<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 13 Sep 2026 10:20:00 +0530</lastBuildDate>
        <atom:link href="https://kannada.asianetnews.com/rss" rel="self" type="application/rss+xml"/>
        <item>
            <title><![CDATA[ಸೂಪರ್ ಕ್ಲೈಮ್ಯಾಕ್ಸ್ ಕಥೆಯ ತಮಿಳು & ಮಲಯಾಳಂ ಈ ಸಿನಿಮಾ ನೋಡಿದ್ರೆ ಮನಸ್ಸು ನಿರಾಳ!]]></title>
            <link>https://kannada.asianetnews.com/movie-reviews/a-movie-with-a-superb-climax-watching-the-tamil-meiyazhagan-malayalam-kishkindha-kaandam-leaves-you-feeling-at-peace-mrq/articleshow-erof222</link>
            <guid isPermaLink="true">https://kannada.asianetnews.com/movie-reviews/a-movie-with-a-superb-climax-watching-the-tamil-meiyazhagan-malayalam-kishkindha-kaandam-leaves-you-feeling-at-peace-mrq/articleshow-erof222</guid>
            <pubDate>Sun, 13 Sep 2026 10:12:56 +0530</pubDate>
            <description><![CDATA[ಮಲಯಾಳಂ ಮತ್ತು ತಮಿಳು ಚಿತ್ರರಂಗದ ಸರಳ ಹಾಗೂ ಮನಮುಟ್ಟುವ ಕಥೆಗಳು ಪ್ರೇಕ್ಷಕರನ್ನು ಸೆಳೆಯುತ್ತವೆ. ಈ ವಾರಾಂತ್ಯದಲ್ಲಿ ಕುಟುಂಬದೊಂದಿಗೆ ನೋಡಬಹುದಾದ ಎರಡು ಅದ್ಭುತ ಸಿನಿಮಾಗಳನ್ನು ಇಲ್ಲಿ ಪರಿಚಯಿಸಲಾಗಿದೆೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ch63w81bwsgv8yp21ma4g9,imgname-movie-1789274558344.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಾ&lt;/strong&gt;ರತದ ದಕ್ಷಿಣದ ಸಿನಿಮಾಗಳು ಸರಳವಾದ ಕಥೆಯನ್ನು ತೆರೆಯ ಮೇಲೆ ಅದ್ಭುತವಾಗಿ ತೆಗೆದುಕೊಂಡು ಬರಲಾಗುತ್ತದೆ. ಮಾಲಿವುಡ್&zwnj;ನ ಸಿನಿಮಾಗಳು ಕೇರಳದ ಎಲ್ಲೋ ಒಂದು ಮನೆಯಲ್ಲಿ ನಡೆಯುವ ಕಥೆ ಎಲ್ಲಿಯೂ ಶಿಫ್ಟ್ ಆಗಲ್ಲ. ಒಂದು ಮನೆ ಮತ್ತು ನಾಲ್ಕೈದು ಪಾತ್ರಗಳಲ್ಲೇ ಸಿನಿಮಾ ಮುಗಿದು ಹೋಗುತ್ತದೆ. ಸಿನಿಮಾ ಮುಕ್ತಾಯಗೊಂಡಾಗ ಎಷ್ಟೊಂದು ಸರಳ ಅಲ್ಲವಾ ಎಂಬ ಉದ್ಘಾರದ ಜೊತೆ ಮನಸ್ಸಿನಲ್ಲೊಂದು ನಿರಾಳತೆಯುಂಟಾಗುತ್ತದೆ. ಈ ರೀತಿಯಾಗಿ ಮಲಯಾಳಂ ಸಿನಿಮಾಗಳು ವೀಕ್ಷಕರನ್ನು ಕೊನೆಯವರೆಗೂ ತೆಗೆದುಕೊಂಡು ಹೋಗುತ್ತದೆ. ಸಿನಿಮಾ ಮುಗಿದ ಬಳಿಕ ಕಥೆ ನಿಮ್ಮೊಂದಿಗೆ ಸಾಗುತ್ತದೆ. ಚಿತ್ರದ ಒಂದೊಂದು ಸನ್ನಿವೇಶಗಳು ಕಣ್ಮುಂದೆ ಬಂದು ನಿಮ್ಮ ಮನಸ್ಸಿಗೆ ಹೊಸತನದ ಕೆಲಸ ನೀಡುತ್ತವೆ.&lt;/p&gt;&lt;p&gt;ಸದ್ಯ ಸಾಲು ಸಾಲು ರಜೆಗಳಿದ್ದು ಅಥವಾ ವೀಕೆಂಡ್&zwnj;ಗಳಲ್ಲಿ ಕುಟುಂಬಸ್ಥರೊಂದಿಗೆ ಈ ಮಲಯಾಳಂ ಮತ್ತು ತಮಿಳಿನ ಭಾಷೆಯ ಸಿನಿಮಾ ನೋಡಬಹುದು. ಈ ಎರಡು ಸಿನಿಮಾಗಳು OTT ಪ್ಲಾಟ್&zwnj;ಫಾರಂನಲ್ಲಿದ್ದು, ಕನ್ನಡ ಭಾಷೆಯಲ್ಲಿಯೂ ನೋಡಬಹುದಾಗಿದೆ. ಆ ಎರಡು ಸಿನಿಮಾಗಳು ಯಾವವು ಎಂದು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;1.ಕಿಷ್ಕಿಂಧ ಕಾಂಡಂ (Kishkindha Kaandam)&lt;/strong&gt;&lt;/h2&gt;&lt;p&gt;ಇಂದೊಂದು ಮಿಸ್ಟರಿ ಆಂಡ್ ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಅರಣ್ಯ ಪ್ರದೇಶದಲ್ಲಿನ ಮನೆ ಕಥೆಯನ್ನು ಹೊಂದಿದೆ. ಈ ಸಿನಿಮಾಗೆ IMDbಯಲ್ಲಿ 8 ರೇಟಿಂಗ್ ಸಿಕ್ಕಿದ್ದು, ಚಿತ್ರದಲ್ಲಿ ಆಸಿಫ್ ಅಲಿ ಮತ್ತು ವಿಜಯರಾಘವನ್ ಅಭಿನಯ ನಿಮ್ಮನ್ನು ಮೋಡಿ ಮಾಡುತ್ತದೆ. ಅದರಲ್ಲಿಯೂ ಅಪ್ಪು ಪಿಳ್ಳೈ ಪಾತ್ರದಲ್ಲಿ ವಿಜಯರಾಘವನ್ ಜೀವಿಸಿದ್ದಾರೆ.&lt;/p&gt;&lt;p&gt;ಮದುವೆಯಾಗಿ ಬಂದ ಸೊಸೆ ಹಲವು ಆಶ್ಚರ್ಯಕರ ಘಟನೆಗಳನ್ನು ತುಂಬಾನೇ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಒಂದೊಂದು ಘಟನೆಯ ಎಳೆ ಬಿಡಿಸುತ್ತಾ ಹೋದಂತೆ ತಂದೆ-ಮಗನ ಭಾವನಾತ್ಮಕ ಮತ್ತು ಮರೆಯಲಾಗದ ಗುಟ್ಟಿನ ಸುತ್ತ ಕಥೆ ಸಾಗುತ್ತದೆ.&lt;/p&gt;&lt;p&gt;&lt;strong&gt;ಬಿಡುಗಡೆ: &lt;/strong&gt;19ನೇ ನವೆಂಬರ್ 2024&lt;/p&gt;&lt;p&gt;&lt;strong&gt;OTT ಪ್ಲಾಟ್&zwnj;ಫಾರಂ: &lt;/strong&gt;Jiohotstar, Prime Video&lt;/p&gt;&lt;p&gt;&lt;strong&gt;ರೇಟಿಂಗ್: &lt;/strong&gt;8/10&lt;/p&gt;&lt;h3&gt;&lt;strong&gt;2.ಮೀಯಳಗನ್&zwnj; (Meiyazhagan)&lt;/strong&gt;&lt;/h3&gt;&lt;p&gt;ತಮಿಳು ಭಾಷೆಯ ಮೀಯಳಗನ್ ಸಿನಿಮಾ OTT ಪ್ಲಾಟ್&zwnj;ಫಾರಂ ಪ್ರವೇಶಿಸಿದಾಗ ಸೋಶಿಯಲ್ ಮೀಡಿಯಾದಲ್ಲಿ ಆರೋಗ್ಯಕರ ಸಂಚಲನವನ್ನೇ ಸೃಷ್ಟಿಸಿತ್ತು. ಊರು ತೊರೆದು ಪಟ್ಟಣ ಸೇರಿದ ಬಹುತೇಕರ ಜೀವನಕ್ಕೆ ಹತ್ತಿರವಾದ ಈ ಸಿನಿಮಾವನ್ನು ಕುಟುಂಬದ ಜೊತೆ ಕುಳಿತು ವೀಕ್ಷಿಸಬಹುದು. ಕಾರ್ತಿ ಮತ್ತು ಅರವಿಂದ್ ಸ್ವಾಮಿ ಅವರ ಭಾವನಾತ್ಮಕ ಹಾಗೂ ಸಹಜ ನಟನೆ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು. ಸಿಟಿಯಲ್ಲಿದ್ದ ವ್ಯಕ್ತಿ, ಸೋದರಿಯ ಮದುವೆಗಾಗಿ ತನ್ನೂರಿಗೆ ಹಲವು ವರ್ಷಗಳ ನಂತ್ರ ಹೋಗುತ್ತಾನೆ. ಇಲ್ಲಿಂದ ಮೀಯಳಗನ್ ಕಥೆ ಆರಂಭಗೊಳ್ಳುತ್ತದೆ. ಮನಸ್ಸಿಗೆ ಹಿತ ನೀಡೋದರ ಜೊತೆ ಚಿತ್ರದ ಒಂದೊಂದು ದೃಶ್ಯಗಳು ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿ ಹಾಕುತ್ತವೆ. ಬಾಲ್ಯದ ನೆನಪುಗಳನ್ನು ತೆರೆಯ ಮೇಲೆ ಅತ್ಯಂತ ಸರಳವಾಗಿ ತೆಗೆದುಕೊಂಡು ಬಂದಿರೋದು ಚಿತ್ರದ ಹೈಲೈಟ್&lt;/p&gt;&lt;p&gt;&lt;strong&gt;ಬಿಡುಗಡೆ:&lt;/strong&gt; 27ನೇ ಸೆಪ್ಟೆಂಬರ್ 2024&lt;/p&gt;&lt;p&gt;&lt;strong&gt;OTT ಪ್ಲಾಟ್&zwnj;ಫಾರಂ:&lt;/strong&gt; Netflix&lt;/p&gt;&lt;p&gt;&lt;strong&gt;ರೇಟಿಂಗ್:&lt;/strong&gt; 8.5/10&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಣ್ಣೀರಾಗಿಸುವ &lsquo;ಮೇಯಗಳನ್&rsquo; ನೋಡಿದ್ರೆ ಊರಿಗೆ ಮರಳುವಂತಾಗುತ್ತೆ!&lt;/strong&gt;&lt;/p&gt;]]></content:encoded>
            <category><![CDATA[movie-reviews]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/movie-reviews/a-movie-with-a-superb-climax-watching-the-tamil-meiyazhagan-malayalam-kishkindha-kaandam-leaves-you-feeling-at-peace-mrq/articleshow-erof222"/>
        </item>
        <item>
            <title><![CDATA[ಬೆಂಗಳೂರಿನ ಈ ರಸ್ತೆಯಲ್ಲಿ ಓಡಾಡೋಕೆ ಆಗ್ತಾನೇ ಇಲ್ಲ ಸ್ವಾಮಿ...! ದುರಸ್ತಿ ಮಾಡುವಂತೆ ಪಿಎಂ ಮೋದಿಗೆ ಪತ್ರ]]></title>
            <link>https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8</link>
            <guid isPermaLink="true">https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8</guid>
            <pubDate>Sun, 13 Sep 2026 10:10:46 +0530</pubDate>
            <description><![CDATA[ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ ದುಸ್ಥಿತಿಯಿಂದ ಬೇಸತ್ತ ನಾಗರಿಕರೊಬ್ಬರು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ವಿರುದ್ಧ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಟಿವಿಎಸ್ ಕ್ರಾಸ್‌ನಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ಈ ಮಾರ್ಗದ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cgq7tagmf58716b4h73wt9,imgname-bengaluru-peenya-road-1789274070858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): 'ಆ&lt;/strong&gt;ಗ್ತಿಲ್ಲ ಸ್ವಾಮಿ.. ಆಗ್ತಿಲ್ಲ.. ಈ ರಸ್ತೆಯಲ್ಲಿ ದಿನವೂ ಓಡಾಡೋಕೆ ಆಗ್ತಾನೇ ಇಲ್ಲ!' &ndash; ಇದು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಕೈಗಾರಿಕಾ ಪ್ರದೇಶ ಪೀಣ್ಯದ ರಸ್ತೆಗಳಲ್ಲಿ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರ ಆಕ್ರೋಶದ ನುಡಿ. ವರ್ಷಾನುಗಟ್ಟಲೆ ದೂರು ನೀಡಿದರೂ ಸ್ಥಳೀಯ ಆಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ಎಚ್ಚೆತ್ತುಕೊಳ್ಳದ ಕಾರಣ ಬೇಸತ್ತ ಬೆಂಗಳೂರಿನ ನಿವಾಸಿಯೊಬ್ಬರು ಇದೀಗ ನೇರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕದ ತಟ್ಟಿದ್ದಾರೆ.&lt;/p&gt;&lt;p&gt;ಪೀಣ್ಯದ ಟಿವಿಎಸ್ ಕ್ರಾಸ್&zwnj;ನಿಂದ ಹೊರವರ್ತುಲ ರಸ್ತೆ (Outer Ring Road) ಸಂಪರ್ಕಿಸುವ ರಸ್ತೆಯ ದುಃಸ್ಥಿತಿ ಸರಿಪಡಿಸುವಂತೆ ಕೋರಿ ಬೆಂಗಳೂರಿನ ಜಾಗೃತ ನಾಗರಿಕ ದೀಪಕ್ ಎನ್ ಎಂಬುವವರು ಪ್ರಧಾನಿ ಕಾರ್ಯಾಲಯಕ್ಕೆ (PMO) ತುರ್ತು ಮಧ್ಯಪ್ರವೇಶ ಕೋರಿ ಅಧಿಕೃತ ಪತ್ರ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್&zwnj;ನಲ್ಲೇ ಈ ದುಸ್ಥಿತಿ!&lt;/strong&gt;&lt;/h2&gt;&lt;p&gt;ಪ್ರಧಾನಿ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ವಾಸ್ತವ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ದೀಪಕ್, 'ಏಷ್ಯಾದ ಅತಿದೊಡ್ಡ ಸಣ್ಣ ಕೈಗಾರಿಕೆಗಳ ತಾಣವಾಗಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಆದರೆ, ಟಿವಿಎಸ್ ಕ್ರಾಸ್&zwnj;ನಿಂದ ಹೊರವರ್ತುಲ ರಸ್ತೆಯವರೆಗಿನ ಮಾರ್ಗ ಸಂಪೂರ್ಣವಾಗಿ ಕಿತ್ತುಹೋಗಿದ್ದು, ಕಸ, ಧೂಳು ಮತ್ತು ಅಪಾಯಕಾರಿ ಗುಂಡಿಗಳಿಂದ ತುಂಬಿ ತುಳುಕುತ್ತಿದೆ. ನಿತ್ಯ ಸಾವಿರಾರು ಉದ್ಯೋಗಿಗಳು, ಸಾರ್ವಜನಿಕರು ಮತ್ತು ವ್ಯಾಪಾರ-ಕೈಗಾರಿಕಾ ವಾಹನಗಳು ಈ ಅಪಾಯಕಾರಿ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ' ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;'ಜನಸ್ಪಂದನ'ಕ್ಕೂ ಕ್ಯಾರೆ ಅನ್ನದ ಅಧಿಕಾರಿಗಳು!&lt;/strong&gt;&lt;/h2&gt;&lt;p&gt;ರಸ್ತೆ ದುರಸ್ತಿಗಾಗಿ ಸ್ಥಳೀಯ ಆಡಳಿತ, ಇ-ಮೇಲ್ ಮತ್ತು ರಾಜ್ಯ ಸರ್ಕಾರದ ಅಧಿಕೃತ &lsquo;ಜನಸ್ಪಂದನ&rsquo; ವೇದಿಕೆ ಮೂಲಕ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಒಮ್ಮೆ ಕಾಟಾಚಾರಕ್ಕೆ ಬಂದು ತೇಪೆ (ಪ್ಯಾಚ್ ವರ್ಕ್) ಹಾಕಲಾಯಿತಾದರೂ, ಒಂದೇ ಮಳೆಗೆ ಆ ಡಾಂಬರೆಲ್ಲ ಕೊಚ್ಚಿಹೋಗಿ ರಸ್ತೆ ಮತ್ತಷ್ಟು ಅಧ್ವಾನವಾಗಿದೆ. ಸದ್ಯ ನಡೆಯುತ್ತಿರುವ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದ್ದು, ಜನ ಸಾಮಾನ್ಯರು ದಿನನಿತ್ಯ ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ ಎಂದು ಪತ್ರದಲ್ಲಿ ಅಸಹಾಯಕತೆ ವ್ಯಕ್ತಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಧಾನಿ ಮಧ್ಯಪ್ರವೇಶಕ್ಕೆ ಅಂಗಲಾಚಿದ ನಾಗರಿಕ:&lt;/strong&gt;&lt;/h2&gt;&lt;p&gt;'ನಾವು ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸ ಹೊಂದಿದ್ದೇವೆ. ಪ್ರಧಾನಿ ಕಾರ್ಯಾಲಯವು ಈ ಕೂಡಲೇ ಮಧ್ಯಪ್ರವೇಶಿಸಿ, ಈ ರಸ್ತೆಯ ಎರಡೂ ಬದಿಯ ಕಾಮಗಾರಿಯನ್ನು ಅತ್ಯಂತ ತ್ವರಿತವಾಗಿ ಮತ್ತು ಗುಣಮಟ್ಟದಿಂದ ಪೂರ್ಣಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು' ಎಂದು ದೀಪಕ್ ಅವರು ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.&lt;/p&gt;&lt;p&gt;ಸ್ಥಳೀಯ ಕಾರ್ಪೊರೇಟರ್, ಶಾಸಕರು ಹಾಗೂ ಪಾಲಿಕೆ ಅಧಿಕಾರಿಗಳು ಕೇಳಬೇಕಾದ ಸಮಸ್ಯೆಗೆ ಪ್ರಧಾನಿ ಕಚೇರಿಗೆ ಪತ್ರ ಬರೆಯುವ ದುಸ್ಥಿತಿ ಬಂದಿರುವುದು ಬೆಂಗಳೂರಿನ ನಾಗರಿಕ ಮೂಲಸೌಕರ್ಯದ ನೈಜ ಚಿತ್ರಣಕ್ಕೆ ಕನ್ನಡಿ ಹಿಡಿದಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/peenya-road-pathetic-condition-bengalurian-writes-letter-prime-minister-modi-sat/articleshow-6gde3i8"/>
        </item>
        <item>
            <title><![CDATA[Ganesh Chaturthi 2026:  ಗಣಪತಿ ಹಬ್ಬಕ್ಕೆ ಹೂ, ಹಣ್ಣು ತರಕಾರಿ ದುಬಾರಿ!  ಇಂದಿನ ಬೆಲೆಗಳ ಪಟ್ಟಿ ಇಲ್ಲಿದೆ ನೋಡಿ]]></title>
            <link>https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</link>
            <guid isPermaLink="true">https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv</guid>
            <pubDate>Sun, 13 Sep 2026 09:23:39 +0530</pubDate>
            <description><![CDATA[ಗಣೇಶ ಹಬ್ಬದ ಹೊಸ್ತಿಲಲ್ಲಿ, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಬ್ಬದ ಪೂಜೆಗೆ ಅಗತ್ಯವಿರುವ ವಸ್ತುಗಳ ದರ ದುಪ್ಪಟ್ಟಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈ ಲೇಖನದಲ್ಲಿ ಬೆಂಗಳೂರಿನ ಮಾರುಕಟ್ಟೆಯಲ್ಲಿನ ಇಂದಿನ ಸಂಪೂರ್ಣ ದರಪಟ್ಟಿಯನ್ನು ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cdw694f4beq030xy3qa3zp,imgname-ganesh-chaturthi-market-price-hike-1789271087396.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13):&lt;/strong&gt; ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಎಲ್ಲೆಡೆ ಗಣಪತಿಪೂರ್ತಿಯನ್ನ ಭರ್ಜರಿಯಾಗಿ ಸ್ಥಾಪಿಸುತ್ತಿದ್ದಂತೆ ಇತ್ತ ಮಾರ್ಕೆಟ್&zwnj;ನಲ್ಲಿ ಹೂವು, ಹಣ್ಣು ತರಕಾರಿ ಬೆಲೆಗಳು ಗಗನಕ್ಕೇರಿವೆ. ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳು, ಹೂಗಳ ದರದಲ್ಲಂತೂ ಭಾರೀ ಏರಿಕೆಯಾಗಿದೆ. ಬೆಲೆ ಏರಿಕೆಯಾದರೂ ಜನ ಖರೀದಿಸಲು ಮುಗಿಬಿದ್ದಿದ್ದಿದ್ದಾರೆ.&lt;/p&gt;&lt;h2&gt;ಹಬ್ಬಕ್ಕೆ ಶಾಕ್ ಕೊಟ್ಟ ದರ ಏರಿಕೆ&lt;/h2&gt;&lt;p&gt;ಹೂವು ಹಣ್ಣುಗಳಲ್ಲದೆ ದಿನಸಿ ಸಾಮಾನು, ಹಬ್ಬದ ಸಾಮಗ್ರಿ ಕೂಡ ಬೆಲೆ ಏರಿಕೆಯಾಗಿದೆ. ಹಬ್ಬದ ಸಂಭ್ರಮದಲ್ಲಿ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸಾಮಾನ್ಯ ದಿನಗಳಲ್ಲಿ ಇದ್ದ ಹೂವಿನ ತೋರಣಗಳಿಗೆ ಇಂದು ಡಬಲ್ ಬೆಲೆ ಏರಿಕೆಯಾಗಿದೆ. ಯಾವ್ಯಾವ ಹೂಗಳು ಬೆಲೆ ಎಷ್ಟಿದೆ ಅಂತಾ ಇಂದಿನ ದರದಂತೆ ಇಲ್ಲಿ ಪಟ್ಟಿ ಸಿದ್ಧಪಡಿಸಲಾಗಿದೆ. ನೀವು ಹೂವು ಖರೀದಿಸುವ ಮುನ್ನ ಈ ಪಟ್ಟಿಯನ್ನು ಒಮ್ಮೆ ನೋಡಿ.&lt;/p&gt;&lt;p&gt;&lt;strong&gt;ಹೂಗಳ ಬೆಲೆ ಎಷ್ಟು&lt;/strong&gt;&lt;/p&gt;&lt;ul&gt; &lt;li&gt;ಸೇವಂತಿಗೆ 1kg : ₹350&lt;/li&gt; &lt;li&gt;ತಾವರೆ ಹೂವು (ಜೋಡಿ) : ₹50&lt;/li&gt; &lt;li&gt;ಗುಲಾಬಿ (ಬಟನ್) : 1kg ಗೆ 350&lt;/li&gt; &lt;li&gt;ಮಿಕ್ಸ್ ಹೂವು : 1kg : ₹300 - ₹400&lt;/li&gt; &lt;li&gt;ಕನಕಾಂಬರ (ಮೊಳ) : ₹50 : ₹2000 (1kg)&lt;/li&gt; &lt;li&gt;ಮಲ್ಲಿಗೆ (ಮೊಳ) : ₹50 : ₹1000 (1kg)&lt;/li&gt; &lt;li&gt;ತುಳಸಿ ತೋರಣ (ಮೊಳ) : ₹60&lt;/li&gt; &lt;li&gt;ಮಾವಿನ ಎಲೆ (ಕಟ್ಟು) : ₹10 - ₹30&lt;/li&gt; &lt;li&gt;ಬಾಳೆ ದಿಂಡು (ಜೋಡಿ) : ₹50 - ₹80&lt;/li&gt;&lt;/ul&gt;&lt;h2&gt;ಇಂದಿನ ಹಣ್ಣುಗಳ ದರ(KG) ಹೇಗಿದೆ?&lt;/h2&gt;&lt;ul&gt; &lt;li&gt;ಸೇಬು: ₹200 ರಿಂದ ₹300(1kg)&lt;/li&gt; &lt;li&gt;ದಾಳಿಂಬೆ: ₹100 ರಿಂದ ₹250(1kg)&lt;/li&gt; &lt;li&gt;ಸಪೋಟ: ₹150 ರಿಂದ ₹200(1kg)&lt;/li&gt; &lt;li&gt;ದ್ರಾಕ್ಷಿ: ₹120 ರಿಂದ ₹150 (1kg)&lt;/li&gt; &lt;li&gt;ಮೂಸಂಬಿ ಹಾಗೂ ಕಿತ್ತಳೆ: ₹80 ರಿಂದ ₹100(1kg)&lt;/li&gt; &lt;li&gt;ಬಾಳೆ ಹಣ್ಣು- 80 ರಿಂದ 150(1kg)&lt;/li&gt;&lt;/ul&gt;&lt;h3&gt;ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ದರ ಎಷ್ಟು?&lt;/h3&gt;&lt;ul&gt; &lt;li&gt;ಈರುಳ್ಳಿ: ₹60 ರಿಂದ ₹70(1KG)&lt;/li&gt; &lt;li&gt;ಹನಿಮೆಣಸಿನಕಾಯಿ : 40 ರಿಂದ 60(1KG)&lt;/li&gt; &lt;li&gt;ಬೀಟ್&zwnj;ರೂಟ್: ₹50 ರಿಂದ ₹60(1KG)&lt;/li&gt; &lt;li&gt;ಬೆಳ್ಳುಳ್ಳಿ: ₹200 ರಿಂದ ₹250&lt;/li&gt; &lt;li&gt;ನಿಂಬೆಹಣ್ಣು : (ಒಂದಕ್ಕೆ) ₹8 ರಿಂದ ₹15&lt;/li&gt; &lt;li&gt;ನುಗ್ಗೆಕಾಯಿ : (ಒಂದಕ್ಕೆ)₹10 ರಿಂದ ₹15&lt;/li&gt; &lt;li&gt;ಕ್ಯಾಪ್ಸಿಕಂ ₹50-₹70&lt;/li&gt; &lt;li&gt;ಬಟಾಣಿ: ₹ 140 ರಿಂದ 160&lt;/li&gt;&lt;/ul&gt;&lt;h3&gt;ಇಂದಿನ ದಿನಸಿ ಸಾಮಗ್ರಿ ಬೆಲೆ ಎಷ್ಟು?&lt;/h3&gt;&lt;ul&gt; &lt;li&gt;ಬೆಲ್ಲ : ₹50 ರಿಂದ ₹55&lt;/li&gt; &lt;li&gt;ತೊಗರಿಬೇಳೆ : ₹160 ರಿಂದ ₹170&lt;/li&gt; &lt;li&gt;ಹುರಿಗಡಲೆ :₹150 ರಿಂದ ₹180&lt;/li&gt; &lt;li&gt;ಕಡಲೆಬೀಜ : ₹100 ರಿಂದ ₹140&lt;/li&gt; &lt;li&gt;ಸಕ್ಕರೆ : ₹60 ರಿಂದ ₹80&lt;/li&gt; &lt;li&gt;ಚಿರೋಟಿ ರವೆ : ₹90 ರಿಂದ ₹100&lt;/li&gt; &lt;li&gt;ಮೈದಾ ಹಿಟ್ಟು : ₹45 ರಿಂದ ₹50&lt;/li&gt; &lt;li&gt;ಕಡಲೆಕಾಳು : ₹90 ರಿಂದ ₹100&lt;/li&gt; &lt;li&gt;ಅಡುಗೆ ಎಣ್ಣೆ : ₹190 ರಿಂದ ₹210 (ಆಯಾ ಬ್ರ್ಯಾಂಡ್ಗಳು ಮೇಲೆ ದರ ಬದಲಾಗುತ್ತದೆ.&lt;/li&gt;&lt;/ul&gt;]]></content:encoded>
            <category><![CDATA[state]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/state/fruits-flowers-and-vegetables-price-hike-in-market-ahead-of-ganesh-chaturthi-festival-rav/articleshow-kke42wv"/>
        </item>
        <item>
            <title><![CDATA[ಹಾವು ಕಚ್ಚಿದಾಗ ಸೈಕಲ್ ತುಳಿದು ಆಸ್ಪತ್ರೆಗೆ ಹೋದ! 'ಇಂಥ ತಪ್ಪು ಜೀವಕ್ಕೆ ಕುತ್ತು' ಎಂದ ಉರಗ ತಜ್ಞ ಗೌರಿ ಕಾಳಿಂಗ]]></title>
            <link>https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp</link>
            <guid isPermaLink="true">https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp</guid>
            <pubDate>Sun, 13 Sep 2026 09:22:46 +0530</pubDate>
            <description><![CDATA[ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cdq33b6bxmkb9tbrz4kpz3,imgname-indian-common-krait-snake-1789270920299.jpg" type="image/jpeg" height="390" width="690"/>
            <content:encoded><![CDATA[&lt;p&gt;ಅತ್ಯಂತ ವಿಷಕಾರಿ ಹಾವು ಕಚ್ಚಿದ ವ್ಯಕ್ತಿಯೊಬ್ಬರು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಉರಗ ತಜ್ಞ ಗೌರಿ ಕಾಳಿಂಗ ಅವರು ಹಾವು ಕಡಿತದ ನಂತರ ಮಾಡಬಾರದ ತಪ್ಪುಗಳ ಬಗ್ಗೆ ಎಚ್ಚರಿಸಿದ್ದು, ಸರಿಯಾದ ಪ್ರಥಮ ಚಿಕಿತ್ಸೆ ಮತ್ತು ಕ್ರಮಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಂಗಳೂರು/ಭುವನೇಶ್ವರ (ಸೆ.13): &lt;/strong&gt;ಹಾವು ಕಚ್ಚಿದರೆ ಮನುಷ್ಯ ಗಾಬರಿಯಾಗುವುದು ಸಹಜ. ಆದರೆ ಒಡಿಶಾದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತನಗೆ ಕಚ್ಚಿದ ಹಾವನ್ನೇ ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡು, ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ಹೋಗಿರುವ ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಿದರೂ ಅವರ ಪರಿಸ್ಥಿತಿ ಈಗ ಗಂಭೀರವಾಗಿದೆ! ಇದಕ್ಕೆ ಕಾರಣವೇನು? ಹಾವು ಕಚ್ಚಿದಾಗ ಜನಸಾಮಾನ್ಯರು ಮಾಡುವ ಇಂತಹ ಪ್ರಮಾದಗಳೇನು ಎಂಬುದರ ಕುರಿತು ಖ್ಯಾತ ಉರಗ ತಜ್ಞ ಗೌರಿ ಕಾಳಿಂಗ ಮಹತ್ವದ ಎಚ್ಚರಿಕೆ ಹಾಗೂ ಸಲಹೆಗಳನ್ನು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಏನಿದು ಘಟನೆ?&lt;/strong&gt;&lt;/p&gt;&lt;p&gt;ಒಡಿಶಾದ ಮಯೂರ್&zwnj;ಭಂಜ್ ಜಿಲ್ಲೆಯ ಏತ ನೀರಾವರಿ ಯೋಜನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ 37 ವರ್ಷದ ವ್ಯಕ್ತಿಗೆ ವಿಷಕಾರಿ ಹಾವೊಂದು ಕಚ್ಚಿದೆ. ತಕ್ಷಣ ಆತ ಹಾವನ್ನು ಹುಡುಕಿ ಸಾಯಿಸಿ, ವೈದ್ಯರಿಗೆ ತೋರಿಸಲೆಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಸೈಕಲ್ ತುಳಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;ಸೈಕಲ್ ತುಳಿದಿದ್ದೇ ದೊಡ್ಡ ಪ್ರಮಾದವಾಗಿದ್ದು ಏಕೆ?&lt;/strong&gt;&lt;/p&gt;&lt;p&gt;ಈ ಘಟನೆಯನ್ನು ವಿಶ್ಲೇಷಿಸಿರುವ ಉರಗ ತಜ್ಞ ಗೌರಿ ಕಾಳಿಂಗ, 'ವ್ಯಕ್ತಿ ಆದಷ್ಟು ಬೇಗ ಆಸ್ಪತ್ರೆ ತಲುಪಲು ಯತ್ನಿಸಿದ್ದು ಒಳ್ಳೆಯದೇ. ಆದರೆ, ಆತ ಸೈಕಲ್ ತುಳಿದುಕೊಂಡು ಹೋದದ್ದು ಆತನ ಜೀವಕ್ಕೇ ಕಂಟಕ ತಂದಿಟ್ಟಿದೆ. ಸೈಕಲ್ ತುಳಿಯುವಾಗ ಅಥವಾ ವೇಗವಾಗಿ ಓಡಿದಾಗ ನಮ್ಮ ಹೃದಯ ಬಡಿತ ಹಾಗೂ ರಕ್ತಪರಿಚಲನೆ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ ಹಾವಿನ ವಿಷವು ಅತಿ ವೇಗವಾಗಿ ಇಡೀ ದೇಹಕ್ಕೆ ಮತ್ತು ಪ್ರಮುಖ ಅಂಗಾಂಗಗಳಿಗೆ ಆವರಿಸುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಈಗ ಅತ್ಯಂತ ಗಂಭೀರ (ಕ್ರಿಟಿಕಲ್) ಸ್ಥಿತಿಗೆ ತಲುಪಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಹಾವು ಕಚ್ಚಿದಾಗ ಏನು ಮಾಡಬೇಕು?:&lt;/strong&gt;&lt;/p&gt;&lt;p&gt;ಹಾವು ಕಚ್ಚಿದ ತಕ್ಷಣ ಗಾಬರಿಯಾಗಬಾರದು. ಯಾವುದೇ ಕಾರಣಕ್ಕೂ ಓಡುವುದು, ಸೈಕಲ್ ತುಳಿಯುವುದು ಅಥವಾ ಅತಿಯಾದ ದೈಹಿಕ ಶ್ರಮ ಮಾಡಬಾರದು. ಕಡಿತಕ್ಕೊಳಗಾದ ಅಂಗವನ್ನು ಅಲುಗಾಡಿಸದೆ ಶಾಂತರಾಗಿರಬೇಕು. ಬೈಕ್, ಆಟೋ ಅಥವಾ ಕಾರಿನಂತಹ ವಾಹನದಲ್ಲಿ ಕುಳಿತು ಆದಷ್ಟು ಬೇಗ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ (Anti-venom) ಚಿಕಿತ್ಸೆ ಪಡೆಯಬೇಕು.&lt;/p&gt;&lt;img&gt;&lt;p&gt;&lt;strong&gt;ಸ್ವಯಂಘೋಷಿತ ಪರಿಸರವಾದಿಗಳು &amp;amp; ಸರ್ಕಾರದ ನೀತಿಯ ವಿರುದ್ಧ ಆಕ್ರೋಶ!&lt;/strong&gt;&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಇತ್ತೀಚಿನ ಹಾವು ಸಂರಕ್ಷಣಾ ಆದೇಶದ ವಿರುದ್ಧವೂ ಗೌರಿ ಕಾಳಿಂಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅನುಭವಿ ಸ್ವತಂತ್ರ ಹಾವು ಸಂರಕ್ಷಕರು ಹಾವುಗಳನ್ನು ಹಿಡಿಯುವುದನ್ನು ನಿಲ್ಲಿಸಿದ್ದಾರೆ. ಕೇವಲ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಹಾವು ಹಿಡಿಯಬೇಕೆಂಬ ನಿಯಮ ಜಾರಿಗೆ ಬಂದಿದೆ. ಇದರಿಂದಾಗಿ ಸಾರ್ವಜನಿಕರಿಗೆ ಸಕಾಲದಲ್ಲಿ ನೆರವು ಸಿಗದೆ ಹಾವು ಕಡಿತದ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ' ಎಂದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೀಬೋರ್ಡ್ ವಾರಿಯರ್ಸ್&zwnj;ಗೆ ತರಾಟೆ:&lt;/strong&gt;&lt;/p&gt;&lt;p&gt;'ಹಾವಿನ ಬಗ್ಗೆ ಕನಿಷ್ಠ ಜ್ಞಾನವಿಲ್ಲದ, ಜೀವನದಲ್ಲಿ ಒಂದೇ ಒಂದು ಹಾವನ್ನೂ ರಕ್ಷಿಸದ, ಕೇವಲ ಮೊಬೈಲ್ ಮತ್ತು ಕಂಪ್ಯೂಟರ್ ಮುಂದೆ ಕುಳಿತು ಪರಿಸರ ರಕ್ಷಣೆ ಮಾತನಾಡುವ ಬೆಂಗಳೂರಿನಂತಹ ನಗರಗಳ 'ಸ್ವಯಂಘೋಷಿತ ಪರಿಸರವಾದಿಗಳು' ಇದಕ್ಕೆ ಪ್ರಮುಖ ಕಾರಣ. ಇವರು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸಿ, ಸರ್ಕಾರದ ಮೇಲೆ ಅನಗತ್ಯ ಒತ್ತಡ ತಂದು ನೈಜ ಉರಗ ರಕ್ಷಕರ ಕೈಕಟ್ಟಿ ಹಾಕಿದ್ದಾರೆ' ಎಂದು ಕಿಡಿಕಾರಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕೇರಳ, ತಮಿಳುನಾಡು ಮಾದರಿ ಅಗತ್ಯ:&lt;/strong&gt;&lt;/p&gt;&lt;p&gt;'ಪಕ್ಕದ ಕೇರಳ ಮತ್ತು ತಮಿಳುನಾಡು ಸರ್ಕಾರಗಳನ್ನು ನೋಡಿ ಕಲಿಯಬೇಕಿದೆ. ಅಲ್ಲಿ ಸರ್ಕಾರವೇ ವಾಲಂಟಿಯರ್&zwnj;ಗಳನ್ನು (ಸ್ವಯಂಸೇವಕರು) ಒಗ್ಗೂಡಿಸಿಕೊಂಡು &lsquo;ಸರ್ಪ&rsquo; (SARPA) ದಂತಹ ಮೊಬೈಲ್ ಆ್ಯಪ್ ರೂಪಿಸಿದೆ. ಆ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗುತ್ತಿದೆ. ನಮ್ಮಲ್ಲೂ ಇಂತಹ ಪ್ರಾಯೋಗಿಕ ವ್ಯವಸ್ಥೆ ಬರಬೇಕಿದೆ. ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಎಚ್ಚರದಿಂದಿರಿ, ಆಸ್ಪತ್ರೆಗೆ ಬೇಗ ದಾಖಲಾಗಿ ಜೀವ ಉಳಿಸಿಕೊಳ್ಳಿ' ಎಂದು ಗೌರಿ ಕಾಳಿಂಗ ಮನವಿ ಮಾಡಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/snakebite-first-aid-why-exertion-is-fatal-gowri-kalinga-slams-karnataka-policy-sat-5dsughp"/>
        </item>
        <item>
            <title><![CDATA[Cotton Blouse: ಆಫೀಸ್ ಹಾಗೂ ದಿನಬಳಕೆಗೆ ಸೂಪರ್ ಆಗಿರೋ ಟ್ರೆಂಡಿ ಕಾಟನ್ ಬ್ಲೌಸ್ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stylish-cotton-blouse-ideas-for-work-and-everyday-fashion-gvd-sgu9sid</link>
            <guid isPermaLink="true">https://kannada.asianetnews.com/webstories/fashion/stylish-cotton-blouse-ideas-for-work-and-everyday-fashion-gvd-sgu9sid</guid>
            <pubDate>Sun, 13 Sep 2026 09:15:02 +0530</pubDate>
            <description><![CDATA[ಆಫೀಸ್ ಹಾಗೂ ದಿನನಿತ್ಯದ ಬಳಕೆಗೆ ಸೂಕ್ತವಾದ ಕಾಟನ್ ಬ್ಲೌಸ್ ಡಿಸೈನ್‌ಗಳು ಇಲ್ಲಿವೆ. ಮೃದುವಾದ ಬಟ್ಟೆ, ವಿಶಿಷ್ಟ ನೆಕ್ ಡಿಸೈನ್ ಹಾಗೂ ಟ್ರೆಂಡಿ ಸ್ಲೀವ್ಸ್ ಇರುವ ಈ ಬ್ಲೌಸ್‌ಗಳು ದಿನವಿಡೀ ನಿಮಗೆ ಆರಾಮ ಹಾಗೂ ಸುಂದರ ಲುಕ್ ನೀಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1pr4a5p6fw59zvz4vrdyqb,imgname-trendy-printed-cotton-blouse-designs--2--1777100132677.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stylish-cotton-blouse-ideas-for-work-and-everyday-fashion-gvd-sgu9sid"/>
        </item>
        <item>
            <title><![CDATA[Google Maps ಟ್ರಾಫಿಕ್ ಜಾಮ್ ಹೇಗೆ ಪತ್ತೆ ಮಾಡುತ್ತೆ? 99% ಜನರಿಗೆ ಗೊತ್ತಿಲ್ಲದ ಸತ್ಯ!]]></title>
            <link>https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7</link>
            <guid isPermaLink="true">https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7</guid>
            <pubDate>Sun, 13 Sep 2026 09:14:12 +0530</pubDate>
            <description><![CDATA[Google Maps‌ನಲ್ಲಿ ರಸ್ತೆ ಕೆಂಪು ಬಣ್ಣಕ್ಕೆ ತಿರುಗಿ ಟ್ರಾಫಿಕ್ ಜಾಮ್ ತೋರಿಸುವುದು ಹೇಗೆ? ಬಳಕೆದಾರರ GPS ಸ್ಥಳ, ನ್ಯಾವಿಗೇಶನ್ ಮಾರ್ಗ ಮತ್ತು ಸಾಧನದ ಕೆಲವು ಸೆನ್ಸರ್ ಡೇಟಾವನ್ನು ಬಳಸಿಕೊಂಡು Google ರಸ್ತೆಗಳಲ್ಲಿ ವಾಹನಗಳ ಚಲನೆಯ ವೇಗವನ್ನು ಅಂದಾಜಿಸುತ್ತದೆ. ಹಳೆಯ ಹಾಗೂ ಪ್ರಸ್ತುತ ಮಾಹಿತಿಯನ್ನು ಸಂಯೋಜಿಸಿ ಟ್ರಾಫಿಕ್ ಮತ್ತು ವೇಗದ ಪರ್ಯಾಯ ಮಾರ್ಗಗಳನ್ನು ಸೂಚಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ca480f30nbms9jjjfpa5rp,imgname-how-google-maps-detects-traffic-without-cameras-everywhere--1--1789267157007.jpg" type="image/jpeg" height="390" width="690"/>
            <content:encoded><![CDATA[&lt;h2&gt;Google Maps&zwnj;ಗೆ ಟ್ರಾಫಿಕ್ ಹೇಗೆ ಗೊತ್ತಾಗುತ್ತೆ?&lt;/h2&gt;&lt;p&gt;ನೀವು ಕಾರಿನಲ್ಲಿ ಹೋಗುತ್ತಿದ್ದೀರಿ. ಏಕಾಏಕಿ Google Maps&zwnj;ನಲ್ಲಿದ್ದ ರಸ್ತೆ ಹಸಿರಿನಿಂದ ಕಿತ್ತಳೆ ಅಥವಾ ಕೆಂಪು ಬಣ್ಣಕ್ಕೆ ಬದಲಾಗುತ್ತದೆ. ಮುಂದೆ ಟ್ರಾಫಿಕ್ ಜಾಮ್ ಇದೆ, ಪ್ರಯಾಣಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು Maps ಎಚ್ಚರಿಸುತ್ತದೆ. ಆದರೆ ರಸ್ತೆಯ ಪ್ರತಿಯೊಂದು ಭಾಗದಲ್ಲೂ ಕ್ಯಾಮೆರಾ ಅಳವಡಿಸಿರುವುದಿಲ್ಲ. ಹಾಗಿದ್ದರೆ Google Maps&zwnj;ಗೆ ಟ್ರಾಫಿಕ್ ಬಗ್ಗೆ ಹೇಗೆ ಗೊತ್ತಾಗುತ್ತದೆ?&lt;/p&gt;&lt;h3&gt;ನಿಮ್ಮ ಫೋನ್&zwnj;ನ GPS ಪ್ರಮುಖ ಸುಳಿವು&lt;/h3&gt;&lt;p&gt;Google Maps&zwnj;ನ ಟ್ರಾಫಿಕ್ ಮಾಹಿತಿ ಪಡೆಯುವ ಪ್ರಮುಖ ಮೂಲಗಳಲ್ಲಿ ಬಳಕೆದಾರರ ನ್ಯಾವಿಗೇಶನ್ ಡೇಟಾವೂ ಒಂದು. ನೀವು Maps ಬಳಸಿ ಪ್ರಯಾಣಿಸುವಾಗ, GPS ಸ್ಥಳ, ನೀವು ತೆಗೆದುಕೊಂಡ ಮಾರ್ಗ ಮತ್ತು ಕೆಲವು ಸಾಧನದ ಸೆನ್ಸರ್ ಮಾಹಿತಿಯನ್ನು ಬಳಸಿಕೊಂಡು ರಸ್ತೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು Googleಗೆ ಸಹಾಯವಾಗುತ್ತದೆ.&lt;/p&gt;&lt;p&gt;ಒಂದೇ ರಸ್ತೆಯಲ್ಲಿ ಹಲವಾರು Maps ಬಳಕೆದಾರರ ಫೋನ್&zwnj;ಗಳು ಸಾಮಾನ್ಯಕ್ಕಿಂತ ನಿಧಾನವಾಗಿ ಚಲಿಸುತ್ತಿವೆ ಎಂದು ಊಹಿಸಿ. ಈ ಮಾಹಿತಿಯನ್ನು ಇತರ ಮೂಲಗಳೊಂದಿಗೆ ಸಂಯೋಜಿಸುವ ಮೂಲಕ ಆ ರಸ್ತೆಯಲ್ಲಿ ಸಂಚಾರ ನಿಧಾನವಾಗಿದೆ ಎಂಬುದನ್ನು Maps ಅಂದಾಜಿಸಬಹುದು. Google ಹೇಳುವಂತೆ, ಇಂತಹ ಡೇಟಾ ರಿಯಲ್-ಟೈಮ್ ಟ್ರಾಫಿಕ್ ಪರಿಸ್ಥಿತಿಗಳನ್ನು ತೋರಿಸಲು ಮತ್ತು ವೇಗವಾದ ಪರ್ಯಾಯ ಮಾರ್ಗಗಳನ್ನು ಸೂಚಿಸಲು ಸಹಾಯ ಮಾಡುತ್ತದೆ.&lt;/p&gt;&lt;h3&gt;ಹಳೆಯ ಡೇಟಾ + ಈಗಿನ ಪರಿಸ್ಥಿತಿ&lt;/h3&gt;&lt;p&gt;ಇದು ಕೇವಲ ಆ ಕ್ಷಣದ GPS ಮಾಹಿತಿಯ ಮೇಲಷ್ಟೇ ಅವಲಂಬಿತವಾಗಿರುವುದಿಲ್ಲ. ಹಿಂದಿನ ಮತ್ತು ಪ್ರಸ್ತುತ ಸ್ಥಳದ ಮಾಹಿತಿಯನ್ನು ಬಳಸಿಕೊಂಡು ಪ್ರಯಾಣದ ಸಮಯವನ್ನು ಅಂದಾಜಿಸಲಾಗುತ್ತದೆ. ರಸ್ತೆಗಳಲ್ಲಿ ಸಂಭವಿಸುವ ವ್ಯತ್ಯಾಸಗಳನ್ನು ಗುರುತಿಸಲು ಇತರ ಮೂಲಗಳಿಂದ ದೊರೆಯುವ ಟ್ರಾಫಿಕ್ ಮತ್ತು ಘಟನೆಗಳ ಮಾಹಿತಿಯನ್ನೂ ಬಳಸಬಹುದು.&lt;/p&gt;&lt;h3&gt;Google Maps&zwnj;ನಲ್ಲಿ ರಸ್ತೆ ಕೆಂಪಾಗೋದು ಯಾಕೆ?&lt;/h3&gt;&lt;p&gt;Maps&zwnj;ನಲ್ಲಿ ರಸ್ತೆ ಹಸಿರು, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುವುದರ ಉದ್ದೇಶವೇ ಸಂಚಾರದ ವೇಗದ ಬಗ್ಗೆ ತಕ್ಷಣದ ಸೂಚನೆ ನೀಡುವುದು. ಹೀಗಾಗಿ ಚಾಲಕರು ಮುಂದೆ ಇರುವ ರಸ್ತೆಯಲ್ಲಿ ನಿಧಾನಗತಿ ಇದೆಯೇ ಅಥವಾ ಬೇರೆ ಮಾರ್ಗ ತೆಗೆದುಕೊಳ್ಳುವುದು ಉತ್ತಮವೇ ಎಂಬುದನ್ನು ಅರ್ಥಮಾಡಿಕೊಳ್ಳಬಹುದು.&lt;/p&gt;&lt;h3&gt;ನಿಮ್ಮ ಲೊಕೇಶನ್ ಡೇಟಾ Google Maps&zwnj;ಗೆ ಹೇಗೆ ಸಹಾಯ ಮಾಡುತ್ತದೆ?&lt;/h3&gt;&lt;p&gt;Google ಪ್ರಕಾರ, Maps&zwnj;ನ ನ್ಯಾವಿಗೇಶನ್ ಡೇಟಾವನ್ನು ಸಂಸ್ಕರಿಸಿ Maps ಅನುಭವ ಸುಧಾರಿಸಲು ಬಳಸಲಾಗುತ್ತದೆ. ನ್ಯಾವಿಗೇಶನ್&zwnj;ಗಾಗಿ ಬಳಸುವ ಕೆಲವು ಡೇಟಾವನ್ನು Google ಅಜ್ಞಾತ ರೀತಿಯಲ್ಲಿ ಸಂಯೋಜಿಸುತ್ತದೆ ಮತ್ತು Maps&zwnj;ಗೆ ನೀಡುವ ಅಪ್&zwnj;ಡೇಟ್&zwnj;ಗಳನ್ನು Google Account ಅಥವಾ ನಿರ್ದಿಷ್ಟ ಸಾಧನಕ್ಕೆ ಜೋಡಿಸದಂತೆ ಮಾಡುತ್ತದೆ ಎಂದು ಕಂಪನಿ ಹೇಳುತ್ತದೆ.&lt;/p&gt;&lt;p&gt;ಅಂದರೆ, ನೀವು ಟ್ರಾಫಿಕ್&zwnj;ನಲ್ಲಿ ಸಿಲುಕಿಕೊಂಡಿರುವುದನ್ನು Maps ಮಾಯಾಜಾಲದಿಂದ ತಿಳಿಯುವುದಿಲ್ಲ. ಸಾವಿರಾರು ಫೋನ್&zwnj;ಗಳಿಂದ ಬರುವ ಸ್ಥಳ ಮತ್ತು ಚಲನೆಯ ಮಾಹಿತಿಯನ್ನು ತಂತ್ರಜ್ಞಾನ ಬಳಸಿ ವಿಶ್ಲೇಷಿಸಿ, ರಸ್ತೆಯ ಸ್ಥಿತಿಯನ್ನು ಅಂದಾಜಿಸುತ್ತದೆ. ಇದೇ Google Maps&zwnj;ನ ಟ್ರಾಫಿಕ್ ವ್ಯವಸ್ಥೆಯ ಹಿಂದಿರುವ ಪ್ರಮುಖ ತಂತ್ರಜ್ಞಾನ.&lt;/p&gt;]]></content:encoded>
            <category><![CDATA[technology]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/technology/how-does-google-maps-know-where-traffic-is-the-gps-magic-behind-your-red-route/articleshow-oevldx7"/>
        </item>
        <item>
            <title><![CDATA[ಇಂದಿನಿಂದ ಭಾರತ-ಆಫ್ಘಾನಿಸ್ತಾನ ಟಿ20 ಕದನ; ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರ ಪ್ರಸಾರ?]]></title>
            <link>https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls</guid>
            <pubDate>Sun, 13 Sep 2026 09:13:44 +0530</pubDate>
            <description><![CDATA[ಭಾರತವು ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಶ್ರೇಯಸ್‌ ಅಯ್ಯರ್‌ ನಾಯಕರಾಗಿದ್ದಾರೆ. ಆರಂಭಿಕರ ಆಯ್ಕೆ ಗೊಂದಲದ ನಡುವೆಯೂ, ಜಸ್‌ಪ್ರೀತ್‌ ಬುಮ್ರಾ ಅವರ ವಾಪಸಾತಿಯು ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ. ಇತ್ತ ಇಬ್ರಾಹಿಂ ಜದ್ರಾನ್‌ ನಾಯಕತ್ವದ ಅಫ್ಘಾನ್ ತಂಡವು ರಶೀದ್‌ ಖಾನ್‌ರಂತಹ ಅನುಭವಿಗಳೊಂದಿಗೆ ಸವಾಲೊಡ್ಡಲು ಸಜ್ಜಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m22dqc4gj1z2dwyjb0nhbx5t,imgname-untitled-design--48--1788935385232.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತ ಕ್ರಿಕೆಟ್&zwnj; ತಂಡ ಭಾನುವಾರದಿಂದ ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿ ಭಾರತದಲ್ಲೇ ನಡೆಯಲಿದೆಯಾದರೂ, ಆತಿಥ್ಯ ವಹಿಸುತ್ತಿರುವುದು ಅಫ್ಘಾನಿಸ್ತಾನ ಎನ್ನುವುದು ವಿಶೇಷ. 3 ಪಂದ್ಯಗಳೂ ರಾಜಧಾನಿಯಲ್ಲೇ ನಡೆಯಲಿದೆ.&lt;/p&gt;&lt;p&gt;ಅಫ್ಘಾನಿಸ್ತಾನ ತಂಡ ಭಾರತ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಮೊದಲ ಜಯಕ್ಕಾಗಿ ಎದುರು ನೋಡುತ್ತಿದ್ದರೆ, ಐರ್ಲೆಂಡ್&zwnj; ಹಾಗೂ ಇಂಗ್ಲೆಂಡ್&zwnj;ನಲ್ಲಿ ಟಿ20 ಸರಣಿಗಳನ್ನು ಸೋತಿದ್ದ ಶ್ರೇಯಸ್&zwnj; ಅಯ್ಯರ್&zwnj; ನಾಯಕತ್ವದ ತಂಡ, ತವರಿನಲ್ಲಿ ಸರಣಿ ಗೆಲ್ಲಲು ಕಾತರಿಸುತ್ತಿದೆ. ಇತ್ತೀಚೆಗೆ ಜಿಂಬಾಬ್ವೆಯಲ್ಲಿ ಭಾರತ ಸರಣಿ ಜಯಿಸಿತ್ತಾದರೂ, ಅದಕ್ಕೆ ಅಷ್ಟೇನೂ ಮಹತ್ವ ಸಿಕ್ಕಿರಲಿಲ್ಲ.&lt;/p&gt;&lt;h2&gt;&lt;strong&gt;ಟೀಂ ಇಂಡಿಯಾಗೆ ಶುರುವಾಗಿದೆ ಆಯ್ಕೆ ತಲೆಬಿಸಿ&lt;/strong&gt;&lt;/h2&gt;&lt;p&gt;ನಾಯಕ ಶ್ರೇಯಸ್&zwnj;ಗೆ ಮೊದಲ ಪಂದ್ಯಕ್ಕೂ ಮೊದಲೇ ಆಯ್ಕೆ ತಲೆಬಿಸಿ ಶುರುವಾಗಿದೆ. ಆರಂಭಿಕರನ್ನಾಗಿ ಅಭಿಷೇಕ್&zwnj; ಶರ್ಮಾ, ಸಂಜು ಸ್ಯಾಮ್ಸನ್&zwnj; ಹಾಗೂ ವೈಭವ್&zwnj; ಸೂರ್ಯವಂಶಿ ನಡುವೆ ಯಾರಿಬ್ಬರನ್ನು ಆಯ್ಕೆ ಮಾಡಬೇಕು ಎನ್ನುವ ಗೊಂದಲವಿದೆ. ಇನ್ನು ಆಲ್ರೌಂಡರ್&zwnj;ಗಳ ಆಯ್ಕೆಯೂ ಕಷ್ಟ ಎನಿಸಿದೆ. ಆದರೆ ಜಸ್&zwnj;ಪ್ರೀತ್&zwnj; ಬುಮ್ರಾ ಹಾಗೂ ವರುಣ್&zwnj; ಚಕ್ರವರ್ತಿ ತಂಡಕ್ಕೆ ವಾಪಸಾಗಿರುವ ಕಾರಣ, ಬೌಲಿಂಗ್&zwnj; ವಿಭಾಗ ಬಲಿಷ್ಠವಾಗಿ ತೋರುತ್ತಿದೆ.&lt;/p&gt;&lt;p&gt;ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೆ ಇಬ್ರಾಹಿಂ ಜದ್ರಾನ್&zwnj; ನಾಯಕನಾಗಿ ನೇಮಕಗೊಂಡಿದ್ದಾರೆ. ರಶೀದ್&zwnj; ಖಾನ್&zwnj;, ಮೊಹಮದ್&zwnj; ನಬಿ, ರಹಮಾನುಲ್ಲಾ ಗುರ್ಬಾಜ್&zwnj;ರಂಥ ಅನುಭವಿಗಳ ಬಲ ತಂಡಕ್ಕಿದೆ. ಒಟ್ಟಾರೆಯಾಗಿ, 3 ಪಂದ್ಯಗಳ ಸರಣಿ ಸಾಕಷ್ಟು ಕುತೂಹಲ ಮೂಡಿಸಿದ್ದು ಸ್ಪರ್ಧಾತ್ಮಕ ಕ್ರಿಕೆಟ್&zwnj;ಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.&lt;/p&gt;&lt;h3&gt;&lt;strong&gt;ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್&zwnj;ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್&zwnj;ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್&zwnj;ಝೈ, ನವೀನ್ ಉಲ್ ಹಕ್&lt;/p&gt;&lt;p&gt;ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್&zwnj; ಟೆನ್&zwnj; 5/ಫ್ಯಾನ್&zwnj;ಕೋಡ್&zwnj;&lt;/p&gt;]]></content:encoded>
            <category><![CDATA[cricket-sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/india-vs-afghanistan-t20-abhishek-samson-or-vaibhav-shreyas-iyer-faces-big-selection-puzzle-kvn/articleshow-9c7cpls"/>
        </item>
        <item>
            <title><![CDATA[ಸೆಪ್ಟೆಂಬರ್ 13 ಪಂಚ ಮಹಾಪುರುಷ ರಾಜ ಯೋಗ, ಈ 5 ರಾಶಿಚಕ್ರ ಚಿಹ್ನಗೆ ಸಂಪತ್ತು ಮತ್ತು ಯಶಸ್ಸು]]></title>
            <link>https://kannada.asianetnews.com/gallery/festivals/lucky-zodiac-signs-13-september-2026-suh-ou64og6</link>
            <guid isPermaLink="true">https://kannada.asianetnews.com/gallery/festivals/lucky-zodiac-signs-13-september-2026-suh-ou64og6</guid>
            <pubDate>Sun, 13 Sep 2026 09:08:23 +0530</pubDate>
            <description><![CDATA[ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 13 ರಂದು ಮೂರು ಪ್ರಮುಖ ಪಂಚ ಮಹಾಪುರುಷ ರಾಜ ಯೋಗಗಳು, ಕನ್ಯಾರಾಶಿಯಲ್ಲಿ ಬುಧ ಮತ್ತು ಚಂದ್ರನ ಸಂಯೋಗ ಮತ್ತು ಗುರು ಮತ್ತು ಶನಿಯ ನವಪಂಚಮ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cctz3gqq23nctjge9827cd,imgname-lucky-zodiac-signs-13-september-2026-1789269998704.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 13 ರಂದು ಮೂರು ಪ್ರಮುಖ ಪಂಚ ಮಹಾಪುರುಷ ರಾಜ ಯೋಗಗಳು, ಕನ್ಯಾರಾಶಿಯಲ್ಲಿ ಬುಧ ಮತ್ತು ಚಂದ್ರನ ಸಂಯೋಗ ಮತ್ತು ಗುರು ಮತ್ತು ಶನಿಯ ನವಪಂಚಮ ಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 13 ಮಿಥುನ ರಾಶಿಯವರಿಗೆ ತುಂಬಾ ಸಕಾರಾತ್ಮಕ ದಿನವೆಂದು ಸಾಬೀತುಪಡಿಸಬಹುದು. ಮಾಧ್ಯಮ (ಪತ್ರಿಕೋದ್ಯಮ), ಮಾರ್ಕೆಟಿಂಗ್ ಮತ್ತು ತಾಂತ್ರಿಕ ವಲಯದಲ್ಲಿ ತೊಡಗಿಸಿಕೊಂಡಿರುವವರು ಲಾಭ ಪಡೆಯುವ ಸ್ಥಿತಿಯಲ್ಲಿರುತ್ತಾರೆ. ಉದ್ಯೋಗಗಳಲ್ಲಿ ಕೆಲಸ ಮಾಡುವವರ ಹಾದಿಯಲ್ಲಿರುವ ಅಡೆತಡೆಗಳು ನಿವಾರಣೆಯಾಗಬಹುದು. ನವೋದ್ಯಮವನ್ನು ಪ್ರಾರಂಭಿಸುವವರಿಗೆ ಈ ದಿನವು ಹೊಸ ಅವಕಾಶಗಳನ್ನು ತರಬಹುದು. ಸ್ನೇಹಿತರ ಸಹಾಯದಿಂದ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನೆಯಲ್ಲಿ, ವಾತಾವರಣವು ಸಂತೋಷದಾಯಕ ಮತ್ತು ಹಬ್ಬದಂತಿರುತ್ತದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 13 ಕರ್ಕಾಟಕ ರಾಶಿಯವರಿಗೆ ಬಹಳ ಶುಭ ಮತ್ತು ನಿರ್ಣಾಯಕ ದಿನವೆಂದು ಸಾಬೀತುಪಡಿಸಬಹುದು. ಬ್ಯಾಂಕಿಂಗ್, ಹಣಕಾಸು ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರು ಅನುಕೂಲಕರ ವಾತಾವರಣವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ಸಾಮಾಜಿಕ ಚಿತ್ರಣ ಸುಧಾರಿಸುತ್ತದೆ. ನಿಮ್ಮ ಆಲೋಚನೆ ಅಥವಾ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಬಹುದು. ಕುಟುಂಬ ಸಭೆಗಳಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗುವುದು. ಹಣವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ ಮತ್ತು ವ್ಯವಹಾರವು ಲಾಭವನ್ನು ಗಳಿಸುತ್ತದೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ಸೆಪ್ಟೆಂಬರ್ 13 ಸಾಧನೆಯ ದಿನವೆಂದು ಸಾಬೀತುಪಡಿಸಬಹುದು. ನಿಮ್ಮ ಕಡೆ ಅದೃಷ್ಟ ಸಿಗಬಹುದು. ರಾಜಕೀಯ, ಆಡಳಿತ ಸೇವೆಗಳು, ನಿರ್ವಹಣೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿರುವವರು ಬಹಳ ಸಕಾರಾತ್ಮಕ ದಿನವನ್ನು ಅನುಭವಿಸಬಹುದು. ಬಾಕಿ ಇರುವ ಕೆಲಸಗಳು ಇದ್ದಕ್ಕಿದ್ದಂತೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಚರ ಆಸ್ತಿಗೆ ಸಂಬಂಧಿಸಿದಂತೆ ಸಂಬಂಧಿಕರೊಂದಿಗಿನ ವಿವಾದ ಬಗೆಹರಿಯಬಹುದು. ಆದಾಯವನ್ನು ಹೆಚ್ಚಿಸಲು ಹೊಸ ಅವಕಾಶಗಳು ಹೊರಹೊಮ್ಮುತ್ತವೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 13 ಕನ್ಯಾ ರಾಶಿಯವರಿಗೆ ಫಲಪ್ರದ ದಿನವಾಗಬಹುದು. ಶಿಕ್ಷಣ ಮತ್ತು ಸಂಶೋಧನೆಯಲ್ಲಿ ತೊಡಗಿರುವವರು ಈ ದಿನ ಗಮನಾರ್ಹ ಪ್ರಯೋಜನಗಳನ್ನು ಅನುಭವಿಸುತ್ತಾರೆ. ಒತ್ತಡ ನಿವಾರಣೆಯಾಗುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಾಲ ನೀಡಿದ ಹಣ ಚೇತರಿಸಿಕೊಳ್ಳಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಲಾಭವನ್ನು ಕಾಣುತ್ತಾರೆ. ಅಲ್ಪಾವಧಿಯ ಹೂಡಿಕೆಗಳಿಗೆ ದಿನವು ಸಕಾರಾತ್ಮಕವಾಗಿದೆ. ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಆಹಾರಕ್ರಮದ ಬಗ್ಗೆ ಕಾಳಜಿ ವಹಿಸಿ. ಕುಟುಂಬದ ಬೆಂಬಲ ಉಳಿಯುತ್ತದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 13 ರಂದು ರೂಪುಗೊಳ್ಳುವ ಸರ್ವಾರ್ಥ ಸಿದ್ಧಿ ಯೋಗವು ಕುಂಭ ರಾಶಿಯವರಿಗೆ ಶುಭ ಸಂಕೇತಗಳನ್ನು ಸೂಚಿಸುತ್ತದೆ. ನಿಮ್ಮ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ. ಐಟಿ, ಆಮದು-ರಫ್ತು ಮತ್ತು ಇತರ ಕ್ಷೇತ್ರಗಳಲ್ಲಿ ತೊಡಗಿರುವವರು ಈ ದಿನ ವಿಶೇಷವಾಗಿ ಪ್ರಯೋಜನ ಪಡೆಯುತ್ತಾರೆ. ನಿಮ್ಮ ನವೀನ ತಂತ್ರವು ನಿಮಗೆ ಆರ್ಥಿಕ ಲಾಭವನ್ನು ತರಬಹುದು. ಹೊಸ ಒಪ್ಪಂದಗಳು ಸಾಧ್ಯವಾಗಬಹುದು. ವಿರೋಧಿಗಳು ಸೋಲುತ್ತಾರೆ. ಸಕಾರಾತ್ಮಕ ಬದಲಾವಣೆಗೆ ಹೊಸ ಅವಕಾಶಗಳು ಉದ್ಭವಿಸಬಹುದು. ಅಪರಿಚಿತರಿಗೆ ಸಹಾಯ ಮಾಡುವುದರಿಂದ ನಿಮ್ಮ ಹೃದಯಕ್ಕೆ ಸಂತೋಷವಾಗುತ್ತದೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/lucky-zodiac-signs-13-september-2026-suh-ou64og6"/>
        </item>
        <item>
            <title><![CDATA[‘ಆಸೆ’ ಧಾರಾವಾಹಿಯಲ್ಲಿ ನಟಿ ಚೈತನ್ಯಾಗೆ ಹೊಸ ಶೇಡ್: ‘ತಾರಾ’ ಪಾತ್ರಕ್ಕೆ ಸಿಕ್ತು ಹೊಸ ತಿರುವು]]></title>
            <link>https://kannada.asianetnews.com/gallery/tv-talk/aase-serial-actress-chaitanyaa-tara-character-wins-audience-attention-sparks-curiosity-gvd-kqfryqa</link>
            <guid isPermaLink="true">https://kannada.asianetnews.com/gallery/tv-talk/aase-serial-actress-chaitanyaa-tara-character-wins-audience-attention-sparks-curiosity-gvd-kqfryqa</guid>
            <pubDate>Sun, 13 Sep 2026 09:00:42 +0530</pubDate>
            <description><![CDATA[ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ‘ಆಸೆ’ ಧಾರಾವಾಹಿಯಲ್ಲಿ ನಟಿ ಚೈತನ್ಯಾ ‘ತಾರಾ’ ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b813c8fbdqy6p32p4fac68,imgname-cc--1--1789231402376.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ &lsquo;ಆಸೆ&rsquo; ಧಾರಾವಾಹಿಯಲ್ಲಿ ನಟಿ ಚೈತನ್ಯಾ &lsquo;ತಾರಾ&rsquo; ಪಾತ್ರದ ಮೂಲಕ ಗಮನ ಸೆಳೆಯುತ್ತಿದ್ದಾರೆ. ವಿಭಿನ್ನ ಶೇಡ್&zwnj;ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅವರ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.&lt;/p&gt;&lt;img&gt;&lt;p&gt;ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ &lsquo;ಆಸೆ&rsquo; ಧಾರಾವಾಹಿ ಸದ್ಯ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿಯಲ್ಲಿ ನಟಿ ಚೈತನ್ಯಾ ಕೂಡ ಪ್ರಮುಖ ಪಾತ್ರದ ಮೂಲಕ ಮಿಂಚುತ್ತಿದ್ದು, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಚೈತನ್ಯಾ ಅವರಿಗೆ &lsquo;ಆಸೆ&rsquo; ಧಾರಾವಾಹಿ ಉತ್ತಮ ಅವಕಾಶ ನೀಡಿದೆ. ಧಾರಾವಾಹಿಯಲ್ಲಿ ಅವರ ಪಾತ್ರ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮೂಡಿಸುತ್ತಿದ್ದು, ಚೈತನ್ಯಾ ಅವರಿಗೂ ಅಭಿಮಾನಿಗಳ ಬಳಗ ಹೆಚ್ಚಾಗುತ್ತಿದೆ.&lt;/p&gt;&lt;img&gt;&lt;p&gt;ಅಭಿನಯದ ಜೊತೆಗೆ ಚೈತನ್ಯಾ ಅವರ ಸ್ಟೈಲಿಶ್ ಲುಕ್ ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಅವರು ತಮ್ಮ ವಿಭಿನ್ನ ಲುಕ್ ಹಾಗೂ ಅಪ್&zwnj;ಡೇಟ್&zwnj;ಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.&lt;/p&gt;&lt;img&gt;&lt;p&gt;&lsquo;ಆಸೆ&rsquo; ಧಾರಾವಾಹಿಯಲ್ಲಿ ಚೈತನ್ಯಾ ಅವರು &lsquo;ತಾರಾ&rsquo; ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕೆ ಸದ್ಯ ಎರಡು ವಿಭಿನ್ನ ಶೇಡ್&zwnj;ಗಳು ಕಾಣಿಸಿಕೊಳ್ಳುತ್ತಿದ್ದು, ಕಥೆ ಸಾಗಿದಂತೆ ಅವರ ಪಾತ್ರ ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.&lt;/p&gt;&lt;img&gt;&lt;p&gt;&lsquo;ಆಸೆ&rsquo; ಧಾರಾವಾಹಿಗೆ ಎಂಟ್ರಿ ನೀಡಿದ ಬಳಿಕ ಚೈತನ್ಯಾ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ವಿಶೇಷವಾಗಿ ಅವರ ಪಾತ್ರದ ವಿಭಿನ್ನ ಶೇಡ್&zwnj;ಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪಾತ್ರಕ್ಕೆ ಇನ್ನಷ್ಟು ಟ್ವಿಸ್ಟ್&zwnj;ಗಳು ಸಿಗಲಿವೆಯೇ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/tv-talk/aase-serial-actress-chaitanyaa-tara-character-wins-audience-attention-sparks-curiosity-gvd-kqfryqa"/>
        </item>
        <item>
            <title><![CDATA[ಮಳೆಗೆ ತಂದ ಛತ್ರಿ ಬಿಸಿಲಿಗೆ ಆಯ್ತು; ಅಂಕೋಲಾದಲ್ಲಿ ತಾಪಮಾನ  34 ಡಿಗ್ರಿ ಸೆಲ್ಸಿಯಸ್‌]]></title>
            <link>https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q</link>
            <guid isPermaLink="true">https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q</guid>
            <pubDate>Sun, 13 Sep 2026 08:50:35 +0530</pubDate>
            <description><![CDATA[ಮಳೆಗಾಲದ ಮಧ್ಯದಲ್ಲೇ ಅಂಕೋಲಾದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ವಾಡಿಕೆಗಿಂತ ಶೇ. 42ರಷ್ಟು ಮಳೆ ಕೊರತೆಯಾಗಿದ್ದು, ಜನರು ಮಳೆಗೆ ತಂದ ಛತ್ರಿಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುವಂತಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2cc2h7x99feq3ja2n5a9j44,imgname-ankola-summer-1789269198077.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಘು ಕಾಕರಮಠ&lt;/strong&gt;&lt;/p&gt;&lt;p&gt;&lt;strong&gt;ಅಂಕೋಲಾ: &lt;/strong&gt;ಮಳೆಗಾಲ ಇನ್ನೂ ಮುಗಿದಿಲ್ಲ, ಆದರೆ ತಾಲೂಕಿನಲ್ಲಿ ಈಗಾಗಲೇ ಸುಡುಬಿಸಿಲಿನ ಝಳ ಹೆಚ್ಚಾಗಿದೆ. ಜನರು ಬಿಸಿಲಿನ ತಾಪಕ್ಕೆ ಕಂಗೆಡುವಂತಾಗಿದೆ. ಸೆಪ್ಟೆಂಬರನಲ್ಲೇ ಇಂತಹ ವಾತಾವರಣ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕ ಮೂಡಿದೆ.&lt;/p&gt;&lt;p&gt;ಕಳೆದ ವರ್ಷದ ಸೆಪ್ಟೆಂಬರ್&zwnj;ನಲ್ಲಿ ಸಾಮಾನ್ಯ ಗರಿಷ್ಠ ತಾಪಮಾನ ಸುಮಾರು 29 ಡಿಗ್ರಿ ಸೆಲ್ಸಿಯಸ್&zwnj;ನಷ್ಟಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ತಾಪಮಾನ ಸುಮಾರು 5 ಡಿಗ್ರಿಯಷ್ಟು ಏರಿಕೆಯಾಗಿ 34ಕ್ಕೆ ತಲುಪಿದೆ. ಭಾರತೀಯ ಹವಾಮಾನ ಇಲಾಖೆ ದಾಖಲೆಯ ಪ್ರಕಾರ, ಸೆಪ್ಟೆಂಬರ್ 1ರಿಂದ 12ರ ವರೆಗೆ ಸರಾಸರಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ನಡುವೆ ಮಳೆಯ ಪ್ರಮಾಣವೂ ವಾಡಿಕೆಗಿಂತ ಶೇ. 42ರಷ್ಟು ಕುಸಿದಿದೆ. ಮಳೆ ಸುರಿಯಬೇಕಾದ ದಿನಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಜನರಲ್ಲಿ ಬೆವರು ಹರಿಸುವಂತಾಗಿದೆ.&lt;/p&gt;&lt;h2&gt;&lt;strong&gt;ಮಳೆ ಬದಲಿಗೆ ಬಿಸಿಲಿನ ತಾಪ:&lt;/strong&gt;&lt;/h2&gt;&lt;p&gt;ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತಾಪಮಾನ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಳೆ, ಮೋಡ ಮತ್ತು ತಂಪಾದ ವಾತಾವರಣದಿಂದ ಜನತೆ ಬಿಸಿಲಿನ ತಾಪದಿಂದ ಸ್ವಲ್ಪ ನಿರಾಳರಾಗಿರುತ್ತಾರೆ. ಈ ಬಾರಿ ಮಾತ್ರ ಮಳೆಗಾಲದ ಸಂದರ್ಭದಲ್ಲೇ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದು ಅಸಹನೆಗೆ ಕಾರಣವಾಗಿದೆ.&lt;/p&gt;&lt;p&gt;ಸುದೀರ್ಘವಾಗಿ ಮಳೆ ಕೈಕೊಟ್ಟು ಒಣಹವೆ ಮುಂದುವರಿದಿರುವುದರಿಂದ ಜನರು ಕಂಗೆಡುವಂತಾಗಿದೆ. ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಕಾಣಿಸಿಕೊಳ್ಳುವಂತಹ ಬಿಸಿಲಿನ ವಾತಾವರಣವೇ ಸೆಪ್ಟೆಂಬರ್&zwnj;ನಲ್ಲೇ ಕಾಣಿಸಿಕೊಳ್ಳುತ್ತಿರುವುದು ಹವಾಮಾನ ಬದಲಾವಣೆಯ ಕುರಿತು ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಮಳೆಗಾಲದಲ್ಲೇ ತಾಪಮಾನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಿಸಿಲಿನ ತೀವ್ರತೆ ಮತ್ತಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇದೆ.:&lt;/p&gt;&lt;h3&gt;&lt;strong&gt;ಮಳೆಗೆ ತಂದ ಕೊಡೆ ಬಿಸಿಲಿಗೇ ಬಂತು!&lt;/strong&gt;&lt;/h3&gt;&lt;p&gt;ಮಳೆಗಾಲ ಎಂದಾಕ್ಷಣ ಯಾವ ಕ್ಷಣದಲ್ಲಿ ಮಳೆ ಸುರಿಯಬಹುದು ಎಂಬ ಕಾರಣಕ್ಕೆ ಜನರು ಮನೆಯಿಂದ ಹೊರಡುವಾಗ ಕೊಡೆ ಹಿಡಿದುಕೊಂಡು ಬರುತ್ತಾರೆ. ಆದರೆ ಈ ಬಾರಿ ಅಂಕೋಲಾದಲ್ಲಿ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಅಲ್ಲ, ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಛತ್ರಿ ಬಳಸುತ್ತಿದ್ದಾರೆ.&lt;/p&gt;&lt;p&gt;ಮಳೆಯ ಪ್ರಮಾಣ ತೀವ್ರವಾಗಿ ಕುಸಿದಿರುವುದರಿಂದ, ಸಹಜವಾಗಿ ಉಷ್ಣತೆಯು ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ, ಗಾಳಿಯ ದಿಕ್ಕು ಹಾಗೂ ವಾಯುಭಾರದಲ್ಲಾಗುವ ಬದಲಾವಣೆಗಳಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದಿರಬಹುದು. ಇದರ ಪರಿಣಾಮ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಹವಾಮಾನ ಅಧಕಾರಿ ಅವಿನಾಶ್ ಹೇಳಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/uttara-kannada-el-nino-effect-maximum-temperature-in-ankola-rises-to-34-degree-celsius-even-before-the-monsoon-ends-mrq/articleshow-m57s59q"/>
        </item>
        <item>
            <title><![CDATA['ಮೋನಿಕಾ ಬೆಲ್ಲೂಚಿ': ಮಾಳವಿಕಾ ಬಗ್ಗೆ ನಟ ಕಾರ್ತಿ ಕೊಟ್ಟ ಕಾಂಪ್ಲಿಮೆಂಟ್‌ಗೆ ಇಷ್ಟೊಂದು ಚರ್ಚೆ ಯಾಕೆ?]]></title>
            <link>https://kannada.asianetnews.com/gallery/entertainment/kollywood-actor-karthi-compares-actress-malavika-mohanan-to-monica-bellucci-here-s-what-he-said-gvd-9pyyx1f</link>
            <guid isPermaLink="true">https://kannada.asianetnews.com/gallery/entertainment/kollywood-actor-karthi-compares-actress-malavika-mohanan-to-monica-bellucci-here-s-what-he-said-gvd-9pyyx1f</guid>
            <pubDate>Sun, 13 Sep 2026 08:45:30 +0530</pubDate>
            <description><![CDATA[ಮಾಳವಿಕಾ ಮೋಹನನ್ ಅವರನ್ನು ತಮಿಳು ನಟ ಕಾರ್ತಿ ಮೋನಿಕಾ ಬೆಲ್ಲೂಚಿಗೆ ಹೋಲಿಸಿರುವುದು ಇದೀಗ ಗಮನ ಸೆಳೆದಿದೆ. ‘ಸರ್ದಾರ್ 2’ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾಳವಿಕಾ ಅವರ ಡ್ರೆಸ್ ಮತ್ತು ಲುಕ್ ಬಗ್ಗೆ ಕಾರ್ತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b64zj5k29993bjvpmkf7ev,imgname-bjb-1789229432389.png" type="image/jpeg" height="390" width="690"/>
            <content:encoded><![CDATA[&lt;p&gt;ಮಾಳವಿಕಾ ಮೋಹನನ್ ಅವರನ್ನು ತಮಿಳು ನಟ ಕಾರ್ತಿ ಮೋನಿಕಾ ಬೆಲ್ಲೂಚಿಗೆ ಹೋಲಿಸಿರುವುದು ಇದೀಗ ಗಮನ ಸೆಳೆದಿದೆ. &lsquo;ಸರ್ದಾರ್ 2&rsquo; ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾಳವಿಕಾ ಅವರ ಡ್ರೆಸ್ ಮತ್ತು ಲುಕ್ ಬಗ್ಗೆ ಕಾರ್ತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;img&gt;&lt;p&gt;ಮಲಯಾಳಂ ಮೂಲದ ನಟಿ ಮಾಳವಿಕಾ ಮೋಹನನ್ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಮಲಯಾಳಂ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿರುವ ಅವರು, ತಮ್ಮ ಗ್ಲಾಮರ್ ಲುಕ್ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಇದೀಗ ಮಾಳವಿಕಾ ಮೋಹನನ್ ಕುರಿತಾಗಿ ತಮಿಳು ಸ್ಟಾರ್ ನಟ ಕಾರ್ತಿ ಮಾಡಿದ ಕಾಮೆಂಟ್&zwnj;ವೊಂದು ಚರ್ಚೆಗೆ ಗ್ರಾಸವಾಗಿದೆ. ಹಾಲಿವುಡ್ ನಟಿ ಹಾಗೂ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಮೋನಿಕಾ ಬೆಲ್ಲೂಚಿಗೆ ಮಾಳವಿಕಾ ಅವರನ್ನು ಕಾರ್ತಿ ಹೋಲಿಕೆ ಮಾಡಿರುವುದು ಇದೀಗ ಸಿನಿ ವಲಯದಲ್ಲಿ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಕಾರ್ತಿ ಹಾಗೂ ಮಾಳವಿಕಾ ಮೋಹನನ್ ಒಟ್ಟಿಗೆ ನಟಿಸಿರುವ &lsquo;ಸರ್ದಾರ್ 2&rsquo; ಸಿನಿಮಾ ಸದ್ಯ ಭಾರೀ ನಿರೀಕ್ಷೆ ಮೂಡಿಸಿದೆ. ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ತಿ, ಮಾಳವಿಕಾ ಅವರ ಲುಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;img&gt;&lt;p&gt;ಕಾರ್ಯಕ್ರಮದಲ್ಲಿ ಮಾಳವಿಕಾ ಧರಿಸಿದ್ದ ವಿಶೇಷ ಡ್ರೆಸ್ ಬಗ್ಗೆ ಮಾತನಾಡಿದ ಕಾರ್ತಿ, ಆ ಉಡುಪಿನಲ್ಲಿ ಅವರು ಥೇಟ್ ಮೋನಿಕಾ ಬೆಲ್ಲೂಚಿಯಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ. ನಟಿಯ ಸೌಂದರ್ಯವನ್ನು ಅಂತಾರಾಷ್ಟ್ರೀಯ ನಟಿಯೊಂದಿಗೆ ಹೋಲಿಸಿ ಕಾರ್ತಿ ನೀಡಿದ ಈ ಹೇಳಿಕೆ ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆದಿದೆ.&lt;/p&gt;&lt;img&gt;&lt;p&gt;ಆದರೆ ಕಾರ್ತಿ ಅವರ ಈ ಕಾಮೆಂಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ನಟನ ಹೇಳಿಕೆಯನ್ನು ಮೆಚ್ಚಿಕೊಂಡಿದ್ದರೆ, ಮತ್ತೊಂದೆಡೆ ಇಂತಹ ಹೋಲಿಕೆ ಅಗತ್ಯವಿತ್ತೇ ಎಂಬ ಪ್ರಶ್ನೆಯೂ ಕೇಳಿಬಂದಿದೆ. ಆದರೆ ಈ ಚರ್ಚೆಗಳಿಗೆ ಮಾಳವಿಕಾ ಮೋಹನನ್ ಹೆಚ್ಚು ಮಹತ್ವ ನೀಡಿಲ್ಲ. ಕಾರ್ತಿ ಅವರ ಬಗ್ಗೆ ಮಾತನಾಡಿರುವ ಅವರು, ಅವರು ಅತ್ಯಂತ ಸಜ್ಜನ ಹಾಗೂ ಸಹಕಾರ ನೀಡುವ ಸಹನಟ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಕಾರ್ತಿ ಮತ್ತು ಮಾಳವಿಕಾ ಮೋಹನನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ &lsquo;ಸರ್ದಾರ್ 2&rsquo; ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಪ್ರಚಾರದ ವೇಳೆ ಇಬ್ಬರ ಕೆಮಿಸ್ಟ್ರಿಯೂ ಗಮನ ಸೆಳೆಯುತ್ತಿದೆ. ಇನ್ನು ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾಳವಿಕಾ ಅವರ ಸೌಂದರ್ಯವನ್ನು ಕಾರ್ತಿ ಮೋನಿಕಾ ಬೆಲ್ಲೂಚಿಗೆ ಹೋಲಿಸಿರುವ ಘಟನೆ ಇದೀಗ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ಗಮನ ಸೆಳೆದಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/kollywood-actor-karthi-compares-actress-malavika-mohanan-to-monica-bellucci-here-s-what-he-said-gvd-9pyyx1f"/>
        </item>
        <item>
            <title><![CDATA[ಭಾರತದ ಅತಿ ಉದ್ದದ ತಡೆರಹಿತ ರೈಲು! 528 ಕಿ.ಮೀ. ಚಲಿಸಿದರೂ ಒಂದೇ ಒಂದು ನಿಲ್ದಾಣದಲ್ಲಿ ನಿಲ್ಲೋದಿಲ್ಲ!]]></title>
            <link>https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</link>
            <guid isPermaLink="true">https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx</guid>
            <pubDate>Sun, 13 Sep 2026 08:44:09 +0530</pubDate>
            <description><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01m1p1s7f382tqdjvcmpj7hn2e,imgname-vjh-1788520209891.png" type="image/jpeg" height="390" width="690"/>
            <content:encoded><![CDATA[ಒಂದು ರೈಲು ಸುಮಾರು 528 ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ. ಆದರೆ, ಯಾವುದೇ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಮಧ್ಯದಲ್ಲಿ ಒಬ್ಬ ಪ್ರಯಾಣಿಕನನ್ನೂ ಹತ್ತಿಸಿಕೊಳ್ಳುವುದಿಲ್ಲ. ಈ ರೈಲು ಯಾವುದೇ ನಿಲ್ದಾಣದಲ್ಲಿ ಯಾಕೆ ನಿಲ್ಲುವುದಿಲ್ಲ? ಇಲ್ಲಿದೆ ವಿವರ.&lt;img&gt;ನಮ್ಮ ದೇಶದಲ್ಲಿ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕೆ ರೈಲು ಮೊದಲ ಆಯ್ಕೆಯಾಗಿರುತ್ತದೆ. ಗಂಟೆಗಟ್ಟಲೆ ಸಾಗುವ ಈ ಪ್ರಯಾಣದಲ್ಲಿ ರೈಲು ಹಲವು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಆದರೆ, ನಮ್ಮ ದೇಶದಲ್ಲಿ ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ, ಬರೋಬ್ಬರಿ 528 ಕಿಲೋಮೀಟರ್ ನಾನ್&zwnj;ಸ್ಟಾಪ್ ಆಗಿ ಚಲಿಸುವ ರೈಲು ಒಂದಿದೆ. ರಾಜಸ್ಥಾನದ ಕೋಟಾದಿಂದ ಗುಜರಾತ್&zwnj;ನ ವಡೋದರಾವರೆಗೆ ಸಾಗುವ ಆ ರೈಲಿನ ಬಗ್ಗೆ ಈಗ ನೋಡೋಣ.&lt;img&gt;ಒಂದೇ ಒಂದು ನಿಲ್ದಾಣದಲ್ಲೂ ನಿಲ್ಲದೆ 528 ಕಿಲೋಮೀಟರ್ ಪ್ರಯಾಣಿಸುವ ಮೂಲಕ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ದಾಖಲೆ ನಿರ್ಮಿಸಿದೆ. ಸಾಮಾನ್ಯವಾಗಿ ಎಕ್ಸ್&zwnj;ಪ್ರೆಸ್ ಅಥವಾ ಸೂಪರ್&zwnj;ಫಾಸ್ಟ್ ರೈಲುಗಳು ಪ್ರತಿ 50 ರಿಂದ 100 ಕಿಲೋಮೀಟರ್&zwnj;ಗೆ ಒಮ್ಮೆ ಯಾವುದಾದರೂ ನಿಲ್ದಾಣದಲ್ಲಿ ನಿಲ್ಲುತ್ತವೆ. ಆದರೆ ತ್ರಿವೇಂಡ್ರಂ ರಾಜಧಾನಿ ಎಕ್ಸ್&zwnj;ಪ್ರೆಸ್ ಕೋಟಾ ಜಂಕ್ಷನ್&zwnj;ನಿಂದ ಹೊರಟರೆ, ಮತ್ತೆ 528 ಕಿಲೋಮೀಟರ್ ದೂರದಲ್ಲಿರುವ ವಡೋದರಾ ಜಂಕ್ಷನ್&zwnj;ನಲ್ಲೇ ನಿಲ್ಲುತ್ತದೆ. ಈ ಎರಡು ದೊಡ್ಡ ಜಂಕ್ಷನ್&zwnj;ಗಳ ನಡುವೆ ಇರುವ ಹತ್ತಾರು ಸಣ್ಣ, ದೊಡ್ಡ ರೈಲ್ವೆ ನಿಲ್ದಾಣಗಳನ್ನು ಈ ರೈಲು ಕ್ಯಾರೇ ಎನ್ನದೆ ಸಾಗುತ್ತದೆ.&lt;img&gt;ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ ಎರಡು ಕಮರ್ಷಿಯಲ್ ಹಾಲ್ಟ್&zwnj;ಗಳ ನಡುವೆ ಅತಿ ಹೆಚ್ಚು ದೂರ ನಾನ್&zwnj;ಸ್ಟಾಪ್ ಆಗಿ ಸಂಚರಿಸುವ ರೈಲು ಇದಾಗಿದೆ. ಮಧ್ಯದಲ್ಲಿ ಎಲ್ಲಿಯೂ ನಿಲ್ಲದೆ ಇರುವುದರಿಂದ, ಈ ರೈಲು ಸುಮಾರು 528 ಕಿಲೋಮೀಟರ್&zwnj;ಗಳ ಈ ದೈತ್ಯ ದೂರವನ್ನು ಕೇವಲ 5 ರಿಂದ 6 ಗಂಟೆಗಳಲ್ಲಿ ಕ್ರಮಿಸುತ್ತದೆ. ಈ ಸುದೀರ್ಘ ನಾನ್&zwnj;ಸ್ಟಾಪ್ ಪ್ರಯಾಣದಲ್ಲಿ ಪ್ರಯಾಣಿಕರು ಯಾವುದೇ ಅಡೆತಡೆ ಇಲ್ಲದೆ, ನಿರಂತರ ಪ್ರಯಾಣವನ್ನು ಆನಂದಿಸಬಹುದು. ರೈಲು ವೇಗವಾಗಿ ಚಲಿಸುವುದರಿಂದ ದಣಿವಾದ ಅನುಭವ ಆಗುವುದಿಲ್ಲ. ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪುತ್ತಾರೆ.]]></content:encoded>
            <category><![CDATA[travel]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/travel/indian-railway-indias-longest-non-stop-train-journey-from-kota-to-vadodara-sat-deu1sdx"/>
        </item>
        <item>
            <title><![CDATA[Agumbe Ghat: ಕರಾವಳಿ–ಮಲೆನಾಡು, ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮ]]></title>
            <link>https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</link>
            <guid isPermaLink="true">https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y</guid>
            <pubDate>Sun, 13 Sep 2026 08:36:02 +0530</pubDate>
            <description><![CDATA[Agumbe Ghat: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹18 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khmxh5a1jyhv3zt6ctn09asj,imgname-agumbe-1771302327617.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಾರ್ಕಳ: &lt;/strong&gt;ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ₹18 ಕೋಟಿ ರು. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;&lt;p&gt;ಆಗುಂಬೆ ಘಾಟ್&zwnj;ನಿಂದ ಹೆಬ್ರಿ ಪೇಟೆಯವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಮುಖ ತಿರುವುಗಳಲ್ಲಿ ಅಗತ್ಯ ಕಾಮಗಾರಿಗಳ ಜೊತೆಗೆ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಲು ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಅನುದಾನ ಬಿಡುಗಡೆ ಮಾಹಿತಿ ನೀಡಿದ ಸುನಿಲ್ ಕುಮಾರ್&lt;/strong&gt;&lt;/h2&gt;&lt;p&gt;ಆಗುಂಬೆ ಘಾಟ್ ರಸ್ತೆಯ ಅಭಿವೃದ್ಧಿ ಹಾಗೂ ಅಪಾಯಕಾರಿ ತಿರುವುಗಳಲ್ಲಿ ವಾಹನಗಳ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಈ ಹಿಂದೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ₹18 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.&lt;/p&gt;&lt;p&gt;ಅನುದಾನ ಬಿಡುಗಡೆಗೆ ವಿಶೇಷ ಮುತುವರ್ಜಿ ವಹಿಸಿದ ಕೇಂದ್ರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಂಪರ್ಕ ಮತ್ತಷ್ಟು ಸುಗಮ&lt;/strong&gt;&lt;/h3&gt;&lt;p&gt;ರಸ್ತೆ ಅಭಿವೃದ್ಧಿಯಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದ್ದು, ಕರಾವಳಿ&ndash;ಮಲೆನಾಡು ಹಾಗೂ ಉತ್ತರ ಕರ್ನಾಟಕದ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/central-government-releases-rs-18-crore-grant-for-the-development-of-the-agumbe-ghat-road-mrq/articleshow-0kkdh3y"/>
        </item>
        <item>
            <title><![CDATA[ಪ್ರೀತಿ ಮುಕುಂದನ್ ಯಾರು? ಎಂಜಿನಿಯರಿಂಗ್‌ನಿಂದ ಗ್ಲಾಮರ್ ಲೋಕಕ್ಕೆ, ಇಲ್ಲಿದೆ ನಟಿಯ ಸಿನಿ ಜರ್ನಿ!]]></title>
            <link>https://kannada.asianetnews.com/gallery/entertainment/south-indian-actress-preity-mukhundhan-rise-from-modeling-to-telugu-and-tamil-cinema-gvd-2ff8fmh</link>
            <guid isPermaLink="true">https://kannada.asianetnews.com/gallery/entertainment/south-indian-actress-preity-mukhundhan-rise-from-modeling-to-telugu-and-tamil-cinema-gvd-2ff8fmh</guid>
            <pubDate>Sun, 13 Sep 2026 08:30:14 +0530</pubDate>
            <description><![CDATA[ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಮಾಡೆಲಿಂಗ್ ಹಾಗೂ ಜಾಹೀರಾತುಗಳ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಪ್ರೀತಿ ಮುಕುಂದನ್, ‘ಆಸ ಕೂಟ’ ಮ್ಯೂಸಿಕ್ ವೀಡಿಯೋ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2b52jrmnnx06pvhk29820x6,imgname-pm--1--1789228305172.png" type="image/jpeg" height="390" width="690"/>
            <content:encoded><![CDATA[&lt;p&gt;ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಮಾಡೆಲಿಂಗ್ ಹಾಗೂ ಜಾಹೀರಾತುಗಳ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಪ್ರೀತಿ ಮುಕುಂದನ್, &lsquo;ಆಸ ಕೂಟ&rsquo; ಮ್ಯೂಸಿಕ್ ವೀಡಿಯೋ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು.&lt;/p&gt;&lt;img&gt;&lt;p&gt;ತಮಿಳುನಾಡಿನಲ್ಲಿ ಬೆಳೆದ ನಟಿ ಪ್ರೀತಿ ಮುಕುಂದನ್ ಬಾಲ್ಯದಿಂದಲೇ ನೃತ್ಯ ಮತ್ತು ಕಲೆಯತ್ತ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಓದಿನ ಜೊತೆಗೆ ತಮ್ಮ ಕಲಾತ್ಮಕ ಪ್ರತಿಭೆಯನ್ನು ಬೆಳೆಸಿಕೊಂಡ ಅವರು, ಮುಂದೆ ಗ್ಲಾಮರ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವತ್ತ ಹೆಜ್ಜೆ ಹಾಕಿದರು.&lt;/p&gt;&lt;img&gt;&lt;p&gt;ಪ್ರೀತಿ ಮುಕುಂದನ್ ಅವರ ಶೈಕ್ಷಣಿಕ ಹಿನ್ನೆಲೆಯೂ ಗಮನ ಸೆಳೆಯುವಂತಿದೆ. ತಿರುಚಿರಾಪಳ್ಳಿಯ ಎನ್&zwnj;ಐಟಿ (NIT)ಯಲ್ಲಿ ಬಿ.ಟೆಕ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅವರು, ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಆದರೆ ವೃತ್ತಿಜೀವನದ ಪಯಣ ಅವರನ್ನು ಸಿನಿಮಾ ಮತ್ತು ಮನರಂಜನಾ ಕ್ಷೇತ್ರದತ್ತ ಸೆಳೆಯಿತು.&lt;/p&gt;&lt;img&gt;&lt;p&gt;ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಪ್ರೀತಿ ಮುಕುಂದನ್, ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಗುರುತನ್ನು ಮೂಡಿಸಿಕೊಂಡರು. ಕ್ಯಾಮೆರಾ ಎದುರಿನ ಆತ್ಮವಿಶ್ವಾಸ ಹಾಗೂ ಆಕರ್ಷಕ ವ್ಯಕ್ತಿತ್ವ ಅವರಿಗೆ ಮನರಂಜನಾ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆದವು.&lt;/p&gt;&lt;img&gt;&lt;p&gt;&lsquo;ಆಸ ಕೂಟ&rsquo; ಎಂಬ ಜನಪ್ರಿಯ ಮ್ಯೂಸಿಕ್ ವೀಡಿಯೋ ಪ್ರೀತಿ ಮುಕುಂದನ್ ಅವರ ವೃತ್ತಿಜೀವನಕ್ಕೆ ಪ್ರಮುಖ ತಿರುವು ನೀಡಿತು. ಈ ಹಾಡು ದೇಶಾದ್ಯಂತ ಗಮನ ಸೆಳೆಯುತ್ತಿದ್ದಂತೆ, ಪ್ರೀತಿಯೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಪರಿಚಿತರಾದರು. ಇದರೊಂದಿಗೆ ಅವರು ಭರವಸೆಯ ಯುವ ನಟಿಯಾಗಿ ಗುರುತಿಸಿಕೊಳ್ಳಲು ಆರಂಭಿಸಿದರು.&lt;/p&gt;&lt;img&gt;&lt;p&gt;ಮ್ಯೂಸಿಕ್ ವೀಡಿಯೋ ಮೂಲಕ ಜನಪ್ರಿಯತೆ ಗಳಿಸಿದ ಬಳಿಕ ಪ್ರೀತಿ ಮುಕುಂದನ್ ತೆಲುಗು ಚಿತ್ರರಂಗದತ್ತ ಹೆಜ್ಜೆ ಹಾಕಿದರು. &lsquo;ಓಂ ಭೀಮ್ ಬುಷ್&rsquo; ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಅವರು, ತಮ್ಮ ನಟನಾ ಪಯಣವನ್ನು ಯಶಸ್ವಿಯಾಗಿ ಆರಂಭಿಸಿದರು.&lt;/p&gt;&lt;img&gt;&lt;p&gt;ತೆಲುಗಿನಲ್ಲಿ ಎಂಟ್ರಿ ಪಡೆದ ಬಳಿಕ ಪ್ರೀತಿ ಮುಕುಂದನ್ ತಮಿಳು ಚಿತ್ರರಂಗಕ್ಕೂ ಕಾಲಿಟ್ಟರು. ನಟ ಕವಿನ್ ಅಭಿನಯದ &lsquo;ಸ್ಟಾರ್&rsquo; ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತಮಿಳು ಪ್ರೇಕ್ಷಕರ ಗಮನ ಸೆಳೆದರು.&lt;/p&gt;&lt;img&gt;&lt;p&gt;ಎಂಜಿನಿಯರಿಂಗ್ ವಿದ್ಯಾಭ್ಯಾಸ, ಮಾಡೆಲಿಂಗ್, ಮ್ಯೂಸಿಕ್ ವೀಡಿಯೋ ಹಾಗೂ ನಂತರದ ಸಿನಿಮಾ ಪ್ರವೇಶ, ಹೀಗೆ ವಿಭಿನ್ನ ಹಂತಗಳನ್ನು ದಾಟಿ ಬಂದಿರುವ ಪ್ರೀತಿ ಮುಕುಂದನ್, ಇದೀಗ ಬಹುಭಾಷಾ ನಟಿಯಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಕಟ್ಟಿಕೊಳ್ಳುವತ್ತ ಸಾಗುತ್ತಿದ್ದಾರೆ. ಕಡಿಮೆ ಅವಧಿಯಲ್ಲೇ ಹಲವು ಭಾಷೆಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಅವಕಾಶಗಳ ನಿರೀಕ್ಷೆ ಮೂಡಿಸಿರುವ ಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/south-indian-actress-preity-mukhundhan-rise-from-modeling-to-telugu-and-tamil-cinema-gvd-2ff8fmh"/>
        </item>
        <item>
            <title><![CDATA[ಕೆನಡಾದಿಂದ ಬಂದ ಹಣ… ಪುಟ್ಟ ಬಾಲಕ ಮಾಡಿದ್ದೇನು ಗೊತ್ತಾ? ಗೆಳೆಯರಿಗಾಗಿ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ!]]></title>
            <link>https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz</link>
            <guid isPermaLink="true">https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz</guid>
            <pubDate>Sun, 13 Sep 2026 08:27:44 +0530</pubDate>
            <description><![CDATA[ಕೆನಡಾದಲ್ಲಿ ವಾಸಿಸುವ ಕೇಶಾ ಎಂಬ ಮಹಿಳೆಯ ನೆರವಿನಿಂದ ಪುಟ್ಟ ವಿಷಯ ಸೃಷ್ಟಿಕರ್ತ ಸೂರಜ್ ಕುಮಾರ್ ತನ್ನ ಸ್ನೇಹಿತರಿಗೆ ವಿಶೇಷ ಆಹಾರ ಕೂಟ ಆಯೋಜಿಸಿದ್ದಾರೆ. ಫ್ರೆಂಚ್ ಫ್ರೈಸ್, ಕಪ್‌ಕೇಕ್, ಪ್ಯಾಟೀಸ್, ಕಾಲಾ ಜಾಮೂನ್ ಮತ್ತು ತಂಪು ಪಾನೀಯಗಳ ಮೆನು ಗಮನ ಸೆಳೆದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸೂರಜ್ ಗ್ಯಾಂಗ್‌ಗೆ ಸೇರಲು ನೆಟ್ಟಿಗರು ತಮಾಷೆಯಾಗಿ ಆಸೆ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2an2rjk9ra94sybx8gm0sg0,imgname-young-content-creator-suraj-kumar-enjoys-party-with-friends--1--1789211533907.jpg" type="image/jpeg" height="390" width="690"/>
            <content:encoded><![CDATA[&lt;h2&gt;ಕೆನಡಾದಿಂದ ಬಂದ ನೆರವು; ಗೆಳೆಯರಿಗೆ ಸೂರಜ್ ಕೊಟ್ಟ ಭರ್ಜರಿ ಟ್ರೀಟ್!&lt;/h2&gt;&lt;p&gt;ಕೆನಡಾದಲ್ಲಿ ವಾಸಿಸುವ ಕೇಶಾ ಎಂಬ ಮಹಿಳೆಯೊಬ್ಬರು ನೀಡಿದ ದೇಣಿಗೆ ಪುಟ್ಟ ವಿಷಯ ಸೃಷ್ಟಿಕರ್ತ ಸೂರಜ್ ಕುಮಾರ್ ಮತ್ತು ಅವರ ಸ್ನೇಹಿತರ ಪಾಲಿಗೆ ವಿಶೇಷ ಸಂಭ್ರಮಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ತನ್ನ ಸ್ನೇಹಿತರಿಗಾಗಿ ವಿವಿಧ ಖಾದ್ಯಗಳನ್ನು ತಯಾರಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸೂರಜ್, ಈ ಬಾರಿ ದೊರೆತ ನೆರವಿನಿಂದ ಗೆಳೆಯರಿಗೆ ವಿಶೇಷ ಆಹಾರ ಕೂಟ ಆಯೋಜಿಸಿದ್ದಾರೆ.&lt;/p&gt;&lt;h3&gt;ಮೆನುವಿನಲ್ಲಿ ಏನೇನಿತ್ತು ಗೊತ್ತಾ?&lt;/h3&gt;&lt;p&gt;ಈ ವಿಶೇಷ ಪಾರ್ಟಿಯ ಮೆನು ಕೂಡ ಗಮನ ಸೆಳೆಯುವಂತಿತ್ತು. ಫ್ರೆಂಚ್ ಫ್ರೈಸ್, ಕಪ್&zwnj;ಕೇಕ್&zwnj;ಗಳು, ಪ್ಯಾಟೀಸ್, ಕಾಲಾ ಜಾಮೂನ್ ಮತ್ತು ತಂಪು ಪಾನೀಯಗಳು ಮಕ್ಕಳಿಗೆ ಹಬ್ಬದ ವಾತಾವರಣ ಸೃಷ್ಟಿಸಿವೆ.&lt;/p&gt;&lt;p&gt;ಸೂರಜ್ ಮೊದಲು ಆಲೂಗಡ್ಡೆಗಳನ್ನು ಕತ್ತರಿಸಿ ಫ್ರೆಂಚ್ ಫ್ರೈಸ್ ತಯಾರಿಸುವ ಮೂಲಕ ಅಡುಗೆ ಆರಂಭಿಸಿದರು. ನಂತರ ಉಳಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ, ಕೊನೆಯಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ತಟ್ಟೆಗಳಲ್ಲಿ ಬಡಿಸಿದರು. ಸ್ನೇಹಿತರೆಲ್ಲರೂ ಒಟ್ಟಿಗೆ ಕುಳಿತು ಊಟ ಸವಿಯುವ ದೃಶ್ಯವೂ ವಿಡಿಯೋದಲ್ಲಿದೆ.&lt;/p&gt;&lt;h3&gt;ದೇಣಿಗೆ ನೀಡಿದ ಕೇಶಾಗೆ ವಿಶೇಷ ಧನ್ಯವಾದ&lt;/h3&gt;&lt;p&gt;ಈ ಪಾರ್ಟಿ ಕೆನಡಾದಲ್ಲಿರುವ ಕೇಶಾ ಅವರ ನೆರವಿನಿಂದ ಸಾಧ್ಯವಾಯಿತು ಎಂದು ಸೂರಜ್ ವಿಡಿಯೋದಲ್ಲಿ ತಿಳಿಸಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಆಹಾರ ಹಂಚಿಕೊಳ್ಳುವ ಮೂಲಕ ದೊರೆತ ಸಹಾಯವನ್ನು ಸಂಭ್ರಮವಾಗಿ ಪರಿವರ್ತಿಸಿರುವುದು ವೀಕ್ಷಕರ ಗಮನ ಸೆಳೆದಿದೆ.&lt;/p&gt;&lt;p&gt;ಸೂರಜ್ ಅವರ ಕಂಟೆಂಟ್&zwnj;ನ ವಿಶೇಷತೆಯೇ ಸ್ನೇಹಿತರಿಗಾಗಿ ಅಡುಗೆ ಮಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡುವ ಕ್ಷಣಗಳನ್ನು ಹಂಚಿಕೊಳ್ಳುವುದು. ಹೀಗಾಗಿ ಈ ಬಾರಿ ವಿದೇಶದಿಂದ ಬಂದ ನೆರವು ಕೂಡ ಅದೇ ಸರಳ ಮತ್ತು ಆತ್ಮೀಯ ಶೈಲಿಯಲ್ಲಿ ಬಳಕೆಯಾಗಿದೆ.&lt;/p&gt;&lt;h3&gt;&lsquo;ಗ್ಯಾಂಗ್&zwnj;ಗೆ ಸೇರಿಸಿಕೊಳ್ಳಿ&rsquo; ಎಂದ ನೆಟ್ಟಿಗರು!&lt;/h3&gt;&lt;p&gt;ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾಮೆಂಟ್&zwnj;ಗಳಲ್ಲೂ ತಮಾಷೆಯ ಮಾತುಗಳು ಶುರುವಾದವು. ಕೆಲವರು &ldquo;ವಿದೇಶಿ ನಿಧಿಯೂ ಬರಲು ಶುರುವಾಗಿದೆ&rdquo; ಎಂದು ತಮಾಷೆ ಮಾಡಿದರೆ, ಇನ್ನೂ ಹಲವರು ಸೂರಜ್ ಅವರ ಸ್ನೇಹಿತರ ಗುಂಪಿಗೆ ಸೇರಲು ತಮಾಷೆಯಾಗಿ ಆಸೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&ldquo;ನಿಮ್ಮ ಗ್ಯಾಂಗ್&zwnj;ಗೆ ಸೇರಲು ಏನು ಮಾಡಬೇಕು?&rdquo;, &ldquo;ನನ್ನನ್ನೂ ನಿಮ್ಮ ತಂಡಕ್ಕೆ ಸೇರಿಸಿಕೊಳ್ಳಿ&rdquo; ಎಂಬ ರೀತಿಯ ಕಾಮೆಂಟ್&zwnj;ಗಳು ಗಮನ ಸೆಳೆದಿವೆ.&lt;/p&gt;&lt;h3&gt;ಊಟಕ್ಕಿಂತ ದೊಡ್ಡದಾದ ಸಂದೇಶ&lt;/h3&gt;&lt;p&gt;ಈ ವಿಡಿಯೋದಲ್ಲಿ ಗಮನ ಸೆಳೆಯುವುದು ಕೇವಲ ರುಚಿಕರ ಆಹಾರವಲ್ಲ. ಸಿಕ್ಕ ನೆರವನ್ನು ಹಂಚಿಕೊಳ್ಳುವ ಮನೋಭಾವ ಮತ್ತು ಸ್ನೇಹಿತರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಸರಳತೆ ವೀಕ್ಷಕರನ್ನು ಸೆಳೆದಿದೆ.&lt;/p&gt;&lt;p&gt;ಸೂರಜ್ ಅವರ ಕಂಟೆಂಟ್&zwnj;ಗೆ ದೊರೆಯುತ್ತಿರುವ ಪ್ರತಿಕ್ರಿಯೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಸರಳವಾದ ಮಾನವೀಯ ಕ್ಷಣಗಳಿಗೂ ದೊಡ್ಡ ಮಟ್ಟದ ಪ್ರೇಕ್ಷಕರ ಸಂಪರ್ಕ ಸಿಗಬಹುದು ಎಂಬುದನ್ನು ತೋರಿಸುತ್ತಿವೆ.&lt;/p&gt;View this post on Instagram&lt;p&gt;A post shared by Suraj Kumar (@surajkaju10k)&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/canadian-woman-sponsors-little-boys-food-party-what-he-does-with-the-money-wins-hearts/articleshow-61qduhz"/>
        </item>
        <item>
            <title><![CDATA[SSLC ಟಾಪರ್ಸ್‌ಗಳಿಗೆ ಉಚಿತ ದೆಹಲಿ ಪ್ರವಾಸದ ಭಾಗ್ಯ; ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಗ್ಯಾರಂಟಿ!]]></title>
            <link>https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</link>
            <guid isPermaLink="true">https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k</guid>
            <pubDate>Sun, 13 Sep 2026 07:58:02 +0530</pubDate>
            <description><![CDATA[ದಾವಣಗೆರೆ ಲೋಕಸಭಾ ಕ್ಷೇತ್ರದ ಎಸ್ಸೆಸ್ಸೆಲ್ಸಿ ಟಾಪರ್ ವಿದ್ಯಾರ್ಥಿಗಳನ್ನು ಉಚಿತವಾಗಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಘೋಷಿಸಿದ್ದಾರೆ. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಈ ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ನೋಡುವ ಅವಕಾಶ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c995qvya46atbcmdwng385,imgname-davanagere-sslc-toppers-delhi-tour-1789266269944.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ/ದಾವಣಗೆರೆ (ಸೆ.13): ವಿ&lt;/strong&gt;ಜಯನಗರ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳನ್ನು ಮುಂದಿನ ತಿಂಗಳು ಉಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಪಟ್ಟಣದ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು, ದಾವಣಗೆರೆ ಲೋಕಸಭಾ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಿಹಿಸುದ್ದಿ ನೀಡಿದ್ದಾರೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ದೇಶದ ಆಡಳಿತ ಕೇಂದ್ರದ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.&lt;/p&gt;&lt;h2&gt;&lt;strong&gt;ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳು:&lt;/strong&gt;&lt;/h2&gt;&lt;p&gt;ಶಿಕ್ಷಕರ ಪಾತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, 'ಯುವ ಪೀಳಿಗೆಯನ್ನು ಸರಿಯಾದ ಹಾದಿಯಲ್ಲಿ ನಡೆಸಿ ದೇಶದ ಭವಿಷ್ಯ ರೂಪಿಸುವ ಅದ್ಭುತ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಶಿಕ್ಷಕರು ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ಬೋಧಿಸುವವರಲ್ಲ, ಬದಲಿಗೆ ಮಕ್ಕಳಲ್ಲಿ ಸಂಸ್ಕಾರ, ನೈತಿಕ ಮೌಲ್ಯ ಮತ್ತು ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬಿತ್ತುವ ನೈಜ ಶಿಲ್ಪಿಗಳು' ಎಂದು ಬಣ್ಣಿಸಿದರು.&lt;/p&gt;&lt;p&gt;ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸಲು ಇಂತಹ ಪ್ರೋತ್ಸಾಹಕ ಕ್ರಮಗಳು ಅತ್ಯಗತ್ಯವಾಗಿದ್ದು, ದೆಹಲಿ ಪ್ರವಾಸದ ವೇಳೆ ವಿದ್ಯಾರ್ಥಿಗಳಿಗೆ ಸಂಸತ್ ಭವನ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮದಲ್ಲಿ ತಾಲೂಕಿನ ಗಣ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ನೂರಾರು ಶಿಕ್ಷಕರು ಉಪಸ್ಥಿತರಿದ್ದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/davanagere-mp-prabha-mallikarjun-promise-free-delhi-tour-for-sslc-toppers-sat/articleshow-e2xxr9k"/>
        </item>
        <item>
            <title><![CDATA[ಜರ್ಮನಿಯ ಗಣೇಶನಿಗೆ ಪುತ್ತೂರಿನಲ್ಲಿ ತಯಾರಾಯ್ತು ರಜತ ಕಿರೀಟ; ಏನಿದರ ವಿಶೇಷತೆ?]]></title>
            <link>https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</link>
            <guid isPermaLink="true">https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko</guid>
            <pubDate>Sun, 13 Sep 2026 07:55:24 +0530</pubDate>
            <description><![CDATA[ಜರ್ಮನಿಯ ಬರ್ಲಿನ್‌ನಲ್ಲಿರುವ ಶ್ರೀ ಗಣೇಶ ಹಿಂದೂ ದೇವಸ್ಥಾನದ ಗಣಪತಿ ವಿಗ್ರಹಕ್ಕಾಗಿ ಪುತ್ತೂರಿನ ಡಿ. ಶಿವ ಭಟ್ ಜ್ಯುವೆಲ್ಲರ್ಸ್‌ನಲ್ಲಿ ವಿಶೇಷ ರಜತ ಕಿರೀಟವನ್ನು ತಯಾರಿಸಲಾಗಿದೆ. ಶ್ಯಾಮಲಾ ನಾಯಕ್ ಪುಣಚ ಕುಟುಂಬದವರ ಸೇವೆಯಾಗಿ, ಆರು ತಿಂಗಳ ಪರಿಶ್ರಮದಿಂದ ಸಿದ್ಧವಾದ ಈ ಕಿರೀಟವು ಪುತ್ತೂರಿನ ಕರಕುಶಲ ಪರಂಪರೆ ಮತ್ತು ಭಕ್ತಿಯ ಪ್ರತೀಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c93gnr4y901ba4j8gmsbp8,imgname-puttur-1789266084528.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ಜರ್ಮನಿಯ ಬರ್ಲಿನ್&zwnj;ನಲ್ಲಿರುವ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ನ ಗಣೇಶನ ಮೂರ್ತಿಗೆ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನಲ್ಲಿ ರಜತ ಕಿರೀಟ ತಯಾರಿಸಲಾಗಿದೆ.&lt;/p&gt;&lt;p&gt;ಶ್ಯಾಮಲಾ ನಾಯಕ್ ಪುಣಚ ಹಾಗೂ ಕುಟುಂಬದವರ ಸೇವಾರ್ಥವಾಗಿ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;ನ ಕರಕುಶಲ ಕರ್ಮಿಗಳು ವಿಶೇಷ ವಿನ್ಯಾಸದ ಈ ಬೆಳ್ಳಿ ಕಿರೀಟವನ್ನು ತಯಾರಿಸಿದ್ದಾರೆ.&lt;/p&gt;&lt;p&gt;ಸಿದ್ಧ ವಿನ್ಯಾಸವನ್ನು ಕೈಬಿಟ್ಟು, ಭಕ್ತರ ಭಕ್ತಿ-ಆರಾಧನೆಗೆ ಅನುಗುಣವಾಗಿ ಕಿರೀಟಕ್ಕೆ ರೂಪ ನೀಡಲಾಗಿದೆ. ಆರು ತಿಂಗಳ ಪರಿಶ್ರಮದ ಫಲವೇ ಈ ರಜತ ಕಿರೀಟ. ಬೆಳ್ಳಿಯ ಕರಕುಶಲತೆ, ಸೂಕ್ಷ್ಮ ಅಲಂಕಾರಿಕ ವಿವರಗಳು ಹಾಗೂ ಅಂತಿಮ ರೂಪದವರೆಗೆ ಪ್ರತಿಯೊಂದು ಹಂತದಲ್ಲೂ ತಾಳ್ಮೆ ನಿಖರತೆ ಮತ್ತು ಅನುಭವ ಮೇಳೈಸಿದೆ.&lt;/p&gt;&lt;p&gt;ಹೀಗಾಗಿ ಇದು ಕೇವಲ ಬೆಳ್ಳಿ ಕಿರೀಟವಲ್ಲ. ಪುತ್ತೂರಿನ ಕರಕುಶಲ ಪರಂಪರೆ, ಭಕ್ತಿಭಾವ, ವೈಯಕ್ತಿಕ ಕಲ್ಪನೆ ಮತ್ತು ಮೂರು ತಲೆಮಾರುಗಳಿಂದ ಬೆಳೆದು ಬಂದ ಗ್ರಾಹಕರ ವಿಶ್ವಾಸ ಇವೆಲ್ಲವೂ ಒಂದೇ ಕಲಾಕೃತಿಯಲ್ಲಿ ಒಂದಾಗಿರುವ ಪ್ರತೀಕ.&lt;/p&gt;&lt;h2&gt;&lt;strong&gt;ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj;&lt;/strong&gt;&lt;/h2&gt;&lt;p&gt;2027ರಲ್ಲಿ ಶತಮಾನೋತ್ಸವ ಆಚರಿಸಲಿರುವ ಡಿ. ಶಿವ ಭಟ್ ಜ್ಯುವೆಲ್ಲರ್ಸ್&zwnj; ಪುತ್ತೂರಿನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವ್ಯಾಪಾರ ಹಾಗೂ ಕರಕುಶಲ ಪರಂಪರೆಯೊಂದಿಗೆ ಬೆಳೆದುಬಂದಿದೆ. ಡಿ. ಶಿವ ಭಟ್ ಅವರ ನಂತರ ಸಂಸ್ಥೆಯ ಜವಾಬ್ದಾರಿಯನ್ನು ಅವರ ಪುತ್ರ ಗೋವಿಂದ ಭಟ್ ವಹಿಸಿಕೊಂಡರು. ಮೂಲ ಮೌಲ್ಯವಾದ ಗ್ರಾಹಕರ ವಿಶ್ವಾಸ ನಿರಂತರವಾಗಿ ಮುಂದುವರಿಯಿತು. ಇಂದು ಮೂರನೇ ತಲೆಮಾರಿನ ಈಶ್ವರ ಮುರಳಿ ಅವರ ನೇತೃತ್ವದಲ್ಲಿ ಸಂಸ್ಥೆ ಹೊಸ ಕಾಲದ ಅಗತ್ಯಗಳು ಮತ್ತು ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳಿಗೆ ಹೊಂದಿಕೊಳ್ಳುತ್ತಾ ಪರಂಪರೆಯನ್ನು ಜೀವಂತವಾಗಿದೆ.&lt;/p&gt;&lt;p&gt;ಜರ್ಮನಿಯ ಬರ್ಲಿನ್&zwnj;ನ ಶ್ರೀ ಗಣೇಶ ಹಿಂದೂ ಟೆಂಪಲ್&zwnj;ಗಾಗಿ ಶ್ಯಾಮಲಾ ನಾಯಕ್ ಪುಣಚ ಮತ್ತು ಕುಟುಂಬ ನೀಡಿದ ಗಣಪತಿ ಕಿರೀಟದ ಆರ್ಡರ್ ವೈಯಕ್ತಿಕ ಕಲ್ಪನೆ ಮತ್ತು ಭಕ್ತಿಯ ಫಲ. ಗಣಪತಿ ಆರಾಧನೆಯೊಂದಿಗೆ ಬೆಸೆದುಕೊಂಡಿರುವ ಭಕ್ತಿಭಾವವನ್ನು ಗಮನದಲ್ಲಿಟ್ಟುಕೊಂಡು ಕಿರೀಟದ ವಿನ್ಯಾಸ, ಅಲಂಕಾರಿಕ ವಿವರಗಳು ಮತ್ತು ಬೆಳ್ಳಿಯ ಕರಕುಶಲತೆಯನ್ನು ಸಮನ್ವಯಗೊಳಿಸಲಾಗಿದೆ. ಕಣ್ಣಿಗೆ ಕಾಣುವ ಅಂತಿಮ ಕಲಾಕೃತಿಯ ಹಿಂದೆ ಹಲವು ಹಂತಗಳ ಪರಿಶ್ರಮ, ತಾಳ್ಮೆ ಮತ್ತು ನಿಖರತೆ ಅಡಗಿದೆ. ಇಂದು ಆಭರಣಗಳ ವಿನ್ಯಾಸ ಬದಲಾಗಿದೆ, ಗ್ರಾಹಕರ ಅಭಿರುಚಿ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ. ಆದರೆ ಗ್ರಾಹಕರ ಮಾತನ್ನು ಆಲಿಸಿ, ಅವರ ಭಾವನೆ ಮತ್ತು ಅಗತ್ಯಕ್ಕೆ ತಕ್ಕಂತೆ ಆಭರಣವನ್ನು ರೂಪಿಸುವ ಮೂಲ ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.&lt;/p&gt;&lt;p&gt;। ಈಶ್ವರ ಮುರಳಿ, ಮಾಲಕರು, ಡಿ. ಶಿವ ಭಟ್ ಜ್ಯುವೆಲ್ಲರ್ಸ್, ಪುತ್ತೂರು&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-silver-crown-crafted-in-puttur-for-germany-s-ganesha-what-makes-it-special-mrq/articleshow-d3anzko"/>
        </item>
        <item>
            <title><![CDATA[Belagavi: 756 ಎಕ್ರೆಯ ಪ್ರದೇಶದಲ್ಲಿ ಪಾಲಿಕೆಗೆ ಕಂಟೋನ್ಮೆಂಟ್‌ ಕೊಡೋದೆಷ್ಟು ಜಾಗ?]]></title>
            <link>https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</link>
            <guid isPermaLink="true">https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp</guid>
            <pubDate>Sun, 13 Sep 2026 07:47:35 +0530</pubDate>
            <description><![CDATA[ಬೆಳಗಾವಿ ಕಂಟೋನ್ಮೆಂಟ್‌ನ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಚರ್ಚೆಯಲ್ಲಿದೆ. 756 ಎಕರೆ ಪೂರ್ಣ ಪ್ರದೇಶದ ಬದಲು 112 ಎಕರೆ ಮಾತ್ರ ಹಸ್ತಾಂತರಿಸುವ ಪ್ರಸ್ತಾಪದಿಂದ ಗೊಂದಲ ಉಂಟಾಗಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2c8t73v0wcwe7we7526afq7,imgname-belagavi-cantonment-1789265779835.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರದ ಹೃದಯಭಾಗದಲ್ಲಿದ್ದು, ಇತಿಹಾಸ, ಹಸಿರು ಪರಿಸರ, ಶಿಕ್ಷಣ ಹಾಗೂ ಸೇನಾ ಪರಂಪರೆಯನ್ನು ತನ್ನೊಳಗೆ ಕಟ್ಟಿಕೊಂಡಿರುವ ಬೆಳಗಾವಿ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಯ ತೆಕ್ಕೆಗೆ ಯಾವಾಗ ಬರಲಿದೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. 756 ಎಕರೆ ನಾಗರಿಕ ಪ್ರದೇಶದ ಹಸ್ತಾಂತರಕ್ಕೆ 70 ಪುಟಗಳ ಸಮಗ್ರ ವರದಿ ಸಿದ್ಧವಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯೂ ಇದೆ. ರಾಜ್ಯ ಸರ್ಕಾರದ ಹಂತದಲ್ಲೂ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಆದರೂ ಅಂತಿಮ ಹಸ್ತಾಂತರಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ.&lt;/p&gt;&lt;h2&gt;&lt;strong&gt;ಕಡತದ ಪಯಣ ಇನ್ನೂ ಮುಗಿದಿಲ್ಲ&lt;/strong&gt;&lt;/h2&gt;&lt;p&gt;ಕಂಟೋನ್ಮೆಂಟ್ ವ್ಯಾಪ್ತಿಯ ನಾಗರಿಕ ವಸಾಹತುಗಳನ್ನು ಆಯಾ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಹಸ್ತಾಂತರಿಸುವ ಕೇಂದ್ರ ರಕ್ಷಣಾ ಸಚಿವಾಲಯದ ನೀತಿಯಡಿ ಬೆಳಗಾವಿಯ 756 ಎಕರೆ ನಾಗರಿಕ ಪ್ರದೇಶದ ಕುರಿತು ವರದಿ ಸಿದ್ಧಪಡಿಸಲಾಗಿದೆ. ಆದರೆ ವರದಿ ಸಿದ್ಧವಾಗುವುದೇ ಹಸ್ತಾಂತರವಲ್ಲ. ಭೂ ಮಾಲೀಕತ್ವದ ಹಕ್ಕುಗಳು, ಸ್ವತ್ತುಗಳ ವರ್ಗಾವಣೆ, ಬಾಕಿ ಇರುವ ಹೊಣೆಗಾರಿಕೆಗಳು, ಸಿಬ್ಬಂದಿ, ರಸ್ತೆ, ನೀರು, ಒಳಚರಂಡಿ ಹಾಗೂ ಇತರೆ ನಾಗರಿಕ ಮೂಲಸೌಕರ್ಯಗಳ ಜವಾಬ್ದಾರಿ ಸೇರಿದಂತೆ ಹಲವು ವಿಷಯಗಳು ಇನ್ನೂ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿವೆ. ಸದ್ಯ ಪ್ರಸ್ತಾವನೆ ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಪರಿಗಣನೆಯಲ್ಲಿದೆ. ರಾಜ್ಯಮಟ್ಟದ ಪರಿಶೀಲನೆ ಬಳಿಕ ಸಚಿವ ಸಂಪುಟ ಹಾಗೂ ರಕ್ಷಣಾ ಸಚಿವಾಲಯದೊಂದಿಗೆ ಚರ್ಚಿಸಿ ಮುಂದಿನ ಹಂತಕ್ಕೆ ಕಳುಹಿಸಬೇಕಿದೆ.&lt;/p&gt;&lt;p&gt;ಹಸ್ತಾಂತರದ ಪ್ರಸ್ತಾವನೆಯಲ್ಲಿ 112 ಎಕರೆ ಅಂಶ ಇದೀಗ ಪ್ರಮುಖ ಚರ್ಚೆಯ ವಿಷಯವಾಗಿದೆ. ಕಂಟೋನ್ಮೆಂಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ 112 ಎಕರೆ ನಾಗರಿಕ ಪ್ರದೇಶವನ್ನು ಮಾತ್ರ ಹಸ್ತಾಂತರಿಸಲು ಪ್ರಸ್ತಾಪಿಸಿದ್ದಾರೆ. ಆದರೆ 756 ಎಕರೆ ನಾಗರಿಕ ಪ್ರದೇಶದ ಕುರಿತು ಸಮಗ್ರ ವರದಿ ಸಿದ್ಧವಾಗಿರುವಾಗ 112 ಎಕರೆ ಮಾತ್ರ ಏಕೆ ಎಂಬ ಪ್ರಶ್ನೆ ಎದುರಾಗಿದೆ. ಹಾಗಾದರೆ ಉಳಿದ ಪ್ರದೇಶದ ಸ್ಥಿತಿ ಏನು? ನಾಗರಿಕ ಪ್ರದೇಶದ ಗಡಿ ಯಾವ ಆಧಾರದ ಮೇಲೆ ನಿಗದಿಯಾಗಲಿದೆ? ಅಂತಿಮವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಎಷ್ಟು ಪ್ರದೇಶ ಬರಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.&lt;/p&gt;&lt;p&gt;ಕೇಂದ್ರ ರಕ್ಷಣಾ ಸಚಿವಾಲಯದ ಹೊಸ ಮಾರ್ಗಸೂಚಿಗಳು ಮಾತ್ರ ಈ ಪ್ರಕ್ರಿಯೆಗೆ ಹೊಸ ತಿರುವು ನೀಡಿವೆ. ಕಂಟೋನ್ಮೆಂಟ್ ಮಿತಿಯೊಳಗಿನ ನಾಗರಿಕ ವಸಾಹತುಗಳನ್ನು ಸ್ಥಳೀಯ ಪುರಸಭೆ ಸಂಸ್ಥೆಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಿರುವುದರಿಂದ, ಅಂತಿಮವಾಗಿ ಗುರುತಿಸಲಾದ ಸಂಪೂರ್ಣ ನಾಗರಿಕ ಪ್ರದೇಶವೇ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂಬ ನಿರೀಕ್ಷೆ ಮೂಡಿದೆ. ಆದರೆ ಕೇಂದ್ರದ ಮಾರ್ಗಸೂಚಿ ಇದ್ದರೂ, ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರದ ಅಂತಿಮ ಒಪ್ಪಿಗೆ ಇಲ್ಲದೆ ಹಸ್ತಾಂತರ ಸಾಧ್ಯವಿಲ್ಲ.&lt;/p&gt;&lt;p&gt;ಪಾಲಿಕೆಗೆ ಸೇರಿದರೆ ಏನು ಬದಲಾಗಲಿದೆ?:ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಸೇರಿದರೆ ಅಲ್ಲಿನ ನಿವಾಸಿಗಳ ದೈನಂದಿನ ಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಲಾಗಿದೆ. ನೀರು ಪೂರೈಕೆ, ರಸ್ತೆ ನಿರ್ವಹಣೆ, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಕಟ್ಟಡ ಪರವಾನಗಿ ಸೇರಿದಂತೆ ಹಲವು ಮೂಲಸೌಲಭ್ಯಗಳು ಪಾಲಿಕೆಯ ವ್ಯಾಪ್ತಿಗೆ ಬರಬಹುದು. ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ಸಂಭವಿಸುವ ಸಾಧ್ಯತೆಯಿದೆ. ಕಂಟೋನ್ಮೆಂಟ್&zwnj;ನ ಆಸ್ತಿಗಳು ಯಾರ ಪಾಲಾಗಲಿವೆ? ಸಿಬ್ಬಂದಿಯ ಗತಿ ಏನು? ರಸ್ತೆ, ಚರಂಡಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ವಹಣೆ ಯಾರ ಹೊಣೆ? ಬಾಕಿ ಇರುವ ಆರ್ಥಿಕ ಹೊಣೆಗಾರಿಕೆಗಳನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬುದಕ್ಕೆ ಹಸ್ತಾಂತರಕ್ಕೂ ಮುನ್ನ ಸ್ಪಷ್ಟ ಉತ್ತರ ಬೇಕಿದೆ.&lt;/p&gt;&lt;h3&gt;&lt;strong&gt;ಎರಡ್ಮೂರು ತಿಂಗಳು ಬೇಕು&lt;/strong&gt;&lt;/h3&gt;&lt;p&gt;ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಆದರೆ ಕಡತದ ಹಂತಗಳು ಇನ್ನೂ ಹಲವು ಇರುವುದರಿಂದ ಎರಡು&ndash;ಮೂರು ತಿಂಗಳ ನಂತರವೇ ನಿಜವಾದ ಹಸ್ತಾಂತರ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.&lt;/p&gt;&lt;h3&gt;&lt;strong&gt;ಕಂಟೋನ್ಮೆಂಟ್&zwnj; ಇತಿಹಾಸ&lt;/strong&gt;&lt;/h3&gt;&lt;p&gt;ಬೆಳಗಾವಿ ಕಂಟೋನ್ಮೆಂಟ್&zwnj;ಗೆ ಎರಡು ಶತಮಾನಗಳ ಇತಿಹಾಸವಿದೆ. 1832ರಲ್ಲಿ ಸ್ಥಾಪನೆಯಾದ ಕಂಟೋನ್ಮೆಂಟ್, ಮುಖ್ಯ ಕಂಟೋನ್ಮೆಂಟ್ ಮತ್ತು ಕೋಟೆ ವಲಯ ಎಂಬ ಎರಡು ಭಾಗಗಳನ್ನು ಒಳಗೊಂಡಿದೆ. ಕಂಟೋನ್ಮೆಂಟ್ ಎಂದರೆ ಕೇವಲ ಸೇನಾ ನೆಲೆ ಎಂಬ ಕಲ್ಪನೆಗೆ ಮೀರಿದ ಹಲವು ಆಯಾಮಗಳು ಇಲ್ಲಿವೆ. ವಿಶಾಲವಾದ ಹಸಿರು ಪ್ರದೇಶ, ಮರಗಳ ಸಾಲು, ಅಚ್ಚುಕಟ್ಟಾದ ರಸ್ತೆಗಳು ಹಾಗೂ ವಾಯುವಿಹಾರಕ್ಕೆ ಸೂಕ್ತವಾದ ವಾತಾವರಣದಿಂದ ಇದು ಬೆಳಗಾವಿಯ ಹಸಿರು ಶ್ವಾಸಕೋಶದಂತಿದೆ. ಬೆಳಗಿನ ಜಾವ ವಾಯುವಿಹಾರಕ್ಕೆ ಬರುವ ಜನರಿಗೆ ಇದು ನೆಚ್ಚಿನ ತಾಣ. ಅಲ್ಲದೇ, ಇದು ರಾಜ್ಯದ ಏಕೈಕ ಕಂಟೋನ್ಮೆಂಟ್&zwnj; ಎಂಬ ಹೆಗ್ಗಳಿಕೆಯೂ ಇದೆ.&lt;/p&gt;&lt;p&gt;ಮರಾಠಾ ಲಘು ಪದಾತಿದಳದ ರೆಜಿಮೆಂಟಲ್ ಕೇಂದ್ರ, ಕಿರಿಯ ನಾಯಕರ ತರಬೇತಿ ವಿಭಾಗ ಸೇರಿದಂತೆ ಹಲವು ಪ್ರಮುಖ ಸೇನಾ ಸ್ಥಾಪನೆಗಳು ಕಂಟೋನ್ಮೆಂಟ್&zwnj;ನಲ್ಲಿವೆ. ಹೀಗಾಗಿ ಸೇನಾ ನೆಲೆ, ನಾಗರಿಕ ವಸಾಹತು, ಶಿಕ್ಷಣ ಕೇಂದ್ರ, ಐತಿಹಾಸಿಕ ತಾಣ ಹಾಗೂ ಹಸಿರು ಪ್ರದೇಶಗಳ ಅಪರೂಪದ ಸಂಗಮವೇ ಬೆಳಗಾವಿ ಕಂಟೋನ್ಮೆಂಟ್. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಂಟೋನ್ಮೆಂಟ್&zwnj;ನ ನಾಗರಿಕ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿವೆ.&lt;/p&gt;&lt;p&gt;ದಂಡುಮಂಡಳಿ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಯಾವುದೇ ಅಂತಿಮ ನಿರ್ಧಾರವಾಗಿಲ್ಲ. 112 ಎಕರೆ ಪ್ರದೇಶವನ್ನು ಹೊರತುಪಡಿಸುವ ಪ್ರಸ್ತಾವ ಮಾತ್ರ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. 756 ಎಕರೆ ಹಸ್ತಾಂತರದ ಪ್ರಸ್ತಾವನೆಗೆ ಡಿಒ ಹಾಗೂ ಸ್ಥಳೀಯ ಮಿಲಿಟರಿ ಪ್ರಾಧಿಕಾರದಿಂದ ಆಕ್ಷೇಪವಿದೆ. ಅಂತಿಮ ತೀರ್ಮಾನ ಕೇಂದ್ರ ರಕ್ಷಣಾ ಸಚಿವಾಲಯದ್ದಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಹಾಗೂ ಗುತ್ತಿಗೆದಾರರು ಆತಂಕಪಡುವ ಅಗತ್ಯವಿಲ್ಲ.&lt;/p&gt;&lt;p&gt;&lt;strong&gt;ಮಂಚಲವಾರ ಸುದಾಮ ಹರಿವಿಜಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಬೆಳಗಾವಿ ದಂಡುಮಂಡಳಿ&lt;/strong&gt;&lt;/p&gt;&lt;p&gt;ದಂಡುಮಂಡಳಿಯ ನಾಗರಿಕ ಪ್ರದೇಶವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ಇನ್ನೂ ಅಂತಿಮ ಹಂತ ತಲುಪಿಲ್ಲ. 756 ಎಕರೆ ಪ್ರದೇಶದ ಕುರಿತು ಪ್ರಸ್ತಾವ ಪರಿಶೀಲನೆಯಲ್ಲಿದೆ. ರಾಜ್ಯ ಸಚಿವ ಸಂಪುಟದ ಅನುಮೋದನೆ ಹಾಗೂ ಕೇಂದ್ರ ರಕ್ಷಣಾ ಸಚಿವಾಲಯದ ಅಂತಿಮ ಒಪ್ಪಿಗೆಯ ಬಳಿಕವೇ ಹಸ್ತಾಂತರ ಪ್ರಕ್ರಿಯೆ ಆರಂಭವಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಎರಡರಿಂದ ಮೂರು ತಿಂಗಳು ಬೇಕಾಗಬಹುದು. ಅಂತಿಮವಾಗಿ ನಾಗರಿಕ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರವಾಗುವ ವಿಶ್ವಾಸವಿದೆ.&lt;/p&gt;&lt;p&gt;&lt;strong&gt;- ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ, ಬೆಳಗಾವಿ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-how-much-land-is-the-cantonment-board-handing-over-to-the-city-corporation-out-of-the-756-acre-area-mrq/articleshow-i3zgiyp"/>
        </item>
        <item>
            <title><![CDATA[BTM ಲೇಔಟ್‌ ವ್ಯಾಪ್ತಿಯ 3 ನಿಲ್ದಾಣಗಳ ಹೆಸರು ಬದಲಿಸಿ: BMRCLಗೆ ರಾಮಲಿಂಗಾರೆಡ್ಡಿ ಪತ್ರ]]></title>
            <link>https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k</link>
            <guid isPermaLink="true">https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k</guid>
            <pubDate>Sun, 13 Sep 2026 07:35:41 +0530</pubDate>
            <description><![CDATA[ರಾಮಲಿಂಗಾರೆಡ್ಡಿ ಅವರು BTM ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ. ಈ ಹೆಸರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಸ್ಥಳೀಯ, ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c7sy27aerb5cmpqa1h359n,imgname-ramalinga-reddy-metro-name--4--1789264721991.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಮಲಿಂಗಾರೆಡ್ಡಿ ಅವರು BTM ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಬಿಎಂಆರ್&zwnj;ಸಿಎಲ್&zwnj;ಗೆ ಪತ್ರ ಬರೆದಿದ್ದಾರೆ. ಈ ಹೆಸರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಸ್ಥಳೀಯ, ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.&lt;/p&gt;&lt;img&gt;&lt;p&gt;ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೆಟ್ರೋ ರೈಲು ನಿಲ್ದಾಣಗಳಿಗೆ ಭೌಗೋಳಿಕ ಮಹತ್ವ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಿ ನಾಮಕರಣ ಮಾಡುವಂತೆ ಬಿಎಂಆರ್&zwnj;ಸಿಎಲ್&zwnj; ವ್ಯವಸ್ಥಾಪಕ ನಿರ್ದೇಶಕರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.&lt;/p&gt;&lt;img&gt;&lt;p&gt;ಪ್ರಸ್ತುತ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಕೆಲ ಮೆಟ್ರೋ ನಿಲ್ದಾಣಗಳ ಹೆಸರುಗಳು ನಿಲ್ದಾಣ ಇರುವ ನಿಖರ ಸ್ಥಳ ಅಥವಾ ಆ ಪ್ರದೇಶದ ಜನರಿಗೆ ಹೆಚ್ಚು ಪರಿಚಿತವಾಗಿರುವ ಸ್ಥಳೀಯ ಹೆಸರನ್ನು ಪ್ರತಿಬಿಂಬಿಸುವುದಿಲ್ಲ. ಇದರಿಂದ ಜನರಿಗೆ ನಿಲ್ದಾಣಗಳ ಸ್ಥಳ ಗುರುತಿಸುವಲ್ಲಿ ಗೊಂದಲ ಉಂಟಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;img&gt;&lt;p&gt;ಈ ಕಾರಣದಿಂದ ನಿಲ್ದಾಣಗಳ ಹೆಸರು ಅಂತಿಮಗೊಳಿಸುವ ಸಂದರ್ಭದಲ್ಲಿ ನಿಲ್ದಾಣ ಇರುವ ಸ್ಥಳೀಯ ಪ್ರದೇಶದ ಪ್ರಚಲಿತ ಹೆಸರು, ಸ್ಥಳೀಯವಾಗಿ ಸಾರ್ವಜನಿಕರು ಹೆಚ್ಚು ಪರಿಚಿತವಾಗಿರುವ ಹೆಸರು, ಪ್ರದೇಶದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹಾಗೂ ಪ್ರಯಾಣಿಕರು ಸುಲಭವಾಗಿ ಗುರುತಿಸಲು ಅನುಕೂಲವಾಗುವ ಹೆಸರನ್ನಿಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ಜೆಪಿ ನಗರ 4ನೇ ಹಂತ ಮೆಟ್ರೋ ನಿಲ್ದಾಣವನ್ನು ಎನ್&zwnj;ಎಸ್&zwnj; ಪಾಳ್ಯ ಮೆಟ್ರೋ ನಿಲ್ದಾಣ, ತಾವರೆಕೆರೆ ಮೆಟ್ರೋ ನಿಲ್ದಾಣವನ್ನು ಎಸ್&zwnj;ಜಿ ಪಾಳ್ಯ ಮೆಟ್ರೋ ನಿಲ್ದಾಣ ಹಾಗೂ ಡೈರಿ ವೃತ್ತ ಮೆಟ್ರೋ ನಿಲ್ದಾಣವನ್ನು ಲಕ್ಕಸಂದ್ರ ಮೆಟ್ರೋ ನಿಲ್ದಾಣ ಎಂದು ಬದಲಿಸುವುದು ಸೂಕ್ತ. ಈ ನಿಲ್ದಾಣಗಳ ಮರುನಾಮಕರಣ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/bengaluru-urban/rename-3-stations-under-btm-layout-assembly-constituency-minister-ramalingareddy-s-letter-to-bmrcl-mrq-dcwm44k"/>
        </item>
        <item>
            <title><![CDATA[₹30,000 ಗೃಹಿಣಿಯ ಮಾಸಿಕ ಆದಾಯ; ಮಹಿಳೆ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ಕೊಡಿ - ಹೈಕೋರ್ಟ್]]></title>
            <link>https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</link>
            <guid isPermaLink="true">https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk</guid>
            <pubDate>Sun, 13 Sep 2026 07:18:12 +0530</pubDate>
            <description><![CDATA[ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ₹30,000 ಎಂದು ಪರಿಗಣಿಸಿರುವ ಹೈಕೋರ್ಟ್, ವಿಮಾ ಕಂಪನಿಗೆ ₹59.69 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ನ್ಯಾಯಾಧಿಕರಣ ನೀಡಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿ, ಗೃಹಿಣಿಯರ ಶ್ರಮ ಮತ್ತು ಕೊಡುಗೆಯನ್ನು ಕನಿಷ್ಠ ಆದಾಯದಲ್ಲಿ ಅಳೆಯಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c6y2zc6g00saxgcr9sjfeh,imgname-karnataka-high-court--2--1789263809513.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಮ&lt;/strong&gt;ನೆ ಕೆಲಸ ನಿರ್ವಹಿಸುವ ಗೃಹಿಣಿಯರ ನಿಸ್ವಾರ್ಥ ಶ್ರಮ ಮತ್ತು ಕುಟುಂಬಕ್ಕೆ ಅವರು ನೀಡುವ ಕೊಡುಗೆಯನ್ನು ಕೇವಲ ಕನಿಷ್ಠ ವೇತನದ ಅಡಿಯಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ 37 ವರ್ಷದ ಗೃಹಿಣಿಯೊಬ್ಬರ ಮಾಸಿಕ ಕಾಲ್ಪನಿಕ ಆದಾಯವನ್ನು ಬರೋಬ್ಬರಿ ₹30,000 ಎಂದು ಪರಿಗಣಿಸಿರುವ ನ್ಯಾಯಾಲಯ, ಮೃತರ ಕುಟುಂಬಕ್ಕೆ ₹59.69 ಲಕ್ಷ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.&lt;/p&gt;&lt;p&gt;ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ನೀಡಿದ್ದ ₹11.18 ಲಕ್ಷ ಪರಿಹಾರ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಮತ್ತು ಪರಿಹಾರದ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಮೃತರ ಸಂಬಂಧಿಕರು ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಪರಿಹಾರ ಮೊತ್ತ ₹11.18 ಲಕ್ಷದಿಂದ ₹59.69 ಲಕ್ಷಕ್ಕೆ ಏರಿಕೆ:&lt;/strong&gt;&lt;/h2&gt;&lt;p&gt;ನ್ಯಾಯಾಧಿಕರಣ ಈ ಹಿಂದೆ ನಿಗದಿಪಡಿಸಿದ್ದ ₹11.18 ಲಕ್ಷ ಪರಿಹಾರವನ್ನು ರದ್ದುಗೊಳಿಸಿದ ಹೈಕೋರ್ಟ್, ಮೃತರ ಮಗನಿಗೆ ಪರಿಷ್ಕೃತ ಮೊತ್ತವಾದ ಒಟ್ಟು ₹59,69,000 (ಶೇ.9ರಷ್ಟು ವಾರ್ಷಿಕ ಬಡ್ಡಿ ಸಹಿತ) ಪಾವತಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗೃಹಿಣಿಯರ ಶ್ರಮವನ್ನು ಗುರುತಿಸುವ ವೇಳೆ ಸುಪ್ರೀಂ ಕೋರ್ಟ್&zwnj;ನ &lsquo;ಶಿಶು ಪಾಲ್ ವಿರುದ್ಧ ಸುರ್ಜೀತ್&rsquo; ಪ್ರಕರಣದ ಐತಿಹಾಸಿಕ ತೀರ್ಪನ್ನು ಹೈಕೋರ್ಟ್ ಉಲ್ಲೇಖಿಸಿದೆ. ಗೃಹಿಣಿಯೊಬ್ಬರು ಕುಟುಂಬಕ್ಕೆ ನೀಡುವ ಸೇವೆ ಅಮೂಲ್ಯವಾದುದು. ಹೀಗಾಗಿ ಅವರ ಮಾಸಿಕ ಕಾಲ್ಪನಿಕ ಆದಾಯವನ್ನು ₹30 ಸಾವಿರ ಎಂದು ನಿಗದಿಪಡಿಸಿ, ಅದಕ್ಕೆ ಭವಿಷ್ಯದ ಗಳಿಕೆಯ ಶೇ.40 ಭಾಗವನ್ನು ಸೇರಿಸಿ ನ್ಯಾಯಾಲಯ ಈ ಬೃಹತ್ ಪರಿಹಾರ ಮೊತ್ತವನ್ನು ಅಂತಿಮಗೊಳಿಸಿದೆ.&lt;/p&gt;&lt;h2&gt;&lt;strong&gt;ವಿಮಾ ಕಂಪನಿಯ ವಾದ ತಳ್ಳಿಹಾಕಿದ ಪೀಠ:&lt;/strong&gt;&lt;/h2&gt;&lt;p&gt;'ದ್ವಿಚಕ್ರ ವಾಹನಕ್ಕೆ ಹಸು ಅಡ್ಡ ಬಂದಿದ್ದರಿಂದ ಅಪಘಾತ ಸಂಭವಿಸಿದೆ. ಕ್ರಿಮಿನಲ್ ನ್ಯಾಯಾಲಯದಲ್ಲಿ ಬೈಕ್ ಸವಾರ ಖುಲಾಸೆಗೊಂಡಿರುವುದರಿಂದ ಈ ಅಪಘಾತಕ್ಕೆ ವಿಮಾ ಕಂಪನಿ ಹೊಣೆಯಾಗುವುದಿಲ್ಲ' ಎಂದು ವಿಮಾ ಸಂಸ್ಥೆಯ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ವಿಮಾ ಕಂಪನಿಯು ಪರಿಹಾರ ಪಾವತಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.&lt;/p&gt;&lt;p&gt;ಪ್ರಕರಣದ ಹಿನ್ನೆಲೆ:&lt;/p&gt;&lt;p&gt;2011ರ ಅಕ್ಟೋಬರ್&zwnj;ನಲ್ಲಿ ಪುಟ್ಟತಾಯಮ್ಮ (37) ಅವರು ತಮ್ಮ ಪತಿ ಮಾಯಣ್ಣ ಗೌಡ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಾಮನಗರ ಜಿಲ್ಲೆಯ ಬಿಡದಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆ ಪಡೆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.&lt;/p&gt;&lt;p&gt;ಇದರ ವಿರುದ್ಧ ಚಿಕಿತ್ಸಾ ವೆಚ್ಚ ಹಾಗೂ ಪರಿಹಾರ ಕೋರಿ ಮೃತರ ಸಂಬಂಧಿಕರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ಮೆಟ್ಟಿಲೇರಿದ್ದರು. ನ್ಯಾಯಾಧಿಕರಣವು ₹11.18 ಲಕ್ಷ ಪರಿಹಾರ ನೀಡಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ವಿಮಾ ಕಂಪನಿ ಹಾಗೂ ಮೃತರ ಕುಟುಂಬಸ್ಥರು ಹೈಕೋರ್ಟ್&zwnj;ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಗೃಹಿಣಿಯ ಗೌರವ ಮತ್ತು ಸ್ಥಾನಮಾನವನ್ನು ಎತ್ತಿಹಿಡಿದು ಪರಿಹಾರವನ್ನು ಬರೋಬ್ಬರಿ ₹59.69 ಲಕ್ಷಕ್ಕೆ ಹೆಚ್ಚಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-high-court-homemaker-monthly-income-30000-accident-compensation-rs-59-lakh-sat/articleshow-s6mxqkk"/>
        </item>
        <item>
            <title><![CDATA[₹1 ಕೋಟಿ ಲಾಭ ಗಳಿಸಿದ ಸುಬ್ರಮಣ್ಯೇಶ್ವರ ಸಹಕಾರ ಬ್ಯಾಂಕ್‌: ಲಾಭದ ಹಿಂದಿನ ರಹಸ್ಯ ಸಭೆಯಲ್ಲೇ ರಿವೀಲ್!]]></title>
            <link>https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</link>
            <guid isPermaLink="true">https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx</guid>
            <pubDate>Sun, 13 Sep 2026 07:02:27 +0530</pubDate>
            <description><![CDATA[ಸುಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹1.10 ಕೋಟಿ ನಿವ್ವಳ ಲಾಭ ಗಳಿಸಿದ್ದು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಘೋಷಿಸಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು 'ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್‌ಬುಕ್ ಆ್ಯಪ್' ಅನ್ನು ಸಹ ಪರಿಚಯಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c60q8z9wbkx6swc7g8kwvk,imgname-subco-bank-1789262847263.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.13): ಸು&lt;/strong&gt;ಬ್ರಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಪ್ರಸಕ್ತ ಸಾಲಿನಲ್ಲಿ 1.10 ಕೋಟಿ ರು.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರಿ ರತ್ನ ಡಿ.ಆರ್.ವಿಜಯ ಸಾರಥಿ ಘೋಷಿಸಿದರು.&lt;/p&gt;&lt;p&gt;ಸೌತ್ ಎಂಡ್ ಸರ್ಕಲ್&zwnj;ನ ಚಾಮರಾಜ ಕಲ್ಯಾಣ ಮಂಟಪದಲ್ಲಿ ನಡೆದ ಬ್ಯಾಂಕ್&zwnj;ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಬ್ಯಾಂಕ್&zwnj;ನ ಮಹಿಳಾ ಖಾತೆದಾರರು ಸಾಲ ಪಡೆದಾಗ ಸಾಮಾನ್ಯ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಮಹಿಳೆಯರಿಗೆ ವಿಶೇಷ ಬಡ್ಡಿದರ ರಿಯಾಯಿತಿ ನೀಡುವ ಮೂಲಕ ಅವರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಉದ್ದೇಶ ಎಂದು ತಿಳಿಸಿದರು.&lt;/p&gt;&lt;p&gt;ಬ್ಯಾಂಕ್ ಪ್ರಸ್ತುತ 33,755 ಸದಸ್ಯರನ್ನು ಹೊಂದಿದ್ದು, ಕಳೆದ 7 ವರ್ಷಗಳಿಂದ ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ಘೋಷಿಸಲಾಗುತ್ತಿದೆ. ಆರ್&zwnj;ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನ ಅಂತ್ಯಕ್ಕೆ ಒಟ್ಟು ಎನ್&zwnj;ಪಿಎ ಶೇ10.22, ನಿವ್ವಳ ಎನ್&zwnj;ಪಿಎ ಶೇ2.03 ಹಾಗೂ ಸಿಆರ್&zwnj;ಎಆರ್ ಶೇ.17.90ರಷ್ಟಿದೆ ಎಂದು ವಿಜಯ ಸಾರಥಿ ವಿವರಿಸಿದರು.&lt;/p&gt;&lt;h2&gt;&lt;strong&gt;ಡಿಜಿಟಲ್ ಪಾವತಿಗೆ ಹೆಚ್ಚಿನ ಸೌಲಭ್ಯ:&amp;nbsp;&lt;/strong&gt;&lt;/h2&gt;&lt;p&gt;ಸದಸ್ಯರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಒದಗಿಸಲು ಬ್ಯಾಂಕ್ ಫೋನ್&zwnj;ಪೇ, ಗೂಗಲ್&zwnj;ಪೇ ಹಾಗೂ ಮರ್ಚೆಂಟ್ ಪೇಮೆಂಟ್ ಸ್ಕ್ಯಾನರ್ ಸೌಲಭ್ಯ ಕಲ್ಪಿಸುತ್ತಿದೆ. ಈ ಮೂಲಕ ಗ್ರಾಹಕರು ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳನ್ನು ಸುಲಭವಾಗಿ ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಬಹುದು. ಜೊತೆಗೆ ಖಾತೆ ವ್ಯವಹಾರಗಳ ಮಾಹಿತಿಯನ್ನು ಸುಲಭವಾಗಿ ಪಡೆಯಲು &lsquo;ಎಸ್.ಎಸ್.ಸಿ.ಬಿ.ಎಲ್- ಎಂ-ಪಾಸ್&zwnj;ಬುಕ್ ಆ್ಯಪ್&rsquo; ಪರಿಚಯಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಡಾ. ಕೆ.ಎಂ. ರಂಗಧಾಮಶೆಟ್ಟಿ, ಪ್ರಭಾರ ಪ್ರಧಾನ ವ್ಯವಸ್ಥಾಪಕ ಹರೀಶ್ ಬಿ.ಜೆ., ಪೂರ್ಣಾವಧಿ ಸಲಹೆಗಾರ ಬಿ.ಆರ್. ನಾಗರಾಜ್, ಬ್ಯಾಂಕಿನ ಪದಾಧಿಕಾರಿಗಳು ಇದ್ದರು.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/subrahmanyeshwara-cooperative-bank-subco-profit-women-loan-discount-dividend-sat/articleshow-pvdn1sx"/>
        </item>
        <item>
            <title><![CDATA[ಗಜ ಗಾತ್ರದ ಗಣೇಶನಿಗೆ ಸಣ್ಣ ಇಲಿಯೇ ವಾಹನ ಆಗಿದ್ದೇಕೆ ಗೊತ್ತಾ? ಇದರ ಹಿಂದಿದೆ ಗಜಮುಖಾಸುರನ ಕಥೆ!]]></title>
            <link>https://kannada.asianetnews.com/gallery/festivals/the-story-of-gajamukhasura-and-why-lord-ganesha-rides-a-mouse-sat-6yyab54</link>
            <guid isPermaLink="true">https://kannada.asianetnews.com/gallery/festivals/the-story-of-gajamukhasura-and-why-lord-ganesha-rides-a-mouse-sat-6yyab54</guid>
            <pubDate>Sun, 13 Sep 2026 06:39:33 +0530</pubDate>
            <description><![CDATA[ಗಣೇಶ ಅಂದ ತಕ್ಷಣ ನಮಗೆ ಆನೆ ಮುಖ, ಕೈಯಲ್ಲಿ ಮೋದಕ, ಇಲಿಯ ಮೇಲೆ ಕುಳಿತಿರುವ ಚಿತ್ರಣವೇ ಕಣ್ಣ ಮುಂದೆ ಬರುತ್ತೆ. ಆದರೆ, ಇಷ್ಟು ದೊಡ್ಡ ಆಕಾರದ ಗಣೇಶನಿಗೆ ಇಷ್ಟೊಂದು ಸಣ್ಣ ಪ್ರಾಣಿಯಾದ ಇಲಿ ಹೇಗೆ ವಾಹನವಾಯ್ತು? ಇದರ ಹಿಂದಿನ ಕಥೆ ಇಲ್ಲಿದೆ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c4vh1qpyrjxr9frm3r11eb,imgname-ganesh-chaturfthi-1789261628471.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಣೇಶ ಅಂದ ತಕ್ಷಣ ನಮಗೆ ಆನೆ ಮುಖ, ಕೈಯಲ್ಲಿ ಮೋದಕ, ಇಲಿಯ ಮೇಲೆ ಕುಳಿತಿರುವ ಚಿತ್ರಣವೇ ಕಣ್ಣ ಮುಂದೆ ಬರುತ್ತೆ. ಆದರೆ, ಇಷ್ಟು ದೊಡ್ಡ ಆಕಾರದ ಗಣೇಶನಿಗೆ ಇಷ್ಟೊಂದು ಸಣ್ಣ ಪ್ರಾಣಿಯಾದ ಇಲಿ ಹೇಗೆ ವಾಹನವಾಯ್ತು? ಇದರ ಹಿಂದಿನ ಕಥೆ ಇಲ್ಲಿದೆ ನೋಡಿ.&lt;/p&gt;&lt;img&gt;ಪುರಾಣ ಕಥೆಗಳ ಪ್ರಕಾರ, ಗಜಮುಖಾಸುರನು ಬಹಳ ಶಕ್ತಿಶಾಲಿ ಅಸುರನಾಗಿದ್ದ. ಕಠಿಣ ತಪಸ್ಸು ಮಾಡಿ, ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದ ಅವನು, ದೇವತೆಗಳು ಮತ್ತು ಋಷಿಮುನಿಗಳಿಗೆ ನಾನಾ ರೀತಿಯ ತೊಂದರೆ ಕೊಡುತ್ತಿದ್ದ. ತಪಸ್ಸಿನಿಂದ ಪಡೆದ ವರಗಳಿಂದಾಗಿ ತನ್ನನ್ನು ಯಾರೂ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲ ಎಂಬ ಅಹಂಕಾರ ಅವನಲ್ಲಿತ್ತು. ಅಧಿಕಾರ ಹೆಚ್ಚಾದಂತೆ ಅವನ ಸೊಕ್ಕು ಕೂಡ ಹೆಚ್ಚಾಯಿತು. ದೇವತೆಗಳು ಮತ್ತು ಋಷಿಗಳನ್ನು ಹೆದರಿಸಿ, ಅವರ ಪೂಜೆಗಳಿಗೆ ಅಡ್ಡಿಪಡಿಸುತ್ತಿದ್ದ. ಇದರಿಂದ ಬೇಸತ್ತ ದೇವತೆಗಳು ಗಣೇಶನ ಮೊರೆ ಹೋದರು.&lt;img&gt;ಗಜಮುಖಾಸುರನ ಅಟ್ಟಹಾಸಕ್ಕೆ ಅಂತ್ಯ ಹಾಡಲು ಗಣೇಶನು ಅವನನ್ನು ಎದುರಿಸಿದನು. ಇಬ್ಬರ ನಡುವೆ ಘೋರ ಯುದ್ಧ ನಡೆಯಿತು. ಗಜಮುಖಾಸುರನು ತನ್ನ ಹಲವು ಶಕ್ತಿಗಳನ್ನು ಬಳಸಿ ಗಣೇಶನನ್ನು ಎದುರಿಸಿದರೂ, ಕೊನೆಗೆ ಗಣೇಶನ ದೈವಿಕ ಶಕ್ತಿಯ ಮುಂದೆ ನಿಲ್ಲಲು ಅವನಿಗೆ ಸಾಧ್ಯವಾಗಲಿಲ್ಲ. ಯುದ್ಧದ ಕೊನೆಯಲ್ಲಿ, ಗಣೇಶನು ತನ್ನ ಆಯುಧವಾದ ದಂತವನ್ನು ಬಳಸಿ ಗಜಮುಖಾಸುರನನ್ನು ಸೋಲಿಸಿದನು ಎಂದು ಕೆಲವು ಪುರಾಣಗಳು ಹೇಳುತ್ತವೆ. ಆದರೆ ಕಥೆ ಇಲ್ಲಿಗೇ ಮುಗಿಯುವುದಿಲ್ಲ, ಇಲ್ಲೊಂದು ಅನಿರೀಕ್ಷಿತ ತಿರುವು ಇದೆ.&lt;img&gt;ಗಣೇಶನಿಂದ ಸೋತ ಗಜಮುಖಾಸುರ, ತನ್ನ ಅಹಂಕಾರವನ್ನು ಬಿಟ್ಟು ಗಣೇಶನಿಗೆ ಶರಣಾದನು. ಆಗ ಗಣೇಶನು ಅವನನ್ನು ನಾಶಮಾಡುವ ಬದಲು, ತನ್ನ ವಾಹನವಾಗಿ ಸ್ವೀಕರಿಸಿದನು ಎಂದು ಒಂದು ಜನಪ್ರಿಯ ಪುರಾಣ ಕಥೆ ಹೇಳುತ್ತದೆ. ಹೀಗೆ ಗಜಮುಖಾಸುರನು ಇಲಿಯ ರೂಪ ಪಡೆದು, ಅಂದಿನಿಂದ ಗಣೇಶನ ವಾಹನವಾದನು ಎಂದು ನಂಬಲಾಗಿದೆ. ಅಂದರೆ, ಗಣೇಶನ ಪಾದದ ಬಳಿ ಇರುವ ಇಲಿ ಕೇವಲ ಒಂದು ಸಣ್ಣ ಪ್ರಾಣಿಯಲ್ಲ; ಅದು ಅಹಂಕಾರವನ್ನು ಅಡಗಿಸಿ, ದೈವಿಕ ನಿಯಂತ್ರಣಕ್ಕೆ ಬಂದ ಶಕ್ತಿಯ ಸಂಕೇತವಾಗಿದೆ.&lt;img&gt;ಈ ಕಥೆಯಲ್ಲಿ ಒಂದು ಆಳವಾದ ಸಾಂಕೇತಿಕ ಅರ್ಥವಿದೆ. ಇಲಿ ತುಂಬಾ ಚಿಕ್ಕ ಪ್ರಾಣಿ. ಆದರೆ ಅದು ಸುಲಭವಾಗಿ ಓಡಾಡಿ, ಕಿರಿದಾದ ಜಾಗಗಳಿಗೂ ನುಗ್ಗಿ, ಏನನ್ನಾದರೂ ಕಚ್ಚಿ ಹಾನಿ ಮಾಡಬಲ್ಲದು. ಇದನ್ನು ಮನುಷ್ಯನ ಆಸೆ, ದುರಾಸೆ ಮತ್ತು ಅನಿಯಂತ್ರಿತ ಮನಸ್ಸಿಗೆ ಹೋಲಿಸಲಾಗುತ್ತದೆ. ಮನುಷ್ಯನ ಆಸೆಗಳು ಎಷ್ಟೇ ಚಿಕ್ಕದಾಗಿ ಕಂಡರೂ, ಅವುಗಳು ನಿಯಂತ್ರಣವಿಲ್ಲದೆ ಬೆಳೆದರೆ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಬಹುದು. ಹಾಗಾಗಿ, ಗಣೇಶನು ಇಲಿಯ ಮೇಲೆ ಕುಳಿತಿರುವುದು, ಆಸೆ ಮತ್ತು ಅಹಂಕಾರವನ್ನು ಜ್ಞಾನದಿಂದ ನಿಯಂತ್ರಿಸಬೇಕು ಎಂಬುದರ ಸಂಕೇತವಾಗಿದೆ.&lt;img&gt;&lt;p&gt;ಇದು ಗಣೇಶನ ರೂಪದ ಒಂದು ಕುತೂಹಲಕಾರಿ ಅಂಶ. ಒಂದೆಡೆ, ಗಣೇಶನಿಗೆ ಬೃಹತ್ ಆನೆಯ ತಲೆ. ಇನ್ನೊಂದೆಡೆ, ಅವನ ವಾಹನ ಅತಿ ಚಿಕ್ಕ ಇಲಿ. ಈ ವೈರುಧ್ಯವೇ ಒಂದು ಪ್ರಮುಖ ಆಧ್ಯಾತ್ಮಿಕ ಸಂದೇಶವನ್ನು ನೀಡುತ್ತದೆ. ಆಕಾರದಲ್ಲಿ ದೊಡ್ಡದಿರುವುದು ಮುಖ್ಯವಲ್ಲ; ಶಕ್ತಿಯನ್ನು ಹೇಗೆ ನಿಯಂತ್ರಿಸುತ್ತೇವೆ ಎಂಬುದು ಮುಖ್ಯ. ದೊಡ್ಡ ಶಕ್ತಿ ಹೊಂದಿರುವ ವ್ಯಕ್ತಿಯು, ಚಿಕ್ಕದಾಗಿ ಕಾಣುವ ವಸ್ತುವನ್ನೂ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂಬುದನ್ನು ಇದು ಸೂಚಿಸುತ್ತದೆ.&lt;/p&gt;&lt;p&gt;&lt;strong&gt;ಇನ್ನೊಂದು ಜನಪ್ರಿಯ ಪುರಾಣ ಕಥೆ&lt;/strong&gt;&lt;/p&gt;&lt;p&gt;ಗಣೇಶನ ಇಲಿ ವಾಹನದ ಬಗ್ಗೆ ಗಜಮುಖಾಸುರನ ಕಥೆ ಮಾತ್ರವಲ್ಲದೆ, ಕ್ರೌಂಚನೆಂಬ ಗಂಧರ್ವನು ಶಾಪದಿಂದ ಇಲಿಯಾಗಿ ಬದಲಾಗಿ, ನಂತರ ಗಣೇಶನ ವಾಹನವಾದನು ಎಂಬ ಕಥೆಯೂ ಇದೆ. ಹಾಗಾಗಿ, ಗಣೇಶನ ಇಲಿ ವಾಹನದ ಬಗ್ಗೆ ಹಲವು ಪುರಾಣ ಮತ್ತು ಪ್ರಾದೇಶಿಕ ಕಥೆಗಳಿವೆ. ಇವುಗಳನ್ನು ಐತಿಹಾಸಿಕ ಸತ್ಯ ಎನ್ನುವುದಕ್ಕಿಂತ, ಪೌರಾಣಿಕ ನಂಬಿಕೆಗಳಾಗಿ ಅರ್ಥಮಾಡಿಕೊಳ್ಳುವುದು ಸೂಕ್ತ.&lt;/p&gt;]]></content:encoded>
            <category><![CDATA[festivals]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/festivals/the-story-of-gajamukhasura-and-why-lord-ganesha-rides-a-mouse-sat-6yyab54"/>
        </item>
        <item>
            <title><![CDATA[ಎಲ್‌ ನಿನೋ ಎಫೆಕ್ಟ್, ಮಳೆಗಾಲದಲ್ಲೇ ದಾಖಲೆಯ ವಿದ್ಯುತ್ ಬಳಕೆ! ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಫಿಕ್ಸ್!]]></title>
            <link>https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4</link>
            <guid isPermaLink="true">https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4</guid>
            <pubDate>Sun, 13 Sep 2026 06:32:57 +0530</pubDate>
            <description><![CDATA[ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮಳೆಗಾಲದಲ್ಲೇ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ರೈತರ ಪಂಪ್‌ಸೆಟ್‌ ಬಳಕೆ ಹಾಗೂ ಬಿಸಿಲಿನಿಂದ ಎಸಿ, ಫ್ಯಾನ್‌ಗಳ ಬಳಕೆ ಹೆಚ್ಚಾಗಿದ್ದು, ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಇದರಿಂದಾಗಿ, ರಾಜ್ಯವು ಅನಧಿಕೃತ ಲೋಡ್ ಶೆಡ್ಡಿಂಗ್‌ ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvdeh03w3sq7h7kqeq1131e7,imgname-thumb-10-1781789130876.jpg" type="image/jpeg" height="390" width="690"/>
            <content:encoded><![CDATA[&lt;p&gt;--&lt;/p&gt;&lt;p&gt;&lt;strong&gt;ವರದಿ- ಶ್ರೀಕಾಂತ್ ಎನ್. ಗೌಡಸಂದ್ರ&lt;/strong&gt;&lt;/p&gt;&lt;p&gt;ಬೆಂಗಳೂರು (ಸೆ.13): ರಾಜ್ಯದಲ್ಲಿ ಮಳೆಗಾಲದಲ್ಲೇ ಗರಿಷ್ಠ ವಿದ್ಯುತ್&zwnj; ಬೇಡಿಕೆ ಸೃಷ್ಟಿಯಾಗಿದೆ. ಸೆ.11ರಂದು ಮೊದಲ ಬಾರಿ ದಿನದ ಗರಿಷ್ಠ ವಿದ್ಯುತ್&zwnj; ಬೇಡಿಕೆ 20 ಸಾವಿರ ಮೆ.ವ್ಯಾಟ್ ಗಡಿ ದಾಟಿದ್ದು, ಬರೋಬ್ಬರಿ 20,094 ಮೆ.ವ್ಯಾಟ್&zwnj; ವಿದ್ಯುತ್ ಬಳಕೆಯಾಗಿದೆ.&lt;/p&gt;&lt;p&gt;ಎಲ್&zwnj;ನಿನೋ ಪರಿಣಾಮ ಹಾಗೂ ತೀವ್ರ ಬರದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಅಂದಾಜಿಸಿದ ಪ್ರಮಾಣಕ್ಕಿಂತ ಶೇ.27ರಷ್ಟು ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಜತೆಗೆ ಜಲವಿದ್ಯುತ್ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ನಿರೀಕ್ಷೆಗೂ ಮೀರಿ ಸೃಷ್ಟಿಯಾಗಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅನಧಿಕೃತವಾಗಿ ಲೋಡ್&zwnj; ಶೆಡ್ಡಿಂಗ್&zwnj; ಮೊರೆ ಹೋಗಲಾಗಿದೆ. ಈ ಬಗ್ಗೆ ಸೆ.3ರಂದು ಕೆಪಿಟಿಸಿಎಲ್&zwnj; ಎಲ್ಲಾ ಎಸ್ಕಾಂಗಳಿಗೆ ಪೀಕ್&zwnj; ಅವಧಿಯಲ್ಲಿ ಹೆಚ್ಚು ವಿದ್ಯುತ್&zwnj; ಬಳಕೆ ಮಾಡದಂತೆ ಮಿತಿ ವಿಧಿಸಿದ್ದ ದಾಖಲೆ &lsquo;ಕನ್ನಡಪ್ರಭ&rsquo;ಕ್ಕೆ ಲಭ್ಯವಾಗಿದೆ.&lt;/p&gt;&lt;p&gt;ಎಸ್ಕಾಂಗಳು ಸೆ.3ರಂದು ಸಂಜೆ 6.15 ಗಂಟೆಯಿಂದ ರಾತ್ರಿ 8.15 ಗಂಟೆವರೆಗೆ 1,200 ಮೆ.ವ್ಯಾಟ್&zwnj; ವಿದ್ಯುತ್&zwnj; ಮಾತ್ರ ಡ್ರಾ ಮಾಡಬೇಕು. ರಾತ್ರಿ 8.15 ರಿಂದ ರಾತ್ರಿ 9 ಗಂಟೆವರೆಗೆ 650 ಮೆ.ವ್ಯಾಟ್&zwnj; ಮಾತ್ರ ಬಳಕೆ ಮಾಡಬೇಕು ಎಂದು ಅಧಿಕೃತವಾಗಿ ತಿಳಿಸಿದೆ. ಇದರಿಂದ ವಿಧಿ ಇಲ್ಲದೆ ಎಸ್ಕಾಂಗಳು ವಿದ್ಯುತ್ ಕಡಿತದ ಮೊರೆ ಹೋಗಿದ್ದು, ಅನಧಿಕೃತ ಲೋಡ್&zwnj; ಶೆಡ್ಡಿಂಗ್&zwnj; ಶುರುವಾಗಿದೆ.&lt;/p&gt;&lt;p&gt;ಅಲ್ಲದೆ ದಿನದಿಂದ ದಿನಕ್ಕೆ ವಿದ್ಯುತ್&zwnj; ಬೇಡಿಕೆ ಹೆಚ್ಚಾಗುತ್ತಿದ್ದು, ಪೂರೈಕೆ ಕಡಿಮೆಯಾಗುತ್ತಿದೆ. ಹೀಗಾಗಿ ನಿತ್ಯವೂ ಅನಧಿಕೃತ ಕರ್ಟೈಲ್&zwnj;ಮೆಂಟ್ ಮುಂದುವರೆದಿದೆ. ಮೌಖಿಕವಾಗಿ ಕರ್ಟೈಲ್&zwnj;ಮೆಂಟ್&zwnj; ಸೂಚನೆ ನೀಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.&lt;/p&gt;&lt;h2&gt;&lt;strong&gt;ನಿರೀಕ್ಷೆಗೂ ಮೀರಿ ವಿದ್ಯುತ್&zwnj; ಬಳಕೆ:&lt;/strong&gt;&lt;/h2&gt;&lt;p&gt;ಇಂಧನ ಇಲಾಖೆ 2026-27ನೇ ಅವಧಿಗೆ ನಿತ್ಯ ಸರಾಸರಿ 277.1 ದಶಲಕ್ಷ ಯುನಿಟ್&zwnj;ನಂತೆ (ಎಂಯು) 1,01,155 ದಶಲಕ್ಷ ಯುನಿಟ್&zwnj; ಬಳಕೆ ಅಂದಾಜಿಸಿತ್ತು. ಆದರೆ, ಏ.1 ರಿಂದ ಸೆ.11 ರವರೆಗೆ ಸರಾಸರಿ 302.8 ದಶಲಕ್ಷ ಯುನಿಟ್&zwnj;ನಂತೆ 49,666 ಎಂ.ಯು ಬಳಕೆಯಾಗಿದೆ. ಮಳೆಗಾಲದಲ್ಲಿ ವಾಡಿಕೆ ಪ್ರಕಾರ ವಿದ್ಯುತ್&zwnj; ಬಳಕೆ ಕಡಿಮೆಯಾಗಲಿದೆ. ಹೀಗಾಗಿ ಸೆಪ್ಟೆಂಬರ್&zwnj; ತಿಂಗಳಲ್ಲಿ ಪ್ರತಿ ದಿನ 253 ಮಿ.ಯು. ವಿದ್ಯುತ್&zwnj; ಬಳಕೆ ನಿರೀಕ್ಷಿಸಲಾಗಿತ್ತು. ಆದರೆ, ಸೆ.11 ರಂದು ಸಾರ್ವಕಾಲಿಕ 345.35 ದಶಲಕ್ಷ ಯುನಿಟ್&zwnj; ವಿದ್ಯುತ್ ಬಳಕೆಯಾಗಿದೆ. ಇದು ಇಂಧನ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;h2&gt;&lt;strong&gt;ಮಳೆಗಾಲದಲ್ಲೇ ಹೆಚ್ಚಾಯ್ತು ಬೇಡಿಕೆ:&lt;/strong&gt;&lt;/h2&gt;&lt;p&gt;ರಾಜ್ಯದ ಪ್ರಮುಖ ಮೂರು ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿದಿದೆ. ಲಿಂಗನಮಕ್ಕಿ, ಸೂಪಾ, ವಾರಾಹಿ ಯೋಜನೆಗಳಲ್ಲಿ ಕಳೆದ ವರ್ಷ ಏ.1 ರಿಂದ ಸೆ.11ರ ವರೆಗೆ 5,143 ದಶಲಕ್ಷ ಯುನಿಟ್&zwnj; ಉತ್ಪಾದನೆಯಾಗಿತ್ತು. ಈ ಬಾರಿ 3,507 ಮಿಲಿಯನ್&zwnj; ಯುನಿಟ್&zwnj; ಮಾತ್ರ ಆಗಿದ್ದು, 1,635 ಮಿಲಿಯನ್&zwnj; ಯುನಿಟ್&zwnj; ಕೊರತೆ ಸೃಷ್ಟಿಯಾಗಿದೆ. ಸಣ್ಣ ಜಲಾಶಯಗಳಲ್ಲಿ 2,640 ದಶಲಕ್ಷ ಯುನಿಟ್&zwnj; ಬದಲಿಗೆ 1,427 ದಶಲಕ್ಷ ಯುನಿಟ್&zwnj; ಮಾತ್ರ ಉತ್ಪಾದನೆಯಾಗಿದೆ.&lt;/p&gt;&lt;p&gt;ಲಿಂಗನಮಕ್ಕಿಯಲ್ಲಿ ನಿತ್ಯ 12.46 ಮಿಲಿಯನ್&zwnj; ಯುನಿಟ್&zwnj; ಬದಲಿಗೆ ಸೆ.11ಕ್ಕೆ 6.07 ಮಿಲಿಯನ್&zwnj; ಯುನಿಟ್&zwnj; ಮಾತ್ರ ಉತ್ಪಾದನೆಯಾಗಿದ್ದು, ಸೂಪಾ ಜಲಾಶಯದಲ್ಲಿ 6.05 ರಿಂದ 4.22ಕ್ಕೆ, ಮಾಣಿ (ವಾರಾಹಿ) ಜಲಾಶಯದಲ್ಲಿ 1.95 ರಿಂದ 1.25 ಮಿಲಿಯನ್ ಯುನಿಟ್&zwnj;ಗೆ ಕಡಿಮೆಯಾಗಿದೆ.&lt;/p&gt;&lt;p&gt;ಇದರಿಂದ ಶಾಖೋತ್ಪನ್ನ ವಿದ್ಯುತ್ ಮೇಲಿನ ಒತ್ತಡ ಹೆಚ್ಚಾಗಿದೆ. ವಿದ್ಯುತ್&zwnj; ಕೊರತೆ ನೀಗಿಸಲು ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಘಟಕಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸೆ.11 ರಂದು ಆರ್&zwnj;ಟಿಪಿಎಸ್&zwnj;ನಿಂದ 1,007, ಬಿಟಿಪಿಎಸ್&zwnj;ನಿಂದ 1,156, ವೈಟಿಪಿಎಸ್&zwnj;ನಿಂದ 1,120 ಮೆ.ವ್ಯಾಟ್&zwnj; ವಿದ್ಯುತ್&zwnj; ಉತ್ಪಾದನೆ ಮಾಡಲಾಗಿದೆ. ರಾಜ್ಯಗಳು ಬೇಡಿಕೆ ಮತ್ತು ಪೂರೈಕೆಯ ನಡುವಿನ ವ್ಯತ್ಯಾಸ ಸರಿದೂಗಿಸಲು ಮುಕ್ತ ಮಾರುಕಟ್ಟೆಯಿಂದ ದುಬಾರಿ ವೆಚ್ಚದಲ್ಲಿ ವಿದ್ಯುತ್ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h2&gt;&lt;strong&gt;ಮಳೆಯ ಅಭಾವವೇ ಪ್ರಮುಖ ಕಾರಣ&lt;/strong&gt;&lt;/h2&gt;&lt;p&gt;ಪ್ರತಿ ವರ್ಷ ವಾಡಿಕೆ ಪ್ರಕಾರ ಮಳೆಗಾಲದಲ್ಲಿ ವಿದ್ಯುತ್&zwnj; ಬೇಡಿಕೆ ಕಡಿಮೆ ಇರಬೇಕು. ಆದರೆ, ಎಲ್&zwnj;ನಿನೋ ಹಾಗೂ ಶತಮಾನದ ಬರದ ಹಿನ್ನೆಲೆಯಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಶತಾಯಗತಾಯ ಬೆಳೆ ಉಳಿಸಿಕೊಳ್ಳಲು ರೈತರು ಪಂಪ್&zwnj;ಸೆಟ್&zwnj;ಗಳ ಮೂಲಕ ನೀರು ಹಾಯಿಸಲು ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಜತೆಗೆ ಮಳೆಗಾಲ ಆಗಿದ್ದರೂ ರಾಜ್ಯದಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್&zwnj;ವರೆಗೆ ಹೆಚ್ಚಾಗಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಸಿಲ ಬೇಗೆ ಕಾಡುತ್ತಿದೆ. ಹೀಗಾಗಿ ಫ್ಯಾನ್&zwnj;, ಎಸಿಯಂತಹ ವಿದ್ಯುತ್&zwnj; ಉಪಕರಣಗಳ ಬಳಕೆ ಪ್ರತಿ ವರ್ಷದ ಮಳೆಗಾಲಕ್ಕಿಂತ ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;ಜತೆಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುವುದರಿಂದ ಜಲವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಂಠಿತಗೊಂಡಿದೆ. ಇದು ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-power-crisis-record-electricity-demand-load-shedding-drought-sat/articleshow-8sxrhc4"/>
        </item>
        <item>
            <title><![CDATA[ಜಾತಕ ಸೆಪ್ಟೆಂಬರ್ 13: ಸಿಂಹ ಮತ್ತು ಕನ್ಯಾ ರಾಶಿಗೆ ಅದೃಷ್ಟ, ಬಾಕಿ ಹಣ ಸಿಗುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು]]></title>
            <link>https://kannada.asianetnews.com/festivals/today-horoscope-13-september-2026-suh/articleshow-idl433h</link>
            <guid isPermaLink="true">https://kannada.asianetnews.com/festivals/today-horoscope-13-september-2026-suh/articleshow-idl433h</guid>
            <pubDate>Sun, 13 Sep 2026 06:30:24 +0530</pubDate>
            <description><![CDATA[ಸೆಪ್ಟೆಂಬರ್ 13, 2026 ಎಲ್ಲಾ ರಾಶಿಚಕ್ರ ಚಿಹ್ನೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಬಹುದು. ಮೇಷ, ಕರ್ಕ, ಸಿಂಹ, ಕನ್ಯಾ, ಕುಂಭ ಮತ್ತು ಮಕರ ರಾಶಿಯವರಿಗೆ ವೃತ್ತಿ, ಹಣಕಾಸು, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಗ್ರಹಗಳ ಸ್ಥಾನಗಳು ಮತ್ತು ನಕ್ಷತ್ರಪುಂಜಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ಕಂಡುಕೊಳ್ಳಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kygt1ft5yrzpgqdqxasxm257,imgname-august-2026-planetary-transit-brings-luck-for-four-zodiac-signs-s-1785123094341.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇಷ ರಾಶಿ&lt;/p&gt;&lt;p&gt;ವ್ಯವಹಾರವು ಇಂದು ಕೆಲವು ಏರಿಳಿತಗಳನ್ನು ಅನುಭವಿಸಬಹುದು, ಆದರೆ ಚಿಂತಿಸುವ ಅಗತ್ಯವಿಲ್ಲ. ಆರಂಭದಲ್ಲಿ, ಸಂದರ್ಭಗಳು ಸ್ವಲ್ಪ ನಕಾರಾತ್ಮಕವಾಗಿ ಕಾಣಿಸಬಹುದು, ಆದರೆ ಅಂತಿಮವಾಗಿ, ಫಲಿತಾಂಶಗಳು ಸಕಾರಾತ್ಮಕವಾಗಿರುತ್ತವೆ. ಪ್ರೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಬರಬಹುದು. ವ್ಯವಹಾರವು ಸಹ ಬಲವಾಗಿ ಉಳಿಯುತ್ತದೆ ಮತ್ತು ನಿಮ್ಮ ಕಠಿಣ ಪರಿಶ್ರಮವು ಅನುಕೂಲಕರ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ.&lt;/p&gt;&lt;p&gt;ವೃಷಭ ರಾಶಿ&lt;/p&gt;&lt;p&gt;ಇಂದು, ನಿಮ್ಮ ವ್ಯಕ್ತಿತ್ವವು ನಿಮ್ಮ ಪ್ರಭಾವ ಮತ್ತು ಆತ್ಮವಿಶ್ವಾಸದಿಂದ ಸ್ಪಷ್ಟವಾಗಿ ಗುರುತಿಸಲ್ಪಡುತ್ತದೆ. ರಾಜಕೀಯ ಮತ್ತು ಸರ್ಕಾರಿ ವಿಷಯಗಳಲ್ಲಿ ಸಂದರ್ಭಗಳು ನಿಮಗೆ ಅನುಕೂಲಕರವಾಗಬಹುದು. ಹಣಕಾಸಿನ ಒಳಹರಿವು ಹೆಚ್ಚಾಗುತ್ತದೆ, ಮತ್ತು ಕುಟುಂಬ ವಿಸ್ತರಣೆಯ ಲಕ್ಷಣಗಳು ಅಥವಾ ಕೆಲವು ಒಳ್ಳೆಯ ಸುದ್ದಿಗಳಿವೆ. ಆರೋಗ್ಯ, ಪ್ರೀತಿ, ಮಕ್ಕಳು ಮತ್ತು ವ್ಯವಹಾರ: ಎಲ್ಲಾ ಕ್ಷೇತ್ರಗಳಲ್ಲಿ ದಿನವು ಅತ್ಯುತ್ತಮವಾಗಿರುತ್ತದೆ.&lt;/p&gt;&lt;p&gt;ಮಿಥುನ ರಾಶಿ&lt;/p&gt;&lt;p&gt;ಇಂದು, ನೀವು ಎಲ್ಲರ ಗಮನ ಸೆಳೆಯುವಿರಿ ಮತ್ತು ಸಮಾಜದಲ್ಲಿ ಮೆಚ್ಚುಗೆಗೆ ಪಾತ್ರರಾಗುವಿರಿ. ನಿಮ್ಮ ಪ್ರಭಾವ ಮತ್ತು ಖ್ಯಾತಿ ಹೆಚ್ಚಾಗಬಹುದು ಮತ್ತು ನಿಮಗೆ ಬೇಕಾದ ವಸ್ತುಗಳು ಸುಲಭವಾಗಿ ಲಭ್ಯವಿರುತ್ತವೆ. ನಿಮ್ಮ ಆರೋಗ್ಯ ಸ್ವಲ್ಪ ದುರ್ಬಲವಾಗಿರಬಹುದು, ಆದರೆ ಒಟ್ಟಾರೆಯಾಗಿ, ಪರಿಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರು ಮತ್ತು ಮಕ್ಕಳಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ ಮತ್ತು ವ್ಯವಹಾರವು ಸಹ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.&lt;/p&gt;&lt;p&gt;ಕರ್ಕಾಟಕ ರಾಶಿ&lt;/p&gt;&lt;p&gt;ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು. ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು, ಮತ್ತು ಅವುಗಳನ್ನು ನಿಯಂತ್ರಿಸದಿದ್ದರೆ ಸಾಲಕ್ಕೆ ಕಾರಣವಾಗಬಹುದು. ಆದಾಗ್ಯೂ, ಪ್ರೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಂದರ್ಭಗಳು ಅನುಕೂಲಕರವಾಗಿರುತ್ತವೆ. ವ್ಯವಹಾರಗಳು ಸಹ ಉತ್ತಮವಾಗಿ ನಡೆಯುತ್ತವೆ, ಆದ್ದರಿಂದ ಹಣಕಾಸಿನ ವಿಷಯಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ನಿರ್ಣಾಯಕವಾಗಿರುತ್ತದೆ.&lt;/p&gt;&lt;p&gt;ಸಿಂಹ ರಾಶಿ:&lt;/p&gt;&lt;p&gt;ಇಂದು ಆರ್ಥಿಕವಾಗಿ ಉತ್ತಮ ದಿನವಾಗಬಹುದು. ನಿಮ್ಮ ಹಣದ ಒಳಹರಿವು ಹೆಚ್ಚಾಗುತ್ತದೆ ಮತ್ತು ಗಳಿಕೆಯ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ನಿಮ್ಮ ಕುಟುಂಬದಿಂದ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ದೀರ್ಘಕಾಲದಿಂದ ಬಾಕಿ ಇರುವ ಹಣವು ಚೇತರಿಸಿಕೊಳ್ಳುವ ಸಾಧ್ಯತೆಯಿದೆ. ಪ್ರಯಾಣವೂ ಸಾಧ್ಯ. ಆರೋಗ್ಯ, ಪ್ರೀತಿ ಮತ್ತು ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಈ ದಿನವು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.&lt;/p&gt;&lt;p&gt;ಕನ್ಯಾ ರಾಶಿ :&lt;/p&gt;&lt;p&gt;ಇಂದು, ಯಶಸ್ಸು ನಿಮ್ಮನ್ನು ಹಲವು ರಂಗಗಳಲ್ಲಿ ಅನುಸರಿಸುವ ಸಾಧ್ಯತೆಯಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ಕಂಡುಬರುವ ಸಾಧ್ಯತೆಯಿದೆ ಮತ್ತು ನಿಮ್ಮ ವ್ಯವಹಾರ ಪರಿಸ್ಥಿತಿ ಬಲಗೊಳ್ಳುತ್ತದೆ. ನಿಮ್ಮ ತಂದೆಯಿಂದ ಬೆಂಬಲ ಮತ್ತು ಮಾರ್ಗದರ್ಶನವನ್ನು ಸಹ ನೀವು ಪಡೆಯುತ್ತೀರಿ. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ನೀವು ಅನುಭವಿಸುವಿರಿ. ಪ್ರೀತಿ, ಮಕ್ಕಳು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪರಿಸ್ಥಿತಿಗಳು ಅತ್ಯಂತ ಅನುಕೂಲಕರವಾಗಿರುತ್ತವೆ ಮತ್ತು ದಿನವು ನಿಮಗೆ ವಿಶೇಷವಾಗಿ ಆಹ್ಲಾದಕರವಾಗಿರುತ್ತದೆ.&lt;/p&gt;&lt;p&gt;ತುಲಾ:&lt;/p&gt;&lt;p&gt;ಇಂದು ಅದೃಷ್ಟವು ನಿಮ್ಮ ಕಡೆ ಸಂಪೂರ್ಣವಾಗಿ ಇರುವಂತೆ ತೋರುತ್ತಿದೆ. ನಿಮಗೆ ಪ್ರಯಾಣದ ಅವಕಾಶ ದೊರೆಯಬಹುದು, ಅದು ಆಹ್ಲಾದಕರ ಅನುಭವಗಳನ್ನು ತರುತ್ತದೆ. ಆರೋಗ್ಯ, ಪ್ರೀತಿ ಮತ್ತು ವ್ಯವಹಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಸೂಚಿಸಲಾಗುತ್ತದೆ. ನಿಮಗೆ ತೀರ್ಥಯಾತ್ರೆಗೆ ಹೋಗಲು ಅಥವಾ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಲು ಅವಕಾಶ ಸಿಗಬಹುದು. ನಿಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಾಂತಿ ಸಿಗುತ್ತದೆ ಮತ್ತು ನಿಮ್ಮ ದಿನವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ.&lt;/p&gt;&lt;p&gt;ವೃಶ್ಚಿಕ ರಾಶಿ :&lt;/p&gt;&lt;p&gt;ಇಂದು ನೀವು ಸ್ವಲ್ಪ ಜಾಗರೂಕರಾಗಿರಬೇಕು. ಗಾಯ ಅಥವಾ ಅನಿರೀಕ್ಷಿತ ತೊಂದರೆಯ ಅಪಾಯವಿದೆ, ಆದ್ದರಿಂದ ಯಾವುದೇ ಆತುರದ ಕ್ರಮಗಳನ್ನು ತಪ್ಪಿಸಿ. ಸಂದರ್ಭಗಳು ಸಂಪೂರ್ಣವಾಗಿ ಅನುಕೂಲಕರವಾಗಿಲ್ಲ, ಮತ್ತು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಪ್ರೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ತುಲನಾತ್ಮಕವಾಗಿ ಸುಗಮವಾಗಿರುತ್ತವೆ ಮತ್ತು ವ್ಯವಹಾರಗಳು ಸಾಮಾನ್ಯವಾಗಿಯೇ ಇರುತ್ತವೆ. ಇಂದು ಎಚ್ಚರಿಕೆಯನ್ನು ನಿಮ್ಮ ಆದ್ಯತೆಯನ್ನಾಗಿ ಮಾಡಿ.&lt;/p&gt;&lt;p&gt;ಧನು ರಾಶಿ:&lt;/p&gt;&lt;p&gt;ಇಂದು ಸಂಬಂಧಗಳಿಗೆ ಅದ್ಭುತವಾದ ದಿನವಾಗಬಹುದು. ನಿಮ್ಮ ಸಂಗಾತಿಯ ಸಹವಾಸವನ್ನು ನೀವು ಆನಂದಿಸುವಿರಿ ಮತ್ತು ಪ್ರೇಮಿಗಳ ನಡುವಿನ ಭೇಟಿಯೂ ಸಾಧ್ಯ. ಪ್ರಣಯ ಸಂಬಂಧವು ಮದುವೆಯತ್ತ ಸಾಗಬಹುದು. ನಿಮ್ಮ ಕೆಲಸ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳು ಬಲಗೊಳ್ಳುತ್ತವೆ. ಆರೋಗ್ಯ, ಪ್ರೀತಿ ಮತ್ತು ವ್ಯವಹಾರ ಎಂಬ ಮೂರು ಕ್ಷೇತ್ರಗಳಲ್ಲಿಯೂ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ.&lt;/p&gt;&lt;p&gt;ಮಕರ ರಾಶಿ :&lt;/p&gt;&lt;p&gt;ಇಂದು, ನೀವು ನಿಮ್ಮ ವಿರೋಧಿಗಳ ಮೇಲೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತೀರಿ. ಕುತೂಹಲಕಾರಿಯಾಗಿ, ಒಮ್ಮೆ ನಿಮ್ಮನ್ನು ವಿರೋಧಿಸಿದವರು ಸಹ ನಿಮ್ಮೊಂದಿಗೆ ಸ್ನೇಹಪರರಾಗಬಹುದು. ನಿಗೂಢ ಅಥವಾ ಆಧ್ಯಾತ್ಮಿಕ ಜ್ಞಾನದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ಮತ್ತು ನೀವು ಹಿರಿಯರಿಂದ ಆಶೀರ್ವಾದ ಪಡೆಯುತ್ತೀರಿ. ನಿಮ್ಮ ಆರೋಗ್ಯವು ಸ್ವಲ್ಪ ಪರಿಣಾಮ ಬೀರಬಹುದು, ಆದರೆ ಪ್ರೀತಿ, ಮಕ್ಕಳು ಮತ್ತು ವ್ಯವಹಾರದ ವಿಷಯಗಳಲ್ಲಿ ದಿನವು ತುಂಬಾ ಉತ್ತಮವಾಗಿರುತ್ತದೆ.&lt;/p&gt;&lt;p&gt;ಕುಂಭ ರಾಶಿ :&lt;/p&gt;&lt;p&gt;ಇಂದು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅನುಕೂಲಕರ ಸಮಯ. ಬರವಣಿಗೆ, ಕಾವ್ಯ, ಕಲೆ ಮತ್ತು ಚಲನಚಿತ್ರ ನಿರ್ಮಾಣದಂತಹ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರೀತಿ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಸಂತೋಷವನ್ನು ತರುತ್ತವೆ ಮತ್ತು ವ್ಯವಹಾರವು ಸಹ ಅಭಿವೃದ್ಧಿ ಹೊಂದುತ್ತದೆ. ಆದಾಗ್ಯೂ, ಭಾವನೆಗಳ ಪ್ರಭಾವದಡಿಯಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.&lt;/p&gt;&lt;p&gt;ಮೀನ ರಾಶಿ :&lt;/p&gt;&lt;p&gt;ಇಂದು, ನೀವು ಭೂಮಿ, ಮನೆ ಅಥವಾ ವಾಹನವನ್ನು ಖರೀದಿಸುವತ್ತ ಪ್ರಮುಖ ಹೆಜ್ಜೆ ಇಡಬಹುದು. ಮನೆಯಲ್ಲಿ ಒಂದು ಆಚರಣೆ, ಶುಭ ಸಮಾರಂಭ ಅಥವಾ ಶುಭ ಕಾರ್ಯಕ್ರಮವು ವಾತಾವರಣವನ್ನು ಸಂತೋಷದಿಂದ ತುಂಬಿಸಬಹುದು. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ನಿಮಗೆ ಅವಕಾಶವಿರುತ್ತದೆ. ಪ್ರೀತಿ, ಮಕ್ಕಳು ಮತ್ತು ವ್ಯವಹಾರ ಎಂಬ ಮೂರು ಕ್ಷೇತ್ರಗಳಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ ಮತ್ತು ಕುಟುಂಬ ಸಂತೋಷ ಮತ್ತು ಸಮೃದ್ಧಿಗೆ ದಿನವು ವಿಶೇಷವಾಗಬಹುದು.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/festivals/today-horoscope-13-september-2026-suh/articleshow-idl433h"/>
        </item>
        <item>
            <title><![CDATA[ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದು ಬಿಜೆಪಿಗೆ ಮತ ಹಾಕುವ, ಕಾಂಗ್ರೆಸ್‌ ನಂಟಿರುವ ವ್ಯಕ್ತಿ: ಸತೀಶ್ ಜಾರಕಿಹೊಳಿ!]]></title>
            <link>https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo</link>
            <guid isPermaLink="true">https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo</guid>
            <pubDate>Sun, 13 Sep 2026 06:21:44 +0530</pubDate>
            <description><![CDATA[ತಮ್ಮ ವಿರುದ್ಧ ಇ.ಡಿ.ಗೆ ದೂರು ನೀಡಿದ ಕಾಂಗ್ರೆಸ್ ಸಂಬಂಧಿ, ಬಿಜೆಪಿ ಮತದಾರನಾಗಿರುವ ವ್ಯಕ್ತಿಯ ಬಗ್ಗೆ ತಮಗೆ ತಿಳಿದಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಆಫ್ರಿಕಾದ ಚಿನ್ನದ ಗಣಿಗಾರಿಕೆಯಲ್ಲಿ ಶೇ.40ರಷ್ಟು ಪಾಲುದಾರಿಕೆ ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c3wydga4c7mzpvsq33chk4,imgname-satish-jarkiholi-1789260626352.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.13): &lt;/strong&gt;ಜಾರಿ ನಿರ್ದೇಶನಾಲಯ (ಇ.ಡಿ)ಗೆ ನನ್ನ ವಿರುದ್ಧ ದೂರು ನೀಡಿದವರು ಯಾರು ಎಂಬುದು ಗೊತ್ತಾಗಿದೆ. ಕಾಂಗ್ರೆಸ್&zwnj; ಸಂಬಂದ ಇರುವ, ಆದರೆ ಬಿಜೆಪಿ ಮತದಾರನಾಗಿರುವ ಈ ವ್ಯಕ್ತಿ ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನದ್ದು ಮುಖ್ಯಮಂತ್ರಿಗಳು ಪರಿಶೀಲಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳೆ, ಇ.ಡಿಗೆ ದೂರು ನೀಡಿದವರು ಯಾವ ಪಕ್ಷದವರು ಎಂಬ ಪ್ರಶ್ನೆಗೆ ಉತ್ತರಿಸಿದರು.ನಾನು ಯಾವ ಪಕ್ಷದವರು ಎಂದು ಹೇಳಿಲ್ಲ. ಅವರು ನಮ್ಮ ಪಕ್ಷದವರೂ ಇರಬಹುದು ಅಥವಾ ಇಲ್ಲದಿರಬಹುದು. ಅವರ ಸಂಬಂಧ ಇರುವುದು ಕಾಂಗ್ರೆಸ್&zwnj;ನಲ್ಲಿ. ಆದರೆ ಅವರ ಮತದಾರರು ಬಿಜೆಪಿಯಲ್ಲಿದ್ದಾರೆ. 50-50 ಇದೆ. ಹೀಗಾಗಿ ಯಾವ ರೀತಿ ನಿರ್ಧಾರ ಮಾಡುವಿರಿ ನೋಡಿ ಎಂದು ಮುಖ್ಯಮಂತ್ರಿ ಅವರಿಗೆ ಹೇಳಿದ್ದೇನೆ. ಇದು ಎಲ್ಲಾ ಪಕ್ಷದಲ್ಲೂ ಇರುವುದೇ. ಅದನ್ನು ಮೀರಿ ಬೆಳೆಯಬೇಕು ಎಂದು ಜಾರಕಿಹೊಳಿ ಹೇಳಿದರು.&lt;/p&gt;&lt;h2&gt;&lt;strong&gt;ಶೇ.40 ರಷ್ಟು ಪಾಲು ಸಾಬೀತು ಮಾಡಲಿ:&lt;/strong&gt;&lt;/h2&gt;&lt;p&gt;ಆಫ್ರಿಕಾ ಚಿನ್ನದ ಗಣಿಗಾರಿಕೆ ಕಂಪೆನಿಯಲ್ಲಿ ನನ್ನದು ಶೇ.40 ರಷ್ಟು ಪಾಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು. ಇ.ಡಿ ಅವರ ಹೇಳಿಕೆಯಲ್ಲೂ ಗಣಿಗಾರಿಕೆ ಕಂಪೆನಿಯಲ್ಲಿ ನಮ್ಮ ಪಾಲಿದೆ ಎಂದಿದ್ದಾರೆ. ಅದು ಅನುಮಾನದ ಆರೋಪವೇ ಹೊರತು ಅಂತಿಮವಲ್ಲ. ಲಂಚದ ಬಗ್ಗೆಯೂ ಆರೋಪವಿದೆ ಎಂದಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಸಾಬೀತು ಮಾಡಲಿ. ನಮಗೆ ನೋಟಿಸ್&zwnj; ನೀಡಿದರೆ ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು.&lt;/p&gt;&lt;p&gt;ಇ.ಡಿ ಪತ್ರಿಕಾ ಹೇಳಿಕೆಯಲ್ಲಿ ಹೂಡಿಕೆ, ಲೋಕೋಪಯೋಗಿ ಇಲಾಖೆಯ ಅಂಶಗಳ ಬಗ್ಗೆ ಇದೆ. ನಮಗೆ ನೋಟಿಸ್&zwnj; ನೀಡಿದರೆ ನಮ್ಮ ದಾಖಲೆ ನಾವು ಕೊಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ. ಅದು ದೀರ್ಘ ಪ್ರಕ್ರಿಯೆ ಅವರು ಕರೆದರೆ ಎಲ್ಲದಕ್ಕೂ ನಮ್ಮ ಬಳಿ ಸ್ಪಷ್ಟೀಕರಣವಿದೆ ಎಂದರು.&lt;/p&gt;&lt;p&gt;ಇ.ಡಿ ದಾಳಿ ರಾಜಕೀಯ ಇಮೇಜಿಗೆ ಧಕ್ಕೆ ತರುತ್ತಾ ಎಂಬ ಪ್ರಶ್ನೆಗೆ, ಸಾಧಾರಣವಾಗಿ ಧಕ್ಕೆ ಆಗುತ್ತದೆ. ಶಂಕೆ ಅಂತ ಹೇಳಿದ್ದಾರೆ ನೋಡೋಣ. ನಮಗೆ ಇ.ಡಿಗೂ ಮೊದಲು ಸಾರ್ವಜನಿಕರು ಹಾಗೂ ನ್ಯಾಯಾಲಯ ಮುಖ್ಯ ಎಂದರು.&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/satish-jarkiholi-ed-complaint-vijay-mallya-post-africa-gold-mine-reaction-sat/articleshow-2ucalzo"/>
        </item>
        <item>
            <title><![CDATA[2026 BRICS: ಸ್ವಂತ ಫೋನ್‌ ನೆಟ್‌ವರ್ಕ್‌, ಸ್ಪೋಟಕ್ಕೂ ಜಗ್ಗದ ಕಾರಿನ ಜತೆ ಬಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್!]]></title>
            <link>https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi</link>
            <guid isPermaLink="true">https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi</guid>
            <pubDate>Sun, 13 Sep 2026 05:55:38 +0530</pubDate>
            <description><![CDATA[ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ 24 ಗಂಟೆಗಳ ಪ್ರವಾಸಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿದೆ. ಅವರ ವಿಶೇಷ 'ಹಾಂಗ್ಕಿ' ಕಾರು, ಆಹಾರ ಪರೀಕ್ಷಕರ ತಂಡ ಮತ್ತು ಅತ್ಯಾಧುನಿಕ ಸಂವಹನ ವ್ಯವಸ್ಥೆಗಳು ಅವರ ಭೇಟಿಯ ಪ್ರಮುಖ ಅಂಶಗಳಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m286yh00bm9v7yjk3ah759ah,imgname-xi-jinping-car-hongqi-n701-1789129606141.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: ಭಾ&lt;/strong&gt;ರತದ ಆತಿಥ್ಯದಲ್ಲಿ ನಡೆಯುತ್ತಿರುವ ಬ್ರಿಕ್ಸ್&zwnj; ಶೃಂಗಸಭೆಯಲ್ಲಿ ಭಾಗವಹಿಸಲು ಕೇವಲ 24 ತಾಸಿನ ಅವಧಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ದೆಹಲಿಗೆ ಆಗಮಿಸಿದ್ದಾರೆ. ವಿಶೇಷವೆಂದರೆ, ಪ್ರವಾಸಕ್ಕೂ 10 ದಿನ ಮೊದಲೇ ಚೀನಾದಿಂದ ವಿಶೇಷ ಸರಕು ವಿಮಾನದ ಮೂಲಕ ಕ್ಸಿ ಅವರ ಅಧಿಕೃತ &lsquo;ಹಾಂಗ್ಕಿ&rsquo; ಲಿಮೋಸಿನ್&zwnj; ಕಾರು, ಮತ್ತೊಂದು ಬ್ಯಾಕಪ್&zwnj; ಕಾರು ಮತ್ತು ಸಂವಹನ ಉಪಕರಣಗಳು ಭಾರತವನ್ನು ತಲುಪಿವೆ.&lt;/p&gt;&lt;p&gt;ಮಿಲಿಟರಿ ಮತ್ತು ಸರ್ಕಾರಿ ಪ್ರಧಾನ ಕಚೇರಿಗಳೊಂದಿಗೆ ದೂರವಾಣಿ ಸಂಪರ್ಕದಲ್ಲಿರಲು ಕ್ಸಿ ತಮ್ಮ ಅಧ್ಯಕ್ಷೀಯ ವಿಮಾನದಲ್ಲಿ ತಮ್ಮದೇ ಆದ ಭಾರೀ ಭದ್ರತೆಯ, ಎನ್&zwnj;ಕ್ರಿಪ್ಟ್ ಮಾಡಿದ ಉಪಗ್ರಹ ವ್ಯವಸ್ಥೆ ಬಳಸುತ್ತಾರೆ. ಅಲ್ಲದೆ, ಅವರ ಕಾರಿನಲ್ಲಿ ಕೂಡ ಅವರದ್ದೇ ಆದ ಸಂವಹನ ಉಪಕರಣಗಳಿವೆ. ಭಾರತದಲ್ಲಿ ವಿದೇಶಿಗರು ಅವರದ್ದೇ ಆದ ಸ್ಯಾಟಲೈಟ್ ಫೋನ್&zwnj; ಬಳಸಲು ನಿರ್ಬಂಧವಿದೆ. ಆದರೆ ಆಯಾ ರಾಯಭಾರ ಕಚೇರಿಗಳು ಸ್ವತಂತ್ರ ಪ್ರದೇಶಗಳಾಗಿರುವ ಕಾರಣ ಅಲ್ಲಿ ಆಯಾ ದೇಶಗಳ ಉಪಗ್ರಹ ನೆಟ್&zwnj;ವರ್ಕ್&zwnj; ಬಳಸಲು ಅವಕಾಶವುಂಟು. ಕ್ಸಿ ಕೂಡ ಅಲ್ಲಿನ ಚೀನೀ ನೆಟ್&zwnj;ವರ್ಕ್&zwnj; ಬಳಸಿ ಸಂವಹನ ನಡೆಸುತ್ತಾರೆ ಎನ್ನಲಾಗಿದೆ.&lt;/p&gt;&lt;h2&gt;&lt;strong&gt;ಆಹಾರ ಪರೀಕ್ಷಕರೂ ಆಗಮನ!:&lt;/strong&gt;&lt;/h2&gt;&lt;p&gt;ವಿಶೇಷವೆಂದರೆ, ಅವರ ಭದ್ರತಾ ಪಡೆಯ ಜತೆ &lsquo;ಆಹಾರ ಪರೀಕ್ಷಕರು&rsquo; ಕೂಡಾ ಆಗಮಿಸಿದ್ದು ಗಮನ ಸೆಳೆದಿದೆ. ವಿಶ್ವದ ಅತ್ಯಂತ ಪ್ರಭಾವಿ ನಾಯಕರು ವಿದೇಶ ಪ್ರವಾಸ ಕೈಗೊಂಡಾಗ ಅವರ ಜೀವಕ್ಕೆ ಎದುರಾಗಬಹುದಾದ ವಿಷಪ್ರಾಶನ ಅಥವಾ ಆಹಾರ ಕಲಬೆರಕೆಯಂತಹ ಗಂಭೀರ ಅಪಾಯಗಳನ್ನು ತಡೆಯಲು ಆಹಾರ ಪರೀಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ. ಅಧ್ಯಕ್ಷರಿಗೆ ಬಡಿಸುವ ಪ್ರತಿಯೊಂದು ಆಹಾರ, ಪಾನೀಯ ಮತ್ತು ಕುಡಿಯುವ ನೀರನ್ನು ಈ ತಂಡ ಪರೀಕ್ಷಿಸುತ್ತದೆ. ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ಅದನ್ನು ನಾಯಕರಿಗೆ ಬಡಿಸಲು ಅನುಮತಿ ನೀಡಲಾಗುತ್ತದೆ.&lt;/p&gt;&lt;p&gt;ಇದೇ ರೀತಿ, ಕ್ಸಿಯವರಿಗೆ ನೀಡಲಾಗುವ ಆಹಾರವನ್ನು ಚೀನಾದ ಪರೀಕ್ಷಕರು ರುಚಿ ನೋಡಿ ಪರೀಕ್ಷಿಸಿದ್ದಾರೆ. ಆಹಾರವು ಸಂಪೂರ್ಣ ಸಸ್ಯಾಹಾರವಾಗಿರಲಿದೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಭದ್ರತಾ ಸಿಬ್ಬಂದಿ ಸೇರಿ 67 ಸದಸ್ಯರ ತಂಡ:&lt;/strong&gt;&lt;/h2&gt;&lt;p&gt;ಕ್ಸಿ ಜತೆ ರಾಜಕಾರಣಿಗಳು, ರಾಜತಾಂತ್ರಿಕರು, ಭದ್ರತಾ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಒಳಗೊಂಡ 67 ಸದಸ್ಯರ ತಂಡ ಭಾರತಕ್ಕೆ ಆಗಮಿಸಿದೆ. ಲೋನ್&zwnj;-ವೋಲ್ಫ್&zwnj; (ಒಂಟಿ ದಾಳಿಕೋರ) ದಾಳಿ ಅಥವಾ ಟಿಬೆಟಿಯನ್&zwnj; ಕಾರ್ಯಕರ್ತರ ಪ್ರತಿಭಟನೆಯ ಆತಂಕದಿಂದಾಗಿ ಈ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚೀನಾ ವಿರೋಧಿ ಪ್ರಚಾರಕ್ಕಾಗಿ ಡ್ರೋನ್&zwnj;ಗಳು, ಬ್ಯಾನರ್&zwnj;ಗಳು, ಲೌಡ್&zwnj;ಸ್ಪೀಕರ್&zwnj;ಗಳು ಮತ್ತು ಬಲೂನ್&zwnj;ಗಳನ್ನು ಬಳಸುವ ಸಾಧ್ಯತೆಯಿದೆ ಎಂದು ಚೀನಾ ಮುನ್ನೆಚ್ಚರಿಕೆ ನೀಡಿದ್ದು, ಸಣ್ಣ ಗಾತ್ರದ ವೈಮಾನಿಕ ವಸ್ತುಗಳು ಮತ್ತು ಡ್ರೋನ್&zwnj;ಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.&lt;/p&gt;&lt;h2&gt;&lt;strong&gt;ಅಭೂತಪೂರ್ವ ಭದ್ರತೆ:&lt;/strong&gt;&lt;/h2&gt;&lt;p&gt;2019ರ ನಂತರ ಭಾರತಕ್ಕೆ ಇದು ಕ್ಸಿ ಅವರ ಮೊದಲ ಭೇಟಿಯಾಗಿದ್ದು, ಅವರು ತಂಗುವ ಹೋಟೆಲ್&zwnj; ಸುತ್ತ ತಾತ್ಕಾಲಿಕ &lsquo;ನೋ ಫ್ಲೈ ಝೋನ್&rsquo; ಘೋಷಣೆ ಮಾಡುವುದರಿಂದ ಹಿಡಿದು ಸಂಭವನೀಯ ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಅಣು ಬೆದರಿಕೆಗಳ ತಪಾಸಣೆವರೆಗೆ ಹಿಂದೆಂದೂ ಕಾಣದ ಮಟ್ಟದ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಧ್ಯಕ್ಷರು ತಂಗುವ ಹೋಟೆಲ್&zwnj;ನಲ್ಲಿ ಅಣು ವಿಕಿರಣ ಮತ್ತು ಜೈವಿಕ ರಾಸಾಯನಿಕ ಸುರಕ್ಷತಾ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ಭೂಗತ ಪೈಪ್&zwnj;ಲೈನ್ ಜಾಲಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗಿದೆ.&lt;/p&gt;&lt;h2&gt;&lt;strong&gt;ಅತ್ಯಾಧುನಿಕ ಕಾರು:&lt;/strong&gt;&lt;/h2&gt;&lt;p&gt;10 ದಿನ ಮೊದಲೇ ಅವರ ಕಾರು ಭಾರತಕ್ಕೆ ಬಂದಿದೆ. 18 ಅಡಿ ಉದ್ದವಿರುವ ಹಾಂಗ್ಕಿ ಎನ್&zwnj;701 ಕಾರು 21-ಇಂಚಿನ ಬುಲೆಟ್&zwnj;ಪ್ರೂಫ್ ವೀಲ್&zwnj;ಗಳು, ಗಟ್ಟಿಯಾದ ಬುಲೆಟ್&zwnj;ಪ್ರೂಫ್ ಗ್ಲಾಸ್&zwnj;ಗಳು ಮತ್ತು ಬಲವರ್ಧಿತ ಶಸ್ತ್ರಸಜ್ಜಿತ ಕವಚವನ್ನು ಹೊಂದಿದೆ. ಸಣ್ಣ ಪ್ರಮಾಣದ ಸ್ಫೋಟಕ ದಾಳಿಗಳನ್ನು ತಡೆಯುವ ಸಾಮರ್ಥ್ಯ ಮಾತ್ರವಲ್ಲದೆ, ವಿಷಕಾರಿ ಅನಿಲ ಅಥವಾ ರಾಸಾಯನಿಕ ದಾಳಿ ನಡೆದರೆ ಕಾರಿನ ಒಳಗಿರುವವರನ್ನು ರಕ್ಷಿಸಲು ಪ್ರತ್ಯೇಕ ಏರ್-ಕಂಪ್ರೆಷನ್ ಆಕ್ಸಿಜನ್ ವ್ಯವಸ್ಥೆಯನ್ನು ಇದು ಹೊಂದಿದೆ. ಚೀನಾದ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆಯಾದ ಹಾಂಗ್ಕಿ ಇದನ್ನು ಕಸ್ಟಮ್-ಬಿಲ್ಟ್ ಮಾದರಿಯಲ್ಲಿ ಸಿದ್ಧಪಡಿಸಿದೆ.&lt;/p&gt;&lt;h2&gt;&lt;strong&gt;ಕೆಲವೇ ಕೆಲವರಿಗೆ ಕಾರು ಸೌಲಭ್ಯ:&lt;/strong&gt;&lt;/h2&gt;&lt;p&gt;ವಿದೇಶಿ ಗಣ್ಯರೆಲ್ಲರಿಗೂ ಭಾರತಕ್ಕೆ ಬಂದರೆ ತಮ್ಮದೇ ಆದ ಕಾರು ಬಳಸಲು ಅವಕಾಶವಿಲ್ಲ. ಪುಟಿನ್&zwnj;, ಟ್ರಂಪ್&zwnj;, ಕ್ಸಿ ಅಂಥವರಿಗೆ ಮಾತ್ರ ಇಂಥ ಆವಕಾಶವಿದೆ.&lt;/p&gt;&lt;h3&gt;&lt;strong&gt;ಪಿಸ್ತೂಲ್&zwnj; ಬಿಟ್ಟು ಬೇರೆ ಶಸ್ತ್ರಾಸ್ತ್ರ ತರುವಂತಿಲ್ಲ:&lt;/strong&gt;&lt;/h3&gt;&lt;p&gt;ವಿದೇಶಿ ನಿಯೋಗವು ಭಾರತದ ದೂರಸಂಪರ್ಕ ಇಲಾಖೆಯ ಅನುಮತಿ ಪಡೆದು ತಮ್ಮ ಸ್ವಂತ ಸಂವಹನ ಉಪಕರಣಗಳನ್ನು ಭಾರತಕ್ಕೆ ತರಬಹುದಾಗಿದೆ. ಆದರೆ ಉಪಗ್ರಹ ಸಂವಹನ ಉಪಕರಣಗಳನ್ನು ತರಲು ಅನುಮತಿಯಿಲ್ಲ. ಬಂದೂಕು ಮತ್ತು ಮದ್ದುಗುಂಡುಗಳನ್ನು ತರುವ ಅನಿವಾರ್ಯತೆಯಿದ್ದರೆ, ಪಿಸ್ತೂಲ್&zwnj;ಗಳಿಗೆ ಅವಕಾಶವಿದೆ. ಆದರೆ ಸಬ್&zwnj;ಮಷಿನ್&zwnj; ಗನ್&zwnj;ಗಳು ಮತ್ತು ಆ್ಯಂಟಿ-ಡ್ರೋನ್&zwnj; ಉಪಕರಣಗಳನ್ನು ಏರ್ಪೋರ್ಟ್&zwnj;ನ ಕಸ್ಟಮ್ಸ್&zwnj; ವಿಭಾಗದಲ್ಲೇ ಇಟ್ಟುಬರಬೇಕಾಗುತ್ತದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/china-president-xi-jinping-india-visit-brics-summit-2026-hongqi-car-security-details-sat/articleshow-a4u7ygi"/>
        </item>
        <item>
            <title><![CDATA[ಕರ್ನಾಟಕ ಪೊಲೀಸರ ದಾಳಿ: ಅಮೆಜಾನ್, ಫ್ಲಿಪ್‌ಕಾರ್ಟ್ ಗೋದಾಮುಗಳಲ್ಲಿ ಸೇರಿ ರಾಜ್ಯಾದ್ಯಂತ 800 ಬಾಲಕಾರ್ಮಿಕರ ರಕ್ಷಣೆ!]]></title>
            <link>https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt</link>
            <guid isPermaLink="true">https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt</guid>
            <pubDate>Sun, 13 Sep 2026 05:48:18 +0530</pubDate>
            <description><![CDATA[ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ, ಪೊಲೀಸರು ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ 800 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಬೆಂಗಳೂರಿನಲ್ಲೇ 503 ಮಕ್ಕಳು ಪತ್ತೆಯಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ 20 ಪ್ರಕರಣಗಳನ್ನು ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2c1nysz0jpwx20thfw4510g,imgname-karnataka-child-labour-1789258300222.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕನ್ನಡಪ್ರಭ ವಾರ್ತೆ ಬೆಂಗಳೂರು (ಸೆ.13): ಮು&lt;/strong&gt;ಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು, ಲೇಬರ್&zwnj; ಇನ್&zwnj;ಸ್ಪೆಕ್ಟರ್&zwnj;ಗಳು ಶನಿವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ಕೆಲಸದಲ್ಲಿ ತೊಡಗಿದ್ದ 800 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ಜತೆಗೆ, ಕೆಲಸಕ್ಕೆ ಮಕ್ಕಳನ್ನು ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಬಾಲ ಕಾರ್ಮಿಕರ ನಿಷೇಧ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆಯಡಿ ಒಟ್ಟು 20 ಪ್ರಕರಣವನ್ನೂ ದಾಖಲಿಸಿದ್ದಾರೆ.&lt;/p&gt;&lt;p&gt;ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಸೇರಿ 31 ಜಿಲ್ಲೆ ಹಾಗೂ ಮಹಾನಗರಗಳು, ರೈಲ್ವೆ ನಿಲ್ದಾಣಗಳು ಸೇರಿ ಒಟ್ಟು 962 ಪೊಲೀಸ್&zwnj; ಠಾಣಾ ವ್ಯಾಪ್ತಿಯಲ್ಲಿ 16,951 ಸ್ಥಳಗಳಲ್ಲಿ ಶನಿವಾರ ತಪಾಸಣೆ ನಡೆಸಿ ಒಟ್ಟು 800 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಇತ್ತೀಚೆಗೆ ಯಶವಂತಪುರದ ಎಪಿಎಂಸಿಗೆ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಲಕಾರ್ಮಿಕರನ್ನು ಗಮನಿಸಿ ಅಸಮಾಧಾನ ವ್ಯಕ್ತಪಡಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್&zwnj; ಇಲಾಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಅಂದು ಕಾರ್ಯಾಚರಣೆ ನಡೆಸಿದ ಪೊಲೀಸರು 29 ಮಂದಿ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದರು.&lt;/p&gt;&lt;h2&gt;&lt;strong&gt;ಬೆಂಗಳೂರಿನಲ್ಲಿ 503 ಬಾಲಕರ ರಕ್ಷಣೆ:&lt;/strong&gt;&lt;/h2&gt;&lt;p&gt;ನಗರ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಮತ್ತು ಲೇಬರ್&zwnj; ಇನ್&zwnj;ಸ್ಪೆಕ್ಟರ್&zwnj;ಗಳ ವಿಶೇಷ ತಂಡ ಶನಿವಾರ 11 ಡಿಸಿಪಿ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವ ಹಾಗೂ ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಉದ್ದೇಶದಿಂದ ಗ್ಯಾರೇಜ್&zwnj;ಗಳು, ಮಾರ್ಟ್&zwnj;ಗಳು, ರಿಪೇರಿ ಅಂಗಡಿಗಳು, ಹೋಟೆಲ್&zwnj;ಗಳು, ಮಾರುಕಟ್ಟೆಗಳು, ಬಾರ್ ಮತ್ತು ರೆಸ್ಟೋರೆಂಟ್&zwnj;ಗಳು, ಲಾಡ್ಜ್&zwnj;, ಬೇಕರಿ, ಬಸ್&zwnj; ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆಗಳು, ನಿರ್ಮಾಣ ಹಂತದ ಕಟ್ಟಡಗಳು, ಕಾರು ಗ್ಯಾರೇಜ್&zwnj;, ಅಮೆಜಾನ್&zwnj;, ಪ್ಲಿಫ್&zwnj;ಕಾರ್ಟ್&zwnj; ಗೋದಾಮು ಸೇರಿ ಒಟ್ಟು 5,897 ಸ್ಥಳಗಳಲ್ಲಿ ತಪಾಸಣೆ ನಡೆಸಲಾಯಿತು.&lt;/p&gt;&lt;p&gt;ಕಾರ್ಯಾಚರಣೆ ವೇಳೆ ಕೆಲಸದಲ್ಲಿ ತೊಡಗಿದ್ದ 503 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರೆದಿದ್ದು, ಬಾಲಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿರುವ ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸುವ ಹಾಗೂ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ನಿಟ್ಟಿನಲ್ಲಿ ಈ ವಿಶೇಷ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಬೆಂಗಳೂರು ನಗರದಲ್ಲಿ ನಡೆದ ಕಾರ್ಯಾಚರಣೆ ವಿವರ:&lt;/strong&gt;&lt;/h2&gt;&lt;p&gt;ವಿಭಾಗ ಪರಿಶೀಲನೆಯ ಸ್ಥಳಗಳ ಸಂಖ್ಯೆ ರಕ್ಷಣೆ ಮಾಡಲಾದ ಬಾಲಕರು ದಾಖಲಾದ ಪ್ರಕರಣಗಳು&lt;/p&gt;&lt;ul&gt; &lt;li&gt;ಕೇಂದ್ರ 492 63 0&lt;/li&gt; &lt;li&gt;ದಕ್ಷಿಣ 515 54 0&lt;/li&gt; &lt;li&gt;ಪಶ್ಚಿಮ 742 84 1&lt;/li&gt; &lt;li&gt;ಉತ್ತರ 327 62 0&lt;/li&gt; &lt;li&gt;ನೈಋತ್ಯ 150 17 3&lt;/li&gt; &lt;li&gt;ವಾಯುವ್ಯ 337 14 2&lt;/li&gt; &lt;li&gt;ಪೂರ್ವ 927 71 3&lt;/li&gt; &lt;li&gt;ಈಶಾನ್ಯ 412 55 0&lt;/li&gt; &lt;li&gt;ಆಗ್ನೇಯ 375 13 0&lt;/li&gt; &lt;li&gt;ಎಲೆಕ್ಟ್ರಾನಿಕ್&zwnj; ಸಿಟಿ 343 3 0&lt;/li&gt; &lt;li&gt;ವೈಟ್&zwnj;ಫೀಲ್ಡ್&zwnj; 857 22 0&lt;/li&gt; &lt;li&gt;ಸಿಸಿಬಿ 420 45 9&lt;/li&gt; &lt;li&gt;&lt;strong&gt;ಒಟ್ಟು 5897 503 18&lt;/strong&gt;&lt;/li&gt;&lt;/ul&gt;&lt;p&gt;ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 5,897 ಸ್ಥಳಗಳಲ್ಲಿ ಪರಿಶೀಲನೆ ಮಾಡಿ 503 ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಬಾಲ ಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಳ್ಳುವ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.&lt;/p&gt;&lt;h3&gt;&lt;strong&gt;-ಸೀಮಂತ್&zwnj; ಕುಮಾರ್&zwnj; ಸಿಂಗ್&zwnj;, ನಗರ ಪೊಲೀಸ್&zwnj; ಆಯುಕ್ತ&lt;/strong&gt;&lt;/h3&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-police-mega-crackdown-800-child-labourers-rescued-bengaluru-sat/articleshow-gckh0yt"/>
        </item>
        <item>
            <title><![CDATA[BRICS: ಯುದ್ಧದ ವಿರುದ್ಧ ಬ್ರಿಕ್ಸ್ ಸಮರ; ಮೋದಿ 'ದೆಹಲಿ ನಿರ್ಣಯ'ಕ್ಕೆ ಸರ್ವಾನುಮತದ ಅಂಗೀಕಾರ!]]></title>
            <link>https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib</link>
            <guid isPermaLink="true">https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib</guid>
            <pubDate>Sun, 13 Sep 2026 05:26:53 +0530</pubDate>
            <description><![CDATA[ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ 'ನವದೆಹಲಿ ನಿರ್ಣಯ 2026' ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಈ ನಿರ್ಣಯವು ಯುದ್ಧ, ಪಹಲ್ಗಾಂ ದಾಳಿ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಏಕಪಕ್ಷೀಯ ಸುಂಕ ಹೇರಿಕೆಯನ್ನು ಖಂಡಿಸಿದ್ದು, ಇದು ಭಾರತಕ್ಕೆ ಸಿಕ್ಕ ದೊಡ್ಡ ರಾಜತಾಂತ್ರಿಕ ಯಶಸ್ಸು ಎಂದು ಪರಿಗಣಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ay3t7sst4h08m65te2y8hy,imgname-brics-2026-group-photo-1789221005561.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪಿಟಿಐ ನವದೆಹಲಿ (ಸೆ.13): ಭಾ&lt;/strong&gt;ರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ಮೊದಲ ದಿನದಂದೇ ಬ್ರಿಕ್ಸ್ ಒಕ್ಕೂಟವು ಯುದ್ಧವನ್ನು ಖಂಡಿಸಿ, ಸರ್ವಾನುಮತದಿಂದ &lsquo;ನವದೆಹಲಿ ನಿರ್ಣಯ 2026&rsquo; ಅನ್ನು ಅಂಗೀಕರಿಸಿದೆ. ಇದೇ ವೇಳೆ, ಪಹಲ್ಗಾಂ ದಾಳಿ ಹಾಗೂ ಎಲ್ಲ ರೀತಿಯ ಉಗ್ರವಾದ ಖಂಡಿಸಿ ಪಾಕಿಸ್ತಾನಕ್ಕೆ ಚಾಟಿಯೇಟು ನೀಡಿದೆ. ಇನ್ನು ಏಕಪಕ್ಷೀಯ ಸುಂಕ ಹೇರಿಕೆಯನ್ನೂ ಪ್ರಶ್ನಿಸಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;ಗೆ ಪರೋಕ್ಷ ಸಂದೇಶ ರವಾನಿಸಿದೆ.&lt;/p&gt;&lt;p&gt;ಶೃಂಗಸಭೆಯ ಉದ್ಘಾಟನಾ ಅಧಿವೇಶನದ ಮುಕ್ತಾಯದ ವೇಳೆ ಪ್ರಧಾನಿ ನರೇಂದ್ರ ಮೋದಿ, ಜಂಟಿ ಪ್ರಕಟಣೆಯ ಅಂಗೀಕಾರವನ್ನು ಅಧಿಕೃತವಾಗಿ ಘೋಷಿಸಿದರು. &lsquo;ಯಾವ ಸದಸ್ಯ ರಾಷ್ಟ್ರವೂ ಯಾವುದೇ ಆಕ್ಷೇಪಣೆ ಎತ್ತಿಲ್ಲ. ಹೀಗಾಗಿ &lsquo;ನವದೆಹಲಿ ನಿರ್ಣಯ 2026&rsquo; ಅನ್ನು ಸರ್ವಸಮ್ಮತಿಯಿಂದ ಅಂಗೀಕರಿಸಲಾಗಿದೆ&rsquo; ಎಂದು ತಿಳಿಸಿದರು.&lt;/p&gt;&lt;p&gt;ಈ ಬಾರಿಯ ಜಂಟಿ ಪ್ರಕಟಣೆಯಲ್ಲಿ ಯಾವುದೇ ನಿರ್ದಿಷ್ಟ ದೇಶದ ಹೆಸರು ಉಲ್ಲೇಖಿಸದೆ &lsquo;ಏಕಪಕ್ಷೀಯ ಮಿಲಿಟರಿ ದಾಳಿ&rsquo; ಹಾಗೂ ಸಂಘರ್ಷಗಳನ್ನು ಖಂಡಿಸಲಾಗಿದೆ. ಜಾಗತಿಕ ಶಾಂತಿ, ಮಾತುಕತೆ, ಸಾರ್ವಭೌಮತ್ವದ ರಕ್ಷಣೆ, ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಬದಲಿಗೆ ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸುವ ವಿಷಯಗಳ ಬಗ್ಗೆ ಬ್ರಿಕ್ಸ್ ಒಕ್ಕೂಟ ಒಮ್ಮತಕ್ಕೆ ಬಂದಿದೆ.&lt;/p&gt;&lt;h2&gt;&lt;strong&gt;ತಡರಾತ್ರಿವರೆಗೂ ಚರ್ಚೆ:&lt;/strong&gt;&lt;/h2&gt;&lt;p&gt;ಪ್ರಕಟಣೆಯ ಕರಡು ಸಿದ್ಧಪಡಿಸುವ ವೇಳೆ ವೈರಿ ರಾಷ್ಟ್ರಗಳಾದ ಇರಾನ್ ಮತ್ತು ಯುಎಇ ತಮ್ಮ ನಿಲುವುಗಳಿಗೆ ಪಟ್ಟು ಹಿಡಿದಿದ್ದರಿಂದ ಮಧ್ಯರಾತ್ರಿಯವರೆಗೂ ಸುದೀರ್ಘ ಮಾತುಕತೆಗಳು ನಡೆದವು. ಶನಿವಾರ ಮುಂಜಾನೆ 4 ಗಂಟೆಯವರೆಗೆ ನಡೆದ ತೀವ್ರತರ ಚರ್ಚೆಯ ಬಳಿಕ ಈ ಕರಡು ನಿರ್ಣಯಕ್ಕೆ ಒಮ್ಮತ ಮೂಡಿತು.&lt;/p&gt;&lt;p&gt;ಪಹಲ್ಗಾಂ ದಾಳಿಗೆ ಖಂಡನೆ:&lt;/p&gt;&lt;p&gt;2025ರ ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿಯನ್ನು ಬ್ರಿಕ್ಸ್&zwnj; ಜಂಟಿ ನಿರ್ಣಯ ಖಂಡಿಸಿದೆ. ಉಗ್ರವಾದದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಲು ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಭಯೋತ್ಪಾದನೆ ತಡೆ ಸಮಗ್ರ ಒಪ್ಪಂದವನ್ನು ಶೀಘ್ರ ಅಂಗೀಕರಿಸಲು ಕರೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಭಾರತಕ್ಕೆ ರಾಜತಾಂತ್ರಿಕ ಯಶ:&lt;/strong&gt;&lt;/h2&gt;&lt;p&gt;ಬ್ರಿಕ್ಸ್ ಶೃಂಗಸಭೆಯಲ್ಲಿ ಜಂಟಿ ಪ್ರಕಟಣೆಯ ಕುರಿತು ಎಲ್ಲಾ ಸದಸ್ಯ ರಾಷ್ಟ್ರಗಳ ನಡುವೆ ಸರ್ವಾನುಮತ ಮೂಡಿಸಿರುವುದು ಭಾರತಕ್ಕೆ ಲಭಿಸಿದ ದೊಡ್ಡ ರಾಜತಾಂತ್ರಿಕ ಯಶಸ್ಸಾಗಿದೆ. ಪ್ರಾದೇಶಿಕ ಮತ್ತು ಭೌಗೋಳಿಕ ರಾಜಕೀಯ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಇರಾನ್ ಮತ್ತು ಯುಎಇ ದೇಶಗಳು ವಿಸ್ತರಿತ ಬ್ರಿಕ್ಸ್ ಒಕ್ಕೂಟದ ಭಾಗವಾಗಿದ್ದರೂ, ಈ ರಾಜತಾಂತ್ರಿಕ ಯಶಸ್ಸು ಲಭಿಸಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ.&lt;/p&gt;&lt;h2&gt;&lt;strong&gt;ನಿರ್ಣಯದ ಮುಖ್ಯಾಂಶಗಳು:&lt;/strong&gt;&lt;/h2&gt;&lt;p&gt;&lt;strong&gt;1.ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ:&lt;/strong&gt; ಗಡಿಯಾಚೆಗಿನ ಭಯೋತ್ಪಾದನೆ, ಉಗ್ರರಿಗೆ ಹಣಕಾಸು ನೆರವು ಮತ್ತು ಸುರಕ್ಷಿತ ತಾಣಗಳನ್ನು ಒದಗಿಸುವುದೂ ಸೇರಿದಂತೆ ಎಲ್ಲ ಮಾದರಿಯ ಭಯೋತ್ಪಾದನೆಯನ್ನು ಬ್ರಿಕ್ಸ್ ತೀವ್ರವಾಗಿ ಖಂಡಿಸಿದೆ.&lt;/p&gt;&lt;p&gt;&lt;strong&gt;2. ರಾಜತಾಂತ್ರಿಕ ಪರಿಹಾರಕ್ಕೆ ಒತ್ತು: &lt;/strong&gt;ಸಂಘರ್ಷಗಳ ಮೂಲ ಕಾರಣಗಳನ್ನು ಕಂಡುಕೊಂಡು ಅವುಗಳನ್ನು ತಡೆಯಲು ಬ್ರಿಕ್ಸ್ ಒತ್ತು ನೀಡಿದೆ. ರಾಜತಾಂತ್ರಿಕತೆ, ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕವೇ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಪುನರುಚ್ಚರಿಸಿದೆ. ಗಾಜಾದಲ್ಲಿ ಕದನ ವಿರಾಮ ಪಾಲನೆ, ಮಾನವೀಯ ನೆರವು ಹಾಗೂ 1967ರ ಗಡಿ ಆಧರಿತ ಸ್ವತಂತ್ರ ಪ್ಯಾಲೆಸ್ಟೈನ್ ರಾಷ್ಟ್ರದೊಂದಿಗೆ &lsquo;ದ್ವಿ-ರಾಷ್ಟ್ರ ಪರಿಹಾರ&rsquo;ಕ್ಕೆ ಬೆಂಬಲ ಸೂಚಿಸಲಾಗಿದೆ.&lt;/p&gt;&lt;p&gt;&lt;strong&gt;3. ಏಕಪಕ್ಷೀಯ ಸುಂಕಕ್ಕೆ ಕಳವಳ: &lt;/strong&gt;ವಿಶ್ವ ವ್ಯಾಪಾರ ಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿ ಮತ್ತು ಜಾಗತಿಕ ವ್ಯಾಪಾರಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಕೆಲವು ರಾಷ್ಟ್ರಗಳು ಏಕಪಕ್ಷೀಯವಾಗಿ ವಿಧಿಸುತ್ತಿರುವ ಸುಂಕ ಹಾಗೂ ಸುಂಕೇತರ ನಿರ್ಬಂಧಗಳ ಕುರಿತು ಬ್ರಿಕ್ಸ್ ತೀವ್ರ ಕಳವಳ ವ್ಯಕ್ತಪಡಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/brics-summit-2026-new-delhi-declaration-terrorism-tariffs-india-diplomatic-win-sat/articleshow-4zbbaib"/>
        </item>
        <item>
            <title><![CDATA[ಬಿಗ್ ಬಾಸ್ 13, ಕಿಚ್ಚನ ಮೊದಲ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಫುಲ್‌ ಕ್ಲಾಸ್‌ ತೆಗೆದುಕೊಂಡ  ಸುದೀಪ್]]></title>
            <link>https://kannada.asianetnews.com/tv-talk/bigg-boss-kannada-13-kichcha-sudeep-schools-contestants-during-first-panchayat/articleshow-ni552yz</link>
            <guid isPermaLink="true">https://kannada.asianetnews.com/tv-talk/bigg-boss-kannada-13-kichcha-sudeep-schools-contestants-during-first-panchayat/articleshow-ni552yz</guid>
            <pubDate>Sun, 13 Sep 2026 00:04:30 +0530</pubDate>
            <description><![CDATA[ಬಿಗ್ ಬಾಸ್ 13ರ ಮೊದಲ ಪಂಚಾಯಿತಿ ನಡೆದಿದೆ. ಕಿಚ್ಚನ ಮೊದಲ ಪಂಚಾಯಿತಿಯಲ್ಲೇ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ವೇಳೆ ಕೆಲ ಎಚ್ಚರಿಕೆಯನ್ನು ನೀಡಿದ್ದಾರೆ. ಹೇಗಿತ್ತು ಪಂಚಾಯಿತಿ?]]></description>
            <media:content url="https://static.asianetnews.com/images/w-1280,h-720,format-jpg,imgid-01m2beccs2bkndp3929f6hnyjv,imgname-bigg-boss-kannada-13-1789238063906.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.12) &lt;/strong&gt;ಬಿಗ್ ಬಾಸ್ ಕನ್ನಡದ 13ನೇ ಆವೃತ್ತಿ ಹಲವು ಹೊಸ ಪ್ರಯೋಗ ಮೂಲಕ ಆರಂಭಗೊಂಡಿದೆ. ಪರಿಣಾಮ ಆರಂಭದಲ್ಲೇ ಸ್ಪರ್ಧಾ ಕಣ ರಂಗೇರಿದೆ. ಕಿಚ್ಚನ ಮೊದಲ ಪಂಚಾಯಿತಿ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ವೀಕ್ಷಕರ ನಿರೀಕ್ಷೆಯಂತೆಯೇ ಕಿಚ್ಚ ಸುದೀಪ್ ಬಿಸಿ ಮುಟ್ಟಿಸಬೇಕಾದ ಕಡೆ ಬಿಸಿ ಮುಟ್ಟಿಸುವ ಮೂಲಕ ಸ್ಪರ್ಧಿಗಳನ್ನು ಎಚ್ಚರಿಸಿದ್ದಾರೆ.&lt;/p&gt;&lt;h2&gt;ಫ್ರೆಂಡ್&zwnj;ಶಿಪ್&zwnj; ಬಾಂಡಿಂಗ್&zwnj;ನಲ್ಲಿ ಎಲ್ಲವೂ ಒಕೆ ಅಲ್ಲ&lt;/h2&gt;&lt;p&gt;ಗಗನ್&zwnj;-ತಾಂಡವ್&zwnj; ಫ್ರೆಂಡ್&zwnj;ಶ್ಯಿಪ್&zwnj; ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ತಾಂಡವ್&zwnj; ಗಗನ್&zwnj;ನ ಫ್ರೆಂಡ್&zwnj;ಶ್ಯಿಪ್&zwnj;ನ ಬಳಸಿ ಕೋ ವಿಐಪಿ ಆಗಿದ್ದರ ಬಗ್ಗೆ ಅದರ ಪರಿಣಾಮದ ಬಗ್ಗೆ ಸೂಕ್ಷ್ಮ ಮಾತುಗಳಲ್ಲಿ ಹೇಳಿದಾಗ ಅದನ್ನು ಅರಿತುಕೊಂಡ ಗಗನ್&zwnj; ತುಂಬಾ ಸೀರಿಯಸ್ ಆಗಿದ್ದಾರೆ. ಈ ಪಂಚಾಯಿತಿಯ ಬಳಿಕ ಅವರ ಫ್ರೆಂಡ್&zwnj;ಶ್ಯಿಪ್&zwnj; ಬಾಂಡ್ ಹೀಗೆಯೇ ಇರಲಿದೆಯೇ? ಎಂಬ ಪ್ರಶ್ನೆಗೆ ಪಂಚಾಯಿತಿಯ ಕೊನೆಯಲ್ಲಿ ಅವರಿಬ್ಬರು ಕೂತ ಭಂಗಿಯೇ ಉತ್ತರ ನೀಡುವಂತಿತ್ತು.&lt;/p&gt;&lt;h2&gt;ವುಮನ್&zwnj; ಕಾರ್ಡ್&zwnj; ಸೀಸನ್&zwnj; 13ನಲ್ಲಿ ಬೇಡ ಎಂದ ಎಚ್ಚರಿಸಿದ ಕಿಚ್ಚ&lt;/h2&gt;&lt;p&gt;ನೀವು ತಮಾಷೆಗೆ ಹೇಳಿರಬಹುದು ಆದ್ರೆ ಇಲ್ಲಿ ವುಮನ್&zwnj; ಕಾರ್ಡ್&zwnj; ನಡೆಯಲ್ಲ ಎಂಬುವುದನ್ನು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಅಲ್ಲದೆ ಹುಡುಗಿಯರನ್ನು ಡಿಸ್&zwnj;ಕ್ರಿಮಿನೇಶನ್ ಮಾಡುತ್ತಿದ್ದಾರೆ ಎಂಬ ಭಾವನೆ ಕೆಲ ಮಹಿಳಾ ಸ್ಪರ್ಧಿಗಳಲ್ಲಿ ಇದೆ. ಅದನ್ನು ಅವರು ಹಲವು ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ವೈಷ್ಣವಿಯನ್ನು ಗೇಮ್&zwnj;ನಿಂದ ಹೊರಗಿಟ್ಟ ನೀವು ಮಹಿಳಾ ಡಿಸ್&zwnj;ಕ್ರಿಮಿನೇಶನ್ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಕ್ಲಾಸ್ ತೆಗೆದುಕೊಂಡರು.&lt;/p&gt;&lt;h2&gt;ಕಾಮನ್&zwnj; ಸಿಂಪತಿ ಕಾರ್ಡ್&zwnj;ಗೂ ಕತ್ತರಿ ಹಾಕಿದ ಕಿಚ್ಚ&lt;/h2&gt;&lt;p&gt;ಅಗ್ನಿ ಪರೀಕ್ಷೆಯ ಮೂಲಕ ಬಿಗ್&zwnj;ಬಾಸ್&zwnj; ಮನೆಗೆ ಬಂದವರು ತಾವು ಕಾಮನ್&zwnj;ರು ಎಂಬ ಸಿಂಪತಿ ಕಾರ್ಡ್ ಬಳಸುವುದಕ್ಕೆ ಕತ್ತರಿ ಹಾಕಿದ್ದಾರೆ . ಕನ್ನಡ ಜನತೆಯ ಪ್ರೀತಿ ಗಳಿಸಿ ಈ ಸ್ಟೇಜ್&zwnj;ಗೆ ಬಂದಿದ್ದೀರಿ. ಹೀಗಾಗಿ ಇಲ್ಲಿ ನಾವು ಸಾಮಾನ್ಯರು ಎಂಬ ಸಿಂಪತಿ ಕಾರ್ಡ್&zwnj; ಬಳಸಬೇಡಿ ಎಂಬುವುದನ್ನ ಖಾರವಾಗಿ ಹೇಳಿದರು.&lt;/p&gt;&lt;h2&gt;ಈ ಸೀಸನ್&zwnj;ನ ವಿನ್ನರ್&zwnj;ಗೆ ಹಾಗೂ ರನ್ನರ್&zwnj;ಗೆ ಸಿಗಲಿರುವ ಹಣವೆಷ್ಟು?&lt;/h2&gt;&lt;p&gt;ಕಿಚ್ಚ ಸುದೀಪ್&zwnj;ರವರು ಈ ಬಾರಿಯ ಸೀಸನ್ ವಿನ್ನರ್&zwnj;ಗೆ 50 ಕ್ಯಾಶ್&zwnj; ಪ್ರೈಸ್ ಹಾಗೂ ರನ್ನರ್&zwnj;ಗೆ 25 ಲಕ್ಷ ಕ್ಯಾಶ್ ಪ್ರೈಸ್ ಸಿಗುವುದಾಗಿ ವಾರದ ಪಂಚಾಯಿತಿ ವೇದಿಕೆಯಲ್ಲಿ ತಿಳಿಸಿದರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/tv-talk/bigg-boss-kannada-13-kichcha-sudeep-schools-contestants-during-first-panchayat/articleshow-ni552yz"/>
        </item>
        <item>
            <title><![CDATA[ಗೆಳತಿಗೆ RS 3.5 ಕೋಟಿ ಖರ್ಚು ಮಾಡಿ ಮೋಸ ಹೋದ, Break-Up ಬಳಿಕ ಕೋರ್ಟ್‌ ಮೆಟ್ಟಿಲೇರಿ ಕೇಸ್‌ ಕೂಡ ಸೋತ CEO]]></title>
            <link>https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba</link>
            <guid isPermaLink="true">https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba</guid>
            <pubDate>Sat, 12 Sep 2026 23:58:02 +0530</pubDate>
            <description><![CDATA[ಭಾರತೀಯ ಮೂಲದ ಸಿಇಒ ಚಂದರ್ ಅಗರ್ವಾಲ್, ತಮ್ಮ ಗೆಳತಿ ಫೆಲಿಷಿಯಾ ಲೀ ಮೇಲೆ ಸುಮಾರು 3.5 ಕೋಟಿ ರೂಪಾಯಿ ಖರ್ಚು ಮಾಡಿ, ಸಂಬಂಧ ಮುರಿದ ನಂತರ ಅದನ್ನು ಸಾಲವೆಂದು ವಾದಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಸಿಂಗಾಪುರದ ಕೋರ್ಟ್ ಈ ಹಣವನ್ನು ಉಡುಗೊರೆ ಎಂದು ಪರಿಗಣಿಸಿ, ಸಿಇಒ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಪ್ರೀತಿಯಲ್ಲಿ ಹಣ ಕಳೆದುಕೊಂಡ ಸಿಇಒಗೆ ನ್ಯಾಯಾಲಯದಲ್ಲೂ ಹಿನ್ನಡೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2be0g3ewnxrkb98kyyre0nb,imgname-chander-agarwal-1789237674094.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೆಣ್ಣು ಮಕ್ಕಳಾದರೂ ಅಷ್ಟೇ, ಗಂಡು ಮಕ್ಕಳಾದರೂ ಅಷ್ಟೇ. ಅಷ್ಟು ಈಜಿಯಾಗಿ ಯಾರನ್ನೂ ನಂಬಿ ಮೋಸ ಹೋಗಬೇಡಿ ಅಂತಾ ಅನುಭವಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ಅದನ್ನ ನಾವು ಹಾಗೇ ಕೇಳಿಸಿಕೊಂಡು ಹೀಗೆ ಬಿಟ್ಟು ಬಿಡುತ್ತೇವೆ. ನನ್ನ ಹತ್ರ ಬೇಕಾದಷ್ಟು ಹಣ ಇದೆ ಅಂದ್ಕೊಂಡ ಭಾರತೀಯ ಮೂಲದ ಸಿಇಓ ಒಬ್ಬ ತನ್ನ ಗೆಳತಿಗೆ ಬರೋಬ್ಬರಿ 3.5 ಕೋಟಿ ರೂಪಾಯಿ ಖರ್ಚು ಮಾಡಿ ಮೋಸ ಹೋಗಿದ್ದಾರೆ. ಅಸಲಿ ಸತ್ಯ ಗೊತ್ತಾದ್ಮೇಲೆ ಕೋರ್ಟ್&zwnj; ಮೇಟ್ಟಿಲೇರಿದ್ದ ಪುಣ್ಯಾತ್ಮನಿಗೆ ಅಲ್ಲೂ ಹಿನ್ನಡೆ ಆಗಿದೆ ಅನ್ನೋದು ಆತನ ವಾದ. ಆದರೆ ಕೋರ್ಟ್&zwnj; ಎಲ್ಲವನ್ನೂ ವಿಚಾರಣೆ ನಡೆಸಿಯೇ ತೀರ್ಪು ನೀಡಿದೆ.&lt;/p&gt;&lt;p&gt;ಪ್ರೀತಿಯೂ ಸಿಗಲಿಲ್ಲ. ಹಣವೂ ಸಿಗಲಿಲ್ಲ. ಕೋರ್ಟ್&zwnj; ಕೂಡ ನನ್ನ ಮಾತನ್ನ ಕೇಳಲಿಲ್ಲ ಅನ್ನೋ ಸ್ಥಿತಿಗೆ ಆ ಯುವಕ ಸಿಲುಕಿದ್ದಾನೆ. ಹೌದು, ಭಾರತೀಯ ಲಾಜಿಸ್ಟಿಕ್ಸ್ ಕಂಪನಿ ಟಿಸಿಐ ಎಕ್ಸ್&zwnj;ಪ್ರೆಸ್ ಲಿಮಿಟೆಡ್&zwnj;ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಚಂದರ್ ಅಗರ್ವಾಲ್, ತಮ್ಮ ಮಾಜಿ ಗೆಳತಿ ಫೆಲಿಷಿಯಾ ಲೀ ವಿರುದ್ಧ ಸಿಂಗಾಪುರದ ಹೈಕೋರ್ಟ್&zwnj;ನಲ್ಲಿ ಮೊಕದ್ದಮೆ ಹೂಡಿದ್ದರು. ಆಕೆಗಾಗಿ ಖರ್ಚು ಮಾಡಿದ ಹಣವನ್ನು ಬಡ್ಡಿರಹಿತ ಸಾಲವಾಗಿ ನೀಡಲಾಗಿದೆ ಮತ್ತು ಅದನ್ನು ಮರುಪಾವತಿಸಬೇಕಾಗಿತ್ತು ಎಂದು ವಾದಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್&zwnj;, ಹಣವನ್ನು ಹೆಚ್ಚಾಗಿ ಉಡುಗೊರೆ ರೂಪದಲ್ಲಿ ನೀಡಲಾಗಿದೆ ಎಂಬುದನ್ನ ಕಂಡುಕೊಂಡಿದೆ. ವಿಚಾರಣೆ ಬಳಿಕ ಅಗರ್ವಾಲ್&zwnj; ಅರ್ಜಿಯನ್ನು ವಜಾಗೊಳಿಸಿದೆ.&lt;/p&gt;&lt;h2&gt;&lt;strong&gt;ಏನಿದು ಪ್ರಕರಣ?&lt;/strong&gt;&lt;/h2&gt;&lt;p&gt;ಅಗರ್ವಾಲ್ ಮತ್ತು ಲೀ ಮೊದಲ ಬಾರಿಗೆ 2019 ರಲ್ಲಿ ಭೇಟಿಯಾದರು. ಅವರು ಸೆಪ್ಟೆಂಬರ್ 2022 ರಲ್ಲಿ ಪ್ರಣಯ ಸಂಬಂಧ ಹೊಂದಿದ್ದರು ಮತ್ತು ಅಗರ್ವಾಲ್ ಲೀ ಅವರನ್ನು ವಿಶ್ವಾಸದ್ರೋಹಿ ಎಂದು ಅನುಮಾನಿಸಿದರು. ಡಿಸೆಂಬರ್ 2023 ರಲ್ಲಿ ಇಬ್ಬರು ಬೇರ್ಪಟ್ಟರು. ಅವರು ಒಟ್ಟಿಗೆ ಇದ್ದಾಗ ಅಗರ್ವಾಲ್, ಲೀ ಅವರ ಮೇಲೆ ದೊಡ್ಡ ಮೊತ್ತವನ್ನು ಖರ್ಚು ಮಾಡಿದರು. ವೆಚ್ಚಗಳಲ್ಲಿ ಹರ್ಮ್ಸ್, ಡಿಯರ್ ಮತ್ತು ಪ್ರಾಡಾದಂತಹ ಬ್ರ್ಯಾಂಡ್&zwnj;ಗಳ ಐಷಾರಾಮಿ ವಸ್ತುಗಳು, ಪ್ರಥಮ ದರ್ಜೆ ವಿಮಾನಗಳು, ವಿದೇಶ ಪ್ರವಾಸಗಳು, ಜೀವ ವಿಮಾ ಕಂತುಗಳು ಅವರ ಕ್ರೆಡಿಟ್ ಕಾರ್ಡ್&zwnj;ಗಳ ವೈಯಕ್ತಿಕ ವೆಚ್ಚಗಳು ಮತ್ತು ಸ್ಟ್ಯಾನ್&zwnj;ಫೋರ್ಡ್-ಎನ್&zwnj;ಯುಎಸ್ ಕಾರ್ಯನಿರ್ವಾಹಕ ಕಾರ್ಯಕ್ರಮ ಸೇರಿವೆ.&lt;/p&gt;&lt;p&gt;ಲೀ ಅವರ ಫ್ಲಾಟ್&zwnj;ಗಾಗಿ ಅವರು ಫೆಂಗ್ ಶೂಯಿ ಮಾಸ್ಟರ್&zwnj;ಗಾಗಿ ಸುಮಾರು 17,000 ಡಾಲರ್&zwnj; ಹಣ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಭಾರತೀಯರಾಗಿ ಫೆಂಗ್ ಶೂಯಿಯಲ್ಲಿ ನಂಬಿಕೆ ಇಲ್ಲದ ಕಾರಣ ಪಾವತಿ ಸಾಲವಾಗಿರಬೇಕು ಎಂದು ಅಗರ್ವಾಲ್ ವಾದಿಸಿದರು. ನ್ಯಾಯಾಧೀಶರು ವಾದವನ್ನು ತಿರಸ್ಕರಿಸಿದರು, ಅಗರ್ವಾಲ್ ಅವರೇ ಈ ಸೇವೆಯನ್ನು ಏರ್ಪಡಿಸಿದ್ದರು ಎಂಬುದುನ್ನ ಕೋರ್ಟ್&zwnj; ಕಂಡುಕೊಂಡಿದೆ. ಲೀ ಹಣವನ್ನು ಸಾಲವಾಗಿ ವಿನಂತಿಸಿದ್ದರು ಮತ್ತು ಮರುಪಾವತಿಸಲು ಒಪ್ಪಿಕೊಂಡಿದ್ದರು ಎಂದು ಅಗರ್ವಾಲ್ ಹೇಳಿದ್ದಾರೆ. ಆದರೆ ಅದನ್ನು ಕೋರ್ಟ್&zwnj;ನಲ್ಲಿ ಸಾಬೀತುಪಡಿಸಲು ಅಗರ್ವಾಲ್&zwnj; ವಿಫಲರಾಗಿದ್ದಾರೆ.&lt;/p&gt;&lt;p&gt;ಅರ್ಜಿಯನ್ನು ವಜಾ ಮಾಡಿರುವ ಕೋರ್ಟ್&zwnj;, ಲೀ ಅವರ ಕಾನೂನು ವೆಚ್ಚವನ್ನೂ ಪಾವತಿಸುವಂತೆ ಆದೇಶ ನೀಡಿದೆ. ವಿವಾದಿತ ಪಾವತಿಗಳು ಸಾಲಗಳಲ್ಲ, ಉಡುಗೊರೆಗಳಾಗಿದ್ದು, ಲೀ ಹಣವನ್ನು ಮರುಪಾವತಿಸಲು ಬಾಧ್ಯಸ್ಥರಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/indian-origin-ceo-chander-agarwal-spends-rs-3-5-crore-on-girlfriend-after-breakup-he-lose-court-case-gkn/articleshow-216wyba"/>
        </item>
        <item>
            <title><![CDATA[How to cut onions for cooking: ಅಡುಗೆ ರುಚಿ ಹೆಚ್ಚಬೇಕಾ? ಹಾಗಾದ್ರೆ ಈರುಳ್ಳಿನ ಹೀಗೆ ಕಟ್ ಮಾಡಿ]]></title>
            <link>https://kannada.asianetnews.com/food/how-onion-cut-size-changes-food-flavor/articleshow-reziu3w</link>
            <guid isPermaLink="true">https://kannada.asianetnews.com/food/how-onion-cut-size-changes-food-flavor/articleshow-reziu3w</guid>
            <pubDate>Sat, 12 Sep 2026 23:21:50 +0530</pubDate>
            <description><![CDATA[Onion chopping science: ನಿಮ್ಮ ಅಡುಗೆ ಯಾಕೆ ಒಂದೊಂದು ದಿನ ಒಂದೊಂದು ತರಹ ರುಚಿ ಕೊಡುತ್ತೆ ಗೊತ್ತಾ? ಅದಕ್ಕೆ ನೀವು ಈರುಳ್ಳಿ ಕತ್ತರಿಸೋ ಸೈಜ್ ಕೂಡ ಒಂದು ಕಾರಣ! ತುರಿದ ಈರುಳ್ಳಿಗೂ, ಹೆಚ್ಚಿದ ಈರುಳ್ಳಿಗೂ ಇರೋ ಆ ಅಸಲಿ ವ್ಯತ್ಯಾಸ ಏನು ಅಂತ ನೀವೇ ನೋಡಿ...]]></description>
            <media:content url="https://static.asianetnews.com/images/w-1280,h-720,format-jpg,imgid-01m1dmwd8etm1b4g5z827evge7,imgname-chopped-onion-1788238247182.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾ&lt;/strong&gt;ವು ಪ್ರತಿದಿನ ಅಡುಗೆ ಮಾಡುವಾಗ ಈರುಳ್ಳಿಯನ್ನು ಕೆಲವೊಮ್ಮೆ ಸಣ್ಣಗೆ ಹೆಚ್ಚುತ್ತೇವೆ, ಇನ್ನು ಕೆಲವೊಮ್ಮೆ ದಪ್ಪಗೆ ಕತ್ತರಿಸುತ್ತೇವೆ, ಕೆಲವೊಮ್ಮೆ ಪೇಸ್ಟ್ ಅಥವಾ ತುರಿದು (Grate ಮಾಡಿ) ಹಾಕುತ್ತೇವೆ. ಆದರೆ ನಾವು ಈರುಳ್ಳಿಯನ್ನು ಯಾವ ಸೈಜ್&zwnj;ನಲ್ಲಿ ಕತ್ತರಿಸುತ್ತೇವೆ ಎಂಬುದು ಅಡುಗೆಯ ರುಚಿಯ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆ ನಿಮ್ಮಲ್ಲೂ ಕಾಡಿರಬಹುದು.&lt;/p&gt;&lt;p&gt;ಇದಕ್ಕೆ ಉತ್ತರ ಖಂಡಿತವಾಗಿಯೂ ಹೌದು. ಈರುಳ್ಳಿಯನ್ನು ಕತ್ತರಿಸುವ ಗಾತ್ರವೇ ನಿಮ್ಮ ಇಡೀ ಅಡುಗೆಯ ಸ್ವಾದ, ವಾಸನೆ ಮತ್ತು ಟೆಕ್ಸ್ಚರ್ ಅನ್ನು ನಿರ್ಧರಿಸುತ್ತದೆ ಎಂಬುದನ್ನು ಆಹಾರ ವಿಜ್ಞಾನ ಮತ್ತು ಪ್ರಾಯೋಗಿಕ ಪರೀಕ್ಷೆ ಸಾಬೀತುಪಡಿಸಿದೆ!&lt;/p&gt;&lt;h2&gt;&lt;strong&gt;ಇದರ ಹಿಂದಿರುವ ವಿಜ್ಞಾನವೇನು?&lt;/strong&gt;&lt;/h2&gt;&lt;p&gt;ಈರುಳ್ಳಿಯಲ್ಲಿ ನೀರು, ಕಾರ್ಬೋಹೈಡ್ರೇಟ್ಸ್ (ನೈಸರ್ಗಿಕ ಸಕ್ಕರೆ), ಸಲ್ಫರ್ (ಘಾಟು ನೀಡುವ ಅಂಶ) ಮತ್ತು ಆರೊಮ್ಯಾಟಿಕ್ ಕಣಗಳಿರುತ್ತವೆ. ನಾವು ಈರುಳ್ಳಿಯನ್ನು ಚಾಕುವಿನಿಂದ ಎಷ್ಟು ಚಿಕ್ಕದಾಗಿ ಕತ್ತರಿಸುತ್ತೇವೆಯೋ, ಅಷ್ಟೂ ಹೆಚ್ಚಾಗಿ ಅದರ ಕಣಗಳು (Cells) ಒಡೆದುಕೊಳ್ಳುತ್ತವೆ. ಜೀವಕೋಶಗಳು ಒಡೆದಾಗ ಅದರೊಳಗಿರುವ ಸಕ್ಕರೆ ಅಂಶ ಮತ್ತು ರಸಗಳು ಹೊರಬಂದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ. ಇದರಿಂದ ಈರುಳ್ಳಿಯ ಮೂಲ ರುಚಿಯ ಲಕ್ಷಣಗಳೇ ಬದಲಾಗುತ್ತವೆ!&lt;/p&gt;&lt;h2&gt;&lt;strong&gt;ಟೊಮೆಟೊ ಸಾಸ್ ಪ್ರಯೋಗ (Tomato Sauce Experiment)&lt;/strong&gt;&lt;/h2&gt;&lt;p&gt;ಈ ಸತ್ಯವನ್ನು ಪರೀಕ್ಷಿಸಲು ಶೆಫ್ ಒಬ್ಬರು ಒಂದೇ ರೀತಿಯ ಪದಾರ್ಥಗಳನ್ನು ಬಳಸಿ 3 ಬಗೆಯ ಟೊಮೆಟೊ ಸಾಸ್&zwnj;ಗಳನ್ನು ತಯಾರಿಸಿದರು..&lt;/p&gt;&lt;p&gt;&lt;strong&gt;ದೊಡ್ಡ ತುಂಡುಗಳು (Large Pieces / Halves): &lt;/strong&gt;ಇದರಲ್ಲಿ ಈರುಳ್ಳಿಯನ್ನು ಕೇವಲ ಎರಡು ಭಾಗ ಮಾಡಿ ನೇರವಾಗಿ ಬೇಯಿಸಲಾಯಿತು.&lt;/p&gt;&lt;p&gt;&lt;strong&gt;ಮಧ್ಯಮ ಗಾತ್ರ (Medium Dice):&lt;/strong&gt; ಸಾಮಾನ್ಯವಾಗಿ ನಾವು ಸಾಂಬಾರು ಅಥವಾ ಪಲ್ಯಕ್ಕೆ ಕತ್ತರಿಸುವಂತೆ ಸಣ್ಣದಾಗಿ ಕತ್ತರಿಸಿ ಹಾಕಲಾಯಿತು.&lt;/p&gt;&lt;p&gt;&lt;strong&gt;ತುರಿದ ಈರುಳ್ಳಿ (Grated / Minced): &lt;/strong&gt;ಈರುಳ್ಳಿಯನ್ನು ಕ್ಯಾರೆಟ್ ತುರಿಯುವ ಮಣೆಯಲ್ಲಿ ನುಣ್ಣಗೆ ತುರಿದು ಸಾಸ್&zwnj;ಗೆ ಬೆರೆಸಲಾಯಿತು.&lt;/p&gt;&lt;h2&gt;&lt;strong&gt;ಫಲಿತಾಂಶ ಹೇಗಿತ್ತು ಗೊತ್ತಾ?&lt;/strong&gt;&lt;/h2&gt;&lt;p&gt;ಮೂರು ಸಾಸ್&zwnj;ಗಳು ನೋಡಲು ಒಂದೇ ತರಹ ಕಂಡರೂ, ರುಚಿಯಲ್ಲಿ ಅಗಾಧ ವ್ಯತ್ಯಾಸವಿತ್ತು&lt;/p&gt;&lt;p&gt;&lt;strong&gt;ತುರಿದ ಈರುಳ್ಳಿಯ ಸಾಸ್ (Grated): &lt;/strong&gt;ಇದು ಎಲ್ಲಕ್ಕಿಂತ ಅತ್ಯಂತ ಸಿಹಿಯಾಗಿತ್ತು (Sweetest)! ಏಕೆಂದರೆ ಈರುಳ್ಳಿ ತುರಿದಾಗ ಅದರ ನೈಸರ್ಗಿಕ ಸಕ್ಕರೆ ಮತ್ತು ರಸ ಪೂರ್ತಿಯಾಗಿ ಹೊರಬಂದು ಸಾಸ್&zwnj;ನೊಂದಿಗೆ ಬೆರೆತಿತ್ತು.&lt;/p&gt;&lt;p&gt;&lt;strong&gt;ದೊಡ್ಡ ತುಂಡುಗಳ ಸಾಸ್ (Large Pieces): &lt;/strong&gt;ಇದರಲ್ಲಿ ಸಿಹಿ ಕಡಿಮೆ ಇತ್ತು, ಆದರೆ ಅಡುಗೆಗೆ ಒಂದು ಅದ್ಭುತವಾದ ಸುಗಂಧ ಹಾಗೂ ರಾಯಲ್ ಫ್ಲೇವರ್ (Perfumed Aroma) ಸಿಕ್ಕಿತ್ತು.&lt;/p&gt;&lt;h2&gt;&lt;strong&gt;ನಿಮ್ಮ ಅಡುಗೆಗೆ ಈ ಟಿಪ್ಸ್ ಹೇಗೆ ಬಳಸಿಕೊಳ್ಳಬೇಕು?&lt;/strong&gt;&lt;/h2&gt;&lt;p&gt;&lt;strong&gt;ಗ್ರೇವಿ ಸಿಹಿಯಾಗಿ, ದಪ್ಪವಾಗಿ ಬರಬೇಕಾದರೆ: &lt;/strong&gt;ಈರುಳ್ಳಿಯನ್ನು ತುಂಬಾ ಸಣ್ಣಗೆ ಹೆಚ್ಚಿ ಅಥವಾ ತುರಿದು (Grate ಮಾಡಿ) ಎಣ್ಣೆಯಲ್ಲಿ ಕ್ಯಾರಮೆಲೈಸ್ ಮಾಡಿ.&lt;/p&gt;&lt;p&gt;&lt;strong&gt;ಅಡುಗೆಗೆ ಕೇವಲ ಘಮ ಮತ್ತು ಲಘು ರುಚಿ ಬೇಕಾದರೆ: &lt;/strong&gt;ಬಿರಿಯಾನಿ ಅಥವಾ ಸೂಪ್&zwnj;ಗಳಂತಹ ಖಾದ್ಯಗಳಿಗೆ ಈರುಳ್ಳಿಯನ್ನು ದೊಡ್ಡದಾಗಿ ಕತ್ತರಿಸಿ ಹಾಕಿ.&lt;/p&gt;&lt;h2&gt;&lt;strong&gt;ಹಾಗಾದ್ರೆ ಯಾವುದು ಸರಿ?&lt;/strong&gt;&lt;/h2&gt;&lt;p&gt;ಯಾವುದೂ ತಪ್ಪು ಅಥವಾ ಸರಿಯಲ್ಲ. ನಿಮಗೆ ಅಡುಗೆಯಲ್ಲಿ ಎಂತಹ ರುಚಿ ಮತ್ತು ಹದ (Texture) ಬೇಕು ಎಂಬುದರ ಆಧಾರದ ಮೇಲೆ ಈರುಳ್ಳಿಯ ಸೈಜ್ ನಿರ್ಧಾರವಾಗುತ್ತದೆ. ಇನ್ಮುಂದೆ ಈರುಳ್ಳಿ ಹೆಚ್ಚುವಾಗ ನಿಮ್ಮ ಅಡುಗೆಯ ರುಚಿಯ ಸೀಕ್ರೆಟ್ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯಬೇಡಿ!&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-onion-cut-size-changes-food-flavor/articleshow-reziu3w"/>
        </item>
        <item>
            <title><![CDATA[ಗಣಪತಿ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್‌ಗೆ ಗಾಯ, ಆಸ್ಪತ್ರೆ ದಾಖಲು]]></title>
            <link>https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</link>
            <guid isPermaLink="true">https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3</guid>
            <pubDate>Sat, 12 Sep 2026 22:55:32 +0530</pubDate>
            <description><![CDATA[ಗಣಪತಿ ಮೂರ್ತಿ ರಿವೀಲ್ ಕಾರ್ಯಕ್ರಮದಲ್ಲಿ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ತಲೆಗೆ ಗಾಯವಾಗಿದೆ. ತಕ್ಷಣವೇ ಶಾಸಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕರು ಗಾಯಗೊಂಡಿದ್ದು ಹೇಗೆ?]]></description>
            <media:content url="https://static.asianetnews.com/images/w-1280,h-720,format-jpg,imgid-01m2badzrxeb55jj7qhv06814a,imgname-mandya-mla-ganiga-ravikumar-suffers-injury-1789233921821.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಡ್ಯ (ಸೆ.12) &lt;/strong&gt;ರಾಜ್ಯದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಡ್ಯದಲ್ಲಿ ಗಣಪತಿ ಹಬ್ಬ ಆಚರಣೆ ಜೋರಾಗಿದೆ. ಬೃಹತ್ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ರವಿಕುಮಾರ್ ತಲೆಗೆ ಗಾಯವಾಗಿದೆ. ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಸ್ಕ್ರೀನ್&zwnj;ನ ಕೊಂಡಿ ಬಿದ್ದು ರವಿಕುಮಾರ್ ಗಾಯಗೊಂಡಿದ್ದಾರೆ. ತಕ್ಷಣ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.&lt;/p&gt;&lt;h2&gt;ತಲೆಗೆ ಬಿದ್ದ ಸ್ಕ್ರೀನ್ ಕೊಂಡಿ&lt;/h2&gt;&lt;p&gt;ಮಂಡ್ಯದ ಮರಿಗೌಡ ಬಡಾವಣೆಯಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಬಾರಿಯೂ ಬೃಹತ್ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣೇಶನ ಪ್ರತಿಷ್ಠಾಪನೆಗೂ ಮೊದಲು ಮೂರ್ತಿಯನ್ನು ಅನಾವರಣ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರು ಗಾಯಗೊಂಡಿದ್ದಾರೆ. ಸ್ಕ್ರೀನ್&zwnj;ನ ಕೊಂಡಿ ಶಾಸಕರ ತಲೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ.ಅದ್ಧೂರಿ ಕಾರ್ಯಕ್ರಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.&lt;/p&gt;&lt;p&gt;ಗಾಯಗೊಂಡ ಶಾಸಕ ಗಣಿಗ ರವಿಕುಮಾರ್ ಅವರನ್ನು ತಕ್ಷಣವೇ ಮಂಡ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಾಸಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪಂದನ ಆಸ್ಪತ್ರೆಯತ್ತ ಶಾಸಕ ಗಣಿಗ ರವಿಕುಮಾರ್ ಬೆಂಬಲಿಗರು ದೌಡಾಯಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/mandya-congress-mla-ganiga-ravikumar-injured-at-ganapati-event-hospitalised/articleshow-6dzpcz3"/>
        </item>
        <item>
            <title><![CDATA[10 ಲಕ್ಷದ FD ಅಥವಾ 10 ಸಾವಿರದ RD? ಯಾವುದು ಹೆಚ್ಚು ಆದಾಯ ನೀಡುತ್ತದೆ? ಲೆಕ್ಕಾಚಾರ ಇಲ್ಲಿದೆ!]]></title>
            <link>https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t</link>
            <guid isPermaLink="true">https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t</guid>
            <pubDate>Sat, 12 Sep 2026 22:54:19 +0530</pubDate>
            <description><![CDATA[₹10 ಲಕ್ಷವನ್ನು ಎಫ್‌ಡಿಯಲ್ಲಿ ಹೂಡಿಕೆ ಮಾಡುವುದು ಮತ್ತು ತಿಂಗಳಿಗೆ ₹10,000 ಆರ್‌ಡಿಯಲ್ಲಿ ತೊಡಗಿಸುವುದರ ನಡುವಿನ ವ್ಯತ್ಯಾಸವನ್ನು ಈ ಲೇಖನ ವಿಶ್ಲೇಷಿಸುತ್ತದೆ. 10 ವರ್ಷಗಳ ಅವಧಿಯಲ್ಲಿ, ಒಂದೇ ಬಡ್ಡಿದರವಿದ್ದರೂ, ಆರಂಭಿಕ ದೊಡ್ಡ ಮೊತ್ತದ ಹೂಡಿಕೆಯಿಂದಾಗಿ ಎಫ್‌ಡಿ ಹೆಚ್ಚು ಆದಾಯ ನೀಡುತ್ತದೆ. ನಿಮ್ಮ ಬಳಿ ಇರುವ ಹಣ ಮತ್ತು ಉಳಿತಾಯದ ಸಾಮರ್ಥ್ಯದ ಆಧಾರದ ಮೇಲೆ ಯಾವುದು ಉತ್ತಮ ಆಯ್ಕೆ ಎಂಬುದನ್ನು ನಿರ್ಧರಿಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01m10t6xp49dags95v8gjbw1fj,imgname-rbi-1787807626948.png" type="image/jpeg" height="390" width="690"/>
            <content:encoded><![CDATA[&lt;p&gt;ಸುರಕ್ಷಿತವಾಗಿ ಹಣ ಹೂಡಿಕೆ ಮಾಡಬೇಕು, ಆದರೆ ಷೇರು ಮಾರುಕಟ್ಟೆಯ ಏರಿಳಿತದ ಅಪಾಯ ಬೇಡ ಎನ್ನುವವರಿಗೆ ಬ್ಯಾಂಕ್&zwnj;ಗಳ ಸ್ಥಿರ ಠೇವಣಿ (FD) ಮತ್ತು ಮರುಕಳಿಸುವ ಠೇವಣಿ (RD) ಪ್ರಮುಖ ಆಯ್ಕೆಗಳಾಗಿವೆ. ಎರಡೂ ಹೂಡಿಕೆ ವಿಧಾನಗಳು ಕಡಿಮೆ ಅಪಾಯದ ಆಯ್ಕೆಗಳಾಗಿದ್ದರೂ, ಇವೆರಡರ ಕಾರ್ಯವಿಧಾನದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಅದರಲ್ಲೂ ದೀರ್ಘಾವಧಿಗೆ ಹಣ ಹೂಡಿಕೆ ಮಾಡುವಾಗ ಯಾವುದು ಹೆಚ್ಚು ಲಾಭ ನೀಡುತ್ತದೆ ಎಂಬ ಪ್ರಶ್ನೆ ಬಹುತೇಕ ಹೂಡಿಕೆದಾರರನ್ನು ಕಾಡುತ್ತದೆ.&lt;/p&gt;&lt;h2&gt;&lt;strong&gt;10 ವರ್ಷದ ಲೆಕ್ಕಾಚಾರ!&lt;/strong&gt;&lt;/h2&gt;&lt;p&gt;ಇಲ್ಲಿ ವರ್ಷಕ್ಕೆ ಶೇ.6.5ರಷ್ಟು ಬಡ್ಡಿದರವನ್ನು ಊಹಿಸಿಕೊಂಡು 10 ವರ್ಷಗಳ ಲೆಕ್ಕಾಚಾರ ನೋಡೋಣ. ಒಬ್ಬ ವ್ಯಕ್ತಿಯ ಬಳಿ ಆರಂಭದಲ್ಲೇ ₹10 ಲಕ್ಷ ಹಣವಿದ್ದು, ಅದನ್ನು ಎಫ್&zwnj;ಡಿಯಲ್ಲಿ ಹೂಡಿಕೆ ಮಾಡಿದರೆ, ಸಂಪೂರ್ಣ ₹10 ಲಕ್ಷ ಮೊತ್ತಕ್ಕೂ ಮೊದಲ ದಿನದಿಂದಲೇ ಬಡ್ಡಿ ಲೆಕ್ಕಾಚಾರ ಆರಂಭವಾಗುತ್ತದೆ. ಬಡ್ಡಿಯನ್ನು ಮರುಹೂಡಿಕೆ ಮಾಡುವ ರೀತಿಯ ಸಂಯೋಜಿತ ಬಡ್ಡಿಯ ಪರಿಣಾಮದಿಂದ 10 ವರ್ಷಗಳ ಅಂತ್ಯದಲ್ಲಿ ಈ ಮೊತ್ತ ಸುಮಾರು ₹19 ಲಕ್ಷದಷ್ಟಾಗಬಹುದು. ಅಂದರೆ, ಆರಂಭದಲ್ಲೇ ದೊಡ್ಡ ಮೊತ್ತ ಲಭ್ಯವಿದ್ದರೆ ಎಫ್&zwnj;ಡಿ ಮೂಲಕ ದೀರ್ಘಾವಧಿಯಲ್ಲಿ ಉತ್ತಮ ಮೊತ್ತವನ್ನು ನಿರ್ಮಿಸಬಹುದು. ಆದರೆ ಎಲ್ಲರ ಬಳಿಯೂ ಒಂದೇ ಬಾರಿಗೆ ₹10 ಲಕ್ಷ ಹೂಡಿಕೆ ಮಾಡುವಷ್ಟು ಹಣ ಇರಬೇಕೆಂದಿಲ್ಲ. ಅಂತಹ ಸಂದರ್ಭದಲ್ಲಿ ಆರ್&zwnj;ಡಿ ಹೆಚ್ಚು ಅನುಕೂಲಕರವಾಗಬಹುದು.&lt;/p&gt;&lt;h3&gt;&lt;strong&gt;ತಿಂಗಳಿಗೆ ₹10 ಸಾವಿರ RD ಮಾಡಿದರೆ?&lt;/strong&gt;&lt;/h3&gt;&lt;p&gt;ಒಬ್ಬ ಹೂಡಿಕೆದಾರರು ಪ್ರತಿ ತಿಂಗಳು ₹10,000ರಂತೆ ಆರ್&zwnj;ಡಿಯಲ್ಲಿ ಹಣ ಜಮೆ ಮಾಡುತ್ತಾರೆ ಎಂದುಕೊಳ್ಳಿ. ಒಂದು ವರ್ಷದಲ್ಲಿ ಅವರು ₹1.20 ಲಕ್ಷ ಹೂಡಿಕೆ ಮಾಡುತ್ತಾರೆ. ಇದೇ ರೀತಿ 10 ವರ್ಷಗಳ ಕಾಲ ಮುಂದುವರಿಸಿದರೆ, ಒಟ್ಟು ₹12 ಲಕ್ಷ ಹಣವನ್ನು ಠೇವಣಿ ಮಾಡಿರುತ್ತಾರೆ. ಇದಕ್ಕೆ ವರ್ಷಕ್ಕೆ ಶೇ.6.5ರಷ್ಟು ಬಡ್ಡಿ ಸಿಗುತ್ತದೆ ಎಂದು ಅಂದಾಜಿಸಿದರೆ, 10 ವರ್ಷಗಳ ಅಂತ್ಯದಲ್ಲಿ ಆರ್&zwnj;ಡಿ ಮೊತ್ತವು ಸುಮಾರು ₹16.9 ಲಕ್ಷದವರೆಗೆ ಬೆಳೆಯಬಹುದು. ಅಂದರೆ, ಹೂಡಿಕೆ ಮಾಡಿದ ₹12 ಲಕ್ಷದ ಮೇಲೆ ಸುಮಾರು ₹4.9 ಲಕ್ಷದಷ್ಟು ಬಡ್ಡಿ ಲಭಿಸುವ ಸಾಧ್ಯತೆಯಿದೆ. ನಿಜವಾದ ಮೊತ್ತವು ಬ್ಯಾಂಕ್&zwnj;ನ ಬಡ್ಡಿದರ, ಬಡ್ಡಿ ಲೆಕ್ಕಾಚಾರದ ವಿಧಾನ ಮತ್ತು ಕಂತು ಜಮೆ ಮಾಡುವ ಸಮಯದ ಆಧಾರದ ಮೇಲೆ ಬದಲಾಗಬಹುದು.&lt;/p&gt;&lt;h3&gt;&lt;strong&gt;FD ಮತ್ತು RD ನಡುವಿನ ಪ್ರಮುಖ ವ್ಯತ್ಯಾಸವೇನು?&lt;/strong&gt;&lt;/h3&gt;&lt;p&gt;ಎಫ್&zwnj;ಡಿ ಮತ್ತು ಆರ್&zwnj;ಡಿ ನಡುವಿನ ಮೂಲಭೂತ ವ್ಯತ್ಯಾಸವೆಂದರೆ ಹಣ ಹೂಡಿಕೆ ಮಾಡುವ ವಿಧಾನ. ಎಫ್&zwnj;ಡಿಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಠೇವಣಿ ಮಾಡಲಾಗುತ್ತದೆ. ಹೀಗಾಗಿ ಸಂಪೂರ್ಣ ಹಣದ ಮೇಲೆ ಆರಂಭದಿಂದಲೇ ಬಡ್ಡಿ ಲೆಕ್ಕವಾಗುತ್ತದೆ. ಆದರೆ ಆರ್&zwnj;ಡಿಯಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಜಮೆ ಮಾಡಬೇಕು. ಮೊದಲ ತಿಂಗಳ ಕಂತಿಗೆ ಹೆಚ್ಚು ಅವಧಿಯ ಬಡ್ಡಿ ಸಿಗುತ್ತದೆ. ನಂತರದ ಕಂತುಗಳಿಗೆ ಅವು ಜಮೆಯಾದ ಸಮಯಕ್ಕೆ ಅನುಗುಣವಾಗಿ ಬಡ್ಡಿ ಲೆಕ್ಕವಾಗುತ್ತದೆ. ಇದೇ ಕಾರಣಕ್ಕೆ ಒಂದೇ ಬಡ್ಡಿದರ ಇದ್ದರೂ, ₹10 ಲಕ್ಷವನ್ನು ಆರಂಭದಲ್ಲೇ ಎಫ್&zwnj;ಡಿಯಲ್ಲಿ ಇಡುವುದರಿಂದ ಸಿಗುವ ಅಂತಿಮ ಮೊತ್ತ ಮತ್ತು ತಿಂಗಳಿಗೆ ₹10 ಸಾವಿರ ಆರ್&zwnj;ಡಿಯಲ್ಲಿ ಜಮೆ ಮಾಡುವುದರಿಂದ ಸಿಗುವ ಮೊತ್ತ ಒಂದೇ ಆಗುವುದಿಲ್ಲ.&lt;/p&gt;&lt;h3&gt;&lt;strong&gt;ಹಾಗಾದರೆ ಯಾವುದು ಉತ್ತಮ?&lt;/strong&gt;&lt;/h3&gt;&lt;p&gt;ನಿಮ್ಮ ಬಳಿ ಈಗಾಗಲೇ ₹10 ಲಕ್ಷದಷ್ಟು ದೊಡ್ಡ ಮೊತ್ತವಿದ್ದು, ಅದನ್ನು 10 ವರ್ಷಗಳ ಕಾಲ ಬಳಸುವ ಅಗತ್ಯವಿಲ್ಲದಿದ್ದರೆ ಎಫ್&zwnj;ಡಿ ಹೆಚ್ಚು ಸೂಕ್ತವಾಗಬಹುದು. ಆದರೆ ನಿಮ್ಮ ಬಳಿ ದೊಡ್ಡ ಮೊತ್ತ ಇಲ್ಲದೆ, ಪ್ರತಿ ತಿಂಗಳು ₹10 ಸಾವಿರದಂತೆ ನಿಯಮಿತವಾಗಿ ಉಳಿಸುವ ಸಾಮರ್ಥ್ಯವಿದ್ದರೆ ಆರ್&zwnj;ಡಿ ಉತ್ತಮ ಆಯ್ಕೆಯಾಗಬಹುದು. ಹೀಗಾಗಿ FD ಅಥವಾ RD ಎಂಬುದರಲ್ಲಿ ಎಲ್ಲರಿಗೂ ಒಂದೇ ಉತ್ತರ ಇರುವುದಿಲ್ಲ. ನಿಮ್ಮ ಕೈಯಲ್ಲಿರುವ ಆರಂಭಿಕ ಹಣ, ಪ್ರತಿ ತಿಂಗಳ ಉಳಿತಾಯ ಸಾಮರ್ಥ್ಯ, ಹೂಡಿಕೆ ಅವಧಿ ಮತ್ತು ನಿಮಗೆ ಬೇಕಿರುವ ದ್ರವ್ಯತೆ ಇವುಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಬಡ್ಡಿದರಗಳು ಬ್ಯಾಂಕ್&zwnj;ನಿಂದ ಬ್ಯಾಂಕ್&zwnj;ಗೆ ಬದಲಾಗುವುದರಿಂದ, ಹೂಡಿಕೆ ಮಾಡುವ ಮುನ್ನ ಪ್ರಸ್ತುತ ಬಡ್ಡಿದರ ಮತ್ತು ನಿಯಮಗಳನ್ನು ಪರಿಶೀಲಿಸುವುದು ಮುಖ್ಯ.&lt;/p&gt;]]></content:encoded>
            <category><![CDATA[money]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/money/10-lakh-fd-vs-10000-monthly-rd-10-years-which-is-better-fixed-deposit-recurring-deposit-interest-return-calculation-bmk/articleshow-gkemv6t"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೆ ಮನೆಯಲ್ಲಿಯೇ ಮಾಡಿ ರುಚಿಯಾದ ಬೇಸನ್ ಲಡ್ಡು… ಇಲ್ಲಿದೆ ಸಿಂಪಲ್-ಟೇಸ್ಟಿ ರೆಸಿಪಿ]]></title>
            <link>https://kannada.asianetnews.com/food/how-to-make-besan-ladoo-at-home-for-ganesha-on-ganesh-chaturthi-2026/articleshow-hsuldia</link>
            <guid isPermaLink="true">https://kannada.asianetnews.com/food/how-to-make-besan-ladoo-at-home-for-ganesha-on-ganesh-chaturthi-2026/articleshow-hsuldia</guid>
            <pubDate>Sat, 12 Sep 2026 22:36:54 +0530</pubDate>
            <description><![CDATA[Besan Laddu Recipe: ಈ ಗಣೇಶ ಚತುರ್ಥಿಗೆ, ಗಣೇಶನಿಗೆ ವಿಶೇಷಾದ ಆದರೆ ಮನೆಯಲ್ಲಿಯೇ ತಯಾರಿಸಿದ ಸಿಹಿತಿಂಡಿಯನ್ನು ನೈವೇದ್ಯವಾಗಿ ನೀಡಲು ಬಯಸಿದರೆ, ಇಲ್ಲಿದೆ ಟೇಸ್ಟಿಯಾದ ಆದರೆ, ಮಾಡಲು ತುಂಬಾನೆ ಸರಳವಾಗಿರುವ ಬೇಸನ್ ಲಡ್ಡೂ ರೆಸಿಪಿ. ನೀವು ಟ್ರೈ ಮಾಡಿ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b9b1vfqqmz2zfw5s5av7zn,imgname-besan-laddu-1789232777067.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಗಣೇಶ ಚತುರ್ಥಿಗಾಗಿ ಬೇಸನ್ ಲಾಡು&lt;/strong&gt;&lt;/h2&gt;&lt;p&gt;ಗಣೇಶ ಚತುರ್ಥಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನದಂದು ಭಕ್ತರು ಗಣೇಶನನ್ನು ಪೂಜಿಸುತ್ತಾರೆ ಹಾಗೂ ಆತನಿಗೆ ಇಷ್ಟವಾದ ವಿವಿಧ ಸಿಹಿತಿಂಡಿಗಳು ಮತ್ತು ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. 'ಮೋದಕ' ಮತ್ತು 'ಲಡ್ಡು'ಗಳು ಗಣೇಶನಿಗೆ ಅತ್ಯಂತ ಪ್ರಿಯವಾದ ತಿನಿಸುಗಳಾಗಿರುವುದರಿಂದ, ಸಾಮಾನ್ಯವಾಗಿ ಇವನ್ನೇ ನೈವೇದ್ಯವಾಗಿ ನೀಡಲಾಗುತ್ತದೆ. ಮಾರುಕಟ್ಟೆಯಿಂದ ಸಿಹಿತಿಂಡಿಗಳನ್ನು ಖರೀದಿಸುವ ಬದಲು, ಈ ಗಣೇಶ ಚತುರ್ಥಿಗೆ ಮನೆಯಲ್ಲೇ ವಿಶೇಷ ಲಡ್ಡುಗಳನ್ನು ತಯಾರಿಸಲು ನೀವು ಬಯಸಿದರೆ, 'ಬೇಸನ್ ಲಡ್ಡು' ಒಂದು ಅತ್ಯುತ್ತಮ ಆಯ್ಕೆಯಾಗಿದೆ. ಇವು ನೈವೇದ್ಯಕ್ಕೆ ಸೂಕ್ತವಾಗಿರುವುದಲ್ಲದೆ, ತಿನ್ನಲು ಕೂಡ ಅತ್ಯಂತ ರುಚಿಕರವಾಗಿರುತ್ತವೆ.&lt;/p&gt;&lt;h3&gt;&lt;strong&gt;ಗಣೇಶ ಚತುರ್ಥಿಗಾಗಿ ಬೇಸನ್ ಲಾಡು ಮಾಡುವುದು ಹೇಗೆ?&lt;/strong&gt;&lt;/h3&gt;&lt;ul&gt; &lt;li&gt;ಬೇಸನ್ (ಕಡಲೆ ಹಿಟ್ಟು)&lt;/li&gt; &lt;li&gt;ತುಪ್ಪ&lt;/li&gt; &lt;li&gt;ಸಕ್ಕರೆ ಪುಡಿ&lt;/li&gt; &lt;li&gt;ಏಲಕ್ಕಿ ಪುಡಿ&lt;/li&gt; &lt;li&gt;ಗೋಡಂಬಿ, ಬಾದಾಮಿ ಮತ್ತು ಒಣದ್ರಾಕ್ಷಿ (2&ndash;3 ದೊಡ್ಡ ಚಮಚ).&lt;/li&gt;&lt;/ul&gt;&lt;p&gt;&lt;strong&gt;ಬೇಸನ್ ಲಾಡು ತಯಾರಿಸುವ ವಿಧಾನ&lt;/strong&gt;&lt;/p&gt;&lt;ul&gt; &lt;li&gt;ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟನ್ನು ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.&lt;/li&gt; &lt;li&gt;ಹಿಟ್ಟು ತಿಳಿ ಕಂದು ಬಣ್ಣಕ್ಕೆ ಬಂದು ಚೆನ್ನಾಗಿ ಹುರಿದ ನಂತರ, ಉರಿಯನ್ನು ಆರಿಸಿ.&lt;/li&gt; &lt;li&gt;ಹುರಿದ ಹಿಟ್ಟು ತಣ್ಣಗಾದ ಮೇಲೆ, ಅದಕ್ಕೆ ಏಲಕ್ಕಿ ಪುಡಿ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.&lt;/li&gt; &lt;li&gt;ನಂತರ, ಸಣ್ಣದಾಗಿ ಕತ್ತರಿಸಿದ ಡ್ರೈ ಫ್ರೂಟ್ಸ್ ಸೇರಿಸಿ ಎಲ್ಲವನ್ನೂ ಒಟ್ಟಿಗೆ ಚೆನ್ನಾಗಿ ಬೆರೆಸಿ. ಕೊನೆಯದಾಗಿ, ಹುರಿದ ಹಿಟ್ಟಿನ ಮಿಶ್ರಣವನ್ನು ಕೈಯಿಂದ ಉಂಡೆಗಳ ಆಕಾರಕ್ಕೆ ಮಾಡಿ; ಹಿಟ್ಟು ಕೈಗೆ ಅಂಟಿಕೊಳ್ಳುವುದನ್ನು ತಡೆಯಲು ಅಂಗೈಗೆ ಸ್ವಲ್ಪ ತುಪ್ಪವನ್ನು ಸವರಿಕೊಳ್ಳಬಹುದು.&lt;/li&gt; &lt;li&gt;ಈ ಲಾಡುಗಳು ನಿಜಕ್ಕೂ ಅತ್ಯಂತ ರುಚಿಕರವಾಗಿರುತ್ತವೆ. ಈಗ ಬೇಸನ್ ಲಾಡುಗಳು ಸಿದ್ಧವಾಗಿವೆ.&lt;/li&gt; &lt;li&gt;ಇವುಗಳನ್ನು ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿಡಬಹುದು. ಇವು ಗಣೇಶನಿಗೆ ನೈವೇದ್ಯವಾಗಿ ಅರ್ಪಿಸಲು ಸೂಕ್ತವಾಗಿವೆ ಮತ್ತು ಮಕ್ಕಳು ಹಾಗೂ ದೊಡ್ಡವರು ಹೀಗೆ ಎಲ್ಲರೂ ಇಷ್ಟಪಡುವಂತಹ ರುಚಿಕರವಾದ ಸಿಹಿತಿಂಡಿಯಾಗಿವೆ.&lt;/li&gt;&lt;/ul&gt;]]></content:encoded>
            <category><![CDATA[food]]></category>
            <dc:creator>Pavna Das</dc:creator>
            <atom:link href="https://kannada.asianetnews.com/food/how-to-make-besan-ladoo-at-home-for-ganesha-on-ganesh-chaturthi-2026/articleshow-hsuldia"/>
        </item>
        <item>
            <title><![CDATA[ಸಚಿನ್ ತೆಂಡೂಲ್ಕರ್ ಸಾರ್ವಕಾಲಿಕ ದಾಖಲೆ ಮುರಿದ ಜೋ ರೂಟ್: ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ!]]></title>
            <link>https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na</link>
            <guid isPermaLink="true">https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na</guid>
            <pubDate>Sat, 12 Sep 2026 22:23:01 +0530</pubDate>
            <description><![CDATA[ಇಂಗ್ಲೆಂಡ್‌ನ ಅನುಭವಿ ಬ್ಯಾಟರ್ ಜೋ ರೂಟ್, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಜೇಯ 62 ರನ್ ಗಳಿಸುವ ಮೂಲಕ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ್ದ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದೇ ಪಂದ್ಯದಲ್ಲಿ ಅವರು ಎಡ್ಜ್‌ಬಾಸ್ಟನ್ ಮೈದಾನದಲ್ಲಿ 1000 ಟೆಸ್ಟ್ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2b8cr19cra8fz0wk6ax59hj,imgname-sachin-tendulkar-joe-root-1789231783975.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬರ್ಮಿಂಗ್&zwnj;ಹ್ಯಾಮ್ (ಸೆ.12): ಇಂ&lt;/strong&gt;ಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಜೋ ರೂಟ್, ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ಬೃಹತ್ ದಾಖಲೆಯೊಂದನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಎಡ್ಜ್&zwnj;ಬಾಸ್ಟನ್&zwnj;ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ ರೂಟ್, ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ.&lt;/p&gt;&lt;h2&gt;&lt;strong&gt;ಸಚಿನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ರೂಟ್:&lt;/strong&gt;&lt;/h2&gt;&lt;p&gt;ಪಾಕ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್&zwnj;ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್, ಅಜೇಯ 62 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅವರ 69ನೇ ಅರ್ಧಶತಕವಾಗಿದೆ. ಈ ಮೂಲಕ ಟೆಸ್ಟ್&zwnj; ಇತಿಹಾಸದಲ್ಲೇ ಅತಿ ಹೆಚ್ಚು ಅರ್ಧಶತಕ (ಹಾಫ್ ಸೆಂಚುರಿ) ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (68 ಅರ್ಧಶತಕ) ಅವರನ್ನು ಹಿಂದಿಕ್ಕಿ ರೂಟ್ ವಿಶ್ವದಾಖಲೆ ಬರೆದಿದ್ದಾರೆ.&lt;/p&gt;&lt;h2&gt;&lt;strong&gt;ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಅರ್ಧಶತಕ ಸಿಡಿಸಿದ ಬ್ಯಾಟರ್&zwnj;ಗಳು:&lt;/strong&gt;&lt;/h2&gt;&lt;ul&gt; &lt;li&gt;ಜೋ ರೂಟ್ (ಇಂಗ್ಲೆಂಡ್) &ndash; 69&lt;/li&gt; &lt;li&gt;ಸಚಿನ್ ತೆಂಡೂಲ್ಕರ್ (ಭಾರತ) &ndash; 68&lt;/li&gt; &lt;li&gt;ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್) &ndash; 66&lt;/li&gt; &lt;li&gt;ರಾಹುಲ್ ದ್ರಾವಿಡ್ (ಭಾರತ) &ndash; 63&lt;/li&gt; &lt;li&gt;ಅಲನ್ ಬಾರ್ಡರ್ (ಆಸ್ಟ್ರೇಲಿಯಾ) &ndash; 63&lt;/li&gt; &lt;li&gt;ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) &ndash; 62&lt;/li&gt;&lt;/ul&gt;&lt;h2&gt;&lt;strong&gt;ಇಂಗ್ಲೆಂಡ್&zwnj;ಗೆ ಕ್ಲೀನ್ ಸ್ವೀಪ್ ಗೆಲುವು:&lt;/strong&gt;&lt;/h2&gt;&lt;p&gt;ಗೆಲ್ಲಲು 130 ರನ್&zwnj;ಗಳ ಸುಲಭ ಗುರಿ ಪಡೆದ ಇಂಗ್ಲೆಂಡ್, ಕೇವಲ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಜೋ ರೂಟ್ (ಅಜೇಯ 62) ಮತ್ತು ಯುವ ಬ್ಯಾಟರ್ ಜೋರ್ಡಾನ್ ಕಾಕ್ಸ್ (ಅಜೇಯ 59) ಮೂರನೇ ವಿಕೆಟ್&zwnj;ಗೆ ಶತಕದ ಜೊತೆಯಾಟವಾಡಿ ತಂಡಕ್ಕೆ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.&lt;/p&gt;&lt;h2&gt;&lt;strong&gt;ಒಂದೇ ಪಂದ್ಯದಲ್ಲಿ ಮತ್ತೊಂದು ಮೆಗಾ ರೆಕಾರ್ಡ್:&lt;/strong&gt;&lt;/h2&gt;&lt;p&gt;ಇದೇ ಪಂದ್ಯದಲ್ಲಿ ಜೋ ರೂಟ್ ಮತ್ತೊಂದು ವಿಶ್ವ ಮಟ್ಟದ ಸಾಧನೆ ಮಾಡಿದ್ದಾರೆ. ಎಡ್ಜ್&zwnj;ಬಾಸ್ಟನ್ ಕ್ರೀಡಾಂಗಣದಲ್ಲಿ 1000 ಟೆಸ್ಟ್ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾಗಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲದೆ, 4 ಪ್ರತ್ಯೇಕ ಮೈದಾನಗಳಲ್ಲಿ 1000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ವಿಶ್ವದ 3ನೇ ಆಟಗಾರ ಎಂಬ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮಾತ್ರ ಈ ಸಾಧನೆ ಮಾಡಿದ್ದರು.&lt;/p&gt;&lt;h2&gt;&lt;strong&gt;ರೂಟ್ 1000+ ರನ್ ಗಳಿಸಿರುವ ಮೈದಾನಗಳು:&lt;/strong&gt;&lt;/h2&gt;&lt;ul&gt; &lt;li&gt;ಲಾರ್ಡ್ಸ್ &ndash; 2,203 ರನ್&lt;/li&gt; &lt;li&gt;ಮ್ಯಾಂಚೆಸ್ಟರ್ &ndash; 1,128 ರನ್&lt;/li&gt; &lt;li&gt;ದಿ ಓವಲ್ &ndash; 1,050 ರನ್&lt;/li&gt; &lt;li&gt;ಎಡ್ಜ್&zwnj;ಬಾಸ್ಟನ್ &ndash; 1,000+ ರನ್&lt;/li&gt;&lt;/ul&gt;&lt;p&gt;ಪ್ರಸ್ತುತ ಅದ್ಭುತ ಫಾರ್ಮ್&zwnj;ನಲ್ಲಿರುವ ಜೋ ರೂಟ್, ಟೆಸ್ಟ್ ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಒಟ್ಟಾರೆ ರನ್&zwnj;ಗಳ ದಾಖಲೆಯನ್ನು ಮುರಿಯುವತ್ತಲೂ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/joe-root-breaks-sachin-tendulkar-record-most-test-fifties-eng-vs-pak-sat/articleshow-f6d63na"/>
        </item>
        <item>
            <title><![CDATA[Loneliness: ಸಾವಿರಾರೂ ಜನರ ನಡುವಿದ್ದರೂ ಏಕಾಂಗಿ ಭಾವನೆ! ನಿಮ್ಮನ್ನೂ ಕಾಡುತ್ತಿದೆಯಾ ಈ ಸೈಲೆಂಟ್ ಮಹಾಮಾರಿ? ಪರಿಹಾರವೇನು?]]></title>
            <link>https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz</link>
            <guid isPermaLink="true">https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz</guid>
            <pubDate>Sat, 12 Sep 2026 22:14:17 +0530</pubDate>
            <description><![CDATA[ಇತ್ತೀಚೆಗೆ ಒಂಟಿತನವು ಕೇವಲ ಭಾವನಾತ್ಮಕ ಕೊರತೆಯಾಗಿ ಉಳಿದಿಲ್ಲ, ಬದಲಿಗೆ ಅದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ವೈದ್ಯರ ಪ್ರಕಾರ, ಈ ಏಕಾಂಗಿತನವು ದೈಹಿಕ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಈ ಬಿಕ್ಕಟ್ಟಿಗೆ ಪರಿಹಾರವು ಕುಟುಂಬದ ಪ್ರೀತಿ, ಗೌರವ ಮತ್ತು ಅರ್ಥಪೂರ್ಣ ಸಂವಾದದಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b81hschbks6jpnc12rr7sk,imgname-alone-1789231417132.jpg" type="image/jpeg" height="390" width="690"/>
            <content:encoded><![CDATA[&lt;p&gt;ವೃದ್ಧಾಪ್ಯ ಎಂಬುದು ಜೀವನದ ಅತ್ಯಂತ ಅನುಭವಿ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಹಿರಿಯ ನಾಗರಿಕರು ಎದುರಿಸುತ್ತಿರುವ ಅತ್ಯಂತ ಗಂಭೀರ ಹಾಗೂ ಕಡೆಗಣಿಸಲ್ಪಟ್ಟ ಸಮಸ್ಯೆಯೆಂದರೆ ಅದು ಒಂಟಿತನ. ವೃದ್ಧರು ನಾಲ್ಕು ಜನರ ನಡುವೆ ಅಥವಾ ಸ್ವಂತ ಕುಟುಂಬದೊಂದಿಗೆ ವಾಸಿಸುತ್ತಿದ್ದರೂ ಈ ಒಂಟಿತನ ಅವರನ್ನು ಆವರಿಸಿಕೊಳ್ಳುತ್ತಿರುವುದು ವೈದ್ಯಕೀಯ ಜಗತ್ತನ್ನು ತೀವ್ರ ಚಿಂತೆಗೆ ಈಡುಮಾಡಿದೆ.&lt;/p&gt;&lt;h2&gt;&lt;strong&gt;ಖಾಲಿ ಮಾಡುವ ಭಾವನೆ!&lt;/strong&gt;&lt;/h2&gt;&lt;p&gt;ಸೀತಾರಾಮ್ ಭಾರ್ತಿಯಾ ಆಸ್ಪತ್ರೆಯ ವೃದ್ಧಾಶ್ರಮ ವಿಭಾಗದ ಹಿರಿಯ ಸಲಹೆಗಾರ ಡಾ. ಹರ್ಜೀತ್ ಸಿಂಗ್ ಭಟ್ಟಿ ಅವರ ಪ್ರಕಾರ, ಒಂಟಿತನ ಎಂಬುದು ಕೇವಲ ಒಬ್ಬಂಟಿಯಾಗಿ ಕೊಠಡಿಯಲ್ಲಿ ವಾಸಿಸುವುದಕ್ಕೆ ಸೀಮಿತವಾಗಿಲ್ಲ. ಬದಲಾಗಿ, ತಾನು ವಾಸಿಸುತ್ತಿರುವ ವಾತಾವರಣದಲ್ಲಿ ನಿರ್ಲಕ್ಷಿಸಲ್ಪಟ್ಟಾಗ, ಅಪೇಕ್ಷಿತ ಭಾವನಾತ್ಮಕ ಸಂಪರ್ಕ ಸಿಗದಿದ್ದಾಗ ಉಂಟಾಗುವ ಆಂತರಿಕ ಕೊರತೆಯಾಗಿದೆ. ಬದಲಾಗುತ್ತಿರುವ ವಿಭಕ್ತ ಕುಟುಂಬ ವ್ಯವಸ್ಥೆ, ನಗರೀಕರಣ ಹಾಗೂ ಮಕ್ಕಳು ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವುದು ವೃದ್ಧರಲ್ಲಿ ಕೇವಲ ದೈಹಿಕ ದೂರವನ್ನಷ್ಟೇ ಅಲ್ಲ, ಮನಸ್ಸಿನ ನಡುವೆಯೂ ಕಂದಕ ಸೃಷ್ಟಿಸಿದೆ. ಸಂಗಾತಿಯ ಅಗಲಿಕೆ, ದೀರ್ಘಕಾಲದ ಅನಾರೋಗ್ಯ ಮತ್ತು ನಿವೃತ್ತಿಯು ಈ ಸಮಸ್ಯೆಯ ಆಳವನ್ನು ಹೆಚ್ಚಿಸಿದೆ.&lt;/p&gt;&lt;h3&gt;&lt;strong&gt;ಒಂಟಿತನ ನೈಸರ್ಗಿಕ ವಯಸ್ಸಾಗುವಿಕೆಯಲ್ಲ, ಅದೊಂದು ದೈಹಿಕ ಕಾಯಿಲೆ!&lt;/strong&gt;&lt;/h3&gt;&lt;p&gt;ದೆಹಲಿಯ ಏಮ್ಸ್ ನವದೆಹಲಿ ರಾಷ್ಟ್ರೀಯ ವೃದ್ಧಾಪ್ಯ ಕೇಂದ್ರದ ಪ್ರಾಧ್ಯಾಪಕ ಡಾ. ಅವಿನಾಶ್ ಚಕ್ರವರ್ತಿ ಅವರು ವೈಜ್ಞಾನಿಕ ಕೋನದಿಂದ ಈ ಸಮಸ್ಯೆಯನ್ನು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ಒಂಟಿತನವನ್ನು ವೃದ್ಧಾಪ್ಯದ ಸಹಜ ಪರಿಣಾಮವೆಂದು ನಿರ್ಲಕ್ಷಿಸದೆ, ಅದನ್ನೊಂದು ಆರೋಗ್ಯ ಸಂಬಂಧಿತ ಕಾಯಿಲೆಯಂತೆ ಕಾಣಬೇಕು. ಕೇಳುವ ಶಕ್ತಿ ಕಡಿಮೆಯಾಗುವುದು, ಸರಿಯಾಗಿ ನಡೆಯಲಾಗದಿರುವುದು ಮತ್ತು 'ನಾವು ಯಾರಿಗೂ ಬೇಡ' ಎಂಬ ಕೀಳರಿಮೆ ಹಿರಿಯರನ್ನು ಸಾಮಾಜಿಕವಾಗಿ ಇನ್ನಷ್ಟು ಪ್ರತ್ಯೇಕಿಸುತ್ತದೆ. ಇದು ಅವರ ನಿದ್ರೆ, ಆಹಾರ ಕ್ರಮ ಹಾಗೂ ಮನಸ್ಥಿತಿಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ.&lt;/p&gt;&lt;h3&gt;&lt;strong&gt;ಜೀವಕೋಶಗಳ ಮಟ್ಟದಲ್ಲಿ ಆತಂಕ!&lt;/strong&gt;&lt;/h3&gt;&lt;p&gt;ಐಎಂಎಸ್-ಬಿಎಚ್&zwnj;ಯು (IMS-BHU) ನ ವೃದ್ಧಾಪ್ಯ ವಿಭಾಗದ ಸ್ಥಾಪಕ ಮುಖ್ಯಸ್ಥ ಡಾ. ಅನೂಪ್ ಸಿಂಗ್ ಅವರು ಒಂಟಿತನದ ಭಯಾನಕ ದೈಹಿಕ ಪರಿಣಾಮಗಳನ್ನು ವಿವರಿಸುತ್ತಾರೆ. ದೀರ್ಘಕಾಲದ ಏಕಾಂಗಿತನವು ದೇಹದಲ್ಲಿ ನಿರಂತರ ಸೈಕಾಲಜಿಕಲ್ ಸ್ಟ್ರೆಸ್ (ಒತ್ತಡ) ಉಂಟುಮಾಡುತ್ತದೆ. ಇದರಿಂದಾಗಿ: ಅಧಿಕ ರಕ್ತದೊತ್ತಡ, ಹೃದ್ರೋಗದ ಅಪಾಯ ಮತ್ತು ನಿದ್ರಾಹೀನತೆ ಹೆಚ್ಚಾಗುತ್ತದೆ. ಅರಿವಿನ ಕುಸಿತ, ಆತಂಕ, ಖಿನ್ನತೆ ಮತ್ತು ಆಲ್ಝೈಮರ್ಸ್&zwnj;ನಂತಹ ಮನೋವ್ಯಾಧಿಗಳಿಗೆ ಇದು ಹಾದಿಮಾಡಿಕೊಡುತ್ತದೆ. ಇದು ಕೇವಲ ನಗರಗಳಿಗೆ ಸೀಮಿತವಾಗಿರದೆ, ಯುವಕರು ವಲಸೆ ಹೋದ ಕಾರಣ ಗ್ರಾಮೀಣ ಭಾಗದಲ್ಲೂ ವೃದ್ಧರಿಗೆ ಒಡನಾಟವಿಲ್ಲದೆ ತೀವ್ರವಾಗಿ ಕಾಡುತ್ತಿದೆ.&lt;/p&gt;&lt;h3&gt;&lt;strong&gt;ಪರಿಹಾರವೇನು? ಹಿರಿಯರನ್ನು ಮತ್ತೆ ಬಾಂಧವ್ಯಕ್ಕೆ ತರುವುದು ಹೇಗೆ?&lt;/strong&gt;&lt;/h3&gt;&lt;p&gt;ವೃದ್ಧರ ಈ ಮಾನಸಿಕ ಮತ್ತು ಭಾವನಾತ್ಮಕ ಬಿಕ್ಕಟ್ಟಿಗೆ ಪರಿಹಾರ ನಮ್ಮ ಮನೆಯಿಂದಲೇ ಆರಂಭವಾಗಬೇಕಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದು ಅಥವಾ ಮೌನವಾಗಿರುವುದನ್ನು ಕುಟುಂಬಸ್ಥರು ಸೂಕ್ಷ್ಮವಾಗಿ ಗಮನಿಸಬೇಕು. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಅವರೊಂದಿಗೆ ಮುಕ್ತವಾಗಿ ಮಾತನಾಡುವುದು. ಊಟವನ್ನು ಒಟ್ಟಿಗೆ ಮಾಡುವುದು ಮತ್ತು ಹಿರಿಯರನ್ನು ಸಣ್ಣಪುಟ್ಟ ಕುಟುಂಬ ನಿರ್ಧಾರಗಳಲ್ಲಿ ಭಾಗಿ ಮಾಡಿಕೊಳ್ಳುವುದು. ಅವರ ಅನುಭವಗಳಿಗೆ ಸೂಕ್ತ ಗೌರವ ನೀಡಿ, 'ನಿಮ್ಮ ಅಗತ್ಯ ನಮಗಿದೆ' ಎಂಬ ಭರವಸೆ ಮೂಡಿಸುವುದು. ಹಿರಿಯರಿಗೆ ಬೇಕಿರುವುದು ಕೇವಲ ಆಸ್ಪತ್ರೆಯ ಔಷಧಗಳಲ್ಲ, ಬದಲಿಗೆ ಪ್ರೀತಿ, ಆಲಿಸುವ ಕಿವಿಗಳು ಮತ್ತು ಅರ್ಥಪೂರ್ಣ ಒಡನಾಟ. ಅವರ ಆರೋಗ್ಯಪೂರ್ಣ ಜೀವನಕ್ಕೆ ಸಾಮಾಜಿಕ ಸಂಪರ್ಕವೇ ಅಂತಿಮ ಸಂಜೀವಿನಿಯಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[science]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/science/loneliness-health-effects-citizens-mental-health-heart-disease-depression-anxiety-alzheimers-aging-health-tips-bmk/articleshow-pw3hgcz"/>
        </item>
        <item>
            <title><![CDATA[ಬೆಂಗಳೂರಲ್ಲಿ ಹೆಕ್ಟರ್ ಟೋಮಾಹಾಕ್ ಇವಿ ಲಾಂಚ್, ಕೈಗೆಟುಕುವ ಬೆಲೆಯಲ್ಲಿ ಭಾರತದ ಮೊದಲ PHEV ಕಾರು]]></title>
            <link>https://kannada.asianetnews.com/car-news/hector-tomahawk-ev-launched-in-bengaluru-india-first-affordable-phev-car/articleshow-b7if2a8</link>
            <guid isPermaLink="true">https://kannada.asianetnews.com/car-news/hector-tomahawk-ev-launched-in-bengaluru-india-first-affordable-phev-car/articleshow-b7if2a8</guid>
            <pubDate>Sat, 12 Sep 2026 22:13:20 +0530</pubDate>
            <description><![CDATA[ಭಾರತದ ಮೊದಲ PHEV ಕಾರು ಎಂದೇ ಖ್ಯಾತಿ ಪಡೆದಿರುವ ಹೆಕ್ಟರ್ ಟೋಮಾಹಾಕ್ ಇವಿ ಬೆಂಗಳೂರಲ್ಲಿ ಬಿಡುಗಡೆಯಾಗಿದೆ. ಕೇವಲ 13.99 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಈ ಕಾರು ಲಭ್ಯವಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b80vw1jas466pnmkeaz5hd,imgname-hector-tomahawk-ev-launched-in-bengaluru-1789231394689.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.12)&lt;/strong&gt; JSW ಎಂಜಿ ಮೋಟಾರ್ ಇಂಡಿಯಾ ಹೊಸದಾಗಿ ಬಿಡುಗಡೆಯಾದ ಹೆಕ್ಟರ್ ಟೊಮಾಹಾಕ್ ಕಾರನ್ನು ಬೆಂಗಳೂರಿಗೆ ಪರಿಚಯಿಸಿತು. ಅಡ್ವಾನ್ಸ್ಡ್ ಡ್ರೈವ್ ಆರ್ಕಿಟೆಕ್ಚರ್ ಪ್ಲಾಟ್ಫಾರ್ಮ್ ಟೆಕ್ನಾಲಜಿ ಮೇಲೆ ನಿರ್ಮಿಸಿರುವ ಈ ಕಾರು ಅತ್ಯುತ್ತಮ ಪವರ್, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತ್ಯಂತ ಆಕರ್ಷಕ ವಿನ್ಯಾಸ ಹೊಂದಿದೆ. ಇದು ಭಾರತದ ಮೊದಲ &lsquo;ಮಲ್ಟಿ-ನ್ಯೂ ಎನರ್ಜಿ ವೆಹಿಕಲ್' (ಎನ್ಇವಿ) ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಸೌಕರ್ಯ, ಸುಧಾರಿತ ಸುರಕ್ಷತೆ ಮತ್ತು ಎಲೆಕ್ಟ್ರಿಕ್ ಪರ್ಫಾಮೆನ್ಸ್ ಸಂಯೋಜಿಸುವ ಹೆಕ್ಟರ್ ಟೊಮಾಹಾಕ್, ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮತ್ತು ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV) ಪವರ್&zwnj;ಟ್ರೇನ್ ಆಯ್ಕೆಯೊಂದಿಗೆ ಲಭ್ಯವಿದೆ.&lt;/p&gt;&lt;h2&gt;ಭಾರತದ ಮೊದಲ ಪ್ಲಗ್ ಇನ್ ಹೈಬ್ರಿಡ್ ಕಾರಿನ ಬೆಲೆ&lt;/h2&gt;&lt;p&gt;ಸಚಿವ ರಾಮಲಿಂಗಾರೆಡ್ಡಿ, ಬಿಟಿಎಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪ್ಯಾಟ್ರಿಕ್ ರಾಜು ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಕಾರು ಅನಾವರಣಗೊಳಿಸಲಾಯಿತು. ಹೆಕ್ಟರ್ ಟೊಮಾಹಾಕ್ ಇವಿ (ಇವಿ) ಮತ್ತು ಭಾರತದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ಕಾರು. ಆರಂಭಿಕ ಬೆಲೆ (ಬ್ಯಾಟರಿ ಬಾಡಿಗೆ ಮೂಲಕ) 13.99 ಲಕ್ಷ ರೂಪಾಯಿ. ಬ್ಯಾಟರಿ ಬಾಡಿಗೆ ಮೂಲಕ ಖರೀದಿಸಿದರೆ ಪ್ರತಿ ಕಿ.ಮೀ.ಗೆ ₹4.90. ಇನ್ನುPHEV ಕಾರಿಗೆ 21.79 ಲಕ್ಷ + ಪ್ರತಿ ಕಿ.ಮೀ.ಗೆ ₹3.20 ಬ್ಯಾಟರಿ ಬಾಡಿಗೆಯ ಆರಂಭಿಕ &lsquo;ಬ್ಯಾಟರಿ-ಆಸ್-ಎ-ಸರ್ವಿಸ್' (ಬಾಸ್) ಬೆಲೆಯಲ್ಲಿ ಲಭ್ಯವಿದೆ. ಹೆಕ್ಟರ್ ಟೊಮಾಹಾಕ್ ಈಗ ಬೆಂಗಳೂರಿನಾದ್ಯಂತ ಇರುವ ಎಂಜಿ ಡೀಲರ್&zwnj;ಶಿಪ್&zwnj;ನಲ್ಲಿ ಲಭ್ಯವಿದೆ.&lt;/p&gt;&lt;h2&gt;ಒಂದು ಚಾರ್ಜ್&zwnj;ನಲ್ಲಿ 517 ಕಿ.ಮೀ ಮೈಲೇಜ್&lt;/h2&gt;&lt;p&gt;ಆಲ್-ಎಲೆಕ್ಟ್ರಿಕ್ ಎಂಜಿ ಹೆಕ್ಟರ್ ಟೊಮಾಹಾಕ್ ಮ್ಯಾಜಿಕ್ ಬ್ಯಾಟರಿಯಿಂದ ಚಾಲಿತವಾಗಿದೆ. ಶಾಶ್ವತ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ನೊಂದಿಗೆ ಜೋಡಿಸಲಾದ 69.2 ಕೆಡಬ್ಲ್ಯುಹೆಚ್ ಹೈ ವೋಲ್ಟೇಜ್ ಬ್ಯಾಟರಿ ಪ್ಯಾಕ್ ನೀಡುತ್ತದೆ, 150 ಕೆಡಬ್ಲ್ಯು ಪವರ್ ಮತ್ತು 310 ಎನ್ಎಂ ಟಾರ್ಕ್ ನೀಡುತ್ತದೆ. ಇದು ಒಂದೇ ಚಾರ್ಜ್ನಲ್ಲಿ 517 ಕಿಮೀ ಮೈಲೇಜ್ ನೀಡುತ್ತದೆ. 90 ಕೆಡಬ್ಲ್ಯು ವರೆಗಿನ ಡಿಸಿ ವೇಗದ ಚಾರ್ಜಿಂಗ್ ಸಪೋರ್ಟ್ ಮಾಡಲಿದೆ. ಇದು ದೈನಂದಿನ ಅನುಕೂಲತೆ ಮತ್ತು ದೀರ್ಘ-ದೂರ ಸಾಮಥ್ರ್ಯವನ್ನು ಖಚಿತಪಡಿಸುತ್ತದೆ.&lt;/p&gt;&lt;p&gt;ಎಂಜಿ ಹೆಕ್ಟರ್ ಟೊಮಾಹಾಕ್ ತನ್ನ ವಿಭಾಗದಲ್ಲಿ ಭಾರತದ ಮೊದಲ ಪ್ಲಗ್-ಇನ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (PHEV) ಅನ್ನು ಪರಿಚಯಿಸುತ್ತದೆ. ಸುಧಾರಿತ ಪವರ್ಟ್ರೇನ್ 1.5-ಲೀಟರ್ ಪೆಟ್ರೋಲ್ ಎಂಜಿನ್, ಡೆಡಿಕೇಟೆಡ್ ಹೈಬ್ರಿಡ್ ಟ್ರಾನ್ಸ್ಮಿಷನ್ (DHT) ಮತ್ತು 20.5 KWh ಬ್ಯಾಟರಿ ಪ್ಯಾಕ್ ಹೊಂದಿದೆ. ಇದು 115 ಕಿ.ಮೀ.ಗಿಂತ ಹೆಚ್ಚು ವಿದ್ಯುತ್ ಚಾಲನಾ ಶ್ರೇಣಿಯನ್ನು ನೀಡುತ್ತದೆ. 148 KW ಎಲೆಕ್ಟ್ರಿಕ್ ಮೋಟಾರ್ ಬಲವಾದ ಮತ್ತು ಸ್ಪಂದಿಸುವ ವೇಗವರ್ಧನೆಯನ್ನು ನೀಡುತ್ತದೆ, ಸುಮಾರು 9 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ/ಗಂಟೆಗೆ ವೇಗವನ್ನು ತಲಪುತ್ತದೆ&lt;/p&gt;&lt;h2&gt;ಸುಧಾರಿತ ಸುರಕ್ಷತೆ&lt;/h2&gt;&lt;p&gt;ಈ ಕಾರು ಎಲ್ಲಾ ರೂಪಾಂತರಗಳಲ್ಲಿ ಪ್ರಮಾಣಿತವಾಗಿ 6 ಏರ್&zwnj;ಬ್ಯಾಗ್ ಹೊಂದಿದೆ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್), ಹಿಲ್ ಹೋಲ್ಡ್ ಕಂಟ್ರೋಲ್, ಇಬಿಡಿ ಜೊತೆಗೆ ಎಬಿಎಸ್, ಬ್ರೇಕ್ ಅಸಿಸ್ಟ್, ಆಟೋ ಹೋಲ್ಡ್ ಜೊತೆಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್-ಸೀಟ್ ಆಂಕರ್ಗಳು ಮತ್ತು ಆಲ್-ವೀಲ್ ಡಿಸ್ಕ್ ಬ್ರೇಕ್ ಹೊಂದಿದೆ.&lt;/p&gt;&lt;p&gt;ವೀಲ್ ವ್ಯೂನೊಂದಿಗೆ 360ಲಿ ಅರೌಂಡ್ ವ್ಯೂ ಹೆಚ್ಡಿ ಕ್ಯಾಮೆರಾ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್ಗಳು ಮತ್ತು ಲೆವೆಲ್ 2 ADAS ತಂತ್ರಜ್ಞಾನಗಳ ಸಮಗ್ರ ಸೂಟ್ನೊಂದಿಗೆ ಸುರಕ್ಷತೆ ಮತ್ತು ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಇವುಗಳಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಟ್ರಾಫಿಕ್ ಜಾಮ್ ಅಸಿಸ್ಟ್, ಲೇನ್ ಕೀಪ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಡಿಪಾರ್ಚರ್ ಪ್ರಿವೆನ್ಷನ್, ಫ್ರಂಟ್ ಡಿಕ್ಕಿ ಎಚ್ಚರಿಕೆ, ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಪಾದಚಾರಿಗಳಿಗೆ ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಮತ್ತು ಇಂಟೆಲಿಜೆಂಟ್ ಹೆಡ್ಲ್ಯಾಂಪ್ ನಿಯಂತ್ರಣ ಸೇರಿವೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/car-news/hector-tomahawk-ev-launched-in-bengaluru-india-first-affordable-phev-car/articleshow-b7if2a8"/>
        </item>
        <item>
            <title><![CDATA[ಅಡುಗೆ ಮನೆಯ ಎಣ್ಣೆ ಬಾಟಲಿಯ ಜಿಡ್ಡು ನಿಮಿಷದಲ್ಲಿ ತೆಗೆಯಲು ಟ್ರಿಕ್ಸ್‌, ಈ ಸುಲಭ ಟಿಪ್ಸ್ ಫಾಲೋ ಮಾಡಿ]]></title>
            <link>https://kannada.asianetnews.com/food/tricks-to-remove-grease-from-kitchen-oil-bottles-in-minutes-follow-these-easy-tips-gkn/articleshow-8kpqqcu</link>
            <guid isPermaLink="true">https://kannada.asianetnews.com/food/tricks-to-remove-grease-from-kitchen-oil-bottles-in-minutes-follow-these-easy-tips-gkn/articleshow-8kpqqcu</guid>
            <pubDate>Sat, 12 Sep 2026 21:53:36 +0530</pubDate>
            <description><![CDATA[ನೀವು ನಿಮ್ಮ ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಎಣ್ಣೆ ಮತ್ತು ತುಪ್ಪದ ಬಾಟಲಿಗಳು ಅಥವಾ ಡಬ್ಬಿಗಳಲ್ಲಿನ ಜಿಡ್ಡು ಮಾತ್ರ ಹೋಗುವುದಿಲ್ಲ. ಅಡುಗೆ ಮಾಡುವಾಗ ಈ ಜಿಡ್ಡಿನ ಬಾಟಲಿಗಳು ಕೈಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತವೆ. ಅದಕ್ಕೆ ಇಲ್ಲಿದೆ ಸರಳ ಉಪಾಯ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b6vvt494zn1xjd8d7nvpgb,imgname-greasy-oil-bottles-1789230182212.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಡುಗೆ ಮನೆ ಎಷ್ಟೇ ಕ್ಲೀನ್ ಇದ್ದರೂ ಸಾಕಾಗಲ್ಲ. ಉತ್ತಮ ಆರೋಗ್ಯಕ್ಕೆ ಆಡುಗೆ ಮನೆಯ ಸ್ವಚ್ಛತೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಅಡುಗೆ ಮನೆ ಫಳ ಫಳ ಅಂತಾ ಹೊಳೆಯುವ ಹಾಗೆ ಇಟ್ಟುಕೊಳ್ಳಿ. ಸರಿ, ಅಡುಗೆ ಮನೆಯೇನೋ ಕ್ಲೀನಾಗಿ ಇಟ್ಟುಕೊಳ್ತೀವಿ, ಈ ಎಣ್ಣೆ ಜಿಡ್ಡಿಗೆ ಏನು ಮಾಡೋದು ಅನ್ನೋ ಪ್ರಶ್ನೆ ತುಂಬಾ ದಿನದಿಂದ ಕಾಡ್ತಿದ್ಯಾ? ಅದಕ್ಕೆ ಉತ್ತರ ಇಲ್ಲಿದೆ.&lt;/p&gt;&lt;p&gt;ಹೌದು, ನೀವು ನಿಮ್ಮ ಅಡುಗೆಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ, ಎಣ್ಣೆ ಮತ್ತು ತುಪ್ಪದ ಬಾಟಲಿಗಳು ಅಥವಾ ಡಬ್ಬಿಗಳಲ್ಲಿನ ಜಿಡ್ಡು ಮಾತ್ರ ಹೋಗುವುದಿಲ್ಲ. ಅಡುಗೆ ಮಾಡುವಾಗ ಈ ಜಿಡ್ಡಿನ ಬಾಟಲಿಗಳು ಕೈಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತವೆ. ಎಣ್ಣೆ ಮತ್ತು ಗ್ರೀಸ್ ಅವುಗಳ ಮೇಲೆ ಮತ್ತು ಒಳಭಾಗದಲ್ಲಿ ಗಟ್ಟಿಯಾಗಿ ಸಂಗ್ರಹವಾಗಿರುತ್ತದೆ.&lt;/p&gt;&lt;p&gt;ನೀವು ಎಷ್ಟೇ ಸ್ಕ್ರಬ್ ಮಾಡಿ ತೊಳೆದರೂ ಈ ಜಿಡ್ಡನ್ನು ತೆಗೆಯುವುದು ಕಷ್ಟದ ಕೆಲಸ.ಆದರೆ, ಕೆಲವು ಸುಲಭ ಮನೆಮದ್ದುಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.&lt;/p&gt;&lt;h2&gt;&lt;strong&gt;ಕುದಿಯುವ ನೀರಿನ ಸಂಸ್ಕರಣೆ&lt;/strong&gt;&lt;/h2&gt;&lt;p&gt;ಮೊದಲು ನೀವು ಮಾಡಬೇಕಾಗಿರೋದು ಇಷ್ಟೇ. ಬಾಟಲಿಯೊಳಗಿನ ಎಣ್ಣೆಯನ್ನು ಸಂಪೂರ್ಣವಾಗಿ ಖಾಲಿ ಮಾಡಿ. ನಂತರ ಕುದಿಯುವ ಬಿಸಿ ನೀರನ್ನು ಬಾಟಲಿಗೆ ಸುರಿದು 10 ನಿಮಿಷ ಹಾಗೆಯೇ ಬಿಡಬೇಕು. ಇದರಿಂದ ಒಳಗಿನ ಗಟ್ಟಿಯಾದ ಜಿಡ್ಡು ಕರಗುತ್ತದೆ. ಆಗ ಸೋಪಿನಿಂದ ಮತ್ತೊಮ್ಮೆ ತೊಳೆಯಿರಿ.&lt;/p&gt;&lt;h2&gt;&lt;strong&gt;ಅಡಿಗೆ ಸೋಡಾ ಮತ್ತು ಪಾತ್ರೆ ತೊಳೆಯುವ ದ್ರವ&lt;/strong&gt;&lt;/h2&gt;&lt;p&gt;ಬಿಸಿ ನೀರನ್ನು ಚೆಲ್ಲಿ ನಂತರ, ಒಂದು ಚಮಚ ಅಡಿಗೆ ಸೋಡಾ ಮತ್ತು ಸ್ವಲ್ಪ ಪಾತ್ರೆ ತೊಳೆಯುವ ಲಿಕ್ವಿಡ್ ಹಾಕಿ ತೊಳೆಯಬೇಕು. ಬಾಟಲ್ ಬ್ರಷ್&zwnj;ನಿಂದ ಚೆನ್ನಾಗಿ ಉಜ್ಜಿ. ಅಡಿಗೆ ಸೋಡಾ ಜಿಡ್ಡನ್ನು ಸಂಪೂರ್ಣವಾಗಿ ತೆಗೆದುಹಾಕಿ ಬಾಟಲಿಯನ್ನು ಹೊಳೆಯುವಂತೆ ಮಾಡುತ್ತದೆ.&lt;/p&gt;&lt;h2&gt;&lt;strong&gt;ಅನ್ನದಿಂದ ಒಳಭಾಗ ಸ್ವಚ್ಛ&lt;/strong&gt;&lt;/h2&gt;&lt;p&gt;ಸಣ್ಣ ಬಾಯಿ ಇರುವ ಬಾಟಲಿಗಳ ಒಳಭಾಗವನ್ನು ಕೈಯಿಂದ ಸ್ವಚ್ಛ ಮಾಡೋದು ತುಂಬಾ ಕಷ್ಟ. ಅಂತಹ ಸಮಯದಲ್ಲಿ ಬಾಟಲಿಯೊಳಗೆ ಸ್ವಲ್ಪ ಬಿಸಿ ನೀರು, ಒಂದು ಚಮಚ ಅನ್ನ ಮತ್ತು ಡಿಶ್ ವಾಷ್ ಹಾಕಿ ಬಾಟಲಿಯನ್ನು ಬಿಗಿಯಾಗಿ ಮುಚ್ಚಿ ಚೆನ್ನಾಗಿ ಅಲ್ಲಾಡಿಸಬೇಕು. ಅನ್ನವು ಸ್ಕ್ರಬ್ಬರ್ ರೀತಿ ಕೆಲಸ ಮಾಡಿ ಒಳಗಿನ ಎಲ್ಲಾ ಜಿಡ್ಡನ್ನು ಹೊರತೆಗೆದು ಸ್ವಚ್ಛ ಮಾಡುತ್ತದೆ.&lt;/p&gt;&lt;h2&gt;&lt;strong&gt;ವಿನೆಗರ್ ಮತ್ತು ನಿಂಬೆ ರಸ&lt;/strong&gt;&lt;/h2&gt;&lt;p&gt;ಬಾಟಲಿಯನ್ನು ತೊಳೆದ ನಂತರವೂ ಎಣ್ಣೆಯ ವಾಸನೆ ಹೋಗದಿದ್ದರೆ, ವಿನೆಗರ್ ಅಥವಾ ನಿಂಬೆ ರಸವನ್ನು ಬಳಸಿ. ಅರ್ಧ ಕಪ್ ಬಿಳಿ ವಿನೆಗರ್ ಅಥವಾ ನಿಂಬೆ ರಸವನ್ನು ನೀರಿನೊಂದಿಗೆ ಬೆರೆಸಿ ಬಾಟಲಿಯೊಳಗೆ ಹಾಕಿ 15 ನಿಮಿಷ ಬಿಡಿ. ಇದು ದುರ್ವಾಸನೆ ಸಂಪೂರ್ಣವಾಗಿ ನಿವಾರಿಸಿ, ಬಾಟಲಿಗೆ ಫ್ರೆಶ್ ಪರಿಮಳ ನೀಡುತ್ತದೆ.&lt;/p&gt;&lt;p&gt;ಎಣ್ಣೆ ಪಾತ್ರೆಗಳು, ಬಾಟಲ್&zwnj;ಗಳು ಸಚ್ಛಚಾಗಿದ್ರೆ ಅಡುಗೆ ಮನೆಯೂ ಚೆಂದವಾಗಿರುತ್ತದೆ. ಆಗಾಗ ಹೋಗಿ ಅಡುಗೆ ಮಾಡಲು ಹ್ಯಾಪಿ ಮೂಡ್ ಬರುತ್ತದೆ. ನಿಮಗೆ ಬೇಕಾದ ಅಡುಗೆಯನ್ನ ಮಾಡಿಕೊಳ್ಳಬಹುದು.&lt;/p&gt;]]></content:encoded>
            <category><![CDATA[food]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/food/tricks-to-remove-grease-from-kitchen-oil-bottles-in-minutes-follow-these-easy-tips-gkn/articleshow-8kpqqcu"/>
        </item>
        <item>
            <title><![CDATA[BCCI ಹೊಸ ರೂಲ್ಸ್; ರೋಹಿತ್, ಕೊಹ್ಲಿಗೆ ಬಿಗ್ ಶಾಕ್; ರೆಡಿಯಾದ ಮಹಾಸಂಚಿನ ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ!]]></title>
            <link>https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9</link>
            <guid isPermaLink="true">https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9</guid>
            <pubDate>Sat, 12 Sep 2026 21:48:13 +0530</pubDate>
            <description><![CDATA[BCCI New Rules: ಬಿಸಿಸಿಐ ತನ್ನ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಸಜ್ಜಾಗಿದೆ. ಇದು ಆಯ್ದ ಸರಣಿಗಳಲ್ಲಿ ಮಾತ್ರ ಆಡುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮೇಲೆ ಹೇಗೆ ಗಂಭೀರ ಪರಿಣಾಮ ಬೀರಬಹುದು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b6gz9x4hv390a02hq5avcd,imgname-cricket-roko--1789229825341.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಬಹುನಿರೀಕ್ಷಿತ ಮೂರು ಪಂದ್ಯಗಳ T20 ಅಂತರರಾಷ್ಟ್ರೀಯ ಸರಣಿಯ ಕಾವಿನ ನಡುವೆಯೇ ಭಾರತೀಯ ಕ್ರಿಕೆಟ್ ಅಂಗಳದಲ್ಲಿ ಮಹಾ ಸಂಚಲನವೊಂದು ಸೃಷ್ಟಿಯಾಗಿದೆ. ಸರಣಿಯ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐ (BCCI) ಒಂದು ಪ್ರಮುಖ ನಿಯಮವನ್ನು ಬದಲಾಯಿಸಲು ನಿರ್ಧರಿಸಿದ್ದು, ಇದರ ಅತಿದೊಡ್ಡ ಪೆಟ್ಟು ಭಾರತೀಯ ಕ್ರಿಕೆಟ್&zwnj;ನ ಇಬ್ಬರು ದಂತಕಥೆಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬೀಳುವ ಲಕ್ಷಣಗಳು ಎದ್ದು ಕಾಣುತ್ತಿವೆ.&lt;/p&gt;&lt;h2&gt;&lt;strong&gt;ಬಿಸಿಸಿಐ ಹೊಸ ನಿಯಮವೇನು?&lt;/strong&gt;&lt;/h2&gt;&lt;p&gt;ಬಿಸಿಸಿಐ ಆಟಗಾರರಿಗೆ ನೀಡಲಾಗುವ ವಾರ್ಷಿಕ ಸೆಂಟ್ರಲ್ ಕಾಂಟ್ರಾಕ್ಟ್ (ಕೇಂದ್ರ ಒಪ್ಪಂದ) ನಿಯಮಾವಳಿಗಳಲ್ಲಿ ಭಾರಿ ಬದಲಾವಣೆಗೆ ಮುಂದಾಗಿದೆ. ಇಲ್ಲಿಯವರೆಗೆ ಆಟಗಾರರ ಹಿರಿತನ, ಅನುಭವ ಮತ್ತು ಅವರ ಬ್ರಾಂಡ್ ಮೌಲ್ಯದ ಆಧಾರದ ಮೇಲೆ ಕಾಂಟ್ರಾಕ್ಟ್ ಗ್ರೇಡ್&zwnj;ಗಳನ್ನು (ಎ+, ಎ, ಬಿ, ಸಿ) ನೀಡಲಾಗುತ್ತಿತ್ತು. ಆದರೆ ಈಗ ಬಿಸಿಸಿಐ 'ಪಂದ್ಯ ಲಭ್ಯತೆ' (Match Availability) ಹಾಗೂ 'ಆಟಗಾರರ ಫಿಟ್&zwnj;ನೆಸ್' ಅನ್ನು ಪ್ರಮುಖ ಷರತ್ತಾಗಿ ಪರಿಗಣಿಸಲು ಸಜ್ಜಾಗಿದೆ. ಸರಳವಾಗಿ ಹೇಳುವುದಾದರೆ, ಒಬ್ಬ ಆಟಗಾರ ಋತುವೊಂದರಲ್ಲಿ ಎಷ್ಟು ಪಂದ್ಯಗಳಲ್ಲಿ ಫಿಟ್ ಆಗಿದ್ದು ತಂಡಕ್ಕೆ ಲಭ್ಯವಿದ್ದಾನೆ ಎಂಬುದರ ಆಧಾರದ ಮೇಲೆ ಮಾತ್ರವೇ ಅವರಿಗೆ ವಾರ್ಷಿಕ ಒಪ್ಪಂದ ನೀಡಲಾಗುತ್ತದೆ.&lt;/p&gt;&lt;h3&gt;&lt;strong&gt;ಮಂಡಳಿಯ ಈ ಬಿಗಿ ಪ್ಲಾನ್&zwnj;ಗೆ ಕಾರಣವೇನು?&lt;/strong&gt;&lt;/h3&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸತತವಾಗಿ ಗಾಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದು, ಪ್ರಮುಖ ಅಂತಾರಾಷ್ಟ್ರೀಯ ಸರಣಿ ಹಾಗೂ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಇದನ್ನು ತೀವ್ರವಾಗಿ ಪರಿಗಣಿಸಿರುವ ಮಂಡಳಿ, ಆಟಗಾರರು ರಾಷ್ಟ್ರೀಯ ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಆಡುವುದು ಕಡ್ಡಾಯ ಎಂದು ಸ್ಪಷ್ಟಪಡಿಸಲು ಬಯಸಿದೆ. ಈ ಹಿನ್ನೆಲೆಯಲ್ಲಿ, ಒಪ್ಪಂದವನ್ನು ಉಳಿಸಿಕೊಳ್ಳಲು ಅಥವಾ ಉನ್ನತ ಶ್ರೇಣಿ ಪಡೆಯಲು ಒಬ್ಬ ಆಟಗಾರ ಋತುವಿನಲ್ಲಿ ಆಡಲೇಬೇಕಾದ 'ಕನಿಷ್ಠ ಪಂದ್ಯಗಳ ಸಂಖ್ಯೆ'ಯ ಮಾನದಂಡವನ್ನು ನಿಗದಿಪಡಿಸಲು ಬಿಸಿಸಿಐ ಚರ್ಚೆ ನಡೆಸುತ್ತಿದೆ.&lt;/p&gt;&lt;h3&gt;&lt;strong&gt;ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಬಿಗ್ ಶಾಕ್ ಯಾಕೆ?&lt;/strong&gt;&lt;/h3&gt;&lt;p&gt;ಈ ಹೊಸ ನಿಯಮ ಜಾರಿಗೆ ಬಂದರೆ, ಅದರ ಅತಿ ಹೆಚ್ಚಿನ ಪರಿಣಾಮ ಎದುರಿಸಬೇಕಿರುವುದು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇಬ್ಬರೂ ದಂತಕಥೆಗಳು ಈಗಾಗಲೇ ಕೆಲವು ಸ್ವರೂಪಗಳಿಂದ ದೂರವುಳಿದಿದ್ದು, ವರ್ಷದಲ್ಲಿ ಆಯ್ಕೆ ಮಾಡಿದ ಕೇವಲ 2-3 ಪ್ರಮುಖ ಸರಣಿಗಳಲ್ಲಿ ಮಾತ್ರವೇ ಕಣಕ್ಕಿಳಿಯುತ್ತಿದ್ದಾರೆ. ಇಡೀ ಋತುವಿನಲ್ಲಿ ಆಡುವ ಪಂದ್ಯಗಳ ಸಂಖ್ಯೆ ಕಡಿಮೆಯಿರುವುದರಿಂದ, ಬಿಸಿಸಿಐ ನಿಗದಿಪಡಿಸಲಿರುವ 'ಕನಿಷ್ಠ ಪಂದ್ಯಗಳ ಆಟದ ಸಂಖ್ಯೆ'ಯನ್ನು ಇಬ್ಬರಿಗೂ ತಲುಪಲು ಸಾಧ್ಯವಾಗದಿರಬಹುದು.&lt;/p&gt;&lt;h3&gt;&lt;strong&gt;ಕಂಗಾಲಾದ ಅಭಿಮಾನಿಗಳು!&lt;/strong&gt;&lt;/h3&gt;&lt;p&gt;ಬಿಸಿಸಿಐ ಪ್ರಸ್ತುತ ಈ ಕಟ್ಟುನಿಟ್ಟಿನ ನಿಯಮದ ಅಂತಿಮ ರೂಪುರೇಷೆಯ ಮೇಲೆ ಕೆಲಸ ಮಾಡುತ್ತಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ, ಹಿರಿತನದ ಆಧಾರದಲ್ಲಿ ಉನ್ನತ ಒಪ್ಪಂದ ಪಡೆಯುತ್ತಿದ್ದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಸೆಂಟ್ರಲ್ ಕಾಂಟ್ರಾಕ್ಟ್&zwnj;ನ ಕೆಳ ಶ್ರೇಣಿಗೆ ತಳ್ಳಲ್ಪಡುವ ಅಥವಾ ಒಪ್ಪಂದದಿಂದಲೇ ಹೊರಗುಳಿಯುವ ಭೀತಿ ಎದುರಾಗಿದೆ. ದೆಹಲಿ T20 ಪಂದ್ಯದ ಹೊಸ್ತಿಲಲ್ಲೇ ಹೊರಬಿದ್ದಿರುವ ಈ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಕಂಗಾಲನ್ನು ಉಂಟುಮಾಡಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/bcci-new-rules-central-contract-match-availability-fitness-rohit-sharma-virat-kohli-big-shock-team-india-bmk/articleshow-oodetx9"/>
        </item>
        <item>
            <title><![CDATA[ಮಡಿಯಾಲದಲ್ಲಿ ಶೀಘ್ರದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಉನ್ನತ ಶಿಕ್ಷಣ ಕೇಂದ್ರ ಕಾರ್ಯಾರಂಭ]]></title>
            <link>https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</link>
            <guid isPermaLink="true">https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0</guid>
            <pubDate>Sat, 12 Sep 2026 21:45:13 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ ಶೀಘ್ರದಲ್ಲೇ ಮಡಿಯಾಲದಲ್ಲಿ ಕಾರ್ಯಾರಂಭಗೊಳ್ಳಲಿದೆ. ಜೂನ್ 2027ರಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ. ಈ ಕುರಿತು ಸದ್ಗುರು ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b6da3e0hpxw8vrtye305td,imgname-madiayala-ai-higher-education-centre-1789229705325.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು (ಸೆ.12&lt;/strong&gt;) ಲೋಕಸೇವಾ ವೃಂದದ ಸಂಸ್ಥಾಪಕರಾದ ಮಡಿಯಾಲ ನಾರಾಯಣ ಭಟ್ಟರ ಹುಟ್ಟೂರಾದ ಮಡಿಯಾಲ ಗ್ರಾಮದಲ್ಲಿ ಇದೇ ನವೆಂಬರ್&zwnj;ನಲ್ಲಿ ಕೃತಕ ಬುದ್ಧಿಮತ್ತೆ ಉನ್ನತ ಶಿಕ್ಷಣ ಕೇಂದ್ರ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್&zwnj; - ಎಐ) ಕಾರ್ಯಾರಂಭ ಮಾಡಲಿದೆ. ಜೂನ್ 2027 ರಿಂದ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಇರಲಿದೆ ಎಂದು &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ಸಂಸ್ಥಾಪಕ ಸದ್ಗುರು ಮಧುಸೂದನ ಸಾಯಿ ಘೋಷಿಸಿದರು.&lt;/p&gt;&lt;h2&gt;ಮಶಿನ್ ಲರ್ನಿಂಗ್, ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು&lt;/h2&gt;&lt;p&gt;ನಗರದಲ್ಲಿ ಶನಿವಾರ (ಸೆ 12) ನಡೆದ &quot;ದಿವ್ಯ ಸಂಜೆ&quot; ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಉಲ್ಲಾಸ್ ಕಾಮತ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಲೋಕಸೇವಾ ವೃಂದದ ಮೂಲಕ ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಪ್ರಯತ್ನಿಸಿದ ಮಡಿಯಾಲ ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ವರ್ಷದಲ್ಲಿ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕಿನ ಅವರ ಹುಟ್ಟೂರಿನಲ್ಲಿ ಈ ಮಹತ್ವದ ಉಪಕ್ರಮ ಆರಂಭಿಸಲಾಗಿದೆ ಎಂದು ವಿವರಿಸಿದರು. ಮಂಗಳೂರು ನಗರದಲ್ಲಿ ಎಲ್ಲ ಬಗೆಯ ಶಿಕ್ಷಣ ಕೋರ್ಸ್&zwnj;ಗಳೂ ಲಭ್ಯವಿವೆ. ಇದಕ್ಕೆ ಮತ್ತಷ್ಟು ಮೆರಗು ನೀಡಬೇಕು ಎಂದು ಯೋಚಿಸಿ ಇಲ್ಲಿ ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಒತ್ತು ಕೊಡುವ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಕೇಂದ್ರ ಆರಂಭಿಸುತ್ತಿದ್ದೇವೆ ಎಂದರು&lt;/p&gt;&lt;p&gt;ಮಡಿಯಾಲ ಗ್ರಾಮದಲ್ಲಿ ನಾವು ಸ್ಥಾಪಿಸುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಕಂಟ್ಯೂಟರ್ ಸೈನ್ಸ್&zwnj; ಅಧ್ಯಯನ ಕೇಂದ್ರಗಳು ಸಹ ಭಾರತದ ಸನಾತನ ಜ್ಞಾನ ಪರಂಪರೆಯ ಭಾಗವೇ ಆಗುತ್ತವೆ. ಅಧ್ಯಾತ್ಮವನ್ನು ತನ್ನ ಕಾರ್ಯಚಟುವಟಿಕೆಗಳ ತಳಹದಿಯಾಗಿ ಹೊಂದಿರುವ ಸಂಸ್ಥೆಯೊಂದು ಇಂಥ ಕೇಂದ್ರಗಳನ್ನು ಆರಂಭಿಸುತ್ತಿರುವುದು ಹಲವು ದೃಷ್ಟಿಗಳಿಂದ ಮಹತ್ವದ ವಿಚಾರ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.&lt;/p&gt;&lt;h2&gt;ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ&lt;/h2&gt;&lt;p&gt;ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಅಥವಾ ಯಾವುದೇ ಅತ್ಯಾಧುನಿಕ ತಂತ್ರಜ್ಞಾನವು ಸನಾತನ ಧರ್ಮಕ್ಕೆ ಹೊರತಾದುದು ಅಲ್ಲ. ಅಧ್ಯಾತ್ಮದಲ್ಲಿ ಮಹತ್ವದ ಸಾಧನೆ ಮಾಡಿ ಎತ್ತರಕ್ಕೆ ಏರಿದ್ದ ನಮ್ಮ ಋಷಿಗಳು ಏಕಕಾಲಕ್ಕೆ ವಿಜ್ಞಾನಿಗಳೂ ಆಗಿದ್ದರು. ತಾಯಿ ಸರಸ್ವತಿ ಜ್ಞಾನದಲ್ಲಿ ಭೇದ ಮಾಡುವುದಿಲ್ಲ ಎಂದು ವಿವರಿಸಿದರು.&lt;/p&gt;&lt;p&gt;ಸನಾತನ ಧರ್ಮವು ಪುರಾತನ ಮೌಲ್ಯವಷ್ಟೇ ಅಲ್ಲ; ನಿತ್ಯ ನೂತನವೂ ಆಗಿದೆ. ಸನಾತನ ಧರ್ಮವು ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ. ನಾನೂ ಸಹ ವಿಶ್ವದಾದ್ಯಂತ ಏನಾಗುತ್ತಿದೆ ಅಂತ ತಿಳಿದುಕೊಳ್ಳುತ್ತೇನೆ. ಮುಂದೇನು ಬರಬಹುದು? ನಾನು ಹೇಗೆ ಸ್ಪಂದಿಸಬಹುದು ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಅತ್ಯಾಧುನಿಕ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಅಭಿಪ್ರಾಯಪಟ್ಟರು.&lt;/p&gt;&lt;p&gt;ಮಂಗಳೂರಿಗೆ ಬರಲು ಏಕಿಷ್ಟು ತಡವಾಯಿತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನವರಿಗೆ ಕೊಡಲು ನನ್ನ ಬಳಿ ಏನಿದೆ ಎಂದು ಕೇಳಿಕೊಳ್ಳುತ್ತಿದ್ದೆ. ಈಗ ಮಡಿಯಾಲದಲ್ಲಿ ಪೂಜ್ಯ ಮಡಿಯಾಲ ನಾರಾಯಣ ಭಟ್ಟರ ಸ್ಮರಣಾರ್ಥ ಉನ್ನತ ಶಿಕ್ಷಣ ಆರಂಭವಾಗುತ್ತಿದೆ. ಈ ಕೊಡುಗೆ ಕೊಡುವ ಅವಕಾಶದೊಂದಿಗೆ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು. ಸಿಎಸ್&zwnj;ಆರ್&zwnj; ಫಂಡ್&zwnj;ಗಳ ಸಮರ್ಪಕ ಬಳಕೆ ಆಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸರ್ಕಾರಕ್ಕೆ ತೆರಿಗೆಯ ಮೇಲೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭದ ಮೇಲೆ ಹಕ್ಕು ಇರುವಂತೆ ಸೇವಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳಿಗೆ ಸಿಎಸ್&zwnj;ಆರ್&zwnj; ನಿಧಿಯ ಮೇಲೆ ಹಕ್ಕು ಇರಬೇಕು. ಈ ಹಕ್ಕನ್ನು ಯಾರೂ ನಿರಾಕರಿಸಬಾರದು ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;ಮಂಗಳೂರಿನಲ್ಲಿ ಶೀಘ್ರ ಉಚಿತ ಆಸ್ಪತ್ರೆ ಆರಂಭ&lt;/h2&gt;&lt;p&gt;ಮಂಗಳೂರು ನಗರದಲ್ಲಿ ಶೀಘ್ರ 50 ಹಾಸಿಗೆ ಸಾಮರ್ಥ್ಯದ ಉಚಿತ ಆಸ್ಪತ್ರೆಯನ್ನು ಆರಂಭಿಸಲಾಗುವುದು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಇಂಥ ಆಸ್ಪತ್ರೆಗಳನ್ನು ಆರಂಭಿಸಲಾಗುವುದು. ಆಸ್ಪತ್ರೆಯ ರೂಪುರೇಷೆ ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ವಿವರ ನೀಡಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಪ್ರಸ್ತುತ ಕರ್ನಾಟಕದಲ್ಲಿ 15 ಜಿಲ್ಲೆಗಳಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳಿವೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗುವುದು. ಸಾಯಿಶ್ಯೂರ್&zwnj; ಮೂಲಕ ಪ್ರಸ್ತುತ ಒಂದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳ ಐದು ಕೋಟಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.&lt;/p&gt;&lt;h2&gt;ಮೋಹನ್ ಆಳ್ವಗೆ ಕರ್ನಾಟಕ ಪರಿವರ್ತಕ ಪ್ರಶಸ್ತಿ&lt;/h2&gt;&lt;p&gt;ಮೂಡುಬಿದರೆಯ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಡಾ ಎಂ.ಮೋಹನ್ ಆಳ್ವ ಅವರಿಗೆ &quot;ಒನ್&zwnj; ವರ್ಲ್ಡ್&zwnj; ಒನ್ ಫ್ಯಾಮಿಲಿ ಮಿಷನ್&quot; ವತಿಯಿಂದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕ ಪರಿವರ್ತಕ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ಡಾ ಎಂ.ಮೋಹನ್ ಆಳ್ವ, ಮುಂದಿನ ಆಳ್ವಾಸ್&zwnj; ವಿರಾಸತ್ ಜನವರಿ 7 ರಿಂದ 10 ರವರೆಗೆ ನಡೆಯಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರನ್ನು ಮುಂದಿನ ವಿರಾಸತ್ ಉದ್ಘಾಟನೆಗೆ ಆಹ್ವಾನಿಸುತ್ತಿದ್ದೇನೆ ಎಂದು ಆಮಂತ್ರಿಸಿದರು.&lt;/p&gt;&lt;p&gt;ಮುದ್ದೇನಹಳ್ಳಿಗೆ ನಾನು ಸ್ವತಃ ಭೇಟಿ ನೀಡಿ ಅಲ್ಲಿ ನಡೆದಿರುವ ಕೆಲಸಗಳನ್ನು ಗಮನಿಸಿದ್ದೇನೆ. ಅದೊಂದು ಪವಾಡದಂತೆ ಭಾಸವಾಗುತ್ತದೆ. ಅಲ್ಲಿರುವಂಥ ಗೋಶಾಲೆ ಬೇರೆಲ್ಲಿಯೂ ಇಲ್ಲ. ಅಲ್ಲಿನ ಸಾಯಿಶ್ಯೂರ್ ಕಾರ್ಖಾನೆ ಕೋಟ್ಯಂತರ ಮಕ್ಕಳಿಗೆ ಮುಂಜಾನೆ ಪೌಷ್ಟಿಕ ಆಹಾರ ಒದಗಿಸುತ್ತಿದೆ. ಅಲ್ಲಿನ ಆಸ್ಪತ್ರೆಯ ಸಿಬ್ಬಂದಿ ಪ್ರೇಮಪೂರ್ವಕ ಕಾಳಜಿಯ ವೈಖರಿ ಎಲ್ಲದಕ್ಕೂ ನಾನು ಸಾಕ್ಷಿಯಾಗಿದ್ದೇನೆ ಎಂದು ಭಾವುಕರಾಗಿ ವಿವರಿಸಿದರು.&lt;/p&gt;&lt;p&gt;ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಮೋಹನ್ ಆಳ್ವ, ಆರ್&zwnj;ಎಸ್&zwnj;ಎಸ್&zwnj; ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಘವೇಂದ್ರ ಭಟ್, ಕ್ಯಾಂಪ್ಕೋ ಅಧ್ಯಕ್ಷ ಸತೀಶ್&zwnj; ಚಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವೈದಿಕ ಅಧ್ಯಯನ ವಿಭಾಗದ ವಿದ್ಯಾರ್ಥಿನಿಯರಿಂದ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಎಂಬಿಬಿಎಸ್ ವಿದ್ಯಾರ್ಥಿನಿ ಗೌತಮಿ ಪೈ ತಮ್ಮ ಅನುಭವ ಹಂಚಿಕೊಂಡರು. ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಗೌಡ ಬಿರಾದಾರ್ ನಿರೂಪಿಸಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/karnataka-districts/artificial-intelligence-higher-education-centre-to-begin-operations-soon-in-madiyala/articleshow-3nw4hf0"/>
        </item>
        <item>
            <title><![CDATA[ಪಲಾವ್ ಎಲೆ ಹಾಕಿದ್ರೆ ನಿಜವಾಗ್ಲೂ ಅಡುಗೆ ರುಚಿ ಬರುತ್ತಾ? ಇಲ್ಲಿದೆ ನೋಡಿ ಶೆಫ್ ಹೇಳಿದ ಅಸಲಿ ಸೀಕ್ರೆಟ್]]></title>
            <link>https://kannada.asianetnews.com/food/do-bay-leaves-actually-do-anything-in-cooking-science-explains/articleshow-zoeazig</link>
            <guid isPermaLink="true">https://kannada.asianetnews.com/food/do-bay-leaves-actually-do-anything-in-cooking-science-explains/articleshow-zoeazig</guid>
            <pubDate>Sat, 12 Sep 2026 21:41:18 +0530</pubDate>
            <description><![CDATA[Do bay leaves add flavor: ಬಿರಿಯಾನಿ ಅಥವಾ ಪಲಾವ್ ತಿನ್ನುವಾಗ ಮಧ್ಯದಲ್ಲಿ ಸಿಗೊ ಆ ಎಲೆನಾ ಎತ್ತಿ ಬಿಸಾಕೋರೆ ಹೆಚ್ಚು! ಹಾಗಾದ್ರೆ, ಈ ಪಲಾವ್ ಎಲೆಯಿಂದ ಅಡುಗೆಗೆ ನಿಜವಾಗ್ಲೂ ಏನಾದ್ರೂ ರುಚಿ ಬರುತ್ತಾ ಅಥವಾ ಸುಮ್ಮನೆ ಶೋಕಿಗಾಗಿ ಹಾಕ್ತಾರಾ? ಅನ್ನೋ ಅನುಮಾನ ನಿಮ್ಮಲ್ಲೂ ಇರಬಹುದು. ಇದರ ಹಿಂದಿರೋ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ..]]></description>
            <media:content url="https://static.asianetnews.com/images/w-1280,h-720,format-jpg,imgid-01kcn4wtmqe1ervkz8y6qktf2h,imgname-mixcollage-17-dec-2025-08-45-am-5156-1765941340823.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಿ&lt;/strong&gt;ರಿಯಾನಿ, ಪಲಾವ್, ಕುರ್ಮಾ ಅಥವಾ ಸೂಪ್ ಮಾಡುವಾಗ 'ಪಲಾವ್ ಎಲೆ' (Bay Leaf) ಹಾಕುವುದು ನಮಗೆಲ್ಲಾ ರೂಢಿ. ಆದರೆ ಊಟ ಮಾಡುವಾಗ ಆ ಎಲೆ ಬಾಯಿಗೆ ಸಿಕ್ಕಿದರೆ ಅದನ್ನು ಎತ್ತಿ ಹೊರಗೆ ಎಸೆಯುತ್ತೇವೆ. ಹೀಗಾಗಿ ಅನೇಕ ಜನರಿಗೆ ಒಂದು ದೊಡ್ಡ ಅನುಮಾನವಿದೆ. ಈ ಎಲೆಯಿಂದ ಅಡುಗೆಗೆ ನಿಜವಾಗಿಯೂ ಏನಾದರೂ ಉಪಯೋಗವಿದೆಯಾ? ಅಥವಾ ಕೇವಲ ಶೋಕಿಗಾಗಿ ಹಾಕ್ತಾರಾ?. ಆದರೆ, ಫುಡ್ ಸೈನ್ಸ್ (ಆಹಾರ ವಿಜ್ಞಾನ) ಮತ್ತು ಪ್ರಾಯೋಗಿಕ ಟೇಸ್ಟ್ ಟೆಸ್ಟ್ ಪ್ರಕಾರ, ಪಲಾವ್ ಎಲೆ ಕೇವಲ ಹೆಸರಿಗಷ್ಟೇ ಅಲ್ಲ, ಅದು ಅಡುಗೆಯ ಸ್ವಾದವನ್ನೇ (Aroma) ಬದಲಾಯಿಸುವ ಅಪ್ರತಿಮ ಶಕ್ತಿ ಹೊಂದಿದೆ!&lt;/p&gt;&lt;h2&gt;&lt;strong&gt;ಪಲಾವ್ ಎಲೆ ಕೆಲಸ ಮಾಡಲ್ಲ ಎಂದು ಜನ ಅಂದುಕೊಳ್ಳಲು 2 ಮುಖ್ಯ ಕಾರಣಗಳು..&lt;/strong&gt;&lt;/h2&gt;&lt;h2&gt;&lt;strong&gt;ಹಳೆಯದಾದ ಎಲೆಗಳ ಬಳಕೆ&lt;/strong&gt;&lt;/h2&gt;&lt;p&gt;ಪಲಾವ್ ಎಲೆಗಳಿಗೆ ಅದರದೇ ಆದ ಸುವಾಸನೆ ನೀಡುವ ಆವಿಯಾಗುವ ಸಂಯುಕ್ತಗಳಿರುತ್ತವೆ (Aromatic compounds). ಆದರೆ ಹೆಚ್ಚಿನವರ ಮನೆಯ ಮಸಾಲೆ ಡಬ್ಬದಲ್ಲಿ ಈ ಎಲೆಗಳು ವರ್ಷಗಟ್ಟಲೆ ಬಿದ್ದಿರುತ್ತವೆ. 6 ತಿಂಗಳು ಕಳೆದರೆ ಎಲೆಯಲ್ಲಿನ ಸುಗಂಧವೆಲ್ಲಾ ಗಾಳಿಯಲ್ಲಿ ಆವಿಯಾಗಿ ಹೋಗಿರುತ್ತದೆ. ಅಂತಹ ಹಳೆಯ ಎಲೆ ಹಾಕಿದರೆ ಅದರಿಂದ ಯಾವುದೇ ರುಚಿ ಸಿಗುವುದಿಲ್ಲ.&lt;/p&gt;&lt;h2&gt;&lt;strong&gt;ಲಘು ಪರಿಮಳ (Subtle Flavor)&lt;/strong&gt;&lt;/h2&gt;&lt;p&gt;ಇದು ಅರಿಶಿನ, ಖಾರದ ಪುಡಿ ಅಥವಾ ಲವಂಗದಂತೆ ಅತಿಯಾದ ಘಾಟು ಅಥವಾ ಗಾಢ ರುಚಿಯನ್ನು ಹೊಂದಿರುವುದಿಲ್ಲ. ಇದರ ಪರಿಮಳ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಇದರ ಇರುವಿಕೆ ತಕ್ಷಣ ಎದ್ದು ಕಾಣಿಸುವುದಿಲ್ಲ.&lt;/p&gt;&lt;h2&gt;&lt;strong&gt;ಪಲಾವ್ ಎಲೆಯ ಹಿಂದಿರುವ ವಿಜ್ಞಾನವೇನು?&lt;/strong&gt;&lt;/h2&gt;&lt;p&gt;ಖ್ಯಾತ ಆಹಾರ ವಿಜ್ಞಾನಿ ಹೆರಾಲ್ಡ್ ಮೆಕ್&zwnj;ಗೀ ಅವರ ಪ್ರಕಾರ, ಪಲಾವ್ ಎಲೆಯಲ್ಲಿ ನೀಲಗಿರಿ (Eucalyptus), ಲವಂಗ (Clove), ಪೈನ್ ಮತ್ತು ಹೂವಿನ ಸುವಾಸನೆಗಳ ಅದ್ಭುತ ಮಿಶ್ರಣವಿರುತ್ತದೆ. ಹಾಗೆ ನೋಡಿದರೆ ಪಲಾವ್ ಎಲೆಯನ್ನು ತಣ್ಣೀರಿನಲ್ಲಿ 15 ನಿಮಿಷ ಇಟ್ಟರೂ ನೀರಿಗೆ ಯಾವುದೇ ರುಚಿ ಬರುವುದಿಲ್ಲ. ಆದರೆ ಇದೇ ಎಲೆಯನ್ನು ಕುದಿಯುವ ನೀರಿನಲ್ಲಿ ಅಥವಾ ಬಿಸಿ ಎಣ್ಣೆಯಲ್ಲಿ ಹಾಕಿದಾಗ, ಶಾಖಕ್ಕೆ ಅದರೊಳಗಿನ ಆಂಟಿಆಕ್ಸಿಡೆಂಟ್ ಹಾಗೂ ಪರಿಮಳದ ಎಣ್ಣೆಗಳು ಹೊರಬಂದು ಅಡುಗೆಗೆ ಅದ್ಭುತವಾದ ನೈಸರ್ಗಿಕ ಸುಗಂಧ ಮತ್ತು ಲಘು ಕಹಿ ಮಿಶ್ರಿತ 'ಉಮಾಮಿ' (Umami) ರುಚಿಯನ್ನು ನೀಡುತ್ತವೆ.&lt;/p&gt;&lt;h2&gt;&lt;strong&gt;ಪ್ರಾಯೋಗಿಕ ಪರೀಕ್ಷೆ (Rice Taste Test)&lt;/strong&gt;&lt;/h2&gt;&lt;p&gt;ವಿಡಿಯೋದಲ್ಲಿ ಶೆಫ್ ಎರಡು ಪ್ರತ್ಯೇಕ ಪಾತ್ರೆಗಳಲ್ಲಿ ಒಂದೇ ಅಳತೆಯ ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ ಹಾಗೂ ಅರಿಶಿನ ಹಾಕಿ ಹಳದಿ ರೈಸ್ (Yellow Rice) ತಯಾರಿಸುತ್ತಾರೆ. ಆದರೆ, ಕೇವಲ ಒಂದಕ್ಕೆ ಮಾತ್ರ &lsquo;ಪಲಾವ್ ಎಲೆ&rsquo; ಹಾಕಿ, ಇನ್ನೊಂದಕ್ಕೆ ಹಾಕುವುದಿಲ್ಲ.&lt;/p&gt;&lt;h2&gt;&lt;strong&gt;ಫಲಿತಾಂಶ&lt;/strong&gt;&lt;/h2&gt;&lt;p&gt;ಎರಡೂ ಅನ್ನ ಬೆಂದ ನಂತರ ವಾಸನೆ ಮತ್ತು ರುಚಿ ನೋಡಿದಾಗ ಅಚ್ಚರಿಯ ಫಲಿತಾಂಶ ಹೊರಬಂತು! ಪಲಾವ್ ಎಲೆ ಹಾಕಿದ ಅನ್ನದಲ್ಲಿ ಅದ್ಭುತವಾದ ರಾಯಲ್ ಸುವಾಸನೆ ಮತ್ತು ರಿಚ್ ಆದ ರುಚಿ ಇತ್ತು. ಎಲೆ ಹಾಕದ ಅನ್ನ ಕೇವಲ ಸಾದಾ ಅನ್ನದಂತಿತ್ತು. ಅಂದರೆ, ಎಲೆ ಹಾಕಿದಾಗ ಬಾಯಿಗೆ ಕರಾರುವಕ್ಕಾಗಿ ಗೊತ್ತಾಗದಿದ್ದರೂ, ಎಲೆ ಹಾಕದಿದ್ದರೆ ಅಡುಗೆಯಲ್ಲಿ &quot;ಏನೋ ಒಂದು ಮಿಸ್ಸಿಂಗ್&quot; ಎಂಬ ಭಾವನೆ ಬರುವುದು ಖಚಿತ!&lt;/p&gt;&lt;h2&gt;&lt;strong&gt;ಪಲಾವ್ ಎಲೆ ಬಳಸುವಾಗ ನೀವು ನೆನಪಿಡಬೇಕಾದ ಟಿಪ್ಸ್&lt;/strong&gt;&lt;/h2&gt;&lt;p&gt;ಅಡುಗೆಗೆ ಬಳಸುವ ಮುನ್ನ ಎಲೆಯನ್ನು ಮೂಸಿ ನೋಡಿ. ಅದರಲ್ಲಿ ಯಾವುದೇ ಸುವಾಸನೆ ಇಲ್ಲದಿದ್ದರೆ, ಅದು ಹಳೆಯದಾಗಿದೆ ಎಂದರ್ಥ. ಅದನ್ನು ತಕ್ಷಣ ಎಸೆದು ತಾಜಾ ಎಲೆಗಳನ್ನು ಖರೀದಿಸಿ. ಅಡುಗೆ ಪೂರ್ತಿ ಬೆಂದು ಅದರ ಸುವಾಸನೆ ಇಳಿದ ನಂತರ ಎಲೆಯನ್ನು ತೆಗೆದು ಎಸೆಯಬಹುದು, ಏಕೆಂದರೆ ಅದನ್ನು ನೇರವಾಗಿ ಜಗಿದು ತಿನ್ನಲು ಸಾಧ್ಯವಿಲ್ಲ.&lt;/p&gt;&lt;h2&gt;&lt;strong&gt;ತಾಜಾ ಪಲಾವ್ ಎಲೆ ಬಳಸಿ&lt;/strong&gt;&lt;/h2&gt;&lt;p&gt;ಪಲಾವ್ ಎಲೆ ಕೇವಲ ತಟ್ಟೆಯ ಅಲಂಕಾರವಲ್ಲ, ಅದು ಅಡುಗೆಯ ಘಮವನ್ನು ಹೆಚ್ಚಿಸುವ 'ಸೈಲೆಂಟ್ ಹೀರೋ'! ಮುಂದಿನ ಬಾರಿ ಬಿರಿಯಾನಿ ಅಥವಾ ಪಲಾವ್ ಮಾಡುವಾಗ ತಾಜಾ ಪಲಾವ್ ಎಲೆ ಬಳಸಲು ಮರೆಯಬೇಡಿ.&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/do-bay-leaves-actually-do-anything-in-cooking-science-explains/articleshow-zoeazig"/>
        </item>
        <item>
            <title><![CDATA[ಮೀನು ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಸುದ್ದಿ, ಭಾರೀ ಬೇಡಿಕೆಯ ಹಿಲ್ಸಾ ಮೀನು ಸವಿಯಲು ರೆಡಿಯಾಗಿ]]></title>
            <link>https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t</link>
            <guid isPermaLink="true">https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t</guid>
            <pubDate>Sat, 12 Sep 2026 21:06:32 +0530</pubDate>
            <description><![CDATA[ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ಮೀನು ರಫ್ತಿಗೆ ಅವಕಾಶ ನೀಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಬಾಂಗ್ಲಾದೇಶ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 'ಮೀನುಗಳ ರಾಣಿ' ಎಂದೇ ಖ್ಯಾತವಾದ ಈ ಮೀನಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾರಿ ಬೇಡಿಕೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzj87enmhfwzan8c2y3x0cr4,imgname-hilsa-fish-1786245266100.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೀನುಗಳ ರಾಣಿ ಎಂದೇ ಕರೆಯಲ್ಪಡುವ ಹಿಲ್ಸಾ ಮೀನಿಗೆ ಭಾರತದಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾದಲ್ಲಿ ಹಿಲ್ಸಾ ಮೀನಿಗೆ ಭಾರಿ ಡಿಮ್ಯಾಂಡು. ವಿಷಯ ಏನಪ್ಪ ಅಂದ್ರೆ ಮುಂದಿನ ದರ್ಗಾ ಪೂಜೆಗೂ ಮುನ್ನವೇ ಹಿಲ್ಸಾ ಮೀನು ರಫ್ತಿಗೆ ಅವಕಾಶ ಮಾಡಿಕೊಡುವಂತೆ ಭಾರತೀಯ ಆಮದುಗಾರರು ಬಾಂಗ್ಲಾದೇಶಕ್ಕೆ ಮನವಿ ಮಾಡಿದ್ದಾರೆ. ಸಮಾಧಾನದ ವಿಚಾರ ಎಂದರೆ ಬಾಂಗ್ಲಾದೇಶ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ.&lt;/p&gt;&lt;p&gt;ಹೌದು, ದುರ್ಗಾ ಪೂಜೆಗೂ ಮುನ್ನ ಹಿಲ್ಸಾ ರಫ್ತಿಗೆ ಅವಕಾಶ ನೀಡುವಂತೆ ಬಾಂಗ್ಲಾದೇಶವನ್ನು ಒತ್ತಾಯಿಸಲಾಗಿದೆ. ಕೋಲ್ಕತ್ತದ ಆಮದುದಾರರ ಸಂಘವು ಬಾಂಗ್ಲಾದೇಶದ ಸಚಿವರಿಗೆ ಮೀನು ಸಾಗಣೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದೆ. 1996 ರಿಂದ ಬಾಂಗ್ಲಾದೇಶದಿಂದ ಹಿಲ್ಸಾ ಮೀನು ಆಮದು ಮಾಡಿಕೊಳ್ಳಲಾಗುತ್ತಿದೆ. 2012ರಲ್ಲಿ ಬಾಂಗ್ಲಾದೇಶ ಈ ಮೀನನ್ನು ರಫ್ತು ಮಾಡೋದನ್ನು ನಿಷೇಧ ಮಾಡಿತ್ತು. ಮೊದಲು ಪಶ್ಚಿಮ ಬಂಗಾಳದ ಬೆನಪೋಲ್ ಭೂ ಕಸ್ಟಮ್ಸ್ ಠಾಣೆ ಮತ್ತು ತ್ರಿಪುರಾದ ಅಖೌರಾ ಭೂ ಕಸ್ಟಮ್ಸ್ ಠಾಣೆ ಮೂಲಕ ಹಿಲ್ಸಾವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.&lt;/p&gt;&lt;p&gt;ರಫ್ತು ನಿಷೇಧದ ನಡುವೆಯೂ 2019ರಿಂದ ದುರ್ಗಾ ಪೂಜೆಯ ಸಮಯದಲ್ಲಿ ಹಿಲ್ಸಾ ಮೀನನ್ನು ಸೀಮಿತ ರಫ್ತಿಗೆ ಅನುಮತಿಯನ್ನ ಬಾಂಗ್ಲಾ ನೀಡಿದೆ. ಆದರೆ ಈ ವ್ಯವಹಾರ ಒಂದು ತಿಂಗಳ ಮಾತ್ರ ಇರೋದ್ರಿಂದ ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೀನು ಆಮದುದಾರರು ಎರಡು ಬಂಗಾಳಗಳ ನಡುವಿನ ದೀರ್ಘಕಾಲದ ಸಾಂಸ್ಕೃತಿಕ ಮತ್ತು ಪಾಕಶಾಲೆಯ ಸಂಪರ್ಕಗಳನ್ನು ಹಾಗೂ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಹಿಲ್ಸಾದ ಜನಪ್ರಿಯತೆಯನ್ನು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಕಳೆದ ವರ್ಷ ದುರ್ಗಾ ಪೂಜೆ ಸಂದರ್ಭದಲ್ಲಿ ಭಾರತಕ್ಕೆ 1200 ಟನ್&zwnj; ಹಿಲ್ಸಾ ಮೀನು ಬಂದಿತ್ತು. ಈ ಬಾರಿ 2420 ಟನ್&zwnj; ಹಿಲ್ಸಾ ಮೀನು ಬರುವ ಸಾಧ್ಯತೆ ಇದೆ. ಕೆಲವು ವರದಿಗಳ ಪ್ರಕಾರ ಬಾಂಗ್ಲಾದೇಶ ಸರ್ಕಾರವು ಇತ್ತೀಚಿನ ವಿನಂತಿಗೆ ಸಕಾರಾತ್ಮಕವಾಗಿ ಪರಿಗಣಿಸಿದೆ ಎನ್ನಲಾಗಿದೆ. ಇದು ಈ ವರ್ಷದ ದುರ್ಗಾ ಪೂಜೆಗೆ ಮುನ್ನ ಬಂಗಾಳ ಮೀನು ಮಾರುಕಟ್ಟೆಗಳಲ್ಲಿ ಹಿಲ್ಸಾ ಲಭ್ಯತೆಯ ಬಗ್ಗೆ ಆಸಕ್ತಿಯನ್ನು ಸೃಷ್ಟಿಸಿದೆ.&lt;/p&gt;&lt;p&gt;ಪೂರ್ವ ಭಾರತದಲ್ಲಿ ಈ ಮೀನು ಅತ್ಯಂತ ಪ್ರಿಯವಾದ ಖಾದ್ಯ. ಅದ್ಭುತ ರುಚಿ ಮತ್ತು ಆರೋಗ್ಯಕರ ಗುಣಗಳಿಂದಾಗಿ ಈ ಮೀನಿಗೆ ತುಂಬಾನೇ ಜನಪ್ರಿಯತೆ ಇದೆ. ಈ ಮೀನನ್ನು ಬೇಯಿಸುವಾಗ ಬರುವ ವಿಶಿಷ್ಟ ಸುವಾಸನೆ ಮೀನು ಪ್ರಿಯರನ್ನು ಆಕರ್ಷಿಸುತ್ತದೆ. ದುಬಾರಿ ಮೀನುಗಳಲ್ಲಿ ಇದು ಕೂಡ ಒಂದು. ಈ ಮೀನನ್ನು ಮೀನುಗಳ ರಾಣಿ ಎಂದು ಹೇಳುತ್ತಾರೆ. ಹಿಲ್ಸಾ ಮೀನುಗಳು ಸಾಮಾನ್ಯವಾಗಿ ಸಮುದ್ರದ ಉಪ್ಪು ನೀರಿನಲ್ಲಿ ವಾಸಿಸುತ್ತವೆ. ಆದರೆ ಸಂತಾನೋತ್ಪತ್ತಿಯ (ಮೊಟ್ಟೆಯಿಡಲು) ಸಮಯದಲ್ಲಿ ಇವು ನದಿಗಳ ಸಿಹಿ ನೀರಿಗೆ ವಲಸೆ ಬರುತ್ತವೆ.&lt;/p&gt;&lt;h2&gt;&lt;strong&gt;ಭಾರತದಲ್ಲಿ ಹಿಲ್ಸಾ ಮೀನು&lt;/strong&gt;&lt;/h2&gt;&lt;p&gt;ಹಿಂದೂಗಳ ಪವಿತ್ರ ನದಿಯಾದ ಉತ್ತರ ಪ್ರದೇಶದ ಗಂಗಾ ನದಿ (Ganga River) ಜಲಾನಯನ ಪ್ರದೇಶದಲ್ಲಿ ದಶಕಗಳ ಕಾಲ ಕಾಣೆಯಾಗಿದ್ದ ಅತ್ಯಂತ ರುಚಿಕರ ಹಾಗೂ ಅಪರೂಪದ 'ಹಿಲ್ಸಾ' (Hilsa Fish) ಮೀನುಗಳು ಮತ್ತೆ ಪ್ರತ್ಯಕ್ಷವಾಗಿವೆ ಎಂದು ಇತ್ತೀಚೆಗೆ ವರದಿಯಾಗಿದೆ. ಸುಮಾರು ಅರ್ಧ ಶತಮಾನದ (50 ವರ್ಷಗಳು) ಸುದೀರ್ಘ ಕಾಯುವಿಕೆಯ ನಂತರ ಉತ್ತರ ಪ್ರದೇಶದ ಗಾಜಿಪುರ (Ghazipur) ಬಳಿ ಗಂಗಾ ನದಿಯಲ್ಲಿ ಹಿಲ್ಸಾ ಮೀನುಗಳು ಪತ್ತೆಯಾಗಿದ್ದು, ವಿಜ್ಞಾನಿಗಳು ಹಾಗೂ ಸ್ಥಳೀಯ ಮೀನುಗಾರರಲ್ಲಿ ಹೊಸ ಆಶಾದಾಯಕ ವಾತಾವರಣ ಮೂಡಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/association-of-indian-fish-importers-requests-bangladesh-to-export-hilsa-fish-gkn/articleshow-r08019t"/>
        </item>
        <item>
            <title><![CDATA[ಸಮುದ್ರದ ನೀರು ಶುದ್ಧೀಕರಿಸಿ ಕುಡಿಯಲು ಮುಂಬೈ ಮಾಸ್ಟರ್ ಪ್ಲಾನ್: 4,007 ಕೋಟಿ ವೆಚ್ಚದ ಬೃಹತ್ ಯೋಜನೆಗೆ ಚಾಲನೆ!]]></title>
            <link>https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou</link>
            <guid isPermaLink="true">https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou</guid>
            <pubDate>Sat, 12 Sep 2026 20:44:34 +0530</pubDate>
            <description><![CDATA[ಮುಂಬೈನಲ್ಲಿನ ತೀವ್ರ ನೀರಿನ ಕೊರತೆ ನೀಗಿಸಲು, ಬೃಹನ್‌ಮುಂಬೈ ಮಹಾನಗರ ಪಾಲಿಕೆಯು ₹4,007 ಕೋಟಿ ವೆಚ್ಚದಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಬೃಹತ್ ಘಟಕವನ್ನು ಸ್ಥಾಪಿಸುತ್ತಿದೆ. ಮನೋರಿಯಲ್ಲಿ ನಿರ್ಮಾಣವಾಗಲಿರುವ ಈ ಘಟಕವು ಇಸ್ರೇಲ್ ತಂತ್ರಜ್ಞಾನ ಬಳಸಿ ದಿನಕ್ಕೆ 40 ಕೋಟಿ ಲೀಟರ್ ನೀರನ್ನು ಶುದ್ಧೀಕರಿಸುವ ಗುರಿ ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2n1pw6p5hp52yye4dsdf3,imgname-mumbai-seawater--1--1789225764572.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಇಸ್ರೇಲ್ ಹಾಗೂ ಗಲ್ಫ್ ರಾಷ್ಟ್ರಗಳ ಮಾದರಿಯಲ್ಲಿ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂಬೈ ಮಹಾನಗರ ಸಜ್ಜಾಗಿದೆ. ಚೆನ್ನೈ ನಂತರ ಈ ತಂತ್ರಜ್ಞಾನದ ಮೂಲಕ ಬೃಹತ್ ಪ್ರಮಾಣದಲ್ಲಿ ತಲೆದೂರಿದ ನೀರಿನ ಕೊರತೆ ನೀಗಿಸಿಕೊಳ್ಳಲಿರುವ ಭಾರತದ ಎರಡನೇ ನಗರವಾಗಿ ಮುಂಬೈ ಹೊರಹೊಮ್ಮಲಿದೆ. 2029ರ ವೇಳೆಗೆ ನಗರದಲ್ಲಿ ಎದುರಾಗಬಹುದಾದ ಭೀಕರ ನೀರಿನ ಅಭಾವವನ್ನು ಕಮ್ಮಿ ಮಾಡಲು ಬೃಹನ್&zwnj;ಮುಂಬೈ ಮಹಾನಗರ ಪಾಲಿಕೆ ₹4,007 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.&lt;/p&gt;&lt;h2&gt;15 ವರ್ಷಗಳ ಹಳೆಯ ಪ್ರಸ್ತಾಪಕ್ಕೆ ಜೀವ!&lt;/h2&gt;&lt;p&gt;2009ರಲ್ಲಿ ಮುಂಬೈ ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸಿದಾಗ ನಗರದ ಸರೋವರಗಳು ಬತ್ತಿ ಹೋಗಿದ್ದವು. ಅಂದಿನಿಂದ ಪ್ರತಿದಿನ ನೀರಿನ ಕೊರತೆ ಎದುರಿಸುತ್ತಿದ್ದ ಮುಂಬೈ ಮಹಾನಗರ ಪಾಲಿಕೆ, ಮಾನ್ಸೂನ್ ಮಳೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಮುದ್ರದ ನೀರನ್ನು ಶುದ್ಧೀಕರಿಸುವ ಪ್ರಸ್ತಾಪ ಇಟ್ಟಿತ್ತು. ತದನಂತರ ಸುಮಾರು 15 ವರ್ಷಗಳ ಕಾಲ ನಾನಾ ಹಂತಗಳಲ್ಲಿ ಚರ್ಚೆಯಲ್ಲಿದ್ದ ಈ ಯೋಜನೆಗೆ ಇದೀಗ ಅಂತಿಮ ರೂಪ ಸಿಕ್ಕಿದೆ. ವಾಯುವ್ಯ ಮುಂಬೈನ ಮಲಾಡ್ ಬಳಿಯ ಕರಾವಳಿ ಗ್ರಾಮವಾದ ಮನೋರಿಯಲ್ಲಿ 12 ಎಕರೆ ಜಾಗದಲ್ಲಿ ಈ ಬೃಹತ್ 'ಉಪ್ಪುನೀರು ಶುದ್ಧೀಕರಣ ಘಟಕ' (Desalination Plant) ನಿರ್ಮಾಣವಾಗಲಿದೆ.&lt;/p&gt;&lt;p&gt;ಮೊದಲ ಹಂತವಾಗಿ ನಿತ್ಯ 200 ಮಿಲಿಯನ್ ಲೀಟರ್ (20 ಕೋಟಿ ಲೀಟರ್) ನೀರು ಸಂಸ್ಕರಣೆ. ಎರಡನೇ ಹಂತವಾಗಿ ಯೋಜನೆ ಪೂರ್ಣಗೊಂಡಾಗ ನಿತ್ಯ 400 ಮಿಲಿಯನ್ ಲೀಟರ್ (40 ಕೋಟಿ ಲೀಟರ್) ನೀರು ಪೂರೈಕೆ ಆಗಲಿದೆ. 2030ರ ಮಧ್ಯಭಾಗದ ವೇಳೆಗೆ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ಇದು ಭಾರತದಲ್ಲೇ ಅತ್ಯಂತ ದೊಡ್ಡ ಉಪ್ಪುನೀರು ಶುದ್ಧೀಕರಣ ಘಟಕ ಎನಿಸಿಕೊಳ್ಳಲಿದೆ.&lt;/p&gt;&lt;h2&gt;ಜಾಗತಿಕ ಪಾಲುದಾರಿಕೆ ಹಾಗೂ ಪರಿಸರ ಕಾಳಜಿ&lt;/h2&gt;&lt;p&gt;ಈ ಬೃಹತ್ ಘಟಕದ ಉಪ್ಪುನೀರು ನಿರ್ಮೂಲನ ವ್ಯವಸ್ಥೆಯನ್ನು ಇಸ್ರೇಲ್ ಮೂಲದ ಪ್ರಸಿದ್ಧ ಐಡಿಇ ಟೆಕ್ನಾಲಜೀಸ್ ಸಂಸ್ಥೆಯು ನಿರ್ಮಿಸಲಿದ್ದು, ಮುಂದಿನ 20 ವರ್ಷಗಳ ಕಾಲ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ. ಮೂಲಸೌಕರ್ಯ ಹಾಗೂ ನಾಗರಿಕ ಕಾಮಗಾರಿಗಳನ್ನು ಹೈದರಾಬಾದ್ ಮೂಲದ ಜಿವಿಪಿಆರ್ ಎಂಜಿನಿಯರ್ಸ್ ಸಂಸ್ಥೆ ನಡೆಸಿಕೊಡಲಿದೆ.&lt;/p&gt;&lt;p&gt;ಈ ಯೋಜನೆಗೆ ರಾಜ್ಯ ಮತ್ತು ರಾಷ್ಟ್ರೀಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳಿಂದ (CRZ) ಕಠಿಣ ಷರತ್ತುಗಳೊಂದಿಗೆ ಅನುಮತಿ ದೊರೆತಿದೆ. ತ್ಯಾಜ್ಯ ಉಪ್ಪುನೀರನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಮರಳಿಸುವುದು. ಕಡಲಾಚೆಯ ಪೈಪ್&zwnj;ಲೈನ್&zwnj;ಗಳಿಗಾಗಿ ವಿಶೇಷ ಟನಲ್ ಬೋರಿಂಗ್ ಬಳಸುವುದು. ಪ್ಲಾಂಟ್&zwnj;ಗೆ ಅಗತ್ಯವಿರುವ ವಿದ್ಯುತ್&zwnj; ಶಕ್ತಿಯ ಒಂದು ಭಾಗವನ್ನು ನವೀಕರಿಸಬಹುದಾದ ಇಂಧನದಿಂದ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಮಳೆಗಾಲದ ತಕ್ಷಣವೇ ಕಾಮಗಾರಿ ಆರಂಭವಾಗಲಿದೆ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಅಭಿಜಿತ್ ಬಂಗಾರ್ ತಿಳಿಸಿದ್ದಾರೆ.&lt;/p&gt;&lt;h2&gt;ಸಮುದ್ರದ ನೀರು ಕುಡಿಯುವ ನೀರಾಗುವುದು ಹೇಗೆ?&lt;/h2&gt;&lt;p&gt;ಸಮುದ್ರದಿಂದ ಪೈಪ್&zwnj;ಲೈನ್ ಮೂಲಕ ಉಪ್ಪು ನೀರನ್ನು ಘಟಕಕ್ಕೆ ತರಲಾಗುತ್ತದೆ. ಬಳಿಕ ಮರಳು, ಪಾಚಿ ಹಾಗೂ ಕಸವನ್ನು ಮೊದಲ ಹಂತದಲ್ಲೇ ತಡೆಯಲಾಗುತ್ತದೆ. ಅತ್ಯಂತ ಹೆಚ್ಚಿನ ಒತ್ತಡದಲ್ಲಿ ನೀರನ್ನು ವಿಶೇಷ ಸೂಕ್ಷ್ಮ ಪೊರೆಗಳ (Semi-permeable Membranes) ಮೂಲಕ ತಳ್ಳಲಾಗುತ್ತದೆ. ಇವು ಕರಗಿದ ಲವಣಗಳು ಮತ್ತು ಕಲ್ಮಶಗಳನ್ನು ತಡೆದು, ಶುದ್ಧ ನೀರಿನ ಅಣುಗಳನ್ನು ಒಂದು ಕಡೆ ಶೇಖರಣೆ ಮಾಡುತ್ತದೆ. ಕೊನೆಯಲ್ಲಿ ನೀರನ್ನು ಕುಡಿಯಲು ಯೋಗ್ಯವಾಗಿಸಲು ಅಗತ್ಯವಾದ ಖನಿಜಗಳನ್ನು ಪುನಃ ಸೇರಿಸಲಾಗುತ್ತದೆ.&lt;/p&gt;&lt;h2&gt;ಮುಂಬೈಗೆ ಈ ಯೋಜನೆ ಎಷ್ಟು ಅಗತ್ಯ?&lt;/h2&gt;&lt;p&gt;ಮುಂಬೈ ನಗರಕ್ಕೆ ಏಳು ಪ್ರಮುಖ ಸರೋವರಗಳಿಂದ ನಿತ್ಯ ಸುಮಾರು 4,100 ಮಿಲಿಯನ್ ಲೀಟರ್ ನೀರು ಸರಬರಾಜಾಗುತ್ತದೆ. ಆದರೆ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ವಾಣಿಜ್ಯ ಅಗತ್ಯಗಳಿಗೆ ನಿತ್ಯ ಕನಿಷ್ಠ 4,664 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಅಂದರೆ ಪ್ರಸ್ತುತವೇ ನಿತ್ಯ 500 ರಿಂದ 600 ಮಿಲಿಯನ್ ಲೀಟರ್ ನೀರಿನ ಕೊರತೆ ಇದೆ.&lt;/p&gt;&lt;p&gt;ಮಾನ್ಸೂನ್ ಮಳೆ ವಿಳಂಬವಾದರೆ ಅಥವಾ ಕಡಿಮೆಯಾದರೆ ನಗರದಲ್ಲಿ ಹಾಹಾಕಾರ ಸೃಷ್ಟಿಯಾಗುತ್ತದೆ. ಜಲಾಶಯಗಳ ಮಟ್ಟ ಶೇ. 23.5ಕ್ಕೆ ಕುಸಿದಾಗ ನಗರದಾದ್ಯಂತ ಶೇ. 10ರಷ್ಟು ನೀರು ಕಡಿತ ಮಾಡುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಈ ನೂತನ 'ಸಮುದ್ರ ನೀರು ಶುದ್ಧೀಕರಣ ಘಟಕ'ವು ಮುಂಬೈ ನಗರಕ್ಕೆ ಜೀವಜಲದ ಹೊಸ ಜೀವ ತುಂಬಲಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/mumbai-seawater-desalination-plant-bmc-s-rs-4000-cr-drinking-water-project-gdp/articleshow-p8dn5ou"/>
        </item>
        <item>
            <title><![CDATA[ಗಂಡನ ಗೊರಕೆ ಹೆಂಡತಿಯ ಆರೋಗ್ಯಕ್ಕೆ ನಿಧಾನವಾಗಿ ಕಾಡುವ ಅಪಾಯವೇ? ಇಲ್ಲಿದೆ ಅಸಲಿ ಸತ್ಯ!]]></title>
            <link>https://kannada.asianetnews.com/health-life/partner-snoring-is-more-than-just-noise-know-the-health-risks-heres-what-you-need-to-know-gvd/articleshow-nsnl227</link>
            <guid isPermaLink="true">https://kannada.asianetnews.com/health-life/partner-snoring-is-more-than-just-noise-know-the-health-risks-heres-what-you-need-to-know-gvd/articleshow-nsnl227</guid>
            <pubDate>Sat, 12 Sep 2026 20:41:54 +0530</pubDate>
            <description><![CDATA[ಗಂಡನ ಗೊರಕೆ ಕೇವಲ ಕಿರಿಕಿರಿ ಉಂಟುಮಾಡುವ ಶಬ್ದವಲ್ಲ. ನಿರಂತರವಾಗಿ ಗೊರಕೆಯಿಂದ ಪಕ್ಕದಲ್ಲಿ ಮಲಗುವವರ ನಿದ್ರೆ ಕದಡಿದರೆ, ಬೆಳಗ್ಗೆ ಆಯಾಸ, ತಲೆನೋವು, ಗಮನ ಕೇಂದ್ರೀಕರಿಸಲು ಕಷ್ಟ, ಕಿರಿಕಿರಿ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2rxetwpcknv1hybekkjgw,imgname-nknk-1789225891289.png" type="image/jpeg" height="390" width="690"/>
            <content:encoded><![CDATA[&lt;p&gt;ಸಂಗಾತಿಯ ಜೋರಾದ ಗೊರಕೆ ಶಬ್ದದಿಂದ ರಾತ್ರಿ ಪದೇಪದೇ ನಿದ್ರೆ ಕದಡುವುದು, ಪಕ್ಕದಲ್ಲಿ ಮಲಗುವವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ಬೆಳಗ್ಗೆ ತೀವ್ರ ಆಯಾಸ, ಗಮನ ಕೇಂದ್ರೀಕರಿಸಲು ಕಷ್ಟ, ಮಾನಸಿಕ ಒತ್ತಡ ಉಂಟಾಗುವುದರ ಜೊತೆಗೆ ದಂಪತಿಯ ಸಂಬಂಧದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಹಾಗೂ ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಇಬ್ಬರ ಆರೋಗ್ಯ ಮತ್ತು ನೆಮ್ಮದಿಯ ದೃಷ್ಟಿಯಿಂದಲೂ ಮುಖ್ಯವಾಗಿದೆ.&lt;/p&gt;&lt;p&gt;ರಾತ್ರಿ ಸಂಗಾತಿ ಮಾಡುವ ಜೋರಾದ ಗೊರಕೆ ಶಬ್ದದಿಂದ ಪಕ್ಕದಲ್ಲಿ ಮಲಗಿರುವವರ ಆಳವಾದ ನಿದ್ರೆ ಪದೇಪದೇ ಭಂಗವಾಗುತ್ತದೆ. ಬಹುತೇಕ ಮನೆಗಳಲ್ಲಿ ಇದನ್ನು ಸಾಮಾನ್ಯ ಸಂಗತಿ ಎಂದು ನಿರ್ಲಕ್ಷಿಸಲಾಗುತ್ತದೆ. ಆದರೆ ನಿರಂತರವಾಗಿ ನಿದ್ರೆ ಕದಡುವುದರಿಂದ ಪಕ್ಕದಲ್ಲಿ ಮಲಗುವವರ ಆರೋಗ್ಯವೂ ನಿಧಾನವಾಗಿ ಹದಗೆಡಬಹುದು. ಸಾಕಷ್ಟು ನಿದ್ರೆ ಸಿಗದ ಕಾರಣ ಬೆಳಗ್ಗೆ ಆಯಾಸ, ಗಮನ ಕೇಂದ್ರೀಕರಿಸಲು ಕಷ್ಟ, ತಲೆನೋವು ಮತ್ತು ಕಿರಿಕಿರಿ ಉಂಟಾಗಬಹುದು. ನಿದ್ರೆಯ ಕೊರತೆ ಮೆದುಳಿನ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿ, ಮಾನಸಿಕ ಒತ್ತಡ ಮತ್ತು ಮರೆವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.&lt;/p&gt;&lt;p&gt;ಇದರ ಜೊತೆಗೆ ದಂಪತಿಯ ನಡುವೆ ಅನಗತ್ಯ ಮನಸ್ತಾಪ ಹಾಗೂ ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯೂ ಇದೆ. ದೇಹದ ತೂಕವನ್ನು ಕಡಿಮೆ ಮಾಡುವುದು ಮತ್ತು ಮಲಗುವ ಭಂಗಿಯನ್ನು ಬದಲಾಯಿಸುವುದು ಸೇರಿದಂತೆ ಕೆಲವು ಸರಳ ಜೀವನಶೈಲಿ ಬದಲಾವಣೆಗಳು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಕೆಲವೊಮ್ಮೆ ಗೊರಕೆ &lsquo;ಸ್ಲೀಪ್ ಅಪ್ನಿಯಾ&rsquo;ದಂತಹ ಉಸಿರಾಟದ ಸಮಸ್ಯೆಯ ಲಕ್ಷಣವಾಗಿರಬಹುದು. ಹೀಗಾಗಿ ಅಗತ್ಯವಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.&lt;/p&gt;&lt;p&gt;&lt;strong&gt;ಗೊರಕೆ ಕೇವಲ ಶಬ್ದವಲ್ಲ&lt;/strong&gt;&lt;/p&gt;&lt;p&gt;ರಾತ್ರಿ ನಿಮ್ಮ ಪಕ್ಕದಲ್ಲಿ ಮಲಗುವ ಸಂಗಾತಿಯ ಜೋರಾದ ಗೊರಕೆಯಿಂದ ಪದೇಪದೇ ನಿದ್ದೆಯಿಂದ ಎಚ್ಚರವಾಗುತ್ತಿದೆಯೇ? ಮರುದಿನ ಬೆಳಗ್ಗೆ ಎದ್ದಾಗ ತಲೆನೋವು, ಗಮನ ಕೇಂದ್ರೀಕರಿಸಲು ಕಷ್ಟ ಅಥವಾ ತೀವ್ರ ಆಯಾಸ ಅನುಭವಿಸುತ್ತೀರಾ?&lt;/p&gt;&lt;p&gt;ಬಹುತೇಕ ಮನೆಗಳಲ್ಲಿ ಗೊರಕೆಯನ್ನು ಸಾಮಾನ್ಯ ಅಥವಾ ತಮಾಷೆಯ ಸಂಗತಿ ಎಂದು ಪರಿಗಣಿಸಲಾಗುತ್ತದೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಗೊರಕೆ ಹೊಡೆಯುವ ವ್ಯಕ್ತಿಗಿಂತ ಅವರ ಪಕ್ಕದಲ್ಲಿ ಮಲಗುವ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ಇದರ ಪರಿಣಾಮ ಗಂಭೀರವಾಗಿರಬಹುದು. ಉಸಿರಾಟದ ಮಾರ್ಗದಲ್ಲಿರುವ ಮೃದು ಅಂಗಾಂಶಗಳು ಕಂಪಿಸುವುದರಿಂದ ಗೊರಕೆ ಶಬ್ದ ಉಂಟಾಗುತ್ತದೆ. ಈ ಶಬ್ದ ಪಕ್ಕದಲ್ಲಿರುವವರ ಆಳವಾದ ನಿದ್ರೆಗೆ ಅಡ್ಡಿಪಡಿಸುತ್ತದೆ.&lt;/p&gt;&lt;p&gt;&lt;strong&gt;ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ&lt;/strong&gt;&lt;/p&gt;&lt;p&gt;ನಿರಂತರವಾಗಿ ನಿದ್ರೆ ಭಂಗವಾಗುವುದರಿಂದ ದೇಹದ ಸಹಜ ನಿದ್ರಾ ಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಸ್ಮರಣೆಯನ್ನು ಸಂಗ್ರಹಿಸುವ ಪ್ರಕ್ರಿಯೆಯೂ ಅಸ್ತವ್ಯಸ್ತವಾಗಿ ಮರೆವಿನ ಸಮಸ್ಯೆ ಉಂಟಾಗಬಹುದು. ಜೊತೆಗೆ ಮಾನಸಿಕ ಒತ್ತಡ, ಕಿರಿಕಿರಿ ಮತ್ತು ದೇಹದ ಹಾರ್ಮೋನ್&zwnj;ಗಳ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯಿದೆ.&lt;/p&gt;&lt;p&gt;ರಾತ್ರಿ ನಿದ್ರೆ ಸರಿಯಾಗಿ ಆಗದ ವ್ಯಕ್ತಿಗಳು ಮದ್ಯ ಸೇವಿಸಿದ ಮರುದಿನ ಬೆಳಗ್ಗೆ ಅನುಭವಿಸುವ &lsquo;ಹ್ಯಾಂಗೋವರ್&zwnj;&rsquo;ನಂತಹ ಒಂದು ರೀತಿಯ ಮಂಕು ಮತ್ತು ಅಸ್ವಸ್ಥತೆಯನ್ನು ಅನುಭವಿಸಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ. ಇದು ದಂಪತಿಯ ನಡುವೆ ಅನಗತ್ಯ ಕಿರಿಕಿರಿ ಮತ್ತು ಮನಸ್ತಾಪಕ್ಕೆ ಕಾರಣವಾಗಿ, ಸಂಬಂಧದ ಮೇಲೂ ಪರಿಣಾಮ ಬೀರಬಹುದು.&lt;/p&gt;&lt;h2&gt;&lt;strong&gt;ಪರಿಹಾರವೇನು? ವೈದ್ಯರ ಸಲಹೆ ಯಾವಾಗ ಅಗತ್ಯ?&lt;/strong&gt;&lt;/h2&gt;&lt;p&gt;ಗೊರಕೆ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ ಪರಿಹರಿಸುವುದು ಬಹಳ ಮುಖ್ಯ. ದೇಹದ ತೂಕವನ್ನು ಕಡಿಮೆ ಮಾಡುವುದು, ಮಲಗುವ ಭಂಗಿಯನ್ನು ಬದಲಾಯಿಸುವುದು ಹಾಗೂ ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸುವಂತಹ ಜೀವನಶೈಲಿ ಬದಲಾವಣೆಗಳು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಗೊರಕೆ ಸ್ಲೀಪ್ ಅಪ್ನಿಯಾದಂತಹ ಗಂಭೀರ ಉಸಿರಾಟದ ಸಮಸ್ಯೆಯ ಲಕ್ಷಣವಾಗಿರಬಹುದು.&lt;/p&gt;&lt;p&gt;ಹಾಗಾಗಿ ಗೊರಕೆ ನಿರಂತರವಾಗಿದ್ದರೆ ಅಥವಾ ನಿದ್ರೆಯ ವೇಳೆ ಉಸಿರಾಟಕ್ಕೆ ತೊಂದರೆ, ಉಸಿರುಗಟ್ಟುವಿಕೆ ಅಥವಾ ಪದೇಪದೇ ಎಚ್ಚರಗೊಳ್ಳುವ ಸಮಸ್ಯೆ ಕಂಡುಬಂದರೆ ಕಿವಿ, ಮೂಗು, ಗಂಟಲು (ENT) ತಜ್ಞರು ಅಥವಾ ನಿದ್ರಾ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಇಂತಹ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಪರಿಹಾರ ಕಂಡುಕೊಂಡರೆ ಸಂಗಾತಿಯ ನಿದ್ರೆಯ ಗುಣಮಟ್ಟವನ್ನು ಮಾತ್ರವಲ್ಲದೆ, ಇಬ್ಬರ ಒಟ್ಟಾರೆ ಆರೋಗ್ಯ ಮತ್ತು ದಾಂಪತ್ಯ ಜೀವನದ ನೆಮ್ಮದಿಯನ್ನೂ ಸುಧಾರಿಸಬಹುದು.&lt;/p&gt;&lt;p&gt;&lt;strong&gt;ಹಕ್ಕು ನಿರಾಕರಣೆ: &lt;/strong&gt;ಈ ತಾಣದಲ್ಲಿ ಪ್ರಕಟವಾಗುವ ಜೀವನಶೈಲಿ, ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದ ಮಾಹಿತಿಗಳು ಸಾಮಾನ್ಯ ಜಾಗೃತಿಗಾಗಿ ಮಾತ್ರ. ಇವು ವೈದ್ಯಕೀಯ ಸಲಹೆಯಲ್ಲ. ಈ ಮಾಹಿತಿಯನ್ನು ಅನುಸರಿಸುವ ಮೊದಲು ಸೂಕ್ತ ತಜ್ಞರು ಅಥವಾ ವೈದ್ಯರ ಸಲಹೆ ಪಡೆಯುವುದು ಅಗತ್ಯ.&lt;/p&gt;]]></content:encoded>
            <category><![CDATA[health-life]]></category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/partner-snoring-is-more-than-just-noise-know-the-health-risks-heres-what-you-need-to-know-gvd/articleshow-nsnl227"/>
        </item>
        <item>
            <title><![CDATA[Belagavi: ಕಾರ್ ಓಡಿಸಿದ ವ್ಯಕ್ತಿಗೆ ಹೆಲ್ಮೆಟ್ ಫೈನ್! ಪೊಲೀಸರ ಯಡವಟ್ಟಿಗೆ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ಮಾಲೀಕ!]]></title>
            <link>https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</link>
            <guid isPermaLink="true">https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041</guid>
            <pubDate>Sat, 12 Sep 2026 20:37:41 +0530</pubDate>
            <description><![CDATA[ಬೆಳಗಾವಿಯ ಅಥಣಿಯಲ್ಲಿ, ಎಐ ಕ್ಯಾಮೆರಾದ ತಾಂತ್ರಿಕ ದೋಷದಿಂದಾಗಿ ಕಾರು ಚಾಲಕನಿಗೆ 'ಹೆಲ್ಮೆಟ್ ಇಲ್ಲ' ಎಂದು ದಂಡ ವಿಧಿಸಲಾಗಿದೆ. ಈ ವಿಚಿತ್ರ ದಂಡವನ್ನು ವಿರೋಧಿಸಿ, ಮಾಲೀಕರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡಿ ಪ್ರತಿಭಟಿಸಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b2fgtjft4x5ff76fp98nqv,imgname-belagavi-ai-camara-1789225583442.jpg" type="image/jpeg" height="390" width="690"/>
            <content:encoded><![CDATA[&lt;p&gt;ತಂತ್ರಜ್ಞಾನ ಬೆಳೆದಂತೆ ಕೆಲಸಗಳು ಸುಲಭವಾಗುತ್ತವೆ ಎಂಬ ನಂಬಿಕೆಯಿದೆ. ಆದರೆ ಅದೇ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡದಿದ್ದರೆ ಎಂಥಾ ಅವಾಂತರ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಟ್ರಾಫಿಕ್ ನಿಯಮ ಉಲ್ಲಂಘಿಸುವವರನ್ನು ಹಿಡಿಯಲು ಪೊಲೀಸರು ಅಳವಡಿಸಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಕ್ಯಾಮೆರಾವೊಂದು ಭಾರಿ ಎಡವಟ್ಟು ಮಾಡಿದ್ದು, ಕಾರ್ ಮಾಲೀಕನಿಗೆ &quot;ನೋ ಹೆಲ್ಮೆಟ್&quot; ದಂಡ ವಿಧಿಸಿ ಶಾಕ್ ನೀಡಿದೆ!&lt;/p&gt;&lt;h2&gt;&lt;strong&gt;ಅಷ್ಟಕ್ಕೂ ನಡೆದಿದ್ದೇನು?&lt;/strong&gt;&lt;/h2&gt;&lt;p&gt;ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿಯಾದ ಸುಭಾಷ್ ಬೋಜನೆ ಎಂಬುವವರು ತಮ್ಮ ಕಾರಿನಲ್ಲಿ ಪಟ್ಟಣದ ಪ್ರಮುಖ ವೃತ್ತವಾದ ಅಂಬೇಡ್ಕರ್ ಸರ್ಕಲ್ ಮೂಲಕ ಪ್ರಯಾಣಿಸುತ್ತಿದ್ದರು. ಕಾರು ಚಾಲನೆ ಮಾಡುವಾಗ ಅವರು ಸೀಟ್ ಬೆಲ್ಟ್ ಸೇರಿದಂತೆ ಅಗತ್ಯ ನಿಯಮಗಳನ್ನು ಪಾಲಿಸುತ್ತಿದ್ದರೂ, ಅಲ್ಲಿ ಅಳವಡಿಸಲಾಗಿದ್ದ ಎಐ ಸಂಚಾರ ಕ್ಯಾಮೆರಾ ಕಾರನ್ನು ಗುರುತಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು ದಾಖಲಿಸಿಕೊಂಡಿದೆ.&lt;/p&gt;&lt;h3&gt;&lt;strong&gt;ಬಂತು 500 ರೂ., ದಂಡ!&lt;/strong&gt;&lt;/h3&gt;&lt;p&gt;ಸ್ವಲ್ಪ ಸಮಯದ ನಂತರ ಸುಭಾಷ್ ಅವರ ವಾಟ್ಸಾಪ್&zwnj;ಗೆ ಬೆಳಗಾವಿ ಜಿಲ್ಲಾ ಸಂಚಾರ ಪೊಲೀಸರಿಂದ ಸಂದೇಶವೊಂದು ಬಂದಿದೆ. ಅದನ್ನು ತೆರೆದು ನೋಡಿದಾಗ ಸುಭಾಷ್ ಸಂಪೂರ್ಣವಾಗಿ ತಬ್ಬಿಬ್ಬಾಗಿದ್ದಾರೆ. ಏಕೆಂದರೆ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರಿಗೆ &quot;ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕಾಗಿ&quot; 500 ರೂಪಾಯಿ ದಂಡ ವಿಧಿಸಲಾಗಿತ್ತು!&lt;/p&gt;&lt;h3&gt;&lt;strong&gt;ಕಾರ್ ಮಾಲೀಕನ ವಿಭಿನ್ನ ಪ್ರತಿಭಟನೆ!&lt;/strong&gt;&lt;/h3&gt;&lt;p&gt;ಕಾರಿಗೆ ಹೆಲ್ಮೆಟ್ ದಂಡ ಬಿದ್ದಿದ್ದನ್ನು ನೋಡಿ ಮೊದಲಿಗೆ ದಿಗ್ಭ್ರಮೆಗೊಂಡ ಸುಭಾಷ್, ನಂತರ ಈ ಎಐ ತಂತ್ರಜ್ಞಾನದ ಅವಾಂತರವನ್ನು ಸಾರ್ವಜನಿಕರಿಗೆ ತೋರಿಸಲು ವಿಭಿನ್ನ ಹಾದಿ ತುಳಿದರು. ಸ್ವತಃ ತಾವೇ ತಲೆಗೆ ಹೆಲ್ಮೆಟ್ ಧರಿಸಿಕೊಂಡು, ಕಾರಿನಲ್ಲಿ ಕುಳಿತು ಚಾಲನೆ ಮಾಡುತ್ತಾ ವಿಡಿಯೋ ಒಂದನ್ನು ಚಿತ್ರೀಕರಿಸಿದ್ದಾರೆ. ಟ್ರಾಫಿಕ್ ಪೊಲೀಸರ ಎಐ ಕ್ಯಾಮೆರಾ ಪ್ರಕಾರ ನಾವು ಕಾರು ಓಡಿಸಬೇಕಾದರೂ ಹೆಲ್ಮೆಟ್ ಧರಿಸಬೇಕು ಅನಿಸುತ್ತೆ! ಹೀಗಾಗಿ ಫೈನ್&zwnj;ನಿಂದ ತಪ್ಪಿಸಿಕೊಳ್ಳಲು ನಾನು ಕಾರಿನಲ್ಲೇ ಹೆಲ್ಮೆಟ್ ಹಾಕಿಕೊಂಡು ಓಡಾಡುತ್ತಿದ್ದೇನೆ&quot; ಎಂದು ಅವರು ವಿಡಿಯೋದಲ್ಲಿ ಹಾಸ್ಯಸ್ಪಂದನವಾಗಿ ಪೊಲೀಸರ ಎಡವಟ್ಟನ್ನು ಬಿಚ್ಚಿಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!&lt;/strong&gt;&lt;/h3&gt;&lt;p&gt;ಸುಭಾಷ್ ಬೋಜನೆ ಅವರು ಕಾರಿನೊಳಗೆ ಹೆಲ್ಮೆಟ್ ಧರಿಸಿ ಚಾಲನೆ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಟ್ರಾಫಿಕ್ ಪೊಲೀಸರು ಮತ್ತು ಎಐ ಕ್ಯಾಮೆರಾದ ತಾಂತ್ರಿಕ ಲೋಪದೋಷವನ್ನು ಕಂಡು ತೀವ್ರವಾಗಿ ಕಾಲೆಳೆಯುತ್ತಿದ್ದಾರೆ. &quot;ಮುಂದಿನ ದಿನಗಳಲ್ಲಿ ಸೈಕಲ್&zwnj;ಗೂ ಹೆಲ್ಮೆಟ್ ಫೈನ್ ಹಾಕ್ತಾರೇನೋ!&quot; ಎಂದು ನೆಟ್ಟಿಗರು ತಮಾಷೆಯ ಕಮೆಂಟ್&zwnj;ಗಳನ್ನು ಮಾಡುತ್ತಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯು ಸಂಚಾರ ವಿಭಾಗದ ಎಐ ವ್ಯವಸ್ಥೆಯಲ್ಲಿರುವ ತಾಂತ್ರಿಕ ದೋಷಗಳನ್ನು ಎತ್ತಿ ತೋರಿಸಿದೆ. ತಂತ್ರಜ್ಞಾನದ ಆಧಾರದ ಮೇಲೆ ದಂಡ ವಿಧಿಸುವಾಗ ಪೊಲೀಸರು ಒಮ್ಮೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/athani-ai-camera-blunder-car-owner-gets-helmet-fine-rs-500-belagavi-traffic-police-viral-video-bmk/articleshow-ll3b041"/>
        </item>
        <item>
            <title><![CDATA[ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ದಿನ ಬಂತು 6.93 ಕೋಟಿ ರೂ, ತಿರುಮಲದಲ್ಲಿ ದಾಖಲೆ]]></title>
            <link>https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t</link>
            <guid isPermaLink="true">https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t</guid>
            <pubDate>Sat, 12 Sep 2026 20:32:52 +0530</pubDate>
            <description><![CDATA[ಗಣೇಶ ಹಬ್ಬದ ಸಾಲು ಸಾಲು ರಜೆ ಆಗಮಿಸುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರ ದಂಡು ಹೆಚ್ಚಿದೆ. ಇದೇ ವೇಳೆ ತಿರುಮಲದಲ್ಲಿ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂಪಾಯಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxg4v7pk9kkb599bd3cpp056,imgname-new-project--34--1784027127506.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಿರುಪತಿ (ಸೆ.12)&lt;/strong&gt; ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಮಂದಿ ಆಗಮಿಸುತ್ತಾರೆ. ವಿಶೇಷ ದಿನ, ರಜಾ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದೀಗ ಒಂದೇ ದಿನ ತಿರುಪತಿ ಹುಂಡಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಒಂದೇ ದಿನ 6.93 ಕೋಟಿ ರೂ ಕಾಣಿಕೆ ಸಂಗ್ರವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಗುರುವಾರ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಬರೋಬ್ಬರಿ 6.93 ಕೋಟಿ ರೂಪಾಯಿ ಕಾಣಿಕೆ ಸಂಗ್ರವಾಗಿದೆ. ಇದು ತಿರುಮಲ ತಿರುಪತಿ ದೇವಸ್ಥಾನ ಇತಿಹಾಸದಲ್ಲೇ 2ನೇ ಗರಿಷ್ಠ ಸಂಗ್ರಹ ಅನ್ನೋ ದಾಖಲೆ ಬರೆದಿದೆ.&lt;/p&gt;&lt;h2&gt;ಒಂದೇ ದಿನ ಹಲವು ದಾಖಲೆ&lt;/h2&gt;&lt;p&gt;ವಿಶೇಷ ದಿನಗಳ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ತಿರುಪತಿ ತಿರುಮಲದ ಇತಿಹಾಸದಲ್ಲಿ ಒಂದೇ ದಿನ 7.68 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗುವ ಮೂಲಕ ಅತ್ಯಂತ ಗರಿಷ್ಠ ದಾಖಲೆ ಬರೆದಿದೆ. ಇದೀಗ 6.93 ಕೋಟಿ ರೂಪಾಯಿ ಮೂಲಕ 2ನೇ ಗರಿಷ್ಠ ದಾಖಲೆ ಕಾಣಿಕೆ ಸಂಗ್ರಹ ನಿರ್ಮಾಣವಾಗಿದೆ. 7ನೇ ಬಾರಿ ಒಂದೇ ದಿನ 6 ಕೋಟಿ ರೂಪಾಯಿಗಿಂತ ಹೆಚ್ಚು ಕಾಣಿಕೆ ಸಂಗ್ರಹಗಿದೆ. ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಭಕ್ತ ಭೇಟಿ ಹೆಚ್ಚಿದ್ದು ಇದಕ್ಕೆ ಕಾರಣ.&lt;/p&gt;&lt;h2&gt;ತಿರುಪತಿಯಲ್ಲಿ ಕಾಣಿಕೆ ಸಂಗ್ರಹ&lt;/h2&gt;&lt;p&gt;ಈ ಹಿಂದೆ 2023ರ ಜ.2ರ ವೈಕುಂಠ ಏಕಾದಶಿಯಂದು ಸಂಗ್ರಹವಾಗಿದ್ದ 7.68 ಕೋಟಿ ರು. ಈವರೆಗಿನ ಗರಿಷ್ಠವಾಗಿದೆ. ಇದನ್ನು ಹೊರತುಪಡಿಸಿ 2018ರ ಏ.1ರಂದು 6.45 ಕೋಟಿ ರು., 2022ರ ಅ.23ರಂದು 6.31 ಕೋಟಿ ರು., 2018ರ ಜು.26ರಂದು 6.28 ಕೋಟಿ ರು., 2022ರ ಜು.4ರಂದು 6.18 ಕೋಟಿ ರು., 2026ರ ಆ.18ರಂದು 6.12 ಕೋಟಿ ರು. ಸಂಗ್ರಹವಾಗಿತ್ತು.&lt;/p&gt;&lt;h2&gt;ತಿರುಪತಿ ಭಕ್ತರಿಗೆ ವಿಮೆ&lt;/h2&gt;&lt;p&gt;ಇತ್ತೀಚೆಗೆ ತಿರುಪತಿ ತಿರುಮಲ ಭಕ್ತರಿಗೆ ನೀಡುವ ವಿಮೆ ಸೌಲಭ್ಯವನ್ನು ವಿಸ್ತರಿಲಾಗಿದೆ. 3 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ತಿರುಪತಿ ತಿರುಮಲ ದರ್ಶನಕ್ಕೆ ಆಗಮಿಸುವ ಭಕ್ತರು ಆಕಸ್ಮಿಕವಾಗಿ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತಿದೆ. ಇನ್ನು ತಿರುಪತಿ ಭಕ್ತರು ಸಹಜ ಸಾವು ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ವಿಮೆ ಸೌಲಭ್ಯ ನೀಡಲಾಗುತ್ತದೆ. ಅಪಘಾತ ವಿಮೆ ಜೊತೆ ಸಹಜ ಸಾವಿಗೂ ವಿಮೆ ಕಲ್ಪಿಸುವ ಮೂಲಕ ತಿರುಪತಿ ಭಕ್ತರಿಗೆ ಸಂಪೂರ್ಣ ವಿಮಾ ಕವಚ ನೀಡಲು ಮುಂದಾಗಿದೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/festivals/tirupati-tirumala-create-record-temple-hundi-receives-record-rs-6-93-crore-in-a-single-day/articleshow-c0gyv8t"/>
        </item>
        <item>
            <title><![CDATA[ಮದುವೆ ನಂತರ ಅಫೇರ್! ಈ ದೇಶಗಳಲ್ಲೇ ಅತಿ ಹೆಚ್ಚು, ಇಲ್ಲಿದೆ ಟಾಪ್ 10 ಪಟ್ಟಿ!]]></title>
            <link>https://kannada.asianetnews.com/webstories/relationship/top-10-countries-with-highest-rates-of-infidelity-after-marriage-kvn-14rvlg8</link>
            <guid isPermaLink="true">https://kannada.asianetnews.com/webstories/relationship/top-10-countries-with-highest-rates-of-infidelity-after-marriage-kvn-14rvlg8</guid>
            <pubDate>Sat, 12 Sep 2026 20:18:02 +0530</pubDate>
            <description><![CDATA[ಮದುವೆಯಾದ ಮೇಲೆ ಬೇರೆಯವರ ಜೊತೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಅಂತ ಎಲ್ಲರಿಗೂ ಗೊತ್ತು. ಆದ್ರೂ ಆ ತಪ್ಪು ಮಾಡ್ತಾರೆ. ಡ್ಯುರೆಕ್ಸ್ ಹಾಗೂ ಕೆಲವು ಡೇಟಿಂಗ್ ಸೈಟ್‌ಗಳ ಮಾಹಿತಿಯ ಪ್ರಕಾರ, ಜಗತ್ತಿನ ಯಾವ ದೇಶಗಳಲ್ಲಿ ಜನರು ಇಂತಹ ಸಂಬಂಧಗಳನ್ನು ಹೆಚ್ಚಾಗಿ ಹೊಂದಿದ್ದಾರೆ ಅನ್ನೋದನ್ನು ಈಗ ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01jpjg5tn72q2mpnmtfsh4mra4,imgname-couples-picss-1742230186663.jpg" type="image/jpeg" height="390" width="690"/>
            <category><![CDATA[relationship]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/relationship/top-10-countries-with-highest-rates-of-infidelity-after-marriage-kvn-14rvlg8"/>
        </item>
        <item>
            <title><![CDATA[Cricket: ಪಾಸ್‌ಪೋರ್ಟ್ ಇಲ್ಲ, ವೀಸಾನೂ ಇಲ್ಲ! ತರಕಾರಿ ಮಾರುತ್ತಿದ್ದ ಹುಡುಗನಿಗೆ ಅವಕಾಶ ಕೊಟ್ಟ ಪಾಕ್‌! ಇಂಗ್ಲೆಂಡ್‌ನಲ್ಲಿ ದಾಖಲೆ ಉಡೀಸ್!]]></title>
            <link>https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u</link>
            <guid isPermaLink="true">https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u</guid>
            <pubDate>Sat, 12 Sep 2026 20:01:18 +0530</pubDate>
            <description><![CDATA[ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ರಜೌಲ್ಲಾ ಮಶ್ವಾನಿ, ರಾತ್ರೋರಾತ್ರಿ ಇಂಗ್ಲೆಂಡ್‌ಗೆ ಹಾರಿ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ 9 ಸಿಕ್ಸರ್‌ಗಳನ್ನು ಸಿಡಿಸಿ, 4 ವಿಕೆಟ್ ಪಡೆದು ಇಡೀ ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b0ehz4h20zdma64bqypwkw,imgname-pakistan-player-1789223454692.jpg" type="image/jpeg" height="390" width="690"/>
            <content:encoded><![CDATA[&lt;p&gt;ಬರ್ಮಿಂಗ್ಹ್ಯಾಮ್&zwnj;ನ ಎಡ್ಜ್&zwnj;ಬಾಸ್ಟನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಮೂರನೇ ಟೆಸ್ಟ್ ಪಂದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್&zwnj;ನಲ್ಲಿ ಇಂಗ್ಲೆಂಡ್ ವೇಗಿ ಓಲ್ಲಿ ರಾಬಿನ್ಸನ್ ಅವರ ಮಾರಕ ಸ್ವಿಂಗ್ ಬೌಲಿಂಗ್&zwnj;ಗೆ ತಲೆಯಾಗಿದ್ದ ಪಾಕಿಸ್ತಾನ, ಕೇವಲ 133 ರನ್&zwnj;ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ, ಸ್ಟಾರ್ ಬ್ಯಾಟರ್ ಜೋ ರೂಟ್ ಅವರ ಮನಮೋಹಕ शतಕದ (124 ರನ್) ನೆರವಿನಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್&zwnj;ನಲ್ಲಿ 453 ರನ್&zwnj;ಗಳ ಬೃಹತ್ ಮೊತ್ತ ಪೇರಿಸಿತ್ತು.&lt;/p&gt;&lt;h2&gt;&lt;strong&gt;21ರ ಯುವಕನಿಗೆ ಅವಕಾಶ!&lt;/strong&gt;&lt;/h2&gt;&lt;p&gt;ಬೃಹತ್ ಹಿನ್ನಡೆಯಿಂದ ಮುಜುಗರಕ್ಕೊಳಗಾಗಿದ್ದ ಪಾಕಿಸ್ತಾನ ತಂಡಕ್ಕೆ 21 ವರ್ಷದ ಯುವ ಆಲ್&zwnj;ರೌಂಡರ್ ರಜೌಲ್ಲಾ ಮಶ್ವಾನಿ ಹೊಸ ಜೀವ ನೀಡಿದ್ದಾರೆ. ಇಂಗ್ಲೆಂಡ್ ಬೌಲರ್&zwnj;ಗಳ ಮೇಲೆ ಸಿಕ್ಸರ್&zwnj;ಗಳ ಸುರಿಮಳೆಗೈದ ಅವರು ಕ್ರೀಡಾಂಗಣದ ಹೊರಗಿದ್ದ ಹೋಟೆಲ್&zwnj;ನ ಗಾಜನ್ನೇ ಒಡೆದು ಜಗತ್ತನ್ನೇ ಮೂಕವಿಸ್ಮಿತರನ್ನಾಗಿ ಮಾಡಿದ್ದಾರೆ!&lt;/p&gt;&lt;h3&gt;&lt;strong&gt;ಬಾಡಿಗೆ ಅಂಗಡಿಯಿಂದ ಒಂದೇ ರಾತ್ರಿಯಲ್ಲಿ ಇಂಗ್ಲೆಂಡ್&zwnj;ಗೆ ಬಡ್ತಿ!&lt;/strong&gt;&lt;/h3&gt;&lt;p&gt;ರಜೌಲ್ಲಾ ಮಶ್ವಾನಿ ಅವರ ಈ ಪಯಣ ಯಾವುದೇ ಸಿನಿಮಾ ಕಥೆಗೂ ಕಡಿಮೆಯಿಲ್ಲ. ರಜೌಲ್ಲಾ ಈ ಮುನ್ನ ಯಾವುದೇ ಪ್ರಮುಖ ಲೀಗ್&zwnj;ಗಳಲ್ಲಿ ಆಡಿದ ಅನುಭವ ಹೊಂದಿರಲಿಲ್ಲ. ವಿದೇಶಕ್ಕೆ ಪ್ರಯಾಣಿಸಲು ಅವರ ಬಳಿ ಹಣವೂ ಇರಲಿಲ್ಲ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಪರ್ವತ ಪ್ರದೇಶದ ಬಾಡಿಗೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಹುಡುಗನ ಬಳಿ ಪಾಸ್&zwnj;ಪೋರ್ಟ್ ಕೂಡ ಇರಲಿಲ್ಲ.&lt;/p&gt;&lt;h3&gt;&lt;strong&gt;ರಾತ್ರೋರಾತ್ರಿ ವಿಮಾನಯಾಣ!&lt;/strong&gt;&lt;/h3&gt;&lt;p&gt;ತಂಡದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧಿಕಾರಿಗಳು, ರಜೌಲ್ಲಾನನ್ನು ಹುಡುಕಿ ಲಾಹೋರ್&zwnj;ಗೆ ಕರೆತಂದರು. ಕೇವಲ ಒಂದೇ ದಿನದಲ್ಲಿ ಅವರ ಪಾಸ್&zwnj;ಪೋರ್ಟ್ ಹಾಗೂ ವೀಸಾ ಕ್ಲಿಯರೆನ್ಸ್ ಮುಗಿಸಿ, ರಾತ್ರೋರಾತ್ರಿ ವಿಮಾನವೇರಿಸಿ ನೇರವಾಗಿ ಇಂಗ್ಲೆಂಡ್&zwnj;ಗೆ ಕಳುಹಿಸಿಕೊಟ್ಟಿದ್ದರು!&lt;/p&gt;&lt;h3&gt;&lt;strong&gt;ಇಂಗ್ಲೆಂಡ್ ಗ್ರೌಂಡ್&zwnj;ನಲ್ಲಿ ರಜೌಲ್ಲಾ ಬಿರುಗಾಳಿ ಧಮಾಕಾ!&lt;/strong&gt;&lt;/h3&gt;&lt;p&gt;ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟೆಸ್ಟ್&zwnj;ನಲ್ಲೇ ರಜೌಲ್ಲಾ ತಮ್ಮ ಆಲ್&zwnj;ರೌಂಡರ್ ಸಾಮರ್ಥ್ಯ ತೋರಿಸಿದರು. ಬೌಲಿಂಗ್&zwnj;ನಲ್ಲಿ ಜೋ ರೂಟ್ ಅವರ ನಿರ್ಣಾಯಕ ವಿಕೆಟ್ ಸೇರಿದಂತೆ ಮೊದಲ ಇನ್ನಿಂಗ್ಸ್&zwnj;ನಲ್ಲಿ 4 ವಿಕೆಟ್ ಕಬಳಿಸಿದರು. ಆದರೆ ನಿಜವಾದ ಜಾದೂ ನಡೆದದ್ದು ಅವರ ಬ್ಯಾಟಿಂಗ್&zwnj;ನಲ್ಲಿ!&lt;/p&gt;&lt;h3&gt;&lt;strong&gt;9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್&zwnj;!&lt;/strong&gt;&lt;/h3&gt;&lt;p&gt;ಎರಡನೇ ಇನ್ನಿಂಗ್ಸ್&zwnj;ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್&zwnj;ಗೆ ಇಳಿದ ರಜೌಲ್ಲಾ, ಕೇವಲ 63 ಎಸೆತಗಳಲ್ಲಿ 9 ಸಿಕ್ಸರ್&zwnj;ಗಳ ನೆರವಿನಿಂದ 81 ರನ್&zwnj;ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಪಾಯಕಾರಿ ಬೌಲರ್ ಜೋಫ್ರಾ ಆರ್ಚರ್ ಎಸೆತಗಳಿಗೇ ಸತತ ಎರಡು ಸಿಕ್ಸರ್ ಬಾರಿಸಿದ ಅವರು, ಮೂರನೇ ದಿನದ ಕೊನೆಯಲ್ಲಿ ಲಾಗ್-ಆನ್ ಕಡೆಗೆ ಬಾರಿಸಿದ ಬೃಹತ್ ಸಿಕ್ಸರ್ ನೇರವಾಗಿ ಸ್ಟೇಡಿಯಂನ ಹೊರಗಿದ್ದ ಹೋಟೆಲ್&zwnj;ಗೆ ಅಪ್ಪಳಿಸಿತು. ಶಾಟ್&zwnj;ನ ರಭಸಕ್ಕೆ ಹೋಟೆಲ್&zwnj;ನ ಗಾಜು ಪುಡಿಪುಡಿಯಾಯಿತು! ಈ ಅದ್ಭುತ ಶಾಟ್ ನೋಡಿ ಗ್ರೌಂಡ್&zwnj;ನಲ್ಲಿದ್ದ ಜೋ ರೂಟ್ ಸೇರಿದಂತೆ ಪ್ರತಿಯೊಬ್ಬ ಆಟಗಾರನೂ ಆಘಾತಕ್ಕೊಳಗಾದರು.&lt;/p&gt;&lt;h3&gt;&lt;strong&gt;ಚೊಚ್ಚಲ ಪಂದ್ಯದಲ್ಲೇ ಸಾರ್ವಕಾಲಿಕ ವಿಶ್ವ ದಾಖಲೆ!&lt;/strong&gt;&lt;/h3&gt;&lt;p&gt;ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ರಜೌಲ್ಲಾ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಹೆಸರು ಬರೆದಿದ್ದಾರೆ. 9ನೇ ಕ್ರಮಾಂಕದ ಸಿಕ್ಸರ್ ಕಿಂಗ್; ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 9ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಒಂದೇ ಇನ್ನಿಂಗ್ಸ್&zwnj;ನಲ್ಲಿ ಅತಿ ಹೆಚ್ಚು (9) ಸಿಕ್ಸರ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದರು.&lt;/p&gt;&lt;p&gt;&lt;strong&gt;ಸೌಥಿ ದಾಖಲೆ ಸಮಗಟ್ಟು;&lt;/strong&gt; ಟೆಸ್ಟ್ ಚೊಚ್ಚಲ ಪಂದ್ಯದ ಒಂದೇ ಇನ್ನಿಂಗ್ಸ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ನ್ಯೂಜಿಲೆಂಡ್&zwnj;ನ ಟಿಮ್ ಸೌಥಿ (9 ಸಿಕ್ಸರ್) ಅವರ ದಾಖಲೆಯನ್ನು ರಜೌಲ್ಲಾ ಸರಿಗಟ್ಟಿದ್ದಾರೆ. ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇಂದು ಇಂಗ್ಲೆಂಡ್ ಅಂಗಳದಲ್ಲಿ ಸಿಕ್ಸರ್&zwnj;ಗಳ ಸುರಿಮಳೆಗೈದು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/pakistan-cricketer-from-vegetable-market-to-england-six-hitting-struggle-story-viral-pakistan-cricket-news-bmk/articleshow-mnk3d9u"/>
        </item>
        <item>
            <title><![CDATA[ಕಡಿಮೆ ಬಜೆಟ್‌ನಲ್ಲಿ ಕೋಟಿ ಕೋಟಿ ಗಳಿಕೆ! ‘ಹನುಮಾನ್ ಅಂಶ್’ಗೂ ಮುನ್ನ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ 4 ಡಿವೈನ್ ಸಿನಿಮಾಗಳು]]></title>
            <link>https://kannada.asianetnews.com/gallery/cine-world/low-budget-crores-in-earnings-4-films-that-created-box-office-magic-before-hanuman-ansh-h9hs43m</link>
            <guid isPermaLink="true">https://kannada.asianetnews.com/gallery/cine-world/low-budget-crores-in-earnings-4-films-that-created-box-office-magic-before-hanuman-ansh-h9hs43m</guid>
            <pubDate>Sat, 12 Sep 2026 19:57:31 +0530</pubDate>
            <description><![CDATA[‘ಹನುಮಾನ್ ಅಂಶ್’ ಸಿನಿಮಾ ತನ್ನ ಕಲೆಕ್ಷನ್ ಮತ್ತು ಹೌಸ್ ಫುಲ್ ಶೋ ಮೂಲಕ ಸುದ್ದಿಯಲ್ಲಿದೆ. ಭಕ್ತಿ, ಪೌರಾಣಿಕ ಕಥೆಗಳು ಮತ್ತು ಜನಪದ ನಂಬಿಕೆಗಳನ್ನು ಆಧರಿಸಿದ ಹಲವು ಕಡಿಮೆ ಬಜೆಟ್ ಸಿನಿಮಾಗಳು ಈ ಹಿಂದೆಯೂ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಆ ಸಿನಿಮಾಗಳು ಯಾವುವು ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m1km3hbwyhfs2q6yy3e7xf4p,imgname-befunky-collage-1788438758780.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಹನುಮಾನ್ ಅಂಶ್&rsquo; ಸಿನಿಮಾ ತನ್ನ ಕಲೆಕ್ಷನ್ ಮತ್ತು ಹೌಸ್ ಫುಲ್ ಶೋ ಮೂಲಕ ಸುದ್ದಿಯಲ್ಲಿದೆ. ಭಕ್ತಿ, ಪೌರಾಣಿಕ ಕಥೆಗಳು ಮತ್ತು ಜನಪದ ನಂಬಿಕೆಗಳನ್ನು ಆಧರಿಸಿದ ಹಲವು ಕಡಿಮೆ ಬಜೆಟ್ ಸಿನಿಮಾಗಳು ಈ ಹಿಂದೆಯೂ ಬಾಕ್ಸ್ ಆಫೀಸ್&zwnj;ನಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಆ ಸಿನಿಮಾಗಳು ಯಾವುವು ನೋಡೋಣ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕೇಳಿಬರುತ್ತಿರುವ ಸಿನಿಮಾಗಳಲ್ಲಿ &lsquo;ಹನುಮಾನ್ ಅಂಶ್&rsquo; ಕೂಡ ಒಂದು. ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಭಕ್ತಿ ಮತ್ತು ಪೌರಾಣಿಕ ಕಥೆಗಳನ್ನು ಆಧರಿಸಿದ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಇದೇ ರೀತಿಯಲ್ಲಿ ಆಧ್ಯಾತ್ಮಿಕತೆ ಮತ್ತು ಜನಪದ ಕಥೆಗಳನ್ನು ಆಧರಿಸಿದ ಹಲವು ಸಿನಿಮಾಗಳು ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡಿದ್ದರೂ ಬಾಕ್ಸ್ ಆಫೀಸ್&zwnj;ನಲ್ಲಿ ಭರ್ಜರಿ ಗಳಿಕೆ ಮಾಡಿವೆ. ಅಂತಹ ಸಿನಿಮಾಗಳ ಬಗ್ಗೆ ತಿಳಿಯೋಣ.&lt;/p&gt;&lt;img&gt;&lt;p&gt;ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು &lsquo;ಕಾಂತಾರ&rsquo;. ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ಈ ಸಿನಿಮಾ ಜನಪದ ನಂಬಿಕೆಗಳು, ಕರ್ನಾಟಕದ ಸಂಸ್ಕೃತಿ ಹಾಗೂ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಆಧರಿಸಿತ್ತು. ಸ್ಥಳೀಯ ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯನ್ನು ದೊಡ್ಡ ಪರದೆಯ ಮೇಲೆ ತರುವ ಮೂಲಕ, ಪ್ರಾದೇಶಿಕ ಕಥೆಗಳು ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಆಳವಾದ ಸ್ಥಾನ ಪಡೆಯಬಹುದು ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿತು. ಸುಮಾರು 16 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ವಿಶ್ವಾದ್ಯಂತ 407 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;img&gt;&lt;p&gt;ನಿಖಿಲ್ ಸಿದ್ಧಾರ್ಥ್ ಅಭಿನಯದ &lsquo;ಕಾರ್ತಿಕೇಯ 2&rsquo; ಸಿನಿಮಾವನ್ನು ಕೂಡ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಪೌರಾಣಿಕ ಕಥೆ, ಇತಿಹಾಸ, ರಹಸ್ಯ ಮತ್ತು ಸಾಹಸವನ್ನು ಈ ಸಿನಿಮಾ ಒಳಗೊಂಡಿತ್ತು. ಭಗವಾನ್ ಶ್ರೀಕೃಷ್ಣನಿಗೆ ಸಂಬಂಧಿಸಿದ ರಹಸ್ಯಗಳನ್ನು ಸಾಹಸಮಯ ಥ್ರಿಲ್ಲರ್ ಕಥೆಯ ರೂಪದಲ್ಲಿ ಈ ಸಿನಿಮಾ ಪ್ರೇಕ್ಷಕರ ಮುಂದಿಟ್ಟಿತ್ತು. ಸುಮಾರು 15 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ವಿಶ್ವಾದ್ಯಂತ 117.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;img&gt;&lt;p&gt;ಪ್ರಶಾಂತ್ ವರ್ಮಾ ನಿರ್ದೇಶನದ &lsquo;ಹನು-ಮ್ಯಾನ್&rsquo; ಸಿನಿಮಾ ಭಾರತೀಯ ಪೌರಾಣಿಕ ಕಥೆ ಮತ್ತು ಸೂಪರ್ ಹೀರೋ ಶೈಲಿಯ ಅದ್ಭುತ ಸಂಯೋಜನೆಯಾಗಿತ್ತು. ಭಗವಾನ್ ಹನುಮಂತನಿಗೆ ಸಂಬಂಧಿಸಿದ ಭಕ್ತಿ ಮತ್ತು ಶಕ್ತಿಗಳನ್ನು ಆಧುನಿಕ ಸೂಪರ್ ಹೀರೋ ಕಥೆಯ ಮೂಲಕ ಈ ಸಿನಿಮಾ ಪ್ರೇಕ್ಷಕರಿಗೆ ಪರಿಚಯಿಸಿತು. 2024ರಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಸುಮಾರು 40 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡ &lsquo;ಹನು-ಮ್ಯಾನ್&rsquo; ವಿಶ್ವಾದ್ಯಂತ 295.29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;img&gt;&lt;p&gt;&lsquo;ಮಹಾವತಾರ ನರಸಿಂಹ&rsquo; ಸಿನಿಮಾವನ್ನು ಕೂಡ ಪ್ರೇಕ್ಷಕರು ಸಾಕಷ್ಟು ಮೆಚ್ಚಿಕೊಂಡಿದ್ದರು. ಈ ಸಿನಿಮಾವನ್ನು ವೀಕ್ಷಿಸಲು ಚಿತ್ರಮಂದಿರಗಳಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಭಗವಾನ್ ವಿಷ್ಣುವಿನ ನರಸಿಂಹ ಅವತಾರದ ಪೌರಾಣಿಕ ಕಥೆಯನ್ನು ಆಧರಿಸಿದ ಈ ಸಿನಿಮಾ, ಅನಿಮೇಷನ್ ಮೂಲಕ ಪ್ರಾಚೀನ ಧಾರ್ಮಿಕ ಕಥೆಯನ್ನು ದೊಡ್ಡ ಪರದೆಯ ಮೇಲೆ ತಂದಿತ್ತು. ಸುಮಾರು 40 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ವಿಶ್ವಾದ್ಯಂತ 326.82 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;img&gt;&lt;p&gt;2026ರ ಆಗಸ್ಟ್ 7ರಂದು ಬಿಡುಗಡೆಯಾದ &lsquo;ಹನುಮಾನ್ ಅಂಶ್&rsquo; ಸಿನಿಮಾದ ಆರಂಭಿಕ ವೇಗ ನಿಧಾನವಾಗಿತ್ತು. ಆದರೆ ಜನರು ಸಿನಿಮಾವನ್ನು ನೋಡುತ್ತಾ ಹೋದಂತೆ, ಚಿತ್ರ ವೀಕ್ಷಿಸಲು ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗತೊಡಗಿತು. ಇದೀಗ ಈ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಹಲವು ಶೋಗಳು ಹೌಸ್&zwnj;ಫುಲ್ ಆಗುತ್ತಿವೆ. ನೀಮ್ ಕರೋಲಿ ಬಾಬಾ ಅವರ ಜೀವನ, ಅವರ ಬೋಧನೆಗಳು ಮತ್ತು ಅವರೊಂದಿಗೆ ಸಂಬಂಧಿಸಿದ ಪವಾಡಗಳನ್ನು ಆಧರಿಸಿ ಈ ಸಿನಿಮಾ ನಿರ್ಮಾಣಗೊಂಡಿದೆ. ಕೇವಲ 2 ಕೋಟಿ ರೂಪಾಯಿ ಕಡಿಮೆ ಬಜೆಟ್&zwnj;ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಕಲೆಕ್ಷನ್ ಇದೀಗ 205.15 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ಯಶಸ್ವಿಯಾಗಿ ಸಾಗುತ್ತಿದೆ.&lt;/p&gt;]]></content:encoded>
            <category><![CDATA[cine-world]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/cine-world/low-budget-crores-in-earnings-4-films-that-created-box-office-magic-before-hanuman-ansh-h9hs43m"/>
        </item>
        <item>
            <title><![CDATA[ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಏರ್‌ ಇಂಡಿಯಾ ಕಾಕ್‌ಪಿಟ್‌ ಸಿಬ್ಬಂದಿ ನಿಧನ]]></title>
            <link>https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw</link>
            <guid isPermaLink="true">https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw</guid>
            <pubDate>Sat, 12 Sep 2026 19:57:10 +0530</pubDate>
            <description><![CDATA[ಏರ್‌ ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ನಂತರ ಏನೆಲ್ಲ ಆಗಿದೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2b07ec42dvxk0ka5y0z62ba,imgname-air-india-1789223221636.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ:&lt;/strong&gt; ಏರ್&zwnj; ಇಂಡಿಯಾ ಸಿಬ್ಬಂದಿಯೊಬ್ಬರು ದೆಹಲಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ ವಸಂತ್&zwnj; ಕುಂಚ್&zwnj;ನಲ್ಲಿರುವ ಹೋಟೆಲ್&zwnj; ಒಂದರಲ್ಲಿ ಏರ್&zwnj; ಇಂಡಿಯಾದ ಕಾಕ್&zwnj;ಪಿಟ್&zwnj; ಸಿಬ್ಬಂದಿ ಒಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ನಂತರದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಪೊಲೀಸರು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ದೆಹಲಿ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಹೋಟೆಲ್&zwnj; ದಿ ಗ್ರ್ಯಾಂಡ್&zwnj;ನಿಂದ ಕರೆ ಬಂದಿದೆ. ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು. ಅಲ್ಲಿಗೆ ಭದ್ರತಾ ಅಧಿಕಾರಿಗಳು ಹೋಗಿ ತಲುಪಿದಾಗ, ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದೇವು.&lt;/p&gt;&lt;p&gt;ಆದರೆ ಅಲ್ಲಿನ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ನಂತರ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೇವು. ಮೃತ ವ್ಯಕ್ತಿ ವಿಮಾನ ಸಂಸ್ಥೆಯ ಕ್ಯಾಪ್ಟನ್&zwnj; ಆಗಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್&zwnj; 10 ರಂದು ಹೋಟೆಲ್&zwnj;ಗೆ ಭೇಟಿ ನೀಡಿದ್ದರು. ಸೆಪ್ಟೆಂಬರ್&zwnj; 11 ಸಂಜೆ ಅವರ ಸಹೋದರ ಹೋಟೆಲ್&zwnj; ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದರು. ಸಹೋದರ ನನ್ನ ಕರೆಗಳನ್ನ ಸ್ವೀಕರಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಬೆನ್ನಲ್ಲೇ ಹೋಟೆಲ್&zwnj; ಮ್ಯಾನೇಜರ್&zwnj; ಅವರಿಗೆ ನೀಡಲಾಗಿದ್ದ ಹೋಟೆಲ್&zwnj; ರೂಮ್&zwnj;ಗೆ ಹೋಗಿದ್ದಾರೆ. ಆಗಲೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಹೋಟೆಲ್&zwnj;ನ ಇನ್ನೊಂದು ಕೀನಿಂದ ರೂಮ್&zwnj;ನ ಡೋರ್&zwnj; ಓಪನ್&zwnj; ಮಾಡಲಾಗಿದೆ. ಆಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರೋದು ಪತ್ತೆಯಾಗಿದೆ. ಕೂಡಲೇ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.&lt;/p&gt;&lt;p&gt;ವೈದ್ಯರು ಮೃತಪಟ್ಟಿದ್ದಾರೆ ಎಂದು ಹೇಳಿದ ಕೂಡಲೇ ನಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ಮರಣೋತ್ತರ ಪರೀಕ್ಷೆ ಕೂಡ ಮುಗಿದಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194 ರ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇನ್ನೊಂದು ಕಡೆ ಏರ್&zwnj; ಇಂಡಿಯಾ ಕೂಡ ತನ್ನ ಸಿಬ್ಬಂದಿ ಸಾವನ್ನು ಖಚಿತಪಡಿಸಿದೆ. ನಿನ್ನೆ ರಾತ್ರಿ ನಮ್ಮ ಕಾಕ್&zwnj;ಪಿಟ್&zwnj; ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ ಅಂತಾ ವಕ್ತಾರರು ತಿಳಿಸಿದ್ದಾರೆ.&lt;/p&gt;&lt;p&gt;ಏರ್&zwnj; ಇಂಡಿಯಾ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ದುಃಖದ ಸಮಯದಲ್ಲಿ ನಾವು ಆ ಕುಟುಂಬದ ಜೊತೆ ನಿಲ್ಲುತ್ತೇವೆ ಎಂದು ಏರ್&zwnj; ಇಂಡಿಯಾ ಹೇಳಿದೆ.&lt;/p&gt;&lt;p&gt;Delhi Police: &quot;A PCR call was received at PS Vasant Kunj North on September 11 regarding the ill health of a guest at Hotel The Grand in Vasant Kunj. Police reached the spot and found the person unconscious and unresponsive. He was shifted to a hospital, where he was declared brought dead. The Crime Team was subsequently called to the spot. The deceased was working as a captain with an airline and had checked into the hotel on September 10. On the evening of September 11, his brother contacted the hotel manager and informed him that his brother was not responding to his calls. The manager went to the room, which was locked from the inside, and opened it with the hotel master key, where the deceased was found unconscious and unresponsive. The post-mortem examination was conducted at Safdarjung Hospital on September 12. The final cause of death will be ascertained after the final opinion is received. Further inquiry is underway, and inquest proceedings under Section 194 of the BNSS are being conducted.&quot;&lt;/p&gt;&lt;p&gt;&mdash; ANI (@ANI) September 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/air-india-cockpit-crew-found-unconscious-dies-gkn/articleshow-da0txrw"/>
        </item>
        <item>
            <title><![CDATA[Jalebi Recipe: ಮನೆಯಲ್ಲೇ ಗರಿಗರಿಯಾದ ಜಿಲೇಬಿ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಪ್ರೊಸೆಸ್]]></title>
            <link>https://kannada.asianetnews.com/webstories/food/food-easy-crispy-jalebi-recipe-for-home-cooks-gvd-3i7trie</link>
            <guid isPermaLink="true">https://kannada.asianetnews.com/webstories/food/food-easy-crispy-jalebi-recipe-for-home-cooks-gvd-3i7trie</guid>
            <pubDate>Sat, 12 Sep 2026 19:53:31 +0530</pubDate>
            <description><![CDATA[ಮೈದಾ, ಕಾರ್ನ್‌ಫ್ಲೋರ್ ಮತ್ತು ಮೊಸರು ಬಳಸಿ ಹಿಟ್ಟು ರೆಡಿ ಮಾಡಿ. ರಾತ್ರಿಯಿಡೀ ಹುದುಗಲು ಬಿಡಿ. ನಂತರ, ಕಡಿಮೆ ಉರಿಯಲ್ಲಿ ಜಿಲೇಬಿ ಕರಿದು ಸಕ್ಕರೆ ಪಾಕದಲ್ಲಿ ಅದ್ದಿದರೆ, ಹೋಟೆಲ್ ಶೈಲಿಯ ಗರಿಗರಿ ಜಿಲೇಬಿ ಸಿದ್ಧ.]]></description>
            <media:content url="https://static.asianetnews.com/images/w-1280,h-720,format-jpg,imgid-01jphjehr3bvtr9wz5rafdjbm2,imgname-Easy-Besan-Jalebi-Recipe-1742199015171.jpg" type="image/jpeg" height="390" width="690"/>
            <category><![CDATA[food]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/food/food-easy-crispy-jalebi-recipe-for-home-cooks-gvd-3i7trie"/>
        </item>
        <item>
            <title><![CDATA[ಲೇಓವರ್ ವೇಳೆ ಏರ್ ಇಂಡಿಯಾ ಪೈಲೆಟ್ ಅಸ್ವಸ್ಥ, ತಕ್ಷಣ ಆಸ್ಪತ್ರೆ ದಾಖಲಿಸಿದರೂ ಬದುಕುಳಿಯಲಿಲ್ಲ]]></title>
            <link>https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg</link>
            <guid isPermaLink="true">https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg</guid>
            <pubDate>Sat, 12 Sep 2026 19:50:11 +0530</pubDate>
            <description><![CDATA[ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಅಸ್ವಸ್ಥರಾಗಿ ಬಿದ್ದಿದ್ದ ಪೈಲೆಟ್‌ನ ತಕ್ಷಣ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಲೇ ಓವರ್ ವೇಳೆ ದಿಢೀರ್ ಆರೋಗ್ಯ ಏರುಪೇರಾಗಿದ್ದು ಹೇಗೆ?]]></description>
            <media:content url="https://static.asianetnews.com/images/w-1280,h-720,format-jpg,imgid-01ks602zk6t1502rzcgrn88v41,imgname-air-india-fire--1779391626854.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದೆಹಲಿ (ಸೆ.12) &lt;/strong&gt;ಏರ್ ಇಂಡಿಯಾ ಪೈಲೆಟ್ ಲೇ ಓವರ್ ವೇಳೆ ಮೃತಪಟ್ಟ ಘಟನೆ ನಡೆದಿದೆ. ಮುಂಬೈ ಮೂಲಕ 40ರ ಹರೆಯದ ಪೈಲೆಟ್ ಲೇ ಓವರ್ ವೇಳೆ ದೆಹಲಿಯ ವಸಂತ್ ಕುಂಜ್ ಹೊಟೆಲ್&zwnj;ನಲ್ಲಿ ಅಸ್ವಸ್ಥರಾಗಿ ಬಿದ್ದಿದ್ದಾರೆ. ತಕ್ಷಣವೇ ದೆಹಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ತಪಾಸಣೆ ನಡೆಸಿದ ವೈದ್ಯರು ಪೈಲೆಟ್ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಈ ಘಟನೆಯಿಂದ ಪೈಲೆಟ್&zwnj;ಗಳ ಆರೋಗ್ಯ ಕುರಿತು ಭಾರಿ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಲೇಓವರ್ ವೇಳೆ ಪೈಲೆಟ್ ಆರೋಗ್ಯ ಏರುಪೇರಾಗುವ ಕುರಿತು ತೀವ್ರ ಚರ್ಚೆಯಾಗುತ್ತಿದೆ.&lt;/p&gt;&lt;p&gt;40ರ ಹರೆಯದ ಮುಂಬೈ ಮೂಲಕ ಪೈಲೆಟ್ ಸುದೀರ್ಘ ಏರ್ ಇಂಡಿಯಾ ಪ್ರಯಾಣ ಬಳಿ ಲೇಓವರ್ ಸಮಯದಲ್ಲಿದ್ದರು. ಲೇಓವರ್ ವೇಳೆ ವಸಂತ್ ಕುಂಜ್ ಹೊಟೆಲ್&zwnj;ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಆರೋಗ್ಯ ಏರುಪೇರಾಗಿದೆ. ಲೇಓವರ್ ಸಮಯದ ಕಾರಣ ಮತ್ತೆ ಪ್ರಯಾಣ ಮುಂದುವರಿಸಬೇಕಾದ ಕಾರಣ ವಿಶ್ರಾಂತಿಗೆ ಜಾರಿದ್ದರು. ಈ ವೇಳೆ ಆರೋಗ್ಯ ಸಮಸ್ಯೆ ಎದುರಾಗಿದೆ. ಈ ನಡುವೆ ಸಹೋದ್ಯೋಗಿಗಳು ಹೊಟೆಲ್&zwnj;ಗೆ ಬಂದಾಗ ಪೈಲೆಟ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.&lt;/p&gt;&lt;h2&gt;ದೆಹಲಿ ಪೊಲೀಸರಿಂದ ತನಿಖೆ&lt;/h2&gt;&lt;p&gt;ಘಟನೆ ಕುರಿತು ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ವೈದ್ಯಕೀಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಪೈಲೆಟ್ ಸಾವಿಗೆ ನೈಜ ಕಾರಣವೇನು ಅನ್ನೋ ಕುರಿತು ವೈದ್ಯರ ವರದಿಯಲ್ಲಿ ಉಲ್ಲೇಖವಾಗಲಿದೆ. ಪ್ರಮುಖವಾಗಿ ಆರೋಗ್ಯದ ಕಾರಣವೇ ಅಥವಾ ಇತರ ಕಾರಣಗಳಿತ್ತಾ ಅನ್ನೋ ಕುರಿತು ಪೊಲೀಸರು ವೈದ್ಯರ ಜೊತೆ ಚರ್ಚಿಸಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ಸುದೀರ್ಘ ಹಾರಾಟದ ಬಳಿಕ ಲೇಓವರ್ ಸಮಯದಲ್ಲಿ ಪೈಲೆಟ್ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವ ಕಾರಣ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸುತ್ತಾರೆ. ಇದೀಗ ಪೈಲೆಟ್ ಸಾವು ಲೇಓವರ್ ವೇಳೆ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಿಸಿದೆ. ಘಟನೆಗೆ ಏರ್ ಇಂಡಿಯಾ ಆಘಾತ ವ್ಯಕ್ತಪಡಿಸಿದೆ. ಇದೇ ವೇಳೆ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಇಷ್ಟೇ ಅಲ್ಲ ಕುಟುಂಬಕ್ಕೆ ಎಲ್ಲಾ ನೆರವು ನೀಡುವುದಾಗಿ ಏರ್ ಇಂಡಿಯಾ ಹೇಳಿದೆ. ಏರ್ ಇಂಡಿಯಾ ಪೈಲೆಟ್ ಸಾವಿಗೆ ಸಹೋದ್ಯೋಗಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/air-india-pilot-falls-ill-during-layover-dies-despite-immediate-hospitalisation-delhi/articleshow-aqp4bdg"/>
        </item>
        <item>
            <title><![CDATA[BMW ಖರೀದಿ ಖುಷಿಯಲ್ಲಿದ್ದ ಮಾಲೀಕನಿಗೆ ಬಿಗ್ ಶಾಕ್: ಲಕ್ಷ ಲಕ್ಷ ಹಣ ಕೊಡದಿದ್ದರೆ ಜಾಗ ಖಾಲಿ ಮಾಡಲ್ಲ ಅಂದ್ರು!]]></title>
            <link>https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh</link>
            <guid isPermaLink="true">https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh</guid>
            <pubDate>Sat, 12 Sep 2026 19:45:22 +0530</pubDate>
            <description><![CDATA[ಹೈದರಾಬಾದ್‌ನಲ್ಲಿ ಹೊಸ BMW ಡೆಲಿವರಿ ವೇಳೆ ಟ್ರಾನ್ಸ್‌ಜೆಂಡರ್‌ಗಳ ಗುಂಪೊಂದು ಕಾರನ್ನು ಸುತ್ತುವರಿದು ₹2 ಲಕ್ಷ ಕೇಳಿದೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಸಂಭ್ರಮದ ಸಂದರ್ಭಗಳಲ್ಲಿ ಹಣದ ಬೇಡಿಕೆ, ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2azgceb1zm7htvdy1jy89f5,imgname-bmw-delivery-video-going-viral-1789222465993.jpg" type="image/jpeg" height="390" width="690"/>
            <content:encoded><![CDATA[&lt;h2&gt;ಹೊಸ BMW ಡೆಲಿವರಿ ವೇಳೆ ₹2 ಲಕ್ಷ ಬೇಡಿಕೆ? ಹೈದರಾಬಾದ್ ವೈರಲ್ ವಿಡಿಯೋ ಸೃಷ್ಟಿಸಿದ ಚರ್ಚೆ!&lt;/h2&gt;&lt;p&gt;ಹೈದರಾಬಾದ್&zwnj;ನಲ್ಲಿ ಹೊಸದಾಗಿ ಡೆಲಿವರಿ ಪಡೆದ BMW ಕಾರಿನ ಸುತ್ತ ಗುಂಪೊಂದು ಸೇರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಾರು ಮಾಲೀಕರಿಂದ ₹2 ಲಕ್ಷ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಆರೋಪಗಳು ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಿದ್ದು, ವಾಹನ ಡೆಲಿವರಿ ಹಾಗೂ ಇತರ ಸಂಭ್ರಮದ ಸಂದರ್ಭಗಳಲ್ಲಿ ಹಣ ಕೇಳುವ ಪದ್ಧತಿ ಕುರಿತು ಚರ್ಚೆ ಶುರುವಾಗಿದೆ. ಆದರೆ, ವೈರಲ್ ವಿಡಿಯೋದಲ್ಲಿರುವ ಆರೋಪಗಳ ಸ್ವತಂತ್ರ ದೃಢೀಕರಣ ಸದ್ಯಕ್ಕೆ ಲಭ್ಯವಿಲ್ಲ.&lt;/p&gt;&lt;h3&gt;BMW ಡೆಲಿವರಿ ವೇಳೆ ಏನಾಯ್ತು?&lt;/h3&gt;&lt;p&gt;ವರದಿಗಳ ಪ್ರಕಾರ, ಹೊಸ BMW ಕಾರಿನ ಡೆಲಿವರಿ ಪಡೆದ ಕೆಲವೇ ಸಮಯದಲ್ಲಿ ಮಾಲೀಕರನ್ನು ಗುಂಪೊಂದು ಸಂಪರ್ಕಿಸಿದೆ. ವೈರಲ್ ಆಗಿರುವ ದೃಶ್ಯದಲ್ಲಿ ಹಲವು ಮಂದಿ ಕಾರಿನ ಸುತ್ತ ನಿಂತಿರುವುದು ಕಾಣಿಸುತ್ತದೆ. ಕಾರು ಶೋರೂಮ್ ಆವರಣದಿಂದ ಹೊರಡುವುದಕ್ಕೂ ಅಡ್ಡಿಯಾಗುವ ರೀತಿಯಲ್ಲಿ ಕೆಲವರು ವಾಹನದ ಬಳಿ ನಿಂತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ ಎಂದು ವರದಿಯಾಗಿದೆ.&lt;/p&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಹರಿದಾಡುತ್ತಿರುವ ಹೇಳಿಕೆಗಳ ಪ್ರಕಾರ, ಗುಂಪು ಕಾರು ಮಾಲೀಕರಿಂದ ₹2 ಲಕ್ಷ ಕೇಳಿದೆ ಎನ್ನಲಾಗಿದೆ. ಕೆಲವರು ಕಾರಿನ ಮೇಲೆ ಒರಗಿಕೊಂಡಿರುವುದು ಹಾಗೂ ವಾಹನದಲ್ಲಿದ್ದವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿರುವ ದೃಶ್ಯವೂ ಕ್ಲಿಪ್&zwnj;ನಲ್ಲಿದೆ.&lt;/p&gt;&lt;p&gt;&lt;strong&gt;ಮೊಬೈಲ್ ಕ್ಯಾಮೆರಾದಿಂದ ಸೋಶಿಯಲ್ ಮೀಡಿಯಾವರೆಗೆ&lt;/strong&gt;&lt;/p&gt;&lt;p&gt;ಘಟನೆಯ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್&zwnj;ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ, ಹೊಸ ಕಾರು ಖರೀದಿ, ಗೃಹಪ್ರವೇಶ, ಮದುವೆ ಸೇರಿದಂತೆ ಹಲವು ಶುಭ ಸಮಾರಂಭಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡುವ ಆರೋಪಗಳ ಕುರಿತು ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.&lt;/p&gt;&lt;p&gt;&lt;strong&gt;ಹಳೆಯ ಘಟನೆಗಳೂ ಚರ್ಚೆಗೆ&lt;/strong&gt;&lt;/p&gt;&lt;p&gt;ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಹೈದರಾಬಾದ್&zwnj;ನಲ್ಲೇ ಹಿಂದೆ ನಡೆದಿದ್ದ ಎಂದು ಹೇಳಲಾಗುವ ಗೃಹಪ್ರವೇಶದ ಘಟನೆಯನ್ನೂ ಕೆಲವರು ನೆನಪಿಸಿಕೊಂಡಿದ್ದಾರೆ. 2019ರ ಘಟನೆಯಲ್ಲಿ ₹50,000 ಕೇಳಲಾಗಿತ್ತು ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ಚರ್ಚೆಗೆ ಬಂದಿವೆ. ಇದೇ ವೇಳೆ, ಪುಣಿಯಲ್ಲಿ ಸಂಗ್ರಹದ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದಿತ್ತೆಂದು ಹೇಳಲಾಗುವ ಘರ್ಷಣೆಯನ್ನೂ ಕೆಲವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಆದರೆ ಇಂತಹ ಸಾಮಾಜಿಕ ಮಾಧ್ಯಮದ ಹೇಳಿಕೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸದೆ ಖಚಿತ ಘಟನೆಗಳೆಂದು ಪರಿಗಣಿಸುವುದು ಸೂಕ್ತವಲ್ಲ.&lt;/p&gt;&lt;p&gt;&lt;strong&gt;ಹಣದ ಬೇಡಿಕೆನಾ, ಸಾಮಾಜಿಕ ಸಮಸ್ಯೆಯಾ?&lt;/strong&gt;&lt;/p&gt;&lt;p&gt;ಈ ಘಟನೆ ಕೇವಲ ವೈರಲ್ ವಿಡಿಯೋ ಚರ್ಚೆಗೆ ಸೀಮಿತವಾಗದೆ, ಹಣಕ್ಕಾಗಿ ಬಲವಂತದ ಬೇಡಿಕೆಗಳ ಆರೋಪಗಳನ್ನು ಕಾನೂನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆಯನ್ನೂ ಎತ್ತಿದೆ. ಕೆಲ ನೆಟ್ಟಿಗರು ಇಂತಹ ಸಂದರ್ಭಗಳಲ್ಲಿ ಕಠಿಣ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟರೆ, ಮತ್ತೊಂದು ವರ್ಗವು ಟ್ರಾನ್ಸ್&zwnj;ಜೆಂಡರ್ ಸಮುದಾಯ ಎದುರಿಸುವ ಉದ್ಯೋಗ, ಆದಾಯ ಮತ್ತು ಸಾಮಾಜಿಕ ಸ್ವೀಕಾರದ ಸಮಸ್ಯೆಗಳನ್ನೂ ಚರ್ಚೆಯ ಭಾಗವಾಗಿಸಬೇಕು ಎಂದು ಹೇಳಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಹೈದರಾಬಾದ್&zwnj;ನ BMW ಡೆಲಿವರಿ ವಿಡಿಯೋವು ಒಂದು ಘಟನೆಯನ್ನಷ್ಟೇ ತೋರಿಸದೆ, ಸಂಭ್ರಮದ ಸಂದರ್ಭಗಳಲ್ಲಿ ಹಣ ಕೇಳುವ ಪದ್ಧತಿ, ಬಲವಂತದ ಬೇಡಿಕೆಗಳ ಆರೋಪ ಮತ್ತು ಅದರ ಹಿಂದಿನ ಸಾಮಾಜಿಕ ಕಾರಣಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.&lt;/p&gt;&lt;p&gt;BMW owner harassed by transgenders in Hyderabad, demanding 2 lakh rupees after new car was delivered pic.twitter.com/zVFXKdbJh8&lt;/p&gt;&lt;p&gt;&mdash; Mogambo (@Netajinonsense1) September 11, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[car-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/car-news/new-bmw-delivery-turns-awkward-in-hyderabad-as-viral-video-shows-alleged-2-lakh-demand/articleshow-ccug8hh"/>
        </item>
        <item>
            <title><![CDATA['ತಲಾಖ್‌-ಎ-ಹಸನ್‌' ದೇಶದಲ್ಲಿ ಅಮಾನ್ಯವಲ್ಲ, ಅದು ಮಾನ್ಯ ವಿಚ್ಛೇದನ ವಿಧಾನ: ಹೈಕೋರ್ಟ್‌ ಮಹತ್ವದ ಆದೇಶ!]]></title>
            <link>https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang</link>
            <guid isPermaLink="true">https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang</guid>
            <pubDate>Sat, 12 Sep 2026 19:30:43 +0530</pubDate>
            <description><![CDATA['ತಲಾಖ್‌-ಎ-ಹಸನ್‌' ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ರೀತಿಯ ವಿಚ್ಛೇದನಗಳನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfmcj8281bshnfbe2fvh5bx0,imgname-up-triple-talaq-halala-fir-legal-ambiguity-muslim-women-rights-1769137053768.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗುವಾಹಟಿ:&lt;/strong&gt; 'ತಲಾಖ್&zwnj;-ಎ-ಹಸನ್&zwnj;' (Talaq-e-Hasan) ಎಂಬುದು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಮಾನ್ಯವಾದ ವಿಚ್ಛೇದನ ಪದ್ಧತಿಯಾಗಿದ್ದು, ಇದನ್ನು ಭಾರತದಲ್ಲಿ ನಿಷೇಧಿಸಿಲ್ಲ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಅಸ್ಸಾಂನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರುಣ್&zwnj; ದೇವ್&zwnj; ಚೌಧುರಿ ಅವರಿದ್ದ ಏಕಸದಸ್ಯ ಪೀಠವು ಈ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;ಅಲ್ಲದೆ, ಇಂತಹ ವಿಚ್ಛೇದನಗಳನ್ನು ಇತ್ತೀಚೆಗೆ ಜಾರಿಗೆ ತರಲಾದ 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಡ್ಡಾಯ ನೋಂದಣಿ ಕಾಯ್ದೆ-2024' ರ ಅಡಿಯಲ್ಲಿ ಕಾನೂನುಬದ್ಧವಾಗಿ ನೋಂದಾಯಿಸಿಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ&lt;/h2&gt;&lt;p&gt;ಅರ್ಜಿದಾರರು 2016ರಲ್ಲಿ ವಿವಾಹವಾಗಿದ್ದರು. ಆದರೆ ದಂಪತಿ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣ 2018ರಲ್ಲಿ ಪತ್ನಿ ಮನೆಬಿಟ್ಟು ತೆರಳಿದ್ದರು. ತದನಂತರ ನಡೆದ ರಾಜಿ ಸಂಧಾನದ ಪ್ರಯತ್ನಗಳೂ ವಿಫಲವಾದಾಗ, ಅರ್ಜಿದಾರರು ಸಾಂಪ್ರದಾಯಿಕ ನಿಯಮಾವಳಿಯಂತೆ ಮೂರು ಪ್ರತ್ಯೇಕ ತಿಂಗಳುಗಳಲ್ಲಿ (ಮಾರ್ಚ್ 22, ಏಪ್ರಿಲ್ 26 ಮತ್ತು ಮೇ 27) ತಮ್ಮ ಪತ್ನಿಗೆ 'ತಲಾಖ್' ಉಚ್ಚರಿಸಿದ್ದರು.&lt;/p&gt;&lt;p&gt;ತಮ್ಮ ವಿಚ್ಛೇದನವನ್ನು ಅಧಿಕೃತವಾಗಿ ನೋಂದಾಯಿಸಲು ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಭಾರತದಲ್ಲಿ 'ತಲಾಖ್-ಎ-ಹಸನ್' ಗೆ ಯಾವುದೇ ಕಾನೂನು ತಡೆಯಿಲ್ಲ ಮತ್ತು ತಾವು ಧಾರ್ಮಿಕ ನಿಯಮಾವಳಿಗಳನ್ನು ಪೂರ್ಣಗೊಳಿಸಿರುವುದರಿಂದ ವಿಚ್ಛೇದನವನ್ನು ನೋಂದಾಯಿಸಬೇಕು ಎಂದು ಅರ್ಜಿದಾರರು ವಾದಿಸಿದ್ದರು.&lt;/p&gt;&lt;h2&gt;ಏನಿದು 'ತಲಾಖ್-ಎ-ಹಸನ್'?&lt;/h2&gt;&lt;p&gt;ತಲಾಖ್-ಎ-ಹಸನ್ ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ವಿಚ್ಛೇದನ ನೀಡುವ ಸಾಂಪ್ರದಾಯಿಕ ವಿಧಾನವಾಗಿದೆ. ಈ ಪದ್ಧತಿಯಲ್ಲಿ ಪತಿಯು ಸತತ ಮೂರು ತಿಂಗಳುಗಳ ಕಾಲ, ಪ್ರತಿ ತಿಂಗಳಿಗೆ ಒಂದರಂತೆ 'ತಲಾಖ್' ಪದವನ್ನು ಉಚ್ಚರಿಸಬೇಕಾಗುತ್ತದೆ.&lt;/p&gt;&lt;p&gt;ಈ ಉಚ್ಚಾರಣೆಗಳ ನಡುವಿನ ಕಾಲಾವಕಾಶವು ದಂಪತಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಮತ್ತು ಸಮನ್ವಯ ಸಾಧಿಸಲು ಸಾಕಷ್ಟು ಅವಕಾಶ ನೀಡುತ್ತದೆ. ಹೀಗಾಗಿ, 2017 ರಲ್ಲಿ ಸುಪ್ರೀಂ ಕೋರ್ಟ್&zwnj;ನಿಂದ ಅಸಂವಿಧಾನಿಕ ಎಂದು ರದ್ದುಗೊಳಿಸಲಾದ 'ತಲಾಖ್-ಎ-ಬಿದ್ದತ್' (ತತ್ಕ್ಷಣದ ತ್ರಿವಳಿ ತಲಾಖ್) ಗೂ ಮತ್ತು 'ತಲಾಖ್-ಎ-ಹಸನ್'ಗೂ ವ್ಯತ್ಯಾಸವಿದೆ.&lt;/p&gt;&lt;h2&gt;ಹೈಕೋರ್ಟ್ ನೀಡಿದ ನಿರ್ದೇಶನಗಳೇನು?&lt;/h2&gt;&lt;p&gt;ರಾಜ್ಯ ಸರ್ಕಾರವು ಈ ಹಿಂದೆ ಅಸ್ತಿತ್ವದಲ್ಲಿದ್ದ 1935ರ ಕಾನೂನು ರದ್ದಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠವು ಈ ಕೆಳಗಿನ ನಿರ್ದೇಶನಗಳನ್ನು ನೀಡಿತು.&lt;/p&gt;&lt;p&gt;1935ರ ಹಳೆಯ ಕಾನೂನು ರದ್ದಾಗಿರುವುದರಿಂದ, ಹಳೆಯ ಪ್ರಾಧಿಕಾರದ ಬಳಿ ನೋಂದಣಿಗೆ ಆದೇಶಿಸಲು ಸಾಧ್ಯವಿಲ್ಲ. ಆದರೆ ಅರ್ಜಿದಾರರು ತಮ್ಮ 'ತಲಾಖ್&zwnj;ನಾಮಾ'ವನ್ನು 'ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ-2024'ರ ಸೆಕ್ಷನ್ 12 ರ ಹೊಸ ಕಾಯ್ದೆಯಡಿ ಬರ್ಪೇಟಾ ನೋಂದಣಾಧಿಕಾರಿ (Registrar) ಮುಂದೆ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.&lt;/p&gt;&lt;p&gt;ನೋಂದಣಾಧಿಕಾರಿಗಳು ಅರ್ಜಿದಾರರ ಗುರುತನ್ನು ಪರಿಶೀಲಿಸಿದ ನಂತರವೇ ವಿಚ್ಛೇದನ ನೋಂದಣಿ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಒಂದು ವೇಳೆ ರಿಜಿಸ್ಟ್ರಾರ್ ನೋಂದಣಿಯನ್ನು ನಿರಾಕರಿಸಿದರೆ, ಅರ್ಜಿದಾರರಿಗೆ ಕಾಯ್ದೆಯ ಸೆಕ್ಷನ್ 17 ರ ಅಡಿಯಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿರುತ್ತದೆ.&lt;/p&gt;&lt;p&gt;ವಿಚಾರಣೆಗೆ ನೋಟಿಸ್ ಕಳುಹಿಸಿದರೂ ಅರ್ಜಿದಾರರ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಗೈರು ಹಾಜರಿಯಿಂದ ಅವರ ಕಾನೂನುಬದ್ಧ ಹಕ್ಕುಗಳು ಕಸಿದುಕೊಂಡಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಪತ್ನಿಯು ಬಯಸಿದರೆ 'ತಲಾಖ್-ಎ-ಹಸನ್' ವಿಚ್ಛೇದನವನ್ನು ಸೂಕ್ತ ನ್ಯಾಯಾಂಗ ವೇದಿಕೆಯಲ್ಲಿ ಪ್ರಶ್ನಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Gowthami K</dc:creator>
            <atom:link href="https://kannada.asianetnews.com/relationship/talaq-e-hasan-valid-divorce-practice-in-india-rules-gauhati-high-court-gdp/articleshow-81k9ang"/>
        </item>
        <item>
            <title><![CDATA[ನನಗೆ ಅಲ್ಲ ಪೊಗರು, ನಿಮ್ಮ ಗುರುಗೆ ಅಹಂಕಾರ ಜಾಸ್ತಿ: ರಾಜಮೌಳಿಗೆ ಟಕ್ಕರ್ ಕೊಟ್ಟ ನಟ ಮೋಹನ್ ಬಾಬು]]></title>
            <link>https://kannada.asianetnews.com/entertainment/tollywood-actor-mohan-babu-recalls-heated-incident-with-director-rajamouli-and-raghavendra-rao-gvd/articleshow-uut44ge</link>
            <guid isPermaLink="true">https://kannada.asianetnews.com/entertainment/tollywood-actor-mohan-babu-recalls-heated-incident-with-director-rajamouli-and-raghavendra-rao-gvd/articleshow-uut44ge</guid>
            <pubDate>Sat, 12 Sep 2026 19:25:43 +0530</pubDate>
            <description><![CDATA[ನಟ ಮೋಹನ್ ಬಾಬು ಅವರ ಹಳೆಯ ಕಾಮೆಂಟ್‌ವೊಂದು ಇದೀಗ ವೈರಲ್ ಆಗಿದೆ. ಕಾರ್ಯಕ್ರಮವೊಂದರಲ್ಲಿ ಎಸ್‌ಎಸ್ ರಾಜಮೌಳಿ ಅವರು ಮೋಹನ್ ಬಾಬುಗೆ ‘ಪೊಗರು’ ಇದೆ ಎಂದು ಹಾಸ್ಯಮಯವಾಗಿ ತಮಾಷೆ ಮಾಡಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m2aydcat8ptsc6h2645xf6na,imgname-bjb-1789221319001.png" type="image/jpeg" height="390" width="690"/>
            <content:encoded><![CDATA[&lt;p&gt;ಫಿಲ್ಮ್ ಇಂಡಸ್ಟ್ರಿಯಲ್ಲಿ ಡೈಲಾಗ್ ಕಿಂಗ್ ಮೋಹನ್ ಬಾಬು ನೇರ ನುಡಿಯ ವ್ಯಕ್ತಿ ಅಂತಾನೇ ಫೇಮಸ್. ಎದುರಲ್ಲಿ ಎಂಥವರೇ ಇರಲಿ, ಅಂದುಕೊಂಡಿದ್ದನ್ನು ಹೇಳಿಬಿಡುತ್ತಾರೆ. ಇದೇ ರೀತಿ ಒಂದು ಕಾರ್ಯಕ್ರಮದಲ್ಲಿ ರಾಜಮೌಳಿ ಮತ್ತು ರಾಘವೇಂದ್ರ ರಾವ್ ಬಗ್ಗೆ ಅವರು ಮಾಡಿದ ಕಾಮೆಂಟ್&zwnj;ಗಳು ಈಗ ವೈರಲ್ ಆಗಿವೆ. ಅಷ್ಟಕ್ಕೂ ಮೋಹನ್ ಬಾಬು ಹೇಳಿದ್ದೇನು? ತೆಲುಗು ಚಿತ್ರರಂಗದಲ್ಲಿ ನಟರು ಮತ್ತು ನಿರ್ದೇಶಕರ ನಡುವಿನ ಬಾಂಧವ್ಯ ವಿಶೇಷವಾದದ್ದು. ದೊಡ್ಡ ವೇದಿಕೆಗಳಲ್ಲಿ ಒಬ್ಬರನ್ನೊಬ್ಬರು ತಮಾಷೆಯಾಗಿ ಕಾಲೆಳೆಯುವುದು, ಹಳೆಯ ನೆನಪುಗಳನ್ನು ಹಂಚಿಕೊಳ್ಳುವುದು ಸಾಮಾನ್ಯ.&lt;/p&gt;&lt;p&gt;ಅಂತಹದ್ದೇ ಒಂದು ವೇದಿಕೆಯಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ, 'ಮೋಹನ್ ಬಾಬು ಅವರಿಗೆ ಬಹಳ ಗರ್ವ, ಅವರಿಗಿಂತ ದೊಡ್ಡ ನಟ ಇಲ್ಲ ಎಂದು ಅವರು ಭಾವಿಸುತ್ತಾರೆ... ಅದು ನಿಜ ಕೂಡ!' ಎಂದು ತಮಾಷೆಯಾಗಿ ಹೇಳಿದ್ದರು. ರಾಜಮೌಳಿ ಮಾತಿಗೆ ವೇದಿಕೆಯಲ್ಲಿದ್ದವರು ಮತ್ತು ಪ್ರೇಕ್ಷಕರು ನಗೆಗಡಲಲ್ಲಿ ತೇಲಿದರು. ರಾಜಮೌಳಿ ಕಾಮೆಂಟ್&zwnj;ಗೆ ಮೋಹನ್ ಬಾಬು ತಮ್ಮದೇ ಮಾರ್ಕ್ ಪಂಚ್&zwnj;ನೊಂದಿಗೆ ಉತ್ತರಿಸಿದರು. ತನಗೆ ಪೊಗರು ಇದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರೊಂದಿಗಿನ ಹಳೆಯ ನೆನಪೊಂದನ್ನು ಹಂಚಿಕೊಂಡರು.&lt;/p&gt;&lt;p&gt;'ರಾಜಮೌಳಿ ನನಗೆ ಪೊಗರು ಅಂದ. ಏನಯ್ಯಾ ರಾಜಮೌಳಿ... ನನಗೆ ಅಲ್ಲ ಪೊಗರು, ನಿಮ್ಮ ಗುರು ರಾಘವೇಂದ್ರ ರಾವ್ ಅವರಿಗೆ ಪೊಗರು, ಅಹಂಕಾರ ಜಾಸ್ತಿ. ಸತತ ಹಿಟ್ ಕೊಡುತ್ತಿದ್ದ ಸಮಯದಲ್ಲಿ ಅದನ್ನು ತೋರಿಸಿದ್ದರು' ಎಂದು ಮೋಹನ್ ಬಾಬು ಹಳೆಯ ಘಟನೆಯೊಂದನ್ನು ವಿವರಿಸಿದರು. &lsquo;ಸಿಂಹಬಲುಡು&rsquo; ಸಿನಿಮಾ ಶೂಟಿಂಗ್ ಸಮಯದಲ್ಲಿ ಅಣ್ಣಾವ್ರು ಸೀನಿಯರ್ ಎನ್&zwnj;ಟಿಆರ್ ಜೊತೆ ಫೈಟ್ ಸೀನ್ ಮಾಡುತ್ತಿದ್ದಾಗ ಒಂದು ಘಟನೆ ನಡೆಯಿತು.&lt;/p&gt;&lt;p&gt;ಆಗಲೇ ಶೂಟಿಂಗ್&zwnj;ನಿಂದ ಸುಸ್ತಾಗಿ ಕಣ್ಣುಗಳು ಊದಿಕೊಂಡಿದ್ದವು. ಆ ಸಮಯದಲ್ಲಿ ರಾಘವೇಂದ್ರ ರಾವ್ ಸತತ ಹಿಟ್ ನೀಡಿ, ಸ್ವಲ್ಪ ಪೊಗರು ಮತ್ತು ಅಹಂಕಾರದಿಂದ (ತಮಾಷೆಯಾಗಿ) ಇದ್ದರು. ಶೂಟಿಂಗ್&zwnj;ನಲ್ಲಿ ನನಗೆ ತಲೆನೋವು ಹೆಚ್ಚಾಗಿ, ಕಣ್ಣು ಊದಿಕೊಂಡಿದ್ದಾಗ, ಇನ್ನೊಬ್ಬ ನಿರ್ದೇಶಕ ಕೋದಂಡರಾಮಿರೆಡ್ಡಿಗೆ 'ಸ್ವಲ್ಪ ರಿಸ್ಕಿ ಶಾಟ್ಸ್ ಬೇಡ, ನಿಧಾನವಾಗಿ ಮಾಡಿಸಲು ಹೇಳು' ಎಂದು ಹೇಳಿದ್ದೆ. ಆದರೂ ರಾಘವೇಂದ್ರ ರಾವ್ ಭಯಂಕರ ರಿಸ್ಕಿಯಾದ ಶಾಟ್ ಇಟ್ಟರು.&lt;/p&gt;&lt;h2&gt;&lt;strong&gt;ಊರಿಗೆ ಹೋಗಿ ವ್ಯವಸಾಯ ಮಾಡ್ಕೋತೀನಿ&lt;/strong&gt;&lt;/h2&gt;&lt;p&gt;'ಏನ್ರೀ! ಇಷ್ಟು ರಿಸ್ಕಿ ಶಾಟ್ ಇಟ್ಟಿದ್ದೀರಲ್ಲ?' ಅಂತ ನಾನು ಕೇಳಿದೆ. ಅದಕ್ಕೆ ಅವರು, 'ಪ್ರತಿಯೊಂದನ್ನೂ ಆರ್ಟಿಸ್ಟ್&zwnj;ಗೆ ಹೇಳಬೇಕಾ? ಮಾಡ್ತೀಯಾ ಇಲ್ವಾ?' ಅಂತ ಸೀರಿಯಸ್ ಆಗಿ ಕೇಳಿದರು. ಇದರಿಂದ ನನಗೆ ಕೋಪ ಬಂದು, ಹೆಲ್ಮೆಟ್ ಜೊತೆಗೆ ನನ್ನ ವಿಗ್ ತೆಗೆದು ಕೆಳಗೆ ಬಿಸಾಡಿ, 'ಹೋಗಯ್ಯಾ... ನೀನು ನನಗೆ ಶೂಟಿಂಗ್ ಕೊಡಬೇಡ! ನಾನು ನಮ್ಮೂರಿಗೆ ಹೋಗಿ ವ್ಯವಸಾಯ ಮಾಡ್ಕೋತೀನಿ' ಅಂತ ಅಲ್ಲಿಂದ ಹೊರಟು ಹೋದೆ. ನಾನು ಹೆಲ್ಮೆಟ್ ತೆಗೆದು ಬಿಸಾಕಿದ್ನೋ, ವಿಗ್ ತೆಗೆದು ಬಿಸಾಕಿದ್ನೋ ಅವರಿಗೂ ಅರ್ಥವಾಗಲಿಲ್ಲ!&quot; ಎಂದು ಮೋಹನ್ ಬಾಬು ಆ ಘಟನೆಯನ್ನು ವಿವರಿಸಿದರು. ಆದರೆ, ಮೋಹನ್ ಬಾಬು ಇದೆಲ್ಲವನ್ನೂ ನಗುತ್ತಾ ಹೇಳಿದ್ದರಿಂದ, ಅಲ್ಲೇ ಇದ್ದ ರಾಘವೇಂದ್ರ ರಾವ್ ಮತ್ತು ರಾಜಮೌಳಿ ಕೂಡ ಎಂಜಾಯ್ ಮಾಡಿದರು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/tollywood-actor-mohan-babu-recalls-heated-incident-with-director-rajamouli-and-raghavendra-rao-gvd/articleshow-uut44ge"/>
        </item>
        <item>
            <title><![CDATA[BRICS: ಇರಾನ್ ಅಧ್ಯಕ್ಷರ ಪುತ್ರಿ ಬ್ರಿಕ್ಸ್ ಮಾರುಕಟ್ಟೆಯಲ್ಲಿ ಶಾಪಿಂಗ್! ಅವರ ಖರೀದಿ ಲಿಸ್ಟ್‌ನಲ್ಲಿ ಏನೇನಿದೆ? ಫೋಟೋಗಳು ವೈರಲ್!]]></title>
            <link>https://kannada.asianetnews.com/viral/iran-president-daughter-shopping-at-brics-market-viral-photos-what-did-she-buy-brics-summit-india-bmk/articleshow-bl2axz2</link>
            <guid isPermaLink="true">https://kannada.asianetnews.com/viral/iran-president-daughter-shopping-at-brics-market-viral-photos-what-did-she-buy-brics-summit-india-bmk/articleshow-bl2axz2</guid>
            <pubDate>Sat, 12 Sep 2026 19:25:09 +0530</pubDate>
            <description><![CDATA[18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, ಇರಾನ್ ಅಧ್ಯಕ್ಷರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ನವದೆಹಲಿಯ 'ಬ್ರಿಕ್ಸ್ ಬಜಾರ್'ಗೆ ಭೇಟಿ ನೀಡಿದರು. ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರೊಂದಿಗೆ ಭಾರತೀಯ ಕೈಮಗ್ಗ, ಕರಕುಶಲ ವಸ್ತುಗಳನ್ನು ವೀಕ್ಷಿಸಿದ ಅವರು, ಸ್ಥಳೀಯ ಕುಶಲಕರ್ಮಿಗಳ ಕೌಶಲ್ಯವನ್ನು ಮುಕ್ತಕಂಠದಿಂದ ಶ್ಲಾಘನೆ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2aybrpxspzckspazwfnh2g3,imgname-india-and-iran-1789221266141.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯಲ್ಲಿ ನಡೆಯುತ್ತಿರುವ 18ನೇ ಬ್ರಿಕ್ಸ್ ಶೃಂಗಸಭೆಯ ರಾಜತಾಂತ್ರಿಕ ಹಾಗೂ ಗಂಭೀರ ಚರ್ಚೆಗಳ ನಡುವೆ ಅತ್ಯಂತ ಆಕರ್ಷಕ ಸಾಂಸ್ಕೃತಿಕ ಚಿತ್ರಣವೊಂದು ಹೊರಬಿದ್ದಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪುತ್ರಿ ಜಹ್ರಾ ಪೆಜೆಶ್ಕಿಯಾನ್ ಅವರು ನವದೆಹಲಿಯ ರಾಷ್ಟ್ರೀಯ ಕರಕುಶಲ ವಸ್ತುಸಂಗ್ರಹಾಲಯದಲ್ಲಿ (ನ್ಯಾಷನಲ್ ಕ್ರಾಫ್ಟ್ಸ್ ಮ್ಯೂಸಿಯಂ) ಆಯೋಜಿಸಲಾಗಿದ್ದ &quot;ಬ್ರಿಕ್ಸ್ ಬಜಾರ್&quot;ಗೆ ಭೇಟಿ ನೀಡಿ ಭಾರತೀಯ ಕಲೆ ಮತ್ತು ಸಾಂಪ್ರದಾಯಿಕ ವೈಭವವನ್ನು ಕಣ್ಣುಂಬಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಪತಿ ಹಾಗೂ ಕೇಂದ್ರ ಸಚಿವರೊಂದಿಗೆ ರಾಯಲ್ ವಿಸಿಟ್!&lt;/strong&gt;&lt;/h2&gt;&lt;p&gt;ಜಹ್ರಾ ಪೆಜೆಶ್ಕಿಯಾನ್ ಅವರು ಬ್ರಿಕ್ಸ್ ಬಜಾರ್&zwnj;ಗೆ ತಮ್ಮ ಪತಿ ಹಸನ್ ಮಜಿದಿ ಅವರೊಂದಿಗೆ ಆಗಮಿಸಿದ್ದರು. ಭಾರತದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಅವರು ಜಹ್ರಾ ದಂಪತಿಯನ್ನು ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿ ಪ್ರೀತಿಯಿಂದ ಸ್ವಾಗತಿಸಿ, ವಸ್ತುಸಂಗ್ರಹಾಲಯದ ಪ್ರವಾಸಕ್ಕೆ ಕರೆದೊಯ್ದರು.&lt;/p&gt;&lt;h3&gt;&lt;strong&gt;ಭಾರತೀಯ ಕೈಮಗ್ಗ ಹಾಗೂ ಕರಕುಶಲತೆಗೆ ಜಹ್ರಾ ಫಿದಾ!&lt;/strong&gt;&lt;/h3&gt;&lt;p&gt;ವಸ್ತುಸಂಗ್ರಹಾಲಯದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಜಹ್ರಾ, ಭಾರತೀಯ ಕೈಮಗ್ಗ ಉಡುಪುಗಳು, ಸಾಂಪ್ರದಾಯಿಕ ಜವಳಿ ವೈವಿಧ್ಯತೆ ಹಾಗೂ ಅಪರೂಪದ ಕುಂಬಾರಿಕೆ ಕಲೆಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಭಾರತದ ವೈವಿಧ್ಯಮಯ ಮಣ್ಣಿನ ಸಂಸ್ಕೃತಿ ಮತ್ತು ನೇಕಾರರ ವೈಭವಕ್ಕೆ ಅವರು ಸಂಪೂರ್ಣವಾಗಿ ಮಾರುಹೋದರು.&lt;/p&gt;&lt;h3&gt;&lt;strong&gt;ಮುಕ್ತಕಂಠದಿಂದ ಶ್ಲಾಘನೆ!&lt;/strong&gt;&lt;/h3&gt;&lt;p&gt;ಇಷ್ಟೇ ಅಲ್ಲದೆ, ಶಾಪಿಂಗ್ ಮಾಡುವ ವೇಳೆ ಜಹ್ರಾ ಪೆಜೆಶ್ಕಿಯಾನ್ ಅವರು ಸ್ಥಳೀಯ ಕುಶಲಕರ್ಮಿಗಳೊಂದಿಗೆ ನೇರವಾಗಿ ಸಂವಹನ ನಡೆಸಿದರು. ಕಚ್ಚಾ ವಸ್ತುಗಳಿಂದ ಅತ್ಯಂತ ಸುಂದರ ಹಾಗೂ ಸೂಕ್ಷ್ಮವಾದ ಕಲಾಕೃತಿಗಳನ್ನು ಕೈಯಲ್ಲೇ ಹೇಗೆ ಸೃಷ್ಟಿಸಲಾಗುತ್ತದೆ ಎಂಬುದನ್ನು ಕುಶಲಕರ್ಮಿಗಳಿಂದಲೇ ಕೇಳಿ ತಿಳಿದುಕೊಂಡರು. ಭಾರತೀಯ ಆಟೋಮೆಟಿಕ್ ಮತ್ತು ಹ್ಯಾಂಡ್&zwnj;ಮೇಡ್ ಕಲಾವಿದರ ಕಠಿಣ ಪರಿಶ್ರಮ ಹಾಗೂ ಕೌಶಲವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.&lt;/p&gt;&lt;h3&gt;&lt;strong&gt;ಬ್ರಿಕ್ಸ್ ಬಜಾರ್ ಆಯೋಜನೆಯ ಹಿಂದಿನ ಉದ್ದೇಶ!&lt;/strong&gt;&lt;/h3&gt;&lt;p&gt;ಈ ಬ್ರಿಕ್ಸ್ ಶೃಂಗಸಭೆಯ ಸಮಯದಲ್ಲಿ ಇಂತಹ ಬಜಾರ್&zwnj;ಗಳನ್ನು ಆಯೋಜಿಸುವುದರ ಮುಖ್ಯ ಉದ್ದೇಶ ಸದಸ್ಯ ರಾಷ್ಟ್ರಗಳ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುವುದಾಗಿದೆ. ಭಾರತ, ಇರಾನ್ ಸೇರಿದಂತೆ ಹಲವು ಬ್ರಿಕ್ಸ್ ದೇಶಗಳ ವಿಶಿಷ್ಟ ಸಾಂಸ್ಕೃತಿಕ ಉತ್ಪನ್ನಗಳ ಸ್ಟಾಲ್&zwnj;ಗಳು ಇಲ್ಲಿ ಭಾಗವಹಿಸಿದ್ದು, ಇದು ದೇಶಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸಲು ನೆರವಾಗಿದೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್!&lt;/strong&gt;&lt;/h3&gt;&lt;p&gt;ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ 'ಎಕ್ಸ್'ನಲ್ಲಿ ಜಹ್ರಾ ಅವರ ಭೇಟಿಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. &quot;ಜಹ್ರಾ ಪೆಜೆಶ್ಕಿಯಾನ್ ಅವರನ್ನು ಭೇಟಿಯಾಗುವುದು ಅತ್ಯಂತ ಸಂತೋಷ ತಂದಿದೆ. ಕಲೆ ಮತ್ತು ಕರಕುಶಲ ವಸ್ತುಗಳ ಈ ವೈಭವದ ಆಚರಣೆಯು ಬ್ರಿಕ್ಸ್ ದೇಶಗಳ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ&quot; ಎಂದು ಸಚಿವರು ಬರೆದುಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ವೈರಲ್&zwnj; ಆದ ಪೋಟೋಗಳು!&lt;/strong&gt;&lt;/h3&gt;&lt;p&gt;ಈ ವೈರಲ್ ಫೋಟೋಗಳಲ್ಲಿ ಜಹ್ರಾ ಪೆಜೆಶ್ಕಿಯಾನ್ ಅವರು ಭಾರತೀಯ ಪ್ರತಿಯೊಂದು ಸ್ಟಾಲ್&zwnj;ಗಳ ಉತ್ಪನ್ನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದು ಕಂಡುಬಂದಿದೆ. 18ನೇ ಬ್ರಿಕ್ಸ್ ಶೃಂಗಸಭೆಯ ಗಂಭೀರ ರಾಜಕೀಯ ಸಭೆಗಳ ನಡುವೆ ನಡೆದ ಈ ಸಾಂಸ್ಕೃತಿಕ ಪ್ರವಾಸವು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಬ್ರಿಕ್ಸ್ ಒಕ್ಕೂಟವು ಕೇವಲ ಅರ್ಥಶಾಸ್ತ್ರ ಅಥವಾ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ, ಕಲೆ ಮತ್ತು ಸಂಸ್ಕೃತಿಯ ಮೂಲಕವೂ ದೇಶಗಳನ್ನು ಒಂದಾಗಿಸುವ ವೇದಿಕೆಯಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/iran-president-daughter-shopping-at-brics-market-viral-photos-what-did-she-buy-brics-summit-india-bmk/articleshow-bl2axz2"/>
        </item>
        <item>
            <title><![CDATA[ಇ-ಕಾಮರ್ಸ್ ಸಂಸ್ಥೆಗಳಿಗೆ ಬಿಗಿಬಂಧನ: ಆನ್‌ಲೈನ್ ಸೇಲ್ ವೇಳೆ 'ಅಸಲಿ ಬೆಲೆ' ತೋರಿಸೋದು ಕಡ್ಡಾಯ!]]></title>
            <link>https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0</link>
            <guid isPermaLink="true">https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0</guid>
            <pubDate>Sat, 12 Sep 2026 19:07:49 +0530</pubDate>
            <description><![CDATA[ಕೇಂದ್ರ ಸರ್ಕಾರವು ಆನ್‌ಲೈನ್ ಶಾಪಿಂಗ್‌ನಲ್ಲಿ ಪಾರದರ್ಶಕತೆ ತರಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಇನ್ನು ಮುಂದೆ ನಕಲಿ ರಿಯಾಯಿತಿಗಳನ್ನು ತಡೆಯಲು ಉತ್ಪನ್ನದ ನೈಜ ಬೆಲೆಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಗ್ರಾಹಕರನ್ನು ದಾರಿತಪ್ಪಿಸುವ ಡಾರ್ಕ್ ಪ್ಯಾಟರ್ನ್‌ಗಳು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kf2v8sp4pdr8gjasma6j1nrv,imgname-e-commerce-1768548492996.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಆನ್&zwnj;ಲೈನ್ ಶಾಪಿಂಗ್ ಪ್ರಿಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು ಇ-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳ ನಕಲಿ ರಿಯಾಯಿತಿ ಮತ್ತು ದಾರಿತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಮುಂಬರುವ ಜನವರಿಯಿಂದ ಜಾರಿಗೆ ಬರಲಿರುವ ಹೊಸ ನಿಯಮಗಳ ಪ್ರಕಾರ, ಫ್ಲಿಪ್&zwnj;ಕಾರ್ಟ್, ಅಮೆಜಾನ್ ಸೇರಿದಂತೆ ಎಲ್ಲಾ ಇ-ಕಾಮರ್ಸ್ ಸಂಸ್ಥೆಗಳು ಹಬ್ಬದ ಮಾರಾಟ ಅಥವಾ ಯಾವುದೇ ಕೊಡುಗೆಗಳ ಸಮಯದಲ್ಲಿ ಉತ್ಪನ್ನದ &lsquo;ರಿಯಾಯಿತಿ ದರ&rsquo;ದ ಜೊತೆಗೆ ಅದರ ಅಸಲಿ ಬೆಲೆ ಯನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.&lt;/p&gt;&lt;p&gt;ಗ್ರಾಹಕರ ಹಿತರಕ್ಷಣೆ ಮತ್ತು ಆನ್&zwnj;ಲೈನ್ ವ್ಯಾಪಾರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು 'ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು'ಗಳಿಗೆ ವ್ಯಾಪಕ ತಿದ್ದುಪಡಿ ತಂದಿದ್ದು, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.&lt;/p&gt;&lt;h2&gt;'ಹಿಂದಿನ ಬೆಲೆ' ಎಂದರೆ ಏನು?&lt;/h2&gt;&lt;p&gt;ಸಾಮಾನ್ಯವಾಗಿ ಹಬ್ಬದ ಸೇಲ್&zwnj;ಗಳಲ್ಲಿ ರಿಯಾಯಿತಿ ನೀಡುವ ಮುನ್ನ ಉತ್ಪನ್ನಗಳ ಬೆಲೆಯನ್ನು ಕೃತಕವಾಗಿ ಏರಿಸಿ, ನಂತರ ಭಾರಿ ಆಫರ್ ನೀಡಿದಂತೆ ಬಿಂಬಿಸಲಾಗುತ್ತದೆ ಎಂಬ ದೂರುಗಳಿದ್ದವು. ಇದನ್ನು ತಡೆಯಲು &lsquo;ಹಿಂದಿನ ಬೆಲೆ&rsquo; (Previous Price) ಎಂಬ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ಆಫರ್ ಘೋಷಿಸುವ ದಿನಕ್ಕಿಂತ ಹಿಂದಿನ 30 ದಿನಗಳ ಅವಧಿಯಲ್ಲಿ ಆ ಉತ್ಪನ್ನಕ್ಕೆ ವಿಧಿಸಲಾಗಿದ್ದ ಅತ್ಯಂತ ಕಡಿಮೆ ಬೆಲೆಯನ್ನು 'ಹಿಂದಿನ ಬೆಲೆ' ಎಂದು ಪರಿಗಣಿಸಲಾಗುತ್ತದೆ. ಪ್ಲಾಟ್&zwnj;ಫಾರ್ಮ್&zwnj;ಗಳು ಕಡ್ಡಾಯವಾಗಿ ಈ ಕಡಿಮೆ ಬೆಲೆ ಮತ್ತು ಪ್ರಸ್ತುತ ನೀಡುತ್ತಿರುವ ರಿಯಾಯಿತಿ ಬೆಲೆ ಎರಡನ್ನೂ ಪ್ರದರ್ಶಿಸಬೇಕು.&lt;/p&gt;&lt;h2&gt;ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಜೊತೆ ಲಿಂಕ್ ಕಡ್ಡಾಯ&lt;/h2&gt;&lt;p&gt;ಇನ್ಮುಂದೆ ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯು 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ'ಯ (NCH) ಒಮ್ಮುಖ ವ್ಯವಸ್ಥೆಯೊಂದಿಗೆ ಸಂಯೋಜನೆಗೊಳ್ಳುವುದು ಕಡ್ಡಾಯವಾಗಿದೆ. 2025 ರ ಒಂದೇ ವರ್ಷದಲ್ಲಿ ಎನ್&zwnj;ಸಿಎಚ್&zwnj;ಗೆ ಬಂದ ಒಟ್ಟು 17.7 ಲಕ್ಷ ದೂರುಗಳಲ್ಲಿ ಶೇಕಡಾ 29 ರಷ್ಟು ದೂರುಗಳು ಇ-ಕಾಮರ್ಸ್ ವಲಯಕ್ಕೆ ಸಂಬಂಧಿಸಿದ್ದಾಗಿದ್ದವು. ಗ್ರಾಹಕರು ಬೆಲೆಯಲ್ಲಿ ವ್ಯತ್ಯಾಸ ಅಥವಾ ಮೋಸ ಕಂಡುಕೊಂಡರೆ ಎನ್&zwnj;ಸಿಎಚ್&zwnj;ಗೆ ದೂರು ನೀಡಬಹುದು. ಗ್ರಾಹಕ ಕುಂದುಕೊರತೆ ಅಧಿಕಾರಿಯು ದಾಖಲಿಸಿದ ದೂರಿನ ಪ್ರತಿಯನ್ನು ಇ-ಕಾಮರ್ಸ್ ಸಂಸ್ಥೆಗಳು ಗ್ರಾಹಕರಿಗೆ ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.&lt;/p&gt;&lt;h2&gt;ಡಾರ್ಕ್ ಪ್ಯಾಟರ್ನ್ ಹಾಗೂ ದಾರಿತಪ್ಪಿಸುವ ಹುಡುಕಾಟಗಳಿಗೆ ನಿಷೇಧ&lt;/h2&gt;&lt;p&gt;ಗ್ರಾಹಕರು ಆನ್&zwnj;ಲೈನ್ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ವಸ್ತುಗಳನ್ನು ಸರ್ಚ್ ಮಾಡುವಾಗ ಅವರನ್ನು ದಾರಿತಪ್ಪಿಸುವ &lsquo;ಡಾರ್ಕ್ ಪ್ಯಾಟರ್ನ್&zwnj;&rsquo; (Dark Patterns) ತಂತ್ರಗಳನ್ನು ಹೊಸ ನಿಯಮಗಳು ಕಟ್ಟುನಿಟ್ಟಾಗಿ ನಿಷೇಧಿಸುತ್ತವೆ.&lt;/p&gt;&lt;p&gt;ಪ್ರಾಯೋಜಿತ ಪಟ್ಟಿಗಳ (Sponsored Listings) ಬಹಿರಂಗಪಡಿಸುವಿಕೆ: ಪ್ರಾಯೋಜಿತ ಅಥವಾ ಪಾವತಿಸಿದ ಜಾಹೀರಾತು ಉತ್ಪನ್ನಗಳನ್ನು ನೈಜ (Organic) ಶೋಧನಾ ಫಲಿತಾಂಶಗಳಿಂದ ಪ್ರತ್ಯೇಕಿಸಲು &quot;ಸ್ಪಷ್ಟ ಮತ್ತು ಎದ್ದುಕಾಣುವ&quot; ಲೇಬಲ್&zwnj;ಗಳನ್ನು ಹಾಕಬೇಕು. ಇದರಿಂದ ಗ್ರಾಹಕರು ಜಾಹೀರಾತು ಮತ್ತು ನೈಜ ಉತ್ಪನ್ನಗಳ ನಡುವಿನ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ನಿಯಮಗಳು ಆನ್&zwnj;ಲೈನ್ ಶಾಪಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರ ಹಕ್ಕುಗಳನ್ನು ಎತ್ತಿಹಿಡಿಯಲಿದ್ದು, ಬೆಲೆ ನಿಗದಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಿವೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/e-commerce-discount-rules-india-mandatory-mrp-and-previous-price-display-from-january-in-online-shopping-gdp/articleshow-dw5qma0"/>
        </item>
        <item>
            <title><![CDATA[ದೇಶದ ನಾಲ್ಕು ಪ್ರಸಿದ್ಧ ದೇಗುಲದಲ್ಲಿ ಮಾಂಸಾಹಾರವೇ ಭಕ್ತರಿಗೆ ಪ್ರಸಾದ - ಅವು ಯಾವುದು?]]></title>
            <link>https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w</link>
            <guid isPermaLink="true">https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w</guid>
            <pubDate>Sat, 12 Sep 2026 19:05:27 +0530</pubDate>
            <description><![CDATA[ನಿಮಗೆ ಗೊತ್ತಾ? ದೇಶದಲ್ಲಿರುವ ಕೆಲವು ದೇಗುಲಗಳಲ್ಲಿ ಮಾಂಸಾಹಾರವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅವುಗಳ ವಿವರ ಈ ಸ್ಟೋರಿಯಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ax7kt36vvk5m5ecq5f7nr7,imgname-suvendu-adhikari-1789220081475.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಶ್ಚಿಮ ಬಂಗಾಳದಲಿ ದುರ್ಗಾ ಪೂಜೆಗೂ ಮುನ್ನ ಆಹಾರ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹೊಸ ಚರ್ಚೆ ಭುಗಿಲೆದ್ದಿದೆ. ಇತ್ತೀಚೆಗೆ ಬಾಗೇಶ್ವರ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಒಂದು ಹೇಳಿಕೆಯನ್ನ ನೀಡಿದ್ದಾರೆ. ದುರ್ಗಾ ಪೂಜೆಯ ಸಮಯದಲ್ಲಿ ಬಂಗಾಳಿ ಹಿಂದೂಗಳು ಮಾಂಸಾಹಾರದಿಂದ ದೂರವಿರಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇತ್ತ, ಅಲ್ಲಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೌಶಿಕಿ ಅಮವಾಸ್ಯೆಯ ಸಂದರ್ಭದಲ್ಲಿ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಮೀನು ನೈವೇದ್ಯವನ್ನು ಸೇವಿಸಲು ನೆಲದ ಮೇಲೆ ಕುಳಿತರು. ಬೆನ್ನಲ್ಲೇ ಶಾಸ್ತ್ರಿಗಳ ಈ ಹೇಳಿಕೆಯು ಮತ್ತಷ್ಟು ವಿವಾದವನ್ನು ಹೆಚ್ಚಿಸಿತು.&lt;/p&gt;&lt;p&gt;ವಿವಾದ ಏನೇ ಇರಲಿ. ದೇಶದಲ್ಲಿರುವ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಮಾಂಸಾಹಾರವನ್ನೇ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಅಂಥ ದೇಗುಲಗಳು ಯಾವ್ಯಾವುದು ಅನ್ನೋ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಕಾಳಿಘಾಟ್ ದೇವಾಲಯ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿರುವ ಕಾಳಿಘಾಟ್ ಕಾಳಿ ದೇವಾಲಯ ಇದೆ. ಇದು ದೇಶದ ಅತ್ಯಂತ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದು. ಕಾಳಿ ದೇವಿಗೆ ಮೇಕೆಯನ್ನು ಬಲಿ ನೀಡಲಾಗುತ್ತದೆ. ಇದು ತುಂಬಾ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ದೇವಾಲಯದ ಒಂದು ಜಾಗದಲ್ಲಿ ಬಲಿಗೆ ಮೀಸಲಾದ ಸ್ಥಳ ಇದೆ. ಮೇಕೆ ಕಡಿದ ನಂತರ ಮಾಂಸವನ್ನು ಬೇಯಿಸಿ ದೇವಿಗೆ ಅರ್ಪಿಸಲಾಗುತ್ತದೆ. ನಂತರ ಅದನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಭಕ್ತರು ಬಲಿ ನೀಡುವ ಬದಲು ತೆಂಗಿನಕಾಯಿ, ಕುಂಬಳಕಾಯಿ ಅರ್ಪಿಸುತ್ತಾರೆ. ಹೀಗಿದ್ದೂ ಮಾಂಸವನ್ನು ಅರ್ಪಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡೇ ಬಂದಿದೆ.&lt;/p&gt;&lt;h2&gt;&lt;strong&gt;ಕಾಮಾಕ್ಯ ದೇವಾಲಯ&lt;/strong&gt;&lt;/h2&gt;&lt;p&gt;ಅಸ್ಸಾಂನ ಗುವಾಹಟಿಯಲ್ಲಿ ಮಾ ಕಾಮಾಕ್ಯ ದೇವಾಲಯ ಇದೆ. ದೇಶದ ಪ್ರಮುಖ ಶಕ್ತಿಪೀಠಗಳಲ್ಲಿ ಇದೂ ಒಂದು. ಈ ದೇಗುಲ ತಾಂತ್ರಿಕ ಪದ್ಧತಿಗಳಿಗೂ ಹೆಸರುವಾಸಿ. ಅಂಬುಬಾಚಿ ಜಾತ್ರೆಯ ಸಮಯದಲ್ಲಿ ಮತ್ತು ನಿಯಮಿತ ಸಂದರ್ಭಗಳಲ್ಲಿ ಮೇಕೆ ಮತ್ತು ಪಾರಿವಾಳಗಳನ್ನ ಬಲಿಯಾಗಿ ನೀಡಲಾಗುತ್ತದೆ. ದುರ್ಗಾ ಪೂಜೆಯ ಸಮಯದಲ್ಲಿ ಕೋಣಗಳು ಮತ್ತು ಬಾತುಕೋಳಿಗಳನ್ನು ಸಹ ಬಲಿ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಬಲಿ ಪಡೆದ ನಂತರ ಮಾಂಸವನ್ನು ದೇವಿಗೆ ನೈವೇದ್ಯವೆಂದು ಅರ್ಪಿಸಲಾಗುತ್ತದೆ. ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ನರಬಲಿಯಂತಹ ಪ್ರಾಚೀನ ಪದ್ಧತಿಗಳನ್ನು ಈಗ ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದರೂ ಪ್ರಾಣಿ ಬಲಿಯ ಸಂಪ್ರದಾಯ ಮುಂದುವರೆದಿದೆ..&lt;/p&gt;&lt;h2&gt;&lt;strong&gt;ತಾರಾಪೀಠ ದೇವಾಲಯ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಇನ್ನೊಂದು ದೇಗುಲ ಬಿರ್ಭುಮ್ ಜಿಲ್ಲೆಯಲ್ಲಿದೆ. ಅದುವೇ ತಾರಾಪೀಠ ದೇವಾಲಯ. ತಾರಾ ದೇವಿಗೆ ಮಾಂಸಾಹಾರ ಸಮರ್ಪಿತ. ಈ ದೇಗುಲ ತಾಂತ್ರಿಕ ಪದ್ಧತಿಗೆ ಹೆಸರುವಾಸಿ. ಇಲ್ಲಿ ಮೇಕೆಯನ್ನು ಬಲಿ ನೀಡುವ ಸಂಪ್ರದಾಯವಿದೆ. ಬಲಿದಾನದ ನಂತರ ಮಾಂಸವನ್ನು ದೇವಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ಕಾಲಕಾಲಕ್ಕೆ ದೇವಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಆಹಾರ ದೇಣಿಗೆಗಳನ್ನು ಆಯೋಜಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಕೇರಳದ ಭದ್ರಕಾಳಿ&lt;/strong&gt;&lt;/h2&gt;&lt;p&gt;ಕೇರಳದಲ್ಲಿ ಒಂದು ಭದ್ರಕಾಳಿ ದೇವಸ್ಥಾನವಿದೆ. ಇದನ್ನು ಉತ್ತರ ಕೇರಳದ ಎಲ್ಲಾ ಭದ್ರಕಾಳಿ ದೇವಸ್ಥಾನಗಳ ಮೂಲವೆಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಪ್ರಾಣಿ ಬಲಿ ಇಲ್ಲಿ ಒಂದು ಸಂಪ್ರದಾಯವಾಗಿತ್ತು. ಕಾನೂನು ಅದನ್ನು ನಿಷೇಧಿಸಿದ ನಂತರ ಈ ದೇವಸ್ಥಾನದಲ್ಲಿ ನಿತ್ಯ ಕೋಳಿಯನ್ನು ಅರ್ಪಿಸಲಾಗುತ್ತದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/in-four-of-the-country-is-famous-temples-non-vegetarian-food-is-served-as-prasada-to-devotees-which-are-they-gkn/articleshow-wb9aq3w"/>
        </item>
        <item>
            <title><![CDATA[ಅಗ್ಗದ ಬೆಲೆಯಲ್ಲಿ ಎಬಿಎಸ್ ಇರೋ ಹೀರೋ ಗ್ಲಾಮರ್ ಬೈಕ್ ಲಾಂಚ್, ಏನಿದರ ವಿಶೇಷತೆ?]]></title>
            <link>https://kannada.asianetnews.com/bike-news/hero-glamour-bike-launched-at-affordable-price-with-abs-check-features/articleshow-r7kdmsm</link>
            <guid isPermaLink="true">https://kannada.asianetnews.com/bike-news/hero-glamour-bike-launched-at-affordable-price-with-abs-check-features/articleshow-r7kdmsm</guid>
            <pubDate>Sat, 12 Sep 2026 18:53:57 +0530</pubDate>
            <description><![CDATA[ಹೀರೋ ಗ್ಲಾಮರ್ ಬೈಕ್ ಇದೀಗ ಎಬಿಎಸ್ ಬ್ರೇಕ್ ಮೂಲಕ ಬಿಡುಗಡೆಯಾಗಿದೆ. ಇದರ ಜೊತೆಗೆ ಕೆಲ ಫೀಚರ್ ಸೇರಿಸಲಾಗಿದೆ. ಕೈಗೆಟುಕುವ ಬೆಲೆಯಲ್ಲಿ ಬೈಕ್ ಬಿಡುಗಡೆಯಾಗಿದೆ. 125ಸಿಸಿ ಬೈಕ್‌ನಲ್ಲೇ ಎಬಿಎಸ್ ಇಂಟಿಗ್ರೇಟೆಡ್ ಇದೇ ಮೊದಲು.]]></description>
            <media:content url="https://static.asianetnews.com/images/w-1280,h-720,format-jpg,imgid-01m2awkfgcq0p03sm33w4ma3vp,imgname-hero-glamour-with-abs-launched-1789219421708.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.12)&lt;/strong&gt; ಭಾರತದಲ್ಲಿ ಹೀರೋ ಕೈಗೆಟುಕುವ ಬೆಲೆಯಲ್ಲಿ ಉತ್ತಮ ದ್ವಿಚಕ್ರ ವಾಹನ ನೀಡುವ ಮೂಲಕ ಮನೆ ಮಾತಾಗಿದೆ. ಹೀರೋ ಸ್ಪ್ಲೆಂಡರ್ ಸೇರಿದಂತೆ ಹಲವು ಬೈಕ್ ಭಾರತದಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಹೀರೋದ ಮತ್ತೊಂದು ಜನಪ್ರಿಯ ಬೈಕ್ ಗ್ಲಾಮರ್ ಇದೀಗ ಹೊಸ ಅಪ್&zwnj;ಡೇಟ್ ಜೊತೆ ಬಿಡುಗಡೆಯಾಗಿದೆ. 125 ಸಿಸಿ ಗ್ಲಾಮರ್ ಬೈಕ್ ಇದೀಗ ಎಬಿಎಸ್ ಇಂಟಿಗ್ರೇಟೆಡ್ ಫೀಚರ್ ಜೊತೆ ಲಾಂಚ್ ಆಗಿದೆ.&lt;/p&gt;&lt;p&gt;ಗ್ಲಾಮರ್ ಎಕ್ಸ್ 125 ಬೈಕ್ ಇದೀಗ ಇಂಟಿಗ್ರೇಟೆಡ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್ ಮೂಲಕ ಲಾಂಚ್ ಆಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಇದಾಗಿದೆ. ಇದರಿಂದ ಬೈಕ್ ರೈಡ್ ಹಾಗೂ ಪ್ರಯಾಣದ ಸುರಕ್ಷತೆ ಹೆಚ್ಚಿದೆ. ದಿಢೀರ್ ಬ್ರೇಕ್ ಅಪ್ಲೈ ಮಾಡಿದರೂ ಸ್ಕಿಡ್ ಸಮಸ್ಯೆಗಳು ದೂರವಾಗಲಿದೆ. ಜೊತೆಗೆ ಸವಾರರ ಸುರಕ್ಷತೆಗೆ ಪ್ರಮುಖ ಆದ್ಯತೆಯಾಗಿ ಎಬಿಎಸ್ ಕೆಲಸ ನಿರ್ವಹಿಸಲಿದೆ.&lt;/p&gt;&lt;h2&gt;ಹೊಸ ಬೈಕ್ ಬೆಲೆ&lt;/h2&gt;&lt;p&gt;ಗ್ಲಾಮರ್ ಎಕ್ಸ್ 125 ಬೈಕ್ ಬೆಲೆ 1,01,000 (ಎಕ್ಸ್ ಶೋ ರೂಂ). ಗನ್ ಮೆಟಲ್ ಗ್ರೇ ಹಾಗೂ ಆ್ಯಕ್ಸಿಸ್ ಗ್ರೇ ಹೊಸ ಬಣ್ಣಗಳು ಹಾಗೂ ಪ್ರಮುಖ ಮೂರು ಆಕರ್ಷಕ ಬಣ್ಣಗಳಲ್ಲಿ ಬೈಕ್ ಲಭ್ಯವಿದೆ. ಹೊಸ ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ.ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಕಂಪನಿ ಹೇಳಿದೆ.&lt;/p&gt;&lt;p&gt;ಎಲ್&zwnj;ಇಡಿ ಲೈಟಿಂಗ್, ಗ್ಲಾಮರ್ ಸಿಗ್ನೇಚರ್ ಸ್ಟೈಲ್ ಹೊಸ ಗ್ಲಾಮರ್ ಎಕ್ಸ್ 125 ಬೈಕ್&zwnj;ನಲ್ಲಿದೆ. ಆಕರ್ಷಕ ವಿನ್ಯಾಸ, ಮಸ್ಕುಲರ್ ಬಾಡಿಯಿಂದ ಬೈಕ್ ಲುಕ್ ಹೆಚ್ಚಾಗಿದೆ. ಆ್ಯಂಬಿಯೆಂಟ್ ಲೈಟಿಂಗ್, ಅಡಾಪ್ಟಿವ್ ಮಲ್ಟಿ ಕಲರ್ ಕನ್ಸೋಲ್ ಸೇರಿದಂತೆ ಹಲವು ಆಕರ್ಷಕ ಫೀಚರ್ ನೀಡಲಾಗಿದೆ. ನ್ಯಾವಿಗೇಶನ್, ಕಾಲ್, ಮೆಸೆಜ್ ಅಲರ್ಟ್, ತಂತ್ರಜ್ಞಾನ ಆಧಾರಿತ ರೈಡಿಂಗ್, ಗೇರ್ ಶಿಪ್ಟ್ ಸೂಚನೆ, ಬ್ಲೂಟೂತ್ ಕನೆಕ್ಟಿವಿಟಿ, ಮೈಲೇಜ್ ಡಿಸ್&zwnj;ಪ್ಲೇ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.&lt;/p&gt;&lt;h2&gt;ಹೊಸ ಗ್ಲಾಮರ್ ಬೈಕ್ ಎಂಜಿನ್ ಹಾಗೂ ಪವರ್&lt;/h2&gt;&lt;p&gt;ಗ್ಲಾಮರ್ ಎಕ್ಸ್ 125 ಬೈಕ್ 11.4 ಬಿಹೆಚ್&zwnj;ಪಿ ಪವರ್ ಹೊಂದಿದೆ. ಎಂಜಿನ್ ಅತ್ಯಂತ ಸ್ಮೂತ್ ಫೀಲ್ ನೀಡಲಿದೆ. ಹೆಚ್ಚಿನ ಸೌಂಡ್ ಇಲ್ಲದೆ ಚಲಿಸಲಿದೆ. ಇನ್ನು ಮೂರು ರೈಡ್ ಮೋಡ್ ನೀಡಲಾಗಿದೆ. ಕ್ರೂಸ್ ಕಂಟ್ರೋಲ್ ಸಿಸ್ಟಮ್&zwnj;ಗಳಿಂದ ಮೈಲೇಜ್ ಸುಧಾರಣೆ ಕಾಣಲಿದೆ. ತಂತ್ರಜ್ಞಾನದಿಂದ ಬೈಕ್ ರೈಡರ್ ಅತೀ ಸುಲಭವಾಗಿ ರೈಡಿಂಗ್ ಸಾಧ್ಯವಿದೆ, ನಗರ, ಹಳ್ಳಿ, ಲಾಂಗ್ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಅತೀ ಸುಲಭವಾಗಿ ರೈಡಿಂಗ್ ಸಾಧ್ಯವಾಗಲಿದೆ.&lt;/p&gt;]]></content:encoded>
            <category><![CDATA[bike-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/bike-news/hero-glamour-bike-launched-at-affordable-price-with-abs-check-features/articleshow-r7kdmsm"/>
        </item>
        <item>
            <title><![CDATA[BRICS Summit ಪ್ರಧಾನಿ ಮೋದಿ ಜತೆ ಝಾಕಿರ್ ನಾಯಕ್ ಹಸ್ತಾಂತರ ಚರ್ಚೆ, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಸ್ಪಷ್ಟನೆ!]]></title>
            <link>https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x</link>
            <guid isPermaLink="true">https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x</guid>
            <pubDate>Sat, 12 Sep 2026 18:46:10 +0530</pubDate>
            <description><![CDATA[ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ವಿವಾದಿತ ಧರ್ಮೋಪದೇಶಕ ಝಾಕಿರ್ ನಾಯಕ್ ಹಸ್ತಾಂತರದ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ. ದ್ವಿಪಕ್ಷೀಯ ಬಾಂಧವ್ಯವನ್ನು ಗೌರವಿಸಿ, ಮಲೇಷ್ಯಾದ ಕಾನೂನು ಪ್ರಕ್ರಿಯೆಗಳ ಅಡಿಯಲ್ಲಿ ಈ ವಿಷಯವನ್ನು ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j9n4pfbz4q930pj9n1c4h1p8,imgname-capture.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಭಾರತದಿಂದ ಪರಾರಿಯಾಗಿ ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ವಿವಾದಾತ್ಮಕ ಇಸ್ಲಾಮಿಕ್ ಧರ್ಮೋಪದೇಶಕ ಝಾಕಿರ್ ನಾಯಕ್&zwnj;ನ ಹಸ್ತಾಂತರದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿರುವುದಾಗಿ ದೃಢಪಡಿಸಿದ್ದಾರೆ.&lt;/p&gt;&lt;h2&gt;ದ್ವಿಪಕ್ಷೀಯ ಬದ್ಧತೆ&lt;/h2&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯ ನಂತರ ಮಾತನಾಡಿದ ಅನ್ವರ್ ಇಬ್ರಾಹಿಂ, ಖಾಸಗಿ ಕಾರ್ಯಕ್ರಮಗಳಲ್ಲಿ ಇಂತಹ ವಿಷಯಗಳ ಕುರಿತು ಮಾತುಕತೆಗಳು ಮುಂದುವರಿಯುತ್ತವೆ. ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಹಿತಾಸಕ್ತಿಗಳನ್ನು ಕಾಯುವ ನಿಟ್ಟಿನಲ್ಲಿ ಈ ವಿಷಯವನ್ನು ಅತ್ಯಂತ ಖಾಸಗಿಯಾಗಿ ಇರಿಸುವುದು ಸೂಕ್ತ. ಆದರೆ, ಉಭಯ ದೇಶಗಳ ನಡುವಿನ ಪರಸ್ಪರ ವಿಶ್ವಾಸ ಮತ್ತು ಮೈತ್ರಿ ಸಂಬಂಧವನ್ನು ಬಲಪಡಿಸಲು ಈ ವಿಷಯವನ್ನು ಆದ್ಯತೆಯ ಪಟ್ಟಿಯಲ್ಲಿ ಇರಿಸಿದ್ದೇವೆ ಎಂದು ಹೇಳಿದ್ದಾರೆ ಎಂದು ಎನ್&zwnj;ಡಿಟಿವಿ ವರದಿ ಮಾಡಿದೆ.&lt;/p&gt;&lt;p&gt;ಆದರೂ ಗಡಿಪಾರು ಪ್ರಕ್ರಿಯೆಯ ಕುರಿತು ಮಾತನಾಡಿ ಭಾರತದ ಹಸ್ತಾಂತರ ಬೇಡಿಕೆಯ ಬಗ್ಗೆ ನಮಗೆ ಅರಿವಿದೆ. ಆದರೆ ಮಲೇಷ್ಯಾದ ಕಾನೂನು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ದ್ವಿಪಕ್ಷೀಯ ಬಾಂಧವ್ಯ ಹಾಗೂ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಗೌರವಿಸಿ ಈ ವಿಷಯದಲ್ಲಿ ಕಟ್ಟುನಿಟ್ಟಿನ ಹಾಗೂ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಯಾರು ಈ ಝಾಕಿರ್ ನಾಯಕ್? ಭಾರತಕ್ಕೆ ಏಕೆ ಬೇಕು?&lt;/h2&gt;&lt;p&gt;ಮುಂಬೈ ಮೂಲದ ಇಸ್ಲಾಮಿಕ್ ಟೆಲಿವಿಂಜೆಲಿಸ್ಟ್ ಆಗಿರುವ ಝಾಕಿರ್ ನಾಯಕ್, ತನ್ನ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' (IRF) ಹಾಗೂ ಅಂತರರಾಷ್ಟ್ರೀಯ ಉಪಗ್ರಹ ಚಾನೆಲ್ 'ಪೀಸ್ ಟಿವಿ' ಮೂಲಕ ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಾನೆ ಮತ್ತು ಅಕ್ರಮ ಹಣ ವರ್ಗಾವಣೆ ನಡೆಸಿದ್ದಾನೆ ಎಂದು ಭಾರತೀಯ ತನಿಖಾ ಸಂಸ್ಥೆಗಳು ಆರೋಪಿಸಿವೆ.&lt;/p&gt;&lt;p&gt;2016 ರ ಢಾಕಾ ಕೆಫೆ ಭಯೋತ್ಪಾದಕ ದಾಳಿ ಸೇರಿದಂತೆ ಜಾಗತಿಕ ಮಟ್ಟದ ಹಲವು ಉಗ್ರ ಕೃತ್ಯಗಳಿಗೆ ಆತನ ಭಾಷಣಗಳೇ ಪ್ರೇರಣೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಭಾರತೀಯ ಅಧಿಕಾರಿಗಳು ಆತನ ಜಾಲದ ವಿರುದ್ಧ ತನಿಖೆ ತೀವ್ರಗೊಳಿಸಿದರು. ಇದರಿಂದಾಗಿ ನಾಯಕ್ 2016 ರಲ್ಲಿ ಭಾರತದಿಂದ ಪಲಾಯನ ಮಾಡಿ ಮಲೇಷ್ಯಾಕ್ಕೆ ತೆರಳಿದನು. ಅಲ್ಲಿ ಆತನಿಗೆ ಶಾಶ್ವತ ನಿವಾಸಿ ಅರ್ಹತೆ ನೀಡಲಾಯಿತು.&lt;/p&gt;&lt;h2&gt;ಪಾಸ್&zwnj;ಪೋರ್ಟ್ ರದ್ದು ಮತ್ತು ಹಸ್ತಾಂತರಕ್ಕೆ ಮನವಿ:&lt;/h2&gt;&lt;p&gt;2017 ರಲ್ಲಿ ಭಾರತ ಸರ್ಕಾರವು ಝಾಕಿರ್ ನಾಯಕ್&zwnj;ನ ಪಾಸ್&zwnj;ಪೋರ್ಟ್ ರದ್ದುಗೊಳಿಸಿ, ಆತನನ್ನು 'ಘೋಷಿತ ಅಪರಾಧಿ' ಎಂದು ಪ್ರಕಟಿಸಿತು. ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮಲೇಷ್ಯಾ ಸರ್ಕಾರಕ್ಕೆ ಔಪಚಾರಿಕ ವಿನಂತಿಗಳನ್ನು ಸಲ್ಲಿಸಲಾಯಿತು. ಆದರೆ, ಆತನ ವಿರುದ್ಧ ದೃಢ ಹಾಗೂ ವಿಶ್ವಾಸಾರ್ಹ ಸಾಕ್ಷ್ಯಾಧಾರಗಳನ್ನು ಒದಗಿಸಿದರೆ ಮಾತ್ರವೇ ಸ್ಥಾಪಿತ ಕಾನೂನು ಮಾರ್ಗಗಳ ಮೂಲಕ ಸಹಕರಿಸುವುದಾಗಿ ಮಲೇಷ್ಯಾ ವಾದಿಸುತ್ತಾ ಬಂದಿದೆ. ಸಾಕಷ್ಟು ಆಧಾರಗಳ ಕೊರತೆಯನ್ನು ಉಲ್ಲೇಖಿಸಿ ಇಂಟರ್&zwnj;ಪೋಲ್ ಸಹ ಹಿಂದೆ ಆತನ ವಿರುದ್ಧ 'ರೆಡ್ ಕಾರ್ನರ್ ನೋಟಿಸ್' ಹೊರಡಿಸಲು ನಿರಾಕರಿಸಿತ್ತು.&lt;/p&gt;&lt;h2&gt;ಮಲೇಷ್ಯಾದಲ್ಲೂ ವಿವಾದ ಸೃಷ್ಟಿಸಿದ್ದ ಧರ್ಮೋಪದೇಶಕ&lt;/h2&gt;&lt;p&gt;ಝಾಕಿರ್ ನಾಯಕ್ ತನ್ನ ಪ್ರಚೋದನಕಾರಿ ಹೇಳಿಕೆಗಳಿಂದ ಮಲೇಷ್ಯಾ ಸರ್ಕಾರಕ್ಕೂ ಮುಜುಗರ ಉಂಟುಮಾಡಿದ್ದಾನೆ. 2019 ರಲ್ಲಿ ಮಲೇಷ್ಯಾದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಚೀನಿ ಹಾಗೂ ಭಾರತೀಯ ಮೂಲದ ನಾಗರಿಕರ ವಿರುದ್ಧ ಜನಾಂಗೀಯವಾಗಿ ಸೂಕ್ಷ್ಮ ಹೇಳಿಕೆಗಳನ್ನು ನೀಡಿ ತೀವ್ರ ಸಾರ್ವಜನಿಕ ಮತ್ತು ರಾಜಕೀಯ ಆಕ್ರೋಶಕ್ಕೆ ಗುರಿಯಾಗಿದ್ದನು. ತದನಂತರ ಆತ ತನ್ನ ಹೇಳಿಕೆಗಳಿಗಾಗಿ ಮಲೇಷ್ಯಾ ಜನತೆಯಲ್ಲಿ ಕ್ಷಮೆಯಾಚಿಸಿದ್ದರೂ, ಮಲೇಷ್ಯಾ ಅಧಿಕಾರಿಗಳು ಆತನಿಗೆ ಸಾರ್ವಜನಿಕ ಭಾಷಣ ಮಾಡದಂತೆ ಹಲವು ರಾಜ್ಯಗಳಲ್ಲಿ ತಾತ್ಕಾಲಿಕ ನಿಷೇಧ ಹೇರಿದ್ದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/zakir-naik-extradition-discussed-with-pm-modi-confirms-malaysian-pm-anwar-ibrahim-on-brics-summit-gdp/articleshow-vcy0h6x"/>
        </item>
        <item>
            <title><![CDATA[ಸ್ಟೀವ್ ಸ್ಮಿತ್ ಕುತಂತ್ರವನ್ನು ವಿರಾಟ್ ಕೊಹ್ಲಿ ಬಯಲು ಮಾಡಿದ್ದು ಹೀಗೆ! ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗ]]></title>
            <link>https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11</link>
            <guid isPermaLink="true">https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11</guid>
            <pubDate>Sat, 12 Sep 2026 18:45:10 +0530</pubDate>
            <description><![CDATA[2017ರ 'ಬ್ರೇನ್ ಫೇಡ್' ವಿವಾದದ ಬಗ್ಗೆ ಚೇತೇಶ್ವರ್ ಪೂಜಾರ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ಬಳಸಿ ಡಿಆರ್‌ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಇದು ಸ್ಟೀವ್ ಸ್ಮಿತ್ ಮಾಡಿದ ಪ್ರಮಾದವಲ್ಲ, ಬದಲಿಗೆ ಆಸೀಸ್ ತಂಡದ ಯೋಜಿತ ಮೋಸದ ತಂತ್ರವಾಗಿತ್ತು ಎಂದು ಪೂಜಾರ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3g80j6s02w3vzncpvf6xewx,imgname-vk-8-1756113160409.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2017ರಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ, ಕ್ರಿಕೆಟ್ ಜಗತ್ತು ಕಂಡ ಅತ್ಯಂತ ರೋಚಕ ಸರಣಿಗಳಲ್ಲಿ ಒಂದಾಗಿತ್ತು. ಭಾರತ 2-1 ಅಂತರದಲ್ಲಿ ಗೆದ್ದ ಈ ಸರಣಿಯಲ್ಲಿ, ಬೆಂಗಳೂರು ಟೆಸ್ಟ್&zwnj;ನಲ್ಲಿ ಸ್ಟೀವ್ ಸ್ಮಿತ್ ಭಾಗಿಯಾಗಿದ್ದ 'ಬ್ರೇನ್ ಫೇಡ್' ಘಟನೆ ದೊಡ್ಡ ವಿವಾದ ಸೃಷ್ಟಿಸಿತ್ತು. ಇದೀಗ, ಘಟನೆ ನಡೆದು ವರ್ಷಗಳ ನಂತರ, ಟೀಂ ಇಂಡಿಯಾದ ಮಾಜಿ ಆಟಗಾರ ಚೇತೇಶ್ವರ್ ಪೂಜಾರ ಆ ವಿವಾದದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;ಆಕಾಶ್ ಚೋಪ್ರಾಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪೂಜಾರ, ಆಸ್ಟ್ರೇಲಿಯಾ ತಂಡವು ಡ್ರೆಸ್ಸಿಂಗ್ ರೂಮ್&zwnj;ನಲ್ಲಿದ್ದ ಲೈವ್ ಟಿವಿ ದೃಶ್ಯಗಳನ್ನು ದುರ್ಬಳಕೆ ಮಾಡಿಕೊಂಡು ಡಿಆರ್&zwnj;ಎಸ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ನೇರವಾಗಿ ಆರೋಪಿಸಿದ್ದಾರೆ. ಬೆಂಗಳೂರು ಟೆಸ್ಟ್&zwnj;ನ ನಾಲ್ಕನೇ ಇನ್ನಿಂಗ್ಸ್&zwnj;ನಲ್ಲಿ ಭಾರತ ನೀಡಿದ್ದ 188 ರನ್&zwnj;ಗಳ ಗುರಿ ಬೆನ್ನಟ್ಟುತ್ತಿದ್ದಾಗ, ಉಮೇಶ್ ಯಾದವ್ ಬೌಲಿಂಗ್&zwnj;ನಲ್ಲಿ ಸ್ಟೀವ್ ಸ್ಮಿತ್ ಎಲ್&zwnj;ಬಿಡಬ್ಲ್ಯೂ ಬಲೆಗೆ ಬಿದ್ದರು. ಫೀಲ್ಡ್ ಅಂಪೈರ್ ಔಟ್ ಕೊಟ್ಟ ತಕ್ಷಣ, ಸ್ಮಿತ್ ನಾನ್-ಸ್ಟ್ರೈಕರ್&zwnj;ನಲ್ಲಿದ್ದ ಪೀಟರ್ ಹ್ಯಾಂಡ್ಸ್&zwnj;ಕಾಂಬ್ ಜೊತೆ ಮಾತನಾಡುವ ಬದಲು, ಡಿಆರ್&zwnj;ಎಸ್ ತೆಗೆದುಕೊಳ್ಳಬೇಕೇ ಬೇಡವೇ ಎಂದು ಡ್ರೆಸ್ಸಿಂಗ್ ರೂಮ್ ಕಡೆ ನೋಡಿ ಸನ್ನೆ ಮಾಡಿದರು.&lt;/p&gt;&lt;h2&gt;&lt;strong&gt;ಆಸೀಸ್ ಮೋಸ ಬಯಲು ಮಾಡಿದ್ದ ಕೊಹ್ಲಿ:&lt;/strong&gt;&lt;/h2&gt;&lt;p&gt;ಇದನ್ನು ಗಮನಿಸಿದ ಅಂದಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ತಂಡ, ತಕ್ಷಣವೇ ಅಂಪೈರ್&zwnj;ಗಳಿಗೆ ದೂರು ನೀಡಿದರು. ಅಂಪೈರ್&zwnj;ಗಳು ಮಧ್ಯಪ್ರವೇಶಿಸಿ ಸ್ಮಿತ್&zwnj;ಗೆ ರಿವ್ಯೂ ತೆಗೆದುಕೊಳ್ಳಲು ಅವಕಾಶ ನಿರಾಕರಿಸಿದರು ಮತ್ತು ಅವರನ್ನು ಪೆವಿಲಿಯನ್&zwnj;ಗೆ ಕಳುಹಿಸಿದರು. ಪಂದ್ಯದ ನಂತರ ಮಾತನಾಡಿದ್ದ ಸ್ಮಿತ್, ಡ್ರೆಸ್ಸಿಂಗ್ ರೂಮ್ ಕಡೆ ನೋಡಿದ್ದು ತನ್ನಿಂದಾದ ಪ್ರಮಾದ, ಅದೊಂದು 'ಬುದ್ಧಿಶೂನ್ಯ ನಡೆ' (brain fade) ಎಂದು ಹೇಳಿಕೊಂಡಿದ್ದರು. ಆದರೆ ಇದು ಕೇವಲ ಪ್ರಮಾದವಾಗಿರಲಿಲ್ಲ, ಬದಲಿಗೆ ಆಸ್ಟ್ರೇಲಿಯಾ ತಂಡದ ಯೋಜಿತ ತಂತ್ರವಾಗಿತ್ತು ಎಂದು ಪೂಜಾರ ಈಗ ಬಯಲು ಮಾಡಿದ್ದಾರೆ.&lt;/p&gt;&lt;p&gt;&quot;ಆಸ್ಟ್ರೇಲಿಯಾದ ಡಿಆರ್&zwnj;ಎಸ್ ನಿರ್ಧಾರಗಳನ್ನು ನೋಡಿದರೆ, ಅವೆಲ್ಲವೂ ಪಕ್ಕಾ ಆಗಿರುತ್ತಿದ್ದವು. ರಿವ್ಯೂ ತೆಗೆದುಕೊಳ್ಳಬೇಕೋ, ಬೇಡವೋ ಎಂಬುದು ಅವರಿಗೆ ಖಚಿತವಾಗಿ ಗೊತ್ತಿರುತ್ತಿತ್ತು. ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್&zwnj;ನಲ್ಲಿ ಲೈವ್ ಫೀಡ್ ಇತ್ತು ಎಂಬುದು ನಮಗೆ ಆಗ ತಿಳಿದಿರಲಿಲ್ಲ. ಸಾಮಾನ್ಯವಾಗಿ ಡ್ರೆಸ್ಸಿಂಗ್ ರೂಮ್&zwnj;ನಲ್ಲಿ ಟಿವಿ ದೃಶ್ಯಗಳು ಕೆಲವು ಸೆಕೆಂಡ್&zwnj;ಗಳಷ್ಟು ತಡವಾಗಿ ಬರುತ್ತವೆ. ಆದರೆ ಬೆಂಗಳೂರು ಟೆಸ್ಟ್&zwnj;ನಲ್ಲಿ ಅವರಿಗೆ ಯಾವುದೇ ಡಿಲೇ ಇಲ್ಲದ ಲೈವ್ ದೃಶ್ಯಗಳು ಸಿಗುತ್ತಿದ್ದವು. ಯಾರಿಗೂ ಗೊತ್ತಾಗದಂತೆ ಡ್ರೆಸ್ಸಿಂಗ್ ರೂಮ್ ಕಡೆ ನೋಡಿ, ಅಲ್ಲಿಂದ ಸಿಗುವ ಸೂಚನೆ ಆಧರಿಸಿ ಅವರು ರಿವ್ಯೂ ತೆಗೆದುಕೊಳ್ಳುತ್ತಿದ್ದರು,&quot; ಎಂದು ಪೂಜಾರ ವಿವರಿಸಿದ್ದಾರೆ.&lt;/p&gt;&lt;h3&gt;&lt;strong&gt;ಆಸೀಸ್ ಮಾಡಿದ್ದು ಶುದ್ದ ಮೋಸ&lt;/strong&gt;&lt;/h3&gt;&lt;p&gt;&quot;ಇದು ಶುದ್ಧ ಮೋಸವಾಗಿತ್ತು. ಇದನ್ನೇ ಬೇರೆ ತಂಡ ಮಾಡಿದ್ದರೆ, ಆಸ್ಟ್ರೇಲಿಯಾ ದೊಡ್ಡ ರಂಪಾಟವನ್ನೇ ಮಾಡುತ್ತಿತ್ತು,&quot; ಎಂದು ಪೂಜಾರ ಹೇಳಿದ್ದಾರೆ. 2012ರಲ್ಲಿ ಇಂಗ್ಲೆಂಡ್ ಸರಣಿ ಗೆದ್ದ ನಂತರ, ಭಾರತವನ್ನು ಭಾರತದಲ್ಲೇ ಸೋಲಿಸುವ ಸಾಮರ್ಥ್ಯವಿದ್ದ ಮೊದಲ ತಂಡವೆಂದರೆ ಅದು ಸ್ಟೀವ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ತಂಡವಾಗಿತ್ತು. ಸರಣಿ ಗೆಲ್ಲಲು ಅವರು ಯಾವುದೇ ಹಂತಕ್ಕೆ ಹೋಗಲು ಸಿದ್ಧರಿದ್ದರು. ಆಟದ ತೀವ್ರತೆಯಿಂದಾಗಿ ತಾನೂ ಕೂಡ ಆ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡಿದ್ದೆ ಎಂದು ಪೂಜಾರ ಒಪ್ಪಿಕೊಂಡಿದ್ದಾರೆ. ಪುಣೆಯಲ್ಲಿ ನಡೆದ ಮೊದಲ ಟೆಸ್ಟ್&zwnj;ನಲ್ಲಿ ಸೋತಿದ್ದ ಭಾರತ, ಬೆಂಗಳೂರಿನಲ್ಲಿ 75 ರನ್&zwnj;ಗಳ ಜಯ ಸಾಧಿಸಿ ಸರಣಿಗೆ ಕಮ್&zwnj;ಬ್ಯಾಕ್ ಮಾಡಿತ್ತು. ಅಂತಿಮವಾಗಿ 2-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/it-was-pure-cheating-cheteshwar-pujara-makes-explosive-claim-on-steve-smith-2017-drs-controversy-kvn/articleshow-nmp4g11"/>
        </item>
        <item>
            <title><![CDATA[ನಿಮಗಿದು ಗೊತ್ತಾ? ಹೊಟ್ಟೆ ಖಾಲಿಯಾಗಿರುವಾಗ ಗುಡುಗುಡು ಎಂದು ಸದ್ದು ಬರೋದು ಯಾಕೆ?]]></title>
            <link>https://kannada.asianetnews.com/gallery/health-life/why-stomach-growls-or-makes-sound-when-hungry-tgkvtue</link>
            <guid isPermaLink="true">https://kannada.asianetnews.com/gallery/health-life/why-stomach-growls-or-makes-sound-when-hungry-tgkvtue</guid>
            <pubDate>Sat, 12 Sep 2026 18:32:08 +0530</pubDate>
            <description><![CDATA[ಸಾಮಾನ್ಯವಾಗಿ, ಹೊಟ್ಟೆ ಹಸಿವಾದಾಗ, ಹೊಟ್ಟೆ ಖಾಲಿಯಾದಾಗ ಒಳಗಿನಿಂದ ಗುಡುಗುಡುವ ಶಬ್ದವು ಕೇಳಿಸುತ್ತದೆ. ಆದರೆ ಈ ಶಬ್ಧ ಯಾಕೆ ಬರುತ್ತೆ? ಇದರ ಹಿಂದಿನ ಕಾರಣ ಏನು? ಇದು ಯಾವುದೇ ಆರೋಗ್ಯ ಸಮಸ್ಯೆಯ ಸೂಚನೆಯೇ? ಎಲ್ಲಾ ಮಾಹಿತಿ ತಿಳಿಯಲು ನೀವು ಈ ಸುದ್ದಿ ಓದಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kdfn207wea54kgm1q6pncwvv,imgname-mixcollage-27-dec-2025-03-47-pm-3395-1766830702844.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ, ಹೊಟ್ಟೆ ಹಸಿವಾದಾಗ, ಹೊಟ್ಟೆ ಖಾಲಿಯಾದಾಗ ಒಳಗಿನಿಂದ ಗುಡುಗುಡುವ ಶಬ್ದವು ಕೇಳಿಸುತ್ತದೆ. ಆದರೆ ಈ ಶಬ್ಧ ಯಾಕೆ ಬರುತ್ತೆ? ಇದರ ಹಿಂದಿನ ಕಾರಣ ಏನು? ಇದು ಯಾವುದೇ ಆರೋಗ್ಯ ಸಮಸ್ಯೆಯ ಸೂಚನೆಯೇ? ಎಲ್ಲಾ ಮಾಹಿತಿ ತಿಳಿಯಲು ನೀವು ಈ ಸುದ್ದಿ ಓದಿ.&lt;/p&gt;&lt;img&gt;&lt;p&gt;ಹೊಟ್ಟೆಯಲ್ಲಿ ಗುಡುಗುಡುವ ಶಬ್ದ ಬರುವುದು ಸಾಮಾನ್ಯ ಸಂಗತಿ, ವಿಶೇಷವಾಗಿ ಹಸಿವಾದಾಗ ಹೀಗಾಗುತ್ತದೆ. ಆದಾಗ್ಯೂ, ದೇಹದ ಜೀರ್ಣಕ್ರಿಯೆ ಮತ್ತು ಕರುಳಿನ ಸಂಕೋಚನದಂತಹ ಇತರ ಕಾರಣಗಳಿಂದಲೂ ಈ ಶಬ್ದ ಉಂಟಾಗಬಹುದು. ಕೆಲವೊಮ್ಮೆ ಈ ಶಬ್ದವು ಪಕ್ಕದಲ್ಲಿ ಕುಳಿತವರಿಗೂ ಕೇಳಿಸುವಷ್ಟು ಜೋರಾಗಿರಬಹುದು. ಜೀರ್ಣಾಂಗ ವ್ಯವಸ್ಥೆಯ ಸಹಜ ಚಟುವಟಿಕೆಯೇ ಇದಕ್ಕೆ ಕಾರಣ. ಹೊಟ್ಟೆಯಲ್ಲಿ ಗುಡುಗುಡುವ ಶಬ್ದಕ್ಕೆ ಕಾರಣಗಳೇನು ಮತ್ತು ಅದನ್ನು ಹೇಗೆ ನಿಭಾಯಿಸುವುದು ಎಂಬುದನ್ನು ನಾವಿಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಹೊಟ್ಟೆ ಮತ್ತು ಕರುಳುಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಹೊಟ್ಟೆಯಲ್ಲಿ ಆಹಾರವಿದ್ದಾಗ, ಜೀರ್ಣಕ್ರಿಯೆಯ ಸಮಯದಲ್ಲಿ ಸ್ನಾಯುಗಳು ಆಹಾರ ಮತ್ತು ದ್ರವಗಳನ್ನು ಮುಂದಕ್ಕೆ ತಳ್ಳುತ್ತವೆ; ಈ ಪ್ರಕ್ರಿಯೆಯನ್ನು 'ಪೆರಿಸ್ಟಾಲ್ಸಿಸ್' (peristalsis) ಎಂದು ಕರೆಯಲಾಗುತ್ತದೆ. ಹೊಟ್ಟೆ ಖಾಲಿಯಾಗಿದ್ದಾಗಲೂ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ನಿಶ್ಚಲವಾಗಿರುವುದಿಲ್ಲ. ಹೊಟ್ಟೆ ಮತ್ತು ಸಣ್ಣ ಕರುಳಿನ ಸ್ನಾಯುಗಳು ಕಾಲಕಾಲಕ್ಕೆ ಸಂಕುಚಿತಗೊಳ್ಳುವುದರಿಂದ, ಅನಿಲ ಮತ್ತು ದ್ರವಗಳು ಕರುಳಿನ ಮೂಲಕ ಚಲಿಸುತ್ತವೆ. ಈ ಚಲನೆಯೇ ಆ ಗುಡುಗುಡುವ ಶಬ್ದವನ್ನು ಉಂಟುಮಾಡುತ್ತದೆ.&lt;/p&gt;&lt;img&gt;&lt;p&gt;ಹೊಟ್ಟೆ ಖಾಲಿಯಿದ್ದಾಗ ಶಬ್ದವನ್ನು ತಡೆಹಿಡಿಯುವ ಅಥವಾ ಮಂದಗೊಳಿಸುವ ಯಾವುದೇ ಆಹಾರ ಪದಾರ್ಥ ಅಲ್ಲಿರುವುದಿಲ್ಲವಾದ್ದರಿಂದ, ಶಬ್ದಗಳು ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತವೆ. ಪರಿಣಾಮವಾಗಿ, ಹೊಟ್ಟೆಯ ಸಾಮಾನ್ಯ ಚಟುವಟಿಕೆ ಕೂಡ ಹೆಚ್ಚು ಜೋರಾಗಿ ಕೇಳಿಸಬಹುದು ಅಥವಾ ಅನುಭವಕ್ಕೆ ಬರಬಹುದು. ಹಸಿವು ದೇಹದಲ್ಲಿ ಹಾರ್ಮೋನ್ ಬದಲಾವಣೆಗಳನ್ನು ಉಂಟುಮಾಡುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯ ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ; ಇದೇ ಕಾರಣಕ್ಕಾಗಿಯೇ ಹೊಟ್ಟೆ ಖಾಲಿಯಿದ್ದಾಗ ಕೆಲವರು ತಮ್ಮ ಹೊಟ್ಟೆಯೊಳಗೆ ಹೆಚ್ಚಿನ ಚಲನೆಯನ್ನು ಅನುಭವಿಸುತ್ತಾರೆ.&lt;/p&gt;&lt;img&gt;&lt;p&gt;ಹೊಟ್ಟೆಯಲ್ಲಿ ಗುಡುಗುಡುವ ಶಬ್ದ ಉಂಟಾಗಲು ಗ್ಯಾಸ್ ಒಂದು ಕಾರಣವಾಗಿದೆ. ಊಟ ಮಾಡುವಾಗ ಅಥವಾ ನೀರು ಕುಡಿಯುವಾಗ ಗಾಳಿಯನ್ನು ನುಂಗುವುದು ಅಥವಾ ಅತಿ ವೇಗವಾಗಿ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗುತ್ತದೆ. ಅಲ್ಲದೆ, ಕೆಲವು ನಿರ್ದಿಷ್ಟ ಆಹಾರಗಳು ಹೊಟ್ಟೆ ಮತ್ತು ಕರುಳಿನಲ್ಲಿ ಗಾಳಿಯ ಪ್ರಮಾಣವನ್ನು ಹೆಚ್ಚಿಸುತ್ತವೆ; ಈ ಗ್ಯಾಸ್ ಕರುಳಿನ ಮೂಲಕ ಚಲಿಸುವಾಗ ಶಬ್ದ ಉಂಟಾಗುತ್ತದೆ. ಜೊತೆಗೆ, ಮಲಬದ್ಧತೆ, ಅಜೀರ್ಣ ಅಥವಾ ಆಹಾರ ಪದ್ಧತಿಯಲ್ಲಿನ ಹಠಾತ್ ಬದಲಾವಣೆಗಳ ಸಮಯದಲ್ಲಿ ಕರುಳಿನ ಚಟುವಟಿಕೆಯಲ್ಲಿ ವ್ಯತ್ಯಾಸ ಉಂಟಾಗಿ ಹೊಟ್ಟೆಯಲ್ಲಿ ಗುಡುಗುಡುವ ಶಬ್ದ ಬರುತ್ತದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಹೊಟ್ಟೆ ಗುಡುಗುಡು ಶಬ್ದ ಮಾಡುವುದು ಆತಂಕದ ವಿಷಯವಲ್ಲ; ಆದರೆ, ಈ ಶಬ್ದವು ಮುಂದುವರಿದು ಅದರೊಂದಿಗೆ ತೀವ್ರ ಹೊಟ್ಟೆ ನೋವು, ನಿರಂತರ ವಾಂತಿ ಅಥವಾ ಅತಿಸಾರದಂತಹ ಲಕ್ಷಣಗಳು ಕಂಡುಬಂದರೆ, ಅದು ಯಾವುದಾದರೂ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು. ವಿಶೇಷವಾಗಿ, ಹೊಟ್ಟೆಯ ಶಬ್ದದೊಂದಿಗೆ ತೀವ್ರ ನೋವು ಅಥವಾ ಮಲವಿಸರ್ಜನೆಯಲ್ಲಿ ತೊಂದರೆ ಇದ್ದರೆ, ಅದನ್ನು ಕೇವಲ ಹಸಿವಿನ ಕಾರಣವೆಂದು ನಿರ್ಲಕ್ಷಿಸಬಾರದು. ಅಂತಹ ಸಂದರ್ಭಗಳಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.&lt;/p&gt;&lt;img&gt;&lt;ul&gt; &lt;li&gt;ಯಾವಾಗಲೂ ನಿಧಾನವಾಗಿ ತಿನ್ನುವುದು ಮತ್ತು ಆಹಾರವನ್ನು ಚೆನ್ನಾಗಿ ಅಗಿದು ತಿನ್ನುವುದು ಉತ್ತಮ.&lt;/li&gt; &lt;li&gt;ದೇಹದಲ್ಲಿ ನೀರಿನಂಶವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವುದು ಅತ್ಯಗತ್ಯ, ಆದ್ದರಿಂದ ನಿಯಮಿತವಾಗಿ ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ.&lt;/li&gt; &lt;li&gt;ದೀರ್ಘಕಾಲದವರೆಗೆ ಆಹಾರ ಸೇವಿಸದೆ ಇರುವುದನ್ನು ತಪ್ಪಿಸಿ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.&lt;/li&gt; &lt;li&gt;ರೋಗಮುಕ್ತ ದೇಹವನ್ನು ಹೊಂದಲು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ.&lt;/li&gt; &lt;li&gt;ಯಾವುದೇ ಗಂಭೀರ ಸಮಸ್ಯೆಗಳು ಅಥವಾ ರೋಗಲಕ್ಷಣಗಳು ಕಂಡುಬಂದರೆ, ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.&lt;/li&gt;&lt;/ul&gt;]]></content:encoded>
            <category><![CDATA[health-life]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/health-life/why-stomach-growls-or-makes-sound-when-hungry-tgkvtue"/>
        </item>
        <item>
            <title><![CDATA[Mangalsutra: ಆಫೀಸ್ ವೇರ್‌ಗೆ ಸಖತ್ ಆಗಿ ಕಾಣೋ ಟ್ರೆಂಡಿ ಮಂಗಳಸೂತ್ರ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stylish-mangalsutra-ideas-for-office-and-daily-wear-kvn-kgfs17u</link>
            <guid isPermaLink="true">https://kannada.asianetnews.com/webstories/fashion/stylish-mangalsutra-ideas-for-office-and-daily-wear-kvn-kgfs17u</guid>
            <pubDate>Sat, 12 Sep 2026 18:29:44 +0530</pubDate>
            <description><![CDATA[ಡೈಲಿ ವೇರ್ ಹಾಗೂ ಆಫೀಸ್ ವೇರ್‌ಗೆ ಕ್ಲಾಸಿ, ಡಿಫರೆಂಟ್ ಲುಕ್ ಬೇಕಾ? ಹಾಗಿದ್ರೆ, ಒಂದೇ ಥರದ ಹಳೇ ಡಿಸೈನ್ ಬಿಟ್ಟು ಈ ಹೊಸ ಬಗೆಯ ಮಂಗಳಸೂತ್ರ ಟ್ರೈ ಮಾಡಿ. ನಿಮ್ಮ ಲುಕ್ ಸಖತ್ ಆಗಿ ಕಾಣುತ್ತೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ar0azx1tfrb2jddgq8b8jz,imgname-whatsapp-image-2026-09-12-at-2.16.00-pm-1789214600189.jpeg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/stylish-mangalsutra-ideas-for-office-and-daily-wear-kvn-kgfs17u"/>
        </item>
        <item>
            <title><![CDATA['ಇಡಿ ದಾಳಿ ಸುಮ್ಮನೆ ನಡೆಯಲ್ಲ': ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?]]></title>
            <link>https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</link>
            <guid isPermaLink="true">https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn</guid>
            <pubDate>Sat, 12 Sep 2026 18:27:16 +0530</pubDate>
            <description><![CDATA[ಗಂಗಾವತಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲಿನ ಇಡಿ ದಾಳಿ ಸಮಂಜಸವಾಗಿದ್ದು, ಅದು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ್ದಾರೆ. ಸೂಕ್ತ ದಾಖಲೆಗಳು ಮತ್ತು ಆಧಾರಗಳಿದ್ದರೆ ಮಾತ್ರ ಇಡಿ ದಾಳಿ ನಡೆಯುತ್ತದೆ ಎಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2atx547qqhtcsv6p8jgt2nc,imgname-bkb-1789217641607.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಸೆ.12): &lt;/strong&gt;ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿ ಸಮಂಜಸವಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಗರಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಯಾವುದೇ ಕಾರಣವಿಲ್ಲದೆ ದಾಳಿ ನಡೆಸುವುದಿಲ್ಲ. ಸೂಕ್ತ ದಾಖಲೆಗಳು ಹಾಗೂ ಆಧಾರಗಳಿದ್ದರೆ ಮಾತ್ರ ದಾಳಿ ನಡೆಸಲಾಗುತ್ತದೆ.&lt;/p&gt;&lt;p&gt;ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಆಧಾರಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.&lt;/p&gt;&lt;p&gt;&lt;strong&gt;&lsquo;ನಮ್ಮ ಮೇಲಿನ ದಾಳಿಯೂ ರಾಜಕೀಯ ಪ್ರೇರಿತ ಎಂದರ್ಥ&rsquo;&lt;/strong&gt;&lt;/p&gt;&lt;p&gt;ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದು ಹೇಳುವುದಾದರೆ, ಈ ಹಿಂದೆ ತಮ್ಮ ಮೇಲಾದ ಇಡಿ ದಾಳಿಯೂ ರಾಜಕೀಯ ಪ್ರೇರಿತ ಎಂದು ಒಪ್ಪಿಕೊಂಡಂತಾಗುತ್ತದೆ ಎಂದು ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.&lt;/p&gt;&lt;p&gt;ಇಡಿ ದಾಳಿ ನಡೆದಿದೆ ಎಂದರೆ ಅಕ್ರಮ ಅಥವಾ ಅವ್ಯವಹಾರದ ಕುರಿತು ತನಿಖೆಯ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಇನ್ನೂ ನಾಲ್ಕೈದು ಸಚಿವರ ಮೇಲೆ ಇಡಿ ದಾಳಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹಾಗಾದರೆ ಆ ಸಚಿವರ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ ಎಂಬುದನ್ನು ಮುಖ್ಯಮಂತ್ರಿಯವರೇ ಒಪ್ಪಿಕೊಂಡಂತಾಗುತ್ತದೆ ಎಂದು ಟೀಕಿಸಿದರು.&lt;/p&gt;&lt;p&gt;&lt;strong&gt;&lsquo;ಒಂದು ಕೋಟಿ ಪಡೆದು ಡಿವೈಎಸ್ಪಿ ಪೋಸ್ಟಿಂಗ್&rsquo; ಆರೋಪ&lt;/strong&gt;&lt;/p&gt;&lt;p&gt;ಪೊಲೀಸ್ ಅಧಿಕಾರಿಗಳ ಪೋಸ್ಟಿಂಗ್&zwnj;ನಲ್ಲಿ ಸಚಿವ ಶಿವರಾಜ ತಂಗಡಗಿ ಅವರು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಆರೋಪದ ಬಗ್ಗೆಯೂ ಜನಾರ್ದನ ರೆಡ್ಡಿ ಪ್ರತಿಕ್ರಿಯಿಸಿದರು. ತಮ್ಮದೇ ಪಕ್ಷದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಒಂದು ಕೋಟಿ ರೂಪಾಯಿ ಪಡೆದು ಡಿವೈಎಸ್ಪಿ ಹುದ್ದೆಗೆ ಪೋಸ್ಟಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.&lt;/p&gt;&lt;p&gt;ಇಂತಹ ಆರೋಪವನ್ನು ಲಘುವಾಗಿ ಪರಿಗಣಿಸಬಾರದು ಎಂದು ಅವರು ಹೇಳಿದರು. ಆರೋಪ ಗಂಭೀರವಾಗಿರುವುದರಿಂದ ಸಚಿವ ಶಿವರಾಜ ತಂಗಡಗಿ ಅವರು ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕಿತ್ತು. ಆದರೆ ತನಿಖೆಗೆ ಒಪ್ಪಿಸುವ ಬದಲು &lsquo;ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ&rsquo; ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.&lt;/p&gt;&lt;h2&gt;&lt;strong&gt;&lsquo;ಆರೋಪ ಸತ್ಯವೋ, ಸುಳ್ಳೋ ತನಿಖೆಯಿಂದ ಬಹಿರಂಗವಾಗಲಿ&rsquo;&lt;/strong&gt;&lt;/h2&gt;&lt;p&gt;ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯವೋ ಅಥವಾ ಸುಳ್ಳೋ ಎಂಬುದು ತನಿಖೆಯಿಂದಲೇ ಬಹಿರಂಗವಾಗಬೇಕು ಎಂದು ಜನಾರ್ದನ ರೆಡ್ಡಿ ಹೇಳಿದರು. ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ತಾವೇ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಆರೋಪಗಳಿಗೆ ಸೂಕ್ತ ತನಿಖೆ ನಡೆದರೆ ವಾಸ್ತವಾಂಶ ಏನೆಂಬುದು ಹೊರಬರಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-mla-janardhana-reddy-reacts-to-ed-raid-on-minister-satish-jarkiholi-gvd/articleshow-y14qyyn"/>
        </item>
        <item>
            <title><![CDATA[ದೇವರಿಗೆ ಇಡುವ ನೈವೇದ್ಯ ಆರತಿ ಬಳಿಕ ತೆಗೆಯಬೇಕಾ? ರಾತ್ರಿಯಿಡಿ ಇಡಬೇಕಾ, ಶಾಸ್ತ್ರ ಹೇಳುವುದೇನು?]]></title>
            <link>https://kannada.asianetnews.com/gallery/festivals/should-naivedya-be-removed-after-aarti-or-kept-overnight-what-scriptures-say-gezhw99</link>
            <guid isPermaLink="true">https://kannada.asianetnews.com/gallery/festivals/should-naivedya-be-removed-after-aarti-or-kept-overnight-what-scriptures-say-gezhw99</guid>
            <pubDate>Sat, 12 Sep 2026 18:18:11 +0530</pubDate>
            <description><![CDATA[ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತದೆ. ಆರತಿ ಬಳಿಕ ಈ ನೈವೇದ್ಯವನ್ನು ತೆಗೆಯಬೇಕಾ ಅಥವಾ ರಾತ್ರಿಯಿಡಿ ಇಡಬೇಕಾ? ಪ್ರಸಾದವಾಗಿ ಹಂಚಲು ಶಾಸ್ತ್ರಗಳು ಹೇಳುವುದೇನು? ಗೊಂದಲಗಳಿಗೆ ಇಲ್ಲಿದೆ ಉತ್ತರ.]]></description>
            <media:content url="https://static.asianetnews.com/images/w-1280,h-720,format-jpg,imgid-01m2at60y7hwzmkhw7djh6yf1g,imgname-naivedya-rules-after-aarti-1789216883654.png" type="image/jpeg" height="390" width="690"/>
            <content:encoded><![CDATA[&lt;p&gt;ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತದೆ. ಆರತಿ ಬಳಿಕ ಈ ನೈವೇದ್ಯವನ್ನು ತೆಗೆಯಬೇಕಾ ಅಥವಾ ರಾತ್ರಿಯಿಡಿ ಇಡಬೇಕಾ? ಪ್ರಸಾದವಾಗಿ ಹಂಚಲು ಶಾಸ್ತ್ರಗಳು ಹೇಳುವುದೇನು? ಗೊಂದಲಗಳಿಗೆ ಇಲ್ಲಿದೆ ಉತ್ತರ.&lt;/p&gt;&lt;img&gt;&lt;p&gt;ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಲಾಗುತ್ತದೆ. ಮನೆ ಮನೆಗಳಲ್ಲೂ ಗಣೇಶನ ಕೂರಿಸಿ ಬಳಿ ವಿಸರ್ಜನೆಗಳು ನಡೆಯುತ್ತದೆ. ಗಣೇಶ ಹಬ್ಬ, ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಪ್ರತಿ ಹಬ್ಬ, ಪೂಜೆ ಸಂದರ್ಭದಲ್ಲಿ ಕೆಲವರಿಗೆ ಗೊಂದಲಗಳು ಸೃಷ್ಟಿಯಾಗುತ್ತದೆ. ಮನೆಯಲ್ಲಿ ಪೂಜೆಯನ್ನು ಮನೆಯ ಸದಸ್ಯರೇ ಮಾಡುತ್ತಾರೆ. ಈ ವೇಳೆ ತಮಗೆ ಗೊತ್ತಿರುವ, ಕುಟುಂಬಗಳು, ಹಿರಿಯರು ಪಾಲಿಸಿದ ಸಂಪ್ರದಾಯ ಮುಂದುವರಿಸುತ್ತಾರೆ. ಹಲವು ಬಾರಿ ಇಲ್ಲೇ ಗೊಂದಲಗಳು ಸೃಷ್ಟಿಯಾಗುತ್ತಿದೆ. ಈ ಪೈಕಿ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಯಾವಾಗ ತೆಗೆಯಬೇಕು, ಆರತಿ ಆದ ಬಳಿಕ, ಆರತಿ ಆದ 10 ನಿಮಿಷ ಅಥವಾ ರಾತ್ರಿಯಿಡಿ ಇಡಬೇಕಾ ಅನ್ನೋ ಗೊಂದಲ ಸಹಜ.&lt;/p&gt;&lt;img&gt;&lt;p&gt;ಪ್ರತಿ ಹಬ್ಬ ಅಥವಾ ಮನೆಯ ವಿಶೇಷ ಪೂಜೆ ಸಂದರ್ಭದಲ್ಲಿ ಮನೆಯ ಸದಸ್ಯರು ಉತ್ತಮ ಘಳಿಗೆಯಲ್ಲಿ ಮಾಡುತ್ತಾರೆ. ಅಥವಾ ತಾವು ಪಾಲಿಸಿಕೊಂಡು ಬಂದ ಸಂಪ್ರದಾಯದ ಪ್ರಕಾರ ಮಾಡುತ್ತಾರೆ. ಇಲ್ಲಿ ನಿರ್ದಿಷ್ಟ ಸಮಯ, ಕಾಲಮಿತಿ ಇರುವುದಿಲ್ಲ. ದೇವರಿಗೆ ನೈವೇದ್ಯ ಅರ್ಪಿಸಿ ಪೂಜೆ, ಆರತಿ ಬಳಿಕ ತೆಗೆಯುತ್ತಾರೆ. ಪ್ರಸಾದವಾಗಿ ಹಂಚುತ್ತಾರೆ. ಇದು ಬಹುತೇಕರ ಮನೆಯ ಪದ್ಧತಿ.&lt;/p&gt;&lt;img&gt;&lt;p&gt;ಶಾಸ್ತ್ರಗಳಲ್ಲಿ ನೀವು ಭಕ್ತಿಯಿಂದ, ಪ್ರೀತಿಯಿಂದ ಅರ್ಪಿಸುವ ಯಾವುದೇ ವಸ್ತು ದೇವರಿಗೆ ನೈವೇದ್ಯ. ಇದನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿದ ಬಳಿಕ ತೆಗೆಯಬಹುದು. ನೀವು ಪ್ರೀತಿಯಿಂದ ಅರ್ಪಿಸುವ ವಸ್ತುವನ್ನು ದೇವರು ಸಂಪ್ರೀತನಾಗಿ ಸ್ವೀಕರಿಸುವುದೇ ನೈವೇದ್ಯ. ಭಗವದ್ಗೀತೆಯ ಶ್ಲೋಕದಲ್ಲಿ ಈ ಕುರಿತು ಸ್ಪಷ್ಟನೆ ಇದೆ.&lt;/p&gt;&lt;p&gt;&lt;strong&gt;ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ&lt;/strong&gt;&lt;/p&gt;&lt;p&gt;ಶ್ಲೋಕದಲ್ಲಿರುವಂತೆ ಎಲೆ, ಹೂವು, ಹಣ್ಣು, ನೀರು ಸೇರಿದಂತೆ ಭಕ್ತನು ಭಕ್ತಿಪೂರ್ವಕವಾಗಿ ಅರ್ಪಿಸುವ ಯಾವುದೇ ವಸ್ತು ನೈವೇದ್ಯವಾಗುತ್ತದೆ. ಈ ಮೂಲಕ ಶ್ಲೋಕ ಸ್ಪಷ್ಟವಾಗಿ ನಿಮ್ಮ ಭಕ್ತಿ ಪ್ರಧಾನ ಎಂದು ಹೇಳುತ್ತದೆ.&lt;/p&gt;&lt;img&gt;&lt;p&gt;ಶ್ರೀಮದ್ ಭಾಗವತ ಪುರಾಣದಲ್ಲಿ ನೈವೇದ್ಯ ಅರ್ಪಣೆ ಕುರಿತ ಉಲ್ಲೇಖವಿದೆ. ದೇವರ ವಿಗ್ರಹ ಪೂಜೆ ವೇಳೆ 11ನೇ ಸ್ಕಂದದ 27ನೇ ಅಧ್ಯಾಯದಲ್ಲಿ ಹಾಲು, ತುಪ್ಪ, ಮೊಸರು, ಬೆಲ್ಲ, ಮೋದಕ ಅರ್ಪಿಸುವ ಕುರಿತು ಉಲ್ಲೇಖಿಸಲಾಗಿದೆ. ಭಗವದ್ಗೀತೆಯ 3ನೇ ಅಧ್ಯಾಯದಲ್ಲಿ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಬಳಿಕ ಪ್ರಸಾದ ರೂಪದಲ್ಲಿ ಹಂಚುವ ಕುರಿತು ಉಲ್ಲೇಖವಿದೆ. ನೀವು ನೈವೇದ್ಯವನ್ನು ದೇವರಿಗೆ ಅರ್ಪಿಸಿ ಬಳಿಕ ಪೂಜೆ ನಡೆಯುತ್ತದೆ. ಆರತಿ ಬಳಿಕ ಅಥವಾ ಪೂಜೆ ಬಳಿಕ ಇದೇ ನೈವೇದ್ಯವನ್ನು ತೆಗೆದು ಎಲ್ಲರಿಗೂ ಪ್ರಸಾದವಾಗಿ ಹಂಚಬೇಕು. ಇದುರಿಂದ ಪೂಜಾ ಫಲ ಹೆಚ್ಚುತ್ತದೆ ಎಂಬ ಉಲ್ಲೇಖಗಳಿವೆ.&lt;/p&gt;&lt;img&gt;&lt;p&gt;ನೈವೇದ್ಯಗಳನ್ನು ರಾತ್ರಿಯಿಡಿ ಇಡುವ ಪದ್ಧತಿ ಉತ್ತಮವಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿದರೆ ಫಲ ಹೆಚ್ಚು. ಇನ್ನು ಹಾಲು, ತುಪ್ಪ ಸೇರಿದಂತೆ ಹಲವು ವಸ್ತುಗಳು, ಅಥವಾ ಅದರಿಂದ ಮಾಡಿದ ನೈವೇದ್ಯಗಳು ರಾತ್ರಿಯಿಡಿ ಇಟ್ಟರೆ ಹಾಳಾಗುತ್ತದೆ. ಮರುದಿನ ಚೆಲ್ಲಬೇಕಾಗುತ್ತದೆ. ದೇವರ ನೈವೇದ್ಯವನ್ನು ಯಾವ ಭಕ್ತನೂ ಸೇವಿಸದೆ ಚೆಲ್ಲುವುದು ಉತ್ತಮವಲ್ಲ. ಇನ್ನು ರೆಫ್ರಿಜರೇಟರ್&zwnj;ನಲ್ಲಿ ಇಟ್ಟು ಮರು ದಿನ ಬಳಕೆ ಮಾಡುವುದು ಉತ್ತಮ ಪದ್ಧತಿಯಲ್ಲ. ಹೀಗಾಗಿ ಪೂಜೆ ಬಳಿಕ ನೈವೇದ್ಯ ಪ್ರಸಾದ ರೂಪದಲ್ಲಿ ಹಂಚುವುದು ಉತ್ತಮ.&lt;/p&gt;]]></content:encoded>
            <category><![CDATA[festivals]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/festivals/should-naivedya-be-removed-after-aarti-or-kept-overnight-what-scriptures-say-gezhw99"/>
        </item>
        <item>
            <title><![CDATA['ನೀನು ಅಹಂಕಾರಿಯಾಗಲೇಬೇಕು..': ಮಗ ವೇದಾಂತ್‌ಗೆ ನಟ ಮಾಧವನ್ ಈ ಸಲಹೆ ಕೊಟ್ಟಿದ್ಯಾಕೆ?]]></title>
            <link>https://kannada.asianetnews.com/entertainment/south-indian-acor-r-madhavan-s-son-vedaant-opens-up-about-his-father-egoistic-advice-gvd/articleshow-86ahpgc</link>
            <guid isPermaLink="true">https://kannada.asianetnews.com/entertainment/south-indian-acor-r-madhavan-s-son-vedaant-opens-up-about-his-father-egoistic-advice-gvd/articleshow-86ahpgc</guid>
            <pubDate>Sat, 12 Sep 2026 18:07:41 +0530</pubDate>
            <description><![CDATA[ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ತಮ್ಮ ಸ್ವಿಮ್ಮಿಂಗ್ ಸಾಧನೆಯಿಂದ ಗಮನ ಸೆಳೆಯುತ್ತಿದ್ದಾರೆ. 2026ರ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುತ್ತಿರುವ ವೇದಾಂತ್, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ತಂದೆ ನೀಡಿದ ವಿಶೇಷ ಸಲಹೆಯನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2asg3pyb0z0ta4v22dv3sk1,imgname-bkb-1789216165598.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ಮಾಧವನ್ ಪ್ರತಿಭಾವಂತ ಈಜುಗಾರನಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಲವು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅವರು, ದೇಶಕ್ಕಾಗಿ ಅನೇಕ ಪದಕಗಳನ್ನು ಗೆದ್ದಿದ್ದಾರೆ. ಇದೀಗ 2026ರ ಏಷ್ಯನ್ ಗೇಮ್ಸ್&zwnj;ಗೆ ಸಜ್ಜಾಗುತ್ತಿರುವ ವೇದಾಂತ್, ತಮ್ಮ ತಂದೆ ಆರ್. ಮಾಧವನ್ ನೀಡಿದ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. &lsquo;ನೀನು ಅಹಂಕಾರಿಯಾಗಲೇಬೇಕು&rsquo; ಎಂದು ತಂದೆ ಏಕೆ ಹೇಳಿದರು ಎಂಬುದನ್ನೂ ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಈಜಿನಲ್ಲಿ ಮಿಂಚುತ್ತಿರುವ ಆರ್. ಮಾಧವನ್ ಪುತ್ರ&lt;/strong&gt;&lt;/p&gt;&lt;p&gt;ಆರ್. ಮಾಧವನ್ ಅವರ ಪುತ್ರ ವೇದಾಂತ್ ಸದ್ಯ ತಮ್ಮ ಅದ್ಭುತ ಈಜು ಸಾಧನೆಯಿಂದ ಸುದ್ದಿಯಲ್ಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅವರು, 2026ರ ಏಷ್ಯನ್ ಗೇಮ್ಸ್&zwnj;ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ವೇದಾಂತ್ ಭಾರತೀಯ ಕ್ರೀಡಾಪಟುಗಳ ಸಾಮರ್ಥ್ಯ, ಆಹಾರ ಪದ್ಧತಿ ಹಾಗೂ ಯಶಸ್ಸಿಗೆ ಅಗತ್ಯವಿರುವ ಮಾನಸಿಕ ಸಿದ್ಧತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;ಭಾರತೀಯರಲ್ಲಿ ಕ್ರೀಡೆಗೆ ಅಗತ್ಯವಿರುವ ನೈಸರ್ಗಿಕ ಸಾಮರ್ಥ್ಯ ಅಪಾರವಾಗಿದೆ ಎಂದು ವೇದಾಂತ್ ಹೇಳಿದ್ದಾರೆ. ಭಾರತೀಯರು &lsquo;ಜೆನೆಟಿಕಲಿ ಗಿಫ್ಟೆಡ್&rsquo; ಅಂದರೆ ನೈಸರ್ಗಿಕವಾಗಿಯೇ ಪ್ರತಿಭಾವಂತರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಭಾರತೀಯ ಕ್ರೀಡಾಪಟುಗಳಿಗೆ ಆಹಾರವೇ ದೊಡ್ಡ ಸವಾಲು?&lt;/strong&gt;&lt;/p&gt;&lt;p&gt;ಪ್ರತಿಭೆ ಮತ್ತು ಸಾಮರ್ಥ್ಯವಿದ್ದರೂ ಭಾರತೀಯ ಕ್ರೀಡಾಪಟುಗಳು ನಿರೀಕ್ಷಿತ ಮಟ್ಟದ ಯಶಸ್ಸು ಸಾಧಿಸಲು ಆಹಾರ ಪದ್ಧತಿಯೂ ಒಂದು ಪ್ರಮುಖ ಅಡ್ಡಿಯಾಗುತ್ತಿದೆ ಎಂದು ವೇದಾಂತ್ ಹೇಳಿದ್ದಾರೆ. ವಿಶೇಷವಾಗಿ ಭಾರತೀಯರ ಆಹಾರದಲ್ಲಿ ಪ್ರೋಟೀನ್ ಪ್ರಮಾಣ ಹೆಚ್ಚಾಗಬೇಕಿದೆ ಎಂದು ಅವರು ತಿಳಿಸಿದ್ದಾರೆ. ಕ್ರೀಡಾಪಟುಗಳು ತಮ್ಮ ಆಹಾರದ ಬಗ್ಗೆ ಹೆಚ್ಚು ಗಂಭೀರವಾಗಿ ಗಮನಹರಿಸಿ, ಅಗತ್ಯ ಪ್ರಮಾಣದ ಪ್ರೋಟೀನ್ ಸೇವಿಸಿದರೆ, ಕ್ರೀಡಾ ಕ್ಷೇತ್ರದಲ್ಲಿ ಭಾರತ ಇನ್ನಷ್ಟು ದೊಡ್ಡ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ವೇದಾಂತ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಮೈಂಡ್&zwnj;ಸೆಟ್, ಶಿಸ್ತು ಕೂಡ ಅಷ್ಟೇ ಮುಖ್ಯ&lt;/strong&gt;&lt;/p&gt;&lt;p&gt;ಕೇವಲ ಆಹಾರ ಮಾತ್ರವಲ್ಲ, ಒಬ್ಬ ಕ್ರೀಡಾಪಟುವಿನ ಯಶಸ್ಸಿನ ಹಿಂದೆ ಸರಿಯಾದ ಮೈಂಡ್&zwnj;ಸೆಟ್, ಶಿಸ್ತು ಹಾಗೂ ತನ್ನ ಸಾಮರ್ಥ್ಯಕ್ಕೆ ನಿರಂತರವಾಗಿ ಸವಾಲು ಹಾಕುವ ಮನೋಭಾವವೂ ಬಹಳ ಮುಖ್ಯ ಎಂದು ವೇದಾಂತ್ ಹೇಳಿದ್ದಾರೆ. ತಮ್ಮ ಸಾಮರ್ಥ್ಯದ ಮಿತಿಗಳನ್ನು ಮೀರಿ ಮುನ್ನಡೆಯಲು ತಮ್ಮ ತರಬೇತಿಯಲ್ಲೂ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.&lt;/p&gt;&lt;p&gt;ಸದ್ಯ ವೇದಾಂತ್ 200 ಮೀಟರ್ ಫ್ರೀಸ್ಟೈಲ್ ವಿಭಾಗದ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ. ಇದಕ್ಕಾಗಿ ಅವರ ತರಬೇತಿಯಲ್ಲಿ ತೂಕ ಎತ್ತುವ ವ್ಯಾಯಾಮಗಳನ್ನೂ ಸೇರಿಸಲಾಗಿದೆ. ಈ ಹಿಂದೆ ಅವರು ಮುಖ್ಯವಾಗಿ ಲಾಂಗ್ ಡಿಸ್ಟೆನ್ಸ್ ಸ್ವಿಮ್ಮಿಂಗ್&zwnj;ಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಇದೀಗ ಹೊಸ ವಿಭಾಗದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಅವರು ಮತ್ತಷ್ಟು ಕಠಿಣ ತರಬೇತಿ ಪಡೆಯುತ್ತಿದ್ದಾರೆ.&lt;/p&gt;&lt;p&gt;&lt;strong&gt;2026ರ ಏಷ್ಯನ್ ಗೇಮ್ಸ್&zwnj;ಗೆ ವೇದಾಂತ್ ಸಜ್ಜು&lt;/strong&gt;&lt;/p&gt;&lt;p&gt;2026ರ ಏಷ್ಯನ್ ಗೇಮ್ಸ್&zwnj;ಗಾಗಿ ಆಯ್ಕೆಯಾಗಿರುವ ಭಾರತದ 12 ಸದಸ್ಯರ ಈಜು ತಂಡದಲ್ಲಿ ವೇದಾಂತ್ ಕೂಡ ಸ್ಥಾನ ಪಡೆದಿದ್ದಾರೆ. ಈ ತಂಡದಲ್ಲಿ ಒಲಿಂಪಿಯನ್&zwnj;ಗಳಾದ ಶ್ರೀಹರಿ ನಟರಾಜ್ ಮತ್ತು ಸಾಜನ್ ಪ್ರಕಾಶ್ ಕೂಡ ಇದ್ದಾರೆ. ಜಪಾನ್&zwnj;ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ವೇದಾಂತ್ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.&lt;/p&gt;&lt;h2&gt;&lt;strong&gt;ಮಗನ ಯಶಸ್ಸಿನ ಹಿಂದೆ ಆರ್. ಮಾಧವನ್ ಪಾಲನೆಯೂ ಇದೆ&lt;/strong&gt;&lt;/h2&gt;&lt;p&gt;ವೇದಾಂತ್ ಅವರ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮದ ಜೊತೆಗೆ ತಂದೆ ಆರ್. ಮಾಧವನ್ ಅವರ ಪಾಲನೆಯ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತದೆ. ಮಗನಿಗೆ ಚಿಕ್ಕಂದಿನಿಂದಲೇ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಹಾಗೂ ತನ್ನ ಗುರಿಗಾಗಿ ಶ್ರಮಿಸುವ ಸ್ವಾತಂತ್ರ್ಯವನ್ನು ನೀಡಿದ್ದಾಗಿ ಮಾಧವನ್ ಈ ಹಿಂದೆ ಹೇಳಿದ್ದರು.&lt;/p&gt;&lt;p&gt;ವೇದಾಂತ್ ಅವರ ಈಜು ತರಬೇತಿಗಾಗಿ ಕುಟುಂಬವೂ ಹಲವು ತ್ಯಾಗಗಳನ್ನು ಮಾಡಿದೆ. ಅವರ ತರಬೇತಿ ಮತ್ತು ಡಯೆಟ್ ವಿಚಾರದಲ್ಲಿ ಕಟ್ಟುನಿಟ್ಟಿನ ಶಿಸ್ತು ಪಾಲಿಸಲಾಗುತ್ತದೆ ಎಂದು ಆರ್. ಮಾಧವನ್ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ವೇದಾಂತ್ ಹಂಚಿಕೊಂಡಿರುವ ತಂದೆಯ ಸಲಹೆ ಮತ್ತೊಮ್ಮೆ ಗಮನ ಸೆಳೆದಿದ್ದು, ಅವರ ಕ್ರೀಡಾ ಬದುಕಿನ ಜೊತೆಗೆ ಆರ್. ಮಾಧವನ್ ಅವರ ವಿಭಿನ್ನ ಪೋಷಕರ ಶೈಲಿಯೂ ಚರ್ಚೆಯಾಗುತ್ತಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/south-indian-acor-r-madhavan-s-son-vedaant-opens-up-about-his-father-egoistic-advice-gvd/articleshow-86ahpgc"/>
        </item>
        <item>
            <title><![CDATA[ಜಿನ್‌ಪಿಂಗ್ ಭಾರತದಲ್ಲಿ ತಮ್ಮ ಶೌಚಾಲಯವನ್ನೂ ಬಿಡುವುದಿಲ್ಲ, ವಾಪಸ್ ಚೀನಾಗೆ ಕೊಂಡೊಯ್ಯುತ್ತಾರೆ - ಕಾರಣವೇನು?]]></title>
            <link>https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3</link>
            <guid isPermaLink="true">https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3</guid>
            <pubDate>Sat, 12 Sep 2026 18:06:38 +0530</pubDate>
            <description><![CDATA[ಪ್ರಮುಖ ನಾಯಕರು ತಮ್ಮ ವಿದೇಶಿ ಪ್ರವಾಸದ ವೇಳೆ ತಾವು ಬಳಸುವ ಪೋರ್ಟಬಲ್‌ ಶೌಚಾಲಯವನ್ನೂ ತೆಗೆದುಕೊಂಡೇ ಹೋಗ್ತಾರೆ. ಇದಕ್ಕೆ ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್‌, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಹೊರತಾಗಿಲ್ಲ. ಯಾಕೆ ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01m2asq9dkd9947hdc0p6p5mpn,imgname-xi-jinping-and-puti-1789216400819.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯಲ್ಲಿ ಬ್ರಿಕ್ಸ್&zwnj; (BRICS) ಶೃಂಗಸಭೆ ನಡೆಯುತ್ತಿದೆ. ಚೀನಾದ ಅಧ್ಯಕ್ಷ ಶೀ ಜಿನ್&zwnj;ಪಿಂಗ್&zwnj; ಕೂಡ ಭಾರತಕ್ಕೆ ಏಳು ವರ್ಷಗಳ ಬಳಿಕ ಕಾಲಿಟ್ಟಿದ್ದಾರೆ. ಸದ್ಯ ಸೋಶಿಯಲ್&zwnj; ಮೀಡಿಯಾದಲ್ಲಿ ಚರ್ಚೆ ಆಗ್ತಿರುವ ವಿಚಾರ ಏನೆಂದ್ರೆ ಜಿನ್&zwnj;ಪಿಂಗ್&zwnj; ತಮ್ಮ ಪೋರ್ಟಬಲ್&zwnj; ಶೌಚಾಲಯವನ್ನೂ ಭಾರತದ ಪ್ರವಾಸದ ವೇಳೆ ತೆಗೆದುಕೊಂಡು ಬರುತ್ತಾರೆ ಅನ್ನೋದು. ಹಾಗಂತ ಈ ಕೆಲಸವನ್ನು ಜಿನ್&zwnj;ಪಿಂಗ್&zwnj; ಮಾತ್ರವಲ್ಲ. ವಿಶ್ವದ ಅನೇಕ ನಾಯಕರು ತಮ್ಮ ಪ್ರವಾಸದ ವೇಳೆ ಪೋರ್ಟಬಲ್&zwnj; ಶೌಚಾಲಯವನ್ನು ತೆಗೆದುಕೊಂಡೇ ಓಡಾಡುತ್ತಾರೆ.&lt;/p&gt;&lt;h2&gt;&lt;strong&gt;ಯಾಕೆ ಹೀಗೆ ಮಾಡುತ್ತಾರೆ?&lt;/strong&gt;&lt;/h2&gt;&lt;p&gt;ವಿಶ್ವದ ಪ್ರಮುಖ ನಾಯಕರ ಇಂಥ ನಿರ್ಧಾರಗಳಿಗೆ ಪ್ರಮುಖ ಎರಡು ಕಾರಣಗಳಿರುತ್ತವೆ. ಒಂದು ವೈದ್ಯಕೀಯ ಸೂಕ್ಷ್ಮ ಮಾಹಿತಿಯ ರಕ್ಷಣೆ. ಇನ್ನೊಂದು ಸಂಭಾವ್ಯ ಬೇಹುಗಾರಿಕೆ ತಡೆಗಟ್ಟುವಿಕೆ. ಅಂದರೆ ಜೈವಿಕ ತ್ಯಾಜ್ಯಗಳನ್ನ ಸಂಗ್ರಹಿಸುವ ಕಾಳಜಿಗಳಲ್ಲಿ ಅದರಲ್ಲಿರುವ ಸೂಕ್ಷ್ಮ ಮಾಹಿತಿ. ಮಾನವ ತ್ಯಾಜ್ಯವು ವ್ಯಕ್ತಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ. ಒಬ್ಬ ಗಣ್ಯ ವ್ಯಕ್ತಿಯ ಆರೋಗ್ಯ ವಿಚಾರವು ತುಂಬಾನೇ ಸುಕ್ಷ್ಮವಾಗಿರೋದ್ರಿಂದ ಅದು ಬಹಿರಂಗವಾಗಬಾರದು. ಅಂದರೆ ಹಿರಿಯ ನಾಯಕರ ಭದ್ರತೆಗೆ ಇಂತಹ ಮಾಹಿತಿ ನಿರ್ಣಾಯಕವಾಗಬಹುದು ಎಂಬ ಸಾಧ್ಯತೆಯಲ್ಲಿ ಇಂಥ ವ್ಯವಸ್ಥೆ ಮಾಡಿಕೊಳ್ತಾರೆ.&lt;/p&gt;&lt;p&gt;ಕೆಲವು ಗುಪ್ತಚರ ಸಂಸ್ಥೆಗಳು ಗಂಭೀರ ಕಾಯಿಲೆಗಳು, ಔಷಧಿಗಳು ಅಥವಾ ನಾಯಕನ ವೈದ್ಯಕೀಯ ಸ್ಥಿತಿಯ ಇತರ ಅಂಶಗಳ ಬಗ್ಗೆ ಸುಳಿವುಗಳನ್ನು ಪತ್ತೆಹಚ್ಚುವ ಸಾಧ್ಯತೆ ದಟ್ಟವಾಗಿರುತ್ತದೆ. ಹೀಗಾಗಿಯೇ ಹೆಚ್ಚಿನ ಭದ್ರತೆ ಹೊಂದಿರುವ ನಾಯಕರು ವಿದೇಶ ಪ್ರವಾಸಗಳ ಸಂದರ್ಭದಲ್ಲಿ ತಮ್ಮ ಜೈವಿಕ ಮಾದರಿಗಳನ್ನು ಬಿಡದಂತೆ ಎಚ್ಚರ ವಹಿಸುತ್ತಾರೆ.&lt;/p&gt;&lt;h2&gt;&lt;strong&gt;ಬೇಹುಗಾರಿಕೆ, ಗೌಪ್ಯತೆಯ ಕಾಳಜಿಗಳು&lt;/strong&gt;&lt;/h2&gt;&lt;p&gt;ಇನ್ನೊಂದು ಪ್ರಮುಖ ಉದ್ದೇಶ ಏನಂದ್ರೆ ಪರಿಚಯವೇ ಇಲ್ಲದ ಸ್ಥಳಗಳಲ್ಲಿ ಕಣ್ಗಾವಲು ಸಾಧ್ಯತೆ ಇರುತ್ತದೆ. ಹೋಟೆಲ್&zwnj;, ಸ್ನಾನಗೃಹಗಳು ಸೇರಿದಂತೆ ನೆಲೆವಸ್ತುಗಳು ಮತ್ತು ಎಲೆಕ್ಟ್ರಾನಿಕ್&zwnj; ವ್ಯವಸ್ಥೆಗಳನ್ನ ಹೊಂದಿರಬಹುದು ಎಂಬ ಭಯ ಇರುತ್ತದೆ. ಯಾಕೆಂದರೆ ಭದ್ರತಾ ತಂಡವು ಅವು ಸುರಕ್ಷಿತವಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.&lt;/p&gt;&lt;h2&gt;&lt;strong&gt;ಪೋರ್ಟಬಲ್ ಶೌಚಾಲಯ ಹೇಗೆ ಕೆಲಸ ಮಾಡುತ್ತೆ?&lt;/strong&gt;&lt;/h2&gt;&lt;p&gt;ನಾಯಕರ ಜೈವಿಕ ತ್ಯಾಜ್ಯವನ್ನು ವಿದೇಶಿ ಸ್ಥಳದಲ್ಲಿ ಬಿಡದಂತೆ ನೋಡಿಕೊಳ್ಳಲು ಅದನ್ನು ವಿನ್ಯಾಸ ಮಾಡಲಾಗುತ್ತದೆ. ಅದಕ್ಕಾಗಿಯೇ ಮೀಸಲಾಗಿರುವ ಭದ್ರತಾ ತಂಡವು ಆ ಶೌಚಾಲಯವನ್ನು ಸಿದ್ಧಪಡಿಸುತ್ತದೆ. ಪೋರ್ಟಬಲ್ ಶೌಚಾಲಯಗಳನ್ನು ಬಳಸಿದ ನಂತರ ಅದನ್ನು ಸುಲಭವಾಗಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಮಾಡಿರುತ್ತಾರೆ. ಆ ವಸ್ತುವನ್ನು ಭದ್ರತಾ ತಂಡದ ಮೇಲ್ವಿಚಾರಣೆಯಲ್ಲಿ ಸುರಕ್ಷಿತಗೊಳಿಸಿ ಸ್ವದೇಶಕ್ಕೆ ಸಾಗಿಸಲಾಗುತ್ತದೆ.&lt;/p&gt;&lt;p&gt;ಎಲ್ಲಾ ದೇಶಗಳಲ್ಲೂ ಸಾಮಾನ್ಯ ಜನರಿಗೆ ಹೋಟೆಲ್ ಸ್ನಾನಗೃಹವನ್ನು ಬಳಸುವುದು ಸಾಮಾನ್ಯ ಸಂಗತಿ. ಆದರೆ ಒಂದು ರಾಷ್ಟ್ರದ ಮುಖ್ಯಸ್ಥರಿಗೆ, ಅತ್ಯಲ್ಪವೆಂದು ತೋರುವ ವೈಯಕ್ತಿಕ ಮಾಹಿತಿಯು ಸಹ ಗುಪ್ತಚರ ಮೂಲವಾಗಬಹುದು. ಸೈದ್ಧಾಂತಿಕವಾಗಿ ಒಂದು ಜೈವಿಕ ಮಾದರಿಯು ನಾಯಕನೊಬ್ಬ ವಿದೇಶಿ ಏಜೆನ್ಸಿಗಳು ಪ್ರವೇಶಿಸಲು ಬಯಸದ ಮಾಹಿತಿಯನ್ನು ಬಹಿರಂಗಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಸುರಕ್ಷಿತ ಸ್ನಾನಗೃಹಗಳ ಕೊರತೆಯು ಕಣ್ಗಾವಲುಗೆ ಅವಕಾಶಗಳನ್ನು ನೀಡುತ್ತದೆ. ಕೆಲವು ನಾಯಕರಿಗೆ, ಭದ್ರತಾ ಕ್ರಮಗಳು ಅಂಗರಕ್ಷಕರು, ಗುಂಡು ನಿರೋಧಕ ವಾಹನಗಳು ಮತ್ತು ಸುರಕ್ಷಿತ ಮಾರ್ಗಗಳನ್ನು ಮೀರಿ ಹೋಗುತ್ತವೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/xi-jinping-would-not-even-leave-his-toilet-behind-in-india-he-takes-it-back-to-china-what-is-the-reason-gkn/articleshow-6qlwhq3"/>
        </item>
        <item>
            <title><![CDATA[Rice Storage: ಅಕ್ಕಿ ಡಬ್ಬಿ ಟೈಟಾಗಿ ಮುಚ್ಚಿದರೂ ಹುಳುಗಳು ಹೇಗೆ ಬರುತ್ತವೆ? ಇಲ್ಲಿದೆ ಅಸಲಿ ಕಾರಣ]]></title>
            <link>https://kannada.asianetnews.com/gallery/food/where-do-rice-bugs-come-from-even-in-airtight-containers-heres-the-truth-p34gxg0</link>
            <guid isPermaLink="true">https://kannada.asianetnews.com/gallery/food/where-do-rice-bugs-come-from-even-in-airtight-containers-heres-the-truth-p34gxg0</guid>
            <pubDate>Sat, 12 Sep 2026 18:05:22 +0530</pubDate>
            <description><![CDATA[Kitchen pantry pests: ಅಕ್ಕಿ ಡಬ್ಬಿಯನ್ನ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿಟ್ಟರೂ, ಕೆಲವು ದಿನಗಳ ನಂತರ ಅದರಲ್ಲಿ ಸಣ್ಣ ಹುಳುಗಳು ಕಾಣಿಸಿಕೊಳ್ಳುತ್ತವೆ. ಆಗ ಡಬ್ಬಿಯ ಮುಚ್ಚಳ ತೆಗೆಯದಿದ್ದರೂ ಹುಳುಗಳು ಒಳಗೆ ಹೇಗೆ ಬಂದವು ಎಂಬ ಅನುಮಾನ ಮೂಡೋದು ಸಹಜ. ಹಾಗಾದರೆ ಇದರ ಹಿಂದಿನ ಕಾರಣವೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01m2asrd7dxbrk7nvqzaz55xm1,imgname-thumbnail---2026-09-12t180312.816-1789216437485.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen pantry pests: ಅಕ್ಕಿ ಡಬ್ಬಿಯನ್ನ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿಟ್ಟರೂ, ಕೆಲವು ದಿನಗಳ ನಂತರ ಅದರಲ್ಲಿ ಸಣ್ಣ ಹುಳುಗಳು ಕಾಣಿಸಿಕೊಳ್ಳುತ್ತವೆ. ಆಗ ಡಬ್ಬಿಯ ಮುಚ್ಚಳ ತೆಗೆಯದಿದ್ದರೂ ಹುಳುಗಳು ಒಳಗೆ ಹೇಗೆ ಬಂದವು ಎಂಬ ಅನುಮಾನ ಮೂಡೋದು ಸಹಜ. ಹಾಗಾದರೆ ಇದರ ಹಿಂದಿನ ಕಾರಣವೇನು?&lt;/p&gt;&lt;img&gt;&lt;p&gt;&lt;strong&gt;ಅಕ್ಕಿಯಲ್ಲಿ ಹುಳುಗಳು ಅಸಲಿಗೆ ಎಲ್ಲಿಂದ ಬರುತ್ತವೆ?&lt;/strong&gt;ಅಕ್ಕಿಯಲ್ಲಿ ಕಾಣುವ ಸಣ್ಣ ಹುಳುಗಳನ್ನು ಸಾಮಾನ್ಯವಾಗಿ 'ರೈಸ್ ವೀವಿಲ್ಸ್' (Rice Weevils) ಎಂದು ಕರೆಯುತ್ತಾರೆ. ಇವುಗಳ ಜೀವನಚಕ್ರ ಅಕ್ಕಿ ಅಥವಾ ಇತರ ಧಾನ್ಯಗಳಲ್ಲೇ ಆರಂಭವಾಗುವ ಸಾಧ್ಯತೆ ಇರುತ್ತದೆ. ಬೆಳೆ ಹೊಲದಲ್ಲಿದ್ದಾಗಲೇ ಕೆಲವು ಕೀಟಗಳು ಧಾನ್ಯದ ಕಾಳುಗಳ ಮೇಲೆ ಮೊಟ್ಟೆ ಇಡಬಹುದು. ಕೊಯ್ಲು, ಸ್ವಚ್ಛಗೊಳಿಸುವಿಕೆ ಮತ್ತು ಸಂಗ್ರಹಣೆಯ ಸಮಯದಲ್ಲಿಯೂ ಕೀಟಗಳು ಧಾನ್ಯವನ್ನು ಸೇರಿಕೊಳ್ಳಬಹುದು. ಆದರೆ, ಪ್ರತಿ ಅಕ್ಕಿ ಕಾಳಿನಲ್ಲೂ ಹುಳದ ಮೊಟ್ಟೆ ಇರುತ್ತದೆ ಎಂದಲ್ಲ. ಕೆಲವು ಸಂದರ್ಭಗಳಲ್ಲಿ, ಮೊಟ್ಟೆಗಳು ಅಥವಾ ಹುಳದ ಆರಂಭಿಕ ಹಂತಗಳು ಕಣ್ಣಿಗೆ ಕಾಣಿಸದೆ ಉಳಿದುಬಿಡಬಹುದು. ಅಕ್ಕಿ ಮನೆಗೆ ಬಂದ ನಂತರ, ಅವುಗಳಿಗೆ ಅನುಕೂಲಕರ ವಾತಾವರಣ ಸಿಕ್ಕರೆ, ಕ್ರಮೇಣ ಹುಳುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಡಬ್ಬಿ ಮುಚ್ಚಿದ್ದರೂ ಹುಳುಗಳು ಹೇಗೆ ಹೊರಬರುತ್ತವೆ?&lt;/strong&gt;ಇದೇ ಆಸಕ್ತಿದಾಯಕ ವಿಷಯ. ಡಬ್ಬಿಯ ಹೊರಗಿನಿಂದ ಹುಳು ಒಳಗೆ ಬರದಿದ್ದರೂ, ಅಕ್ಕಿಯಲ್ಲಿ ಮೊದಲೇ ಇರುವ ಮೊಟ್ಟೆ ಬೆಳೆದರೆ, ಸ್ವಲ್ಪ ಸಮಯದ ನಂತರ ಹುಳು ಕಾಣಿಸಿಕೊಳ್ಳಬಹುದು. ಕೆಲವು ಬಗೆಯ ಧಾನ್ಯದ ಹುಳುಗಳು ಕಾಳಿನಲ್ಲೇ ಮೊಟ್ಟೆ ಇಟ್ಟು, ಅವುಗಳ ಲಾರ್ವಾ ಹಂತವನ್ನು ಕೂಡ ಕಾಳಿನ ಒಳಗೆಯೇ ಪೂರ್ಣಗೊಳಿಸುತ್ತವೆ. ಮೊದಲು ಮೊಟ್ಟೆ ತುಂಬಾ ಚಿಕ್ಕದಾಗಿರುವುದರಿಂದ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ನಂತರ ಅದರಿಂದ ಲಾರ್ವಾ ಹೊರಬಂದು, ಕಾಳಿನೊಳಗಿನ ಪದಾರ್ಥವನ್ನು ಆಹಾರವಾಗಿ ತಿನ್ನುತ್ತಾ ಬೆಳೆಯುತ್ತದೆ. ಸಂಪೂರ್ಣವಾಗಿ ಬೆಳೆದ ನಂತರ, ವಯಸ್ಕ ಹುಳು ಕಾಳನ್ನು ಬಿಟ್ಟು ಹೊರಗೆ ಬರಬಹುದು. ಅದಕ್ಕಾಗಿಯೇ ಡಬ್ಬಿಯನ್ನು ಬಿಗಿಯಾಗಿ ಮುಚ್ಚಿದ್ದರೂ, ಅಕ್ಕಿಯಲ್ಲಿ ಇದ್ದಕ್ಕಿದ್ದಂತೆ ಹುಳುಗಳು ಕಾಣಿಸಿಕೊಂಡಂತೆ ಅನಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಶಾಖ ಮತ್ತು ತೇವಾಂಶ ಇದ್ದರೆ ಸಮಸ್ಯೆ ಏಕೆ ಹೆಚ್ಚಾಗುತ್ತದೆ?&lt;/strong&gt;ಅಕ್ಕಿಯಲ್ಲಿ ಹುಳುಗಳು ಬೇಗನೆ ಬೆಳೆಯಲು ವಾತಾವರಣದ ಪರಿಸ್ಥಿತಿಗಳು ಕೂಡ ಮುಖ್ಯ ಪಾತ್ರವಹಿಸುತ್ತವೆ. ಹೆಚ್ಚು ಶಾಖ ಮತ್ತು ತೇವಾಂಶವಿರುವ ಸ್ಥಳಗಳಲ್ಲಿ ಸಂಗ್ರಹಿಸಿದ ಧಾನ್ಯದಲ್ಲಿ ಕೀಟಗಳ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು ಉಂಟಾಗಬಹುದು. ವಿಶೇಷವಾಗಿ, ತೇವಾಂಶವು ಅಕ್ಕಿ ಸಂಗ್ರಹಣೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಅಕ್ಕಿ ಡಬ್ಬಿಯನ್ನು ಒದ್ದೆಯಾದ ಜಾಗದಲ್ಲಿ ಇಡುವುದು, ಒದ್ದೆ ಚಮಚದಿಂದ ಅಕ್ಕಿ ತೆಗೆಯುವುದು, ಡಬ್ಬಿಯೊಳಗೆ ತೇವಾಂಶ ಸೇರುವುದು ಮುಂತಾದ ಕಾರಣಗಳಿಂದ ಸಂಗ್ರಹಣೆಯ ಪರಿಸ್ಥಿತಿಗಳು ಬದಲಾಗಬಹುದು. ಇದರಿಂದಾಗಿ, ಈಗಾಗಲೇ ಅಕ್ಕಿಯಲ್ಲಿರುವ ಕೀಟಗಳ ಮೊಟ್ಟೆಗಳು ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಅಕ್ಕಿಯನ್ನು ಒಣಗಿದ ಮತ್ತು ಗಾಳಿಯಲ್ಲಿ ತೇವಾಂಶ ಕಡಿಮೆ ಇರುವ ಜಾಗದಲ್ಲಿ ಸಂಗ್ರಹಿಸುವುದು ಮುಖ್ಯ.&lt;/p&gt;&lt;img&gt;&lt;p&gt;&lt;strong&gt;ಅಕ್ಕಿಯಲ್ಲಿ ಹುಳುಗಳು ಬರದಂತೆ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?&lt;/strong&gt;ಅಕ್ಕಿ ಖರೀದಿಸಿದ ತಕ್ಷಣ, ಸಂಪೂರ್ಣ ಅಕ್ಕಿಯನ್ನು ಒಂದೇ ಬಾರಿಗೆ ದೊಡ್ಡ ಡಬ್ಬಿಯಲ್ಲಿ ಸುರಿಯುವ ಬದಲು, ಮೊದಲು ಅದನ್ನು ಪರೀಕ್ಷಿಸುವುದು ಒಳ್ಳೆಯದು. ಕಾಳುಗಳಲ್ಲಿ ಅಸಹಜವಾದ ರಂಧ್ರಗಳು, ಸಣ್ಣ ಹುಳುಗಳು, ಪುಡಿಯಂತಹ ಅವಶೇಷಗಳು ಕಾಣಿಸುತ್ತಿವೆಯೇ ಎಂದು ಗಮನಿಸಬೇಕು. ಸಂಗ್ರಹಿಸುವ ಡಬ್ಬಿ ಸಂಪೂರ್ಣವಾಗಿ ಸ್ವಚ್ಛವಾಗಿ ಮತ್ತು ಒಣಗಿರಬೇಕು. ಹಳೆಯ ಅಕ್ಕಿಯ ಮೇಲೆ ಹೊಸ ಅಕ್ಕಿಯನ್ನು ಬೆರೆಸದಿರುವುದು ಕೂಡ ಒಳ್ಳೆಯದು. ಡಬ್ಬಿಯಲ್ಲಿ ಉಳಿದ ಅಕ್ಕಿಯನ್ನು ಸಂಪೂರ್ಣವಾಗಿ ಖಾಲಿ ಮಾಡಿ, ಡಬ್ಬಿಯನ್ನು ಸ್ವಚ್ಛವಾಗಿ ತೊಳೆದು, ಪೂರ್ತಿಯಾಗಿ ಒಣಗಿದ ನಂತರ ಹೊಸ ಅಕ್ಕಿಯನ್ನು ಹಾಕಬೇಕು. ಹಾಗೆಯೇ, ಅಕ್ಕಿಯನ್ನು ಪದೇ ಪದೇ ಹೆಚ್ಚು ಶಾಖ ಅಥವಾ ತೇವಾಂಶಕ್ಕೆ ಒಡ್ಡದಂತೆ ನೋಡಿಕೊಳ್ಳಬೇಕು. ಹೆಚ್ಚು ಕಾಲ ಸಂಗ್ರಹಿಸದೆ, ಅಗತ್ಯಕ್ಕೆ ತಕ್ಕಂತೆ ಖರೀದಿಸುವುದು ಕೂಡ ಉಪಯುಕ್ತ.&lt;/p&gt;&lt;img&gt;&lt;p&gt;&lt;strong&gt;ಹುಳುಗಳು ಕಂಡರೆ ಏನು ಮಾಡಬೇಕು?&lt;/strong&gt;ಅಕ್ಕಿಯಲ್ಲಿ ಹುಳುಗಳು ಕಂಡಾಗ, ಮೊದಲು ಆ ಅಕ್ಕಿಯನ್ನು ಇತರ ಧಾನ್ಯಗಳಿಂದ ಬೇರ್ಪಡಿಸಬೇಕು. ಹುಳುಗಳ ಸಂಖ್ಯೆ ತುಂಬಾ ಹೆಚ್ಚಾಗಿದ್ದರೆ, ಅಕ್ಕಿಯಲ್ಲಿ ಕೆಟ್ಟ ವಾಸನೆ, ತೇವಾಂಶ, ಬೂಷ್ಟು ಅಥವಾ ಇತರ ಬದಲಾವಣೆಗಳು ಕಂಡುಬಂದರೆ, ಅದನ್ನು ಬಳಸದೆ ಬಿಸಾಡುವುದು ಸುರಕ್ಷಿತ ನಿರ್ಧಾರ. ವಿಶೇಷವಾಗಿ ಬೂಷ್ಟು ಹಿಡಿದ ಧಾನ್ಯವನ್ನು ತಿನ್ನಬಾರದು. ಹುಳುಗಳು ಕಂಡ ಡಬ್ಬಿಯನ್ನು ಕೂಡ ಖಾಲಿ ಮಾಡಿ, ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ತೇವಾಂಶವಿಲ್ಲದಂತೆ ಒಣಗಿಸಬೇಕು. ಹತ್ತಿರದಲ್ಲಿರುವ ಬೇಳೆಕಾಳುಗಳು ಮತ್ತು ಇತರ ಧಾನ್ಯಗಳನ್ನು ಕೂಡ ಒಮ್ಮೆ ಪರೀಕ್ಷಿಸುವುದು ಒಳ್ಳೆಯದು. ಏಕೆಂದರೆ, ಇಂತಹ ಸಂಗ್ರಹಣಾ ಹುಳುಗಳು ಇತರ ಧಾನ್ಯಗಳಿಗೂ ಹರಡುವ ಸಾಧ್ಯತೆ ಇರುತ್ತದೆ.&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/where-do-rice-bugs-come-from-even-in-airtight-containers-heres-the-truth-p34gxg0"/>
        </item>
        <item>
            <title><![CDATA[ಮಹಾ ಪಿರಮಿಡ್ ಬರಿ ಸಮಾಧಿಯಲ್ಲ, ಖಗೋಳದ ಗಣಿತ ಕಣಜ! ಚಂದ್ರ, ಗ್ರಹಗಳ ಲೆಕ್ಕ, ಹೊಸ ಸಿದ್ಧಾಂತದಿಂದ ಶಾಕಿಂಗ್ ಸತ್ಯ ಬಯಲು!]]></title>
            <link>https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta</link>
            <guid isPermaLink="true">https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta</guid>
            <pubDate>Sat, 12 Sep 2026 18:05:21 +0530</pubDate>
            <description><![CDATA[ಗಿಜಾದ ಮಹಾ ಪಿರಮಿಡ್ ತನ್ನ ಆಯಾಮಗಳಲ್ಲಿ ಗುಪ್ತ ಗಣಿತ ಸಂಕೇತವನ್ನು ಹೊಂದಿರಬಹುದು ಎಂದು ಹೊಸ ಸಿದ್ಧಾಂತವೊಂದು ಹೇಳಿದೆ. ಈ ಸಂಕೇತವು ಚಂದ್ರ, ನಕ್ಷತ್ರ ಮತ್ತು ಗ್ರಹಗಳ ಚಲನೆಗೆ ಸಂಬಂಧಿಸಿದೆ ಎಂದು ಸಂಶೋಧಕ ಸೆಫಿ ಲೆವಿ ಪ್ರತಿಪಾದಿಸಿದ್ದಾರೆ. ಆದರೆ, ಈ ವಾದಕ್ಕೆ ಇನ್ನೂ ವೈಜ್ಞಾನಿಕ ಪುರಾವೆಗಳು ಲಭ್ಯವಾಗಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kfszwgm3t5ac7skt5whtg4cs,imgname-great-pyramid-construction-new-study-pulley-counterweight-theory-05-1769325085315.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಈಜಿಪ್ಟ್:&lt;/strong&gt; ಪ್ರಪಂಚದ ಅತ್ಯಂತ ಅದ್ಭುತ ಪ್ರಾಚೀನ ಸ್ಮಾರಕಗಳಲ್ಲಿ ಒಂದಾದ ಗಿಜಾದ ಮಹಾ ಪಿರಮಿಡ್ (Great Pyramid of Giza) ತನಗಷ್ಟೇ ಸೀಮಿತವಾದ ಅಪಾರ ರಹಸ್ಯಗಳಿಂದಾಗಿ ಗತಕಾಲದಿಂದ ಸಂಶೋಧಕರನ್ನು ಆಕರ್ಷಿಸುತ್ತಲೇ ಬಂದಿದೆ. ಇದೀಗ ಈ ಪಿರಮಿಡ್ ಚಂದ್ರ, ನಕ್ಷತ್ರಗಳು ಹಾಗೂ ವಿವಿಧ ಗ್ರಹಗಳ ಚಲನೆಗೆ ಸಂಬಂಧಿಸಿದ ಅತ್ಯಂತ ನಿಖರವಾದ ಗುಪ್ತ ಗಣಿತ ಸಂಕೇತಗಳನ್ನು (Mathematical Code) ಹೊಂದಿರಬಹುದು ಎಂಬ ಹೊಸ ಸಿದ್ಧಾಂತವೊಂದು ಚರ್ಚೆಗೆ ಬಂದಿದೆ&lt;/p&gt;&lt;p&gt;ವರದಿಯ ಪ್ರಕಾರ, ಸ್ವತಂತ್ರ ಸಂಶೋಧಕರಾದ ಸೆಫಿ ಲೆವಿ ಅವರು ಈ ಹೊಸ ಅಧ್ಯಯನವನ್ನು ಮಾಡಿದ್ದಾರೆ. ಪಿರಮಿಡ್&zwnj;ನ ಎತ್ತರ, ತಳಭಾಗದ ಅಳತೆ ಹಾಗೂ ಇಳಿಜಾರಿನ ಬದಿಗಳ ಆಯಾಮಗಳು ಪ್ರಾಚೀನ ಈಜಿಪ್ಟಿನವರ ಅಪಾರ ಗಣಿತ ಮತ್ತು ಖಗೋಳಶಾಸ್ತ್ರದ ಜ್ಞಾನವನ್ನು ಪ್ರತಿಬಿಂಬಿಸುವ ನಿರ್ದಿಷ್ಟ ಸಂಖ್ಯಾತ್ಮಕ ಮಾದರಿಗಳನ್ನು ಒಳಗೊಂಡಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.&lt;/p&gt;&lt;h2&gt;ಸಿದ್ಧಾಂತ ಹೇಳುವುದೇನು?&lt;/h2&gt;&lt;p&gt;ಈ ಹೊಸ ಅಧ್ಯಯನವು 'SSRN' ಜರ್ನಲ್&zwnj;ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವನ್ನು ಆಧರಿಸಿದೆ. ಲೆವಿ ಅವರು ಪ್ರಾಚೀನ ಈಜಿಪ್ಟಿನ ಗಣಿತ ಪದ್ಧತಿಯಲ್ಲಿದ್ದ ಭಿನ್ನರಾಶಿಗಳನ್ನು ಬಳಸಿಕೊಂಡು ಗ್ರೇಟ್ ಪಿರಮಿಡ್&zwnj;ನ ಪ್ರಮುಖ ಅಳತೆಗಳನ್ನು ತೀವ್ರ ಅಧ್ಯಯನಕ್ಕೆ ಒಳಪಡಿಸಿದರು. ಈ ಲೆಕ್ಕಾಚಾರಗಳಿಂದ ದೊರೆತ ಸಂಖ್ಯೆಗಳು ಪ್ರಮುಖ ಖಗೋಳ ಚಕ್ರಗಳು ಹಾಗೂ ಗಣಿತದ ಸ್ಥಿರಾಂಕಗಳಿಗೆ (Mathematical Constants) ಅತ್ಯಂತ ನಿಕಟವಾಗಿ ಹೊಂದಿಕೆಯಾಗುತ್ತವೆ ಎಂಬುದು ಅವರ ವಾದ.&lt;/p&gt;&lt;p&gt;ಪಿರಮಿಡ್&zwnj;ನ ಅಳತೆಯ ಒಂದು ಲೆಕ್ಕಾಚಾರದಿಂದ 27.5 ಎಂಬ ಸಂಖ್ಯೆ ದೊರೆತಿದೆ. ಇದು ಚಂದ್ರನು ಭೂಮಿಗೆ ಅತ್ಯಂತ ಸಮೀಪದಲ್ಲಿರುವಾಗ ಎರಡು ಸತತ ಪರಿಭ್ರಮಣೆಗಳ ನಡುವೆ ಇರುವ 27.55 ದಿನಗಳ ಅವಧಿಗೆ ಅತ್ಯಂತ ಹತ್ತಿರದಲ್ಲಿದೆ.&lt;/p&gt;&lt;p&gt;ಮತ್ತೊಂದು ಲೆಕ್ಕಾಚಾರದಲ್ಲಿ 70 ಎಂಬ ಸಂಖ್ಯೆ ಲಭಿಸಿದ್ದು, ಸೂರ್ಯನ ತೀವ್ರ ಪ್ರಜ್ವಲನೆಯಿಂದಾಗಿ ಸಿರಿಯಸ್ ನಕ್ಷತ್ರವು ಆಕಾಶದಲ್ಲಿ ಗೋಚರಿಸದಿರುವ ಅಂದಾಜು 70 ದಿನಗಳ ಅವಧಿಗೆ ಇದು ಸಂಪರ್ಕ ಹೊಂದಿದೆ ಎಂದು ಲೆವಿ ಹೇಳುತ್ತಾರೆ.&lt;/p&gt;&lt;p&gt;ಈ ಸಿದ್ಧಾಂತದ ಪ್ರಕಾರ, ಪಿರಮಿಡ್&zwnj;ನ ಹಲವು ಲೆಕ್ಕಾಚಾರಗಳು ಗುರು, ಶನಿ, ಶುಕ್ರ ಮತ್ತು ಮಂಗಳ ಗ್ರಹಗಳ ಚಲನೆಗೆ ಅನುಗುಣವಾಗಿವೆ. ಅಷ್ಟೇ ಅಲ್ಲದೆ, ಗಣಿತದ ಪ್ರಮುಖ ಸ್ಥಿರಾಂಕಗಳಾದ &lsquo;ಪೈ&rsquo; ಮತ್ತು &lsquo;ಸುವರ್ಣ ಅನುಪಾತ&rsquo;ದ (Golden Ratio) ಜೊತೆಗೂ ಇವು ಸಂಭಾವ್ಯ ಸಂಪರ್ಕ ಹೊಂದಿವೆ.&lt;/p&gt;&lt;h2&gt;ಉದ್ದೇಶಪೂರ್ವಕವಾಗಿ ನಿರ್ಮಿಸಿದ ಕೋಡ್?&lt;/h2&gt;&lt;p&gt;ಈ ಸಂಖ್ಯಾತ್ಮಕ ಮಾದರಿಗಳು ಕೇವಲ ಯಾದೃಚ್ಛಿಕವಾಗಿ ಅಥವಾ ಆಕಸ್ಮಿಕವಾಗಿ ಸಂಭವಿಸಿವೆಯೇ ಎಂದು ಪರೀಕ್ಷಿಸಲು, ಲೆವಿ ತಮ್ಮ ಫಲಿತಾಂಶಗಳನ್ನು ಕಂಪ್ಯೂಟರ್ ಮೂಲಕ ಸೃಷ್ಟಿಸಿದ 100,000 ವಿಭಿನ್ನ ಪಿರಮಿಡ್ ಮಾದರಿಗಳೊಂದಿಗೆ ಹೋಲಿಕೆ ಮಾಡಿದರು.&lt;/p&gt;&lt;p&gt;ಈ ಪರೀಕ್ಷೆಯಲ್ಲಿ ಕೇವಲ ಶೇಕಡಾ 2.4 ರಷ್ಟು ಮಾದರಿಗಳು ಮಾತ್ರ ಗ್ರೇಟ್ ಪಿರಮಿಡ್&zwnj;ನಲ್ಲಿರುವಂತಹ ಹೋಲಿಕೆಯನ್ನು ತೋರಿಸಿವೆ. ಹೀಗಾಗಿ, ಗ್ರೇಟ್ ಪಿರಮಿಡ್&zwnj;ನ ಆಯಾಮಗಳನ್ನು ಪ್ರಾಚೀನ ಈಜಿಪ್ಟಿನವರು ಅತ್ಯಂತ ಯೋಜನಾಬದ್ಧವಾಗಿ ಹಾಗೂ ಉದ್ದೇಶಪೂರ್ವಕವಾಗಿಯೇ ವಿನ್ಯಾಸಗೊಳಿಸಿದ್ದಾರೆ ಎಂದು ಲೆವಿ ವಾದಿಸುತ್ತಾರೆ.&lt;/p&gt;&lt;p&gt;ಸುಮಾರು 4,500 ವರ್ಷಗಳ ಹಿಂದೆ ಫರೋ ಖುಫು (Pharaoh Khufu) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಮಹಾ ಪಿರಮಿಡ್ ಅನ್ನು ಸಾಂಪ್ರದಾಯಿಕವಾಗಿ ಅವರ ಅಂತ್ಯಕ್ರಿಯೆಯ ಸ್ಥಳ ಅಥವಾ ಸಮಾಧಿ ಎಂದು ಅರ್ಥೈಸಲಾಗುತ್ತದೆ. ಆದರೆ, ಲೆವಿ ಭಿನ್ನ ವ್ಯಾಖ್ಯಾನವನ್ನು ನೀಡಿದ್ದು, ಇದನ್ನು ಕೇವಲ ಸಮಾಧಿಯಾಗಿ ನಿರ್ಮಿಸದೆ, ಪ್ರಾಚೀನ ಮಹಾ ಜ್ಞಾನವನ್ನು ಭವಿಷ್ಯಕ್ಕಾಗಿ ಕಾಯ್ದಿರಿಸುವ 'ಶಾಶ್ವತ ದಾಖಲೆ'ಯಾಗಿ ರೂಪಿಸಿರಬಹುದು ಎಂದಿದ್ದಾರೆ. ಈಜಿಪ್ಟಿನ ಸೃಷ್ಟಿ ಪುರಾಣದಲ್ಲಿ ಉಲ್ಲೇಖಿಸಲಾದ 'ಬೆನ್&zwnj;ಬೆನ್' ಎಂಬ ಆದಿಸ್ವರೂಪದ ದಿಬ್ಬಕ್ಕೂ ಇದಕ್ಕೂ ಸಂಬಂಧವಿರಬಹುದು ಎಂಬುದು ಅವರ ಊಹೆ.&lt;/p&gt;&lt;h2&gt;ಸಿದ್ಧಾಂತಕ್ಕೆ ವೈಜ್ಞಾನಿಕ ಪುರಾವೆಗಳಿವೆಯೇ?&lt;/h2&gt;&lt;p&gt;ಸದ್ಯಕ್ಕೆ ಈ ಎಲ್ಲಾ ಹೇಳಿಕೆಗಳು ಕೇವಲ ಊಹಾತ್ಮಕವಾಗಿಯೇ ಉಳಿದಿವೆ. ಈ ಸಂಶೋಧನೆಯು ಇನ್ನು ಪೀರ್-ರಿವ್ಯೂ (Peer-Reviewed) ಪ್ರಕ್ರಿಯೆಗೆ ಒಳಪಟ್ಟಿಲ್ಲ ಹಾಗೂ ಮುಖ್ಯವಾಹಿನಿಯ ಈಜಿಪ್ಟ್ ಶಾಸ್ತ್ರಜ್ಞರು (Egyptologists) ಅಥವಾ ಪುರಾತತ್ವಜ್ಞರು ಈ ವಾದಗಳನ್ನು ಅಧಿಕೃತವಾಗಿ ಸ್ವೀಕರಿಸಿಲ್ಲ.&lt;/p&gt;&lt;p&gt;ಖಗೋಳ ಅಥವಾ ಗ್ರಹಗಳ ಮಾಹಿತಿಯನ್ನು ಎನ್&zwnj;ಕೋಡ್ ಮಾಡಲು ಈ ಪಿರಮಿಡ್ ಅನ್ನು ಉದ್ದೇಶಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದಕ್ಕೆ ಯಾವುದೇ ಸ್ವತಂತ್ರ ಸಾಕ್ಷ್ಯಗಳು ಲಭ್ಯವಿಲ್ಲ. ಪ್ರಪಂಚದ ಈ ಮಹಾನ್ ಸೃಷ್ಟಿಯ ಹಿಂದಿರುವ ನೈಜ ಉದ್ದೇಶ ಮತ್ತು ವಿನ್ಯಾಸದ ಕುರಿತು ದಶಕಗಳಿಂದ ನಡೆಯುತ್ತಿರುವ ಸಾರ್ವತ್ರಿಕ ಚರ್ಚೆಗೆ ಈ ಹೊಸ ಸಿದ್ಧಾಂತವು ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.&lt;/p&gt;]]></content:encoded>
            <category><![CDATA[science]]></category>
            <dc:creator>Gowthami K</dc:creator>
            <atom:link href="https://kannada.asianetnews.com/science/great-pyramid-of-giza-hidden-mathematical-code-for-planets-and-stars-new-study-gdp/articleshow-hvkgeta"/>
        </item>
        <item>
            <title><![CDATA[Brics: ಭಾರತಕ್ಕೆ ಬಂದ ಆಗಾ ಖಾನ್ ಯಾರು? ಸ್ವಂತ ದೇಶವಿಲ್ಲ, ಸೈನ್ಯವಿಲ್ಲ;  ಆದರೂ ಕೋಟ್ಯಂತರ ಮುಸ್ಲಿಮರಿಗೆ ಅತ್ಯುನ್ನತ ಧರ್ಮಗುರು ಆಗಿದ್ದೇಗೆ?]]></title>
            <link>https://kannada.asianetnews.com/viral/who-is-aga-khan-india-visit-muslim-spiritual-leader-ismaili-community-prince-american-model-wife-marriage-history-bmk/articleshow-iligclc</link>
            <guid isPermaLink="true">https://kannada.asianetnews.com/viral/who-is-aga-khan-india-visit-muslim-spiritual-leader-ismaili-community-prince-american-model-wife-marriage-history-bmk/articleshow-iligclc</guid>
            <pubDate>Sat, 12 Sep 2026 17:59:27 +0530</pubDate>
            <description><![CDATA[ಶಿಯಾ ಇಸ್ಮಾಲಿ ಮುಸ್ಲಿಂ ಸಮುದಾಯದ 50ನೇ ಇಮಾಮ್ ಪ್ರಿನ್ಸ್ ರಹೀಮ್ ಅಗಾ ಖಾನ್ ಭಾರತಕ್ಕೆ ಭೇಟಿ ನೀಡಿದ್ದಾರೆ. ತಮ್ಮ 'ಅಗಾ ಖಾನ್ ಅಭಿವೃದ್ಧಿ ಜಾಲ' (AKDN) ಮೂಲಕ ಜಗತ್ತಿನಾದ್ಯಂತ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಇವರು, ಭಾರತದಲ್ಲಿನ ತಮ್ಮ ಯೋಜನೆಗಳನ್ನು ಪರಿಶೀಲಿಸಲು ಮತ್ತು ಪ್ರಮುಖ ನಾಯಕರೊಂದಿಗೆ ಚರ್ಚಿಸಲು ಆಗಮಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2asd8jzf0f183z8rkp13srk,imgname-modi-with-aga-khan-1789216072286.jpg" type="image/jpeg" height="390" width="690"/>
            <content:encoded><![CDATA[&lt;p&gt;ಪ್ರಸ್ತುತ ನವದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಕಾವು ಜೋರಾಗಿದೆ. ರಷ್ಯಾ, ಚೀನಾ, ಇರಾನ್, ಬ್ರೆಜಿಲ್ ಸೇರಿದಂತೆ ವಿಶ್ವದ ಪ್ರಮುಖ ದೇಶಗಳ ನಾಯಕರು ಭಾರತದಲ್ಲಿದ್ದಾರೆ. ಈ ಜಾಗತಿಕ ರಾಜತಾಂತ್ರಿಕ ಸಂಚಲನದ ನಡುವೆಯೇ ಮತ್ತೊಬ್ಬ ಪ್ರಭಾವಿ ವ್ಯಕ್ತಿತ್ವ ಭಾರತಕ್ಕೆ ಆಗಮಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅವರೇ ಶಿಯಾ ಇಸ್ಮಾಲಿ ಮುಸ್ಲಿಂ ಸಮುದಾಯದ 50ನೇ ಇಮಾಮ್, ಪ್ರಿನ್ಸ್ ರಹೀಮ್ ಅಗಾ ಖಾನ್. ಆರು ದಿನಗಳ ಭಾರತ ಪ್ರವಾಸದಲ್ಲಿರುವ ಪ್ರಿನ್ಸ್ ರಹೀಮ್ ಅಗಾ ಖಾನ್, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಗೃಹ ಸಚಿವ ಅಮಿತ್ ಶಾ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಯಾವುದೇ ಸಾಮ್ರಾಜ್ಯ ಅಥವಾ ಸ್ವಂತ ಸೈನ್ಯವಿಲ್ಲದಿದ್ದರೂ, ಇಡೀ ವಿಶ್ವವೇ ಇವರನ್ನು ರಾಜಕುಮಾರ ಎಂದು ಕರೆಯುತ್ತದೆ.&lt;/p&gt;&lt;h2&gt;&lt;strong&gt;ಯಾರೀ ಪ್ರಿನ್ಸ್ ರಹೀಮ್ ಆಗಾ ಖಾನ್?&lt;/strong&gt;&lt;/h2&gt;&lt;p&gt;ಪ್ರಿನ್ಸ್ ರಹೀಮ್ ಅಗಾ ಖಾನ್ (ನಿಜವಾದ ಹೆಸರು ಶಾ ರಹೀಮ್ ಅಲ್-ಹುಸೇನಿ) ಶಿಯಾ ಮುಸ್ಲಿಂ ಪಂಥದ ಎರಡನೇ ಅತಿ ದೊಡ್ಡ ವಿಭಾಗವಾದ 'ಇಸ್ಮಾಲಿ' ಸಮುದಾಯದ 50ನೇ ಆನುವಂಶಿಕ ಇಮಾಮ್. ಇಸ್ಮಾಲಿ ನಂಬಿಕೆಯ ಪ್ರಕಾರ, ಇವರು ಪ್ರವಾದಿ ಮಹಮ್ಮದ್ ಹಾಗೂ ಅವರ ಅಳಿಯ ಹಜರತ್ ಅಲಿ ಅವರ ನೇರ ವಂಶಸ್ಥರು. ಜಗತ್ತಿನಾದ್ಯಂತ ಹಂಚಿಹೋಗಿರುವ ಸುಮಾರು 1.5 ಕೋಟಿ (15 ಮಿಲಿಯನ್) ಇಸ್ಮಾಲಿ ಮುಸ್ಲಿಮರು ಇವರನ್ನು ತಮ್ಮ ಅತ್ಯುನ್ನತ ಆಧ್ಯಾತ್ಮಿಕ ಮಾರ್ಗದರ್ಶಿ ಎಂದು ಸ್ವೀಕರಿಸಿದ್ದಾರೆ. ಇವರ ರಾಜಮನೆತನದ ವಂಶಾವಳಿ ಮತ್ತು ಪಾರಂಪರಿಕ ಶ್ರೇಷ್ಠತೆಯಿಂದಾಗಿ ಇವರಿಗೆ 'ಪ್ರಿನ್ಸ್' ಎಂಬ ಬಿರುದಿದೆ.&lt;/p&gt;&lt;h3&gt;&lt;strong&gt;ಜನರು ಇವರನ್ನು 'ಗುಣಪಡಿಸುವವನು' (Doctor) ಎಂದು ಕರೆಯುವುದೇಕೆ?&lt;/strong&gt;&lt;/h3&gt;&lt;p&gt;ಇಸ್ಮಾಲಿ ಸಮುದಾಯದ ಅನುಯಾಯಿಗಳು ಪ್ರಿನ್ಸ್ ರಹೀಮ್ ಅವರನ್ನು ಕೇವಲ ಧಾರ್ಮಿಕ ನಾಯಕನಾಗಿ ಮಾತ್ರವಲ್ಲ, ಜನರ ಕಷ್ಟ-ದುಃಖಗಳನ್ನು ನಿವಾರಿಸುವ ದೈವಿಕ ವ್ಯಕ್ತಿಯಾಗಿ ಕಾಣುತ್ತಾರೆ.&lt;/p&gt;&lt;p&gt;&lt;strong&gt;ಆಧ್ಯಾತ್ಮಿಕ ನಂಬಿಕೆ; &lt;/strong&gt;ಇಮಾಮ್ ನೀಡುವ ಆಶೀರ್ವಾದ ಜೀವನದ ಕಷ್ಟಗಳನ್ನು ದೂರ ಮಾಡುತ್ತದೆ ಎಂಬುದು ಅನುಯಾಯಿಗಳ ನಂಬಿಕೆ.&lt;/p&gt;&lt;p&gt;&lt;strong&gt;ಸಾಮಾಜಿಕ ಕ್ರಾಂತಿ:&lt;/strong&gt; 'ಆಗಾ ಖಾನ್ ಅಭಿವೃದ್ಧಿ ಜಾಲ' (AKDN) ಸಂಸ್ಥೆಯ ಮೂಲಕ ಇವರು ಜಗತ್ತಿನಾದ್ಯಂತ ಬಿಲಿಯನ್ ಡಾಲರ್ ವೆಚ್ಚದಲ್ಲಿ ಉಚಿತ ಆಸ್ಪತ್ರೆಗಳು, ಶಾಲೆಗಳು, ವಿಪತ್ತು ಪರಿಹಾರ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಯುದ್ಧಪೀಡಿತ ಮತ್ತು ಬಡ ಪ್ರದೇಶಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಿ ಲಕ್ಷಾಂತರ ಜನರ ಜೀವ ಉಳಿಸುತ್ತಿರುವುದರಿಂದ ಇವರನ್ನು ಗುಣಪಡಿಸುವ 'ಡಾಕ್ಟರ್' ಅಥವಾ ಆಶಾಕಿರಣ ಎಂದು ಕರೆಯಲಾಗುತ್ತದೆ.&lt;/p&gt;&lt;h3&gt;&lt;strong&gt;ಅಮೆರಿಕನ್ ಮಾಡೆಲ್ ವಿವಾಹ ಮತ್ತು ರಾಯಲ್ ಜೀವನ!&lt;/strong&gt;&lt;/h3&gt;&lt;p&gt;ಅಗಾ ಖಾನ್ ಕುಟುಂಬದ ವೈಯಕ್ತಿಕ ಜೀವನವು ಸದಾ ಗ್ಲಾಮರಸ್ ಹಾಗೂ ಆಧುನಿಕ ಶೈಲಿಗೆ ಹೆಸರಾಗಿದೆ. ಪ್ರಿನ್ಸ್ ರಹೀಮ್ ಅಗಾ ಖಾನ್ 2013 ರಲ್ಲಿ ಅಮೆರಿಕದ ಪ್ರಸಿದ್ಧ ಫ್ಯಾಷನ್ ಮಾಡೆಲ್ ಕೇಂದ್ರ ಸ್ಪಿಯರ್ಸ್ ಅವರನ್ನು ವಿವಾಹವಾಗಿದ್ದರು. ಚಾನೆಲ್, ಪ್ರಾಡಾ ಹಾಗೂ ಲೂಯಿ ವಿಟಾನ್&zwnj;ನಂತಹ ಜಾಗತಿಕ ಬ್ರ್ಯಾಂಡ್&zwnj;ಗಳಿಗೆ ರನ್&zwnj;ವೇಯಲ್ಲಿ ಹೆಜ್ಜೆ ಹಾಕಿದ್ದ ಕೇಂದ್ರ ಸ್ಪಿಯರ್ಸ್, ಮದುವೆಯ ನಂತರ ಇಸ್ಲಾಂಗೆ ಮತಾಂತರಗೊಂಡು 'ರಾಜಕುಮಾರಿ ಸಲ್ವಾ ಅಗಾ ಖಾನ್' ಎಂದು ಹೆಸರು ಬದಲಾಯಿಸಿಕೊಂಡರು. ಆದರೆ ಕೆಲ ವರ್ಷಗಳ ನಂತರ ಈ ದಂಪತಿ ವಿಚ್ಛೇದನ ಪಡೆದರು.&lt;/p&gt;&lt;h3&gt;&lt;strong&gt;ಭಾರತ ಭೇಟಿಯ ಮುಖ್ಯ ಉದ್ದೇಶವೇನು?&lt;/strong&gt;&lt;/h3&gt;&lt;p&gt;ಅಗಾ ಖಾನ್ ಕುಟುಂಬಕ್ಕೆ ಭಾರತದೊಂದಿಗೆ ತಲೆಮಾರುಗಳ ಆಳವಾದ ಸಂಬಂಧವಿದೆ. ತಮ್ಮ ಟ್ರಸ್ಟ್ (AKDN) ಮೂಲಕ ಭಾರತದಲ್ಲಿ ನಡೆಯುತ್ತಿರುವ ನೂರಾರು ಸಾಮಾಜಿಕ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲಿಸಲು ಇವರು ಆಗಮಿಸಿದ್ದಾರೆ. ದೆಹಲಿಯ ಐತಿಹಾಸಿಕ ಹುಮಾಯೂನ್ ಸಮಾಧಿ, ಸುಂದರ್ ನರ್ಸರಿ ಹಾಗೂ ರಾಜಸ್ಥಾನದ ಅಹಚತ್&zwnj;ಗಢ ಕೋಟೆಯಂತಹ ಪರಂಪರೆಯ ತಾಣಗಳನ್ನು ಜೀರ್ಣೋದ್ಧಾರ ಮಾಡುವಲ್ಲಿ ಇವರ ಟ್ರಸ್ಟ್ ಹೆಗ್ಗುರುತಿನ ಕೆಲಸ ಮಾಡಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/who-is-aga-khan-india-visit-muslim-spiritual-leader-ismaili-community-prince-american-model-wife-marriage-history-bmk/articleshow-iligclc"/>
        </item>
        <item>
            <title><![CDATA[ವೈಭವ್‌ ಸೂರ್ಯವಂಶಿನಂತಹ ಒಬ್ಬ ಬ್ಯಾಟರ್‌ನನ್ನಾದರೂ PSL ಸೃಷ್ಟಿಸಿದೆಯೇ? ಪಾಕ್ ದಿಗ್ಗಜ ಕಿಡಿ]]></title>
            <link>https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca</link>
            <guid isPermaLink="true">https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca</guid>
            <pubDate>Sat, 12 Sep 2026 17:42:13 +0530</pubDate>
            <description><![CDATA[ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ್ದಾರೆ. ಐಪಿಎಲ್‌ನಂತೆ ಯುವ ಬ್ಯಾಟಿಂಗ್ ಪ್ರತಿಭೆಗಳನ್ನು ರೂಪಿಸುವಲ್ಲಿ ಪಿಎಸ್‌ಎಲ್ ವಿಫಲವಾಗಿದೆ ಎಂದು ಅವರು ಪಾಕ್ ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸುವುದರಿಂದ ಮಾತ್ರ ಪಾಕಿಸ್ತಾನ ಕ್ರಿಕೆಟ್ ಮುನ್ನಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybwe5345akp4t5mhb9v4kwa,imgname-vaibhav-suryavanshi-all-rounder-plan-1784957834340.gif" type="image/jpeg" height="390" width="690"/>
            <content:encoded><![CDATA[&lt;p&gt;ಕರಾಚಿ: ಭಾರತೀಯ ಕ್ರಿಕೆಟ್&zwnj;ನ ಹೊಸ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿರುವ ಪಾಕಿಸ್ತಾನದ ಬೌಲಿಂಗ್ ದಂತಕಥೆ ವಾಸೀಂ ಅಕ್ರಮ್, ಪಾಕಿಸ್ತಾನ್ ಸೂಪರ್ ಲೀಗ್ (PSL) ಅನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಪಿಎಸ್&zwnj;ಎಲ್ ಬೆಳವಣಿಗೆಯನ್ನು ಹೋಲಿಕೆ ಮಾಡಿದ ಅಕ್ರಮ್, ಪಾಕ್ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;ಸತತ ಎರಡು ಐಪಿಎಲ್ ಸೀಸನ್&zwnj;ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ, ವೈಭವ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಅತಿ ಕಿರಿಯ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್&zwnj;ಗೆ ಕಾಲಿಟ್ಟ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದಿದ್ದರು. ಯೂಟ್ಯೂಬರ್ ಫುರ್ಖಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅಕ್ರಮ್, ಐಪಿಎಲ್ ಯುವ ಆಟಗಾರರಿಗೆ ನೀಡುವ ಅವಕಾಶ ಮತ್ತು ಬೆಳವಣಿಗೆಯನ್ನು ಪಿಎಸ್&zwnj;ಎಲ್&zwnj;ಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿಯನ್ನು ಕೊಂಡಾಡಿದ ಪಾಕ್ ದಿಗ್ಗಜ&lt;/strong&gt;&lt;/h2&gt;&lt;p&gt;&lsquo;ಪಿಎಸ್&zwnj;ಎಲ್ ಶುರುವಾಗಿ ಸುಮಾರು 10 ವರ್ಷಗಳಾಗಿವೆ. ಈ ಅವಧಿಯಲ್ಲಿ ಪಿಎಸ್&zwnj;ಎಲ್ ಮೂಲಕ ಗಮನ ಸೆಳೆದ ಒಬ್ಬನೇ ಒಬ್ಬ ಬ್ಯಾಟರ್&zwnj;ನನ್ನಾದರೂ ನಾವು ಗುರುತಿಸಿದ್ದೇವೆಯೇ? ಕೆಲ ಬೌಲರ್&zwnj;ಗಳು ಸಿಕ್ಕಿದ್ದು ನಿಜ. ಆದರೆ, ಹೇಳಿಕೊಳ್ಳುವಂತಹ ಒಬ್ಬ ಬ್ಯಾಟಿಂಗ್ ಪ್ರತಿಭೆಯನ್ನಾದರೂ ನಾವು ರೂಪಿಸಿದ್ದೇವೆಯೇ? ಭಾರತದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿಯಂತಹ ಬ್ಯಾಟಿಂಗ್ ಪ್ರತಿಭೆಯನ್ನು ಬೆಳೆಸುವಾಗ ಮಾತ್ರ ನಮ್ಮ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಗಬೇಕಿತ್ತು' ಎಂದು ಅಕ್ರಮ್ ಹೇಳಿದರು.&lt;/p&gt;&lt;p&gt;ವಾಸೀಂ ಅಕ್ರಮ್ ಐಪಿಎಲ್&zwnj;ನಲ್ಲಿ ಕೋಲ್ಕತಾ ನೈಟ್ ರೈಡರ್ಸ್&zwnj;ನ ಬೌಲಿಂಗ್ ಕೋಚ್ ಆಗಿ ಮತ್ತು ಪಿಎಸ್&zwnj;ಎಲ್&zwnj;ನಲ್ಲಿ ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ತಳಮಟ್ಟದ ಕ್ಲಬ್ ಕ್ರಿಕೆಟ್ ಅನ್ನು ಬಲಪಡಿಸದೆ ಯುವ ಪ್ರತಿಭೆಗಳನ್ನು ಹುಡುಕಲು ಸಾಧ್ಯವಿಲ್ಲ ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ. &lsquo;ಕರಾಚಿ ಮತ್ತು ಲಾಹೋರ್&zwnj;ನಲ್ಲಿ ಕ್ಲಬ್ ಕ್ರಿಕೆಟ್&zwnj;ನ ಬೆಳವಣಿಗೆಗಾಗಿ ಪಿಸಿಬಿ ತಲಾ 100 ಮಿಲಿಯನ್ ರೂಪಾಯಿ ಖರ್ಚು ಮಾಡಬೇಕು. ಆಗ ಮಾತ್ರ ಟೆಸ್ಟ್ ಕ್ರಿಕೆಟ್ ಮತ್ತು ವೈಟ್ ಬಾಲ್ ಮಾದರಿಯಲ್ಲಿ ದೇಶವು ಮುನ್ನಡೆಯಲು ಸಾಧ್ಯ&rsquo; ಎಂದು ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ವೈಟ್&zwnj;ವಾಷ್ ಭೀತಿಯಲ್ಲಿ ಪಾಕಿಸ್ತಾನ&lt;/strong&gt;&lt;/h3&gt;&lt;p&gt;ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿರುವ ಪಾಕಿಸ್ತಾನ ತಂಡ, ಕೊನೆಯ ಪಂದ್ಯದಲ್ಲೂ ಸೋಲಿನ ಸುಳಿಯಲ್ಲಿದೆ. ಪಾಕ್ ಬ್ಯಾಟಿಂಗ್ ಪಡೆಯ ಕಳಪೆ ಪ್ರದರ್ಶನದ ಬಗ್ಗೆ ದೊಡ್ಡ ಮಟ್ಟದ ಟೀಕೆಗಳು ಕೇಳಿಬರುತ್ತಿರುವಾಗಲೇ ಅಕ್ರಮ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/wasim-akram-takes-brutal-dig-at-psl-says-pakistan-has-failed-to-produce-batting-stars-kvn/articleshow-zrhgrca"/>
        </item>
        <item>
            <title><![CDATA[ಸೌಂದರ್ಯ ಸಿನಿಮಾ ಬಂದರೆ ಟಿವಿ ಆಫ್ ಮಾಡುತ್ತಿದ್ದೆ.. ರಮ್ಯಾ ಕೃಷ್ಣನ್ ಕಣ್ಣೀರಿಟ್ಟ ಘಟನೆಯನ್ನೂ ಬಿಚ್ಚಿಟ್ಟ ಕೃಷ್ಣಾರೆಡ್ಡಿ]]></title>
            <link>https://kannada.asianetnews.com/entertainment/telugu-director-sv-krishna-reddy-recalls-his-special-bond-with-ramya-krishnan-and-soundarya-gvd/articleshow-ieaxz6p</link>
            <guid isPermaLink="true">https://kannada.asianetnews.com/entertainment/telugu-director-sv-krishna-reddy-recalls-his-special-bond-with-ramya-krishnan-and-soundarya-gvd/articleshow-ieaxz6p</guid>
            <pubDate>Sat, 12 Sep 2026 17:34:01 +0530</pubDate>
            <description><![CDATA[ಎಸ್‌ವಿ ಕೃಷ್ಣಾರೆಡ್ಡಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ನಟಿಯರಾದ ರಮ್ಯಾ ಕೃಷ್ಣನ್ ಹಾಗೂ ದಿವಂಗತ ಸೌಂದರ್ಯ ಅವರೊಂದಿಗಿನ ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಸೌಂದರ್ಯ ಅವರ ಅಕಾಲಿಕ ನಿಧನ ತಮ್ಮ ಮೇಲೆ ಬೀರಿದ ಆಘಾತದ ಬಗ್ಗೆಯೂ ನಿರ್ದೇಶಕರು ಭಾವುಕರಾಗಿ ಮಾತನಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2aqv7wbwtdsarmc4b5skdjc,imgname-vhv-1789214433163.png" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ನಿರ್ದೇಶಕ ಎಸ್&zwnj;ವಿ ಕೃಷ್ಣಾರೆಡ್ಡಿ ಅವರ ಸಿನಿಮಾಗಳಿಗೆ ಇದ್ದ ಫಾಲೋಯಿಂಗ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಫ್ಯಾಮಿಲಿ ಆಡಿಯನ್ಸ್ ಮೆಚ್ಚುವಂತಹ ಸಿನಿಮಾಗಳನ್ನು ನೀಡುತ್ತಾ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಇದೀಗ ತಮ್ಮ ಸಿನಿ ಜರ್ನಿಯ ಹಲವು ಆಸಕ್ತಿದಾಯಕ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಚಿತ್ರಗಳಲ್ಲಿನ ನಾಯಕಿಯರ ಬಗ್ಗೆ ಮಾತನಾಡಿರುವ ಅವರು, ನಟಿ ರಮ್ಯಾ ಕೃಷ್ಣನ್ ಅವರ ಮೇಲಿದ್ದ ಗೌರವ ಮತ್ತು ಸಿನಿಮಾದ ಶೂಟಿಂಗ್ ಮುಗಿದ ಬಳಿಕ ಅವರನ್ನು ವಿಶೇಷವಾಗಿ ಬೀಳ್ಕೊಟ್ಟಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಎಸ್&zwnj;ವಿ ಕೃಷ್ಣಾರೆಡ್ಡಿ ತಮ್ಮ ಸಿನಿ ಬದುಕಿನ ಎರಡು ಪ್ರಮುಖ ಹಾಗೂ ಭಾವನಾತ್ಮಕ ಘಟನೆಗಳನ್ನು ಈ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ. ಒಂದು ನಟಿ ರಮ್ಯಾ ಕೃಷ್ಣನ್ ಅವರ ಮೇಲಿದ್ದ ಅಪಾರ ಗೌರವಕ್ಕೆ ಸಂಬಂಧಿಸಿದ್ದಾದರೆ, ಮತ್ತೊಂದು ದಿವಂಗತ ನಟಿ ಸೌಂದರ್ಯ ಅವರ ಅಕಾಲಿಕ ನಿಧನ ತಮ್ಮ ಮೇಲೆ ಬೀರಿದ ಗಾಢ ಪರಿಣಾಮದ ಕುರಿತು.&lt;/p&gt;&lt;p&gt;&lt;strong&gt;ರಮ್ಯಾ ಕೃಷ್ಣನ್&zwnj;ಗೆ ವಿಶೇಷ ಗೌರವ&lt;/strong&gt;&lt;/p&gt;&lt;p&gt;&lsquo;ಆಹ್ವಾನಂ&rsquo; ಸಿನಿಮಾ ಶೂಟಿಂಗ್ ವೇಳೆ ರಮ್ಯಾ ಕೃಷ್ಣನ್&zwnj; ಅವರೊಂದಿಗಿನ ತಮ್ಮ ಒಡನಾಟವನ್ನು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ. ಅವರನ್ನು ತಾವು ಎಷ್ಟು ಆತ್ಮೀಯವಾಗಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಿದ್ದೆವು ಎಂಬುದನ್ನು ವಿವರಿಸಿದ್ದಾರೆ. ಸಿನಿಮಾದ ಶೂಟಿಂಗ್ ಕೊನೆಯ ದಿನ ರಮ್ಯಾ ಕೃಷ್ಣನ್&zwnj; ಅವರು ಹೊರಡುವ ಸಂದರ್ಭದಲ್ಲಿ, ಬೆಳ್ಳಿ ತಟ್ಟೆಯಲ್ಲಿ ರೇಷ್ಮೆ ಬಟ್ಟೆ, 10 ಸಾವಿರ ರೂಪಾಯಿ ನಗದು ಹಾಗೂ ಕುಂಕುಮ ಇಟ್ಟು, ಸಾಂಪ್ರದಾಯಿಕವಾಗಿ ಗೌರವ ನೀಡಿ ಬೀಳ್ಕೊಟ್ಟಿದ್ದಾಗಿ ಎಸ್&zwnj;ವಿ ಕೃಷ್ಣಾರೆಡ್ಡಿ ಹೇಳಿದ್ದಾರೆ. ತಮ್ಮಿಂದ ದೊರೆತ ಈ ಅನಿರೀಕ್ಷಿತ ಗೌರವದಿಂದ ರಮ್ಯಾ ಕೃಷ್ಣನ್&zwnj; ಭಾವುಕರಾಗಿ ಕಣ್ಣೀರು ಹಾಕಿದ್ದರು ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಆ ಘಟನೆ ಇಂದಿಗೂ ತಮ್ಮ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದ್ದಾರೆ. ಕಲಾವಿದರಿಗೆ ಇಂತಹ ಗೌರವ ನೀಡುವುದು ನನ್ನ ಸಂಸ್ಕಾರದ ಒಂದು ಭಾಗ. ಒಬ್ಬ ಕಲಾವಿದನನ್ನು ನಾವು ಎಷ್ಟು ಗೌರವದಿಂದ ನೋಡಿಕೊಳ್ಳುತ್ತೇವೋ, ಅವರು ಕೂಡ ಅಷ್ಟೇ ಆತ್ಮೀಯವಾಗಿ ನಮ್ಮೊಂದಿಗೆ ಕೆಲಸ ಮಾಡುತ್ತಾರೆ ಎಂಬ ಅಭಿಪ್ರಾಯವನ್ನು ಎಸ್&zwnj;ವಿ ಕೃಷ್ಣಾರೆಡ್ಡಿ ವ್ಯಕ್ತಪಡಿಸಿದ್ದಾರೆ. ಇಂದಿನ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಹಲವು ವಿವಾದಗಳ ನಡುವೆಯೂ, ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಪರಸ್ಪರ ಗೌರವ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಸೌಂದರ್ಯ ನೆನಪಿಸಿಕೊಂಡು ಭಾವುಕರಾದ ನಿರ್ದೇಶಕ&lt;/strong&gt;&lt;/p&gt;&lt;p&gt;ನಂತರ ಮಾತುಕತೆ ದಿವಂಗತ ನಟಿ ಸೌಂದರ್ಯ ಅವರತ್ತ ತಿರುಗಿದೆ. ಸೌಂದರ್ಯ ಅವರನ್ನು ಅದ್ಭುತ ನಟಿ ಮಾತ್ರವಲ್ಲದೆ, ಅತ್ಯುತ್ತಮ ವ್ಯಕ್ತಿ ಎಂದೂ ಎಸ್&zwnj;ವಿ ಕೃಷ್ಣಾರೆಡ್ಡಿ ಬಣ್ಣಿಸಿದ್ದಾರೆ. ಅವರ ಅಭಿನಯದ ಬಗ್ಗೆ ತಮಗಿದ್ದ ಅಪಾರ ಅಭಿಮಾನವನ್ನೂ ಹಂಚಿಕೊಂಡಿದ್ದಾರೆ. ಒಂದು ಸಿನಿಮಾದಲ್ಲಿ ನಟಿಸಲು ಸೌಂದರ್ಯ ಮೊದಲಿಗೆ ನಿರಾಕರಿಸಿದ್ದರು. ಆದರೆ ನಂತರ ಅವರೇ ಫೋನ್ ಮಾಡಿ, ಬಾಬು ಮೋಹನ್ ಅವರೊಂದಿಗೆ ನಟಿಸಲು ಒಪ್ಪಿಕೊಂಡಿದ್ದರು ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಇದು ಸೌಂದರ್ಯ ಅವರ ವೃತ್ತಿಪರ ಬದ್ಧತೆ ಹಾಗೂ ಕಲಾವಿದರ ಮೇಲಿದ್ದ ಗೌರವವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಒಬ್ಬ ಕಲಾವಿದನನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಅವರು ಕೂಡ ಸಿನಿಮಾಗೆ ಅದೇ ರೀತಿಯಲ್ಲಿ ಸಹಕಾರ ನೀಡುತ್ತಾರೆ. ಚಿತ್ರರಂಗದಲ್ಲಿ ಪರಸ್ಪರ ಗೌರವವೇ ಮುಖ್ಯ ಎಂದು ಎಸ್&zwnj;ವಿ ಕೃಷ್ಣಾರೆಡ್ಡಿ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ಸೌಂದರ್ಯ ನಿಧನದ ನೆನಪು ಕಾಡುತ್ತದೆ&lt;/strong&gt;&lt;/h2&gt;&lt;p&gt;ಆದರೆ ಸೌಂದರ್ಯ ಅವರ ಅಕಾಲಿಕ ನಿಧನ ತಮ್ಮನ್ನು ತೀವ್ರವಾಗಿ ಕಾಡಿತ್ತು ಎಂದು ನಿರ್ದೇಶಕರು ಭಾವುಕರಾಗಿ ಹೇಳಿದ್ದಾರೆ. ಸೌಂದರ್ಯ ನಿಧನದ ನಂತರ ಅವರು ನಟಿಸಿದ ಸಿನಿಮಾಗಳನ್ನು ನೋಡಲು ಸಾಧ್ಯವಾಗಲಿಲ್ಲ. ಟಿವಿಯಲ್ಲಿ ಅವರ ಸಿನಿಮಾ ಬಂದರೆ ಸ್ವಿಚ್ ಆಫ್ ಮಾಡುತ್ತಿದ್ದೆ ಎಂದು ಅವರು ನೋವು ಹಂಚಿಕೊಂಡಿದ್ದಾರೆ. ಸೌಂದರ್ಯ ಹಾಗೂ ಅವರ ಸಹೋದರ ವಿಮಾನ ಅಪಘಾತದಲ್ಲಿ ಮೃತಪಟ್ಟ ಘಟನೆ ಅತ್ಯಂತ ದುರಂತವಾಗಿತ್ತು ಎಂದು ಅವರು ಹೇಳಿದ್ದಾರೆ. ಸೌಂದರ್ಯ ಅವರಂತಹ ಮಹಾನ್ ನಟಿಯನ್ನು ಕಳೆದುಕೊಂಡಿರುವುದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಎಸ್&zwnj;ವಿ ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಅವರ ಅಂತಿಮ ಕ್ಷಣಗಳ ನೆನಪುಗಳು ತುಂಬಾ ನೋವು ನೀಡುತ್ತವೆ. ಸೌಂದರ್ಯ ಅವರ ದೇಹವನ್ನು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದ ದೃಶ್ಯವನ್ನು ಜನರು ನೋಡಲಾಗದೆ ಕಣ್ಣೀರು ಹಾಕಿದ್ದರು. ಅದು ಊಹಿಸಲೂ ಸಾಧ್ಯವಾಗದಷ್ಟು ಭೀಕರ ಹಾಗೂ ದುಃಖದ ಘಟನೆ ಎಂದು ನಿರ್ದೇಶಕರು ಭಾವುಕರಾಗಿ ನೆನಪಿಸಿಕೊಂಡಿದ್ದಾರೆ. ಇನ್ನು ರಮ್ಯಾ ಕೃಷ್ಣನ್&zwnj; ಅವರಿಗೆ ತಾವು ನೀಡಿದ ಗೌರವದಿಂದ ಹಿಡಿದು ಸೌಂದರ್ಯ ಅವರ ಅಕಾಲಿಕ ನಿಧನದ ನೋವಿನವರೆಗೆ, ಎಸ್&zwnj;ವಿ ಕೃಷ್ಣಾರೆಡ್ಡಿ ಹಂಚಿಕೊಂಡ ಈ ನೆನಪುಗಳು ಅವರ ಸಿನಿ ಬದುಕಿನ ಜೊತೆಗೆ ಕಲಾವಿದರ ಮೇಲಿದ್ದ ಅವರ ಆತ್ಮೀಯತೆ ಮತ್ತು ಗೌರವವನ್ನೂ ತೆರೆದಿಡುತ್ತವೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-director-sv-krishna-reddy-recalls-his-special-bond-with-ramya-krishnan-and-soundarya-gvd/articleshow-ieaxz6p"/>
        </item>
        <item>
            <title><![CDATA[Cricket: ದಿಗ್ಗಜನ ಹೆಸರಿನಲ್ಲಿದ್ದ ಬಹುದೊಡ್ಡ ದಾಖಲೆ ಉಡೀಸ್‌ ಮಾಡಲ ಕೇವಲ 3 ಹೆಜ್ಜೆ ದೂರದಲ್ಲಿ ವೈಭವ್ ಸೂರ್ಯವಂಶಿ!]]></title>
            <link>https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw</guid>
            <pubDate>Sat, 12 Sep 2026 17:25:55 +0530</pubDate>
            <description><![CDATA[ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯದಲ್ಲಿ ಆರಂಭಿಕ ಆಟಗಾರನ ಆಯ್ಕೆ ಕುತೂಹಲ ಕೆರಳಿಸಿದೆ. 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಕಣಕ್ಕಿಳಿದರೆ, ಕೇವಲ 3 ಸಿಕ್ಸರ್ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಮುರಿಯುವ ಸುವರ್ಣಾವಕಾಶವನ್ನು ಹೊಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1p46sdqc1gqvgx4bnat37bv,imgname-vaibhav--1788522751414.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸಂಪೂರ್ಣವಾಗಿ ಸಜ್ಜಾಗಿದೆ. ಕ್ರಿಕೆಟ್ ಅಭಿಮಾನಿಗಳೆಲ್ಲರೂ ಅಂಗಳದಲ್ಲಿ ಯಾರ ಅಬ್ಬರ ನಡೆಯಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ಪಂದ್ಯ ಆರಂಭವಾಗುವ ಮುನ್ನವೇ ಒಂದು ದೊಡ್ಡ ಸಸ್ಪೆನ್ಸ್ ಹಾಗೂ ಕುತೂಹಲ ಕ್ರಿಕೆಟ್ ಪ್ರಿಯರನ್ನು ತುದಿಕಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಜೊತೆಗೆ ಇನಿಂಗ್ಸ್ ಆರಂಭಿಸಲು ನಾಯಕ ಮತ್ತು ಆಡಳಿತ ಮಂಡಳಿ ಯಾರನ್ನು ಕಣಕ್ಕಿಳಿಸಲಿದೆ? ಅನುಭವಿ ಸಂಜು ಸ್ಯಾಮ್ಸನ್ ಅವರೋ ಅಥವಾ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರೋ?&lt;/p&gt;&lt;h2&gt;&lt;strong&gt;ಮೊದಲ ಅಂತಾರಾಷ್ಟ್ರೀಯ ಪಂದ್ಯ!&lt;/strong&gt;&lt;/h2&gt;&lt;p&gt;ಒಂದು ವೇಳೆ 15 ವರ್ಷದ ಈ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ ಪ್ಲೇಯಿಂಗ್ XI ನಲ್ಲಿದ್ದರೆ, ಭಾರತದ ನೆಲದಲ್ಲಿ ಅವರು ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಪಂದ್ಯ ಇದಾಗಲಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ವೈಭವ್ ಕ್ರಿಕೆಟ್ ಲೋಕದ ದಂತಕಥೆ, ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನೇ ಒಂದು ವಿಶೇಷ ದಾಖಲೆಯಲ್ಲಿ ಮೀರಿಸುವ ಸುವರ್ಣ ಅವಕಾಶವನ್ನು ಹೊಂದಿದ್ದಾರೆ.&lt;/p&gt;&lt;h3&gt;&lt;strong&gt;ಅಷ್ಟಕ್ಕೂ ವೈಭವ್ ಮಾಡಬೇಕಾಗಿರುವುದು ಇಷ್ಟೇ !&lt;/strong&gt;&lt;/h3&gt;&lt;p&gt;ಈ ಪಂದ್ಯದಲ್ಲಿ ಬ್ಯಾಟ್ ಬೀಸಿ ಕೇವಲ 3 ಸಿಕ್ಸರ್&zwnj;ಗಳನ್ನು ಬಾರಿಸುವುದು! ವೀರೇಂದ್ರ ಸೆಹ್ವಾಗ್ ಭಾರತಕ್ಕಾಗಿ ಆಡಿದ 19 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 16 ಸಿಕ್ಸರ್&zwnj;ಗಳನ್ನು ಬಾರಿಸಿದ್ದಾರೆ. ಇನ್ನೊಂದೆಡೆ, ವೈಭವ್ ಸೂರ್ಯವಂಶಿ ಇದುವರೆಗೆ ಆಡಿರುವ ಕೇವಲ 6 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲೇ 14 ಸಿಕ್ಸರ್&zwnj;ಗಳನ್ನು ಸಿಡಿಸಿ ಅಬ್ಬರಿಸಿದ್ದಾರೆ. ದೆಹಲಿಯಲ್ಲಿ ಅವರು ಇನ್ನ ಮೂರು ಸಿಕ್ಸರ್ ಬಾರಿಸಿದರೆ, ಟಿ20 ಸ್ವರೂಪದಲ್ಲಿ ಸೆಹ್ವಾಗ್ ಅವರಿಗಿಂತ ಹೆಚ್ಚು ಸಿಕ್ಸರ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.&lt;/p&gt;&lt;h3&gt;&lt;strong&gt;ನೆಕ್ಸ್ಟ್ ಲೆವೆಲ್&zwnj; ಪರ್ಪಾಮೆನ್ಸ್!&lt;/strong&gt;&lt;/h3&gt;&lt;p&gt;2026ರ ಸಾಲಿನಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅಬ್ಬರ ಬೇರೆ ಹಂತದಲ್ಲಿದೆ. ಐಪಿಎಲ್&zwnj;ನಲ್ಲಿ ಧೂಳೆಬ್ಬಿಸಿದ ನಂತರ, ಅವರು ಈ ವರ್ಷ ಭಾರತಕ್ಕಾಗಿ ಟಿ20 ಕ್ರಿಕೆಟ್&zwnj;ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಆಡಿದ 22 ಪಂದ್ಯಗಳಲ್ಲಿ ಬರೋಬ್ಬರಿ 86 ಸಿಕ್ಸರ್&zwnj;ಗಳನ್ನು ಸಿಡಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಟಿ20 ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವೈಭವ್ 5ನೇ ಸ್ಥಾನದಲ್ಲಿದ್ದಾರೆ.&lt;/p&gt;&lt;h3&gt;&lt;strong&gt;ಅತ್ಯಂತ ಕಡಿಮೆ ಪಂದ್ಯದಲ್ಲಿ ದೊಡ್ಡ ಸಾಧನೆ!&lt;/strong&gt;&lt;/h3&gt;&lt;p&gt;ವಿಶ್ವದ ದೊಡ್ಡ ದೊಡ್ಡ ಆಟಗಾರರಾದ ಫಿನ್ ಅಲೆನ್ (100 ಸಿಕ್ಸರ್), ನಿಕೋಲಸ್ ಪೂರನ್ (99 ಸಿಕ್ಸರ್), ರಯಾನ್ ರಿಕಲ್ಟನ್ (96 ಸಿಕ್ಸರ್) ಮತ್ತು ಮಿಚೆಲ್ ಮಾರ್ಷ್ (95 ಸಿಕ್ಸರ್) ವೈಭವ್&zwnj;ಗಿಂತ ಮುಂದಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಈ ಎಲ್ಲ ಆಟಗಾರರಿಗಿಂತ ವೈಭವ್ ಅತ್ಯಂತ ಕಡಿಮೆ ಪಂದ್ಯಗಳನ್ನು ಆಡಿ ಈ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಸಚಿನ ದಾಖಲೆ ಉಡೀಸ್!&lt;/strong&gt;&lt;/h3&gt;&lt;p&gt;ವೈಭವ್ ಸೂರ್ಯವಂಶಿ ಅವರಿಗೆ ಇದು ಭಾರತದ ನೆಲದಲ್ಲಿ ಆಡುತ್ತಿರುವ ಮೊದಲ ಅಂತರರಾಷ್ಟ್ರೀಯ ಸರಣಿಯಾಗಿದೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್&zwnj;ಗೆ ಪದಾರ್ಪಣೆ ಮಾಡಿದ್ದ ಅವರು, ಭಾರತದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಇತಿಹಾಸ ನಿರ್ಮಿಸಿದ್ದರು. 15 ವರ್ಷ 99 ದಿನಗಳಿದ್ದಾಗ ಚೊಚ್ಚಲ ಪಂದ್ಯವಾಡುವ ಮೂಲಕ ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ಮುರಿದಿದ್ದರು. ಇಂಗ್ಲೆಂಡ್ ಸರಣಿಯಲ್ಲಿ ಸರಾಸರಿ ಪ್ರದರ್ಶನ ನೀಡಿದ್ದರೂ, ತದನಂತರ ನಡೆದ ಜಿಂಬಾಬ್ವೆ ಪ್ರವಾಸದಲ್ಲಿ ಎರಡು ಅರ್ಧಶತಕ ಸಿಡಿಸಿ ಸರಣಿ ಶ್ರೇಷ್ಠ (ಪ್ಲೇಯರ್ ಆಫ್ ದಿ ಸಿರೀಸ್) ಪ್ರಶಸ್ತಿ ಪಡೆದಿದ್ದರು.&lt;/p&gt;&lt;h3&gt;&lt;strong&gt;ಈಘ ಎದುರಾಗಿರಿವ ಪ್ರಶ್ನೆ ಏನು?&lt;/strong&gt;&lt;/h3&gt;&lt;p&gt;ಈಗ ತವರು ನೆಲದಲ್ಲಿ ಅಫ್ಘಾನಿಸ್ತಾನ ವಿರುದ್ಧ ತಮ್ಮ ಬ್ಯಾಟಿಂಗ್ ಮುಂದುವರಿಸಿ ಧೂಳೆಬ್ಬಿಸಲು ವೈಭವ್ ಕಾಯುತ್ತಿದ್ದಾರೆ. ಸೆಹ್ವಾಗ್ ದಾಖಲೆ ಪತನಗೊಳ್ಳುತ್ತದೆಯೇ ಮತ್ತು ವೈಭವ್ ಪ್ಲೇಯಿಂಗ್ 11ನಲ್ಲಿ ಜಾಗ ಪಡೆಯುತ್ತಾರೆಯೇ ಎಂಬುದನ್ನು ತಿಳಿಯಲು ಅಭಿಮಾನಿಗಳು ಪಂದ್ಯದ ಟಾಸ್ ವರೆಗೆ ಕಾಯಲೇಬೇಕಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-afghanistan-t20-vaibhav-suryavanshi-playing-xi-vs-sanju-samson-3-sixes-to-break-virender-sehwag-record-bmk/articleshow-ksobwkw"/>
        </item>
        <item>
            <title><![CDATA[ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!]]></title>
            <link>https://kannada.asianetnews.com/gallery/festivals/ganesh-chaturthi-2026-what-is-the-meaning-of-seeing-mouse-in-house-bx0g1bs</link>
            <guid isPermaLink="true">https://kannada.asianetnews.com/gallery/festivals/ganesh-chaturthi-2026-what-is-the-meaning-of-seeing-mouse-in-house-bx0g1bs</guid>
            <pubDate>Sat, 12 Sep 2026 17:13:42 +0530</pubDate>
            <description><![CDATA[Ganesh Chaturthi 2026: ಗಣೇಶ ಚತುರ್ಥಿಯಂದು ಇದ್ದಕ್ಕಿದ್ದಂತೆ ಮನೆಯಲ್ಲಿ ಇಲಿ ಕಾಣಿಸಿಕೊಂಡರೆ, ಅದಕ್ಕೇನು ಅರ್ಥ? ಇದು ಶುಭ ಸೂಚನೆಯೇ? ಅಶುಭ ಸಂಕೇತವೇ? ಇಲ್ಲಿದೆ ಮಹತ್ವದ ಮಾಹಿತಿ. ಗಣೇಶನ ವಾಹನ ಏನನ್ನು ಸೂಚಿಸುತ್ತದೆ ಅನ್ನೋದನ್ನು ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m2aprtn5nx8rr2pqa3g6z8hx,imgname-ganesh-chaturthi-2026-1789213305508.jpg" type="image/jpeg" height="390" width="690"/>
            <content:encoded><![CDATA[&lt;p&gt;Ganesh Chaturthi 2026: ಗಣೇಶ ಚತುರ್ಥಿಯಂದು ಇದ್ದಕ್ಕಿದ್ದಂತೆ ಮನೆಯಲ್ಲಿ ಇಲಿ ಕಾಣಿಸಿಕೊಂಡರೆ, ಅದಕ್ಕೇನು ಅರ್ಥ? ಇದು ಶುಭ ಸೂಚನೆಯೇ? ಅಶುಭ ಸಂಕೇತವೇ? ಇಲ್ಲಿದೆ ಮಹತ್ವದ ಮಾಹಿತಿ. ಗಣೇಶನ ವಾಹನ ಏನನ್ನು ಸೂಚಿಸುತ್ತದೆ ಅನ್ನೋದನ್ನು ನೋಡೋಣ.&lt;/p&gt;&lt;img&gt;&lt;p&gt;ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಗಣೇಶೋತ್ಸವದ ಸಂದರ್ಭದಲ್ಲಿ, ಜನರು ಗಣೇಶನನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡು, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆತನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಪೂಜೆ ಮಾಡುತ್ತಾರೆ. ಈ ವರ್ಷ ಈ ಹಬ್ಬವು ಸೆಪ್ಟೆಂಬರ್ 14, 2026 ರ ಸೋಮವಾರದಂದು ಬಂದಿದ್ದು, ಮಾರುಕಟ್ಟೆಗಳಲ್ಲಿ ಈಗಾಗಲೇ ಹಬ್ಬದ ಸಂಭ್ರಮ ಮತ್ತು ಸಿದ್ಧತೆಗಳು ಕಂಡುಬರುತ್ತಿವೆ.&lt;/p&gt;&lt;img&gt;&lt;p&gt;ಈ ದಿನದಂದು ಗಣೇಶನನ್ನು ಪೂಜಿಸಲಾಗುತ್ತದೆ ಮತ್ತು ಆತನ ವಾಹನವಾದ 'ಮೂಷಕ' (ಇಲಿ) ಕ್ಕೂ ಕೂಡ ವಿಶೇಷ ಮಹತ್ವವನ್ನು ನೀಡಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಣೇಶ ಚತುರ್ಥಿಯಂದು ಇಲಿಯನ್ನು ನೋಡುವುದು ಕೆಲವು ಶುಭ ಅಥವಾ ಅಶುಭ ಶಕುನಗಳನ್ನು ಸೂಚಿಸುತ್ತದೆ. ಬನ್ನಿ, ಈ ಶಕುನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗಣೇಶ ಚತುರ್ಥಿಯಂದು ಮನೆಯಿಂದ ಹೊರಹೋಗುವ ಇಲಿಯನ್ನು ಕಾಣುವುದು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಆ ಇಲಿಯು ನಿಮ್ಮ ಮನೆಯಲ್ಲಿರುವ ಬಡತನ ಮತ್ತು ತೊಂದರೆಗಳನ್ನೆಲ್ಲಾ ಹೊತ್ತುಕೊಂಡು ಹೋಗುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಇದು ಮನೆಗೆ ಸಂತೋಷ ಮತ್ತು ಸಮೃದ್ಧಿಯ ಆಗಮನಕ್ಕೆ ದಾರಿ ಮಾಡಿಕೊಡುತ್ತದೆ ಹಾಗೂ ಭಗವಾನ್ ಗಣೇಶನು ತನ್ನ ಆಶೀರ್ವಾದವನ್ನು ಕರುಣಿಸುತ್ತಾನೆ ಎನ್ನುವ ಸೂಚನೆಯಾಗಿದೆ.&lt;/p&gt;&lt;img&gt;&lt;p&gt;ಗಣೇಶ ಚತುರ್ಥಿಯ ದಿನದಂದು ಬಿಳಿ ಇಲಿಯನ್ನು ನೋಡುವುದು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಬಿಳಿ ಇಲಿಯು ಸಕಾರಾತ್ಮಕತೆಯ ಸಂಕೇತವಾಗಿದ್ದು, ಅದು ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳಲಿವೆ ಎಂಬುದನ್ನು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಗಣೇಶ ಚತುರ್ಥಿಯಂದು ಇಲಿ ಗಣಪತಿ ಮೂರ್ತಿಯ ಹತ್ತಿರ ಓಡಾಡುತ್ತಿರುವುದು ಕಂಡು ಬಂದರೆ, ಅದು ಶುಭ ಸೂಚನೆಯಾಗಿದೆ. ನಿಮ್ಮ ಪೂಜೆಯಿಂದ ಗಣೇಶ ಸಂತುಷ್ಟನಾಗಿದ್ದಾನೆ ಎನ್ನುವುದನ್ನು ಅದು ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಇನ್ನು ಸ್ವಪ್ನ ಶಾಸ್ತ್ರದ ಪ್ರಕಾರ ಗಣೇಶ ಚತುರ್ಥಿ ದಿನ ನಿಮಗೆ ಇಲಿಯ ಕನಸು ಕಂಡರೆ, ಅದರಲ್ಲೂ ಇಲಿ ಬೋನಿನಿಂದ ಬಿಡುಗಡೆಯಾಗಿ, ಹೊರಗೆ ಓಡಿ ಹೋಗುತ್ತಿರುವಂತೆ ಕನಸು ಕಂಡರೆ, ಅದರ ಅರ್ಥನೀವು ಶೀಘ್ರದಲ್ಲಿ ದೊಡ್ಡದಾದ ಕಷ್ಟದಿಂದ ಮುಕ್ತಿ ಹೊಂದುವಿರಿ. ನಿಮ್ಮ ಜೀವನವು ಉತ್ತಮ ರೀತಿಯಲ್ಲಿ ಮುಂದುವರೆಯಲಿದೆ ಎನ್ನುವುದನ್ನು ಇದು ಸೂಚಿಸುತ್ತದೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/festivals/ganesh-chaturthi-2026-what-is-the-meaning-of-seeing-mouse-in-house-bx0g1bs"/>
        </item>
        <item>
            <title><![CDATA[ED Raid: ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!]]></title>
            <link>https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci</link>
            <guid isPermaLink="true">https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci</guid>
            <pubDate>Sat, 12 Sep 2026 17:09:41 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದು, ವಿದೇಶಿ ಹೂಡಿಕೆ ಕಾನೂನುಬಾಹಿರವಲ್ಲ ಎಂದು ಹೇಳಿದ್ದಾರೆ. ಇತ್ತ, ಸಹೋದರ ಬಾಲಚಂದ್ರ ಜಾರಕಿಹೊಳಿ ಅವರು 770 ಕೋಟಿ ಹೂಡಿಕೆ ಆರೋಪವನ್ನು ನಿರಾಕರಿಸಿದ್ದು, ವಶಪಡಿಸಿಕೊಂಡ ಹಣಕ್ಕೆ ಲೆಕ್ಕವಿದೆ ಮತ್ತು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6mf3epsrp7x7r6vrwgfcpr,imgname-priyank-kharge-rss-case-1782634221014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಜಾರಿ ನಿರ್ದೇಶಾಲಯ (ಇಡಿ) ದಾಳಿಯ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಇಡಿ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ? ಇನ್ನು ಮುಂದಿನ ತನಿಖೆ ನಡೆಯಬೇಕು ಅಂತ ಹೇಳಿದ್ದಾರೆ. ಇದು ಆರೋಪ ಅಂತ ಇದೆ. ಅಲ್ಲಿ ಸಾಕ್ಷಿ ಸಿಕ್ಕಿದೆ ಅಂತಾರೆ, ಏನು ಸಾಕ್ಷಿ ಸಿಕ್ಕಿದೆ ಅಂತ ಹೇಳಿಲ್ಲ. ಪ್ರೆಸ್ ನೋಟ್ ನೂರು ನೋಡಿ ಇದ್ದೀವಿ ಅಲ್ವಾ? ಹೊಸದಾ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h2&gt;ಇಡಿ 196 ಕಡೆ ದಾಳಿ ಮಾಡಿದರೆ, ಎರಡು ಕೇಸ್&zwnj;ನಲ್ಲಿ ಮಾತ್ರ ಶಿಕ್ಷೆ!&lt;/h2&gt;&lt;p&gt;ಇಡಿ ದಾಳಿಯ ಬಗ್ಗೆ ಮೊನ್ನೆ ನಾನು ಅಂಕಿ ಅಂಶ ಕೊಟ್ಟೆ, ಇಲ್ಲಿವರೆಗೂ 196 ಕಡೆ ದಾಳಿ ಆಗಿದೆ ಎರಡು ಕೇಸ್ ಮಾತ್ರ ಶಿಕ್ಷೆ ಆಗಿದೆ. ಎಲ್ಲಾ 196 ದಾಳಿಗಳಿಗೂ ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ. ಶಿಕ್ಷೆ ಪ್ರಮಾಣ ಯಾಕೆ ಇಷ್ಟು ಕಮ್ಮಿ ಇದೆ. ಸತೀಶ್ ಜಾರಕಿಹೊಳಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎಲ್ಲ ಸಾಬೀತು ಮಾಡಬಹುದು. ನಾವು ಎಲ್ಲಿ ಹೊಡಿಕೆ ಮಾಡಿಲ್ಲ, ಹೊಡಿಕೆ ಮಾಡಬೇಕು ಅಂತ ಇದ್ದೀವಿ ಅಂತ ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.&lt;/p&gt;&lt;h2&gt;ಹೂಡಿಕೆ ಮಾಡೋದು ತಪ್ಪಾ!&lt;/h2&gt;&lt;p&gt;ಪ್ರಧಾನಿ ಮೋದಿ ಅವರು ಭಾರತೀಯ ಹೋಗಿ ಹೊರಗಡೆ ಬಂಡವಾಳ ಹಾಕಬೇಕು, ಇಲ್ಲಿ ಹೊಡಿಕೆ ಮಾಡಬೇಕು ಅಂತ ಮೋದಿ ಹೇಳ್ತಾರೆ. ಸತೀಶ್ ಜಾರಕಿಹೊಳಿ ಅವರು ಅದನ್ನೇ ಮಾಡ್ತಾ ಇರೋದು ಅಲ್ವಾ? ಹೂಡಿಕೆ ಮಾಡಿದರೆ ಅದು ಕಾನೂನು ಬಾಹಿರನಾ? ಕಾಂಗೋದಲ್ಲಿ ಇರಬಹುದು, ಕೆನಡಾದಲ್ಲಿ ಇರಬಹುದು. ಹೂಡಿಕೆ ಮಾಡೋದು ತಪ್ಪಾ! ಅದನ್ನ ಎಲ್ಲೂ ಹೇಳಿಲ್ಲ ಅಲ್ವಾ? ಇವರೇ ಮಾಡಬೇಕು ಅಂತ ಹೇಳಿದ್ದಾರೆ. ಅವರು ಹೂಡಿಕೆ ಮಾಡಿದ್ದಾರೆ ಅಂತ ಹೇಳಿದ್ದಾರೆ, ಇಡಿ ಅವರು ಕಥೆ ಕಟ್ಟುತ್ತಾರೆ. ಇಲ್ಲಿ ಲಂಚ ತೆಗೆದುಕೊಂಡು ಹೂಡಿಕೆ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ದಾಖಲೆ ಸಮೇತ ಕೊಡ್ತೀನಿ ನಾನು, ಹೂಡಿಕೆ ಮಾಡೋಕೆ ರೆಡಿಯಾಗ್ತಾ ಇದ್ದೆ ಅಂತ ಹೇಳಿದ್ದಾರೆ ಎಂದು ವಿವರಿಸಿದರು.&lt;/p&gt;&lt;h2&gt;ರಾಜಕಾರಣ ಬೇರೆ ಕುಟುಂಬದ ವಿಷಯದಲ್ಲಿ ನಾವೆಲ್ಲ ಒಂದೇ&lt;/h2&gt;&lt;p&gt;ಸತೀಶ್ ಜಾರಕಿಹೊಳಿ ಮನೆಯ ಮೇಲೆ ಇಡಿ ದಾಳಿ ನಡೆಸಿದ ಬಳಿಕ ಸಹೋದರನ ಮನೆಗೆ ಭೇಟಿ ನೀಡಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮನೆಗೆ ನಾನು ಬಿಜೆಪಿ ಶಾಸಕನಾಗಿ ಭೇಟಿ ನೀಡಿಲ್ಲ. ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. 770 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ವಿಚಾರ ಸತ್ಯಕ್ಕೆ ದೂರ. ವಿದೇಶದಲ್ಲಿ ಸಚಿವ ಸತೀಶ ಅವರ ಹೂಡಿಕೆ ಇಲ್ಲ, ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಜನರು ಸುಳ್ಳು ಸುದ್ದಿ ಹಬ್ಬಿಸಿ ರಾಜಕಾರಣದಲ್ಲಿ ನಮ್ಮ ಕುಟುಂಬದ ಹೆಸರು ಕೆಡಿಸಬೇಡಿ. ಗೋಕಾಕ್ ನಿವಾಸದಲ್ಲಿ ಒಟ್ಟು 1 ಕೋಟಿ 73 ಲಕ್ಷ ಹಣ ಸೀಜ್ ಮಾಡಲಾಗಿದೆ. 2 ಟ್ರಂಕ್ ತಂದಿದ್ದರೂ ಅದರಲ್ಲಿ ಒಂದೇ ಟ್ರಂಕಿನಲ್ಲಿ ಹಣ ಸೀಜ್ ಮಾಡಿ ಒಯಲಾಗಿದೆ. ಬೇರೆ ಕಡೆ ಹಣ ಸೀಜ್ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ಹಣಕ್ಕೆ ಲೆಕ್ಕ ಕೊಟ್ಟು ಹಣ ಬಿಡುಗಡೆ ಮಾಡಿಸುವ ಕಾರ್ಯ ಆಗುತ್ತದೆ. ದಾಳಿ ವಿರುದ್ಧ ಕಾನೂನು ಹೋರಾಟವನ್ನ ಸತೀಶ ಜಾರಕಿಹೊಳಿ ಮಾಡುತ್ತಾರೆ ಸ್ಪಷ್ಟಪಡಿಸಿದರು.&lt;/p&gt;&lt;p&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/satish-jarkiholi-is-doing-exactly-what-pm-modi-said-says-minister-priyank-kharge-sns/articleshow-9pgkdci"/>
        </item>
        <item>
            <title><![CDATA[Gowri Ganesha Festival Wishes in Kannada: ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಲು ಸುಂದರ ಶುಭಾಶಯಗಳ ಸಂಗ್ರಹ ಇಲ್ಲಿದೆ]]></title>
            <link>https://kannada.asianetnews.com/festivals/gowri-ganesha-festival-wishes-in-kannada-ganapati-habbada-shubhashayagalu-quotes-messages-status-images-for-loved-ones/articleshow-7zzai0m</link>
            <guid isPermaLink="true">https://kannada.asianetnews.com/festivals/gowri-ganesha-festival-wishes-in-kannada-ganapati-habbada-shubhashayagalu-quotes-messages-status-images-for-loved-ones/articleshow-7zzai0m</guid>
            <pubDate>Sat, 12 Sep 2026 17:04:00 +0530</pubDate>
            <description><![CDATA[Gowri ganesha festival wishes: ಗಣೇಶ ಚತುರ್ಥಿಯ ಈ ಶುಭ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ವಿಶೇಷವಾಗಿ ಶುಭಾಶಯ ತಿಳಿಸಬೇಕಾ? ಅವರಿಗಾಗಿ ಬ್ಯೂಟಿಫುಲ್ ಕೋಟ್ಸ್, ಭಕ್ತಿಪೂರ್ವಕ ಮೆಸೇಜ್ ಮತ್ತು ವಾಟ್ಸಾಪ್ ಸ್ಟೇಟಸ್‌ಗಳ ಸೂಪರ್ ಕಲೆಕ್ಷನ್ ಇಲ್ಲಿದೆ ನೋಡಿ...]]></description>
            <media:content url="https://static.asianetnews.com/images/w-1280,h-720,format-jpg,imgid-01m2amsyjaj67124m31cap8td8,imgname-thumbnail---2026-09-12t163646.195-1789211245130.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾ&lt;/strong&gt;ಡಿನೆಲ್ಲೆಡೆ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಈ ಸಂಭ್ರಮದ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಕುಟುಂಬಸ್ಥರು, ಸ್ನೇಹಿತರು ಮತ್ತು ಬಂಧು-ಮಿತ್ರರಿಗೆ ವಾಟ್ಸಾಪ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಳುಹಿಸಲು ಇಲ್ಲಿದೆ 50 ಅತ್ಯುತ್ತಮ ಭಕ್ತಿಪೂರ್ವಕ ಶುಭಾಶಯ ಸಂದೇಶಗಳು&hellip;&lt;/p&gt;&lt;h2&gt;&lt;strong&gt;1. ಭಕ್ತಿಪೂರ್ವಕ ಮತ್ತು ಸಾಂಪ್ರದಾಯಿಕ ಶುಭಾಶಯಗಳು (Devotional Wishes)&lt;/strong&gt;&lt;/h2&gt;&lt;p&gt;ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ | ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ || ತಮಗೂ, ನಿಮ್ಮ ಕುಟುಂಬಕ್ಕೂ ಗಣೇಶ ಚತುರ್ಥಿಯ ಶುಭಾಶಯಗಳು.&lt;/p&gt;&lt;p&gt;ಪ್ರಥಮ ಪೂಜಿತ ಗಣಪತಿಯ ಕೃಪೆ ನಿಮ್ಮ ಮೇಲಿರಲಿ. ನಿಮ್ಮ ಬಾಳಿನ ಎಲ್ಲಾ ಸಂಕಷ್ಟಗಳು ದೂರವಾಗಲಿ. ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!&lt;/p&gt;&lt;p&gt;ವಿದ್ಯೆ, ಬುದ್ಧಿ ಮತ್ತು ಸಿದ್ಧಿಯ ಅಧಿದೇವತೆ ಮಹಾಗಣಪತಿ ನಿಮ್ಮ ಮನೆಯಲ್ಲಿ ಸದಾ ಸುಖ-ಶಾಂತಿಯನ್ನು ನೆಲೆಸುವಂತೆ ಮಾಡಲಿ. ಹ್ಯಾಪಿ ಗಣೇಶ ಚತುರ್ಥಿ!&lt;/p&gt;&lt;p&gt;ಗಜಮುಖನ ಆಗಮನ ನಿಮ್ಮ ಜೀವನದಲ್ಲಿ ಹೊಸ ಆಶಾಕಿರಣವನ್ನು ಹೊತ್ತು ತರಲಿ. ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.&lt;/p&gt;&lt;p&gt;ನಿಮ್ಮ ಮನಸ್ಸಿನ ಸಕಲ ಇಷ್ಟಾರ್ಥಗಳನ್ನು ಆ ವಿಘ್ನನಿವಾರಕ ಗಣೇಶ ಈಡೇರಿಸಲಿ. ಗಣೇಶ ಹಬ್ಬದ ಶುಭಾಶಯಗಳು!&lt;/p&gt;&lt;p&gt;ಪಾರ್ವತಿ ನಂದನ ಗಣಪತಿಯ ಆಶೀರ್ವಾದ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ.&lt;/p&gt;&lt;p&gt;ಗಣೇಶನ ಪಾದಗಳಿಗೆ ಭಕ್ತಿಯ ನಮನ ಸಲ್ಲಿಸುತ್ತಾ, ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಶುಭಾಶಯಗಳು.&lt;/p&gt;&lt;p&gt;ಲಂಬೋದರನ ಕೃಪೆಯಿಂದ ನಿಮ್ಮ ಜೀವನದ ಎಲ್ಲಾ ವಿಘ್ನಗಳು ಕರಗಿ ಹೋಗಲಿ. ಗಣೇಶ ಚತುರ್ಥಿಯ ಶುಭಾಶಯಗಳು.&lt;/p&gt;&lt;p&gt;ಗಣಪತಿಯ ದಿವ್ಯ ಕೃಪೆಯಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಸಮೃದ್ಧಿ ಸದಾ ತುಂಬಿರಲಿ.&lt;/p&gt;&lt;p&gt;ಭಕ್ತರ ಸಂಕಷ್ಟಗಳನ್ನು ಕಳೆಯುವ ಸಂಕಷ್ಟಹರ ಗಣಪತಿ ನಿಮ್ಮನ್ನು ಸದಾ ಕಾಪಾಡಲಿ. ಗಣೇಶ ಹಬ್ಬದ ಶುಭಾಶಯಗಳು.&lt;/p&gt;&lt;h2&gt;&lt;strong&gt;2. ಯಶಸ್ಸು, ಆರೋಗ್ಯ ಮತ್ತು ಸಮೃದ್ಧಿಯ ಶುಭಾಶಯಗಳು (Prosperity &amp;amp; Success Wishes)&lt;/strong&gt;&lt;/h2&gt;&lt;p&gt;ಈ ಗಣೇಶ ಚತುರ್ಥಿಯು ನಿಮ್ಮ ಜೀವನದಲ್ಲಿ ಹೊಸ ಸಂತೋಷ, ಉತ್ತಮ ಆರೋಗ್ಯ ಮತ್ತು ಯಶಸ್ಸನ್ನು ಹೊತ್ತು ತರಲಿ.&lt;/p&gt;&lt;p&gt;ನಿಮ್ಮ ಎಲ್ಲಾ ಹೊಸ ಪ್ರಯತ್ನಗಳಿಗೂ ಆ ವಿಘ್ನರಾಜ ಶುಭವನ್ನುಂಟು ಮಾಡಲಿ. ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!&lt;/p&gt;&lt;p&gt;ಗಣಪತಿಯ ದೊಡ್ಡ ಕಿವಿಯಂತೆ ಒಳ್ಳೆಯದನ್ನು ಆಲಿಸಿ, ಸಣ್ಣ ಕಣ್ಣುಗಳಂತೆ ಏಕಾಗ್ರತೆ ಬೆಳೆಸಿಕೊಂಡು ಬದುಕಿನಲ್ಲಿ ಯಶಸ್ಸು ನಿಮ್ಮದಾಗಲಿ. ಹ್ಯಾಪಿ ಗಣೇಶ ಚತುರ್ಥಿ!&lt;/p&gt;&lt;p&gt;ಬೊಜ್ಜ ಗಣಪಯ್ಯ ನಿಮ್ಮ ಮನೆಯ ಭಂಡಾರವನ್ನು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಸದಾ ತುಂಬಿಡಲಿ.&lt;/p&gt;&lt;p&gt;ಕಷ್ಟಗಳು ಕರಗಲಿ, ಸಂಕಷ್ಟಗಳು ಮರೆಯಾಗಲಿ, ಮಹಾಗಣಪತಿಯ ಆಶೀರ್ವಾದದಿಂದ ನಿಮ್ಮ ಬದುಕು ಹಸನಾಗಲಿ.&lt;/p&gt;&lt;p&gt;ಮಾಡುವ ಪ್ರತಿಯೊಂದು ಕೆಲಸದಲ್ಲೂ ವಿಜಯ ನಿಮ್ಮದಾಗಲಿ ಎಂದು ಆ ವಿಘ್ನವಿನಾಶಕನಲ್ಲಿ ಪ್ರಾರ್ಥಿಸುತ್ತೇನೆ.&lt;/p&gt;&lt;p&gt;ಗಣೇಶನ ಮೂಷಿಕ ವಾಹನದಂತೆ ವಿನಮ್ರತೆ, ಮೋದಕದಂತೆ ಸಿಹಿಯಾದ ಮಾತು ನಿಮ್ಮ ಜೀವನದಲ್ಲಿ ಸದಾ ಇರಲಿ.&lt;/p&gt;&lt;p&gt;ಗಣೇಶ ಚತುರ್ಥಿಯ ಈ ಪುಣ್ಯ ದಿನವು ನಿಮ್ಮ ಬಾಳಿನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿ.&lt;/p&gt;&lt;p&gt;ಆರೋಗ್ಯ, ಆಯುಷ್ಯ, ಐಶ್ವರ್ಯ ಮತ್ತು ಕೀರ್ತಿಯನ್ನು ಮಹಾಗಣಪತಿ ನಿಮಗೆ ಕರುಣಿಸಲಿ. ಗಣೇಶ ಹಬ್ಬದ ಶುಭಾಶಯಗಳು!&lt;/p&gt;&lt;p&gt;ಮನೆಯಲ್ಲಿ ನಗು, ಮನದಲ್ಲಿ ಶಾಂತಿ ನೆಲೆಸಲಿ. ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.&lt;/p&gt;&lt;h2&gt;&lt;strong&gt;3. ವಾಟ್ಸಾಪ್ ಮತ್ತು ಸೋಶಿಯಲ್ ಮೀಡಿಯಾಗೆ ಸೂಕ್ತವಾದ ಕಿರು ಸಂದೇಶಗಳು (Short &amp;amp; Crisp Wishes)&lt;/strong&gt;&lt;/h2&gt;&lt;p&gt;ಗಣಪತಿ ಬಪ್ಪ ಮೋರಯಾ! ಎಲ್ಲರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.&lt;/p&gt;&lt;p&gt;ಬಂತು ಬಂತು ಗಣೇಶ ಹಬ್ಬ! ಮನೆ-ಮನಗಳಲ್ಲಿ ತುಂಬಲಿ ಸಡಗರದ ಹರ್ಷ! ಹ್ಯಾಪಿ ಗಣೇಶ ಚತುರ್ಥಿ!&lt;/p&gt;&lt;p&gt;ಗಣೇಶನ ಆಗಮನದಿಂದ ನಿಮ್ಮ ಬಾಳು ಸದಾ ಬೆಳಗಲಿ. ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.&lt;/p&gt;&lt;p&gt;ಸಿಹಿ ಮೋದಕದಂತೆ ನಿಮ್ಮ ಜೀವನ ಸದಾ ಮಧುರವಾಗಿರಲಿ. ಗಣೇಶ ಚತುರ್ಥಿಯ ಶುಭಾಶಯಗಳು!&lt;/p&gt;&lt;p&gt;ವಿಘ್ನರಾಜನ ಕೃಪೆ ಸದಾ ನಿಮ್ಮ ರಕ್ಷೆಯಾಗಿರಲಿ. ಸರ್ವರಿಗೂ ಗೌರಿ-ಗಣಪತಿ ಹಬ್ಬದ ಶುಭಾಶಯಗಳು.&lt;/p&gt;&lt;p&gt;ಗಣೇಶನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ, ಹಬ್ಬದ ಹಾರ್ದಿಕ ಶುಭಾಶಯಗಳು!&lt;/p&gt;&lt;p&gt;ಕಷ್ಟಗಳೆಲ್ಲಾ ಕರಗಲಿ, ಇಷ್ಟಾರ್ಥಗಳೆಲ್ಲಾ ಈಡೇರಲಿ. ಹ್ಯಾಪಿ ವಿನಾಯಕ ಚತುರ್ಥಿ!&lt;/p&gt;&lt;p&gt;ಸಮಸ್ತ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು.&lt;/p&gt;&lt;p&gt;ನಿಮ್ಮ ಮುಖದಲ್ಲಿ ನಗು, ಬಾಳಿನಲ್ಲಿ ಬೆಳಕು ತರಲಿ ಈ ಗಣೇಶ ಹಬ್ಬ. ಶುಭಾಶಯಗಳು!&lt;/p&gt;&lt;p&gt;ಮಂಗಳಮೂರ್ತಿ ಗಣಪತಿ ನಿಮ್ಮ ಕುಟುಂಬಕ್ಕೆ ಸಕಲ ಶುಭವನ್ನುಂಟು ಮಾಡಲಿ.&lt;/p&gt;&lt;h2&gt;&lt;strong&gt;4. ಸ್ನೇಹಿತರು ಮತ್ತು ಆತ್ಮೀಯರಿಗಾಗಿ (Friends &amp;amp; Family Wishes)&lt;/strong&gt;&lt;/h2&gt;&lt;p&gt;ಪ್ರೀತಿಯ ಸ್ನೇಹಿತರಿಗೆ ಮತ್ತು ಅವರ ಕುಟುಂಬಸ್ಥರಿಗೆ ಗಣೇಶ ಚತುರ್ಥಿಯ ಪ್ರೀತಿಯ ಶುಭಾಶಯಗಳು.&lt;/p&gt;&lt;p&gt;ನಮ್ಮ ಸ್ನೇಹ ಗಣೇಶನ ಬಾಂಧವ್ಯದಂತೆ ಗಟ್ಟಿಯಾಗಿರಲಿ. ನಿನಗೆ ಮತ್ತು ನಿನ್ನ ಮನೆಯವರಿಗೆ ಗಣೇಶ ಹಬ್ಬದ ಶುಭಾಶಯಗಳು!&lt;/p&gt;&lt;p&gt;ಈ ಹಬ್ಬವು ನಿಮ್ಮ ಕುಟುಂಬದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಸಂಭ್ರಮವನ್ನು ಹೆಚ್ಚಿಸಲಿ. ಹ್ಯಾಪಿ ಗಣೇಶ ಚತುರ್ಥಿ.&lt;/p&gt;&lt;p&gt;ಕಡುಬು, ಮೋದಕ ಸವಿಯುತ್ತಾ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ಹಬ್ಬದ ಶುಭಾಶಯಗಳು!&lt;/p&gt;&lt;p&gt;ನನ್ನ ಪ್ರೀತಿಯ ಕುಟುಂಬಕ್ಕೆ ಹಾಗೂ ಆಪ್ತ ಮಿತ್ರರಿಗೆ ಗೌರಿ-ಗಣಪತಿ ಹಬ್ಬದ ಹಾರ್ದಿಕ ಶುಭಕಾಮನೆಗಳು.&lt;/p&gt;&lt;p&gt;ಬೊಜ್ಜ ಗಣಪನ ಆಶೀರ್ವಾದ ನಿಮ್ಮ ಮೇಲಿದ್ದು, ನಿಮ್ಮೆಲ್ಲಾ ಕನಸುಗಳು ನನಸಾಗಲಿ.&lt;/p&gt;&lt;p&gt;ನಿಮ್ಮ ಬಾಳಿನ ಪುಟಗಳಲ್ಲಿ ಸಂತೋಷದ ರಂಗು ತುಂಬಲಿ. ಗಣೇಶ ಚತುರ್ಥಿಯ ಶುಭಾಶಯಗಳು ಗೆಳೆಯಾ!&lt;/p&gt;&lt;p&gt;ಹಬ್ಬದ ಈ ಸುದಿನ ನಿಮ್ಮ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸವನ್ನು ನೀಡಲಿ.&lt;/p&gt;&lt;p&gt;ಪ್ರೀತಿಯ ಬಂಧು-ಮಿತ್ರರಿಗೆ ಗಣೇಶ ಚತುರ್ಥಿಯ ಭಕ್ತಿಪೂರ್ವಕ ನಮನಗಳು ಮತ್ತು ಶುಭಾಶಯಗಳು.&lt;/p&gt;&lt;p&gt;ಮನೆಯ ತುಂಬ ಹಬ್ಬದ ಸಡಗರ, ಮನದ ತುಂಬ ಭಕ್ತಿಯ ಸಂಭ್ರಮ ನೆಲೆಸಲಿ. ಶುಭಾಶಯಗಳು!&lt;/p&gt;&lt;h2&gt;&lt;strong&gt;5. ಪರಿಸರಸ್ನೇಹಿ ಮತ್ತು ವಿಶಿಷ್ಟ ಶುಭಾಶಯಗಳು (Eco-Friendly &amp;amp; Unique Wishes)&lt;/strong&gt;&lt;/h2&gt;&lt;p&gt;ಮಣ್ಣಿನ ಗಣಪತಿಯನ್ನು ಪೂಜಿಸೋಣ, ಪರಿಸರವನ್ನು ಉಳಿಸೋಣ. ಎಲ್ಲರಿಗೂ ಪರಿಸರಸ್ನೇಹಿ ಗಣೇಶ ಹಬ್ಬದ ಶುಭಾಶಯಗಳು!&lt;/p&gt;&lt;p&gt;ನಮ್ಮ ಭಕ್ತಿ ಪ್ರಕೃತಿಗೆ ಹಾನಿಯಾಗದಿರಲಿ, ಮಣ್ಣಿನ ಗಣೇಶನನ್ನೇ ಮನೆಗೆ ತರೋಣ. ಹ್ಯಾಪಿ ಎಕೋ-ಫ್ರೆಂಡ್ಲಿ ಗಣೇಶ ಚತುರ್ಥಿ!&lt;/p&gt;&lt;p&gt;ಪ್ರಕೃತಿಯನ್ನು ರಕ್ಷಿಸುತ್ತಾ, ಭಕ್ತಿಯಿಂದ ಗಣೇಶನನ್ನು ಆರಾಧಿಸೋಣ. ಸರ್ವರಿಗೂ ಹಬ್ಬದ ಶುಭಾಶಯಗಳು.&lt;/p&gt;&lt;p&gt;ಗಣೇಶನ ಬುದ್ಧಿವಂತಿಕೆ, ತಾಳ್ಮೆ ಮತ್ತು ನಾಯಕತ್ವ ಗುಣಗಳು ನಮ್ಮೆಲ್ಲರಲ್ಲೂ ಜಾಗೃತವಾಗಲಿ. ಶುಭಾಶಯಗಳು!&lt;/p&gt;&lt;p&gt;ಹಬ್ಬದ ಆಚರಣೆ ಕೇವಲ ಸಂಪ್ರದಾಯವಾಗದೆ, ಸಮಾಜಕ್ಕೆ ಒಳ್ಳೆಯ ಸಂದೇಶವಾಗಲಿ. ಗಣೇಶ ಚತುರ್ಥಿಯ ಶುಭಾಶಯಗಳು.&lt;/p&gt;&lt;p&gt;ಎಲ್ಲರಲ್ಲೂ ಸದ್ಬುದ್ಧಿ, ಸದ್ಭಾವನೆ ತುಂಬಿ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಗಣಪತಿ ಆಶೀರ್ವದಿಸಲಿ.&lt;/p&gt;&lt;p&gt;ವಿಘ್ನಗಳ ನಿವಾರಕ, ಸರ್ವ ಸಂಕಷ್ಟ ಹಾರಕ ಮಹಾಗಣಪತಿ ಎಲ್ಲರ ಬಾಳಲ್ಲೂ ಒಳಿತನ್ನೇ ಮಾಡಲಿ.&lt;/p&gt;&lt;p&gt;ಭಕ್ತಿಯ ಸಾಗರದಲ್ಲಿ ಮಿಂದೆದ್ದು, ವಿಘ್ನವಿನಾಶಕನ ಕೃಪೆಗೆ ಪಾತ್ರರಾಗೋಣ. ಹಬ್ಬದ ಹಾರ್ದಿಕ ಶುಭಾಶಯಗಳು.&lt;/p&gt;&lt;p&gt;ಈ ಗಣೇಶ ಚತುರ್ಥಿಯು ನಿಮ್ಮ ಬದುಕಿಗೆ ಹೊಸ ಚೈತನ್ಯ, ಹೊಸ ಹುಮ್ಮಸ್ಸು ತರಲಿ.&lt;/p&gt;&lt;p&gt;ಜೈ ಗಣೇಶ! ಮಂಗಳಮೂರ್ತಿ ಮೋರಯಾ! ನಾಡಿನ ಸಮಸ್ತ ಪ್ರಜೆಗಳಿಗೂ ಗಣೇಶ ಹಬ್ಬದ ಅನಂತಾನಂತ ಶುಭಾಶಯಗಳು!&lt;/p&gt;&lt;h2&gt;&lt;strong&gt;ಗೌರಿ ಹಬ್ಬಕ್ಕೆ ಕಳುಹಿಸಬಹುದಾದ ಅತ್ಯುತ್ತಮ ಶುಭಾಶಯಗಳು (Gowri Festival Wishes)&lt;/strong&gt;&lt;/h2&gt;&lt;p&gt;ಸಕಲ ಸೌಭಾಗ್ಯಗಳನ್ನು ಕರುಣಿಸುವ ಜಗನ್ಮಾತೆ ಸ್ವರ್ಣ ಗೌರಿ ನಿಮ್ಮ ಮನೆಯಲ್ಲಿ ಸದಾ ಸುಖ, ಶಾಂತಿ, ನೆಮ್ಮದಿಯನ್ನು ಕರುಣಿಸಲಿ. ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು!&lt;/p&gt;&lt;p&gt;ತವರು ಮನೆಗೆ ಬಂದ ಗೌರಿಯು ನಿಮ್ಮ ಬದುಕಿನಲ್ಲಿ ಸಿರಿ-ಸಂಪತ್ತು, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ. ಗೌರಿ ವ್ರತದ ಶುಭಾಶಯಗಳು.&lt;/p&gt;&lt;p&gt;ತಾಯಿ ಗೌರಿಯ ಕೃಪೆಯಿಂದ ನಿಮ್ಮ ಸೌಭಾಗ್ಯ ಸದಾ ಹಸಿರಾಗಿರಲಿ, ನಿಮ್ಮ ಕುಟುಂಬದಲ್ಲಿ ಸಂತೋಷ ತುಂಬಿರಲಿ. ಗೌರಿ ಹಬ್ಬದ ಶುಭಾಶಯಗಳು!&lt;/p&gt;&lt;p&gt;ಮುತ್ತೈದೆ ತನವನ್ನು ಹರಸಿ, ಕಷ್ಟಗಳನ್ನು ಕಳೆಯುವ ಮಂಗಳಗೌರಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.&lt;/p&gt;&lt;p&gt;ನಾಡಿನ ಸಮಸ್ತ ಮಹಿಳೆಯರಿಗೆ, ತಾಯಂದಿರಿಗೆ ಹಾಗೂ ಅಕ್ಕ-ತಂಗಿಯರಿಗೆ ಸ್ವರ್ಣ ಗೌರಿ ಹಬ್ಬದ ಭಕ್ತಿಪೂರ್ವಕ ಶುಭಾಶಯಗಳು!&lt;/p&gt;]]></content:encoded>
            <category><![CDATA[festivals]]></category>
            <dc:creator>Ashwini HR</dc:creator>
            <atom:link href="https://kannada.asianetnews.com/festivals/gowri-ganesha-festival-wishes-in-kannada-ganapati-habbada-shubhashayagalu-quotes-messages-status-images-for-loved-ones/articleshow-7zzai0m"/>
        </item>
        <item>
            <title><![CDATA[IND vs AFG 1st T20I: ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ...!]]></title>
            <link>https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak</link>
            <guid isPermaLink="true">https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak</guid>
            <pubDate>Sat, 12 Sep 2026 17:00:55 +0530</pubDate>
            <description><![CDATA[ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m1fwtkjcrh4pm4h6ppt3wmyh,imgname-vaibhav-sooryavanshi-1788313685580.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 13ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ ನೋಡಿ.&lt;/p&gt;&lt;img&gt;&lt;p&gt;ಭಾರತ-ಆಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ಮೂರು ಪಂದ್ಯಗಳು ಇಲ್ಲಿನ ಅರುಣ್&zwnj; ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏಷ್ಯನ್ ಗೇಮ್ಸ್&zwnj; ಮುನ್ನ ನಡೆಯಲಿರುವ ಈ ಟೂರ್ನಿಯು ಹಲವು ವಿಚಾರಗಳಿಗೆ ಮಹತ್ವದ್ದೆನಿಸಿಕೊಂಡಿದೆ. ಇದೀಗ ಆಫ್ಘಾನಿಸ್ತಾನ ಎದುರಿನ ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೇಗಿರಲಿದೆ? ಯಾರಿಗೆಲ್ಲಾ ಸ್ಥಾನ ಸಿಗಬಹುದು ಎನ್ನುವುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಆಫ್ಘಾನಿಸ್ತಾನ ಎದುರಿನ ಮೊದಲ ಟಿ20 ಪಂದ್ಯಕ್ಕೆ ಆರಂಭಿಕರಾಗಿ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವಾಗಿದೆ. ಈ ಇಬ್ಬರು ಸ್ಪೋಟಕ ಆರಂಭಿಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾದಲ್ಲಿ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;img&gt;&lt;p&gt;ಜಿಂಬಾಬ್ವೆ ಎದುರಿನ ಸರಣಿಯಿಂದ ಸಂಜು ಸ್ಯಾಮ್ಸನ್ ಹೊರಗುಳಿದಿದ್ದರು. ಇದೀಗ ಆಫ್ಘಾನಿಸ್ತಾನ ಎದುರಿನ ಸರಣಿಯಲ್ಲಿ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸ್ಥಾನ ಪಡೆಯಲಿದ್ದಾರೆ. ಇಶಾನ್ ಕಿಶನ್ ಇತ್ತೀಚೆಗಷ್ಟೇ ದುಲೀಪ್ ಟ್ರೋಫಿ ಫೈನಲ್&zwnj;ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದರು.&lt;/p&gt;&lt;img&gt;&lt;p&gt;ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಐದನೇ ಹಾಗೂ ಉಪನಾಯಕ ತಿಲಕ್ ವರ್ಮಾ ಆರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಶಿವಂ ದುಬೆ ಅವರ ಸೆಲೆಕ್ಷನ್ ವಿಚಾರದಲ್ಲಿ ಟೀಮ್ ಮ್ಯಾನೇಜ್&zwnj;ಮೆಂಟ್ ಕೊಂಚ ತಲೆಕೆಡಿಸಿಕೊಂಡಂತಿದೆ.&lt;/p&gt;&lt;img&gt;&lt;p&gt;ಹೌದು, ಇತ್ತೀಚಿಗಿನ ಕೆಲ ಪಂದ್ಯದಲ್ಲಿ ಶಿವಂ ದುಬೆ ಸ್ಥಿರ ಪ್ರದರ್ಶನ ತೋರಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಹೀಗಾಗಿ ದುಬೆಗೆ ವಿಶ್ರಾಂತಿ ನೀಡಿ ಮತ್ತೋರ್ವ ವೇಗದ ಬೌಲಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾದಲ್ಲಿ ತಂಡ ಮತ್ತಷ್ಟು ಸಮತೋಲಿತವಾಗಿ ಕಂಡು ಬರಲಿದೆ.&lt;/p&gt;&lt;p&gt;ಇನ್ನುಳಿದಂತೆ 8ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್, ಆ ಬಳಿಕ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಹಾಗೂ ತಜ್ಞ ಸ್ಪಿನ್ನರ್ ರೂಪದಲ್ಲಿ ವರುಣ್ ಚಕ್ರವರ್ತಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮೇಲ್ನೋಟಕ್ಕೆ ಬೌಲಿಂಗ್ ವಿಭಾಗ ಕೂಡಾ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದೆ.&lt;/p&gt;&lt;img&gt;&lt;p&gt;ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/india-vs-afghanistan-1st-t20-vaibhav-sooryavanshi-abhishek-sharma-set-to-open-kvn-pkdluak"/>
        </item>
        <item>
            <title><![CDATA[ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ]]></title>
            <link>https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</link>
            <guid isPermaLink="true">https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn</guid>
            <pubDate>Sat, 12 Sep 2026 16:57:09 +0530</pubDate>
            <description><![CDATA[ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಗಣೇಶ ಹಬ್ಬ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿದೆ. ಪರಿಣಾಮ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2anxhha7r76fj89wzgcy20p,imgname-ganesh-festival-traffic-disrupts-bengaluru-1789212411434.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಸೆ.12) ಗಣೇಶ ಹಬ್ಬ ಹಿನ್ನಲೆಯಲ್ಲಿ ನಗರದ ಹಲೆವೆಡೆ ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಇದೀಗ ಬೆಂಗಳೂರಿನ ಏರ್&zwnj;ಪೋರ್ಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್&zwnj; ಸೃಷ್ಟಿಯಾಗಿದೆ. ಪ್ಯಾಲೇಸ್ ರಸ್ತೆಯಿಂದ ಹಿಡಿದು ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣ, ಆಂಧ್ರ ಪ್ರದೇಶ ಸೇರಿದಂತೆ ಪ್ರಮುಖ ರಸ್ತೆಗಳ ಲಿಂಕ್ ಆಗಿರುವ ಕಾರಣ ಹಬ್ಬದ ಹಿನ್ನಲೆಯಲ್ಲಿ ಊರಿಗೆ ತೆರಳುವ ಜನ ಹೆಚ್ಚಿದ್ದಾರೆ. ಹೀಗಾಗಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ.&lt;/p&gt;&lt;h2&gt;ಕಳೆದ ಕೆಲ ಗಂಟೆಯಿಂದ ಸಿಲುಕಿದ ವಾಹನ ಸವಾರರು&lt;/h2&gt;&lt;p&gt;ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೆ ವಾಹನ ಸಂಚಾರ ಬಂದ್ ಆಗಿದೆ. ಅಷ್ಟರ ಮಟ್ಟಿಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ವಾಹನ ಸವಾರರು ಕಳೆದ ಕೆಲ ಗಂಟೆಯಿಂದ ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗಿನ ಸರಿಸುಮಾರು 4 ಕಿಲೋಮೀಟರ್ ದೂರ ಕ್ರಮಿಸಲು ಗಂಟೆ ಗಟ್ಟಲೆ ಹಿಡಿಯುತ್ತಿದೆ. ಭಾರಿ ಸಂಖ್ಯೆಯಲ್ಲಿ ವಾಹನಗಳು ಏರ್&zwnj;ಪೋರ್ಟ್ ರಸ್ತೆಯಲ್ಲಿ ಸಾಗುತ್ತಿದೆ. ವಿಮಾನ ನಿಲ್ದಾಣ ತಲುಪುದು ಹರಸಾಹಸವಾಗಿದೆ.&lt;/p&gt;&lt;h2&gt;ಇಂದು ರಾತ್ರಿ ಮೆಜೆಸ್ಟಿಕ್ ಸುತ್ತ ಮುತ್ತ ಟ್ರಾಫಿಕ್&lt;/h2&gt;&lt;p&gt;ಶುಕ್ರವಾರ ಸಂಜೆಯಿಂದ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಎರಡನೇ ಶನಿವಾರ, ಭಾನುವಾರ, ಸೋಮವಾರ ಗಣೇಶ ಹಬ್ಬದ ಪ್ರಯುಕ್ತ ರಜೆ. ಹೀಗಾಗಿ ಬೆಂಗಳೂರಿನ ಬಹುತೇಕ ಮಂದಿ ಶುಕ್ರವಾರವೇ ಊರಿಗೆ ತೆರಳಿದ್ದಾರೆ. ಹೀಗಾಗಿ ಶುಕ್ರವಾರ ಮೆಜೆಸ್ಟಿಕ್ ಸುತ್ತ ಮುತ್ತ ಭಾರಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇಂದು ರಾತ್ರಿಯೂ ಟ್ರಾಫಿಕ್ ಜಾಮ್ ಸೃಷ್ಟಿಯಾಗಲಿದೆ.&lt;/p&gt;&lt;p&gt;ಮೂರು ದಿನ ರಜೆ ಹಿನ್ನೆಲೆ ತಮ್ಮ ತಮ್ಮ ಊರುಗಳಿಗೆ ಜನರು ಹೊರಟಿದ್ದಾರೆ. ಮೆಜೆಸ್ಟಿಕ್ ಸುತ್ತಮುತ್ತ ನಾಲ್ಕೈದು ಕಿಲೋ ಮೀಟರ್ ವರೆಗೆ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಖಾಸಗಿ ಬಸ್, ಕೆಎಸ್ ಆರ್ ಟಿ ಸಿ ಬಸ್ ಎಲ್ಲವೂ ಪ್ರಯಾಣಿಕರಿಂದ ಭರ್ತಿಯಾಗಿತ್ತು. ಇದರ ನಡುವೆ ಕೆಲ ಆ್ಯಂಬುಲೆನ್ಸ್ ಸಿಲುಕಿ ಪರದಾಡಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/bengaluru-traffic-alert-ganesh-festival-rush-causes-jam-from-palace-road-to-hebbal/articleshow-scccakn"/>
        </item>
        <item>
            <title><![CDATA[ತಾಳಿ, ಬೊಟ್ಟು, ವ್ರತ.. ಪುರುಷರಿಗೆ ಇಲ್ಲದ ಈ ನಿಯಮಗಳೆಲ್ಲ ಮಹಿಳೆಯರಿಗೆ ಮಾತ್ರ ಏಕೆ?: ನಟಿ ನಮಿತಾ ಪ್ರಶ್ನೆ!]]></title>
            <link>https://kannada.asianetnews.com/entertainment/sandalwood-actress-namitha-viral-comments-on-women-marriage-and-traditional-rules-spark-debate-gvd/articleshow-5m42ywx</link>
            <guid isPermaLink="true">https://kannada.asianetnews.com/entertainment/sandalwood-actress-namitha-viral-comments-on-women-marriage-and-traditional-rules-spark-debate-gvd/articleshow-5m42ywx</guid>
            <pubDate>Sat, 12 Sep 2026 16:50:52 +0530</pubDate>
            <description><![CDATA[ನಟಿ ನಮಿತಾ ಅವರ ತಾಳಿ, ಬೊಟ್ಟು ಮತ್ತು ಮಹಿಳೆಯರ ಮೇಲಿನ ಸಂಪ್ರದಾಯಗಳ ಕುರಿತ ಹೇಳಿಕೆಗಳು ವೈರಲ್ ಆಗಿವೆ. ‘ಮಹಿಳೆಯರಿಗೇ ಏಕೆ ಎಲ್ಲಾ ನಿಯಮಗಳು?’ ಎಂದು ಪ್ರಶ್ನಿಸಿರುವ ಅವರು, ಪತ್ನಿಯ ಕ್ಷೇಮಕ್ಕಾಗಿ ಗಂಡಂದಿರು ಉಪವಾಸ ಮಾಡುವುದಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2andxgnn69668ej61kjjn8x,imgname-bj-1789211899413.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ನಮಿತಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಭಾರತೀಯ ವಿವಾಹ ಸಂಪ್ರದಾಯಗಳು ಹಾಗೂ ಸಮಾಜದಲ್ಲಿ ರೂಢಿಯಾಗಿರುವ ಕೆಲ ಆಚಾರಗಳ ಬಗ್ಗೆ ಕುತೂಹಲಕಾರಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರೇ ತಾಳಿ ಧರಿಸಬೇಕು, ಬೊಟ್ಟು ಇಡಬೇಕು, ಗಂಡನ ಕ್ಷೇಮಕ್ಕಾಗಿ ವರಮಹಾಲಕ್ಷ್ಮಿ ವ್ರತದಂತಹ ಉಪವಾಸಗಳನ್ನು ಮಾಡಬೇಕು ಎಂದು ಸಮಾಜ ಏಕೆ ನಿರೀಕ್ಷಿಸುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಪತ್ನಿಯರಿಗಾಗಿ ಗಂಡಂದಿರು ಎಂದಾದರೂ ಉಪವಾಸ ಮಾಡುತ್ತಾರೆಯೇ ಎಂದು ಪ್ರಶ್ನಿಸಿರುವ ನಮಿತಾ, ಇಂತಹ ನಿಯಮಗಳೆಲ್ಲ ಸಮಾಜವೇ ಸೃಷ್ಟಿಸಿಕೊಂಡಿರುವುದು, ಯಾವುದೇ ಗ್ರಂಥಗಳಲ್ಲೂ ಇವುಗಳ ಬಗ್ಗೆ ಉಲ್ಲೇಖವಿಲ್ಲ ಎಂದು ಹೇಳಿದ್ದಾರೆ. ಇದೀಗ ನಮಿತಾ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.&lt;/p&gt;&lt;p&gt;ಕನ್ನಡ ಪ್ರೇಕ್ಷಕರಿಗೆ ನಟಿ ನಮಿತಾ ಪರಿಚಿತ ಮುಖ. ತಮಿಳಿನ ಜೊತೆಗೆ ತೆಲುಗು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಲ್ಲೂ ಅವರು ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಸಿನಿಮಾಗಳಿಂದ ದೂರವಿರುವ ನಮಿತಾ, ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಭಾರತೀಯ ವಿವಾಹ ಪದ್ಧತಿ ಹಾಗೂ ಮಹಿಳೆಯರ ಮೇಲೆ ಸಮಾಜ ಹೇರಿರುವ ಕೆಲವು ಜವಾಬ್ದಾರಿಗಳ ಬಗ್ಗೆ ಮಾತನಾಡಿದ್ದಾರೆ.&lt;/p&gt;&lt;p&gt;&lt;strong&gt;ಮಹಿಳೆಯರೇ ತಾಳಿ ಏಕೆ ಧರಿಸಬೇಕು?&lt;/strong&gt;&lt;/p&gt;&lt;p&gt;ಪುರುಷರಿಗೆ ಇಲ್ಲದ ಕೆಲವು ನಿಯಮಗಳು ಮಹಿಳೆಯರಿಗೆ ಮಾತ್ರ ಏಕೆ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ. ಗಂಡನ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಆಚರಿಸುವ ವರಮಹಾಲಕ್ಷ್ಮಿ ವ್ರತದಂತಹ ಸಂಪ್ರದಾಯಗಳ ಬಗ್ಗೆಯೂ ನಮಿತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳೆಯರೇ ತಾಳಿ ಏಕೆ ಧರಿಸಬೇಕು? ಮಹಿಳೆಯರೇ ಬೊಟ್ಟು ಇಡಬೇಕು, ಸಂಪ್ರದಾಯಗಳನ್ನು ಪಾಲಿಸಬೇಕು ಎಂದು ಏಕೆ ನಿರೀಕ್ಷಿಸುತ್ತಾರೆ? ಪುರುಷರಿಗೆ ಇಲ್ಲದ ಈ ನಿಯಮಗಳೆಲ್ಲ ಮಹಿಳೆಯರಿಗೆ ಮಾತ್ರ ಏಕೆ?&lt;/p&gt;&lt;p&gt;&lt;strong&gt;ಎಲ್ಲಾ ನಿಯಮಗಳೂ ಮಹಿಳೆಯರಿಗೇ ಏಕೆ?&lt;/strong&gt;&lt;/p&gt;&lt;p&gt;ನನ್ನ ಗಂಡ ಸುರಕ್ಷಿತವಾಗಿರಬೇಕು ಎಂದು ನಾನು ಉಪವಾಸ ಮಾಡುತ್ತೇನೆ. ಆದರೆ ಪತ್ನಿಯ ಕ್ಷೇಮಕ್ಕಾಗಿ ಗಂಡ ವರ್ಷಕ್ಕೆ ಕನಿಷ್ಠ ಒಂದು ದಿನವಾದರೂ ಉಪವಾಸ ಮಾಡಬೇಕು ಎಂಬ ನಿಯಮ ಏನಾದರೂ ಇದೆಯೇ? ಅಂತಹದ್ದೇನೂ ಇಲ್ಲ. ಸಮಾಜ ಇಂತಹ ನಿಯಮಗಳನ್ನು ಏಕೆ ರೂಪಿಸಿಲ್ಲ? ಎಲ್ಲಾ ನಿಯಮಗಳೂ ಮಹಿಳೆಯರಿಗೇ ಏಕೆ? ಇವೆಲ್ಲವೂ ಸಮಾಜ ಸೃಷ್ಟಿಸಿಕೊಂಡಿರುವ ನಿಯಮಗಳು. ಯಾವುದೇ ಗ್ರಂಥದಲ್ಲೂ ಇಂತಹ ನಿಯಮಗಳಿಲ್ಲ ಎಂದು ನಮಿತಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ನಮಿತಾ ಅವರ ಈ ಕಾಮೆಂಟ್&zwnj;ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಕೆಲವರು ಅವರ ಪ್ರಶ್ನೆಗಳನ್ನು ಬೆಂಬಲಿಸಿದರೆ, ಇನ್ನು ಕೆಲವರು ಭಾರತೀಯ ಸಂಪ್ರದಾಯಗಳ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಉದ್ಯಮಿ ವೀರೇಂದ್ರ ಚೌಧರಿ ಜೊತೆ ವಿವಾಹ&lt;/strong&gt;&lt;/h2&gt;&lt;p&gt;'ನೀಲಕಂಠ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದ ನಮಿತಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಹಲವು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ತಮಿಳು ಚಿತ್ರರಂಗದಲ್ಲಿ ನಮಿತಾ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವೇ ಇದೆ. 2017ರಲ್ಲಿ ಉದ್ಯಮಿ ವೀರೇಂದ್ರ ಚೌಧರಿ ಅವರನ್ನು ನಮಿತಾ ವಿವಾಹವಾದರು. ತಮ್ಮ 41ನೇ ಹುಟ್ಟುಹಬ್ಬದಂದು ತಾವು ಗರ್ಭಿಣಿಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದರು. 2022ರ ಆಗಸ್ಟ್&zwnj;ನಲ್ಲಿ ನಮಿತಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.&lt;/p&gt;&lt;p&gt;ಇನ್ನು 2020ರಲ್ಲಿ ಬಿಡುಗಡೆಯಾದ &lsquo;ಮಿಯಾ&rsquo; ಎಂಬ ತಮಿಳು ಸಿನಿಮಾ ನಮಿತಾ ಅಭಿನಯದ ಕೊನೆಯ ಚಿತ್ರ. ಇದೀಗ ಅವರು ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧರಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಮೂಲಕ ಸಾಕಷ್ಟು ಸ್ಲಿಮ್ ಆಗಿರುವ ನಮಿತಾ, ಇನ್&zwnj;ಸ್ಟಾಗ್ರಾಂನಲ್ಲಿ ತಮ್ಮ ಲೇಟೆಸ್ಟ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actress-namitha-viral-comments-on-women-marriage-and-traditional-rules-spark-debate-gvd/articleshow-5m42ywx"/>
        </item>
        <item>
            <title><![CDATA[ಮುಂಗಾರು ವಿದಾಯ ಹೇಳ್ತಿದೆ .. ಮಾನ್ಸೂನ್‌ ಹಿಂತಿರುಗುವ ಪ್ರಕ್ರಿಯೆ ಹೇಗೆ ನಡೆಯುತ್ತೆ?]]></title>
            <link>https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</link>
            <guid isPermaLink="true">https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre</guid>
            <pubDate>Sat, 12 Sep 2026 16:50:47 +0530</pubDate>
            <description><![CDATA[ಮುಂಗಾರು ದುರ್ಬಲಗೊಂಡಿದೆ. ರಾಜ್ಯದಲ್ಲಿ ಮಳೆಯ ಕೊರತೆ ಶುರುವಾಗಿದೆ. ಈ ನಡುವೆ ಮಾನ್ಸೂನ್‌ ಹಿಮ್ಮೆಟ್ಟುವಿಕೆ ಪ್ರಕ್ರಿಯೆ ಶುರುವಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2angecfc9p4cx98my1z1245,imgname-monsoon-1789211982223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಈ ವರ್ಷ ದೇಶದಲ್ಲಿ ಅಂದುಕೊಂಡಷ್ಟು ಮಳೆಯೇ ಆಗಿಲ್ಲ. ಇದರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನ್ನದಾತರು ಕಂಗಾಲಾಗಿದ್ದಾರೆ. ಇದರ ಮಧ್ಯೆ ಮಾನ್ಸೂನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆ ಶುರುವಾಗಿದೆ.. ಕರ್ನಾಟಕದಲ್ಲೂ ಮುಂಗಾರು ದುರ್ಬಲಗೊಂಡಿದ್ದು, ಹವಾಮಾನ ಇಲಾಖೆ ಮಳೆಯ ಬಗ್ಗೆ ಭವಿಷ್ಯ ನುಡಿದಿದೆ.&lt;/p&gt;&lt;p&gt;ಹೌದು, ಸೆಪ್ಟೆಂಬರ್&zwnj; ಅಂತ್ಯದ ಒಳಗಾಗಿ ಮಾನ್ಸೂನ್&zwnj; ಸಂಪೂರ್ಣವಾಗಿ ನಿರ್ಗಮನವಾಗಲಿದೆ. ಮಾನ್ಸೂನ್&zwnj; ಹಿಮ್ಮೆಟ್ಟುವ ವೇಳೆ ಅನೇಕ ರಾಜ್ಯಗಳ ಮೇಲೆ ಸಹಜವಾಗಿಯೇ ಪರಿಣಾಮ ಬೀಳಲಿದೆ. ಗಾಳಿಯ ದಿಕ್ಕು ಬದಲಾಗುತ್ತದೆ. ತೇವಾಂಶವುಳ್ಳ ಗಾಳಿಯು ಒಂದು ನಿರ್ದಿಷ್ಟ ಪ್ರದೇಶದ ಕಡೆಗೆ ಹಿಂತಿರುಗುತ್ತದೆ. ಇದರಿಂದ ಭಾರೀ ಮಳೆಯಾದರೂ ಅಚ್ಚರಿ ಇಲ್ಲ. ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ತಮಿಳುನಾಡಿನಲ್ಲಿ ಮಳೆ ಬೀಳಲಿದೆ. ವಿಶೇಷ ಅಂದ್ರೆ ಈ ಬಾರಿಯ ಮಾನ್ಸೂನ್&zwnj; ಆರ್ಭಟದಿಂದ ಆಗಮಿಸಿತ್ತು. ಆದರೆ ಹೋಗುವಾಗ ಶಾಂತ ಮತ್ತು ನಿಧಾನವಾಗಿ ಹೋಗಲಿದೆ. ಇನ್ನು, ಈ ಮಾನ್ಸುನ್&zwnj; ಹಿಮ್ಮೆಟ್ಟುವ ಪ್ರಕ್ರಿಯೆಯು ಅಕ್ಟೋಬರ್&zwnj; ಮತ್ತು ನವೆಂಬರ್&zwnj;ನಲ್ಲಿ ಉತ್ತಮ ಮಳೆಗೆ ಅವಕಾಶ ಮಾಡಿಕೊಡಲಿದೆ.&lt;/p&gt;&lt;h2&gt;&lt;strong&gt;ಯಾವಾಗಿಂದ?&lt;/strong&gt;&lt;/h2&gt;&lt;p&gt;ಯಾವಾಗಲೂ ದೇಶದ ವಾಯುವ್ಯ ತುದಿಯಲ್ಲಿ ಮಾನ್ಸೂನ್ ನಿರ್ಗಮನ ಪ್ರಾರಂಭವಾಗುತ್ತದೆ. ಪಶ್ಚಿಮ ರಾಜಸ್ಥಾನ ಮತ್ತು ಕಚ್&zwnj;ನಿಂದ ಶುರುವಾಗುತ್ತದೆ. ಹವಾಮಾನ ಇಲಾಖೆಯ ನಿಯಮಗಳ ಪ್ರಕಾರ.. ಸೆಪ್ಟೆಂಬರ್ 1 ರ ಮೊದಲು ದೇಶದ ಯಾವುದೇ ಭಾಗದಿಂದ ಮಾನ್ಸೂನ್ ಹಿಂತೆಗೆತ ಪ್ರಾರಂಭಿಸುವುದಿಲ್ಲ. ಒಂದು ಪ್ರದೇಶದಲ್ಲಿ ಸತತ ಐದು ದಿನಗಳವರೆಗೆ ಮಳೆಯಾಗದಿದ್ದರೆ.. ಗಾಳಿಯ ಒತ್ತಡ ಬದಲಾದರೆ ಮತ್ತು ಆರ್ದ್ರತೆಯ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದರೆ.. ಹವಾಮಾನ ಇಲಾಖೆಯು ಆ ಪ್ರದೇಶದಿಂದ ಮಾನ್ಸೂನ್ ಹಿಂತೆಗೆತ ಎಂದು ಪರಿಗಣಿಸುತ್ತದೆ.&lt;/p&gt;&lt;p&gt;ರಾಜಸ್ಥಾನ ಮತ್ತು ಕಚ್&zwnj;ನಿಂದ ನಿರ್ಗಮಿಸಿದ ನಂತರ ಮಾನ್ಸೂನ್ ಕ್ರಮೇಣ ಪಂಜಾಬ್, ಹರಿಯಾಣ, ದೆಹಲಿ ಮತ್ತು ಗುಜರಾತ್&zwnj;ನ ಉಳಿದ ಭಾಗಗಳಿಂದ ಹಿಮ್ಮೆಟ್ಟುತ್ತದೆ. ನಂತರ ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ ಚಲಿಸುತ್ತದೆ. ಅದು ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಿಂದ ತನ್ನ ಹಿಮ್ಮೆಟ್ಟುವಿಕೆಯನ್ನ ಪ್ರಾರಂಭಿಸುತ್ತದೆ.&lt;/p&gt;&lt;p&gt;ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಿಂದ ಕೊನೆಯದಾಗಿ ಹೊರಡುತ್ತದೆ. ಇದರರ್ಥ ಅದು ಬಂದ ಮಾರ್ಗಕ್ಕೆ ವಿರುದ್ಧವಾದ ಮಾರ್ಗವನ್ನು ಅನುಸರಿಸಿ ದೇಶವನ್ನು ಬಿಡುತ್ತದೆ. ಮಾನ್ಸೂನ್ ಇಡೀ ದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಸಾಮಾನ್ಯವಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ..&lt;/p&gt;&lt;h2&gt;&lt;strong&gt;ರಾಜ್ಯದ ಇವತ್ತಿನ ಮಳೆ ಪರಿಸ್ಥಿತಿ ಹೇಗಿದೆ?&lt;/strong&gt;&lt;/h2&gt;&lt;p&gt;ಕರ್ನಾಟಕದಲ್ಲಿ ಮುಂಗಾರು ಸಂಪೂರ್ಣ ದುರ್ಬಲಗೊಂಡಿದೆ. ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರವಾಗಿ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ. ಸೆಪ್ಟೆಂಬರ್&zwnj; 13 ರಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ. ಇನ್ನು ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿಯಲ್ಲೂ ಮಳೆ ಬೀಳುವ ಸೂಚನೆ ನೀಡಲಾಗಿದೆ. ಇನ್ನು ದಕ್ಷಿಣ ಒಳನಾಡಿನಲ್ಲಿ ಮೈಸೂರು, ಚಾಮರಾಜನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಒಂದೆರಡು ಭಾಗಗಳಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/the-monsoon-is-bidding-farewell-how-does-the-monsoon-withdrawal-process-take-place-gkn/articleshow-krwpmre"/>
        </item>
        <item>
            <title><![CDATA['ನಿಮ್ಮ ಪೌರುಷ ಇಲ್ಲಿ ತೋರಿಸಿ', ಗಣೇಶ ಮೆರವಣಿಗೆ ಮಸೀದಿ ಮುಂದೆ ಹೋಗಬಾರ್ದು ಎಂದ ಇನ್ಸ್‌ಪೆಕ್ಟರ್‌ಗೆ ಪ್ರತಾಪ್ ಸಿಂಹ ಕಿಡಿ]]></title>
            <link>https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd</link>
            <guid isPermaLink="true">https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd</guid>
            <pubDate>Sat, 12 Sep 2026 16:46:31 +0530</pubDate>
            <description><![CDATA[ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಯು ಮಸೀದಿ ಮುಂಭಾಗ ಸಾಗಬಾರದು ಮತ್ತು ಪಟಾಕಿ ಸಿಡಿಸಬಾರದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಖಂಡಿಸಿರುವ ಸಂಸದ ಯದುವೀರ್ ಒಡೆಯರ್ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ದೊಡ್ಡ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2am6d0608jzj0a9y2vnqfr6,imgname-pratap-simha-1789210604550.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಜಿಲ್ಲೆ ಟಿ.ನರಸೀಪುರದ ಗಣೇಶೋತ್ಸವ ಮೆರವಣಿಗೆ ವಿಚಾರ ಇದೀಗ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಲಿಂಕ್ ರಸ್ತೆಯಲ್ಲಿ, ಮಸೀದಿ ಮುಂಭಾಗ ಮೆರವಣಿಗೆ ಹೋಗಬಾರದು ಹಾಗೂ ಪಟಾಕಿ ಸಿಡಿಸಬಾರದು ಎಂದು ಇನ್&zwnj;ಸ್ಪೆಕ್ಟರ್ ಧನಂಜಯ ನೀಡಿದ್ದ ಎಚ್ಚರಿಕೆ ವಿಡಿಯೋ ವೈರಲ್ ಆಗಿದೆ. ಅಧಿಕಾರಿ ಧಮ್ಕಿ ಬೆನ್ನಲ್ಲೇ ಬಿಜೆಪಿ ನಾಯಕರು ಸಿಡಿದಿದ್ದು, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h2&gt;ಟಿ.ನರಸೀಪುರ ಗಣೇಶೋತ್ಸವ&lt;/h2&gt;&lt;p&gt;ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್&zwnj;ಸ್ಪೆಕ್ಟರ್ ಧನಂಜಯ ಆಡಿದ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ನಾವು ಸೂಚಿಸಿದ ಮಾರ್ಗದಲ್ಲೇ ಮೆರವಣಿಗೆ ಸಾಗಬೇಕು. ಮಸೀದಿ ಮುಂಭಾಗ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಸಾರ್ವಜನಿಕ ಸಭೆಯಲ್ಲಿ ಅಧಿಕಾರಿ ಈ ರೀತಿ ಏಕವಚನ ಹಾಗೂ ಹದ್ದುಮೀರಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;p&gt;ಪೊಲೀಸ್ ಅಧಿಕಾರಿಯ ನಡೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಹಿಂದೂಗಳ ಹಬ್ಬಗಳಿಗೆ ನಿರಂತರವಾಗಿ ಕಠಿಣ ಷರತ್ತುಗಳನ್ನು ಹೇರುತ್ತಿದೆ. ದೇವಸ್ಥಾನ ಅಥವಾ ಮಸೀದಿ ಇದೆ ಎಂದು ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ನಿರ್ಬಂಧಿಸುವುದು ತಪ್ಪು. ಸರ್ಕಾರವೇ ಸಾರ್ವಜನಿಕರಲ್ಲಿ ಭೇದಭಾವ ಹುಟ್ಟುಹಾಕುತ್ತಿದೆ ಎಂದು ಕಿಡಿಕಾರಿದ್ದಾರೆ.&lt;/p&gt;&lt;h2&gt;ಅಧಿಕಾರಿಯ ಎಚ್ಚರಿಕೆಯಿಂದ ರಾಜಕೀಯ ಕಿಡಿ&lt;/h2&gt;&lt;p&gt;ಇನ್ನೊಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹ ಇನ್&zwnj;ಸ್ಪೆಕ್ಟರ್ ಧನಂಜಯ ವಿರುದ್ಧ ಬೆಂಕಿ ಉಗುಳಿದ್ದಾರೆ. ಬ್ರಿಟಿಷರ ಕಾಲದ ದರ್ಪವನ್ನು ಪೊಲೀಸರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಲಿ. ಯುವಕರಿಗೆ ಧಮ್ಕಿ ಹಾಕಲು ನೀವ್ಯಾರು? ಇನ್ನೊಮ್ಮೆ ಈ ರೀತಿ ಮಾತನಾಡಿದರೆ ನಾನೇ ನೇರವಾಗಿ ಠಾಣೆಗೆ ನುಗ್ಗುತ್ತೇನೆ. ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೂಗುವ ಕೂಗಿಗೆ ಇಲ್ಲದ ನಿಯಮ, ಹಿಂದೂಗಳ ಹಬ್ಬಕ್ಕೆ ಮಾತ್ರ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.&lt;/p&gt;&lt;p&gt;ಮತ್ತೊಂದೆಡೆ ಸ್ಥಳೀಯ ಬಿಜೆಪಿ ಮುಖಂಡ ಅರ್ಜುನ್ ರಮೇಶ್ ಕೂಡ ಆಡಳಿತ ವರ್ಗದ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಟಿ.ನರಸೀಪುರದ ಇತಿಹಾಸದಲ್ಲೇ ಕೋಮು ಗಲಭೆಯಾಗಿಲ್ಲ. ಲಿಂಕ್ ರಸ್ತೆಯನ್ನು ಬೇಕೆಂದೇ ಮಸೀದಿ ರಸ್ತೆ ಎಂದು ಬಿಂಬಿಸಿ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಿಟ್ಲರ್ ನೀತಿಯನ್ನು ಜನರ ಮೇಲೆ ಹೇರಲು ಮುಂದಾದರೆ. ಲಿಂಕ್ ರಸ್ತೆಯಲ್ಲೇ ಸಾಮೂಹಿಕ ಗಣೇಶ ವಿಸರ್ಜನೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;p&gt;​ಒಟ್ಟಾರೆ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿ ಬಳಸಿದ ಭಾಷೆ ಹಬ್ಬಕ್ಕೂ ಮುನ್ನವೇ ತಾಲೂಕಿನಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದ್ದು, ಪರಿಸ್ಥಿತಿ ಸೂಕ್ಷ್ಮ ಹಂತಕ್ಕೆ ತಲುಪಿದೆ.&lt;strong&gt; (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&amp;nbsp;&lt;/strong&gt;&lt;/p&gt;&lt;p&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/prathap-simha-lashes-out-at-inspector-who-said-ganesha-procession-should-not-pass-in-front-of-mosque-sns/articleshow-ci1hlqd"/>
        </item>
        <item>
            <title><![CDATA[ಸೊಳ್ಳೆಗಳನ್ನು ಓಡಿಸಲು ಅಗರಬತ್ತಿ ಬಳಸ್ತೀರಾ? ಆರೋಗ್ಯಕ್ಕೆ ಅಲ್ಲ, ನಿಮ್ಮ ಜೀವಕ್ಕೆ ಮಾರಕವಾಗಬಹುದು ಎಚ್ಚರ!]]></title>
            <link>https://kannada.asianetnews.com/health-life/do-not-buy-or-use-mosquito-incense-sticks-at-home-which-cause-health-issues/articleshow-pa0h2pt</link>
            <guid isPermaLink="true">https://kannada.asianetnews.com/health-life/do-not-buy-or-use-mosquito-incense-sticks-at-home-which-cause-health-issues/articleshow-pa0h2pt</guid>
            <pubDate>Sat, 12 Sep 2026 16:27:26 +0530</pubDate>
            <description><![CDATA[Health Tips: ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರಮಾಣೀಕರಿಸದ ಸೊಳ್ಳೆ ನಿವಾರಕ ಅಗರಬತ್ತಿಗಳು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಬಲ್ಲವು ಎಂಬ ವಿಷಯವನ್ನು ಸ್ವತಃ ವೈದ್ಯರೇ ಎತ್ತಿ ಹೇಳಿದ್ದಾರೆ. ಇವುಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದರಿಂದ, ಅಂತಹ ಅಗರಬತ್ತಿಗಳನ್ನು ಬಳಕೆ ಮಾಡುವ ಮುನ್ನ ಎಚ್ಚರ ವಹಿಸೋದು ಮುಖ್ಯ.]]></description>
            <media:content url="https://static.asianetnews.com/images/w-1280,h-720,format-jpg,imgid-01m2am7hb227j8pe93vkz5tsmf,imgname-mosquito-coil-1789210641761.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸೊಳ್ಳೆಗಳನ್ನು ಓಡಿಸಲು ಅಗರಬತ್ತಿ ಬಳಸುತ್ತಿದ್ದೀರಾ?&lt;/strong&gt;&lt;/h2&gt;&lt;p&gt;ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು ಸೊಳ್ಳೆಯ ಕಾಟದಿಂದ ತಮ್ಮ, ರಕ್ಷಣೆಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೊಳ್ಳೆ ನಿವಾರಕ ಧೂಪದ ಕಡ್ಡಿಗಳನ್ನು (incense sticks) ಹಲವರು ಬಳಸುತ್ತಾರೆ. ಇದರಿಂದ ಸೊಳ್ಳೆಗಳು ಬೇಗನೆ ಓಡಿ ಹೋಗುತ್ತವೆ ಅನ್ನೋದೇನೋ ನಿಜ. ನೀವು ಈ ಅಗರಬತ್ತಿಗಳನ್ನು ಬಳಸುತ್ತಿದ್ದರೆ, ಒಮ್ಮೆ ನಿಂತು ಮರುಪರಿಶೀಲಿಸುವುದು ಅಗತ್ಯ. ಯಾಕಂದ್ರೆ ಇವು ನಿಮ್ಮ ಆರೋಗ್ಯ ಅಥವಾ ಜೀವಕ್ಕೆ ಗಂಭೀರ ಅಪಾಯವನ್ನು ಉಂಟುಮಾಡಬಲ್ಲವು ಎಂಬ ಕಾರಣಕ್ಕೆ, ಇಂತಹ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವುಗಳ ಗುಣಮಟ್ಟ ಮತ್ತು ಅಧಿಕೃತತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.&lt;/p&gt;&lt;h3&gt;&lt;strong&gt;ಅಗರಬತ್ತಿಗಳು ಶ್ವಾಸಕೋಶದ ಆರೋಗ್ಯಕ್ಕೆ ಹಾನಿಕಾರಕ&lt;/strong&gt;&lt;/h3&gt;&lt;p&gt;ವಿವಿಧ ಹಾನಿಕಾರಕ ರಾಸಾಯನಿಕಗಳ ಉಪಸ್ಥಿತಿಯಿಂದಾಗಿ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾದ ನಕಲಿ ಅಗರಬತ್ತಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ ಎಂಬ ವರದಿಗಳು ಬಂದಿವೆ. ಹಾನಿಕಾರಕ ಕೆಮಿಕಲ್ ಗಳಿಂದಾಗಿ ಇಂತಹ ಅಗರಬತ್ತಿಗಳು ಸೊಳ್ಳೆಯನೇನೋ ಓಡಿಸುತ್ತವೆ. ಆದರೆ ಅದರ ಜೊತೆಗೆ ನಿಮ್ಮ ಶ್ವಾಸಕೋಶಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದ ಹಲವೆಡೆ ಅಂಗಡಿದಾರರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರಿಗೆ ಎಚ್ಚರಿಕೆ ನೀಡಲು ನಿರಂತರವಾಗಿ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇಂತಹ ಅಗರಬತ್ತಿಗಳನ್ನು ಹೊಂದಿರುವವರ ವಿರುದ್ಧ ನಿಯಮಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ನೀವು ಅಗರಬತ್ತಿ ಖರೀದಿಸುವ ಮುನ್ನ ಎಚ್ಚರ ವಹಿಸುವುದು ಮುಖ್ಯ.&lt;/p&gt;&lt;p&gt;&lt;strong&gt;ಈ ಅಂಶಗಳ ಬಗ್ಗೆ ವಿಶೇಷ ಗಮನಹರಿಸಿ&lt;/strong&gt;&lt;/p&gt;&lt;p&gt;ನೀವು ಮನೆಯಲ್ಲಿ ಧೂಪದ ಕಡ್ಡಿಗಳನ್ನು (incense sticks) ಬಳಸುವುದಾದರೆ, ಅವು ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣೀಕೃತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಆಗಾಗ್ಗೆ ನಾವು ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಧೂಪದ ಕಡ್ಡಿಗಳನ್ನು ಖರೀದಿಸುವ ಸಾಧ್ಯತೆಯಿರುತ್ತದೆ. ಅಲ್ಲದೆ, ಯಾವುದೇ ನಿರ್ದಿಷ್ಟ ಧೂಪದ ಕಡ್ಡಿಯಿಂದ ನಿಮಗೆ ಉಸಿರಾಟದ ತೊಂದರೆ ಉಂಟಾದರೆ, ಅದನ್ನು ಬಳಸಬೇಡಿ. ಅಗರಬತ್ತಿಯಿಂದ ಉಸಿರಾಟದ ಸಮಸ್ಯೆಗಳು ಉಂಟಾದಲ್ಲಿ, ಅದು ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.&lt;/p&gt;]]></content:encoded>
            <category><![CDATA[health-life]]></category>
            <dc:creator>Pavna Das</dc:creator>
            <atom:link href="https://kannada.asianetnews.com/health-life/do-not-buy-or-use-mosquito-incense-sticks-at-home-which-cause-health-issues/articleshow-pa0h2pt"/>
        </item>
        <item>
            <title><![CDATA[Bengaluru ಪರಪ್ಪನ ಅಗ್ರಹಾರದಲ್ಲಿ ಭಾರೀ ಸ್ಕ್ಯಾಮ್: ಸುಪ್ರೀಂ ಆದೇಶವೇ ನಕಲಿ, ಬಿಡುಗಡೆಯಾಗಿದ್ದ ಅಪರಾಧಿ ಮತ್ತೆ ಲಾಕ್!]]></title>
            <link>https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm</link>
            <guid isPermaLink="true">https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm</guid>
            <pubDate>Sat, 12 Sep 2026 16:27:22 +0530</pubDate>
            <description><![CDATA[ಸುಪ್ರೀಂ ಕೋರ್ಟ್‌ನ ನಕಲಿ ಆದೇಶವನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪಾಯಕಾರಿ ಕೈದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಅಕ್ರಮವಾಗಿ ಬಿಡುಗಡೆಗೊಳಿಸಿದ ಬೃಹತ್ ಜಾಲವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲಿನ ಪ್ರಥಮ ದರ್ಜೆ ಸಹಾಯಕ ಮತ್ತು ಬಿಡುಗಡೆಯಾಗಿದ್ದ ಕೈದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0w4ca6ctjah6wx6nwyqbcds,imgname-supreme-court-tmc-rebel-mps-abhishek-banerjee-disqualification-petition-om-birla-notice-1787650517196.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು; ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್&zwnj; ಹೆಸರಲ್ಲೇ ನಕಲಿ ಆದೇಶ ಪ್ರತಿಯನ್ನು ಸೃಷ್ಟಿಸಿ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪಾಯಕಾರಿ ಅಪರಾಧಿಯೊಬ್ಬನನ್ನು ಜೈಲಿನಿಂದ ಅಕ್ರಮವಾಗಿ ಬಿಡುಗಡೆಗೊಳಿಸಿದ್ದ ಅತಿ ದೊಡ್ಡ ಅಕ್ರಮ ಜಾಲವೊಂದು ಬೆಂಗಳೂರಿನಲ್ಲಿ ಬಯಲಿಗೆ ಬಂದಿದೆ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನೇ ಫೋರ್ಜರಿ ಮಾಡಿ 2018ರಲ್ಲಿ ಕೈದಿಯನ್ನು ಬಿಡುಗಡೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರು ಕೇಂದ್ರ ಕಾರಾಗೃಹದ (ಪರಪ್ಪನ ಅಗ್ರಹಾರ) ಪ್ರಸ್ತುತ ಪ್ರಥಮ ದರ್ಜೆ ಸಹಾಯಕ (ಎಫ್&zwnj;ಡಿಎ) ಹಾಗೂ ಬಿಡುಗಡೆಯಾಗಿದ್ದ ಜೀವಾವಧಿ ಕೈದಿ ಸೇರಿದಂತೆ ಇಬ್ಬರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಬಂಧಿತ ಸಿಬ್ಬಂದಿ ಯಾರು?&lt;/strong&gt;&lt;/h2&gt;&lt;p&gt;ಬಂಧಿತ ಆರೋಪಿಗಳನ್ನು ಅಪಹರಣ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್ ಎ. ಹಾಗೂ ಅಪರಾಧ ಎಸಗಿದ ಸಮಯದಲ್ಲಿ ಜೈಲಿನ ಅಪರಾಧಿ ವಿಭಾಗದಲ್ಲಿ ಎರಡನೇ ದರ್ಜೆ ಸಹಾಯಕನಾಗಿ (ಎಸ್&zwnj;ಡಿಎ) ಕಾರ್ಯನಿರ್ವಹಿಸುತ್ತಿದ್ದ, ಪ್ರಸ್ತುತ ಎಫ್&zwnj;ಡಿಎ ಆಗಿರುವ ಶ್ರೀಕಾಂತ್ ಎಸ್. ಎಂದು ಗುರುತಿಸಲಾಗಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ಮೇಲ್ಮನವಿ!&lt;/strong&gt;&lt;/h3&gt;&lt;p&gt;ಬೆಂಗಳೂರಿನ ಮೂಲ ನ್ಯಾಯಾಲಯವೊಂದು 2004ರ ಜುಲೈ 12ರಂದು ಅಪಹರಣ ಪ್ರಕರಣದಲ್ಲಿ ಶಂಕರ್ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ರೂಪಾಯಿ ದಂಡ ವಿಧಿಸಿ ಆದೇಶಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಶಂಕರ್ ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದನು. ಆದರೆ, ಅಪರಾಧದ ತೀವ್ರತೆಯನ್ನು ಪರಿಗಣಿಸಿದ್ದ ಉಭಯ ನ್ಯಾಯಾಲಯಗಳು ಆತನ ಮೇಲ್ಮನವಿಗಳನ್ನು ವಜಾಗೊಳಿಸಿ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನೇ ಎತ್ತಿಹಿಡಿದಿದ್ದವು.&lt;/p&gt;&lt;h3&gt;&lt;strong&gt;ನಕಲಿ ದಾಖಲೆ ಸೃಷ್ಟಿ ಮತ್ತು ರಿಲೀಸ್ ಹೈಡ್ರಾಮಾ!&lt;/strong&gt;&lt;/h3&gt;&lt;p&gt;ತನ್ನ ಎಲ್ಲಾ ಕಾನೂನು ಹೋರಾಟಗಳು ವಿಫಲಗೊಂಡಾಗ, ಜೈಲು ಸಿಬ್ಬಂದಿ ಶ್ರೀಕಾಂತ್ ಜೊತೆಗೂಡಿದ ಕೈದಿ ಶಂಕರ್ ಭಾರಿ ಸಂಚು ರೂಪಿಸಿದ್ದ. ಶ್ರೀಕಾಂತ್ ತನ್ನ ಅಧಿಕಾರ ಹಾಗೂ ಜೈಲಿನ ಕೆಲಸದ ಪ್ರಭಾವ ಬಳಸಿ ಸುಪ್ರೀಂ ಕೋರ್ಟ್&zwnj;ನ ಕ್ರಿಮಿನಲ್ ಮೇಲ್ಮನವಿ ಆದೇಶದ ಪ್ರತಿಯನ್ನೇ ನಕಲಿಯಾಗಿ ಸೃಷ್ಟಿಸಿದ್ದನು. 2018ರ ನವೆಂಬರ್ 2ರಂದು ಸುಪ್ರೀಂ ಕೋರ್ಟ್ ಶಂಕರ್&zwnj;ನನ್ನು ಶಿಕ್ಷೆಯಿಂದ ಬಿಡುಗಡೆ ಮಾಡಲು ನಿರ್ದೇಶಿಸಿದೆ ಎಂದು ಬಿಂಬಿಸುವ ಹುಸಿ ದಾಖಲೆಯನ್ನು ತಯಾರಿಸಲಾಗಿತ್ತು. ಈ ನಕಲಿ ದಾಖಲೆಯನ್ನು ನಿಜವೆಂದು ನಂಬಿದ ಜೈಲಿನ ಮೇಲಾಧಿಕಾರಿಗಳು 2018ರ ನವೆಂಬರ್ 13ರಂದು ಶಂಕರ್&zwnj;ನನ್ನು ಕಾರಾಗೃಹದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದ್ದರು.&lt;/p&gt;&lt;h3&gt;&lt;strong&gt;ಬೆಳಕಿಗೆ ಬಂದ ಭಾರಿ ವಂಚನೆ; ಜೈಲು ಪಾಲು!&lt;/strong&gt;&lt;/h3&gt;&lt;p&gt;ವರ್ಷಗಳ ಕಾಲ ರಹಸ್ಯವಾಗಿದ್ದ ಈ ಭಾರಿ ಅಕ್ರಮ ಮತ್ತು ವಂಚನೆಯ ಜಾಲವು ಇತ್ತೀಚೆಗೆ ಕಾರಾಗೃಹದ ಆಡಳಿತ ಮಂಡಳಿಯ ಮರುಪರಿಶೀಲನೆ ವೇಳೆ ಅನುಮಾನಕ್ಕೆ ಕಾರಣವಾಗಿತ್ತು. ತನಿಖೆ ನಡೆಸಿದಾಗ ಸುಪ್ರೀಂ ಕೋರ್ಟ್ ಅಂತಹ ಯಾವುದೇ ಬಿಡುಗಡೆ ಆದೇಶ ನೀಡಿರಲಿಲ್ಲ ಎಂಬ ಕಹಿ ಸತ್ಯ ಹೊರಬಿದ್ದಿದೆ. ಈ ಸಂಬಂಧ ಬೆಂಗಳೂರು ಕೇಂದ್ರ ಕಾರಾಗೃಹದ ಪ್ರಭಾರಿ ಸೂಪರಿಂಟೆಂಡೆಂಟ್ ಅವರು 2026ರ ಮೇ 20ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಪ್ರಕರಣ ದಾಖಲಿಸಿಕೊಂಡ ಪೊಲೀಸರು!&lt;/strong&gt;&lt;/h3&gt;&lt;p&gt;ಪ್ರಕರಣ ದಾಖಲಿಸಿಕೊಂಡ ಪೊಲೀಸರು ತೀವ್ರ ತನಿಖೆ ನಡೆಸಿ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಜುಲೈ 9, 2026ರಂದು ಕೈದಿ ಶಂಕರ್&zwnj;ನನ್ನು ಪೊಲೀಸ್ ಕಸ್ಟಡಿಗೆ ಪಡೆದು 12 ದಿನಗಳ ಕಾಲ ವಿಚಾರಣೆ ನಡೆಸಿದ ನಂತರ, ಜುಲೈ 21 ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಂದೆಡೆ, ಈ ನಕಲಿ ಜಾಲದ ರೂವಾರಿ ಜೈಲು ಸಿಬ್ಬಂದಿ ಶ್ರೀಕಾಂತ್&zwnj;ನನ್ನು ಜುಲೈ 17 ರಂದು ವಶಕ್ಕೆ ಪಡೆದ ಪೊಲೀಸರು 10 ದಿನಗಳ ಕಸ್ಟಡಿ ವಿಚಾರಣೆ ಮುಗಿಸಿ, ಜುಲೈ 27 ರಂದು ನ್ಯಾಯಾಂಗ ಬಂಧನಕ್ಕೆ ರವಾನಿಸಿದ್ದಾರೆ. ಕಾರಾಗೃಹದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಂಡು ಸುಪ್ರೀಂ ಕೋರ್ಟ್ ಹೆಸರಲ್ಲೇ ಫೋರ್ಜರಿ ನಡೆಸಿದ ಈ ಘಟನೆ ಈಗ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/bengaluru-urban/bengaluru-fake-court-order-forged-document-life-convict-illegal-release-parappana-agrahara-jail-prison-staff-arrest-bmk/articleshow-rrbrggm"/>
        </item>
        <item>
            <title><![CDATA[ಭಾರತದಲ್ಲಿ ಚೀನಾ ಅಧ್ಯಕ್ಷರ 24 ಗಂಟೆ, ಭದ್ರತಾ ಪಡೆ ಸೇರಿ 15 ಸಾವಿರ ಅಧಿಕಾರಿಗಳು, 50ಕ್ಕೂ ಹೆಚ್ಚು ಕಾರು]]></title>
            <link>https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn</link>
            <guid isPermaLink="true">https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn</guid>
            <pubDate>Sat, 12 Sep 2026 16:23:13 +0530</pubDate>
            <description><![CDATA[ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ 24 ಗಂಟೆ ಭಾರತದಲ್ಲಿ ಇರಲಿದ್ದಾರೆ. ಚೀನಾ ಅಧ್ಯಕ್ಷರಿಗೆ ಭದ್ರತಾ ಪಡೆ, ಅಧಿಕಾರಿಗಳು ಸೇರಿದಂತೆ 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಪ್ರಯಾಣಿಸುವ ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು ಕೂಡ ತಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a9x1e621hcre6f6crg1hv8,imgname-20260912083l-1789199812038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.12) &lt;/strong&gt;ವಿಶ್ವವೇ ಇದೀಗ ಭಾರತದಲ್ಲಿ ನೋಡುತ್ತಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಮುಖ ನಾಯಕರು ಪಾಲ್ಗೊಂಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಸೇರಿದಂತೆ ಹಲವು ಗಣ್ಯರು ಭಾರತದಲ್ಲಿದ್ದಾರೆ. ಈ ಪೈಕಿ ಪುಟಿನ್ ಹಾಗೂ ಕ್ಸಿ ಜಿನ್&zwnj;ಪಿಂಗ್ ಭದ್ರತೆ ಎಲ್ಲರಿಗಂತ ಭಿನ್ನ. ಈ ಬಾರಿ ಕ್ಸಿ ಜಿನ್&zwnj;&zwj;ಪಿಂಗ್ ಭಾರತ ಬೇಟಿಯಲ್ಲಿ 24 ಗಂಟೆ ಕಳೆಯಲಿದ್ದಾರೆ. ಇದಕ್ಕಾಗಿ ಚೀನಾದಿಂದ ಭದ್ರತಾ ಪಡೆಗಳು, ಅಧಿಕಾರಿಗಳು ಆಗಮಿಸಿದ್ದಾರೆ. ಚೀನಾ ಅಧ್ಯಕ್ಷರಿಗೆ ಒಟ್ಟು 15 ಸಾವಿರ ಮಂದಿ ನಿಯೋಜಿಸಲಾಗಿದೆ. ಇನ್ನು ಕ್ಸಿ ಜಿನ್&zwnj;ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರನ್ನು ಚೀನಾದಿಂದಲೇ ತಂದಿದ್ದಾರೆ. ಜಿನ್&zwnj;ಪಿಂಗ್ ಭದ್ರತೆ ಹಾಗೂ ಅಧಿಕಾರಿಗಳ ಬಳಗವೇ ಭಾರಿ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;&lt;h2&gt;ಕ್ಸಿ ಜಿನ್&zwnj;ಪಿಂಗ್&zwnj;ಗೆ ಹಲವು ಸ್ತರದ ಭದ್ರತೆ&lt;/h2&gt;&lt;p&gt;ಕ್ಸಿ ಜಿನ್&zwnj;ಪಿಂಗ್ ಚೀನಾ ಏರ್ ವಿಮಾನ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಹಲವು ಎಜೆನ್ಸಿಗಳು ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಂಡ ನಾಯಕರಿಗೆ ಭದ್ರತೆ ನೀಡುತ್ತಿದೆ. ದೆಹಲಿ ಪೊಲೀಸ್, ಎನ್&zwnj;ಎಸ್&zwnj;ಜಿ ಕಮಾಂಡೋ, ಪ್ಯಾರಾ ಮಿಲಿಟರಿ ಸೇರಿದಂತೆ ಹಲವು ಎಜೆನ್ಸಿಗಳಿಂದ ಭಾರಿ ಭದ್ರತೆ ನೀಡುತ್ತಿದೆ. ಇದರ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಭದ್ರತಾ ಪಡೆಗಳು ಭಾರತಕ್ಕೆ ಆಗಮಿಸಿದ್ದಾರೆ. ಚೀನಾ ಭದ್ರತಾ ಪಡೆಗಳು, ಭದ್ರತಾ ಎಜೆನ್ಸಿ ಅಧಿಕಾರಿಗಳು, ರಾಜತಾಂತ್ರಿಕ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಬರೋಬ್ಬರಿ 15 ಸಾವಿರ ಮಂದಿ ಇದ್ದಾರೆ.&lt;/p&gt;&lt;h2&gt;ಲಿಮೋಸಿನ್ ಸೇರಿ 50ಕ್ಕೂ ಹೆಚ್ಚು ಕಾರು&lt;/h2&gt;&lt;p&gt;ಚೀನಾ ಅಧ್ಯಕ್ಷರು ಪ್ರಯಾಣಿಸುವ ಅತೀ ಸುರಕ್ಷತೆ ಹಾಗೂ ಭದ್ರತೆಯ ಲಿಮೋಸಿನ್ ಕಾರನ್ನು ಚೀನಾದಿಂದಲೇ ತರಿಸಿಕೊಳ್ಳಲಾಗಿದೆ. ವಿಶೇಷ ಅಂದರೆ ಕ್ಸಿ ಜಿನ್&zwnj;ಪಿಂಗ್ ಪ್ರಯಾಣಿಸುವ ಲಿಮೋಸಿನ್ ಕಾರು ಭಾರತಕ್ಕೆ 10 ದಿನಗಳ ಮೊದಲೇ ಆಗಮಿಸಿದೆ. ಇದರ ಜೊತೆಗೆ ಬೆಂಗಾವಲು ಪಡೆ ಕಾರು ಸೇರಿದಂತೆ 50ಕ್ಕೂ ಹೆಚ್ಚು ಕಾರು ಭಾರತಕ್ಕೆ ಆಗಮಿಸಿದೆ. ಇದರ ಜೊತೆಗೆ ಭಾರತದ ಭದ್ರತಾ ಪಡೆಗಳ ಕಾರು ಇರಲಿದೆ.&lt;/p&gt;&lt;p&gt;ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;ಗೆ ಚಾಣಾಕ್ಯಪುರಿಯ ಲಕ್ಷುರಿ ಹೊಟೆಲ್&zwnj;ನಲ್ಲಿ ತಂಗಲಿದ್ದಾರೆ. ಕ್ಸಿ ಜಿನ್&zwnj;ಪಿಂಗ್&zwnj;ಗೆ ಪ್ರತ್ಯೇಕ ಹೊಟೆಲ್ ವ್ಯವಸ್ಥೆ ಮಾಡಿದ್ದಾರೆ. ಹೊಟೆಲ್ ಸುತ್ತಲೂ ಭದ್ರತಾ ಪಡೆಗಳಿವೆ. ಇನ್ನು ಪ್ರತಿ ಚಲನವಲನಗಳನ್ನು ಕೂಡ ಪರಿಶೀಲಿಸಲಾಗುತ್ತದೆ. ಪ್ರತಿ ರಸ್ತೆ, ಹೊಟೆಲ್, ಶೃಂಗಸಭೆ ಸ್ಥಳ ಸೇರಿದಂತೆ ಎಲ್ಲೆಡೆ ಭದ್ರತೆ ನಿಯೋಜನೆ ಮಾಡಲಾಗಿದೆ. 700ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ, ಡ್ರೋನ್&zwnj;ಗಳ ಮೂಲಕ ಭದ್ರತಾ ಪಡೆಗಳು ಕಣ್ಗಾವಲು ಇಟ್ಟಿದ್ದಾರೆ. ಕಂಟ್ರೋಲ್ ರೂಂ ಮೂಕ ಎಲ್ಲವನ್ನು ಪರಿಶೀಲಿಸಲಾಗುತ್ತದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/brics-china-president-24-hours-in-india-15000-officials-security-forces-and-50-puls-cars/articleshow-iaa93hn"/>
        </item>
        <item>
            <title><![CDATA[ಮಾಸ್‌ ಹಾಡುಗಳು, ಜಾನಪದ ಸೊಗಡು.. ಸಿನಿಮಾ ಪ್ರಿಯರಿಗೆ ಕಿಕ್‌ ಎಂದಿದ್ಯಾಕೆ ದುನಿಯಾ ವಿಜಯ್‌!]]></title>
            <link>https://kannada.asianetnews.com/sandalwood/kannada-actor-duniya-vijay-s-city-lights-five-songs-win-appreciation-alak-niranjan-trends-gvd/articleshow-xnq943u</link>
            <guid isPermaLink="true">https://kannada.asianetnews.com/sandalwood/kannada-actor-duniya-vijay-s-city-lights-five-songs-win-appreciation-alak-niranjan-trends-gvd/articleshow-xnq943u</guid>
            <pubDate>Sat, 12 Sep 2026 16:23:05 +0530</pubDate>
            <description><![CDATA[ಸಿಟಿ ಲೈಟ್ಸ್‌ ಸಿನಿಮಾ ಸೆ.18ಕ್ಕೆ ರಿಲೀಸ್‌ ಆಗಲಿದೆ. ದುನಿಯಾ ವಿಜಯ್‌ ನಿರ್ದೇಶನದ ಈ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ ಹಾಗೂ ಮೋನಿಷಾ ವಿಜಯ್‌ಕುಮಾರ್‌ ನಟಿಸಿದ್ದಾರೆ. ಈಗಾಗಲೇ ಐದು ಹಾಡುಗಳು ಮೆಚ್ಚುಗೆ ಗಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2akyy1rhzrtmdvyghqsjyds,imgname-vvjv-1789210359864.png" type="image/jpeg" height="390" width="690"/>
            <content:encoded><![CDATA[&lt;p&gt;ದುನಿಯಾ ವಿಜಯ್&zwnj; ನಿರ್ದೇಶಿಸಿ, ವಿನಯ್&zwnj;ರಾಜ್&zwnj;ಕುಮಾರ್&zwnj; ಹಾಗೂ ಮೋನಿಷಾ ವಿಜಯ್&zwnj;ಕುಮಾರ್&zwnj; ಜೋಡಿಯಾಗಿ ನಟಿಸಿರುವ &lsquo;ಸಿಟಿ ಲೈಟ್ಸ್&zwnj;&rsquo; ಚಿತ್ರವು ಸೆ.18ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಐದು ಹಾಡುಗಳು ಆನಂದ್&zwnj; ಯೂಟ್ಯೂಬ್&zwnj;ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ಗಳಿಸಿವೆ. ಈಗಷ್ಟೇ ಬಿಡುಗಡೆ ಆಗಿರುವ &lsquo;ಅಲಕ್&zwnj; ನಿರಂಜನ್&zwnj;&rsquo; ಹಾಡು ಟ್ರೆಂಡಿಂಗ್&zwnj;ನಲ್ಲಿದೆ.&lt;/p&gt;&lt;p&gt;ಈ ಕುರಿತು ದುನಿಯಾ ವಿಜಯ್&zwnj;, &lsquo;ಯಾವುದೇ ಸಿನಿಮಾಗೆ ಹಾಡುಗಳೇ ಮೊದಲ ಇನ್ವಿಟೇಷನ್&zwnj;. ಅಲ್ಲದೆ ಹಾಡುಗಳು ಮಾಸ್&zwnj; ಮತ್ತು ಜಾನಪದ ಸೊಗಡು ಎರಡೂ ಒಳಗೊಂಡರೆ ಅದನ್ನು ಕೇಳುವಾಗ ಸಿಗೋ ಕಿಕ್ಕೇ ಬೇರೆ. ಸಿಟಿ ಲೈಟ್ಸ್&zwnj; ಚಿತ್ರದ ಹಾಡುಗಳು ಸಿನಿಮಾ ಪ್ರಿಯರಿಗೆ ಕಿಕ್&zwnj; ಕೊಡುತ್ತೇವೆ. ಸಿನಿಮಾ ಬಗ್ಗೆ ನಿರೀಕ್ಷೆ ಹಾಗೂ ಕುತೂಹಲ ಮೂಡಿಸುವುದಕ್ಕೆ ಕಾರಣವಾಗುತ್ತಿವೆ. ಚರಣ್&zwnj; ರಾಜ್&zwnj; ಸಂಗೀತ ಎಲ್ಲಾ ಹಾಡುಗಳನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ&rsquo; ಎನ್ನುತ್ತಾರೆ.&lt;/p&gt;&lt;p&gt;ಸಿಟಿ ಲೈಟ್ಸ್ ಸಂಪೂರ್ಣ ಹೆಣ್ಣು ಮಕ್ಕಳ ಬಗೆಗಿನ ಕಥೆ. ಬೆಂಗಳೂರಿನಲ್ಲಿ ಹುಡುಗಿಯರು ಜೀವನ ಸಾಗಿಸೋದಕ್ಕೆ ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ ಎಂಬುದುರ ಬಗ್ಗೆ ಹೇಳೋದಕ್ಕೆ ಹೊರಟಿದ್ದೇನೆಂದು ಈ ಹಿಂದೆ ಸ್ವತಃ ದುನಿಯಾ ವಿಜಯ್​ ಹೇಳಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಪಕ್ಕಾ ಮಾಸ್ ಅವತಾರದಲ್ಲಿ ದೊಡ್ಮನೆ ಕುಡಿ&lt;/strong&gt;&lt;/h2&gt;&lt;p&gt;ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚರಣ್ ರಾಜ್ ಸಂಗೀತವಿದೆ. ವಿನಯ್ ರಾಜ್​​ಕುಮಾರ್ ಪಕ್ಕಾ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿದೆ. ಇನ್ನು ವಿಜಯ್&zwnj; ಕುಮಾರ್&zwnj; ಹಾಗೂ ವಿಕ್ರಂ ಆರ್ಯ ಸಿನಿಮಾವನ್ನು ನಿರ್ಮಿಸಿದ್ದಾರೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actor-duniya-vijay-s-city-lights-five-songs-win-appreciation-alak-niranjan-trends-gvd/articleshow-xnq943u"/>
        </item>
        <item>
            <title><![CDATA[ಪದವಿ ಇಲ್ಲ, ಪ್ರಯೋಗಾಲಯವೂ ಇಲ್ಲ; 23 ಸಸ್ಯಗಳ ಪತ್ತೆ ಮಾಡಿದ ‘ಬರಿಗಾಲಿನ ವಿಜ್ಞಾನಿ’!]]></title>
            <link>https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</link>
            <guid isPermaLink="true">https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn</guid>
            <pubDate>Sat, 12 Sep 2026 16:12:29 +0530</pubDate>
            <description><![CDATA[ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಕೇರಳದ ಪಿಚನ್ ಎಂ. ಸಲೀಂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. 2,000ಕ್ಕೂ ಹೆಚ್ಚು ಸಸ್ಯಗಳ ಜ್ಞಾನ ಹೊಂದಿರುವ ಅವರು 23 ಹೊಸ ಸಸ್ಯಗಳ ಪತ್ತೆಗೆ ಕೊಡುಗೆ ನೀಡಿದ್ದಾರೆ. ಎರಡು ಸಸ್ಯಗಳಿಗೆ ಅವರ ಹೆಸರಿಡಲಾಗಿದ್ದು, ರಾಷ್ಟ್ರಪತಿಗಳಿಂದಲೂ ಗೌರವ ಪಡೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a5hk6dbszdmbeg5y76z6jq,imgname-pichan-m-salim--a-barefoot-scientist-from-kerala--1--1789195242701.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಶಾಲೆ ಬಿಟ್ಟರೂ ಕಾಡನ್ನೇ ವಿಶ್ವವಿದ್ಯಾಲಯ ಮಾಡಿಕೊಂಡ &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo;!&lt;/strong&gt;&lt;/h2&gt;&lt;p&gt;ಕೇರಳದ ವಯನಾಡಿನ ಪಿಚನ್ ಎಂ. ಸಲೀಂ ಅವರ ಕಥೆ, ಪದವಿ ಅಥವಾ ದೊಡ್ಡ ಶೈಕ್ಷಣಿಕ ಅರ್ಹತೆಯಿಲ್ಲದಿದ್ದರೂ ಜ್ಞಾನ ಮತ್ತು ಕ್ಷೇತ್ರಾನುಭವದಿಂದ ವಿಜ್ಞಾನ ಲೋಕದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ. ಶಾಲಾ ಶಿಕ್ಷಣವನ್ನು ಬೇಗನೇ ಮುಗಿಸಿದ ಸಲೀಂ, ಪಶ್ಚಿಮ ಘಟ್ಟಗಳ ಕಾಡುಗಳನ್ನೇ ತಮ್ಮ ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡು ಸಸ್ಯಶಾಸ್ತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳ ಜ್ಞಾನ&lt;/strong&gt;&lt;/h3&gt;&lt;p&gt;1997ರಲ್ಲಿ ವಯನಾಡಿನಲ್ಲಿ ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (MSSRF) ಆಯೋಜಿಸಿದ್ದ ಪ್ಯಾರಾಟ್ಯಾಕ್ಸಾನಮಿ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾದ 20 ಸ್ಥಳೀಯ ಯುವಕರಲ್ಲಿ ಸಲೀಂ ಕೂಡ ಒಬ್ಬರು. ಬಳಿಕ MSSRF ಜೊತೆ ಕೆಲಸ ಆರಂಭಿಸಿದ ಅವರು ಕೃಷಿ ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರು.&lt;/p&gt;&lt;p&gt;ವರ್ಷಗಳ ಕಾಲ ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಸಂಚರಿಸಿ ಸಸ್ಯಗಳನ್ನು ಗುರುತಿಸುವ ಮೂಲಕ ಸಲೀಂ 2,000ಕ್ಕೂ ಹೆಚ್ಚು ಸಸ್ಯಗಳ ವೈಜ್ಞಾನಿಕ ಹೆಸರುಗಳನ್ನು ಕಲಿತಿದ್ದಾರೆ. ಸಂಶೋಧಕರಿಗೆ ಸಸ್ಯಗಳು ಹಾಗೂ ಅವುಗಳ ಆವಾಸಸ್ಥಾನಗಳನ್ನು ಗುರುತಿಸಲು ಸಹಾಯ ಮಾಡುತ್ತಾ, 23 ಹೊಸ ಸಸ್ಯ ಪ್ರಭೇದಗಳ ಪತ್ತೆ, 10ಕ್ಕೂ ಹೆಚ್ಚು ಹೊಸ ಭೌಗೋಳಿಕ ದಾಖಲೆಗಳು ಹಾಗೂ 53ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಿಗೆ ಅವರ ಕೆಲಸ ಕೊಡುಗೆ ನೀಡಿದೆ.&lt;/p&gt;&lt;h3&gt;&lt;strong&gt;175 ವರ್ಷಗಳ ಬಳಿಕ ಅಪರೂಪದ ಸಸ್ಯದ ಮರುಪತ್ತೆ&lt;/strong&gt;&lt;/h3&gt;&lt;p&gt;ಸಲೀಂ ಅವರ ಗಮನಾರ್ಹ ಸಾಧನೆಗಳಲ್ಲಿ 175 ವರ್ಷಕ್ಕೂ ಹೆಚ್ಚು ಕಾಲ ಕಾಣೆಯಾಗಿದ್ದ Campbellia aurantiaca ಸಸ್ಯದ ಮರುಪತ್ತೆಯೂ ಒಂದು. ವಯನಾಡಿನ ತೊಲ್ಲಾಯಿರಂ ಪ್ರದೇಶದಲ್ಲಿ ಸಂಶೋಧಕರ ತಂಡದೊಂದಿಗೆ ಅವರು ಈ ಅಪರೂಪದ ಪರಾವಲಂಬಿ ಹೂವಿನ ಸಸ್ಯವನ್ನು ಪತ್ತೆಹಚ್ಚಿದರು. ಈ ಸಂಶೋಧನೆಯ ಫಲಿತಾಂಶ 2025ರಲ್ಲಿ Kew Bulletinನಲ್ಲಿ ಪ್ರಕಟವಾಯಿತು.&lt;/p&gt;&lt;h3&gt;&lt;strong&gt;ಸಲೀಂ ಹೆಸರನ್ನೇ ಪಡೆದ ಎರಡು ಸಸ್ಯಗಳು!&lt;/strong&gt;&lt;/h3&gt;&lt;p&gt;ಸಸ್ಯಶಾಸ್ತ್ರ ಕ್ಷೇತ್ರಕ್ಕೆ ಅವರ ಕೊಡುಗೆ ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿದೆ ಎಂಬುದಕ್ಕೆ ಎರಡು ಅಪರೂಪದ ಸಸ್ಯಗಳೇ ಸಾಕ್ಷಿ. Seidenfadeniella salimii ಹಾಗೂ Impatiens salimii ಎಂಬ ಸಸ್ಯಗಳಿಗೆ ಸಲೀಂ ಅವರ ಹೆಸರನ್ನೇ ಇಡಲಾಗಿದೆ. ಇದು ಅವರ ಕ್ಷೇತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯ ನೀಡಿದ ಗೌರವವಾಗಿದೆ.&lt;/p&gt;&lt;h3&gt;&lt;strong&gt;ರಾಷ್ಟ್ರಪತಿಗಳಿಂದಲೂ ಗೌರವ&lt;/strong&gt;&lt;/h3&gt;&lt;p&gt;ಸಸ್ಯ ಜನಿತ ಸಂಪತ್ತಿನ ಸಂರಕ್ಷಣೆಗೆ ನೀಡಿದ ಕೊಡುಗೆಗಾಗಿ ಸಲೀಂ ಅವರಿಗೆ 2020&ndash;21ರ Plant Genome Saviour Award ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2023ರಲ್ಲಿ ಈ ಗೌರವವನ್ನು ಪ್ರದಾನ ಮಾಡಿದರು. ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿ ಪ್ರಶಸ್ತಿ ಹಾಗೂ ವನಮಿತ್ರ ಪ್ರಶಸ್ತಿಯೂ ಅವರಿಗೆ ಲಭಿಸಿದೆ.&lt;/p&gt;&lt;h3&gt;&lt;strong&gt;ಮನೆಯೇ ಜೀವಂತ &lsquo;ಜೀನ್ ಬ್ಯಾಂಕ್&rsquo;&lt;/strong&gt;&lt;/h3&gt;&lt;p&gt;ಸಲೀಂ ಅವರ ಸಂರಕ್ಷಣಾ ಕಾರ್ಯ ಕಾಡಿನಲ್ಲಷ್ಟೇ ಸೀಮಿತವಾಗಿಲ್ಲ. ವಯನಾಡಿನ ಅಥಿಮೂಲದಲ್ಲಿರುವ ತಮ್ಮ ಮನೆಯಲ್ಲೇ ಅವರು ಇನ್-ಸಿಟು ಮತ್ತು ಎಕ್ಸ್-ಸಿಟು ಜೈವ ಸಂರಕ್ಷಣಾ ಕೇಂದ್ರವನ್ನು ನಿರ್ಮಿಸಿದ್ದಾರೆ. ಇಲ್ಲಿ 614 ಸಾಂಪ್ರದಾಯಿಕ ಹಾಗೂ ಕಾಡು ಸಸ್ಯ ಪ್ರಭೇದಗಳು ಮತ್ತು ವೈವಿಧ್ಯಗಳನ್ನು ಸಂರಕ್ಷಿಸಲಾಗುತ್ತಿದೆ.&lt;/p&gt;&lt;p&gt;ಪದವಿ ಇಲ್ಲದಿದ್ದರೂ ಕ್ಷೇತ್ರಜ್ಞಾನ, ನಿರಂತರ ಅಧ್ಯಯನ ಮತ್ತು ಪ್ರಕೃತಿಯ ಮೇಲಿನ ಅಪಾರ ಆಸಕ್ತಿಯಿಂದ ಸಲೀಂ ಇಂದು &lsquo;ಬೇರ್&zwnj;ಫೂಟ್ ಸೈಂಟಿಸ್ಟ್&rsquo; ಎಂದೇ ಗುರುತಿಸಿಕೊಂಡಿದ್ದಾರೆ. ಅವರ ಬದುಕು, ವಿಜ್ಞಾನ ಕಲಿಯಲು ತರಗತಿಯ ನಾಲ್ಕು ಗೋಡೆಗಳೇ ಬೇಕೆಂದಿಲ್ಲ; ಪ್ರಕೃತಿಯೂ ಒಂದು ದೊಡ್ಡ ಪಾಠಶಾಲೆಯಾಗಬಹುದು ಎಂಬುದನ್ನು ತೋರಿಸುತ್ತದೆ.&lt;/p&gt;]]></content:encoded>
            <category><![CDATA[science]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/science/he-left-school-early-then-discovered-23-plants-meet-keralas-barefoot-scientist-salim-pichan/articleshow-c3n8pwn"/>
        </item>
        <item>
            <title><![CDATA[Video Review: ತಾಂತ್ರಿಕ ಶ್ರೀಮಂತ ಕುತೂಹಲಕರ ರುದ್ರ ಭಯಾನಕ ಜಾಗದಲ್ಲಿ ವ್ಲಾಗರ್‌ಗಳು!]]></title>
            <link>https://kannada.asianetnews.com/movie-reviews/sandalwood-suspence-thriller-video-movie-review-five-young-vloggers-and-a-chilling-mystery-gvd/articleshow-vy0lkew</link>
            <guid isPermaLink="true">https://kannada.asianetnews.com/movie-reviews/sandalwood-suspence-thriller-video-movie-review-five-young-vloggers-and-a-chilling-mystery-gvd/articleshow-vy0lkew</guid>
            <pubDate>Sat, 12 Sep 2026 16:01:05 +0530</pubDate>
            <description><![CDATA[ವಿಡಿಯೋ Review: ಐವರು ವ್ಲಾಗರ್‌ಗಳು ಭಯಾನಕ ಜಾಗವೊಂದಕ್ಕೆ ತೆರಳಿದಾಗ ನಡೆದ ಘಟನೆಗಳನ್ನು ಫೌಂಡ್ ಫೂಟೇಜ್ ಶೈಲಿಯಲ್ಲಿ ಹೇಳುವ ಸಿನಿಮಾ ‘ವಿಡಿಯೋ’. ಹೊಸ ನಿರೂಪಣೆ, ರಿಯಲಿಸ್ಟಿಕ್ ಮೇಕಿಂಗ್ ಮತ್ತು ನಿರಂತರ ಕುತೂಹಲ ಚಿತ್ರದ ಪ್ರಮುಖ ಆಕರ್ಷಣೆಗಳು.]]></description>
            <media:content url="https://static.asianetnews.com/images/w-1280,h-720,format-jpg,imgid-01m2ajhjtj9t5cp0dvgx9r14h0,imgname-bkb-1789208873810.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;- ರಾಜೇಶ್ ಶೆಟ್ಟಿ&lt;/strong&gt;&lt;/h2&gt;&lt;p&gt;ತಾಂತ್ರಿಕವಾಗಿ ಶ್ರೀಮಂತವಾಗಿರುವ, ಮೊದಲಿನಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಪ್ರೇಕ್ಷಕನನ್ನು ಕತೆಯ ಜೊತೆಗೆ ಕರೆದೊಯ್ಯುವ ಶ್ಲಾಘನೀಯ ಪ್ರಯತ್ನ &lsquo;ವಿಡಿಯೋ&rsquo;. ತೆರೆಯ ಮೇಲೆ ಇರುವ ಐವರು ಯುವ ಕಲಾವಿದರು ಮತ್ತು ತೆರೆಯ ಹಿಂದೆ ಇರುವ ನಿರ್ದೇಶಕ ಶ್ರೀನಿಧಿ ಬೆಂಗಳೂರು, ಸಂಗೀತ ನಿರ್ದೇಶಕ ಪ್ರಸನ್ನ ಕುಮಾರ್&zwnj;, ಛಾಯಾಗ್ರಾಹಕ ಅವಿನಾಶ್ ಶಾಸ್ತ್ರಿ, ಸಂಕಲನಕಾರ ಸಂಜೀವ್ ಜಾಗಿರ್&zwnj;ದಾರ್&zwnj; ಈ ಸಿನಿಮಾದ ನಿಜವಾದ ಹೀರೋಗಳು.&lt;/p&gt;&lt;p&gt;ತಂತ್ರಜ್ಞರು ಮತ್ತು ಕಲಾವಿದರು ಅದ್ಭುತವಾಗಿ ಕಾರ್ಯ ನಿರ್ವಹಿಸಿದ ಫಲವೇ ಈ ಸಿನಿಮಾ. ಕತೆಯ ಕುರಿತು ಜಾಸ್ತಿ ಹೇಳುವುದೇನೂ ಇಲ್ಲ. ಇದೊಂದು ಫೌಂಡ್&zwnj; ವಿಡಿಯೋ ಜಾನರಾ ಸಿನಿಮಾ. ಐವರು ವ್ಲಾಗರ್&zwnj;ಗಳು ಒಂದು ರುದ್ರ ಭಯಾನಕ ಜಾಗಕ್ಕೆ ವ್ಲಾಗ್&zwnj; ಮಾಡುವುದಕ್ಕೆ ಹೋದಾಗಿನ ವಿಡಿಯೋ ಫೂಟೇಜ್&zwnj;ಗಳು ಈ ಸಿನಿಮಾದ ಜೀವಾಳ. ಅಲ್ಲಿ ಏನು ನಡೆಯಿತು ಅನ್ನುವುದೇ ಕಥನ ಕುತೂಹಲ. ಆ ಕತೆಯನ್ನು ಸೊಗಸಾಗಿ ಹೇಳಿರುವುದು ಈ ಕತೆ, ಚಿತ್ರಕತೆಯ ಸಾರ್ಥಕತೆ.&lt;/p&gt;&lt;p&gt;ಐಡಿಯಾ ಹಳೆಯದಾದರೂ ಸಿನಿಮಾ ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ರಿಯಲಿಸ್ಟಿಕ್&zwnj; ಆಗಿ ಕಾಣಿಸುವ ಪ್ರಯತ್ನ ಎದ್ದು ಕಾಣುತ್ತದೆ. ಆರಂಭದಲ್ಲಿ ಲವಲವಿಕೆಯಿಂದ ಸಾಗುವ ಕತೆ, ಮುಂದುವರೆದಂತೆ ಕಾತರದಿಂದ ಮುಂದೇನು ಎಂದು ನೋಡುವಂತೆ ಬದಲಾಗುತ್ತದೆ.&lt;/p&gt;&lt;p&gt;&lt;strong&gt;ಚಿತ್ರ: &lt;/strong&gt;ವಿಡಿಯೋ&lt;/p&gt;&lt;p&gt;&lt;strong&gt;ನಿರ್ದೇಶನ: &lt;/strong&gt;ಶ್ರೀನಿಧಿ ಬೆಂಗಳೂರು&lt;/p&gt;&lt;p&gt;&lt;strong&gt;ತಾರಾಗಣ:&lt;/strong&gt; ಭರತ್, ಜೀವನ್ ಶಿವಕುಮಾರ್, ತೇಜೇಶ್ ಮಂಜುನಾಥ್, ಪ್ರಿಯಾ ಆಚಾರ್, ನಲ್ಮೆ ನಚಿಯಾರ್&lt;/p&gt;&lt;p&gt;&lt;strong&gt;ರೇಟಿಂಗ್: &lt;/strong&gt;3.5&lt;/p&gt;&lt;p&gt;ಒಂದು ಕತೆಯನ್ನು ನೋಡುಗನಿಗೆ ಕನೆಕ್ಟ್ ಆಗುವಂತೆ ರೂಪಿಸುವುದೇ ಈ ಕಾಲದ ಸವಾಲು. ಶ್ರೀನಿಧಿ ಬೆಂಗಳೂರು ಆ ಸವಾಲಲ್ಲಿ ಗೆದ್ದಿದ್ದಾರೆ. ಅದರಲ್ಲೂ ಯುವ ಕಲಾವಿದರಾದ ಭರತ್, ಜೀವನ್ ಶಿವಕುಮಾರ್, ತೇಜೇಶ್ ಮಂಜುನಾಥ್, ಪ್ರಿಯಾ ಆಚಾರ್, ನಲ್ಮೆ ನಚಿಯಾರ್ ವ್ಲಾಗರ್&zwnj;ಗಳಾಗಿ ಮನಸ್ಸಲ್ಲಿ ಉಳಿಯುವಂತೆ ನಟಿಸಿದ್ದಾರೆ. ಹೊಸ ಹುರುಪಿನ ತಂಡದ ಮೆಚ್ಚಬಹುದಾದ ಸಿನಿಮಾ.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/sandalwood-suspence-thriller-video-movie-review-five-young-vloggers-and-a-chilling-mystery-gvd/articleshow-vy0lkew"/>
        </item>
        <item>
            <title><![CDATA[ಬೆಂಗಳೂರು: ಬಾಲಕಾರ್ಮಿಕರ ವಿರುದ್ಧ ಖಾಕಿ ಅಟ್ಯಾಕ್: ಸಿಸಿಬಿ ಪೊಲೀಸರ ಬಿಗ್ ಆಪರೇಷನ್, 100ಕ್ಕೂ ಹೆಚ್ಚು ಮಕ್ಕಳ ರಕ್ಷಣೆ!]]></title>
            <link>https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4</link>
            <guid isPermaLink="true">https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4</guid>
            <pubDate>Sat, 12 Sep 2026 16:00:46 +0530</pubDate>
            <description><![CDATA[ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿ, ನಗರದಾದ್ಯಂತ ನೂರಾರು ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ಹಲವು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cyeefczwm29qec5trp30xm5v,imgname-Child-labour-video.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ಹಾಗೂ ಸಿಸಿಬಿ (CCB), ನಗರದಾದ್ಯಂತ ಬೃಹತ್ ಜಂಟಿ ಕಾರ್ಯಾಚರಣೆ ನಡೆಸಿ ನೂರಾರು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಮಹತ್ವದ ಕಾರ್ಯಾಚರಣೆಯಲ್ಲಿ ಹಲವಾರು ಬಾಲಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮಕ್ಕಳನ್ನು ಕಾನೂನುಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.&lt;/p&gt;&lt;h2&gt;ಸಚಿವ ಸಂಪುಟದ ನಾಯಕರ ಸೂಚನೆ ಮತ್ತು ಪೊಲೀಸ್ ಕಾರ್ಯಾಚರಣೆ&lt;/h2&gt;&lt;p&gt;ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಪಿಎಂಸಿ (APMC) ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಮಹಿಳಾ ಕೂಲಿ ಕಾರ್ಮಿಕರು ಸಣ್ಣ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಬಳಸಿಕೊಳ್ಳುತ್ತಿರುವ ಕುರಿತು ದೂರು ನೀಡಿದ್ದರು. ಈ ಸಮಸ್ಯೆಯ ಗಂಭೀರತೆಯನ್ನು ಅರಿತ ಸಿಎಂ, ನಗರದಾದ್ಯಂತ ತಕ್ಷಣವೇ ಪರಿಶೀಲನೆ ನಡೆಸಿ ಬಾಲಕಾರ್ಮಿಕ ಪದ್ಧತಿಗೆ ತಡೆ ನೀಡುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಕ್ರಿಯಗೊಂಡ ಬೆಂಗಳೂರು ಪೊಲೀಸರು ಬೃಹತ್ ಕಾರ್ಯಾಚರಣೆಗೆ ಇಳಿದರು.&lt;/p&gt;&lt;h2&gt;ವಿವಿಧ ವಿಭಾಗಗಳಲ್ಲಿ ನಡೆದ ತಪಾಸಣೆ ಹಲವರ ರಕ್ಷಣೆ&lt;/h2&gt;&lt;p&gt;ಪೂರ್ವ ಮತ್ತು ಈಶಾನ್ಯ ವಿಭಾಗಗಳ ವ್ಯಾಪ್ತಿಯಲ್ಲಿ ಪೊಲೀಸರು ಒಟ್ಟು 917 ಸ್ಥಳಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಿದರು. ಗ್ಯಾರೇಜ್, ಮಾರ್ಕೆಟ್, ರಿಪೇರಿ ಶಾಪ್, ಹೋಟೆಲ್, ಮಾರುಕಟ್ಟೆ, ಬಾರ್ ಮತ್ತು ರೆಸ್ಟೋರೆಂಟ್&zwnj;ಗಳ ಮೇಲೆ ದಾಳಿ ನಡೆಸಿ ಒಟ್ಟು 71 ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ ಈಶಾನ್ಯ (North-East) ವಿಭಾಗ ಒಂದರಲ್ಲೇ 295 ಕ್ಕೂ ಹೆಚ್ಚು ಸ್ಥಳಗಳನ್ನು ತಪಾಸಣೆಗೊಳಪಡಿಸಿ, 43 ಬಾಲಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಗಿದೆ.&lt;/p&gt;&lt;h2&gt;ಸಿಸಿಬಿ (CCB) ಯಿಂದ ವ್ಯಾಪಕ ದಾಳಿ:&lt;/h2&gt;&lt;p&gt;ಸಿಸಿಬಿಯ ವಿವಿಧ ಕಡೆಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ನಗರದಾದ್ಯಂತ ವಿಶೇಷ ಮಿಂಚಿನ ಕಾರ್ಯಾಚರಣೆ ನಡೆಸಿದವು. ಒಟ್ಟು 67 ಪೊಲೀಸ್ ಠಾಣಾ ವ್ಯಾಪ್ತಿಯ 417 ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು, 43 ಮಕ್ಕಳನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ.&lt;/p&gt;&lt;h2&gt;ಉತ್ತರ ವಿಭಾಗದ ಪರಿಶೀಲನೆ:&lt;/h2&gt;&lt;p&gt;ಉತ್ತರ ವಿಭಾಗದಲ್ಲೂ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಪೆಟ್ರೋಲ್ ಬಂಕ್, ಗ್ಯಾರೇಜ್ ಹಾಗೂ ಹೋಟೆಲ್&zwnj;ಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ.&lt;/p&gt;&lt;h2&gt;ಮಾಲೀಕರು ಮತ್ತು ಪೋಷಕರ ವಿರುದ್ಧ ಕಾನೂನು ಕ್ರಮ:&lt;/h2&gt;&lt;p&gt;ಈ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ ಅವರು, ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಲಾಗುತ್ತಿದೆ. ಮಾಲೀಕರ ಜೊತೆಗೆ ಮಕ್ಕಳ ಪೋಷಕರನ್ನೂ ಕರೆಸಿ ವಿಚಾರಣೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.&lt;/p&gt;&lt;p&gt;ರಕ್ಷಿಸಲ್ಪಟ್ಟ ಪ್ರತಿಯೊಬ್ಬ ಮಗುವಿನ ವಯಸ್ಸಿನ ಪರಿಶೀಲನೆ ನಡೆಸಲಾಗುತ್ತಿದ್ದು, ವಯಸ್ಸು ದೃಢಪಟ್ಟ ತಕ್ಷಣವೇ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಹೆಚ್ಚುವರಿ ಎಫ್&zwnj;ಐಆರ್ ದಾಖಲಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/bengaluru-child-labour-crackdown-ccb-and-police-rescue-many-childrens-after-cm-dk-shivakumar-instruction-gdp/articleshow-u1xvqq4"/>
        </item>
        <item>
            <title><![CDATA[ಇಡಿ ದಾಳಿ ಬೆನ್ನಲ್ಲೇ ರಾಜೀನಾಮೆಗೆ ಮುಂದಾದ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ನಡೆಯಿಂದ ಕೋಲಾಹಲ]]></title>
            <link>https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at</link>
            <guid isPermaLink="true">https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at</guid>
            <pubDate>Sat, 12 Sep 2026 15:53:19 +0530</pubDate>
            <description><![CDATA[ಕಾಂಗ್ರೆಸ್‌ನಲ್ಲೀಗ ಇಡಿ ದಾಳಿಯಿಂದ ಕೋಲಾಹಲ ಶುರುವಾಗಿದೆ. ಸೆ.10ರಂದು ಇಡಿ ಅಧಿಕಾರಿಗಳು ಮಾಜಿ ಸಿಎಂ ನಿವಾಸ, ಕಚೇರಿ ಸೇರದಿದಂತೆ ಹಲವು ಕಡೆ ದಾಳಿ ಮಾಡಲಾಗಿದೆ. ಈ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಇದೀಗ ಪ್ರಮುಖ 2 ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jyrqbx8ej40khb8r1hwwt4xp,imgname-gettyimages-1249642728-1751028987150.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೆಹ್ರಡೂನ್ (ಸೆ.12)&lt;/strong&gt; ದೇಶದ ಹಲವು ಭಾಗದಲ್ಲಿ ಇಡಿ ದಾಳಿ ನಡೆಯುತ್ತಿದೆ. ಕರ್ನಾಟಕದಲ್ಲಿ ಸತೀಶ್ ಜಾರಕಿಹೊಳಿಗೆ ಸೇರಿದ ಹಲವೆಡೆ ದಾಳಿ ನಡೆದಿದೆ. ಇನ್ನು ಉತ್ತರಖಂಡದಲ್ಲೂ ಇಡಿ ದಾಳಿ ಮುಂದುವರಿದಿದೆ. ಉತ್ತರಖಂಡದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ನಿವಾಸ ಸೇರಿದಂತೆ ಹಲವೆಡೆ ಇಡಿ ದಾಳಿ ನಡೆದಿದೆ.ಹರೀಶ್ ರಾವತ್ ಸಹಾಯಕನ ಮನೆಯಿಂದ 1.28 ಕೋಟಿ ರೂಪಾಯಿ ನಗದು, ಚಿನ್ನಾಭರಣ, ಲಕ್ಷುರಿ ವಾಚ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇಡಿ ದಾಳಿ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹರೀಶ್ ರಾವತ್, ಇದೀಗ ಕಾಂಗ್ರೆಸ್ ಪಕ್ಷದ ಪ್ರಮುಖ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.&lt;/p&gt;&lt;h2&gt;2 ಸ್ಥಾನಗಳಿಗೆ ಹರೀಶ್ ರಾವತ್ ರಾಜೀನಾಮೆ ಸಾಧ್ಯತೆ&lt;/h2&gt;&lt;p&gt;ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಮಾತುಗಳನ್ನಾಡಿದ್ದಾರೆ. ಉತ್ತರಖಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪ್ರಮುಖ ಜವಾಬ್ದಾರಿಯಿಂದ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಾಕಾರಿ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಹರೀಶ್ ರಾವತ್ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಉತ್ತರಖಂಡದಲ್ಲಿ ಚುನಾವಣೆ ಸೋತ ಬಳಿಕ ಹಿರಿಯ ನಾಯಕ ಹರೀಶ್ ರಾವತ್&zwnj;&zwj;ಗೆ ಉತ್ತರಖಂಡ ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಕಾಂಗ್ರೆಸ್&zwnj;ನಲ್ಲಿ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು. ಇದೀಗ ಈ ಎರಡೂ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಕಾನೂನು ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಹರೀಶ್ ರಾವತ್ ಅಧಿೃಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.&lt;/p&gt;&lt;p&gt;ಸೆಪ್ಟೆಂಬರ್ 10ಕ್ಕೆ ಹರೀಶ್ ರಾವತ್&zwnj;ಗೆ ಸೇರಿದ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿತ್ತು. 2016ರ ಉತ್ತರಖಂಡ ಸಬೋರ್ಡಿನೇಟ್ ಸೆಲೆಕ್ಷನ್ ಕಮಿಷನ್ (UKSSSC) ನಡೆದಿದೆ ಎನ್ನಲಾದ ಹಲವು ಅಕ್ರಮಗಳಿಗೆ ಸಂಬಂಧಿಸಿ ಇಡಿ ದಾಳಿ ನಡೆಸಿದೆ. ಹರೀಶ್ ರಾವತ್, UKSSSC ಮಧ್ಯವರ್ತಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಇಡಿ ದಾಳಿ ನಡೆದಿದೆ. 2009 ರಿಂದ 2017ರ ವರೆಗೆ ಮುಖ್ಯಮಂತ್ರಿಯಾಗಿದ್ದ ಹರೀಶ್ ರಾವತ್, ಈ ಸಮಯದಲ್ಲಿದ್ದ ನಿವಾಸದ ಮೇಲೂ ಇಡಿ ದಾಳಿ ನಡೆದಿದೆ.&lt;/p&gt;&lt;p&gt;ಒಎಂಆರ್ ಶೀಟ್, ಉತ್ತರ ಪತ್ರಿಕೆಗಳು ರಹಸ್ಯವಾಗಿ ಕಮಿಷನರ್ ಕಸ್ಟಡಿಯಿಂದ ಸೆಕ್ರಟರಿ ಕಚೇರಿಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿತ್ತು. UKSSSCನಲ್ಲಿ ಹಲವು ಅಕ್ರಮಗಳು ನಡೆದಿರುವ ಕುರಿತು ತನಿಖೆ ತೀವ್ರಗೊಂಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಜವಾಬ್ದಾರಿಗಳಿಂದ ಮುಕ್ತಿಹೊಂದಲು ಹರೀಶ್ ರಾವತ್ ಬಯಸಿದ್ದಾರೆ. ಇಷ್ಟೇ ಅಲ್ಲ ಹರೀಶ್ ರಾವತ್ ನಡೆ ಇದೀಗ ಭಾರಿ ಕೋಲಾಹಲಕ್ಕೂ ಕಾರಣವಾಗಿದೆ. ಇಡಿ ದಾಳಿ ಬೆನ್ನಲ್ಲೇ ಹರೀಶ್ ರಾವತ್ ರಾಜೀನಾಮೆ ಬಯಸಿರುವುದು ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಆಳ ಸೂಚಿಸುತ್ತಿದೆ ಎಂದು ರಾಜಕೀಯ ಆರೋಪಗಳು ಕೇಳಿಬರುತ್ತಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/ed-raids-trigger-resignation-buzz-around-uttarakhand-congress-leader-harish-rawat/articleshow-qkwu2at"/>
        </item>
        <item>
            <title><![CDATA[Indian Railways: ರೈಲಿನ ಜನರಲ್ ಬೋಗಿಗಳು ಮುಂದೆ-ಹಿಂದೆ ಯಾಕಿರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್]]></title>
            <link>https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798</link>
            <guid isPermaLink="true">https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798</guid>
            <pubDate>Sat, 12 Sep 2026 15:51:35 +0530</pubDate>
            <description><![CDATA[ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೋಚ್‌ಗಳ ಜೋಡಣೆಯನ್ನು ಗಮನಿಸಿರಬಹುದು. ಜನರಲ್ ಬೋಗಿಗಳು ಸಾಮಾನ್ಯವಾಗಿ ರೈಲಿನ ಮಧ್ಯದಲ್ಲಿ ಇರುವುದಿಲ್ಲ, ಬದಲಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿರುತ್ತವೆ. ಹೀಗೆ ಯಾಕೆ ಇರುತ್ತೆ ಅಂತ ಎಂದಾದರೂ ಯೋಚಿಸಿದ್ದೀರಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kr7vqdjdvnc1cy078ydnn1kj,imgname-idnian-railways--3--1778380420685.jpg" type="image/jpeg" height="390" width="690"/>
            <content:encoded><![CDATA[&lt;p&gt;ನೀವು ರೈಲಿನಲ್ಲಿ ಪ್ರಯಾಣಿಸುವಾಗ ಕೋಚ್&zwnj;ಗಳ ಜೋಡಣೆಯನ್ನು ಗಮನಿಸಿರಬಹುದು. ಜನರಲ್ ಬೋಗಿಗಳು ಸಾಮಾನ್ಯವಾಗಿ ರೈಲಿನ ಮಧ್ಯದಲ್ಲಿ ಇರುವುದಿಲ್ಲ, ಬದಲಾಗಿ ಮುಂಭಾಗ ಅಥವಾ ಹಿಂಭಾಗದಲ್ಲಿರುತ್ತವೆ. ಹೀಗೆ ಯಾಕೆ ಇರುತ್ತೆ ಅಂತ ಎಂದಾದರೂ ಯೋಚಿಸಿದ್ದೀರಾ?&lt;/p&gt;&lt;img&gt;&lt;p&gt;ಒಂದು ರೈಲಿನಲ್ಲಿ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಜನರಲ್, ಸ್ಲೀಪರ್, ಎಸಿ ಹೀಗೆ ಹಲವು ಬಗೆಯ ಕೋಚ್&zwnj;ಗಳಿರುತ್ತವೆ. ರೈಲ್ವೆ ಇಲಾಖೆಯು ಸಾಮಾನ್ಯವಾಗಿ ಜನರಲ್ ಬೋಗಿಗಳನ್ನು ರೈಲಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಇರಿಸುತ್ತದೆ. ಸ್ಲೀಪರ್ ಮತ್ತು ಎಸಿ ಕೋಚ್&zwnj;ಗಳು ಮಧ್ಯದಲ್ಲಿರುತ್ತವೆ. ಆದರೆ, ಈ ವ್ಯವಸ್ಥೆ ಎಲ್ಲಾ ರೈಲುಗಳಿಗೂ ಕಡ್ಡಾಯವಲ್ಲ. ರೈಲಿನ ಮಾದರಿ, ಮಾರ್ಗ ಮತ್ತು ಕೋಚ್&zwnj;ಗಳ ಸಂಖ್ಯೆಗೆ ಅನುಗುಣವಾಗಿ ಈ ಜೋಡಣೆಯಲ್ಲಿ ಬದಲಾವಣೆಗಳಿರಬಹುದು. ಆದರೂ, ಜನರಲ್ ಬೋಗಿಗಳು ತುದಿಯಲ್ಲಿರಲು ಮುಖ್ಯ ಕಾರಣ ಜನದಟ್ಟಣೆಯನ್ನು ಒಂದೇ ಕಡೆ ಸೇರದಂತೆ ನೋಡಿಕೊಳ್ಳುವುದು.&lt;/p&gt;&lt;img&gt;&lt;p&gt;ಜನರಲ್ ಕೋಚ್&zwnj;ಗಳಿಗೆ ರಿಸರ್ವೇಶನ್ ಅಗತ್ಯವಿಲ್ಲದ ಕಾರಣ, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಇವುಗಳನ್ನು ಬಳಸುತ್ತಾರೆ. ಅದರಲ್ಲೂ ದಿನನಿತ್ಯದ ಪ್ರಯಾಣಿಕರು, ಕಡಿಮೆ ದೂರ ಹೋಗುವವರು ಮತ್ತು ಕೊನೆ ಕ್ಷಣದಲ್ಲಿ ಟಿಕೆಟ್ ಪಡೆಯುವವರು ಈ ಬೋಗಿಗಳನ್ನೇ ಅವಲಂಬಿಸಿರುತ್ತಾರೆ. ಇದರಿಂದಾಗಿ, ಇತರೆ ಕೋಚ್&zwnj;ಗಳಿಗೆ ಹೋಲಿಸಿದರೆ ಜನರಲ್ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಈ ಕೋಚ್&zwnj;ಗಳನ್ನು ರೈಲಿನ ಮಧ್ಯದಲ್ಲಿ ಇಟ್ಟರೆ, ಪ್ಲಾಟ್&zwnj;ಫಾರ್ಮ್&zwnj;ನ ಒಂದೇ ಜಾಗದಲ್ಲಿ ಭಾರಿ ಜನಸಂದಣಿ ಉಂಟಾಗುತ್ತದೆ. ಇದನ್ನೇ ತಪ್ಪಿಸಲು ಅವುಗಳನ್ನು ಎರಡೂ ತುದಿಗಳಿಗೆ ಹಂಚಲಾಗುತ್ತದೆ.&lt;/p&gt;&lt;img&gt;&lt;p&gt;ಜನರಲ್ ಕೋಚ್&zwnj;ಗಳನ್ನು ಎರಡೂ ತುದಿಗಳಲ್ಲಿ ಇಡುವುದರಿಂದ ಪ್ರಯಾಣಿಕರು ಒಂದೇ ಕಡೆ ಗುಂಪುಗೂಡುವುದನ್ನು ತಪ್ಪಿಸಬಹುದು. ರೈಲು ನಿಂತಾಗ, ಪ್ರಯಾಣಿಕರು ತಮಗೆ ಹತ್ತಿರವಿರುವ ಬೋಗಿಯ ಕಡೆಗೆ ಹೋಗುತ್ತಾರೆ. ಇದರಿಂದ ಪ್ಲಾಟ್&zwnj;ಫಾರ್ಮ್&zwnj;ನ ಮಧ್ಯಭಾಗದಲ್ಲಿ ಉಂಟಾಗಬಹುದಾದ ಭಾರಿ ದಟ್ಟಣೆ ಕಡಿಮೆಯಾಗುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಚಲನವಲನವನ್ನು ಸುಗಮಗೊಳಿಸಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ. ಅದರಲ್ಲೂ ಹೆಚ್ಚು ಜನನಿಬಿಡ ಸಮಯದಲ್ಲಿ ಒಂದೇ ಕಡೆ ಜನ ಸೇರುವುದನ್ನು ಇದು ತಡೆಯುತ್ತದೆ.&lt;/p&gt;&lt;img&gt;&lt;p&gt;ಜನಸಂದಣಿಯನ್ನು ವಿಭಜಿಸುವುದರ ಜೊತೆಗೆ, ತುರ್ತು ಪರಿಸ್ಥಿತಿಗಳಲ್ಲಿಯೂ ಈ ಕೋಚ್&zwnj;ಗಳ ಜೋಡಣೆ ಸಹಕಾರಿಯಾಗಿದೆ. ಒಂದೇ ಕಡೆ ಹೆಚ್ಚು ಪ್ರಯಾಣಿಕರು ಇದ್ದರೆ, ಯಾವುದೇ ಸಮಸ್ಯೆ ಎದುರಾದಾಗ ಅವರನ್ನು ನಿಯಂತ್ರಿಸುವುದು ಮತ್ತು ಸುರಕ್ಷಿತವಾಗಿ ಸ್ಥಳಾಂತರಿಸುವುದು ಕಷ್ಟವಾಗುತ್ತದೆ. ಜನರಲ್ ಕೋಚ್&zwnj;ಗಳು ರೈಲಿನ ಎರಡೂ ಬದಿಗಳಲ್ಲಿ ಇರುವುದರಿಂದ, ಪ್ರಯಾಣಿಕರ ಚಲನವಲನವನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಇದೇ ವೇಳೆ, ರೈಲ್ವೆ ಸಿಬ್ಬಂದಿಗೂ ಪ್ಲಾಟ್&zwnj;ಫಾರ್ಮ್ ಮೇಲಿನ ದಟ್ಟಣೆಯನ್ನು ಗಮನಿಸಲು ಅನುಕೂಲವಾಗುತ್ತದೆ. ಹೀಗಾಗಿ, ಜನರಲ್ ಬೋಗಿಗಳನ್ನು ರೈಲಿನ ತುದಿಗಳಲ್ಲಿ ಇರಿಸುವ ಹಿಂದೆ ಪ್ರಯಾಣಿಕರ ದಟ್ಟಣೆ, ನಿಲ್ದಾಣ ನಿರ್ವಹಣೆ, ಅನುಕೂಲ ಮತ್ತು ಸುರಕ್ಷತೆಯಂತಹ ಹಲವು ಕಾರಣಗಳಿವೆ.&lt;/p&gt;&lt;img&gt;&lt;p&gt;ರೈಲಿನ ಮಧ್ಯಭಾಗದಲ್ಲಿ ಸ್ಲೀಪರ್ ಮತ್ತು ಎಸಿ ಕೋಚ್&zwnj;ಗಳು ಇರುವುದರಿಂದ, ರಿಸರ್ವೇಶನ್ ಮಾಡಿದ ಪ್ರಯಾಣಿಕರು ತಮ್ಮ ಬೋಗಿಗಳನ್ನು ಸುಲಭವಾಗಿ ಗುರುತಿಸಬಹುದು. ಜನರಲ್ ಕೋಚ್&zwnj;ಗಳ ಬಳಿ ಇರುವ ಜನದಟ್ಟಣೆಯಿಂದ ರಿಸರ್ವ್ಡ್ ಪ್ರಯಾಣಿಕರು ದೂರವಿರುತ್ತಾರೆ. ಇದರಿಂದಾಗಿ, ರೈಲು ಹತ್ತುವಾಗ ಆಗುವ ಗೊಂದಲ ಕಡಿಮೆಯಾಗುತ್ತದೆ. ವಿಶೇಷವಾಗಿ ವೃದ್ಧರು, ಮಕ್ಕಳು ಮತ್ತು ಕುಟುಂಬದೊಂದಿಗೆ ಪ್ರಯಾಣಿಸುವವರಿಗೆ ತಮ್ಮ ಕೋಚ್&zwnj;ಗಳನ್ನು ತಲುಪುವುದು ಸ್ವಲ್ಪ ಸುಲಭವಾಗುತ್ತದೆ. ಆದರೂ, ಪ್ರಯಾಣಿಕರು ಡಿಸ್&zwnj;ಪ್ಲೇ ಬೋರ್ಡ್&zwnj;ಗಳನ್ನು ನೋಡಿ ಕೋಚ್ ಪೊಸಿಷನ್ ಖಚಿತಪಡಿಸಿಕೊಳ್ಳುವುದು ಉತ್ತಮ.&lt;/p&gt;]]></content:encoded>
            <category><![CDATA[Viral News]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/viral/train-coach-mystery-solved-why-general-compartments-stay-at-the-ends-kvn-x22h798"/>
        </item>
        <item>
            <title><![CDATA[ಕೋಟಿ ಕೋಟಿ ಹಣದ ಕನಸು, ಸಾಲದ ಬೆಟ್ಟ: ಹೇಗಿದೆ ನಗಿಸುವ 'ಸಾಲಗಾರರ ಸಹಕಾರ ಸಂಘ' ಸಿನಿಮಾ?]]></title>
            <link>https://kannada.asianetnews.com/movie-reviews/kannada-movie-saalagaarara-sahakara-sangha-review-three-village-youths-big-dreams-and-bigger-debts-gvd/articleshow-aamqi2g</link>
            <guid isPermaLink="true">https://kannada.asianetnews.com/movie-reviews/kannada-movie-saalagaarara-sahakara-sangha-review-three-village-youths-big-dreams-and-bigger-debts-gvd/articleshow-aamqi2g</guid>
            <pubDate>Sat, 12 Sep 2026 15:43:28 +0530</pubDate>
            <description><![CDATA[ಸಾಲಗಾರರ ಸಹಕಾರ ಸಂಘ Review: ಕೋಟಿ ಕೋಟಿ ಹಣದ ಕನಸು ಹೊತ್ತು ರಾಜಧಾನಿಗೆ ಬರುವ ಮೂವರು ಹಳ್ಳಿ ಯುವಕರು ಸಾಲದ ಸುಳಿಯಲ್ಲಿ ಸಿಲುಕುವ ಕಥೆಯಿದು. ಹಾಸ್ಯ, ಹಳ್ಳಿ ಸಂಭಾಷಣೆ ಮತ್ತು ಅನಿರೀಕ್ಷಿತ ತಿರುವುಗಳ ಮೂಲಕ ‘ಆಸೆ ಇರಲಿ, ದುರಾಸೆ ಬೇಡ’ ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ahphnfha5jkgxbx62r0cz0,imgname-nkn-1789207987886.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;.ಎಸ್&zwnj;.&lt;/strong&gt;&lt;/h2&gt;&lt;p&gt;ಆದಾಯಕ್ಕಿಂತ ಖರ್ಚು ಜಾಸ್ತಿಯಾಗಿ, ಕಿಸೆಗಿಂತ ಆಸೆ ದೊಡ್ಡದಾದರೆ ಮನುಷ್ಯ ಎಂಥೆಂಥಾ ಪ್ರಮಾದಗಳನ್ನು ಎದುರಿಸಬೇಕಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ. ಸುಲಭವಾಗಿ ಸಿರಿವಂತರಾಗುವ ದುರಾಸೆಗೆ ಬಿದ್ದು ಸಾಲದ ಸುಳಿಯಲ್ಲಿ ಸಿಲುಕುವ ಯುವಕರ ಪರದಾಟವನ್ನು ಹಾಸ್ಯ ಧಾಟಿಯಲ್ಲಿ ಕಟ್ಟಿಕೊಡುವ ಯತ್ನ ಈ ಸಿನಿಮಾ.&lt;/p&gt;&lt;p&gt;ಹಳ್ಳಿಯ ಗೂಡು ಬಿಟ್ಟು ರಾಜಧಾನಿಗೆ ವಲಸೆ ಬರುವ ಮೂವರು ಹಳ್ಳಿ ಪ್ರತಿಭೆಗಳ ಸುತ್ತ ಇಡೀ ಚಿತ್ರ ಗಿರಕಿ ಹೊಡೆಯುತ್ತದೆ. ಕಣ್ಣು ತುಂಬಾ ಕೋಟಿ ಕೋಟಿ ಹಣದ ಕನಸು ಹೊತ್ತು ಬರುವ ಈ ಯುವಕರು, ವಾಸ್ತವದ ನೆಲೆಗಟ್ಟಿನಲ್ಲಿ ಕೈಸುಟ್ಟುಕೊಂಡು, ಸಾಲದ ಬೆಟ್ಟ ಹೊತ್ತು ದಿಕ್ಕೆಟ್ಟು ನಿಲ್ಲುವ ಸನ್ನಿವೇಶಗಳೇ ಈ ಸಿನಿಮಾ ಜೀವಾಳ. ಆರಂಭದಲ್ಲಿ ಸಾಲಗಾರರನ್ನೆಲ್ಲ ಒಗ್ಗೂಡಿಸಿ ಸಂಘಟಿಸುವ ಸಾರಾಂಶದೊಂದಿಗೆ ಸಾಗುವ ಚಿತ್ರಕಥೆ, ದ್ವಿತೀಯಾರ್ಧ ತಲುಪುವಷ್ಟರಲ್ಲಿ ಮೂಲ ಗುರಿ ತಪ್ಪುತ್ತದೆ. ಆದರೆ ಪಾತ್ರಧಾರಿಗಳ ಹಳ್ಳಿಗಾಡಿನ ಸಂಭಾಷಣೆ, ಮ್ಯಾನರಿಸಂ ಮತ್ತು ಎಡವಟ್ಟು ವರ್ತನೆಗಳು ನಗೆ ಮೂಡಿಸುತ್ತವೆ.&lt;/p&gt;&lt;p&gt;&lt;strong&gt;ಚಿತ್ರ:&lt;/strong&gt; ಸಾಲಗಾರರ ಸಹಕಾರ ಸಂಘ&lt;/p&gt;&lt;p&gt;&lt;strong&gt;ನಿರ್ದೇಶನ: &lt;/strong&gt;ವಿಕ್ರಂ ಧನಂಜಯ&lt;/p&gt;&lt;p&gt;&lt;strong&gt;ತಾರಾಗಣ: &lt;/strong&gt;ಲೋಕೇಶ್, ಕೆಂಪೇಗೌಡ, ಪ್ರವೀಣ್, ಜಾಲಿ ಜ್ಯಾಕ್, ರಕ್ಷಿತಾ, ಸೌಮ್ಯಾ&lt;/p&gt;&lt;p&gt;ತರ್ಕಬದ್ಧತೆ ಅಥವಾ ಗಟ್ಟಿಯಾದ ಕಥೆಯ ಜಾಡನ್ನು ಅರಸುವವರಿಗೆ ಈ ಸಿನಿಮಾ ಹಾದಿ ತಪ್ಪಿಸಬಹುದು. ಆದರೆ ಸ್ವಲ್ಪ ನಗುವುದಕ್ಕೆ ಇದರಲ್ಲಿ ಸಾಮಗ್ರಿಗಳಿವೆ. ನಡುವೆ ಬರುವ ಅನಿರೀಕ್ಷಿತ ತಿರುವುಗಳು ಕುತೂಹಲ ಕಾಯ್ದುಕೊಳ್ಳಲು ನೆರವಾಗುತ್ತವೆ. &lsquo;ಆಸೆ ಪಡಬೇಕು, ಆದರೆ ದುರಾಸೆ ಪಟ್ಟರೆ ಉಳಿಗಾಲವಿಲ್ಲ&rsquo; ಎಂಬ ಸಂದೇಶವನ್ನು ರವಾನಿಸಲಾಗಿದೆ. ಕೆಂಪೇಗೌಡ, ಲೋಕೇಶ್ ಮತ್ತು ಪ್ರವೀಣ್&zwnj;ಕುಮಾರ್ ಅವರ ಪಾತ್ರಗಳು ನಗಿಸುತ್ತವೆ. ಜಾಲಿ ಜಾಕ್, ಪೂಜಾ, ಹಿರಿಯ ಕಲಾವಿದ ಹೊನ್ನವಳ್ಳಿ ಕೃಷ್ಣ ಹಾಗೂ ಲಕ್ಷ್ಮೀ ಸಿದ್ದಯ್ಯ ಪೋಷಕ ಪಾತ್ರಗಳಲ್ಲಿ ಚಿತ್ರಕ್ಕೆ ಸಾಥ್ ನೀಡಿದ್ದಾರೆ.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/kannada-movie-saalagaarara-sahakara-sangha-review-three-village-youths-big-dreams-and-bigger-debts-gvd/articleshow-aamqi2g"/>
        </item>
        <item>
            <title><![CDATA[America America 2 Review: ಪತ್ನಿ ಮತ್ತು ಮಾಜಿ ಪ್ರಿಯಕರನನ್ನು ಬಿಟ್ಟು ಗಂಡ ಎಲ್ಲಿಗೆ ಹೋದ? ಸಖತ್ ಟ್ವಿಸ್ಟ್]]></title>
            <link>https://kannada.asianetnews.com/movie-reviews/sandalwood-film-america-america-2-review-prithvi-ambaar-nirup-bhandari-and-shanvi-srivastava-shine-gvd/articleshow-i1cch18</link>
            <guid isPermaLink="true">https://kannada.asianetnews.com/movie-reviews/sandalwood-film-america-america-2-review-prithvi-ambaar-nirup-bhandari-and-shanvi-srivastava-shine-gvd/articleshow-i1cch18</guid>
            <pubDate>Sat, 12 Sep 2026 15:30:27 +0530</pubDate>
            <description><![CDATA[ಅಮೆರಿಕಾ ಅಮೆರಿಕಾ 2 Review: ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾ ನಗಿಸುತ್ತಾ, ಯೋಚಿಸುವಂತೆ ಮಾಡುತ್ತದೆ. ಪ್ರೀತಿ, ದಾಂಪತ್ಯ ಮತ್ತು ಕುಟುಂಬದ ತಾಕಲಾಟಗಳನ್ನು ಪೃಥ್ವಿ ಅಂಬಾರ್‌, ನಿರೂಪ್‌ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ ಪಾತ್ರಗಳ ಮೂಲಕ ಕಟ್ಟಿಕೊಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2agypfya5ctxf7vnf113x9e,imgname-bnj-1789207206398.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಆರ್&zwnj;. ಕೇಶವಮೂರ್ತಿ&lt;/strong&gt;&lt;/h2&gt;&lt;p&gt;ಪ್ರಮುಖ ದೃಶ್ಯವೊಂದರಲ್ಲಿ ಗಂಡ, ಹೆಂಡತಿ ಮತ್ತು ಆಕೆಯ ಮಾಜಿ ಪ್ರಿಯಕರ ಮೂವರು ಒಟ್ಟಿಗೆ ಕೂತಿದ್ದಾರೆ. ಗಂಡ ಆದವನಿಗೆ ಆ ಇನ್ನೊಬ್ಬ ತನ್ನ ಪತ್ನಿಯ ಹಳೆಯ ಪ್ರಿಯಕರ ಎಂಬುದು ಗೊತ್ತೇ? ಈಗ ಗಂಡನಿಗೆ ಪೋನ್&zwnj; ಕಾಲ್&zwnj; ಬರುತ್ತದೆ. ತನ್ನ ಪತ್ನಿ ಮತ್ತು ಆಕೆಯ ಮಾಜಿ ಪ್ರಿಯಕರನನ್ನು ಅಲ್ಲೇ ಬಿಟ್ಟು ಪೋನ್&zwnj; ಎತ್ತಿಕೊಂಡು ಹೋಗುವ ಮುನ್ನ ಆತ ಇಬ್ಬರಿಗೂ ಏನು ಹೇಳಬಹುದು... ಎಂದು ಪ್ರೇಕ್ಷಕರು ಯೋಚನೆ ಮಾಡುತ್ತಿರುವಾಗಲೇ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್&zwnj; ಸಖತ್&zwnj; ಕ್ರಿಯೇಟಿವ್&zwnj; ಹಾಗೂ ವ್ಯಂಗ್ಯ ಭರಿತವಾದ ಸರ್ಪ್ರೈಸ್&zwnj; ಟ್ವಿಸ್ಟ್&zwnj; ಕೊಡುತ್ತಾರೆ. ಪ್ರೇಕ್ಷಕರು ಜೋರಾಗಿ ನಗುತ್ತಾರೆ. ಆ ನಗು ಮೂಡಿಸುವ ಮೌನದಲ್ಲಿ ಆಲೋಚನೆಗೂ ಮುಂದಾಗುತ್ತಾರೆ. ಯಾಕೆಂದರೆ ಇಂದಿನ ಯುವ ಮನಸ್ಸುಗಳು ಮಾತನಾಡಿಕೊಳ್ಳಬೇಕಾದ ವಿಷಯಗಳೇನು ಎಂಬುದನ್ನು ತಮಾಷೆಯಾಗಿಯೇ ಹೇಳಲಾಗಿದೆ.&lt;/p&gt;&lt;p&gt;ಹೀಗೆ &lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾ ಅಲ್ಲಲ್ಲಿ ನಗಿಸುತ್ತಾ, ಯೋಚಿಸುತ್ತಾ, ಆಲೋಚನೆ ಮಾಡುವಂತೆ ಹೇಳುತ್ತಾ ಸಾಗುತ್ತದೆ. ಮೇಷ್ಟ್ರು ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ಹೋಗುವಂತೆ ಪ್ರೇಕ್ಷಕರನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುವ ಗುಣವನ್ನು ಹೀಗೆ ನಾಗತಿಹಳ್ಳಿ ಚಂದ್ರಶೇಖರ್&zwnj; ತಮ್ಮ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಇಷ್ಟಕ್ಕೂ ಆ ಸೀನ್&zwnj;ನಲ್ಲಿ ಗಂಡನ ಪಾತ್ರಧಾರಿ ಹೇಳಿದ್ದೇನು ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು.&lt;/p&gt;&lt;p&gt;ಹಳೆಯದರಿಂದಲೇ ಹೊಸದು ಹುಟ್ಟಿಕೊಳ್ಳುತ್ತವೆ ಎನ್ನುವ ಈ ಸಿನಿಮಾ ಪ್ರೇಕ್ಷಕನಿಗೆ ಭಾವನಾತ್ಮಕ ಅನುಭವ ನೀಡುತ್ತದೆ. ಮೇಲ್ನೊಟಕ್ಕೆ ಹೆಣ್ಣಿನ ಸುತ್ತಾ ಸಾಗುವ ಕತೆಯಾಗಿ ಕಂಡರೂ ಇದು ಕುಟುಂಬದ ಕತೆ. ತಪ್ಪಿತಸ್ಥನ ಸ್ಥಾನದಲ್ಲಿ ನಿಂತಿರುವ ತಂದೆ, ಹೊರ ಜಗತ್ತಿನಲ್ಲಿ ದುಡಿಯಲೇ ಬೇಕಾದ ಅನಿವಾರ್ಯತೆ, ಭಾವನೆಗಳೇ ಇಲ್ಲದ ಆಕೆಯ ಗಂಡ, ಪ್ರತಿಯೊಂದನ್ನು ಕೇರ್&zwnj; ಮಾಡುವ ಗಾಢ ಪ್ರೇಮಿ, ಬಿಡುಗಡೆ ಬಯಸುವ ಹೆಣ್ಣಿನ ತಾಕಲಾಟಗಳು...&lt;/p&gt;&lt;p&gt;&lt;strong&gt;ಚಿತ್ರ: &lt;/strong&gt;ಅಮೆರಿಕಾ ಅಮೆರಿಕಾ 2&lt;/p&gt;&lt;p&gt;&lt;strong&gt;ನಿರ್ದೇಶನ:&lt;/strong&gt; ನಾಗತಿಹಳ್ಳಿ ಚಂದ್ರಶೇಖರ್&zwnj;&lt;/p&gt;&lt;p&gt;&lt;strong&gt;ತಾರಾಗಣ:&lt;/strong&gt; ಪೃಥ್ವಿ ಅಂಬಾರ್&zwnj;, ನಿರೂಪ್&zwnj; ಭಂಡಾರಿ, ಶಾನ್ವಿ ಶ್ರೀವಾಸ್ತವ, ಮಂಡ್ಯ ರಮೇಶ್&zwnj;, ಮಾಲತಿ ಸುಧೀರ್&zwnj;, ರೀತು ಸಿಂಗ್&zwnj;&lt;/p&gt;&lt;p&gt;&lt;strong&gt;ರೇಟಿಂಗ್&zwnj;: &lt;/strong&gt;3&lt;/p&gt;&lt;p&gt;ಈ ಎಲ್ಲವನ್ನೂ ಮೂರು ಪಾತ್ರಗಳ&zwj; ಮೂಲಕ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಬರುವ ನುಡಿ (ಶಾನ್ವಿ ಶ್ರೀವಾಸ್ತವ), ನಿನಾದ್&zwnj; (ನಿರೂಪ್&zwnj; ಭಂಡಾರಿ), ನೀಲ್&zwnj; (ಪೃಥ್ವಿ ಅಂಬಾರ್&zwnj;), ಸಿರಿ (ರೀತು ಸಿಂಗ್&zwnj;) ಪಾತ್ರಧಾರಿಗಳು ಯಾರೋ ಹೊರಗಿನವರು ಅನಿಸಲ್ಲ. ಅವು ನಾವೇ ಅನಿಸುವ ಮಟ್ಟಿಗೆ ಪ್ರೇಕ್ಷನಿಗೆ ಪಾತ್ರಗಳು ಸನಿಹವಾಗುತ್ತವೆ. ಶ್ರೀ ಕ್ರೇಜಿಮೈಂಡ್ಸ್&zwnj; ಸಂಕಲನ, ಮನೋ ಮೂರ್ತಿ ಸಂಗೀತ, ಎಸ್&zwnj;.ಕೆ.ರಾವ್&zwnj; ಛಾಯಾಗ್ರಾಹಣ ನಿರ್ದೇಶಕರ ಕತೆ ಕಟ್ಟುವಿಗೆಗೆ ಸಂಪೂರ್ಣವಾಗಿ ಶಕ್ತಿ ತುಂಬಿವೆ. ತಂಪಾಗಿ ಕಾಡುವ ಭಾವನೆಗಳ ಸಿನಿಮಾ ನೋಡಬೇಕು ಎನಿಸುವವರಿಗೆ &lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾ ಉತ್ತಮ ಆಯ್ಕೆ.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/sandalwood-film-america-america-2-review-prithvi-ambaar-nirup-bhandari-and-shanvi-srivastava-shine-gvd/articleshow-i1cch18"/>
        </item>
        <item>
            <title><![CDATA[14 ಕೋಟಿ ರೂ. ಖರ್ಚು, 180 ಬಾರಿ ಹೋಟೆಲ್ ವಾಸ್ತವ್ಯ: ಗಂಡನ ಸೀಕ್ರೆಟ್ ಅಫೇರ್ ರಟ್ಟು ಮಾಡಿದ ಹೆಂಡತಿ!]]></title>
            <link>https://kannada.asianetnews.com/relationship/wife-tracks-insurance-policies-finds-7-year-affair-3-6-crore-transfers-and-180-hotel-stays/articleshow-qq1pc9s</link>
            <guid isPermaLink="true">https://kannada.asianetnews.com/relationship/wife-tracks-insurance-policies-finds-7-year-affair-3-6-crore-transfers-and-180-hotel-stays/articleshow-qq1pc9s</guid>
            <pubDate>Sat, 12 Sep 2026 15:29:49 +0530</pubDate>
            <description><![CDATA[ಪತಿಯ ವಿಮಾ ಪಾಲಿಸಿಗಳ ಬಗ್ಗೆ ಚೀನಾದ ಮಹಿಳೆಗೆ ಮೂಡಿದ ಅನುಮಾನ, ಏಳು ವರ್ಷಗಳ ಹಿಂದಿನ ಸಂಬಂಧವನ್ನು ಬಯಲಿಗೆಳೆಯಿತು. 50ಕ್ಕೂ ಹೆಚ್ಚು ವಿಮಾ ಪಾಲಿಸಿಗಳು, ಕೋಟ್ಯಂತರ ಯುವಾನ್ ವಹಿವಾಟು ಹಾಗೂ 180ಕ್ಕೂ ಹೆಚ್ಚು ಹೋಟೆಲ್ ವಾಸದ ದಾಖಲೆಗಳು ಪ್ರಕರಣದಲ್ಲಿ ಬೆಳಕಿಗೆ ಬಂದವು. ನ್ಯಾಯಾಲಯವು ಅನುಚಿತವಾಗಿ ನೀಡಿದ್ದ ಸುಮಾರು 9 ಲಕ್ಷ ಯುವಾನ್‌ ಉಡುಗೊರೆಗಳನ್ನು ಪತ್ನಿಗೆ ಮರಳಿಸುವಂತೆ ಆದೇಶಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m28gts5n1bw52824scs8ents,imgname-how-a-wife-exposed-a-hidden-relationship-of-husband-1789139969205.jpg" type="image/jpeg" height="390" width="690"/>
            <content:encoded><![CDATA[&lt;h2&gt;ವಿಮಾ ಪಾಲಿಸಿಗಳ ಬಗ್ಗೆ ಅನುಮಾನ... ಕೊನೆಗೆ ಬಯಲಾಯ್ತು 7 ವರ್ಷದ ರಹಸ್ಯ!&lt;/h2&gt;&lt;p&gt;ಚೀನಾದ ಗುವಾಂಗ್ಕ್ಸಿ ಪ್ರಾಂತ್ಯದ ಲಿಯುಝೌನಲ್ಲಿ ನಡೆದ ಈ ಪ್ರಕರಣ, ಪತಿಯ ವಿಮಾ ಖರೀದಿಗಳ ಬಗ್ಗೆ ಪತ್ನಿಗೆ ಮೂಡಿದ ಅನುಮಾನ ಹೇಗೆ ವರ್ಷಗಳ ಹಿಂದಿನ ರಹಸ್ಯ ಸಂಬಂಧವನ್ನು ಬಯಲಿಗೆಳೆಯಿತು ಎಂಬುದಕ್ಕೆ ಉದಾಹರಣೆಯಾಗಿದೆ. ಪ್ರಕರಣದ ವಿವರಗಳು ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದು, ದೊಡ್ಡ ಮೊತ್ತದ ಹಣಕಾಸು ವಹಿವಾಟುಗಳೂ ಚರ್ಚೆಗೆ ಬಂದಿವೆ.&lt;/p&gt;&lt;h3&gt;2017ರಲ್ಲೇ ಮೊದಲ ಅನುಮಾನ&lt;/h3&gt;&lt;p&gt;2017ರಲ್ಲಿ ಝೆನ್ ಎಂಬ ಮಹಿಳೆಗೆ ತನ್ನ ಪತಿ ಗುವೊ ಮತ್ತು ಲಿ ಎಂಬ ವಿಮಾ ಏಜೆಂಟ್ ನಡುವೆ ನಡೆದಿದ್ದ ಪ್ರಣಯ ಸಂದೇಶಗಳು ಸಿಕ್ಕಿದ್ದವು. ಕೆಲವು ಸಂದೇಶಗಳಲ್ಲಿ ಪ್ರೇಮಪೂರ್ಣ ಮಾತುಕತೆಗಳ ಜೊತೆಗೆ 520 ಯುವಾನ್&zwnj;ನ ವರ್ಗಾವಣೆಗಳೂ ಕಂಡುಬಂದಿದ್ದವು. ಚೀನಾದ ಆನ್&zwnj;ಲೈನ್ ಸಂಸ್ಕೃತಿಯಲ್ಲಿ 520 ಎಂಬ ಮೊತ್ತವನ್ನು &lsquo;ಐ ಲವ್ ಯು&rsquo; ಎಂಬ ಅರ್ಥದಲ್ಲಿ ಬಳಸಲಾಗುತ್ತದೆ.&lt;/p&gt;&lt;p&gt;ಆದರೆ ಆ ಸಂದರ್ಭದಲ್ಲಿ ಈ ವಿಚಾರ ಅಲ್ಲಿಗೇ ಮುಗಿದಿತ್ತು.&lt;/p&gt;&lt;p&gt;&lt;strong&gt;ಆರೋಗ್ಯ ವಿಮೆಯಿಂದ ಮತ್ತೆ ಶುರುವಾಯ್ತು ತನಿಖೆ&lt;/strong&gt;&lt;/p&gt;&lt;p&gt;2024ರಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ, ಪತಿ ತನ್ನ ಮತ್ತು ತಮ್ಮ ಚಿಕ್ಕ ಮಗಳ ಹೆಸರಿನಲ್ಲಿ ಆರೋಗ್ಯ ವಿಮಾ ಪಾಲಿಸಿಗಳನ್ನು ಖರೀದಿಸಿರುವುದು ಝೆನ್&zwnj;ಗೆ ತಿಳಿಯಿತು. ಇದರಿಂದ ಪತಿಯ ವಿಮಾ ವ್ಯವಹಾರಗಳ ಬಗ್ಗೆ ಮತ್ತೊಮ್ಮೆ ಅನುಮಾನ ಮೂಡಿತು.&lt;/p&gt;&lt;p&gt;ಹೆಚ್ಚಿನ ಮಾಹಿತಿ ಪರಿಶೀಲಿಸಿದಾಗ, ಗುವೊ ಹಲವು ವರ್ಷಗಳಲ್ಲಿ ಲಿಗೆ 30 ಲಕ್ಷ ಯುವಾನ್&zwnj;ಗಿಂತ ಹೆಚ್ಚು ಹಣ ವರ್ಗಾಯಿಸಿರುವುದು ಪತ್ತೆಯಾಯಿತು. ಅಲ್ಲದೆ, ಲಿ ಮೂಲಕ 50ಕ್ಕೂ ಹೆಚ್ಚು ವಿಮಾ ಪಾಲಿಸಿಗಳನ್ನು ಖರೀದಿಸಲಾಗಿದ್ದು, ಅವುಗಳಿಗೆ 1 ಕೋಟಿ ಯುವಾನ್&zwnj;ಗಿಂತ ಹೆಚ್ಚಿನ ಪ್ರೀಮಿಯಂ ಪಾವತಿಸಲಾಗಿತ್ತು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;180ಕ್ಕೂ ಹೆಚ್ಚು ಹೋಟೆಲ್ ವಾಸ!&lt;/strong&gt;&lt;/p&gt;&lt;p&gt;ತನಿಖೆ ಮುಂದುವರಿದಂತೆ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿತು. ಪೊಲೀಸ್ ವರದಿಯ ಪ್ರಕಾರ, ಗುವೊ ಸಂಬಂಧದ ಅವಧಿಯಲ್ಲಿ ಲಿಯೊಂದಿಗೆ 180ಕ್ಕೂ ಹೆಚ್ಚು ಬಾರಿ ಹೋಟೆಲ್&zwnj;ಗಳಲ್ಲಿ ತಂಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದು ಇಬ್ಬರ ನಡುವಿನ ಸಂಬಂಧ ಕೇವಲ ವೃತ್ತಿಪರ ಸಂಪರ್ಕವಾಗಿರಲಿಲ್ಲ ಎಂಬ ವಾದಕ್ಕೆ ಪ್ರಮುಖ ಸಾಕ್ಷಿಯಾಯಿತು.&lt;/p&gt;&lt;p&gt;&lt;strong&gt;ನ್ಯಾಯಾಲಯದಲ್ಲಿ ಏನಾಯ್ತು?&lt;/strong&gt;&lt;/p&gt;&lt;p&gt;ಲಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದರು. ಹೋಟೆಲ್ ಭೇಟಿಗಳು ಕೆಲಸದ ನಿಮಿತ್ತ ನಡೆದವು ಎಂದು ಅವರು ವಾದಿಸಿದರು. ವಿಮಾ ಕಂತುಗಳನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಗುವೊ ಮತ್ತು ಅವರ ಪತ್ನಿ ಹಣವನ್ನು ವಾಪಸ್ ಪಡೆಯಲು ಪ್ರಕರಣ ದಾಖಲಿಸಿದ್ದಾರೆ ಎಂದೂ ಅವರು ಹೇಳಿಕೊಂಡರು.&lt;/p&gt;&lt;p&gt;ಆದರೆ ಗುವೊ ಆರ್ಥಿಕ ಸಂಕಷ್ಟದಲ್ಲಿದ್ದೆ ಎಂಬ ವಾದವನ್ನು ತಳ್ಳಿಹಾಕಿ, ತಮ್ಮ ಬಳಿ ಹಲವು ಆಸ್ತಿಗಳಿವೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ಲಿಯೊಂದಿಗಿನ ಸಂಬಂಧವು ತಾನು ಹಲವು ವಿಮಾ ಉತ್ಪನ್ನಗಳನ್ನು ಖರೀದಿಸಲು ಕಾರಣವಾಯಿತು ಎಂದೂ ಒಪ್ಪಿಕೊಂಡಿದ್ದಾನೆ.&lt;/p&gt;&lt;p&gt;&lt;strong&gt;ಪತ್ನಿಗೆ ಸಿಕ್ಕಿತು ನ್ಯಾಯಾಂಗದ ಬೆಂಬಲ&lt;/strong&gt;&lt;/p&gt;&lt;p&gt;ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯವು ಗುವೊ ಮತ್ತು ಲಿ ನಡುವೆ ಅನುಚಿತ ಸಂಬಂಧವಿತ್ತು ಎಂದು ತೀರ್ಮಾನಿಸಿತು. ಅನುಚಿತವಾಗಿ ನೀಡಲಾಗಿದೆ ಎಂದು ಪರಿಗಣಿಸಲಾದ ಸುಮಾರು 9 ಲಕ್ಷ ಯುವಾನ್&zwnj; (ಸುಮಾರು ₹1.1 ಕೋಟಿ) ಉಡುಗೊರೆಗಳನ್ನು ಬಡ್ಡಿಯೊಂದಿಗೆ ಝೆನ್&zwnj;ಗೆ ಹಿಂದಿರುಗಿಸುವಂತೆ ಲಿಗೆ ಆದೇಶಿಸಿತು. ನಂತರ ಸಲ್ಲಿಸಿದ ಮರುವಿಚಾರಣೆಯ ಮನವಿಯನ್ನೂ ತಿರಸ್ಕರಿಸಲಾಯಿತು.&lt;/p&gt;&lt;p&gt;ಈ ಪ್ರಕರಣದಲ್ಲಿ ಗಮನ ಸೆಳೆದದ್ದು ಕೇವಲ ವೈವಾಹಿಕ ಸಂಬಂಧವಲ್ಲ; ವಿಮಾ ಖರೀದಿಗಳು, ಹಣಕಾಸು ವ್ಯವಹಾರಗಳು ಮತ್ತು ಹೋಟೆಲ್ ದಾಖಲೆಗಳು ಸೇರಿ ಹೇಗೆ ಒಂದು ದೊಡ್ಡ ರಹಸ್ಯದ ಜಾಡು ಹಿಡಿಯಲು ಕಾರಣವಾದವು ಎಂಬುದಾಗಿದೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/relationship/wife-tracks-insurance-policies-finds-7-year-affair-3-6-crore-transfers-and-180-hotel-stays/articleshow-qq1pc9s"/>
        </item>
        <item>
            <title><![CDATA[ಅನಂತ್ ಅಂಬಾನಿ ವಂತಾರಾದಲ್ಲಿ ಮಾಧುರಿಗೆ ಸಿಕ್ತು ಪುನರ್ಜನ್ಮ, ಚೇತರಿಸಿಕೊಂಡು ನಂದನಿ ಮಠಕ್ಕೆ ಮರಳಿದ ಮಹಾದೇವಿ!]]></title>
            <link>https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k</link>
            <guid isPermaLink="true">https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k</guid>
            <pubDate>Sat, 12 Sep 2026 15:28:42 +0530</pubDate>
            <description><![CDATA[ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 'ಮಾಧುರಿ' ಆನೆಯು, ಗುಜರಾತ್‌ನ ವಂತಾರಾ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದೆ. ಉನ್ನತಾಧಿಕಾರ ಸಮಿತಿಯ ಅನುಮೋದನೆಯೊಂದಿಗೆ, ಕಟ್ಟುನಿಟ್ಟಾದ ಷರತ್ತುಗಳ ಅಡಿಯಲ್ಲಿ ಆನೆಯು ತನ್ನ ಮೂಲ ನಿವಾಸವಾದ ಕೊಲ್ಹಾಪುರಕ್ಕೆ ಮರಳುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2agtbhsmzscgnhz318pm7j5,imgname-elephant-madhuri-1789207064120.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೊಲ್ಹಾಪುರ:&lt;/strong&gt; ಗುಜರಾತ್&zwnj;ನ ಜಾಮ್&zwnj;ನಗರದಲ್ಲಿರುವ ಅಂಬಾನಿ ಸಮೂಹದ &lsquo;ವಂತಾರಾ&rsquo; (Vantara) ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವಿಶೇಷ ವೈದ್ಯಕೀಯ ಆರೈಕೆ ಮತ್ತು ಪುನರ್ವಸತಿ ಪಡೆದ 'ಮಾಧುರಿ' (ಸ್ಥಳೀಯವಾಗಿ 'ಮಹಾದೇವಿ' ಎಂದೂ ಕರೆಯಲ್ಪಡುವ) ಆನೆ, ಅಂತಿಮವಾಗಿ ತನ್ನ ಮೂಲ ನಿವಾಸವಾದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮರಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆ ಹಾಗೂ ಚಲನಶೀಲತೆಯ ಸವಾಲುಗಳನ್ನು ಎದುರಿಸುತ್ತಿದ್ದ ಮಾಧುರಿ, ಈಗ ಚೇತರಿಸಿಕೊಂಡು ಕೊಲ್ಹಾಪುರಕ್ಕೆ ಮರಳುತ್ತಿರುವುದು ಒಂದು ಪ್ರಮುಖ ಮೈಲಿಗಲ್ಲಾಗಿದೆ.&lt;/p&gt;&lt;h2&gt;ಆರೋಗ್ಯ ಹದಗೆಡಲು ಕಾರಣವಾದ ಹಿನ್ನೆಲೆ:&lt;/h2&gt;&lt;p&gt;ಜುಲೈ 30, 2023 ರಂದು ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿಯ (HPC) ನಿರ್ದೇಶನದಂತೆ ಮಾಧುರಿಯನ್ನು ವಂತಾರಾಕ್ಕೆ ಕರೆತರಲಾಗಿತ್ತು. ವರ್ಷಗಳ ಕಾಲ ಗಟ್ಟಿಯಾದ ಕಾಂಕ್ರೀಟ್ ಮೇಲ್ಮೈಯಲ್ಲಿ ಕಟ್ಟಿಹಾಕಿದ್ದು, ಸರಪಳಿಗಳಿಂದ ನಿರ್ಬಂಧಿತ ಚಲನೆ, ಬಿಸಿ ಡಾಂಬರು ರಸ್ತೆಗಳಲ್ಲಿ ದೂರದವರೆಗೆ ನಡೆಸುವುದು ಹಾಗೂ ಹಬ್ಬ-ಹರಿದಿನಗಳ ಮೆರವಣಿಗೆಗಳಲ್ಲಿ ಭಾಗವಹಿಸುವಂತೆ ಮಾಡಿದ್ದರಿಂದ ಆಕೆಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ವಂಟಾರಾಕ್ಕೆ ಬಂದಾಗ ಆಕೆ ತೀವ್ರ ಸ್ವರೂಪದ ಸಂಧಿವಾತ (Arthritis), ದೀರ್ಘಕಾಲದ ಪಾದದ ಕೊಳೆತ (Foot Rot) ಮತ್ತು ತೀವ್ರ ಚಲನಶೀಲತೆಯ ಸಮಸ್ಯೆಗಳಿಂದ ಬಳಲುತ್ತಿದ್ದಳು.&lt;/p&gt;&lt;h2&gt;ವಂತಾರಾದಲ್ಲಿ ದೊರೆತ ಆಧುನಿಕ ಚಿಕಿತ್ಸೆ ಮತ್ತು ಒಡನಾಟ:&lt;/h2&gt;&lt;p&gt;ಅನಂತ್ ಅಂಬಾನಿ ಅವರ ಮಾರ್ಗದರ್ಶನದಲ್ಲಿ ವಂತಾರಾದ ಪಶುವೈದ್ಯರು, ಆರೈಕೆದಾರರು, ಪೌಷ್ಟಿಕತಜ್ಞರು ಹಾಗೂ ನಡವಳಿಕೆಯ ತಜ್ಞರ ತಂಡವು ಮಾಧುರಿಗೆ ತೀವ್ರ ಪುನರ್ವಸತಿ ಕಾರ್ಯಕ್ರಮವನ್ನು ರೂಪಿಸಿತು.&lt;/p&gt;&lt;p&gt;&lt;strong&gt;ದೈಹಿಕ ಚಿಕಿತ್ಸೆ: &lt;/strong&gt;ಜಲಚಿಕಿತ್ಸೆ (Hydrotherapy), ಲೇಸರ್ ಥೆರಪಿ, ವಿಶೇಷ ಪಾದದ ಆರೈಕೆ ಹಾಗೂ ಪೌಷ್ಟಿಕ ಆಹಾರ ನೀಡುವ ಮೂಲಕ ಚಲನಶೀಲತೆಯನ್ನು ಸುಧಾರಿಸಲಾಯಿತು.&lt;/p&gt;&lt;p&gt;&lt;strong&gt;ಭಾವನಾತ್ಮಕ ಪುನರ್ವಸತಿ: &lt;/strong&gt;ಸುರಕ್ಷಿತ ವಾತಾವರಣದಲ್ಲಿ ಇತರ ಆನೆಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಿದ್ದರಿಂದ, ವರ್ಷಗಳ ಬಂಧನದಿಂದ ಉಂಟಾಗಿದ್ದ ಮಾನಸಿಕ ಒತ್ತಡ ಕಡಿಮೆಯಾಗಿ ಭದ್ರತೆಯ ಪ್ರಜ್ಞೆ ಮೂಡಿತು.&lt;/p&gt;&lt;h2&gt;ಉನ್ನತಾಧಿಕಾರ ಸಮಿತಿ (HPC) ಅನುಮೋದನೆ ಮತ್ತು ಷರತ್ತುಗಳು:&lt;/h2&gt;&lt;p&gt;ಮಾಧುರಿಯ ಆರೋಗ್ಯದಲ್ಲಿ ಕಂಡುಬಂದ ಸುಧಾರಣೆಯನ್ನು ಪರಿಶೀಲಿಸಿದ ಉನ್ನತಾಧಿಕಾರ ಸಮಿತಿಯು (HPC) ಸೆಪ್ಟೆಂಬರ್ 9 ರಂದು ಕೊಲ್ಹಾಪುರಕ್ಕೆ ವರ್ಗಾಯಿಸಲು ಅಗತ್ಯವಾದ ಸಾರಿಗೆ ಪರವಾನಗಿಗಳನ್ನು ನೀಡಿದೆ. ಕೊಲ್ಹಾಪುರದ ನಂದನಿಯಲ್ಲಿರುವ ಸೌಲಭ್ಯವನ್ನು ಪರಿಶೀಲಿಸಿದ ನಂತರವೇ ಈ ಅನುಮತಿ ನೀಡಲಾಗಿದ್ದು, ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಲಾಗಿದೆ.&lt;/p&gt;&lt;ul&gt; &lt;li&gt;ಮಾಧುರಿಯನ್ನು ಇನ್ಮುಂದೆ ಯಾವುದೇ ಮೆರವಣಿಗೆ ಅಥವಾ ಇತರ ಧಾರ್ಮಿಕ/ವಾಣಿಜ್ಯ ಉದ್ದೇಶಗಳಿಗೆ ಬಳಸುವಂತಿಲ್ಲ.&lt;/li&gt; &lt;li&gt;ಆನೆಗೆ ದಿನದ 24 ಗಂಟೆಯೂ ನಿರಂತರ ಆರೈಕೆ ಸಿಗಬೇಕು.&lt;/li&gt; &lt;li&gt;ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಯಬೇಕು.&lt;/li&gt;&lt;/ul&gt;&lt;h2&gt;ನಂದನಿ ಮಠಕ್ಕೆ ಸುಸಜ್ಜಿತ ಸಾರಿಗೆಯೊಂದಿಗೆ ವಾಪಸಾತಿ:&lt;/h2&gt;&lt;p&gt;ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ವಾಸಿಸುತ್ತಿದ್ದ ಕೊಲ್ಹಾಪುರದ ನಂದನಿ ಮಠಕ್ಕೆ ಮಾಧುರಿಯನ್ನು ಪಶುವೈದ್ಯಕೀಯ ತಂಡದೊಂದಿಗೆ ವಿಶೇಷವಾಗಿ ಸುಸಜ್ಜಿತವಾದ 'ಆನೆ ಆಂಬ್ಯುಲೆನ್ಸ್'ನಲ್ಲಿ ಕರೆತರಲಾಗುತ್ತಿದೆ. ನಂದನಿಯ ಆವರಣದಲ್ಲಿ ಅಗತ್ಯ ಮೂಲಸೌಕರ್ಯ, ವೈದ್ಯಕೀಯ ಉಪಕರಣ ಹಾಗೂ ಔಷಧಿಗಳ ವ್ಯವಸ್ಥೆ ಮಾಡಲು ವಂತಾರಾ ನೆರವಾಗಿದೆ. ಪ್ರಸ್ತುತ ಟೌನ್ ಪ್ಲಾನಿಂಗ್ ನಿಯಮಗಳಿಂದಾಗಿ ಮಠದ ಆವರಣದ ದೊಡ್ಡ ಮಟ್ಟದ ನವೀಕರಣಕ್ಕೆ ತಡೆಯಿದೆಯಾದರೂ, ಲಭ್ಯವಿರುವ ಜಾಗದಲ್ಲೇ ಉತ್ತಮ ವಾತಾವರಣ ನಿರ್ಮಿಸಲಾಗಿದೆ.&lt;/p&gt;&lt;p&gt;ವಂತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ಭೇಟಿ ನೀಡಿ ಮಾಧುರಿಯನ್ನು ತಪಾಸಣೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.&lt;/p&gt;&lt;p&gt;&quot;ಮಾಧುರಿಯ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ. ಆಕೆಯ ಆರೋಗ್ಯ, ಕಲ್ಯಾಣ ಮತ್ತು ಘನತೆಗೆ ನಮ್ಮ ಬದ್ಧತೆ ಎಂದಿಗೂ ಮುಂದುವರಿಯುತ್ತದೆ,&quot; ಎಂದು ವಂತಾರಾ ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/elephant-madhuri-returns-to-kolhapur-after-successful-ananth-ambani-vantara-rehabilitation-gdp/articleshow-4ge7y7k"/>
        </item>
        <item>
            <title><![CDATA[Rusty tap cleaning hack: ಈ ಮಿಶ್ರಣದಲ್ಲಿ ಅದ್ದಿ ಜಸ್ಟ್ ಬ್ರಷ್ ಮಾಡಿ.. ತುಕ್ಕು, ಉಪ್ಪಿನ ಕಲೆ ಎಲ್ಲವೂ ಮಾಯ]]></title>
            <link>https://kannada.asianetnews.com/gallery/life/how-to-remove-rust-from-water-taps-viral-cleaning-hack-wxpmmq1</link>
            <guid isPermaLink="true">https://kannada.asianetnews.com/gallery/life/how-to-remove-rust-from-water-taps-viral-cleaning-hack-wxpmmq1</guid>
            <pubDate>Sat, 12 Sep 2026 15:20:25 +0530</pubDate>
            <description><![CDATA[How to remove rust from taps: ಬಾತ್‌ರೂಂ ನಲ್ಲಿಗಳಿಗೆ ತುಕ್ಕು ಹಿಡಿದು ಹಾಳಾಗಿದ್ಯಾ? ಹೊಸ ನಲ್ಲಿ ಹಾಕಿಸೋ ಮುನ್ನ ಈ ಟಿಪ್ಸ್ ನೋಡಿ! ಕಿಚನ್‌ನಲ್ಲಿರೋ ಮೂರೇ ಮೂರು ಪದಾರ್ಥದಿಂದ ಹಳೆಯ ನಲ್ಲಿಯನ್ನು ಹೊಚ್ಚ ಹೊಸದರಂತೆ ಮಾಡುವ ಸೂಪರ್ ವೈರಲ್ ಹ್ಯಾಕ್ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ag3f0e7fx7f0xq3b5erq43,imgname-thumbnail---2026-09-12t151427.533-1789206313998.jpg" type="image/jpeg" height="390" width="690"/>
            <content:encoded><![CDATA[&lt;p&gt;How to remove rust from taps: ಬಾತ್&zwnj;ರೂಂ ನಲ್ಲಿಗಳಿಗೆ ತುಕ್ಕು ಹಿಡಿದು ಹಾಳಾಗಿದ್ಯಾ? ಹೊಸ ನಲ್ಲಿ ಹಾಕಿಸೋ ಮುನ್ನ ಈ ಟಿಪ್ಸ್ ನೋಡಿ! ಕಿಚನ್&zwnj;ನಲ್ಲಿರೋ ಮೂರೇ ಮೂರು ಪದಾರ್ಥದಿಂದ ಹಳೆಯ ನಲ್ಲಿಯನ್ನು ಹೊಚ್ಚ ಹೊಸದರಂತೆ ಮಾಡುವ ಸೂಪರ್ ವೈರಲ್ ಹ್ಯಾಕ್ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ದುಬಾರಿ ಖರ್ಚು ಮಾಡಬೇಕಿಲ್ಲ&lt;/strong&gt;ಮನೆಯ ಬಾತ್&zwnj;ರೂಂ ಅಥವಾ ಅಡುಗೆ ಮನೆಯಲ್ಲಿರುವ ವಾಟರ್ ಟ್ಯಾಪ್&zwnj;ಗಳು (ನಲ್ಲಿಗಳು) ಹಳೆಯದಾಗುತ್ತಿದ್ದಂತೆ ಅಥವಾ ನೀರಿನಲ್ಲಿ ಉಪ್ಪಿನಂಶ ಹೆಚ್ಚಿದ್ದಾಗ ತುಕ್ಕು (Rust) ಹಿಡಿಯುವುದು ಸಾಮಾನ್ಯ. ಒಮ್ಮೆ ನಲ್ಲಿಗಳಿಗೆ ಕಂದು ಬಣ್ಣದ ತುಕ್ಕು ಹಿಡಿದರೆ ಅವು ನೋಡಲು ಅಸಹ್ಯವಾಗಿ ಕಾಣುತ್ತವೆ. ಇಂತಹ ತುಕ್ಕು ಹಿಡಿದ ನಲ್ಲಿಗಳನ್ನು ಕ್ಲೀನ್ ಮಾಡುವುದು ಕಷ್ಟವೆಂದು ಹಲವರು ಹೊಸ ನಲ್ಲಿಯನ್ನೇ ಬದಲಾಯಿಸಲು ಮುಂದಾಗುತ್ತಾರೆ. ಆದರೆ, ಇನ್ನು ಮುಂದೆ ದುಬಾರಿ ಖರ್ಚು ಮಾಡಿ ನಲ್ಲಿಗಳನ್ನು ಬದಲಾಯಿಸುವ ಅಗತ್ಯವೇ ಇಲ್ಲ!&lt;/p&gt;&lt;img&gt;&lt;p&gt;&lt;strong&gt;ಐದೇ ನಿಮಿಷದಲ್ಲಿ ಫಳಫಳನೆ ಹೊಳೆಯುತ್ತೆ&lt;/strong&gt;ತುಕ್ಕು ಹಿಡಿದ ನಲ್ಲಿಗಳನ್ನು ಕೇವಲ ಎರಡೇ ನಿಮಿಷದಲ್ಲಿ ಹೊಸದಾಗಿ ಅಂಗಡಿಯಿಂದ ತಂದ ನಲ್ಲಿಯಂತೆ ಫಳಫಳನೆ ಹೊಳೆಯುವಂತೆ ಮಾಡುವ ಅದ್ಭುತ ಮನೆಮದ್ದು ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.&lt;/p&gt;&lt;img&gt;&lt;p&gt;&lt;strong&gt;ಹಠಮಾರಿ ತುಕ್ಕು ನಿವಾರಣೆಗೆ&lt;/strong&gt;ಇನ್&zwnj;ಸ್ಟಾಗ್ರಾಮ್&zwnj;ನ &lsquo;ರೂಪಾಲಿ ಕುಕ್ರೇಟಿ ಡೈರೀಸ್&rsquo; ಎಂಬ ಪೇಜ್&zwnj;ನಲ್ಲಿ ಈ ಉಪಯುಕ್ತ ಹ್ಯಾಕ್ ಅನ್ನು ಹಂಚಿಕೊಳ್ಳಲಾಗಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಅಡುಗೆ ಮನೆಯಲ್ಲಿರುವ ಮೂರು ವಸ್ತುಗಳನ್ನು ಬಳಸಿ ಹಠಮಾರಿ ತುಕ್ಕು ನಿವಾರಿಸುವುದು ಹೇಗೆ ಎಂಬುದನ್ನು ಇದರಲ್ಲಿ ತೋರಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಕ್ಲೀನ್ ಮಾಡುವ ಸುಲಭ ವಿಧಾನ&lt;/strong&gt;*ಮೊದಲಿಗೆ ಒಂದು ಸಣ್ಣ ಬೌಲ್&zwnj;ಗೆ ಸ್ವಲ್ಪ ಉಪ್ಪು (Salt), ಬೇಕಿಂಗ್ ಸೋಡಾ (Baking Soda) ಮತ್ತು ವಿನೆಗರ್ (Vinegar) ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. (ಇವುಗಳನ್ನು ಬೆರೆಸಿದಾಗ ನೊರೆಯಂತಹ ರಿಯಾಕ್ಷನ್ ಉಂಟಾಗುತ್ತದೆ).&lt;/p&gt;&lt;p&gt;*ಈಗ ಒಂದು ಹಳೆಯ ಟೂತ್&zwnj;ಬ್ರಷ್ (Toothbrush) ತೆಗೆದುಕೊಂಡು, ಈ ಮ್ಯಾಜಿಕ್ ಮಿಶ್ರಣದಲ್ಲಿ ಅದ್ದಿ. ನಂತರ ನಲ್ಲಿಯ ಎಲ್ಲೆಲ್ಲಿ ತುಕ್ಕು, ಕಲೆ ಅಥವಾ ಉಪ್ಪಿನ ಕಲೆಗಳಿವೆಯೋ ಅಲ್ಲಿ ಚೆನ್ನಾಗಿ ಉಜ್ಜಿ (ಸ್ಕ್ರಬ್ ಮಾಡಿ).&lt;/p&gt;&lt;p&gt;*ಉಜ್ಜಿದ ನಂತರ ಕೇವಲ 2 ನಿಮಿಷ ಹಾಗೆಯೇ ಬಿಟ್ಟು, ಸಾಧಾರಣ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಸಾಕು.&lt;/p&gt;&lt;img&gt;&lt;p&gt;&lt;strong&gt;ಮನೆಯಲ್ಲಿ ಟ್ರೈ ಮಾಡಿ ನೋಡಿ!&lt;/strong&gt;ಅದೆಷ್ಟೇ ಹಳೆಯದಾದ, ತುಕ್ಕು ಹಿಡಿದ ನಲ್ಲಿಯೂ ಸಹ ಈಗಷ್ಟೇ ಶೋರೂಂನಿಂದ ತಂದು ಫಿಟ್ ಮಾಡಿದ ಹೊಚ್ಚ ಹೊಸ ನಲ್ಲಿಯಂತೆ ಮಿನುಗುತ್ತದೆ. ಕಿಂಚಿತ್ತೂ ಹಣ ಖರ್ಚು ಮಾಡದೆ, ನಲ್ಲಿ ಬದಲಿಸುವ ತಾಪತ್ರಯವಿಲ್ಲದೆ ಈ ಕೆಲಸ ಮಾಡಬಹುದು. ನೀವೂ ಒಮ್ಮೆ ಈ ಸುಲಭ ಉಪಾಯವನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ!&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/how-to-remove-rust-from-water-taps-viral-cleaning-hack-wxpmmq1"/>
        </item>
        <item>
            <title><![CDATA[1980s AI photo trend: 1980ರ ಟ್ರೆಂಡ್‌, ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟ ಕರ್ನಾಟಕ ಪೊಲೀಸ್!]]></title>
            <link>https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7</link>
            <guid isPermaLink="true">https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7</guid>
            <pubDate>Sat, 12 Sep 2026 15:16:33 +0530</pubDate>
            <description><![CDATA[ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ 1980ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಕಲಿ ಆ್ಯಪ್‌ಗಳ ಮೂಲಕ ವೈಯಕ್ತಿಕ ಮಾಹಿತಿ, ಫೋಟೋಗಳನ್ನು ಕದ್ದು, ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಬ್ಲಾಕ್‌ಮೇಲ್ ಮಾಡುವ ಅಪಾಯದ ಬಗ್ಗೆ ಕರ್ನಾಟಕ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2ag3bsa6gwt2xkdjb0dfxy9,imgname-1980s-trend-1789206310697.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಸಾಮಾಜಿಕ ಜಾಲತಾಣದಲ್ಲಿ ಹಳೆಯ ನೆನಪುಗಳನ್ನು ರೂಪಿಸಿಕೊಳ್ಳುವಂತಹ 1980 ಟ್ರೆಂಡ್ ಲುಕ್ ಫೋಟೋ ಎಡಿಟಿಂಗ್ ಕ್ರೇಜ್ ಈಗ ಸೈಬರ್ ಆರೋಪಿಗಳಿಗೆ ವರವಾಗಿ ಮಾರ್ಪಾಡಾಗಿದೆ. ತಮ್ಮ ಇತ್ತೀಚಿನ ಫೋಟೋಗಳನ್ನು ಹಳೆಯ ಕಾಲದ ರೆಟ್ರೋ ಶೈಲಿಯ, 80ರ ದಶಕದ ಬ್ಲಾಕ್ ಅಂಡ್ ವೈಟ್ ಅಥವಾ ನೆಪಿಯಾ ಟೋನ್&zwnj;ಗೆ ಬದಲಾವಣೆ ಮಾಡಿಕೊಳ್ಳಲು ಯುವ ಜನತೆ ಸೇರಿದಂತೆ ಹಲವು ಜನರು ಮುಂದಾಗುತ್ತಿದ್ದಾರೆ.&lt;/p&gt;&lt;h2&gt;1980ರ ಟ್ರೆಂಡ್: ನಿಮ್ಮ ಫೋಟೋಗೆ ಕಾದಿದೆಯೇ ಸೈಬರ್ ಕಂಟಕ?&lt;/h2&gt;&lt;p&gt;ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು ಥರ್ಡ್ ಪಾರ್ಟಿ ಮೊಬೈಲ್ ಆಪ್, ಎಐ ಟೂಲ್ಸ್ ಹೆಸರಿನಲ್ಲಿ ನಕಲಿ ಎಪಿಕೆ ಲಿಂಕ್&zwnj;ಗಳನ್ನು ಪರಿಚಯ ಮಾಡಿಸುತ್ತಿದ್ದಾರೆ. ಆ ಮೂಲಕ ಮೊಬೈಲ್&zwnj;ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಫ್ರೀಯಾಗಿ ಎಐ ಇಮೇಜ್ ಮಾಡಿಕೊಡುತ್ತೇವೆ ಅಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಾ, ಲಿಂಕ್&zwnj;ಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಆ ಮೂಲಕ ಸೆಂಬರ್ ವಂಚನೆ ಬಲೆಗೆ ಕೆಡವುತ್ತಿದ್ದಾರೆ.&lt;/p&gt;&lt;p&gt;ಇದರೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದಾರೆ. 1980ರ ಟ್ರೆಂಡ್ ಹಿಂದೆ ಬಿದ್ದು ಆನ್ಲೈನ್ ಗೆ ಫೋಟೋ ಅಪ್ಲೋಡ್ ಮುನ್ನ ಎಚ್ಚರವಾಗಿರಿ, ಟ್ರೆಂಡ್ ಗೋಸ್ಕರ ಅಪರಿಚಿತ ಆ್ಯಪ್ ಗಳಿಗೆ ಫೋಟೋ ಅಪ್&zwnj;ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ. ಮೊಬೈಲ್ ಗ್ಯಾಲರಿ ಅನುಮತಿಯನ್ನ ಪಡೆದುಕೊಂಡು ವೈಯುಕ್ತಿಕ ಮಾಹಿತಿ ಮತ್ತು ದಾಖಲೆ ಕದಿಯುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಬಳಕೆದಾರರು ತಮಗೆ ಅರಿವೇ ಇಲ್ಲದಂತೆ ನೀಡುತ್ತಿರುವ ಕೆಲವು ಅನುಮತಿಗಳು ನೆಟ್ ಬ್ಯಾಂಕಿಂಗ್ ಅಪ್ಗಳ ನಿಯಂತ್ರಣಕ್ಕೆ ಸೈಬರ್ ಖದೀಮರಿಗೆ ಅನುಕೂಲವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಬಳಕೆದಾರರು ಅಪ್&zwnj;ಲೋಡ್ ಮಾಡಿದ ವೈಯುಕ್ತಿಕ ಫೋಟೋಗಳನ್ನು ಡೀಪ್ ಫೇಕ್ ಮಾಡಿ ತಂತ್ರಜ್ಞಾನದೊಂದಿಗೆ ಬದಲಾವಣೆ ಮಾಡಿ, ಅವರ ಸಂಬಂಧಿಕರಿಗೆ ಕಳುಹಿಸಿ ಬೆದರಿಕೆ ಹಾಕುವ ಸಾಧ್ಯತೆಗಳು ಇದೆ.&lt;/p&gt;&lt;p&gt;ಇಂತಹ ಯಾವುದೇ ಅನುಮಾಸ್ಪದ ಲಿಂಕ್&zwnj;ಗಳು ಕಂಡು ಬಂದರೆ ಅಥವಾ ಯಾವುದೇ ಸಮಸ್ಯೆ, ವಂಚನೆಗಳು ಆದರೆ ಕೂಡಲೇ ಸೈಬರ್ ಹೆಲ್ಪ್ ಲೈನ್ ಸಂಖ್ಯೆ 1930ಗೆ ಕರೆ ಮಾಡಲು ಮನವಿ ಕರ್ನಾಟಕ ಪೊಲೀಸರು ಮನವಿ ಮಾಡಿದ್ದಾರೆ. ಅನಗತ್ಯ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅನಧಿಕೃತ ಅಪ್&zwnj;ಗಳನ್ನು ಮೊಬೈಲ್&zwnj;ನಲ್ಲಿ ಇನ್&zwnj;ಸ್ಟಾಲ್ ಮಾಡಬೇಡಿ. ಆ ಮೂಲಕ ನೀವೇ ಸೈಬರ್ ಕಳ್ಳರಿಗೆ ಸುಲಭ ದಾರಿ ಮಾಡಿಕೊಡಬೇಡಿ. ಟ್ರೆಂಡ್ ಗಿಂತ ಸುರಕ್ಷತೆ ಮುಖ್ಯ- ಎಚ್ಚರಿಕೆ ವಹಿಸಿ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ನೀಡಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/1980s-ai-photo-trend-karnataka-police-issue-warning-to-the-public-sns/articleshow-ggpggy7"/>
        </item>
        <item>
            <title><![CDATA[ಹಲವು ದಿನಗಳ ಬಳಿಕ ಸೀಮಾ ಹೈದರ್ ರೀಲ್ಸ್, ಡ್ಯಾನ್ಸ್‌ಗಿಂತ ಹೆಚ್ಚು ಚರ್ಚೆಯಾಗುತ್ತಿದೆ ಹಿಂದಿನ ಫೋಟೋ]]></title>
            <link>https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl</link>
            <guid isPermaLink="true">https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl</guid>
            <pubDate>Sat, 12 Sep 2026 15:00:49 +0530</pubDate>
            <description><![CDATA[ಪ್ರೀತಿಗಾಗಿ ಪಾಕಿಸ್ತಾನ ಗಡಿ ದಾಟಿ ಬಂದು ಸಚಿನ್ ಮೀನಾ ವರಿಸಿದ ಸೀಮಾ ಹೈದರ್ ಈಗಾಗಲೇ 6 ಮಕ್ಕಳ ತಾಯಿಯಾಗಿ ಭಾರಿ ಸುದ್ದಿಯಾಗಿದ್ದಾರೆ. ಹಲವು ದಿನಗಳ ಬಳಿಕ ಸೀಮಾ ಹೈದರ್ ಡ್ಯಾನ್ಸ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಸೀಮಾ ಡ್ಯಾನ್ಸ್‌ಗಿಂತ ಕೋಣೆಯಲ್ಲಿರುವ ಫೋಟೋ ಭಾರಿ ಚರ್ಚೆಯಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2af67hyp6mwekncx10mm01h,imgname-seema-haider-shares-reels-behind-photo-talk-of-the-town-1789205356092.png" type="image/jpeg" height="390" width="690"/>
            <content:encoded><![CDATA[&lt;p&gt;ಸೀಮಾ ಹೈದರ್ ಭಾರತ ಹಾಗೂ ಪಾಕಿಸ್ತಾನದಲ್ಲಿ ಬಾರಿ ಕೋಲಾಹಲ ಸೃಷ್ಟಿಸಿದ ಮಹಿಳೆ. ಮದುವೆಯಾಗಿ ಮಕ್ಕಳಿರುವಾಗಲೇ ಭಾರತದ ಸಚಿನ್ ಮೀನಾ ಜೊತೆ ಪ್ರೀತಿಯಲ್ಲಿ ಬಿದ್ದ ಸೀಮಾ ಹೈದರ್ ಮಕ್ಕಳ ಜೊತೆ ಭಾರತಕ್ಕೆ ಬಂದ ಸೀಮಾ ಇದೀಗ 6 ಮಕ್ಕಳ ತಾಯಿಯಾಗಿದ್ದಾರೆ. ಕಳೆದ ಹಲವು ದಿನಗಳಿಂದ ಸೀಮಾ ಹೈದರ್ ಸೈಲೆಂಟ್ ಆಗಿದ್ದರು. ಸುದೀರ್ಘ ದಿನಗಳ ಬಳಿಕ ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಆದರೆ ಸೀಮಾ ಹೈದರ್ ಮಾಡಿರುವ ಡ್ಯಾನ್ಸ್ ರೀಲ್ಸ್&zwnj;ಗಿಂತ ಹೆಚ್ಚು ಕೋಣೆಯಲ್ಲಿರುವ ಫೋಟೋ ಕುರಿತು ಭಾರಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;ವಿಡಿಯೋದಲ್ಲಿ ಕಾಣಿಸಿಕೊಂಡ ಫೋಟೋ ಯಾರದ್ದು?&lt;/h2&gt;&lt;p&gt;ಸೀಮಾ ಹೈದರ್ ತಮ್ಮ ಮನೆ ಅಥವಾ ಖಾಸಗಿ ಕೋಣೆಯಲ್ಲಿ ಡ್ಯಾನ್ಸ್ ವಿಡಿಯೋ ಮಾಡಿದ್ದಾರೆ. ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಡ್ ಮೇಲೆ ಕುಳಿತು ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಸೀಮಾ ಹೈದರ್ ಈ ವಿಡಿಯೋ ಮಾಡುವಾ ಕೋಣೆಯ ಹಿಂಭಾಗದಲ್ಲಿ ಫೋಟೋ ಒಂದು ಕಾಣಿಸಿಕೊಂಡಿದೆ. ಸೀಮಾ ಹೈದರ್ ಪತಿ ಸಚಿನ್ ಮೀನಾ ಫೋಟೋ ಅಲ್ಲ. ಹೀಗಾಗಿ ಎಲ್ಲರ ಚಿತ್ತ ಈ ಫೋಟೋ ಮೇಲೆ ನೆಟ್ಟಿದೆ. ಸೀಮಾ ಹೈದರ್ ಡ್ಯಾನ್ಸ್ ರೀಲ್ಸ್&zwnj;ನ ಹಿಂದೆ ಕಾಣಿಸುವ ಫೋಟೋ ಆಕೆಯ ವಕೀಲರ ಫೋಟೋ. ಸೀಮಾ ಹೈದರ್ ವಕೀಲ ಎಪಿ ಸಿಂಗ್ ಫೋಟೋ ಇದೀಗ ಭಾರಿ ಚರ್ಚೆಯಾಗುತ್ತಿದೆ.&lt;/p&gt;&lt;h2&gt;ಬೆಡ್ ರೂಂನಲ್ಲಿ ಲಾಯರ್ ಫೋಟೋ&lt;/h2&gt;&lt;p&gt;ಸೀಮಾ ಹೈದರ್ ಬೆಡ್ ರೂಂನಲ್ಲಿ ಎಪಿ ಸಿಂಗ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ. ಬೆಡ್&zwnj;ರೂಂನಲ್ಲಿ ಸೀಮಾ ಹೈದರ್ ಪತಿ ಫೋಟೋ ಇರುವುದು ಸಾಮಾನ್ಯ, ಅಥವಾ ಸೀಮಾ ಹೈದರ್, ಸಚಿನ್ ಮೀನಾ ಕುಟುಂಬಸ್ಥರ ಫೋಟೋ ಇದ್ದರೂ ವಿಶೇಷವಲ್ಲ, ಆದರೆ ಲಾಯರ್ ಫೋಟೋ ಹಿಂದಿನ ರಹಸ್ಯವೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಸೀಮಾ ಹೈದರ್ ಭಾರತಕ್ಕೆ ಬಂದ ಬಳಿಕ ಹಲವು ಕಾನೂನು ತೊಡಕು, ಸಮಸ್ಯೆಗಳು ಎದುರಾಗಿತ್ತು. ಈ ವೇಳೆ ಸೀಮಾ ಹೈದರ್ ಪರ್ ಎಪಿ ಸಿಂಗ್ ಹಾಜರಾಗಿದ್ದರು. ಮಾಧ್ಯಮಗಳಲ್ಲೂ ಎಪಿ ಸಿಂಗ್ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇದೀಗ ಸೀಮಾ ಹೈದರ್ ಬೆಡ್ ರೂಂನಲ್ಲಿರುವ ಎಪಿ ಸಿಂಗ್ ಫೋಟೋ ಕೋಲಾಹಲಕ್ಕೆ ಕಾರಣವಾಗಿದೆ.&lt;/p&gt;&lt;p&gt;ಸೀಮಾ ಹೈದರ್ ರೀಲ್ಸ್ ವಿಡಿಯೋಗಿಂತ ಹೆಚ್ಚು ಇದೀಗ ಲಾಯರ್ ಫೋಟೋ ಚರ್ಚೆಯಾಗುತ್ತಿದೆ. ಹಲವು ಸೀಮಾ ಹೈದರ್ ಭಾರತದಲ್ಲಿ ಉಳಿದುಕೊಳ್ಳಲು ಎಪಿ ಸಿಂಗ್ ಕಾರಣರಾಗಿದ್ದಾರೆ. ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪರ ವಾದಿಸಿ ಕಾನೂನು ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಎಪಿ ಸಿಂಗ್ ಫೋಟೋ ಇಟ್ಟುಕೊಂಡಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ. ಆದರೆ ಚರ್ಚೆ, ಪ್ರಶ್ನೆಗಳು ತೀವ್ರಗೊಳ್ಳುತ್ತಿದೆ.&lt;/p&gt;&lt;p&gt;ಸೀಮಾ ಹೈದರ್ 2023ಮೇ ತಿಂಗಳಲ್ಲಿ ಪಾಕಿಸ್ತಾನದ ಗಂಡನ ಬಿಟ್ಟು ಮಕ್ಕಳ ಜೊತೆ ನೇರವಾಗಿ ನೇಪಾಳಕ್ಕೆ ಬಂದಿದ್ದರು. ಇತ್ತ ಸೀಮಾ ಹೈದರ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ರಿಲೇಶನ್&zwnj;ಶಿಪ್ ಬೆಳೆಸಿಕೊಂಡ ಸಚಿನ್ ಮೀನಾ ಕೂಡ ನೇರವಾಗಿ ನೇಪಾಳಕ್ಕೆ ಹೋಗಿ ಭೇಟಿಯಾಗಿದ್ದರು. ಪಬ್&zwnj;&zwj;ಜಿ ಗೇಮ್ ಮೂಲಕ ಇವರಿಬ್ಬರು ಆನ್&zwnj;ಲೈನ್ ಮೂಲಕ ಬೇಟಿಯಾಗಿದ್ದರು. ಬಳಿಕ ಈ ಪರಿಚಯ, ಪ್ರೀತಿಯಾಗಿ ತಿರುಗಿತ್ತು. ಬಳಿಕ ಉತ್ತರ ಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯಲ್ಲಿ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಪತ್ತೆಯಾಗಿದ್ದರು. ಸೀಮಾ ಹೈದರ್ ಪತ್ತೆ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಒಂದೆಡೆ ಪಾಕಿಸ್ತಾನದ ಗಂಡ ಕೂಡ ಪ್ರಕರಣ ದಾಖಲಿಸಿದ್ದರೆ, ಇತ್ತ ಪಾಕಿಸ್ತಾನದಿಂದ ಬಂದು ದಾಖಲೆಗಳಿಲ್ಲದೆ ಭಾರತದಲ್ಲಿ ಇರುವಿಕೆ ಕುರಿತು ಕೆಲ ಪ್ರಕರಣ ದಾಖಲಾಗಿತ್ತು. ಈ ವೇಳೆ ಸಚಿನ್ ಮೀನಾ ಹಾಗೂ ಸೀಮಾ ಹೈದರ್ ವಕೀಲರಾಗಿ ಎಪಿ ಸಿಂಗ್ ನೇಮಕ ಮಾಡಿದ್ದರು.&lt;/p&gt;&lt;p&gt;सीमा हैदर का यह वीडियो वायरल हो रहा है।वायरल होने का कारण सीमा हैदर के बेडरूम में उनके वकील की फोटो लगी होना है।लोग कह रहे हैं कि सचिन की जगह वकील की फोटो क्यों लगी। pic.twitter.com/BCq4fo6WOV&lt;/p&gt;&lt;p&gt;&mdash; Rajendra Raj (@iamrajendraraj) September 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/viral/seema-haider-latest-reels-grab-attention-due-to-photo-over-pakistani-woman-dance-clip/articleshow-eqcg4xl"/>
        </item>
        <item>
            <title><![CDATA[Samsung Galaxy Tab S10+ ಖರೀದಿಸುವವರಿಗೆ ಗುಡ್‌ ನ್ಯೂಸ್‌; ಬೆಲೆ ₹17,000 ಕಡಿತ!]]></title>
            <link>https://kannada.asianetnews.com/mobiles/samsung-galaxy-tab-s10-plus-price-cut-get-wi-fi-model-at-88999-5g-at-103999-kvn/articleshow-lape95t</link>
            <guid isPermaLink="true">https://kannada.asianetnews.com/mobiles/samsung-galaxy-tab-s10-plus-price-cut-get-wi-fi-model-at-88999-5g-at-103999-kvn/articleshow-lape95t</guid>
            <pubDate>Sat, 12 Sep 2026 14:53:37 +0530</pubDate>
            <description><![CDATA[ಹಬ್ಬದ ಸೀಸನ್‌ಗೂ ಮುನ್ನ, ಸ್ಯಾಮ್‌ಸಂಗ್ ಇಂಡಿಯಾ ಗ್ಯಾಲಕ್ಸಿ ಟ್ಯಾಬ್ S10+ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್‌ನ ಭಾಗವಾಗಿ, ವೈ-ಫೈ ಮತ್ತು 5G ಆವೃತ್ತಿಗಳ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಗ್ರಾಹಕರಿಗೆ ನೋ-ಕಾಸ್ಟ್ ಇಎಂಐ ಸೌಲಭ್ಯವೂ ಲಭ್ಯವಿದೆ. ಈ ಟ್ಯಾಬ್ಲೆಟ್ ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇ, AI ಫೀಚರ್‌ಗಳು ಮತ್ತು ಶಕ್ತಿಶಾಲಿ ಪ್ರೊಸೆಸರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a9tsy710nw77qs5pa7tzh9,imgname-samsung-galaxy-tab-s10-series-1789199738823.png" type="image/jpeg" height="390" width="690"/>
            <content:encoded><![CDATA[&lt;p&gt;ಹಬ್ಬದ ಸೀಸನ್&zwnj; ಮಾರಾಟಕ್ಕೂ ಮುನ್ನ ಸ್ಯಾಮ್&zwnj;ಸಂಗ್ ಇಂಡಿಯಾ, ಗ್ಯಾಲಕ್ಸಿ ಟ್ಯಾಬ್ S10+ ಮೇಲೆ ವಿಶೇಷ ಆಫರ್&zwnj;ಗಳನ್ನು ಘೋಷಿಸಿದೆ. ಈ ಹಬ್ಬದ ಆಫರ್&zwnj;ನ ಭಾಗವಾಗಿ, 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಗ್ಯಾಲಕ್ಸಿ ಟ್ಯಾಬ್ S10+ ವೈ-ಫೈ ಆವೃತ್ತಿಯ ಬೆಲೆ ₹1,05,999 ರಿಂದ ₹88,999 ಕ್ಕೆ ಇಳಿದಿದೆ. ಹಾಗೆಯೇ, 5G ಆವೃತ್ತಿಯ ಬೆಲೆ ₹1,20,999 ರಿಂದ ₹1,03,999 ಕ್ಕೆ ಇಳಿಕೆಯಾಗಿದೆ.&lt;/p&gt;&lt;h2&gt;&lt;strong&gt;ನೋ-ಕಾಸ್ಟ್ ಇಎಂಐ ಸೌಲಭ್ಯ&lt;/strong&gt;&lt;/h2&gt;&lt;p&gt;ಗ್ರಾಹಕರು ಬ್ಯಾಂಕ್&zwnj;ಗಳ ಮೂಲಕ ಆರು ತಿಂಗಳವರೆಗೆ ಮತ್ತು NBFC ಗಳ ಮೂಲಕ 12 ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯಬಹುದು. ಕಂಪನಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ EMI ವಿವರಗಳನ್ನು ನೀಡಿದೆ. ವೈ-ಫೈ ಆವೃತ್ತಿಗೆ, ಬ್ಯಾಂಕ್ ಇಎಂಐ ತಿಂಗಳಿಗೆ ₹14,833 ರಿಂದ, ಎನ್&zwnj;ಬಿಎಫ್&zwnj;ಸಿ ಇಎಂಐ ₹7,417 ರಿಂದ ಮತ್ತು ಸ್ಯಾಮ್&zwnj;ಸಂಗ್ ಫೈನಾನ್ಸ್ ಪ್ಲಸ್ ಮೂಲಕ 15% ಡೌನ್ ಪೇಮೆಂಟ್ ಮಾಡಿದರೆ, ತಿಂಗಳಿಗೆ ₹6,877 ರಿಂದ ಇಎಂಐ ಆರಂಭವಾಗುತ್ತದೆ. 5G ಆವೃತ್ತಿಗೆ ಈ ಮಾಸಿಕ ಇಎಂಐ ಮೊತ್ತಗಳು ಕ್ರಮವಾಗಿ ₹17,333, ₹8,667, ಮತ್ತು ₹8,036 ಆಗಿರುತ್ತದೆ.&lt;/p&gt;&lt;h3&gt;&lt;strong&gt;ಗ್ಯಾಲಕ್ಸಿ ಟ್ಯಾಬ್ S10+ ವಿಶೇಷತೆಗಳು&lt;/strong&gt;&lt;/h3&gt;&lt;p&gt;ಸ್ಯಾಮ್&zwnj;ಸಂಗ್, ಗ್ಯಾಲಕ್ಸಿ ಟ್ಯಾಬ್ S10+ ಅನ್ನು ಉತ್ಪಾದಕತೆ, ಸೃಜನಶೀಲತೆ, ಮನರಂಜನೆ ಮತ್ತು ಸ್ಮಾರ್ಟ್ ಹೋಮ್ ನಿಯಂತ್ರಣದಂತಹ ಎಲ್ಲಾ ಕೆಲಸಗಳನ್ನು ಒಂದೇ ಸಾಧನದಲ್ಲಿ ಮಾಡುವಂತೆ ವಿನ್ಯಾಸಗೊಳಿಸಿದೆ. ಇದು 31.47 ಸೆಂ.ಮೀ. ಡೈನಾಮಿಕ್ ಅಮೋಲೆಡ್ 2X ಡಿಸ್&zwnj;ಪ್ಲೇ ಹೊಂದಿದ್ದು, ಬೆಳಕಿನ ಪ್ರತಿಫಲನವನ್ನು ಕಡಿಮೆ ಮಾಡುವ ತಂತ್ರಜ್ಞಾನದಿಂದಾಗಿ ಅತ್ಯುತ್ತಮ ದೃಶ್ಯಾನುಭವ ನೀಡುತ್ತದೆ. AI ಡೈಲಾಗ್ ಬೂಸ್ಟ್ ಸಿಸ್ಟಮ್ ಹೊಂದಿರುವ ಕ್ವಾಡ್ ಸ್ಪೀಕರ್&zwnj;ಗಳು, IP68 ಧೂಳು ಮತ್ತು ನೀರಿನ ಪ್ರತಿರೋಧ, ಹಾಗೂ ಆರ್ಮರ್ ಅಲ್ಯೂಮಿನಿಯಂ ಬಾಡಿ ಈ ಟ್ಯಾಬ್&zwnj;ನ ಪ್ರಮುಖ ಫೀಚರ್&zwnj;ಗಳಾಗಿವೆ.&lt;/p&gt;&lt;p&gt;ಬಳಕೆದಾರರು ಎಸ್ ಪೆನ್ ಬಳಸಿ ಮೀಟಿಂಗ್ ನೋಟ್ಸ್ ಮಾಡಬಹುದು, ಡಾಕ್ಯುಮೆಂಟ್&zwnj;ಗಳನ್ನು ಮಾರ್ಕ್ ಮಾಡಬಹುದು ಮತ್ತು ಸ್ಕೆಚ್&zwnj;ಗಳನ್ನು ಸಹ ಮಾಡಬಹುದು. ನೋಟ್ ಅಸಿಸ್ಟ್ AI ಫೀಚರ್, ಕೈಬರಹದ ನೋಟ್ಸ್&zwnj;ಗಳನ್ನು ಟೈಪ್ ಮಾಡಿ, ಸಾರಾಂಶ ಮಾಡಲು ಸಹಾಯ ಮಾಡುತ್ತದೆ. ಪಿಡಿಎಫ್ ಓವರ್&zwnj;ಲೇ ಟ್ರಾನ್ಸ್&zwnj;ಲೇಶನ್ ಮೂಲಕ ಸ್ಕ್ರೀನ್ ಮೇಲೆಯೇ ಪಿಡಿಎಫ್ ಡಾಕ್ಯುಮೆಂಟ್&zwnj;ಗಳನ್ನು ಭಾಷಾಂತರಿಸಬಹುದು. ಹ್ಯಾಂಡ್&zwnj;ರೈಟಿಂಗ್ ಹೆಲ್ಪ್ ಫೀಚರ್, ಕೈಬರಹದ ನೋಟ್ಸ್&zwnj;ಗಳನ್ನು ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತದೆ. ಸರ್ಕಲ್ ಟು ಸರ್ಚ್ ಬಳಸಿ, ಆ್ಯಪ್&zwnj;ಗಳನ್ನು ಬದಲಿಸದೆಯೇ ಸ್ಕ್ರೀನ್ ಮೇಲಿರುವ ಯಾವುದೇ ಮಾಹಿತಿಯನ್ನು ಹುಡುಕಬಹುದು ಅಥವಾ ಭಾಷಾಂತರಿಸಬಹುದು. AI ಒಳಗೊಂಡಿರುವ ಏರ್ ಕಮಾಂಡ್ ಮೂಲಕ ಗ್ಯಾಲಕ್ಸಿ AI ಅಸಿಸ್ಟೆಂಟ್ ಫೀಚರ್&zwnj;ಗಳನ್ನು ವೇಗವಾಗಿ ಬಳಸಬಹುದು. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ಯಾಮ್&zwnj;ಸಂಗ್ ಬಿಕ್ಸ್&zwnj;ಬಿ ಅಥವಾ ಗೂಗಲ್ ಜೆಮಿನಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ಗ್ಯಾಲಕ್ಸಿ AI ಸಿಸ್ಟಮ್ ನೀಡುತ್ತದೆ.&lt;/p&gt;&lt;p&gt;ಗ್ಯಾಲಕ್ಸಿ ಟ್ಯಾಬ್ S10+ ಅನ್ನು ಸ್ಮಾರ್ಟ್ ಹೋಮ್ ಹಬ್ ಆಗಿಯೂ ಬಳಸಬಹುದು. ಸ್ಮಾರ್ಟ್&zwnj;ಥಿಂಗ್ಸ್&zwnj;ನಲ್ಲಿರುವ 3D ಮ್ಯಾಪ್ ವ್ಯೂ ಬಳಸಿ, ಕನೆಕ್ಟ್ ಆಗಿರುವ ಎಲ್ಲಾ ಡಿವೈಸ್&zwnj;ಗಳನ್ನು ಒಂದೇ ಸ್ಕ್ರೀನ್&zwnj;ನಲ್ಲಿ ನೋಡಬಹುದು. ಸ್ಮಾರ್ಟ್&zwnj;ಥಿಂಗ್ಸ್ ಎನರ್ಜಿ ಮತ್ತು AI ಎನರ್ಜಿ ಮೋಡ್, ವಿದ್ಯುತ್ ಬಳಕೆಯ ಬಗ್ಗೆ ಮಾಹಿತಿ ನೀಡುತ್ತದೆ. ಈ ಟ್ಯಾಬ್&zwnj;ಗೆ ಮೀಡಿಯಾಟೆಕ್ ಡೈಮೆನ್ಸಿಟಿ 9300+ ಪ್ರೊಸೆಸರ್ ಶಕ್ತಿ ನೀಡುತ್ತದೆ. ಇದು 12GB RAM ಮತ್ತು 256GB ಸ್ಟೋರೇಜ್ ಹೊಂದಿದ್ದು, ಮೈಕ್ರೋ ಎಸ್&zwnj;ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಿಸಬಹುದು. ಇದರಲ್ಲಿ 10,090 mAh ಬ್ಯಾಟರಿ ಮತ್ತು 45 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವಿದೆ.&lt;/p&gt;]]></content:encoded>
            <category><![CDATA[mobiles]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/mobiles/samsung-galaxy-tab-s10-plus-price-cut-get-wi-fi-model-at-88999-5g-at-103999-kvn/articleshow-lape95t"/>
        </item>
        <item>
            <title><![CDATA[ದುಡ್ಡು ದುಡ್ಡು,  ದೇಶದ ಟಾಪ್‌ 5 ಶ್ರೀಮಂತ ನಗರಗಳಲ್ಲಿ ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ?]]></title>
            <link>https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</link>
            <guid isPermaLink="true">https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5</guid>
            <pubDate>Sat, 12 Sep 2026 14:16:49 +0530</pubDate>
            <description><![CDATA[ದೇಶದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸಿಟಿ ಯಾವುದು? ನಿಮಗೆ ಗೊತ್ತಾ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಎಂದು? ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2acr3d2y9jxt153jtcqae6a,imgname-richest-city-in-india-1789202795937.jpg" type="image/jpeg" height="390" width="690"/>
            <content:encoded><![CDATA[&lt;p&gt;ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ ಕೂಡ ಒಂದು. ಅದಕ್ಕೆ ನಮ್ಮ ಮಹಾನಗರಗಳು ಪ್ರಮುಖ ಪಾತ್ರವಹಿಸುತ್ತವೆ. ಬೆಂಗಳೂರು, ಹೈದರಾಬಾದ್&zwnj;, ಮುಂಬೈ, ದೆಹಲಿ, ಅಹ್ಮದಾಬಾದ್&zwnj; ಸೇರಿದಂತೆ ಪ್ರಮುಖ ನಗರಗಳು ದೇಶದ ಬೆಳವಣಿಗೆಗೆ ಅಮೂಲ್ಯ ಕೊಡುಗೆಗಳನ್ನ ನೀಡುತ್ತಿವೆ. ನಿಮಗೆ ದೇಶದ ಯಾವ ನಗರವು ಆದಾಯ ಮತ್ತು ಸಂಪತ್ತಿನ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಗೊತ್ತಾ? ಇತ್ತೀಚೆಗೆ ಜಿಡಿಪಿ ದತ್ತಾಂಶದ ಮಾಹಿತಿ ಪ್ರಕಾರ ದೇಶದ ಮಹಾನಗರಗಳ ಕೊಡುಗೆ ಇಲ್ಲಿದೆ.&lt;/p&gt;&lt;h2&gt;&lt;strong&gt;ಮುಂಬೈ ಕೊಡುಗೆ ಏನು?&lt;/strong&gt;&lt;/h2&gt;&lt;p&gt;ಅತ್ಯಂತ ಶ್ರೀಮಂತ ಮತ್ತು ಆದಾಯದ ದೃಷ್ಟಿಯಿಂದ ಮುಂಬೈ ಮೊದಲ ಸ್ಥಾನದಲ್ಲಿದೆ. ಹಣಕಾಸು ವರ್ಷದ ಅಂಕಿ-ಅಂಶಗಳ ಪ್ರಕಾರ.. ಮುಂಬೈನ GDP ಸುಮಾರು $310 ಬಿಲಿಯನ್ ಅಂದರೆ ಸರಿಸುಮಾರು ₹25 ಲಕ್ಷ ಕೋಟಿ. ಅತಿದೊಡ್ಡ ಷೇರು ವಿನಿಮಯ ಕೇಂದ್ರ ಇರೋದು ಇದೇ ಮುಂಬೈನಲ್ಲಿ. ಈ ಎಲ್ಲಾ ಕಾರಣಗಳಿಂದ ಮುಂಬೈ ನಗರವನ್ನು ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಬಾಲಿವುಡ್, ಬಂದರುಗಳಲ್ಲಿ ನಡೆಯುವ ದಾಖಲೆಯ ವ್ಯವಹಾರಗಳು ಆದಾಯಕ್ಕೆ ಪ್ರಮುಖ ಕೊಡುಗೆಗಳನ್ನ ನೀಡುತ್ತವೆ.&lt;/p&gt;&lt;h2&gt;&lt;strong&gt;ದೆಹಲಿ NCR&lt;/strong&gt;&lt;/h2&gt;&lt;p&gt;ಇನ್ನು, ಎರಡನೇ ಪಟ್ಟಿಯಲ್ಲಿ ದೇಶದ ರಾಜಧಾನಿ ದೆಹಲಿ ಮತ್ತು ಅದರ NCR ಪ್ರದೇಶಗಳು ಬರುತ್ತವೆ. ದೆಹಲಿ-NCR ಸುಮಾರು 293.6 ಬಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ದೆಹಲಿ ದೇಶದ ರಾಜಕೀಯ ಕೇಂದ್ರ ಮಾತ್ರವಲ್ಲದೇ, ಪ್ರಮುಖ ವ್ಯಾಪಾರ ಕೇಂದ್ರವೂ ಆಗಿದೆ. ಅಲ್ಲೇ ಸಮೀಪವಿರುವ ಗುರುಗ್ರಾಮ್ ವಿಶ್ವದ ಕೆಲವು ದೊಡ್ಡ ಕಾರ್ಪೊರೇಟ್ ಕಂಪನಿಗಳ ಕಚೇರಿ ಹೊಂದಿದೆ. ಆದರೆ ನೋಯ್ಡಾ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿದೆ.&lt;/p&gt;&lt;h2&gt;&lt;strong&gt;ಕೋಲ್ಕತ್ತಾ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ, ದೇಶದ ಶ್ರೀಮಂತ ನಗರಗಳಲ್ಲಿ ಮೂರನೇ ಸ್ಥಾವನ್ನು ಪಡೆದುಕೊಂಡಿದೆ. ಕೋಲ್ಕತ್ತಾದ ಒಟ್ಟು GDP ಸುಮಾರು $150 ಬಿಲಿಯನ್ ಎಂದು ಹೇಳಲಾಗಿದೆ. ಕೋಲ್ಕತ್ತಾವನ್ನು ಈಶಾನ್ಯ ಭಾರತದ ಅತಿದೊಡ್ಡ ವಾಣಿಜ್ಯ ಕೇಂದ್ರ ಎಂದು ಹೇಳುತ್ತಾರೆ. ಸೆಣಬಿನ ಉದ್ಯಮ, ಚಹಾ ವ್ಯಾಪಾರ, ಬಂದರುಗಳು, ಬ್ಯಾಂಕಿಂಗ್ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಿಂದಾಗಿ ಬಲವಾದ ಆರ್ಥಿಕ ಶಕ್ತಿ ಕೇಂದ್ರವಾಗಿ ಇಂದಿಗೂ ಉಳಿದುಕೊಂಡಿದೆ.&lt;/p&gt;&lt;h2&gt;&lt;strong&gt;ಬೆಂಗಳೂರು&lt;/strong&gt;&lt;/h2&gt;&lt;p&gt;ಕನ್ನಡಿಗರ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಬೆಂಗಳೂರು ಸುಮಾರು 110 ಬಿಲಿಯನ್ ಡಾಲರ್&zwnj; ಜಿಡಿಪಿ ಹೊಂದಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಮತ್ತು ಸ್ಟಾರ್ಟ್ಅಪ್ ರಾಜಧಾನಿ ಅಂತಲೂ ಕರೆಯಲಾಗುತ್ತದೆ. ವಿಶ್ವದ ದೈತ್ಯ ಐಟಿ ಮತ್ತು ಸಾಫ್ಟ್&zwnj;ವೇರ್ ಕಂಪನಿಗಳು, ಏರೋಸ್ಪೇಸ್ ಉದ್ಯಮ ಮತ್ತು ಬಯೋಟೆಕ್ ಸಂಸ್ಥೆಗಳು ಬೆಂಗಳೂರಿನಿಂದ ಕಾರ್ಯನಿರ್ವಹಿಸುತ್ತವೆ. ಬೆಂಗಳೂರು ಹೆಚ್ಚು ಟೆಕ್ ಪ್ರೊಫೆಷನಲಿಸ್ಟ್&zwnj; ಮತ್ತು ಹೊಸ ಮಿಲಿಯನೇರ್&zwnj;ಗಳನ್ನ ಹುಟ್ಟು ಹಾಕುತ್ತದೆ.&lt;/p&gt;&lt;h2&gt;&lt;strong&gt;ಚೆನ್ನೈ&lt;/strong&gt;&lt;/h2&gt;&lt;p&gt;ದಕ್ಷಿಣ ಭಾರತದ ಪ್ರಮುಖ ಮಹಾನಗರ ಚೆನ್ನೈ. ಈ ಪಟ್ಟಿಯಲ್ಲಿ ಅದು 5ನೇ ಸ್ಥಾನವನ್ನು ಪಡೆದುಕೊಂಡಿದೆ. ಅಂದಾಜು $90 ರಿಂದ $100 ಬಿಲಿಯನ್ ಜಿಡಿಪಿಯೊಂದಿಗೆ, ಚೆನ್ನೈ ದೇಶದ ಅತಿದೊಡ್ಡ ಆಟೋಮೊಬೈಲ್ ಉದ್ಯಮಕ್ಕೆ ನೆಲೆಯಾಗಿದೆ. ಚೆನ್ನೈ ಬಂದರಿನ ಮೂಲಕ ಜಾಗತಿಕ ವ್ಯಾಪಾರ ಮತ್ತು ವೇಗವಾಗಿ ಬೆಳೆಯುತ್ತಿರುವ ಜವಳಿ ಮತ್ತು ಜವಳಿ ಕ್ಷೇತ್ರಗಳು ದೇಶಕ್ಕೆ ಪ್ರಮುಖ ಕೊಡುಗೆಗಳನ್ನು ನೀಡುತ್ತಿವೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/what-rank-does-bengaluru-hold-among-the-country-is-top-5-wealthiest-cities-and-india-richest-citygkn/articleshow-io2dse5"/>
        </item>
        <item>
            <title><![CDATA[ನದಿ ಸ್ವಚ್ಛಗೊಳಿಸಿ ಫೇಮಸ್ ಆದ ಬಿಟ್ಟು; ಈಗ ದೇಶಕ್ಕೆ ಕೊಟ್ಟಿದ್ದಾರೆ ಬಿಗ್ ಚಾಲೆಂಜ್!]]></title>
            <link>https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt</link>
            <guid isPermaLink="true">https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt</guid>
            <pubDate>Sat, 12 Sep 2026 14:16:35 +0530</pubDate>
            <description><![CDATA[ಮಧ್ಯಪ್ರದೇಶದ ಅಜ್ನರ್ ನದಿಯನ್ನು ಸ್ವಚ್ಛಗೊಳಿಸಿ ವೈರಲ್ ಆಗಿರುವ ಬಿಟ್ಟು ತಬಾಹಿ ಇದೀಗ ತಮ್ಮ ಅಭಿಯಾನವನ್ನು ದೇಶದಾದ್ಯಂತ ವಿಸ್ತರಿಸಲು ಮುಂದಾಗಿದ್ದಾರೆ. ಮೊದಲು ಯಾವ ರಾಜ್ಯಕ್ಕೆ ಭೇಟಿ ನೀಡಬೇಕು ಎಂದು ಜನರನ್ನೇ ಕೇಳಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ The Ocean Cleanup ಸಂಸ್ಥೆಯ CEO ಬೋಯನ್ ಸ್ಲಾಟ್, ಅವರಿಗೆ ಕೆಲಸದ ಆಹ್ವಾನವನ್ನೂ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a8qed02zy2a4p1nk88s1gq,imgname-bittu-tabahi-s-next-move---from-viral-river-cleaner-to-national-environmental-crusader-1789198580127.jpg" type="image/jpeg" height="390" width="690"/>
            <content:encoded><![CDATA[&lt;h2&gt;ಅಜ್ನರ್ ನದಿಯಿಂದ ದೇಶದ ಮೂಲೆಮೂಲೆಗೂ: ಬಿಟ್ಟು ತಬಾಹಿ ಹೊಸ ಪ್ಲಾನ್!&lt;/h2&gt;&lt;p&gt;ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಬಿಯೋರಾದ ಅಜ್ನರ್ ನದಿಯಲ್ಲಿ ತುಂಬಿದ್ದ ಕಸ, ಪ್ಲಾಸ್ಟಿಕ್ ಹಾಗೂ ತ್ಯಾಜ್ಯವನ್ನು ತೆರವುಗೊಳಿಸುವ ಮೂಲಕ ಗಮನ ಸೆಳೆದಿರುವ ಸುರೇಂದ್ರ ಸಿಂಗ್ ಚೌಧರಿ, &lsquo;ಬಿಟ್ಟು ತಬಾಹಿ&rsquo; ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ. ತಮ್ಮ ಪ್ರದೇಶದ ಸ್ವಚ್ಛತೆಗಾಗಿ ಆರಂಭಿಸಿದ ಅವರ ವೈಯಕ್ತಿಕ ಪ್ರಯತ್ನ ಇದೀಗ ದೊಡ್ಡ ಅಭಿಯಾನದ ರೂಪ ಪಡೆಯುವ ಸೂಚನೆ ನೀಡಿದೆ.&lt;/p&gt;&lt;p&gt;&lt;strong&gt;&ldquo;ಮಧ್ಯಪ್ರದೇಶದಲ್ಲೇ ನಿಲ್ಲಬಾರದು&rdquo; &ndash; ಬಿಟ್ಟು ತಬಾಹಿ&lt;/strong&gt;&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತಾ ಕಾರ್ಯದ ಬಳಿಕ ಬಿಟ್ಟು ತಬಾಹಿ ಇದೀಗ ತಮ್ಮ ಅಭಿಯಾನವನ್ನು ದೇಶದ ಇತರ ರಾಜ್ಯಗಳಿಗೂ ಕೊಂಡೊಯ್ಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಇನ್&zwnj;ಸ್ಟಾಗ್ರಾಮ್ ವೀಡಿಯೊದಲ್ಲಿ, ಮೊದಲು ಯಾವ ರಾಜ್ಯಕ್ಕೆ ಭೇಟಿ ನೀಡಬೇಕು? ಎಂದು ಜನರನ್ನೇ ಕೇಳಿದ್ದಾರೆ.&lt;/p&gt;&lt;p&gt;ಜನರು ಕಾಮೆಂಟ್ ಮೂಲಕ ತಮ್ಮ ರಾಜ್ಯದ ಹೆಸರನ್ನು ಸೂಚಿಸುವಂತೆ ಮನವಿ ಮಾಡಿರುವ ಅವರು, ಸ್ವಚ್ಛತೆಯ ಸಂದೇಶವನ್ನು ಇನ್ನಷ್ಟು ಜನರಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆ. ಅಂದರೆ, ಒಂದು ನದಿಯ ಸ್ವಚ್ಛತೆಯಿಂದ ಆರಂಭವಾದ ಕೆಲಸವನ್ನು ಇದೀಗ ರಾಷ್ಟ್ರಮಟ್ಟದ ಜನಾಂದೋಲನವಾಗಿ ಬೆಳೆಸುವ ಪ್ರಯತ್ನ ಇದಾಗಿದೆ.&lt;/p&gt;&lt;p&gt;&lt;strong&gt;ಒಬ್ಬರಿಂದ ಆರಂಭವಾದ ಕೆಲಸಕ್ಕೆ ಜನರ ಬೆಂಬಲ&lt;/strong&gt;&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತಾ ಕಾರ್ಯದಲ್ಲಿ ಬಿಟ್ಟು ತಬಾಹಿ ಸ್ವತಃ ಕಸ ಹಾಗೂ ಪ್ಲಾಸ್ಟಿಕ್ ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅವರ ಪ್ರಯತ್ನಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಸೇರಿದಂತೆ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಅಭಿಯಾನ ಕೇವಲ ನದಿ ಸ್ವಚ್ಛಗೊಳಿಸುವ ಕೆಲಸವಾಗಿರದೆ, ಸ್ಥಳೀಯ ಸಮಸ್ಯೆಗಳಿಗೆ ನಾಗರಿಕರೂ ಮುಂದಾಗಿ ಪರಿಹಾರ ಹುಡುಕಬಹುದು ಎಂಬ ಸಂದೇಶವನ್ನೂ ನೀಡಿದೆ.&lt;/p&gt;&lt;p&gt;&lt;strong&gt;ವಿದೇಶಿ ಸಂಸ್ಥೆಯ CEO ಗಮನ ಸೆಳೆದ ಕೆಲಸ!&lt;/strong&gt;&lt;/p&gt;&lt;p&gt;ಬಿಟ್ಟು ತಬಾಹಿ ಅವರ ಕೆಲಸಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸಿಕ್ಕಿದೆ. ಸಮುದ್ರ ಮತ್ತು ನದಿಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯ ನಿವಾರಣೆಗೆ ಕೆಲಸ ಮಾಡುತ್ತಿರುವ ನೆದರ್ಲ್ಯಾಂಡ್ಸ್ ಮೂಲದ The Ocean Cleanup ಸಂಸ್ಥೆಯ ಸಂಸ್ಥಾಪಕ ಹಾಗೂ CEO ಬೋಯನ್ ಸ್ಲಾಟ್, ಸಾಮಾಜಿಕ ಜಾಲತಾಣದಲ್ಲಿ ಅವರ ಕೆಲಸವನ್ನು ಮೆಚ್ಚಿ ಸಂಸ್ಥೆಯೊಂದಿಗೆ ಕೆಲಸ ಮಾಡಲು ಆಹ್ವಾನಿಸಿದ್ದರು.&lt;/p&gt;&lt;p&gt;ನಂತರ ಬಿಟ್ಟು ತಬಾಹಿ ಅವರು ಸಂಸ್ಥೆಯೊಂದಿಗೆ ವೀಡಿಯೊ ಕಾಲ್ ನಡೆಸಿರುವುದನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಅವರ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.&lt;/p&gt;View this post on Instagram&lt;p&gt;A post shared by Surendra singh choudhry (@bittu_tabahi)&lt;/p&gt;&lt;p&gt;&lt;/p&gt;&lt;p&gt;&lt;strong&gt;&ldquo;ಭಾರತಕ್ಕಾಗಿ ಮಾತ್ರವಲ್ಲ, ಜಗತ್ತಿಗಾಗಿ ಯೋಚಿಸಿ&rdquo;&lt;/strong&gt;&lt;/p&gt;&lt;p&gt;ಬಿಟ್ಟು ತಬಾಹಿ ಅವರ ಕೆಲಸಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಅಭಿಯಾನವನ್ನು ನಿಲ್ಲಿಸದೆ ಇನ್ನಷ್ಟು ದೂರ ಕೊಂಡೊಯ್ಯುವಂತೆ ಪ್ರೋತ್ಸಾಹಿಸಿದ್ದಾರೆ. ಕೆಲವರು ವಿದೇಶಿ ಸಂಸ್ಥೆಯಿಂದ ಬಂದಿರುವ ಉದ್ಯೋಗದ ಆಹ್ವಾನವನ್ನು ಪರಿಗಣಿಸುವಂತೆ ಸಲಹೆ ನೀಡಿದ್ದಾರೆ.&lt;/p&gt;&lt;p&gt;ಅಜ್ನರ್ ನದಿಯ ಸ್ವಚ್ಛತೆಯಿಂದ ಆರಂಭವಾದ ಈ ಯುವಕನ ಪ್ರಯತ್ನ ಇದೀಗ ಭಾರತದ ಇತರ ನದಿಗಳು ಮತ್ತು ಪರಿಸರ ಸಮಸ್ಯೆಗಳತ್ತ ಗಮನ ಸೆಳೆಯುವ ದೊಡ್ಡ ವೇದಿಕೆಯಾಗುತ್ತದೆಯೇ? ಎಂಬುದು ಮುಂದಿನ ದಿನಗಳಲ್ಲಿ ಕುತೂಹಲ ಮೂಡಿಸುವ ಪ್ರಶ್ನೆಯಾಗಿದೆ.&lt;/p&gt;View this post on Instagram&lt;p&gt;A post shared by Surendra singh choudhry (@bittu_tabahi)&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/from-cleaning-ajnar-river-to-cleaning-india-bittu-tabahi-reveals-his-next-big-plan/articleshow-g9g4pwt"/>
        </item>
        <item>
            <title><![CDATA[ಸಾರ್ವಕಾಲಿಕ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡಿದ ರಾಹುಲ್ ದ್ರಾವಿಡ್‌..! ಕೊಹ್ಲಿ, ಪಾಂಟಿಂಗ್‌ರನ್ನೇ ಹಿಂದಿಕ್ಕಿದ ಈ ಲೆಜೆಂಡ್..!]]></title>
            <link>https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y</link>
            <guid isPermaLink="true">https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y</guid>
            <pubDate>Sat, 12 Sep 2026 13:51:37 +0530</pubDate>
            <description><![CDATA[ಟೀಂ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಯಾರೆಂದು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ, ಇಮ್ರಾನ್ ಖಾನ್, ಕ್ಲೈವ್ ಲಾಯ್ಡ್‌ರಂತಹ ದಿಗ್ಗಜರನ್ನು ಹಿಂದಿಕ್ಕಿ, ಮೂರು ಐಸಿಸಿ ಟ್ರೋಫಿ ಗೆದ್ದ ಎಂ.ಎಸ್. ಧೋನಿಯನ್ನು ಅವರು ತಮ್ಮ ಆಯ್ಕೆಯಾಗಿ ಹೆಸರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxcpz1wj0jv1nenq74c6xqgb,imgname-rahul-dravid-1783911909266.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ, ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್, ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಯಾರು ಅನ್ನೋದನ್ನು ತಿಳಿಸಿದ್ದಾರೆ. ಕ್ರಿಕ್&zwnj;ಇನ್ಫೋ ಆಯೋಜಿಸಿದ್ದ 'ವಿನ್ನರ್ ಸ್ಟೇಯ್ಸ್ ಆನ್' ಅನ್ನೋ ಗೇಮ್&zwnj;ನಲ್ಲಿ ದ್ರಾವಿಡ್ ತಮ್ಮ ಆಯ್ಕೆಯನ್ನು ಬಹಿರಂಗಪಡಿಸಿದ್ದಾರೆ. ಆಸ್ಟ್ರೇಲಿಯಾದ ಕ್ಯಾಪ್ಟನ್&zwnj;ಗಳು, ವಿರಾಟ್ ಕೊಹ್ಲಿ, ಪಾಕಿಸ್ತಾನದ ಇಮ್ರಾನ್ ಖಾನ್ ಎಲ್ಲರನ್ನೂ ಹಿಂದಿಕ್ಕಿ ಎಂ.ಎಸ್. ಧೋನಿ, ದ್ರಾವಿಡ್ ಪಟ್ಟಿಯಲ್ಲಿ ನಂಬರ್ 1 ಆಗಿ ಹೊರಹೊಮ್ಮಿದ್ದಾರೆ.&lt;/p&gt;&lt;h2&gt;&lt;strong&gt;ದಿಗ್ಗಜರನ್ನು ಹಿಂದಿಕ್ಕಿದ್ದ ವಿರಾಟ್ ಕೊಹ್ಲಿ&lt;/strong&gt;&lt;/h2&gt;&lt;p&gt;ಹಲವು ಹಂತಗಳಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ, ವಿರಾಟ್ ಕೊಹ್ಲಿ ಅವರು ಸ್ಟೀವ್ ಸ್ಮಿತ್, ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾರನ್ನು ಹಿಂದಿಕ್ಕಿ ಮುನ್ನಡೆದಿದ್ದರು. ಆದರೆ, ಮುಂದಿನ ಸುತ್ತಿನಲ್ಲಿ ದ್ರಾವಿಡ್, ಕೊಹ್ಲಿಗಿಂತ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್&zwnj;ರನ್ನು ಆಯ್ಕೆ ಮಾಡಿದರು. ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಭಾರತದ ಕ್ಯಾಪ್ಟನ್ ಕೊಹ್ಲಿ ಆಗಿದ್ದರೂ, 1992ರಲ್ಲಿ ಪಾಕಿಸ್ತಾನಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಇಮ್ರಾನ್ ಖಾನ್ ನಾಯಕತ್ವಕ್ಕೆ ದ್ರಾವಿಡ್ ಮಣೆ ಹಾಕಿದರು. ಕೊಹ್ಲಿ 213 ಪಂದ್ಯಗಳಲ್ಲಿ 135 ಗೆಲುವು ಸಾಧಿಸಿದ್ದರೆ, ಇಮ್ರಾನ್ 187 ಪಂದ್ಯಗಳಲ್ಲಿ 89 ಗೆಲುವು ದಾಖಲಿಸಿದ್ದರು.&lt;/p&gt;&lt;h3&gt;&lt;strong&gt;ಧೋನಿ ಶ್ರೇಷ್ಠ ಕ್ಯಾಪ್ಟನ್ ಎಂದ ದ್ರಾವಿಡ್&lt;/strong&gt;&lt;/h3&gt;&lt;p&gt;ಆದರೆ, ಇಮ್ರಾನ್ ಖಾನ್&zwnj;ರ ಪಾರುಪತ್ಯ ಮುಂದಿನ ಸುತ್ತಿನಲ್ಲಿ ಕೊನೆಗೊಂಡಿತು. ದ್ರಾವಿಡ್, ಇಮ್ರಾನ್ ಖಾನ್&zwnj;ಗಿಂತ ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಎಂ.ಎಸ್. ಧೋನಿಯನ್ನೇ ಆಯ್ಕೆ ಮಾಡಿದರು. ಅಂತಿಮ ಹಣಾಹಣಿ ಧೋನಿ ಮತ್ತು ವೆಸ್ಟ್ ಇಂಡೀಸ್&zwnj;ಗೆ ಮೊದಲ ಎರಡು ವಿಶ್ವಕಪ್&zwnj;ಗಳನ್ನು ಗೆದ್ದುಕೊಟ್ಟ ಕ್ಲೈವ್ ಲಾಯ್ಡ್ ನಡುವೆ ಇತ್ತು. ಆದರೆ ಇಲ್ಲೂ ಕೂಡ ದ್ರಾವಿಡ್, ಕ್ಲೈವ್ ಲಾಯ್ಡ್&zwnj;ಗಿಂತ ಎಂ.ಎಸ್. ಧೋನಿಗೇ ತಮ್ಮ ಮತ ಹಾಕಿದರು.&lt;/p&gt;&lt;p&gt;ಭಾರತಕ್ಕೆ ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು (2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, 2013 ಚಾಂಪಿಯನ್ಸ್ ಟ್ರೋಫಿ) ಗೆದ್ದುಕೊಟ್ಟ ಏಕೈಕ ನಾಯಕ ಧೋನಿ. 332 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 178 ಗೆಲುವುಗಳನ್ನು ದಾಖಲಿಸಿರುವ ಧೋನಿ, ಭಾರತವನ್ನು ಮೊದಲ ಬಾರಿಗೆ ಟೆಸ್ಟ್ ರ&zwj;್ಯಾಂಕಿಂಗ್&zwnj;ನಲ್ಲಿ ನಂಬರ್ 1 ಸ್ಥಾನಕ್ಕೆ ಕೊಂಡೊಯ್ದಿದ್ದರು. ಆರಂಭಿಕ ಸುತ್ತುಗಳಲ್ಲಿ ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಕೇನ್ ವಿಲಿಯಮ್ಸನ್ ಮತ್ತು ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿದ್ದರು. ಆದರೆ ದ್ರಾವಿಡ್, ಸ್ಮಿತ್&zwnj;ಗಿಂತ ರಿಕಿ ಪಾಂಟಿಂಗ್&zwnj;ರನ್ನು, ಹಾಗೂ ಪಾಂಟಿಂಗ್&zwnj;ಗಿಂತ ಸ್ಟೀವ್ ವಾರನ್ನು ಉತ್ತಮ ಕ್ಯಾಪ್ಟನ್&zwnj;ಗಳೆಂದು ಆಯ್ಕೆ ಮಾಡಿದರು.&lt;/p&gt;&lt;p&gt;Rahul Dravid picks &quot;MS Dhoni as the Top International Captain&quot; pic.twitter.com/uXqmymBtW4&lt;/p&gt;&lt;p&gt;&mdash;  (@Shebas_10dulkar) September 12, 2026&lt;/p&gt;&lt;p&gt;&lt;/p&gt;&lt;p&gt;ಇನ್ನು ರಾಹುಲ್ ದ್ರಾವಿಡ್ ಸ್ವತಃ ಟೀಂ ಇಂಡಿಯಾ ನಾಯಕರಾಗಿ ಹಲವು ಸಾಧನೆ ಮಾಡಿದ್ದಾರೆ. ಕ್ರಿಕೆಟ್&zwnj;ಗೆ ವಿದಾಯ ಹೇಳಿದ ಬಳಿಕ ಟೀಂ ಇಂಡಿಯಾ ಹೆಡ್&zwnj; ಕೋಚ್ ಆಗಿ 2024ರಲ್ಲಿ ಭಾರತ ತಂಡವು ದಶಕದ ಬಳಿಕ ಐಸಿಸಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದ್ದರು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/rahul-dravid-picks-ms-dhoni-as-the-greatest-captain-in-cricket-history-kohli-misses-out-kvn/articleshow-swsm64y"/>
        </item>
        <item>
            <title><![CDATA[BBK 13: ವೀಕೆಂಡ್ ಪಂಚಾಯ್ತಿಯಲ್ಲಿ ಬಯಲಾಗುತ್ತಾ ಗಗನ್ ಡಬಲ್ ಗೇಮ್; ಸುದೀಪ್ ಕ್ಲಾಸ್?]]></title>
            <link>https://kannada.asianetnews.com/gallery/tv-talk/bigg-boss-kannada-13-gagan-chinnappa-s-biased-decisions-rule-violations-are-set-to-come-under-scrutiny-mrq-5ggrqei</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-13-gagan-chinnappa-s-biased-decisions-rule-violations-are-set-to-come-under-scrutiny-mrq-5ggrqei</guid>
            <pubDate>Sat, 12 Sep 2026 13:43:53 +0530</pubDate>
            <description><![CDATA[ಬಿಗ್‌ಬಾಸ್ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿಯಲ್ಲಿ, ಗಗನ್ ಚಿನ್ನಪ್ಪ ಅವರ ಪಕ್ಷಪಾತದ ನಿರ್ಧಾರಗಳು ಮತ್ತು ನಿಯಮ ಉಲ್ಲಂಘನೆಗಳು ಚರ್ಚೆಗೆ ಬರಲಿವೆ. ತಾಂಡವ್ ರಾಮ್ ಜೊತೆ ಸೇರಿ ನಾಮಿನೇಷನ್ ಬಗ್ಗೆ ಚರ್ಚೆ ನಡೆಸಿ, ಡಬಲ್ ಗೇಮ್ ಆಡಿರುವ ಗಗನ್ ಆಟ ಬಯಲಾಗುವ ಸಾಧ್ಯತೆ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2aajh7vbafxpv9pseqkrgpe,imgname-bigg-boss-kannada--1--1789200516347.jpg" type="image/jpeg" height="390" width="690"/>
            <content:encoded><![CDATA[ಬಿಗ್&zwnj;ಬಾಸ್ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿಯಲ್ಲಿ, ಗಗನ್ ಚಿನ್ನಪ್ಪ ಅವರ ಪಕ್ಷಪಾತದ ನಿರ್ಧಾರಗಳು ಮತ್ತು ನಿಯಮ ಉಲ್ಲಂಘನೆಗಳು ಚರ್ಚೆಗೆ ಬರಲಿವೆ. ತಾಂಡವ್ ರಾಮ್ ಜೊತೆ ಸೇರಿ ನಾಮಿನೇಷನ್ ಬಗ್ಗೆ ಚರ್ಚೆ ನಡೆಸಿ, ಡಬಲ್ ಗೇಮ್ ಆಡಿರುವ ಗಗನ್ ಆಟ ಬಯಲಾಗುವ ಸಾಧ್ಯತೆ ಇದೆ.&lt;img&gt;&lt;p&gt;ಇಂದು ಬಿಗ್&zwnj;ಬಾಸ್ ಸೀಸನ್ 13 ಮೊದಲ ವೀಕೆಂಡ್ ಪಂಚಾಯ್ತಿ ನಡೆಯಲಿದ್ದು, ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಮೊದಲ ವಾರದಲ್ಲಿ ಮೂಲಗಳ ನಿಯಮ ಉಲ್ಲಂಘನೆ, ಉಸ್ತುವಾರಿಯ ಪಕ್ಷಪಾತದ ನಿರ್ಧಾರಗಳು ಮತ್ತು ಕಾಮನ್ ವರ್ಸಸ್ ಸೆಲಿಬ್ರಿಟಿ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ.&lt;/p&gt;&lt;img&gt;&lt;p&gt;ಸ್ವಿಮ್ಮಿಂಗ್ ಪೂಲ್ ಟಾಸ್ಕ್&zwnj; ವೇಳೆ ಗಗನ್ ತೆಗೆದುಕೊಂಡು ಪಕ್ಷಪಾತ ನಿರ್ಧಾರವನ್ನು ಇಂದಿನ ಪ್ರೋಮೋದಲ್ಲಿ ತೋರಿಸಲಾಗಿದೆ. ಮಂಜುನಾಥ್ ಮತ್ತು ಸೌಂದರ್ಯಾ ಶೆಟ್ಟಿ ನಡುವೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ. ಈ ನಿರ್ಧಾರದ ಬಗ್ಗೆ ವಿಮಾನದ ಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಮನೆಯಲ್ಲಿರುವ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ನಡುವೆ ಹಲವು ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರನ್ನು ನಾಮಿನೇಟ್ ಮಾಡಬೇಕು ಎಂಬುದರ ಕುರಿತು ಯಾರ ಜೊತೆಯಲ್ಲಿ ಚರ್ಚೆ ಮಾಡಬಾರದು ಅನ್ನೋದು ಬಿಗ್&zwnj;ಬಾಸ್ ಮನೆಯ ಮೂಲ ನಿಯಮವಾಗಿದೆ. ಈ ನಿಯಮವನ್ನು ತಾಂಡವ್ ರಾಮ್ ಮತ್ತು ಗಗನ್ ಬ್ರೇಕ್ ಮಾಡಿದ್ದಾರೆ.&lt;/p&gt;&lt;img&gt;&lt;p&gt;ತಾಂಡವ್ ಮತ್ತು ಗಗನ್ ಜೊತೆಯಾಗಿ ಎಲ್ಲವೂ ಪ್ಲಾನ್ ಮತ್ತು ಎಲ್ಲರ ಬಗ್ಗೆ ಗಾಸಿಪ್ ಮಾಡುತ್ತಿರೋದನ್ನು ಗಮನಿಸಿದ ವೀಕ್ಷಕರು, ಇದು ಗಂಡಸರ ಕಿತಾಪತಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲ ಆಸಿಯಾ ಅವರಿಗೆ ತಂಡದ ನಿರ್ಧಾರಕ್ಕೆ ಒಪ್ಪಿಗೆ ನೀಡಬೇಡಿ. ನಾನು ನಿಮ್ಮನ್ನು ಸೇವ್ ಮಾಡಿಕೊಳ್ಳುತ್ತೇನೆ ಎಂದು ಗಗನ್ ಹೇಳಿದ್ದರು.&lt;/p&gt;&lt;img&gt;&lt;p&gt;ಆದ್ರೆ ಒಬ್ಬರನ್ನು ಸೇವ್ ಮಾಡಿಕೊಳ್ಳುವ ಅವಕಾಶ ಬಂದಾಗ ಸೌಂದರ್ಯಾ ಶೆಟ್ಟಿ ಪರವಾಗಿ ಗಗನ್ ಬ್ಯಾಟ್ ಬೀಸಿದರು. ಹಾಗೆಯೇ ಮಹಿಳಾ ಸ್ಪರ್ಧಿ ಬಂದ್ರೆ ಮನೆಗೆಲಸ ಮಾಡಲು ನೆರವು ಸಿಗುತ್ತದೆ ಎಂಬುವುದು ಗಗನ್ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯಕ್ಕೆ ಕಾವ್ಯಾ ಗೌಡ ವಿರೋಧ ವ್ಯಕ್ತಪಡಿಸಿದರು. ಮಂಜುನಾಥ್ ಉಳಿದುಕೊಂಡ್ರೆ ಆತನಿಂದ ನಾನು ಮೈಲೇಜ್ ಪಡೆಯಬಹುದು. ಆತನಿದ್ರೆ ನಮಗೆ ಹೆಚ್ಚು ಲಾಭ ಎಂದು ಗಗನ್ ಮಾತನಾಡಿದ್ದರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-13-gagan-chinnappa-s-biased-decisions-rule-violations-are-set-to-come-under-scrutiny-mrq-5ggrqei"/>
        </item>
        <item>
            <title><![CDATA[Ganesh Chaturthi Special: ಗೌರಿ-ಗಣೇಶ ಹಬ್ಬಕ್ಕೆ ಬಾಯಲ್ಲಿ ನೀರೂರಿಸುವ ಸಿಹಿ ಹಬೆ ಕಡುಬು ಮಾಡುವ ಸುಲಭ ವಿಧಾನ]]></title>
            <link>https://kannada.asianetnews.com/food/ganesh-chaturthi-special-how-to-make-authentic-steamed-sweet-kadubu/articleshow-uz8lo62</link>
            <guid isPermaLink="true">https://kannada.asianetnews.com/food/ganesh-chaturthi-special-how-to-make-authentic-steamed-sweet-kadubu/articleshow-uz8lo62</guid>
            <pubDate>Sat, 12 Sep 2026 13:40:46 +0530</pubDate>
            <description><![CDATA[Sweet kadubu recipe: ಗೌರಿ-ಗಣೇಶ ಹಬ್ಬಕ್ಕೆ ವಿಘ್ನವಿನಾಶಕನಿಗೆ ನೈವೇದ್ಯ ಮಾಡಲು ಸಾಂಪ್ರದಾಯಿಕ 'ಸಿಹಿ ಹಬೆ ಕಡುಬು' ಹೇಗೆ ಮಾಡೋದು ಅಂತ ಯೋಚಿಸ್ತಿದ್ದೀರಾ? ಅಕ್ಕಿ ಹಿಟ್ಟು ಸ್ವಲ್ಪವೂ ಒಡೆಯದಂತೆ, ಬಾಯಲ್ಲಿಟ್ಟರೆ ಕರಗುವಂತಹ ಸಾಫ್ಟ್ ಕಡುಬು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ...]]></description>
            <media:content url="https://static.asianetnews.com/images/w-1280,h-720,format-jpg,imgid-01m2aak860fzk3e3kemjx8zpsa,imgname-thumbnail---2026-09-12t133258.707-1789200539838.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗೌ&lt;/strong&gt;ರಿ-ಗಣೇಶ ಹಬ್ಬ ಬಂತೆಂದರೆ ಮನೆಮನೆಗಳಲ್ಲೂ ಸಂಭ್ರಮವೋ ಸಂಭ್ರಮ. ವಿಘ್ನವಿನಾಶಕ ಗಣಪತಿಗೆ ಬಗೆಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಪ್ರದಾಯ. ಅದರಲ್ಲಿಯೂ ಗಣೇಶನಿಗೆ ಅತ್ಯಂತ ಪ್ರಿಯವಾದದ್ದು &lsquo;ಆವಿಯಲ್ಲಿ ಬೇಯಿಸಿದ ಸಿಹಿ ಕಡುಬು&rsquo; (ಹಬೆ ಕಡುಬು). ಹಬ್ಬದ ದಿನ ಕಡುಬು ಮಾಡುವುದು ಕೆಲವರಿಗೆ ಕಷ್ಟದ ಕೆಲಸ ಅನ್ನಿಸಬಹುದು. ಆದರೆ ಯಾವುದೇ ಗೊಂದಲವಿಲ್ಲದೆ, ಅಕ್ಕಿ ಹಿಟ್ಟು ಒಡೆಯದಂತೆ ಅತ್ಯಂತ ಸಾಫ್ಟ್ ಮತ್ತು ರುಚಿಕರವಾದ ಸಾಂಪ್ರದಾಯಿಕ ಸಿಹಿ ಕಡುಬನ್ನು ಮನೆಯಲ್ಲೇ ಸರಳವಾಗಿ ಹೇಗೆ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;h3&gt;&lt;strong&gt;ಸಿಹಿ ಹೂರಣಕ್ಕೆ&lt;/strong&gt;&lt;/h3&gt;&lt;p&gt;ಬೆಲ್ಲ - 200 ಗ್ರಾಂ (2 ಕಪ್)ಹಸಿ ತೆಂಗಿನತುರಿ - 3 ರಿಂದ 4 ಕಪ್ಏಲಕ್ಕಿ ಪುಡಿ - 1/4 ಚಮಚತುಪ್ಪ - 1 ಚಮಚನೀರು - ಸ್ವಲ್ಪ&lt;/p&gt;&lt;h3&gt;&lt;strong&gt;ಮೇಲ್ಮೈ ಕಣಕಕ್ಕೆ (ಹಿಟ್ಟಿಗೆ)&lt;/strong&gt;&lt;/h3&gt;&lt;p&gt;ಅಕ್ಕಿ ಹಿಟ್ಟು - 5 ಕಪ್ (ಸುಮಾರು 800 ಗ್ರಾಂ)ನೀರು - ಅರ್ಧ ಲೀಟರ್ತುಪ್ಪ - 1 ಚಮಚತಟ್ಟಲು - ಬಾಳೆ ಎಲೆ ಮತ್ತು ಸ್ವಲ್ಪ ಎಣ್ಣೆ/ತುಪ್ಪ&lt;/p&gt;&lt;h2&gt;&lt;strong&gt;ಹಂತ 1: ರುಚಿಕರ ಹೂರಣ ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;*ಒಂದು ಬಾಣಲೆಗೆ 200 ಗ್ರಾಂ ಬೆಲ್ಲ ಹಾಕಿ, ಅದಕ್ಕೆ ಸ್ವಲ್ಪವೇ ನೀರನ್ನು ಚಿಮುಕಿಸಿ ಕರಗಲು ಬಿಡಿ.*ಬೆಲ್ಲ ಕರಗಿ, ನೊರೆ ಬಂದು ಸ್ವಲ್ಪ ಗಟ್ಟಿಯಾದ ಹದಕ್ಕೆ ಬಂದಾಗ, ತುರಿದ ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ತಿರುವಿ.*ತೆಂಗಿನಕಾಯಿ ಹಾಕಿದ ನಂತರ ಮಿಶ್ರಣ ಕೊಂಚ ನೀರಾಗುತ್ತದೆ. 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಹೂರಣ ಗಟ್ಟಿಯಾಗುತ್ತದೆ.*ನಂತರ ಒಲೆ ಆಫ್ ಮಾಡಿ, ಮಿಶ್ರಣ ತಣ್ಣಗಾದ ಮೇಲೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ ಪಕ್ಕಕ್ಕಿಡಿ.&lt;/p&gt;&lt;h2&gt;&lt;strong&gt;ಹಂತ 2: ಕಣಕ (ಅಕ್ಕಿ ಹಿಟ್ಟಿನ ಮುದ್ದೆ) ತಯಾರಿಕೆ&lt;/strong&gt;&lt;/h2&gt;&lt;p&gt;*ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ, ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಕುದಿಯಲು ಬಿಡಿ.*ನೀರು ಕುದಿಯುತ್ತಿದ್ದಂತೆ ಉರಿ ಕಡಿಮೆ ಮಾಡಿ, ಅಕ್ಕಿ ಹಿಟ್ಟನ್ನು ಸೇರಿಸಿ ಗಂಟಾಗದಂತೆ ಮುದ್ದೆಯ ಹದಕ್ಕೆ ಚೆನ್ನಾಗಿ ತಿರುವಿ, ಒಲೆ ಆಫ್ ಮಾಡಿ ಮುಚ್ಚಿಡಿ.*ಹಿಟ್ಟು ಸ್ವಲ್ಪ ಬೆಚ್ಚಗಿರುವಾಗಲೇ ಕೈಗೆ ಸ್ವಲ್ಪ ನೀರು ತಾಗಿಸಿಕೊಂಡು, ಹಿಟ್ಟನ್ನು ನುಣ್ಣಗೆ ನಾದಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ನಾದಿದಷ್ಟೂ ಕಡುಬು ಲಟ್ಟಿಸುವಾಗ ಒಡೆಯುವುದಿಲ್ಲ.*ಈಗ ಕಣಕ ಮತ್ತು ಹೂರಣ ಎರಡನ್ನೂ ನಿಂಬೆಹಣ್ಣಿನ ಗಾತ್ರದ ಸಮಾನ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.&lt;/p&gt;&lt;h2&gt;&lt;strong&gt;ಹಂತ 3: ಕಡುಬು ಕಟ್ಟುವುದು ಮತ್ತು ಬೇಯಿಸುವುದು&lt;/strong&gt;&lt;/h2&gt;&lt;p&gt;*ಬಾಳೆ ಎಲೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ, ಅದರ ಮೇಲೆ ಹಿಟ್ಟಿನ ಉಂಡೆಯನ್ನಿಡಿ.*ಅದರ ಮೇಲೆ ಮತ್ತೊಂದು ಬಾಳೆ ಎಲೆಯಿಟ್ಟು, ಫ್ಲಾಟ್ ಆಗಿರುವ ಸಣ್ಣ ಪಾತ್ರೆಯಿಂದ ಲಘುವಾಗಿ ಒತ್ತಿದರೆ (ಪ್ರೆಸ್ ಮಾಡಿದರೆ) ಸುಲಭವಾಗಿ ಪೂರಿಯಂತೆ ಹರಡಿಕೊಳ್ಳುತ್ತದೆ.*ಈಗ ಅದರ ಮಧ್ಯಭಾಗದಲ್ಲಿ ಹೂರಣದ ಉಂಡೆಯನ್ನಿಟ್ಟು, ಅರ್ಧ ಚಂದ್ರಾಕಾರದಲ್ಲಿ ಮಡಚಿ ಅಂಚುಗಳನ್ನು ಬೆರಳುಗಳಿಂದ ಒತ್ತಿ ಮುಚ್ಚಿ.*ಇಡ್ಲಿ ಪಾತ್ರೆ ಅಥವಾ ಸ್ಟೀಮರ್&zwnj;ನಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ, ನಂತರ ಈ ಕಡುಬುಗಳನ್ನು ತಟ್ಟೆಯಲ್ಲಿ ಜೋಡಿಸಿ ಇಡಿ.*ಜೋರು ಉರಿಯಲ್ಲಿ ಸರಿಯಾಗಿ 15 ರಿಂದ 16 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ, ಒಲೆ ಆಫ್ ಮಾಡಿ.&lt;/p&gt;&lt;h2&gt;&lt;strong&gt;ರುಚಿ ನೋಡಿ&lt;/strong&gt;&lt;/h2&gt;&lt;p&gt;ಬಿಸಿಬಿಸಿಯಾದ ಹಬೆ ಕಡುಬಿನ ಮೇಲೆ ಒಂದು ಚಮಚ ತುಪ್ಪ ಹಾಕಿಕೊಂಡು ತಿಂದರೆ ಆ ಬೆಲ್ಲ, ತೆಂಗಿನಕಾಯಿ ಹಾಗೂ ಏಲಕ್ಕಿಯ ಘಮ ಬಾಯಲ್ಲಿ ಕರಗಿ ಅಮೃತದಂತೆ ಭಾಸವಾಗುತ್ತದೆ. ಗಣಪತಿಗೆ ನೈವೇದ್ಯ ಅರ್ಪಿಸಲು ಇದು ಹೇಳಿಮಾಡಿಸಿದ ಸಾಂಪ್ರದಾಯಿಕ ತಿನಿಸು. ಈ ಹಬ್ಬಕ್ಕೆ ನೀವೂ ಒಮ್ಮೆ ಈ ಸುಲಭ ವಿಧಾನವನ್ನು ಪ್ರಯತ್ನಿಸಿ ನೋಡಿ!&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/ganesh-chaturthi-special-how-to-make-authentic-steamed-sweet-kadubu/articleshow-uz8lo62"/>
        </item>
        <item>
            <title><![CDATA[Instagram ರೀಲ್ಸ್, ನೆಟ್ಟಿಗರ ಕಾಮೆಂಟ್ಸ್; ಗಂಡನಿಗೇ ಡಿವೋರ್ಸ್ ಕೊಟ್ಟ ಮಹಿಳೆ! ನಿಜಕ್ಕೂ ಅಲ್ಲೇನಾಯ್ತು?]]></title>
            <link>https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07</link>
            <guid isPermaLink="true">https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07</guid>
            <pubDate>Sat, 12 Sep 2026 13:29:04 +0530</pubDate>
            <description><![CDATA[ಭೋಪಾಲ್‌ನಲ್ಲಿ 12 ವರ್ಷಗಳ ದಾಂಪತ್ಯ ಸಾಮಾಜಿಕ ಮಾಧ್ಯಮದ ಹೊಗಳಿಕೆಯಿಂದ ವಿಚ್ಛೇದನದ ಅಂಚಿಗೆ ತಲುಪಿರುವುದಾಗಿ ವರದಿಯಾಗಿದೆ. ಇನ್‌ಸ್ಟಾಗ್ರಾಂ ರೀಲ್ಸ್‌ಗೆ ಬಂದ ಮೆಚ್ಚುಗೆಯ ಬಳಿಕ ಪತ್ನಿ ಪತಿ ತನಗೆ ಅರ್ಹರಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ ಎನ್ನಲಾಗಿದೆ. ಬಳಿಕ ಜಗಳ, ಹೊಸ ಮನೆ ಬೇಡಿಕೆ, ಜೀವನಾಂಶ, ವಿಚ್ಛೇದನ ಹಾಗೂ ಕೌಟುಂಬಿಕ ಹಿಂಸಾಚಾರದ ಆರೋಪಗಳೊಂದಿಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29wqk4e6tcqzrpeqg3wg1db,imgname-instagram-compliments-trigger-marital-trouble-after-12-years-of-marriage--1--1789186002062.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರೀಲ್ಸ್, ಫಾಲೋವರ್ಸ್, ಹೊಗಳಿಕೆ... ಕೊನೆಗೆ ವಿಚ್ಛೇದನದವರೆಗೆ ಹೋದ ದಾಂಪತ್ಯ!&lt;/strong&gt;&lt;/p&gt;&lt;p&gt;ಮಧ್ಯಪ್ರದೇಶದ ಭೋಪಾಲ್&zwnj;ನಲ್ಲಿ ನಡೆದಿರುವ ವಿಚಿತ್ರ ದಾಂಪತ್ಯ ವಿವಾದವೊಂದು ಸಾಮಾಜಿಕ ಮಾಧ್ಯಮದ ಪ್ರಭಾವದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ವರದಿಗಳ ಪ್ರಕಾರ, 12 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಯ ವೈವಾಹಿಕ ಜೀವನದಲ್ಲಿ ಪತ್ನಿಯ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಬಳಿಕ ಬಿರುಕು ಮೂಡಿದೆ. ಪ್ರಕರಣ ಇದೀಗ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದೆ.&lt;/p&gt;&lt;p&gt;&lt;strong&gt;12 ವರ್ಷ ಚೆನ್ನಾಗಿದ್ದ ಸಂಸಾರದಲ್ಲಿ ಬಿರುಗಾಳಿ!&lt;/strong&gt;&lt;/p&gt;&lt;p&gt;ಭೋಪಾಲ್ ಮೂಲದ ಮಹಿಳೆ 2014ರಲ್ಲಿ ಇಂದೋರ್&zwnj;ನ ಜಂಟಿ ಕುಟುಂಬದ ವ್ಯಕ್ತಿಯನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಇಂದೋರ್&zwnj;ನಲ್ಲಿ ವಾಸವಾಗಿದ್ದ ದಂಪತಿಗೆ 11 ವರ್ಷದ ಮಗಳು ಹಾಗೂ 7 ವರ್ಷದ ಮಗನಿದ್ದಾರೆ.&lt;/p&gt;&lt;p&gt;ಆರಂಭದಲ್ಲಿ ಕುಟುಂಬ ಜೀವನ ಸಾಮಾನ್ಯವಾಗಿಯೇ ಸಾಗುತ್ತಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಮಹಿಳೆ ಇನ್&zwnj;ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಆಸಕ್ತಿ ಬೆಳೆಸಿಕೊಂಡರು. ಅವರ ವಿಡಿಯೋಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಯತೊಡಗಿತು. ಫಾಲೋವರ್ಸ್ ಸಂಖ್ಯೆ ಹೆಚ್ಚಿದಂತೆ, ಅವರ ನೋಟ ಮತ್ತು ವ್ಯಕ್ತಿತ್ವವನ್ನು ಹೊಗಳುವ ಕಾಮೆಂಟ್&zwnj;ಗಳೂ ಹೆಚ್ಚಾದವು.&lt;/p&gt;&lt;p&gt;&lt;strong&gt;ಸೋಷಿಯಲ್ ಮೀಡಿಯಾ ಕಾಮೆಂಟ್&zwnj;ಗಳಿಂದ ಮನಸ್ಥಿತಿಯಲ್ಲಿ ಬದಲಾವಣೆ?&lt;/strong&gt;&lt;/p&gt;&lt;p&gt;ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲಹೆ ನೀಡುತ್ತಿರುವ ಶೈಲ್ ಅವಸ್ಥಿ ಅವರ ಪ್ರಕಾರ, ಈ ನಿರಂತರ ಹೊಗಳಿಕೆ ಮಹಿಳೆಯ ಮನೋಭಾವದ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. ತಮ್ಮ ಪತಿ ತಮ್ಮ ಮಟ್ಟಕ್ಕೆ ಹೊಂದಿಕೆಯಾಗುವುದಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಇದಾದ ಬಳಿಕ ದಂಪತಿಯ ನಡುವೆ ಜಗಳಗಳು ಹೆಚ್ಚಾದವು. ಪತ್ನಿ ಹೊಸ ಮನೆ ಖರೀದಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರೆ, ಪತಿ ಅದನ್ನು ಒಪ್ಪಲಿಲ್ಲ ಎನ್ನಲಾಗಿದೆ. ನಂತರ ಮಹಿಳೆ ಮಕ್ಕಳೊಂದಿಗೆ ಭೋಪಾಲ್&zwnj;ನಲ್ಲಿರುವ ತವರು ಮನೆಗೆ ತೆರಳಿದರು.&lt;/p&gt;&lt;p&gt;&lt;strong&gt;ಜೀವನಾಂಶ, ವಿಚ್ಛೇದನ ಮತ್ತು ಕಿರುಕುಳದ ಆರೋಪ..!&lt;/strong&gt;&lt;/p&gt;&lt;p&gt;ಮಹಿಳೆ ತನ್ನ ಮತ್ತು ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶ ಕೋರಿ ಭೋಪಾಲ್ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಜೊತೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಕಿರುಕುಳ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪಗಳನ್ನೂ ಮುಂದಿಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಪತಿಯ ವಾದವೇನು?&lt;/strong&gt;&lt;/p&gt;&lt;p&gt;ಕುಟುಂಬ ನ್ಯಾಯಾಲಯದ ಸಲಹೆಗಾರರ ಪ್ರಕಾರ, ಪತಿ ತಮ್ಮ ಪತ್ನಿಯ ಶಿಕ್ಷಣಕ್ಕೆ ನೆರವಾಗಿದ್ದಾಗಿ ತಿಳಿಸಿದ್ದಾರೆ. ಮದುವೆಯ ಸಮಯದಲ್ಲಿ ಅವರು ಶಾಲಾ ವಿದ್ಯಾರ್ಥಿನಿಯಾಗಿದ್ದರು ಎಂದು ಪತಿ ಹೇಳಿಕೊಂಡಿದ್ದು, ಆರ್ಥಿಕವಾಗಿ ಸ್ವಾವಲಂಬಿಯಾಗಲು ಸುಮಾರು ₹4 ಲಕ್ಷವನ್ನು ಬ್ಯೂಟಿ ಪಾರ್ಲರ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.&lt;/p&gt;&lt;p&gt;ತಮ್ಮ ರೂಪ-ರೇಖೆಯ ಕಾರಣದಿಂದ ಪತ್ನಿ ತನ್ನನ್ನು ತಿರಸ್ಕರಿಸುತ್ತಿದ್ದಾರೆ ಎಂಬ ಭಾವನೆ ಪತಿಯಲ್ಲಿ ಮೂಡಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಮಕ್ಕಳ ಭವಿಷ್ಯವೂ ಪ್ರಶ್ನೆಯಲ್ಲಿದೆ&lt;/strong&gt;&lt;/p&gt;&lt;p&gt;ಪ್ರಸ್ತುತ ಮಹಿಳೆ ವಿಚ್ಛೇದನ ಪಡೆಯುವುದರಲ್ಲೇ ದೃಢವಾಗಿದ್ದಾರೆ ಎಂದು ಸಲಹೆಗಾರರು ತಿಳಿಸಿದ್ದಾರೆ. ವಿಚ್ಛೇದನವಾದರೆ ಇಬ್ಬರೂ ಮಕ್ಕಳಲ್ಲಿ ತಲಾ ಒಬ್ಬರ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ.&lt;/p&gt;&lt;p&gt;ಈ ಪ್ರಕರಣವು ಸಾಮಾಜಿಕ ಮಾಧ್ಯಮದ ಹೊಗಳಿಕೆ ಮಾತ್ರವೇ ದಾಂಪತ್ಯ ಬಿಕ್ಕಟ್ಟಿಗೆ ಕಾರಣ ಎಂದು ಸಾಬೀತುಪಡಿಸುವುದಿಲ್ಲ. ಆದರೆ ಆನ್&zwnj;ಲೈನ್&zwnj;ನಲ್ಲಿ ಸಿಗುವ ನಿರಂತರ ಮೆಚ್ಚುಗೆ, ವೈಯಕ್ತಿಕ ನಿರೀಕ್ಷೆಗಳು ಮತ್ತು ನೈಜ ಸಂಬಂಧಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗ್ರಹಿಸಲಾಗುತ್ತದೆ ಎಂಬುದರ ಕುರಿತು ಚರ್ಚೆಗೆ ಕಾರಣವಾಗಿದೆ. ಅಂತಿಮವಾಗಿ, ಈ ಪ್ರಕರಣದ ನಿಜವಾದ ಕಾನೂನು ಪರಿಣಾಮಗಳನ್ನು ನ್ಯಾಯಾಲಯದ ತೀರ್ಪೇ ನಿರ್ಧರಿಸಲಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/he-doesnt-deserve-me-instagram-comments-change-womans-view-of-her-husband/articleshow-snb2g07"/>
        </item>
        <item>
            <title><![CDATA[ಶ್ರೀಶಾಂತ್‌ ಅವರ ತಂದೆ ನಿಧನ, ತೀವ್ರ ದುಃಖದಲ್ಲಿ ಮಾಜಿ ಕ್ರಿಕೆಟಿಗ]]></title>
            <link>https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</link>
            <guid isPermaLink="true">https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3</guid>
            <pubDate>Sat, 12 Sep 2026 13:23:17 +0530</pubDate>
            <description><![CDATA[ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಎಸ್‌.ಶ್ರೀಶಾಂತ್‌ ಅವರ ತಂದೆ ವಿ.ಶಾಂತಕುಮಾರನ್‌ ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01m2a90hzmxa69nr49arca8a3n,imgname-sreesanth-father-dies-at-89-1789198878708.jpg" type="image/jpeg" height="390" width="690"/>
            <content:encoded><![CDATA[&lt;p&gt;ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್&zwnj;.ಶ್ರೀಶಾಂತ್&zwnj; ಅವರ ತಂದೆ ವಿ.ಶಾಂತಕುಮಾರನ್&zwnj; ನಾಯರ್&zwnj; ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎರ್ನಾಕುಲಂನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವಾರದಿಯಾಗಿದೆ.&lt;/p&gt;&lt;p&gt;ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಪತ್ನಿ ಟಿ.ಎನ್&zwnj;.ಸಾವಿತ್ರಿ ದೇವಿ, ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಹಾಗೂ ಶ್ರೀಶಾಂತ್&zwnj; ಅವರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj;ಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ವಿ.ಶಾಂತಕುಮಾರನ್&zwnj; ಅವರ ಪಾರ್ಥಿವ ಶರೀರವನ್ನು ಕೊಟ್ಟಮಂಗಲಂನಲ್ಲಿರುವ ಅವರ ಪೂರ್ವಜನರ ನಿವಾಸಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಕೆಲವು ವರದಿಗಳ ಪ್ರಕಾರ, ಶ್ರೀಶಾಂತ್&zwnj; ಕುಟುಂಬದ&zwnj; ಕೆಲವು ಸದಸ್ಯರು ವಿದೇಶದಲ್ಲಿದ್ದಾರೆ. ಅವರು ಕೇರಳಕ್ಕೆ ಹಿಂದಿರುಗಿದ ನಂತರ ಕೊಟ್ಟಮಂಗಲಂನಲ್ಲಿರುವ ಪೂರ್ವಜರ ಮನೆಗೆ ಮೃತದೇಹ ಕೊಂಡೊಯ್ಯಲಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ. ವಿ.ಶಾಂತಕುಮಾರನ್&zwnj; ನಾಯರ್&zwnj; ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು.&lt;/p&gt;&lt;p&gt;ತಂದೆಯನ್ನು ಕಳೆದುಕೊಂಡ ಶ್ರೀಶಾಂತ್&zwnj; ಅವರಿಗೆ ಕ್ರಿಕೆಟ್&zwnj; ದಿಗ್ಗಜರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 43 ವರ್ಷದ ಶ್ರೀಶಾಂತ್&zwnj; 2022 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್&zwnj;ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್&zwnj;ಗಳನ್ನು ಕಬಳಿಸಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಎಸ್. ಶ್ರೀಶಾಂತ್ ಐಪಿಎಲ್ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು. 2015 ರಲ್ಲಿ ಕೆಳ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್&zwnj;ಗೆ ಮರಳಲು ಸಾಧ್ಯವಾಗಲಿಲ್ಲ.&lt;/p&gt;&lt;p&gt;STORY | Former Indian cricketer Sreesanth&rsquo;s father dies at 89&lt;/p&gt;&lt;p&gt;V Santhakumaran Nair, father of former Indian cricketer S Sreesanth, died at a private hospital here, family sources said on Saturday. He was 89.&lt;/p&gt;&lt;p&gt;He was undergoing treatment at Lisie Hospital here and died at 9.45 pm on Friday, family sources said.&lt;/p&gt;&lt;p&gt;READ: https://t.co/jfDMoUpnkL&lt;/p&gt;&lt;p&gt;&mdash; Press Trust of India (@PTI_News) September 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/former-cricketer-s-sreesanths-father-v-santhakumaran-nair-has-passed-away-gkn/articleshow-ggyyob3"/>
        </item>
        <item>
            <title><![CDATA[ಅಕ್ಕಿ ತೊಳೆದ ನೀರನ್ನು ಹೀಗೆ ಬಳಸಿದರೆ ಮುಖ ಫಳಫಳ ಹೊಳೆಯೋದು ಗ್ಯಾರಂಟಿ!]]></title>
            <link>https://kannada.asianetnews.com/gallery/fashion/rice-water-for-face-simple-home-remedy-for-fresh-and-soft-skin-kvn-eul1u1y</link>
            <guid isPermaLink="true">https://kannada.asianetnews.com/gallery/fashion/rice-water-for-face-simple-home-remedy-for-fresh-and-soft-skin-kvn-eul1u1y</guid>
            <pubDate>Sat, 12 Sep 2026 13:20:45 +0530</pubDate>
            <description><![CDATA[ಮುಖದ ಕಾಂತಿ ಹೆಚ್ಚಿಸಲು ದುಬಾರಿ ಸ್ಕಿನ್‌ಕೇರ್‌ ಉತ್ಪನ್ನಗಳೇ ಬೇಕಿಲ್ಲ. ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಅಕ್ಕಿ ತೊಳೆದ ನೀರನ್ನೂ ಬಳಸಬಹುದು. ಹಾಗಾದ್ರೆ, ಇದನ್ನು ಬಳಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m0asfky1b1bdm9704enja941,imgname-rice-water-benefits-1787068665792.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖದ ಕಾಂತಿ ಹೆಚ್ಚಿಸಲು ದುಬಾರಿ ಸ್ಕಿನ್&zwnj;ಕೇರ್&zwnj; ಉತ್ಪನ್ನಗಳೇ ಬೇಕಿಲ್ಲ. ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಅಕ್ಕಿ ತೊಳೆದ ನೀರನ್ನೂ ಬಳಸಬಹುದು. ಹಾಗಾದ್ರೆ, ಇದನ್ನು ಬಳಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ.&lt;/p&gt;&lt;img&gt;&lt;p&gt;ಅಕ್ಕಿ ತೊಳೆದ ನೀರನ್ನು ವೇಸ್ಟ್&zwnj; ಮಾಡದೆ ಚರ್ಮದ ಆರೈಕೆಗೆ ಬಳಸಬಹುದು. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಚರ್ಮವು ಫ್ರೆಶ್ ಆಗಿ ಮತ್ತು ಮೃದುವಾಗಿ ಕಾಣಿಸುತ್ತದೆ.&lt;/p&gt;&lt;img&gt;&lt;p&gt;ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ಸ್ವಲ್ಪ ನೀರಿನಲ್ಲಿ ನೆನೆಸಿಡಿ. ನಂತರ ಆ ನೀರನ್ನು ಸೋಸಿ, ಒಂದು ಕ್ಲೀನ್ ಪಾತ್ರೆಗೆ ಹಾಕಿಕೊಂಡರೆ ರೈಸ್ ವಾಟರ್ ರೆಡಿ.&lt;/p&gt;&lt;img&gt;&lt;p&gt;ಮೊದಲು ನಿಮ್ಮ ಮುಖವನ್ನು ಸೌಮ್ಯವಾದ ಕ್ಲೆನ್ಸರ್&zwnj;ನಿಂದ ಕ್ಲೀನ್ ಮಾಡಿಕೊಳ್ಳಿ. ನಂತರ, ಹತ್ತಿ (ಕಾಟನ್) ಬಳಸಿ ಅಕ್ಕಿ ತೊಳೆದ ನೀರನ್ನು ಮುಖಕ್ಕೆ ನಿಧಾನವಾಗಿ ಹಚ್ಚಿಕೊಳ್ಳಿ.&lt;/p&gt;&lt;img&gt;&lt;p&gt;ಮೊದಲ ಬಾರಿಗೆ ಬಳಸುತ್ತಿದ್ದರೆ, ಸ್ವಲ್ಪ ಹೊತ್ತು ಮಾತ್ರ ಇಟ್ಟುಕೊಳ್ಳಿ. ಚರ್ಮಕ್ಕೆ ಯಾವುದೇ ಸಮಸ್ಯೆ ಆಗದಿದ್ದರೆ, ನಂತರ ನೀರಿನಿಂದ ಮುಖ ತೊಳೆದು ಮಾಯಿಶ್ಚರೈಸರ್ ಹಚ್ಚಿಕೊಳ್ಳಬಹುದು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ರೈಸ್ ವಾಟರ್ ಅನ್ನು ಪ್ರತಿದಿನ ಬಳಸಬಹುದು. ಆದರೆ, ನಿಮ್ಮದು ಸೂಕ್ಷ್ಮ ಚರ್ಮವಾಗಿದ್ದರೆ, ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡಿಕೊಳ್ಳುವುದು ಒಳ್ಳೆಯದು.&lt;/p&gt;&lt;img&gt;&lt;p&gt;ಹುಳಿ ಬಂದ ಅಥವಾ ಹೆಚ್ಚು ದಿನ ಇಟ್ಟ ಅಕ್ಕಿ ನೀರನ್ನು ನೇರವಾಗಿ ಮುಖಕ್ಕೆ ಹಚ್ಚಬಾರದು. ಕೆಟ್ಟ ವಾಸನೆ ಬಂದರೆ ಅಥವಾ ಬಣ್ಣ ಬದಲಾಗಿದ್ದರೆ ಅದನ್ನು ಬಳಸಬೇಡಿ.&lt;/p&gt;]]></content:encoded>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/fashion/rice-water-for-face-simple-home-remedy-for-fresh-and-soft-skin-kvn-eul1u1y"/>
        </item>
        <item>
            <title><![CDATA[ಮಸೀದಿ ಮುಂದೆ ಪಟಾಕಿ ಹೊಡೆದ್ರೆ, ಮೆರವಣಿಗೆ ಮಾಡಿದ್ರೆ,  ಗ್ರಹಚಾರ ಬಿಡಿಸ್ತೀನಿ!: ಟಿ.ನರಸೀಪುರ ಇನ್ಸ್‌ಪೆಕ್ಟರ್]]></title>
            <link>https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b</link>
            <guid isPermaLink="true">https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b</guid>
            <pubDate>Sat, 12 Sep 2026 13:03:32 +0530</pubDate>
            <description><![CDATA[ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯನ್ನು ಮಸೀದಿ ಮುಂದೆ ನಡೆಸದಂತೆ ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ನಿರ್ಬಂಧಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ನೀತಿಯನ್ನು ಖಂಡಿಸಿ, ಇದು ಹಿಂದೂ ಹಬ್ಬಗಳ ಆಚರಣೆಯ ಹಕ್ಕನ್ನು ಕಸಿದುಕೊಳ್ಳುವ ಯತ್ನ ಎಂದು ಆರೋಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a823ctdpqgg6c6qnjmkm1w,imgname-t-narsipur-ganesh-procession-row-1789197880730.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು &lt;/strong&gt;ಜಿಲ್ಲೆಯ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮೆರವಣಿಗೆಯ ನಿಯಮಗಳಿಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಸೀದಿ ಮುಂದೆ ಮೆರವಣಿಗೆ ಮಾಡುವಂತಿಲ್ಲ ಮತ್ತು ಪಠಾಕಿ ಹೊಡೆಯುವಂತಿಲ್ಲ ಎಂದು ತಾಕೀತು ಮಾಡಿದ್ದು, ಗಲ್ಲಿಯ ಬೀದಿಗೊಂದೊಂದು ಗಣೇಶನನ್ನು ಕೂರಿಸುವಾಗ ಮಸೀದಿ ಮುಂದೆತೇ ಹೋಗಬೇಕಾದ ಅನಿವಾರ್ಯತೆ ಇದೆ. ಗಣೇಶನನ್ನು ವಿಸರ್ಜನೆಗೆ ಆಕಾಶ ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕೆ ಎಂದು ಸಾರ್ವಜನಿಕರಿ ಕಿಡಿಕಾರಿದ್ದಾರೆ. ಪ್ರಕರಣ ಸಂಬಂಧ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪ್ರತಿಕ್ರಿಯೆ ನೀಡಿ ಕಿಡಿಕಾರಿದ್ದಾರೆ.&lt;/p&gt;&lt;h2&gt;ಇನ್ಸ್ಪೆಕ್ಟರ್ ಧನಂಜಯ ನೀಡಿದ ಎಚ್ಚರಿಕೆ&lt;/h2&gt;&lt;p&gt;ಟಿ. ನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮತ್ತು ಮೂರ್ತಿ ವಿಸರ್ಜನೆಗೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ, ಇನ್ಸ್ಪೆಕ್ಟರ್ ಧನಂಜಯ ಅವರು ಆಯೋಜಕರು ಹಾಗೂ ಯುವಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.&lt;/p&gt;&lt;p&gt;ಗಣೇಶ ಮೆರವಣಿಗೆಯನ್ನು ಪೊಲೀಸರು ನಿಗದಿಪಡಿಸಿದ ಮಾರ್ಗದಲ್ಲೇ ನಡೆಸಬೇಕು. ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಮೆರವಣಿಗೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಮಸೀದಿಗಳ ಮುಂಭಾಗದಲ್ಲಿ ಮೆರವಣಿಗೆ ನಡೆಸುವುದಾಗಲಿ ಅಥವಾ ಪಟಾಕಿ ಸಿಡಿಸುವುದಾಗಲಿ ಮಾಡಬಾರದು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಥವಾ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ಎಚ್ಚರಿಸಿದ್ದಾರೆ. ಒಂದು ವೇಳೆ ಅನುಮತಿ ಇಲ್ಲದೆ ಮೆರವಣಿಗೆ ಮಾಡಿದ್ದು ನನ್ನ ಗಮನಕ್ಕೆ ಬಂದ್ರೆ ಹೇಳಲ್ಲ ಮಾಡಿ ತೋರಿಸ್ತೀನಿ ಎಂದು ಹಿಂದೂ ಯುವಕರನ್ನು ಗುಂಪು ಸೇರಿಸಿಕೊಂಡು ಪೊಲೀಸಪ್ಪ ವಾರ್ನಿಂಗ್ ಕೊಟ್ಟಿದ್ದು, ಈ ಬಾರಿ ಮಸೀದಿ ಮುಂದೆ ಪಟಾಕಿ ಹೊಡೆದ್ರೆ ಗ್ರಹಚಾರ ಬಿಡಿಸ್ತೇನೆ. ಅಲ್ಲಿ ನಾವು ಭದ್ರತೆ ಹಾಕಿರ್ತಿವಿ. ನೀವು ಮೆರವಣಿಗೆ ಮಾಡುವ ರೂಟ್ ಕೊಟ್ಟು ಗಣಪತಿ ಕೂರಿಸಬೇಕು ಎಂಬ ಎಚ್ಚರಿಕೆ ನೀಡಿದ್ದು, ಈ ಶಾಂತಿ ಸಭೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;ಸರ್ಕಾರದ ವಿರುದ್ಧ ಸಂಸದ ಯದುವೀರ್ ಒಡೆಯರ್ ವಾಗ್ದಾಳಿ&lt;/h2&gt;&lt;p&gt;ಟಿ. ನರಸೀಪುರದಲ್ಲಿ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳನ್ನು ಖಂಡಿಸಿರುವ ಮೈಸೂರು ಸಂಸದ ಯದುವೀರ್ ಒಡೆಯರ್, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹಿಂದೂ ಹಬ್ಬಗಳ ಆಚರಣೆಗೆ ಮತ್ತು ಮೆರವಣಿಗೆಗಳಿಗೆ ಪ್ರತಿ ಬಾರಿಯೂ ಕಠಿಣ ಷರತ್ತುಗಳನ್ನು ವಿಧಿಸುವುದು ಈ ಸರ್ಕಾರದ ಅಭ್ಯಾಸವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;ಮಸೀದಿ ಅಥವಾ ದೇವಸ್ಥಾನಗಳಿರುವ ರಸ್ತೆಗಳಲ್ಲಿ ಮೆರವಣಿಗೆ ಹೋಗಬಾರದು ಎಂದು ತಡೆಯುವುದು ಸೂಕ್ತವಲ್ಲ. ಸಾರ್ವಜನಿಕರಿಗೆ ಸೇರಿದ ಎಲ್ಲಾ ರಸ್ತೆಗಳಲ್ಲೂ ಮೆರವಣಿಗೆ ನಡೆಸುವ ಹಕ್ಕು ಪ್ರಜೆಗಳಿಗಿದೆ. ಇಂತಹ ನಿರ್ಬಂಧಗಳು ಸಮಾಜದಲ್ಲಿ ಅನಗತ್ಯ ವಿಭಜನೆಯ ಭಾವನೆಯನ್ನು ಬಿತ್ತುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಚಾಮುಂಡಿ ಬೆಟ್ಟದ ವಿಚಾರದಲ್ಲೂ ಸರ್ಕಾರ ಇಂತಹದೇ ನಿಲುವು ತಳೆದಿತ್ತು. ಧಾರ್ಮಿಕ ಚೌಕಟ್ಟಿನ ಆಚರಣೆಗಳಿಗೆ ಜಾತ್ಯತೀತತೆಯ ನೆಪದಲ್ಲಿ ಅಡೆತಡೆ ಉಂಟುಮಾಡಲಾಗುತ್ತಿದೆ ಎಂದು ಸಂಸದರು ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಈ ಘಟನೆಯು ಸ್ಥಳೀಯವಾಗಿ ಹಾಗೂ ರಾಜಕೀಯ ವಲಯದಲ್ಲಿ ಗಣೇಶೋತ್ಸವ ಮೆರವಣಿಗೆಯ ಮಾರ್ಗ ಸೂಕ್ಷ್ಮತೆ ಮತ್ತು ಸಾರ್ವಜನಿಕ ಆಚರಣೆಗಳ ಹಕ್ಕುಗಳ ಕುರಿತು ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;]]></content:encoded>
            <category><![CDATA[mysore]]></category>
            <dc:creator>Gowthami K</dc:creator>
            <atom:link href="https://kannada.asianetnews.com/mysore/mysuru-t-narsipur-ganesh-procession-row-police-warning-sparks-controversy-mp-yaduveer-slams-govt-gdp/articleshow-gdlk67b"/>
        </item>
        <item>
            <title><![CDATA[Yettinahole Water Project: 11 ವರ್ಷ ಬಳಿಕ ಎತ್ತಿನಹೊಳೆ ಯೋಜನೆಗೆ ಟ್ರಯಲ್ ರನ್! ಅಕ್ಟೋಬರ್‌ನಲ್ಲಿ ತುಮಕೂರಿಗೆ ನೀರು]]></title>
            <link>https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq</link>
            <guid isPermaLink="true">https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq</guid>
            <pubDate>Sat, 12 Sep 2026 13:03:27 +0530</pubDate>
            <description><![CDATA[ಸುಮಾರು 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಯಲುಸೀಮೆಯ ಎತ್ತಿನಹೊಳೆ ಯೋಜನೆ ಅಂತಿಮವಾಗಿ ಪರೀಕ್ಷಾರ್ಥ ಸಂಚಾರ ಹಂತಕ್ಕೆ ತಲುಪಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ತುಮಕೂರಿಗೆ ನೀರು ಹರಿಸಿ ಟ್ರಯಲ್ ರನ್ ನಡೆಸಲು ಸಿದ್ಧತೆ ನಡೆದಿದ್ದು, ಇದು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ ಚಿಕ್ಕಮಗಳೂರಿನ ಹಲವು ಕೆರೆಗಳು ತುಂಬಿ, ರೈತರಲ್ಲಿ ಆಶಾಭಾವನೆ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a873ma5sjmmx9mk2xq4sjf,imgname-yettinahole-water-project-1789198044810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬಯಲುಸೀಮೆಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕೊನೆಗೂ ಪರೀಕ್ಷಾ ಹಂತ ತಲುಪಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸುಮಾರು 11 ವರ್ಷಗಳಿಂದ ನಡೆಯುತ್ತಿರುವ ಯೋಜನೆಯ ಕಾಮಗಾರಿಯ ಬಳಿಕ, ಒಂದು ತಿಂಗಳ ಕಾಲ ನಾಲೆಗೆ ನೀರು ಹರಿಸಿ ನೀರಿನ ಸರಾಗ ಹರಿವನ್ನು ಇಂಜಿನಿಯರ್&zwnj;ಗಳು ಪರೀಕ್ಷಿಸಲಿದ್ದಾರೆ.&lt;/p&gt;&lt;h2&gt;ಎತ್ತಿನಹೊಳೆ ಯೋಜನೆ: 11 ವರ್ಷಗಳ ಕಾಯುವಿಕೆಗೆ ಕೊನೆ?&lt;/h2&gt;&lt;p&gt;ಈ ಬಗ್ಗೆ ಸುದ್ದಿಗೋಷ್ಠಿ ಮಾಹಿತಿ ನೀಡಿರುವ ಸಚಿವ ಜಿ ಪರಮೇಶ್ವರ್ ಅವರು, ಎತ್ತಿನಹೊಳೆ ಯೋಜನೆಯನ್ನು 2026 ಅಥವಾ 2027ರ ಆರಂಭದ ವೇಳೆಗೆ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದ್ದೇವು. ಆದರೆ ಕೇಂದ್ರ ಸರ್ಕಾರ ಹಾಸನ ಜಿಲ್ಲೆಯಲ್ಲಿ ಸುಮಾರು 500 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಬೇಕಿತ್ತು. ನಾವು ಬಹಳ ಬಾರಿ ಒತ್ತಡ ಹಾಕಿದ ಬಳಿಕ ಅರಣ್ಯ ಪ್ರದೇಶವನ್ನು ಕ್ಲೀಯರ್ ಮಾಡಿ ಕೊಟ್ಟಿದ್ದರು. ಈಗ ಆ 500 ಮೀಟರ್ ಪ್ರದೇಶದಲ್ಲಿ ಆಗಬೇಕಿದ್ದ ಕೆಲಸ ಸಂಪೂರ್ಣಗೊಂಡಿದೆ ಎಂದು ತಿಳಿಸಿದರು.&lt;/p&gt;&lt;h2&gt;ಅಕ್ಟೋಬರ್&zwnj;ನಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು&lt;/h2&gt;&lt;p&gt;ಹಾಸನದಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಅರಸೀಕೆರೆಗೆ ನೀರು ಬರುತ್ತದೆ. ಅಲ್ಲಿಂದ ನೀರು ತುಮಕೂರಿಗೆ ಬರಬೇಕು. ಆದರೆ ತುಮಕೂರಿನಲ್ಲಿ ಅಲ್ಲಲ್ಲಿ ಕೆಲವು ಅಡಚಣೆಗಳು ಇತ್ತು. ಆದರೆ ಈಗ ಆ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಈ ವರ್ಷದ ಅಕ್ಟೋಬರ್&zwnj;ನಲ್ಲಿ ಅಂದರೆ ಮುಂದಿನ ತಿಂಗಳ ಕೊನೆಯ ಒಳಗೆ ತುಮಕೂರಿಗೆ ನೀರು ಹರಿಸಲಾಗುತ್ತದೆ. ಇದು ಕೇವಲ ಟ್ರಯಲ್ ರನ್ ಆಗಿದ್ದು, ಶೇಖರಣೆ ಮಾಡಿರುವ ನೀರಿನ್ನು ಮಾತ್ರ ಇಲ್ಲಿಗೆ ಹರಿಸಿ ಪರೀಕ್ಷೆ ನಡೆಸಲಾಗುತ್ತದೆ. ಏಕೆಂದರೆ ನಮಗೆ ಅಕ್ಟೋಬರ್&zwnj;ನಲ್ಲಿ ಮಳೆ ಬರುವುದಿಲ್ಲ. ಶೇಖರಣೆ ಮಾಡಿದ ನೀರನ್ನು ಮಾತ್ರ ಟ್ರಯಲ್ ರನ್&zwnj;ಗಾಗಿ ಹರಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಎತ್ತಿಕಹೊಳೆ ಯೋಜನೆ ಆರಂಭವಾಗಿ 11 ವರ್ಷಗಳು ಕಳೆದ ಬಳಿಕ ಯೋಜನೆ ಪ್ರಯೋಗಾತ್ಮಕ ನೀರಿನ ಹರಿವು ಮಾಡುವ ಹಂತಕ್ಕೆ ಬಂದಿದೆ. ಟ್ರಯಲ್&zwnj; ರನ್ ವೇಳೆ ಎಂಜಿನಯರ್ ಗಳು ನೀರಿನ ಸರಾಗ ಹರಿವಿನ ಬಗ್ಗೆ ಪರೀಕ್ಷೆಯನ್ನು ನಡೆಸಲಿದ್ದಾರೆ. ಇದರೊಂದಿಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯುವುದು ಬಹುತೇಕ ಖಚಿತವಾಗಿದೆ.&lt;/p&gt;&lt;h2&gt;ಕೆರೆಗೆ ಬಾಗಿನ ಅರ್ಪಿಸಿದ ಶಾಸಕ&lt;/h2&gt;&lt;p&gt;ಹಿಂದಿನ ಸಿಎಂ ಸಿದ್ದರಾಮಯ್ಯ ಅವರು 2014ರಲ್ಲಿ ಮಾರ್ಚ್&zwnj;ನಲ್ಲಿ ಯೋಜನೆಗೆ ಚಾಲನೆಯನ್ನು ನೀಡಿದ್ದರು. ಇನ್ನು, ಎತ್ತಿನಹೊಳೆ ಯೋಜನೆಯ ನೀರಿನಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾದ ಬೆಳವಾಡಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಶಾಸಕ ತಿಮ್ಮಪ್ಪಯ ಅವರು ಗುರುವಾರ ಕೆರೆಗೆ ಬಾಗಿನ ಅರ್ಪಿಸಿದ್ದರು. ಈ ವೇಳೆ ಮಾತನಾಡಿದ್ದ ಶಾಸಕರು, ಎತ್ತಿನಹೊಳೆ ಯೋಜನೆಗೆ ಸರ್ಕಾರ ಆದ್ಯತೆ ನೀಡಿದ ಪರಿಣಾಮ ಈಗ ಹಳೇಬೀಡು, ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ, ದೇವನೂರು ಸೇರಿದಂತೆ ಹಲವು ಕೆರೆಗಳು ತುಂಬಿದೆ. ಇದರಿಂದ ಈ ಭಾಗದ ಹಲವು ವರ್ಷಗಳ ನೀರಿನ ಸಮಸ್ಯೆ ದೂರವಾಗಿದೆ. ರೈತರ ಜೀವನದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಹೇಳಿದ್ದರು.&lt;/p&gt;&lt;p&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/yettinahole-water-project-trial-run-after-11-years-water-to-reach-tumakuru-in-october-sns/articleshow-5mlubhq"/>
        </item>
        <item>
            <title><![CDATA[Astrology: ಮಂಗಳನ ನೀಚ ದೃಷ್ಟಿ:  3 ರಾಶಿಗೆ ಕಾದಿದೆ ಮಹಾ ಕಂಟಕ, ಇಲ್ಲಿದೆ ಪರಿಹಾರ!]]></title>
            <link>https://kannada.asianetnews.com/gallery/festivals/kannada-astrology-mars-transit-2026-unlucky-zodiac-signs-capricorn-libra-cancer-remedies-mrq-ums594b</link>
            <guid isPermaLink="true">https://kannada.asianetnews.com/gallery/festivals/kannada-astrology-mars-transit-2026-unlucky-zodiac-signs-capricorn-libra-cancer-remedies-mrq-ums594b</guid>
            <pubDate>Sat, 12 Sep 2026 12:45:23 +0530</pubDate>
            <description><![CDATA[ಸೆಪ್ಟೆಂಬರ್ 18 ರಂದು ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಿ ನೀಚ ಸ್ಥಿತಿಯನ್ನು ತಲುಪಲಿದೆ. ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಿ ನೀಚ ಸ್ಥಿತಿ ತಲುಪುವುದರಿಂದ 3 ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು? ಅವರು ಮಾಡಬೇಕಾದ ಪರಿಹಾರಗಳೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01m2a73202z6z8x5z3esjq8fkm,imgname-astrology-1789196863490.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 18 ರಂದು ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಿ ನೀಚ ಸ್ಥಿತಿಯನ್ನು ತಲುಪಲಿದೆ. ಮಂಗಳ ಗ್ರಹವು ಕರ್ಕಾಟಕ ರಾಶಿಗೆ ಪ್ರವೇಶಿಸಿ ನೀಚ ಸ್ಥಿತಿ ತಲುಪುವುದರಿಂದ 3 ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು? ಅವರು ಮಾಡಬೇಕಾದ ಪರಿಹಾರಗಳೇನು?&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಸೇನಾಪತಿ ಎಂದು ಪೂಜಿಸಲ್ಪಡುವ ಮಂಗಳ ಗ್ರಹವು ಧೈರ್ಯ, ಶೌರ್ಯ, ಭೂಮಿ ಮತ್ತು ಶಕ್ತಿಯ ಕಾರಕ. ಈಗ ಮಿಥುನ ರಾಶಿಯಲ್ಲಿರುವ ಮಂಗಳ, ಇದೇ ಸೆಪ್ಟೆಂಬರ್ 18 ರಂದು ಚಂದ್ರನ ಆಳ್ವಿಕೆಯ ಕರ್ಕಾಟಕ ರಾಶಿಗೆ ಸಾಗಲಿದ್ದಾನೆ. ನವೆಂಬರ್ 12 ರವರೆಗೆ ಕರ್ಕಾಟಕ ರಾಶಿಯಲ್ಲಿಯೇ ಮುಂದುವರಿಯುವ ಮಂಗಳನ ಈ ಪ್ರಯಾಣವು, ಜ್ಯೋತಿಷ್ಯದ ಪ್ರಕಾರ ನೀಚ ಸ್ಥಿತಿಯನ್ನು ತಲುಪುತ್ತದೆ.&lt;/p&gt;&lt;img&gt;&lt;p&gt;ಮಂಗಳ ಮತ್ತು ಚಂದ್ರನ ಸ್ವಭಾವಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ, ಈ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ವಿಶೇಷವಾಗಿ ಕರ್ಕಾಟಕ, ತುಲಾ ಮತ್ತು ಮಕರ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕಾದ ಸಮಯವಿದು. ಇವರ ಸದ್ಯದ ಸ್ಥಿತಿ ಮತ್ತು ಅದಕ್ಕೆ ಮಾಡಬೇಕಾದ ಸರಳ ಪರಿಹಾರಗಳ ಬಗ್ಗೆ ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯ ಮೊದಲ ಮನೆಗೆ (ಜನ್ಮ ರಾಶಿ) ಮಂಗಳ ಪ್ರವೇಶಿಸುವುದರಿಂದ, ಈ ಸಮಯದಲ್ಲಿ ಹೆಚ್ಚಿನ ಗಮನ ಬೇಕು. ಕೆಲಸದ ಸ್ಥಳದಲ್ಲಿ ಕಾಣದ ಶತ್ರುಗಳಿಂದ ಸಣ್ಣಪುಟ್ಟ ಕಿರಿಕಿರಿಗಳು ಎದುರಾಗಬಹುದು. ಯಾವುದೇ ಕೆಲಸವನ್ನು ಹೆಚ್ಚಿನ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದ ನಿಭಾಯಿಸುವುದು ಅವಶ್ಯಕ. ಅನಗತ್ಯ ಮಾನಸಿಕ ಒತ್ತಡವನ್ನು ತಪ್ಪಿಸಿ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಆರ್ಥಿಕವಾಗಿಯೂ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.&lt;/p&gt;&lt;p&gt;&lt;strong&gt;ಪರಿಹಾರ: &lt;/strong&gt;ಪ್ರತಿ ಮಂಗಳವಾರ, ಹತ್ತಿರದ ಅಮ್ಮನ ದೇವಸ್ಥಾನಕ್ಕೆ ಹೋಗಿ ಕೆಂಪು ಹೂವುಗಳನ್ನು ಅರ್ಪಿಸಿ ಪೂಜಿಸಿ. ಬಡ ಮತ್ತು ವಯಸ್ಸಾದವರಿಗೆ ನಿಮ್ಮ ಕೈಲಾದಷ್ಟು ತೊಗರಿಬೇಳೆ ಅಥವಾ ಕೆಂಪು ಬಣ್ಣದ ಧಾನ್ಯಗಳನ್ನು ದಾನ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ&lt;/p&gt;&lt;img&gt;&lt;p&gt;ಮಕರ ರಾಶಿಯ 7ನೇ ಮನೆಯಾದ ಕಳತ್ರ ಸ್ಥಾನದಲ್ಲಿ ಮಂಗಳನು ಇರುವುದರಿಂದ, ಕೌಟುಂಬಿಕ ಜೀವನ ಮತ್ತು ವ್ಯವಹಾರ ಪಾಲುದಾರಿಕೆಯಲ್ಲಿ ಸಣ್ಣಪುಟ್ಟ ಸವಾಲುಗಳನ್ನು ಎದುರಿಸಬೇಕಾಗಬಹುದು. ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಹೊಂದಾಣಿಕೆಯಿಂದ ಇರುವುದು ಅವಶ್ಯಕ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಎಲ್ಲದರಲ್ಲೂ ತಾಳ್ಮೆಯಿಂದಿರಿ. ಕೋಪವನ್ನು ನಿಯಂತ್ರಿಸುವುದರ ಜೊತೆಗೆ, ಯಾರೊಂದಿಗೂ ಮಾತನಾಡುವಾಗ ಪದಗಳಲ್ಲಿ ಜಾಗರೂಕರಾಗಿರಿ.&lt;/p&gt;&lt;p&gt;&lt;strong&gt;ಪರಿಹಾರ: &lt;/strong&gt;ಮಂಗಳವಾರದಂದು ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ರಾಹುಕಾಲದಲ್ಲಿ ನಿಂಬೆಹಣ್ಣಿನಲ್ಲಿ ದೀಪವನ್ನು ಹಚ್ಚಿ ಪೂಜಿಸಬಹುದು. ಮಂಗಳ ದೋಷ ನಿವಾರಣೆಗೆ ಹನುಮಾನ್ ಚಾಲೀಸ ಪಠಿಸುವುದರಿಂದ ಮನೋಬಲ ಮತ್ತು ಸ್ಪಷ್ಟತೆ ಸಿಗುವುದಲ್ಲದೆ, ಸಮಸ್ಯೆಗಳೂ ನಿವಾರಣೆಯಾಗುತ್ತವೆ.&lt;/p&gt;&lt;img&gt;&lt;p&gt;ತುಲಾ ರಾಶಿಯ 10ನೇ ಮನೆಗೆ ಮಂಗಳ ಸಂಚರಿಸಲಿದ್ದಾನೆ. ವೃತ್ತಿ ಮತ್ತು ಉದ್ಯೋಗದ ಸ್ಥಾನವಾದ ಹತ್ತನೇ ಮನೆಯಲ್ಲಿ ನೀಚನಾಗುವುದರಿಂದ, ಕಚೇರಿಯಲ್ಲಿ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಅನಗತ್ಯ ವಾಗ್ವಾದಗಳನ್ನು ತಪ್ಪಿಸುವುದು ಉತ್ತಮ. ಹೊಸ ಪಾಲುದಾರಿಕೆ ವ್ಯವಹಾರದ ಪ್ರಯತ್ನಗಳನ್ನು ತಾತ್ಕಾಲಿಕವಾಗಿ ಮುಂದೂಡುವುದು ಲಾಭದಾಯಕ. ಯಾವುದೇ ರೀತಿಯ ರಿಸ್ಕ್ ಇರುವ ಹೂಡಿಕೆಗಳನ್ನು ತಪ್ಪಿಸಿ. ಜೀವನ ಸಂಗಾತಿಯೊಂದಿಗೆ ಹೊಂದಾಣಿಕೆಯಿಂದ ಇರುವುದು ಸಂಬಂಧದಲ್ಲಿ ಸಾಮರಸ್ಯವನ್ನು ಉಂಟುಮಾಡುತ್ತದೆ.&lt;/p&gt;&lt;p&gt;&lt;strong&gt;ಪರಿಹಾರ:&lt;/strong&gt; ಮಂಗಳವಾರದಂದು ಮುರುಗನ್ (ಸುಬ್ರಹ್ಮಣ್ಯ) ಸನ್ನಿಧಿಯಲ್ಲಿ ತುಪ್ಪದ ದೀಪವನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸುವುದರಿಂದ ಉದ್ಯೋಗದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಪ್ರತಿದಿನ ಹಸುವಿಗೆ ಸೊಪ್ಪು ಅಥವಾ ಬೆಲ್ಲ ಮಿಶ್ರಿತ ಆಹಾರವನ್ನು ನೀಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.&lt;/p&gt;&lt;p&gt;&lt;strong&gt;Disclaimer: &lt;/strong&gt;ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/kannada-astrology-mars-transit-2026-unlucky-zodiac-signs-capricorn-libra-cancer-remedies-mrq-ums594b"/>
        </item>
        <item>
            <title><![CDATA[ಬಾತ್‌ರೂಂ ಡ್ರೈನ್ ಜಾಲರಿಗೆ ಬಾಟಲ್ ಮುಚ್ಚಳ ಹಾಕೋದೇಕೆ? ವೈರಲ್ ಆಯ್ತು ಖರ್ಚಿಲ್ಲದ ಪರಿಹಾರ]]></title>
            <link>https://kannada.asianetnews.com/life/bottle-cap-in-shower-drain-the-zero-cost-hair-trap-trick-going-viral/articleshow-lc41q3o</link>
            <guid isPermaLink="true">https://kannada.asianetnews.com/life/bottle-cap-in-shower-drain-the-zero-cost-hair-trap-trick-going-viral/articleshow-lc41q3o</guid>
            <pubDate>Sat, 12 Sep 2026 12:24:23 +0530</pubDate>
            <description><![CDATA[Bottle cap in shower drain: ಪ್ರತಿಯೊಬ್ಬರ ಮನೆಯ ಬಾತ್‌ರೂಂನಲ್ಲೂ ಕಾಡುವ ಈ ಕಿರಿಕಿರಿಯ ಸಮಸ್ಯೆಗೆ ಇಂಟರ್ನೆಟ್‌ನಲ್ಲಿ ಹೊಸ ಪರಿಹಾರ ಸಿಕ್ಕಿದೆ! ಕಿಚನ್‌ನಲ್ಲಿ ಕಸ ಅಂತ ಎಸೆಯೋ ಆ ಒಂದು ಚಿಕ್ಕ ವಸ್ತುವನ್ನು ಇಲ್ಲಿಟ್ಟರೆ ಡ್ರೈನೇಜ್ ಬ್ಲಾಕ್ ಅನ್ನೋ ಮಾತೇ ಇರಲ್ಲ! ಏನಿದು ವೈರಲ್ ಟ್ರಿಕ್?]]></description>
            <media:content url="https://static.asianetnews.com/images/w-1280,h-720,format-jpg,imgid-01m2a66x8nxvs6zgfkpn7mnx4z,imgname-thumbnail---2026-09-12t121522.750-1789195941141.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ತಿಯೊಬ್ಬರ ಮನೆಯಲ್ಲೂ ಬಾತ್&zwnj;ರೂಂ (ಸ್ನಾನಗೃಹ) ಸ್ವಚ್ಛತೆ ಕಾಪಾಡುವುದು ಒಂದು ದೊಡ್ಡ ಸವಾಲಿನ ಕೆಲಸ. ಅದರಲ್ಲಿಯೂ ಮುಖ್ಯವಾಗಿ ಸ್ನಾನ ಮಾಡುವ ಜಾಗದ ಡ್ರೈನೇಜ್ ಜಾಲರಿ ಮತ್ತು ಪೈಪ್&zwnj;ನಲ್ಲಿ (Shower drain) ಕೂದಲು ಸಿಲುಕಿಕೊಂಡು ನೀರು ಸರಾಗವಾಗಿ ಹರಿದುಹೋಗದೆ ನಿಲ್ಲುವುದು ಎಲ್ಲರ ಮನೆಯಲ್ಲೂ ನಿತ್ಯ ಎದುರಾಗುವ ದೊಡ್ಡ ಸಮಸ್ಯೆಯಾಗಿದೆ. ಪೈಪ್ ಒಳಗೆ ಕೂದಲು ಸಿಲುಕಿ ಬ್ಲಾಕ್ ಆದರೆ ಅದನ್ನು ಸರಿಪಡಿಸಲು ದುಬಾರಿ ಕೆಮಿಕಲ್ ಲಿಕ್ವಿಡ್ ಸುರಿಯಬೇಕು ಅಥವಾ ಪ್ಲಂಬರ್ ಕರೆಸಿ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ, ಕಸಕ್ಕೆ ಎಸೆಯುವ ಕೇವಲ ಒಂದು ಸಣ್ಣ &lsquo;ಪ್ಲಾಸ್ಟಿಕ್ ಬಾಟಲ್ ಮುಚ್ಚಳ&rsquo;ದಿಂದ (Bottle cap) ಈ ಸಮಸ್ಯೆಗೆ ಅತ್ಯಂತ ಸುಲಭವಾಗಿ ಶಾಶ್ವತ ಪರಿಹಾರ ಕಾಣಬಹುದು ಎಂಬ ಹೊಸ ಟ್ರಿಕ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.&lt;/p&gt;&lt;h2&gt;&lt;strong&gt;ಬಾಟಲ್ ಮುಚ್ಚಳ ಡ್ರೈನೇಜ್ ಬ್ಲಾಕ್ ತಡೆಯುವುದು ಹೇಗೆ?&lt;/strong&gt;&lt;/h2&gt;&lt;p&gt;ನಾವು ತಲೆಸ್ನಾನ ಮಾಡುವ ಸಂದರ್ಭದಲ್ಲಿ ಉದುರುವ ಕೂದಲುಗಳು ಸಾಬೂನಿನ ನೊರೆ, ಶ್ಯಾಂಪೂ ಮತ್ತು ಜಿಡ್ಡಿನ ಕೊಳೆಯೊಂದಿಗೆ ಸೇರಿಕೊಂಡು ಡ್ರೈನೇಜ್ ಪೈಪ್&zwnj;ನೊಳಗೆ ನಿಧಾನವಾಗಿ ಜಾರುತ್ತವೆ. ಕ್ರಮೇಣ ದಿನಗಳು ಕಳೆದಂತೆ ಇವೆಲ್ಲವೂ ಪೈಪ್&zwnj;ನ ಒಳಭಾಗದ ಗೋಡೆಗಳಿಗೆ ಗಟ್ಟಿಯಾಗಿ ಅಂಟಿಕೊಂಡು ದೊಡ್ಡ ಗಂಟಿನಂತಾಗುತ್ತವೆ. ಇದರಿಂದ ನೀರು ಮುಂದೆ ಹೋಗದೆ ಬಾತ್&zwnj;ರೂಂನಲ್ಲೇ ನಿಂತು ದುರ್ನಾತ ಬೀರಲು ಶುರುವಾಗುತ್ತದೆ. ವಿಶೇಷವಾಗಿ ಮನೆಯಲ್ಲಿ ಉದ್ದ ಕೂದಲಿರುವ ಮಹಿಳೆಯರು ಹೆಚ್ಚಿರುವ ಕುಟುಂಬಗಳಲ್ಲಿ ಈ ಸಮಸ್ಯೆ ಪ್ರತಿದಿನವೂ ಕಾಡುತ್ತದೆ.&lt;/p&gt;&lt;p&gt;ಅದೇ ನಾವು ಬಾತ್&zwnj;ರೂಂನ ಡ್ರೈನ್ ಜಾಲರಿಯ ಮಧ್ಯಭಾಗದಲ್ಲಿ ಪ್ಲಾಸ್ಟಿಕ್ ಬಾಟಲಿಯ ಸಣ್ಣ ಮುಚ್ಚಳವನ್ನು ಸರಿಯಾದ ಜಾಗದಲ್ಲಿ ಇಟ್ಟಾಗ, ಅದು ಒಂದು ಅತ್ಯುತ್ತಮ ನೈಸರ್ಗಿಕ 'ಕೂದಲು ಹೀರುವ ಫಿಲ್ಟರ್' (Hair Trap) ರೀತಿ ಕೆಲಸ ಮಾಡುತ್ತದೆ. ಸ್ನಾನ ಮಾಡುವಾಗ ನೀರಿನ ಪ್ರವಾಹದೊಂದಿಗೆ ಕೊಚ್ಚಿಬರುವ ಕಣ್ಣಿಗೆ ಕಾಣದ ಕೂದಲುಗಳು ನೇರವಾಗಿ ಪೈಪ್&zwnj;ನ ಒಳಗೆ ಹೋಗುವ ಬದಲು, ಈ ಬಾಟಲ್ ಮುಚ್ಚಳದ ಅಂಚುಗಳಿಗೆ ತಕ್ಷಣವೇ ಸುತ್ತಿಕೊಳ್ಳುತ್ತವೆ ಅಥವಾ ಅಲ್ಲೇ ಸಿಕ್ಕಿಬೀಳುತ್ತವೆ. ಅದೇ ಸಮಯದಲ್ಲಿ ನೀರು ಮಾತ್ರ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಪೈಪ್ ಒಳಗೆ ಹರಿದುಹೋಗುತ್ತದೆ.&lt;/p&gt;&lt;h2&gt;&lt;strong&gt;ಇದನ್ನು ಮನೆಯಲ್ಲಿ ಬಳಸುವುದು ಹೇಗೆ?&lt;/strong&gt;&lt;/h2&gt;&lt;p&gt;ಯಾವುದೇ ಖಾಲಿ ನೀರಿನ ಬಾಟಲ್ ಅಥವಾ ಕೂಲ್ ಡ್ರಿಂಕ್ಸ್ ಬಾಟಲಿಯ ಮುಚ್ಚಳವನ್ನು ತೆಗೆದುಕೊಂಡು, ಡ್ರೈನೇಜ್ ಜಾಲರಿಯ ರಂಧ್ರದ ನಡುವೆ ನೀರು ಹರಿದುಹೋಗಲು ಜಾಗ ಬಿಟ್ಟು ಗಟ್ಟಿಯಾಗಿ ಸಿಕ್ಕಿಸಿ. ಸ್ನಾನ ಮುಗಿದ ತಕ್ಷಣ, ಆ ಮುಚ್ಚಳದ ಸುತ್ತಲೂ ಸಿಕ್ಕಿಬಿದ್ದಿರುವ ಕೂದಲನ್ನು ಕೈಯಿಂದ ಅಥವಾ ಟಿಶ್ಯೂ ಪೇಪರ್ ಸಹಾಯದಿಂದ ಸುಲಭವಾಗಿ ಎತ್ತಿ ಕಸದ ಬುಟ್ಟಿಗೆ ಎಸೆಯಬಹುದು. ನಂತರ ಮುಚ್ಚಳವನ್ನು ಒಮ್ಮೆ ನೀರಿನಿಂದ ತೊಳೆದರೆ ಜಾಗ ಸಂಪೂರ್ಣ ಸ್ವಚ್ಛವಾಗುತ್ತದೆ.&lt;/p&gt;&lt;p&gt;ಯಾವುದೇ ದುಬಾರಿ ಡ್ರೈನ್ ಕ್ಲೀನರ್&zwnj;ಗಳು ಅಥವಾ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಫಿಲ್ಟರ್ ಜಾಲರಿಗಳನ್ನು ಖರೀದಿಸುವ ಬದಲು, ವೇಸ್ಟ್ ಪ್ಲಾಸ್ಟಿಕ್&zwnj;ನಿಂದ ಪೈಪ್ ಜಾಮ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಈ ಜುಗಾಡ್ ಐಡಿಯಾ ನಿಜಕ್ಕೂ ಅದ್ಭುತವಾಗಿದೆ. ನೀವೂ ಒಮ್ಮೆ ಈ ಸುಲಭ ಉಪಾಯವನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.&lt;/p&gt;&lt;h2&gt;&lt;strong&gt;ಗಮನಿಸಿ&lt;/strong&gt;&lt;/h2&gt;&lt;h3&gt;&lt;strong&gt;ಮುಚ್ಚಳವನ್ನು ಮಾರ್ಪಾಡು ಮಾಡಿ (Custom DIY Cap)&lt;/strong&gt;&lt;/h3&gt;&lt;p&gt;ಕೇವಲ ಸಾದಾ ಮುಚ್ಚಳ ಇಡುವ ಬದಲು, ಒಂದು ಪ್ಲಾಸ್ಟಿಕ್ ಬಾಟಲ್ ಮುಚ್ಚಳದ ಅಂಚುಗಳಲ್ಲಿ ಕತ್ತರಿಯಿಂದ ಸಣ್ಣ ಸಣ್ಣ ಚೂಪಾದ ಕಟ್&zwnj;ಗಳನ್ನು (V-shape cuts) ಮಾಡಿ. ಇದು ಕೂದಲನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು (Hook ಮಾಡಲು) ಸಹಾಯ ಮಾಡುತ್ತದೆ.&lt;/p&gt;&lt;h3&gt;&lt;strong&gt;ಮುಚ್ಚಳವೇ ಪೈಪ್ ಒಳಗೆ ಜಾರದಂತೆ ಎಚ್ಚರ ವಹಿಸಿ&lt;/strong&gt;&lt;/h3&gt;&lt;p&gt;ನೀವು ಬಳಸುವ ಮುಚ್ಚಳವು ಡ್ರೈನೇಜ್ ಜಾಲರಿಯ ರಂಧ್ರಕ್ಕಿಂತ ಸ್ವಲ್ಪ ದೊಡ್ಡದಾಗಿರಬೇಕು. ತೀರಾ ಸಣ್ಣ ಮುಚ್ಚಳ ಬಳಸಿದರೆ, ನೀರಿನ ರಭಸಕ್ಕೆ ಮುಚ್ಚಳವೇ ಪೈಪ್ ಒಳಗೆ ಜಾರಿ ಮತ್ತಷ್ಟು ದೊಡ್ಡ ಬ್ಲಾಕೇಜ್ ಆಗುವ ಅಪಾಯವಿರುತ್ತದೆ.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/life/bottle-cap-in-shower-drain-the-zero-cost-hair-trap-trick-going-viral/articleshow-lc41q3o"/>
        </item>
        <item>
            <title><![CDATA[CSK ತಂಡದಲ್ಲಿ ಧೋನಿಯ ಷೇರುಗಳು ಇದೆಯಾ? ಕೊನೆಗೂ ಅಸಲಿ ಕಥೆ ಬಿಚ್ಚಿಟ್ಟ ಚೆನ್ನೈ ಟೀಮ್‌ ಮ್ಯಾನೇಜ್‌ಮೆಂಟ್!]]></title>
            <link>https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</link>
            <guid isPermaLink="true">https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo</guid>
            <pubDate>Sat, 12 Sep 2026 12:21:24 +0530</pubDate>
            <description><![CDATA[ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ (CSK) ಎಂ.ಎಸ್. ಧೋನಿ ಶೇ.15-20ರಷ್ಟು ಷೇರುಗಳನ್ನು ಖರೀದಿಸುತ್ತಿದ್ದಾರೆ ಎಂಬ ವದಂತಿಯನ್ನು ತಂಡದ ಮ್ಯಾನೇಜ್‌ಮೆಂಟ್ ತಳ್ಳಿಹಾಕಿದೆ. ಆದರೆ, ಧೋನಿ ತಂಡದಲ್ಲಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದು, ತಂಡದ ಪ್ರಮುಖ ನಿರ್ಧಾರಗಳಲ್ಲಿ ಅವರ ಪ್ರಭಾವ ಈಗಲೂ ಮಹತ್ವದ್ದಾಗಿದೆ. ಮುಂಬರುವ ಸೀಸನ್‌ನಲ್ಲಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kryn21bz1g3ycse250s80pma,imgname-ms-dhoni-1779145180543.jpeg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್&zwnj;ನ (CSK) ಶೇ.15 ರಿಂದ 20ರಷ್ಟು ಷೇರುಗಳನ್ನು ಮಾಜಿ ನಾಯಕ ಎಂ.ಎಸ್. ಧೋನಿ ಖರೀದಿಸಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಸಿಎಸ್&zwnj;ಕೆ ಟೀಮ್ ಮ್ಯಾನೇಜ್&zwnj;ಮೆಂಟ್ ತಳ್ಳಿಹಾಕಿದೆ. ಆದರೆ, ಫ್ರಾಂಚೈಸಿಯಲ್ಲಿ ಧೋನಿ ಸಣ್ಣ ಪ್ರಮಾಣದ ಷೇರುಗಳನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ಕ್ರಿಕ್&zwnj;ಬಝ್ ವರದಿ ಪ್ರಕಾರ, ಧೋನಿ ಈ ಹಿಂದೆ ಖಾಸಗಿ ವಹಿವಾಟಿನ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಖರೀದಿಸಿದ್ದಾರೆ.&lt;/p&gt;&lt;h2&gt;&lt;strong&gt;ಧೋನಿ ಬಳಿಯಿದೆ ಒಂದು ಲಕ್ಷ ಸಿಎಸ್&zwnj;ಕೆ ಷೇರುಗಳು!&lt;/strong&gt;&lt;/h2&gt;&lt;p&gt;ಧೋನಿ ಬಳಿ ಒಂದು ಲಕ್ಷ ಷೇರುಗಳಿದ್ದರೂ, ಕಂಪನಿಯ ಒಟ್ಟು ಷೇರುಗಳಿಗೆ ಹೋಲಿಸಿದರೆ ಇದು ಕೇವಲ 0.01% ರಿಂದ 0.02% ಮಾತ್ರ. ಐಪಿಎಲ್ ಫ್ರಾಂಚೈಸಿಗಳ ಸದ್ಯದ ಮಾರುಕಟ್ಟೆ ಮೌಲ್ಯದ ಪ್ರಕಾರ, ಧೋನಿ ಹೊಂದಿರುವ ಷೇರುಗಳ ಬೆಲೆ ಸುಮಾರು 2.6 ಕೋಟಿಯಿಂದ 3 ಕೋಟಿ ರೂಪಾಯಿ ಅಷ್ಟೇ. ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರ ಕುಟುಂಬವು ತಂಡದಲ್ಲಿ ಶೇ. 55ಕ್ಕಿಂತ ಹೆಚ್ಚು ಷೇರುಗಳನ್ನು ಮತ್ತು ನಿಯಂತ್ರಣವನ್ನು ಹೊಂದಿದೆ. ಅಲ್ಲದೆ, 30 ಕೋಟಿಗೂ ಹೆಚ್ಚು ಸಾರ್ವಜನಿಕ ಷೇರುದಾರರಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ತಿಂಗಳುಗಳಿಂದ, ಸಿಎಸ್&zwnj;ಕೆಯ ಶೇ.15-20ರಷ್ಟು ದೊಡ್ಡ ಪಾಲುದಾರಿಕೆಯನ್ನು ಪಡೆಯಲು ಧೋನಿ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆದರೆ, ಅಂತಹ ಯಾವುದೇ ಮಾತುಕತೆಗಳು ನಡೆದಿಲ್ಲ ಎಂದು ತಂಡದ ಮ್ಯಾನೇಜ್&zwnj;ಮೆಂಟ್ ಸ್ಪಷ್ಟಪಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಸಾರ್ವಜನಿಕ ಮಾರುಕಟ್ಟೆಯಲ್ಲಿಲ್ಲದ (unlisted) ಕಂಪನಿಯಾಗಿದೆ. ಷೇರು ಪಾಲುದಾರಿಕೆ ಕಡಿಮೆ ಇದ್ದರೂ, ತಂಡದ ಪ್ರಮುಖ ನಿರ್ಧಾರಗಳಲ್ಲಿ ಧೋನಿಯ ಪ್ರಭಾವ ದೊಡ್ಡದಿದೆ. ಮಾಜಿ ಕೋಚ್ ಸ್ಟೀಫನ್ ಫ್ಲೆಮಿಂಗ್ ಸ್ಥಾನ ತೊರೆದ ನಂತರ ಹೊಸ ಕೋಚ್ ಆಯ್ಕೆ ಹಾಗೂ ಮೆಗಾ ಹರಾಜಿಗೆ ಮುನ್ನ ಆಟಗಾರರ ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಧೋನಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಗಾಯದ ಕಾರಣ ಕಳೆದ ಸೀಸನ್&zwnj;ನಲ್ಲಿ ಆಡದಿದ್ದ ಧೋನಿ, ಮುಂಬರುವ ಸೀಸನ್&zwnj;ನಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ಹೊಸ ಕೋಚ್ ಜೊತೆ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.&lt;/p&gt;&lt;h3&gt;&lt;strong&gt;ಐದು ಬಾರಿಯ ಚಾಂಪಿಯನ್&zwnj; ತಂಡದಿಂದ ನೀರಸ ಪ್ರದರ್ಶನ:&lt;/strong&gt;&lt;/h3&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ಬರೋಬ್ಬರಿ ಐದು ಟ್ರೋಫಿ ಗೆಲ್ಲುವ ಮೂಲಕ ಐಪಿಎಲ್&zwnj;ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಇತ್ತೀಚಿಗಿನ ವರ್ಷಗಳಲ್ಲಿ ನೀರಸ ಪ್ರದರ್ಶನ ತೋರುತ್ತಿದೆ. 2023ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ ಆಗಿದ್ದ ಸಿಎಸ್&zwnj;ಕೆ ತಂಡವು ಆ ಬಳಿಕ ಪ್ಲೇ ಆಫ್&zwnj;ಗೇರಲು ಪದೇ ಪದೇ ವಿಫಲವಾಗುತ್ತಾ ಬಂದಿದೆ. ಮುಂದಿನ ಸೀಸನ್&zwnj;ನಲ್ಲಾದರೂ ಸಿಎಸ್&zwnj;ಕೆ ಕಮ್&zwnj;ಬ್ಯಾಕ್ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ms-dhoni-csk-stake-worth-crores-team-reveals-the-truth-behind-rumours-kvn/articleshow-yzuw0oo"/>
        </item>
        <item>
            <title><![CDATA[ನಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ: ವಿಜಯ್ ಮಲ್ಯ ಬೆಂಬಲಕ್ಕೆ ಜಾರಕಿಹೊಳಿ ಫಸ್ಟ್ ರಿಯಾಕ್ಷನ್]]></title>
            <link>https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h</link>
            <guid isPermaLink="true">https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h</guid>
            <pubDate>Sat, 12 Sep 2026 12:20:34 +0530</pubDate>
            <description><![CDATA[ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್‌ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a5v0tbfb5drm7yc0ra74eq,imgname-satish-jarkiholi-vijay-mallya-1789195551563.jpg" type="image/jpeg" height="390" width="690"/>
            <content:encoded><![CDATA[ತಮ್ಮ ನಿವಾಸದ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿರುವ ಸಚಿವ ಸತೀಶ್ ಜಾರಕಿಹೊಳಿ, 40% ಷೇರು ದಾಖಲೆ ತೋರಿಸಲು ಸವಾಲು ಹಾಕಿದ್ದಾರೆ. ಇದೇ ವೇಳೆ, ಇಡಿ ಕಾರ್ಯವೈಖರಿ ಟೀಕಿಸಿದ್ದ ಉದ್ಯಮಿ ವಿಜಯ್ ಮಲ್ಯ ತಮ್ಮ ಫ್ಯಾನ್ಸ್ ಕ್ಲಬ್&zwnj;ಗೆ ಸೇರಿದ್ದಾರೆ ಎಂದು ಅವರು ಹಾಸ್ಯಮಯವಾಗಿ ಹೇಳಿದ್ದಾರೆ.&lt;img&gt;&lt;p&gt;ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲಿನ ED ದಾಳಿ ಬಗ್ಗೆ ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಪ್ರತಿಕ್ರಿಯಿಸಿದ್ದರು. ಇದೀಗ ಈ ಬಗ್ಗೆ ಸತೀಶ್ ಜಾರಕಿಹೊಳಿ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟನೆ ಬಗ್ಗೆ ಮಾತನಾಡಿದರು.&lt;/p&gt;&lt;img&gt;&lt;p&gt;ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನೋಟಿಸ್ ಕೊಟ್ಟು ಹೇಳಿದ್ರೆ ಉತ್ತರ ಕೋಡುತ್ತೇವೆ. ಮೊದಲು ನಮ್ಮನ್ನು ಕರೆಯಲಿ ಅಲ್ಲಿ ಹೋಗಿ ಹೇಳುತ್ತೇವೆ. ಇದಕ್ಕೆ ಕಾನೂನಿಲ್ಲಿ ಅವಕಾಶವಿದೆ. ನೇರವಾಗಿ ನಾವು ಮಾಡಿದ್ದೇವೆ ಅಂತ ಹೇಳಿಲ್ಲ. ಪ್ರಶ್ನೆ ಉತ್ತರ ಅಲ್ಲೆ ಇದೆ, ಅಷ್ಟಕ್ಕೆ ಚರ್ಚೆ ಸಾಕು. ಮುಂದೆ ತಪ್ಪಿದ್ರೆ ಹೇಳಲಿ. 40% ಷೇರು ದಾಖಲೆ ತೋರಿಸಲಿ. ನಮ್ಮದಾಗಿದ್ರೆ ನಾವು ಒಪ್ಪಿಕೊಳ್ಳುತ್ತೇವೆ. ಹೂಡಿಕೆ ಬಗ್ಗೆ ನನಗೆ ಸ್ಪಷ್ಟತೆವಿದೆ. ಇಲ್ಲಿ ಅದನ್ನು ಸಾಬೀತು ಮಾಡಲು ಆಗಲ್ಲ. ಇಡಿ ಆಫೀಸ್ ಗೆ ಕರೆಯಿಸಲಿ, ಅಲ್ಲಿ ಸಾಬೀತು ಮಾಡುತ್ತೇವೆ ಎಂದು ಸಚಿವ ಜಾರಕಿಹೊಳಿ ಹೇಳಿದರು.&lt;/p&gt;&lt;img&gt;&lt;p&gt;ಇದೇ ವೇಳೆ ವಿಜಯ್ ಮಲ್ಯ ಬೆಂಬಲಕ್ಕೆ ಪ್ರತಿಕ್ರಿಯಿಸಿದ ಸಚಿವರು, ಥ್ಯಾಂಕ್ಸ್ ಅಂತ ಹೇಳಿ ನಕ್ಕರು. ಅವರೂ ನಮ್ಮ ಫ್ಯಾನ್ಸ್ ಕ್ಲಬ್ ಗೆ ಸೇರಿದ್ರು ಹಾಗಿದ್ರೆ ಎಂದರು. ಮುಂದುವರಿದ ಮಾತನಾಡಿದ ಸತೀಶ್ ಜಾರಕಿಹೊಳಿ, ದೂರು ಕೊಟ್ಟವರ ಬಗ್ಗೆ ಗೊತ್ತಿದೆ, ಅದನ್ನು ಸಿಎಂಗೆ ಹೇಳಿದ್ದೇನೆ. ಯಾರು ಕೊಟ್ಟಿದ್ದಾರೆ ಅಂತ ಹೇಳಲ್ಲ. ದೂರು ಕೋಡೋದು ತಪ್ಪು ಅಂತ ಹೇಳಲ್ಲ ಮತ್ತು ಪಕ್ಷದವರು ಅಂತ ಹೇಳಲ್ಲ. ಇರಬಹುದು, ಇಲ್ಲದೆ ಇರಬಹುದು. ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ.&lt;/p&gt;&lt;img&gt;&lt;p&gt;ದೂರು ನೀಡಿರೋರು ಬಿಜೆಪಿಯ ಮತದಾರರಾಗಿದ್ದು, ಅವರ ಸಂಬಂಧ ಕಾಂಗ್ರೆಸ್&zwnj;ನಲ್ಲಿದೆ. ಈ ವಿಷಯವನ್ನು ಸಿಎಂ ಗಮನಕ್ಕೆ ತೆಗೆದುಕೊಂಡು ಬರಲಾಗಿದೆ. ಈಗ ಬಂದಿರುವುದು ಆರೋಪ, ಅದು ಸಾಬೀತು ಆಗಬೇಕು. ಇಡಿ ತನಿಖೆ ಮಾಡುತ್ತಿದೆ, ಫೈನಲ್ ರಿಪೋರ್ಟ್ ಬರಲಿ ಎಲ್ಲವೂ ಗೊತ್ತಾಗುತ್ತದೆ. ರಾಜಕೀಯ ಉದ್ದೇಶ ಇದ್ದೆ ಇರುತ್ತದೆ. ಅದನ್ನು ಮೀರಿ ಬೆಳೆಯಬೇಕು ಅಷ್ಟೇ ಎಂದರು.&lt;/p&gt;&lt;img&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/he-has-joined-our-fan-club-minister-satish-jarkiholi-s-first-reaction-in-support-of-vijay-mallya-mrq-8vc8s9h"/>
        </item>
        <item>
            <title><![CDATA[ಕೆಪಿಎಸ್‌ಸಿ ಮತ್ತೊಂದು ಹಗರಣ ಬಯಲಿಗೆ: ಶಿವಶಂಕರಪ್ಪ ಸಾಹುಕಾರ್, ಜ್ಞಾನೇಂದ್ರಕುಮಾರ್‌ಗೆ ಮತ್ತೊಂದು ಸಂಕಷ್ಟ!]]></title>
            <link>https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</link>
            <guid isPermaLink="true">https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil</guid>
            <pubDate>Sat, 12 Sep 2026 12:18:04 +0530</pubDate>
            <description><![CDATA[ಕರ್ನಾಟಕ ಲೋಕಸೇವಾ ಆಯೋಗದ (KPSC) ಸಹಾಯಕ ನಿಯಂತ್ರಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಫಲಿತಾಂಶ ವಿಳಂಬ, ಅಪೂರ್ಣ ಅಂಕಗಳ ವಿವರ ಮತ್ತು ಶಂಕಾಸ್ಪದ ರ‍್ಯಾಂಕಿಂಗ್ ಸರಣಿಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದೇ ವೇಳೆ, ಮತ್ತೊಂದು ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kx6f30f9v04b846swtjxw1vh,imgname-kpsc-chairman-shivashankarappa-sahukar-1783702323689.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದ ಕರ್ನಾಟಕ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಯ ಸಹಾಯಕ ನಿಯಂತ್ರಕರ (AC) ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಜ್ಞಾನೇಂದ್ರಕುಮಾರ್ ಅವರ ಅವಧಿಯಲ್ಲಿ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಬೆಳಗಾವಿ ಮೂಲದ ಪರೀಕ್ಷಾರ್ಥಿ ಚೇತನ ಚೋಪಡೆ ಸೇರಿದಂತೆ ಹಲವು ಅಭ್ಯರ್ಥಿಗಳು ಪ್ರಶ್ನಿಸಿದ್ದು, ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.&lt;/p&gt;&lt;h2&gt;ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ಲೋಪಗಳ ಆರೋಪ&lt;/h2&gt;&lt;p&gt;2025ರ ಏಪ್ರಿಲ್&zwnj;ನಲ್ಲಿ ಎಸಿ-ಎಸ್&zwnj;ಎಎಡಿ ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಸುಮಾರು 17 ತಿಂಗಳುಗಳ ಕಾಲ ಫಲಿತಾಂಶವನ್ನು ವಿಳಂಬಗೊಳಿಸಿ, ಇತ್ತೀಚೆಗೆ ಸೆಪ್ಟೆಂಬರ್ 3ರಂದು 1:3 ಪ್ರಮಾಣದ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಹಲವು ಅಕ್ರಮಗಳ ವಾಸನೆ ಹೊಡೆಯುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.&lt;/p&gt;&lt;p&gt;&lt;strong&gt;ಅಂಕ ಹಾಗೂ ಕಟ್-ಆಫ್ ವಿವರ ಅಪೂರ್ಣ: &lt;/strong&gt;ಪ್ರಿಲಿಮ್ಸ್ ಪರೀಕ್ಷೆಯ ಕಟ್-ಆಫ್ ಅಂಕಗಳು ಮತ್ತು ವರ್ಗವಾರು ವಿವರಗಳನ್ನು ಪ್ರಕಟಿಸಿಲ್ಲ. ಜೊತೆಗೆ ಆಯ್ಕೆಯಾಗದ ಅಭ್ಯರ್ಥಿಗಳ ಅಂಕಗಳು ಮತ್ತು ವರ್ಗವಾರು ಮಾಹಿತಿಗಳನ್ನು ಬಹಿರಂಗಪಡಿಸದೆ, ಕೇವಲ ಆಯ್ಕೆಯಾದವರ ವಿವರಗಳನ್ನು ಮಾತ್ರ ಪ್ರಕಟಿಸಲಾಗಿದೆ.&lt;/p&gt;&lt;p&gt;&lt;strong&gt;ಶಂಕಾಸ್ಪದ ಪತ್ರಿಕಾ ಪ್ರಕಟಣೆ&lt;/strong&gt;: ಮೌಲ್ಯಮಾಪನ ಮುಗಿದು ಎರಡು ತಿಂಗಳು ಕಳೆದ ನಂತರ, ಅಂದರೆ ಸೆಪ್ಟೆಂಬರ್ 9ರಂದು &quot;ಅಭ್ಯರ್ಥಿಯೊಬ್ಬರು ನಿಯಮ ಉಲ್ಲಂಘಿಸಿದ್ದಾರೆ&quot; ಎಂದು ಕೆಪಿಎಸ್&zwnj;ಸಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.&lt;/p&gt;&lt;p&gt;&lt;strong&gt;ರ&zwj;್ಯಾಂಕಿಂಗ್ ಸರಣಿಯಲ್ಲಿ ವ್ಯತ್ಯಾಸ:&lt;/strong&gt; ಆಯ್ಕೆಯಾದವರ ಪಟ್ಟಿಯಲ್ಲಿ 40ಕ್ಕೂ ಹೆಚ್ಚು ಅಭ್ಯರ್ಥಿಗಳ ರ&zwj;್ಯಾಂಕ್ ಸೀರಿಯಲ್ ನಂಬರ್ ಸರಣಿ ಒಂದೇ ರೀತಿಯಲ್ಲಿರುವುದು ದೊಡ್ಡ ಮಟ್ಟದ ಅಕ್ರಮದ ಶಂಕೆಗೆ ಕಾರಣವಾಗಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಮೀಸಲಾತಿ ನಿಯಮಗಳ ಪಾಲನೆ ಹಾಗೂ ಫಲಿತಾಂಶ ವಿಳಂಬದ ಕುರಿತು ಸ್ವತಂತ್ರ ತನಿಖೆಯಾಗಬೇಕು ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಅಭ್ಯರ್ಥಿ ಚೇತನ್ ಚೋಪಡೆ ಒತ್ತಾಯಿಸಿದ್ದಾರೆ.&lt;/p&gt;&lt;h2&gt;ಇನ್ನೊಂದೆಡೆ ಕೆಪಿಎಸ್&zwnj;ಸಿ ಹಗರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಡಿ ಸುದೀರ್ಘ ವಿಚಾರಣೆ&lt;/h2&gt;&lt;p&gt;ಇದೇ ವೇಳೆ, ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಞಾನೇಂದ್ರಕುಮಾರ್ ಮತ್ತು ಬಸವರಾಜ್ ಕನ್ನಾಳೆ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಇಡಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.&lt;/p&gt;&lt;p&gt;ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ 6 ಗಂಟೆಗಳ ಕಾಲ ನಡೆದಿರುವ ಈ ವಿಚಾರಣೆಯಲ್ಲಿ, ನೇಮಕಾತಿ ಅಕ್ರಮದಲ್ಲಿ ನಡೆದಿದೆಯನ್ನಲಾದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ದಾಖಲೆ ಹಾಗೂ ಮಾಹಿತಿಗಳನ್ನು ಕಲೆಹಾಕಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇಂದೂ ಕೂಡ ಇಡಿ ಅಧಿಕಾರಿಗಳು ಜೈಲಿಗೆ ತೆರಳಿ ಆರೋಪಿಗಳ ವಿಚಾರಣೆ ನಡೆಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/kpsc-recruitment-scam-allegations-candidates-demand-probe-into-saad-exam-results-shivashankarappa-sahukar-case-gdp/articleshow-se9agil"/>
        </item>
        <item>
            <title><![CDATA[₹75 ಲಕ್ಷ ಸಂಬಳ ತೊರೆದು ಉದ್ಯಮಕ್ಕೆ ಧುಮುಕಿದ ಮಹಿಳೆ; ChatGPT ಕೊಟ್ಟ ಶಾಕ್‌ನಿಂದ ಹೊರಬಂದ ಕಥೆ!]]></title>
            <link>https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb</link>
            <guid isPermaLink="true">https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb</guid>
            <pubDate>Sat, 12 Sep 2026 11:59:03 +0530</pubDate>
            <description><![CDATA[₹75 ಲಕ್ಷದ ವಾರ್ಷಿಕ ಸಂಬಳದ ಉದ್ಯೋಗ ತೊರೆದು ಸ್ಟಾರ್ಟ್‌ಅಪ್ ಆರಂಭಿಸಿದ ಖ್ಯಾತಿ ಠಾಕೂರ್‌ಗೆ ಮೊದಲ ಉತ್ಪನ್ನವೇ ದೊಡ್ಡ ಹಿನ್ನಡೆ ತಂದಿತು. ChatGPT ಮತ್ತು Google AI ಬೆಳವಣಿಗೆಯಿಂದ 30 ದಿನಗಳಲ್ಲಿ ಎಲ್ಲ ಗ್ರಾಹಕರನ್ನೂ ಕಳೆದುಕೊಂಡರು. ಆದರೂ ಕಂಪನಿ ಮುಚ್ಚದೆ 7 ತಿಂಗಳು ಹೊಸ ದಿಕ್ಕು ಹುಡುಕಿ, ಬಳಿಕ ಹೊಸ ಉತ್ಪನ್ನ ನಿರ್ಮಿಸಲು ಮುಂದಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m29tgaabc98d4907fz5f0h2k,imgname-a-startup-founder-s-brutal-startup-journey--1--1789183666507.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;₹75 ಲಕ್ಷದ ಕೆಲಸ ಬಿಟ್ಟು ಸ್ಟಾರ್ಟ್&zwnj;ಅಪ್; ಆದರೆ ಮೊದಲ ಉತ್ಪನ್ನವೇ ಕೈಕೊಟ್ಟಿತು!&lt;/strong&gt;&lt;/p&gt;&lt;p&gt;ವರ್ಷಕ್ಕೆ ₹75 ಲಕ್ಷದ ಸಂಬಳ ಬರುತ್ತಿದ್ದ ತಾಂತ್ರಿಕ ಉದ್ಯೋಗವನ್ನು ತೊರೆದು ಸ್ವಂತ ಸ್ಟಾರ್ಟ್&zwnj;ಅಪ್ ಕಟ್ಟುವುದು ಸುಲಭದ ನಿರ್ಧಾರವಲ್ಲ. ಆದರೆ ಖ್ಯಾತಿ ಠಾಕೂರ್ ಈ ಅಪಾಯವನ್ನು ತೆಗೆದುಕೊಂಡರು. ಫ್ರೈಡೇ AI ಎಂಬ ಕಂಪನಿಯನ್ನು ಆರಂಭಿಸಿದ ಅವರಿಗೆ ಆರಂಭದಲ್ಲೇ ದೊಡ್ಡ ಸವಾಲು ಎದುರಾಯಿತು. ಅವರು ನಿರ್ಮಿಸಿದ್ದ ಮೊದಲ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಲು ಶುರುವಾಯಿತು.&lt;/p&gt;&lt;p&gt;&lt;strong&gt;ChatGPT, Google AI ತಂದ ಅನಿರೀಕ್ಷಿತ ಹೊಡೆತ&lt;/strong&gt;&lt;/p&gt;&lt;p&gt;ಖ್ಯಾತಿ ಹಂಚಿಕೊಂಡಿರುವ ಅನುಭವದ ಪ್ರಕಾರ, ChatGPT ಮತ್ತು Google AIಯಂತಹ ತಂತ್ರಜ್ಞಾನಗಳ ಬೆಳವಣಿಗೆಯಿಂದ ಅವರ ಮೊದಲ ಉತ್ಪನ್ನ ಬಹುತೇಕ ಅಪ್ರಸ್ತುತವಾಯಿತು. ಪರಿಣಾಮವಾಗಿ ಕೇವಲ 30 ದಿನಗಳಲ್ಲಿ ಸ್ಟಾರ್ಟ್&zwnj;ಅಪ್&zwnj;ನ ಎಲ್ಲ ಗ್ರಾಹಕರನ್ನೂ ಕಳೆದುಕೊಂಡರು.&lt;/p&gt;&lt;p&gt;ಒಂದು ಉತ್ಪನ್ನದ ಮೇಲೆ ಸಮಯ, ಹಣ ಮತ್ತು ಪರಿಶ್ರಮ ಹೂಡಿದ ನಂತರ ಅದೇ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಜಾಗವಿಲ್ಲದಂತಾಗುವುದು ಯಾವುದೇ ಸಂಸ್ಥಾಪಕರಿಗೂ ದೊಡ್ಡ ಆಘಾತ. ಆದರೆ ಖ್ಯಾತಿ ಮತ್ತು ಅವರ ತಂಡ ಕಂಪನಿಯನ್ನು ಮುಚ್ಚುವ ಬದಲು ಹೊಸ ಅವಕಾಶ ಹುಡುಕಲು ಮುಂದಾದರು.&lt;/p&gt;&lt;p&gt;&lt;strong&gt;7 ತಿಂಗಳು ಕೇವಲ &lsquo;ಪಿವೋಟ್&rsquo; ಹುಡುಕಲು!&lt;/strong&gt;&lt;/p&gt;&lt;p&gt;ಹೊಸ ಉತ್ಪನ್ನ ಅಥವಾ ವ್ಯವಹಾರ ಮಾದರಿ ಯಾವುದು ಆಗಬೇಕು ಎಂಬುದನ್ನು ನಿರ್ಧರಿಸಲು ತಂಡಕ್ಕೆ ಸುಮಾರು ಏಳು ತಿಂಗಳುಗಳು ಬೇಕಾಯಿತು. ಅದರ ನಂತರ ಅರ್ಥಪೂರ್ಣ ಉತ್ಪನ್ನವನ್ನು ನಿರ್ಮಿಸಲು ಇನ್ನೂ ಒಂಬತ್ತು ತಿಂಗಳುಗಳ ಕಾಲ ಪರಿಶ್ರಮಿಸಿದರು.&lt;/p&gt;&lt;p&gt;ಈ ಅವಧಿ ಸ್ಟಾರ್ಟ್&zwnj;ಅಪ್ ಜಗತ್ತಿನ ಮತ್ತೊಂದು ಕಠಿಣ ಸತ್ಯವನ್ನು ತೋರಿಸುತ್ತದೆ. ಐಡಿಯಾ ಬಂದ ತಕ್ಷಣ ಯಶಸ್ಸು ಸಿಗುವುದಿಲ್ಲ. ಮಾರುಕಟ್ಟೆ ಬದಲಾಗಬಹುದು, ಗ್ರಾಹಕರ ಅಗತ್ಯ ಬದಲಾಗಬಹುದು, ಸ್ಪರ್ಧಿಗಳು ಹೊಸ ತಂತ್ರಜ್ಞಾನ ತರಬಹುದು. ಅಂತಹ ಸಂದರ್ಭದಲ್ಲಿ ಸಂಸ್ಥಾಪಕರು ತಮ್ಮ ಮೂಲ ಯೋಜನೆಯನ್ನೇ ಬದಲಿಸಲು ಸಿದ್ಧರಾಗಿರಬೇಕು.&lt;/p&gt;&lt;p&gt;&lt;strong&gt;ಈಗ ಏನು ಮಾಡುತ್ತಿದೆ Friday AI?&lt;/strong&gt;&lt;/p&gt;&lt;p&gt;ಫ್ರೈಡೇ AI ಸಣ್ಣ ಉದ್ಯಮಗಳಿಗೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಆನ್&zwnj;ಲೈನ್ ಸ್ಟೋರ್&zwnj;ಗಳು, ಉತ್ಪನ್ನ ಕ್ಯಾಟಲಾಗ್&zwnj;ಗಳು ಮತ್ತು ಮಾರ್ಕೆಟಿಂಗ್ ವಿಷಯಗಳನ್ನು ಸಿದ್ಧಪಡಿಸಲು ನೆರವಾಗುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ.&lt;/p&gt;&lt;p&gt;ಆದರೆ ಪ್ರಯಾಣ ಇನ್ನೂ ಸುಲಭವಾಗಿಲ್ಲ. ಖ್ಯಾತಿಯ ಪ್ರಕಾರ ಕಂಪನಿಯ ಹಣಕಾಸಿನ &lsquo;ರನ್&zwnj;ವೇ&rsquo; ತಾವು ಬಯಸಿದಷ್ಟು ದೊಡ್ಡದಿಲ್ಲ. B2B ಗ್ರಾಹಕರನ್ನು ಪಡೆಯಲು 3&ndash;4 ತಿಂಗಳಷ್ಟು ದೀರ್ಘ ಮಾರಾಟ ಪ್ರಕ್ರಿಯೆ ಎದುರಾಗುತ್ತಿದೆ. ಜೊತೆಗೆ ತಮ್ಮ ಹೊಸ ಆಲೋಚನೆಯನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡಲು ಸಿದ್ಧರಿರುವ ಹೂಡಿಕೆದಾರರ ಹುಡುಕಾಟವೂ ಮುಂದುವರಿದಿದೆ.&lt;/p&gt;&lt;p&gt;&lt;strong&gt;&lsquo;ತಿಂಗಳ ಸಂಬಳವೇ ಮೇಲು&rsquo; ಅನ್ನಿಸುವ ದಿನಗಳು!&lt;/strong&gt;&lt;/p&gt;&lt;p&gt;ಸ್ಟಾರ್ಟ್&zwnj;ಅಪ್ ಆರಂಭಿಸಿದವರ ಜೀವನ ಹೊರಗಿನಿಂದ ರೋಮಾಂಚಕವಾಗಿ ಕಾಣಬಹುದು. ಆದರೆ ವಾಸ್ತವದಲ್ಲಿ ನಿರಂತರ ಅನಿಶ್ಚಿತತೆ ಇರುತ್ತದೆ. ಖ್ಯಾತಿ ಹೇಳುವಂತೆ, ವ್ಯವಹಾರ ಕಟ್ಟುವಾಗ ತಪ್ಪಾಗಬಹುದಾದ ಬಹುತೇಕ ಎಲ್ಲವೂ ತಪ್ಪಾಗಬಹುದು. ಕೆಲ ದಿನಗಳಲ್ಲಿ ನಿಯಮಿತ ಸಂಬಳದ ಉದ್ಯೋಗವನ್ನು ಆಯ್ಕೆ ಮಾಡದಿರುವುದೇ ತಪ್ಪು ಎಂದು ಅನಿಸಬಹುದು.&lt;/p&gt;&lt;p&gt;ಆದರೂ ಸ್ವಂತವಾಗಿ ಏನನ್ನಾದರೂ ನಿರ್ಮಿಸುವ ಅನುಭವಕ್ಕೆ ಬೇರೆ ರೀತಿಯ ಮೌಲ್ಯವಿದೆ. ಯಾವಾಗ ಹೋರಾಟ ಮುಂದುವರಿಸಬೇಕು, ಯಾವಾಗ ದಿಕ್ಕು ಬದಲಿಸಬೇಕು ಎಂಬ ನಿರ್ಧಾರವೇ ಸಂಸ್ಥಾಪಕರಿಗೆ ದೊಡ್ಡ ಸವಾಲಾಗುತ್ತದೆ.&lt;/p&gt;&lt;p&gt;&lt;strong&gt;ಸೋಲಿಗಿಂತ ಕಲಿತ ಪಾಠ ದೊಡ್ಡದು&lt;/strong&gt;&lt;/p&gt;&lt;p&gt;ಖ್ಯಾತಿ ತಮ್ಮ ಅನುಭವವನ್ನು ಇತರರನ್ನು ಸ್ಟಾರ್ಟ್&zwnj;ಅಪ್ ಆರಂಭಿಸದಂತೆ ಹೆದರಿಸಲು ಹಂಚಿಕೊಂಡಿಲ್ಲ. ಬದಲಾಗಿ, ಉದ್ಯಮಶೀಲತೆಯ ನಿಜವಾದ ಮುಖವನ್ನು ಅರ್ಥಮಾಡಿಕೊಳ್ಳಬೇಕು ಎಂಬ ಸಂದೇಶ ನೀಡಿದ್ದಾರೆ.&lt;/p&gt;&lt;p&gt;ಮೊದಲ ಉತ್ಪನ್ನ ವಿಫಲವಾದರೂ, ಗ್ರಾಹಕರನ್ನು ಕಳೆದುಕೊಂಡರೂ, ಅವರ ತಂಡ ಹೊಸದನ್ನು ಕಲಿತು ಮತ್ತೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಇದೇ ಕಾರಣಕ್ಕೆ ಅವರ ಕಥೆ ಕೇವಲ ಸ್ಟಾರ್ಟ್&zwnj;ಅಪ್ ಯಶಸ್ಸಿನ ಕಥೆಯಲ್ಲ; ವಿಫಲತೆಯ ನಂತರ ಮತ್ತೆ ಎದ್ದು ನಿಲ್ಲುವ ಧೈರ್ಯದ ಕಥೆಯಾಗಿದೆ.&lt;/p&gt;&lt;p&gt;&lt;/p&gt;]]></content:encoded>
            <category><![CDATA[india-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/chatgpt-killed-her-first-startup-product-what-happened-next-is-a-lesson-in-resilience/articleshow-4y6m1bb"/>
        </item>
        <item>
            <title><![CDATA[BJPಗೆ ಬಿಗ್ ಶಾಕ್! ಮಾಜಿ ಶಾಸಕ ನರೇಂದ್ರ ಬಾಬು ರಾಜೀನಾಮೆ, 10 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ವಾಪಸ್]]></title>
            <link>https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v</link>
            <guid isPermaLink="true">https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v</guid>
            <pubDate>Sat, 12 Sep 2026 11:56:27 +0530</pubDate>
            <description><![CDATA[ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಅಲ್ಪಸಂಖ್ಯಾತರು, ಒಬಿಸಿಗಳಿಗೆ ನೆಲೆಯಿಲ್ಲ ಮತ್ತು ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ಅವರು, ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2a4mkgbtd29dc3hybgbw8qk,imgname-narendrababu-1789194292747.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಭಾನುವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ತಂದೆ ಮಕ್ಕಳ ಪಕ್ಷವಾಗಿದೆ. ಅಲ್ಪಸಂಖ್ಯಾತರು, ಒಬಿಸಿಗಳಿಗೆ ನೆಲ ಇಲ್ಲದ ಕಾರಣ ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಸೆ.13 ರಂದು ಸಿಎಂ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು.&lt;/p&gt;&lt;h2&gt;ಮಾಜಿ ಶಾಸಕ ನರೇಂದ್ರ ಬಾಬು ರಾಜೀನಾಮೆ, ಕಾಂಗ್ರೆಸ್&zwnj;ಗೆ ವಾಪಸ್&lt;/h2&gt;&lt;p&gt;ಮಹಾನಗರ ಪಾಲಿಕೆ ಸದಸ್ಯನಾಗಿ 3 ಬಾರಿ ಮತ್ತು 2 ಬಾರಿ ಶಾಸಕನಾಗಿ ಕಳೆದ 40 ವರ್ಷಗಳಿಂದ ಸಾರ್ವಜನಿಕರ ಬೆಂಬಲದಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಕಳೆದ 10 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನನ್ನನ್ನು ಸಮರ್ಪಿಸಿಕೊಂಡೆ. ಆದರೆ ರಾಜಾಜಿನಗರ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಕಾರ್ಯಕರ್ತರನ್ನು ನನ್ನಿಂದ ದೂರಮಾಡಿದರು. ನನ್ನ ವಿರುದ್ಧ ಪಿತೂರಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.&lt;/p&gt;&lt;p&gt;ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಪರ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ನನ್ನನ್ನು ನಿರ್ಲಕ್ಷಿಸಿದರು. ಗೋಪಾಲಯ್ಯ ಸೇರಿದಂತೆ 17 ಮಂದಿ ಶಾಸಕರು ಬಿಜೆಪಿ ಸೇರಿದಾಗ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಉಪ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಉಪ ಚುನಾವಣೆಯಲ್ಲಿ ನೀವು ಸಹಕಾರ ನೀಡಬೇಕೆಂದು ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ನನ್ನನ್ನು ಮನವೊಲಿಸಿದರು. ಪಕ್ಷಕ್ಕಾಗಿ ತ್ಯಾಗ ಮಾಡಿದ ನಂತರ ಜವಾಬ್ದಾರಿ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರು ಜಾಣ ಕುರುಡು ವಹಿಸಿದರು. ಕೆಲಸ ಮಾಡುವವರಿಗೆ ಬಿಜೆಪಿ ಪಕ್ಷದಲ್ಲಿ ಬೆಲೆಯಿಲ್ಲ ಎಂದು ಕಿಡಿಕಾರಿದರು.&lt;/p&gt;&lt;p&gt;&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/big-shock-for-karnataka-bjp-former-mla-narendrababu-resigns-and-returns-to-congress-sns/articleshow-fffug4v"/>
        </item>
        <item>
            <title><![CDATA[Cleaning Hacks: ಬಾತ್‌ರೂಮ್‌ ಜಗ್ ಮೇಲಿರುವ ಹಠಮಾರಿ ಕಲೆ ತೆಗೆಯುವ ಸುಲಭ ಉಪಾಯಗಳು]]></title>
            <link>https://kannada.asianetnews.com/gallery/life/kannada-cleaning-hacks-easy-ways-to-remove-stubborn-stains-from-bathroom-mugs-or-jugs-mrq-g66u9hy</link>
            <guid isPermaLink="true">https://kannada.asianetnews.com/gallery/life/kannada-cleaning-hacks-easy-ways-to-remove-stubborn-stains-from-bathroom-mugs-or-jugs-mrq-g66u9hy</guid>
            <pubDate>Sat, 12 Sep 2026 11:50:32 +0530</pubDate>
            <description><![CDATA[ಬಾತ್‌ರೂಮ್‌ನಲ್ಲಿ ಬಳಸುವ ಬಕೆಟ್ ಮತ್ತು ಮಗ್‌/ಜಗ್ ಗಳ ಮೇಲಿನ ಹಠಮಾರಿ ಜಿಡ್ಡುಕಲೆಗಳನ್ನು ತೆಗೆದುಹಾಕಲು ಹಲವು ಮನೆಮದ್ದುಗಳಿವೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಈ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2a3zc0ge3pjrfkhv8f134as,imgname-bathroom-mug--5--1789193596944.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾತ್&zwnj;ರೂಮ್&zwnj;ನಲ್ಲಿ ಬಳಸುವ ಬಕೆಟ್ ಮತ್ತು ಮಗ್&zwnj;/ಜಗ್ ಗಳ ಮೇಲಿನ ಹಠಮಾರಿ ಜಿಡ್ಡುಕಲೆಗಳನ್ನು ತೆಗೆದುಹಾಕಲು ಹಲವು ಮನೆಮದ್ದುಗಳಿವೆ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಈ ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.&lt;/p&gt;&lt;img&gt;&lt;p&gt;ಮನೆಯಲ್ಲಿರುವ ವಸ್ತುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡುತ್ತಿದ್ದರೆ ಜಿಡ್ಡುಕಲೆಗಳು ಉಂಟಾಗಲ್ಲ. ಅದರಲ್ಲಿಯೂ ಬಾತ್&zwnj;ರೂಮ್&zwnj;ನಲ್ಲಿರುವ ಬಕೆಟ್ ಅಥವಾ ಮಗ್ ಅಥವಾ ಸಿಟ್ಟಿಂಗ್ ಟೇಬಲ್&zwnj;ಗಳು ಹೆಚ್ಚು ಸಮಯ ನೀರಿನಲ್ಲಿ ಮತ್ತು ಸೋಪಿನಂತಹ ಮಾರ್ಜಕಗಳಿಗೆ ಒಡ್ಡಿಕೊಳ್ಳೋದರಿಂದ ಹಠಮಾರಿ ಕಲೆಗಳು ಉಂಟಾಗುತ್ತವೆ. ಈ ಕಲೆಗಳನ್ನು ಸುಲಭವಾಗಿ ಹೇಗೆ ತೆಗೆಯಬೇಕೆಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಎರಡು ಟೀ ಸ್ಪೂನ್ ಬೇಕಿಂಗ್&zwnj; ಸೋಡಾಗೆ ಒಂದು ಟೀ ಸ್ಪೂನ್&zwnj;ನಷ್ಟು ವಿನೇಗರ್ ಸೇರಿಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್&zwnj;ನ್ನು ಕೊಳೆಯಾಗಿರುವ ಭಾಗದ ಮೇಲೆ ನಯವಾಗಿ ಸವರಿ 10 ರಿಂದ 15 ನಿಮಿಷ ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಂಡ್ರೆ ನಿಮ್ಮ ಮಗ್ ಹೊಸದರಂತೆ ಕಾಣಿಸುತ್ತದೆ.&lt;/p&gt;&lt;img&gt;&lt;p&gt;ಮೇಲಿನಂತೆ ಬೇಕಿಂಗ್ ಸೋಡಾಗೆ ವಿನೇಗರ್ ಬದಲಾಗಿ ನಿಂಬೆರಸ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್&zwnj;ನಿಂದ ಕೊಳೆಯಾಗಿರುವ ಮಗ್&zwnj;ನ್ನು ಉಜ್ಜಿಕೊಳ್ಳಿ. ನಂತರ ಸ್ವಚ್ಛ ನೀರಿನಿಂದ ತೊಳೆದ್ರೆ ಮಗ್ ಕ್ಲೀನ್ ಆಗಲಿದೆ. ಈ ಪೇಸ್ಟ್&zwnj;ನೇ ಸೋಪಿನ ಪುಡಿಯಂತೆ ಬಳಕೆ ಮಾಡಬಹುದು.&lt;/p&gt;&lt;img&gt;&lt;p&gt;ಮಗ್ ತುಂಬಾನೇ ಕೊಳೆಯಾಗಿದ್ರೆ ಬಿಸಿನೀರಿನಲ್ಲಿ 10 ರಿಂದ 15 ನಿಮಿಷ ನೆನೆಸಿಟ್ಟುಕೊಳ್ಳಿ. ನಂತರ ಬಟ್ಟೆ ತೊಳೆಯುವ ಸಾಬೂನಿನ ಪುಡಿಯಿಂದ ಚೆನ್ನಾಗಿ ಉಜ್ಜಿ. ಹೀಗೆ ಮಾಡೋದರಿಂದ ಮಗ್ ಸ್ವಚ್ಛಗೊಳ್ಳುತ್ತದೆ. ನಿಮ್ಮಲ್ಲಿ ಬೇಕಿಂಗ್ ಸೋಡಾ/ವಿನಗೇರ್/ನಿಂಬೆರಸ ಇಲ್ಲದಿದ್ರೆ ಈ ಉಪಾಯವನ್ನು ಬಳಸಬಹುದು.&lt;/p&gt;&lt;img&gt;&lt;p&gt;ಇಂತಹ ಹಠಮಾರಿ ಕಲೆಗಳನ್ನು ತೆಗೆದುಹಾಕಲು ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಬಗೆಬಗೆಯ ಉತ್ಪನ್ನಗಳು ಸಿಗುತ್ತವೆ. ಈ ಮೇಲಿನ ಮೂರು ಉಪಾಯಗಳಿಂದ ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆ ಅಥವಾ ಕುರ್ಚಿಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.&lt;/p&gt;]]></content:encoded>
            <category><![CDATA[life]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/life/kannada-cleaning-hacks-easy-ways-to-remove-stubborn-stains-from-bathroom-mugs-or-jugs-mrq-g66u9hy"/>
        </item>
        <item>
            <title><![CDATA[ಪಾಕ್‌ ಕ್ರಿಕೆಟ್‌ಗೆ ಮತ್ತೆ ಮುಖಭಂಗ: ಸೈಬರ್‌ ಕ್ರೈಮ್‌ನಿಂದ ರಿಜ್ವಾನ್‌, ಇಮಾಮ್‌ 4 ಗಂಟೆ ವಿಚಾರಣೆ!]]></title>
            <link>https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r</link>
            <guid isPermaLink="true">https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r</guid>
            <pubDate>Sat, 12 Sep 2026 11:28:54 +0530</pubDate>
            <description><![CDATA[ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ವೇಳೆ ಡ್ರೆಸ್ಸಿಂಗ್‌ ಕೋಣೆಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಕ್ರಿಕೆಟಿಗರಾದ ಮೊಹಮ್ಮದ್‌ ರಿಜ್ವಾನ್‌ ಮತ್ತು ಇಮಾಮ್‌ ಉಲ್‌ ಹಕ್‌ ಅವರನ್ನು ಸೈಬರ್‌ ಕ್ರೈಮ್ ಏಜೆನ್ಸಿ ವಿಚಾರಣೆಗೊಳಪಡಿಸಿದೆ. ಏಜೆನ್ಸಿಯು ಆಟಗಾರರ ಮೊಬೈಲ್ ಫೋನ್‌ಗಳ ಫಾರೆನ್ಸಿಕ್ ವಿಶ್ಲೇಷಣೆ ನಡೆಸುತ್ತಿದ್ದು, ಅವರ ಹಣಕಾಸು ವಹಿವಾಟುಗಳ ಮೇಲೂ ತೀವ್ರ ನಿಗಾ ಇರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m13m0azetgb0bva2h7kvap7n,imgname-pak-team-1787901783021.jpg" type="image/jpeg" height="390" width="690"/>
            <content:encoded><![CDATA[&lt;h2&gt;England Test Series ವೇಳೆ ಡ್ರೆಸ್ಸಿಂಗ್&zwnj; ರೂಮ್&zwnj; ಮಾಹಿತಿ ಲೀಕ್&zwnj;? ರಿಜ್ವಾನ್&zwnj;, ಇಮಾಮ್&zwnj;ಗೆ ವಿಚಾರಣೆ&lt;/h2&gt;&lt;p&gt;ಲಾಹೋರ್&zwnj;: ಸದಾ ಒಂದಿಲ್ಲೊಂದು ಪ್ರಕರಣದಲ್ಲಿ ಸುದ್ದಿಯಾಗುವ ಪಾಕಿಸ್ತಾನ ಕ್ರಿಕೆಟ್&zwnj;, ಈಗ ತಂಡದ ಕೆಲ ಆಟಗಾರರ ವಿಚಾರದಲ್ಲೇ ಮುಖಭಂಗಕ್ಕೊಳಗಾಗುವ ಸ್ಥಿತಿಯಲ್ಲಿದೆ.&lt;/p&gt;&lt;p&gt;ಇಂಗ್ಲೆಂಡ್&zwnj; ಟೆಸ್ಟ್&zwnj; ಸರಣಿಯ ವೇಳೆ ಡ್ರೆಸ್ಸಿಂಗ್&zwnj; ಕೋಣೆಯ ಮಾಹಿತಿ ಸೋರಿಕೆ ಮಾಡಿದ ಪ್ರಕರಣದಲ್ಲಿ ಪಾಕ್&zwnj; ಕ್ರಿಕೆಟ್&zwnj; ಮಂಡಳಿ ನೀಡಿದ್ದ ದೂರು ಆಧರಿಸಿ ಅಲ್ಲಿನ ರಾಷ್ಟ್ರೀಯ ಸೈಬರ್&zwnj; ಕ್ರೈಮ್ ವಿಚಾರಣಾ ಏಜೆನ್ಸಿ(ಎನ್&zwnj;ಸಿಸಿಐಎ)ಯು ತಾರಾ ಕ್ರಿಕೆಟಿಗರಾದ ಮೊಹಮ್ಮದ್&zwnj; ರಿಜ್ವಾನ್&zwnj; ಹಾಗೂ ಇಮಾಮ್&zwnj; ಉಲ್&zwnj; ಹಕ್&zwnj;ರನ್ನು 4 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದೆ. ಇಂಗ್ಲೆಂಡ್&zwnj;ನಲ್ಲಿ ಅವರ ತರಬೇತಿ, ಸಭೆ, ಪಂದ್ಯ, ಡ್ರೆಸ್ಸಿಂಗ್&zwnj; ರೂಮ್&zwnj; ವಿಚಾರಗಳ ಬಗ್ಗೆ ಪ್ರಶ್ನಿಸಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ವರದಿಗಳ ಪ್ರಕಾರ, ಈಗ ನಡೆಯುತ್ತಿರುವ ತನಿಖೆಗೆ ಹೊಸ ಆಯಾಮ ಲಭಿಸಿದೆ. ಎನ್&zwnj;ಸಿಸಿಐಎ ಈ ಇಬ್ಬರು ಆಟಗಾರರ ಮೊಬೈಲ್ ಫೋನ್&zwnj;ಗಳ ವಿಧಿವಿಜ್ಞಾನ(ಫಾರೆನ್ಸಿಕ್) ಮತ್ತು ತಾಂತ್ರಿಕ ವಿಶ್ಲೇಷಣೆಯನ್ನು ನಡೆಸುತ್ತಿದೆ. ಅಲ್ಲದೆ, ಅವರ ಹಣಕಾಸು ಖಾತೆಗಳು ಮತ್ತು ಅನುಮಾನಾಸ್ಪದ ವಹಿವಾಟುಗಳ ಮೇಲೂ ತೀವ್ರ ನಿಗಾ ಇಟ್ಟಿದೆ. ಇಂಗ್ಲೆಂಡ್&zwnj; ಸರಣಿಗೂ ಮುನ್ನ ಹಾಗೂ ಬಳಿಕದ ವಹಿವಾಟುಗಳ ಬಗ್ಗೆ ಪರಿಶೀಲಿಸಲಿದ್ದು, ಇವರಿಬ್ಬರ ಜೊತೆ ಯಾವುದಾದರೂ ಕಂಪೆನಿ, ಸಂಘಟನೆ ಅಥವಾ ವ್ಯಕ್ತಿ ಹಣಕಾಸಿನ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಿದೆ ಎಂದು ಗೊತ್ತಾಗಿದೆ.&lt;/p&gt;&lt;p&gt;ಇತ್ತೀಚೆಗೆ ಇಂಗ್ಲೆಂಡ್&zwnj; ವಿರುದ್ಧ ಮೊದಲೆರಡು ಟೆಸ್ಟ್&zwnj; ಪಂದ್ಯಗಳಲ್ಲಿ ಹೀನಾಯ ಸೋಲಿನ ಬಳಿಕ ಪಾಕ್ ತಂಡದ 15 ಆಟಗಾರರ ಪೈಕಿ 7 ಮಂದಿಯನ್ನು ಕಳಪೆ ಪ್ರದರ್ಶನ ಕಾರಣಕ್ಕೆ ತವರಿಗೆ ಕಳುಹಿಸಲಾಗಿತ್ತು. ಇದರಲ್ಲಿ ರಿಜ್ವಾನ್&zwnj;, ಇಮಾಮ್&zwnj; ಕೂಡಾ ಒಳಗೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಇದೇ ಮೊದಲ ಸಲ ಆಟಗಾರರ ವಿರುದ್ಧ ಮಂಡಳಿಯ ದೂರು!&lt;/strong&gt;&lt;/h3&gt;&lt;p&gt;ಸಾಮಾನ್ಯವಾಗಿ ಕ್ರಿಕೆಟಿಗರ ವಿಚಾರದಲ್ಲಿ ಫಿಕ್ಸಿಂಗ್&zwnj;, ದೌರ್ಜನ್ಯ ಸೇರಿದಂತೆ ಬೇರೆ ಬೇರೆ ರೀತಿಯ ಹಲವು ಆರೋಪಗಳು ಕಂಡುಬರುತ್ತವೆ. ಆವಾಗೆಲ್ಲಾ ಪೊಲೀಸ್&zwnj; ತನಿಖೆಗಳೂ ನಡೆಯುತ್ತವೆ. ಆದರೆ ತನ್ನದೇ ರಾಷ್ಟ್ರೀಯ ತಂಡದ ಆಟಗಾರರ ವಿರುದ್ಧ ಕ್ರಿಕೆಟ್&zwnj; ಮಂಡಳಿಯೊಂದು ಸೈಬರ್&zwnj; ಏಜೆನ್ಸಿಗೆ ದೂರು ನೀಡಿದ್ದು ಇದೇ ಮೊದಲು.&lt;/p&gt;&lt;h3&gt;&lt;strong&gt;3ನೇ ಟೆಸ್ಟ್&zwnj;ನಲ್ಲಿ ಇಂಗ್ಲೆಂಡ್&zwnj; ವಿರುದ್ಧ ಇನ್ನಿಂಗ್ಸ್&zwnj; ಸೋಲು ತಪ್ಪಿಸಿಕೊಂಡ ಪಾಕಿಸ್ತಾನ&lt;/strong&gt;&lt;/h3&gt;&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;: ಇಂಗ್ಲೆಂಡ್&zwnj; ವಿರುದ್ಧ 3ನೇ ಹಾಗೂ ಕೊನೆ ಟೆಸ್ಟ್&zwnj; ಪಂದ್ಯದಲ್ಲಿ ಪಾಕಿಸ್ತಾನ ತಂಡ ಇನ್ನಿಂಗ್ಸ್&zwnj; ಸೋಲಿನಿಂದ ಪಾರಾಗಿದೆ. ಮೊದಲ ಇನ್ನಿಂಗ್ಸ್&zwnj;ನಲ್ಲಿ ಪಾಕ್&zwnj; 133 ರನ್&zwnj; ಗಳಿಸಿದ್ದರೆ, ಇಂಗ್ಲೆಂಡ್&zwnj; 453 ರನ್ ಸಿಡಿಸಿ ದೊಡ್ಡ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್&zwnj;ನಲ್ಲೂ ಆರಂಭದಲ್ಲಿ ಆಘಾತ ಅನುಭವಿಸಿದ್ದ ಪಾಕ್&zwnj;, ಇನ್ನಿಂಗ್ಸ್&zwnj; ಅಂತರದಲ್ಲಿ ಸೋಲುವ ಭೀತಿಯಲ್ಲಿತ್ತು. ಆದರೆ ಅಝಾನ್&zwnj; ಅವೈಸ್&zwnj;(59), ಶಾನ್&zwnj; ಮಸೂದ್&zwnj;(95) ಹಾಗೂ ನಾಯಕ ಬಾಬರ್&zwnj; ಆಜಂ(76) ಹೋರಾಟದ ನೆರವಿನಿಂದ ತಂಡ ಹಿನ್ನಡೆಯಿಂದ ಪಾರಾಗಿ, ಇಂಗ್ಲೆಂಡ್&zwnj; ಮತ್ತೆ ಬ್ಯಾಟ್&zwnj; ಮಾಡುವಂತೆ ಮಾಡಿತು. 318 ರನ್&zwnj;ಗೆ 8 ವಿಕೆಟ್&zwnj; ಕಳೆದುಕೊಂಡಿದ್ದ ತಂಡ ಇನ್ನಿಂಗ್ಸ್&zwnj; ಸೋಲು ತಪ್ಪಿಸಲು ಇನ್ನೂ 2 ರನ್ ಬೇಕಿತ್ತು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಝಾವುಲ್ಲಾ, ಇಂಗ್ಲೆಂಡ್&zwnj;ಗೆ 50ಕ್ಕೂ ಹೆಚ್ಚು ರನ್&zwnj; ಗುರಿ ನೀಡಲು ನೆರವಾದರು.&lt;/p&gt;&lt;h3&gt;&lt;strong&gt;ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಕ್ಯಾಚ್&zwnj;: ಸ್ಮಿತ್&zwnj; ಹಿಂದಿಕ್ಕಿದ ಜೋ ರೂಟ್&zwnj; ವಿಶ್ವ ನಂ.1&lt;/strong&gt;&lt;/h3&gt;&lt;p&gt;ಬರ್ಮಿಂಗ್&zwnj;ಹ್ಯಾಮ್&zwnj;: ಟೆಸ್ಟ್&zwnj; ಕ್ರಿಕೆಟ್&zwnj;ನಲ್ಲಿ ಗರಿಷ್ಠ ಕ್ಯಾಚ್&zwnj; ಪಡೆದ ಫೀಲ್ಡರ್&zwnj;ಗಳ ಪಟ್ಟಿಯಲ್ಲಿ ಇಂಗ್ಲೆಂಡ್&zwnj; ನಾಯಕ ಜೋ ರೂಟ್&zwnj; ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್&zwnj; ಸ್ಮಿತ್&zwnj;ರನ್ನು ಹಿಂದಿಕ್ಕಿ ಈಗ ವಿಶ್ವದಲ್ಲೇ ಅಗ್ರಸ್ಥಾನಕ್ಕೇರಿದ್ದಾರೆ. ರೂಟ್&zwnj; 169 ಪಂದ್ಯಗಳಲ್ಲಿ 220 ಕ್ಯಾಚ್&zwnj; ಪಡೆದಿದ್ದಾರೆ. ಇನ್ನಿಂಗ್ಸ್&zwnj;ನಲ್ಲಿ ಅವರ ಗರಿಷ್ಠ ಕ್ಯಾಚ್&zwnj; ನಾಲ್ಕು. 125 ಪಂದ್ಯಗಳನ್ನಾಡಿರುವ ಸ್ಮಿತ್&zwnj; 219 ಕ್ಯಾಚ್&zwnj;ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಮಾಜಿ ನಾಯಕ ರಾಹುಲ್&zwnj; ದ್ರಾವಿಡ್&zwnj; 164 ಪಂದ್ಯಗಳಲ್ಲಿ 210, ಶ್ರೀಲಂಕಾದ ಜಯವರ್ಧನೆ 149 ಪಂದ್ಯಗಳಲ್ಲಿ 205, ದ.ಆಫ್ರಿಕಾದ ಜ್ಯಾಕ್&zwnj; ಕ್ಯಾಲಿಸ್&zwnj; 166 ಪಂದ್ಯಗಳಲ್ಲಿ 200 ಕ್ಯಾಚ್&zwnj; ಪಡೆದಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/pakistan-cricket-in-trouble-rizwan-and-imam-ul-haq-questioned-for-4-hours-kvn/articleshow-gdnkr9r"/>
        </item>
        <item>
            <title><![CDATA[Bengaluru: ಸಾಯುವ ರೋಗಿಗಳನ್ನೇ ಬಂಡವಾಳ ಮಾಡಿಕೊಂಡ ಖದೀರರು: ಎಸ್‌ಐಟಿಯಿಂದ ಕೃಪಾ ಹೆಲ್ತ್ ಕೇರ್ ಕಿಂಗ್‌ಪಿನ್ ಬಂಧನ!]]></title>
            <link>https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur</link>
            <guid isPermaLink="true">https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur</guid>
            <pubDate>Sat, 12 Sep 2026 11:03:49 +0530</pubDate>
            <description><![CDATA[ಬೆಂಗಳೂರಿನ ತಾವರೆಕೆರೆಯಲ್ಲಿ ಬೆಳಕಿಗೆ ಬಂದ 'ಕೃಪಾ ಹೆಲ್ತ್ ಕೇರ್' ಸಂಸ್ಥೆಯ ನಕಲಿ ಔಷಧಿ ಜಾಲದ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದೆ. ಸಂಸ್ಥೆಯ ಮಾಲೀಕ ವೀರೇಶ್, ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ರೋಗಿಗಳನ್ನು ಗುರಿಯಾಗಿಸಿ ನಕಲಿ ಕ್ಯಾನ್ಸರ್ ಹಾಗೂ ಜೀವ ರಕ್ಷಕ ಔಷಧಿಗಳನ್ನು ಮಾರಾಟ ಮಾಡುತ್ತಿದ್ದ. ಪ್ರಸ್ತುತ ಮುಖ್ಯ ಆರೋಪಿ ವೀರೇಶ್‌ನನ್ನು ಬಂಧಿಸಿ, ಜಾಲದ ಹಿಂದಿರುವ ಇತರರ ಪತ್ತೆಗಾಗಿ ತನಿಖೆ ಮುಂದುವರೆಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0p599hpx3nsq3eheqray5aj,imgname-----------------------2026-08-23t072503.672-1787450140214.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನ ತಾವರೆಕೆರೆಯಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡಕ್ಕೆ (SIT) ದಂಧೆಯ ಭೀಕರ ಮುಖಗಳು ಲಭ್ಯವಾಗಿವೆ. 'ಕೃಪಾ ಹೆಲ್ತ್ ಕೇರ್' ಸಂಸ್ಥೆಯ ಮಾಲೀಕ ವೀರೇಶ್ ನೇತೃತ್ವದಲ್ಲಿ ನಡೆದಿದ್ದ ಈ ಅಕ್ರಮ ಜಾಲವು ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟು ನಡೆಸಿರುವುದು ಎಸ್&zwnj;ಐಟಿ ತನಿಖೆಯಿಂದ ಬಹಿರಂಗಗೊಂಡಿದೆ.&lt;/p&gt;&lt;h2&gt;ಆಪ್ತನ ಐಡಿಯಾದಿಂದ ಕೋಟಿಗಳ ಸಾಮ್ರಾಜ್ಯ&lt;/h2&gt;&lt;p&gt;ಆರಂಭದಲ್ಲಿ ಸಣ್ಣ ಪ್ರಮಾಣದ ರಿಟೇಲ್ ವ್ಯಾಪಾರ ಮಾಡಿಕೊಂಡಿದ್ದ ವೀರೇಶ್, ತನ್ನ ಆಪ್ತ ಪ್ರಶಾಂತ್ ನೀಡಿದ ಕುತಂತ್ರದ ಸಲಹೆಯಿಂದಾಗಿ ನಕಲಿ ಔಷಧಿಯ ದಂಧೆಗೆ ಕಾಲಿಟ್ಟಿದ್ದ. ಪ್ರತಿಷ್ಠಿತ ಔಷಧ ಕಂಪನಿಗಳ ಲೇಬಲ್ ಬಳಸಿ ನಕಲಿ ಮಾತ್ರೆ ಹಾಗೂ ಇಂಜೆಕ್ಷನ್ ಮಾರಾಟ ಮಾಡಿದರೆ ಕೋಟಿ ಕೋಟಿ ಹಣ ಗಳಿಸಬಹುದೆಂದು ಪ್ರಶಾಂತ್ ನೀಡಿದ ಕಲ್ಪನೆಗೆ ವೀರೇಶ್ ಸಮ್ಮತಿಸಿದ್ದ. ನಾನು ಬಂಡವಾಳ ಹೂಡಿಕೆ ಮಾಡುತ್ತೇನೆ, ನೀನು ಮೆಡಿಸಿನ್ ಸಿದ್ಧಪಡಿಸು ಎಂದು ವೀರೇಶ್ ನೀಡಿದ ಅಭಯದಂತೆ ಪ್ರಶಾಂತ್ ಸಂಪೂರ್ಣ ಕಾರ್ಯಾಚರಣೆಯ ಹೊಣೆ ಹೊತ್ತಿದ್ದ.&lt;/p&gt;&lt;h2&gt;ಸಾಯುವ ರೋಗಿಗಳ ಆಸರೆಯನ್ನೇ ಬಂಡವಾಳ ಮಾಡಿಕೊಂಡ ಖದೀರರು&lt;/h2&gt;&lt;p&gt;ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಅಥವಾ ಕೊನೆ ಕ್ಷಣದಲ್ಲಿ ಬದುಕಿನ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಸಿಕ್ಕರೆ ಯಾರೂ ಪ್ರಶ್ನಿಸುವುದಿಲ್ಲ ಎಂಬ ಕ್ರೂರ ಮಾನಸಿಕತೆಯನ್ನು ಈ ವಂಚಕರು ಬಂಡವಾಳ ಮಾಡಿಕೊಂಡಿದ್ದರು. ಇದೇ ತಂತ್ರವನ್ನು ಬಳಸಿ ತಮ್ಮ ಅಕ್ರಮ ಜಾಲವನ್ನು ರಾಜ್ಯ ಹಾಗೂ ಹೊರರಾಜ್ಯಗಳಿಗೂ ವಿಸ್ತರಿಸಿದ್ದರು.&lt;/p&gt;&lt;p&gt;2021ರಲ್ಲಿ 'ಕೃಪಾ ಹೆಲ್ತ್ ಕೇರ್' ಹೆಸರಿನಲ್ಲಿ ಕಂಪನಿ ನೋಂದಾಯಿಸಿದ ವೀರೇಶ್, ಮುಖ್ಯ ಸೂತ್ರಧಾರ ಪ್ರಶಾಂತ್ ಸೇರಿದಂತೆ ವಿವಿಧ ಡೀಲರ್&zwnj;ಗಳಿಂದ ನಕಲಿ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ. ಮುಂಬೈ, ಗುಜರಾತ್ ಸೇರಿದಂತೆ ದೇಶದ ಪ್ರಮುಖ ರಾಜ್ಯಗಳಿಂದಲೂ ಮೆಡಿಸಿನ್ ತರಿಸಿ, ಮಿನರ್ವಾ ಸರ್ಕಲ್ ಬಳಿ ಇದ್ದ ತನ್ನ ಗೋದಾಮಿನಲ್ಲಿ ಸಂಗ್ರಹಿಸಿಡುತ್ತಿದ್ದ.&lt;/p&gt;&lt;h2&gt;ಮೆಡಿಕಲ್ ರೆಪ್&zwnj;ಗಳಿಗೆ ಬಂಪರ್ ಕಮಿಷನ್: ಆಸ್ಪತ್ರೆಗಳಿಗೆ ಸರಬರಾಜು&lt;/h2&gt;&lt;p&gt;ಈ ನಕಲಿ ಔಷಧಿಗಳನ್ನು ಪ್ರತಿಷ್ಠಿತ ಆಸ್ಪತ್ರೆಗಳಿಗೆ ಮಾರಾಟ ಮಾಡಲು ವೀರೇಶ್ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್&zwnj;ಗಳನ್ನು (MR) ಬಳಸಿಕೊಳ್ಳುತ್ತಿದ್ದ. ಅವರಿಗೆ ಭಾರಿ ಪ್ರಮಾಣದ ಕಮಿಷನ್ ಆಮಿಷ ಒಡ್ಡಿ, ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ಆಸ್ಪತ್ರೆಗಳು ಹಾಗೂ ಪ್ರಮುಖ ಮೆಡಿಕಲ್ ಶಾಪ್&zwnj;ಗಳಿಗೆ ನಕಲಿ ಔಷಧಿ ಸರಬರಾಜು ಮಾಡುತ್ತಿದ್ದ. ಈ ಜಾಲವು ಪ್ರಮುಖವಾಗಿ ಕ್ಯಾನ್ಸರ್, ಥೈರಾಯ್ಡ್, ವಿಟಮಿನ್ ಮಾತ್ರೆಗಳು ಹಾಗೂ ಜೀವ ರಕ್ಷಕ ಇಂಜೆಕ್ಷನ್&zwnj;ಗಳನ್ನು ಪೂರೈಸುತ್ತಿತ್ತು.&lt;/p&gt;&lt;h2&gt;SIT ವಶದಲ್ಲಿ ಆರೋಪಿ ವೀರೇಶ್&lt;/h2&gt;&lt;p&gt;ಪ್ರಕರಣದ ಬೆನ್ನಟ್ಟಿದ ಸಿಐಡಿ ಎಸ್&zwnj;ಐಟಿ ಅಧಿಕಾರಿಗಳು ಕೃಪಾ ಹೆಲ್ತ್ ಕೇರ್ ಮಾಲೀಕ ವೀರೇಶ್&zwnj;ನನ್ನು ಬಂಧಿಸಿದ್ದು, ಆತನಿಂದ ಭಾರಿ ಪ್ರಮಾಣದ ನಕಲಿ ಔಷಧಿಗಳು ಹಾಗೂ ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಜಾಲದಲ್ಲಿದ್ದ ಇತರ ಕಿಂಗ್&zwnj;ಪಿನ್&zwnj;ಗಳ ಪತ್ತೆಗೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/bengaluru-fake-medicine-racket-sit-uncovers-multi-crore-scam-exploiting-terminally-ill-patients-gdp/articleshow-95c6gur"/>
        </item>
        <item>
            <title><![CDATA[ಬೆಳಗಾವಿ, ಬಾಗಲಕೋಟೆಯ ಖೋವಾ, ಪನೀರ್ ಮಹಾರಾಷ್ಟ್ರದಲ್ಲಿ ವಶ; 600 KG ಖೋವಾ, 12,500 KG ಪನೀರ್ ಜಪ್ತಿ]]></title>
            <link>https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s</link>
            <guid isPermaLink="true">https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s</guid>
            <pubDate>Sat, 12 Sep 2026 10:56:39 +0530</pubDate>
            <description><![CDATA[ಗಣಪತಿ ಹಬ್ಬದ ಮುನ್ನ ಮಹಾರಾಷ್ಟ್ರದ ಎಫ್‌ಡಿಎ, ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆಯಿಂದ ಸಾಗಿಸುತ್ತಿದ್ದ 4600 ಕೆ.ಜಿ. ಕಳಪೆ ಖೋವಾ ಮತ್ತು 12,500 ಕೆ.ಜಿ. ಪನೀರ್ ಅನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 39 ಲಕ್ಷ ಮೌಲ್ಯದ ಆಹಾರೋತ್ಪನ್ನಗಳನ್ನು ಜಪ್ತಿ ಮಾಡಲಾಗಿದ್ದು, ನಕಲಿ ಪನೀರ್ ಮತ್ತು ಖೋವಾವನ್ನು ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0mbj5w721tmmzhvcdv3p3zn,imgname-fake-paneer-1787389613959.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪುಣೆ: &lt;/strong&gt;ಗಣಪತಿ ಹಬ್ಬಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್&zwnj;ಡಿಎ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆಯಿಂದ ಸಾಗಿಸಲಾಗುತ್ತಿದ್ದ ಕಳಪೆ ಗುಣಮಟ್ಟ ಹೊಂದಿದ್ದ 4600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;ಹಬ್ಬದ ಹೊತ್ತಲ್ಲಿ ಬಯಲಾಯ್ತು 'ಸಿಹಿ' ರಹಸ್ಯ!&lt;/h2&gt;&lt;p&gt;ಈ ಬಗ್ಗೆ 10-12 ದಿನಗಳಿಂದ ಪೊಲೀಸರು ಗುಪ್ತಚರ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಯನ್ನು ನಡೆಸಿ 39 ಲಕ್ಷ ರು. ಮೌಲ್ಯದ ಆಹಾರೋತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;p&gt;ಈ ಪೈಕಿ ಖೋವಾ ಸುಮಾರು 11.60 ಲಕ್ಷ ರು. ಮೌಲ್ಯದಾಗಿದ್ದು, ಅನೈರ್ಮಲ್ಯ ಸ್ಥಿತಿಯಲ್ಲಿ ಗೋಣಿ ಜಿಲ್ಲೆಗಳಲ್ಲಿ ಸಾಗಿಸಲಾಗುತ್ತಿತ್ತು, ಇನ್ನು ಎರಡು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವಿವಿಧ ಬಗೆಯ ಪನೀರ್&zwnj;ಗಳು ಜಪ್ತಿಯಾಗಿದ್ದು ಇದರ ಮೌಲ್ಯ, 27.83 ಲಕ್ಷ ರು. ಎಂದು ತಿಳಿದು ಬಂದಿದೆ. ಇವುಗಳನ್ನು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕ ಗಡಿಯ ಕೆಲವು ಭಾಗಗಳಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.&lt;/p&gt;&lt;h2&gt;ನಕಲಿ ಪನೀರ್, ಖೋವಾ ಪತ್ತೆ ಹಚ್ಚುವುದು ಹೇಗೆ?&lt;/h2&gt;&lt;p&gt;ನಿಜವಾದ ಪನೀರ್ ಮೃದುವಾಗಿರುತ್ತದೆ. ಆದರೆ ನಕಲಿ ರಬ್ಬರ್&zwnj;ನಂತೆ ಹಿಗ್ಗುವಂತೆ ಭಾಸವಾಗುತ್ತದೆ. ಶುದ್ಧ ಪನೀರ್ ಹಗುರವಾದ ಸ್ವಚ್ಛವಾದ ಹಾಲಿನ ಪರಿಮಳವನ್ನು ಹೊಂದಿರುತ್ತದೆ. ದರೆ ಕಲಬೆರಕೆ ಮಾಡಿದ ಪನೀರ್ ಹುಳಿ ರಾಸಾಯನಿಕದಂತಹ ವಾಸನೆಯನ್ನು ಹೊಂದಿರುತ್ತದೆ. ಒಂದು ಸಣ್ಣ ಪನೀರ್ ಅನ್ನು ಕುದಿಸಿ, ಆ ಬಳಿಕ ತಣ್ಣಗಾಗಲು ಬಿಡಿ. ಕೆಲವು ಹನಿ ಅಯೋಡಿನ್ ದ್ರಾವಣ ಸೇರಿಸಿದರೆ, ಅದು ನೀಲಿ ಅಥವಾ ಕಪ್ಪು ಬಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟವಿರುತ್ತದೆ. ಪ್ಯಾಕ್ ಮಾಡಲಾದ ಅನಲಾಗ್ ಪನೀರ್ ಅನ್ನು ಎಫ್&zwnj;ಎಸ್&zwnj;ಎಸ್&zwnj;ಎಐ ಲೇಬಲ್ ಪರಿಶೀಲನೆ ಮಾಡಿ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/belgaum-khoa-of-bagalkot-paneer-seized-in-maharashtra-600-kg-khoa-12500-kg-paneer-seized-sns/articleshow-y8fak3s"/>
        </item>
        <item>
            <title><![CDATA[US Open Final 2026: ಅರೈನಾ ಸಬಲೆಂಕಾ vs ಎಲೆನಾ ರಬೈಕೆನಾ ಪ್ರಶಸ್ತಿಗಾಗಿ ಹೋರಾಟ]]></title>
            <link>https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq</link>
            <guid isPermaLink="true">https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq</guid>
            <pubDate>Sat, 12 Sep 2026 10:56:33 +0530</pubDate>
            <description><![CDATA[ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಮತ್ತು ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಎಲೆನಾ ರಬೈಕೆನಾ ಮುಖಾಮುಖಿಯಾಗಲಿದ್ದಾರೆ. ಸೆಮಿಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾ ಅವರನ್ನು ಸಬಲೆಂಕಾ ಸೋಲಿಸಿದರೆ, ಕೊಕೊ ಗಾಫ್ ವಿರುದ್ಧ ರಬೈಕೆನಾ ಗೆಲುವು ಸಾಧಿಸಿದರು. ಈ ಫೈನಲ್ ಪಂದ್ಯವು ವಿಶ್ವದ ನಂಬರ್ 1 ಸ್ಥಾನವನ್ನು ಸಹ ನಿರ್ಧರಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27rwgf7cdtxq0ceq5jktch6,imgname-afp--20260911--c7yb67h--v1--midres--tennisusaopen-1789114860007.jpg" type="image/jpeg" height="390" width="690"/>
            <content:encoded><![CDATA[&lt;p&gt;ನ್ಯೂಯಾರ್ಕ್&zwnj;: ವರ್ಷದ ಕೊನೆ ಗ್ರ್ಯಾನ್&zwnj;ಸ್ಲಾಂ ಟೆನಿಸ್&zwnj; ಟೂರ್ನಿಯಾಗಿರುವ ಯುಎಸ್&zwnj; ಓಪನ್&zwnj;ನಲ್ಲಿ ಈ ಬಾರಿ ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಹಾಗೂ ಹಾಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಚಾಂಪಿಯನ್&zwnj; ಎಲೆನಾ ರಬೈಕೆನಾ ನಡುವೆ ಫೈನಲ್&zwnj; ಕಾದಾಟ ನಡೆಯಲಿದೆ. ಈ ಪಂದ್ಯ ಭಾನುವಾರ ನಿಗದಿಯಾಗಿದೆ.&lt;/p&gt;&lt;p&gt;ಮಹಿಳಾ ಸಿಂಗಲ್ಸ್&zwnj; ಸೆಮಿಫೈನಲ್&zwnj;ನಲ್ಲಿ ವಿಶ್ವ ನಂ.1 ಆಟಗಾರ್ತಿ, ಕಳೆದೆರಡು ಬಾರಿಯ ಟ್ರೋಫಿ ವಿಜೇತೆ, ಬೆಲಾರಸ್&zwnj;ನ ಸಬಲೆಂಕಾ ಅವರು 3ನೇ ಶ್ರೇಯಾಂಕಿತೆ, ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 7-5, 6-2 ಸೆಟ್&zwnj;ಗಳಲ್ಲಿ ಸುಲಭ ಗೆಲುವು ದಾಖಲಿಸಿದರು. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ, ಒಟ್ಟಾರೆ ಗ್ರ್ಯಾನ್&zwnj;ಸ್ಲಾಂನಲ್ಲಿ 9ನೇ ಬಾರಿ ಫೈನಲ್&zwnj;ಗೇರಿದರು.&lt;/p&gt;&lt;h2&gt;&lt;strong&gt;ಕೊಕೊ ಗಾಫ್&zwnj; ಎದುರು ಗೆದ್ದ ರಬೈಕೆನಾ&lt;/strong&gt;&lt;/h2&gt;&lt;p&gt;ಮತ್ತೊಂದು ಸೆಮಿಫೈನಲ್&zwnj;ನಲ್ಲಿ 2ನೇ ಶ್ರೇಯಾಂಕಿತೆ, ಕಜಕಸ್ತಾನದ ರಬೈಕೆನಾ ಅವರು ಅಮೆರಿಕದ ಯುವ ತಾರೆ, 2023ರ ಚಾಂಪಿಯನ್&zwnj; ಕೊಕೊ ಗಾಫ್&zwnj; ವಿರುದ್ಧ 3-6, 6-4, 6-4 ಗೇಮ್&zwnj;ಗಳಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಯುಎಸ್&zwnj; ಓಪನ್&zwnj;ನಲ್ಲಿ ಚೊಚ್ಚಲ, ಒಟ್ಟಾರೆ ಗ್ರ್ಯಾನ್&zwnj;ಸ್ಲಾಂನಲ್ಲಿ 4ನೇ ಬಾರಿ ರಬೈಕೆನಾ ಫೈನಲ್&zwnj; ತಲುಪಿದರು.&lt;/p&gt;&lt;p&gt;ಸದ್ಯ ವಿಶ್ವ ರ್&zwj;ಯಾಂಕಿಂಗ್&zwnj;ನಲ್ಲಿ ಸಬಲೆಂಕಾ ಅಗ್ರಸ್ಥಾನದಲ್ಲಿದ್ದು, ರಬೈಕೆನಾ 2ನೇ ಸ್ಥಾನದಲ್ಲಿದ್ದಾರೆ. ಸಬಲೆಂಕಾ ಅವರು ಈ ಪಂದ್ಯದಲ್ಲಿ ಸೋತರೆ ಅಗ್ರಸ್ಥಾನ ಕಳೆದುಕೊಳ್ಳಲಿದ್ದು, ರಬೈಕೆನಾ ಮೊದಲ ಸ್ಥಾನ ಪಡೆಯಲಿದ್ದಾರೆ.&lt;/p&gt;&lt;h3&gt;&lt;strong&gt;ಆಸ್ಟ್ರೇಲಿಯಾದಲ್ಲಿ ರಬೈಕೆನಾ ವಿರುದ್ಧ ಸೋತಿದ್ದ ಅರೈನಾ&lt;/strong&gt;&lt;/h3&gt;&lt;p&gt;ಇದು ಸಬಲೆಂಕಾ ಹಾಗೂ ರಬೈಕೆನಾ ನಡುವೆ 3ನೇ ಗ್ರ್ಯಾನ್&zwnj;ಸ್ಲಾಂ ಫೈನಲ್&zwnj; ಮುಖಾಮುಖಿ. 2023ರಲ್ಲಿ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;ನಲ್ಲಿ ರಬೈಕೆನಾ ವಿರುದ್ಧ ಸಬಲೆಂಕಾ ಗೆದ್ದಿದ್ದರು. ಆದರೆ ಈ ವರ್ಷ ಆಸ್ಟ್ರೇಲಿಯನ್&zwnj; ಓಪನ್&zwnj; ಫೈನಲ್&zwnj;ನಲ್ಲಿ ಸಬಲೆಂಕಾರನ್ನು ಸೋಲಿಸಿ ರಬೈಕೆನಾ ಟ್ರೋಫಿ ಎತ್ತಿಹಿಡಿದಿದ್ದರು. ಈಗ ಮತ್ತೊಮ್ಮೆ ಇವರಿಬ್ಬರು ಮುಖಾಮುಖಿಯಾಗುತ್ತಿದ್ದಾರೆ.&lt;/p&gt;&lt;p&gt;04ನೇ ಫೈನಲ್&zwnj;&lt;/p&gt;&lt;p&gt;ಸಬಲೆಂಕಾ ಯುಎಸ್&zwnj; ಓಪನ್&zwnj;ನಲ್ಲಿ ಸತತ 4ನೇ ಫೈನಲ್&zwnj;ಗೇರಿದರು. 2023ರಲ್ಲಿ ರನ್ನರ್&zwnj;ಅಪ್&zwnj;, 2024, 2025ರಲ್ಲಿ ಟ್ರೋಫಿ ಗೆದ್ದಿದ್ದಾರೆ.&lt;/p&gt;]]></content:encoded>
            <category><![CDATA[sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/sports/us-open-2026-final-sabalenka-vs-rybakina-set-for-blockbuster-showdown-kvn/articleshow-zt06qmq"/>
        </item>
        <item>
            <title><![CDATA[BBK 13: ಬಿಗ್‌ಬಾಸ್ ಕನ್ನಡ ಮೊದಲ ಎಲಿಮಿನೇಷನ್: ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು?]]></title>
            <link>https://kannada.asianetnews.com/gallery/tv-talk/bigg-boss-kannada-season-13-first-elimination-who-is-the-contestant-leaving-the-house-mrq-cgauh0g</link>
            <guid isPermaLink="true">https://kannada.asianetnews.com/gallery/tv-talk/bigg-boss-kannada-season-13-first-elimination-who-is-the-contestant-leaving-the-house-mrq-cgauh0g</guid>
            <pubDate>Sat, 12 Sep 2026 10:37:34 +0530</pubDate>
            <description><![CDATA[ಬಿಗ್‌ಬಾಸ್ ಕನ್ನಡ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿ! ವಿಮಾನದಲ್ಲಿರುವ ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಹೊರಹೋಗಲಿದ್ದಾರೆ? ಸೌಂದರ್ಯಾ ಶೆಟ್ಟಿ ಸೇಫ್! ಪೂರ್ತಿ ವಿವರ ತಿಳಿಯಲು ಕ್ಲಿಕ್ ಮಾಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m29zy823vxn57dsqhtfxpt21,imgname-bigg-boss-nomination-1789189365827.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್&zwnj;ಬಾಸ್ ಕನ್ನಡ ಸೀಸನ್ 13ರ ಮೊದಲ ವೀಕೆಂಡ್ ಪಂಚಾಯ್ತಿ! ವಿಮಾನದಲ್ಲಿರುವ ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಹೊರಹೋಗಲಿದ್ದಾರೆ? ಸೌಂದರ್ಯಾ ಶೆಟ್ಟಿ ಸೇಫ್! ಪೂರ್ತಿ ವಿವರ ತಿಳಿಯಲು ಕ್ಲಿಕ್ ಮಾಡಿ.&lt;/p&gt;&lt;img&gt;&lt;p&gt;ಇಂದು ಕನ್ನಡ ಬಿಗ್&zwnj;ಬಾಸ್ ಸೀಸನ್ 13ರ ಮೊದಲ ಪಂಚಾಯ್ತಿ ನಡೆಯಲಿದೆ. ಹಾಗೆಯೇ ಒಬ್ಬರಿಗೆ ಬಿಗ್&zwnj;ಬಾಸ್ ಆಟ ನಾಳೆಗೆ ಮುಕ್ತಾಯವಾಗಲಿದೆ. ಬಿಗ್&zwnj;ಬಾಸ್ ಶೋ ಎರಡು ತಂಡಗಳಾಗಿವೆ. ವಿಮಾನದಲ್ಲಿರೋ ಎಲ್ಲಾ ಪ್ರಯಾಣಿಕರು ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ. ಮನೆಯಲ್ಲಿರುವ ಸದಸ್ಯರು ಸೇಫ್ ಆಗಿದ್ದಾರೆ.&lt;/p&gt;&lt;img&gt;&lt;p&gt;ವಿಮಾನದಲ್ಲಿರೋ ಸದಸ್ಯರ ಪೈಕಿ ಆಸಿಯಾ ಫಿರ್ದೋಸ್, ಮಾಡರ್ನ್ ಮಹಾಕವಿ ಮಂಜ ಮತ್ತು ಓಂಪ್ರಕಾಶ್ ರಾವ್ ಒಂದು ಬಾರಿ ಬಿಗ್&zwnj;ಬಾಸ್ ಮನೆ ಪ್ರವೇಶಿಸಿ ಬಂದಿದ್ದಾರೆ. ಇನ್ನುಳಿದ ಕಿರಣ್ ಶಾಸ್ತ್ರಿ, ಪ್ರಥಮಾ ಪ್ರಸಾದ್, ಅವಿನಾಶ್ ಮತ್ತು ಧನುಷ್&zwnj; ಅವರಿಗೆ ಮನೆ ಪ್ರವೇಶಿಸುವ ಅದೃಷ್ಟ ಇನ್ನು ದೊರೆತಿಲ್ಲ. ಈ ನಾಲ್ವರ ಪೈಕಿ ಒಬ್ಬರು ನಾಮಿನೇಟ್ ಆದ್ರ ಮನೆಯನ್ನು ನೋಡದೇ ಹೋದಂತೆ ಆಗುತ್ತದೆ.&lt;/p&gt;&lt;img&gt;&lt;p&gt;ಶುಕ್ರವಾರ ಸಂಚಿಕೆಯ ಫೈನಲ್ ಕಾಲ್ ಟಾಸ್ಕ್&zwnj;ನಿಂದ ಸೌಂದರ್ಯಾ ಶೆಟ್ಟಿ ಸೇವ್ ಆಗಿದ್ದು, ಬಿಗ್&zwnj;ಬಾಸ್ ಮನೆ ಪ್ರವೇಶಿಸಿದ್ದಾರೆ. ಡೈಮಂಡ್ ಹುಡುಕಾಟ ಟಾಸ್ಕ್&zwnj;ನಂತೆ ನಡೆದ ಆಟದಲ್ಲಿ ಮನೆ ಸದಸ್ಯರ ಒಮ್ಮತದ ಮೇರೆಗೆ ಸೌಂದರ್ಯಾ ಅವರನ್ನ ಆಯ್ಕೆ ಮಾಡಲಾಗಿತ್ತು. ಹಾಗಾಗಿ ಕೊನೆ ಕ್ಷಣದಲ್ಲಿ ಸೌಂದರ್ಯಾ ಶೆಟ್ಟಿ ಸೇಫ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಬಿಗ್&zwnj;ಬಾಸ್ ಆರಂಭವಾದ ಮೊದಲ ದಿನದಿಂದಲೂ ಗಗನ್ ಚಿನ್ನಪ್ಪ ಅತ್ಯಂತ ಚಾಣಾಕ್ಷತನದಿಂದ ಆಟ ಆಡಿಕೊಂಡು ಬಂದಿದ್ದಾರೆ. ಮೊದಲ ಟಾಸ್ಕ್ ಗೆಲ್ಲುವ ಮೂಲಕ ಮನೆಯ ವಿಐಪಿ ಆಗಿರೋ ಗಗನ್ ಎಲ್ಲಾ ಆಟಗಳಿಗೆ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಗಗನ್ ಆಟದ ವೈಖರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;img&gt;&lt;p&gt;ಮನೆಯಿಂದ ಯಾರು ಹೋಗಬಹುದು ಎಂಬುದರ ಬಗ್ಗೆ ಸ್ಪರ್ಧಿಗಳ ನಡುವೆಯೂ ತೀವ್ರ ಚರ್ಚೆ ನಡೆಯುತ್ತಿದೆ. ಸೌಂದರ್ಯ ಶೆಟ್ಟಿ ಪ್ರಕಾರ, ಧನುಷ್ ಅಥವಾ ಅವಿನಾಶ್ ಹೋಗಬಹುದಂತೆ. ಮತ್ತೊಂದೆಡೆ ಪ್ರಥಮಾ ಪ್ರಸಾದ್ ಬಗ್ಗೆ ಸೌಂದರ್ಯಾ ಶೆಟ್ಟಿ ಮಾತನಾಡಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/bigg-boss-kannada-season-13-first-elimination-who-is-the-contestant-leaving-the-house-mrq-cgauh0g"/>
        </item>
        <item>
            <title><![CDATA[ಒಂದೇ ಎಕರೆ ಜಮೀನು, ದಿನಕ್ಕೆ ₹12 ಸಾವಿರ ಆದಾಯ; ಈ ರೈತನ ಹೊಸ ಕೃಷಿ ಮಾದರಿ ವೈರಲ್..!]]></title>
            <link>https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3</link>
            <guid isPermaLink="true">https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3</guid>
            <pubDate>Sat, 12 Sep 2026 10:30:44 +0530</pubDate>
            <description><![CDATA[ಮಹಾರಾಷ್ಟ್ರದ ರೈತ ಅರ್ಜುನ್ ಸಬಳೆ ಅವರು ಕೇವಲ ಒಂದು ಎಕರೆಯಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆದು ದಿನಕ್ಕೆ ₹12,000–₹13,000 ಆದಾಯ ಗಳಿಸುತ್ತಿದ್ದಾರೆ. ತಿಂಗಳ ವಹಿವಾಟು ₹3.5 ಲಕ್ಷಕ್ಕೂ ಅಧಿಕವಾಗಿದ್ದು, ನಿವ್ವಳ ಲಾಭ ಸುಮಾರು ₹2.5 ಲಕ್ಷ. ಪಾಲಿಹೌಸ್, ಹನಿ ನೀರಾವರಿ ಮತ್ತು ಉತ್ತಮ ಮಾರುಕಟ್ಟೆ ಸಂಪರ್ಕವೇ ಅವರ ಯಶಸ್ಸಿನ ಪ್ರಮುಖ ಕಾರಣಗಳು.]]></description>
            <media:content url="https://static.asianetnews.com/images/w-1280,h-720,format-jpg,imgid-01m27ggn0rfrsepv9bpzrq753q,imgname-maharashtra-farmer-s-flower-farming-success--1--1789106082839.jpg" type="image/jpeg" height="390" width="690"/>
            <content:encoded><![CDATA[&lt;h2&gt;ಒಂದೇ ಒಂದು ಎಕರೆಯಲ್ಲಿ ಹೂವಿನ ಕೃಷಿ; ತಿಂಗಳಿಗೆ ₹2.5 ಲಕ್ಷ ಲಾಭ!&lt;/h2&gt;&lt;p&gt;ಕೃಷಿಯಲ್ಲಿ ಹೆಚ್ಚು ಭೂಮಿ ಇದ್ದರೆ ಮಾತ್ರ ಹೆಚ್ಚು ಆದಾಯ ಗಳಿಸಬಹುದು ಎಂಬ ಮಾತನ್ನು ಮಹಾರಾಷ್ಟ್ರದ ರೈತ ಅರ್ಜುನ್ ಸಬಳೆ ಅವರ ಯಶೋಗಾಥೆ ಪ್ರಶ್ನಿಸುವಂತಿದೆ. ಕೇವಲ ಒಂದು ಎಕರೆ ಜಾಗದಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆದು ಅವರು ದಿನಕ್ಕೆ ಸುಮಾರು ₹12,000&ndash;₹13,000 ಆದಾಯ ಗಳಿಸುತ್ತಿದ್ದಾರೆ. ತಿಂಗಳ ವಹಿವಾಟು ₹3.5 ಲಕ್ಷಕ್ಕೂ ಅಧಿಕವಾಗಿದ್ದು, ನಿವ್ವಳ ಲಾಭ ಸುಮಾರು ₹2.5 ಲಕ್ಷ ಎಂದು Moneycontrol ವರದಿ ತಿಳಿಸಿದೆ.&lt;/p&gt;&lt;h3&gt;ಸಾಂಪ್ರದಾಯಿಕ ಹೂವಿನ ಕೃಷಿಯಿಂದ ಹೊಸ ಪ್ರಯೋಗ&lt;/h3&gt;&lt;p&gt;ಅರ್ಜುನ್ ಅವರ ಕುಟುಂಬ ಹಲವು ವರ್ಷಗಳಿಂದ ಸೇವಂತಿಗೆ ಮತ್ತು ಚೆಂಡುಹೂವು ಬೆಳೆದು, ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಬೆಲೆ ಕುಸಿತ ಮತ್ತು ಹೆಚ್ಚಿದ ಸ್ಪರ್ಧೆಯಿಂದ ಸಾಂಪ್ರದಾಯಿಕ ಹೂವಿನ ಕೃಷಿಯಿಂದ ಸಿಗುತ್ತಿದ್ದ ಆದಾಯ ಕಡಿಮೆಯಾಗತೊಡಗಿತು. ಹೀಗಾಗಿ ಹೆಚ್ಚು ಲಾಭ ನೀಡುವ ಪರ್ಯಾಯ ಬೆಳೆಗಳ ಹುಡುಕಾಟ ಆರಂಭಿಸಿದರು.&lt;/p&gt;&lt;p&gt;&lt;strong&gt;ಪಾಲಿಹೌಸ್ ಕಂಡು ಬದಲಾಯಿತು ಕೃಷಿಯ ದಾರಿ&lt;/strong&gt;&lt;/p&gt;&lt;p&gt;ಕೃಷಿಯಲ್ಲಿ ಪದವಿ ಓದುತ್ತಿದ್ದ ಸಂದರ್ಭದಲ್ಲಿ ವಿವಿಧ ಕೃಷಿ ತೋಟಗಳಿಗೆ ಭೇಟಿ ನೀಡಿದ ಅರ್ಜುನ್, ಪಾಲಿಹೌಸ್&zwnj;ನಲ್ಲಿ ಬೆಳೆಯುತ್ತಿದ್ದ ಗುಲಾಬಿ ಕೃಷಿಯನ್ನು ಗಮನಿಸಿದರು. ನಿಯಂತ್ರಿತ ವಾತಾವರಣದಲ್ಲಿ ಹೂ ಬೆಳೆಸುವ ವಿಧಾನ ಅವರಿಗೆ ಇಷ್ಟವಾಯಿತು. 2016ರಲ್ಲಿ ಸುಮಾರು 10 ಗುಂಠೆ, ಅಂದರೆ ಕಾಲು ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆದು ಪ್ರಯೋಗ ಆರಂಭಿಸಿದರು.&lt;/p&gt;&lt;p&gt;ಆರಂಭದಲ್ಲಿ ಸುಮಾರು ₹8,000 ಹೂ ಸಸಿಗಳಿಗಾಗಿ ಖರ್ಚು ಮಾಡಿದ್ದರು. ಆರು ತಿಂಗಳ ಬಳಿಕ ದಿನಕ್ಕೆ ಸುಮಾರು 500 ಗುಲಾಬಿಗಳನ್ನು ಕೊಯ್ಲು ಮಾಡಲಾರಂಭಿಸಿದರು. ಸ್ಥಳೀಯವಾಗಿ ಪ್ರತಿ ಹೂವನ್ನು ₹5ರಂತೆ ಮಾರಾಟ ಮಾಡುವ ಮೂಲಕ ದಿನಕ್ಕೆ ಸುಮಾರು ₹2,500 ಆದಾಯ ಗಳಿಸಿದರು. ಈ ಫಲಿತಾಂಶವೇ ಮುಂದಿನ ವಿಸ್ತರಣೆಗೆ ಪ್ರೇರಣೆಯಾಯಿತು.&lt;/p&gt;&lt;p&gt;&lt;strong&gt;ಈಗ 16 ಸಾವಿರ ಗುಲಾಬಿ, 16 ಸಾವಿರ ಜರ್ಬೆರಾ ಗಿಡಗಳು!&lt;/strong&gt;&lt;/p&gt;&lt;p&gt;ಇಂದು ಅರ್ಜುನ್ ಒಂದು ಎಕರೆ ಪ್ರದೇಶದಲ್ಲಿ ಗುಲಾಬಿ ಮತ್ತು ಜರ್ಬೆರಾ ಬೆಳೆಸುತ್ತಿದ್ದಾರೆ. ಸುಮಾರು 16,000 ಗುಲಾಬಿ ಹಾಗೂ 16,000 ಜರ್ಬೆರಾ ಗಿಡಗಳಿವೆ. ಪ್ರತಿದಿನ ಸುಮಾರು 1,000 ಗುಲಾಬಿ ಮತ್ತು 2,000 ಜರ್ಬೆರಾ ಕಾಂಡಗಳನ್ನು ಉತ್ಪಾದಿಸುತ್ತಾರೆ. ಸರಾಸರಿ ₹5ರಂತೆ ಗುಲಾಬಿ ಮತ್ತು ₹4ರಂತೆ ಜರ್ಬೆರಾ ಮಾರಾಟವಾಗುವುದರಿಂದ ದಿನದ ಆದಾಯ ಸುಮಾರು ₹13,000ಕ್ಕೆ ತಲುಪುತ್ತದೆ.&lt;/p&gt;&lt;p&gt;&lt;strong&gt;ಪಾಲಿಹೌಸ್, ಹನಿ ನೀರಾವರಿ ಮತ್ತು ನೇರ ಮಾರಾಟ..!&lt;/strong&gt;&lt;/p&gt;&lt;p&gt;ಅರ್ಜುನ್ ನೈಸರ್ಗಿಕವಾಗಿ ಗಾಳಿ ಸಂಚಾರವಾಗುವ ಪಾಲಿಹೌಸ್ ಬಳಸುತ್ತಾರೆ. ಮೇಲ್ಛಾವಣಿಯ ವೆಂಟ್&zwnj;ಗಳು ಮತ್ತು ಬದಿಯ ಪರದೆಗಳ ಮೂಲಕ ಗಾಳಿಯ ಹರಿವು ನಿಯಂತ್ರಿಸಲಾಗುತ್ತದೆ. ಹನಿ ನೀರಾವರಿ, ಮೈಕ್ರೋ ಸ್ಪ್ರಿಂಕ್ಲರ್&zwnj;ಗಳು ಹಾಗೂ ನಿಯಮಿತ ಕೀಟ ನಿಯಂತ್ರಣ ಕ್ರಮಗಳನ್ನೂ ಬಳಸುತ್ತಾರೆ. ಅವರ ಮೊದಲ 10,000 ಚದರ ಅಡಿ ಪಾಲಿಹೌಸ್&zwnj;ಗೆ 2015&ndash;16ರಲ್ಲಿ ಸುಮಾರು ₹3 ಲಕ್ಷ ವೆಚ್ಚವಾಗಿತ್ತು.&lt;/p&gt;&lt;p&gt;&lt;strong&gt;ಮುಂಬೈಯಿಂದ ಬೆಂಗಳೂರಿನವರೆಗೆ ಮಾರುಕಟ್ಟೆ!&lt;/strong&gt;&lt;/p&gt;&lt;p&gt;ಹೂಗಳನ್ನು ನೇರವಾಗಿ ಹೂವಿನ ಅಂಗಡಿಗಳು ಮತ್ತು ಸಗಟು ಮಾರುಕಟ್ಟೆಗಳಿಗೆ ಮಾರಾಟ ಮಾಡಲಾಗುತ್ತದೆ. ಜರ್ಬೆರಾಗಳನ್ನು ಬೇಡಿಕೆಗೆ ಅನುಗುಣವಾಗಿ ಬೆಂಗಳೂರು, ವಡೋದರಾ, ಅಹಮದಾಬಾದ್, ಹೈದರಾಬಾದ್ ಮತ್ತು ಮುಂಬೈ ಮಾರುಕಟ್ಟೆಗಳಿಗೂ ಕಳುಹಿಸಲಾಗುತ್ತದೆ. ಹೀಗಾಗಿ ಸೂಕ್ತ ಬೆಳೆ ಆಯ್ಕೆ, ಸಂರಕ್ಷಿತ ಕೃಷಿ ಮತ್ತು ಮಾರುಕಟ್ಟೆ ಸಂಪರ್ಕ ಇದ್ದರೆ ಸೀಮಿತ ಜಮೀನಿನಿಂದಲೂ ಉತ್ತಮ ಆದಾಯದ ಅವಕಾಶ ಸೃಷ್ಟಿಸಬಹುದು ಎಂಬುದನ್ನು ಈ ಯಶೋಗಾಥೆ ತೋರಿಸುತ್ತದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/this-maharashtra-farmer-earns-12000-rupees-a-day-from-just-one-acre-of-flowers/articleshow-vpy83b3"/>
        </item>
        <item>
            <title><![CDATA[ಸಚಿವ ಜಾರಕಿಹೊಳೆ ಮನೆ ಮೇಲೆ ಇಡಿ ದಾಳಿಗೆ ವಿಜಯ್ ಮಲ್ಯ ಕೆಂಡಾಮಂಡಲ, ತನ್ನಿಷ್ಟದ ದೇಗುಲ ನೆನೆದು ಬೇಸರ!]]></title>
            <link>https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</link>
            <guid isPermaLink="true">https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq</guid>
            <pubDate>Sat, 12 Sep 2026 10:19:36 +0530</pubDate>
            <description><![CDATA[ಸಚಿವ ಸತೀಶ್ ಜಾರಕಿಹೊಳೆ ಆಪ್ತರ ಮೇಲಿನ ಇಡಿ ದಾಳಿಯನ್ನು ಉದ್ಯಮಿ ವಿಜಯ್ ಮಲ್ಯ 'ಎಕ್ಸ್'ನಲ್ಲಿ ಖಂಡಿಸಿದ್ದಾರೆ. ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಎಂದಿರುವ ಅವರು, ಇದು ಸಾರ್ವಜನಿಕ ಚಾರಿತ್ರ್ಯ ವಧೆ ಎಂದು ಟೀಕಿಸಿದ್ದಾರೆ. ಅಲ್ಲದೆ, ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ywc4316j1cpx6kr99k0xm,imgname-satish-jarkiholi-vijay-mallya-1789188255874.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ಮನೆಗಳ ಮೇಲಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿದೇಶದಲ್ಲಿರುವ ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಅವರು, ಯಾವುದೇ ಸೂಕ್ತ ಚಾರ್ಜ್&zwnj;ಶೀಟ್ ಸಲ್ಲಿಸದೆ ಹಾಗೂ ನ್ಯಾಯಯುತ ವಿಚಾರಣೆ ನಡೆಸದೆ, ಕೇವಲ ಸಾರ್ವಜನಿಕವಾಗಿ ವ್ಯಕ್ತಿಗಳ ಚಾರಿತ್ರ್ಯ ವಧೆ ಮಾಡುವುದರಲ್ಲಿ ಇಡಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಇಂತಹ ಜಾರಿ ಸಂಸ್ಥೆಗಳ ನಡವಳಿಕೆಯನ್ನು ಕಾಣಲು ಸಾಧ್ಯವಿಲ್ಲ. ನಾಗರಿಕರು ಈ ಬಗ್ಗೆ ಯೋಚಿಸಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ತಮ್ಮ ಮೇಲಿನ ಆರೋಪಗಳು ಹಾಗೂ ಸಾರ್ವಜನಿಕ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಮಲ್ಯ, ನನ್ನನ್ನು ಪ್ರೀತಿಸಿ, ದ್ವೇಷಿಸಿ, ನಿಂದಿಸಿ ಅಥವಾ ನಿರ್ಲಕ್ಷಿಸಿ ಆದರೆ ನಾನು ಎಂದಿಗೂ ಬದಲಾಗುವುದಿಲ್ಲ. ದೇವರು ನನಗೆ ಸಾಟಿಯಿಲ್ಲದ ಧೈರ್ಯ ಮತ್ತು ಶಕ್ತಿಯನ್ನು ನೀಡಿದ್ದಾನೆ. ಕೊನೆಯಲ್ಲಿ ಸತ್ಯವೇ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಭಾರತದಲ್ಲಿರುವ ನಾನು ಪೂಜಿಸುವ ಪವಿತ್ರ ದೇವಾಲಯಗಳಿಗೆ ಭೇಟಿ ನೀಡಲಾಗದಿರುವುದು ನನಗೆ ಅತ್ಯಂತ ಬೇಸರ ತಂದಿದೆ. ನಾನು ದೇವಾಲಯ ಭೇಟಿಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಆದಾಗ್ಯೂ, ನನ್ನ ಧಾರ್ಮಿಕ ಚೌಕಟ್ಟು ಮತ್ತು ನಿಷ್ಠೆಯನ್ನು ನಾನು ಸದಾ ಕಾಪಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;ಸಾಲ ತೀರಿದರೂ ಮಲ್ಯ ಮೇಲಿನ ಕೇಸ್ ರದ್ದಾಗಲ್ಲ&lt;/h2&gt;&lt;p&gt;ಬ್ಯಾಂಕ್&zwnj;ಗಳಿಗೆ ವಂಚಿಸಿ ದೇಶ ತೊರೆದಿರುವ ಉದ್ಯಮಿ ವಿಜಯ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್&zwnj;ಬಿಐ) ನೇತೃತ್ವದ ಕನ್ಸೋರ್ಟಿಯಂಗೆ ಹಸ್ತಾಂತರಿಸಲಾಗಿದ್ದರೂ, ಅವರ ವಿರುದ್ಧದ ಹಣ ಅಕ್ರಮ ವರ್ಗಾವಣೆ (ಮನಿ ಲ್ಯಾಂಡರಿಂಗ್) ಪ್ರಕರಣಗಳು ರದ್ದಾಗುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸ್ಪಷ್ಟಪಡಿಸಿದೆ.&lt;/p&gt;&lt;p&gt;&quot;ನನ್ನ 14,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡು ಬ್ಯಾಂಕ್&zwnj;ಗಳ ಸಾಲ ತೀರಿಸಲಾಗಿದೆ. ಆದ್ದರಿಂದ ನನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಅಂತ್ಯಗೊಳಿಸಬೇಕು,&quot; ಎಂದು ಕೋರಿ ವಿಜಯ ಮಲ್ಯ ಅವರು ಬಾಂಬೆ ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿದ್ದರು.&lt;/p&gt;&lt;p&gt;ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್&zwnj;ಗೆ ಅಫಿಡವಿಟ್ ಸಲ್ಲಿಸಿರುವ ಇ.ಡಿ., &quot;ಮಲ್ಯ ಅವರು ಕಾನೂನು ಪ್ರಕ್ರಿಯೆಯಿಂದ ಹಾಗೂ ತನಿಖೆಯಿಂದ ಸತತವಾಗಿ ನುಣಚಿಕೊಳ್ಳುತ್ತಿದ್ದಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣವೇ ಅವರ ಮೇಲಿನ ಅಪರಾಧ ಹೊಣೆಗಾರಿಕೆ ಇಲ್ಲವಾಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡಲು ಸಾಧ್ಯವಿಲ್ಲ,&quot; ಎಂದು ತಿಳಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/vijay-mallya-slams-enforcement-directorate-following-raids-on-karnataka-minister-satish-jarkihol-gdp/articleshow-x3792vq"/>
        </item>
        <item>
            <title><![CDATA[Mysuru: ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್, ಪ್ರತಿಭಟನೆ; ಅಲೋಕ್ ಕುಮಾರ್ ಹೇಳಿದ್ದೇನು?]]></title>
            <link>https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug</link>
            <guid isPermaLink="true">https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug</guid>
            <pubDate>Sat, 12 Sep 2026 10:02:11 +0530</pubDate>
            <description><![CDATA[ಖೈದಿಗಳ ಅಕ್ರಮ ಮೊಬೈಲ್ ಬಳಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಹಿನ್ನೆಲೆಯಲ್ಲಿ, ಡಿಜಿಪಿ ಅಲೋಕ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದರು. ಪರಿಶೀಲನೆ ವೇಳೆ ಕೆಲವು ಲೋಪಗಳನ್ನು ಒಪ್ಪಿಕೊಂಡ ಅವರು, ತಪ್ಪಿತಸ್ಥ ಖೈದಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29y3dzykw7ebbv3ejt1n73j,imgname-alok-kumar--1789187438590.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು: &lt;/strong&gt;ಕೇಂದ್ರ ಕಾರಾಗೃಹದಕ್ಕೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ. ಖುದ್ದು ಪ್ರತಿಯೊಂದು ಬ್ಯಾರಕ್&zwnj;ಗಳನ್ನು ಜಾಲಾಡಿದ ಡಿಜಿಪಿ, ಅಕ್ರಮ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಖೈದಿಗಳ ಅಕ್ರಮ ಮೊಬೈಲ್ ಬಳಕೆ ಹಾಗೂ ಅಧಿಕಾರಿಗಳು ನಿರ್ದಿಷ್ಟ ಸಮುದಾಯದ ಖೈದಿಗಳಿಗೆ ಸಾಥ್ ನೀಡುತ್ತಾರೆಂಬ ಆರೋಪ ಕೇಳಿಬಂದ ಬೆನ್ನಲ್ಲೇ ದಾಳಿ ನಡೆದಿದ್ದು, ಕೆಲವು ಲೋಪಗಳ ಬಗ್ಗೆ ಡಿಜಿಪಿ ಒಪ್ಪಿಕೊಂಡಿದ್ದಾರೆ.&lt;/p&gt;&lt;h2&gt;ಮೈಸೂರು ಜೈಲಿನೊಳಗೆ ಡಿಜಿಪಿ, ಬಯಲಾಯ್ತು ಖೈದಿಗಳ ಅಸಲಿ ಆಟ!&lt;/h2&gt;&lt;p&gt;ಮೈಸೂರು ಕೇಂದ್ರ ಕಾರಾಗೃಹದ ಮೇಲೆ ಇಂದಹ ಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಯಿತು. ಕಳೆದ ರಾತ್ರಿ ಜೈಲಿನಲ್ಲಿ ಒಂದು ಸಮುದಾಯದ ಖೈದಿಗಳ ಬಳಿ ಮಾತ್ರ ಮೊಬೈಲ್ ಇರುವುದಕ್ಕೆ ಅಧಿಕಾರಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ ಎಂದು ಆರೋಪಿಸಿ ಇತರೆ ಖೈದಿಗಳು ಪ್ರತಿಭಟನೆ ನಡೆಸಿದ್ದರು ಎಂಬ ಮಾಹಿತಿ ಹೊರ ಬಿದ್ದಿತ್ತು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬ್ಯಾರಕ್&zwnj;ಗಳನ್ನು ಖುದ್ದು ಪರಿಶೀಲನೆ ನಡೆಸಿದರು.&lt;/p&gt;&lt;p&gt;ಪರಿಶೀಲನೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಜೈಲಿನ ಕೆಲವೆಡೆ ಮೊಬೈಲ್ ನೆಟ್&zwnj;ವರ್ಕ್ ಸಿಗುತ್ತಿರುವುದು ನಿಜವಾಗಿದ್ದು, ತುರ್ತಾಗಿ ಜಾಮರ್ ಅಳವಡಿಸುವ ಅಗತ್ಯವಿದೆ ಎಂದರು. ಖೈದಿಗಳು ಹಾಗೂ ಸಿಬ್ಬಂದಿ ಇಬ್ಬರಿಂದಲೂ ಮಾಹಿತಿ ಪಡೆದಿದ್ದು, ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಮೊಬೈಲ್ ಇಟ್ಟುಕೊಳ್ಳುವುದು ಎಷ್ಟು ತಪ್ಪೋ, ಅದಕ್ಕೆ ನೆರವಾಗುವ ಅಧಿಕಾರಿಗಳೂ ಅಷ್ಟೇ ಅಪರಾಧಿಗಳು ಎಂದ ಅವರು, ಇಬ್ಬರ ಮೇಲೂ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.&lt;/p&gt;&lt;p&gt;ಇದೇ ವೇಳೆ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಡಿಜಿಪಿ, ಪ್ರಕರಣ ಸದ್ಯ ತನಿಖಾ ಹಂತದಲ್ಲಿದೆ. ಜೊತೆಗೆ ಜೈಲಿನೊಳಗೆ ಮೊಬೈಲ್ ಹೇಗೆ ನುಸುಳುತ್ತದೆ ಎಂಬ ಕರಾಳ ಸತ್ಯವನ್ನೂ ಬಿಚ್ಚಿಟ್ಟರು. ಕಳೆದ 8 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲೊಂದರಲ್ಲೇ ಬರೋಬ್ಬರಿ 300 ಮೊಬೈಲ್&zwnj;ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಐದಾರು ಫೋನ್&zwnj;ಗಳಿರುವ ಶಂಕೆ ಇದೆ. ಪ್ರತಿದಿನ 200ಕ್ಕೂ ಹೆಚ್ಚು ಮಂದಿ ಜೈಲಿಗೆ ಬರುತ್ತಿದ್ದು, ಕೆಲವರು ಸಿಮ್ ಕಾರ್ಡ್ ನುಂಗಿ, ದೇಹದೊಳಗೆ ಮೊಬೈಲ್ ಬಚ್ಚಿಟ್ಟುಕೊಂಡು ಬರುತ್ತಿದ್ದಾರೆ. ಇಂತಹ ಸೂಕ್ಷ್ಮ ತಪಾಸಣೆ ಸವಾಲಾಗಿದ್ದರೂ ಅಕ್ರಮಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಿರಂತರವಾಗಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಒಟ್ಟಾರೆ ಮೈಸೂರು ಜೈಲಿನಲ್ಲೂ ಖೈದಿಗಳ ವಿಲಾಸಿ ಜೀವನ ನಡೆಯುತ್ತಿದೆ ಎಂಬ ಆರೋಪವನ್ನು ಡಿಜಿಪಿ ರೇಡ್ ಮತ್ತಷ್ಟು ಗಟ್ಟಿ ಮಾಡಿರುವುದಂತು ಸ್ಪಷ್ಟ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು)&lt;/p&gt;&lt;p&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/protest-over-mobile-phones-found-only-with-inmates-from-one-community-in-the-jail-what-did-alok-kumar-say-sns/articleshow-opd5xug"/>
        </item>
        <item>
            <title><![CDATA[Belthangady: 105ರ ತಾಯಿ-85ರ ಮಗಳ ಅಪರೂಪದ ಭೇಟಿ: ದುರ್ಗಮ ರಸ್ತೆಯಲ್ಲಿ ಪುತ್ರಿಯ ಪಯಣ]]></title>
            <link>https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</link>
            <guid isPermaLink="true">https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4</guid>
            <pubDate>Sat, 12 Sep 2026 09:06:37 +0530</pubDate>
            <description><![CDATA[ಬೆಳ್ತಂಗಡಿಯ ಮಲವಂತಿಕೆ ಗ್ರಾಮದಲ್ಲಿ, 105 ವರ್ಷದ ತಾಯಿ ಸೀತಮ್ಮ ಮತ್ತು 85 ವರ್ಷದ ಮಗಳು ಸುಶೀಲಾ ಅವರು 20 ವರ್ಷಗಳ ನಂತರ ಭೇಟಿಯಾದರು. ದುರ್ಗಮ ದಾರಿಯ ಕಾರಣದಿಂದಾಗಿ ದೂರವಾಗಿದ್ದ ಇವರನ್ನು, ಮೊಮ್ಮಕ್ಕಳು ಕಷ್ಟಪಟ್ಟು ಒಂದಾಗಿಸಿ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m29ty91dnrsx5fdd3w9c97k0,imgname-belthangady-1789184123949.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಕ್ಷಿಣ ಕನ್ನಡ: &lt;/strong&gt;ತಾಯಿಗೆ 105 ವರ್ಷ, ಆಕೆಯ ಮಗಳಿಗೆ 85 ವರ್ಷ. ಇಬ್ಬರದ್ದೂ ಇಳಿ ವಯಸ್ಸು. ಮಗಳಿಗೆ ತಾಯಿಯನ್ನು ನೋಡಬೇಕೆಂಬ ಆಸೆಯಿದ್ದರೂ ವಯಸ್ಸು, ದುರ್ಗಮ ದಾರಿಯ ಕಾರಣದಿಂದ ಭೇಟಿ ಸಾಧ್ಯವಾಗಿರಲಿಲ್ಲ. ಆದರೆ ಮೊಮ್ಮಕ್ಕಳು ತಾಯಿ ಮಗಳ ಆಸೆಯನ್ನು ಪೂರೈಸಿದ್ದಾರೆ. ಇಂತಹ ಅದ್ಭುತ ಕ್ಷಣ ಕಾಣಸಿಕ್ಕಿದ್ದು, ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ಮಕ್ಕಿ ಎಂಬಲ್ಲಿ&lt;/p&gt;&lt;p&gt;ಮಕ್ಕಿಯಲ್ಲಿ ಮಕ್ಕಳ ಜೊತೆ ವಾಸ ಇರುವ 105 ವರ್ಷದ ಸೀತಮ್ಮ ಅವರಿಗೆ 11 ಮಂದಿ ಮಕ್ಕಳು. ಅವರಲ್ಲಿ ಮೊದಲನೆಯವರು ಸುಶೀಲಾ. ಅವರಿಗೀಗ 85 ವಯಸ್ಸು. ಸೀತಮ್ಮ ಅವರ ಮನೆಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಜೀಪಿನಲ್ಲಿ ದುರ್ಗಮ ಕಾಡಿನಲ್ಲಿ ಸಾಗಿ ಬಳಿಕ ಒಂದೂವರೆ ಕಿಲೋ ಮೀಟರ್ ಬೆಟ್ಟ ಇಳಿದು, ಹೊಳೆ ದಾಟಿ ಸಾಗಬೇಕು. ಸುಶೀಲಾ ಅವರು ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ಫಗರೆ ಎಂಬಲ್ಲಿ ವಾಸವಾಗಿದ್ದಾರೆ. ದೂರ ದೂರ ಇರುವ ತಾಯಿ&ndash;ಮಗಳು ಒಂದಾಗಿ ಸುಮಾರು 20 ವರ್ಷ ಸಂದಿತ್ತು. ಹಿಂದಿನ ನೆನಪು ಮಾತ್ರ ಮನಸ್ಸಲ್ಲಿ ಉಳಿದಿತ್ತು.&lt;/p&gt;&lt;h2&gt;&lt;strong&gt;ಅಜ್ಜಿ ಆಸೆ ಪೂರೈಸಲು ಮುಂದಾದ ಮೊಮ್ಮಕಳು&lt;/strong&gt;&lt;/h2&gt;&lt;p&gt;ಮುತ್ತಜ್ಜಿ ಸೀತಮ್ಮ ಅವರಿಗೆ ವಯಸ್ಸಿನ ಕಾರಣ ಮಗಳ ಬಳಿ ಬರಲು ಸಾಧ್ಯರಲಿಲ್ಲ. ಮಗಳು ಸುಶೀಲಾ ಅವರಿಗೆ ಅನಾರೋಗ್ಯದ ಕಾರಣದಿಂದ ತಾಯಿ ಬಳಿ ಹೋಗಲು ಸಾಧ್ಯವಾಗದೆ ಹಲವು ವರ್ಷವಾಗಿತ್ತು. ಆದರೆ ಮೊಮ್ಮಕ್ಕಳು ಅಜ್ಜಿ ಆಸೆ ಪೂರೈಸಲು ಸುಶೀಲಾ ಅವರನ್ನು ಕರೆದುಕೊಂಡು ದಟ್ಟ ಕಾಡಿನ ಕಚ್ಛಾ ರಸ್ತೆಯ ಮೂಲಕ ಜೀಪಿನಲ್ಲಿ ಪ್ರಯಾಣಿಸಿದ್ದಾರೆ. ಜೀಪಿನಲ್ಲಿ ಅಜ್ಜಿಯನ್ನು ಕರೆದುಕೊಂಡು ಸಾಗಿದರೂ ಮುತ್ತಜ್ಜಿ ಮನೆಯವರೆಗೂ ವಾಹನ ಸಾಗಲು ಸಾಧ್ಯವಿಲ್ಲ. ಹೀಗಾಗಿ ಅಜ್ಜಿಯನ್ನು ಕಾಡುದಾರಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಮನೆ ತಲುಪಿದ್ದಾರೆ.&lt;/p&gt;&lt;p&gt;&lt;strong&gt;ರಸ್ತೆಯಿಲ್ಲದ ಮನೆಯಲ್ಲಿದ್ದ ಮುತ್ತಜ್ಜಿ&lt;/strong&gt;&lt;/p&gt;&lt;p&gt;ಅಜ್ಜಿಯನ್ನು ಕರೆದುಕೊಂಡು ಮುತ್ತಜ್ಜಿ ಮನೆಗೆ ತೆರಳಬೇಕು ಎನ್ನುವುದು ಮೊಮ್ಮಕ್ಕಳಾದ ನಮ್ಮ ಆಸೆಯಾಗಿತ್ತು. ಆದರೆ ಅಜ್ಜಿಗೆ ವಯಸ್ಸಾದ ಕಾರಣ, ಮುತ್ತಜ್ಜಿ ಮನೆಗೆ ಸರಿಯಾದ ರಸ್ತೆ ಇಲ್ಲದ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲ. ಇದೀಗ ಅದು ಸಾಧ್ಯವಾಗಿದೆ ಎಂದು ಮೊಮ್ಮಗ ಕೇಶವ ಹೇಳುತ್ತಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಯುವಕರಿಗೂ ಕಷ್ಟವಾಗಿದ್ದ 40 ಅಡಿ ಜಾರುಕಂಬ ಸರಸರನೆ ಏರಿದ 7ನೇ ತರಗತಿಯ ಬಾತೀಶ್&zwnj;: ಹೇಗೆ ಅಂತೀರಾ?&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-belthangady-105-year-old-mother-seetamma-and-85-year-old-daughter-sushila-met-after-20-years-mrq/articleshow-ugk6tt4"/>
        </item>
        <item>
            <title><![CDATA[Rani Haar: ಸೀರೆ ಮೇಲೆ ಈ ಒಂದು ರಾಣಿಹಾರ ಹಾಕಿದ್ರೆ ಸಾಕು, ಲುಕ್ಕೇ ಬದಲಾಗುತ್ತೆ: ಇಲ್ಲಿವೆ ಡಿಸೈನ್ಸ್!]]></title>
            <link>https://kannada.asianetnews.com/webstories/fashion/stunning-rani-haar-designs-for-sarees-and-lehengas-gvd-3f5bnnp</link>
            <guid isPermaLink="true">https://kannada.asianetnews.com/webstories/fashion/stunning-rani-haar-designs-for-sarees-and-lehengas-gvd-3f5bnnp</guid>
            <pubDate>Sat, 12 Sep 2026 09:00:03 +0530</pubDate>
            <description><![CDATA[Rani Haar: ರಾಣಿಹಾರಗಳು ನೋಡಲು ತುಂಬಾನೇ ಸುಂದರವಾಗಿರುತ್ತವೆ. ಸೀರೆ ಅಥವಾ ಲೆಹೆಂಗಾಗಳ ಮೇಲೆ ಒಂದೇ ಒಂದು ರಾಣಿಹಾರ ಧರಿಸಿದರೂ ಸಾಕು, ತುಂಬಾನೇ ಗ್ರಾಂಡ್ ಆಗಿ ಕಾಣಿಸುತ್ತೀರಿ. ಇಲ್ಲಿ ನಾವು ನಿಮಗಾಗಿ ಕೆಲವು ರಾಣಿಹಾರದ ಡಿಸೈನ್‌ಗಳನ್ನು ನೀಡಿದ್ದೇವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwep6yey22fr735b40bjynj4,imgname-1-1782904486366.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-rani-haar-designs-for-sarees-and-lehengas-gvd-3f5bnnp"/>
        </item>
        <item>
            <title><![CDATA[ಹಾರ್ಟ್‌ನಲ್ಲಿ ಸ್ವಲ್ಪ ಜಾಗ ಮಾಡ್ಕೊಳ್ರಿ.. ಶಿವಣ್ಣನ ಜೊತೆ ಸ್ಟೆಪ್ ಹಾಕೋಕೆ ಬರ್ತಿದ್ದಾಳೆ ನಿವಿ ಕುಮಾರಿ!]]></title>
            <link>https://kannada.asianetnews.com/sandalwood/bigg-boss-fame-niveditha-gowda-to-dance-with-shivarajkumar-in-bail-movie-special-song-gvd/articleshow-21qo02o</link>
            <guid isPermaLink="true">https://kannada.asianetnews.com/sandalwood/bigg-boss-fame-niveditha-gowda-to-dance-with-shivarajkumar-in-bail-movie-special-song-gvd/articleshow-21qo02o</guid>
            <pubDate>Sat, 12 Sep 2026 08:45:47 +0530</pubDate>
            <description><![CDATA[ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಬೇಲ್’ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 12ರಂದು ಸಂಜೆ 5.05ಕ್ಕೆ ಹಾಡು ಬಿಡುಗಡೆಯಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28qzhamtqprq9er06jybj7v,imgname-bjvb-1789147465043.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಹ್ಯಾಟ್ರಿಕ್ ಹೀರೋ ಶಿವರಾಜ್&zwnj;ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ &lsquo;ಬೇಲ್&rsquo; ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಹಾಗೂ ಪಾತ್ರಗಳ ಝಲಕ್ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇದೀಗ ಮತ್ತೊಂದು ಸರ್ಪ್ರೈಸ್ ನೀಡಿದೆ. ಬಿಗ್&zwnj;ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಶಿವಣ್ಣ ಜೊತೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಹೌದು, &lsquo;ಬೇಲ್&rsquo; ಸಿನಿಮಾದ ವಿಶೇಷ ಹಾಡಿನಲ್ಲಿ ನಿವೇದಿತಾ ಗೌಡ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾಗಿ ಚಿತ್ರತಂಡ ಅಧಿಕೃತ ಪೋಸ್ಟರ್&zwnj;ವೊಂದನ್ನು ಬಿಡುಗಡೆ ಮಾಡಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.&lt;/p&gt;&lt;p&gt;&lt;strong&gt;ಹಾರ್ಟ್&zwnj;ನಲ್ಲಿ ಸ್ವಲ್ಪ ಜಾಗ ಮಾಡ್ಕೊಳ್ರಿ...&lt;/strong&gt;&lt;/p&gt;&lt;p&gt;ನಿವೇದಿತಾ ಗೌಡ ಅವರ ಪೋಸ್ಟರ್&zwnj;ನ್ನು ಹಂಚಿಕೊಂಡಿರುವ ಚಿತ್ರತಂಡ, 'ಹಾರ್ಟ್ ಅಲ್ಲಿ ಸಲ್ಪ ಜಾಗ ಮಾಡ್ಕೊಳ್ರಿ... ಬರ್ತಿದಾಳೆ ನಮ್ಮ ಕುಮಾರಿ' ಎಂಬ ಕ್ಯಾಪ್ಶನ್ ನೀಡಿದೆ. ಈ ಮೂಲಕ ಬಿಗ್&zwnj;ಬಾಸ್ ಬೆಡಗಿ ಸಿನಿಮಾದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಈ ಸ್ಪೆಷಲ್ ಸಾಂಗ್ ಸೆಪ್ಟೆಂಬರ್ 12ರಂದು ಸಂಜೆ 5.05ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಶಿವಣ್ಣ ಹಾಗೂ ನಿವೇದಿತಾ ಗೌಡ ಅವರ ಕಾಂಬಿನೇಷನ್&zwnj;ನಲ್ಲಿ ಹಾಡು ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.&lt;/p&gt;&lt;p&gt;&lt;strong&gt;ಸ್ಪೆಷಲ್ ಸಾಂಗ್&zwnj;ನಲ್ಲಿ ನಿವೇದಿತಾ ಗೌಡ&lt;/strong&gt;&lt;/p&gt;&lt;p&gt;&lsquo;ಬೇಲ್&rsquo; ಸಿನಿಮಾದ ಈ ವಿಶೇಷ ಹಾಡಿನಲ್ಲಿ ನಿವೇದಿತಾ ಗೌಡ ಗ್ಲಾಮರಸ್ ಲುಕ್&zwnj;ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಫ್ರೀ ಹೇರ್&zwnj;ಸ್ಟೈಲ್, ಆಕರ್ಷಕ ಬ್ಲೌಸ್ ಹಾಗೂ ಮುದ್ದಾದ ನಗುವಿನೊಂದಿಗೆ ಪೋಸ್ಟರ್&zwnj;ನಲ್ಲಿ ಕಾಣಿಸಿಕೊಂಡಿರುವ ನಿವೇದಿತಾ, ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬಿಗ್&zwnj;ಬಾಸ್ ಮೂಲಕ ಕನ್ನಡಿಗರಿಗೆ ಪರಿಚಿತರಾದ ನಿವೇದಿತಾ ಗೌಡ, ಇದೀಗ ಸಿನಿಮಾದ ಸ್ಪೆಷಲ್ ಸಾಂಗ್ ಮೂಲಕ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡು ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;p&gt;&lt;strong&gt;&lsquo;ಬೇಲ್&rsquo;ನಲ್ಲಿ ಖಡಕ್ ಪೊಲೀಸ್ ಆಗಿ ಶಿವಣ್ಣ&lt;/strong&gt;&lt;/p&gt;&lt;p&gt;ಇನ್ನು &lsquo;ಬೇಲ್&rsquo; ಸಿನಿಮಾದಲ್ಲಿ ಶಿವರಾಜ್&zwnj;ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಲುಕ್ ಹಾಗೂ ಗಂಭೀರ ಅಭಿನಯದ ಮೂಲಕ ಶಿವಣ್ಣ ಈಗಾಗಲೇ ಗಮನ ಸೆಳೆದಿದ್ದಾರೆ. ಸಿನಿಮಾದಲ್ಲಿ ಸಾಯಿಕುಮಾರ್, ಜಯರಾಮ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದು, ಇವರ ಪಾತ್ರಗಳ ಝಲಕ್ ಈಗಾಗಲೇ ಬಿಡುಗಡೆಯಾಗಿರುವ ಟೀಸರ್&zwnj;ನಲ್ಲಿ ಕಾಣಿಸಿಕೊಂಡಿದೆ. ಗಂಭೀರ ಕಥಾಹಂದರದ ಜೊತೆಗೆ ಕಾಮಿಡಿ ಹಾಗೂ ಮನರಂಜನೆಯ ಅಂಶಗಳೂ ಸಿನಿಮಾದಲ್ಲಿವೆ ಎನ್ನುವುದು ಟೀಸರ್&zwnj;ನಿಂದ ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ನಿವೃತ್ತ ಪೊಲೀಸ್ ಅಧಿಕಾರಿಗಳ ಸುತ್ತ ಹೆಣೆದ ಕಥೆ&lt;/strong&gt;&lt;/p&gt;&lt;p&gt;&lsquo;ಬೇಲ್&rsquo; ಸಿನಿಮಾದ ಕಥೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸುತ್ತ ಸಾಗುತ್ತದೆ ಎನ್ನಲಾಗಿದೆ. ಹೀಗಾಗಿ ಚಿತ್ರದಲ್ಲಿ ಪೊಲೀಸ್ ವ್ಯವಸ್ಥೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿದ ಹಲವು ಕುತೂಹಲಕಾರಿ ವಿಚಾರಗಳು ಇರಲಿವೆ ಎಂಬ ನಿರೀಕ್ಷೆ ಇದೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್&zwnj;ನಲ್ಲಿ ಅವರ ಪಾತ್ರದ ಝಲಕ್ ಕೂಡ ಗಮನ ಸೆಳೆದಿದ್ದು, &lsquo;ಗೊತ್ತಾಗಲ್ವೇನ್ರೀ ಮೀಡಿಯಾ&rsquo; ಎಂಬ ಡೈಲಾಗ್ ಕೂಡ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಎರಡು ಟೀಸರ್&zwnj;ಗಳಿಂದ ಹೆಚ್ಚಿದ ನಿರೀಕ್ಷೆ&lt;/strong&gt;&lt;/h2&gt;&lt;p&gt;&lsquo;ಬೇಲ್&rsquo; ಸಿನಿಮಾದ ಮೊದಲ ಟೀಸರ್ ಮುಖ್ಯವಾಗಿ ಶಿವರಾಜ್&zwnj;ಕುಮಾರ್ ಅವರ ಪಾತ್ರವನ್ನು ಪರಿಚಯಿಸಿತ್ತು. ಬಳಿಕ ಬಿಡುಗಡೆಯಾದ ಎರಡನೇ ಟೀಸರ್&zwnj;ನಲ್ಲಿ ಸಿನಿಮಾದ ಇತರ ಪ್ರಮುಖ ಪಾತ್ರಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ವಿಶೇಷವಾಗಿ ಸಾಯಿಕುಮಾರ್ ಹಾಗೂ ಜಯರಾಮ್ ಅವರ ಪಾತ್ರಗಳ ಖದರ್ ಹೇಗಿರಲಿದೆ ಎಂಬುದರ ಝಲಕ್ ಎರಡನೇ ಟೀಸರ್&zwnj;ನಲ್ಲಿ ಸಿಕ್ಕಿದೆ.&lt;/p&gt;&lt;p&gt;ಸುಮಾರು 1 ನಿಮಿಷ 36 ಸೆಕೆಂಡ್&zwnj;ಗಳ ಈ ಟೀಸರ್ ಸಿನಿಮಾದ ಪ್ರಮುಖ ಪಾತ್ರಗಳ ಪರಿಚಯ ಮಾಡಿಕೊಡುವ ಜೊತೆಗೆ ಚಿತ್ರದ ಮೇಲಿನ ನಿರೀಕ್ಷೆಯನ್ನೂ ಹೆಚ್ಚಿಸಿದೆ. ಇದೀಗ ಶಿವಣ್ಣ ಜೊತೆ ನಿವೇದಿತಾ ಗೌಡ ಕಾಣಿಸಿಕೊಳ್ಳಲಿರುವ ಸ್ಪೆಷಲ್ ಸಾಂಗ್ ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿದ್ದು, ಈ ಹಾಡು &lsquo;ಬೇಲ್&rsquo; ಸಿನಿಮಾದ ಹೈಪ್&zwnj;ಗೆ ಮತ್ತಷ್ಟು ಬೂಸ್ಟ್ ನೀಡುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/bigg-boss-fame-niveditha-gowda-to-dance-with-shivarajkumar-in-bail-movie-special-song-gvd/articleshow-21qo02o"/>
        </item>
        <item>
            <title><![CDATA[ಅ.1ರಿಂದ ಮಂಗಳೂರು ರೈಲ್ವೆ ಪ್ರದೇಶ ಬದಲಾವಣೆ; ಪಾಲಕ್ಕಾಡ್-ಮೈಸೂರು ಸಭೆಯಲ್ಲೇನಾಯ್ತು?]]></title>
            <link>https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</link>
            <guid isPermaLink="true">https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv</guid>
            <pubDate>Sat, 12 Sep 2026 08:45:02 +0530</pubDate>
            <description><![CDATA[ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕುರಿತು ಎರಡೂ ವಿಭಾಗಗಳ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಅಕ್ಟೋಬರ್ 1 ರಿಂದ ಈ ಬದಲಾವಣೆ ಜಾರಿಯಾಗಲಿದ್ದು, ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಸುಗಮ ವರ್ಗಾವಣೆಗೆ ಸಿದ್ಧತೆ ನಡೆಸಲಾಗಿದೆ. ಸಿಬ್ಬಂದಿಗೆ ತಮ್ಮ ಆಯ್ಕೆಯ ವಿಭಾಗದಲ್ಲಿ ಮುಂದುವರಿಯುವ ಅವಕಾಶ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29sk74pjxfjy7wqmr9ktd22,imgname-palakkad-mysuru-1789182712982.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಹಿನ್ನೆಲೆಯಲ್ಲಿ ಎರಡೂ ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ಡಿಆರ್&zwnj;ಎಂ) ಹಾಗೂ ಹಿರಿಯ ಅಧಿಕಾರಿಗಳ ಸಮನ್ವಯ ಸಭೆ ಶುಕ್ರವಾರ ಮಂಗಳೂರಿನಲ್ಲಿ ನಡೆಯಿತು.&lt;/p&gt;&lt;p&gt;ಮಂಗಳೂರು ವ್ಯಾಪ್ತಿಯ ಆಡಳಿತಾತ್ಮಕ ಬದಲಾವಣೆಗೆ ಅಗತ್ಯವಿರುವ ಸಿದ್ಧತೆಗಳು ಹಾಗೂ ಸುಗಮ ವರ್ಗಾವಣೆಯ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಸಭೆ ಸೌಹಾರ್ದಯುತ ಹಾಗೂ ರಚನಾತ್ಮಕ ವಾತಾವರಣದಲ್ಲಿ ನಡೆದಿದ್ದು, ವ್ಯಾಪ್ತಿ ಬದಲಾವಣೆಯಿಂದ ರೈಲು ಸಂಚಾರ ಮತ್ತು ಪ್ರಯಾಣಿಕರ ಸೇವೆಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಎರಡೂ ವಿಭಾಗಗಳು ಒಮ್ಮತ ವ್ಯಕ್ತಪಡಿಸಿದವು.&lt;/p&gt;&lt;h2&gt;&lt;strong&gt;ರೈಲು ಸೇವೆಗಳು ಹಾಗೂ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಅಕ್ಟೋಬರ್&zwnj; 1 ರಿಂದ ಹೊಸ ರೈಲ್ವೆ ವ್ಯಾಪ್ತಿ ಜಾರಿಗೆ ಬರಲಿದ್ದು, ಅಂದಿನಿಂದಲೂ ರೈಲು ಸೇವೆಗಳು ಹಾಗೂ ಕಾರ್ಯಾಚರಣೆಗಳು ಸಹಜವಾಗಿ ಮುಂದುವರಿಯುವಂತೆ ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಲು ನಿರ್ಧರಿಸಲಾಯಿತು.&lt;/p&gt;&lt;p&gt;ಕಾರ್ಯಾಚರಣೆಯ ಸಮನ್ವಯ, ಆಸ್ತಿಗಳು, ದಾಖಲೆಗಳು, ನಿಯಂತ್ರಣ ವ್ಯವಸ್ಥೆ, ಸಿಬ್ಬಂದಿ ಸೇರಿದಂತೆ ವ್ಯಾಪ್ತಿ ಬದಲಾವಣೆಯಿಂದ ಎದುರಾಗುವ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಿದರು.&lt;/p&gt;&lt;h3&gt;&lt;strong&gt;ಸಿಬ್ಬಂದಿಗೆ ಆಯ್ಕೆ ಅವಕಾಶ:&lt;/strong&gt;&lt;/h3&gt;&lt;p&gt;ಮಂಗಳೂರು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ದಕ್ಷಿಣ ರೈಲ್ವೆಯಲ್ಲೇ ಮುಂದುವರಿಯಲು ಅಥವಾ ನೈಋತ್ಯ ರೈಲ್ವೆಗೆ ಸೇರ್ಪಡೆಯಾಗಲು ನಿಯಮಾನುಸಾರ ಆಯ್ಕೆ ನೀಡಲಾಗುವುದು ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು. ರೈಲ್ವೆ ಮಂಡಳಿ ನಿರ್ದೇಶನದಂತೆ ಗಜೆಟೆಡ್ ಅಲ್ಲದ ಸಿಬ್ಬಂದಿಯನ್ನು &lsquo;ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ&rsquo; ವರ್ಗಾಯಿಸುವ ವ್ಯವಸ್ಥೆ ಇದ್ದರೂ, ದಕ್ಷಿಣ ರೈಲ್ವೆಯಲ್ಲಿ ಮುಂದುವರಿಯುವ ಅಥವಾ ನೈಋತ್ಯ ರೈಲ್ವೆಗೆ ಸೇರುವ ಆಯ್ಕೆಯನ್ನು ಸಿಬ್ಬಂದಿಗೆ ನೀಡಲಾಗುತ್ತದೆ. ಇತರ ವರ್ಗಗಳ ಸಿಬ್ಬಂದಿಗೆ ಅನ್ವಯವಾಗುವ ನಿಯಮಾನುಸಾರ ಪ್ರಕ್ರಿಯೆ ಮುಂದುವರಿಯಲಿದೆ.&lt;/p&gt;&lt;p&gt;ಪಾಲಕ್ಕಾಡ್ ಹಾಗೂ ಮೈಸೂರು ವಿಭಾಗಗಳ ನಡುವಿನ ನಿರಂತರ ಸಮನ್ವಯದ ಮೂಲಕ ವ್ಯಾಪ್ತಿ ಬದಲಾವಣೆಯನ್ನು ಸುಗಮವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಎರಡೂ ವಿಭಾಗಗಳ ಅಧಿಕಾರಿಗಳು ವ್ಯಕ್ತಪಡಿಸಿದರು. ಪ್ರಯಾಣಿಕರ ಸೇವೆ ಹಾಗೂ ರೈಲು ಕಾರ್ಯಾಚರಣೆಯ ನಿರಂತರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಯಿತು.&lt;/p&gt;&lt;p&gt;ರೈಲ್ವೆ ಮಂಡಳಿಯ ಅಧಿಸೂಚನೆಯಂತೆ 2026ರ ಅಕ್ಟೋಬರ್ 1ರಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಬದಲಾವಣೆ ಅಧಿಕೃತವಾಗಿ ಜಾರಿಗೆ ಬರಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/mangaluru-railway-zone-reorganization-from-oct-1-coordination-meeting-between-palakkad-and-mysuru-divisions-mrq/articleshow-l7msrmv"/>
        </item>
        <item>
            <title><![CDATA[Ganesh Chaturthi: ಗಣೇಶನ ಪೂಜೆಯಲ್ಲಿ ತುಳಸಿ ಯಾಕೆ ಬಳಸಲ್ಲ? ಇದರ ಹಿಂದಿದೆ ಶಾಪದ ಕಥೆ!]]></title>
            <link>https://kannada.asianetnews.com/gallery/festivals/ganesh-chaturthi-why-is-tulsi-not-used-in-the-worship-of-lord-ganesha-there-is-a-story-of-a-curse-behind-this-mrq-16zpd06</link>
            <guid isPermaLink="true">https://kannada.asianetnews.com/gallery/festivals/ganesh-chaturthi-why-is-tulsi-not-used-in-the-worship-of-lord-ganesha-there-is-a-story-of-a-curse-behind-this-mrq-16zpd06</guid>
            <pubDate>Sat, 12 Sep 2026 08:33:20 +0530</pubDate>
            <description><![CDATA[ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ, ವಿಷ್ಣುವಿನ ಪೂಜೆಯಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಆದರೆ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವ ಪದ್ಧತಿ ಇಲ್ಲ. ಇದರ ಹಿಂದೆ ಒಂದು ಕಥೆಯಿದೆ. ಆ ಪೌರಾಣಿಕ ಕಥೆಯು ತುಳಸಿ ದೇವಿ ಮತ್ತು ಗಣೇಶನಿಗೆ ಸಂಬಂಧಿಸಿದ್ದು.]]></description>
            <media:content url="https://static.asianetnews.com/images/w-1280,h-720,format-jpg,imgid-01m27qxmxbx4awp11qa8gp8jbe,imgname-seed-ganesha-idols--1--1789113848747.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ, ವಿಷ್ಣುವಿನ ಪೂಜೆಯಲ್ಲಿ ತುಳಸಿಗೆ ವಿಶೇಷ ಸ್ಥಾನವಿದೆ. ಆದರೆ, ಗಣೇಶನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವ ಪದ್ಧತಿ ಇಲ್ಲ. ಇದರ ಹಿಂದೆ ಒಂದು ಕಥೆಯಿದೆ. ಆ ಪೌರಾಣಿಕ ಕಥೆಯು ತುಳಸಿ ದೇವಿ ಮತ್ತು ಗಣೇಶನಿಗೆ ಸಂಬಂಧಿಸಿದ್ದು.&lt;/p&gt;&lt;img&gt;&lt;p&gt;ಗಣೇಶನಿಗೆ ಪ್ರಿಯವಾದ ಗಣೇಶ ಚತುರ್ಥಿ ಹಬ್ಬವು 2026ರ ಸೆಪ್ಟೆಂಬರ್ 14ರಂದು ಆರಂಭವಾಗಲಿದೆ. ಈ ದಿನ, ಭಕ್ತರು ಹಲವು ಬಗೆಯ ಪೂಜಾ ವಿಧಿವಿಧಾನಗಳ ಮೂಲಕ ಗಣಪತಿಯನ್ನು ಆರಾಧಿಸುತ್ತಾರೆ. ಗಣೇಶನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುತ್ತಾರೆ. ಗಣಪತಿ ಪೂಜೆಯಲ್ಲಿ ಗರಿಕೆ ಹುಲ್ಲು ಮತ್ತು ಮೋದಕಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ.&lt;/p&gt;&lt;img&gt;&lt;p&gt;ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ಗಣೇಶನು ಗಂಗಾ ನದಿಯ ದಡದಲ್ಲಿ ತೀವ್ರ ಧ್ಯಾನದಲ್ಲಿ ಮುಳುಗಿದ್ದನು. ಆಗ ಆ ದಾರಿಯಲ್ಲಿ ಬಂದ ತುಳಸಿ ದೇವಿಯು, ಧ್ಯಾನದಲ್ಲಿದ್ದ ಗಣೇಶನ ಸೌಂದರ್ಯಕ್ಕೆ ಮನಸೋತಳು. ಆತನನ್ನು ಮದುವೆಯಾಗಲು ಆಸೆಪಟ್ಟಳು.&lt;/p&gt;&lt;p&gt;ತಕ್ಷಣವೇ, ತುಳಸಿ ತನ್ನ ವಿವಾಹದ ಪ್ರಸ್ತಾಪವನ್ನು ಗಣೇಶನ ಮುಂದಿಟ್ಟಳು. ಆದರೆ, ಗಣೇಶನು ಆ ಪ್ರಸ್ತಾಪವನ್ನು ನಿರಾಕರಿಸಿದನು. ತಾನು ಬ್ರಹ್ಮಚಾರಿ ಎಂದೂ, ಮದುವೆಯಾಗುವ ಯೋಚನೆ ಇಲ್ಲವೆಂದೂ ವಿವರಿಸಿದನು. ಗಣೇಶನ ಈ ನಿರಾಕರಣೆಯಿಂದ ತುಳಸಿ ದೇವಿಗೆ ಕೋಪ ಬಂತು. ಇಲ್ಲಿಂದಲೇ ಶಾಪದ ಕಥೆ ಶುರುವಾಗುತ್ತದೆ.&lt;/p&gt;&lt;img&gt;&lt;p&gt;ತನ್ನ ಮದುವೆಯ ಆಸೆಯನ್ನು ನಿರಾಕರಿಸಿದ್ದರಿಂದ ಕೋಪಗೊಂಡ ತುಳಸಿ ದೇವಿಯು, 'ನಿನಗೆ ಖಂಡಿತವಾಗಿಯೂ ಮದುವೆಯಾಗುತ್ತದೆ' ಎಂದು ಗಣೇಶನಿಗೆ ಶಾಪ ನೀಡಿದಳು. ಇದೇ ಕಾರಣಕ್ಕೆ, ನಂತರದ ದಿನಗಳಲ್ಲಿ ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿಯರೊಂದಿಗೆ ವಿವಾಹವಾದట్లు ಉಲ್ಲೇಖಿಸಲಾಗಿದೆ. ತುಳಸಿಯ ಶಾಪದಿಂದ ಕೋಪಗೊಂಡ ಗಣೇಶನು, 'ನೀನು ಒಬ್ಬ ಅಸುರನನ್ನು ಮದುವೆಯಾಗುವೆ' ಎಂದು ತುಳಸಿಗೆ ಪ್ರತಿಯಾಗಿ ಶಾಪ ಕೊಟ್ಟನು.&lt;/p&gt;&lt;img&gt;&lt;p&gt;ಗಣೇಶನ ಶಾಪವನ್ನು ಕೇಳಿದ ನಂತರ, ತುಳಸಿಯು ತನ್ನ ತಪ್ಪನ್ನು ಅರಿತುಕೊಂಡು ಆತನಲ್ಲಿ ಕ್ಷಮೆ ಯಾಚಿಸಿದಳು. ಆಗ ಮನ ಕರಗಿದ ಗಣೇಶನು, 'ನೀನು ವಿಷ್ಣು ದೇವರ ಪ್ರೀತಿಯನ್ನು ಪಡೆಯುವೆ. ಜಗತ್ತಿನಾದ್ಯಂತ ಪವಿತ್ರ ಸಸ್ಯವಾಗಿ ಪೂಜಿಸಲ್ಪಡುವೆ' ಎಂದು ವರವನ್ನು ನೀಡಿದನು. ಇದೇ ಕಾರಣದಿಂದ, ವಿಷ್ಣು ದೇವರು ಮತ್ತು ಕೃಷ್ಣನ ಪೂಜೆಗಳಲ್ಲಿ ತುಳಸಿಗೆ ಬಹಳ ಮುಖ್ಯವಾದ ಸ್ಥಾನವನ್ನು ನೀಡಲಾಗುತ್ತದೆ. ಇಂದಿಗೂ ಆ ಪದ್ಧತಿ ಮುಂದುವರಿದಿದೆ. ಆದರೆ, ಗಣೇಶನ ಪೂಜೆಯಲ್ಲಿ ತುಳಸಿಯನ್ನು ಬಳಸುವುದಿಲ್ಲ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಗಣೇಶನಿಗೆ ತುಳಸಿಯನ್ನು ಅರ್ಪಿಸುವ ಪದ್ಧತಿ ಇಲ್ಲ. ಬ್ರಹ್ಮವೈವರ್ತ ಪುರಾಣದ ಗಣಪತಿ ಖಂಡದಲ್ಲಿ, ತುಳಸಿ ಮತ್ತು ಗಣೇಶನ ನಡುವಿನ ಶಾಪದ ಬಗ್ಗೆ ಉಲ್ಲೇಖವಿದೆ. ಆದಾಗ್ಯೂ, ಕೆಲವು ಸಂಪ್ರದಾಯಗಳಲ್ಲಿ ಗಣೇಶನ ನಿರ್ದಿಷ್ಟ ರೂಪಗಳಿಗೆ ತುಳಸಿಯನ್ನು ಬಳಸಬಹುದು ಎಂದೂ ಹೇಳಲಾಗುತ್ತದೆ. ಆದ್ದರಿಂದ, ಸಾಮಾನ್ಯ ಗಣಪತಿ ಪೂಜೆಯಲ್ಲಿ ತುಳಸಿ ಎಲೆಗಳನ್ನು ಅರ್ಪಿಸುವುದನ್ನು ತಪ್ಪಿಸುವುದೇ ವಾಡಿಕೆ. ಗಣೇಶನ ಪೂಜೆಯಲ್ಲಿ ಗರಿಕೆ ಹುಲ್ಲಿಗೆ (Durva grass) ಹೆಚ್ಚಿನ ಮಹತ್ವ ನೀಡಲಾಗುತ್ತದೆ.&lt;/p&gt;&lt;img&gt;&lt;p&gt;ಧಾರ್ಮಿಕ ನಂಬಿಕೆಗಳ ಪ್ರಕಾರ, ಪೂಜೆಯ ಸಮಯದಲ್ಲಿ ತಿಳಿಯದೆ ಮಾಡುವ ತಪ್ಪುಗಳ ಬಗ್ಗೆ ಭಯಪಡಬೇಕಾಗಿಲ್ಲ. ಗಣೇಶ ಪೂಜೆಯ ವೇಳೆ ತಪ್ಪಾಗಿ ತುಳಸಿಯನ್ನು ಅರ್ಪಿಸಿದರೆ, ಅದನ್ನು ಗೌರವಯುತವಾಗಿ ತೆಗೆದು, ಗಣೇಶನಲ್ಲಿ ಕ್ಷಮೆ ಕೇಳಿದರೆ ಸಾಕು. ಅರಿಯದೆ ಮಾಡಿದ ತಪ್ಪಿಗೆ ಪಾಪವಿಲ್ಲ. ಆದ್ದರಿಂದ, ಇದರ ಬಗ್ಗೆ ಭಯಪಡದೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣಪತಿಯನ್ನು ಪೂಜಿಸುವುದೇ ಶ್ರೇಷ್ಠ.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/ganesh-chaturthi-why-is-tulsi-not-used-in-the-worship-of-lord-ganesha-there-is-a-story-of-a-curse-behind-this-mrq-16zpd06"/>
        </item>
        <item>
            <title><![CDATA[ನಾನಿ ಸಿನಿಮಾ ಟ್ರೇಲರ್‌ಗೇ ಬ್ರೇಕ್: 'ದಿ ಪ್ಯಾರಡೈಸ್' ಬಗ್ಗೆ ನ್ಯಾಚುರಲ್ ಸ್ಟಾರ್ ಕೊಟ್ಟ ಉತ್ತರವಿದು?]]></title>
            <link>https://kannada.asianetnews.com/entertainment/telugu-actor-natural-star-nani-s-the-paradise-takes-a-different-route-no-trailer-before-release-gvd/articleshow-vn86qhc</link>
            <guid isPermaLink="true">https://kannada.asianetnews.com/entertainment/telugu-actor-natural-star-nani-s-the-paradise-takes-a-different-route-no-trailer-before-release-gvd/articleshow-vn86qhc</guid>
            <pubDate>Sat, 12 Sep 2026 08:30:16 +0530</pubDate>
            <description><![CDATA[ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ 'ದಿ ಪ್ಯಾರಡೈಸ್' ಸಿನಿಮಾ ಸೆಪ್ಟೆಂಬರ್ 24 ರಂದು ಬಿಡುಗಡೆಯಾಗಲಿದೆ. ಆದರೆ ಈ ಚಿತ್ರಕ್ಕೆ ಯಾವುದೇ ಟ್ರೇಲರ್‌ ಇರುವುದಿಲ್ಲ ಎಂದು ನಾನಿ ಸ್ಪಷ್ಟಪಡಿಸಿದ್ದಾರೆ. ಟ್ರೇಲರ್‌ ಯಾಕೆ ರಿಲೀಸ್ ಮಾಡುತ್ತಿಲ್ಲ ಎಂಬುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28n3gsgpdrv8x2gcw55wc25,imgname-v-1789144449840.png" type="image/jpeg" height="390" width="690"/>
            <content:encoded><![CDATA[&lt;p&gt;ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ದಿ ಪ್ಯಾರಡೈಸ್' ಬಿಡುಗಡೆಗೆ ಸಿದ್ಧವಾಗಿದೆ. ಶ್ರೀಕಾಂತ್ ಓದೆಲಾ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 24 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ನಾನಿ ಅಭಿನಯದ ಮತ್ತೊಂದು ವಿಭಿನ್ನ ಚಿತ್ರ ಇದಾಗಿದ್ದು, ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇದೀಗ ನಾನಿ ಅವರೇ ಚಿತ್ರದ ಕುರಿತು ಒಂದು ಪ್ರಮುಖ ವಿಷಯವನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&lsquo;ದಿ ಪ್ಯಾರಡೈಸ್&rsquo; ಚಿತ್ರಕ್ಕೆ ಟ್ರೇಲರ್&zwnj; ಇರುವುದಿಲ್ಲ ಎಂಬ ವದಂತಿಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದವು. ಆದರೆ, ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿರಲಿಲ್ಲ. ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ನಾನಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. &lsquo;ದಿ ಪ್ಯಾರಡೈಸ್&rsquo; ಚಿತ್ರಕ್ಕೆ ಟ್ರೇಲರ್&zwnj; ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. ಟ್ರೇಲರ್&zwnj; ಬಿಡುಗಡೆ ಮಾಡದಿರಲು ನಿಜವಾದ ಕಾರಣವನ್ನೂ ನಾನಿ ವಿವರಿಸಿದ್ದಾರೆ.&lt;/p&gt;&lt;p&gt;ಸಿನಿಮಾದ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿರುವುದರಿಂದ ಟ್ರೇಲರ್&zwnj; ಅಗತ್ಯವಿಲ್ಲ ಎಂದು ನಾವು ಭಾವಿಸಿಲ್ಲ ಎಂದು ನಾನಿ ತಿಳಿಸಿದ್ದಾರೆ. ಬದಲಿಗೆ, ಟ್ರೇಲರ್&zwnj; ಬಿಡುಗಡೆ ಮಾಡಲು ಸದ್ಯಕ್ಕೆ ಸಮಯದ ಅಭಾವವಿದೆ ಎಂದು ಅವರು ಹೇಳಿದರು. ಚಿತ್ರದ ಗುಣಮಟ್ಟಕ್ಕಾಗಿ ನಿರ್ದೇಶಕ ಶ್ರೀಕಾಂತ್ ಓದೆಲಾ, ಸಂಗೀತ ನಿರ್ದೇಶಕ ಅನಿರುಧ್ ಮತ್ತು ಇಡೀ ತಂಡವು ಬಿಡುವಿಲ್ಲದೆ ಕೆಲಸ ಮಾಡುತ್ತಿದೆ ಎಂದು ನಾನಿ ಬಹಿರಂಗಪಡಿಸಿದರು. ಈ ಪರಿಸ್ಥಿತಿಯಲ್ಲಿ ಟ್ರೇಲರ್&zwnj;&zwnj;ಗಾಗಿ ಸಮಯ ಮೀಸಲಿಡುವುದು ಕಷ್ಟವಾಗಿದೆ ಎಂದು ಅವರು ವಿವರಿಸಿದರು.&lt;/p&gt;&lt;p&gt;&lsquo;ದಿ ಪ್ಯಾರಡೈಸ್&rsquo; ಚಿತ್ರಕ್ಕೆ ಟ್ರೇಲರ್&zwnj; ಬಿಡುಗಡೆ ಮಾಡಿದರೆ, ಅದು ಸಾಮಾನ್ಯ ಎನಿಸಬಾರದು, ಬದಲಿಗೆ ಅದ್ಭುತವಾಗಿರಬೇಕು ಎಂದು ನಾನಿ ಅಭಿಪ್ರಾಯಪಟ್ಟರು. ಅಂತಹ ಟ್ರೇಲರ್&zwnj; ಸಿದ್ಧಪಡಿಸಲು ಕನಿಷ್ಠ ನಾಲ್ಕು ದಿನಗಳ ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದರು. ಆ ನಾಲ್ಕು ದಿನಗಳನ್ನು ಟ್ರೇಲರ್&zwnj;&zwnj;ಗೆ ಮೀಸಲಿಟ್ಟರೆ, ಚಿತ್ರದ ಅಂತಿಮ ಹಂತದ ಕೆಲಸಗಳ ಮೇಲೆ ಪರಿಣಾಮ ಬೀರಬಹುದು ಎಂದು ಚಿತ್ರತಂಡ ಭಾವಿಸಿದೆ. ಇದೇ ಕಾರಣಕ್ಕೆ ಟ್ರೇಲರ್&zwnj; ಬಿಡುಗಡೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ನಾನಿ ತಿಳಿಸಿದರು.&lt;/p&gt;&lt;h2&gt;&lt;strong&gt;ಬಿಡುಗಡೆಗೂ ಮುನ್ನ ಹೆಚ್ಚಿದ ಕುತೂಹಲ&lt;/strong&gt;&lt;/h2&gt;&lt;p&gt;ಟ್ರೇಲರ್&zwnj; ಇಲ್ಲದೆಯೇ &lsquo;ದಿ ಪ್ಯಾರಡೈಸ್&rsquo; ಪ್ರೇಕ್ಷಕರ ಮುಂದೆ ಬರುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ, ದೊಡ್ಡ ಚಿತ್ರಗಳ ಕಥೆ, ಪಾತ್ರಗಳು ಮತ್ತು ಪ್ರಪಂಚವನ್ನು ಟ್ರೇಲರ್&zwnj; ಮೂಲಕ ಪ್ರೇಕ್ಷಕರಿಗೆ ಪರಿಚಯಿಸಲಾಗುತ್ತದೆ. ಆದರೆ ಈ ಚಿತ್ರತಂಡ ವಿಭಿನ್ನ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್ 24 ರಂದು ಸಿನಿಮಾ ನೇರವಾಗಿ ಥಿಯೇಟರ್&zwnj;ಗೆ ಬರಲಿದ್ದು, ಟ್ರೇಲರ್&zwnj; ಇಲ್ಲದೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ನಾನಿ ಮತ್ತು ಶ್ರೀಕಾಂತ್ ಓದೆಲಾ ಕಾಂಬಿನೇಷನ್ ಮೇಲಿನ ನಿರೀಕ್ಷೆಗಳು ಚಿತ್ರಕ್ಕೆ ಎಷ್ಟು ಸಹಾಯ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actor-natural-star-nani-s-the-paradise-takes-a-different-route-no-trailer-before-release-gvd/articleshow-vn86qhc"/>
        </item>
        <item>
            <title><![CDATA[ಅಕ್ರಮದ ದುಡ್ಡಲ್ಲಿ ಗೆಳತಿಗೆ ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ! ವಿಲ್ಲಾ ಖರೀದಿ?]]></title>
            <link>https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc</link>
            <guid isPermaLink="true">https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc</guid>
            <pubDate>Sat, 12 Sep 2026 08:09:10 +0530</pubDate>
            <description><![CDATA[ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ, ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್, ಅಕ್ರಮ ಹಣದಲ್ಲಿ ತನ್ನ ಗೆಳತಿಗೆ 26 ಲಕ್ಷ ಮೌಲ್ಯದ ಚಿನ್ನಾಭರಣ ಕೊಡಿಸಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಸಹೋದರನ ಹೆಸರಲ್ಲಿ ವಿಲಾಸಿ ವಿಲ್ಲಾ ಖರೀದಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m0q6g86q7p181q3694mf2hbp,imgname-ias-gyanendra-kumar--1--1787484971223.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು&lt;/strong&gt;: ಕೆಪಿಎಸ್&zwnj;ಸಿ ನೇಮಕಾತಿ ಅಕ್ರಮ ಪ್ರಕರಣದ ಆರೋಪಿಯಾಗಿರುವ ಐಎಎಸ್&zwnj; ಅಧಿಕಾರಿ ಜ್ಞಾನೇಂದ್ರ ಕುಮಾರ್&zwnj; ಅಕ್ರಮ ಹಣದಲ್ಲಿ ತನ್ನ ಗೆಳತಿಗೆ ಚಿನ್ನಾಭರಣ ಕೊಡಿಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.&lt;/p&gt;&lt;p&gt;ಜ್ಞಾನೇಂದ್ರ ಕುಮಾರ್&zwnj; ಬೆಂಗಳೂರಿನ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್&zwnj;ಗೆ ತನ್ನ ಗೆಳತಿ ಕರೆದೊಯ್ದು ಸುಮಾರು 26 ಲಕ್ಷ ರು. ಮೌಲ್ಯದ ಚಿನ್ನಾಭರಣ ಕೊಡಿಸಿದ್ದರು. ಇದಕ್ಕೆ ಬಸವರಾಜ್ ಎಂಬ ಹೆಸರಿನ ಅಕೌಂಟ್&zwnj;ನಿಂದ ಬಿಲ್&zwnj; ಪಾವತಿ ಮಾಡಲಾಗಿತ್ತು. ಬೀದರ್&zwnj;ನ ಲಕ್ಷ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಖಾತೆಯಿಂದ ಹಣ ಪಾವತಿ ಮಾಡಲಾಗಿತ್ತು. ಆಭರಣ ಖರೀದಿಸಿದ ಬಿಲ್ ಅನ್ನು ಸಿಐಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಿಐಡಿ ಅಧಿಕಾರಿಗಳು, ಜ್ಞಾನೇಂದ್ರ ಗೆಳತಿ ಜತೆ ಚಿನ್ನ ಖರೀದಿಸಿರುವ ಪೊಟೋಸಾಕ್ಷ್ಯ ಕಲೆ ಹಾಕುತ್ತಿದ್ದಾರೆ.&lt;/p&gt;&lt;h2&gt;&lt;strong&gt;ವಿಲಾಸಿ ವಿಲ್ಲಾ ಖರೀದಿ:&lt;/strong&gt;&lt;/h2&gt;&lt;p&gt;ಅಕ್ರಮ ಹಣದಲ್ಲಿ ಜ್ಞಾನೇಂದ್ರ ತನ್ನ ಸಹೋದರನ ಹೆಸರಲ್ಲಿ ಬೆಂಗಳೂರಿನಲ್ಲಿ ವಿಲ್ಲಾ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಜ್ಞಾನೇಂದ್ರ 2024ರ ಫೆಬ್ರವರಿಯಿಂದ 2026 ಮಾರ್ಚ್&zwnj;ವರೆಗೂ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದರು. ಈ ವೇಳೆ ಅಕ್ರಮ ದುಡ್ಡಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪ ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಐಡಿ ತನಿಖೆ ಮುಂದುವರಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kpsc-scam-ias-gyanendra-kumar-bought-gold-jewelry-for-his-female-friend-using-illicit-money-purchase-of-a-villa-mrq/articleshow-g8b99pc"/>
        </item>
        <item>
            <title><![CDATA[ದಾವಣಗೆರೆ ಹೊರವಲಯದ 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧಾರ: ಎಲ್ಲಿ?]]></title>
            <link>https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</link>
            <guid isPermaLink="true">https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb</guid>
            <pubDate>Sat, 12 Sep 2026 07:58:06 +0530</pubDate>
            <description><![CDATA[ದಾವಣಗೆರೆ ಹೊರವಲಯದ ಕರೂರಿನಲ್ಲಿ 200 ಎಕರೆ ಪ್ರದೇಶದಲ್ಲಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಆದ್ಯತೆ ನೀಡಿ ಹೊಸ ಲೇಔಟ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29f6q567r9c48n33gkcndk0,imgname-davanagere--1789171817638.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ: &lt;/strong&gt;ದಾವಣಗೆರೆ ಹೊರ ವಲಯದ ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಹೊಸ ಲೇಔಟ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸಭೆಯ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿ, ಕರೂರು ಪ್ರದೇಶದಲ್ಲಿ ಸುಮಾರು 200 ಎಕರೆ ಜಾಗವನ್ನು ಗುರುತಿಸಿದ್ದು, ಅಲ್ಲಿ ಹೊಸ ಲೇಔಟ್&zwnj; ನಿರ್ಮಿಸಲಾಗುವುದು ಎಂದರು.&lt;/p&gt;&lt;p&gt;ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಒತ್ತು ನೀಡುವ ಹಿನ್ನೆಲೆಯಲ್ಲಿ ಕರೂರು ಪ್ರದೇಶದ ಲೇಔಟ್ ಅಭಿವೃದ್ಧಿಪಡಿಸಲಾಗುವುದು. ಪ್ರಾಧಿಕಾರದಿಂದ ದಾವಣಗೆರೆ-ಹರಿಹರದಲ್ಲಿ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅವರು ತಿಳಿಸಿದರು.&lt;/p&gt;&lt;p&gt;ಇದಕ್ಕೂ ಮುನ್ನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ನಡೆದ ದೂಡಾ ಸಭೆಯಲ್ಲಿ ದಾವಣಗೆರೆ-ಹರಿಹರ ನಗರಗಳ ಸಮಗ್ರ ಅಭಿವೃದ್ಧಿ, ಮೂಲ ಸೌಕರ್ಯಗಳ ಸುಧಾರಣೆ ಹಾಗೂ ಸಾರ್ವಜನಿಕರ ಅಗತ್ಯತೆಗಳಿಗೆ ಅನುಗುಣವಾಗಿ ಕೈಗೊಳ್ಳಬೇಕಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಯಿತು.&lt;/p&gt;&lt;p&gt;ಜಿಲ್ಲಾ ಕೇಂದ್ರದ ವಿವಿಧ ಭಾಗಗಳ ಅಗತ್ಯತೆಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವುದು, ಕೈಗೊಂಡಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ಮತ್ತು ನಿಗದಿತ ಅವದಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳಿಂದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕ ಸಮರ್ಥ ಶಾಮನೂರು ಮಾಹಿತಿ ಪಡೆದರು.&lt;/p&gt;&lt;p&gt;ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವ ಮೂಲಕ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನದಲ್ಲಿ ಯಾವುದೇ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಂಡು, ಕಾಮಗಾರಿಗಳ ಗುಣಮಟ್ಟದ ಮೇಲೂ ವಿಶೇಷ ಗಮನ ಹರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಎಚ್.ಟಿ.ಶೇಖರ, ದೂಡಾ ಆಯುಕ್ತರಾದ ರೇಣುಕಾ, ಪಾಲಿಕೆ ಆಯುಕ್ತ ಡಾ.ಮಹಾಂತೇಶ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು.&lt;/p&gt;&lt;h2&gt;&lt;strong&gt;ಮತ್ತೆ ಶಾಸಕ ಹರೀಶ್&zwnj; ವಿರುದ್ಧ ಹರಿಹಾಯ್ದ ಸಚಿವ ಎಸ್ಸೆಸ್ಸೆಂ&lt;/strong&gt;&lt;/h2&gt;&lt;p&gt;ದಾವಣಗೆರೆ: ಅವನಿಗೆ ಕೆಲಸ ಇಲ್ಲ ಅಂದ್ರೆ, ನನಗೆ ಕೆಲಸ ಇಲ್ಲವಾ? ಫಸ್ಟ್ ಆಫ್ ಆಲ್ ರೈತರನ್ನು ದಿಕ್ಕು ತಪ್ಪಿಸದೇ, ಕರೆಕ್ಟ್ ಆಗಿ ಏನಿದೆ ಅಂತಾ ವಾಸ್ತವವನ್ನು ಹೇಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರೋಕ್ಷವಾಗಿ ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.&lt;/p&gt;&lt;p&gt;ನಗರದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಏನು ಪ್ರತಿಭಟನೆ ಮಾಡುತ್ತಾರೆ? ಕರೆಕ್ಟ್ ಆಗಿ ಏನಿದೆ ವಾಸ್ತವ ವಿಚಾರ ರೈತರಿಗೆ ತಿಳಿಸುವ ಕೆಲಸ ಮಾಡಲಿ ಎಂದರು.&lt;/p&gt;&lt;p&gt;ಭದ್ರಾ ಡ್ಯಾಂನ ಎಡ ಮತ್ತು ಬಲ ದಂಡೆ ಅಚ್ಚುಕಟ್ಟು ರೈತರು ಕುಳಿತು ಮಾತನಾಡಿಯೆಂದು ಭದ್ರಾ ಕಾಡಾ ಸಮಿತಿ ಸಭೆಯಲ್ಲಿ ಹೇಳಿದ್ದೇನೆ. ಆ ಸಭೆಯಲ್ಲಿ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಸೇರಿದಂತೆ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಅಂದಿನ ಸಭೆಯಲ್ಲಿ ಏನೂ ಮಾತನಾಡಲಿಲ್ಲ ಏಕೆ ಎಂದು ಅವರು ಪ್ರಶ್ನಿಸಿದರು. ಎಲ್ಲಾ ಕುಂದು ಕೊರತೆ ಪ್ರಾಕ್ಟಿಕಲ್ ಆಗಿ ಸಾಲ್ವ್ ಮಾಡಿ ಹೋಗಬೇಕು. ಅದನ್ನು ಬಿಟ್ಟು ಮಂತ್ರಿಯನ್ನು ಕೇಳಿ ಅಂತಾ ಹೇಳುವುದು ಶಾಸಕನ ಕೆಲಸವಲ್ಲ. ಎಲ್ಲರೂ ಸೇರಿ, ಜೊತೆಗೆ ಕುಳಿತು ಮಾತನಾಡಿ, ಕೆಲಸ ಮಾಡಬೇಕು. ಎಲ್ಲರಿಗೂ ಬಾಯಿ ಇದೆ. ನಾಲಿಗೆ ಇದೆಯಲ್ಲ. ಆದರೆ, ನಾಲಿಗೆಗೆ ಎಲುಬು ಇಲ್ಲ ಎಂದು ಅವರು ಹರಿಹಾಯ್ದರು.&lt;/p&gt;&lt;p&gt;ಗಣೇಶ ಹಬ್ಬದಲ್ಲಿ ಡಿಜೆ ಅನುಮತಿ ನೀಡುವ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ಹೇಳುತ್ತಿದ್ದಾರೆ. ಡಿಜೆ ಬಗ್ಗೆ ಪೊಲೀಸ್ ಇಲಾಖೆಯವರೇ ಒಂದು ಹೇಳುತ್ತಾರೆ. ಜಿಲ್ಲಾಡಳಿತವೇ ಒಂದು ರೀತಿ ಹೇಳುತ್ತಿದೆ. ನಾಳೆ ಅಥವಾ ನಾಡಿದ್ದು ಈ ಬಗ್ಗೆ ಸಭೆ ಮಾಡಿ, ಕೂಲಂಕುಷವಾಗಿ ಪರಿಶೀಲಿಸುತ್ತೇವೆ ಎಂದು ಎಸ್ಸೆಸ್ ಮಲ್ಲಿಕಾರ್ಜುನ ತಿಳಿಸಿದರು.&lt;/p&gt;&lt;p&gt;ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮುಖಂಡರಾದ ಬೂದಾಳ್ ಬಾಬು, ಎ.ಬಿ.ರಹೀಂ ಸಾಬ್&zwnj;, ಎ.ನಾಗರಾಜ ಇತರರು ಇದ್ದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/davanagere-a-new-layout-on-a-200-acre-area-on-karur-outskirts-minister-s-s-mallikarjun-mrq/articleshow-yvu1nrb"/>
        </item>
        <item>
            <title><![CDATA[ದೇವನಹಳ್ಳಿ ಬಳಿಯ ಕೃಷ್ಣದೇವರಾಯ ಶಿಕ್ಷಣ ಟ್ರಸ್ಟ್‌ನ 31 ಎಕ್ರೆ ವಶಕ್ಕೆ ಪಡೆಯಿರಿ: ಹೈಕೋರ್ಟ್]]></title>
            <link>https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056</link>
            <guid isPermaLink="true">https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056</guid>
            <pubDate>Sat, 12 Sep 2026 07:54:57 +0530</pubDate>
            <description><![CDATA[ದೇವನಹಳ್ಳಿ ಬಳಿಯ ನೆಲ್ಲುಕುಂಟೆ ಗ್ರಾಮದಲ್ಲಿರುವ ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್ ಸುಪರ್ದಿಯಲ್ಲಿದ್ದ 31 ಎಕರೆ 36 ಗುಂಟೆ 'ಬಿ' ಖರಾಬು ಜಮೀನನ್ನು ವಶಕ್ಕೆ ಪಡೆಯುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ. ಈ ಸರ್ಕಾರಿ ಜಮೀನಿನ ಮೇಲೆ ಟ್ರಸ್ಟ್‌ಗೆ ಯಾವುದೇ ಮಾಲೀಕತ್ವದ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಭೂಮಿಯನ್ನು ಮರುಸರ್ವೇ ಮಾಡಿ ರಕ್ಷಿಸಲು ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29ps8yew4pxvhdkfkb1cngx,imgname-bengaluru--2--1789179765710.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ದೇವನಹಳ್ಳಿಯ ಸಮೀಪದ ನೆಲ್ಲುಕುಂಟೆ ಗ್ರಾಮದಲ್ಲಿ &lsquo;ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&rsquo; ಸುಪರ್ದಿಯಲ್ಲಿರುವ ಬಹುಕೋಟಿ ಮೌಲ್ಯದ 31 ಎಕರೆ 36 ಗುಂಟೆ ಬಿ ಖರಾಬು ಜಮೀನನ್ನು ವಶಕ್ಕೆ ಪಡೆಯಬೇಕೆಂದು ಸರ್ಕಾರಕ್ಕೆ ಹೈಕೋರ್ಟ್&zwnj; ನಿರ್ದೇಶಿಸಿದೆ.&lt;/p&gt;&lt;p&gt;ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್&zwnj;.ಶಾಂತಿಭೂಷಣ್&zwnj; ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.&lt;/p&gt;&lt;p&gt;ನೆಲ್ಲುಕುಂಟೆ ಗ್ರಾಮದ ಸರ್ವೇ ನಂ 45ರಲ್ಲಿ 133 ಎಕರೆ ಮತ್ತು 33 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಖರೀದಿಸಿರುವುದಾಗಿ ಶ್ರೀಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&zwnj; ಕ್ಲೇಮು ಮಾಡುತ್ತಿದೆ. ಆದರೆ, ಸರ್ಕಾರಿ ವಕೀಲರು ಸರ್ವೇ ನಂ. 45ಕ್ಕೆ ಸಂಬಂಧಿಸಿದ ಆರ್&zwnj;ಟಿಸಿ ಪ್ರಕಾರ ಈ ಸರ್ವೇ ನಂಬರ್&zwnj;ನಲ್ಲಿ ಒಟ್ಟು 133 ಎಕರೆ 33 ಗುಂಟೆ ಇದೆ. ಅದರಲ್ಲಿ 31 ಎಕರೆ 36 ಗುಂಟೆಗಳಷ್ಟು ಭೂಮಿಯನ್ನು ನಿರ್ದಿಷ್ಟವಾಗಿ &lsquo;ಬಿ&rsquo; ಖರಾಬ್ ಎಂದು ವರ್ಗೀಕರಿಸಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ, ಮಾರಾಟ ಪತ್ರಗಳಲ್ಲಿ ನಮೂದಿಸಲಾದ ಸಂಪೂರ್ಣ ಜಮೀನನ್ನು ಮಾರಾಟಗಾರರು ಹಸ್ತಾಂತರಿಸಲು ಅರ್ಹವಾದ ಖಾಸಗಿ ಭೂಮಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂಬುದು ಈ ಕಂದಾಯ ದಾಖಲೆಯಿಂದ ಸ್ಪಷ್ಟವಾಗುತ್ತದೆ ಎಂದು ಪೀಠ ಹೇಳಿದೆ.&lt;/p&gt;&lt;h2&gt;&lt;strong&gt;ನ್ಯಾಯಾಲಯದ ಆದೇಶದಲ್ಲಿ ಏನಿದೆ?&lt;/strong&gt;&lt;/h2&gt;&lt;p&gt;ಅಲ್ಲದೆ, ಯಾವುದೇ ದೃಷ್ಟಿಕೋನದಿಂದ ನೋಡಿದರೂ ಟ್ರಸ್ಟ್&zwnj;ಗೆ ಭೂಮಿ ಮಾರಾಟ ಮಾಡಿರುವ ಖಾಸಗಿ ವ್ಯಕ್ತಿಗಳಿಗೆ ಕೇವಲ 101 ಎಕರೆ 37 ಗುಂಟೆಗಳಷ್ಟು ಭೂಮಿಯ ಮೇಲೆ ಮಾತ್ರ ಮಾಲೀಕತ್ವ ಮತ್ತು ಹಕ್ಕು ಇತ್ತು. 31 ಎಕರೆ 36 ಗುಂಟೆಗಳ &lsquo;ಬಿ&rsquo; ಖರಾಬ್ ಭೂಮಿಯ ಮೇಲೆ ಅವರಿಗೆ ಯಾವುದೇ ಹಕ್ಕು, ಮಾಲೀಕತ್ವ ಇರಲಿಲ್ಲ. ಕೇವಲ ಮಾರಾಟ ಪತ್ರದಲ್ಲಿ ಭೂಮಿಯ ವಿಸ್ತೀರ್ಣವನ್ನು 133 ಎಕರೆ 33 ಗುಂಟೆ ಎಂದು ನಮೂದಿಸಿದ ಮಾತ್ರಕ್ಕೆ ಟ್ರಸ್ಟ್&zwnj; ಈ 31 ಎಕರೆ 36 ಗುಂಟೆಗಳ ಬಿ ಖರಾಬ್ ಭೂಮಿಯ ಮಾಲೀಕರಾಗುವುದಿಲ್ಲ. ಟ್ರಸ್ಟ್&zwnj; ತಮಗೆ ಭೂಮಿ ಮಾರಾಟ ಮಾಡಿದವರ ಪರವಾಗಿ ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಕೋರುತ್ತಿದ್ದಾರೆ ಎಂಬ ಅಂಶವನ್ನು ಏಕ ಸದಸ್ಯ ಪೀಠ ಕಡೆಗಣಿಸಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.&lt;/p&gt;&lt;p&gt;ಸರ್ಕಾರವು ಸರ್ವೇ ನಂಬರ್&zwnj;ನಲ್ಲಿ 45ರಲ್ಲಿ ಒಟ್ಟು ಭೂಮಿಯನ್ನು ಸರ್ವೇ ನಡೆಸುವ ಕುರಿತಂತೆ ಟ್ರಸ್ಟ್&zwnj;ಗೆ ಹೊಸ ನೋಟಿಸ್ ಜಾರಿ ಮಾಡಬೇಕು. ಎಲ್ಲ ಪಕ್ಷಗಾರರಿಗೆ ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸುವಂತೆ ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಬೇಕು. ಸರ್ವೇ ನಡೆಸಿ 101 ಎಕರೆ ಮತ್ತು 37 ಗುಂಟೆಗಳ ವಿಸ್ತೀರ್ಣವನ್ನು ಗುರುತಿಸಬೇಕು. &lsquo;ಬಿ&rsquo; ಖರಾಬ್ ಸರ್ಕಾರಿ ಜಮೀನು ಎಂದು ಗುರುತಿಸಿದ ನಂತರ, ಅಧಿಕಾರಿಗಳು ಅದರ ವರ್ಗೀಕರಣವನ್ನು ಕಂದಾಯ ದಾಖಲೆಗಳಲ್ಲಿ ಸೂಕ್ತ ರೀತಿಯಲ್ಲಿ ನಮೂದಿಸಿ ಜಮೀನನ್ನು ರಕ್ಷಿಸಬೇಕು ಎಂದು ಪೀಠ ಹೇಳಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h3&gt;&lt;p&gt;ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಜಾಲ ಹೋಬಳಿಯ ನೆಲ್ಲುಕುಂಟೆ ಗ್ರಾಮದ ಸರ್ವೇ ನಂಬರ್ 45ರ ಸಮೀಕ್ಷೆ ನಡೆಸಲು ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ 2023ರ ಏ.17ರಂದು ಹೊರಡಿಸಿದ್ದ ನೋಟಿಸ್&zwnj;ಗಳನ್ನು ಪ್ರಶ್ನಿಸಿ, &lsquo;ಶ್ರೀ ಕೃಷ್ಣ ದೇವರಾಯ ಶಿಕ್ಷಣ ಟ್ರಸ್ಟ್&rsquo; ಹೈಕೋರ್ಟ್&zwnj;ಗೆ ಅರ್ಜಿ ಸಲ್ಲಿಸಿತ್ತು. ಆ ನೋಟಿಸ್&zwnj;ಗಳನ್ನು ಏಕ ಸದಸ್ಯ ಪೀಠ ರದ್ದುಪಡಿಸಿತ್ತು. ಅಲ್ಲದೆ, ಪ್ರಕರಣ ಸಂಬಂಧ ಟ್ರಸ್ಟ್&zwnj;, ಸಕ್ಷಮ ಪ್ರಾಧಿಕಾರಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಅಂತಹ ಆಕ್ಷೇಪಣೆ ಸಲ್ಲಿಕೆಯಾದರೆ ಸಕ್ಷಮ ಪ್ರಾಧಿಕಾರವು ಆಕ್ಷೇಪಣೆ ಪರಿಗಣಿಸಿ, ಟ್ರಸ್ಟ್&zwnj; ವಾದ ಆಲಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಯಲಹಂಕ ವಿಶೇಷ ತಹಶೀಲ್ದಾರ್, ಯಲಹಂಕ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮತ್ತು ಭೂ ಮಾಪಕ (ಸರ್ವೇಯರ್) ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.&lt;/p&gt;]]></content:encoded>
            <category><![CDATA[bengaluru-rural]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-rural/bengaluru-take-possession-of-the-31-acres-belonging-to-krishnadevaraya-education-trust-near-devanahalli-high-court-mrq/articleshow-rp7e056"/>
        </item>
        <item>
            <title><![CDATA[Bengaluru 16980 ಕೋಟಿ ವೆಚ್ಚದ ಸುರಂಗ ಮಾರ್ಗ, 9 ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ]]></title>
            <link>https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr</link>
            <guid isPermaLink="true">https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr</guid>
            <pubDate>Sat, 12 Sep 2026 07:39:42 +0530</pubDate>
            <description><![CDATA[ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಸಿಲ್ಕ್‌ಬೋರ್ಡ್‌ನಿಂದ ಹೆಬ್ಬಾಳದವರೆಗೆ ₹16,980 ಕೋಟಿ ವೆಚ್ಚದ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗಿದ್ದು, ಇದರೊಂದಿಗೆ 11 ಎಲಿವೇಟೆಡ್ ಕಾರಿಡಾರ್‌ಗಳು ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ರಾಜಕಾಲುವೆ ಅಭಿವೃದ್ಧಿ ಯೋಜನೆಗಳಿಗೂ ಚಾಲನೆ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29gte13vnxw0tsam3cywbmj,imgname-hebbal-to-silk-board-1789173512227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 16,980 ಕೋಟಿ ರು.ವೆಚ್ಚದ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಪ್ರಕ್ರಿಯೆಗೆ ಅನುಮತಿ ದೊರೆತಿದ್ದು, ಶೀಘ್ರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್&zwnj; ರಾವ್ ತಿಳಿಸಿದ್ದಾರೆ.&lt;/p&gt;&lt;p&gt;ಮುಖ್ಯಮಂತ್ರಿಗಳ ಸೂಚನೆಯಂತೆ ಯೋಜನೆಯ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಈ ಸುರಂಗ ಮಾರ್ಗವು ಸಿಲ್ಕ್&zwnj;ಬೋರ್ಡ್&zwnj; ಜಂಕ್ಷನ್&zwnj;ನಿಂದ ಹೆಬ್ಬಾಳದ ವರೆಗೆ 16.75 ಕಿ.ಮೀ ಸಂಪರ್ಕ ಕಲ್ಪಿಸುತ್ತದೆ. ಇನ್ನು 2 ಅಥವಾ 3 ದಿನಗಳಲ್ಲಿ ಯೋಜನಾ ವರದಿ ಕುರಿತು ಮುಖ್ಯಮಂತ್ರಿಗಳ ಜೊತೆ ಅಂತಿಮ ಚರ್ಚೆ ನಡೆಸುವುದಾಗಿ ತಿಳಿಸಿದರು.&lt;/p&gt;&lt;p&gt;ಇದಲ್ಲದೆ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ 23 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು 23,500 ಕೋಟಿ ರು.ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಎರಡನೇ ಹಂತದಲ್ಲಿ ಪೂರ್ವ ಹಾಗೂ ಪಶ್ಚಿಮ 23 ಕಿ.ಮೀ. ಉದ್ದದ ಸುರಂಗಮಾರ್ಗ ಸಂಬಂಧ ಯೋಜನಾ ವರದಿ ಸಿದ್ಧತೆ ಹಂತದಲ್ಲಿದೆ. ಇದಲ್ಲದೆ, ಸಿಲ್ಕ್ ಬೋರ್ಡ್ ಜಂಕ್ಷನ್&zwnj;ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರವರ್ತುಲ ರಸ್ತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ದೀರ್ಘಬಾಳಿಕೆ ರಸ್ತೆಯಾಗಿ ಅಭಿವೃದ್ಧಿಪಡಿಸಲು 450 ಕೋಟಿ ರು.ಅನುದಾನ ಒದಗಿಸಲಾಗಿದೆ ಎಂದರು.&lt;/p&gt;&lt;h2&gt;&lt;strong&gt;9 ಮೇಲ್ಸೇತುವೆ ನಿರ್ಮಾಣ&lt;/strong&gt;&lt;/h2&gt;&lt;p&gt;ನಗರದ ಸಾರಿಗೆ ವ್ಯವಸ್ಥೆ ಉತ್ತಮ ದರ್ಜೆಗೆ ಪರಿವರ್ತಿಸಲು ಒಟ್ಟು 120 ಕಿ.ಮೀ. ಉದ್ದದ 13 ಎತ್ತರಿಸಿದ ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 13,262.70 ಕೋಟಿ ರು.ಅಂದಾಜು ವೆಚ್ಚದಲ್ಲಿ ಒಟ್ಟು 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್&zwnj;ಗಳಿಗೆ ಟೆಂಡರ್ ಪ್ರಗತಿಯಲ್ಲಿದ್ದು, ಈಗಾಗಲೇ 9 ಎಲಿವೇಟೆಡ್ ಕಾರಿಡಾರ್&zwnj;ಗಳ, ಒಟ್ಟು 29.10 ಕಿಮೀ ಉದ್ದದ ಕಾಮಗಾರಿಗಳಿಗೆ ಟೆಂಡರ್ ಅಂತಿಮ ಹಂತದಲ್ಲಿವೆ ಎಂದರು. ಎಲಿವೇಟೆಡ್ ಕಾರಿಡಾರ್&zwnj;ಗೆ ಭೂ ಸ್ವಾಧೀನ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, 11 ಎಲಿವೇಟೆಡ್ ಕಾರಿಡಾರ್ ಗಳಿಗೆ ಸಂಬಂಧ ಭೂ-ಸ್ವಾಧೀನಕ್ಕೆ ಒಳಪಡುವ ಸ್ವತ್ತುಗಳ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.&lt;/p&gt;&lt;h3&gt;&lt;strong&gt;ಪ್ರವಾಹ ನಿಯಂತ್ರಣ, ರಾಜಕಾಲುವೆ ಅಭಿವೃದ್ಧಿ&lt;/strong&gt;&lt;/h3&gt;&lt;p&gt;ಬೆಂಗಳೂರು ಪೂರ್ವ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ಎಚ್&zwnj;ಬಿಆರ್ ಲೇಔಟ್, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ, ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಅಸ್ತಿತ್ವದಲ್ಲಿದ್ದ ಕಿರಿದಾದ ವೆಂಟ್&zwnj;ಗೆ ಹೆಚ್ಚುವರಿಯಾಗಿ 2 ಹೊಸ ವೆಂಟ್&zwnj;ಗಳನ್ನು 16 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ, ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ನಗರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾಗೂ ಅನಾಹುತ ತಡೆಯಲು ಮತ್ತು ಬೃಹತ್ ರಾಜಕಾಲುವೆಗಳಿಗೆ ಶಾಶ್ವತ ರಕ್ಷಣಾತ್ಮಕ ಮೂಲಸೌಕರ್ಯ ಒದಗಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರು.ವೆಚ್ಚದಲ್ಲಿ 173 ಹೊಸ ರಾಜಕಾಲುವೆಗಳ ನಿರ್ಮಾಣ ಹಾಗೂ 80 ರಾಜಕಾಲುವೆಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಲ್ಲಿ ಈಗಾಗಲೇ ಶೇ.15ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಆಯುಕ್ತರು ತಿಳಿಸಿದರು.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/bengaluru-approval-granted-for-the-construction-of-a-tunnel-road-and-9-flyovers-at-a-cost-of-rs-16980-crore-mrq/articleshow-mgt9hbr"/>
        </item>
        <item>
            <title><![CDATA[ಹುಬ್ಬಳ್ಳಿ-ಧಾರವಾಡ ನಗರದಲ್ಲಿ 5 ದಿನ ಮದ್ಯ ಮಾರಾಟ, ಸಾಗಾಟಕ್ಕೆ ನಿಷೇಧ; ಯಾವ್ಯಾವ ದಿನ?]]></title>
            <link>https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</link>
            <guid isPermaLink="true">https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs</guid>
            <pubDate>Sat, 12 Sep 2026 07:36:31 +0530</pubDate>
            <description><![CDATA[ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸ್ ಆಯುಕ್ತರು 5 ಹಂತಗಳಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಮೂರು ದಿನಗಳ ಕಾಲ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr65x5jgmac7xtedc2cekj3d,imgname-alcohol--9--1778323985999.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರವಾಡ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ 5 ಹಂತಗಳಲ್ಲಿ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯ ಸೇವನೆಯನ್ನು ನಿಷೇಧಿಸಿ ಹು-ಧಾ ನಗರ ಪೊಲೀಸ್&zwnj; ಆಯುಕ್ತ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಭೂಷಣ್ ಬೊರಸೆ ಆದೇಶ ಹೊರಡಿಸಿದ್ದಾರೆ.&lt;/p&gt;&lt;p&gt;ಗಣೇಶ ಹಬ್ಬದ ಆಚರಣೆ ಸೆ.14ರಿಂದ 25ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h2&gt;&lt;strong&gt;ಯಾವಾಗ ಮದ್ಯ ನಿಷೇಧ?&lt;/strong&gt;&lt;/h2&gt;&lt;p&gt;ಸೆ.13ರ ರಾತ್ರಿ 11.59 ರಿಂದ ಸೆ.15ರ ಬೆಳಗ್ಗೆ 6ರ ವರೆಗೆ, ಸೆ.17ರ ರಾತ್ರಿ 11.59ರಿಂದ ಸೆ. 19ರ ಬೆಳಗ್ಗೆ 6ರ ವರೆಗೆ, ಸೆ.19ರ ರಾತ್ರಿ 11.59ರಿಂದ ಸೆ.21ರ ಬೆಳಗ್ಗೆ 6ರ ವರೆಗೆ, ಸೆ. 21ರ ರಾತ್ರಿ 11.59ರಿಂದ ಸೆ.23ರ ಬೆಳಗ್ಗೆ 6ರ ವರೆಗೆ, ಸೆ.24ರ ರಾತ್ರಿ 11.59ರಿಂದ ಸೆ. 26ರ ಬೆಳಗ್ಗೆ 6ರ ವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಸೇವನೆ ನಿಷೇಧಿಸಲಾಗಿದೆ.&lt;/p&gt;&lt;h3&gt;&lt;strong&gt;ರಾಣಿ ಚೆನ್ನಮ್ಮ ಮೈದಾನದಲ್ಲಿ ಸೆ. 14ರಿಂದ ಗಣೇಶೋತ್ಸವ&lt;/strong&gt;&lt;/h3&gt;&lt;p&gt;ರಾಣಿ ಚೆನ್ನಮ್ಮ ಮೈದಾನ ಗಣೇಶೋತ್ಸವ ಮಂಡಳಿ ವತಿಯಿಂದ ಸೆ. 14ರಿಂದ 16ರ ವರೆಗೆ ಮೂರು ದಿನಗಳ ಕಾಲ ಭಕ್ತಿ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಗಣೇಶೋತ್ಸವ ಆಚರಿಸಲಾಗುವುದು ಎಂದು ಉತ್ಸವ ಮಹಾಮಂಡಳದ ಅಧ್ಯಕ್ಷ ಸಂಜಯ ಬಡಸ್ಕರ ತಿಳಿಸಿದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣೇಶೋತ್ಸವವನ್ನು ಕೇವಲ ಧಾರ್ಮಿಕ ಆಚರಣೆಗೆ ಸೀಮಿತಗೊಳಿಸದೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಪ್ರತಿಬಿಂಬಿಸುವ ಮಾದರಿ ಉತ್ಸವವನ್ನಾಗಿ ರೂಪಿಸುವುದು ಮಂಡಳಿಯ ಆಶಯವಾಗಿದೆ ಎಂದರು.&lt;/p&gt;&lt;p&gt;ಕಳೆದ ವರ್ಷ ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 300ಕ್ಕೂ ಅಧಿಕ ಕಲಾವಿದರು ವಿವಿಧ ಸಾಂಸ್ಕೃತಿಕ ಮೇಳಗಳಲ್ಲಿ ಪಾಲ್ಗೊಂಡು ಮೆರವಣಿಗೆಗೆ ಮೆರುಗು ತಂದಿದ್ದರು. ಡಿಜೆ ಬಳಸದೆ ಇದ್ದರೂ ಜನರ ಉತ್ಸಾಹ ಮತ್ತು ಸಂಭ್ರಮಕ್ಕೆ ಯಾವುದೇ ಕೊರತೆಯಾಗಿರಲಿಲ್ಲ ಎಂದು ಹೇಳಿದರು.&lt;/p&gt;&lt;p&gt;ಈ ಬಾರಿ ಸೆ. 14ರಂದು ಬೆಳಗ್ಗೆ 9 ಗಂಟೆಗೆ ಮೂರುಸಾವಿರ ಮಠದ ಆವರಣದಿಂದ ಗಣೇಶ ಮೂರ್ತಿಯ ಭವ್ಯ ಮೆರವಣಿಗೆ ಆರಂಭವಾಗಲಿದ್ದು, ರಾಣಿ ಚೆನ್ನಮ್ಮ ಮೈದಾನಕ್ಕೆ ಮೂರ್ತಿಯನ್ನು ಕರೆತಂದು ಮಧ್ಯಾಹ್ನ 12 ಗಂಟೆಗೆ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು. ಸೆ. 14 ಮತ್ತು 15ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರಿಗೆ ನಿರಂತರ ಅನ್ನಸಂತರ್ಪಣೆಯನ್ನೂ ಆಯೋಜಿಸಲಾಗಿದೆ ಎಂದರು.&lt;/p&gt;&lt;p&gt;ಸೆ. 16ರಂದು ಮಧ್ಯಾಹ್ನ 12 ಗಂಟೆಗೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಾರ್ವಜನಿಕ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಮೆರವಣಿಗೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳಗಳು ಪ್ರಮುಖ ಆಕರ್ಷಣೆಯಾಗಲಿವೆ. ಸಂಜೆ 5ರ ವೇಳೆಗೆ ಹೊಸೂರಿನ ಬಾವಿಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ ಎಂದರು.&lt;/p&gt;&lt;p&gt;ಹು-ಧಾ ಮಹಾನಗರ ಪಾಲಿಕೆಯಿಂದ ಉತ್ಸವಕ್ಕೆ ಅನುಮತಿ ದೊರೆತಿದ್ದು, ಉತ್ಸವದ ಯಶಸ್ವಿ ಆಯೋಜನೆಗೆ ಸ್ವಾಗತ ಸಮಿತಿ ಹಾಗೂ ಉತ್ಸವ ಸಮಿತಿ ರಚಿಸಲಾಗಿದೆ. ಮಹಾದೇವ ಕರಮರಿ, ನಂದಕುಮಾರ ಹಾಗೂ ಡಾ. ವಿ.ಎಸ್.ವಿ. ಪ್ರಸಾದ್ ಮಹಾಪೋಷಕರಾಗಿದ್ದು, 41 ಸದಸ್ಯರ ಉತ್ಸವ ಸಮಿತಿಗೆ ಉದ್ಯಮಿ ಗೌತಮ ಬಾಫಣಾ ಅಧ್ಯಕ್ಷರಾಗಿದ್ದಾರೆ ಎಂದರು.&lt;/p&gt;&lt;p&gt;ಸುದ್ದಿಗೋಷ್ಠಿಯಲ್ಲಿ ಮಹಾದೇವ ಕರಮರಿ, ಗೌತಮ ಬಾಫಣಾ, ರವಿ ದಂಡಿನ, ರಮೇಶ ಕದಂ ಸೇರಿ ಹಲವರಿದ್ದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/ganesha-festival-ban-on-liquor-sale-and-transport-in-hubballi-dharwad-city-for-5-days-mrq/articleshow-osh65rs"/>
        </item>
        <item>
            <title><![CDATA[BRICS: ದೆಹಲಿಯ ಭಾರತ ಮಂಟಪದಲ್ಲಿ 2 ದಿನಗಳ 18ನೇ  ಬ್ರಿಕ್ಸ್‌ ಶೃಂಗಸಭೆಗೆ ಇಂದು ಚಾಲನೆ]]></title>
            <link>https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol</link>
            <guid isPermaLink="true">https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol</guid>
            <pubDate>Sat, 12 Sep 2026 07:18:09 +0530</pubDate>
            <description><![CDATA[ಭಾರತ ಮಂಟಪದಲ್ಲಿ 18ನೇ ಬ್ರಿಕ್ಸ್‌ ಶೃಂಗಸಭೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಅಧ್ಯಕ್ಷತೆ ವಹಿಸಿದ್ದಾರೆ. ಈ ಸಭೆಯಲ್ಲಿ ಚೀನಾ, ರಷ್ಯಾ ಸೇರಿದಂತೆ ಸದಸ್ಯ ರಾಷ್ಟ್ರಗಳ ನಾಯಕರು ಭಾಗವಹಿಸಲಿದ್ದು, ಜಾಗತಿಕ ಆಡಳಿತ, ವ್ಯಾಪಾರ, ಮತ್ತು ಇಂಧನ ಭದ್ರತೆಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಸಭೆಯ ಕೊನೆಯಲ್ಲಿ 'ನವದೆಹಲಿ ಘೋಷಣೆ'ಯನ್ನು ಹೊರಡಿಸಲಾಗುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m29kdaxwfenbsexsptpz37rg,imgname-today-top-10-morning-news-xi-jinping-modi-putin-trump-iran-oil-apple-asia-cup-rupee-0-1789176228796.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಮಧ್ಯಪ್ರಾಚ್ಯ ಕದನ ಹಾಗೂ ಜಾಗತಿಕ ಉದ್ವಿಗ್ನತೆಗಳ ನಡುವೆಯೇ, ದೆಹಲಿಯಲ್ಲಿ ಬಹುನಿರೀಕ್ಷಿತ 18ನೇ ಬ್ರಿಕ್ಸ್&zwnj; ಶೃಂಗಸಭೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ನಡೆಯಲಿರುವ ಈ ಉನ್ನತ ಮಟ್ಟದ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ವ್ಯಾಪಾರ, ಇಂಧನ ಭದ್ರತೆ ಮತ್ತು ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ನಿರ್ಣಯಗಳ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಭಾರತ ಮಂಟಪದಲ್ಲಿ ಶೃಂಗಸಭೆ ನಡೆಯಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;, ರಷ್ಯಾ ಅಧ್ಯಕ್ಷ ವ್ಲಾಡಿಮಿರ್&zwnj; ಪುಟಿನ್&zwnj;, ಇರಾನ್&zwnj; ಅಧ್ಯಕ್ಷ ಮಸೂದ್&zwnj; ಪೆಜೆಶ್ಕಿಯಾನ್&zwnj;, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್&zwnj; ರಾಮಫೋಸಾ ಸೇರಿದಂತೆ ವಿಸ್ತರಿತ ಒಕ್ಕೂಟದ ವಿಶ್ವನಾಯಕರು ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಪೂರೈಕೆ ಸರಪಳಿಯ ವ್ಯತ್ಯಯ ಮತ್ತು ಆರ್ಥಿಕ ಸವಾಲುಗಳ ಹಿನ್ನೆಲೆಯಲ್ಲಿ ಈ ಶೃಂಗಸಭೆಯು ಜಾಗತಿಕ ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ವಿವಿಧ ಕಲಾಪ&lt;/strong&gt;&lt;/h2&gt;&lt;p&gt;ಶೃಂಗಸಭೆಯ ಮೊದಲ ದಿನವಾದ ಶನಿವಾರ ಮಧ್ಯಾಹ್ನ 2:35ಕ್ಕೆ &lsquo;ಸಮಗ್ರ ಜಾಗತಿಕ ಆಡಳಿತ ಹಾಗೂ ಬಹುಪಕ್ಷೀಯತೆಯ ಬಲವರ್ಧನೆ&rsquo; ವಿಷಯದ ಕುರಿತು ಬ್ರಿಕ್ಸ್&zwnj; ಸದಸ್ಯ ರಾಷ್ಟ್ರಗಳ ನಾಯಕರ ನಡುವೆ ಮುಚ್ಚಿದ ಬಾಗಿಲಿನ ಸಭೆ ನಡೆಯಲಿದೆ. ತದನಂತರ 4.25ಕ್ಕೆ ನಾಯಕರು &lsquo;ಭಾರತ್&zwnj; ಇನ್ನೋವೇಟ್ಸ್&zwnj;&rsquo; ಪ್ರದರ್ಶನ ವೀಕ್ಷಿಸಲಿದ್ದು, ಅಧಿಕೃತ ಛಾಯಾಚಿತ್ರ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಪ್ರಧಾನಿ ಮೋದಿಯವರು ಆಗಮಿಸಿದ ಎಲ್ಲಾ ವಿಶ್ವನಾಯಕರಿಗೆ ವಿಶೇಷ ಭೋಜನಕೂಟ ಆಯೋಜಿಸಲಿದ್ದಾರೆ.&lt;/p&gt;&lt;p&gt;2ನೇ ದಿನವಾದ ಭಾನುವಾರ ಬೆಳಗ್ಗೆ 9.55ಕ್ಕೆ ಬ್ರಿಕ್ಸ್&zwnj; ಸದಸ್ಯ ರಾಷ್ಟ್ರಗಳು, ಪಾಲುದಾರ ದೇಶಗಳು ಹಾಗೂ ಆಹ್ವಾನಿತ ಪ್ರತಿನಿಧಿಗಳ ಆಗಮನದೊಂದಿಗೆ ಸಭೆ ಆರಂಭವಾಗಲಿದೆ. ಬೆಳಿಗ್ಗೆ 10:50ಕ್ಕೆ &lsquo;ಸ್ಥಿರತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ: ಸಮಗ್ರ ಜಾಗತಿಕ ಪ್ರಗತಿಯ ಭವಿಷ್ಯ ರೂಪಿಸುವಿಕೆ&rsquo; ಎಂಬ ಶೀರ್ಷಿಕೆಯಡಿಯಲ್ಲಿ ಮುಖ್ಯ ಮುಕ್ತ ಅಧಿವೇಶನ ನಡೆಯಲಿದೆ. ಸಭೆಯ ಕೊನೆಯಲ್ಲಿ ಜಾಗತಿಕ ಮಟ್ಟದ ವಿವಿಧ ಒಪ್ಪಂದಗಳು ಮತ್ತು ನಿರ್ಣಯಗಳನ್ನು ಒಳಗೊಂಡ &lsquo;ನವದೆಹಲಿ ಘೋಷಣೆ&rsquo;ಯನ್ನು ಹೊರಡಿಸುವುದರೊಂದಿಗೆ ಶೃಂಗಸಭೆ ಮುಕ್ತಾಯಗೊಳ್ಳಲಿದೆ.&lt;/p&gt;&lt;h3&gt;&lt;strong&gt;ಏನೇನು ಚರ್ಚೆ?&lt;/strong&gt;&lt;/h3&gt;&lt;p&gt;ಈ ಪ್ರಮುಖ ಸಭೆಯಲ್ಲಿ ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ, ಇಂಧನ ಮತ್ತು ಆಹಾರ ಭದ್ರತೆ, ವ್ಯಾಪಾರ, ಹೂಡಿಕೆ ಹಾಗೂ ನಿರ್ಣಾಯಕ ಪೂರೈಕೆ ಸರಪಳಿಗಳ ಬಲವರ್ಧನೆಯ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ. ಇದರೊಂದಿಗೆ ಜಾಗತಿಕ ಮಟ್ಟದ ಪ್ರಾದೇಶಿಕ ಸಂಘರ್ಷಗಳು, ಆರ್ಥಿಕ ಹಿನ್ನಡೆ ಹಾಗೂ ಅಮೆರಿಕನ್ ಡಾಲರ್&zwnj;ಗೆ ಪರ್ಯಾಯವಾಗಿ ಪ್ರತ್ಯೇಕ ಕರೆನ್ಸಿ ರೂಪಿಸುವ ವಿಷಯಗಳ ಕುರಿತಾಗಿಯೂ ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ.&lt;/p&gt;&lt;h3&gt;&lt;strong&gt;ಯಾರ್ಯಾರು ಭಾಗಿ?&lt;/strong&gt;&lt;/h3&gt;&lt;p&gt;ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್&zwnj;, ರಷ್ಯಾ ಅಧ್ಯಕ್ಷ ವ್ಲಾದಿಮಿರ್&zwnj; ಪುಟಿನ್&zwnj;, ಇರಾನ್ ಅಧ್ಯಕ್ಷ ಮಸೌದ್&zwnj; ಪೆಜೆಶ್ಕಿಯಾನ್&zwnj;, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಈಜಿಪ್ಟ್, ಮಲೇಷ್ಯಾ, ಯುಎಇ, ಇಥಿಯೋಪಿಯಾ ಹಾಗೂ ವಿಯೆಟ್ನಾಂ ದೇಶಗಳ ಪ್ರಧಾನಮಂತ್ರಿಗಳು/ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ವಿಶ್ವಸಂಸ್ಥೆಯ ಮಹಾನಿರ್ದೇಶಕ ಆಂಟೋನಿಯೊ ಗುಟೆರಸ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ನ್ಯೂ ಡೆವಲಪ್&zwnj;ಮೆಂಟ್ ಬ್ಯಾಂಕ್ ಹಾಗೂ ಎಐಐಬಿ ಸಂಸ್ಥೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ.&lt;/p&gt;&lt;h3&gt;&lt;strong&gt;ಬ್ರಿಕ್ಸ್ ದೇಶಗಳು ಯಾವುವು?&lt;/strong&gt;&lt;/h3&gt;&lt;p&gt;ಪ್ರಸ್ತುತ ಭಾರತ, ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾನ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ ಮತ್ತು ಯುಎಇ ದೇಶಗಳು ಬ್ರಿಕ್ಸ್&zwnj; ಒಕ್ಕೂಟದ ಪ್ರಮುಖ ಸದಸ್ಯ ರಾಷ್ಟ್ರಗಳಾಗಿವೆ.&lt;/p&gt;&lt;h3&gt;&lt;strong&gt;ಬ್ರಿಕ್ಸ್&zwnj; ಬಲಶಾಲಿ ಹೇಗೆ?&lt;/strong&gt;&lt;/h3&gt;&lt;p&gt;ಬ್ರಿಕ್ಸ್&zwnj; ದೇಶಗಳು ಜಾಗತಿಕ ಜನಸಂಖ್ಯೆಯ ಸುಮಾರು ಶೇಕಡಾ 49.5, ಜಾಗತಿಕ ಜಿಡಿಪಿಯ ಶೇ.40 ಮತ್ತು ಜಾಗತಿಕ ವ್ಯಾಪಾರದ ಶೇ.26ರಷ್ಟು ಪಾಲು ಹೊಂದಿವೆ.&lt;/p&gt;&lt;p&gt;&lt;strong&gt;ಅರ್ಥಪೂರ್ಣ ಚರ್ಚೆಗೆ ಬ್ರಿಕ್ಸ್&zwnj; ವೇದಿಕೆ&lt;/strong&gt;&lt;/p&gt;&lt;p&gt;ಪ್ರಪಂಚದಾದ್ಯಂತದ ನಾಯಕರು ಬ್ರಿಕ್ಸ್ ಶೃಂಗಸಭೆಗೆ ಸೇರುತ್ತಾರೆ. ಜಾಗತಿಕ ಕಲ್ಯಾಣಕ್ಕಾಗಿ ಹಂಚಿಕೆಯ ಆಶಯದೊಂದಿಗೆ ವಿವಿಧ ವಿಷಯಗಳ ಕುರಿತು ಸಕಾರಾತ್ಮಕ ಮತ್ತು ಅರ್ಥಪೂರ್ಣ ಚರ್ಚೆಗಳು ನಡೆಯುತ್ತವೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ.&lt;/p&gt;&lt;p&gt;- ನರೇಂದ್ರ ಮೋದಿ, ಪ್ರಧಾನ ಮಂತ್ರಿ&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/the-two-day-18th-brics-summit-kicks-off-today-at-bharat-mandapam-in-delhi-mrq/articleshow-43lhfol"/>
        </item>
        <item>
            <title><![CDATA[ಚುನಾವಣಾ ನಿವೃತ್ತಿ ಮಾತು ನಿಲ್ಲಿಸಿ: ಸಿದ್ದರಾಮಯ್ಯಗೆ ರಾಹುಲ್‌ ಗಾಂಧಿ ಕಿವಿಮಾತು]]></title>
            <link>https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav</link>
            <guid isPermaLink="true">https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav</guid>
            <pubDate>Sat, 12 Sep 2026 07:11:21 +0530</pubDate>
            <description><![CDATA[ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ರಾಹುಲ್ ಕಿವಿಮಾತು ಹೇಳಿದ್ದಾರೆ. ಈ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿಗಳಂತಹ ಪ್ರಮುಖ ರಾಜಕೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29m7bcc1ghxeb9wfgfs06x4,imgname-rahul-gandhi-siddaramaiah-1789177081227.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡದಂತೆ ಕಾಂಗ್ರೆಸ್&zwnj; ವರಿಷ್ಠ ರಾಹುಲ್ ಗಾಂಧಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.&lt;/p&gt;&lt;p&gt;ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಲ್&zwnj; ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್&zwnj; ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದರು.&lt;/p&gt;&lt;p&gt;ಶುಕ್ರವಾರ ಬೆಳಗ್ಗೆ 11ಕ್ಕೆ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಅವರು 10 ಜನಪಥ್&zwnj; ನಿವಾಸದಲ್ಲಿ ಭೇಟಿ ಆದರು. ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು. ಈ ವೇಳೆ ರಾಹುಲ್&zwnj; ಗಾಂಧಿ ಅವರು, &lsquo;ಸಿದ್ದರಾಮಯ್ಯ ಜೀ, ಪದೇ ಪದೇ ನಿವೃತ್ತಿಯ ಮಾತಾಡಬೇಡಿ. ನಿಮ್ಮ ಸೇವೆ, ನಾಯಕತ್ವ ಪಕ್ಷಕ್ಕೆ ಬೇಕು&rsquo; ಎಂದು ಕಿವಿಮಾತು ಹೇಳಿದರು.&lt;/p&gt;&lt;h2&gt;&lt;strong&gt;ರಾಹುಲ್ ಗಾಂಧಿ ಜೊತೆ ಏನೆಲ್ಲಾ ಚರ್ಚೆ?&amp;nbsp;&lt;/strong&gt;&lt;/h2&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ವಯಸ್ಸಿನ ಹಿನ್ನೆಲೆಯಲ್ಲಿ ನಾನು ಈ ಮಾತು ಹೇಳಿದ್ದೆ ಎಂದು ಸಮಜಾಯಿಷಿ ನೀಡಿದರು ಎಂದು ಮೂಲಗಳು ತಿಳಿಸಿವೆ. ಆದರೆ ಭೇಟಿಯ ವೇಳೆ ನಡೆದ ಮಾತುಕತೆಯನ್ನು ಬಹಿರಂಗಪಡಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದ್ದಾರೆ.&lt;/p&gt;&lt;p&gt;ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿ ಅಧ್ಯಕ್ಷರ ಬದಲಾವಣೆ, ವಿಧಾನ ಪರಿಷತ್&zwnj; ಖಾಲಿ ಸ್ಥಾನಗಳ ಭರ್ತಿ, ಜಾತಿ ಜನಗಣತಿ ಜಾರಿ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಇದಕ್ಕೂ ಮೊದಲು ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್&zwnj; ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಗೆ ಬಂದಿದ್ದಾಗ ಭೇಟಿಗೆ ಸಮಯ ಕೇಳಿದ್ದೆ. ಅದರಂತೆ ಸಮಯ ನೀಡಿದ್ದಾರೆ. ಕೇವಲ ಉಭಯ ಕುಶಲೋಪರಿ ಅಷ್ಟೇ. ಭೇಟಿ ಕುತೂಹಲ ಏನೂ ಇಲ್ಲ ಎಂದು ಹೇಳಿದರು.&lt;/p&gt;&lt;p&gt;ಮಧ್ಯಾಹ್ನ 2 ಗಂಟೆಗೆ ಕೆ.ಸಿ.ವೇಣುಗೋಪಾಲ್&zwnj; ಅವರನ್ನು ಲೋಧಿ ಎಸ್ಟೇಟ್ ನಿವಾಸದಲ್ಲಿ ಸಿದ್ದರಾಮಯ್ಯ ಭೇಟಿ ಆಗಿ ಮಾತುಕತೆ ನಡೆಸಿದರು. ಸಚಿವ ಸಂಪುಟ ವಿಸ್ತರಣೆ, ನಿಗಮ- ಮಂಡಳಿಗೆ ಹೊಸ ಅಧ್ಯಕ್ಷರ ನೇಮಕ ಕುರಿತು ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.&lt;/p&gt;&lt;p&gt;ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಭೇಟಿ ಮಾಡಿದ್ದೇನೆ ಅಷ್ಟೇ. ಭೇಟಿಯ ವೇಳೆ ಏನು ಚರ್ಚೆ ನಡೆಯಿತು ಎಂದು ಹೇಳಲು ಸಾಧ್ಯ ಇಲ್ಲ ಎಂದು ಸ್ಪಷ್ಟವಾಗಿ ಮಾಹಿತಿ ನೀಡಲು ನಿರಾಕರಿಸಿದರು.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/stop-talking-about-retirement-from-elections-rahul-gandhi-advises-siddaramaiah-mrq/articleshow-gxk4xav"/>
        </item>
        <item>
            <title><![CDATA[ಪ್ರಜ್ವಲ್ ಸೆಲ್‌ನಲ್ಲಿದ್ದ ಪೆನ್‌ಡ್ರೈವ್‌ನಲ್ಲಿ 100 ಅಶ್ಲೀಲ ವಿಡಿಯೋ ಪತ್ತೆ; ಟಿವಿಯಲ್ಲಿ ವೀಕ್ಷಣೆ]]></title>
            <link>https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb</link>
            <guid isPermaLink="true">https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb</guid>
            <pubDate>Sat, 12 Sep 2026 07:04:41 +0530</pubDate>
            <description><![CDATA[ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿರುವುದು ಎಫ್‌ಎಸ್‌ಎಲ್‌ ವರದಿಯಿಂದ ದೃಢಪಟ್ಟಿದೆ. ಪ್ರಜ್ವಲ್ ಈ ವಿಡಿಯೋಗಳನ್ನು ಜೈಲಿನ ಎಲ್‌ಇಡಿ ಟಿವಿಯಲ್ಲಿ ವೀಕ್ಷಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಪ್ರಜ್ವಲ್ ಮತ್ತು ಅವರ ಸಹಕೈದಿ ವಿರುದ್ಧ ಪ್ರಕರಣ ದಾಖಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvhjkddehbc8y968632ar148,imgname-prajwal-revanna-1781927622062.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಹಾಗೂ ಅತ್ಯಾ*ಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್&zwnj;ನಲ್ಲಿ ಪತ್ತೆಯಾಗಿದ್ದ ಪೆನ್&zwnj;ಡ್ರೈವ್&zwnj;ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳಿವೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್&zwnj;ಎಸ್&zwnj;ಎಲ್&zwnj;) ವರದಿಯಲ್ಲಿ ಮಹತ್ವದ ಸಂಗತಿ ಉಲ್ಲೇಖವಾಗಿರುವುದಾಗಿ ತಿಳಿದು ಬಂದಿದೆ.&lt;/p&gt;&lt;p&gt;ಕಾರಾಗೃಹದಲ್ಲಿ ಅಳವಡಿಸಲಾಗಿದ್ದ ಎಲ್&zwnj;ಇಡಿ ಟೀವಿಗೆ ಆ ಪೆನ್&zwnj;ಡ್ರೈವ್ ಅಳವಡಿಸಿಕೊಂಡು ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್&zwnj; ವೀಕ್ಷಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಯಾವ ಸಮಯದಲ್ಲಿ ಪೆನ್&zwnj; ಡ್ರೈವ್ ಬಳಸಲಾಗಿದೆ ಎಂಬುದನ್ನು ದೃಢಪಡಿಸುವಂತೆ ಮತ್ತೆ ಎಫ್&zwnj;ಎಸ್&zwnj;ಎಲ್ ತಜ್ಞರನ್ನು ಈಗ ಪೊಲೀಸರು ಕೋರಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಆದರೆ ಪ್ರಜ್ವಲ್ ಇದ್ದ ಸೆಲ್&zwnj;ನಲ್ಲಿ ಸಿಕ್ಕಿದ ಮೊಬೈಲ್&zwnj;ನಲ್ಲಿ ಚಲನಚಿತ್ರಗಳು ಹಾಗೂ ವೆಬ್&zwnj; ಸಿರೀಸ್&zwnj;ಗಳು ಮಾತ್ರ ಸಿಕ್ಕಿವೆ. ಮೊಬೈಲ್&zwnj;ನಲ್ಲಿದ್ದ ಫೈಲ್&zwnj;ಗಳಲ್ಲಿ ಅಶ್ಲೀಲ ವಿಡಿಯೋಗಳು ಕಂಡು ಬಂದಿಲ್ಲ ಎಂದು ಮೂಲಗಳು &lsquo;ಕನ್ನಡಪ್ರಭ&rsquo;ಕ್ಕೆ ತಿಳಿಸಿವೆ.&lt;/p&gt;&lt;h2&gt;&lt;strong&gt;ಮೊಬೈಲ್ ಹಾಗೂ ಪೆನ್&zwnj;ಡ್ರೈವ್ ಬಳಕೆ&lt;/strong&gt;&lt;/h2&gt;&lt;p&gt;ಕಳೆದ ತಿಂಗಳ 11ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಆ ವೇಳೆ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಸೆಲ್&zwnj; ಅನ್ನು ತಸಾಪಣೆ ನಡೆಸಿದಾಗ ಸಿಸಿಬಿ ತಂಡಕ್ಕೆ ಮೊಬೈಲ್ ಹಾಗೂ ಪೆನ್&zwnj; ಡ್ರೈವ್&zwnj;ಗಳು ಸಿಕ್ಕಿದ್ದವು. ಜೈಲಿನಲ್ಲಿ ನಿಷೇಧಿತ ವಸ್ತುಗಳಾದ ಮೊಬೈಲ್ ಹಾಗೂ ಪೆನ್&zwnj;ಡ್ರೈವ್ ಬಳಕೆ ಆರೋಪದ ಮೇರೆಗೆ ಪ್ರಜ್ವಲ್ ಹಾಗೂ ಆತನ ಸೆಲ್&zwnj;ನ ಸಹಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಜ್ವಲ್ ಸೆಲ್&zwnj;ನಲ್ಲಿ ಜಪ್ತಿಯಾಗಿದ್ದ ಮೊಬೈಲ್ ಹಾಗೂ ಪೆನ್&zwnj; ಡ್ರೈವ್ ಅನ್ನು ಪರೀಕ್ಷೆ ನಡೆಸಿ ವರದಿ ನೀಡುವಂತೆ ಎಫ್ಎಸ್&zwnj;ಎಲ್&zwnj;ಗೆ ಕಳುಹಿಸಿದ್ದರು. ಈಗ ಪೊಲೀಸರ ಕೈಗೆ ಸೇರಿದ ಎಫ್&zwnj;ಎಸ್&zwnj;ಎಲ್&zwnj; ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;173 ಫೈಲ್&zwnj;ಗಳಲ್ಲಿ 100 ವಿಡಿಯೋ&lt;/strong&gt;&lt;/h3&gt;&lt;p&gt;ಪ್ರಜ್ವಲ್ ರೇವಣ್ಣ ಸೆಲ್&zwnj;ನಲ್ಲಿ ಪತ್ತೆಯಾದ ಪೆನ್&zwnj;ಡ್ರೈವ್ ಹಾಗೂ ಮೊಬೈಲ್&zwnj;ಗಳಲ್ಲಿ 173 ಫೈಲ್&zwnj;ಗಳಲ್ಲಿ ವಿಡಿಯೋಗಳಿದ್ದವು. ಇದರಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಗಳ ಚಲನಚಿತ್ರಗಳು, ವೆಬ್&zwnj; ಸೀರೀಸ್&zwnj;ಗಳು ಹಾಗೂ ಇತರೆ ವಿಡಿಯೋಗಳಿವೆ. ಆದರೆ ಮೊಬೈಲ್&zwnj;ನ ಫೈಲ್&zwnj;ಗಳಲ್ಲಿ ಯಾವುದೇ ಅಶ್ಲೀಲ ವಿಡಿಯೋಗಳ ಸಿಕ್ಕಿಲ್ಲ. ಆದರೆ ಪೆನ್&zwnj;ಡ್ರೈವ್&zwnj; ನಲ್ಲಿ 100 ಅಶ್ಲೀಲ ವಿಡಿಯೋಗಳಿದ್ದವು ಎಂದು ಎಫ್&zwnj;ಎಸ್&zwnj;ಎಲ್ ವರದಿಯಲ್ಲಿ ದೃಢಪಡಿಸಿರುವುದಾಗಿ ಮೂಲಗಳು ತಿಳಿಸಿವೆ.&lt;/p&gt;&lt;h3&gt;&lt;strong&gt;ಜೈಲು ಟಿವಿಯಲ್ಲಿ ಸೆ*ಕ್ಸ್ ವಿಡಿಯೋ&lt;/strong&gt;&lt;/h3&gt;&lt;p&gt;ಜೈಲಿನಲ್ಲಿ ಕೈದಿಗಳ ಮನರಂಜನೆ ಸಲುವಾಗಿ ಎಲ್&zwnj;ಇಡಿ ಟಿವಿಗಳನ್ನು ಅಳವಡಿಸಲಾಗಿದೆ. ಅಂತೆಯೇ ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಸಹ ಟಿವಿ ಇತ್ತು. ತನ್ನ ಬ್ಯಾರೆಕ್&zwnj;ನ ಟಿವಿಯಲ್ಲಿ ಪೆನ್&zwnj; ಡ್ರೈವ್&zwnj; ಅನ್ನು ಬಳಸಿ ಅಶ್ಲೀಲ ವಿಡಿಯೋಗಳನ್ನು ಪ್ರಜ್ವಲ್ ವೀಕ್ಷಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/fsl-report-has-confirmed-that-pen-drive-found-in-prajwal-revanna-s-cell-contains-approximately-100-obscene-videos-mrq/articleshow-aa17lsb"/>
        </item>
        <item>
            <title><![CDATA[ಆಫ್ರಿಕಾದ ಚಿನ್ನದ ಗಣಿ ಕಂಪನಿಯಲ್ಲಿ 40% ಪಾಲು; 3.3 ಕೋಟಿ ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ]]></title>
            <link>https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e</link>
            <guid isPermaLink="true">https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e</guid>
            <pubDate>Sat, 12 Sep 2026 06:55:47 +0530</pubDate>
            <description><![CDATA[ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಲಂಚದ ಹಣದಿಂದ ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿಯಲ್ಲಿ ಶೇ.40ರಷ್ಟು ಪಾಲು ಖರೀದಿಸಿರುವುದು ಇ.ಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಜಾರಕಿಹೊಳಿ ಮತ್ತು ಅವರ ಕುಟುಂಬದ ಸದಸ್ಯರ ನಿವಾಸಗಳ ಮೇಲೆ ನಡೆದ ದಾಳಿಯಲ್ಲಿ, ಘೋಷಿಸದ ವಿದೇಶಿ ಹೂಡಿಕೆಗಳು, ನಗದು ಹಾಗೂ ಫೇಮಾ ಉಲ್ಲಂಘನೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29kd17a1pzdm43mgcvyr2tw,imgname-satish-jarkiholi-1789176218858.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು &lt;/strong&gt;: ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಆಫ್ರಿಕಾದ ಕಾಂಗೋ ದೇಶದ ಚಿನ್ನದ ಗಣಿ ಕಂಪನಿಯಲ್ಲಿ ಶೇ.40ರಷ್ಟು ಪಾಲು ಹೊಂದಿರುವುದು ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಯ ವೇಳೆ ಪತ್ತೆಯಾಗಿದೆ.&lt;/p&gt;&lt;p&gt;ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ. ಸೇರಿ ವಿವಿಧ ಗುತ್ತಿಗೆ ಕಂಪನಿಗಳು ಭಾರೀ ಪ್ರಮಾಣದ ಲಂಚ ಪಾವತಿಸಿದ್ದು, ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;p&gt;ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿ ಇ.ಡಿ ಶುಕ್ರವಾರ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಶೋಧ ಕಾರ್ಯಾಚರಣೆ ವೇಳೆ, ಸತೀಶ್&zwnj; ಜಾರಕಿಹೊಳಿ ಕುಟುಂಬದ ಸದಸ್ಯರಾದ ಚಿಕ್ಕೋಡಿ ಸಂಸದೆ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ವೈ.ಡಿ ಮಂಜುನಾಥ್ ಅವರ ಪತ್ನಿ ಮತ್ತು ಸತೀಶ್ ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು (ಪಾಲು) ಹೊಂದಿರುವುದು ಪತ್ತೆಯಾಗಿದೆ. ಇವುಗಳಲ್ಲಿ ಕಾಂಗೋದ ಎಲ್&zwnj;ಡೊರಾಡೊ ಮೈನಿಂಗ್&zwnj; ರಿಸೋರ್ಸಸ್&zwnj; ಹಾಗೂ ಜಾಂಬಿಯಾದಲ್ಲಿರುವ ನವ ಔರಂ ಮೈನಿಂಗ್&zwnj; ಲಿಮಿಟೆಡ್&zwnj; ಸೇರಿ ಹಲವು ಸಂಸ್ಥೆಗಳೂ ಸೇರಿವೆ.&lt;/p&gt;&lt;p&gt;ಇದಲ್ಲದೆ, ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ ಮೆ.ಮ್ಯಾಗ್ನಿಟ್ಯೂಡ್&zwnj; ಸ್ಟಾರ್&zwnj; ಎಸ್&zwnj;ಎಆರ್&zwnj;ಎಲ್&zwnj; ಸಂಸ್ಥೆಯಲ್ಲಿ ಸತೀಶ್ ಜಾರಕಿಹೊಳಿ ಶೇ.40 ಪಾಲು ಹೊಂದಿರುವುದು ಪತ್ತೆಯಾಗಿದೆ. ಆಫ್ರಿಕಾದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮತ್ತು ಅಲ್ಲಿ ಆಸ್ತಿಗಳನ್ನು ಹೊಂದಿರುವ ಬಗ್ಗೆ ಹಾಗೂ ಇತರ ಹಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;h2&gt;&lt;strong&gt;21 ಸ್ಥಳಗಳ ಮೇಲೆ ದಾಳಿ&lt;/strong&gt;&lt;/h2&gt;&lt;p&gt;ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯದ ಅಧಿಕಾರಿಗಳು, ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾ ಸೇರಿ 21 ಸ್ಥಳಗಳ ಮೇಲೆ ಸೆ.9-10ರಂದು ದಾಳಿ ನಡೆಸಿ ಶೋಧ ನಡೆಸಿದ್ದರು.&lt;/p&gt;&lt;p&gt;ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ(ಫೇಮಾ) ಪ್ರಕರಣ ದಾಖಲಿಸಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಜಾರಕಿಹೊಳಿ ಕುಟುಂಬಕ್ಕೆ ಸಂಬಂಧಿಸಿ ಘೋಷಣೆಯಾಗದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರ, ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ವಾಸ್ತವಾಂಶ ಪತ್ತೆಹಚ್ಚುವುದು ಈ ದಾಳಿ ಉದ್ದೇಶವಾಗಿತ್ತು ಎಂದು ಇ.ಡಿ ಹೇಳಿದೆ.&lt;/p&gt;&lt;p&gt;ಶೋಧ ಕಾರ್ಯಾಚರಣೆ ವೇಳೆ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ ಹಾಗೂ ಭಾವ ವೈ.ಡಿ ಮಂಜುನಾಥ್, ಅಲ್ಲದೆ, ಸತೀಶ್ ಜಾರಕಿಹೊಳಿ ಅವರ ವಿಶೇಷ ಕರ್ತವ್ಯ ಅಧಿಕಾರಿ (ಒಎಸ್&zwnj;ಡಿ) ಹಾಗೂ ಆಪ್ತ ಸಹಾಯಕ ಮಲ್ಲಗೌಡ ಪಾಟೀಲ್, ರಾಜು ದರಗಶೆಟ್ಟಿ, ವಿಠ್ಠಲ್ ಪರಸನ್ನವರ ಹಾಗೂ ಡಾ.ಗಿರೀಶ್ ಸೋನವಾಲ್ಕರ್ ಅವರಿಗೆ ಸೇರಿದ ಸ್ಥಳಗಳ ಮೇಲೂ ದಾಳಿ ನಡೆಸಿ ಶೋಧ ನಡೆಸಲಾಯಿತು.&lt;/p&gt;&lt;p&gt;ಇದೇ ವೇಳೆ, ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ. ಎಂಬ ಖಾಸಗಿ ಕಂಪನಿಯ ಅಧಿಕಾರಿಗಳಿಗೂ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ ಈ ಕಂಪನಿ ಭಾರೀ ಪ್ರಮಾಣದ ಲಂಚ ಪಾವತಿಸಿದೆ ಹಾಗೂ ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್&zwnj; ವಾಣಿಜ್ಯ ಈಸ್ಟರ್ನ್&zwnj; ಪ್ರೈ.ಲಿ ಸಂಸ್ಥೆಯ ಮಾಲೀಕರ ಕಚೇರಿ ಹಾಗೂ ನಿವಾಸಗಳಲ್ಲಿಯೂ ಶೋಧ ನಡೆಸಲಾಯಿತು.&lt;/p&gt;&lt;p&gt;ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸ, ಕ್ರೆಸೆಂಟ್ ರಸ್ತೆಯಲ್ಲಿರುವ ನಿವಾಸ, ಗೋಕಾಕ್ ಮತ್ತು ಬೆಳಗಾವಿಯಲ್ಲಿನ ವಿವಿಧ ಸ್ಥಳಗಳು ಸೇರಿ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ಫೆಮಾ ಉಲ್ಲಂಘನೆಗಳಿಗೆ ಸಂಬಂಧಿಸಿ ಮಹತ್ವದ ವಸ್ತುಗಳು ಮತ್ತು ದಾಖಲೆಗಳು ಪತ್ತೆಯಾಗಿವೆ ಎಂದು ಇ.ಡಿ ತಿಳಿಸಿದೆ.&lt;/p&gt;&lt;h3&gt;&lt;strong&gt;3.3 ಕೋಟಿ ರು. ನಗದು, 15 ಲಕ್ಷ ವಿದೇಶಿ ಕರೆನ್ಸಿ ಪತ್ತೆ&lt;/strong&gt;&lt;/h3&gt;&lt;p&gt;ದಾಳಿ ವೇಳೆ ಲೆಕ್ಕ ತೋರಿಸದ 3.3 ಕೋಟಿ ರು. ನಗದು ಹಾಗೂ ಅಮೆರಿಕನ್ ಡಾಲರ್, ಯುರೋ ಸೇರಿ ಸುಮಾರು 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ಶೋಧದ ವೇಳೆ ದೊರೆತ ಸಾಕ್ಷ್ಯಗಳ ಆಧಾರದ ಮೇಲೆ, ಅನುಮೋದಿತವಲ್ಲದ ಮಾರ್ಗದ ಮೂಲಕ ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ಭಾರೀ ಪ್ರಮಾಣದ ಹಣ ಹೂಡಿಕೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.&lt;/p&gt;&lt;p&gt;ಶೋಧ ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಹಾಗೂ ಗುತ್ತಿಗೆದಾರರಿಂದ ಭಾರತ್&zwnj; ವಾಣಿಜ್ಯ ಈಸ್ಟ್ರರ್ನ್ ಸೇರಿ ವಿವಿಧ ಸಂಸ್ಥೆಗಳ ಮೂಲಕ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ಹಲವು ದಾಖಲೆಗಳು ಮತ್ತು ಡಿಜಿಟಲ್ ಸಾಧನಗಳು ಪತ್ತೆಯಾಗಿವೆ.&lt;/p&gt;&lt;p&gt;ಸತೀಶ್ ಜಾರಕಿಹೊಳಿ ಅವರ ಭಾವ ವೈ.ಡಿ ಮಂಜುನಾಥ್ ಅವರು, ನಿರ್ವಹಿಸುತ್ತಿರುವ ಸಂಸ್ಥೆಯ ಖಾತೆಗಳಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳೊಂದಿಗೆ ವ್ಯವಹಾರ ನಡೆಸಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಇ.ಡಿ ವಿವರಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/an-ed-investigation-has-revealed-the-purchase-of-40-percent-stake-in-a-gold-mine-in-african-country-of-congo-mrq/articleshow-lnio85e"/>
        </item>
        <item>
            <title><![CDATA[ದ್ವಿಪಕ್ಷೀಯ ವ್ಯಾಪಾರ ದ್ವಿಗುಣಕ್ಕೆ ಮೋದಿ-ಪುಟಿನ್ ಅಸ್ತು; ಶತಕೋಟಿ ಡಾಲರ್ ಒಪ್ಪಂದ!]]></title>
            <link>https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x</link>
            <guid isPermaLink="true">https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x</guid>
            <pubDate>Sat, 12 Sep 2026 06:46:41 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, 2030ರ ವೇಳೆಗೆ ವಾರ್ಷಿಕ ವ್ಯಾಪಾರವನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ರಕ್ಷಣೆ, ಇಂಧನ, ಮತ್ತು ಖನಿಜಗಳ ಸಹಕಾರವನ್ನು ಬಲಪಡಿಸಲು ಒಪ್ಪಿಕೊಳ್ಳಲಾಗಿದ್ದು, ಉಕ್ರೇನ್ ಸಂಘರ್ಷವನ್ನು ಮಾತುಕತೆಯ ಮೂಲಕ ಕೊನೆಗೊಳಿಸಲು ಮೋದಿ ಕರೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28dh8avfet0vae8sj0erzwn,imgname-20260911368l-1789136511323.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಬ್ರಿಕ್ಸ್&zwnj; ಶೃಂಗಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆಸಿದ ದ್ವಿಪಕ್ಷೀಯ ಮಾತುಕತೆ ಯಶ ಕಂಡಿದೆ. ಈ ಸಭೆಯಲ್ಲಿ 2030ರ ವೇಳೆಗೆ ಉಭಯ ದೇಶಗಳ ನಡುವಿನ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು ಹಾಲಿ 65 ಶತಕೋಟಿ ಡಾಲರ್&zwnj;ನಿಂದ 100 ಶತಕೋಟಿ ಡಾಲರ್&zwnj;ಗೆ ಹೆಚ್ಚಿಸಲು ಹಾಗೂ ರಕ್ಷಣೆ, ಇಂಧನ, ನಿರ್ಣಾಯಕ ಖನಿಜಗಳು ಮತ್ತು ರಸಗೊಬ್ಬರ ಪೂರೈಕೆ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ನಿರ್ಧರಿಸಲಾಗಿದೆ.&lt;/p&gt;&lt;p&gt;ಈ ಮೂಲಕ ರಷ್ಯಾ ಜತೆ ವ್ಯಾಪಾರ ನಡೆಸಬೇಡಿ ಎಂಬ ಅಮೆರಿಕದ ಒತ್ತಾಯಕ್ಕೆ ಮಣಿಯದಿರಲು ಭಾರತ ನಿರ್ಧರಿಸಿದೆ. ಇದೇ ವೇಳೆ, ಇತ್ತೀಚೆಗೆ ರಷ್ಯಾ ಸನಿಹದ ಕಪ್ಪು ಸಮುದ್ರದಲ್ಲಿ ಭಾರತೀಯರು ಇದ್ದ ಹಡಗುಗಳು ದಾಳಿಗೆ ಒಳಗಾದ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದ್ದು, ಭಾರತೀಯ ನಾವಿಕರ ಸುರಕ್ಷತೆಗೆ ಆಗ್ರಹಿಸಿದ್ದಾರೆ. ಅಲ್ಲದೆ, &lsquo;ಉಕ್ರೇನ್ ಜತೆ ರಷ್ಯಾ ಮಾತುಕತೆ ನಡೆಸಿ ಸಂಘರ್ಷ ನಿಲ್ಲಿಸಿಬೇಕು. ಯುದ್ಧದ ಅಂತ್ಯಕ್ಕೆ ಶಾಂತಿ ಉಪಕ್ರಮವನ್ನು ಬೆಂಬಲಿಸಲು ಭಾರತ ಸಿದ್ಧವಾಗಿದೆ&rsquo; ಎಂದು ಪುನರುಚ್ಚರಿಸಿದ್ದಾರೆ. ಆಗ ಪುಟಿನ್ ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿ ಸ್ಥಾಪನೆಯ ಪ್ರಯತ್ನಗಳ ಬಗ್ಗೆ ಮೋದಿಗೆ ವಿವರಣೆ ನೀಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಅಸ್ತಾನಾದಲ್ಲಿ ನಡೆದ ಎಸ್&zwnj;ಸಿಒ ಶೃಂಗಸಭೆಯ ವೇಳೆ ಭೇಟಿಯಾಗಿದ್ದ ಮೋದಿ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದತ್ತ ಸಾಗಬೇಕು ಎಂದು ಪುಟಿನ್&zwnj; ಅವರಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.&lt;/p&gt;&lt;h2&gt;&lt;strong&gt;100 ಶತಕೋಟಿ ಡಾಲರ್&zwnj; ವ್ಯಾಪಾರ ಗುರಿ:&lt;/strong&gt;&lt;/h2&gt;&lt;p&gt;ಈ ಬಾರಿಯ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಕೊರತೆಯನ್ನು ನೀಗಿಸಲು ಭಾರತೀಯ ರಫ್ತುದಾರರಿಗೆ ರಷ್ಯಾ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶ ನೀಡಬೇಕು ಎಂದು ಭಾರತ ಮನವಿ ಮಾಡಿದೆ. ಪ್ರಸ್ತುತ ವರ್ಷಕ್ಕೆ ಸುಮಾರು 65 ಶತಕೋಟಿ ಡಾಲರ್&zwnj;ನಷ್ಟಿರುವ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 100 ಶತಕೋಟಿ ಡಾಲರ್&zwnj;ಗೆ ತಲುಪಿಸುವ ಕಾರ್ಯತಂತ್ರಗಳ ಕುರಿತು ಎರಡೂ ದೇಶಗಳು ಸುದೀರ್ಘವಾಗಿ ಸಮಾಲೋಚನೆ ನಡೆಸಿವೆ.&lt;/p&gt;&lt;h3&gt;&lt;strong&gt;ರಕ್ಷಣಾ ಸಹಕಾರಕ್ಕೆ ಒತ್ತು:&lt;/strong&gt;&lt;/h3&gt;&lt;p&gt;ಇದರೊಂದಿಗೆ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ನೀಡಿರುವ ಮಾಹಿತಿಯಂತೆ, ಬ್ರಹ್ಮೋಸ್ ಕ್ಷಿಪಣಿಗಳ ನವೀಕರಣ, ಬಾಕಿ ಇರುವ ಎಸ್&zwnj;-400 ವ್ಯವಸ್ಥೆಗಳ ಪೂರೈಕೆ ಹಾಗೂ ಸು-57 ಫೈಟರ್ ಜೆಟ್&zwnj;ಗಳ ಪೂರೈಕೆ ಕುರಿತು ಉಭಯ ದೇಶಗಳು ಚರ್ಚಿಸಿವೆ. ಇಂಧನ ಕ್ಷೇತ್ರದಲ್ಲಿ ನಾಗರಿಕ ಪರಮಾಣು ಶಕ್ತಿ ಸಹಕಾರವನ್ನು ಹೆಚ್ಚಿಸಲು ಒಪ್ಪಿಕೊಳ್ಳಲಾಗಿದ್ದು, ರೈಲ್ವೆ, ಸುರಂಗ ನಿರ್ಮಾಣ, ಉಕ್ಕು ವಲಯ, ನಿರ್ಣಾಯಕ ಖನಿಜಗಳು ಹಾಗೂ ಭಾರತೀಯ ಕುಶಲ ಕಾರ್ಮಿಕರಿಗೆ ರಷ್ಯಾದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಮಾತುಕತೆ ನಡೆದಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bilateral-meeting-between-prime-minister-narendra-modi-and-russian-president-vladimir-putin-mrq/articleshow-08hoz3x"/>
        </item>
        <item>
            <title><![CDATA[ಗಣೇಶ ಹಬ್ಬಕ್ಕೂ ಮುನ್ನ ಯಾವ ರಾಶಿಯವರಿಗೆ ಸಿಗಲಿದೆ ಬಂಪರ್ ಲಕ್? ಇಲ್ಲಿದೆ ಸೆಪ್ಟೆಂಬರ್ 12ರ ಸಂಪೂರ್ಣ ರಾಶಿಫಲ!]]></title>
            <link>https://kannada.asianetnews.com/astrology/september-12-daily-horoscope-in-kannada-career-growth-financial-clarity-and-love-signals-for-these-signs/articleshow-8llzivm</link>
            <guid isPermaLink="true">https://kannada.asianetnews.com/astrology/september-12-daily-horoscope-in-kannada-career-growth-financial-clarity-and-love-signals-for-these-signs/articleshow-8llzivm</guid>
            <pubDate>Sat, 12 Sep 2026 06:30:52 +0530</pubDate>
            <description><![CDATA[ಸೆಪ್ಟೆಂಬರ್ 12, 2026ರ ರಾಶಿಫಲದ ಪ್ರಕಾರ ಚಂದ್ರ-ಬುಧ ಪ್ರಭಾವದಿಂದ ಯೋಜನೆ, ಸಂವಹನ ಮತ್ತು ಪ್ರಾಯೋಗಿಕ ನಿರ್ಧಾರಗಳಿಗೆ ಒತ್ತು ಸಿಗಲಿದೆ. ಕೆಲವು ರಾಶಿಗಳಿಗೆ ವೃತ್ತಿ ಬೆಳವಣಿಗೆ, ಹಣಕಾಸಿನ ಸ್ಪಷ್ಟತೆ ಮತ್ತು ಹೊಸ ಅವಕಾಶಗಳ ಸೂಚನೆ ಇದ್ದರೆ, ಇತರರು ಖರ್ಚು, ಆರೋಗ್ಯ ಮತ್ತು ಸಂಬಂಧಗಳತ್ತ ಹೆಚ್ಚು ಗಮನಹರಿಸಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01m28efa180gmcygnc09hgsbsa,imgname-september-12-2026-daily-horoscope-in-kannada--1--1789137496095.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 12, 2026 ಶನಿವಾರದ ದಿನವು 12 ರಾಶಿಗಳಿಗೂ ಯೋಜನೆ, ಶಿಸ್ತು ಮತ್ತು ಪ್ರಾಯೋಗಿಕ ನಿರ್ಧಾರಗಳಿಗೆ ಹೆಚ್ಚಿನ ಮಹತ್ವ ನೀಡುವ ದಿನವಾಗಿರಲಿದೆ ಎಂದು ಜ್ಯೋತಿಷ್ಯ ನಂಬಿಕೆಗಳು ಸೂಚಿಸುತ್ತವೆ. ಚಂದ್ರ ಮತ್ತು ಬುಧ ಕನ್ಯಾರಾಶಿಯಲ್ಲಿ ಇರುವುದರಿಂದ ಬಾಕಿ ಉಳಿದಿರುವ ಕೆಲಸಗಳನ್ನು ಮುಗಿಸುವುದು, ಹಣಕಾಸಿನ ಯೋಜನೆಗಳನ್ನು ಪರಿಶೀಲಿಸುವುದು ಹಾಗೂ ಸಂಬಂಧಗಳಲ್ಲಿ ಸ್ಪಷ್ಟವಾಗಿ ಮಾತನಾಡುವುದು ಮುಖ್ಯವಾಗಲಿದೆ. ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವುದರಿಂದ ಹಬ್ಬದ ಸಿದ್ಧತೆಗಳೂ ಅನೇಕರ ದಿನಚರಿಯ ಭಾಗವಾಗಲಿವೆ. &lt;/p&gt;&lt;p&gt;&lt;strong&gt;ಮೇಷ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಕೆಲಸದಲ್ಲಿ ಬಾಕಿ ಉಳಿದಿರುವ ಕಾರ್ಯಗಳನ್ನು ಮುಗಿಸಲು ದಿನ ಅನುಕೂಲಕರವಾಗಿದೆ. ಗೊಂದಲಮಯ ಕೆಲಸಗಳನ್ನು ಕ್ರಮಬದ್ಧಗೊಳಿಸುವ ಸಾಮರ್ಥ್ಯ ಹೆಚ್ಚಾಗಬಹುದು. ಆದರೆ ಆತುರದಿಂದ ಆಡಳಿತಾತ್ಮಕ ದಾಖಲೆ ಅಥವಾ ಹಣಕಾಸು ವಿಚಾರದಲ್ಲಿ ತಪ್ಪು ಮಾಡದಂತೆ ಎಚ್ಚರಿಕೆ ಅಗತ್ಯ. ಹೊಸ ಅಪಾಯಕಾರಿ ಹೂಡಿಕೆಗಿಂತ ಬಜೆಟ್ ಪರಿಶೀಲನೆ ಮತ್ತು ಉಳಿತಾಯಕ್ಕೆ ಆದ್ಯತೆ ನೀಡಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ಅತಿಯಾದ ಟೀಕೆ ಬೇಡ. ಕೆಲಸದ ಒತ್ತಡದಿಂದ ಮಾನಸಿಕ ದಣಿವು ಉಂಟಾಗಬಹುದು; ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಿ.&lt;/p&gt;&lt;p&gt;&lt;strong&gt;ವೃಷಭ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಉತ್ತಮ ದಿನ. ಕಂಟೆಂಟ್, ಮಾರ್ಕೆಟಿಂಗ್, ತಂತ್ರಗಾರಿಕೆ ಅಥವಾ ಹೊಸ ಯೋಜನೆಗಳಲ್ಲಿ ನಿಮ್ಮ ಆಲೋಚನೆಗಳಿಗೆ ಮೆಚ್ಚುಗೆ ಸಿಗಬಹುದು. ಹಣದ ವಿಚಾರದಲ್ಲಿ ಐಷಾರಾಮಿ ಖರ್ಚು ಹಾಗೂ ಹೆಚ್ಚಿನ ಅಪಾಯದ ವಹಿವಾಟು ತಪ್ಪಿಸುವುದು ಒಳಿತು.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ನಿಮ್ಮ ಸರಳ ಮಾತು ಮತ್ತು ಹಾಸ್ಯಪ್ರಜ್ಞೆ ಸಂಬಂಧಗಳನ್ನು ಹತ್ತಿರ ಮಾಡಬಹುದು. ಕುಟುಂಬದವರೊಂದಿಗೆ ಸಮಯ ಕಳೆಯುವುದು ಸಂತೋಷ ನೀಡಬಹುದು. ದೇಹಕ್ಕೆ ಅತಿಯಾದ ಒತ್ತಡ ನೀಡದೆ ಸಮತೋಲನ ಕಾಯ್ದುಕೊಳ್ಳಿ.&lt;/p&gt;&lt;p&gt;&lt;strong&gt;ಮಿಥುನ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಮನೆ ಅಥವಾ ವರ್ಕ್&zwnj;ಸ್ಪೇಸ್&zwnj;ಗೆ ಸಂಬಂಧಿಸಿದ ಕೆಲಸಗಳು ಪ್ರಮುಖವಾಗಬಹುದು. ಮನೆಯಿಂದ ಕೆಲಸ ಮಾಡುವವರಿಗೆ ಯೋಜನೆ ರೂಪಿಸಲು ಉತ್ತಮ ಸಮಯ. ಕಚೇರಿಯಲ್ಲಿ ಅನಗತ್ಯ ವಾದ-ವಿವಾದಗಳಿಂದ ದೂರವಿರಿ. ಮನೆ ಖರ್ಚು, ಆಸ್ತಿ ಅಥವಾ ತುರ್ತು ವೆಚ್ಚಗಳಿಗಾಗಿ ಹಣಕಾಸಿನ ಮೀಸಲು ಇಟ್ಟುಕೊಳ್ಳಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕುಟುಂಬದೊಂದಿಗೆ ಶಾಂತವಾಗಿ ಮಾತನಾಡುವುದು ಸಂಬಂಧ ಬಲಪಡಿಸುತ್ತದೆ. ಹೊರಗೆ ಹೆಚ್ಚು ಓಡಾಡುವುದಕ್ಕಿಂತ ಮನೆಯಲ್ಲೇ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡಬಹುದು. ಪರದೆ ಮುಂದೆ ಹೆಚ್ಚು ಸಮಯ ಕಳೆಯುವುದನ್ನು ಕಡಿಮೆ ಮಾಡಿ.&lt;/p&gt;&lt;p&gt;&lt;strong&gt;ಕಟಕ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ನಿಮ್ಮ ಸಂವಹನ ಕೌಶಲ್ಯವೇ ನಾಳೆಯ ಪ್ರಮುಖ ಶಕ್ತಿಯಾಗಲಿದೆ. ಸೇಲ್ಸ್, ಪ್ರೆಸೆಂಟೇಶನ್, ಫ್ರೀಲ್ಯಾನ್ಸಿಂಗ್ ಅಥವಾ ಸಣ್ಣ ಪ್ರಾಜೆಕ್ಟ್&zwnj;ಗಳಲ್ಲಿ ಅವಕಾಶಗಳು ದೊರೆಯಬಹುದು. ಯಾವುದೇ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಷರತ್ತುಗಳನ್ನು ಸಂಪೂರ್ಣವಾಗಿ ಓದಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕುಟುಂಬದ ಸಣ್ಣ ಸಮಸ್ಯೆಗಳನ್ನು ಮಾತುಕತೆಯಿಂದ ಪರಿಹರಿಸಬಹುದು. ಹೊಸ ವ್ಯಕ್ತಿಯ ಪರಿಚಯವೂ ಸಾಧ್ಯ. ಹೆಚ್ಚು ಸಭೆ ಅಥವಾ ಕರೆಗಳಿದ್ದರೆ ಸಾಕಷ್ಟು ನೀರು ಕುಡಿಯಿರಿ ಮತ್ತು ನಿಮ್ಮ ಧ್ವನಿಗೆ ವಿಶ್ರಾಂತಿ ನೀಡಿ.&lt;/p&gt;&lt;p&gt;&lt;strong&gt;ಸಿಂಹ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಮಯ. ಸಂಬಳ, ಬೆಲೆ, ಸಂಪನ್ಮೂಲ ಅಥವಾ ವ್ಯವಹಾರ ಷರತ್ತುಗಳ ಕುರಿತು ಮಾತುಕತೆ ನಡೆಸಲು ದಿನ ಅನುಕೂಲಕರವಾಗಬಹುದು. ಉಳಿತಾಯ ಮತ್ತು ಹಣದ ಹರಿವಿನ ಬಗ್ಗೆ ಸ್ಪಷ್ಟತೆ ಪಡೆಯಿರಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕುಟುಂಬದ ಹಣಕಾಸು ಅಥವಾ ಜವಾಬ್ದಾರಿಗಳ ಕುರಿತು ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ದೀರ್ಘಕಾಲ ಕುಳಿತು ಕೆಲಸ ಮಾಡುವವರು ಕುತ್ತಿಗೆ ಮತ್ತು ಭುಜದ ನೋವಿನ ಬಗ್ಗೆ ಎಚ್ಚರಿಕೆ ವಹಿಸಬೇಕು.&lt;/p&gt;&lt;p&gt;&lt;strong&gt;ಕನ್ಯಾ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಇಂದಿನ ದಿನ ಕನ್ಯಾ ರಾಶಿಯವರಿಗೆ ವಿಶೇಷವಾಗಿ ಗಮನಾರ್ಹವಾಗಬಹುದು. ಚಂದ್ರ ಮತ್ತು ಬುಧದ ಪ್ರಭಾವದಿಂದ ವಿಶ್ಲೇಷಣೆ, ಯೋಜನೆ ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಹೆಚ್ಚಾಗಬಹುದು. ಕೆಲಸದಲ್ಲಿ ನಾಯಕತ್ವ ವಹಿಸುವ ಅವಕಾಶ ದೊರೆಯಬಹುದು. ಹೂಡಿಕೆಗಳನ್ನು ಮರುಪರಿಶೀಲಿಸಿ, ಅನಗತ್ಯ ಖರ್ಚು ಕಡಿಮೆ ಮಾಡುವುದು ಪ್ರಯೋಜನಕಾರಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕುಟುಂಬದವರು ನಿಮ್ಮ ಸಲಹೆ ಕೇಳಬಹುದು. ಆದರೆ ಸಂಗಾತಿಯ ಪ್ರತಿಯೊಂದು ಮಾತನ್ನೂ ವಿಶ್ಲೇಷಿಸುವ ಬದಲು ಪ್ರೀತಿಯಿಂದ ಮಾತನಾಡಿ. ಹೆಚ್ಚು ಸ್ಕ್ರೀನ್ ಟೈಮ್&zwnj;ನಿಂದ ಕಣ್ಣಿನ ದಣಿವು ಉಂಟಾಗಬಹುದು. &lt;/p&gt;&lt;p&gt;&lt;strong&gt;ತುಲಾ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಕೆಲಸದ ಸ್ಥಳದಲ್ಲಿ ಹೆಚ್ಚು ಪ್ರಚಾರ ಪಡೆಯುವುದಕ್ಕಿಂತ ಮೌನವಾಗಿ ಬಾಕಿ ಕೆಲಸಗಳನ್ನು ಮುಗಿಸುವುದು ಉತ್ತಮ. ಕಚೇರಿ ಗಾಸಿಪ್&zwnj;ನಿಂದ ದೂರವಿರಿ. ಆರೋಗ್ಯ ಅಥವಾ ಪ್ರಯಾಣಕ್ಕೆ ಸಂಬಂಧಿಸಿದ ಅನಿರೀಕ್ಷಿತ ಖರ್ಚು ಬರಬಹುದು.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ನಿಮಗೆ ಸ್ವಲ್ಪ ವೈಯಕ್ತಿಕ ಸಮಯದ ಅಗತ್ಯವಿರಬಹುದು. ಸಂಗಾತಿಯಿಂದ ದೂರವಾಗುವ ಬದಲು ನಿಮ್ಮ ಅಗತ್ಯವನ್ನು ಸ್ಪಷ್ಟವಾಗಿ ತಿಳಿಸಿ. ರಾತ್ರಿ ಬೇಗ ವಿಶ್ರಾಂತಿ ಪಡೆಯುವುದು ಮಾನಸಿಕ ದಣಿವು ಕಡಿಮೆ ಮಾಡಬಹುದು.&lt;/p&gt;&lt;p&gt;&lt;strong&gt;ವೃಶ್ಚಿಕ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ನಿಮ್ಮ ವೃತ್ತಿಪರ ಸಂಪರ್ಕಗಳೇ ಹೊಸ ಅವಕಾಶಗಳಿಗೆ ಕಾರಣವಾಗಬಹುದು. ಹಳೆಯ ಸಹೋದ್ಯೋಗಿ ಅಥವಾ ಪ್ರಭಾವಿ ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ ಇದೆ. ತ್ವರಿತ ಲಾಭದ ಹಿಂದೆ ಓಡುವುದಕ್ಕಿಂತ ದೀರ್ಘಕಾಲದ ಗುರಿಗಳತ್ತ ಗಮನ ಹರಿಸಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಸ್ನೇಹಿತರು ಅಥವಾ ಸಹೋದರ-ಸಹೋದರಿಯರಿಂದ ಉತ್ತಮ ಸಲಹೆ ಸಿಗಬಹುದು. ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಗಳ ಕುರಿತು ಮಾತನಾಡುವುದು ಸಂಬಂಧವನ್ನು ಬಲಪಡಿಸಬಹುದು. ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಪ್ಪಿಸಿ.&lt;/p&gt;&lt;p&gt;&lt;strong&gt;ಧನು ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ವೃತ್ತಿಜೀವನದಲ್ಲಿ ನಿಮ್ಮ ಸಾಮರ್ಥ್ಯ ತೋರಿಸಲು ಅವಕಾಶ ಸಿಗಬಹುದು. ಪ್ರಮುಖ ಜವಾಬ್ದಾರಿ, ಹೊಸ ಪ್ರಾಜೆಕ್ಟ್ ಅಥವಾ ನಾಯಕತ್ವದ ಕೆಲಸ ನಿಮ್ಮ ಮುಂದೆ ಬರಬಹುದು. ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲ ವಿವರಗಳನ್ನು ಪರಿಶೀಲಿಸಿ. ವೃತ್ತಿ ಪ್ರಗತಿಯೊಂದಿಗೆ ಆದಾಯವೂ ಹೆಚ್ಚಾಗುವ ಅವಕಾಶವಿದೆ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಕಚೇರಿಯ ಒತ್ತಡವನ್ನು ಮನೆಗೆ ತರಬೇಡಿ. ಸಂಗಾತಿಗೂ ಸಮಾನ ಸಮಯ ನೀಡಿ. ದೀರ್ಘಕಾಲ ಕೆಲಸ ಮಾಡುವವರು ಬೆನ್ನು ಮತ್ತು ದೇಹದ ಭಂಗಿಯ ಬಗ್ಗೆ ಗಮನಹರಿಸಬೇಕು.&lt;/p&gt;&lt;p&gt;&lt;strong&gt;ಮಕರ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ದೀರ್ಘಕಾಲದ ಯೋಜನೆಗಳಿಗೆ ದಿನ ಉತ್ತಮ. ಶಿಕ್ಷಣ, ವಿದೇಶ ಸಂಬಂಧಿತ ಕೆಲಸ, ಕಾನೂನು ದಾಖಲೆ ಅಥವಾ ಮಹತ್ವದ ಪ್ರಸ್ತಾವನೆಗಳಲ್ಲಿ ಪ್ರಗತಿ ಕಾಣಬಹುದು. ವೇಗವಾಗಿ ಲಾಭ ಪಡೆಯುವ ಬದಲು ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನೆ ಆಧಾರಿತ ನಿರ್ಧಾರಗಳಿಗೆ ಆದ್ಯತೆ ನೀಡಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಹಿರಿಯ ಕುಟುಂಬ ಸದಸ್ಯರ ಸಲಹೆ ಉಪಯುಕ್ತವಾಗಬಹುದು. ಸಂಗಾತಿಯೊಂದಿಗೆ ಹೊಸ ವಿಚಾರ ಅಥವಾ ಕಲಿಕೆಯ ಅನುಭವ ಹಂಚಿಕೊಳ್ಳುವುದು ಸಂಬಂಧಕ್ಕೆ ಹೊಸತನ ತರಬಹುದು. ಸಾಕಷ್ಟು ನೀರು ಕುಡಿಯಿರಿ ಮತ್ತು ಬೆನ್ನಿಗೆ ವ್ಯಾಯಾಮ ನೀಡಿ.&lt;/p&gt;&lt;p&gt;&lt;strong&gt;ಕುಂಭ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಸಂಶೋಧನೆ, ಆಡಿಟ್, ರಹಸ್ಯ ಪ್ರಾಜೆಕ್ಟ್&zwnj;ಗಳು ಮತ್ತು ಸಂಕೀರ್ಣ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು. ಹಣಕಾಸು ದಾಖಲೆ, ತೆರಿಗೆ, ಸಾಲ ಅಥವಾ ಜಂಟಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಮೇಲ್ಮೈ ಮಾತುಕತೆಗಿಂತ ಮನಸ್ಸಿನಲ್ಲಿರುವ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವುದು ಸಂಬಂಧ ಗಟ್ಟಿಗೊಳಿಸುತ್ತದೆ. ಹೆಚ್ಚು ಯೋಚಿಸುವುದರಿಂದ ಒತ್ತಡ ಹೆಚ್ಚಾಗದಂತೆ ಧ್ಯಾನ ಅಥವಾ ಉಸಿರಾಟದ ಅಭ್ಯಾಸ ಸಹಾಯಕವಾಗಬಹುದು.&lt;/p&gt;&lt;p&gt;&lt;strong&gt;ಮೀನ ರಾಶಿ:&lt;/strong&gt;&lt;/p&gt;&lt;p&gt;ಉದ್ಯೋಗ ಮತ್ತು ಹಣಕಾಸು&lt;/p&gt;&lt;p&gt;ಪಾಲುದಾರಿಕೆ ಮತ್ತು ಗ್ರಾಹಕರೊಂದಿಗೆ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ನಿಮ್ಮ ಅಂತಃಪ್ರಜ್ಞೆಯ ಜೊತೆಗೆ ಪ್ರಾಯೋಗಿಕ ಚಿಂತನೆಯೂ ಸಹಾಯ ಮಾಡಲಿದೆ. ಜಂಟಿ ವ್ಯವಹಾರ ಅಥವಾ ಒಪ್ಪಂದದಲ್ಲಿ ಹಣ ಪಾವತಿ ಷರತ್ತುಗಳನ್ನು ಸ್ಪಷ್ಟಪಡಿಸಿ.&lt;/p&gt;&lt;p&gt;ಪ್ರೀತಿ ಮತ್ತು ಆರೋಗ್ಯ&lt;/p&gt;&lt;p&gt;ಸಂಗಾತಿಗೆ ದೊಡ್ಡ ಉಡುಗೊರೆ ನೀಡುವುದಕ್ಕಿಂತ ಸಣ್ಣ ಕೆಲಸಗಳಲ್ಲಿ ಸಹಾಯ ಮಾಡುವುದು ಹೆಚ್ಚು ಪರಿಣಾಮಕಾರಿ. ಸಂಬಂಧದಲ್ಲಿ ಭಾವನಾತ್ಮಕ ಭದ್ರತೆ ಹೆಚ್ಚಬಹುದು. ಅತಿಯಾದ ಖಾರ ಅಥವಾ ಭಾರವಾದ ಆಹಾರ ತಪ್ಪಿಸಿ.&lt;/p&gt;&lt;p&gt;&lt;strong&gt;ಸೂಚನೆ:&lt;/strong&gt; ಮೇಲಿನ ರಾಶಿಫಲ ಜ್ಯೋತಿಷ್ಯ ನಂಬಿಕೆಗಳು ಮತ್ತು ಲಭ್ಯವಿರುವ ಜ್ಯೋತಿಷ್ಯ ಮೂಲಗಳ ಆಧಾರಿತ ಮನರಂಜನಾ/ಆಧ್ಯಾತ್ಮಿಕ ವಿಷಯವಾಗಿದೆ. ಪ್ರಮುಖ ಹಣಕಾಸು, ಆರೋಗ್ಯ ಅಥವಾ ಜೀವನದ ನಿರ್ಧಾರಗಳನ್ನು ಇದೊಂದನ್ನೇ ಆಧರಿಸಿ ತೆಗೆದುಕೊಳ್ಳಬೇಡಿ.&lt;/p&gt;]]></content:encoded>
            <category><![CDATA[astrology]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/astrology/september-12-daily-horoscope-in-kannada-career-growth-financial-clarity-and-love-signals-for-these-signs/articleshow-8llzivm"/>
        </item>
        <item>
            <title><![CDATA[Belagavi: 53 ವರ್ಷಗಳ ಬಳಿಕ ನಡೆಯಲಿದೆ ಉತ್ಸವ; ಗಣೇಶೋತ್ಸವ ಸಂಭ್ರಮಕ್ಕೆ ಬೆಳಗಾವಿ ಸಜ್ಜು]]></title>
            <link>https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</link>
            <guid isPermaLink="true">https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd</guid>
            <pubDate>Sat, 12 Sep 2026 06:18:44 +0530</pubDate>
            <description><![CDATA[ಗಣೇಶ ಚತುರ್ಥಿಗೆ ಮುನ್ನವೇ ಬೆಳಗಾವಿ ನಗರವು ಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ಸಾರ್ವಜನಿಕ ಮಂಟಪಗಳಲ್ಲಿ ಬೃಹತ್ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಹಾಗೂ ಮನೆಮನೆಗಳಲ್ಲಿ ಗಣಪನ ಸ್ವಾಗತಕ್ಕೆ ಸಿದ್ಧತೆಗಳು ಜೋರಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m29hc6vy587k213yk295yfgn,imgname-belagavi-1789174094718.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶ್ರೀಶೈಲ ಮಠದ&lt;/strong&gt;&lt;/p&gt;&lt;p&gt;&lt;strong&gt;ಬೆಳಗಾವಿ: &lt;/strong&gt;ನಗರವೆಲ್ಲ ಗಣಪನೇ ಗಣಪ. ಬೀದಿಗಿಳಿದರೆ ಕಿವಿಗೆ ಬೀಳುವುದು ಡೊಳ್ಳು, ತಾಷಾ, ಗಣೇಶನ ಘೋಷಣೆ. ಮಾರುಕಟ್ಟೆಗೆ ಕಾಲಿಟ್ಟರೆ ಕಣ್ಣಿಗೆ ಬೀಳುವುದು ಬಣ್ಣಬಣ್ಣದ ಗಣೇಶ ಮೂರ್ತಿಗಳು. ಅಂಗಡಿಗಳ ಮುಂದೆ ಅಲಂಕಾರಿಕ ಸಾಮಗ್ರಿಗಳ ರಾಶಿ. ಕೈಚೀಲ ಹಿಡಿದು ಹಬ್ಬದ ಖರೀದಿಗೆ ಬಂದ ಮಹಿಳೆಯರು. ತಮಗಿಷ್ಟವಾದ ಗಣಪನನ್ನು ಮನೆಗೆ ಕೊಂಡೊಯ್ಯಬೇಕೆಂದು ಹಠ ಹಿಡಿದ ಮಕ್ಕಳು. ಮಂಟಪಗಳ ಮುಂದೆ ಬೃಹತ್ ಗಣೇಶ ಮೂರ್ತಿಗಳ ಅಂತಿಮ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು.&lt;/p&gt;&lt;p&gt;ಗಣೇಶ ಚತುರ್ಥಿಗೆ ಇನ್ನೂ ಮೂರು ದಿನ ಬಾಕಿ ಇರುವಂತೆಯೇ ಬೆಳಗಾವಿ ನಗರ ಸಂಪೂರ್ಣ ಹಬ್ಬದ ಗುಂಗಿನಲ್ಲಿ ಮುಳುಗಿದೆ. ವಿಘ್ನವಿನಾಶಕನನ್ನು ಮನೆಗೆ ಬರಮಾಡಿಕೊಳ್ಳಲು ಮನೆಮನೆಗಳಲ್ಲಿ ಸಿದ್ಧತೆ ಚುರುಕುಗೊಂಡಿದ್ದರೆ, ಸಾರ್ವಜನಿಕ ಗಣೇಶ ಮಂಡಳಿಗಳು ಈಗಾಗಲೇ ಬೃಹತ್ ಮೂರ್ತಿಗಳನ್ನು ಮಂಟಪಗಳಿಗೆ ತಂದು ಪ್ರತಿಷ್ಠಾಪನೆಯ ಸಿದ್ಧತೆಯಲ್ಲಿ ತೊಡಗಿವೆ. ಹೀಗಾಗಿ ಗಣೇಶ ಚತುರ್ಥಿ ಆರಂಭಕ್ಕೂ ಮುನ್ನವೇ ನಗರದಲ್ಲಿ ಹಬ್ಬದ ವಾತಾವರಣ ಗರಿಗೆದರಿದೆ.&lt;/p&gt;&lt;h2&gt;&lt;strong&gt;ಗಣಪನಿಗಾಗಿಯೇ ಮಾರುಕಟ್ಟೆ&lt;/strong&gt;&lt;/h2&gt;&lt;p&gt;ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಖಡೇಬಜಾರ್&zwnj;, ಶನಿವಾರಕೂಟ, ಕಾಕತಿವೇಸ್&zwnj;, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಬಾಪಟ ಗಲ್ಲಿ, ಕೋನ್ವಾಳ ಗಲ್ಲಿ ಸೇರಿದಂತೆ ಮತ್ತಿತರ ಪ್ರದೇಶಗಳು ಇದೀಗ ಗಣೇಶೋತ್ಸವದ ಮಾರುಕಟ್ಟೆಗಳಾಗಿ ಮಾರ್ಪಟ್ಟಿವೆ. ವಿವಿಧ ಗಾತ್ರ, ಆಕಾರ ಮತ್ತು ವಿನ್ಯಾಸದ ಗಣೇಶ ಮೂರ್ತಿಗಳು ಗ್ರಾಹಕರನ್ನು ಸೆಳೆಯುತ್ತಿವೆ. ಪುಟ್ಟ ಗಣಪನಿಂದ ಹಿಡಿದು ಬೃಹದಾಕಾರದ ಮೂರ್ತಿಗಳವರೆಗೆ ಸಾಲಾಗಿ ನಿಂತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.&lt;/p&gt;&lt;p&gt;ಮನೆಯ ಗಣಪನನ್ನು ಆಯ್ಕೆ ಮಾಡಿಕೊಳ್ಳಲು ಕುಟುಂಬಗಳು ಮೂರ್ತಿಗಳ ಮುಂದೆ ನಿಂತು ಚರ್ಚಿಸುತ್ತಿದ್ದರೆ, ಮಕ್ಕಳ ಕಣ್ಣು ಮಾತ್ರ ಬಣ್ಣಬಣ್ಣದ ಮೂರ್ತಿಗಳ ಮೇಲೆಯೇ. ಯಾವ ಗಣಪ ಸುಂದರ, ಯಾವ ಗಣಪ ಮನೆಗೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದ್ದರೆ, ವ್ಯಾಪಾರಿಗಳು ಗ್ರಾಹಕರ ಆಯ್ಕೆಗೆ ತಕ್ಕಂತೆ ಮೂರ್ತಿಗಳನ್ನು ತೋರಿಸುತ್ತಿದ್ದಾರೆ.&lt;/p&gt;&lt;p&gt;ಗಣೇಶ ಮಂಟಪಗಳ ಅಲಂಕಾರಕ್ಕೆ ಬೇಕಾಗುವ ಹೂವಿನ ಮಾಲೆಗಳು, ಕೃತಕ ಹೂವುಗಳು, ತೋರಣಗಳು, ಬಣ್ಣಬಣ್ಣದ ಪರದೆಗಳು, ಅಲಂಕಾರಿಕ ವಸ್ತುಗಳು ಹಾಗೂ ವಿದ್ಯುತ್ ದೀಪಗಳಿಗೆ ಭರ್ಜರಿ ಬೇಡಿಕೆ ಬಂದಿದೆ. ಸರಣಿ ದೀಪ, ಎಲ್&zwnj;ಇಡಿ ದೀಪ ಸೇರಿದಂತೆ ಹೊಸ ವಿನ್ಯಾಸದ ಬೆಳಕಿನ ಅಲಂಕಾರಿಕ ಸಾಮಗ್ರಿಗಳ ಖರೀದಿ ಹೆಚ್ಚಾಗಿದೆ. ಪೂಜಾ ಸಾಮಗ್ರಿ, ಹೂವು, ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು, ಗಂಧ, ಕುಂಕುಮ, ಅರಿಶಿನ, ಅಗರಬತ್ತಿ, ಕರ್ಪೂರ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯೂ ಚುರುಕಾಗಿದೆ. ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಈ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯನ್ನು ವ್ಯಾಪಾರಿಗಳು ಹೊಂದಿದ್ದಾರೆ.&lt;/p&gt;&lt;p&gt;ಹಬ್ಬದ ಖರೀದಿಯ ಮತ್ತೊಂದು ಭಾಗ ಬಟ್ಟೆ ಅಂಗಡಿಗಳಲ್ಲಿದೆ. ಮಕ್ಕಳಿಗೆ ಹೊಸ ಉಡುಪು, ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್, ಪ್ಯಾಂಟ್, ಕುರ್ತಾಗಳ ಖರೀದಿ ನಡೆಯುತ್ತಿದೆ. ಮನೆಗಳಲ್ಲಿ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬೇಕಾದ ಪದಾರ್ಥಗಳು ಹಾಗೂ ಸಿಹಿ ತಿಂಡಿಗಳಿಗೂ ಬೇಡಿಕೆ ಹೆಚ್ಚಾಗಿದೆ.&lt;/p&gt;&lt;h3&gt;&lt;strong&gt;ಬೆಳಗಾವಿಯ ರಾಜಾನ ಅದ್ಧೂರಿ ಆಗಮನ&lt;/strong&gt;&lt;/h3&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಈಗಾಗಲೇ ಮುನ್ನುಡಿ ಬರೆದಿರುವ ಬೆಳಗಾವಿ, 10 ದಿನ ಮೊದಲೇ ಮತ್ತೊಂದು ಅದ್ಧೂರಿ ಕ್ಷಣಕ್ಕೆ ಸಾಕ್ಷಿಯಾಯಿತು. ಚವ್ಹಾಟ ಗಲ್ಲಿಯ ಬೆಳಗಾವಿಯ ರಾಜಾ ಎಂಬ ಖ್ಯಾತಿ ಹೊಂದಿದ ಗಣೇಶ ಮೂರ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಹೀಗೆ ನಾನಾ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬೃಹತ್&zwnj; ಗಾತ್ರದ ಗಣೇಶ ಮೂರ್ತಿಗಳನ್ನು ವಿರಾಜಮಾನಗೊಂಡಿವೆ. ಡೊಳ್ಳು, ಡೋಲ್-ತಾಷಾ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಮೇಳಗಳ ನಿನಾದದ ನಡುವೆ ಟ್ರಾಲಿಯಲ್ಲಿ ಆಗಮಿಸಿದ ಬೃಹದಾಕಾರದ ಗಣೇಶ ಮೂರ್ತಿ ಭಕ್ತರ ಗಮನ ಸೆಳೆಯಿತು. ಜೈ ಗಣೇಶ ಘೋಷಣೆಗಳು ಮುಗಿಲು ಮುಟ್ಟಿದವು. ಯುವಕರು ಕುಣಿದು ಕುಪ್ಪಳಿಸುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿಯ ಸಂಭ್ರಮವನ್ನು ಹೆಚ್ಚಿಸಿದರು.&lt;/p&gt;&lt;p&gt;ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಆಗಮಿಸಿದ ಬೆಳಗಾವಿಯ ರಾಜಾನನ್ನು ಸ್ವಾಗತಿಸಲು ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.&lt;/p&gt;&lt;p&gt;&lt;strong&gt;53 ವರ್ಷಗಳ ಪರಂಪರೆ&lt;/strong&gt;&lt;/p&gt;&lt;p&gt;ಬೆಳಗಾವಿಯ ಗಣೇಶೋತ್ಸವ ಎಂದರೆ ಕೇವಲ ಹಬ್ಬವಲ್ಲ. ಅದು ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ಬದುಕಿನೊಂದಿಗೆ ಬೆಸೆದುಕೊಂಡಿರುವ ಪರಂಪರೆ. 53 ವರ್ಷಗಳ ಬಳಿಕ ಈ ಬಾರಿ 12 ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿರುವುದು ವಿಶೇಷ.&lt;/p&gt;&lt;p&gt;ನಗರದ ವಿವಿಧ ಭಾಗಗಳಲ್ಲಿ 400ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹಲವು ಮಂಡಳಿಗಳು ಗಣೇಶ ಚತುರ್ಥಿಗೆ ಒಂದು ವಾರ ಮುಂಚೆಯೇ ಮೂರ್ತಿಗಳನ್ನು ಮಂಟಪಗಳಿಗೆ ತಂದು ಅಲಂಕಾರ ಕಾರ್ಯ ಆರಂಭಿಸಿವೆ. ಕೆಲ ಮಂಟಪಗಳಲ್ಲಿ ಧಾರ್ಮಿಕ ವಾತಾವರಣಕ್ಕೆ ಒತ್ತು ನೀಡಲಾಗಿದ್ದರೆ, ಇನ್ನು ಕೆಲವೆಡೆ ಕಲಾತ್ಮಕ ಅಲಂಕಾರ, ಸಾಮಾಜಿಕ ಸಂದೇಶ ಹಾಗೂ ವಿವಿಧ ವಿಷಯಾಧಾರಿತ ವಿನ್ಯಾಸಗಳಿಗೆ ಆದ್ಯತೆ ನೀಡಲಾಗುತ್ತಿದೆ.&lt;/p&gt;&lt;p&gt;12 ದಿನಗಳ ಕಾಲ ಬೆಳಗಾವಿಯತ್ತ ಭಕ್ತರ ಹರಿವು ಹೆಚ್ಚಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳು ಮಾತ್ರವಲ್ಲದೆ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಜನರು ಗಣೇಶ ಮೂರ್ತಿಗಳ ದರ್ಶನಕ್ಕೆ ಆಗಮಿಸುವ ನಿರೀಕ್ಷೆಯಿದೆ. ವಿಸರ್ಜನಾ ಮೆರವಣಿಗೆ ವೇಳೆ ಲಕ್ಷಾಂತರ ಜನರು ಭಾಗವಹಿಸುವುದು ಬೆಳಗಾವಿಯ ಗಣೇಶೋತ್ಸವದ ವೈಭವಕ್ಕೆ ಸಾಕ್ಷಿಯಾಗಲಿದೆ.&lt;/p&gt;&lt;p&gt;ಮುಂಬೈ, ಪುಣೆ ಹೊರತುಪಡಿಸಿದರೆ ದೇಶದಲ್ಲೇ ಅತ್ಯಂತ ಅದ್ಧೂರಿಯಾಗಿ ಸಾರ್ವಜನಿಕ ಗಣೇಶೋತ್ಸವ ನಡೆಯುವ ನಗರಗಳಲ್ಲಿ ಬೆಳಗಾವಿಗೂ ಪ್ರಮುಖ ಸ್ಥಾನವಿದೆ. ಕರ್ನಾಟಕದಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆಗೆ ಬೆಳಗಾವಿಯೇ ಮುನ್ನುಡಿ ಬರೆದಿದೆ ಎಂಬ ಹೆಗ್ಗಳಿಕೆಯೂ ನಗರದ ಗಣೇಶೋತ್ಸವಕ್ಕಿದೆ.&lt;/p&gt;&lt;p&gt;&lt;strong&gt;ಮನೆಮನೆಗೂ ಗಣಪನ ಸ್ವಾಗತ&lt;/strong&gt;&lt;/p&gt;&lt;p&gt;ಸಾರ್ವಜನಿಕ ಮಂಟಪಗಳ ಸಿದ್ಧತೆ ಒಂದು ಕಡೆಯಾದರೆ, ಮನೆಮನೆಗಳಲ್ಲಿಯೂ ಗಣಪನ ಸ್ವಾಗತಕ್ಕೆ ಅಂತಿಮ ಸಿದ್ಧತೆ ನಡೆಯುತ್ತಿದೆ. ಮನೆ ಸ್ವಚ್ಛತೆ, ಮಂಟಪ ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಹೂವಿನ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಕುಟುಂಬ ಸದಸ್ಯರು ತೊಡಗಿದ್ದಾರೆ.&lt;/p&gt;&lt;p&gt;ಕೆಲವರು ಸರಳ ಮಂಟಪಕ್ಕೆ ಆದ್ಯತೆ ನೀಡಿದರೆ, ಮತ್ತೆ ಕೆಲವರು ಕಲಾತ್ಮಕ ವಿನ್ಯಾಸದ ಮಂಟಪ ನಿರ್ಮಿಸಿ ಗಣಪನಿಗೆ ವಿಶೇಷ ಅಲಂಕಾರ ಮಾಡಲು ಸಜ್ಜಾಗಿದ್ದಾರೆ. ಮನೆಯ ಹಿರಿಯರಿಂದ ಮಕ್ಕಳವರೆಗೆ ಎಲ್ಲರೂ ಸಿದ್ಧತೆಯಲ್ಲಿ ಭಾಗಿಯಾಗಿರುವುದು ಹಬ್ಬದ ಕೌಟುಂಬಿಕ ಸಂಭ್ರಮವನ್ನು ಹೆಚ್ಚಿಸಿದೆ.&lt;/p&gt;&lt;p&gt;ಗಣೇಶೋತ್ಸವದ ಸಂಭ್ರಮಕ್ಕೆ ಪರಿಸರ ಕಾಳಜಿಯ ಸ್ಪರ್ಶವೂ ಅಗತ್ಯ. ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ, ಶಬ್ದ ಮಾಲಿನ್ಯ ನಿಯಂತ್ರಣ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಹೊಣೆಗಾರಿಕೆ ಆಗಿದೆ. ಭಕ್ತಿಯ ಹೆಸರಿನಲ್ಲಿ ಪರಿಸರಕ್ಕೆ ಹಾನಿಯಾಗದಂತೆ, ಸಂಭ್ರಮದ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಣೇಶೋತ್ಸವ ಆಚರಿಸುವುದು ನಗರದ ಪರಂಪರೆಗೆ ಮತ್ತಷ್ಟು ಗೌರವ ತಂದುಕೊಡಲಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/even-before-ganesha-chaturthi-belagavi-city-is-immersed-in-festive-fervour-mrq/articleshow-a8trsrd"/>
        </item>
        <item>
            <title><![CDATA[ಕೈದಿಗಳಿಗೆ ಮೊಬೈಲ್‌ ಪೂರೈಕೆ: ಮತ್ತಿಬ್ಬರು ಜೈಲಿನ ಸಿಬ್ಬಂದಿ ಸೆರೆ,  12 ಮೊಬೈಲ್ ಖರೀದಿ]]></title>
            <link>https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6</link>
            <guid isPermaLink="true">https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6</guid>
            <pubDate>Sat, 12 Sep 2026 05:57:58 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಣದಾಸೆಗಾಗಿ ಕೈದಿಗಳಿಗೆ ಕಾನೂನುಬಾಹಿರವಾಗಿ ಮೊಬೈಲ್ ಪೂರೈಸುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ವೀಕ್ಷಕ ವಿಜಯ್ ಕುಮಾರ್ ಮತ್ತು ವೀಕ್ಷಕ ಶ್ರೀನಿವಾಸ್ ನಾಯ್ಕ್, ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಕೈದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kj4v3zmg23rbaqra33w3ttmn,imgname-parappana-agrahara-jail-1771836669584.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಹಣದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಸಂಬಂಧ ಮತ್ತಿಬ್ಬರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.&lt;/p&gt;&lt;p&gt;ಕಾರಾಗೃಹದ ಮುಖ್ಯ ವೀಕ್ಷಕ ವಿಜಯ್ ಕುಮಾರ್ ಹಾಗೂ ವೀಕ್ಷಕ ಶ್ರೀನಿವಾಸ್ ನಾಯ್ಕ ಬಂಧಿತರು. ಹಣದಾಸೆಗೆ ಕೈದಿಗಳಿಗೆ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿಸಿ ಆರೋಪಿಗಳು ಮಾರುತ್ತಿದ್ದರು. ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕವಾಗಿ 2 ಎಫ್&zwnj;ಐಆರ್&zwnj;ಗಳು ದಾಖಲಾಗಿದ್ದವು. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಸತೀಶ್ ನೇತೃತ್ವದ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದೆ.&lt;/p&gt;&lt;h2&gt;&lt;strong&gt;ಬೇನಾಮಿ ಹೆಸರಿನಲ್ಲಿ 12 ಮೊಬೈಲ್ ಖರೀದಿ&amp;nbsp;&lt;/strong&gt;&lt;/h2&gt;&lt;p&gt;ಕಳೆದ ಜನವರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿ 4 ಮೊಬೈಲ್&zwnj;ಗಳು, 2 ಸಿಮ್ ಕಾರ್ಡ್&zwnj;ಗಳು, 1 ಚಾರ್ಜರ್ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಆ ಮೊಬೈಲ್ ಸಂಖ್ಯೆಗಳು ಯಾವ ಫೋನ್&zwnj;ಗಳಲ್ಲಿ ಬಳಕೆಯಾಗಿವೆ ಎಂಬುದರ ಬಗ್ಗೆ ಸಿಐಐಆರ್ ಪೋರ್ಟಲ್ ಮೂಲಕ ತಾಂತ್ರಿಕ ಮಾಹಿತಿ ಕಲೆ ಹಾಕಿದರು. ಆಗ ಜೈಲಿನಲ್ಲಿ ಸಿಕ್ಕಿದ ಸಿಮ್&zwnj;ಗಳು ಕಾರಾಗೃಹ ವಾರ್ಡನ್&zwnj; ಶ್ರೀನಿವಾಸ್ ನಾಯ್ಕ್&zwnj;ಗೆ ಸೇರಿದ 2 ಮೊಬೈಲ್&zwnj;ಗಳಲ್ಲಿ ಬಳಕೆಯಾಗಿರುವ ಸಂಗತಿ ಗೊತ್ತಾಯಿತು. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಬೇನಾಮಿ ಹೆಸರಿನಲ್ಲಿ ಮೊಬೈಲ್ ಖರೀದಿ ಭಾನಗಡಿ ಬಯಲಾಯಿತು.&lt;/p&gt;&lt;p&gt;&lsquo;ರಾಹುಲ್&rsquo; ಎಂಬ ಅಪರಿಚಿತ ಹೆಸರಿನಲ್ಲಿ ಒಟ್ಟು 12 ಮೊಬೈಲ್&zwnj;ಗಳನ್ನು ಶ್ರೀನಿವಾಸ್ ಖರೀದಿಸಿದ್ದರು. ಬಳಿಕ ಅವುಗಳಲ್ಲಿ 2 ಮೊಬೈಲ್&zwnj;ಗಳನ್ನು ಕೈದಿಗೆ ಪೂರೈಕೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಕಾರಾಗೃಹದಲ್ಲಿ ಮತ್ತೆ ಮೇನಲ್ಲಿ ಒಂದು ಮೊಬೈಲ್ ಹಾಗೂ ಸಿಮ್ ಪತ್ತೆಯಾಗಿದ್ದವು. ಆ ಸಿಮ್ ಆಧಾರದ ಮೇರೆಗೆ ತನಿಖೆಗಿಳಿದ ಪೊಲೀಸರು, ಸಿಮ್ ಮಾರಾಟದ ಬಗ್ಗೆ ಮಾಹಿತಿ ಕಲೆ ಹಾಕಿದರು.&lt;/p&gt;&lt;p&gt;ಆಗ ಆಂಧ್ರದ ಎಜೆನ್ಸಿವೊಂದಕ್ಕೆ ಮಾಡಲಾಗಿತ್ತು ಎಂದು ಕಂಪನಿ ತಿಳಿಸಿತು. ಈ ಸುಳಿವು ಆಧರಿಸಿ ಮತ್ತಷ್ಟು ಶೋಧಿಸಿದಾಗ ಮೊಬೈಲ್ ಮಾರಾಟದ ಪೂರ್ಣ ವಿವರ ಲಭಿಸಿತು. ಈ ಮಾಹಿತಿ ಬೆನ್ನತ್ತಿದ್ದಾಗ ಮೊಬೈಲ್ ಖರೀದಿಸಿದ್ದ ಭರತ್ ಅಲಿಯಾಸ್ ಭುವನ್&zwnj; ಸಿಕ್ಕಿಬಿದ್ದ. ಆತನ ಹೇಳಿಕೆ ಮೇರೆಗೆ ಮುಖ್ಯ ವೀಕ್ಷಕ ವಿಜಯ್ ಸೆರೆಯಾಗಿದ್ದಾನೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪವಿತ್ರ ಗೌಡ ಸ್ಥಳಾಂತರ, ದರ್ಶನ್&zwnj;ಗೂ ಬಿಗಿ ಹಿಡಿದ ಜೈಲು ಅಧಿಕಾರಿಗಳು' ಇಷ್ಟಕ್ಕೆಲ್ಲ ಕಾರಣ ಪ್ರಜ್ವಲ್&zwnj; ರೇವಣ್ಣ&lt;/strong&gt;&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/supply-of-mobile-phones-to-prisoners-two-more-parappana-agrahara-jail-staff-members-arrested-mrq/articleshow-imflyw6"/>
        </item>
        <item>
            <title><![CDATA[Holiday: ಸಾಲು ಸಾಲು ರಜೆ: ಊರಿನತ್ತ ಹೊರಟ ಬೆಂಗಳೂರಿನ ಜನರು, ಖಾಸಗಿ ಬಸ್‌ಗಳ ಸುಲಿಗೆ]]></title>
            <link>https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il</link>
            <guid isPermaLink="true">https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il</guid>
            <pubDate>Sat, 12 Sep 2026 05:49:44 +0530</pubDate>
            <description><![CDATA[ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆ ಇದ್ದ ಕಾರಣ, ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ಉಂಟಾಗಿತ್ತು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಿದರೂ, ಖಾಸಗಿ ಬಸ್‌ಗಳು ದುಪ್ಪಟ್ಟು ದರ ವಸೂಲಿ ಮಾಡಿ ಪ್ರಯಾಣಿಕರಿಗೆ ಹೊರೆಯಾದವು.]]></description>
            <media:content url="https://static.asianetnews.com/images/w-1280,h-720,format-jpg,imgid-01m29fq1f6a33x75qjvptcd40x,imgname-bengaluru-1789172352485.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಿಂದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿ ಕೆಎಸ್ಸಾರ್ಟಿಸಿ ಬಸ್&zwnj; ನಿಲ್ದಾಣಗಳು ಜನದಟ್ಟಣೆಯಿಂದ ಕೂಡಿತ್ತು.&lt;/p&gt;&lt;p&gt;ಸೆ.12 ಎರಡನೇ ಶನಿವಾರ ಸರ್ಕಾರಿ ರಜೆ, ಸೆ.13 ಭಾನುವಾರ. ಹಾಗೆಯೇ, ಸೆ.14ರಂದು ಗೌರಿ-ಗಣೇಶ ಹಬ್ಬ ಇರುವ ಕಾರಣ 3 ದಿನ ರಜೆ ಸಿಗುತ್ತಿದೆ. ಹೀಗೆ ಸಾಲಾಗಿ ರಜೆಯಿರುವ ಕಾರಣ ಊರು ಬಿಡುತ್ತಿರುವವರ ಸಂರ್ಖಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು. ಶುಕ್ರವಾರ ಸಂಜೆ 5 ಗಂಟೆಯಿಂದಲೇ ಜನರು ಕೆಎಸ್ಸಾರ್ಟಿಸಿಯ ಮೆಜೆಸ್ಟಿಕ್&zwnj; ಬಸ್&zwnj; ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್&zwnj; ಬಸ್&zwnj; ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳತ್ತ ಬಂದರು. ಅದರಿಂದ ಬಸ್&zwnj; ನಿಲ್ದಾಣಗಳಲ್ಲಿ ಜನದಟ್ಟಣೆಯಿಂದ ತುಂಬಿತ್ತು.&lt;/p&gt;&lt;h2&gt;&lt;strong&gt;2400 ಹೆಚ್ಚುವರಿ ಬಸ್&zwnj;ಗಳ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಪ್ರಯಾಣಿಕರ ಒತ್ತಡ ನಿವಾರಿಸಲು ಕೆಎಸ್ಸಾರ್ಟಿಸಿ 2400 ಹೆಚ್ಚುವರಿ ಬಸ್&zwnj;ಗಳ ಕಾರ್ಯಾಚರಣೆ ಮಾಡಿತ್ತು. ಜತೆಗೆ ಬಿಎಂಟಿಸಿ ಸಹ ವಿವಿಧ ನಗರಗಳಿಗೆ ಸೇವೆ ಒದಗಿಸಿದೆ.&lt;/p&gt;&lt;p&gt;ಸಂಜೆಯಿಂದಲೇ ನಗರದ ವಿವಿಧೆಡೆಗಳಿಂದ ಬಸ್&zwnj; ನಿಲ್ದಾಣಗಳತ್ತ ಬರುವ ಜನರ ಸಂಖ್ಯೆ ಹೆಚ್ಚಿತ್ತು. ಬಸ್&zwnj; ನಿಲ್ದಾಣ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಹೆಚ್ಚಾಗಿ ದಟ್ಟಣೆ ಜಾಸ್ತಿಯಾಗಿತ್ತು. ಬಸ್&zwnj; ನಿಲ್ದಾಣಗಳಲ್ಲಿ ಗೊಂದಲ ವಾತಾವರಣ ಇದ್ದ ಕಾರಣ ಮುಂಗಡ ಟಿಕೆಟ್&zwnj; ಕಾಯ್ದಿರಿಸಿದ್ದವರು ತಮ್ಮ ಬಸ್&zwnj;ಗಳನ್ನು ಹುಡುಕಲು ಹರಸಾಹಸ ಪಟ್ಟರು.&lt;/p&gt;&lt;p&gt;ನಗರದ ವಿವಿಧೆಡೆಗಳಿಂದ ಪ್ರಯಾಣಿಕರು ಹೆಚ್ಚಾಗಿ ಖಾಸಗಿ ವಾಹನಗಳ ಮೂಲಕ ಬಸ್&zwnj; ನಿಲ್ದಾಣಗಳತ್ತ ಬಂದ ಪರಿಣಾಮ ಮೆಜೆಸ್ಟಿಕ್&zwnj;, ಮಲ್ಲೇಶ್ವರ, ಯಶವಂತಪುರ, ಶಾಂತಿನಗರ, ಮೈಸೂರು ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಇತ್ತು. ತಡರಾತ್ರಿವರೆಗೆ ಬಸ್&zwnj;ಗಳು ನಗರದಿಂದ ಹೊರಗೆ ಹೊರಟಿದ್ದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ಬೆಂಗಳೂರಿನಿಂದ ಹೊರಗೆ ಹೋಗುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ಕಷ್ಟಕರವಾಗಿತ್ತು.&lt;/p&gt;&lt;h3&gt;&lt;strong&gt;ಸಾರಿಗೆ ಅಧಿಕಾರಿಗಳ ತಪಾಸಣೆ&lt;/strong&gt;&lt;/h3&gt;&lt;p&gt;ಖಾಸಗಿ ಬಸ್&zwnj;ಗಳ ಸುಲಿಗೆ ತಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆಯಿಂದಲೇ ಪ್ರಮುಖ ಬಸ್&zwnj; ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ಟಿಕೆಟ್&zwnj; ದರ ವಸೂಲಿ ಬಗ್ಗೆ ಪರಿಶೀಲನೆ ನಡೆಸಿದರು. ಈ ವೇಳೆ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಬಸ್&zwnj; ಮಾಲೀಕರಿಗೆ ಎಚ್ಚರಿಕೆ ನೀಡಿ, ದಂಡ ವಿಧಿಸಲಾಯಿತು. ಅಷ್ಟಾದರೂ ಬಸ್&zwnj; ಮಾಲೀಕರು ರಾತ್ರಿ ವೇಳೆಗೆ ಹೆಚ್ಚುವರಿ ದರ ವಸೂಲಿಯನ್ನು ಬಿಟ್ಟಿರಲಿಲ್ಲ.&lt;/p&gt;&lt;h3&gt;&lt;strong&gt;ಖಾಸಗಿ ಬಸ್&zwnj;ಗಳ ಸುಲಿಗೆ&lt;/strong&gt;&lt;/h3&gt;&lt;p&gt;ಕೆಎಸ್ಸಾರ್ಟಿಸಿ ಬಸ್&zwnj;ಗಳನ್ನು ಹೊರತುಪಡಿಸಿ ಖಾಸಗಿ ಬಸ್&zwnj;ಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಸಾರಿಗೆ ಇಲಾಖೆ ಎಚ್ಚರಿಕೆ ನಡುವೆಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ಖಾಸಗಿ ಬಸ್&zwnj;ಗಳ ಸುಲಿಗೆ ಜೋರಾಗಿತ್ತು. ಬೆಂಗಳೂರಿನಿಂದ ವಿವಿಧ ಕಡೆ ಹೊರಡುವ ಖಾಸಗಿ ಬಸ್&zwnj;ಗಳ ಪ್ರಯಾಣ ದರವನ್ನು ದುಪ್ಪಟ್ಟು ಹೆಚ್ಚಿಸಲಾಗಿತ್ತು. ಕೆಎಸ್ಸಾರ್ಟಿಸಿ ಬಸ್&zwnj; ಸಿಗದವರು ಖಾಸಗಿ ಬಸ್&zwnj;ಗಳತ್ತ ಮುಖ ಮಾಡಿದರು. ಆದರೆ, ಬಸ್ ಪ್ರಯಾಣ ದರವನ್ನು ಕೇಳಿ ಅಘಾತಕ್ಕೊಳಗಾದರು. ಪ್ರಮುಖವಾಗಿ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ದಾವಣಗೆರೆ ಕಡೆಗೆ ಹೋಗುವ ಬಸ್&zwnj;ಗಳ ದರ ಮಾಮೂಲಿಗಿಂತ ದುಪ್ಪಟ್ಟು ಹೆಚ್ಚಿತ್ತು.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/gauri-ganesha-festival-increase-in-the-number-of-people-travelling-from-bengaluru-to-their-hometowns-mrq/articleshow-luge7il"/>
        </item>
        <item>
            <title><![CDATA[Bangladesh: ಚಿನ್ಮಯ ಕೃಷ್ಣ ದಾಸ್ ಬಂಧನ; ಬಾಂಗ್ಲಾದಲ್ಲಿ ನಡೆದ ಮಹಾಪಾಪಕ್ಕೆ ಉತ್ತರ ನೀಡಬೇಕಿದೆ ತಾರಿಕ್ ರಹಮಾನ್!]]></title>
            <link>https://kannada.asianetnews.com/world-news/chinmoy-krishna-das-arrest-bangladesh-hindu-persecution-tarique-rahman-minority-rights-chinmoy-das-mother-parole-bmk/articleshow-0ytgla7</link>
            <guid isPermaLink="true">https://kannada.asianetnews.com/world-news/chinmoy-krishna-das-arrest-bangladesh-hindu-persecution-tarique-rahman-minority-rights-chinmoy-das-mother-parole-bmk/articleshow-0ytgla7</guid>
            <pubDate>Fri, 11 Sep 2026 23:19:25 +0530</pubDate>
            <description><![CDATA[ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಹಕ್ಕುಗಳ ಹೋರಾಟಗಾರ ಸಂತ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ಅನಾರೋಗ್ಯ ಪೀಡಿತ ತಾಯಿ ನೋಡಲು ಪೆರೋಲ್ ನಿರಾಕರಿಸಲಾಯಿತು. ತಾಯಿಯ ಮರಣಾನಂತರ ಅಂತ್ಯಕ್ರಿಯೆಗೆ ಕೇವಲ ಐದು ಗಂಟೆಗಳ ಪೆರೋಲ್ ನೀಡಿದ ಅಮಾನವೀಯ ಘಟನೆ, ತಾರಿಕ್ ರಹಮಾನ್ ಉತ್ತರಿಸಬೇಕಿದೆ. ಅಷ್ಟೇ ಅಲ್ಲ ಅವರ ಮೇಲಿರುವ ಕೇಸ್‌ ಯಾವವು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01m28scmwa21qe615es19sbe2j,imgname-chinmay-das-1789148943242.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಹಾಗೂ ಬಿಎನ್&zwnj;ಪಿ ನಾಯಕ ತಾರಿಕ್ ರಹಮಾನ್ ಆಡಳಿತಾವಧಿಯಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯಗಳು ಮಿತಿಮೀರಿದ್ದು, ಮಾನವೀಯತೆಯೇ ತಲೆ ತಗ್ಗಿಸುವಂತಹ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಹಿಂದೂ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪ್ರಮುಖ ಧಾರ್ಮಿಕ ನಾಯಕ, ಸಂತ ಚಿನ್ಮಯ್ ಕೃಷ್ಣ ದಾಸ್ ಅವರ ಜೀವನದಲ್ಲಿ ನಡೆದ ಇತ್ತೀಚಿನ ಹೃದಯವಿದ್ರಾವಕ ಘಟನೆ ಬಾಂಗ್ಲಾದೇಶ ಸರ್ಕಾರದ ಕಪಟ ಮತ್ತು ಕ್ರೂರ ಮುಖವನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ.&lt;/p&gt;&lt;h2&gt;&lt;strong&gt;ಸಾಯುವ ಮುನ್ನ ಮಗನನ್ನು ನೋಡಲಾಗದೆ ಕಣ್ಣೀರಿಟ್ಟ ತಾಯಿ!&lt;/strong&gt;&lt;/h2&gt;&lt;p&gt;ಹಿಂದೂ ಸಂತ ಚಿನ್ಮಯ್ ಕೃಷ್ಣ ದಾಸ್ ಅವರು ಜೈಲಿನಲ್ಲಿದ್ದ ಸಮಯದಲ್ಲೇ, ಅವರ ೭೧ ವರ್ಷದ ವೃದ್ಧ ತಾಯಿ ಸಂಧ್ಯಾ ರಾಣಿ ಧಾರ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. &quot;ಸಾಯುವ ಮುನ್ನ ಕೊನೆಯ ಬಾರಿಗೆ ಮಗನ ಮುಖ ನೋಡಬೇಕು&quot; ಎಂಬುದು ಆ ತಾಯಿಯ ಏಕೈಕ ಆಸೆಯಾಗಿತ್ತು. ಈ ಕುರಿತು ಅವರ ಕುಟುಂಬವು ಚಿತ್ತಗಾಂಗ್ ಜಿಲ್ಲಾಡಳಿತಕ್ಕೆ ಷರತ್ತುಬದ್ಧ ಪೆರೋಲ್ ಕೋರಿ ಮನವಿ ಸಲ್ಲಿಸಿತ್ತು. ಆದರೆ, ರಾಜಕೀಯ ಪಿತೂರಿಯ ಭಾಗವಾಗಿ ಆಡಳಿತವು &quot;ಅನಾರೋಗ್ಯ ಪೀಡಿತರನ್ನು ಭೇಟಿಯಾಗಲು ಕಾನೂನಿನಲ್ಲಿ ಪೆರೋಲ್&zwnj;ಗೆ ಅವಕಾಶವಿಲ್ಲ&quot; ಎಂದು ಹೇಳಿ ಆ ತಾಯಿಯ ಕೊನೆಯ ಆಸೆಯನ್ನು ನಿರ್ದಯವಾಗಿ ತಿರಸ್ಕರಿಸಿತು. ಮಗನ ಮೇಲಿನ ಕಿರುಕುಳ ಮತ್ತು ಜೈಲು ವಾಸದ ದುಃಖದಿಂದಲೇ ಆ ವೃದ್ಧ ತಾಯಿ ಕೊನೆಯುಸಿರೆಳೆದರು.&lt;/p&gt;&lt;h3&gt;&lt;strong&gt;ಐದೇ ಗಂಟೆಯ ಪೆರೋಲ್; ಕಣ್ಣೀರಿಟ್ಟ ಸಂತ!&lt;/strong&gt;&lt;/h3&gt;&lt;p&gt;ತಾಯಿಯ ಮರಣದ ನಂತರ, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಚಿನ್ಮಯ್ ದಾಸ್ ಅವರಿಗೆ ಕೇವಲ ೫ ಗಂಟೆಗಳ ಕಾಲಾವಕಾಶದ ಪೆರೋಲ್ ನೀಡಲಾಯಿತು. ಕಟ್ಟುನಿಟ್ಟಿನ ಪೊಲೀಸ್ ಭದ್ರತೆಯಲ್ಲಿ ಪುಂಡರೀಕ ಧಾಮಕ್ಕೆ ಬಂದ ಚಿನ್ಮಯ್ ದಾಸ್, ಅಲ್ಲಿ ತಾಯಿಯ ಮೃತದೇಹವನ್ನು ಅಪ್ಪಿ ಕಣ್ಣೀರಿಟ್ಟ ದೃಶ್ಯ ಪ್ರತಿಯೊಬ್ಬರ ಕಣ್ಣಲ್ಲೂ ನೀರು ತರಿಸುವಂತಿತ್ತು. ನಂತರ ಅಲ್ಲಿದ್ದ ರಾಧಾ-ಕೃಷ್ಣ ವಿಗ್ರಹದ ಪಾದಗಳ ಮೇಲೆ ತಲೆಯಿಟ್ಟು ಅವರು ಸುರಿಸಿದ ಕಣ್ಣೀರು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ನರಕಯಾತನೆಗೆ ಸಾಕ್ಷಿಯಾಗಿತ್ತು. ಪೂಜೆ ಮುಗಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ಮತ್ತೆ ಜೈಲಿಗೆ ಎಳೆದೊಯ್ದರು.&lt;/p&gt;&lt;h3&gt;&lt;strong&gt;ದೇಶದ್ರೋಹದ ಸುಳ್ಳು ಪ್ರಕರಣಗಳು!&lt;/strong&gt;&lt;/h3&gt;&lt;p&gt;ಹಿಂದೂಗಳ ರಕ್ಷಣೆಗೆ ಶಾಂತಿಯುತ ರ್ಯಾಲಿಗಳನ್ನು ನಡೆಸುತ್ತಿದ್ದ ಚಿನ್ಮಯ್ ದಾಸ್ ಅವರನ್ನು ನವೆಂಬರ್ ೨೦೨೪ ರಲ್ಲಿ ಬಂಧಿಸಲಾಯಿತು. ಅವರ ಮೇಲೆ ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಗಂಭೀರ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಅವರ ವಿರುದ್ಧ ಒಟ್ಟು ೬ ಕ್ರಿಮಿನಲ್ ಪ್ರಕರಣಗಳಿದ್ದು, ೪ ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದರೂ ಸಹ, ಸರ್ಕಾರಿ ವಕೀಲರೊಬ್ಬರ ಕೊಲೆ ಪ್ರಕರಣ ಹಾಗೂ ದೇಶದ್ರೋಹದ ಕೇಸ್ ಅನ್ನು ಮುನ್ನೆಲೆಗೆ ತಂದು ಅವರನ್ನು ಜೈಲಿನಲ್ಲೇ ಬಂಧಿಸಿಡಲಾಗಿದೆ.&lt;/p&gt;&lt;h3&gt;&lt;strong&gt;ತಾರಿಕ್ ಸರ್ಕಾರದ ವಿರುದ್ಧ ಜಾಗತಿಕ ಆಕ್ರೋಶ!&lt;/strong&gt;&lt;/h3&gt;&lt;p&gt;ಈ ಅಮಾನವೀಯ ಘಟನೆಯು ಬಿಎನ್&zwnj;ಪಿ ನಾಯಕ ತಾರಿಕ್ ರಹಮಾನ್ ಮತ್ತು ಆಡಳಿತಾರೂಢ ಶಕ್ತಿಗಳ ಕಪಟತನವನ್ನು ಬಯಲಿಗೆಳೆದಿದೆ. ಅಲ್ಪಸಂಖ್ಯಾತರ ಧ್ವನಿಯನ್ನು ಹತ್ತಿಕ್ಕಲು ಮೂಲಭೂತವಾದಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬರುತ್ತಿವೆ. ಜೈಲಿನಲ್ಲಿದ್ದ ಸಂತನ ಕಣ್ಣೀರು ಮತ್ತು ಆ ವೃದ್ಧ ತಾಯಿಯ ಈಡೇರದ ಆಸೆಗೆ ತಾರಿಕ್ ರಹಮಾನ್ ಉತ್ತರ ನೀಡಲೇಬೇಕಿದೆ. ಈ 'ಮಹಾಪಾಪ'ದ ವಿರುದ್ಧ ಭಾರತ ಸೇರಿದಂತೆ ವಿಶ್ವದಾದ್ಯಂತ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚಿನ್ಮಯ್ ದಾಸ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಲು ಒತ್ತಾಯಿಸುತ್ತಿವೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/world-news/chinmoy-krishna-das-arrest-bangladesh-hindu-persecution-tarique-rahman-minority-rights-chinmoy-das-mother-parole-bmk/articleshow-0ytgla7"/>
        </item>
        <item>
            <title><![CDATA[15 ವರ್ಷಗಳಲ್ಲಿ 96 ಕಿ.ಮೀ ಬೆಳೆದ ನಮ್ಮ 'ದುಬಾರಿ' ಮೆಟ್ರೋ, ನಿರೀಕ್ಷಿತ ಮಟ್ಟಕ್ಕೆ ಮುಟ್ಟದ ಪ್ರಯಾಣಿಕರ ಸಂಖ್ಯೆ]]></title>
            <link>https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw</guid>
            <pubDate>Fri, 11 Sep 2026 23:13:57 +0530</pubDate>
            <description><![CDATA[ಬೆಂಗಳೂರಿನ 'ನಮ್ಮ ಮೆಟ್ರೋ' 96 ಕಿ.ಮೀ.ಗೆ ವಿಸ್ತರಿಸಿದರೂ, ನಿರೀಕ್ಷಿತ 30 ಲಕ್ಷದ ಬದಲು ಕೇವಲ 10 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಿದೆ. ಈ ಹಿನ್ನಡೆಗೆ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' ಕೊರತೆಯೇ ಪ್ರಮುಖ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvhf4ga52jsn83083nzrmnkh,imgname----------------------23--1781923987780.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಉದ್ಯಾನನಗರಿ ಬೆಂಗಳೂರಿನ ಪ್ರಮುಖ ಸಾರಿಗೆ ಸಂಪರ್ಕ ಕೊಂಡಿಯಾಗಿರುವ 'ನಮ್ಮ ಮೆಟ್ರೋ' ಆರಂಭವಾಗಿ 15 ವರ್ಷಗಳು ಕಳೆದಿವೆ. ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿವರೆಗಿನ ಕೇವಲ 7 ಕಿಲೋಮೀಟರ್&zwnj;ನ ಸಣ್ಣ ಮಾರ್ಗದಿಂದ ಪ್ರಾರಂಭವಾದ ಮೆಟ್ರೋ, ಇಂದು 3 ಕಾರಿಡಾರ್&zwnj;ಗಳು, 83 ನಿಲ್ದಾಣಗಳೊಂದಿಗೆ 96 ಕಿಲೋಮೀಟರ್&zwnj;ಗಳ ಬೃಹತ್ ಜಾಲವಾಗಿ ಬೆಳೆದು ನಿಂತಿದೆ. ಆದರೆ, ಮಾರ್ಗ ವಿಸ್ತರಣೆಯಾದಷ್ಟು ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ (Ridership) ಹೆಚ್ಚದಿರುವುದು ಸರ್ಕಾರ ಹಾಗೂ ಮೆಟ್ರೋ ಆಡಳಿತ ಮಂಡಳಿಗೆ ಭಾರಿ ಕಳವಳ ತಂದೊಡ್ಡಿದೆ.&lt;/p&gt;&lt;p&gt;ವಿಸ್ತರಿತ ಕಾರಿಡಾರ್&zwnj;ಗಳ ಯೋಜನಾ ವರದಿಗಳ (DPR) ಪ್ರಕಾರ ಈ ವೇಳೆಗೆ ಪ್ರತಿದಿನ ಕನಿಷ್ಠ 30 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸಬೇಕಿತ್ತು. ಆದರೆ, ಪ್ರಸ್ತುತ ದಿನಕ್ಕೆ ಸರಾಸರಿ 10 ಲಕ್ಷ ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಜಿಬಿಎ ಸಭೆಯಲ್ಲಿ ಗಂಭೀರ ಚರ್ಚೆ&lt;/strong&gt;&lt;/h2&gt;&lt;p&gt;ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ (Traffic Congestion) ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದರೂ, ಮೆಟ್ರೋ ನಿರೀಕ್ಷಿತ ಪ್ರಯಾಣಿಕರನ್ನು ತಲುಪಲು ಸಾಧ್ಯವಾಗದಿರುವ ವಿಚಾರವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 'ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಸಭೆಯಲ್ಲಿ ಗಂಭೀರ ಚರ್ಚೆಗೆ ಬಂದಿದೆ. ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಕರು ಸುಲಭವಾಗಿ ತಲುಪಲು ಸೂಕ್ತವಾದ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' (ಮೊದಲ ಮತ್ತು ಕೊನೆಯ ಹಂತದ ಸಾರಿಗೆ ಸಂಪರ್ಕ) ಇಲ್ಲದಿರುವುದೇ ಈ ಹಿನ್ನಡೆಗೆ ಮುಖ್ಯ ಕಾರಣ ಎಂದು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.&lt;/p&gt;&lt;p&gt;ಈ ಸಮಸ್ಯೆಗೆ ತಕ್ಷಣದ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದ್ದು, ನಗರ ಭೂಸಾರಿಗೆ ನಿರ್ದೇಶನಾಲಯ (Dult) ಸಮಗ್ರ ಚಲನಶೀಲ ಯೋಜನೆಯನ್ನು (CMP - Comprehensive Mobility Plan) ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಆರ್ಕಾಡಿಸ್-ದೆಹಲಿ ಇಂಟಿಗ್ರೇಟೆಡ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ಸ್ ಲಿಮಿಟೆಡ್ (Arcadis-DIMTS) ಸಂಸ್ಥೆಯನ್ನು ಜಿಎಸ್&zwnj;ಟಿ ಹೊರತುಪಡಿಸಿ ₹4.2 ಕೋಟಿ ವೆಚ್ಚದಲ್ಲಿ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಸಂಸ್ಥೆಯು ಈಗಾಗಲೇ ಆರಂಭಿಕ ವರದಿಯನ್ನು ಸಲ್ಲಿಸಿದ್ದು, ಸಾರಿಗೆ ಸಮೀಕ್ಷೆಗಳು ನಡೆಯುತ್ತಿವೆ.&lt;/p&gt;&lt;p&gt;ಹಿಂದೆ 2020 ರಲ್ಲಿ ಸಿದ್ಧಪಡಿಸಲಾಗಿದ್ದ ಸಿಎಂಪಿಯು 2035 ರ ವೇಳೆಗೆ ಸಾರ್ವಜನಿಕ ಸಾರಿಗೆಯ ಪಾಲನ್ನು ಶೇ. 40 ರಿಂದ ಶೇ. 70 ಕ್ಕೆ ಹೆಚ್ಚಿಸುವ ಗುರಿ ಹೊಂದಿತ್ತು. 2022 ರಲ್ಲಿ ಸರ್ಕಾರವು 'ಟ್ರಾನ್ಸಿಟ್-ಓರಿಯೆಂಟೆಡ್ ಡೆವಲಪ್&zwnj;ಮೆಂಟ್' (TOD) ನೀತಿಯನ್ನು ತಂದಿತ್ತಾದರೂ, ಈ ನೀತಿಗಳು ಯೋಜನೆಗೆ ತಕ್ಕಂತೆ ಫಲಿತಾಂಶ ನೀಡಿಲ್ಲ.&lt;/p&gt;&lt;h2&gt;&lt;strong&gt;₹30.2 ಕೋಟಿ ವೆಚ್ಚದಲ್ಲಿ 19 ನಿಲ್ದಾಣಗಳ ಸುಧಾರಣೆ&lt;/strong&gt;&lt;/h2&gt;&lt;p&gt;ಡಲ್ಟ್ ಸಂಸ್ಥೆಯು ಪಾದಚಾರಿ ಮಾರ್ಗ, ಸೈಕ್ಲಿಂಗ್, ಶೇರ್ಡ್ ಮೊಬಿಲಿಟಿ ಹಾಗೂ ಬಸ್ ಬೇ (Bus Bays) ನಿರ್ಮಾಣದ ಮೂಲಕ ಮೆಟ್ರೋ ಸಂಪರ್ಕವನ್ನು ಸುಧಾರಿಸಲು ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಹಸಿರು (11) ಮತ್ತು ನೇರಳೆ (8) ಮಾರ್ಗದ 19 ಮೆಟ್ರೋ ನಿಲ್ದಾಣಗಳಲ್ಲಿ ₹30.2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾಪ ಸಿದ್ಧವಾಗಿದೆ. ಜೊತೆಗೆ ಜಿಐಎಸ್ (GIS) ಆಧಾರಿತ ಅಧ್ಯಯನದ ಮೂಲಕ ಬಿಎಂಟಿಸಿಗೆ ನೂತನ ಫೀಡರ್ ಮಾರ್ಗಗಳನ್ನು ಪರಿಚಯಿಸಲು ಶಿಫಾರಸು ಮಾಡಲಾಗುತ್ತಿದೆ.&lt;/p&gt;&lt;p&gt;ಸೆಪ್ಟೆಂಬರ್ 3 ರಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ನಡೆದ ಜಿಬಿಎ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಬೆಂಗಳೂರಿನ ಕಿರಿದಾದ ರಸ್ತೆಗಳಲ್ಲಿ ದೊಡ್ಡ ಬಸ್&zwnj;ಗಳನ್ನು ಫೀಡರ್ ಸೇವೆಯಾಗಿ ಓಡಿಸಲು ಇರುವ ಕಷ್ಟಗಳ ಬಗ್ಗೆ ಚರ್ಚಿಸಲಾಯಿತು. ಹೀಗಾಗಿ ಕೇವಲ 6 ಮೀಟರ್ ಅಥವಾ ಅದಕ್ಕಿಂತ ಕಡಿಮೆ ಉದ್ದದ ಮಿನಿ ಬಸ್&zwnj;ಗಳನ್ನು ಮೆಟ್ರೋ ಫೀಡರ್ ಸೇವೆಗೆ ಕಡ್ಡಾಯವಾಗಿ ಖರೀದಿಸುವಂತೆ ಬಿಎಂಟಿಸಿಗೆ ಸೂಚಿಸಲಾಗಿದೆ.&lt;/p&gt;&lt;h2&gt;&lt;strong&gt;₹125 ಕೋಟಿ ವೆಚ್ಚದಲ್ಲಿ 500 ಮಿನಿ ಬಸ್&zwnj;ಗಳ ಕೊಡುಗೆ&lt;/strong&gt;&lt;/h2&gt;&lt;p&gt;ಮತ್ತೊಂದೆಡೆ, ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಸೇವೆಯಾಗಿ ಬಳಸಲು 500 ಮಿನಿ ಬಸ್&zwnj;ಗಳನ್ನು ಖರೀದಿಸಿ ಕಾರ್ಯಾಚರಣೆಗೊಳಿಸಲು ಬಿಎಂಟಿಸಿಗೆ ₹125 ಕೋಟಿ ಅನುದಾನ ನೀಡುವುದಾಗಿ ಬಿಎಂಆರ್&zwnj;ಸಿಎಲ್ (BMRCL) ಜಿಬಿಎ ಸಭೆಯಲ್ಲಿ ಪ್ರಸ್ತಾಪಿಸಿದೆ.&lt;/p&gt;&lt;p&gt;ಬಿಎಂಟಿಸಿ ಮತ್ತು ಬಿಎಂಆರ್&zwnj;ಸಿಎಲ್ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪರಿಣಾಮವಾಗಿ, ಬಿಎಂಟಿಸಿ ಬಸ್ ತಂಗುದಾಣಗಳನ್ನು ಮೆಟ್ರೋ ನಿಲ್ದಾಣಗಳ ಸಮೀಪಕ್ಕೆ (ಸರಾಸರಿ 100 ಮೀಟರ್ ಅಂತರಕ್ಕೆ) ಸ್ಥಳಾಂತರಿಸಲಾಗಿದೆ. ಪ್ರಸ್ತುತ ಚಾಲ್ತಿಯಲ್ಲಿರುವ 83 ಮೆಟ್ರೋ ನಿಲ್ದಾಣಗಳಿಗೆ ಸಾಮಾನ್ಯ ಬಿಎಂಟಿಸಿ ಬಸ್ ಸೌಲಭ್ಯವಿದೆ. ಆದರೆ, ಬೇಡಿಕೆಗೆ ಅನುಗುಣವಾಗಿ 54 ನಿಲ್ದಾಣಗಳಲ್ಲಿ 255 ಮೀಸಲು ಫೀಡರ್ ಬಸ್&zwnj;ಗಳು ಪ್ರತಿದಿನ 1.5 ಲಕ್ಷ ಪ್ರಯಾಣಿಕರನ್ನು ತಲುಪಿಸುತ್ತಿವೆ. ಇನ್ನುಳಿದ 29 ಮೆಟ್ರೋ ನಿಲ್ದಾಣಗಳಿಗೆ ಯಾವುದೇ ವಿಶೇಷ ಫೀಡರ್ ಬಸ್ ಸೌಲಭ್ಯವಿಲ್ಲ.&lt;/p&gt;&lt;p&gt;ಪ್ರಯಾಣಿಕರ ಕೊರತೆಯನ್ನು ನೀಗಿಸಲು ಆಗಸ್ಟ್ 21 ರಂದು ಬಿಎಂಆರ್&zwnj;ಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದಲ್ಲಿ 10 ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ವಿವರವಾದ ಅಧ್ಯಯನಕ್ಕೆ ಆಯ್ಕೆ ಮಾಡಲಾಗಿದೆ.&lt;/p&gt;&lt;h2&gt;&lt;strong&gt;ಸೆಪ್ಟೆಂಬರ್ ಅಂತ್ಯಕ್ಕೆ ಪಿಂಕ್ ಲೈನ್ ಉದ್ಘಾಟನೆ: ಪ್ರಯಾಣಿಕರ ಹಳೆಯ ಆತಂಕ!&lt;/strong&gt;&lt;/h2&gt;&lt;p&gt;ಬಿಎಂಆರ್&zwnj;ಸಿಎಲ್ ಸಂಸ್ಥೆಯು ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿಲೋಮೀಟರ್ ಉದ್ದದ 'ಪಿಂಕ್ ಲೈನ್'ನ (Pink Line) ಎಲಿವೇಟೆಡ್ ಮಾರ್ಗವನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಯೋಜಿಸುತ್ತಿದೆ.&lt;/p&gt;&lt;p&gt;ಆದರೆ, ಹಿಂದೆ ಉದ್ಘಾಟನೆಯಾದ ಹಲವು ಮೆಟ್ರೋ ಮಾರ್ಗಗಳಂತೆ ಇಲ್ಲೂ ಸಹ ನಿಲ್ದಾಣ ತಲುಪುವುದು ಪ್ರಯಾಣಿಕರಿಗೆ ಕಬ್ಬಿಣದ ಕಡಲೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಏಕೆಂದರೆ, ಪ್ರಮುಖ ಸ್ಥಳಗಳಲ್ಲಿ ಕಾಲುದಾರಿಗಳ (Footpaths) ಕೊರತೆ, ಪಾದಚಾರಿ ಮೂಲಸೌಕರ್ಯಗಳ ಕೊರತೆ, ಕಾಲುದಾರಿಗಳ ಮೇಲೆ ತ್ಯಾಜ್ಯ ವಿಲೇವಾರಿ, ಹಾಳಾದ ರಸ್ತೆಗಳು ಹಾಗೂ ಮೆಟ್ರೋ ನಿಲ್ದಾಣಗಳ ಬಳಿ ಸೂಕ್ತ ಬಸ್ ತಂಗುದಾಣಗಳಿಲ್ಲದಿರುವುದು ಪ್ರಯಾಣಿಕರ ನಿದ್ದೆಗೆಡಿಸಿದೆ. ಮಾರ್ಗ ಉದ್ಘಾಟಿಸುವ ಮುನ್ನವೇ ನಿಲ್ದಾಣಗಳ ಪ್ರವೇಶಾವಕಾಶ ಮತ್ತು ಮೂಲಸೌಕರ್ಯಗಳನ್ನು ಸರಿಪಡಿಸುವಂತೆ ಸ್ಥಳೀಯ ನಿವಾಸಿಗಳು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-namma-metro-low-ridership-feeder-bus-dult-bmrcb-plan-san/articleshow-6o6obrw"/>
        </item>
        <item>
            <title><![CDATA[ಬಾಯಲ್ಲಿ ಸಿಮ್ ಕಾರ್ಡ್ ಅಡಗಿಸಿ ಪ್ರಜ್ವಲ್‌ಗೆ ನೀಡಿದ್ದ ಡಿಜೆ ಹಳ್ಳಿ ಆರೋಪಿ!: ಫೋನ್‌ಗಾಗಿ 70 ಸಾವಿರ, ಸಿಮ್‌ಗೆ 30 ಸಾವಿರ ರೂ. ಲಂಚ!]]></title>
            <link>https://kannada.asianetnews.com/bengaluru-urban/prajwal-revanna-phone-smuggling-case-parappana-agrahara-jail-san/articleshow-vt73nah</link>
            <guid isPermaLink="true">https://kannada.asianetnews.com/bengaluru-urban/prajwal-revanna-phone-smuggling-case-parappana-agrahara-jail-san/articleshow-vt73nah</guid>
            <pubDate>Fri, 11 Sep 2026 22:48:25 +0530</pubDate>
            <description><![CDATA[ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನುಬಾಹಿರವಾಗಿ ಮೊಬೈಲ್ ತಲುಪಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಜೈಲು ವಾರ್ಡನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28q6n38thf8g1h00shxg4hz,imgname-prajwal-revanna-phone-smuggling-case-1789146649704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11):&lt;/strong&gt; ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲಿನೊಳಗೆ ಕಾನೂನುಬಾಹಿರವಾಗಿ ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್ ಹಾಗೂ ಪೆನ್ ಡ್ರೈವ್ ತಲುಪಿಸಿದ ಅಕ್ರಮ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಜೈಲು ಸಿಬ್ಬಂದಿ (ವಾರ್ಡನ್) ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ರೇವಣ್ಣ ಮೊಬೈಲ್ ಹ್ಯಾಂಡ್&zwnj;ಸೆಟ್&zwnj;ಗಾಗಿ 70,000 ರೂಪಾಯಿ ಹಾಗೂ ಸಿಮ್ ಕಾರ್ಡ್&zwnj;ಗಾಗಿ 30,000 ರೂಪಾಯಿ ಸೇರಿದಂತೆ ಒಟ್ಟು 1 ಲಕ್ಷ ರೂಪಾಯಿ ಹಣವನ್ನು ನೀಡಿ ಜೈಲಿನೊಳಗೆ ಫೋನ್ ತರಿಸಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;h2&gt;&lt;strong&gt;ಬಾಯಲ್ಲಿ ಸಿಮ್ ಅಡಗಿಸಿ ತಂದು ಪ್ರಜ್ವಲ್&zwnj;ಗೆ ನೀಡಿದ್ದ ವಿಚಾರಣಾಧೀನ ಕೈದಿ!&lt;/strong&gt;&lt;/h2&gt;&lt;p&gt;ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಜೈಲು ವಾರ್ಡನ್ ಪ್ರಕಾಶ್ ಗಾವಡೆ ಎಂಬಾತ ಮೊಬೈಲ್ ಫೋನ್ ಅನ್ನು ಪ್ರಜ್ವಲ್ ರೇವಣ್ಣಗೆ ಖುದ್ದಾಗಿ ಹಸ್ತಾಂತರಿಸಿದ್ದ. ಇನ್ನು ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ವಿಚಾರಣಾಧೀನ ಕೈದಿ ಮಹಮ್ಮದ್ ತೌಸಿಫ್, ಸಿಮ್ ಕಾರ್ಡ್ ಅನ್ನು ತನ್ನ ಬಾಯಲ್ಲಿ ಅಡಗಿಸಿಕೊಂಡು ಬಂದು ಜೈಲಿನೊಳಗೆ ಪ್ರಜ್ವಲ್&zwnj;ಗೆ ತಲುಪಿಸಿದ್ದ.&lt;/p&gt;&lt;p&gt;ಬಳಿಕ ಪ್ರಕಾಶ್ ಗಾವಡೆ, ಮುಂದಿನ ಭೇಟಿಗಳ ಸಂದರ್ಭದಲ್ಲಿ ಚಾರ್ಜರ್ ಮತ್ತು ಪೆನ್ ಡ್ರೈವ್ ಅನ್ನು ಮಾಜಿ ಸಂಸದನಿಗೆ ನೀಡಿದ್ದ. ಅಂದಹಾಗೆ, ಈ ಜೈಲು ಸಿಬ್ಬಂದಿ ಪ್ರಕಾಶ್ ಗಾವಡೆ ಈ ಹಿಂದೆ ಜೈಲಿನೊಳಗೆ ಗಾಂಜಾ ಸರಬರಾಜು ಮಾಡಿದ ಆರೋಪದ ಮೇಲೆಯೂ ಬಂಧನಕ್ಕೊಳಗಾಗಿ ಅಮಾನತುಗೊಂಡಿದ್ದ.&lt;/p&gt;&lt;h2&gt;&lt;strong&gt;ಸಿಸಿಬಿ ದಾಳಿ ವೇಳೆ ಸಿಕ್ಕಿಬಿದ್ದಿತ್ತು ರಹಸ್ಯ ಮೊಬೈಲ್&lt;/strong&gt;&lt;/h2&gt;&lt;p&gt;ಕಳೆದ ಆಗಸ್ಟ್&zwnj;ನಲ್ಲಿ ಸೆಂಟ್ರಲ್ ಕ್ರೈಮ್ ಬ್ರಾಂಚ್ (CCB) ಪೊಲೀಸರು ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಾಕ್ ಮೇಲೆ ದಿಢೀರ್ ದಾಳಿ ನಡೆಸಿದಾಗ, ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್ ಮತ್ತು ಪೆನ್ ಡ್ರೈವ್ ಜಪ್ತಿಯಾಗಿತ್ತು. ಈ ಸಂಬಂಧ ಪ್ರಜ್ವಲ್ ರೇವಣ್ಣ ಹಾಗೂ ಅವರ ಸಹ-ಕೈದಿ ಪ್ರತಾಪ್ ರೈ ವಿರುದ್ಧ ಎಫ್&zwnj;ಐಆರ್ ದಾಖಲಿಸಲಾಗಿತ್ತು. ಆದರೆ, ಪ್ರತಾಪ್ ರೈ ತಾನು ನಿರಪರಾಧಿ ಎಂದಿದ್ದು, ನಾನು ಈ ಬ್ಯಾರಾಕ್&zwnj;ಗೆ ಬರುವುದಕ್ಕೂ ಮೊದಲಿನಿಂದಲೂ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿದ್ದ ಎಂದು ತಿಳಿಸಿದ್ದ.&lt;/p&gt;&lt;p&gt;ಬಂಧಿತ ಐವರು ಆರೋಪಿಗಳನ್ನು ನವೀನ್ ಕುಮಾರ್, ಮಂಜುನಾಥ್, ಮಹಮ್ಮದ್ ತೌಸಿಫ್, ಸಿದ್ದಿಕಿ ಹಾಗೂ ಜೈಲು ವಾರ್ಡನ್ ಗಾವಡೆ ಎಂದು ಗುರುತಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ. ನಾರಾಯಣ ತಿಳಿಸಿದ್ದಾರೆ. ನವೀನ್ ಮತ್ತು ಸಿದ್ದಿಕಿ ಫೋನ್ ಹಾಗೂ ಸಿಮ್ ಕಾರ್ಡ್ ವ್ಯವಸ್ಥೆ ಮಾಡಿದ್ದರು. ಮಂಜುನಾಥ್ ಇವರನ್ನು ಪ್ರಜ್ವಲ್ ಮತ್ತು ಗಾವಡೆಗೆ ಸಂಪರ್ಕಿಸಿದ್ದ. ಫೋನ್ ಹಾಗೂ ಸಿಮ್ ಬೆಲೆಯ ಹೊರತಾಗಿ ಗಾವಡೆಗೆ 1 ಲಕ್ಷ ರೂ. (ಫೋನ್&zwnj;ಗೆ 70,000 ರೂ. ಮತ್ತು ಸಿಮ್&zwnj;ಗೆ 30,000 ರೂ.) ನೀಡಲಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಒಂದೇ ವರ್ಷದಲ್ಲಿ ಜೈಲಿನಲ್ಲಿ 300 ಮೊಬೈಲ್&zwnj;ಗಳು ವಶ!&lt;/strong&gt;&lt;/h2&gt;&lt;p&gt;ಈ ಪ್ರಸಕ್ತ ವರ್ಷ ಒಂದರಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಂದ ಸುಮಾರು 300 ಮೊಬೈಲ್ ಫೋನ್&zwnj;ಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್, &quot;ಕಾರಾಗೃಹ ಅಧಿಕಾರಿಗಳು 299 ಫೋನ್&zwnj;ಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ಸಿಸಿಬಿ ಪೊಲೀಸರು ದಾಳಿಯ ವೇಳೆ ಪ್ರಜ್ವಲ್ ರೇವಣ್ಣ ಅವರಿಂದ 1 ಫೋನ್ ವಶಪಡಿಸಿಕೊಂಡಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ನಂತರ, ಕಟ್ಟುನಿಟ್ಟಿನ ಕಣ್ಣಾವಲು ಇಡಲು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಧಿಕಾರಿಗಳನ್ನು ಇತರ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಿಗೆ ವರ್ಗಾಯಿಸಲಾಗಿದೆ&quot; ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮತ್ತಿಬ್ಬರು ಜೈಲು ಸಿಬ್ಬಂದಿಗಳ ಬಂಧನ&lt;/strong&gt;&lt;/h2&gt;&lt;p&gt;ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದ ಆರೋಪದ ಮೇಲೆ ಚೀಫ್ ವಾರ್ಡನ್ ವಿಜಯ್ ಕುಮಾರ್ ಮತ್ತು ವಾರ್ಡನ್ ಶ್ರೀಕಾಂತ್ ನಾಯಕ್ ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ. ಭರತ್ ಅಲಿಯಾಸ್ ಕೆಟಿಎಮ್ ಭರತ್ ಎಂಬ ಕೈದಿಗೆ ವಿಜಯ್ ಕುಮಾರ್ ಮೊಬೈಲ್ ನೀಡಿದ್ದ. 2026 ರ ಮೇ ತಿಂಗಳಲ್ಲಿ ನಡೆದ ದಾಳಿಯ ವೇಳೆ ಭರತ್ ಬಳಿ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ಸಿಕ್ಕಿತ್ತು. ತನಿಖೆಯ ವೇಳೆ ಚೀಫ್ ವಾರ್ಡನ್ ಆಗಿದ್ದ ವಿಜಯ್ ಕುಮಾರ್ ತನ್ನ ಉಡುಪಿನಲ್ಲಿ ಫೋನ್ ಬಚ್ಚಿಟ್ಟುಕೊಂಡು ಮುಖ್ಯ ದ್ವಾರದ ತಪಾಸಣೆಯಿಂದ ತಪ್ಪಿಸಿಕೊಂಡು ಒಳಗೆ ತಂದಿರುವುದು ಗೊತ್ತಾಗಿದೆ.&lt;/p&gt;&lt;p&gt;ಇನ್ನೊಬ್ಬ ವಾರ್ಡನ್ ಶ್ರೀಕಾಂತ್ ನಾಯಕ್ ವಿವಿಧ ಬ್ಯಾರಾಕ್&zwnj;ಗಳಲ್ಲಿದ್ದ ಕೈದಿಗಳಿಗೆ ಬರೋಬ್ಬರಿ 12 ಮೊಬೈಲ್ ಫೋನ್&zwnj;ಗಳನ್ನು ಸರಬರಾಜು ಮಾಡಿದ್ದ. ಜನವರಿಯಲ್ಲಿ ಬ್ಯಾರಾಕ್&zwnj;ಗಳ ಮೇಲೆ ದಾಳಿ ನಡೆಸಿ 4 ಮೊಬೈಲ್, 2 ಸಿಮ್ ಹಾಗೂ ಚಾರ್ಜರ್ ವಶಪಡಿಸಿಕೊಂಡು ತನಿಖೆ ನಡೆಸಿದಾಗ, ಶ್ರೀಕಾಂತ್ ನಾಯಕ್ ಈ ಕೃತ್ಯ ಎಸಗಿರುವುದು ಬಹಿರಂಗವಾಗಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/prajwal-revanna-phone-smuggling-case-parappana-agrahara-jail-san/articleshow-vt73nah"/>
        </item>
        <item>
            <title><![CDATA[Cricket: ವೈಭವ್ ಸೂರ್ಯವಂಶಿಯನ್ನು ಆಡಿಸಬೇಡಿ’! ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ದಿಗ್ಗಜರ ಖಡಕ್‌ ಮಾತು!]]></title>
            <link>https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r</link>
            <guid isPermaLink="true">https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r</guid>
            <pubDate>Fri, 11 Sep 2026 22:29:43 +0530</pubDate>
            <description><![CDATA[ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಟಿ20 ಸರಣಿಗೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ಅವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಹಿರಿಯ ಆಟಗಾರ ಆಗ್ರಹಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಮೇಲೆ ನಂಬಿಕೆ ಇಡಬೇಕು ಮತ್ತು ಕೆಲವೇ ಪಂದ್ಯಗಳ ವೈಫಲ್ಯಕ್ಕೆ ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1fwtkjcrh4pm4h6ppt3wmyh,imgname-vaibhav-sooryavanshi-1788313685580.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಮೂರು ಪಂದ್ಯಗಳ ಟಿ20 ಐ ಸರಣಿಗೆ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಹನ್ನೊಂದರ (Playing 11) ಬಳಗದಿಂದ ಹೊರಗಿಡಬೇಕು ಎಂದು ಟೀಮ್ ಇಂಡಿಯಾದ ಹಿರಿಯ ಆಟಗಾರ ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ. ಅವರ ಬದಲಿಗೆ ಸಂಜು ಸ್ಯಾಮ್ಸನ್ ಅವರಿಗೆ ಮತ್ತೊಮ್ಮೆ ಸಾಬೀತುಪಡಿಸಲು ಅವಕಾಶ ನೀಡಬೇಕು ಎಂದು ಅವರು ಭಾರತೀಯ ತಂಡದ ಆಡಳಿತವನ್ನು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ತಂಡದ ಅಗ್ರ ಕ್ರಮಾಂಕದ ಪ್ರಯೋಗಗಳು!&lt;/strong&gt;&lt;/h2&gt;&lt;p&gt;ಭಾರತ ತಂಡವು 2026 ರ ಟಿ20 ವಿಶ್ವಕಪ್ ಗೆದ್ದ ನಂತರ, ಮ್ಯಾನೇಜ್&zwnj;ಮೆಂಟ್ ಅಗ್ರ ಮೂರು ಬ್ಯಾಟಿಂಗ್ ಕ್ರಮಾಂಕದಲ್ಲಿ (Top-3 Order) ಹಲವು ಪ್ರಯೋಗಗಳನ್ನು ಮಾಡುತ್ತಿದೆ. ವಿಶ್ವಕಪ್&zwnj; ಟೂರ್ನಿಯಲ್ಲಿ ಮೂರನೇ ಕ್ರಮಾಂಕದಲ್ಲಿದ್ದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರನ್ನೊಳಗೊಂಡ ಬ್ಯಾಟಿಂಗ್ ಕ್ರಮಾಂಕವು ಭಾರತದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಸತತ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದರು ಎಂಬ ಕಾರಣಕ್ಕೆ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು.&lt;/p&gt;&lt;h3&gt;&lt;strong&gt;ವೈಭವ್ ವಿಫಲ!&lt;/strong&gt;&lt;/h3&gt;&lt;p&gt;ಇದರ ಬೆನ್ನಲ್ಲೇ, ಕೇವಲ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಂತರರಾಷ್ಟ್ರೀಯ ಟಿ20 ಪದಾರ್ಪಣೆ ಮಾಡಿದರು. ಆದರೆ, ತಮಗೆ ಸಿಕ್ಕ ಮೊದಲ ಮೂರು ಪಂದ್ಯಗಳಲ್ಲಿ ಸೂರ್ಯವಂಶಿ ದೊಡ್ಡ ಮಟ್ಟದ ಪ್ರಭಾವ ಬೀರಲು ವಿಫಲರಾದರು. ಈ ಕಾರಣದಿಂದ ಸರಣಿಯ ಅಂತಿಮ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಮತ್ತೆ ತಂಡಕ್ಕೆ ಮರಳಿದರು. ತದನಂತರದ ಜಿಂಬಾಬ್ವೆ ಪ್ರವಾಸದಿಂದ ಸ್ಯಾಮ್ಸನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.&lt;/p&gt;&lt;h3&gt;&lt;strong&gt;ಅಜಿಂಕ್ಯ ರಹಾನೆ ವಾದವೇನು?&lt;/strong&gt;&lt;/h3&gt;&lt;p&gt;ತಂಡದ ಆಡುವ ಬಳಗದ ಆಯ್ಕೆಯ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆ, ಮಾಜಿ ನಾಯಕ ಅಜಿಂಕ್ಯ ರಹಾನೆ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಈ ವಿಚಾರವಾಗಿ ಮಾತನಾಡಿದ್ದಾರೆ:&lt;/p&gt;&lt;p&gt;&lt;strong&gt;ಸಂಜುಗೆ ನ್ಯಾಯ ಸಿಗಬೇಕು;&lt;/strong&gt; ವಿಶ್ವಕಪ್&zwnj; ಪ್ರಶಸ್ತಿ ಗೆದ್ದು ಕೊಟ್ಟ ಆಟಗಾರರ ಮೇಲೆ ಮ್ಯಾನೇಜ್&zwnj;ಮೆಂಟ್ ಮೊದಲು ನಂಬಿಕೆ ಇಡಬೇಕು. ಕೇವಲ ಎರಡು ಅಥವಾ ಮೂರು ಕೆಟ್ಟ ಇನ್ನಿಂಗ್ಸ್&zwnj;ಗಳ ಆಧಾರದ ಮೇಲೆ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಾದ ನಿರ್ಧಾರವಲ್ಲ.&lt;/p&gt;&lt;p&gt;&lt;strong&gt;ವಿಶ್ವಕಪ್ ಯಶಸ್ವಿ ಜೋಡಿಗೆ ಆದ್ಯತೆ ನೀಡಿ;&lt;/strong&gt; ಟಿ20 ವಿಶ್ವಕಪ್&zwnj;ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್&zwnj;ಗೆ ನಿರಂತರ ಅವಕಾಶಗಳನ್ನು ನೀಡಬೇಕು.&lt;/p&gt;&lt;p&gt;&lt;strong&gt;ಸೂರ್ಯವಂಶಿಗೆ ಇನ್ನೂ ಸಮಯವಿದೆ&lt;/strong&gt;; ವೈಭವ್ ಸೂರ್ಯವಂಶಿ ನಿಸ್ಸಂದೇಹವಾಗಿ ಅತ್ಯಂತ ಪ್ರತಿಭಾನ್ವಿತ ಆಟಗಾರ. ಆದರೆ, ಅವರಿಗೆ ಇನ್ನೂ ವಯಸ್ಸಿದೆ ಮತ್ತು ಮುಂದಿನ ದಿನಗಳಲ್ಲಿ ಅವರಿಗೆ ಖಂಡಿತವಾಗಿಯೂ ಸಾಲು ಸಾಲು ಅವಕಾಶಗಳು ಸಿಗಲಿವೆ. ಪ್ರಸ್ತುತ ಸಮಯಕ್ಕೆ ಭಾರತ ತನ್ನ ಪರೀಕ್ಷಿತ ಮತ್ತು ಯಶಸ್ವಿ 'ಟಾಪ್-3' ಆಟಗಾರರನ್ನೇ ಕಣಕ್ಕಿಳಿಸಬೇಕು. ರಹಾನೆ ಅವರ ಪ್ರಕಾರ, ಆಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸಿ, ತಮ್ಮ ಕ್ರಮಾಂಕವನ್ನು ಭದ್ರಪಡಿಸಿಕೊಳ್ಳಲು ಇದು ಸೂಕ್ತ ವೇದಿಕೆಯಾಗಿದೆ.&lt;/p&gt;&lt;h3&gt;&lt;strong&gt;ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳ!&lt;/strong&gt;&lt;/h3&gt;&lt;p&gt;ಭಾರತ ಹಾಗೂ ಅಫ್ಘಾನಿಸ್ತಾನ್ ನಡುವಿನ ಬಹುನಿರೀಕ್ಷಿತ ಮೂರು ಪಂದ್ಯಗಳ ಟಿ20 ಸರಣಿಯು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.&lt;/p&gt;&lt;p&gt;&lt;strong&gt;ಮೊದಲ ಪಂದ್ಯ;&lt;/strong&gt; ಸೆಪ್ಟೆಂಬರ್ 13&lt;/p&gt;&lt;p&gt;&lt;strong&gt;ಎರಡನೇ ಪಂದ್ಯ;&lt;/strong&gt; ಸೆಪ್ಟೆಂಬರ್ 15&lt;/p&gt;&lt;p&gt;&lt;strong&gt;ಮೂರನೇ ಪಂದ್ಯ;&lt;/strong&gt; ಸೆಪ್ಟೆಂಬರ್ 17&lt;/p&gt;&lt;p&gt;ಟಿ20 ವಿಶ್ವಕಪ್ ನಂತರ ಹೊಸ ಆಟಗಾರರಿಗೆ ಅವಕಾಶ ನೀಡುವ ಧಾವಂತದಲ್ಲಿ, ಸದ್ಯಕ್ಕೆ ಅನುಭವಿಗಳನ್ನೇ ನೆಚ್ಚಿಕೊಳ್ಳುವುದು ಭಾರತ ತಂಡದ ದೀರ್ಘಕಾಲೀನ ಸ್ಥಿರತೆಗೆ ಒಳ್ಳೆಯದು ಎಂಬುದು ರಹಾನೆ ಅವರ ಬಲವಾದ ವಾದವಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/india-vs-afghanistan-t20-series-vaibhav-suryavanshi-playing-11-sanju-samson-ajinkya-rahane-team-india-selection-bmk/articleshow-6tkox8r"/>
        </item>
        <item>
            <title><![CDATA[ಕರುಣೆ ಇಲ್ಲದ ಬಾಂಗ್ಲಾ ಕಾನೂನು: ತಾಯಿಯ ಅಂತಿಮ ಸಂಸ್ಕಾರಕ್ಕೆ ಕೇವಲ 5 ಗಂಟೆ ಪರೋಲ್, ರಾಧಾ-ಕೃಷ್ಣನ ಪಾದ ಹಿಡಿದು ಕಣ್ಣೀರಿಟ್ಟ ಸಂನ್ಯಾಸಿ ಚಿನ್ಮಯ್‌ ದಾಸ್‌]]></title>
            <link>https://kannada.asianetnews.com/world-news/chinmoy-krishna-das-5-hour-parole-mother-funeral-bangladesh-san/articleshow-ozyv6k1</link>
            <guid isPermaLink="true">https://kannada.asianetnews.com/world-news/chinmoy-krishna-das-5-hour-parole-mother-funeral-bangladesh-san/articleshow-ozyv6k1</guid>
            <pubDate>Fri, 11 Sep 2026 22:09:35 +0530</pubDate>
            <description><![CDATA[ಬಾಂಗ್ಲಾದೇಶದ ಜೈಲಿನಲ್ಲಿರುವ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೇವಲ 5 ಗಂಟೆಗಳ ಪರೋಲ್ ನೀಡಲಾಯಿತು. ಜೀವಂತವಾಗಿದ್ದಾಗ ಮಗನನ್ನು ನೋಡಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಲಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01m28n4dfsk71m3xkrmn6k3wdr,imgname-chinmoy-krishna-das-1789144479224.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಢಾಕಾ (ಸೆ.11): &lt;/strong&gt;ಸುಮಾರು ಎರಡು ವರ್ಷಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿ ಬಂಧಿಯಾಗಿರುವ ಪ್ರಮುಖ ಹಿಂದೂ ಸಂನ್ಯಾಸಿ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರಿಗೆ ತಮ್ಮ ತಾಯಿಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಡಳಿತವು ಕೇವಲ 5 ಗಂಟೆಗಳ ಕಾಲ ತಾತ್ಕಾಲಿಕ ಪರೋಲ್ (5-hour Parole) ಮಂಜೂರು ಮಾಡಿದೆ. ಅಂತಿಮ ದಿನಗಳಲ್ಲಿ ಜೈಲಿನಲ್ಲಿರುವ ಮಗನನ್ನು ಒಮ್ಮೆ ನೋಡಬೇಕೆಂಬ 71 ವರ್ಷದ ತಾಯಿಯ ಕೊನೆಯ ಆಸೆ ಕೂಡ ಈಡೇರಲೇ ಇಲ್ಲ.&lt;/p&gt;&lt;p&gt;ಬಂಧನದಿಂದ ಕೇವಲ 5 ಗಂಟೆಗಳ ಕಾಲ ಹೊರಬಂದ ಸಂನ್ಯಾಸಿಯ ಭಾವುಕ ಕ್ಷಣಗಳ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚಿನ್ಮಯ್ ಕೃಷ್ಣ ದಾಸ್ ಅವರು ಚಟ್ಟೋಗ್ರಾಮ್&zwnj;ನ ಪುಂಡರೀಕ್ ಧಾಮ್ (Pundarik Dham) ದೇವಾಲಯದಲ್ಲಿ ರಾಧಾ-ಕೃಷ್ಣನ ವಿಗ್ರಹದ ಪಾದಗಳನ್ನು ಸ್ಪರ್ಶಿಸಿ ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಿರುವ ದೃಶ್ಯವಿದ್ದು, ಬಳಿಕ ಅವರು ಮತ್ತೆ ಜೈಲಿಗೆ ಮರಳಿದ್ದಾರೆ.&lt;/p&gt;&lt;h2&gt;&lt;strong&gt;ಸಾವಿನ ನಂತರಷ್ಟೇ ಸಿಕ್ಕಿತು ಪರೋಲ್&lt;/strong&gt;&lt;/h2&gt;&lt;p&gt;ಚಿನ್ಮಯ್ ಕೃಷ್ಣ ದಾಸ್ ಅವರ ತಾಯಿ ಸಂಧ್ಯಾ ರಾಣಿ ಧಾರ್ (71) ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಜೀವಂತವಾಗಿದ್ದಾಗ ಮಗನನ್ನು ಭೇಟಿಯಾಗಲು ಕುಟುಂಬಸ್ಥರು ಸಲ್ಲಿಸಿದ್ದ ಪರೋಲ್ ಅರ್ಜಿಯನ್ನು ಬಾಂಗ್ಲಾದೇಶದ ಅಧಿಕಾರಿಗಳು ತಿರಸ್ಕರಿಸಿದ್ದರು. ತಾಯಿ ಮೃತಪಟ್ಟ ನಂತರವಷ್ಟೇ ಚಟ್ಟೋಗ್ರಾಮ್ ಜಿಲ್ಲಾ ಡೆಪ್ಯುಟಿ ಕಮಿಷನರ್ (DC) ಮೊಹಮ್ಮದ್ ಝಾಹಿದುಲ್ ಇಸ್ಲಾಂ ಮಿಯಾ ಅವರು ಅಂತಿಮ ಸಂಸ್ಕಾರಕ್ಕೆ ಹಾಜರಾಗಲು 5 ಗಂಟೆಗಳ ಪರೋಲ್ ನೀಡಿ ಆದೇಶಿಸಿದರು ಎಂದು 'ದಿ ಡೈಲಿ ಸ್ಟಾರ್' ವರದಿ ಮಾಡಿದೆ. ಚಿನ್ಮಯ್ ದಾಸ್ ಅವರ ಸಹೋದರ ರಂಜನ್ ಕುಮಾರ್ ಧಾರ್ ನೀಡಿದ ಮಾಹಿತಿ ಪ್ರಕಾರ, ತಾಯಿ ಸಂಧ್ಯಾ ರಾಣಿ ಅವರ ಅಂತಿಮ ಸಂಸ್ಕಾರವನ್ನು ಪುಂಡರೀಕ್ ಧಾಮ್&zwnj;ನಲ್ಲೇ ನೆರವೇರಿಸಲಾಯಿತು.&lt;/p&gt;&lt;h2&gt;&lt;strong&gt;ಚಿನ್ಮಯ್ ದಾಸ್ ವಿರುದ್ಧ ಇರುವ ಪ್ರಕರಣಗಳೇನು?&lt;/strong&gt;&lt;/h2&gt;&lt;p&gt;ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ ಜೋಟ್&zwnj;ನ (Bangladesh Sammilito Sanatani Jagaran Jot) ವಕ್ತಾರರೂ ಆಗಿರುವ ಚಿನ್ಮಯ್ ಕೃಷ್ಣ ದಾಸ್ ಅವರನ್ನು 2024 ರ ನವೆಂಬರ್&zwnj;ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ದೇಶದ್ರೋಹದ (Sedition) ಕಾಯ್ದೆಯಡಿ ಬಂಧಿಸಲಾಗಿತ್ತು. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪತನದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ರಕ್ಷಣೆ ಕೋರಿ ಇವರ ನೇತೃತ್ವದ ಸಂಘಟನೆಯು ಬೃಹತ್ ರಾಲಿಗಳನ್ನು ಆಯೋಜಿಸಿತ್ತು.&lt;/p&gt;&lt;p&gt;ಈ ಹಿಂದೆ ಇಸ್ಕಾನ್ (ISKCON) ಜೊತೆ ಗುರುತಿಸಿಕೊಂಡಿದ್ದ ಚಿನ್ಮಯ್ ದಾಸ್ ವಿರುದ್ಧ ಒಟ್ಟು 6 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೈಕೋರ್ಟ್ ಈಗಾಗಲೇ 4 ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿದೆ. ಆದರೆ, ಉಳಿದ ಪ್ರಕರಣಗಳಿಂದಾಗಿ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿಲ್ಲ. ದೇಶದ್ರೋಹ ಪ್ರಕರಣದ ಜಾಮೀನಿಗೆ ತಡೆ ನೀಡಲಾಗಿದ್ದು, ಚಟ್ಟೋಗ್ರಾಮ್ ತ್ವರಿತ ವಿಚಾರಣಾ ನ್ಯಾಯಾಧಿಕರಣದಲ್ಲಿ (Chattogram Speedy Trial Tribunal) ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಚಿನ್ಮಯ್ ದಾಸ್ ಬಂಧನವನ್ನು ಪ್ರತಿಭಟಿಸುತ್ತಿದ್ದಾಗ ಸರ್ಕಾರಿ ಅಭಿಯೋಜಕ (Prosecutor) ಸೈಫುಲ್ ಇಸ್ಲಾಂ ಅಲಿಫ್ ಎಂಬುವವರ ಹತ್ಯೆಯಾಗಿತ್ತು, ಆ ಕೊಲೆ ಪ್ರಕರಣದಲ್ಲಿ ಚಿನ್ಮಯ್ ಅವರ ಮೇಲೆಯೂ ಆರೋಪ ಹೊರಿಸಲಾಗಿದೆ.&lt;/p&gt;&lt;h2&gt;&lt;strong&gt;ತಾಯಿಯ ಕೊನೆಯ ಆಸೆ ಈಡೇರಲೇ ಇಲ್ಲ&lt;/strong&gt;&lt;/h2&gt;&lt;p&gt;ಹಟಾಜಾರಿ (Hathazari) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ತಾಯಿಯ ಅಂತಿಮ ದರ್ಶನ ಮಗನಿಗೆ ಸಿಗದಿರುವುದಕ್ಕೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ತಾಯಿ ಹೊರಟುಹೋದರು. ನನ್ನ ಸಹೋದರ ಜೀವಂತವಾಗಿದ್ದಾಗ ತಾಯಿಯನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಚಿನ್ಮಯ್ ಅವರ ಇನ್ನೊಬ್ಬ ಸಹೋದರ ಅಂಜನ್ ಕುಮಾರ್ ಧಾರ್ ಬಾಂಗ್ಲಾದೇಶದ 'ಕಲ್ಬೆಲಾ' ಪತ್ರಿಕೆಗೆ ತಿಳಿಸಿದ್ದಾರೆ.&lt;/p&gt;&lt;p&gt;ಮಗನ ದೀರ್ಘಕಾಲದ ಜೈಲುವಾಸ, ಅನಾರೋಗ್ಯದ ವರದಿಗಳು ಹಾಗೂ ಪದೇ ಪದೇ ಜಾಮೀನು ತಿರಸ್ಕೃತಗೊಳ್ಳುತ್ತಿದ್ದದ್ದು ತಾಯಿ ಸಂಧ್ಯಾ ರಾಣಿ ಅವರನ್ನು ಮಾನಸಿಕವಾಗಿ ತೀವ್ರವಾಗಿ ಕುಗ್ಗಿಸಿತ್ತು. ಜೈಲು ನಿರ್ವಹಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಚಟ್ಟೋಗ್ರಾಮ್ ಡಿಸಿಗೆ ಬುಧವಾರ ಅನಾರೋಗ್ಯಪೀಡಿತ ತಾಯಿಯನ್ನು ನೋಡಲು ಷರತ್ತುಬದ್ಧ ಪರೋಲ್ ಕೋರಲಾಗಿತ್ತು. ಆದರೆ, ಅಸ್ವಸ್ಥ ಬಂಧುಗಳನ್ನು ನೋಡಲು ಕೈದಿಗಳಿಗೆ ಪರೋಲ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಡಳಿತ ಅರ್ಜಿ ವಜಾಗೊಳಿಸಿತ್ತು ಎಂದು 'ಸಮಕಾಲ' ಪತ್ರಿಕೆ ವರದಿ ಮಾಡಿದೆ.&lt;/p&gt;&lt;p&gt;#BangladeshSri Chinmay Krishna Das Prabhu touched the feet of Radha-Krishna in Pundarik Dham temple of #Chattragram before taken to jail.&amp;nbsp;Sri Chinmay Krishna Das Prabhu was given only a few hours of parole to see his dead mother for the last time. pic.twitter.com/JcLKT8OF3F&lt;/p&gt;&lt;p&gt;&mdash; Hindu Voice (@HinduVoice_in) September 10, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[world-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/chinmoy-krishna-das-5-hour-parole-mother-funeral-bangladesh-san/articleshow-ozyv6k1"/>
        </item>
        <item>
            <title><![CDATA[BRICS: ಟಾಲ್‌ಸ್ಟಾಯ್ ಬರೆದ ಪತ್ರ, ಗಾಂಧೀಜಿಗೆ ಸಿಕ್ಕ 'ಖಜಾನೆ' ಇಂದು ಪುಟಿನ್‌ಗೆ ಮೋದಿ ಸರ್ಪ್ರೈಸ್ ಗಿಫ್ಟ್!]]></title>
            <link>https://kannada.asianetnews.com/world-news/tolstoy-letter-gandhi-tirukkural-tamil-treasure-modi-gift-putin-russian-translation-india-russia-relations-bmk/articleshow-lhohd1k</link>
            <guid isPermaLink="true">https://kannada.asianetnews.com/world-news/tolstoy-letter-gandhi-tirukkural-tamil-treasure-modi-gift-putin-russian-translation-india-russia-relations-bmk/articleshow-lhohd1k</guid>
            <pubDate>Fri, 11 Sep 2026 21:49:05 +0530</pubDate>
            <description><![CDATA[ಲಿಯೋ ಟಾಲ್‌ಸ್ಟಾಯ್ ಅವರ 'ಹಿಂದೂಗೆ ಪತ್ರ' ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಸ್ಪೂರ್ತಿ ನೀಡಿತು. ಈ ಪತ್ರದ ಮೂಲಕ ಗಾಂಧೀಜಿಗೆ ಪರಿಚಯವಾದ 'ತಿರುಕ್ಕುರಲ್' ತಮಿಳು ಮಹಾಕಾವ್ಯ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧಾಂತಕ್ಕೆ ಬುನಾದಿಯಾಯಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28m6zfsyn5pfzs99pxcwxvm,imgname-modi-putin-1789143514616.jpg" type="image/jpeg" height="390" width="690"/>
            <content:encoded><![CDATA[&lt;p&gt;20 ನೇ ಶತಮಾನದ ಆರಂಭದಲ್ಲಿ ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗ, ರಷ್ಯಾದ ಮಹಾನ್ ಸಾಹಿತ್ಯ ದಿಗ್ಗಜ ਲಿಯೋ ಟಾಲ್&zwnj;ಸ್ಟಾಯ್ ಅವರ ಬರವಣಿಗೆಗಳ ಪರಿಚಯವಾಯಿತು. ಅಲ್ಲಿಂದ ಆರಂಭವಾದ ಈ ಐತಿಹಾಸಿಕ ಸಂಪರ್ಕವು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧಾಂತವನ್ನು ಬದಲಾಯಿಸಿದ್ದಲ್ಲದೆ, ಶತಮಾನಗಳ ನಂತರ ಇಂದು ಭಾರತ ಮತ್ತು ರಷ್ಯಾದ ನಡುವಿನ ರಾಜತಾಂತ್ರಿಕ ಬಾಂಧವ್ಯಕ್ಕೂ ಸೇತುವೆಯಾಗಿದೆ.&lt;/p&gt;&lt;h2&gt;&lt;strong&gt;ಟಾಲ್&zwnj;ಸ್ಟಾಯ್ ಬರೆದ ಅಹಿಂಸೆಯ ಮಂತ್ರ!&lt;/strong&gt;&lt;/h2&gt;&lt;p&gt;1908ರ ಡಿಸೆಂಬರ್ 14ರಂದು ಟಾಲ್&zwnj;ಸ್ಟಾಯ್ ಎ ಲೆಟರ್ ಟು ಎ ಹಿಂದೂ ಎಂಬ ಪ್ರಸಿದ್ಧ ಲೇಖನವನ್ನು ಬರೆದಿದ್ದರು. ಕ್ರಾಂತಿಕಾರಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಫ್ರೀ ಹಿಂದೂಸ್ತಾನ್ ಪತ್ರಿಕೆಯ ಸಂಪಾದಕ ತಾರಕ್&zwnj;ನಾಥ್ ದಾಸ್ ಅವರ ಕೋರಿಕೆಯ ಮೇರೆಗೆ ಇದನ್ನು ರಚಿಸಲಾಗಿತ್ತು. ಈ ಪತ್ರದಲ್ಲಿ ಟಾಲ್&zwnj;ಸ್ಟಾಯ್ ಬ್ರಿಟಿಷ್ ವಸಾಹತುಶಾಹಿಯನ್ನು ತೀವ್ರವಾಗಿ ಖಂಡಿಸಿದರು. ಬೆರಳೆಣಿಕೆಯಷ್ಟು ಬ್ರಿಟಿಷ್ ಸೈನಿಕರು ಹಾಗೂ ಒಂದು ಸಣ್ಣ ವ್ಯಾಪಾರ ಕಂಪನಿ (ಈಸ್ಟ್ ಇಂಡಿಯಾ ಕಂಪನಿ) ಕೋಟ್ಯಂತರ ಭಾರತೀಯರನ್ನು ಆಳಲು ನಾವೇ ನೀಡುತ್ತಿರುವ ಸಹಕಾರವೇ ಕಾರಣ ಎಂದು ಅವರು ವಾದಿಸಿದರು. ಹಿಂಸೆ ಅಥವಾ ಭಯೋತ್ಪಾದನೆಯಿಂದ ಸ್ವಾತಂತ್ರ್ಯ ಸಿಗಲು ಸಾಧ್ಯವಿಲ್ಲ, ಬದಲಿಗೆ 'ನಾಗರಿಕ ಅಸಹಕಾರ' ಮತ್ತು 'ಅಹಿಂಸೆ'ಯಿಂದ ಮಾತ್ರ ಬ್ರಿಟಿಷರನ್ನು ಸೋಲಿಸಬಹುದು ಎಂದು ಅವರು ಪ್ರತಿಪಾದಿಸಿದರು.&lt;/p&gt;&lt;h3&gt;&lt;strong&gt;ಗಾಂಧೀಜಿಗೆ ಸಿಕ್ಕ 'ತಿರುಕ್ಕುರಲ್' ಎಂಬ ನೈತಿಕ ನಿಧಿ!&lt;/strong&gt;&lt;/h3&gt;&lt;p&gt;1909ರಲ್ಲಿ ಈ ಪತ್ರವನ್ನು ಓದಿದ ಯುವ ಮೋಹನದಾಸ ಕರಮಚಂದ ಗಾಂಧಿಯವರು ತೀವ್ರವಾಗಿ ಪ್ರಭಾವಿತರಾದರು. ಟಾಲ್&zwnj;ಸ್ಟಾಯ್ ಅವರಿಗೆ ಪತ್ರ ಬರೆದು, ಅದನ್ನು ತಮ್ಮ &quot;ಇಂಡಿಯನ್ ಒಪೀನಿಯನ್&quot; ಪತ್ರಿಕೆಯಲ್ಲಿ ಪ್ರಕಟಿಸಲು ಅನುಮತಿ ಪಡೆದರು. ಇದು ಇಬ್ಬರ ನಡುವೆ ೧೯೧೦ ರಲ್ಲಿ ಟಾಲ್&zwnj;ಸ್ಟಾಯ್ ನಿಧನರಾಗುವವರೆಗೂ ಸುದೀರ್ಘ ಪತ್ರವ್ಯವಹಾರಕ್ಕೆ ದಾರಿಯಾಯಿತು. ಟಾಲ್&zwnj;ಸ್ಟಾಯ್ ತಮ್ಮ ಪತ್ರದಲ್ಲಿ ಪ್ರೀತಿ ಮತ್ತು ಅಹಿಂಸೆಯ ಶಕ್ತಿಯನ್ನು ವಿವರಿಸಲು ವೇದಗಳು ಹಾಗೂ ಕೃಷ್ಣನ ಬೋಧನೆಗಳ ಜೊತೆಗೆ ಪ್ರಾಚೀನ ತಮಿಳು ಸಾಹಿತ್ಯವಾದ 'ತಿರುಕ್ಕುರಲ್'ನ ಪದ್ಯಗಳನ್ನು ಉಲ್ಲೇಖಿಸಿದ್ದರು. ಇದನ್ನು ಅವರು ಹಿಂದೂ ಕುರಲ್ ಎಂದು ಕರೆದಿದ್ದರು. ಕವಿ-ಸಂತ ತಿರುವಳ್ಳುವರ್ ಬರೆದ ಈ ಮಹಾಕಾವ್ಯವು ದಕ್ಷಿಣ ಭಾರತದ ಶ್ರೇಷ್ಠ ನೈತಿಕ ಚಿಂತನೆಗಳನ್ನು ಒಳಗೊಂಡಿತ್ತು. ಟಾಲ್&zwnj;ಸ್ಟಾಯ್ ಪತ್ರದ ಮೂಲಕ ಈ ತಮಿಳು 'ಖಜಾನೆ' ಗಾಂಧೀಜಿಯವರ ಗಮನಸೆಳೆಯಿತು. ಜೈಲಿನಲ್ಲಿದ್ದಾಗ ಗಾಂಧೀಜಿಯವರು ಇದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರು. ತಿರುಕ್ಕುರಲ್&zwnj;ನ ನೈತಿಕ ಬೋಧನೆಗಳು ಗಾಂಧೀಜಿಯವರ 'ಸತ್ಯಾಗ್ರಹ' ಮತ್ತು 'ಅಹಿಂಸೆ'ಯ ತತ್ವಗಳಿಗೆ ಬಲವಾದ ಅಡಿಪಾಯ ಹಾಕಿಕೊಟ್ಟವು.&lt;/p&gt;&lt;h3&gt;&lt;strong&gt;ವ್ಲಾಡಿಮಿರ್ ಪುಟಿನ್&zwnj;ಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆ!&lt;/strong&gt;&lt;/h3&gt;&lt;p&gt;ಶತಮಾನಗಳ ಹಿಂದೆ ರಷ್ಯಾದ ಸಾಹಿತಿಯಿಂದ ಭಾರತದ ಗಾಂಧೀಜಿಗೆ ತಲುಪಿ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯಾಗಿದ್ದ ಆ ತಮಿಳು ಮಹಾಕಾವ್ಯದ ವೃತ್ತವು ಇಂದು ಪೂರ್ಣಗೊಂಡಿದೆ. ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಈ ಪ್ರಸಿದ್ಧ ತಮಿಳು ಪಠ್&quot;ತಿರುಕ್ಕುರಲ್&quot; ನ ರಷ್ಯನ್ ಅನುವಾದವನ್ನು ವಿಶೇಷ ಉಡುಗೊರೆಯಾಗಿ ನೀಡಿದರು.&lt;/p&gt;&lt;h3&gt;&lt;strong&gt;ಹೆಚ್ಚಿದ ರಾಜತಾಂತ್ರಿಕ ತೂಕ!&lt;/strong&gt;&lt;/h3&gt;&lt;p&gt;ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ತೂಕ ಹೆಚ್ಚುತ್ತಿರುವ ಈ ಸಮಯದಲ್ಲಿ, ಈ ಉಡುಗೊರೆಯು ಸಾಂಸ್ಕೃತಿಕವಾಗಿ ಮಹತ್ವದ ಮೈಲಿಗಲ್ಲಾಗಿದೆ. ಭಾರತದ ತಮಿಳು ಸಾಹಿತ್ಯ ಪರಂಪರೆ, ರಷ್ಯಾದ ಸಾಹಿತ್ಯ ದಿಗ್ಗಜನ ಚಿಂತನೆ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಸಂಬಂಧವನ್ನು ನೆನಪಿಸುವ ರೀತಿಯಲ್ಲಿ ಪ್ರಧಾನಿ ಮೋದಿ ಈ ಅಪರೂಪದ ಗಿಫ್ಟ್ ನೀಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿದ್ದಾರೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/world-news/tolstoy-letter-gandhi-tirukkural-tamil-treasure-modi-gift-putin-russian-translation-india-russia-relations-bmk/articleshow-lhohd1k"/>
        </item>
        <item>
            <title><![CDATA['ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ': ಗಣೇಶ ಹಬ್ಬಕ್ಕೂ ಮುನ್ನ ಎಸ್‌ಪಿ ಸಾಹಿಲ್ ಖಡಕ್ ಸೂಚನೆ!]]></title>
            <link>https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6</link>
            <guid isPermaLink="true">https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6</guid>
            <pubDate>Fri, 11 Sep 2026 21:36:49 +0530</pubDate>
            <description><![CDATA[ಗಂಗಾವತಿಯಲ್ಲಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ. ಗಣೇಶ ಹಬ್ಬದ ಮುನ್ನ ಎಸ್‌ಪಿ ಸಾಹಿಲ್ ಬಾಗ್ಲಾ ಸೌಹಾರ್ದತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಬ್ಬದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m28m2qmt3t6whqsws4bv6wcr,imgname-v-1789143375514.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ರಾಮಮೂರ್ತಿ ನವಲಿ&lt;/strong&gt;&lt;/h2&gt;&lt;p&gt;&lt;strong&gt;ಗಂಗಾವತಿ (ಸೆ.11): &lt;/strong&gt;ಗಣೇಶ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ಬೇರೆ ಧರ್ಮದವರಿಗೆ ತೊಂದರೆ ಉಂಟುಮಾಡುವಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ ಹೇಳಿದರು.&lt;/p&gt;&lt;p&gt;ನಗರದ ಭಾರತೀಯ ವೈದ್ಯಕೀಯ ಭವನದಲ್ಲಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಂಗಾವತಿ ನಗರದಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಹೀಗಾಗಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆಯುವ ಮೆರವಣಿಗೆಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಯುವಂತೆ ಎಲ್ಲರೂ ಸಹಕರಿಸಬೇಕು ಎಂದರು.&lt;/p&gt;&lt;p&gt;ಗಣೇಶ ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಯಿಂದ ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಮಂಟಪಗಳಿಗಾಗಿ ಜೆಸ್ಕಾಂ, ಅರಣ್ಯ ಇಲಾಖೆ ಹಾಗೂ ನಗರಸಭೆಯಿಂದ ಅಗತ್ಯ ಪರವಾನಿಗೆಗಳನ್ನು ಪಡೆಯಬೇಕು ಎಂದು ಸೂಚಿಸಿದರು.&lt;img&gt;&lt;/p&gt;&lt;p&gt;ವಿಸರ್ಜನೆ ಸಂದರ್ಭದಲ್ಲಿ ದಾಸನಾಳ ಹಾಗೂ ಕಂಪ್ಲಿ ತುಂಗಭದ್ರಾ ಸೇತುವೆ ಬಳಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಾರ್ವಜನಿಕರು ಹಾಗೂ ಗಣೇಶೋತ್ಸವ ಸಮಿತಿಗಳು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಎಸ್&zwnj;ಪಿ ಸಾಹಿಲ್ ಬಾಗ್ಲಾ ಮನವಿ ಮಾಡಿದರು.&lt;/p&gt;&lt;p&gt;&lt;strong&gt;ಗಣೇಶ ಹಬ್ಬ ಸಂಘಟನೆಯ ಉದ್ದೇಶವಾಗಲಿ&lt;/strong&gt;&lt;/p&gt;&lt;p&gt;ಮಾಜಿ ಸಂಸದ ಶಿವರಾಮ ಗೌಡ ಮಾತನಾಡಿ, ಗಣೇಶ ಹಬ್ಬದ ಆಚರಣೆ ಸಂಘಟನೆಯ ಉದ್ದೇಶದಿಂದ ನಡೆಯಬೇಕು. ಹಬ್ಬದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ಭಾವೈಕ್ಯತೆಯ ನಗರವಾಗಿದೆ. ಈ ಹಿಂದೆ ಭಾವೈಕ್ಯತೆಯ ಪ್ರತೀಕವಾಗಿ ಎಂ.ಎಸ್. ಅನ್ಸಾರಿ ಅವರು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದಿರುವುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.&lt;/p&gt;&lt;p&gt;ಗಣೇಶ ಮಂಟಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ರಸ್ತೆ ಗುಂಡಿಗಳನ್ನು ಮುಚ್ಚುವುದು ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಅಂಬ್ಯುಲೆನ್ಸ್, ಜೆಸಿಬಿ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಡಿಜೆ ಬಳಕೆಯಲ್ಲೂ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಂಡು ಸೌಹಾರ್ದತೆಯಿಂದ ಹಬ್ಬ ಆಚರಿಸುವ ವಾತಾವರಣ ನಿರ್ಮಿಸಬೇಕು ಎಂದು ಅವರು ಮನವಿ ಮಾಡಿದರು.&lt;img&gt;&lt;/p&gt;&lt;p&gt;ನಗರಸಭೆ ಮಾಜಿ ಅಧ್ಯಕ್ಷ ಶ್ಯಾಮೀದ್ ಮನಿಯಾರ್ ಮಾತನಾಡಿ, ಡಿಜೆ ಸೌಂಡ್&zwnj;ಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿ ಹಾಗೂ ಘೋಷಣೆ ಮಾಡಬೇಕು. ಮೊದಲನೇ ಗಣಪತಿಗೆ ಮಾತ್ರ ಅವಕಾಶ ನೀಡಿ, ಕೊನೆಯ ಗಣಪತಿ ವಿಸರ್ಜನೆ ಮಾಡುವವರಿಗೆ ಅವಕಾಶ ನೀಡದಂತಹ ತಾರತಮ್ಯ ಮಾಡಬಾರದು. ಪರವಾನಿಗೆ ನೀಡುವಲ್ಲಿ ಯಾವುದೇ ಗೊಂದಲವಿದ್ದರೆ ಎಲ್ಲ ಗಣೇಶ ಮೂರ್ತಿಗಳ ವಿಸರ್ಜನೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.&lt;/p&gt;&lt;p&gt;ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಗಣೇಶ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಮಂಟಪಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಸಭೆಯಲ್ಲಿ ತಹಸೀಲ್ದಾರ್ ವಸಂತಕುಮಾರಿ, ಇಒ ರಂಗಪ್ಪರೆಡ್ಡಿ, ಇಲಿಯಾಸ್ ಖಾದ್ರಿ, ಪಿಐ ಪ್ರಕಾಶ ಯಾತನೂರು, ಸಿಪಿಐ ರಂಗಪ್ಪ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಹಾಗೂ ಡಿವೈಎಸ್&zwnj;ಪಿ ಜಾಯಪ್ಪ ನ್ಯಾಮಗೌಡರ್ ಉಪಸ್ಥಿತರಿದ್ದರು. ವಿನಯ ಪಾಟೀಲ್, ಶರಣಪ್ಪ, ನೀಲಕಂಠ ನಾಗಶಟ್ಟಿ, ಉಸ್ಮಾನ್, ಕಾಶಿನಾಥ್ ಚಿತ್ರಗಾರ, ವಿರೂಪಾಕ್ಷಗೌಡ ನಾಯಕ, ಪಂಪಣ್ಣ ನಾಯಕ, ಎಸ್.ಎಚ್. ಮುಧೋಳ್ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿ ತಮ್ಮ ಸಲಹೆಗಳನ್ನು ನೀಡಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/koppal-gangavathi-ganesha-festival-sp-sahil-bagla-urges-peace-and-harmony-strict-instructions-gvd/articleshow-84g6tf6"/>
        </item>
        <item>
            <title><![CDATA[Elon musk: ಪೌರತ್ವದ ಕುರಿತು ಭಾರತವನ್ನು ಏಕಾಏಕಿ ಹಾಡಿ ಹೊಗಳಿದ ಎಲಾನ್‌ ಮಸ್ಕ್‌!]]></title>
            <link>https://kannada.asianetnews.com/viral/elon-musk-india-immigration-citizenship-rules-grok-irish-citizen-viral-x-post-bmk/articleshow-2gxmgu1</link>
            <guid isPermaLink="true">https://kannada.asianetnews.com/viral/elon-musk-india-immigration-citizenship-rules-grok-irish-citizen-viral-x-post-bmk/articleshow-2gxmgu1</guid>
            <pubDate>Fri, 11 Sep 2026 21:07:06 +0530</pubDate>
            <description><![CDATA[ಎಲೋನ್ ಮಸ್ಕ್ ಅವರು ಭಾರತದ ವಲಸೆ ಮತ್ತು ಪೌರತ್ವ ನಿಯಮಗಳನ್ನು 'ವಾಸ್ತವಿಕ' ಎಂದು ಶ್ಲಾಘಿಸಿದ್ದಾರೆ. ಐರಿಶ್ ಪ್ರಜೆಯೊಬ್ಬರು ಭಾರತದ ಪೌರತ್ವ ಪಡೆಯುವ ಕಠಿಣ ಪ್ರಕ್ರಿಯೆಯ ಬಗ್ಗೆ 'ಗ್ರೋಕ್' ಚಾಟ್‌ಬಾಟ್‌ನೊಂದಿಗೆ ನಡೆಸಿದ ವೈರಲ್ ಸಂಭಾಷಣೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದು, ಇದು ಜಾಗತಿಕ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktxnv4rn776f4ah787781dxe,imgname-elon-musk-space-x-1781259932437.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾಜಿಕ ಜಾಲತಾಣ X ನ ಮಾಲೀಕ ಎಲೋನ್ ಮಸ್ಕ್ ಅವರು ಭಾರತದ ವಲಸೆ ಮತ್ತು ಪೌರತ್ವ ನಿಯಮಗಳನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ನೀಡಿದ 'ಭಾರತ ಅತ್ಯಂತ ಪ್ರಾಯೋಗಿಕ ಹಾಗೂ ವ್ಯಾವಹಾರಿಕ' ಎಂಬ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಐರಿಶ್ ಪ್ರಜೆಯೊಬ್ಬರು ಕೃತಕ ಬುದ್ಧಿಮತ್ತೆ ಚಾಟ್&zwnj;ಬಾಟ್ 'ಗ್ರೋಕ್' ಜೊತೆ ನಡೆಸಿದ ಆಸಕ್ತಿಕರ ಮತ್ತು ತಮಾಷೆಯ ಸಂಭಾಷಣೆಗೆ ಮಸ್ಕ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ಐರಿಶ್ ಪ್ರಜೆಯೊಬ್ಬರು ಇತ್ತೀಚೆಗೆ ಭಾರತದ ಕಲ್ಕತ್ತಾಗೆ (ಕೋಲ್ಕತ್ತಾ) ಆಗಮಿಸಿದ ನಂತರ X ನಲ್ಲಿ &quot;ನಾನು ಈಗಷ್ಟೇ ಭಾರತಕ್ಕೆ ಬಂದಿಳಿದೆ, ನನಗೆ ಈ ದೇಶ ತುಂಬಾ ಇಷ್ಟವಾಗಿದೆ. ನಾನು ಇಲ್ಲೇ ನೆಲೆಸಲು ಬಯಸುತ್ತೇನೆ&quot; ಎಂದು ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರು xAI ಅಭಿವೃದ್ಧಿಪಡಿಸಿದ 'ಗ್ರೋಕ್' ಚಾಟ್&zwnj;ಬಾಟ್&zwnj;ಗೆ, ಭಾರತದ ಪೌರತ್ವ ಪಡೆಯಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಪ್ರಶ್ನಿಸಿದರು.&lt;/p&gt;&lt;h3&gt;&lt;strong&gt;ಗ್ರೋಕ್ ನೀಡಿದ ಸ್ಪಷ್ಟನೆಗಳು!&lt;/strong&gt;&lt;/h3&gt;&lt;p&gt;ಗ್ರೋಕ್ ಚಾಟ್&zwnj;ಬಾಟ್ ಭಾರತೀಯ ಕಾನೂನುಗಳ ಕುರಿತು ಅತ್ಯಂತ ನಿಖರವಾದ ವಿವರಣೆಗಳನ್ನು ನೀಡಿತು:&lt;/p&gt;&lt;p&gt;&lt;strong&gt;12 ವರ್ಷಗಳ ಕಾಯುವಿಕೆ;&lt;/strong&gt; ಭಾರತದ ಪೌರತ್ವ ಪಡೆಯಲು ಕನಿಷ್ಠ 12 ವರ್ಷಗಳ ಕಾನೂನುಬದ್ಧ ನಿವಾಸ ಅಗತ್ಯ. ಹಿಂದಿನ 14 ವರ್ಷಗಳಲ್ಲಿ ಕನಿಷ್ಠ 11 ವರ್ಷಗಳು ಹಾಗೂ ಅರ್ಜಿ ಸಲ್ಲಿಸುವ ಮುನ್ನ ಸತತ 12 ತಿಂಗಳು ಭಾರತದಲ್ಲೇ ವಾಸವಿರಬೇಕು.&lt;/p&gt;&lt;p&gt;&lt;strong&gt;ದ್ವಿಪೌರತ್ವಕ್ಕೆ ಅವಕಾಶವಿಲ್ಲ; &lt;/strong&gt;ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಆದ್ದರಿಂದ ಪೌರತ್ವ ಪಡೆಯಲು ಅವರು ತಮ್ಮ ಐರಿಶ್ ರಾಷ್ಟ್ರೀಯತೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗುತ್ತದೆ.&lt;/p&gt;&lt;p&gt;&lt;strong&gt;ಸರ್ಕಾರದ ನಿರ್ಧಾರ;&lt;/strong&gt; ಪೌರತ್ವ ನೀಡುವುದು ಸಂಪೂರ್ಣವಾಗಿ ಭಾರತ ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ.&lt;/p&gt;&lt;h3&gt;&lt;strong&gt;ಆರ್ಥಿಕ ಸಹಾಯ ಮತ್ತು ಉದ್ಯೋಗದ ಪ್ರಶ್ನೆ!&lt;/strong&gt;&lt;/h3&gt;&lt;p&gt;ಸಂಭಾಷಣೆ ಮುಂದುವರಿದಂತೆ, ಆ ವ್ಯಕ್ತಿ ತಾವು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಂದಿರುವುದಾಗಿ ಹೇಳಿ, ಕೆಲಸ ಸಿಗುವವರೆಗೆ ಭಾರತ ಸರ್ಕಾರ ತಮಗೆ ಏನಾದರೂ ಆರ್ಥಿಕ ನೆರವು ಅಥವಾ ನಿರುದ್ಯೋಗ ಭತ್ಯೆ ನೀಡುತ್ತದೆಯೇ ಎಂದು ಕೇಳಿದರು.&lt;/p&gt;&lt;h3&gt;&lt;strong&gt;ಖಡಕ್&zwnj; ಆಗಿ ಉತ್ತರಿಸಿದ ಗ್ರೋಕ್&zwnj;!&lt;/strong&gt;&lt;/h3&gt;&lt;p&gt;ಇದಕ್ಕೆ ಖಡಕ್ ಆಗಿ ಉತ್ತರಿಸಿದ ಗ್ರೋಕ್, ಯಾವುದೇ ಉಚಿತ ಹಣ ಸಿಗುವುದಿಲ್ಲ! ಭಾರತದಲ್ಲಿ ಹೊಸದಾಗಿ ಬಂದ ವಿದೇಶಿಯರಿಗೆ ಅಥವಾ ಪೌರರಲ್ಲದವರಿಗೆ ಯಾವುದೇ ಸಾಮಾಜಿಕ ಕಲ್ಯಾಣ ಅಥವಾ ನಿರುದ್ಯೋಗ ಭತ್ಯೆಯಿರುವುದಿಲ್ಲ. ಸರ್ಕಾರದ ಪಡಿತರ ಚೀಟಿ ಅಥವಾ ಪಿಂಚಣಿ ಸೌಲಭ್ಯಗಳಿಗೆ ಭಾರತೀಯ ಪೌರತ್ವದ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ (BPL) ಅರ್ಹತೆ ಬೇಕು. ಆದ್ದರಿಂದ ನಿಮ್ಮ ಕುಟುಂಬವನ್ನು ನೀವೇ ಸ್ವಂತ ಖರ್ಚಿನಲ್ಲಿ ನೋಡಿಕೊಳ್ಳಬೇಕು&quot; ಎಂದು ಸಲಹೆ ನೀಡಿತು.&lt;/p&gt;&lt;h3&gt;&lt;strong&gt;ಆಸ್ತಿ ಖರೀದಿ ಮತ್ತು ಕ್ಯಾಸಿನೊ ಹಣ!&lt;/strong&gt;&lt;/h3&gt;&lt;p&gt;ನಂತರ ಆ ವ್ಯಕ್ತಿ &quot;ಕ್ಯಾಸಿನೊದಲ್ಲಿ 1,00,000 ಯುರೋ ಗೆದ್ದರೆ, ಆ ಹಣದಿಂದ ಭಾರತದಲ್ಲಿ ಮನೆ ಖರೀದಿಸಬಹುದೇ?&quot; ಎಂದು ಪ್ರಸ್ತಾಪಿಸಿದರು. ಅದಕ್ಕೆ ಗ್ರೋಕ್, ಆಸ್ತಿ ಖರೀದಿಸುವುದು ಕೇವಲ ಹಣದ ಮೇಲಷ್ಟೇ ಅಲ್ಲದೆ, ಅವರ ವಲಸೆ ಮತ್ತು ನಿವಾಸದ ಕಾನೂನು ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅರಿವು ಮೂಡಿಸಿತು.&lt;/p&gt;&lt;h3&gt;&lt;strong&gt;ವೈರಲ್ ಆದ ಪೋಸ್ಟ್ ಹಾಗೂ ಎಲೋನ್ ಮಸ್ಕ್ ಪ್ರತಿಕ್ರಿಯೆ!&lt;/strong&gt;&lt;/h3&gt;&lt;p&gt;ಈ ಇಡೀ ಸಂಭಾಷಣೆಯ ಸ್ಕ್ರೀನ್&zwnj;ಶಾಟ್&zwnj;ಗಳನ್ನು X ಬಳಕೆದಾರ ಪೀಟರ್ ಸೇಂಟ್ ಒಂಗೆ ಹಂಚಿಕೊಂಡು, ಭಾರತಕ್ಕೆ ಸ್ಥಳಾಂತರಗೊಳ್ಳುವ ಬಗ್ಗೆ ಐರಿಶ್ ವ್ಯಕ್ತಿಯೊಬ್ಬರು ಕೇಳುತ್ತಿರುವ ತಮಾಷೆಯ ಸಂಭಾಷಣೆ ಇದು. 12 ವರ್ಷ ಕಾಯಬೇಕು, ಹಳೆಯ ಪಾಸ್&zwnj;ಪೋರ್ಟ್ ತ್ಯಜಿಸಬೇಕು ಮತ್ತು ಯಾವುದೇ ಉಚಿತ ಸೌಲಭ್ಯಗಳಿಲ್ಲ&quot; ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಅನ್ನು ಗಮನಿಸಿದ ಎಲೋನ್ ಮಸ್ಕ್, ಭಾರತ ವಾಸ್ತವಿಕವಾಗಿದೆ ಎಂದು ಕೇವಲ ಮೂರೇ ಪದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಕ್ರಮ ವಲಸೆ ಮತ್ತು ವಲಸಿಗರ ಉಚಿತ ಕಲ್ಯಾಣ ಯೋಜನೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಭಾರತದ ಕಟ್ಟುನಿಟ್ಟಾದ ಮತ್ತು ಸ್ಪಷ್ಟ ವಲಸೆ ನಿಯಮಗಳನ್ನು ಮಸ್ಕ್ ಶ್ಲಾಘಿಸಿರುವುದು ವ್ಯಾಪಕ ಬೆಂಬಲ ವ್ಯಕ್ತವಾಗಲು ಕಾರಣವಾಗಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/elon-musk-india-immigration-citizenship-rules-grok-irish-citizen-viral-x-post-bmk/articleshow-2gxmgu1"/>
        </item>
        <item>
            <title><![CDATA[15 ವರ್ಷಗಳ ದೇಶಸೇವೆ ಮುಗಿಸಿ ಮನೆಗೆ ಬಂದ ಇಂಡಿಯನ್‌ ನೇವಿ ಹೀರೋ: ಪತಿಗೆ ಹಾರ ಹಾಕಿ, ಆರತಿ ಎತ್ತಿ ಸಂಭ್ರಮಿಸಿದ ಪತ್ನಿ!]]></title>
            <link>https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead</link>
            <guid isPermaLink="true">https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead</guid>
            <pubDate>Fri, 11 Sep 2026 21:01:59 +0530</pubDate>
            <description><![CDATA[ಭಾರತೀಯ ನೌಕಾಪಡೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ ಅವರಿಗೆ, ಅವರ ಪತ್ನಿ ಶಿವಾನಿ ಸಾಂಪ್ರದಾಯಿಕವಾಗಿ ನೀಡಿದ ಭಾವುಕ ಸ್ವಾಗತದ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m24z1nkr63byy9rp982he1jt,imgname-indian-navy-soldier-retirement-1789020657271.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.11): &lt;/strong&gt;ಭಾರತೀಯ ನೌಕಾಪಡೆಯಲ್ಲಿ (Indian Navy) ಸುದೀರ್ಘ 15 ವರ್ಷಗಳ ಕಾಲ ಕಠಿಣ ಹಾಗೂ ನಿಷ್ಠಾವಂತ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ರಾಹುಲ್ ಮಾಧ್ವಾಲ್ (Rahul Madhwal) ಅವರು ಮನೆಗೆ ಮರಳಿದಾಗ, ಅವರ ಪತ್ನಿ ಅತ್ಯಂತ ಭಾವುಕ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನೀಡಿದ ಅದ್ಧೂರಿ ಸ್ವಾಗತದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ದೇಶ ಕಾಯುವ ಕಠಿಣ ಜವಾಬ್ದಾರಿ ಮುಗಿಸಿ ಬಂದ ಪತಿಯನ್ನು 'ನನ್ನ ರಿಯಲ್ ಹೀರೋ' ಎಂದು ಕರೆದಿರುವ ಪತ್ನಿಯ ಪ್ರೀತಿ ಹಾಗೂ ಸಂಭ್ರಮದ ಕ್ಷಣಗಳು ಲಕ್ಷಾಂತರ ನೆಟ್ಟಿಗರ ಮನ ಗೆದ್ದಿವೆ. ಸೆಪ್ಟೆಂಬರ್ 1 ರಂದು ಸೋಶಿಯಲ್&zwnj; ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಜಾಲತಾಣಗಳಲ್ಲಿ ಭಾರಿ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಈ ದೇಶಪ್ರೇಮಿ ದಂಪತಿಗೆ ಶುಭಹಾರೈಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಹಾರ ಹಾಕಿ, ಆರತಿ ಎತ್ತಿ ಸಾಂಪ್ರದಾಯಿಕ ಸ್ವಾಗತ&lt;/strong&gt;&lt;/h2&gt;&lt;p&gt;ರಾಹುಲ್ ಮಾಧ್ವಾಲ್ ಅವರ ಪತ್ನಿ ಶಿವಾನಿ ಬುಧಕೋಟಿ (Shivani Budhkoti) ತಮ್ಮ ಪತಿಯ ನಿವೃತ್ತಿಯನ್ನು ಸ್ಮರಣೀಯವಾಗಿಸಲು ಮನೆ ಬಾಗಿಲಲ್ಲೇ ವಿಶೇಷ ಸಮಾರಂಭವನ್ನು ಆಯೋಜಿಸಿದ್ದರು. ರಾಹುಲ್ ಮನೆಗೆ ಆಗಮಿಸುತ್ತಿದ್ದಂತೆ ಬಾಗಿಲಲ್ಲಿ ನಿಂತು ಅವರ ಸಾಮಗ್ರಿಗಳನ್ನು ಕೈಗೆ ತೆಗೆದುಕೊಂಡ ಶಿವಾನಿ, ಪತಿಯ ಹಣೆಗೆ ಶ್ರೀಗಂಧ ಮತ್ತು ಅಕ್ಷತೆಯನ್ನು ಇಟ್ಟು, ಹೂವಿನ ಮಳೆಗರೆದು, ಆರತಿ ಎತ್ತುವ ಮೂಲಕ ಗೌರವದಿಂದ ಒಳಗೆ ಬರಮಾಡಿಕೊಂಡರು.&lt;/p&gt;&lt;p&gt;ಬಳಿಕ, ಜೀವನದ ಹೊಸ ಅಧ್ಯಾಯದ ಸಂಕೇತವಾಗಿ ಕತ್ತರಿಯನ್ನು ನೀಡಿ ಮನೆ ಬಾಗಿಲಲ್ಲಿದ್ದ ರಿಬ್ಬನ್ ಕತ್ತರಿಸುವಂತೆ ಮಾಡಿದರು. ಮನೆಯೊಳಗೆ &quot;ಥ್ಯಾಂಕ್ ಯೂ ರಾಹುಲ್&quot; (Thank You Rahul) ಎಂದು ಬರೆದಿದ್ದ ವಿಶೇಷ ಕೇಕ್ ಅನ್ನು ದಂಪತಿ ಹಾಗೂ ಅವರ ಮಗು ಒಟ್ಟಾಗಿ ಕತ್ತರಿಸಿ, 15 ವರ್ಷಗಳ ಸಾರ್ಥಕ ದೇಶಸೇವೆಯನ್ನು ಒಟ್ಟಾಗಿ ಸಂಭ್ರಮಿಸಿದರು.&lt;/p&gt;&lt;h2&gt;&lt;strong&gt;ನೌಕಾಪಡೆಯಲ್ಲಿ ರಾಹುಲ್ ಅವರ ಪಾತ್ರವೇನಿತ್ತು?:&lt;/strong&gt;&lt;/h2&gt;&lt;p&gt;ರಾಹುಲ್ ಮಾಧ್ವಾಲ್ ಅವರು 2011 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು 2026 ರಲ್ಲಿ ಸೇವಾ ನಿವೃತ್ತಿ ಹೊಂದಿದ್ದಾರೆ. ನೌಕಾಪಡೆಯಲ್ಲಿ ಅವರು ಪಿಒ-ಲಾಜ್&zwnj; (PO-LOG - Petty Officer Logistics) ಹುದ್ದೆಯಲ್ಲಿದ್ದರು. ಇದು ನಾನ್-ಕಮಿಷನ್ಡ್ ಮಿಡ್-ರಾಂಕ್ ಹುದ್ದೆಯಾಗಿದ್ದು, ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಪೂರೈಕೆ ಸರಣಿ (Supply Chain), ದಾಸ್ತಾನು ನಿರ್ವಹಣೆ (Inventory), ಖರೀದಿ ಹಾಗೂ ಹಣಕಾಸು ಆಡಳಿತದಂತಹ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವ ಪಾತ್ರವಾಗಿದೆ.&lt;/p&gt;&lt;p&gt;ಪತಿ ಪಡೆದ ಪ್ರಶಸ್ತಿ ಮತ್ತು ಪದಕಗಳ ಚಿತ್ರಗಳನ್ನು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಹಂಚಿಕೊಂಡ ಶಿವಾನಿ, &quot;15 ವರ್ಷಗಳ ಸಮರ್ಪಣೆ, ಶಿಸ್ತು ಮತ್ತು ತ್ಯಾಗದ ನಂತರ, ಈಗ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ. ನಿಮ್ಮನ್ನು ಕಂಡು ಹೆಮ್ಮೆಯಾಗುತ್ತಿದೆ. ನಿವೃತ್ತಿಯ ಶುಭಾಶಯಗಳು. ಮನೆಗೆ ಸುಸ್ವಾಗತ ನನ್ನ ಹೀರೋ&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ಪ್ರಶಂಸೆಯ ಮಹಾಪೂರ&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್&zwnj;ಗಳ ಮೂಲಕ ದಂಪತಿಗೆ ಹಾರೈಸಿದ್ದಾರೆ. ವಿಡಿಯೋದಲ್ಲಿ ರಾಹುಲ್ ಅವರು ತಮಗೆ ನೀಡಿದ ಸಿಹಿಯನ್ನು ತಿಂದ ನಂತರ ಮೊದಲು ತಮ್ಮ ಪತ್ನಿಗೆ ನೀಡುವ ಸಣ್ಣ ಕ್ಷಣವನ್ನು ಹಲವರು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ, ಕೆಲ ಯೂಸರ್&zwnj;ಗಳು &quot;ಅಷ್ಟು ಚಿಕ್ಕ ವಯಸ್ಸಿನಲ್ಲಿ, ಕೇವಲ 15 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇಕೆ?&quot; ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ.&lt;/p&gt;&lt;h2&gt;&lt;strong&gt;ನೌಕಾಪಡೆಯಲ್ಲಿ 15 ವರ್ಷಕ್ಕೆ ನಿವೃತ್ತಿ ಪಡೆಯುವುದೇಕೆ?&lt;/strong&gt;&lt;/h2&gt;&lt;p&gt;ಭಾರತೀಯ ನೌಕಾಪಡೆಯಲ್ಲಿ 15 ರಿಂದ 20 ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದಕ್ಕೆ ಮುಖ್ಯ ಕಾರಣಗಳೆಂದರೆ,&lt;/p&gt;&lt;ul&gt; &lt;li&gt;&lt;strong&gt;ಯುವಪಡೆಗೆ ಅವಕಾಶ: &lt;/strong&gt;ನೌಕಾಪಡೆಯು ಸದಾ ಯುವ ಹಾಗೂ ಹುರುಪಿನ ಯೋಧರಿಂದ ಕೂಡಿರಲು ಈ ನಿಯಮ ನೆರವಾಗುತ್ತದೆ.&lt;/li&gt; &lt;li&gt;&lt;strong&gt;ಹುದ್ದೆಗಳ ಸಮತೋಲನ: &lt;/strong&gt;ಶ್ರೇಣಿವಾರು ಹುದ್ದೆಗಳ (Ranks) ನಡುವೆ ಸರಿಯಾದ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.&lt;/li&gt; &lt;li&gt;&lt;strong&gt;ಕಠಿಣ ವಾತಾವರಣ: &lt;/strong&gt;ಕಡಲಿನಲ್ಲಿ ಸುದೀರ್ಘ ನಿಯೋಜನೆ (Deployments) ಮತ್ತು ಸವಾಲಿನ ವಾತಾವರಣದಲ್ಲಿ ವಯಸ್ಸಾಗುತ್ತಿದ್ದಂತೆ ಕಾರ್ಯನಿರ್ವಹಿಸುವುದು ಸವಾಲಿನ ಸಂಗತಿಯಾಗಿದೆ.&lt;/li&gt; &lt;li&gt;&lt;strong&gt;ವಿಶೇಷ ಸೌಲಭ್ಯಗಳು:&lt;/strong&gt; 15 ವರ್ಷಗಳ ನಿರಂತರ ಸೇವೆಯ ನಂತರ ಯೋಧರು ಪಿಂಚಣಿ ಸೇರಿದಂತೆ ಎಲ್ಲಾ ನಿವೃತ್ತಿ ಸೌಲಭ್ಯಗಳಿಗೆ (Benefits) ಅರ್ಹತೆ ಪಡೆಯುತ್ತಾರೆ.&lt;/li&gt; &lt;li&gt;&lt;strong&gt;ಹೊಸ ವೃತ್ತಿ ಅವಕಾಶ:&lt;/strong&gt; ಬೇಗನೆ ನಿವೃತ್ತಿ ಹೊಂದುವುದರಿಂದ ಯೋಧರಿಗೆ ನಾಗರಿಕ ಜೀವನದಲ್ಲಿ ಬೇರೆ ಹೊಸ ವೃತ್ತಿಜೀವನದ ಅವಕಾಶಗಳನ್ನು (New Career Opportunities) ಕಂಡುಕೊಳ್ಳಲು ಸುಲಭವಾಗುತ್ತದೆ.&lt;/li&gt;&lt;/ul&gt;View this post on Instagram&lt;p&gt;A post shared by Shivani Budakoti (@shivanibudakoti_)&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Santosh Naik</dc:creator>
            <atom:link href="https://kannada.asianetnews.com/viral/indian-navy-officer-rahul-madhwal-retires-after-15-years-viral-welcome-san/articleshow-0y0vead"/>
        </item>
        <item>
            <title><![CDATA[ಶೂಟಿಂಗ್ ಮುಗಿದ ಮೇಲೆ ಈ ಸ್ಟಾರ್ ನಟಿಯರು ಏನ್ ಮಾಡ್ತಾರೆ ಗೊತ್ತಾ? ಗ್ಲಾಮರ್ ಲೋಕದಾಚೆ ಇವರದೇ ಪ್ರಪಂಚ!]]></title>
            <link>https://kannada.asianetnews.com/entertainment/south-indian-actresses-samantha-sai-pallavi-rashmika-mandanna-nayanthara-their-life-beyond-cinema-gvd/articleshow-fncvbob</link>
            <guid isPermaLink="true">https://kannada.asianetnews.com/entertainment/south-indian-actresses-samantha-sai-pallavi-rashmika-mandanna-nayanthara-their-life-beyond-cinema-gvd/articleshow-fncvbob</guid>
            <pubDate>Fri, 11 Sep 2026 21:01:53 +0530</pubDate>
            <description><![CDATA[ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಸಿನಿಮಾ ಆಚೆ ಹೊಂದಿರುವ ವಿಭಿನ್ನ ಹವ್ಯಾಸಗಳೇನು? ಯೋಗ, ಜೇನು ಸಾಕಾಣಿಕೆ, ಟ್ರಾವೆಲ್, ಪುಸ್ತಕ ಹಾಗೂ ಲಾಂಗ್ ಡ್ರೈವ್‌ವರೆಗೆ ಸ್ಟಾರ್ ನಟಿಯರ ಆಫ್-ಸ್ಕ್ರೀನ್ ಲೈಫ್ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28he69zb269tenfngabd9cm,imgname-bjb-1789140605247.png" type="image/jpeg" height="390" width="690"/>
            <content:encoded><![CDATA[&lt;p&gt;ಶೂಟಿಂಗ್ ಮುಗಿದ ಬಳಿಕ ಬಹುತೇಕ ಸೆಲೆಬ್ರಿಟಿಗಳು ಐಷಾರಾಮಿ ರಜೆ, ಪಾರ್ಟಿ ಅಥವಾ ರೆಡ್ ಕಾರ್ಪೆಟ್ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುತ್ತಾರೆ ಎಂಬುದು ಸಾಮಾನ್ಯ ಅಭಿಪ್ರಾಯ. ಆದರೆ ದಕ್ಷಿಣ ಭಾರತದ ಕೆಲವು ಖ್ಯಾತ ನಟಿಯರ ಜೀವನಶೈಲಿ ಇದಕ್ಕಿಂತ ಭಿನ್ನವಾಗಿದೆ. ನಟಿಯರಾದ ಸಮಂತಾ ರುತ್ ಪ್ರಭು, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಹಾಗೂ ನಯನತಾರಾ ಸಿನಿಮಾಗಳಾಚೆ ತಮ್ಮದೇ ಆದ ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದಾರೆ.&lt;/p&gt;&lt;p&gt;ಯಾರಿಗೋ ಯೋಗ, ಧ್ಯಾನ ಇಷ್ಟವಾದರೆ, ಮತ್ತೊಬ್ಬರಿಗೆ ಡ್ಯಾನ್ಸ್, ಜೇನು ಸಾಕಾಣಿಕೆ, ಟ್ರಾವೆಲ್, ಪುಸ್ತಕ ಓದುವುದು, ಮ್ಯೂಸಿಕ್ ಹಾಗೂ ಲಾಂಗ್ ಡ್ರೈವ್&zwnj;ಗಳೇ ನೆಚ್ಚಿನ ಹವ್ಯಾಸಗಳಾಗಿವೆ. ಸಿನಿಮಾ ಶೂಟಿಂಗ್, ಫ್ಯಾನ್ಸ್ ಹಾಗೂ ಸೆಲೆಬ್ರಿಟಿ ಲೈಫ್&zwnj;ನ ಗದ್ದಲದಿಂದ ದೂರವಿರುವಾಗ ಈ ನಟಿಯರು ಹೇಗೆ ಸಮಯ ಕಳೆಯುತ್ತಾರೆ ಎಂಬುದು ನಿಜಕ್ಕೂ ಕುತೂಹಲಕಾರಿ. ಅವರ ಹವ್ಯಾಸಗಳು ತೆರೆ ಮೇಲಿನ ಸ್ಟಾರ್ ಇಮೇಜ್&zwnj;ಗಿಂತ ಸಂಪೂರ್ಣ ವಿಭಿನ್ನವಾದ ಮತ್ತೊಂದು ಮುಖವನ್ನು ಪರಿಚಯಿಸುತ್ತವೆ.&lt;/p&gt;&lt;p&gt;&lt;strong&gt;ಸಮಂತಾ: ಯೋಗ, ವೆಲ್&zwnj;ನೆಸ್ ಮತ್ತು ಆಧ್ಯಾತ್ಮಿಕತೆ&lt;/strong&gt;&lt;/p&gt;&lt;p&gt;ನಟಿ ಸಮಂತಾ ರುತ್ ಪ್ರಭು ಅವರಿಗೆ ಬಿಡುವಿನ ಸಮಯ ಎಂದರೆ ಸುಮ್ಮನೆ ಕುಳಿತುಕೊಳ್ಳುವುದಲ್ಲ. ವೆಲ್&zwnj;ನೆಸ್, ಯೋಗ ಹಾಗೂ ಫಿಟ್&zwnj;ನೆಸ್ ಅವರ ಜೀವನದ ಪ್ರಮುಖ ಭಾಗಗಳಾಗಿವೆ. ಇದರ ಜೊತೆಗೆ ಆಧ್ಯಾತ್ಮಿಕತೆ ಮತ್ತು ಧ್ಯಾನದ ಬಗ್ಗೆಯೂ ಅವರು ಆಸಕ್ತಿ ಬೆಳೆಸಿಕೊಂಡಿದ್ದಾರೆ.&lt;/p&gt;&lt;p&gt;ಇಶಾ ಯೋಗ ಕೇಂದ್ರದೊಂದಿಗಿನ ಅವರ ಒಡನಾಟವೂ ಅವರಿಗೆ ಸಿನಿಮಾ ಹಾಗೂ ಸೆಲೆಬ್ರಿಟಿ ಜೀವನದ ಗದ್ದಲದಿಂದ ಸ್ವಲ್ಪ ದೂರ ಸರಿಯಲು ಅವಕಾಶ ನೀಡಿದೆ. ನಟನೆಯ ಜೊತೆಗೆ ಉದ್ಯಮಶೀಲತೆಯಲ್ಲೂ ಸಮಂತಾ ಆಸಕ್ತಿ ತೋರಿಸಿದ್ದಾರೆ. ಸದಾ ಸಾರ್ವಜನಿಕರ ಗಮನದಲ್ಲಿರುವ ವೃತ್ತಿಜೀವನದ ನಡುವೆ, ತಮ್ಮನ್ನು ತಾವು ರೀಚಾರ್ಜ್ ಮಾಡಿಕೊಳ್ಳಲು ಮತ್ತು ಸಿನಿಮಾಗಳಾಚೆಗೂ ಹೊಸದನ್ನು ನಿರ್ಮಿಸಲು ಅವರು ಸಮಯ ಮೀಸಲಿಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಸಾಯಿ ಪಲ್ಲವಿ: ಡ್ಯಾನ್ಸ್ ಜೊತೆ ಜೇನು ಸಾಕಾಣಿಕೆ!&lt;/strong&gt;&lt;/p&gt;&lt;p&gt;ನ್ಯಾಚುರಲ್ ನಟಿ ಸಾಯಿ ಪಲ್ಲವಿ ಹೆಸರು ಕೇಳಿದ ತಕ್ಷಣ ಅವರ ಡ್ಯಾನ್ಸ್ ನೆನಪಾಗುವುದು ಸಹಜ. ನಟಿಯಾಗುವುದಕ್ಕೂ ಮುನ್ನವೇ ಡ್ಯಾನ್ಸ್ ಅವರ ಜೀವನದ ಪ್ರಮುಖ ಭಾಗವಾಗಿತ್ತು. ಸಿನಿಮಾಗಳಲ್ಲೂ ಅವರ ನೃತ್ಯ ಪ್ರತಿಭೆ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಆದರೆ ಸಾಯಿ ಪಲ್ಲವಿಯವರ ಮತ್ತೊಂದು ಹವ್ಯಾಸ ಕೇಳಿದರೆ ಖಂಡಿತವಾಗಿಯೂ ಅಚ್ಚರಿಯಾಗಬಹುದು. ಅದೇ ಜೇನು ಸಾಕಾಣಿಕೆ!&lt;/p&gt;&lt;p&gt;ಹೌದು, ಅವರು ಜೇನು ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜೇನುನೊಣಗಳಿಂದ ಕಚ್ಚಿಸಿಕೊಂಡ ಅನುಭವವೂ ಅವರಿಗೆ ಆಗಿದೆಯಂತೆ. ಸಾಮಾನ್ಯವಾಗಿ ದೊಡ್ಡ ಸ್ಟಾರ್&zwnj;ಗಳ ಪ್ರತಿಯೊಂದು ಹವ್ಯಾಸವೂ ಒಂದು ಸ್ಟೈಲ್ ಸ್ಟೇಟ್&zwnj;ಮೆಂಟ್ ಆಗಿಬಿಡುತ್ತದೆ. ಆದರೆ ಸಾಯಿ ಪಲ್ಲವಿಯವರ ಜೇನು ಸಾಕಾಣಿಕೆಯ ಹವ್ಯಾಸ ಮಾತ್ರ ಅದಕ್ಕಿಂತ ಭಿನ್ನವಾಗಿದ್ದು, ಅವರ ಸರಳ ಹಾಗೂ ಕುತೂಹಲಭರಿತ ವ್ಯಕ್ತಿತ್ವವನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ರಶ್ಮಿಕಾ ಮಂದಣ್ಣ: ಟ್ರಾವೆಲ್, ಫುಡ್ ಮತ್ತು ಹೊಸ ಜಾಗಗಳ ಅನ್ವೇಷಣೆ&lt;/strong&gt;&lt;/p&gt;&lt;p&gt;ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗೆ ಟ್ರಾವೆಲ್ ಎಂದರೆ ಕೇವಲ ಹೊಸ ಹೊಸ ದೇಶಗಳಿಗೆ ಭೇಟಿ ನೀಡುವುದಲ್ಲ. ಹೊಸ ಸ್ಥಳಗಳ ಸಂಸ್ಕೃತಿ, ಅಲ್ಲಿನ ಜನಜೀವನ, ಸ್ಥಳೀಯ ಆಹಾರ ಹಾಗೂ ಕಲೆಗಳನ್ನು ಹತ್ತಿರದಿಂದ ತಿಳಿದುಕೊಳ್ಳುವುದರಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹೊಸ ಊರಿಗೆ ಹೋದಾಗ ಅಲ್ಲಿನ ಸ್ಥಳೀಯ ಆಹಾರವನ್ನು ಸವಿಯುವುದು, ಅಲ್ಲಿನ ಜೀವನಶೈಲಿಯನ್ನು ಗಮನಿಸುವುದು ಹಾಗೂ ಪರಿಚಯವಿಲ್ಲದ ಸ್ಥಳಗಳಲ್ಲಿ ಅಡ್ಡಾಡುವುದು ರಶ್ಮಿಕಾಗೆ ಇಷ್ಟ.&lt;/p&gt;&lt;p&gt;ಟ್ರಾವೆಲ್ ಜೊತೆಗೆ ಫುಡ್ ಕೂಡ ಅವರ ಅನುಭವದ ಪ್ರಮುಖ ಭಾಗವಾಗಿದೆ. ಮತ್ತೊಂದೆಡೆ, ಕೊಡಗಿನ ಮೇಲಿರುವ ಅವರ ಪ್ರೀತಿಯೂ ವಿಶೇಷ. ಕೊಡಗಿನ ಮಳೆ ಹಾಗೂ ಅಲ್ಲಿನ ವಾತಾವರಣ ರಶ್ಮಿಕಾಗೆ ತುಂಬಾ ಇಷ್ಟ ಎನ್ನಲಾಗುತ್ತದೆ. ಎಷ್ಟೇ ಬ್ಯುಸಿ ಶೆಡ್ಯೂಲ್ ಮತ್ತು ನಿರಂತರ ಪ್ರಯಾಣವಿದ್ದರೂ, ಸರಳವಾದ ಈ ಅನುಭವಗಳು ಅವರಿಗೆ ವಿಶೇಷವಾಗಿಯೇ ಉಳಿದಿವೆ.&lt;/p&gt;&lt;p&gt;&lt;strong&gt;ನಯನತಾರಾ: ಪುಸ್ತಕ, ಲಾಂಗ್ ಡ್ರೈವ್ ಮತ್ತು ಮ್ಯೂಸಿಕ್&lt;/strong&gt;&lt;/p&gt;&lt;p&gt;ಕಾಲಿವುಡ್&zwnj;ನ ಲೇಡಿ ಸೂಪರ್&zwnj;ಸ್ಟಾರ್ ನಯನತಾರಾ ಅವರ ಬಿಡುವಿನ ಸಮಯದ ಹವ್ಯಾಸಗಳು ಮಾತ್ರ ಬಹಳ ಸಿಂಪಲ್. ಪುಸ್ತಕ ಓದುವುದು, ಲಾಂಗ್ ಡ್ರೈವ್&zwnj;ಗೆ ತೆರಳುವುದು ಹಾಗೂ ಮ್ಯೂಸಿಕ್ ಕೇಳುವುದು ಅವರಿಗೆ ಇಷ್ಟ. ವಿಶೇಷವಾಗಿ ಲಾಂಗ್ ಡ್ರೈವ್ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು. ಯಾವುದೇ ಶೂಟಿಂಗ್ ಶೆಡ್ಯೂಲ್ ಇಲ್ಲ, ರೆಡ್ ಕಾರ್ಪೆಟ್ ಕಾರ್ಯಕ್ರಮದ ಒತ್ತಡವಿಲ್ಲ...&lt;/p&gt;&lt;p&gt;ಒಳ್ಳೆಯ ಮ್ಯೂಸಿಕ್ ಕೇಳುತ್ತಾ ಕಾರಿನಲ್ಲಿ ಪ್ರಯಾಣಿಸುವುದು ಅವರಿಗೆ ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಪುಸ್ತಕ ಓದುವುದೂ ನಯನತಾರಾಗೆ ಸಿನಿಮಾ ಜಗತ್ತಿನಿಂದ ಸ್ವಲ್ಪ ದೂರವಾಗಲು ಉತ್ತಮ ಮಾರ್ಗವಾಗಿದೆ. ಸದಾ ಸಾರ್ವಜನಿಕರ ಕಣ್ಣಿನಲ್ಲಿರುವ ನಟಿಗೆ ಇಂತಹ ವೈಯಕ್ತಿಕ ಹವ್ಯಾಸಗಳು ತಮ್ಮೊಂದಿಗೆ ತಾವು ಸಮಯ ಕಳೆಯಲು ಅವಕಾಶ ನೀಡುತ್ತವೆ.&lt;/p&gt;&lt;h2&gt;&lt;strong&gt;ಸಿನಿಮಾ ಆಚೆ ಈ ನಟಿಯರ ಮತ್ತೊಂದು ಮುಖ!&lt;/strong&gt;&lt;/h2&gt;&lt;p&gt;ಸಮಂತಾ, ಸಾಯಿ ಪಲ್ಲವಿ, ರಶ್ಮಿಕಾ ಮತ್ತು ನಯನತಾರಾ ಯಶಸ್ವಿ ನಟಿಯರು ಎನ್ನುವುದಕ್ಕಿಂತಲೂ ಅವರ ಸಿನಿಮಾ ಜೀವನದ ಹೊರಗಿನ ಆಸಕ್ತಿಗಳೇ ಹೆಚ್ಚು ಕುತೂಹಲ ಮೂಡಿಸುತ್ತವೆ. ಸಮಂತಾ ತಮ್ಮೊಳಗೆ ತಾವು ತೊಡಗಿಸಿಕೊಳ್ಳಲು ಯೋಗ ಮತ್ತು ಆಧ್ಯಾತ್ಮಿಕತೆಯತ್ತ ಮುಖ ಮಾಡುತ್ತಾರೆ. ಸಾಯಿ ಪಲ್ಲವಿ ಜೇನು ಸಾಕಾಣಿಕೆಯಂತಹ ವಿಭಿನ್ನ ಹವ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಶ್ಮಿಕಾ ಹೊಸ ಜಾಗಗಳು ಹಾಗೂ ಅನುಭವಗಳನ್ನು ಹುಡುಕುತ್ತಾ ಪ್ರಯಾಣಿಸುತ್ತಾರೆ. ನಯನತಾರಾ ಪುಸ್ತಕ, ಮ್ಯೂಸಿಕ್ ಮತ್ತು ಲಾಂಗ್ ಡ್ರೈವ್&zwnj;ಗಳಲ್ಲಿ ನೆಮ್ಮದಿ ಕಂಡುಕೊಳ್ಳುತ್ತಾರೆ.&lt;/p&gt;&lt;p&gt;ಇನ್ನು ಸೆಲೆಬ್ರಿಟಿಗಳ ಹವ್ಯಾಸಗಳು ಯಾವಾಗಲೂ ವೃತ್ತಿ ಅಥವಾ ಪ್ರಚಾರದ ಭಾಗವಾಗಿರಬೇಕೆಂದೇನಿಲ್ಲ. ಕೆಲವೊಮ್ಮೆ ಯಾವುದೇ ಗುರಿಯಿಲ್ಲದೆ ತಮಗೆ ಇಷ್ಟವಾದ ಕೆಲಸದಲ್ಲಿ ಸಮಯ ಕಳೆಯುವುದೇ ಅವರ ಪಾಲಿಗೆ ದೊಡ್ಡ ಸಂತೋಷವಾಗಿರಬಹುದು. ಸಿನಿಮಾಗಳ ಬೆಳಕಿನಿಂದ ದೂರವಿರುವ ಈ ಹವ್ಯಾಸಗಳೇ ಈ ಸ್ಟಾರ್ ನಟಿಯರ ಮತ್ತೊಂದು ಆಸಕ್ತಿದಾಯಕ ಮುಖವನ್ನು ಪರಿಚಯಿಸುತ್ತವೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/south-indian-actresses-samantha-sai-pallavi-rashmika-mandanna-nayanthara-their-life-beyond-cinema-gvd/articleshow-fncvbob"/>
        </item>
        <item>
            <title><![CDATA['ಸ್ಟಾರ್ ಹೀರೋಗಳಿಗಿಂತ ನನಗೆ ಪಾತ್ರವೇ ಮುಖ್ಯ': ಕ್ಯೂಟ್ ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ದೇಕೆ?]]></title>
            <link>https://kannada.asianetnews.com/entertainment/sandalwood-actress-ashika-ranganath-says-roles-matter-more-than-the-number-of-movies-gvd/articleshow-xia370s</link>
            <guid isPermaLink="true">https://kannada.asianetnews.com/entertainment/sandalwood-actress-ashika-ranganath-says-roles-matter-more-than-the-number-of-movies-gvd/articleshow-xia370s</guid>
            <pubDate>Fri, 11 Sep 2026 20:29:35 +0530</pubDate>
            <description><![CDATA[ಕನ್ನಡ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಸಂಖ್ಯೆಯಿಗಿಂತ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28fnebj07djf2nmsjc89aw3,imgname-kbk-1789138745712.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿರಂಗದಲ್ಲಿ ಕೆಲ ನಟಿಯರು ಒಂದೆರಡು ಸಿನಿಮಾಗಳಲ್ಲಿ ಮಿಂಚಿ ಬಳಿಕ ಚಿತ್ರರಂಗದಿಂದ ದೂರವಾಗುತ್ತಾರೆ. ಇನ್ನೂ ಕೆಲವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದಿದ್ದರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಆಗಾಗ ಗ್ಲಾಮರಸ್ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಫ್ಯಾನ್ಸ್&zwnj;ಗೆ ಟ್ರೀಟ್ ನೀಡುತ್ತಿರುತ್ತಾರೆ.&lt;/p&gt;&lt;p&gt;ಇನ್ನು ಕೆಲ ನಟಿಯರಿಗೆ ಮಾತ್ರ ಸಿನಿಮಾಗಳ ಸಂಖ್ಯೆಗಿಂತ ತಾವು ಆಯ್ಕೆ ಮಾಡಿಕೊಳ್ಳುವ ಪಾತ್ರಗಳೇ ಹೆಚ್ಚು ಮುಖ್ಯ. ಸವಾಲಿನ ಪಾತ್ರಗಳು ಸಿಕ್ಕಾಗ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಾಯುವ ಇಂತಹ ನಟಿಯರ ಸಾಲಿಗೆ ಇದೀಗ ಮತ್ತೊಬ್ಬ ನಾಯಕಿ ಸೇರಿದ್ದಾರೆ. ಸತತವಾಗಿ ಸಿನಿಮಾಗಳನ್ನು ಮಾಡುವುದಕ್ಕಿಂತ, ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಮುಖ್ಯ ಎಂದು ಈ ಕ್ಯೂಟ್ ಬೆಡಗಿ ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಪಾತ್ರಗಳೇ ನನಗೆ ಮೊದಲ ಆದ್ಯತೆ!&lt;/strong&gt;&lt;/p&gt;&lt;p&gt;ಅಷ್ಟಕ್ಕೂ ಈ ಮಾತು ಹೇಳಿರುವ ನಟಿ ಯಾರು ಅಂತೀರಾ? ಬೇರೆ ಯಾರೂ ಅಲ್ಲ, ಸ್ಯಾಂಡಲ್&zwnj;ವುಡ್&zwnj;ನಲ್ಲಿ ಗುರುತಿಸಿಕೊಂಡು ಇದೀಗ ಟಾಲಿವುಡ್&zwnj;ನಲ್ಲೂ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್. ಸಿನಿಮಾಗಳ ಸಂಖ್ಯೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ, ತಾನು ನಟಿಸುವ ಪ್ರತಿಯೊಂದು ಚಿತ್ರದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬುದು ತಮ್ಮ ಆಸೆ ಎಂದು ಆಶಿಕಾ ಹೇಳಿದ್ದಾರೆ. ನಾಯಕಿಯಾಗಿ ಅವಕಾಶ ಸಿಗುವುದು ಒಂದು ವಿಚಾರವಾದರೆ, ಸಿಕ್ಕ ಪ್ರತಿಯೊಂದು ಸಿನಿಮಾದಲ್ಲೂ ಪ್ರೇಕ್ಷಕರಿಗೆ ಹೊಸ ಆಶಿಕಾಳನ್ನು ತೋರಿಸುವುದು ತಮ್ಮ ಗುರಿ ಎಂದಿದ್ದಾರೆ.&lt;/p&gt;&lt;p&gt;&lt;strong&gt;ಸ್ಟಾರ್ ಹೀರೋಗಳಿಗಿಂತ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ!&lt;/strong&gt;&lt;/p&gt;&lt;p&gt;ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದಕ್ಕಿಂತಲೂ, ಕಥೆಯಲ್ಲಿ ತನ್ನ ಪಾತ್ರಕ್ಕೆ ಸೂಕ್ತವಾದ ಪ್ರಾಮುಖ್ಯತೆ ಇರಬೇಕು ಎಂಬುದು ಆಶಿಕಾ ಅವರ ಅಭಿಪ್ರಾಯ. ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂಬ ಹೆಗ್ಗಳಿಕೆಗಿಂತ, ತಾನು ಮಾಡಿದ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಬೇಕು ಎಂಬುದೇ ಮುಖ್ಯ ಎಂದು ಅವರು ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೂಡ ವಿಭಿನ್ನ ಹಾಗೂ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸೂಚನೆಯನ್ನು ಸಹ ನೀಡಿದ್ದಾರೆ.&lt;/p&gt;&lt;p&gt;&lt;strong&gt;ಸ್ಯಾಂಡಲ್&zwnj;ವುಡ್&zwnj;ನಿಂದ ಟಾಲಿವುಡ್&zwnj;ವರೆಗೆ ಆಶಿಕಾ ಜರ್ನಿ&lt;/strong&gt;&lt;/p&gt;&lt;p&gt;1996ರ ಆಗಸ್ಟ್ 5ರಂದು ಕರ್ನಾಟಕದ ತುಮಕೂರಿನಲ್ಲಿ ಜನಿಸಿದ ಆಶಿಕಾ ರಂಗನಾಥ್, ರಂಗನಾಥ್ ಮತ್ತು ಸುಧಾ ರಂಗನಾಥ್ ದಂಪತಿಯ ಪುತ್ರಿ. ಇವರಿಗೆ ಅನುಷಾ ರಂಗನಾಥ್ ಎಂಬ ಅಕ್ಕ ಕೂಡ ಇದ್ದು, ಅವರು ಕೂಡ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಶಿಕಾ ಫ್ರೀಸ್ಟೈಲ್, ಬೆಲ್ಲಿ ಡ್ಯಾನ್ಸ್ ಹಾಗೂ ವೆಸ್ಟರ್ನ್ ಡ್ಯಾನ್ಸ್&zwnj;ನಲ್ಲಿ ತರಬೇತಿ ಪಡೆದಿದ್ದಾರೆ. 2014ರಲ್ಲಿ ನಡೆದ &lsquo;ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು&rsquo; ಸ್ಪರ್ಧೆಯಲ್ಲಿ ರನ್ನರ್&zwnj;ಅಪ್ ಆಗಿ ಗುರುತಿಸಿಕೊಂಡಿದ್ದರು.&lt;/p&gt;&lt;p&gt;2016ರಲ್ಲಿ ಬಿಡುಗಡೆಯಾದ &lsquo;ಕ್ರೇಜಿ ಬಾಯ್&rsquo; ಚಿತ್ರದ ಮೂಲಕ ಆಶಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸೈಮಾ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಡೆಬ್ಯೂ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಆ ಬಳಿಕ &lsquo;ರ್ಯಾಂಬೋ 2&rsquo;, &lsquo;ರೇಮೋ&rsquo;, &lsquo;ಮದಗಜ&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. &lsquo;ಮದಗಜ&rsquo; ಚಿತ್ರದ ಅಭಿನಯಕ್ಕಾಗಿ ಸೈಮಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.&lt;/p&gt;&lt;p&gt;&lt;strong&gt;&lsquo;ಅಮಿಗೋಸ್&rsquo; ಮೂಲಕ ಟಾಲಿವುಡ್&zwnj;ಗೆ ಪರಿಚಯ&lt;/strong&gt;&lt;/p&gt;&lt;p&gt;2023ರಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅಭಿನಯದ &lsquo;ಅಮಿಗೋಸ್&rsquo; ಚಿತ್ರದ ಮೂಲಕ ಆಶಿಕಾ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ 2024ರಲ್ಲಿ ಕಿಂಗ್ ನಾಗಾರ್ಜುನ ಅಭಿನಯದ &lsquo;ನಾ ಸಾಮಿರಂಗ&rsquo; ಸಿನಿಮಾದಲ್ಲಿ ಕಾಣಿಸಿಕೊಂಡು ತೆಲುಗು ಪ್ರೇಕ್ಷಕರ ಗಮನ ಸೆಳೆದರು. ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ &lsquo;ವಿಶ್ವಂಭರ&rsquo; ಸಿನಿಮಾದಲ್ಲೂ ಆಶಿಕಾ ನಟಿಸುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟಿವ್&lt;/strong&gt;&lt;/h2&gt;&lt;p&gt;ಸಿನಿಮಾಗಳ ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಆಶಿಕಾ ರಂಗನಾಥ್ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳು, ವಿಡಿಯೋಗಳು ಹಾಗೂ ಗ್ಲಾಮರಸ್ ಪೋಸ್ಟ್&zwnj;ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುತ್ತಾರೆ. ಇನ್ನು ಸಿನಿಮಾಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ತಮ್ಮ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬ ಆಶಿಕಾ ಅವರ ನಿಲುವು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮುಂದೆ ಯಾವ ರೀತಿಯ ವಿಭಿನ್ನ ಪಾತ್ರಗಳ ಮೂಲಕ ಆಶಿಕಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂಬುದೇ ಸದ್ಯ ಕುತೂಹಲ ಮೂಡಿಸಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sandalwood-actress-ashika-ranganath-says-roles-matter-more-than-the-number-of-movies-gvd/articleshow-xia370s"/>
        </item>
        <item>
            <title><![CDATA[ಇಂಟರ್​ನೆಟ್ ಆನ್​ ಇದ್ರೂ ಬೇರೆಯವರಿಗೆ whatsappನಲ್ಲಿ ಸಿಂಗಲ್​ ಟಿಕ್​ ತೋರಿಸಬೇಕಾ? ನಿಮಗಾಗಿ ಈ ಹ್ಯಾಕ್​]]></title>
            <link>https://kannada.asianetnews.com/technology/want-to-get-single-tick-on-whatsapp-even-when-the-internet-is-on-this-hack-is-for-you-suc/articleshow-dhsv5yb</link>
            <guid isPermaLink="true">https://kannada.asianetnews.com/technology/want-to-get-single-tick-on-whatsapp-even-when-the-internet-is-on-this-hack-is-for-you-suc/articleshow-dhsv5yb</guid>
            <pubDate>Fri, 11 Sep 2026 20:02:26 +0530</pubDate>
            <description><![CDATA[ಇಂಟರ್ನೆಟ್ ಆನ್ ಇದ್ದರೂ, ವಾಟ್ಸ್ಆ್ಯಪ್ನಲ್ಲಿ ನಿಮಗೆ ಬರುವ ಮೆಸೇಜ್‌ಗಳಿಗೆ ಸಿಂಗಲ್ ಟಿಕ್ ಮಾತ್ರ ಕಾಣಿಸುವಂತೆ ಮಾಡುವ ಟ್ರಿಕ್ ಒಂದಿದೆ. ವಾಟ್ಸ್ಆ್ಯಪ್ನ ಪ್ರಾಕ್ಸಿ ಸೆಟ್ಟಿಂಗ್ಸ್ ಬದಲಾಯಿಸುವ ಮೂಲಕ, ನೀವು ಆನ್‌ಲೈನ್‌ನಲ್ಲಿದ್ದರೂ ಆಫ್‌ಲೈನ್‌ನಲ್ಲಿದ್ದಂತೆ ತೋರಿಸಬಹುದು, ಈ ಮೂಲಕ ನಿಮ್ಮ ಆನ್‌ಲೈನ್ ಸ್ಥಿತಿಯನ್ನು ಮರೆಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m28e3c7th1cc16kycz44ntfg,imgname-whatsapp-hack-1789137105146.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗ ಇಂಟರ್​ನೆಟ್​ ಇಲ್ಲದೇ ಜನರು ಬದುಕುವುದೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿದೆ. ಒಂದು ಹೊತ್ತಿನ ಊಟ ಬಿಟ್ಟಾರು, ಕೊನೆಗೆ ಉಸಿರು ಬೇಕಾದ್ರೂ ಬಿಟ್ಟಾದು, ಸ್ಮಾರ್ಟ್​ಫೋನ್​ ಇಲ್ಲದೇ ಜೀವನ ನಡೆಯುವುದು ಕಷ್ಟ ಎನ್ನುವ ಸ್ಥಿತಿ ಆಗಿಹೋಗಿದೆ. ಒಂದು ಕ್ಷಣ ಇಂಟರ್​ನೆಟ್​ ಏನಾದ್ರೂ ಸಮಸ್ಯೆಯಾಗಿ ಬಿಟ್ಟರೆ, ಜೀವವೇ ಹೋದಷ್ಟು ಸಂಕಷ್ಟ ಹಲವರಿಗೆ ಆಗುವುದು ಇದೆ. ಆ ಪರಿಯಲ್ಲಿ ಫೋನ್​ ದಾಸರಾಗಿರುವವರೇ ಎಷ್ಟೋ ಮಂದಿ.&lt;/p&gt;&lt;h2&gt;&lt;strong&gt;ವಾಟ್ಸ್​ಆ್ಯಪ್​ನಲ್ಲಿ ಸಿಂಗಲ್​ ಟಿಕ್​&lt;/strong&gt;&lt;/h2&gt;&lt;p&gt;ಕೆಲವೊಮ್ಮೆ ಯಾವುದೇ ವಿಡಿಯೋ ನೋಡುತ್ತಿದ್ದರೆ, ಅಥವಾ ವಾಟ್ಸ್ಆ್ಯಪ್​ನಲ್ಲಿ ಇನ್ನಾರದೋ ಜೊತೆ ಮಾತನಾಡುತ್ತಿದ್ದರೆ ಇಂಟರ್​ನೆಟ್​ ಆನ್​ ಮಾಡಿಕೊಳ್ಳಲೇಬೇಕು. ಆ ಸಮಯದಲ್ಲಿ ಯಾರಾದರೂ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್​ ಮಾಡಿದ್ರೆ ಡಬಲ್​ ಟಿಕ್​ ಬಂದು ಬಿಡುತ್ತದೆ. ಆಗ ನೀವು ಆನ್​ಲೈನ್​ನಲ್ಲಿ ಇರುವುದು ತಿಳಿಯುತ್ತದೆ, ಇಲ್ಲವೇ ಇಂಟರ್​ನೆಟ್​ ಆನ್​ನಲ್ಲಿ ಇರುವುದು ತಿಳಿದು ಹೋಗುತ್ತದೆ. ಈಗ ಹೆಚ್ಚಿನವರು, ತಾವು ಮೆಸೇಜ್​ ನೋಡಿದ್ದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಬ್ಲೂಟಿಕ್​ ಆಫ್​ ಮಾಡಿಟ್ಟುಕೊಳ್ಳುತ್ತಾರೆ, ಲಾಸ್ಟ್​ ಸೀನ್​ ಆಪ್ಷನ್​ ಕೂಡ ತೆಗೆದುಬಿಡುತ್ತಾರೆ. ಇಂಥ ಕಳ್ಳರು ಹಲವರು ಇದ್ದಾರೆ.&lt;/p&gt;&lt;h3&gt;&lt;strong&gt;ಹೀಗೆ ಮಾಡಿ ನೀವು&lt;/strong&gt;&lt;/h3&gt;&lt;p&gt;ಆದರೆ ಇದೇನೇ ಮಾಡಿದ್ರೂ ಡಬಲ್​ ಟಿಕ್​ ಬಂದು ಬಿಟ್ಟರೆ ಇಂಟರ್​ನೆಟ್​ ಆನ್​ ಇದೆ ಎಂದು ಸುಲಭದಲ್ಲಿ ಸಿಕ್ಕಿಬೀಳುತ್ತಾರೆ. ಅಯ್ಯೋ, ಇದಕ್ಕೆ ಯಾವುದೂ ಆಪ್ಷನ್​ ಇಲ್ವಲ್ಲಪ್ಪಾ ಎಂದು ಸಂಕಟಪಡಬೇಕಾಗಿಲ್ಲ. ಏಕೆಂದ್ರೆ ಮೊಬೈಲ್​ನಲ್ಲಿ ನಿಮಗೆ ಏನೇನು ಕಳ್ಳಾಟ ಮಾಡಲು ಬೇಕೋ ಎಲ್ಲಾ ವ್ಯವಸ್ಥೆಗಳನ್ನು ಬಹುತೇಕ ಎಲ್ಲಾ ಸ್ಮಾರ್ಟ್​ಫೋನ್​ಗಳಲ್ಲಿ ತಯಾರಕರು ಮಾಡಿಯೇ ಕೊಟ್ಟಿರುತ್ತಾರೆ. ಹಾಗಿದ್ದರೆ ನೆಟ್​ ಆನ್​ ಇದ್ದರೂ, ನೀವು ಇಂಟರ್​ನೆಟ್​ ಆನ್​ ಮಾಡಿಕೊಂಡು ವಿಡಿಯೋ ನೋಡುತ್ತಿದ್ದರೂ, ವಾಟ್ಸ್​ಆ್ಯಪ್​ನಲ್ಲಿ ಯಾರಾದ್ರೂ ಮೆಸೇಜ್​ ಕಳಿಸಿದ್ರೆ ಅವರಿಗೆ ಸಿಂಗಲ್​ ಟಿಕ್​ ಕಾಣಿಸಿ, ಬಹುಶಃ ನೆಟ್​ ಆನ್​ ಮಾಡಿಲ್ಲ ಎಂದುಕೊಳ್ಳುವಂತೆ ಮಾಡಬಹುದಾ? ಹೌದು. ಹೀಗೆ ಮಾಡಬಹುದು.&lt;/p&gt;&lt;p&gt;ಅದಕ್ಕಾಗಿ ನೀವುಮಾಡಬೇಕಿರುವುದು ಇಷ್ಟು...&lt;/p&gt;&lt;p&gt;- ಮೊದಲಿಗೆ ವಾಟ್ಸ್​ಆ್ಯಪ್​ ಓಪನ್​ ಮಾಡಿ&lt;/p&gt;&lt;p&gt;- ಬಲಭಾಗದ ಮೇಲುಗಡೆ ಇರುವ ಮೂರು ಡಾಟ್​ ಮೇಲೆ ಕ್ಲಿಕ್​ ಮಾಡಿ&lt;/p&gt;&lt;p&gt;- ಸೆಟ್ಟಿಂಗ್​ ಓಪನ್​ ಮಾಡಿ&lt;/p&gt;&lt;p&gt;- ಕೆಳಗಡೆ ಸ್ಕ್ರಾಲ್​ ಮಾಡುತ್ತಾ ಹೋದರೆ ನಿಮಗೆ ಸ್ಟೋರೇಜ್​ ಆ್ಯಂಡ್​ ಡಾಟಾ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.&lt;/p&gt;&lt;p&gt;- ಬಳಿಕ Proxy ಆಪ್ಷನ್​ ಮೇಲೆ ಕ್ಲಿಕ್​ ಮಾಡಿ.&lt;/p&gt;&lt;p&gt;- ಯೂಸ್​​ ಪ್ರಾಕ್ಸಿ ಎನ್ನೋದು ಆಫ್​ ಆಗಿದ್ದರೆ ಆನ್​ ಮಾಡಿ&lt;/p&gt;&lt;p&gt;- ಕೆಳಗಡೆ ನಿಮಗೆ ಸಂಖ್ಯೆ ಕಾಣಿಸುತ್ತದೆ. ಅದನ್ನು 1.1.1.1 ಎಂದು ರೀಟೈಪ್​ ಮಾಡಿ&lt;/p&gt;&lt;p&gt;- ಕೆಳಗಡೆ ಇರುವ ರೈಟ್​ಮಾರ್ಕ್​ ಅಂದರೆ ಓಕೆ ಎನ್ನೋದನ್ನು ಕ್ಲಿಕ್ ಮಾಡಿ.&lt;/p&gt;&lt;p&gt;- ಒಂದು ವೇಳೆ ನಿಮ್ಮ ಕೆಲಸ ಆದ ಮೇಲೆ ಡಬಲ್​ ಟಿಕ್​ ಬೇಕು ಎಂದರೆ, ಯೂಸ್​ ಪ್ರಾಕ್ಸಿ ಅನ್ನು ಮತ್ತೆ ಆನ್​ ಮಾಡಿ. ಆಗ 1.1.1.443 ಎನ್ನುವ ಆಪ್ಷನ್​ತಾನಾಗಿಯೇ ಆನ್​ ಆಗುತ್ತದೆ.&lt;/p&gt;]]></content:encoded>
            <category><![CDATA[technology]]></category>
            <dc:creator>Suchethana D</dc:creator>
            <atom:link href="https://kannada.asianetnews.com/technology/want-to-get-single-tick-on-whatsapp-even-when-the-internet-is-on-this-hack-is-for-you-suc/articleshow-dhsv5yb"/>
        </item>
        <item>
            <title><![CDATA[Bribe: ಕಾಮಗಾರಿಗೆ 30% ಲಂಚದ ಕಮಿಷನ್ ಬೇಡಿಕೆ; ಲಂಚ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಬಿದ್ದ RFO!]]></title>
            <link>https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91</link>
            <guid isPermaLink="true">https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91</guid>
            <pubDate>Fri, 11 Sep 2026 20:01:46 +0530</pubDate>
            <description><![CDATA[ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಂಜೂರಾದ ಕಾಮಗಾರಿಗೆ ಗುತ್ತಿಗೆದಾರನಿಂದ 30% ಕಮಿಷನ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, RFO ಹಾಗೂ ಅವರ ಸಹವರ್ತಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28e2ms5ermxy0ejkvx0b192,imgname-lokayukta-1789137081125.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು/ಗುಬ್ಬಿ; ಅರಣ್ಯ ಇಲಾಖೆಯಿಂದ ಮಂಜೂರಾಗಿದ್ದ ಕಾಮಗಾರಿಗೆ ಶೇಕಡಾ 30 ರಷ್ಟು ಲಂಚದ ಕಮಿಷನ್ ಬೇಡಿಕೆಯಿಟ್ಟು, ಗುತ್ತಿಗೆದಾರನಿಂದ ಹಣ ಪಡೆಯುತ್ತಿದ್ದ ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (RFO) ಹಾಗೂ ಅವರ ಕೆಳಹಂತದ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್&zwnj;ಹ್ಯಾಂಡ್&zwnj; ಆಗಿ ಸಿಕ್ಕಿಬಿದ್ದಿದ್ದಾರೆ. ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಕೆ.ಎಸ್ ಮತ್ತು ಅವರ ಸೂಚನೆಯಂತೆ ಹಣ ಸ್ವೀಕರಿಸುತ್ತಿದ್ದ ಹೊರಗುತ್ತಿಗೆ ಆಧಾರದ ಕ್ಯಾಂಪ್ ವಾಚರ್ ಶೌಕತ್ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ!&lt;/strong&gt;&lt;/h2&gt;&lt;p&gt;ಮಂಡ್ಯ ಮೂಲದ ಶಿವರಾಜು ಎಂಬುವವರು ಅರಣ್ಯ ಹಾಗೂ ಸಿವಿಲ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತುಮಕೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿ ಸಿ.ಸಿ.ಟಿ (CCT) ಅಗೆಯುವಿಕೆ, ಬದುಗಳ ಮೇಲೆ ಅಗೇವಾ ಸಸ್ಯಗಳನ್ನು ನೆಡುವ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಪಡೆದಿದ್ದರು. ಸರ್ಕಾರದಿಂದ ಕಾರ್ಯಾದೇಶ (Work Order) ಸಿಕ್ಕ ನಂತರ, ಗುತ್ತಿಗೆದಾರ ಶಿವರಾಜು ಕಾಮಗಾರಿ ಪ್ರಾರಂಭಿಸಲು ಸ್ಥಳಕ್ಕೆ ತೆರಳಿದ್ದರು. ಆದರೆ, ಗುಬ್ಬಿ RFO ಸತೀಶ್ ಚಂದ್ರ ಕೆ.ಎಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಂತೆ ಅಡ್ಡಿಪಡಿಸಿ ತಡೆದು ನಿಲ್ಲಿಸಿದ್ದರು. ಮಂಜೂರಾದ ಒಟ್ಟು ಕಾಮಗಾರಿ ಮೊತ್ತದ ಶೇಕಡಾ 30 ರಷ್ಟು ಹಣವನ್ನು ತಮಗೆ ಲಂಚವಾಗಿ ನೀಡಬೇಕು, ಅಂದರೆ ಒಟ್ಟು 5 ಲಕ್ಷ ರೂಪಾಯಿ ಲಂಚ ಕೊಟ್ಟರೆ ಮಾತ್ರ ಕೆಲಸ ಪ್ರಾರಂಭಿಸಲು ಬಿಡುವುದಾಗಿ ಬೆದರಿಕೆ ಒಡ್ಡಿದ್ದರು.&lt;/p&gt;&lt;h3&gt;&lt;strong&gt;ಹಂತ ಹಂತವಾಗಿ ಲಂಚದ ಬೇಡಿಕೆ!&lt;/strong&gt;&lt;/h3&gt;&lt;p&gt;ಅಧಿಕಾರಿಯ ಕಿರುಕುಳಕ್ಕೆ ಬೇಸತ್ತ ಗುತ್ತಿಗೆದಾರ ಶಿವರಾಜು, ಕಾಮಗಾರಿ ಆರಂಭಿಸುವ ಉದ್ದೇಶದಿಂದ ಆರಂಭದಲ್ಲಿ 50,000 ರೂಪಾಯಿಗಳನ್ನು RFO ಸತೀಶ್ ಚಂದ್ರ ಅವರಿಗೆ ನೀಡಿದ್ದರು. ಆದಾಗ್ಯೂ, ಉಳಿದ 3,50,000 ರೂಪಾಯಿ ಲಂಚದ ಹಣಕ್ಕಾಗಿ ಸತೀಶ್ ಚಂದ್ರ ನಿರಂತರವಾಗಿ ಪೀಡಿಸಲು ಪ್ರಾರಂಭಿಸಿದ್ದರು. ಲಂಚ ನೀಡಲು ಇಷ್ಟವಿಲ್ಲದ ಗುತ್ತಿಗೆದಾರ ಶಿವರಾಜು, ಈ ಕುರಿತು ಸಮಗ್ರ ಸಾಕ್ಷ್ಯಾಧಾರಗಳೊಂದಿಗೆ ತುಮಕೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಲೋಕಾಯುಕ್ತ ಟ್ರ್ಯಾಪ್ ಕಾರ್ಯಾಚರಣೆ!&lt;/strong&gt;&lt;/h3&gt;&lt;p&gt;ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಪಕ್ಕಾ ಯೋಜನೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದರು. ಯೋಜನೆಯಂತೆ, ಇಂದು ಮಧ್ಯಾಹ್ನ ಗುತ್ತಿಗೆದಾರ ಶಿವರಾಜು ಅವರು ಗುಬ್ಬಿಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಗೆ ತೆರಳಿ, ಮುಂಗಡವಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. RFO ಸತೀಶ್ ಚಂದ್ರ ಅವರ ಸೂಚನೆಯಂತೆ, ಕ್ಯಾಂಪ್ ವಾಚರ್ ಶೌಕತ್ ದೂರುದಾರರಿಂದ 2 ಲಕ್ಷ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ ದಾಳಿ ನಡೆಸಿದ ಲೋಕಾಯುಕ್ತ ತಂಡ, ಹಣದೊಂದಿಗೆ ಇಬ್ಬರನ್ನೂ ರೆಡ್&zwnj;ಹ್ಯಾಂಡ್&zwnj; ಆಗಿ ವಶಕ್ಕೆ ಪಡೆದುಕೊಂಡಿದೆ.&lt;/p&gt;&lt;h3&gt;&lt;strong&gt;ಮುಂದುವರಿದ ತನಿಖೆ!&lt;/strong&gt;&lt;/h3&gt;&lt;p&gt;ದೂರುದಾರರಿಂದ ಪಡೆದಿದ್ದ 2 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, RFO ಸತೀಶ್ ಚಂದ್ರ ಹಾಗೂ ಕ್ಯಾಂಪ್ ವಾಚರ್ ಶೌಕತ್&zwnj;ನನ್ನು ಬಂಧಿಸಿದ್ದಾರೆ. ಕಚೇರಿಯಲ್ಲಿ ಇತರೆ ಕಡತಗಳು ಹಾಗೂ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/gubbi-rfo-bribe-tumakuru-lokayukta-trap-30-percent-commission-forest-officer-arrested-bmk/articleshow-7wgfy91"/>
        </item>
        <item>
            <title><![CDATA['ನಾನು ಸಿಂಪಲ್ ನನ್ನ ಪೆನ್ನು ತುಂಬಾ ಪವರ್ ಫುಲ್': ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಗುಡುಗು]]></title>
            <link>https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c</link>
            <guid isPermaLink="true">https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c</guid>
            <pubDate>Fri, 11 Sep 2026 19:52:58 +0530</pubDate>
            <description><![CDATA[‘ನಾನು ಸಿಂಪಲ್, ನನ್ನ ಪೆನ್ನು ಪವರ್‌ಫುಲ್’ ಎಂದು ಬೆಳ್ಳೂರಿನಲ್ಲಿ ಗುಡುಗಿದ ಉಪಲೋಕಾಯುಕ್ತ ಬಿ.ವೀರಪ್ಪ. ಡಾಟಾ ಆಪರೇಟರ್ ವಹಿವಾಟು, ಎಫ್‌ಸಿ ಮುಗಿದ ಶಾಲಾ ಬಸ್‌ಗಳು, ಆಸ್ಪತ್ರೆ ಹಾಗೂ ಹಾಸ್ಟೆಲ್ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ksahd2tewpxe5crd8ccqr38j,imgname-xgx-1779544001358.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನಾಗಮಂಗಲ (ಸೆ.11): &lt;/strong&gt;ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಅಧಿಕಾರಿಗಳ ವಿರುದ್ಧ ನೂರಾರು ಮಂದಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು. ಇದಕ್ಕೆ ತೀವ್ರ ಅಸಮಾಧಾನಗೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನಾನು ಮಾತ್ರ ಬಹಳ ಸಿಂಪಲ್, ಆದರೆ, ನನ್ನ ಪೆನ್ನು ತುಂಬಾ ಪವರ್ ಫುಲ್ ಆಗಿ ಕೆಲಸ ಮಾಡುತ್ತದೆ ಎಂದು ಗುಡುಗಿದರು.&lt;/p&gt;&lt;p&gt;ಬೆಳ್ಳೂರು ಉಪತಹಸೀಲ್ದಾರ್ ಪದ್ಮ ಅವರಿಗೆ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಒತ್ತುವರಿಯಾಗಿವೆ ಎಂಬ ಯಾವ ಮಾಹಿತಿಯೂ ಇಲ್ಲ. ಅವರು ನೀಡಿರುವ ಒಂದು ಉತ್ತರವೂ ಸಮರ್ಪಕವಾಗಿಲ್ಲ. ಕಚೇರಿ ಡಾಟಾ ಆಪರೇಟರ್ ನಾಗರತ್ನ ಅವರಿಗೆ ಮಾಸಿಕ ವೇತನ ₹16 ಸಾವಿರದಂತೆ 9 ತಿಂಗಳಿಗೆ ₹1.44 ಲಕ್ಷ ಆಗುತ್ತದೆ. ಅವರ ಮೊಬೈಲ್&zwnj;ನಲ್ಲಿ ಯುಪಿಐ ಪರಿಶೀಲಿಸಲಾಗಿ ಕಳೆದ 9 ತಿಂಗಳಲ್ಲಿ ₹4,17,851 ವಹಿವಾಟು ನಡೆಸಿರುವುದು ಕಂಡುಬಂದಿದೆ. ಆದ್ದರಿಂದ ಡಾಟಾ ಆಪರೇಟರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಹಸೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದರು.&lt;/p&gt;&lt;p&gt;ಬೆಳ್ಳೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಆಸ್ಪತ್ರೆಯಲ್ಲಿ ಯಾವೊಬ್ಬ ರೋಗಿ ಹಾಗೂ ವೈದ್ಯರು ಇಲ್ಲದಿರುವುದನ್ನು ಕಂಡು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಆಸ್ಪತ್ರೆ ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾದವು. ಇದರಿಂದ ಆಕ್ರೋಶಗೊಂಡ ಬಿ.ವೀರಪ್ಪ ಅವರು, ಈ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಸೇವೆ ನೀಡುತ್ತಿಲ್ಲವೆಂಬ ನೂರಾರು ದೂರುಗಳಿವೆ. ಹಾಗಾಗಿ ಮುಚ್ಚಲು ಶಿಫಾರಸ್ಸು ಮಾಡುತ್ತೇನೆ ಎಂದರು.&lt;/p&gt;&lt;p&gt;ನೆಲ್ಲಿಗೆರೆ ಗ್ರಾಪಂನಲ್ಲಿ ಗುಬ್ಬಿ ಹಾಗೂ ಬೆಳ್ಳೂರು ಕ್ರಾಸ್&zwnj;ನ ಜಿಎಸ್&zwnj;ಟಿ ನೋಂದಣಿ ಇಲ್ಲದ ನಕಲಿ ಅಂಗಡಿಗಳ ಎರಡು ಏಜೆನ್ಸಿಯಲ್ಲಿ ಹಲವು ಸಾಮಗ್ರಿಗಳನ್ನು ಅಕ್ರಮವಾಗಿ ಖರೀದಿ ಮಾಡಿರುವುದು ಹಾಗೂ ನಕಲಿ ಲೆಟರ್ ಹೆಡ್&zwnj;ಗಳಲ್ಲಿ ತಾವೇ ಕೃತಕವಾಗಿ ದರ ಪಟ್ಟಿ ಸಿದ್ಧಪಡಿಸಿಕೊಂಡಿರುವುದು ಬೆಳಕಿಗೆ ಬಂದವು. ಇವೆಲ್ಲವನ್ನು ಪರಿಶೀಲಿಸಿದ ಉಪಲೋಕಾಯುಕ್ತರು ಪಿಡಿಒ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದರು.&lt;/p&gt;&lt;p&gt;ಪಟ್ಟಣದ ಎಆರ್&zwnj;ಟಿಒ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತರು, ವಾಹನಗಳ ಕುರಿತು ಮಾಹಿತಿ ಪಡೆದುಕೊಂಡರು. ಎಫ್&zwnj;ಸಿ ಮುಗಿದ ವಾಹನಗಳು ನಾಗಮಂಗಲ ಆರ್&zwnj;ಟಿಒ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಹೆಚ್ಚು ವಾಹನಗಳಿರುವುದನ್ನು ಕಂಡು ಅಚ್ಚರಿಪಟ್ಟರು. ಈ ಪೈಕಿ 41 ಶಾಲಾ ಬಸ್&zwnj;ಗಳಿರುವುದನ್ನು ಕಂಡು ಆರ್&zwnj;ಟಿಒ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಎಫ್&zwnj;ಸಿ ಮುಗಿದಿರುವ ವಾಹನಗಳನ್ನು ಸೀಜ್ ಮಾಡಬೇಕು. ಇಲ್ಲದಿದ್ದರೆ ನಿಮ್ಮೆಲ್ಲರನ್ನು ಮನೆಗೆ ಕಳುಹಿಸುತ್ತೇನೆ. ಮಕ್ಕಳು ಹಾಗೂ ಪ್ರಯಾಣಿಕರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿ ಆರ್&zwnj;ಟಿಒ ಅಧಿಕಾರಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿಕೊಂಡರು.&lt;/p&gt;&lt;h2&gt;&lt;strong&gt;ತೀವ್ರ ತರಾಟೆ&lt;/strong&gt;&lt;/h2&gt;&lt;p&gt;ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್&zwnj;ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಅಲ್ಲಿನ ವ್ಯವಸ್ಥೆ ಪರಿಶೀಲಿಸಿ ಶೌಚಾಲಯಗಳು ಸರಿ ಇಲ್ಲ. ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ನೀವು ಆಸಕ್ತಿ ತೋರಿಲ್ಲ ಎದು ಕಿಡಿಕಾರಿದರು. ಇದಕ್ಕೆ ಉತ್ತರಿಸಿದ ವಾರ್ಡನ್ ಮಕ್ಕಳ ಕೊರತೆ ಇದೆ. ಈ ಹಾಸ್ಟೆಲ್ ಮುಚ್ಚುವಂತೆ ಶಿಫಾರಸ್ಸು ಪತ್ರ ಕೊಟ್ಟಿದ್ದೇನೆ ಸರ್ ಎಂದಾಗ, ಇದಕ್ಕೆ ಸಿಡಿಮಿಡಿಗೊಂಡ ಉಪಲೋಕಾಯುಕ್ತರು, ನಿಮಗೆ ಕೆಲಸ ಮಾಡಲು ಆಸಕ್ತಿ ಇಲ್ಲ. ಈ ರೀತಿಯ ಹಾಸ್ಟೆಲ್ ತರಲು ಎಷ್ಟು ಶ್ರಮ ಇದೆ ಎಂಬುದು ಗೊತ್ತಿದೆಯಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.&lt;/p&gt;&lt;p&gt;ಪಟ್ಟಣದ ಬದರಿಕೊಪ್ಪಲು ಬಳಿಯ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ನ್ಯಾ.ಬಿ.ವೀರಪ್ಪ ಅವರು ಹಾಸ್ಟೆಲ್&zwnj;ನಲ್ಲಿದ್ದ 11 ಜನ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಆದರೆ, ಹಾಜರಾತಿ ಪುಸ್ತಕ ಪರಿಶೀಲಿಸಿದ ವೇಳೆ 36 ಜನ ವಿದ್ಯಾರ್ಥಿಗಳಿರುವುದು ಕಂಡುಬಂತು. ಆದರೆ, 11 ಜನ ವಿದ್ಯಾರ್ಥಿಗಳಿರುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದರು.&lt;/p&gt;&lt;p&gt;ಈ ವೇಳೆ ಅಧಿಕಾರಿ ಹೇಳಿದ ಮಕ್ಕಳ ದಾಖಲಾತಿ ಪಟ್ಟಿ ಮತ್ತು ಹಾಜರಾತಿ ಪುಸ್ತಕದಲ್ಲಿದ್ದ ವಿದ್ಯಾರ್ಥಿಗಳ ಪಟ್ಟಿಗೂ ಸಾಮ್ಯತೆ ಬಾರದಿದ್ದಾಗ ಆಕ್ರೋಶ ವ್ಯಕ್ತಪಡಿಸಿ ಮಕ್ಕಳ ಹೆಸರಿನಲ್ಲಿ ಸುಳ್ಳು ಲೆಕ್ಕ ಕೊಟ್ಟು ಲಂಚ ಹೊಡೆಯಲು ನಾಚಿಕೆಯಾಗಲ್ವಾ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಹಾಸ್ಟೆಲ್&zwnj;ಗೆ ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಅಳವಡಿಸುವಂತೆ ಸೂಚಿಸಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/mandya-uplokayukta-b-veerappa-takes-strong-action-against-officials-in-nagamangala-gvd/articleshow-iw3ik0c"/>
        </item>
        <item>
            <title><![CDATA[ವೃಷಭಾವತಿ ಆಯ್ತು, ಈಗ ಕಾವೇರಿಗೂ ಕಂಟಕ; ಜೀವನದಿಗೆ ಸೇರುತ್ತಿದೆ ಬೆಂಗಳೂರಿನ ಶೇ. 50ರಷ್ಟು ಕೊಳಚೆ ನೀರು]]></title>
            <link>https://kannada.asianetnews.com/bengaluru-urban/bengaluru-untreated-sewage-cauvery-river-ramalinga-reddy-ngt-san/articleshow-zy4vs7y</link>
            <guid isPermaLink="true">https://kannada.asianetnews.com/bengaluru-urban/bengaluru-untreated-sewage-cauvery-river-ramalinga-reddy-ngt-san/articleshow-zy4vs7y</guid>
            <pubDate>Fri, 11 Sep 2026 19:48:27 +0530</pubDate>
            <description><![CDATA[ಬೆಂಗಳೂರಿನಿಂದ ಉತ್ಪತ್ತಿಯಾಗುವ ಶೇ. 47ರಷ್ಟು ಕೊಳಚೆ ನೀರು ಯಾವುದೇ ಶುದ್ಧೀಕರಣವಿಲ್ಲದೆ ನೇರವಾಗಿ ಕಾವೇರಿ ನದಿ ಸೇರುತ್ತಿದ್ದು, ಇದು ತಮಿಳುನಾಡಿನವರೆಗೂ ಮಾಲಿನ್ಯ ಉಂಟುಮಾಡುತ್ತಿದೆ. .]]></description>
            <media:content url="https://static.asianetnews.com/images/w-1280,h-720,format-jpg,imgid-01m28d6nnmdazndfgxavtx4a37,imgname-bwssb-1789136164532.jfif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ರಾಜಧಾನಿಯ ವೃಷಭಾವತಿ ನದಿ ಈಗ ಚರಂಡಿ ಆಗಿದ್ದಾಯ್ತು. ಮುಂದಿನ ದಿನದಲ್ಲಿ ಕಾವೇರಿ ನದಿಗೂ ಇದೇ ಸಂಕಷ್ಟ ಎದುರಾಗುಬಹುದೇ ಎನ್ನುವ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ನೀಡಿದೆ. ಮಹಾನಗರಕ್ಕೆ ಪ್ರತಿದಿನ ಬರುವ ಕಾವೇರಿ ನೀರಿನಲ್ಲಿ ಅಂದಾಜು ಶೇಕಡಾ 47 ರಷ್ಟು ಕೊಳಚೆ ನೀರು ಯಾವುದೇ ಶುದ್ಧೀಕರಣವಿಲ್ಲದೆ (Untreated) ನೇರವಾಗಿ ಕಾವೇರಿ ನದಿ ಹಾಗೂ ಇತರೆ ಜಲಮೂಲಗಳನ್ನು ಸೇರುತ್ತಿದ್ದು, ತಮಿಳುನಾಡಿನವರೆಗೂ ನೀರು ಕಲುಷಿತಗೊಳ್ಳುತ್ತಿದೆ ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ. ಬೆಂಗಳೂರಿನಿಂದ ಕಾವೇರಿ ನದಿಗೆ ತ್ಯಾಜ್ಯ ನೀರು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (NGT) ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಪರಾಮರ್ಶೆ ನಡೆಸಲು ಸಚಿವರು ಗುರುವಾರ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು.&lt;/p&gt;&lt;h2&gt;&lt;strong&gt;ಶೇ. 47 ರಷ್ಟು ತ್ಯಾಜ್ಯ ನೀರು ಶುದ್ಧೀಕರಣವೇ ಆಗ್ತಿಲ್ಲ!&lt;/strong&gt;&lt;/h2&gt;&lt;p&gt;ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, &quot;ಕರ್ನಾಟಕವು ಪ್ರತಿದಿನ ಕಾವೇರಿಯಿಂದ 2,825 ಮಿಲಿಯನ್ ಲೀಟರ್ (MLD) ನೀರನ್ನು ಪಡೆಯುತ್ತಿದ್ದು, ಅದರಲ್ಲಿ 2,580 ಎಂಎಲ್&zwnj;ಡಿಯಷ್ಟು ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಪ್ರಸ್ತುತ ಬಿಡಬ್ಲ್ಯೂಎಸ್&zwnj;ಎಸ್&zwnj;ಬಿಯ 37 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು (STP) ಕೇವಲ 1,364.5 ಎಂಎಲ್&zwnj;ಡಿ ತ್ಯಾಜ್ಯ ನೀರನ್ನು ಮಾತ್ರ ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ. ಇದರಿಂದಾಗಿ ದಿನಕ್ಕೆ 1,215.5 ಎಂಎಲ್&zwnj;ಡಿಯಷ್ಟು ಕೊಳಚೆ ನೀರು ಸಂಸ್ಕರಣೆಯಾಗದೆ ಉಳಿಯುತ್ತಿದ್ದು, ಒಟ್ಟು ತ್ಯಾಜ್ಯ ನೀರಿನಲ್ಲಿ ಶೇ. 47 ರಷ್ಟು ನೀರು ನೇರವಾಗಿ ಜಲಮೂಲಗಳನ್ನು ಸೇರುತ್ತಿದೆ&quot; ಎಂದು ಆತಂಕ ವ್ಯಕ್ತಪಡಿಸಿದರು.&lt;/p&gt;&lt;h2&gt;&lt;strong&gt;ಕನಕಪುರ ಸಂಗಮ, ಕೆಲವರಪಳ್ಳಿ ಡ್ಯಾಮ್&zwnj;ಗೆ ಕಲುಷಿತ ನೀರು&lt;/strong&gt;&lt;/h2&gt;&lt;p&gt;ಸಂಸ್ಕರಿಸದ ಈ ಬೃಹತ್ ಪ್ರಮಾಣದ ಕೊಳಚೆ ನೀರು ಕನಕಪುರ ತಾಲೂಕಿನ 'ಸಂಗಮ'ದಲ್ಲಿ ನೇರವಾಗಿ ಕಾವೇರಿ ನದಿಯನ್ನು ಸೇರುತ್ತಿದ್ದು, ಅಲ್ಲಿಂದ ತಮಿಳುನಾಡಿಗೆ ಹರಿಯುತ್ತಿದೆ. ಅಷ್ಟೇ ಅಲ್ಲದೆ, ನಗರದ ಇನ್ನೊಂದೆಡೆ ದಕ್ಷಿಣ ಪಿನಾಕಿನಿ (Dakshina Pinakini) ನದಿಯ ಮೂಲಕ ಈ ಕಲುಷಿತ ನೀರು ತಮಿಳುನಾಡಿನ 'ಕೆಲವರಪಳ್ಳಿ' (Kelavarapalli) ಅಣೆಕಟ್ಟಿಗೂ ತಲುಪುತ್ತಿದೆ. ಮುಂದಿನ ವಾರ ಎನ್&zwnj;ಜಿಟಿಯಲ್ಲಿ ಈ ವಿಷಯ ವಿಚಾರಣೆಗೆ ಬರಲಿರುವುದರಿಂದ ಜಲ ಮಂಡಳಿ ತೀವ್ರ ಒತ್ತಡಕ್ಕೆ ಸಿಲುಕಿದೆ.&lt;/p&gt;&lt;h2&gt;&lt;strong&gt;ಕೊಳವೆಬಾವಿಗಳ ನೀರಿನ ಲೆಕ್ಕವೇ ಸಿಗುತ್ತಿಲ್ಲ&lt;/strong&gt;&lt;/h2&gt;&lt;p&gt;ವಿಶೇಷವೆಂದರೆ, ಈ ಅಂಕಿ-ಅಂಶಗಳಲ್ಲಿ ನಗರದಲ್ಲಿರುವ ಸುಮಾರು 4 ಲಕ್ಷ ಕೊಳವೆಬಾವಿಗಳಿಂದ (Borewells) ಪಡೆಯಲಾಗುತ್ತಿರುವ ಅಂತರ್ಜಲದ ಲೆಕ್ಕ ಸೇರಿಲ್ಲ. ಸಾಮಾನ್ಯವಾಗಿ ಬಳಸುವ ಶುದ್ಧ ನೀರಿನ ಪೈಕಿ ಶೇಕಡಾ 80 ರಷ್ಟು ನೀರು ಕೊಳಚೆ ನೀರಾಗಿ ಮಾರ್ಪಡುತ್ತದೆ ಎಂದು ಅಂದಾಜಿಸಲಾಗಿದೆ. ನಗರದಲ್ಲಿ ಕೊಳವೆಬಾವಿಗಳ ಮೂಲಕ ಎಷ್ಟು ಅಂತರ್ಜಲ ಹೊರತೆಗೆಯಲಾಗುತ್ತಿದೆ ಹಾಗೂ ಅದರಿಂದ ಎಷ್ಟು ತ್ಯಾಜ್ಯ ನೀರು ಸೃಷ್ಟಿಯಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನು ಸೂಕ್ತ ಅಂದಾಜು ಮಾಡಲು ಸಾಧ್ಯವಾಗಿಲ್ಲ.&lt;/p&gt;&lt;h2&gt;&lt;strong&gt;2029 ರ ವೇಳೆಗೆ 42 ಹೊಸ ಎಸ್&zwnj;ಟಿಪಿಗಳ ನಿರ್ಮಾಣ&lt;/strong&gt;&lt;/h2&gt;&lt;p&gt;ತ್ಯಾಜ್ಯ ನೀರು ಸಂಸ್ಕರಣಾ ಕೊರತೆಯನ್ನು ನೀಗಿಸಲು 1,174 ಎಂಎಲ್&zwnj;ಡಿ ಸಾಮರ್ಥ್ಯದ 42 ಹೊಸ ಎಸ್&zwnj;ಟಿಪಿಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಚಿವರು ತಿಳಿಸಿದರು. ಇದರ ಜೊತೆಗೆ ಹಾಲಿ ಇರುವ ಎಸ್&zwnj;ಟಿಪಿಗಳನ್ನು ಮೇಲ್ದರ್ಜೆಗೇರಿಸುವ (Upgrading) ಮೂಲಕ ಹೆಚ್ಚುವರಿಯಾಗಿ 60 ಎಂಎಲ್&zwnj;ಡಿ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಸಚಿವರ ಕಚೇರಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬಿಡಬ್ಲ್ಯೂಎಸ್&zwnj;ಎಸ್&zwnj;ಬಿಯು 2029 ರ ಅಂತ್ಯದ ವೇಳೆಗೆ ಎಲ್ಲಾ ಹೊಸ ಎಸ್&zwnj;ಟಿಪಿಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವ ಭರವಸೆ ಹೊಂದಿದೆ.&lt;/p&gt;&lt;p&gt;ಇನ್ನು ನಗರದಲ್ಲಿ ಬಿಡಬ್ಲ್ಯೂಎಸ್&zwnj;ಎಸ್&zwnj;ಬಿಯ ಭೂಗತ ಒಳಚರಂಡಿ (UGD) ಸಂಪರ್ಕ ಪಡೆಯದೆ, ತಮ್ಮ ಮನೆಯ ಕೊಳಚೆ ನೀರನ್ನು ನೇರವಾಗಿ ಸಾರ್ವಜನಿಕ ಚರಂಡಿಗಳಿಗೆ ಹರಿಸುತ್ತಿರುವ ಮನೆಗಳನ್ನು ಗುರುತಿಸಿ ನೋಟಿಸ್ ನೀಡಲಾಗುವುದು ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;ಎಸ್&zwnj;ಟಿಪಿಗಳ ಕಳಪೆ ನಿರ್ವಹಣೆ, ಅಪಾರ್ಟ್&zwnj;ಮೆಂಟ್&zwnj;ಗಳಿಗೆ 15 ದಿನಗಳ ಡೆಡ್&zwnj;ಲೈನ್&lt;/strong&gt;&lt;/h2&gt;&lt;p&gt;ಜಲ ಮಂಡಳಿ ಪ್ರಸ್ತುತ ನಿರ್ವಹಿಸುತ್ತಿರುವ 37 ಎಸ್&zwnj;ಟಿಪಿಗಳಲ್ಲಿ ಕೆಲವು ಘಟಕಗಳು ಎನ್&zwnj;ಜಿಟಿ ನಿಗದಿಪಡಿಸಿರುವ ನಿಗದಿತ ಮಾನದಂಡಗಳ ಪ್ರಕಾರ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿಲ್ಲ ಎಂಬುದನ್ನು ಸಚಿವರು ಒಪ್ಪಿಕೊಂಡರು. ಅದೇ ರೀತಿ, 80 ಕ್ಕಿಂತ ಹೆಚ್ಚು ವಸತಿ ಯೂನಿಟ್&zwnj;ಗಳನ್ನು ಹೊಂದಿರುವ ಅಪಾರ್ಟ್&zwnj;ಮೆಂಟ್ ಸಂಕೀರ್ಣಗಳಲ್ಲಿರುವ ಎಸ್&zwnj;ಟಿಪಿಗಳ ಕಾರ್ಯನಿರ್ವಹಣೆಯೂ ತೃಪ್ತಿಕರವಾಗಿಲ್ಲ. &quot;ಅಪಾರ್ಟ್&zwnj;ಮೆಂಟ್&zwnj;ಗಳಲ್ಲಿ ಅರ್ಧಂಬರ್ಧ ಸಂಸ್ಕರಿಸಿದ ನೀರನ್ನು ಚರಂಡಿಗೆ ಹರಿಸಲಾಗುತ್ತಿದ್ದು, ಅದು ಕೊನೆಗೆ ಕೆರೆಗಳನ್ನು ಕಲುಷಿತಗೊಳಿಸುತ್ತಿದೆ. ಹೀಗಾಗಿ ಅಪಾರ್ಟ್&zwnj;ಮೆಂಟ್&zwnj;ಗಳ ಎಸ್&zwnj;ಟಿಪಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ 15 ದಿನಗಳಲ್ಲಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ&quot; ಎಂದು ಸಚಿವರು ತಿಳಿಸಿದರು.&lt;/p&gt;&lt;p&gt;ಇದಲ್ಲದೆ, ಜಲಮೂಲಗಳ ಮಾಲಿನ್ಯವನ್ನು ತಪ್ಪಿಸಲು ರಾಜಕಾಲುವೆಗಳು ಹಾಗೂ ಮಳೆನೀರು ಚರಂಡಿಗಳಲ್ಲಿ (SWD) ಹರಿಯುವ ಕೊಳಚೆ ನೀರನ್ನು ಕಡ್ಡಾಯವಾಗಿ ಎಸ್&zwnj;ಟಿಪಿ ಘಟಕಗಳತ್ತ ತಿರುಗಿಸುವಂತೆ (Divert) ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-untreated-sewage-cauvery-river-ramalinga-reddy-ngt-san/articleshow-zy4vs7y"/>
        </item>
        <item>
            <title><![CDATA[ಬ್ಯಾಂಕಾಕ್​ನಲ್ಲಿ Karna Serial: ಕರ್ಣ- ನಿಧಿ ಹನಿಮೂನ್​ ಸ್ಪೆಷಲ್​; ನಡೆಯುತ್ತಾ ಅನಾಹುತ]]></title>
            <link>https://kannada.asianetnews.com/gallery/tv-talk/karna-serial-in-bangkok-karna-nidhi-honeymoon-special-episode-suc-zymihe5</link>
            <guid isPermaLink="true">https://kannada.asianetnews.com/gallery/tv-talk/karna-serial-in-bangkok-karna-nidhi-honeymoon-special-episode-suc-zymihe5</guid>
            <pubDate>Fri, 11 Sep 2026 19:46:16 +0530</pubDate>
            <description><![CDATA[ಕರ್ಣ ತನ್ನ ಮಗನೆಂದು ತಿಳಿದು ರಮೇಶ್ ಪ್ರೀತಿ ತೋರುತ್ತಿದ್ದು, ಕರ್ಣ ಮತ್ತು ನಿಧಿಯನ್ನು ಬ್ಯಾಂಕಾಕ್ ಹನಿಮೂನ್‌ಗೆ ಕಳುಹಿಸಿದ್ದಾರೆ. ಅಲ್ಲಿ ನಿಧಿಯ ಆಸೆಗಳನ್ನು ಈಡೇರಿಸಲು ಕರ್ಣ ಸಿದ್ಧನಾಗಿದ್ದು, ವಿಮಾನದಲ್ಲಿನ ಘಟನೆಯು ಅವರ ಪ್ರಯಾಣದ ಬಗ್ಗೆ ಅನುಮಾನ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28d1ytaphdyvs0m5hxhed4m,imgname-karna-serial-1789136010058.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ತನ್ನ ಮಗನೆಂದು ತಿಳಿದು ರಮೇಶ್ ಪ್ರೀತಿ ತೋರುತ್ತಿದ್ದು, ಕರ್ಣ ಮತ್ತು ನಿಧಿಯನ್ನು ಬ್ಯಾಂಕಾಕ್ ಹನಿಮೂನ್&zwnj;ಗೆ ಕಳುಹಿಸಿದ್ದಾರೆ. ಅಲ್ಲಿ ನಿಧಿಯ ಆಸೆಗಳನ್ನು ಈಡೇರಿಸಲು ಕರ್ಣ ಸಿದ್ಧನಾಗಿದ್ದು, ವಿಮಾನದಲ್ಲಿನ ಘಟನೆಯು ಅವರ ಪ್ರಯಾಣದ ಬಗ್ಗೆ ಅನುಮಾನ ಮೂಡಿಸಿದೆ.&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ (Karna Serial) ಸದ್ಯ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ರಮೇಶನಿಗೆ ಕರ್ಣ ತನ್ನ ಸ್ವಂತ ಮಗ ಎಂದುತಿಳಿಯುತ್ತಲೇ ಆತನಿಗಾಗಿ ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾನೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಮಾಲತಿ ಮತ್ತು ರಮೇಶ್​ ಸೇರಿ, ಕರ್ಣ ಮತ್ತು ನಿಧಿಯನ್ನು ಹನಿಮೂನ್​ಗೆ ಕಳುಹಿಸುತ್ತಿದ್ದಾರೆ. ಅದೂ ಬ್ಯಾಂಕಾಂಕ್​ನಲ್ಲಿ.&lt;/p&gt;&lt;img&gt;&lt;p&gt;ಇದೀಗ ಮುದ್ದಾದ ಜೋಡಿ ಬ್ಯಾಂಕಾಂಕ್​ಗೆ ಹೋಗಿದ್ದು, ಅಲ್ಲಿಗೆ ಹೋದ ಮೇಲೆ ಏನೇನು ಬೇಕು ಎನ್ನೋದನ್ನು ನಿಧಿ ದೊಡ್ಡ ಲಿಸ್ಟ್​ ಮಾಡುವ ಮೂಲಕ ಕರ್ಣನಿಗೆ ಕೊಟ್ಟಿದ್ದಾಳೆ. ಅವಳ ಎಲ್ಲಾ ಆಸೆಗಳನ್ನೂ ಈಡೇರಿಸುವುದಾಗಿ ಕರ್ಣ ಹೇಳಿದ್ದಾನೆ.&lt;/p&gt;&lt;img&gt;&lt;p&gt;ಇನ್ನು ಕೆಲವು ಎಪಿಸೋಡ್​ಗಳು ಬ್ಯಾಂಕಾಂಕ್​ನ ಸುಂದರ ದೃಶ್ಯಗಳನ್ನು ಸೆರೆ ಹಿಡಿಯಲಿದ್ದು, ವೀಕ್ಷಕರಿಗೆ ರಸದೌತಣ ಉಣಬಡಿಸಲಿದೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ನಿತ್ಯಾಳ ಸೀಮಂತಕ್ಕೂ ರೆಡಿ ಮಾಡಿಕೊಳ್ಳಲಾಗುತ್ತಿದೆ. ಇಷ್ಟು ದಿನ ಮರೆಯಾಗಿದ್ದ ನಿತ್ಯಾ ಮತ್ತೆ ಮರಳಿದ್ದಾಳೆ. ಅಲ್ಲಿಗೆ ಈ ಸೀರಿಯಲ್​ ಇನ್ನೊಂದು ಹಂತಕ್ಕೆ ಹೋಗಲಿದೆ.&lt;/p&gt;&lt;img&gt;&lt;p&gt;ಒಟ್ಟಿನಲ್ಲಿ, ಸೀರಿಯಲ್​ನಲ್ಲಿ ಮುಂದೇನಾಗಲಿದೆ ಎನ್ನುವ ಕುತೂಹಲ ಎಲ್ಲರದ್ದು. ಬ್ಯಾಂಕಾಂಕ್​ಗೆ ಹೋಗುವಾಗ ವಿಮಾನ ಅಲ್ಲಾಡಿದಾಗ ಹೆದರಿದ ನಿಧಿ, ತನ್ನ ವಿಷ್​ ಲಿಸ್ಟ್​ನಲ್ಲಿ ಮತ್ತೊಂದು ಸೇರಿಸಿ, ಇಬ್ಬರೂ ಸೇಫ್​ ಆಗಿ ಬರಬೇಕು ಎಂದು ಹೇಳಿದ್ದಾಳೆ.ಅಲ್ಲಿಗೆ ಇಬ್ಬರಲ್ಲಿ ಒಬ್ಬರಿಗೆ ಏನಾದರೂ ಸಮಸ್ಯೆ ತಲೆದೋರತ್ತಾ ಎನ್ನುವ ಗುಮಾನಿ ಕೂಡ ಇದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-in-bangkok-karna-nidhi-honeymoon-special-episode-suc-zymihe5"/>
        </item>
        <item>
            <title><![CDATA[Karnataka style veg pulao: ಪಕ್ಕಾ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್... ಒಮ್ಮೆ ಟ್ರೈ ಮಾಡಿ ನೋಡಿ!]]></title>
            <link>https://kannada.asianetnews.com/food/karnataka-special-tarkari-pulao-recipe-quick-and-easy-pressure-cooker-rice/articleshow-8hqh4wo</link>
            <guid isPermaLink="true">https://kannada.asianetnews.com/food/karnataka-special-tarkari-pulao-recipe-quick-and-easy-pressure-cooker-rice/articleshow-8hqh4wo</guid>
            <pubDate>Fri, 11 Sep 2026 19:43:57 +0530</pubDate>
            <description><![CDATA[Karnataka style veg pulao: ಯಾವಾಗಲೂ ಮಾಡೋ ಸಾದಾ ಪಲಾವ್, ಬಿರಿಯಾನಿ ತಿಂದು ಬೇಜಾರಾಗಿದ್ಯಾ? ಹಾಗಾದ್ರೆ ತಾಜಾ ಹಸಿ ಮಸಾಲೆ ರುಬ್ಬಿ ಮಾಡುವ ಪಕ್ಕಾ 'ಕರ್ನಾಟಕ ಸ್ಟೈಲ್ ತರಕಾರಿ ಪಲಾವ್' ಒಮ್ಮೆ ಟ್ರೈ ಮಾಡಿ ನೋಡಿ! ಇದರ ರುಚಿ, ಘಮಕ್ಕೆ ಬಿರಿಯಾನಿ ಕೂಡ ಸರಿಸಾಟಿಯಲ್ಲ...]]></description>
            <media:content url="https://static.asianetnews.com/images/w-1280,h-720,format-jpg,imgid-01m28cxwk5th7hbf70xv7ar2cz,imgname-thumbnail---2026-09-11t193644.092-1789135876707.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಯಾ&lt;/strong&gt;ವಾಗಲೂ ಮಾಡುವ ಬಿರಿಯಾನಿ ಅಥವಾ ಟೊಮೆಟೊ ಬಾತ್&zwnj;ಗಿಂತ ಭಿನ್ನವಾಗಿ ಏನಾದರೂ ಹೊಸದಾಗಿ, ನಾಲಿಗೆಗೆ ರುಚಿ ನೀಡುವಂತಹ ಅಡುಗೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗಾಗಿ ಇಲ್ಲಿದೆ ಒಂದು ಅದ್ಭುತವಾದ ಖಾದ್ಯ. ಅದೇ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ಬಾಯಲ್ಲಿ ನೀರೂರಿಸುವ &lsquo;ತರಕಾರಿ ಪಲಾವ್&rsquo; (Veg Pulao). ಇದು ನಾವು ಸಾಮಾನ್ಯವಾಗಿ ಮಾಡುವ ಸಾದಾ ಪಲಾವ್ ತರಹ ಇರುವುದೇ ಇಲ್ಲ!&lt;/p&gt;&lt;p&gt;ಇದರಲ್ಲಿ ಬಳಸುವ ತಾಜಾ ರುಬ್ಬಿದ ಹಸಿ ಮಸಾಲೆ ಮತ್ತು ತರಕಾರಿಗಳು ಇದಕ್ಕೆ ವಿಶಿಷ್ಟವಾದ ಘಮ ಹಾಗೂ ಅದ್ಭುತ ರುಚಿಯನ್ನು ನೀಡುತ್ತವೆ. ಹಾಗಾದರೆ ಮತ್ಯಾಕೆ ತಡ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವ, ಘಮಘಮಿಸುವ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೋಡಿ.&lt;/p&gt;&lt;h2&gt;&lt;strong&gt;ತರಕಾರಿ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;h3&gt;&lt;strong&gt;ಮಸಾಲೆ ಪೇಸ್ಟ್ ರುಬ್ಬಿಕೊಳ್ಳಲು&lt;/strong&gt;&lt;/h3&gt;&lt;p&gt;ಕೊತ್ತಂಬರಿ ಸೊಪ್ಪು - 1 ಸಣ್ಣ ಕಟ್ಟುಪುದೀನಾ ಸೊಪ್ಪು - 1 ಸಣ್ಣ ಕಟ್ಟುಹಸಿ ತೆಂಗಿನಕಾಯಿ ತುರಿ - 1/4 ಕಪ್ಬೆಳ್ಳುಳ್ಳಿ ಎಸಳು - 6ಶುಂಠಿ - ಅರ್ಧ ಇಂಚು ತುಂಡುಈರುಳ್ಳಿ - 1/4 ಕಪ್ (ಹೆಚ್ಚಿದ್ದು)ಹಸಿಮೆಣಸಿನಕಾಯಿ - 3ನೀರು - 1/2 ಕಪ್&lt;/p&gt;&lt;h3&gt;&lt;strong&gt;ಪಲಾವ್ ತಯಾರಿಸಲು&lt;/strong&gt;&lt;/h3&gt;&lt;p&gt;ಅಕ್ಕಿ (ಸೋನಾ ಮಸೂರಿ ಅಥವಾ ಜೀರಾ ರೈಸ್) - 1 ಕಪ್ಕಡಲೆಕಾಯಿ ಎಣ್ಣೆ - 3 ಚಮಚಪಲಾವ್ ಎಲೆ (ಬಿರಿಯಾನಿ ಎಲೆ) - 2ಏಲಕ್ಕಿ - 1ಲವಂಗ - 1ಚಕ್ಕೆ (ದಾಲ್ಚಿನ್ನಿ) - 1 ಇಂಚು ತುಂಡುಚಕ್ರಮೊಗ್ಗು (ಅನಾಸ ಹೂವು) - 1ಸಣ್ಣಗೆ ಹೆಚ್ಚಿದ ಈರುಳ್ಳಿ - 1/4 ಕಪ್ಹೆಚ್ಚಿದ ಟೊಮೆಟೊ - 1ಕರಿಬೇವಿನ ಸೊಪ್ಪು - 2 ಕಡ್ಡಿಕಡಲೆಕಾಯಿ ಬೀಜ (ಶೇಂಗಾ) - 2 ಚಮಚತರಕಾರಿ ತುಂಡುಗಳು (ಕ್ಯಾರೆಟ್, ಬೀನ್ಸ್, ಆಲೂಗಡ್ಡೆ, ಬಟಾಣಿ) - 2 ಕಪ್ಉಪ್ಪು - ರುಚಿಗೆ ತಕ್ಕಷ್ಟುನೀರು - 2 ಕಪ್&lt;/p&gt;&lt;h2&gt;&lt;strong&gt;ತರಕಾರಿ ಪಲಾವ್ ಮಾಡುವ ವಿಧಾನ&lt;/strong&gt;&lt;/h2&gt;&lt;p&gt;*ಮೊದಲಿಗೆ 1 ಕಪ್ ಅಕ್ಕಿಯನ್ನು ಶುದ್ಧವಾಗಿ ತೊಳೆದು, ಕನಿಷ್ಠ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.*ಒಂದು ಮಿಕ್ಸಿ ಜಾರ್&zwnj;ಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿ ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ. ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಪೇಸ್ಟ್&zwnj;ನಂತೆ ರುಬ್ಬಿ ಪಕ್ಕಕ್ಕೆ ಇಡಿ.*ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟು, ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ ಮತ್ತು ಚಕ್ರಮೊಗ್ಗು ಹಾಕಿ ಘಮ ಬರುವವರೆಗೆ ಹುರಿಯಿರಿ.*ಈಗ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ 2-3 ನಿಮಿಷ ಹುರಿಯಿರಿ. ನಂತರ ಟೊಮೆಟೊ, ಕರಿಬೇವಿನ ಸೊಪ್ಪು ಮತ್ತು ಕಡಲೆಕಾಯಿ ಬೀಜಗಳನ್ನು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬಾಡಿಸಿ.*ನಂತರ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಹಸಿ ಮಸಾಲೆ ಪೇಸ್ಟ್ ಅನ್ನು ಕುಕ್ಕರ್&zwnj;ಗೆ ಹಾಕಿ, ಹಸಿ ವಾಸನೆ ಹೋಗುವವರೆಗೆ ಸುಮಾರು 2 ನಿಮಿಷಗಳ ಕಾಲ ಚೆನ್ನಾಗಿ ಎಣ್ಣೆಯಲ್ಲಿ ಫ್ರೈ ಮಾಡಿ.*ಮಸಾಲೆ ಬೆಂದ ನಂತರ ಕತ್ತರಿಸಿಟ್ಟುಕೊಂಡ ಮಿಶ್ರ ತರಕಾರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಕಪ್ ನೀರು ಸೇರಿಸಿ ಚೆನ್ನಾಗಿ ಕಲಕಿ ಕುದಿಯಲು ಬಿಡಿ.*ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿಟ್ಟ ಅಕ್ಕಿಯಲ್ಲಿರುವ ನೀರನ್ನೆಲ್ಲಾ ಸೋಸಿ ಅಕ್ಕಿಯನ್ನು ಮಾತ್ರ ಕುಕ್ಕರ್&zwnj;ಗೆ ಸೇರಿಸಿ. ನೀರು ಮತ್ತು ಅಕ್ಕಿ ಒಟ್ಟಿಗೆ ಕುದಿಯುವಾಗ, ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಸರಿಯಾಗಿ 2 ವಿಷಲ್ ಕೂಗಿಸಿ ಒಲೆ ಆಫ್ ಮಾಡಿ.*ಪ್ರೆಶರ್ ತಣ್ಣಗಾದ ನಂತರ ಮುಚ್ಚಳ ತೆರೆದು ಲಘುವಾಗಿ ಕಲಕಿದರೆ, ಘಮಘಮಿಸುವ, ಅತ್ಯಂತ ರುಚಿಕರವಾದ ಬಿಸಿಬಿಸಿಯಾದ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್ ಸವಿಯಲು ಸಿದ್ಧ!&lt;/p&gt;&lt;p&gt;ಇದನ್ನು ಗಟ್ಟಿ ಮೊಸರು ಬಜ್ಜಿ (ರಾಯ್ತಾ) ಜೊತೆ ಸವಿದರೆ ಆಹಾ... ಸ್ವರ್ಗವೇ ಧರೆಗಿಳಿದ ಅನುಭವ!&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/karnataka-special-tarkari-pulao-recipe-quick-and-easy-pressure-cooker-rice/articleshow-8hqh4wo"/>
        </item>
        <item>
            <title><![CDATA[​'ನಿನ್ನ ಕೈ ಅಡುಗೆ ಬೇಡ' ಎಂದವನಿಗೆ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳ ಪಟ್ಟಿ ತೋರಿಸಿ ಸುಮ್ಮನಾಗಿಸಿದ ಶೆಫ್!]]></title>
            <link>https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y</link>
            <guid isPermaLink="true">https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y</guid>
            <pubDate>Fri, 11 Sep 2026 19:38:24 +0530</pubDate>
            <description><![CDATA[ಅಡುಗೆ ವಿಡಿಯೋ ಹಂಚಿಕೊಂಡಿದ್ದ ಶೆಫ್ ಒಬ್ಬರಿಗೆ ನೆಟ್ಟಿಗನೊಬ್ಬ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು ‘ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ತಿನ್ನಲ್ಲ’ ಎಂಬ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. ಇದಕ್ಕೆ ಶೆಫ್ ಆತ್ಮಗೌರವದಿಂದ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಣ್ಣದ ಆಧಾರದ ತಾರತಮ್ಯದ ಬಗ್ಗೆ ಚರ್ಚೆ ಹುಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27k7tqmrmfq6qm5me89mv8h,imgname-chef-karthikeyan-selvaraj-1789108939508.jpg" type="image/jpeg" height="390" width="690"/>
            <content:encoded><![CDATA[&lt;h2&gt;&lsquo;ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ತಿನ್ನಲ್ಲ&rsquo; ಎಂದ ನೆಟ್ಟಿಗ!&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ಆಹಾರ ತಯಾರಿಸುವ ವಿಡಿಯೋಗಳು ವೈರಲ್ ಆಗುವುದು ಸಾಮಾನ್ಯ. ರುಚಿಕರವಾದ ಅಡುಗೆ, ವಿಭಿನ್ನ ರೆಸಿಪಿ ಮತ್ತು ಅಡುಗೆ ಮಾಡುವ ಶೈಲಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಕೆಲವೊಮ್ಮೆ ಆಹಾರ ಅಥವಾ ಪ್ರತಿಭೆಯ ಬದಲು ವ್ಯಕ್ತಿಯ ರೂಪ, ಚರ್ಮದ ಬಣ್ಣದಂತಹ ವೈಯಕ್ತಿಕ ವಿಚಾರಗಳೇ ಟ್ರೋಲ್&zwnj;ಗಳ ಗುರಿಯಾಗುತ್ತವೆ. ಇದೀಗ ಶೆಫ್ ಒಬ್ಬರಿಗೂ ಇದೇ ರೀತಿಯ ಅನುಭವವಾಗಿದ್ದು, ಅವರ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.&lt;/p&gt;&lt;p&gt;&lt;strong&gt;ಆಹಾರದ ವಿಡಿಯೋಗೆ ಬಂತು ವೈಯಕ್ತಿಕ ಕಾಮೆಂಟ್&lt;/strong&gt;&lt;/p&gt;&lt;p&gt;ಶೆಫ್ ಹಂಚಿಕೊಂಡಿದ್ದ ಅಡುಗೆ ಸಂಬಂಧಿತ ವಿಡಿಯೋವೊಂದಕ್ಕೆ ನೆಟ್ಟಿಗನೊಬ್ಬ ಆಹಾರದ ಗುಣಮಟ್ಟದ ಬಗ್ಗೆ ಮಾತನಾಡುವ ಬದಲು, ಶೆಫ್&zwnj;ನ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. &ldquo;ನಿಮ್ಮ ಕೈಯಲ್ಲಿ ಮಾಡಿದ ಅಡುಗೆ ನಾನು ತಿನ್ನಲ್ಲ&rdquo; ಎಂಬ ರೀತಿಯ ಮಾತುಗಳು ಚರ್ಚೆಗೆ ಕಾರಣವಾಗಿವೆ.&lt;/p&gt;&lt;p&gt;&lt;strong&gt;ಚರ್ಮದ ಬಣ್ಣದ ಆಧಾರದ ಮೇಲೆ ಟೀಕೆ ಏಕೆ?&lt;/strong&gt;&lt;/p&gt;&lt;p&gt;ಒಬ್ಬ ವ್ಯಕ್ತಿಯ ಚರ್ಮದ ಬಣ್ಣಕ್ಕೂ ಅವರ ಸಾಮರ್ಥ್ಯ, ವ್ಯಕ್ತಿತ್ವ ಅಥವಾ ಅವರು ತಯಾರಿಸುವ ಆಹಾರದ ಗುಣಮಟ್ಟಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರೂಪ ಅಥವಾ ಬಣ್ಣದ ಆಧಾರದ ಮೇಲೆ ಇತರರನ್ನು ಅವಮಾನಿಸುವುದು ಕಂಡುಬರುತ್ತದೆ. ಇಂತಹ ಕಾಮೆಂಟ್&zwnj;ಗಳು ಕೇವಲ ಒಬ್ಬ ವ್ಯಕ್ತಿಗೆ ನೋವುಂಟು ಮಾಡುವುದಷ್ಟೇ ಅಲ್ಲ, ಸಮಾಜದಲ್ಲಿ ಇರುವ ಬಣ್ಣದ ಕುರಿತ ಪೂರ್ವಾಗ್ರಹಗಳನ್ನೂ ಪ್ರತಿಬಿಂಬಿಸುತ್ತವೆ.&lt;/p&gt;&lt;p&gt;&lt;strong&gt;ಟ್ರೋಲ್&zwnj;ಗೆ ಶೆಫ್ ಕೊಟ್ಟ ಪ್ರತಿಕ್ರಿಯೆ&lt;/strong&gt;&lt;/p&gt;&lt;p&gt;ಅವಮಾನಕಾರಿ ಕಾಮೆಂಟ್&zwnj;ಗೆ ಕೋಪದಿಂದ ಪ್ರತಿಕ್ರಿಯಿಸುವ ಬದಲು ಶೆಫ್ ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಅವರ ಪ್ರತಿಕ್ರಿಯೆ ಆನ್&zwnj;ಲೈನ್&zwnj;ನಲ್ಲಿ ಚರ್ಚೆಗೆ ಕಾರಣವಾಗಿದ್ದು, ಅನೇಕರು ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟೀಕೆ ಎದುರಾದಾಗ ಅದೇ ರೀತಿಯ ಅವಹೇಳನಕ್ಕೆ ಇಳಿಯದೆ, ಆತ್ಮಗೌರವದಿಂದ ಪ್ರತಿಕ್ರಿಯಿಸುವುದು ಹೇಗೆ ಎಂಬುದಕ್ಕೂ ಈ ಘಟನೆ ಉದಾಹರಣೆಯಾಗಿದೆ.&lt;/p&gt;&lt;p&gt;&lt;strong&gt;ವೈರಲ್ ವಿಡಿಯೋ ಹೇಳುವ ದೊಡ್ಡ ಸಂದೇಶ&lt;/strong&gt;&lt;/p&gt;&lt;p&gt;ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಯೊಂದು ಕಾಮೆಂಟ್ ಕೂಡ ಮತ್ತೊಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಚರ್ಮದ ಬಣ್ಣ, ದೇಹದ ಆಕಾರ, ಮುಖ ಅಥವಾ ಇತರ ವೈಯಕ್ತಿಕ ಲಕ್ಷಣಗಳನ್ನು ಗುರಿಯಾಗಿಸಿಕೊಂಡು ಮಾಡುವ ಹಾಸ್ಯ ಮತ್ತು ಟೀಕೆಗಳು ಮನರಂಜನೆಯ ವಿಷಯವಲ್ಲ.&lt;/p&gt;&lt;p&gt;ಅಡುಗೆಯ ಬಗ್ಗೆ ಇಷ್ಟವಿಲ್ಲದಿದ್ದರೆ ರುಚಿ, ವಿಧಾನ ಅಥವಾ ರೆಸಿಪಿ ಕುರಿತು ಆರೋಗ್ಯಕರ ಟೀಕೆ ಮಾಡಬಹುದು. ಆದರೆ ವ್ಯಕ್ತಿಯ ಚರ್ಮದ ಬಣ್ಣವನ್ನು ಅವಮಾನಿಸುವುದು ಯಾವುದೇ ರೀತಿಯ ರಚನಾತ್ಮಕ ಅಭಿಪ್ರಾಯವಲ್ಲ. ಈ ಘಟನೆ, ಸಾಮಾಜಿಕ ಜಾಲತಾಣ ಬಳಸುವಾಗ ಪರದೆಯ ಆಚೆಯೂ ಒಬ್ಬ ಮನುಷ್ಯ ಇದ್ದಾನೆ ಎಂಬುದನ್ನು ನೆನಪಿಸುತ್ತದೆ.&lt;/p&gt;&lt;p&gt;&lt;strong&gt;ರೂಪವಲ್ಲ, ಪ್ರತಿಭೆ ಮುಖ್ಯ&lt;/strong&gt;&lt;/p&gt;&lt;p&gt;ಒಬ್ಬ ಶೆಫ್&zwnj;ನ ಸಾಮರ್ಥ್ಯವನ್ನು ಅವರ ಚರ್ಮದ ಬಣ್ಣದಿಂದ ಅಳೆಯಲು ಸಾಧ್ಯವಿಲ್ಲ. ಉತ್ತಮ ಆಹಾರ, ಪರಿಶ್ರಮ ಮತ್ತು ಪ್ರತಿಭೆಯೇ ಅವರ ವೃತ್ತಿಪರತೆಯನ್ನು ನಿರ್ಧರಿಸಬೇಕು. ವೈರಲ್ ಆಗಿರುವ ಈ ಘಟನೆ, ಬಣ್ಣದ ಆಧಾರದ ಮೇಲಿನ ತಾರತಮ್ಯದ ವಿರುದ್ಧ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.&lt;/p&gt;View this post on Instagram&lt;p&gt;A post shared by karthi cooks | Karthikeyan Selvaraj (@imkarthi_89)&lt;/p&gt;&lt;p&gt;&lt;/p&gt;]]></content:encoded>
            <category><![CDATA[india-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/chef-trolled-over-skin-colour-and-food-choice-his-response-wins-hearts-online/articleshow-ha0a58y"/>
        </item>
        <item>
            <title><![CDATA[Amruthadhaare ಮಾಡೋದೆಲ್ಲಾ ಮಾಡಿ, ಮತ್ತೆ ದಾರಿ ತಪ್ಪಿದ ಮಲ್ಲಿ: ಅಪಾಯದಲ್ಲಿ ಭೂಮಿಕಾ]]></title>
            <link>https://kannada.asianetnews.com/gallery/tv-talk/zee-kannada-amruthadhaare-serial-malli-steps-in-to-save-bhoomika-and-jeeva-who-are-in-danger-of-being-arrested-mrq-1dhm1ll</link>
            <guid isPermaLink="true">https://kannada.asianetnews.com/gallery/tv-talk/zee-kannada-amruthadhaare-serial-malli-steps-in-to-save-bhoomika-and-jeeva-who-are-in-danger-of-being-arrested-mrq-1dhm1ll</guid>
            <pubDate>Fri, 11 Sep 2026 19:36:14 +0530</pubDate>
            <description><![CDATA[ಅಮೃತಧಾರೆ ಸೀರಿಯಲ್‌ನಲ್ಲಿ ವಿಲನ್ ಜೈದೇವ್ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೈದೇವ್ ಕೊನೆಯದಾಗಿ ಭೂಮಿಕಾ ಮತ್ತು ಜೀವಾಗೆ ಕರೆ ಮಾಡಿದ್ದರಿಂದ ಅವರಿಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28c245d53b50x4pfp0nc86s,imgname--amruthadhaare-1789134966957.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಸೀರಿಯಲ್&zwnj;ನಲ್ಲಿ ವಿಲನ್ ಜೈದೇವ್ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೈದೇವ್ ಕೊನೆಯದಾಗಿ ಭೂಮಿಕಾ ಮತ್ತು ಜೀವಾಗೆ ಕರೆ ಮಾಡಿದ್ದರಿಂದ ಅವರಿಬ್ಬರನ್ನೂ ವಿಚಾರಣೆಗೊಳಪಡಿಸಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಅಮೃತಧಾರೆ ಸೀರಿಯಲ್&lt;/strong&gt; ಇದೀಗ ವಿಲನ್ ಕೆಡಿ ಜೈದೇವ್ ಸಾವಿನ ಸುತ್ತ ಸಾಗುತ್ತಿದೆ. ಜೈದೇವ್ ಮಿಸ್ಸಿಂಗ್ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೈದೇವ್ ಕೊನೆಯ ಬಾರಿಗೆ ಜೀವಾ ಮತ್ತು ಭೂಮಿಕಾಗೆ ಕಾಲ್ ಮಾಡಿದ್ದನು. ಹಾಗಾಗಿ ಇಬ್ಬರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಪೊಲೀಸರಿಂದ ಕಾಲ್ ಬರುತ್ತಿದ್ದಂತೆ ಭಯಗೊಂಡಿರುವ ಭೂಮಿಕಾ, ಎಲ್ಲಾ ವಿಷಯಗಳನ್ನು ಮಲ್ಲಿ ಮುಂದೆ ಹೇಳಿಕೊಂಡಿದ್ದಾರೆ. ಓರ್ವ ಐಪಿಎಸ್ ಅಧಿಕಾರಿಯಾಗಿರುವ ಮಲ್ಲಿ, ಆರೋಪಿಗಳನ್ನು ಬಂಧಿಸಬೇಕಿತ್ತು. ಆದ್ರೆ ಭೂಮಿಕಾ ಮತ್ತು ಜೀವಾನನ್ನು ಕಾಪಾಡೋಕೆ ಮುಂದಾಗಿದ್ದಾಳೆ. ಮೊಬೈಲ್ ಲೋಕೇಶನ್&zwnj;ನಿಂದ ತನಿಖೆ ಅರಂಭವಾಗಿದೆ. ಹಾಗಾಗಿ ಟವರ್ ಲೋಕೇಶನ್ ರಿಶಫಲ್ ಮಾಡೋದಾಗಿ ಮಲ್ಲಿ ಹೇಳಿದ್ದಾಳೆ.&lt;/p&gt;&lt;img&gt;&lt;p&gt;ಜೈದೇವ್ ವಿರುದ್ಧ ಹನಿಟ್ರ್ಯಾಪ್ ಪ್ಲಾನ್ ಮಾಡಿದ್ದ ಮಲ್ಲಿ, ತನ್ನ ಸಹೋದ್ಯೋಗಿ ಮಧುರಾಳನ್ನು ನೇಮಿಸಿದ್ದಳು. ಇದೀಗ ಮಧುರಾ ಸಹ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೈದೇವ್ ಮಿಸ್ಸಿಂಗ್ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಶಕುಂತಲಾ ಹುಡುಕಾಟ ಆರಂಭಿಸಿದ್ದಾಳೆ. ಭೂಮಿಕಾಳನ್ನು ವಿಚಾರಣೆಗೆ ಕರೆದಿರೋದನ್ನು ತಿಳಿದು ಶಕುಂತಲಾ ಸಹ ಶಾಕ್ ಆಗಿದ್ದಾಳೆ.&lt;/p&gt;&lt;img&gt;&lt;p&gt;ಪೊಲೀಸರಿಗೆ ಕರೆ ಮಾಡಿರುವ ಶಕುಂತಲಾ, ನನ್ನ ಸೊಸೆಯನ್ನು ಯಾಕೆ ಕರೆಸುತ್ತಿದ್ದೀರಿ ಎಂದು ಕೇಳಿದಾಗ, ಜೈದೇವ್ ಕೊನೆಗೆ ಭೂಮಿಕಾಗೆ ಕಾಲ್ ಮಾಡಿದ್ದಾನೆ. ಹಾಗಾಗಿ ಅವರಿಬ್ಬರ ನಡುವೆ ಏನು ಮಾತುಕತೆ ನಡೆದಿದೆ ಎಂದು ತಿಳಿದುಕೊಳ್ಳಲು ಭೂಮಿಕಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.&lt;/p&gt;&lt;img&gt;&lt;p&gt;ಈಗಾಗಲೇ ಪೊಲೀಸರ ವಿಚಾರಣೆಯನ್ನು ಎದುರಿಸಿ ಜೀವಾ ಮನೆಗೆ ಹಿಂದಿರುಗಿದ್ದಾನೆ. ಜೀವಾ ಸಹ ಭಯಗೊಂಡಿದ್ದಾನೆ. ವಿಚಾರಣೆಗೆ ಹೊರಟಿರುವ ಭೂಮಿಕಾಗೆ ಮಲ್ಲಿ ಸಾಥ್ ನೀಡಿದ್ದಾಳೆ. ನಾನು ನಿಮ್ಮ ಜೊತೆಯಲ್ಲಿದ್ದರೆ ಸ್ವಲ್ಪ ಧೈರ್ಯವಿರುತ್ತೆ. ನಾನು ಪೊಲೀಸ್ ಠಾಣೆಯ ಹೊರಗೆ ನಿಮಗಾಗಿ ಕಾಯುತ್ತಿರುತ್ತೇನೆ ಎಂದು ಮಲ್ಲಿ ಹೇಳಿದ್ದಾಳೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/zee-kannada-amruthadhaare-serial-malli-steps-in-to-save-bhoomika-and-jeeva-who-are-in-danger-of-being-arrested-mrq-1dhm1ll"/>
        </item>
        <item>
            <title><![CDATA[ಕೋಟಿ ಹಣಕ್ಕಿಂತ ಬಡ ಜನರು ಕೊಟ್ಟ ₹10, ₹20 ಬೆಲೆ ಹೆಚ್ಚು: ಮೋಹಕ ತಾರೆ ರಮ್ಯಾ ಹೇಳಿದ್ದೇನು?]]></title>
            <link>https://kannada.asianetnews.com/sandalwood/kannada-actress-ramya-divya-spandana-powerful-words-about-fame-and-money-go-viral-gvd/articleshow-pgd835n</link>
            <guid isPermaLink="true">https://kannada.asianetnews.com/sandalwood/kannada-actress-ramya-divya-spandana-powerful-words-about-fame-and-money-go-viral-gvd/articleshow-pgd835n</guid>
            <pubDate>Fri, 11 Sep 2026 19:18:40 +0530</pubDate>
            <description><![CDATA[ಸ್ಯಾಂಡಲ್‌ವುಡ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಹಣ, ಖ್ಯಾತಿ ಶಾಶ್ವತವಲ್ಲ ಎಂದು ಹೇಳಿದ್ದಾರೆ. ಮಂಡ್ಯ ರಾಜಕೀಯ ಪ್ರಚಾರದ ವೇಳೆ ಜನರು ನೀಡಿದ ₹10, ₹20, ₹50 ನೆನಪಿಸಿಕೊಂಡ ರಮ್ಯಾ ಮಾತುಗಳು ಇದೀಗ ವೈರಲ್ ಆಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28bkq1qjq4ybyynk277fvqy,imgname-b-1789134494774.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ &lsquo;ಮೋಹಕ ತಾರೆ&rsquo; ಎಂದೇ ಖ್ಯಾತರಾಗಿರುವ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳಿಗಿಂತಲೂ ಕೆಲವೊಮ್ಮೆ ತಮ್ಮ ನೇರ ಮಾತುಗಳು ಹಾಗೂ ವಿಭಿನ್ನ ಆಲೋಚನೆಗಳಿಂದಲೇ ಗಮನ ಸೆಳೆಯುವ ರಮ್ಯಾ, ಇದೀಗ ಜೀವನ, ಹಣ, ಖ್ಯಾತಿ ಹಾಗೂ ಜನರ ಪ್ರೀತಿ ಕುರಿತು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿವೆ.&lt;/p&gt;&lt;p&gt;ಇತ್ತೀಚಿನ ಸಂಭಾಷಣೆಯೊಂದರಲ್ಲಿ ರಮ್ಯಾ ಹಂಚಿಕೊಂಡಿರುವ ಕೆಲವು ಮಾತುಗಳು ಇದೀಗ ನೆಟ್ಟಿಗರ ಗಮನ ಸೆಳೆದಿವೆ. ಅದರಲ್ಲೂ ತಮ್ಮ ರಾಜಕೀಯ ಪ್ರಚಾರದ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ ಅವರು ಹೇಳಿರುವ ಒಂದು ಸಂಗತಿ ಎಲ್ಲರ ಮನಸ್ಸು ಮುಟ್ಟಿದೆ.&lt;/p&gt;&lt;p&gt;&lt;strong&gt;&lsquo;ಫೇಮ್, ಹಣ ಯಾವುದೂ ಶಾಶ್ವತವಲ್ಲ&rsquo;&lt;/strong&gt;&lt;/p&gt;&lt;p&gt;ಹೆಸರು, ಹಣ ಹಾಗೂ ಖ್ಯಾತಿಯ ಬಗ್ಗೆ ಮಾತನಾಡಿರುವ ರಮ್ಯಾ, ಜೀವನದಲ್ಲಿ ಯಾವುದನ್ನೂ ಅತಿಯಾಗಿ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂಬ ಸಂದೇಶ ನೀಡಿದ್ದಾರೆ. ಹೆಸರು, ಹಣ ಎಲ್ಲವೂ ಬರುತ್ತೆ, ಹೋಗುತ್ತೆ. ಯಾವುದನ್ನೂ ತುಂಬಾ ಗಂಭೀರವಾಗಿ ತಗೋಬೇಡಿ ಎಂಬ ರಮ್ಯಾ ಅವರ ಮಾತು ಇದೀಗ ವೈರಲ್ ಆಗುತ್ತಿದೆ. ಜೀವನದಲ್ಲಿ ಎಷ್ಟೇ ಯಶಸ್ಸು, ಹಣ ಅಥವಾ ಖ್ಯಾತಿ ಸಿಕ್ಕರೂ ಅವು ಶಾಶ್ವತವಲ್ಲ. ಹಾಗಾಗಿ ಅವುಗಳ ಬಗ್ಗೆ ಅತಿಯಾದ ಹೆಮ್ಮೆ ಅಥವಾ ಚಿಂತೆಯ ಬದಲು ಜೀವನವನ್ನು ಸರಳವಾಗಿ ಸ್ವೀಕರಿಸಬೇಕು ಎಂಬ ಆಲೋಚನೆ ಅವರ ಮಾತಿನಲ್ಲಿದೆ.&lt;/p&gt;&lt;p&gt;&lt;strong&gt;₹10, ₹20, ₹50... ರಮ್ಯಾಗೆ ಅದೇ ದೊಡ್ಡ ಉಡುಗೊರೆ!&lt;/strong&gt;&lt;/p&gt;&lt;p&gt;ರಮ್ಯಾ ಅವರ ಮಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು ಅವರ ರಾಜಕೀಯ ಪ್ರಚಾರದ ದಿನಗಳ ನೆನಪು. ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಡ ಜನರು ತಮ್ಮ ಕೈಲಾದಷ್ಟು ಹಣವನ್ನು ಪ್ರೀತಿಯಿಂದ ನೀಡುತ್ತಿದ್ದರಂತೆ. ಕೆಲವರು ₹10, ₹20, ₹50 ಹೀಗೆ ಸಣ್ಣ ಮೊತ್ತವನ್ನು ಕೊಡುತ್ತಿದ್ದರು ಎಂದು ರಮ್ಯಾ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಆದರೆ ಆ ಹಣದ ಬೆಲೆ ಅದರ ಮೊತ್ತದಲ್ಲಿರಲಿಲ್ಲ. ಜನರು ತಮ್ಮ ಕಷ್ಟದ ದುಡಿಮೆಯಿಂದ, ಪ್ರೀತಿಯಿಂದ ನೀಡುತ್ತಿದ್ದ ಆ ಹಣವೇ ತಮ್ಮ ಜೀವನದಲ್ಲಿ ಪಡೆದ ಅತ್ಯಂತ ದುಬಾರಿ ವಸ್ತು ಎಂಬ ಭಾವನೆಯನ್ನು ರಮ್ಯಾ ಹಂಚಿಕೊಂಡಿದ್ದಾರೆ. ಹಣದ ಮೌಲ್ಯಕ್ಕಿಂತ ಅದರ ಹಿಂದಿರುವ ಪ್ರೀತಿ ಮತ್ತು ಭಾವನೆ ಮುಖ್ಯ ಎಂಬುದನ್ನು ರಮ್ಯಾ ಅವರ ಈ ಮಾತುಗಳು ಸಾರುತ್ತವೆ.&lt;/p&gt;&lt;p&gt;&lt;strong&gt;ಮಂಡ್ಯದ ಆ ದಿನಗಳನ್ನು ನೆನಪಿಸಿಕೊಂಡ ರಮ್ಯಾ&lt;/strong&gt;&lt;/p&gt;&lt;p&gt;ಸಿನಿಮಾ ಕ್ಷೇತ್ರದಲ್ಲಿ ಹಲವು ಯಶಸ್ವಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಮ್ಯಾ, ರಾಜಕೀಯದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ಅವರು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಾಮಾನ್ಯ ಜನರೊಂದಿಗೆ ಬೆರೆತಿದ್ದ ದಿನಗಳನ್ನು ಇದೀಗ ನೆನಪಿಸಿಕೊಂಡಿದ್ದಾರೆ.&lt;/p&gt;&lt;p&gt;ಜನರೊಂದಿಗೆ ನೇರವಾಗಿ ಬೆರೆತು, ಅವರ ಪ್ರೀತಿ ಮತ್ತು ಅಭಿಮಾನವನ್ನು ಹತ್ತಿರದಿಂದ ಕಂಡ ಅನುಭವವೇ ಇಂದಿಗೂ ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂಬುದನ್ನು ಅವರ ಮಾತುಗಳು ತೋರಿಸುತ್ತವೆ.ಸದ್ಯ ಸಿನಿಮಾ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ರಮ್ಯಾ, ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಇದು ಇತ್ತೀಚೆಗೆ ಕೇಳಿದ ಅತ್ಯುತ್ತಮ ಮಾತು&rsquo; ಎಂದ ನೆಟ್ಟಿಗರು&lt;/strong&gt;&lt;/h2&gt;&lt;p&gt;ರಮ್ಯಾ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಹಣ ಮತ್ತು ಖ್ಯಾತಿಗಿಂತ ಜನರ ಪ್ರೀತಿಗೆ ಅವರು ನೀಡಿರುವ ಮಹತ್ವವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇನ್&zwnj;ಸ್ಟಾಗ್ರಾಂನಲ್ಲಿ ಕಂಡ ಅತ್ಯುತ್ತಮ ಸಂಭಾಷಣೆಗಳಲ್ಲಿ ಇದು ಒಂದು. ಅವರ ಧ್ವನಿ ಮತ್ತು ಆಲೋಚನೆಗಳು ತುಂಬಾ ಶಕ್ತಿಶಾಲಿಯಾಗಿವೆ ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಇನ್ನೂ ಹಲವರು ರಮ್ಯಾ ಅವರ ಸರಳತೆ ಹಾಗೂ ಜೀವನದ ಕುರಿತಾದ ದೃಷ್ಟಿಕೋನವನ್ನು ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ, ಹಣ, ಹೆಸರು, ಖ್ಯಾತಿ ಎಲ್ಲವೂ ಒಂದು ಹಂತದಲ್ಲಿ ಬಂದು ಹೋಗಬಹುದು. ಆದರೆ ಜನರು ಪ್ರೀತಿಯಿಂದ ನೀಡುವ ಒಂದು ಸಣ್ಣ ಕಾಣಿಕೆಯ ಹಿಂದಿರುವ ಭಾವನೆ ಮಾತ್ರ ಎಂದಿಗೂ ಮರೆಯಲಾಗದು ಎಂಬ ಸಂದೇಶವನ್ನು ರಮ್ಯಾ ಅವರ ಈ ಮಾತುಗಳು ಮತ್ತೊಮ್ಮೆ ನೆನಪಿಸಿವೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/kannada-actress-ramya-divya-spandana-powerful-words-about-fame-and-money-go-viral-gvd/articleshow-pgd835n"/>
        </item>
        <item>
            <title><![CDATA[Happy Life ನಿಮ್ಮದಾಗಬೇಕೆ? ಆಧ್ಯಾತ್ಮ ಸೇರಿ ಈ 5 ರೂಲ್ಸ್ ಪ್ರತಿದಿನ ಫಾಲೋ ಮಾಡಿ]]></title>
            <link>https://kannada.asianetnews.com/gallery/health-life/5-life-changing-daily-habits-for-happy-life-ubxovqo</link>
            <guid isPermaLink="true">https://kannada.asianetnews.com/gallery/health-life/5-life-changing-daily-habits-for-happy-life-ubxovqo</guid>
            <pubDate>Fri, 11 Sep 2026 19:14:42 +0530</pubDate>
            <description><![CDATA[Happy Life: ಸಂತೋಷಕ್ಕೆ ಸಂಪತ್ತು ಅಥವಾ ಐಷಾರಾಮಿ ಜೀವನಶೈಲಿ ಅತ್ಯಗತ್ಯವಲ್ಲ. ಕುಟುಂಬ, ಸ್ನೇಹಿತರು, ಅರ್ಥಪೂರ್ಣ ಕೆಲಸ ಮತ್ತು ಆಧ್ಯಾತ್ಮಿಕ ಸಂಪರ್ಕ ನಮ್ಮ ಸಂತೋಷವನ್ನು ಹೆಚ್ಚಿಸುತ್ತವೆ. ಹೆಚ್ಚು ಸಂತೋಷ ಮತ್ತು ತೃಪ್ತಿದಾಯಕ ಜೀವನ ನಡೆಸಲು ನಿಮಗೆ ಸಹಾಯ ಮಾಡುವ 5 ದೈನಂದಿನ ಅಭ್ಯಾಸಗಳನ್ನು ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m28bagq6h7mm1ygpzswpd8dy,imgname-happy-life-1789134193381.jpg" type="image/jpeg" height="390" width="690"/>
            <content:encoded><![CDATA[&lt;p&gt;Happy Life: ಸಂತೋಷಕ್ಕೆ ಸಂಪತ್ತು ಅಥವಾ ಐಷಾರಾಮಿ ಜೀವನಶೈಲಿ ಅತ್ಯಗತ್ಯವಲ್ಲ. ಕುಟುಂಬ, ಸ್ನೇಹಿತರು, ಅರ್ಥಪೂರ್ಣ ಕೆಲಸ ಮತ್ತು ಆಧ್ಯಾತ್ಮಿಕ ಸಂಪರ್ಕ ನಮ್ಮ ಸಂತೋಷವನ್ನು ಹೆಚ್ಚಿಸುತ್ತವೆ. ಹೆಚ್ಚು ಸಂತೋಷ ಮತ್ತು ತೃಪ್ತಿದಾಯಕ ಜೀವನ ನಡೆಸಲು ನಿಮಗೆ ಸಹಾಯ ಮಾಡುವ 5 ದೈನಂದಿನ ಅಭ್ಯಾಸಗಳನ್ನು ತಿಳಿಯಿರಿ.&lt;/p&gt;&lt;img&gt;&lt;p&gt;ಕಠಿಣ ಸಂದರ್ಭಗಳಲ್ಲೂ ಕೆಲವರು ಸಂತೋಷದಿಂದ ಮತ್ತು ಸಕಾರಾತ್ಮಕವಾಗಿರುವುದನ್ನು, ಆದರೆ ಇನ್ನು ಕೆಲವರು ಸಣ್ಣಪುಟ್ಟ ವಿಷಯಗಳಿಗೂ ಬೇಸರಗೊಳ್ಳುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಸಂತೋಷವಾಗಿರುವವರನ್ನು ಇತರರಿಗಿಂತ ಭಿನ್ನವಾಗಿಸುವುದು ಯಾವುದು? ಅವರ ಸಂತೋಷವು ಕೇವಲ ಅದೃಷ್ಟದ ವಿಷಯವೇ ಅಥವಾ ಅದರ ಹಿಂದೆ ನಿರ್ದಿಷ್ಟ ಕಾರಣವಿದೆಯೇ? ನಿಮ್ಮ ಸಂತೋಷವನ್ನು ಹೆಚ್ಚಿಸಲು ಐದು ಸರಳ ಸೂತ್ರಗಳು ಇಲ್ಲಿದೆ.&lt;/p&gt;&lt;img&gt;&lt;p&gt;ಕುಟುಂಬವು ನಮ್ಮ ಜೀವನದ ಅತ್ಯಂತ ಬಲವಾದ ಅಡಿಪಾಯವಾಗಿದೆ. ಅದು ನಮಗೆ ಬೇಷರತ್ತಾದ ಪ್ರೀತಿ ಮತ್ತು ಆಪ್ತತೆಯ ಭಾವನೆಯನ್ನು ನೀಡುತ್ತದೆ. ಜೀವನದಲ್ಲಿ ಏಳುಬೀಳುಗಳು ಎದುರಾದಾಗ, ಹಡಗನ್ನು ಲಂಗರು ಹಿಡಿದಿಟ್ಟುಕೊಳ್ಳುವಂತೆ ಕುಟುಂಬವು ನಮಗೆ ಸ್ಥಿರತೆಯನ್ನು ನೀಡುತ್ತದೆ. ಕುಟುಂಬದೊಂದಿಗೆ ಕಳೆಯುವ ಸಮಯ ಮತ್ತು ಅವರ ಸಾನ್ನಿಧ್ಯವು ನಮ್ಮಲ್ಲಿ ಮಾನಸಿಕ ದೃಢತೆ ಹಾಗೂ ಸಂತೋಷವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಪ್ರತಿದಿನ ನಿಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯವನ್ನು ಕಳೆಯುವುದನ್ನು ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಯಾವುದೇ ಸ್ವಾರ್ಥವಿಲ್ಲದೆ ನಮ್ಮನ್ನು ಪ್ರೀತಿಸುವವರೇ ನಿಜವಾದ ಸ್ನೇಹಿತರು. ಭೌತಿಕ ಯಶಸ್ಸಿನಿಂದ ಸಾಧಿಸಲಾಗದಂತಹ ವಿಷಯಗಳನ್ನು ಒಬ್ಬ ಒಳ್ಳೆಯ ಸ್ನೇಹಿತ ಸುಲಭವಾಗಿ ಸಾಧಿಸಬಲ್ಲ. ಸಂತೋಷದ ಕ್ಷಣಗಳಲ್ಲಿ ನಮ್ಮ ನಗುವಿನಲ್ಲಿ ಭಾಗಿಯಾಗುವ ಒಳ್ಳೆಯ ಸ್ನೇಹಿತರು, ದುಃಖದ ಸಮಯದಲ್ಲಿ ನಮಗೆ ಬೆಂಬಲವಾಗಿ ನಿಂತು ಧೈರ್ಯ ತುಂಬುತ್ತಾರೆ. ಆದರೆ, ನಿಜವಾದ ಸ್ನೇಹವು ತಾನಾಗಿಯೇ ರೂಪುಗೊಳ್ಳುವುದಿಲ್ಲ ಎಂಬುದನ್ನು ನೆನಪಿಡಿ; ಅದಕ್ಕೆ ನಿರಂತರ ಕಾಳಜಿ, ನಂಬಿಕೆ ಮತ್ತು ಪರಸ್ಪರ ಸಂವಹನದ ಅಗತ್ಯವಿರುತ್ತದೆ. ಸೂಕ್ತ ಸ್ನೇಹಿತರ ಬಳಗವು ಕುಟುಂಬದಂತೆಯೇ ನಮ್ಮ ಜೀವನವನ್ನು ಉಜ್ವಲಗೊಳಿಸುತ್ತದೆ.&lt;/p&gt;&lt;img&gt;&lt;p&gt;ಕೇವಲ ಹಣ ಮತ್ತು ಯಶಸ್ಸು ಜೀವನವನ್ನು ಪರಿಪೂರ್ಣವಾಗಿಸುವುದಿಲ್ಲ. ನಿಮ್ಮ ಕೆಲಸವು ಅರ್ಥಪೂರ್ಣವಾಗಿದೆ ಮತ್ತು ನಿರ್ದಿಷ್ಟ ಉದ್ದೇಶಕ್ಕೆ ಅನುಗುಣವಾಗಿದೆ ಎಂದು ನಿಮಗೆ ಅನ್ನಿಸಿದಾಗ, ನೀವು ಆಳವಾದ ಆಂತರಿಕ ತೃಪ್ತಿಯನ್ನು ಅನುಭವಿಸುತ್ತೀರಿ. ಆದ್ದರಿಂದ, ನಿಮ್ಮ ಕೆಲಸವನ್ನು ಕೇವಲ ಒಂದು ಜವಾಬ್ದಾರಿ ಎಂದು ಭಾವಿಸಬೇಡಿ. ಅದರಲ್ಲಿ ಅರ್ಥ, ಯಾವುದಾದರೂ ಪಾಠ ಅಥವಾ ಸಾಧನೆಯ ಭಾವನೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಸಣ್ಣಪುಟ್ಟ ಯಶಸ್ಸಿಗೂ ನಿಮ್ಮನ್ನು ನೀವು ಮೆಚ್ಚಿಕೊಳ್ಳಿ; ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಜೀವನದ ಬಗ್ಗೆ ತೃಪ್ತಿಯ ಭಾವನೆಯನ್ನು ಮೂಡಿಸುತ್ತದೆ.&lt;/p&gt;&lt;img&gt;&lt;p&gt;ಸಂತೋಷದ ಜೀವನಕ್ಕೆ ಕೇವಲ ಕುಟುಂಬ, ಸ್ನೇಹಿತರು ಮತ್ತು ಕೆಲಸವಷ್ಟೇ ಸಾಲದು; ನಮಗಿಂತಲೂ ವಿಶಾಲವಾದದ್ದೊಂದು ಜಗತ್ತಿದೆ ಎಂಬ ಭಾವನೆಯೂ ನಮಗೆ ಅಗತ್ಯ. ಇಂತಹ ಸಂಪರ್ಕದ ಭಾವನೆಯು ಧರ್ಮ ಅಥವಾ ಆಧ್ಯಾತ್ಮಿಕತೆಯಿಂದ, ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯುವುದರಿಂದ, ಅಥವಾ ಜೀವನದ ಆಳವಾದ ಉದ್ದೇಶ ಅಥವಾ ತತ್ವಚಿಂತನೆಯಿಂದ ಮೂಡಬಹುದು. ವಿಶಾಲವಾದ ಆಕಾಶವನ್ನು ನೋಡುವುದು, ಪ್ರಕೃತಿಯ ನಡುವೆ ಕಾಲ ಕಳೆಯುವುದು ಅಥವಾ ಶಾಂತವಾಗಿ ಕುಳಿತು ಜೀವನದ ಬಗ್ಗೆ ಚಿಂತನೆ ನಡೆಸುವುದು ನಿಮಗೆ ಆಂತರಿಕ ಶಾಂತಿಯನ್ನು ನೀಡಬಲ್ಲದು. ನಮ್ಮ ಸಮಸ್ಯೆಗಳು ಜೀವನದ ಒಂದು ಸಣ್ಣ ಭಾಗವಷ್ಟೇ ಎಂದು ನಮಗೆ ಅರಿವಾದಾಗ, ಕಠಿಣ ಸನ್ನಿವೇಶಗಳ ಕುರಿತಾದ ನಮ್ಮ ದೃಷ್ಟಿಕೋನ ಬದಲಾಗತೊಡಗುತ್ತದೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ, ನಮ್ಮ ಫೋನ್&zwnj;ಗಳು ನಮ್ಮ ಸಂತೋಷಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿವೆ. ನಾವು ಕುಟುಂಬದವರೊಂದಿಗೆ ಕುಳಿತಿದ್ದರೂ ನಮ್ಮ ಗಮನ ಮೊಬೈಲ್ ಪರದೆಯ ಮೇಲೆಯೇ ಇರುತ್ತದೆ; ಸ್ನೇಹಿತರೊಂದಿಗೆ ಇದ್ದರೂ ನಾವು ಆಗಾಗ್ಗೆ ನೋಟಿಫಿಕೇಶನ್&zwnj;ಗಳನ್ನು ಪರಿಶೀಲಿಸುತ್ತಲೇ ಇರುತ್ತೇವೆ. ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯ ಬಗ್ಗೆ ಪ್ರೊಫೆಸರ್ ಬ್ರೂಕ್ಸ್ ಎಚ್ಚರಿಕೆ ನೀಡುತ್ತಾರೆ. ಸದಾ ಫೋನ್&zwnj;ನಲ್ಲೇ ಮಗ್ನರಾಗಿರುವುದು ನಮ್ಮ ಸುತ್ತಮುತ್ತಲಿನ ಜನರಿಂದ ಮತ್ತು ಅವರೊಂದಿಗಿನ ನಮ್ಮ ಸಂಬಂಧಗಳಿಂದ ನಮ್ಮನ್ನು ದೂರವಾಗಿಸಬಹುದು. ಮೊಬೈಲ್ ನಿಂದ ದೂರ ಇದ್ದರೆ, ನೀವು ಖಂಡಿತವಾಗಿಯೂ ಸುಂದರ ಸಂತೋಷದ ಜೀವನ ನಡೆಸುವಿರಿ.&lt;/p&gt;]]></content:encoded>
            <category><![CDATA[health-life]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/health-life/5-life-changing-daily-habits-for-happy-life-ubxovqo"/>
        </item>
        <item>
            <title><![CDATA[ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌]]></title>
            <link>https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx</link>
            <guid isPermaLink="true">https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx</guid>
            <pubDate>Fri, 11 Sep 2026 19:14:17 +0530</pubDate>
            <description><![CDATA[ಆಪಲ್‌ನ ಹೊಸ 'ಐಫೋನ್ ಡ್ಯುಯೋ' ಬೆಲೆಯು ಭಾರತದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್‌ನ ಫ್ರೆಷರ್ಸ್ ವಾರ್ಷಿಕ ಸಂಬಳಕ್ಕೆ ಸಮನಾಗಿದೆ ಎಂದು 'ಎಕ್ಸ್'ನಲ್ಲಿ ವೈರಲ್ ಆದ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28b8mfmh0z5v0f2pnzxnt87,imgname-it-fresher-ann-iphone-duo-1789134131700.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' (Apple) ಸಂಸ್ಥೆಯು ತನ್ನ ಚೊಚ್ಚಲ ಫೋಲ್ಡಬಲ್ ಸ್ಮಾರ್ಟ್&zwnj;ಫೋನ್ 'ಐಫೋನ್ ಡ್ಯುಯೋ' (iPhone Duo) ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆ, ಅದರ ಭಾರತದ ಪ್ರೀಮಿಯಂ ಬೆಲೆಗಳನ್ನು ಕಂಡ ತಂತ್ರಜ್ಞಾನ ಪ್ರಿಯರು ತಲೆಬಿಸಿ ಮಾಡಿಕೊಂಡಿದ್ದಾರೆ. ಪ್ರೀಮಿಯಂ ಸ್ಮಾರ್ಟ್&zwnj;ಫೋನ್&zwnj;ಗಳ ಬೆಲೆಗಳು ಎಷ್ಟು ಗಗನಕ್ಕೇರಿವೆ ಎಂದರೆ, ಪ್ರಮುಖ ಐಟಿ ಕಂಪನಿಗಳು ಪದವೀಧರ ಫ್ರೆಷರ್&zwnj;ಗಳಿಗೆ ನೀಡುವ ವಾರ್ಷಿಕ ಸ್ಯಾಲರಿ ಪ್ಯಾಕೇಜ್&zwnj;ಗೆ (Annual CTC) ಈ ಫೋನ್&zwnj;ನ ಬೆಲೆಗಳು ನೇರವಾಗಿ ಪೈಪೋಟಿ ನೀಡುತ್ತಿವೆ!&lt;/p&gt;&lt;p&gt;'ಎಕ್ಸ್'ನಲ್ಲಿ (X) ಗಗನ್ ಎಂಬುವವರು 'ಐಫೋನ್ ಡ್ಯುಯೋ' ಮಾದರಿಗಳ ಬೆಲೆಯನ್ನು ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ವಿಪ್ರೋ, ಅಕ್ಸೆಂಚರ್ ಹಾಗೂ ಇನ್ಫೋಸಿಸ್ ನೀಡುವ ಫ್ರೆಷರ್ಸ್&zwnj; ಸ್ಯಾಲರಿಗೆ ಹೋಲಿಸಿ ಮಾಡಿರುವ ಪೋಸ್ಟ್ ಈಗ ಇಂಟರ್ನೆಟ್&zwnj;ನಲ್ಲಿ ತೀವ್ರ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ವೈರಲ್ ಪೋಸ್ಟ್&zwnj;ನಲ್ಲಿರುವ ಬೆಲೆ ಹಾಗೂ ಸಂಬಳದ ಹೋಲಿಕೆ ಇಲ್ಲಿದೆ&lt;/strong&gt;&lt;/h2&gt;&lt;p&gt;&lt;strong&gt;256GB ಆವೃತ್ತಿ&lt;/strong&gt; &ndash; ₹2,99,900. ಇದು ಟಿಸಿಎಸ್ (TCS) ಕಂಪನಿಯ ಫ್ರೆಷರ್ಸ್&zwnj; ವಾರ್ಷಿಕ ಸ್ಯಾಲರಿ ಪ್ಯಾಕೇಜ್.&lt;/p&gt;&lt;p&gt;&lt;strong&gt;512GB ಆವೃತ್ತಿ &lt;/strong&gt;&ndash; ₹3,24,900 ಇದು ವಿಪ್ರೋ (Wipro) ಸಂಸ್ಥೆಗೆ ಸೇರುವ ಫ್ರೆಶರ್&zwnj; ಉದ್ಯೋಗಿಯ ವಾರ್ಷಿಕ ವೇತನ.&lt;/p&gt;&lt;p&gt;&lt;strong&gt;1TB ಆವೃತ್ತಿ &lt;/strong&gt;&ndash; ₹3,74,900. ಇದು ಅಕ್ಸೆಂಚರ್ (Accenture) ಕಂಪನಿಯ ವೇರಿಯೇಬಲ್ ಪೇ ಸೇರಿದಂತೆ ಸಿಗುವ ವಾರ್ಷಿಕ ವೇತನ.&lt;/p&gt;&lt;p&gt;&lt;strong&gt;2TB ಆವೃತ್ತಿ &lt;/strong&gt;&ndash; ₹4,49,900. ಇದು ಇನ್ಫೋಸಿಸ್ (Infosys) ಸಂಸ್ಥೆಯ ಆರಂಭಿಕ ಹಂತದ ಫ್ರೆಷರ್ಸ್&zwnj; ವಾರ್ಷಿಕ ಸಿಟಿಸಿ.&lt;/p&gt;&lt;h2&gt;&lt;strong&gt;ಫೋನ್ ಸ್ಪೆಸಿಫಿಕೇಶನ್ ವರ್ಸಸ್ ವಾಸ್ತವ ಬಜೆಟ್&lt;/strong&gt;&lt;/h2&gt;&lt;p&gt;ನಿಮ್ಮ ಸ್ಮಾರ್ಟ್&zwnj;ಫೋನ್&zwnj;ನ ಆರಂಭಿಕ ಬೆಲೆಯೇ ಒಬ್ಬ ಐಟಿ ಫ್ರೆಷರ್&zwnj;ನ ವಾರ್ಷಿಕ ಸಿಟಿಸಿಯಂತೆ (CTC) ಕಾಣಲು ಪ್ರಾರಂಭಿಸಿದಾಗ, ವಿಷಯಗಳು ನಿಜಕ್ಕೂ ಗಂಭೀರ ಹಂತಕ್ಕೆ ತಲುಪಿವೆ ಎಂಬುದು ಅರಿವಾಗುತ್ತದೆ ಎಂದು ವೈರಲ್ ಪೋಸ್ಟ್ ತಮಾಷೆಯಾಗಿ ಚಾಟಿ ಬೀಸಿದೆ.&lt;/p&gt;&lt;p&gt;ಒಂದು ಕಾಲದಲ್ಲಿ ಸ್ಮಾರ್ಟ್&zwnj;ಫೋನ್ ಖರೀದಿಸುವಾಗ ಇದರ ಸ್ಪೆಸಿಫಿಕೇಶನ್&zwnj;ಗಳು ಮತ್ತು ಫೀಚರ್&zwnj;ಗಳು ಏನೇನಿವೆ? ಎಂದು ರಿಸರ್ಚ್ ಮಾಡುತ್ತಿದ್ದ ಜನ, ಇಂದು ಪ್ರೀಮಿಯಂ ಫೋನ್&zwnj;ಗಳ ಬೆಲೆ ನೋಡಿ &quot;ಇದನ್ನು ಕೊಳ್ಳಲು ನನ್ನಿಂದ ನಿಜಕ್ಕೂ ಸಾಧ್ಯವೇ?&quot; ಎಂದು ಯೋಚಿಸುವ ಸ್ಥಿತಿಗೆ ತಲುಪಿದ್ದಾರೆ. &quot;ಒಂದು ಇಡೀ ವರ್ಷ ಕಷ್ಟಪಟ್ಟು ದುಡಿದ ಸಂಪೂರ್ಣ ಸಂಬಳವನ್ನು ಕೇವಲ ಒಂದೇ ಒಂದು ಸ್ಮಾರ್ಟ್&zwnj;ಫೋನ್ ಖರೀದಿಸಲು ನೀವು ಖರ್ಚು ಮಾಡುತ್ತೀರಾ?&quot; ಎಂಬ ಪ್ರಶ್ನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;p&gt;ಐಟಿ ವಲಯದಲ್ಲಿ ಇಂದಿಗೂ ಆರಂಭಿಕ ಹಂತದ ವೇತನಗಳು ಹತ್ತಾರು ವರ್ಷಗಳಿಂದ ಗಣನೀಯವಾಗಿ ಏರಿಕೆಯಾಗದಿರುವುದು ಮತ್ತು ಇನ್ನೊಂದೆಡೆ ಪ್ರೀಮಿಯಂ ತಂತ್ರಜ್ಞಾನದ ಬೆಲೆ ಕಲ್ಪನೆಗೂ ಮೀರಿದ ವೇಗದಲ್ಲಿ ಗಗನಕ್ಕೇರುತ್ತಿರುವುದನ್ನು ಈ ವೈರಲ್ ಪೋಸ್ಟ್ ಅತ್ಯಂತ ರೋಚಕವಾಗಿ ಹಾಗೂ ಹಾಸ್ಯಾಸ್ಪದವಾಗಿ ಪ್ರತಿಬಿಂಬಿಸಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Santosh Naik</dc:creator>
            <atom:link href="https://kannada.asianetnews.com/viral/iphone-duo-price-vs-it-fresher-salary-viral-post-san/articleshow-2drwetx"/>
        </item>
        <item>
            <title><![CDATA[Viral News: ನೆಟ್‌ವರ್ಕ್ ಸಿಗಲಿಲ್ಲವೆಂದು Jio ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಚಚ್ಚಿದ ನೆಟ್ಟಿಗರು!]]></title>
            <link>https://kannada.asianetnews.com/viral/jio-employee-assault-fatehpur-uttar-pradesh-5g-network-problem-villager-tied-staff-to-pole-viral-video-bmk/articleshow-26xtg9k</link>
            <guid isPermaLink="true">https://kannada.asianetnews.com/viral/jio-employee-assault-fatehpur-uttar-pradesh-5g-network-problem-villager-tied-staff-to-pole-viral-video-bmk/articleshow-26xtg9k</guid>
            <pubDate>Fri, 11 Sep 2026 19:10:10 +0530</pubDate>
            <description><![CDATA[ಉತ್ತರ ಪ್ರದೇಶದ ಫತೇಪುರ್‌ನಲ್ಲಿ 5G ನೆಟ್‌ವರ್ಕ್ ಸಮಸ್ಯೆಯಿಂದ ಕೋಪಗೊಂಡ ಗ್ರಾಮಸ್ಥರು, ಜಿಯೋ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೌಕರನನ್ನು ರಕ್ಷಿಸಿ, ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28b3s27dj1hq0y6rpmkq59j,imgname-jio-employee-1789133972551.jpg" type="image/jpeg" height="390" width="690"/>
            <content:encoded><![CDATA[&lt;p&gt;ಫತೇಪುರ್ (ಉತ್ತರ ಪ್ರದೇಶ); ಮೊಬೈಲ್&zwnj;ನಲ್ಲಿ ನೆಟ್&zwnj;ವರ್ಕ್ ಸಿಗುತ್ತಿಲ್ಲ, ಕರೆಗಳು ಸರಿಯಾಗಿ ಸಂಪರ್ಕಗೊಳ್ಳುತ್ತಿಲ್ಲ ಅಥವಾ ಇಂಟರ್ನೆಟ್ ವೇಗ ಕಡಿಮೆಯಾಗಿದೆ ಎಂದು ಕಂಪನಿಯ ಕಸ್ಟಮರ್ ಕೇರ್&zwnj;ಗೆ ಕರೆ ಮಾಡಿ ದೂರು ನೀಡುವುದನ್ನು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುವುದನ್ನು ನಾವು ನೋಡಿದ್ದೇವೆ. ಆದರೆ, 5G ನೆಟ್&zwnj;ವರ್ಕ್ ಸಿಗುತ್ತಿಲ್ಲ ಎಂಬ ಸಿಟ್ಟಿಗೆ ಗ್ರಾಮಸ್ಥರೆಲ್ಲರೂ ಸೇರಿ ಟೆಲಿಕಾಂ ಕಂಪನಿಯ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ ವಿಚಿತ್ರ ಮತ್ತು ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;5G ನೆಟ್&zwnj;ವರ್ಕ್ ಕೈಕೊಟ್ಟಿದ್ದೇ ಸಿಟ್ಟಿಗೆ ಕಾರಣ!&lt;/strong&gt;&lt;/h2&gt;&lt;p&gt;ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ರಿಲಯನ್ಸ್ ಜಿಯೋ (Jio) ಕಂಪನಿಯ 5G ಸೇವೆ ಕಳೆದ ಕೆಲವು ದಿನಗಳಿಂದ ತೀವ್ರ ತಾಂತ್ರಿಕ ತೊಂದರೆಗೊಳಗಾಗಿತ್ತು. ಗ್ರಾಮಸ್ಥರು ದಿನನಿತ್ಯದ ಕರೆಗಳಿಗೆ, ಆನ್&zwnj;ಲೈನ್ ಪಾವತಿಗಳಿಗೆ ಹಾಗೂ ನೆಟ್&zwnj;ವರ್ಕ್ ಆಧಾರಿತ ಕೆಲಸಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹಲವು ಬಾರಿ ಕಂಪನಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.&lt;/p&gt;&lt;h3&gt;&lt;strong&gt;ತರಾಟೆಗೆ ತೆದುಕೊಂಡ ಯುವ ಸಮೂಹ!&lt;/strong&gt;&lt;/h3&gt;&lt;p&gt;ಇದೇ ಸಂದರ್ಭದಲ್ಲಿ, ಜಿಯೋ ಕಂಪನಿಯ ತಾಂತ್ರಿಕ ಸಿಬ್ಬಂದಿಯೊಬ್ಬರು ಟವರ್&zwnj;ನ ರಿಪೇರಿ ಮತ್ತು ಪರಿಶೀಲನೆಗಾಗಿ ಗ್ರಾಮಕ್ಕೆ ಆಗಮಿಸಿದ್ದರು. ಇದನ್ನು ಗಮನಿಸಿದ ಸ್ಥಳೀಯ ಯುವಕರು ಹಾಗೂ ನೆಟ್ಟಿಗರು, ಸಿಬ್ಬಂದಿಯನ್ನು ಸುತ್ತುವರೆದು ನೆಟ್&zwnj;ವರ್ಕ್ ಸಮಸ್ಯೆಯ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು, ಆಕ್ರೋಶಗೊಂಡ ಗ್ರಾಮಸ್ಥರು ಆ ಸಿಬ್ಬಂದಿಯನ್ನು ಸ್ಥಳದಲ್ಲೇ ಇದ್ದ ಟವರ್ ಕಂಬಕ್ಕೆ ಹಗ್ಗದಿಂದ ಬಿಗಿದು ಕಟ್ಟಿಹಾಕಿದ್ದಾರೆ.&lt;/p&gt;&lt;h3&gt;&lt;strong&gt;ಕಂಬಕ್ಕೆ ಕಟ್ಟಿಹಾಕಿ ಹಲ್ಲೆ, ವಿಡಿಯೋ ವೈರಲ್!&lt;/strong&gt;&lt;/h3&gt;&lt;p&gt;ನೆಟ್&zwnj;ವರ್ಕ್ ಬಾರದ ಕೋಪದಲ್ಲಿದ್ದ ಜನರು ಸಿಬ್ಬಂದಿಗೆ ಮನಬಂದಂತೆ ಥಳಿಸಿದ್ದಾರೆ. &quot;ನಾವು ಪ್ರತಿ ತಿಂಗಳು ಸಾವಿರಾರು ರೂಪಾಯಿ ರೀಚಾರ್ಜ್ ಮಾಡುತ್ತೇವೆ. ಆದರೆ ನಿಮ್ಮ 5G ನೆಟ್&zwnj;ವರ್ಕ್ ಮಾತ್ರ ಎಲ್ಲೂ ಸಿಗುವುದಿಲ್ಲ&quot; ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಇಡೀ ಘಟನೆಯನ್ನು ಸ್ಥಳೀಯರು ತಮ್ಮ ಮೊಬೈಲ್&zwnj;ನಲ್ಲಿ ವಿಡಿಯೋ ಮಾಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಕತ್ ವೈರಲ್ ಆಗಿದೆ. ವಿಡಿಯೋದಲ್ಲಿ ನೌಕರನು ತಾನು ಕೇವಲ ತಾಂತ್ರಿಕ ನೌಕರನೆಂದು, ಸಮಸ್ಯೆ ಬಗೆಹರಿಸಲು ಬಂದಿರುವುದಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ, ಆಕ್ರೋಶಿತ ಗ್ರಾಮಸ್ಥರು ಆತನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ.&lt;/p&gt;&lt;h3&gt;&lt;strong&gt;ಪೊಲೀಸರ ಪ್ರವೇಶ ಮತ್ತು ರಕ್ಷಣೆ!&lt;/strong&gt;&lt;/h3&gt;&lt;p&gt;ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು, ಕಂಬಕ್ಕೆ ಕಟ್ಟಲಾಗಿದ್ದ ಜಿಯೋ ಸಿಬ್ಬಂದಿಯನ್ನು ರಕ್ಷಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೌಕರನ ದೂರಿನ ಆಧಾರದ ಮೇಲೆ ಕಾಯ್ದೆಯನ್ನು ಕೈಗೆತ್ತಿಕೊಂಡ ಮತ್ತು ಹಲ್ಲೆ ನಡೆಸಿದ ಗ್ರಾಮಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ಅಪರಾಧವಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ!&lt;/strong&gt;&lt;/h3&gt;&lt;p&gt;ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ ನೆಟ್ಟಿಗರು &quot;ನೆಟ್&zwnj;ವರ್ಕ್ ತೊಂದರೆಯಿಂದ ಜನರು ಎಷ್ಟರಮಟ್ಟಿಗೆ ಬೇಸತ್ತಿದ್ದಾರೆ ಎಂಬುದಕ್ಕೆ ಇದು ಉದಾಹರಣೆ&quot; ಎಂದು ಕಮೆಂಟ್ ಮಾಡುತ್ತಿದ್ದರೆ, ಇನ್ನೊಂದೆಡೆ &quot;ಸೇವೆಯಲ್ಲಿ ಲೋಪವಿದ್ದರೆ ಕಂಪನಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು, ಸಣ್ಣ ಸಂಬಳಕ್ಕೆ ಕೆಲಸ ಮಾಡುವ ಕೆಳಹಂತದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವುದು ತೀರಾ ಖಂಡನೀಯ&quot; ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/jio-employee-assault-fatehpur-uttar-pradesh-5g-network-problem-villager-tied-staff-to-pole-viral-video-bmk/articleshow-26xtg9k"/>
        </item>
        <item>
            <title><![CDATA[ಸ್ವಂತ ನೆಲದಲ್ಲೇ 'ಅತಿಥಿ'ಯಾದ ಟೀಂ ಇಂಡಿಯಾ! ಇತಿಹಾಸದಲ್ಲೇ ಮೊದಲ ಬಾರಿಗೆ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಪಾಲು!  ಯಾಕೆ ಹೀಗೆ?]]></title>
            <link>https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w</link>
            <guid isPermaLink="true">https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w</guid>
            <pubDate>Fri, 11 Sep 2026 18:50:37 +0530</pubDate>
            <description><![CDATA[ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವು ತವರಿನಲ್ಲೇ 'ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್' ಬಳಸಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುವ ಈ ಸರಣಿಯ ಅಧಿಕೃತ ಆತಿಥ್ಯವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ವಹಿಸಿರುವುದೇ ಇದಕ್ಕೆ ಕಾರಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m189gdbma4vp7gnn0rwfsttf,imgname-india-vs-afghanistan-t20-series-2026-1788058547572.gif" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಒಂದು ಅಪರೂಪದ ಘಟನೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ, ಭಾರತ ತಂಡವು ಇದೇ ಮೊದಲ ಬಾರಿಗೆ ತವರಿನಲ್ಲೇ 'ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್' ಬಳಸಲಿದೆ.&lt;/p&gt;&lt;p&gt;ಈ ಸರಣಿಯ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆದರೂ, ಇದರ ಅಧಿಕೃತ ಆತಿಥ್ಯ ವಹಿಸಿರುವುದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್. ಕ್ರಿಕೆಟ್ ನಿಯಮಗಳ ಪ್ರಕಾರ, ಆತಿಥೇಯ ತಂಡಕ್ಕೆ 'ಹೋಮ್ ಡ್ರೆಸ್ಸಿಂಗ್ ರೂಮ್' ನೀಡಬೇಕು. ಇದೇ ಕಾರಣಕ್ಕೆ, ಸರಣಿಯ ಅಧಿಕೃತ ಆಯೋಜಕರಾದ ಅಫ್ಘಾನಿಸ್ತಾನಕ್ಕೆ ಹೋಮ್ ಡ್ರೆಸ್ಸಿಂಗ್ ರೂಮ್ ಸಿಕ್ಕಿದೆ. ಭಾರತ ತಂಡವು ಅತಿಥಿಗಳ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗಿದೆ.&lt;/p&gt;&lt;p&gt;ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಮಾಜಿ ಭಾರತೀಯ ಆಟಗಾರ ರಮಣ್ ಲಾಂಬಾ ಅವರ ಹೆಸರಿನ ಹೋಮ್ ಡ್ರೆಸ್ಸಿಂಗ್ ರೂಮ್ ಅನ್ನು ಅಫ್ಘಾನ್ ಆಟಗಾರರು ಬಳಸಲಿದ್ದಾರೆ. ಹಾಗೆಯೇ, ಪ್ರಕಾಶ್ ಭಂಡಾರಿ ಅವರ ಹೆಸರಿನಲ್ಲಿರುವ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಅನ್ನು ಭಾರತೀಯ ಆಟಗಾರರು ಬಳಸಲಿದ್ದಾರೆ. ಕೇವಲ ಡ್ರೆಸ್ಸಿಂಗ್ ರೂಮ್ ಮಾತ್ರವಲ್ಲ, ಟಾಸ್ ಸೇರಿದಂತೆ ಇತರ ಅಧಿಕೃತ ಪ್ರಕ್ರಿಯೆಗಳಲ್ಲೂ ಭಾರತವನ್ನು 'ಅತಿಥಿ ತಂಡ' ಎಂದೇ ಪರಿಗಣಿಸಲಾಗುತ್ತದೆ.&lt;/p&gt;&lt;h2&gt;&lt;strong&gt;ಭಾರತದಲ್ಲಿ ನಡೆಯುವ ದ್ವಿಪಕ್ಷೀಯ ಸರಣಿಗೆ ಆಫ್ಘಾನಿಸ್ತಾನ ಏಕೆ ಆತಿಥ್ಯ?&lt;/strong&gt;&lt;/h2&gt;&lt;p&gt;ತನ್ನ ದೇಶದಲ್ಲಿ ಭದ್ರತೆ ಮತ್ತು ಮೂಲಸೌಕರ್ಯದ ಸವಾಲುಗಳಿರುವುದರಿಂದ, ಅಫ್ಘಾನಿಸ್ತಾನವು ತನ್ನ ತವರಿನ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಡುತ್ತದೆ. ಆದರೆ, ಭಾರತದ ನೆಲದಲ್ಲಿ ನಡೆಯುವ ಸರಣಿಯಲ್ಲಿ ಅಫ್ಘಾನಿಸ್ತಾನ ಅಧಿಕೃತ ಆತಿಥೇಯರಾಗುತ್ತಿರುವುದು ಮತ್ತು ಭಾರತ ತಂಡ ವಿಸಿಟಿಂಗ್ ಡ್ರೆಸ್ಸಿಂಗ್ ರೂಮ್&zwnj;ಗೆ ಸ್ಥಳಾಂತರಗೊಳ್ಳುತ್ತಿರುವುದು ಇದೇ ಮೊದಲು. ಸರಣಿಯ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ. ಸೆಪ್ಟೆಂಬರ್ 15 ಮತ್ತು 17 ರಂದು ಸರಣಿಯ ಕೊನೆಯ ಎರಡು ಪಂದ್ಯಗಳು ನಡೆಯಲಿವೆ. ಈ ಮೂರೂ ಪಂದ್ಯಗಳಿಗೆ ಅರುಣ್ ಜೇಟ್ಲಿ ಸ್ಟೇಡಿಯಂ ನಡೆಯಲಿದೆ.&lt;/p&gt;&lt;h3&gt;&lt;strong&gt;ಆಫ್ಘಾನಿಸ್ತಾನ ಎದುರಿನ ಸರಣಿಗೆ ಭಾರತ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.&lt;/p&gt;&lt;h3&gt;&lt;strong&gt;ಭಾರತ ಎದುರಿನ ಟಿ20 ಆಫ್ಘಾನಿಸ್ತಾನ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್&zwnj;ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್&zwnj;ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್&zwnj;ಝೈ, ನವೀನ್ ಉಲ್ ಹಕ್&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-afghanistan-why-team-india-will-use-the-visitors-dressing-room-in-delhi-kvn/articleshow-2nkyq5w"/>
        </item>
        <item>
            <title><![CDATA[Coriander water for hair growth: ಕೊತ್ತಂಬರಿ ಬೀಜದ ನೀರನ್ನು ಹೀಗೆ ಬಳಸಿ.. ಕೂದಲು ವೇಗವಾಗಿ ಬೆಳೆಯುತ್ತೆ!]]></title>
            <link>https://kannada.asianetnews.com/gallery/fashion/grow-hair-faster-with-coriander-water-dx3qav9</link>
            <guid isPermaLink="true">https://kannada.asianetnews.com/gallery/fashion/grow-hair-faster-with-coriander-water-dx3qav9</guid>
            <pubDate>Fri, 11 Sep 2026 18:42:58 +0530</pubDate>
            <description><![CDATA[Coriander water for hair growth: ಉದ್ದ ಹಾಗೂ ದಪ್ಪ ಕೂದಲು ಬೇಕು ಅನ್ನೋದು ಎಲ್ಲರ ಆಸೆ. ಆದರೆ, ದುಬಾರಿ ಶಾಂಪೂ, ಎಣ್ಣೆ ಬಳಸುವ ಬದಲು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕೊತ್ತಂಬರಿ ಬೀಜ ಬಳಸಿದರೆ ಸಾಕು. ಈ ಕೊತ್ತಂಬರಿ ನೀರಿನಿಂದ ಕೂದಲನ್ನು ವೇಗವಾಗಿ ಬೆಳೆಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01ggsh0eacpvfg02m534zwfhd0,imgname-antioxidants-in-coriander-water.jpg" type="image/jpeg" height="390" width="690"/>
            <content:encoded><![CDATA[&lt;p&gt;Coriander water for hair growth: ಉದ್ದ ಹಾಗೂ ದಪ್ಪ ಕೂದಲು ಬೇಕು ಅನ್ನೋದು ಎಲ್ಲರ ಆಸೆ. ಆದರೆ, ದುಬಾರಿ ಶಾಂಪೂ, ಎಣ್ಣೆ ಬಳಸುವ ಬದಲು ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಕೊತ್ತಂಬರಿ ಬೀಜ ಬಳಸಿದರೆ ಸಾಕು. ಈ ಕೊತ್ತಂಬರಿ ನೀರಿನಿಂದ ಕೂದಲನ್ನು ವೇಗವಾಗಿ ಬೆಳೆಸಬಹುದು.&lt;/p&gt;&lt;img&gt;&lt;p&gt;&lt;strong&gt;ಕೂದಲಿನ ಆರೋಗ್ಯ ಸುಧಾರಿಸಲು ಸಹಕಾರಿ&lt;/strong&gt;ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಕೊತ್ತಂಬರಿ ಬೀಜ ಇದ್ದೇ ಇರುತ್ತದೆ. ಇದನ್ನು ನಾವು ಹಲವು ಅಡುಗೆಗಳಲ್ಲಿ ಬಳಸುತ್ತೇವೆ. ಆದರೆ ಈ ಕೊತ್ತಂಬರಿ ಬೀಜ ನಮ್ಮ ಕೂದಲು ಆರೋಗ್ಯವಾಗಿ ಬೆಳೆಯಲು ಕೂಡ ಸಹಾಯ ಮಾಡುತ್ತದೆ. ಯಾಕೆಂದರೆ, ಕೊತ್ತಂಬರಿ ಬೀಜದಲ್ಲಿ ವಿಟಮಿನ್ ಎ, ಸಿ, ಕೆ ಜೊತೆಗೆ ಕಬ್ಬಿಣ, ತಾಮ್ರ, ಮೆಗ್ನೀಶಿಯಂ ಮತ್ತು ಆ್ಯಂಟಿಆಕ್ಸಿಡೆಂಟ್&zwnj;ಗಳಿವೆ. ಇವು ಕೂದಲಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.&lt;/p&gt;&lt;img&gt;&lt;p&gt;&lt;strong&gt;ನಿಯಮಿತವಾಗಿ ಈ ನೀರನ್ನು ಬಳಸಿ&lt;/strong&gt;ಕೊತ್ತಂಬರಿ ನೀರನ್ನು ಬಳಸುವುದರಿಂದ ಕೂದಲಿನ ಬುಡಗಳು ಬಲಗೊಳ್ಳುತ್ತವೆ. ಕೊತ್ತಂಬರಿಯಲ್ಲಿರುವ ಕೆಲವು ಪೋಷಕಾಂಶಗಳು ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೂದಲಿನ ಬುಡಗಳು ಗಟ್ಟಿಯಾಗುತ್ತವೆ ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಈ ನೀರಿನಲ್ಲಿ ಆ್ಯಂಟಿಆಕ್ಸಿಡೆಂಟ್&zwnj;ಗಳು ಹೇರಳವಾಗಿವೆ. ಇವು ಫ್ರೀ ರಾಡಿಕಲ್&zwnj;ಗಳಿಂದಾಗುವ ಹಾನಿಯನ್ನು ತಡೆದು, ಕೂದಲು ಸೀಳುವುದನ್ನು ಮತ್ತು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಬರುವುದನ್ನು ತಡೆಯುತ್ತದೆ. ಕೊತ್ತಂಬರಿಯಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಗಳು ಸೋಂಕು, ತುರಿಕೆ ಮತ್ತು ತಲೆಹೊಟ್ಟಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಈ ನೀರನ್ನು ಬಳಸುವುದರಿಂದ ಕೂದಲಿನ ಬುಡಗಳು ಬಲಪಡುವುದಲ್ಲದೆ, ಹೊಸ ಕೂದಲು ಬೆಳೆಯಲು ಸಹಕಾರಿಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ಈ ಕೊತ್ತಂಬರಿ ನೀರನ್ನು ಹೇಗೆ ತಯಾರಿಸಿಕೊಳ್ಳಬೇಕು?&lt;/strong&gt;ಎರಡು ಚಮಚ ಕೊತ್ತಂಬರಿ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಮರುದಿನ ಬೆಳಗ್ಗೆ ಆ ನೀರನ್ನು ಸಣ್ಣ ಉರಿಯಲ್ಲಿ 5 ರಿಂದ 10 ನಿಮಿಷಗಳ ಕಾಲ ಕುದಿಸಿ. ನೀರು ತಣ್ಣಗಾದ ನಂತರ ಅದನ್ನು ಸೋಸಿ, ಒಂದು ಸ್ಪ್ರೇ ಬಾಟಲಿಗೆ ತುಂಬಿಸಿ.&lt;/p&gt;&lt;p&gt;&lt;strong&gt;ಬಳಸುವ ವಿಧಾನ&lt;/strong&gt;ಶಾಂಪೂವಿನಿಂದ ತಲೆ ತೊಳೆದ ನಂತರ, ಕೊನೆಯಲ್ಲಿ ಈ ಕೊತ್ತಂಬರಿ ನೀರಿನಿಂದ ನೆತ್ತಿ ಮತ್ತು ಕೂದಲನ್ನು ತೊಳೆಯಿರಿ. 10-15 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಸಾಮಾನ್ಯ ನೀರಿನಿಂದ ತೊಳೆಯಬಹುದು.&lt;/p&gt;&lt;p&gt;&lt;strong&gt;ಸ್ಪ್ರೇ ಕೂಡ ಮಾಡ್ಬೋದು&lt;/strong&gt;ಸ್ಪ್ರೇ ಬಾಟಲಿ ಸಹಾಯದಿಂದ ಕೂದಲಿನ ಬುಡಗಳಿಗೆ ನೇರವಾಗಿ ಸ್ಪ್ರೇ ಮಾಡಿ, ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ವಾರದಲ್ಲಿ 2 ರಿಂದ 3 ಬಾರಿ ಹೀಗೆ ಮಾಡಬಹುದು.&lt;/p&gt;&lt;p&gt;&lt;strong&gt;ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ?&lt;/strong&gt;ಕೊತ್ತಂಬರಿ ನೀರು ಕೂದಲಿನ ಆರೋಗ್ಯಕ್ಕೆ ಸಹಕಾರಿ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಇದು ಎಲ್ಲರಿಗೂ ಒಂದೇ ರೀತಿ ಕೆಲಸ ಮಾಡದಿರಬಹುದು. ಆದರೆ, ಇದರಲ್ಲಿರುವ ವಿಟಮಿನ್&zwnj;ಗಳು ಮತ್ತು ಖನಿಜಗಳು ಕೂದಲಿಗೆ ಬಾಹ್ಯ ಪೋಷಣೆಯನ್ನು ನೀಡುತ್ತವೆ. ನಾಲ್ಕೈದು ದಿನ ಬಳಸಿ ಕೂದಲು ಬೆಳೆಯಲಿಲ್ಲ ಎಂದುಕೊಳ್ಳಬೇಡಿ. ನಿಯಮಿತವಾಗಿ ಬಳಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಆನುವಂಶಿಕ ಕೂದಲು ಉದುರುವಿಕೆ, ಹಾರ್ಮೋನ್ ಅಸಮತೋಲನ ಅಥವಾ ತೀವ್ರ ವಿಟಮಿನ್ ಕೊರತೆ ಇದ್ದಾಗ ಕೇವಲ ಈ ನೀರು ಮಾತ್ರ ಸಾಕಾಗುವುದಿಲ್ಲ. ಇತರ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಬೇಕು.&lt;/p&gt;]]></content:encoded>
            <category><![CDATA[fashion]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/fashion/grow-hair-faster-with-coriander-water-dx3qav9"/>
        </item>
        <item>
            <title><![CDATA[ಕ್ಷಿಪಣಿ, ರಾಕೆಟ್ ಅಭಿವೃದ್ಧಿಗೆ ಕ್ಲೌಡ್ ಎಐ ಬಳಸಿದ ಯೆಮೆನ್‌: ಟೆಕ್‌ ಲೋಕವನ್ನೇ ಬೆಚ್ಚಿಬೀಳಿಸಿದ ಆಂಥ್ರೋಪಿಕ್ ವರದಿ]]></title>
            <link>https://kannada.asianetnews.com/technology/anthropic-says-yemen-group-used-claude-ai-for-missile-development-san/articleshow-fefqhwk</link>
            <guid isPermaLink="true">https://kannada.asianetnews.com/technology/anthropic-says-yemen-group-used-claude-ai-for-missile-development-san/articleshow-fefqhwk</guid>
            <pubDate>Fri, 11 Sep 2026 18:38:21 +0530</pubDate>
            <description><![CDATA[ಯೆಮೆನ್ ಮೂಲದ ಗುಂಪೊಂದು 'ಆಂಥ್ರೋಪಿಕ್' ಕಂಪನಿಯ 'ಕ್ಲೌಡ್ ಎಐ' ಬಳಸಿ ಮಾರ್ಗದರ್ಶಿತ ರಾಕೆಟ್‌ಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲು ಯತ್ನಿಸಿದೆ. ಕ್ಷಿಪಣಿಗಳ ಸಾಫ್ಟ್‌ವೇರ್ ರಚನೆ ಹಾಗೂ ವಿಫಲ ಪರೀಕ್ಷೆಯ ದೋಷ ಪತ್ತೆಗೂ ಎಐ ಬಳಸಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2896sbztmqmph0ppvpvtvyn,imgname-claude-ai-for-missile-development-1789131974015.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸ್ಯಾನ್ ಫ್ರಾನ್ಸಿಸ್ಕೋ (ಸೆ.11): &lt;/strong&gt;ಜಾಗತಿಕ ಸೇನಾ ಕಾರ್ಯಕ್ರಮಗಳು ಹಾಗೂ ಸರ್ಕಾರೇತರ ಸಶಸ್ತ್ರ ಗುಂಪುಗಳು (Non-state actors) ಸುಧಾರಿತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಅತ್ಯಂತ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಉತ್ತರ ಯೆಮೆನ್ ಮೂಲದ ಗುಂಪೊಂದು ಪ್ರಮುಖ ಎಐ ಕಂಪನಿಯಾದ 'ಆಂಥ್ರೋಪಿಕ್'ನ (Anthropic) 'ಕ್ಲೌಡ್ ಎಐ' (Claude AI) ಮಾದರಿಯನ್ನು ಮಾರ್ಗದರ್ಶಿತ ರಾಕೆಟ್&zwnj;ಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳ ಅಭಿವೃದ್ಧಿಗಾಗಿ ಬಳಸಿಕೊಂಡಿರುವುದನ್ನು ಆಂಥ್ರೋಪಿಕ್ ಸಂಸ್ಥೆ ಬಹಿರಂಗಪಡಿಸಿದೆ. ಕೃತಕ ಬುದ್ಧಿಮತ್ತೆಯ ದುರ್ಬಳಕೆಯನ್ನು ಪತ್ತೆಹಚ್ಚುವ ಮತ್ತು ತಡೆಯುವ ಕುರಿತು ಗುರುವಾರ ಪ್ರಕಟಿಸಲಾದ ತನ್ನ ಇತ್ತೀಚಿನ ವರದಿಯಲ್ಲಿ ಆಂಥ್ರೋಪಿಕ್ ಈ ಆಘಾತಕಾರಿ ವಿಚಾರವನ್ನು ಉಲ್ಲೇಖಿಸಿದೆ.&lt;/p&gt;&lt;h2&gt;&lt;strong&gt;ಮೂರು ಪ್ರಮುಖ ಅಸ್ತ್ರ ಯೋಜನೆಗಳಿಗೆ ಎಐ ಬಳಕೆ&lt;/strong&gt;&lt;/h2&gt;&lt;p&gt;ವರದಿಯ ಪ್ರಕಾರ, ಯೆಮೆನ್&zwnj;ನ ಗುರುತಿಸದ ಆ ಗುಂಪು ಒಟ್ಟು ಮೂರು ಪ್ರಮುಖ ಶಸ್ತ್ರಾಸ್ತ್ರ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದರಲ್ಲಿ ಒಂದು ಮಾರ್ಗದರ್ಶಿತ ರಾಕೆಟ್ (Guided rocket), 2,000 ಕಿಲೋಮೀಟರ್&zwnj;ಗಳಿಗೂ (1,243 ಮೈಲಿ) ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯವಿದೆ ಎನ್ನಲಾದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ 'ಆರ್2000' (R2000) ಎಂಬ ಹೆಸರಿನ ಕ್ಷಿಪಣಿ ಸರಣಿ ಯೋಜನೆಗಳು ಸೇರಿವೆ.&lt;/p&gt;&lt;p&gt;ಕ್ಷಿಪಣಿಗಳ ಮಾರ್ಗದರ್ಶನ (Guidance), ನ್ಯಾವಿಗೇಷನ್ ಮತ್ತು ನಿಯಂತ್ರಣ ಸಾಫ್ಟ್&zwnj;ವೇರ್&zwnj;ಗಳನ್ನು (Control software) ಅಭಿವೃದ್ಧಿಪಡಿಸಲು ಈ ಗುಂಪು 'ಕ್ಲೌಡ್ ಎಐ' ಅನ್ನು ಬಳಸಿಕೊಂಡಿದೆ. ಸಾಮಾನ್ಯವಾಗಿ ಸಾಫ್ಟ್&zwnj;ವೇರ್ ಇಂಜಿನಿಯರ್&zwnj;ಗಳು ಮಾಡುವಂತಹ ಜಟಿಲ ಕೆಲಸಗಳನ್ನು ಈ ಎಐ ಮಾದರಿಯೇ ಮಾಡಿ ಮುಗಿಸಿತ್ತು. ತಮ್ಮ ಮಿಲಿಟರಿ ಯೋಜನೆಯು ತಂತ್ರಜ್ಞಾನ ಸಂಸ್ಥೆಯ ಕಣ್ಣಿಗೆ ಬೀಳದಂತೆ ಮತ್ತು ಭದ್ರತಾ ವ್ಯವಸ್ಥೆಯನ್ನು ತಪ್ಪಿಸಲು, ಈ ಗುಂಪು ಹಲವು ಎಐ ಸೆಷನ್&zwnj;ಗಳಲ್ಲಿ (Multiple AI sessions) ಕೆಲಸವನ್ನು ವಿಂಗಡಿಸಿ, ತಮ್ಮ ಮೂಲ ಉದ್ದೇಶವನ್ನು ಮರೆಮಾಚಿ ಅಸ್ತ್ರಗಳನ್ನು ವಿನ್ಯಾಸಗೊಳಿಸುತ್ತಿತ್ತು.&lt;/p&gt;&lt;h2&gt;&lt;strong&gt;ವಿಫಲ ರಾಕೆಟ್ ಪರೀಕ್ಷೆಯ ದೋಷ ಸರಿಪಡಿಸಲು ಎಐ ನೆರವು!&lt;/strong&gt;&lt;/h2&gt;&lt;p&gt;ಯೆಮೆನ್ ಮೂಲದ ಈ ಗುಂಪು ನೇರ ರಾಕೆಟ್ ಉಡಾವಣಾ ಪರೀಕ್ಷೆಯನ್ನು (Live rocket test) ನಡೆಸಿತ್ತು. ಆದರೆ ಆ ಪರೀಕ್ಷೆ ವಿಫಲಗೊಂಡಾಗ, ಉಡಾವಣೆ ಏತಕ್ಕಾಗಿ ವಿಫಲವಾಯಿತು ಎಂಬುದನ್ನು ವಿಶ್ಲೇಷಿಸಲು ಹಾಗೂ ದೋಷವನ್ನು ಪತ್ತೆಹಚ್ಚಲು (Diagnose) ಮತ್ತೆ ಅದೇ ಕ್ಲೌಡ್ ಎಐನ ನೆರವು ಕೋರಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಆದಾಗ್ಯೂ, ಈ ಪ್ರಯತ್ನಗಳಿಂದ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಕ್ರಿಯಾಶೀಲ ಶಸ್ತ್ರಾಸ್ತ್ರ (Operational weapon) ಸಿದ್ಧವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಕಂಪನಿ ತಿಳಿಸಿದೆ.&lt;/p&gt;&lt;p&gt;ಅಷ್ಟೇ ಅಲ್ಲದೆ, ಈ ಗುಂಪು ಆಫ್&zwnj;ಲೈನ್ ಸಿಮ್ಯುಲೇಶನ್ ಟೂಲ್&zwnj;ಕಿಟ್&zwnj;ಗಳನ್ನು (Offline simulation toolkits) ಅಭಿವೃದ್ಧಿಪಡಿಸಿಕೊಂಡಿತ್ತು. ಇದರಿಂದಾಗಿ ಕ್ಲೌಡ್ ಎಐ ಅಥವಾ ಸಾಫ್ಟ್&zwnj;ವೇರ್ ಇಂಜಿನಿಯರಿಂಗ್ ನೆಟ್&zwnj;ವರ್ಕ್ ಸಂಪರ್ಕವಿಲ್ಲದಿದ್ದರೂ ಶಸ್ತ್ರಾಸ್ತ್ರ ಅಭಿವೃದ್ಧಿಯ ಕೆಲವು ಭಾಗಗಳ ಕೆಲಸವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗುತ್ತಿತ್ತು ಎಂದು ವರದಿ ಹೇಳಿದೆ.&lt;/p&gt;&lt;h2&gt;&lt;strong&gt;ಕೆಂಪು ಸಮುದ್ರದ ಬಿಕ್ಕಟ್ಟು ಮತ್ತು ಆಂಥ್ರೋಪಿಕ್ ಕ್ರಮ&lt;/strong&gt;&lt;/h2&gt;&lt;p&gt;ಇರಾನ್ ಬೆಂಬಲಿತ ಹೂತಿ ದಂಗೆಕೋರ ಪಡೆಗಳು ಜಾಗತಿಕ ವಾಣಿಜ್ಯ ನೌಕಾಯಾನಕ್ಕೆ ಅತ್ಯಂತ ಪ್ರಮುಖ ಮಾರ್ಗವಾಗಿರುವ 'ಕೆಂಪು ಸಮುದ್ರ'ದಲ್ಲಿ (Red Sea) ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಿರಂತರವಾಗಿ ನಡೆಸುತ್ತಿರುವ ಸಮಯದಲ್ಲೇ ಆಂಥ್ರೋಪಿಕ್&zwnj;ನ ಈ ವರದಿ ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ದಂಗೆಕೋರರು ಆಯಕಟ್ಟಿನ ಬಾಬ್ ಎಲ್-ಮಂಡೆಬ್ ಜಲಸಂಧಿಯ (Bab el-Mandeb Strait) ಗಡಿಯಲ್ಲಿರುವ ಕೆಂಪು ಸಮುದ್ರದ ಕರಾವಳಿ ಪ್ರದೇಶಗಳತ್ತ ಮುನ್ನುಗ್ಗುತ್ತಿದ್ದು, ಸೌದಿ ಬೆಂಬಲಿತ ಯೆಮೆನ್ ಪಡೆಗಳು ಮತ್ತು ದಂಗೆಕೋರರ ನಡುವಿನ ಕಾಳಗ ತೀವ್ರಗೊಂಡಿದೆ. ಇರಾನ್ ಯುದ್ಧವು ಇಂಧನ ಮಾರುಕಟ್ಟೆಯನ್ನು ಕಲಕುತ್ತಿರುವುದರಿಂದ ಜಾಗತಿಕವಾಗಿ ತೈಲ ಬೆಲೆಯೂ ಏರಿಕೆಯಾಗುತ್ತಿದೆ.&lt;/p&gt;&lt;p&gt;ಪ್ರಕರಣದ ಗಂಭೀರತೆಯನ್ನು ಅರಿತಿರುವ ಆಂಥ್ರೋಪಿಕ್ ಸಂಸ್ಥೆಯು, ಈ ಅನುಮಾನಾಸ್ಪದ ಚಟುವಟಿಕೆಗೆ ಸಂಬಂಧಿಸಿದ ಎಲ್ಲಾ ಎಐ ಖಾತೆಗಳನ್ನು ತಕ್ಷಣವೇ ನಿಷೇಧಿಸಿದೆ (Ban). ಅಲ್ಲದೆ, ತನಿಖೆಯ ನಂತರ ಈ ಕುರಿತಾದ ರಕ್ಷಣಾ ಮಾಹಿತಿಯನ್ನು (Intelligence) ತನ್ನ ಪಾಲುದಾರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದು, ತನ್ನ ಎಐ ವ್ಯವಸ್ಥೆಯ ಭದ್ರತಾ ನಿಯಮಾವಳಿಗಳನ್ನು (Safeguards) ಮತ್ತಷ್ಟು ಬಿಗಿಗೊಳಿಸಿದೆ.&lt;/p&gt;]]></content:encoded>
            <category><![CDATA[technology]]></category>
            <dc:creator>Santosh Naik</dc:creator>
            <atom:link href="https://kannada.asianetnews.com/technology/anthropic-says-yemen-group-used-claude-ai-for-missile-development-san/articleshow-fefqhwk"/>
        </item>
        <item>
            <title><![CDATA[ತಿಂಗಳಿಗೆ 64 ಲಕ್ಷ ರೂಪಾಯಿ ಬಾಡಿಗೆ, ಬಿಎಂಟಿಸಿ ಕಚೇರಿಗೆ ಶಿಫ್ಟ್‌ ಆಗುವ ಪ್ಲ್ಯಾನ್‌ ಡ್ರಾಪ್‌ ಮಾಡಿದ ಬಿಡಿಎ]]></title>
            <link>https://kannada.asianetnews.com/bengaluru-urban/bda-drops-bmtc-office-plan-scouts-single-site-for-temporary-hq-san/articleshow-bpb6s5d</link>
            <guid isPermaLink="true">https://kannada.asianetnews.com/bengaluru-urban/bda-drops-bmtc-office-plan-scouts-single-site-for-temporary-hq-san/articleshow-bpb6s5d</guid>
            <pubDate>Fri, 11 Sep 2026 18:16:41 +0530</pubDate>
            <description><![CDATA[ತನ್ನ ಪ್ರಧಾನ ಕಚೇರಿಯ ಮರುಅಭಿವೃದ್ಧಿಗಾಗಿ, ಮೂರು ಬಿಎಂಟಿಸಿ ಸಂಕೀರ್ಣಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವ ಯೋಜನೆಯನ್ನು ಬಿಡಿಎ ಕೈಬಿಟ್ಟಿದೆ. ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದೀಗ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m287rn3szxczqhg111mn8850,imgname-bda-1789130462329.jfif" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11):&lt;/strong&gt; ತನ್ನ ಹಾಲಿ ಪ್ರಧಾನ ಕಚೇರಿಯನ್ನು ಕೆಡವಿ ನೂತನ ಮರುಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA), ತಾತ್ಕಾಲಿಕವಾಗಿ ತನ್ನ ಕಚೇರಿಗಳನ್ನು ಮೂರು ಬೇರೆ ಬೇರೆ ಬಿಎಂಟಿಸಿ (BMTC) ಸಂಕೀರ್ಣಗಳಿಗೆ ಸ್ಥಳಾಂತರಿಸುವ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ತನ್ನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಂದೇ ಸೂರಿನಡಿ ಸಂಯೋಜಿಸಲು ಸಾಧ್ಯವಾಗುವಂತಹ ಏಕೈಕ ಸೂಕ್ತ ಜಾಗಕ್ಕಾಗಿ ಪ್ರಾಧಿಕಾರವು ಈಗ ಹುಡುಕಾಟ ಪ್ರಾರಂಭಿಸಿದೆ.&lt;/p&gt;&lt;p&gt;ಆರಂಭದಲ್ಲಿ ಬಿಡಿಎ, ಶಾಂತಿನಗರ, ಜಯನಗರ ಮತ್ತು ಕಲಾಸಿಪಾಳ್ಯದಲ್ಲಿರುವ ಬಿಎಂಟಿಸಿ ಸಂಕೀರ್ಣಗಳಲ್ಲಿ ಸುಮಾರು 95,747 ಚದರ ಅಡಿ ಕಚೇರಿ ಜಾಗವನ್ನು ಬಾಡಿಗೆಗೆ ಪಡೆಯಲು ಪರಿಶೀಲನೆ ನಡೆಸಿತ್ತು. ನೂತನ ಕಚೇರಿ ನಿರ್ಮಾಣದ ಅವಧಿಯಲ್ಲಿ ತಾತ್ಕಾಲಿಕ ವ್ಯವಸ್ಥೆಯಾಗಿ ಇದನ್ನು ಬಳಸಲು ಯೋಜಿಸಲಾಗಿತ್ತು. ಆದರೆ ಸಿಬ್ಬಂದಿ ಮೂರು ವಿಭಿನ್ನ ಸ್ಥಳಗಳಲ್ಲಿ ಹಂಚಿಹೋಗುವುದರಿಂದ ಆಡಳಿತಾತ್ಮಕವಾಗಿ ತೊಂದರೆಯಾಗಲಿದೆ ಎಂದು ಭಾವಿಸಿದ ಬಿಡಿಎ, ಪ್ರಸ್ತುತ ಈ ಯೋಜನೆಯಿಂದ ಹಿಂದೆ ಸರಿದಿದೆ.&lt;/p&gt;&lt;h2&gt;&lt;strong&gt;63.53 ಲಕ್ಷ ರೂ. ಬಾಡಿಗೆ, 10 ಕೋಟಿ ರೂ. ಇಂಟೀರಿಯರ್ ವೆಚ್ಚ&lt;/strong&gt;&lt;/h2&gt;&lt;p&gt;ಮೂರು ಕಟ್ಟಡಗಳಿಗೆ ಬಿಎಂಟಿಸಿಯು ತಿಂಗಳಿಗೆ 63.53 ಲಕ್ಷ ರೂಪಾಯಿ ಬಾಡಿಗೆಯನ್ನು ಕೋರಿತ್ತು. ಇದರ ಜೊತೆಗೆ ಬಿಡಿಎ ಸಿಬ್ಬಂದಿಗಾಗಿ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ, ವಿದ್ಯುತ್, ಡಾಟಾ ನೆಟ್&zwnj;ವರ್ಕ್ ಕಾಮಗಾರಿಗಳು ಹಾಗೂ ಇತರ ಆಂತರಿಕ ವಿನ್ಯಾಸಗಳಿಗೆ (Interior modifications) ಅಂದಾಜು 10 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.&lt;/p&gt;&lt;p&gt;ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಬಿಎಂಟಿಸಿ ಕಟ್ಟಡಗಳ ಆಯ್ಕೆಯನ್ನು ಬದಿಗಿಟ್ಟು, ಒಂದೇ ಸ್ಥಳವನ್ನು ಹುಡುಕಲು ನಿರ್ಧರಿಸಲಾಗಿದೆ. ಈ ಮಧ್ಯೆ, ಕಚೇರಿ ನಿರ್ವಹಣೆಗಾಗಿ ತನ್ನದೇ ಆದ ಸ್ವಂತ ವಾಣಿಜ್ಯ ಸಂಕೀರ್ಣಗಳು ಅಥವಾ ಇಂದಿರಾನಗರದಲ್ಲಿರುವ 'ಕೆಯುಐಡಿಎಫ್&zwnj;ಸಿ' (KUIDFC) ಸಂಕೀರ್ಣವನ್ನು ಬಳಸಿಕೊಳ್ಳುವ ಬಗ್ಗೆಯೂ ಬಿಡಿಎ ಚಿಂತನೆ ನಡೆಸುತ್ತಿದೆ.&lt;/p&gt;&lt;h2&gt;&lt;strong&gt;ಸರ್ಕಾರದ ಅನುಮತಿಗೆ ಕಾಯುತ್ತಿರುವ ಪ್ರಾಧಿಕಾರ&lt;/strong&gt;&lt;/h2&gt;&lt;p&gt;ಕುಮಾರ ಪಾರ್ಕ್ ವೆಸ್ಟ್&zwnj;ನಲ್ಲಿರುವ ತನ್ನ ಹಾಲಿ ಪ್ರಧಾನ ಕಚೇರಿಯನ್ನು ನೆಲಸಮಗೊಳಿಸಲು ಬಿಡಿಎ ಇನ್ನು ಸಹ ರಾಜ್ಯ ಸರ್ಕಾರದಿಂದ ಅಧಿಕೃತ ಅನುಮತಿಯನ್ನು ಪಡೆದುಕೊಂಡಿಲ್ಲ. ಹಾಲಿ ಜಾಗದಲ್ಲಿ ಬಹುಮಹಡಿಯ ನೂತನ ಕಚೇರಿಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆದಾಗ್ಯೂ, ಉತ್ತಮ ಸ್ಥಿತಿಯಲ್ಲಿರುವ ಹಾಲಿ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.&lt;/p&gt;&lt;h2&gt;&lt;strong&gt;&quot;ಇದು ರಿಯಲ್ ಎಸ್ಟೇಟ್ ಹಿತಾಸಕ್ತಿಯ ಯೋಜನೆ&quot;: ಬಿ.ಎಂ. ಶಿವಶಂಕರ್ ಆರೋಪ&lt;/strong&gt;&lt;/h2&gt;&lt;p&gt;ಜಯಪ್ರಕಾಶ್ ನಾರಾಯಣ ವಿಚಾರ್ ವೇದಿಕೆಯ ಅಧ್ಯಕ್ಷ ಬಿ.ಎಂ. ಶಿವಶಂಕರ್ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, &quot;ಪ್ರಸ್ತುತ ಬಿಡಿಎ ಪ್ರಧಾನ ಕಚೇರಿ ಇರುವ ಸುಮಾರು 2.5 ಎಕರೆ ಜಾಗವು ಮೂಲತಃ 1945 ರಲ್ಲಿ ಸ್ಥಾಪನೆಯಾಗಿದ್ದ 'ಸಿಟಿ ಇಂಪ್ರೂವ್&zwnj;ಮೆಂಟ್ ಟ್ರಸ್ಟ್ ಬೋರ್ಡ್' (CITB) ಗೆ ಸೇರಿದ ಐತಿಹಾಸಿಕ ತಾಣವಾಗಿದೆ. ಇದು ಆಧುನಿಕ ಬೆಂಗಳೂರಿನ ಇತಿಹಾಸದ ಭಾಗವಾಗಿರುವ ಪರಂಪರೆಯ ತಾಣ&quot; ಎಂದು ಹೇಳಿದ್ದಾರೆ.&lt;/p&gt;&lt;p&gt;ಅಲ್ಲದೆ, ಈ ಕಟ್ಟಡ ನೆಲಸಮ ಯೋಜನೆಯ ಹಿಂದೆ ರಿಯಲ್ ಎಸ್ಟೇಟ್ ಹಿತಾಸಕ್ತಿಗಳಿರುವ ಶಂಕೆಯಿದೆ ಎಂದು ಆರೋಪಿಸಿರುವ ಅವರು, ಇತ್ತೀಚಿನ ವರ್ಷಗಳಲ್ಲಷ್ಟೇ ಅಧ್ಯಕ್ಷರ ಕೊಠಡಿ ಮತ್ತು ಗ್ಲಾಸ್&zwnj;ಹೌಸ್ ಸೇರಿದಂತೆ ಪ್ರಧಾನ ಕಚೇರಿಯ ವಿವಿಧ ಸ್ಥಳಗಳ ನವೀಕರಣಕ್ಕಾಗಿ ಬಿಡಿಎ ಕೋಟ್ಯಂತರ ರೂಪಾಯಿ ಹಣವನ್ನು ಪೋಲು ಮಾಡಿದೆ ಎಂದು ಬೆಟ್ಟು ಮಾಡಿಕೊಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಆಯುಕ್ತ ಪಿ. ಮಣಿವಣ್ಣನ್ ಸ್ಪಷ್ಟನೆ&lt;/strong&gt;&lt;/h2&gt;&lt;p&gt;ಮರುಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಕಳವಳಗಳಿಗೆ ಸ್ಪಷ್ಟನೆ ನೀಡಿರುವ ಬಿಡಿಎ ಆಯುಕ್ತ ಪಿ. ಮಣಿವಣ್ಣನ್, ಪ್ರಸ್ತಾವನೆಯು ಇನ್ನು ಪ್ರಾರಂಭಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. &quot;ನಾವು 30 ಮಹಡಿಗಳ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಇನ್ನು ಅಂತಿಮಗೊಳಿಸಿಲ್ಲ&quot; ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bda-drops-bmtc-office-plan-scouts-single-site-for-temporary-hq-san/articleshow-bpb6s5d"/>
        </item>
        <item>
            <title><![CDATA[ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ನಟಿ ವಾಮಿಕಾಗೆ BMW ಯಾಕಿಲ್ಲ? ಫ್ಯಾನ್ಸ್ ಗರಂ]]></title>
            <link>https://kannada.asianetnews.com/entertainment/kollywood-actress-wamiqa-gabbi-deserved-a-bmw-too-say-fans-after-dc-movie-success-celebration-gvd/articleshow-0cnx2wv</link>
            <guid isPermaLink="true">https://kannada.asianetnews.com/entertainment/kollywood-actress-wamiqa-gabbi-deserved-a-bmw-too-say-fans-after-dc-movie-success-celebration-gvd/articleshow-0cnx2wv</guid>
            <pubDate>Fri, 11 Sep 2026 18:16:04 +0530</pubDate>
            <description><![CDATA[‘ಡಿಸಿ’ ಸಿನಿಮಾ ಸಕ್ಸಸ್ ಬಳಿಕ ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೆ ವಾಮಿಕಾ ಗಬ್ಬಿಗೆ ಗಿಫ್ಟ್ ನೀಡದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2880z3c5tmmr9cmpxgxkvjf,imgname-bkjb-1789130734700.png" type="image/jpeg" height="390" width="690"/>
            <content:encoded><![CDATA[&lt;p&gt;ಅರುಣ್ ಮಾಥೇಶ್ವರನ್ ನಿರ್ದೇಶನದ ಹಾಗೂ ಲೋಕೇಶ್ ಕನಗರಾಜ್, ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ &lsquo;ಡಿಸಿ&rsquo; ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾದ ಸಕ್ಸಸ್ ಬೆನ್ನಲ್ಲೇ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್&zwnj;ನ ಮಾಲೀಕ ಕಲಾನಿಧಿ ಮಾರನ್ ಅವರು ಚಿತ್ರತಂಡದ ಮೂವರಿಗೆ ಹೊಚ್ಚ ಹೊಸ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರಿನ ಕೀಗಳನ್ನು ನೀಡಿರುವ ವಿಡಿಯೋವನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿತ್ತು. ಆದರೆ ಈ ಪೋಸ್ಟ್&zwnj;ನ ಕಾಮೆಂಟ್ ಸೆಕ್ಷನ್&zwnj;ನಲ್ಲಿ ವಾಮಿಕಾ ಗಬ್ಬಿಗೆ ಉಡುಗೊರೆ ನೀಡದಿರುವುದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಾಮಿಕಾಗೆ Private Jet ಕೊಡಬೇಕು!&rsquo;&lt;/strong&gt;&lt;/p&gt;&lt;p&gt;ಸಿನಿಮಾದಲ್ಲಿ ವಾಮಿಕಾ ಗಬ್ಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗ ಸಕ್ಸಸ್ ಗಿಫ್ಟ್ ಆಗಿ ಮೂವರಿಗೆ ಮಾತ್ರ BMW ಕಾರು ನೀಡಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ವಾಮಿಕಾಗೆ ಒಂದು Private Jet ಕೊಡಿ ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ.&lt;/p&gt;&lt;p&gt;ಮತ್ತೊಬ್ಬರು, ಸಿನಿಮಾ ನೋಡಿಲ್ಲ. ಆದರೆ ಟ್ರೇಲರ್ ನೋಡಿದಾಗ ನಾಯಕಿಗೂ ಪ್ರಮುಖ ಪಾತ್ರವಿದೆ ಎಂದು ಅನಿಸಿತ್ತು. ಹಾಗಿದ್ದರೆ ಮಹಿಳಾ ನಟಿಗೆ ಏಕೆ ಯಾವುದೇ ಗೌರವ ಅಥವಾ ಉಡುಗೊರೆ ಇಲ್ಲ? ಯಾವಾಗಲೂ ಪುರುಷರಿಗೇ ಕಾರುಗಳು ಯಾಕೆ? ಎಂದು ಪ್ರಶ್ನಿಸಿದ್ದಾರೆ. ವಾಮಿಕಾ ಕೂಡ ಇದಕ್ಕೆ ಅರ್ಹರು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬ ನೆಟ್ಟಿಗ, ಇದು ವಾಮಿಕಾ ಅವರ ಸಿನಿಮಾನೇ. ಅವರು ನಾಯಕನಿಗಿಂತಲೂ ಮೊದಲು ಈ ಗೌರವಕ್ಕೆ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&lt;strong&gt;&lsquo;ವಾಮಿಕಾಗೂ ಗಿಫ್ಟ್ ಕೊಡಿ ಮಾರನ್ ಸರ್&rsquo;&lt;/strong&gt;&lt;/p&gt;&lt;p&gt;ಇನ್ನೊಂದು ಕಾಮೆಂಟ್&zwnj;ನಲ್ಲಿ, ಬದಲಾವಣೆಗೆ ನೀವೇ ಕಾರಣರಾಗಿ, ಮಾರನ್ ಸರ್. @iWamiqaGabbi ಅವರಿಗೂ ಉಡುಗೊರೆ ನೀಡಿ. ಅವರು ಲೋಕೇಶ್ ಅವರಷ್ಟೇ ಅಲ್ಲ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಚಂದ್ರ ಪಾತ್ರದ ಬಗ್ಗೆ ಜನರು ಮಾತನಾಡುವಂತೆ ಮಾಡಿದ್ದಾರೆ. ಹೀಗಾಗಿ ಅವರಿಗೂ ಏನಾದರೂ ವಿಶೇಷವಾಗಿ ನೀಡಬೇಕು. ಕಾಲಿವುಡ್&zwnj;ನಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸುವ ಸಮಯ ಬಂದಿದೆ ಎಂದು ನೆಟ್ಟಿಗರು ಬರೆದಿದ್ದಾರೆ.&lt;/p&gt;&lt;p&gt;ಇನ್ನು ಕೆಲವರು, ಥಿಯೇಟರ್&zwnj;ನಲ್ಲಿ ಸಿನಿಮಾಗೆ ಸಿಕ್ಕ ಅರ್ಧದಷ್ಟು ಚಪ್ಪಾಳೆಗಳು ವಾಮಿಕಾಗಾಗಿಯೇ ಇದ್ದವು. ಆದರೆ ನೀವು ಅವರನ್ನು ಬಿಟ್ಟುಬಿಟ್ಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮೂವರ ಗೆಲುವು ಮಾತ್ರವಲ್ಲ, ಇಡೀ ಚಿತ್ರತಂಡದ ಗೆಲುವು. ವಾಮಿಕಾಗೆ ಯಾಕೆ ಕಾರು ಕೊಡಲಿಲ್ಲ? ಎಂಬ ಪ್ರಶ್ನೆಯೂ ಕೇಳಿಬಂದಿದೆ.&lt;/p&gt;&lt;p&gt;&lt;strong&gt;&lsquo;ಡಿಸಿ&rsquo; ಸಿನಿಮಾದಲ್ಲಿ ವಾಮಿಕಾ ಪಾತ್ರವೇನು?&lt;/strong&gt;&lt;/p&gt;&lt;p&gt;&lsquo;ಡಿಸಿ&rsquo; ಸಿನಿಮಾದಲ್ಲಿ ಲೋಕೇಶ್ ಕನಗರಾಜ್ ದೇವದಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕುಳಿಯಲು ಭಾರೀ ಬೆಲೆ ತೆರಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿರುವ ವ್ಯಕ್ತಿಯ ಸುತ್ತ ಕಥೆ ಸಾಗುತ್ತದೆ. ವಾಮಿಕಾ ಗಬ್ಬಿ ಇಲ್ಲಿ ಚಂದ್ರಾ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ದೇವದಾಸ್ ಜೊತೆ ಆಕೆ ಆಪ್ತವಾದ ಸಂಬಂಧ ಹೊಂದಿದ್ದು, ಕಥೆಯ ಪ್ರಮುಖ ಭಾಗವಾಗಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 7ರಂದು ಥಿಯೇಟರ್&zwnj;ಗಳಿಗೆ ಬಿಡುಗಡೆಯಾಗಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಧರ್ಮ ಪ್ರೊಡಕ್ಷನ್ಸ್ ಸಿನಿಮಾವನ್ನು ವಿತರಿಸಿದೆ.&lt;/p&gt;&lt;h2&gt;&lt;strong&gt;ಲೋಕೇಶ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳು&lt;/strong&gt;&lt;/h2&gt;&lt;p&gt;&lsquo;ಡಿಸಿ&rsquo; ಹೊರತುಪಡಿಸಿ ಲೋಕೇಶ್ ಕನಗರಾಜ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2025ರಲ್ಲಿ ರಜನಿಕಾಂತ್ ಅಭಿನಯದ &lsquo;ಕೂಲಿ&rsquo; ಸಿನಿಮಾವನ್ನು ನಿರ್ದೇಶಿಸಿದ್ದ ಲೋಕೇಶ್, ಇದೀಗ ಮೊದಲ ಬಾರಿಗೆ ತೆಲುಗು ಸಿನಿಮಾವೊಂದನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇನ್ನು ಅಲ್ಲು ಅರ್ಜುನ್ ಜೊತೆಗಿನ ಈ ಚಿತ್ರಕ್ಕೆ ಸದ್ಯಕ್ಕೆ &lsquo;AA23&rsquo; ಎಂಬ ತಾತ್ಕಾಲಿಕ ಶೀರ್ಷಿಕೆ ಇದೆ. ಹೀಗಾಗಿ ಲೋಕೇಶ್ ಅವರ ಮುಂದಿನ ಪ್ರಾಜೆಕ್ಟ್&zwnj;ಗಳ ಮೇಲೂ ಸಿನಿಪ್ರೇಕ್ಷಕರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kollywood-actress-wamiqa-gabbi-deserved-a-bmw-too-say-fans-after-dc-movie-success-celebration-gvd/articleshow-0cnx2wv"/>
        </item>
        <item>
            <title><![CDATA[90s Kids.. ನಿಮ್ಮ ಬಾಲ್ಯದ ಈ ಕಾರ್ಟೂನ್ ನೆನಪಿದೆಯಾ? ಜಿಪುಣ ಅಂಕಲ್ ಸ್ಕ್ರೂಜ್ ಕಥೆಯಿದು!]]></title>
            <link>https://kannada.asianetnews.com/gallery/entertainment/90s-kids-ducktales-cartoon-nostalgia-remember-donald-duck-uncle-scrooge-and-the-triplets-gvd-qieqhga</link>
            <guid isPermaLink="true">https://kannada.asianetnews.com/gallery/entertainment/90s-kids-ducktales-cartoon-nostalgia-remember-donald-duck-uncle-scrooge-and-the-triplets-gvd-qieqhga</guid>
            <pubDate>Fri, 11 Sep 2026 17:48:45 +0530</pubDate>
            <description><![CDATA[90s Kids DuckTales Cartoon Nostalgia90ರ ದಶಕದ ಮಕ್ಕಳಾ ನೀವು? ಹಾಗಿದ್ರೆ ದೂರದರ್ಶನದಲ್ಲಿ ಬರ್ತಿದ್ದ ಡೊನಾಲ್ಡ್ ಡಕ್ ಕಾರ್ಟೂನ್ ನೆನಪಿದೆಯಾ? ಅಂಕಲ್ ಸ್ಕ್ರೂಜ್, ಹ್ಯೂಯಿ, ಡ್ಯೂಯಿ, ಲೂಯಿ ಎಲ್ಲ ನೆನಪಿದ್ದಾರಾ? ಬನ್ನಿ, ಆ ಕಾಮಿಡಿ ಸೀರಿಸ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m28627xncbbhp65eh6b3eeh2,imgname-bjb-1789128679349.png" type="image/jpeg" height="390" width="690"/>
            <content:encoded><![CDATA[&lt;p&gt;90s Kids DuckTales Cartoon Nostalgia90ರ ದಶಕದ ಮಕ್ಕಳಾ ನೀವು? ಹಾಗಿದ್ರೆ ದೂರದರ್ಶನದಲ್ಲಿ ಬರ್ತಿದ್ದ ಡೊನಾಲ್ಡ್ ಡಕ್ ಕಾರ್ಟೂನ್ ನೆನಪಿದೆಯಾ? ಅಂಕಲ್ ಸ್ಕ್ರೂಜ್, ಹ್ಯೂಯಿ, ಡ್ಯೂಯಿ, ಲೂಯಿ ಎಲ್ಲ ನೆನಪಿದ್ದಾರಾ? ಬನ್ನಿ, ಆ ಕಾಮಿಡಿ ಸೀರಿಸ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.&lt;/p&gt;&lt;img&gt;&lt;p&gt;'ಡಕ್&zwnj;ಟೇಲ್ಸ್' ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಒಂದು ಪ್ರಸಿದ್ಧ ಆನಿಮೇಟೆಡ್ ಟಿವಿ ಸರಣಿ. 1990ರ ದಶಕದಲ್ಲಿ ಭಾರತದಲ್ಲಿ, ಅದರಲ್ಲೂ ದೂರದರ್ಶನದಲ್ಲಿ ಪ್ರಸಾರವಾದ ಈ ಸೀರಿಯಲ್, ಅಂದಿನ ಮಕ್ಕಳ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಉಳಿಸಿದೆ. ವಾಲ್ಟ್ ಡಿಸ್ನಿ ಟೆಲಿವಿಷನ್ ಆನಿಮೇಷನ್ ನಿರ್ಮಿಸಿದ ಈ ಸರಣಿ, ಕಾರ್ಟೂನ್ ಜಗತ್ತಿನಲ್ಲಿ ಒಂದು ಹೊಸ ಅಧ್ಯಾಯವನ್ನೇ ಸೃಷ್ಟಿಸಿತು.&lt;/p&gt;&lt;img&gt;&lt;p&gt;ಈ ಕಥೆ ನಡೆಯೋದು ಜಗತ್ತಿನ ಅತ್ಯಂತ ಶ್ರೀಮಂತ ಬಾತುಕೋಳಿ 'ಸ್ಕ್ರೂಜ್ ಮೆಕ್&zwnj;ಡಕ್' ಮತ್ತು ಅವನ ಸೋದರಳಿಯರಾದ ಹ್ಯೂಯಿ, ಡ್ಯೂಯಿ ಮತ್ತು ಲೂಯಿ ಸುತ್ತ. ಡೊನಾಲ್ಡ್ ಡಕ್ ಸೈನ್ಯಕ್ಕೆ ಸೇರುವುದರಿಂದ, ತನ್ನ ಮೂವರು ಸೋದರಳಿಯರನ್ನು ನೋಡಿಕೊಳ್ಳಲು ಚಿಕ್ಕಪ್ಪ ಸ್ಕ್ರೂಜ್ ಬಳಿ ಬಿಟ್ಟು ಹೋಗುತ್ತಾನೆ. ಸ್ಕ್ರೂಜ್ ಮೆಕ್&zwnj;ಡಕ್ ಒಬ್ಬ ಜಿಪುಣ. ಖರ್ಚು ಮಾಡಲು ಹಿಂದೇಟು ಹಾಕುವ ಸ್ವಭಾವ ಅವನದು. ಅವನ ಬಳಿ ಅಪಾರ ಸಂಪತ್ತು ಇರುತ್ತದೆ. ದೊಡ್ಡ ಚಿನ್ನದ ನಾಣ್ಯಗಳ ಸ್ವಿಮ್ಮಿಂಗ್ ಪೂಲ್&zwnj;ನಲ್ಲಿ ಈಜುತ್ತಿರುತ್ತಾನೆ. ಅವನು ಲೋಭಿಯಾಗಿದ್ದರೂ, ಸಾಹಸಗಳೆಂದರೆ ಪ್ರಾಣ ಕೊಡುವ ಅಜ್ಜ.&lt;/p&gt;&lt;img&gt;&lt;p&gt;ಹ್ಯೂಯಿ, ಡ್ಯೂಯಿ ಮತ್ತು ಲೂಯಿ ತಮಾಷೆಯ ಪುಟ್ಟ ಪಾತ್ರಗಳು. ಕೆಂಪು, ನೀಲಿ, ಹಸಿರು ಬಣ್ಣದ ಡ್ರೆಸ್ ಹಾಕುವ ಈ ಮೂವರು ಚುರುಕಿನ ಮಕ್ಕಳು, ತಮ್ಮ ಬುದ್ಧಿವಂತಿಕೆಯಿಂದ ಪ್ರತಿ ಸಮಸ್ಯೆಯನ್ನೂ ಬಗೆಹರಿಸುತ್ತಾರೆ. ಅಂಕಲ್ ಸ್ಕ್ರೂಜ್&zwnj;ಗೆ ಬರುವ ಪ್ರತಿಯೊಂದು ಸಮಸ್ಯೆಯನ್ನು ಈ ಮಕ್ಕಳು ಪರಿಹರಿಸುತ್ತಾರೆ. ಇವರ ಜೊತೆಗೆ ಲಾಂಚ್&zwnj;ಪ್ಯಾಡ್ ಮೆಕ್&zwnj;ಕ್ವಾಕ್ ಎಂಬ ಇನ್ನೊಂದು ಪಾತ್ರವಿದೆ. ಅವನು ವಿಮಾನ ಚಲಾಯಿಸುವುದರಲ್ಲಿ ಎಕ್ಸ್&zwnj;ಪರ್ಟ್, ಆದರೆ ಪ್ರತಿ ಬಾರಿಯೂ ಕ್ರಾಶ್ ಲ್ಯಾಂಡಿಂಗ್ ಮಾಡುವ ಮುಗ್ಧ ಪೈಲಟ್ ಆಗಿ ನಗಿಸುತ್ತಾನೆ. ಅಂಕಲ್ ಸ್ಕ್ರೂಜ್ ಮನೆಯಲ್ಲಿ ಕೆಲಸ ಮಾಡುವ ಕೇರ್&zwnj;ಟೇಕರ್ ಮೊಮ್ಮಗಳು ವೆಬ್ಬಿ ವ್ಯಾಂಡರ್&zwnj;ಕ್ವಾಕ್ ಕೂಡ ಈ ಮಕ್ಕಳ ಜೊತೆ ಇರುತ್ತಾಳೆ. ಈ ಮೂವರು ಮಕ್ಕಳೊಂದಿಗೆ ಸಾಹಸಗಳಲ್ಲಿ ಭಾಗಿಯಾಗುತ್ತಾಳೆ.&lt;/p&gt;&lt;img&gt;&lt;p&gt;ಡಕ್&zwnj;ಟೇಲ್ಸ್ ಮೊದಲ ಬಾರಿಗೆ ಸೆಪ್ಟೆಂಬರ್ 18, 1987ರಂದು ಅಮೆರಿಕದಲ್ಲಿ ಬಿಡುಗಡೆಯಾಯಿತು. ಒಟ್ಟು 100 ಎಪಿಸೋಡ್&zwnj;ಗಳೊಂದಿಗೆ ನಾಲ್ಕು ಸೀಸನ್&zwnj;ಗಳ ಕಾಲ ಯಶಸ್ವಿಯಾಗಿ ಪ್ರಸಾರವಾಯಿತು. ನವೆಂಬರ್ 28, 1990ರಂದು ಈ ಸರಣಿ ಮುಗಿಯಿತು. ನಂತರ 1990ರಲ್ಲಿ &quot;ಡಕ್&zwnj;ಟೇಲ್ಸ್ ದಿ ಮೂವೀ: ಟ್ರೆಷರ್ ಆಫ್ ದಿ ಲಾಸ್ಟ್ ಲ್ಯಾಂಪ್&quot; ಹೆಸರಿನಲ್ಲಿ ಒಂದು ಪೂರ್ಣ ಪ್ರಮಾಣದ ಸಿನಿಮಾ ಕೂಡ ಬಿಡುಗಡೆಯಾಯಿತು. 1990ರ ದಶಕದಲ್ಲಿ ಭಾರತದಲ್ಲಿ ದೂರದರ್ಶನದ 'ಡಿಸ್ನಿ ಕ್ಲಬ್' ಕಾರ್ಯಕ್ರಮದ ಮೂಲಕ ಈ ಸರಣಿ ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಯಿತು. &quot;ಜಿಂದಗೀ ತೂಫಾನೀ ಹೈ&quot; (ಹಿಂದಿ) ಟೈಟಲ್ ಟ್ರ್ಯಾಕ್ ಆಗಿನ ಕಾಲದಲ್ಲಿ ಪ್ರತಿ ಮನೆಯಲ್ಲೂ ಮೊಳಗುತ್ತಿತ್ತು.&lt;/p&gt;&lt;img&gt;&lt;p&gt;ಈ ಸರಣಿಯ ಪ್ರತಿ ಎಪಿಸೋಡ್ ಒಂದು ಹೊಸ ಸಾಹಸ, ನಿಧಿ ಹುಡುಕಾಟ ಮತ್ತು ಜ್ಞಾನವನ್ನು ನೀಡುವಂತಿತ್ತು. ಬ್ಯೂರೋಕ್ರಾಟ್ ಬಾಂಬರ್ಸ್, ಮ್ಯಾಜಿಕ್ ದ ಸ್ಪೆಲ್&zwnj;ನಂತಹ ಖಳನಾಯಕರಿಂದ ತಮ್ಮ ಆಸ್ತಿ ಮತ್ತು ಚಿನ್ನದ ನಾಣ್ಯಗಳನ್ನು ಕಾಪಾಡಿಕೊಳ್ಳಲು ಸ್ಕ್ರೂಜ್ ಜೊತೆಗೆ ಮಕ್ಕಳು ಮಾಡುವ ಹೋರಾಟಗಳು ಪ್ರೇಕ್ಷಕರನ್ನು ಬಹಳವಾಗಿ ಆಕರ್ಷಿಸುತ್ತಿದ್ದವು. ಕಾರ್ಟೂನ್ ನೆಟ್&zwnj;ವರ್ಕ್, ಡಿಸ್ನಿ ಚಾನೆಲ್&zwnj;ಗಳು ಬರುವ ಮೊದಲೇ ಅಂದಿನ ಮಕ್ಕಳಿಗೆ ಅತ್ಯುತ್ತಮ ಮನರಂಜನೆ ನೀಡಿದ ಹೆಗ್ಗಳಿಕೆ ಡಕ್&zwnj;ಟೇಲ್ಸ್&zwnj;ನದ್ದು. 2017ರಲ್ಲಿ ಡಿಸ್ನಿ ಸಂಸ್ಥೆ ಈ ಸರಣಿಯನ್ನು ಹೊಸ ಆನಿಮೇಷನ್&zwnj;ನೊಂದಿಗೆ ರೀಬೂಟ್ ಮಾಡಿ ಮತ್ತೆ ನಿರ್ಮಿಸಿದರೂ, 1980 ಮತ್ತು 90ರ ದಶಕದ ಮೂಲ ಡಕ್&zwnj;ಟೇಲ್ಸ್ ನೀಡಿದ ಅನುಭವ ಮತ್ತು ಆನಂದ ಇಂದಿಗೂ ವಿಶೇಷ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/90s-kids-ducktales-cartoon-nostalgia-remember-donald-duck-uncle-scrooge-and-the-triplets-gvd-qieqhga"/>
        </item>
        <item>
            <title><![CDATA[7 ವರ್ಷಗಳ ಗಂಡನ ಅಕ್ರಮ ಸಂಬಂಧ ಬಯಲಿಗೆಳೆದ ಪತ್ನಿ; 180 ಸಲ ಹೋಟೆಲ್ ವಾಸ್ತವ್ಯ, 14 ಕೋಟಿ ಇನ್ಶೂರೆನ್ಸ್! ಸಿಕ್ಕಿ ಬಿದ್ದಿದ್ದೇ ಇಂಟ್ರೆಸ್ಟಿಂಗ್ ಕಥೆ]]></title>
            <link>https://kannada.asianetnews.com/relationship/china-wife-uncovers-husband-long-affair-with-insurance-agent-evidence-leaves-social-media-stunned-kvn/articleshow-5z1gs5w</link>
            <guid isPermaLink="true">https://kannada.asianetnews.com/relationship/china-wife-uncovers-husband-long-affair-with-insurance-agent-evidence-leaves-social-media-stunned-kvn/articleshow-5z1gs5w</guid>
            <pubDate>Fri, 11 Sep 2026 17:26:48 +0530</pubDate>
            <description><![CDATA[ಚೀನಾದಲ್ಲಿ ಪತ್ನಿಯೊಬ್ಬರು, ತಮ್ಮ ಪತಿಯ ಏಳು ವರ್ಷಗಳ ಅಕ್ರಮ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದಾರೆ. ಇನ್ಶೂರೆನ್ಸ್ ಏಜೆಂಟ್ ಜೊತೆಗಿನ ಈ ಸಂಬಂಧದಲ್ಲಿ ಕೋಟ್ಯಂತರ ರೂಪಾಯಿ ಪಾಲಿಸಿಗಳು ಮತ್ತು ನೂರಾರು ಹೋಟೆಲ್ ವಾಸ್ತವ್ಯದ ಸಾಕ್ಷ್ಯಗಳನ್ನು ಸಂಗ್ರಹಿಸಿ, ಪತ್ನಿ ಇದೀಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k0x2h1m78dgfs4f0jc6w0m9k,imgname-extra-marital-affairs-1753322391175.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೀನಾದಲ್ಲಿ ಪತ್ನಿಯೊಬ್ಬರು ತಮ್ಮ ಗಂಡನ ಏಳು ವರ್ಷಗಳ ಅಕ್ರಮ ಸಂಬಂಧವನ್ನು ಸೋಷಿಯಲ್ ಮೀಡಿಯಾದಲ್ಲಿ ಬಯಲು ಮಾಡಿದ್ದು, ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ಇನ್ಶೂರೆನ್ಸ್ ಏಜೆಂಟ್ ಜೊತೆಗಿನ ಈ ಸಂಬಂಧದಲ್ಲಿ ಕೋಟ್ಯಂತರ ರೂಪಾಯಿ ಪಾಲಿಸಿಗಳು ಮತ್ತು ನೂರಾರು ಹೋಟೆಲ್&zwnj;ಗಳಲ್ಲಿ ತಂಗಿದ್ದರ ಸಾಕ್ಷ್ಯಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಪತ್ನಿ ಈಗ ಗಂಡನ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಚೀನಾದ ಗ್ವಾಂಗ್ಸಿ ಪ್ರಾಂತ್ಯದ ಲಿಯುಝೌ ನಗರದ ನಿವಾಸಿ ಶೆನ್, ತಮ್ಮ ಪತಿ ಗುವೋ ಅವರ ರಹಸ್ಯ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದಾರೆ.&lt;/p&gt;&lt;h2&gt;&lt;strong&gt;2017ರಲ್ಲೇ ಶುರುವಾಗಿತ್ತು ಅನುಮಾನ; ಸಿಕ್ಕಿಬಿದ್ದಿದ್ದು ಹೇಗೆ?&lt;/strong&gt;&lt;/h2&gt;&lt;p&gt;2017ರಲ್ಲಿಯೇ ತನ್ನ ಗಂಡ ಗುವೋ ಮತ್ತು ಇನ್ಶೂರೆನ್ಸ್ ಏಜೆಂಟ್ ಲಿ ನಡುವಿನ ಸಂಬಂಧದ ಬಗ್ಗೆ ತನಗೆ ಮೊದಲ ಬಾರಿಗೆ ಅನುಮಾನ ಬಂದಿತ್ತು ಎಂದು ಶೆನ್ ಹೇಳಿದ್ದಾರೆ. ಇಬ್ಬರ ನಡುವಿನ ಮೆಸೇಜ್&zwnj;ಗಳನ್ನು ಪರಿಶೀಲಿಸಿದಾಗ, &quot;I miss you&quot; (ನಿನ್ನ ನೆನಪಾಗ್ತಿದೆ) ಎಂಬಂತಹ ಪ್ರೇಮ ಸಂದೇಶಗಳು ಸಿಕ್ಕಿದ್ದವು. ಅಷ್ಟೇ ಅಲ್ಲ, ಗುವೋ ಹಲವು ಬಾರಿ ಲಿಗೆ 520 ಯುವಾನ್ ಹಣ ವರ್ಗಾವಣೆ ಮಾಡಿದ್ದನ್ನೂ ಶೆನ್ ಪತ್ತೆ ಹಚ್ಚಿದ್ದರು. ಚೀನೀ ಭಾಷೆಯಲ್ಲಿ 520 ಸಂಖ್ಯೆಯ ಉಚ್ಚಾರಣೆ 'ಐ ಲವ್ ಯೂ' ಎನ್ನುವ ಪದದಂತೆ ಕೇಳಿಸುತ್ತದೆ. ಇದೇ ಕಾರಣಕ್ಕೆ ಪ್ರೇಮಿಗಳು ಈ ಸಂಖ್ಯೆಯ ಮೊತ್ತವನ್ನು ಹೆಚ್ಚಾಗಿ ಬಳಸುತ್ತಾರೆ.&lt;/p&gt;&lt;p&gt;ಈ ನಡುವೆ, ಗುವೋ ತನ್ನ ಪ್ರೇಯಸಿ ಲಿಯ ಮೂಲಕವೇ ಸುಮಾರು 1.5 ಮಿಲಿಯನ್ ಯುಎಸ್ ಡಾಲರ್ (ಅಂದಾಜು 14 ಕೋಟಿ 35 ಲಕ್ಷ ರೂಪಾಯಿ) ಮೌಲ್ಯದ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಿದ್ದರು. ಈ ಜೋಡಿ ಕಳೆದ ಏಳು ವರ್ಷಗಳಲ್ಲಿ ಬೇರೆ ಬೇರೆ ಹೋಟೆಲ್&zwnj;ಗಳಲ್ಲಿ 180 ಬಾರಿ ತಂಗಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಎಲ್ಲಾ ಸಾಕ್ಷ್ಯಗಳನ್ನು ಕಲೆಹಾಕಿದ ಶೆನ್, ಗಂಡನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.&lt;/p&gt;&lt;h3&gt;&lt;strong&gt;ಜಟಿಲವಾದ ಪ್ರಕರಣ&lt;/strong&gt;&lt;/h3&gt;&lt;p&gt;ಪತ್ನಿ ಶೆನ್ ಅವರೇ ಖುದ್ದು ತನಿಖೆ ನಡೆಸಿ ಈ ಸಂಬಂಧದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಿದ್ದಾರೆ ಎಂದು ವರದಿಯಾಗಿದೆ. ಶೆನ್ ಮತ್ತು ಗುವೋ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವಿದೆ. ಈ ಪ್ರಕರಣದಲ್ಲಿ ಕೇವಲ ವೈಯಕ್ತಿಕ ಸಂಬಂಧ ಮಾತ್ರವಲ್ಲದೆ, ದೊಡ್ಡ ಮೊತ್ತದ ಇನ್ಶೂರೆನ್ಸ್ ವ್ಯವಹಾರ ಮತ್ತು ಹಣಕಾಸಿನ ಆಸಕ್ತಿಗಳು ಸೇರಿಕೊಂಡಿರುವುದರಿಂದ ಇದು ಮತ್ತಷ್ಟು ಜಟಿಲವಾಗಿದೆ. ಈ ಘಟನೆ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ವೈವಾಹಿಕ ನಂಬಿಕೆ, ಇನ್ಶೂರೆನ್ಸ್ ವ್ಯವಹಾರಗಳಲ್ಲಿನ ಪಾರದರ್ಶಕತೆ ಮತ್ತು ಖಾಸಗಿ ಸಂಬಂಧಗಳಿಂದಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ನೆಟ್ಟಿಗರು ಬಿಸಿಬಿಸಿ ಚರ್ಚೆ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/relationship/china-wife-uncovers-husband-long-affair-with-insurance-agent-evidence-leaves-social-media-stunned-kvn/articleshow-5z1gs5w"/>
        </item>
        <item>
            <title><![CDATA[ಈ ನಟ ಡ್ಯಾನ್ಸ್ ಮಾಡ್ತಿದ್ರೆ ಕಣ್ಣು ಮಿಟುಕಿಸೋಕೆ ಆಗಲ್ಲ.. ಮೈಕೇಲ್ ಜಾಕ್ಸನ್‌ಗಿಂತ ಬೆಸ್ಟ್: ನಟಿ ರಂಭಾ]]></title>
            <link>https://kannada.asianetnews.com/entertainment/south-indian-actress-rambha-says-jr-ntr-is-the-best-dancer-even-better-than-michael-jackson-gvd/articleshow-v7wah5i</link>
            <guid isPermaLink="true">https://kannada.asianetnews.com/entertainment/south-indian-actress-rambha-says-jr-ntr-is-the-best-dancer-even-better-than-michael-jackson-gvd/articleshow-v7wah5i</guid>
            <pubDate>Fri, 11 Sep 2026 17:21:30 +0530</pubDate>
            <description><![CDATA[ನಟಿ ರಂಭಾ ಜೂ.ಎನ್‌ಟಿಆರ್ ಅವರ ಡ್ಯಾನ್ಸ್ ಬಗ್ಗೆ ಮನಸಾರೆ ಹೊಗಳಿದ್ದಾರೆ. ‘ನಾಚೋರೆ ನಾಚೋರೆ’ ಹಾಡಿನಲ್ಲಿನ ತಾರಕ್ ಡ್ಯಾನ್ಸ್‌ನ್ನು ಮೆಚ್ಚಿಕೊಂಡಿರುವ ರಂಭಾ, ತಮ್ಮ ದೃಷ್ಟಿಯಲ್ಲಿ ಮೈಕೇಲ್ ಜಾಕ್ಸನ್‌ಗಿಂತಲೂ ತಾರಕ್ ಬೆಸ್ಟ್ ಡ್ಯಾನ್ಸರ್ ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m284vv17xajmj5t3q1va9jq1,imgname-nnkn-1789127420967.png" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ರಂಭಾ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಾಯಕಿಯಾಗಿ ಮಿಂಚಿದ್ದ ಅವರು, ಹೀರೋಯಿನ್ ಪಾತ್ರಗಳ ಜೊತೆಗೆ ಸ್ಪೆಷಲ್ ಸಾಂಗ್&zwnj;ಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಇದೀಗ ಸಿನಿಮಾಗಳಿಂದ ಕೊಂಚ ದೂರ ಉಳಿದಿರುವ ರಂಭಾ, ತಮ್ಮ ಹಳೆಯ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಮತ್ತೆ ವೈರಲ್ ಆಗುತ್ತಿದೆ.&lt;/p&gt;&lt;p&gt;ರಂಭಾ ತಮ್ಮ ಸಿನಿ ಜರ್ನಿ, ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಹಲವು ಆಸಕ್ತಿಕರ ಸಂಗತಿಗಳನ್ನು ಆ ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಇದೇ ವೇಳೆ ಟಾಲಿವುಡ್&zwnj;ನ ಯಂಗ್ ಟೈಗರ್ ಜೂ.ಎನ್&zwnj;ಟಿಆರ್ ಬಗ್ಗೆ ಅವರು ನೀಡಿದ್ದ ಹೇಳಿಕೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.&lt;/p&gt;&lt;p&gt;&lt;strong&gt;ಎನ್&zwnj;ಟಿಆರ್ ಡ್ಯಾನ್ಸ್&zwnj;ಗೆ ಫಿದಾ ಆದ ರಂಭಾ&lt;/strong&gt;&lt;/p&gt;&lt;p&gt;ಜೂ.ಎನ್&zwnj;ಟಿಆರ್ ಅವರ ಡ್ಯಾನ್ಸ್&zwnj;ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಭಿನಯದ ಜೊತೆಗೆ ಅದ್ಭುತ ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ತಾರಕ್, ತಮ್ಮ ಎನರ್ಜಿಟಿಕ್ ಪರ್ಫಾರ್ಮೆನ್ಸ್&zwnj;ನಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಟಾಲಿವುಡ್&zwnj;ನ ಬೆಸ್ಟ್ ಡ್ಯಾನ್ಸರ್ ಯಾರು ಎಂದು ಕೇಳಿದರೆ ಅನೇಕರು ಜೂ.ಎನ್&zwnj;ಟಿಆರ್ ಹೆಸರನ್ನೇ ಹೇಳುತ್ತಾರೆ.&lt;/p&gt;&lt;p&gt;ಇದೀಗ ನಟಿ ರಂಭಾ ಕೂಡ ತಾರಕ್ ಅವರ ಡ್ಯಾನ್ಸ್ ಹಾಗೂ ಡೆಡಿಕೇಶನ್ ಬಗ್ಗೆ ಮನಸಾರೆ ಹೊಗಳಿದ್ದಾರೆ. ಜೂ.ಎನ್&zwnj;ಟಿಆರ್ ಅವರ ನಟನೆಯೆಂದರೆ ತಮಗೆ ತುಂಬಾ ಇಷ್ಟ ಎಂದು ಹೇಳಿರುವ ರಂಭಾ, ಅವರ ಡ್ಯಾನ್ಸ್ ನೋಡಲು ತಾನು ಕೂಡ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನಾಚೋರೆ ನಾಚೋರೆ&rsquo; ಎಂದರೆ ರಂಭಾಗೆ ಅಚ್ಚುಮೆಚ್ಚು&lt;/strong&gt;&lt;/p&gt;&lt;p&gt;ತಾವು ನಟಿಸಿರುವ ಸ್ಪೆಷಲ್ ಸಾಂಗ್&zwnj;ಗಳ ಪೈಕಿ &lsquo;ನಾಚೋರೆ ನಾಚೋರೆ&rsquo; ಹಾಡು ತಮಗೆ ಬಹಳ ಇಷ್ಟ ಎಂದು ರಂಭಾ ಹೇಳಿದ್ದಾರೆ. ಈ ಹಾಡಿನಲ್ಲಿನ ಎನ್&zwnj;ಟಿಆರ್ ಅವರ ಡ್ಯಾನ್ಸ್ ಹಾಗೂ ಎನರ್ಜಿ ಬಗ್ಗೆ ಅವರು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್&zwnj;ಟಿಆರ್ ಡ್ಯಾನ್ಸ್ ಮಾಡುತ್ತಿದ್ದರೆ ಕಣ್ಣು ಮಿಟುಕಿಸದೇ ನೋಡುತ್ತಿರುತ್ತೇವೆ. ಅವರ ಡೆಡಿಕೇಶನ್ ನೋಡಿದರೆ ಹುಚ್ಚೆದ್ದು ಹೋಗುವಂತಾಗುತ್ತದೆ ಎಂಬರ್ಥದಲ್ಲಿ ರಂಭಾ ತಾರಕ್ ಅವರನ್ನು ಹೊಗಳಿದ್ದಾರೆ.&lt;/p&gt;&lt;p&gt;ಅಷ್ಟೇ ಅಲ್ಲ, ತಮ್ಮ ದೃಷ್ಟಿಯಲ್ಲಿ ಮೈಕೇಲ್ ಜಾಕ್ಸನ್&zwnj;ಗಿಂತಲೂ ಜೂ.ಎನ್&zwnj;ಟಿಆರ್ ಉತ್ತಮ ಡ್ಯಾನ್ಸರ್ ಎಂದು ರಂಭಾ ಹೇಳಿರುವುದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಎನ್&zwnj;ಟಿಆರ್ ಅವರ ಡ್ಯಾನ್ಸ್ ಮೇಲಿನ ಹಿಡಿತ, ಎನರ್ಜಿ ಮತ್ತು ಡೆಡಿಕೇಶನ್&zwnj;ಗೆ ರಂಭಾ ನೀಡಿರುವ ಈ ಕಾಂಪ್ಲಿಮೆಂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.&lt;/p&gt;&lt;h2&gt;&lt;strong&gt;ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆ ನಟಿಸುವ ಆಸೆ&lt;/strong&gt;&lt;/h2&gt;&lt;p&gt;ಇದೇ ಸಂದರ್ಶನದಲ್ಲಿ ರಂಭಾ ತಮ್ಮ ಇನ್ನೊಂದು ಆಸೆಯನ್ನೂ ಬಹಿರಂಗಪಡಿಸಿದ್ದರು. ಟಾಲಿವುಡ್&zwnj;ನ ಸೂಪರ್&zwnj;ಸ್ಟಾರ್ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರ ಜೊತೆ ಸಿನಿಮಾದಲ್ಲಿ ನಟಿಸಬೇಕು ಎಂಬ ತಮ್ಮ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ಇನ್ನು ಹಲವು ವರ್ಷಗಳ ಹಿಂದೆ ರಂಭಾ ನೀಡಿದ್ದ ಈ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಬಂದಿದ್ದು, ಜೂ.ಎನ್&zwnj;ಟಿಆರ್ ಅಭಿಮಾನಿಗಳು ರಂಭಾ ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/south-indian-actress-rambha-says-jr-ntr-is-the-best-dancer-even-better-than-michael-jackson-gvd/articleshow-v7wah5i"/>
        </item>
        <item>
            <title><![CDATA[ಭಾನುವಾರ, ಏಕಾದಶಿಯಂದು ತುಳಸಿಗೆ ನೀರು ಹಾಕಬಾರದೇಕೆ? ಈ ನಾಲ್ಕು ತಪ್ಪನ್ನು ಎಂದಿಗೂ ಮಾಡಬೇಡಿ]]></title>
            <link>https://kannada.asianetnews.com/gallery/astrology/why-shouldnt-you-water-tulsi-on-sundays-and-ekadashi-never-make-these-four-mistakes-suc-zb5vq45</link>
            <guid isPermaLink="true">https://kannada.asianetnews.com/gallery/astrology/why-shouldnt-you-water-tulsi-on-sundays-and-ekadashi-never-make-these-four-mistakes-suc-zb5vq45</guid>
            <pubDate>Fri, 11 Sep 2026 17:15:57 +0530</pubDate>
            <description><![CDATA[ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ ಗಿಡದ ಪೂಜೆ ಮತ್ತು ಆರೈಕೆಯಲ್ಲಿ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ರವಿವಾರ, ಏಕಾದಶಿಯಂದು ನೀರು ಹಾಕದಿರುವುದು, ಉಗುರಿನಿಂದ ಎಲೆ ಕೀಳದಿರುವುದು ಸೇರಿದಂತೆ ಪ್ರಮುಖ ನಾಲ್ಕು ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2849y83577nj2xttfs8fy34,imgname-tulsi-00-1789126834435.jpg" type="image/jpeg" height="390" width="690"/>
            <content:encoded><![CDATA[ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದಿರುವ ತುಳಸಿ ಗಿಡದ ಪೂಜೆ ಮತ್ತು ಆರೈಕೆಯಲ್ಲಿ ನಾವು ತಿಳಿಯದೆ ಮಾಡುವ ಕೆಲವು ತಪ್ಪುಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ರವಿವಾರ, ಏಕಾದಶಿಯಂದು ನೀರು ಹಾಕದಿರುವುದು, ಉಗುರಿನಿಂದ ಎಲೆ ಕೀಳದಿರುವುದು ಸೇರಿದಂತೆ ಪ್ರಮುಖ ನಾಲ್ಕು ನಿಯಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.&lt;img&gt;&lt;p&gt;ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಸ್ಥಾನ ಕಲ್ಪಿಸಲಾಗಗಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರ ಮನೆಯಲ್ಲಿಯೂ ತುಳಸಿ ಗಿಡ ಇದ್ದೇ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರು ಪ್ರತಿ ನಿತ್ಯವೂ ತುಳಸಿಗೆ ಪೂಜೆ ಮಾಡುವುದು ಇದೆ. ತುಳಸಿಗಾಗಿಯೇ ದೀಪಾವಳಿ ಬಳಿಕ ಹಬ್ಬವನ್ನೂ ಮಾಡುವುದು, ಕಾರ್ತಿಕ ಮಾಸದಲ್ಲಿ ಅದಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವುದೂ ಇದೆ. ತುಳಸಿ ಒಣಗದಂತೆ ನೋಡಿಕೊಳ್ಳಲಾಗುವುದು. ಒಣಗುತ್ತಿರುವ ತುಳಸಿಯು ಹಲವಾರು ಕೆಟ್ಟ ಸೂಚನೆಗಳನ್ನೂ ನೀಡುತ್ತದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಧಾರ್ಮಿಕ ಭಾವನೆಯಿಂದ ಮಾತ್ರವಲ್ಲದೇ, ತುಳಸಿಯೂ ಹಲವಾರು ಅನಾರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಚಿಕ್ಕ ಪುಟ್ಟ ಶೀತ ನೆಗಡಿಯಿಂದ ಹಿಡಿದು ಹಲವಾರು ಮಾರಣಾಂತಿಕ ಕಾಯಿಲೆಗಳವರೆಗೆ ತುಳಸಿಯ ಎಲೆಗಳಿಂದ ತಯಾರಿಸಿರುವ ಔಷಧಗಳನ್ನು ಸೇವನೆ ಮಾಡುವುದು ಇದೆ. ತುಳಸಿ ಮನೆಯಲ್ಲಿ ಇದ್ದರೂ, ಸಮಸ್ಯೆಗಳು ನಿಮಗೆ ಮುಗಿಯುತ್ತಲೇ ಇಲ್ಲವೆ, ಸದಾ ಅನಾರೋಗ್ಯ ಉಂಟಾಗುತ್ತಿದೆಯೆ? ಹಾಗಿದ್ದರೆ ಧಾರ್ಮಿಕ ನಂಬಿಕೆಗಳ ಪ್ರಕಾರ ನೀವು ಈ ನಾಲ್ಕು ತಪ್ಪುಗಳನ್ನು ಮಾಡುತ್ತಿರುವಿರಿ.&lt;/p&gt;&lt;img&gt;&lt;p&gt;ಮೊದಲನೆಯದಾಗಿ, ತುಳಸಿಗೆ ರವಿವಾರ ಮತ್ತು ಏಕಾದಶಿಯಂತೆ ನೀರನ್ನು ಹಾಕಬಾರದು. ಈ ದಿನಗಳಲ್ಲಿ ತುಳಸಿಯು ನಿರ್ಜಲ ವೃತ ಅಂದರೆ ಜಲರಹಿತವಾಗಿ ಇರಬೇಕು ಎನ್ನುತ್ತದೆ ಶಾಸ್ತ್ರ. ಪೂಜೆ ಮಾಡಬಹುದು, ದೀಪವನ್ನು ಹಚ್ಚಬಹುದು. ಆದರೆ ಈ ದಿನಗಳಂದು ನೀರು ಹಾಕಬಾರದು.&lt;/p&gt;&lt;img&gt;&lt;p&gt;ತುಳಸಿಯನ್ನು ಯಾವತ್ತಿಗೂ ಉಗುರಿನಿಂದ ಕೀಳಬಾರದು. ಇದು ಅಪಶಕುನ ಎನ್ನಲಾಗುತ್ತದೆ. ಆದ್ದರಿಂದ ನಿಧಾನವಾಗಿ ಬೆರಳಿನ ಸಹಾಯದಿಂದ ಎಲೆಯನ್ನು ಕೀಳಬೇಕು. ಸೂರ್ಯಾಸ್ತದ ಬಳಿಕ ಯಾವುದೇ ಕಾರಣಕ್ಕೂ ಎಲೆಯನ್ನು ಕೀಳಬಾರದು.&lt;/p&gt;&lt;img&gt;&lt;p&gt;ತುಳಸಿಯ ಸಮೀಪ, ಚಪ್ಪಲಿ, ಶೂಸ್​, ಕಸಕಡ್ಡಿ, ಪೊರಕೆ ಸೇರಿದಂತೆ ಯಾವುದೇ ಕಸಗಳನ್ನು ಇಡಬಾರದು. ತುಳಸಿಯ ಸಮೀಪ ಸದಾ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.&lt;/p&gt;&lt;img&gt;&lt;p&gt;ತುಳಸಿಯ ಕಸ್ತ್ರಗಳನ್ನು ಅಂದರೆ ಹೂವುಗಳನ್ನು ಹಾಗೆಯೇ ಬಿಡಬಾರದು. ಅದನ್ನು ಕತ್ತರಿಸಿ ವಿಷ್ಣು ಅಥವಾ ಸಾಲಿಗ್ರಾಮಕ್ಕೆ ಹಾಕಿ.&lt;/p&gt;]]></content:encoded>
            <category><![CDATA[astrology]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/astrology/why-shouldnt-you-water-tulsi-on-sundays-and-ekadashi-never-make-these-four-mistakes-suc-zb5vq45"/>
        </item>
        <item>
            <title><![CDATA[ಪಿತೃಪಕ್ಷದ 16 ದಿನಗಳಲ್ಲಿ ಶುಭ ಕಾರ್ಯ ಏಕೆ ಮಾಡಬಾರದು? ಇದರ ಹಿಂದಿದೆ ಧಾರ್ಮಿಕ ಕಾರಣ]]></title>
            <link>https://kannada.asianetnews.com/festivals/why-new-beginnings-are-prohibited-in-pitru-paksha/articleshow-znb210v</link>
            <guid isPermaLink="true">https://kannada.asianetnews.com/festivals/why-new-beginnings-are-prohibited-in-pitru-paksha/articleshow-znb210v</guid>
            <pubDate>Fri, 11 Sep 2026 17:07:08 +0530</pubDate>
            <description><![CDATA[Pitru Paksha rules: ಹಿಂದೂ ಧರ್ಮದಲ್ಲಿ ಪಿತೃಪಕ್ಷಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ಸಮಯದಲ್ಲಿ ಮದುವೆ, ಹೊಸ ಕಾರ್ಯ ಮಾಡುವುದು, ಹೊಸ ಮನೆ, ಆಸ್ತಿ ಖರೀದಿಸುವುದು ಹೀಗೆ ಎಲ್ಲಾ ಕಾರ್ಯವನ್ನು ನಿಷೇಧಿಸಲಾಗಿದೆ. ಯಾಕೆ ಈ ರೀತಿಯಾದ ಆಚರಣೆ ನಂಬಿಕೆ ಇದೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ಆ ಕುರಿತು ಮಹತ್ವದ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m1vksh5pwvefsajagz4yex52,imgname-pitru-paksha--1--1788706866358.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪಿತೃಪಕ್ಷದಲ್ಲಿ ಮಂಗಳ ಕಾರ್ಯ ಯಾಕೆ ಮಾಡಲ್ಲ&lt;/strong&gt;&lt;/h2&gt;&lt;p&gt;ಸನಾತನ ಧರ್ಮದಲ್ಲಿ ಪಿತೃಪಕ್ಷಕ್ಕೆ ವಿಶೇಷ ಮಹತ್ವವಿದೆ; ಈ ವರ್ಷ ಇದು ಸೆಪ್ಟೆಂಬರ್ 26 ರಂದು ಪೂರ್ಣಿಮಾ ಶ್ರಾದ್ಧದೊಂದಿಗೆ ಪ್ರಾರಂಭವಾಗಿ ಅಕ್ಟೋಬರ್ 10 ರವರೆಗೆ ಮುಂದುವರಿಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಈ 16 ದಿನಗಳು ಪೂರ್ವಜರ ಬಗ್ಗೆ ಗೌರವವನ್ನು ವ್ಯಕ್ತಪಡಿಸಲು ಮತ್ತು ಅವರ ಆತ್ಮದ ಶಾಂತಿಗಾಗಿ ಪ್ರಾರ್ಥಿಸಲು 'ತರ್ಪಣ' ಹಾಗೂ 'ಪಿಂಡದಾನ'ವನ್ನು ನೆರವೇರಿಸಲು ಮೀಸಲಾದ ಅವಧಿಯಾಗಿದೆ. ಇದನ್ನು 'ಮಹಾಲಯ ಪಕ್ಷ' ಎಂದೂ ಕರೆಯಲಾಗುತ್ತದೆ. ಪಿತೃಪಕ್ಷವು ಪ್ರತಿವರ್ಷ ಆಶ್ವಯುಜ ಮಾಸದ ಆರಂಭದಲ್ಲಿ (ಭಾದ್ರಪದ ಪೂರ್ಣಿಮೆಯ ನಂತರ) ಪ್ರಾರಂಭವಾಗಿ ಸರ್ವಪಿತೃ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ ನಿಗದಿತ ವಿಧಿವಿಧಾನಗಳ ಪ್ರಕಾರ ಪ್ರತಿದಿನ ಪೂರ್ವಜರಿಗೆ ಪಿಂಡದಾನ ಮತ್ತು ತರ್ಪಣವನ್ನು ಮಾಡುವುದರಿಂದ ವ್ಯಕ್ತಿಗಳು 'ಪಿತೃದೋಷ' ಮತ್ತು ಪಿತೃಋಣದಿಂದ ಮುಕ್ತರಾಗುತ್ತಾರೆ ಎನ್ನುವ ನಂಬಿಕೆ ಇದೆ.&lt;/p&gt;&lt;h3&gt;&lt;strong&gt;ಪಿತೃಪಕ್ಷದಲ್ಲಿ ಹೊಸ ಕೆಲಸ ಆರಂಭಿಸ ಬಾರದು ಯಾಕೆ ಗೊತ್ತ?&lt;/strong&gt;&lt;/h3&gt;&lt;p&gt;ಪಿತೃಪಕ್ಷದ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ ಎಂದು ಧಾರ್ಮಿಕ ನಂಬಿಕೆ ಹೇಳುತ್ತದೆ. ಈ ಅವಧಿಯಲ್ಲಿ ಹೊಸ ಕೆಲಸ ಆರಂಭಿಸುವುದು ಅಥವಾ ಶುಭ ಹಾಗೂ ಮಂಗಳಕರ ಕಾರ್ಯಕ್ರಮಗಳನ್ನು ನಡೆಸುವುದನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ.&lt;/p&gt;&lt;p&gt;&lt;strong&gt;16 ದಿನ ಶುಭ ಕಾರ್ಯಗಳಿಗೆ ವಿರಾಮ ಏಕೆ?&lt;/strong&gt;&lt;/p&gt;&lt;p&gt;ಪಿತೃಪಕ್ಷವನ್ನು ಮುಖ್ಯವಾಗಿ ಪೂರ್ವಜರಿಗೆ ಸಮರ್ಪಿತವಾದ ಅವಧಿ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅವರ ಆತ್ಮಶಾಂತಿಗಾಗಿ ತರ್ಪಣ, ಪಿಂಡಪ್ರದಾನ ಮತ್ತು ಶ್ರಾದ್ಧ ಮಾಡುವ ಮೂಲಕ ಗೌರವ ಹಾಗೂ ಕೃತಜ್ಞತೆ ಸಲ್ಲಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಮದುವೆ, ಗೃಹಪ್ರವೇಶ, ನಿಶ್ಚಿತಾರ್ಥ, ಉಪನಯನ, ಹೊಸ ಆಸ್ತಿ ಅಥವಾ ವಾಹನ ಖರೀದಿ ಸೇರಿದಂತೆ ಹಲವು ಮಂಗಳಕರ ಕಾರ್ಯಗಳನ್ನು ಮಾಡದಿರುವುದು ಧಾರ್ಮಿಕ ಆಚರಣೆಯಾಗಿದೆ. ಈ ದಿನಗಳಲ್ಲಿ ಕುಟುಂಬದ ಗಮನ ಮತ್ತು ಶಕ್ತಿ ಪೂರ್ವಜರ ಸ್ಮರಣೆ ಹಾಗೂ ಅವರಿಗಾಗಿ ನಡೆಯುವ ಧಾರ್ಮಿಕ ವಿಧಿವಿಧಾನಗಳತ್ತ ಕೇಂದ್ರೀಕೃತವಾಗಿರಬೇಕು ಎಂಬುದು ಇದರ ಹಿಂದಿನ ನಂಬಿಕೆಯಾಗಿದೆ.&lt;/p&gt;&lt;p&gt;&lt;strong&gt;ಪಿತೃಗಳ ಪೂಜೆಯಲ್ಲಿ ನಿಯಮ ಪಾಲನೆ ಮುಖ್ಯ&lt;/strong&gt;&lt;/p&gt;&lt;p&gt;ಧಾರ್ಮಿಕ ಗ್ರಂಥಗಳ ಪ್ರಕಾರ, ಪೂರ್ವಜರ ಆರಾಧನೆಯಲ್ಲಿ ವಿಧಿ-ವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇವರ ಪೂಜೆಯಲ್ಲಿ ಭಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಪಿತೃಪಕ್ಷದಲ್ಲಿ ಪೂರ್ವಜರಿಗೆ ನಿಯಮಾನುಸಾರ ಪೂಜೆ ಮತ್ತು ಶ್ರಾದ್ಧ ಮಾಡುವುದಕ್ಕೆ ಒತ್ತು ನೀಡಲಾಗುತ್ತದೆ. ಈ ಕಾರಣದಿಂದಲೂ ಹೊಸ ಆರಂಭ ಹಾಗೂ ಮಂಗಳಕರ ಕಾರ್ಯಗಳನ್ನು ಮುಂದೂಡಲಾಗುತ್ತದೆ.&lt;/p&gt;&lt;p&gt;&lt;strong&gt;ಪಿತೃಪಕ್ಷ ಮತ್ತು ಚಾತುರ್ಮಾಸಕ್ಕೂ ಸಂಬಂಧವಿದೆಯೇ?&lt;/strong&gt;&lt;/p&gt;&lt;p&gt;ಪಿತೃಪಕ್ಷದಲ್ಲಿ ಶುಭ ಕಾರ್ಯಗಳನ್ನು ತಪ್ಪಿಸಲು ಮತ್ತೊಂದು ಧಾರ್ಮಿಕ ಕಾರಣವೂ ಇದೆ. ಈ ಅವಧಿ ಚಾತುರ್ಮಾಸದ ಸಮಯದಲ್ಲೇ ಬರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ದೇವಶಯನಿ ಏಕಾದಶಿಯಿಂದ ದೇವಉತ್ಥಾನ ಏಕಾದಶಿವರೆಗೆ ಸುಮಾರು ನಾಲ್ಕು ತಿಂಗಳ ಕಾಲ ಶ್ರೀವಿಷ್ಣು ಯೋಗನಿದ್ರೆಯಲ್ಲಿರುತ್ತಾರೆ. ಹೀಗಾಗಿ ಈ ಅವಧಿಯಲ್ಲಿಯೂ ಹೊಸ ಕೆಲಸಗಳು ಮತ್ತು ಮಂಗಳಕರ ಕಾರ್ಯಕ್ರಮಗಳನ್ನು ಆರಂಭಿಸಬಾರದು.&lt;/p&gt;]]></content:encoded>
            <category><![CDATA[festivals]]></category>
            <dc:creator>Pavna Das</dc:creator>
            <atom:link href="https://kannada.asianetnews.com/festivals/why-new-beginnings-are-prohibited-in-pitru-paksha/articleshow-znb210v"/>
        </item>
        <item>
            <title><![CDATA[Cancer Detection: ಸಾಕು ನಾಯಿಗಳು ನಿಜವಾಗಿಯೂ ಮನುಷ್ಯರಲ್ಲಿನ ಕ್ಯಾನ್ಸರ್ ಪತ್ತೆಹಚ್ಚಬಲ್ಲವೇ?]]></title>
            <link>https://kannada.asianetnews.com/gallery/health-life/dogs-and-ai-the-new-weapon-against-cancer-2zo1xc8</link>
            <guid isPermaLink="true">https://kannada.asianetnews.com/gallery/health-life/dogs-and-ai-the-new-weapon-against-cancer-2zo1xc8</guid>
            <pubDate>Fri, 11 Sep 2026 17:00:43 +0530</pubDate>
            <description><![CDATA[Early cancer detection technology: ನಾಯಿಗಳಿಗೆ ಮೂಸುವ ಶಕ್ತಿ ಹೆಚ್ಚು ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಸಾಕು ನಾಯಿಗಳು ತಮ್ಮ ಯಜಮಾನರ ದೇಹದಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಕೂಡ ಪತ್ತೆಹಚ್ಚಬಲ್ಲವು ಎಂಬ ವಾದವಿದೆ. ಈ ಬಗ್ಗೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27q7p8ck12hjdyb883hzkkf,imgname-can-pet-dogs-really-detect-cancer-in-humans-1789113129228.jpg" type="image/jpeg" height="390" width="690"/>
            <content:encoded><![CDATA[&lt;p&gt;Early cancer detection technology: ನಾಯಿಗಳಿಗೆ ಮೂಸುವ ಶಕ್ತಿ ಹೆಚ್ಚು ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಸಾಕು ನಾಯಿಗಳು ತಮ್ಮ ಯಜಮಾನರ ದೇಹದಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಅನ್ನು ಕೂಡ ಪತ್ತೆಹಚ್ಚಬಲ್ಲವು ಎಂಬ ವಾದವಿದೆ. ಈ ಬಗ್ಗೆ ಈಗಾಗಲೇ ಸಂಶೋಧನೆಗಳು ನಡೆಯುತ್ತಿವೆ.&lt;/p&gt;&lt;img&gt;&lt;p&gt;&lt;strong&gt;ಸುಲಭವಾಗಿ ಪತ್ತೆಹಚ್ಚುತ್ತವೆ ನಾಯಿಗಳು&lt;/strong&gt;ಸಾಮಾನ್ಯವಾಗಿ ನಾಯಿಗಳಿಗೆ ಗ್ರಹಣ ಶಕ್ತಿ ಅದ್ಭುತವಾಗಿರುತ್ತದೆ. ಅದಕ್ಕಾಗಿಯೇ ಪೊಲೀಸ್ ಇಲಾಖೆಯು ಅಪರಾಧ ತನಿಖೆ ಮತ್ತು ಕಳ್ಳತನ ಪತ್ತೆಗೆ ಅವುಗಳನ್ನು ಬಳಸುತ್ತದೆ. ಈಗ, ಇದೇ ಅದ್ಭುತ ಮೂಗಿನ ಶಕ್ತಿಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಭಾರತದಲ್ಲಿ ಸಂಶೋಧನೆಗಳು ವೇಗವಾಗಿ ಸಾಗುತ್ತಿವೆ. ಮಾನವನ ದೇಹದಲ್ಲಿ ಯಾವುದೇ ಕಾಯಿಲೆ ಬಂದಾಗ, ಜೀವಕೋಶಗಳ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದ, ದೇಹದಿಂದ ಹೊರಬರುವ ಉಸಿರು, ಬೆವರು ಮತ್ತು ಇತರ ದ್ರವಗಳ ಮೂಲಕ 'ವೊಲಟೈಲ್ ಆರ್ಗ್ಯಾನಿಕ್ ಕಾಂಪೌಂಡ್ಸ್' (VOCs) ಎಂಬ ರಾಸಾಯನಿಕಗಳು ಹೊರಬರುತ್ತವೆ. ಅದರಲ್ಲೂ ಕ್ಯಾನ್ಸರ್ ಪೀಡಿತರಲ್ಲಿ ಈ ರಾಸಾಯನಿಕಗಳ ವಾಸನೆಯಲ್ಲಿ ಸ್ಪಷ್ಟ ಬದಲಾವಣೆ ಇರುತ್ತದೆ. ಈ ಸೂಕ್ಷ್ಮ ಬದಲಾವಣೆಯನ್ನು ಮನುಷ್ಯರು ಗುರುತಿಸಲಾರರು, ಆದರೆ ನಾಯಿಗಳು ಸುಲಭವಾಗಿ ಪತ್ತೆಹಚ್ಚುತ್ತವೆ. ಇದೇ ನೈಸರ್ಗಿಕ ಗುಣವನ್ನು ಬಳಸಿಕೊಂಡು, ಭಾರತೀಯ ಹೆಲ್ತ್-ಟೆಕ್ ಸ್ಟಾರ್ಟಪ್ ಒಂದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸೇರಿಸಿ ಈ ಸಂಶೋಧನೆಗೆ ಮುಂದಾಗಿದೆ.&lt;/p&gt;&lt;img&gt;&lt;p&gt;&lt;strong&gt;ಹೇಗೆ ಗೊತ್ತಾಗುತ್ತೆ?&lt;/strong&gt;ನಾಯಿಗಳ ಮೂಲಕ ಕ್ಯಾನ್ಸರ್ ಪರೀಕ್ಷೆ ಮಾಡುವ ವಿಧಾನ ತುಂಬಾ ಸುಲಭ ಹಾಗೂ ನೋವುರಹಿತವಾಗಿದೆ. ಒಬ್ಬ ವ್ಯಕ್ತಿಗೆ ಹತ್ತು ನಿಮಿಷಗಳ ಕಾಲ ಸಾಮಾನ್ಯ ಕಾಟನ್ ಮಾಸ್ಕ್ ಧರಿಸಿ ಕೂರಲು ಹೇಳಲಾಗುತ್ತದೆ. ಈ ಸಮಯದಲ್ಲಿ ಅವರು ಸಹಜವಾಗಿ ಮಾತನಾಡಲು ಮತ್ತು ಆಳವಾಗಿ ಉಸಿರಾಡಲು ಸೂಚಿಸಲಾಗುತ್ತದೆ. ನಂತರ ಆ ಮಾಸ್ಕ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ವಿಶೇಷ ತರಬೇತಿ ಪಡೆದ ನಾಯಿಗಳಿಂದ ಮೂಸಿ ನೋಡಲಾಗುತ್ತದೆ. ಈ ಸಮಯದಲ್ಲಿ ನಾಯಿಗಳಿಗೆ ಸುಧಾರಿತ ಸೆನ್ಸರ್&zwnj;ಗಳಿರುವ ವಿಶೇಷ ಸೂಟ್&zwnj;ಗಳನ್ನು ತೊಡಿಸಲಾಗುತ್ತದೆ. ನಾಯಿ ಆ ಮಾಸ್ಕ್ ಅನ್ನು ಮೂಸುವಾಗ ಅದರ ಹೃದಯ ಬಡಿತ, ಉಸಿರಾಟ, ದೇಹದ ಚಲನೆ ಮತ್ತು ಮೆದುಳಿನ ಸ್ಪಂದನಗಳನ್ನು ಆ ಸೆನ್ಸರ್&zwnj;ಗಳು ದಾಖಲಿಸುತ್ತವೆ. ಈ ಸಂಪೂರ್ಣ ಡೇಟಾವನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಲ್ಗಾರಿದಮ್&zwnj;ಗೆ ಕಳುಹಿಸಿ, ಅದರ ಆಧಾರದ ಮೇಲೆ ರಿಸ್ಕ್ ಸ್ಕೋರ್ ಲೆಕ್ಕಹಾಕಿ ಕ್ಯಾನ್ಸರ್ ಇದೆಯೇ ಅಥವಾ ಇಲ್ಲವೇ ಎಂದು ಪ್ರಾಥಮಿಕವಾಗಿ ನಿರ್ಧರಿಸಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಪ್ರಬಲ ಸ್ಕ್ರೀನಿಂಗ್ ಸಾಧನ&lt;/strong&gt;ಈ ಹೊಸ ತಂತ್ರಜ್ಞಾನದ ಸತ್ಯಾಸತ್ಯತೆಯನ್ನು ಪರೀಕ್ಷಿಸಲು, ಕರ್ನಾಟಕದ ಆರು ಪ್ರಮುಖ ಆಸ್ಪತ್ರೆಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರ ಮೇಲೆ ಕ್ಲಿನಿಕಲ್ ಟ್ರಯಲ್ಸ್ ನಡೆಸಲಾಯಿತು. ಇದರಲ್ಲಿ, ಬಯಾಪ್ಸಿ ಮೂಲಕ ಈಗಾಗಲೇ ಕ್ಯಾನ್ಸರ್ ದೃಢಪಟ್ಟ 283 ರೋಗಿಗಳ ಸ್ಯಾಂಪಲ್&zwnj;ಗಳೂ ಸೇರಿದ್ದವು. 'ಜರ್ನಲ್ ಆಫ್ ಕ್ಲಿನಿಕಲ್ ಆಂಕಾಲಜಿ'ಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ವ್ಯವಸ್ಥೆಯು ಪ್ರತಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 9 ಅನ್ನು, ಅಂದರೆ ಸುಮಾರು 90% ನಿಖರತೆಯೊಂದಿಗೆ ಪತ್ತೆಹಚ್ಚಿದೆ. ಕ್ಯಾನ್ಸರ್ ಇಲ್ಲದವರನ್ನು ಕೂಡ ಅಷ್ಟೇ ನಿಖರವಾಗಿ ಗುರುತಿಸಿದೆ. ಕ್ಯಾನ್ಸರ್ ಯಾವುದೇ ಹಂತದಲ್ಲಿದ್ದರೂ ಒಂದೇ ರೀತಿಯ ನಿಖರತೆ ತೋರಿಸಿರುವುದು ವೈದ್ಯಕೀಯ ವಲಯದಲ್ಲಿ ದೊಡ್ಡ ಭರವಸೆ ಮೂಡಿಸಿದೆ. ಸದ್ಯಕ್ಕೆ ಇದು ಅಧಿಕೃತ ಪರೀಕ್ಷೆಯಲ್ಲದಿದ್ದರೂ, ಭವಿಷ್ಯದಲ್ಲಿ ಕಡಿಮೆ ಖರ್ಚಿನಲ್ಲಿ, ನೋವಿಲ್ಲದೆ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚುವ ಪ್ರಬಲ ಸ್ಕ್ರೀನಿಂಗ್ ಸಾಧನವಾಗಲಿದೆ ಎಂದು ಸಂಶೋಧಕರು ನಂಬಿದ್ದಾರೆ.&lt;/p&gt;]]></content:encoded>
            <category><![CDATA[health-life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/health-life/dogs-and-ai-the-new-weapon-against-cancer-2zo1xc8"/>
        </item>
        <item>
            <title><![CDATA[ಭಾರತದಲ್ಲಿ ಕಾಣದ ಅಪರೂಪದ 'ಬ್ಯಾಂಡೆಡ್ ಕ್ರೇಟ್' ಹಾವು ತೆಲಂಗಾಣದಲ್ಲಿ ಪ್ರತ್ಯಕ್ಷ, ಇದರ ಕಡಿತಕ್ಕೆ ಬದುಕಿರೋರೇ ಇಲ್ಲ!]]></title>
            <link>https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona</link>
            <guid isPermaLink="true">https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona</guid>
            <pubDate>Fri, 11 Sep 2026 16:59:37 +0530</pubDate>
            <description><![CDATA[ತೆಲಂಗಾಣದ ಏಟೂರುನಾಗಾರಂ ಅರಣ್ಯದಲ್ಲಿ ಅತ್ಯಂತ ವಿಷಕಾರಿ 'ಬ್ಯಾಂಡೆಡ್ ಕ್ರೇಟ್' ಹಾವು ಕಾಣಿಸಿಕೊಂಡು ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಈ ಕಪ್ಪು-ಹಳದಿ ಪಟ್ಟೆಯ ಹಾವು, ಮಾರಕ ನರವಿಷವನ್ನು ಹೊಂದಿದ್ದು, ಇದನ್ನು ಕಂಡರೆ ಕೊಲ್ಲದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಕೋರಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01dxwfa171ph8yysh79p4qvj8x,imgname-pjimage--14--jpg.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್ (ತೆಲಂಗಾಣ): &lt;/strong&gt;ತೆಲಂಗಾಣದ ಮುಲುಗು ಜಿಲ್ಲೆಯ ಏಟೂರುನಾಗಾರಂ ದಟ್ಟ ಅರಣ್ಯ ಪ್ರದೇಶದಲ್ಲಿ ಅತ್ಯಂತ ಅಪರೂಪದ ಹಾಗೂ ಭೀಕರ ವಿಷಪೂರಿತ 'ಬ್ಯಾಂಡೆಡ್ ಕ್ರೇಟ್' ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಹಾಗೂ ಅರಣ್ಯ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕಪ್ಪು ಮತ್ತು ಹಳದಿ ಬಣ್ಣದ ದಪ್ಪನೆಯ ಪಟ್ಟೆಗಳನ್ನು ಹೊಂದಿರುವ ಈ ಹಾವು ಕಡಿದರೆ ವ್ಯಕ್ತಿ ಬದುಕುಳಿಯುವುದು ಬಹುತೇಕ ಅಸಾಧ್ಯ. ಸಾಮಾನ್ಯವಾಗಿ ಚೀನಾ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಾವು, ಈಗ ಭಾರತದ ಭಾಗದಲ್ಲೂ ಕಾಣಿಸಿಕೊಂಡಿರುವುದು ಸಾರ್ವಜನಿಕರು ಹಾಗೂ ಉರಗ ತಜ್ಞರ ಗಮನ ಸೆಳೆದಿದೆ.&lt;/p&gt;&lt;h2&gt;ಏಟೂರುನಾಗಾರಂ ಹಾಗೂ ಪಕಾಲಾ ಅರಣ್ಯದಲ್ಲಿ ಭೀತಿ&lt;/h2&gt;&lt;p&gt;ಏಟೂರುನಾಗಾರಂ ಹೊರವಲಯದ ರಸ್ತೆಯಲ್ಲಿ ರಾತ್ರಿ ವೇಳೆ ಈ ಹಾವೊಂದು ರಸ್ತೆ ದಾಟುತ್ತಿದ್ದಾಗ ದಾರಿಹೋಕರ ಕಣ್ಣಿಗೆ ಬಿದ್ದಿದೆ. ಆರಂಭದಲ್ಲಿ ಕಪ್ಪು-ಹಳದಿ ಪಟ್ಟೆಗಳ ಈ ವಿಚಿತ್ರ ರೂಪವನ್ನು ಕಂಡು ಜನ ಆತಂಕಗೊಂಡರು. ಈ ಹಿಂದೆ ವಾರಂಗಲ್&zwnj;ನ ಪಕಾಲಾ ಕಾಡುಗಳು ಹಾಗೂ ಖಾನಪುರಂ ಮಂಡಲದ ಅಶೋಕ್ ನಗರ ಗ್ರಾಮದ ಹೊರವಲಯದಲ್ಲೂ ಇಂತಹದ್ದೇ ಹಾವು ಕಾಣಿಸಿಕೊಂಡಿತ್ತು. ಅಶೋಕ್ ನಗರದಲ್ಲಿ ಕೃಷಿ ಭೂಮಿ ಬಳಿ ಇದನ್ನು ಮೊದಲ ಬಾರಿಗೆ ನೋಡಿದ ಸ್ಥಳೀಯರು, ಪ್ಲಾಸ್ಟಿಕ್ ಆಟಿಕೆ ಇರಬೇಕೆಂದು ಭಾವಿಸಿದ್ದರು. ಆದರೆ ಅದು ಚಲಿಸಲು ಪ್ರಾರಂಭಿಸಿದಾಗ ಭಯಭೀತರಾಗಿ ತಕ್ಷಣವೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.&lt;/p&gt;&lt;h2&gt;5 ಅಡಿ ಉದ್ದದ ಮಾರಕ ಸರೀಸೃಪ&lt;/h2&gt;&lt;p&gt;ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು ಹಾಗೂ ಉರಗ ರಕ್ಷಕರು ಸುಮಾರು 5 ಅಡಿ ಉದ್ದವಿದ್ದ ಈ ಹಾವನ್ನು ಅತ್ಯಂತ ಚಾಣಾಕ್ಷತನದಿಂದ ಹಿಡಿದು ದಟ್ಟ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಉರಗ ತಜ್ಞರ ಪ್ರಕಾರ, ಈ ಹಾವು ಶೇಕಡಾ 100 ರಷ್ಟು ಪ್ರಾಣಾಪಾಯ ತರಬಲ್ಲ ತೀವ್ರ ನರವಿಷವನ್ನು (Neurotoxin) ಹೊಂದಿದೆ. ಇದು ಕಡಿದ ಕೆಲವೇ ನಿಮಿಷಗಳಲ್ಲಿ ನರಮಂಡಲದ ಮೇಲೆ ದಾಳಿ ಮಾಡುವುದರಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡು ಸಾವು ಸಂಭವಿಸುತ್ತದೆ.&lt;/p&gt;&lt;p&gt;ಇದು ನೋಡಡಲು ಅತ್ಯಂತ ಆಕರ್ಷಕವಾಗಿ ಕಂಡರೂ, ಅಷ್ಟೇ ಮಾರಕವಾದ ವಿಷವನ್ನು ಹೊಂದಿದೆ. ರಾತ್ರಿ ವೇಳೆಯಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ಹಾವು, ಅತ್ಯಂತ ಶಾಂತ ಸ್ವಭಾವದ್ದಾಗಿದ್ದರೂ ಕಿರಿಕಿರಿ ಉಂಟುಮಾಡಿದರೆ ತಕ್ಷಣವೇ ದಾಳಿ ಮಾಡುತ್ತದೆ.&lt;/p&gt;&lt;h2&gt;ವಿದೇಶದಿಂದ ಸರಕು ಲಾರಿಗಳ ಮೂಲಕ ಭಾರತಕ್ಕೆ ಎಂಟ್ರಿ?&lt;/h2&gt;&lt;p&gt;ಸಾಮಾನ್ಯವಾಗಿ ಈ 'ಬ್ಯಾಂಡೆಡ್ ಕ್ರೇಟ್' ಹಾವುಗಳು ಚೀನಾ, ನೇಪಾಳ, ಥೈಲ್ಯಾಂಡ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಭಾರತದಲ್ಲಿ ಜಾರ್ಖಂಡ್, ಛತ್ತೀಸ್&zwnj;ಗಢ, ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಕೆಲವೇ ಭಾಗಗಳಲ್ಲಿ ಇವು ವಿರಳವಾಗಿ ಗೋಚರಿಸುತ್ತವೆ. ತೆಲಂಗಾಣದ ಕಾಡುಗಳಲ್ಲಿ ಇವು ಕಾಣ ಸಿಗುವುದು ಅತ್ಯಂತ ಆಶ್ಚರ್ಯಕರ ವಿಷಯವಾಗಿದೆ. ಬೇರೆ ರಾಜ್ಯಗಳಿಂದ ಅಥವಾ ವಿದೇಶಗಳಿಂದ ಬರುವ ಸರಕು ಸಾಗಣೆ ಲಾರಿಗಳಲ್ಲಿ ದಾರಿ ತಪ್ಪಿ ಇವು ಈ ಪ್ರದೇಶವನ್ನು ತಲುಪಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ.&lt;/p&gt;&lt;h2&gt;ಅರಣ್ಯ ಇಲಾಖೆಯ ಮುಖ್ಯ ಮನವಿ&lt;/h2&gt;&lt;p&gt;ಈ ಹಾವುಗಳು ಸಾಮಾನ್ಯವಾಗಿ ಶಾಂತ ಸ್ವಭಾವದವು ಹಾಗೂ ರಾತ್ರಿ ವೇಳೆಯಲ್ಲಿ ಮಾತ್ರ ಆಹಾರ ಅರಸಿ ಹೊರಬರುತ್ತವೆ. ಸಾರ್ವಜನಿಕರು ಅಥವಾ ರೈತರು ಕಪ್ಪು ಮತ್ತು ಹಳದಿ ಪಟ್ಟೆಗಳಿರುವ ಇಂತಹ ಹಾವುಗಳನ್ನು ಕಂಡಾಗ ಭಯಪಟ್ಟು ಕೊಲ್ಲಬಾರದು. ಹಾವುಗಳನ್ನು ಕೊಲ್ಲುವುದು ಅಪರಾಧವಾಗಿದ್ದು, ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ನುರಿತ ಉರಗ ರಕ್ಷಕರಿಗೆ ಮಾಹಿತಿ ನೀಡಬೇಕಾಗಿ ಕೋರಲಾಗಿದೆ.&lt;/p&gt;]]></content:encoded>
            <category><![CDATA[science]]></category>
            <dc:creator>Gowthami K</dc:creator>
            <atom:link href="https://kannada.asianetnews.com/science/rare-and-extremely-venomous-banded-krait-snake-spotted-snake-in-telangana-s-eturnagaram-forest-gdp/articleshow-18e9ona"/>
        </item>
        <item>
            <title><![CDATA[ರಾಜ್ ಬಿ. ಶೆಟ್ಟಿಗೆ ಕಾಡ್ತಿದೆ ಆ ನಿಗೂಢ ರಹಸ್ಯ.. 'ರಕ್ಕಸಪುರದೊಳ್' ಪೊಲೀಸ್‌ಗೆ ಕಂಡ ಅತೀಂದ್ರಿಯ ತಿರುವು!]]></title>
            <link>https://kannada.asianetnews.com/movie-reviews/kannada-crime-thriller-movie-rakkasapuradhol-ott-raj-b-shetty-movie-now-streaming-on-amazon-prime-video-gvd/articleshow-tvwg1v8</link>
            <guid isPermaLink="true">https://kannada.asianetnews.com/movie-reviews/kannada-crime-thriller-movie-rakkasapuradhol-ott-raj-b-shetty-movie-now-streaming-on-amazon-prime-video-gvd/articleshow-tvwg1v8</guid>
            <pubDate>Fri, 11 Sep 2026 16:54:03 +0530</pubDate>
            <description><![CDATA[ನಟ ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಸಿನಿಮಾ ಇದೀಗ Amazon Prime Videoನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ರೈಂ, ಮಿಸ್ಟರಿ ಮತ್ತು ಅತೀಂದ್ರಿಯ ಅಂಶಗಳ ಈ ಥ್ರಿಲ್ಲರ್ ಸಿನಿಮಾವನ್ನು ಮನೆಯಲ್ಲೇ ವೀಕ್ಷಿಸಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m283awgj9kr126axvv8wepg0,imgname-bjb-1789125816849.png" type="image/jpeg" height="390" width="690"/>
            <content:encoded><![CDATA[&lt;p&gt;ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ &lsquo;ರಕ್ಕಸಪುರದೊಳ್&rsquo; ಇದೀಗ OTTಗೆ ಎಂಟ್ರಿ ಕೊಟ್ಟಿದೆ. ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಕ್ರೈಂ ಥ್ರಿಲ್ಲರ್ ಸಿನಿಮಾ ಸೆಪ್ಟೆಂಬರ್ 11ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಥಿಯೇಟರ್&zwnj;ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡಿದ್ದವರು ಇದೀಗ ಮನೆಯಲ್ಲೇ ಕುಳಿತು ಚಿತ್ರವನ್ನು ವೀಕ್ಷಿಸಬಹುದಾಗಿದೆ.&lt;/p&gt;&lt;p&gt;ಸಿನಿಮಾದ OTT ರಿಲೀಸ್ ಕುರಿತು ನಟ ಅನಿರುದ್ಧ ಭಟ್ ವಿಡಿಯೋ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಹಲವು ದಿನಗಳಿಂದ ಪ್ರೇಕ್ಷಕರು &lsquo;ರಕ್ಕಸಪುರದೊಳ್&rsquo; ಯಾವಾಗ OTTಗೆ ಬರಲಿದೆ ಎಂದು ಕೇಳುತ್ತಿದ್ದರು. ಆದರೆ ಈ ಹಿಂದೆ ತಮ್ಮ ಬಳಿ ಹೇಳಲು ಯಾವುದೇ ಅಪ್&zwnj;ಡೇಟ್ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.&lt;/p&gt;&lt;p&gt;ರಕ್ಕಸಪುರದೊಳ್ ಯಾವಾಗ OTTಗೆ ಬರುತ್ತದೆ ಎಂದು ಹಲವರು ಕೇಳುತ್ತಿದ್ದರು. ಆಗ ನನ್ನ ಬಳಿ ಅದಕ್ಕೆ ಉತ್ತರ ಇರಲಿಲ್ಲ. ಇದೀಗ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ಎಂದು ಅನಿರುದ್ಧ ಭಟ್ ಹೇಳಿದ್ದಾರೆ. ಜೊತೆಗೆ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ಚಿತ್ರತಂಡವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ರಾಜ್ ಬಿ. ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ&lt;/strong&gt;&lt;/p&gt;&lt;p&gt;ರವಿ ಸಾರಂಗ್ ನಿರ್ದೇಶನದ ಈ ಸಿನಿಮಾವನ್ನು ಸ್ಟಂಟ್ ಮಾಸ್ಟರ್ ರವಿವರ್ಮ ನಿರ್ಮಿಸಿದ್ದಾರೆ. ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಕ್ರೈಂ, ಮಿಸ್ಟರಿ ಮತ್ತು ಅತೀಂದ್ರಿಯ ಅಂಶಗಳ ಮಿಶ್ರಣವಾಗಿದೆ. ಒಂದು ಹಳ್ಳಿಯಲ್ಲಿ ನಡೆಯುವ ಸರಣಿ ನಿಗೂಢ ಕೊಲೆಗಳ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ರಾಜ್ ಬಿ. ಶೆಟ್ಟಿ ಇಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.&lt;/p&gt;&lt;p&gt;ಆತನನ್ನು ರಕ್ಕಸಪುರಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಆತ ಅಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಹಳ್ಳಿಯಲ್ಲಿ ಸರಣಿ ಕೊಲೆಗಳು ನಡೆಯಲು ಆರಂಭಿಸುತ್ತವೆ. ಈ ಪ್ರಕರಣದ ತನಿಖೆಗೆ ಇಳಿಯುವ ಪೊಲೀಸ್ ಅಧಿಕಾರಿ, ಕ್ರಮೇಣ ಊಹಿಸಲೂ ಸಾಧ್ಯವಾಗದಷ್ಟು ಸಂಕೀರ್ಣವಾಗುವ ರಹಸ್ಯದೊಳಗೆ ಸಿಲುಕಿಕೊಳ್ಳುತ್ತಾನೆ.&lt;/p&gt;&lt;p&gt;&lt;strong&gt;ಕೊಲೆಗಳ ಹಿಂದೆ ಮನುಷ್ಯರ ಕೈಯೋ? ಅತೀಂದ್ರಿಯ ಶಕ್ತಿಯೋ?&lt;/strong&gt;&lt;/p&gt;&lt;p&gt;ಆರಂಭದಲ್ಲಿ ಸಿನಿಮಾ ಸಾಮಾನ್ಯ ಕೊಲೆ ತನಿಖೆಯ ಕಥೆಯಂತೆ ಕಾಣುತ್ತದೆ. ಆದರೆ ಕಥೆ ಮುಂದುವರಿದಂತೆ ಚಿತ್ರದಲ್ಲಿ ಅತೀಂದ್ರಿಯ ಅಂಶಗಳು ಪ್ರವೇಶಿಸುತ್ತವೆ. ಹೀಗಾಗಿ ಹಳ್ಳಿಯಲ್ಲಿ ನಡೆಯುತ್ತಿರುವ ಕೊಲೆಗಳಿಗೆ ನಿಜಕ್ಕೂ ಮನುಷ್ಯರೇ ಕಾರಣರೇ? ಅಥವಾ ಕಣ್ಣಿಗೆ ಕಾಣದ ಯಾವುದೋ ಶಕ್ತಿಯ ಕೈವಾಡವಿದೆಯೇ? ಎಂಬ ಪ್ರಶ್ನೆ ಪ್ರೇಕ್ಷಕರ ಮುಂದೆ ಮೂಡುತ್ತದೆ. ನಿಗೂಢತೆ, ಕ್ರೈಂ ಹಾಗೂ ಅತೀಂದ್ರಿಯ ಅಂಶಗಳನ್ನು ಬೆರೆಸಿರುವ ಈ ಸಿನಿಮಾ ಥಿಯೇಟರ್ ರನ್ ಬಳಿಕ ಇದೀಗ ಡಿಜಿಟಲ್ ವೇದಿಕೆಯಲ್ಲೂ ಲಭ್ಯವಾಗಿದೆ.&lt;/p&gt;&lt;h2&gt;&lt;strong&gt;ಈಗ ಮನೆಯಲ್ಲೇ ನೋಡಿ &lsquo;ರಕ್ಕಸಪುರದೊಳ್&rsquo;&lt;/strong&gt;&lt;/h2&gt;&lt;p&gt;ಇನ್ನು ಥಿಯೇಟರ್&zwnj;ಗಳಲ್ಲಿ ಚಿತ್ರವನ್ನು ನೋಡಲು ಸಾಧ್ಯವಾಗದವರು ಅಥವಾ ಮತ್ತೊಮ್ಮೆ ಸಿನಿಮಾ ವೀಕ್ಷಿಸಲು ಬಯಸುವವರು ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ &lsquo;ರಕ್ಕಸಪುರದೊಳ್&rsquo; ವೀಕ್ಷಿಸಬಹುದು. ರಾಜ್ ಬಿ. ಶೆಟ್ಟಿ ಅವರ ವಿಭಿನ್ನ ಪಾತ್ರ, ಸರಣಿ ಕೊಲೆಗಳ ಹಿಂದಿನ ರಹಸ್ಯ ಹಾಗೂ ಕಥೆಯಲ್ಲಿರುವ ಅತೀಂದ್ರಿಯ ತಿರುವುಗಳು ಸಿನಿಮಾ OTTಯಲ್ಲೂ ಕುತೂಹಲ ಮೂಡಿಸುವ ಸಾಧ್ಯತೆಯಿದೆ.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/kannada-crime-thriller-movie-rakkasapuradhol-ott-raj-b-shetty-movie-now-streaming-on-amazon-prime-video-gvd/articleshow-tvwg1v8"/>
        </item>
        <item>
            <title><![CDATA[ಬಿಗ್ ಬಾಸ್ ವಿಮಾನದಲ್ಲಿ ಟ್ವಿಸ್ಟ್, ಮನೆಯೊಳಗೆ ಕಾಲಿಡದೇ ಒಬ್ಬರು ಔಟ್! ಮೊದಲ ವಾರ 9 ಜನ ನಾಮಿನೇಟ್!]]></title>
            <link>https://kannada.asianetnews.com/tv-talk/bigg-boss-kannada-season-13-flight-twist-contestants-elimination-without-entering-house-sat/articleshow-w0ug93d</link>
            <guid isPermaLink="true">https://kannada.asianetnews.com/tv-talk/bigg-boss-kannada-season-13-flight-twist-contestants-elimination-without-entering-house-sat/articleshow-w0ug93d</guid>
            <pubDate>Fri, 11 Sep 2026 16:35:41 +0530</pubDate>
            <description><![CDATA[ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿಗಳಿಗೆ ಕಾದಿದೆ ದೊಡ್ಡ ಶಾಕ್! 5 ದಿನಕಳೆದರೂ ಬಿಗ್ ಬಾಸ್ ಮನೆಯೊಳಗೆ ಕಾಲಿಡದೆ ವಿಮಾನದಲ್ಲೇ ವಾಸ ಮಾಡುತ್ತಿರುವ 6 ಸ್ಪರ್ಧಿಗಳು, ಮೊದಲ ವಾರದಲ್ಲಿ ಅಲ್ಲಿಂದಲೇ ಎಲಿಮಿನೇಷನ್ ಆಗಲಿದ್ದಾರೆ. ಈ ವಿಚಿತ್ರ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m282grna3k61hkhvqqre1w2v,imgname-bigg-boss-first-week-nomination--1--1789124960938.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರ ಮೊದಲ ವಾರವೇ ವೀಕ್ಷಕರಿಗೆ ಮತ್ತು ಸ್ಪರ್ಧಿಗಳಿಗೆ ದೊಡ್ಡ ಶಾಕ್ ನೀಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಕಠಿಣ ಹಾಗೂ ವಿಚಿತ್ರ ನಿಯಮವೊಂದನ್ನು ಜಾರಿಗೆ ತರಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಕಾರ್ಯಕ್ರಮ ಆರಂಭವಾಗಿ 4 ದಿನಗಳು ಕಳೆದರೂ, ಮನೆಗೆ ಬಂದಿರುವ 16 ಸ್ಪರ್ಧಿಗಳ ಪೈಕಿ 6 ಮಂದಿ ಇನ್ನೂ ಮುಖ್ಯವಾದ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟೇ ಇಲ್ಲ! ಬದಲಾಗಿ ಅವರು ವಿಮಾನದ (Flight Set) ಒಳಗೆಯೇ ಕಾಲ ಕಳೆಯುತ್ತಿದ್ದಾರೆ. ಎಲ್ಲಕ್ಕಿಂತ ಆಘಾತಕಾರಿ ವಿಷಯವೆಂದರೆ, ಮೊದಲ ವಾರದಲ್ಲಿ ಎಲಿಮಿನೇಟ್ ಆಗುವ ಸ್ಪರ್ಧಿ ಮನೆಯ ಒಳಹೋಗದೆಯೇ ವಿಮಾನದಿಂದಲೇ ನೇರವಾಗಿ ತಮ್ಮ ಮನೆಗೆ ವಾಪಸ್ ಹೋಗಬೇಕಾಗುತ್ತದೆ!&lt;/p&gt;&lt;h2&gt;&lt;strong&gt;ಏನಿದು ವಿಮಾನದ ಚಟುವಟಿಕೆ?&lt;/strong&gt;&lt;/h2&gt;&lt;p&gt;ಆರಂಭದ ದಿನವೇ ವಿಮಾನದಲ್ಲಿ ಕುಳಿತಿದ್ದ ಎಲ್ಲಾ 16 ಸದಸ್ಯರಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಒಬ್ಬರನ್ನು ಹಾರ ಹಾಕಿ ಸ್ವಾಗತಿಸುವುದು ಹಾಗೂ ಇನ್ನೊಬ್ಬರ ಫೋಟೋವನ್ನು ಸೂಟ್&zwnj;ಕೇಸ್&zwnj;ಗೆ ಅಂಟಿಸಿ ವಿಮಾನದಿಂದ ಹೊರಗೆ ಹಾಕುವುದು ಈ ಚಟುವಟಿಕೆಯಾಗಿತ್ತು. ಇದರಲ್ಲಿ ಹಾರ ಪಡೆದವರು ಹಾಗೂ ಸೂಟ್&zwnj;ಕೇಸ್ ಹೊರಹಾಕಿಸಿಕೊಳ್ಳದ 7 ಜನರು ಮತ್ತು ಯಾವುದೇ ಹಾರ ಪಡೆಯದಿದ್ದರೂ ವಿರೋಧ ಎದುರಿಸದ ಯಶಸ್ ಕೃಷ್ಣ ಸೇರಿದಂತೆ ಒಟ್ಟು 8 ಮಂದಿ ಅದೃಷ್ಟವಶಾತ್ ಮನೆಯೊಳಗೆ ಪ್ರವೇಶ ಪಡೆದರು. ಆದರೆ, ಜನಸಾಮಾನ್ಯರ ಕೋಟಾದಿಂದ ಬಂದ ನಾಲ್ವರು ಹಾಗೂ ನಾಲ್ವರು ಸೆಲೆಬ್ರಿಟಿಗಳು ಸೇರಿದಂತೆ ಉಳಿದ 8 ಮಂದಿ ವಿಮಾನದಲ್ಲೇ ಉಳಿದುಕೊಂಡರು. ನಿಯಮದ ಪ್ರಕಾರ, ಈ ಎಂಟೂ ಜನರು ನೇರವಾಗಿ ಮೊದಲ ವಾರದ ಎಲಿಮಿನೇಷನ್&zwnj;ಗೆ ನಾಮಿನೇಟ್ ಆಗಿದ್ದರು.&lt;/p&gt;&lt;h2&gt;&lt;strong&gt;ವಿಮಾನಕ್ಕೆ ಬಂದ, ಓಂ ಪ್ರಕಾಶ್, ಆಸಿಯಾ ಫಿರ್ದೋಸ್!&lt;/strong&gt;&lt;/h2&gt;&lt;p&gt;ಮನೆಯೊಳಗೆ ಹೋದ 8 ಸ್ಪರ್ಧಿಗಳಿಗೆ ನಡೆಸಲಾದ 'ಡೈಮಂಡ್ ಚಟುವಟಿಕೆ'ಯಲ್ಲಿ ತಪ್ಪು ನಿರ್ಧಾರಕ್ಕೆ ಬಲಿಯಾದ ಸ್ಪರ್ಧಿ ಆಸಿಯಾ ಫಿರ್ದೋಸ್, ಮನೆಯಿಂದ ಮತ್ತೆ ವಾಪಸ್ ವಿಮಾನಕ್ಕೆ ಕಳುಹಿಸಲ್ಪಟ್ಟಿದ್ದಾರೆ. ಇದಾದ ನಂತರ ಆಹಾರಗಳನ್ನು ತಿನ್ನುವ ಟಾಸ್ಕ್&zwnj;ನಲ್ಲಿ ಪ್ರಯಾಣಿಕರ ತಂಡದಲ್ಲಿ ಗೆಲುವು ದಾಧಿಸಿದ್ದಕ್ಕೆ ಮಾಡ್ರನ್ ಮಹಾಕವಿ ಮಂಜು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆಯುತ್ತಾರೆ. ಈ ವೇಳೆ ಸೋತ ತಂಡದಿಂದ ಓಂ ಪ್ರಕಾಶ್ ರಾವ್ ಅವರು ಪುನಃ ವಿಮಾನದೊಳಗೆ ಪ್ರಯಾಣಿಕ ತಂಡಕ್ಕೆ ವಾಪಸ್ ಬರುತ್ತಾರೆ.&lt;/p&gt;&lt;p&gt;ನಂತರ ನಡೆಸಲಾದ ರಸಪ್ರಶ್ನೆ ಟಾಸ್ಕ್&zwnj;ನಲ್ಲಿ ಮನೆಯೊಳಗಿನ ತಂಡವು ಮೈನಸ್ 2 ಅಂಕದೊಂದಿಗೆ ಗೆಲುವು ಸಾಧಿಸಿ ಜಗ ಮಮ್ಮಿಗೆ ಇಮ್ಯೂನಿಟಿ ಕೊಡಲಾಗುತ್ತದೆ. ಜೊತೆಗೆ, ಪ್ರಯಾಣಿಕ ತಂಡದಲ್ಲಿ ಧನುಷ್&zwnj;ಗೆ ಮನೆಯೊಳಗೆ ಬರದಂತೆ ನೇರವಾಗಿ ನಾಮಿನೇಟ್ ಮಾಡಲಾಗುತ್ತದೆ. ಜೊತೆಗೆ ನಾಲ್ಕನೇ ದಿನ ನಡೆಸಲಾದ ಸ್ವಮ್ಮಿಂಗ್ ಪೂಲ್&zwnj;ನಲ್ಲಿರುವವರಿಗೆ ಟ್ಯೂಬ್ ರಿಂಗ್ ಹಾಕುವ ಸ್ಪರ್ಧೆಯಲ್ಲಿ ವಿಮಾನ ಪ್ರಯಾಣಿಕರ ತಂಡವು ಗೆಲ್ಲುತ್ತದೆ. ಇದರಿಂದ ಪ್ರಯಾಣಿಕ ತಂಡದಿಂದ ಲಿಖಿತ್ ಗೋಂಡಿ ಅವರು ಬಿಗ್ ಬಾಸ್ ಮನೆಯೊಳಗೆ ಬರುತ್ತಾರೆ. ಆದರೆ, ಇನ್ನೂ 6 ಜನರು ಬಿಗ್ ಬಾಸ್ ಮನೆಯೊಳಗೇ ಹೋಗಿಲ್ಲ. ಹೀಗಿರುವಾಗ ಇವರಲ್ಲಿ ಒಬ್ಬರು ವಾರಾಂತ್ಯದಲ್ಲಿ ರಿಯಾಲಿಟಿ ಶೋ ಸ್ಪರ್ಧೆಯಿಂದಲೇ ಹೊರಗೆ ಬರಲಿದ್ದಾರೆ.&lt;/p&gt;&lt;h2&gt;&lt;strong&gt;ಆಕ್ಟಿವಿಟಿ ರೂಮ್ ಶೌಚಾಲಯ, ನಿದ್ದೆಯಿಲ್ಲದ ರಾತ್ರಿಗಳು:&lt;/strong&gt;&lt;/h2&gt;&lt;p&gt;ವಿಮಾನದಲ್ಲಿರುವ ಸ್ಪರ್ಧಿಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಅವರು ಅಧಿಕೃತವಾಗಿ ಬಿಗ್ ಬಾಸ್ ಮನೆಯನ್ನು ಕಣ್ತುಂಬಿಕೊಳ್ಳುವಂತಿಲ್ಲ. ಟಾಸ್ಕ್&zwnj;ಗಳನ್ನು ಆಡುವಾಗ ಬಿಗ್ ಬಾಸ್ ಮನೆಯ ಹೊರಗಿನ ಆವರಣಕ್ಕೆ ಬರುತ್ತಾರೆ, ಮನೆಯೊಳಗೆ ಕಾಲಿಡದೇ ವಾಪಸ್ ವಿಮಾನದೊಳಗೆ ಹೋಗುತ್ತಾರೆ. ನೈಸರ್ಗಿಕ ಕರೆಗಳನ್ನು ಪೂರೈಸಲು ಕೇವಲ ಆಕ್ಟಿವಿಟಿ ಏರಿಯಾದಲ್ಲಿರುವ ವಾಶ್&zwnj;ರೂಮ್ ಬಳಸಬೇಕು ಮತ್ತು ತಕ್ಷಣ ವಾಪಸ್ ವಿಮಾನಕ್ಕೆ ಬಂದು ಕುಳಿತುಕೊಳ್ಳಬೇಕು. ವಿಮಾನದ ಕಿರಿದಾದ ಸೀಟುಗಳಲ್ಲೇ ಮಲಗಿ ನಿದ್ದೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.&lt;/p&gt;&lt;h2&gt;&lt;strong&gt;ವೀಕ್ಷಕರ ಅಸಮಾಧಾನ: ಈ ನಿರ್ಧಾರ ನ್ಯಾಯವೇ?&lt;/strong&gt;&lt;/h2&gt;&lt;p&gt;ಬಿಗ್ ಬಾಸ್ ಶೋಗೆ ಆಯ್ಕೆಯಾಗುವುದು ಪ್ರತಿಯೊಬ್ಬ ಸ್ಪರ್ಧಿಯ ದೊಡ್ಡ ಕನಸು. ತಿಂಗಳುಗಟ್ಟಲೆ ಸಿದ್ಧತೆ ನಡೆಸಿ, ಹತ್ತಾರು ಕನಸುಗಳನ್ನು ಹೊತ್ತು ಬರುವ ಸ್ಪರ್ಧಿಯೊಬ್ಬರು ಮುಖ್ಯ ಮನೆಯ ಸೌಂದರ್ಯವನ್ನು ಆಸ್ವಾದಿಸದೆ, ಮನೆಯೊಳಗೆ ಹೆಜ್ಜೆಯನ್ನೇ ಇಡದೆ ಕೇವಲ 7 ದಿನಗಳಲ್ಲಿ ಹೊರಹೋಗುವುದು ಎಷ್ಟು ಸರಿ? ಇದು ಆ ಸ್ಪರ್ಧಿಗೆ ಎಷ್ಟು ದೊಡ್ಡ ಮಾನಸಿಕ ಆಘಾತ ಮತ್ತು ಕಹಿ ಅನುಭವ ನೀಡಬಹುದು? ಇಂತಹ ಅಮಾನವೀಯ ಟ್ವಿಸ್ಟ್&zwnj;ಗಳ ಅಗತ್ಯವಿತ್ತೇ ಎಂದು ಬಿಗ್ ಬಾಸ್ ಪ್ರೇಕ್ಷಕರು ಪ್ರಶ್ನಿಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/bigg-boss-kannada-season-13-flight-twist-contestants-elimination-without-entering-house-sat/articleshow-w0ug93d"/>
        </item>
        <item>
            <title><![CDATA[Anklet Designs:ಈ ಕಾಲ್ಗೆಜ್ಜೆ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ]]></title>
            <link>https://kannada.asianetnews.com/webstories/fashion/stunning-silver-anklet-designs-for-modern-women-must-try-once-kvn-65dmlwk</link>
            <guid isPermaLink="true">https://kannada.asianetnews.com/webstories/fashion/stunning-silver-anklet-designs-for-modern-women-must-try-once-kvn-65dmlwk</guid>
            <pubDate>Fri, 11 Sep 2026 16:39:01 +0530</pubDate>
            <description><![CDATA[ಈಗಿನ ಕಾಲದ ಹುಡುಗಿಯರು ಭಾರವಾದ ಬೆಳ್ಳಿ ಗೆಜ್ಜೆಗಳನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಸಿಂಪಲ್ ಆಗಿರುವ ಡಿಸೈನ್‌ಗಳನ್ನು ಹೆಚ್ಚು ಇಷ್ಟ ಮಾಡುತ್ತಾರೆ. ಅಂತಹ ಕೆಲವು ಗೆಜ್ಜೆ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಪಾದಗಳ ಅಂದವನ್ನು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27t4bed30vqszarj4k0f783,imgname-whatsapp-image-2026-09-11-at-2.09.58-pm--2--1789116165581.jpeg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/stunning-silver-anklet-designs-for-modern-women-must-try-once-kvn-65dmlwk"/>
        </item>
        <item>
            <title><![CDATA[20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!]]></title>
            <link>https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</link>
            <guid isPermaLink="true">https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g</guid>
            <pubDate>Fri, 11 Sep 2026 16:32:43 +0530</pubDate>
            <description><![CDATA[ವಿಪ್ರೋ ಸಂಸ್ಥೆಯು ತನ್ನ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ಮೂಲಕ ಸುಮಾರು 20,000 ಉದ್ಯೋಗಿಗಳ ಕೆಲಸದ ಸಾಮರ್ಥ್ಯಕ್ಕೆ ಸಮನಾದ ಉತ್ಪಾದಕತೆಯನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಉಳಿತಾಯವಾದ ಮಾನವ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m28209y615dnk1xjagxxm9d7,imgname-sandhya-arun-wipro-1789124421574.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11): &lt;/strong&gt;ಭಾರತೀಯ ಐಟಿ ರಂಗದ ದೈತ್ಯ ಸಂಸ್ಥೆಯಾದ 'ವಿಪ್ರೋ' (Wipro) ಕೈಗೆತ್ತಿಕೊಂಡಿರುವ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳು ಸುಮಾರು 20,000 ಉದ್ಯೋಗಿಗಳ ಒಟ್ಟು ಕೆಲಸದ ಸಾಮರ್ಥ್ಯಕ್ಕೆ (Productivity) ಸಮನಾದ ಯಶಸ್ಸನ್ನು ತಂದುಕೊಟ್ಟಿವೆ ಎಂದು ಕಂಪನಿಯ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಸಂಧ್ಯಾ ಅರುಣ್ ತಿಳಿಸಿದ್ದಾರೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಉಳಿತಾಯವಾಗಿರುವ ಈ ಮಾನವ ಸಂಪನ್ಮೂಲವನ್ನು ಕಂಪನಿಯ ಒಳಗಡೆಯೇ ಇತರ ಪ್ರಮುಖ ಯೋಜನೆಗಳಿಗೆ ಪುನರ್ ನಿಯೋಜಿಸಲಾಗಿದೆ (Redeployed) ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಪ್ರಸ್ತುತ ಸುಮಾರು 315 ಬಿಲಿಯನ್ ಡಾಲರ್ ಮೌಲ್ಯದ ಭಾರತೀಯ ತಂತ್ರಜ್ಞಾನ ಹಾಗೂ ಸಾಫ್ಟ್&zwnj;ವೇರ್ ಸೇವಾ ಕ್ಷೇತ್ರವು (Software Services Industry) ಎಐ ತಂತ್ರಜ್ಞಾನದ ತೀವ್ರ ಅಳವಡಿಕೆಯಿಂದಾಗಿ ನೌಕರರ ನೇಮಕಾತಿ, ಸಾಫ್ಟ್&zwnj;ವೇರ್ ಅಭಿವೃದ್ಧಿ ಹಾಗೂ ಗ್ರಾಹಕರ ಒಪ್ಪಂದಗಳ ಸ್ವರೂಪದಲ್ಲೇ ಭಾರಿ ಬದಲಾವಣೆಗಳನ್ನು ಕಾಣುತ್ತಿದ್ದು, ಈ ಹಂತದಲ್ಲಿ ವಿಪ್ರೋದ ಈ ಬೆಳವಣಿಗೆ ಪ್ರಮುಖ ಎನಿಸಿದೆ.&lt;/p&gt;&lt;h2&gt;&lt;strong&gt;1 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಎಐ ತರಬೇತಿ&lt;/strong&gt;&lt;/h2&gt;&lt;p&gt;ಜೂನ್ ತಿಂಗಳ ವೇಳೆಗೆ ದೇಶಾದ್ಯಂತ ಸುಮಾರು 2,43,000 ಉದ್ಯೋಗಿಗಳನ್ನು ಹೊಂದಿರುವ ವಿಪ್ರೋ, ಈಗ &quot;ಮಾನವ-ಎಐ ಕಾರ್ಯಾಚರಣೆ ಮಾದರಿ&quot;ಗೆ (Human-AI Operating Model) ಸಂಪೂರ್ಣವಾಗಿ ತೆರೆದುಕೊಳ್ಳುತ್ತಿದೆ. ಇದರ ಭಾಗವಾಗಿ ಈಗಾಗಲೇ 1,00,000 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಸುಧಾರಿತ ಎಐ ಸಂಬಂಧಿತ ತರಬೇತಿ ಮತ್ತು ಪ್ರಮಾಣಪತ್ರಗಳನ್ನು (Certifications) ನೀಡಲಾಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;p&gt;&quot;ಇದರರ್ಥ ಒಬ್ಬನೇ ಇಂಜಿನಿಯರ್ ಹಲವು ಎಐ ಏಜೆಂಟ್&zwnj;ಗಳನ್ನು (AI Agents) ನಿರ್ವಹಿಸಬಹುದು, ಅಥವಾ ಅವರನ್ನು ಇತರ ಯೋಜನೆಗಳಿಗೆ ನಿಯೋಜಿಸಬಹುದು ಇಲ್ಲವೇ ಹೊಸ ಪಾತ್ರಕ್ಕಾಗಿ ತರಬೇತಿ ನೀಡಬಹುದು. ಎಐ ಏಜೆಂಟ್&zwnj;ಗಳು ನೇರವಾಗಿ ಮನುಷ್ಯರನ್ನು ಕೆಲಸದಿಂದ ತೆಗೆದುಹಾಕಿ ಅವರ ಜಾಗವನ್ನು ತುಂಬುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ&quot; ಎಂದು ಅವರು ವಿವರಿಸಿದ್ದಾರೆ. ಇತ್ತೀಚೆಗೆ ವಿಪ್ರೋ ಕಾರ್ಯಕಾರಿ ಅಧ್ಯಕ್ಷ ರಿಷದ್ ಪ್ರೇಮ್&zwnj;ಜಿ ಅವರು ವ್ಯಕ್ತಪಡಿಸಿದ್ದ ಕಳಕಳಿ ಮತ್ತು ವಿಚಾರಗಳಿಗೆ ಸಂಧ್ಯಾ ಅರುಣ್ ಅವರ ಈ ಮಾತುಗಳು ಪೂರಕವಾಗಿವೆ.&lt;/p&gt;&lt;h2&gt;&lt;strong&gt;ಐಟಿ ವಲಯದಲ್ಲಿ ಎಐ ಏಜೆಂಟ್&zwnj;ಗಳ ಹವಾ&lt;/strong&gt;&lt;/h2&gt;&lt;p&gt;ಭಾರತದ ಅತಿದೊಡ್ಡ ಸಾಫ್ಟ್&zwnj;ವೇರ್ ರಫ್ತು ಸಂಸ್ಥೆಯಾದ 'ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್' (TCS), ಮುಂಬರುವ ದಿನಗಳಲ್ಲಿ ತನ್ನ ಕಾರ್ಯಪಡೆಯಲ್ಲಿ ನೌಕರರು ಮತ್ತು ಎಐ ಏಜೆಂಟ್&zwnj;ಗಳ ಸಂಖ್ಯೆಯನ್ನು ಸಮಾನವಾಗಿ (50:50) ತರಲು ಯೋಜಿಸುತ್ತಿದ್ದು, ಈ ಕಾರಣಕ್ಕೆ ಸಾಂಪ್ರದಾಯಿಕ ನೌಕರರ ನೇಮಕಾತಿ ಪ್ರಕ್ರಿಯೆ ಮಂದಗತಿಯಲ್ಲಿರಲಿದೆ ಎಂದು ಕಳೆದ ಜೂನ್&zwnj;ನಲ್ಲೇ ಸುಳಿವು ನೀಡಿತ್ತು.&lt;/p&gt;&lt;p&gt;ಗ್ರಾಹಕರಲ್ಲಿ ಎಐ ತಂತ್ರಜ್ಞಾನದ ಬಳಕೆಯನ್ನು ವೇಗಗೊಳಿಸಲು ತಾವೇ ನೇರವಾಗಿ ಗ್ರಾಹಕರ ಆವರಣದಲ್ಲಿ ಕಾರ್ಯನಿರ್ವಹಿಸುವ (Forward-deployed engineers) ತಜ್ಞ ಇಂಜಿನಿಯರ್&zwnj;ಗಳ ತಂಡವನ್ನು ಕಟ್ಟಲು ಪ್ರಮುಖ ಕಂಪನಿಗಳು ಮುಂದಾಗಿವೆ. ಟಿಸಿಎಸ್ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 8,900 ಹಾಗೂ ಇನ್ಫೋಸಿಸ್ (Infosys) ಸುಮಾರು 6,000 ಇಂತಹ ಇಂಜಿನಿಯರ್&zwnj;ಗಳನ್ನು ಸಿದ್ಧಪಡಿಸಲು ಪ್ಲಾನ್ ಮಾಡಿವೆ. ವಿಪ್ರೋ ಸಹ ಇಂತಹ ಇಂಜಿನಿಯರ್&zwnj;ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆಯಾದರೂ, ಯಾವುದೇ ನಿರ್ದಿಷ್ಟ ಗುರಿಯನ್ನು ಬಹಿರಂಗಪಡಿಸಿಲ್ಲ. ತಮ್ಮ ಈ ಶಕ್ತಿ ಇತರ ಪೈಪೋಟಿ ಸಂಸ್ಥೆಗಳಿಗೆ ಸಮನಾಗಿರಲಿದೆ ಎಂದು ಸಿಟಿಒ ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಕೇವಲ ನಿರ್ದಿಷ್ಟ ಹುದ್ದೆಗಳ ಮೇಲಷ್ಟೇ ಗಮನ ಹರಿಸುವುದನ್ನು ತಡೆದಿರುವ ಅವರು, &quot;ಎಲ್ಲಾ ಇಂಜಿನಿಯರ್&zwnj;ಗಳು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದೇ ಇಂದಿನ ಪ್ರಮುಖ ಸವಾಲಾಗಿದೆ&quot; ಎಂದಿದ್ದಾರೆ.&lt;/p&gt;&lt;p&gt;&quot;ನಮ್ಮ ಗಮನ ಉತ್ಪಾದಕತೆಯಿಂದ (Productivity) ಅಂತಿಮ ಫಲಿತಾಂಶದತ್ತ (Outcomes) ಬದಲಾಗಬೇಕಿದೆ. ಎಐ ತಂತ್ರಜ್ಞಾನವು ಗ್ರಾಹಕರ ಅನುಭವವನ್ನು ಉತ್ತಮಗೊಳಿಸುತ್ತದೆಯೇ, ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸುತ್ತದೆಯೇ ಮತ್ತು ವ್ಯಾಪಾರದ ಗುರಿಗಳನ್ನು ತಲುಪಲು ನೆರವಾಗುತ್ತದೆಯೇ ಎಂಬುದರ ಆಧಾರದ ಮೇಲೆ ಅದರ ಮೌಲ್ಯಮಾಪನ ನಡೆಯಬೇಕು&quot; ಎಂದು ಸಂಧ್ಯಾ ಅರುಣ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಆದಾಯ ಗಳಿಕೆಯಲ್ಲಿ ಹಿನ್ನಡೆ?&lt;/strong&gt;&lt;/h2&gt;&lt;p&gt;ಭಾರತದ ಪ್ರಮುಖ ನಾಲ್ಕು ಐಟಿ ಕಂಪನಿಗಳ ಪೈಕಿ ವಿಪ್ರೋ ಒಂದೇ ತನ್ನ 'ಎಐ ಆದಾಯವನ್ನು' (AI Revenue) ಪ್ರತ್ಯೇಕವಾಗಿ ಬಹಿರಂಗಪಡಿಸದಿರುವ ಕಂಪನಿಯಾಗಿದೆ.&lt;/p&gt;&lt;p&gt;ಈ ಕುರಿತು ವಿಶ್ಲೇಷಣೆ ನೀಡಿರುವ 'ನಾರ್ಡ್-ಐಕ್ಯೂ ರಿಸರ್ಚ್'ನ (Nord-IQ Research) ಪ್ರಮುಖ ವಿಶ್ಲೇಷಕ ಮನೋಜ್ ಚಂದ್ರ ಝಾ, &quot;ಪೈಪೋಟಿ ಸಂಸ್ಥೆಗಳಿಗೆ ಹೋಲಿಸಿದರೆ ವಿಪ್ರೋ ಇನ್ನು ಸಹ ಎಐ ನಿಂದ ನೇರ ಆದಾಯ ಗಳಿಸುವ (Commercialization/Monetisation) ವಿಚಾರದಲ್ಲಿ ಆರಂಭಿಕ ಹಂತದಲ್ಲೇ ಇದೆ. ಪ್ರಸ್ತುತ ಕಂಪನಿಯು ಮೂಲಸೌಕರ್ಯ ಹಾಗೂ ತರಬೇತಿಗಾಗಿ ವೆಚ್ಚ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಎಐ ಒಪ್ಪಂದಗಳು ನೇರ ಆದಾಯವಾಗಿ ಮತ್ತು ಶೇಕಡಾವಾರು ಲಾಭವಾಗಿ ಲಾಭದಾಯಕವಾಗಿ ಬದಲಾದಾಗ ಕಂಪನಿಯ ನಿಜವಾದ ಪರೀಕ್ಷೆ ಎದುರಾಗಲಿದೆ&quot; ಎಂದಿದ್ದಾರೆ.&lt;/p&gt;&lt;p&gt;ಎಐ ತರಬೇತಿ ಮತ್ತು ಮಾರುಕಟ್ಟೆ ಪಾಲುದಾರಿಕೆಯಲ್ಲಿ ವಿಪ್ರೋ ಹೂಡಿಕೆಯು ಟಿಸಿಎಸ್, ಇನ್ಫೋಸಿಸ್ ಮತ್ತು ಹೆಚ್&zwnj;ಸಿಎಲ್&zwnj;ಟೆಕ್ (HCLTech) ಕಂಪನಿಗಳಿಗೆ ಸಮನಾಗಿದೆಯಾದರೂ, ಅದನ್ನು ನೇರ ವಾಣಿಜ್ಯ ಲಾಭವಾಗಿ ಬದಲಾಯಿಸುವ ಪಕ್ವತೆಯಲ್ಲಿ ವಿಪ್ರೋ ಕೊಂಚ ಹಿಂದುಳಿದಿದೆ ಎಂದು ಝಾ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[technology]]></category>
            <dc:creator>Santosh Naik</dc:creator>
            <atom:link href="https://kannada.asianetnews.com/technology/wipro-ai-initiatives-free-capacity-equivalent-to-20k-workers-san/articleshow-mihvg9g"/>
        </item>
        <item>
            <title><![CDATA[ಉಪ್ಪಿಗೆ ನೀರು ಬಿದ್ರೆ ಇದೊಂದು ಪದಾರ್ಥ ಸೇರಿಸಿ.. ಕೆಲವೇ ಗಂಟೇಲಿ ಡ್ರೈ ಆಗುತ್ತೆ]]></title>
            <link>https://kannada.asianetnews.com/webstories/kitchen/why-you-should-put-rice-in-damp-salt-8ogfqo3</link>
            <guid isPermaLink="true">https://kannada.asianetnews.com/webstories/kitchen/why-you-should-put-rice-in-damp-salt-8ogfqo3</guid>
            <pubDate>Fri, 11 Sep 2026 16:28:26 +0530</pubDate>
            <description><![CDATA[Remove moisture from salt: ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಕ್ಕೆ ಅಪ್ಪಿತಪ್ಪಿ ನೀರು ಬಿದ್ದರೆ ಅಥವಾ ಗಾಳಿಗೆ ಉಪ್ಪು ನೀರಾದರೆ ಚಿಂತೆ ಬೇಡವೇ ಬೇಡ!]]></description>
            <media:content url="https://static.asianetnews.com/images/w-1280,h-720,format-jpg,imgid-01knbhnf7hr5fzvkdnp7taxv5q,imgname-salt-1775282863345.jpg" type="image/jpeg" height="390" width="690"/>
            <category><![CDATA[kitchen]]></category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/kitchen/why-you-should-put-rice-in-damp-salt-8ogfqo3"/>
        </item>
        <item>
            <title><![CDATA[Election: ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ; ಕಾಲೇಜು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ! ಗೆದ್ದು ಬೀಗಿದ ABVP!]]></title>
            <link>https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs</link>
            <guid isPermaLink="true">https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs</guid>
            <pubDate>Fri, 11 Sep 2026 16:28:22 +0530</pubDate>
            <description><![CDATA[ಕಾಲೇಜು ಚುನಾವಣೆಯಲ್ಲಿ, ಕೊನೆ ಕ್ಷಣದಲ್ಲಿ ಸರ್ಕಾರ ಹೊರಡಿಸಿದ ನೇರ ಚುನಾವಣೆ ಆದೇಶವನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತು. ನಿಗದಿಯಂತೆ ನಡೆದ ಪರೋಕ್ಷ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m281w08xbb7r692emjj5kyh2,imgname-abvp-1789124280605.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಕರಾವಳಿಯ ಶೈಕ್ಷಣಿಕ ಕೇಂದ್ರ ಮಂಗಳೂರಿನಲ್ಲಿ ನಡೆದ ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಈಗ ರಾಜ್ಯ ರಾಜಕೀಯ ಮತ್ತು ಶೈಕ್ಷಣಿಕ ವಲಯದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ ಉಂಟುಮಾಡಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲಿತ ಅಭ್ಯರ್ಥಿಗಳು, ಸರ್ಕಾರದ ಆದೇಶಕ್ಕೆ ನೇರ ಠಕ್ಕರ್ ನೀಡಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ಮಾಸ್ಟರ್ ಪ್ಲಾನ್ ಮತ್ತು ಕೊನೇ ಕ್ಷಣದ ಆದೇಶ!&lt;/strong&gt;&lt;/h2&gt;&lt;p&gt;ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಐತಿಹಾಸಿಕ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಿಗದಿಯಾಗಿತ್ತು. ಅಲ್ಲಿಯವರೆಗೆ ಚಾಲ್ತಿಯಲ್ಲಿದ್ದ ನಿಯಮದಂತೆ, ತರಗತಿ ಪ್ರತಿನಿಧಿಗಳು ಮತದಾನ ಮಾಡುವ &lsquo;ಪರೋಕ್ಷ ಮತದಾನ&rsquo; (Indirect Election) ಪದ್ಧತಿಯಲ್ಲಿ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ, ಪರೋಕ್ಷ ಚುನಾವಣೆ ನಡೆದರೆ ಎಬಿವಿಪಿ ಬೆಂಬಲಿತರೇ ಗೆದ್ದು ಬೀಗಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ, ಆಡಳಿತಾರೂಢ ಸರ್ಕಾರ ಮತ್ತು ಸಚಿವರಿಂದ ಚುನಾವಣೆ ತಡೆಯಲು ಅಥವಾ ಮುಂದೂಡಲು ವಿಶ್ವವಿದ್ಯಾಲಯದ ಮೇಲೆ ತೀವ್ರ ಒತ್ತಡ ಹೇರಲಾಗಿತ್ತು ಎನ್ನಲಾಗಿದೆ.&lt;/p&gt;&lt;h3&gt;&lt;strong&gt;ಸರ್ಕಾರಕ್ಕೆ ಠಕ್ಕರ್!&lt;/strong&gt;&lt;/h3&gt;&lt;p&gt;ಈ ಚುನಾವಣೆಯನ್ನು ಹೇಗಾದರೂ ಮಾಡಿ ತಡೆಯಲು ತರಾತುರಿಯಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದ ಸರ್ಕಾರ, ನಿನ್ನೆ ರಾತ್ರೋರಾತ್ರಿ ರಾಜ್ಯಾದ್ಯಂತ ಕಾಲೇಜು ಚುನಾವಣೆ&zwnj;ಗೆ ಹೊಸ ನಿಯಮ ಜಾರಿಗೆ ತಂದು ಆದೇಶ ಹೊರಡಿಸಿತು. ಇನ್ಮುಂದೆ ಪರೋಕ್ಷ ಚುನಾವಣೆ ಬೇಡ, ಎಲ್ಲಾ ವಿದ್ಯಾರ್ಥಿಗಳು ನೇರವಾಗಿ ಮತ ಚಲಾಯಿಸುವ &lsquo;ನೇರ ಚುನಾವಣೆ&rsquo; ನಡೆಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ಆದೇಶ ಹೊರಡಿಸಲಾಯಿತು. ಈ ಮೂಲಕ ಇಂದಿನ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.&lt;/p&gt;&lt;h3&gt;&lt;strong&gt;ಸರಕಾರಿ ಆದೇಶಕ್ಕೆ ಬೆಲೆ ಕೊಡದ ವಿವಿ: ಕಾನೂನುಬದ್ಧ ವಾದ!&lt;/strong&gt;&lt;/h3&gt;&lt;p&gt;ಆದರೆ, ಸರ್ಕಾರದ ಈ ತರಾತುರಿಯ ಆದೇಶಕ್ಕೂ ಮತ್ತು ಸಚಿವರ ರಾಜಕೀಯ ಒತ್ತಡಕ್ಕೂ ಮಂಗಳೂರು ವಿಶ್ವವಿದ್ಯಾಲಯ ಮಣಿಯಲಿಲ್ಲ. ಸೆಪ್ಟೆಂಬರ್ 10 ರಂದು ಸರ್ಕಾರಿ ಆದೇಶ ಬರುವುದಕ್ಕಿಂತ ಮುಂಚಿತವಾಗಿಯೇ ಮಂಗಳೂರು ವಿವಿ ಕಾಲೇಜಿನ ಚುನಾವಣಾ ವೇಳಾಪಟ್ಟಿ ಘೋಷಣೆಯಾಗಿತ್ತು. ನಿಯಮಾವಳಿಗಳ ಪ್ರಕಾರ ಒಮ್ಮೆ ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಮೇಲೆ ಮಧ್ಯದಲ್ಲಿ ಬಂದ ಹೊಸ ಆದೇಶಗಳನ್ನು ಅನ್ವಯಿಸಲು ಬರುವುದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿ ನಾಯಕರು ಪ್ರಬಲವಾಗಿ ವಾದಿಸಿದರು. ಸರ್ಕಾರದ ಕಡೆಯಿಂದ ಎಷ್ಟೇ ಒತ್ತಡ ಬಂದರೂ, ವಿಶ್ವವಿದ್ಯಾಲಯವು ನಿಗದಿತ ವೇಳಾಪಟ್ಟಿಯಂತೆಯೇ ಪರೋಕ್ಷ ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು.&lt;/p&gt;&lt;h3&gt;&lt;strong&gt;ಎಬಿವಿಪಿ ಭರ್ಜರಿ ಜಯಭೇರಿ ಹಾಗೂ ವಿಜಯೋತ್ಸವ!&lt;/strong&gt;&lt;/h3&gt;&lt;p&gt;ಪರೋಕ್ಷ ಮತದಾನದ ಮೂಲಕ ನಡೆದ ಈ ರೋಚಕ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಗೆಲುವು ಸಾಧಿಸಿ ಬೀಗಿದ್ದಾರೆ. ಸರ್ಕಾರದ ಹಸ್ತಕ್ಷೇಪ ಮತ್ತು ಕಟ್ಟುನಿಟ್ಟಿನ ಆದೇಶದ ನಡುವೆಯೂ ಎಬಿವಿಪಿ ತನ್ನ ಪದಾಧಿಕಾರಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.&lt;/p&gt;&lt;h3&gt;&lt;strong&gt;ಎಬಿವಿಪಿಯಿಂದ ಸಂಭ್ರಮ!&lt;/strong&gt;&lt;/h3&gt;&lt;p&gt;ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಮಂಗಳೂರಿನ ಹಂಪನಕಟ್ಟೆಯ ಕಾಲೇಜು ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ವಿಜಯೋತ್ಸವ ಆಚರಿಸಿದರು. ಭಗವಾ ಧ್ವಜ ಹಿಡಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ವಿಜಯದ ಸಂಭ್ರಮ ಆಚರಿಸಿದರು. ತರಾತುರಿಯಲ್ಲಿ ಆದೇಶ ಹೊರಡಿಸಿ ಕಾಲೇಜು ಚುನಾವಣೆಯಲ್ಲಿ ರಾಜಕೀಯ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರಕ್ಕೆ ವಿದ್ಯಾರ್ಥಿ ಶಕ್ತಿ ತಕ್ಕ ಉತ್ತರ ನೀಡಿದೆ ಎಂದು ಎಬಿವಿಪಿ ನಾಯಕರು ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ, ಮಂಗಳೂರು ವಿವಿ ಕಾಲೇಜು ಚುನಾವಣೆ ಈಗ ರಾಜ್ಯಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ತಂದಿಟ್ಟಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/mangalore-university-student-union-election-abvp-victory-congress-government-order-direct-indirect-election-bmk/articleshow-5wb42qs"/>
        </item>
        <item>
            <title><![CDATA[ಮಗು ಬೇಕೆಂದುಕೊಂಡಿರಲಿಲ್ಲ, ಆದರೆ ಬದುಕನ್ನೇ ಬದಲಿಸ್ತು ಆ ಸರ್ಪ್ರೈಸ್: ಸಮಂತಾ ಸೀಕ್ರೆಟ್ ಏನು?]]></title>
            <link>https://kannada.asianetnews.com/entertainment/telugu-actress-samantha-pregnancy-actress-reveals-how-her-pregnancy-came-as-a-big-surprise-gvd/articleshow-d1o1ctb</link>
            <guid isPermaLink="true">https://kannada.asianetnews.com/entertainment/telugu-actress-samantha-pregnancy-actress-reveals-how-her-pregnancy-came-as-a-big-surprise-gvd/articleshow-d1o1ctb</guid>
            <pubDate>Fri, 11 Sep 2026 16:27:07 +0530</pubDate>
            <description><![CDATA[ನಟಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಗು ಬೇಕೆಂದುಕೊಂಡಿರದಿದ್ದರೂ ಪ್ರೆಗ್ನೆನ್ಸಿ ದೊಡ್ಡ ಸರ್ಪ್ರೈಸ್ ಆಯಿತು ಎಂದು ಸಮಂತಾ ಹೇಳಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m281sb57v623w8jcm1tsbdw9,imgname-j-1789124193447.png" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ಸಮಂತಾ ರುತ್ ಪ್ರಭು ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಧಿಮೋರು ಸದ್ಯ ತಮ್ಮ ಜೀವನದ ಅತ್ಯಂತ ಖುಷಿಯ ಕ್ಷಣಗಳನ್ನು ಎದುರು ನೋಡುತ್ತಿದ್ದಾರೆ. ದಂಪತಿ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಆದರೆ ವಿಶೇಷವೆಂದರೆ, ಈ ಪ್ರೆಗ್ನೆನ್ಸಿ ಇಬ್ಬರೂ ನಿರೀಕ್ಷಿಸಿದ್ದ ಸಂಗತಿಯೇ ಆಗಿರಲಿಲ್ಲವಂತೆ. ಮಗು ಆಗದಿದ್ದರೂ ಜೀವನವನ್ನು ಸಂತೋಷದಿಂದ ನಡೆಸಿಕೊಂಡು ಹೋಗಬಹುದು ಎಂದು ಇಬ್ಬರೂ ಮೊದಲೇ ನಿರ್ಧರಿಸಿಕೊಂಡಿದ್ದರಂತೆ.&lt;/p&gt;&lt;p&gt;ಹೀಗಾಗಿ ಮಕ್ಕಳ ವಿಚಾರದಲ್ಲಿ ಯಾವುದೇ ಒತ್ತಡ ಅಥವಾ ಆತುರ ಇರಲಿಲ್ಲ. ಆದರೆ ಇದೀಗ ಸಮಂತಾ ಜೀವನಕ್ಕೆ ಹೊಸ ಅತಿಥಿಯ ಆಗಮನದ ಸುದ್ದಿ ದೊಡ್ಡ ಸರ್ಪ್ರೈಸ್ ಆಗಿ ಪರಿಣಮಿಸಿದೆ. ಕಳೆದ ವರ್ಷ ಡಿಸೆಂಬರ್&zwnj;ನಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದ ಸಮಂತಾ ಮತ್ತು ರಾಜ್, ಈ ವರ್ಷದ ಜೂನ್&zwnj;ನಲ್ಲಿ ತಾವು ಪೋಷಕರಾಗುತ್ತಿರುವುದನ್ನು ಘೋಷಿಸಿದ್ದರು.&lt;/p&gt;&lt;p&gt;&lt;strong&gt;ಮಕ್ಕಳ ಬಗ್ಗೆ ಮೊದಲೇ ಸ್ಪಷ್ಟವಾಗಿತ್ತು&lt;/strong&gt;&lt;/p&gt;&lt;p&gt;ಸಮಂತಾ ಹೇಳಿಕೊಂಡಿರುವ ಪ್ರಕಾರ, ಮಕ್ಕಳಾಗಲೇಬೇಕು ಎಂಬ ನಿರ್ಧಾರ ಇಬ್ಬರಲ್ಲೂ ಇರಲಿಲ್ಲ. ಬಹುಶಃ ತಮಗೆ ಮಕ್ಕಳಾಗದೇ ಇರಬಹುದು ಎಂಬ ಸಾಧ್ಯತೆಯನ್ನೂ ಅವರು ಒಪ್ಪಿಕೊಂಡಿದ್ದರು. ಮಗು ಬೇಕೇ ಅಥವಾ ಬೇಡವೇ ಎಂಬ ವಿಚಾರದಲ್ಲಿ ಇಬ್ಬರೂ ತಮ್ಮದೇ ಆದ ಸ್ಪಷ್ಟತೆಯನ್ನು ಹೊಂದಿದ್ದರು. ಮಕ್ಕಳಿಲ್ಲದಿದ್ದರೂ ಬದುಕನ್ನು ಸಂತೋಷವಾಗಿ ನಡೆಸಲು ಸಿದ್ಧರಾಗಿದ್ದರು. ಇದೇ ಕಾರಣಕ್ಕೆ ಸಮಂತಾ ಈ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.&lt;/p&gt;&lt;p&gt;&lt;strong&gt;ಆ ಒಂದು ದಿನ ಗೊತ್ತಾಯ್ತು ಬದುಕಿನ ದೊಡ್ಡ ಸುದ್ದಿ!&lt;/strong&gt;&lt;/p&gt;&lt;p&gt;ಆದರೆ ವಿಧಿ ಬೇರೆಯದೇ ಪ್ಲಾನ್ ಮಾಡಿಕೊಂಡಿತ್ತು. &lsquo;ಥಸ್ಸಾಡಿಯಾ&rsquo; ಹಾಡಿನ ಚಿತ್ರೀಕರಣದ ಮೊದಲ ದಿನವೇ ಸಮಂತಾಗೆ ತಾವು ಗರ್ಭಿಣಿ ಎಂಬ ವಿಚಾರ ತಿಳಿದುಬಂದಿತಂತೆ. ಆ ಸಂದರ್ಭದಲ್ಲಿ ಅವರಿಗೆ ಸ್ವಲ್ಪ ಅನಾರೋಗ್ಯ ಕಾಡುತ್ತಿತ್ತು. ತಪಾಸಣೆ ಮಾಡಿಸಿಕೊಂಡಾಗ ಗರ್ಭಧಾರಣೆಯಾಗಿರುವುದು ಗೊತ್ತಾಗಿದೆ.&lt;/p&gt;&lt;p&gt;ಈ ಸುದ್ದಿ ಸಮಂತಾ ಮತ್ತು ರಾಜ್ ಅವರಿಗೆ ಅಪಾರ ಸಂತೋಷ ತಂದಿದೆ. ಮಗುವಿನ ಆಗಮನ ತಮ್ಮ ಬದುಕಿನಲ್ಲೇ ದೊಡ್ಡ ಬದಲಾವಣೆ ತರಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಸಮಂತಾ. ಮಗು ಹುಟ್ಟಿದ ಬಳಿಕ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಹಲವರು ಹೇಳಿರುವುದನ್ನೂ ಅವರು ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಸಿನಿಮಾ ರಿಲೀಸ್ ಬಳಿಕ ಪ್ರೆಗ್ನೆನ್ಸಿ ಅನೌನ್ಸ್&zwnj;ಮೆಂಟ್&lt;/strong&gt;&lt;/p&gt;&lt;p&gt;ಸಮಂತಾ ಅಭಿನಯದ &lsquo;ಮಾ ಇಂಟಿ ಬಂಗಾರಂ&rsquo; ಸಿನಿಮಾ ಜೂನ್&zwnj;ನಲ್ಲಿ ಚಿತ್ರಮಂದಿರಗಳಿಗೆ ಬಂದಿತ್ತು. ಸಿನಿಮಾ ಬಿಡುಗಡೆಯಾದ ಮರುದಿನವೇ ಸಮಂತಾ ತಮ್ಮ ಪ್ರೆಗ್ನೆನ್ಸಿ ಸುದ್ದಿಯನ್ನು ಜಗತ್ತಿನ ಮುಂದೆ ಬಹಿರಂಗಪಡಿಸಿದ್ದರು. ಇದೀಗ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ನಡುವೆಯೇ ಸಮಂತಾ ಅವರ ಸಿನಿಮಾ ಪಯಣವೂ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ.&lt;/p&gt;&lt;h2&gt;&lt;strong&gt;ಮತ್ತೆ ಬಣ್ಣದ ಲೋಕದಲ್ಲಿ ಸಮಂತಾ&lt;/strong&gt;&lt;/h2&gt;&lt;p&gt;ಒಂದು ಹಂತದಲ್ಲಿ ಚಿತ್ರರಂಗದಿಂದ ದೂರವಾಗಬೇಕು ಎಂದುಕೊಂಡಿದ್ದ ಸಮಂತಾ, ಇದೀಗ ಮತ್ತೆ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲದಿಂದ ಮತ್ತೆ ಬಣ್ಣದ ಲೋಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿರುವ ಅವರು, ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಜವಾಬ್ದಾರಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ. ಇನ್ನು ಸಮಂತಾ-ರಾಜ್ ದಂಪತಿಯ ಈ ಹೊಸ ಪಯಣಕ್ಕೆ ಸಿನಿರಸಿಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/telugu-actress-samantha-pregnancy-actress-reveals-how-her-pregnancy-came-as-a-big-surprise-gvd/articleshow-d1o1ctb"/>
        </item>
        <item>
            <title><![CDATA[2027 ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ಓಪನ್, ಮುಂದಿನ ವರ್ಷ ಹಣ, ಉದ್ಯೋಗ, ಯಶಸ್ಸು ಪಕ್ಕಾ]]></title>
            <link>https://kannada.asianetnews.com/gallery/festivals/2027-lucky-zodiac-signs-may-you-have-money-job-and-success-next-year-suh-yxggnr1</link>
            <guid isPermaLink="true">https://kannada.asianetnews.com/gallery/festivals/2027-lucky-zodiac-signs-may-you-have-money-job-and-success-next-year-suh-yxggnr1</guid>
            <pubDate>Fri, 11 Sep 2026 16:26:06 +0530</pubDate>
            <description><![CDATA[ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಅದೃಷ್ಟ, ಜ್ಞಾನ, ವಿಸ್ತರಣೆ ಮತ್ತು ಅವಕಾಶಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪರಿಣಾಮ 12 ರಾಶಿಗಳ ಮೇಲೂ ವಿಭಿನ್ನ ರೀತಿಯಲ್ಲಿ ಬೀರುತ್ತದೆ ಎಂದು ಜ್ಯೋತಿಷ್ಯ ನಂಬಿಕೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m281cjp2q2twf7re2xjpswcq,imgname-2027-lucky-zodiac-signs-may-you-have-money-job-and-success-next-year-1789123775167.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಅದೃಷ್ಟ, ಜ್ಞಾನ, ವಿಸ್ತರಣೆ ಮತ್ತು ಅವಕಾಶಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪರಿಣಾಮ 12 ರಾಶಿಗಳ ಮೇಲೂ ವಿಭಿನ್ನ ರೀತಿಯಲ್ಲಿ ಬೀರುತ್ತದೆ ಎಂದು ಜ್ಯೋತಿಷ್ಯ ನಂಬಿಕೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಅದೃಷ್ಟ, ಜ್ಞಾನ, ವಿಸ್ತರಣೆ ಮತ್ತು ಅವಕಾಶಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಿದಾಗ ಅದರ ಪರಿಣಾಮ 12 ರಾಶಿಗಳ ಮೇಲೂ ವಿಭಿನ್ನ ರೀತಿಯಲ್ಲಿ ಬೀರುತ್ತದೆ ಎಂದು ಜ್ಯೋತಿಷ್ಯ ನಂಬಿಕೆ. ಇದೀಗ ಗುರು ಸಿಂಹ ರಾಶಿಯಲ್ಲಿ ಸಂಚರಿಸುತ್ತಿದ್ದು, ಜುಲೈ 2027ರವರೆಗೆ ಈ ಸ್ಥಾನದಲ್ಲಿರಲಿದೆ ಎಂದು ವರದಿ ತಿಳಿಸಿದೆ. ಈ ಅವಧಿ ಆತ್ಮವಿಶ್ವಾಸ, ನಾಯಕತ್ವ, ಸೃಜನಶೀಲತೆ ಮತ್ತು ಹೊಸ ಅವಕಾಶಗಳಿಗೆ ಹೆಚ್ಚು ಮಹತ್ವ ನೀಡುವ ಸಮಯವಾಗಿರಬಹುದು. ವಿಶೇಷವಾಗಿ 4 ರಾಶಿಗಳಿಗೆ ಈ ಸಂಚಾರ ಹೆಚ್ಚು ಅನುಕೂಲಕರವಾಗಿರಬಹುದು ಎಂದು ಜ್ಯೋತಿಷಿಗಳ ಅಭಿಪ್ರಾಯವನ್ನು ವರದಿ ಉಲ್ಲೇಖಿಸಿದೆ.&lt;/p&gt;&lt;img&gt;&lt;p&gt;ಗುರು ಸಿಂಹ ರಾಶಿಯಲ್ಲೇ ಸಂಚರಿಸುತ್ತಿರುವುದರಿಂದ ಸಿಂಹ ರಾಶಿಯವರಿಗೆ ಈ ಅವಧಿ ವಿಶೇಷವಾಗಿರಬಹುದು. ಉದ್ಯೋಗದಲ್ಲಿ ಬೆಳವಣಿಗೆ, ಹೊಸ ಅವಕಾಶಗಳು, ಹೆಸರು-ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆ ಎದುರಾಗಬಹುದು. ಬಹಳ ದಿನಗಳಿಂದ ಮುಂದೂಡುತ್ತಿದ್ದ ಕೆಲಸ ಅಥವಾ ಕನಸಿನ ಯೋಜನೆಯನ್ನು ಆರಂಭಿಸಲು ಇದು ಸೂಕ್ತ ಸಮಯವಾಗಬಹುದು. ತಮ್ಮ ಸಾಮರ್ಥ್ಯವನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸುವವರಿಗೆ ಹೊಸ ಬಾಗಿಲುಗಳು ತೆರೆದುಕೊಳ್ಳಬಹುದು ಎಂದು ಜ್ಯೋತಿಷ್ಯ ವಿಶ್ಲೇಷಣೆ ಹೇಳುತ್ತದೆ.&lt;/p&gt;&lt;img&gt;&lt;p&gt;ಕುಂಭ ರಾಶಿಯವರಿಗೆ ಗುರು ಸಂಚಾರವು ಸಂಬಂಧಗಳು ಮತ್ತು ಸಹಭಾಗಿತ್ವದ ವಿಚಾರದಲ್ಲಿ ಬದಲಾವಣೆ ತರಬಹುದು. ಹೊಸ ಸ್ನೇಹಿತರು, ಮಾರ್ಗದರ್ಶಕರು, ಉದ್ಯಮ ಪಾಲುದಾರರು ಅಥವಾ ವೃತ್ತಿಜೀವನದಲ್ಲಿ ನೆರವಾಗುವ ವ್ಯಕ್ತಿಗಳ ಪರಿಚಯವಾಗುವ ಸಾಧ್ಯತೆ ಇದೆ. ಸರಿಯಾದ ಜನರೊಂದಿಗೆ ಕೈಜೋಡಿಸುವುದು ವೃತ್ತಿಜೀವನದ ಪ್ರಗತಿಗೆ ಸಹಕಾರಿಯಾಗಬಹುದು. ಆದರೆ ಎದುರಾಗುವ ಪ್ರತಿಯೊಂದು ಅವಕಾಶವನ್ನೂ ಸ್ವೀಕರಿಸುವ ಬದಲು, ತಮ್ಮ ಗುರಿಗೆ ಹೊಂದಿಕೆಯಾಗುವ ಸಂಬಂಧಗಳು ಮತ್ತು ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಲಿದೆ.&lt;/p&gt;&lt;img&gt;&lt;p&gt;ವೃಷಭ ರಾಶಿಯವರಿಗೆ ಗುರು ಸಂಚಾರವು ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಬೆಳವಣಿಗೆ ತರಬಹುದು. ಮನೆ ಬದಲಾವಣೆ, ಮನೆ ನವೀಕರಣ ಅಥವಾ ಕುಟುಂಬದೊಂದಿಗೆ ಸಂಬಂಧ ಮತ್ತಷ್ಟು ಗಟ್ಟಿಯಾಗುವಂತಹ ಬೆಳವಣಿಗೆಗಳು ಸಂಭವಿಸಬಹುದು. ಹಣಕಾಸಿನ ಯಶಸ್ಸಿನ ಜೊತೆಗೆ ಮನಸ್ಸಿನ ನೆಮ್ಮದಿಗೂ ಈ ಅವಧಿಯಲ್ಲಿ ಹೆಚ್ಚಿನ ಮಹತ್ವ ಸಿಗಬಹುದು. ಹಳೆಯ ನಿರೀಕ್ಷೆಗಳನ್ನು ಬದಿಗಿಟ್ಟು ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುವುದರಿಂದ ಉತ್ತಮ ಅವಕಾಶಗಳು ಸಿಗಬಹುದು ಎಂದು ವರದಿ ತಿಳಿಸಿದೆ.&lt;/p&gt;&lt;img&gt;&lt;p&gt;ವೃಶ್ಚಿಕ ರಾಶಿಯವರು ಸಾಮಾನ್ಯವಾಗಿ ತಮ್ಮ ಕೆಲಸವನ್ನು ಹೆಚ್ಚು ಪ್ರಚಾರವಿಲ್ಲದೆ ಮಾಡುವವರಾಗಿದ್ದರೂ, ಗುರು ಸಿಂಹದಲ್ಲಿ ಇರುವ ಈ ಅವಧಿಯಲ್ಲಿ ಅವರ ಕೆಲಸ ಹೆಚ್ಚು ಜನರ ಗಮನ ಸೆಳೆಯಬಹುದು. ಉದ್ಯೋಗದಲ್ಲಿ ಬಡ್ತಿ, ಹೊಸ ಜವಾಬ್ದಾರಿ, ಸ್ವಂತ ಉದ್ಯಮ ಆರಂಭಿಸುವ ಅವಕಾಶ ಅಥವಾ ವೈಯಕ್ತಿಕ ಬ್ರ್ಯಾಂಡ್ ಬೆಳೆಸಿಕೊಳ್ಳುವಂತಹ ಬೆಳವಣಿಗೆಗಳು ಎದುರಾಗಬಹುದು. ಇಷ್ಟು ದಿನ ಮಾಡಿದ ಪರಿಶ್ರಮಕ್ಕೆ ಮನ್ನಣೆ ಸಿಗುವ ಸಮಯವಾಗಬಹುದು ಎಂದು ಜ್ಯೋತಿಷ್ಯ ವಿಶ್ಲೇಷಣೆ ಹೇಳುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಪ್ರಕಾರ ಅವಕಾಶಗಳು ಎದುರಾಗುವುದು ಒಂದು ಭಾಗವಾದರೆ, ಅವುಗಳನ್ನು ಬಳಸಿಕೊಳ್ಳಲು ವ್ಯಕ್ತಿಯ ಪ್ರಯತ್ನವೂ ಮುಖ್ಯ. ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಸಾಮರ್ಥ್ಯವನ್ನು ನಂಬುವುದು, ದೀರ್ಘಕಾಲದ ಗುರಿಗಳಿಗೆ ಹೊಂದಿಕೆಯಾಗುವ ಅವಕಾಶಗಳನ್ನು ಸ್ವೀಕರಿಸುವುದು ಮತ್ತು ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಈ ಅವಧಿಯಲ್ಲಿ ಸಹಾಯಕವಾಗಬಹುದು.&lt;/p&gt;&lt;p&gt;&lt;strong&gt;ಈ 4 ರಾಶಿಗಳೇ ಯಾವವು?&lt;/strong&gt;&lt;/p&gt;&lt;p&gt;ಸಿಂಹ, ಕುಂಭ, ವೃಷಭ ಮತ್ತು ವೃಶ್ಚಿಕ &mdash; ಗುರು ಸಿಂಹ ರಾಶಿಯಲ್ಲಿ ಇರುವ ಅವಧಿಯಲ್ಲಿ ಈ ನಾಲ್ಕು ರಾಶಿಗಳು ವಿಶೇಷವಾಗಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು ಎಂದು ವರದಿ ಉಲ್ಲೇಖಿಸಿದೆ. ಜುಲೈ 2027ರವರೆಗೆ ಈ ಸಂಚಾರ ಮುಂದುವರಿಯಲಿದೆ ಎಂದು ವರದಿಯಲ್ಲಿದೆ.&lt;/p&gt;&lt;p&gt;ಸೂಚನೆ: ಇದು ಜ್ಯೋತಿಷ್ಯ ಆಧಾರಿತ ಸಾಮಾನ್ಯ ಮಾಹಿತಿಯಾಗಿದ್ದು, ವೈಯಕ್ತಿಕ ಭವಿಷ್ಯದ ಖಚಿತ ಭವಿಷ್ಯವಾಣಿ ಎಂದು ಪರಿಗಣಿಸಬಾರದು.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/2027-lucky-zodiac-signs-may-you-have-money-job-and-success-next-year-suh-yxggnr1"/>
        </item>
        <item>
            <title><![CDATA[ಆಫ್ರಿಕಾದಲ್ಲಿ ಇನ್ನೂ ವಹಿವಾಟು ಶುರುವಾಗಿಲ್ಲ, ವಿದೇಶಿ ಹೂಡಿಕೆ, ₹2 ಕೋಟಿ ಹಣದ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ]]></title>
            <link>https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc</link>
            <guid isPermaLink="true">https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc</guid>
            <pubDate>Fri, 11 Sep 2026 16:25:08 +0530</pubDate>
            <description><![CDATA[ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕರೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಹಣಕ್ಕೆ ಮತ್ತು ವಿದೇಶಿ ಕಂಪನಿ ನೋಂದಣಿಗೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಬೆಂಬಲವಿದೆ ಎಂದು ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jh24v737ythcv968s6vfgs95,imgname-373728547bdr9-179.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;&quot;ಕೇಂದ್ರದ ಬಿಜೆಪಿ ಸರ್ಕಾರವು ಪ್ರತಿಪಕ್ಷ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡುವುದು ಹೊಸದೇನಲ್ಲ,&quot; ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಇಡಿ (ED) ದಾಳಿ ಹಾಗೂ ವಿದೇಶಿ ಹೂಡಿಕೆ ಆರೋಪಗಳ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಹಲವು ವಿಷಯಗಳನ್ನು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಕೇಂದ್ರದಿಂದ ವಿರೋಧ ಪಕ್ಷಗಳ ಟಾರ್ಗೆಟ್&lt;/h2&gt;&lt;p&gt;&quot;ಕೇವಲ ಕಾಂಗ್ರೆಸ್ ನಾಯಕರನ್ನೇ ಏಕೆ ಗುರಿಯಾಗಿಸಲಾಗುತ್ತಿದೆ? ಬಿಜೆಪಿಯ ನಾಯಕರ ಮೇಲೆ ಏಕೆ ದಾಳಿಗಳು ನಡೆಯುತ್ತಿಲ್ಲ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಕುಗ್ಗಿಸುವ ಯತ್ನ ನಡೆಯುತ್ತಲೇ ಬಂದಿದೆ. ಈ ಹಿಂದೆ ಮಾಜಿ ಸಚಿವ ನಾಗೇಂದ್ರ ಅವರನ್ನೂ ಟಾರ್ಗೆಟ್ ಮಾಡಲಾಗಿತ್ತು. ನಾವು ವಾಲ್ಮೀಕಿ ನಾಯಕ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುವುದೇ ಕೆಲವರಿಗೆ ನುಂಗಲಾರದ ತೂತಾಗಿದೆ. ಆದರೆ, ಇಡಿ ದಾಳಿ ವಿಚಾರದಲ್ಲಿ ನಾನು ಯಾವುದೇ ಜಾತಿ ಕಾರ್ಡ್ ಬಳಸುವುದಿಲ್ಲ. ಸಾರ್ವಜನಿಕ ಜೀವನದಲ್ಲಿದ್ದಾಗ ಇಂತಹ ಆರೋಪಗಳಿಂದ ಮುಕ್ತರಾಗುವುದು ನಮ್ಮ ಕರ್ತವ್ಯ&quot; ಎಂದರು.&lt;/p&gt;&lt;h2&gt;ಎರಡು ಕೋಟಿ ರೂಪಾಯಿ ಮತ್ತು ವ್ಯವಹಾರದ ಸ್ಪಷ್ಟನೆ&lt;/h2&gt;&lt;p&gt;ದಾಳಿಯ ವೇಳೆ ಸಿಕ್ಕ ಹಣದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, &quot;ಸಿಕ್ಕಿರುವ ಎರಡು ಕೋಟಿ ರೂಪಾಯಿ ಹಣದ ಮೂಲ ಸಂಪೂರ್ಣವಾಗಿ ನಮ್ಮದೇ ಆಗಿದೆ. ನಮ್ಮ ಸಮ್ಮಿಶ್ರ ಉದ್ಯಮದಲ್ಲಿ ವರ್ಷಕ್ಕೆ ಸುಮಾರು 2,000 ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಹೀಗಾಗಿ ಈ ಹಣದ ಬಗ್ಗೆ ಯಾವುದೇ ಗೊಂದಲವಿಲ್ಲ. ನನ್ನ ಮಗ ಮತ್ತು ಮಗಳ ಹೆಸರಿನಲ್ಲಿ ಆಫ್ರಿಕಾದಲ್ಲಿ ನೋಂದಾಯಿತ ಕಂಪನಿಯಿರುವುದು ನಿಜ. ಆದರೆ, ಅಲ್ಲಿ ಇನ್ನೂ ಯಾವುದೇ ವಹಿವಾಟು ಆರಂಭವಾಗಿಲ್ಲ. ಐಟಿ ಇಲಾಖೆಗೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇಡಿ ತನಿಖಾಧಿಕಾರಿಗಳು ನೋಟಿಸ್ ನೀಡಿದಾಗ ಅವರಿಗೂ ಅಗತ್ಯ ದಾಖಲೆಗಳನ್ನು ಒದಗಿಸಿ ಸೂಕ್ತ ಉತ್ತರ ನೀಡುತ್ತೇನೆ,&quot; ಎಂದು ತಿಳಿಸಿದರು.&lt;/p&gt;&lt;h2&gt;ವಿದೇಶಿ ಮೈನಿಂಗ್ ಮತ್ತು ಹೂಡಿಕೆ ಯೋಜನೆ&lt;/h2&gt;&lt;p&gt;&quot;ನನಗೆ ವಿದೇಶಗಳಲ್ಲಿ ಮೈನಿಂಗ್ ಮತ್ತು ಟ್ರೇಡಿಂಗ್ ಮಾಡುವ ಆಸಕ್ತಿಯಿದೆ. ಕಳೆದೆಂಟು-ಹತ್ತು ವರ್ಷಗಳಿಂದ ಹೂಡಿಕೆಗಾಗಿ ವಿವಿಧ ದೇಶಗಳನ್ನು ಪರಿಶೀಲಿಸುತ್ತಿದ್ದೇನೆ. ಆದರೆ, ಇಲ್ಲಿಯವರೆಗೆ ಯಾವುದೇ ಒಪ್ಪಂದ ಫೈನಲ್ ಆಗಿಲ್ಲ ಅಥವಾ ಹೂಡಿಕೆ ಮಾಡಿಲ್ಲ. ಮಾತುಕತೆ ಹಂತದಲ್ಲಿದ್ದಾಗಲೇ ಹೂಡಿಕೆ ಮುಗಿದಿದೆ ಎಂದು ಬಿಂಬಿಸಲಾಗುತ್ತಿದೆ,&quot; ಎಂದು ಸ್ಪಷ್ಟಪಡಿಸಿದರು.&lt;/p&gt;&lt;h2&gt;ಪಕ್ಷದ ಬೆಂಬಲ ಮತ್ತು ಆಂತರಿಕ ಸಂಚಿನ ಶಂಕೆ&lt;/h2&gt;&lt;p&gt;&quot;ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ನಾಯಕರು ನನ್ನೊಂದಿಗೆ ಮಾತನಾಡಿದ್ದಾರೆ. ಸಿಎಂ ಅವರು ನಿನ್ನೆ ರಾತ್ರಿ ಭೇಟಿಯಾಗಿ ಧೈರ್ಯ ತುಂಬಿದ್ದು, ಈ ಪ್ರಕರಣವನ್ನು ಒಗ್ಗಟ್ಟಿನಿಂದ ಮತ್ತು ಕಾನೂನಾತ್ಮಕವಾಗಿ ಎದುರಿಸೋಣ ಎಂದು ಹೇಳಿದ್ದಾರೆ. ಈ ದೂರು ಸ್ವಪಕ್ಷದವರಿಂದ ಬಂದಿದೆಯೇ ಅಥವಾ ವಿರೋಧಿಗಳಿಂದ ಬಂದಿದೆಯೇ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇನೆ. ಇನ್ನು, ಬಿಜೆಪಿಯಿಂದ ನನಗ ಯಾವುದೇ ಆಫರ್ ಬಂದಿಲ್ಲ,&quot; ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/satish-jarkiholi-ed-raid-minister-denies-illegal-overseas-investments-vows-legal-fight-gdp/articleshow-lgh77fc"/>
        </item>
        <item>
            <title><![CDATA[Cricket: ಭಾರತದಲ್ಲಿ ಪತ್ನಿ ಸಾವು, ಕೊನೆಯ ಮಾತು ನೆನೆದು ಕಣ್ಣೀರು ಸುರಿಸಿದ ವಾಸಿಂ ಅಕ್ರಮ್!]]></title>
            <link>https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp</link>
            <guid isPermaLink="true">https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp</guid>
            <pubDate>Fri, 11 Sep 2026 16:03:33 +0530</pubDate>
            <description><![CDATA[ಪಾಕಿಸ್ತಾನದ ಕ್ರಿಕೆಟ್ ದಂತಕಥೆ ವಾಸಿಂ ಅಕ್ರಮ್, ತಮ್ಮ ಮೊದಲ ಪತ್ನಿ ಹುಮಾ ಅವರ ಸಾವಿನ ನೋವನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಚಿಕಿತ್ಸೆಗಾಗಿ ಭಾರತದ ಚೆನ್ನೈಗೆ ಬಂದಾಗ ಪತ್ನಿ ಕೊನೆಯುಸಿರೆಳೆದಿದ್ದು, ವೀಸಾ ಇಲ್ಲದಿದ್ದರೂ ಭಾರತೀಯ ಅಧಿಕಾರಿಗಳು ತೋರಿದ ಮಾನವೀಯತೆಯನ್ನು ಅವರು ಸ್ಮರಿಸಿದ್ದಾರೆ. ಪತ್ನಿಯ ಕೊನೆಯ ಮಾತುಗಳನ್ನು ನೆನೆದು ಅವರು ಭಾವುಕರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m280cr6acx8r1wc7t0m45ndr,imgname-wasim-akram--1789122732234.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್ ಮೈದಾನದಲ್ಲಿ ಎಂತಹ ಬಲಿಷ್ಠ ಬ್ಯಾಟರ್&zwnj;ಗಳನ್ನೂ ತಮ್ಮ ಭೀಕರ ಸ್ವಿಂಗ್ ಬೌಲಿಂಗ್&zwnj;ನಿಂದ ನಡುಗಿಸುತ್ತಿದ್ದ ಪಾಕಿಸ್ತಾನದ ವೇಗದ ದಂತಕಥೆ ವಾಸಿಂ ಅಕ್ರಮ್, ಜೀವನದ ಅತಿ ದೊಡ್ಡ ಪರೀಕ್ಷೆಯಲ್ಲಿ ತೀವ್ರವಾಗಿ ಸೋತುಹೋಗಿದ್ದರು. ಕ್ರಿಕೆಟ್ ಲೋಕದ ಸುಲ್ತಾನ್ ಎಂದೇ ಪ್ರಸಿದ್ಧರಾಗಿದ್ದ ಅಕ್ರಮ್, ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ದುರಂತ ಮತ್ತು ನೋವು ಯಾರ ಕಣ್ಣಿನಲ್ಲೂ ನೀರು ತರಿಸುವಂತದ್ದು. ಇತ್ತೀಚೆಗೆ ಪಾಕಿಸ್ತಾನದ ಜನಪ್ರಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ತಮ್ಮ ಮೊದಲ ಪತ್ನಿ ಹುಮಾ ಅವರ ಕೊನೆಯ ಕ್ಷಣಗಳನ್ನು ಹಾಗೂ ಅವರು ಆಡಿದ ಕೊನೆಯ ಮಾತುಗಳನ್ನು ನೆನೆದು ವೇದಿಕೆಯಲ್ಲೇ ಧಸಧಸ ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಮಕ್ಕಳ ಭವಿಷ್ಯ ಮತ್ತು ಪತ್ನಿಯ ಕೊನೆಯ ಮಾತುಗಳು!&lt;/strong&gt;&lt;/h2&gt;&lt;p&gt;ಕಾರ್ಯಕ್ರಮದ ನಿರೂಪಕರು ಹುಮಾ ಅವರ ಬಗ್ಗೆ ಪ್ರಶ್ನಿಸಿದಾಗ, ವಾಸಿಂ ಅಕ್ರಮ್ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಾಗದೆ ಭಾವುಕರಾದರು. &quot;ಹುಮಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ, ನನಗೆ ಏನಾದರೂ ಸಂಭವಿಸಿದರೆ ನನ್ನ ಮುದ್ದು ಮಕ್ಕಳಿಗೆ ಏನಾಗುತ್ತದೆ? ಅವರ ಗತಿ ಏನು? ಎಂದು ನನ್ನಲ್ಲಿ ಕೇಳಿದ್ದಳು. ಪ್ರಪಂಚದ ಯಾವುದೇ ತಾಯಿಯೂ ತನ್ನ ಮಕ್ಕಳ ಬಗ್ಗೆ ಇದನ್ನೇ ಯೋಚಿಸುತ್ತಾಳೆ. ಅವಳ ಆ ಮಾತುಗಳು ನನ್ನ ತಲೆಯಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ&quot; ಎಂದು ಅಕ್ರಮ್ ನೆನಪಿಸಿಕೊಂಡರು.&lt;/p&gt;&lt;p&gt;ಪತ್ನಿಯ ಅಗಲಿಕೆಯ ನಂತರದ ದಿನಗಳನ್ನು ನೆನೆದ ಅವರು, &quot;ನಾನು ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಾಗ, ಅವರಿಗೆ ವಿಷಯ ಏನೆಂದು ಅರ್ಥವಾಗಲೇ ಇಲ್ಲ. ಏಕೆಂದರೆ ಅವರು ತುಂಬಾ ಚಿಕ್ಕವರಾಗಿದ್ದರು. ಹುಮಾ ಅಗಲಿದ ನಂತರ ನಾನು ದೀರ್ಘಕಾಲ ತೀವ್ರ ಖಿನ್ನತೆಗೆ (Depression) ಒಳಗಾಗಿದ್ದೆ. ಆ ಕಷ್ಟದ ಸಮಯದಲ್ಲಿ ನನ್ನ ಇಬ್ಬರು ಆಪ್ತ ಸ್ನೇಹಿತರು ನನಗೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡಿದರು. ಜೀವನ ಮುಂದೆ ಸಾಗಲೇಬೇಕು, ಮಕ್ಕಳಿಗಾಗಿ ನಾನು ಮತ್ತೆ ಶೂನ್ಯದಿಂದ (Zero) ಜೀವನವನ್ನು ಪ್ರಾರಂಭಿಸಬೇಕಾಯಿತು&quot; ಎಂದು ಕಣ್ಣೀರಧಾರೆಯ ನಡುವೆ ತಮ್ಮ ಅಂತರಂಗದ ನೋವನ್ನು ಹಂಚಿಕೊಂಡರು.&lt;/p&gt;&lt;h3&gt;&lt;strong&gt;2009ರ ಆ ಕಪ್ಪು ದಿನ ಮತ್ತು ಚೆನ್ನೈನ ದುರಂತ!&lt;/strong&gt;&lt;/h3&gt;&lt;p&gt;ಅದು ಅಕ್ಟೋಬರ್ 2009. ವಾಸಿಂ ಅಕ್ರಮ್ ಅವರ ಧರ್ಮಪತ್ನಿ ಹುಮಾ ಅವರು ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ತೊಂದರೆಯಿಂದ (Multi-organ failure) ಬಳಲುತ್ತಿದ್ದರು. ಹುಮಾ ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ, ವಾಸಿಂ ಅಕ್ರಮ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್ ಅಂಬುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕರೆದೊಯ್ಯಲು ನಿರ್ಧರಿಸಿದರು. ಆದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಇಂಧನ ತುಂಬಿಸಿಕೊಳ್ಳಲು (Refueling) ವಿಮಾನವನ್ನು ಭಾರತದ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಬೇಕಾಯಿತು.&lt;/p&gt;&lt;p&gt;ಅದೇ ಸಮಯದಲ್ಲಿ ಹುಮಾ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿ, ಅವರು ಪ್ರಜ್ಞೆ ತಪ್ಪಿದರು. ಪತ್ನಿಯ ಸಾವು-ಬದುಕಿನ ನಡುವಿನ ಹೋರಾಟವನ್ನು ಕಂಡ ವಾಸಿಂ ಅಕ್ರಮ್, ಚೆನ್ನೈ ವಿಮಾನ ನಿಲ್ದಾಣದಲ್ಲೇ ತೀವ್ರ ಆತಂಕದಿಂದ ಅಳಲು ಪ್ರಾರಂಭಿಸಿದರು. ವಿದೇಶದಲ್ಲಿದ್ದ ಅವರಿಗೆ ಏನು ಮಾಡಬೇಕೆಂದು ತೋಚದಂತಾಯಿತು.&lt;/p&gt;&lt;h3&gt;&lt;strong&gt;ಮಾನವೀಯತೆ ಮೆರೆದ ಭಾರತೀಯರು!&lt;/strong&gt;&lt;/h3&gt;&lt;p&gt;ಆ ಕ್ಷಣದಲ್ಲಿ ವಾಸಿಂ ಅಕ್ರಮ್ ಮತ್ತು ಹುಮಾ ಅವರ ಬಳಿ ಭಾರತೀಯ ವೀಸಾ (Indian Visa) ಇರಲಿಲ್ಲ. ನಿಯಮಗಳ ಪ್ರಕಾರ, ವೀಸಾ ಇಲ್ಲದೆ ಯಾವುದೇ ವಿದೇಶಿ ಪ್ರಜೆಗೆ ದೇಶದ ಒಳಗೆ ಪ್ರವೇಶಿಸಲು ಅನುಮತಿ ಇರುವುದಿಲ್ಲ. ಆದರೆ, ಆ ಜಟಿಲ ಪರಿಸ್ಥಿತಿಯಲ್ಲಿ ಭಾರತೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳು ಹಾಗೂ ವಲಸೆ (Immigration) ಅಧಿಕಾರಿಗಳು ಸಂಪೂರ್ಣ ನಿಯಮಗಳನ್ನು ಬದಿಗೊತ್ತಿ ಅತ್ಯುನ್ನತ ಮಾನವೀಯತೆ ಮೆರೆದರು.&lt;/p&gt;&lt;h3&gt;&lt;strong&gt;ವಿಸಾ ಇಲ್ಲದಿದ್ದರೂ ಬೆನ್ನಿಗೆ ನಿಂತ ಭಾರತ!&lt;/strong&gt;&lt;/h3&gt;&lt;p&gt;ಯಾವುದೇ ವೀಸಾ ಇಲ್ಲದಿದ್ದರೂ, ತಕ್ಷಣವೇ ಹುಮಾ ಅವರನ್ನು ಚೆನ್ನೈನ ಪ್ರಸಿದ್ಧ ಅಪೋಲೋ ಆಸ್ಪತ್ರೆಗೆ ದಾಖಲಿಸಲು ಸಂಪೂರ್ಣ ವ್ಯವಸ್ಥೆ ಮಾಡಿಕೊಟ್ಟರು. ಭಾರತ ಮತ್ತು ಪಾಕಿಸ್ತಾನದ ನಡುವೆ ಎಷ್ಟೇ ರಾಜಕೀಯ ಉದ್ವಿಗ್ನತೆಗಳಿದ್ದರೂ, ಜೀವ ಉಳಿಸುವ ವಿಷಯದಲ್ಲಿ ಭಾರತ ತೋರಿಸಿದ ಈ ಮಹಾನ್ ಮಾನವೀಯತೆಯನ್ನು ವಾಸಿಂ ಅಕ್ರಮ್ ಇಂದು ಕೂಡ ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ. &quot;ಭಾರತೀಯರು ಆ ದಿನ ತೋರಿಸಿದ ಪ್ರೀತಿ ಮತ್ತು ಕರುಣೆಯನ್ನು ನಾನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ&quot; ಎಂದು ಅವರು ಆಗಾಗ್ಗೆ ಹೇಳುತ್ತಾರೆ. ಆದರೆ, ದುರದೃಷ್ಟವಶಾತ್ ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಹುಮಾ ಅವರು ಕೇವಲ 42ನೇ ವಯಸ್ಸಿನಲ್ಲಿ ಚೆನ್ನೈನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.&lt;/p&gt;&lt;h3&gt;&lt;strong&gt;ಹೊಸ ಜೀವನದ ಪಯಣ!&lt;/strong&gt;&lt;/h3&gt;&lt;p&gt;ವಾಸಿಂ ಅಕ್ರಮ್ ಮತ್ತು ಹುಮಾ ದಂಪತಿಗೆ ತೈಮೂರ್ ಮತ್ತು ಅಕ್ಬರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿಯ ಅಗಲಿಕೆಯ ನಂತರ ಮಕ್ಕಳನ್ನೇ ತಮ್ಮ ಪ್ರಪಂಚವಾಗಿಸಿಕೊಂಡು ಬದುಕುತ್ತಿದ್ದ ಅಕ್ರಮ್, 2013 ರಲ್ಲಿ ಆಸ್ಟ್ರೇಲಿಯಾ ಮೂಲದ ಶನಿರಾ ಥಾಂಪ್ಸನ್ ಅವರನ್ನು ದ್ವಿತೀಯ ವಿವಾಹವಾದರು. ಪ್ರಸ್ತುತ ಈ ದಂಪತಿಗೆ ಐಲಾ ಎಂಬ ಮುದ್ದಾದ ಮಗಳಿದ್ದಾಳೆ. ಆದಾಗ್ಯೂ, ತಮ್ಮ ಜೀವನದ ಕಷ್ಟದ ದಿನಗಳಲ್ಲಿ ಜೊತೆಯಾಗಿದ್ದ ಮೊದಲ ಪತ್ನಿ ಹುಮಾ ಅವರ ನೆನಪುಗಳು ವಾಸಿಂ ಅಕ್ರಮ್ ಅವರ ಮನಸ್ಸಿನಲ್ಲಿ ಎಂದೆಂದಿಗೂ ಅಮರ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/wasim-akram-wife-huma-death-last-words-emotional-story-chennai-hospital-india-humanity-pakistan-cricket-legend-bmk/articleshow-x7z7epp"/>
        </item>
        <item>
            <title><![CDATA[IMDbಯಲ್ಲಿ ಟಾಪ್, 260 ಕೋಟಿ ಕಲೆಕ್ಷನ್: ಕನ್ನಡದಲ್ಲೂ ಸ್ಟ್ರೀಮಿಂಗ್ ಆಗ್ತಿದೆ ಸೂರ್ಯರ ಈ ಸಿನಿಮಾ!]]></title>
            <link>https://kannada.asianetnews.com/movie-reviews/tamil-actor-suriya-mamitha-baiju-starrer-vishwanath-and-sons-movie-is-now-streaming-on-netflix-ott-gvd/articleshow-60oc1ml</link>
            <guid isPermaLink="true">https://kannada.asianetnews.com/movie-reviews/tamil-actor-suriya-mamitha-baiju-starrer-vishwanath-and-sons-movie-is-now-streaming-on-netflix-ott-gvd/articleshow-60oc1ml</guid>
            <pubDate>Fri, 11 Sep 2026 15:59:50 +0530</pubDate>
            <description><![CDATA[ಸೂರ್ಯ ನಟನೆಯ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾ ಥಿಯೇಟರ್‌ಗಳಲ್ಲಿ 260 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಆಗಿದೆ. ಇದೀಗ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ OTT ಸ್ಟ್ರೀಮಿಂಗ್ ಆರಂಭಿಸಿದ್ದು, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವೀಕ್ಷಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m2807q9bxh7qtw33h66xvmjm,imgname-b-jb-1789122567467.png" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚೆಗಷ್ಟೇ ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಬ್ಲಾಕ್&zwnj;ಬಸ್ಟರ್ ಆಗಿ ಹೊರಹೊಮ್ಮಿತ್ತು. ಒಟ್ಟಾರೆ ₹250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಈ ಚಿತ್ರ ನಾಯಕನ ವೃತ್ತಿಜೀವನದ ಅತಿದೊಡ್ಡ ಹಿಟ್&zwnj;ಗಳಲ್ಲಿ ಒಂದಾಗಿ ದಾಖಲಾಗಿತ್ತು. ಇದೀಗ ಈ ಸಿನಿಮಾ ಶುಕ್ರವಾರ (ಆಗಸ್ಟ್ 11)ರಿಂದ OTTಯಲ್ಲೂ ಲಭ್ಯವಾಗಿದೆ. ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ನಟನೆಯ ಲೇಟೆಸ್ಟ್ ಸಿನಿಮಾ &lsquo;ವಿಶ್ವನಾಥ್ ಅಂಡ್ ಸನ್ಸ್&rsquo;.&lt;/p&gt;&lt;p&gt;ಟಾಲಿವುಡ್&zwnj;ನ ಪ್ರತಿಭಾವಂತ ನಿರ್ದೇಶಕ ವೆಂಕಿ ಅಟ್ಲೂರಿ ಈ ಫ್ಯಾಮಿಲಿ ಎಂಟರ್&zwnj;ಟೈನರ್&zwnj;ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಲಯಾಳಂನ ಚೆಲುವೆ ಮಮಿತಾ ಬೈಜು ನಾಯಕಿಯಾಗಿ ನಟಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 14ರಂದು ಬಿಡುಗಡೆಯಾದ &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಬ್ಲಾಕ್&zwnj;ಬಸ್ಟರ್ ಆಗಿ ಸದ್ದು ಮಾಡಿತ್ತು. ಒಟ್ಟಾರೆ ₹260 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿ ಸೂರ್ಯ ಅವರ ವೃತ್ತಿಜೀವನದ ವನ್ ಆಫ್ ದಿ ಬಿಗ್&zwnj;ಜೆಸ್ಟ್ ಹಿಟ್&zwnj;ಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.&lt;/p&gt;&lt;p&gt;&lt;strong&gt;ಫ್ಯಾಮಿಲಿ ಎಲಿಮೆಂಟ್ಸ್&zwnj;ಗೆ ಹೆಚ್ಚಿನ ಪ್ರಾಮುಖ್ಯತೆ&lt;/strong&gt;&lt;/p&gt;&lt;p&gt;ಸೂರ್ಯ ಅವರ ಪಕ್ವ ಅಭಿನಯ, ಮಮಿತಾ ಬೈಜು ಅವರ ಕ್ಯೂಟ್ ಅಲೆದಾಟ, ರಾಧಿಕಾ, ರವೀನಾ ಟಂಡನ್ ಅವರ ಅದ್ಭುತ ನಟನೆ, ನಿರ್ದೇಶಕ ವೆಂಕಿ ಅಟ್ಲೂರಿ ಅವರ ಟೇಕಿಂಗ್ ಹಾಗೂ ಜಿ.ವಿ. ಪ್ರಕಾಶ್ ಕುಮಾರ್ ಅವರ ಹಾಡುಗಳು... ಹೀಗೆ ಎಲ್ಲವೂ ಸೇರಿ &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಸಿನಿಮಾವನ್ನು ಬ್ಲಾಕ್&zwnj;ಬಸ್ಟರ್ ರೇಂಜ್&zwnj;ಗೆ ಕೊಂಡೊಯ್ದಿವೆ. ವಿಶೇಷವಾಗಿ ಸಿನಿಮಾದಲ್ಲಿ ಫ್ಯಾಮಿಲಿ ಎಲಿಮೆಂಟ್ಸ್&zwnj;ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.&lt;/p&gt;&lt;p&gt;ಇದೇ ಕಾರಣಕ್ಕೆ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಕೂಡ ಬಂದಿದೆ. ಮತ್ತೊಂದು ವಿಶೇಷವೆಂದರೆ, ತಮಿಳಿಗಿಂತ ತೆಲುಗಿನಲ್ಲೇ ಸೂರ್ಯ ಅವರ ಈ ಸಿನಿಮಾಗೆ ಹೆಚ್ಚಿನ ಕಲೆಕ್ಷನ್ ಬಂದಿರುವುದು. ಥಿಯೇಟರ್&zwnj;ಗಳಲ್ಲಿ ಬ್ಲಾಕ್&zwnj;ಬಸ್ಟರ್ ಯಶಸ್ಸು ಕಂಡ ಈ ಸಿನಿಮಾವನ್ನು OTTಯಲ್ಲೂ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದರು. ಇದೀಗ ಅವರ ಕಾಯುವಿಕೆಗೆ ತೆರೆ ಬಿದ್ದಿದೆ. &lsquo;ವಿಶ್ವನಾಥ್ ಅಂಡ್ ಸನ್ಸ್&rsquo; OTTಗೆ ಎಂಟ್ರಿ ಕೊಟ್ಟಿದೆ.&lt;/p&gt;&lt;h2&gt;&lt;strong&gt;OTTಯಲ್ಲಿ ಸ್ಟ್ರೀಮಿಂಗ್&lt;/strong&gt;&lt;/h2&gt;&lt;p&gt;ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಜನಪ್ರಿಯ OTT ಸಂಸ್ಥೆ ನೆಟ್&zwnj;ಫ್ಲಿಕ್ಸ್ ಭಾರೀ ಮೊತ್ತಕ್ಕೆ ತನ್ನದಾಗಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ (ಆಗಸ್ಟ್ 11) ಮಧ್ಯರಾತ್ರಿಯಿಂದಲೇ ಸೂರ್ಯ ಅಭಿನಯದ ಈ ಸಿನಿಮಾ OTTಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ತಮಿಳು, ತೆಲುಗು ಮಾತ್ರವಲ್ಲದೆ ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲೂ &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಸಿನಿಮಾ ಲಭ್ಯವಿದೆ.&lt;/p&gt;&lt;p&gt;ಸಿತಾರಾ ಎಂಟರ್&zwnj;ಟೈನ್&zwnj;ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಾಗವಂಶಿ ನಿರ್ಮಿಸಿರುವ &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಸಿನಿಮಾದಲ್ಲಿ ಹಲವು ಸ್ಟಾರ್ ಕಲಾವಿದರು ನಟಿಸಿದ್ದಾರೆ. ಹಿರಿಯ ನಟಿಯರಾದ ರಾಧಿಕಾ ಶರತ್ ಕುಮಾರ್, ರವೀನಾ ಟಂಡನ್ ಜೊತೆಗೆ ನಾಸರ್, ಸುನಿಲ್ ರೆಡ್ಡಿ, ರಾಜೀವ್ ಮೆನನ್, ಹರ್ಷ ಚೆಮುಡು, ಕಾಳಿ ವೆಂಕಟ್, ದೀಪಾ ಶಂಕರ್, ಹೈಪರ್ ಆದಿ, ಮೈಮ್ ಗೋಪಿ, ಸರ್ವದಮನ್ ಬ್ಯಾನರ್ಜಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ಹಾಗಾದರೆ ಥಿಯೇಟರ್&zwnj;ಗಳಲ್ಲಿ &lsquo;ವಿಶ್ವನಾಥ್ ಅಂಡ್ ಸನ್ಸ್&rsquo; ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದೀರಾ? ಅಥವಾ ಮತ್ತೊಮ್ಮೆ ನೋಡಬೇಕೆಂದುಕೊಂಡಿದ್ದೀರಾ? ಹಾಗಿದ್ದರೆ ಇನ್ನೇಕೆ ತಡ? ನೆಟ್&zwnj;ಫ್ಲಿಕ್ಸ್&zwnj;ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿ!&lt;/p&gt;]]></content:encoded>
            <category><![CDATA[movie-reviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/movie-reviews/tamil-actor-suriya-mamitha-baiju-starrer-vishwanath-and-sons-movie-is-now-streaming-on-netflix-ott-gvd/articleshow-60oc1ml"/>
        </item>
        <item>
            <title><![CDATA[100-200 ವರ್ಷಗಳಲ್ಲ.. ಇಲ್ಲಿ ಸಿಕ್ಕ 3,000 ಚಿನ್ನದ ನಾಣ್ಯಗಳು 4,500 ವರ್ಷ ಹಳೆಯವಂತೆ: ಏನಿದರ ರಹಸ್ಯ!]]></title>
            <link>https://kannada.asianetnews.com/india-news/uttar-pradesh-mandi-gold-coin-mystery-solved-after-27-years-coins-found-to-be-4500-years-old-gvd/articleshow-8404egs</link>
            <guid isPermaLink="true">https://kannada.asianetnews.com/india-news/uttar-pradesh-mandi-gold-coin-mystery-solved-after-27-years-coins-found-to-be-4500-years-old-gvd/articleshow-8404egs</guid>
            <pubDate>Fri, 11 Sep 2026 15:39:32 +0530</pubDate>
            <description><![CDATA[ಮಾಂಡಿಯಲ್ಲಿ 27 ವರ್ಷಗಳ ಹಿಂದೆ ಸಿಕ್ಕ 3,000 ಚಿನ್ನದ ನಾಣ್ಯಗಳು 4,000-4,500 ವರ್ಷ ಹಳೆಯವು. OCP ಸಂಸ್ಕೃತಿ ಮತ್ತು ಪ್ರಾಚೀನ ಭಾರತದ ಲೋಹಶಾಸ್ತ್ರ, ಗಣಿತ ಹಾಗೂ ವ್ಯಾಪಾರದ ಕುರಿತು ಮಹತ್ವದ ಪುರಾವೆಗಳು ಪತ್ತೆಯಾಗಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27z2n7jxbz073as81pbmxdt,imgname-bjb-1789121352946.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಜಫ್ಫರ್&zwnj;ನಗರ (ಸೆ.11): &lt;/strong&gt;ಮುಜಫ್ಫರ್&zwnj;ನಗರ ಜಿಲ್ಲೆಯ ಮಾಂಡಿ ಗ್ರಾಮದಲ್ಲಿ 27 ವರ್ಷಗಳ ಹಿಂದೆ ರೈತರಿಗೆ ದೊರೆತಿದ್ದ ಸುಮಾರು 3,000 ಚಿನ್ನದ ನಾಣ್ಯಗಳು 4,000ರಿಂದ 4,500 ವರ್ಷಗಳಷ್ಟು ಹಳೆಯವು ಎಂಬುದು ವೈಜ್ಞಾನಿಕ ಅಧ್ಯಯನದಿಂದ ತಿಳಿದುಬಂದಿದೆ. ಈ ನಾಣ್ಯಗಳು ಗಂಗಾ ಕಣಿವೆಯ ಪ್ರಾಚೀನ ಓಕರ್ ಕಲರ್ಡ್ ಪಾಟರಿ (OCP) ಸಂಸ್ಕೃತಿಯ ಇತಿಹಾಸ ಹಾಗೂ ಅದರ ವೈಜ್ಞಾನಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಮಹತ್ವದ ಪುರಾವೆಗಳನ್ನು ಒದಗಿಸಿವೆ.&lt;/p&gt;&lt;p&gt;ಇದರ ಜೊತೆಗೆ ಪ್ರಾಚೀನ ಭಾರತೀಯ ಸಮಾಜದಲ್ಲಿದ್ದ ಲೋಹಶಾಸ್ತ್ರದ ಜ್ಞಾನ, ತೂಕದ ವ್ಯವಸ್ಥೆ, ಗಣಿತೀಯ ತಿಳುವಳಿಕೆ ಹಾಗೂ ವ್ಯಾಪಾರ ಚಟುವಟಿಕೆಗಳ ಕುರಿತು ಮಹತ್ವದ ಮಾಹಿತಿಯೂ ಬೆಳಕಿಗೆ ಬಂದಿದೆ. ಸದ್ಯ ಈ ನಾಣ್ಯಗಳನ್ನು ಲಖನೌನ ರಾಜ್ಯ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.&lt;/p&gt;&lt;p&gt;ಲಖನೌನ ಹೋಟೆಲ್ ಗೋಮತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಡಿಜಿಪಿ, ನ್ಯಾಷನಲ್ ಟ್ರಸ್ಟ್ ಫಾರ್ ಪ್ರಮೋಷನ್ ಆಫ್ ನಾಲೆಡ್ಜ್&zwnj;ನ ಅಧ್ಯಕ್ಷ ಹಾಗೂ ಇಂಡಿಯನ್ ಜರ್ನಲ್ ಆಫ್ ಆರ್ಕಿಯಾಲಜಿಯ ಮುಖ್ಯ ಸಂಪಾದಕ ವಿಜಯ್ ಕುಮಾರ್ ಈ ಕುರಿತು ಮಾಹಿತಿ ನೀಡಿದರು.&lt;/p&gt;&lt;p&gt;ಈ ನಾಣ್ಯಗಳ ತೂಕ 0.04 ಗ್ರಾಂನಿಂದ 1.61 ಗ್ರಾಂವರೆಗೆ ಇದೆ. ಅತ್ಯಂತ ಸಣ್ಣ ಗಾತ್ರ ಹಾಗೂ ಕಡಿಮೆ ತೂಕ ಹೊಂದಿದ್ದರೂ, ಅವುಗಳ ತಯಾರಿಕೆಯಲ್ಲಿ ಕಂಡುಬರುವ ತಾಂತ್ರಿಕ ಪರಿಣತಿ ಆ ಕಾಲದಲ್ಲೇ ಲೋಹಶಾಸ್ತ್ರ ಹಾಗೂ ಗಣಿತದ ಜ್ಞಾನ ಸಾಕಷ್ಟು ಮುಂದುವರಿದಿತ್ತು ಎಂಬುದನ್ನು ಸೂಚಿಸುತ್ತದೆ ಎಂದು ವಿಜಯ್ ಕುಮಾರ್ ತಿಳಿಸಿದರು.&lt;/p&gt;&lt;p&gt;&lt;strong&gt;ತೂಕಕ್ಕಾಗಿ ರತ್ತಿ, ತೋಲಾ ಸೇರಿದಂತೆ ವಿವಿಧ ಮಾನದಂಡ&lt;/strong&gt;&lt;/p&gt;&lt;p&gt;ಭಾರತದಲ್ಲಿ ಪ್ರಾಚೀನ ಕಾಲದಿಂದಲೇ ವಸ್ತುಗಳು ಮತ್ತು ಲೋಹಗಳ ತೂಕ ಅಳೆಯಲು ರತ್ತಿ ಮತ್ತು ತೋಲಾದಂತಹ ಅಳತೆಗಳನ್ನು ಬಳಸಲಾಗುತ್ತಿತ್ತು ಎಂದು ವಿಜಯ್ ಕುಮಾರ್ ಹೇಳಿದರು. ಒಂದು ರತ್ತಿಗಿಂತಲೂ ಕಡಿಮೆ ತೂಕವಿದ್ದ ಚಿನ್ನದ ನಾಣ್ಯಗಳ ಸೂಕ್ಷ್ಮ ತೂಕ ನಿರ್ಧರಿಸಲು ರಾಯಿ ಮತ್ತು ಸಾಸಿವೆ ಬೀಜಗಳನ್ನು ಆಧಾರವಾಗಿಟ್ಟುಕೊಂಡಿರಬಹುದೆಂದು ಅವರು ವಿವರಿಸಿದರು. OCP ಸಂಸ್ಕೃತಿಯ ಜನರು ದೊಡ್ಡ ಗಾತ್ರದ ತಾಮ್ರದ ಕತ್ತಿಗಳನ್ನು ತಯಾರಿಸುವುದರ ಜೊತೆಗೆ, ಅತ್ಯಂತ ಸಣ್ಣ ಗಾತ್ರದ ಚಿನ್ನದ ನಾಣ್ಯಗಳನ್ನು ರೂಪಿಸುವ ತಾಂತ್ರಿಕ ಸಾಮರ್ಥ್ಯವನ್ನೂ ಹೊಂದಿದ್ದರು.&lt;/p&gt;&lt;h2&gt;&lt;strong&gt;ಪ್ರಾಚೀನ ಭಾರತೀಯ ಗಣಿತದ ಜ್ಞಾನಕ್ಕೂ ಪುರಾವೆ&lt;/strong&gt;&lt;/h2&gt;&lt;p&gt;ಮಾಂಡಿಯಲ್ಲಿ ಪತ್ತೆಯಾದ ನಾಣ್ಯಗಳ ಗಾತ್ರ ಮತ್ತು ರಚನೆಯ ಅಧ್ಯಯನವು ಪ್ರಾಚೀನ ಭಾರತೀಯ ಗಣಿತದ ಜ್ಞಾನವನ್ನೂ ಸೂಚಿಸುತ್ತದೆ. ಚಪ್ಪಟೆ, ದುಂಡಗಿನ ಹಾಗೂ ರಂಧ್ರ ಹೊಂದಿರುವ ನಾಣ್ಯಗಳ ವಿನ್ಯಾಸ ರೂಪಿಸುವುದು ಮತ್ತು ಅವುಗಳ ಪರಿಮಾಣವನ್ನು ನಿರ್ಧರಿಸಲು ಗಣಿತೀಯ ಲೆಕ್ಕಾಚಾರದ ಅಗತ್ಯವಿದ್ದಿರಬೇಕು ಎಂದು ಹೇಳಲಾಗಿದೆ.&lt;/p&gt;&lt;p&gt;OCP ಸಂಸ್ಕೃತಿಯಲ್ಲಿ ತೂಕ ಅಳೆಯಲು 96 ರತ್ತಿಯ ತೋಲಾ ಬಳಸಲಾಗುತ್ತಿತ್ತು ಎಂಬ ಉಲ್ಲೇಖವಿದೆ. ಬಹ್ರೇನ್ ಪ್ರದೇಶದಲ್ಲಿಯೂ ವ್ಯಾಪಾರಿಕ ತೂಕದ ಮಾನದಂಡವಾಗಿ 112 ರತ್ತಿಯ ತೋಲಾ ಬಳಸಲಾಗುತ್ತಿತ್ತು. ಇದರಿಂದ ಪ್ರಾಚೀನ ಕಾಲದಲ್ಲಿ ಭಾರತೀಯ ಉಪಖಂಡ ಮತ್ತು ಪಶ್ಚಿಮ ಏಷ್ಯಾ ನಡುವೆ ವ್ಯಾಪಾರಿಕ ಸಂಪರ್ಕಗಳಿದ್ದ ಸಂದರ್ಭದಲ್ಲಿ ತೂಕ ಮತ್ತು ಅಳತೆಯ ಕೆಲವು ಸಾಮಾನ್ಯ ವ್ಯವಸ್ಥೆಗಳು ಬಳಕೆಯಲ್ಲಿದ್ದವು ಎಂಬುದು ಸೂಚಿಸುತ್ತದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Govindaraj S</dc:creator>
            <atom:link href="https://kannada.asianetnews.com/india-news/uttar-pradesh-mandi-gold-coin-mystery-solved-after-27-years-coins-found-to-be-4500-years-old-gvd/articleshow-8404egs"/>
        </item>
        <item>
            <title><![CDATA[ಎಸೆಯುವ ಬಟಾಣಿ ಸಿಪ್ಪೆಯಿಂದ ಹತ್ತೇ ನಿಮಿಷದಲ್ಲಿ ಮಾಡಿ ಶಾಹಿ ಕಬಾಬ್! ಮತ್ತೆ ಮತ್ತೆ ಬೇಕೆನ್ನಿಸುವ ಟೇಸ್ಟಿ ರೆಸಿಪಿ]]></title>
            <link>https://kannada.asianetnews.com/gallery/food/make-shahi-kabab-from-pea-skin-in-just-ten-minutes-a-tasty-recipe-that-will-make-you-want-it-again-suc-fgy6v6k</link>
            <guid isPermaLink="true">https://kannada.asianetnews.com/gallery/food/make-shahi-kabab-from-pea-skin-in-just-ten-minutes-a-tasty-recipe-that-will-make-you-want-it-again-suc-fgy6v6k</guid>
            <pubDate>Fri, 11 Sep 2026 15:24:48 +0530</pubDate>
            <description><![CDATA[ಸಾಮಾನ್ಯವಾಗಿ ಕಸವೆಂದು ಬಿಸಾಡುವ ಬಟಾಣಿ ಸಿಪ್ಪೆಯನ್ನು ಬಳಸಿ ರುಚಿಕರವಾದ ಶಾಹಿ ಕಬಾಬ್ ತಯಾರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಹಸಿಮೆಣಸು, ಶುಂಠಿ, ಆಲೂಗಡ್ಡೆ ಮತ್ತು ಕೆಲವು ಮಸಾಲೆಗಳನ್ನು ಬಳಸಿ, ಕೇವಲ ಹತ್ತು ನಿಮಿಷಗಳಲ್ಲಿ ಈ ತಿಂಡಿಯನ್ನು ಸಿದ್ಧಪಡಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m27y0qz88nhyh6ffvbnzzxw8,imgname-shahi-kabab-00-1789120241640.jpg" type="image/jpeg" height="390" width="690"/>
            <content:encoded><![CDATA[ಸಾಮಾನ್ಯವಾಗಿ ಕಸವೆಂದು ಬಿಸಾಡುವ ಬಟಾಣಿ ಸಿಪ್ಪೆಯನ್ನು ಬಳಸಿ ರುಚಿಕರವಾದ ಶಾಹಿ ಕಬಾಬ್ ತಯಾರಿಸುವ ವಿಧಾನವನ್ನು ಈ ಲೇಖನ ವಿವರಿಸುತ್ತದೆ. ಹಸಿಮೆಣಸು, ಶುಂಠಿ, ಆಲೂಗಡ್ಡೆ ಮತ್ತು ಕೆಲವು ಮಸಾಲೆಗಳನ್ನು ಬಳಸಿ, ಕೇವಲ ಹತ್ತು ನಿಮಿಷಗಳಲ್ಲಿ ಈ ತಿಂಡಿಯನ್ನು ಸಿದ್ಧಪಡಿಸಬಹುದು.&lt;img&gt;&lt;p&gt;ಬಟಾಣೆ ಹಲವರಿಗೆ ಇಷ್ಟವಾಗುತ್ತದೆ. ಇದರಿಂದ ಹಲವಾರು ರೀತಿಯ ರೆಸಿಪಿ ಮಾಡುವುದು ನಿಮಗೆ ಗೊತ್ತೇ ಇದೆ. ಆದರೆ ಕಸದ ಬುಟ್ಟಿಗೆ ಎಸೆಯುವ ಬಟಾಣಿ ಸಿಪ್ಪೆಯಿಂದ ಟೇಸ್ಟಿ ಟೇಸ್ಟಿ ರೆಸಿಪಿ ಮಾಡಬಹುದು ಎಂದರೆ ನಂಬುವಿರಾ?&lt;/p&gt;&lt;img&gt;&lt;p&gt;ನಂಬಲೇ ಬೇಕು. ಇದರ ಸಿಪ್ಪೆಯಿಂದಲೇ ಟೇಸ್ಟಿಯಾಗಿರುವ, ಒಂದು ಸಲ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ಶಾಹಿ ಕಬಾಬ್ ಮಾಡಬಹುದು. ಅದೂ ಕೇವಲ ಹತ್ತೇ ನಿಮಿಷಗಳಲ್ಲಿ!&lt;/p&gt;&lt;img&gt;&lt;p&gt;ಮೊದಲಿಗೆ ಬಟಾಣಿ ಸಿಪ್ಪೆಯನ್ನು ನಿಮ್ಮ ಖಾರದ ಟೇಸ್ಟಿಗೆ ಅನುಸಾರವಾಗಿ 2ರಿಂದ 4 ಹಸಿರು ಮೆಣಸಿನಕಾಯಿ ಹಾಗೂ ಎರಡು ಪೀಸ್​ ಶುಂಠಿ ಹಾಗೂ ಒಂದು ಹಿಡಿ ಕೊತ್ತಂಬರಿ ಸೊಪ್ಪಿನ ಜೊತೆ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.&lt;/p&gt;&lt;img&gt;&lt;p&gt;ಇದಕ್ಕೆ ನಾಲ್ಕೈದು ಬೇಯಿಸಿದ ಅಲೂಗಡ್ಡೆ, ಸ್ವಲ್ಪ ಕಡ್ಲೆಹಿಟ್ಟು, ಒಂದು ಚಮಚ ಆಮ್​ಚೂರ್​ ಪೌಡರ್​ ಹಾಕಿ ಮಿಕ್ಸ್​ ಮಾಡಿಕೊಳ್ಳಬೇಕು.&lt;/p&gt;&lt;img&gt;&lt;p&gt;ನಂತರ ಉಂಡೆ ರೀತಿ ಮಾಡಿ ಸ್ವಲ್ಪ ಚಪ್ಪಟೆ ಮಾಡಿಕೊಂಡು ಅದರ ಮೇಲೆ ಬಿಳಿಎಳ್ಳು ಮತ್ತು ಪುಡಿ ಮಾಡಿದ ಗೋಡಂಬಿ ಉದುರಿಸಬೇಕು.&lt;/p&gt;&lt;img&gt;&lt;p&gt;ತವಾದ ಮೇಲೆ ತುಪ್ಪವನ್ನು ಹಾಕಿ, ಇದನ್ನು ಫ್ರೈ ಮಾಡಿಕೊಳ್ಳಬೇಕು. ಎರಡೂ ಕಡೆ ಫ್ರೈ ಮಾಡಿಕೊಳ್ಳಬೇಕು.&lt;/p&gt;]]></content:encoded>
            <category><![CDATA[food]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/food/make-shahi-kabab-from-pea-skin-in-just-ten-minutes-a-tasty-recipe-that-will-make-you-want-it-again-suc-fgy6v6k"/>
        </item>
        <item>
            <title><![CDATA[ನಿಮ್ಮನೆಯ ಟಿವಿ ರಿಮೋಟ್ ಒಮ್ಮೆ ತಟ್ಟಿದಾಗ ಮಾತ್ರ ಕೆಲಸ ಮಾಡೋದ್ಯಾಕೆ? ಇದರ ಹಿಂದಿದೆ ಸೈನ್ಸ್ ಕಥೆ!]]></title>
            <link>https://kannada.asianetnews.com/gallery/life/why-tv-remote-works-after-hitting-science-behind-slapping-remote-sat-t6uzgbo</link>
            <guid isPermaLink="true">https://kannada.asianetnews.com/gallery/life/why-tv-remote-works-after-hitting-science-behind-slapping-remote-sat-t6uzgbo</guid>
            <pubDate>Fri, 11 Sep 2026 15:21:55 +0530</pubDate>
            <description><![CDATA[ಕೆಲಸ ಮಾಡದ ಟಿವಿ ರಿಮೋಟ್‌ಗೆ ತಟ್ಟಿದಾಗ ಅದು ತಕ್ಷಣ ಕೆಲಸ ಮಾಡುವುದೇಕೆ? ಇದರ ಹಿಂದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ನಿಯಮಗಳು, ಬ್ಯಾಟರಿ ಆಕ್ಸಿಡೀಕರಣ ಹಾಗೂ ಸುಲಭ ಪರಿಹಾರಗಳ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr137ax1asfeqmxpwkz9awey,imgname-3-1778153401249.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೆಲಸ ಮಾಡದ ಟಿವಿ ರಿಮೋಟ್&zwnj;ಗೆ ತಟ್ಟಿದಾಗ ಅದು ತಕ್ಷಣ ಕೆಲಸ ಮಾಡುವುದೇಕೆ? ಇದರ ಹಿಂದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ನಿಯಮಗಳು, ಬ್ಯಾಟರಿ ಆಕ್ಸಿಡೀಕರಣ ಹಾಗೂ ಸುಲಭ ಪರಿಹಾರಗಳ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ರಿಮೋಟ್&zwnj;ಗೆ ತಟ್ಟಿದಾಗ ಅದು ಕೆಲಸ ಮಾಡಲು ಯಾವುದೇ ಮ್ಯಾಜಿಕ್ ಕಾರಣವಲ್ಲ, ಇದರ ಹಿಂದೆ ಸಂಪೂರ್ಣವಾಗಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ನಿಯಮಗಳಿವೆ:&lt;/p&gt;&lt;p&gt;&lt;strong&gt;1. ಬ್ಯಾಟರಿ ತುಕ್ಕು (ಆಕ್ಸಿಡೀಕರಣ - Oxidation):&lt;/strong&gt;&lt;/p&gt;&lt;p&gt;ರಿಮೋಟ್ ಒಳಗೆ ಬ್ಯಾಟರಿಗಳನ್ನು ಕೂರಿಸುವ ಜಾಗದಲ್ಲಿ ಲೋಹದ ಸ್ಪ್ರಿಂಗ್&zwnj;ಗಳು (Springs/Terminals) ಇರುತ್ತವೆ. ಗಾಳಿಯಲ್ಲಿನ ತೇವಾಂಶ ಮತ್ತು ಧೂಳಿನಿಂದಾಗಿ ಬ್ಯಾಟರಿಯ ತುದಿ ಹಾಗೂ ಸ್ಪ್ರಿಂಗ್ ನಡುವೆ ನಮಗೆ ಕಣ್ಣಿಗೆ ಕಾಣಿಸದಂತಹ ಅತ್ಯಂತ ತೆಳುವಾದ ತುಕ್ಕು ಅಥವಾ ಆಕ್ಸೈಡ್ ಪದರ (Oxidation layer) ಜಮೆಯಾಗುತ್ತದೆ. ಇದು ಬ್ಯಾಟರಿಯಿಂದ ರಿಮೋಟ್&zwnj;ಗೆ ವಿದ್ಯುತ್ ಹರಿಯುವುದನ್ನು ತಡೆಯುತ್ತದೆ.&lt;/p&gt;&lt;p&gt;ತಟ್ಟಿದಾಗ ಏನಾಗುತ್ತದೆ?: ನಾವು ರಿಮೋಟ್&zwnj;ಗೆ ತಟ್ಟಿದಾಗ ಅಥವಾ ಬಡಿದಾಗ, ಬ್ಯಾಟರಿ ಮತ್ತು ಸ್ಪ್ರಿಂಗ್ ನಡುವೆ ಘರ್ಷಣೆ (Friction) ಉಂಟಾಗಿ ಆ ತುಕ್ಕು ಅಥವಾ ಕೊಳೆ ಸ್ವಲ್ಪ ಪಕ್ಕಕ್ಕೆ ಸರಿಯುತ್ತದೆ. ಇದರಿಂದ ವಿದ್ಯುತ್ ಸಂಚಾರ ಮತ್ತೆ ಆರಂಭವಾಗಿ ರಿಮೋಟ್ ಕೆಲಸ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಸ್ಪ್ರಿಂಗ್ ಸಡಿಲವಾಗಿರುವುದು (Loose Connection):&lt;/strong&gt;&lt;/p&gt;&lt;p&gt;ರಿಮೋಟ್ ಕೈಯಿಂದ ಕೆಳಗೆ ಬಿದ್ದಾಗ ಅಥವಾ ತುಂಬಾ ಸಮಯ ಒಂದೇ ಕಡೆ ಇದ್ದಾಗ, ಬ್ಯಾಟರಿಯನ್ನು ಹಿಡಿದಿಟ್ಟುಕೊಳ್ಳುವ ಸ್ಪ್ರಿಂಗ್ ಸಡಿಲವಾಗಿರುತ್ತದೆ (Loose contact). ರಿಮೋಟ್&zwnj;ಗೆ ಬಡಿದಾಗ ಬ್ಯಾಟರಿ ಸ್ವಲ್ಪ ಜರಿದು ಸರಿಯಾದ ಸ್ಥಾನಕ್ಕೆ ಕೂರುತ್ತದೆ, ಇದರಿಂದ ಸಂಪರ್ಕ ಪುನಃ ಸಿಗುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಬ್ಯಾಟರಿಯ ಕೊನೆಯ ಹಂತದ ಚಾರ್ಜ್ (Chemical Jolt):&lt;/strong&gt;&lt;/p&gt;&lt;p&gt;ಬ್ಯಾಟರಿಯ ಜೀವಿತಾವಧಿ ಮುಗಿಯುತ್ತಾ ಬಂದಾಗ, ಅದರ ಒಳಗಿನ ರಾಸಾಯನಿಕ ಪ್ರತಿಕ್ರಿಯೆ ನಿಧಾನವಾಗಿರುತ್ತದೆ. ರಿಮೋಟ್&zwnj;ಗೆ ತಟ್ಟಿದಾಗ ಅಥವಾ ಅಲುಗಾಡಿಸಿದಾಗ ಬ್ಯಾಟರಿಯೊಳಗಿನ ರಾಸಾಯನಿಕಗಳು ಸ್ವಲ್ಪ ಚಲಿಸಿ, ಕ್ಷಣಕಾಲ ಅತ್ಯಲ್ಪ ಪ್ರಮಾಣದ ಹೆಚ್ಚುವರಿ ವೋಲ್ಟೇಜ್ ಉತ್ಪತ್ತಿಯಾಗುತ್ತದೆ. ರಿಮೋಟ್&zwnj;ನಿಂದ ಟಿವಿಗೆ ಸಿಗ್ನಲ್ ಕಳುಹಿಸಲು ಈ ಒಂದು ಸೆಕೆಂಡಿನ ಶಕ್ತಿಯೇ ಸಾಕಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಹಾಗಾದರೆ, ಇದು ಯಾವುದರ ಮುನ್ಸೂಚನೆ?&lt;/strong&gt;&lt;/p&gt;&lt;p&gt;ರಿಮೋಟ್&zwnj;ಗೆ ತಟ್ಟಿದಾಗ ಮಾತ್ರ ಕೆಲಸ ಮಾಡುತ್ತಿದೆ ಎಂದರೆ ಅದು ನಿಮ್ಮ ರಿಮೋಟ್ ನೀಡುತ್ತಿರುವ ಸ್ಪಷ್ಟ ಸೂಚನೆಗಳಾಗಿವೆ:&lt;/p&gt;&lt;p&gt;&lt;strong&gt;ಬ್ಯಾಟರಿ ಜೀವಿತಾವಧಿ ಮುಗಿದಿದೆ: &lt;/strong&gt;ನಿಮ್ಮ ರಿಮೋಟ್&zwnj;ನಲ್ಲಿರುವ ಬ್ಯಾಟರಿಗಳು ಸಂಪೂರ್ಣವಾಗಿ ಡ್ರೈನ್ (ಖಾಲಿ) ಆಗುವ ಹಂತಕ್ಕೆ ತಲುಪಿವೆ ಎಂದರ್ಥ.&lt;/p&gt;&lt;p&gt;&lt;strong&gt;ಕಾರ್ಬನ್ ಅಥವಾ ಕೊಳೆ ಕುಳಿತಿದೆ:&lt;/strong&gt; ಬ್ಯಾಟರಿ ಕೂರುವ ಸ್ಪ್ರಿಂಗ್&zwnj;ಗಳಲ್ಲಿ ಧೂಳು ಅಥವಾ ತೇವಾಂಶದಿಂದ ತುಕ್ಕು ಹಿಡಿದಿದೆ ಎಂದರ್ಥ.&lt;/p&gt;&lt;img&gt;&lt;p&gt;&lt;strong&gt;ಪ್ರಮುಖ ಎಚ್ಚರಿಕೆ: ಪದೇ ಪದೇ ತಟ್ಟಬೇಡಿ!&lt;/strong&gt;&lt;/p&gt;&lt;p&gt;ರಿಮೋಟ್ ಕೆಲಸ ಮಾಡದಿದ್ದಾಗ ಕೈಯಿಂದ ಬಡಿಯುವುದು ಅಥವಾ ಸೋಫಾ, ಟೇಬಲ್&zwnj;ಗೆ ಕುಟ್ಟುವುದು ದೀರ್ಘಕಾಲದ ಪರಿಹಾರವಲ್ಲ.&lt;/p&gt;&lt;p&gt;ಹೀಗೆ ಬಡಿಯುವುದರಿಂದ ರಿಮೋಟ್&zwnj;ನ ಒಳಗಿರುವ ಚಿಕ್ಕ ಮದರ್&zwnj;ಬೋರ್ಡ್ (Circuit Board), ಐಆರ್ ಸೆನ್ಸರ್ (IR LED) ಅಥವಾ ಪ್ಲಾಸ್ಟಿಕ್ ಲಾಕ್&zwnj;ಗಳು ಮುರಿದುಹೋಗಿ ರಿಮೋಟ್ ಶಾಶ್ವತವಾಗಿ ಹಾಳಾಗಬಹುದು.&lt;/p&gt;&lt;img&gt;&lt;p&gt;&lt;strong&gt;ಇದಕ್ಕೆ ಸುಲಭ ಪರಿಹಾರವೇನು?&lt;/strong&gt;&lt;/p&gt;&lt;p&gt;ರಿಮೋಟ್&zwnj;ಗೆ ಬಡಿಯುವ ಬದಲು, ಬ್ಯಾಟರಿ ಕವರ್ ತೆಗೆದು ಎರಡೂ ಬ್ಯಾಟರಿಗಳನ್ನು ನಿಮ್ಮ ಬೆರಳಿನಿಂದಲೇ ಹಿಂದಕ್ಕೂ ಮುಂದಕ್ಕೂ ಒಂದೆರಡು ಬಾರಿ ತಿರುಗಿಸಿ (Rotate ಮಾಡಿ). ಇದರಿಂದ ತುಕ್ಕು ಸರಿದು ತಕ್ಷಣ ಸಂಪರ್ಕ ಸಿಗುತ್ತದೆ.&lt;/p&gt;&lt;p&gt;ಸ್ಪ್ರಿಂಗ್ ಮೇಲೆ ಕೊಳೆ ಇದ್ದರೆ ಒಣ ಬಟ್ಟೆ ಅಥವಾ ರಬ್ಬರ್ (Eraser) ನಿಂದ ಸ್ವಚ್ಛಗೊಳಿಸಿ.&lt;/p&gt;&lt;p&gt;ಎಲ್ಲಕ್ಕಿಂತ ಮುಖ್ಯವಾಗಿ, ತಕ್ಷಣವೇ ಹೊಸ ಬ್ಯಾಟರಿಗಳನ್ನು ಹಾಕಿ, ನಿಮ್ಮ ರಿಮೋಟ್ ಸುಸೂತ್ರವಾಗಿ ಕೆಲಸ ಮಾಡುತ್ತದೆ!&lt;/p&gt;]]></content:encoded>
            <category><![CDATA[life]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/why-tv-remote-works-after-hitting-science-behind-slapping-remote-sat-t6uzgbo"/>
        </item>
        <item>
            <title><![CDATA[ಬೆಂಗಳೂರು: ಕಡಿಮೆ ಬೆಲೆಗೆ ಸಿಗುತ್ತೆ ಅಂತ ಈ ಔಷಧಿ ತಗೊಳ್ತಿದ್ದೀರಾ? ಬಯಲಾಯ್ತು ದಂಧೆ, ಕ್ಯಾನ್ಸರ್ ಮಾತ್ರೆಗಳೇ ನಕಲಿ!]]></title>
            <link>https://kannada.asianetnews.com/bengaluru-urban/fake-medicine-racket-busted-in-bengaluru-sit-raids-across-6-states-gdp/articleshow-efuppbh</link>
            <guid isPermaLink="true">https://kannada.asianetnews.com/bengaluru-urban/fake-medicine-racket-busted-in-bengaluru-sit-raids-across-6-states-gdp/articleshow-efuppbh</guid>
            <pubDate>Fri, 11 Sep 2026 15:05:17 +0530</pubDate>
            <description><![CDATA[ಕರ್ನಾಟಕ ಸರ್ಕಾರದ ಎಸ್‌ಐಟಿ ಮತ್ತು ಔಷಧ ನಿಯಂತ್ರಣ ಇಲಾಖೆಯು ಜಂಟಿ ಕಾರ್ಯಾಚರಣೆ ನಡೆಸಿ, 6 ರಾಜ್ಯಗಳಲ್ಲಿ ವ್ಯಾಪಿಸಿದ್ದ ಬೃಹತ್ ನಕಲಿ ಔಷಧಿ ಜಾಲವನ್ನು ಭೇದಿಸಿದೆ. ಬೆಂಗಳೂರಿನ 'ಕೃಪಾ ಫಾರ್ಮಾ' ಮಾಲೀಕನನ್ನು ಬಂಧಿಸಿದ್ದು, ಈ ಜಾಲವು ಕ್ಯಾನ್ಸರ್ ಹಾಗೂ ಇತರೆ ಜೀವ ರಕ್ಷಕ ಔಷಧಿಗಳನ್ನು ನಕಲಿಯಾಗಿ ತಯಾರಿಸಿ ಆಸ್ಪತ್ರೆಗಳಿಗೆ ಪೂರೈಸುತ್ತಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01m27x1yt4cpgdn9b1s89y845e,imgname-kripa-healthcare-fake-medicine-1789119232836.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ತಾವರೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧಿ ಜಾಲದ ಬೆನ್ನತ್ತಿರುವ ಕರ್ನಾಟಕ ಸರ್ಕಾರದ ವಿಶೇಷ ತನಿಖಾ ತಂಡ ಹಾಗೂ ಔಷಧ ನಿಯಂತ್ರಣ ಇಲಾಖೆ (Drugs Control Department), ಜಂಟಿಯಾಗಿ ಬೃಹತ್ ಕಾರ್ಯಾಚರಣೆ ನಡೆಸಿವೆ. ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ರಚನೆಗೊಂಡಿರುವ ಎಸ್&zwnj;ಐಟಿ ತಂಡವು ಏಕಕಾಲಕ್ಕೆ ಕರ್ನಾಟಕ ಸೇರಿದಂತೆ ದೇಶದ 6 ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ ಭಾರಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.&lt;/p&gt;&lt;p&gt;ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿರುವ ನಕಲಿ ಫಾರ್ಮ್&zwnj;ಗಳು, ನಕಲಿ ಔಷಧಿ ಪೂರೈಸುತ್ತಿದ್ದ ಕಂಪನಿಗಳ ಫಾರ್ಮ್ ಹೌಸ್&zwnj;ಗಳು ಹಾಗೂ ಗೋಡೌನ್&zwnj;ಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪ್ರಕರಣದ ಮುಖ್ಯ ಕಿಂಗ್&zwnj;ಪಿನ್ ಪ್ರಶಾಂತ್ ಹಾಗೂ ಆತನ ಗ್ಯಾಂಗ್ ಅನ್ನು ಬಳಸಿಕೊಂಡು ನಕಲಿ ಔಷಧಿ, ನಕಲಿ ಬಾಟಲ್ ಹಾಗೂ ಪ್ರತಿಷ್ಠಿತ ಡ್ರಗ್ ಕಂಪನಿಗಳ ನಕಲಿ ಲೇಬಲ್&zwnj;ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಭೇದಿಸಲಾಗಿದೆ. ತಾವರೆಕೆರೆಯ ಗೋಡೌನ್ ಒಂದರಲ್ಲಿ ನಕಲಿ ಔಷಧಿಗಳನ್ನು ಸಂಗ್ರಹಿಸಿ, ಅಲ್ಲಿಂದಲೇ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಜಾಗೃತರಾದ ಸರ್ಕಾರ, ಎಸ್&zwnj;ಐಟಿ ತಂಡವನ್ನು ರಚಿಸಿ ಶೋಧ ಕಾರ್ಯಕ್ಕೆ ಆದೇಶಿಸಿತ್ತು.&lt;/p&gt;&lt;h2&gt;ಕೃಪಾ ಫಾರ್ಮಾಸಿ ಮೇಲೆ ದಾಳಿ ಮತ್ತು ಸುದೀರ್ಘ ಪರಿಶೀಲನೆ&lt;/h2&gt;&lt;p&gt;ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರಿನ ವಿ.ವಿ.ಪುರಂನ ಮಿನರ್ವ ಸರ್ಕಲ್&zwnj;ನಲ್ಲಿರುವ 'ಕೃಪಾ ಫಾರ್ಮಾ/ಕೃಪಾ ಹೆಲ್ತ್&zwnj;ಕೇರ್' ಸಂಸ್ಥೆಯ ಮಾಲೀಕ ವೀರೇಶ್ ಅವರ ಮನೆ ಹಾಗೂ ಗೋಡೌನ್ ಮೇಲೆಯೂ ಎಸ್&zwnj;ಐಟಿ ದಾಳಿ ನಡೆಸಿದೆ. ಎಸ್&zwnj;ಐಟಿ ಇನ್&zwnj;ಸ್ಪೆಕ್ಟರ್, ಡಿವೈಎಸ್&zwnj;ಪಿ, ಸಬ್-ಇನ್&zwnj;ಸ್ಪೆಕ್ಟರ್ ಹಾಗೂ ಮೂವರು ಔಷಧ ನಿಯಂತ್ರಣಾಧಿಕಾರಿಗಳನ್ನೊಳಗೊಂಡ ತಂಡವು ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುದೀರ್ಘ ತನಿಖೆ ನಡೆಸಿದೆ. ಪರಿಶೀಲನೆಯ ವೇಳೆ ಕಂಪನಿಯ ಪ್ರಮುಖ ದಾಖಲೆಗಳು, ಮಾಲೀಕ ವೀರೇಶ್ ಅವರ ಮೊಬೈಲ್ ಫೋನ್ ಹಾಗೂ ಲ್ಯಾಪ್&zwnj;ಟಾಪ್&zwnj;ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;ಕಡಿಮೆ ಬೆಲೆ ಹಾಗೂ ಕಮಿಷನ್ ಆಸೆಗೆ ಬಿದ್ದು ನಕಲಿ ಔಷಧಿ ಖರೀದಿ&lt;/h2&gt;&lt;p&gt;ವೀರೇಶ್ 2021ರಲ್ಲಿ ಕೃಪಾ ಹೆಲ್ತ್&zwnj;ಕೇರ್ ಕಂಪನಿಯನ್ನು ನೋಂದಾಯಿಸಿದ್ದು, ಕಳೆದ ಐದು ವರ್ಷಗಳಿಂದ ನಗರದ ಬಹುತೇಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಮತ್ತು ಮೆಡಿಕಲ್ ಶಾಪ್&zwnj;ಗಳಿಗೆ ಔಷಧಿ ಪೂರೈಸುತ್ತಿದ್ದ. ಕಿಂಗ್&zwnj;ಪಿನ್ ಪ್ರಶಾಂತ್ ಸೇರಿದಂತೆ ವಿವಿಧ ಅಕ್ರಮ ಡೀಲರ್&zwnj;ಗಳಿಂದ ನಕಲಿ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದ ಈತ, ಮಿನರ್ವ ಸರ್ಕಲ್ ಬಳಿಯ ಗೋಡೌನ್ ಮೂಲಕ ಮುಂಬೈ ಹಾಗೂ ಗುಜರಾತ್ ಮುಂತಾದ ಹೊರರಾಜ್ಯಗಳಿಗೂ ಸರಬರಾಜು ಮಾಡುತ್ತಿದ್ದ.&lt;/p&gt;&lt;p&gt;ಮಾರುಕಟ್ಟೆಯ ಇತರೆ ಡೀಲರ್&zwnj;ಗಳಿಗಿಂತ ಅತಿ ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತವೆ ಎಂಬ ಕಾರಣಕ್ಕೆ ಹಲವು ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್ ಶಾಪ್&zwnj;ಗಳು ಇವನಿಂದ ಔಷಧಿಗಳನ್ನು ಖರೀದಿ ಮಾಡುತ್ತಿದ್ದವು. ತನ್ನ ಜಾಲವನ್ನು ವಿಸ್ತರಿಸಲು ವೀರೇಶ್ 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರೆಸೆಂಟೇಟಿವ್&zwnj;ಗಳನ್ನು (MR) ನೇಮಿಸಿಕೊಂಡಿದ್ದ. ಅವರಿಗೆ ಅತಿ ಹೆಚ್ಚಿನ ಕಮಿಷನ್ ಆಸೆ ತೋರಿಸಿ, ಆಸ್ಪತ್ರೆಗಳಿಗೆ ನಕಲಿ ಔಷಧಿ ಸಪ್ಲೈ ಮಾಡಿಸುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಕ್ಯಾನ್ಸರ್ ಹಾಗೂ ಜೀವ ರಕ್ಷಕ ಔಷಧಿಗಳ ಸರಬರಾಜು&lt;/h2&gt;&lt;p&gt;ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಜಾಲವು, ಪ್ರಮುಖವಾಗಿ ಅತ್ಯಂತ ಸೂಕ್ಷ್ಮ ಹಾಗೂ ದುಬಾರಿಯಾದ ಕ್ಯಾನ್ಸರ್ ರೋಗದ ಔಷಧಿಗಳು, ಥೈರಾಯ್ಡ್, ವಿಟಮಿನ್ ಮಾತ್ರೆಗಳು ಹಾಗೂ ಹಲವು ಪ್ರಮುಖ ಇಂಜೆಕ್ಷನ್&zwnj;ಗಳನ್ನು ನಕಲಿ ರೂಪದಲ್ಲಿ ಪೂರೈಸುತ್ತಿತ್ತು. ಪ್ರಸ್ತುತ ಎಸ್&zwnj;ಐಟಿ ಅಧಿಕಾರಿಗಳು ಗೋಡೌನ್&zwnj;ನಲ್ಲಿಯೇ ಮಾಲೀಕ ವೀರೇಶ್&zwnj;ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಈ ಜಾಲದ ಹಿಂದೆ ಇರುವ ಇತರೆ ಬೃಹತ್ ಉದ್ಯಮಿಗಳು ಹಾಗೂ ಆಸ್ಪತ್ರೆಗಳ ಲಿಂಕ್&zwnj;ಗಳ ಕುರಿತು ಜಾಲಾಡುತ್ತಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Gowthami K</dc:creator>
            <atom:link href="https://kannada.asianetnews.com/bengaluru-urban/fake-medicine-racket-busted-in-bengaluru-sit-raids-across-6-states-gdp/articleshow-efuppbh"/>
        </item>
        <item>
            <title><![CDATA[ಈ ಲಕ್ಷಣಗಳಿದ್ದರೆ ಜೀವನದ ಮೇಲೆ ಸರ್ಪ ಗ್ರಹ ಸ್ಥಾನ ಪರಿಣಾಮ ಬೀರುತ್ತಿದೆ ಎಂದರ್ಥ, ಪರಿಹಾರವೇನು?]]></title>
            <link>https://kannada.asianetnews.com/gallery/astrology/these-signs-may-indicate-influence-of-snake-planet-in-your-life-what-are-remedies-4qwn1pe</link>
            <guid isPermaLink="true">https://kannada.asianetnews.com/gallery/astrology/these-signs-may-indicate-influence-of-snake-planet-in-your-life-what-are-remedies-4qwn1pe</guid>
            <pubDate>Fri, 11 Sep 2026 14:57:37 +0530</pubDate>
            <description><![CDATA[ಸರ್ಪ ಗ್ರಹಗಳ ದೋಷಗಳು ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಸರ್ಪ ಗ್ರಹ ದೋಷಗಳಿವೆ ಎಂದರ್ಥ, ಹಾಗಂತ ಆತಂಕ ಪಡಬೇಕಿಲ್ಲ,ಪರಿಹಾರ ಸೂತ್ರವೂ ಇದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27w8x9g2b72p9gahkndekgf,imgname-sarpa-graha-in-astrology-1789118412077.png" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಪ ಗ್ರಹಗಳ ದೋಷಗಳು ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ಲಕ್ಷಣಗಳು ಕಂಡು ಬಂದರೆ ಸರ್ಪ ಗ್ರಹ ದೋಷಗಳಿವೆ ಎಂದರ್ಥ, ಹಾಗಂತ ಆತಂಕ ಪಡಬೇಕಿಲ್ಲ,ಪರಿಹಾರ ಸೂತ್ರವೂ ಇದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ, ಪಲ್ಲಟ, ಅನುಗ್ರಹಗಳು ಅತೀ ಮುಖ್ಯ. ಈ ಪೈಕಿ ಸರ್ಪ ಗ್ರಹಗಳ ಸ್ಥಾನ ಹಾಗೂ ದಶೆ ಪ್ರತಿಯೊಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲ ಲಕ್ಷಣಗಳು, ಸೂಚನೆಗಳು ಸರ್ಪ ಗ್ರಹ ಸ್ಥಾನ ಬಿರುತ್ತಿರುವ ಪರಿಣಾಮವನ್ನು ಸೂಚಿಸುತ್ತದೆ. ಈ ಸೂಚನೆಗಳನ್ನು ನಿರ್ಲಕ್ಷಿಸುವುದಕ್ಕಿಂತ ಪರಿಹಾರ ಕಂಡುಕೊಳ್ಳುವುದು ಮುಖ್ಯ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ರಾಹುವನ್ನು ಸರ್ಪದ ತಲೆ ಹಾಗೂ ಕೇತು ಸರ್ಪದ ಬಾಲ ಎಂದು ಪರಿಗಣಿಸಲಾಗುತ್ತದೆ. ರಾಹು ಹಾಗೂ ಕೇತು ಅಶುಭ ಸ್ಥಾನದಲ್ಲಿದ್ದರೆ ದೋಷಗಳು ಕಾಣಿಸಿಕೊಳ್ಳುತ್ತದೆ. ಕೆಟ್ಟ ಕನಸುಗಳು ಬೀಳುವುದು, ಮನೆಯಲ್ಲಿ ಹಾವು ಕಾಣಿಸಿಕೊಳ್ಳುವುದು, ಹಾವಿನ ಕನಸು, ಪ್ರಯತ್ನ ವಿಫಲ, ದಿಢೀರ್ ಎದುರಾಗುವ ಸಮಸ್ಯೆಯಲ್ಲೇ ಎಲ್ಲಾ ಪ್ರಯತ್ನ ವ್ಯರ್ಥವಾಗುವುದು, ವೃತ್ತಿಯಲ್ಲಿನ ಅಡಚಣೆ, ಆರ್ಥಿಕ ನಷ್ಟ, ಸಾಲದ ಸಮಸ್ಯೆ, ಭಯ, ಆಚತಂಕ, ನಿದ್ರಾಹೀನತೆ, ಅಸ್ಪಸ್ಥತೆ, ಆಸಕ್ತಿ ಕಳೆದುಕೊಳ್ಳುವಿಕೆ,ದಾಂಪತ್ಯದಲ್ಲಿ ಮನಸ್ತಾಪ, ಕುಟುಂಬದಲ್ಲಿ ಅಶಾಂತಿ, ಚರ್ಮ ಸಮಸ್ಯೆ, ಹಾವು ಸೇರಿದಂತೆ ವಿಷಕಾರಿ ಜಂತುಗಳ ಕಡಿತ, ಮಾನಸಿಕ ಒತ್ತಡ, ಸಾವಿನ ಭಯ ಸೂಚನೆಗಳಿದ್ದರೆ ರಾಹು ಕೇತುವಿನ ಪರಿಣಾಮದ ಸೂಚನೆಗಳು.&lt;/p&gt;&lt;img&gt;&lt;p&gt;ರಾಹು ಹಾಗೂ ಕೇತು ದೋಷದಿಂದ ದೂರವಾಗಲು ಸರಳ ಸೂತ್ರ ಪಾಲಿಸಿದರೆ ಸಾಕು. ಪ್ರತಿ ದಿನ ಕೆಲ ಅಭ್ಯಾಸಗಳು, ದೇವರ ಜಪ ತಪ ದೋಷಗಳಿಂದ ಮುಕ್ತಿ ಸಿಗುವಂತೆ ಮಾಡುತ್ತದೆ. ಇಷ್ಟೇ ಅಲ್ಲ ಸಮಸ್ಯೆಗಳು ನಿಧಾನವಾಗಿ ದೂರವಾಗುತ್ತದೆ. ಬೆಳಗ್ಗೆ ಸ್ನಾನದ ಬಳಿಕ ಗಂಗಾಜಲ ಅಥವಾ ಶುದ್ದ ನೀರಿಗೆ ಸ್ವಲ್ಪ ಉಪ್ಪು ಹಾಕಿ ಮನೆ ಮೂಲೆಗಳಲ್ಲಿ ಸಿಂಪಡಿಸಬೇಕು. ಇದು ನೆಗಟೀವ್ ಶಕ್ತಿಯನ್ನು ದೂರ ಮಾಡುತ್ತದೆ.&lt;/p&gt;&lt;img&gt;&lt;p&gt;ಶುಕ್ರವಾರ, ಶನಿವಾರ ಎಳ್ಳು ಎಣ್ಣೆಯ ದೀಪ ಹಚ್ಚಬೇಕು. ಇದು ಮನೆಯೊಳಗಿನ ನೆಗಟೀವ್ ಎನರ್ಜಿಯನ್ನು ಮಾತ್ರವಲ್ಲ, ದೇಹ ಹಾಗೂ ಮನಸ್ಸಿನ ನೆಗಿಟೀವ್ ಎನರ್ಜಿಯನ್ನು ದೂರ ಮಾಡುತ್ತದೆ. ಬೆಳಕು ಪ್ರಜ್ವಲಿಸುತ್ತಿದ್ದಂತೆ ಮನಸ್ಸು ಶಾಂತಗೊಳ್ಳುತ್ತದೆ. ರಾಹುವಿನ ಇಷ್ಟದ ಬಣ್ಣ ನೀಲಿ. ಹೀಗಾಗಿ ನೀಲಿ ಬಟ್ಟೆ, ನೀಲಿ ಹೂವು ದಾನ ಮಾಡುವುದು, ದೇವರಿಗೆ ಅರ್ಪಿಸುವುದು ಉತ್ತಮ. ಕೇತುವಿಗೆ ಕಪ್ಪು. ಹೀಗಾಗಿ ಕಪ್ಪು ಬಟ್ಟೆ, ಕಪ್ಪು ಎಳ್ಳು ದಾನ ಮಾಡುವುದು ಉತ್ತಮ.&lt;/p&gt;&lt;img&gt;&lt;p&gt;ಶ್ರಾವಣ ಮಾಸದಲ್ಲಿ ಅಥವಾ ಪ್ರತಿ ಸೋಮವಾರ ನಾಗ ದೇವಸ್ಥಾನ, ನಾಗ ಕಟ್ಟೆಗಳಿಗೆ ಬೇಟಿ ನೀಡಿ, ಹಾಲು ಅಕ್ಕಿ, ಎಳ್ಳು, ಹೂವು ಅರ್ಪಿಸುವುದು ಉತ್ತಮ. ನಾಗರ ಪಂಚಮಿ ದಿನ ನಾಗ ಬನ, ನಾಗ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ, ಹಾಲು ಅರ್ಪಿಸುವುದು ಉತ್ತಮ. ಮಹಾಮೃತ್ಯುಂಜಯ ಮಂತ್ರ, ರಾಹು ಮಂತ್ರಗಳನ್ನು ಜುಪಿಸುವುದು ಉತ್ತಮ. ಇನ್ನು ರುದ್ರಾಭಿಷೇಕ, ನವಗ್ರಹ ಶಾಂತಿ ಪೂಜೆ, ಪರಿಹಾರ ಪೂಜೆ ಸೇರಿದಂತೆ ಇತರ ಪೂಜೆಗಳಿಂದಲೂ ದೋಷ ಪರಿಹಾರ ಅಥವಾ ದೋಷದಿಂದ ದೂರವಿರಲು ಸಾಧ್ಯವಿದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/astrology/these-signs-may-indicate-influence-of-snake-planet-in-your-life-what-are-remedies-4qwn1pe"/>
        </item>
        <item>
            <title><![CDATA[ಆಯುರ್ವೇದಿಕ್‌ ಹುಕ್ಕಾ ತಯಾರಿಸೋದು ಹೇಗೆ? ಇದ್ರ ಸೇವನೆಯಿಂದ ಲಾಭ ಏನು?]]></title>
            <link>https://kannada.asianetnews.com/health-life/baba-ramdev-told-how-to-make-ayurvedic-hookah-said-drinking-it-will-open-the-blocked-nose/articleshow-g6ot3fp</link>
            <guid isPermaLink="true">https://kannada.asianetnews.com/health-life/baba-ramdev-told-how-to-make-ayurvedic-hookah-said-drinking-it-will-open-the-blocked-nose/articleshow-g6ot3fp</guid>
            <pubDate>Fri, 11 Sep 2026 14:54:11 +0530</pubDate>
            <description><![CDATA[Ayurvedic hookah : ಯೋಗ ಗುರು ಬಾಬಾ ರಾಮದೇವ, ಆಯುರ್ವೇದಿಕ್‌ ಹುಕ್ಕಾ ತಯಾರಿಸುವ ವಿಧಾನವನ್ನು ಹೇಳಿದ್ದಾರೆ. ಅದ್ರಿಂದ ಏನು ಪ್ರಯೋಜನ ಎಂಬುದನ್ನೂ ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27wdp3hpdxhqms458d7qs1a,imgname-baba-ramdev-1789118568561.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ದಿನಗಳಲ್ಲಿ ಇ-ಸಿಗರೇಟ್ ಹಾಗೂ ಫ್ಲೇವರ್ಡ್ ಹುಕ್ಕಾ ಯುವಜನರಲ್ಲಿ ಹೆಚ್ಚು ಚರ್ಚೆಯಲ್ಲಿವೆ. ಆದರೆ, ಇವು ಆರೋಗ್ಯಕ್ಕೆ ಹಾನಿಕಾರಕ. ಅವುಗಳನ್ನು ತೆಗೆದುಕೊಳ್ಳದಂತೆ ಆರೋಗ್ಯ ತಜ್ಞರು ಎಚ್ಚರಿಸ್ತಿರುತ್ತಾರೆ. ಇ-ಸಿಗರೇಟ್ ಮತ್ತು ಫ್ಲೇವರ್ಡ್ ಹುಕ್ಕಾದಲ್ಲಿರುವ ರಾಸಾಯನಿಕಗಳು ಹಾಗೂ ತಂಬಾಕು, ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ಅಪಾಯ ಕಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;p&gt;ಇದರ ನಡುವೆ ಯೋಗ ಗುರು ಬಾಬಾ ರಾಮ್ದೇವ್ ಅವರ ಹಳೆಯ ವಿಡಿಯೋವೊಂದು ಮತ್ತೆ ಗಮನ ಸೆಳೆದಿದೆ. ಇದರಲ್ಲಿ ಅವರು ಆಯುರ್ವೇದಿಕ ಹುಕ್ಕಾದ ಬಗ್ಗೆ ಮಾತನಾಡಿದ್ದು, ಕೆಲವು ಗಿಡಮೂಲಿಕೆಗಳನ್ನು ಬಳಸುವ ವಿಧಾನವನ್ನು ತಿಳಿಸಿದ್ದಾರೆ.&lt;/p&gt;&lt;h2&gt;ಆಯುರ್ವೇದಿಕ ಹುಕ್ಕಾಗೆ ಏನೇನು ಬೇಕು?&lt;/h2&gt;&lt;p&gt;ಬಾಬಾ ರಾಮ್ದೇವ್ ಹೇಳುವ ಪ್ರಕಾರ, ಆಯುರ್ವೇದಿಕ್&zwnj; ಹುಕ್ಕಾ ತಯಾರಿಸಲು ಒಂದು ಚಿಟಿಕೆ ಮುಲೇತಿ, ಒಂದು ಚಿಟಿಕೆ ಅರಿಶಿನ, ಒಂದು ಚಿಟಿಕೆ ಸಾಸಿವೆ, ಸ್ವಲ್ಪ ಹಸುವಿನ ತುಪ್ಪ, ಕಾಕಡ ಸಿಂಗಿ ಹಾಗೂ ದೇಸಿ ಕರ್ಪೂರದ ಅಗತ್ಯವಿದೆ.&lt;/p&gt;&lt;h3&gt;ಆಯುರ್ವೇದಿಕ್&zwnj; ಹುಕ್ಕಾ ತಯಾರಿಸೋದು ಹೇಗೆ?&lt;/h3&gt;&lt;p&gt;ಮೊದಲು ಮುಲೇತಿಯನ್ನು ಸ್ವಲ್ಪ ಜಜ್ಜಿ ಅದಕ್ಕೆ ಹಸುವಿನ ತುಪ್ಪವನ್ನು ಸೇರಿಸಬೇಕು. ನಂತರ ಒಂದು ಚಿಟಿಕೆ ಅರಿಶಿನ ಮತ್ತು ಸಾಸಿವೆ ಸೇರಿಸಬೇಕು. ಹುಕ್ಕಾದ ಪ್ಲೇಟ್ನಲ್ಲಿ ಕರ್ಪೂರವನ್ನು ಉರಿಸಿ, ಅದರ ಮೇಲೆ ಕಾಕಡ ಸಿಂಗಿಯನ್ನು ಹಾಕಬೇಕು. ಈ ಪದಾರ್ಥಗಳನ್ನು ಹುಕ್ಕಾದ ಮೂಲಕ ಸೇವಿಸುವುದರಿಂದ ಕಟ್ಟಿಕೊಂಡ ಮೂಗು ಬಿಡುತ್ತದೆ. ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು. ಹಾಗೆಯೇ ವಾತ, ಪಿತ್ತ, ಕಫದ ಸಮತೋಲನಕ್ಕೂ ಸಹಾಯವಾಗುತ್ತದೆ ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ, ಇ-ಸಿಗರೇಟ್ ಮತ್ತು ಫ್ಲೇವರ್ಡ್ ಹುಕ್ಕಾದಲ್ಲಿರುವ ವಿವಿಧ ರಾಸಾಯನಿಕಗಳು ಹಾಗೂ ತಂಬಾಕು ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡಬಹುದು. ಹಾಗಾಗಿ ಇವುಗಳಿಂದ ದೂರವಿರುವಂತೆ ಬಾಬಾ ರಾಮ್ದೇವ್ ಕೂಡ ಸಲಹೆ ನೀಡಿದ್ದಾರೆ. ಯಾವುದೇ ಇಂತಹ ವಿಧಾನವನ್ನು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಬಳಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಮುಖ್ಯ.&lt;/p&gt;]]></content:encoded>
            <category><![CDATA[health-life]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/health-life/baba-ramdev-told-how-to-make-ayurvedic-hookah-said-drinking-it-will-open-the-blocked-nose/articleshow-g6ot3fp"/>
        </item>
        <item>
            <title><![CDATA[ಬದನೆಕಾಯಿ ಪಲ್ಯ ಅಥವಾ ಗ್ರೇವಿ ಮಾಡುವಾಗ ಕೇವಲ 2 ಚಮಚ ಹಾಲು ಸೇರಿಸುವುದೇಕೆ? ಇಲ್ಲಿದೆ ಅಡುಗೆ ಭಟ್ಟರ ಗುಟ್ಟು!]]></title>
            <link>https://kannada.asianetnews.com/gallery/kitchen/secret-trick-why-you-should-add-milk-while-cooking-brinjal-zg5gshx</link>
            <guid isPermaLink="true">https://kannada.asianetnews.com/gallery/kitchen/secret-trick-why-you-should-add-milk-while-cooking-brinjal-zg5gshx</guid>
            <pubDate>Fri, 11 Sep 2026 14:53:46 +0530</pubDate>
            <description><![CDATA[Kitchen hacks for brinjal: ಬದನೆಕಾಯಿ ಪಲ್ಯ ಇಷ್ಟಪಡದವರೂ ಬೆರಳು ನೆಕ್ಕಿ ತಿನ್ನೋ ಹಾಗೆ ಮಾಡುವ ಒಂದು ರಹಸ್ಯ ಕಿಚನ್ ಟ್ರಿಕ್ ಇಲ್ಲಿದೆ! ಅಡುಗೆಗೆ ಇದೊಂದು ಸಿಂಪಲ್ ಪದಾರ್ಥ ಹಾಕಿದ್ರೆ ಸಾಕು, ಹೋಟೆಲ್ ಸ್ಟೈಲ್ ರುಚಿ ಗ್ಯಾರಂಟಿ. ಆದ್ರೆ ಇದನ್ನ ಹುಣಸೆಹಣ್ಣಿನ ಜೊತೆ ಮಾತ್ರ ಬಳಸಲೇಬಾರದು! ಯಾಕೆ ಅಂತೀರಾ?]]></description>
            <media:content url="https://static.asianetnews.com/images/w-1280,h-720,format-jpg,imgid-01m27vz4xt53616sqp7gfr6swp,imgname-thumbnail---2026-09-11t144328.009-1789118092217.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen hacks for brinjal: ಬದನೆಕಾಯಿ ಪಲ್ಯ ಇಷ್ಟಪಡದವರೂ ಬೆರಳು ನೆಕ್ಕಿ ತಿನ್ನೋ ಹಾಗೆ ಮಾಡುವ ಒಂದು ರಹಸ್ಯ ಕಿಚನ್ ಟ್ರಿಕ್ ಇಲ್ಲಿದೆ! ಅಡುಗೆಗೆ ಇದೊಂದು ಸಿಂಪಲ್ ಪದಾರ್ಥ ಹಾಕಿದ್ರೆ ಸಾಕು, ಹೋಟೆಲ್ ಸ್ಟೈಲ್ ರುಚಿ ಗ್ಯಾರಂಟಿ. ಆದ್ರೆ ಇದನ್ನ ಹುಣಸೆಹಣ್ಣಿನ ಜೊತೆ ಮಾತ್ರ ಬಳಸಲೇಬಾರದು! ಯಾಕೆ ಅಂತೀರಾ?&lt;/p&gt;&lt;img&gt;&lt;p&gt;&lt;strong&gt;ಬೇಗನೆ ಕಪ್ಪಾಗುವುದು ಸಹ ಸಾಮಾನ್ಯ&lt;/strong&gt;ಬದನೆಕಾಯಿ ಎಂದರೆ ಕೆಲವರಿಗೆ ಪಂಚಪ್ರಾಣ, ಇನ್ನು ಕೆಲವರಿಗೆ ಅದರ ಕಹಿ ಅಥವಾ ಒಗರಾದ ರುಚಿಯಿಂದಾಗಿ ಕಂಡರೆ ಆಗುವುದೇ ಇಲ್ಲ. ಎಷ್ಟೋ ಬಾರಿ ಬದನೆಕಾಯಿ ಪಲ್ಯ ಅಥವಾ ಎಣ್ಣೆಗಾಯಿ ಮಾಡುವಾಗ ಅದರ ಸಿಪ್ಪೆಯಿಂದಾಗಿ ಲಘು ಕಹಿ ರುಚಿ ಬರುವುದುಂಟು. ಅಲ್ಲದೆ, ಹೆಚ್ಚಿಟ್ಟ ಬದನೆಕಾಯಿ ಬೇಗನೆ ಕಪ್ಪಾಗುವುದು (Discoloration) ಸಹ ಸಾಮಾನ್ಯ.&lt;/p&gt;&lt;img&gt;&lt;p&gt;&lt;strong&gt;ಹದವೇ ಬದಲಾಗುತ್ತೆ&lt;/strong&gt;ಆದರೆ ಇನ್ನು ಮುಂದೆ ಆ ಚಿಂತೆ ಬೇಡ.. ಅಡುಗೆ ಮಾಡುವಾಗ ಕೇವಲ ಸ್ವಲ್ಪ 'ಹಾಲು' (Milk) ಸೇರಿಸಿದರೆ, ಇಡೀ ಅಡುಗೆಯ ರುಚಿ ಮತ್ತು ಹದವೇ (Texture) ಬದಲಾಗುತ್ತದೆ ಎಂಬ ಅದ್ಭುತ ಕಿಚನ್ ಟ್ರಿಕ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ!&lt;/p&gt;&lt;img&gt;&lt;p&gt;&lt;strong&gt;ಬದನೆಕಾಯಿಗೆ ಹಾಲು ಸೇರಿಸುವುದರ ಪ್ರಯೋಜನಗಳೇನು?&lt;/strong&gt;ಸಾಮಾಜಿಕ ಜಾಲತಾಣಗಳಲ್ಲಿ ಅಡುಗೆ ತಜ್ಞರು ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಬದನೆಕಾಯಿ ಬೇಯಿಸುವಾಗ ಸ್ವಲ್ಪ ಹಾಲು ಸೇರಿಸುವುದರಿಂದ ಹಲವು ಅದ್ಭುತ ಬದಲಾವಣೆಗಳಾಗುತ್ತವೆ..&lt;/p&gt;&lt;p&gt;&lt;strong&gt;ಸಿಪ್ಪೆಯ ಕಹಿ ಮಾಯವಾಗುತ್ತದೆ: &lt;/strong&gt;ಬದನೆಕಾಯಿಯ ಸಿಪ್ಪೆಯಲ್ಲಿ ನೈಸರ್ಗಿಕವಾಗಿ ಇರುವ ಲಘು ಕಹಿ ಅಥವಾ ಒಗರು ರುಚಿಯನ್ನು ಹಾಲು ಸಂಪೂರ್ಣವಾಗಿ ತಗ್ಗಿಸುತ್ತದೆ.&lt;/p&gt;&lt;p&gt;&lt;strong&gt;ಕ್ರೀಮಿ ರುಚಿ (Creamy Texture): &lt;/strong&gt;ಹಾಲನ್ನು ಸೇರಿಸುವುದರಿಂದ ಬದನೆಕಾಯಿ ಗ್ರೇವಿ ಅಥವಾ ಪಲ್ಯಕ್ಕೆ ಹೋಟೆಲ್ ಶೈಲಿಯ ಕ್ರೀಮಿ ರುಚಿ ಮತ್ತು ಹದ ಸಿಗುತ್ತದೆ.&lt;/p&gt;&lt;p&gt;&lt;strong&gt;ಬಣ್ಣ ಕಪ್ಪಾಗುವುದಿಲ್ಲ: &lt;/strong&gt;ಬದನೆಕಾಯಿ ಕಪ್ಪಾಗುವುದನ್ನು ತಡೆದು, ಅದು ತನ್ನ ನೈಸರ್ಗಿಕ ಮಣ್ಣಿನ ಪರಿಮಳವನ್ನು (Earthen flavour) ಉಳಿಸಿಕೊಳ್ಳಲು ಹಾಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ನೆನಪಿನಲ್ಲಿಡಬೇಕಾದ ಅತಿ ಮುಖ್ಯ ಎಚ್ಚರಿಕೆ&lt;/strong&gt;ಈ ಟ್ರಿಕ್ ಬಳಸುವಾಗ ಒಂದು ಪ್ರಮುಖ ನಿಯಮವನ್ನು ತಪ್ಪದೇ ಪಾಲಿಸಬೇಕು..&lt;strong&gt;ಹುಣಸೆಹಣ್ಣು ಬಳಸುವಾಗ ಹಾಲು ಹಾಕಬೇಡಿ&lt;/strong&gt;ನೀವು ಮಾಡುವ ಬದನೆಕಾಯಿ ಸಾರು ಅಥವಾ ಗ್ರೇವಿಗೆ ಹುಣಸೆಹಣ್ಣು (Tamarind) ಅಥವಾ ಅತಿಯಾದ ಹುಳಿ ಅಂಶವನ್ನು ಸೇರಿಸುತ್ತಿದ್ದರೆ, ಖಂಡಿತವಾಗಿಯೂ ಹಾಲು ಹಾಕಬಾರದು! ಹುಣಸೆಹಣ್ಣಿನ ಜೊತೆ ಹಾಲು ಸೇರಿದರೆ ಹಾಲು ಒಡೆದುಹೋಗುವುದಷ್ಟೇ ಅಲ್ಲದೆ, ಗ್ರೇವಿ ಮತ್ತಷ್ಟು ಕಹಿಯಾಗುವ ಅಥವಾ ಹಾಳಾಗುವ ಅಪಾಯವಿರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಕೇವಲ 2-3 ಚಮಚ ಹಾಲು ಸೇರಿಸಿ&lt;/strong&gt;ನೀವು ಹುಣಸೆಹಣ್ಣು ಬಳಸದ ಮಸಾಲೆ ಗ್ರೇವಿ, ಎಣ್ಣೆಗಾಯಿ ಅಥವಾ ಸಿಂಪಲ್ ಬದನೆಕಾಯಿ ಫ್ರೈ ಮಾಡುವಾಗ ಈ ಟ್ರಿಕ್ ಅನ್ನು ಬಳಸಬಹುದು. ಮುಂದಿನ ಬಾರಿ ಬದನೆಕಾಯಿ ಅಡುಗೆ ಮಾಡುವಾಗ ಕೇವಲ 2-3 ಚಮಚ ಹಾಲು ಸೇರಿಸಿ ನೋಡಿ, ಮನೆಯವರೆಲ್ಲರೂ ಇಷ್ಟಪಟ್ಟು ಸವಿಯುವುದರಲ್ಲಿ ಸಂಶಯವೇ ಇಲ್ಲ!&lt;/p&gt;]]></content:encoded>
            <category><![CDATA[kitchen]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/secret-trick-why-you-should-add-milk-while-cooking-brinjal-zg5gshx"/>
        </item>
        <item>
            <title><![CDATA[ಕುಕ್ಕರ್‌ನಿಂದ ನೀರು ಹೊರಬರ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ]]></title>
            <link>https://kannada.asianetnews.com/webstories/kitchen/pressure-cooker-water-leaking-causes-and-easy-fixes-suh-w9iiru6</link>
            <guid isPermaLink="true">https://kannada.asianetnews.com/webstories/kitchen/pressure-cooker-water-leaking-causes-and-easy-fixes-suh-w9iiru6</guid>
            <pubDate>Fri, 11 Sep 2026 14:51:22 +0530</pubDate>
            <description><![CDATA[ಪ್ರೆಶರ್ ಕುಕ್ಕರ್‌ನಿಂದ ನೀರು ಸೋರದಂತೆ ಗ್ಯಾಸ್ಕೆಟ್, ಮುಚ್ಚಳ, ಒತ್ತಡ ನಿಯಂತ್ರಕವನ್ನು ಸರಿಯಾಗಿ ಸ್ವಚ್ಛವಾಗಿಟ್ಟುಕೊಂಡು ಸೂಕ್ತ ಪ್ರಮಾಣದಲ್ಲಿ ಅಡುಗೆ ಮಾಡುವ ಬಗ್ಗೆ ಈ ಟಿಪ್ಸ್ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01knh4cfc1bh6cma0nhsr9z8dj,imgname-1-1775470263681.jpg" type="image/jpeg" height="390" width="690"/>
            <category><![CDATA[kitchen]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/webstories/kitchen/pressure-cooker-water-leaking-causes-and-easy-fixes-suh-w9iiru6"/>
        </item>
        <item>
            <title><![CDATA[ಬಿಸಿ ಬಿಸಿ ಎಣ್ಣೆಗೆ ನೇರವಾಗಿ ಮಸಾಲೆ, ಒಗ್ಗರಣೆ ಹಾಕ್ತೀರಾ? ಇದು ತಪ್ಪು…. ಚೆಫ್ ಏನು ಹೇಳ್ತಾರೆ ನೋಡಿ]]></title>
            <link>https://kannada.asianetnews.com/kitchen/cooking-tips-when-to-add-whole-spices-while-cooking-at-home/articleshow-qvciz5m</link>
            <guid isPermaLink="true">https://kannada.asianetnews.com/kitchen/cooking-tips-when-to-add-whole-spices-while-cooking-at-home/articleshow-qvciz5m</guid>
            <pubDate>Fri, 11 Sep 2026 14:49:22 +0530</pubDate>
            <description><![CDATA[Cooking Tips: ತರಕಾರಿಗಳು ಅಥವಾ ಬೇಳೆಕಾಳುಗಳನ್ನು ಬೇಯಿಸುವಾಗ ನೀವು ಕೂಡ ಮೊದಲು ಬಾಣಲೆಯಲ್ಲಿ ಒಗ್ಗರಣೆಗೆಂದು ಮಸಾಲೆ ಪದಾರ್ಥಗಳನ್ನು ಹಾಕುತ್ತೀರಾ? ಇವುಗಳನ್ನು ಬಳಸುವಾಗ ಜನರು ಮಾಡುವ ಒಂದು ಪ್ರಮುಖ ತಪ್ಪು ನಿಮ್ಮ ಅಡುಗೆ ರುಚಿಯನ್ನು ಹಾಳು ಮಾಡುತ್ತದೆ. ಶೆಫ್ ಹೇಳುವ ಈ ಟ್ರಿಕ್ಸ್ ಟ್ರೈ ಮಾಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01k1wx35zyq8wg3set3rnr7yqs,imgname-untitled-design--92--1754390435838.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಅಡುಗೆ ಮಾಡುವಾಗ ಈ ತಪ್ಪು ಮಾಡ್ಬೇಡಿ&lt;/strong&gt;&lt;/h2&gt;&lt;p&gt;ಭಾರತೀಯ ಅಡುಗೆಮನೆಗಳಲ್ಲಿ, ಅಡುಗೆ ಮಾಡುವಾಗ ಬಹುತೇಕ ಯಾವಾಗಲೂ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮಸಾಲೆಗಳನ್ನು ಸೇರಿಸುವ ಮೂಲಕ ಪ್ರಾರಂಭವಾಗುತ್ತದೆ. ಜೀರಿಗೆ, ಸೋಂಪು, ಸಾಸಿವೆ, ದಾಲ್ಚಿನ್ನಿ, ಲವಂಗ ಅಥವಾ ಏಲಕ್ಕಿಯ ಸುವಾಸನೆಯು ಇಡೀ ಮನೆಗೆ ಸುವಾಸನೆ ಹರಡುತ್ತದೆ. ಆದರೆ, ಈ ಮಸಾಲೆಗಳನ್ನು ನೀವು ಹೇಗೆ ಒಗ್ಗರಣೆಗೆ ಹಾಕುತ್ತೀರಿ ಎಂಬುದು ನಿಮ್ಮ ಆಹಾರದ ರುಚಿ ಮತ್ತು ಪೌಷ್ಟಿಕಾಂಶದ ಮೌಲ್ಯ ಎರಡನ್ನೂ ರಾಜಿ ಮಾಡಿಕೊಳ್ಳಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಚೆಫ್ ಕುಲದೀಪ್ ರಾಣಾ ಇತ್ತೀಚೆಗೆ ಈ ಸಾಮಾನ್ಯ ಅಡುಗೆ ತಪ್ಪಿನ ಬಗ್ಗೆ ತಿಳಿಸಿದ್ದು, ಇದು ನಮ್ಮಲ್ಲಿ ಅನೇಕರು ವರ್ಷಗಳಿಂದ ಪುನರಾವರ್ತಿಸುತ್ತಿರುವ ಒಂದು ತಪ್ಪು. ಸಂಪೂರ್ಣ ಮಸಾಲೆಗಳನ್ನು ಬಳಸುವ ಸರಿಯಾದ, ವೈಜ್ಞಾನಿಕವಾಗಿ ಉತ್ತಮ ವಿಧಾನವನ್ನು ತಿಳಿಯೋಣ.&lt;/p&gt;&lt;h3&gt;&lt;strong&gt;ಮಸಾಲೆ ಪದಾರ್ಥಗಳನ್ನು ಅಥವಾ ಒಗ್ಗರಣೆಯನ್ನು ನೇರವಾಗಿ ಬಿಸಿ ಎಣ್ಣೆಗೆ ಏಕೆ ಹಾಕಬಾರದು?&lt;/strong&gt;&lt;/h3&gt;&lt;p&gt;ಎಣ್ಣೆ ಚೆನ್ನಾಗಿ ಬಿಸಿಯಾದ ತಕ್ಷಣ ನಾವು ಸಾಮಾನ್ಯವಾಗಿ ಸಂಪೂರ್ಣ ಮಸಾಲೆ ಪದಾರ್ಥಗಳನ್ನು ಬಾಣಲೆಗೆ ಹಾಕುತ್ತೇವೆ. ಆದರೆ ತಜ್ಞರ ಪ್ರಕಾರ, ಈ ವಿಧಾನವು ಕೆಲವೇ ಕೆಲವು ಖಾದ್ಯಗಳಿಗೆ ಮಾತ್ರ ಸೂಕ್ತ; ಅಂತಹ ಖಾದ್ಯಗಳಲ್ಲಿ ಮಸಾಲೆಗಳಿಗೆ 'ಸ್ಮೋಕಿ' ರುಚಿಯನ್ನು ನೀಡಲು ಅವುಗಳನ್ನು ಸ್ವಲ್ಪ ಹೆಚ್ಚು ಬರ್ನ್ ಮಾಡುವ ಅಗತ್ಯ ಇದೆ. ಆದರೆ, ಬೇಳೆ ಸಾರು , ತರಕಾರಿ ಪಲ್ಯ ಅಥವಾ ಸಾಮಾನ್ಯ ಗ್ರೇವಿಯಲ್ಲಿ ಮಸಾಲೆ ಪದಾರ್ಥಗಳ ಅಸಲಿ ರುಚಿ ಮತ್ತು ನ್ಯಾಚುರಲ್ ಸ್ಮೆಲ್ ನೀವು ಬಯಸುವುದಾದರೆ,ನೀವು ಈ ಟ್ರಿಕ್ಸ್ ಟ್ರೈ ಮಾಡಬಾರದು. ಅತಿಯಾಗಿ ಬಿಸಿಯಾದ ಎಣ್ಣೆಗೆ ಮಸಾಲೆ ಪದಾರ್ಥಗಳನ್ನು ಅಂದರೆ ಒಗ್ಗರಣೆ ಸಾಮಗ್ರಿಗಳನ್ನು ನೇರವಾಗಿ ಹಾಕಿದಾಗ, ಅವು ಕ್ಷಣಮಾತ್ರದಲ್ಲಿಯೇ ಸುಟ್ಟುಹೋಗುತ್ತವೆ. ಹೀಗೆ ಸುಡುವುದರಿಂದ ಮಸಾಲೆಗಳಲ್ಲಿರುವ ನೈಸರ್ಗಿಕ ತೈಲಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಪರಿಣಾಮವಾಗಿ, ಮಸಾಲೆಗಳು ಕಹಿಯಾಗುತ್ತವೆ, ಅಡುಗೆಯು ತನ್ನ ಅದ್ಭುತ ಸುವಾಸನೆಯನ್ನು ಕಳೆದುಕೊಳ್ಳುತ್ತದೆ ಮತ್ತು ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವುದಿಲ್ಲ.&lt;/p&gt;&lt;p&gt;&lt;strong&gt;ಮಸಾಲೆಗಳನ್ನು ಹುರಿಯಲು ಸರಿಯಾದ ಮತ್ತು ಸುಲಭವಾದ ವಿಧಾನ ಯಾವುದು?&lt;/strong&gt;&lt;/p&gt;&lt;p&gt;ನೀವು ತಯಾರಿಸುವ ಆಹಾರವನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು ಮತ್ತು ಅದರ ರುಚಿ ಹೆಚ್ಚಾಗಬೇಕು ಎಂದು ನೀವು ಬಯಸಿದರೆ, ಚೆಫ್ ನೀಡಿರುವ ಈ ಸರಳ ಸಲಹೆಗಳನ್ನು ತಪ್ಪದೆ ಪಾಲಿಸಿ:&lt;/p&gt;&lt;ul&gt; &lt;li&gt;&lt;strong&gt;ಮಿತವಾದ ಉರಿ ಮತ್ತು ಸರಿಯಾದ ತಾಪಮಾನ: &lt;/strong&gt;ತೀವ್ರವಾಗಿ ಕುದಿಯುತ್ತಿರುವ ಅಥವಾ ಹೊಗೆ ಬರುತ್ತಿರುವ ಎಣ್ಣೆಗೆ ಎಂದಿಗೂ ಮಸಾಲೆ ಪದಾರ್ಥಗಳನ್ನು ಹಾಕಬೇಡಿ; ತಾಪಮಾನವನ್ನು ನಿಯಂತ್ರಿಸುವುದು ಅತ್ಯಗತ್ಯ.&lt;/li&gt; &lt;li&gt;&lt;strong&gt;ಈರುಳ್ಳಿ ಮತ್ತು ಬೆಳ್ಳುಳ್ಳಿಗೆ ಆದ್ಯತೆ ನೀಡಿ:&lt;/strong&gt; ಎಣ್ಣೆ ಬಿಸಿಯಾದ ನಂತರ, ಮೊದಲು ಈರುಳ್ಳಿ, ಬೆಳ್ಳುಳ್ಳಿ ಅಥವಾ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಅವು ಬಂಗಾರ ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಈರುಳ್ಳಿಯಲ್ಲಿರುವ ತೇವಾಂಶವು ಎಣ್ಣೆಯ ತಾಪಮಾನವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.&lt;/li&gt; &lt;li&gt;&lt;strong&gt;ಸರಿಯಾದ ಸಮಯದಲ್ಲಿ ಮಸಾಲೆಗಳನ್ನು ಸೇರಿಸಿ: &lt;/strong&gt;ಈರುಳ್ಳಿ ಸ್ವಲ್ಪ ಹುರಿದು, ಅದರಲ್ಲಿನ ತೇವಾಂಶ ಕಡಿಮೆಯಾದ ನಂತರ, ಲವಂಗ, ಏಲಕ್ಕಿ, ಚಕ್ಕೆ ಮತ್ತು ಜೀರಿಗೆಯಂತಹ ಒಣ ಮಸಾಲೆ ಪದಾರ್ಥಗಳನ್ನು ಸೇರಿಸಿ.&lt;/li&gt; &lt;li&gt;&lt;strong&gt;ಕಡಿಮೆ ಉರಿ ಅತ್ಯಗತ್ಯ:&lt;/strong&gt; ಈರುಳ್ಳಿಯಲ್ಲಿರುವ ತೇವಾಂಶ ಮತ್ತು ಮಸಾಲೆಗಳ ಸಂಯೋಜನೆಯು ಮಸಾಲೆಗಳು ಸೀದುಹೋಗದಂತೆ ತಡೆಯುತ್ತದೆ. ಈ ವಿಧಾನದಲ್ಲಿ ಅಡುಗೆ ಮಾಡುವುದರಿಂದ ಮಸಾಲೆಗಳ ಸುವಾಸನೆ ಮತ್ತು ರುಚಿಯು ಎಣ್ಣೆ ಹಾಗೂ ಈರುಳ್ಳಿಯಲ್ಲಿ ಚೆನ್ನಾಗಿ ಬೆರೆಯುತ್ತದೆ, ಇದರಿಂದಾಗಿ ಅಂತಿಮವಾಗಿ ತಯಾರಾದ ಖಾದ್ಯದಲ್ಲಿ ಆ ಪರಿಮಳವು ಉಳಿದುಕೊಳ್ಳುತ್ತದೆ.&lt;/li&gt;&lt;/ul&gt;&lt;p&gt;&lt;strong&gt;ಒಂದು ಸಣ್ಣ ಎಚ್ಚರಿಕೆಯ ಕ್ರಮದೊಂದಿಗೆ ದೊಡ್ಡ ಬದಲಾವಣೆಯನ್ನು ತನ್ನಿ&lt;/strong&gt;&lt;/p&gt;&lt;p&gt;ಅಡುಗೆ ಕೇವಲ ಒಂದು ಅಗತ್ಯವಷ್ಟೇ ಅಲ್ಲ, ಅದೊಂದು ಸುಂದರವಾದ ಕಲೆ. ಸಣ್ಣಪುಟ್ಟ ಬದಲಾವಣೆಗಳ ಮೂಲಕ, ಸಾಮಾನ್ಯ ಊಟವನ್ನೂ ಸಹ ಪಂಚತಾರಾ ಹೋಟೆಲ್ ಅಥವಾ ರೆಸ್ಟೋರೆಂಟ್&zwnj;ನಷ್ಟು ರುಚಿಕರ ಮತ್ತು ಪರಿಮಳಯುಕ್ತವಾದ ಭಕ್ಷ್ಯವನ್ನಾಗಿ ಪರಿವರ್ತಿಸಬಹುದು. ಮುಂದಿನ ಬಾರಿ ನೀವು ಅಡುಗೆಮನೆಯಲ್ಲಿ 'ಒಗ್ಗರಣೆ' ತಯಾರಿಸುವಾಗ, ಮಸಾಲೆ ಪದಾರ್ಥಗಳನ್ನು ನೇರವಾಗಿ ಬಿಸಿ ಎಣ್ಣೆಗೆ ಹಾಕಬೇಡಿ. ಸರಿಯಾದ ಸಮಯ ಮತ್ತು ವಿಧಾನವನ್ನು ಅನುಸರಿಸುವ ಮೂಲಕ,ರುಚಿಯಾದ ಅಡುಗೆ ಸರ್ವ್ ಮಾಡಿ.&lt;/p&gt;]]></content:encoded>
            <category><![CDATA[kitchen]]></category>
            <dc:creator>Pavna Das</dc:creator>
            <atom:link href="https://kannada.asianetnews.com/kitchen/cooking-tips-when-to-add-whole-spices-while-cooking-at-home/articleshow-qvciz5m"/>
        </item>
        <item>
            <title><![CDATA[ಆಸ್ಟ್ರೇಲಿಯಾದಲ್ಲಿ ಸನಾತನ ಧರ್ಮದ ಪವರ್: 12ರ ಬಾಲಕನ ಮುಂದೆ ಮಂಡಿಯೂರಿದ ಫುಟ್​ಬಾಲ್​ ಮಂಡಳಿ]]></title>
            <link>https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery</link>
            <guid isPermaLink="true">https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery</guid>
            <pubDate>Fri, 11 Sep 2026 14:32:25 +0530</pubDate>
            <description><![CDATA[ಆಸ್ಟ್ರೇಲಿಯಾದಲ್ಲಿ, 12 ವರ್ಷದ ಭಾರತ ಮೂಲದ ಬಾಲಕ ಶುಭ್ ಪಟೇಲ್, ತುಳಸಿಮಾಲೆ ತೆಗೆಯಲು ರೆಫರಿ ಸೂಚಿಸಿದಾಗ, ತನ್ನ ಧರ್ಮವೇ ಮುಖ್ಯವೆಂದು ಫುಟ್ಬಾಲ್ ಪಂದ್ಯದಿಂದ ಹೊರನಡೆದನು. ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾದ ನಂತರ, ಫುಟ್‌ಬಾಲ್ ಕ್ವೀನ್ಸ್‌ಲ್ಯಾಂಡ್ ಸಂಸ್ಥೆಯು ಕ್ಷಮೆಯಾಚಿಸಿ, ಬಾಲಕನಿಗೆ ಮಾಲೆ ಧರಿಸಿಯೇ ಆಡಲು ಅನುಮತಿ ನೀಡಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m27v6fwqb18pp7kmzga0dzez,imgname-shub-patel-1789117284247.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಟಕ್ಕಿಂತ ಧರ್ಮವೇ ಮುಖ್ಯ ಎಂದ 12 ವರ್ಷದ ಬಾಲಕ, ತುಳಸಿಮಾಲೆಯನ್ನು ತೆಗೆಯಲು ನಿರಾಕರಿಸಿ ಫುಟ್​ಬಾಲ್​ಪಂದ್ಯದಿಂದ ಹೊರಕ್ಕೆ ಬಂದಿರುವ ಘಟನೆ ಭಾರಿ ಸದ್ದು ಮಾಡುತ್ತಿದೆ. ಆದರೆ ಕೊನೆಗೆ ನಡೆದ ಘಟನೆ ಇನ್ನೂ ರೋಚಕವಾಗಿದೆ. ಇದು ನಡೆದಿರುವುದು, ಆಸ್ಟ್ರೇಲಿಯಾದ ಬ್ರಿಸ್ಬೇನ್&zwnj;ನಲ್ಲಿ. ಆಸ್ಟ್ರೇಲಿಯಾದ ನಿವಾಸಿ ಭಾರತ ಮೂಲದ 12 ವರ್ಷದ ಬಾಲಕ ಶುಭ್ ಪಟೇಲ್ ಫುಟ್​ಬಾಲ್​ ಆಟಗಾರ. ಈತ ಈ ಪಂದ್ಯಕ್ಕೆ ಬರಲು ಸಾಕಷ್ಟು ಶ್ರಮವಹಿಸಿದ್ದ. ಕೊನೆಗೂ ಸೆಲೆಕ್ಟ್​ ಆಗಿದ್ದ. ಆತನ ಆಸೆ ಇನ್ನೇನು ಈಡೇರುವುದರಲ್ಲಿ ಇತ್ತು. ಆದರೆ, ಆ ಸಮಯದಲ್ಲಿ ಆತನ ಕೊರಳಿನಲ್ಲಿ ಇದ್ದ ತುಳಸಿ ಮಾಲೆ ತೆಗೆಯಲು ಹೇಳಲಾಯಿತು. ಇದು ಆಟಕ್ಕೆ ಸೂಕ್ತವಲ್ಲ ಎಂದು ಮಂಡಳಿ ಆದೇಶಿಸಿತು.&lt;/p&gt;&lt;p&gt;ಆದರೆ ಬಾಲಕ ಇದನ್ನು ಸುತರಾಂ ಒಪ್ಪಲಿಲ್ಲ. ಟೂವಾಂಗ್ ಸಾಕರ್ ಕ್ಲಬ್&zwnj;ನ ಶುಭ್ ಪಟೇಲ್, ನಾನು ಐದು ವರ್ಷದಿಂದಲೂ ಇದನ್ನು ಧರಿಸುತ್ತಿದ್ದೇನೆ. ಇದಾಗಲೇ ಇದನ್ನು ಧರಿಸಿ 15 ಪಂದ್ಯಗಳನ್ನು ಆಡಿದ್ದೇನೆ. ಈ ಹಿಂದೆ ಯಾವುದೇ ತರಬೇತುದಾರ ಅಥವಾ ತಂಡದ ಸಹ ಆಟಗಾರ ಅದನ್ನು ತೆಗೆದುಹಾಕಲು ಕೇಳಿರಲಿಲ್ಲ. ಈಗ ತೆಗೆಯಲೇ ಬೇಕು ಎಂದು ಆಟಕ್ಕಿಂತ ನನ್ನ ಧರ್ಮವೇ ಮುಖ್ಯ. ನಾನು ನನ್ನ ಧರ್ಮವನ್ನು ಅನುಸರಿಸಲು ಬಯಸುತ್ತೇನೆ.ಏಕೆಂದರೆ ಇದು ನನಗೆ ಕೇವಲ ಒಂದು ಪರಿಕರವಲ್ಲ. ಸ್ವಾಮಿನಾರಾಯಣ ಸಂಪ್ರದಾಯವನ್ನು ಅನುಸರಿಸುವ ನನಗೆ ಧರ್ಮಕ್ಕಿಂತ ಮುಖ್ಯವಾದದ್ದು ಮತ್ತೊಂದಿಲ್ಲ ಎಂದು ಪಂದ್ಯವನ್ನೇ ರಿಜೆಕ್ಟ್​ ಮಾಡಿ ಬಂದು ಬಿಟ್ಟ!&lt;/p&gt;&lt;h2&gt;&lt;strong&gt;ಕ್ಷಮೆಯಾಚಿಸಿದ ಮಂಡಳಿ&lt;/strong&gt;&lt;/h2&gt;&lt;p&gt;ಶುಭ್ ಆಟವಾಡದೇ ಇರಲು ನಿರ್ಧರಿಸಿ ಪಕ್ಕದಲ್ಲೇ ಬಂದು ಕುಳಿತ. ತಂಡದ ಸದಸ್ಯರು ಪಂದ್ಯವನ್ನು ಮುಂದುವರಿಸಿದರು. ಆದರೆ ಈ ಮಾತು ಬಹಳ ವೇಗದಲ್ಲಿ ಫುಟ್​ಬಾಲ್​ ಮಂಡಳಿಯನ್ನು ತಲುಪಿತು. ಆಮೇಲೆ ಆದದ್ದು ರೋಚಕ. ಫುಟ್&zwnj;ಬಾಲ್ ಮತ್ತು ಫುಟ್ಸಲ್&zwnj;ನ ಆಡಳಿತ ಮಂಡಳಿಯಾದ ಫುಟ್&zwnj;ಬಾಲ್ ಕ್ವೀನ್ಸ್&zwnj;ಲ್ಯಾಂಡ್ ತನಿಖೆಯನ್ನು ಪ್ರಾರಂಭಿಸಿತು. ಬಳಿಕ ತನ್ನಿಂದ ತಪ್ಪಾಗಿದೆ ಎಂದು ಶುಭ್ ಮತ್ತು ಅವರ ಕುಟುಂಬದವರಲ್ಲಿ ಕ್ಷಮೆಯಾಚಿಸಿತು. ಕ್ವೀನ್ಸ್&zwnj;ಲ್ಯಾಂಡ್&zwnj;ನಲ್ಲಿ ಫುಟ್&zwnj;ಬಾಲ್ ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳ ಜನರನ್ನು ಗೌರವಿಸುವ ಒಂದು ಒಳಗೊಳ್ಳುವ ಕ್ರೀಡೆಯಾಗಬೇಕೆಂದು ಹೇಳಿದ ಸಂಸ್ಥೆ, ಶುಭ್&zwnj;ಗೆ ಧಾರ್ಮಿಕ ಹಾರವನ್ನು ಧರಿಸಿ ಆಡಲು ಅವಕಾಶ ನೀಡಿತು.&lt;/p&gt;&lt;h3&gt;&lt;strong&gt;ನಿಜಕ್ಕೂ ಮಾಲೆ ನಿಷೇಧಿಸಲಾಗಿದೆಯೇ?&lt;/strong&gt;&lt;/h3&gt;&lt;p&gt;ಇಲ್ಲಿಯೇ ಕಥೆ ಹೆಚ್ಚು ಜಟಿಲವಾಯಿತು. ಫಿಫಾದ ಆಟದ ನಿಯಮಗಳ 4 ನೇ ನಿಯಮವು ಸುರಕ್ಷತಾ ಕಾರಣಗಳಿಗಾಗಿ ಪಂದ್ಯಗಳ ಸಮಯದಲ್ಲಿ ಹಾರಗಳು, ಉಂಗುರಗಳು ಮತ್ತು ಬಳೆಗಳಂತಹ ಆಭರಣಗಳನ್ನು ಧರಿಸುವುದನ್ನು ನಿಷೇಧಿಸುತ್ತದೆ. ಅಂದರೆ ರೆಫರಿಯ ಸೂಚನೆಯು ಹಿಂದೂ ಧಾರ್ಮಿಕ ಚಿಹ್ನೆಗಳನ್ನು ಗುರಿಯಾಗಿರಿಸಿಕೊಂಡು ಮಾಡಿದ ನಿಯಮವಾಗಿರಲಿಲ್ಲ. ಆಭರಣಗಳ ವಿರುದ್ಧದ ವಿಶಾಲವಾದ ಕ್ರೀಡಾ ನಿಯಮವು ಶುಭ್&zwnj;ಗೆ ಮಾಲಾವನ್ನು ತೆಗೆದುಹಾಕಲು ಕೇಳಲು ಆಧಾರವಾಗಿತ್ತು.&lt;/p&gt;&lt;p&gt;ಆದಾಗ್ಯೂ, ಈ ಪ್ರಸಂಗವು ಕ್ರೀಡಾ ಸಂಸ್ಥೆಗಳು ಕ್ರೀಡಾಪಟುಗಳು ತಮ್ಮ ಆಳವಾದ ನಂಬಿಕೆಗಳ ಭಾಗವಾಗಿ ಗೌರವಿಸುವ ಧಾರ್ಮಿಕ ವಸ್ತುಗಳ ವಿಷಯವನ್ನು ಹೇಗೆ ಸಮೀಪಿಸಬೇಕು ಎಂಬುದರ ಸುತ್ತಲಿನ ನಿಜವಾದ ಮತ್ತು ನಿರ್ಣಾಯಕ ಚರ್ಚೆಯನ್ನು ಹುಟ್ಟುಹಾಕಿತು. ಶುಭ್&zwnj;ಗೆ, ಮಾಲೆಯನ್ನು ತೆಗೆದುಹಾಕುವ ಕ್ರಿಯೆಯು ಕೇವಲ ಸರಳ ರಿಯಾಯಿತಿಯಾಗಿರಲಿಲ್ಲ; ಬದಲಾಗಿ, ಅದು ಆತನ ವೈಯಕ್ತಿಕ ನಂಬಿಕೆ ಮತ್ತು ಆಧ್ಯಾತ್ಮಿಕ ಗುರುತಿನ ಆಳವಾದ ರಾಜಿಯಾಗಿತ್ತು. ಮತ್ತೊಂದೆಡೆ, ರೆಫರಿಯ ದೃಷ್ಟಿಕೋನದಿಂದ, ಪರಿಸ್ಥಿತಿಯನ್ನು ವಿಶಾಲವಾದ ಸುರಕ್ಷತಾ ನಿಯಮದಿಂದ ನಿಯಂತ್ರಿಸಲಾಗುತ್ತದೆ, ಇದು ಹಾರಗಳು ಮತ್ತು ಇತರ ಅಲಂಕಾರಗಳು ಸೇರಿದಂತೆ ವಿವಿಧ ರೀತಿಯ ಆಭರಣಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ.&lt;/p&gt;&lt;p&gt;ಆರಂಭದಲ್ಲಿ ಯುವ ಫುಟ್ಬಾಲ್ ಆಟಗಾರನನ್ನು ಒಳಗೊಂಡ ಸಂಕ್ಷಿಪ್ತ ಘಟನೆಯಂತೆ ಕಂಡುಬಂದಿದ್ದು, ಧಾರ್ಮಿಕ ಗುರುತಿನ ಬಹು ಆಯಾಮಗಳು, ಕ್ರೀಡಾ ನಿಯಮಗಳ ಜಾರಿ ಮತ್ತು ವಿವಾದಾತ್ಮಕವೆಂದು ವ್ಯಾಖ್ಯಾನಿಸಬಹುದಾದ ನಿರ್ಧಾರಗಳ ಹಿಂದೆ ಸಮಗ್ರ ಸಂದರ್ಭವನ್ನು ತಲುಪಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿಯೊಂದಿಗೆ ನಿರ್ಣಾಯಕ ಪಾತ್ರದ ಬಗ್ಗೆ ಹೆಚ್ಚು ವ್ಯಾಪಕವಾದ ಸಂಭಾಷಣೆಯಾಗಿ ತ್ವರಿತವಾಗಿ ರೂಪಾಂತರಗೊಂಡಿತು. ಬಳಿಕ ಈ ಕುರಿತು ಕ್ರೀಡಾ ಮಂಡಳಿ ಇನ್ನಷ್ಟು ಚರ್ಚೆಯನ್ನು ನಡೆಸಿದೆ.&lt;/p&gt;]]></content:encoded>
            <category><![CDATA[football-sports]]></category>
            <dc:creator>Suchethana D</dc:creator>
            <atom:link href="https://kannada.asianetnews.com/football-sports/i-had-rather-follow-my-religion-than-break-it-12-year-old-hindu-boy-chooses-religion-over-football-suc/articleshow-8ppwery"/>
        </item>
        <item>
            <title><![CDATA[ಫಿಯಟ್ ಕಾರನ್ನು ಕತ್ತರಿಸಿ 'ಪೇಪರ್' ನಂತೆ ಮಾಡಿದ ಕಿಲಾಡಿ! ವಿಶ್ವ ದಾಖಲೆ ಬರೆದ 'ಫ್ಲಾಟ್ ಫಿಯಟ್' ಕಾರಿನ ಕಥೆ!]]></title>
            <link>https://kannada.asianetnews.com/car-news/italian-mechanic-turned-an-old-fiat-panda-into-a-50cm-wide-car-meet-the-flat-fiat/articleshow-17xargh</link>
            <guid isPermaLink="true">https://kannada.asianetnews.com/car-news/italian-mechanic-turned-an-old-fiat-panda-into-a-50cm-wide-car-meet-the-flat-fiat/articleshow-17xargh</guid>
            <pubDate>Fri, 11 Sep 2026 14:31:01 +0530</pubDate>
            <description><![CDATA[ಇಟಲಿಯ ಮೆಕ್ಯಾನಿಕ್ ಆಂಡ್ರಿಯಾ ಮರಾಝಿ 1993ರ ಹಳೆಯ Fiat Pandaಯನ್ನು ಮರುರೂಪಿಸಿ ಕೇವಲ 50 ಸೆಂ.ಮೀ ಅಗಲದ ‘Flat Fiat’ ನಿರ್ಮಿಸಿದ್ದಾರೆ. ನಾಲ್ಕು ಚಕ್ರಗಳ ಈ ಎಲೆಕ್ಟ್ರಿಕ್ ಕಾರು ಸುಮಾರು 15 ಕಿ.ಮೀ/ಗಂ ವೇಗದಲ್ಲಿ ಚಲಿಸುತ್ತದೆ. 12 ತಿಂಗಳ ಪರಿಶ್ರಮದಿಂದ ನಿರ್ಮಿಸಿದ ಈ ವಿಚಿತ್ರ ಕಾರು ವಿಶ್ವದ ಗಮನ ಸೆಳೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27n96m9xz2td8566hknc1pf,imgname-world-s-narrowest-car---flat-fiat-1789111081609.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಳೆಯ Fiat Pandaಗೆ ಹೊಸ ರೂಪ; ಕೇವಲ 50 ಸೆಂ.ಮೀ ಅಗಲದ &lsquo;Flat Fiat&rsquo;!&lt;/strong&gt;&lt;/p&gt;&lt;p&gt;ಸಾಮಾನ್ಯ ಕಾರನ್ನು ನೋಡಿದರೆ ನಾಲ್ಕು ಚಕ್ರ, ಅಗಲವಾದ ಬಾಡಿ, ಎರಡು-ಮೂರು ಸೀಟ್&zwnj;ಗಳು ನೆನಪಾಗುತ್ತವೆ. ಆದರೆ ಇಟಲಿಯ ಮೆಕ್ಯಾನಿಕ್ ಆಂಡ್ರಿಯಾ ಮರಾಝಿ ಹಳೆಯ 1993 Fiat Panda ಕಾರನ್ನು ಸಂಪೂರ್ಣ ವಿಭಿನ್ನವಾಗಿ ರೂಪಿಸಿ, ಕೇವಲ 50 ಸೆಂ.ಮೀ ಅಗಲದ &lsquo;Flat Fiat&rsquo; ಎಂಬ ವಿಚಿತ್ರ ಕಾರು ತಯಾರಿಸಿದ್ದಾರೆ. ಇದು ಸಾಮಾನ್ಯ ಕಾರಿಗಿಂತ ಹಲವಾರು ಪಟ್ಟು ಸಣ್ಣದಾಗಿದ್ದು, ವಿಶ್ವದ ಅತ್ಯಂತ ಕಿರಿದಾದ ಚಾಲಿಸಬಹುದಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;p&gt;&lt;strong&gt;ಸ್ಕ್ರ್ಯಾಪ್&zwnj; ಕಾರಿನಿಂದ ಶುರುವಾಯಿತು ಐಡಿಯಾ&lt;/strong&gt;&lt;/p&gt;&lt;p&gt;ಆಂಡ್ರಿಯಾ ಅವರ ಕುಟುಂಬದ ಕಾರು ಸ್ಕ್ರ್ಯಾಪ್&zwnj; ವ್ಯವಹಾರದಲ್ಲಿತ್ತು. ಅಲ್ಲಿದ್ದ ಹಳೆಯ Fiat Panda ಅವರ ಗಮನ ಸೆಳೆಯಿತು. ಕಾರನ್ನು ಸ್ಕ್ರ್ಯಾಪ್ ಮಾಡುವ ಬದಲು, ಅದನ್ನೇ ವಿಭಿನ್ನ ಪ್ರಯೋಗಕ್ಕೆ ಬಳಸಲು ನಿರ್ಧರಿಸಿದರು. ಸುಮಾರು 12 ತಿಂಗಳು ಕೈಯಾರೆ ಕೆಲಸ ಮಾಡಿ, ಕಾರಿನ ಮೂಲ ಭಾಗಗಳ ಬಹುಪಾಲನ್ನು ಉಳಿಸಿಕೊಂಡೇ ಅದರ ಗಾತ್ರವನ್ನು ಸಂಪೂರ್ಣ ಬದಲಿಸಿದರು.&lt;/p&gt;&lt;p&gt;&lt;strong&gt;149 ಸೆಂ.ಮೀ ಕಾರು ಈಗ ಕೇವಲ 50 ಸೆಂ.ಮೀ!&lt;/strong&gt;&lt;/p&gt;&lt;p&gt;ಸಾಮಾನ್ಯ Fiat Pandaಯ ಅಗಲವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿ, Flat Fiat ಅನ್ನು ಕೇವಲ 50 ಸೆಂ.ಮೀ ಅಗಲದಲ್ಲಿ ನಿರ್ಮಿಸಲಾಗಿದೆ. ಉದ್ದ ಸುಮಾರು 3.4 ಮೀಟರ್, ಎತ್ತರ 1.45 ಮೀಟರ್ ಮತ್ತು ತೂಕ ಸುಮಾರು 264 ಕೆ.ಜಿ. ನಾಲ್ಕು ಚಕ್ರಗಳು, ಸ್ಟೀರಿಂಗ್ ವ್ಯವಸ್ಥೆ ಸೇರಿದಂತೆ ಕಾರಿನ ಮೂಲ ವಿನ್ಯಾಸದ ಹಲವು ಅಂಶಗಳನ್ನು ಉಳಿಸಲಾಗಿದೆ.&lt;/p&gt;&lt;p&gt;ಇದರೊಳಗೆ ಮುಖ್ಯವಾಗಿ ಒಬ್ಬ ಚಾಲಕ ಕುಳಿತುಕೊಳ್ಳುವಷ್ಟು ಜಾಗವಿದೆ. ಹೊರಗಿನಿಂದ ನೋಡಿದರೆ ಕಾರು ಯಾರೋ &lsquo;ಫೋಟೋ ಎಡಿಟ್&rsquo; ಮಾಡಿದಂತೆ ಕಾಣಿಸಿದರೂ, ಇದು ನಿಜವಾಗಿಯೂ ಚಲಿಸಬಲ್ಲ ವಾಹನವಾಗಿದೆ.&lt;/p&gt;&lt;p&gt;&lt;strong&gt;ಪೆಟ್ರೋಲ್ ಎಂಜಿನ್ ಬದಲು ಎಲೆಕ್ಟ್ರಿಕ್ ಪವರ್&lt;/strong&gt;&lt;/p&gt;&lt;p&gt;ಸಾಮಾನ್ಯ Fiat Pandaಯ ಎಂಜಿನ್&zwnj;ನ್ನು ಈ ಅತಿ ಕಿರಿದಾದ ವಿನ್ಯಾಸದಲ್ಲಿ ಅಳವಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಆಂಡ್ರಿಯಾ ಇದನ್ನು ಎಲೆಕ್ಟ್ರಿಕ್ ಮೋಟಾರ್ ಮತ್ತು ಬ್ಯಾಟರಿಗಳಿಂದ ಚಲಿಸುವಂತೆ ಮಾಡಿದ್ದಾರೆ. ಗರಿಷ್ಠ ವೇಗ ಸುಮಾರು 15 ಕಿ.ಮೀ/ಗಂ, ಒಂದು ಚಾರ್ಜ್&zwnj;ನಲ್ಲಿ ಸುಮಾರು 25 ಕಿ.ಮೀ ದೂರ ಸಾಗುವ ಸಾಮರ್ಥ್ಯ ಹೊಂದಿದೆ.&lt;/p&gt;&lt;p&gt;&lt;strong&gt;ವಿಶ್ವದ ಗಮನ ಸೆಳೆದ &lsquo;Flat Fiat&rsquo;&lt;/strong&gt;&lt;/p&gt;&lt;p&gt;ಕಾರಿನ ಅಸಾಮಾನ್ಯ ಗಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮೊದಲ ನೋಟಕ್ಕೆ AI ಮೂಲಕ ಸೃಷ್ಟಿಸಿದ ಚಿತ್ರವಂತೆ ಕಂಡರೂ, ಇದು ಸಂಪೂರ್ಣವಾಗಿ ನಿಜವಾದ ಮತ್ತು ಕಾರ್ಯನಿರ್ವಹಿಸುವ ವಾಹನವಾಗಿದೆ. ಕಾರು ರಸ್ತೆ ಬಳಕೆಗೆ ಅಧಿಕೃತವಾಗಿ ನೋಂದಾಯಿತ ವಾಹನವಾಗಿಲ್ಲ; ಇದು ಮುಖ್ಯವಾಗಿ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾದ ಪ್ರಾಜೆಕ್ಟ್.&lt;/p&gt;&lt;p&gt;&lt;strong&gt;ಕಾರಿಗಿಂತ ಹೆಚ್ಚಾಗಿ ಒಂದು ಎಂಜಿನಿಯರಿಂಗ್ ಪ್ರಯೋಗ&lt;/strong&gt;&lt;/p&gt;&lt;p&gt;Flat Fiat ಸಾಮಾನ್ಯ ಬಳಕೆಯ ಕಾರಾಗಿರದಿದ್ದರೂ, ಸೃಜನಶೀಲತೆ ಮತ್ತು ಎಂಜಿನಿಯರಿಂಗ್&zwnj;ಗೆ ಇದು ವಿಶಿಷ್ಟ ಉದಾಹರಣೆ. ಹಳೆಯ ಕಾರಿನ ಭಾಗಗಳನ್ನು ಮರುಬಳಕೆ ಮಾಡಿಕೊಂಡು ಸಂಪೂರ್ಣ ಹೊಸ ವಿನ್ಯಾಸ ರೂಪಿಸುವ ಮೂಲಕ, ಆಂಡ್ರಿಯಾ &lsquo;ಕಾರ್ ಎಷ್ಟು ದೊಡ್ಡದಾಗಿರಬೇಕು?&rsquo; ಎಂಬ ಪ್ರಶ್ನೆಗೇ ಹೊಸ ಆಯಾಮ ನೀಡಿದ್ದಾರೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/car-news/italian-mechanic-turned-an-old-fiat-panda-into-a-50cm-wide-car-meet-the-flat-fiat/articleshow-17xargh"/>
        </item>
        <item>
            <title><![CDATA[BRICS, ‌ ದೆಹಲಿಯಲ್ಲಿ ಕಾರುಗಳ ದಿನದ ಬಾಡಿಗೆ ಲಕ್ಷ ರೂ ದಾಟಿವೆ, ಈ ಬಣ್ಣದ ಕಾರುಗಳಿಗೆ ಭಾರೀ ಡಿಮ್ಯಾಂಡ್]]></title>
            <link>https://kannada.asianetnews.com/gallery/india-news/delhi-brics-summit-car-rentals-have-crossed-lakhs-of-rupees-there-is-huge-demand-for-cars-of-black-color-1ihaol9</link>
            <guid isPermaLink="true">https://kannada.asianetnews.com/gallery/india-news/delhi-brics-summit-car-rentals-have-crossed-lakhs-of-rupees-there-is-huge-demand-for-cars-of-black-color-1ihaol9</guid>
            <pubDate>Fri, 11 Sep 2026 14:29:59 +0530</pubDate>
            <description><![CDATA[ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಐಷಾರಾಮಿ ಕಾರುಗಳಿಗೆ ಭಾರಿ ಬೇಡಿಕೆ ಬಂದಿದ್ದು, ದಿನದ ಬಾಡಿಗೆ ದರ ಲಕ್ಷ ರೂಪಾಯಿಗಳನ್ನು ದಾಟಿದೆ. ವಿದೇಶಿ ಗಣ್ಯರು ಹೆಚ್ಚಾಗಿ ಕಪ್ಪು ಬಣ್ಣದ ಪ್ರೀಮಿಯಂ ಕಾರುಗಳನ್ನು ಬಯಸುತ್ತಿದ್ದು, ಅವರ ಸೇವೆಗಾಗಿ ಇಂಗ್ಲಿಷ್ ಬಲ್ಲ ನುರಿತ ಚಾಲಕರನ್ನು ನಿಯೋಜಿಸಲಾಗಿದೆ]]></description>
            <media:content url="https://static.asianetnews.com/images/w-1280,h-720,format-jpg,imgid-01m27tpzatpjh4z9h3efr2xm0c,imgname-brics-car-rent--2--1789116775770.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿಯಲ್ಲಿ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಐಷಾರಾಮಿ ಕಾರುಗಳಿಗೆ ಭಾರಿ ಬೇಡಿಕೆ ಬಂದಿದ್ದು, ದಿನದ ಬಾಡಿಗೆ ದರ ಲಕ್ಷ ರೂಪಾಯಿಗಳನ್ನು ದಾಟಿದೆ. ವಿದೇಶಿ ಗಣ್ಯರು ಹೆಚ್ಚಾಗಿ ಕಪ್ಪು ಬಣ್ಣದ ಪ್ರೀಮಿಯಂ ಕಾರುಗಳನ್ನು ಬಯಸುತ್ತಿದ್ದು, ಅವರ ಸೇವೆಗಾಗಿ ಇಂಗ್ಲಿಷ್ ಬಲ್ಲ ನುರಿತ ಚಾಲಕರನ್ನು ನಿಯೋಜಿಸಲಾಗಿದೆ&lt;/p&gt;&lt;img&gt;&lt;p&gt;ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಬ್ರಿಕ್ಸ್ (BRICS) ಶೃಂಗಸಭೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಮಹತ್ವದ ಸಭೆಗೆ ವಿದೇಶಿ ಗಣ್ಯರು, ವಿವಿಐಪಿಗಳು (VVIP) ಮತ್ತು ಹಿರಿಯ ಅಧಿಕಾರಿಗಳು ಆಗಮಿಸುತ್ತಿದ್ದು, ದೆಹಲಿಯಲ್ಲಿ ಐಷಾರಾಮಿ ಕಾರುಗಳಿಗೆ ಭಾರೀ ಬೇಡಿಕೆ ಬಂದಿದೆ. ಕಾರುಗಳ ಒಂದು ದಿನದ ಬಾಡಿಗೆ ದರ ಲಕ್ಷ ರೂಪಾಯಿಗಳನ್ನು ದಾಟಿದೆ!&lt;/p&gt;&lt;img&gt;&lt;p&gt;ವಿದೇಶಿ ಅತಿಥಿಗಳ ಸಂಚಾರಕ್ಕಾಗಿ ಮರ್ಸಿಡಿಸ್ (Mercedes), ಬಿಎಂಡಬ್ಲ್ಯು (BMW), ಮೇಬ್ಯಾಕ್ (Maybach) ಮತ್ತು ಟೊಯೋಟಾ ವೆಲ್&zwnj;ಫೈರ್&zwnj; (Toyota Vellfire) ನಂತಹ ಅತಿ ದುಬಾರಿ ಕಾರುಗಳನ್ನು ಬುಕ್ ಮಾಡಲಾಗುತ್ತಿದೆ. ಇವುಗಳ ಬಾಡಿಗೆ ಈಗ ಲಕ್ಷದ ಗಡಿ ಮುಟ್ಟಿದೆ.&lt;/p&gt;&lt;img&gt;&lt;p&gt;ಶೃಂಗಸಭೆಗೆ ಬರುವ ಬಹುತೇಕ ಅತಿಥಿಗಳಿಗೆ &lsquo;ಕಪ್ಪು ಬಣ್ಣದ&rsquo; ಐಷಾರಾಮಿ ಕಾರುಗಳೇ ಮೊದಲ ಆಯ್ಕೆಯಾಗಿವೆ. ಕಪ್ಪು ಬಣ್ಣದ ಮೇಬ್ಯಾಕ್, ಮರ್ಸಿಡಿಸ್ ಕಾರುಗಳಿಗೆ ಮೊದಲ ಆದ್ಯತೆ ಇದ್ದರೆ, ಬಿಳಿ ಬಣ್ಣದ ಕಾರುಗಳಿಗೂ ಬೇಡಿಕೆಯಿದೆ.&lt;/p&gt;&lt;img&gt;&lt;p&gt;ದೆಹಲಿಯಲ್ಲಿ ಇಷ್ಟೊಂದು ಐಷಾರಾಮಿ ವಾಹನಗಳ ಕೊರತೆ ಇರುವುದರಿಂದ ಪಕ್ಕದ ನಗರಗಳು ಮತ್ತು ರಾಜ್ಯಗಳಿಂದಲೂ ಕಾರುಗಳನ್ನು ತರಿಸಲಾಗುತ್ತಿದೆ. ಅಲ್ಲದೆ, ಸ್ಥಳೀಯವಾಗಿ ಕೆಲವು ವಾಹನಗಳಿಗೆ ಗಂಟೆಗೆ 80 ಕಿ.ಮೀ ವೇಗದ ಮಿತಿ ಇರುವುದರಿಂದ, ಅತಿಥಿಗಳ ತುರ್ತು ಮತ್ತು ವೇಗದ ಸಂಚಾರಕ್ಕಾಗಿ ಹೊರಗಿನಿಂದ ಉತ್ತಮ ವಾಹನಗಳನ್ನು ಕರೆಯಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ಈ ಕಾರುಗಳನ್ನು ಚಲಾಯಿಸುವ ಚಾಲಕರಿಗೆ (Drivers) ವಿಶೇಷ ತರಬೇತಿ ನೀಡಲಾಗಿದೆ. ವಿದೇಶಿ ಅತಿಥಿಗಳೊಂದಿಗೆ ಸಂವಹನ ನಡೆಸಲು ಮೂಲ ಇಂಗ್ಲಿಷ್ ಕಲಿಸಲಾಗಿದ್ದು, ಉತ್ತಮ ಡ್ರೆಸ್ ಕೋಡ್ ಮತ್ತು ಸೌಜನ್ಯಯುತ ನಡವಳಿಕೆಗೆ ಆದ್ಯತೆ ನೀಡಲಾಗಿದೆ.&lt;/p&gt;&lt;img&gt;&lt;p&gt;ಅಂತರರಾಷ್ಟ್ರೀಯ ಮಟ್ಟದ ಶೃಂಗಸಭೆಗಳು ಕೇವಲ ರಾಜತಾಂತ್ರಿಕ ಚರ್ಚೆಗೆ ಮಾತ್ರ ಸೀಮಿತವಾಗಿರದೆ, ಸ್ಥಳೀಯ ಹೋಟೆಲ್ ಉದ್ಯಮ, ಭದ್ರತೆ ಮತ್ತು ಐಷಾರಾಮಿ ವಾಹನಗಳ ಮಾರುಕಟ್ಟೆಗೆ ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ತಂದುಕೊಡುತ್ತಿವೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/delhi-brics-summit-car-rentals-have-crossed-lakhs-of-rupees-there-is-huge-demand-for-cars-of-black-color-1ihaol9"/>
        </item>
        <item>
            <title><![CDATA[ಈ ಕಾಲದ ಹುಡುಗಿಯರು ಇಷ್ಟಪಡುವ ಕಾಲುಂಗುರ ಡಿಸೈನ್‌ಗಳು! ಡೈಲಿ ವೇರ್‌ಗೆ ಬೆಸ್ಟ್]]></title>
            <link>https://kannada.asianetnews.com/webstories/fashion/modern-toe-ring-designs-for-daily-wear-must-try-once-kvn-1kgwyvx</link>
            <guid isPermaLink="true">https://kannada.asianetnews.com/webstories/fashion/modern-toe-ring-designs-for-daily-wear-must-try-once-kvn-1kgwyvx</guid>
            <pubDate>Fri, 11 Sep 2026 14:22:09 +0530</pubDate>
            <description><![CDATA[ಮದುವೆಯಾದ ಹೆಣ್ಣುಮಕ್ಕಳು ಕಾಲುಂಗುರ ಧರಿಸುವುದು ಸಂಪ್ರದಾಯ. ಆದರೆ, ಹಳೆಯ ಕಾಲದ ಡಿಸೈನ್‌ಗಳನ್ನು ಧರಿಸಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಹಾಗಾಗಿ, ಈ ಕಾಲದ ಯುವತಿಯರು ಇಷ್ಟಪಡುವ ಕೆಲವು ಟ್ರೆಂಡಿ ಕಾಲುಂಗುರ ಡಿಸೈನ್‌ಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kna92zxxgv6jd2j8aaf02w97,imgname-toe-ring-1--3--1775240314813.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/modern-toe-ring-designs-for-daily-wear-must-try-once-kvn-1kgwyvx"/>
        </item>
        <item>
            <title><![CDATA[₹1 ಕೋಟಿ ಗಳಿಸಬೇಕಾ? EPFOಗೆ ಮಾಸಿಕ ₹10,750 ಕಟ್ಟಿ; ಆದ್ರೆ ಈ ಒಂದು ತಪ್ಪು ಮಾಡಿದ್ರೆ ಭಾರೀ ನಷ್ಟ ಆಗುತ್ತೆ!]]></title>
            <link>https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7</link>
            <guid isPermaLink="true">https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7</guid>
            <pubDate>Fri, 11 Sep 2026 14:00:43 +0530</pubDate>
            <description><![CDATA[EPF: ಪ್ರತಿ ತಿಂಗಳು ₹10,750 ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು. ಆದರೆ, ಕೆಲಸದ ಮಧ್ಯೆ ದೀರ್ಘ ವಿರಾಮ ತೆಗೆದುಕೊಂಡರೆ ನಿಮ್ಮ ನಿವೃತ್ತಿ ನಿಧಿಗೆ ದೊಡ್ಡ ಹೊಡೆತ ಬೀಳಬಹುದು. ಅದು ಹೇಗೆ? ಇಲ್ಲಿದೆ ಪೂರ್ತಿ ಲೆಕ್ಕಾಚಾರ!]]></description>
            <media:content url="https://static.asianetnews.com/images/w-1280,h-720,format-jpg,imgid-01kwh0bn5dmtk89ztyp12xdahf,imgname-epf-benefits-1782982235309.jpg" type="image/jpeg" height="390" width="690"/>
            <content:encoded><![CDATA[EPF: ಪ್ರತಿ ತಿಂಗಳು ₹10,750 ಹೂಡಿಕೆ ಮಾಡಿದರೆ 25 ವರ್ಷಗಳಲ್ಲಿ ₹1 ಕೋಟಿ ಗಳಿಸಬಹುದು. ಆದರೆ, ಕೆಲಸದ ಮಧ್ಯೆ ದೀರ್ಘ ವಿರಾಮ ತೆಗೆದುಕೊಂಡರೆ ನಿಮ್ಮ ನಿವೃತ್ತಿ ನಿಧಿಗೆ ದೊಡ್ಡ ಹೊಡೆತ ಬೀಳಬಹುದು. ಅದು ಹೇಗೆ? ಇಲ್ಲಿದೆ ಪೂರ್ತಿ ಲೆಕ್ಕಾಚಾರ!&lt;img&gt;&lt;p&gt;ಸಂಬಳ ಪಡೆಯುವ ಅನೇಕರಿಗೆ ಪ್ರತಿ ತಿಂಗಳು ಸಂಬಳದಿಂದ ಕಡಿತವಾಗುವ ಪಿಎಫ್ ಮೊತ್ತ ದೊಡ್ಡದಾಗಿ ಕಾಣಿಸುವುದಿಲ್ಲ. ಆದರೆ, ಅದನ್ನು ದೀರ್ಘಕಾಲದವರೆಗೆ ಉಳಿತಾಯ ಮಾಡಿದರೆ, ಅದಕ್ಕೆ ಸಿಗುವ ಬಡ್ಡಿಯೊಂದಿಗೆ ಸೇರಿ ನಿವೃತ್ತಿ ಸಮಯದಲ್ಲಿ ದೊಡ್ಡ ಮೊತ್ತವಾಗಿ ಬದಲಾಗುತ್ತದೆ. ಒಂದು ಲೆಕ್ಕಾಚಾರದ ಪ್ರಕಾರ, ಉದ್ಯೋಗಿ ಮತ್ತು ಕಂಪನಿಯ ಇಪಿಎಫ್ ಪಾಲು ಸೇರಿ ತಿಂಗಳಿಗೆ ₹10,750 ನಿರಂತರವಾಗಿ ಪಾವತಿಯಾದರೆ ಮತ್ತು ವಾರ್ಷಿಕ 8.25% ಬಡ್ಡಿ ಸಿಕ್ಕರೆ, ಸುಮಾರು 24-25 ವರ್ಷಗಳಲ್ಲಿ ₹1 ಕೋಟಿ ತಲುಪಬಹುದು.&lt;/p&gt;&lt;p&gt;ಇಲ್ಲಿ ಮುಖ್ಯವಾದ ವಿಷಯವೆಂದರೆ, ತಿಂಗಳು ಪಾವತಿಸುವ ಮೊತ್ತ ಮಾತ್ರವಲ್ಲ, ಹಲವು ವರ್ಷಗಳ ಕಾಲ ನಿರಂತರವಾಗಿ ಉಳಿತಾಯ ಮಾಡುವುದು ಮತ್ತು ಅದಕ್ಕೆ ಸಿಗುವ ಬಡ್ಡಿ ಮತ್ತೆ ಬೆಳೆಯುವುದೇ ಇದರ ಹಿಂದಿನ ಶಕ್ತಿ.&lt;/p&gt;&lt;img&gt;&lt;p&gt;ಇಪಿಎಫ್&zwnj;ನಲ್ಲಿ ಉದ್ಯೋಗಿಯ ಪಾಲು ಸಾಮಾನ್ಯವಾಗಿ ಮೂಲ ವೇತನದ 12% ಇರುತ್ತದೆ. ಕಂಪನಿಯೂ ತನ್ನ ಪಾಲನ್ನು ನೀಡುತ್ತದೆ. ಆದರೆ ಕಂಪನಿಯ ಸಂಪೂರ್ಣ ಪಾಲು ಒಂದೇ ಖಾತೆಗೆ ಸೇರುವುದಿಲ್ಲ; ಅದರಲ್ಲಿ ಒಂದು ಭಾಗ ಉದ್ಯೋಗಿಗಳ ಪಿಂಚಣಿ ಯೋಜನೆಗೂ ಹೋಗುತ್ತದೆ. ಹಾಗಾಗಿ, ಸಂಬಳದಿಂದ ಕಡಿತವಾಗುವ ಪಿಎಫ್ ಮೊತ್ತವನ್ನು ಮಾತ್ರ ನೋಡಿ 'ಇಷ್ಟೇನಾ?' ಎಂದು ಅಂದುಕೊಳ್ಳಬಾರದು.&lt;/p&gt;&lt;p&gt;ಹಲವು ವರ್ಷಗಳ ಕಾಲ ಹಣ ಸೇರಿದಾಗ, ಈಗಾಗಲೇ ಸೇರಿದ ಮೊತ್ತಕ್ಕೂ ಬಡ್ಡಿ ಸಿಗುತ್ತದೆ. ಆ ಬಡ್ಡಿಯೂ ಖಾತೆಗೆ ಸೇರುವುದರಿಂದ, ಕಾಲ ಕಳೆದಂತೆ ಬೆಳವಣಿಗೆ ವೇಗವಾಗುತ್ತದೆ. ಇದನ್ನೇ ಚಕ್ರಬಡ್ಡಿ ಬೆಳವಣಿಗೆ ಎಂದು ಹೇಳಬಹುದು.&lt;/p&gt;&lt;img&gt;&lt;p&gt;ಇಲ್ಲಿದೆ ನೋಡಿ ಹಲವರಿಗೆ ತಿಳಿಯದ ಮುಖ್ಯವಾದ ವಿಷಯ. ಒಬ್ಬ ವ್ಯಕ್ತಿ 25 ವರ್ಷಗಳ ಕಾಲ ನಿರಂತರವಾಗಿ ಇಪಿಎಫ್&zwnj;ಗೆ ಹಣ ಕಟ್ಟಿದರೆ, ಮೇಲಿನ ಲೆಕ್ಕಾಚಾರದ ಪ್ರಕಾರ ಸುಮಾರು ₹1 ಕೋಟಿ ಸಿಗಬಹುದು. ಅದೇ ವ್ಯಕ್ತಿ 3 ವರ್ಷ ಕೆಲಸದಲ್ಲಿ ವಿರಾಮ ತೆಗೆದುಕೊಂಡರೆ, ಆ ಸಮಯದಲ್ಲಿ ಹೊಸ ಇಪಿಎಫ್ ಪಾಲು ಸೇರುವುದಿಲ್ಲ. ಆಗ ಖಾತೆಯಲ್ಲಿರುವ ಹಣ ಹಾಗೆಯೇ ಇರುತ್ತದೆ; ಆದರೆ ಆ 3 ವರ್ಷಗಳಲ್ಲಿ ಸೇರಬೇಕಾದ ಹೊಸ ಹಣ ಮತ್ತು ಆ ಹಣಕ್ಕೆ ಮುಂದಿನ ವರ್ಷಗಳಲ್ಲಿ ಸಿಗಬೇಕಾದ ಬಡ್ಡಿ ಇಲ್ಲವಾಗುತ್ತದೆ.&lt;/p&gt;&lt;p&gt;ಹೀಗಾಗಿ, 25 ವರ್ಷಗಳ ಬದಲು 22 ವರ್ಷ ಮಾತ್ರ ಹಣ ಕಟ್ಟಿದರೆ, ಇದೇ ಲೆಕ್ಕಾಚಾರದಲ್ಲಿ ನಿವೃತ್ತಿ ಮೊತ್ತ ಸುಮಾರು ₹76.6 ಲಕ್ಷಕ್ಕೆ ಇಳಿಯಬಹುದು. ಅಂದರೆ, ಸುಮಾರು ₹24.9 ಲಕ್ಷದಷ್ಟು ವ್ಯತ್ಯಾಸ ಉಂಟಾಗಬಹುದು. ಇದಕ್ಕೆ ಕಾರಣ, ಕೆಲಸದ ವಿರಾಮದಲ್ಲಿ ಪಾವತಿಸದ ಮೊತ್ತ ಮಾತ್ರವಲ್ಲ, ಆ ಮೊತ್ತವು ಮುಂದಿನ ಹಲವು ವರ್ಷಗಳಲ್ಲಿ ಗಳಿಸಬಹುದಾಗಿದ್ದ ಬಡ್ಡಿಯೂ ನಷ್ಟವಾಗುತ್ತದೆ.&lt;/p&gt;&lt;img&gt;&lt;p&gt;ಇಪಿಎಫ್&zwnj;ನಲ್ಲಿ ಸಾಮಾನ್ಯ ಪಾಲುದಾರಿಕೆಗಿಂತ ಹೆಚ್ಚಾಗಿ, ಅರ್ಹ ಉದ್ಯೋಗಿಗಳು ಸ್ವಯಂಪ್ರೇರಿತ ಭವಿಷ್ಯ ನಿಧಿ (VPF) ಮೂಲಕ ಹೆಚ್ಚುವರಿ ಹಣವನ್ನು ಪಾವತಿಸಬಹುದು. ಉದಾಹರಣೆಗೆ, ತಿಂಗಳಿಗೆ ₹10,750 ಇಪಿಎಫ್ ಪಾಲಿನೊಂದಿಗೆ ಹೆಚ್ಚುವರಿಯಾಗಿ ₹6,000 ಪಾವತಿಸಿದರೆ, ಒಟ್ಟು ಮಾಸಿಕ ಪಾಲು ₹16,750 ಆಗುತ್ತದೆ.&lt;/p&gt;&lt;p&gt;ಇದೇ ರೀತಿ 25 ವರ್ಷಗಳ ಕಾಲ ನಿರಂತರವಾಗಿ ಪಾವತಿಸಿ, ವಾರ್ಷಿಕ 8.25% ಬಡ್ಡಿ ಸಿಕ್ಕರೆ, ಒಟ್ಟು ಮೊತ್ತ ಸುಮಾರು ₹1.58 ಕೋಟಿಯವರೆಗೆ ತಲುಪಬಹುದು. ಆದರೆ VPFಗೆ ಕಂಪನಿಯು ಅಷ್ಟೇ ಪ್ರಮಾಣದ ಹೆಚ್ಚುವರಿ ಪಾಲು ನೀಡಬೇಕೆಂಬ ನಿಯಮವಿಲ್ಲ. ಹೆಚ್ಚುವರಿ ಹಣ ಪಾವತಿಸುವ ಮುನ್ನ, ನಿಮ್ಮ ಸಂಬಳ, ಮಾಸಿಕ ಖರ್ಚುಗಳು ಮತ್ತು ಇತರ ಹೂಡಿಕೆಗಳನ್ನು ಪರಿಗಣಿಸುವುದು ಮುಖ್ಯ.&lt;/p&gt;&lt;img&gt;&lt;p&gt;ಇಪಿಎಫ್&zwnj;ನ ಅತಿದೊಡ್ಡ ಶಕ್ತಿಯೇ ದೀರ್ಘಕಾಲದ ನಿರಂತರ ಉಳಿತಾಯ. ತಿಂಗಳಿಗೆ ಪಾವತಿಸುವ ಮೊತ್ತ ಚಿಕ್ಕದಾಗಿದ್ದರೂ, 20-25 ವರ್ಷಗಳ ಕಾಲ ಅದನ್ನು ಮುಂದುವರಿಸಿದರೆ, ಬಡ್ಡಿಯ ಮೂಲಕ ಮೊತ್ತವು ಗಣನೀಯವಾಗಿ ಬೆಳೆಯುತ್ತದೆ. ಅದೇ ಸಮಯದಲ್ಲಿ, ಕೆಲಸದಲ್ಲಿ ವಿರಾಮ, ಪಿಎಫ್ ಹಣವನ್ನು ಮೊದಲೇ ಹಿಂಪಡೆಯುವುದು ದೀರ್ಘಕಾಲೀನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಸಂಬಳದಲ್ಲಿ ಪಿಎಫ್ ಕಡಿತವಾಗುತ್ತಿದೆ ಎನ್ನುವುದನ್ನು ಬಿಟ್ಟು, ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಸೇರುತ್ತಿದೆ, ಕಂಪನಿಯ ಪಾಲು ಎಷ್ಟು, VPF ಅಗತ್ಯವಿದೆಯೇ, ನಿವೃತ್ತಿ ಗುರಿಗೆ ಇದು ಸಾಕಾಗುತ್ತದೆಯೇ ಎಂಬುದನ್ನು ಆಗಾಗ ಪರಿಶೀಲಿಸುವುದು ಒಳ್ಳೆಯದು.&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ಮೇಲಿನ ₹1 ಕೋಟಿ, ₹76.6 ಲಕ್ಷ, ₹1.58 ಕೋಟಿ ಇತ್ಯಾದಿ ಲೆಕ್ಕಾಚಾರಗಳು ವಾರ್ಷಿಕ 8.25% ಬಡ್ಡಿ ಮತ್ತು ನಿರ್ದಿಷ್ಟ ಅವಧಿಗೆ ನಿರಂತರ ಹೂಡಿಕೆ ಮಾಡಲಾಗುವುದು ಎಂಬ ಊಹೆಯ ಮೇಲಿನ ಉದಾಹರಣೆಗಳಾಗಿವೆ. ನಿಜವಾದ ಇಪಿಎಫ್ ಬಡ್ಡಿ ದರ ಮತ್ತು ನಿಯಮಗಳಿಗೆ ಅನುಗುಣವಾಗಿ ಅಂತಿಮ ಮೊತ್ತ ಬದಲಾಗಬಹುದು.&lt;/p&gt;]]></content:encoded>
            <category><![CDATA[money]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/money/how-to-accumulate-1-crore-retirement-corpus-through-epf-compounding-impact-career-break-sat-up1zlu7"/>
        </item>
        <item>
            <title><![CDATA[PUC ಫೇಲ್.. 7 ವರ್ಷಗಳ ಕಷ್ಟ! ಇಂದು ಅಮ್ಮನ ಹೆಸರಿಗೆ ಹುಟ್ಟೂರಲ್ಲಿ ಸೈಟ್‌ ಖರೀದಿಸಿದ ತಾರೇಶ್-ಸ್ವಾತಿ]]></title>
            <link>https://kannada.asianetnews.com/tv-talk/kannada-youtubers-tharesh-swathi-puc-fail-7-years-struggle-site-bought-in-mothers-name-suh/articleshow-mkz5xlx</link>
            <guid isPermaLink="true">https://kannada.asianetnews.com/tv-talk/kannada-youtubers-tharesh-swathi-puc-fail-7-years-struggle-site-bought-in-mothers-name-suh/articleshow-mkz5xlx</guid>
            <pubDate>Fri, 11 Sep 2026 13:50:44 +0530</pubDate>
            <description><![CDATA[ಒಂದು ಹೊತ್ತು ಊಟಕ್ಕೂ ಪರದಾಡಿದ್ದ ಕುಟುಂಬವಿದು. ಬದುಕು ಸಾಗಿಸುವುದೇ ಕಷ್ಟವಾಗಿದ್ದ ದಿನಗಳಿದ್ದವು. ಆದರೆ ಕಷ್ಟಕ್ಕೆ ಹೆದರದೆ, ಅವಮಾನಗಳನ್ನು ಎದುರಿಸಿ, ವರ್ಷಗಳ ಕಾಲ ದುಡಿದು ಇಂದು ತಮ್ಮದೇ ಆದ ಸೈಟ್ ಖರೀದಿಸಿ, ಅದರಲ್ಲಿ ಕನಸಿನ ಮನೆ ಕಟ್ಟುವ ಹಂತಕ್ಕೆ ಈ ಕುಟುಂಬ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27je5px9y6n3jgb047m2mvk,imgname-kannada-youtubers-tharesh-swathi-puc-fail-7-years-struggle-site-bought-in-mothers-name-1789108098781.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಂದು ಹೊತ್ತು ಊಟಕ್ಕೂ ಪರದಾಡಿದ್ದ ಕುಟುಂಬವಿದು. ಬದುಕು ಸಾಗಿಸುವುದೇ ಕಷ್ಟವಾಗಿದ್ದ ದಿನಗಳಿದ್ದವು. ಆದರೆ ಕಷ್ಟಕ್ಕೆ ಹೆದರದೆ, ಅವಮಾನಗಳನ್ನು ಎದುರಿಸಿ, ವರ್ಷಗಳ ಕಾಲ ದುಡಿದು ಇಂದು ತಮ್ಮದೇ ಆದ ಸೈಟ್ ಖರೀದಿಸಿ, ಅದರಲ್ಲಿ ಕನಸಿನ ಮನೆ ಕಟ್ಟುವ ಹಂತಕ್ಕೆ ಈ ಕುಟುಂಬ ಬಂದಿದೆ. ಇದು ತಾರೇಶ್-ಸ್ವಾತಿ ದಂಪತಿಯ ಸ್ಪೂರ್ತಿದಾಯಕ ಜೀವನದ ಕಥೆ. ಒಂದು ಕಾಲದಲ್ಲಿ ಆರ್ಥಿಕ ಸಂಕಷ್ಟ ಎದುರಿಸಿದ್ದ ಈ ಜೋಡಿ, ಇಂದು ಸೋಷಿಯಲ್ ಮೀಡಿಯಾ ಮೂಲಕ ಜನರ ಮೆಚ್ಚುಗೆ ಗಳಿಸುತ್ತಿದೆ. ₹23 ಲಕ್ಷ ಮೌಲ್ಯದ ಕಾರು ಖರೀದಿಸಿದ ಬಳಿಕ ಇದೀಗ ಹಾಸನದಲ್ಲಿ ಸ್ವಂತ ನಿವೇಶನ ಖರೀದಿಸಿ, ಭವಿಷ್ಯದಲ್ಲಿ ಸುಂದರ ಡ್ಯೂಪ್ಲೆಕ್ಸ್ ಮನೆ ಕಟ್ಟುವ ಕನಸು ಕಾಣುತ್ತಿದೆ.&lt;/p&gt;&lt;h2&gt;ಕೇವಲ 2 ವರ್ಷಗಳ ಯೂಟ್ಯೂಬ್ ಜರ್ನಿ&lt;/h2&gt;&lt;p&gt;ತಮ್ಮ ನೈಜ ಜೀವನ, ಕುಟುಂಬದ ಕ್ಷಣಗಳು, ದಿನನಿತ್ಯದ ಅನುಭವಗಳು ಸೇರಿದಂತೆ ಹಲವು ವಿಚಾರಗಳನ್ನು ವ್ಲಾಗ್&zwnj;ಗಳ ಮೂಲಕ ಹಂಚಿಕೊಳ್ಳಲು ಆರಂಭಿಸಿದರು. ಜನರಿಗೆ ಕೃತಕವಾಗಿ ಕಾಣಿಸಿಕೊಳ್ಳುವ ಬದಲು ತಮ್ಮ ನಿಜ ಜೀವನವನ್ನೇ ವೀಡಿಯೋಗಳಲ್ಲಿ ತೋರಿಸಿದ್ದು ಇವರ ಜನಪ್ರಿಯತೆಗೆ ಪ್ರಮುಖ ಕಾರಣವಾಯಿತು. ಯೂಟ್ಯೂಬ್ ಜರ್ನಿ ಆರಂಭಿಸಿ ಸುಮಾರು 2 ವರ್ಷಗಳಾಗಿದ್ದು, ಲಾಂಗ್ ಫಾರ್ಮ್ ವೀಡಿಯೋಗಳು ಹಾಗೂ ಅದರಿಂದ ಬಂದ ಆದಾಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ. ಆದರೆ ತಮ್ಮ ಯಶಸ್ಸು ಕೇವಲ ಯೂಟ್ಯೂಬ್&zwnj;ನಿಂದ ದಿಢೀರ್ ಬಂದ ಹಣದಿಂದ ಸಿಕ್ಕಿದ್ದಲ್ಲ ಎಂದು ದಂಪತಿ ಹೇಳಿಕೊಂಡಿದ್ದಾರೆ. ವರ್ಷಗಳ ಪರಿಶ್ರಮ, ಉಳಿತಾಯ ಹಾಗೂ ಇಬ್ಬರ ಪರಸ್ಪರ ಬೆಂಬಲವೇ ತಮ್ಮ ಇಂದಿನ ಸ್ಥಿತಿಗೆ ಕಾರಣ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;ಹಾಸನದಲ್ಲಿ 2 ಗುಂಟೆ ಜಾಗ ಖರೀದಿ&lt;/h2&gt;&lt;p&gt;ಕಷ್ಟಪಟ್ಟು ದುಡಿದ ಬಳಿಕ ಪ್ರತಿಯೊಬ್ಬರಿಗೂ ಸ್ವಂತ ಮನೆ ಅಥವಾ ನಿವೇಶನ ಹೊಂದಬೇಕು ಎಂಬ ಕನಸು ಇರುತ್ತದೆ. ತಾರೇಶ್-ಸ್ವಾತಿ ದಂಪತಿಯೂ ಹಲವು ವರ್ಷಗಳಿಂದ ಕಂಡಿದ್ದ ಈ ಕನಸು ಇದೀಗ ನನಸಾಗಿದೆ. ಹಾಸನ ನಗರದ ಸಮೀಪ ಸುಮಾರು 2 ಗುಂಟೆ ಜಾಗವನ್ನು ಖರೀದಿಸಿರುವ ದಂಪತಿ, ನೋಂದಣಿ ಹಾಗೂ ಖಾತಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಬಳಿಕ ತಮ್ಮ ಹೊಸ ಜಾಗಕ್ಕೆ ಭೇಟಿ ನೀಡಿ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜಾಗದ ಸುತ್ತಮುತ್ತ ಹಸಿರು ವಾತಾವರಣ, ಕೃಷಿ ಭೂಮಿ ಹಾಗೂ ಶಾಂತಿಯುತ ಹಳ್ಳಿ ವಾತಾವರಣವಿದ್ದು, ನಗರಕ್ಕೆ ಹತ್ತಿರವಾಗಿರುವುದೇ ಇದರ ಪ್ರಮುಖ ಆಕರ್ಷಣೆ ಎನ್ನಲಾಗಿದೆ.&lt;/p&gt;&lt;h2&gt;ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಹೈವೇ ಕೂಡ ಹತ್ತಿರ&lt;/h2&gt;&lt;p&gt;ತಮ್ಮ ಹೊಸ ನಿವೇಶನದ ಸ್ಥಳದ ಬಗ್ಗೆ ಮಾತನಾಡಿರುವ ದಂಪತಿ, ಹಾಸನ ನಗರಕ್ಕೆ ಸಾಕಷ್ಟು ಹತ್ತಿರದಲ್ಲಿರುವುದರ ಜೊತೆಗೆ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಹಾಸನ ಮೇನ್ ಬಸ್&zwnj;ಸ್ಟ್ಯಾಂಡ್/ಸಿಟಿ &ndash; ಸುಮಾರು 3 ಕಿ.ಮೀ&lt;/p&gt;&lt;p&gt;ಬೆಂಗಳೂರು-ಮಂಗಳೂರು ಹೈವೇ &ndash; ಸುಮಾರು 1.5ರಿಂದ 2 ಕಿ.ಮೀ&lt;/p&gt;&lt;p&gt;ಕುಶಾಲನಗರ ಮುಖ್ಯ ರಸ್ತೆ &ndash; ಸುಮಾರು 1 ಕಿ.ಮೀ ಒಳಗೆ&lt;/p&gt;&lt;p&gt;ಸುತ್ತಮುತ್ತ ಹಸಿರು ಹಾಗೂ ಪ್ರಶಾಂತ ವಾತಾವರಣ, ಹೀಗಾಗಿ ಮುಂದೆ ಇದೇ ಜಾಗದಲ್ಲಿ ತಮ್ಮ ಕುಟುಂಬಕ್ಕೆ ಅನುಕೂಲವಾಗುವಂತೆ ಸುಂದರವಾದ ಮನೆಯನ್ನು ನಿರ್ಮಿಸುವ ಯೋಜನೆ ದಂಪತಿಯದ್ದಾಗಿದೆ.&lt;/p&gt;&lt;h2&gt;ಯೂಟ್ಯೂಬ್&zwnj;ನಿಂದ ದಿಢೀರ್ ಬಂದ ದುಡ್ಡಲ್ಲ&lt;/h2&gt;&lt;p&gt;ತಮ್ಮ ಯಶಸ್ಸಿನ ಬಗ್ಗೆ ಮಾತನಾಡುವಾಗ ದಂಪತಿ ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಇಂದು ಕಾಣುತ್ತಿರುವ ಆಸ್ತಿ ಹಾಗೂ ಜೀವನಶೈಲಿಯ ಹಿಂದೆ ಕೇವಲ ಯೂಟ್ಯೂಬ್ ಆದಾಯವಿಲ್ಲ. ಇಂಜಿನಿಯರಿಂಗ್ ಬಳಿಕ ಸುಮಾರು 7 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿ, ಕಷ್ಟಪಟ್ಟು ಉಳಿಸಿಕೊಂಡ ಹಣವೂ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯೂಟ್ಯೂಬ್ ಆರಂಭಿಸಿದ್ದು ಕೇವಲ 2 ವರ್ಷಗಳ ಹಿಂದೆ ಎಂಬುದನ್ನೂ ಅವರು ತಿಳಿಸಿದ್ದಾರೆ. ಅಂದರೆ, ಇಂದಿನ ಯಶಸ್ಸಿನ ಹಿಂದೆ ವರ್ಷಗಳ ಪರಿಶ್ರಮ, ಉಳಿತಾಯ, ತಾಳ್ಮೆ ಹಾಗೂ ಪರಸ್ಪರ ಬೆಂಬಲವಿದೆ.&lt;/p&gt;&lt;h2&gt;ಅಮ್ಮನ ಹೆಸರಿಗೆ ಸೈಟ್ ನೋಂದಣಿ&lt;/h2&gt;&lt;p&gt;ಈ ನಿವೇಶನದ ಮತ್ತೊಂದು ವಿಶೇಷ ಸಂಗತಿಯೆಂದರೆ, ಸೈಟ್ ಅನ್ನು ದಂಪತಿಯ ತಾಯಿಯ ಹೆಸರಿಗೆ ನೋಂದಣಿ ಮಾಡಿಸಲಾಗಿದೆ ಎನ್ನಲಾಗಿದೆ. ಸದ್ಯಕ್ಕೆ ಸಾಲ ತೀರಿಸುವತ್ತ ಗಮನಹರಿಸಿರುವ ಕುಟುಂಬ, ಮುಂದಿನ ದಿನಗಳಲ್ಲಿ ಇದೇ ಜಾಗದಲ್ಲಿ ದೊಡ್ಡ ಹಾಗೂ ಸುಂದರವಾದ ಡ್ಯೂಪ್ಲೆಕ್ಸ್ ಮನೆ ನಿರ್ಮಿಸಬೇಕು ಎಂಬ ಕನಸು ಹೊಂದಿದೆ.&lt;/p&gt;&lt;h2&gt;ಬಂದ ದಾರಿಯನ್ನು ಮರೆಯಬಾರದು&lt;/h2&gt;&lt;p&gt;ತಮ್ಮ ಜೀವನದ ಈ ಹಂತದ ಬಗ್ಗೆ ಮಾತನಾಡಿರುವ ದಂಪತಿ, ಒಂದು ಚಿಕ್ಕ ಮನೆಯಿಂದ ತಮ್ಮ ವೀಡಿಯೋ ಜರ್ನಿ ಆರಂಭವಾಗಿತ್ತು. ಇಂದು ತಮ್ಮದೇ ಆದ ಸ್ವಂತ ಜಾಗ ಹೊಂದಿರುವುದು ಮಾತಿನಲ್ಲಿ ಹೇಳಲಾಗದಷ್ಟು ಸಂತೋಷ ನೀಡುತ್ತಿದೆ ಎಂದು ಹೇಳಿದ್ದಾರೆ. ಕಷ್ಟದ ದಿನಗಳನ್ನು ಮರೆಯದೆ, ಮುಂದೆ ಸಾಗಬೇಕು ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ. ಪ್ರೇಮಿಗಳಾಗಿ, ದಂಪತಿಗಳಾಗಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತು, ಶೂನ್ಯದಿಂದ ತಮ್ಮದೇ ಆದ ಬದುಕನ್ನು ಕಟ್ಟಿಕೊಂಡಿರುವ ತಾರೇಶ್-ಸ್ವಾತಿ ಜೋಡಿಯ ಈ ಜರ್ನಿ ಇದೀಗ ಹಲವರಿಗೆ ಸ್ಪೂರ್ತಿಯಾಗಿದೆ. ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ; ಅದರ ಹಿಂದೆ ವರ್ಷಗಳ ಪರಿಶ್ರಮ, ತಾಳ್ಮೆ ಮತ್ತು ಸೋಲನ್ನು ಒಪ್ಪಿಕೊಳ್ಳದ ಮನಸ್ಸಿರುತ್ತದೆ ಎಂಬುದನ್ನು ಇವರ ಕಥೆ ಮತ್ತೊಮ್ಮೆ ಸಾಬೀತುಪಡಿಸಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/tv-talk/kannada-youtubers-tharesh-swathi-puc-fail-7-years-struggle-site-bought-in-mothers-name-suh/articleshow-mkz5xlx"/>
        </item>
        <item>
            <title><![CDATA[ಯುವತಿಯನ್ನು ಮದ್ವೆಯಾದ 2 ಮಕ್ಕಳ ಅಮ್ಮ! ರೀಲ್ಸ್​ ಮಾಡುತ್ತಲೇ ಶುರುವಾಯ್ತು ಲವ್​- ವಿಚಿತ್ರ ಪ್ರೇಮ ಕಥೆ ಹೀಗಿದೆ]]></title>
            <link>https://kannada.asianetnews.com/relationship/a-wedding-ceremony-involving-an-18-year-old-woman-and-a-mother-of-two-suc/articleshow-hifa1w2</link>
            <guid isPermaLink="true">https://kannada.asianetnews.com/relationship/a-wedding-ceremony-involving-an-18-year-old-woman-and-a-mother-of-two-suc/articleshow-hifa1w2</guid>
            <pubDate>Fri, 11 Sep 2026 13:47:38 +0530</pubDate>
            <description><![CDATA[ಬಿಹಾರದ ಬಕ್ಸಾರ್‌ನಲ್ಲಿ, ಇಬ್ಬರು ಮಕ್ಕಳ ತಾಯಿ ಸಂಧ್ಯಾ ದೇವಿ ಮತ್ತು ಪುರುಷರನ್ನು ದ್ವೇಷಿಸುತ್ತಿದ್ದ ಯುವತಿ ರೂಬಿ ಕುಮಾರಿ ರೀಲ್ಸ್ ಮಾಡುವಾಗ ಪ್ರೀತಿಸಿ ಮದುವೆಯಾಗಿದ್ದಾರೆ. ಕುಟುಂಬದ ವಿರೋಧದ ನಡುವೆಯೂ, ಇಬ್ಬರೂ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದು, ಈ ವಿಶಿಷ್ಟ ಪ್ರೇಮಕಥೆ ಚರ್ಚೆಗೆ ಗ್ರಾಸವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27rn6e91vwm3z1ny482t12r,imgname-women-marriage-1789114620360.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಕ್ಸಾರ್: ಒಂದು ಗಂಡಿಗೆ ಒಂದು ಹೆಣ್ಣು ಎನ್ನುವ ಮಾತಿದೆ. ಆದರೆ ಈ ಕಲಿಯುಗದಲ್ಲಿ ಎಲ್ಲವೂ ಉಲ್ಟಾ ಪಲ್ಟಾ ಆಗುತ್ತಲೇ ಇವೆ. ಒಂದು ಗಂಡಿಗೆ ಹಲವು ಹೆಣ್ಣು, ಒಬ್ಬಳಿಗೆ ಹಲವು ಗಂಡು ಎನ್ನೋದು ಒಂದೆಡೆಯಾದರೆ, ಗಂಡು-ಗಂಡೇ ಮದ್ವೆಯಾಗೋದು, ಹೆಣ್ಣು-ಹೆಣ್ಣೇ ಮದ್ವೆಯಾಗೋದು ಕೂಡ ಸಹಜ ಎನ್ನಿಸುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಇಲ್ಲೊಂದು ಜೋಡಿ ವಿಚಿತ್ರ ಕಥೆ ಇದೆ. ಇಬ್ಬರು ಮಕ್ಕಳ ಅಮ್ಮನಿಗೆ ಗಂಡನ ಮೇಲೆ ಕೋಪ, ಅದೇ ಇನ್ನೊಂದೆಡೆ 18ರ ಯುವತಿಗೆ ಗಂಡಸರು ಎಂದರೇನೇ ಅಲರ್ಜಿ. ಇವರಿಬ್ಬರೂ ರೀಲ್ಸ್​ ಮಾಡುತ್ತಾ ಲವ್​ ಮಾಡಿ, ಇದೀಗ ಎಲ್ಲರನ್ನೂ ಧಿಕ್ಕರಿಸಿ ಮದುವೆಯಾಗಿದ್ದಾರೆ!&lt;/p&gt;&lt;h2&gt;&lt;strong&gt;ಯುವತಿ, ವಿವಾಹಿತೆ ಲವ್​&lt;/strong&gt;&lt;/h2&gt;&lt;p&gt;ಬಿಹಾರದ ಬಕ್ಸಾರ್ ಜಿಲ್ಲೆಯ ಬಾಗೆಂಗೋಲಾ ಪೊಲೀಸ್ ಠಾಣೆ ಪ್ರದೇಶದ ವಿಶಿಷ್ಟ ಪ್ರೇಮಕಥೆ ಇದಾಗಿದೆ. ಸಂಧ್ಯಾ ದೇವಿ ಮತ್ತು ರೂಬಿ ಕುಮಾರಿ ಪರಸ್ಪರ ಮದುವೆಯಾಗುವ ಮೂಲಕ ಸಾಮಾಜಿಕ ಸಂಪ್ರದಾಯಗಳನ್ನು ಧಿಕ್ಕರಿಸಿದ್ದಾರೆ. ಈ ಘಟನೆಯು ಆ ಪ್ರದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ, ಕೆಲವರು ಇದನ್ನು ಪ್ರೀತಿಯ ಉದಾಹರಣೆ ಎಂದು ಶ್ಲಾಘಿಸಿದರೆ, ಇತರರು ಇದನ್ನು ಸಾಮಾಜಿಕ ರೂಢಿಗಳ ಉಲ್ಲಂಘನೆ ಎಂದು ಟೀಕಿಸಿದ್ದಾರೆ. ವರದಿಗಳ ಪ್ರಕಾರ, ಸಂಧ್ಯಾ ದೇವಿ ಈ ಹಿಂದೆ ವಿವಾಹವಾಗಿದ್ದರು. ಅವರು 2010 ರಲ್ಲಿ ಅತ್ವಾರು ಯಾದವ್ ಅವರನ್ನು ವಿವಾಹವಾದರು ಮತ್ತು ಇಬ್ಬರು ಮಕ್ಕಳಿದ್ದಾರೆ: 12 ವರ್ಷದ ಮಗಳು ಮತ್ತು 10 ವರ್ಷದ ಮಗ. ಅವರ ಪತಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಾರೆ. ರೂಬಿ ಕುಮಾರಿ ಅವಿವಾಹಿತರಾಗಿದ್ದು, ಅವರ ತಂದೆ ಮನೋಜ್ ಶಾ ಬಾಗೆಂಗೋಲಾದಲ್ಲಿ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಕುಟುಂಬವನ್ನು ಪೋಷಿಸುತ್ತಾರೆ. ಕಳೆದ 15 ದಿನಗಳಲ್ಲಿ ಇಬ್ಬರೂ ಹತ್ತಿರವಾಗಿದ್ದರು ಎಂದು ವರದಿಯಾಗಿದೆ. ಅವರು ಒಟ್ಟಿಗೆ ರೀಲ್ಸ್​ ಮಾಡುತ್ತಿದ್ದರು, ಅದು ಪ್ರೀತಿಯಾಗಿ ಅರಳಿತು. ನಂತರ ಅವರು ಉತ್ತರ ಪ್ರದೇಶದ ವಿಂಧ್ಯಾಚಲದಲ್ಲಿರುವ ಅಷ್ಟಭುಜ ದೇವಸ್ಥಾನಕ್ಕೆ ಹೋಗಿ ತಮ್ಮ ವಿವಾಹ ವಿಧಿವಿಧಾನಗಳನ್ನು ನೆರವೇರಿಸಿದರು. ಮದುವೆಯ ನಂತರ, ಅವರು ಬಕ್ಸಾರ್&zwnj;ಗೆ ಹಿಂತಿರುಗಿ ರಾಮೇಶ್ವರನಾಥ ದೇವಾಲಯದಲ್ಲಿ ಪರಸ್ಪರ ಹಾರ ಹಾಕುವ ಮೂಲಕ ವಿವಾಹ ಸಮಾರಂಭವನ್ನು ನಡೆಸಿದರು. ಇದರ ವಿಶೇಷವೆಂದರೆ ಸಂಧ್ಯಾ ದೇವಿ ತನ್ನನ್ನು ಹೆಂಡತಿಯಾಗಿ ಒಪ್ಪಿಕೊಂಡಿದ್ದಾರೆ ಮತ್ತು ರೂಬಿ ಕುಮಾರಿ ತನ್ನನ್ನು ಗಂಡನಾಗಿ ಒಪ್ಪಿಕೊಂಡಿದ್ದಾರೆ.&lt;/p&gt;&lt;h3&gt;&lt;strong&gt;ಎಲ್ಲರನ್ನೂ ಧಿಕ್ಕರಿಸಿ ಮದುವೆ&lt;/strong&gt;&lt;/h3&gt;&lt;p&gt;ಆದಾಗ್ಯೂ, ಎರಡೂ ಕುಟುಂಬಗಳು ಈ ಸಂಬಂಧವನ್ನು ಗುರುತಿಸಲು ನಿರಾಕರಿಸುತ್ತಿವೆ. ಸಂಧ್ಯಾ ಮತ್ತು ರೂಬಿ ತಮ್ಮ ಸಂಬಂಧಿಕರು ತಮ್ಮನ್ನು ಬೆದರಿಸುತ್ತಿದ್ದಾರೆ ಮತ್ತು ತಮ್ಮ ಮನೆಗಳಿಗೆ ಬಿಡಲು ನಿರಾಕರಿಸುತ್ತಿದ್ದಾರೆ, ಸ್ಥಳದಿಂದ ಸ್ಥಳಕ್ಕೆ ಅಲೆದಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಧ್ಯಾ ದೇವಿ ತನ್ನ ಪತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ, ಕಳೆದ 16 ವರ್ಷಗಳಿಂದ ತಾನು ಅವನೊಂದಿಗೆ ವಾಸಿಸುತ್ತಿದ್ದೇನೆ, ಆದರೆ ಈ ಸಮಯದಲ್ಲಿ, ಅವಳು ದೈಹಿಕ ಹಿಂಸೆ ಮತ್ತು ಚಿತ್ರಹಿಂಸೆಯನ್ನು ಸಹಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ. ತನ್ನ ಪತಿ ಮದ್ಯದ ಪ್ರಭಾವದಲ್ಲಿ ತನಗೆ ಬೆದರಿಕೆ ಹಾಕುತ್ತಿದ್ದ ಮತ್ತು ಕ್ಷುಲ್ಲಕ ವಿಷಯಗಳಿಗೆ ಜಗಳವಾಡುತ್ತಿದ್ದ ಎಂದು ಅವರು ಹೇಳಿದರು. ತನ್ನ ಪತಿ ಅದಕ್ಕೆ ಸಿದ್ಧರಿಲ್ಲದ ಕಾರಣ ವಿಚ್ಛೇದನವನ್ನು ಕೋರಲಿಲ್ಲ ಎಂದು ಸಂಧ್ಯಾ ಹೇಳಿದ್ದಾರೆ.&lt;/p&gt;&lt;p&gt;ರೂಬಿ ಕುಮಾರಿ, ತಾನು ಪುರುಷರನ್ನು ದ್ವೇಷಿಸುತ್ತೇನೆ ಮತ್ತು ಯಾರನ್ನೂ ಮದುವೆಯಾಗಲು ಬಯಸುವುದಿಲ್ಲ ಎಂದು ಹೇಳಿದರು. ಈ ಕಾರಣಕ್ಕಾಗಿ, ಅವರು ಸಂಧ್ಯಾ ಅವರೊಂದಿಗೆ ತಮ್ಮ ಜೀವನವನ್ನು ಕಳೆಯಲು ನಿರ್ಧರಿಸಿದರು ಮತ್ತು ತಮ್ಮನ್ನು ತಮ್ಮ ಪತಿ ಎಂದು ಪರಿಗಣಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಒಟ್ಟಿಗೆ ವಾಸಿಸಲು ಮತ್ತು ಪರಸ್ಪರ ಬೆಂಬಲಿಸಲು ಪ್ರತಿಜ್ಞೆ ಮಾಡಿದ್ದಾರೆ. ಪ್ರಸ್ತುತ, ಈ ವಿಷಯದ ಬಗ್ಗೆ ಬಕ್ಸಾರ್ ಪೊಲೀಸರಿಗೆ ಯಾವುದೇ ಅಧಿಕೃತ ಅರ್ಜಿ ಸಲ್ಲಿಸಲಾಗಿಲ್ಲ.&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/relationship/a-wedding-ceremony-involving-an-18-year-old-woman-and-a-mother-of-two-suc/articleshow-hifa1w2"/>
        </item>
        <item>
            <title><![CDATA[ದುಲೀಪ್ ಟ್ರೋಫಿ ಗೆಲುವಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಬಗ್ಗೆ ಮೊಹಮ್ಮದ್ ಶಮಿ ಹೀಗಾ ಹೇಳೋದು..?]]></title>
            <link>https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7</link>
            <guid isPermaLink="true">https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7</guid>
            <pubDate>Fri, 11 Sep 2026 13:44:10 +0530</pubDate>
            <description><![CDATA[2026ರ ದುಲೀಪ್ ಟ್ರೋಫಿ ಗೆದ್ದ ಪೂರ್ವ ವಲಯ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ, 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತಮ್ಮ ವೃತ್ತಿಜೀವನದಷ್ಟೇ ವಯಸ್ಸಿನ ಅನುಭವವನ್ನು ವೈಭವ್ ಹೊಂದಿದ್ದಾರೆ ಎಂದು ಶಮಿ ಹೇಳಿದ್ದು, ಯುವ ಆಟಗಾರರ ಪ್ರಬುದ್ಧತೆಯನ್ನು ಶ್ಲಾಘಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27r8csn6t3jfq6zwa49e779,imgname-untitled-design--52--1789114200884.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಇಶಾನ್ ಕಿಶನ್ ನೇತೃತ್ವದ ಪೂರ್ವ ವಲಯ ತಂಡವು 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಪೂರ್ವ ವಲಯ ತಂಡದ ಜತೆಗಿದ್ದ ಅನುಭವಿ ವೇಗಿ ಮೊಹಮ್ಮದ್ ಶಮಿ, ಸಹ ಆಟಗಾರರ ಜತೆ ಒಳ್ಳೆಯ ಕ್ಷಣಗಳನ್ನು ಕಳೆದಿದ್ದಾರೆ. ಇದೆಲ್ಲದರ ನಡುವೆ ಪೂರ್ವ ವಲಯ ತಂಡದ ಉಪನಾಯಕ ಹಾಗೂ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಶಮಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 36 ವರ್ಷದ ಮೊಹಮ್ಮದ್ ಶಮಿ, ಮೂರು ಪಂದ್ಯಗಳನ್ನಾಡಿ 7 ವಿಕೆಟ್ ಕಬಳಿಸಿ ಮಿಂಚಿದ್ದರು. ಅದರಲ್ಲೂ ಫೈನಲ್&zwnj;ನಲ್ಲಿ ಎರಡು ಪ್ರಮುಖ ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪೂರ್ವ ವಲಯ ತಂಡವು ಚಾಂಪಿಯನ್ ಆದ ಬೆನ್ನಲ್ಲೇ ಮಾತನಾಡಿದ ಮೊಹಮ್ಮದ್ ಶಮಿ, ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವವನ್ನು ಹೊಂದಿದ್ದಾರೆ' ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.&lt;/p&gt;&lt;p&gt;ದುಲೀಪ್ ಟ್ರೋಫಿ ಫೈನಲ್ ಪಂದ್ಯವು ಮೊಹಮ್ಮದ್ ಶಮಿ ಪ್ರಥಮ ದರ್ಜೆ ಕ್ರಿಕೆಟ್&zwnj;ನಲ್ಲಿ ಆಡಿದ 100ನೇ ಪಂದ್ಯ ಎನಿಸಿಕೊಂಡಿತು. 2010, ನವೆಂಬರ್ 17ರಂದು ಮೊಹಮ್ಮದ್ ಶಮಿ, ಬಂಗಾಳ ಪರ ರಣಜಿ ಟ್ರೋಫಿ ಕ್ರಿಕೆಟ್&zwnj;ಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಇದಾಗಿ ನಾಲ್ಕು ತಿಂಗಳ ಬಳಿಕ ಅಂದರೆ ಮಾರ್ಚ್ 27, 2011ರಂದು ವೈಭವ್ ಸೂರ್ಯವಂಶಿ ಹುಟ್ಟಿದ್ದರು. ಕೇವಲ 15ನೇ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್&zwnj;ನ ಉಪನಾಯಕನಾಗಿ, ದುಲೀಪ್ ಟ್ರೋಫಿ ಗೆಲ್ಲುವಲ್ಲಿ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿಯ ಹೇಳಿಕೆ:&lt;/strong&gt;&lt;/h2&gt;&lt;p&gt;ದುಲೀಪ್ ಟ್ರೋಫಿ ಗೆಲುವಿನ ಬಳಿಕ ಮಾತನಾಡಿದ ಶಮಿ, ನಾನು ಈ ಟೂರ್ನಿಯನ್ನು ತುಂಬಾ ಚೆನ್ನಾಗಿ ಎಂಜಾಯ್ ಮಾಡಿದೆ. ನಮ್ಮ ತಂಡದಲ್ಲಿರುವ ಈ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಅಕ್ಷರಶಃ ನನ್ನ ವೃತ್ತಿಜೀವನದಷ್ಟೇ ಅನುಭವ ಹೊಂದಿದ್ದಾರೆ. ಇನ್ನೂ ಆತನಲ್ಲಿ ಅದೇ ಮುಗ್ದತೆ, ಅಕ್ಕ ಪಕ್ಕದವರ ಜತೆ ಜೋಕ್ ಮಾಡಿ ನಗಿಸುವುದು ಹಾಗೂ ಕೆಲವು ವಿಚಾರಗಳನ್ನು ತಕ್ಷಣವೇ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುವುದು. ಬಹುತೇಕ ಈಗಿನ ಎಲ್ಲಾ ಯಂಗಸ್ಟರ್ಸ್&zwnj; ಪ್ರಬುದ್ದರಾಗಿರುತ್ತಾರೆ. ಇವರೆಲ್ಲ ಐಪಿಎಲ್ ಸೇರಿದಂತೆ ಹಲವು ಹೈ ಲೆವೆಲ್ ಟೂರ್ನಿಗಳನ್ನು ಆಡುವುದರಿಂದ ಬೇಗನೇ ಪ್ರಬುದ್ದತೆ ಬರುತ್ತದೆ. ಹೀಗಾಗಿ ಅವರಿಗೆ ಹೆಚ್ಚಿನ ಕೋಚಿಂಗ್ ಅಗತ್ಯವಿಲ್ಲ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಅವರಿಗೆ ತಾಂತ್ರಿಕವಾಗಿ ಸಲಹೆಗಳನ್ನು ನೀಡಬೇಕಾಗುತ್ತದೆ' ಎಂದು ಶಮಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;192 ರನ್ ಗಳಿಸಿದ ವೈಭವ್ ಸೂರ್ಯವಂಶಿ:&lt;/strong&gt;&lt;/h3&gt;&lt;p&gt;ಪೂರ್ವ ವಲಯ ತಂಡದ ಉಪನಾಯಕ ಹಾಗೂ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ, 2026ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ 3 ಪಂದ್ಯಗಳ ಐದು ಇನ್ನಿಂಗ್ಸ್&zwnj;ಗಳನ್ನಾಡಿ 192 ರನ್ ಸಿಡಿಸಿ ಮಿಂಚಿದರು. ಈ ಮೂಲಕ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್&zwnj;ಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದರು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/vaibhav-sooryavanshi-stuns-again-mohammed-shami-makes-a-big-statement-on-15-year-old-star-kvn/articleshow-g99dqd7"/>
        </item>
        <item>
            <title><![CDATA[ಆಸ್ಟೇಲಿಯಾದಲ್ಲಿ ಭಾರತೀಯ ಯುವತಿಗೆ ಕಲ್ಚರ್ ಶಾಕ್; ಸಂಜೆ 5ಕ್ಕೆ ಅಂಗಡಿ ಕ್ಲೋಸ್, ಯಾರಿಗೂ ಸರ್ ಅನ್ನಂಗಿಲ್ಲ!]]></title>
            <link>https://kannada.asianetnews.com/world-news/indian-young-woman-shares-5-culture-shocks-in-australia-viral-video-sat/articleshow-dqv7o6t</link>
            <guid isPermaLink="true">https://kannada.asianetnews.com/world-news/indian-young-woman-shares-5-culture-shocks-in-australia-viral-video-sat/articleshow-dqv7o6t</guid>
            <pubDate>Fri, 11 Sep 2026 13:36:10 +0530</pubDate>
            <description><![CDATA[ಆಸ್ಟ್ರೇಲಿಯಾಗೆ ತೆರಳಿದ ಭಾರತೀಯ ಯುವತಿ ದಿಶಾ ಶಾ ತಮಗಾದ 5 ಪ್ರಮುಖ 'ಕಲ್ಚರ್ ಶಾಕ್' ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಂಜೆ 5ಕ್ಕೆ ಅಂಗಡಿಗಳ ಬಂದ್, ಕುದುರೆ ಮೇಲಿನ ಪೊಲೀಸರು, 'ಸರ್-ಮೇಡಂ' ಇಲ್ಲದ ಸಂಸ್ಕೃತಿ, ಮತ್ತು ಕಟ್ಟುನಿಟ್ಟಾದ ವರ್ಕ್-ಲೈಫ್ ಬ್ಯಾಲೆನ್ಸ್ ಸೇರಿದಂತೆ ಅಲ್ಲಿನ ಜೀವನಶೈಲಿಯ ವ್ಯತ್ಯಾಸಗಳನ್ನು ಅವರು ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27jvyarzsg477ay7362t74e,imgname-woman-shares-her-australian-experience-1789108549976.jpg" type="image/jpeg" height="390" width="690"/>
            <content:encoded><![CDATA[&lt;p&gt;ಉನ್ನತ ವಿದ್ಯಾಭ್ಯಾಸಕ್ಕಾಗಲಿ ಅಥವಾ ಕೈತುಂಬಾ ಸಂಬಳ ತರುವ ಉದ್ಯೋಗಕ್ಕಾಗಲಿ ವಿದೇಶಕ್ಕೆ ಹಾರುವ ಭಾರತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋದಾಗ ಅಲ್ಲಿನ ಭಾಷೆ, ಆಹಾರ, ಹವಾಮಾನ ಹಾಗೂ ಮುಖ್ಯವಾಗಿ ಜೀವನಶೈಲಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅಲ್ಲಿನ ನಿಯಮಗಳು, ಸಂಸ್ಕೃತಿ ನಮಗೆ ಭಾರೀ &lsquo;ಕಲ್ಚರ್ ಶಾಕ್&rsquo; (Culture Shock) ನೀಡುತ್ತವೆ.&lt;/p&gt;&lt;p&gt;ಇದೇ ರೀತಿಯ ಅನುಭವ ಭಾರತೀಯ ಮೂಲದ ಯುವತಿ ದಿಶಾ ಶಾ ಅವರಿಗೂ ಆಗಿದೆ. ಆಸ್ಟ್ರೇಲಿಯಾಗೆ ತೆರಳಿದ ಬಳಿಕ ತಮಗೆ ಅತ್ಯಂತ ಅಚ್ಚರಿ ಮೂಡಿಸಿದ 5 ಪ್ರಮುಖ ಜೀವನಶೈಲಿಯ ವ್ಯತ್ಯಾಸಗಳನ್ನು ಅವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ಇಂಟರ್ನೆಟ್&zwnj;ನಲ್ಲಿ ಭಾರಿ ಸದ್ದು ಮಾಡುತ್ತಿದೆ.&lt;/p&gt;&lt;h2&gt;&lt;strong&gt;ದಿಶಾಗೆ ಆಸ್ಟ್ರೇಲಿಯಾದಲ್ಲಿ ಅಚ್ಚರಿ ಮೂಡಿಸಿದ 5 ಸಂಗತಿಗಳು ಇಲ್ಲಿವೆ:&lt;/strong&gt;&lt;/h2&gt;&lt;h3&gt;&lt;strong&gt;1. ಸಂಜೆ 5 ಗಂಟೆಗೇ ಅಂಗಡಿ-ಮುಂಗಟ್ಟುಗಳು ಕ್ಲೋಸ್!&lt;/strong&gt;&lt;/h3&gt;&lt;p&gt;ಭಾರತದ ಬೆಂಗಳೂರು, ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ರಾತ್ರಿ 10-11 ಗಂಟೆಯಾದರೂ ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿರುತ್ತವೆ. ಆದರೆ, ಆಸ್ಟ್ರೇಲಿಯಾದಲ್ಲಿ ಸಂಜೆ 5 ಗಂಟೆಯಾಗುತ್ತಿದ್ದಂತೆ ಬಹುತೇಕ ಎಲ್ಲಾ ರಿಟೇಲ್ ಅಂಗಡಿಗಳು ಮತ್ತು ಶಾಪಿಂಗ್ ಮಳಿಗೆಗಳು ಬಾಗಿಲು ಮುಚ್ಚುತ್ತವೆ. ಸಂಜೆಯ ನಂತರ ರಸ್ತೆಗಳಲ್ಲಿ ಯಾವುದೇ ವ್ಯಾಪಾರ ಗದ್ದಲವಿರುವುದಿಲ್ಲ.&lt;/p&gt;&lt;h3&gt;&lt;strong&gt;2. ರಸ್ತೆಗಳಲ್ಲಿ ಕುದುರೆ ಸವಾರಿ ಮಾಡುವ ಪೊಲೀಸರು:&lt;/strong&gt;&lt;/h3&gt;&lt;p&gt;ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಜನದಟ್ಟಣೆಯ ವಾಣಿಜ್ಯ ಪ್ರದೇಶಗಳಲ್ಲಿ ಪೊಲೀಸರು ಕುದುರೆಗಳ ಮೇಲೆ ಕುಳಿತು ಗಸ್ತು (ಪ್ಯಾಟ್ರೋಲಿಂಗ್) ತಿರುಗುವುದು ದಿಶಾ ಅವರಿಗೆ ಆರಂಭದಲ್ಲಿ ವಿಸ್ಮಯ ಮೂಡಿಸಿತ್ತು. ಇದು ಅಲ್ಲಿನ ದೈನಂದಿನ ಭದ್ರತೆಯ ಸಾಮಾನ್ಯ ಭಾಗವಾಗಿದ್ದರೂ, ಭಾರತದಿಂದ ಹೋದವರಿಗೆ ವಿಶೇಷವಾಗಿ ಕಾಣಿಸುತ್ತದೆ.&lt;/p&gt;&lt;h3&gt;&lt;strong&gt;3. 'ಸರ್', 'ಮೇಡಂ' ಅನ್ನೋ ಸಂಸ್ಕೃತಿಯೇ ಇಲ್ಲ:&lt;/strong&gt;&lt;/h3&gt;&lt;p&gt;ನಮ್ಮಲ್ಲಿ ಹಿರಿಯರು, ಮೇಲಧಿಕಾರಿಗಳು, ವೈದ್ಯರು ಅಥವಾ ಶಿಕ್ಷಕರನ್ನು &lsquo;ಸರ್&rsquo;, &lsquo;ಮೇಡಂ&rsquo;, &lsquo;ಅಂಕಲ್&rsquo;, &lsquo;ಆಂಟಿ&rsquo; ಎಂದು ಕರೆಯುವುದು ಸಂಪ್ರದಾಯ. ಆದರೆ, ಆಸ್ಟ್ರೇಲಿಯಾದಲ್ಲಿ ಇಂತಹ ಯಾವುದೇ ಔಪಚಾರಿಕ ಪದಗಳಿಲ್ಲ. ಕಚೇರಿಯ ಬಾಸ್ ಆಗಿರಲಿ, ಆಸ್ಪತ್ರೆಯ ವೈದ್ಯರಾಗಿರಲಿ ಅಥವಾ ಶಿಕ್ಷಕರಾಗಿರಲಿ, ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಅವರ ಮೊದಲ ಹೆಸರಿನಿಂದಲೇ (First Name) ನೇರವಾಗಿ ಕರೆಯಲಾಗುತ್ತದೆ.&lt;/p&gt;&lt;h3&gt;&lt;strong&gt;4. ಕಟ್ಟುನಿಟ್ಟಾದ 'ವರ್ಕ್-ಲೈಫ್ ಬ್ಯಾಲೆನ್ಸ್':&lt;/strong&gt;&lt;/h3&gt;&lt;p&gt;ಭಾರತದಲ್ಲಿ ಕಚೇರಿಯಲ್ಲಿ ತಡರಾತ್ರಿಯವರೆಗೂ ಕೆಲಸ ಮಾಡುವುದನ್ನು ಡೆಡಿಕೇಷನ್ ಎಂದು ಬಿಂಬಿಸುವುದಿದೆ. ಆದರೆ ಆಸ್ಟ್ರೇಲಿಯನ್ನರು ಕೆಲಸ ಮುಗಿದ ತಕ್ಷಣ ಲ್ಯಾಪ್&zwnj;ಟಾಪ್ ಮುಚ್ಚುತ್ತಾರೆ. ಅಲ್ಲಿ ಯಾರೂ ಓವರ್&zwnj;ಟೈಮ್ ಮಾಡುವುದನ್ನು ಹೆಮ್ಮೆಯ ವಿಷಯ ಎಂದು ಭಾವಿಸುವುದಿಲ್ಲ. ಬದಲಾಗಿ ತಮ್ಮ ವೈಯಕ್ತಿಕ ಬದುಕು, ಹವ್ಯಾಸ, ಆರೋಗ್ಯ ಮತ್ತು ಕುಟುಂಬದ ಜೊತೆ ಕಳೆಯುವ ಬಿಡುವಿನ ಸಮಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ.&lt;/p&gt;&lt;h3&gt;&lt;strong&gt;5. ಅತ್ಯಾಧುನಿಕ ಹಾಗೂ ಸುಸಜ್ಜಿತ ಸಾರ್ವಜನಿಕ ಪಾರ್ಕ್&zwnj;ಗಳು:&lt;/strong&gt;&lt;/h3&gt;&lt;p&gt;ಆಸ್ಟ್ರೇಲಿಯಾದ ಸ್ಥಳೀಯ ಉದ್ಯಾನವನಗಳು ಮತ್ತು ಸಾರ್ವಜನಿಕ ತಾಣಗಳ ನಿರ್ವಹಣೆ ಅದ್ಭುತವಾಗಿದೆ. ಬಹುತೇಕ ಪಾರ್ಕ್&zwnj;ಗಳಲ್ಲಿ ಮಕ್ಕಳ ಆಟದ ಮೈದಾನ, ಹೈಜಿನ್ ಶೌಚಾಲಯಗಳು, ವಾಕಿಂಗ್ ಪಾತ್&zwnj;ಗಳ ಜೊತೆಗೆ ಸಾರ್ವಜನಿಕರು ಉಚಿತವಾಗಿ ಬಳಸಬಹುದಾದ ವಿದ್ಯುತ್ ಚಾಲಿತ 'ಬಾರ್ಬೆಕ್ಯೂ' (BBQ) ಸೌಲಭ್ಯಗಳೂ ಲಭ್ಯವಿವೆ.&lt;/p&gt;View this post on Instagram&lt;p&gt;A post shared by Disha Shah (@dr.dshah)&lt;/p&gt;&lt;p&gt;&lt;strong&gt;ನೆಟ್ಟಿಗರ ಮೆಚ್ಚುಗೆ, ತರಹೇವಾರಿ ಚರ್ಚೆ:&lt;/strong&gt;&lt;/p&gt;&lt;p&gt;ದಿಶಾ ಶಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. &quot;ಕೇರಳದ ತಿರುವನಂತಪುರಂನಲ್ಲಿಯೂ ಪೊಲೀಸರು ರಾತ್ರಿ ವೇಳೆ ಕುದುರೆಗಳ ಮೇಲೆ ಗಸ್ತು ತಿರುಗುತ್ತಾರೆ, ಹಾಗಾಗಿ ಇದು ನಮಗೇನೂ ಹೊಸದಲ್ಲ&quot; ಎಂದು ಮಲಯಾಳಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, &quot;ಕಾನೂನಿಗಿಂತ ಜನರ ಸ್ವಯಂ ಶಿಸ್ತು ಮತ್ತು ಕೆಲಸದ ಸ್ಥಳಗಳಲ್ಲಿ ಮಾನಸಿಕ ಆರೋಗ್ಯಕ್ಕೆ ನೀಡುವ ಗೌರವವೇ ಇಂತಹ ಸುಂದರ ಸಮಾಜಕ್ಕೆ ಕಾರಣ&quot; ಎಂದು ಶ್ಲಾಘಿಸಿದ್ದಾರೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/world-news/indian-young-woman-shares-5-culture-shocks-in-australia-viral-video-sat/articleshow-dqv7o6t"/>
        </item>
        <item>
            <title><![CDATA[ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿ ಮನೆ ಮುಂದೆ ಚಿರತೆ ಪ್ರತ್ಯಕ್ಷ, ನಗರದಲ್ಲಿ ಹೆಚ್ಚಿದ ಆತಂಕ]]></title>
            <link>https://kannada.asianetnews.com/bengaluru-rural/leopard-spotted-outside-house-in-bengaluru-banashankari-raising-concern/articleshow-xwgxzli</link>
            <guid isPermaLink="true">https://kannada.asianetnews.com/bengaluru-rural/leopard-spotted-outside-house-in-bengaluru-banashankari-raising-concern/articleshow-xwgxzli</guid>
            <pubDate>Fri, 11 Sep 2026 13:27:55 +0530</pubDate>
            <description><![CDATA[ಬೆಂಗಳೂರಿನಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಜನರ ಆತಂಕ ಹೆಚ್ಚಿಸಿದೆ. ಈ ಬಾರಿ ಬನಶಂಕರಿ 6ನೇ ಸ್ಟೇಜ್‌ನಲ್ಲಿ ಚಿರತೆ ಕಾಣಿಸಿಕೊಂಡಿದೆ. ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ದಾಖಲಾಗಿದೆ. ಮನೆ ಮುಂದೆ, ರಸ್ತೆಯಲ್ಲಿ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27qhj5ysxa8bwss7xsw8hgb,imgname-leopard-sighting-in-banashankari-1789113452733.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11)&lt;/strong&gt; ಬೆಂಗಳೂರಿನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಈಗಾಗಲೇ ಬೆಂಗಳೂರಿನ ಕೆಲೆವೆಡೆ ಚಿರತೆ ಕಾಣಿಸಿಕೊಂಡು ಆತಂಕ ಹೆಚ್ಚಿಸಿದೆ. ಕೆಲ ದಿನಗಳಿಂದ ನೆಮ್ಮದಿಯಿಂದ ಜನರಿಗೆ ಇದೀಗ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಈ ಬಾರಿ ಬೆಂಗಳೂರಿನ ಬನಶಂಕರಿಯ 6ನೇ ಸ್ಟೇಜ್&zwnj;ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೇಶವ್ ಎಂಬುವವರ ಮನೆ ಮುಂದೆ ಚಿರತೆ ಓಡಾಡುತ್ತಿರುವುದು ಪತ್ತೆಯಾಗಿದೆ. ಕೇಶವ್ ಮನೆ ಮುಂದೆ ಹಾಕಿರುವ ಸಿಸಿಟಿವಿಯಲ್ಲಿ ಚಿರತೆ ದೃಶ್ಯಗಳು ಸೆರೆಯಾಗಿದೆ. ಮನೆ ಮುಂಭಾಗ, ರಸ್ತೆಯಲ್ಲಿ ರಾಜಾರೋಷವಾಗಿ ಚಿರತೆ ಓಡಾಡುತ್ತಿದೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಮನೆ ಮುಂದೆ ಕಾಣಿಸಿಕೊಂಡ ಚಿರತೆ&lt;/h2&gt;&lt;p&gt;ಬನಶಂಕರಿ 6ನೇ ಸ್ಟೇಜ್&zwnj;ನಲ್ಲಿ ನಿನ್ನೆ (ಸೆ.10) ಮುಂಜಾನೆ ಚಿರತೆ ಕಾಣಿಸಿಕೊಂಡಿದೆ. ಕೇಶವ್ ಅನ್ನೋ ನಿವಾಸಿಯ ಮನೆ ಮುಂದೆ ಚಿರತೆ ಓಡಾಡಿದೆ. ನಾಯಿ ಬೊಗಳಿದ ಕಾರಣ ಚಿರತೆ ಸ್ಥಳದಿಂದ ಓಡಿ ಹೋಗಿದೆ. ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಮನೆ ಸುತ್ತು ಮುತ್ತ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದಾಗ ಚಿರತೆ ಪ್ರತ್ಯಕ್ಷವಾಗಿರುವುದು ಖಚಿತವಾಗಿದೆ.&lt;/p&gt;&lt;h2&gt;ಎರಡು ವರ್ಷದ ಗಂಡು ಚಿರತೆ&lt;/h2&gt;&lt;p&gt;ಬನಶಂಕರಿ 6ನೇ ಸ್ಟೇಜ್&zwnj;ನಲ್ಲಿ ಕಾಣಿಸಿಕೊಂಡ ಚಿರತೆ 2 ವರ್ಷದ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಹೇಳಿದೆ. ಕೇಶವ್ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಸಿಸಿಟಿವಿ ಪರಿಶೀಲಿಸಿದ್ದಾರೆ. ಇತ್ತ ಕೇಶವ್ ಈ ಕುರಿತು ಆತಂಕ ಹೊರಹಾಕಿದ್ದು, ಚಿರತೆ ಮನೆ ಮುಂದೆ ಬರುತ್ತಿದೆ ಎಂದರೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಅರಣ್ಯದಂಚಿನ ಪ್ರದೇಶವಾಗಿರುವ ಕಾರಣ ಚಿರತೆ ಬರುತ್ತಿದೆ.ಹೀಗಾಗಿ ಟ್ರೆಂಟ್ ಹಾಕಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಬರದಂತೆ ತಡೆಯಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಮಾಡಬೇಕು ಎಂದು ಕೇಶವ್ ಆಗ್ರಹಿಸಿದ್ದಾರೆ.&lt;/p&gt;&lt;p&gt;ಚಿರತೆ ಪ್ರತ್ಯಕ್ಷ ಎಂದರೆ ಮಕ್ಕಳು ಹೆಚ್ಚು ಜಾಗೃತೆ ವಹಿಸಬೇಕು. ಚಿರತೆಗಳು ಮಕ್ಕಳನ್ನು ಟಾರ್ಗೆಟ್ ಮಾಡಲಿದೆ. ಇದೀಗ ಮನೆಯಿಂದ ಹೊರಗೆ ಕಾಲಿಡಲು ಭಯಪಡುವ ಪರಿಸ್ಥಿತಿ ಇದೆ ಎಂದು ಕೇಶವ್ ಹೇಳಿದ್ದಾರೆ.&lt;/p&gt;]]></content:encoded>
            <category><![CDATA[bengaluru-rural]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-rural/leopard-spotted-outside-house-in-bengaluru-banashankari-raising-concern/articleshow-xwgxzli"/>
        </item>
        <item>
            <title><![CDATA[ಒಡಿಶಾ ಕಾಡಿನಲ್ಲಿ ನಿಗೂಢವಾಗಿ ಪತ್ತೆಯಾದ ವಿದೇಶಿ ಒರಾಂಗುಟಾನ್ ಮರಿಗಳಿಗೆ ಆತಂಕ ದೂರ ಮಾಡಲು ' ಮ್ಯೂಸಿಕ್ ಥೆರಪಿ']]></title>
            <link>https://kannada.asianetnews.com/india-news/music-therapy-to-five-rescued-orangutan-infants-under-stress-management-at-nandankanan-zoo-gdp/articleshow-pgo7xzf</link>
            <guid isPermaLink="true">https://kannada.asianetnews.com/india-news/music-therapy-to-five-rescued-orangutan-infants-under-stress-management-at-nandankanan-zoo-gdp/articleshow-pgo7xzf</guid>
            <pubDate>Fri, 11 Sep 2026 13:27:15 +0530</pubDate>
            <description><![CDATA[ಒಡಿಶಾದ ಬಾಲಾಸೋರ್ ಬಳಿ ರಕ್ಷಿಸಲ್ಪಟ್ಟ ಐದು ಅಪರೂಪದ ಒರಾಂಗುಟಾನ್ ಮರಿಗಳನ್ನು ನಂದನಕಾನನ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ತೀವ್ರ ಆತಂಕದಲ್ಲಿರುವ ಈ ಮರಿಗಳಿಗೆ ಸಂಗೀತ ಚಿಕಿತ್ಸೆ ಸೇರಿದಂತೆ ವಿಶೇಷ ಆರೈಕೆ ನೀಡಲಾಗುತ್ತಿದ್ದು, ಇವುಗಳ ಆಗಮನದ ಹಿಂದೆ ಅಂತಾರಾಷ್ಟ್ರೀಯ ಕಳ್ಳಸಾಗಣೆ ಜಾಲದ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m2785z2b9cghp52x7czyt990,imgname-ani-five-rescued-orangutans-being-kept-in-qu-1789097344075.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಡಿಶಾ ರಾಜ್ಯದ ಬಾಲಾಸೋರ್ ಜಿಲ್ಲೆಯ ಭೋಗ್ರೈ ಬ್ಲಾಕ್&zwnj;ನಲ್ಲಿರುವ ವಿಚಿತ್ರಪುರ ಮ್ಯಾಂಗ್ರೂವ್ ಅಭಯಾರಣ್ಯದ ಸಮೀಪವಿರುವ ಗಾಳಿಮರ ನೆಡುತೋಪಿನಲ್ಲಿ ಇತ್ತೀಚೆಗೆ ಐದು ಅಪರೂಪದ ಒರಾಂಗುಟಾನ್ (ನರವಾನರ) ಮರಿಗಳನ್ನು ರಕ್ಷಿಸಲಾಗಿದೆ. ಭುವನೇಶ್ವರ-ಕೋಲ್ಕತ್ತ ಹೆದ್ದಾರಿಯ ಬಳಿ ಪತ್ತೆಯಾದ ಈ ಮರಿಗಳನ್ನು ತಕ್ಷಣವೇ ಖೋರ್ದಾ ಜಿಲ್ಲೆಯ ಪ್ರಸಿದ್ಧ &lsquo;ನಂದನಕಾನನ&rsquo; ಮೃಗಾಲಯಕ್ಕೆ ರವಾನಿಸಲಾಗಿದ್ದು, ಸದ್ಯ ಅಲ್ಲಿನ ತಜ್ಞ ಪಶುವೈದ್ಯರ ಉಸ್ತುವಾರಿಯಲ್ಲಿ ವಿಶೇಷ ಆರೈಕೆ ನೀಡಲಾಗುತ್ತಿದೆ.&lt;/p&gt;&lt;h2&gt;ಆತಂಕ ಹಾಗೂ ಬದಲಾಗುತ್ತಿರುವ ವರ್ತನೆ&lt;/h2&gt;&lt;p&gt;ಸಾಮಾನ್ಯವಾಗಿ ಮಲೇಷ್ಯಾ, ಇಂಡೊನೇಷ್ಯಾ ಮತ್ತು ಬೋರ್ನಿಯೊ ದ್ವೀಪಗಳ ದಟ್ಟ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವ ಈ ಜೀವಿಗಳ ವರ್ತನೆಯಲ್ಲಿ ಈಗ ವಿಚಿತ್ರ ವ್ಯತ್ಯಾಸಗಳು ಗೋಚರಿಸುತ್ತಿವೆ. ಮೃಗಾಲಯದ ಪ್ರತ್ಯೇಕವಾಸದಲ್ಲಿರುವ ಮರಿಗಳು ಕೆಲವೊಮ್ಮೆ ಅತ್ಯಂತ ಉತ್ಸಾಹದಿಂದ ಆಟವಾಡುತ್ತಿದ್ದರೆ, ಮರುಕ್ಷಣವೇ ತೀವ್ರ ಆತಂಕಕ್ಕೆ ಒಳಗಾಗುತ್ತಿವೆ. ಭಯಗೊಂಡ ತಕ್ಷಣವೇ ಒಂದನ್ನೊಂದು ಗಟ್ಟಿಯಾಗಿ ಅಪ್ಪಿಕೊಂಡು ಕುಳಿತುಕೊಳ್ಳುವ ಚಿತ್ರಣ ಕಂಡುಬರುತ್ತಿದೆ. &quot;ಈ ಮರಿಗಳು ಹೊರನೋಟಕ್ಕೆ ಆರಾಮವಾಗಿ ಕಂಡರೂ, ತಾಯಿಯಿಂದ ಪ್ರತ್ಯೇಕಗೊಂಡಿರುವುದರಿಂದ ತೀವ್ರ ಸ್ವರೂಪದ ಭಾವನಾತ್ಮಕ ಒತ್ತಡ ಹಾಗೂ ಆತಂಕವನ್ನು ಎದುರಿಸುತ್ತಿರಬಹುದು&quot; ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.&lt;/p&gt;&lt;h2&gt;ವಿಶೇಷ ಆರೈಕೆ ಮತ್ತು ಒತ್ತಡ ನಿರ್ವಹಣೆಯ ಕ್ರಮಗಳು&lt;/h2&gt;&lt;p&gt;ಮರಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲ್ವಿಚಾರಣೆಗಾಗಿ ಪಶುವೈದ್ಯರ ತಂಡವನ್ನು ನಿಯೋಜಿಸಲಾಗಿದ್ದು, ಅವುಗಳ ನಿರಾತಂಕ ವಾತಾವರಣಕ್ಕಾಗಿ ಮೃಗಾಲಯ ಆಡಳಿತ ಮಂಡಳಿಯು ವಿವಿಧ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಮರಿಗಳನ್ನು ಕ್ವಾರಂಟೈನ್&zwnj; (ಪ್ರತ್ಯೇಕವಾಸ) ವಿಭಾಗದಲ್ಲಿ ಇರಿಸಲಾಗಿದ್ದು, ನೈಸರ್ಗಿಕ ವಿಟಮಿನ್ ಡಿ ಪೂರೈಕೆಗಾಗಿ ಬೆಳಗಿನ ಎಳೆಯ ಬಿಸಿಲಿಗೆ ಒಡ್ಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಆಹಾರವಾಗಿ ಹಾಲು, ಬೇಯಿಸಿ ಹಿಸುಕಿದ ಸೇಬು ಹಣ್ಣು ಮತ್ತು ಬಾಳೆಹಣ್ಣುಗಳನ್ನು ನೀಡಲಾಗುತ್ತಿದೆ. ಪ್ರತ್ಯೇಕವಾಸದ ಆವರಣದಲ್ಲಿ ಮರಿಗಳಿಗೆ ಮಾನಸಿಕ ಚಟುವಟಿಕೆ ನೀಡಲು ಉಯ್ಯಾಲೆಗಳನ್ನು ಅಳವಡಿಸಲಾಗಿದ್ದು, ಆಟಿಕೆಗಳ ಜೊತೆ ಕಾಲ ಕಳೆಯಲು ಅನುಕೂಲ ಮಾಡಿಕೊಡಲಾಗಿದೆ.&lt;/p&gt;&lt;h2&gt;ಶಾಸ್ತ್ರೀಯ ಸಂಗೀತ ಥೆರಪಿ&lt;/h2&gt;&lt;p&gt;ಆತಂಕವನ್ನು ತಗ್ಗಿಸಿ, ಪ್ರಕೃತಿದತ್ತ ಹಿತಕರ ವಾತಾವರಣವನ್ನು ಸೃಷ್ಟಿಸಲು ಶಾಸ್ತ್ರೀಯ ಸಂಗೀತವನ್ನು ಪ್ರಸಾರ ಮಾಡಲಾಗುತ್ತಿದೆ. ತಜ್ಞರ ಸಲಹೆಯಂತೆ ಈ ಸಂಗೀತ ಚಿಕಿತ್ಸೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ಮೃಗಾಲಯದ ಉಪ ನಿರ್ದೇಶಕ ಪ್ರದೀಪ್ ಮಿರಾಸೆ ಸ್ಪಷ್ಟಪಡಿಸಿದ್ದಾರೆ. ಪಶುವೈದ್ಯರು ಮರಿಗಳ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಶೀಘ್ರದಲ್ಲೇ ಅವು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಲಿವೆ ಎಂದು ಮೃಗಾಲಯದ ನಿರ್ದೇಶಕರಾದ ಎನ್. ಸನತ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;ಭಾರತದಲ್ಲಿ ಕಂಡುಬರದ ಅಪರೂಪದ ಪ್ರಾಣಿಗಳು&lt;/h2&gt;&lt;p&gt;ಭಾರತದ ನೈಸರ್ಗಿಕ ವಾಸಸ್ಥಾನದಲ್ಲಿ ಕಂಡುಬರದ ಈ ಪ್ರಾಣಿಗಳು ರಾಜ್ಯಕ್ಕೆ ಹೇಗೆ ಬಂದವು ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದ್ದು, ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆ ಜಾಲದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಪೊಲೀಸ್&zwnj;ನ ವಿಶೇಷ ಕಾರ್ಯಪಡೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜಂಟಿ ತನಿಖೆ ಆರಂಭಿಸಿವೆ. ರಕ್ಷಿಸಲ್ಪಟ್ಟ 5 ಒರಾಂಗುಟನ್&zwnj;ಗಳಲ್ಲಿ 3 ಗಂಡು ಹಾಗೂ 2 ಹೆಣ್ಣು ಮರಿಗಳಿದ್ದು, ಇವುಗಳ ವಯಸ್ಸು 6 ತಿಂಗಳಿಂದ 1 ವರ್ಷದ ಒಳಗಿದೆ. ಇವುಗಳನ್ನು ಭುವನೇಶ್ವರದ ಪ್ರಸಿದ್ಧ ನಂದನಕಾನನ ಮೃಗಾಲಯದಲ್ಲಿಯೇ ಉಳಿಸಿಕೊಳ್ಳಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿದೆ.&lt;/p&gt;&lt;h2&gt;ಕಪ್ಪು ಥಾರ್ ಸಂಶಯಾಸ್ಪದ ಓಡಾಟ:&lt;/h2&gt;&lt;p&gt;ಸೋಮವಾರ ರಾತ್ರಿ ಘಟನಾ ಸ್ಥಳದ ಸಮೀಪ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಎಸ್&zwnj;ಯುವಿ ವಾಹನವೊಂದು ಸಂಶಯಾಸ್ಪದವಾಗಿ ಸಂಚರಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಾಹನದ ಚಲನವಲನ ಹಾಗೂ ಅದರ ಮಾಲೀಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪರೂಪದ ಒರಾಂಗುಟನ್&zwnj;ಗಳನ್ನು ಇದೇ ವಾಹನದಲ್ಲಿ ತಂದು ಬಿಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.&lt;/p&gt;&lt;h2&gt;ಅಂತಾರಾಷ್ಟ್ರೀಯ ಜಾಲದ ಶಂಕೆ:&lt;/h2&gt;&lt;p&gt;ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 1 ಒರಾಂಗುಟನ್ ಬೆಲೆ 20-25 ಲಕ್ಷ ರು.ನಷ್ಟಿದೆ. ಇವು ಮೂಲತಃ ಮಲೇಷ್ಯಾ ಮತ್ತು ಇಂಡೋನೇಷ್ಯಾದ ಕಾಡುಗಳಲ್ಲಿ ಮಾತ್ರ ಕಂಡುಬರುತ್ತವೆ. ವಿಮಾನ, ಹಡಗು ಅಥವಾ ರೈಲು ಮಾರ್ಗವಾಗಿ ಇವುಗಳನ್ನು ಭಾರತಕ್ಕೆ ತಂದಿರುವ ಸಾಧ್ಯತೆಯಿದ್ದು, ತನಿಖೆಗಾಗಿ ದೇಶದ ಪ್ರಮುಖ ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರೈಲ್ವೆ ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/music-therapy-to-five-rescued-orangutan-infants-under-stress-management-at-nandankanan-zoo-gdp/articleshow-pgo7xzf"/>
        </item>
        <item>
            <title><![CDATA[ಮುಖದಲ್ಲಿ ಗ್ಲೋ ಇಲ್ವಾ? ಕಣ್ಣಿನ ಕಪ್ಪು ಕಲೆ, ಸುಕ್ಕು ಕಾಡ್ತಿದ್ಯಾ? ಈ ಎಣ್ಣೆಯ 2 ಹನಿ ಸಾಕು]]></title>
            <link>https://kannada.asianetnews.com/gallery/fashion/why-you-should-massage-your-face-with-almond-oil-every-night-4d5ixp9</link>
            <guid isPermaLink="true">https://kannada.asianetnews.com/gallery/fashion/why-you-should-massage-your-face-with-almond-oil-every-night-4d5ixp9</guid>
            <pubDate>Fri, 11 Sep 2026 13:22:10 +0530</pubDate>
            <description><![CDATA[Almond oil for face: ಚರ್ಮ ಒಣಗಿ, ಮುಖದ ಕಾಂತಿ ಕಳೆದುಹೋಗಿದ್ಯಾ? ಕಣ್ಣಿನ ಕೆಳಗಿನ ಕಪ್ಪು ಕಲೆ, ಸುಕ್ಕುಗಳು ನಿಮ್ಮನ್ನು ಕಾಡ್ತಿದ್ಯಾ? ಹಾಗಾದ್ರೆ ರಾತ್ರಿ ಮಲಗೋ ಮುನ್ನ ಮುಖಕ್ಕೆ ಕೇವಲ 2 ಹನಿ ಈ ಎಣ್ಣೆ ಹಚ್ಚಿ ಮಸಾಜ್ ಮಾಡಿ ನೋಡಿ!]]></description>
            <media:content url="https://static.asianetnews.com/images/w-1280,h-720,format-jpg,imgid-01fsp68v564hsb0ee2309r6z46,imgname-p-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;Almond oil for face: ಚರ್ಮ ಒಣಗಿ, ಮುಖದ ಕಾಂತಿ ಕಳೆದುಹೋಗಿದ್ಯಾ? ಕಣ್ಣಿನ ಕೆಳಗಿನ ಕಪ್ಪು ಕಲೆ, ಸುಕ್ಕುಗಳು ನಿಮ್ಮನ್ನು ಕಾಡ್ತಿದ್ಯಾ? ಹಾಗಾದ್ರೆ ರಾತ್ರಿ ಮಲಗೋ ಮುನ್ನ ಮುಖಕ್ಕೆ ಕೇವಲ 2 ಹನಿ ಈ ಎಣ್ಣೆ ಹಚ್ಚಿ ಮಸಾಜ್ ಮಾಡಿ ನೋಡಿ!&lt;/p&gt;&lt;img&gt;&lt;p&gt;&lt;strong&gt;ಏನೆಲ್ಲಾ ಲಾಭಗಳು ಸಿಗುತ್ತವೆ?&lt;/strong&gt;ಬದಲಾಗುತ್ತಿರುವ ಹವಾಮಾನದಲ್ಲಿ ಚರ್ಮವು ಒಣಗಲು (ಡ್ರೈ ಆಗಲು) ಪ್ರಾರಂಭವಾಗುತ್ತದೆ. ಇದಕ್ಕೆ ಪರಿಹಾರವಾಗಿ ಮುಖಕ್ಕೆ ಬಾದಾಮಿ ಎಣ್ಣೆಯಿಂದ (Almond Oil) ಸ್ವಲ್ಪ ಸಮಯ ಮಸಾಜ್ ಮಾಡುವುದು ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಮುಖಕ್ಕೆ ಬಾದಾಮಿ ಎಣ್ಣೆ ಹಚ್ಚುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.&lt;/p&gt;&lt;img&gt;&lt;p&gt;&lt;strong&gt;ಮುಖವನ್ನು ಸದಾ ಹೈಡ್ರೇಟ್ ಆಗಿಡುತ್ತೆ&lt;/strong&gt;ನಿಮ್ಮ ಚರ್ಮವು ತುಂಬಾ ಒಣಗಿ, ನಿಸ್ತೇಜ ಮತ್ತು ಜೀವಕಳೆಯಿಲ್ಲದಂತೆ ಕಾಣುತ್ತಿದ್ದರೆ ಹಾಗೂ ಚರ್ಮದ ತೇವಾಂಶ ಕಡಿಮೆಯಾಗುತ್ತಿದ್ದರೆ, ನಿಮ್ಮ ತ್ವಚೆಗೆ ಹೆಚ್ಚಿನ ಪೋಷಣೆಯ ಅಗತ್ಯವಿದೆ ಎಂದರ್ಥ. ಇದಕ್ಕಾಗಿ ಪ್ರತಿದಿನ ಸ್ವಲ್ಪ ಸಮಯ ಮುಖಕ್ಕೆ ಎಣ್ಣೆಯಿಂದ ಮಸಾಜ್ ಮಾಡಿ. ಬಾದಾಮಿ ಎಣ್ಣೆಯು ಚರ್ಮಕ್ಕೆ ಅತ್ಯಂತ ಹಗುರವಾಗಿದ್ದು (Lightweight) ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಚರ್ಮಕ್ಕೆ ಆಳವಾದ ಪೋಷಣೆಯನ್ನು ನೀಡುತ್ತದೆ ಮತ್ತು ಮುಖವನ್ನು ಸದಾ ಹೈಡ್ರೇಟ್ ಆಗಿ (ತೇವಾಂಶದಿಂದ) ಇಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಇದರಲ್ಲಿದೆ ಕಡಿಮೆ ಜಿಡ್ಡಿನಂಶ&lt;/strong&gt;ಒಣ ಚರ್ಮವನ್ನು ಗುಣಪಡಿಸಲು ಬಾದಾಮಿ ಎಣ್ಣೆ ಅತ್ಯುತ್ತಮವಾಗಿದೆ. ಇದು ಇತರ ಎಣ್ಣೆಗಳಿಗಿಂತ ಕಡಿಮೆ ಜಿಡ್ಡಿನಂಶವನ್ನು ಹೊಂದಿರುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ 'ಇ', ಕೊಬ್ಬಿನಾಮ್ಲಗಳು (Fatty Acids) ಮತ್ತು ಉತ್ಕರ್ಷಣ ನಿರೋಧಕಗಳು (Antioxidants) ಸಮೃದ್ಧವಾಗಿವೆ. ಇವು ಚರ್ಮವನ್ನು ನುಣುಪಾಗಿ, ಮೃದುವಾಗಿ ಹಾಗೂ ಕಾಂತಿಯುತವಾಗಿ ಇರಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಸೂಕ್ಷ್ಮ ತ್ವಚೆಯವರೂ ಬಳಸಬಹುದು&lt;/strong&gt;ಬಾದಾಮಿ ಎಣ್ಣೆಯನ್ನು ಕಣ್ಣಿನ ಕೆಳಗಿನ ಕಪ್ಪು ಕಲೆಗಳು (Dark Circles) ಅಥವಾ ಊತವನ್ನು ಕಡಿಮೆ ಮಾಡಲು ಬಳಸಬಹುದು. ಸೂಕ್ಷ್ಮ ತ್ವಚೆ (Sensitive Skin) ಹೊಂದಿರುವವರಿಗೂ ಬಾದಾಮಿ ಎಣ್ಣೆ ತುಂಬಾ ಒಳ್ಳೆಯದು. ಸ್ನಾನದ ನಂತರ ಚರ್ಮಕ್ಕೆ ಬಾದಾಮಿ ಎಣ್ಣೆ ಹಚ್ಚುವುದರಿಂದ ಚರ್ಮದಲ್ಲಿ ನೈಸರ್ಗಿಕ ತೇವಾಂಶ ಲಾಕ್ ಆಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ತ್ವಚೆ ಬಿಸಿಲಿನಿಂದ ಕಪ್ಪಾಗಿದ್ದರೆ&lt;/strong&gt;ಮುಖದ ಟ್ಯಾನಿಂಗ್ (ಬಿಸಿಲಿನಿಂದ ಕಪ್ಪಾಗುವುದು) ಕಡಿಮೆ ಮಾಡಲು ಪ್ರತಿದಿನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಮುಖದ ಕಪ್ಪು ಕಲೆಗಳು ಕಡಿಮೆಯಾಗಿ ಮುಖದಲ್ಲಿ ನೈಸರ್ಗಿಕ ಹೊಳಪು ಬರಲು ಪ್ರಾರಂಭವಾಗುತ್ತದೆ. ಇದರಲ್ಲಿರುವ ವಿಟಮಿನ್ 'ಇ' ಸೂಕ್ಷ್ಮ ಗೆರೆಗಳನ್ನು (Fine lines) ಹೋಗಲಾಡಿಸಿ, ಮುಖದ ಮೇಲಿನ ಸುಕ್ಕುಗಳನ್ನು (Wrinkles) ಕಡಿಮೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ತ್ವಚೆಯು ಸದಾ ಹೊಳೆಯುತ್ತೆ&lt;/strong&gt;ಬಾದಾಮಿಯಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಪೋಷಕಾಂಶಗಳಿವೆ. ನಿಮ್ಮ ಚರ್ಮವು ತುಂಬಾ ಒರಟಾಗಿದ್ದರೆ (Rough skin), ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿ. ಅಂಗೈಗೆ ಕೇವಲ 2 ಹನಿ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು, ಇಡೀ ಮುಖಕ್ಕೆ ಹಚ್ಚಿ ಹಗುರವಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ತ್ವಚೆಯು ಸದಾ ಅರಳಿದಂತೆ ಹೊಳೆಯುತ್ತದೆ.&lt;/p&gt;]]></content:encoded>
            <category><![CDATA[fashion]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/fashion/why-you-should-massage-your-face-with-almond-oil-every-night-4d5ixp9"/>
        </item>
        <item>
            <title><![CDATA[ಕಾಣೆಯಾದ ಮಕ್ಕಳ ಹುಡುಕಲು ಕೆಲಸ ಬಿಟ್ಟು ಭಿಕ್ಷುಕರಾದ ಅಪ್ಪ-ಅಮ್ಮ: ಮುಂದಾದದ್ದು ಸಿನಿಮಾ ಮೀರಿಸೋ, ಮೈನವಿರೇಳೋ ಸ್ಟೋರಿ]]></title>
            <link>https://kannada.asianetnews.com/relationship/bihar-parents-disguise-themselves-as-beggars-quit-jobstravel-across-states-for-months-to-find-sons-suc/articleshow-zapylix</link>
            <guid isPermaLink="true">https://kannada.asianetnews.com/relationship/bihar-parents-disguise-themselves-as-beggars-quit-jobstravel-across-states-for-months-to-find-sons-suc/articleshow-zapylix</guid>
            <pubDate>Fri, 11 Sep 2026 13:13:57 +0530</pubDate>
            <description><![CDATA[ಗುಜರಾತಿನಲ್ಲಿ ನಾಪತ್ತೆಯಾದ ತಮ್ಮ ಇಬ್ಬರು ಗಂಡು ಮಕ್ಕಳನ್ನು ಹುಡುಕಲು, ಬಿಹಾರದ ದಂಪತಿ ತಮ್ಮ ಕೆಲಸವನ್ನೇ ತೊರೆದು ಭಿಕ್ಷುಕರ ವೇಷ ಧರಿಸಿದರು. ಪೊಲೀಸರಿಂದ ಸಹಾಯ ಸಿಗದಿದ್ದಾಗ, ಹಲವು ರಾಜ್ಯಗಳಲ್ಲಿ ಊರೂರು ಅಲೆದು, ಕೊನೆಗೆ ತಮ್ಮ ಮಕ್ಕಳನ್ನು ಭಿಕ್ಷೆ ಬೇಡುತ್ತಿದ್ದಾಗ ಪತ್ತೆಹಚ್ಚಿ ರಕ್ಷಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m27pq02andkb7yzbwnn5akk0,imgname-parents-story-1789112582218.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆಯ ಬಳಿಯೇ ಆಡುತ್ತಿದ್ದ ಇಬ್ಬರು ಗಂಡುಮಕ್ಕಳು ಏಕಾಏಕಿ ನಾಪತ್ತೆ... ಬಹುತೇಕ ಪ್ರಕರಣಗಳಂತೆ, ಒಂದಿಷ್ಟು ಹುಡುಕಿದಂತೆ ಮಾಡಿ 'ನಿಮ್ಮ ಮಕ್ಕಳು ಸಿಗುತ್ತಿಲ್ಲ, ನಾವೇನೂ ಮಾಡಲು ಸಾಧ್ಯವಿಲ್ಲ' ಎಂದ ಪೊಲೀಸರು... ನಮ್ಮಂಥ ಸಾಮಾನ್ಯ ಜನರು ಪೊಲೀಸ್​ ಠಾಣೆ ಮೆಟ್ಟಿಲೇರಿದರೆ ಸಿಗುವ ಉತ್ತವೇ ಇಷ್ಟು, ನಮ್ಮ ಹಣೆಬರಹವೇ ಇಷ್ಟು ಎಂದು ಗೋಳೋ ಎಂದು ಪೊಲೀಸರನ್ನು ನಂಬಿ ಕುಳಿತುಕೊಳ್ಳದೇ ಮಕ್ಕಳನ್ನು ತಾವೇ ಹುಡುಕುವ ಪಣ ತೊಟ್ಟು ಭಿಕ್ಷುರಾಗಿ ಊರೂರು ಸುತ್ತಿದ ಅಪ್ಪ-ಅಮ್ಮ... ಕೊನೆಗೆ ಆಗಿದ್ದೆಲ್ಲವೂ ರೋಚಕ. ಸಿನಿಮಾ ಸ್ಟೋರಿಯನ್ನೂ ಮೀರಿಸುವ ರಿಯಲ್​ ಹೀರೋ ಈ ಅಪ್ಪ-ಅಮ್ಮನ ಸ್ಟೋರಿ ಈಗ ವೈರಲ್​ ಆಗಿದ್ದು, ಇನ್ನು ಮುಂದೆ ಇದು ಸಿನಿಮಾ ಆದರೂ ಅಚ್ಚರಿಯೇನಿಲ್ಲ.&lt;/p&gt;&lt;p&gt;ಇಂಥದ್ದೊಂದು ಘಟನೆ ನಡೆದಿರುವುದು, ಗುಜರಾತಿನಲ್ಲಿ. ಬಿಹಾರದ ದಂಪತಿ ಇಲ್ಲಿ ಕೆಲಸ ಸಮಾಡುತ್ತಿದ್ದರು. ಕಳೆದ ಜನವರಿ ತಿಂಗಳಿನಲ್ಲಿ ಮನೆಯ ಬಳಿ ಆಡುತ್ತಿದ್ದ ಇಬ್ಬರು ಚಿಕ್ಕ ಗಂಡು ಮಕ್ಕಳು ನಾಪತ್ತೆಯಾಗಿಬಿಟ್ಟರು. ಅಪ್ಪ-ಅಮ್ಮ ಅವರನ್ನು ಹುಡುಕಲು ತೀವ್ರವಾಗಿ ಪ್ರಯತ್ನಿಸಿದರು, ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಪೊಲೀಸರಿಗೂ ಅವರಿಬ್ಬರೂ ಸಿಗಲಿಲ್ಲ. ನಂತರ ಪೋಷಕರು ಭಿಕ್ಷುಕರ ವೇಷ ಧರಿಸಿ ತಮ್ಮ ಗಂಡು ಮಕ್ಕಳನ್ನು ಹುಡುಕಲು ದೇಶಾದ್ಯಂತ ಪ್ರಯಾಣಿಸಲು ನಿರ್ಧರಿಸಿದರು. ತಮಗೆ ಇದ್ದ ಚಿಕ್ಕ ಉದ್ಯೋಗವನ್ನೂ ಬಿಟ್ಟು, ಮಕ್ಕಳು ಎಲ್ಲಿಯಾದರೂ ಸಿಕ್ಕೇ ಸಿಗುತ್ತಾರೆ ಎನ್ನುವ ಅದಮ್ಯ ಆಸೆಯಿಂದ ಅವರು ಭಿಕ್ಷುರಾಗಿ ಊರೂರು ಸುತ್ತಿದರು. ತಮ್ಮ ಮಕ್ಕಳನ್ನು ಭಿಕ್ಷಾಟನೆಗೆ ಯಾರಾದರೂ ತಳ್ಳಿರುತ್ತಾರೆ ಎನ್ನುವ ಅನಿಸಿಕೆ ಅವರದ್ದು. ಆದ್ದರಿಂದ ಛಲ ಬಿಡದೇ ಅಪ್ಪ-ಅಮ್ಮ ಭಿಕ್ಷೆ ಬೇಡುತ್ತಲೇ ಊರೂರು ಸುತ್ತಿದರು.&lt;/p&gt;&lt;h2&gt;&lt;strong&gt;ಭಿಕ್ಷುಕರಾದ ಅಪ್ಪ-ಅಮ್ಮ&lt;/strong&gt;&lt;/h2&gt;&lt;p&gt;ಅಷ್ಟಕ್ಕೂ ಎಷ್ಟೋ ಅಪ್ಪ-ಅಮ್ಮ ತಮ್ಮ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಎಷ್ಟೇ ವೆಚ್ಚವಾದರೂ ಸರಿ, ಯಾವ ವೇಷ ತೊಡಬೇಕಾದರೂ ಸರಿ.ಅದನ್ನೇ ಈ ಅಪ್ಪ-ಅಮ್ಮ ಮಾಡಿದರು. ಬಿಹಾರದ ಒಂದು ಕುಟುಂಬವು ಕೆಲಸ ಹುಡುಕುತ್ತಾ ಗುಜರಾತ್&zwnj;ಗೆ ಬಂದಿತ್ತು. ಕುಟುಂಬವು ಗಂಡ, ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಒಳಗೊಂಡಿದೆ. ಹಿರಿಯ ಮಗ ರಾಹುಲ್ (14) ಮತ್ತು ಕಿರಿಯ ಮಗ ಅರ್ಪಿತ್ (11). ಜನವರಿ 15 ರಂದು ರಾಹುಲ್ ಮತ್ತು ಅರ್ಪಿತ್ ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದರು. ಅವರು ಮತ್ತೆ ಹಿಂತಿರುಗಲಿಲ್ಲ. ದಂಪತಿ ಅವರನ್ನು ತೀವ್ರವಾಗಿ ಹುಡುಕಿದರು.&lt;/p&gt;&lt;p&gt;ತಮ್ಮ ಪುತ್ರರು ಎಲ್ಲಿದ್ದಾರೆ ಎಂದು ನೆರೆಹೊರೆಯವರು ಮತ್ತು ಸ್ನೇಹಿತರಲ್ಲಿ ವಿಚಾರಿಸಿದರು, ಆದರೆ ನಿರಾಶೆಗೊಂಡರು. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದರು, ಆದರೆ ಅವರು ಎಲ್ಲಿಯೂ ಪತ್ತೆಯಾಗಲಿಲ್ಲ. ಪೋಷಕರು ಅವರಿಗಾಗಿ ಹುಡುಕಾಟ ಮುಂದುವರೆಸಿದರು. ಮೂರು ತಿಂಗಳುಗಳು ಕಳೆದವು, ಮತ್ತು ಅವರ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ. ಭಿಕ್ಷುಕರ ಗುಂಪೊಂದು ತಮ್ಮ ಪುತ್ರರನ್ನು ಅಪಹರಿಸಿದೆ ಎಂದು ಪೋಷಕರು ಅನುಮಾನಿಸಿದರು. ಆದ್ದರಿಂದ, ಏನೇ ಆದರೂ ಅವರನ್ನು ಸ್ವತಃ ಹುಡುಕಲು ಅವರು ನಿರ್ಧರಿಸಿದರು.&lt;/p&gt;&lt;h3&gt;&lt;strong&gt;ಇಬ್ಬರು ಪುತ್ರರು ಹೇಗೆ ಕಂಡುಬಂದರು&lt;/strong&gt;&lt;/h3&gt;&lt;p&gt;ದಂಪತಿ ತಮ್ಮ ಕೆಲಸವನ್ನು ಬಿಟ್ಟು ಭಿಕ್ಷುಕರಾದರು. ಅವರು ಗುಜರಾತ್, ಮಹಾರಾಷ್ಟ್ರ, ಗೋವಾ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಹಗಲು ರಾತ್ರಿ ಅಲೆದಾಡಿದರು. ಮಕ್ಕಳ ಬಗ್ಗೆ ಎಲ್ಲಿಂದಲಾದರೂ ಏನಾದರೂ ಮಾಹಿತಿ ಸಿಗುತ್ತದೆ ಎಂಬ ಭರವಸೆ ಇತ್ತು. ನಂತರ ಅವರ ಹಿರಿಯ ಮಗ ಬಿಹಾರದ ಭಿಕ್ಷುಕರ ಗುಂಪಿನೊಂದಿಗೆ ಕಾಣಿಸಿಕೊಂಡ. ಅವನು ಭಿಕ್ಷೆ ಬೇಡುತ್ತಿದ್ದ. ಬಾಲಕನ ಫೋಟೋ ತೋರಿಸಿದಾಗ, ಯಾರೋ ಈ ವಿಷಯವನ್ನು ಅಪ್ಪ-ಅಮ್ಮನಿಗೆ ತಿಳಿಸಿದರು. ಅವರು, ತಕ್ಷಣ ಭಾಗಲ್ಪುರ ತಲುಪಿದರು. ಆದರೆ, ಅ ವೇಳೆಗಾಗಲೇ ಅವನು ಅಲ್ಲಿಂದ ಓಡಿಹೋಗಿದ್ದ. ದಂಪತಿ ಭಿಕ್ಷುಕರ ವೇಷದಲ್ಲಿರುವ ಮಕ್ಕಳನ್ನು ಹುಡುಕುತ್ತಲೇ ಇದ್ದರು. ಕೊನೆಗೆ ಆತ ಬಿಕಾನೇರ್&zwnj;ನಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡುಕೊಂಡರು. ಆತನನ್ನು ತಮ್ಮ ಬಳಿಗೆ ಕರೆದುಕೊಂಡು ಬಂದರು.&lt;/p&gt;&lt;p&gt;ನಂತರ ಅವರ ಕಿರಿಯ ಮಗನಿಗಾಗಿ ಹುಡುಕಾಟ ನಡೆಯಿತು. ಮತ್ತೆ ಊರೂರು ಸುತ್ತಿದರು. ಕೊನೆಗೆ, 15 ದಿನಗಳ ನಂತರ ಅವರು ಕಿರಿಯ ಮಗನನ್ನು ಪಶ್ಚಿಮ ಬಂಗಾಳದ ಹೌರಾದಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡರು. ಹೀಗೆ ಅಪ್ಪ-ಅಮ್ಮನ ಶ್ರದ್ಧೆಯಿಂದ ಮಕ್ಕಳು ಸಿಕ್ಕರು. ಬಹುಶಃ ಯಾವ ಸಿನಿಮಾದಲ್ಲಿಯೂ ಇಂಥ ರೋಚಕ ಸ್ಟೋರಿ ಕಾಣಲು ಸಾಧ್ಯವಿಲ್ಲ. ಒಂದೊಮ್ಮೆ ಇಂಥ ಸಿನಿಮಾ ಬಂದರೂ, ಇದು ನಿಜ ಜೀವನದಲ್ಲಿ ಆಗಲ್ಲ ಬಿಡಿ ಎನ್ನುವವರೇ ಎಲ್ಲಾ. ಆದರೆ ಮಕ್ಕಳಿಗಾಗಿ ಅಪ್ಪ-ಅಮ್ಮ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಯಿತು.&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/relationship/bihar-parents-disguise-themselves-as-beggars-quit-jobstravel-across-states-for-months-to-find-sons-suc/articleshow-zapylix"/>
        </item>
        <item>
            <title><![CDATA[ತಾಯಿಯ ಪ್ರೀತಿ, ಸಿರಿಧಾನ್ಯದ ಶಕ್ತಿ! ವರ್ಷಕ್ಕೆ ₹1 ಕೋಟಿ ಗಳಿಸುತ್ತಿದೆ ಮಾಜಿ ರಾಕೆಟ್ ಡಿಸೈನರ್ ಉದ್ಯಮ!]]></title>
            <link>https://kannada.asianetnews.com/business/engineer-who-designed-rockets-for-the-army-turns-motherhood-challenge-into-a-rs-1-crore-business/articleshow-kae8x4v</link>
            <guid isPermaLink="true">https://kannada.asianetnews.com/business/engineer-who-designed-rockets-for-the-army-turns-motherhood-challenge-into-a-rs-1-crore-business/articleshow-kae8x4v</guid>
            <pubDate>Fri, 11 Sep 2026 13:12:14 +0530</pubDate>
            <description><![CDATA[ಭಾರತೀಯ ಸೇನೆಗಾಗಿ ರಾಕೆಟ್ ವಿನ್ಯಾಸ ಮಾಡುತ್ತಿದ್ದ ಜ್ಯೋತಿ ಶ್ರೀವಾಸ್ತವ, ಮಕ್ಕಳಿಗೆ ಆರೋಗ್ಯಕರ ಆಹಾರ ಸಿಗದ ಕಾರಣ 2022ರಲ್ಲಿ Little Cherry Mom ಎಂಬ ಮಿಲೆಟ್ ಬೇಬಿ ಫುಡ್ ಬ್ರ್ಯಾಂಡ್ ಆರಂಭಿಸಿದರು. ಇಂದು ಸಂಸ್ಥೆ ₹1 ಕೋಟಿಗೂ ಅಧಿಕ ಆದಾಯ ಗಳಿಸಿದ್ದು, ದೇಶಾದ್ಯಂತ 70 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25dr6mtcnprkgsn1a6dqc6h,imgname-jyoti-srivastava---successful-mompreneur--1--1789036075602.jpg" type="image/jpeg" height="390" width="690"/>
            <content:encoded><![CDATA[&lt;h2&gt;ಸೇನೆಯ ರಾಕೆಟ್ ವಿನ್ಯಾಸದಿಂದ ₹1 ಕೋಟಿ ಬೇಬಿ ಫುಡ್ ಉದ್ಯಮದವರೆಗೆ&lt;/h2&gt;&lt;p&gt;ಕೆಲವೊಮ್ಮೆ ಬದುಕಿನಲ್ಲಿ ಎದುರಾಗುವ ಒಂದು ಸಣ್ಣ ಸಮಸ್ಯೆಯೇ ದೊಡ್ಡ ಯಶಸ್ಸಿನ ದಾರಿಗೆ ಕಾರಣವಾಗುತ್ತದೆ. ಮಕ್ಕಳಿಗೆ ಆರೋಗ್ಯಕರ ಹಾಗೂ ನಂಬಿಕೆಯಿಂದ ನೀಡಬಹುದಾದ ಆಹಾರ ಸಿಗುತ್ತಿಲ್ಲ ಎಂಬ ಚಿಂತೆ ತಾಯಿಯೊಬ್ಬರನ್ನು ಉದ್ಯಮಿಯಾಗಿ ರೂಪಿಸಿದೆ. ಭಾರತೀಯ ಸೇನೆಗಾಗಿ ರಾಕೆಟ್&zwnj;ಗಳನ್ನು ವಿನ್ಯಾಸಗೊಳಿಸುತ್ತಿದ್ದ ಎಂಜಿನಿಯರ್ ಜ್ಯೋತಿ ಶ್ರೀವಾಸ್ತವ ಅವರು ಇಂದು ಮಿಲೆಟ್ ಆಧಾರಿತ ಬೇಬಿ ಫುಡ್ ಬ್ರ್ಯಾಂಡ್ ಮೂಲಕ ಗಮನ ಸೆಳೆದಿದ್ದಾರೆ.&lt;/p&gt;&lt;h3&gt;ಸೇನೆಗಾಗಿ ರಾಕೆಟ್ ವಿನ್ಯಾಸ ಮಾಡುತ್ತಿದ್ದ ಎಂಜಿನಿಯರ್&lt;/h3&gt;&lt;p&gt;ಜ್ಯೋತಿ ಶ್ರೀವಾಸ್ತವ ಅವರು ಈ ಹಿಂದೆ ಭಾರತೀಯ ಸೇನೆಗಾಗಿ ರಾಕೆಟ್&zwnj;ಗಳ ವಿನ್ಯಾಸದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಾಯಿಯಾದ ಬಳಿಕ ಅವರ ಆದ್ಯತೆಗಳಲ್ಲಿ ಬದಲಾವಣೆಯಾಯಿತು. ಮಗುವಿಗೆ ಘನ ಆಹಾರ ನೀಡಲು ಆರಂಭಿಸುವ ಸಮಯದಲ್ಲಿ ಆರೋಗ್ಯಕರ ಹಾಗೂ ನಂಬಿಕೆಗೆ ಅರ್ಹವಾದ ಆಯ್ಕೆಗಳು ಸುಲಭವಾಗಿ ಸಿಗುತ್ತಿಲ್ಲ ಎಂಬುದು ಅವರಿಗೆ ಅರಿವಾಯಿತು.&lt;/p&gt;&lt;p&gt;&lt;strong&gt;ಮಗುವಿಗಾಗಿ ಹುಡುಕಿದ್ದು ಉದ್ಯಮದ ದಾರಿ&lt;/strong&gt;&lt;/p&gt;&lt;p&gt;ಮಾರುಕಟ್ಟೆಯಲ್ಲಿ &lsquo;ನ್ಯಾಚುರಲ್&rsquo; ಮತ್ತು &lsquo;ಹೆಲ್ದಿ&rsquo; ಎಂದು ಹೇಳಿಕೊಳ್ಳುವ ಹಲವು ಉತ್ಪನ್ನಗಳಿದ್ದರೂ, ಅವುಗಳ ಪದಾರ್ಥಗಳ ಪಟ್ಟಿಯನ್ನು ಗಮನಿಸಿದಾಗ ತಮಗೆ ತೃಪ್ತಿ ಇರಲಿಲ್ಲ ಎಂದು ಜ್ಯೋತಿ ಹೇಳಿದ್ದಾರೆ. ಮಕ್ಕಳ ಆಹಾರದಲ್ಲಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಅವರು ಉತ್ತರ ಪ್ರದೇಶದ ಮೀರತ್&zwnj;ನಲ್ಲಿ ತಮ್ಮದೇ ಉದ್ಯಮ ಆರಂಭಿಸಿದರು.&lt;/p&gt;&lt;p&gt;&lt;strong&gt;ಮಿಲೆಟ್ ಆಧಾರಿತ ಆಹಾರಕ್ಕೆ ಒತ್ತು&lt;/strong&gt;&lt;/p&gt;&lt;p&gt;2022ರಲ್ಲಿ ಆರಂಭವಾದ Little Cherry Mom ಬ್ರ್ಯಾಂಡ್ ಮಿಲೆಟ್ ಹಿಟ್ಟು, ಇನ್&zwnj;ಸ್ಟಂಟ್ ದೋಸೆ ಮಿಕ್ಸ್, ಸಕ್ಕರೆ ಮತ್ತು ಬೆಲ್ಲವಿಲ್ಲದ ಲಡ್ಡುಗಳು ಹಾಗೂ ಮಕ್ಕಳಿಗಾಗಿ ಆರೋಗ್ಯಕರ ಸ್ನ್ಯಾಕ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ನೀಡುತ್ತದೆ.&lt;/p&gt;&lt;p&gt;&lt;strong&gt;ತಾಯಿಯ ಕಾಳಜಿಯಿಂದ ಕೋಟಿ ರೂಪಾಯಿ ಉದ್ಯಮ&lt;/strong&gt;&lt;/p&gt;&lt;p&gt;ಉದ್ಯಮ ಆರಂಭಿಸುವ ದಾರಿ ಸುಲಭವಾಗಿರಲಿಲ್ಲ. ಮಾತೃತ್ವದ ನಂತರ ವೃತ್ತಿಜೀವನಕ್ಕೆ ಮರಳುವುದು, ವ್ಯವಹಾರ ಕಟ್ಟುವುದು ಮತ್ತು ಹಣಕಾಸಿನ ಸವಾಲುಗಳನ್ನು ಎದುರಿಸುವುದು ಜ್ಯೋತಿಗೆ ಸವಾಲಾಗಿತ್ತು. ಮಕ್ಕಳ ಪೌಷ್ಟಿಕಾಂಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವರು UNICEFನ Infant and Young Child Feeding ಪ್ರಮಾಣಪತ್ರವನ್ನೂ ಪಡೆದರು. ಆಯುರ್ವೇದದ ಗ್ರಂಥಗಳನ್ನೂ ಅಧ್ಯಯನ ಮಾಡಿದರು.&lt;/p&gt;&lt;p&gt;&lt;strong&gt;70 ಸಾವಿರಕ್ಕೂ ಹೆಚ್ಚು ಗ್ರಾಹಕರು&lt;/strong&gt;&lt;/p&gt;&lt;p&gt;ಜ್ಯೋತಿಯ ಪ್ರಯತ್ನ ಇಂದು ದೊಡ್ಡ ಯಶಸ್ಸಾಗಿ ಬೆಳೆದಿದೆ. ಅವರ ಕಂಪನಿ ದೇಶಾದ್ಯಂತ 70,000ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ₹1 ಕೋಟಿಗೂ ಅಧಿಕ ಆದಾಯ ಗಳಿಸಿದೆ. ಅವರು Shark Tank India ಸೀಸನ್ 5ರಲ್ಲೂ ಕಾಣಿಸಿಕೊಂಡಿದ್ದಾರೆ.&lt;/p&gt;&lt;p&gt;ಮಗುವಿನ ಆರೋಗ್ಯದ ಬಗ್ಗೆ ಒಬ್ಬ ತಾಯಿಗೆ ಮೂಡಿದ ಕಾಳಜಿ, ಸರಿಯಾದ ಯೋಜನೆ ಮತ್ತು ಪರಿಶ್ರಮದೊಂದಿಗೆ ಸಾವಿರಾರು ಕುಟುಂಬಗಳಿಗೆ ತಲುಪುವ ಉದ್ಯಮವಾಗಿ ಬೆಳೆದಿರುವುದು ನಿಜಕ್ಕೂ ಸ್ಫೂರ್ತಿದಾಯಕ ಯಶೋಗಾಥೆಯಾಗಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/business/engineer-who-designed-rockets-for-the-army-turns-motherhood-challenge-into-a-rs-1-crore-business/articleshow-kae8x4v"/>
        </item>
        <item>
            <title><![CDATA[ಕಸದ ರಾಶಿಗೆ ಬ್ರೇಕ್! ಬೆಂಗಳೂರಿನ ಕುಂಬಳಗೋಡು ಈಗ ಗಾರ್ಬೇಜ್ ಫ್ರೀ, ನಿವಾಸಿಗಳ ‘ಕಸ ಕಿಯೋಸ್ಕ್’ ಐಡಿಯಾ ವೈರಲ್]]></title>
            <link>https://kannada.asianetnews.com/karnataka-districts/bengaluru-kumbalgodu-goes-garbage-free-residents-join-hands-with-ngo-to-set-u-kasa-kiosk-suh/articleshow-9ii5oai</link>
            <guid isPermaLink="true">https://kannada.asianetnews.com/karnataka-districts/bengaluru-kumbalgodu-goes-garbage-free-residents-join-hands-with-ngo-to-set-u-kasa-kiosk-suh/articleshow-9ii5oai</guid>
            <pubDate>Fri, 11 Sep 2026 13:09:34 +0530</pubDate>
            <description><![CDATA[ಬೆಂಗಳೂರಿನಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ದೊಡ್ಡ ಸವಾಲಾಗುತ್ತಿದೆ. ರಸ್ತೆ ಬದಿ, ಖಾಲಿ ಜಾಗ ಸೇರಿದಂತೆ ಹಲವು ಕಡೆಗಳಲ್ಲಿ ಕಸ ಸುರಿಯುವುದರಿಂದ ಕಸದ ಬ್ಲ್ಯಾಕ್‌ಸ್ಪಾಟ್‌ಗಳು ನಿರ್ಮಾಣವಾಗುತ್ತಿವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರದ ಕುಂಬಳಗೋಡು ನಿವಾಸಿಗಳು ಇದೀಗ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27kz1bmde5erm8vhbngkpnv,imgname-bengaluru-kumbalgodu-goes-garbage-free-residents-join-hands-with-ngo-to-set-u-kasa-kiosk-1789109699956.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ದೊಡ್ಡ ಸವಾಲಾಗುತ್ತಿದೆ. ರಸ್ತೆ ಬದಿ, ಖಾಲಿ ಜಾಗ ಸೇರಿದಂತೆ ಹಲವು ಕಡೆಗಳಲ್ಲಿ ಕಸ ಸುರಿಯುವುದರಿಂದ ಕಸದ ಬ್ಲ್ಯಾಕ್&zwnj;ಸ್ಪಾಟ್&zwnj;ಗಳು ನಿರ್ಮಾಣವಾಗುತ್ತಿವೆ. ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಗರದ ಕುಂಬಳಗೋಡು ನಿವಾಸಿಗಳು ಇದೀಗ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಕುಂಬಳಗೋಡು ಪ್ರದೇಶದ ನಿವಾಸಿಗಳು ಸ್ವಚ್ಛತಾ ವಿಚಾರದಲ್ಲಿ ಸ್ಥಳೀಯ NGOವೊಂದರೊಂದಿಗೆ ಕೈಜೋಡಿಸಿದ್ದು, ತಮ್ಮ ಪ್ರದೇಶವನ್ನು ಕಸ ಮುಕ್ತವಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ.&lt;/p&gt;&lt;h2&gt;ಕಸ ಎಸೆಯುವ ಜಾಗವೇ ಈಗ ಬದಲಾಗಲಿದೆ!&lt;/h2&gt;&lt;p&gt;ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯುವುದು ಈ ಪ್ರಯತ್ನದ ಪ್ರಮುಖ ಉದ್ದೇಶವಾಗಿದೆ. ನಿವಾಸಿಗಳು ಕಸವನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ನಿಗದಿತ ಸ್ಥಳಕ್ಕೆ ತಲುಪಿಸುವ ಮೂಲಕ ತಮ್ಮ ಪ್ರದೇಶವನ್ನು ಸ್ವಚ್ಛವಾಗಿಡಲು ಮುಂದಾಗಿದ್ದಾರೆ. ಇದಕ್ಕಾಗಿ &lsquo;ಕಸ ಕಿಯೋಸ್ಕ್&zwnj;&rsquo; (Kasa Kiosk) ಮಾದರಿಯ ವ್ಯವಸ್ಥೆ ಮಹತ್ವ ಪಡೆದುಕೊಂಡಿದೆ. ಇಂತಹ ಕಿಯೋಸ್ಕ್&zwnj;ಗಳಲ್ಲಿ ನಿವಾಸಿಗಳು ತಮ್ಮ ಕಸವನ್ನು ತಂದು ಹಾಕಬಹುದು. ಕಸವನ್ನು ಮೂಲದಲ್ಲೇ ವಿಂಗಡಿಸಿ ಸಂಗ್ರಹಿಸುವುದರಿಂದ ರಸ್ತೆ ಬದಿಯಲ್ಲಿ ಕಸದ ರಾಶಿ ಸೇರುವುದನ್ನು ತಡೆಯುವ ಉದ್ದೇಶವಿದೆ.&lt;/p&gt;&lt;h2&gt;ನಿವಾಸಿಗಳೇ ಮುಂದೆ ಬಂದರೆ ಬದಲಾವಣೆ ಸಾಧ್ಯ&lt;/h2&gt;&lt;p&gt;ಕಸ ನಿರ್ವಹಣೆ ಎನ್ನುವುದು ಕೇವಲ ಸ್ಥಳೀಯ ಆಡಳಿತದ ಜವಾಬ್ದಾರಿ ಮಾತ್ರವಲ್ಲ. ಸಾರ್ವಜನಿಕರ ಸಹಕಾರವೂ ಅತ್ಯಂತ ಮುಖ್ಯ. ಇದೇ ನಿಟ್ಟಿನಲ್ಲಿ ಕುಂಬಳಗೋಡು ನಿವಾಸಿಗಳು ಸ್ವತಃ ಮುಂದೆ ಬಂದು NGO ಜೊತೆ ಸೇರಿಕೊಂಡಿರುವುದು ಗಮನ ಸೆಳೆದಿದೆ. ಪ್ರದೇಶದ ನಿವಾಸಿಗಳು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಸೂಕ್ತ ರೀತಿಯಲ್ಲಿ ವಿಂಗಡಿಸಿ ನಿಗದಿತ ವ್ಯವಸ್ಥೆಗೆ ನೀಡುವಂತೆ ಜಾಗೃತಿ ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ.&lt;/p&gt;&lt;h2&gt;ಬೆಂಗಳೂರಿನ &lsquo;ಕಸ ಕಿಯೋಸ್ಕ್&zwnj;&rsquo; ಪರಿಕಲ್ಪನೆ ಏನು?&lt;/h2&gt;&lt;p&gt;ಬೆಂಗಳೂರಿನಲ್ಲಿ ಕಸ ಕಿಯೋಸ್ಕ್&zwnj;ಗಳ ಪರಿಕಲ್ಪನೆಯನ್ನು ಕಸದ ಬ್ಲ್ಯಾಕ್&zwnj;ಸ್ಪಾಟ್&zwnj;ಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಬಳಸಲಾಗುತ್ತಿದೆ. ನಿವಾಸಿಗಳು ಮನೆ ಬಾಗಿಲಿಗೆ ಬರುವ ಕಸ ಸಂಗ್ರಹ ವಾಹನವನ್ನು ತಪ್ಪಿಸಿಕೊಂಡ ಸಂದರ್ಭದಲ್ಲೂ, ನಿಗದಿತ ಕಿಯೋಸ್ಕ್&zwnj;ಗೆ ಕಸ ತಲುಪಿಸಲು ಇದು ಪರ್ಯಾಯ ವ್ಯವಸ್ಥೆಯಾಗಿ ಕೆಲಸ ಮಾಡಬಹುದು. ಕೆಲವು ಕಿಯೋಸ್ಕ್&zwnj;ಗಳಲ್ಲಿ ಹಸಿ ಮತ್ತು ಒಣ ಕಸ ಸೇರಿದಂತೆ ವಿವಿಧ ರೀತಿಯ ಕಸವನ್ನು ಪ್ರತ್ಯೇಕವಾಗಿ ಸ್ವೀಕರಿಸುವ ವ್ಯವಸ್ಥೆಯೂ ಇದೆ.&lt;/p&gt;&lt;h2&gt;ಒಂದು ಪ್ರದೇಶದ ಪ್ರಯತ್ನ, ಇತರರಿಗೂ ಮಾದರಿ&lt;/h2&gt;&lt;p&gt;ಕುಂಬಳಗೋಡು ನಿವಾಸಿಗಳ ಈ ಪ್ರಯತ್ನದ ವಿಶೇಷತೆ ಎಂದರೆ ಸ್ವಚ್ಛತೆಯ ಹೊಣೆಗಾರಿಕೆಯನ್ನು ಸಮುದಾಯವೇ ಕೈಗೆತ್ತಿಕೊಂಡಿರುವುದು. NGO ಸಹಕಾರದೊಂದಿಗೆ ನಿವಾಸಿಗಳು ನಿರಂತರವಾಗಿ ಈ ವ್ಯವಸ್ಥೆಯನ್ನು ಬಳಸಿಕೊಂಡರೆ, ಕಸದ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ಸ್ವಚ್ಛತಾ ಜಾಗೃತಿಯೂ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಸದ ಬ್ಲ್ಯಾಕ್&zwnj;ಸ್ಪಾಟ್&zwnj;ಗಳು ಇನ್ನೂ ಸವಾಲಾಗಿರುವ ಸಂದರ್ಭದಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ಸಂಘಟನೆಗಳು ಒಟ್ಟಾಗಿ ಕೆಲಸ ಮಾಡುವ ಇಂತಹ ಮಾದರಿ ಮತ್ತಷ್ಟು ಪ್ರದೇಶಗಳಿಗೂ ವಿಸ್ತರಿಸಿದರೆ ನಗರದ ಸ್ವಚ್ಛತಾ ವ್ಯವಸ್ಥೆಗೆ ಸಹಾಯವಾಗಬಹುದು.&lt;/p&gt;&lt;p&gt;ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ವಿಂಗಡಿಸಿ ಸೂಕ್ತ ಸ್ಥಳಕ್ಕೆ ತಲುಪಿಸುವುದು &mdash; ಸ್ವಚ್ಛ ಬೆಂಗಳೂರಿನತ್ತ ಪ್ರತಿಯೊಬ್ಬ ನಾಗರಿಕನ ಸಣ್ಣ ಹೆಜ್ಜೆಯೇ ದೊಡ್ಡ ಬದಲಾವಣೆಗೆ ಕಾರಣವಾಗಬಹುದು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/karnataka-districts/bengaluru-kumbalgodu-goes-garbage-free-residents-join-hands-with-ngo-to-set-u-kasa-kiosk-suh/articleshow-9ii5oai"/>
        </item>
        <item>
            <title><![CDATA[ವೈದ್ಯರಿಗೇ ಶಾಕ್! ಮಗು ಆಗುತ್ತಿಲ್ಲವೆಂದು ಆಸ್ಪತ್ರೆಗೆ ಹೋದ ಗಂಡಸಿನ ದೇಹದಲ್ಲಿ ಪತ್ತೆಯಾಯ್ತು ಗರ್ಭಕೋಶ!]]></title>
            <link>https://kannada.asianetnews.com/life/26-year-old-man-infertility-rare-condition-uterus-found-in-body-suh/articleshow-004d7zn</link>
            <guid isPermaLink="true">https://kannada.asianetnews.com/life/26-year-old-man-infertility-rare-condition-uterus-found-in-body-suh/articleshow-004d7zn</guid>
            <pubDate>Fri, 11 Sep 2026 13:02:42 +0530</pubDate>
            <description><![CDATA[ಸಂತಾನವಾಗದ ಸಮಸ್ಯೆಗೆ ಕಾರಣ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಿದ 26 ವರ್ಷದ ವ್ಯಕ್ತಿಯೊಬ್ಬರಿಗೆ ವೈದ್ಯಕೀಯ ಪರೀಕ್ಷೆಯ ವೇಳೆ ಅಪರೂಪದ ಆರೋಗ್ಯ ಸ್ಥಿತಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27p2k8m9t6pe06m3ctcgwdp,imgname-26-year-old-man-infertility-rare-condition-uterus-found-in-body-1789111913748.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂತಾನವಾಗದ ಸಮಸ್ಯೆಗೆ ಕಾರಣ ತಿಳಿದುಕೊಳ್ಳಲು ವೈದ್ಯರನ್ನು ಸಂಪರ್ಕಿಸಿದ 26 ವರ್ಷದ ವ್ಯಕ್ತಿಯೊಬ್ಬರಿಗೆ ವೈದ್ಯಕೀಯ ಪರೀಕ್ಷೆಯ ವೇಳೆ ಅಪರೂಪದ ಆರೋಗ್ಯ ಸ್ಥಿತಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಪರೀಕ್ಷೆ ನಡೆಸಿದ ವೈದ್ಯರಿಗೆ ಅವರ ದೇಹದೊಳಗೆ ಗರ್ಭಕೋಶ ಮತ್ತು ಅದಕ್ಕೆ ಸಂಬಂಧಿಸಿದ ಅಂಗಗಳಂತಿರುವ ರಚನೆಗಳು ಇರುವುದು ಕಂಡುಬಂದಿದೆ. ವ್ಯಕ್ತಿಗೆ ಮದುವೆಯಾಗಿದ್ದರೂ ಸಂತಾನವಾಗಿರಲಿಲ್ಲ. ಇದೇ ಕಾರಣಕ್ಕೆ ವೈದ್ಯರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಪರೀಕ್ಷೆಗಳು ನಡೆದಿದ್ದು, ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಸಂತಾನಹೀನತೆ ಪರೀಕ್ಷೆಯಿಂದ ಹೊರಬಂತು ಅಚ್ಚರಿಯ ಸಂಗತಿ&lt;/h2&gt;&lt;p&gt;ವರದಿಗಳ ಪ್ರಕಾರ, ವ್ಯಕ್ತಿಯ ವೀರ್ಯದಲ್ಲಿ ಸಂತಾನಕ್ಕೆ ಅಗತ್ಯವಾದ ವೀರ್ಯಾಣುಗಳು ಇರಲಿಲ್ಲ. ಹೀಗಾಗಿ ಮಕ್ಕಳಾಗದಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ. ಈ ವೇಳೆ ದೇಹದೊಳಗೆ ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರದ ಕೆಲವು ಅಂಗಗಳ ರಚನೆ ಇರುವುದು ವೈದ್ಯರ ಗಮನಕ್ಕೆ ಬಂದಿದೆ. ಮುಂದಿನ ಪರೀಕ್ಷೆಗಳಲ್ಲಿ ಗರ್ಭಕೋಶ ಮತ್ತು ಅದಕ್ಕೆ ಸಂಪರ್ಕ ಹೊಂದಿರುವ ಕೊಳವೆಗಳಂತಿರುವ ಅಂಗಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.&lt;/p&gt;&lt;h2&gt;ಏನಿದು Persistent M&uuml;llerian Duct Syndrome?&lt;/h2&gt;&lt;p&gt;ವೈದ್ಯಕೀಯವಾಗಿ ಇದನ್ನು Persistent M&uuml;llerian Duct Syndrome (PMDS) ಎಂದು ಕರೆಯಲಾಗುತ್ತದೆ. ಸರಳವಾಗಿ ಹೇಳುವುದಾದರೆ, ಪುರುಷ ದೇಹದಲ್ಲಿ ಸಾಮಾನ್ಯವಾಗಿ ಬೆಳೆಯದ ಕೆಲವು ಸ್ತ್ರೀ ಸಂತಾನೋತ್ಪತ್ತಿ ಅಂಗಗಳ ರಚನೆ ಉಳಿದುಕೊಳ್ಳುವ ಅಪರೂಪದ ಜನ್ಮಜಾತ ಸ್ಥಿತಿ ಇದು. ಅಂದರೆ, ಮಗು ಗರ್ಭದಲ್ಲಿರುವಾಗ ದೇಹದ ಅಂಗಗಳು ಬೆಳೆಯುವ ಸಂದರ್ಭದಲ್ಲಿ ಆಗುವ ಅಪರೂಪದ ಬದಲಾವಣೆಯಿಂದ ಈ ರೀತಿಯ ಸ್ಥಿತಿ ಉಂಟಾಗಬಹುದು.&lt;/p&gt;&lt;h2&gt;ಇಷ್ಟು ವರ್ಷಗಳವರೆಗೆ ಹೇಗೆ ಪತ್ತೆಯಾಗಲಿಲ್ಲ?&lt;/h2&gt;&lt;p&gt;ಈ ಪ್ರಕರಣದ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ವ್ಯಕ್ತಿಗೆ ಈ ಸ್ಥಿತಿ ಇಷ್ಟು ವರ್ಷಗಳವರೆಗೆ ತಿಳಿದಿರಲಿಲ್ಲ ಎನ್ನುವುದು. ಯಾವುದೇ ವಿಶೇಷ ಲಕ್ಷಣಗಳಿಲ್ಲದೆ ವ್ಯಕ್ತಿ ಸಾಮಾನ್ಯ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಸಂತಾನಹೀನತೆ ಸಮಸ್ಯೆ ಎದುರಾದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಮಾತ್ರ ದೇಹದೊಳಗಿನ ಈ ಅಪರೂಪದ ಬೆಳವಣಿಗೆ ಪತ್ತೆಯಾಗಿದೆ.&lt;/p&gt;&lt;h2&gt;ಅಪರೂಪದ ಪ್ರಕರಣದ ಬಗ್ಗೆ ವೈದ್ಯರ ಗಮನ&lt;/h2&gt;&lt;p&gt;ಈ ರೀತಿಯ ಪ್ರಕರಣಗಳು ವೈದ್ಯಕೀಯ ಕ್ಷೇತ್ರದಲ್ಲೂ ಸಾಕಷ್ಟು ಕುತೂಹಲ ಮೂಡಿಸುತ್ತವೆ. ಸಾಮಾನ್ಯವಾಗಿ ಬಾಲ್ಯದಲ್ಲೇ ಕೆಲವು ಲಕ್ಷಣಗಳ ಮೂಲಕ ಇಂತಹ ಸ್ಥಿತಿಗಳು ಪತ್ತೆಯಾಗುವ ಸಾಧ್ಯತೆ ಇದ್ದರೂ, ಕೆಲವರಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಪ್ರೌಢಾವಸ್ಥೆಯವರೆಗೂ ಪತ್ತೆಯಾಗದೇ ಇರಬಹುದು. ಈ ಪ್ರಕರಣವೂ ಸಂತಾನಹೀನತೆಗಾಗಿ ನಡೆಸಿದ ತಪಾಸಣೆಯ ಮೂಲಕ ಬೆಳಕಿಗೆ ಬಂದಿರುವ ಅಪರೂಪದ ವೈದ್ಯಕೀಯ ಉದಾಹರಣೆಯಾಗಿದೆ.&lt;/p&gt;&lt;p&gt;ಸೂಚನೆ: ಮೇಲಿನ ಮಾಹಿತಿಯು ಲಭ್ಯವಿರುವ ಮಾಧ್ಯಮ ವರದಿಗಳ ಆಧಾರಿತವಾಗಿದೆ. ಇಂತಹ ಆರೋಗ್ಯ ಸಮಸ್ಯೆಗಳ ಬಗ್ಗೆ ವೈಯಕ್ತಿಕವಾಗಿ ನಿರ್ಧಾರ ಕೈಗೊಳ್ಳುವ ಬದಲು ಅರ್ಹ ವೈದ್ಯರ ಸಲಹೆ ಪಡೆಯುವುದು ಅಗತ್ಯ.&lt;/p&gt;]]></content:encoded>
            <category><![CDATA[life]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/life/26-year-old-man-infertility-rare-condition-uterus-found-in-body-suh/articleshow-004d7zn"/>
        </item>
        <item>
            <title><![CDATA[ಪುರುಷನ ದೇಹದಲ್ಲಿ ಗರ್ಭಾಶಯ ಪತ್ತೆ! ವೈದ್ಯಕೀಯ ಲೋಕವನ್ನೇ ಅಚ್ಚರಿಗೊಳಿಸಿದ ಅಪರೂಪದ PMDS ಸ್ಥಿತಿ]]></title>
            <link>https://kannada.asianetnews.com/health-life/man-discovers-uterus-like-structures-inside-his-body-during-infertility-test/articleshow-gz3c8dg</link>
            <guid isPermaLink="true">https://kannada.asianetnews.com/health-life/man-discovers-uterus-like-structures-inside-his-body-during-infertility-test/articleshow-gz3c8dg</guid>
            <pubDate>Fri, 11 Sep 2026 13:01:10 +0530</pubDate>
            <description><![CDATA[ಶರೀರದಲ್ಲಿ ಅಂಗಗಳು ಅಂದರೆ ಗಂಡುಮಕ್ಕಳಲ್ಲಿ ಪುರುಷ ಅಂಗಗಳು ಮತ್ತು ಹೆಣ್ಣುಮಕ್ಕಳಲ್ಲಿ ಸ್ತ್ರೀ ಅಂಗಗಳು ನಿರ್ದಿಷ್ಟ ಪ್ರಕ್ರಿಯೆಯೊಂದಿದೆ ರೂಪುಗೊಳ್ಳುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಉಂಟಾಗುವ ವ್ಯತ್ಯಯವು 'ಪಿಎಂಡಿಎಸ್' (PMDS) ಸಿಂಡ್ರೋಮ್ ಎಂಬ ಅಪರೂಪದ ಆನುವಂಶಿಕ ಸ್ಥಿತಿಗೆ ಕಾರಣವಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k10d4dzs1fpmn6f1qk4q6b18,imgname-mri-scan-precautions--6--1753434175481.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪುರುಷನ ದೇಹದಲ್ಲಿ ಗರ್ಭಾಶಯದಂತಹ ರಚನೆ ಪತ್ತೆ! ಅಪರೂಪದ PMDS ಸ್ಥಿತಿ&lt;/strong&gt;&lt;/h2&gt;&lt;p&gt;26 ವರ್ಷದ ರಾಜೇಶ್&zwnj; (ಹೆಸರು ಬದಲಿಸಲಾಗಿದೆ) ಅವರಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಅವರು ಬಂಜೆತನದ ಪರೀಕ್ಷೆ ಮಾಡಿಸಿಕೊಂಡರು ದೆಹಲಿಯ ಆರ್ ಜಿ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಎಂಆರ್&zwnj;ಐ ಮತ್ತು ಆನುವಂಶಿಕ ಪರೀಕ್ಷೆಯ ವರದಿ ವೈದ್ಯರನ್ನೇ ಅಚ್ಚರಿಗೊಳಿಸಿತು. ತನ್ನ ದೇಹದೊಳಗೆ ಈ ರೀತಿಯಾದ ಒಂದು ವಿಷಯ ಇದೆ ಅನ್ನೋದನ್ನು ರಾಜೇಶ್ ಕನಸಿನಲ್ಲೂ ಸಹ ಯೋಚನೆ ಮಾಡಿರಲಿಲ್ಲ. ಎಂಆರ್&zwnj;ಐ ಮತ್ತು ಜೆನೆಟಿಕ್ ಟೆಸ್ಟ್ ನಲ್ಲಿ ರಾಜೇಶ್ ಅವರ ದೇಹದೊಳಗೆ ಗರ್ಭಾಶಯ ಮತ್ತು ಫ್ಯಾಲೋಪಿಯನ್ ಟ್ಯೂಬ್&zwnj;ಗಳಂತಹ ಮಹಿಳೆಯರ ದೇಹದ ಒಳಗಿನ ರಚನೆಗಳು ಪತ್ತೆಯಾಗಿದ್ದವು. ಆದರೆ ರಾಜೇಶ್ ಅವರ ಕ್ರೋಮೋಸೋಮ್&zwnj;ಗಳು 46,XY ಆಗಿದ್ದು, ಅವರು ಅನುವಂಶಿಕವಾಗಿ ಪುರುಷರಾಗಿದ್ದಾರೆ. ವೈದ್ಯಕೀಯವಾಗಿ ಇದನ್ನು Persistent M&uuml;llerian Duct Syndrome (PMDS) ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪದ ಜನ್ಮಜಾತ ಸ್ಥಿತಿಯಾಗಿದ್ದು, ಜಗತ್ತಿನಾದ್ಯಂತ ಸುಮಾರು 300 ಪ್ರಕರಣಗಳು ಮಾತ್ರ ವರದಿಯಾಗಿವೆ.&lt;/p&gt;&lt;h3&gt;&lt;strong&gt;PMDS ಎಂದರೇನು?&lt;/strong&gt;&lt;/h3&gt;&lt;p&gt;ತಾಯಿಯ ಗರ್ಭದಲ್ಲಿರುವಾಗ ಮಗುವಿನ ದೇಹದಲ್ಲಿ ಆರಂಭದಲ್ಲಿ ಎರಡು ರೀತಿಯ ನಾಳಗಳು ಇರುತ್ತವೆ. ಹೆಣ್ಣುಮಕ್ಕಳಲ್ಲಿ M&uuml;llerian ducts ಮುಂದಕ್ಕೆ ಗರ್ಭಾಶಯ ಮತ್ತು ಫ್ಯಾಲೋಪಿಯನ್ ಟ್ಯೂಬ್&zwnj;ಗಳನ್ನು ರೂಪಿಸುತ್ತವೆ. ಗಂಡುಮಕ್ಕಳಲ್ಲಿ Wolffian duct ಪುರುಷರ ಪ್ರಜನನ ಅಂಗ ಬೆಳೆಯಲು ಸಹಾಯ ಮಾಡುತ್ತದೆ. ಆದರೆ AMH ಎಂಬ ಹಾರ್ಮೋನ್ ಈ ನಾಳಗಳು ಬೆಳೆಯದಂತೆ ತಡೆಯುತ್ತದೆ. ಆದರೆ PMDS ಇರುವ ಕೆಲವು ಪುರುಷರಲ್ಲಿ AMH ಹಾರ್ಮೋನ್ ಅಥವಾ ಅದರ ಕಾರ್ಯವಿಧಾನ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಗರ್ಭಾಶಯ ಮತ್ತು ಟ್ಯೂಬ್&zwnj;ಗಳಂತಹ ರಚನೆಗಳು ದೇಹದೊಳಗೆ ಉಳಿದುಕೊಳ್ಳಬಹುದು. ಹೊರಗಿನಿಂದ ವ್ಯಕ್ತಿ ಸಾಮಾನ್ಯ ಪುರುಷನಂತೆಯೇ ಕಾಣಬಹುದು.&lt;/p&gt;&lt;p&gt;&lt;strong&gt;ಬಂಜೆತನದಿಂದ ಪತ್ತೆಯಾಗಬಹುದು&lt;/strong&gt;&lt;/p&gt;&lt;p&gt;ಈ ಸ್ಥಿತಿ ಕೆಲವೊಮ್ಮೆ ಬಾಲ್ಯದಲ್ಲೇ ಪತ್ತೆಯಾಗುತ್ತದೆ. ವಿಶೇಷವಾಗಿ ಅಂಡಕೋಶಗಳು ಕೆಳಗೆ ಇಳಿಯದಿರುವುದು ಪ್ರಮುಖ ಸೂಚನೆಯಾಗಿರಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಯಾವುದೇ ಹೊರಗಿನ ಲಕ್ಷಣಗಳಿಲ್ಲದ ಕಾರಣ ವಯಸ್ಕರಾದ ನಂತರ ಬಂಜೆತನದ ಪರೀಕ್ಷೆ ವೇಳೆ ಪತ್ತೆಯಾಗುತ್ತದೆ. PMDS ತಕ್ಷಣ ಜೀವಕ್ಕೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲ. ಆದರೆ ಹೊಟ್ಟೆಯೊಳಗೆ ದೀರ್ಘಕಾಲ ಉಳಿದ ಅಂಡಕೋಶಗಳಿಂದ ಕ್ಯಾನ್ಸರ್ ಅಪಾಯ ಮತ್ತು ಬಂಜೆತನದ ಸಮಸ್ಯೆ ಹೆಚ್ಚಾಗಬಹುದು. ಅಗತ್ಯವಿದ್ದರೆ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅಸಹಜ ರಚನೆಗಳು ಮತ್ತು ಅಂಡಕೋಶಗಳನ್ನು ತೆಗೆದುಹಾಕುತ್ತಾರೆ.&lt;/p&gt;&lt;p&gt;ಇದು ಜನ್ಮಜಾತ ಸ್ಥಿತಿಯಾಗಿದ್ದು, ಇದಕ್ಕೆ ಮಗುವಾಗಲಿ ಅಥವಾ ಪೋಷಕರದ್ದಾಗಲಿ ಯಾವುದೇ ತಪ್ಪಿಲ್ಲ. ಮಕ್ಕಳಲ್ಲಿ ಅಂಡಕೋಶಗಳು ಕೆಳಗೆ ಇಳಿಯದಿದ್ದರೆ ತಡ ಮಾಡದೆ ಯೂರೋಲಾಜಿಸ್ಟ್ ತಜ್ಞರನ್ನು ಸಂಪರ್ಕಿಸುವುದು ಮುಖ್ಯ.&lt;/p&gt;]]></content:encoded>
            <category><![CDATA[health-life]]></category>
            <dc:creator>Pavna Das</dc:creator>
            <atom:link href="https://kannada.asianetnews.com/health-life/man-discovers-uterus-like-structures-inside-his-body-during-infertility-test/articleshow-gz3c8dg"/>
        </item>
        <item>
            <title><![CDATA[ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಕೋರಿದ ಪಾತಕಿ ಅಬು ಸಲೇಂ, ಹಾಗೆಲ್ಲ ಆಗಲ್ಲ 2030ರ ವರೆಗೆ ಜೈಲಲ್ಲೇ ಇರಪ್ಪ ಎಂದ ಸುಪ್ರೀಂ]]></title>
            <link>https://kannada.asianetnews.com/india-news/gangster-abu-salem-s-early-release-request-dismissed-by-supreme-court-gdp/articleshow-38doanm</link>
            <guid isPermaLink="true">https://kannada.asianetnews.com/india-news/gangster-abu-salem-s-early-release-request-dismissed-by-supreme-court-gdp/articleshow-38doanm</guid>
            <pubDate>Fri, 11 Sep 2026 12:52:34 +0530</pubDate>
            <description><![CDATA[1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪೋರ್ಚುಗಲ್ ಜೊತೆಗಿನ ಹಸ್ತಾಂತರ ಒಪ್ಪಂದದ ಪ್ರಕಾರ, 25 ವರ್ಷಗಳ ಶಿಕ್ಷೆಯು ನವೆಂಬರ್ 2030ಕ್ಕೆ ಪೂರ್ಣಗೊಳ್ಳಲಿದ್ದು, ಅದಕ್ಕೂ ಮುನ್ನ ಬಿಡುಗಡೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kex7p26tt638jzpw8fw59pvq,imgname-abu-salem-parole-bombay-high-court-1993-blast-case-update-01-1768360184026.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ: &lt;/strong&gt;1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ, ಭೂಗತ ಪಾತಕಿ ಅಬು ಸಲೇಂ ತನಗೆ ವಿಧಿಸಲಾದ ಶಿಕ್ಷೆಯ ಅವಧಿ ಪೂರ್ಣಗೊಂಡಿದೆ ಎಂದು ಪ್ರತಿಪಾದಿಸಿ ಸಲ್ಲಿಸಿದ್ದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.&lt;/p&gt;&lt;p&gt;ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಪೀಠವು ಈ ವಿಚಾರಣೆ ನಡೆಸಿದ್ದು, ಬಾಂಬೆ ಹೈಕೋರ್ಟ್ ಏಪ್ರಿಲ್ 15, 2026ರಂದು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಸಲೇಂ ಸಲ್ಲಿಸಿರುವ ಈ ಅರ್ಜಿಯು ಅಕಾಲಿಕ ಹಾಗೂ ಅತಾರ್ಕಿಕ (ತಪ್ಪು ಕಲ್ಪನೆಯಿಂದ ಕೂಡಿದ್ದು) ಎಂದು ಅಭಿಪ್ರಾಯಪಟ್ಟಿರುವ ಪೀಠವು, ಹೈಕೋರ್ಟ್ ಆದೇಶದಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ ಮತ್ತು ಹಸ್ತಾಂತರ ಒಪ್ಪಂದ&lt;/h2&gt;&lt;p&gt;ದೀರ್ಘಕಾಲದ ಕಾನೂನು ಹೋರಾಟದ ನಂತರ ನವೆಂಬರ್ 11, 2005ರಂದು ಅಬು ಸಲೇಂನನ್ನು ಪೋರ್ಚುಗಲ್&zwnj;ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು. ಭಾರತ ಮತ್ತು ಪೋರ್ಚುಗಲ್ ಸರ್ಕಾರಗಳ ನಡುವೆ ನಡೆದ ಹಸ್ತಾಂತರ ಒಪ್ಪಂದದ ನಿಯಮಗಳ ಪ್ರಕಾರ, ಸಲೇಂಗೆ ಮರಣದಂಡನೆ ವಿಧಿಸುವಂತಿಲ್ಲ ಮತ್ತು ಆತನ ಒಟ್ಟು ಜೈಲು ಶಿಕ್ಷೆಯ ಅವಧಿಯು 25 ವರ್ಷಗಳನ್ನು ಮೀರುವಂತಿಲ್ಲ ಎಂಬ ಕಟ್ಟುನಿಟ್ಟಿನ ಷರತ್ತಿತ್ತು.&lt;/p&gt;&lt;p&gt;ಇದರ ಆಧಾರದ ಮೇಲೆ, ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ ತಡೆ (ಟಾಡಾ) ವಿಶೇಷ ನ್ಯಾಯಾಲಯವು ಡಿಸೆಂಬರ್ 2024ರಲ್ಲಿ ಬಿಡುಗಡೆ ಮನವಿಯನ್ನು ತಿರಸ್ಕರಿಸಿದಾಗ ಸಲೇಂ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.&lt;/p&gt;&lt;h2&gt;ಸಲೇಂ ವಾದ ಮತ್ತು ಸುಪ್ರೀಂ ಕೋರ್ಟ್ ನಿಲುವು:&lt;/h2&gt;&lt;p&gt;ಸಲೇಂ ಪರ ವಾದಮಂಡಿಸಿದ ಹಿರಿಯ ವಕೀಲ ರಿಷಿ ಮಲ್ಹೋತ್ರಾ, &quot;ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಳೆದ ಸಮಯ ಹಾಗೂ ಜೈಲಿನ ಸನ್ನಡತೆಯ ಆಧಾರದಲ್ಲಿ ದೊರೆತಿರುವ ವಿನಾಯಿತಿ ದಿನಗಳನ್ನು ಒಟ್ಟಾರೆಯಾಗಿ ಸೇರಿಸಿದರೆ 25 ವರ್ಷಗಳ ಶಿಕ್ಷೆಯ ಅವಧಿ ಪೂರ್ಣಗೊಂಡಂತಾಗುತ್ತದೆ&quot; ಎಂದು ವಾದಿಸಿದ್ದರು. ತಮ್ಮ ವಾದಕ್ಕೆ ಬೆಂಬಲವಾಗಿ 'ಸ್ವಾಮಿ ಶ್ರದ್ದಾನಂದ ವಿರುದ್ಧ ಕರ್ನಾಟಕ ಸರ್ಕಾರ' (Swamy Shraddhananda v. State of Karnataka, 2008) ಪ್ರಕರಣದ ತೀರ್ಪನ್ನು ಕೋರ್ಟ್ ಮುನ್ನೆಲೆಗೆ ತಂದಿದ್ದರು.&lt;/p&gt;&lt;p&gt;ಆದರೆ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್, ಹಸ್ತಾಂತರ ಒಪ್ಪಂದದ ಪ್ರಕಾರ 25 ವರ್ಷಗಳ ಶಿಕ್ಷೆಯ ಅವಧಿಯು ಆತನ ಬಂಧನದ ದಿನಾಂಕದಿಂದ ಲೆಕ್ಕಾಚಾರವಾಗಿ ನವೆಂಬರ್ 2030ಕ್ಕೆ ಮುಕ್ತಾಯಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿವೆ. ಸನ್ನಡತೆಯ ವಿನಾಯಿತಿಗಳನ್ನು ಬಳಸಿ ಈ ಅವಧಿಯನ್ನು ಮುಂಚಿತವಾಗಿಯೇ ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಖಡಕ್ ಆಗಿ ತಿಳಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/gangster-abu-salem-s-early-release-request-dismissed-by-supreme-court-gdp/articleshow-38doanm"/>
        </item>
        <item>
            <title><![CDATA[Amruthadhaare: ಜೈದೇವನ ಹುಡುಕಲು ಯುವತಿಯ ಎಂಟ್ರಿ! ಸತ್ಯ ಹೇಳೇಬಿಟ್ಟಳು ಮಿಂಚು- ಭೂಮಿಕಾ ಕಥೆ ಫಿನಿಷ್​]]></title>
            <link>https://kannada.asianetnews.com/gallery/tv-talk/amruthadhaare-young-lady-entry-to-find-jaideva-minchu-told-the-truth-suc-53xh995</link>
            <guid isPermaLink="true">https://kannada.asianetnews.com/gallery/tv-talk/amruthadhaare-young-lady-entry-to-find-jaideva-minchu-told-the-truth-suc-53xh995</guid>
            <pubDate>Fri, 11 Sep 2026 12:48:40 +0530</pubDate>
            <description><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚುವನ್ನು ರಕ್ಷಿಸಲು ಹೋದ ಜೀವ, ಜೈದೇವನನ್ನು ಕೊಲೆ ಮಾಡಿದ್ದಾನೆ. ಈ ಸತ್ಯವನ್ನು ಮಿಂಚು ಶಕುಂತಲಾ ಬಳಿ ಬಾಯಿಬಿಟ್ಟಿದ್ದು, ಆಕೆ ಪರೋಕ್ಷವಾಗಿ ದೂರು ದಾಖಲಿಸಿದ್ದಾಳೆ. ಈ ದೂರಿನ ಅನ್ವಯ ಪೊಲೀಸರು ಜೀವನನ್ನು ವಿಚಾರಣೆಗೆ ಕರೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27n5tvr27xcevjqgy3s8ktq,imgname-amruthadhaar-serial-00-1789110971256.jpg" type="image/jpeg" height="390" width="690"/>
            <content:encoded><![CDATA[ಅಮೃತಧಾರೆ ಧಾರಾವಾಹಿಯಲ್ಲಿ, ಮಿಂಚುವನ್ನು ರಕ್ಷಿಸಲು ಹೋದ ಜೀವ, ಜೈದೇವನನ್ನು ಕೊಲೆ ಮಾಡಿದ್ದಾನೆ. ಈ ಸತ್ಯವನ್ನು ಮಿಂಚು ಶಕುಂತಲಾ ಬಳಿ ಬಾಯಿಬಿಟ್ಟಿದ್ದು, ಆಕೆ ಪರೋಕ್ಷವಾಗಿ ದೂರು ದಾಖಲಿಸಿದ್ದಾಳೆ. ಈ ದೂರಿನ ಅನ್ವಯ ಪೊಲೀಸರು ಜೀವನನ್ನು ವಿಚಾರಣೆಗೆ ಕರೆದಿದ್ದಾರೆ.&lt;img&gt;&lt;p&gt;ಅಮೃತಧಾರೆಯಲ್ಲಿ (Amruthadhaare Serial)ನಲ್ಲಿ ಜೈದೇವನ ಕೊಲೆಯಾಗಿದೆ. ಮಿಂಚುವನ್ನು ಕಿಡ್​ನ್ಯಾಪ್​ ಮಾಡಿದಾಗ, ಆಕೆಯನ್ನು ಬಚಾವ್​ ಮಾಡಲು ಹೋಗುವ ಭರದಲ್ಲಿ ಜೀವ ಜೈದೇವನನ್ನು ಸಾಯಿಸಿದಂತೆ ತೋರಿಸಲಾಗಿದೆ. ಆತನನ್ನು ಮಣ್ಣುಕೂಡ ಮಾಡಲಾಗಿದೆ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಹೆದರಿಕೊಂಡಿರುವ ಮಿಂಚು ಈ ಬಗ್ಗೆ ಭೂಮಿಕಾಳ ಬಳಿ ಹೇಳುತ್ತಿರುವಾಗಲೇ ಶಕುಂತಲಾ ಎಂಟ್ರಿಯಾಗಿದೆ. ಇದರಿಂದ ಅಲ್ಲಿಯೇ ಮಾತನ್ನು ಮುಗಿಸಿದ್ದಾಳೆ ಭೂಮಿಕಾ. ಇದನ್ನು ಶಕುಂತಲಾ ಗಮನಿಸಿದ್ದಾಳೆ. ಅವಳಿಗೆ ಡೌಟ್​ ಬಂದಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಮಿಂಚುವಲ್ಲಿ ನಿಧಾನವಾಗಿ ವಿಷ್ಯ ಕೇಳಿದ್ದಾಳೆ. ಜೈ ಅಂಕಲ್​ ನಿನಗೇನಾದ್ರೂ ತೊಂದರೆ ಮಾಡಿದ್ನಾ ಎಂದು ಪ್ರಶ್ನಿಸಿದಾಗ, ಏನೂ ಅರಿಯದ ಮಿಂಚು ಎಲ್ಲವನ್ನೂ ಹೇಳಿಬಿಟ್ಟಿದ್ದಾಳೆ. ಆತ ಕಿಡ್​ನ್ಯಾಪ್​ ಮಾಡಿದ್ದು, ತನ್ನನ್ನು ಬಿಡಿಸಲು ಜೀವ, ಭೂಮಿಕಾ ಬಂದಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ಇಷ್ಟಾಗುತ್ತಿದ್ದಂತೆಯೇ ಶಕುಂತಲಾ ಡೌಟ್​ ಕ್ಲಿಯರ್​ ಆಗಿದೆ. ಇದೀಗ ಜೈದೇವನ ಕಾಣೆಯಾಗಿದ್ದಾನೆ ಎನ್ನುವ ಕಂಪ್ಲೇಂಟ್​ ತಾನೇ ಕೊಟ್ಟರೆ ಮನೆಯವರಿಗೆ ತಾನು ಜೈದೇವನ ಪರ ಇರುವುದು ತಿಳಿಯುತ್ತದೆ ಎಂದುಕೊಂಡಿರುವ ಶಕುಂತಲಾ ಯುವತಿಯೊಬ್ಬಳ ಕೈಯಿಂದ ಕಂಪ್ಲೇಂಟ್​ ಕೊಡಿಸಿದ್ದಾಳೆ.&lt;/p&gt;&lt;img&gt;&lt;p&gt;ಆ ಕಂಪ್ಲೇಂಟ್​ ಆಧಾರದ ಮೇಲೆ ತನಿಖೆ ನಡೆಸಿರುವ ಪೊಲೀಸರಿಗೆ ಜೈದೇವ, ಜೀವನಿಗೆ ಕೊನೆಯ ಬಾರಿ ಕಾಲ್​ ಮಾಡಿರುವುದು ತಿಳಿದು, ಪೊಲೀಸ್​ ಸ್ಟೇಷನ್​ಗೆ ಕರೆಸಿದ್ದಾರೆ.&lt;/p&gt;&lt;img&gt;&lt;p&gt;ಇದೀಗ, ಆ ಯುವತಿಯಿಂದ ಸತ್ಯ ಬಯಲಾಗತ್ತಾ? ಭೂಮಿಕಾಳನ್ನು ಜೀವ ರಕ್ಷಿಸ್ತಾನಾ ಅಥ್ವಾ ಜೈದೇವ ಸತ್ತೇ ಇಲ್ವಾ? ಎಲ್ಲವೂ ಕುತೂಹಲವಾಗಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/amruthadhaare-young-lady-entry-to-find-jaideva-minchu-told-the-truth-suc-53xh995"/>
        </item>
        <item>
            <title><![CDATA[ಕರ್ತವ್ಯದೂರಿನಲ್ಲೇ ಅನಾಥ ಶವವಾದ ಸರ್ಕಾರಿ ಅಧಿಕಾರಿ! ಸಾಯುವ ಕೊನೆ ಗಳಿಗೆಯಲ್ಲೂ ಸಿಗಲಿಲ್ಲ ಕುಟುಂಬದ ಆಸರೆ!]]></title>
            <link>https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</link>
            <guid isPermaLink="true">https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri</guid>
            <pubDate>Fri, 11 Sep 2026 12:38:45 +0530</pubDate>
            <description><![CDATA[ಹಾಸನದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಿದ್ದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕುಟುಂಬ ಬೆಂಗಳೂರಿನಲ್ಲಿದ್ದ ಕಾರಣ ಒಬ್ಬರೇ ವಾಸಿಸುತ್ತಿದ್ದ ಅವರ ಸಾವು, ಕಚೇರಿ ಸಿಬ್ಬಂದಿ ಕರೆ ಮಾಡಿದಾಗ ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27mnfzax8ddnmabz9jdswyw,imgname-hassan-govt-officer-death-1789110435817.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹಾಸನ (ಸೆ.11): ಇ&lt;/strong&gt;ಡೀ ಕುಟುಂಬವು ಚೆನ್ನಾಗಿರಲೆಂದು ಬೆಂಗಳೂರಿನಲ್ಲಿ ಬಿಟ್ಟು ಸರ್ಕಾರಿ ಕೆಲಸದ ನಿಮಿತ್ತ ದೂರದ ಊರಿನಲ್ಲಿ ವಾಸವಾಗಿದ್ದ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ ಅವರು ತಾವು ವಾಸವಾಗಿದ್ದ ಮನೆಯಲ್ಲಿ ಅನಾಥವಾಗಿ ಶವವಾಗಿದ್ದಾರೆ. ಜೀವನ ಪೂರ್ತಿ ಕುಟುಂಬ ನೆಮ್ಮದಿಗಾಗಿ ದುಡಿಯುತ್ತಿದ್ದ ಸರ್ಕಾರಿ ಅಧಿಕಾರಿ ತಮ್ಮ ಸಾವಿನ ಕೊನೆಯ ಕ್ಷಣಗಳಲ್ಲಿ ಕುಟುಂಬದ ಒಬ್ಬರೇ ಒಬ್ಬ ಸದಸ್ಯರೂ ಆಸರೆಯೂ ಸಿಗಲಿಲ್ಲ.&lt;/p&gt;&lt;p&gt;ಈ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ್ (55) ಅವರು ತೀವ್ರ ಹೃದಯಾಘಾತದಿಂದ ಏಕಾಏಕಿ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಫೋನ್ ರಿಸೀವ್ ಮಾಡದಿದ್ದಾಗ ಬೆಳಕಿಗೆ ಬಂತು ದುರಂತ:&lt;/strong&gt;&lt;/h2&gt;&lt;p&gt;ಡಾ.ವೆಂಕಟೇಶ್ ಅವರು ಎಂದಿನಂತೆ ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿ ತಮ್ಮ ಬಾಡಿಗೆ ಮನೆಗೆ ತೆರಳಿದ್ದರು. ಇಂದು ಬೆಳಿಗ್ಗೆ ಕಚೇರಿಯ ಸಿಬ್ಬಂದಿ ಅಗತ್ಯ ಕೆಲಸದ ನಿಮಿತ್ತ ಹಲವು ಬಾರಿ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್ ಕರೆ ಸ್ವೀಕರಿಸದ ಕಾರಣ ಅನುಮಾನಗೊಂಡ ಸಿಬ್ಬಂದಿ ನೇರವಾಗಿ ಸಕಲೇಶಪುರದಲ್ಲಿರುವ ಅವರ ಮನೆಗೆ ತೆರಳಿ ನೋಡಿದ್ದಾರೆ. ಈ ವೇಳೆ ಡಾ.ವೆಂಕಟೇಶ್ ಅವರು ಮನೆಯಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಪರಿಶೀಲಿಸಿದಾಗ, ಅವರು ರಾತ್ರಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ.&lt;/p&gt;&lt;h2&gt;&lt;strong&gt;ಮೂಲತಃ ಚಿಕ್ಕಬಳ್ಳಾಪುರದವರು:&lt;/strong&gt;&lt;/h2&gt;&lt;p&gt;ಮೃತ ಡಾ.ವೆಂಕಟೇಶ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದೆ. ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಅತ್ಯಂತ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಸಕಲೇಶಪುರ ಪಟ್ಟಣದಲ್ಲಿ ಒಬ್ಬರೇ ವಾಸವಿದ್ದರು.&lt;/p&gt;&lt;h3&gt;ಕಂಬನಿ ಮಿಡಿದ ಸಿಬ್ಬಂದಿ, ರೈತರು:&lt;/h3&gt;&lt;p&gt;ಸರಳ ಸಜ್ಜನಿಕೆಯ ಅಧಿಕಾರಿಯಾಗಿದ್ದ ಡಾ.ವೆಂಕಟೇಶ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಇಲಾಖೆಯ ಸಹೋದ್ಯೋಗಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕಿನ ರೈತರು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಕಂಬನಿ ಮಿಡಿದಿದ್ದಾರೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-animal-husbandry-assistant-director-dr-venkatesh-passes-away-heart-attack-sakleshpur-sat/articleshow-b1wnmri"/>
        </item>
        <item>
            <title><![CDATA[ಫ್ಲೈಟ್ ಹತ್ತುವ ಮುನ್ನ ಪ್ರಯಾಣಿಕರು ಸೂಟ್‌ಕೇಸ್ ಚಕ್ರಗಳಿಗೆ ಟೇಪ್ ಅಂಟಿಸುತ್ತಿರುವುದೇಕೆ?]]></title>
            <link>https://kannada.asianetnews.com/life/why-put-tape-on-suitcase-wheels-before-flights/articleshow-h22e5ts</link>
            <guid isPermaLink="true">https://kannada.asianetnews.com/life/why-put-tape-on-suitcase-wheels-before-flights/articleshow-h22e5ts</guid>
            <pubDate>Fri, 11 Sep 2026 12:24:38 +0530</pubDate>
            <description><![CDATA[Tape on luggage wheels: ವಿಮಾನ ಹತ್ತುವ ಮುನ್ನ ಪ್ರವಾಸಿಗರು ತಮ್ಮ ಸೂಟ್‌ಕೇಸ್ ಚಕ್ರಗಳಿಗೆ ಟೇಪ್ ಸುತ್ತುತ್ತಿರೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ! ಉರುಳಬೇಕಾದ ಚಕ್ರಗಳಿಗೆ ಟೇಪ್ ಸುತ್ತೋದೇಕೆ? ಇದರ ಹಿಂದಿರೋ ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m27ksrgvgc98dea9pswc13ke,imgname-thumbnail---2026-09-11t121811.230-1789109527067.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪ್ರ&lt;/strong&gt;ವಾಸ ಹೊರಡುವ ಮುನ್ನ ಬಟ್ಟೆಬರೆ, ಅಗತ್ಯ ಹಣಕಾಸು ದಾಖಲೆಗಳು, ಪಾಸ್&zwnj;ಪೋರ್ಟ್ ಹಾಗೂ ಮೊಬೈಲ್ ಚಾರ್ಜರ್ ಪ್ಯಾಕ್ ಮಾಡುವುದು ಪ್ರತಿಯೊಬ್ಬರ ಸಾಮಾನ್ಯ ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಇನ್&zwnj;ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವದ ಪ್ರವಾಸಿಗರ ಹೊಸದೊಂದು ವಿಚಿತ್ರ ಹ್ಯಾಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಮಾನ ಅಥವಾ ದೂರದ ಊರಿಗೆ ರೈಲು ಹತ್ತುವ ಮುನ್ನ ಅನೇಕ ಜಾಣ ಪ್ರಯಾಣಿಕರು ತಮ್ಮ ಸೂಟ್&zwnj;ಕೇಸ್&zwnj;ನ ಚಕ್ರಗಳಿಗೆ &lsquo;ಸೆಲ್ಲೋ ಟೇಪ್&rsquo; ಅಥವಾ &lsquo;ಡಕ್ಟ್ ಟೇಪ್&rsquo; (Tape) ಸುತ್ತುತ್ತಿದ್ದಾರೆ. ನೆಲದ ಮೇಲೆ ಸರಾಗವಾಗಿ ಉರುಳಬೇಕಾದ ಚಕ್ರಗಳಿಗೆ ಟೇಪ್ ಹಾಕಿ ಕವರ್ ಮಾಡುವುದೇಕೆ? ಇದರಿಂದಾಗುವ ಮಹತ್ವದ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆ ಮತ್ತು ಕುತೂಹಲ ಎಲ್ಲರಲ್ಲೂ ಮೂಡುವುದು ಸಹಜ.&lt;/p&gt;&lt;h2&gt;&lt;strong&gt;ಟಾಯ್ಲೆಟ್ ಸೀಟ್&zwnj;ಗಿಂತಲೂ ಕೊಳಕು ಈ ಚಕ್ರಗಳು!&lt;/strong&gt;&lt;/h2&gt;&lt;p&gt;ನಾವು ದೇಶ-ವಿದೇಶಗಳಲ್ಲಿ ಪ್ರವಾಸ ಮಾಡುವಾಗ ಲಗೇಜ್&zwnj;ನ ಚಕ್ರಗಳು ನಿರಂತರವಾಗಿ ವಿಮಾನ ನಿಲ್ದಾಣದ ಟರ್ಮಿನಲ್ ನೆಲ, ರೈಲ್ವೆ ಪ್ಲಾಟ್&zwnj;ಫಾರ್ಮ್, ಸಾರ್ವಜನಿಕ ರಸ್ತೆ ಹಾಗೂ ಧೂಳಿನಿಂದ ಕೂಡಿದ ಪಾದಚಾರಿ ಮಾರ್ಗಗಳ ನಿರಂತರ ಸಂಪರ್ಕದಲ್ಲಿರುತ್ತವೆ. ಇದರಿಂದ ರಸ್ತೆಯ ಕೊಳಕು ಕಸ, ಕೂದಲು, ಗಲೀಜು, ವಾಹನಗಳ ಆಯಿಲ್ ಜಿಡ್ಡು ಮತ್ತು ಹಾನಿಕಾರಕ ಸೂಕ್ಷ್ಮಾಣು ಬ್ಯಾಕ್ಟೀರಿಯಾಗಳು ಚಕ್ರದೊಳಗೆ ಆಳವಾಗಿ ಜಮೆಯಾಗುತ್ತವೆ.&lt;/p&gt;&lt;p&gt;2025 ರಲ್ಲಿ ಪ್ರಸಿದ್ಧ ಪ್ರವಾಸ ವಿಮಾ ಸಂಸ್ಥೆ &lsquo;ಇನ್ಶೂರ್ ಆಂಡ್ ಗೋ&rsquo; (InsureandGo) ಮೈಕ್ರೋಬಯಾಲಜಿಸ್ಟ್ ಆಮಿ-ಮೇ ಪಾಯಿಂಟರ್ ಅವರೊಂದಿಗೆ ನಡೆಸಿದ ಮಹತ್ವದ ವೈಜ್ಞಾನಿಕ ಅಧ್ಯಯನದ ಪ್ರಕಾರ, ಇಡೀ ಸೂಟ್&zwnj;ಕೇಸ್&zwnj;ನಲ್ಲಿ ಅತ್ಯಂತ ಕೊಳಕಾದ ಮತ್ತು ಅಪಾಯಕಾರಿ ಭಾಗವೇ &lsquo;ಚಕ್ರಗಳು&rsquo;.&lt;/p&gt;&lt;p&gt;ಲಂಡನ್&zwnj;ನ ಪ್ರಮುಖ ರೈಲು ನಿಲ್ದಾಣದಲ್ಲಿ ಪರೀಕ್ಷಿಸಲಾದ ಸೂಟ್&zwnj;ಕೇಸ್&zwnj;ಗಳ ಚಕ್ರಗಳಲ್ಲಿ ಸಾರ್ವಜನಿಕ ಶೌಚಾಲಯದ ಕಮೋಡ್ ಸೀಟ್&zwnj;ಗಿಂತಲೂ ಬರೋಬ್ಬರಿ 58 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದವು! ಪ್ರತಿ 3 ಚದರ ಸೆಂಟಿಮೀಟರ್ ಜಾಗದಲ್ಲಿ ಬರೋಬ್ಬರಿ 400ಕ್ಕೂ ಅಧಿಕ ಬ್ಯಾಕ್ಟೀರಿಯಾ ಕಾಲನಿಗಳು ಜೀವಂತವಾಗಿ ಕಂಡುಬಂದಿದ್ದವು.&lt;/p&gt;&lt;h2&gt;&lt;strong&gt;ಈ ವೈರಲ್ ಹ್ಯಾಕ್ ಹೇಗೆ ಕೆಲಸ ಮಾಡುತ್ತೆ?&lt;/strong&gt;&lt;/h2&gt;&lt;p&gt;ಪ್ರಯಾಣ ಆರಂಭಿಸುವ ಮುನ್ನ ಚಕ್ರದ ಉರುಳುವ ಭಾಗಕ್ಕೆ ಗಟ್ಟಿಯಾಗಿ ಟೇಪ್ ಸುತ್ತಲಾಗುತ್ತದೆ. ಇದು ಕೊಳೆಯನ್ನು ತಡೆಯುವ ಅತ್ಯುತ್ತಮ ತಾತ್ಕಾಲಿಕ ರಕ್ಷಣಾ ಕವಚವಾಗಿ (Protective barrier) ಕೆಲಸ ಮಾಡುತ್ತದೆ. ಪ್ರವಾಸ ಮುಗಿದು ಮನೆ ಅಥವಾ ಹೋಟೆಲ್ ತಲುಪಿದ ತಕ್ಷಣ, ಆ ಟೇಪ್ ಅನ್ನು ಸುಲಭವಾಗಿ ಕಿತ್ತು ಡಸ್ಟ್&zwnj;ಬಿನ್&zwnj;ಗೆ ಎಸೆಯಬಹುದು. ಇದರಿಂದ ಚಕ್ರಗಳಿಗೆ ಅಂಟಿಕೊಂಡಿದ್ದ ಕಣ್ಣಿಗೆ ಕಾಣದ ಧೂಳು ಮತ್ತು ರೋಗಾಣುಗಳು ಟೇಪ್ ಜೊತೆಯಲ್ಲೇ ಹೊರಬರುತ್ತವೆ. ಮುಖ್ಯವಾಗಿ ಹೊರಗಿನ ಅಪಾಯಕಾರಿ ಕ್ರಿಮಿಕೀಟಗಳು ನಿಮ್ಮ ಸ್ವಚ್ಛವಾದ ಮನೆ, ಕಾರ್ಪೆಟ್ ಅಥವಾ ಮಲಗುವ ಕೋಣೆಯನ್ನು ಪ್ರವೇಶಿಸುವುದು ಸುಲಭವಾಗಿ ತಪ್ಪುತ್ತದೆ.&lt;/p&gt;&lt;h2&gt;&lt;strong&gt;ಮಿತಿ ಮತ್ತು ಮುನ್ನೆಚ್ಚರಿಕೆ&lt;/strong&gt;&lt;/h2&gt;&lt;p&gt;ಈ ಹ್ಯಾಕ್ ಕೊಳೆಯನ್ನು ತಡೆಯಲು ಸಹಕಾರಿಯಾದರೂ, ಇದರಲ್ಲಿ ಕೆಲವು ಮಿತಿಗಳಿವೆ. ಟೇಪ್ ಅನ್ನು ಅತಿಯಾಗಿ ದಪ್ಪವಾಗಿ ಅಥವಾ ಸಡಿಲವಾಗಿ ಅಂಟಿಸಿದರೆ ಚಕ್ರಗಳು ಸರಾಗವಾಗಿ ತಿರುಗದೆ ಜಾಮ್ ಆಗುವ ಸಾಧ್ಯತೆ ಇರುತ್ತದೆ. ಇದು ಲಗೇಜ್ ಎಳೆಯುವಾಗ ತೊಂದರೆ ಉಂಟುಮಾಡಬಹುದು. ಅಲ್ಲದೆ, ಟೇಪ್ ತೆಗೆದ ನಂತರ ಅದರ ಜಿಗುಟಾದ ಗಮ್ ಚಕ್ರಕ್ಕೆ ಉಳಿದುಕೊಂಡು ಮತ್ತಷ್ಟು ಧೂಳನ್ನು ಆಕರ್ಷಿಸಬಹುದು.&lt;/p&gt;&lt;p&gt;ಹಾಗಾಗಿ, ಟೇಪ್ ಬಳಸುವುದಕ್ಕಿಂತ ಪ್ರವಾಸ ಮುಗಿಸಿ ಮನೆಗೆ ಬಂದ ತಕ್ಷಣ ಚಕ್ರಗಳನ್ನು ಆ್ಯಂಟಿಬ್ಯಾಕ್ಟೀರಿಯಲ್ ವೈಪ್ಸ್ ಅಥವಾ ಬಿಸಿ ಸಾಬೂನು ನೀರಿನಿಂದ ಸ್ವಚ್ಛಗೊಳಿಸುವುದು ಹೆಚ್ಚು ಸುರಕ್ಷಿತ ಮತ್ತು ಸೂಕ್ತ ಪರಿಹಾರವಾಗಿದೆ ಎಂದು ಪರಿಣಿತರು ಸಲಹೆ ನೀಡುತ್ತಾರೆ.&lt;/p&gt;View this post on Instagram&lt;p&gt;A post shared by Liz Richards | Daily Original Vids (@dailyoriginalvids)&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/life/why-put-tape-on-suitcase-wheels-before-flights/articleshow-h22e5ts"/>
        </item>
        <item>
            <title><![CDATA[ಫೋನ್,ATM ಇಲ್ಲ, ಕಾಣೆಯಾದ 18ರ ಹುಡುಗಿಯನ್ನು 7 ತಿಂಗಳ ಬಳಿಕ ಪತ್ತೆ ಹಚ್ಚಿದ ಆಧಾರ್ ಒಟಿಪಿ]]></title>
            <link>https://kannada.asianetnews.com/bengaluru-urban/no-phone-or-atm-aadhaar-otp-helps-trace-missing-bengaluru-student-after-7-months/articleshow-3cqdwu9</link>
            <guid isPermaLink="true">https://kannada.asianetnews.com/bengaluru-urban/no-phone-or-atm-aadhaar-otp-helps-trace-missing-bengaluru-student-after-7-months/articleshow-3cqdwu9</guid>
            <pubDate>Fri, 11 Sep 2026 12:18:58 +0530</pubDate>
            <description><![CDATA[ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಎಲ್ಲಾ ಕಡೆ ಹುಡುಕಿದ್ದಾರೆ. ಹೈಕೋರ್ಟ್ ಸೂಚನೆ ಮೇರೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಆದರೆ ಸುಳಿವೇ ಇರಲಿಲ್ಲ. 7 ತಿಂಗಳ ಬಳಿಕ ಒಟಿಪಿಯಿಂದ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ. ಏನಿದು ಒಟಿಪಿ ಸ್ಟೋರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01m27kksf7j6g1hcmdng4rgxzd,imgname-missing-bengaluru-student-found-1789109331431.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಸೆ.11) &lt;/strong&gt;ದ್ವಿತೀಯ ಪಿಯುಸಿ ಬೆಂಗಳೂರು ವಿದ್ಯಾರ್ಥಿನಿ ಬೆಳಗ್ಗೆ ಕಾಲೇಜಿಗೆ ಹೋಗಿ ಮರಳಿ ಬಂದಿಲ್ಲ. ಮನೆಯವರು ಹುಡುಕಾಟ ತೀವ್ರಗೊಳಿಸಿದ್ದರು. ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಸುಳಿವಿಲ್ಲ. ವಿದ್ಯಾರ್ಥಿನಿ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿಲ್ಲ, ಎಟಿಎಂ ಕೂಡ ಇಲ್ಲ. ಪೋಷಕರು, ಪೊಲೀಸರು ಸೇರಿ ಮುಂಬೈ, ಚೆನ್ನೈ, ದೆಹಲಿ ಸೇರಿದಂತೆ 10ಕ್ಕೂ ಹೆಚ್ಚು ನಗರ, ನಾಲ್ಕಕ್ಕೂ ಹೆಚ್ಚು ರಾಜ್ಯ, ಸಣ್ಣ ಪಟ್ಟಣ, ಗಲ್ಲಿ ಎಲ್ಲಾ ಕಡೆ ಹುಡುಕಿದ್ದಾರೆ. ಆದರೆ ಸುಳಿವೇ ಇಲ್ಲ. ಬರೋಬ್ಬರಿ 7 ತಿಂಗಳ ಬಳಿಕ ಆಧಾರ್ ಕಾರ್ಡ್ ಒಟಿಪಿಯಿಂದ ವಿದ್ಯಾರ್ಥಿನಿ ಪತ್ತೆಯಾದ ಘಟನೆ ನಡೆದಿದೆ.&lt;/p&gt;&lt;h2&gt;ಏನಿದು ಮಿಸ್ಸಿಂಗ್ ಸ್ಟೋರಿ&lt;/h2&gt;&lt;p&gt;ಬೆಂಗಳೂರಿನ ವಿದ್ಯಾರಣ್ಯಪುರದ 18 ವರ್ಷದ ತನಿಷ್ಕಾ ಗೆಳೆತಿ ಜೊತೆ ಕಾಲೇಜಿಗೆ ಹೋದವಳು ಮರಳಿ ಮನೆಗೆ ಬಂದಿಲ್ಲ. ಅದೇ ಗೆಳೆತಿ ಜೊತೆ ಜನವರಿ 31ರಂದು ಈಕೆ ನಾಪತ್ತೆಯಾಗಿದ್ದಾಳೆ. ಸಂಜೆಯಾಗಿ, ರಾತ್ರಿಯಾದರೂ ಮಗಳು ಬಾರದ ಹಿನ್ನಲೆಯಲ್ಲಿ ಪೋಷಕರು ಹುಡುಕಾಡಿದ್ದಾರೆ, ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಾಟ ತೀವ್ರಗೊಂಡಿದೆ. ಸುಳಿವು ಸಿಕ್ಕಿಲ್ಲ. ಕಾಲೇಜಿಗೆ ತೆರಳುವಾಗ ಕಾಲೇಜು ಬ್ಯಾಗ್, ಆಧಾರ್ ಕಾರ್ಡ್ ಬಿಟ್ಟರೆ ಬೇರೇನೆ ತೆಗೆದುಕೊಂಡು ಹೋಗಿಲ್ಲ. ಕನಿಷ್ಠ ಮೊಬೈಲ್ ಬಳಸಿದ್ದರೆ ಲೊಕೋಶನ್ ಟ್ರಾಕ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಈ ರೀತಿಯ ಯಾವು ಸುಳಿವು ಸಿಗಲಿಲ್ಲ.&lt;/p&gt;&lt;h2&gt;100 ಕಡೆ ಹುಡುಕಾಟ&lt;/h2&gt;&lt;p&gt;ನಾಪತ್ತೆಯಾದ ಕೆಲ ದಿನಗಳ ಬಳಿಕ ಹೊಸ ನಂಬರ್&zwnj;ನಿಂದ ಸ್ನೇಹಿತರಿಗೆ ಕರೆಯೊಂದು ಬಂದಿದೆ. ತಾವು ಮಲೆ ಮಹದೇಶ್ವರ ಬೆಟ್ಟದಲ್ಲಿದ್ದೇವೆ ಎಂದಿದ್ದರು. ಈ ಮಾಹಿತಿ ಬಿಟ್ಟರೆ ಇವರ ಬಗ್ಗೆ ಯಾವ ಮಾಹಿತಿಯೂ ಇಲ್ಲ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. 10 ಮಂದಿಯನ್ನೊಳಗೊಂಡ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ಬರೋಬ್ಬರಿ 100 ಕಡೆ ಹುಡುಕಾಡಿದ್ದಾರೆ. ಸಿಗುವ ಸುಳಿವು, ಮಾಹಿತಿ ಆಧರಿಸಿ ಹುಡುಕಾಡಿದ್ದಾರೆ. ಆದರೆ ಯಾವುದೇ ಸುಳಿವಿಲ್ಲ. ಹೀಗಾಗಿ ಪೋಷಕರು ಕರ್ನಾಟಕ ಹೈಕೋರ್ಟ್&zwnj;ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.&lt;/p&gt;&lt;h2&gt;ಮಹದೇಶ್ವರ ಬೆಟ್ಟದಲ್ಲಿ ಯೂಟರ್ನ್&lt;/h2&gt;&lt;p&gt;ಕರ್ನಾಟಕ ಹೈಕೋರ್ಟ್ ಸೂಚನೆ ಮೇರೆಗೆ ಪ್ರಕರಣ ಎಪ್ರಿಲ್ ತಿಂಗಳಲ್ಲಿ ಸಿಐಡಿಗೆ ಹಸ್ತಾಂತರಗೊಂಡಿತು.ಸಿಐಡಿ ತನಿಖೆ ಕೈಗೆತ್ತಿಕೊಂಡಿತು. ಇತ್ತ ತನಿಷ್ಕಾ ಹಾಗೂ ಆಕೆ ಗೆಳತಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಬದುಕು ಅಂತ್ಯಗೊಳಿಸಲು ಮುಂದಾಗಿದ್ದರು. ಈ ವೇಳೆ ಇಬ್ಬರು ಯುವಕರು ತಡೆದಿದ್ದರು. ತನಿಷ್ಕಾ ಹಾಗೂ ಆಕೆಯ ಗೆಳತಿಯನ್ನು ಮನ ಒಲಿಸಿದ್ದರು. ಈ ಘಟನೆ ಬಳಿಕ ತನಿಷ್ಕಾ ಹಾಗೂ ಆಕೆಯ ಗೆಳತಿ ಬೇರೇ ಬೇರೆ ದಿಕ್ಕಿನಲ್ಲಿ ಸಾಗಿದ್ದಾರೆ. ಇತ್ತ ತನಿಷ್ಕಾ ಬೆಟ್ಟದಲ್ಲಿ ಭೇಟಿಯಾದ ಯುವಕನ ಜೊತೆಗಿರಲು ನಿರ್ಧರಿಸಿದ್ದಾಳೆ.&lt;/p&gt;&lt;p&gt;ಯುವಕನ ಜೊತೆ ನೆಲೆಸಲು ನಿರ್ಧರಿಸಿದ ತನಿಷ್ಕಾ ಕೆಲ ತಿಂಗಳ ಬಳಿಕ ಸರ್ಕಾರಿ ಆರೋಗ್ಯ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾಳೆ. ತನಿಷ್ಕಾ ತನ್ನ ಆಧಾರ್ ಕಾರ್ಡ್ ಬಳಸಿಕೊಂಡು ಆರೋಗ್ಯ ಯೋಜನೆಗೆ ನೋಂದಣಿ ಮಾಡಿದ್ದಾರೆ. ನೋಂದಣಿಯಲ್ಲಿ ಪತಿ ಹೆಸರು ಹಾಗೂ ಆತನ ಮೊಬೈಲ್ ನಂಬರ್ ದಾಖಲಿಸಿದ್ದಾಳೆ. ಯೋಜನೆ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಒಟಿಪಿ ಕಡ್ಡಾಯವಾಗಿತ್ತು. ಇತ್ತ ತನಿಖೆ ನಡೆಸುತ್ತಿದ್ದ ಸಿಐಡಿ ತಂಡ ತನಿಷ್ಖಾ ಎಲ್ಲಾ ಮಾಹಿತಿಗಳನ್ನು ಪಡೆದು ತಪಾಸಣೆ ನಡೆಸುತ್ತಿತ್ತು. ಇದೇ ವೇಳೆ ತನಿಷ್ಕಾ ಆಧಾರ್ ಕಾರ್ಡ್ ನೋಂದಣಿಯಾಗಿರುವುದು ಪತ್ತೆಯಾಗಿದೆ. ತಕ್ಷಣವೇ ಈ ಮಾಹಿತಿ ಪಡೆದ ಸಿಐಡಿ ಮೊಬೈಲ್ ನಂಬರ್ ಪಡೆದು ಟ್ರೇಸ್ ಮಾಡಿದೆ. ಮೊಬೈಲ್ ನಂಬರ್ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನಿಷ್ಕಾ ಪತ್ತೆಯಾಗಿದ್ದಾಳೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/no-phone-or-atm-aadhaar-otp-helps-trace-missing-bengaluru-student-after-7-months/articleshow-3cqdwu9"/>
        </item>
        <item>
            <title><![CDATA["ನನಗಾದ ಅನ್ಯಾಯಕ್ಕೆ ನಾನೂ ಜಿರಳೆಯಾಗಬೇಕಿತ್ತೇ?" ಭಾರತ ಸರ್ಕಾರದ ವಿರುದ್ಧ ಕಟು ವ್ಯಂಗ್ಯವಾಡಿದ ವಿಜಯ್ ಮಲ್ಯ!]]></title>
            <link>https://kannada.asianetnews.com/india-news/should-i-have-become-a-cockroach-fugitive-vijay-mallya-questions-alleged-injustice-gdp/articleshow-txi0lhu</link>
            <guid isPermaLink="true">https://kannada.asianetnews.com/india-news/should-i-have-become-a-cockroach-fugitive-vijay-mallya-questions-alleged-injustice-gdp/articleshow-txi0lhu</guid>
            <pubDate>Fri, 11 Sep 2026 12:16:58 +0530</pubDate>
            <description><![CDATA[ಬ್ಯಾಂಕ್ ಸಾಲ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ, ತಮ್ಮ 'ಎಕ್ಸ್' ಖಾತೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲ ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡರೂ, தம்ಮನ್ನು ವಂಚಕ ಎಂದು ಕರೆಯುವುದನ್ನು ಪ್ರಶ್ನಿಸಿದ್ದಾರೆ. ಅಲ್ಲದೆ, ತಾನು ದೇಶಭ್ರಷ್ಟನಲ್ಲ, ಬ್ರಿಟನ್‌ನಲ್ಲಿ ಕಾನೂನು ಪ್ರಕ್ರಿಯೆಗಳಿಂದ ಸಿಲುಕಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-66b80dd6-40a1-4c2b-961d-584230fb36ac,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್&zwnj; : &lt;/strong&gt;ಸುಮಾರು 9,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ಭಾರತೀಯ ತನಿಖಾ ಸಂಸ್ಥೆಗಳು ಹಾಗೂ ಸರ್ಕಾರದ ವಿರುದ್ಧ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ದೇಶದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನಡೆಸಿದ ಅನ್ಯಾಯದ ವಿರುದ್ಧದ ಪ್ರತಿಭಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಅವರು, &quot;ನನ್ನ ಜೀವನದಲ್ಲಿ ಅನುಭವಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯವನ್ನು ನೋಡಿದರೆ, ನಾನೂ ಜಿರಳೆಯಾಗಬೇಕಿತ್ತೇ ಅನಿಸುತ್ತದೆ. ಬಹುಶಃ ಜಿರಳೆಯಾಗಿ ಬದುಕುವುದು ಉತ್ತಮವೇನೋ&quot; ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ವಿರುದ್ಧದ ಕಾನೂನು ಕ್ರಮಗಳನ್ನು ಪ್ರಶ್ನಿಸಿ ಸರಣಿ ಪೋಸ್ಟ್ ಮಾಡಿರುವ ಮಲ್ಯ, ಜಾರಿ ನಿರ್ದೇಶನಾಲಯ (ಇ.ಡಿ) ಜತೆಗಿನ ತಮ್ಮ ಹಳೆಯ ವಿವಾದ ಹಾಗೂ ಸಾಲ ಮರುಪಾವತಿಯ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.&lt;/p&gt;&lt;h2&gt;ಇ.ಡಿ ಸಲ್ಲಿಸಿದ ಅಫಿಡವಿಟ್ ಉಲ್ಲೇಖಿಸಿ ಮಲ್ಯ ಸುದೀರ್ಘ ಸ್ಪಷ್ಟನೆ:&lt;/h2&gt;&lt;p&gt;ಜಾರಿ ನಿರ್ದೇಶನಾಲಯವು ಬಾಂಬೆ ಹೈಕೋರ್ಟ್&zwnj;ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿರುವ ಮಲ್ಯ, ಇ.ಡಿ ಸಲ್ಲಿಸಿರುವ ಅಧಿಕೃತ ದಾಖಲೆ ಪ್ರಕಾರ, 2021ರಲ್ಲೇ ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸುಮಾರು 14,131.60 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕ್&zwnj;ಗಳಿಗೆ ವರ್ಗಾಯಿಸಲಾಗಿದೆ. ಮೂಲ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್&zwnj;ಗಳು ವಸೂಲಿ ಮಾಡಿಕೊಂಡಿದ್ದರೂ, ಕಳೆದ ಐದು ವರ್ಷಗಳಿಂದ ನನ್ನನ್ನು ಇಂದಿಗೂ ವಂಚಕ ಮತ್ತು ದೇಶಭ್ರಷ್ಟ ಎಂದು ಬಿಂಬಿಸುತ್ತಿರುವುದು ದುರಂತ. ಸಾಲ ತೀರುವಳಿಯಲ್ಲಿ ನ್ಯಾಯಯುತ ಲೆಕ್ಕಪತ್ರ ಸಲ್ಲಿಕೆಯಾಗುತ್ತಿಲ್ಲ, ಹೆಚ್ಚುವರಿಯಾಗಿ ಮುಟ್ಟುಗೋಲು ಹಾಕಿಕೊಂಡ ಹಣದಿಂದ ನನಗೆ ಎಷ್ಟು ಮರುಪಾವತಿಯಾಗಬೇಕಿದೆ ಎಂಬುದನ್ನು ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ ಎಂದು ದೂರಿದ್ದಾರೆ.&lt;/p&gt;&lt;h2&gt;ದೇಶಭ್ರಷ್ಟ ಹಣೆಪಟ್ಟಿಗೆ ಆಕ್ಷೇಪ:&lt;/h2&gt;&lt;p&gt;ತಮಗೆ ನೀಡಿರುವ ಪಲಾಯನಗೈದ ಆರೋಪಿ ಎಂಬ ಹಣೆಪಟ್ಟಿಯನ್ನು ಬಲವಾಗಿ ವಿರೋಧಿಸಿರುವ ಅವರು, ಸಾಲ ಮರುಪಾವತಿಯು ಭಾರತದಲ್ಲಿನ ತಮ್ಮ ಭೌತಿಕ ಉಪಸ್ಥಿತಿಯ ಮೇಲೆ ಅವಲಂಬಿತವಾಗಿರಬಾರದು ಎಂದು ವಾದಿಸಿದ್ದಾರೆ. ನಾನು 1992ರಿಂದ ಯುನೈಟೆಡ್ ಕಿಂಗ್&zwnj;ಡಮ್&zwnj;ನ (UK) ಶಾಶ್ವತ ನಿವಾಸಿಯಾಗಿದ್ದೇನೆ. ಬ್ರಿಟನ್&zwnj;ನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ನನ್ನನ್ನು ಈ ದೇಶ ತೊರೆಯದಂತೆ ತಡೆದಿವೆ. ಹೀಗಿದ್ದರೂ ನನ್ನನ್ನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ಭಗೋಡ ಎಂದು ಕರೆಯಲಾಗುತ್ತಿದೆ. ಶಾಶ್ವತ ನಿವಾಸ ಮತ್ತು ಪೌರತ್ವದ ನಡುವಿನ ವ್ಯತ್ಯಾಸವನ್ನು ಜನರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.&lt;/p&gt;&lt;h2&gt;ಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ ಹಾಗೂ ಹಿನ್ನೆಲೆ&lt;/h2&gt;&lt;p&gt;ಭಾರತದಲ್ಲಿ 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿಯಲ್ಲಿ &lsquo;ದೇಶಭ್ರಷ್ಟ ಅಪರಾಧಿ&rsquo; ಎಂದು ಘೋಷಿಸಲ್ಪಟ್ಟ 15 ಜನರಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಪ್ರಮುಖರು. ಈ ವಿಚಾರವಾಗಿ ಬಾಂಬೆ ಹೈಕೋರ್ಟ್&zwnj;ನಲ್ಲಿ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. &quot;ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿಗೆ ಯಾವುದೇ ತಡೆಯಾಜ್ಞೆ ಅಥವಾ ಪರಿಹಾರ ನೀಡಲು ಸಾಧ್ಯವಿಲ್ಲ&quot; ಎಂದು ಹೇಳಿದ್ದ ಹೈಕೋರ್ಟ್, ಭಾರತಕ್ಕೆ ಹಿಂತಿರುಗುವ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಲು ಅಂತಿಮ ಅವಕಾಶವನ್ನು ನೀಡಿತ್ತು.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/should-i-have-become-a-cockroach-fugitive-vijay-mallya-questions-alleged-injustice-gdp/articleshow-txi0lhu"/>
        </item>
        <item>
            <title><![CDATA[Hanuman Ansh: ನಾಯಕನ ಆರೋಗ್ಯ ಸಮಸ್ಯೆ, ಸಹಾಯಕ ನಿರ್ದೇಶಕನಿಗೆ ಸಿಕ್ತು ‘ಬಾಬಾ’ ಪಟ್ಟ.. ಮುಂದೆ ನಡೆದಿದ್ದು ಮಾತ್ರ ಇತಿಹಾಸ]]></title>
            <link>https://kannada.asianetnews.com/gallery/cine-world/hanuman-ansh-shobhinav-satya-wasnt-the-original-lead-actor-heres-how-he-got-the-role-gqvvii5</link>
            <guid isPermaLink="true">https://kannada.asianetnews.com/gallery/cine-world/hanuman-ansh-shobhinav-satya-wasnt-the-original-lead-actor-heres-how-he-got-the-role-gqvvii5</guid>
            <pubDate>Fri, 11 Sep 2026 12:07:02 +0530</pubDate>
            <description><![CDATA[Hanuman Ansh: ಸದ್ಯ ಥಿಯೇಟರ್ ಗಳಲ್ಲಿ ಭಾರಿ ಸದ್ದು ಮಾಡುತ್ತಿರುವ, ಕಥೆಯ ಮೂಲಕ, ಜನರಿಂದ ಜನರಿಂದ ತಲುಪಿರುವ ಸಣ್ಣ ಬಜೆಟ್ ಸಿನಿಮಾ ‘ಹನುಮಾನ್ ಅಂಶ್’ ಸಿನಿಮಾದಲ್ಲಿ ನಟ ಶೋಭಿನವ್ ಸತ್ಯ ಅವರಿಗೆ ನಾಯಕನ ಪಾತ್ರ ಸಿಕ್ಕಿದ್ದು ಹೇಗೆ? ಎನ್ನುವ ಅಚ್ಚರಿಯ ವಿಚಾರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m1jzst3nm0qanzr20aja02p6,imgname-hanuman-ansh-gets-global-release-date-1788417468531.jpeg" type="image/jpeg" height="390" width="690"/>
            <content:encoded><![CDATA[&lt;p&gt;Hanuman Ansh: ಸದ್ಯ ಥಿಯೇಟರ್ ಗಳಲ್ಲಿ ಭಾರಿ ಸದ್ದು ಮಾಡುತ್ತಿರುವ, ಕಥೆಯ ಮೂಲಕ, ಜನರಿಂದ ಜನರಿಂದ ತಲುಪಿರುವ ಸಣ್ಣ ಬಜೆಟ್ ಸಿನಿಮಾ &lsquo;ಹನುಮಾನ್ ಅಂಶ್&rsquo; ಸಿನಿಮಾದಲ್ಲಿ ನಟ ಶೋಭಿನವ್ ಸತ್ಯ ಅವರಿಗೆ ನಾಯಕನ ಪಾತ್ರ ಸಿಕ್ಕಿದ್ದು ಹೇಗೆ? ಎನ್ನುವ ಅಚ್ಚರಿಯ ವಿಚಾರ ಇಲ್ಲಿದೆ.&lt;/p&gt;&lt;img&gt;&lt;p&gt;ವಿಶಾಲ್ ಚತುರ್ವೇದಿ ನಿರ್ದೇಶನದ &lsquo;ಹನುಮಾನ್ ಅಂಶ್&rsquo; ಸಿನಿಮಾ ಈ ವರ್ಷ ಬಾಕ್ಸ್&zwnj;ಆಫೀಸ್&zwnj;ನಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಆದರೆ ಈ ಸಿನಿಮಾ ದೊಡ್ಡ ಪರದೆಯ ಮೇಲೆ ಮೂಡಿಬರುವ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಕೇವಲ 2 ಕೋಟಿ ರೂಪಾಯಿ ಬಜೆಟ್&zwnj;ನಲ್ಲಿ ನಿರ್ಮಾಣವಾದ ಈ ಭಕ್ತಿ ಪ್ರಧಾನ ಸಿನಿಮಾ ಇದುವರೆಗೆ 169 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಸಿನಿಮಾದಲ್ಲಿ ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಶೋಭಿನವ್ ಸತ್ಯ ಆರಂಭದಲ್ಲಿ ನಾಯಕನ ಪಾತ್ರಕ್ಕೆ ಆಯ್ಕೆಯಾಗಿರಲಿಲ್ಲ. ಸಿನಿಮಾ ಶೂಟಿಂಗ್&zwnj;ನ ಮೊದಲ ದಿನವೇ ಮೊದಲು ಆಯ್ಕೆಯಾಗಿದ್ದ ನಟ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕ ಶೋಭಿನವ್ ಅವರಿಗೆ ಈ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಿತು.&lt;/p&gt;&lt;img&gt;&lt;p&gt;ಈ ಪಾತ್ರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿದಾಗ ಶೋಭಿನವ್ ಸತ್ಯ ಅವರೇ ಅಚ್ಚರಿಗೊಳಗಾಗಿದ್ದರು. ಅದರ ಜೊತೆಗೆ ಪಾತ್ರದ ಬಗ್ಗೆ ಅವರಿಗೆ ಸಾಕಷ್ಟು ಒತ್ತಡವೂ ಇತ್ತು. ಅದರಲ್ಲೂ ಮುಖ್ಯವಾಗಿ ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರಿಂದ, ಈ ಪಾತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಅವರಲ್ಲಿತ್ತು.&lt;/p&gt;&lt;img&gt;&lt;p&gt;ಶೋಭಿನವ್ ಹೇಳುವಂತೆ, ಆರಂಭದಲ್ಲಿ ಅವರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದ್ದವು. &ldquo;ಮುಂದೆ ಜನರು, &lsquo;ಇಂತಹ ಬಾಬಾನನ್ನು ಎಲ್ಲಿಂದ ಕರೆದುಕೊಂಡು ಬಂದಿದ್ದಾರೆ?&rsquo; ಎಂದು ಹೇಳಿದರೆ ಏನು ಮಾಡುವುದು ಎಂಬ ಭಯವಿತ್ತು. ಈ ಎಲ್ಲ ವಿಚಾರಗಳು ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ಆಗ ನಿರ್ದೇಶಕರು ನನ್ನನ್ನು ಸಮಾಧಾನಪಡಿಸಿ, ನೀನು ನಿನ್ನ ಅಭಿನಯದ ಬಗ್ಗೆ ಮಾತ್ರ ಗಮನ ಕೊಡು, ಬಾಕಿದ್ದನ್ನು ನಾನು ನೋಡುತ್ತೇನೆ&rsquo; ಎಂದಿದ್ದರಂತೆ. ಆದರೆ ಸಿನಿಮಾ ಚಿತ್ರೀಕರಣ ಆರಂಭವಾದ ನಂತರ ಅವರ ಆತ್ಮವಿಶ್ವಾಸ ನಿಧಾನವಾಗಿ ಹೆಚ್ಚಾಗತೊಡಗಿತು.&lt;/p&gt;&lt;img&gt;&lt;p&gt;ಶೂಟಿಂಗ್&zwnj;ಗಾಗಿ ತಂಡದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಾಗ ನಡೆದ ಘಟನೆ ಅವರ ಮನಸ್ಥಿತಿಯನ್ನೇ ಬದಲಿಸಿತು ಎಂದು ಹೇಳುವ ಶೋಭಿನವ್ &lsquo;ಅದು ಮೊದಲ ದಿನವಾಗಿತ್ತು. ನಾನು ಈ ಪಾತ್ರಕ್ಕೆ ನಿಜವಾಗಿಯೂ ಹೊಂದಿಕೊಳ್ಳುತ್ತಿದ್ದೇನೆಯೇ ಎಂಬುದು ನನಗೆ ಖಚಿತವಾಗಿರಲಿಲ್ಲ. ಆದರೆ ಎರಡನೇ ದಿನ ಇಡೀ ತಂಡ ಬೇಸ್&zwnj;ಗೆ ತೆರಳಿದಾಗ. ನಾನು ಮಾತ್ರ ದೇವಸ್ಥಾನದಲ್ಲಿ ಒಬ್ಬನೇ ಉಳಿದುಕೊಂಡಿದ್ದೆ. ಆವಾಗ ಅಲ್ಲಿಗೆ ಬಂದಿದ್ದ ಕೆಲವರು ಶೋಭಿನವ್ ಅವರನ್ನು ಬಾಬಾ ಎಂದು ಕರೆದರಂತೆ, ಜೊತೆಗೆ ಏನಾದರೂ ತಿನ್ನಲು ಬೇಕೆ ಎಂದು ಉಪಚರಿಸಿದರಂತೆ.&lt;/p&gt;&lt;img&gt;&lt;p&gt;ಆ ಸಮಯದಲ್ಲಿ ತಾನು ಸ್ವಲ್ಪ ಬೆಳ್ಳುಳ್ಳಿ, ಉಪ್ಪು ಮತ್ತು ರೊಟ್ಟಿ ತರುವಂತೆ ಕೇಳಿದಾಗ, ಗ್ರಾಮಸ್ಥರು ಆ ವಸ್ತುಗಳನ್ನು ತಂದುಕೊಟ್ಟಿದ್ದರಂತೆ. ನನ್ನೊಂದಿಗೆ ಇಂತಹ ಹಲವು ಘಟನೆಗಳು ನಡೆಯುತ್ತಲೇ ಇದ್ದವು ಎನ್ನುವ ಶೋಭಿನವ್, ನಾನು ಉದ್ದೇಶಪೂರ್ವಕವಾಗಿ ಏನನ್ನೂ ಮಾಡಲು ಹೋಗಿರಲಿಲ್ಲ. ಆದರೆ ಎಲ್ಲವೂ ಸಹಜವಾಗಿಯೇ ನಡೆಯುತ್ತಿತ್ತು. ಜನರು ನನ್ನ ಬಳಿ ಬಂದು ಆಶೀರ್ವಾದ ಕೇಳಲು ಆರಂಭಿಸಿದಾಗ, ನಾನೂ ಅವರಿಗೆ ಆಶೀರ್ವಾದ ನೀಡಲು ಶುರು ಮಾಡಿದೆ. ಇದರಿಂದ ನಿಧಾನವಾಗಿ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ಶೋಭಿನವ್ ಅವರಿಗೆ ಮತ್ತೊಂದು ದೊಡ್ಡ ಚಿಂತೆ ಇತ್ತು. ತಾವು ಸಹಾಯಕ ನಿರ್ದೇಶಕರಾಗಿ ಪರಿಚಿತರಾಗಿದ್ದ ಕಾರಣ, ಪ್ರೇಕ್ಷಕರು ತಮ್ಮನ್ನು ನಾಯಕನ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂಬ ಅನುಮಾನ ಅವರಲ್ಲಿತ್ತು. &ldquo; ಜನರು ನನ್ನನ್ನು ಈ ಪಾತ್ರದಲ್ಲಿ ಸ್ವೀಕರಿಸುತ್ತಾರೆಯೇ ಎಂದು ನಾನು ಯೋಚಿಸುತ್ತಿದ್ದೆ. ನಟರು ಇಂತಹ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಮತ್ತೊಂದೆಡೆ, ನನ್ನನ್ನು ಸಹಾಯಕ ನಿರ್ದೇಶಕ ಎಂದು ತಿಳಿದಿರುವವರು ನನ್ನನ್ನು ನಾಯಕನಾಗಿ ಒಪ್ಪಿಕೊಳ್ಳುತ್ತಾರೆಯೇ? ಅವರ ಪ್ರತಿಕ್ರಿಯೆ ಹೇಗಿರಬಹುದು ಎಂಬ ಯೋಚನೆಯೂ ಇತ್ತು. ಆದರೆ ನಿರ್ದೇಶಕರು ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ನಾನು ನಿನ್ನೊಂದಿಗೆ ಇದ್ದೇನೆ ಎಂದು ಧೈರ್ಯ ತುಂಬಿದರು&rdquo; ಎಂದು ಶೋಭಿನವ್ ಸತ್ಯ ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[cine-world]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/cine-world/hanuman-ansh-shobhinav-satya-wasnt-the-original-lead-actor-heres-how-he-got-the-role-gqvvii5"/>
        </item>
        <item>
            <title><![CDATA[Sleeping Tips: ರಾತ್ರಿ ಬೇಗ, ಆರಾಮವಾಗಿ ನಿದ್ದೆ ಮಾಡಬೇಕಾ? ಈ ಟಿಪ್ಸ್ ನಿಮಗಾಗಿ!]]></title>
            <link>https://kannada.asianetnews.com/webstories/life/simple-tips-for-a-good-nights-sleep-all-need-to-know-kvn-vhh062a</link>
            <guid isPermaLink="true">https://kannada.asianetnews.com/webstories/life/simple-tips-for-a-good-nights-sleep-all-need-to-know-kvn-vhh062a</guid>
            <pubDate>Fri, 11 Sep 2026 12:03:54 +0530</pubDate>
            <description><![CDATA[ರಾತ್ರಿ ಹೊತ್ತು ಎಷ್ಟೇ ಪ್ರಯತ್ನಿಸಿದರೂ ಬೇಗ ನಿದ್ದೆ ಬರಲ್ವಾ? ಹಾಗಾದ್ರೆ ಚಿಂತೆ ಬಿಡಿ. ಇಲ್ಲಿ ನೀಡಿರುವ ಕೆಲವು ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ನೀವು ಆರಾಮವಾಗಿ ನಿದ್ದೆ ಮಾಡಬಹುದು. ಬನ್ನಿ, ಆ ಟಿಪ್ಸ್ ಯಾವುವು ಅಂತಾ ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kf0kpypr90y9an94pgyvswe9,imgname-new-project---2026-01-15t160122.313-1768473459416.jpg" type="image/jpeg" height="390" width="690"/>
            <category><![CDATA[life]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/life/simple-tips-for-a-good-nights-sleep-all-need-to-know-kvn-vhh062a"/>
        </item>
        <item>
            <title><![CDATA[ಮೀನು, ಮಾಂಸ, ಮದ್ಯವೇ ದೇವರ ನೈವೇದ್ಯ; ಭಾರತದ ಈ ದೇವಾಲಯಗಳ ಸಂಪ್ರದಾಯ ಅಚ್ಚರಿ ಮೂಡಿಸುತ್ತದೆ]]></title>
            <link>https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g</link>
            <guid isPermaLink="true">https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g</guid>
            <pubDate>Fri, 11 Sep 2026 12:00:05 +0530</pubDate>
            <description><![CDATA[ಭಾರತದ ಎಲ್ಲ ಹಿಂದೂ ದೇವಾಲಯಗಳಲ್ಲೂ ನೈವೇದ್ಯದ ಸಂಪ್ರದಾಯ ಒಂದೇ ಆಗಿಲ್ಲ. ಕೆಲವು ಶಕ್ತಿ, ತಾಂತ್ರಿಕ ಮತ್ತು ಜಾನಪದ ಪರಂಪರೆಯ ದೇವಾಲಯಗಳಲ್ಲಿ ಮೀನು, ಮಾಂಸ ಅಥವಾ ಮದ್ಯವನ್ನು ದೇವರಿಗೆ ಅರ್ಪಿಸುವ ಆಚರಣೆಗಳಿವೆ. ಕಾಮಾಖ್ಯಾ, ತಾರಾಪೀಠ, ಕಾಳಿಘಾಟ್, ಮುಟ್ಟಪ್ಪನ್, ಕಾಲ ಭೈರವ ಸೇರಿದಂತೆ ಹಲವು ದೇವಾಲಯಗಳ ವಿಭಿನ್ನ ಸಂಪ್ರದಾಯಗಳು ಭಾರತದ ಧಾರ್ಮಿಕ ವೈವಿಧ್ಯತೆಯನ್ನು ತೋರಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m25xnnyn4y6ss0424t92g32z,imgname-indian-hindu-temples--1--1789052770261.jpg" type="image/jpeg" height="390" width="690"/>
            <content:encoded><![CDATA[&lt;h2&gt;ಮೀನು, ಮಾಂಸ, ಮದ್ಯವೇ ನೈವೇದ್ಯ! ಭಾರತದ ದೇವಾಲಯಗಳ ವಿಭಿನ್ನ ಸಂಪ್ರದಾಯ&lt;/h2&gt;&lt;p&gt;ನವರಾತ್ರಿ ಸಂದರ್ಭದಲ್ಲಿ ದೇವಿಯ ಮೂರ್ತಿಗಳ ಬಳಿ ಮಾಂಸಾಹಾರ ಮಾರಾಟದ ವಿಚಾರದ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತದಲ್ಲಿನ ಹಿಂದೂ ಧಾರ್ಮಿಕ ಆಚರಣೆಗಳ ವೈವಿಧ್ಯತೆಯೂ ಗಮನ ಸೆಳೆಯುತ್ತದೆ. ದೇಶದ ಎಲ್ಲ ದೇವಾಲಯಗಳಲ್ಲೂ ನೈವೇದ್ಯದ ಪದ್ಧತಿ ಒಂದೇ ಆಗಿಲ್ಲ. ಬಹುತೇಕ ದೇವಾಲಯಗಳಲ್ಲಿ ಹಣ್ಣು, ಸಿಹಿತಿಂಡಿ ಮತ್ತು ಸಸ್ಯಾಹಾರಿ ಭೋಗ್ ಅರ್ಪಿಸುವ ಪದ್ಧತಿ ಇದ್ದರೂ, ಕೆಲವು ಶಕ್ತಿ, ತಾಂತ್ರಿಕ ಮತ್ತು ಜಾನಪದ ಸಂಪ್ರದಾಯಗಳಲ್ಲಿ ಮೀನು, ಮಾಂಸ ಅಥವಾ ಮದ್ಯವೂ ನೈವೇದ್ಯದ ಭಾಗವಾಗಿವೆ.&lt;/p&gt;&lt;p&gt;&lt;strong&gt;ಕಾಮಾಖ್ಯಾ ದೇವಾಲಯ: ಶಕ್ತಿ ಆರಾಧನೆಯ ವಿಶಿಷ್ಟ ಪರಂಪರೆ&lt;/strong&gt;&lt;/p&gt;&lt;p&gt;ಅಸ್ಸಾಂನ ಪ್ರಸಿದ್ಧ ಕಾಮಾಖ್ಯಾ ದೇವಾಲಯವು ಶಕ್ತಿ ಆರಾಧನೆಯ ಪ್ರಮುಖ ಕೇಂದ್ರವಾಗಿದೆ. ಇಲ್ಲಿ ಕೆಲವು ಧಾರ್ಮಿಕ ಆಚರಣೆಗಳಲ್ಲಿ ಪ್ರಾಣಿ ಬಲಿ ಪರಂಪರೆ ಕಂಡುಬರುತ್ತದೆ. ದೇವಾಲಯದ ಪೂಜಾ ಪದ್ಧತಿಗಳು ಶಕ್ತಿ ಮತ್ತು ತಾಂತ್ರಿಕ ಸಂಪ್ರದಾಯಗಳೊಂದಿಗೆ ಐತಿಹಾಸಿಕವಾಗಿ ನಿಕಟ ಸಂಬಂಧ ಹೊಂದಿವೆ.&lt;/p&gt;&lt;p&gt;&lt;strong&gt;ತಾರಾಪೀಠ ಮತ್ತು ಕಾಳಿಘಾಟ್: ಬಂಗಾಳದ ವಿಭಿನ್ನ ಆಚರಣೆ&lt;/strong&gt;&lt;/p&gt;&lt;p&gt;ಪಶ್ಚಿಮ ಬಂಗಾಳದ ತಾರಾಪೀಠದಲ್ಲಿ ತಾರಾ ದೇವಿಗೆ ಮೀನು ಮತ್ತು ಮೇಕೆ ಮಾಂಸ ಅರ್ಪಿಸುವ ಸಂಪ್ರದಾಯದ ಉಲ್ಲೇಖಗಳಿವೆ. ಕೆಲವು ತಾಂತ್ರಿಕ ಆಚರಣೆಗಳಲ್ಲಿ ಮದ್ಯವೂ ಕಾಣಿಸಿಕೊಳ್ಳುತ್ತದೆ. ಕೋಲ್ಕತ್ತಾದ ಕಾಳಿಘಾಟ್ ಕಾಳಿ ದೇವಾಲಯದಲ್ಲಿಯೂ ಪ್ರಾಣಿ ಬಲಿ ಐತಿಹಾಸಿಕವಾಗಿ ಕೆಲವು ಆಚರಣೆಗಳ ಭಾಗವಾಗಿತ್ತು. ಇಲ್ಲಿ ಸಸ್ಯಾಹಾರಿ ಅರ್ಪಣೆಗಳೂ ಇವೆ ಎಂಬುದು ಗಮನಾರ್ಹ.&lt;/p&gt;&lt;p&gt;&lt;strong&gt;ದಕ್ಷಿಣೇಶ್ವರ: ಮೀನು ಭೋಗ್&zwnj;ನ ವಿಶೇಷತೆ&lt;/strong&gt;&lt;/p&gt;&lt;p&gt;ಕೋಲ್ಕತ್ತಾದ ದಕ್ಷಿಣೇಶ್ವರ ಕಾಳಿ ದೇವಾಲಯದಲ್ಲಿ ಭವತಾರಿಣಿ ದೇವಿಗೆ ಅರ್ಪಿಸುವ ಭೋಗ್&zwnj;ನಲ್ಲಿ ಮೀನು ಸೇರಿಸುವ ಸಂಪ್ರದಾಯವಿದೆ. ಆದರೆ ಬಂಗಾಳದ ಕೆಲವು ಇತರ ಕಾಳಿ ದೇವಾಲಯಗಳಿಗಿಂತ ಭಿನ್ನವಾಗಿ, ಇಲ್ಲಿ ಪ್ರಾಣಿ ಬಲಿ ನೀಡಲಾಗುವುದಿಲ್ಲ. ಇದರಿಂದ ಒಂದೇ ಪ್ರದೇಶದ ದೇವಾಲಯಗಳಲ್ಲೂ ಆಚರಣೆಗಳಲ್ಲಿ ವ್ಯತ್ಯಾಸ ಇರಬಹುದು ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;&lt;strong&gt;ಪುರಿಯ ವಿಮಲ ದೇವಾಲಯದಿಂದ ಕೇರಳದ ಮುಟ್ಟಪ್ಪನ್&zwnj;ವರೆಗೆ&lt;/strong&gt;&lt;/p&gt;&lt;p&gt;ಒಡಿಶಾದ ಪುರಿ ಜಗನ್ನಾಥ ದೇವಾಲಯ ಸಂಕೀರ್ಣದಲ್ಲಿರುವ ವಿಮಲ ದೇವಾಲಯವು ಶಕ್ತಿ ಸಂಪ್ರದಾಯದ ಪ್ರಮುಖ ಕೇಂದ್ರವಾಗಿದೆ. ಕೆಲವು ವಿಶೇಷ ಆಚರಣೆಗಳಲ್ಲಿ ಮೀನು ಮತ್ತು ಮೇಕೆ ಮಾಂಸ ಅರ್ಪಿಸುವ ಪದ್ಧತಿ ಇದೆ. ಕೇರಳದ ಪರಶ್ಶಿನಿಕಡವು ಮುಟ್ಟಪ್ಪನ್ ದೇವಾಲಯದಲ್ಲಿ ಒಣಮೀನು ಮತ್ತು ಸ್ಥಳೀಯ ಮದ್ಯಪಾನೀಯವಾದ ತಾಡಿಯನ್ನು ಅರ್ಪಿಸುವ ಸಂಪ್ರದಾಯವಿದೆ ಎಂದು ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ತಮಿಳುನಾಡಿನ ಮುನಿಯಾಂಡಿ ಸ್ವಾಮಿ ದೇವಾಲಯ&lt;/strong&gt;&lt;/p&gt;&lt;p&gt;ಮಧುರೈ ಸಮೀಪದ ಮುನಿಯಾಂಡಿ ಸ್ವಾಮಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಕೋಳಿ ಮತ್ತು ಮಟನ್ ಬಿರಿಯಾನಿ ತಯಾರಿಸಿ ಭಕ್ತರಿಗೆ ವಿತರಿಸುವ ವಿಶಿಷ್ಟ ಆಚರಣೆ ಇದೆ. ಇದು ಸ್ಥಳೀಯ ಜಾನಪದ ದೇವತಾ ಆರಾಧನೆ, ಆಹಾರ ಸಂಸ್ಕೃತಿ ಮತ್ತು ಸಮುದಾಯದ ಆಚರಣೆಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.&lt;/p&gt;&lt;p&gt;&lt;strong&gt;ಮದ್ಯ ನೈವೇದ್ಯದ ಕಾಲ ಭೈರವ ಪರಂಪರೆ&lt;/strong&gt;&lt;/p&gt;&lt;p&gt;ಉಜ್ಜಯಿನಿಯ ಪ್ರಸಿದ್ಧ ಕಾಲ ಭೈರವ ದೇವಾಲಯದಲ್ಲಿ ಮದ್ಯವನ್ನು ದೇವರಿಗೆ ಅರ್ಪಿಸುವ ಆಚರಣೆ ಅತ್ಯಂತ ಪ್ರಸಿದ್ಧವಾಗಿದೆ. ವಾರಾಣಸಿಯ ಕಾಲ ಭೈರವ ಆರಾಧನೆಯಲ್ಲಿಯೂ ವಿಭಿನ್ನ ನೈವೇದ್ಯ ಪದ್ಧತಿಗಳ ಉಲ್ಲೇಖಗಳು ಕಂಡುಬರುತ್ತವೆ. ಇವು ಭೈರವ ಮತ್ತು ಕೆಲವು ತಾಂತ್ರಿಕ ಪರಂಪರೆಗಳೊಂದಿಗೆ ಸಂಬಂಧ ಹೊಂದಿವೆ.&lt;/p&gt;&lt;p&gt;&lt;strong&gt;ಹಿಂದೂ ಧರ್ಮದಲ್ಲಿ ಒಂದೇ ಆಹಾರ ಸಂಪ್ರದಾಯವೇ?&lt;/strong&gt;&lt;/p&gt;&lt;p&gt;ಇತಿಹಾಸದ ವಿವಿಧ ಹಂತಗಳಲ್ಲಿ ಕೆಲವು ವೈದಿಕ ಯಜ್ಞಗಳಲ್ಲಿ ಪ್ರಾಣಿ ಬಲಿಯ ಉಲ್ಲೇಖಗಳಿವೆ. ಆದರೆ ಇದರಿಂದ ಮಾಂಸಾಹಾರವೇ ಸಾರ್ವತ್ರಿಕ ಹಿಂದೂ ಆಚರಣೆ ಎಂದು ಹೇಳಲಾಗುವುದಿಲ್ಲ. ಬದಲಾಗಿ, ಭಾರತದ ಹಿಂದೂ ಧಾರ್ಮಿಕ ಪರಂಪರೆಗಳು ಪ್ರದೇಶ, ಸಮುದಾಯ, ದೇವತಾ ಆರಾಧನೆ ಮತ್ತು ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ವೈವಿಧ್ಯಮಯವಾಗಿವೆ.&lt;/p&gt;&lt;p&gt;ಹೀಗಾಗಿ ಮೀನು, ಮಾಂಸ ಅಥವಾ ಮದ್ಯದ ನೈವೇದ್ಯ ಇರುವ ದೇವಾಲಯಗಳ ಆಚರಣೆಗಳನ್ನು ಇಡೀ ಹಿಂದೂ ಧರ್ಮದ ಪ್ರತಿನಿಧಿ ಎಂದು ನೋಡುವುದಕ್ಕಿಂತ, ಭಾರತದ ವಿಶಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಒಂದು ಭಾಗವಾಗಿ ಅರ್ಥಮಾಡಿಕೊಳ್ಳುವುದು ಸೂಕ್ತ.&lt;/p&gt;]]></content:encoded>
            <category><![CDATA[travel]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/travel/indias-unusual-temple-traditions-where-fish-meat-and-alcohol-become-offerings/articleshow-gle9f6g"/>
        </item>
        <item>
            <title><![CDATA[ಬುಧ-ಚಂದ್ರನ ಸಂಯೋಗದಿಂದ ಮತಿ ಭ್ರಮ ಯೋಗ, ಮೇಷ ಜೊತೆ ಎರಡು ರಾಶಿಗೆ ಇಂದು ಸಂಜೆಯಿಂದ ಶೋಕ]]></title>
            <link>https://kannada.asianetnews.com/gallery/astrology/mati-bhram-yog-moon-mercury-conjunction-bad-for-3-zodiac-signs-suh-lkvb0ps</link>
            <guid isPermaLink="true">https://kannada.asianetnews.com/gallery/astrology/mati-bhram-yog-moon-mercury-conjunction-bad-for-3-zodiac-signs-suh-lkvb0ps</guid>
            <pubDate>Fri, 11 Sep 2026 11:45:51 +0530</pubDate>
            <description><![CDATA[ಸೆಪ್ಟೆಂಬರ್ 11 ರಂದು, ಚಂದ್ರ ಮತ್ತು ಬುಧ ಗ್ರಹಗಳ ಸಂಯೋಗವು ಗೊಂದಲಕ್ಕೆ ಕಾರಣವಾಗುವ ಅಶುಭ ಯೋಗವನ್ನು ಸೃಷ್ಟಿಸುತ್ತಿದೆ. ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಸೂಚಿಸುವ ಈ ಎರಡು ಗ್ರಹಗಳ ನಡುವಿನ ಸಂಘರ್ಷವು ಮೂರು ರಾಶಿಚಕ್ರ ಚಿಹ್ನೆಗಳ ಸಂಪತ್ತು ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01m27hh43kpgzy7ftvhgnwxv41,imgname-mati-bhram-yog-moon-mercury-conjunction-bad-for-3-zodiac-signs-1789107146867.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 11 ರಂದು, ಚಂದ್ರ ಮತ್ತು ಬುಧ ಗ್ರಹಗಳ ಸಂಯೋಗವು ಗೊಂದಲಕ್ಕೆ ಕಾರಣವಾಗುವ ಅಶುಭ ಯೋಗವನ್ನು ಸೃಷ್ಟಿಸುತ್ತಿದೆ. ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಸೂಚಿಸುವ ಈ ಎರಡು ಗ್ರಹಗಳ ನಡುವಿನ ಸಂಘರ್ಷವು ಮೂರು ರಾಶಿಚಕ್ರ ಚಿಹ್ನೆಗಳ ಸಂಪತ್ತು ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.&lt;/p&gt;&lt;img&gt;&lt;p&gt;ದೃಕ್ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 11 ರ ಸಂಜೆ, ಚಂದ್ರನು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಸಾಗುತ್ತಾನೆ, ಅಲ್ಲಿ ಅದು ಈಗಾಗಲೇ ಇರುವ ಬುಧ ಗ್ರಹದೊಂದಿಗೆ ಸಂಧಿಸುತ್ತಾನೆ. ಜ್ಯೋತಿಷ್ಯ ಸಿದ್ಧಾಂತದ ಪ್ರಕಾರ, ಚಂದ್ರನು ಬುಧನನ್ನು ತನ್ನ ಶತ್ರುವೆಂದು ಪರಿಗಣಿಸುವುದಿಲ್ಲ, ಆದರೆ ಬುಧನು ಚಂದ್ರನ ತಂದೆಯಾದರೂ ಅದನ್ನು ತನ್ನ ಪರಮ ಶತ್ರುವೆಂದು ಪರಿಗಣಿಸುತ್ತಾನೆ. ಎರಡೂ ಗ್ರಹಗಳು ಮನಸ್ಸು ಮತ್ತು ಬುದ್ಧಿಶಕ್ತಿಗೆ ನೇರವಾಗಿ ಸಂಪರ್ಕ ಹೊಂದಿವೆ. ಕನ್ಯಾ ರಾಶಿಯಲ್ಲಿ ಬುಧ-ಚಂದ್ರನ ಸಂಯೋಗವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆಯಾದರೂ, ಮೂರು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದವರಿಗೆ ಪರಿಸ್ಥಿತಿ ಸ್ವಲ್ಪ ಕಷ್ಟಕರವಾಗಬಹುದು.&lt;/p&gt;&lt;img&gt;&lt;p&gt;ಮೇಷ ರಾಶಿಯವರಿಗೆ, ಬುಧ ಮತ್ತು ಚಂದ್ರನ ಈ ಸಂಯೋಗವು ಆರನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಇದು ಅನಾರೋಗ್ಯ, ಸಾಲ ಮತ್ತು ಶತ್ರುಗಳ ಮನೆಯಾಗಿದೆ. ಈ ರಾಶಿಯಲ್ಲಿ ಜನಿಸಿದವರಿಗೆ, ಮನಸ್ಸು ಮತ್ತು ಬುದ್ಧಿಶಕ್ತಿಯ ನಡುವಿನ ಈ ಸಂಘರ್ಷವು ಮಾನಸಿಕ ತೊಂದರೆಯನ್ನು ಹೆಚ್ಚಿಸಬಹುದು. ಕೆಲಸದಲ್ಲಿ ಸಹೋದ್ಯೋಗಿಯೊಂದಿಗೆ ಸಂಘರ್ಷ ಉಂಟಾಗಬಹುದು. ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಅನಿರೀಕ್ಷಿತ ವೆಚ್ಚವು ಸಾಲಕ್ಕೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ಸಿಂಹ ರಾಶಿಲೋಚನೆಗಳು ಮತ್ತು ಮಾತಿನ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದು ನಷ್ಟಗಳಿಗೆ ಕಾರಣವಾಗಬಹುದು. ಇಂದು ದೊಡ್ಡ ಹೂಡಿಕೆಗಳನ್ನು ತಪ್ಪಿಸಿ. ಒಳಬರುವ ಹಣಕಾಸಿನ ಒಳಹರಿವು ನಿಲ್ಲಬಹುದು.&lt;/p&gt;&lt;img&gt;&lt;p&gt;ಕುಂಭ ರಾಶಿಯವರಿಗೆ, ಈ ಸಂಯೋಗವು ಎಂಟನೇ ಮನೆಯಲ್ಲಿ ರೂಪುಗೊಳ್ಳುತ್ತಿದೆ, ಇದು ಬಿಕ್ಕಟ್ಟು, ಅನಿಶ್ಚಿತತೆ ಮತ್ತು ರಹಸ್ಯಗಳ ಮನೆಯಾಗಿದೆ. ಕೆಲವೊಮ್ಮೆ, ಈ ಸಂಯೋಗವು ಭ್ರಮೆಗಳಿಗೆ ಕಾರಣವಾಗಬಹುದು. ಸರಿ ಮತ್ತು ತಪ್ಪುಗಳನ್ನು ತಪ್ಪಾಗಿ ನಿರ್ಣಯಿಸುವುದು ಸಾಧ್ಯ. ಇದು ಆತಂಕವನ್ನು ಸಹ ಉಂಟುಮಾಡಬಹುದು. ವ್ಯಾಪಾರ ಒಪ್ಪಂದಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಲು ಇದು ಸರಿಯಾದ ಸಮಯವಲ್ಲ. ಪಾಲುದಾರಿಕೆಯಲ್ಲಿ ನೀವು ಮೋಸವನ್ನು ಎದುರಿಸಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರಾಸಕ್ತಿ ಅನುಭವಿಸಬಹುದು.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/mati-bhram-yog-moon-mercury-conjunction-bad-for-3-zodiac-signs-suh-lkvb0ps"/>
        </item>
        <item>
            <title><![CDATA[ಮಗಳು ವೈಶಾಲಿ ಜನ್ಮದಿನಕ್ಕೆ ಮೈಸೂರು ಆನೆ ದತ್ತು ಕೊಡಿಸಿದ ಅಪ್ಪ ಶಾಸಕ ವಿನಯ್ ಕುಲಕರ್ಣಿ!]]></title>
            <link>https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068</link>
            <guid isPermaLink="true">https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068</guid>
            <pubDate>Fri, 11 Sep 2026 11:36:01 +0530</pubDate>
            <description><![CDATA[ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್ ಕುಲಕರ್ಣಿ ಅವರು ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿಯವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ದತ್ತು ಸ್ವೀಕಾರ ನಡೆಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01m27gpgrnsx89j7fc2avetrbw,imgname-mla-vinay-kulkarni-vaishali-kulkarni-1789106275093.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಸೆ.11): ಮೈ&lt;/strong&gt;ಸೂರು ನಗರದ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ವಿನಯ್&zwnj; ಕುಲಕರ್ಣಿ ಅವರು 3 ಲಕ್ಷ ರು. ಪಾವತಿಸಿ ಭಾರತೀಯ ಆನೆಯನ್ನು ದತ್ತು ಸ್ವೀಕರಿಸಿದ್ದಾರೆ. ಈ ಮಹತ್ವದ ಕೊಡುಗೆಯನ್ನು ಮೃಗಾಲಯ ಪ್ರಾಧಿಕಾರವು ಶ್ಲಾಘಿಸಿದೆ. ದತ್ತು ಸ್ವೀಕಾದ ವೇಳೆ ಶಾಸಕ ವಿನಯ್&zwnj; ಕುಲಕರ್ಣಿ ಮತ್ತು ಕುಟುಂಬ ವರ್ಗದವರು ಇದ್ದರು.&lt;/p&gt;&lt;p&gt;ಶಾಸಕ ವಿನಯ್ ಕುಲಕರ್ಣಿ ಅವರು ತಮ್ಮ ಮಗಳು ವೈಶಾಲಿ ಅವರ ಜನ್ಮದಿನದ ಅಂಗವಾಗಿ ಕುಟುಂಬ ಸಮೇತರಾಗಿ ಭೇಟಿ ಮಾಡಿದ್ದರು.ಈ ವೇಳೆ ವಿವಿಧೆಡೆ ಸಂಚಾರ ಮಾಡಿದ ನಂತರ ಮೈಸೂರು ಮೃಗಾಲಯಕ್ಕೆ ಭೇಟಿ ಮಾಡಿದ್ದಾರೆ. ಈ ವೇಳೆ ವೈಶಾಲಿ ಕುಲಕರ್ಣಿ ಅವರು ಆನೆಯನ್ನು ದತ್ತು ಸ್ವೀಕಾರ ಮಾಡಿದ್ದಾರೆ. ಇದೇ ವೇಳೆ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಉಳಿದ ಇಬ್ಬರು ಮಕ್ಕಳು ಕೂಡ ಹಾಜರಿದ್ದರು.&lt;/p&gt;&lt;h2&gt;&lt;strong&gt;6 ವರ್ಷಗಳ ಬಳಿಕ ಧಾರವಾಡ ಪ್ರವೇಶ&lt;/strong&gt;&lt;/h2&gt;&lt;p&gt;ಇನ್ನು ಶಾಸಕ ವಿನಯ್ ಕುಲಕರ್ಣಿ ಅವರು ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊ*ಲೆ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಆದರೆ, ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿದ್ದು, ಬರೋಬ್ಬರಿ 6 ವರ್ಷಗಳ ಬಳಿಕ ತಮ್ಮ ಸ್ವಂತ ಕ್ಷೇತ್ರ ಧಾರವಾಡಕ್ಕೆ ಪ್ರವೇಶ ಕೊಟ್ಟಿದ್ದಾರೆ. ಈ ಮೂಲಕ ಸುಮಾರು 6 ವರ್ಷಗಳ ಬಳಿಕ ತಮ್ಮ ಸ್ವಂತ ಊರಿನಲ್ಲಿ ಕುಟುಂಬದೊಂದಿಗೆ ಸಮಯ ಕಳೆದಿದ್ದಾರೆ. ಇದೀಗ ಎಲ್ಲರೊಂದಿಗೆ ಮೈಸೂರು ಕಡೆಗೆ ಪ್ರವಾಸ ಬಂದಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/mysuru-zoo-mla-vinay-kulkarni-daughter-vaishali-adopts-elephant-rs-3-lakh-sat/articleshow-9e66068"/>
        </item>
        <item>
            <title><![CDATA[ಪೋಷಕರ ವಿರೋಧ ಇದ್ರೂ, 20 ವರ್ಷದ ಯುವತಿಗೆ ಜೈನ ದೀಕ್ಷೆ ಪಡೆದು ಸನ್ಯಾಸಿಯಾಗಲು ಹೈಕೋರ್ಟ್ ಅನುಮತಿ!]]></title>
            <link>https://kannada.asianetnews.com/women/madhya-pradesh-high-court-permits-20-year-old-woman-to-become-jain-monk-despite-family-opposition-gdp/articleshow-9p0pzxe</link>
            <guid isPermaLink="true">https://kannada.asianetnews.com/women/madhya-pradesh-high-court-permits-20-year-old-woman-to-become-jain-monk-despite-family-opposition-gdp/articleshow-9p0pzxe</guid>
            <pubDate>Fri, 11 Sep 2026 11:30:45 +0530</pubDate>
            <description><![CDATA[ಪೋಷಕರ ತೀವ್ರ ವಿರೋಧದ ನಡುವೆಯೂ ಜೈನ ಸನ್ಯಾಸಿನಿಯಾಗಲು ಬಯಸಿದ 20 ವರ್ಷದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್ ಅನುಮತಿ ನೀಡಿದೆ. ವಯಸ್ಕ ನಾಗರಿಕೆಯಾಗಿ ತನ್ನಿಷ್ಟದ ಧರ್ಮವನ್ನು ಆಚರಿಸಲು ಮತ್ತು ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ಆಕೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿ, ಪೊಲೀಸ್ ರಕ್ಷಣೆ ಒದಗಿಸಲು ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27gnkdfkdxhbwfg65ptz6x5,imgname-jain-monk-1789106245038.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಂದೋರ್:&lt;/strong&gt; ಪೋಷಕರು ಹಾಗೂ ಕುಟುಂಬದವರ ತೀವ್ರ ವಿರೋಧದ ನಡುವೆಯೂ, ಲೌಕಿಕ ಜೀವನವನ್ನು ತ್ಯಜಿಸಿ ಜೈನ ಸನ್ಯಾಸಿಯಾಗಲು ಬಯಸಿದ 20 ವರ್ಷದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಆದೇಶದ ಮೂಲಕ ಅನುಮತಿ ನೀಡಿದೆ. ಭಾರತೀಯ ಸಂವಿಧಾನದ ಪ್ರಕಾರ ಅರ್ಜಿದಾರಳು ವಯಸ್ಕ ನಾಗರಿಕಳಾಗಿದ್ದು, ತನ್ನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ತನಗಿಷ್ಟವಾದ ಧರ್ಮವನ್ನು ಆಚರಿಸಲು ಸಂಪೂರ್ಣ ಸ್ವತಂತ್ರಳು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಶ್ವೇತಾಂಬರ ಜೈನ ಧರ್ಮದ ತತ್ವಗಳನ್ನು ಸ್ವೀಕರಿಸಿ 'ದೀಕ್ಷೆ' ಪಡೆಯುವ ಮೂಲಕ ಸಾಧ್ವಿಯಾಗಲು ನಿರ್ಧರಿಸಿದ್ದ ಯುವತಿಗೆ, ಆಕೆಯ ಪೋಷಕರು ಮತ್ತು ಸಂಬಂಧಿಕರು ತೀವ್ರ ಅಡ್ಡಿಪಡಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ತನ್ನ ಧಾರ್ಮಿಕ ಹಕ್ಕಿನ ರಕ್ಷಣೆ ಹಾಗೂ ತಕ್ಷಣದ ಪೊಲೀಸ್ ಭದ್ರತೆ ಕೋರಿ ಯುವತಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.&lt;/p&gt;&lt;h2&gt;ತನ್ನ ಇಷ್ಟದಂತೆ ಧಾರ್ಮಿಕ ಮಾರ್ಗ ಅನುಸರಿಸುವ ಹಕ್ಕಿದೆ&lt;/h2&gt;&lt;p&gt;ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್&zwnj;ನ ಇಂದೋರ್ ಪೀಠದ ನ್ಯಾಯಮೂರ್ತಿ ಸಂದೀಪ್ ಎನ್. ಭಟ್ ಅವರು, ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿ ಈ ತೀರ್ಪನ್ನು ನೀಡಿದ್ದಾರೆ. ಅರ್ಜಿದಾರಳಿಗೆ 20 ವರ್ಷ ವಯಸ್ಸಾಗಿದ್ದು, ಭಾರತದ ಜವಾಬ್ದಾರಿಯುತ ನಾಗರಿಕಳಾಗಿ ಆಕೆಗೆ ತನ್ನ ಇಷ್ಟದಂತೆ ಧಾರ್ಮಿಕ ಮಾರ್ಗವನ್ನು ಅನುಸರಿಸುವ ಹಾಗೂ ಜೀವನ ನಡೆಸುವ ಸಂಪೂರ್ಣ ಹಕ್ಕಿದೆ ಎಂದು ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;ಪ್ರಕರಣದ ಸೂಕ್ಷ್ಮತೆಯನ್ನು ಉಲ್ಲೇಖಿಸಿದ ನ್ಯಾಯಾಲಯವು, ಯುವತಿ ಹಾಗೂ ಆಕೆಯ ಪೋಷಕರ ಪರ ಸಮಾನ ಸಹಾನುಭೂತಿ ವ್ಯಕ್ತಪಡಿಸಿತಾದರೂ, ಕಾನೂನಿನ ಚೌಕಟ್ಟನ್ನು ಎತ್ತಿಹಿಡಿಯಿತು. ಅರ್ಜಿದಾರಳು 18 ವರ್ಷ ಮೇಲ್ಪಟ್ಟ ವಯಸ್ಕಳಾಗಿರುವುದರಿಂದ ಆಕೆಯ ಕೌಟುಂಬಿಕ ಮತ್ತು ಮೂಲಭೂತ ಕಾನೂನು ಹಕ್ಕುಗಳಿಗೆ ರಕ್ಷಣೆ ಸಿಗಲೇಬೇಕು. ಯಾರೇ ಆದರೂ ಆಕೆಯ ನಿರ್ಧಾರಕ್ಕೆ ಅಡ್ಡಿಪಡಿಸುವುದನ್ನು ಕಾನೂನಿನ ದೃಷ್ಟಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.&lt;/p&gt;&lt;p&gt;ಒಂದೊಮ್ಮೆ ಪೋಷಕರಾಗಲಿ ಅಥವಾ ಇತರ ಯಾವುದೇ ವ್ಯಕ್ತಿಗಳಾಗಲಿ ಆಕೆಯ ವಿರುದ್ಧ ಬಲವಂತದ ಕ್ರಮಗಳನ್ನು ಕೈಗೊಂಡರೆ, ಯುವತಿಯು ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ನ್ಯಾಯಾಲಯ ಸೂಚಿಸಿದೆ.&lt;/p&gt;&lt;p&gt;ತನ್ನ ಆದೇಶಕ್ಕೆ ಬೆಂಬಲವಾಗಿ ಹೈಕೋರ್ಟ್, 'ಲತಾ ಸಿಂಗ್&zwnj; ವಿರುದ್ಧ ಉತ್ತರ ಪ್ರದೇಶ ಸರ್ಕಾರ' ಸೇರಿದಂತೆ ಸುಪ್ರೀಂ ಕೋರ್ಟ್&zwnj;ನ ಹಲವು ಪ್ರಮುಖ ತೀರ್ಪುಗಳನ್ನು ಉಲ್ಲೇಖಿಸಿದೆ. 18 ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರರಾಗಿದ್ದು, ಅವರ ಹಿತಾಸಕ್ತಿ ಹಾಗೂ ಸ್ವಾತಂತ್ರ್ಯವನ್ನು ರಕ್ಷಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ ಎಂದು ಈ ತೀರ್ಪುಗಳು ಪ್ರತಿಪಾದಿಸುತ್ತವೆ.&lt;/p&gt;&lt;p&gt;ಅರ್ಜಿದಾರ ಯುವತಿಯು ಭದ್ರತೆ ಕೋರಿ ಯಾವುದೇ ಮನವಿ ಸಲ್ಲಿಸಿದರೆ, ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳು ಅಥವಾ ಸಕ್ಷಮ ಪ್ರಾಧಿಕಾರವು ತಕ್ಷಣವೇ ವಿಷಯವನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.&lt;/p&gt;]]></content:encoded>
            <category><![CDATA[women]]></category>
            <dc:creator>Gowthami K</dc:creator>
            <atom:link href="https://kannada.asianetnews.com/women/madhya-pradesh-high-court-permits-20-year-old-woman-to-become-jain-monk-despite-family-opposition-gdp/articleshow-9p0pzxe"/>
        </item>
        <item>
            <title><![CDATA[BRICS 2026 ಶಾಲಾ ಕಾಲೇಜಿಗೆ ರಜೆ, 1 ಮೆಟ್ರೋ ನಿಲ್ದಾಣ ಬಂದ್, ಸೆ.11-13ರ ವರೆಗೆ ಏನಿದೆ? ಏನಿಲ್ಲ?]]></title>
            <link>https://kannada.asianetnews.com/india-news/brics-2026-delhi-schools-and-colleges-to-get-holiday-metro-services-to-run-as-usual/articleshow-8m1ddcb</link>
            <guid isPermaLink="true">https://kannada.asianetnews.com/india-news/brics-2026-delhi-schools-and-colleges-to-get-holiday-metro-services-to-run-as-usual/articleshow-8m1ddcb</guid>
            <pubDate>Fri, 11 Sep 2026 11:15:53 +0530</pubDate>
            <description><![CDATA[ಸೆಪ್ಟೆಂಬರ್ 11 ರಿಂದ 13ರವರೆಗೆ ಏನಿರುತ್ತೆ, ಏನಿರಲ್ಲ? ಒಂದು ಮೆಟ್ರೋ ನಿಲ್ದಾಣ ಕ್ಲೋಸ್ ಮಾಡಲಾಗಿದೆ. ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಇಂದು ಸಾರ್ವತ್ರಿಕ ರಜೆ ನೀಡಲಾಗಿದೆ. ಬ್ರಿಕ್ಸ್ ಪ್ರಮುಖ ಅಪ್‌ಡೇಟ್]]></description>
            <media:content url="https://static.asianetnews.com/images/w-1280,h-720,format-jpg,imgid-01m27g05f2xj1zz3h2rrw5mmcg,imgname-brics-2026-delhi-whats-open-and-closed-1789105542626.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.11)&lt;/strong&gt; ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ಕೆಲ ಮಹತ್ವದ ಘೋಷಣೆಳು, ನಿರ್ಧಾರಗಳು ಹೊರಬಿದ್ದಿದೆ. ಸೆಪ್ಟೆಂಬರ್ 12 ಹಾಗೂ 13ರಂದು ಸಭೆ ನಡೆಯುವ ಹಿನ್ನಲೆಯಲ್ಲಿ ಶಾಲಾ ಕಾಲೇಜಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ. ಸಂಚಾರ ನಿರ್ಬಂಧ ಹಿನ್ನಲೆಯಲ್ಲಿ ಹಲವು ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದೆ. ಆದರೆ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ಹಲವು ಕ್ರಮ ಕೈಗೊಳ್ಳಲಾಗಿದೆ.&lt;/p&gt;&lt;h2&gt;ಶಾಲಾ ಕಾಲೇಜು ಸೋಮಾವಾರ ಪುನರ್ ಆರಂಭ&lt;/h2&gt;&lt;p&gt;ಈಗಾಗಲೇ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಾಯಕರು ದೆಹಲಿಗೆ ಆಗಮಿಸಿದ್ದಾರೆ. ಹಲವು ಸಂಚಾರ ಮಾರ್ಗ ನಿರ್ಬಂಧಿಸಲಾಗಿದೆ. ಹೆಚ್ಚುವರಿ ಭದ್ರತೆ ಕೈಗೊಳ್ಳಲಾಗಿದೆ. ಹೀಗಾಗಿ ಇಂದಿನಿಂದ (ಸೆ.11) ಭಾನುವಾರವರೆಗೆ (ಸೆ.13) ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ. ಸೆಪ್ಟೆಂಬರ್ 14 ರಂದು ದೆಹಲಿಯ ಶಾಲಾ ಕಾಲೇಜು ಪುನರ್ ಆರಂಭಗೊಳ್ಳಲಿದೆ. ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.&lt;/p&gt;&lt;p&gt;ದೆಹಲಿ ಲೆಫ್ಟಿನೆಂಟ್ ಗರ್ವನರ್ ತರಣಜಿತ್ ಸಿಂಗ್ ಸಂಧು ಮತ್ತೊಂದು ಘೋಷಣೆ ಮಾಡಿದ್ದಾರೆ. ಸೆಪ್ಟೆಂಬರ್ 11 ರಂದು ಸಾರ್ವತ್ರಿಕ ರಜೆ ಘೋಷಿಸಿದ್ದಾರೆ. ಬ್ರಿಕ್ಸ್ ಶೃಂಗಸಭೆ ವೀಕ್ಷಿಸಲು ರಜೆ ನೀಡಲಾಗಿದೆ. ಇತ್ತ ದೆಹಲಿ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.&lt;/p&gt;&lt;h2&gt;ಮೆಟ್ರೋ ಸಂಚಾರ ಎಂದಿನಂತೆ, ಒಂದು ನಿಲ್ದಾಣ ಬಂದ್&lt;/h2&gt;&lt;p&gt;ದೆಹಲಿ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ಸುಪ್ರೀಂ ಕೋರ್ಟ್ ದೆಹಲಿ ಮೆಟ್ರೋ ನಿಲ್ದಾಣ ಬಂದ್ ಮಾಡಲಾಗಿದೆ. ಇನ್ನು ದೆಹಲಿ ಮೆಟ್ರೋ ಮ್ಯೂಸಿಯಂ ಕೂಡ ಬಂದ್ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣ ಹಾಗೂ ಮ್ಯೂಸಿಯಂ ಸೆಪ್ಟೆಂಬರ್ 11 ರಿಂದ 13ರ ವರೆಗೆ ಬಂದ್ ಮಾಡಲಾಗಿದೆ.&lt;/p&gt;&lt;h2&gt;22 ಸಂಚಾರ ಮಾರ್ಗ ಬದಲಾವಣೆ&lt;/h2&gt;&lt;p&gt;ಭಾರತ್ ಮಂಡಪಂ ಸುತ್ತ ಮುತ್ತಲಿನ 22ಕ್ಕೂ ಹೆಚ್ಚು ಮಾರ್ಗದ ಸಂಚಾರ ಬದಲಾಯಿಸಲಾಗಿದೆ. 35ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇದೆ. 4800ಕ್ಕೂ ಹೆಚ್ಚು ಟ್ರಾಫಿಕ್ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ ವಿವಿಐಪಿ ಕಾನ್ವೇಗಳು ಹೆಚ್ಚಾಗಿರುವ ಕಾರಣ ಭದ್ರತಾ ಪಡೆ ಹಾಗೂ ಟ್ರಾಫಿಕ್ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;ಟ್ರಾಫಿಕ್ ಸಂಚಾರ ಬದಲಾವಣೆಯಿಂದ ಕಚೇರಿಗೆ ತೆರಳುವರಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಕೆಲ ಕಂಪನಿಗಳು ವರ್ಕ್ ಫ್ರಮ್ ಹೋಮ್ ನೀಡಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/brics-2026-delhi-schools-and-colleges-to-get-holiday-metro-services-to-run-as-usual/articleshow-8m1ddcb"/>
        </item>
        <item>
            <title><![CDATA[2027ರ ಏಕದಿನ ವಿಶ್ವಕಪ್ ಬಗ್ಗೆ ಉಲ್ಟಾ ಹೊಡೆದ ರೋಹಿತ್ ಶರ್ಮಾ..! ಕೊನೆಯ ಕ್ಷಣದಲ್ಲಿ ಹೀಗ್ಯಾಕೆ ಅಂದ್ರು ಹಿಟ್‌ಮ್ಯಾನ್?]]></title>
            <link>https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk</link>
            <guid isPermaLink="true">https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk</guid>
            <pubDate>Fri, 11 Sep 2026 11:01:08 +0530</pubDate>
            <description><![CDATA[ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ, ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದರೆ ಇದೀಗ ಹಿಟ್‌ಮ್ಯಾನ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27453f80n0851s3hf9pmgys,imgname-rohit-sharma-non-committal-t-shirt-1789093121511.gif" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋಹಿತ್ ಶರ್ಮಾ, ಲಾರ್ಡ್ಸ್&zwnj;ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಆದರೆ ಇದೀಗ ಹಿಟ್&zwnj;ಮ್ಯಾನ್ ಅಚ್ಚರಿಯ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.&lt;/p&gt;&lt;img&gt;&lt;p&gt;ಕೆಲ ತಿಂಗಳ ಹಿಂದೆ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯೇ ಹಿಟ್&zwnj;ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ ಎನ್ನುವ ಚರ್ಚೆ ಜೋರಾಗಿತ್ತು. ಅದಕ್ಕೆ ತಕ್ಕಂತೆ ರೋಹಿತ್ ಶರ್ಮಾ ಕೂಡಾ ಮೊದಲೆರಡು ಪಂದ್ಯಗಳಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್&zwnj; ಒಪ್ಪಿಸಿ ವೈಫಲ್ಯ ಅನುಭವಿಸಿದ್ದರು.&lt;/p&gt;&lt;img&gt;&lt;p&gt;ಹೀಗಾಗಿ ಲಾರ್ಡ್ಸ್&zwnj;ನಲ್ಲಿ ನಿಗದಿಯಾಗಿದ್ದ ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗುವ ಸಾಧ್ಯತೆಯಿದೆ ಎನ್ನುವ ಚರ್ಚೆಗಳ ನಡುವೆ ಹಿಟ್&zwnj;ಮ್ಯಾನ್ ಆಕರ್ಷಕ ಶತಕ ಸಿಡಿಸುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಈ ಮೂಲಕ ತಾನು 2027ರ ಏಕದಿನ ವಿಶ್ವಕಪ್ ಆಡಲು ಫಿಟ್ ಇದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದರು.&lt;/p&gt;&lt;img&gt;&lt;p&gt;ಇದೀಗ 2027ರ ಏಕದಿನ ವಿಶ್ವಕಪ್&zwnj;ನಲ್ಲಿ ಆಡುವ ಬಗ್ಗೆ ಭಾರತದ ಮಾಜಿ ನಾಯಕ ರೋಹಿತ್&zwnj; ಶರ್ಮಾ ಕೊನೆಗೂ ಮೌನ ಮುರಿದಿದ್ದು, ಅದಕ್ಕಿನ್ನೂ ಸಮಯವಿದೆ, ನೋಡೋಣ ಎಂದು ಉಲ್ಟಾ ಹೊಡೆದಿದ್ದಾರೆ. ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಪಾಲ್ಗೊಂಡ ರೋಹಿತ್&zwnj;ಗೆ ಪತ್ರಕರ್ತರಿಂದ 2027ರ ವಿಶ್ವಕಪ್&zwnj; ಬಗ್ಗೆ ಪ್ರಶ್ನೆ ಎದುರಾಯಿತು.&lt;/p&gt;&lt;img&gt;&lt;p&gt;ಅದಕ್ಕೆ ಉತ್ತರಿಸಿದ ರೋಹಿತ್&zwnj;, &lsquo;2027ರ ಅಕ್ಟೋಬರ್&zwnj;ಗೆ ಇನ್ನೂ ಸಮಯವಿದೆ. ಅದರ ಬಗ್ಗೆ ಆಗಲೇ ನೋಡೋಣ&rsquo; ಎಂದಿದ್ದಾರೆ. ಇನ್ನು, 2024ರ ವಿಶ್ವಕಪ್&zwnj; ಗೆಲುವಿನ ಬಳಿಕ ಮುಂಬೈನಲ್ಲಿ ನಡೆದ ತೆರೆದ ಬಸ್&zwnj;ನ ವಿಜಯಯಾತ್ರೆ ರೀತಿ 2027ರ ವಿಶ್ವಕಪ್&zwnj; ಗೆದ್ದ ಬಳಿಕವೂ ಪರೇಡ್&zwnj; ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್&zwnj;, &lsquo;ಬಸ್ ಪರೇಡ್&zwnj; ಈಗ ಸಾಧ್ಯವಿದೆ ಎಂದು ನನಗೆ ಅನಿಸುವುದಿಲ್ಲ&rsquo; ಎಂದಿದ್ದಾರೆ.&lt;/p&gt;&lt;img&gt;&lt;p&gt;ರೋಹಿತ್ ಶರ್ಮಾ ಒಮ್ಮೆ ಆಟಗಾರನಾಗಿ ಹಾಗೂ ಒಮ್ಮೆ ನಾಯಕನಾಗಿ ಒಟ್ಟು ಎರಡು ಟಿ20 ವಿಶ್ವಕಪ್ ಜಯಿಸಿದ್ದಾರೆ. ಅದೇ ರೀತಿ ಒಮ್ಮೆ ಆಟಗಾರನಾಗಿ ಹಾಗೂ ಒಮ್ಮೆ ನಾಯಕನಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದ್ದಾರೆ. ಆಟಗಾರನಾಗಿ ಒಮ್ಮೆಯೂ ಏಕದಿನ ವಿಶ್ವಕಪ್ ಗೆಲ್ಲಲು ರೋಹಿತ್ ಶರ್ಮಾಗೆ ಸಾಧ್ಯವಾಗಿಲ್ಲ. ಅದೊಂದು ಕೊರಗು ಈಗಲೂ ರೋಹಿತ್&zwnj;ಗೆ ಇದೆ.&lt;/p&gt;&lt;img&gt;&lt;p&gt;2011ರಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್ ಗೆದ್ದಾಗ ರೋಹಿತ್ ಶರ್ಮಾಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದಾದ ಬಳಿಕ 2015 ಹಾಗೂ 2019 ಏಕದಿನ ವಿಶ್ವಕಪ್&zwnj;ನಲ್ಲಿ ಭಾರತ ಸೆಮೀಸ್&zwnj;ನಲ್ಲೇ ಮುಗ್ಗರಿಸಿತ್ತು. ಇನ್ನು 2023ರ ಏಕದಿನ ವಿಶ್ವಕಪ್&zwnj;ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾಗೆ ಶರಣಾಗಿತ್ತು. ಇದೀಗ ರೋಹಿತ್ ಶರ್ಮಾ ಅವರ ಈ ಹೇಳಿಕೆ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/2027-odi-world-cup-rohit-sharma-finally-speaks-but-his-answer-raises-more-questions-kvn-4qxtssk"/>
        </item>
        <item>
            <title><![CDATA[ಸೆಪ್ಟೆಂಬರ್ 11 ಇಂದು 4 ರಾಜಯೋಗದಿಂದ ಈ 4 ರಾಶಿಗೆ ದೊಡ್ಡ ಅವಕಾಶ, ಉತ್ತಮ ಲಾಭ]]></title>
            <link>https://kannada.asianetnews.com/gallery/festivals/11-september-2026-prediction-lucky-zodiac-signs-suh-34o1a5d</link>
            <guid isPermaLink="true">https://kannada.asianetnews.com/gallery/festivals/11-september-2026-prediction-lucky-zodiac-signs-suh-34o1a5d</guid>
            <pubDate>Fri, 11 Sep 2026 10:51:03 +0530</pubDate>
            <description><![CDATA[ಸೆಪ್ಟೆಂಬರ್ 11 2026 ರಂದು ಹಂಸ, ಭದ್ರ ಮತ್ತು ಮಾಲವ್ಯರನ್ನು ಒಳಗೊಂಡ ಶಕ್ತಿಶಾಲಿ ಪಂಚ ಮಹಾಪುರುಷ ರಾಜಯೋಗವು ಜಾರಿಗೆ ಬರಲಿದೆ. ಈ ಶುಭ ಗ್ರಹ ಜೋಡಣೆಯು ಈ ಐದು ರಾಶಿಗೆ ಹೂಡಿಕೆಗಳ ಮೇಲೆ ಬಂಪರ್ ಲಾಭ ಮತ್ತು ಹೊಸ ಅವಕಾಶಗಳನ್ನು ತರುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27cmq2sa2xgg6aj78crbsae,imgname-11-september-2026-prediction-lucky-zodiac-signs-1789102021721.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೆಪ್ಟೆಂಬರ್ 11 2026 ರಂದು ಹಂಸ, ಭದ್ರ ಮತ್ತು ಮಾಲವ್ಯರನ್ನು ಒಳಗೊಂಡ ಶಕ್ತಿಶಾಲಿ ಪಂಚ ಮಹಾಪುರುಷ ರಾಜಯೋಗವು ಜಾರಿಗೆ ಬರಲಿದೆ. ಈ ಶುಭ ಗ್ರಹ ಜೋಡಣೆಯು ಈ ಐದು ರಾಶಿಗೆ ಹೂಡಿಕೆಗಳ ಮೇಲೆ ಬಂಪರ್ ಲಾಭ ಮತ್ತು ಹೊಸ ಅವಕಾಶಗಳನ್ನು ತರುತ್ತದೆ.&lt;/p&gt;&lt;img&gt;&lt;p&gt;ಸೆಪ್ಟೆಂಬರ್ 11 ರಂದು ಗ್ರಹಗಳ ಜೋಡಣೆಗಳು ದೊಡ್ಡ ಮತ್ತು ಸಣ್ಣ ಎರಡೂ ರೀತಿಯ ಹಲವಾರು ಶಕ್ತಿಶಾಲಿ ಯೋಗಗಳನ್ನು ಸೃಷ್ಟಿಸುತ್ತಿವೆ. ಗುರುವಿನ ಹಂಸ ರಾಜಯೋಗ, ಬುಧನ ಭದ್ರ ರಾಜಯೋಗ ಮತ್ತು ತುಲಾ ರಾಶಿಯ ಮಾಲವ್ಯ ರಾಜಯೋಗಗಳು ಈ ದಿನದಂದು ಸಕ್ರಿಯವಾಗಿದ್ದು, ಪಂಚ ಮಹಾಪುರುಷ ಯೋಗದ ಪ್ರಬಲ ರಾಜಯೋಗಗಳನ್ನು ರೂಪಿಸುತ್ತವೆ. ಹೆಚ್ಚುವರಿಯಾಗಿ, ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗವು ರೂಪುಗೊಳ್ಳುತ್ತಿದೆ. ಈ ದಿನದಂದು ಶುಕ್ರನು ಸ್ವಾತಿ ನಕ್ಷತ್ರದ ಮೂಲಕವೂ ಸಾಗುತ್ತಾನೆ. ಜ್ಯೋತಿಷಿ ಹರ್ಷವರ್ಧನ್ ಶಾಂಡಿಲ್ಯರ ಪ್ರಕಾರ, ಸೆಪ್ಟೆಂಬರ್ 11 ರಂದು ಎಲ್ಲಾ ರಾಶಿಚಕ್ರ ಚಿಹ್ನೆಗಳು ಈ ಜ್ಯೋತಿಷ್ಯ ಸಂಯೋಜನೆಗಳಿಂದ ಪ್ರಭಾವಿತವಾಗಿದ್ದರೂ, ಐದು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದವರಿಗೆ ಈ ದಿನವು ಅತ್ಯಂತ ಫಲಪ್ರದವಾಗಬಹುದು.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯಲ್ಲಿ ಹಂಸರಾಜ ಯೋಗ ಉಂಟಾಗುವುದರಿಂದ ಈ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆಗಳು ಗಮನಾರ್ಹ ಲಾಭವನ್ನು ತರಬಹುದು . ಈ ದಿನ ದೀರ್ಘಾವಧಿಯ ಹೂಡಿಕೆಗಳಿಗೆ ಒಳ್ಳೆಯದು . ನೀವು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು . ಈ ದಿನ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳು ಅತ್ಯುತ್ತಮವಾಗಿರುತ್ತವೆ . ನೀವು ಹೊಸ ಉದ್ಯಮವನ್ನು ಪ್ರಾರಂಭಿಸುವ ಯೋಜನೆಗಳನ್ನು ಹೊಂದಿದ್ದರೆ, ಇದು ಒಳ್ಳೆಯ ದಿನ . ರಾಜಕೀಯಕ್ಕೆ ಸಂಬಂಧಿಸಿದ ಗೌರವ ಮತ್ತು ಗೌರವವನ್ನು ನೀವು ಪಡೆಯಬಹುದು . ಕುಟುಂಬದ ಬೆಂಬಲ ಉಳಿಯುತ್ತದೆ .&lt;/p&gt;&lt;img&gt;&lt;p&gt;ಕನ್ಯಾರಾಶಿಯಲ್ಲಿ ಬುಧ ಗ್ರಹವು ಭದ್ರ ರಾಜ್ಯಯೋಗವನ್ನು ರೂಪಿಸುತ್ತಿದೆ . ಈ ದಿನ ಚಂದ್ರನು ಈ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ . ಈ ದಿನ, ಈ ರಾಶಿಯಲ್ಲಿ ಜನಿಸಿದವರ ತಾರ್ಕಿಕ ಸಾಮರ್ಥ್ಯಗಳು ಹೊಸ ಮಟ್ಟವನ್ನು ತಲುಪುತ್ತವೆ . ಷೇರು ವ್ಯಾಪಾರವು ಅನಿರೀಕ್ಷಿತ ಲಾಭಗಳನ್ನು ತರಬಹುದು . ಐಟಿ ಕ್ಷೇತ್ರದಲ್ಲಿರುವವರು ವಿದೇಶಕ್ಕೆ ಇಳಿಯಬಹುದು . ಉದ್ಯೋಗಾಕಾಂಕ್ಷಿಗಳು ಸಂಪರ್ಕದ ಮೂಲಕ ಉತ್ತಮ ಕೆಲಸವನ್ನು ಪಡೆಯಬಹುದು . ಕಳೆದುಹೋದ ಹಣ ಮರಳಿ ಬರುವ ಸಾಧ್ಯತೆಗಳಿವೆ .&lt;/p&gt;&lt;img&gt;&lt;p&gt;ಸೆಪ್ಟೆಂಬರ್ 11 ರಂದು, ಶುಕ್ರನು ಸ್ವಾತಿ ನಕ್ಷತ್ರಕ್ಕೆ ಸಾಗುತ್ತಾನೆ, ಇದು ತುಲಾ ರಾಶಿಯವರಿಗೆ ಗುಪ್ತ ಸಂಪತ್ತಿಗೆ ಬಾಗಿಲು ತೆರೆಯಬಹುದು . ಮಾಡಿದ ಹೂಡಿಕೆಗಳು ಲಾಭವನ್ನು ನೀಡುತ್ತವೆ . ಕಲೆ, ಜವಳಿ ಮತ್ತು ಇತರ ಕೈಗಾರಿಕೆಗಳಲ್ಲಿ ತೊಡಗಿರುವವರು ಗಣನೀಯ ಲಾಭವನ್ನು ಗಳಿಸಬಹುದು . ಪಾಲುದಾರಿಕೆಯನ್ನು ಪ್ರಾರಂಭಿಸಲು ಈ ದಿನವು ಅತ್ಯುತ್ತಮ ದಿನವಾಗಬಹುದು . ಭೌತಿಕ ಸೌಕರ್ಯಗಳು ಮತ್ತು ಐಷಾರಾಮಿ ವಸ್ತುಗಳು ಹೆಚ್ಚಾಗುತ್ತವೆ . ನೀವು ಚಿಂತೆಗಳಿಂದ ಮುಕ್ತರಾಗಿ ಹೃದಯದಲ್ಲಿ ಸಂತೋಷವನ್ನು ಅನುಭವಿಸುವಿರಿ .&lt;/p&gt;&lt;img&gt;&lt;p&gt;ಸೆಪ್ಟೆಂಬರ್ 11 ಧನು ರಾಶಿಯವರಿಗೆ ಅದ್ಭುತ ದಿನವಾಗಬಹುದು . ಗುರು ಮತ್ತು ಶನಿಯ ನವ ಪಂಚಮ ಸಂಯೋಗವು ನಿಮಗೆ ಅತ್ಯಂತ ಫಲಪ್ರದವಾಗಬಹುದು . ಹಳೆಯ ಸ್ಥಿರ ಠೇವಣಿ ಉತ್ತಮ ಮತ್ತು ಸುರಕ್ಷಿತ ಆದಾಯವನ್ನು ನೀಡುತ್ತದೆ . ನಿಮಗೆ ಲಾಟರಿ ಕೂಡ ಹೊಡೆಯಬಹುದು . ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ಸಾಧ್ಯತೆಯಿದೆ . ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಮಾಡುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು .&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/11-september-2026-prediction-lucky-zodiac-signs-suh-34o1a5d"/>
        </item>
        <item>
            <title><![CDATA[ಬಿಕ್ಸ್ ಶೃಂಗಸಭೆಯಿಂದ 120ಕ್ಕೂ ಹೆಚ್ಚು ರೈಲು ಸಂಚಾರ ಮಾರ್ಗ ಬದಲಾವಣೆ, ಹಲವು ರದ್ದು, ಇಲ್ಲಿದೆ ಲಿಸ್ಟ್]]></title>
            <link>https://kannada.asianetnews.com/india-news/brics-summit-over-120-trains-to-be-diverted-several-cancelled-check-full-list/articleshow-kyvmoom</link>
            <guid isPermaLink="true">https://kannada.asianetnews.com/india-news/brics-summit-over-120-trains-to-be-diverted-several-cancelled-check-full-list/articleshow-kyvmoom</guid>
            <pubDate>Fri, 11 Sep 2026 10:39:11 +0530</pubDate>
            <description><![CDATA[ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಿಂದ ರೈಲು ಸಂಚಾರದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಹಲವು ರೈಲುಗಳು ರದ್ದಾಗಿದೆ. ರೈಲು ವಿಳಂಬ ಮಾರ್ಗ ಬದಲಾವಣೆ ಸೇರಿದಂತೆ ವ್ಯತ್ಯಯದ ಸಂಪೂರ್ಣ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27dx214q1ktb459f8fnpa2m,imgname-brics-summit-impact-trains-1789103343652.png" type="image/jpeg" height="390" width="690"/>
            <content:encoded><![CDATA[&lt;p&gt;ನ&lt;strong&gt;ವದೆಹಲಿ (ಸೆ.11) &lt;/strong&gt;ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬ್ರಿಕ್ಸ್ (BRICS Summit 2026) ಶೃಂಗಸಭೆ ನಡೆಯುತ್ತಿದೆ. ಸೆಪ್ಟೆಂಬರ್ 12 ಹಾಗೂ 13ರಂದು ಪ್ರಮುಖ ದೇಶಗಳ ನಾಯಕರು, ನಿಯೋಗ ಸಭೆ ಸೇರುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್&zwnj;ಪಿಂಗ್ ಸೇರಿದಂತೆ ಪ್ರಮುಖ ನಾಯಕರು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ. ಹೀಗಾಗಿ ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಬ್ರಿಕ್ಸ್ ಶೃಂಗಸಭೆ ಹಿನ್ನಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಭಾರತೀಯ ರೈಲ್ವೇ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಬ್ರಿಕ್ಸ್ ಶೃಂಗಸಭೆಯಿಂದ ಬರೋಬ್ಬರಿ 120ಕ್ಕೂ ಹೆಚ್ಚು ರೈಲುಗಳ ಸೇವೆಯಲ್ಲಿ ವಿಳಂಬ, ಹಲವು ರದ್ದು, ಮತ್ತೆ ಕೆಲವು ರೈಲುಗಳ ಮಾರ್ಗ ಬದಲಾವಣೆಯಾಗುತ್ತಿದೆ.&lt;/p&gt;&lt;p&gt;ಸೆಪ್ಟೆಂಬರ್ 11 ರಿಂದ 13ರ ವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಪ್ರಮುಖ ನಾಯಕರು ಸೆಪ್ಟೆಂಬರ್ 11 ರಂದು ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿ ಡಿವಿಶನ್ ರೈಲು ಕಾರ್ಯನಿರ್ವಹಣೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನವ ದೆಹಲಿ ರಾಂಚಿ ರಾಜಧಾನಿ ಎಕ್ಸ್&zwnj;ಪ್ರೆಸ್, ನವದೆಹಲಿ ದಿಬ್ರುಗಡ ರಾಜಧಾನಿ ಎಕ್ಸ್&zwnj;ಪ್ರೆಸ್, ನವದೆಹಲಿ ಸೆಲ್ದಾ ರಾಜಧಾನಿ ಎಕ್ಸ್&zwnj;ಪ್ರೆಸ್, ದೆಹಲಿ ಹೌರಾ ರಾಜಧಾನಿ ಎಕ್ಸ್&zwnj;ಪೆಸ್, ನವ ದೆಹಲಿ ಭುವನೇಶ್ವರ್ ರಾಜಧಾನಿ ಎಕ್ಸ್&zwnj;ಪ್ಸೆಸ್, ಮುಂಬೈ ತೇಜಸ್ ರಾಜಧಾನಿ, ನವದೆಹಲಿ ರಾಜೇಂದ್ರ ನಗರ ಟರ್ಮಿನಲ್, ವಂದೇ ಭಾರತ್ ಎಕ್ಸ್&zwnj;ಪ್ರೆಸ್, ನವ ದೆಹಿ ಹೌರ ಪೂರ್ವ ಎಕ್ಸ್&zwnj;ಪ್ರೆಸ್ ಸೇರಿದಂತೆ ಹಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.&lt;/p&gt;&lt;h2&gt;ಹಲವು ರೈಲು ಮಾರ್ಗ ಬದಲಾವಣೆ&lt;/h2&gt;&lt;p&gt;ಬ್ರಿಕ್ಸ್ ಶೃಂಗಸಭೆಯಿಂದ ಪ್ರೀಮಿಯಂ ಹಾಗೂ ಸೂಪರ್&zwnj;ಫಾಸ್ಟ್ ರೈಲು ಮಾರ್ಗಗಳ ಬದಲಾವಣೆ ಮಾಡಲಾಗಿದೆ. ದೆಹಲಿ ಜಂಕ್ಷನ್, ದೆಹಲಿ ಶಹದರ, ಶಾಹೀಬಾದ್, ತಿಲಕ್ ಬ್ರಿಡ್ಜ್, ಹಜ್ರತ್ ನಿಜಾಮುದ್ದಿನ್ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಮಾರ್ಗದಲ್ಲಿ ಸಂಚರಿವು ರೈಲುಗಳ ಮಾರ್ಗಗಳು ಬದಲಾಗಲಿದೆ. ಹೀಗಾಗಿ ಸಂಪೂರ್ಣ ಕ್ರಾಂತಿ ಎಕ್ಸ್&zwnj;ಪ್ರೆಸ್, ಗೋಮಿತಿ ಎಕ್ಸ್&zwnj;ಪ್ರೆಸ್, ಮಗ್ದ್ ಎಕ್ಸ್&zwnj;ಪ್ರೆಸ್, ಶಿವ ಗಂಗಾ, ಸ್ವತಂತ್ರ ಸೇನಾನಿ ಎಕ್ಸ್&zwnj;ಪ್ರೆಸ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ.&lt;/p&gt;&lt;h2&gt;ಹಲವು ರೈಲುಗಳು ವಿಳಂಬ&lt;/h2&gt;&lt;p&gt;ಶೃಂಗಸಭೆ ಹಿನ್ನಲೆಯಲ್ಲಿ ಹಲವು ಮಾರ್ಗ ಬದಲಾವಣೆ ಮಾಡಲಾಗಿದೆ. ಕೆಲ ರೈಲುಗಳು ರದ್ದು ಮಾಡಲಾಗಿದೆ. ಇನ್ನು ಗ್ರ್ಯಾಂಡ್ ಟ್ರಂಕ್ ಎಕ್ಸ್&zwnj;ಪ್ರೆಸ್, ತೇಜಸ್ ರಾಜಧಾನಿ, ಪಶ್ಚಿಮ ಎಕ್ಸ್&zwnj;ಪ್ಸೆ, ನ್ಯೂ ಡೆಲ್ಲಿ ಹೈದರಾಬಾದ್ ಎಕ್ಸ್&zwnj;ಪ್ರೆಸ್ ರೈಲುಗಳು ವಿಳಂಬವಾಗಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. 15 ರಿಂದ ಗರಿಷ್ಠ 2 ಗಂಟೆ ವರೆಗೆ ವಿಳಂಬವಾಗುವ ಸಾಧ್ಯತೆ ಇದೆ ಎಂದಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/brics-summit-over-120-trains-to-be-diverted-several-cancelled-check-full-list/articleshow-kyvmoom"/>
        </item>
        <item>
            <title><![CDATA[ದೆಹಲಿಯಲ್ಲಿ ದಕ್ಷಿಣದ ಬದ್ಧ ವೈರಿಗಳಾದ ಇರಾನ್, ಸೌದಿ, ಯುಎಇ ನಾಯಕರ ಸಮಾಗಮ! ಭಾರತದ ಜಾಣ್ಮೆಯ ಹೆಜ್ಜೆ ಹೀಗಿದೆ]]></title>
            <link>https://kannada.asianetnews.com/bengaluru-urban/red-sea-crisis-houthi-mocha-port-india-iran-saudi-uae-diplomacy-brics-sat/articleshow-5614q9v</link>
            <guid isPermaLink="true">https://kannada.asianetnews.com/bengaluru-urban/red-sea-crisis-houthi-mocha-port-india-iran-saudi-uae-diplomacy-brics-sat/articleshow-5614q9v</guid>
            <pubDate>Fri, 11 Sep 2026 10:37:22 +0530</pubDate>
            <description><![CDATA[ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಮೋಕಾ ಬಂದರನ್ನು ವಶಪಡಿಸಿಕೊಂಡು ಜಾಗತಿಕ ವ್ಯಾಪಾರಕ್ಕೆ ಬೆದರಿಕೆ ಒಡ್ಡಿರುವ ಹೊತ್ತಲ್ಲೇ, ಪಶ್ಚಿಮ ಏಷ್ಯಾದ ಬದ್ಧವೈರಿಗಳಾದ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ನಾಯಕರು ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಬೆಳವಣಿಗೆಯು ಭಾರತದ ಇಂಧನ ಭದ್ರತೆಗೆ ಸವಾಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m27dhfef6d1qq3yq3bfv52ck,imgname-brics-india-summit-2026-1789102964175.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಸೆ.11): ಪ&lt;/strong&gt;ಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಸಂಘರ್ಷ ಮತ್ತು ಕೆಂಪು ಸಮುದ್ರದಲ್ಲಿನ ನೌಕಾ ಬಿಕ್ಕಟ್ಟಿನ ನಡುವೆಯೇ, ಜಾಗತಿಕ ರಾಜತಾಂತ್ರಿಕತೆಯ ಪ್ರಮುಖ ಕೇಂದ್ರವಾಗಿ ನವದೆಹಲಿ ಹೊರಹೊಮ್ಮಿದೆ. ಒಂದೆಡೆ ಯೆಮನ್&zwnj;ನ ಹೌತಿ ಬಂಡುಕೋರರು 2017ರ ನಂತರ ಮೊದಲ ಬಾರಿಗೆ ಆಯಕಟ್ಟಿನ 'ಮೋಕಾ ಬಂದರು' (Port of Mocha) ಅನ್ನು ವಶಪಡಿಸಿಕೊಂಡು ಜಾಗತಿಕ ವ್ಯಾಪಾರ ಮಾರ್ಗಕ್ಕೆ ಹೊಸ ಬೆದರಿಕೆ ಒಡ್ಡಿದ್ದರೆ, ಮತ್ತೊಂದೆಡೆ ಪಶ್ಚಿಮ ಏಷ್ಯಾದ ಬದ್ಧವೈರಿಗಳೆಂದೇ ಬಿಂಬಿತವಾಗಿರುವ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳ ಪ್ರಮುಖ ನಾಯಕರು ನವದೆಹಲಿಯಲ್ಲಿ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಮೋಕಾ ಬಂದರು ವಶ: ಭಾರತಕ್ಕೆ ಆತಂಕ?&lt;/strong&gt;&lt;/h2&gt;&lt;p&gt;ಹೌತಿಗಳು ವಶಪಡಿಸಿಕೊಂಡಿರುವ ಮೋಕಾ ಬಂದರು, ಜಾಗತಿಕ ನೌಕಾ ಸಂಚಾರದ ಜೀವನಾಡಿಯಾಗಿರುವ ಬಾಬ್ ಅಲ್-ಮಂದೇಬ್ (Bab-el-Mandeb) ಜಲಸಂಧಿಯಿಂದ ಕೇವಲ 75 ಕಿ.ಮೀ ದೂರದಲ್ಲಿದೆ. ಇದು ಕೆಂಪು ಸಮುದ್ರವನ್ನು ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸಂಪರ್ಕಿಸುವ ಹೆಬ್ಬಾಗಿಲಾಗಿದೆ. ಭಾರತವು ತಾನು ಆಮದು ಮಾಡಿಕೊಳ್ಳುವ ಒಟ್ಟು ಕಚ್ಚಾತೈಲದ ಸುಮಾರು 80% ರಷ್ಟನ್ನು ಇದೇ ಕೆಂಪು ಸಮುದ್ರ ಮತ್ತು ಬಾಬ್ ಅಲ್-ಮಂದೇಬ್ ಮಾರ್ಗದ ಮೂಲಕವೇ ಸಾಗಿಸುತ್ತದೆ. ಇಷ್ಟೇ ಅಲ್ಲದೆ, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಭಾರತೀಯರು ನೆಲೆಸಿದ್ದು, ಈ ಪ್ರದೇಶದ ಅಸ್ಥಿರತೆ ಭಾರತದ ಇಂಧನ ಭದ್ರತೆ ಮತ್ತು ಪ್ರಜೆಗಳ ಹಿತಾಸಕ್ತಿಗೆ ನೇರ ಸವಾಲಾಗಿದೆ.&lt;/p&gt;&lt;h2&gt;&lt;strong&gt;ದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆ: ಮೂರು ರಾಷ್ಟ್ರಗಳ ನಾಯಕರ ಆಗಮನ&lt;/strong&gt;&lt;/h2&gt;&lt;p&gt;ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯು 'ರೆಸಿಲಿಯನ್ಸ್, ಇನ್ನೋವೇಶನ್ ಮತ್ತು ಸಸ್ಟೈನಬಿಲಿಟಿ' (ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಸುಸ್ಥಿರತೆ) ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜನೆಗೊಂಡಿದೆ. ಈ ಶೃಂಗಸಭೆಯ ಭಾಗವಾಗಿ ಪಶ್ಚಿಮ ಏಷ್ಯಾದ ಮೂವರು ಪ್ರಮುಖ ನಾಯಕರು ಭಾರತಕ್ಕೆ ಆಗಮಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಇರಾನ್&lt;/strong&gt;: ಇರಾನ್&zwnj;ನ ನೂತನ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅವರು ಸೆಪ್ಟೆಂಬರ್ 11ರಂದೇ ದೆಹಲಿಗೆ ಆಗಮಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬ್ರಿಕ್ಸ್ ಒಕ್ಕೂಟದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದು ಮತ್ತು ಅಮೆರಿಕದ ದಿಗ್ಬಂಧನಗಳ ವಿರುದ್ಧ ಪ್ರಬಲ ನಿಲುವು ಪ್ರದರ್ಶಿಸುವುದು ಇರಾನ್&zwnj;ನ ಉದ್ದೇಶವಾಗಿದೆ.&lt;/p&gt;&lt;p&gt;&lt;strong&gt;ಸೌದಿ ಅರೇಬಿಯಾ:&lt;/strong&gt; ಸೌದಿ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರು ಸೆಪ್ಟೆಂಬರ್ 12ರಂದು ರಾಜಧಾನಿಗೆ ಆಗಮಿಸಲಿದ್ದಾರೆ.&lt;/p&gt;&lt;p&gt;&lt;strong&gt;ಯುಎಇ:&lt;/strong&gt; ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯಿದ್ ಅವರ ಪರವಾಗಿ ಅಬುಧಾಬಿಯ ಕ್ರೌನ್ ಪ್ರಿನ್ಸ್ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯಿದ್ ಅಲ್ ನಹ್ಯಾನ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾಗವಹಿಸಲಿದೆ.&lt;/p&gt;&lt;h2&gt;&lt;strong&gt;ಭಾರತದ ಸಮತೋಲನ ರಾಜತಾಂತ್ರಿಕತೆ ಮತ್ತು ದ್ವಿಪಕ್ಷೀಯ ಮಹತ್ವ:&lt;/strong&gt;&lt;/h2&gt;&lt;p&gt;ಪಶ್ಚಿಮ ಏಷ್ಯಾದ ಪ್ರಮುಖ ಶಕ್ತಿಗಳ ನಡುವೆ ಶಾಂತಿ ಕಾಪಾಡಲು ಭಾರತವು ಅತ್ಯಂತ ವಿಶ್ವಾಸಾರ್ಹ ಮಧ್ಯಸ್ಥಿಕೆದಾರನಾಗಿ ಕಾರ್ಯನಿರ್ವಹಿಸುತ್ತಿದೆ. ನವದೆಹಲಿಗೆ ಈ ಮೂರೂ ದೇಶಗಳೊಂದಿಗಿನ ಸಂಬಂಧ ಅತ್ಯಂತ ಮಹತ್ವದ್ದಾಗಿದೆ:&lt;/p&gt;&lt;p&gt;&lt;strong&gt;ಭಾರತ - ಇರಾನ್ (ಚಾಬಹಾರ್ ಬಂದರು): &lt;/strong&gt;ಪಾಕಿಸ್ತಾನವನ್ನು ಬೈಪಾಸ್ ಮಾಡಿ ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ &lsquo;ಚಾಬಹಾರ್ ಬಂದರು&rsquo; ಭಾರತ ಮತ್ತು ಇರಾನ್ ನಡುವಿನ ಕಾರ್ಯತಂತ್ರದ ಪ್ರಮುಖ ಕೊಂಡಿಯಾಗಿದೆ.&lt;/p&gt;&lt;p&gt;&lt;strong&gt;ಭಾರತ - ಸೌದಿ ಅರೇಬಿಯಾ (ಇಂಧನ ಮತ್ತು ವಲಸಿಗರು): &lt;/strong&gt;ಸೌದಿ ಅರೇಬಿಯಾವು ಭಾರತದ ಅತಿಮುಖ್ಯ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಅಲ್ಲದೆ, ಸುಮಾರು 25 ಲಕ್ಷಕ್ಕೂ ಅಧಿಕ ಭಾರತೀಯರು ಸೌದಿಯಲ್ಲಿ ಉದ್ಯೋಗದಲ್ಲಿದ್ದು, ದೇಶದ ಆರ್ಥಿಕತೆಗೆ ಇವರ ಕೊಡುಗೆ ಅಪಾರ.&lt;/p&gt;&lt;p&gt;&lt;strong&gt;ಭಾರತ - ಯುಎಇ (ವ್ಯಾಪಾರ ಮತ್ತು ರಕ್ಷಣೆ): &lt;/strong&gt;ಯುಎಇ ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಭಾರತದಲ್ಲಿ ಬರೋಬ್ಬರಿ 20 ಬಿಲಿಯನ್ ಡಾಲರ್ (ಸುಮಾರು ₹1.67 ಲಕ್ಷ ಕೋಟಿ) ಹೂಡಿಕೆ ಮಾಡುವ ಗುರಿ ಹೊಂದಿದೆ. ಜೊತೆಗೆ ಉಭಯ ಸೇನೆಗಳ ನಡುವೆ ಜಂಟಿ ಕವಾಯತು ಹಾಗೂ ಭದ್ರತಾ ಸಹಕಾರ ಗಟ್ಟಿಯಾಗಿದೆ.&lt;/p&gt;&lt;p&gt;ಒಟ್ಟಾರೆಯಾಗಿ, ಕೆಂಪು ಸಮುದ್ರದ ಹೌತಿ ಸಂಘರ್ಷ ಜಾಗತಿಕ ಸರಕು ಸಾಗಣೆಗೆ ಕಂಟಕವಾಗಿರುವ ಹೊತ್ತಲ್ಲೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ನಡೆಸುತ್ತಿರುವ ಈ ಜಾಗತಿಕ ಸಮಾಗಮವು ವಿಶ್ವದ ಗಮನ ಸೆಳೆದಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/red-sea-crisis-houthi-mocha-port-india-iran-saudi-uae-diplomacy-brics-sat/articleshow-5614q9v"/>
        </item>
        <item>
            <title><![CDATA[ಮಳೆಗಾಲದಲ್ಲೂ ಬಿಸಿಲ ಬೇಗೆ, ಆಗಸ್ಟ್ ಜಾಗತಿಕವಾಗಿ ಅತ್ಯಂತ ಬಿಸಿಯಾದ ತಿಂಗಳು, ಕರ್ನಾಟಕದಾದ್ಯಂತ ತಾಪಮಾನ ದಿಢೀರ್ ಜಿಗಿತ!]]></title>
            <link>https://kannada.asianetnews.com/state/august-2026-hits-record-high-el-nino-and-fossil-fuels-drive-global-heat-wave-karnataka-faces-heat-surge-gdp/articleshow-ciemxlx</link>
            <guid isPermaLink="true">https://kannada.asianetnews.com/state/august-2026-hits-record-high-el-nino-and-fossil-fuels-drive-global-heat-wave-karnataka-faces-heat-surge-gdp/articleshow-ciemxlx</guid>
            <pubDate>Fri, 11 Sep 2026 10:36:02 +0530</pubDate>
            <description><![CDATA[2026ರ ಆಗಸ್ಟ್ ತಿಂಗಳು ಜಾಗತಿಕವಾಗಿ ಅತಿ ಹೆಚ್ಚು ಉಷ್ಣಾಂಶ ದಾಖಲಿಸಿದ್ದು, ಇದಕ್ಕೆ ಹಸಿರುಮನೆ ಅನಿಲಗಳು ಮತ್ತು 'ಎಲ್ ನಿನೋ' ಕಾರಣವಾಗಿವೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲಾಗಿದ್ದು, ರಾಜ್ಯದಲ್ಲಿ ತೀವ್ರ ಬರಗಾಲದ ಜೊತೆಗೆ ತಾಪಮಾನವು ಸರಾಸರಿಗಿಂತ 5.5 ಡಿಗ್ರಿಯಷ್ಟು ಹೆಚ್ಚಳವಾಗಿದೆ, ಇದು ಕೃಷಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq3qt9drtx2d96fy8c9ayqq1,imgname-heat-wave--2--1777168360888.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು: &lt;/strong&gt;ವಿಶ್ವದಾದ್ಯಂತ ಹವಾಮಾನ ವೈಪರೀತ್ಯ ತೀವ್ರಗೊಳ್ಳುತ್ತಿದ್ದು, 2026ರ ಆಗಸ್ಟ್ ತಿಂಗಳು ಜಾಗತಿಕವಾಗಿ ಅತ್ಯಂತ ಹೆಚ್ಚಿನ ಉಷ್ಣಾಂಶ ಹೊಂದಿದ್ದ ತಿಂಗಳು ಎಂಬ ಆತಂಕಕಾರಿ ದಾಖಲೆಗೆ ಪಾತ್ರವಾಗಿದೆ. ಯುರೋಪಿಯನ್ ಹವಾಮಾನ ವೀಕ್ಷಣಾಲಯ &lsquo;ಸಿ3ಎಸ್&rsquo; (C3S) ನೀಡಿರುವ ವರದಿಯ ಪ್ರಕಾರ, ಈ ಬಾರಿಯ ಆಗಸ್ಟ್ ತಾಪಮಾನವು ಜುಲೈ 2023ರಲ್ಲಿ ದಾಖಲಾಗಿದ್ದ ಸಾರ್ವಕಾಲಿಕ ಗರಿಷ್ಠ ಉಷ್ಣಾಂಶದ ಮಟ್ಟಕ್ಕೆ ಸಮನಾಗಿದೆ.&lt;/p&gt;&lt;p&gt;ಮಾನವ ನಿರ್ಮಿತ ಜಾಗತಿಕ ತಾಪಮಾನ ಏರಿಕೆಯನ್ನು ಅಳೆಯಲು ಆಧಾರವಾಗಿಟ್ಟುಕೊಳ್ಳುವ &lsquo;ಕೈಗಾರಿಕಾ ಪೂರ್ವ ಅವಧಿ&rsquo;ಗೆ (Pre-industrial period) ಹೋಲಿಸಿದರೆ, ಕಳೆದ ಆಗಸ್ಟ್&zwnj;ನಲ್ಲಿ ಜಾಗತಿಕ ಸರಾಸರಿ ತಾಪಮಾನವು 1.65 ಡಿ.ಸೆ. ನಷ್ಟು ಹೆಚ್ಚಾಗಿದೆ. ನವೆಂಬರ್ 2025ರ ನಂತರ ಇದೇ ಮೊದಲ ಬಾರಿಗೆ ಮಾಸಿಕ ಸರಾಸರಿ ತಾಪಮಾನವು ಕೈಗಾರಿಕಾ ಪೂರ್ವದ ಸರಾಸರಿಗಿಂತ1.5 ನಷ್ಟು ಗಡಿಯನ್ನು ದಾಟಿದೆ. ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ತೈಲ ಹಾಗೂ ನೈಸರ್ಗಿಕ ಅನಿಲಗಳ ಅತಿಯಾದ ದಹನದಿಂದ ವಾತಾವರಣಕ್ಕೆ ಸೇರುತ್ತಿರುವ ಹಸಿರುಮನೆ ಅನಿಲಗಳು ಮತ್ತು &lsquo;ಎಲ್ ನಿನೋ&rsquo; (El Ni&ntilde;o) ಮಾರುತಗಳ ಪ್ರಭಾವವೇ ಈ ತಾಪಮಾನ ಏರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಲ್ಲಿದ್ದಲು ಮತ್ತು ಇಂಧನಗಳ ಬಳಕೆಗೆ ಶೀಘ್ರವೇ ಕಡಿವಾಣ ಹಾಕದಿದ್ದರೆ ತಾಪಮಾನವು ಇಂತೆಯೇ ಏರುತ್ತಾ ಹೋಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.&lt;/p&gt;&lt;h2&gt;ಕರ್ನಾಟಕದಲ್ಲೂ &lsquo;ಎಲ್ ನಿನೋ&rsquo; ಬಿಸಿ: ಸರಾಸರಿಗಿಂತ 5.5 ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಳ&lt;/h2&gt;&lt;p&gt;ಜಾಗತಿಕ ತಾಪಮಾನ ವೈಪರೀತ್ಯದ ಬಿಸಿ ಈಗ ಕರ್ನಾಟಕಕ್ಕೂ ನೇರವಾಗಿ ತಟ್ಟಿದೆ. ರಾಜ್ಯದಲ್ಲಿ ಮುಂಗಾರು ಮಳೆಗಾಲ ಪೂರ್ಣಗೊಳ್ಳುವ ಮೊದಲೇ ಬೇಸಿಗೆಯಂತಹ ಕಠಿಣ ವಾತಾವರಣ ನಿರ್ಮಾಣವಾಗಿದ್ದು, ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಾಪಮಾನವು ಸಾಧಾರಣ ಮಟ್ಟಕ್ಕಿಂತ ಗರಿಷ್ಠ 5.5 ಡಿಗ್ರಿಯಷ್ಟು ಹೆಚ್ಚಾಗಿದೆ.&lt;/p&gt;&lt;p&gt;&lsquo;ಎಲ್ ನಿನೋ&rsquo; ಪರಿಣಾಮದಿಂದಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆಯ ಅಭಾವ ಉಂಟಾಗಿ ತೀವ್ರ ಬರಗಾಲ ಆವರಿಸಿದೆ. ಇದರ ಮುಂದುವರಿದ ಭಾಗವಾಗಿ ಈಗ ಬಿಸಿಲಿನ ತಾಪಮಾನವೂ ಗಣನೀಯವಾಗಿ ಏರಿಕೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.&lt;/p&gt;&lt;p&gt;ವಿಶೇಷವಾಗಿ, ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್&zwnj;ನಲ್ಲಿ ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನವು 30 ಡಿಗ್ರಿ ಸೆಲ್ಸಿಯಸ್&zwnj; ಒಳಗಿರುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್ 1ರಿಂದಲೇ ನಿರಂತರವಾಗಿ 30 ರಿಂದ 32 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ.&lt;/p&gt;&lt;p&gt;ಬೆಂಗಳೂರು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎನ್. ಪುವಿಅರಸನ್ ನೀಡಿರುವ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಯಾವುದೇ ಲಕ್ಷಣಗಳಿಲ್ಲ. ಆ ನಂತರ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದ್ದು, ಆಗ ತಾಪಮಾನದಲ್ಲಿ ಕೊಂಚ ಇಳಿಕೆ ಕಂಡುಬರಬಹುದು.&lt;/p&gt;&lt;p&gt;ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಗುರುವಾರ ಹಾಸನದಲ್ಲಿ ಸರಾಸರಿಗಿಂತ 5.5&deg;C ತಾಪಮಾನ ಹೆಚ್ಚಳವಾಗಿ ಗರಿಷ್ಠ 32.8&deg;C ದಾಖಲಾದರೆ, ಧಾರವಾಡದಲ್ಲಿ 4.3&deg;C ಹೆಚ್ಚಳದೊಂದಿಗೆ 32.2&deg;C ಮತ್ತು ಮೈಸೂರಿನಲ್ಲಿ 3.9&deg;C ಹೆಚ್ಚಳದೊಂದಿಗೆ 33.0&deg;C ಉಷ್ಣಾಂಶ ದಾಖಲಾಗಿದೆ. ಇದೇ ರೀತಿ ಬೀದರ್ 3.2 ಹೆಚ್ಚಳ (32.8&deg;C), ಗದಗ 3.0 ಹೆಚ್ಚಳ (32.6&deg;C), ಚಿತ್ರದುರ್ಗ 3.0 ಹೆಚ್ಚಳ (32.0&deg;C), ರಾಯಚೂರು 2.9 ಹೆಚ್ಚಳ (35.0&deg;C) ಹಾಗೂ ಕಲಬುರಗಿಯಲ್ಲೂ 2.6 ಹೆಚ್ಚಳ (34.6&deg;C) ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ.&lt;/p&gt;&lt;p&gt;ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್&zwnj;ನಲ್ಲಿ ಸಾಮಾನ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನವು 30&deg;C ಒಳಗಿರುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್ 1ರಿಂದಲೇ ನಿರಂತರವಾಗಿ 30&deg;C ನಿಂದ 32&deg;C ವರೆಗೆ ಉಷ್ಣಾಂಶ ಮುಟ್ಟುತ್ತಿದ್ದು, ನಗರದಲ್ಲೂ ಸರಾಸರಿಗಿಂತ 3.2&deg;C ನಷ್ಟು ಹೆಚ್ಚು ತಾಪಮಾನ (31.4&deg;C) ದಾಖಲಾಗಿದೆ. ವಾತಾವರಣದಲ್ಲಿನ ಈ ದಿಢೀರ್ ಬದಲಾವಣೆಯು ಸಾರ್ವಜನಿಕರ ಆರೋಗ್ಯ ಹಾಗೂ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಮೂಡಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/august-2026-hits-record-high-el-nino-and-fossil-fuels-drive-global-heat-wave-karnataka-faces-heat-surge-gdp/articleshow-ciemxlx"/>
        </item>
    </channel>
</rss>
