<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Mon, 24 Aug 2026 11:18:22 +0530</lastBuildDate>
        <atom:link href="https://kannada.asianetnews.com/rss/bagalkot" rel="self" type="application/rss+xml"/>
        <item>
            <title><![CDATA[Bagalakote: ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್; ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು, ಆಗಿದ್ದೇನು?]]></title>
            <link>https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb</link>
            <guid isPermaLink="true">https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb</guid>
            <pubDate>Mon, 24 Aug 2026 11:18:17 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಯುವಕನೊಬ್ಬನ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಗಾಯಗಳಾಗಿವೆ. ಘಟನೆಯಲ್ಲಿ ಕಾಲು, ಹೊಟ್ಟೆ ಬಳಿ ಸುಟ್ಟ ಗಾಯಗಳಾಗಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0s4z9hvdzh1h6209sy7mnaq,imgname-bgk-power-bank-1787550475835.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಜೇಬಲ್ಲಿ ಇಟ್ಟುಕೊಂಡಿದ್ದ ಪವರ್ ಬ್ಯಾಂಕ್&zwnj; ಬ್ಲಾಸ್ಟ್ ಆಗಿ ಯುವ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಸಿದ್ದು ಎಂಬ ಯುವಕ ಘಟನೆಯಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಮಖಂಡಿ ಬಸ್ ನಿಲ್ದಾಣದ ಬಳಿಯ ಎಟಿಎಮ್ ಹತ್ತಿರ ಘಟನೆ ನಡೆದಿದ್ದು, ಏಕಾಏಕಿ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್ ಆದ ಕಾರಣ ಯುವಕ ಕಾಲು, ಹೊಟ್ಟೆ, ಸೊಂಟದ ಬಳಿ ಗಾಯಗಳಾಗಿದೆ.&lt;/p&gt;&lt;h2&gt;ಜೇಬಲ್ಲೇ ಸ್ಫೋಟಗೊಂಡ ಪವರ್ ಬ್ಯಾಂಕ್! ಯುವಕನ ಸ್ಥಿತಿ ಏನು?&lt;/h2&gt;&lt;p&gt;ಘಟನೆಯಲ್ಲಿ ಪವರ್ ಬ್ಯಾಂಕ್ ಸುಟ್ಟು ಕರಕಲಾಗಿದ್ದು, ಗಾಯಾಳು ಯುವಕ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಅದೃಷ್ಟವಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆತ ಚೇತರಿಕೆ ಕಾಣುತ್ತಿದ್ದು, ಯುವಕನ ಶರ್ಟ್ ಹಾಗೂ ಪ್ಯಾಂಟ್ ಬೆಂಕಿಯಿಂದ ಸುಟ್ಟು ಹೋಗಿದೆ.&lt;/p&gt;&lt;p&gt;ಘಟನೆ ಬಗ್ಗೆ ಮಾತನಾಡಿರುವ ಯುವಕನ ತಂದೆ, ನಮ್ಮ ಮಗ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ. ಹಣ ತೆಗೆದುಕೊಂಡು ಬರಲು ಮನೆಯಿಂದ ಎಟಿಎಂ ಬಳಿ ಸಂದರ್ಭದಲ್ಲಿ ಏಕಾಏಕಿ ಪ್ಯಾಂಡ್ ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಸುಟ್ಟ ಗಾಯಗಳಾಗಿರುವ ಕಾರಣ ಆತನಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಆತ ಯಾವ ಕಂಪನಿಯ ಪವರ್ ಬ್ಯಾಂಕ್ ಬಳಕೆ ಮಾಡುತ್ತಿದ್ದ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಗಮನ ಸೆಳೆದ ಹಗ್ಗ ಜಗ್ಗಾಟ ಸ್ಪರ್ಧೆ&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬುದ್ನಿ ಪಿಎಂ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಭರ್ಜರಿ ಹಗ್ಗ ಜಗ್ಗಾಟ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು. ಗ್ರಾಮದ ಲಕ್ಷ್ಮಿ ದೇವಿ ಜಾತ್ರೆ ನಿಮಿತ್ಯ ಹಗ್ಗ ಜಗ್ಗಾಟ ಸ್ಪರ್ಧೆ ಹಮ್ಮಿಕೊಂಡಿತ್ತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ತಂಡ ತಂಡಗಳಾಗಿ ಭಾಗವಹಿಸಿದ ಜನ, ಇಕ್ಕೆಲಗಳಲ್ಲಿ ನಿಂತು ಸ್ಪರ್ಧೆಯನ್ನು ನೋಡಿ ಖುಷಿಪಟ್ಟು ಸ್ಥಳೀಯರು ಕೇಕೆ ಹಾಕಿದರು.&lt;/p&gt;&lt;p&gt;ಹಗ್ಗ ಜಗ್ಗಾಟ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನದ ಗೌರವ ನೀಡಲಾಯಿತು. ಮೊದಲ ಬಹುಮಾನ 15,001 ರೂ., ದ್ವಿತೀಯ ಬಹುಮಾನ 10,001 ರೂ., ತೃತೀಯ ಬಹುಮಾನ 7,501 ರೂ. ಸೇರಿದಂತೆ ಮೊದಲ 6 ವಿಜೇತ ತಂಡಗಳಿಗೆ ಬಹುಮಾನ ನೀಡಿ ಜಾತ್ರಾ ಕಮಿಟಿ ಗೌರವಿಸಿದರು.&lt;/p&gt;]]></content:encoded>
            <category>bagalkot</category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/bagalakote-power-bank-in-pocket-explodes-injured-youth-hospitalized-sns/articleshow-3yrh5gb"/>
        </item>
        <item>
            <title><![CDATA[Crop Insurance: ಬೆಳೆಯೇ ಇಲ್ಲದ ಜಮೀನಿಗೆ ವಿಮೆ ಹಣ: ₹38 ಕೋಟಿ ಫಸಲ್ ಭೀಮಾ ಹಗರಣಕ್ಕೆ ಸಿಐಡಿ ಎಂಟ್ರಿ!]]></title>
            <link>https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r</link>
            <guid isPermaLink="true">https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r</guid>
            <pubDate>Fri, 21 Aug 2026 22:30:21 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ₹38 ಕೋಟಿಗೂ ಅಧಿಕ ಮೊತ್ತದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಕ್ರಮದ ತನಿಖೆಯನ್ನು ಸಿಐಡಿ ಚುರುಕುಗೊಳಿಸಿದೆ. ನಕಲಿ ದಾಖಲೆ ಸೃಷ್ಟಿಸಿ ವಿಮೆ ಹಣ ಪಡೆದ ಆರೋಪದ ಮೇಲೆ, ಅಧಿಕಾರಿಗಳು ಮುಧೋಳದಲ್ಲಿ ರೈತರನ್ನು ವಿಚಾರಣೆ ನಡೆಸುತ್ತಿದ್ದು, ಅಕ್ರಮದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0jm5mta2qhwd5dnf27cywgh,imgname-pmfby-1787331531594.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಬರೋಬ್ಬರಿ ₹38,28,51,580 ರೂಪಾಯಿಗಳ ಬೆಳೆ ವಿಮೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳ ತಂಡವು ತನಿಖೆಯ ಭಾಗವಾಗಿ ಮುಧೋಳ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.&lt;/p&gt;&lt;h2&gt;&lt;strong&gt;ಸಿಐಡಿಯಿಂದ ನೋಟಿಸ್!&lt;/strong&gt;&lt;/h2&gt;&lt;p&gt;ಫಸಲ್ ಭೀಮಾ ಯೋಜನೆಯಡಿ ವಿಮೆ ಪರಿಹಾರ ಹಣ ಪಡೆದಿರುವ ರೈತರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಮುಂಚಿತವಾಗಿ ನೋಟೀಸ್ ಜಾರಿಗೊಳಿಸಿತ್ತು. ನೋಟೀಸ್ ಸ್ವೀಕರಿಸಿದ ರೈತರು ಮುಧೋಳ ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಸಿಐಡಿ ಅಧಿಕಾರಿಗಳು ವಿಮೆ ಪರಿಹಾರ ಪಡೆದ ಪ್ರತಿಯೊಬ್ಬ ರೈತರನ್ನು ಪ್ರತ್ಯೇಕವಾಗಿ ಕರೆದು, ಅವರ ಬ್ಯಾಂಕ್ ಖಾತೆಗೆ ಜಮೆಯಾದ ಹಣ, ಸಲ್ಲಿಸಲಾದ ದಾಖಲೆಗಳು ಹಾಗೂ ಜಮೀನಿನ ಬೆಳೆ ವಿವರಗಳ ಕುರಿತು ಸುದೀರ್ಘ ಮಾಹಿತಿ ಸಂಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಮತ್ತು ಆರೋಪಗಳು!&lt;/strong&gt;&lt;/h3&gt;&lt;p&gt;ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ವ್ಯಾಪಕ ಗೋಲ್&zwnj;ಮಾಲ್ ನಡೆದಿದೆ ಎಂಬ ದೂರುಗಳು ದಾಖಲಾಗಿದ್ದವು. ಜಮೀನಿನಲ್ಲಿ ಯಾವುದೇ ಬೆಳೆ ಇರದಿದ್ದರೂ ಅಥವಾ ಬೆಳೆ ಹಾನಿಯಾಗದಿದ್ದರೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಬೆಳೆ ವಿಮೆ ಹಣವನ್ನು ಅಕ್ರಮವಾಗಿ ಪಡೆಯಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ತನಿಖಾ ಮೂಲಗಳ ಪ್ರಕಾರ, ಗ್ರಾಮೀಣ ಭಾಗಗಳಲ್ಲಿ ಸಕ್ರಿಯವಾಗಿದ್ದ ಕೆಲವು ಏಜೆಂಟರ ಜಾಲವು ರೈತರ ಹೆಸರು ಮತ್ತು ದಾಖಲೆಗಳನ್ನು ಬಳಸಿಕೊಂಡು ಈ ಅಕ್ರಮ ಎಸಗಿದೆ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ದಾಖಲೆಗಳ ಸಂಗ್ರಹ!&lt;/strong&gt;&lt;/h3&gt;&lt;p&gt;ಗ್ರಾಮ ಮಟ್ಟದಲ್ಲಿದ್ದ ಏಜೆಂಟರು ರೈತರಿಂದ ಪಹಣಿ (RTC), ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಜಮೀನಿನಲ್ಲಿ ಬೆಳೆ ಬೆಳೆಯದೇ ಇದ್ದರೂ ಅಥವಾ ಬೇರೆ ಜಮೀನಿನ ಹಸಿರು ಬೆಳೆಗಳ ನಕಲಿ ಫೋಟೋಗಳನ್ನು ಸಿಸ್ಟಮ್&zwnj;ಗೆ ಅಪ್&zwnj;ಲೋಡ್ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದಲ್ಲದೇ ಬೆಳೆ ನಷ್ಟವಾಗಿದೆ ಎಂದು ಬಿಂಬಿಸಲು ನಕಲಿ ಬೆಳೆ ಸರ್ವೇ ವರದಿಗಳನ್ನು ಸಿದ್ಧಪಡಿಸಿ, ವಿಮೆ ಕಂಪನಿ ಮತ್ತು ಸರಕಾರದಿಂದ ಪರಿಹಾರ ಮೊತ್ತ ಬಿಡುಗಡೆಯಾಗುವಂತೆ ಮಾಡಲಾಗಿತ್ತು ಎಂಬ ಗಂಭೀರ ಆರೋಪಗಳಾಗಿವೆ.&lt;/p&gt;&lt;h3&gt;&lt;strong&gt;ತನಿಖೆಯ ಉದ್ದೇಶ ಹಾಗೂ ಪ್ರಸ್ತುತ ಸ್ಥಿತಿ!&lt;/strong&gt;&lt;/h3&gt;&lt;p&gt;ಪರಿಹಾರದ ರೂಪದಲ್ಲಿ ಬಿಡುಗಡೆಯಾದ ₹38 ಕೋಟಿಗೂ ಹೆಚ್ಚಿನ ಹಣದಲ್ಲಿ ನೈಜ ಫಲಾನುಭವಿಗಳಿಗೆ ತಲುಪಿದ್ದು ಎಷ್ಟು, ನಕಲಿ ದಾಖಲೆ ಸೃಷ್ಟಿಸಿ ದುರುಪಯೋಗಪಡಿಸಿಕೊಂಡಿದ್ದು ಎಷ್ಟು ಎಂಬ ಬಗ್ಗೆ ಸಿಐಡಿ ಪ್ರಸ್ತುತ ಕೂಲಂಕುಷವಾಗಿ ಪರಿಶೀಲಿಸುತ್ತಿದೆ. ರೈತರ ಹೆಸರಿನಲ್ಲಿ ಹಣವನ್ನು ಪಡೆಯಲಾಗಿದೆಯೇ ಅಥವಾ ರೈತರಿಗೂ ಈ ಅಕ್ರಮಕ್ಕೂ ನೇರ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚುವುದು ಈ ತನಿಖೆಯ ಪ್ರಮುಖ ಭಾಗವಾಗಿದೆ.&lt;/p&gt;&lt;h3&gt;&lt;strong&gt;ಪ್ರಕರಣ ಸಿಐಡಿಗೆ ಒಪ್ಪಿಸಿದ ಸರ್ಕಾರ!&lt;/strong&gt;&lt;/h3&gt;&lt;p&gt;ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಸಂಪೂರ್ಣ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸಿತ್ತು. ತನಿಖಾಧಿಕಾರಿಗಳು ಬ್ಯಾಂಕ್ ದಾಖಲೆಗಳು, ವಿಮೆ ಅರ್ಜಿಗಳು ಮತ್ತು ಬೆಳೆ ಸರ್ವೇ ದತ್ತಾಂಶಗಳನ್ನು ತಾಳೆ ನೋಡಿ ಪರಿಶೀಲಿಸುತ್ತಿದ್ದಾರೆ. ಈ ಹಗರಣದ ಹಿಂದೆ ಯಾರ್ಯಾರ ಪಾತ್ರವಿದೆ, ಅಧಿಕಾರಿಗಳು ಅಥವಾ ಮಧ್ಯವರ್ತಿಗಳ ಕುಮ್ಮಕ್ಕು ಇದೆಯೇ ಎಂಬ ವಿವರಗಳು ಸಿಐಡಿ ತನಿಖೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕವಷ್ಟೇ ಸ್ಪಷ್ಟವಾಗಲಿವೆ. ಪ್ರಸ್ತುತ ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳು ಹಾಗೂ ರೈತರ ಹೇಳಿಕೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/bagalkot-fasal-bima-yojana-scam-cid-investigation-rs-38-crore-crop-insurance-fraud-farmers-notice-bmk/articleshow-5ldo23r"/>
        </item>
        <item>
            <title><![CDATA[ಶಾಹಪುರ-ವಾಡಿ ರೈಲು ಮಾರ್ಗ 2028ರೊಳಗೆ ಪೂರ್ಣ: ಬಾದಾಮಿಯಲ್ಲಿ ವಿ. ಸೋಮಣ್ಣ ಮಹತ್ವದ ಘೋಷಣೆ]]></title>
            <link>https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy</link>
            <guid isPermaLink="true">https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy</guid>
            <pubDate>Fri, 17 Jul 2026 17:57:00 +0530</pubDate>
            <description><![CDATA[&lt;p&gt;ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kxr0f1dmxjp13nf050r2f850,imgname-m-mb-1784290969011.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಜು.17): &lt;/strong&gt;ಬಾದಾಮಿ ರೈಲು ನಿಲ್ದಾಣದ ಮೇಲ್ದರ್ಜೆಗೇರಿಸಿದ ನೂತನ ಕಟ್ಟಡವನ್ನು ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನೆರವೇರಿತು. ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿವರಿಸಿದರು.&lt;/p&gt;&lt;p&gt;ಭಾಷಣದಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಸುಮಾರು 75 ರೈಲು ನಿಲ್ದಾಣಗಳನ್ನು ₹75 ಸಾವಿರ ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಬಾದಾಮಿ ರೈಲು ನಿಲ್ದಾಣವನ್ನು ಸುಮಾರು ₹15 ಕೋಟಿ ವೆಚ್ಚದಲ್ಲಿ ಆಧುನೀಕರಿಸಲಾಗಿದೆ ಎಂದರು.&lt;/p&gt;&lt;p&gt;ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಈ ಬಾರಿ ಸುಮಾರು ₹3 ಲಕ್ಷ ಕೋಟಿ ಬಜೆಟ್ ಮೀಸಲಿಟ್ಟಿದ್ದು, ಕರ್ನಾಟಕದಲ್ಲಿಯೂ ಹಲವು ಮಹತ್ವದ ಯೋಜನೆಗಳು ವೇಗವಾಗಿ ಸಾಗುತ್ತಿವೆ ಎಂದು ಸೋಮಣ್ಣ ಹೇಳಿದರು. ಕುಡುಚಿ ರೈಲು ಮಾರ್ಗದ 37 ಕಿಲೋಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ಎಂಟು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಈ ಯೋಜನೆಗಾಗಿ ಸುಮಾರು ₹1,900 ಕೋಟಿ ವೆಚ್ಚ ಮಾಡಲಾಗಿದೆ ಎಂದರು.&lt;/p&gt;&lt;p&gt;ಶಾಹಪುರ-ವಾಡಿ ರೈಲು ಮಾರ್ಗದ ಕಾಮಗಾರಿಯನ್ನು 2028ರ ಏಪ್ರಿಲ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದ ಸಚಿವರು, ಕೋವಿಡ್ ಅವಧಿಯಲ್ಲಿ ಸ್ಥಗಿತಗೊಂಡಿದ್ದ ಹಲವು ರೈಲುಗಳ ಸೇವೆಯನ್ನು ಪುನರಾರಂಭಿಸಿ, ಹೆಚ್ಚುವರಿಯಾಗಿ 30 ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿದೆ ಎಂದರು.&lt;/p&gt;&lt;h2&gt;&lt;strong&gt;ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆ&lt;/strong&gt;&lt;/h2&gt;&lt;p&gt;ಅಮೃತ್ ಭಾರತ ಯೋಜನೆಯಡಿ ಪ್ರಯಾಣಿಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ರೈಲು ಅಪಘಾತಗಳನ್ನು ತಡೆಯಲು 'ಕವಚ್' ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ 23 ಹೊಸ ರೈಲು ನಿಲ್ದಾಣಗಳು ಹಾಗೂ ಏಳು ಹೊಸ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದೂ ವಿವರಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈಡ್ರೋಜನ್ ರೈಲಿಗೆ ಚಾಲನೆ ನೀಡಿರುವುದು ಭಾರತೀಯ ರೈಲ್ವೆಯ ಆಧುನೀಕರಣದ ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ ಸೋಮಣ್ಣ, ರಾಜ್ಯ-ಕೇಂದ್ರ ಎಂಬ ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದರು.&lt;/p&gt;&lt;p&gt;ಜಲಶಕ್ತಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹5 ಲಕ್ಷ ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ ಅವರು, 2047ರೊಳಗೆ ವಿಕಸಿತ ಭಾರತ ನಿರ್ಮಾಣವೇ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು. ಭಾಷಣದ ಕೊನೆಯಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸಿದ ಸಚಿವರು, &quot;ಚುನಾವಣೆಗೆ 30 ದಿನ ಇರುವಾಗ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡೋಣ&quot; ಎಂದು ಕರೆ ನೀಡಿದರು.&lt;/p&gt;]]></content:encoded>
            <category>bagalkot</category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/badami-railway-station-inaugurated-v-somanna-speech-bagalkote-gvd/articleshow-6rcssgy"/>
        </item>
        <item>
            <title><![CDATA['ಇದಕ್ಕೇ ಭಂಡರು ಅಂತಾರೆ..' ಆರ್‌ಎಸ್‌ಎಸ್‌ ಮುಂದೆಯೂ ನೋಂದಣಿ ಆಗೋಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಕಾಶಪ್ಪನವರ್ ಕಿಡಿ]]></title>
            <link>https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo</link>
            <guid isPermaLink="true">https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo</guid>
            <pubDate>Sat, 15 Aug 2026 13:40:11 +0530</pubDate>
            <description><![CDATA[&lt;p&gt;ಆರ್&zwnj;ಎಸ್&zwnj;ಎಸ್&zwnj; ನೋಂದಣಿಯಾಗುವುದಿಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆರ್&zwnj;ಎಸ್&zwnj;ಎಸ್&zwnj; ಅನ್ನು 'ಭಂಡರು' ಎಂದು ಕರೆದ ಅವರು, ಕಳ್ಳ ದುಡ್ಡನ್ನು ರಕ್ಷಿಸಿಕೊಳ್ಳಲು ನೋಂದಣಿ ಮಾಡಿಸುತ್ತಿಲ್ಲ ಎಂದು ಆರೋಪಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m026a56d21fhxfc499ybyxk1,imgname-----------------------2026-08-15t130707.501-1786780128461.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ (ಆ.15):&lt;/strong&gt; 'ಇದಕ್ಕೆಲ್ಲ ಭಂಡರು ಅಂತಾರೆ, ಭಂಡರು ಅಂತಾ ಕರೀತಾರೆ..' ಆರ್&zwnj;ಎಸ್&zwnj;ಎಸ್&zwnj; ಮುಂಚೆ ನೋಂದಣಿಯಾಗಿಲ್ಲ, ಮುಂದೆಯೂ ಆಗೊಲ್ಲ ಎಂಬ ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರು ತಿರುಗೇಟು ನೀಡಿದರು.&lt;/p&gt;&lt;h2&gt;ಆರ್&zwnj;ಎಸ್&zwnj;ಎಸ್&zwnj;ಗೆ ಕಳ್ಳ ದುಡ್ಡು ಬರುತ್ತೆ&lt;/h2&gt;&lt;p&gt;ಇಂದು ಬಾಗಲಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆರೆಸ್ಸೆಸ್&zwnj;ಗೆ ಕಳ್ಳ ದುಡ್ಡು ಬರ್ತಿದೆ. ನೋಂದಣಿ ಮಾಡಿಸಿದರೆ ಇವರಿಗೆ ಕಳ್ಳ ದುಡ್ಡು ಹೇಗೆ ಬರುತ್ತೆ ಅಂತಾ ಸರ್ಕಾರಕ್ಕೆ ಗೊತ್ತಾಗುತ್ತೆ. ಕಳ್ಳ ದುಡ್ಡನ್ನು ರಕ್ಷಣೆ ಮಾಡಿಕೊಳ್ಳೋದಕ್ಕೆ ನೋಂದಣಿ ಮಾಡಲ್ಲ ಅಂತಿದ್ದಾರೆ ಎಂದು ಕಿಡಿಕಾರಿದರು.&lt;/p&gt;&lt;h3&gt;ಆರೆಸ್ಸೆಸ್&zwnj;ನವರಿಗೆ ಸಂವಿಧಾನದ ಅರಿವು ಇದೆಯಾ?&lt;/h3&gt;&lt;p&gt;ದೇಶದ ಸಂವಿಧಾನದ ಅಡಿಯಲ್ಲಿ ಇರುವ ಪ್ರಜೆಗಳು ನಾವು ಅಂತಾ ಹೇಳ್ತಾರೆ. ಆದರೆ ಸಂವಿಧಾನ ಏನು ಹೇಳುತ್ತೆ? ಇವರಿಗೆ ಸಂವಿಧಾನದ ಅರಿವು ಏನಾದ್ರೂ ಇದೆಯಾ? ಸಂವಿಧಾನಕ್ಕೆ ಇವರು ಗೌರವ ಕೊಡ್ತಾರಾ? ಏನೂ ಇಲ್ಲ. ಅದಕ್ಕೆ ಇವರನ್ನು ಭಂಡರು ಅನ್ನೋದು ಇವರಿಗೆ ಸಂವಿಧಾನ ಬೇಕಿಲ್ಲ. ಕಾನೂನು ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.&lt;/p&gt;&lt;p&gt;ನಮ್ಮ ಗೃಹಸಚಿವರು ಕಡ್ಡಾಯವಾಗಿ ನೋಂದಣಿ ಮಾಡ್ಕೊಳ್ಳಬೇಕೆಂಬ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ. ಯಾವುದೇ ಸಂಘಟನೆ ಇರಲಿ. ಆ ಸಂಘಟನೆಗೆ ಒಂದು ಹೆಸರಿರಬೇಕು, ಒಂದು ನೋಂದಣಿ ಇರಬೇಕು. ಅಂದಾಗ ಮಾತ್ರ ಅದು ಅಧಿಕೃತ ಆಗೋಕೆ ಸಾಧ್ಯ. ಕೆಲವೊಂದಿಷ್ಟು ಸಂಘಟನೆಗಳಿಗೆ ವಿದೇಶದಿಂದ ದೇಣಿಗೆ ಬರ್ತಾ ಇತ್ತು. ಅದನ್ನ ಬಂದ್ದ ಮಾಡಲಿಕ್ಕೆ ಕೇಂದ್ರದಲ್ಲಿ ಕೆಲವೊಂದು ಬಿಲ್ ಪಾಸ್ ಮಾಡಿದರು. ಮತ್ತೆ ಇವರಿಗೆ ಆರ್&zwnj;ಎಸ್&zwnj;ಎಸ್ ನವರಿಗೆ ಎಲ್ಲಿಂದ ದುಡ್ಡು ಬರುತ್ತೆ? ಅದನ್ನ ತೋರಿಸಲಿ, ಲೆಕ್ಕ ಕೊಡಲಿ ಎಂದು ಸವಾಲೆಸೆದರು.&lt;/p&gt;&lt;p&gt;&lt;strong&gt;ಆರೆಸ್ಸೆಸ್&zwnj;, ಬಿಜೆಪಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತೆ?&lt;/strong&gt;&lt;/p&gt;&lt;p&gt;ಆರೆಸ್ಸೆಸ್&zwnj;ಗೆ, ಬಿಜೆಪಿಯವರಿಗೆ ದುಡ್ಡು ಎಲ್ಲಿ ಬರುತ್ತೆ? ಅದು ಕೇವಲ 12 ವರ್ಷದಲ್ಲಿ. ನಾವು 70 ವರ್ಷದಿಂದ ಆಡಳಿತ ಮಾಡುತ್ತಿದ್ದೇವೆ. ನಮ್ಮದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದಂತ ಪಕ್ಷ. ನಮ್ಮ ಪರಿಸ್ಥಿತಿ ನೋಡಿ ಭಾರತೀಯ ಜನತಾ ಪಕ್ಷದ ಪರಿಸ್ಥಿತಿ ನೋಡಿ ಹೇಗಿದ್ದಾರೆ. ಬಿಜೆಪಿ ಅವರ ಹತ್ರ ಎಷ್ಟು ದುಡ್ಡಿದೆ ಅಷ್ಟೊಂದು ಹಣ ಎಲ್ಲಿಂದ ಬಂತು. ಇದೆಲ್ಲವನ್ನು ಮುಚ್ಚಿ ಹಾಕುವಂತ ಕೆಲಸ ಮಾಡ್ತಿದ್ದಾರೆ. ಆರೆಸ್ಸೆಸ್&zwnj;ನವರದ್ದು ಇದೇ ಹಣೆಬರಹ. ಅದಕ್ಕೆ ನೋಂದಣಿ ಮಾಡಿಸೋಲ್ಲ ಅಂತಾರೆ. ಕೈಯಲ್ಲಿ ಬಡಿಗೆ ಹಿಡ್ಕೊಂಡು ಬಂದು ಟ್ರೈನಿಂಗ್ ಕೊಡ್ತಾರೆ. ಇದು ಏನು ದೇಶದ ರಕ್ಷಣೆಗಾ? ದೇಶದಲ್ಲೇನು ಸ್ವಾತಂತ್ರ್ಯ ಚಳವಳಿ ನಡೆದಿದೆಯಾ? ದೇಶದಲ್ಲೇ ಇವರು ಸ್ವಾತಂತ್ರ್ಯ ತರುವಂತ ಕೆಲಸ ಮಾಡೋಕೆ ಹೊರಟಿದ್ದಾರಾ? ದೇಶದ ಸ್ವಾತಂತ್ರ್ಯದ ವೇಳೆ ದೇಶದ ವಿರುದ್ಧ ಇವರು ನಡೆವಳಿಕೆಗಳು ನಡೆದಿದ್ದವು. ಇವತ್ತಿಗೂ ಏನು ಮಾಡುತ್ತಿದ್ದಾರೆ? ಸಂವಿಧಾನಕ್ಕೆ ಗೌರವ ಕೊಡಲ್ಲ, ಪ್ರಜಾಪ್ರಭುತ್ವಕ್ಕೆ ಗೌರವ ಕೊಡಲ್ಲ.&lt;/p&gt;&lt;p&gt;&lt;strong&gt;ಆರೆಸ್ಸೆಸ್ ವಿರುದ್ಧ ಕ್ರಮಕ್ಕೆ ಒಂದು ಕಾಲ ಬರುತ್ತೆ:&lt;/strong&gt;&lt;/p&gt;&lt;p&gt;ಧೈರ್ಯವಿದ್ರೆ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಸಚಿವರು, ಕಾಲ ಬರುತ್ತೆ. ಅದಕ್ಕೂ ಒಂದು ಕಾಲ ಬರುತ್ತೆ. ಆಕ್ಷನ್ ತಗೊಳ್ಳೋಕೂ, ಕಾನೂನು ಜಾರಿ ಮಾಡೋಕೂ ಒಂದು ಕಾಲ ಬರುತ್ತೆ ಅದು ತಕ್ಷಣ ಆಗೋಲ್ಲ. ಮೊದಲು ಕಾನೂನು ಆಗಬೇಕು ಆಮೇಲೆ ಆಕ್ಷನ್ ಆಗುತ್ತೆ ಎಂದರು.&lt;/p&gt;&lt;p&gt;ಸರಕಾರ ವರ್ಸಸ್ ಆರ್ ಎಸ್ ಎಸ್ ಆಗ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಶಪ್ಪನವರ್, ಸರಕಾರ ವರ್ಸಸ್ ಆರ್ ಎಸ್ ಎಸ್ ಯಾಕೆ ಹೋಲಿಸುತ್ತೀರಿ. ನಮ್ಮ ಸರಕಾರ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹೇಳುತ್ತದೆ.&lt;/p&gt;&lt;p&gt;ಎಲ್ಲರನ್ನು ಅಪ್ಪಿಕೊಳ್ಳುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ. ಆದರೆ ಇವರು ಏನು ಮಾಡುತ್ತಿದ್ದಾರೆ? ಎಂದು ಸಚಿವರು ಮಾಧ್ಯಮದವರನ್ನೇ ಪ್ರಶ್ನಿಸಿದರು.&lt;/p&gt;]]></content:encoded>
            <category>bagalkot</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/rss-registration-row-vijayananda-kashappanavar-slams-bl-santosh-at-bagalakote-rav/articleshow-73qlcmo"/>
        </item>
        <item>
            <title><![CDATA[ಬಡ್ತಿಯ ಸಿಹಿ ಸವಿಯುವ ಮುನ್ನವೇ ಪೊಲೀಸ್ ಅಧಿಕಾರಿಗೆ ಎದುರಾಯ್ತು ಕಂಟಕ! ಮಾರ್ಗ ಮಧ್ಯಯೇ ಕೊನೆಯುಸಿರೆಳೆದ ಎಎಸ್‌ಐ]]></title>
            <link>https://kannada.asianetnews.com/karnataka-districts/a-police-officer-faced-a-thorn-before-he-could-taste-the-sweetness-of-promotion-asi-breathed-his-last-on-the-way/articleshow-7rzq1af</link>
            <guid isPermaLink="true">https://kannada.asianetnews.com/karnataka-districts/a-police-officer-faced-a-thorn-before-he-could-taste-the-sweetness-of-promotion-asi-breathed-his-last-on-the-way/articleshow-7rzq1af</guid>
            <pubDate>Wed, 01 Jul 2026 17:40:31 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwescfmjqc8mfbg9m5fdqwhh,imgname-venkatesh-1782907813522.jpg" type="image/jpeg" height="390" width="690"/>
            <content:encoded><![CDATA[&lt;p&gt;&amp;nbsp;&lt;/p&gt;&lt;p&gt;ಹಣೆಬರಹದ ಕ್ರೂರ ಆಟಕ್ಕೆ ಒಂದು ಪೊಲೀಸ್ ಕುಟುಂಬ ತತ್ತರಿಸಿಹೋಗಿದೆ. ಒಂದೆಡೆ ದಶಕಗಳ ಸೇವೆಯ ನಂತರ ಸಿಕ್ಕ ಬಡ್ತಿಯ ಸಂಭ್ರಮ, ಇನ್ನೊಂದೆಡೆ ಆ ಸಂಭ್ರಮದ ಮನೆಯನ್ನೇ ಆವರಿಸಿದ ಕತ್ತಲೆ. ಕರ್ತವ್ಯದ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಹೊರಟಿದ್ದ ಅಧಿಕಾರಿಯೊಬ್ಬರನ್ನು ಮಾರ್ಗಮಧ್ಯೆಯೇ ಸಾವು ಹೆಡೆಮುರಿ ಕಟ್ಟಿದೆ. ಬಡ್ತಿಯ ಆದೇಶ ಕೈಸೇರಿದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಸಹಾಯಕ ಪೊಲೀಸ್ ಉಪನಿರೀಕ್ಷಕರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಬೀಳಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿ!&lt;/strong&gt;&lt;/h2&gt;&lt;p&gt;ಬಡ್ತಿಯ ಖುಷಿ ತಂದ ತಲ್ಲಣಮೃತ ಅಧಿಕಾರಿಯನ್ನು ಅಲ್ಲಾಭಕ್ಷ ಖರೋಷಿ (೫೦ ವರ್ಷ) ಎಂದು ಗುರುತಿಸಲಾಗಿದೆ. ಅವರು ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯಲ್ಲಿ ದೀರ್ಘಕಾಲ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಇಲಾಖೆಯು ಅವರಿಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ (ಎಎಸ್&zwnj;ಐ) ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಈ ಸುದ್ಧಿ ಕೇಳಿ ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಹೋದ್ಯೋಗಿಗಳು ಮತ್ತು ಹಿತೈಷಿಗಳು ಫೋನ್ ಮಾಡಿ ಶುಭಾಶಯಗಳನ್ನು ಕೋರುತ್ತಿದ್ದರು.&lt;/p&gt;&lt;h3&gt;&lt;strong&gt;ಮಾರ್ಗಮಧ್ಯೆ ಎರಗಿದ ಕಂಟಕ!&lt;/strong&gt;&lt;/h3&gt;&lt;p&gt;ಬಡ್ತಿ ಪಡೆದ ಹೊಸ ಹುದ್ದೆಗೆ ಅಧಿಕೃತವಾಗಿ ಹಾಜರಾಗಲು ಅಲ್ಲಾಭಕ್ಷ ಅವರು ಇಂದು ಸಿದ್ಧರಾಗಿದ್ದರು. ಗದ್ದನಕೇರಿಯಿಂದ ಬಾಗಲಕೋಟೆ ಮುಖ್ಯ ಕಚೇರಿಗೆ ತೆರಳಲು ಅವರು ಅತ್ಯಂತ ಉತ್ಸಾಹದಿಂದ ವಾಹನ ಏರಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಪ್ರಯಾಣದ ಮಾರ್ಗಮಧ್ಯೆ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಕಣ್ಣೀರಲ್ಲಿ ಮುಳುಗಿದ ಶೋಕತಪ್ತ ಕುಟುಂಬ!&lt;/strong&gt;&lt;/h3&gt;&lt;p&gt;ಬಾಳಿನ ಹೊಸ ಹೆಜ್ಜೆ ಇಡಬೇಕಾಗಿದ್ದ ಯಜಮಾನನ ಅಗಲಿಕೆಯಿಂದ ಇಡೀ ಕುಟುಂಬ ಆಘಾತಕ್ಕೆ ಒಳಗಾಗಿದೆ. ಯಾವ ಮನೆಯಲ್ಲಿ ಬಡ್ತಿಯ ಸಿಹಿ ಹಂಚಬೇಕಿತ್ತೋ, ಅದೇ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೂತನ ಸ್ಟಾರ್ ಧರಿಸಿ ಸಲ್ಯೂಟ್ ಹೊಡೆಯಬೇಕಾಗಿದ್ದ ಅಧಿಕಾರಿ ಶವವಾಗಿ ಮನೆಗೆ ಮರಳಿದ್ದನ್ನು ಕಂಡು ಕುಟುಂಬಸ್ಥರು ಮತ್ತು ಸಾರ್ವಜನಿಕರ ಕಣ್ಣಾಲಿಗಳು ತೇವಗೊಂಡಿವೆ. ಬೀಳಗಿ ಠಾಣೆಯ ಸಹೋದ್ಯೋಗಿಗಳು ತಮ್ಮ ಆತ್ಮೀಯ ಅಧಿಕಾರಿ ಕಳೆದುಕೊಂಡು ಸಂತಾಪ ಸೂಚಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bagalkot</category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/a-police-officer-faced-a-thorn-before-he-could-taste-the-sweetness-of-promotion-asi-breathed-his-last-on-the-way/articleshow-7rzq1af"/>
        </item>
        <item>
            <title><![CDATA[ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗ ಮಂಜೂರಾತಿಗೆ ಸಚಿವ ವಿ ಸೋಮಣ್ಣ ಭರವಸೆ]]></title>
            <link>https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76</link>
            <guid isPermaLink="true">https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76</guid>
            <pubDate>Wed, 22 Jul 2026 09:01:49 +0530</pubDate>
            <description><![CDATA[ಕಳೆದ 25 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಲಮಟ್ಟಿ-ಇಳಕಲ್ಲ-ಕುಷ್ಟಗಿ ನೂತನ ರೈಲು ಮಾರ್ಗದ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲರ ನೇತೃತ್ವದಲ್ಲಿ ಹೋರಾಟ ಸಮಿತಿಯು ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಶೀಘ್ರ ಮಂಜೂರಾತಿಗೆ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky3xyyrhxny011hmy5qs02y6,imgname-alamatti-kushtagi-1784690998033.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಕಳೆದ 25 ವರ್ಷಗಳಿಂದ ಆಲಮಟ್ಟಿ ಕೊಪ್ಪಳ ನೂತನ ರೈಲು ಮಾರ್ಗ ಮಂಜೂರ ಮಾಡುವಂತ್ತೆ ಕೇಂದ್ರ ಸರ್ಕಾರಕ್ಕೆ ಹಾಗೂ ರೈಲು ಸಚಿವರಿಗೆ ಮತ್ತು ಸಂಸದ ಪಿ.ಸಿ.ಗದ್ದಿಗೌಡರ ಇವರಿಗೆ ಇಳಕಲ್ಲ ಜನತೆ ಮನವಿ ಕೊಟ್ಟು ನೂತನ ರೈಲು ಮಾರ್ಗ ಮಂಜೂರ ಮಾಡಲು ದೇಹಲಿ ತನಕ ಹೋಗಿ ಒತ್ತಾಯಿಸಿತ್ತು ಆದರೆ ಕನ್ನಡಪ್ರಭ ಪತ್ರಿಕೆಯು ಯುವಕರು ಮುದಕರಾದರು ಇಳಕಲ್ಲಿಗೆ ರೈಲು ಬರಲೇ ಇಲ್ಲ ಎಂದು ಸುದ್ದಿಯನ್ನು ಈ ಹಿಂದೆ ಪ್ರಕಟಿಸಿತ್ತು.&lt;/p&gt;&lt;p&gt;ಆದರೆ ಅದಕ್ಕೂ ಸಂಸದರು, ಸಚಿವರು ಹಾಗು ಸರಕಾರ ನಿರಾಶೇ ಮಾಡಿದೆ ಆದರೆ ಈ ಹಿಂದೆ ಸರಕಾರ ಆಲಮಟ್ಟಿ ಇಳಕಲ್ಲ ಕುಷ್ಟಗಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಡಿಪಿಆರ್ ಮಾಡಿದೆ ಎಂದು ತಿಳಿದು ಬಂದಿತ್ತು.&lt;/p&gt;&lt;h2&gt;&lt;strong&gt;ಕಾಮಗಾರಿ ಆರಂಭಕ್ಕೆ ಒತ್ತಾಯ&lt;/strong&gt;&lt;/h2&gt;&lt;p&gt;ಆದರೆ ಇಲ್ಲಿಯವರೆಗೂ ಈ ಕಾರ್ಯದ ಬಗ್ಗೆ ಎನು ಆಗದೆ ಇರುವದರಿಂದ ಇಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಇವರ ನೇತ್ರತ್ವದಲ್ಲಿ ಕೊಪ್ಪಳಕ್ಕೆ ಆಗಮಿಸಿದ ರಾಜ್ಯ ರೇಲ್ವೆ ಸಚಿವ ಸೋಮಣ್ಣ ಇವರಿಗೆ ಸಂಸದ ಪಿ.,ಸಿ.ಗದ್ದಿಗೌಡರ ಇವರ ಸಮ್ಮುಖದಲ್ಲಿ ರೇಲ್ವೆ ಹೋರಾಟ ಸಮಿತಿ ಮತ್ತೆ ಮನವಿ ಕೊಟ್ಟು ಆದಷ್ಟು ವೇಗವಾಗಿ ಈ ಭಾಗದ ರೃಲು ಕಾಮಗಾರಿಯನ್ನು ಮಂಜೂರ ಮಾಡಿಸಿ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿತು.&lt;/p&gt;&lt;p&gt;ಮನವಿ ಸ್ತಿಕಾರ ಮಾಡಿದ ಸಚಿವ ಸೋಮಣ್ಣ ಇವರು ಈ ಭಾಗದ ಜನರ ತೊಂದರೆ ನನಗೆ ಅರಿವಾಗಿದೆ ಈ ವಿಷಯವನ್ನು ರೇಲ್ವೆ ಸಮಿತಿಯಲ್ಲಿ ಮಂಡಿಸಿ ಆದಷ್ಟು ತಿವ್ರವೆ ಮಂಜೂರ ಮಾಡುವದಾಗಿ ಭರವಸೆ ಕೊಟ್ಟರು. ಆದರೆ ಈ ಹಿಂದೆ ಗದಗ ಗಜೇಂದ್ರಗಡ ಇಳಕಲ್ಲ ಮುದಗಲ್ಲ ಹಾಗು ಲಿಂಗಸೂರ ದಿಂದ ವಾಡಿಗೆ ಹೋಗುವ ರೃಲು ಮಾರ್ಗ ಮಾಡುವ ಯೋಜನೆ ಇತ್ತು ಆದರೆ ಯಾರೋ ಮಾಡಿದ ತಪ್ಪನಿಂದ ಇಂದು ಆ ಮಾರ್ಗ ಬಾಣಾಪುರ ಕುಷ್ಟಗಿ ಆಗಿದೆ ಎಂದು ಜನತೆ ಆರೋಪಿಸುತಿದ್ದಾರೆ ಎಂದು ಸಚಿವರಿಗೆ ಜನತೆ ತಿಳಿಸಿದರು.&lt;/p&gt;&lt;p&gt;ಮನವಿ ಕೊಡುವ ಸಮಿತಿಯಲ್ಲಿ ರೈಲು ಹೋರಾಟ ಸಮಿತಿಯ ಅದ್ಯಕ್ಷ ಶರಣಪ್ಪ ಅಕ್ಕಿ, ಜಿ.ಪಿ.ಪಾಟೀಲ, ಎಂ.ವಿ.ಪಾಟೀಲ, ಟಿ.ಎಚ್.ಕುಲಕರ್ಣಿ, ಚೋಳಪ್ಪ ಇಚಿಡಿ, ಚಂದ್ರಶೇಖರ ಎಕಬೋಟೆ ಸೇರಿದಂತೆ ಇತರರು ಉಪಸ್ತಿತರಿದ್ದರು.&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-state-minister-v-somanna-promises-approval-for-new-railway-line-between-alamatti-ilakal-kushtagi-mrq/articleshow-9ix6w76"/>
        </item>
        <item>
            <title><![CDATA[ಕರ್ನಾಟಕದ ಜಲಾಶಯಗಳಿಗೆ ಹರಿದುಬಂದ ಜಲರಾಶಿ: ಒಂದೇ ದಿನದಲ್ಲಿ ಆಲಮಟ್ಟಿಗೆ 11 ಟಿಎಂಸಿ ನೀರು]]></title>
            <link>https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</link>
            <guid isPermaLink="true">https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx</guid>
            <pubDate>Thu, 09 Jul 2026 18:00:43 +0530</pubDate>
            <description><![CDATA[&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ರಾಜ್ಯದ ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳಲ್ಲಿ 20 ಟಿಎಂಸಿ ನೀರು ಹರಿದುಬಂದಿದೆ. ಕೃಷ್ಣಾ ಕೊಳ್ಳದ ಆಲಮಟ್ಟಿ, ಘಟಪ್ರಭಾ ಜಲಾಶಯಗಳು ಗಣನೀಯ ಪ್ರಮಾಣದ ನೀರನ್ನು ಪಡೆದಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kx3d6vm0cz6ss4d6kpwsxq8q,imgname-almatti-reservoir-storage-1783599689344.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ (ಜು.9): &lt;/strong&gt;ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮುಂಗಾರಿನ ಭಾರಿ ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ತೀವ್ರವಾಗಿ ಏರಿಕೆಯಾಗಿದೆ. ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಲಾಗುವ ಕರ್ನಾಟಕದ 10 ಪ್ರಮುಖ ಜಲಾಶಯಗಳಿಗೆ ಕೇವಲ 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 20 ಟಿಎಂಸಿ (TMC) ನೀರು ಹರಿದುಬಂದಿದೆ. ಇದರಲ್ಲಿ ಕೃಷ್ಣಾ ಕೊಳ್ಳದ ಆರು ಜಲಾಶಯಗಳಿಗೇ ದಾಖಲೆಯ 17.4 ಟಿಎಂಸಿ ನೀರು ಸೇರ್ಪಡೆಯಾಗಿದೆ.&lt;/p&gt;&lt;p&gt;ಮಹಾರಾಷ್ಟ್ರ ಮತ್ತು ಕರ್ನಾಟಕದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯು ಆಲಮಟ್ಟಿ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಮತ್ತು ಭದ್ರಾ ಜಲಾಶಯಗಳಿಗೆ ನಿರಂತರ ನೀರಿನ ಆಸರೆಯಾಗುತ್ತಿದೆ. ವಿಶೇಷವೆಂದರೆ, ಜುಲೈ ತಿಂಗಳ ಆರಂಭದಲ್ಲಿ ಭದ್ರಾ ಜಲಾಶಯವನ್ನು ಹೊರತುಪಡಿಸಿ ಈ ಕೊಳ್ಳದ ಉಳಿದೆಲ್ಲಾ ಅಣೆಕಟ್ಟುಗಳಲ್ಲಿ ಒಳಹರಿವಿನ ಪ್ರಮಾಣ ಸಂಪೂರ್ಣ ಶೂನ್ಯವಾಗಿತ್ತು.&lt;/p&gt;&lt;h2&gt;&lt;strong&gt;ಆಲಮಟ್ಟಿಗೆ ಒಂದೇ ದಿನದಲ್ಲಿ 11 ಟಿಎಂಸಿ ನೀರು&lt;/strong&gt;&lt;/h2&gt;&lt;p&gt;ಜುಲೈ 8 ರಂದು ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯವಾದ ಆಲಮಟ್ಟಿಗೆ ಕೇವಲ 24 ಗಂಟೆಗಳಲ್ಲಿ 1.26 ಲಕ್ಷ ಕ್ಯೂಸೆಕ್ (ಅಂದರೆ ಸುಮಾರು 10.92 ಟಿಎಂಸಿ) ನಷ್ಟು ಭಾರಿ ಒಳಹರಿವು ದಾಖಲಾಗಿದೆ. ಜುಲೈ 7 ರಂದು ಆಲಮಟ್ಟಿ ಜಲಾಶಯದಲ್ಲಿ 22.46 ಟಿಎಂಸಿ ನೀರು ಸಂಗ್ರಹವಿತ್ತು ಮತ್ತು ಕೇವಲ 21,625 ಕ್ಯೂಸೆಕ್ ಒಳಹರಿವು ಇತ್ತು. ಆದರೆ, ಬುಧವಾರದ ವೇಳೆಗೆ ಜಲಾಶಯದ ಪ್ರಸ್ತುತ ನೀರಿನ ಸಂಗ್ರಹ 33.34 ಟಿಎಂಸಿಗೆ ಏರಿಕೆಯಾಗಿದ್ದು, ಒಳಹರಿವು ಕೂಡ 1,26,373 ಕ್ಯೂಸೆಕ್&zwnj;ಗೆ ತಲುಪಿದೆ.&lt;/p&gt;&lt;h2&gt;&lt;strong&gt;ಘಟಪ್ರಭಾ ಮತ್ತು ತುಂಗಭದ್ರಾ ಜಲಾಶಯಗಳ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅತಿ ಹೆಚ್ಚು ಪ್ರಯೋಜನ ಪಡೆದ ಮತ್ತೊಂದು ಜಲಾಶಯವೆಂದರೆ ಘಟಪ್ರಭಾ. ಕೇವಲ 24 ಗಂಟೆಗಳ ಅವಧಿಯಲ್ಲಿ ಈ ಅಣೆಕಟ್ಟಿನ ನೀರಿನ ಮಟ್ಟ ಸುಮಾರು 4 ಟಿಎಂಸಿಯಷ್ಟು ಹೆಚ್ಚಾಗಿದೆ. ಇತ್ತ ತುಂಗಭದ್ರಾ ಜಲಾಶಯಕ್ಕೂ 24 ಗಂಟೆಗಳಲ್ಲಿ 17,507 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, 2 ಟಿಎಂಸಿಯಷ್ಟು ನೀರು ಸಂಗ್ರಹಕ್ಕೆ ಸೇರ್ಪಡೆಯಾಗಿದೆ.&lt;/p&gt;&lt;h2&gt;&lt;strong&gt;ಮಲಪ್ರಭಾಗೆ ಮೂರು ಪಟ್ಟು ಹೆಚ್ಚಿದ ಒಳಹರಿವು&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ಅಣೆಕಟ್ಟಿನ ಒಳಹರಿವು ಹಿಂದಿನ ದಿನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಸ್ತುತ ಜಲಾಶಯಕ್ಕೆ 13,700 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಇನ್ನು ಆಲಮಟ್ಟಿ ಜಲಾಶಯದ ಸಮತೋಲನ ಅಣೆಕಟ್ಟಾಗಿರುವ ನಾರಾಯಣಪುರ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಶೂನ್ಯವಾಗಿಯೇ ಮುಂದುವರಿದಿದೆ. ಪ್ರಸ್ತುತ ಈ ಅಣೆಕಟ್ಟು ತನ್ನ ಒಟ್ಟು 33 ಟಿಎಂಸಿ ಸಾಮರ್ಥ್ಯದ ಎದುರು 19.89 ಟಿಎಂಸಿ ನೀರನ್ನು ಹೊಂದಿದೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ಜಲಾಶಯ&lt;/td&gt;   &lt;td&gt;ಒಟ್ಟು ಸಾಮರ್ಥ್ಯ&lt;/td&gt;   &lt;td&gt;ಪ್ರಸ್ತುತ ಸಂಗ್ರಹಣೆ (In tmcft)&lt;/td&gt;   &lt;td&gt;ಒಳಹರಿವು (cusec)&lt;/td&gt;   &lt;td&gt;ಹೊರಹರಿವು (cusec)&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕೃಷ್ಣಾ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಆಲಮಟ್ಟಿ&lt;/td&gt;   &lt;td&gt;123.08&lt;/td&gt;   &lt;td&gt;33.34&lt;/td&gt;   &lt;td&gt;1,26,625&lt;/td&gt;   &lt;td&gt;100&lt;/td&gt;  &lt;/tr&gt;  &lt;tr&gt;   &lt;td&gt;ತುಂಗಭದ್ರಾ&lt;/td&gt;   &lt;td&gt;105.79&lt;/td&gt;   &lt;td&gt;11.22&lt;/td&gt;   &lt;td&gt;17,507&lt;/td&gt;   &lt;td&gt;170&lt;/td&gt;  &lt;/tr&gt;  &lt;tr&gt;   &lt;td&gt;ಭದ್ರಾ&lt;/td&gt;   &lt;td&gt;71.54&lt;/td&gt;   &lt;td&gt;28.75&lt;/td&gt;   &lt;td&gt;17,818&lt;/td&gt;   &lt;td&gt;214&lt;/td&gt;  &lt;/tr&gt;  &lt;tr&gt;   &lt;td&gt;ಹಿಡಕಲ್&lt;/td&gt;   &lt;td&gt;51&lt;/td&gt;   &lt;td&gt;13.18&lt;/td&gt;   &lt;td&gt;26,393&lt;/td&gt;   &lt;td&gt;110&lt;/td&gt;  &lt;/tr&gt;  &lt;tr&gt;   &lt;td&gt;ಮಲಪ್ರಭಾ&lt;/td&gt;   &lt;td&gt;37.73&lt;/td&gt;   &lt;td&gt;10.38&lt;/td&gt;   &lt;td&gt;13,700&lt;/td&gt;   &lt;td&gt;194&lt;/td&gt;  &lt;/tr&gt;  &lt;tr&gt;   &lt;td&gt;ನಾರಾಯಣಪುರ&lt;/td&gt;   &lt;td&gt;33.31&lt;/td&gt;   &lt;td&gt;19.82&lt;/td&gt;   &lt;td&gt;0&lt;/td&gt;   &lt;td&gt;767&lt;/td&gt;  &lt;/tr&gt;  &lt;tr&gt;   &lt;td&gt;&lt;strong&gt;ಕಾವೇರಿ ಕೊಳ್ಳ&lt;/strong&gt;&lt;/td&gt;  &lt;/tr&gt;  &lt;tr&gt;   &lt;td&gt;ಹಾರಂಗಿ&lt;/td&gt;   &lt;td&gt;8.5&lt;/td&gt;   &lt;td&gt;4.03&lt;/td&gt;   &lt;td&gt;2,090&lt;/td&gt;   &lt;td&gt;180&lt;/td&gt;  &lt;/tr&gt;  &lt;tr&gt;   &lt;td&gt;ಹೇಮಾವತಿ&lt;/td&gt;   &lt;td&gt;37.10&lt;/td&gt;   &lt;td&gt;18.78&lt;/td&gt;   &lt;td&gt;16,593&lt;/td&gt;   &lt;td&gt;300&lt;/td&gt;  &lt;/tr&gt;  &lt;tr&gt;   &lt;td&gt;ಕೆಆರ್&zwnj; ಸಾಗರ&lt;/td&gt;   &lt;td&gt;49.45&lt;/td&gt;   &lt;td&gt;12.49&lt;/td&gt;   &lt;td&gt;7,531&lt;/td&gt;   &lt;td&gt;790&lt;/td&gt;  &lt;/tr&gt;  &lt;tr&gt;   &lt;td&gt;ಕಬಿನಿ&lt;/td&gt;   &lt;td&gt;19.52&lt;/td&gt;   &lt;td&gt;7.96&lt;/td&gt;   &lt;td&gt;10,757&lt;/td&gt;   &lt;td&gt;500&lt;/td&gt;  &lt;/tr&gt;  &lt;tr&gt;   &lt;td&gt;ವಾಣಿವಿಲಾಸ ಸಾಗರ&lt;/td&gt;   &lt;td&gt;30.42&lt;/td&gt;   &lt;td&gt;23.76&lt;/td&gt;   &lt;td&gt;0&lt;/td&gt;   &lt;td&gt;0&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;&lt;strong&gt;ಕಾವೇರಿ ಕೊಳ್ಳದ ಜಲಾಶಯಗಳಲ್ಲೂ ಸ್ಥಿರ ಪ್ರಗತಿ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ ಕಾವೇರಿ ಕೊಳ್ಳದ ನಾಲ್ಕು ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ನಿಧಾನ ಹಾಗೂ ಸ್ಥಿರವಾಗಿ ಮುಂದುವರಿದಿದೆ. ಈ ನಾಲ್ಕು ಅಣೆಕಟ್ಟುಗಳ ಒಟ್ಟು ನೀರಿನ ಸಾಮರ್ಥ್ಯ 114.57 ಟಿಎಂಸಿ ಆಗಿದ್ದು, ಪ್ರಸ್ತುತ 43.25 ಟಿಎಂಸಿ (ಶೇ. 38 ರಷ್ಟು) ನೀರು ಸಂಗ್ರಹವಾಗಿದೆ. ಜುಲೈ 7 ರಂದು ಇವುಗಳಲ್ಲಿ 40.23 ಟಿಎಂಸಿ ನೀರಿತ್ತು.&lt;/p&gt;&lt;p&gt;ಕಾವೇರಿ ಕೊಳ್ಳದಲ್ಲಿ ಹಾರಂಗಿ ಜಲಾಶಯವು ಅತ್ಯಂತ ಕಡಿಮೆ ಎಂದರೆ 1,657 ಕ್ಯೂಸೆಕ್ ಒಳಹರಿವನ್ನು ಪಡೆದಿದೆ. ಆದರೆ ಹೇಮಾವತಿ ಜಲಾಶಯದ ಒಳಹರಿವು ಕಳೆದ 24 ಗಂಟೆಗಳಲ್ಲಿ ದುಪ್ಪಟ್ಟಾಗಿದ್ದು, 16,593 ಕ್ಯೂಸೆಕ್&zwnj;ಗೆ ತಲುಪಿದೆ. ಅದೇ ರೀತಿ ಕಬಿನಿ ಜಲಾಶಯದ ಒಳಹರಿವು ಕೂಡ ಒಂದೇ ದಿನದಲ್ಲಿ ದುಪ್ಪಟ್ಟಾಗಿದ್ದು, ಪ್ರಸ್ತುತ 10,757 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಒಟ್ಟಾರೆಯಾಗಿ ರಾಜ್ಯದ ಪ್ರಮುಖ ನದಿ ಕೊಳ್ಳಗಳಲ್ಲಿ ನೀರಿನ ಆಶಾಭಾವನೆ ಮೂಡಿದ್ದು, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಸಿಗುವ ಲಕ್ಷಣಗಳು ಕಾಣಿಸುತ್ತಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/state/karnataka-dams-inflow-july-2026-almatti-reservoir-storage-water-level-san/articleshow-b4vvzlx"/>
        </item>
        <item>
            <title><![CDATA[ಬಾಗಲಕೋಟೆ: ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ, ರೈತರ ಹಿತಾಸಕ್ತಿ ರಕ್ಷಣೆಗೆ ವೈಜ್ಞಾನಿಕವಾಗಿ ನಿರ್ಮಾಣ]]></title>
            <link>https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v</link>
            <guid isPermaLink="true">https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v</guid>
            <pubDate>Thu, 09 Jul 2026 09:55:33 +0530</pubDate>
            <description><![CDATA[ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಭಾಗವಾಗಿ ಘಟಪ್ರಭಾ ನದಿಗೆ ರೈಲ್ವೆ ಸೇತುವೆ ನಿರ್ಮಾಣ ಕುರಿತು ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸೇತುವೆ ನಿರ್ಮಾಣವು ವೈಜ್ಞಾನಿಕವಾಗಿರಬೇಕು ಮತ್ತು ಪ್ರವಾಹದ ಸಮಯದಲ್ಲಿ ರೈತರ ಜಮೀನುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kx2hz8nt2a0bexpfqvg578mm,imgname-uttar-kannada-road-accident--5--1783571129018.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬಾಗಲಕೋಟೆ:&lt;/strong&gt; ಮುಧೋಳ ತಾಲೂಕಿನ ಜಾಲಿಬೇರಿ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ರೈಲ್ವೆ ಸೇತುವೆ ನಿರ್ಮಾಣ ಕುರಿತು ಸಂಸದ ಪಿ.ಸಿ.ಗದ್ದಿಗೌಡ ಅವರ ಅಧ್ಯಕ್ಷತೆಯಲ್ಲಿ ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ಜರುಗಿತು.&lt;/p&gt;&lt;h2&gt;ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿ&lt;/h2&gt;&lt;p&gt;ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜರುಗಿದ ಸಭೆಯಲ್ಲಿ ಬಾಗಲಕೋಟೆ ಕುಡಚಿ ರೈಲು ಮಾರ್ಗ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಜಾಲಿಬೇರಿ ಭಾಗದಲ್ಲಿ ಘಟಪ್ರಭಾ ನದಿಗೆ ರೈಲು ಸೇತುವೆ ನಿರ್ಮಾಣ ಮಾಡುವ ಅಗತ್ಯವಿದೆ. ವೈಜ್ಞಾನಿಕವಾಗಿ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು. ಅದೇ ಸಮಯದಲ್ಲಿ ರೈತರ ಹಿತಾಶಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.&lt;/p&gt;&lt;h2&gt;ವೈಜ್ಞಾನಿಕವಾಗಿ ಸೇತುವ ನಿರ್ಮಾಣ&lt;/h2&gt;&lt;p&gt;ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಘಟಪ್ರಭಾ ನದಿಯಿಂದ ಉಂಟಾಗುವ ಪ್ರವಾಹವನ್ನು ಆಧರಿಸಿ ಸೇತುವೆ ನಿರ್ಮಾಣ ಕುರಿತು ಯೋಜನೆ ಸಿದ್ದಪಡಿಸಬೇಕು. ಪ್ರವಾಹ ಬಂದಾಗ ರೈತರ ಜಮೀನುಗಳಿಗೆ ನೀರು ಹೋಗದ ರೀತಿಯಲ್ಲಿ ವೈಜ್ಞಾನಿಕವಾಗಿ ಸೇತುವ ನಿರ್ಮಿಸುವ ನಿಟ್ಟಿನಲ್ಲಿ ಕೆಬಿಜೆಎನ್ಎಲ್, ರೈಲ್ವೆ ಅಧಿಕಾರಿಗಳು ಹಾಗೂ ರೈತರೊಂದಿಗೆ ಜಂಟಿ ಸ್ಥಳ ಪರಿಶೀಲಿಸಿ, ನೀರಿನ ಹರಿವು ನೋಡಿಕೊಂಡು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.&lt;/p&gt;&lt;p&gt;ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಭಾರತೀಯ ರೈಲ್ವೆ ಇಲಾಖೆಯ ಡೆಪ್ಯೂಟಿ ಸಿಇ ಶಿವುಕುಮಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜು ನಾಯಕ, ಆಡಳಿತಾಧಿಕಾರಿ ಉಮೇಶ ನಾಯಕ, ಎಡಿಎಲ್ಆರ್ ಮಹೇಶ ಪತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.&lt;/p&gt;&lt;p&gt;ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಂಡರೆ ರೈಲು ಸಂಚಾರಕ್ಕೆ ಅನುಕೂಲವಾಗುವದರ ಜತೆಗೆ ಜಿಲ್ಲೆಯ ಮೂಲಸೌಕರ್ಯ ಅಭಿವೃದ್ಧಿಗೂ ಹೊಸ ಉತ್ತೇಜನ ದೊರೆಯಲಿದೆ. ಆದ್ದರಿಂದ ಕಾಮಗಾರಿಯ ಪ್ರತಿಯೊಂದು ಹಂತವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಿಶೇಷ ಕಾಳಜಿ ವಹಿಸಬೇಕು. ರೈತರು ಸಲ್ಲಿಸಿರುವ ನ್ಯಾಯಸಮ್ಮತ ಬೇಡಿಕೆಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು.&lt;/p&gt;&lt;p&gt;-ಪಿ.ಸಿ.ಗದ್ದಿಗೌಡರ, ಸಂಸದ&lt;/p&gt;&lt;p&gt;----&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bagalkote-kudachi-line-mp-pc-gaddigoudar-directs-officials-ensure-scientific-railway-bridge-over-ghataprabha-river-gdp/articleshow-bbc4a7v"/>
        </item>
        <item>
            <title><![CDATA[ಹೂಗುಚ್ಛ, ಶಾಲು, ಪೇಟಗಳಿಗೆ ಸಚಿವರಿಂದ ಬ್ರೇಕ್, ಸರಳತೆಯ ಹಾದಿ ಹಿಡಿದ ವಿಜಯಾನಂದ ಕಾಶಪ್ಪನವರ್]]></title>
            <link>https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx</link>
            <guid isPermaLink="true">https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx</guid>
            <pubDate>Wed, 05 Aug 2026 12:03:33 +0530</pubDate>
            <description><![CDATA[&lt;p&gt;ನೂತನ ಸಚಿವ ವಿಜಯಾನಂದ ಕಾಶಪ್ಪನವರ್ ಅವರು, ತಮಗೆ ಶಾಲು, ಪೇಟ, ಹಾರ-ತುರಾಯಿ ತರಬಾರದೆಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz89x7pydyq7xsf2wxk9636m,imgname-images-1785911484126.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.5):&lt;/strong&gt; ರಾಜಕೀಯ ವಲಯದಲ್ಲಿ ಸಚಿವರು ಅಥವಾ ನಾಯಕರು ಅಧಿಕಾರಕ್ಕೇರಿದಾಗ ಬೃಹತ್ ಹೂಹಾರಗಳು, ಪೇಟಗಳು, ಶಾಲೆಗಳನ್ನು ನೀಡಿ ಸನ್ಮಾನಿಸುವುದು ಇಲ್ಲವೇ ಗೌರವಿಸುವುದು, ಕಳೆದ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದೆ ಇದೆ. ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇತ್ತೀಚಿಗಷ್ಟೇ ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಸಚಿವ ವಿಜಯಾನಂದ ಕಾಶಪ್ಪನವರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರು, ಕಾರ್ಯಕರ್ತರು ಅಭಿಮಾನಿಗಳು ಸೇರಿದಂತೆ ಯಾರೊಬ್ಬರೂ ತಮಗೆ ಶಾಲು, ಪೇಟ, ತರಬಾರದೆಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಇದನ್ನು ಯಾರೊಬ್ಬರೂ ಅನ್ಯತಾ ಭಾವಿಸಬಾರದು ಎಂದು ಸಚಿವ ಕಾಶಪ್ಪನವರ್ ವಿನಮ್ರವಾಗಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ&lt;/p&gt;&lt;p&gt;ಹಾರ ತುರಾಯಿ ಪೇಟ ಶಾಲು ತರುವುದಕ್ಕೆ ಅನಗತ್ಯವಾಗಿ ಬಂದು ವೆಚ್ಚ ಮಾಡುವ ಬದಲು ಸರಳವಾಗಿಯೇ ತಮ್ಮ ಕಚೇರಿ ಇಲ್ಲವೇ ನಿವಾಸಕ್ಕೆ ಬಂದು ಯಾವುದೇ ಸಂದರ್ಭದಲ್ಲಿ ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ. ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾಸ್ತವಿಕತೆಯಲ್ಲಿ ಅತಿಶಯೋಕ್ತಿಯ ಸನ್ಮಾನಗಳು ಮತ್ತು ಅದ್ದೂರಿ ಸ್ವಾಗತಗಳು ಅನಗತ್ಯ ಖರ್ಚಿಗೆ ಕಾರಣವಾಗುವುದಲ್ಲದೆ, ಸಮಯದ ನಷ್ಟಕ್ಕೂ ದಾರಿ ಮಾಡಿಕೊಡುತ್ತವೆ.&lt;/p&gt;&lt;p&gt;ಸಾರ್ವಜನಿಕರ ಹಣ ಅಥವಾ ಅಭಿಮಾನಿಗಳ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಂತಹ ತಾತ್ಕಾಲಿಕ ವಸ್ತುಗಳ ಮೇಲೆ ವ್ಯಯ ಮಾಡುವುದಕ್ಕಿಂತ, ಜನಪರ ಕೆಲಸಗಳಿಗೆ ಬಳಸುವುದು ಉತ್ತಮ ಎಂಬ ಸಂದೇಶವನ್ನು ಈ ನಿರ್ಧಾರ ಸಾರುತ್ತದೆ. ವಿಜಯಾನಂದ ಕಾಶಪ್ಪನವರ್ ಅವರ ಅಭಿಮಾನಿಗಳ ಈ ನಡೆ ಇಂದಿನ ಯುವ ರಾಜಕಾರಣಕ್ಕೆ ಮತ್ತು ಸಮಾಜಕ್ಕೆ ಒಂದು ಸಕಾರಾತ್ಮಕ ಬದಲಾವಣೆಯ ಮುನ್ನುಡಿಯಾಗಿದೆ. ವಿಜಯಾನಂದ ಕಾಶಪ್ಪನವರ್ ಅವರು ಕೂಡ ತಮ್ಮ ಜನಪರ ಹೋರಾಟಗಳು ಮತ್ತು ನೇರ ನುಡಿಯ ರಾಜಕಾರಣಕ್ಕೆ ಹೆಸರುವಾಸಿಯಾದವರು. ಹಿಂದೆ ಶಾಸಕರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲೂ ಅವರು ಸರಳ ಜೀವನಶೈಲಿಗೆ ಒತ್ತು ನೀಡಿದ್ದರು.&lt;/p&gt;&lt;p&gt;ಸಾರ್ವಜನಿಕರು ಕಷ್ಟಪಟ್ಟು ತರುವ ದುಬಾರಿ ಉಡುಗೊರೆಗಳು ಅಥವಾ ಶಾಲು-ಪೇಟಗಳ ಬದಲು ಜನರ ಸಮಸ್ಯೆಗಳನ್ನು ಆಲಿಸುವುದೇ ತಮಗೆ ನಿಜವಾದ ಸನ್ಮಾನ ಎಂದು ಅವರು ಹಿಂದೆ ಹಲವು ವೇದಿಕೆಗಳಲ್ಲಿ ಅಭಿಪ್ರಾಯಪಟ್ಟಿದ್ದರು. ಈ ವಿನೂತನ ನಿರ್ಧಾರವು ರಾಜಕೀಯ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಜನಸಾಮಾನ್ಯರೊಂದಿಗೆ ನಾಯಕರು ಮತ್ತಷ್ಟು ಹತ್ತಿರವಾಗಲು ಇಂತಹ ಸರಳತೆಯ ಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category>bagalkot</category>
            <dc:creator>Santosh Naik</dc:creator>
            <atom:link href="https://kannada.asianetnews.com/bagalkot/karnataka-minister-vijayanand-kashappanavar-no-garlands-shawls-request-san/articleshow-e3gmhnx"/>
        </item>
        <item>
            <title><![CDATA[ಲೋಕಾಪುರದವರೆಗಿನ 6 ರೈಲು ನಿಲ್ದಾಣಗಳಿಗೆ 3 ಪ್ಯಾಸೆಂಜರ್‌ ರೈಲು ಆರಂಭಿಸಲು ಸ್ಪಂದನೆ]]></title>
            <link>https://kannada.asianetnews.com/karnataka-districts/bagalkote-indian-railways-response-to-start-3-passenger-trains-for-6-railway-stations-up-to-lokapura-mrq/articleshow-eucbigo</link>
            <guid isPermaLink="true">https://kannada.asianetnews.com/karnataka-districts/bagalkote-indian-railways-response-to-start-3-passenger-trains-for-6-railway-stations-up-to-lokapura-mrq/articleshow-eucbigo</guid>
            <pubDate>Tue, 07 Jul 2026 07:34:51 +0530</pubDate>
            <description><![CDATA[&lt;p&gt;ಬಾಗಲಕೋಟೆಯ ರೈಲ್ವೆ ಹೋರಾಟ ಸಮಿತಿಯು ಲೋಕಾಪುರದವರೆಗೆ ಪ್ಯಾಸೆಂಜರ್ ರೈಲು ಸೇವೆ ಆರಂಭಿಸಲು ಸಂಸದ ಗದ್ದಿಗೌಡರ ಅವರನ್ನು ಒತ್ತಾಯಿಸಿದೆ. ಬಳಕೆಯಾಗದ ನಿಲ್ದಾಣಗಳು ಹಾಳಾಗುತ್ತಿದ್ದು, ಶೀಘ್ರ ರೈಲು ಆರಂಭಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwx4t5na40apy90z1rtm02k3,imgname-lokapur-1783389558442.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ನಗರದ ಸಂಸದರ ಕಚೇರಿಗೆ ರೈಲ್ವೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸೋಮವಾರ ಭೇಟಿ ನೀಡಿ ಲೋಕಾಪುರದ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಲು ಸಂಸದರನ್ನು ಒತ್ತಾಯಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಕುತಬುದ್ದೀನ ಖಾಜಿ ಮಾತನಾಡಿ, ಲೋಕಾಪುರದವರೆಗೆ ಆರು ರೈಲು ನಿಲ್ದಾಣಗಳ ನಿರ್ಮಾಣಕ್ಕಾಗಿ ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದು, ರೈಲ್ವೆ ಸೌಲಭ್ಯ ಇಲ್ಲದಿರುವುದರಿಂದ ಆ ಕಟ್ಟಡಗಳು ಹಾಳಾಗುತ್ತಿದ್ದು, ಅನೈತಿಕ ಚಟುವಟಿಕೆಗಳ ಕೇಂದ್ರವಾಗುತ್ತಿವೆ ಎಂದು ದೂರಿದರು.&lt;/p&gt;&lt;h2&gt;&lt;strong&gt;ಮೂರು ರೈಲುಗಳು&lt;/strong&gt;&lt;/h2&gt;&lt;p&gt;ಲೋಕಾಪುರ ಮಾರ್ಗದಲ್ಲಿ 1) ಬಾಗಲಕೋಟ ಮೈಸೂರು ಬಸವ ಎಕ್ಸಪ್ರೆಸ್&zwnj; (17307/17308) 2) ಬೆಂಗಳೂರು ಹೊಸಪೇಟೆ ಪ್ಯಾಸೆಂಜರ್ (56419/56420) 3) ವಿಜಯಪುರ ಹೈದರಾಬಾದ ಎಕ್ಸಪ್ರೆಸ್&zwnj; (17029/17030) ಈ ಮೂರು ರೈಲುಗಳನ್ನು ಲೋಕಾಪುರದ ವರೆಗೆ ವಿಸ್ತರಿಸಲು ಸರಳ ಅವಕಾಶವಿದ್ದು, ಹುಬ್ಬಳ್ಳಿ ನೈರುತ್ಯ ರೇಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿ ಚಾಲನೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.&lt;/p&gt;&lt;p&gt;ಅದರಂತೆ ಲೋಕಾಪುರದಿಂದ ಯಾದವಾಡ, ಮುಧೋಳ, ಜಮಖಂಡಿ ಭಾಗದಲ್ಲಿ ರೇಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಗೆ ಯಾವುದೇ ರೀತಿಯ ಅಡಚಣೆಗಳು ಬಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯ ಸಾಧಿಸಿ ಅಡಚಣೆ ಬಗೆಹರಿಸಲು ತಾವು ಪ್ರಮುಖ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಈಚೆಗೆ ರೇಲ್ವೆ ಹೋರಾಟ ಸಮಿತಿಯು ಬೆಳಗಾವಿ ಜಿಲ್ಲಾ ಅಧಿಕಾರಿಗಳು ಚಿಕ್ಕೋಡಿ ಭೂಸ್ವಾಧೀನ ಅಧಿಕಾರಿಗಳಿಗೆ ಭೇಟಿಯಾಗಿ ಜಮಖಂಡಿಯಿಂದ ಕುಡಚಿ ವರೆಗೆ ಅಗತ್ಯವಿರುವ ಭೂಮಿಯನ್ನು ರೇಲ್ವೆ ಇಲಾಖೆಗೆ ಹಸ್ತಾಂತರಿಸಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸಂಪರ್ಕಿಸಲಾಗಿದೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.&amp;nbsp;&lt;/p&gt;&lt;p&gt;ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ತಾವುಗಳು ಬಾಗಲಕೋಟೆ ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾದ ಕುಡಚಿ ರೇಲ್ವೆ ಮಾರ್ಗ ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ಇಚ್ಚಾಶಕ್ತಿ ತೋರಬೇಕೆಂದು ಕುತುಬುದ್ದೀನ ಖಾಜಿ ಒತ್ತಾಯಿಸಿದರು.&lt;/p&gt;&lt;h3&gt;&lt;strong&gt;ಬೇಡಿಕೆಗೆ ಸ್ಪಂದನೆ&lt;/strong&gt;&lt;/h3&gt;&lt;p&gt;ಸಂಸದ ಗದ್ದಿಗೌಡರ ಅವರು, ತತಕ್ಷಣ ರೇಲ್ವೆ ಇಲಾಖೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಅತಿ ಶೀಘ್ರದಲ್ಲಿ ಲೋಕಾಪುರದ ವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು. ಕುಡಚಿವರೆಗೂ ಏಕಕಾಲಕ್ಕೆ ಕಾಮಗಾರಿ ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು. ನನಗೆ ಜಿಲ್ಲೆಯ ಜನರ ಬಹಳ ಒತ್ತಡವಿದೆ, ಅತೀಶೀಘ್ರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಹೋರಾಟ ನಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕುಡಚಿ-ಬಾಗಲಕೊಟೆ ರೈಲು ಕಾಮಗಾರಿ ವಿಳಂಬಕ್ಕೆ ಕಾರಣ ಏನು? ಸಂಸದರು ಸಿಟ್ಟಾಗಿದ್ದೇಕೆ?&lt;/strong&gt;&lt;/p&gt;&lt;p&gt;ಈ ಸಂದರ್ಭದಲ್ಲಿ ಜಯಶ್ರೀ ಗುಳಬಾಳ, ಮಹೇಶ ಹುಗ್ಗಿ, ಡಾ.ರವಿ ಜಮಖಂಡಿ, ಬ್ರಿಜ್ ಮೋಹನ ಢಾಗಾ, ದಯಾನಂದ ಬಿಜ್ಜರಗಿ, ಮೈನುದ್ದೀನ ಖಾಜಿ ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್&zwnj;ಗೆ ಡಿಮ್ಯಾಂಡ್&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-indian-railways-response-to-start-3-passenger-trains-for-6-railway-stations-up-to-lokapura-mrq/articleshow-eucbigo"/>
        </item>
        <item>
            <title><![CDATA[ಹಿಪ್ಪರಗಿ ಬ್ಯಾರೇಜ್‌ನ ಕ್ರಸ್ಟ್‌ಗೇಟ್‌ಗಳ ಬದಲಾವಣೆಗೆ ₹42 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದ ರಾಜ್ಯ ನೀರಾವರಿ ನಿಗಮ!]]></title>
            <link>https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</link>
            <guid isPermaLink="true">https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1</guid>
            <pubDate>Fri, 10 Jul 2026 14:41:12 +0530</pubDate>
            <description><![CDATA[ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್&zwnj;ನ 25 ವರ್ಷ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ₹42 ಕೋಟಿ ವೆಚ್ಚದಲ್ಲಿ ಹೊಸ, ಆಧುನಿಕ ಸ್ಟೀಲ್ ಗೇಟ್&zwnj;ಗಳನ್ನು ಅಳವಡಿಸಲು ಕರ್ನಾಟಕ ನೀರಾವರಿ ನಿಗಮ ಟೆಂಡರ್ ಕರೆದಿದೆ. ಶಾಸಕ ಸಿದ್ದು ಸವದಿ ಅವರ ನಿರಂತರ ಒತ್ತಾಯದ ಫಲವಾಗಿ, ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತ ಕಾಯುವ ಈ ಮಹತ್ವದ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx5mb0xt1zpvah6y4gydy91b,imgname-hipparagi-barrage--1--1783674274744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಬಕವಿ-ಬನಹಟ್ಟಿ:&lt;/strong&gt; ಬಾಗಲಕೋಟೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ 25 ವರ್ಷಗಳಿಂದ ಸತತವಾಗಿ ಯಾವ ಬದಲಾವಣೆಯಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಹಿಪ್ಪರಗಿ ಬ್ಯಾರೇಜ್&zwnj;ನ ಹಳೆಯ ಕ್ರಸ್ಟ್&zwnj;ಗೇಟ್&zwnj;ಗಳ ಬದಲಿಗೆ ಹೊಸ ಆಧುನಿಕ ತಂತ್ರಜ್ಞಾನದ ಸ್ಟೀಲ್ ಕ್ರಸ್ಟ್&zwnj;ಗೇಟ್&zwnj;ಗಳನ್ನು ಅಳವಡಿಸುವ ಮಹತ್ವದ ಕಾಮಗಾರಿಗೆ ಕರ್ನಾಟಕ ನೀರಾವರಿ ನಿಗಮವು ₹ 42 ಕೋಟಿ.ಗಳ ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿದೆ. ಜನವರಿಯಲ್ಲಿ ಬ್ಯಾರೇಜ್&zwnj;ನ 22ನೇಕ್ರಸ್ ಗೇಟ್ ನೀರಿನ ಒತ್ತಡಕ್ಕೆ ಮುರಿದು ಅಪಾರ ನೀರು ಪೋಲಾಗಿತ್ತು. ಬಳಿಕ ಅಂದಾಜು 1.60 ಲಕ್ಷ ರೂ.ದಲ್ಲಿ ಹೊಸ ಗೇಟ್ ಅಳವಡಿಕೆ ಮಾಡಲಾಗಿತ್ತು. ಹೀಗಾಗಿ ಈಗ ಉಳಿದಿರುವ 21 ಹೊಸ ಗೇಟ್&zwnj;ಗಳ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.&lt;/p&gt;&lt;p&gt;ಹಿಪ್ಪರಗಿ ಬ್ಯಾರೇಜ್&zwnj;ನ ಕ್ರೆಸ್ಟ್ಗೇಟ್&zwnj;ಗಳು ಸವಕಳಿಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಕ್ಷಣ ನವೀಕರಿಸಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ವಿಧಾನಸಭೆಯಲ್ಲಿ ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದರು. ಅವರ ಪತ್ರ ನೀಡಿದ ಬಳಿಕ ಸರ್ಕಾರ ಅಗತ್ಯ ಕ್ರಮ ಕೈಗೊಂಡಿರುವುದು ಗಮನಾರ್ಹವಾಗಿದೆ.&lt;/p&gt;&lt;p&gt;ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಸಿದ್ದು ಸವದಿ, 2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj;ಗೆ ಕಬ್ಬಿಣದ ಕ್ರೆಸ್ಟ್ಗೇಟ್&zwnj;ಗಳನ್ನು ಅಳವಡಿಸಲಾಗಿತ್ತು. ಹೈದರಾಬಾದ್&zwnj;ನಿಂದ ಬಂದ ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷಗಳಷ್ಟೇ ಇದ್ದರೂ, ಹೆಚ್ಚುವರಿಯಾಗಿ ಸುಮಾರು 10 ವರ್ಷಗಳಿಗೂ ಹೆಚ್ಚು ಅವು ಕಾರ್ಯನಿರ್ವಹಿಸಿವೆ. ಆದರೆ, ಕಳೆದ ಜನವರಿಯಲ್ಲಿ 22ನೇ ಗೇಟ್&zwnj;ನಲ್ಲಿ ಸಂಭವಿಸಿದ ಅವಘಡ ಗೇಟ್&zwnj;ಗಳ ಸ್ಥಿತಿಗತಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂಬ ಎಚ್ಚರಿಕೆಯನ್ನು ನೀಡಿತ್ತು ಎಂದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಎಲ್ಲ ಕ್ರೆಸ್ಟ್ಗೇಟ್&zwnj;ಗಳನ್ನು ಹೊಸದಾಗಿ ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದೆವು. ಇದೀಗ ಕಾಮಗಾರಿಗೆ ಟೆಂಡರ್ ಕರೆಯಲಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಈ ಕ್ರಮಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಅವರು ತಿಳಿಸಿದರು.&lt;/p&gt;&lt;p&gt;ಈ ಬಾರಿ ಕಬ್ಬಿಣದ ಬದಲಿಗೆ ಉಕ್ಕಿನಿಂದ (ಸ್ಟೀಲ್) ಕ್ರೆಸ್ಟ್ಗೇಟ್&zwnj;ಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳ ಬಾಳಿಕೆ ಸುಮಾರು 50 ವರ್ಷಗಳವರೆಗೆ ಇರಲಿದೆ ಎಂದು ಶಾಸಕರು ಮಾಹಿತಿ ನೀಡಿದರು. ಒಟ್ಟು 22 ಗೇಟ್&zwnj;ಗಳ ಪೈಕಿ 21 ಗೇಟ್&zwnj;ಗಳನ್ನು ನವೀಕರಿಸಲಾಗುತ್ತದೆ. ಪ್ರಸಕ್ತ ಮಳೆಗಾಲ ಮುಗಿದ ನಂತರ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಳೆಗಾಲದ ವೇಳೆಗೆ ಹೊಸ ಕ್ರೆಸ್ಟ್ಗೇಟ್&zwnj;ಗಳ ಮೂಲಕವೇ ಬ್ಯಾರೇಜ್&zwnj;ನಲ್ಲಿ ನೀರು ತಡೆಹಿಡಿಯುವ ವ್ಯವಸ್ಥೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.&lt;/p&gt;&lt;h2&gt;ತಜ್ಞರ ತಂಡದ ವರದಿಗೆ ಮನ್ನಣೆ:&lt;/h2&gt;&lt;p&gt;ಕಳೆದ ಮೇ ತಿಂಗಳಲ್ಲಿ ಹೈದರಾಬಾದ್&zwnj;ನ ತಜ್ಞರ ವಿಶೇಷ ತಂಡ ಬ್ಯಾರೇಜ್&zwnj;ಗೆ ಭೇಟಿ ನೀಡಿ ಕ್ರೆಸ್ಟ್ಗೇಟ್&zwnj;ಗಳ ಸಮಗ್ರ ಪರಿಶೀಲನೆ ನಡೆಸಿತ್ತು. ಪರಿಶೀಲನೆಯಲ್ಲಿ ಬಹುತೇಕ ಎಲ್ಲ ಗೇಟ್&zwnj;ಗಳು ಸವಕಳಿಗೊಂಡಿರುವುದು ದೃಢಪಟ್ಟಿದ್ದು, ಅವುಗಳನ್ನು ಸಂಪೂರ್ಣವಾಗಿ ನವೀಕರಿಸಬೇಕೆಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಅದರ ಆಧಾರದ ಮೇಲೆ ಸುಮಾರು ₹ 42 ಕೋಟಿಗಳ ಅಂದಾಜು ವೆಚ್ಚದಲ್ಲಿ ನವೀಕರಣ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇದೀಗ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಶಾಸಕ ಸವದಿ ನಿರಂತರ ಆಗ್ರಹದಿಂದ ನೂತನ ಗೇಟ್&zwnj;ಗಳು ಅಳವಡಿಕೆಯಾಗುತ್ತಿದ್ದು, ಶಾಸಕರನ್ನು ಧುರೀಣರಾದ ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಆನಂದ ಕಂಪು ಮೊದಲಾದವರು ಅಭಿನಂದಿಸಿದ್ದಾರೆ.&lt;/p&gt;&lt;p&gt;2001ರಲ್ಲಿ ಹಿಪ್ಪರಗಿ ಬ್ಯಾರೇಜ್&zwnj; ಗೆ ಕ್ರಸ್ಟ್&zwnj; ಗೇಟ್ ಅಳವಡಿಸಲಾಗಿತ್ತು. ತಜ್ಞರ ಪ್ರಕಾರ ಅವುಗಳ ಬಾಳಿಕೆ 15 ವರ್ಷ. ಆದರೆ ಹೆಚ್ಚುವರಿಯಾಗಿ 10 ವರ್ಷ ಕಾರ್ಯನಿರ್ವಹಿಸಿವೆ. ಹೊಸಗೇಟ್ ಅಳವಡಿಕೆಗೆ ಸರಕಾರದ ಮೇಲೆ ನಿರಂತರ ಒತ್ತಡ ಹೇರಲಾಗಿತ್ತು.ಹಿಪ್ಪರಗಿ ಬ್ಯಾರೇಜ್&zwnj;ನ ಸುರಕ್ಷತೆ ಮತ್ತು ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.&lt;/p&gt;&lt;p&gt;-ಸಿದ್ದು ಸವದಿ ತೇರದಾಳ ಶಾಸಕ&lt;/p&gt;]]></content:encoded>
            <category>bagalkot</category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hipparagi-barrage-to-get-new-steel-gates-rs-42-cr-tender-invited-by-karnataka-neeravari-nigama-gdp/articleshow-ghgapn1"/>
        </item>
        <item>
            <title><![CDATA[Ilakal: ಅಂಧ ಅನಾಥ ಯುವತಿ ಹುಲಿಗೆಮ್ಮಾಳ ಬಾಳಿಗೆ ಬೆಳಕಾದ ನಾಗರಾಜ್; ಅಪರೂಪದ ಮದುವೆ]]></title>
            <link>https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h</link>
            <guid isPermaLink="true">https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h</guid>
            <pubDate>Sun, 05 Jul 2026 07:44:55 +0530</pubDate>
            <description><![CDATA[&lt;p&gt;ಹುಟ್ಟು ಕುರುಡಿಯಾದ ಅನಾಥ ಯುವತಿ ಹುಲಿಗೆಮ್ಮಳನ್ನು, ತಾನೂ ಅನಾಥನಾದ ನಾಗರಾಜ ಎಂಬ ಯುವಕ ಮದುವೆಯಾಗಿದ್ದಾನೆ. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಈ ಮದುವೆಯ ಸಂಪೂರ್ಣ ಖರ್ಚು ವಹಿಸಿ, ನವ ದಂಪತಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kwr0hrcmxgfp9vxrt134km7q,imgname-marriage--1--1783217316244.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಹುಟ್ಟು ಕುರುಡಿಯಾಗಿದ್ದ ಯುವತಿಯ ಬಾಳಿಗೆ ಬೆಳಕಾದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಹೌದು!! ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಇಲಕಲ್ಲ ನಗರದ ಅಂಬಾಭವಾನಿ ದೇವಸ್ಥಾನ. ಇಳಕಲ್ಲ ನಗರದ ಅಂಧ ಯುವತಿ ಹುಲಿಗೆಮ್ಮ ತಿಪ್ಪಣಸಾ ರಾಯಬಾಗಿ ಎಂಬ ಯುವತಿ ಕೈಹಿಡಿದು ಆಕೆಯೆ ಬಾಳಿಗೆ ಬೆಳಕಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್&zwnj; ಮೂಲದ ನಾಗರಾಜ ಪರಶುರಾಮಸಾ ಖೋಡೆ. ಇತನಿಗೂ ತಂದೆ -ತಾಯಿ ಇಲ್ಲದ ಅನಾಥನಾಗಿದ್ದ. ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೇ ಆತನ ಸ್ನೇಹಿತರಿಂದ ಹುಲಿಗೆಮ್ಮಳ ಬಗ್ಗೆ ಹೇಳಿದ್ದ ಆಕೆ ಕುರುಡಿಯಾಗಿದ್ದರೂ ಆಕೆಗೆ ಬಾಳು ಕೊಡಯವುದಾಗಿ ಹೇಳಿ ಶುಕ್ರವಾರ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.&lt;/p&gt;&lt;h2&gt;&lt;strong&gt;ಮದುವೆಗೆ ಹಣಕಾಸಿನ ತೊಂದರೆ&lt;/strong&gt;&lt;/h2&gt;&lt;p&gt;ಮದುವೆ ಏನೋ ನಿಶ್ಚಿಯವಾಯಿತು. ಆದರೆ, ಅದರ ಖರ್ಚು ವೆಚ್ಚಕ್ಕೆ ಮುಂದೆ ಬಂದವರು ಇಲಕಲ್ಲ ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಬಾಂಧವರು. ಎಲ್ಲ ಬಾಂಧವರು ಸೇರಿಕೊಂಡು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಸಿಕೊಟ್ಟರು. ವಧು-ವರರ ಲಗ್ನಕ್ಕೆ ಅಗತ್ಯವಿರುವ ಒಡುವೆ-ವಸ್ತ್ರದ ಸಂಪೂರ್ಣ ಖರ್ಚು ಭರಿಸಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಳಗಾವಿ: ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ&lt;/strong&gt;&lt;/p&gt;&lt;p&gt;ಮುಂದಿನ ಜೀವನೋಪಾಯಕ್ಕೆ ಅನುಕೂಲವಾಗಲೆಂದು ₹ 15,000 ಗಳನ್ನು ನೀಡಿ ಸಹಾಯಹಸ್ತ ಚಾಚಿದ್ದಾರೆ. ನಗರದ ಸಾರ್ವಜನಿಕರು ಮದುವೆ ಬಂದು ನೂತನ ವಧು-ವರನಿಗೆ ಶುಭ ಹಾರೈಸಿದರು. ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h"/>
        </item>
        <item>
            <title><![CDATA[ಸಚಿವರಾಗ್ತಿದ್ದಂತೆ ಅಖಾಡಕ್ಕಿಳಿದ ವಿಜಯಾನಂದ ಕಾಶಪ್ಪನವರ್: ಇಂದು ಬಾಗಲಕೋಟೆಯಲ್ಲಿ ಬರ ವೀಕ್ಷಣೆ]]></title>
            <link>https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm</link>
            <guid isPermaLink="true">https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm</guid>
            <pubDate>Wed, 05 Aug 2026 08:25:14 +0530</pubDate>
            <description><![CDATA[&lt;p&gt;ಮುಖ್ಯಮಂತ್ರಿಗಳ ಆದೇಶದಂತೆ, ನೂತನ ಸಚಿವ ವಿಜಯಾನಂದ ಕಾಶೆಪ್ಪನವರ್ ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಮುಂದಾಗಿದ್ದಾರೆ. ಅವರು ಜಿಲ್ಲೆಯ ಇಳಕಲ್, ಹುನುಗುಂದ, ಗುಳೇದಗುಡ್ಡ ಹಾಗೂ ಬಾಗಲಕೋಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿನ ಬೆಳೆ ಹಾನಿಯನ್ನು ವೀಕ್ಷಣೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kz7x6wm3kjpqvcdketmp8bmc,imgname-----------------------2026-08-05t081539.633-1785898168963.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ (ಆ.5): ರಾಜ್ಯದ ಅನಾವೃಷ್ಟಿ ಮತ್ತು ಅತಿವೃಷ್ಟಿ ಪರಿಸ್ಥಿತಿ ಅಧ್ಯಯನ ನಡೆಸಿ ವರದಿ ನೀಡಲು ಎಲ್ಲ 31 ಜಿಲ್ಲೆಗಳಿಗೂ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಆದೇಶಿಸಿದ ಬೆನ್ನಲ್ಲೇ ಬಾಗಲಕೋಟೆಯ ಬರ ವೀಕ್ಷಣೆಗೆ ಸಚಿವ ವಿಜಯಾನಂದ ಕಾಶೆಪ್ಪನವರು ಮುಂದಾಗಿದ್ದಾರೆ.&lt;/p&gt;&lt;h2&gt;ಸಚಿವರಾಗುತ್ತಿದ್ದಂತೆ ಅಖಾಡಕ್ಕಿಳಿದ ಕಾಶೆಪ್ಪನವರ್&lt;/h2&gt;&lt;p&gt;ಸಚಿವ ವಿಜಯಾನಂದ ಕಾಶೆಪ್ಪನವರ್ ಮೊನ್ನೆಯಷ್ಟೇ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು. ಇದೀಗ ಸಚಿವ ಸ್ಥಾನ ಸ್ವೀಕರಿಸಿದ ಎರಡೇ ದಿನದಲ್ಲಿ ಬರ ಅಧ್ಯಯನಕ್ಕೆ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 9.30ಗಂಟೆಯಿಂದಲೇ ರೈತರ ಜಮೀನುಗಳಿಗೆ ಹೋಗಿ ಬರ ವೀಕ್ಷಣೆ ಆರಂಭಿಸಲಿದ್ದಾರೆ.&lt;/p&gt;&lt;p&gt;ಇದನ್ನೂ ಓದಿ: ಬರ-ಅತಿವೃಷ್ಟಿ ಅಧ್ಯಯನ: 31 ಜಿಲ್ಲೆಗಳಿಗೆ ಸಚಿವರ ನೇಮಕಗೊಳಿಸಿ ಸಿಎಂ ಆದೇಶ; ನಿಮ್ಮ ಜಿಲ್ಲೆಗೆ ಯಾವ ಸಚಿವರು?&lt;/p&gt;&lt;h3&gt;ಬಾಗಲಕೋಟೆಯ ಬರಪೀಡಿತ ಗ್ರಾಮಗಳು&lt;/h3&gt;&lt;p&gt;ಬಾಗಲಕೋಟೆ, ಇಳಕಲ್ ತಾಲೂಕಿನ ಹೆರೂರ, ಅಮರಾವತಿ, ಹುನುಗುಂದ ತಾಲೂಕಿನ ಹಿರೆಬಾದವಾಡಗಿ, ರಕ್ಕಸಗಿ, ಕಮತಗಿ. ಗುಳೇದಗುಡ್ಡ ತಾಲೂಕಿನ ಇಂಜಿನವಾರಿ, ಬೂದನಗಡ, ಬಾಗಲಕೋಟೆ ತಾಲೂಕಿನ ಶಿರೂರ, ಬೇವಿನಮಟ್ಟಿ ಗ್ರಾಮಗಳುಲ್ಲಿ ಬರ ವೀಕ್ಷಣೆ ಆರಂಭಿಸಲಿದ್ದಾರೆ. ಸಚಿವರೊಂದಿಗೆ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಾಥ್ ನೀಡಲಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/minister-vijayanand-kashappanvar-inspect-drought-area-conditions-in-bagalkote-today-rav/articleshow-mv8cxrm"/>
        </item>
        <item>
            <title><![CDATA[ಬಾಗಲಕೋಟೆ: ಹೃದಯಾಘಾತದ ಮುನ್ನ ಇತರರ ಜೀವ ಉಳಿಸಿ ಪ್ರಾಣ ಬಿಟ್ಟ ಲಾರಿ ಡ್ರೈವರ್]]></title>
            <link>https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</link>
            <guid isPermaLink="true">https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h</guid>
            <pubDate>Sat, 08 Aug 2026 19:50:02 +0530</pubDate>
            <description><![CDATA[&lt;p&gt;&lt;strong&gt;Lorry driver heart attack: &lt;/strong&gt;ಬಾಗಲಕೋಟೆ ಜಿಲ್ಲೆಯ ಇಳಕಲ್ ಹೆದ್ದಾರಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಜಮ್ಮು ಕಾಶ್ಮೀರದ ಲಾರಿ ಚಾಲಕ ಇನ್ಸಾರ್ ಅಹ್ಮದ್ ಚಾಲನೆ ವೇಳೆ ಹೃದಯಾಘಾತಕ್ಕೊಳಗಾದರೂ, ಯಾವುದೇ ವಾಹನಕ್ಕೆ ಅಪಘಾತವಾಗದ ಹಾಗೆ ಲಾರಿಯನ್ನು ಸುರಕ್ಷಿತವಾಗಿ ಪಕ್ಕಕ್ಕೆ ನಿಲ್ಲಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzgvqabk35v8h3pp1ht5c1x2,imgname-thumbnail---2026-08-08t193219.362-1786198600051.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿದರೂ, ತನ್ನ ಪ್ರಾಣ ಹೋಗುವ ಕಡೆಯ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದ ಲಾರಿ ಚಾಲಕರೊಬ್ಬರು ದೊಡ್ಡ ಅನಾಹುತವನ್ನು ತಪ್ಪಿಸಿ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಇಳಕಲ್ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಮೃತ ಚಾಲಕನನ್ನು ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಳಿ ಪಟ್ಟಣದ ನಿವಾಸಿ ಇನ್ಸಾರ್ ಅಹ್ಮದ್ (60) ಎಂದು ಗುರುತಿಸಲಾಗಿದೆ. ಇವರು ತಮ್ಮ ಲಾರಿಯೊಂದಿಗೆ ಕುಷ್ಟಗಿ ಮಾರ್ಗದತ್ತ ಪ್ರಯಾಣಿಸುತ್ತಿದ್ದರು. ಇಳಕಲ್ ನಗರದ ಹತ್ತಿರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಇನ್ಸಾರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಹೃದಯಾಘಾತ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಸಮಯಪ್ರಜ್ಞೆ ಮೆರೆದ ಚಾಲಕ&lt;/strong&gt;&lt;/h2&gt;&lt;p&gt;ಹೃದಯಾಘಾತದ ತೀವ್ರ ನೋವು ಕಾಣಿಸಿಕೊಂಡ ತಕ್ಷಣ, ಚಾಲಕ ಇನ್ಸಾರ್ ಅಹ್ಮದ್ ಗಾಬರಿಯಾಗದೆ ಅದ್ಭುತ ಸಮಯಪ್ರಜ್ಞೆ ಮೆರೆದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಇತರ ವಾಹನಗಳಿಗೆ ಡಿಕ್ಕಿಯಾದರೆ ದೊಡ್ಡ ಪ್ರಾಣಾಪಾಯ ಸಂಭವಿಸಬಹುದು ಎಂದು ಅರಿತ ಅವರು, ನೋವಿನ ನಡುವೆಯೂ ಲಾರಿಯನ್ನು ಸುರಕ್ಷಿತವಾಗಿ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ ಅವರು ಸ್ಟೇರಿಂಗ್ ಮೇಲೆಯೇ ಮಲಗಿ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;p&gt;ತಾನು ಸಾಯುವ ಮುನ್ನ ರಸ್ತೆಯಲ್ಲಿದ್ದ ಜನರ ಜೀವ ಉಳಿಸಿದ ಚಾಲಕನ ಈ ಕಾರ್ಯಕ್ಕೆ ಸಾರ್ವಜನಿಕರು ಭಾವುಕರಾಗಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ವಿಷಯ ತಿಳಿದ ತಕ್ಷಣ ಇಳಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ashwini HR</dc:creator>
            <atom:link href="https://kannada.asianetnews.com/karnataka-districts/driver-saves-lives-dies-on-duty-heartbreaking-incident-in-ilkal/articleshow-ohygk9h"/>
        </item>
        <item>
            <title><![CDATA[ಅಪ್ಪಾ ದುಡ್ಡು ಬೇಡ, ಬಡವರ ಸೇವೆ ಮಾಡು: ತಂದೆ ವಿಜಯಾನಂದ ಕಾಶಪ್ಪನವರಿಗೆ ಮಗಳ ಮಾತು]]></title>
            <link>https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu</link>
            <guid isPermaLink="true">https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu</guid>
            <pubDate>Thu, 06 Aug 2026 06:07:31 +0530</pubDate>
            <description><![CDATA[ನೂತನ ಸಚಿವ ವಿಜಯಾನಂದ ಕಾಶಪ್ಪನವರ ತವರಿಗೆ ಆಗಮಿಸಿದಾಗ, ಅವರ ಮಗಳು ಸಮಿಕ್ಷಾ 'ದುಡ್ಡು ಬೇಡ, ಬಡವರ ಸೇವೆ ಮಾಡು' ಎಂದು ಹೇಳಿ ಎಲ್ಲರ ಮನಗೆದ್ದಳು. ಇದೇ ವೇಳೆ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ಸಂಬಂಧಿಸಿದಂತೆ ತಿಮ್ಮಾಪುರ ಮತ್ತು ನಂಜಯ್ಯನಮಠ ಅವರ ಆಡಿಯೋ ವಿವಾದದ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kza7p5yqpm6zgqtd7e89tc72,imgname-vijayananda-kashappanavara-1785976264663.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಅಪ್ಪಾ ನನಗೆ ದುಡ್ಡು ಬೇಡ ಮತ ನೀಡಿದ ಬಡ ಜನರ ಸೇವೆ ಮಾಡು ಅಪ್ಪಾ ಎಂದು ನೂತನ ಸಚಿವ ವಿಜಯಾನಂದ ಕಾಶಪ್ಪನವರ ಮಗಳು ಸಮಿಕ್ಷಾ ತಂದೆಗೆ ಆರತಿ ಬೆಳಗಿ ಮನವಿ ಮಾಡಿಕೊಂಡಳು.&lt;/p&gt;&lt;p&gt;ನೂತನ ಸಚಿವರಾಗಿ ಬಾಗಲಕೋಟೆ ಜಿಲ್ಲೆ ಇಳಕಲ್ಲ ನಗರಕ್ಕೆ ಬಂದ ಸಚಿವರು ತಮ್ಮ ಮನೆಗೆ ಬಂದಾಗ ಮನೆಯ ಮುಂದೆ ಅವರ ಕುಟುಂಬದವರು ಹಾಗೂ ಅಪಾರ ಅಭಿಮಾನಿಗಳು ಸ್ವಾಗತ ಮಾಡಿಕೊಳ್ಳುವಾಗ ಮಗಳು ಸಮಿಕ್ಷಾ ಕೂಡ ತಂದೆ, ಸಚಿವ ವಿಜಯಾನಂದ ಕಾಶಪ್ಪನವರಿಗೆ ಆರತಿ ಮಾಡಿದಾಗ ಸಚಿವರು ಮಗಳ ಆರತಿ ತಟ್ಟೆಗೆ ದುಡ್ಡು ಹಾಕಲು ಮುಂದಾದರು. ಆಗ ಮಗಳು ದುಡ್ಡು ಬೇಡ ಸಮಾಜ ಸೇವೆ ಮಾಡು ಎಂದು ಹೇಳಿದಳು. ಆಗ ಅಲ್ಲಿ ನೆರೆದಿದ್ದ ಅಪಾರ ಜನರ ಮನಸು ಗೆದ್ದಿತು.&amp;nbsp;&lt;/p&gt;&lt;p&gt;ಸಚಿವರ ಪುತ್ರಿಯ ಆ ಮಾತು ಕೇಳಿದ ಸಚಿವ ಕಾಶಪ್ಪನವರು, ಕ್ಷಣ ಹೊತ್ತು ಆಶ್ಚರ್ಯಚಕಿತರಾಗಿ ಮಗಳಿಗೆ ಕೃಮುಗಿದು ಅಪ್ಪಿಕೊಂಡರು. ಚಿಕ್ಕವಳಾದ ಅವಳ ಬಾಯಿಯಿಂದ ಸಮಾಜ ಸೇವೆ ಮಾಡುವ ಗುರಿ ಕೇಳಿ ಸಂತಸ ಪಟ್ಟರು. ಸಚಿವ ವಿಜಯಾನಂದ ಕಾಶಪ್ಪನವರ ಧರ್ಮಪತ್ನಿ ವೀಣಾ ಕಾಶಪ್ಪನವರ ಕೂಡ ಸಚಿವರಿಗೆ ಹಾರ ಹಾಕಿ ಸ್ವಾಗತಿಸಿಕೊಂಡರು ನಂತರ ಕೂಡಿದ ಜನತೆ ಜೃಕಾರ ಹಾಕಿದರು.&lt;/p&gt;&lt;h2&gt;&lt;strong&gt;ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋ&lt;/strong&gt;&lt;/h2&gt;&lt;p&gt;ನನ್ನ ಉಸ್ತುವಾರಿ ತಪ್ಪಿಸುವುದಕ್ಕೆ, ನಿರ್ಧಾರ ಮಾಡುವುದಕ್ಕೆ ಪಕ್ಷ ಇದೆ. ನಮ್ಮ ಮುಖ್ಯಮಂತ್ರಿಗಳು ಇದ್ದಾರೆ. ನಿರ್ಧಾರ ಮಾಡೋದಕ್ಕೆ ಇವರಿಬ್ಬರು ಹೇಳಿದರೆ ಮಾಡುತ್ತಾರಾ ಎಂದು ಸಚಿವ ವಿಜಯಾನಂದ ಕಾಶಪ್ಪನವರ ಪ್ರಶ್ನಿಸಿದ್ದಾರೆ. ಜಿಲ್ಲೆಯ ಇಳಕಲ್ಲಿನಲ್ಲಿ ಬುಧವಾರ ಮಾತನಾಡಿದ ಅವರು, ಕಾಶಪ್ಪನವರ ಅವರನ್ನು ಬಾಗಲಕೋಟೆ ಉಸ್ತುವಾರಿ ತಪ್ಪಿಸಲು, ಕಾಂಗ್ರೆಸ್ ಶಾಸಕರ ಸಹಿ ಬಗ್ಗೆ ತಿಮ್ಮಾಪುರ ಹಾಗೂ ನಂಜಯ್ಯನಮಠ ಆಡಿಯೋದಲ್ಲಿ ಪ್ರಸ್ತಾಪ ಮಾಡಿರುವುಕ್ಕೆ ತಿರುಗೇಟು ನೀಡಿದರು. 2008ರಲ್ಲಿ ಕಾಶಪ್ಪನವರಗೆ ನಾನು ಅನ್ಯಾಯ ಮಾಡಿದೆ ಎಂದು ನಂಜಯ್ಯನಮಠ ತಾವೆ ಬರೆದ ಪುಸ್ತಕದಲ್ಲಿ ಬರೆದಿದ್ದಾರೆ. ಇವರು ಕಾಯಂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಇವರು ಯಾವತ್ತು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಎಂದರು.&lt;/p&gt;&lt;p&gt;ಇಬ್ಬರ ಬಗ್ಗೆ ಹೈಕಮಾಂಡ್&zwnj;ಗೆ ದೂರ ನೀಡುತ್ತಿರಾ ಎಂಬ ಪ್ರಶ್ನೆಗೆ, ನಾನು ದ್ವೇಷದ ರಾಜಕಾರಣ ಮಾಡುವುದನ್ನು ಬಿಟ್ಟಿದ್ದೇನೆ. ನಾನು ಸಂಸ್ಕಾರ ಇರುವಂತಹ ಕುಟುಂಬದಲ್ಲಿ ಹುಟ್ಟಿದ್ದೇನೆ. ಕಾಂಗ್ರೆಸ್ ಪಕ್ಷ ನಮ್ಮ ತಂದೆ-ತಾಯಿ ಎಲ್ಲರನ್ನು ಶಾಸಕರನ್ನಾಗಿ ಮಾಡಿದೆ. 6 ಬಾರಿ ನಮ್ಮ ಮನೆತನದವರನ್ನು ಶಾಸಕರನ್ನಾಗಿ ಮಾಡಿದೆ. ನಾವು ಸೇವೆ ಮಾಡುವವರು. ದ್ವೇಷ ಮಾಡುವುದು ಅಥವಾ ವಿರುದ್ಧವಾಗಿ ಏನಾದರೂ ಹೇಳೋದು ನಮ್ಮ ಮನಸಿನಲ್ಲಿ ಇಲ್ಲ. ನಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಹೇಳಿದರು.&lt;/p&gt;&lt;h3&gt;&lt;strong&gt;ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ನಾನೊಬ್ಬನೇ ಮಂತ್ರಿ ಆಗಿದ್ದೇನೆ. ಆದ್ದರಿಂದ ನನಗೆ ಉಸ್ತುವಾರಿ ಕೊಡಬೇಕು. ನಾವು ಯಾವುದೇ ರೀತಿ ಕಚ್ಚಾಟ ಮಾಡುವುದಿಲ್ಲ. ಈಗ ಅವರವರೆ (ಆರ್.ಬಿ.ತಿಮ್ಮಾಪುರ ಮತ್ತು ನಂಜಯ್ಯನಮಠ) ಮಾತನಾಡಿಕೊಂಡಿದ್ದಾರೆ. ಅವರಿಗೆ ಏನು ನೋವು ಆಗಿದೆಯೋ ಗೊತ್ತಿಲ್ಲ. ಸಹಜವಾಗಿ ಕೆಲವಷ್ಟು ಜನಕ್ಕೆ ನೋವಾಗುತ್ತೆ. ಅವರಿಗೂ ಅವಕಾಶ ಕೊಟ್ಟಿದೆಯಲ್ಲ ಪಕ್ಷ, ಅದನ್ನು ಹೇಳಬೇಕಲ್ಲ. ಯಾರಾರ ಮೇಲೆ ಏನೇನೋ ಆರೋಪ ಮಾಡೋದು, ಶೇ.80 ದುಡ್ಡು ತಗೊಂಡೆ ಸಚಿವ ಸಂಪುಟ ಮಾಡಿದ್ದಾರೆ ಅಂತ ಹೇಳೋದು. ಪಾಪ ನಮ್ಮ ನಾಗೇಂದ್ರ ಬಗ್ಗೆ ಕೇಸ್ ಇದೆ. ಅವರನ್ನು ಹೇಗೆ ಮಾಡಿದ್ರು ಅನ್ನೋದು. ವೇಣುಗೋಪಾಲ್ ಅವರಿಗೆ ಏಕವಚನದಲ್ಲಿ ಮಾತನಾಡುವುದು, ಹುಚ್ಚರು ಅನ್ನೋದು ಹೈಕಮಾಂಡ್&zwnj;ನವರನ್ನು ಹುಚ್ಚರು ಅನ್ನೋದು. ನಮ್ಮ ವರಿಷ್ಠರು ಇದಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಹೇಳ್ತೀನಿ ಇದೇನು ನಮಗೆ ಹೊಸದಲ್ಲ. ಇದನ್ನು ನಮ್ಮ ತಂದೆ-ತಾಯಿ ಕಾಲದಿಂದಲೂ ಎದುರಿಸಿಕೊಂಡು ಬಂದಿದ್ದೇವೆ. ಮುಂದೆ ಎದುರಿಸಿಕೊಂಡು ಹೋಗುತ್ತೇವೆ. ನಾವು ಗಟ್ಟಿಯಾಗಿದ್ದೇವೆ ಎಂದರು.&lt;/p&gt;&lt;p&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/new-minister-vijayananda-kashappanavara-was-surprised-to-hear-his-daughter-s-words-mrq/articleshow-u4ikimu"/>
        </item>
        <item>
            <title><![CDATA[Bagalkote : 19 ವರ್ಷ ವಯೋಮಿತಿಯ KSCA ಕ್ರಿಕೆಟ್‌ಗೆ ಮಹಾಲಿಂಗಪುರದ ದಿಶಾ ಶಿರೋಳ ಆಯ್ಕೆ]]></title>
            <link>https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx</link>
            <guid isPermaLink="true">https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx</guid>
            <pubDate>Tue, 21 Jul 2026 07:30:07 +0530</pubDate>
            <description><![CDATA[ಮಹಾಲಿಂಗಪುರದ ನಿವಾಸಿ ದಿಶಾ ಶಿರೋಳ ಅವರು 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್&zwnj;ನ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಆಡುವ ಮೂಲಕ ಇವರು ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ky165ghwtgzjwh8143m9vgwf,imgname-disha-1784598938172.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; 19 ವರ್ಷ ವಯೋಮಿತಿಯ ಕೆಎಸ್ ಸಿಎ ಮಹಿಳಾ ಕ್ರಿಕೆಟ್ ತಂಡಕ್ಕೆ ದಿಶಾ ಶಿರೋಳ ಆಯ್ಕೆಯಾಗಿ ಗಮನ ಸೆಳೆದಿದ್ದಾಳೆ.&lt;/p&gt;&lt;p&gt;8 ಜಿಲ್ಲೆಗಳನ್ನೊಳಗೊಂಡ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿರುವ ದಿಶಾ ಮಹಾಲಿಂಗಪುರ ನಿವಾಸಿ ಮನೋಹರ ಶಿರೋಳ ಅವರ ಪುತ್ರಿಯಾಗಿದ್ದಾಳೆ. ಜು.23ರಿಂದ ಬೆಂಗಳೂರಿನಲ್ಲಿ ಜರುಗುವ ಕೆಎಸ್&zwnj;ಸಿಎ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದು, ಮಹಾಲಿಂಗಪುರ ಪಟ್ಟಣ ಮತ್ತು ಬಾಗಲಕೋಟೆ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾಳೆ.&lt;/p&gt;&lt;h2&gt;&lt;strong&gt;ಕಠಿಣ ಪರಿಶ್ರಮ&lt;/strong&gt;&lt;/h2&gt;&lt;p&gt;ಸ್ಥಳೀಯ ಜೆಸಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ದಿಶಾ ಗ್ರಾಮೀಣ ಪ್ರದೇಶದಲ್ಲಿ ಬೆಳೆದರೂ ಸಹ ಕಠಿಣ ಪರಿಶ್ರಮದಿಂದ ರಾಯಚೂರು ವಲಯ ತಂಡಕ್ಕೆ ಆಯ್ಕೆಯಾಗಿ ಭರವಸೆ ಮೂಡಿಸಿದ್ದಾಳೆ ಎಂದು ಶಾಲೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜಪಾನ್&zwnj; ದೈತ್ಯ ಕಂಪನಿಗೆ ತಾಂತ್ರಿಕ ಸಲಹೆಗಾರರಾಗಿ ಮಂಗಳೂರಿನ ಪ್ರೊ.ಡಾ. ಗೋಪಾಲ್ ಮುಗೇರಾಯ ನೇಮಕ&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; 15,500 ಅಡಿ ಎತ್ತರದ ಶಿಖರ ಏರಿದ ಸೃಷ್ಟಿ ಮೇಟಿ; ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ವಿದ್ಯಾರ್ಥಿನಿ&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-mahalingapura-s-disha-shirol-selected-for-ksca-under-19-women-s-cricket-team-mrq/articleshow-uut4ccx"/>
        </item>
        <item>
            <title><![CDATA[ಕುಡಚಿ-ಬಾಗಲಕೊಟೆ ರೈಲು ಕಾಮಗಾರಿ ವಿಳಂಬಕ್ಕೆ ಕಾರಣ ಏನು? ಸಂಸದರು ಸಿಟ್ಟಾಗಿದ್ದೇಕೆ?]]></title>
            <link>https://kannada.asianetnews.com/karnataka-districts/indian-railways-what-is-the-reason-for-the-delay-in-kudachi-bagalkote-train-work-mrq/articleshow-xdulwhk</link>
            <guid isPermaLink="true">https://kannada.asianetnews.com/karnataka-districts/indian-railways-what-is-the-reason-for-the-delay-in-kudachi-bagalkote-train-work-mrq/articleshow-xdulwhk</guid>
            <pubDate>Mon, 29 Jun 2026 06:51:42 +0530</pubDate>
            <description><![CDATA[ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರು ಮತ್ತು ರೈತರ ಸಹಕಾರದ ಕೊರತೆಯೇ ಕಾರಣ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದ್ದಾರೆ. ಜಮೀನು ಮತ್ತು ಮರಗಳಿಗೆ ಹೆಚ್ಚಿನ ಪರಿಹಾರಕ್ಕಾಗಿ ರೈತರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ಯೋಜನೆಗೆ ಅಡ್ಡಿಯಾಗಿದೆ ಎಂದು ಅವರು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8fembjn8xkx6xw12jx91hn,imgname--kudachi-bagalkote-train--1782696071538.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ:&lt;/strong&gt; ಸಾರ್ವಜನಿಕರು, ರೈತರ ಸಹಕಾರದ ಕೊರತೆಯಿಂದಾಗಿ ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.&lt;/p&gt;&lt;p&gt;ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು, ಭಾನುವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೊಪಗೊಂಡರು. ಕುಡಚಿ-ಬಾಗಲಕೊಟೆ ರೈಲ್ವೆ ಕಾಮಗಾರಿ ಅನುಷ್ಠಾನಕ್ಕೆ ನಾಲ್ಕುಬಾರಿ ಸಭೆ ನಡೆಸಿದ್ದೇನೆ. ಆಗ ರೈತರು ಜಮೀನುಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಸದ್ಯ ಜಮೀನುಗಳಲ್ಲಿ ಇರುವ ಗಿಡ-ಮರಗಳಿಗೆ ಪರಿಹಾರ ನೀಡುವಂತೆ ನ್ಯಾಯಾಲದಯ ಮೆಟ್ಟಿಲೇರಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಬಾಗಲಕೋಟೆ, ಆಲಮಟ್ಟಿ, ವಿಜಯಪುರದಿಂದ ಕಾಶಿಗೆ ನೇರ ರೈಲು ಸಂಪರ್ಕ; ಎಲ್ಲೆಲ್ಲಿ ನಿಲುಗಡೆ?&lt;/strong&gt;&lt;/p&gt;&lt;h2&gt;&lt;strong&gt;ಸಿಗದ ಸಹಕಾರ&lt;/strong&gt;&lt;/h2&gt;&lt;p&gt;ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಎಲ್ಲರ ಸಹಕಾರ ಅವಶ್ಯವಾಗಿರುತ್ತದೆ. ಸಕಾಲದಲ್ಲಿ ಸೂಕ್ತವಾದ ಸಹಕಾರ ದೊರೆತರೆ ಅಂದುಕೊಂಡಂತೆ ಕಾಮಗಾರಿಗಳು ನಡೆಯುತ್ತವೆ. ಸಹಕಾರ ವಿಲ್ಲದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದರು. ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಆಸಕ್ತಿ ವಹಿಸಿ ಕಾಮಗಾರಿಗಳು ನಡೆಸಲು ಸಹಕರಿಸಬೇಕು ಎಂದು ಹೇಳಿದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಉತ್ತರ ಕರ್ನಾಟಕ ರೈಲು ಅಭಿವೃದ್ಧಿ ಬಗ್ಗೆ ಮಹತ್ವದ ಸಭೆ, ಗದಗ-ಮುಂಬೈ ವಂದೇ ಭಾರತ್ ಎಕ್ಸಪ್ರೆಸ್&zwnj;ಗೆ ಡಿಮ್ಯಾಂಡ್&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-what-is-the-reason-for-the-delay-in-kudachi-bagalkote-train-work-mrq/articleshow-xdulwhk"/>
        </item>
        <item>
            <title><![CDATA[ಒಂದೇ ಜಾಗ.. ಒಂದೇ ವಾರದಲ್ಲಿ ಕೃಷ್ಣ ನದಿಗೆ ಬಿದ್ದ ಮೂರು ಕಾರುಗಳು.. ಬಾಗಲಕೋಟೆಯ ಈ ಜಾಗದಲ್ಲಿ ಏನೋ ಸಮಸ್ಯೆ..]]></title>
            <link>https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx</link>
            <guid isPermaLink="true">https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx</guid>
            <pubDate>Tue, 11 Aug 2026 22:58:45 +0530</pubDate>
            <description><![CDATA[&lt;p&gt;ಬಾಗಲಕೋಟೆಯ ಗಲಗಲಿ-ರಬಕವಿ ರಸ್ತೆಯಲ್ಲಿ ನಿರ್ಲಕ್ಷ್ಯದ ಕಾಮಗಾರಿಯಿಂದಾಗಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿವೆ. ಅಧಿಕಾರಿಗಳ ವಿರುದ್ಧ ದೂರು ನೀಡಲು ಹೋದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01kzrxq3n962y8gs0mrjmg81sv,imgname-bagalakote-accident-1786469125801.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಮತ್ತು ರಬಕವಿ ಗ್ರಾಮಗಳ ಮಧ್ಯೆ ಇರುವ ರಸ್ತೆಯೊಂದು ಈಗ ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇಲ್ಲಿ ಒಂದೇ ವಾರದಲ್ಲಿ ಮೂರು ಕಾರುಗಳು ಕೃಷ್ಣಾ ನದಿಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಯಾವುದೋ ದೈವಿಕ ಶಾಪವಲ್ಲ, ಬದಲಿಗೆ ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದ ಪರಾಕಾಷ್ಠೆ ಎಂಬುದು ಬಯಲಾಗಿದೆ.&lt;/p&gt;&lt;p&gt;ಇಂದು ಬೀಳಗಿ ತಾಲೂಕಿನ ಕೋಲೂರು ಗ್ರಾಮದ ನಿವಾಸಿ ಈರಣ್ಣ ಅಂಬಿಗೇರ ಎಂಬುವವರು ತಮ್ಮ ಕಾರಿನಲ್ಲಿ ಗಲಗಲಿ-ರಬಕವಿ ರಸ್ತೆಯ ಮೂಲಕ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಮೇಲಿದ್ದ ಅವೈಜ್ಞಾನಿಕ ಜಲ್ಲಿಕಲ್ಲುಗಳಿಂದಾಗಿ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಕೃಷ್ಣಾ ನದಿಗೆ ಉರುಳಿದೆ. ಕಾರು ನದಿಗೆ ಬೀಳುತ್ತಿದ್ದಂತೆ ಎಚ್ಚೆತ್ತ ಈರಣ್ಣ, ಕಾರಿನ ಡೋರ್ ಅನ್ನು ಒದ್ದು ಹೊರಗೆ ಬಂದಿದ್ದಾರೆ. ಕೂಡಲೇ ಸ್ಥಳೀಯ ಮೀನುಗಾರರು ಮತ್ತು ಸಾರ್ವಜನಿಕರು ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಬಳಿಕ ಜೆಸಿಬಿ ಬಳಸಿ ಕಾರನ್ನು ನದಿಯಿಂದ ಹೊರತೆಗೆಯಲಾಗಿದೆ.&lt;/p&gt;&lt;h2&gt;&lt;strong&gt;ವಾರದಲ್ಲಿ ಮೂರು ಕಾರುಗಳು ನದಿಪಾಲು!&lt;/strong&gt;&lt;/h2&gt;&lt;p&gt;ಈ ಸ್ಥಳದಲ್ಲಿ ಕಳೆದ ಒಂದು ವಾರದಲ್ಲಿ ಇದು ಮೂರನೇ ಅಪಘಾತವಾಗಿದೆ. ಈ ರಸ್ತೆಯಲ್ಲಿ ಈಗಾಗಲೇ ಮೂರು ಕಾರುಗಳು ನದಿಗೆ ಬಿದ್ದಿವೆ. ಅಷ್ಟೇ ಅಲ್ಲದೆ, ಓರ್ವ ಬೈಕ್ ಸವಾರ ಕೂಡ ರಸ್ತೆ ನಿಯಂತ್ರಣ ತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಈ ಸರಣಿ ಅಪಘಾತಗಳನ್ನು ಗಮನಿಸಿದರೆ ಈ ಜಾಗದಲ್ಲಿ ಏನೋ ದೊಡ್ಡ ಸಮಸ್ಯೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಸರಣಿ ಅವಘಡಗಳಿಗೆ ರಸ್ತೆ ಕಾಮಗಾರಿಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.&lt;/p&gt;&lt;h2&gt;&lt;strong&gt;ಸೂಚನಾ ಫಲಕಗಳಿಲ್ಲ&lt;/strong&gt;&lt;/h2&gt;&lt;p&gt;ರಸ್ತೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಯಾವುದೇ ನಾಮಫಲಕ ಅಥವಾ ಎಚ್ಚರಿಕೆ ಫಲಕಗಳನ್ನು ಅಳವಡಿಸಿಲ್ಲ. ರಸ್ತೆ ಮೇಲೆ ಹಾಕಲಾಗಿರುವ ಜಲ್ಲಿಯನ್ನು ಸಮತಟ್ಟಾಗಿ ಹರಡದೆ, ಬೇಕಾಬಿಟ್ಟಿಯಾಗಿ ಹಾಕಲಾಗಿದೆ. ಇದರಿಂದ ವಾಹನಗಳು ಸ್ಕಿಡ್ ಆಗಿ ನೇರವಾಗಿ ನದಿಗೆ ಬೀಳುತ್ತಿವೆ. ಸಂತ್ರಸ್ತ ಈರಣ್ಣ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ದೂರು ನೀಡಲು ಬೀಳಗಿ ಪೊಲೀಸ್ ಠಾಣೆಗೆ ತೆರಳಿದ್ದರೂ, ಪೊಲೀಸರು ದೂರು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಗ್ರಹವೇನು?&lt;/strong&gt;&lt;/h2&gt;&lt;p&gt;ಒಂದೇ ವಾರದಲ್ಲಿ ಮೂರು ಕಾರುಗಳು ನದಿಗೆ ಬಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು ಮತ್ತು ರಸ್ತೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ. ಗಲಗಲಿ-ರಬಕವಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bagalkot/three-accidents-have-occurred-near-galagali-rabakavi-village-in-bagalkot-within-a-single-week-gkn/articleshow-y7g48sx"/>
        </item>
        <item>
            <title><![CDATA[25 ವರ್ಷಗಳ ಬಳಿಕ ದಂತ ವೈದ್ಯರ ಸಮ್ಮಿಲನ;  2001ರ ಬ್ಯಾಚ್‌ ವಿದ್ಯಾರ್ಥಿಗಳಿಗೆ ಸನ್ಮಾನ]]></title>
            <link>https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g</link>
            <guid isPermaLink="true">https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g</guid>
            <pubDate>Wed, 19 Aug 2026 10:08:29 +0530</pubDate>
            <description><![CDATA[&lt;p&gt;ಬಾಗಲಕೋಟೆಯ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್&zwnj;ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘದಲ್ಲಿ ಮತ್ತೆ ಒಂದಾದರು. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು, ಬಾಗಲಕೋಟೆಯ ಶೈಕ್ಷಣಿಕ ಬೆಳವಣಿಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m0c4vpjeb0fp2dqt8vsacqfb,imgname-bagalkot-1787114150478.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ 2001ರ ಬ್ಯಾಚ್&zwnj; ನ ಹಳೆಯ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಬಿವಿವಿ ಸಂಘಕ್ಕೆ ಭೇಟಿ ನೀಡಿ, ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರೊಂದಿಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.&lt;/p&gt;&lt;p&gt;ಬಿವಿವಿ ಸಂಘದ ವಿವಿಧ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯನ್ನು ವೀಕ್ಷಿಸಿದ ಹಳೆಯ ವಿದ್ಯಾರ್ಥಿಗಳು, ಬಾಗಲಕೋಟೆ ಇಂದು ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಮೆಡಿಕಲ್ ಹಬ್ ಆಗಿ ಬೆಳೆಯುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ ಡಾ.ವೀರಣ್ಣ ಚರಂತಿಮಠ&lt;/strong&gt;&lt;/h2&gt;&lt;p&gt;ಬಿವಿವಿ ಸಂಘದಲ್ಲಿ ವಿದ್ಯಾಭ್ಯಾಸ ಮಾಡಿ ದೇಶ-ವಿದೇಶಗಳಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿರುವ ಹಳೆಯ ವಿದ್ಯಾರ್ಥಿಗಳ ಸಾಧನೆಗೆ ಡಾ.ವೀರಣ್ಣ ಚರಂತಿಮಠ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಬಿವಿವಿ ಸಂಘದ ವತಿಯಿಂದ 2001ರ ಬ್ಯಾಚ್ ನ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 25 ವರ್ಷಗಳ ಬಳಿಕ ನಡೆದ ಈ ಸಮ್ಮಿಲನವು ಹಳೆಯ ಸ್ನೇಹ, ಆತ್ಮೀಯತೆ ಹಾಗೂ ಕಾಲೇಜು ದಿನಗಳ ಸವಿನೆನಪುಗಳನ್ನು ಹಂಚಿಕೊಳ್ಳುವ ವಿಶೇಷ ಸಂದರ್ಭವಾಯಿತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ 2 ಮನೆ ಕಟ್ಟಿ, ತಿಂಗಳಿಗೆ ₹80 ಸಾವಿರ ಬಾಡಿಗೆ ಗಳಿಸ್ತಿರೋ ಚಾಲಕ&lt;/strong&gt;&lt;/p&gt;&lt;p&gt;ಡಾ.ಅಮೀತ ಮಾತೂರ್, ಡಾ.ಸಂದ್ಯಾರಾಣಿ, ಡಾ.ಆಸೀನ ಪಿರಮನಿ, ಡಾ.ಅಂಜುಮ್ ಬಿಸ್ವಾಸ್, ಡಾ.ಆನಂದ, ಡಾ.ಸುಪ್ರೀತ ತ್ರಿಪಾಟಿ, ಡಾ.ಪಾಯಲ್ ತ್ರೀಪಾಟಿ ಸೇರಿ ಅನೇಕರು ಭಾಗವಹಿಸಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;6ನೇ ಕ್ಲಾಸ್ ಪುಸ್ತಕದಲ್ಲಿ AI, ಪೈಥಾನ್ ಪಾಠ! ಬುಕ್ ನೋಡಿ ಬೆಚ್ಚಿಬಿದ್ದ ಇಂಜಿನಿಯರ್&zwnj;ಗಳು, ವಿಡಿಯೋ ವೈರಲ್!&lt;/strong&gt;&lt;/p&gt;]]></content:encoded>
            <category>bagalkot</category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkot-alumni-of-the-2001-batch-of-college-of-dentistry-reunited-at-the-bvv-association-after-25-years-mrq/articleshow-ypryt3g"/>
        </item>
        <item>
            <title><![CDATA[ದೇಶಭಕ್ತಿಯನ್ನ ಹೀಗೂ ತೋರಿಸಬಹುದು.. ಬಾಗಲಕೋಟೆಯಲ್ಲಿ ಕ್ಷೌರಿಕನಿಂದ ಸತತ 21 ವರ್ಷಗಳಿಂದ ನಿರಂತರ ಸೇವೆ]]></title>
            <link>https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t</link>
            <guid isPermaLink="true">https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t</guid>
            <pubDate>Sat, 15 Aug 2026 16:22:23 +0530</pubDate>
            <description><![CDATA[&lt;p&gt;ಬಾಗಲಕೋಟೆ ಜಿಲ್ಲೆಯ ಸೂಳೇಭಾವಿಯ ಮುತ್ತಪ್ಪ ಹಡಪದ ಎಂಬುವವರು ಕಳೆದ 21 ವರ್ಷಗಳಿಂದ ಪ್ರತಿ ಸ್ವಾತಂತ್ರ್ಯ ದಿನಾಚರಣೆಯಂದು ಉಚಿತವಾಗಿ ಕ್ಷೌರ ಸೇವೆ ನೀಡುವ ಮೂಲಕ ದೇಶಭಕ್ತಿ ಮೆರೆಯುತ್ತಿದ್ದಾರೆ. ಪ್ರಮುಖವಾಗಿ ಗ್ರಾಮದ ಹಿರಿಯರು, ಅಶಕ್ತರು ಹಾಗೂ ವಿಕಲಚೇತನರಿಗೆ ಯಾವುದೇ ಶುಲ್ಕವಿಲ್ಲದೆ ಅಕ್ಕರೆಯಿಂದ ಸೇವೆ ಒದಗಿಸುತ್ತಿರುವ ಮುತ್ತಪ್ಪ ಅವರ ಈ ವಿಶಿಷ್ಟ ದೇಶಪ್ರೇಮಕ್ಕೆ ಇಡೀ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.&lt;/p&gt;]]></description>
            <media:content url="https://static.asianetnews.com/images/w-1280,h-720,format-jpg,imgid-01m02grjd9yqr3z4g8wsm3nkn8,imgname-a-barber-s-patriotism-in-bagalkot-1786791086505.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಾಗಲಕೋಟೆ: &lt;/strong&gt;ದೇಶದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್&zwnj; 15) ಸಂಭ್ರಮ ಮನೆಮಾಡಿದೆ. ದೇಶಪ್ರೇಮವನ್ನು ವ್ಯಕ್ತಪಡಿಸಲು ಪ್ರತಿಯೊಬ್ಬರೂ ಒಂದೊಂದು ದಾರಿ ಕಂಡುಕೊಳ್ಳುತ್ತಾರೆ. ಆದರೆ ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದ ನಿವಾಸಿಯೊಬ್ಬರು ಕಳೆದ 21 ವರ್ಷಗಳಿಂದ ವಿಭಿನ್ನ ಹಾಗೂ ಮಾದರಿ ಸೇವೆಯ ಮೂಲಕ ದೇಶಭಕ್ತಿ ಮೆರೆದು ಎಲ್ಲರ ಗಮನ ಸೆಳೆದಿದ್ದಾರೆ. ಅವರೇ ಮುತ್ತಪ್ಪ ಹಡಪದ.&lt;/p&gt;&lt;h2&gt;&lt;strong&gt;ಸ್ವಾತಂತ್ರ್ಯ ದಿನದಂದು ಉಚಿತ ಸೇವೆ!&lt;/strong&gt;&lt;/h2&gt;&lt;p&gt;ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಮುತ್ತಪ್ಪ ಹಡಪದ ಅವರು ಸಣ್ಣದೊಂದು ಕ್ಷೌರದ ಅಂಗಡಿ ನಡೆಸುತ್ತಿದ್ದಾರೆ. ಪ್ರತಿ ವರ್ಷ ಆಗಸ್ಟ್&zwnj; 15 ರಂದು ತಮ್ಮ ಅಂಗಡಿಯನ್ನು ಸಣ್ಣ ಸಣ್ಣ ತ್ರಿವರ್ಣ ಧ್ವಜಗಳಿಂದ ಅಂದವಾಗಿ ಅಲಂಕರಿಸುವ ಇವರು, ಅಂದು ತಮ್ಮ ಬಳಿ ಬರುವ ಎಲ್ಲ ಗ್ರಾಹಕರಿಗೂ ಉಚಿತವಾಗಿ ಕ್ಷೌರ (Haircut) ಮತ್ತು ಶೇವಿಂಗ್&zwnj; ಸೇವೆ ನೀಡುತ್ತಾರೆ. ಈ ಮೂಲಕ ದೇಶಕ್ಕಾಗಿ ತಮ್ಮದೇ ಆದ ಪುಟ್ಟ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ.&lt;/p&gt;&lt;p&gt;ಗ್ರಾಮದ ಹಿರಿಯರ ಸಲಹೆಯಂತೆ ಆರಂಭವಾದ ಈ ವಿಶಿಷ್ಟ ಸೇವಾ ಕಾರ್ಯವನ್ನು ಮುತ್ತಪ್ಪ ಅವರು ಕಳೆದ 21 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೇವಲ ಉಚಿತ ಸೇವೆ ನೀಡುವುದಷ್ಟೇ ಅಲ್ಲದೇ ಗ್ರಾಮದ ಹಿರಿಯರು, ಅಶಕ್ತರು, ವಿಕಲಚೇತನರು ಹಾಗೂ ಬುದ್ಧಿಮಾಂದ್ಯರು ಸೇರಿದಂತೆ ಸಮಾಜದ ಅಗತ್ಯವಿರುವ ವರ್ಗದವರಿಗೆ ಅಕ್ಕರೆಯಿಂದ ಸೇವೆ ಒದಗಿಸುತ್ತಾರೆ. ದೇಶಕ್ಕಾಗಿ ದೊಡ್ಡ ಮಟ್ಟದಲ್ಲಿ ಸೇವೆ ಮಾಡಲು ಸಾಧ್ಯವಾಗದಿದ್ದರೂ ತಮ್ಮ ವೃತ್ತಿಯ ಮೂಲಕವೇ ಸಮಾಜಸೇವೆ ಮಾಡುತ್ತಿರುವ ಮುತ್ತಪ್ಪ ಅವರ ಕಾರ್ಯ ನಿಜಕ್ಕೂ ವಿಭಿನ್ನವಾಗಿದೆ.&lt;/p&gt;&lt;p&gt;ತಮ್ಮ ಪುಟ್ಟ ಅಂಗಡಿಯಲ್ಲೇ ದೇಶಭಕ್ತಿಯ ಭಾವನೆಯನ್ನು ಮೂಡಿಸಿ, ಸಮಾಜದ ಹಿಂದುಳಿದ ಹಾಗೂ ಅಶಕ್ತ ವರ್ಗದವರಿಗೆ ನೆರವಾಗುತ್ತಿರುವ ಮುತ್ತಪ್ಪ ಹಡಪದ ಅವರ ಕಾರ್ಯಕ್ಕೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ. ಪ್ರತಿ ವರ್ಷವೂ ತಪ್ಪದೇ ಈ ಸೇವೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಮುತ್ತಪ್ಪ ಅವರ ಸಮಾಜಮುಖಿ ಕಳಕಳಿಗೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನತೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದಾರೆ. ದೇಶಭಕ್ತಿ ಎಂದರೆ ಕೇವಲ ಭಾಷಣ ಅಥವಾ ಆಚರಣೆಯಲ್ಲ, ಅದು ನಮ್ಮ ದೈನಂದಿನ ಬದುಕಿನಲ್ಲಿ ಮತ್ತು ಇತರರಿಗೆ ನೀಡುವ ಸೇವೆಯಲ್ಲೂ ಇರಬೇಕು ಎಂಬುದಕ್ಕೆ ಮುತ್ತಪ್ಪ ಅವರೇ ಒಂದು ಪ್ರೇರಣೆಯಾಗಿದ್ದಾರೆ.&lt;/p&gt;]]></content:encoded>
            <category>bagalkot</category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bagalkot/mutthappa-hadapada-a-barber-from-bagalkot-has-been-offering-free-haircuts-on-independence-day-for-the-past-21-years-gkn/articleshow-z6fx48t"/>
        </item>
    </channel>
</rss>
