<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 16:52:27 +0530</lastBuildDate>
        <atom:link href="https://kannada.asianetnews.com/rss/bagalkot" rel="self" type="application/rss+xml"/>
        <item>
            <title><![CDATA[Bagalakote: ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್; ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು, ಆಗಿದ್ದೇನು?]]></title>
            <link>https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb</link>
            <guid isPermaLink="true">https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb</guid>
            <pubDate>Mon, 24 Aug 2026 11:18:17 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಯುವಕನೊಬ್ಬನ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಗಾಯಗಳಾಗಿವೆ. ಘಟನೆಯಲ್ಲಿ ಕಾಲು, ಹೊಟ್ಟೆ ಬಳಿ ಸುಟ್ಟ ಗಾಯಗಳಾಗಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s4z9hvdzh1h6209sy7mnaq,imgname-bgk-power-bank-1787550475835.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಜೇಬಲ್ಲಿ ಇಟ್ಟುಕೊಂಡಿದ್ದ ಪವರ್ ಬ್ಯಾಂಕ್&zwnj; ಬ್ಲಾಸ್ಟ್ ಆಗಿ ಯುವ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಸಿದ್ದು ಎಂಬ ಯುವಕ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಮಖಂಡಿ ಬಸ್ ನಿಲ್ದಾಣದ ಬಳಿಯ ಎಟಿಎಮ್ ಹತ್ತಿರ ಘಟನೆ ನಡೆದಿದ್ದು, ಏಕಾಏಕಿ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್ ಆದ ಕಾರಣ ಯುವಕ ಕಾಲು, ಹೊಟ್ಟೆ, ಸೊಂಟದ ಬಳಿ ಗಾಯಗಳಾಗಿದೆ.&lt;/p&gt;&lt;h2&gt;ಜೇಬಲ್ಲೇ ಸ್ಫೋಟಗೊಂಡ ಪವರ್ ಬ್ಯಾಂಕ್! ಯುವಕನ ಸ್ಥಿತಿ ಏನು?&lt;/h2&gt;&lt;p&gt;ಘಟನೆಯಲ್ಲಿ ಪವರ್ ಬ್ಯಾಂಕ್ ಸುಟ್ಟು ಕರಕಲಾಗಿದ್ದು, ಗಾಯಾಳು ಯುವಕ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅದೃಷ್ಟವಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆತ ಚೇತರಿಕೆ ಕಾಣುತ್ತಿದ್ದು, ಯುವಕನ ಶರ್ಟ್ ಹಾಗೂ ಪ್ಯಾಂಟ್ ಬೆಂಕಿಯಿಂದ ಸುಟ್ಟು ಹೋಗಿದೆ.&lt;/p&gt;&lt;p&gt;ಘಟನೆ ಬಗ್ಗೆ ಮಾತನಾಡಿರುವ ಯುವಕನ ತಂದೆ, ನಮ್ಮ ಮಗ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ. ಹಣ ತೆಗೆದುಕೊಂಡು ಬರಲು ಮನೆಯಿಂದ ಎಟಿಎಂ ಬಳಿ ಸಂದರ್ಭದಲ್ಲಿ ಏಕಾಏಕಿ ಪ್ಯಾಂಡ್ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಸುಟ್ಟ ಗಾಯಗಳಾಗಿರುವ ಕಾರಣ ಆತನಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಆತ ಯಾವ ಕಂಪನಿಯ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಗಮನ ಸೆಳೆದ ಹಗ್ಗ ಜಗ್ಗಾಟ ಸ್ಪರ್ಧೆ&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಭರ್ಜರಿ ಹಗ್ಗ ಜಗ್ಗಾಟ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ಲಕ್ಷ್ಮಿ ದೇವಿ ಜಾತ್ರೆ ನಿಮಿತ್ಯ ಹಗ್ಗ ಜಗ್ಗಾಟ ಸ್ಪರ್ಧೆ ಹಮ್ಮಿಕೊಂಡಿತ್ತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತಂಡ ತಂಡಗಳಾಗಿ ಭಾಗವಹಿಸಿದ ಜನ, ಇಕ್ಕೆಲಗಳಲ್ಲಿ ನಿಂತು ಸ್ಪರ್ಧೆಯನ್ನು ನೋಡಿ ಖುಷಿಪಟ್ಟು ಸ್ಥಳೀಯರು ಕೇಕೆ ಹಾಕಿದರು.&lt;/p&gt;&lt;p&gt;ಹಗ್ಗ ಜಗ್ಗಾಟ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನದ ಗೌರವ ನೀಡಲಾಯಿತು. ಮೊದಲ ಬಹುಮಾನ 15,001 ರೂ., ದ್ವಿತೀಯ ಬಹುಮಾನ 10,001 ರೂ., ತೃತೀಯ ಬಹುಮಾನ 7,501 ರೂ. ಸೇರಿದಂತೆ ಮೊದಲ 6 ವಿಜೇತ ತಂಡಗಳಿಗೆ ಬಹುಮಾನ ನೀಡಿ ಜಾತ್ರಾ ಕಮಿಟಿ ಗೌರವಿಸಿದರು.&lt;/p&gt;]]></content:encoded>
            <category>bagalkot</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb"/>
        </item>
        <item>
            <title><![CDATA[Crop Insurance: ಬೆಳೆಯೇ ಇಲ್ಲದ ಜಮೀನಿಗೆ ವಿಮೆ ಹಣ: ₹38 ಕೋಟಿ ಫಸಲ್ ಭೀಮಾ ಹಗರಣಕ್ಕೆ ಸಿಐಡಿ ಎಂಟ್ರಿ!]]></title>
            <link>https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r</link>
            <guid isPermaLink="true">https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r</guid>
            <pubDate>Fri, 21 Aug 2026 22:30:21 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ₹38 ಕೋಟಿಗೂ ಅಧಿಕ ಮೊತ್ತದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ನಕಲಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದ ಆರೋಪದ ಮೇಲೆ, ಅಧಿಕಾರಿಗಳು ಮುಧೋಳದಲ್ಲಿ ರೈತರನ್ನು ವಿಚಾರಣೆ ನಡೆಸುತ್ತಿದ್ದು, ಅಕ್ರಮದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jm5mta2qhwd5dnf27cywgh,imgname-pmfby-1787331531594.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ ₹38,28,51,580 ರೂಪಾಯಿಗಳ ಬೆಳೆ ವಿಮೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳ ತಂಡವು ತನಿಖೆಯ ಭಾಗವಾಗಿ ಮುಧೋಳ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.&lt;/p&gt;&lt;h2&gt;&lt;strong&gt;ಸಿಐಡಿಯಿಂದ ನೋಟಿಸ್!&lt;/strong&gt;&lt;/h2&gt;&lt;p&gt;ಫಸಲ್ ಭೀಮಾ ಯೋಜನೆಯಡಿ ವಿಮೆ ಪರಿಹಾರ ಹಣ ಪಡೆದಿರುವ ರೈತರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಮುಂಚಿತವಾಗಿ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್ ಸ್ವೀಕರಿಸಿದ ರೈತರು ಮುಧೋಳ ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಸಿಐಡಿ ಅಧಿಕಾರಿಗಳು ವಿಮೆ ಪರಿಹಾರ ಪಡೆದ ಪ್ರತಿಯೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು, ಅವರ ಬ್ಯಾಂಕ್ ಖಾತೆಗೆ ಜಮೆಯಾದ ಹಣ, ಸಲ್ಲಿಸಲಾದ ದಾಖಲೆಗಳು ಹಾಗೂ ಜಮೀನಿನ ಬೆಳೆ ವಿವರಗಳ ಕುರಿತು ಸುದೀರ್ಘ ಮಾಹಿತಿ ಸಂಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು!&lt;/strong&gt;&lt;/h3&gt;&lt;p&gt;ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವ್ಯಾಪಕ ಗೋಲ್&zwnj;ಮಾಲ್ ನಡೆದಿದೆ ಎಂಬ ದೂರುಗಳು ದಾಖಲಾಗಿದ್ದವು. ಜಮೀನಿನಲ್ಲಿ ಯಾವುದೇ ಬೆಳೆ ಇರದಿದ್ದರೂ ಅಥವಾ ಬೆಳೆ ಹಾನಿಯಾಗದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಬೆಳೆ ವಿಮೆ ಹಣವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ತನಿಖಾ ಮೂಲಗಳ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿದ್ದ ಕೆಲವು ಏಜೆಂಟರ ಜಾಲವು ರೈತರ ಹೆಸರು ಮತ್ತು ದಾಖಲೆಗಳನ್ನು ಬಳಸಿಕೊಂಡು ಈ ಅಕ್ರಮ ಎಸಗಿದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ದಾಖಲೆಗಳ ಸಂಗ್ರಹ!&lt;/strong&gt;&lt;/h3&gt;&lt;p&gt;ಗ್ರಾಮ ಮಟ್ಟದಲ್ಲಿದ್ದ ಏಜೆಂಟರು ರೈತರಿಂದ ಪಹಣಿ (RTC), ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಜಮೀನಿನಲ್ಲಿ ಬೆಳೆ ಬೆಳೆಯದೇ ಇದ್ದರೂ ಅಥವಾ ಬೇರೆ ಜಮೀನಿನ ಹಸಿರು ಬೆಳೆಗಳ ನಕಲಿ ಫೋಟೋಗಳನ್ನು ಸಿಸ್ಟಮ್&zwnj;ಗೆ ಅಪ್&zwnj;ಲೋಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದಲ್ಲದೇ ಬೆಳೆ ನಷ್ಟವಾಗಿದೆ ಎಂದು ಬಿಂಬಿಸಲು ನಕಲಿ ಬೆಳೆ ಸರ್ವೇ ವರದಿಗಳನ್ನು ಸಿದ್ಧಪಡಿಸಿ, ವಿಮೆ ಕಂಪನಿ ಮತ್ತು ಸರಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾಗುವಂತೆ ಮಾಡಲಾಗಿತ್ತು ಎಂಬ ಗಂಭೀರ ಆರೋಪಗಳಾಗಿವೆ.&lt;/p&gt;&lt;h3&gt;&lt;strong&gt;ತನಿಖೆಯ ಉದ್ದೇಶ ಹಾಗೂ ಪ್ರಸ್ತುತ ಸ್ಥಿತಿ!&lt;/strong&gt;&lt;/h3&gt;&lt;p&gt;ಪರಿಹಾರದ ರೂಪದಲ್ಲಿ ಬಿಡುಗಡೆಯಾದ ₹38 ಕೋಟಿಗೂ ಹೆಚ್ಚಿನ ಹಣದಲ್ಲಿ ನೈಜ ಫಲಾನುಭವಿಗಳಿಗೆ ತಲುಪಿದ್ದು ಎಷ್ಟು, ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಎಂಬ ಬಗ್ಗೆ ಸಿಐಡಿ ಪ್ರಸ್ತುತ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ರೈತರ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆಯೇ ಅಥವಾ ರೈತರಿಗೂ ಈ ಅಕ್ರಮಕ್ಕೂ ನೇರ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚುವುದು ಈ ತನಿಖೆಯ ಪ್ರಮುಖ ಭಾಗವಾಗಿದೆ.&lt;/p&gt;&lt;h3&gt;&lt;strong&gt;ಪ್ರಕರಣ ಸಿಐಡಿಗೆ ಒಪ್ಪಿಸಿದ ಸರ್ಕಾರ!&lt;/strong&gt;&lt;/h3&gt;&lt;p&gt;ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಸಂಪೂರ್ಣ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತ್ತು. ತನಿಖಾಧಿಕಾರಿಗಳು ಬ್ಯಾಂಕ್ ದಾಖಲೆಗಳು, ವಿಮೆ ಅರ್ಜಿಗಳು ಮತ್ತು ಬೆಳೆ ಸರ್ವೇ ದತ್ತಾಂಶಗಳನ್ನು ತಾಳೆ ನೋಡಿ ಪರಿಶೀಲಿಸುತ್ತಿದ್ದಾರೆ. ಈ ಹಗರಣದ ಹಿಂದೆ ಯಾರ್ಯಾರ ಪಾತ್ರವಿದೆ, ಅಧಿಕಾರಿಗಳು ಅಥವಾ ಮಧ್ಯವರ್ತಿಗಳ ಕುಮ್ಮಕ್ಕು ಇದೆಯೇ ಎಂಬ ವಿವರಗಳು ಸಿಐಡಿ ತನಿಖೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಸ್ಪಷ್ಟವಾಗಲಿವೆ. ಪ್ರಸ್ತುತ ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಹಾಗೂ ರೈತರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r"/>
        </item>
        <item>
            <title><![CDATA[ನಾನು ಶಾಲೆಯಲ್ಲಿಯೇ ಮುಖ್ಯಮಂತ್ರಿ ಆಗಿದ್ದೆ; ಸಚಿವ ಸ್ಥಾನ ವಂಚಿತ ಶಾಸಕ ಆರ್.ಬಿ. ತಿಮ್ಮಾಪೂರ]]></title>
            <link>https://kannada.asianetnews.com/karnataka-districts/i-was-chief-minister-in-school-mla-r-b-thimmapur-who-was-deprived-of-ministerial-position-sat/articleshow-6g31srx</link>
            <guid isPermaLink="true">https://kannada.asianetnews.com/karnataka-districts/i-was-chief-minister-in-school-mla-r-b-thimmapur-who-was-deprived-of-ministerial-position-sat/articleshow-6g31srx</guid>
            <pubDate>Mon, 07 Sep 2026 08:15:17 +0530</pubDate>
            <description><![CDATA[&lt;p&gt;ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಶಾಸಕ ಆರ್.ಬಿ. ತಿಮ್ಮಾಪುರ ಅವರು, 2ನೇ ಅವಧಿಯ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಾಗಿದ್ದಾರೆ. ಇದೀಗ ಶಿಕ್ಷಕರ ದಿನಾಚರಣೆ ವೇಳೆ ತಾವು ಶಾಲೆಯಲ್ಲಿ ಮುಖ್ಯಮಂತ್ರಿ ಆಗಿದ್ದೆ ಎಂದು ಶಾಲಾ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1wvgvv9z3zkpy06a964nan6,imgname-mla-r-b-thimmapura-1788748525417.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಸೆ.07): ನ&lt;/strong&gt;ನ್ನೂರು ತಾಲೂಕಿನ ಉತ್ತೂರು, ನನ್ನ ಸ್ವಗ್ರಾಮ ಉತ್ತೂರಿನಲ್ಲಿಯೇ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕಲಿತಿರುವೆ, ನಾನು ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರಿಂದ ನನ್ನನ್ನು ಶಾಲೆ ಮುಖ್ಯಮಂತ್ರಿಯಾಗಿ ಮಾಡಿದ್ದರು ಎಂದು ಶಾಸಕ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ತಮ್ಮ ಶಾಲಾ ದಿನದ ನೆನಪನ್ನು ಮಾಡಿಕೊಂಡರು.&lt;/p&gt;&lt;p&gt;ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ತಾಲೂಕಾಡಳಿತ, ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕ ದಿನೋತ್ಸವ ಸಮಿತಿ ಮುಧೋಳ ಇವರ ಸಂಯುಕ್ತಾಶ್ರಯದಲ್ಲಿ ಡಾ.ರಾಧಾಕೃಷ್ಣನ್ ರವರ ಜನ್ಮದಿನದ ಅಂಗವಾಗಿ ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ತಾಲೂಕಾ ಮಟ್ಟದ ಶಿಕ್ಷಕರ ದಿನೋತ್ಸವ-2026, ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಶಿಕ್ಷಕರ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದಿನ ಸರ್ಕಾರಿ ಶಾಲಾ ಶಿಕ್ಷಕರು ಅಫ್ಡೇಟ್ ಆಗಬೇಕು. ಹೊಸ ಹೊಸ ತಂತ್ರಜ್ಞಾನ, ವಿನೂತನ ಕೌಶಲ ಬ&zwj;ಳಸಿಕೊಂಡು ಮಕ್ಕಳಿಗೆ ಪಾಠಬೋಧನೆ ಮಾಡಬೇಕು. ಪಾಠಬೋಧನೆ ಜತೆಗೆ ಜೀವನ ಶಿಕ್ಷಣ ನೀಡಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಮಾರ್ಗದರ್ಶನ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.&lt;/p&gt;&lt;p&gt;ಜಾತಿ, ಮತ, ಧರ್ಮ, ಮೇಲು, ಕೀಳು ಎಂಬ ಭಾವನೆಯಿಂದ ಮಕ್ಕಳು ಹೊರಬರಬೇಕು. ಅಂತಹ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕೆಂದು ಹೇಳಿದ ಅವರು, ಬಿಇಒ ಕಚೇರಿ ಮತ್ತು ಶಿಕ್ಷಕರ ಗುರುಭವನ ಶೀಘ್ರದಲ್ಲಿ ಕಟ್ಟಿಸಿಕೊಡುವದಾಗಿ ಭರವಸೆ ನೀಡಿದರು.&lt;/p&gt;&lt;p&gt;ವಿಧಾನ ಪರಿಷತ್ ಸದಸ್ಯ ಹಣಮಂತ ಆರ್.ನಿರಾಣಿ ಮಾತನಾಡಿ, ಗುರುವಿನ ಮಹತ್ವ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿ ತಿಳಿಸಿಕೊಟ್ಟ ಅವರು, ಗುಣಾತ್ಮಕ ಮತ್ತು ಮೌಲ್ಯಾಧರಿತ ಶಿಕ್ಷಣ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.&lt;/p&gt;&lt;h2&gt;&lt;strong&gt;ಶಿಕ್ಷಕರು ಮತ್ತೆ ಗುರುಗಳಾಗಬೇಕು&lt;/strong&gt;&lt;/h2&gt;&lt;p&gt;ಡಾ.ಶಿವಾನಂದ ಕುಬಸದ ಮಾತನಾಡಿ, ಇಂದು ಗುರು-ಶಿಷ್ಯರ ಮಧ್ಯ ಬಾಂಧವ್ಯ ಕಡಿಮೆಯಾಗಿದೆ. ಗುರುಗಳು ವೃತ್ತಿ ಶಿಕ್ಷಕರಾಗಿದ್ದಾರೆ. ಸಂಬಳಕ್ಕಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಸೇವಾ ಮನೋಭಾವನೆ ಇಲ್ಲದಂತಾಗಿದೆ. ಇದೊಂದು ನೋವಿನ ಸಂಗತಿ, ಶಿಕ್ಷಕ ಮತ್ತೆ ಗುರುಗಳಾಗಬೇಕು. ಸೇವಾ ನಿರತರಾಗಿ ಆದರ್ಶ ಶಿಕ್ಷಕರಾಗಬೇಕು. ಮಕ್ಕಳನ್ನು ಪ್ರೀತಿಸಿ ಅವರ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಹೇಳಿದರು.&lt;/p&gt;&lt;p&gt;ಲೋಕಾಪೂರ ಹಿರೇಮಠದ ಡಾ.ಚಂದ್ರಶೇಖರ ಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ತಹಸೀಲ್ದಾರ ಡಾ.ಚಿಕ್ಕಪ್ಪ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಇಒ ಎಸ್.ಎಂ.ಮುಲ್ಲಾ ಸ್ವಾಗತಿಸಿದರು. ಎ.ಆರ್.ಛಬ್ಬಿ ವಂದಿಸಿದರು .&lt;/p&gt;&lt;p&gt;ಎಪಿಎಂಸಿ ಉಪಾಧ್ಯಕ್ಷ ಭೀಮಪ್ಪ ಮೆಟಗುಡ್ಡ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ಹೊಸಮನಿ, ತಾ.ಪಂ ಇಒ ರಾಘವೇಂದ್ರ ಕಳ್ಳಿಮನಿ ಸೇರಿದಂತೆ ಇತರೆ ಗಣ್ಯರು ವೇದಿಕೆ ಮೇಲಿದ್ದರು. ನಿವೃತ್ತ ಶಿಕ್ಷಕರಿಗೆ, ಶಿಕ್ಷಕರ ಪ್ರತಿಭಾವಂತ ಮಕ್ಕಳಿಗೆ, ಗಣ್ಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.&lt;/p&gt;&lt;p&gt;ನಾನು ಹಿಂದಿ ವಿಷಯವನ್ನು ಕಲಿಯದೆ ಇದ್ದುದರಿಂದ ಸಾಕಷ್ಟು ಭಾರಿ ತೊಂದರೆ ಮತ್ತು ಮುಜಗುರ ಅನುಭವಿಸಿದ್ದೇನೆ. ನಮ್ಮ ನಡೆ, ನುಡಿ, ಸಂಸ್ಕಾರ, ಜೀವನ ಶಿಕ್ಷಣವನ್ನು ಕಲಿಸುವುದೇ ಸರ್ಕಾರಿ ಶಾಲೆಗಳು ಮತ್ತು ಸರ್ಕಾರಿ ಶಾಲಾ ಶಿಕ್ಷಕರು ಎಂಬುದಕ್ಕೆ ನಾನೇ ಸಾಕ್ಷಿ, ನಾನು ಸರ್ಕಾರಿ ಶಾಲೆಯಲ್ಲಿ ಕಲಿತಿದ್ದರಿಂದಲೇ ಇಂದು ಸಚಿವನಾಗಿ, ಶಾಸಕನಾಗಿದ್ದೇನೆ. ಯಾರು ಉನ್ನತ ಸ್ಥಾನಮಾನದಲ್ಲಿ ಇದ್ದಾರೆ ಅವರೆಲ್ಲರೂ ಬಹುತೇಕ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಣ ಪಡೆದುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಸರ್ಕಾರಿ ಶಾಲೆಯನ್ನು ಉಳಿಸಬೇಕು.&lt;/p&gt;&lt;p&gt;&lt;strong&gt;-ಆರ್&zwnj;.ಬಿ.ತಿಮ್ಮಾಪುರ, ಶಾಸಕ, ಮಾಜಿ ಸಚಿವ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/i-was-chief-minister-in-school-mla-r-b-thimmapur-who-was-deprived-of-ministerial-position-sat/articleshow-6g31srx"/>
        </item>
        <item>
            <title><![CDATA[ಶಾಹಪುರ-ವಾಡಿ ರೈಲು ಮಾರ್ಗ 2028ರೊಳಗೆ ಪೂರ್ಣ: ಬಾದಾಮಿಯಲ್ಲಿ ವಿ. ಸೋಮಣ್ಣ ಮಹತ್ವದ ಘೋಷಣೆ]]></title>
            <link>https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy</link>
            <guid isPermaLink="true">https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy</guid>
            <pubDate>Fri, 17 Jul 2026 17:57:00 +0530</pubDate>
            <description><![CDATA[&lt;p&gt;ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr0f1dmxjp13nf050r2f850,imgname-m-mb-1784290969011.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜು.17): &lt;/strong&gt;ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.&lt;/p&gt;&lt;p&gt;ಭಾಷಣದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಸುಮಾರು 75 ರೈಲು ನಿಲ್ದಾಣಗಳನ್ನು ₹75 ಸಾವಿರ ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಾದಾಮಿ ರೈಲು ನಿಲ್ದಾಣವನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗಿದೆ ಎಂದರು.&lt;/p&gt;&lt;p&gt;ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಸುಮಾರು ₹3 ಲಕ್ಷ ಕೋಟಿ ಬಜೆಟ್ ಮೀಸಲಿಟ್ಟಿದ್ದು, ಕರ್ನಾಟಕದಲ್ಲಿಯೂ ಹಲವು ಮಹತ್ವದ ಯೋಜನೆಗಳು ವೇಗವಾಗಿ ಸಾಗುತ್ತಿವೆ ಎಂದು ಸೋಮಣ್ಣ ಹೇಳಿದರು. ಕುಡುಚಿ ರೈಲು ಮಾರ್ಗದ 37 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ಎಂಟು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಯೋಜನೆಗಾಗಿ ಸುಮಾರು ₹1,900 ಕೋಟಿ ವೆಚ್ಚ ಮಾಡಲಾಗಿದೆ ಎಂದರು.&lt;/p&gt;&lt;p&gt;ಶಾಹಪುರ-ವಾಡಿ ರೈಲು ಮಾರ್ಗದ ಕಾಮಗಾರಿಯನ್ನು 2028ರ ಏಪ್ರಿಲ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ ಸಚಿವರು, ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸೇವೆಯನ್ನು ಪುನರಾರಂಭಿಸಿ, ಹೆಚ್ಚುವರಿಯಾಗಿ 30 ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆ&lt;/strong&gt;&lt;/h2&gt;&lt;p&gt;ಅಮೃತ್ ಭಾರತ ಯೋಜನೆಯಡಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ರೈಲು ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 23 ಹೊಸ ರೈಲು ನಿಲ್ದಾಣಗಳು ಹಾಗೂ ಏಳು ಹೊಸ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ವಿವರಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈಡ್ರೋಜನ್ ರೈಲಿಗೆ ಚಾಲನೆ ನೀಡಿರುವುದು ಭಾರತೀಯ ರೈಲ್ವೆಯ ಆಧುನೀಕರಣದ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ ಸೋಮಣ್ಣ, ರಾಜ್ಯ-ಕೇಂದ್ರ ಎಂಬ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದರು.&lt;/p&gt;&lt;p&gt;ಜಲಶಕ್ತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹5 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು, 2047ರೊಳಗೆ ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು. ಭಾಷಣದ ಕೊನೆಯಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸಿದ ಸಚಿವರು, &quot;ಚುನಾವಣೆಗೆ 30 ದಿನ ಇರುವಾಗ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡೋಣ&quot; ಎಂದು ಕರೆ ನೀಡಿದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy"/>
        </item>
        <item>
            <title><![CDATA['ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ]]></title>
            <link>https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo</link>
            <guid isPermaLink="true">https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo</guid>
            <pubDate>Sat, 15 Aug 2026 13:40:11 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ನೋಂದಣಿಯಾಗುವುದಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆರ್&zwnj;ಎಸ್&zwnj;ಎಸ್&zwnj; ಅನ್ನು 'ಭಂಡರು' ಎಂದು ಕರೆದ ಅವರು, ಕಳ್ಳ ದುಡ್ಡನ್ನು ರಕ್ಷಿಸಿಕೊಳ್ಳಲು ನೋಂದಣಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m026a56d21fhxfc499ybyxk1,imgname-----------------------2026-08-15t130707.501-1786780128461.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಆ.15):&lt;/strong&gt; 'ಇದಕ್ಕೆಲ್ಲ ಭಂಡರು ಅಂತಾರೆ, ಭಂಡರು ಅಂತಾ ಕರೀತಾರೆ..' ಆರ್&zwnj;ಎಸ್&zwnj;ಎಸ್&zwnj; ಮುಂಚೆ ನೋಂದಣಿಯಾಗಿಲ್ಲ, ಮುಂದೆಯೂ ಆಗೊಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತಿರುಗೇಟು ನೀಡಿದರು.&lt;/p&gt;&lt;h2&gt;ಆರ್&zwnj;ಎಸ್&zwnj;ಎಸ್&zwnj;ಗೆ ಕಳ್ಳ ದುಡ್ಡು ಬರುತ್ತೆ&lt;/h2&gt;&lt;p&gt;ಇಂದು ಬಾಗಲಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರೆಸ್ಸೆಸ್&zwnj;ಗೆ ಕಳ್ಳ ದುಡ್ಡು ಬರ್ತಿದೆ. ನೋಂದಣಿ ಮಾಡಿಸಿದರೆ ಇವರಿಗೆ ಕಳ್ಳ ದುಡ್ಡು ಹೇಗೆ ಬರುತ್ತೆ ಅಂತಾ ಸರ್ಕಾರಕ್ಕೆ ಗೊತ್ತಾಗುತ್ತೆ. ಕಳ್ಳ ದುಡ್ಡನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ನೋಂದಣಿ ಮಾಡಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.&lt;/p&gt;&lt;h3&gt;ಆರೆಸ್ಸೆಸ್&zwnj;ನವರಿಗೆ ಸಂವಿಧಾನದ ಅರಿವು ಇದೆಯಾ?&lt;/h3&gt;&lt;p&gt;ದೇಶದ ಸಂವಿಧಾನದ ಅಡಿಯಲ್ಲಿ ಇರುವ ಪ್ರಜೆಗಳು ನಾವು ಅಂತಾ ಹೇಳ್ತಾರೆ. ಆದರೆ ಸಂವಿಧಾನ ಏನು ಹೇಳುತ್ತೆ? ಇವರಿಗೆ ಸಂವಿಧಾನದ ಅರಿವು ಏನಾದ್ರೂ ಇದೆಯಾ? ಸಂವಿಧಾನಕ್ಕೆ ಇವರು ಗೌರವ ಕೊಡ್ತಾರಾ? ಏನೂ ಇಲ್ಲ. ಅದಕ್ಕೆ ಇವರನ್ನು ಭಂಡರು ಅನ್ನೋದು ಇವರಿಗೆ ಸಂವಿಧಾನ ಬೇಕಿಲ್ಲ. ಕಾನೂನು ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ನಮ್ಮ ಗೃಹಸಚಿವರು ಕಡ್ಡಾಯವಾಗಿ ನೋಂದಣಿ ಮಾಡ್ಕೊಳ್ಳಬೇಕೆಂಬ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ. ಯಾವುದೇ ಸಂಘಟನೆ ಇರಲಿ. ಆ ಸಂಘಟನೆಗೆ ಒಂದು ಹೆಸರಿರಬೇಕು, ಒಂದು ನೋಂದಣಿ ಇರಬೇಕು. ಅಂದಾಗ ಮಾತ್ರ ಅದು ಅಧಿಕೃತ ಆಗೋಕೆ ಸಾಧ್ಯ. ಕೆಲವೊಂದಿಷ್ಟು ಸಂಘಟನೆಗಳಿಗೆ ವಿದೇಶದಿಂದ ದೇಣಿಗೆ ಬರ್ತಾ ಇತ್ತು. ಅದನ್ನ ಬಂದ್ದ ಮಾಡಲಿಕ್ಕೆ ಕೇಂದ್ರದಲ್ಲಿ ಕೆಲವೊಂದು ಬಿಲ್ ಪಾಸ್ ಮಾಡಿದರು. ಮತ್ತೆ ಇವರಿಗೆ ಆರ್&zwnj;ಎಸ್&zwnj;ಎಸ್ ನವರಿಗೆ ಎಲ್ಲಿಂದ ದುಡ್ಡು ಬರುತ್ತೆ? ಅದನ್ನ ತೋರಿಸಲಿ, ಲೆಕ್ಕ ಕೊಡಲಿ ಎಂದು ಸವಾಲೆಸೆದರು.&lt;/p&gt;&lt;p&gt;&lt;strong&gt;ಆರೆಸ್ಸೆಸ್&zwnj;, ಬಿಜೆಪಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತೆ?&lt;/strong&gt;&lt;/p&gt;&lt;p&gt;ಆರೆಸ್ಸೆಸ್&zwnj;ಗೆ, ಬಿಜೆಪಿಯವರಿಗೆ ದುಡ್ಡು ಎಲ್ಲಿ ಬರುತ್ತೆ? ಅದು ಕೇವಲ 12 ವರ್ಷದಲ್ಲಿ. ನಾವು 70 ವರ್ಷದಿಂದ ಆಡಳಿತ ಮಾಡುತ್ತಿದ್ದೇವೆ. ನಮ್ಮದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತ ಪಕ್ಷ. ನಮ್ಮ ಪರಿಸ್ಥಿತಿ ನೋಡಿ ಭಾರತೀಯ ಜನತಾ ಪಕ್ಷದ ಪರಿಸ್ಥಿತಿ ನೋಡಿ ಹೇಗಿದ್ದಾರೆ. ಬಿಜೆಪಿ ಅವರ ಹತ್ರ ಎಷ್ಟು ದುಡ್ಡಿದೆ ಅಷ್ಟೊಂದು ಹಣ ಎಲ್ಲಿಂದ ಬಂತು. ಇದೆಲ್ಲವನ್ನು ಮುಚ್ಚಿ ಹಾಕುವಂತ ಕೆಲಸ ಮಾಡ್ತಿದ್ದಾರೆ. ಆರೆಸ್ಸೆಸ್&zwnj;ನವರದ್ದು ಇದೇ ಹಣೆಬರಹ. ಅದಕ್ಕೆ ನೋಂದಣಿ ಮಾಡಿಸೋಲ್ಲ ಅಂತಾರೆ. ಕೈಯಲ್ಲಿ ಬಡಿಗೆ ಹಿಡ್ಕೊಂಡು ಬಂದು ಟ್ರೈನಿಂಗ್ ಕೊಡ್ತಾರೆ. ಇದು ಏನು ದೇಶದ ರಕ್ಷಣೆಗಾ? ದೇಶದಲ್ಲೇನು ಸ್ವಾತಂತ್ರ್ಯ ಚಳವಳಿ ನಡೆದಿದೆಯಾ? ದೇಶದಲ್ಲೇ ಇವರು ಸ್ವಾತಂತ್ರ್ಯ ತರುವಂತ ಕೆಲಸ ಮಾಡೋಕೆ ಹೊರಟಿದ್ದಾರಾ? ದೇಶದ ಸ್ವಾತಂತ್ರ್ಯದ ವೇಳೆ ದೇಶದ ವಿರುದ್ಧ ಇವರು ನಡೆವಳಿಕೆಗಳು ನಡೆದಿದ್ದವು. ಇವತ್ತಿಗೂ ಏನು ಮಾಡುತ್ತಿದ್ದಾರೆ? ಸಂವಿಧಾನಕ್ಕೆ ಗೌರವ ಕೊಡಲ್ಲ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲ್ಲ.&lt;/p&gt;&lt;p&gt;&lt;strong&gt;ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ ಒಂದು ಕಾಲ ಬರುತ್ತೆ:&lt;/strong&gt;&lt;/p&gt;&lt;p&gt;ಧೈರ್ಯವಿದ್ರೆ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವರು, ಕಾಲ ಬರುತ್ತೆ. ಅದಕ್ಕೂ ಒಂದು ಕಾಲ ಬರುತ್ತೆ. ಆಕ್ಷನ್ ತಗೊಳ್ಳೋಕೂ, ಕಾನೂನು ಜಾರಿ ಮಾಡೋಕೂ ಒಂದು ಕಾಲ ಬರುತ್ತೆ ಅದು ತಕ್ಷಣ ಆಗೋಲ್ಲ. ಮೊದಲು ಕಾನೂನು ಆಗಬೇಕು ಆಮೇಲೆ ಆಕ್ಷನ್ ಆಗುತ್ತೆ ಎಂದರು.&lt;/p&gt;&lt;p&gt;ಸರಕಾರ ವರ್ಸಸ್ ಆರ್ ಎಸ್ ಎಸ್ ಆಗ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ್, ಸರಕಾರ ವರ್ಸಸ್ ಆರ್ ಎಸ್ ಎಸ್ ಯಾಕೆ ಹೋಲಿಸುತ್ತೀರಿ. ನಮ್ಮ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ.&lt;/p&gt;&lt;p&gt;ಎಲ್ಲರನ್ನು ಅಪ್ಪಿಕೊಳ್ಳುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಆದರೆ ಇವರು ಏನು ಮಾಡುತ್ತಿದ್ದಾರೆ? ಎಂದು ಸಚಿವರು ಮಾಧ್ಯಮದವರನ್ನೇ ಪ್ರಶ್ನಿಸಿದರು.&lt;/p&gt;]]></content:encoded>
            <category>bagalkot</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo"/>
        </item>
        <item>
            <title><![CDATA[ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಸಚಿವ ವಿ ಸೋಮಣ್ಣ ಭರವಸೆ]]></title>
            <link>https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76</link>
            <guid isPermaLink="true">https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76</guid>
            <pubDate>Wed, 22 Jul 2026 09:01:49 +0530</pubDate>
            <description><![CDATA[ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ನೇತೃತ್ವದಲ್ಲಿ ಹೋರಾಟ ಸಮಿತಿಯು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಶೀಘ್ರ ಮಂಜೂರಾತಿಗೆ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky3xyyrhxny011hmy5qs02y6,imgname-alamatti-kushtagi-1784690998033.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಕಳೆದ 25 ವರ್ಷಗಳಿಂದ ಆಲಮಟ್ಟಿ ಕೊಪ್ಪಳ ನೂತನ ರೈಲು ಮಾರ್ಗ ಮಂಜೂರ ಮಾಡುವಂತ್ತೆ ಕೇಂದ್ರ ಸರ್ಕಾರಕ್ಕೆ ಹಾಗೂ ರೈಲು ಸಚಿವರಿಗೆ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಇವರಿಗೆ ಇಳಕಲ್ಲ ಜನತೆ ಮನವಿ ಕೊಟ್ಟು ನೂತನ ರೈಲು ಮಾರ್ಗ ಮಂಜೂರ ಮಾಡಲು ದೇಹಲಿ ತನಕ ಹೋಗಿ ಒತ್ತಾಯಿಸಿತ್ತು ಆದರೆ ಕನ್ನಡಪ್ರಭ ಪತ್ರಿಕೆಯು ಯುವಕರು ಮುದಕರಾದರು ಇಳಕಲ್ಲಿಗೆ ರೈಲು ಬರಲೇ ಇಲ್ಲ ಎಂದು ಸುದ್ದಿಯನ್ನು ಈ ಹಿಂದೆ ಪ್ರಕಟಿಸಿತ್ತು.&lt;/p&gt;&lt;p&gt;ಆದರೆ ಅದಕ್ಕೂ ಸಂಸದರು, ಸಚಿವರು ಹಾಗು ಸರಕಾರ ನಿರಾಶೇ ಮಾಡಿದೆ ಆದರೆ ಈ ಹಿಂದೆ ಸರಕಾರ ಆಲಮಟ್ಟಿ ಇಳಕಲ್ಲ ಕುಷ್ಟಗಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಮಾಡಿದೆ ಎಂದು ತಿಳಿದು ಬಂದಿತ್ತು.&lt;/p&gt;&lt;h2&gt;&lt;strong&gt;ಕಾಮಗಾರಿ ಆರಂಭಕ್ಕೆ ಒತ್ತಾಯ&lt;/strong&gt;&lt;/h2&gt;&lt;p&gt;ಆದರೆ ಇಲ್ಲಿಯವರೆಗೂ ಈ ಕಾರ್ಯದ ಬಗ್ಗೆ ಎನು ಆಗದೆ ಇರುವದರಿಂದ ಇಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಇವರ ನೇತ್ರತ್ವದಲ್ಲಿ ಕೊಪ್ಪಳಕ್ಕೆ ಆಗಮಿಸಿದ ರಾಜ್ಯ ರೇಲ್ವೆ ಸಚಿವ ಸೋಮಣ್ಣ ಇವರಿಗೆ ಸಂಸದ ಪಿ.,ಸಿ.ಗದ್ದಿಗೌಡರ ಇವರ ಸಮ್ಮುಖದಲ್ಲಿ ರೇಲ್ವೆ ಹೋರಾಟ ಸಮಿತಿ ಮತ್ತೆ ಮನವಿ ಕೊಟ್ಟು ಆದಷ್ಟು ವೇಗವಾಗಿ ಈ ಭಾಗದ ರೃಲು ಕಾಮಗಾರಿಯನ್ನು ಮಂಜೂರ ಮಾಡಿಸಿ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿತು.&lt;/p&gt;&lt;p&gt;ಮನವಿ ಸ್ತಿಕಾರ ಮಾಡಿದ ಸಚಿವ ಸೋಮಣ್ಣ ಇವರು ಈ ಭಾಗದ ಜನರ ತೊಂದರೆ ನನಗೆ ಅರಿವಾಗಿದೆ ಈ ವಿಷಯವನ್ನು ರೇಲ್ವೆ ಸಮಿತಿಯಲ್ಲಿ ಮಂಡಿಸಿ ಆದಷ್ಟು ತಿವ್ರವೆ ಮಂಜೂರ ಮಾಡುವದಾಗಿ ಭರವಸೆ ಕೊಟ್ಟರು. ಆದರೆ ಈ ಹಿಂದೆ ಗದಗ ಗಜೇಂದ್ರಗಡ ಇಳಕಲ್ಲ ಮುದಗಲ್ಲ ಹಾಗು ಲಿಂಗಸೂರ ದಿಂದ ವಾಡಿಗೆ ಹೋಗುವ ರೃಲು ಮಾರ್ಗ ಮಾಡುವ ಯೋಜನೆ ಇತ್ತು ಆದರೆ ಯಾರೋ ಮಾಡಿದ ತಪ್ಪನಿಂದ ಇಂದು ಆ ಮಾರ್ಗ ಬಾಣಾಪುರ ಕುಷ್ಟಗಿ ಆಗಿದೆ ಎಂದು ಜನತೆ ಆರೋಪಿಸುತಿದ್ದಾರೆ ಎಂದು ಸಚಿವರಿಗೆ ಜನತೆ ತಿಳಿಸಿದರು.&lt;/p&gt;&lt;p&gt;ಮನವಿ ಕೊಡುವ ಸಮಿತಿಯಲ್ಲಿ ರೈಲು ಹೋರಾಟ ಸಮಿತಿಯ ಅದ್ಯಕ್ಷ ಶರಣಪ್ಪ ಅಕ್ಕಿ, ಜಿ.ಪಿ.ಪಾಟೀಲ, ಎಂ.ವಿ.ಪಾಟೀಲ, ಟಿ.ಎಚ್.ಕುಲಕರ್ಣಿ, ಚೋಳಪ್ಪ ಇಚಿಡಿ, ಚಂದ್ರಶೇಖರ ಎಕಬೋಟೆ ಸೇರಿದಂತೆ ಇತರರು ಉಪಸ್ತಿತರಿದ್ದರು.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76"/>
        </item>
        <item>
            <title><![CDATA[ಹೂಗುಚ್ಛ, ಶಾಲು, ಪೇಟಗಳಿಗೆ ಸಚಿವರಿಂದ ಬ್ರೇಕ್, ಸರಳತೆಯ ಹಾದಿ ಹಿಡಿದ ವಿಜಯಾನಂದ ಕಾಶಪ್ಪನವರ್]]></title>
            <link>https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx</link>
            <guid isPermaLink="true">https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx</guid>
            <pubDate>Wed, 05 Aug 2026 12:03:33 +0530</pubDate>
            <description><![CDATA[&lt;p&gt;ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು, ತಮಗೆ ಶಾಲು, ಪೇಟ, ಹಾರ-ತುರಾಯಿ ತರಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz89x7pydyq7xsf2wxk9636m,imgname-images-1785911484126.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5):&lt;/strong&gt; ರಾಜಕೀಯ ವಲಯದಲ್ಲಿ ಸಚಿವರು ಅಥವಾ ನಾಯಕರು ಅಧಿಕಾರಕ್ಕೇರಿದಾಗ ಬೃಹತ್ ಹೂಹಾರಗಳು, ಪೇಟಗಳು, ಶಾಲೆಗಳನ್ನು ನೀಡಿ ಸನ್ಮಾನಿಸುವುದು ಇಲ್ಲವೇ ಗೌರವಿಸುವುದು, ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದೆ ಇದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇತ್ತೀಚಿಗಷ್ಟೇ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವ ವಿಜಯಾನಂದ ಕಾಶಪ್ಪನವರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರು, ಕಾರ್ಯಕರ್ತರು ಅಭಿಮಾನಿಗಳು ಸೇರಿದಂತೆ ಯಾರೊಬ್ಬರೂ ತಮಗೆ ಶಾಲು, ಪೇಟ, ತರಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಇದನ್ನು ಯಾರೊಬ್ಬರೂ ಅನ್ಯತಾ ಭಾವಿಸಬಾರದು ಎಂದು ಸಚಿವ ಕಾಶಪ್ಪನವರ್ ವಿನಮ್ರವಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ&lt;/p&gt;&lt;p&gt;ಹಾರ ತುರಾಯಿ ಪೇಟ ಶಾಲು ತರುವುದಕ್ಕೆ ಅನಗತ್ಯವಾಗಿ ಬಂದು ವೆಚ್ಚ ಮಾಡುವ ಬದಲು ಸರಳವಾಗಿಯೇ ತಮ್ಮ ಕಚೇರಿ ಇಲ್ಲವೇ ನಿವಾಸಕ್ಕೆ ಬಂದು ಯಾವುದೇ ಸಂದರ್ಭದಲ್ಲಿ ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ. ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾಸ್ತವಿಕತೆಯಲ್ಲಿ ಅತಿಶಯೋಕ್ತಿಯ ಸನ್ಮಾನಗಳು ಮತ್ತು ಅದ್ದೂರಿ ಸ್ವಾಗತಗಳು ಅನಗತ್ಯ ಖರ್ಚಿಗೆ ಕಾರಣವಾಗುವುದಲ್ಲದೆ, ಸಮಯದ ನಷ್ಟಕ್ಕೂ ದಾರಿ ಮಾಡಿಕೊಡುತ್ತವೆ.&lt;/p&gt;&lt;p&gt;ಸಾರ್ವಜನಿಕರ ಹಣ ಅಥವಾ ಅಭಿಮಾನಿಗಳ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ತಾತ್ಕಾಲಿಕ ವಸ್ತುಗಳ ಮೇಲೆ ವ್ಯಯ ಮಾಡುವುದಕ್ಕಿಂತ, ಜನಪರ ಕೆಲಸಗಳಿಗೆ ಬಳಸುವುದು ಉತ್ತಮ ಎಂಬ ಸಂದೇಶವನ್ನು ಈ ನಿರ್ಧಾರ ಸಾರುತ್ತದೆ. ವಿಜಯಾನಂದ ಕಾಶಪ್ಪನವರ್ ಅವರ ಅಭಿಮಾನಿಗಳ ಈ ನಡೆ ಇಂದಿನ ಯುವ ರಾಜಕಾರಣಕ್ಕೆ ಮತ್ತು ಸಮಾಜಕ್ಕೆ ಒಂದು ಸಕಾರಾತ್ಮಕ ಬದಲಾವಣೆಯ ಮುನ್ನುಡಿಯಾಗಿದೆ. ವಿಜಯಾನಂದ ಕಾಶಪ್ಪನವರ್ ಅವರು ಕೂಡ ತಮ್ಮ ಜನಪರ ಹೋರಾಟಗಳು ಮತ್ತು ನೇರ ನುಡಿಯ ರಾಜಕಾರಣಕ್ಕೆ ಹೆಸರುವಾಸಿಯಾದವರು. ಹಿಂದೆ ಶಾಸಕರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲೂ ಅವರು ಸರಳ ಜೀವನಶೈಲಿಗೆ ಒತ್ತು ನೀಡಿದ್ದರು.&lt;/p&gt;&lt;p&gt;ಸಾರ್ವಜನಿಕರು ಕಷ್ಟಪಟ್ಟು ತರುವ ದುಬಾರಿ ಉಡುಗೊರೆಗಳು ಅಥವಾ ಶಾಲು-ಪೇಟಗಳ ಬದಲು ಜನರ ಸಮಸ್ಯೆಗಳನ್ನು ಆಲಿಸುವುದೇ ತಮಗೆ ನಿಜವಾದ ಸನ್ಮಾನ ಎಂದು ಅವರು ಹಿಂದೆ ಹಲವು ವೇದಿಕೆಗಳಲ್ಲಿ ಅಭಿಪ್ರಾಯಪಟ್ಟಿದ್ದರು. ಈ ವಿನೂತನ ನಿರ್ಧಾರವು ರಾಜಕೀಯ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಜನಸಾಮಾನ್ಯರೊಂದಿಗೆ ನಾಯಕರು ಮತ್ತಷ್ಟು ಹತ್ತಿರವಾಗಲು ಇಂತಹ ಸರಳತೆಯ ಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx"/>
        </item>
        <item>
            <title><![CDATA[Big Impact:ಜಮಖಂಡಿಯ ಇಬ್ಬರಿಗೆ ಒಂದೇ ಆಧಾರ್ ಸಂಖ್ಯೆ:  ಎಚ್ಚೆತ್ತ ಅಧಿಕಾರಿಗಳಿಂದ ಸ್ಪಂದನೆ]]></title>
            <link>https://kannada.asianetnews.com/karnataka-districts/bagalkote-kannada-prabha-big-impact-same-aadhaar-number-for-two-people-from-jamkhandi-response-from-officials-mrq/articleshow-fpvxieg</link>
            <guid isPermaLink="true">https://kannada.asianetnews.com/karnataka-districts/bagalkote-kannada-prabha-big-impact-same-aadhaar-number-for-two-people-from-jamkhandi-response-from-officials-mrq/articleshow-fpvxieg</guid>
            <pubDate>Thu, 03 Sep 2026 05:36:00 +0530</pubDate>
            <description><![CDATA[&lt;p&gt;ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ನೀಡಿದ್ದರಿಂದ ಅವರು 9 ವರ್ಷಗಳ ಕಾಲ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದರು. ಕನ್ನಡಪ್ರಭ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು, ಒಬ್ಬರ ಆಧಾರ್ ಕಾರ್ಡ್ ರದ್ದುಪಡಿಸಿ ಹೊಸ ಕಾರ್ಡ್ ನೀಡುವುದಾಗಿ ಭರವಸೆ ನೀಡಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1d51dgaaa2b0xbfa3zj35kn,imgname-aadhaar-1788221634058.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಜಮಖಂಡಿಚತಾಲೂಕಿನ ಹಿರೇಪಡಸಲಗಿ ಗ್ರಾಮದ ಇಬ್ಬರು ನಿವಾಸಿಗಳಿಗೆ ಒಂದೇ ಆಧಾರ್&zwnj; ನಂಬರ್&zwnj; ವಿತರಿಸಿದ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿದ ನಂತರ ಎಚ್ಚತ್ತ ಅಧಿಕಾರಿಗಳು ಗೊಂದಲವನ್ನು ಸರಿಪಡಿಸಲು ಮುಂದಾಗಿದ್ದಾರೆ.&lt;/p&gt;&lt;h2&gt;&lt;strong&gt;ಅಪರೂಪದ ಪ್ರಕರಣ&lt;/strong&gt;&lt;/h2&gt;&lt;p&gt;ಬೆಂಗಳೂರು ಹಾಗೂ ಬಾಗಲಕೋಟೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸಂತ್ರಸ್ತರನ್ನು ಕಚೇರಿಗೆ ಕರೆಯಿಸಿಕೊಂಡು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಒಂದು ಆಧಾರ ಕಾರ್ಡ್&zwnj;ನ್ನು ರದ್ದುಪಡಿಸಿ ಹೊಸ ಆಧಾರ್&zwnj; ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಒಂದೇ ಆಧಾರ್&zwnj; ಸಂಖ್ಯೆ ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾಗಿರುವ ಅಪರೂಪದ ಪ್ರಕರಣವೊಂದು ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು.&lt;/p&gt;&lt;h3&gt;&lt;strong&gt;ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತ&lt;/strong&gt;&lt;/h3&gt;&lt;p&gt;ಈ ಲೋಪದಿಂದಾಗಿ ಇಬ್ಬರು ಬಡ ಕುಟುಂಬಗಳು 2017ರಿಂದ 9 ವರ್ಷಗಳ ವರೆಗೆ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದ ಆನಂದ ಬಡಿಗೇರ ಹಾಗೂ ಚನ್ನಬಸವ ದೊಡ್ಡಮನಿ ಎಂಬ ಇಬ್ಬರು ವ್ಯಕ್ತಿಗಳ ಆಧಾರ ಕಾರ್ಡ್ಗಳಲ್ಲಿ ಒಂದೇ ಆಧಾರ್&zwnj; ಸಂಖ್ಯೆ ನಮೂದಾಗಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಇಬ್ಬರೂ ತಮ್ಮದೇ ಆದ ಗುರುತಿನ ದಾಖಲೆ ಹೊಂದಿದ್ದರೂ, ಆಧಾರ್&zwnj; ಸಂಖ್ಯೆ ಒಂದೇ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು, ಪಿಂಚಣಿ ಸೇರಿ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ಕನ್ನಡಪ್ರಭ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಆಧಾರ ಸಂತ್ರಸ್ತ ಚೆನ್ನಬಸವ ದೊಡ್ಡಮನಿ ಎಂಬುವರನ್ನು ತಾಲೂಕು ಅಧಿಕಾರಿಗಳು ಬುಧವಾರ ಕಚೇರಿ ಕರೆಯಿಸಿಕೊಂಡು ಮಾಹಿತಿ ಪಡೆದರಲ್ಲದೇ ಬೆಂಗಳೂರು ಹಾಗೂ ಬಾಗಲಕೋಟೆಯ ಅಧಿಕಾರಿಗಳು ಚನ್ನಬಸವ ನೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರೆಯಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಸಂತ್ರಸ್ತರಲ್ಲಿ ತಮ್ಮ ಸಮಸ್ಯೆಗೆ ಪರಿಹಾರ ದೊರಕುವದೆಂಬ ಭರವಸೆ ಮೂಡಿದ್ದು, ಕನ್ನಡಪ್ರಭಕ್ಕೆ ಅಭಿನಂದನೆ ತಿಳಿಸಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-kannada-prabha-big-impact-same-aadhaar-number-for-two-people-from-jamkhandi-response-from-officials-mrq/articleshow-fpvxieg"/>
        </item>
        <item>
            <title><![CDATA[ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾದ ಒಂದೇ ಆಧಾರ್‌ ಸಂಖ್ಯೆ: ಜಮಖಂಡಿಯಲ್ಲಿ ಅಪರೂಪದ ಘಟನೆ]]></title>
            <link>https://kannada.asianetnews.com/karnataka-districts/bagalkote-a-single-aadhaar-number-allocated-to-two-people-a-rare-incident-in-jamakhandi-mrq/articleshow-gucl81e</link>
            <guid isPermaLink="true">https://kannada.asianetnews.com/karnataka-districts/bagalkote-a-single-aadhaar-number-allocated-to-two-people-a-rare-incident-in-jamakhandi-mrq/articleshow-gucl81e</guid>
            <pubDate>Tue, 01 Sep 2026 07:00:26 +0530</pubDate>
            <description><![CDATA[&lt;p&gt;ಜಮಖಂಡಿ ತಾಲೂಕಿನ ಗ್ರಾಮದಲ್ಲಿ ಇಬ್ಬರು ವ್ಯಕ್ತಿಗಳಿಗೆ ಒಂದೇ ಆಧಾರ್ ಸಂಖ್ಯೆ ಹಂಚಿಕೆಯಾದ ಕಾರಣ, ಅವರು ಹಲವು ವರ್ಷಗಳಿಂದ ಪಿಂಚಣಿ, ಮನೆ ಸೌಲಭ್ಯದಂತಹ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿಯದೆ ಇಬ್ಬರೂ ಸಂಕಷ್ಟ ಅನುಭವಿಸುತ್ತಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1d51dgaaa2b0xbfa3zj35kn,imgname-aadhaar-1788221634058.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಒಂದೇ ಆಧಾರ್&zwnj; ಸಂಖ್ಯೆ ಇಬ್ಬರು ವ್ಯಕ್ತಿಗಳಿಗೆ ಹಂಚಿಕೆಯಾಗಿರುವ ಅಪರೂಪದ ಪ್ರಕರಣವೊಂದು ತಾಲೂಕಿನ ಹಿರೇಪಡಸಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಈ ಲೋಪದೋಷದಿಂದಾಗಿ ಇಬ್ಬರು ಬಡ ಕುಟುಂಬಗಳು ಹಲವು ವರ್ಷಗಳಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;p&gt;ಗ್ರಾಮದ ಆನಂದ ಬಡಿಗೇರ ಹಾಗೂ ಚನ್ನಬಸವ ದೊಡ್ಡಮನಿ ಎಂಬ ಇಬ್ಬರು ವ್ಯಕ್ತಿಗಳ ಆಧಾರ ಕಾರ್ಡ್&zwnj;ಗಳಲ್ಲಿ ಒಂದೇ ಆಧಾರ ಸಂಖ್ಯೆ ನಮೂದಾಗಿದ್ದೇ ಈ ಸಮಸ್ಯೆಗೆ ಪ್ರಮುಖ ಕಾರಣ. ಇಬ್ಬರೂ ತಮ್ಮದೇ ಆದ ಗುರುತಿನ ದಾಖಲೆ ಹೊಂದಿದ್ದರೂ, ಆಧಾರ ಸಂಖ್ಯೆ ಒಂದೇ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆಗಳು, ಪಿಂಚಣಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ವಿಕಲಚೇತನ ಆನಂದ್&zwnj;ಗೆ ವರ್ಷಗಳಿಂದ ಸಿಗದ ಪಿಂಚಣಿ&lt;/strong&gt;&lt;/h2&gt;&lt;p&gt;ಆನಂದ ಬಡಿಗೇರ ಅವರು ವಿಕಲಚೇತನರಾಗಿದ್ದು, ದೈಹಿಕ ಅಸಮರ್ಥತೆಯಿಂದಾಗಿ ಕಠಿಣ ಕೆಲಸ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ದೊರೆಯಬೇಕಾದ ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳು ಆಧಾರ ಸಂಖ್ಯೆಯ ಗೊಂದಲದಿಂದಾಗಿ ವರ್ಷಗಳಿಂದ ತಲುಪಿಲ್ಲ ಎನ್ನಲಾಗಿದೆ.&lt;/p&gt;&lt;p&gt;ಸರ್ಕಾರದ ನೆರವಿನ ಮೇಲೆ ಜೀವನ ಸಾಗಿಸಬೇಕಾದ ಕುಟುಂಬಕ್ಕೆ ಪಿಂಚಣಿ ಕೂಡ ಸಿಗದಿರುವುದು ಮತ್ತಷ್ಟು ಸಂಕಷ್ಟ ತಂದಿದೆ. ಬಡತನದಲ್ಲಿರುವ ಇವರಿಗೆ ಮನೆ ಸೌಲಭ್ಯವೂ ಕೈತಪ್ಪಿತು. ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾಗಿದ್ದರೂ, ಆಧಾರ ಸಂಖ್ಯೆಯಲ್ಲಿನ ಸಮಸ್ಯೆಯಿಂದಾಗಿ ಮನೆ ಸೌಲಭ್ಯವೂ ಕೈತಪ್ಪಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಚನ್ನಬಸವ ಅವರ ಕುಟುಂಬದಲ್ಲಿರುವ ಚಿಕ್ಕ ಮಗುವಿಗೂ ತಂದೆಯ ಆಧಾರ ದಾಖಲೆಗಳಲ್ಲಿನ ಗೊಂದಲದಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿದೆ ಎಂದು ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಬೆಂಗಳೂರಿನ ಯುಐಡಿಎಐ ಕಚೇರಿಗೆ ಅಲೆದಾಟ&lt;/strong&gt;&lt;/h3&gt;&lt;p&gt;ಆಧಾರ ಸಂಖ್ಯೆಯ ಸಮಸ್ಯೆ ಪರಿಹರಿಸಿಕೊಳ್ಳಲು ಇಬ್ಬರೂ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಜಮಖಂಡಿ ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಸ್ಥಳೀಯ ಶಾಸಕರಿಗೂ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ. ಬೆಂಗಳೂರಿನ ಯುಐಡಿಎಐ ಕಚೇರಿಗೂ ತೆರಳಿ ತಮ್ಮ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಕಳೆದ ವರ್ಷ ಬೆಂಗಳೂರಿನ ಯುಐಡಿಐಎ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಬಳಿಕ, ಸುಮಾರು ಆರು ತಿಂಗಳ ನಂತರವೂ ಆಧಾರ ಸಂಖ್ಯೆಯಲ್ಲಿನ ಸಮಸ್ಯೆ ಬಗೆಹರಿಯದೇ ಇರುವುದರ ಜೊತೆಗೆ, ದಾಖಲೆಗಳಲ್ಲಿ ಹೆಸರು ಬದಲಾಗಿರುವ ಮತ್ತೊಂದು ಗೊಂದಲ ಎದುರಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಕ್ಕೆ ಒತ್ತಾಯ&lt;/strong&gt;&lt;/h3&gt;&lt;p&gt;ಒಬ್ಬ ವ್ಯಕ್ತಿಗೆ ಮೀಸಲಾಗಬೇಕಾದ ಆಧಾರ ಸಂಖ್ಯೆ ಮತ್ತೊಬ್ಬ ವ್ಯಕ್ತಿಗೂ ಒಂದೇ ಆಗಿರುವುದು ಇಬ್ಬರ ಜೀವನದ ಮೇಲೆಯೇ ಗಂಭೀರ ಪರಿಣಾಮ ಬೀರಿದೆ. ಆಧಾರ ಗುರುತಿನ ಸಮಸ್ಯೆಯಿಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದಿರುವುದು ಕುಟುಂಬಗಳನ್ನು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಯುಐಡಿಎಐಗೆ ಸಂಬಂಧಿಸಿದ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಬ್ಬರ ದಾಖಲೆಗಳನ್ನು ಪರಿಶೀಲಿಸಿ ಪ್ರತ್ಯೇಕ ಹಾಗೂ ಸರಿಯಾದ ಆಧಾರ ಸಂಖ್ಯೆಯನ್ನು ಒದಗಿಸುವಂತೆ ಕ್ರಮ ಕೈಗೊಳ್ಳಬೇಕು.&lt;/p&gt;&lt;p&gt;ಆಧಾರ ಸಮಸ್ಯೆಯಿಂದ ಇದುವರೆಗೆ ಸ್ಥಗಿತಗೊಂಡಿರುವ ಪಿಂಚಣಿ, ಮನೆ ಸೇರಿದಂತೆ ಅರ್ಹ ಸರ್ಕಾರಿ ಸೌಲಭ್ಯಗಳನ್ನು ಮರುಪಡೆಯಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ವರ್ಷಗಳಿಂದ ಕಚೇರಿಗಳಿಗೆ ಅಲೆದಾಡಿದರೂ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಆಧಾರ್ ಸಂಖ್ಯೆಯಲ್ಲಿನ ಈ ಲೋಪದಿಂದಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಪ್ರಕರಣವನ್ನು ಪರಿಶೀಲಿಸಿ ಶೀಘ್ರ ನ್ಯಾಯ ಒದಗಿಸಬೇಕು ಎಂದು ಕುಟುಂಬದವರು ಮನವಿ ಮಾಡಿದ್ದಾರೆ.&lt;/p&gt;&lt;p&gt;ಸನ್&zwnj; 2012ರಲ್ಲಿ ಆಧಾರ ಕಾರ್ಡಗಳ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿತ್ತು. ಗ್ರಾಪಂ ಕೇಂದ್ರದಲ್ಲಿ ಆನಂದ ಬಡಿಗೇರ ಹಾಗೂ ನಾನು ಇಬ್ಬರು ಸರತಿ ಸಾಲಿನಲ್ಲಿ ನಿಂತಿದ್ದೇವು, ಸಾಕಷ್ಟು ಗಂಟೆಗಳ ಕಾಯ್ದ ನನ್ನ ಸರದಿ ಬಂದಿತ್ತು. ನನಗಿಂತಲು ಮೊದಲು ಆನಂದ ಬಡಿಗೇರ ಆಧಾರ್&zwnj; ಕಾರ್ಡ್ ನೋಂದಣಿ ಮುಗಿದಿತ್ತು. ನಂತರ ನನ್ನ ಸರದಿ ಬಂದಾಗ ನನಗೂ ಅದೇ ಸಂಖ್ಯೆಯ ರಸೀದಿ ನೀಡಿದ್ದರು. ನೋಂದಣಿ ಮಾಡಿಕೊಳ್ಳುವರ ತಪ್ಪಿನಿಂದಾಗಿ ನನಗೆ ಆಧಾರ್&zwnj; ಕಾರ್ಡ್ ಬರಲಿಲ್ಲ.&lt;/p&gt;&lt;p&gt;2 ವರ್ಷಗಳ ನಂತರ 2014ರಲ್ಲಿ ನನಗೂ ಆಧಾರ್&zwnj; ಕಾರ್ಡ್ ಬಂದಿತ್ತಾದರೂ ಒಂದೇ ನಂಬರಿನದಾಗಿತ್ತು ಎಂಬುದು ನಮಗೆ ಅರಿವಿಗೆ ಬಂದದ್ದು 2017ರಲ್ಲಿ ಸರ್ಕಾರಿ ಸೌಲಭ್ಯಗಳು ಹಾಗೂ ನನಗಿರುವ 7 ವರ್ಷದ ಅಂಗವಿಕಲ ಮಗನಿಗೆ ಅಂಗವಿಕಲರ ವೇತನ ಬಾರದೇ ಇದ್ದಾಗ ಆಧಾರ ಸಮಸ್ಯೆಯ ಅರಿವು ಉಂಟಾಗಿ ಸ್ಥಳೀಯ ಶಾಸಕರ ಪತ್ರ ಪಡೆದು ಮೂರು ಬಾರಿ ಬೆಂಗಳೂರಿನ ಆಧಾರ ಕಚೇರಿಗೆ ಹೋಗಿ ಬಂದಿದ್ದೇವೆ. ಎರಡು ಆಧಾರಗಳನ್ನು ರದ್ದು ಮಾಡುತ್ತೇವೆ.&lt;/p&gt;&lt;p&gt;3 ತಿಂಗಳ ನಂತರ ಇಬ್ಬರೂ ಹೊಸದಾಗಿ ಆಧಾರ ಮಾಡಿಸಿಕೊಳ್ಳಿ ಎಂದು ಹೇಳಿ ಕಳುಹಿಸಲಾಯಿತು. ಈ ಎಲ್ಲ ಘಟನೆ ನಡೆದು ವರ್ಷ ಕಳೆದರೂ ನಮ್ಮ ಸಮಸ್ಯೆ ಬಗೆಹರಿದಿಲ್ಲ. ಗ್ರಾಪಂನಿಂದ ಮಂಜೂರಾದ ಮನೆ ಪಡೆದುಕೊಳ್ಳಲಾಗಿಲ್ಲ, ಪಡಿತರ ಸಿಗುತ್ತಿಲ್ಲ, ಮನೆ ನಿರ್ಮಿಸುವ ಗೌಂಡಿ ಕೆಸಲ ಮಾಡುವ ನನಗೆ ಕಾರ್ಮಿಕ ಕಾರ್ಡ್ ಕೂಡಾ ದೊರೆತಿಲ್ಲ. ಕಚೇರಿಗಳಿಗೆ ಅಲೆದು ಸುಸ್ತಾಗಿದ್ದೇನೆ,&lt;/p&gt;&lt;p&gt;&lt;strong&gt;-ಚೆನ್ನಬಸವ ದೊಡಮನಿ, ಆಧಾರ ಸಂತ್ರಸ್ಥ, ಹಿರೇಪಡಸಲಗಿ ಗ್ರಾಮ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-a-single-aadhaar-number-allocated-to-two-people-a-rare-incident-in-jamakhandi-mrq/articleshow-gucl81e"/>
        </item>
        <item>
            <title><![CDATA[ಗರ್ಭಗುಡಿಗೆ ಪ್ರತಿದಿನ ಬೀಳುತ್ತೆ ಸೂರ್ಯಕಿರಣ: ಐಹೊಳೆಯ ಈ ದೇಗುಲದ ನಿಗೂಢ ರಹಸ್ಯ ಗೊತ್ತಾ?]]></title>
            <link>https://kannada.asianetnews.com/karnataka-districts/bagalkote-aihole-durga-temple-sun-ray-mystery-sparks-demand-for-scientific-study-gvd/articleshow-ixtl1on</link>
            <guid isPermaLink="true">https://kannada.asianetnews.com/karnataka-districts/bagalkote-aihole-durga-temple-sun-ray-mystery-sparks-demand-for-scientific-study-gvd/articleshow-ixtl1on</guid>
            <pubDate>Mon, 07 Sep 2026 20:25:08 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಐಹೊಳೆಯ ಐತಿಹಾಸಿಕ ದುರ್ಗಾ ದೇವಾಲಯದ ಗರ್ಭಗುಡಿಗೆ ಪ್ರತಿದಿನ ಬೆಳಗ್ಗೆ ಸೂರ್ಯಕಿರಣಗಳು ನೇರವಾಗಿ ಬೀಳುತ್ತಿರುವುದು ವಿಶೇಷ ಗಮನ ಸೆಳೆದಿದೆ. ಸೂರ್ಯತಿಲಕ ಅಥವಾ ಸೂರ್ಯಾಭಿಷೇಕ ಎಂದು ಕರೆಯಲಾಗುವ ಈ ವಿದ್ಯಮಾನವು ದೇವಾಲಯದ ಮೂಲ ಸ್ವರೂಪದ ಕುರಿತು ಹೊಸ ಕುತೂಹಲ ಹುಟ್ಟಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1y5h3w1nzew08nx0beq64gx,imgname-nkn-1788792573825.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಮೀನಗಡ (ಸೆ.07): &lt;/strong&gt;ಬಾಗಲಕೋಟೆ ಜಿಲ್ಲೆಯ ಐಹೊಳೆಯ ದುರ್ಗಾ ದೇವಾಲಯ ಗರ್ಭಗುಡಿಯಲ್ಲಿ ಸೂರ್ಯತಿಲಕ ಸ್ಪರ್ಶವಾಗಿದ್ದು, ಇದು ಸೂರ್ಯ ದೇವಸ್ಥಾನವೇ ಎಂಬ ಸಂಶಯ ಮೂಡಿದೆ. ಹೀಗಾಗಿ ಇದನ್ನು ಸರಿಯಾಗಿ ವೈಜ್ಞಾನಿಕವಾಗಿ ಸಂಶೋಧನೆ ಮಾಡುವ ಅಗತ್ಯವಿದೆ ಎಂಬ ಆಗ್ರಹ ಕೇಳಿಬಂದಿದೆ.&lt;/p&gt;&lt;p&gt;ಈ ಕುರಿತು ಮಾತನಾಡಿದ ಐಹೊಳೆಯ ಇತಿಹಾಸ ಸಂಶೋಧಕ, ಶಿಕ್ಷಕ, ಪ್ರವಾಸಿ ಮಾರ್ಗದರ್ಶಿ ಪರಶುರಾಮ ಗೋಡಿ, ಪ್ರತಿದಿನ ಬೆಳಗ್ಗೆ 7 ಗಂಟೆ 10 ನಿಮಿಷದಿಂದ ಪ್ರಾರಂಭವಾಗಿ 50 ನಿಮಿಷದವರೆಗೆ ಸೂರ್ಯನ ರೇಷ್ಮೆಕಿರಣಗಳು ನೇರವಾಗಿ ಗರ್ಭಗುಡಿಯ ಮೇಲೆ ಸ್ಪರ್ಶ ಮಾಡುತ್ತವೆ. ಒಂದು ವೇಳೆ ಈ ದೇವಾಲಯದಲ್ಲಿ ಸೂರ್ಯವಿಗ್ರಹವಿದ್ದರೆ ಸೂರ್ಯನ ಹಣೆಯ ಮೇಲೆ ಬಿದ್ದು, ನಿಧಾನವಾಗಿ ಮುಖ, ವಕ್ಷಸ್ಥಳ, ನಾಭಿ ನಂತರ ಪಾದದವರೆಗೂ ಸ್ಪರ್ಶಿಸುತ್ತೆ.&lt;/p&gt;&lt;p&gt;ಇದನ್ನು ಸೂರ್ಯಾಭಿಷೇಕ, ಸೂರ್ಯತಿಲಕ ಎಂದೂ ಕರೆಯುತ್ತಾರೆ ಎಂದಿದ್ದಾರೆ. ಈ ಸೂರ್ಯತಿಲಕ ಕಿರಣವು ಪ್ರತಿ ಕೃಷ್ಣ ಜನ್ಮಾಷ್ಠಮಿಯಂದು ಮತ್ತು ಸೂರ್ಯದೇವ ದಕ್ಷಿಣಾಯಣ ಮತ್ತು ಉತ್ತರಾಯಣ ಮಧ್ಯಕಾಲದಲ್ಲಿ ದೇವಾಲಯ ಗರ್ಭಗುಡಿಯೊಳಗೆ ಬೀಳುತ್ತವೆ. ವಿಗ್ರಹದ ತಲೆಯ ಮೇಲೆ ಮೊದಲು ಕಾಣಿಸಿಕೊಳ್ಳುವ ಸೂರ್ಯತಿಲಕ ವೈಜ್ಞಾನಿಕ ಯುಗಕ್ಕೆ ಸವಾಲಾಗಿದೆ.&lt;/p&gt;&lt;h2&gt;&lt;strong&gt;ಅದ್ಭುತ ಸನ್ನಿವೇಶ&lt;/strong&gt;&lt;/h2&gt;&lt;p&gt;1500 ವರ್ಷಗಳ ಹಿಂದೆ ಚಾಲುಕ್ಯರು ಕಟ್ಟಿದ ಈ ದೇವಾಲಯದ ಈ ಅದ್ಭುತ ಸನ್ನಿವೇಶವನ್ನು ಇಂದು ಅಯೋಧ್ಯೆಯ ರಾಮಮಂದಿರದಲ್ಲೂ, ಅಪ್ಟೋ ಮೆಕ್ಯಾನಿಕಲ್ ವ್ಯವಸ್ಥೆಯ ಮೂಲಕ ಶ್ರೀರಾಮದೇವರಿಗೆ ಸೂರ್ಯತಿಲಕದ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಐಹೊಳೆ ಈ ದೇವಾಲಯವೇ ಸ್ಫೂರ್ತಿ ಎನ್ನಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆ ಐಹೊಳೆಯ ದುರ್ಗಾ ದೇವಾಲಯವನ್ನು ತಜ್ಞರಿಂದ ಸರಿಯಾಗಿ ಸಂಶೋಧನೆಗೊಳಪಡಿಸಿ, ಸೂರ್ಯದೇವಾಲಯವಿತ್ತೆ ಎಂಬುದನ್ನು ಶೋಧಿಸಬೇಕಿದೆ ಎಂದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/bagalkote-aihole-durga-temple-sun-ray-mystery-sparks-demand-for-scientific-study-gvd/articleshow-ixtl1on"/>
        </item>
        <item>
            <title><![CDATA[ಸಚಿವರಾಗ್ತಿದ್ದಂತೆ ಅಖಾಡಕ್ಕಿಳಿದ ವಿಜಯಾನಂದ ಕಾಶಪ್ಪನವರ್: ಇಂದು ಬಾಗಲಕೋಟೆಯಲ್ಲಿ ಬರ ವೀಕ್ಷಣೆ]]></title>
            <link>https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm</link>
            <guid isPermaLink="true">https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm</guid>
            <pubDate>Wed, 05 Aug 2026 08:25:14 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7x6wm3kjpqvcdketmp8bmc,imgname-----------------------2026-08-05t081539.633-1785898168963.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ (ಆ.5): ರಾಜ್ಯದ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲು ಎಲ್ಲ 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಆದೇಶಿಸಿದ ಬೆನ್ನಲ್ಲೇ ಬಾಗಲಕೋಟೆಯ ಬರ ವೀಕ್ಷಣೆಗೆ ಸಚಿವ ವಿಜಯಾನಂದ ಕಾಶೆಪ್ಪನವರು ಮುಂದಾಗಿದ್ದಾರೆ.&lt;/p&gt;&lt;h2&gt;ಸಚಿವರಾಗುತ್ತಿದ್ದಂತೆ ಅಖಾಡಕ್ಕಿಳಿದ ಕಾಶೆಪ್ಪನವರ್&lt;/h2&gt;&lt;p&gt;ಸಚಿವ ವಿಜಯಾನಂದ ಕಾಶೆಪ್ಪನವರ್ ಮೊನ್ನೆಯಷ್ಟೇ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಸಚಿವ ಸ್ಥಾನ ಸ್ವೀಕರಿಸಿದ ಎರಡೇ ದಿನದಲ್ಲಿ ಬರ ಅಧ್ಯಯನಕ್ಕೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 9.30ಗಂಟೆಯಿಂದಲೇ ರೈತರ ಜಮೀನುಗಳಿಗೆ ಹೋಗಿ ಬರ ವೀಕ್ಷಣೆ ಆರಂಭಿಸಲಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ಬರ-ಅತಿವೃಷ್ಟಿ ಅಧ್ಯಯನ: 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?&lt;/p&gt;&lt;h3&gt;ಬಾಗಲಕೋಟೆಯ ಬರಪೀಡಿತ ಗ್ರಾಮಗಳು&lt;/h3&gt;&lt;p&gt;ಬಾಗಲಕೋಟೆ, ಇಳಕಲ್ ತಾಲೂಕಿನ ಹೆರೂರ, ಅಮರಾವತಿ, ಹುನುಗುಂದ ತಾಲೂಕಿನ ಹಿರೆಬಾದವಾಡಗಿ, ರಕ್ಕಸಗಿ, ಕಮತಗಿ. ಗುಳೇದಗುಡ್ಡ ತಾಲೂಕಿನ ಇಂಜಿನವಾರಿ, ಬೂದನಗಡ, ಬಾಗಲಕೋಟೆ ತಾಲೂಕಿನ ಶಿರೂರ, ಬೇವಿನಮಟ್ಟಿ ಗ್ರಾಮಗಳುಲ್ಲಿ ಬರ ವೀಕ್ಷಣೆ ಆರಂಭಿಸಲಿದ್ದಾರೆ. ಸಚಿವರೊಂದಿಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm"/>
        </item>
        <item>
            <title><![CDATA[ಬಾಗಲಕೋಟೆ: ಹೃದಯಾಘಾತದ ಮುನ್ನ ಇತರರ ಜೀವ ಉಳಿಸಿ ಪ್ರಾಣ ಬಿಟ್ಟ ಲಾರಿ ಡ್ರೈವರ್]]></title>
            <link>https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</link>
            <guid isPermaLink="true">https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</guid>
            <pubDate>Sat, 08 Aug 2026 19:50:02 +0530</pubDate>
            <description><![CDATA[&lt;p&gt;&lt;strong&gt;Lorry driver heart attack: &lt;/strong&gt;ಬಾಗಲಕೋಟೆ ಜಿಲ್ಲೆಯ ಇಳಕಲ್ ಹೆದ್ದಾರಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಜಮ್ಮು ಕಾಶ್ಮೀರದ ಲಾರಿ ಚಾಲಕ ಇನ್ಸಾರ್ ಅಹ್ಮದ್ ಚಾಲನೆ ವೇಳೆ ಹೃದಯಾಘಾತಕ್ಕೊಳಗಾದರೂ, ಯಾವುದೇ ವಾಹನಕ್ಕೆ ಅಪಘಾತವಾಗದ ಹಾಗೆ ಲಾರಿಯನ್ನು ಸುರಕ್ಷಿತವಾಗಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvqabk35v8h3pp1ht5c1x2,imgname-thumbnail---2026-08-08t193219.362-1786198600051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿದರೂ, ತನ್ನ ಪ್ರಾಣ ಹೋಗುವ ಕಡೆಯ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಲಾರಿ ಚಾಲಕರೊಬ್ಬರು ದೊಡ್ಡ ಅನಾಹುತವನ್ನು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಚಾಲಕನನ್ನು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ನಿವಾಸಿ ಇನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇವರು ತಮ್ಮ ಲಾರಿಯೊಂದಿಗೆ ಕುಷ್ಟಗಿ ಮಾರ್ಗದತ್ತ ಪ್ರಯಾಣಿಸುತ್ತಿದ್ದರು. ಇಳಕಲ್ ನಗರದ ಹತ್ತಿರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಇನ್ಸಾರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಸಮಯಪ್ರಜ್ಞೆ ಮೆರೆದ ಚಾಲಕ&lt;/strong&gt;&lt;/h2&gt;&lt;p&gt;ಹೃದಯಾಘಾತದ ತೀವ್ರ ನೋವು ಕಾಣಿಸಿಕೊಂಡ ತಕ್ಷಣ, ಚಾಲಕ ಇನ್ಸಾರ್ ಅಹ್ಮದ್ ಗಾಬರಿಯಾಗದೆ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾದರೆ ದೊಡ್ಡ ಪ್ರಾಣಾಪಾಯ ಸಂಭವಿಸಬಹುದು ಎಂದು ಅರಿತ ಅವರು, ನೋವಿನ ನಡುವೆಯೂ ಲಾರಿಯನ್ನು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಸ್ಟೇರಿಂಗ್ ಮೇಲೆಯೇ ಮಲಗಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ತಾನು ಸಾಯುವ ಮುನ್ನ ರಸ್ತೆಯಲ್ಲಿದ್ದ ಜನರ ಜೀವ ಉಳಿಸಿದ ಚಾಲಕನ ಈ ಕಾರ್ಯಕ್ಕೆ ಸಾರ್ವಜನಿಕರು ಭಾವುಕರಾಗಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಇಳಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ashwini HR</dc:creator>
            <atom:link href="https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h"/>
        </item>
        <item>
            <title><![CDATA[ನಿಲ್ದಾಣದ ಉಳಿವಿಗಾಗಿ ಬಾಗಲಕೋಟೆಯಿಂದ ಲೋಕಾಪುರದವರೆಗೆ ಪ್ಯಾಸೆಂಜರ್‌ ರೈಲು ಆರಂಭಿಸಿ]]></title>
            <link>https://kannada.asianetnews.com/karnataka-districts/kudachi-railway-route-demand-to-start-passenger-train-from-bagalkote-to-lokapura-to-save-station-buildings-mrq/articleshow-rlo1w1h</link>
            <guid isPermaLink="true">https://kannada.asianetnews.com/karnataka-districts/kudachi-railway-route-demand-to-start-passenger-train-from-bagalkote-to-lokapura-to-save-station-buildings-mrq/articleshow-rlo1w1h</guid>
            <pubDate>Mon, 31 Aug 2026 08:31:10 +0530</pubDate>
            <description><![CDATA[&lt;p&gt;Bagalkote To Kudachi: ಚರಂತಿಮಠದ ಪ್ರಭು ಸ್ವಾಮೀಜಿಗಳು ಸೂಳಿಕೇರಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗದ ನಿರ್ಮಾಣದಷ್ಟೇ ಸಂರಕ್ಷಣೆಯೂ ಮುಖ್ಯ ಎಂದು ಒತ್ತಿ ಹೇಳಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1avvxgz57rtd87d21zz4db3,imgname-sulikeri-1788144907807.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ರೈಲ್ವೆ ಮಾರ್ಗ ನಿರ್ಮಾಣ ಎಷ್ಟು ಮುಖ್ಯವೋ ಸಂರಕ್ಷಣೆಯು ಅಷ್ಟೇ ಮುಖ್ಯವಾಗಿದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಜಿಲ್ಲೆಯಲ್ಲಿ ಕೈಗೊಂಡ ಕುಡಚಿ ಮಾರ್ಗಕ್ಕೆ ಸಂಬಂಧಿಸಿದ ಸೂಳಿಕೇರಿ ರೈಲು ನಿಲ್ದಾಣ ಸ್ತಿತಿಗತಿ ವೀಕ್ಷಿಸಲು ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷರಾದ ಕುತುಬುದ್ದೀನ ಖಾಜಿ ಹಾಗೂ ಸೂಳಿಕೇರಿ ಗ್ರಾಮಸ್ಥರೊಂದಿಗೆ ತೆರಳಿ ರೈಲು ನಿಲ್ದಾಣ ವೀಕ್ಷಿಸಿ ಮಾತನಾಡಿದರು.&lt;/p&gt;&lt;p&gt;ಶತಮಾನಗಳಿಂದ ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣ ಆಗಬೇಕೆಂದು ಬಾಗಲಕೋಟೆಯ ಜಿಲ್ಲೆಯ ಜನ ಬಯಸಿದ್ದರು. ಸಾಕಷ್ಟು ಹೋರಾಟಗಳನ್ನು ನಡೆಸಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ದಶಕಗಳಿಂದ ಕಾಮಗಾರಿ ನಡೆದಿದ್ದು ಕಾಲಮಿತಿಯಲ್ಲಿ ಪೂರ್ಣಗೊಳ್ಳದಿರುವುದು ದುರದೃಷ್ಟಕರವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಯೋಜನಾ ವೆಚ್ಚ&lt;/strong&gt;&lt;/h2&gt;&lt;p&gt;ಕುಡಚಿ ರೈಲು ಮಾರ್ಗ ನಿರ್ಮಾಣ ಇನ್ನೂ ವಿಳಂಬವಾದಲ್ಲಿ ಯೋಜನಾ ವೆಚ್ಚ ಹೆಚ್ಚಾಗಲಿದೆ. ನಿರ್ಮಾಣಗೊಂಡಂತಹ ಕಟ್ಟಡಗಳು ಶಿಥಿಲಗೊಳ್ಳುತ್ತವೆ. ಈಗಾಗಲೇ ಲೋಕಾಪುರವರೆಗೆ ಕಾಮಗಾರಿ ಮುಗಿದು ಮಾರ್ಗವು ಸುರಕ್ಷಿತವಾಗಿದ್ದು, ಪ್ರಯಾಣಿಕರ ರೈಲು ಪ್ರಾರಂಭಿಸುವ ಅವಶ್ಯಕತೆ ಇದೆ ಎಂದರು.&lt;/p&gt;&lt;p&gt;ಲೋಕಾಪುರದಿಂದ ಕುಡಚಿವರೆಗೂ ನಡೆದ ರೇಲ್ವೆ ಕಾಮಗಾರಿ ತೀವ್ರಗತಿಯಲ್ಲಿ ಪ್ರಾರಂಭಿಸುವ ಅವಶ್ಯಕತೆ ಇದ್ದು, ಸಂಸದರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರೆ ನೀಡಿದರು.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕುತಬುದ್ದೀನ ಖಾಜಿ ಮಾತನಾಡಿ, ಸೂಳಿಕೇರಿ ರೈಲು ನಿಲ್ದಾಣಕ್ಕೆ ಕಚ್ಚಾ ರಸ್ತೆ ಇದ್ದು, ಡಾಂಬರೀಕರಣಗೊಳಿಸುವ ಅವಶ್ಯಕತೆ ಇದ್ದು, ಸ್ಥಳಿಯ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.&lt;/p&gt;&lt;h3&gt;&lt;strong&gt;ಲೋಕಾಪುರದವರೆಗೆ ಪ್ಯಾಸೆಂಜರ್&zwnj; ರೈಲು&lt;/strong&gt;&lt;/h3&gt;&lt;p&gt;ಲೋಕಾಪುರದವರೆಗೆ ಪ್ಯಾಸೆಂಜರ್&zwnj; ರೈಲು ಪ್ರಾರಂಭವಾದರೆ ಮಾತ್ರ ನಿರ್ಮಾಣಗೊಂಡ ಕಟ್ಟಡಗಳು ಸುರಕ್ಷಿತವಾಗಿರಲು ಸಾಧ್ಯ. ಪ್ಯಾಸೆಂಜರ್&zwnj; ರೈಲು ಪ್ರಾರಂಭಿಸಲು ರೈಲ್ವೆ ಇಲಾಖೆಗೆ ಸಾಕಷ್ಟು ಅವಕಾಶಗಳಿದ್ದು, ಮುಧೋಳ, ಮಹಾಲಿಂಗಪುರ, ರಬಕವಿ, ಬನಹಟ್ಟಿ, ತೇರದಾಳ ಹಾಗೂ ಜಮಖಂಡಿ ಸೇರಿದಂತೆ ಅನೇಕ ನಗರಗಳಿಗೆ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಂತಾಗುವುದು. ಅತೀ ಶೀಘ್ರದಲ್ಲಿ ಪ್ರಾಯಾಣಿಕರ ರೈಲು ಪ್ರಾರಂಭಿಸಲು ರೈಲ್ವೆ ಇಲಾಖೆ ಸಂಸದರು, ಮಂತ್ರಿಗಳು ಪ್ರಯತ್ನಿಸಬೇಕು. ಅಲ್ಲದೆ ಕುಡಚಿ ವರೆಗೂ ಕಾಮಗಾರಿ ತೀವ್ರಗೊಳಿಸಿ 2027ರೊಳಗಾಗಿ ಪೂರ್ಣಗೊಳಿಸಲು ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಸೂಳಿಕೇರಿ ಗ್ರಾಮದ ಹಿರಿಯರಾದ ಸಂಗಪ್ಪ ಉಳ್ಳಾಗಡ್ಡಿ ಯಂಕಣ್ಣ ದನಕಾಯ ಗದಿಗೆಪ್ಪ ಹನಮರ ರಾಯನಗೌಡ ಕಿತ್ತಲಿ ಜಯಶ್ರೀ ಗುಳಬಾಳ ಮಂಜುಳಾ ಭೂಸಾರಿ ಮೈನುದ್ದೀನ ಖಾಜಿ ಸುರೇಶ ಕೊಳ್ಳಿ ರಂಗಪ್ಪ ಮುಚಖಂಡಿ ಪರಸಪ್ಪ ಮಾದರ ಮಲ್ಲಪ್ಪ ಗಾಣಿಗೇರ ಸೇರಿದಂತೆ ಅನೇಕ ಗುರು ಹಿರಿಯರು ಉಪಸ್ತಿತರಿದ್ದರು.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/kudachi-railway-route-demand-to-start-passenger-train-from-bagalkote-to-lokapura-to-save-station-buildings-mrq/articleshow-rlo1w1h"/>
        </item>
        <item>
            <title><![CDATA[ಅಪ್ಪಾ ದುಡ್ಡು ಬೇಡ, ಬಡವರ ಸೇವೆ ಮಾಡು: ತಂದೆ ವಿಜಯಾನಂದ ಕಾಶಪ್ಪನವರಿಗೆ ಮಗಳ ಮಾತು]]></title>
            <link>https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu</link>
            <guid isPermaLink="true">https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu</guid>
            <pubDate>Thu, 06 Aug 2026 06:07:31 +0530</pubDate>
            <description><![CDATA[ನೂತನ ಸಚಿವ ವಿಜಯಾನಂದ ಕಾಶಪ್ಪನವರ ತವರಿಗೆ ಆಗಮಿಸಿದಾಗ, ಅವರ ಮಗಳು ಸಮಿಕ್ಷಾ 'ದುಡ್ಡು ಬೇಡ, ಬಡವರ ಸೇವೆ ಮಾಡು' ಎಂದು ಹೇಳಿ ಎಲ್ಲರ ಮನಗೆದ್ದಳು. ಇದೇ ವೇಳೆ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಂಬಂಧಿಸಿದಂತೆ ತಿಮ್ಮಾಪುರ ಮತ್ತು ನಂಜಯ್ಯನಮಠ ಅವರ ಆಡಿಯೋ ವಿವಾದದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kza7p5yqpm6zgqtd7e89tc72,imgname-vijayananda-kashappanavara-1785976264663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಅಪ್ಪಾ ನನಗೆ ದುಡ್ಡು ಬೇಡ ಮತ ನೀಡಿದ ಬಡ ಜನರ ಸೇವೆ ಮಾಡು ಅಪ್ಪಾ ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಮಗಳು ಸಮಿಕ್ಷಾ ತಂದೆಗೆ ಆರತಿ ಬೆಳಗಿ ಮನವಿ ಮಾಡಿಕೊಂಡಳು.&lt;/p&gt;&lt;p&gt;ನೂತನ ಸಚಿವರಾಗಿ ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರಕ್ಕೆ ಬಂದ ಸಚಿವರು ತಮ್ಮ ಮನೆಗೆ ಬಂದಾಗ ಮನೆಯ ಮುಂದೆ ಅವರ ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು ಸ್ವಾಗತ ಮಾಡಿಕೊಳ್ಳುವಾಗ ಮಗಳು ಸಮಿಕ್ಷಾ ಕೂಡ ತಂದೆ, ಸಚಿವ ವಿಜಯಾನಂದ ಕಾಶಪ್ಪನವರಿಗೆ ಆರತಿ ಮಾಡಿದಾಗ ಸಚಿವರು ಮಗಳ ಆರತಿ ತಟ್ಟೆಗೆ ದುಡ್ಡು ಹಾಕಲು ಮುಂದಾದರು. ಆಗ ಮಗಳು ದುಡ್ಡು ಬೇಡ ಸಮಾಜ ಸೇವೆ ಮಾಡು ಎಂದು ಹೇಳಿದಳು. ಆಗ ಅಲ್ಲಿ ನೆರೆದಿದ್ದ ಅಪಾರ ಜನರ ಮನಸು ಗೆದ್ದಿತು.&amp;nbsp;&lt;/p&gt;&lt;p&gt;ಸಚಿವರ ಪುತ್ರಿಯ ಆ ಮಾತು ಕೇಳಿದ ಸಚಿವ ಕಾಶಪ್ಪನವರು, ಕ್ಷಣ ಹೊತ್ತು ಆಶ್ಚರ್ಯಚಕಿತರಾಗಿ ಮಗಳಿಗೆ ಕೃಮುಗಿದು ಅಪ್ಪಿಕೊಂಡರು. ಚಿಕ್ಕವಳಾದ ಅವಳ ಬಾಯಿಯಿಂದ ಸಮಾಜ ಸೇವೆ ಮಾಡುವ ಗುರಿ ಕೇಳಿ ಸಂತಸ ಪಟ್ಟರು. ಸಚಿವ ವಿಜಯಾನಂದ ಕಾಶಪ್ಪನವರ ಧರ್ಮಪತ್ನಿ ವೀಣಾ ಕಾಶಪ್ಪನವರ ಕೂಡ ಸಚಿವರಿಗೆ ಹಾರ ಹಾಕಿ ಸ್ವಾಗತಿಸಿಕೊಂಡರು ನಂತರ ಕೂಡಿದ ಜನತೆ ಜೃಕಾರ ಹಾಕಿದರು.&lt;/p&gt;&lt;h2&gt;&lt;strong&gt;ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋ&lt;/strong&gt;&lt;/h2&gt;&lt;p&gt;ನನ್ನ ಉಸ್ತುವಾರಿ ತಪ್ಪಿಸುವುದಕ್ಕೆ, ನಿರ್ಧಾರ ಮಾಡುವುದಕ್ಕೆ ಪಕ್ಷ ಇದೆ. ನಮ್ಮ ಮುಖ್ಯಮಂತ್ರಿಗಳು ಇದ್ದಾರೆ. ನಿರ್ಧಾರ ಮಾಡೋದಕ್ಕೆ ಇವರಿಬ್ಬರು ಹೇಳಿದರೆ ಮಾಡುತ್ತಾರಾ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಪ್ರಶ್ನಿಸಿದ್ದಾರೆ. ಜಿಲ್ಲೆಯ ಇಳಕಲ್ಲಿನಲ್ಲಿ ಬುಧವಾರ ಮಾತನಾಡಿದ ಅವರು, ಕಾಶಪ್ಪನವರ ಅವರನ್ನು ಬಾಗಲಕೋಟೆ ಉಸ್ತುವಾರಿ ತಪ್ಪಿಸಲು, ಕಾಂಗ್ರೆಸ್ ಶಾಸಕರ ಸಹಿ ಬಗ್ಗೆ ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋದಲ್ಲಿ ಪ್ರಸ್ತಾಪ ಮಾಡಿರುವುಕ್ಕೆ ತಿರುಗೇಟು ನೀಡಿದರು. 2008ರಲ್ಲಿ ಕಾಶಪ್ಪನವರಗೆ ನಾನು ಅನ್ಯಾಯ ಮಾಡಿದೆ ಎಂದು ನಂಜಯ್ಯನಮಠ ತಾವೆ ಬರೆದ ಪುಸ್ತಕದಲ್ಲಿ ಬರೆದಿದ್ದಾರೆ. ಇವರು ಕಾಯಂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಇವರು ಯಾವತ್ತು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಎಂದರು.&lt;/p&gt;&lt;p&gt;ಇಬ್ಬರ ಬಗ್ಗೆ ಹೈಕಮಾಂಡ್&zwnj;ಗೆ ದೂರ ನೀಡುತ್ತಿರಾ ಎಂಬ ಪ್ರಶ್ನೆಗೆ, ನಾನು ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟಿದ್ದೇನೆ. ನಾನು ಸಂಸ್ಕಾರ ಇರುವಂತಹ ಕುಟುಂಬದಲ್ಲಿ ಹುಟ್ಟಿದ್ದೇನೆ. ಕಾಂಗ್ರೆಸ್ ಪಕ್ಷ ನಮ್ಮ ತಂದೆ-ತಾಯಿ ಎಲ್ಲರನ್ನು ಶಾಸಕರನ್ನಾಗಿ ಮಾಡಿದೆ. 6 ಬಾರಿ ನಮ್ಮ ಮನೆತನದವರನ್ನು ಶಾಸಕರನ್ನಾಗಿ ಮಾಡಿದೆ. ನಾವು ಸೇವೆ ಮಾಡುವವರು. ದ್ವೇಷ ಮಾಡುವುದು ಅಥವಾ ವಿರುದ್ಧವಾಗಿ ಏನಾದರೂ ಹೇಳೋದು ನಮ್ಮ ಮನಸಿನಲ್ಲಿ ಇಲ್ಲ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ ಆಗಿದ್ದೇನೆ. ಆದ್ದರಿಂದ ನನಗೆ ಉಸ್ತುವಾರಿ ಕೊಡಬೇಕು. ನಾವು ಯಾವುದೇ ರೀತಿ ಕಚ್ಚಾಟ ಮಾಡುವುದಿಲ್ಲ. ಈಗ ಅವರವರೆ (ಆರ್.ಬಿ.ತಿಮ್ಮಾಪುರ ಮತ್ತು ನಂಜಯ್ಯನಮಠ) ಮಾತನಾಡಿಕೊಂಡಿದ್ದಾರೆ. ಅವರಿಗೆ ಏನು ನೋವು ಆಗಿದೆಯೋ ಗೊತ್ತಿಲ್ಲ. ಸಹಜವಾಗಿ ಕೆಲವಷ್ಟು ಜನಕ್ಕೆ ನೋವಾಗುತ್ತೆ. ಅವರಿಗೂ ಅವಕಾಶ ಕೊಟ್ಟಿದೆಯಲ್ಲ ಪಕ್ಷ, ಅದನ್ನು ಹೇಳಬೇಕಲ್ಲ. ಯಾರಾರ ಮೇಲೆ ಏನೇನೋ ಆರೋಪ ಮಾಡೋದು, ಶೇ.80 ದುಡ್ಡು ತಗೊಂಡೆ ಸಚಿವ ಸಂಪುಟ ಮಾಡಿದ್ದಾರೆ ಅಂತ ಹೇಳೋದು. ಪಾಪ ನಮ್ಮ ನಾಗೇಂದ್ರ ಬಗ್ಗೆ ಕೇಸ್ ಇದೆ. ಅವರನ್ನು ಹೇಗೆ ಮಾಡಿದ್ರು ಅನ್ನೋದು. ವೇಣುಗೋಪಾಲ್ ಅವರಿಗೆ ಏಕವಚನದಲ್ಲಿ ಮಾತನಾಡುವುದು, ಹುಚ್ಚರು ಅನ್ನೋದು ಹೈಕಮಾಂಡ್&zwnj;ನವರನ್ನು ಹುಚ್ಚರು ಅನ್ನೋದು. ನಮ್ಮ ವರಿಷ್ಠರು ಇದಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೇಳ್ತೀನಿ ಇದೇನು ನಮಗೆ ಹೊಸದಲ್ಲ. ಇದನ್ನು ನಮ್ಮ ತಂದೆ-ತಾಯಿ ಕಾಲದಿಂದಲೂ ಎದುರಿಸಿಕೊಂಡು ಬಂದಿದ್ದೇವೆ. ಮುಂದೆ ಎದುರಿಸಿಕೊಂಡು ಹೋಗುತ್ತೇವೆ. ನಾವು ಗಟ್ಟಿಯಾಗಿದ್ದೇವೆ ಎಂದರು.&lt;/p&gt;&lt;p&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu"/>
        </item>
        <item>
            <title><![CDATA[Bagalkote : 19 ವರ್ಷ ವಯೋಮಿತಿಯ KSCA ಕ್ರಿಕೆಟ್‌ಗೆ ಮಹಾಲಿಂಗಪುರದ ದಿಶಾ ಶಿರೋಳ ಆಯ್ಕೆ]]></title>
            <link>https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx</link>
            <guid isPermaLink="true">https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx</guid>
            <pubDate>Tue, 21 Jul 2026 07:30:07 +0530</pubDate>
            <description><![CDATA[ಮಹಾಲಿಂಗಪುರದ ನಿವಾಸಿ ದಿಶಾ ಶಿರೋಳ ಅವರು 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್&zwnj;ನ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಆಡುವ ಮೂಲಕ ಇವರು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky165ghwtgzjwh8143m9vgwf,imgname-disha-1784598938172.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.&lt;/p&gt;&lt;p&gt;8 ಜಿಲ್ಲೆಗಳನ್ನೊಳಗೊಂಡ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿರುವ ದಿಶಾ ಮಹಾಲಿಂಗಪುರ ನಿವಾಸಿ ಮನೋಹರ ಶಿರೋಳ ಅವರ ಪುತ್ರಿಯಾಗಿದ್ದಾಳೆ. ಜು.23ರಿಂದ ಬೆಂಗಳೂರಿನಲ್ಲಿ ಜರುಗುವ ಕೆಎಸ್&zwnj;ಸಿಎ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದು, ಮಹಾಲಿಂಗಪುರ ಪಟ್ಟಣ ಮತ್ತು ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.&lt;/p&gt;&lt;h2&gt;&lt;strong&gt;ಕಠಿಣ ಪರಿಶ್ರಮ&lt;/strong&gt;&lt;/h2&gt;&lt;p&gt;ಸ್ಥಳೀಯ ಜೆಸಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದರೂ ಸಹ ಕಠಿಣ ಪರಿಶ್ರಮದಿಂದ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿ ಭರವಸೆ ಮೂಡಿಸಿದ್ದಾಳೆ ಎಂದು ಶಾಲೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜಪಾನ್&zwnj; ದೈತ್ಯ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಮಂಗಳೂರಿನ ಪ್ರೊ.ಡಾ. ಗೋಪಾಲ್ ಮುಗೇರಾಯ ನೇಮಕ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx"/>
        </item>
        <item>
            <title><![CDATA[Bagalakote: ತರಗತಿಯಲ್ಲೇ ಕುಸಿದುಬಿದ್ದ ಶಾಲಾ ಮೇಲ್ಛಾವಣಿ; ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಗಳು ಪಾರು!]]></title>
            <link>https://kannada.asianetnews.com/karnataka-districts/bagalkot-mugallolli-tanda-government-school-roof-ceiling-collapse-classroom-students-narrowly-escape-bmk/articleshow-uvdk3mt</link>
            <guid isPermaLink="true">https://kannada.asianetnews.com/karnataka-districts/bagalkot-mugallolli-tanda-government-school-roof-ceiling-collapse-classroom-students-narrowly-escape-bmk/articleshow-uvdk3mt</guid>
            <pubDate>Wed, 02 Sep 2026 20:26:14 +0530</pubDate>
            <description><![CDATA[&lt;p&gt;ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ, ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m1h9xa0n0py3frwech1txywf,imgname-bagalakote--1788360960021.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ; ಅದು ದಿನಂಪ್ರತಿ ನಡೆಯುವಂತೆಯೇ ಶ್ರದ್ಧೆಯಿಂದ ಪಾಠ ಕೇಳುತ್ತಿದ್ದ ಸಮಯ. ಕೈಯಲ್ಲಿ ಪುಸ್ತಕ, ಮನದಲ್ಲಿ ಹೊಸ ಭವಿಷ್ಯದ ಕನಸುಗಳನ್ನು ಇಟ್ಟುಕೊಂಡು ಕುಳಿತಿದ್ದ ವಿದ್ಯಾರ್ಥಿಗಳಿಗೆ ಕಾದಿತ್ತು ಕರಾಳ ಆಘಾತ. ಶಿಕ್ಷಕರು ಪಾಠ ಮಾಡುತ್ತಿದ್ದಂತೆಯೇ, ಹಠಾತ್ತಾಗಿ ತರಗತಿಯ ಮೇಲ್ಛಾವಣಿಯ ಕಾಂಕ್ರೀಟ್ ಚಕ್ಕೆಗಳು ವಿದ್ಯಾರ್ಥಿಗಳ ಮೇಲೆ ಉದುರಿ ಬಿದ್ದ ಘಟನೆ ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದ್ದು, ನಾಲ್ಕು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ವಾಡಿಕೆಯಂತೆ ತರಗತಿಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ಬೆಂಚ್&zwnj;ಗಳ ಮೇಲೆ ಕುಳಿತು ಶಿಕ್ಷಕರ ಪಾಠ ಆಲಿಸುತ್ತಿದ್ದ ವೇಳೆ, ಜರ್ಜರಿತಗೊಂಡಿದ್ದ ಮೇಲ್ಛಾವಣಿಯ ಕಾಂಕ್ರೀಟ್ ಹಠಾತ್ತಾಗಿ ಕಚಿತ್ ಆಗಿ ಬೆಂಚ್ ಹಾಗೂ ವಿದ್ಯಾರ್ಥಿಗಳ ಮೇಲೆಯೇ ಬಿದ್ದಿದೆ. ಕಾಂಕ್ರೀಟ್ ಚೂರುಗಳು ತಾಗಿದ ಪರಿಣಾಮ ನಾಲ್ಕೈದು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತರಗತಿಯಲ್ಲಿದ್ದ ಮಕ್ಕಳು ಮತ್ತು ಶಿಕ್ಷಕರು ಕ್ಷಣಕಾಲ ಬೆಚ್ಚಿಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಗಾಯಗೊಂಡ ಮಕ್ಕಳಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಶಿಥಿಲಾವಸ್ಥೆಯಲ್ಲಿ ಕಟ್ಟಡ; ಕಬ್ಬಿಣದ ಸರಳುಗಳ ದರ್ಶನ!&lt;/strong&gt;&lt;/h3&gt;&lt;p&gt;ಈ ಘಟನೆ ಶಾಲೆ ಯ ಕಟ್ಟಡದ ಅಸಲಿ ಚಿತ್ರಣವನ್ನು ಬಿಚ್ಚಿಟ್ಟಿದೆ. ಶಾಲೆಯ ಕೊಠಡಿಗಳು ತೀವ್ರ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿಯ ಪ್ಲ್ಯಾಸ್ಟರಿಂಗ್ ಕಿತ್ತುಹೋಗಿ ಒಳಗಿನ ಕಬ್ಬಿಣದ ಸರಳುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಮಳೆಗಾಲದಲ್ಲಿ ನೀರು ಸೋರುವುದು, ಕಾಂಕ್ರೀಟ್ ಹಸುರಾಗಿ ಉದುರುವುದು ಇಲ್ಲಿ ನಿತ್ಯದ ಕಥೆಯಾಗಿತ್ತು. &quot;ಇದು ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳಬಹುದು&quot; ಎಂದು ತಿಳಿದಿದ್ದರೂ, ಬೇರೆ ದಾರಿಯಿಲ್ಲದೆ ಮಕ್ಕಳು ಇದೇ ಭಯಾನಕ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿತ್ತು.&lt;/p&gt;&lt;h3&gt;&lt;strong&gt;ಅಧಿಕಾರಿಗಳ ನಿರ್ಲಕ್ಷ್ಯ; ಪೋಷಕರ ಆಕ್ರೋಶ!&lt;/strong&gt;&lt;/h3&gt;&lt;p&gt;ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಶಾಲೆಯತ್ತ ಧಾವಿಸಿ ಬಂದ ಪೋಷಕರು ಮತ್ತು ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಟ್ಟಡ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಅಥವಾ ಹೊಸ ಕೊಠಡಿ ನಿರ್ಮಾಣಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ನಟಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. &quot;ಇಂದು ನಮ್ಮ ಮಕ್ಕಳು ಅದೃಷ್ಟವಶಾತ್ ಬದುಕಿ ಬಂದಿದ್ದಾರೆ. ನಾಳೆ ಪ್ರಾಣಕ್ಕೇ ಕಂಟಕ ಬಂದರೆ ಯಾರು ಹೊಣೆ?&quot; ಎಂದು ಆಕ್ರೋಶಗೊಂಡ ಪೋಷಕರು ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/bagalkot-mugallolli-tanda-government-school-roof-ceiling-collapse-classroom-students-narrowly-escape-bmk/articleshow-uvdk3mt"/>
        </item>
        <item>
            <title><![CDATA[Bagalakote: ಮಾಳಿಂಗರಾಯನ ಪವಾಡ, ಹಿಂದಿನ ದಾಖಲೆಗಳು ಉಡೀಸ್‌! ಲಕ್ಷ ಲಕ್ಷಕ್ಕೆ ಸೇಲ್ ಆಯ್ತು ಪವಿತ್ರ ತೆಂಗಿನಕಾಯಿ!]]></title>
            <link>https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o</link>
            <guid isPermaLink="true">https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o</guid>
            <pubDate>Sun, 13 Sep 2026 16:52:24 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m2d74xngnaq0g1qk3ztcd7db,imgname-bagalkot-malingaraya-1789297587888.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.&lt;/p&gt;&lt;img&gt;&lt;p&gt;ಬಾಗಲಕೋಟೆ: ಮಾಳಿಂಗರಾಯ ದೇವರ ಗದ್ದುಗೆ ಮೇಲಿನ ಪವಿತ್ರಾ ತೆಂಗಿನಕಾಯಿ ಪ್ರತಿ ವರ್ಷದಂತೆ ಈ ವರ್ಷವೂ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಭಕ್ತ ಸಮೂಹದ ಮಧ್ಯೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 8 ಲಕ್ಷದ 1 ರೂಪಾಯಿ(8,00,001)ಗೆ ತೆಂಗಿನಕಾಯಿ ಹರಾಜಾಗಿದೆ. ಇದರೊಂದಿಗೆ ಈ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡಿದೆ.&lt;/p&gt;&lt;img&gt;&lt;p&gt;ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಸಲಾಗಿದೆ. ದೇವರ ಜಾತ್ರಾ ಮಹೋತ್ಸವ ವೇಳೆ ಗದ್ದುಗೆ ಮೇಲಿಟ್ಟು ಪೂಜೆ ಮಾಡಿದ್ದ ತೆಂಗಿನಕಾಯಿಯನ್ನು ಶ್ರಾವಣ ಮಾಸದ ಕೊನೆಯಲ್ಲಿ ತೆಂಗಿನಕಾಯಿ ಹರಾಜು ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಈ ವರ್ಷ ಜಾತ್ರೆಗೆ ಆಗಮಿಸಿದ್ದ ಅಪಾರ ಭಕ್ತ ಸಮೂಹದ ಮಧ್ಯೆ ನಡೆದ ದೇವರ ತೆಂಗಿನಕಾಯಿ ಹರಾಜು ಮಾಡಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಮೊತ್ತದ ಹರಾಜಿಗೆ ಭಕ್ತರು ಸಾಕ್ಷಿಯಾದರು.&lt;/p&gt;&lt;img&gt;&lt;p&gt;ಹರಾಜಿನಲ್ಲಿ ಜಮಖಂಡಿ ತಾಲೂಕಿನ ಸನಾಳ ಗ್ರಾಮದ ಲಕ್ಷ್ಮಣ ಸಿದ್ದಪ್ಪ ಕುರಣಿ ಅವರು 8 ಲಕ್ಷ 1 ರೂಪಾಯಿಗೆ ಪಡೆದುಕೊಂಡು ಆಶೀರ್ವಾದ ಪಡೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಶ್ರಾವಣ ಮಾಸದ ವೇಳೆ ನಿರಂತರ ಒಂದು ತಿಂಗಳ ಕಾಲ ದೇವರ ಗದ್ದುಗೆ ಮೇಲಿಟ್ಟು ಪೂಜಿಸಲ್ಪಟ್ಟಿದ್ದ ತೆಂಗಿನಕಾಯಿ ನಂತರ ಮಾಳಿಂಗರಾಯ ಜಾತ್ರಾ ಮಹೋತ್ಸವ ವೇಳೆ ಸವಾಲ್ ಮೂಲಕ ಹರಾಜಿನಲ್ಲಿ ಭಕ್ತರಿಗೆ ಸಲ್ಲಿಸಲ್ಪಡುತ್ತದೆ.&lt;/p&gt;&lt;img&gt;&lt;p&gt;ಈ ಹಿಂದೆಯೂ ದಾಖಲೆ ಮೊತ್ತಕ್ಕೆ ಹರಾಜ್ ಆಗಿದ್ದ ತೆಂಗಿನಕಾಯಿ, 2019ರಲ್ಲಿ 6,50,001 ಆಗಿದ್ದರೆ, 2025ರಲ್ಲಿ 5,70,000ಕ್ಕೆ ಹರಾಜ ಆಗಿತ್ತು. ಈ ಬಾರಿ 8,00,001ರೂ. ದಾಖಲೆ ಮೊತ್ತಕ್ಕೆ ಹರಾಜು ಆಗುವ ಮೂಲಕ ದಾಖಲೆ ನಿರ್ಮಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Sumanth SN</dc:creator>
            <atom:link href="https://kannada.asianetnews.com/gallery/karnataka-districts/previous-records-shattered-coconut-from-malingaraya-shrine-sold-for-rs-800001-bagalkot-sns-x22i42o"/>
        </item>
        <item>
            <title><![CDATA[ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..]]></title>
            <link>https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx</link>
            <guid isPermaLink="true">https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx</guid>
            <pubDate>Tue, 11 Aug 2026 22:58:45 +0530</pubDate>
            <description><![CDATA[&lt;p&gt;ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrxq3n962y8gs0mrjmg81sv,imgname-bagalakote-accident-1786469125801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಮತ್ತು ರಬಕವಿ ಗ್ರಾಮಗಳ ಮಧ್ಯೆ ಇರುವ ರಸ್ತೆಯೊಂದು ಈಗ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇಲ್ಲಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಯಾವುದೋ ದೈವಿಕ ಶಾಪವಲ್ಲ, ಬದಲಿಗೆ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಪರಾಕಾಷ್ಠೆ ಎಂಬುದು ಬಯಲಾಗಿದೆ.&lt;/p&gt;&lt;p&gt;ಇಂದು ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಈರಣ್ಣ ಅಂಬಿಗೇರ ಎಂಬುವವರು ತಮ್ಮ ಕಾರಿನಲ್ಲಿ ಗಲಗಲಿ-ರಬಕವಿ ರಸ್ತೆಯ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಮೇಲಿದ್ದ ಅವೈಜ್ಞಾನಿಕ ಜಲ್ಲಿಕಲ್ಲುಗಳಿಂದಾಗಿ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಕೃಷ್ಣಾ ನದಿಗೆ ಉರುಳಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಈರಣ್ಣ, ಕಾರಿನ ಡೋರ್ ಅನ್ನು ಒದ್ದು ಹೊರಗೆ ಬಂದಿದ್ದಾರೆ. ಕೂಡಲೇ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರು ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ.&lt;/p&gt;&lt;h2&gt;&lt;strong&gt;ವಾರದಲ್ಲಿ ಮೂರು ಕಾರುಗಳು ನದಿಪಾಲು!&lt;/strong&gt;&lt;/h2&gt;&lt;p&gt;ಈ ಸ್ಥಳದಲ್ಲಿ ಕಳೆದ ಒಂದು ವಾರದಲ್ಲಿ ಇದು ಮೂರನೇ ಅಪಘಾತವಾಗಿದೆ. ಈ ರಸ್ತೆಯಲ್ಲಿ ಈಗಾಗಲೇ ಮೂರು ಕಾರುಗಳು ನದಿಗೆ ಬಿದ್ದಿವೆ. ಅಷ್ಟೇ ಅಲ್ಲದೆ, ಓರ್ವ ಬೈಕ್ ಸವಾರ ಕೂಡ ರಸ್ತೆ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಸರಣಿ ಅಪಘಾತಗಳನ್ನು ಗಮನಿಸಿದರೆ ಈ ಜಾಗದಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸರಣಿ ಅವಘಡಗಳಿಗೆ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸೂಚನಾ ಫಲಕಗಳಿಲ್ಲ&lt;/strong&gt;&lt;/h2&gt;&lt;p&gt;ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ನಾಮಫಲಕ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ರಸ್ತೆ ಮೇಲೆ ಹಾಕಲಾಗಿರುವ ಜಲ್ಲಿಯನ್ನು ಸಮತಟ್ಟಾಗಿ ಹರಡದೆ, ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ಇದರಿಂದ ವಾಹನಗಳು ಸ್ಕಿಡ್ ಆಗಿ ನೇರವಾಗಿ ನದಿಗೆ ಬೀಳುತ್ತಿವೆ. ಸಂತ್ರಸ್ತ ಈರಣ್ಣ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದೂರು ನೀಡಲು ಬೀಳಗಿ ಪೊಲೀಸ್ ಠಾಣೆಗೆ ತೆರಳಿದ್ದರೂ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಗ್ರಹವೇನು?&lt;/strong&gt;&lt;/h2&gt;&lt;p&gt;ಒಂದೇ ವಾರದಲ್ಲಿ ಮೂರು ಕಾರುಗಳು ನದಿಗೆ ಬಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ರಸ್ತೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗಲಗಲಿ-ರಬಕವಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx"/>
        </item>
        <item>
            <title><![CDATA[25 ವರ್ಷಗಳ ಬಳಿಕ ದಂತ ವೈದ್ಯರ ಸಮ್ಮಿಲನ;  2001ರ ಬ್ಯಾಚ್‌ ವಿದ್ಯಾರ್ಥಿಗಳಿಗೆ ಸನ್ಮಾನ]]></title>
            <link>https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g</link>
            <guid isPermaLink="true">https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g</guid>
            <pubDate>Wed, 19 Aug 2026 10:08:29 +0530</pubDate>
            <description><![CDATA[&lt;p&gt;ಬಾಗಲಕೋಟೆಯ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘದಲ್ಲಿ ಮತ್ತೆ ಒಂದಾದರು. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಬಾಗಲಕೋಟೆಯ ಶೈಕ್ಷಣಿಕ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c4vpjeb0fp2dqt8vsacqfb,imgname-bagalkot-1787114150478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್&zwnj; ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘಕ್ಕೆ ಭೇಟಿ ನೀಡಿ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.&lt;/p&gt;&lt;p&gt;ಬಿವಿವಿ ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ವೀಕ್ಷಿಸಿದ ಹಳೆಯ ವಿದ್ಯಾರ್ಥಿಗಳು, ಬಾಗಲಕೋಟೆ ಇಂದು ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಮೆಡಿಕಲ್ ಹಬ್ ಆಗಿ ಬೆಳೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ ಡಾ.ವೀರಣ್ಣ ಚರಂತಿಮಠ&lt;/strong&gt;&lt;/h2&gt;&lt;p&gt;ಬಿವಿವಿ ಸಂಘದಲ್ಲಿ ವಿದ್ಯಾಭ್ಯಾಸ ಮಾಡಿ ದೇಶ-ವಿದೇಶಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಡಾ.ವೀರಣ್ಣ ಚರಂತಿಮಠ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಬಿವಿವಿ ಸಂಘದ ವತಿಯಿಂದ 2001ರ ಬ್ಯಾಚ್ ನ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 25 ವರ್ಷಗಳ ಬಳಿಕ ನಡೆದ ಈ ಸಮ್ಮಿಲನವು ಹಳೆಯ ಸ್ನೇಹ, ಆತ್ಮೀಯತೆ ಹಾಗೂ ಕಾಲೇಜು ದಿನಗಳ ಸವಿನೆನಪುಗಳನ್ನು ಹಂಚಿಕೊಳ್ಳುವ ವಿಶೇಷ ಸಂದರ್ಭವಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ 2 ಮನೆ ಕಟ್ಟಿ, ತಿಂಗಳಿಗೆ ₹80 ಸಾವಿರ ಬಾಡಿಗೆ ಗಳಿಸ್ತಿರೋ ಚಾಲಕ&lt;/strong&gt;&lt;/p&gt;&lt;p&gt;ಡಾ.ಅಮೀತ ಮಾತೂರ್, ಡಾ.ಸಂದ್ಯಾರಾಣಿ, ಡಾ.ಆಸೀನ ಪಿರಮನಿ, ಡಾ.ಅಂಜುಮ್ ಬಿಸ್ವಾಸ್, ಡಾ.ಆನಂದ, ಡಾ.ಸುಪ್ರೀತ ತ್ರಿಪಾಟಿ, ಡಾ.ಪಾಯಲ್ ತ್ರೀಪಾಟಿ ಸೇರಿ ಅನೇಕರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;6ನೇ ಕ್ಲಾಸ್ ಪುಸ್ತಕದಲ್ಲಿ AI, ಪೈಥಾನ್ ಪಾಠ! ಬುಕ್ ನೋಡಿ ಬೆಚ್ಚಿಬಿದ್ದ ಇಂಜಿನಿಯರ್&zwnj;ಗಳು, ವಿಡಿಯೋ ವೈರಲ್!&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g"/>
        </item>
        <item>
            <title><![CDATA[ದೇಶಭಕ್ತಿಯನ್ನ ಹೀಗೂ ತೋರಿಸಬಹುದು.. ಬಾಗಲಕೋಟೆಯಲ್ಲಿ ಕ್ಷೌರಿಕನಿಂದ ಸತತ 21 ವರ್ಷಗಳಿಂದ ನಿರಂತರ ಸೇವೆ]]></title>
            <link>https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t</link>
            <guid isPermaLink="true">https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t</guid>
            <pubDate>Sat, 15 Aug 2026 16:22:23 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಸೂಳೇಭಾವಿಯ ಮುತ್ತಪ್ಪ ಹಡಪದ ಎಂಬುವವರು ಕಳೆದ 21 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಹಿರಿಯರು, ಅಶಕ್ತರು ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಕರೆಯಿಂದ ಸೇವೆ ಒದಗಿಸುತ್ತಿರುವ ಮುತ್ತಪ್ಪ ಅವರ ಈ ವಿಶಿಷ್ಟ ದೇಶಪ್ರೇಮಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02grjd9yqr3z4g8wsm3nkn8,imgname-a-barber-s-patriotism-in-bagalkot-1786791086505.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್&zwnj; 15) ಸಂಭ್ರಮ ಮನೆಮಾಡಿದೆ. ದೇಶಪ್ರೇಮವನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಒಂದೊಂದು ದಾರಿ ಕಂಡುಕೊಳ್ಳುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದ ನಿವಾಸಿಯೊಬ್ಬರು ಕಳೆದ 21 ವರ್ಷಗಳಿಂದ ವಿಭಿನ್ನ ಹಾಗೂ ಮಾದರಿ ಸೇವೆಯ ಮೂಲಕ ದೇಶಭಕ್ತಿ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ. ಅವರೇ ಮುತ್ತಪ್ಪ ಹಡಪದ.&lt;/p&gt;&lt;h2&gt;&lt;strong&gt;ಸ್ವಾತಂತ್ರ್ಯ ದಿನದಂದು ಉಚಿತ ಸೇವೆ!&lt;/strong&gt;&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಮುತ್ತಪ್ಪ ಹಡಪದ ಅವರು ಸಣ್ಣದೊಂದು ಕ್ಷೌರದ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ಆಗಸ್ಟ್&zwnj; 15 ರಂದು ತಮ್ಮ ಅಂಗಡಿಯನ್ನು ಸಣ್ಣ ಸಣ್ಣ ತ್ರಿವರ್ಣ ಧ್ವಜಗಳಿಂದ ಅಂದವಾಗಿ ಅಲಂಕರಿಸುವ ಇವರು, ಅಂದು ತಮ್ಮ ಬಳಿ ಬರುವ ಎಲ್ಲ ಗ್ರಾಹಕರಿಗೂ ಉಚಿತವಾಗಿ ಕ್ಷೌರ (Haircut) ಮತ್ತು ಶೇವಿಂಗ್&zwnj; ಸೇವೆ ನೀಡುತ್ತಾರೆ. ಈ ಮೂಲಕ ದೇಶಕ್ಕಾಗಿ ತಮ್ಮದೇ ಆದ ಪುಟ್ಟ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.&lt;/p&gt;&lt;p&gt;ಗ್ರಾಮದ ಹಿರಿಯರ ಸಲಹೆಯಂತೆ ಆರಂಭವಾದ ಈ ವಿಶಿಷ್ಟ ಸೇವಾ ಕಾರ್ಯವನ್ನು ಮುತ್ತಪ್ಪ ಅವರು ಕಳೆದ 21 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೇವಲ ಉಚಿತ ಸೇವೆ ನೀಡುವುದಷ್ಟೇ ಅಲ್ಲದೇ ಗ್ರಾಮದ ಹಿರಿಯರು, ಅಶಕ್ತರು, ವಿಕಲಚೇತನರು ಹಾಗೂ ಬುದ್ಧಿಮಾಂದ್ಯರು ಸೇರಿದಂತೆ ಸಮಾಜದ ಅಗತ್ಯವಿರುವ ವರ್ಗದವರಿಗೆ ಅಕ್ಕರೆಯಿಂದ ಸೇವೆ ಒದಗಿಸುತ್ತಾರೆ. ದೇಶಕ್ಕಾಗಿ ದೊಡ್ಡ ಮಟ್ಟದಲ್ಲಿ ಸೇವೆ ಮಾಡಲು ಸಾಧ್ಯವಾಗದಿದ್ದರೂ ತಮ್ಮ ವೃತ್ತಿಯ ಮೂಲಕವೇ ಸಮಾಜಸೇವೆ ಮಾಡುತ್ತಿರುವ ಮುತ್ತಪ್ಪ ಅವರ ಕಾರ್ಯ ನಿಜಕ್ಕೂ ವಿಭಿನ್ನವಾಗಿದೆ.&lt;/p&gt;&lt;p&gt;ತಮ್ಮ ಪುಟ್ಟ ಅಂಗಡಿಯಲ್ಲೇ ದೇಶಭಕ್ತಿಯ ಭಾವನೆಯನ್ನು ಮೂಡಿಸಿ, ಸಮಾಜದ ಹಿಂದುಳಿದ ಹಾಗೂ ಅಶಕ್ತ ವರ್ಗದವರಿಗೆ ನೆರವಾಗುತ್ತಿರುವ ಮುತ್ತಪ್ಪ ಹಡಪದ ಅವರ ಕಾರ್ಯಕ್ಕೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ. ಪ್ರತಿ ವರ್ಷವೂ ತಪ್ಪದೇ ಈ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಮುತ್ತಪ್ಪ ಅವರ ಸಮಾಜಮುಖಿ ಕಳಕಳಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನತೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದಾರೆ. ದೇಶಭಕ್ತಿ ಎಂದರೆ ಕೇವಲ ಭಾಷಣ ಅಥವಾ ಆಚರಣೆಯಲ್ಲ, ಅದು ನಮ್ಮ ದೈನಂದಿನ ಬದುಕಿನಲ್ಲಿ ಮತ್ತು ಇತರರಿಗೆ ನೀಡುವ ಸೇವೆಯಲ್ಲೂ ಇರಬೇಕು ಎಂಬುದಕ್ಕೆ ಮುತ್ತಪ್ಪ ಅವರೇ ಒಂದು ಪ್ರೇರಣೆಯಾಗಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t"/>
        </item>
    </channel>
</rss>
