ಗಂಡ-ಹೆಂಡತಿ ಎಂದು ಬಾಡಿಗೆ ಮನೆ ಪಡೆದಿದ್ದರು!&lt;/strong&gt;&lt;/h2&gt;&lt;p&gt;ಕಳೆದ ನವೆಂಬರ್ ತಿಂಗಳಲ್ಲಿ ಜಿಗಣಿಯ ಪಟಾಲಮ್ಮ ಬಡಾವಣೆಗೆ ಬಂದಿದ್ದ ಅಕ್ಷತಾ ಮತ್ತು ನಾನಾ ಸಾಹೇಬ್, ತಾವಿಬ್ಬರು ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದರು. ಅಲ್ಲಿಂದ ಇಬ್ಬರೂ ಒಟ್ಟಿಗೇ ವಾಸಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ನಾನಾ ಸಾಹೇಬ್, ಅಕ್ಷತಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಜಿಗಣಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ನಾನಾ ಸಾಹೇಬ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/jigani-akshata-death-case-nana-saheb-suspect-police-search-anekal-san/articleshow-kkilpgm"/>
        </item>
        <item>
            <title><![CDATA[7 ಗಂಟೆಯಲ್ಲಿ 3 ದಿನದ ಕೆಲಸ ಮಾಡಿದ ಜೋಡೆತ್ತು; ರೈತರು ಬದಲಾದ್ರೂ ನೇಗಿಲು ಎಳೆದ ಎತ್ತುಗಳು]]></title>
            <link>https://kannada.asianetnews.com/gallery/karnataka-districts/bagalkote-bulls-create-history-by-completing-three-days-worth-of-agricultural-work-in-just-seven-hours-mrq-lzrlpfd</link>
            <guid isPermaLink="true">https://kannada.asianetnews.com/gallery/karnataka-districts/bagalkote-bulls-create-history-by-completing-three-days-worth-of-agricultural-work-in-just-seven-hours-mrq-lzrlpfd</guid>
            <pubDate>Sat, 20 Jun 2026 16:47:20 +0530</pubDate>
            <description><![CDATA[&lt;p&gt;ಜೋಡೆತ್ತುಗಳು, ಮೂರು ದಿನಗಳಲ್ಲಿ ಮಾಡುವ ಕೃಷಿ ಕೆಲಸವನ್ನು ಕೇವಲ ಏಳು ಗಂಟೆಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿವೆ. ರೈತರು ಸುಸ್ತಾಗಿ ಬದಲಾದರೂ, ಎತ್ತುಗಳು ನಿರಂತರವಾಗಿ ಆರೂವರೆ ಎಕರೆ ಭೂಮಿಯನ್ನು ಹದಗೊಳಿಸಿವೆ. ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಎತ್ತುಗಳಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvjbhe5swy1ekzezbwfrdjqv,imgname-bagalkote-farmer--4--1781953771705.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೋಡೆತ್ತುಗಳು, ಮೂರು ದಿನಗಳಲ್ಲಿ ಮಾಡುವ ಕೃಷಿ ಕೆಲಸವನ್ನು ಕೇವಲ ಏಳು ಗಂಟೆಗಳಲ್ಲಿ ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿವೆ. ರೈತರು ಸುಸ್ತಾಗಿ ಬದಲಾದರೂ, ಎತ್ತುಗಳು ನಿರಂತರವಾಗಿ ಆರೂವರೆ ಎಕರೆ ಭೂಮಿಯನ್ನು ಹದಗೊಳಿಸಿವೆ. ಈ ಅಪರೂಪದ ಸಾಧನೆಗೆ ಗ್ರಾಮಸ್ಥರು ಎತ್ತುಗಳಿಗೆ ಮೆರವಣಿಗೆ ಮಾಡಿ ಸಂಭ್ರಮಿಸಿದರು.&lt;/p&gt;&lt;img&gt;&lt;p&gt;ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುರಳಿಕಲ್ ಗ್ರಾಮದ ಜೋಡೆತ್ತುಳಗಳು ಇತಿಹಾಸ ನಿರ್ಮಿಸಿವೆ. ಜೋಡೆತ್ತು ಮೂರು ದಿನ ಮಾಡುವ ಕೆಲಸವನ್ನು ಕೇವಲ ಏಳು ಗಂಟೆಯಲ್ಲಿ ಮಾಡಿ ಮುಗಿಸಿವೆ. ರೈತರು ಸುಸ್ತಾದ್ರೂ ಎತ್ತುಗಳು ಮಾತ್ರ ಕುಗ್ಗದೇ ಏಳು ಗಂಟೆ ನೇಗಿಲು ಎಳೆದಿವೆ.&lt;/p&gt;&lt;img&gt;&lt;p&gt;ಸುರುಳಿಕಲ್ ಗ್ರಾಮದ ಶಿವಬಸಪ್ಪ ಆಸಂಗಿ ಎಂಬವರು ಎತ್ತುಗಳು ದಾಖಲೆ ಬರೆದಿವೆ. ಮುಂಗಾರು ಬಿತ್ತನೆಗೆ ಕೃಷಿಭೂಮಿಯನ್ನು ಹದ ಮಾಡಲಾಗುತ್ತಿತ್ತು. ಒಟ್ಟು ಆರೂವರೆ ಎಕರೆ ಕೃಷಿಭೂಮಿಯನ್ನ ಏಳು ತಾಸಿನಲ್ಲಿ ಹದಗೊಳಿಸಲಾಗಿದೆ. ಎತ್ತುಗಳಿಗೆ ಬಣ್ಣ ಹಚ್ಚಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.&lt;/p&gt;&lt;img&gt;&lt;p&gt;ರೈತರಾದ ಮಂಜುನಾಥ್ ಉಣ್ಣಿಬಾವಿ, ಬಸಪ್ಪ ಕೆಲ್ಲೂರು, ಶೇಖಪ್ಪ ಹಂಡಿ, ಶಿವಪ್ಪ ಹುಣ್ಣಿಮೆ ಸೇರಿದಂತೆ ಐದಾರು ಜನರಿಂದ ನೇಗಿಲು ಹೊಡೆಯುವ ಕಾರ್ಯ ಮಾಡಿದ್ದಾರೆ. ರೈತರು ಬದಲಾದ್ರೂ ಎತ್ತುಗಳು ಮಾತ್ರ ಏಳು ಗಂಟೆ ನಿರಂತರವಾಗಿ ಕೆಲಸ ಮಾಡಿವೆ. ಎತ್ತುಗಳ ಸಾಹಸ ನೋಡಲು ಹೊಲದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಏರ್​ಟೆಲ್​ ಸಿಮ್​ ಇದ್ದೋರಿಗೆ ಬರುತ್ತಿಲ್ಲ ಗೃಹಲಕ್ಷ್ಮಿ ಹಣ? ಏನಿದು ಅವ್ಯವಹಾರ- ಸರ್ಕಾರ ಹೇಳಿದ್ದೇನು&lt;/strong&gt;&lt;/p&gt;&lt;img&gt;&lt;p&gt;ಜೋಡೆತ್ತುಗಳ ಸಾಧನೆಗೆ ಮೆಚ್ಚುಗೆ ಸೂಚಿಸಿದ ಸುತ್ತಮುತ್ತಲಿನ ಗ್ರಾಮಸ್ಥರು.ನೇಗಿಲು ಹೊಡೆದ ರೈತರಿಗೆ ಬಣ್ಣ ಎರಚಿ ಸಂಭ್ರಮಿಸಿದರು. ಸ್ಥಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯ್ತು. ಎತ್ತುಗಳಿಗೆ ಎತ್ತಿನ ಮಾಲೀಕನಿಗೆ,ಸಾಗುವಳಿ ಮಾಡಿದ ರೈತರಿಗೆ ಶಾಲು ಹೊದಿಸಿ ಗೌರವ ಸೂಚಿಸಲಾಯ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕರಾವಳಿಯಲ್ಲಿ ಶೇ.54ರಷ್ಟು ಭಾರೀ ಕುಸಿದ ಮುಂಗಾರು, ಮಳೆಗಾಲದಲ್ಲೂ ಮುಂದುವರಿದ ಬೇಸಿಗೆ ಹವೆ, ಬತ್ತಿದ ನೇತ್ರಾವತಿ!&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bagalkote-bulls-create-history-by-completing-three-days-worth-of-agricultural-work-in-just-seven-hours-mrq-lzrlpfd"/>
        </item>
        <item>
            <title><![CDATA[ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆ: ನಾಯಕತ್ವ ಬದಲಾವಣೆ ಬಗ್ಗೆ ಸಚಿವ ತಿಮ್ಮಾಪುರ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/rb-timmapur-on-karnataka-leadership-change-congress-gvd/articleshow-myp2cwc</link>
            <guid isPermaLink="true">https://kannada.asianetnews.com/karnataka-districts/rb-timmapur-on-karnataka-leadership-change-congress-gvd/articleshow-myp2cwc</guid>
            <pubDate>Sun, 24 May 2026 17:21:13 +0530</pubDate>
            <description><![CDATA[&lt;p&gt;ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿಗಳು ಕೇವಲ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.&amp;nbsp;&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01heecnthg6nyj29hs5x1qr0fn,imgname-bdb.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಮೇ.24):&lt;/strong&gt; ರಾಜ್ಯ ರಾಜಕಾರಣದ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ನಿಗಾ ಇಟ್ಟಿದೆ. ಆದರೆ, ನನ್ನ ಜ್ಞಾನಕ್ಕೆ ಬಂದ ಮಟ್ಟಿಗೆ ಸದ್ಯಕ್ಕೆ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಈ ಸುದ್ದಿಗಳು ಕೇವಲ ಮಾಧ್ಯಮಗಳಲ್ಲಿ ಸುಖಾಸುಮ್ಮನೆ ಓಡಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.&lt;/p&gt;&lt;p&gt;ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಯಾವ ನಿರ್ದೇಶನ ನೀಡುತ್ತಾರೋ ಅಲ್ಲಿಯವರೆಗೆ ಸದ್ಯದ ಪರಿಸ್ಥಿತಿ ಹೀಗೆಯೇ ಮುಂದುವರಿಯಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧ ಎಂದು ನಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಾಯಕತ್ವದ ಗೊಂದಲದಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ. ಮುಖ್ಯಮಂತ್ರಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದಷ್ಟು ಬೇಗ ಹೈಕಮಾಂಡ್ ಮಧ್ಯ ಪ್ರವೇಶಿಸಿ ವದಂತಿಗಳಿಗೆ ಇತಿಶ್ರೀ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.&lt;/p&gt;&lt;p&gt;ಮಂತ್ರಿ ಸ್ಥಾನ ಸಿಗದಿದ್ದರೆ ದೆಹಲಿಗೆ ಹೋಗಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಕೆಲವು ಕಾಂಗ್ರೆಸ್ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ತಿಮ್ಮಾಪೂರ ಅವರು, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ. ಹೀಗಾಗಿ ಶಾಸಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಶಾಸಕರಾದವರು ಸಚಿವರಾಗಲು ಬಯಸುವುದು ಮತ್ತು ಅದಕ್ಕಾಗಿ ಬೇಡಿಕೆ ಇಡುವುದು ಸಹಜ. ಅದರಲ್ಲಿ ಯಾವುದೇ ತಪ್ಪಿಲ್ಲ. ಅಂತಿಮವಾಗಿ ಯಾರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ಎಲ್ಲವನ್ನೂ ಅಳೆದು ತೂಗಿ, ಸೂಕ್ತ ಲೆಕ್ಕಾಚಾರದೊಂದಿಗೆ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.&lt;/p&gt;&lt;p&gt;&lt;strong&gt;ತುಷ್ಟೀಕರಣ ಮಾಡುತ್ತಿರುವವರು ಬಿಜೆಪಿಯವರು&lt;/strong&gt;&lt;/p&gt;&lt;p&gt;ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣದ ಕೇಸ್ ಹಿಂತೆಗೆದುಕೊಂಡ ವಿಚಾರದ ಕುರಿತು ಮುಸ್ಲಿಂ ತುಷ್ಟೀಕರಣ ಎಂಬ ಬಿಜೆಪಿ ಆರೋಪಕ್ಕೆ ತಿಮ್ಮಾಪೂರ ತಿರುಗೇಟು ನೀಡಿ, ನಾವು ರೈತರ ಕೇಸ್&zwnj;ಗಳನ್ನು ವಾಪಸ್ ಪಡೆದಿದ್ದೇವಲ್ಲ. ಅದು ಕೋಮುವಾದವಾ? ಎಂಟರಿಂದ ಒಂಬತ್ತು ರೈತರ ಕೇಸ್&zwnj; ಹಿಂಪಡೆದಿದ್ದೇವೆ, ಅಲ್ಲಿ ಜಾತಿ ಧರ್ಮ ಬಂದಿತ್ತಾ? ಇದಕ್ಕೆ ಕೋಮು ಬಣ್ಣ ಹಚ್ಚೋದು ಬಿಜೆಪಿಯವರು. ತುಷ್ಟೀಕರಣ ರಾಜಕಾರಣ ಮಾಡುತ್ತಿರುವವರು ಬಿಜೆಪಿಯವರು. ಈ ದೇಶದ ಜನರನ್ನು ಒಗ್ಗೂಡಿಸಲು ಎಲ್ಲ ಜಾತಿ ಧರ್ಮದವರನ್ನು ಅಪ್ಪಿಕೊಂಡು ಹೋಗುತ್ತಿರುವ ಪಕ್ಷ ನಮ್ಮದು ಎಂದರು. ಬಿಜೆಪಿಗರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ದೇಶವನ್ನು ಅಧೋಗತಿಗೆ ತಂದಂತವರು ಬಿಜೆಪಿಯವರು. ಅವರಿಗೆ ಬೇರೆ ದಂದೆಯೇ ಇಲ್ಲ. ಮುಂಜಾನೆ ಎದ್ದು ಕೂಡಲೇ ಧರ್ಮದ ಹೆಸರಲ್ಲಿ ಬದುಕುವಂತವರು. ಅವರಿಗೆ ಧರ್ಮಾಭಿಮಾನವಿಲ್ಲ, ದೇಶಾಭಿಮಾನವೂ ಇಲ್ಲ ಎಂದು ಆರೋಪಿಸಿದರು&lt;/p&gt;&lt;h2&gt;&lt;strong&gt;ದೇಶದ ಮಾನ ಮರ್ಯಾದೆ ನಾರ್ವೆಯಲ್ಲಿ ಹರಾಜು&lt;/strong&gt;&lt;/h2&gt;&lt;p&gt;ನಾರ್ವೆಯಲ್ಲಿ ಪ್ರಧಾನಿಗೆ ಇಡೀ ವಿಶ್ವವೇ ಛೀಮಾರಿ ಹಾಕಿದೆ. ಮಾಧ್ಯಮವನ್ನೇ ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಇದಕ್ಕಿಂತ ಪ್ರಜಾಪ್ರಭುತ್ವದ ಕಗ್ಗೊಲೆ ಮತ್ತಿನ್ನೇನು ಬೇಕು. ಡಾಲರ್ ಎದುರು ರೂಪಾಯಿ ಮೌಲ್ಯ 96ಕ್ಕೆ ಬಂದಿದೆ. ಪೆಟ್ರೋಲ್, ಡೀಸೆಲ್, ಸಿಲಿಂಡರ್ ದರ ಏರುತ್ತಿದೆ. ದೇಶಗಳ ಜೊತೆ ಒಳ್ಳೆ ಸಂಬಂಧ ಇಟ್ಕೊಂಡು ಇಂತವುಗಳ ಬೆಲೆ ಕಡಿಮೆ ಮಾಡುವುದನ್ನು ಬಿಟ್ಟು. ಸಿಲಿಂಡರ್ ಬೆಲೆ ಜಾಸ್ತಿ ಆದರೆ ಊಟ ಬಿಡಿ. ಪೆಟ್ರೋಲ್, ಡೀಸೆಲ್ ರೇಟ್ ಹೆಚ್ಚಿಗೆ ಆದರೆ ಮನೆಯಲ್ಲಿ ಕೂತುಕೊಳ್ಳಿ ಎಂದು ಈ ರೀತಿ ಮಾತುಗಳನ್ನು ದೇಶದ ಪ್ರಧಾನಿ ಹೇಳಿದ್ರೆ ಜನ ಏನಂತಾರೆ. ಯಾವ ದೇಶದ ಜೊತೆ ಇವರು ಸಂಬಂಧ ಚೆನ್ನಾಗಿ ಇಟ್ಟುಕೊಂಡಿದ್ದಾರೆ. ನಮ್ಮ ದೇಶದ ಮಾನ ಮರ್ಯಾದೆ ಎಲ್ಲವನ್ನು ನಾರ್ವೆಯಲ್ಲಿ ಹರಾಜು ಹಾಕಿದ್ದಾರೆ ಪ್ರಧಾನಿಗಳು ಎಂದು ಸಚಿವ ತಿಮ್ಮಾಪೂರ ಹೇಳಿದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/rb-timmapur-on-karnataka-leadership-change-congress-gvd/articleshow-myp2cwc"/>
        </item>
        <item>
            <title><![CDATA[ಬಾಗಲಕೋಟೆ: 16 ವರ್ಷ ಪೂರ್ಣ, ಕುಡಚಿ ರೈಲು ಮಾರ್ಗ ಅಪೂರ್ಣ! ಭೂಮಿ ಕಳಕೊಂಡ ರೈತರು ಕೋರ್ಟ್ ಮುಂದೆ]]></title>
            <link>https://kannada.asianetnews.com/gallery/karnataka-districts/bagalkot-kudachi-railway-project-delayed-16-years-on-only-38-km-complete-gdp-ruhoe33</link>
            <guid isPermaLink="true">https://kannada.asianetnews.com/gallery/karnataka-districts/bagalkot-kudachi-railway-project-delayed-16-years-on-only-38-km-complete-gdp-ruhoe33</guid>
            <pubDate>Fri, 22 May 2026 11:22:02 +0530</pubDate>
            <description><![CDATA[&lt;p&gt;ವರದಿ: ಶ್ರೀನಿವಾಸ ಬಬಲಾದಿ&lt;/p&gt;&lt;p&gt;2011ರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯು ಭೂಸ್ವಾಧೀನ ವಿಳಂಬ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. 142ಕಿ.ಮೀ. ಪೈಕಿ ಕೇವಲ 38ಕಿ.ಮೀ. ಪೂರ್ಣಗೊಂಡಿದ್ದು, ರೈಲು ಸಂಚಾರ ಆರಂಭವಾಗದ ಕಾರಣ ಸ್ಥಳೀಯ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks72w4aqjtcxtm0e6zqx19ez,imgname-1--3--1779428102486.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿ: ಶ್ರೀನಿವಾಸ ಬಬಲಾದಿ&lt;/p&gt;&lt;p&gt;2011ರಲ್ಲಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿಯು ಭೂಸ್ವಾಧೀನ ವಿಳಂಬ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. 142ಕಿ.ಮೀ. ಪೈಕಿ ಕೇವಲ 38ಕಿ.ಮೀ. ಪೂರ್ಣಗೊಂಡಿದ್ದು, ರೈಲು ಸಂಚಾರ ಆರಂಭವಾಗದ ಕಾರಣ ಸ್ಥಳೀಯ ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿವೆ.&lt;/p&gt;&lt;img&gt;&lt;p&gt;ಬಾಗಲಕೋಟೆ: ಕೇಂದ್ರ ಬಜೆಟ್&zwnj;ನಲ್ಲಿ ಘೋಷಣೆಯಾಗಿ ರಾಜ್ಯದ ಆರ್ಥಿಕ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ಬಾಗಲಕೋಟೆಯಿಂದ ಕುಡಚಿವರೆಗಿನ 142 ಕಿ.ಮೀ ಉದ್ದದ ರೈಲ್ವೆ ಮಾರ್ಗದ ಕಾಮಗಾರಿಗೆ 2011 ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇಲ್ಲಿಯವರೆಗೆ 38 ಕಿಮೀ ಮಾತ್ರ ಪೂರ್ಣಗೊಂಡಿದೆ. 108ಕಿ.ಮೀ ಕಾಮಗಾರಿ ಬಾಕಿ ಇದೆ. ಮಾರ್ಗ ನಿರ್ಮಾಣಕ್ಕೆ ಬೇಕಾದ ಭೂಸ್ವಾಧಿನದ ವೆಚ್ಚ ಹಾಗೂ ಕಾಮಗಾರಿಯ ಶೇ.50 ರಷ್ಟು ವೆಚ್ಚ ಭರಿಸುವ ವಾಗ್ದಾನದೊಂದಿಗೆ ಕೇಂದ್ರದ ಸಹಯೋಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ ಮಾಡಿಕೊಡಬೇಕಾದ ರಾಜ್ಯದ ಅಧಿಕಾರಿಗಳ ವಿಳಂಬದಿಂದಾಗಿ ಕಾಮಗಾರಿಗೆ ವೇಗ ಸಿಗುತ್ತಿಲ್ಲ.&lt;/p&gt;&lt;img&gt;&lt;p&gt;ಈ ಮಾರ್ಗ ಪೂರ್ಣಗೊಂಡರೆ ಸಿಮೆಂಟ್, ಲೈಮ್ ಸ್ಟೋನ್, ಸಕ್ಕರೆ ಸಾಗಾಣಿಕೆ ಸರಳವಾಗಲಿದ್ದು ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ರಾಜ್ಯದ ನಿರ್ಲಕ್ಷದಿಂದಾಗಿ ಈ ಮಾರ್ಗ ನಿರ್ಮಾಣದ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ವೇಗ ಪಡೆದಿಲ್ಲ. ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟು 2,460 ಎಕರೆ ಭೂಮಿ ಬೇಕಿದ್ದು, ಬಹುತೇಕ ಭೂಮಿ ಸ್ವಾಧೀನಗೊಂಡಿದೆ. ಆದರೆ, ಸ್ವಾಧೀನಪಡಿಸಿಕೊಂಡು ಭೂಮೀಯ ಮಾಲೀಕರು ನ್ಯಾಯಾಲಗಳ ಮೊರೆ ಹೋಗಿದ್ದಾರೆ.&lt;/p&gt;&lt;img&gt;&lt;p&gt;ಬಾಗಲಕೋಟೆ ಜಿಲ್ಲೆಯ ಭೂ ಸ್ವಾಧೀನಕ್ಕೆ ₹365 ಕೋಟಿ, ಬೆಳಗಾವಿ ಜಿಲ್ಲೆಗೆ ₹160 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 142 ಕಿ.ಮೀ ಮಾರ್ಗದ ಕಾಮಗಾರಿಗೆ 2010-11 ರಲ್ಲಿ ₹986 ಕೋಟಿ ವೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಅದರ ಮೊತ್ತ ₹3,128 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಶೇ.39 ರಷ್ಟು ಭೌತಿಕ ಪ್ರಗತಿಯಾಗಿದ್ದರೆ, ಶೇ.30 ರಷ್ಟು ಆರ್ಥಿಕ ಪ್ರಗತಿಯಾಗಿದೆ. ಈಗಾಗಲೇ ಪೂರ್ಣಗೊಂಡಿರುವ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಿದೆ. ದಾದನಟ್ಟಿ-ಯಾದವಾಡ ನಡುವಿನ 15ಕಿ.ಮೀ ಮಾರ್ಗದಲ್ಲಿ ಬರುವ ಒಂಭತ್ತು ಸಣ್ಣ ಸೇತುವೆ, ಏಳು ಕೇಳಸೇತುವೆ, ಒಂದು ಬೃಹತ್ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಯಾದವಾಡ-ಜಮಖಂಡಿ ನಡುವೆ ಶೇ.96 ರಷ್ಟು ಜಮಖಂಡಿ-ಜಗದಾಳ ನಡುವೆ ಶೇ.93 ರಷ್ಟು, ಜಗದಾಳ-ಹಾರೂಗೇರಿ ನಡುವಿನ ಶೇ.91 ರಷ್ಟು ಹಾಗೂ ಹಾರೂಗೇರಿ-ಕುಡಚಿ ನಡುವೆ ಶೇ.60 ರಷ್ಟು ಭೂಸ್ವಾಧಿನ ಆಗಿದೆ. ಲೋಕಾಪುರದಿಂದ ಯಾದವಾಡವರೆಗಿನ 21 ಕಿ.ಮೀ ಮಾರ್ಗದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ.&lt;/p&gt;&lt;img&gt;&lt;p&gt;ಕೆಲ ತಿಂಗಳುಗಳ ಹಿಂದೆ ರೈಲ್ವೆ ಮಾರ್ಗ ವೀಕ್ಷಣೆಗೆ ಬಂದಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ 2027ರ ಹೊತ್ತಿಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದಿದ್ದರು. ಆದರೆ, ಈಗ ನಡೆದಿರುವ ಕಾಮಗಾರಿ ವೇಗೆ ನೋಡಿದರೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಸರಕು ಸಾಗಣೆಗೆಯ ಗೂಡ್ಸ್ ರೈಲು ಸಂಚಾರ ಆರಂಭಗೊಂಡಿದೆ. ಆದರೆ, 2025 ಮಾರ್ಚನಿಂದ ಆರಂಭಗೊಳ್ಳಲಿದೆ ಎಂದು ಸಚಿವರೇ ಹೇಳಿದ್ದ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿಲ್ಲ, ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಯಾಣಿಕರ ರೈಲು ಸಂಚಾರ ಕೂಡ ಆರಂಭಿಸಬೇಕು ಎಂಬ ಕೂಗಿಗೆ ಮನ್ನಣೆ ಸಿಕ್ಕಿಲ್ಲ. ನೆನೆಗುದಿಗೆ ಬಿದ್ದು ಶತಮಾನದ ಅಂಚಿಗೆ ಬಂದು ನಿಂತ ಕುಡಚಿ-ಬಾಗಲಕೋಟ ರೈಲು ಮಾರ್ಗಕ್ಕೆ ಇನ್ನೂ ಯಾವಾಗ ಸಮಯ ಕೂಡಿಬರುತ್ತದೆಯೋ ಗೊತ್ತಾಗುತ್ತಿಲ್ಲ.&lt;/p&gt;&lt;img&gt;&lt;p&gt;ರೈಲ್ವೆ ಇಲಾಖೆಗೆ ಪ್ರಥಮವಾಗಿ ಪ್ಯಾಸೆಂಜರ್&zwnj; ರೈಲು ಪ್ರಾರಂಭಿಸಲು ಮನವಿ ಮಾಡಲಾಗಿದೆ. ರೈಲ್ವೆ ಇಲಾಖೆ ಮೊಂಡ ಸ್ವಭಾವ ಬಿಟ್ಟು ಜಿಲ್ಲೆಯ ಜನರ ಅಪೇಕ್ಷೆಯಂತೆ ಪ್ಯಾಸೆಂಜರ್&zwnj; ರೈಲು ಪ್ರಾರಂಭಿಸಿ ನಂತರ ಸರಕು ಸಾಗಾಣಿಕೆ ವ್ಯವಹಾರ ನಡೆಸುವುದು ಒಳ್ಳೆಯದು. ಇಲ್ಲದಿದ್ದರೇ ಹೋರಾಟ ಸಮಿತಿಯು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತಿತ ಹೋರಾಟ ಮಾಡಿ ರೈಲ್ವೆ ಇಲಾಖೆಗೆ ಬಿಸಿ ತಟ್ಟಿಸಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಬಾಗಲಕೋಟೆ- ಮೈಸೂರು (ಬಸವ ಎಕ್ಸ್&zwnj;ಪ್ರೆಸ್&zwnj;) ರೈಲನ್ನು ಲೋಕಾಪುರ ರೈಲು ನಿಲ್ದಾಣದಿಂದಲೇ ಆರಂಭಿಸಬೇಕು. ಇದರಿಂದ ಲೋಕಾಪುರ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗುತ್ತದೆ. ಬೆಂಗಳೂರು ಆಸ್ಪತ್ರೆ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಪುಣ್ಯಕ್ಷೇತ್ರಗಳಿಗಾಗಿ ತೆರಳುವವರಿಗೆ ಅನುಕೂಲ, ಮೈಸೂರಿನಿಂದ ಬಾಗಲಕೋಟೆ ಬೆಳಗ್ಗೆ 11.15ಕ್ಕೆ ರೈಲು ಬರುತ್ತದೆ. ಮಧ್ಯಾಹ್ನ 2.20 ಮರಳಿ ಹೋಗುತ್ತದೆ ಆ ನಡುವೆ 3 ಗಂಟೆ ಸಮಯವಿರುವುದರಿಂದ ಲೋಕಾಪುರವರೆಗೆ ವಿಸ್ತರಿಸಬೇಕೆಂದು ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿ ಒತ್ತಾಯಿಸಿದ್ದಾರೆ.&lt;/p&gt;&lt;p&gt;ಬಾಗಲಕೋಟೆ-ಲೋಕಾಪುರ ನಡುವೆ ಡೆಮೊ ರೈಲು ಆರಂಭಿಸುವ ಘೋಷಣೆ ಮಾಡಲಾಗಿದೆ. ಆದರೆ, ಇನ್ನೂ ಆರಂಭವಾಗಿಲ್ಲ. ಬಾಗಲಕೋಟೆ-ಲೋಕಾಪುರ ಮಾತ್ರ ಆರಂಭಿಸಿದರೇ ಉಪಯೋಗವಿಲ್ಲ, ದೂರದ ಊರುಗಳಿಗೂ ಸಂಪರ್ಕ ಕಲ್ಪಿಸಬೇಕು. ರೈಲ್ವೆ ಮಾರ್ಗ ಶೀರ್ಘ ಪೂರ್ಣಗೊಳ್ಳಬೇಕು. ಇದು ಈಡೇರುವವರೆಗೆ ಹೋರಾಟ ನಿಲ್ಲದು.&lt;/p&gt;&lt;p&gt;-ಕುತುಬುದ್ಧೀನ್ ಖಾಜಿ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರು&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/gallery/karnataka-districts/bagalkot-kudachi-railway-project-delayed-16-years-on-only-38-km-complete-gdp-ruhoe33"/>
        </item>
        <item>
            <title><![CDATA[20 ವರ್ಷಗಳಿಂದ ಭೂ ಪರಿಹಾರ ನೀಡದ ನೌಕರನಿಗೆ ಚಪ್ಪಲಿ ಏಟು; ರೈತನ ಪರ ನಿಂತ ಲೋಕಾಯುಕ್ತ, ಸುಮೊಟೊ ಕೇಸ್  ದಾಖಲು]]></title>
            <link>https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld</link>
            <guid isPermaLink="true">https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld</guid>
            <pubDate>Fri, 19 Jun 2026 06:01:45 +0530</pubDate>
            <description><![CDATA[&lt;p&gt;20 ವರ್ಷಗಳಿಂದ ಭೂ ಪರಿಹಾರ ಸಿಗದ ಕಾರಣ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ್ದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಲೋಕಾಯುಕ್ತರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ. ಮಾಧ್ಯಮ ವರದಿ ಆಧರಿಸಿ ಈ ಕ್ರಮ ಕೈಗೊಂಡಿದ್ದು, ಸಂಬಂಧಿತ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kvem6nzbszwtr116k5zc3bym,imgname----------------------5--1781828638699.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜೂ.19)&lt;/strong&gt;: ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೌಕರನಿಗೆ ಚಪ್ಪಲಿ ಏಟು ನೀಡಿದ ಪ್ರಕರಣ ಇದೀಗ ರಾಜ್ಯ ಲೋಕಾಯುಕ್ತದ ಗಮನಕ್ಕೆ ಬಂದಿದ್ದು, ಚಪ್ಪಲಿ ಏಟು ನೀಡಿದ ರೈತ ಬಸಪ್ಪ ದೊಡ್ಡಮನಿ ಪರವಾಗಿ ಮಾಧ್ಯಮದ ವರದಿಯಾಧರಿಸಿ ಬೆಂಗಳೂರು ಲೋಕಾಯುಕ್ತರು(Lokayukta) ಸುಮೊಟೊ ಕೇಸ್&zwnj;(Sumoto Case) ದಾಖಲಿಸಿಕೊಂಡಿದ್ದಾರೆ.&lt;/p&gt;&lt;h2&gt;20 ವರ್ಷದಿಂದ ಭೂಪರಿಹಾರ ಸಿಗದೆ ಬೇಸತ್ತಿದ್ದ ರೈತ&lt;/h2&gt;&lt;p&gt;20 ವರ್ಷದಿಂದ ಸ್ವಾಧೀನಕ್ಕೊಳಪಟ್ಟ ಭೂಮಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ 2ರ ನ್ಯಾಯಮೂರ್ತಿ ಬಿ.ವೀರಪ್ಪ(Lokayukta B Veerappa) ಅವರ ಆದೇಶದ ಮೇರೆಗೆ ಸುಮೊಟೊ ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ, ಸಂಬಂಧಿತ ಅಧಿಕಾರಿಗಳಿಗೆ ಜುಲೈ 27ರಂದು ವಿಚಾರಣೆಗೆ ಹಾಜರಾಗಲು ನಿರ್ದೇಶನ ನೀಡಲಾಗಿದೆ.&lt;/p&gt;&lt;h3&gt;ರೈತನ ಪರ ಸುಮೊಟೊ ಕೇಸ್&zwnj; ದಾಖಲಿಸಿದ ಲೋಕಾಯುಕ್ತ&lt;/h3&gt;&lt;p&gt;ಬಸಪ್ಪ ದೊಡ್ಡಮನಿ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕೇಸ್ ವರ್ಕರ್ ನೀಲಕಂಠ ಅಂಕದ ಅವರಿಗೆ ಚಪ್ಪಲಿ ಏಟು ನೀಡಿದ್ದ. ಈ ಬಗ್ಗೆ ಬಾಗಲಕೋಟೆ ನವನಗರ ಠಾಣೆಯಲ್ಲಿ ನೀಲಕಂಠ ಅವರು ದೂರು ದಾಖಲಿಸಿದ್ದರು. ನಂತರ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದಲೂ ದೂರು ದಾಖಲಾಗಿತ್ತು. ಬಳಿಕ ರೈತ ಬಸಪ್ಪನನ್ನು ಬಂಧಿಸಿ ನವನಗರ ಪೊಲೀಸರು ಬಿಡುಗಡೆ ಮಾಡಿದ್ದರು. ಗುರುವಾರ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿಗಳ ವಿರುದ್ಧ, ದಲಿತ ಸಂಘರ್ಷ ಸಮಿತಿ ಭೀಮವಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಾಗಲಕೋಟೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಯತ್ನ ನಡೆಸಿದ್ದರು. ಇದರ ಬೆನ್ನಲ್ಲೇ ರೈತನ ಪರ ಸುಮೊಟೊ ಕೇಸ್&zwnj; ದಾಖಲಾಗಿದೆ.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/lokayukta-notice-to-five-bagalkot-officials-over-pending-relief-for-land-acquisition-rav/articleshow-stxobld"/>
        </item>
        <item>
            <title><![CDATA[Jamakhandi: ತನಿಖೆಗೆ ತೆರಳಿದ್ದ ವೇಳೆಯೇ ASI ಭೀಮಶಿ ಮಧುರಖಂಡಿ ಹೃದಯಾಘಾತದಿಂದ ನಿಧನ]]></title>
            <link>https://kannada.asianetnews.com/gallery/karnataka-districts/bagalkote-jamakhandi-asi-bhimashi-madhurakhandi-dies-of-heart-attack-while-on-an-investigation-mrq-wbtwu0z</link>
            <guid isPermaLink="true">https://kannada.asianetnews.com/gallery/karnataka-districts/bagalkote-jamakhandi-asi-bhimashi-madhurakhandi-dies-of-heart-attack-while-on-an-investigation-mrq-wbtwu0z</guid>
            <pubDate>Mon, 15 Jun 2026 10:33:25 +0530</pubDate>
            <description><![CDATA[ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಬಾಗಲಕೋಟೆ ನಗರ ಠಾಣೆಯ ಎಎಸ್&zwnj;ಐ ಭೀಮಶಿ ಮಧುರಖಂಡಿ, ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಅಧಿಕಾರಿಯ ಅಂತ್ಯಕ್ರಿಯೆ ಸ್ವಗ್ರಾಮ ಹುನ್ನೂರಿನಲ್ಲಿ ನಡೆಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv4t5bnfhqbpcmt3wah9qd6j,imgname-asi-death--1--1781499342511.jpg" type="image/jpeg" height="390" width="690"/>
            <content:encoded><![CDATA[ಪ್ರಕರಣವೊಂದರ ತನಿಖೆಗಾಗಿ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಬಾಗಲಕೋಟೆ ನಗರ ಠಾಣೆಯ ಎಎಸ್&zwnj;ಐ ಭೀಮಶಿ ಮಧುರಖಂಡಿ, ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದ 59 ವರ್ಷದ ಅಧಿಕಾರಿಯ ಅಂತ್ಯಕ್ರಿಯೆ ಸ್ವಗ್ರಾಮ ಹುನ್ನೂರಿನಲ್ಲಿ ನಡೆಯಲಿದೆ.&lt;img&gt;&lt;p&gt;ಬಾಗಲಕೋಟೆ: ಕರ್ತವ್ಯ ನಿರತ ನಗರ ಠಾಣೆ ಎಎಸ್&zwnj;ಐ ಭೀಮಶಿ ಮಧುರಖಂಡಿ ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಭೀಮಶಿ ಮಧುರಖಂಡಿ 59 ವಯಸ್ಸು ಆಗಿತ್ತು.&lt;/p&gt;&lt;img&gt;&lt;p&gt;ಪ್ರಕರಣವೊಂದರ ತನಿಖೆಗೆಂದು ಪಕ್ಕದ ರಾಜ್ಯ ಮಹಾರಾಷ್ಟ್ರದ ಪಂಢರಪುರಕ್ಕೆ ತೆರಳಿದ್ದ ಅವರು, ದೇವರ ದರ್ಶನಕ್ಕೆಂದು ಹೋದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಭೀಮಶಿ ಮದರಖಂಡಿ ಸಮೀಪದ ಹುನ್ನೂರು ಗ್ರಾಮದವರಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು, ಒರ್ವ ಪುತ್ರಿ ಸೇರಿ ಅಪಾರ ಬಂಧು ಬಳಗ ಇದೆ. ಇದೇ ವರ್ಷ ಜುಲೈ 31ರಂದು ಅವರು ನಿವೃತ್ತಿ ಹೊಂದಲಿದ್ದರು.&lt;/p&gt;&lt;img&gt;&lt;p&gt;ಜನಸ್ನೇಹಿ ಅಧಿಕಾರಿಯಾಗಿದ್ದ ಎಎಸ್&zwnj;ಐ ಮದರಖಂಡಿ ಅವರ ಸಾವಿಗೆ ಅಧಿಕಾರಿಗಳು ಹಾಗೂ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಹುನ್ನೂರಿನ ರುದ್ರಭೂಮಿಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಗರಠಾಣೆಯ ಅಧಿಕಾರಿಗಳು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.&lt;/p&gt;&lt;img&gt;&lt;p&gt;ಇಂದು ಜಮಖಂಡಿ ನಗರದ ಪ್ರಮುಖ ರಸ್ತೆಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ನಂತರ ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ಸ್ವಗ್ರಾಮ ಹುನ್ನೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.&lt;/p&gt;]]></content:encoded>
            <category>bagalkot</category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/bagalkote-jamakhandi-asi-bhimashi-madhurakhandi-dies-of-heart-attack-while-on-an-investigation-mrq-wbtwu0z"/>
        </item>
        <item>
            <title><![CDATA[ಕಾರವಾರಕ್ಕೆ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹100 ಕೋಟಿ ಕೊಟ್ಟ ಸರ್ಕಾರ!]]></title>
            <link>https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</link>
            <guid isPermaLink="true">https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz</guid>
            <pubDate>Thu, 21 May 2026 22:23:56 +0530</pubDate>
            <description><![CDATA[&lt;p&gt;ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯು ಕಾರವಾರದಲ್ಲಿ 100 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರೊಂದಿಗೆ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಯಿ-ಮಗು ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01ks5qaf6g5wrrt4vm22e5xhna,imgname-karnataka-cabinet-meeting-1779382435023.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಮೇ 21): ಉ&lt;/strong&gt;ತ್ತರ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇನ್ನು ಜೈಲುಗಳ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ವ್ಯಾಪಾರಿ ಮಳಿಗೆ ಆರಂಭಿಸಲೂ ಅನುಮೋದನೆ ನೀಡಿದೆ.&lt;/p&gt;&lt;p&gt;ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು ಮತ್ತು ಕಾರಾಗೃಹ ಇಲಾಖೆಯ ಆದಾಯ ಹೆಚ್ಚಿಸಲು ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ಕಾರವಾರಕ್ಕೆ ಬಂತು 'ಸೂಪರ್ ಸ್ಪೆಷಾಲಿಟಿ' ಬಲ&lt;/strong&gt;&lt;/h2&gt;&lt;p&gt;ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತುರ್ತು ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (KIMS) ಆವರಣದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅಂದಾಜು 100 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇದರಿಂದ ಜಿಲ್ಲೆಯ ಜನರು ಇನ್ನು ಮುಂದೆ ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಮಂಗಳೂರು ಅಥವಾ ಗೋವಾಕ್ಕೆ ಅಲೆಯುವುದು ತಪ್ಪಲಿದೆ.&lt;/p&gt;&lt;h3&gt;&lt;strong&gt;ಉತ್ತರ ಕರ್ನಾಟಕದಲ್ಲಿ ತಾಯಿ-ಮಗು ಆಸ್ಪತ್ರೆಗಳು&lt;/strong&gt;&lt;/h3&gt;&lt;p&gt;ಹೈದರಾಬಾದ್ ಕರ್ನಾಟಕ ಭಾಗದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರ ಮುಂದಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮತ್ತು ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆಗಳ ಸಾಮರ್ಥ್ಯದ 'ತಾಯಿ ಮತ್ತು ಮಕ್ಕಳ ಆರೋಗ್ಯ' (MCH) ಆಸ್ಪತ್ರೆಗಳನ್ನು ನಿರ್ಮಿಸಲು ಒಟ್ಟು 38 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ. ಇದು ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ನವಜಾತ ಶಿಶುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.&lt;/p&gt;&lt;h2&gt;&lt;strong&gt;ಡಿಜಿಟಲೀಕರಣ ಮತ್ತು ನಮ್ಮ ಕ್ಲಿನಿಕ್ ಬಲವರ್ಧನೆ&lt;/strong&gt;&lt;/h2&gt;&lt;p&gt;ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿನ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ABArK) ಕ್ಲೇಮ್ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು 17.85 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಇನ್ನು ರಾಜ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 'ನಮ್ಮ ಕ್ಲಿನಿಕ್'ಗಳಿಗೆ ಅಗತ್ಯವಿರುವ ಪ್ರಯೋಗಾಲಯ ಉಪಕರಣಗಳು ಮತ್ತು ಆರ್&zwnj;ಡಿ ಕಿಟ್ (RD KIT) ಖರೀದಿಸಲು 22 ಕೋಟಿ ರೂಪಾಯಿಗಳನ್ನು 15ನೇ ಹಣಕಾಸು ಆಯೋಗದ ಅನುದಾನದಡಿ ಬಳಸಲು ಅನುಮೋದನೆ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಜೈಲಿನ ಆವರಣದಲ್ಲಿ ಪೆಟ್ರೋಲ್ ಬಂಕ್&zwnj;ಗಳು!&lt;/strong&gt;&lt;/h3&gt;&lt;p&gt;ಕಾರಾಗೃಹ ಇಲಾಖೆಯ ಜಮೀನನ್ನು ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ವಿನೂತನ ಯೋಜನೆ ರೂಪಿಸಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ (ಪರಪ್ಪನ ಅಗ್ರಹಾರ) ಮತ್ತು ಧಾರವಾಡ ಕೇಂದ್ರ ಕಾರಾಗೃಹದ ಆವರಣದಲ್ಲಿ ಪೆಟ್ರೋಲ್ ಬಂಕ್ ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಡೀಲರ್&zwnj;ಶಿಪ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಧಾರವಾಡದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ವತಿಯಿಂದ ಈ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಇದು ಸರ್ಕಾರದ ಆದಾಯ ಹೆಚ್ಚಿಸುವುದಲ್ಲದೆ, ಸುಧಾರಣಾ ಮಾರ್ಗದಲ್ಲಿರುವ ಕೈದಿಗಳಿಗೆ ಉದ್ಯೋಗಾವಕಾಶ ನೀಡುವ ಸಾಧ್ಯತೆಯೂ ಇದೆ.&lt;/p&gt;]]></content:encoded>
            <category>bagalkot</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-cabinet-meeting-decisions-karwar-super-specialty-hospital-health-infrastructure-sat/articleshow-wggnpmz"/>
        </item>
        <item>
            <title><![CDATA[ಜೀವ ತುಂಬಿಕೊಂಡ ರಬಕವಿ-ಮಹಿಷವಾಡಗಿ ಸೇತುವೆ! ನದಿಯಲ್ಲಿ ನೀರಿದ್ರೂ ಚುರುಕಿನಿಂದ ಕಾಮಗಾರಿ]]></title>
            <link>https://kannada.asianetnews.com/karnataka-districts/after-many-struggles-the-rabakavi-mahishwadagi-bridge-work-has-picked-up-pace-again-mrq/articleshow-whxwmtr</link>
            <guid isPermaLink="true">https://kannada.asianetnews.com/karnataka-districts/after-many-struggles-the-rabakavi-mahishwadagi-bridge-work-has-picked-up-pace-again-mrq/articleshow-whxwmtr</guid>
            <pubDate>Sat, 13 Jun 2026 11:37:05 +0530</pubDate>
            <description><![CDATA[ಹಲವು ಹೋರಾಟಗಳ ನಂತರ, ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಯು ಮತ್ತೆ ಚುರುಕುಗೊಂಡಿದೆ. ಒಟ್ಟು ₹55 ಕೋಟಿ ವೆಚ್ಚದ ಈ ಯೋಜನೆಗೆ ಹೆಚ್ಚುವರಿಯಾಗಿ ₹10 ಕೋಟಿ ಅನುದಾನದ ಪ್ರಸ್ತಾವನೆ ಸಿದ್ಧವಾಗಿದ್ದು, ನದಿಯಲ್ಲಿ ನೀರಿದ್ದರೂ ಕಾಮಗಾರಿ ವೇಗವಾಗಿ ಸಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kty61p80xvkc1r825x0dwdd0,imgname-rabakavi-banahatti-1781276924160.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಕಳೆದೆರಡು ತಿಂಗಳಿಂದ ರಬಕವಿ-ಬನಹಟ್ಟಿ ಜನತೆ ಸಾಕಷ್ಟು ಹೋರಾಟ, ಪ್ರತಿಭಟನೆ ಹಾಗೂ ರಾಜಕೀಯ ನಾಯಕರ ಹೇಳಿಕೆಗಳ ಮಧ್ಯೆ ಒಟ್ಟಾರೆ ಈ ಭಾಗದ ಮಹತ್ವದ ಯೋಜನೆಯಾದ ರಬಕವಿ-ಮಹಿಷವಾಡಗಿ ಸೇತುವೆ ಕಾರ್ಯಕ್ಕೆ ಮತ್ತೇ ಜೀವ ತುಂಬುವ ಮೂಲಕ ನಿತ್ಯ ಕಾಮಗಾರಿ ಚುರುಕಿನಿಂದ ಕೂಡಿರುವುದು ವಿಶೇಷ.&lt;/p&gt;&lt;p&gt;ಒಟ್ಟು ₹ 55 ಕೋಟಿ ವೆಚ್ಚದಲ್ಲಿನ ಕಾಮಗಾರಿಯಾಗಿರುವ ಈ ಸೇತುವೆಯು ಆಗಿನ ಸಚಿವೆ ಆಗಿದ್ದ ಡಾ.ಉಮಾಶ್ರೀ, ಸರ್ಕಾರದಿಂದ ₹ 25 ಕೋಟಿಗಳ ಮೂಲಕ 2018ರಲ್ಲಿ ಚಾಲನೆಗೊಂಡು ಮಧ್ಯಂತರ ಭಾಗವಾಗಿ 2022ರಲ್ಲಿ ಶಾಸಕ ಸಿದ್ದು ಸವದಿ ₹ 20 ಕೋಟಿಗಳಷ್ಟು ಹೆಚ್ಚುವರಿಗೊಳಿಸಿ ಸೇತುವೆ ವಿಸ್ತೀರ್ಣದ ಅಗಲವನ್ನು ಹೆಚ್ಚಳಗೊಳಿಸಿ ಅನುದಾನ ತಂದಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ರಬಕವಿ-ಬನಹಟ್ಟಿ ಸಾರ್ವಜನಿಕರಿಂದ ನಡೆದ ಹೋರಾಟದಲ್ಲಿ ಸರ್ಕಾರದಿಂದ ಮತ್ತೆ ₹ 10 ಕೋಟಿ ಹೆಚ್ಚುವರಿ ಕಾಮಗಾರಿಯಿಂದ ಕಾಮಗಾರಿಗೆ ಜೀವ ಬಂದಂತಾಗಿದೆ.&lt;/p&gt;&lt;h2&gt;&lt;strong&gt;ನದಿಯೊಳಗೆ ನೀರಿದ್ದರೂ ಸಮಸ್ಯೆಯಿಲ್ಲ&lt;/strong&gt;&lt;/h2&gt;&lt;p&gt;ಸದ್ಯ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್&zwnj;ನಿಂದ 4 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಕಳೆದ ಬುಧವಾರದಿಂದ ಹಿಪ್ಪರಗಿ ಬ್ಯಾರೇಜ್&zwnj;ಗೆ ನೀರು ಹರಿದು ಬರುತ್ತಿದೆ. ಕೋಯ್ನಾ ಜಲಾಶಯದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ನೀರಿಲ್ಲದಿದ್ದರೂ ಮಳೆ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆ ನೀರು ಹರಿದು ಬಂದ ನೀರು ನದಿಗೆ ಸೇರುತ್ತಿದೆ ಎಂಬುವುದು ಅಧಿಕಾರಿಗಳಿಂದ ತಿಳಿದು ಬಂದ ಮಾಹಿತಿಯಾಗಿದೆ. ಸಂಜೆ ವೇಳೆಗೆ ಒಳಹರಿವಿನ ತೀವೃತೆ ಕುಸಿದಿದ್ದು, ನೀರು ಸರಾಗವಾಗಿ ಸಾಗಿ ಹಿಪ್ಪರಗಿ ಜಲಾಶಯ ತಲುಪುವಂತೆ ಗುತ್ತಿಗೆದಾರ ಅಭಿಯಂತರ ರೊಟ್ಟಿ ಕಾರ್ಮಿಕರ ಬಳಸಿ ಸೇತುವೆ ರಸ್ತೆಯ ಎರಡು ಭಾಗಗಳಲ್ಲಿ ಕತ್ತರಿಸಿದ್ದರಿಂದ ನದಿ ಪಾತ್ರದ ಮುಂಭಾಗದ ಜನತೆಗೆ ಅನುವಾಗಿದೆ.&lt;/p&gt;&lt;p&gt;ನದಿಯ ನೀರೊಳಗಿನ ಸೇತುವೆ ಕಾರ್ಯ ಪೂರ್ಣ ಪ್ರಮಾಣದಲ್ಲಾಗಿರುವ ಕಾರಣ ಕಾಮಗಾರಿಗೆ ಯಾವುದೇ ತೊಂದರೆಯಾಗದು. ಇದೀಗ ಹೆಚ್ಚಿನ ತಂತ್ರಜ್ಞಾನ ಅಳವಡಿಕೆಯಿಂದ ಎಲ್ಲ ಪಿಲ್ಲರ್&zwnj;ಗಳ ಎತ್ತರಿಸುವ ಕಾರ್ಯ ತ್ವರಿತವಾಗಬೇಕಿದೆ.&lt;/p&gt;&lt;h3&gt;&lt;strong&gt;₹ 10 ಕೋಟಿ ವೆಚ್ಚದ ಯೋಜನೆ ಸಿದ್ಧತೆ&lt;/strong&gt;&lt;/h3&gt;&lt;p&gt;ಇದೀಗ ರಾಜ್ಯ ರಸ್ತೆ ನಿಗಮದಿಂದ ಅಧಿಕಾರಿಗಳ ತಂಡ ಆಗಮಿಸಿದ್ದು, ನದಿ ಪ್ರವಾಹ ಸಂದರ್ಭ ಸುತ್ತಲಿನ ಗ್ರಾಮಗಳ ಹಾಗೂ ಹೊಲ-ಗದ್ದೆಗಳಿಗೆ ಹಿನ್ನೀರು ನಿಂತು ನೆರೆ ಉಂಟಾಗಬಾರದೆಂಬ ಉದ್ದೇಶದಿಂದ ಸೇತುವೆ ಎರಡೂ ಬದಿಯಲ್ಲಿ ಕಮಾನು(ಬ್ಲಾಕ್)ಗಳ ಅಳವಡಿಕೆಗೆ ಹೆಚ್ಚುವರಿ ₹ 10 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವ ಕಾರ್ಯ ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ಭಾಗದ 5 ಬ್ಲಾಕ್ ಹಾಗೂ ಅಥಣಿ ಕಡೆಯ 2 ಬ್ಲಾಕ್&zwnj;ಗಳ ತಾಂತ್ರಿಕ ವ್ಯವಸ್ಥೆ ನಡೆಯುತ್ತಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Karnataka Weather: ಬೆಂಗಳೂರಿಗರೇ ಸುಖಾಸುಮ್ಮನೆ ಹೊರಬರಬೇಡಿ, ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ!&lt;/strong&gt;&lt;/p&gt;&lt;p&gt;ನದಿ ಪಾತ್ರದಲ್ಲಿ ನೀರು ಹೆಚ್ಚಳಗೊಳ್ಳುವ ಮುನ್ನ ತಯಾರಿಸಲಾದ ರಸ್ತೆ ಬಳಸಿ ಗುತ್ತಿಗೆದಾರ ಪಿಲ್ಲರ್ ಎತ್ತರಿಸುವ ಮೇಲ್ಬಾಗದ ಕಾಮಗಾರಿ ತ್ವರಿತಗೊಳಿಸಿ, ನದಿ ಪಾತ್ರದಲ್ಲಿ ನೀರು ಹೆಚ್ಚಳಗೊಂಡಾಗ ರಬಕವಿ ಮತ್ತು ಮಹಿಷವಾಡಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪರ್ಕ ರಸ್ತೆಗಳನ್ನು ನಿರ್ಮಿಸಿ ನೀಡಿದ ಭರವಸೆಯಂತೆ 2027ರ ಮಾರ್ಚ ತಿಂಗಳಲ್ಲಿ ಲೋಕಾರ್ಪಣೆಗೊಳಿಸಬೇಕು ಎಂದು ಹಳಿಂಗಳಿಯ ಪ್ರಗತಿಪರ ರೈತರಾದ ಭುಜಬಲಿ ವೆಂಕಟಾಪುರ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಭಾರತದ ಮೇಲೆ ಕಡಲ ಮುನಿಸು, ಎಲ್&zwnj; ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/after-many-struggles-the-rabakavi-mahishwadagi-bridge-work-has-picked-up-pace-again-mrq/articleshow-whxwmtr"/>
        </item>
        <item>
            <title><![CDATA[ಸೈಕಲ್, ಬೈಕ್ ಪ್ರಯಾಣ ಕೇವಲ ಪ್ರಚಾರದ ಗಿಮಿಕ್: ಬಿಜೆಪಿ ನಾಯಕರ ವಿರುದ್ಧ ಜಾರಕಿಹೊಳಿ ವಾಗ್ದಾಳಿ]]></title>
            <link>https://kannada.asianetnews.com/karnataka-districts/minister-satish-jarkiholi-on-pm-modi-petrol-diesel-comments-gvd/articleshow-x04o299</link>
            <guid isPermaLink="true">https://kannada.asianetnews.com/karnataka-districts/minister-satish-jarkiholi-on-pm-modi-petrol-diesel-comments-gvd/articleshow-x04o299</guid>
            <pubDate>Sun, 24 May 2026 17:35:00 +0530</pubDate>
            <description><![CDATA[&lt;p&gt;ಮೋದಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕರೆಗೆ ಓಗೊಟ್ಟು ಸೈಕಲ್ ಹಾಗೂ ಬೈಕ್ ಮೂಲಕ ಪ್ರಯಾಣಿಸುತ್ತಿರುವ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೇವಲ ಎರಡು ದಿನ ಇದನ್ನು ಪಾಲಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kb2fen8hptdgjveb3ybyvyw9,imgname-----------------------2025-11-27t161112.237-1764241134865.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಮೇ.24): &lt;/strong&gt;ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕರೆಗೆ ಓಗೊಟ್ಟು ಸೈಕಲ್ ಹಾಗೂ ಬೈಕ್ ಮೂಲಕ ಪ್ರಯಾಣಿಸುತ್ತಿರುವ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೇವಲ ಎರಡು ದಿನ ಇದನ್ನು ಪಾಲಿಸಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಟೀಕಿಸಿದ್ದಾರೆ. ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿ ಹಲವು ಬಿಜೆಪಿ ನಾಯಕರು ಸೈಕಲ್ ಮತ್ತು ಬೈಕ್ ಸವಾರಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಆದರೆ ಈ ನಡೆ ಕೇವಲ ತೋರಿಕೆಯದ್ದು ಎಂದರು.&lt;/p&gt;&lt;p&gt;ಕೇವಲ ಒಂದು ಫೋಟೋ ತೆಗೆದುಕೊಳ್ಳುವ ಸಲುವಾಗಿ ಇಂತಹ ಗಿಮಿಕ್&zwnj;ಗಳನ್ನು ಮಾಡಲಾಗುತ್ತಿದೆ. ಸೈಕಲ್ ಅಥವಾ ಬೈಕ್&zwnj;ನಲ್ಲಿ ಹೋಗುವ ನಾಯಕರ ಮುಂದೆ ಕ್ಯಾಮೆರಾ ತಂಡ, ಅವರ ಹಿಂದೆ ಹತ್ತಾರು ಸುರಕ್ಷತಾ ವಾಹನಗಳ ದಂಡೇ ಇರುತ್ತದೆ. ಒಬ್ಬ ಮುಖ್ಯಮಂತ್ರಿಗೆ ಇಡೀ ರಾಜ್ಯದ ಜವಾಬ್ದಾರಿ ಇರುವುದರಿಂದ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯವಿರುತ್ತದೆ. ಅವರು ವಾಹನದಲ್ಲಿದ್ದಾಗ ಇರುವ ಭದ್ರತೆಗಿಂತ, ಹೊರಗೆ ಸೈಕಲ್&zwnj; ನಲ್ಲಿ ಹೋದಾಗ ಬೆಂಗಾವಲು ಪಡೆ ಮತ್ತು ಭದ್ರತೆಯ ವೆಚ್ಚ ದುಪ್ಪಟ್ಟಾಗುತ್ತದೆ ಎಂದು ಹೇಳಿದರು.&lt;/p&gt;&lt;p&gt;ಬಿಜೆಪಿ ನಾಯಕರ ಇಂತಹ ನಡೆಗಳನ್ನು ದಿನನಿತ್ಯದ ಆಡಳಿತದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಬಿ.ವೈ.ವಿಜಯೇಂದ್ರ ಅವರು ಕೂಡ ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದರು. ಆದರೆ ಮಾರನೇ ದಿನದಿಂದ ಯಥಾಸ್ಥಿತಿ ಮುಂದುವರಿದಿದೆ. ಸಮಯಕ್ಕೆ ಸರಿಯಾಗಿ ನ್ಯಾಯಾಲಯ ಹಾಗೂ ಪ್ರಮುಖ ಸಭೆಗಳಿಗೆ ಹಾಜರಾಗಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು, ಕೇವಲ ಒಂದೆರಡು ದಿನಗಳ ಪ್ರಚಾರಕ್ಕಾಗಿ ಇಂತಹ ನಾಟಕ ಆಡುತ್ತಿದ್ದಾರೆ ಹೊರತು, ಇವುಗಳಿಂದ ಯಾವುದೇ ನೈಜ ಬದಲಾವಣೆ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.&lt;/p&gt;&lt;p&gt;&lt;strong&gt;ಸಿಎಂ ಗೊಂದಲ ಬೇಗ ಬಗೆಹರಿಯಲಿದೆ&lt;/strong&gt;&lt;/p&gt;&lt;p&gt;ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಸ್ಥಾನದ ಕಗ್ಗಂಟಿನ ಕುರಿತು ಮಾತನಾಡಿದ ಅವರು, ಸಿಎಂ ಸ್ಥಾನದ ಬದಲಾವಣೆ ಅಥವಾ ಗೊಂದಲಗಳ ಬಗ್ಗೆ ನಾವೇನೂ ಹೇಳಲು ಸಾಧ್ಯವಿಲ್ಲ, ಅದನ್ನೆಲ್ಲ ಬೆಂಗಳೂರಿನವರೇ (ಹೈಕಮಾಂಡ್) ಹೇಳಬೇಕು. ಸಿಎಂ ಸ್ಥಾನದ ವಿಷಯ ಯಾವಾಗ ಇತ್ಯರ್ಥವಾಗುತ್ತದೆ ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಇದು ನಮ್ಮ ವ್ಯಾಪ್ತಿಯಲ್ಲಿ ಬರುವ ವಿಚಾರವಲ್ಲ. ಸದ್ಯಕ್ಕೆ ಚುನಾವಣೆಗಳೆಲ್ಲ ಮುಗಿದಿರುವುದರಿಂದ ಈಗ ಬೇರೆ ಯಾವುದೇ ರಾಜಕೀಯ ಕೆಲಸಗಳಿಲ್ಲ. ಹೈಕಮಾಂಡ್ ಈಗ ಏನು ಮಾಡುತ್ತದೆ ಎಂದು ನೋಡಬೇಕಿದೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೂಡ ವೇಟ್ ಮಾಡ್ತಾ ಇದ್ದೇವೆ ಎಂದು ಸಚಿವರು ತಿಳಿಸಿದರು.&lt;/p&gt;&lt;p&gt;ಇದೇ ವೇಳೆ, ರಾಜ್ಯದಲ್ಲಿ ಅಧಿಕಾರಿಗಳು ಸಚಿವರು ಹಾಗೂ ಶಾಸಕರ ಮಾತು ಕೇಳುತ್ತಿಲ್ಲ ಎಂಬ ಆರೋಪವನ್ನು ಸತೀಶ ಜಾರಕಿಹೊಳಿ ತಳ್ಳಿ ಹಾಕಿದ ಅವರು, ಇದೆಲ್ಲ ಸಂಪೂರ್ಣ ಸುಳ್ಳು ಮಾಹಿತಿ, ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳದೆ ಇರಲು ಸಾಧ್ಯವೇ ಇಲ್ಲ. ಅಧಿಕಾರಿಗಳಿಂದ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯುತ್ತಿವೆ. ಕಡತಗಳಿಗೆ (ಫೈಲ್) ಸಹಿ ಆಗುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.ಬಾಕ್ಸ್&zwnj;&lt;/p&gt;&lt;h2&gt;&lt;strong&gt;ಜನತೆ ಎಲ್ಲ ಪಕ್ಷವನ್ನು ಸೋಲಿಸಿದ್ದಾರೆ&lt;/strong&gt;&lt;/h2&gt;&lt;p&gt;ದೇಶದಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಸದ್ದು ನಡೆದಿರುವ ಕುರಿತು ಮಾತನಾಡಿದ ಸಚಿವರು, ಜನ ಯಾವುದೇ ಪಕ್ಷಕ್ಕೆ ಒಂದು ಕಡೆ ಸಪೋರ್ಟ್&zwnj; ಮಾಡುತ್ತಾರೆ. ಅದರೆ ನಿರ್ಲಕ್ಷ್ಯ ಮಿತಿ ಮೀರಿದರೆ ಹೀಗಾಗುತ್ತದೆ. ಹಿಂದೆ ಇತಿಹಾಸದಲ್ಲಿ ಎಲ್ಲ ಪಕ್ಷವನ್ನು ಜನರು ಸೋಲಿಸಿದ್ದಾರೆ. ಕಾಂಗ್ರೆಸ್&zwnj; ನಲ್ಲಿ ಇಂದಿರಾ ಗಾಂಧಿ,. ವಾಜಪೇಯಿ, ಮೊರಾರ್ಜಿ ದೇಸಾಯಿ ಅವರನ್ನೂ ಸೋಲಿಸಿದ್ದಾರೆ. ಯಾವುದನ್ನೂ ಅಂಡರ್&zwnj; ಎಸ್ಟಿಮೇಟ್ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಯುವಕರಿಗೆ ಉದ್ಯೋಗ ಇಲ್ಲ, ಎಲ್ಲರೂ ಬೀದಿಗೆ ಬಂದಿದ್ದಾರೆ. ಆ ನಿಟ್ಟಿನಲ್ಲಿ ಉದ್ಯೋಗ ಕೊಡಿಸುವ ಪ್ರೋಗ್ರಾಮ್&zwnj; ಗಳನ್ನು ಹಾಕಿಕೊಳ್ಳಬೇಕು. ಕೇವಲ ಮೂರು ದಿವಸದಲ್ಲಿ ಅಷ್ಟು ದೊಡ್ಡ ಸಂಚಲನ ಆಯಿತು. ಅಂದರೆ ಜನ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಮೋದಿಯವರು ಹಾಗೂ ಮೋದಿಯವರ ಸರಕಾರ ಜನಕ್ಕೆ ಏನು ಬೇಕು ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಪರ್ಯಾಯವಾಗಿ ಈ ದೇಶದ ಜನ ಎಲ್ಲರಿಗೂ ಬುದ್ಧಿ ಕಲಿಸಿದ್ದಾರೆ. ಈಗಲೂ ಕಲಿಸುತ್ತಾರಷ್ಟೇ ಎಂದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/minister-satish-jarkiholi-on-pm-modi-petrol-diesel-comments-gvd/articleshow-x04o299"/>
        </item>
        <item>
            <title><![CDATA[Congress ಸಿದ್ದರಾಮಯ್ಯಗೆ ಎಂದೂ ದ್ರೋಹ ಮಾಡಿಲ್ಲ: ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸ್ಪಷ್ಟನೆ]]></title>
            <link>https://kannada.asianetnews.com/karnataka-districts/vs-ugrappa-on-siddaramaiah-congress-never-betrayed-him-gvd/articleshow-z5bbq1z</link>
            <guid isPermaLink="true">https://kannada.asianetnews.com/karnataka-districts/vs-ugrappa-on-siddaramaiah-congress-never-betrayed-him-gvd/articleshow-z5bbq1z</guid>
            <pubDate>Mon, 15 Jun 2026 22:28:32 +0530</pubDate>
            <description><![CDATA[&lt;p&gt;Karnataka Politics: 2006 ರಿಂದ 2026 ವರೆಗೂ ಸಿದ್ದರಾಮಯ್ಯನವರಿಗೆ ಎಲ್ಲಾ ಹಂತಗಳು ಅಧಿಕಾರವನ್ನು ಕೊಟ್ಟಿದೆ, ಹಾಗಾಗಿ ಅವರಿಗೆ ಎಲ್ಲೂ ಸಹ ಕಾಂಗ್ರೆಸ್ ದ್ರೋಹ ಮಾಡಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01k70sbcw8yv1c3ryy3q4jxjcp,imgname-vs-ugrappa-and-siddaramaiah-1759889437576.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜೂ.15): &lt;/strong&gt;ಸಿದ್ದರಾಮಯ್ಯ ಅವರು 2006ರಲ್ಲಿ ಕಾಂಗ್ರೆಸ್ಸಿಗೆ ಬಂದರೂ ಕೂಡ. 2006 ರಿಂದ 2026 ವರೆಗೂ ಸಿದ್ದರಾಮಯ್ಯನವರಿಗೆ ಎಲ್ಲಾ ಹಂತಗಳು ಅಧಿಕಾರವನ್ನು ಕೊಟ್ಟಿದೆ, ಹಾಗಾಗಿ ಅವರಿಗೆ ಎಲ್ಲೂ ಸಹ ಕಾಂಗ್ರೆಸ್ ದ್ರೋಹ ಮಾಡಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ ವಿಚಾರವನ್ನು ಪ್ರಸ್ತಾಪಿಸಿ ಅವರ ಸಾಮರ್ಥ್ಯವನ್ನು ಅವರ ಜನಾನುರಾಗಿ ಪ್ರವೃತ್ತಿಯನ್ನು ನೋಡಿ ಪಕ್ಷ ಅವಕಾಶ ನೀಡಿದೆ ಎಂದರು.&lt;/p&gt;&lt;p&gt;ವ್ಯಕ್ತಿಗಳು ಪರಮನೆಂಟ್&zwnj; ಅಲ್ಲ, ಅಲ್ಟಿಮೇಟ್ಲಿ ಪಾರ್ಟಿ, ದೇಶ ಪರ್ಮನೆಂಟ್ ಆಗುತ್ತದೆ. ಇವತ್ತು ನಾನು ಇರುತ್ತೇನೆ ನಾಳೆ ಇನ್ಯಾರೋ ಬರಬಹುದು ನನ್ನ ಜಾಗಕ್ಕೆ. ಆದರೆ, ನಾವು ಎಲ್ಲಿವರೆಗೂ ಇರುತ್ತೆವೊ ಬದ್ಧತೆಯಿಂದ ಇರೆಬೇಕು. ಅದು ಸಿದ್ದರಾಮಯ್ಯ ಆಗಿರಬಹುದು ಬೇರೆ ಯಾರೆ ಆಗಿರಬಹುದು ಎಂದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾತೆಗಳ ಅಸಮಾಧಾನ ಹಾಗೂ ಸಚಿವ ಸ್ಥಾನಕ್ಕೆ ಬೇಡಿಕೆ ಕುರಿತು ಮಾತನಾಡಿದ ವಿ.ಎಸ್.ಉಗ್ರಪ್ಪ ಅವರು, ನಾನು ಒಬ್ಬ ಸಣ್ಣ ಉಪಾಧ್ಯಕ್ಷ ಇರಬಹುದು ಮಾಜಿ ಸಂಸದ ಇರಬಹುದು. ರಾಜಕೀಯ ವ್ಯವಸ್ಥೆಯಲ್ಲಿ ಸಹಜವಾಗಿ ಜನಪ್ರತಿನಿಧಿಗಳು ಅವರ ಭಾವನೆಗಳನ್ನು ಪಕ್ಷದ ಮುಖಂಡರ ಮುಂದೆ ವ್ಯಕ್ತಪಡಿಸುತ್ತಾರೆ. ಅದು ಅವರ ಹಕ್ಕು. ಈ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ ಎಂದರು.&lt;/p&gt;&lt;p&gt;ಸಿದ್ದರಾಮಯ್ಯನವರು ಸಿಡಬ್ಲ್ಯೂಸಿಯಲ್ಲಿದ್ದಾರೆ. ಪಾರ್ಟಿಯ ಅತುನ್ನತ ಸ್ಥಾನದಲ್ಲಿದ್ದಾರೆ. ಅವರಿಗೂ ಕೂಡ ಇದನ್ನ ಸರಿ ಮಾಡುವ ಜವಾಬ್ದಾರಿ ಇದೆ. ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿದ್ದಾರೆ. ಸಹಜವಾಗಿ ಕೆಲವರು ನಾವು ಮಂತ್ರಿಗಳಾಗಬೇಕು ಅಂತ ಹೊರಟಿದ್ದಾರೆ. ಬಹಳಷ್ಟು ಜನರಿಗೆ ಅರ್ಹತೆ ಇದೆಯೋ ಇಲ್ಲವೋ? ಮತ್ತೊಂದು ಮಗದೊಂದು ಗೊತ್ತಿಲ್ಲ. ಅದಕ್ಕೆ ನಾನು ಹೇಳಿದೆ ರಾಮಾಯಣದಲ್ಲಿ ಹೇಳಿದಾರೆ.&lt;/p&gt;&lt;p&gt;ಎಂಥವರು ಮಂತ್ರಿಗಳಾಗಬೇಕು ಅಂದ್ರೆ. ಅವರು ರಾಮಾಯಣವನ್ನು ತೆಗೆದು ಅಯೋಧ್ಯ ಕಾಂಡ ಸ್ತೋತ್ರ ಓದಿದ್ರೆ ಗೊತ್ತಾಗುತ್ತದೆ. ಬಹಳಷ್ಟು ಜನ ಶಾಸಕರಾದ ತಕ್ಷಣ ಮಂತ್ರಿಗಳಾಗಬೇಕು ಅಂತ ಹೊರಟಿದ್ದಾರೆ. ಸಮಗ್ರವಾಗಿ ರಾಜ್ಯದ ಕಾಪಾಡುವಂಥವರು. ಸಂವಿಧಾನ ಕಾಪಾಡುವಂತವರು. ಸಂವಿಧಾನ ಅರ್ಥ ಮಾಡಿಕೊಂಡವರು. ಸಾಮಾಜಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿರುವವರು. ಈ ರಾಜ್ಯದ ಎಸ್ಸಿ, ಎಸ್ಟಿ, ಒಬಿಸಿ, ಪೈನಾರಿಟಿ ಎಲ್ಲ ವರ್ಗದ ಜನರ. ದುಃಖದುಮ್ಮಾನಗಳನ್ನು ಅರ್ಥ ಮಾಡಿಕೊಂಡವರನ್ನು ಮಂತ್ರಿ ಮಂಡಲದಲ್ಲಿ ತಂದರೆ ರಾಜ್ಯ ಸರ್ವತೋಮುಖ ಅಭಿವೃದ್ಧಿ ಆಗಲಿಕ್ಕೆ ಸಾಧ್ಯ. ಆ ದಿಕ್ಕಿನಲ್ಲಿ ನಮ್ಮ ಹೈಕಮಾಂಡ್ ಗಮನಹರಿಸುತ್ತದೆ ಎಂಬ ವಿಶ್ವಾಸ ಇದೆ ಎಂದರು&lt;/p&gt;&lt;h2&gt;&lt;strong&gt;ಭಗವಾನ್&zwnj;ಗೆ ರಾಮಾಯಣದ ಬಗ್ಗೆ ಅರಿವು ಇಲ್ಲ&lt;/strong&gt;&lt;/h2&gt;&lt;p&gt;ವಾಲ್ಮೀಕಿ ರಾಮಾಯಣದ ಬಗ್ಗೆ ಕೆ.ಎಸ್.ಭಗವಾನ್ ಅವರು ವಿವಾದಾತ್ಮಕ ಹೇಳಿಕೆ ಕುರಿತು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿ, ಭಗವಾನ್ ಅವರು ವಯಸ್ಸಿನ ಕಾರಣವೊ ಏನೋ ಗೊತ್ತಿಲ್ಲ. ಏನೇನೊ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ಅವರನ್ನು ನಾನು ಅನೇಕ ಸಾರಿ ಇಗ್ನೋರ್ ಮಾಡಬೇಕು ಅಂತಿದ್ದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬಗ್ಗೆ ಕೆಟ್ಟ ರೀತಿ ಮಾತಾಡಿದ್ದಾನೆ. ಇವರಿಗೆ ರಾಮಾಯಣದ ಬಗ್ಗೆ ಅರಿವು ಇಲ್ಲ.&lt;/p&gt;&lt;p&gt;ಕೆ.ಎಸ್.ಭಗವಾನ್ ಮನಸಾ ಇಚ್ಚೆ ಮಾತಾಡ್ತಾಯಿಲ್ಲ, ಹೆಸರು ಭಗವಾನ್ ಅಂತ ಇಟ್ಕೊಂಡು.ಗಾಂಧೀಜಿ ಬಯಸಿದ್ದು ಗಾಂಧಿ ರಾಜ್ಯವಲ್ಲ, ರಾಮರಾಜ್ಯ. ಗಾಂಧಿಗಿಂತ ದೊಡ್ಡ ಮನುಷ್ಯನಾ ನೀನು. ಸೋ ಕಾಲ್ಡ್ ಇಂಟೆಲೆಕ್ಚುವಲ್ ಅಂತ ತೋರ್ಪಡಿಸಿಕೊಳ್ತಿರುವ ಭಗವಾನ್ ಈ ರೀತಿ ಮಾತಾಡಬಾರದು. ವಾಲ್ಮೀಕಿ ಸಮಾಜದ ಮೇಲೆ ಸಿಟ್ಟಿದ್ದರೆ ಈ ರೀತಿ ಮಾತಾಡೋದು ಶೋಭೆ ತರೋದಿಲ್ಲ. ನಮ ಭಾವನೆಗೆ ಧಕ್ಕೆ ಮಾಡಿದ್ದೀರಿ ಈ ದೇಶದ ಜನರ ಕ್ಷಮೆ ಕೇಳಬೇಕೆಂಬ ಆಗ್ರಹವನ್ನು ಉಗ್ರಪ್ಪ ಮಾಡಿದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/vs-ugrappa-on-siddaramaiah-congress-never-betrayed-him-gvd/articleshow-z5bbq1z"/>
        </item>
    </channel>
</rss>
