<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Fri, 14 Aug 2026 17:35:00 +0530</lastBuildDate>
        <atom:link href="https://kannada.asianetnews.com/rss" rel="self" type="application/rss+xml"/>
        <item>
            <title><![CDATA[ಶಾರುಖ್​ ಖಾನ್​, ಮೀಟ್​ ಆಗಲು ಡೇಟ್​ ಕೊಟ್ಟಿಲ್ಲವೆಂದು ಹೀಗೆ ಸೇಡು ತೀರಿಸಿಕೊಂಡ್ರಾ ಯಶ್? ರಟ್ಟಾಗೋಯ್ತು ಗುಟ್ಟು]]></title>
            <link>https://kannada.asianetnews.com/entertainment/yash-in-rajat-sharma-show-and-about-shahrukh-khan-suc/articleshow-ca4d9yw</link>
            <guid isPermaLink="true">https://kannada.asianetnews.com/entertainment/yash-in-rajat-sharma-show-and-about-shahrukh-khan-suc/articleshow-ca4d9yw</guid>
            <pubDate>Fri, 14 Aug 2026 17:34:51 +0530</pubDate>
            <description><![CDATA[ಹಿರಿಯ ಪತ್ರಕರ್ತ ರಜತ್ ಶರ್ಮಾ ಅವರ 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ, ಶಾರುಖ್ ಖಾನ್ ಅವರ 'ಜೀರೋ' ಚಿತ್ರದ ಜೊತೆ 'ಕೆಜಿಎಫ್' ಚಿತ್ರವನ್ನು ಬಿಡುಗಡೆ ಮಾಡಿದ್ದರ ಹಿಂದಿನ ಕಾರಣವನ್ನು ಕೇಳಿದಾಗ ಯಶ್ ವಿಚಲಿತರಾದರು. ರಜತ್ ಶರ್ಮಾ ಅವರ ಮಾತಿಗೆ ಯಶ್ ನಿರುತ್ತರರಾದ ಪ್ರಸಂಗವನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m002ewcpx3gx0dhdte89h89x,imgname-yash-and-shahrukh-khan-1786708980118.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಅತ್ಯಂತ ಹೆಸರುವಾಸಿಯಾಗಿರುವ, ಅದರಲ್ಲಿಯೂ ಸಕಾರಾತ್ಮಕವಾದ ಅಂಶಗಳು ಇರುವ ಬೆರಳೆಣಿಕೆಯಷ್ಟು ರಿಯಾಲಿಟಿ ಷೋಗಳಲ್ಲಿ ಒಂದು ಹಿರಿಯ ಪತ್ರಕರ್ತ ರಜತ್​ ಶರ್ಮಾ ಅವರು ನಡೆಸಿಕೊಡುವ ಆಪ್​ ಕೀ ಅದಾಲತ್ (Aap Ki Adalat). ಇದರಲ್ಲಿ ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಬಂದಿದ್ದಾರೆ. ಆ ಸೀಟಿನಲ್ಲಿ ಈಗ ಕುಳಿತವರು ನಟ ಯಶ್​. ಈ ಹಾಟ್​ ಸೀಟ್​ನಲ್ಲಿ ಕುಳಿತ ಕನ್ನಡದ ಮೊದಲ ಸೆಲೆಬ್ರಿಟಿ ಎನ್ನುವ ಹೆಗ್ಗಳಿಕೆ ಅವರದ್ದು. ಈ ಷೋನಲ್ಲಿ ರಜತ್​ ಶರ್ಮಾ (Rajat Sharma) ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಯಶ್​ ಅವರು ಉತ್ತರಿಸಿದ್ದಾರೆ. ತಮ್ಮ ಸಿನಿಮಾ ಜರ್ನಿ, ಪರ್ಸನಲ್​ ಲೈಫ್​ ಎಲ್ಲವುಗಳ ಮೇಲೆ ನಟ ಬೆಳಕು ಚೆಲ್ಲಿದ್ದಾರೆ.&lt;/p&gt;&lt;p&gt;ಇದರಲ್ಲಿ ಒಂದು ಕುತೂಹಲದ ಪ್ರಶ್ನೆಯನ್ನು ಯಶ್​ ಅವರಿಗೆ ಕೇಳಲಾಗಿದೆ. ಅಷ್ಟಕ್ಕೂ ರಜತ್​ ಶರ್ಮಾ ಅವರು ಯಾವುದೇ ಸೆಲೆಬ್ರಿಟಿ ಈ ಸೀಟಿಗೆ ಬರುವಾಗ, ಅವರ ಪೂರ್ವಪರ ಎಲ್ಲವನ್ನೂ ಸಾಕಷ್ಟು ಅಧ್ಯಯನ ಮಾಡಿರುತ್ತಾರೆ. ಅವರ ಪ್ರತಿಯೊಂದು ವಿಷಯಗಳನ್ನೂ ಅಧ್ಯಯನ ಮಾಡಿ, ಕೆಲವೊಮ್ಮೆ ಮಾತಿನಲ್ಲಿ ಸಿಲುಕಿಸಿಬಿಡುತ್ತಾರೆ. ಅವರು ಕೇಳುವ ಪ್ರಶ್ನೆಗೆ ಎಷ್ಟೋ ಮಂದಿ ಉತ್ತರಿಸಲು ಆಗದೇ ಚಡಪಡಿಸುವುದೂ ಇದೆ. ಆದರೆ ಯಶ್​ ಅವರು ಎಲ್ಲಾ ಪ್ರಶ್ನೆಗಳಿಗೂ ಫಟಾಫಟ್​ ಉತ್ತರ ಕೊಟ್ಟರೂ, ಈ ಒಂದು ಪ್ರಶ್ನೆ ಕೇಳಿದಾಗ, ಸ್ವಲ್ಪ ಸಮಯ ವಿಚಲಿತರಾದರು.&lt;/p&gt;&lt;h2&gt;&lt;strong&gt;ಶಾರುಖ್​ ಖಾನ್​ ಕುರಿತು ಪ್ರಶ್ನೆ&lt;/strong&gt;&lt;/h2&gt;&lt;p&gt;ಅದೇ ನಟ ಶಾರುಖ್​ ಖಾನ್​ (Shah rukh Khan) ಕುರಿತ ಪ್ರಶ್ನೆ. ನಿಮಗೆ ಶಾರುಖ್​ ಖಾನ್​ ಅಂದ್ರೆ ತುಂಬಾ ಇಷ್ಟವಾಗಿತ್ತಲ್ವಾ ಎಂದಾಗ ಯಶ್​, ಕೂಡಲೇ ಈಗಲೂ ಇಷ್ಟ ಎಂದು ನಕ್ಕರು. ಅದಕ್ಕೆ ರಜತ್​ ಶರ್ಮಾ ಅವರು, ನನಗೆ ತಿಳಿದಿರುವ ಪ್ರಕಾರ, ನೀವು ಶಾರುಖ್​ ಖಾನ್​ ಅವರನ್ನು ಮೀಟ್​ ಮಾಡಲು ಡೇಟ್​ ಕೇಳಿದ್ದರಂತೆ. ಆದರೆ ಅವರು ಕೊಟ್ಟಿರಲಿಲ್ಲವಂತೆ ಎಂದಾಗ ಯಶ್​ ನಕ್ಕರು. ಅಲ್ಲಿಗೇ ಸುಮ್ಮನಾಗದ ರಜತ್​ ಶರ್ಮಾ ಅವರು, ನೀವು ಇದೇ ಕಾರಣಕ್ಕೆ, ಶಾರುಖ್​ ಖಾನ್​ ಅವರ ಚಿತ್ರಕ್ಕೇ ಠಕ್ಕರ್​ ಕೊಟ್ಟಿರಿ ಎನ್ನೋದು ನಿಜನಾ ಎಂದು ಯಶ್​ ಸ್ವಲ್ಪ ಗಲಿಬಿಲಿಗೊಂಡರು. ಅದಕ್ಕೆ ರಜತ್​ ಶರ್ಮಾ ಅವರು, ನೀವು ಅದಕ್ಕಾಗಿಯೇ ಶಾರುಖ್​ ಅವರ ಜೀರೋ ಫಿಲ್ಮ್​ ರಿಲೀಸ್​ ಆದಾಗಲೇ, ನಿಮ್ಮ ಕೆಜಿಎಫ್​ ಚಿತ್ರವನ್ನೂ ರಿಲೀಸ್​ ಮಾಡಿ ಠಕ್ಕರ್​ ಕೊಟ್ಟಿರಂತೆ ಹೌದಾ ಎಂದು ಪ್ರಶ್ನಿಸಿದರು.&lt;/p&gt;&lt;h3&gt;&lt;strong&gt;ಯಶ್​ ನಿರುತ್ತರ!&lt;/strong&gt;&lt;/h3&gt;&lt;p&gt;ಇದಕ್ಕೆ ಜೋರಾಗಿ ನಕ್ಕ ಯಶ್​ ಅವರು, ಹಾಗೇನೂ ಇಲ್ಲ. ನಮ್ಮದು ಚಿಕ್ಕ ಫಿಲ್ಮ್​, ಶಾರುಖ್​ ಸರ್​ ಅವರದ್ದು ದೊಡ್ಡ ಫಿಲ್ಮ್​. ಠಕ್ಕರ್​ ಏನೂ ಇಲ್ಲ ಎಂದಾಗ, ರಜತ್​ ಶರ್ಮಾ ಅವರು ಅಷ್ಟೇ ಕೂಲಾಗಿ, ನಿಮ್ಮ ಸಿನಿಮಾ 250 ಕೋಟಿ ಗಳಿಸಿತು, ಅವರ ಸಿನಿಮಾ ನೂರು ಕೋಟಿ ಗಳಿಸಿತು ಎಂದಾಗ ಯಶ್​ ನಿರುತ್ತರರಾದರು.&lt;/p&gt;]]></content:encoded>
            <category><![CDATA[entertainment]]></category>
            <dc:creator>Suchethana D</dc:creator>
            <atom:link href="https://kannada.asianetnews.com/entertainment/yash-in-rajat-sharma-show-and-about-shahrukh-khan-suc/articleshow-ca4d9yw"/>
        </item>
        <item>
            <title><![CDATA[breaking news: ರೇಷನ್ ಕಾರ್ಡ್‌ ರದ್ದಾಗುವ ಆತಂಕದಲ್ಲಿದ್ದ ಜನರಿಗೆ ರಿಲೀಫ್ ಕೊಟ್ಟ ಸರ್ಕಾರ]]></title>
            <link>https://kannada.asianetnews.com/bengaluru-urban/karnataka-government-provides-relief-to-people-worried-about-ration-card-cancellation-gkn/articleshow-eh8itrr</link>
            <guid isPermaLink="true">https://kannada.asianetnews.com/bengaluru-urban/karnataka-government-provides-relief-to-people-worried-about-ration-card-cancellation-gkn/articleshow-eh8itrr</guid>
            <pubDate>Fri, 14 Aug 2026 17:28:28 +0530</pubDate>
            <description><![CDATA[ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್‌ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m00263ef5bevxevh2sv6g8rd,imgname-minister-rizwan-arshad-on-bpl-card-karnataka-1786708692431.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಪಿಎಲ್ (BPL) ಕಾರ್ಡ್&zwnj;ಗಳು ರದ್ದಾಗುತ್ತವೆ ಎಂಬ ಭೀತಿಯಲ್ಲಿದ್ದ ಲಕ್ಷಾಂತರ ಕುಟುಂಬಗಳಿಗೆ ರಾಜ್ಯ ಸರ್ಕಾರ ಕೊಂಚ ನಿರಾಳತೆ ನೀಡಿದೆ. ಬಿಪಿಎಲ್ ಕಾರ್ಡ್&zwnj;ಗಳ ಪರಿಷ್ಕರಣಾ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಪರಿಷ್ಕರಣೆ ನಿಲ್ಲಿಸಲು ಸೂಚನೆ&lt;/strong&gt;&lt;/h2&gt;&lt;p&gt;ಸಂಶಯಾಸ್ಪದ ಕಾರ್ಡ್&zwnj;ಗಳ ಪಟ್ಟಿ ಸಿದ್ಧಪಡಿಸಿ ಅವುಗಳನ್ನು ರದ್ದು ಮಾಡಲು ಮುಂದಾಗಿದ್ದ ಇಲಾಖೆಯ ನಡವಳಿಕೆಯಿಂದ ಜನರು ಆತಂಕಕ್ಕೊಳಗಾಗಿದ್ದರು. ಇದನ್ನು ಗಮನಿಸಿದ ಸಚಿವ ರಿಜ್ವಾನ್ ಅರ್ಷದ್, ಸದ್ಯಕ್ಕೆ ಬಿಪಿಎಲ್ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆರ್ಥಿಕ ಹೊರೆ ಮತ್ತು ಜನರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;e-KYC ನಂತರವೇ ಮುಂದಿನ ಕ್ರಮ&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಒಟ್ಟು 2 ಕೋಟಿ 65 ಲಕ್ಷ ಕಾರ್ಡ್&zwnj;ಗಳ ಇ-ಕೆವೈಸಿ ಪ್ರಕ್ರಿಯೆ ಬಾಕಿ ಇದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಮೊದಲು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳಲಿ. ಅದಾದ ನಂತರ ಎಷ್ಟು ಕಾರ್ಡ್&zwnj;ಗಳು ಡಿಲೀಟ್ ಆಗುತ್ತವೆ ಎಂಬುದು ತಿಳಿಯುತ್ತದೆ. ಎಷ್ಟು ಕಾರ್ಡ್&zwnj;ಗಳು ಡಿಲೀಟ್ ಆಗುತ್ತವೆಯೋ, ಅಷ್ಟೇ ಸಂಖ್ಯೆಯ ಹೊಸ ಕಾರ್ಡ್&zwnj;ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.&lt;/p&gt;&lt;p&gt;ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 65 ರಷ್ಟು ಜನರಿಗೆ ಬಿಪಿಎಲ್ ಸೌಲಭ್ಯ ನೀಡಲು ಅವಕಾಶವಿದೆ. ಇವತ್ತಿನ ಹಣದುಬ್ಬರದ ಪರಿಸ್ಥಿತಿಯಲ್ಲಿ ಹಳೆಯ ಮಾನದಂಡಗಳನ್ನು ಇಟ್ಟುಕೊಳ್ಳುವುದು ಕಷ್ಟ. ಕರ್ನಾಟಕದಲ್ಲಿ ಇನ್ನೂ 50 ಲಕ್ಷ ಜನರಿಗೆ ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಸೌಲಭ್ಯ ಮಾಡಿಕೊಡಬೇಕಿದೆ. ಈ ಬಗ್ಗೆ ನಾವು ಕೇಂದ್ರದ ಜೊತೆ ಚರ್ಚೆ ನಡೆಸಬೇಕಿದೆ ಎಂದು ಸಚಿವರು ಹೇಳಿದರು.&lt;/p&gt;&lt;p&gt;ಇಂದಿರಾ ಕಿಟ್ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ತಿಂಗಳು ಫುಡ್ ಕಿಟ್ ನೀಡುವುದು ಒಂದು ದೊಡ್ಡ ವ್ಯವಸ್ಥಿತ ಕೆಲಸ. ಈ ಯೋಜನೆ ಜಾರಿ ಮಾಡುವ ಪ್ರಕ್ರಿಯೆ ಈಗ ಒಂದು ಹಂತಕ್ಕೆ ಬಂದಿದೆ. ಇನ್ನಷ್ಟು ಕೆಲಸಗಳು ಬಾಕಿ ಇವೆ. ಆದರೆ ಸರ್ಕಾರ ಘೋಷಣೆ ಮಾಡಿದಂತೆ ಪ್ರತಿ ತಿಂಗಳು ಅಕ್ಕಿ ವಿತರಣೆ ಸುಗಮವಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಒಟ್ಟಾರೆಯಾಗಿ, ರೇಷನ್ ಕಾರ್ಡ್ ರದ್ದತಿಯ ಭೀತಿಯಲ್ಲಿದ್ದ ಜನರಿಗೆ ಸರ್ಕಾರದ ಈ ನಿರ್ಧಾರ ತಾತ್ಕಾಲಿಕ ನೆಮ್ಮದಿ ತಂದಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/karnataka-government-provides-relief-to-people-worried-about-ration-card-cancellation-gkn/articleshow-eh8itrr"/>
        </item>
        <item>
            <title><![CDATA[ಕಿಂಗ್ ನಾಗಾರ್ಜುನ ಮೊಮ್ಮಗಳು ಯಾರು ಗೊತ್ತಾ? ಈ ಯುವತಿ ಸದ್ಯ ಏನು ಮಾಡುತ್ತಿದ್ದಾರೆ?]]></title>
            <link>https://kannada.asianetnews.com/entertainment/nagarjuna-family-story-from-personal-tragedy-to-a-key-role-at-annapurna-studios-gvd/articleshow-g3vo9dk</link>
            <guid isPermaLink="true">https://kannada.asianetnews.com/entertainment/nagarjuna-family-story-from-personal-tragedy-to-a-key-role-at-annapurna-studios-gvd/articleshow-g3vo9dk</guid>
            <pubDate>Fri, 14 Aug 2026 17:24:25 +0530</pubDate>
            <description><![CDATA[ಅಕ್ಕಿನೇನಿ ನಾಗಾರ್ಜುನ ಕುಟುಂಬದಲ್ಲಿ, ಅವರಿಗೆ ಮೊಮ್ಮಗಳು ಆಗುವ ಸಂಬಂಧಿಯೊಬ್ಬರಿದ್ದಾರೆ. ಅವರು ಪ್ರಸ್ತುತ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದಲ್ಲಿ ಒಂದು ದುರಂತವೂ ನಡೆದಿದೆ. ಆ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01m001whkfm9dhxa9h3g2qjsdp,imgname-jno-1786708379247.png" type="image/jpeg" height="390" width="690"/>
            <content:encoded><![CDATA[&lt;p&gt;ಟಾಲಿವುಡ್&zwnj;ನ ಲೆಜೆಂಡರಿ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರು ತಮ್ಮದೇ ಆದ ಸಾಮ್ರಾಜ್ಯವನ್ನು ಸೃಷ್ಟಿಸಿದ್ದರು. ಅಕ್ಕಿನೇನಿ ಕುಟುಂಬದ ಸದಸ್ಯರು ಸಿನಿಮಾ ಮತ್ತು ಸಿನಿಮಾ ವ್ಯವಹಾರದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಕಿಂಗ್ ನಾಗಾರ್ಜುನ ಟಾಲಿವುಡ್&zwnj;ನ ಅಗ್ರ ನಾಯಕರಲ್ಲಿ ಒಬ್ಬರು. ಅವರ ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್ ನಾಯಕರಾಗಿ ಮಿಂಚುತ್ತಿದ್ದಾರೆ. ಅಕ್ಕಿನೇನಿ ಕುಟುಂಬ ಅಂದಾಕ್ಷಣ ಹೆಚ್ಚಾಗಿ ಇವರೇ ಕಾಣಿಸಿಕೊಳ್ಳುತ್ತಾರೆ. ಆದರೆ, ಎಎನ್&zwnj;ಆರ್ ಕುಟುಂಬದ ಇನ್ನೂ ಅನೇಕ ಸದಸ್ಯರು ತೆರೆಮರೆಯಲ್ಲಿ ಇದ್ದಾರೆ.&lt;/p&gt;&lt;p&gt;ಅಕ್ಕಿನೇನಿ ಕುಟುಂಬದಲ್ಲಿ ನಾಗಾರ್ಜುನಗೆ ಮೊಮ್ಮಗಳಾಗುವ ಯುವತಿಯೊಬ್ಬರು ಅನ್ನಪೂರ್ಣ ಸ್ಟುಡಿಯೋಸ್ ಆಡಳಿತ ನೋಡಿಕೊಳ್ಳುತ್ತಿದ್ದಾರೆ ಎಂಬುದು ನಿಮಗೆ ಗೊತ್ತೇ? ಹೌದು, ಇದು ನಿಜ. ಅವರು ಬೇರಾರೂ ಅಲ್ಲ, ನಾಗಾರ್ಜುನ ಅವರ ಸೋದರ ಸೊಸೆ ಸುಪ್ರಿಯಾ ಯಾರ್ಲಗಡ್ಡ ಅವರ ಮಗಳು. ಸುಪ್ರಿಯಾ ತಮ್ಮ ಮಗಳನ್ನು ಮಾಧ್ಯಮಗಳಿಂದ ದೂರವಿಟ್ಟು ಬೆಳೆಸಿದ್ದಾರೆ. ಹಾಗಾಗಿಯೇ ಅವರ ಬಗ್ಗೆ ಹೆಚ್ಚಿನ ವಿವರಗಳು ಹೊರಬಂದಿಲ್ಲ. ಆದರೆ ಸುಪ್ರಿಯಾ ಅವರ ಮಗಳು ಅನ್ನಪೂರ್ಣ ಸ್ಟುಡಿಯೋಸ್&zwnj;ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.&lt;/p&gt;&lt;p&gt;ಸುಪ್ರಿಯಾ ಮಗಳು ವಿದೇಶದಲ್ಲಿ ಶಿಕ್ಷಣ ಮುಗಿಸಿ, ಹಲವು ಎಂಎನ್&zwnj;ಸಿಗಳಲ್ಲಿ ಕೆಲಸ ಮಾಡಿದ್ದಾರೆ. ಈಗ ಅವರು ಅನ್ನಪೂರ್ಣ ಸ್ಟುಡಿಯೋಸ್&zwnj;ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಪ್ರಿಯಾ ಅನ್ನಪೂರ್ಣ ಸ್ಟುಡಿಯೋಸ್&zwnj;ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದಾರೆ. ಅವರ ಮಗಳು ಕೂಡ ಉತ್ತಮ ಹುದ್ದೆಯಲ್ಲಿದ್ದಾರೆ ಎನ್ನಲಾಗಿದೆ. ಇವರ ಕುಟುಂಬದಲ್ಲಿ ಕೆಲವು ದುರಂತ ಘಟನೆಗಳು ನಡೆದಿವೆ. ಸುಪ್ರಿಯಾ ಮತ್ತು ಸುಮಂತ್ ಅಣ್ಣ-ತಂಗಿ. ಇವರ ತಂದೆ-ತಾಯಿ ಸುರೇಂದ್ರ ಯಾರ್ಲಗಡ್ಡ ಮತ್ತು ಸತ್ಯವತಿ ಚಿಕ್ಕ ವಯಸ್ಸಿನಲ್ಲೇ ನಿಧನರಾದರು.&lt;/p&gt;&lt;p&gt;ತಂದೆ-ತಾಯಿ ತೀರಿಕೊಂಡ ನಂತರ, ನಾಗೇಶ್ವರ ರಾವ್ ಅವರು ಸುಪ್ರಿಯಾ ಮತ್ತು ಸುಮಂತ್ ಇಬ್ಬರನ್ನೂ ಬೆಳೆಸಿ ದೊಡ್ಡವರನ್ನಾಗಿ ಮಾಡಿದರು. ನಂತರ ಸುಪ್ರಿಯಾ, ಪವನ್ ಕಲ್ಯಾಣ್ ಜೊತೆ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆದರೆ ಅವರು ನಾಯಕಿಯಾಗಿ ನಟಿಸಿದ್ದು ಆ ಒಂದೇ ಚಿತ್ರದಲ್ಲಿ ಮಾತ್ರ. ಶ್ರೀಯಾ ಶರಣ್ ಅವರ ಮೊದಲ ಚಿತ್ರ 'ಇಷ್ಟಂ'ನಲ್ಲಿ ಚರಣ್ ರೆಡ್ಡಿ ನಾಯಕರಾಗಿದ್ದರು. ಸುಪ್ರಿಯಾ, ಚರಣ್ ರೆಡ್ಡಿ ಅವರನ್ನು ಪ್ರೀತಿಸಿ ಮದುವೆಯಾದರು. ಇವರಿಗೆ ಒಬ್ಬ ಮಗಳು ಜನಿಸಿದಳು.&lt;/p&gt;&lt;h2&gt;&lt;strong&gt;ಸಿಂಗಲ್ ಮದರ್&lt;/strong&gt;&lt;/h2&gt;&lt;p&gt;ಆದರೆ ಚರಣ್ ರೆಡ್ಡಿ ಕುಡಿತಕ್ಕೆ ದಾಸರಾಗಿ, ಅನಾರೋಗ್ಯದಿಂದ ಕೇವಲ 37ನೇ ವಯಸ್ಸಿನಲ್ಲೇ ನಿಧನರಾದರು. ಅದಕ್ಕೂ ಮೊದಲೇ ಸುಪ್ರಿಯಾ ಮತ್ತು ಚರಣ್ ರೆಡ್ಡಿ ವಿಚ್ಛೇದನ ಪಡೆದಿದ್ದರು. ಸುಪ್ರಿಯಾ ಸಿಂಗಲ್ ಮದರ್ ಆಗಿ ತಮ್ಮ ಮಗಳನ್ನು ಬೆಳೆಸಿದರು. ಚರಣ್ ರೆಡ್ಡಿ 2012ರಲ್ಲಿ ಅನಾರೋಗ್ಯದಿಂದ ನಿಧನರಾದರು. ಇಷ್ಟೆಲ್ಲಾ ದುರಂತಗಳ ನಡುವೆಯೂ ಸುಪ್ರಿಯಾ ಅವರ ಮಗಳು ತಾಯಿಯ ಹಾದಿಯಲ್ಲಿ ಸಾಗಿ, ಪ್ರತಿಭಾವಂತೆಯಾಗಿ ಅನ್ನಪೂರ್ಣ ಸ್ಟುಡಿಯೋಸ್&zwnj;ನಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/nagarjuna-family-story-from-personal-tragedy-to-a-key-role-at-annapurna-studios-gvd/articleshow-g3vo9dk"/>
        </item>
        <item>
            <title><![CDATA[ಸಾವಿರಾರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿದ್ದೇಕೆ? ಗಂಗಾವತಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾಡಿದ್ದೇನು?]]></title>
            <link>https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz</link>
            <guid isPermaLink="true">https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz</guid>
            <pubDate>Fri, 14 Aug 2026 17:17:01 +0530</pubDate>
            <description><![CDATA[80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ "ಬೃಹತ್ ತಿರಂಗ ಯಾತ್ರೆ"ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01m001h28qjbk1ahnmvyf74cs1,imgname-nkn-1786708003095.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಗಂಗಾವತಿ (ಆ.14):&lt;/strong&gt; 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ &quot;ಬೃಹತ್ ತಿರಂಗ ಯಾತ್ರೆ&quot;ಗೆ ಶಾಸಕ ಜನಾರ್ದನ ರೆಡ್ಡಿ ಚಾಲನೆ ನೀಡಿದರು. ಬಾಬು ಜಗಜೀವನ್ ರಾಮ್ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಂಚರಿಸಿ ಶ್ರೀ ಕೃಷ್ಣದೇವರಾಯ ವೃತ್ತಕ್ಕೆ ತಲುಪಿತು.&lt;/p&gt;&lt;p&gt;ಈ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಸೌಹಾರ್ದ್ಯತೆ ಮತ್ತು ಯುವಕರಲ್ಲಿ ದೇಶ ಪ್ರಜ್ಞೆ ಬರ ಬೇಕೆಂಬ ಉದ್ದೇಶದಿಂದ ತಿರಂಗ ಯಾತ್ರೆಗೆ ನೀಡಿದ ಸೂಚನೆ ಹಿನ್ನಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಈ ಯಾತ್ರೆ ಹಮ್ಮಿಕೊಂಡಿದೆ. ಮಕ್ಕಳಲ್ಲಿ ಮತ್ತು ಯುವಕರಲ್ಲಿ ದೇಶ ಭಕ್ತಿ ಬರಬೇಕೆಂದು ತಿಳಿಸಿದರು.&lt;/p&gt;&lt;p&gt;ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಮೋದಿ ಅವರ ಆಪೇಕ್ಷದ ಮೇರೆಗೆ ಯುವಕರಲ್ಲಿ ದೇಶ ಭಕ್ತಿ ಮೂಡಬೇಕು ಮತ್ತು ಮನೆ ಮನೆಗಳಲ್ಲಿ ಧ್ವಜ ಹಾರಾಟ ಆಗಬೇಕು. ಮೂರು ದಿನಗಳ ಕಾಲ ಈ ಹಬ್ಬ ಆಚರಣೆಯಾಗಬೇಕೆಂದು ತಿಳಿಸಿದರು. ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಮಾತನಾಡಿ, ಈ ತಿರಂಗದ ಉದ್ದೇಶ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮತ್ತು ಸೌಹಾರ್ದತೆ ಬೆಳೆಯಬೇಕೆನ್ನುವುದೇ ಈ ಕಾರ್ಯಕ್ರಮವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಸಾವಿರಾರು ಮಕ್ಕಳು ಭಾಗಿ&lt;/strong&gt;&lt;/h2&gt;&lt;p&gt;ಗಂಗಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಭವ್ಯ ಬೃಹತ್ ತಿರಂಗ ಯಾತ್ರೆಯಲ್ಲಿ ವಿವಿಧ ಕಾಲೇಜು ಮತ್ತು ಪ್ರೌಢ ಶಾಲೆಯ ಸಾವಿರಾರು ಮಕ್ಕಳು ಭಾಗಿಯಾಗಿದ್ದರು. ಈ ವೇಳೆ ಕೊಟ್ಟೂರು ಸ್ವಾಮೀಜಿ, ಬಿಜೆಪಿ ಜಿಲ್ಲಾ ಮಾಜಿ ಅದ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಮನೋಹರ್ ಗೌಡ ಹೇರೂರು, ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷರಾದ ಡಿಕೆ ಆಗೋಲಿ, ಯುವ ಮೋರ್ಚಾ ಅಧ್ಯಕ್ಷರಾದ ರಮೇಶ್ ಹೊಸಮಲಿ, ಮುಖಂಡರಾದ ಯಮನೂರ್ ಚೌಡ್ಕಿ, ಆನಂದಗೌಡ ಶರಣಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/janardhana-reddy-flags-off-grand-triranga-yatra-in-gangavathi-gvd/articleshow-aeb71yz"/>
        </item>
        <item>
            <title><![CDATA[ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲದು ಅಡುಗೆಮನೆಯ ಈ ಪದಾರ್ಥ.. ಆದ್ರೆ  ಹೇಗೆ? ಎಲ್ಲಿಡಬೇಕು? ತಿಳ್ಕೊಳ್ಳಿ]]></title>
            <link>https://kannada.asianetnews.com/gallery/vaastu/simple-salt-rituals-to-resolve-financial-problems-6zeln7k</link>
            <guid isPermaLink="true">https://kannada.asianetnews.com/gallery/vaastu/simple-salt-rituals-to-resolve-financial-problems-6zeln7k</guid>
            <pubDate>Fri, 14 Aug 2026 17:08:17 +0530</pubDate>
            <description><![CDATA[Vastu Tips For Storing Salt: ಅಡುಗೆಮನೆಯಲ್ಲಿನ ಈ ಪದಾರ್ಥ ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಮನೆಯ ಸುಖ-ಸಮೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರಿಂದ ಮನೇಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k6mjmt1ekzd6ekm5f8tj3ets,imgname-5-1759479752750.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu Tips For Storing Salt: ಅಡುಗೆಮನೆಯಲ್ಲಿನ ಈ ಪದಾರ್ಥ ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಮನೆಯ ಸುಖ-ಸಮೃದ್ಧಿಯಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರಿಂದ ಮನೇಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸರಿಯಾದ ರೀತಿಯಲ್ಲಿ ಬಳಸಿ&lt;/strong&gt;ನಮ್ಮ ಸಂಪ್ರದಾಯದಲ್ಲಿ ಅಡುಗೆಮನೆಯನ್ನು ಕೇವಲ ಆಹಾರ ತಯಾರಿಸುವ ಸ್ಥಳವೆಂದು ಪರಿಗಣಿಸದೆ, ಮನೆಯ ಅಭಿವೃದ್ಧಿ ಮತ್ತು ನೆಮ್ಮದಿಯ ಕೇಂದ್ರವೆಂದು ನಂಬಲಾಗುತ್ತದೆ. ಅಡುಗೆಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮಹತ್ವವಿದೆ. ವಿಶೇಷವಾಗಿ 'ಉಪ್ಪು' ಕೇವಲ ರುಚಿಗಷ್ಟೇ ಅಲ್ಲ, ಮನೆಯ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿದೆ. ಉಪ್ಪನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.&lt;/p&gt;&lt;img&gt;&lt;p&gt;&lt;strong&gt;ದೋಷ ನಿವಾರಣೆಗೆ&lt;/strong&gt;ಉಪ್ಪು ಪ್ರತಿಯೊಂದು ಮನೆಯಲ್ಲೂ ಸುಲಭವಾಗಿ ಸಿಗುವ ಪದಾರ್ಥ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು (Negative Energy) ಹೊರಹಾಕುವ ಅದ್ಭುತ ಶಕ್ತಿಯನ್ನು ಹೊಂದಿದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸಲು ಮತ್ತು ದೋಷಗಳನ್ನು ನಿವಾರಿಸಲು ಉಪ್ಪನ್ನು ಒಂದು ಪವಿತ್ರ ವಸ್ತುವಿನಂತೆ ನೋಡಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸ್ವಚ್ಛವಾದ ಮತ್ತು ಒಣಗಿದ ಜಾಗದಲ್ಲಿಡಿ&lt;/strong&gt;ವಾಸ್ತು ಪ್ರಕಾರ ಉಪ್ಪನ್ನು ಯಾವಾಗಲೂ ಸ್ವಚ್ಛವಾದ ಮತ್ತು ಒಣಗಿದ ಜಾಗದಲ್ಲಿ ಇಡಬೇಕು. ಉಪ್ಪಿನ ಡಬ್ಬಿಯನ್ನು ಎಂದಿಗೂ ತೆರೆದಿಡಬಾರದು, ಬದಲಿಗೆ ಯಾವಾಗಲೂ ಮುಚ್ಚಳವಿರುವ ಪಾತ್ರೆಯಲ್ಲಿ ಸಂಗ್ರಹಿಸಬೇಕು. ಇದರಿಂದ ಉಪ್ಪು ತೇವಾಂಶದಿಂದ ಹಾಳಾಗುವುದಿಲ್ಲ ಮತ್ತು ಅಡುಗೆಮನೆಯಲ್ಲಿ ಶಿಸ್ತು ಕಾಪಾಡಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ನಕಾರಾತ್ಮಕ ಶಕ್ತಿ ಹೀರುತ್ತೆ&lt;/strong&gt;ಮನೆಯಲ್ಲಿ ನಿರಂತರವಾಗಿ ಆರ್ಥಿಕ ಸಂಕಷ್ಟಗಳು ಎದುರಾಗುತ್ತಿದ್ದರೆ ಉಪ್ಪಿನಿಂದ ಒಂದು ಸರಳ ಪರಿಹಾರವನ್ನು ಮಾಡಬಹುದು. ಒಂದು ಗಾಜಿನ ಬೌಲ್&zwnj;ನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಅಡುಗೆಮನೆಯ ಒಂದು ಸ್ವಚ್ಛವಾದ ಮೂಲೆಯಲ್ಲಿ ಇರಿಸಿ. ಇದು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮತ್ತು ಮನೆಯಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.&lt;/p&gt;&lt;img&gt;&lt;p&gt;&lt;strong&gt;ಒದ್ದೆಯಾದ ಚಮಚ ಹಾಕದಿರಿ&lt;/strong&gt;ಉಪ್ಪನ್ನು ಇಡುವ ಸ್ಥಳದ ಬಗ್ಗೆ ಬಹಳ ಎಚ್ಚರಿಕೆ ಇರಬೇಕು. ಸಿಂಕ್, ಕಸದ ಬುಟ್ಟಿ ಅಥವಾ ಕೊಳಕು ಪ್ರದೇಶಗಳ ಹತ್ತಿರ ಉಪ್ಪಿನ ಡಬ್ಬಿಯನ್ನು ಇಡಬಾರದು. ಇದರಿಂದ ನಕಾರಾತ್ಮಕ ಪ್ರಭಾವ ಉಂಟಾಗಬಹುದು. ಉಪ್ಪಿನ ಡಬ್ಬಿಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿ ಮತ್ತು ಅದಕ್ಕೆ ಒದ್ದೆಯಾದ ಚಮಚವನ್ನು ಹಾಕದಂತೆ ಗಮನಹರಿಸಿ.&lt;/p&gt;&lt;img&gt;&lt;p&gt;&lt;strong&gt;ಡಬ್ಬಿಯನ್ನು ತೊಳೆದು, ಒಣಗಿಸಿ&lt;/strong&gt;ಉಪ್ಪು ಒಂದು ವೇಳೆ ತೇವಾಂಶದಿಂದ ಗಡ್ಡೆಯಾಗಿದ್ದರೆ ಅಥವಾ ತುಂಬಾ ಹಳೆಯದಾಗಿದ್ದರೆ ಅದನ್ನು ಬದಲಾಯಿಸುವುದು ಉತ್ತಮ. ಹಳೆಯ ಉಪ್ಪನ್ನು ದೀರ್ಘಕಾಲದವರೆಗೆ ಇಟ್ಟುಕೊಳ್ಳುವುದು ಅಶುಭ ಎಂದು ಕೆಲವರು ನಂಬುತ್ತಾರೆ. ಹೊಸ ಉಪ್ಪನ್ನು ತುಂಬುವ ಮೊದಲು ಆ ಡಬ್ಬಿಯನ್ನು ಚೆನ್ನಾಗಿ ತೊಳೆದು, ಒಣಗಿಸಿ ನಂತರ ಉಪ್ಪನ್ನು ಹಾಕಿ.&lt;/p&gt;]]></content:encoded>
            <category><![CDATA[vaastu]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/simple-salt-rituals-to-resolve-financial-problems-6zeln7k"/>
        </item>
        <item>
            <title><![CDATA[ಪ್ರಭಾಸ್‌ ಹೊಸ Instagram DP ನೋಡಿದ್ರಾ? ‘ಫೌಜಿ’ ಸೈನಿಕನ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಖುಷ್‌]]></title>
            <link>https://kannada.asianetnews.com/entertainment/prabhas-fauji-soldier-look-goes-viral-after-surprise-instagram-dp-update-gvd/articleshow-6yl82d0</link>
            <guid isPermaLink="true">https://kannada.asianetnews.com/entertainment/prabhas-fauji-soldier-look-goes-viral-after-surprise-instagram-dp-update-gvd/articleshow-6yl82d0</guid>
            <pubDate>Fri, 14 Aug 2026 17:06:23 +0530</pubDate>
            <description><![CDATA[Prabhas Instagram DP: ಸಿನಿಮಾ ತಾರೆಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಪ್ರೊಫೈಲ್‌ ಪಿಕ್ಚರ್‌ ಬದಲಿಸುವುದು ಸಾಮಾನ್ಯ ವಿಚಾರ. ಆದರೆ, ಪ್ರಭಾಸ್‌ ವಿಷಯದಲ್ಲಿ ಅದು ಕೂಡ ಒಂದು ದೊಡ್ಡ ಸುದ್ದಿಯಾಗಿಬಿಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m000xh6g6x402mz5pbz3a1g4,imgname-bjb-1786707363024.png" type="image/jpeg" height="390" width="690"/>
            <content:encoded><![CDATA[&lt;p&gt;ಸಿನಿಮಾ ತಾರೆಯೊಬ್ಬರು ಸೋಷಿಯಲ್&zwnj; ಮೀಡಿಯಾದಲ್ಲಿ ಪ್ರೊಫೈಲ್&zwnj; ಪಿಕ್ಚರ್&zwnj; ಬದಲಿಸುವುದು ಸಾಮಾನ್ಯ ವಿಚಾರ. ಆದರೆ, ಪ್ರಭಾಸ್&zwnj; ವಿಷಯದಲ್ಲಿ ಅದು ಕೂಡ ಒಂದು ದೊಡ್ಡ ಸುದ್ದಿಯಾಗಿಬಿಟ್ಟಿದೆ. ಬರೋಬ್ಬರಿ ಏಳು ವರ್ಷಗಳ ಬಳಿಕ ತಮ್ಮ ಇನ್&zwnj;ಸ್ಟಾಗ್ರಾಮ್&zwnj; ಡಿಪಿಯನ್ನು ಬದಲಿಸಿರುವ ಪ್ರಭಾಸ್&zwnj;, &lsquo;ಬಾಹುಬಲಿ&rsquo;ಯ ನೆನಪನ್ನು ಬದಿಗಿಟ್ಟು &lsquo;ಫೌಜಿ&rsquo;ಯ ಸೈನಿಕನ ಲುಕ್&zwnj;ಗೆ ಜಾಗ ನೀಡಿದ್ದಾರೆ.&lt;/p&gt;&lt;p&gt;ಇಷ್ಟು ವರ್ಷಗಳಿಂದ ಪ್ರಭಾಸ್&zwnj; ಅವರ ಇನ್&zwnj;ಸ್ಟಾಗ್ರಾಮ್&zwnj; ಪ್ರೊಫೈಲ್&zwnj;ನಲ್ಲಿ Baahubali: The Beginning ಚಿತ್ರದ ಐಕಾನಿಕ್&zwnj; ಲುಕ್&zwnj; ಇತ್ತು. ಹಲವು ಸಿನಿಮಾಗಳು ಬಂದವು, ಹೋದವು. ಹೊಸ ಪೋಸ್ಟರ್&zwnj;ಗಳು, ಫಸ್ಟ್&zwnj; ಲುಕ್&zwnj;ಗಳು, ಪ್ರಚಾರದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡವು. ಆದರೆ ಅವರ ಡಿಪಿ ಮಾತ್ರ ಬದಲಾಗಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಆ ಏಳು ವರ್ಷದ ದಾಖಲೆ ಮುರಿದಿದೆ.&lt;/p&gt;&lt;p&gt;&lt;strong&gt;&lsquo;ಬಾಹುಬಲಿ&rsquo; ಬದಲು &lsquo;ಫೌಜಿ&rsquo; ಸೈನಿಕ!&lt;/strong&gt;&lt;/p&gt;&lt;p&gt;ಯಾವುದೇ ದೊಡ್ಡ ಮುನ್ಸೂಚನೆ ಇಲ್ಲದೆ ಪ್ರಭಾಸ್&zwnj; ತಮ್ಮ ಪ್ರೊಫೈಲ್&zwnj; ಚಿತ್ರವನ್ನು ಅಪ್&zwnj;ಡೇಟ್&zwnj; ಮಾಡಿದ್ದಾರೆ. ಹೊಸ ಡಿಪಿಯಲ್ಲಿ ಅವರು &lsquo;ಫೌಜಿ&rsquo; ಚಿತ್ರದ ರಗಡ್&zwnj; ಸೈನಿಕನ ಗೆಟಪ್&zwnj;ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್&zwnj; ಸೋಷಿಯಲ್&zwnj; ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ನಟರಲ್ಲ. ಆದರೆ ಅವರು ತಮ್ಮ ಸಿನಿಮಾಗಳಿಗೆ ಸಂಬಂಧಿಸಿದ ಅಪ್&zwnj;ಡೇಟ್&zwnj;ಗಳನ್ನು ಹಂಚಿಕೊಂಡಾಗಲೆಲ್ಲ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡುತ್ತದೆ. ಹೀಗಿರುವಾಗ, ಏಳು ವರ್ಷಗಳ ಬಳಿಕ ಡಿಪಿ ಬದಲಿಸಿರುವುದು ಅಭಿಮಾನಿಗಳ ಗಮನ ಸೆಳೆಯದೇ ಇರಲಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವೇ ಸೈನಿಕನ ಲುಕ್&zwnj; ಪ್ರೊಫೈಲ್&zwnj; ಚಿತ್ರವಾಗಿರುವುದು ಮತ್ತಷ್ಟು ವಿಶೇಷ. ಪರಿಣಾಮವಾಗಿ #PrabhasDP ಸೇರಿದಂತೆ ವಿವಿಧ ಹ್ಯಾಶ್&zwnj;ಟ್ಯಾಗ್&zwnj;ಗಳು ಸೋಷಿಯಲ್&zwnj; ಮೀಡಿಯಾದಲ್ಲಿ ಚರ್ಚೆಗೆ ಬಂದಿವೆ.&lt;/p&gt;&lt;p&gt;&lt;strong&gt;ಇದು ಕೇವಲ DP ಬದಲಾವಣೆ ಅಲ್ಲವೇ?&lt;/strong&gt;&lt;/p&gt;&lt;p&gt;ಪ್ರಭಾಸ್&zwnj; ಅವರ ಈ ನಡೆ &lsquo;ಫೌಜಿ&rsquo; ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕಾರಣ, ಈ ಸಿನಿಮಾದಲ್ಲಿ ಅವರು ಇದುವರೆಗೂ ಕಾಣಿಸಿಕೊಂಡಿರದ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. &lsquo;ಸೀತಾ ರಾಮಂ&rsquo; ಖ್ಯಾತಿಯ Hanu Raghavapudi ನಿರ್ದೇಶನದ ಈ ಸಿನಿಮಾ ಬ್ರಿಟಿಷರ ಕಾಲಘಟ್ಟದ ಹಿನ್ನೆಲೆಯಲ್ಲಿ ಸಾಗುವ ಪೀರಿಯಾಡಿಕ್&zwnj; ಆಕ್ಷನ್&zwnj; ಡ್ರಾಮಾ ಎನ್ನಲಾಗಿದೆ. ಕಥೆಯ ಕೇಂದ್ರದಲ್ಲಿ ಸೈನಿಕನ ಪಾತ್ರವಿರುವುದರಿಂದ ಪ್ರಭಾಸ್&zwnj; ಅವರ ಹೊಸ ಲುಕ್&zwnj; ಚಿತ್ರದ ಕಥೆಯ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿಸಿದೆ.&lt;/p&gt;&lt;p&gt;&lt;strong&gt;ಪ್ರಭಾಸ್&zwnj;ಗೆ ನಾಯಕಿಯಾಗಿ ಇಮಾನ್ವಿ&lt;/strong&gt;&lt;/p&gt;&lt;p&gt;&lsquo;ಫೌಜಿ&rsquo;ಯಲ್ಲಿ ಪ್ರಭಾಸ್&zwnj;ಗೆ ಜೋಡಿಯಾಗಿ ಇಮಾನ್ವಿ ಇಸ್ಮಾಯಿಲ್&zwnj; ನಟಿಸುತ್ತಿದ್ದಾರೆ. ಜೊತೆಗೆ ಮಿಥುನ್&zwnj; ಚಕ್ರವರ್ತಿ, ಜಯಪ್ರದಾ ಮತ್ತು ಅನುಪಮ್&zwnj; ಖೇರ್&zwnj; ಸೇರಿದಂತೆ ಹಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Mythri Movie Makers ನಿರ್ಮಾಣದ ಈ ಪ್ಯಾನ್&zwnj;-ಇಂಡಿಯಾ ಸಿನಿಮಾವನ್ನು ಭಾರಿ ಬಜೆಟ್&zwnj;ನಲ್ಲಿ ಸಿದ್ಧಪಡಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಡಿಸೆಂಬರ್&zwnj;ನಲ್ಲಿ &lsquo;ಫೌಜಿ&rsquo; ಅಬ್ಬರ&lt;/strong&gt;&lt;/h2&gt;&lt;p&gt;ಪ್ರಭಾಸ್&zwnj; ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿರುವ &lsquo;ಫೌಜಿ&rsquo; ಡಿಸೆಂಬರ್&zwnj; 3ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಡಿಸೆಂಬರ್&zwnj; 2ರಂದು ಪ್ರೀಮಿಯರ್&zwnj; ಶೋಗಳು ನಡೆಯುವ ನಿರೀಕ್ಷೆಯೂ ಇದೆ. ಒಟ್ಟಿನಲ್ಲಿ, ಏಳು ವರ್ಷಗಳ ಕಾಲ ಪ್ರಭಾಸ್&zwnj; ಅವರ ಸೋಷಿಯಲ್&zwnj; ಮೀಡಿಯಾ ಗುರುತಾಗಿದ್ದ &lsquo;ಬಾಹುಬಲಿ&rsquo; ಲುಕ್&zwnj; ಈಗ ಬದಲಾಗಿದೆ. ಅದರ ಜಾಗಕ್ಕೆ ಬಂದಿರುವುದು &lsquo;ಫೌಜಿ&rsquo;ಯ ಸೈನಿಕನ ಅವತಾರ. ಇದು ಕೇವಲ ಹೊಸ ಡಿಪಿಯೇ, ಅಥವಾ ಪ್ರಭಾಸ್&zwnj; ಅವರ ಹೊಸ ಸಿನಿಮಾಟಿಕ್&zwnj; ಅಧ್ಯಾಯದ ಅಧಿಕೃತ ಆರಂಭವೇ ಎಂಬುದನ್ನು &lsquo;ಫೌಜಿ&rsquo;ಯ ಮುಂದಿನ ಅಪ್&zwnj;ಡೇಟ್&zwnj;ಗಳು ಹೇಳಬೇಕಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/prabhas-fauji-soldier-look-goes-viral-after-surprise-instagram-dp-update-gvd/articleshow-6yl82d0"/>
        </item>
        <item>
            <title><![CDATA[ಕರ್ನಾಟಕ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಗ ಶರತ್ ಅಶೋಕ್ ಗಿನ್ನೆಸ್ ರೆಕಾರ್ಡ್; ಸಾಧನೆಯ ಹಾದಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/state/karnataka-leader-of-opposition-r-ashoka-son-sharath-ashoka-guinness-world-record-underwater-flag/articleshow-ac9im24</link>
            <guid isPermaLink="true">https://kannada.asianetnews.com/state/karnataka-leader-of-opposition-r-ashoka-son-sharath-ashoka-guinness-world-record-underwater-flag/articleshow-ac9im24</guid>
            <pubDate>Fri, 14 Aug 2026 17:04:30 +0530</pubDate>
            <description><![CDATA[ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ 'ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' ನಿರ್ಮಿಸಿದ್ದಾರೆ. ಈ ಐತಿಹಾಸಿಕ ಸಾಧನೆಗಾಗಿ ಅವರಿಗೆ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ಲಭಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m000p7ntvgc2m97xqc0gjehy,imgname-r-ashok-son-sharath-ashoka-guinness-world-record--1--1786707123897.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): ಕ&lt;/strong&gt;ರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರ ಪುತ್ರ ಶರತ್ ಅಶೋಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಾಗರದಾಳದಲ್ಲಿ ಬೃಹತ್ ಭಾರತದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸುವ ಮೂಲಕ 'ಅಧಿಕೃತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್' (Guinness World Records) ನಿರ್ಮಿಸಿದ್ದಾರೆ. ದೇಶಕ್ಕೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿರುವ ಈ ಸಾಧನೆಗಾಗಿ ಅವರಿಗೆ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರಿಂದ ಅಧಿಕೃತ ಪ್ರಮಾಣಪತ್ರ ದೊರೆತಿದೆ.&lt;/p&gt;&lt;h2&gt;&lt;strong&gt;ಸಾಗರದಾಳದಲ್ಲಿ ಸಾಹಸಮಯ ಐತಿಹಾಸಿಕ ಸಾಧನೆ&lt;/strong&gt;&lt;/h2&gt;&lt;p&gt;ಅಂಡಮಾನ್ &amp;amp; ನಿಕೋಬಾರ್&zwnj; ದ್ವೀಪಗಳ ಸ್ವರಾಜ್&zwnj;ದ್ವೀಪದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನಡೆದಿತ್ತು. ಸಾಗರದ ಅತ್ಯಂತ ಆಳದಲ್ಲಿ 'ಅತಿ ದೊಡ್ಡ ಭಾರತೀಯ ತ್ರಿವರ್ಣ ಧ್ವಜ'ವನ್ನು ಅನಾವರಣಗೊಳಿಸುವ (Largest Underwater Flag Unfurl) ಸಾಹಸಮಯ ಪ್ರಯತ್ನದಲ್ಲಿ ಶರತ್ ಅಶೋಕ್ ಪ್ರಮುಖ ಭಾಗವಾಗಿದ್ದರು. ಅಂಡಮಾನ್ ಆಡಳಿತ ಮಂಡಳಿಯಿಂದ ಲೋಕ್ ನಿವಾಸ್&zwnj;ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ, ನಿವೃತ್ತ ಅಡ್ಮಿರಲ್ ಹಾಗೂ ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಡಿ. ಕೆ. ಜೋಶಿ ಅವರಿಂದ ಶರತ್ ಅಶೋಕ್ ಅವರು ಗಿನ್ನೆಸ್ ಪ್ರಮಾಣಪತ್ರ ಮತ್ತು ಪದಕವನ್ನು ಸ್ವೀಕರಿಸಿದರು.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಒಬ್ಬ ತಂದೆಯಾಗಿ ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆ: ಆರ್. ಅಶೋಕ್ ಭಾವುಕ!&lt;/strong&gt;&lt;/h3&gt;&lt;p&gt;ತಮ್ಮ ಮಗನ ಈ ಅಪರೂಪದ ಹಾಗೂ ದೇಶಪ್ರೇಮದ ಸಾಧನೆಯನ್ನು ಕಂಡು ತಂದೆ ಆರ್. ಅಶೋಕ್ ಅವರು ತೀವ್ರ ಭಾವುಕರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.&lt;/p&gt;&lt;p&gt;'ಒಬ್ಬ ತಂದೆಯಾಗಿ ನನಗೆ ಇದು ಅಪಾರ ಹೆಮ್ಮೆ ಮತ್ತು ಭಾವುಕತೆಯ ಕ್ಷಣ. ನಮ್ಮ ತ್ರಿವರ್ಣ ಧ್ವಜವನ್ನು ಸಾಗರದಾಳದಲ್ಲಿ ಹಾರಿಸಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್&zwnj;ನ ಭಾಗವಾಗಲು ಅಸಾಧಾರಣ ಧೈರ್ಯ, ಸಮರ್ಪಣೆ, ಶಿಸ್ತು ಮತ್ತು ಶ್ರೇಷ್ಠ ತಂಡಕಾರ್ಯ ಅಗತ್ಯವಿತ್ತು. ದೇಶಕ್ಕೆ ಹೆಮ್ಮೆ ತರುವ ಇಂತಹ ಸಾಧನೆಯಲ್ಲಿ ನನ್ನ ಮಗ ಭಾಗಿಯಾಗಿರುವುದನ್ನು ನೋಡುವುದು ಪದಗಳಲ್ಲಿ ವ್ಯಕ್ತಪಡಿಸಲಾಗದ ಅನುಭವ. ಶರತ್, ನೀನು ಇನ್ನಷ್ಟು ಆಳಕ್ಕೆ ಇಳಿಯುತ್ತಾ, ಇನ್ನಷ್ಟು ಎತ್ತರಕ್ಕೆ ಏರುತ್ತಿರು!' ಎಂದು ಆರ್. ಅಶೋಕ್ ಹಾರೈಸಿದ್ದಾರೆ.&lt;/p&gt;&lt;p&gt;ಶರತ್ ಅಶೋಕ್ ಅವರ ಈ ಐತಿಹಾಸಿಕ ಸಾಧನೆಗೆ ರಾಜ್ಯದ ಹಲವು ರಾಜಕೀಯ ಗಣ್ಯರು, ಸಾಮಾಜಿಕ ಮುಖಂಡರು ಹಾಗೂ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.&lt;/p&gt;&lt;p&gt;A moment of immense pride and emotion as a father! Extremely proud to see my son, Sharath Ashoka, being felicitated by the Andaman &amp;amp; Nicobar Administration at Lok Niwas and receiving the official Guinness World Records certificate for being part of a truly historic&hellip; pic.twitter.com/CX97ipYzBk&lt;/p&gt;&lt;p&gt;&mdash; R. Ashoka (@RAshokaBJP) August 14, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-leader-of-opposition-r-ashoka-son-sharath-ashoka-guinness-world-record-underwater-flag/articleshow-ac9im24"/>
        </item>
        <item>
            <title><![CDATA[26 ಮನೆಗಳ ನೆಲಸಮಕ್ಕೆ ಆದೇಶ.. ಹೊನ್ನಾವರ ಅರಣ್ಯ ಇಲಾಖೆಯ ನೋಟಿಸ್‌ಗೆ ಬೆಚ್ಚಿಬಿದ್ದ ಜನ..!]]></title>
            <link>https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r</link>
            <guid isPermaLink="true">https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r</guid>
            <pubDate>Fri, 14 Aug 2026 17:02:01 +0530</pubDate>
            <description><![CDATA[ಅರಣ್ಯವನ್ನೇ ನಂಬಿ ಬದುಕು ಕಟ್ಟಿಕೊಂಡ ಉತ್ತರ ಕನ್ನಡ ಜಿಲ್ಲೆಯ ನಿವಾಸಿಗಳಿಗೆ ಅರಣ್ಯ ಇಲಾಖೆಯ ತೊಂದರೆ ನಿನ್ನೆ ಮೊನ್ನೆಯದಲ್ಲ. ಇದೀಗ ಹೊನ್ನಾವರ ತಾಲೂಕಿನ 26 ಮನೆಗಳನ್ನ ನೆಲಸಮಗೊಳಿಸವಂತೆ ಆದೇಶ ನೀಡಲಾಗಿದೆ. ಅರಣ್ಯಾ ಇಲಾಖೆಯ ಏಕಾಏಕಿ ಈ ಕ್ರಮವು ಅಲ್ಲಿನ ನಿವಾಸಿಗಳನ್ನ ಕಂಗಾಲಾಗುವಂತೆ ಮಾಡಿದೆ..]]></description>
            <media:content url="https://static.asianetnews.com/images/w-1280,h-720,format-jpg,imgid-01m000mqepb2d29xk0ze7xvwfx,imgname-honnavar-hadinabal-1786707074517.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊನ್ನಾವರ: &lt;/strong&gt;ತಲತಲಾಂತರಗಳಿಂದ ಅರಣ್ಯ ನಂಬಿ ಬದುಕುತ್ತಿರುವ ಬಡ ಕುಟುಂಬಗಳ ಮೇಲೆ ಈಗ ಅರಣ್ಯ ಇಲಾಖೆಯ 'ತೆರವು' ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಡಿನಬಾಳ ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ 26 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಅರಣ್ಯವಾಸಿಗಳು ದಿಕ್ಕುತೋಚದಂತಾಗಿದ್ದಾರೆ.&lt;/p&gt;&lt;h2&gt;&lt;strong&gt;ಬೆಟ್ಟದ ಮೇಲಿನ ಬದುಕಿಗೆ ಈಗ ಸಂಚಕಾರ!&lt;/strong&gt;&lt;/h2&gt;&lt;p&gt;ಹೊನ್ನಾವರ ತಾಲೂಕಿನ ಮೇಲಿನ ಹಡಿನಬಾಳ ಅರಣ್ಯ ವ್ಯಾಪ್ತಿಯ ಮೂಡ್ಕಣಿಯಲ್ಲಿರುವ ಸುಮಾರು 15 ಗುಂಟೆ ಅರಣ್ಯ ಪ್ರದೇಶದಲ್ಲಿ 26 ಕುಟುಂಬಗಳು ವಾಸವಾಗಿವೆ. ತಗ್ಗು ಪ್ರದೇಶದಲ್ಲಿ ವಾಸಿಸಲು ಹತ್ತಾರು ಸಮಸ್ಯೆಗಳಿದ್ದ ಕಾರಣ, ಈ ಕುಟುಂಬಗಳು ಕೊಂಚ ಎತ್ತರದ ಪ್ರದೇಶವಾದ ಬೆಟ್ಟದ ಮೇಲೆ ಮನೆ ಮಾಡಿಕೊಂಡಿದ್ದವು. ಆದರೆ, ಈಗ ಈ ಜಾಗವನ್ನು ಅರಣ್ಯ ಅತಿಕ್ರಮಣ ಎಂದು ಪರಿಗಣಿಸಿರುವ ಇಲಾಖೆ, ತಕ್ಷಣವೇ ಮನೆಗಳನ್ನು ತೆರವುಗೊಳಿಸಲು ಆದೇಶಿಸಿದೆ.&lt;/p&gt;&lt;h2&gt;&lt;strong&gt;ಇಲಾಖೆಯ ಖಡಕ್ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಅತಿಕ್ರಮಿತ ಜಾಗದಲ್ಲಿರುವ ಕಟ್ಟಡ ಹಾಗೂ ಬೆಳೆಗಳನ್ನು ನಿವಾಸಿಗಳೇ ಸ್ವಂತ ಖರ್ಚಿನಲ್ಲಿ ತೆರವುಗೊಳಿಸಬೇಕು. ಒಂದು ವೇಳೆ ನಿಗದಿತ ಸಮಯದೊಳಗೆ ತೆರವು ಮಾಡದಿದ್ದರೆ, ಇಲಾಖೆಯೇ ಜಪ್ತಿ ಮಾಡಿ ತೆರವು ಕಾರ್ಯ ನಡೆಸಲಿದೆ ಎಂದು ಅರಣ್ಯಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಆತಂಕದಲ್ಲಿರುವ ನಿವಾಸಿಗಳು ಯಾರು?&lt;/strong&gt;&lt;/h2&gt;&lt;p&gt;ಅರಣ್ಯ ಇಲಾಖೆಯ ಈ ನೋಟಿಸ್&zwnj;ನಿಂದಾಗಿ ಕೆರವಳ್ಳಿಯ ಕೇಶವ ನಾಯ್ಕ ಸೇರಿದಂತೆ ಜಾಕಿ ಬಾಂವ ಅಡಾ, ಧರ್ಮ ಮಂಜುನಾಥ ನಾಯ್ಕ ಮರಬಳ್ಳಿ, ಶಾಂತಾನಂದ ಅನಂತ ಶಾನಭಾಗ, ಸಂತೋಷ ನರಸಿಂಹ ಶಾನಭಾಗ, ಬೇತಾಳ ನರಸಿಂಹ ಶಾನಭಾಗ, ರಾಮಚಂದ್ರ ಗಣಪ ನಾಯ್ಕ, ನಾರಾಯಣ ಅಮಕೂಸ ಗೌಡ, ಪ್ರಶಾಂತ ಶೇಷಗಿರಿ ನಾಯ್ಕ, ಕೇಶವ ಗಣಪಯ್ಯ ನಾಯ್ಕ, ರಾಘು ನಾರಾಯಣ ಶೆಟ್ಟಿ, ಐವಾನ ಆಶಿಸಿ ಮೆಂಡಿಸ್, ವಿನಾಯಕ ಸುಬ್ರಮಣ್ಯ ವೈದ್ಯ, ವಿಘ್ನಶ್ವರ ಸುಬ್ರಮಣ್ಯ ವೈದ್ಯ, ಪಾರ್ವತಿ ಗಜಾನನ ನಾಯ್ಕ, ವಿಲಿಯಂ ಸಂತಾನ ಮಿರಾಂಡ, ಆಶಿಸ್ ಬಾಂವ್, ದಯಾನಂದ ಈಶ್ವರ ನಾಯ್ಕ, ಶ್ರೀಧರ ಮಂಜಪ್ಪ ಮಹಾಲೆ, ಕೃಷ್ಣಪ್ಪ ಗಣಪತಿ ನಾಯ್ಕ, ಸಂತಾ ಡಿಯೋಗ ಡಯಾಸ, ದಯಾನಂದ ಧರ್ಮ ನಾಯ್ಕ, ಹನುಮಂತ ಸುಬ್ರಾಯ ನಾಯ್ಕ, ಮಹಾದೇವ ಮಂಜಪ್ಪ ಮಹಾಲೆ, ನಿತ್ಯಾನಂದ ವೆಂಕಟೇಶ ಶ್ಯಾನಭಾಗ ಹಾಗೂ ಮಾಲ್ವೇಶ್ವರ ಸಣ್ಣ ತಮ್ಮ ನಾಯ್ಕ ಎಂಬುವವರು ಅಕ್ಷರಶಃ ಕಂಗಾಲಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರತಿಭಟನೆಯ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಜುಲೈ 15ರಂದೇ ಈ ಆದೇಶ ಹೊರಡಿಸಲಾಗಿದ್ದರೂ ನಿವಾಸಿಗಳ ಕೈಗೆ ಸಿಕ್ಕಿದ್ದು ಮಾತ್ರ ಮೂರು ದಿನಗಳ ಹಿಂದೆ! ಅಂದರೆ 30 ದಿನಗಳ ಕಾಲಾವಕಾಶದಲ್ಲಿ ಈಗಾಗಲೇ 25 ದಿನಗಳು ಕಳೆದುಹೋಗಿವೆ. ಕೇವಲ 5-6 ದಿನಗಳ ಬಾಕಿ ಇರುವಾಗ ನೋಟಿಸ್ ನೀಡಿರುವುದು ಅರಣ್ಯವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.&lt;/p&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯ ಭೂಮಿ ಹಕ್ಕಿನ ಹೋರಾಟಗಾರ ಮಹೇಶ ನಾಯ್ಕ, ಜುಲೈ 15ರ ಆದೇಶವನ್ನು ತಲುಪಿಸಲು 25 ದಿನ ವಿಳಂಬ ಮಾಡಿರುವುದು ವಿಷಾದನೀಯ. ಆಗಸ್ಟ್ 14ರ ಒಳಗೆ ಒಕ್ಕಲೆಬ್ಬಿಸುವಂತೆ ಸೂಚಿಸಿರುವುದು ಅನ್ಯಾಯ. ಬದುಕು ಕಟ್ಟಿಕೊಂಡಿರುವ ಅರಣ್ಯವಾಸಿಗಳನ್ನು ಈ ರೀತಿ ಬೀದಿಗೆ ಹಾಕುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ. ಮಳೆಗಾಲದ ಈ ಸಂದರ್ಭದಲ್ಲಿ ಮನೆ ತೆರವುಗೊಳಿಸುವಂತೆ ಆದೇಶಿಸಿರುವುದು ಮಾನವೀಯತೆಯ ದೃಷ್ಟಿಯಿಂದಲೂ ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಬಡ ಕುಟುಂಬಗಳು ಈಗ ನ್ಯಾಯಕ್ಕಾಗಿ ಸರ್ಕಾರದ ಕಡೆಗೆ ಮುಖ ಮಾಡಿವೆ.&lt;/p&gt;]]></content:encoded>
            <category><![CDATA[uttara-kannada]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/forest-department-issued-an-order-to-vacate-26-houses-located-in-the-hadinabala-forest-range-of-honnavar-gkn/articleshow-wze4k7r"/>
        </item>
        <item>
            <title><![CDATA[Karna Serial: ಅಯ್ಯೋ, ಯಾರಾದ್ರೂ ನನ್ನ ಮಗ ಕರ್ಣನನ್ನು ಕಾಪಾಡಿ; ಸತ್ಯ ತಿಳಿದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​]]></title>
            <link>https://kannada.asianetnews.com/gallery/tv-talk/karna-serial-ramesh-came-to-know-about-karna-as-his-own-son-but-did-accident-suc-tvkxnos</link>
            <guid isPermaLink="true">https://kannada.asianetnews.com/gallery/tv-talk/karna-serial-ramesh-came-to-know-about-karna-as-his-own-son-but-did-accident-suc-tvkxnos</guid>
            <pubDate>Fri, 14 Aug 2026 16:59:44 +0530</pubDate>
            <description><![CDATA[ಕರ್ಣನನ್ನು ಮುಗಿಸಲು ಸಂಚು ರೂಪಿಸಿ ಅಪಘಾತ ಮಾಡಿಸಿದ ರಮೇಶ್‌ಗೆ, ಅನಿರೀಕ್ಷಿತ ಕರೆಯೊಂದರಿಂದ ಕರ್ಣನೇ ತನ್ನ ಮಗ ಎಂಬ ಆಘಾತಕಾರಿ ಸತ್ಯ ತಿಳಿಯುತ್ತದೆ. ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಮಗನಿಗಾಗಿ ಹುಡುಕಾಡುವ ರಮೇಶ್, ಮುಂದೇನು ಮಾಡಲಿದ್ದಾನೆ ಎಂಬ ಕುತೂಹಲಕಾರಿ ಘಟ್ಟದಲ್ಲಿ ಕಥೆ ನಿಂತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m000ar0d70hyyjeype2aqn7n,imgname-karna-serial-02-1786706747405.jpg" type="image/jpeg" height="390" width="690"/>
            <content:encoded><![CDATA[ಕರ್ಣನನ್ನು ಮುಗಿಸಲು ಸಂಚು ರೂಪಿಸಿ ಅಪಘಾತ ಮಾಡಿಸಿದ ರಮೇಶ್&zwnj;ಗೆ, ಅನಿರೀಕ್ಷಿತ ಕರೆಯೊಂದರಿಂದ ಕರ್ಣನೇ ತನ್ನ ಮಗ ಎಂಬ ಆಘಾತಕಾರಿ ಸತ್ಯ ತಿಳಿಯುತ್ತದೆ. ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಮಗನಿಗಾಗಿ ಹುಡುಕಾಡುವ ರಮೇಶ್, ಮುಂದೇನು ಮಾಡಲಿದ್ದಾನೆ ಎಂಬ ಕುತೂಹಲಕಾರಿ ಘಟ್ಟದಲ್ಲಿ ಕಥೆ ನಿಂತಿದೆ.&lt;img&gt;&lt;p&gt;ಕರ್ಣ ಸೀರಿಯಲ್​ನಲ್ಲಿ​ (Karna Serial) ಸದ್ಯ, ಕರ್ಣ, ರಮೇಶ್ ಮತ್ತು ಸೀತಾ ನಡುವಿನ ಯುದ್ಧ ನಡೆಯುತ್ತಿದೆ. ಮೂವರಿಗೂ ಸತ್ಯ ಗೊತ್ತಿಲ್ಲ. ಕರ್ಣನೇ ತಮ್ಮ ಮಗ ಎಂದು ಇತ್ತ ಸೀತಾಗೂ (ಭುವನೇಶ್ವರಿ)​ ಗೊತ್ತಿಲ್ಲ, ಅತ್ತ ಅಪ್ಪ-ಅಮ್ಮನ ಸತ್ಯ ಕರ್ಣನಿಗೂ ತಿಳಿದಿಲ್ಲ!&lt;/p&gt;&lt;img&gt;&lt;p&gt;ಕರ್ಣನನ್ನು ಕಂಡರೆ ಕಿಡಿ ಕಾರುತ್ತಿರುವ ರಮೇಶ್​, ಅವನನ್ನು ಮುಗಿಸಲು ಸಂಚು ರೂಪಿಸಿದ. ಸೀತಾಳ ಜಾಡು ಹಿಡಿದು ಹೊರಟ ಕರ್ಣನ ಅಪಘಾತ ಮಾಡಿಸಿ, ಅವನಿಗೆ ಗುಡ್​ಬೈ ಹೇಳಿಹೋದ.&lt;/p&gt;&lt;img&gt;&lt;p&gt;ಅಷ್ಟರಲ್ಲಿಯೇ ಸೀತಾಳ ರಹಸ್ಯ ಅರಿತ ಅಣ್ಣಯ್ಯ ಸೀರಿಯಲ್​ ಶಿವು, ಕರ್ಣನಿಗೆ ಕಾಲ್​ ಮಾಡುತ್ತಿದ್ದ. ಆ ಕಾಲ್​ ಅನ್ನು ಅವನ ಅಪಘಾತದ ಬಳಿಕ ರಮೇಶ್​ ತೆಗೆದುಕೊಂಡ. ಅಲ್ಲಿ ಶಿವು, ಸೀತಾಳ ಸತ್ಯ ಹೇಳುತ್ತಿದ್ದಂತೆಯೇ, ರಮೇಶ್​ ಅಲ್ಲಿಗೆ ಹೋದ.&lt;/p&gt;&lt;img&gt;&lt;p&gt;ಬಳಿಕ, ಶಿವು ರಮೇಶ್​ಗೆ ಕರ್ಣನೇ ಸೀತಾಳ ಹೆತ್ತ ಅಮ್ಮ ಎಂದು ಸತ್ಯ ತಿಳಿಸಿದ. ಆಗ ರಮೇಶ್​ಗೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಯ್ತು. ಸೀತಾ ಕರ್ಣನ ಅಮ್ಮ ಆದ್ರೆ,, ತಾನೇ ಅವನ ಅಪ್ಪ ಎನ್ನುವ ಸತ್ಯ ತಿಳಿಯಿತು.&lt;/p&gt;&lt;img&gt;&lt;p&gt;ಕೂಡಲೇ ತನ್ನ ಹೆತ್ತ ಮಗನನ್ನು ಕೈಯಾರೆ ಕೊಲೆ ಮಾಡಿಬಿಟ್ಟೆನಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​, ಅಪಘಾತ ಆದ ಸ್ಥಳಕ್ಕೆ ಧಾವಿಸಿದ. ಅಲ್ಲಿ ಕರ್ಣ ಇರಲಿಲ್ಲ. ರಸ್ತೆ ಮಧ್ಯೆ ನಿಂತು ಗೋಳಾಡಿದ ರಮೇಶ್​, ನನ್ನ ಮಗನನ್ನು ಯಾರಾದರೂ ಹುಡುಕಿ ಕೊಡಿ, ಬದುಕಿಸಿ ಕೊಡಿ ಎಂದು ಒಂದೇ ಸಮನೆ ರೋಧಿಸಿದ.&lt;/p&gt;&lt;img&gt;&lt;p&gt;ಮುಂದೇನಾಗತ್ತೆ ಎನ್ನುವ ಕುತೂಹಲ ಸದ್ಯದ್ದು. ಕರ್ಣ ಅಂತೂ ಸಾಯಲ್ಲ ಎನ್ನುವುದು ನಿಜ. ಆದರೆ ಆತ ಎಲ್ಲಿದ್ದಾನೆ, ರಮೇಶ್​ಗೆ ಸತ್ಯ ತಿಳಿದರೆ ಏನು ಮಾಡ್ತಾನೆ? ಸೀತಾ ಮತ್ತು ಭುವನೇಶ್ವರಿ ಒಬ್ಬರೇ ಎನ್ನೋದು ತಿಳಿಯತ್ತಾ? ಸದ್ಯ ವಿಪರೀತ ಕುತೂಹಲವಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-ramesh-came-to-know-about-karna-as-his-own-son-but-did-accident-suc-tvkxnos"/>
        </item>
        <item>
            <title><![CDATA[Khadi and Village Industries: ನಲುಗಿದ ಖಾದಿ ಗ್ರಾಮೋದ್ಯೋಗ, ಬೀದಿಗೆ ಬಿದ್ದ ಕಾರ್ಮಿಕರು: ₹150 ಕೋಟಿ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವ ಸರ್ಕಾರ!]]></title>
            <link>https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx</link>
            <guid isPermaLink="true">https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx</guid>
            <pubDate>Fri, 14 Aug 2026 16:53:45 +0530</pubDate>
            <description><![CDATA[ಹುಬ್ಬಳ್ಳಿಯ ರಾಷ್ಟ್ರಧ್ವಜ ತಯಾರಿಕಾ ಘಟಕವು ಸರ್ಕಾರದ ಧ್ವಜ ಸಂಹಿತೆ ತಿದ್ದುಪಡಿ ಮತ್ತು ₹150 ಕೋಟಿ ಪ್ರೋತ್ಸಾಹಧನ ವಿಳಂಬದಿಂದ ತೀವ್ರ ಸಂಕಷ್ಟದಲ್ಲಿದೆ. ಇದರಿಂದಾಗಿ ಖಾದಿ ಧ್ವಜಗಳ ಮಾರಾಟ ಕುಸಿದು, ಅಲ್ಲಿನ ನೇಕಾರರು ಮತ್ತು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01m000hghpz8en4w7dzbwqfk2t,imgname-gemini-ai-1-1786706969142.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ಧ್ವಜ ಆಗಸದಲ್ಲಿ ಆಕಾಶದೆತ್ತರಕ್ಕೆ ಹಾರಾಡುವಾಗ ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಹೇಳತೀರದ ರೋಮಾಂಚನ ಮೂಡುತ್ತದೆ. ದೆಹಲಿ ಕೆಂಪುಕೋಟೆ, ಸಂಸತ್ ಭವನ, ರಾಷ್ಟ್ರಪತಿ ಭವನದಿಂದ ಹಿಡಿದು ಸಾಗರದಾಚೆಗಿನ ರಾಯಭಾರ ಕಚೇರಿಗಳು ಹಾಗೂ ಮಹಾಸಾಗರಗಳಲ್ಲಿ ಸಂಚರಿಸುವ ಭಾರತೀಯ ನೌಕೆಗಳ ಮೇಲೂ ರಾರಾಜಿಸುವ ಆ ರಾಷ್ಟ್ರಧ್ವಜದ ಹಿಂದೆ ಅಸಂಖ್ಯಾತ ಮಹಿಳೆಯರ ಬೆವರಿನ ಹನಿಗಳಿವೆ. ಆದರೆ, ಆ ಧ್ವಜವನ್ನು ತಮ್ಮ ಉಸಿರಾಗಿಸಿಕೊಂಡು, ಹಗಲಿರುಳು ಚರಕದ ಮುಂದೆ ಕುಳಿತು ನೂಲು ತೆಗೆದು, ಬಣ್ಣದೊಡನೆ ಬೆರೆತು ಖಾದಿ ಬಟ್ಟೆಯಲ್ಲಿ ದೇಶಪ್ರೇಮವನ್ನು ನೇಯುವ ಆ ಬಡ ತಾಯಂದಿರ ಬದುಕು ಇಂದು ಕಾರ್ಮೋಡದಲ್ಲಿ ಮುಳುಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ&lt;/p&gt;&lt;h2&gt;&lt;strong&gt;ಸಂಕಷ್ಟದಲ್ಲಿ ಹುಬ್ಬಳ್ಳಿ ಘಟಕ!&lt;/strong&gt;&lt;/h2&gt;&lt;p&gt;ಇಡೀ ಭಾರತದಲ್ಲಿಯೇ 'ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್' (ಬಿಐಎಸ್) ಮಾನ್ಯತೆ ಪಡೆದ ಏಕೈಕ ಹಾಗೂ ಪ್ರತಿಷ್ಠಿತ ರಾಷ್ಟ್ರಧ್ವಜ ತಯಾರಿಕಾ ಘಟಕವಾದ ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ನೇಕಾರರ ಮತ್ತು ಕಾರ್ಮಿಕರ ಕಣ್ಣಲ್ಲಿ ಇಂದು ಕಣ್ಣೀರಿನ ಕೋಡಿ ಹರಿಯುತ್ತಿದೆ. ಗಾಂಧೀಜಿಯವರ ಕನಸಾಗಿದ್ದ ಹಾಗೂ ಸ್ವಾತಂತ್ರ್ಯದ ನೈಜ ಪ್ರತೀಕವಾದ ಖಾದಿಗೆ ಇಂದು ಮಂಕು ಕವಿದಿದ್ದು, ಆ ನೇಕಾರರ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ಬಿಡುವಿಲ್ಲದೆ ದುಡಿಯುವ ಆ ಕೈಗಳಿಗೆ ಇಂದು ಕೂಲಿಯೂ ಇಲ್ಲದೆ, ಹೊಟ್ಟೆಗೆ ಅನ್ನವೂ ಇಲ್ಲದೆ ಕೇವಲ ಹತಾಶೆಯಷ್ಟೇ ಮಿಗಿಲಾಗಿದೆ.&lt;/p&gt;&lt;h3&gt;&lt;strong&gt;ಕಂಟಕವಾದ ಹೊಸ ಕಾಯ್ದೆ!&lt;/strong&gt;&lt;/h3&gt;&lt;p&gt;ಕಳೆದೆರಡು ದಶಕಗಳಿಂದ ಅತ್ಯಂತ ಪವಿತ್ರ ಭಾವನೆಯಿಂದ, ಯಾವುದೇ ಚ್ಯುತಿ ಬಾರದಂತೆ ಧ್ವಜವನ್ನು ಸಿದ್ಧಪಡಿಸುತ್ತಿದ್ದ ಈ ಸಂಸ್ಥೆಗೆ ಈಗ ಎರಡೆರಡು ಆಘಾತಗಳು ಒಟ್ಟಿಗೇ ಎದುರಾಗಿವೆ. ಒಂದು ಕಡೆ ಕೇಂದ್ರ ಸರ್ಕಾರದ 'ಫ್ಲ್ಯಾಗ್ ಕೋಡ್' (ಧ್ವಜ ಸಂಹಿತೆ) ತಿದ್ದುಪಡಿಯಿಂದಾಗಿ ಖಾದಿಯಲ್ಲದ, ಅಂದರೆ ಯಂತ್ರಗಳ ಮೂಲಕ ತಯಾರಾಗುವ ಪ್ಲಾಸ್ಟಿಕ್ ಹಾಗೂ ಪಾಲಿಸ್ಟರ್ ಧ್ವಜಗಳ ಬಳಕೆಗೆ ಮುಕ್ತ ಅವಕಾಶ ನೀಡಲಾಯಿತು. ಪಾಲಿಸ್ಟರ್ ಧ್ವಜಗಳಿಗೆ ಹೋಲಿಸಿದರೆ ನೈಜ ಖಾದಿ ಧ್ವಜಗಳ ತೂಕ ಸ್ವಲ್ಪ ಹೆಚ್ಚು ಹಾಗೂ ಬೆಲೆಯೂ ತುಸು ದುಬಾರಿ. ಹೀಗಾಗಿ ಮಾರುಕಟ್ಟೆಯಲ್ಲಿ ಪಾಲಿಸ್ಟರ್ ಧ್ವಜಗಳ ಅಬ್ಬರ ಹೆಚ್ಚಾಗಿ, ಅಪ್ಪಟ ದೇಶಿ ಸಂಸ್ಕೃತಿಯ ಪ್ರತೀಕವಾದ ಖಾದಿ ತ್ರಿವರ್ಣ ಧ್ವಜಗಳ ಮಾರಾಟ ತೀವ್ರವಾಗಿ ಕುಸಿಯಿತು.&lt;/p&gt;&lt;h3&gt;&lt;strong&gt;ಕುಸಿದ ಆದಾಯ!&lt;/strong&gt;&lt;/h3&gt;&lt;p&gt;ಈ ಬಾರಿಯ ಋತುವಿನಲ್ಲಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳ ಧ್ವಜ ಮಾರಾಟದ ಗುರಿಯನ್ನು ಹೊಂದಿದ್ದ ಸಂಸ್ಥೆಗೆ, ಕೇವಲ 88 ಲಕ್ಷ ರೂಪಾಯಿಗಳ ವ್ಯಾಪಾರವಷ್ಟೇ ಆಗಿದೆ. ಯಂತ್ರಗಳ ಭರಾಟೆಯಲ್ಲಿ, ತಮ್ಮ ಕೈಯಾರೆ, ಜೀವತೇದು ನೇಯ್ದ ಖಾದಿ ಬಟ್ಟೆಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗುತ್ತಿರುವುದನ್ನು ಕಂಡು ಆ ಮುಗ್ಧ ಮಹಿಳಾ ಕಾರ್ಮಿಕರ ಎದೆ ಒಡೆದಿದೆ. ದೇಶದ ಗೌರವವನ್ನು ಕಾಯುವ ಅವರ ಹೊಟ್ಟೆಗೆ ಇಂದು ತಣ್ಣೀರು ಬಟ್ಟೆಯೇ ಗತಿಯಾಗಿದ್ದು, ಅವರ ಭವಿಷ್ಯ ಕಮರಿಹೋಗುತ್ತಿದೆ.&lt;/p&gt;&lt;h3&gt;&lt;strong&gt;ಇನ್ನು ಬಂದಿಲ್ಲ ಪ್ರೋತ್ಸಾಹ ಧನ!&lt;/strong&gt;&lt;/h3&gt;&lt;p&gt;ಈ ಗಾಯದ ಮೇಲೆ ಬರೆ ಎಳೆದಂತೆ, ರಾಜ್ಯ ಸರ್ಕಾರದಿಂದ ನೂಲು ತೆಗೆಯುವವರಿಗೆ ಮತ್ತು ನೇಕಾರರಿಗೆ ಬರಬೇಕಾದ ಪ್ರೋತ್ಸಾಹಧನ ಕೂಡ ಬಿಡುಗಡೆಯಾಗದೆ ವರ್ಷಗಳೇ ಉರುಳಿವೆ. ಬಡ ಕಾರ್ಮಿಕರಿಗೆ ಸೇರಬೇಕಾದ ಈ ಪ್ರೋತ್ಸಾಹಧನದ ಮೊತ್ತ ಬರೋಬ್ಬರಿ 150 ಕೋಟಿ ರೂಪಾಯಿಗಳನ್ನು ತಲುಪಿದೆ. ತಮ್ಮ ಹಕ್ಕಿನ ಹಣಕ್ಕಾಗಿ, ಸುರಿಸಿದ ಬೆವರ ಹನಿಗಾಗಿ ಆ ಶ್ರಮಜೀವಿಗಳು ಚಾತಕ ಪಕ್ಷಿಗಳಂತೆ ದಾರಿ ಕಾಯುತ್ತಿದ್ದಾರೆ. ದುಡಿದ ಹಣವೂ ಸರಿಯಾಗಿ ಕೈಸೇರದೆ, ಸರ್ಕಾರದಿಂದ ಬರಬೇಕಾದ ನೆರವು, ಪ್ರೋತ್ಸಾಹಧನವೂ ಇಲ್ಲದೆ ಆ ಕುಟುಂಬಗಳು ಬೀದಿಗೆ ಬೀಳುವಂತಹ ಅತ್ಯಂತ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;h3&gt;&lt;strong&gt;ನಕಲಿ ಖಾದಿ ಹಾವಳಿ!&lt;/strong&gt;&lt;/h3&gt;&lt;p&gt;ಇಷ್ಟೆಲ್ಲಾ ಸಂಕಟಗಳ ನಡುವೆ, ನಕಲಿ ಖಾದಿಯ ಹಾವಳಿ ಈ ನೇಕಾರರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಸುತ್ತಮುತ್ತಲೂ ನಕಲಿ ಖಾದಿ ಭಂಡಾರಗಳು ತಲೆ ಎತ್ತಿವೆ ಎಂಬುದು ಅರಗಿಸಿಕೊಳ್ಳಲಾಗದ ಕ್ರೂರ ಸತ್ಯ. ನಿಜವಾದ ಖಾದಿಯನ್ನು ನಂಬಿ ಬದುಕುತ್ತಿರುವವರ ಹೊಟ್ಟೆಗೆ ಹೊಡೆದು, ನಕಲಿ ವಸ್ತುಗಳನ್ನು ಮಾರಾಟ ಮಾಡುವ ಜಾಲವನ್ನು ಮಟ್ಟಹಾಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಬಹುದೊಡ್ಡ ದುರಂತ. ಸರ್ಕಾರವು ಎಲ್ಲೆಡೆ ನಿಜವಾದ ಖಾದಿ ಧ್ವಜಗಳ ಹಾಗೂ ಖಾದಿ ಬಟ್ಟೆಗಳ ಬಳಕೆಯನ್ನು ಕಡ್ಡಾಯವಾಗಿ ಪ್ರೋತ್ಸಾಹಿಸಬೇಕಿದೆ.&lt;/p&gt;&lt;h3&gt;&lt;strong&gt;ಸರ್ಕಾರ ಮಾಡಬೇಕಾದದ್ದು ಏನು?&lt;/strong&gt;&lt;/h3&gt;&lt;p&gt;ತ್ವರಿತವಾಗಿ 150 ಕೋಟಿ ರೂ.ಗಳ ಬಾಕಿ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿ, ಕಂಗೆಟ್ಟಿರುವ ನೂಲುಗಾರರು ಹಾಗೂ ನೇಕಾರರಲ್ಲಿ ಮತ್ತೆ ಆತ್ಮಸ್ಥೈರ್ಯ ತುಂಬಬೇಕಿದೆ. ಇಲ್ಲವಾದಲ್ಲಿ, ಸ್ವಾತಂತ್ರ್ಯದ ಹೆಮ್ಮೆಯ ಸಂಕೇತವಾಗಿರುವ ಖಾದಿ ಕೇವಲ ಇತಿಹಾಸದ ಪುಟಗಳಿಗೆ ಮಾತ್ರ ಸೀಮಿತವಾಗಬಹುದು. ನಮ್ಮ ನಾಡಿನ ಹೆಮ್ಮೆಯನ್ನು ನೇಯುವ ಆ ಕೈಗಳು ಯಾವತ್ತೂ ಬೇಡುವ ಕೈಗಳಾಗಬಾರದು. ದೇಶದ ಧ್ವಜವನ್ನು ಸದಾ ಎತ್ತರದಲ್ಲಿ ಹಾರುವಂತೆ ಮಾಡುವ ಆ ಶ್ರಮಿಕರ ಬದುಕಿನಲ್ಲೂ ನೆಮ್ಮದಿಯ ತ್ರಿವರ್ಣ ಬಾವುಟ ಎಂದೆಂದಿಗೂ ಹಾರಾಡುವಂತಾಗಲಿ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/khadi-tricolour-flag-workers-distress-hubballi-bengeri-pending-incentives-bmk/articleshow-6o2m1zx"/>
        </item>
        <item>
            <title><![CDATA[CSKನೂ ಅಲ್ಲ, KKR ಕೂಡಾ ಅಲ್ಲ ಎರಡೂ ತಂಡ ಬಿಟ್ಟು ಹಾರ್ದಿಕ್ ಪಾಂಡ್ಯ ಈ ತಂಡ ಸೇರಬಹುದು! ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್]]></title>
            <link>https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</link>
            <guid isPermaLink="true">https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2</guid>
            <pubDate>Fri, 14 Aug 2026 16:58:55 +0530</pubDate>
            <description><![CDATA[2027ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕೆಕೆಆರ್ ಮತ್ತು ಸಿಎಸ್‌ಕೆ ಹೆಸರುಗಳು ಕೇಳಿಬರುತ್ತಿರುವ ಮಧ್ಯೆ, ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಪಾಂಡ್ಯ ತಮ್ಮ ಹಳೆಯ ತಂಡವಾದ ಗುಜರಾತ್ ಟೈಟಾನ್ಸ್‌ಗೆ ಮರಳಲಿದ್ದಾರೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyewk2kmeyrpabf0ce38jzfg,imgname-hardik-pandya-trade-rumours-intensify-1785058658932.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: 2027ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈಗಾಗಲೇ ಮುಂಬೈ ಇಂಡಿಯನ್ಸ್&zwnj; ತಂಡದಿಂದ ಒಂದು ಕಾಲು ಹೊರಗಿಟ್ಟಿರುವ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮಾಜಿ ಚಾಂಪಿಯನ್ನರಾದ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ ಎನ್ನುವ ಸುದ್ದಿ ಗುಟ್ಟಾಗಿಯೇನು ಉಳಿದಿಲ್ಲ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಎರಡೂ ತಂಡಗಳನ್ನು ಬಿಟ್ಟು ಬೇರೆಯದ್ದೇ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;p&gt;ಕೆಲದಿನಗಳ ಹಿಂದಷ್ಟೇ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ, ತಮ್ಮ ಮಾಜಿ ತಂಡವಾಗಿರುವ ಗುಜರಾತ್ ಟೈಟಾನ್ಸ್ ಸೇರಲು ಒಲವು ತೋರಿದ್ದರು ಎಂದು ವರದಿಯಾಗಿತ್ತು. ಆದರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಬಳಿ ಪಾಂಡ್ಯ ನಾಯಕತ್ವ ಬೇಡಿಕೆಯಿಟ್ಟಿದ್ದರು, ಗುಜರಾತ್ ಫ್ರಾಂಚೈಸಿ ಪಾಂಡ್ಯ ಬೇಡಿಕೆಯನ್ನು ತಿರಸ್ಕರಿಸಿತ್ತು ಎಂದೆಲ್ಲಾ ವರದಿಯಾಗಿತ್ತು. ಸದ್ಯ ಗುಜರಾತ್ ಟೈಟಾನ್ಸ್ ತಂಡವನ್ನು ಶುಭ್&zwnj;ಮನ್ ಮುನ್ನಡೆಸುತ್ತಿದ್ದು, ಕಳೆದ ಸೀಸನ್ ಐಪಿಎಲ್&zwnj;ನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿ, ಆರ್&zwnj;ಸಿಬಿ ಎದುರು ಸೋಲುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಅಶ್ವಿನ್ ಪ್ರಕಾರ, ಹಾರ್ದಿಕ್ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರಲಿದ್ದಾರೆ ಎಂದು ಅಚ್ಚರಿ ಭವಿಷ್ಯ ನುಡಿದಿದ್ದಾರೆ.&lt;/p&gt;&lt;h2&gt;&lt;strong&gt;ಪಾಂಡ್ಯ, ಗುಜರಾತ್ ಟೈಟಾನ್ಸ್ ಮಾತುಕತೆ ನಡೆಸಿದ್ದರೇ ತಪ್ಪಲ್ಲ&lt;/strong&gt;&lt;/h2&gt;&lt;p&gt;'ಗುಜರಾತ್ ಟೈಟಾನ್ಸ್ ತಂಡವನ್ನು ಭೇಟಿ ಮಾಡಿ ಹಾರ್ದಿಕ್ ಪಾಂಡ್ಯ ಮಾತುಕತೆ ನಡೆಸಿದ್ದರೇ ಅದು ತಪ್ಪೇನು ಅಲ್ಲ. ಅವರು ಆ ತಂಡದ ಜತೆಗೆ ನಿಜಕ್ಕೂ ಎಂಜಾಯ್ ಮಾಡಿಕೊಂಡು ಆಡಿದ್ದಾರೆ. ಅದು ನಾಯಕತ್ವವೇ ಇರಲಿ ಅಥವಾ ಬ್ಯಾಟಿಂಗ್ ವಿಚಾರವೇ ಇರಲಿ, ಅವರಿಂದ ಶ್ರೇಷ್ಠ ಪ್ರದರ್ಶನ ಮೂಡಿಬಂದಿದ್ದೇ ಅವರು ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾಗ. ನನಗೆ ಈಗಲೂ ಅನಿಸ್ತಿದೆ ಅವರು ಮತ್ತೆ ಗುಜರಾತ್ ಟೈಟಾನ್ಸ್ ತೆಕ್ಕೆಗೆ ಜಾರುತ್ತಾರೆಂದು' ಎಂದು ಅಶ್ವಿನ್ ತಮ್ಮದೇ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಹೇಳಿದ್ದಾರೆ.&lt;/p&gt;&lt;p&gt;ಹಾರ್ದಿಕ್ ಪಾಂಡ್ಯ ಎರಡು ಸೀಸನ್&zwnj; ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. 2022ರಲ್ಲಿ ನಾಯಕರಾಗಿ ಮೊದಲ ಸೀಸನ್&zwnj;ನಲ್ಲಿಯೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್&zwnj; ಪಟ್ಟಕ್ಕೇರಿಸಿದ್ದರು. ಇದಾದ ಮರು ವರ್ಷ ಅಂದರೆ 2023ರ ಐಪಿಎಲ್ ಟೂರ್ನಿಯಲ್ಲೂ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಚನ್ನೈ ಸೂಪರ್ ಕಿಂಗ್ಸ್ ಎದುರು ವಿರೋಚಿತ ಸೋಲು ಅನುಭವಿಸುವ ಮೂಲಕ ರನ್ನರ್&zwnj;ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ 2024ರ ಐಪಿಎಲ್ ಟೂರ್ನಿಗೂ ಮುನ್ನ ಗುಜರಾತ್ ಟೈಟಾನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು.&lt;/p&gt;&lt;p&gt;&lt;strong&gt;ಹಾರ್ದಿಕ್ ಪಾಂಡ್ಯ ಯಾಕೆ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾಗಬೇಕು?&lt;/strong&gt;&lt;/p&gt;&lt;p&gt;ಗುಜರಾತ್ ಟೈಟಾನ್ಸ್ ಹಾರ್ದಿಕ್ ಪಾಂಡ್ಯ ಪಾಲಿಗೆ ನಿಜಕ್ಕೂ ಒಳ್ಳೆಯ ವೇದಿಕೆ. ಗುಜರಾತ್ ಟೈಟಾನ್ಸ್ ಕೂಡಾ ಒಳ್ಳೆಯ ತಂಡ. ಕಳೆದ ಎರಡು ವರ್ಷಗಳಿಂದ ಶುಭ್&zwnj;ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಚೆನ್ನಾಗಿ ಆಡುತ್ತಾ ಬಂದಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್&zwnj;ಗೆ ವಾಪಾಸ್ಸಾದರೂ ನಾಯಕತ್ವ ಸಿಗುವುದು ಅನುಮಾನ. ಆದರೆ ಆಟಗಾರನಾಗಿ ಪಾಂಡ್ಯ ಮತ್ತೆ ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಿಂಚಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/hardik-pandya-to-return-to-gujarat-titans-r-ashwin-makes-big-ipl-2027-prediction-kvn/articleshow-419kem2"/>
        </item>
        <item>
            <title><![CDATA[ಕನಸಿನ ರೆಕ್ಕೆ ಕಟ್ಟಿದ ಕಾರ್ಕಳದ ಹುಡುಗಿ ಉಡುಪಿಯ ಮೊದಲ ಮಹಿಳಾ ಪೈಲಟ್! ಕರ್ನಾಟಕದಲ್ಲಿ ಮಹಿಳಾ ಪೈಲಟ್‌ಗಳೆಷ್ಟು?]]></title>
            <link>https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei</link>
            <guid isPermaLink="true">https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei</guid>
            <pubDate>Fri, 14 Aug 2026 16:57:09 +0530</pubDate>
            <description><![CDATA[ಕಾರ್ಕಳದ ಶೈನಿ ಅಸ್ಮಾ ಸಲ್ಡಾನಾ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದು, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಲ್ಯದಲ್ಲಿ ನಡೆದ ವಿಮಾನ ಅಪಘಾತದಿಂದ ಪ್ರೇರಿತರಾಗಿ, ಕಠಿಣ ಪರಿಶ್ರಮ ಮತ್ತು ತರಬೇತಿಯ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡ ಇವರ ಸಾಧನೆಯು ಕರಾವಳಿಯ ಯುವತಿಯರಿಗೆ ಸ್ಫೂರ್ತಿದಾಯಕವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzjhaq2k3k3mqh373750y2f,imgname-shiney-asma-saldanha-1786692283105.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಉಡುಪಿ: &lt;/strong&gt;ಕಾರ್ಕಳ ತಾಲೂಕಿನ ಕೌದೂರು ರಂಗನಪಲ್ಕೆಯ ಯುವತಿ ಶೈನಿ ಅಸ್ಮಾ ಸಲ್ಡಾನಾ ಅವರು ತಮ್ಮ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ವಾಣಿಜ್ಯ ಪೈಲಟ್ ಪರವಾನಗಿ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.&lt;/p&gt;&lt;h2&gt;ಬಾಲ್ಯದಲ್ಲೇ ಮೂಡಿದ ಬಲವಾದ ಕನಸು&lt;/h2&gt;&lt;p&gt;ಐದು ವರ್ಷದ ಬಾಲಕಿಯಾಗಿದ್ದಾಗ ಮಂಗಳೂರಿನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತವು ಶೈನಿ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಉಂಟಾದ ಕುತೂಹಲವೇ ಮುಂದೆ ಅವರ ಜೀವನದ ಏಕೈಕ ಗುರಿಯಾಗಿ ಬದಲಾಯಿತು.&lt;/p&gt;&lt;p&gt;&quot;ನಾನು ಐದು ವರ್ಷದವಳಿದ್ದಾಗ ನಡೆದ ಮಂಗಳೂರು ವಿಮಾನ ಅಪಘಾತ ನನ್ನ ಮನಸ್ಸನ್ನು ಕಲಕಿತ್ತು. ಆಗಲೇ ನಾನು ಪೈಲಟ್ ಆಗಬೇಕೆಂಬ ದೃಢಸಂಕಲ್ಪ ಮಾಡಿದೆ. ಹಲವು ವರ್ಷಗಳ ಸತತ ಪರಿಶ್ರಮ, ಛಲ ಮತ್ತು ತಾಳ್ಮೆಯ ಫಲವಾಗಿ ಇಂದು ಆ ಬಾಲ್ಯದ ಕನಸು ನನಸಾಗಿದೆ&quot; ಎಂದು ಶೈನಿ ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಂಡಿದ್ದಾರೆ.&lt;/p&gt;&lt;h2&gt;ಶಿಕ್ಷಣ ಮತ್ತು ತರಬೇತಿಯ ಹಾದಿ&lt;/h2&gt;&lt;p&gt;ಕೌದೂರಿನ ಅಶೋಕ್ ಜಾಕೋಬ್ ಸಲ್ಡಾನಾ ಮತ್ತು ಮಾರಿಯಾ ಗ್ರೆಟ್ಟಾ ಸಲ್ಡಾನಾ ದಂಪತಿಯ ಪುತ್ರಿಯಾದ ಶೈನಿ, ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಹಾಗೂ ಪದವಿ ಪೂರ್ವ (PUC) ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಿಕಾಂ ಶಿಕ್ಷಣದ ನಂತರ ತಮ್ಮ ಕನಸನ್ನು ಬೆನ್ನತ್ತಿದ ಶೈನಿ, ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಯ ಪ್ರವೇಶ ಪರೀಕ್ಷೆಗೆ ಹಾಜರಾದರು. ದೇಶಾದ್ಯಂತ 5,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದ ಈ ಕಠಿಣ ಪರೀಕ್ಷೆಯಲ್ಲಿ ಆಯ್ಕೆಯಾದ 125 ಮಂದಿಯಲ್ಲಿ ಶೈನಿ ಕೂಡ ಒಬ್ಬರಾಗಿದ್ದರು. ತರುವಾಯ, 2023ರ ಆಗಸ್ಟ್&zwnj;ನಿಂದ ಉತ್ತರ ಪ್ರದೇಶದ ಫುರ್ಸತ್&zwnj;ಗಂಜ್&zwnj;ನಲ್ಲಿರುವ IGRUA ಕೇಂದ್ರದಲ್ಲಿ ವೃತ್ತಿಪರ ಪೈಲಟ್ ತರಬೇತಿಯನ್ನು ಪಡೆದರು.&lt;/p&gt;&lt;h2&gt;ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದ ಸಾಧಕಿ&lt;/h2&gt;&lt;p&gt;ಪೈಲಟ್ ತರಬೇತಿಯು ಸುಲಭದ ಹಾದಿಯಾಗಿರಲಿಲ್ಲ. ತಾಂತ್ರಿಕ ಜ್ಞಾನ, ಮಾನಸಿಕ ಸಿದ್ಧತೆ, ಶಿಸ್ತು ಹಾಗೂ ಸುರಕ್ಷತಾ ಕ್ರಮಗಳ ತರಬೇತಿಯೊಂದಿಗೆ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಕೌಶಲ್ಯವನ್ನು ಅವರು ಸಿದ್ಧಿಸಿಕೊಂಡಿದ್ದಾರೆ. ಸದ್ಯ ಹಾರಾಟದ ಅಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿರುವ ಅವರು, ಡಿಜಿಸಿಎ (DGCA) ಗೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳಲ್ಲಿದ್ದಾರೆ.&lt;/p&gt;&lt;h2&gt;ಯುವಜನತೆಗೆ ಸ್ಫೂರ್ತಿ&lt;/h2&gt;&lt;p&gt;&quot;ನನ್ನ ತಂದೆ-ತಾಯಿಯೇ ನನ್ನ ದೊಡ್ಡ ಸ್ಫೂರ್ತಿ. ಬಾಲ್ಯದ ಕನಸನ್ನು ಗುರಿಯಾಗಿಸಿಕೊಂಡು ಮುನ್ನಡೆಯಲು ತಂದೆಯ ಪ್ರೋತ್ಸಾಹವೇ ಪ್ರಮುಖ ಕಾರಣ. ಪ್ರತಿಯೊಬ್ಬರೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಶ್ರಮವಹಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ&quot; ಎನ್ನುತ್ತಾರೆ ಶೈನಿ.&lt;/p&gt;&lt;p&gt;ಉಡುಪಿ ಜಿಲ್ಲೆಯ ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವ ಶೈನಿ ಅಸ್ಮಾ ಸಲ್ಡಾನಾ ಅವರ ಈ ಸಾಧನೆ, ಪೈಲಟ್ ಆಗುವ ಕನಸು ಕಾಣುತ್ತಿರುವ ಕರಾವಳಿಯ ನೂರಾರು ಯುವತಿಯರಿಗೆ ದಾರಿದೀಪವಾಗಿದೆ.&lt;/p&gt;&lt;p&gt;ಈ ಸಾಧನೆ ಮೂಲಕ, ಚಿಕ್ಕಮಗಳೂರಿನ 2018 ರಲ್ಲಿ ವಾಯುಪಡೆಯ ಅಕಾಡೆಮಿಯಿಂದ (IAF) ಪದವಿ ಪಡೆದ ನಂತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಮೇಘನಾ ಶಾನ್&zwnj;ಬೌ, 2024 ರ ಕೊನೆಯಲ್ಲಿ 18 ನೇ ವಯಸ್ಸಿನಲ್ಲಿ ವಾಣಿಜ್ಯ ಪೈಲಟ್ ಪರವಾನಗಿ (CPL) ಗಳಿಸಿದ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್&zwnj;ಗಳಲ್ಲಿ ಒಬ್ಬರೆಂದು ಮಣ್ಣನೆ ಪಡೆದ ವಿಜಯಪುರದ ಸಮೈರಾ ಹುಲ್ಲೂರ್, 2017 ರಲ್ಲಿ ಉತ್ತರ ಕರ್ನಾಟಕ ಪ್ರದೇಶದಿಂದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಎಂದು ಗುರುತಿಸಲ್ಪಟ್ಟ ವಿಜಯಪುರದ ಪ್ರೀತಿ ಬಿರಾದಾರ್ ಸಾಲಿಗೆ ಉಡುಪಿಯ ಶೈನಿ ಅಸ್ಮಾ ಸೇರ್ಪಡೆಯಾಗಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/from-childhood-dream-to-cockpit-karkala-shiney-asma-saldanha-becomes-udupi-district-first-woman-commercial-pilot-gdp/articleshow-4fh62ei"/>
        </item>
        <item>
            <title><![CDATA['ಬೌನ್ಸರ್ & ಬಾಡಿಗಾರ್ಡ್‌ಗಳಂತೆ ಇದ್ದೆವು'.. ಟಾಕ್ಸಿಕ್ ಶೂಟಿಂಗ್‌ ಬಗ್ಗೆ ಮಾತನ್ನಾಡುತ್ತ ಯಶ್ ಹೀಗೆ ಹೇಳಿದ್ದೇಕೆ?]]></title>
            <link>https://kannada.asianetnews.com/entertainment/actor-yash-revealed-that-actress-kiara-advani-was-pregnant-during-the-shooting-of-the-movie-toxic/articleshow-b52htnh</link>
            <guid isPermaLink="true">https://kannada.asianetnews.com/entertainment/actor-yash-revealed-that-actress-kiara-advani-was-pregnant-during-the-shooting-of-the-movie-toxic/articleshow-b52htnh</guid>
            <pubDate>Fri, 14 Aug 2026 16:50:29 +0530</pubDate>
            <description><![CDATA[ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ, ‘ಬಾಡಿಗಾರ್ಡ್’ ಗೀತೂ ಮೋಹನ್‌ದಾಸ್ ಕಥೆಗಳು, ರಾಕಿಂಗ್ ಸ್ಟಾರ್ ಅಸಲಿ ಲೈಫ್‌ನಲ್ಲೂ ಹೀರೋ ಎನಿಸಿಕೊಂಡಿದ್ದು, ಎಲ್ಲವೂ ವೈರಲ್ ಆಗುತ್ತಿವೆ!]]></description>
            <media:content url="https://static.asianetnews.com/images/w-1280,h-720,format-jpg,imgid-01kzzzzhjgc9rp14xryzbtfxm9,imgname-whatsapp-image-2026-08-07-at-4.37.55-pm-1786706380368.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Yash talk about Kiara Advani: ಕಿಯಾರಾ ಡೆಡಿಕೇಷನ್ ಕಂಡು ಬೆಚ್ಚಿಬಿದ್ದ ಟಾಕ್ಸಿಕ್ ಸಾಮ್ರಾಜ್ಯ ಬೆಚ್ಚಿಬಿದ್ದಿತ್ತು!&lt;/strong&gt;&lt;/p&gt;&lt;p&gt;'ಕೆಜಿಎಫ್' ಸರಣಿಯ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್, ಈಗ 'ಟಾಕ್ಸಿಕ್' (Toxic: A Fairy Tale for Grown-Ups) ಎಂಬ ವಿಷಪೂರಿತ ಮಾಯಾಲೋಕದೊಂದಿಗೆ ಮತ್ತೆ ಅಖಾಡಕ್ಕಿಳಿದಿದ್ದಾರೆ. ಟಾಕ್ಸಿಕ್ ಸಿನಿಮಾ ಇಡೀ ಜಗತ್ತಿಗೇ ನಿರೀಕ್ಷೆ ಹುಟ್ಟಿಸಿದೆ. ಸದ್ಯ ಈ ಸಿನಿಮಾದ ಪ್ರಚಾರಕಾರ್ಯದಲ್ಲಿ ನಟ ಯಶ್ ಹಾಗೂ ಟಾಕ್ಸಿಕ್ ಚಿತ್ರತಂಡ ಭಾಗಿಯಾಗಿದೆ. ಆದರೆ, ಈ ಸ್ಟೋರಿ ಸುದ್ದಿಯಲ್ಲಿರುವ ಸಮಗತಿ ಎಂದರೆ, ಸಿನಿಮಾದ ಬರೀ ಆಕ್ಷನ್ ಅಥವಾ ಗನ್ ಸೌಂಡ್ ಅಲ್ಲ; ಬದಲಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ಅದ್ಭುತ ವೃತ್ತಿಪರತೆ ಮತ್ತು ಆ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಮಾತನ್ನಾಡಿದ ಯಶ್ ಅವರ ಮಾನವೀಯತೆ!&lt;/p&gt;&lt;h2&gt;ಬಾಕ್ಸ್ ಆಫೀಸ್ ಸುಲ್ತಾನನ ಸೆಟ್&zwnj;ನಲ್ಲಿ 'ಗರ್ಭಿಣಿ' ನಟಿಯ ಸಾಹಸ!&lt;/h2&gt;&lt;p&gt;ಇತ್ತೀಚೆಗೆ ನಟ ಯಶ್ ಅವರು 'ಆಪ್ ಕಿ ಅದಾಲತ್'(Aap ki Adalat) ಚೇರ್&zwnj;ನಲ್ಲಿ ಕುಳಿತ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಇತ್ತೀಚೆಗೆ ನಡೆದ 'ಟಾಕ್ಸಿಕ್' ಆಡಿಯೋ ಲಾಂಚ್&zwnj;, ಹಾಗೂ ಆಪ್&zwnj; ಕಿ ಅದಾಲತ್&zwnj; ವೇದಿಕೆಯಲ್ಲಿ ನಟ ಯಶ್ ಅವರು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ನಡೆದಿರುವ ಕೆಲವು ಸೀಕ್ರೆಟ್ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಅದು, ಈ ಸಿನಿಮಾದ ಚಿತ್ರೀಕರಣ ನಡೆಯುವಾಗ ನಾಯಕಿ ಕಿಯಾರಾ ಅಡ್ವಾನಿ ಗರ್ಭಿಣಿಯಾಗಿದ್ದರು ಎಂಬಸಮಗತಿ.&lt;/p&gt;&lt;p&gt;ಹೌದು, ಒಂದು ಕಡೆ ಗ್ಯಾಂಗ್&zwnj;ಸ್ಟರ್&zwnj;ಗಳ ನಡುವಿನ ಯುದ್ಧ, ಸತತ ಮಳೆ, ಕಠಿಣ ಆಕ್ಷನ್ ಸನ್ನಿವೇಶಗಳು.. ಇವೆಲ್ಲದರ ನಡುವೆ ಕಿಯಾರಾ ತಮ್ಮ ದೈಹಿಕ ಸ್ಥಿತಿಯನ್ನು ಲೆಕ್ಕಿಸದೆ ಕ್ಯಾಮೆರಾ ಮುಂದೆ ನಿಂತಿದ್ದರು. ಕಿಯಾರಾ ಅವರ ಈ ಬದ್ಧತೆ ಕಂಡು ಸ್ವತಃ ಯಶ್ ಅವರೇ ಫಿದಾ ಆಗಿದ್ದಾರೆ.&lt;/p&gt;&lt;h3&gt;ಯಶ್ ಮತ್ತು ಗೀತು ಮೋಹನ್&zwnj;ದಾಸ್: ಸೆಟ್&zwnj;ನ ಹೊಸ 'ಬೌನ್ಸರ್&zwnj;ಗಳು'!&lt;/h3&gt;&lt;p&gt;ಕಿಯಾರಾ ಅವರು ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆಯೇ, ಸೆಟ್&zwnj;ನಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. ಯಶ್ ಈ ಬಗ್ಗೆ ಹಾಸ್ಯ ಚಟಾಕಿ ಹಾರಿಸುತ್ತಾ, &quot;ನಾವು ಆ ಸಮಯದಲ್ಲಿ ಬರಿ ನಟ ಅಥವಾ ನಿರ್ದೇಶಕರಾಗಿರಲಿಲ್ಲ, ಬದಲಾಗಿ ಕಿಯಾರಾ ಅವರಿಗೆ ಬೌನ್ಸರ್ ಮತ್ತು ಬಾಡಿಗಾರ್ಡ್&zwnj;ಗಳಂತೆ ಕೆಲಸ ಮಾಡಿದೆವು,&quot; ಎಂದಿದ್ದಾರೆ. ನಿರ್ದೇಶಕಿ ಗೀತು ಮೋಹನ್&zwnj;ದಾಸ್ ಮತ್ತು ಯಶ್ ಇಬ್ಬರೂ ಸೇರಿ ಕಿಯಾರಾ ಅವರ ಸುರಕ್ಷತೆಯ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದರು. ಆಕ್ಷನ್ ಸೀನ್&zwnj;ಗಳಲ್ಲಂತೂ ಕಿಯಾರಾಗೆ ಸಣ್ಣದೊಂದು ಗಾಯವಾಗದಂತೆ ಎಚ್ಚರ ವಹಿಸಲಾಗಿತ್ತು.&lt;/p&gt;&lt;p&gt;'ತಬಾಹಿ' ಎಬ್ಬಿಸಿದ ಟ್ರೋಲ್ ಬಿರುಗಾಳಿಗೆ ಯಶ್ ಕೊಟ್ಟ ಉತ್ತರವೇನು?&lt;/p&gt;&lt;p&gt;ಸಿನಿಮಾದ 'ತಬಾಹಿ' ಹಾಡು ಬಿಡುಗಡೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆದಿತ್ತು. ಯಶ್ ಮತ್ತು ಕಿಯಾರಾ ನಡುವಿನ ಕೆಮಿಸ್ಟ್ರಿ ನೋಡಿ ಕೆಲವರು ಟ್ರೋಲ್ ಮಾಡಿದ್ದರು. ಆದರೆ, ಯಶ್ ಮಾತ್ರ ಕಿಯಾರಾ ಪರವಾಗಿ ಬ್ಯಾಟ್ ಬೀಸಿದ್ದಾರೆ. &quot;ನಟನೆಯಲ್ಲಿ ಪಾತ್ರಕ್ಕೆ ಏನು ಬೇಕೋ ಅದನ್ನು ಮಾಡುವುದು ಕಲೆ. ಕಿಯಾರಾ ಅಂತಹ ಸವಾಲಿನ ಸಂದರ್ಭದಲ್ಲೂ ಉತ್ತಮವಾಗಿ ಅಭಿನಯಿಸಿದ್ದಾರೆ,&quot; ಎನ್ನುವ ಮೂಲಕ ಟ್ರೋಲರ್&zwnj;ಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.&lt;/p&gt;&lt;p&gt;ಬಲಿಷ್ಠ ತಾರಾಬಳಗದ 'ಟಾಕ್ಸಿಕ್' ಪಯಣ!&lt;/p&gt;&lt;p&gt;ಇನ್ನು ಟ್ರೇಲರ್&zwnj;ನಲ್ಲಿ ಕಂಡಂತೆ, ಇದು ಬರೀ ಸಿನಿಮಾ ಅಲ್ಲ, ಇದೊಂದು ವಿಷಕಾರಿ ಜಗತ್ತಿನ ಕಥೆ. ಇಲ್ಲಿ ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ದೈತ್ಯ ಪ್ರತಿಭೆಗಳಿದ್ದಾರೆ. ಗೋವಾದ ಗ್ಯಾಂಗ್&zwnj;ಸ್ಟರ್ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಅಧಿಕಾರ ಮತ್ತು ಸಂಬಂಧಗಳ ನಡುವಿನ ಸಂಘರ್ಷ ಎದ್ದುಕಾಣುತ್ತಿದೆ. ಯಶ್ ಕೇವಲ ನಟನಾಗಿ ಮಾತ್ರವಲ್ಲದೆ, ಚಿತ್ರದ ಸ್ಕ್ರಿಪ್ಟ್ ಮತ್ತು ನಿರ್ಮಾಣದಲ್ಲೂ ತೊಡಗಿಸಿಕೊಂಡು ಪಕ್ಕಾ 'ಪ್ಯಾನ್ ವರ್ಲ್ಡ್' ಪ್ರಾಜೆಕ್ಟ್ ಸಿದ್ಧಪಡಿಸಿದ್ದಾರೆ.&lt;/p&gt;&lt;p&gt;ಆಗಸ್ಟ್ 26: ರಾಕಿ ಭಾಯ್ ದರ್ಬಾರ್ ರೀ-ಲೋಡೆಡ್!&lt;/p&gt;&lt;p&gt;ಹಲವು ಬಾರಿ ಡೇಟ್ ಬದಲಿಸಿಕೊಂಡು ಬಂದ 'ಟಾಕ್ಸಿಕ್' ಈಗ ಅಂತಿಮವಾಗಿ 2026ರ ಆಗಸ್ಟ್ 26ಕ್ಕೆ ಲಾಕ್ ಆಗಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿರುವ ಈ ಸಿನಿಮಾ, ಯಶ್ ಅವರ ಕೆರಿಯರ್&zwnj;ನಲ್ಲಿ ಮತ್ತೊಂದು ಮೈಲಿಗಲ್ಲಾಗುವುದು ಗ್ಯಾರಂಟಿ ಎಂದು ಇಡೀ ಜಗತ್ತು ನಂಬಿದೆ. ಅದೇ ಚರ್ಚೆ ಎಲ್ಲಾ ಕಡೆ ನಡೆಯುತ್ತಿದೆ.&lt;/p&gt;&lt;p&gt;ಕಿಯಾರಾ ಅಡ್ವಾಣಿ ಅವರ ಡೆಡಿಕೇಷನ್ ಮತ್ತು ಯಶ್ ಅವರ ಈ ಕಾಳಜಿಯ ಕಥೆಗಳು ಈಗ ಸಿನಿಮಾದ ಮೇಲಿನ ಕುತೂಹಲವನ್ನು ನೂರು ಪಟ್ಟು ಹೆಚ್ಚಿಸಿವೆ. ಸದ್ಯಕ್ಕಂತೂ ಕಿಯಾರಾ ಅವರನ್ನು 'ಬಾಡಿಗಾರ್ಡ್' ರೀತಿ ಕಾದ ರಾಕಿಂಗ್ ಸ್ಟಾರ್ ಅಸಲಿ ಲೈಫ್&zwnj;ನಲ್ಲೂ ಹೀರೋ ಎನಿಸಿಕೊಂಡಿದ್ದಾರೆ!&lt;/p&gt;]]></content:encoded>
            <category><![CDATA[entertainment]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/actor-yash-revealed-that-actress-kiara-advani-was-pregnant-during-the-shooting-of-the-movie-toxic/articleshow-b52htnh"/>
        </item>
        <item>
            <title><![CDATA[ಸಂತೋಷ್‌ ಬಾಲರಾಜ್‌ ಕೊನೆಯ ಸಿನಿಮಾ ‘ಬೆಂಟ್ಲಿ’: ಗೆಳೆಯನ ಪಾತ್ರಕ್ಕೆ ಧ್ವನಿ ನೀಡಿದ ಯೋಗೀಶ್‌]]></title>
            <link>https://kannada.asianetnews.com/sandalwood/bentley-trailer-released-yogesh-dubs-for-late-friend-santhosh-balraj-role-gvd/articleshow-dzx83ux</link>
            <guid isPermaLink="true">https://kannada.asianetnews.com/sandalwood/bentley-trailer-released-yogesh-dubs-for-late-friend-santhosh-balraj-role-gvd/articleshow-dzx83ux</guid>
            <pubDate>Fri, 14 Aug 2026 16:47:05 +0530</pubDate>
            <description><![CDATA[ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್‌ ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. ‘ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzzsftswjw6sdy3vhcbxn45,imgname-nkn-1786706181977.png" type="image/jpeg" height="390" width="690"/>
            <content:encoded><![CDATA[&lt;p&gt;ಅದು ಪುಣ್ಯ ಸ್ಮರಣೆಯ ಶೋಕ ಮತ್ತು ಸಿನಿಮಾವೊಂದರ ಟ್ರೇಲರ್&zwnj; ಬಿಡುಗಡೆ ಸಂಭ್ರಮ. ಈ ಎರಡಕ್ಕೂ ಒಂದೇ ವೇದಿಕೆ ಸಾಕ್ಷಿಯಾಗಿತ್ತು. &lsquo;ನನ್ನ ಗೆಳೆಯನ ಪಾತ್ರಕ್ಕೆ ನನ್ನ ಧ್ವನಿ ಕೊಡುವ ಸಂದರ್ಭ ಬರುತ್ತದೆ ಅಂತ ನಾನು ಕನಸಿನಲ್ಲೂ ಅಂದುಕೊಂಡಿರಲಿಲ್ಲ&rsquo;... ಹೀಗೆ ಹೇಳಿ ಲೂಸ್&zwnj;ಮಾದ ಯೋಗೀಶ್&zwnj; ಕ್ಷಣಕಾಲ ಮೌನಕ್ಕೆ ಜಾರಿದರು. ಅಲ್ಲಿವರೆಗೂ ಚಪ್ಪಾಳೆ, ಶಿಳ್ಳೆ, ಕೇಕೆಗಳು ಸದ್ದು ಹೊಡಿಸುತ್ತಿದ್ದ ಮೈದಾನ ಪೂರ್ತಿ ಮೌನ. ಆ ನಂತರ ವೇದಿಕೆ ಮೇಲೆ ಮಾತನಾಡಿದ ಬಹುತೇಕರು ಭಾವುಕರಾಗಿದ್ದರು.&lt;/p&gt;&lt;p&gt;ಅಂದಹಾಗೆ ಅದು &lsquo;ಬೆಂಟ್ಲಿ&rsquo; ಚಿತ್ರದ ಟ್ರೇಲರ್&zwnj; ಬಿಡುಗಡೆ ಸಮಾರಂಭ. ಎಲ್ಲರು ಭಾವುಕರಾಗಿದ್ದ ಕಾರಣ ಈ ಚಿತ್ರದ ನಾಯಕ ಮತ್ತು ನಿರ್ದೇಶಕ ಸಂತೋಷ್&zwnj; ಬಾಲರಾಜ್&zwnj; ಅವರ ಅಕಾಲಿಕ ಮರಣ. ತಮ್ಮ ತಂದೆ ನಿರ್ಮಾಪಕ ಆನೆಕಲ್&zwnj; ಬಾಲರಾಜ್&zwnj; ಅವರನ್ನು ಕಳೆದುಕೊಂಡ ಸಂತೋಷನ್&zwnj; ಬಾಲರಾಜ್&zwnj;, ನಿರ್ಮಾಣ ಸಂಸ್ಥೆಯ ಸಾರಥಿಯಾಗಿ ತಮ್ಮ ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ, ನಟಿಸುವ ಹೊಣೆ ಹೊತ್ತುಕೊಂಡರು. ಆದರೆ, ವಿಧಿ ಕನಸನ್ನು ಪೂರ್ತಿಗೊಳಿಸಲು ಬಿಡಲಿಲ್ಲ.&lt;/p&gt;&lt;p&gt;ಬಹುಶಃ ಚಿತ್ರದ ನಾಯಕ, ನಿರ್ದೇಶಕನ ಪುಣ್ಯ ಸ್ಮರಣೆ ವೇದಿಕೆಯಲ್ಲೇ ಚಿತ್ರದ ಟ್ರೇಲರ್&zwnj; ಬಿಡುಗಡೆ ಆಗಿದ್ದು ಕನ್ನಡದಲ್ಲಿ ಇದೇ ಮೊದಲು ಇರಬೇಕು. ಹೀಗೆ ಅಕಾಲಿಕವಾಗಿ ನಿಧನರಾದ ಸಂತೋಷ್&zwnj; ಬಾಲರಾಜ್&zwnj; ಅವರ &lsquo;ಬೆಂಟ್ಲಿ&rsquo; ಚಿತ್ರದ ಅವರ ಪಾತ್ರಕ್ಕೆ ಲೂಸ್&zwnj;ಮಾದ ಯೋಗೀಶ್&zwnj; ಡಬ್ಬಿಂಗ್&zwnj; ಮಾಡಿದ್ದಾರೆ. &lsquo;ನನ್ನ ಗೆಳೆಯ ನಿರ್ದೇಶಿಸಿ, ನಟಿಸಿದ ಚಿತ್ರದ ಟ್ರೇಲರ್&zwnj; ಬಿಡುಗಡೆ ಆಗುತ್ತಿದೆ ಎಂದು ಖುಷಿ ಪಡಬೇಕೋ, ಇದೇ ವೇದಿಕೆಯಲ್ಲಿ ಅವನ ಮೊದಲ ವರ್ಷದ ಪುಣ್ಯ ಸ್ಮರಣೆ ಎಂದು ದುಃಖಿಸಬೇಕೋ ಗೊತ್ತಾಗುತ್ತಿಲ್ಲ. ನಾನು ಅವನ ಪಾತ್ರಕ್ಕೆ ಡಬ್&zwnj; ಮಾಡುವ ಸಂದರ್ಭ ಈ ರೀತಿ ಬರಬಹುದು ಎಂದು ಊಹೆ ಮಾಡಿರಲಿಲ್ಲ. ಸಿನಿಮಾಗಳ ಬಗ್ಗೆ ಅಪಾರವಾದ ಕನಸುಗಳನ್ನು ಕಟ್ಟಿಕೊಂಡಿದ್ದ ಸಂತೋಷ್&zwnj;ನ ಕೊನೆಯ ಸಿನಿಮಾ ಇದು. ಈ ಸಿನಿಮಾ ಆದಷ್ಟು ಬೇಗ ರಿಲೀಸ್ ಆಗಲಿ. ಎಲ್ಲರು ಸೇರಿ ಈ ಸಿನಿಮಾನ ಗೆಲ್ಲಿಸೋಣ&rsquo; ಎಂದರು ಲೂಸ್&zwnj;ಮಾದ ಯೋಗೀಶ್&zwnj;.&lt;/p&gt;&lt;h2&gt;&lt;strong&gt;ನೋವಿನ ಸಂಗತಿ&lt;/strong&gt;&lt;/h2&gt;&lt;p&gt;ಪ್ರಮೋದ್&zwnj; ಶೆಟ್ಟಿ, &lsquo;ಸಂತೋಷ್&zwnj; ನನಗೆ ಕಡಿಮೆ ಪರಿಚಯ. ಆದರೆ, ಆತನ ಸಿನಿಮಾ ಕನಸುಗಳ ದೊಡ್ಡ ಪರಿಚಯವೇ ಇದೆ. ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ವ್ಯಕ್ತಿ. ತೀರಾ ಚಿಕ್ಕ ವಯಸ್ಸಿಗೆ ಸಂತೋಷ್&zwnj; ಅಗಲಿದ್ದು ನೋವಿನ ಸಂಗತಿ. &lsquo;ಬೆಂಟ್ಲಿ&rsquo; ಅವರ ಮಹತ್ವಾಕಾಂಕ್ಷೆಯ ಚಿತ್ರ. ಇದು ಗೆಲ್ಲಬೇಕು&rsquo; ಎಂದರು. ಶ್ವೇತಾ ಬಾಲರಾಜ್&zwnj; ನಿರ್ಮಾಣದ ಈ ಚಿತ್ರದಲ್ಲಿ ಸಿಮ್ರಾನ್ ನಟೇಕರ್, ಶ್ರುತಿ, ಚರಣ್&zwnj;ರಾಜ್, ರಾಜಾ ಬಲವಾಡಿ ನಟಿಸಿದ್ದಾರೆ. ಸಂತೋಷ್&zwnj; ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆ.5 ರಂದು ಬಿಡುಗಡೆ ಆಗಿರುವ &lsquo;ಬೆಂಟ್ಲಿ&rsquo; ಚಿತ್ರದ ಟ್ರೇಲರ್&zwnj;ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/bentley-trailer-released-yogesh-dubs-for-late-friend-santhosh-balraj-role-gvd/articleshow-dzx83ux"/>
        </item>
        <item>
            <title><![CDATA[Exclusive: ಸುಂದರ್‌ ರಾಜ್‌ 75ಕ್ಕೆ 250: ನೂರಾರು ಪಾತ್ರಗಳಿಗೆ ಜೀವ ನೀಡಿದ ಮಹಾ ಕಲಾವಿದ]]></title>
            <link>https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</link>
            <guid isPermaLink="true">https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde</guid>
            <pubDate>Fri, 14 Aug 2026 16:35:40 +0530</pubDate>
            <description><![CDATA[ಸುಂದರ್‌ ರಾಜ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ, ವೆಂಕಟ್‌ ಭಾರದ್ವಾಜ್‌ ನಿರ್ದೇಶನದ, ಹಿರಿಯ ಪೊಲೀಸ್‌ ಅಧಿಕಾರಿ ಎಸ್‌.ಕೆ. ಉಮೇಶ್‌ ಕಥೆ ಆಧರಿಸಿದ ‘ಚಾರ್ಜ್‌ಶೀಟ್‌’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇದು ಸುಂದರ್‌ ರಾಜ್‌ ನಟನೆಯ 250ನೇ ಸಿನಿಮಾ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzz5cvm8r84dntxtvmmqkbp,imgname-jjb-1786705523572.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪ್ರಿಯಾ ಕೆರ್ವಾಶೆ&lt;/strong&gt;&lt;/h2&gt;&lt;p&gt;&lt;strong&gt;- ನಿಮಗೀಗ 75 ವರ್ಷ. ಚಾರ್ಜ್&zwnj;ಶೀಟ್&zwnj; ನಿಮ್ಮ 250ನೇ ಸಿನಿಮಾ. ಬಂದ ಹಾದಿಯ ಆತ್ಮಾವಲೋಕನ ಮಾಡಿಕೊಂಡರೆ?&lt;/strong&gt;&lt;/p&gt;&lt;p&gt;ಖುಷಿಯೇ ಇದೆ. ಬೇರೆ ಯಾವುದೇ ರಂಗದಲ್ಲಿ 60ಕ್ಕೆ ನಿವೃತ್ತಿ ಅಂತಿರುತ್ತೆ. ಭಾರತೀಯ ಚಿತ್ರರಂಗದಲ್ಲಿ ಕಲಾವಿದರಿಗೆ ವಯಸ್ಸಿನ ಮಿತಿಯೇ ಇಲ್ಲ. ಸೆಲ್ಯುಲಾಯ್ಡ್&zwnj;ನಿಂದ ಡಿಜಿಟಲ್&zwnj;, ಎಐ ವರೆಗಿನ ಸಿನಿಮಾಗಳಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿದೆ. ಇಷ್ಟು ಕಾಲ ಬದುಕಿ ಉಳಿಯಲು ಸಾಧ್ಯವಾದದ್ದೂ ದೈವೀ ಕೃಪೆ. ಸಿನಿಮಾರಂಗಕ್ಕೆ ಬಂದ ಶುರುವಿನಲ್ಲಿ &lsquo;ಕಾಡು&rsquo;, &lsquo;ಚೋಮನ ದುಡಿ&rsquo;, &lsquo;ತಬ್ಬಲಿಯು ನೀನಾದೆ ಮಗನೇ&rsquo;, &lsquo;ಒಂದಾನೊಂದು ಕಾಲದಲ್ಲಿ&rsquo;, &lsquo;ಅನ್ವೇಷಣೆ&rsquo;ವರೆಗೆ ನನಗೆ ಬಂದಿದ್ದೆಲ್ಲ ಕ್ಲಾಸಿಕ್&zwnj; ಚಿತ್ರಗಳು. ಆಗ ವ್ಯವಸ್ಥೆಗೆ ಕನ್ನಡಿ ಹಿಡಿಯುವ ಚಿತ್ರಗಳಿದ್ದವು. ಬರುಬರುತ್ತ ಸಿನಿಮಾ ಕಮರ್ಷಿಯಲ್&zwnj; ಆಗಿ ಬೇರೆ ಆಯಾಮ ಪಡೆಯಿತು. ಮನರಂಜನೆಯೇ ಮುಖ್ಯವಾಯಿತು. ಇವುಗಳಿಗೆಲ್ಲ ಸಾಕ್ಷಿಯಾಗಿದ್ದು ಒಂದೊಳ್ಳೆ ಅನುಭವ.&lt;/p&gt;&lt;p&gt;&lt;strong&gt;- ನಿಮ್ಮ 250ನೇ ಸಿನಿಮಾ ಚಾರ್ಜ್&zwnj;ಶೀಟ್&zwnj; ಬಗ್ಗೆ ಹೇಳಿ.&lt;/strong&gt;&lt;/p&gt;&lt;p&gt;ಇದು ನನಗೆ ಬಯಸದೇ ಬಂದ ಭಾಗ್ಯ. ನಮ್ಮ ಏರಿಯಾದಲ್ಲೇ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಿದ್ದಾರೆ. ಮಗಳು ಗಗನಸಖಿ. ಬೆಂಗಳೂರಿಂದ ಸಿಂಗಾಪೂರ್&zwnj;ಗೆ ಹೋಗಿ ಬರುವಾಗ ಕಾಣೆಯಾಗುತ್ತಾಳೆ. ಅವಳ ತಂದೆ ಇಂಜಿನಿಯರ್&zwnj;. ಅವರು ಗಾಬರಿಬಿದ್ದು ಕಂಪ್ಲೇಟ್&zwnj; ಕೊಟ್ಟರೆ ಪೊಲೀಸ್&zwnj; ಸ್ಟೇಶನ್&zwnj;ನಲ್ಲಿ ಉಡಾಫೆಯ ಉತ್ತರ ಬರುತ್ತದೆ. ಆದರೆ ಇನ್ನೊಬ್ಬ ಪೊಲೀಸ್&zwnj; ಅಧಿಕಾರಿ ಪರಿಸ್ಥಿತಿ ಅರಿತು ಈ ಕೇಸ್&zwnj; ಹಿಂದೆ ಬೀಳುತ್ತಾನೆ. ಅಲ್ಲಿಗೆ ಈ ಸಿನಿಮಾ ಪೊಲೀಸ್&zwnj; ಡಿಪಾರ್ಟ್&zwnj;ಮೆಂಟ್&zwnj;ನ ವಾಸ್ತವ ಸ್ಥಿತಿಗೂ ಕನ್ನಡಿ ಹಿಡಿಯುತ್ತದೆ. ಹಿರಿಯ ಪೊಲೀಸ್&zwnj; ಅಧಿಕಾರಿ ಎಸ್&zwnj;.ಕೆ. ಉಮೇಶ್&zwnj; ತನ್ನ ಅನುಭವದ ಘಟನೆಗೆ ಕಥೆಯ ರೂಪ ಕೊಟ್ಟಿದ್ದಾರೆ.&lt;/p&gt;&lt;p&gt;&lt;strong&gt;- ನಿಮಗೆ ಈ ಪಾತ್ರ ಹೇಗೆ ಕನೆಕ್ಟ್&zwnj; ಆಯ್ತು?&lt;/strong&gt;&lt;/p&gt;&lt;p&gt;ಚಿತ್ರತಂಡ ಈ ಪಾತ್ರಕ್ಕೆ ನನ್ನ ಆರಿಸಿದ್ದಕ್ಕೆ ನಿರ್ದಿಷ್ಟ ಕಾರಣಗಳಿರಬಹುದು. ಆದರೆ ಕತೆಯನ್ನು ನನಗೆ ಹೇಳಿದಾಗ ಹಿಂದು ಮುಂದು ನೋಡದೇ ಒಪ್ಪಿಬಿಟ್ಟೆ. ನನ್ನ ಒಳಗೂ ಒಬ್ಬ ಅಪ್ಪ ಇದ್ದಾನೆ. ಮಗಳನ್ನು ಬಹಳ ಪ್ರೀತಿಸುವ ಅಪ್ಪ. ಹೀಗಾಗಿ ತಂದೆಯ ಪಾತ್ರಕ್ಕೆ ಕನೆಕ್ಟ್&zwnj; ಆಗುವುದು ಸುಲಭವಾಯಿತು. ರಾಮಣ್ಣ ಅಂತ ನನ್ನ ಪಾತ್ರದ ಹೆಸರು.&lt;/p&gt;&lt;p&gt;&lt;strong&gt;- ವೆಂಕಟ್&zwnj; ಭಾರದ್ವಾಜ್&zwnj; ಅವರ ಕೆಲಸದ ಬಗ್ಗೆ?&lt;/strong&gt;&lt;/p&gt;&lt;p&gt;ಬದುಕಿನಲ್ಲಿ ನಾನು ಮೊದಲ ಬಾರಿ ಶೂಟಿಂಗ್&zwnj; ನೋಡಿದ ಸಿನಿಮಾ ಸಿ.ವಿ ಶಿವಶಂಕರ್&zwnj; ನಿರ್ದೇಶನದ &lsquo;ಮನೆ ಕಟ್ಟಿ ನೋಡು&rsquo;. ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಭಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ ಎಂಬ ಹಾಡು ನಮ್ಮೆಲ್ಲ ಕನ್ನಡಿಗರ ಮನಸ್ಸಿನ ಮಾತಾಗಿತ್ತು. &lsquo;ಚಾರ್ಜ್&zwnj;ಶೀಟ್&zwnj;&rsquo; ಸಿನಿಮಾದಲ್ಲಿ ವೆಂಕಟ್&zwnj; ಅವರ ಕೆಲಸ, ಅವರು ಕಥೆಯನ್ನು ನಿರೂಪಿಸುವ ರೀತಿ ನೋಡಿ ಸಿ.ವಿ. ಶಿವಶಂಕರ್&zwnj; ನೆನಪು ಬಂತು. ಚಿತ್ರದಲ್ಲಿ ಯುವ ಕಲಾವಿದರು ಎನರ್ಜಿಟಿಕ್&zwnj; ಆಗಿ ನಟಿಸಿದ್ದಾರೆ. ಎಸ್&zwnj;.ಕೆ ಉಮೇಶ್&zwnj; ಅವರು ಉತ್ತಮ ಸಾಥ್&zwnj; ನೀಡಿದ್ದಾರೆ. ಈ ಸಿನಿಮಾದಲ್ಲಿ ನನಗೆ ಫುಲ್&zwnj; ಮೀಲ್ಸ್&zwnj; ಸಿಕ್ಕಿದೆ.&lt;/p&gt;&lt;p&gt;&lt;strong&gt;- ಸ್ವಾತಂತ್ರ್ಯೋತ್ಸವದ ಸಂದರ್ಭ ಸಿನಿಮಾ ಬರ್ತಿದೆ. ಸ್ಪರ್ಧೆಯೊಡ್ಡುವಂಥಾ ಬೇರೆ ಚಿತ್ರಗಳಿಲ್ಲ.&lt;/strong&gt;&lt;/p&gt;&lt;p&gt;ಅದು ನಮ್ಮ ಸುದೈವ. ಇದು ಥಿಯೇಟರ್&zwnj;ನಲ್ಲೇ ನೋಡುವಂಥಾ ಕಥಾನಕ. ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್&zwnj; ಶೋ ಕೊಡುವ ಬಗ್ಗೆ ನನಗೆ ಬಹಳ ನೋವಿದೆ. ಕೇಳಿದರೆ ಸರ್&zwnj; ನಮ್ಗೂ ಥಿಯೇಟರ್&zwnj; ನಡೆಸಬೇಕಲ್ವಾ ಅಂತಾರೆ. ಜನ ಬರುವ ಸಂಜೆ ಶೋಗಳಿಗೆ ಅನ್ಯ ಭಾಷೆ ಸಿನಿಮಾಗಳನ್ನು ಹಾಕಿರುತ್ತಾರೆ. ಇದು 60ರ ದಶಕದಿಂದಲೇ ಇರುವ ಸಮಸ್ಯೆ. ಇರಲಿ, ನಮ್ಮ ಸಿನಿಮಾಕ್ಕೆ ಸ್ವಾತಂತ್ರ್ಯೋತ್ಸವಕ್ಕಿಂತ ಒಂದು ದಿನ ಮೊದಲೇ ಸ್ವಾತಂತ್ರ್ಯ ಸಿಗುತ್ತಿದೆ. ಈ ಸಮಸ್ಯೆಗಳಿಂದಲೂ ಮುಕ್ತಿ ಸಿಗಬೇಕಿದೆ.&lt;/p&gt;&lt;p&gt;&lt;strong&gt;ಕನ್ನಡಪ್ರಭದಲ್ಲಿ 6 ತಿಂಗಳು ಕೆಲಸ ಮಾಡಿದ್ದೀನಿ&lt;/strong&gt;&lt;/p&gt;&lt;p&gt;&lsquo;ಒಂಟಿಧ್ವನಿ&rsquo; ಅನ್ನುವ ಸಿನಿಮಾಕ್ಕೆ ಆರಂಭದಲ್ಲಿ ನಾನು ನಾಯಕನಾಗುವುದು ಅಂತಿತ್ತು. ಅದು ಪತ್ರಕರ್ತನ ಪಾತ್ರ. ಆ ಪಾತ್ರದ ಆಳ ಅರಿಯಬೇಕು ಅಂತ ಸುಮಾರು 6 ತಿಂಗಳ ಕಾಲ ಕನ್ನಡಪ್ರಭದಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದೆ. ಆದರೆ ಮುಂದೆ ಒಂಟಿಧ್ವನಿ ಸಿನಿಮಾದ ಪತ್ರಕರ್ತನ ಪಾತ್ರದಲ್ಲಿ ಅಂಬರೀಶ್&zwnj; ನಟಿಸಿದರು. ನಾನು ಮತ್ತೊಂದು ಪಾತ್ರದಲ್ಲಿ ನಟಿಸಿದೆ. ಆದರೆ ಕನ್ನಡಪ್ರಭದಲ್ಲಿ ಕೆಲಸ ಮಾಡಿದ ಅನುಭವ ಸದಾ ನೆನಪಿನಲ್ಲಿ ಉಳಿಯುವಂಥಾದ್ದು.&lt;/p&gt;]]></content:encoded>
            <category><![CDATA[celebrity-interviews]]></category>
            <dc:creator>Govindaraj S</dc:creator>
            <atom:link href="https://kannada.asianetnews.com/celebrity-interviews/sundar-raj-250th-movie-chargesheet-is-based-on-a-real-incident-gvd/articleshow-cf6srde"/>
        </item>
        <item>
            <title><![CDATA[ಶಿವಮೊಗ್ಗದಲ್ಲಿ ಹೃದಯ ವಿದ್ರಾವಕ ಘಟನೆ.. ಕಡಜ ಹುಳುಗೆ 8 ವರ್ಷದ ಬಾಲಕ ಬಲಿ..]]></title>
            <link>https://kannada.asianetnews.com/shivamogga/8-year-old-boy-died-after-being-stung-by-wasps-in-hattisara-village-of-sagara-taluk-shivamogga-district-gkn/articleshow-28gnps1</link>
            <guid isPermaLink="true">https://kannada.asianetnews.com/shivamogga/8-year-old-boy-died-after-being-stung-by-wasps-in-hattisara-village-of-sagara-taluk-shivamogga-district-gkn/articleshow-28gnps1</guid>
            <pubDate>Fri, 14 Aug 2026 16:27:52 +0530</pubDate>
            <description><![CDATA[ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 8 ವರ್ಷದ ಬಾಲಕನೊಬ್ಬ ಕಡಜ ಹುಳು ಕಚ್ಚಿ ಮೃತಪಟ್ಟಿದ್ದಾನೆ. ಇನ್ನೂ ಅವರ ತಂದೆಗೆ ಗಂಭೀರ ಗಾಯವಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ..]]></description>
            <media:content url="https://static.asianetnews.com/images/w-1280,h-720,format-jpg,imgid-01kzzyjgwk3h84ynzszpm5d266,imgname-kadaja-hulu-kadja-hulu-wasp-1786704905106.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾಗರ: &lt;/strong&gt;ತಾಲೂಕಿನ ಹತ್ತಿಸರ ಗ್ರಾಮದಲ್ಲಿ ಕಡಜದ ಹುಳು ಕಚ್ಚಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಹತ್ತಿಸರ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವವರ ಪುತ್ರ ನಿಷ್ಮಿತ್ (8) ಮೃತಪಟ್ಟ ಬಾಲಕ. ಮನೆಯ ಹಿತ್ತಲಿನಲ್ಲಿರುವ ಬಾಳೆ ಗಿಡದಲ್ಲಿದ್ದ ಕಡಜದ ಗೂಡು ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಈ ವೇಳೆ ಬಾಲಕ ನಿಷ್ಮಿತ್ ಹಾಗೂ ಆತನ ತಂದೆ ವೆಂಕಟೇಶ್ ಇಬ್ಬರಿಗೂ ಕಡಜದ ಹುಳುಗಳು ತೀವ್ರವಾಗಿ ಕಚ್ಚಿವೆ.&lt;/p&gt;&lt;p&gt;ಹುಳು ಕಚ್ಚಿದ ತಕ್ಷಣವೇ ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಸಮೀಪದ ಹೆಗ್ಗೂಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಷ್ಮಿತ್ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾನೆ. ಬಾಲಕನ ಜೊತೆಗೆ ಆತನ ತಂದೆ ವೆಂಕಟೇಶ್ ಅವರಿಗೂ ಕಡಜದ ಹುಳುಗಳು ತೀವ್ರವಾಗಿ ಕಚ್ಚಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.&lt;/p&gt;&lt;h2&gt;&lt;strong&gt;ಕಂಬನಿ ಮಿಡಿದ ಗ್ರಾಮಸ್ಥರು&lt;/strong&gt;&lt;/h2&gt;&lt;p&gt;2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ನಿಷ್ಮಿತ್ ಚುರುಕಾಗಿದ್ದನು. ಮಗುವಿನ ಸಾವಿನಿಂದ ಹತ್ತಿಸರ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.&lt;/p&gt;&lt;h2&gt;&lt;strong&gt;ಏನಿದು ಕಡಜ ಹುಳು..?&lt;/strong&gt;&lt;/h2&gt;&lt;p&gt;ಕಡಜದ ಹುಳು (Wasp) ಎನ್ನುವುದು ಕಣಜ ಜಾತಿಗೆ ಸೇರಿದ ಒಂದು ಕೀಟ. ಇದು ತನ್ನ ನೋವಿನ ಕಡಿತ ಮತ್ತು ಗೂಡು ಕಟ್ಟುವ ತಂತ್ರಗಾರಿಕೆಗೆ ಹೆಸರುವಾಸಿಯಾಗಿದೆ. ಕಡಜ ಕಚ್ಚಿದರೆ ತೀವ್ರವಾದ ಉರಿ, ನೋವು ಮತ್ತು ಊತ ಉಂಟಾಗುತ್ತದೆ.ಇವು ಸಾಮಾನ್ಯವಾಗಿ ಆಕ್ರಮಣಕಾರಿಯಾಗಿ ತಮ್ಮ ಗೂಡುಗಳನ್ನು ರಕ್ಷಿಸಿಕೊಳ್ಳುತ್ತವೆ. ಮರಗಳು, ಪೊದೆಗಳು ಅಥವಾ ಮನೆಗಳ ಗೋಡೆಗಳ ಮೇಲ್ಭಾಗದಲ್ಲಿ ಕಾಗದದಂತ da ಅಥವಾ ಮಣ್ಣಿನ ಗೂಡುಗಳನ್ನು ಕಟ್ಟುತ್ತವೆ. ಜೇನುಹುಳುವಿಗಿಂತ ಇವುಗಳ ಕೊಂಡಿ ಹೆಚ್ಚು ಅಪಾಯಕಾರಿ ಮತ್ತು ನೋವಿನಿಂದ ಕೂಡಿರುತ್ತದೆ. ಕಚ್ಚಿದ ಜಾಗಕ್ಕೆ ತಣ್ಣನೆಯ ಐಸ್ ಪ್ಯಾಕ್ ಅಥವಾ ಅಲೋವೆರಾ ಜೆಲ್ ಹಚ್ಚುವುದರಿಂದ ಉರಿ ಮತ್ತು ಊತ ಕಡಿಮೆ ಆಗುತ್ತದೆ. ಗೂಡುಗಳು ಮನೆಯ ಹತ್ತಿರವಿದ್ದರೆ ಅಥವಾ ಹೆಚ್ಚು ಸಂಖ್ಯೆಯಲ್ಲಿದ್ದರೆ ತೊಂದರೆ ನೀಡದೆ ವೃತ್ತಿಪರರ ಸಹಾಯದಿಂದ ಸುರಕ್ಷಿತವಾಗಿ ತೆರವುಗೊಳಿಸಬೇಕು.&lt;/p&gt;]]></content:encoded>
            <category><![CDATA[shivamogga]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/shivamogga/8-year-old-boy-died-after-being-stung-by-wasps-in-hattisara-village-of-sagara-taluk-shivamogga-district-gkn/articleshow-28gnps1"/>
        </item>
        <item>
            <title><![CDATA[ಅಭಿಮಾನಿಯ ಕಟ್ಟ ಕಡೆಯ ಆಸೆಯನ್ನೇ ಈಡೇರಿಸದ ನಟ ಯಶ್​: ಆದರೆ ಕೊಟ್ಟ ಕಾರಣಕ್ಕೆ ದೇಶವೇ ಫಿದಾ]]></title>
            <link>https://kannada.asianetnews.com/gallery/entertainment/actor-yash-who-did-not-fulfill-his-fans-last-wish-but-the-fans-are-happy-with-the-reason-suc-9mediu9</link>
            <guid isPermaLink="true">https://kannada.asianetnews.com/gallery/entertainment/actor-yash-who-did-not-fulfill-his-fans-last-wish-but-the-fans-are-happy-with-the-reason-suc-9mediu9</guid>
            <pubDate>Fri, 14 Aug 2026 16:25:35 +0530</pubDate>
            <description><![CDATA[ಖ್ಯಾತ ರಿಯಾಲಿಟಿ ಶೋ 'ಆಪ್ ಕಿ ಅದಾಲತ್' ನಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ತಾವು ಏಕೆ ಹೋಗಲಿಲ್ಲ ಎನ್ನುವ ಪ್ರಶ್ನೆಗೆ ಯಶ್, ಒಂದು ವೇಳೆ ತಾನು ಹೋಗಿದ್ದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzyk2ntjrdsr9x42wth6663,imgname-yash-1786704923322.jpg" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ರಿಯಾಲಿಟಿ ಶೋ 'ಆಪ್ ಕಿ ಅದಾಲತ್' ನಲ್ಲಿ ನಟ ಯಶ್ ಭಾಗವಹಿಸಿದ್ದರು. ಈ ವೇಳೆ, ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ತಾವು ಏಕೆ ಹೋಗಲಿಲ್ಲ ಎನ್ನುವ ಪ್ರಶ್ನೆಗೆ ಯಶ್, ಒಂದು ವೇಳೆ ತಾನು ಹೋಗಿದ್ದರೆ ಅದು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;img&gt;&lt;p&gt;ಸದ್ಯ ನಟ ಯಶ್​ ಅವರ ಟಾಕ್ಸಿಕ್​ ಚಿತ್ರ (Toxic Movie) ಬಿಡುಗಡೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಯಶ್​ ಅವರ ಸಾಲು ಸಾಲು ಚಿತ್ರದ ಯಶಸ್ಸಿನಿಂದಾಗಿ ಅವರು ಪ್ಯಾನ್​ ಇಂಡಿಯಾ ಮೀರಿದ ಸ್ಟಾರ್​ ಆಗಿ ಬೆಳೆಯುತ್ತಿದ್ದಾರೆ. ಇದೇ ಕಾರಣಕ್ಕೆ ಸುಪ್ರಸಿದ್ಧ ರಿಯಾಲಿಟಿ ಷೋ, ದಿ ರಜತ್​ ಶರ್ಮಾ ಷೋನಲ್ಲಿ ಯಶ್​ ಅವರಿಗೆ ಆಹ್ವಾನ ಬಂದಿದೆ. ಈ ಷೋನಲ್ಲಿ ಸಂದರ್ಶನ ಕೊಡುತ್ತಿರುವ ಮೊದಲ ಕನ್ನಡಿಗ ಎನ್ನುವ ಹೆಮ್ಮೆ ಇವರದ್ದು.&lt;/p&gt;&lt;img&gt;&lt;p&gt;ಈ ಷೋನಲ್ಲಿ ಯಶ್​ ಅವರು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಒಂದು ಪ್ರಶ್ನೆಯನ್ನು ರಜತ್​ ಶರ್ಮಾ ಅವರು ಕೇಳಿದ್ದರು. ಅದಕ್ಕೆ ಯಶ್​ ಕೊಟ್ಟಿರುವ ಉತ್ತರಕ್ಕೆ ಇಡೀ ದೇಶವೇ ಫಿದಾ ಆಗಿದೆ.&lt;/p&gt;&lt;img&gt;&lt;p&gt;ಅದೇನೆಂದರೆ, ನಟ ಯಶ್​ ಅವರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡರು. ನನ್ನ ಕೊನೆಯ ಆಸೆ ಎಂದರೆ, ನಟ ಯಶ್​ ಅವರು ನನ್ನ ಅಂತ್ಯಕ್ರಿಯೆಗೆ ಬರಬೇಕು ಎನ್ನುವ ಆಸೆ ಇಟ್ಟಿದ್ದ. ಯಶ್​ ಮತ್ತು ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಇಬ್ಬರೂ ಬರಬೇಕು ಎಂದು ಸಾಯುವ ಮುನ್ನ ಮನವಿ ಮಾಡಿದ್ದರು. ಅಂತ್ಯಕ್ರಿಯೆಗೆ ಸಿದ್ದರಾಮಯ್ಯ ಹೋದರು, ಆದರೆ ಯಶ್​ ಹೋಗಲಿಲ್ಲ. ಇದಕ್ಕೆ ಕಾರಣವೇನು ಎಂದು ರಜತ್​ ಶರ್ಮಾ ಕೇಳಿದರು.&lt;/p&gt;&lt;img&gt;&lt;p&gt;ಅದಕ್ಕೆ ಯಶ್​ ಕೊಟ್ಟ ಉತ್ತರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರು ಹೇಳಿದ್ದೇನೆಂದರೆ, ನಾನು ಒಂದು ವೇಳೆ ಅವರ ಅಂತ್ಯಕ್ರಿಯೆಗೆ ಹೋದರೆ ಅದು ಕೆಟ್ಟ ಸಂದೇಶವನ್ನು ರವಾನೆ ಮಾಡಿದಂತೆ ಆಗುತ್ತದೆ. ಇದರಿಂದ ಪ್ರೇರೇಪಿತರಾಗಿ ಹಲವರು ಇದೇ ದಾರಿಯನ್ನು ಹಿಡಿಯಬಹುದು. ಕೊನೆಯ ಆಸೆ ಎಂದು ಹೇಳಿ ಸಾವಿನ ಹಾದಿ ತುಳಿಯಬಹುದು. ಇಂಥ ಪ್ರೇರಣೆಯನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ ಎಂದರು.&lt;/p&gt;&lt;img&gt;&lt;p&gt;ಯಾರಾದರೂ ನಾನು ಇಂಥದ್ದೊಂದು ಸಾಧನೆ ಮಾಡುತ್ತೇನೆ. ಆಗ ಯಶ್​ ಅವರು ಬಂದು ನನ್ನನ್ನು ನೋಡಲಿ ಎಂದರೆ, ಖಂಡಿತವಾಗಿಯೂ ಆ ಸಾಧನೆ ಮಾಡಿದವರನ್ನು ನೋಡಿ ಶುಭ ಕೋರುತ್ತೇನೆ. ಅದು ಹಲವರಿಗೆ ಮಾದರಿಯಾಗುತ್ತದೆ. ಆದರೆ ಸಾವಿನ ಮಾದರಿ ಯಾರಿಗೂ ಆಗುವುದು ನನಗೆ ಇಷ್ಟವಿಲ್ಲ ಎಂದರು. ಈ ಉತ್ತರಕ್ಕೆ ಖುದ್ದು ರಜತ್​ ಶರ್ಮಾ ಅವರೇ ಶ್ಲಾಘನೆ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಕೋರ್ಟ್​ ಮಾದರಿಯಲ್ಲೇ ಸೆಟ್&zwnj; ಹಾಕಿ ನಡೆಸಲಾಗುವ ಈ ಸಂದರ್ಶನದಲ್ಲಿ, ಕಟಕಟೆಯಲ್ಲಿ ಕೇವಲ ಖ್ಯಾತನಾಮರನ್ನು ಮಾತ್ರ ಕೂರಿಸಲಾಗುತ್ತದೆ. ಓರ್ವ ನ್ಯಾಯಾಧೀಶರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಪತ್ರಕರ್ತ ರಜತ್ ಶರ್ಮಾ ಅವರು ವಕೀಲರಂತೆ ಪ್ರಶ್ನೆಗಳನ್ನು ಕೇಳುತ್ತಾ, ಸೆಲೆಬ್ರಿಟಿಗಳ ಜೀವನದ ಹೆಜ್ಜೆಗುರುತುಗಳನ್ನು ಅತ್ಯಂತ ಗೌರವಾನ್ವಿತವಾಗಿ ವಿಚಾರಣೆ ನಡೆಸುತ್ತಾರೆ. ಎಲ್ಲಾ ಆದ ಬಳಿಕ ಅವರು ಕೊಟ್ಟ ಉತ್ತರ ಕೇಳಿ ಜಡ್ಜ್​ ಆದವರು ಅವರ ಬಗ್ಗೆ ಅಂತಿಮ ತೀರ್ಪು ಕೊಡುತ್ತಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/actor-yash-who-did-not-fulfill-his-fans-last-wish-but-the-fans-are-happy-with-the-reason-suc-9mediu9"/>
        </item>
        <item>
            <title><![CDATA[ಕಳ್ಳತನಕ್ಕೆ ಹೋದ ಮನೆಯಲ್ಲೇ ನಿದ್ದೆಗೆ ಜಾರಿದ ಭೂಪ; ಎದ್ದು ನೋಡಿದಾಗ ಎದುರಿಗೆ ಮನೆ ಮಾಲೀಕರಿದ್ದರು, ಮುಂದೇನಾಯ್ತು?]]></title>
            <link>https://kannada.asianetnews.com/india-news/hyderabad-thief-steals-gold-falls-asleep-inside-house-owners-find-him-sat/articleshow-e59cpdh</link>
            <guid isPermaLink="true">https://kannada.asianetnews.com/india-news/hyderabad-thief-steals-gold-falls-asleep-inside-house-owners-find-him-sat/articleshow-e59cpdh</guid>
            <pubDate>Fri, 14 Aug 2026 16:24:15 +0530</pubDate>
            <description><![CDATA[ಕಳ್ಳನೊಬ್ಬ ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದಾನೆ. ಆದರೆ, ಅಲ್ಲಿಂದ ಪರಾರಿಯಾಗುವ ಬದಲು, ಆತ ಅದೇ ಮನೆಯಲ್ಲಿ ಆರಾಮವಾಗಿ ನಿದ್ದೆಗೆ ಜಾರಿದ್ದಾನೆ. ಮನೆಗೆ ವಾಪಸ್ ಬಂದ ಕುಟುಂಬಸ್ಥರು ಈ ದೃಶ್ಯ ನೋಡಿದ್ದಾರೆ. ನಂತರ ಕಳ್ಳನನ್ನು ಎಬ್ಬಿಸಿದ್ದು, ಮುಂದೇನಾಯ್ತು ನೀವೇ ನೋಡಿ..]]></description>
            <media:content url="https://static.asianetnews.com/images/w-1280,h-720,format-jpg,imgid-01kzzqr6rxhvgyn5c941c2s7e5,imgname-hyderabad-1786697751325.png" type="image/jpeg" height="390" width="690"/>
            <content:encoded><![CDATA[&lt;p&gt;ಮನೆಗೆ ನುಗ್ಗಬೇಕು, ಚಿನ್ನ, ಬೆಳ್ಳಿ, ಬೆಲೆಬಾಳುವ ವಸ್ತುಗಳನ್ನು ದೋಚಬೇಕು, ಮಾಲೀಕರು ವಾಪಸ್ ಬರುವ ಮೊದಲೇ ಅಲ್ಲಿಂದ ಕಾಲ್ಕಿತ್ತಬೇಕು. ಇದು ಕಳ್ಳನೊಬ್ಬನ ಪ್ಲಾನ್ ಆಗಿತ್ತು. ಆದರೆ ಹೈದರಾಬಾದ್&zwnj;ನಲ್ಲಿ ನಡೆದ ಈ ಘಟನೆಯಲ್ಲಿ ಕಳ್ಳ ಮನೆಯಿಂದ ಹೊರಗೆ ಹೋಗಲೇ ಇಲ್ಲ. ಬದಲಾಗಿ, ಚಿನ್ನಾಭರಣ ಕದ್ದ ನಂತರ ಆತ ಅದೇ ಕೋಣೆಯಲ್ಲಿ ಆರಾಮವಾಗಿ ನಿದ್ದೆಗೆ ಜಾರಿದ್ದಾನೆ. ಮನೆಗೆ ವಾಪಸ್ ಬಂದ ಕುಟುಂಬಸ್ಥರಿಗೆ ಈ ದೃಶ್ಯ ನೋಡಿ ಶಾಕ್ ಆಗಿದೆ.&lt;/p&gt;&lt;h2&gt;&lt;strong&gt;ಚಿನ್ನಾಭರಣ ಪಕ್ಕದಲ್ಲಿಟ್ಟುಕೊಂಡು ಮಲಗಿದ ಕಳ್ಳ&lt;/strong&gt;&lt;/h2&gt;&lt;p&gt;ಆರೋಪಿ ಅದೇ ಪ್ರದೇಶದ ನಿವಾಸಿ ಎನ್ನಲಾಗಿದೆ. ಕಳ್ಳತನ ಮಾಡುವ ಉದ್ದೇಶದಿಂದಲೇ ಆತ ಮನೆಗೆ ನುಗ್ಗಿದ್ದ. ಈ ವೇಳೆ ಆತ ಗಾಂಜಾ ಮತ್ತಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಗೆ ನುಗ್ಗಿದ ನಂತರ, ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದಾನೆ. ಆದರೆ, ಕದ್ದ ವಸ್ತುಗಳೊಂದಿಗೆ ಪರಾರಿಯಾಗುವ ಬದಲು, ಆತ ಅದೇ ಮನೆಯಲ್ಲಿ ಆರಾಮವಾಗಿ ಮಲಗಿಬಿಟ್ಟಿದ್ದಾನೆ.&lt;/p&gt;&lt;p&gt;ಬೆಳಗ್ಗೆ ವೇಳೆಗೆ ಮನೆಗೆ ಬಂದ ಮನೆಯ ಮಾಲೀಕರಿಗೆ ಅಚ್ಚರಿಯ ದೃಶ್ಯ ಕಾದಿತ್ತು. ಮನೆಯ ಕಪಾಟು ಚೆಲ್ಲಾಪಿಲ್ಲಿಯಾಗಿತ್ತು ಮತ್ತು ಅಪರಿಚಿತ ವ್ಯಕ್ತಿಯೊಬ್ಬ ಕೋಣೆಯ ಹಾಸಿಗೆಯ ಮೇಲೆ ಮಲಗಿದ್ದನು. ಆತನನ್ನು ಪರಿಶೀಲಿಸಿದಾಗ, ಕದ್ದ ಚಿನ್ನಾಭರಣಗಳು ಅವನ ಜೇಬಿನಲ್ಲಿ ಪತ್ತೆಯಾಗಿವೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತನನ್ನು ತಕ್ಷಣವೇ ಎಬ್ಬಿಸುವ ಬದಲು, ಕುಟುಂಬಸ್ಥರು ಈ ವಿಚಿತ್ರ ಘಟನೆಯನ್ನು ವಿಡಿಯೋ ಮಾಡಿ, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಕುಡಿದ ಮತ್ತಿನಲ್ಲಿದ್ದ ಕಳ್ಳ&lt;/strong&gt;&lt;/h2&gt;&lt;p&gt;ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕದ್ದೊಯ್ದಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಸಿಕ್ಕಿಬಿದ್ದಾಗ ತೀವ್ರ ಮತ್ತಿನಲ್ಲಿದ್ದಂತೆ ಕಂಡುಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಹಿಂದೆ ಬೇರೆ ಯಾವುದೇ ಕಳ್ಳತನ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;/p&gt;&lt;p&gt;Thief Falls Asleep After TheftA thief allegedly broke into a house in Wadi-e-Mustafa, Jalpally, Hyderabad, and stole jewellery &amp;amp; a mobile He reportedly fell asleep inside the same house owner found him the next morning and allegedly recovered the stolen jewellery from his pocket pic.twitter.com/kLHeNjOVyW&lt;/p&gt;&lt;p&gt;&mdash; Gummalla Lakshmana (@GUMMALLALAKSHM3) August 13, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[india-news]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/india-news/hyderabad-thief-steals-gold-falls-asleep-inside-house-owners-find-him-sat/articleshow-e59cpdh"/>
        </item>
        <item>
            <title><![CDATA[ಜೆನ್‌‍‌ಝೀ ದುಡಿಯುವ ಶೇಕಡಾ 70ರಷ್ಟು ಹಣ ಖರ್ಚು ಮಾಡುತ್ತಿರುವುದು ಎಲ್ಲಿ? ಅಧ್ಯಯನ ವರದಿ]]></title>
            <link>https://kannada.asianetnews.com/life/where-do-gen-z-spend-70-percent-of-their-income-study-reveals-surprising-findings/articleshow-igkfvgp</link>
            <guid isPermaLink="true">https://kannada.asianetnews.com/life/where-do-gen-z-spend-70-percent-of-their-income-study-reveals-surprising-findings/articleshow-igkfvgp</guid>
            <pubDate>Fri, 14 Aug 2026 16:21:38 +0530</pubDate>
            <description><![CDATA[ಜೆನ್‌ಝಿ ಯುವ ಸಮೂಹದ ಸ್ಯಾಲರಿ ಹೆಚ್ಚು. ಉತ್ತಮ ಆದಾಯಗಳಿಸುತ್ತಿರುವ ಜೆನ್‌ಝಿಗಳ ಖರ್ಚು ವೆಚ್ಚದ ಮಾಹಿತಿ ಬಯಲಾಗಿದೆ. ತಿಂಗಳಲ್ಲಿ ಶೇಕಡಾ 70 ರಷ್ಟು ಹಣ ಯಾವುದಕ್ಕೆ ಖರ್ಚು ಮಾಡುತ್ತಾರೆ, ಜೆನ್‌ಝಿಗಳ ಖರ್ಚಿನ ಡೀಟೇಲ್ಸ್]]></description>
            <media:content url="https://static.asianetnews.com/images/w-1280,h-720,format-jpg,imgid-01kt1ac5djsxzd8h4nn3bgetpx,imgname-gen-z-travel-1780308383154.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.14) &lt;/strong&gt;ಭಾರತ ಸೇರಿದಂತೆ ವಿಶ್ವಿದೆಲ್ಲೆಡೆ ಜೆನ್&zwnj;ಝಿ ಸಮೂಹದ ಚರ್ಚೆಗಳು ನಡೆಯುತ್ತಿದೆ.ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಜೆನ್&zwnj;ಝಿ ಸಮೂಹ ಸರ್ಕಾರವನ್ನೇ ಉರುಳಿಸಿ ಹೊಸ ಸರ್ಕಾರ ತರುವಲ್ಲಿ ಯಶಸ್ವಿಯಾಗಿದೆ. ಜೆನ್&zwnj;ಝಿ ಸಮೂಹದ ಲೈಫ್&zwnj;ಸ್ಟೈಲ್ ಭಿನ್ನ. ಸಾಮಾನ್ಯವಾಗಿ ಜೆನ್&zwnj;ಝಿಗಳು ದುಬಾರಿ ಫೋನ್ ಅಥವಾ ಗ್ಯಾಜೆಟ್ಸ್, ಪ್ರವಾಸ, ಮೋಜು ಮಸ್ತಿ, ಪಾರ್ಟಿ ಹೀಗೆ ಹೆಚ್ಚಿನ ಹಣ ಖರ್ಚು ಮಾಡುತ್ತಾರೆ ಅನ್ನೋ ಕಲ್ಪನೆ ಇದೆ. ಆದರೆ ಇದೆಲ್ಲಾ ಸುಳ್ಳು ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.&lt;/p&gt;&lt;h2&gt;ಜೆನ್&zwnj;ಝಿ ಖರ್ಚು ವೆಚ್ಚದಲ್ಲಿ ಭಾರಿ ಶಿಸ್ತು&lt;/h2&gt;&lt;p&gt;ಜೆನ್&zwnj;ಝಿ ಯುವ ಸಮೂಹದ ಖರ್ಚು ವೆಚ್ಚದಲ್ಲಿ ಭಾರಿ ಶಿಸ್ತು ಎಂದು ಅಧ್ಯಯನ ವರದಿ ಹೇಳುತ್ತಿದೆ. ಸ್ಯಾಲರಿಸೇ (SalarySe) ನಡೆಸಿದ ಅಧ್ಯಯನ ವರದಿ ಈ ಮಾಹಿತಿ ನೀಡಿದೆ. ಈ ವರದಿ ಪ್ರಕಾರ ಜೆನ್&zwnj;ಝಿ ಸಮೂಹದ ಖರ್ಚು ವೆಚ್ಚಗಳ ಬಹುತೇಕ ತಮ್ಮ ದಿನಬಳಕೆ ವಸ್ತುಗಳು, ಮಾಸಿಕ ಬಿಲ್&zwnj;ಗಳಿಗೆ ಹೋಗುತ್ತಿದೆ. ಇನ್ನು ಪ್ರವಾಸ, ಎಲೆಕ್ಟ್ರಾನಿಕ್ ವಸ್ತುಗಳಿಗೆ ಕೇವಲ ಶೇಕಡಾ 5ರಷ್ಟು ಖರ್ಚು ಮಾಡುತ್ತಾರೆ ಎಂದು ವರದಿ ಹೇಳುತ್ತಿದೆ.&lt;/p&gt;&lt;h2&gt;ತಿಂಗಳ ಬಿಲ್ ಹಾಗೂ ಸಬ್&zwnj;ಸ್ಕ್ರಿಪ್ಸನ್&lt;/h2&gt;&lt;p&gt;ಜೆನ್&zwnj;ಝಿಗಳ ಶೇಕಡಾ 20.1ರಷ್ಟು ಹಣ ಯುಟಿಲಿಟಿ ಬಿಲ್, ಆನ್&zwnj;ಲೈನ್ ಸರ್ವೀಸ್&zwnj;ಗಳಿಗೆ ಖರ್ಚು ಮಾಡುತ್ತಾರೆ. ಇನ್ನು ಶೇಕಡಾ 15.7ರಷ್ಟು ಮೊತ್ತವನ್ನು ದಿನಸಿ ಸೇರಿದಂತೆ ಇತರ ಅಗತ್ಯ ವಸ್ತುಗಳಿಗೆ ಖರ್ಚು ಮಾಡುತ್ತಾರೆ. ಸಾಲದ ಇಎಂಐ, ವಿಮೆ, ಹೂಡಿಕೆಗಳಲಿಗೆ ಶೇಕಡಾ 12.ರಷ್ಟು ಖರ್ಚಾಗುತ್ತಿದೆ. ಶಾಪಿಂಗ್&zwnj;ಗೆ ಶೇಕಡಾ 11.9ರಷ್ಟು ಹಾಗೂ ಆಹಾರಕ್ಕೆ ಶೇಕಡಾ 11.5ರಷ್ಟು ಖರ್ಚು ಮಾಡುತ್ತಿದ್ದಾರೆ ಅನ್ನೋದು ಅಧ್ಯಯನ ವರದಿಯಲ್ಲಿ ಬಹಿರಂಗವಾಗಿದೆ. ಒಟ್ಟು ಶೇಕಡಾ 70ರಷ್ಟು ಹಣ ಮಾಸಿಕ ಖರ್ಚು ವೆಚ್ಚದಲ್ಲಿ ಖಾಲಿಯಾಗುತ್ತಿದೆ.&lt;/p&gt;&lt;p&gt;ಜೆನ್&zwnj;ಝಿ ಸಮೂಹದ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನೋಡಿದರೆ ಸದಾ ಪ್ರವಾಸ ಮಾಡುತ್ತಾರೆ ಅನ್ನೋ ಕಲ್ಪನೆ ಮೂಡದೇ ಇರದು. ಆದರೆ ಜೆನ್&zwnj;ಜಿ ತಮ್ಮ ಮಾಸಿಕ ತಿಂಗಳಲ್ಲಿ ಪ್ರವಾಸಕ್ಕಾಗಿ ಖರ್ಚು ಮಾಡುವುದು ಶೇಕಡಾ 5ರಷ್ಟು ಮಾತ್ರ. ಮೋಜು ಮಸ್ತಿ, ಪ್ರವಾಸ ಜೆನ್&zwnj;ಜಿಗಳ ಆದ್ಯತೆ ಅಲ್ಲ. ಆದರೆ ಪ್ರವಾಸಕ್ಕೆ ಹೋದಾಗ ಮಸ್ತಿ ಮಾಡಲು ಹಿಂಜರಿಯುವುದಿಲ್ಲ.&lt;/p&gt;&lt;p&gt;ಜೆನ್&zwnj;ಝಿ ಸಮೂಹಗ ಎಟಿಎಂಗೆ ಹೋಗಿ ದುಡ್ಡು ಡ್ರಾ ಮಾಡಿ ಖರ್ಚು ಮಾಡುವ ಮಂದಿ ಕಡಿಮೆ. ಎಲ್ಲವೂ ಯುಪಿಐ ಮೂಲಕವೇ ನಡೆಯುತ್ತಿದೆ. ಯುಪಿಐ ಟ್ರಾನ್ಸಾಕ್ಷನ್ ಮೂಲಕವೇ ತಮ್ಮ ವ್ಯವಹಾರ ನಡೆಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[life]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/life/where-do-gen-z-spend-70-percent-of-their-income-study-reveals-surprising-findings/articleshow-igkfvgp"/>
        </item>
        <item>
            <title><![CDATA[ಶಾಲೆ ಬಿಟ್ಟ ಹುಡುಗ ₹48,000 ಕೋಟಿ ಒಡೆಯ, 15 ಮಕ್ಕಳಲ್ಲಿ 11ನೇ ಮಗನ ಚಿನ್ನದ ಸಾಮ್ರಾಜ್ಯ]]></title>
            <link>https://kannada.asianetnews.com/business/meet-joy-alukkas-school-dropout-to-india-richest-jeweller-with-rs-48000-crore-fortune-suh/articleshow-qk1x500</link>
            <guid isPermaLink="true">https://kannada.asianetnews.com/business/meet-joy-alukkas-school-dropout-to-india-richest-jeweller-with-rs-48000-crore-fortune-suh/articleshow-qk1x500</guid>
            <pubDate>Fri, 14 Aug 2026 16:19:00 +0530</pubDate>
            <description><![CDATA[ಶಾಲೆ ಶಿಕ್ಷಣ ಪೂರ್ಣಗೊಳಿಸದ ಕೇರಳದ ಜಾಯ್ ಅಲುಕ್ಕಾಸ್, ಕುಟುಂಬದ ಚಿನ್ನದ ವ್ಯಾಪಾರವನ್ನು ವಿಸ್ತರಿಸಿ ಇಂದು ₹48,000 ಕೋಟಿ ಸಂಪತ್ತಿನ ಜಾಗತಿಕ ಜ್ಯುವೆಲ್ಲರಿ ಸಾಮ್ರಾಜ್ಯ ಕಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzy1ysg1nh01ymhny0jt0n8,imgname-meet-joy-alukkas-school-dropout-to-india-richest-jeweller-with-rs-48000-crore-fortune-1786704362288.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿನ್ನದ ವ್ಯಾಪಾರದಲ್ಲಿ ಇಂದು ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ಜಾಯ್ ಅಲುಕ್ಕಾಸ್ ಅವರ ಯಶೋಗಾಥೆ ಅನೇಕರಿಗೆ ಸ್ಫೂರ್ತಿ. ಕೇರಳದ ತ್ರಿಶೂರ್&zwnj;ನಲ್ಲಿ ಕುಟುಂಬದ ಚಿನ್ನದ ವ್ಯಾಪಾರದಿಂದ ಆರಂಭವಾದ ಅವರ ಪ್ರಯಾಣ, ಗಲ್ಫ್ ದೇಶಗಳಿಗೆ ವಿಸ್ತರಣೆ, ತಂತ್ರಜ್ಞಾನ ಅಳವಡಿಕೆ ಮತ್ತು ಸ್ವಂತ ಬ್ರ್ಯಾಂಡ್ ನಿರ್ಮಾಣದ ಮೂಲಕ ಜಾಗತಿಕ ಮಟ್ಟದ ಜ್ಯುವೆಲ್ಲರಿ ಸಾಮ್ರಾಜ್ಯವಾಗಿ ಬೆಳೆದಿದೆ. ಫೋರ್ಬ್ಸ್ ಪ್ರಕಾರ, 2026ರಲ್ಲಿ ಅವರ ಸಂಪತ್ತು ಸುಮಾರು ಡಾಲರ್&zwnj; ಬಿಲಿಯನ್ (ಸುಮಾರು ₹48,000 ಕೋಟಿ) ಮಟ್ಟದಲ್ಲಿದೆ.&lt;/p&gt;&lt;h2&gt;15 ಮಕ್ಕಳಲ್ಲಿ 11ನೇ ಮಗ&lt;/h2&gt;&lt;p&gt;ಜಾಯ್ ಅಲುಕ್ಕಾಸ್ 1956ರಲ್ಲಿ ತ್ರಿಶೂರ್&zwnj;ನ ಉದ್ಯಮ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಅಲುಕ್ಕಾ ಜೋಸೆಫ್ ವರ್ಗೀಸ್ 1956ರಲ್ಲೇ ತ್ರಿಶೂರ್&zwnj;ನಲ್ಲಿ ಚಿನ್ನಾಭರಣದ ಅಂಗಡಿಯನ್ನು ಆರಂಭಿಸಿದ್ದರು. ಕುಟುಂಬದ ಇತರ ವ್ಯವಹಾರಗಳ ಜೊತೆಗೆ ಜ್ಯುವೆಲ್ಲರಿ ವ್ಯಾಪಾರವೂ ನಿಧಾನವಾಗಿ ವಿಸ್ತರಿಸಿತು. ಜಾಯ್ ತಮ್ಮ ಕುಟುಂಬದ ಚಿನ್ನದ ವ್ಯವಹಾರಕ್ಕೆ ಸೇರಿಕೊಂಡರೂ, ಕೇವಲ ಅಂಗಡಿಯಲ್ಲಿ ಕುಳಿತು ವ್ಯಾಪಾರ ನಡೆಸುವುದಕ್ಕಿಂತ ದೊಡ್ಡ ಮಟ್ಟದಲ್ಲಿ ಉದ್ಯಮ ಬೆಳೆಸುವ ಆಸಕ್ತಿ ಹೊಂದಿದ್ದರು. ಫೋರ್ಬ್ಸ್ ಪ್ರಕಾರ, ಅವರು ಶಾಲೆ ಶಿಕ್ಷಣವನ್ನು ಪೂರ್ಣಗೊಳಿಸದೇ ಉದ್ಯಮದತ್ತ ಬಂದರು.&lt;/p&gt;&lt;h2&gt;ಒಂದು ನಿರ್ಧಾರವೇ ಜೀವನ ಬದಲಿಸಿತು&lt;/h2&gt;&lt;p&gt;1980ರ ದಶಕದಲ್ಲಿ ಗಲ್ಫ್ ದೇಶಗಳಿಗೆ ಕೇರಳದಿಂದ ಭಾರೀ ಪ್ರಮಾಣದಲ್ಲಿ ಜನರು ವಲಸೆ ಹೋಗುತ್ತಿದ್ದರು. ಗಲ್ಫ್&zwnj;ನಲ್ಲಿದ್ದ ಮಲಯಾಳಿ ಸಮುದಾಯಕ್ಕೆ ಚಿನ್ನದ ಮೇಲಿದ್ದ ವಿಶೇಷ ಆಸಕ್ತಿಯನ್ನು ಜಾಯ್ ಗಮನಿಸಿದರು. ಇದೇ ಅವಕಾಶವನ್ನು ಬಳಸಿಕೊಂಡು ಕುಟುಂಬದ ವ್ಯವಹಾರವನ್ನು ಮಧ್ಯಪ್ರಾಚ್ಯಕ್ಕೆ ಕೊಂಡೊಯ್ಯಲು ಅವರು ಮುಂದಾದರು. 1986ರಲ್ಲಿ ದುಬೈಗೆ ತೆರಳಿ ಅಲ್ಲಿನ ಚಿನ್ನದ ಮಾರುಕಟ್ಟೆಯನ್ನು ಅಧ್ಯಯನ ಮಾಡಿದ ಬಳಿಕ, ಗಲ್ಫ್&zwnj;ನಲ್ಲಿ ತನ್ನದೇ ಆದ ಮಾರುಕಟ್ಟೆ ನಿರ್ಮಿಸುವ ಯೋಜನೆ ರೂಪಿಸಿದರು.&lt;/p&gt;&lt;h2&gt;1988ರಲ್ಲಿ ಅಬುಧಾಬಿಯಲ್ಲಿ ಮೊದಲ ಹೆಜ್ಜೆ&lt;/h2&gt;&lt;p&gt;1987-88ರ ಅವಧಿಯಲ್ಲಿ ಅಬುಧಾಬಿಯಲ್ಲಿ ಕುಟುಂಬದ ಮೊದಲ ವಿದೇಶಿ ಮಳಿಗೆಯನ್ನು ಆರಂಭಿಸುವ ಮೂಲಕ ಜಾಯ್ ಅಲುಕ್ಕಾಸ್ ಗಲ್ಫ್ ಮಾರುಕಟ್ಟೆಗೆ ಪ್ರವೇಶಿಸಿದರು. ಅಲ್ಲಿದ್ದ ಮಲಯಾಳಿ ವಲಸಿಗರು ಪ್ರಮುಖ ಗ್ರಾಹಕರಾದರು. ಈ ವ್ಯಾಪಾರ ವೇಗವಾಗಿ ಬೆಳೆಯುತ್ತಿದ್ದಂತೆ, ಜಾಯ್ ಕೇವಲ ಅಂಗಡಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸೀಮಿತವಾಗಲಿಲ್ಲ. ವ್ಯಾಪಾರವನ್ನು ವ್ಯವಸ್ಥಿತವಾಗಿ ನಡೆಸಲು ಹೊಸ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳನ್ನು ಅಳವಡಿಸಲು ಆರಂಭಿಸಿದರು.&lt;/p&gt;&lt;h2&gt;&lsquo;ಮಾಲೀಕ ಕೌಂಟರ್&zwnj;ನಲ್ಲಿ ಕುಳಿತುಕೊಳ್ಳಬೇಕು&rsquo; ಎಂಬ ಹಳೆಯ ಪದ್ಧತಿಗೆ ಗುಡ್&zwnj;ಬೈ&lt;/h2&gt;&lt;p&gt;ಜ್ಯುವೆಲ್ಲರಿ ವ್ಯಾಪಾರವನ್ನು ಕೇವಲ ಮಾಲೀಕರ ವೈಯಕ್ತಿಕ ಮೇಲ್ವಿಚಾರಣೆಯ ಮೇಲೆ ಅವಲಂಬಿಸಬಾರದು ಎಂಬುದು ಜಾಯ್ ಅವರ ಪ್ರಮುಖ ಆಲೋಚನೆ. ಅವರು ಅಂಗಡಿಗಳಲ್ಲಿ ಸಾಫ್ಟ್&zwnj;ವೇರ್, ತಂತ್ರಜ್ಞಾನ ಆಧಾರಿತ ಕಾರ್ಯವಿಧಾನ, ಸ್ಟ್ಯಾಂಡರ್ಡ್ ಪ್ರೊಸೆಸ್, ಉದ್ಯೋಗಿಗಳ ಯೂನಿಫಾರ್ಮ್, ಲಾಯಲ್ಟಿ ಕಾರ್ಯಕ್ರಮ ಮತ್ತು ಏಕರೂಪದ ಬ್ರ್ಯಾಂಡ್ ಗುರುತು ಮುಂತಾದ ವ್ಯವಸ್ಥೆಗಳನ್ನು ಜಾರಿಗೆ ತಂದರು. ಇದರಿಂದ ಮಾಲೀಕರು ಪ್ರತಿಯೊಂದು ಅಂಗಡಿಯ ಕೌಂಟರ್&zwnj;ನಲ್ಲಿ ಕುಳಿತುಕೊಳ್ಳುವ ಅಗತ್ಯವಿಲ್ಲದೆ, ವಿಸ್ತರಣೆ ಮತ್ತು ವ್ಯವಹಾರದ ತಂತ್ರಗಳತ್ತ ಗಮನ ಹರಿಸಲು ಸಾಧ್ಯವಾಯಿತು.&lt;/p&gt;&lt;h2&gt;2005ರಲ್ಲಿ &lsquo;Joyalukkas&rsquo; ಬ್ರ್ಯಾಂಡ್&lt;/h2&gt;&lt;p&gt;2000ರ ದಶಕದ ಆರಂಭದಲ್ಲಿ ಕುಟುಂಬದ ವ್ಯವಹಾರ ವಿಭಜನೆಯಾದ ಬಳಿಕ, ಜಾಯ್ ಅಲುಕ್ಕಾಸ್ ಗಲ್ಫ್ ವ್ಯವಹಾರದ ಜವಾಬ್ದಾರಿ ವಹಿಸಿಕೊಂಡರು. ನಂತರ ಭಾರತದಲ್ಲಿ ಸ್ವತಂತ್ರವಾಗಿ ಬ್ರ್ಯಾಂಡ್ ವಿಸ್ತರಿಸುವತ್ತ ಗಮನ ಹರಿಸಿದರು. 2005ರಲ್ಲಿ ವ್ಯವಹಾರಕ್ಕೆ &lsquo;Joyalukkas&rsquo; ಎಂಬ ಹೆಸರನ್ನು ನೀಡಲಾಯಿತು. ಬಳಿಕ ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ಆರಂಭಿಸಿ ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದರು.&lt;/p&gt;&lt;h2&gt;ಫ್ರಾಂಚೈಸಿ ಬದಲು ಸ್ವಂತ ಮಳಿಗೆಗಳ ಮೇಲೆ ಒತ್ತು&lt;/h2&gt;&lt;p&gt;ಭಾರತದ ಜ್ಯುವೆಲ್ಲರಿ ಮಾರುಕಟ್ಟೆ ಕ್ರಮೇಣ ಸಂಘಟಿತವಾಗುತ್ತಿದ್ದ ಸಂದರ್ಭದಲ್ಲಿ ಜಾಯ್ ಅಲುಕ್ಕಾಸ್ ತಮ್ಮದೇ ಆದ ಮಳಿಗೆಗಳನ್ನು ನಡೆಸುವ ಮಾದರಿಯನ್ನು ಆಯ್ಕೆ ಮಾಡಿಕೊಂಡರು. ಇಂದು Joyalukkas ಭಾರತದಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ವಿದೇಶಗಳಲ್ಲಿ ಸುಮಾರು 60 ಮಳಿಗೆಗಳನ್ನು ಹೊಂದಿದೆ. UAE, ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ, ಕತಾರ್, ಬಹ್ರೇನ್, ಕುವೈತ್, ಓಮನ್, ಸಿಂಗಾಪುರ್ ಮತ್ತು ಮಲೇಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಬ್ರ್ಯಾಂಡ್ ತನ್ನ ಅಸ್ತಿತ್ವ ಹೊಂದಿದೆ.&lt;/p&gt;&lt;h2&gt;₹24,439 ಕೋಟಿ ಆದಾಯ, ₹3,367 ಕೋಟಿ ಲಾಭ&lt;/h2&gt;&lt;p&gt;ಜಾಯ್ ಅಲುಕ್ಕಾಸ್ ಅವರ ಕಂಪನಿಯ ಭಾರತೀಯ ವ್ಯವಹಾರವೂ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. Tracxn ಮಾಹಿತಿಯ ಪ್ರಕಾರ, FY26ರಲ್ಲಿ ಭಾರತದ ವ್ಯವಹಾರದ ಆದಾಯ ₹24,439.45 ಕೋಟಿ ತಲುಪಿದೆ. FY25ರಲ್ಲಿ ಇದು ₹20,232.89 ಕೋಟಿಯಾಗಿತ್ತು. ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹3,367 ಕೋಟಿಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಲಾಭ ₹1,690.77 ಕೋಟಿ ಇತ್ತು.&lt;/p&gt;&lt;h2&gt;ಚಿನ್ನದ ವ್ಯಾಪಾರ ಮಾತ್ರವಲ್ಲ&lt;/h2&gt;&lt;p&gt;Joyalukkas Group ತನ್ನ ವ್ಯವಹಾರವನ್ನು ಜ್ಯುವೆಲ್ಲರಿ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿಲ್ಲ. ಮನಿ ಎಕ್ಸ್&zwnj;ಚೇಂಜ್, ಟೆಕ್ಸ್&zwnj;ಟೈಲ್ಸ್, ಮಾಲ್&zwnj;ಗಳು ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲೂ ಗುಂಪು ವಿಸ್ತರಿಸಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/business/meet-joy-alukkas-school-dropout-to-india-richest-jeweller-with-rs-48000-crore-fortune-suh/articleshow-qk1x500"/>
        </item>
        <item>
            <title><![CDATA[VVS ಲಕ್ಷ್ಮಣ್‌ಗೆ ಮತ್ತೊಂದು ದೊಡ್ಡ ಜವಾಬ್ದಾರಿ.. ಬಿಸಿಸಿಐನಲ್ಲಿ ಅತ್ಯುನ್ನತ ಹೊಸ ಹುದ್ದೆ ಸೃಷ್ಟಿಸಿ ಮಹತ್ವದ ಹೊಣೆ]]></title>
            <link>https://kannada.asianetnews.com/cricket-sports/vvs-laxman-director-of-cricket-bcci-creats-new-post-for-laxman-gkn/articleshow-aghbye5</link>
            <guid isPermaLink="true">https://kannada.asianetnews.com/cricket-sports/vvs-laxman-director-of-cricket-bcci-creats-new-post-for-laxman-gkn/articleshow-aghbye5</guid>
            <pubDate>Fri, 14 Aug 2026 16:00:33 +0530</pubDate>
            <description><![CDATA[ಬಿಸಿಸಿಐನಲ್ಲಿ ಬದಲಾವಣೆಯ ಗಾಳಿ ಬೀಸುವ ಮುನ್ಸೂಚನೆ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಬಿಸಿಸಿಐ ‘ಡೈರೆಕ್ಟರ್ ಆಫ್ ಕ್ರಿಕೆಟ್’ ಎಂಬ ಹೊಸ ಹುದ್ದೆಯನ್ನ ಸೃಷ್ಟಿಸಲು ಮುಂದಾಗಿದೆ. ಮೊದಲ ಬಾರಿಗೆ ವಿವಿಎಸ್ ಲಕ್ಷ್ಮಣ್ ಅವರು ಆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅವರ ಕಾರ್ಯವೈಖರಿಗಳು ಈ ಸ್ಟೋರಿಯಲ್ಲಿವೆ..]]></description>
            <media:content url="https://static.asianetnews.com/images/w-1280,h-720,format-jpg,imgid-01jt0wgn19gen6ctfrqksc7pht,imgname-vs-2-1745934111785.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಡಳಿತ ರಚನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಟೀಮ್ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ವಿವಿಎಸ್ ಲಕ್ಷ್ಮಣ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲು ಸಜ್ಜಾಗಿದೆ. ಪ್ರಸ್ತುತ ಬೆಂಗಳೂರಿನ 'ಸೆಂಟರ್ ಆಫ್ ಎಕ್ಸಲೆನ್ಸ್' (CoE) ಮುಖ್ಯಸ್ಥರಾಗಿರುವ ಲಕ್ಷ್ಮಣ್, ಶೀಘ್ರದಲ್ಲೇ ಬಿಸಿಸಿಐನ 'ಡೈರೆಕ್ಟರ್ ಆಫ್ ಕ್ರಿಕೆಟ್' (Director of Cricket) ಆಗಿ ನೇಮಕಗೊಳ್ಳುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಸೆಪ್ಟೆಂಬರ್&zwnj;ನಲ್ಲಿ ಮಹತ್ವದ ಬದಲಾವಣೆ&lt;/strong&gt;&lt;/h2&gt;&lt;p&gt;ಮೂಲಗಳ ಪ್ರಕಾರ, ಸೆಪ್ಟೆಂಬರ್ ತಿಂಗಳಿನಲ್ಲಿ ಬಿಸಿಸಿಐ ಪ್ರಮುಖ ಹುದ್ದೆಗಳ ಮರುಹಂಚಿಕೆ ಮಾಡಲಿದೆ. ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಸೆಪ್ಟೆಂಬರ್&zwnj;ನಲ್ಲಿ ಮುಕ್ತಾಯಗೊಳ್ಳಲಿದ್ದು, ಇದೇ ವೇಳೆ ಲಕ್ಷ್ಮಣ್ ಅವರ ಹೊಸ ಹುದ್ದೆಯ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಡೈರೆಕ್ಟರ್ ಆಫ್ ಕ್ರಿಕೆಟ್ ಹುದ್ದೆ?&lt;/strong&gt;&lt;/h2&gt;&lt;p&gt;ಲಕ್ಷ್ಮಣ್ ಅವರಿಗೆ ನೀಡಲು ಉದ್ದೇಶಿಸಿರುವ ಈ ಹೊಸ ಹುದ್ದೆಯು ಭಾರತೀಯ ಕ್ರಿಕೆಟ್&zwnj;ನ ಸಮಗ್ರ ಕಾರ್ಯಾಚರಣೆಯ ಕೇಂದ್ರಬಿಂದುವಾಗಿರಲಿದೆ. ಇದರ ಪ್ರಮುಖ ಜವಾಬ್ದಾರಿಗಳು ಹೀಗಿರಲಿವೆ.. ಹಿರಿಯ ರಾಷ್ಟ್ರೀಯ ತಂಡ, ಆಯ್ಕೆ ಸಮಿತಿ, ತರಬೇತುದಾರರು ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವುದು. ದೇಶದ ವಿವಿಧ ಹಂತದ ಕ್ರಿಕೆಟ್&zwnj;ನಲ್ಲಿ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು. 2027ರ ಏಕದಿನ ವಿಶ್ವಕಪ್ ಸೇರಿದಂತೆ ಭವಿಷ್ಯದ ದೊಡ್ಡ ಟೂರ್ನಿಗಳಿಗಾಗಿ ತಂಡವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.&lt;/p&gt;&lt;h2&gt;&lt;strong&gt;ಲಕ್ಷ್ಮಣ್ ಆಯ್ಕೆಗೆ ಕಾರಣವೇನು?&lt;/strong&gt;&lt;/h2&gt;&lt;p&gt;ರಾಹುಲ್ ದ್ರಾವಿಡ್ ಅವರ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಮೊದಲು ಕೇಳಿಬಂದ ಹೆಸರು ವಿವಿಎಸ್ ಲಕ್ಷ್ಮಣ್ ಅವರದ್ದು. ಆದರೆ, ಅವರು ಬೆಂಗಳೂರಿನಲ್ಲೇ ಉಳಿದು ಯುವ ಆಟಗಾರರ ಅಭಿವೃದ್ಧಿಗೆ ಶ್ರಮಿಸಲು ಆಸಕ್ತಿ ತೋರಿದ್ದರು. ಇತ್ತೀಚೆಗೆ ಜಿಂಬಾಬ್ವೆ ಪ್ರವಾಸದ ವೇಳೆ ಯುವ ಭಾರತ ತಂಡಕ್ಕೆ ಮಾರ್ಗದರ್ಶನ ನೀಡಿ 3-0 ಅಂತರದ ಜಯ ತಂದುಕೊಟ್ಟಿದ್ದು ಲಕ್ಷ್ಮಣ್ ಅವರ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ಅಗರ್ಕರ್ ಭವಿಷ್ಯವೇನು?&lt;/strong&gt;&lt;/h2&gt;&lt;p&gt;ಒಂದೆಡೆ ಲಕ್ಷ್ಮಣ್ ಅವರಿಗೆ ಬಡ್ತಿ ನೀಡುವ ಮಾತು ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿಯನ್ನು 2027ರ ಜೂನ್ ವರೆಗೆ ವಿಸ್ತರಿಸುವ ಬಗ್ಗೆಯೂ ಬಿಸಿಸಿಐನಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಒಟ್ಟಿನಲ್ಲಿ, ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಲಕ್ಷ್ಮಣ್ ಅವರಿಗೆ 'ಡೈರೆಕ್ಟರ್ ಆಫ್ ಕ್ರಿಕೆಟ್' ಪಟ್ಟ ಕಟ್ಟುವ ಮೂಲಕ ಭಾರತೀಯ ಕ್ರಿಕೆಟ್&zwnj;ನಲ್ಲಿ ಹೊಸ ಯುಗ ಆರಂಭಿಸಲು ಬಿಸಿಸಿಐ ಮುಂದಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/vvs-laxman-director-of-cricket-bcci-creats-new-post-for-laxman-gkn/articleshow-aghbye5"/>
        </item>
        <item>
            <title><![CDATA[Vastu Tips: ಮನೆಗೆ ಮಹಾಲಕ್ಷ್ಮಿ ಈ ಮನಿ ಪ್ಲಾಂಟ್ ಗಿಡಕ್ಕೆ ಪ್ರತಿದಿನ ನೀರು ಹಾಕುವ ದಡ್ಡ ಕೆಲಸ ಮಾಡಬೇಡಿ!]]></title>
            <link>https://kannada.asianetnews.com/vaastu/money-plant-care-tips-dont-pore-water-daily-5-simple-ways-to-grow-money-plant-faster/articleshow-2gb1rcv</link>
            <guid isPermaLink="true">https://kannada.asianetnews.com/vaastu/money-plant-care-tips-dont-pore-water-daily-5-simple-ways-to-grow-money-plant-faster/articleshow-2gb1rcv</guid>
            <pubDate>Fri, 14 Aug 2026 15:59:52 +0530</pubDate>
            <description><![CDATA[ಅನೇಕರ ಮನೆಯಲ್ಲಿ ಎಷ್ಟೇ ಆರೈಕೆ ಮಾಡಿದರೂ ಮನಿ ಪ್ಲಾಂಟ್ ಸರಿಯಾಗಿ ಬೆಳೆಯುವುದಿಲ್ಲ. ಗಿಡವು ದಟ್ಟವಾಗಿ ಮತ್ತು ವೇಗವಾಗಿ ಬೆಳೆಯಲು ಸರಿಯಾದ ಬೆಳಕು, ನಿಯಮಿತ ನೀರು, ಗೊಬ್ಬರ, ಆಸರೆ ಹಾಗೂ ಕಟಿಂಗ್‌ನಂತಹ ಪ್ರಮುಖ ಆರೈಕೆಯ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.]]></description>
            <media:content url="https://static.asianetnews.com/images/w-1280,h-720,format-jpg,imgid-01kfmyhvpaedk3a60ppqdhd68g,imgname-what-is-the-best-day-to-plant-a-money-plant-at-home-which-day-brings-luck-1769155915466.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾಸ್ತು ಪ್ರಕಾರ ಹಾಗೂ ಮನೆಯ ಸೌಂದರ್ಯ ಹೆಚ್ಚಿಸಲು ಪ್ರತಿಯೊಬ್ಬರ ಮನೆಯಲ್ಲೂ 'ಮನಿ ಪ್ಲಾಂಟ್' (Money Plant) ಇದ್ದೇ ಇರುತ್ತದೆ. ಮನೆಗೆ ಮಹಾಲಕ್ಷ್ಮಿಯ ಸಂಕೇತ ಎಂದೇ ಪರಿಗಣಿಸಲ್ಪಡುವ ಈ ಗಿಡವನ್ನು ಬೆಳೆಸುವುದು ತುಂಬಾ ಸುಲಭ. ಆದರೆ, ಹಲವರ ಮನೆಯಲ್ಲಿ ಎಷ್ಟೇ ನೀರು ಹಾಕಿದರೂ, ಎಷ್ಟೇ ಆರೈಕೆ ಮಾಡಿದರೂ ಮನಿ ಪ್ಲಾಂಟ್ ಬೆಳೆಯುವುದೇ ಇಲ್ಲ. ಎಲೆಗಳು ಸಣ್ಣದಾಗಿಯೇ ಉಳಿಯುತ್ತವೆ ಅಥವಾ ಬಲಿಷ್ಠವಾಗುವುದಿಲ್ಲ.&lt;/p&gt;&lt;p&gt;ನಿಮ್ಮ ಮನೆಯಲ್ಲೂ ಮನಿ ಪ್ಲಾಂಟ್ ಬೆಳವಣಿಗೆ ನಿಂತು ಹೋಗಿದ್ದರೆ, ಅದಕ್ಕೆ ಪ್ರತಿದಿನ ಅತಿಯಾಗಿ ನೀರು ಹಾಕುವುದು ಪರಿಹಾರವಲ್ಲ! ಗಿಡ ಹಸುವಾಗಿ, ದಟ್ಟವಾಗಿ ಮತ್ತು ವೇಗವಾಗಿ ಬೆಳೆಯಲು ನೀವು ಅನುಸರಿಸಬೇಕಾದ ಪ್ರಮುಖ ಮನೆಮದ್ದುಗಳು ಹಾಗೂ ನಿಯಮಗಳು ಇಲ್ಲಿವೆ:&lt;/p&gt;&lt;h2&gt;&lt;strong&gt;1. ಅತಿಯಾದ ಬಿಸಿಲಿನಿಂದ ರಕ್ಷಿಸಿ, ಬೆಳಕಿರುವ ಜಾಗದಲ್ಲಿಡಿ&lt;/strong&gt;&lt;/h2&gt;&lt;p&gt;ಮನಿ ಪ್ಲಾಂಟ್&zwnj;ಗೆ ಉತ್ತಮ ಬೆಳಕು ಅಗತ್ಯ. ಆದರೆ ಅದನ್ನು ನೇರ ಹಾಗೂ ಪ್ರಖರವಾದ ಬಿಸಿಲಿನಲ್ಲಿಟ್ಟರೆ ಎಲೆಗಳು ಸುಟ್ಟುಹೋಗುತ್ತವೆ. ಕಿಟಕಿಯ ಬಳಿ ಹಗುರವಾದ ಬೆಳಕು ಬರುವ ಜಾಗದಲ್ಲಿ ಇಡುವುದು ಸೂಕ್ತ. ತೀರಾ ಕತ್ತಲಿರುವ ಜಾಗದಲ್ಲಿಟ್ಟರೆ ಎಲೆಗಳು ಸಣ್ಣದಾಗುತ್ತವೆ ಮತ್ತು ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.&lt;/p&gt;&lt;h2&gt;&lt;strong&gt;2. ಪ್ರತಿದಿನ ನೀರು ಹಾಕುವ ತಪ್ಪು ಮಾಡಬೇಡಿ!&lt;/strong&gt;&lt;/h2&gt;&lt;p&gt;ಮನಿ ಪ್ಲಾಂಟ್&zwnj;ಗೆ ಪ್ರತಿದಿನ ನೀರು ಹಾಕುವ ಅಗತ್ಯವಿಲ್ಲ. ಅತಿಯಾದ ನೀರು ಮಣ್ಣನ್ನು ಸದಾ ತೇವವಾಗಿಟ್ಟು, ಗಿಡದ ಬೇರುಗಳನ್ನು ಕೊಳೆಯುವಂತೆ ಮಾಡುತ್ತದೆ. ಮಣ್ಣಿನ ಮೇಲ್ಪದರ ಒಣಗಿದಂತೆ ಅನಿಸಿದಾಗ ಮಾತ್ರ ನೀರು ಹಾಕಿ. ಅಲ್ಲದೆ, ಕುಂಡದಲ್ಲಿ (Pot) ಹೆಚ್ಚುವರಿ ನೀರು ಹೊರಹೋಗಲು ತೂತು (Drainage Hole) ಇದೆಯೇ ಎಂದು ಖಚಿತಪಡಿಸಿಕೊಳ್ಳಿ.&lt;/p&gt;&lt;h2&gt;&lt;strong&gt;3. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಗೊಬ್ಬರ ನೀಡಿ&lt;/strong&gt;&lt;/h2&gt;&lt;p&gt;ಗಿಡದ ಬೆಳವಣಿಗೆ ನಿಧಾನವಾಗಿದ್ದರೆ ಕಾಲಕಾಲಕ್ಕೆ ಸೂಕ್ತ ಸಾವಯವ ಗೊಬ್ಬರ ನೀಡುವುದು ಒಳ್ಳೆಯದು. ಆದರೆ ಅತಿಯಾಗಿ ಗೊಬ್ಬರ ಹಾಕುವುದು ಕೂಡ ಅಪಾಯಕಾರಿ. ಕಡಿಮೆ ಪ್ರಮಾಣದಲ್ಲಿ ಗೊಬ್ಬರ ನೀಡಿ, ಗಿಡದ ಬೆಳವಣಿಗೆಯನ್ನು ಗಮನಿಸಿ. ಕುಂಡದ ಅಡಿಯಲ್ಲಿ ಬೇರುಗಳು ಹೊರಬರುತ್ತಿದ್ದರೆ ಅಥವಾ ಕುಂಡ ಪೂರ್ತಿ ಬೇರುಗಳಿಂದ ತುಂಬಿದ್ದರೆ, ಗಿಡವನ್ನು ಕೊಂಚ ದೊಡ್ಡ ಕುಂಡಕ್ಕೆ ವರ್ಗಾಯಿಸಿ. ಬೇರುಗಳು ಹರಡಲು ಜಾಗ ಸಿಕ್ಕಾಗ ಮಾತ್ರ ಗಿಡ ವೇಗವಾಗಿ ಬೆಳೆಯುತ್ತದೆ.&lt;/p&gt;&lt;h2&gt;&lt;strong&gt;4. ಬಳ್ಳಿಗೆ ಮೇಲ್ಮುಖವಾಗಿ ಬೆಳೆಯಲು ಆಸರೆ ನೀಡಿ&lt;/strong&gt;&lt;/h2&gt;&lt;p&gt;ಮನಿ ಪ್ಲಾಂಟ್ ಮೇಲೆ ಹತ್ತುವ ಬಳ್ಳಿ ಗಿಡ. ಹೀಗಾಗಿ ಬಳ್ಳಿಗೆ ಮೇಲಕ್ಕೆ ಏರಲು ಮಾಸ್ ಪೋಲ್ (Moss Pole) ಅಥವಾ ತೆಂಗಿನ ನಾರಿನ ಕಡ್ಡಿಯ (Coir Pole) ಆಸರೆ ನೀಡಿ. ಹೀಗೆ ಮಾಡುವುದರಿಂದ ಗಿಡದ ಎಲೆಗಳು ದೊಡ್ಡದಾಗಿ, ದಟ್ಟವಾಗಿ ಹಾಗೂ ಸುಂದರವಾಗಿ ಕಾಣಿಸುತ್ತವೆ. ಜೊತೆಗೆ, ಮನಿ ಪ್ಲಾಂಟ್&zwnj;ಗೆ ತೀರಾ ತಂಪಾದ ವಾತಾವರಣ ಒಗ್ಗುವುದಿಲ್ಲ. ಆದ್ದರಿಂದ ಎಸಿ (Air Conditioner) ಯಿಂದ ಬರುವ ನೇರ ಗಾಳಿ ಅಥವಾ ತಂಪಾದ ಗಾಳಿ ಬೀಸುವ ಕಿಟಕಿಗಳ ಬಳಿ ಈ ಗಿಡವನ್ನು ಇಡಬೇಡಿ. ಸಾಮಾನ್ಯ ಕೊಠಡಿಯ ತಾಪಮಾನ ಇದರ ಬೆಳವಣಿಗೆಗೆ ಉತ್ತಮ.&lt;/p&gt;&lt;h2&gt;&lt;strong&gt;5. ಹಳೆಯ ಹಾಗೂ ಬಲಹೀನ ಬಳ್ಳಿಗಳ ಕಟಿಂಗ್ (Pruning) ಮಾಡಿ&lt;/strong&gt;&lt;/h2&gt;&lt;p&gt;ಬಳ್ಳಿ ತುಂಬಾ ಉದ್ದವಾಗಿ ಬೆಳೆದು ಎಲೆಗಳು ಕಡಿಮೆಯಾಗಿದ್ದರೆ, ಅಂತಹ ಸಣ್ಣ ಬಳ್ಳಿಗಳನ್ನು ಕತ್ತರಿಸಿ. ಹೀಗೆ ಮಾಡುವುದರಿಂದ ಗಿಡದಲ್ಲಿ ಹೊಸ ಚಿಗುರುಗಳು ಒಡೆಯಲು ಜಾಗ ಸಿಗುತ್ತದೆ. ಕತ್ತರಿಸಿದ ಬಳ್ಳಿಯನ್ನು ನೀರು ಅಥವಾ ಮಣ್ಣಿನಲ್ಲಿಟ್ಟು ಹೊಸ ಗಿಡವನ್ನಾಗಿಯೂ ಬೆಳೆಸಬಹುದು.&lt;/p&gt;&lt;p&gt;ನೆನಪಿರಲಿ: ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯಲು ಕೇವಲ ನೀರು ಸಾಕಾಗುವುದಿಲ್ಲ. ಸರಿಯಾದ ಬೆಳಕು, ತಕ್ಕಮಟ್ಟಿನ ನೀರು, ಉತ್ತಮ ಗಾಳಿ ಹಾಗೂ ಸರಿಯಾದ ಆರೈಕೆ ಅಗತ್ಯ. ಈ 5 ಟಿಪ್ಸ್ ಪಾಲಿಸಿ ನೋಡಿ, ನಿಮ್ಮ ಮನೆಯ ಮನಿ ಪ್ಲಾಂಟ್ ಕೆಲವೇ ದಿನಗಳಲ್ಲಿ ಕಂಗೊಳಿಸಲಾರಂಭಿಸುತ್ತದೆ!&lt;/p&gt;]]></content:encoded>
            <category><![CDATA[vaastu]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/vaastu/money-plant-care-tips-dont-pore-water-daily-5-simple-ways-to-grow-money-plant-faster/articleshow-2gb1rcv"/>
        </item>
        <item>
            <title><![CDATA[ಕುಕ್ಕರ್ ತಳಭಾಗದಲ್ಲಿ ಸೀದ ಕಲೆಯಿದ್ರೆ ಉಜ್ಜೋದು ಬೇಡ, ಈ ರೀತಿ ನೆನೆಸಿಟ್ಟು ಸ್ಕ್ರಬ್ ಮಾಡಿದ್ರೆ ಈಸಿಯಾಗಿ ಕ್ಲೀನ್ ಆಗುತ್ತೆ]]></title>
            <link>https://kannada.asianetnews.com/gallery/kitchen/simple-steps-to-clean-cooker-whistle-and-rubber-cvswf5s</link>
            <guid isPermaLink="true">https://kannada.asianetnews.com/gallery/kitchen/simple-steps-to-clean-cooker-whistle-and-rubber-cvswf5s</guid>
            <pubDate>Fri, 14 Aug 2026 15:55:10 +0530</pubDate>
            <description><![CDATA[Pressure cooker cleaning: ಅಡುಗೆ ಮಾಡುವಾಗ ಕುಕ್ಕರ್ ತಳ ಹಿಡಿದು ಕಪ್ಪಾಗುವುದು ಸಾಮಾನ್ಯ ಸಮಸ್ಯೆ. ಗಂಟೆಗಟ್ಟಲೆ ಉಜ್ಜಿದರೂ ಈ ಕಲೆಗಳು ಹೋಗುವುದಿಲ್ಲ ಎಂದು ಚಿಂತೆ ಮಾಡುತ್ತಿದ್ದರೆ ಈ ಸುಲಭ ಮನೆಮದ್ದನ್ನು ಅನುಸರಿಸಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzwn4x7a71f1c5x2pr771nw,imgname-thumbnail---2026-08-14t154632.793-1786702893989.jpg" type="image/jpeg" height="390" width="690"/>
            <content:encoded><![CDATA[&lt;p&gt;Pressure cooker cleaning: ಅಡುಗೆ ಮಾಡುವಾಗ ಕುಕ್ಕರ್ ತಳ ಹಿಡಿದು ಕಪ್ಪಾಗುವುದು ಸಾಮಾನ್ಯ ಸಮಸ್ಯೆ. ಗಂಟೆಗಟ್ಟಲೆ ಉಜ್ಜಿದರೂ ಈ ಕಲೆಗಳು ಹೋಗುವುದಿಲ್ಲ ಎಂದು ಚಿಂತೆ ಮಾಡುತ್ತಿದ್ದರೆ ಈ ಸುಲಭ ಮನೆಮದ್ದನ್ನು ಅನುಸರಿಸಿ.&lt;/p&gt;&lt;img&gt;&lt;p&gt;&lt;strong&gt;ಗಂಟೆಗಟ್ಟಲೆ ಉಜ್ಜಬೇಡಿ&lt;/strong&gt;ಅಡುಗೆ ಮಾಡುವಾಗ ಅವಸರದಲ್ಲಿ ಅಥವಾ ಗಮನ ಕೊಡದಿದ್ದಾಗ ಕುಕ್ಕರ್ ತಳ ಸೀದು ಹೋಗುವುದು ಸಾಮಾನ್ಯ. ಆಗ ಸೀದ ಭಾಗದಲ್ಲಿನ ಕಪ್ಪು ಕಲೆಗಳನ್ನು ತೆಗೆಯಲು ಗಂಟೆಗಟ್ಟಲೆ ಉಜ್ಜೋದು ಬೇಡ. ಮನೆಯಲ್ಲಿರುವ ಕೆಲವು ಸರಳ ಪದಾರ್ಥಗಳನ್ನು ಬಳಸಿ ಕುಕ್ಕರ್ ಅನ್ನು ಹೊಸದರಂತೆ ಹೊಳೆಯುವಂತೆ ಮಾಡಬಹುದು.&lt;/p&gt;&lt;img&gt;&lt;p&gt;&lt;strong&gt;ನೀವು ಮಾಡಬೇಕಾಗಿರುವುದು ಇಷ್ಟೇ..&lt;/strong&gt;ಕುಕ್ಕರ್ ಒಳಗಿನ ಕಪ್ಪು ಪದರವನ್ನು ಹೋಗಲಾಡಿಸಲು ಮೊದಲು ಕುಕ್ಕರ್&zwnj;ನ ಸೀಟಿ (Whistle) ಮತ್ತು ರಬ್ಬರ್ ಅನ್ನು ಬೇರ್ಪಡಿಸಿ. ಈಗ ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದಕ್ಕೆ ಅರ್ಧ ಚಮಚ ಚಹಾ ಪುಡಿ (Tea powder) ಹಾಕಿ ಚೆನ್ನಾಗಿ ಕುದಿಸಿ. ನಂತರ ಆ ನೀರನ್ನು ಸೋಸಿಕೊಂಡು, ಸೋಸಿಕೊಂಡ ನೀರಿಗೆ ಸ್ವಲ್ಪ ಡಿಶ್ ವಾಶ್ ಲಿಕ್ವಿಡ್ ಅಥವಾ ಶಾಂಪೂ ಮತ್ತು ಒಂದು ದೊಡ್ಡ ಚಮಚ ಬೇಕಿಂಗ್ ಪೌಡರ್ ಬೆರೆಸಿ ಮಿಶ್ರಣ ತಯಾರಿಸಿ. ಈಗ ಕುಕ್ಕರ್ ಅನ್ನು ಸ್ವಲ್ಪ ಬಿಸಿ ಮಾಡಿ. ಬಿಸಿಯಾದ ತಕ್ಷಣ ಸ್ಟೌವ್ ಆಫ್ ಮಾಡಿ ಅಥವಾ ಕುಕ್ಕರ್ ಅನ್ನು ಕೆಳಗೆ ಇಳಿಸಿ.&lt;/p&gt;&lt;p&gt;ಈ ಮಿಶ್ರಣವನ್ನು ಒಳಗಡೆ ಹಾಕಿ ಎಲ್ಲಾ ಕಡೆ ಹರಡುವಂತೆ ಸುತ್ತಿಸಿ. ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ಸ್ಕ್ರಬ್ಬರ್&zwnj;ನಿಂದ ಉಜ್ಜಿದರೆ ಸೀದ ಕಲೆಗಳು ಸುಲಭವಾಗಿ ಬಿಟ್ಟುಕೊಳ್ಳುತ್ತವೆ.&lt;/p&gt;&lt;img&gt;&lt;p&gt;&lt;strong&gt;ಸೀಟಿ, ರಬ್ಬರ್ ತೊಳೆಯೋದನ್ನು ಮರೆಯದಿರಿ&lt;/strong&gt;ಕುಕ್ಕರ್ ಸೀಟಿಯನ್ನು ಸಹ ಸ್ವಚ್ಛಗೊಳಿಸುವುದು ಸುರಕ್ಷತೆಯ ದೃಷ್ಟಿಯಿಂದ ಬಹಳ ಮುಖ್ಯ. ಸೀಟಿಯಲ್ಲಿ ಆಹಾರದ ಕಣಗಳು ಸಿಲುಕಿಕೊಂಡರೆ ಪ್ರೆಶರ್ ಸರಿಯಾಗಿ ಬಿಡುಗಡೆಯಾಗದೆ ಅಪಾಯ ಸಂಭವಿಸಬಹುದು. ಆದ್ದರಿಂದ ಬಿಸಿ ನೀರಿಗೆ ಡಿಶ್ ವಾಶ್ ಲಿಕ್ವಿಡ್ ಮತ್ತು ಬೇಕಿಂಗ್ ಸೋಡಾ ಹಾಕಿ ಸೀಟಿಯನ್ನು ಅದರಲ್ಲಿ ಸ್ವಲ್ಪ ಸಮಯ ನೆನೆಸಿಡಿ. ನಂತರ ಹಳೆಯ ಟೂತ್&zwnj;ಬ್ರಷ್ ಬಳಸಿ ಅದರ ಒಳಗಿನ ಕೊಳೆಯನ್ನು ಸ್ವಚ್ಛಗೊಳಿಸಿ. ಹಾಗೆಯೇ ಕುಕ್ಕರ್ ರಬ್ಬರ್ ಅನ್ನು ಸಹ ಡಿಶ್ ವಾಶ್ ಲಿಕ್ವಿಡ್ ನೀರಿನಲ್ಲಿ ನೆನೆಸಿ ಬ್ರಷ್&zwnj;ನಿಂದ ಉಜ್ಜುವುದರಿಂದ ಅದರ ಅಂಚಿನಲ್ಲಿ ಅಂಟಿಕೊಂಡಿರುವ ಜಿಡ್ಡು ಮತ್ತು ಕೊಳೆ ದೂರವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಬಳಸಿದ ತಕ್ಷಣ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ&lt;/strong&gt;ಸೀದ ಕಲೆಗಳನ್ನು ತೆಗೆಯಲು ತುಂಬಾ ಬಲವಾಗಿ ಉಜ್ಜುವ ಅಗತ್ಯವಿಲ್ಲ. ಸೀದ ಪದರವನ್ನು ಮೊದಲು ಬಿಸಿ ನೀರಿನ ಕ್ಲೀನಿಂಗ್ ಮಿಶ್ರಣದಲ್ಲಿ ನೆನೆಸಿದರೆ ಅದು ಮೆತ್ತಗಾಗುತ್ತದೆ, ಆಗ ಸುಲಭವಾಗಿ ಸ್ಕ್ರಬ್ಬರ್ ಮೂಲಕ ತೆಗೆಯಬಹುದು. ಕುಕ್ಕರ್ ಬಳಸಿದ ತಕ್ಷಣ ಅದನ್ನು ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಸೀದ ಕಲೆಗಳು ಕಂಡ ತಕ್ಷಣ ಈ ಮನೆಮದ್ದನ್ನು ಅನುಸರಿಸಿದರೆ ಕುಕ್ಕರ್ ಹೆಚ್ಚು ಕಾಲ ಹೊಳೆಯುತ್ತಿರುತ್ತದೆ ಮತ್ತು ಅದರ ಕಾರ್ಯಕ್ಷಮತೆಯೂ ಉತ್ತಮವಾಗಿರುತ್ತದೆ.&lt;/p&gt;]]></content:encoded>
            <category><![CDATA[kitchen]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/simple-steps-to-clean-cooker-whistle-and-rubber-cvswf5s"/>
        </item>
        <item>
            <title><![CDATA[ಮೊದಲ ಗಡಿಯಾರ ತಯಾರಿಸಿದವನಿಗೆ ಸಮಯ ಗೊತ್ತಾಗಿದ್ದು ಹೇಗೆ? ಇತಿಹಾಸದ ರೋಚಕ ಅಧ್ಯಾಯ]]></title>
            <link>https://kannada.asianetnews.com/science/how-did-first-clockmaker-know-the-time-an-interesting-chapter-from-history/articleshow-ekdgpbm</link>
            <guid isPermaLink="true">https://kannada.asianetnews.com/science/how-did-first-clockmaker-know-the-time-an-interesting-chapter-from-history/articleshow-ekdgpbm</guid>
            <pubDate>Fri, 14 Aug 2026 15:52:28 +0530</pubDate>
            <description><![CDATA[ಮೊದಲು ಗಡಿಯಾರ ತಯಾರಿಸಿ ಟೈಮ್ ಸೆಟ್ ಮಾಡಿದ್ದು ಹೇಗೆ? ಗಡಿಯಾರ ತಯಾರಿಸುವ ಮೊದಲು ಸಮಯ ಅಳೆಯುತ್ತಿದ್ದದ್ದು ಹೇಗೆ? ಗಡಿಯಾರಕ್ಕೆ ಮುಳ್ಳುಗಳನ್ನೇ ಇಟ್ಟಿದ್ದು ಯಾಕೆ? ರೋಚಕ ಅಧ್ಯಾಯದ ಡಿಟೇಲ್ಸ್]]></description>
            <media:content url="https://static.asianetnews.com/images/w-1280,h-720,format-jpg,imgid-01kk8jpykzm90raab7hjjgyc7x,imgname-us-clock-fall-back-1773035813503.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೊದಲ ಗಡಿಯಾರ ತಯಾರಿಸಿದ ವ್ಯಕ್ತಿಗೆ ಸಮಯ ಸೆಟ್ ಮಾಡಿದ್ದು ಹೇಗೆ? ಊಹೆ, ತನಗಿಷ್ಟ ಬಂದ ಸಮಯವನ್ನು ಸೆಟ್ ಮಾಡಿ ಇದೇ ಸರಿಯಾದ ಸಮಯ ಎಂದು ಹೇಳಲಿಲ್ಲ. ಮೊದಲ ಗಡಿಯಾರದಲ್ಲಿ ನಿಖರವಾದ ಸಮಯ ಸೆಟ್ ಮಾಡಲಾಗಿತ್ತು. ಹಾಗಂತ ಗಡಿಯಾರ ಬರುವುದಕ್ಕೂ ಮೊದಲು ಸಮಯವೇ ಇರಲಿಲ್ಲ ಎಂದಲ್ಲ. ಆಗಲೂ ಜನ ಸಮಯ ನೋಡುತ್ತಿದ್ದರು, ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು.&lt;/p&gt;&lt;p&gt;ಭಾರತೀಯರಿಗೆ ಸಮಯ ಅಳೆಯಲು ತಿಳಿದಿತ್ತು. ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ಭೂಮಿ ಮೇಲೆ ಮಾತ್ರವಲ್ಲ, ಗೃಹಗಳ ಸಮಯವನ್ನು, ದೂರವನ್ನು ನಿಖರವಾಗಿ ಹೇಳಿದ್ದರು. ದುರಾದೃಷ್ಠವಶಾತ್ ನಮ್ಮ ಮೇಲಿನ ದಾಳಿಯಲ್ಲಿ ನಮ್ಮ ದಾಖಲೆಗಳು ನಶಿಸಿ ಹೋಗಿತ್ತು. ಇನ್ನು ಬ್ರಟಿಷರಾಗಲಿ, ದಾಳಿಕೋರರಾಗಲಿ ಭಾರತವನ್ನು ನಿಕೃಷ್ಠವಾಗಿ ತೋರಿಸಿದರೆ ಹೊರತು ಅಸಲಿ ಜ್ಞಾನ ಸಂಪತ್ತನ್ನು ಹೇಳಲೇ ಇಲ್ಲ. ಹೀಗಾಗಿ ಗಡಿಯಾರ, ಸಮಯ ವಿಚಾರದ ಇತಿಹಾಸದಲ್ಲಿ ಭಾರತದ ಉಲ್ಲೇಖವಿಲ್ಲ. ಸೂರ್ಯನ ಚಲನೆಯನ್ನು ವೀಕ್ಷಿಸಿ ಸಮಯ ಹೇಳುತ್ತಿದ್ದರು. ಅಂದು ಪ್ರತಿ ನಿಮಿಷ, ಗಂಟೆಗಳು ಇರಲಿಲ್ಲ. ಬೆಳಗ್ಗೆ , ಮಧ್ಯಾಹ್ನ, ಸಂಜೆ ಹಾಗೂ ರಾತ್ರಿಯಾಗಿ ವಿಂಗಡಿಸಲಾಗಿತ್ತು.&lt;/p&gt;&lt;h2&gt;ಸಮಯ ನೋಡುವ ಪರಿ, ಗಡಿಯಾರ ಅಭಿವೃದ್ಧಿ&lt;/h2&gt;&lt;p&gt;ಭೂಮಿ ಮೇಲೆ ಒಂದು ವಸ್ತವನ್ನುಟ್ಟು, ಕೋಲನ್ನಿಟ್ಟು ಅದರ ನೆರಳು ಭೂಮಿ ಮೇಲೆ ಹೇಗೆ ಬೀಳುತ್ತದೆ ಎಂಬುದು ಅಧರಿಸಿ ಸಮಯ ನಿಗದಿ ಮಾಡಲಾಗಿತ್ತು. ಕ್ರಿ.ಪೂ 1500ಕ್ಕೂ ಮೊದಲು ಈಜಿಪ್ಟ್&zwnj;ನಲ್ಲಿ ಸೂರ್ಯಗಡಿಯಾರಗಳು ಬಳಕೆಯಲ್ಲಿತ್ತು ಎಂಬ ಉಲ್ಲೇಖವಿದೆ. ನೀರು ಹರಿಸಿ ಅದರ ವೇಗದ ಮೂಲಕ ಸಮಯವನ್ನು ಅಳೆಯಲಾಗುತ್ತಿತ್ತು. ನಕ್ಷತ್ರಗಳು, ಸೂರ್ಯ ಚಂದ್ರನ ಚಲನೆ ಮೂಲಕವೂ ಸಮಯ ನೋಡಲಾಗುತ್ತಿತ್ತು. ಮೊದಲ ಮೆಕಾನಿಕಲ್ ಗಡಿಯಾರವನ್ನು 1092ರಲ್ಲಿ ಚೀನಾದ ವಿಜ್ಞಾನಿ ಸು ಸಾಂಗ್ ನಿರ್ಮಿಸಿದ ಅನ್ನೋ ಉಲ್ಲೇಖವಿದೆ. ಆದರೆ ಸಂಪೂರ್ಣ ಯಾಂತ್ರಿಕ ಗಡಿಯಾರ ಕ್ರಿ.ಶ 1283ರಲ್ಲಿ ಇಂಗ್ಲೆಂಡ್&zwnj;ನಲ್ಲಿ ನಿರ್ಮಾಣಗೊಂಡಿತ್ತು.&lt;/p&gt;&lt;p&gt;ಹಳೇ ಪದ್ಧತಿಗಳಲ್ಲಿ ನಿಖರವಾಗಿ ಸಮಯ ಹೇಳಲಾಗುತ್ತಿತ್ತು. ಪ್ರಮುಖವಾಗಿ ಸೂರ್ಯನ ಬೆಳಕಿನ ಮೂಲಕ. ಆದರೆ ತೀವ್ರ ಮಳೆಗಾಲದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಗಡಿಯಾರ ತಯಾರಿಸುವ ಮೊದಲು ವಿಜ್ಞಾನಿಗಳು ಸೂರ್ಯನ ಬೆಳಕಿನ ಮೂಲಕ ಅಳೆಯುವ ವಿದ್ಯೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಮೆಕಾನಿಕಲ್ ಗಡಿಯಾರಗಳನ್ನು ತಯಾರಿಸಲಾಗಿತ್ತು. ಆರಂಭದಲ್ಲಿ ಸೆಕೆಂಡ್, ನಿಮಿಷಗಳು ಇರಲಿಲ್ಲ. ನಿಖರ ಸಮಯ ಇಲ್ಲದಿದ್ದರೂ ಆಯಾ ಪ್ರದೇಶಕ್ಕ ಅನುಗುಣವಾದ ಸಮಯ ಹೇಳಲಾಗುತ್ತಿತ್ತು. ಇಂಗ್ಲೆಂಡ್&zwnj;ನ 'ಸಾಲಿಸ್&zwnj;ಬರಿ ಕ್ಯಾಥೆಡ್ರಲ್ ಗಡಿಯಾರ ಇಂದಿಗೂ ಕಾರ್ಯನಿರ್ವಹಿಸುತ್ತಿದೆ. ಇದು ಅತ್ಯಂತ ಹಳೇ ಗಡಿಯಾರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.&lt;/p&gt;&lt;h2&gt;ಸೋಲಾರ್ ನೂನ್&lt;/h2&gt;&lt;p&gt;ಸೂರ್ಯನ ಬೆಳಕು ಹರಿಯುತ್ತಿದ್ದಂತೆ ಬೆಳಗ್ಗೆ ಎಂದು ಗುರುತಿಸಲಾಗಿತ್ತು. ಆದರೆ ಮಧ್ಯಾಹ್ನ ಗುರುತಿಸುವುದು ಕಷ್ಟವಾಗಿತ್ತು. ಹೀಗಾಗಿ ಸೋಲಾರ್ ನೂನ್ ಅಂದರೆ ಸೂರ್ಯ ನೆತ್ತನ ಮೇಲೆ ಬರುವಾಗ ಸೋಲಾರ್ ನೂನ್ ಎಂದು ಗುರುತಿಸಲಾಗಿತ್ತು. ಇದಕ್ಕೆ ಅನುಗುಣವಾಗಿ ಗಡಿಯಾರದ ಸಮಯ ಸೆಟ್ ಮಾಡಲಾಗಿತ್ತು. ಮೊದಲ ಗಡಿಯಾರಕ್ಕೆ ಸಮಯ ಹೊಂದಿಸಿದ ವ್ಯಕ್ತಿ ಎಂಬುದಕ್ಕೆ ನಿಖರ ಉತ್ತರವಿಲ್ಲ.&lt;/p&gt;&lt;p&gt;ಡಚ್ ವಿಜ್ಞಾನಿ ಕ್ರಿಸ್ಟಿಯನ್ ಹೈಜೆನ್ಸ್ 1656ರಲ್ಲಿ ಪೆಂಡುಲಮ್ ಗಡಿಯಾರ ಅಭಿವೃದ್ಧಿ ಪಡಿಸಿದ್ದರು. ತೂಗಾಟದ ಮೂಲಕ ಗಡಿಯಾರದ ಮುಳ್ಳುಗಳು ತಿರುಗುವ ತಂತ್ರಜ್ಞಾನ ಬಳಸಲಾಯಿು. ಈಗಲೂ ಹಲವರ ಮನೆಯಲ್ಲಿ ಈ ತೂಗುವ ಹಾಗೂ ಶಬ್ದ ಮಾಡುವ ಗಡಿಯಾರ ಕಾಣಸಿಗುತ್ತದೆ. ಬ್ಯಾಲೆನ್ಸ್ ವ್ಹೀಲ್ ತಂತ್ರಜ್ಞಾನ ಮೂಲಕ ಗಡಿಯಾದ ಗಾತ್ರಗಳು ಚಿಕ್ಕದಾಗಲು ಆರಂಭಿಸಿತು. 16ನೇ ಶತಮಾನದ ವೇಳೆ ಗಡಿಯಾರ ನಿಖರ ಸ್ವರೂಪ, ನಿಖರ ಸಮಯ ಹೇಳುವ ಅಮೂಲ್ಯ ವಸ್ತುಗಳಾಗಿತ್ತು.&lt;/p&gt;]]></content:encoded>
            <category><![CDATA[science]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/science/how-did-first-clockmaker-know-the-time-an-interesting-chapter-from-history/articleshow-ekdgpbm"/>
        </item>
        <item>
            <title><![CDATA[ನೆಕ್ಲೇಸ್ ಡಿಸೈನ್ಸ್: ಮದುವೆಯ ಕಳೆ ಹೆಚ್ಚಿಸುವ ಅದ್ಭುತ ಟ್ರೆಂಡಿ ನೆಕ್ಲೇಸ್‌ಗಳಿವು]]></title>
            <link>https://kannada.asianetnews.com/webstories/fashion/latest-bridal-necklace-designs-for-the-wedding-season-kvn-0br81gm</link>
            <guid isPermaLink="true">https://kannada.asianetnews.com/webstories/fashion/latest-bridal-necklace-designs-for-the-wedding-season-kvn-0br81gm</guid>
            <pubDate>Fri, 14 Aug 2026 15:42:37 +0530</pubDate>
            <description><![CDATA[ಮುಂದೆ ಹಬ್ಬ ಮತ್ತು ಮದುವೆ ಸೀಸನ್ ಬರುತ್ತಿದೆ. ಈ ಸಂದರ್ಭಗಳಲ್ಲಿ ನೀವು ಸುಂದರವಾಗಿ ಮಿಂಚಬೇಕೆಂದರೆ, ಈ ನೆಕ್ಲೇಸ್ ವಿನ್ಯಾಸಗಳನ್ನು ಖಂಡಿತವಾಗಿಯೂ ಧರಿಸಬೇಕು. ಅಂತಹ ಕೆಲವು ನೆಕ್ಲೇಸ್ ವಿನ್ಯಾಸಗಳನ್ನು ಈಗ ನೋಡೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzqw551nmdx30bndgc597pd,imgname-whatsapp-image-2026-08-14-at-2.16.15-pm--2--1786697880737.jpeg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-bridal-necklace-designs-for-the-wedding-season-kvn-0br81gm"/>
        </item>
        <item>
            <title><![CDATA[ಬೆಂಗಳೂರಲ್ಲಿ ನೆಲೆಸಿರುವ ರಷ್ಯಾ ಮಹಿಳೆಯಿಂದ ಮನೆಕೆಲಸದಾಕೆಯ ಬರ್ತಡೇ ಆಚರಣೆ, ಜೀವನದ ಮೊದಲ ಕೇಕ್ ನೋಡಿ ಆಕೆ ಕಣ್ಣಿರು!]]></title>
            <link>https://kannada.asianetnews.com/viral/viral-video-russian-expat-yana-surprises-nanny-savita-on-first-birthday-cake-at-40-in-bengaluru-wins-internet-gdp/articleshow-tenwfys</link>
            <guid isPermaLink="true">https://kannada.asianetnews.com/viral/viral-video-russian-expat-yana-surprises-nanny-savita-on-first-birthday-cake-at-40-in-bengaluru-wins-internet-gdp/articleshow-tenwfys</guid>
            <pubDate>Fri, 14 Aug 2026 15:36:29 +0530</pubDate>
            <description><![CDATA[ಬೆಂಗಳೂರಿನಲ್ಲಿ ವಾಸಿಸುವ ರಷ್ಯಾ ಮೂಲದ ಯಾನಾ, ತಮ್ಮ ಮನೆಗೆಲಸದವರಾದ ಸವಿತಾ ಅವರ 40ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಕೇಕ್ ಕಂಡ ಸವಿತಾ ಭಾವುಕರಾದ ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾನಾ ಅವರ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzvje82v0ge5m9njf6e16y1,imgname-russian-expat-yana-surprises-nanny-savita-1786701756674.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಸಣ್ಣ ಯೋಚನೆಗಳು, ಒಳ್ಳೆಯ ಕೆಲಸ ಕಾರ್ಯಗಳು ಮನುಷ್ಯನ ಮನಸ್ಸನ್ನು ಎಷ್ಟು ಆಳವಾಗಿ ಮುಟ್ಟಬಲ್ಲವು ಎಂಬುದಕ್ಕೆ ಸಾಕ್ಷಿಯಾಗಿರುವ ಅತ್ಯಂತ ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಕಣ್ಣಾಲಿಗಳಲ್ಲಿ ನೀರು ತರಿಸಿದೆ..&lt;/p&gt;&lt;p&gt;ಬೆಂಗಳೂರಿನಲ್ಲಿ ವಾಸಿಸುತ್ತಿರುವ ರಷ್ಯಾ ಮೂಲದ ಯಾನಾ (Yana) ಎಂಬ ಮಹಿಳೆ, ತಮ್ಮ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಮನೆಕೆಲಸದವಳಾಗಿ ಸೇವೆ ಸಲ್ಲಿಸುತ್ತಿರುವ ಸವಿತಾ ಎಂಬುವವರ 40ನೇ ವರ್ಷದ ಹುಟ್ಟುಹಬ್ಬವನ್ನು ಪ್ರೀತಿಯಿಂದ ಆಚರಿಸಿ ಗೌರವಿಸಿದ್ದಾರೆ.&lt;/p&gt;&lt;h2&gt;ಜೀವಮಾನದ ಮೊದಲ ಕೇಕ್ ನೋಡಿ ಭಾವುಕರಾದ ಸವಿತಾ&lt;/h2&gt;&lt;p&gt;ಸಾಮಾಜಿಕ ಜಾಲತಾಣ ಇನ್&zwnj;ಸ್ಟಾಗ್ರಾಮ್&zwnj;ನ ತಮ್ಮ @yana.in.india ಖಾತೆಯಲ್ಲಿ ಯಾನಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ ಯಾನಾ ಅವರು '40' ಎಂದು ಬರೆದಿರುವ ಹುಟ್ಟುಹಬ್ಬದ ಮೇಣದಬತ್ತಿಗಳನ್ನು ಕೇಕ್ ಮೇಲೆ ಜೋಡಿಸುವುದು ಕಾಣಿಸುತ್ತದೆ. ಬಾಗಿಲಿನ ಗಂಟೆ ಬಾರಿಸಿದ ತಕ್ಷಣ ಯಾನಾ ಅವರ ಪುತ್ರಿ ಬಾಗಿಲು ತೆರೆಯುತ್ತಾಳೆ. ಕೈಯಲ್ಲಿ ಕೇಕ್ ಹಿಡಿದು ಮುಂಭಾಗಕ್ಕೆ ಬರುವ ಯಾನಾ, ಸವಿತಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ.&lt;/p&gt;&lt;p&gt;ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ತಮಗಾಗಿ ಕೇಕ್ ತಂದು ಹುಟ್ಟುಹಬ್ಬ ಆಚರಿಸುತ್ತಿರುವುದನ್ನು ಕಂಡ ಸವಿತಾ, ತಕ್ಷಣವೇ ಭಾವುಕರಾಗಿ ಯಾನಾ ಅವರನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ. ಕಣ್ಣಲ್ಲಿನ ಆನಂದಬಾಷ್ಪವನ್ನು ಒರೆಸಿಕೊಳ್ಳುತ್ತಾ, ದುಪಟ್ಟಾದಿಂದ ಮುಖ ಒರೆಸಿಕೊಂಡು ಮೇಣದಬತ್ತಿಯನ್ನು ಊದುತ್ತಾರೆ. ನಂತರ ಯಾನಾ ಮತ್ತು ಅವರ ಪುತ್ರಿಯನ್ನು ಪ್ರೀತಿಯಿಂದ ಅಪ್ಪಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಾರೆ.&lt;/p&gt;&lt;h2&gt;ಭಾರತ ನಮ್ಮ ಹೃದಯ : ಯಾನಾ&lt;/h2&gt;&lt;p&gt;ಸವಿತಾ ಕಳೆದ ಎರಡು ವರ್ಷಗಳಿಂದ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಕುಟುಂಬದ ಸದಸ್ಯರಂತೆಯೇ ಇದ್ದಾರೆ. ನನ್ನ ಮಗಳು ಹುಟ್ಟಿದ್ದು ಕೂಡ ಬೆಂಗಳೂರಿನಲ್ಲೇ, ಭಾರತ ಎಂದಿಗೂ ನಮ್ಮ ಹೃದಯಕ್ಕೆ ಹತ್ತಿರವಾದ ದೇಶ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸವಿತಾ ಅವರು ತಮ್ಮ ಕೆಲಸದ ವಾತಾವರಣ ಮತ್ತು ಈ ರೀತಿಯ ಪ್ರೀತಿ ಸಿಕ್ಕಿದ್ದಕ್ಕೆ ಅತ್ಯಂತ ಧನ್ಯತೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಯಾನ ಕಂಟೆಂಟ್&zwnj; ಕ್ರಿಯೇಟರ್ ಆಗಿದ್ದು, ಭಾರತೀಯ ಆಹಾರ, ಉಡುಗಡ ತೊಡುಗೆ, ಹಬ್ಬಗಳ ಬಗ್ಗೆ ಅಪಾರ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ ಭಾರತವೆಂದರೆ ಯಾಕಿಷ್ಟ ಎಂದು ಹಲವು ವಿಡಿಯೋಗಳು ಕೂಡ ಅವರ ಖಾತೆಗೆ ಹೋದರೆ ಕಾಣಲು ಸಿಗುತ್ತದೆ.&lt;/p&gt;&lt;h2&gt;ನೆಟ್ಟಿಗರ ಮೆಚ್ಚುಗೆ&lt;/h2&gt;&lt;p&gt;ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಯಾನಾ ಅವರ ಸರಳತೆ ಮತ್ತು ದಯನೀಯ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.&lt;/p&gt;&lt;p&gt;&quot;ಅವರ ಜೀವನದಲ್ಲಿ ಬಹುಶಃ ಯಾರೂ ಅವರಿಗಾಗಿ ಹೀಗೆ ಮಾಡಿರಲಿಕ್ಕಿಲ್ಲ. ಮೊದಲ ಬಾರಿಗೆ ಅವರು ತಮ್ಮ ಶ್ರಮಕ್ಕೆ ಗೌರವ ಮತ್ತು ಗುರುತಿಸುವಿಕೆ ಪಡೆದಂತೆ ಕಾಣುತ್ತಿದೆ. ಈ ವಿಡಿಯೋ ನೋಡಿ ನನ್ನ ಕಣ್ಣಲ್ಲೂ ನೀರು ಬಂತು&quot; ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;&quot;ನೀವು ನಿಜಕ್ಕೂ ದೊಡ್ಡ ಕೆಲಸ ಮಾಡಿದ್ದೀರಿ. ನಿಮ್ಮಿಂದ ನಾವೆಲ್ಲರೂ ಕಲಿಯಬೇಕಾದದ್ದು ಬಹಳಷ್ಟಿದೆ. ಇಂತಹ ಜನರಿಂದಾಗಿಯೇ ಜಗತ್ತು ಇನ್ನೂ ಸುಂದರವಾಗಿದೆ&quot; ಎಂದು ಮತ್ತೊಬ್ಬರು ಬರೆದಿದ್ದಾರೆ.&lt;/p&gt;&lt;p&gt;&quot;ಅಧಿಕಾರ ಮತ್ತು ಹಣದ ಗರ್ವ ತೋರಿಸುವ ಈ ಕಾಲದಲ್ಲಿ, ದಯೆ ಮತ್ತು ಪ್ರೀತಿಯನ್ನು ಆಯ್ಕೆ ಮಾಡಿಕೊಂಡ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ&quot; ಎಂದು ಹಲವರು ಹಾರೈಸಿದ್ದಾರೆ.&lt;/p&gt;&lt;p&gt;ಒಟ್ಟಿನಲ್ಲಿ, ಜಾತಿ, ದೇಶ, ಅಂತಸ್ತುಗಳ ಹಂಗಿಲ್ಲದೆ ಪ್ರೀತಿ ಮತ್ತು ಗೌರವ ನೀಡಿದರೆ ಜಗತ್ತು ಎಷ್ಟು ಸುಂದರವಾಗುತ್ತದೆ ಎಂಬುದಕ್ಕೆ ಈ ಸಣ್ಣ ಘಟನೆಯೇ ಸಾಕ್ಷಿಯಾಗಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Gowthami K</dc:creator>
            <atom:link href="https://kannada.asianetnews.com/viral/viral-video-russian-expat-yana-surprises-nanny-savita-on-first-birthday-cake-at-40-in-bengaluru-wins-internet-gdp/articleshow-tenwfys"/>
        </item>
        <item>
            <title><![CDATA[ತಿಂಗಳಿಗೆ 2 ಲಕ್ಷ ರೂ ಸ್ಯಾಲರಿ ವರನನ್ನೇ ರಿಜೆಕ್ಟ್ ಮಾಡಿದ ಬೆಂಗಳೂರು ಬೆಡಗಿ, ಕಾರಣ ಏನು?]]></title>
            <link>https://kannada.asianetnews.com/relationship/bengaluru-woman-turns-down-groom-earning-rs-2-lakh-a-month-reason-will-surprise-you/articleshow-nvcmhu4</link>
            <guid isPermaLink="true">https://kannada.asianetnews.com/relationship/bengaluru-woman-turns-down-groom-earning-rs-2-lakh-a-month-reason-will-surprise-you/articleshow-nvcmhu4</guid>
            <pubDate>Fri, 14 Aug 2026 15:05:44 +0530</pubDate>
            <description><![CDATA[ತಿಂಗಳಿಗೆ 90 ಸಾವಿರ ದುಡಿಯುತ್ತಿದ್ದ ಐಟಿ ಯುವತಿಗೆ ಮದುವೆ ಪ್ರಪೋಸಲ್ ಬಂದಿದೆ. ಯವಕನ ಸ್ಯಾಲರಿ ತಿಂಗಳಿಗೆ 2 ಲಕ್ಷ ರೂಪಾಯಿ. ಆದರೆ ನೇರವಾಗಿ ಆತನ ಮುಂದೆ ಈ ಪ್ರಪೋಸಲ್ ತಿರಸ್ಕರಿಸಿದ್ದಾಳೆ. ಎಷ್ಟಕ್ಕು ಕಾರಣವೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01kzzt0sj7n7z8cye1xk52669f,imgname-bengaluru-woman-rejects-rs-2-lakh-monthly-salary-groom-1786700129863.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14) &lt;/strong&gt;ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ಯುವತಿ ತನಗೆ ಬಂದ ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿದ ಘಟನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾಳೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಪಡೆಯುತ್ತಿರುವ ಹುಡಗನ ಪ್ರಪೋಸಲನ್ನು ನೇರವಾಗಿ ತಿರಸ್ಕರಿಸಿದ್ದಾಳೆ. ತನಗಿಂತ ಡಬಲ್ ಆದಾಯ ಪಡೆಯುತ್ತಿದ್ದರೂ ಈ ಮದುವೆ ಬೇಡ ಎಂದಿದ್ದಾಳೆ. ಪ್ರಪೋಸಲ್ ರಿಜೆಕ್ಟ್ ಕುರಿತು ಯುವತಿ ವಿವರವಾಗಿ ಹೇಳಿಕೊಂಡಿದ್ದಾಳೆ.&lt;/p&gt;&lt;h2&gt;ಯುವತಿಗೆ ಬಂತು ಮದುವೆ ಪ್ರಪೋಸಲ್&lt;/h2&gt;&lt;p&gt;ಮ್ಯಾಟ್ರಿಮೋನಿ ಮೂಲಕ ಯುವತಿ ಫ್ರೊಫೈಲ್&zwnj;&zwnj;ಗೆ ಮದುವೆ ಪ್ರಪೋಸಲ್ ಬಂದಿತ್ತು. ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿಗೆ ಹುಡುಗನ ಜೊತೆ ಮಾತನಾಡುವಂತೆ ತಾಯಿ ಸೂಚಿಸಿದ್ದರು. ಹುಡುಗನ ಕುಟುಂಬ, ಕಂಪನಿ ಕೆಲಸ ಸೇರಿದಂತೆ ಹಲವು ಮಾಹಿತಿಗಳನ್ನು ಯುವತಿ ಕುಟುಂಬ ಕಲೆ ಹಾಕಿ ಒಕೆ ಮಾಡಿತ್ತು. ಮಗಳು ಹುಡುಗನ ಜೊತೆ ಮಾತನಾಡಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕುಟುಂಬ ನಿರ್ಧರಿಸಿತ್ತು. ಇದರಂತೆ ಹುಡುಗನ ಜೊತೆ ಮಾತನಾಡಲು ಯುವತಿ ಕೂಡ ಒಕೆ ಎಂದಿದ್ದಳು.&lt;/p&gt;&lt;h2&gt;ಇಬ್ಬರು ಭೇಟಿಯಲ್ಲಿ ಬಿಗ್ ಟ್ವಿಸ್ಟ್&lt;/h2&gt;&lt;p&gt;ಯುವತಿ ಹಾಗೂ ಹುಡುಗ ಇಬ್ಬರು ರೆಸ್ಟೋರೆಂಟ್&zwnj;ನಲ್ಲಿ ಭೇಟಿಯಾಗಿದ್ದಾರೆ. ಹುಡಗನಿಗೆ ತಿಂಗಳಿಗೆ 2 ಲಕ್ಷ ರೂಪಾಯಿ ವೇತನವಿತ್ತು. ಯುವತಿಗೆ ತಿಂಗಳಿಗೆ 90 ಸಾವಿರ ರೂಪಾಯಿ ವೇತನ. ಮಾತುಕತೆಯಲ್ಲಿ ಹುಡುಗ ತನ್ನ ಕುಟುಂಬ, ಪೋಷಕರು ಸೇರಿದಂತೆ ಇತರ ಮಾಹಿತಿಗಳನ್ನು ನೀಡಿದ್ದಾನೆ. ಪೋಷಕರನ್ನು ನೋಡಿಕೊಳ್ಳುತ್ತಿದ್ದೇನೆ. ಮದುವೆಯಾದ ಬಳಿಕ ನೀನು ಕೆಲಸ ಬಿಟ್ಟು ನನ್ನ ಕುಟುಂಬದ ಜವಾಬ್ದಾರಿ ನೀಡಬೇಕು ಎಂದು ಸೂಚಿಸಿದ್ದಾನೆ. ಈ ಮಾತಿನಿಂದ ಯುವತಿ ನಿರ್ಧಾರವೇ ಬದಲಾಗಿದೆ.&lt;/p&gt;&lt;p&gt;ಈ ಮಾತು ಹೇಳುತ್ತಿದ್ದಂತೆ ಯುವತಿ ಮದುವೆಯಾಗುವ ನಿರ್ಧಾರ ಬದಲಾಯಿಸಿದ್ದಾರೆ. 2 ಲಕ್ಷ ಅಲ್ಲಾ 2 ಕೋಟಿ ರೂಪಾಯಿ ಸಂಬಳ ಇದ್ದರೂ ಈ ಮದುವೆಗೆ ನಾನು ಒಪ್ಪಲ್ಲ ಎಂದು ನೇರವಾಗಿ ಹೇಳಿದ್ದಾಳೆ. ಯುವಕನ ಸಾಂಪ್ರದಾಯಿಕ ಹಾಗೂ ನಿಯಂತ್ರಾಣಾತ್ಮ ಮನಸ್ಥಿತಿಯನ್ನು ಯುವತಿ ವಿರೋಧಿಸಿದ್ದಾಳೆ. ನನ್ನ ಸ್ವಾವಲಂಬನೆ ಹಾಗೂ ವೃತ್ತಿ ಜೀವನದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲು ನಾನು ಬಿಡುವುದಿಲ್ಲ. ಅದನ್ನು ಯಾರ ಬಳಿ ಅಡವಿಡುವುದಿಲ್ಲ. ವೈಯುಕ್ತಿಕ ಗೌರವ, ದುಡಿದು ಸಂಪಾದಿಸುವ ನನ್ನ ಆರ್ಥಿಕ ಸ್ವಾತಂತ್ರ್ಯ ನನಗೆ ಮುಖ್ಯ ಎಂದು ಯುವಕನ ಪ್ರಪೋಸಲ್ ನಯವಾಗಿ ತಿರಸ್ಕರಿಸಿದ್ದಾಳೆ.&lt;/p&gt;&lt;p&gt;ಮನೆ, ಕುಟುಂಬ, ಪೋಷಕರು ಸೇರಿದಂತೆ ಸಂಪೂರ್ಣ ಕುಟುಂಬ ಜವಾಬ್ದಾರಿ ನೋಡಿಕೊಳ್ಳುವ ಹುಡುಗಿ ಬೇಕಿದ್ದರೆ ಆ ರೀತಿ ಆಸಕ್ತಿ ಇರುವ ಯುವತಿಯರನ್ನು ಮದುವೆಯಾಗಿ. ಆದರೆ ಸ್ವಾವಲಂಬಿಯಾಗಿರುವ ಹೆಣ್ಣನ್ನು ಮದುವೆಯಾಗಿ ಅವಲಂಬಿಯಾಗಿ ಮಾಡುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿ ಮಾತುಕತೆ ಮುಗಿಸಿ ಹೊರನಡೆದಿದ್ದಾಳೆ. ಯುವತಿ ಮಾತುಗಳು ಇದೀಗ ಭಾರಿ ಚರ್ಚೆಯಾಗುತ್ತಿದೆ. ಹಲವರು ಯುವತಿ ಮಾತಿಗೆ ಮೆಚ್ಚುಗೆ ವ್ಯಕ್ತಪಡಸಿದ್ದಾರೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/relationship/bengaluru-woman-turns-down-groom-earning-rs-2-lakh-a-month-reason-will-surprise-you/articleshow-nvcmhu4"/>
        </item>
        <item>
            <title><![CDATA['ನಾನೇನೇ ದುಡಿದರೂ, ಹೆಸರು ಸಂಪಾದನೆ ಮಾಡಿದ್ರು.. ಎಲ್ಲವೂ ಕನ್ನಡಿಗರ ಭಿಕ್ಷೆ..' ಹೀಗ್ಯಾಕಂದ್ರು ಅಕುಲ್‌ ಬಾಲಾಜಿ]]></title>
            <link>https://kannada.asianetnews.com/tv-talk/akul-balaji-emotional-statement-kannadigas-bhikshe-interview-san/articleshow-yn5m5m1</link>
            <guid isPermaLink="true">https://kannada.asianetnews.com/tv-talk/akul-balaji-emotional-statement-kannadigas-bhikshe-interview-san/articleshow-yn5m5m1</guid>
            <pubDate>Fri, 14 Aug 2026 15:02:09 +0530</pubDate>
            <description><![CDATA[ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ, ಯೂಟ್ಯೂಬ್ ಸಂದರ್ಶನವೊಂದರಲ್ಲಿ ತಮ್ಮ ಯಶಸ್ಸಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಆಂಧ್ರದಿಂದ ಬಂದ ತಮ್ಮನ್ನು ಕನ್ನಡಿಗರು ಬೆಳೆಸಿದ್ದು, ತಾನು ಗಳಿಸಿದ್ದೆಲ್ಲವೂ ಕನ್ನಡಿಗರು ನೀಡಿದ ಭಿಕ್ಷೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzsrajq1sxgvdfgbjzk2x1x,imgname-akul-balaji-on-kannada-1786699852375.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ನಿರೂಪಣೆಯಿಂದ ಕನ್ನಡಿಗರ ಮನಗೆದ್ದಿರುವ ಸ್ಟಾರ್&zwnj; ನಿರೂಪಕ ಅಕುಲ್&zwnj; ಬಾಲಾಜಿ, ತಮ್ಮ ಆರಂಭಿಕ ದಿನಗಳ ನಟನಾ ಪಯಣ ಹಾಗೂ ಕನ್ನಡಿಗರು ತಮ್ಮ ಮೇಲಿಟ್ಟಿರುವ ಪ್ರೀತಿಯ ಕುರಿತು ಯೂಟ್ಯೂಬ್&zwnj; ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡದ ಜನಪ್ರಿಯ ನಿರೂಪಕರ ಸಾಲಿನಲ್ಲಿ ನಟಿ ಅನುಶ್ರೀ ಅವರ ಜೊತೆಗೆ ಪ್ರಮುಖವಾಗಿ ಕೇಳಿಬರುವ ಹೆಸರೇ ಅಕುಲ್ ಬಾಲಾಜಿ. ಸದ್ಯ 'ಹಳ್ಳಿ ಪವರ್' ಎನ್ನುವ ಬಿಗ್ ರಿಯಾಲಿಟಿ ಶೋನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅಕುಲ್, 'ಬಿಗ್ ಬಾಸ್ ಕನ್ನಡ'ದ ಮಾಜಿ ಸ್ಪರ್ಧಿಯೂ ಹೌದು. ಇಂದು ಕೇವಲ ನಿರೂಪಕರಾಗಿ ಗುರುತಿಸಿಕೊಂಡಿರುವ ಇವರು, ಆರಂಭದಲ್ಲಿ ಬೆಳ್ಳಿ ತೆರೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಮೂರು ಸಿನಿಮಾಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಹಾಗೂ ಹಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಆಂಧ್ರದಿಂದ ಬಂದ ಹುಡುಗನನ್ನು ಬೆಳೆಸಿದ್ದು ಕನ್ನಡಿಗರು!&lt;/strong&gt;&lt;/h2&gt;&lt;p&gt;ತಮ್ಮ ಬೆಳವಣಿಗೆಯ ಕುರಿತು ಅತ್ಯಂತ ವಿನಮ್ರವಾಗಿ ಮಾತನಾಡಿದ ಅಕುಲ್, ನಾನು ಆಂಧ್ರದಿಂದ ಬಂದ ಹುಡುಗ. ನನ್ನನ್ನು ಬೆಳೆಸಿದ್ದು ಕನ್ನಡಿಗರು ಎಂಬ ಮಾತು ಶೇ. 100ರಷ್ಟು ನಿಜ. ನಾನು ಇಲ್ಲಿ ಏನೇ ಹೆಸರು, ಹಣ ಸಂಪಾದನೆ ಮಾಡಿದ್ದರೂ ಅದು ಕನ್ನಡಿಗರು ನೀಡಿದ ಭಿಕ್ಷೆ ಎಂದು ಭಾವುಕರಾಗಿದ್ದಾರೆ.&lt;/p&gt;&lt;p&gt;ತಮ್ಮ ಈ ಮಾತನ್ನು ಸ್ಪಷ್ಟಪಡಿಸುತ್ತಾ, ನಾವು ಕಷ್ಟದಲ್ಲಿದ್ದಾಗ ಅಥವಾ ತುಂಬಾ ನೋವಿನಲ್ಲಿದ್ದಾಗ ಯಾರಾದರೂ ಬಂದು ಸಹಾಯ ಮಾಡಿದರೆ ಅವರನ್ನು ಜೀವನಪೂರ್ತಿ ನೆನಪಿಸಿಕೊಳ್ಳುತ್ತೇವೆ. ಹಾಗೆಯೇ ನಾನು ಏನೂ ಇಲ್ಲದೆ ಕಷ್ಟದಲ್ಲಿದ್ದಾಗ ಕನ್ನಡ ತಾಯಿ ನನ್ನ ಸಹಾಯಕ್ಕೆ ಬಂದು ತನ್ನ ಮಡಿಲಲ್ಲಿ ಬೆಳೆಸಿದ್ದಾರೆ. ಅದಕ್ಕಾಗಿಯೇ ನನಗೆ ಕನ್ನಡ ಮತ್ತು ಕನ್ನಡಿಗರು ಎಂದರೆ ಅಷ್ಟೊಂದು ಪ್ರೀತಿ ಮತ್ತು ಗೌರವ,&quot; ಎಂದು ಕನ್ನಡ ನಾಡಿನ ಮೇಲಿರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ತುಂಬಾ ಜನ ಹೇಳಬಹುದು, ಏನು ಬರೀ ಡವ್&zwnj; ಮಾಡ್ತಾನೆ ಅಂತಾ. ಆದರೆ, ನನಗೆ ಅದರಲ್ಲಿ ಬೇಸರವೇ ಇಲ್ಲ. ತುಂಬಾ ನೋವಲ್ಲಿ ಇದ್ದಾಗ ಯಾರೋ ಒಬ್ಬರು ನಿಮ್ಮ ಸಹಾಯಕ್ಕೆ ಬರ್ತಾರೆ. ಅವರನ್ನು ನೀವು ಜೀವನ ಪೂರ್ತಿ ನೆನಪಿಸಿಕೊಳ್ಳುತ್ತೀರಿ ತಾನೆ. ಅದೇ ರೀತಿ ನನಗೆ ಕರ್ನಾಟಕ. ಅದೇ ಕಾರಣಕ್ಕೆ ಕನ್ನಡಿಗರು ಅಂದರೆ ನನಗೆ ಪ್ರೀತಿ. ಇಷ್ಟು ಭಿಕ್ಷೆ ಕೊಟ್ಟ ಮೇಲೆ ಅದನ್ನ ವಾಪಾಸ್&zwnj; ಕೇಳುವ ಹಾಗಿಲ್ಲ. ಒಂದು ಸತಿ ಭಿಕ್ಷೆ ಕೊಟ್ಟ ಮೇಲೆ ಮುಗಿಯಿತು. ಮತ್ತೆ ಅದನ್ನು ಕೇಳುವ ಹಾಗಿಲ್ಲ. ಅಷ್ಟೊಂದು ಪ್ರೀತಿಯನ್ನು ಇಲ್ಲಿನ ಜನ ನೀಡಿದ್ದಾರೆ ಎಂದಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/akul-balaji-emotional-statement-kannadigas-bhikshe-interview-san/articleshow-yn5m5m1"/>
        </item>
        <item>
            <title><![CDATA[ಹಸೆಮಣೆ ಏರಲು ಸಜ್ಜಾದ ವಿಶ್ವವಿಖ್ಯಾತ 'ಮಂಕಿಮ್ಯಾನ್' ಜ್ಯೋತಿರಾಜ್: ಸಾಹಸಿಯನ್ನ ವರಿಸೋ ವಧು ಯಾರು ಗೊತ್ತಾ?]]></title>
            <link>https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg</link>
            <guid isPermaLink="true">https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg</guid>
            <pubDate>Fri, 14 Aug 2026 15:01:36 +0530</pubDate>
            <description><![CDATA[ವಿಶ್ವವಿಖ್ಯಾತ ಸಾಹಸಿ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ನಿವೇದಿತಾ ಎಂಬುವವರನ್ನು ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗದಲ್ಲಿ ವಿವಾಹವಾಗಲಿದ್ದಾರೆ. ಜ್ಯೋತಿರಾಜ್ ಅವರ ಸಾಹಸಮಯ ವೃತ್ತಿಯನ್ನು ಮೆಚ್ಚಿ ನಿವೇದಿತಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzs083newwtkyktnwj2fpxd,imgname-monkey-man-jyothi-raj-marriage-chitradurga-1786699063413.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಶ್ವವಿಖ್ಯಾತ ಸಾಹಸಿ ಜ್ಯೋತಿರಾಜ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಳ್ಳಕೆರೆ ತಾಲೂಕಿನ ನಿವೇದಿತಾ ಎಂಬುವವರನ್ನು ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗದಲ್ಲಿ ವಿವಾಹವಾಗಲಿದ್ದಾರೆ. ಜ್ಯೋತಿರಾಜ್ ಅವರ ಸಾಹಸಮಯ ವೃತ್ತಿಯನ್ನು ಮೆಚ್ಚಿ ನಿವೇದಿತಾ ಈ ಮದುವೆಗೆ ಒಪ್ಪಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಚಿತ್ರದುರ್ಗ (ಆ.14): ಬರಿಗೈಯಲ್ಲೇ ಎತ್ತರದ ಕೋಟೆಗಳು, ಕಡಿದಾದ ಬಂಡೆಗಳು ಹಾಗೂ ಜಲಪಾತಗಳನ್ನು ಹತ್ತಿ ಪ್ರಪಂಚದಾದ್ಯಂತ 'ಸ್ಪೈಡರ್ ಮ್ಯಾನ್', 'ಮಂಕಿಮ್ಯಾನ್' ಎಂದೇ ಖ್ಯಾತಿ ಪಡೆದಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಶೀಘ್ರದಲ್ಲೇ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಚಿತ್ರದುರ್ಗದ ಈ ಸಾಹಸಿಗನ ಮದುವೆ ದಿನಾಂಕ ಹಾಗೂ ವಧುವಿನ ವಿವರಗಳು ಈಗ ಅಧಿಕೃತವಾಗಿ ಹೊರಬಿದ್ದಿದ್ದು, ಆಗಸ್ಟ್ 22 ಮತ್ತು 23ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಯಾರೀ ವಧು ನಿವೇದಿತಾ?&lt;/strong&gt;&lt;/p&gt;&lt;p&gt;ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ 'ದೊಡ್ಡ ಉಳ್ಳಾರ್ತಿ' ಗ್ರಾಮದ ನಿವಾಸಿಯಾಗಿರುವ ಪದವೀಧರೆ ನಿವೇದಿತಾ ಅವರ ಜೊತೆ ಜ್ಯೋತಿರಾಜ್ ಮದುವೆ ನಿಶ್ಚಯವಾಗಿದೆ. ನಿವೇದಿತಾ ಅವರು ಜ್ಯೋತಿರಾಜ್ ಅವರಿಗಿಂತ 10 ವರ್ಷ ಚಿಕ್ಕವರಾಗಿದ್ದಾರೆ. ಸಾಹಸ ಕ್ರೀಡೆಯನ್ನೇ ವೃತ್ತಿಯಾಗಿಸಿಕೊಂಡು ಜೀವವನ್ನೇ ಪಣಕ್ಕಿಟ್ಟು ಸಾಧನೆ ಮಾಡುತ್ತಿರುವ ಜ್ಯೋತಿರಾಜ್ ಅವರ ವ್ಯಕ್ತಿತ್ವ ಹಾಗೂ ವೃತ್ತಿಯನ್ನು ಮೆಚ್ಚಿ ನಿವೇದಿತಾ ಮದುವೆಗೆ ಸಮ್ಮತಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಚಿತ್ರದುರ್ಗದಲ್ಲೇ ಮದುವೆ!&lt;/strong&gt;&lt;/p&gt;&lt;p&gt;ಜ್ಯೋತಿರಾಜ್ ಅವರ ಕುಟುಂಬಸ್ಥರು ತಮಿಳುನಾಡಿನಲ್ಲಿ ಮದುವೆ ಮಾಡುವಂತೆ ಸಲಹೆ ನೀಡಿದ್ದರು. ಆದರೆ 'ನಾನು ಕರ್ನಾಟಕದಲ್ಲಿ ಬೆಳೆದ ಕನ್ನಡಿಗ, ನನ್ನ ಸಾಧನೆಗೆ ಹೆಗಲು ನೀಡಿದ ಕೋಟೆಗಳ ನಗರಿ ಚಿತ್ರದುರ್ಗದಲ್ಲೇ ಮದುವೆಯಾಗುತ್ತೇನೆ' ಎಂದು ಜ್ಯೋತಿರಾಜ್ ಪಟ್ಟು ಹಿಡಿದು ಒಪ್ಪಿಸಿದ್ದಾರೆ. ಅದರಂತೆ ಆಗಸ್ಟ್ 22 ಮತ್ತು 23 ರಂದು ಚಿತ್ರದುರ್ಗ ನಗರದ 'ವೈಭವ ಗಾರ್ಡನ್' ನಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ನೆರವೇರಲಿದೆ.&lt;/p&gt;&lt;img&gt;&lt;p&gt;&lt;strong&gt;ಸಾಹಸ ವೃತ್ತಿಯ ಸವಾಲು ಹಾಗೂ ಮುರಿದುಬಿದ್ದಿದ್ದ ಮದುವೆ&lt;/strong&gt;&lt;/p&gt;&lt;p&gt;ಕೆಲವು ವರ್ಷಗಳ ಹಿಂದೆ ಜ್ಯೋತಿರಾಜ್ ಅವರ ಮದುವೆ ನಿಶ್ಚಯವಾಗಿ, ನಂತರ ಮುರಿದುಬಿದ್ದಿತ್ತು. ಅವರು ಮಾಡುತ್ತಿದ್ದ ಅಪಾಯಕಾರಿ ರಾಕ್ ಕ್ಲೈಂಬಿಂಗ್ ಸಾಹಸ ವೃತ್ತಿಯ ಹಿನ್ನೆಲೆಯಲ್ಲಿ ಹಿಂದಿನ ಮದುವೆ ಸಂಬಂಧ ಕೈತಪ್ಪಿತ್ತು. ಆದರೆ ಈಗ ನಿವೇದಿತಾ ಅವರು ಈ ಸಾಹಸ ವೃತ್ತಿಯನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. &quot;ಮದುವೆಯ ನಂತರ ಹೆಂಡತಿ-ಕುಟುಂಬದ ಜವಾಬ್ದಾರಿ ಇರುವುದರಿಂದ ಸಾಹಸ ಪ್ರದರ್ಶನಗಳ ವೇಳೆ ಇನ್ನಷ್ಟು ಎಚ್ಚರಿಕೆ ವಹಿಸುತ್ತೇನೆ&quot; ಎಂದು ಜ್ಯೋತಿರಾಜ್ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೌಂಡರಿ ದಾಟಿದ ಸಾಧಕ&lt;/strong&gt;&lt;/p&gt;&lt;p&gt;ಜ್ಯೋತಿರಾಜ್ ಕೇವಲ ಕೋಟೆ ಹತ್ತುವ ಸಾಹಸಿಗ ಮಾತ್ರವಲ್ಲ. ಒಡಿಶಾ ರಾಜ್ಯದ 'ಸಾಹಸ ಕ್ರೀಡೆಗಳ ರಾಯಭಾರಿ'ಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾರ್ವಜನಿಕ ಚುನಾವಣೆಗಳ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಮತದಾನದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಜೀವನಾಧಾರಿತ ಕಥೆಯನ್ನು ಆಧರಿಸಿ ಕನ್ನಡದಲ್ಲಿ 'ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್' ಎಂಬ ಚಲನಚಿತ್ರವೂ ನಿರ್ಮಾಣವಾಗಿ ತೆರೆಕಂಡಿತ್ತು.&lt;/p&gt;&lt;p&gt;ಚಿತ್ರದುರ್ಗದ ಕಲ್ಲಿನ ಕೋಟೆಗೆ ವಿಶ್ವಮಟ್ಟದಲ್ಲಿ ಹೆಸರು ತಂದುಕೊಟ್ಟ ಈ ಅಪ್ರತಿಮ ಸಾಹಸಿಯ ಮದುವೆಗೆ ಹಲವು ರಾಜಕೀಯ ಧುರೀಣರು, ಸಾಮಾಜಿಕ ಮುಖಂಡರು ಹಾಗೂ ಗಣ್ಯರು ನೆರವಿನ ಹಸ್ತ ಚಾಚಿದ್ದು, ಶುಭ ಹಾರೈಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/karnataka-chitradurga-world-famous-monkeyman-jyothiraj-alias-kothiraj-gets-married-to-niveditha-r943lrg"/>
        </item>
        <item>
            <title><![CDATA['35ಕ್ಕೇ ಕೆಲಸಕ್ಕೆ ಗುಡ್‌ಬೈ': ಬೆಂಗಳೂರು ಟೆಕ್ಕಿ ಇಟ್ಟ ಷರತ್ತು ಕೇಳಿ ಹುಡುಗಿಯರು ಶಾಕ್; ಹೆಂಡತಿಗೆ ಇಷ್ಟಿರಬೇಕು ಸಂಬಳ]]></title>
            <link>https://kannada.asianetnews.com/viral/27-year-old-bengaluru-techie-wants-to-quit-it-at-35-with-2-5-crore-but-marriage-changes-the-math/articleshow-dvtbhn3</link>
            <guid isPermaLink="true">https://kannada.asianetnews.com/viral/27-year-old-bengaluru-techie-wants-to-quit-it-at-35-with-2-5-crore-but-marriage-changes-the-math/articleshow-dvtbhn3</guid>
            <pubDate>Fri, 14 Aug 2026 08:00:13 +0530</pubDate>
            <description><![CDATA[27ರ ಬೆಂಗಳೂರಿನ ಟೆಕ್ಕಿಯೊಬ್ಬರು 35ರೊಳಗೆ ₹2.5 ಕೋಟಿ ಸಂಪತ್ತು ನಿರ್ಮಿಸಿ IT ಉದ್ಯೋಗ ತೊರೆದು ಸಿನಿಮಾ ನಿರ್ಮಾಣಕ್ಕೆ ಹೋಗಲು ಬಯಸಿದ್ದಾರೆ. ₹20 ಲಕ್ಷ ಉಳಿತಾಯ ಹೊಂದಿರುವ ಅವರು ತಿಂಗಳಿಗೆ ₹1.25 ಲಕ್ಷ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಮದುವೆ, ಮಕ್ಕಳು ಮತ್ತು ಬೆಂಗಳೂರಿನ ಜೀವನ ವೆಚ್ಚದ ಲೆಕ್ಕಾಚಾರದಿಂದ ₹2.5 ಕೋಟಿ ಸಾಕೇ ಎಂಬ ಪ್ರಶ್ನೆ ಎದುರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzsm7r82sb5enq1psm0j62b,imgname-bengaluru-techie-s-viral-reddit-post--1--1786699718407.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು ಮೂಲದ 27 ವರ್ಷದ ಐಟಿ ವೃತ್ತಿಪರರೊಬ್ಬರು 35ನೇ ವಯಸ್ಸಿನಲ್ಲೇ ಕಾರ್ಪೊರೇಟ್ ಉದ್ಯೋಗ ತೊರೆದು ಚಲನಚಿತ್ರ ನಿರ್ಮಾಣದತ್ತ ಸಂಪೂರ್ಣ ಗಮನ ಹರಿಸುವ ಕನಸು ಕಂಡಿದ್ದಾರೆ. ವರ್ಷಕ್ಕೆ ₹23 ಲಕ್ಷ ಆದಾಯ ಗಳಿಸುತ್ತಿರುವ ಅವರು, ತಮ್ಮ ಕನಸಿಗೆ ಆರ್ಥಿಕ ಬೆಂಬಲ ನೀಡಲು ₹2.5 ಕೋಟಿ ಸಂಪತ್ತಿನ ಗುರಿ ಹಾಕಿಕೊಂಡಿದ್ದಾರೆ. ಆದರೆ ಮದುವೆ, ಮಕ್ಕಳ ಶಿಕ್ಷಣ ಹಾಗೂ ಬೆಂಗಳೂರಿನ ಹೆಚ್ಚುತ್ತಿರುವ ಜೀವನ ವೆಚ್ಚಗಳು ಈಗ ಅವರ ಲೆಕ್ಕಾಚಾರವನ್ನೇ ಪ್ರಶ್ನಿಸುವಂತೆ ಮಾಡಿವೆ.&lt;/p&gt;&lt;p&gt;&lt;strong&gt;₹20 ಲಕ್ಷ ಉಳಿತಾಯದಿಂದ ₹2.5 ಕೋಟಿ ಗುರಿ!&lt;/strong&gt;&lt;/p&gt;&lt;p&gt;ಸದ್ಯ ಸುಮಾರು ₹20 ಲಕ್ಷ ಉಳಿತಾಯ ಹೊಂದಿರುವ ಟೆಕ್ಕಿ, ಪ್ರತಿ ತಿಂಗಳು ₹1.25 ಲಕ್ಷ ಹೂಡಿಕೆ ಮಾಡುವ ಯೋಜನೆ ಹೊಂದಿದ್ದಾರೆ. SIP ಹೂಡಿಕೆಯನ್ನು ಪ್ರತಿವರ್ಷ ಶೇ.5ರಷ್ಟು ಹೆಚ್ಚಿಸಿ, ಸರಾಸರಿ ಶೇ.12ರಷ್ಟು ಆದಾಯ ಸಿಗಲಿದೆ ಎಂದು ಅಂದಾಜಿಸಿದ್ದಾರೆ. ಹೀಗೆ ಮುಂದುವರಿಸಿದರೆ ಎಂಟು ವರ್ಷಗಳಲ್ಲಿ ಸುಮಾರು ₹2.8 ಕೋಟಿ ಸಂಗ್ರಹವಾಗಬಹುದು. ತೆರಿಗೆ ನಂತರ ₹2.5 ಕೋಟಿ ಉಳಿಯಬಹುದು ಎಂಬುದು ಅವರ ಲೆಕ್ಕಾಚಾರ.&lt;/p&gt;&lt;p&gt;ಅವರ ಜೀವನಶೈಲಿಯಲ್ಲೂ ಕಟ್ಟುನಿಟ್ಟಿನ ನಿಯಮಗಳಿವೆ. 50 ವರ್ಷಕ್ಕೂ ಮುನ್ನ ದುಬಾರಿ ಮನೆ ಬೇಡ, 30ರ ನಂತರವೇ ಕಾರು ಖರೀದಿ, ಅದೂ ₹10&ndash;12 ಲಕ್ಷದೊಳಗೆ ಇರಬೇಕು ಎಂಬುದು ಅವರ ನಿಲುವು.&lt;/p&gt;&lt;p&gt;&lt;strong&gt;ಮದುವೆಯಲ್ಲೂ &lsquo;ಎರಡನೇ ಆದಾಯ&rsquo;ದ ನಿರೀಕ್ಷೆ!&lt;/strong&gt;&lt;/p&gt;&lt;p&gt;ಮದುವೆಯ ನಂತರವೂ ಹೆಚ್ಚಿನ ಉಳಿತಾಯ ಮುಂದುವರಿಸಲು ಉದ್ಯೋಗದಲ್ಲಿರುವ ಸಂಗಾತಿ ಬೇಕೆಂದು ಅವರು ಹೇಳಿದ್ದಾರೆ. ₹10 ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ ಸಂಗಾತಿ, ತಿಂಗಳಿಗೆ ಸುಮಾರು ₹75,000 ಕೊಡುಗೆ ನೀಡಿದರೆ ಕುಟುಂಬದ ವೆಚ್ಚಗಳನ್ನು ನಿರ್ವಹಿಸಿ ತಮ್ಮ ಹೂಡಿಕೆ ಮುಂದುವರಿಸಬಹುದು ಎಂಬುದು ಅವರ ಲೆಕ್ಕ.&lt;/p&gt;&lt;p&gt;ಆದರೆ ಮದುವೆ ಹುಡುಕಾಟ ಸುಲಭವಾಗಿಲ್ಲ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ತಮ್ಮ ಸಮುದಾಯದ ವೈವಾಹಿಕ ಪ್ರೊಫೈಲ್&zwnj;ಗಳನ್ನು ಪರಿಶೀಲಿಸಿದರೂ, ತಮ್ಮ ನಿರೀಕ್ಷೆಗೆ ಹೊಂದುವ ಅಭ್ಯರ್ಥಿಗಳು ಕಡಿಮೆ ಸಿಕ್ಕಿದ್ದಾರೆ. ಕಳುಹಿಸಿದ ಹಲವು ವಿನಂತಿಗಳಿಗೆ ಪ್ರತಿಕ್ರಿಯೆಯೂ ಬರಲಿಲ್ಲ ಎಂದು ಅವರು ರೆಡ್ಡಿಟ್&zwnj;ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ನಾಲ್ಕು ಜನರ ಕುಟುಂಬಕ್ಕೆ ₹1 ಲಕ್ಷ ಸಾಕೇ?&lt;/strong&gt;&lt;/p&gt;&lt;p&gt;ಇದೇ ವಿಚಾರದಲ್ಲಿ ಅವರಿಗೆ ಮತ್ತೊಂದು ದೊಡ್ಡ ಪ್ರಶ್ನೆ ಎದುರಾಗಿದೆ. ಭವಿಷ್ಯದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಂತಹ ನಗರದಲ್ಲಿ ತಿಂಗಳಿಗೆ ₹1 ಲಕ್ಷದಲ್ಲಿ ಬದುಕಬಹುದೇ ಎಂದು ಅವರು ಲೆಕ್ಕ ಹಾಕಿದ್ದಾರೆ. 2BHK ಮನೆ, ದಿನಸಿ, ವಿಮೆ ಮತ್ತು ಮಕ್ಕಳ ಶಾಲಾ ವೆಚ್ಚ ಸೇರಿಸಿದರೂ ರಜೆ, ವೈದ್ಯಕೀಯ ತುರ್ತು ಪರಿಸ್ಥಿತಿ, ಕಾರು, ಮನೆ ದುರಸ್ತಿ, ಉನ್ನತ ಶಿಕ್ಷಣದಂತಹ ದೊಡ್ಡ ಖರ್ಚುಗಳು ಈ ಬಜೆಟ್&zwnj;ನಲ್ಲಿ ಸೇರಿಲ್ಲ.&lt;/p&gt;&lt;p&gt;ಹೀಗಾಗಿ ₹2.5 ಕೋಟಿ ಬದಲು ₹5 ಕೋಟಿ ಕಾರ್ಪಸ್ ಬೇಕಾಗಬಹುದು, 35ರ ಬದಲು 45ರವರೆಗೆ ಕೆಲಸ ಮಾಡಬೇಕಾಗಬಹುದು ಎಂಬ ಅನುಮಾನ ಅವರಿಗೆ ಮೂಡಿದೆ.&lt;/p&gt;&lt;p&gt;&lt;strong&gt;₹2.5 ಕೋಟಿ ಸಾಕಾಗುತ್ತದೆಯೇ?&lt;/strong&gt;&lt;/p&gt;&lt;p&gt;35ರ ನಂತರ ₹2.5 ಕೋಟಿಯಿಂದ ವರ್ಷಕ್ಕೆ ₹12 ಲಕ್ಷ, ಅಂದರೆ ತಿಂಗಳಿಗೆ ₹1 ಲಕ್ಷ ಹಿಂಪಡೆಯುವ ಉದ್ದೇಶ ಅವರದು. ಕೆಲ ಹಣವನ್ನು FD ಅಥವಾ ಬಾಂಡ್&zwnj;ಗಳಲ್ಲಿ ಹಾಗೂ ಉಳಿದ ಹಣವನ್ನು ಷೇರುಗಳಲ್ಲಿ ಇಡುವ ಯೋಜನೆಯೂ ಇದೆ.&lt;/p&gt;&lt;p&gt;ಆದರೆ ರೆಡ್ಡಿಟ್ ಬಳಕೆದಾರರು ಈ ಲೆಕ್ಕಾಚಾರವನ್ನು ಆಶಾವಾದಿ ಎಂದು ಪ್ರಶ್ನಿಸಿದ್ದಾರೆ. ಹಣದುಬ್ಬರ, ವೈದ್ಯಕೀಯ ವೆಚ್ಚ, ಕಾರು ಮತ್ತು ಮನೆ ನಿರ್ವಹಣೆ, ಮಕ್ಕಳ ಉನ್ನತ ಶಿಕ್ಷಣ ಮುಂತಾದವುಗಳನ್ನು ಪರಿಗಣಿಸಿದರೆ ₹2.5 ಕೋಟಿ ದೀರ್ಘಾವಧಿಯ FIREಗೆ ಸಾಕಾಗದೇ ಇರಬಹುದು ಎಂದು ಕೆಲವರು ಹೇಳಿದ್ದಾರೆ. ಕೆಲವರು ₹4&ndash;6 ಕೋಟಿ ಕಾರ್ಪಸ್ ಹೆಚ್ಚು ಸುರಕ್ಷಿತ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;ಸಿನಿಮಾ ಕನಸು ಮಾತ್ರ ಬದಲಾಗಿಲ್ಲ..!&lt;/strong&gt;&lt;/p&gt;&lt;p&gt;ಆರ್ಥಿಕ ಲೆಕ್ಕಾಚಾರಗಳ ನಡುವೆ ಅವರ ಮೂಲ ಗುರಿ ಮಾತ್ರ ಸ್ಪಷ್ಟವಾಗಿದೆ&mdash;ಸಿನಿಮಾ ನಿರ್ಮಾಣ. ಈಗಾಗಲೇ ವೆಬ್ ಸರಣಿಯೊಂದನ್ನು ನಿರ್ದೇಶಿಸಿರುವ ಅವರು, ಸ್ಕ್ರಿಪ್ಟ್ ಬರವಣಿಗೆ ಮತ್ತು ಪಿಚಿಂಗ್ ಮುಂದುವರಿಸಲು ಬಯಸಿದ್ದಾರೆ. ಬರವಣಿಗೆಯಿಂದ ತಿಂಗಳಿಗೆ ಸುಮಾರು ₹35,000 ಗಳಿಸುವ ಸಾಧ್ಯತೆಯನ್ನೂ ಅವರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಅಂತಿಮವಾಗಿ, ಈ ಕಥೆ ಕೇವಲ FIRE ಗುರಿಯದ್ದಲ್ಲ. ಯುವಕರಿಗೆ ಆರ್ಥಿಕ ಸ್ವಾತಂತ್ರ್ಯ ಎಂದರೆ ಎಷ್ಟು ಹಣ ಸಾಕು, ಮದುವೆ ಮತ್ತು ಮಕ್ಕಳ ನಂತರ ಜೀವನದ ವೆಚ್ಚ ಹೇಗೆ ಬದಲಾಗುತ್ತದೆ, ಹಾಗೂ ಕನಸಿನ ವೃತ್ತಿಗೆ ಬದಲಾದಾಗ ಎಷ್ಟು ಆರ್ಥಿಕ ಭದ್ರತೆ ಅಗತ್ಯ ಎಂಬ ದೊಡ್ಡ ಪ್ರಶ್ನೆಗಳನ್ನೂ ಇದು ಮುಂದಿಡುತ್ತದೆ.&lt;/p&gt;&lt;p&gt;I don't think I will achieve my financial freedomby u/ in r/leanFIRE_India&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/27-year-old-bengaluru-techie-wants-to-quit-it-at-35-with-2-5-crore-but-marriage-changes-the-math/articleshow-dvtbhn3"/>
        </item>
        <item>
            <title><![CDATA[Bracelets: ಹುಡುಗರಿಗಾಗಿ ಸಖತ್ ಬ್ರೇಸ್ಲೆಟ್‌ ಡಿಸೈನ್; ರಾಖಿಗೆ ಬೆಸ್ಟ್ ಗಿಫ್ಟ್]]></title>
            <link>https://kannada.asianetnews.com/webstories/fashion/stylish-bracelet-designs-for-men-rakhi-gift-ideas-must-try-kvn-csbogip</link>
            <guid isPermaLink="true">https://kannada.asianetnews.com/webstories/fashion/stylish-bracelet-designs-for-men-rakhi-gift-ideas-must-try-kvn-csbogip</guid>
            <pubDate>Fri, 14 Aug 2026 14:57:56 +0530</pubDate>
            <description><![CDATA[ಈ ಸಲದ ರಾಖಿಗೆ ನಿಮ್ಮ ಸಹೋದರನಿಗೆ ಯಾವ ಗಿಫ್ಟ್ ಕೊಡೋದು ಅಂತ ಯೋಚನೆ ಮಾಡ್ತಿದ್ದೀರಾ? ಹಾಗಿದ್ರೆ, ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ, ಈ ಬ್ರೇಸ್ಲೆಟ್‌ಗಳನ್ನು ಗಿಫ್ಟ್ ಮಾಡಿ. ಗೋಲ್ಡ್ ಪ್ಲೇಟೆಡ್‌ನಲ್ಲೂ ಸಖತ್ ಕಲೆಕ್ಷನ್‌ಗಳಿವೆ. ಅಂತಹ ಕೆಲವು ಡಿಸೈನ್‌ಗಳನ್ನು ಈಗ ನೋಡೋಣ ಬನ್ನಿ...]]></description>
            <media:content url="https://static.asianetnews.com/images/w-1280,h-720,format-jpg,imgid-01kzxfyzmgvamk8crzgqzsgft2,imgname-whatsapp-image-2026-08-13-at-5.27.14-pm--1--1786622475919.jpeg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/stylish-bracelet-designs-for-men-rakhi-gift-ideas-must-try-kvn-csbogip"/>
        </item>
        <item>
            <title><![CDATA[ಜಡ್ಜ್ ಮಾಡೋಕೆ ಬಂದಿದ್ದೇ ತಪ್ಪಾಯ್ತು ! ಟ್ರೋಲರ್ ಬಗ್ಗೆ ಸಂಗೀತಾ ಅಸಮಾಧಾನ]]></title>
            <link>https://kannada.asianetnews.com/tv-talk/bigg-boss-kannada-season-13-agnipariksha-sangeeta-sringeri-upset-with-trolls/articleshow-z8kvk6p</link>
            <guid isPermaLink="true">https://kannada.asianetnews.com/tv-talk/bigg-boss-kannada-season-13-agnipariksha-sangeeta-sringeri-upset-with-trolls/articleshow-z8kvk6p</guid>
            <pubDate>Fri, 14 Aug 2026 14:55:12 +0530</pubDate>
            <description><![CDATA[ಬಿಗ್ ಬಾಸ್ ಅಗ್ನಿಪರೀಕ್ಷೆ ಜಡ್ಜ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಎಲ್ಲಿ ನೋಡಿದ್ರೂ ಸಂಗೀತಾ, ವಿನಯ್ ವಿಡಿಯೋ ಓಡಾಡ್ತಿದೆ. ಅದಕ್ಕೆ ಸಂಗೀತಾ ನೀಡಿದ ರಿಯಾಕ್ಷನ್ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzscf6hqs0f3pn5qh40rwet,imgname-sangeetha-sringeri-1786699463889.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನ ಶುರುವಾದ ಅಗ್ನಿಪರೀಕ್ಷೆ ಸದ್ಯ ಟ್ರೋಲ್ ಆಗ್ತಿದೆ. ಕಲರ್ಸ್ ಕನ್ನಡ ಈ ಬಾರಿ ಜನಸಾಮಾನ್ಯರಿಗೆ ಅವಕಾಶ ನೀಡಿದೆ. ಆದ್ರೆ ಜನಸಾಮಾನ್ಯರು ಸೆಲೆಬ್ರಿಟಿಗಳಂತೆ ಬಿಗ್ ಬಾಸ್ ಮನೆಗೆ ಡಾನ್ಸ್ ಮಾಡ್ತಾ ಹೋಗ್ತಿಲ್ಲ. ಮೊದಲು ಅಗ್ನಿಪರೀಕ್ಷೆ ಎದುರಿಸ್ಬೇಕು. ಅಲ್ಲಿ ಗೆದ್ದವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೀತಾರೆ.&lt;/p&gt;&lt;p&gt;ಬಿಗ್ ಬಾಸ್ ಅಗ್ನಿಪರೀಕ್ಷೆ ಆಗಸ್ಟ್ 16 ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿದೆ. ಈಗಾಗಲೇ ಅನೇಕ ಪ್ರೋಮೋಗಳು ಬಿಡುಗಡೆಯಾಗಿ ಚರ್ಚೆಗೆ ಬಂದಿವೆ. ಪ್ರೋಮೋದಲ್ಲಿ ಜಡ್ಜ್ ಗಳ ಖಡಕ್ ನಿರ್ಧಾರ, ತಲೆ ಬೋಳಿಸಿಕೊಳ್ಳೋದು, ದಾಖಲೆ ಹರಿಯುವಂತ ದೃಶ್ಯಗಳು ಜನರ ನಿದ್ರೆಗೆಡಿಸಿವೆ. ಜಡ್ಜಸ್ ಮೇಲೆ ಜನರು ಆರೋಪ ಮಾಡ್ತಿದ್ದಾರೆ.&lt;/p&gt;&lt;h2&gt;ಟ್ರೋಲ್ ಆದ ಸಂಗೀತಾ ಶೃಂಗೇರಿ&lt;/h2&gt;&lt;p&gt;ಸಂಗೀತಾ ಶೃಂಗೇರಿ, ವಿನಯ್ ಗೌಡ, ಶ್ರುತಿ ಹಾಗೂ ಚಂದನ್ ಶೆಟ್ಟಿ ಜಡ್ಜ್ ಆಗಿದ್ದು, ಅವರು ನೀಡ್ತಿರುವ ಒಂದೊಂದು ಟಾಸ್ಕ್, ಮಾತು ಜನಸಾಮಾನ್ಯರ ಕೋಪಕ್ಕೆ ಕಾರಣವಾಗಿದೆ. ಸಂಗೀತಾ ಶೃಂಗೇರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಅವ್ರ ನಿರ್ಧಾರ ಖಂಡಿಸಿ ಅನೇಕರು ಸಂಗೀತಾ ಅವರನ್ನು ಟ್ರೋಲ್ ಮಾಡ್ತಿದ್ದಾರೆ.&lt;/p&gt;&lt;h3&gt;ಅಸಮಾಧಾನಗೊಂಡ ಸಂಗೀತಾ&lt;/h3&gt;&lt;p&gt;ವಿನಯ್ ಗೌಡ ಹಾಗೂ ಸಂಗೀತಾ ಅವರ ವಿಡಿಯೋ ಒಂದನ್ನು ಕಲರ್ಸ್ ಕನ್ನಡ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋದಲ್ಲಿ ಸಂಗೀತಾ, ಟ್ರೋಲರ್ಸ್ ಮೇಲೆ ಅಸಮಾಧಾನಗೊಂಡಿದ್ದಾರೆ. ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಜಡ್ಜ್ ಆಗಿ ಬರಬಾರದಿತ್ತು. ಒಳ್ಳೆ ಸ್ಪರ್ಧಿ ಬಿಗ್ ಬಾಸ್ ಒಳಗೆ ಹೋಗ್ಬೇಕು ಎನ್ನುವ ಕಾರಣಕ್ಕೆ ಟಾಸ್ಕ್ ನೀಡೋದು ತಪ್ಪಾ ಅಂತ ಸಂಗೀತಾ ವಿನಯ್ ಅವ್ರ ಜೊತೆ ವಾದಕ್ಕೆ ಇಳಿದಿದ್ದಾರೆ.&lt;/p&gt;&lt;p&gt;ಟ್ರೋಲರ್ ಬಗ್ಗೆ ವಿನಯ್ ಗೌಡ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಟ್ರೋಲ್ ವಿಡಿಯೋ ನೋಡ್ತಾ ಅಸಮಾಧಾನಗೊಳ್ಳುವ ಬದಲು ಅದನ್ನು ಮನರಂಜನೆಯಾಗಿ ತೆಗೆದ್ಕೊಳ್ಳಿ. ನಾನು ಎಂಜಾಯ್ ಮಾಡ್ತಿದ್ದೇನೆ. ಜನರು ಪೂರ್ತಿ ಎಪಿಸೋಡ್ ನೋಡ್ದೆ ಟ್ರೋಲ್ ಮಾಡ್ತಿದ್ದಾರೆ. ಮೊದಲು ಎಪಿಸೋಡ್ ನೋಡ್ಲಿ ಅಂತ ವಿನಯ್ ಗೌಡ ಹೇಳಿದ್ದಾರೆ.&lt;/p&gt;&lt;p&gt;ಬಿಗ್ ಬಾಸ್ ಅಗ್ನಿ ಪರೀಕ್ಷೆ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತಪಡಿಸಿದ್ದು, ಟ್ರೋಲ್ ಹೆಚ್ಚಾಗ್ತಿದ್ದಂತೆ ಕಲರ್ಸ್ ಕನ್ನಡ ಈ ವಿಡಿಯೋ ಮೂಲಕ ಟ್ರೋಲರ್ ಗೆ ಟಾಂಗ್ ಕೊಟ್ಟಂತಿದೆ. ಮೊದಲು ಎಪಿಸೋಡ್ ನೋಡಿ ನಂತ್ರ ರಿಯಾಕ್ಷನ್ ನೀಡಿ ಅಂತ ಪರೋಕ್ಷವಾಗಿ ತಿಳಿಸಿದೆ.&lt;/p&gt;View this post on Instagram&lt;p&gt;A post shared by Colors Kannada Official (@colorskannadaofficial)&lt;/p&gt;&lt;p&gt;&lt;/p&gt;]]></content:encoded>
            <category><![CDATA[tv-talk]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/tv-talk/bigg-boss-kannada-season-13-agnipariksha-sangeeta-sringeri-upset-with-trolls/articleshow-z8kvk6p"/>
        </item>
        <item>
            <title><![CDATA[ಅವಿವಾಹಿತರು, ಗರ್ಭಿಣಿಯರು ಹಾವುಗಳನ್ನು ಈ ಸಮಯದಲ್ಲಿ ನೋಡಬಾರದಂತೆ.. ಇದಕ್ಕಿದೆ ವೈಜ್ಞಾನಿಕ ಕಾರಣ]]></title>
            <link>https://kannada.asianetnews.com/gallery/life/why-unmarried-people-should-not-watch-snakes-mating-u76h9d9</link>
            <guid isPermaLink="true">https://kannada.asianetnews.com/gallery/life/why-unmarried-people-should-not-watch-snakes-mating-u76h9d9</guid>
            <pubDate>Fri, 14 Aug 2026 14:53:25 +0530</pubDate>
            <description><![CDATA[Snake mating effects: ಪ್ರಕೃತಿಯಲ್ಲಿ ಜೋಡಿ ಹಾವುಗಳು ಮಿಲನದಲ್ಲಿ ತೊಡಗಿರುವ ದೃಶ್ಯ ಅಪರೂಪದ್ದು. ಆದರೆ ಈ ದೃಶ್ಯವನ್ನು ಮದುವೆಯಾಗದ ಯುವಕ-ಯುವತಿಯರು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದೆ ಅಡಗಿರುವ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzs40ztdhfwe9s6ec1tkbj2,imgname-thumbnail---2026-08-14t144605.374-1786699187193.jpg" type="image/jpeg" height="390" width="690"/>
            <content:encoded><![CDATA[&lt;p&gt;Snake mating effects: ಪ್ರಕೃತಿಯಲ್ಲಿ ಜೋಡಿ ಹಾವುಗಳು ಮಿಲನದಲ್ಲಿ ತೊಡಗಿರುವ ದೃಶ್ಯ ಅಪರೂಪದ್ದು. ಆದರೆ ಈ ದೃಶ್ಯವನ್ನು ಮದುವೆಯಾಗದ ಯುವಕ-ಯುವತಿಯರು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಇದರ ಹಿಂದೆ ಅಡಗಿರುವ ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.&lt;/p&gt;&lt;img&gt;&lt;p&gt;&lt;strong&gt;ಕಾರಣವೇನು?&lt;/strong&gt;ಹಾವುಗಳೆಂದರೆ ಹೆಚ್ಚಿನವರಿಗೆ ಭಯ. ಅವುಗಳನ್ನು ನೋಡಿದ ತಕ್ಷಣ ಮಾರುದೂರ ಓಡುವವರೇ ಹೆಚ್ಚು. ಆದರೆ ಕೆಲವೊಮ್ಮೆ ಹಾವುಗಳ ಚಟುವಟಿಕೆಗಳನ್ನು ನೋಡಲು ಜನರು ಆಸಕ್ತಿ ತೋರಿಸುತ್ತಾರೆ. ವಿಶೇಷವಾಗಿ ಜೋಡಿ ಹಾವುಗಳು ಮಿಲನದಲ್ಲಿ ತೊಡಗಿದ್ದಾಗ ಅದನ್ನು ನೋಡಲು ಜನ ಸೇರುತ್ತಾರೆ. ಆದರೆ, ಅವಿವಾಹಿತ ಸ್ತ್ರೀ-ಪುರುಷರು ಇದನ್ನು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ. ಅದರ ಹಿಂದಿನ ಪುರಾಣ ಮತ್ತು ವೈಜ್ಞಾನಿಕ ಕಾರಣಗಳು ಇಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ಅವಿವಾಹಿತರು ನೋಡಬಾರದ್ಯಾಕೆ&lt;/strong&gt;ಪುರಾಣಗಳ ಪ್ರಕಾರ, ಮದುವೆಯಾಗದ ಯುವಕ ಅಥವಾ ಯುವತಿಯರು ಹಾವುಗಳ ಮಿಲನವನ್ನು ನೋಡಿದರೆ ಅವರಿಗೆ ವಿವಾಹ ಯೋಗ ತಡವಾಗುತ್ತದೆ. ಅಷ್ಟೇ ಅಲ್ಲದೆ, ಒಂದು ವೇಳೆ ಮದುವೆಯಾದರೂ ಅವರ ವೈವಾಹಿಕ ಜೀವನದಲ್ಲಿ ಅನೇಕ ಅಡೆತಡೆಗಳು ಮತ್ತು ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ಈ ಕಾರಣದಿಂದಲೇ ಹಿರಿಯರು ಅವಿವಾಹಿತರನ್ನು ಇಂತಹ ದೃಶ್ಯಗಳಿಂದ ದೂರವಿರಲು ಸೂಚಿಸುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಗರ್ಭಿಣಿಯರು ನೋಡಿದ್ರೆ ಏನಾಗುತ್ತೆ?&lt;/strong&gt;ಗರ್ಭಿಣಿ ಮಹಿಳೆಯರು ಸಹ ಹಾವುಗಳ ಮಿಲನವನ್ನು ನೋಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಹೆರಿಗೆಯ ಸಮಯದಲ್ಲಿ ಸಂಕೀರ್ಣತೆಗಳು ಉಂಟಾಗಬಹುದು ಅಥವಾ ಹುಟ್ಟುವ ಮಗುವಿಗೆ ದೋಷಗಳು ತಗುಲಬಹುದು ಎಂಬ ಭೀತಿ ಇದೆ. ಹಾಗೆಯೇ, ಹೊಸದಾಗಿ ಮದುವೆಯಾದ ದಂಪತಿಗಳು ಒಟ್ಟಾಗಿ ಈ ದೃಶ್ಯವನ್ನು ನೋಡಿದರೆ, ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ದಾಂಪತ್ಯದಲ್ಲಿ ಬಿರುಕು ಉಂಟಾಗಬಹುದು ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಭಂಗ ಉಂಟಾಗಿ ಕೋಪದಿಂದ ದಾಳಿ ಮಾಡುವ ಸಾಧ್ಯತೆ&lt;/strong&gt;ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಹಾವುಗಳು ಶಿವನಿಗೆ ಅತ್ಯಂತ ಪ್ರಿಯವಾದವು. ಅವುಗಳ ಮಿಲನ ಪ್ರಕ್ರಿಯೆಯು ಪವಿತ್ರವಾದುದು ಎಂದು ಪರಿಗಣಿಸಲಾಗುತ್ತದೆ. ಅದನ್ನು ನೋಡುವುದು ಅಪವಿತ್ರ ಅಥವಾ ದೋಷಕ್ಕೆ ಕಾರಣವಾಗಬಹುದು. ಮಿಲನದ ಸಮಯದಲ್ಲಿ ಹಾವುಗಳು ಮನುಷ್ಯರನ್ನು ಗಮನಿಸಿದರೆ, ಅವುಗಳಿಗೆ ಭಂಗ ಉಂಟಾಗಿ ಕೋಪದಿಂದ ದಾಳಿ ಮಾಡುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;ವಿಜ್ಞಾನ ಹೇಳುವುದೇನು?&lt;/strong&gt;ವಿಜ್ಞಾನದ ಪ್ರಕಾರ, ಮಿಲನದ ಸಮಯದಲ್ಲಿ ಹಾವುಗಳು ಅತ್ಯಂತ ಆಕ್ರಮಣಕಾರಿಯಾಗಿರುತ್ತವೆ (Aggressive). ಆ ಸಮಯದಲ್ಲಿ ಅವುಗಳ ಹತ್ತಿರ ಹೋಗುವುದು ಅಥವಾ ಅವುಗಳನ್ನು ತೊಂದರೆಗೊಳಿಸುವುದು ಅಪಾಯಕಾರಿ. ತಮ್ಮ ಏಕಾಂತಕ್ಕೆ ಭಂಗ ತಂದ ವ್ಯಕ್ತಿಯನ್ನು ಅವು ಬೆನ್ನಟ್ಟಿ ಕಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಹಾವುಗಳ ಮಿಲನದ ವೇಳೆ ಅಲ್ಲಿಗೆ ಹೋಗಬಾರದು ಎಂದು ಹೇಳಲಾಗುತ್ತದೆ.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-unmarried-people-should-not-watch-snakes-mating-u76h9d9"/>
        </item>
        <item>
            <title><![CDATA[WFH ಮಾಡುವಿರಾ? ಹುಷಾರ್!: ದಿನಕ್ಕೆ 8 ಗಂಟೆ ವಿಡಿಯೋ ಕಾಲ್‌ನಲ್ಲೇ ಕೂರಿಸುವ ಬಾಸ್ ವಿರುದ್ಧ ಉದ್ಯೋಗಿ ಮಾಡಿದ್ದೇನು?]]></title>
            <link>https://kannada.asianetnews.com/viral/manager-keeps-remote-employee-on-video-calls-for-8-hours-a-day-i-am-completely-exhausted-says-employee/articleshow-1qggwms</link>
            <guid isPermaLink="true">https://kannada.asianetnews.com/viral/manager-keeps-remote-employee-on-video-calls-for-8-hours-a-day-i-am-completely-exhausted-says-employee/articleshow-1qggwms</guid>
            <pubDate>Fri, 14 Aug 2026 11:00:37 +0530</pubDate>
            <description><![CDATA[ವರ್ಕ್ ಫ್ರಮ್ ಹೋಮ್ ಮಾಡುತ್ತಿರುವ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್ ಪ್ರತಿದಿನ 6-8 ಗಂಟೆಗಳ ಕಾಲ ವಿಡಿಯೋ ಮತ್ತು ಫೋನ್ ಕರೆಗಳಲ್ಲಿ ಮಾತನಾಡುವುದರಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಎರಡು ದಿನಗಳಲ್ಲಿ ಸುಮಾರು 15 ಗಂಟೆ ಕರೆ ನಡೆದಿದ್ದು, ಹೆಚ್ಚಿನ ಮಾತುಕತೆ ಕೆಲಸಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ. HRಗೆ ದೂರು ನೀಡಬೇಕೇ ಎಂಬ ಗೊಂದಲದಲ್ಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzrzzxcj802rqm9fchrcmr7,imgname-workplace-problem-shared-by-remote-employee--1--1786699055019.jpg" type="image/jpeg" height="390" width="690"/>
            <content:encoded><![CDATA[&lt;p&gt;ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿರುವ ಉದ್ಯೋಗಿಯೊಬ್ಬರು ತಮ್ಮ ಮ್ಯಾನೇಜರ್&zwnj;ನ ಅತಿಯಾದ ಕರೆಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿನದ ಬಹುಪಾಲು ಸಮಯವನ್ನು ಮ್ಯಾನೇಜರ್ ಜೊತೆ ವೀಡಿಯೊ ಮತ್ತು ಫೋನ್ ಕರೆಗಳಲ್ಲಿ ಕಳೆಯಬೇಕಾಗುತ್ತಿದ್ದು, ಇದರಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಎರಡು ದಿನಗಳಲ್ಲಿ ಬರೋಬ್ಬರಿ 15 ಗಂಟೆ ಕರೆ!&lt;/strong&gt;&lt;/p&gt;&lt;p&gt;ರೆಡ್ಡಿಟ್&zwnj;ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಉದ್ಯೋಗಿಯ ಪ್ರಕಾರ, ಕೇವಲ ಎರಡು ದಿನಗಳಲ್ಲಿ ಮ್ಯಾನೇಜರ್ ಜೊತೆ ಸುಮಾರು 15 ಗಂಟೆ ಮಾತನಾಡಿದ್ದಾರೆ. ಒಂದು ದಿನ ಮೈಕ್ರೋಸಾಫ್ಟ್ ಟೀಮ್ಸ್&zwnj;ನಲ್ಲಿ 7 ಗಂಟೆ 21 ನಿಮಿಷ, ಮತ್ತೊಂದು ದಿನ 5 ಗಂಟೆ 43 ನಿಮಿಷ ಟೀಮ್ಸ್ ಕರೆ ಹಾಗೂ 1 ಗಂಟೆ 53 ನಿಮಿಷ ಫೋನ್ ಕರೆ ನಡೆದಿತ್ತು.&lt;/p&gt;&lt;p&gt;ಕೆಲಸದ ಅಗತ್ಯಕ್ಕಾಗಿ ಕೆಲವು ಕರೆಗಳು ನಡೆಯುವುದು ಸಹಜ. ಆದರೆ ಇಲ್ಲಿ ಸಮಸ್ಯೆ ಎಂದರೆ, ಬಹುತೇಕ ಸಂಭಾಷಣೆಗಳು ಕೆಲಸಕ್ಕೆ ಸಂಬಂಧಿಸಿದ್ದೇ ಅಲ್ಲ ಎಂಬುದು ಉದ್ಯೋಗಿಯ ಆರೋಪ.&lt;/p&gt;&lt;p&gt;&lt;strong&gt;&lsquo;ಕೆಲಸದ ಮಾತಿಗಿಂತ ವೈಯಕ್ತಿಕ ಚರ್ಚೆಯೇ ಹೆಚ್ಚು&rsquo;!&lt;/strong&gt;&lt;/p&gt;&lt;p&gt;ಉದ್ಯೋಗಿ ಹೇಳುವಂತೆ, ಮ್ಯಾನೇಜರ್ ಕೆಲಸದ ಮಧ್ಯೆಯೇ ವೈಯಕ್ತಿಕ ವಿಚಾರಗಳನ್ನು ಚರ್ಚಿಸುತ್ತಾರೆ. ತಾವು ಖರೀದಿಸಲು ಬಯಸುವ ವಸ್ತುಗಳ ಚಿತ್ರಗಳನ್ನು ಕಳುಹಿಸುವುದು, ವೈಯಕ್ತಿಕ ವಿಷಯಗಳ ಕುರಿತು ಮಾತನಾಡುವುದು ಸೇರಿದಂತೆ ಹಲವು ವಿಚಾರಗಳು ಕರೆಗಳಲ್ಲಿ ನಡೆಯುತ್ತವೆ.&lt;/p&gt;&lt;p&gt;&ldquo;ನನ್ನ ಪಕ್ಕದಲ್ಲಿ ಯಾರೋ ಕುಳಿತು ದಿನವಿಡೀ ಮಾತನಾಡುತ್ತಿರುವಂತೆ ಭಾಸವಾಗುತ್ತದೆ&rdquo; ಎಂಬ ರೀತಿಯಲ್ಲಿ ಅವರು ತಮ್ಮ ಅನುಭವವನ್ನು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಪ್ರತಿಯೊಂದು ನಿರ್ಧಾರಕ್ಕೂ ನನ್ನ ಅಭಿಪ್ರಾಯ ಬೇಕಂತೆ!&lt;/strong&gt;&lt;/p&gt;&lt;p&gt;ಇಷ್ಟೇ ಅಲ್ಲದೆ, ಮ್ಯಾನೇಜರ್ ಬಹುತೇಕ ಪ್ರತಿಯೊಂದು ವಿಚಾರದಲ್ಲೂ ತಮ್ಮ ಅಭಿಪ್ರಾಯ ಕೇಳುತ್ತಾರೆ ಎಂದು ಉದ್ಯೋಗಿ ಹೇಳಿದ್ದಾರೆ. ಇದರಿಂದ ತಾವು ಮ್ಯಾನೇಜರ್&zwnj;ನ ಕೆಲಸದಲ್ಲೇ ಒಂದು ರೀತಿಯಲ್ಲಿ ತೊಡಗಿಸಿಕೊಂಡಿರುವ ಭಾವನೆ ಮೂಡುತ್ತಿದೆ ಎಂದಿದ್ದಾರೆ.&lt;/p&gt;&lt;p&gt;ಮ್ಯಾನೇಜರ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ವ್ಯಕ್ತಿಯಾಗಿರುವುದರಿಂದ ನೇರವಾಗಿ ಮಿತಿಗಳನ್ನು ನಿಗದಿಪಡಿಸಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಆತಂಕವೂ ಉದ್ಯೋಗಿಗಿದೆ.&lt;/p&gt;&lt;p&gt;&lt;strong&gt;ಕೆಲಸ ಬಿಡಲು ಇಷ್ಟವಿಲ್ಲ; HRಗೆ ದೂರು ನೀಡಬೇಕೇ?&lt;/strong&gt;&lt;/p&gt;&lt;p&gt;ಉದ್ಯೋಗಿಗೆ ಕೆಲಸ ಮತ್ತು ಕಂಪನಿ ಇಷ್ಟವಾಗಿರುವುದರಿಂದ ರಾಜೀನಾಮೆ ನೀಡುವ ಯೋಚನೆ ಇಲ್ಲ. ಆದರೆ ದಿನಕ್ಕೆ 6&ndash;8 ಗಂಟೆಗಳ ಕರೆಗಳು ಮಾನಸಿಕವಾಗಿ ದಣಿಸುತ್ತಿದ್ದು, ತಮ್ಮ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತಿವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಹೀಗಾಗಿ, ಮೊದಲು ಮ್ಯಾನೇಜರ್ ಜೊತೆ ಸ್ಪಷ್ಟವಾಗಿ ಕೆಲಸದ ಸಮಯ ಮತ್ತು ಕರೆಗಳ ಕುರಿತು ಮಿತಿಗಳನ್ನು ನಿಗದಿಪಡಿಸಬೇಕೇ ಅಥವಾ HRಗೆ ವಿಷಯ ತಿಳಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ. ಕೆಲಸದ ಸ್ಥಳದಲ್ಲಿ ಆರೋಗ್ಯಕರ ಸಂವಹನ ಮತ್ತು ವೈಯಕ್ತಿಕ ಗಡಿಗಳ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.&lt;/p&gt;&lt;p&gt;Manager keeps me on video calls 6-8 hours per dayby u/ in r/AskHR&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/manager-keeps-remote-employee-on-video-calls-for-8-hours-a-day-i-am-completely-exhausted-says-employee/articleshow-1qggwms"/>
        </item>
        <item>
            <title><![CDATA[ಟೆಕ್ಕಿಗಳ ಜೇಬು ಖಾಲಿಯಾದಾಗ ಚಿನ್ನವೇ ಆಸರೆ, ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಗೋಲ್ಡ್ ಲೋನ್ ಟ್ರೆಂಡ್]]></title>
            <link>https://kannada.asianetnews.com/bengaluru-urban/techies-are-getting-quick-cash-by-applying-for-a-gold-loan-in-bengaluru-suh/articleshow-lkm6x4y</link>
            <guid isPermaLink="true">https://kannada.asianetnews.com/bengaluru-urban/techies-are-getting-quick-cash-by-applying-for-a-gold-loan-in-bengaluru-suh/articleshow-lkm6x4y</guid>
            <pubDate>Fri, 14 Aug 2026 14:40:39 +0530</pubDate>
            <description><![CDATA[ಬೆಂಗಳೂರಿನ ಟೆಕ್ಕಿಗಳು ತುರ್ತು ಹಣದ ಅಗತ್ಯಕ್ಕಾಗಿ ಕಡಿಮೆ ದಾಖಲೆಗಳು ಹಾಗೂ ವೇಗದ ಪ್ರಕ್ರಿಯೆಯಿಂದ ಚಿನ್ನದ ಸಾಲದತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಗೋಲ್ಡ್ ಲೋನ್ ಟ್ರೆಂಡ್]]></description>
            <media:content url="https://static.asianetnews.com/images/w-1280,h-720,format-jpg,imgid-01kzzrh0bscxm9snxpcgh6a799,imgname-techies-are-getting-quick-cash-by-applying-for-a-gold-loan-in-bengaluru-1786698563960.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ವೇಗದ ಜೀವನಶೈಲಿಯಲ್ಲಿ ತುರ್ತು ಹಣದ ಅಗತ್ಯ ಯಾವಾಗ ಬೇಕಾದರೂ ಎದುರಾಗಬಹುದು. ಹೆಚ್ಚಿನ ಬಾಡಿಗೆ, ಭಾರೀ ಮನೆ ಠೇವಣಿ, ವೈದ್ಯಕೀಯ ವೆಚ್ಚ, ಮನೆ ದುರಸ್ತಿ ಅಥವಾ ಹೊಸ ಸೈಡ್ ಪ್ರಾಜೆಕ್ಟ್&zwnj;ಗೆ ಹೂಡಿಕೆ&mdash;ಇಂತಹ ಸಂದರ್ಭಗಳಲ್ಲಿ ಕೆಲ ಟೆಕ್ ವೃತ್ತಿಪರರು ತಮ್ಮ ಚಿನ್ನವನ್ನು ಅಡಮಾನವಿಟ್ಟು ತ್ವರಿತವಾಗಿ ಹಣ ಪಡೆಯುವ ಆಯ್ಕೆಯತ್ತ ಮುಖ ಮಾಡುತ್ತಿದ್ದಾರೆ. ದೀರ್ಘಾವಧಿಯ ಹಣಕಾಸಿನ ಯೋಜನೆ ಹೊಂದಿದ್ದರೂ, ಕೆಲವೇ ದಿನಗಳಲ್ಲಿ ಹಣದ ಅಗತ್ಯ ಎದುರಾದಾಗ ಚಿನ್ನದ ಸಾಲವು ವೇಗವಾಗಿ ಹಣ ಪಡೆಯಲು ಒಂದು ಆಯ್ಕೆಯಾಗುತ್ತಿದೆ.&lt;/p&gt;&lt;h2&gt;ಚಿನ್ನದ ಸಾಲ ಎಂದರೇನು?&lt;/h2&gt;&lt;p&gt;ಚಿನ್ನದ ಸಾಲ ಪಡೆಯುವ ಪ್ರಕ್ರಿಯೆ ಸರಳವಾಗಿದೆ. ಸಾಲಗಾರರು ತಮ್ಮ ಚಿನ್ನಾಭರಣ, ಆಭರಣಗಳು ಅಥವಾ ಅರ್ಹ ಚಿನ್ನದ ನಾಣ್ಯಗಳನ್ನು ಸಾಲದಾತರ ಬಳಿ ಅಡಮಾನ ಇಡುತ್ತಾರೆ. ಅದರ ಮೌಲ್ಯವನ್ನು ಆಧರಿಸಿ ಸಾಲದಾತರು ನಿರ್ದಿಷ್ಟ ಮೊತ್ತದ ಸಾಲ ನೀಡುತ್ತಾರೆ. ಸಾಲದ ಮೊತ್ತ ಮತ್ತು ಬಡ್ಡಿಯನ್ನು ನಿಗದಿತ ನಿಯಮಗಳಂತೆ ಮರುಪಾವತಿಸಿದ ಬಳಿಕ ಅಡಮಾನವಿಟ್ಟ ಚಿನ್ನವನ್ನು ಮರಳಿ ಪಡೆಯಬಹುದು.&lt;/p&gt;&lt;p&gt;&lt;strong&gt;ಟೆಕ್ಕಿಗಳಿಗೆ ಚಿನ್ನದ ಸಾಲ ಏಕೆ ಆಕರ್ಷಕ?&lt;/strong&gt;&lt;/p&gt;&lt;p&gt;1. ತ್ವರಿತವಾಗಿ ಹಣ ಸಿಗುವ ಸಾಧ್ಯತೆ&lt;/p&gt;&lt;p&gt;ಟೆಕ್ ಉದ್ಯೋಗಿಗಳ ಜೀವನವೇ ವೇಗ. ತುರ್ತು ಸಂದರ್ಭದಲ್ಲಿ ಸಾಲದ ಅನುಮೋದನೆಗಾಗಿ ದಿನಗಟ್ಟಲೆ ಕಾಯಲು ಎಲ್ಲರಿಗೂ ಸಾಧ್ಯವಿಲ್ಲ. ಚಿನ್ನವೇ ಮೇಲಾಧಾರವಾಗಿರುವುದರಿಂದ, ಅಗತ್ಯ ಪರಿಶೀಲನೆ ಪೂರ್ಣಗೊಂಡ ಬಳಿಕ ಚಿನ್ನದ ಸಾಲವನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವ ಸಾಧ್ಯತೆ ಇದೆ.&lt;/p&gt;&lt;p&gt;2. ಕಡಿಮೆ ದಾಖಲೆಗಳೊಂದಿಗೆ ಪ್ರಕ್ರಿಯೆ&lt;/p&gt;&lt;p&gt;ಚಿನ್ನದ ಸಾಲಕ್ಕೆ ಸಾಮಾನ್ಯವಾಗಿ KYC ದಾಖಲೆ ಮತ್ತು ಅಡಮಾನ ಇಡಬೇಕಾದ ಚಿನ್ನಾಭರಣಗಳ ಅಗತ್ಯವಿರುತ್ತದೆ. ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್&zwnj;ಪೋರ್ಟ್, ಚಾಲನಾ ಪರವಾನಗಿ ಸೇರಿದಂತೆ ಮಾನ್ಯ KYC ದಾಖಲೆಗಳನ್ನು ಬಳಸಬಹುದು. ಇದರಿಂದ ದೀರ್ಘವಾದ ದಾಖಲೆ ಪ್ರಕ್ರಿಯೆ ಮತ್ತು ಹೆಚ್ಚಿನ ಕಾಗದಪತ್ರಗಳ ತೊಂದರೆ ಕಡಿಮೆಯಾಗಬಹುದು.&lt;/p&gt;&lt;p&gt;3. ಹಲವು ಮರುಪಾವತಿ ಆಯ್ಕೆಗಳು&lt;/p&gt;&lt;p&gt;ಚಿನ್ನದ ಸಾಲಗಳಲ್ಲಿ ಸಾಲದಾತರನ್ನು ಅವಲಂಬಿಸಿ ವಿವಿಧ ಮರುಪಾವತಿ ಆಯ್ಕೆಗಳು ಲಭ್ಯವಿರಬಹುದು. EMI ಮೂಲಕ ಮರುಪಾವತಿ, ನಿರ್ದಿಷ್ಟ ಅವಧಿಗೆ ಬಡ್ಡಿ ಮಾತ್ರ ಪಾವತಿಸುವ ಆಯ್ಕೆ ಅಥವಾ ಸಾಲದ ಅವಧಿಯ ಕೊನೆಯಲ್ಲಿ ಅಸಲು ಮೊತ್ತವನ್ನು ಪಾವತಿಸುವ &lsquo;ಬುಲೆಟ್ ರಿಪೇಮೆಂಟ್&rsquo; ಆಯ್ಕೆಯೂ ಇರಬಹುದು. ಇದರಿಂದ ತಮ್ಮ ಆದಾಯ ಮತ್ತು ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ಮರುಪಾವತಿ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲು ಸಾಲಗಾರರಿಗೆ ಅನುಕೂಲವಾಗಬಹುದು.&lt;/p&gt;&lt;p&gt;4. ಮುಂಗಡ ಮರುಪಾವತಿಗೆ ಶುಲ್ಕವಿಲ್ಲದ ಆಯ್ಕೆ&lt;/p&gt;&lt;p&gt;ಕೆಲವು ಚಿನ್ನದ ಸಾಲ ಯೋಜನೆಗಳಲ್ಲಿ ಫೋರ್&zwnj;ಕ್ಲೋಸರ್ ಅಥವಾ ಪೂರ್ವಪಾವತಿ ಶುಲ್ಕವಿಲ್ಲದ ಸೌಲಭ್ಯ ಇರಬಹುದು. ಉದಾಹರಣೆಗೆ, ಬೋನಸ್, ESOP ಪಾವತಿ ಅಥವಾ ಬೇರೆ ಮೂಲದಿಂದ ದೊಡ್ಡ ಮೊತ್ತದ ಹಣ ಕೈಗೆ ಬಂದರೆ, ಸಾಲದ ಅವಧಿ ಮುಗಿಯುವ ಮೊದಲೇ ಸಾಲವನ್ನು ಮುಚ್ಚುವ ಅವಕಾಶ ದೊರೆಯಬಹುದು. ಇದರಿಂದ ಸಾಲದ ಅವಧಿ ಕಡಿಮೆಯಾಗುವುದರ ಜೊತೆಗೆ ಒಟ್ಟಾರೆ ಬಡ್ಡಿ ವೆಚ್ಚವನ್ನೂ ತಗ್ಗಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಸೌಲಭ್ಯ ಸಾಲದಾತರು ಮತ್ತು ನಿರ್ದಿಷ್ಟ ಸಾಲ ಯೋಜನೆಯ ನಿಯಮಗಳನ್ನು ಅವಲಂಬಿಸಿರುತ್ತದೆ.&lt;/p&gt;&lt;p&gt;5. ಅಡಮಾನವಿಟ್ಟ ಚಿನ್ನಕ್ಕೆ ವಿಮೆ&lt;/p&gt;&lt;p&gt;ಕೆಲವು ಸಾಲದಾತರು ಸಾಲದ ಅವಧಿಯಲ್ಲಿ ಅಡಮಾನವಿಟ್ಟ ಚಿನ್ನಾಭರಣ, ಆಭರಣ ಅಥವಾ ಚಿನ್ನದ ನಾಣ್ಯಗಳಿಗೆ ವಿಮಾ ರಕ್ಷಣೆಯನ್ನು ಒದಗಿಸಬಹುದು. ಚಿನ್ನ ಸಾಲದಾತರ ವಶದಲ್ಲಿರುವ ಅವಧಿಯಲ್ಲಿ ಅದರ ಸುರಕ್ಷತೆಗೆ ಇದು ಹೆಚ್ಚುವರಿ ರಕ್ಷಣೆಯಾಗಬಹುದು. ಇದರಿಂದ ತಮ್ಮ ಅಮೂಲ್ಯ ಚಿನ್ನವನ್ನು ಅಡಮಾನ ಇಡಬೇಕಾದ ಸಂದರ್ಭದಲ್ಲೂ ಸಾಲಗಾರರಿಗೆ ಹೆಚ್ಚಿನ ಭದ್ರತೆಯ ಭಾವನೆ ಮೂಡಬಹುದು.&lt;/p&gt;&lt;h2&gt;ಬೆಂಗಳೂರಿನ ಟೆಕ್ಕಿಗಳಿಗೆ ಇದು ಏಕೆ ಸೂಕ್ತ ಆಯ್ಕೆಯಾಗುತ್ತಿದೆ?&lt;/h2&gt;&lt;p&gt;ಸ್ಥಿರ ಸಂಬಳ ಪಡೆಯುವ ಟೆಕ್ ವೃತ್ತಿಪರರಿಗೆ ತುರ್ತು ಹಣದ ಅಗತ್ಯ ಎದುರಾದಾಗ ಹೂಡಿಕೆಗಳನ್ನು ಮುರಿಯುವುದು ಅಥವಾ ಇತರ ಆಸ್ತಿಗಳನ್ನು ಮಾರಾಟ ಮಾಡುವುದು ಅನಿವಾರ್ಯವಾಗಬೇಕಿಲ್ಲ. ಮನೆಯಲ್ಲಿರುವ ಚಿನ್ನವನ್ನು ಅಡಮಾನವಿಟ್ಟು ಅಗತ್ಯವಿರುವ ಹಣವನ್ನು ಪಡೆಯುವ ಅವಕಾಶ ಇರುವುದರಿಂದ ಕೆಲವರು ಈ ಆಯ್ಕೆಯನ್ನು ಪರಿಗಣಿಸುತ್ತಿದ್ದಾರೆ. ವಿಶೇಷವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆ ದುರಸ್ತಿ, ಶಿಕ್ಷಣ ವೆಚ್ಚ ಅಥವಾ ವೈಯಕ್ತಿಕ ಅಗತ್ಯಗಳಂತಹ ಸಂದರ್ಭಗಳಲ್ಲಿ ತ್ವರಿತ ಹಣದ ಅವಶ್ಯಕತೆ ಎದುರಾದಾಗ ಚಿನ್ನದ ಸಾಲವು ಪರ್ಯಾಯ ಹಣಕಾಸು ಮಾರ್ಗವಾಗಬಹುದು.&lt;/p&gt;&lt;h2&gt;ಚಿನ್ನದ ಸಾಲ ಪಡೆಯುವ ಮುನ್ನ ಈ ವಿಷಯಗಳನ್ನು ಗಮನಿಸಿ&lt;/h2&gt;&lt;p&gt;ಬೆಂಗಳೂರಿನಲ್ಲಿ ಚಿನ್ನದ ಸಾಲ ಪಡೆಯಲು ಮುಂದಾಗುವವರು ಕೆಲವು ಪ್ರಮುಖ ಅಂಶಗಳನ್ನು ಪರಿಶೀಲಿಸುವುದು ಅಗತ್ಯ. ಸಾಲದ ಮೇಲಿನ ಬಡ್ಡಿದರ ಎಷ್ಟು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ಹೆಚ್ಚುವರಿ ಶುಲ್ಕಗಳಿವೆಯೇ ಎಂದು ಪರಿಶೀಲಿಸಿ. ಸಾಲದ ಅವಧಿ ಮತ್ತು ಮರುಪಾವತಿ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಿ. EMI, ಬಡ್ಡಿ ಮಾತ್ರ ಅಥವಾ ಬುಲೆಟ್ ಮರುಪಾವತಿ&mdash;ಯಾವ ಆಯ್ಕೆ ನಿಮಗೆ ಸೂಕ್ತ ಎಂಬುದನ್ನು ಲೆಕ್ಕ ಹಾಕಿ. ಪೂರ್ವಪಾವತಿ ಅಥವಾ ಫೋರ್&zwnj;ಕ್ಲೋಸರ್ ಶುಲ್ಕಗಳ ನಿಯಮಗಳನ್ನು ಪರಿಶೀಲಿಸಿ. ಸಾಲ ಮರುಪಾವತಿಸಲು ಸಾಧ್ಯವಾಗದಿದ್ದರೆ ಅಡಮಾನವಿಟ್ಟ ಚಿನ್ನದ ಮೇಲೆ ಸಾಲದಾತರು ಕೈಗೊಳ್ಳುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ. ಸಾಲ ಪಡೆಯುವ ಮುನ್ನ ಒಟ್ಟು ಮರುಪಾವತಿ ಮೊತ್ತವನ್ನು ಲೆಕ್ಕ ಹಾಕಿ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/bengaluru-urban/techies-are-getting-quick-cash-by-applying-for-a-gold-loan-in-bengaluru-suh/articleshow-lkm6x4y"/>
        </item>
        <item>
            <title><![CDATA[ಕೇಂದ್ರ ಸಚಿವ ಜೆಪಿ ನಡ್ಡಾ ಆರೋಗ್ಯದಲ್ಲಿ ಏರುಪೇರು, ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲು]]></title>
            <link>https://kannada.asianetnews.com/india-news/union-minister-jp-nadda-hospitalised-at-delhi-aiims-after-health-deteriorates/articleshow-odzn7is</link>
            <guid isPermaLink="true">https://kannada.asianetnews.com/india-news/union-minister-jp-nadda-hospitalised-at-delhi-aiims-after-health-deteriorates/articleshow-odzn7is</guid>
            <pubDate>Fri, 14 Aug 2026 14:19:55 +0530</pubDate>
            <description><![CDATA[ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ತಕ್ಷಣವೇ ಜೆಪಿ ನಡ್ಡಾ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜೆಪಿ ನಡ್ಡಾ ಕುರಿತು ಆಸ್ಪತ್ರೆ ವೈದ್ಯರು ಹೇಳಿದ್ದೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01jqxwfdpdensxvphczx9ny3z5,imgname-JP-Nadda-1743685924556.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ (ಆ.14) ಕೇಂದ್ರ ಸಚಿವ ಜೆಪಿ ನಡ್ಡಾ ಆರೋಗ್ಯದಲ್ಲಿ ಏರುಪೇರಾಗಿದ್ದು , ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲಿದ ಜೆಪಿ ನಡ್ಡಾ ಅವರನ್ನು ತಕ್ಷಣ ಆಸ್ಪತ್ಪೆ ದಾಖಲಿಸಲಾಗಿದೆ. ವೈದ್ಯರ ಸೂಚನೆಯಂತೆ ಕಾರ್ಡಿಯಾಲಜಿ ವಿಭಾಗದಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನರಿ ಆ್ಯಂಡಿಗ್ರಫಿ ಮಾಡಲಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಹೇಳಿದೆ.&lt;/p&gt;&lt;h2&gt;ಜೆಪಿ ನಡ್ಡಾ ಆರೋಗ್ಯ ಸ್ಥಿರ&lt;/h2&gt;&lt;p&gt;ದೆಹಲಿ ಏಮ್ಸ್ ಆಸ್ಪತ್ರೆಯ ಕಾರ್ಡಿಯಲಜಿ ವಿಭಾಗದಲ್ಲಿ ಜೆಪಿ ನಡ್ಡಾ ಅವರಿಗೆ ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ. ಸದ್ಯ ಆ್ಯಂಜಿಯೋಗ್ರಾಮ್ ಟೆಸ್ಟ್ ವರದಿಯಲ್ಲಿ ಜೆಪಿ ನಡ್ಡಾ ಉಸಿರಾಟ ಸಮಸ್ಯೆ ಅಸಲಿ ಆರೋಗ್ಯ ಸಮಸ್ಯೆಗಳು ಬಹಿರಂಗವಾಗಲಿದೆ. ಜೆಪಿ ನಡ್ಡಾ ಆಸ್ಪತ್ರ ದಾಖಲು ಹಾಗೂ ವೈದ್ಯಕೀಯ ಪರೀಕ್ಷೆ ಕುರಿತು ದೆಹಲಿ ಏಮ್ಸ್ ಆಸ್ಪತ್ಪೆ ಮಾಹಿತಿ ನೀಡಿದೆ. ಕೇಂದ್ರ ಸಚಿವ ಜೆಪಿ ನಡ್ಡಾ ಉಸಿರಾಟದ ಸಮಸ್ಯೆಯಿಂದ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ. ನಡ್ಡಾ ಆವರ ಆರೋಗ್ಯ ಸ್ಥಿತಿ ಪರಿಶೀಲಿಸಿ ಕೊರೊನರ್ ಆ್ಯಂಡಿಯೋಗ್ರಫಿ ಟೆಸ್ಟ್ ಮಾಡಲಾಗಿದೆ. ಜೆಪಿ ನಡ್ಡಾ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನಡಿದೆ. ಸದ್ಯ ಜೆಪಿ ನಡ್ಡಾ ಚಿಕಿತ್ಸೆ ಮುಂದುವರಿದಿದೆ. ವರದಿ ಬಳಿಕ ವೈದ್ಯರು ಜೆಪಿ ನಡ್ಡಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ.&lt;/p&gt;&lt;p&gt;ಆಗಸ್ಟ್ 13ರ ಸಂಜೆ ಜೆಪಿ ನಡ್ಡಾಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲಿ ಉಸಿರಾಟ ಸಮಸ್ಯೆ ತೀವ್ರಗೊಂಡಿದೆ. ಪರಿಣಾಮ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಮ್ಸ್ ವೈದ್ಯರ ತಂಡ ಜೆಪಿ ನಡ್ಡಾ ಆರೋಗ್ಯದ ಮೇಲೆ ನಿಗಾ ಇಟ್ಟಿದೆ.&lt;/p&gt;&lt;p&gt;65ರ ಹರೆಯದ ಜೆಪಿ ನಡ್ಡಾ ಕೇಂದ್ರ ಆರೋಗ್ಯ ಸಚಿವರಾಗಿದ್ದಾರೆ. ಹಿಮಾಚಲ ಪ್ರದೇಶ ಮೂಲದ ಜೆಪಿ ನಡ್ಡಾ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿಗೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಎಬಿವಿಪಿ ಮೂಲಕ ವಿದ್ಯಾರ್ಥಿ ಚಳುವಳಿಯಿಂದ ಗುರುತಿಸಿಕೊಂಡ ಜೆಪಿ ನಡ್ಡಾ 1989ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಗಮನಸೆಳೆದಿದ್ದರು. 1993ರಲ್ಲಿ ಹಿಮಾಟಲ ಪ್ರದೇಶದಿಂದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ನಾಯಕನಾಗಿ ಬೆಳೆದಿದ್ದರು. 2014ರಿಂದ 2019ರ ವರೆಗೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಜೆಪಿ ನಡ್ಡಾ ಬಳಿಕ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ಅಧಿಕಾರವಹಿಸಿಕೊಂಡಿದ್ದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/india-news/union-minister-jp-nadda-hospitalised-at-delhi-aiims-after-health-deteriorates/articleshow-odzn7is"/>
        </item>
        <item>
            <title><![CDATA[ಬೆಂಗಳೂರಲ್ಲಿ ಕರಾವಳಿ ಸಂಭ್ರಮ: ನಾಳೆ ವಿಜಯನಗರದಲ್ಲಿ ಯಕ್ಷಗಾನ, ಖಾದ್ಯ ಮೇಳದೊಂದಿಗೆ 'ವಿಶ್ವ ಕುಂದಾಪ್ರ ಕನ್ನಡ ದಿನ'!]]></title>
            <link>https://kannada.asianetnews.com/karnataka-districts/vishwa-kundapra-kannada-dina-celebration-in-bengaluru-vijayanagar-buntara-sangha/articleshow-220y8wl</link>
            <guid isPermaLink="true">https://kannada.asianetnews.com/karnataka-districts/vishwa-kundapra-kannada-dina-celebration-in-bengaluru-vijayanagar-buntara-sangha/articleshow-220y8wl</guid>
            <pubDate>Fri, 14 Aug 2026 14:32:58 +0530</pubDate>
            <description><![CDATA[ಬೆಂಗಳೂರಿನಲ್ಲಿರುವ ಕುಂದಾಪುರ ಜನರಿಗಾಗಿ 'ಕುಂದಾಪ್ರ ಕನ್ನಡ ಪ್ರತಿಷ್ಠಾನ'ವು ಆಗಸ್ಟ್ 15 ರಂದು 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಯೋಜಿಸಿದೆ. ವಿಜಯನಗರದ ಬಂಟರ ಸಂಘದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ, ಗ್ರಾಮೀಣ ಆಟಗಳು, ಖಾದ್ಯ ಮೇಳದ ಜೊತೆಗೆ ಮಹತ್ವದ ಘೋಷಣೆಯೊಂದು ನಿರೀಕ್ಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzr47m7hp7y1kyr52e6ddsh,imgname-bengaluru-vishwa-kundapra-kannada-dina-1786698145415.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): ಬೆಂ&lt;/strong&gt;ಗಳೂರಿನಲ್ಲಿರುವ ಕುಂದಾಪುರ ಮೂಲದ ಜನರನ್ನು ಹಾಗೂ ಕುಂದಾಪ್ರ ಭಾಷಾ ಪ್ರೇಮಿಗಳನ್ನು ಒಂದೇ ಸೂರಿನಡಿ ತರುವ 'ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)' ಈ ವರ್ಷದ 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನು ಆಗಸ್ಟ್ 15ರ ಶನಿವಾರದಂದು ಅತ್ಯಂತ ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ. ವಿಜಯನಗರದ 'ಬಂಟರ ಸಂಘದ ಸಭಾಂಗಣ'ದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿಯವರೆಗೂ ವಿವಿಧ ಸಾಂಸ್ಕೃತಿಕ, ಗ್ರಾಮೀಣ ಆಟೋಟ ಹಾಗೂ ಖಾದ್ಯ ಮೇಳಗಳ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಕರಾವಳಿಯ ವಿಶಿಷ್ಟ ಹಬ್ಬ 'ವಿಶ್ವ ಕುಂದಾಪ್ರ ಕನ್ನಡ ದಿನ'&lt;/strong&gt;&lt;/h2&gt;&lt;p&gt;ಕರಾವಳಿ ಭಾಗದಲ್ಲಿ ಆಷಾಢ ಅಮಾವಾಸ್ಯೆ (ಆಸಾಡಿ ಅಮಾಸಿ/ಆಟಿ ಅಮಾವಾಸ್ಯೆ) ದಿನಕ್ಕೆ ಅತ್ಯಂತ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಕಳೆದ ಏಳು ವರ್ಷಗಳಿಂದ ಈ ಕರ್ಕಾಟಕ ಅಮಾವಾಸ್ಯೆಯ ದಿನವನ್ನು 'ವಿಶ್ವ ಕುಂದಾಪ್ರ ಕನ್ನಡ ದಿನ'ವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಆಗಸ್ಟ್ 12ರಂದು ಆಷಾಢ ಅಮಾವಾಸ್ಯೆಯ ಅಂಗವಾಗಿ ಕುಂದಾಪುರ ಸೇರಿದಂತೆ ಕರಾವಳಿಯಾದ್ಯಂತ ಸಂಭ್ರಮದ ಆಚರಣೆ ನಡೆದಿತ್ತು. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪ್ರ ಭಾಷಿಕರಿಗಾಗಿ ಆಗಸ್ಟ್ 15ರಂದು ಶನಿವಾರ ಬಂಟರ ಸಂಘದಲ್ಲಿ ಈ ವೈಭವದ ದಿನವನ್ನು ಆಚರಿಸಲಾಗುತ್ತಿದೆ.&lt;/p&gt;&lt;h3&gt;&lt;strong&gt;'ಆಗಸ್ಟ್ 15 ಬರೀ ಟ್ರೇಲರ್, ಪಿಚ್ಚರ್ ಅಭಿ ಬಾಕಿ ಹೈ!': ಬೃಹತ್ ಘೋಷಣೆ ನಿರೀಕ್ಷೆ&lt;/strong&gt;&lt;/h3&gt;&lt;p&gt;ಶನಿವಾರದ ರಾಜಸಭೆಯಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ವತಿಯಿಂದ ಅತ್ಯಂತ ಮಹತ್ವದ ಹಾಗೂ ಬೃಹತ್ ಘೋಷಣೆಯೊಂದನ್ನು ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 'ಶನಿವಾರದ ಕಾರ್ಯಕ್ರಮ ಕೇವಲ ಟ್ರೇಲರ್ ಇದ್ದಂತೆ, ಮುಂದೆ ನಡೆಯಲಿರುವ ಅದ್ಧೂರಿ ಕುಂದಾಪ್ರ ಹಬ್ಬದ ಸಂಪೂರ್ಣ 'ಪಿಚ್ಚರ್' ಶನಿವಾರದ ವೇದಿಕೆಯಲ್ಲಿ ಅನಾವರಣಗೊಳ್ಳಲಿದೆ' ಎಂದು ತಿಳಿಸಿರುವ ಪ್ರತಿಷ್ಠಾನವು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದೆ.&lt;/p&gt;&lt;h2&gt;&lt;strong&gt;ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು ಹಾಗೂ ರಂಜನೆ&lt;/strong&gt;&lt;/h2&gt;&lt;p&gt;ಪ್ರಮುಖ ಅತಿಥಿಗಳು: ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಖ್ಯಾತ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.&lt;/p&gt;&lt;p&gt;&lt;strong&gt;ಬಯಲಾಟ &amp;amp; ಗ್ರಾಮೀಣ ಆಟಗಳು: &lt;/strong&gt;ಬಂಟರ ಸಂಘದ ಆವರಣದಲ್ಲಿ ಹಗ್ಗಜಗ್ಗಾಟ ಸೇರಿದಂತೆ ಕರಾವಳಿಯ ತನುವನ್ನು ನೆನಪಿಸುವ ಗ್ರಾಮೀಣ ಕ್ರೀಡಾಕೂಟ.&lt;/p&gt;&lt;p&gt;&lt;strong&gt;ಸಂಗೀತ ಹಾಗೂ ಯಕ್ಷಗಾನ ಸಂಭ್ರಮ:&lt;/strong&gt; 'ಮಂದ್ರ ಕಡಲು' ಕಾರ್ಯಕ್ರಮದಡಿ ರಾಘವೇಂದ್ರ ಬೀಜಾಡಿ, ಸಾನ್ವಿ ಶೆಟ್ಟಿ ಅವರಿಂದ ಭಾವಗೀತೆ ಗಾಯನ. ಜೊತೆಗೆ 'ಯುಗಳ ರಸಗವಳ' ಹೆಸರಿನಲ್ಲಿ ಜೋಡು ಮುಮ್ಮೇಳ ಹಾಗೂ ಕೂಡು ಹಿಮ್ಮೇಳಗಳ ಅಪರೂಪದ ಯಕ್ಷಗಾನ ಪ್ರಯೋಗ.&lt;/p&gt;&lt;p&gt;&lt;strong&gt;ನೃತ್ಯ ರೂಪಕ 'ಮಾರ್ಣ್&zwnj;ಕಟ್ಟೆ ಬ್ರಹ್ಮ, ಮಂದಾರ್ತಿ ಅಮ್ಮ': &lt;/strong&gt;ಅರೆಹೊಳೆ ಪ್ರತಿಷ್ಠಾನದ 'ನಂದಗೋಕುಲ' ಕಲಾವಿದರಿಂದ ವಿಶಿಷ್ಟ ನೃತ್ಯ ರೂಪಕ ಪ್ರದರ್ಶನ.&lt;/p&gt;&lt;p&gt;&lt;strong&gt;ಇಲ್ಕಾಣಿ ಕುಂದಾಪ್ರ:&lt;/strong&gt; ಇದುವರೆಗೆ ನೀವು ಕಂಡೂ ಕಾಣದ ಕುಂದಾಪುರದ ಗತವೈಭವವನ್ನು ಪರಿಚಯಿಸುವ ವಿಶೇಷ ದೃಶ್ಯ ವೈಭವ.&lt;/p&gt;&lt;p&gt;&lt;strong&gt;ಯಬ್ಯಾ ಸೌಂಡೇ! (DJ Night):&lt;/strong&gt; ಕುಂದಾಪ್ರ ಕನ್ನಡದ ಖ್ಯಾತ ಡಿಜೆ ರಂಜು ಕುಂದಾಪುರ ಅವರಿಂದ ಧಮಾಕ ಡಿಜೆ ಸಂಗೀತ ಕಾರ್ಯಕ್ರಮ.&lt;/p&gt;&lt;p&gt;&lt;strong&gt;ಖಾದ್ಯ ಹಾಗೂ ವ್ಯಾಪಾರ ಮೇಳ: &lt;/strong&gt;ಕುಂದಾಪುರ ಶೈಲಿಯ ಸಾಂಪ್ರದಾಯಿಕ ಅಡುಗೆಗಳು, ತಿನಿಸುಗಳು ಹಾಗೂ ಊಟದ ವ್ಯವಸ್ಥೆ. ಜೊತೆಗೆ ಕುಂದಾಪ್ರ ಭಾಗದ ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆಗಳು ಇರಲಿವೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/vishwa-kundapra-kannada-dina-celebration-in-bengaluru-vijayanagar-buntara-sangha/articleshow-220y8wl"/>
        </item>
        <item>
            <title><![CDATA[ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ಕೊಟ್ಟ 3 ವರ್ಷದ ಬಾಲಕ…. ಕಾರಣ ಕೇಳಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಿ!]]></title>
            <link>https://kannada.asianetnews.com/viral/3-year-old-boy-complains-to-police-against-mom-over-chocolates-video-goes-viral/articleshow-8l5qse9</link>
            <guid isPermaLink="true">https://kannada.asianetnews.com/viral/3-year-old-boy-complains-to-police-against-mom-over-chocolates-video-goes-viral/articleshow-8l5qse9</guid>
            <pubDate>Fri, 14 Aug 2026 14:29:01 +0530</pubDate>
            <description><![CDATA[Viral Video: ಮೂರು ವರ್ಷದ ಮಗುವೊಂದು ಪೊಲೀಸ್ ಠಾಣೆಗೆ ತೆರಳಿ, ಚಾಕಲೇಟ್ ಕದ್ದ ತನ್ನ ತಾಯಿಯ ವಿರುದ್ಧ ದೂರು ನೀಡಿರುವ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿ ದೂರು ದಾಖಲಿಸಿದ್ದು, ಮಗುವಿನ ಮುಗ್ಧತೆ ನೋಡಿ, ಜನ ನಗುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzqwppbqv6gmeypwtzz3n5v,imgname-chocolate-complaint-1786697898691.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಚಾಕಲೇಟ್ ಕದ್ದ ಅಮ್ಮನ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಬಾಲಕ&lt;/strong&gt;&lt;/h2&gt;&lt;p&gt;ಮಧ್ಯಪ್ರದೇಶದ ಬುರ್ಹಾನ್&zwnj;ಪುರದಲ್ಲಿ ಮೂರು ವರ್ಷದ ಬಾಲಕನೊಬ್ಬ ತನ್ನ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಕೊಲೇಟ್ ಮತ್ತು ಕ್ಯಾಂಡಿ ಕೊಡದ ತಾಯಿಯ ವಿರುದ್ಧ ದೂರು ನೀಡಲು ಬಾಲಕ ತನ್ನ ತಂದೆಯೊಂದಿಗೆ ದೇದ್ತಲಾಯಿ ಪೊಲೀಸ್ ಠಾಣಾ ಚೌಕಿಗೆ ತೆರಳಿದ್ದ. ಅಲ್ಲಿ ಬಾಲಕ ಸಬ್&zwnj;ಇನ್&zwnj;ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರನ್ನು ಭೇಟಿಯಾಗಿ, ತನ್ನ ತಾಯಿ ತನ್ನ ಚಾಕೊಲೇಟ್&zwnj;ಗಳನ್ನು &ldquo;ಕದ್ದಿದ್ದಾರೆ&rdquo; ಎಂದು ದೂರು ನೀಡಿದ್ದಾನೆ. ಅಲ್ಲದೆ, ತಾಯಿಗೆ ಶಿಕ್ಷೆ ನೀಡಬೇಕು ಎಂದೂ ಹೇಳಿದ್ದಾನೆ.&lt;/p&gt;&lt;p&gt;ಮಗುವಿನ ಮಾತನ್ನು ನಿರ್ಲಕ್ಷಿಸದೆ ಪ್ರಿಯಾಂಕಾ ನಾಯಕ್ ಅವರು ತಾಳ್ಮೆಯಿಂದ ಆತನ ಮಾತು ಕೇಳಿದ್ದಾರೆ. ಬಳಿಕ ಪೆನ್ ಮತ್ತು ಪೇಪರ್ ತೆಗೆದುಕೊಂಡು ಆತನ ದೂರನ್ನು ಬರೆಯಲು ಮುಂದಾಗಿದ್ದಾರೆ. ನಂತರ ದೂರಿನ ಮೇಲೆ ಸಹಿ ಮಾಡುವಂತೆ ಕೇಳಿದಾಗ, ಬಾಲಕ ಪೇಪರ್ ಮೇಲೆ ಹಲವು ಗುರುತುಗಳನ್ನು ಹಾಕಿದ್ದಾನೆ. ಆತ ತನ್ನ ದೂರನ್ನು ನಿಜವಾಗಿಯೂ ಗಂಭೀರವಾಗಿ ತೆಗೆದುಕೊಂಡಿರುವಂತೆ ವರ್ತಿಸಿದ್ದು, ಈ ದೃಶ್ಯ ಎಲ್ಲರನ್ನೂ ನಗುವಂತೆ ಮಾಡಿದೆ.&lt;/p&gt;&lt;p&gt;&lt;strong&gt;ಮುಂದೇನಾಯ್ತು?&lt;/strong&gt;&lt;/p&gt;&lt;p&gt;ಬಾಲಕನ ತಂದೆಯ ಪ್ರಕಾರ, ಆತನ ತಾಯಿ ಗದರಿಸಿದ್ದಲ್ಲದೆ ಚಾಕೊಲೇಟ್ ಮತ್ತು ಕ್ಯಾಂಡಿ ತಿನ್ನುವುದಕ್ಕೂ ನಿರ್ಬಂಧ ಹೇರಿದ್ದರು. ಇದರಿಂದ ಬೇಸರಗೊಂಡ ಬಾಲಕ ಪೊಲೀಸರ ಬಳಿ ದೂರು ನೀಡಲು ಬಂದಿದ್ದ. ಈ ಮುದ್ದಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕ ನ್ಯಾಯ ಪಡೆಯಲು ತೋರಿದ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುರ್ಹಾನ್&zwnj;ಪುರದ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮಾತನಾಡಿ, ಬಾಲಕನಿಗೆ ಪೊಲೀಸರ ಬಗ್ಗೆ ವಿಶೇಷ ಆಸಕ್ತಿ ಇತ್ತು ಎಂದು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಮಗುವನ್ನು ಆತ್ಮೀಯವಾಗಿ ನಡೆಸಿಕೊಂಡಿದ್ದನ್ನೂ ಅವರು ಶ್ಲಾಘಿಸಿದ್ದಾರೆ.&lt;/p&gt;&lt;p&gt;ಜನರು ಪೊಲೀಸರ ಬಳಿ ದೂರು ನೀಡಲು ಹೆದರಬಾರದು ಎಂಬ ಸಂದೇಶವನ್ನೂ ಈ ಘಟನೆಯ ಮೂಲಕ ನೀಡಲಾಗಿದೆ. ಈ ವಿಡಿಯೋ ಅಂದಿನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಗಮನಕ್ಕೂ ಬಂದಿತ್ತು. ಅವರು ವಿಡಿಯೋ ಕಾಲ್ ಮೂಲಕ ಬಾಲಕನೊಂದಿಗೆ ಮಾತನಾಡಿ, ದೀಪಾವಳಿಗೆ ಚಾಕೊಲೇಟ್&zwnj;ಗಳು ಮತ್ತು ಸೈಕಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು.&lt;/p&gt;View this post on Instagram&lt;p&gt;A post shared by The Falcon (@thefalconwire)&lt;/p&gt;]]></content:encoded>
            <category><![CDATA[Viral News]]></category>
            <dc:creator>Pavna Das</dc:creator>
            <atom:link href="https://kannada.asianetnews.com/viral/3-year-old-boy-complains-to-police-against-mom-over-chocolates-video-goes-viral/articleshow-8l5qse9"/>
        </item>
        <item>
            <title><![CDATA[ಪ್ರಜ್ವಲ್‌ಗೆ 'ಅಪ್ಪ ರೇವಣ್ಣ-ಶಿವ, ಅಮ್ಮ ಭವಾನಿ-ಪಾರ್ವತಿ'! ಜೈಲಲ್ಲೂ ಮೊಬೈಲ್ ಬಳಿಸಿದ 40 ನಂಬರ್ಸ್‌ಗೆ ಸೀಕ್ರೆಟ್ ಕೋಡ್]]></title>
            <link>https://kannada.asianetnews.com/karnataka-districts/hassan-former-mp-prajwal-revanna-mobile-used-inside-parappana-agrahara-central-jail-revanna-name-as-shiva/articleshow-y1h7ai6</link>
            <guid isPermaLink="true">https://kannada.asianetnews.com/karnataka-districts/hassan-former-mp-prajwal-revanna-mobile-used-inside-parappana-agrahara-central-jail-revanna-name-as-shiva/articleshow-y1h7ai6</guid>
            <pubDate>Fri, 14 Aug 2026 14:13:54 +0530</pubDate>
            <description><![CDATA[ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ಪಕ್ಕಾ ಪ್ಲಾನ್‌ನೊಂದಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಜ್ವಲ್ ರೇವಣ್ಣನ ಸೆಲ್‌ನಲ್ಲಿ ಮೊಬೈಲ್, ಪೆನ್ ಡ್ರೈವ್ ಹಾಗೂ 40 ಫೋನ್ ನಂಬರ್‌ಗಳಿದ್ದ ನೋಟ್‌ಬುಕ್ ಪತ್ತೆಯಾಗಿದ್ದು, ತಂದೆ-ತಾಯಿಯ ಹೆಸರನ್ನು ಕೋಡ್ ವರ್ಡ್‌ನಲ್ಲಿ ಬರೆದಿರುವುದು ಬೆಳಕಿಗೆ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzpyp7qk7t65bfegbxmf3m5,imgname-prajwal-revanna-mobile-use-in-jail-1786696915191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ- ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ಪರಪ್ಪನ ಅಗ್ರಹಾರ ಜೈಲಿನ ದಾಳಿ ಮಾಡೋಕೆ ಸಿದ್ದತೆ ಮಾಡಿದ್ದ ಸಿಸಿಬಿ ಪೊಲೀಸರು, ಈ ಬಾರಿ ಪಕ್ಕಾ ಪ್ಲಾನ್ ಮಾಡ್ಕೊಂಡು ಎಂಟ್ರಿಯಾಗಿದ್ರು.. ಆ ಪ್ಲಾನ್ ಹೇಗಿತ್ತು,.? ಪ್ರಜ್ವಲ್ ರೇವಣ್ಣ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ..?&lt;/p&gt;&lt;p&gt;ನಾಯಿಯ ಬಾಲ ಯಾವತ್ತಿದ್ರೂ ಡೊಂಕು ಅನ್ನೋ ಮಾತಿ ಇದೆ.. ಆ ಮಾತು ಪರಪ್ಪನ ಅಗ್ರಹಾರ ಜೈಲಿಗೆ ಸರಿಯಾಗೇ ಹೋಲಿಕೆಯಾಗುತ್ತೆ.. ಮೇಲಾಧಿಕಾರಿಗಳು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ತಿದ್ರು. ಒಳಗೆ ಮಾತ್ರ ಕಳ್ಳಾಟ ಎಂದಿನಂತೆ ನಡೀತನೆ ಇರುತ್ತೆ.&lt;/p&gt;&lt;p&gt;ಪರಪ್ಪನ ಅಗ್ರಹಾರ ಜೈಲಿನ ಮೇಲೆ ಕಳೆದ ಆರನೇ ತಾರೀಖಿನಂದು ದಾಳಿ ನಡೆಸಿದ್ದ ಅಧಿಕಾರಿಗಳು, ಬರೀ ಕೈಯಲ್ಲೇ ವಾಪಸು ಆಗಿದ್ದರು. ದಾಳಿಗೆ ಹೋದ ತಕ್ಷಣ ಎಂಟ್ರಿಯಲ್ಲೇ ಕೆಲ ಸಿಗ್ನಲ್ ಗಳ ಮೂಲಕ ಒಳಗಿನವರಿಗೆ ಸಿಗ್ನಲ್ ಕೊಟ್ಟು ಬಿಡ್ತಿದ್ದರು. ಅಷ್ಟೇ ಅಲ್ದೇ, ಅಧಿಕಾರಿಗಳ ತಂಡದ ಪ್ರತಿಯೊಬ್ಬರಿಗೆ ಸೀಲ್ ಹಾಕಿ ಒಳಗೆ ಬಿಡೋಕೆ ಕನಿಷ್ಠ ಅರ್ಧ ಗಂಟೆ ಆಗೋದು. ಅಷ್ಟರೊಳಗೆ ಒಳಗಿನ ಎಲ್ಲಾ ಅಕ್ರಮ ಚಟುವಟಿಕೆ ಗಳು ಬಂದ್ ಆಗಿಬಿಡುತ್ತಿದ್ವು..&lt;/p&gt;&lt;p&gt;ಆದರೆ ಮೊನ್ನೆ ಮಾತ್ರ ಪಕ್ಕಾ ಪ್ಲಾನ್ ಮಾಡ್ಕೊಂಡು ಹೋಗಿದ್ದ ಪೊಲೀಸರು.. ಮೊದಲಿಗೆ ಮೀಟಿಂಗ್ ನೆಪದಲ್ಲಿ ಸಿಸಿಬಿಯ ಇಬ್ಬರು ಡಿಸಿಪಿ ಗಳು ಮಾತ್ರ ಒಳಗೆ ಹೋಗಿದ್ರು.. ಇದೇ ವೇಳೆ ಅವರ ಕಾರಿನಲ್ಲಿ ಇಬ್ಬರು ಇನ್ಸ್ಪೆಕ್ಟರ್ ಗಳನ್ನು ಕರ್ಕೊಂಡು ಹೋಗಿದ್ರು.. ಒಳಗೆ ಹೋದ ತಕ್ಷಣ ಒಬ್ಬ ಇನ್ಸ್ಪೆಕ್ಟರ್ ಕಂಟ್ರೋಲ್ ರೂಮ್ ನಿಂದ ಯಾವುದೇ ಮಸೇಜ್ ಹೋದದಂತೆ ಎಚ್ಚರಿಕೆ ವಹಿಸಿದ್ರೆ, ಮತ್ತೊಬ್ಬ ಇನ್ಸ್ಪೆಕ್ಟರ್ ಸಿಸಿಟಿವಿ ಕಮಾಂಡೆಂಟ್ ಸೆಂಟರ್ ರೂಮ್ ಗೆ ಹೋಗಿ ಕಂಟ್ರೋಲ್ ತೆಗೆದುಕೊಂಡಿದ್ರು.. ನಂತರವೇ 120 ಜನರ ಟೀಂ ಜೈಲಿನ ಒಳಗೆ ಎಂಟ್ರಿಯಾಗಿತ್ತು.&lt;/p&gt;&lt;p&gt;ಈ ವೇಳೆ ನೇರವಾಗಿ ಪ್ರಜ್ವಲ್ ರೇವಣ್ಣ ಸೆಲ್ ಗೆ ಹೋಗಿ ಪರಿಶೀಲನೆ ನಡೆಸಿದ ವೇಳೆ ಮೊಬೈಲ್, ನೋಟ್ ಬುಕ್ , ಪೆನ್ ಡ್ರೈವ್ ಪತ್ತೆಯಾಗಿದೆ. ಮೊದಲಿಗೆ ಇದೆಲ್ಲಾ ನಂದೇ ಅಂತಾ ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ.. ಪಾಸ್ ವರ್ಡ್ ಓಪನ್ ಮಾಡು ಅಂತಿದ್ದಂತೆ ಅಲರ್ಟ್ ಆದ ಪ್ರಜ್ವಲ್ ಇದು ನಂದಲ್ಲ ಅಂತಾ ಉಲ್ಟಾ ಹೊಡೆದಿದ್ದಾನೆ. ತಂದೆ ರೇವಣ್ಣ ಹೆಸರು ಶಿವ- ತಾಯಿ ಭವಾನಿ ಹೆಸರು ಪಾರ್ವತಿ ಎಂದು ಸೇವ್ ಮಾಡಿಕೊಂಡಿದ್ದಾನೆ.&lt;/p&gt;&lt;h2&gt;&lt;strong&gt;ಪ್ರಜ್ವಲ್ ರೇವಣ್ಣ ನೋಟ್ ಬುಕ್&zwnj;ನಲ್ಲಿ ಪತ್ತೆಯಾಯ್ತು 40 ಪೋನ್ ನಂಬರ್:&lt;/strong&gt;&lt;/h2&gt;&lt;p&gt;ಪೊಲೀಸರು, ದಾಳಿ ನಡೆಸಿ ವಶಪಡಿಸಿಕೊಂಡ ನೋಟ್ ಬುಕ್ ನಲ್ಲಿ ಬರೋಬ್ಬರಿ 40 ಪೋನ್ ನಂಬರ್ ಗಳು ಪತ್ತೆಯಾಗಿವೆ. ಅದರಲ್ಲಿ ತಂದೆ ರೇವಣ್ಣ ಹೆಸರನ್ನು ಶಿವ, ತಾಯಿ ಭವಾನಿ ರೇವಣ್ಣ ಹೆಸರನ್ನು ಪಾರ್ವತಿ ಅಂತಾ ಬರೆದುಕೊಳ್ಳಲಾಗಿದೆ.. ಅಷ್ಟೇ ಅಲ್ದೇ, ಹಲವು ಅಪ್ತರು ಮತ್ತು ಅಪರಿಚಿತರ ಪೋನ್ ನಂಬರ್ ಗಳು ಕೂಡ ಪತ್ತೆಯಾಗಿವೆ. ಮೊದಲಿಗೆ ನಂದೇ ಪೋನ್ ಅಂತಾ ಒಪ್ಪಿಕೊಂಡ ಪ್ರಜ್ವಲ್. ನಂತರ ಮೊಬೈಲ್ ನ ಪಾಸ್ ವರ್ಡ್ ಓಪನ್ ಮಾಡುವಂತೆ ಸೂಚಿಸಿದ ವೇಳೆ ಮೊಬೈಲ್ ನಂದಲ್ಲ ಅಂದಿದ್ದಾನೆ.. ಹಾಗಾಗ ಮನೆಯವರ ಬಳಿ ಮಾತಾಡಲು ಪೋನ್ ಬಳಕೆ ಮಾಡುತ್ತಿದ್ದೆ ಅಂತಾ ಹೇಳಿದ ಪ್ರಜ್ವಲ್, ಯಾರು ಮೊಬೈಲ್ ತಂದು ಕೊಟ್ಟರು ಅನ್ನೋದು ಬಾಯಿಬಿಡ್ತಿಲ್ಲ.&lt;/p&gt;&lt;p&gt;ಸದ್ಯ ಮೊಬೈಲ್&zwnj;, ಪೆನ್ ಡ್ರೈವ್ ಎಫ್ ಎಸ್ ಎಲ್ ಗೆ ಕಳಸಿರೋ ಪೊಲೀಸರು, ರಿಪೋರ್ಟ್ ಗಾಗಿ ಕಾದಿದ್ದಾರೆ. ಮತ್ತೊಂದು ಕಡೆ ಖಡಕ್ ಅಧಿಕಾರಿ ಅಂತಾ ಫೇಮಸ್ ಆಗಿದ್ದ ಡಿಜಿ ಅಲೋಕ್ ಕುಮಾರ್ ಅವರಿಗೆ ಈ ಘಟನೆಯಿಂದ ಮುಜುಗರದ ಸನ್ನಿವೇಶ ಎದುರಾಗಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸೋಕೆ ಮುಂದಾಗಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/hassan-former-mp-prajwal-revanna-mobile-used-inside-parappana-agrahara-central-jail-revanna-name-as-shiva/articleshow-y1h7ai6"/>
        </item>
        <item>
            <title><![CDATA[ಸೂರ್ಯ ಏಕೆ ಕೊತ ಕೊತ ಬಿಸಿ, ಹೊರ ಪದರದ ರಹಸ್ಯ ಭೇದಿಸಿದ ಭಾರತದ ಆದಿತ್ಯ-L1, ವಿಜ್ಞಾನಿಗಳಿಂದ ಬೆಂಗಳೂರಿನಲ್ಲಿ ಸಂಶೋಧನೆ!]]></title>
            <link>https://kannada.asianetnews.com/science/india-s-aditya-l1-solves-decades-old-solar-mystery-reveals-why-sun-outer-atmosphere-is-millions-of-degrees-hotter-gdp/articleshow-itq9fwf</link>
            <guid isPermaLink="true">https://kannada.asianetnews.com/science/india-s-aditya-l1-solves-decades-old-solar-mystery-reveals-why-sun-outer-atmosphere-is-millions-of-degrees-hotter-gdp/articleshow-itq9fwf</guid>
            <pubDate>Fri, 14 Aug 2026 13:59:23 +0530</pubDate>
            <description><![CDATA[ಸೂರ್ಯನ ಮೇಲ್ಮೈಗಿಂತ ಅದರ ಹೊರಪದರವಾದ ಕರೋನಾ ಹೆಚ್ಚು ಬಿಸಿಯಾಗಿರುವುದೇಕೆ ಎಂಬ ದಶಕಗಳ ರಹಸ್ಯಕ್ಕೆ ಭಾರತದ 'ಆದಿತ್ಯ-ಎಲ್1' ನೌಕೆಯು ಪ್ರಮುಖ ಸುಳಿವು ನೀಡಿದೆ. ಸೌರ ಸ್ಫೋಟಗಳ ನಂತರ ಕಳೆದುಹೋದ ಶಕ್ತಿಯನ್ನು 'ಕಾಂತೀಯ ಮರುಸಂಪರ್ಕ' ಪ್ರಕ್ರಿಯೆಯು ಶೇ. 93ರಷ್ಟು ಮರುಪೂರಣ ಮಾಡುತ್ತದೆ ಎಂದು ಈ ಸಂಶೋಧನೆ ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzebak6braf9x41cvycmp33g,imgname-scientists-propose-sci-fi-ideas-to-keep-earth-habitable-long-after-the-sun-changes-1786114297035.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೂರ್ಯನ ಹೊರ ಪದರವಾದ ಕರೋನಾ' (Corona), ಅದರ ಮೇಲ್ಮೈಗಿಂತ ಲಕ್ಷಾಂತರ ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಬಿಸಿಯಾಗಿರುವುದು ಹೇಗೆ ಎಂಬುದು ದಶಕಗಳಿಂದ ಖಗೋಳ ವಿಜ್ಞಾನಿಗಳನ್ನು ಗೊಂದಲಕ್ಕೀಡುಮಾಡಿದ್ದ ಬಹುದೊಡ್ಡ ನಿಗೂಢಗಳಲ್ಲಿ ಒಂದಾಗಿದೆ. ಇಷ್ಟೇ ಅಲ್ಲದೆ, ಆಗಾಗ ಸಂಭವಿಸುವ ಸೌರ ಸ್ಫೋಟಗಳಿಂದ ಕರೋನಾ ಅಪಾರ ಪ್ರಮಾಣದ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದರೂ, ಅದು ತನ್ನ ನಿರಂತರ ತಾಪಮಾನವನ್ನು ಹೇಗೆ ಕಾಯ್ದುಕೊಳ್ಳುತ್ತದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.&lt;/p&gt;&lt;p&gt;ಭಾರತದ ಮೊದಲ ಸೌರ ವೀಕ್ಷಣಾ ನೌಕೆ 'ಆದಿತ್ಯ-ಎಲ್1' (Aditya-L1) ಕಳುಹಿಸಿದ ದತ್ತಾಂಶಗಳನ್ನು ಅಧ್ಯಯನ ಮಾಡಿರುವ ಭಾರತೀಯ ಖಗೋಳ ಭೌತಶಾಸ್ತ್ರಜ್ಞರು, ಈ ರಹಸ್ಯವನ್ನು ಭೇದಿಸುವಲ್ಲಿ ಪ್ರಮುಖ ಸುಳಿವು ಕಂಡುಹಿಡಿದಿದ್ದಾರೆ. ಈ ಐತಿಹಾಸಿಕ ಸಂಶೋಧನೆಯು ಪ್ರತಿಷ್ಠಿತ 'ಆಸ್ಟ್ರೋಫಿಸಿಕಲ್ ಜರ್ನಲ್ ಲೆಟರ್ಸ್' (The Astrophysical Journal Letters) ನಲ್ಲಿ ಪ್ರಕಟವಾಗಿದೆ.&lt;/p&gt;&lt;h2&gt;ಭೌತಶಾಸ್ತ್ರದ ನಿಯಮಗಳನ್ನೇ ಧಿಕ್ಕರಿಸುವ ಕರೋನಾ ತಾಪಮಾನ&lt;/h2&gt;&lt;p&gt;ಬೆಂಗಳೂರಿನಲ್ಲಿರುವ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯ (IIA) ಪ್ರಮುಖ ಸೌರ ಖಗೋಳ ಭೌತಶಾಸ್ತ್ರಜ್ಞ ಪ್ರೊ. ಆರ್. ರಮೇಶ್ ಅವರ ನೇತೃತ್ವದಲ್ಲಿ ಈ ಅಧ್ಯಯನ ನಡೆದಿದೆ. ಸೂರ್ಯನ ವಿವಿಧ ಪದರಗಳಲ್ಲಿನ ತಾಪಮಾನ ವ್ಯತ್ಯಾಸವು ಭೌತಶಾಸ್ತ್ರದ ಸಾಮಾನ್ಯ ನಿಯಮಗಳನ್ನೇ ಧಿಕ್ಕರಿಸುತ್ತದೆ ಎಂದು ಅವರು ವಿವರಿಸುತ್ತಾರೆ.&lt;/p&gt;&lt;p&gt;ಸೂರ್ಯನ ಕೋರ್ (ಅಂತರಾಳ) ಇಲ್ಲಿನ ತಾಪಮಾನ ಸುಮಾರು 1.5 ಕೋಟಿ (15 ಮಿಲಿಯನ್) &deg;C ಇರುತ್ತದೆ. ಇನ್ನು ದ್ಯುತಿಗೋಳ (Photosphere - ನಮಗೆ ಕಾಣಿಸುವ ಮೇಲ್ಮೈ) ಕೋರ್&zwnj;ನಿಂದ ದೂರ ಬಂದಂತೆ ತಾಪಮಾನ ಕಡಿಮೆಯಾಗಿ, ಮೇಲ್ಮೈನಲ್ಲಿ ಸುಮಾರು 5,500 &deg;C ಗೆ ಇಳಿಯುತ್ತದೆ.&lt;/p&gt;&lt;p&gt;ಕರೋನಾ (ಹೊರ ವಾತಾವರಣ): ಆದರೆ ನಿಯಮಗಳ ಪ್ರಕಾರ ಮೇಲ್ಮೈಗಿಂತ ಹೊರಭಾಗ ತಂಪಾಗಿರಬೇಕು. ಬದಲಿಗೆ, ಸೂರ್ಯನ ಹೊರ ಪದರವಾದ ಕರೋನಾದಲ್ಲಿ ತಾಪಮಾನ ದಿಢೀರನೆ 20 ಲಕ್ಷ (2 ಮಿಲಿಯನ್) &deg;C ನಿಂದ 4 ಕೋಟಿ (40 ಮಿಲಿಯನ್) &deg;C ವರೆಗೆ ಏರುತ್ತದೆ!. ವಿಜ್ಞಾನ ಲೋಕದಲ್ಲಿ ಇದನ್ನು 'ಕರೋನಲ್ ಹೀಟಿಂಗ್ ಪ್ರಾಬ್ಲಮ್' (Coronal Heating Problem) ಎಂದು ಕರೆಯಲಾಗುತ್ತದೆ.&lt;/p&gt;&lt;h2&gt;ಶಕ್ತಿ ನಷ್ಟ ಮತ್ತು ಬಾಹ್ಯಾಕಾಶ ಹವಾಮಾನದ ಮೇಲಿನ ಪರಿಣಾಮ&lt;/h2&gt;&lt;p&gt;ಕರೋನಾದಿಂದ ಸೌರ ಜ್ವಾಲೆಗಳು (Solar Flares) ಮತ್ತು ಕರೋನಲ್ ಮಾಸ್ ಇಜೆಕ್ಷನ್&zwnj;ಗಳು (CMEs) ಸಂಭವಿಸುತ್ತವೆ. ಈ ಸ್ಫೋಟಗಳ ಸಮಯದಲ್ಲಿ ಸೂರ್ಯನು ಅಗಾಧ ಪ್ರಮಾಣದ ಶಕ್ತಿ ಮತ್ತು ಕಾಂತೀಯ ಪ್ಲಾಸ್ಮಾವನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸುತ್ತಾನೆ.&lt;/p&gt;&lt;p&gt;ಸಾಮಾನ್ಯ ದಿನಗಳಲ್ಲಿ ಸೂರ್ಯನು ದಿನಕ್ಕೆ 2 ರಿಂದ 3 ಕರೋನಲ್ ಮಾಸ್ ಇಜೆಕ್ಷನ್&zwnj;ಗಳನ್ನು ಹೊರಸೂಸುತ್ತಾನೆ. ಸೌರ ಚಟುವಟಿಕೆಯ ಗರಿಷ್ಠ ಅವಧಿಯಲ್ಲಿ ಅಂದರೆ ಪ್ರತಿ 11 ವರ್ಷಗಳಿಗೊಮ್ಮೆ ಒಂದೇ ದಿನದಲ್ಲಿ 10 ಕ್ಕೂ ಹೆಚ್ಚು ಕರೋನಲ್ ಮಾಸ್ ಇಜೆಕ್ಷನ್&zwnj; ಗಳು ಸಂಭವಿಸಬಹುದು.&lt;/p&gt;&lt;p&gt;ಈ CME ಗಳು ಭೂಮಿಯ ಧ್ರುವ ಪ್ರದೇಶಗಳಲ್ಲಿ ಸುಂದರವಾದ ಅರೋರಾಗಳನ್ನು (ಅಲೆಗಳನ್ನು) ಸೃಷ್ಟಿಸುವುದಷ್ಟೇ ಅಲ್ಲದೆ, ಭೂಕಾಂತೀಯ ಬಿರುಗಾಳಿಗಳನ್ನು ಉಂಟುಮಾಡುತ್ತವೆ. ಇವುಗಳಿಂದ ಭೂಮಿಯ ವಿದ್ಯುತ್ ಗ್ರಿಡ್&zwnj;ಗಳು, ಉಪಗ್ರಹ ಸಂಪರ್ಕ ಹಾಗೂ ಜಿಪಿಎಸ್ ವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಯಿರುತ್ತದೆ.&lt;/p&gt;&lt;p&gt;ಪ್ರತಿ ಕರೋನಲ್ ಮಾಸ್ ಇಜೆಕ್ಷನ್&zwnj; ವೇಳೆ ಸೂರ್ಯನು ಅಪಾರ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಒಂದು ವೇಳೆ ಈ ಶಕ್ತಿ ಮರುಪೂರಣಗೊಳ್ಳದಿದ್ದರೆ, ಸೂರ್ಯ ತನ್ನೆಲ್ಲಾ ಶಕ್ತಿಯನ್ನು ಕಳೆದುಕೊಂಡು ಭೂಮಿಯು ಶಾಶ್ವತ ಹಿಮಯುಗಕ್ಕೆ ಜಾರುತ್ತಿತ್ತು. ಆದರೆ ಹಾಗಾಗುತ್ತಿಲ್ಲ ಎಂದರೆ, ಕರೋನಾ ತನ್ನ ಶಕ್ತಿಯನ್ನು ನಿರಂತರವಾಗಿ ಮರುಪೂರಣ ಮಾಡಿಕೊಳ್ಳುವ ಪ್ರಬಲ ಕಾರ್ಯವಿಧಾನ ಒಂದಿದೆ ಎಂದರ್ಥ ಎಂದು ಪ್ರೊ. ರಮೇಶ್ ವಿವರಿಸಿದ್ದಾರೆ.&lt;/p&gt;&lt;h2&gt;ಕರೋನಾಗೆ ಶಕ್ತಿ ತುಂಬುವ ಆ ಎರಡು ಮೂಲಗಳು ಯಾವುವು?&lt;/h2&gt;&lt;p&gt;ವಿಜ್ಞಾನಿಗಳು ಕರೋನಾವನ್ನು ಬಿಸಿಮಾಡಲು ಎರಡು ಮುಖ್ಯ ಕಾರಣಗಳನ್ನು ಗುರುತಿಸಿದ್ದರು:&lt;/p&gt;&lt;p&gt;1. ಸೌರ ಮೇಲ್ಮೈ ಅಲೆಗಳು (7% ಕೊಡುಗೆ): ಸೂರ್ಯನ ಮೇಲ್ಮೈಯಲ್ಲಿ ಕಾಣಿಸುವ ಕುದಿಯುವ ಗುಳ್ಳೆಗಳ ಚಲನೆಯು ಅಲೆಗಳನ್ನು ಸೃಷ್ಟಿಸುತ್ತದೆ. ಇವು ಸಮುದ್ರದ ಅಲೆಗಳಂತೆ ಶಕ್ತಿಯನ್ನು ಕರೋನಾಗೆ ರವಾನಿಸುತ್ತವೆ.&lt;/p&gt;&lt;p&gt;2. ಕಾಂತೀಯ ಮರುಸಂಪರ್ಕ (93% ಕೊಡುಗೆ): ಸೂರ್ಯನ ವಾತಾವರಣದಲ್ಲಿ ಹೆಣೆದುಕೊಂಡಿರುವ ಕಾಂತೀಯ ಕ್ಷೇತ್ರದ ರೇಖೆಗಳು (Magnetic Field Lines) ಚಿಮ್ಮಿ, ಕಡಿದುಕೊಂಡು, ನಂತರ ಮತ್ತೆ ಒಂದಕ್ಕೊಂದು ಜೋಡಣೆಯಾಗುತ್ತವೆ (Magnetic Reconnection).&lt;/p&gt;&lt;h2&gt;ಆದಿತ್ಯ-L1 ನ 'VELC' ಸಾಧನದ ಕ್ರಾಂತಿಕಾರಿ ಶೋಧ!&lt;/h2&gt;&lt;p&gt;ಆಗಸ್ಟ್ 5, 2024 ರಂದು ಸಂಭವಿಸಿದ ಅತ್ಯಂತ ಪ್ರಬಲ CME ಒಂದನ್ನು ಆದಿತ್ಯ-L1 ನಲ್ಲಿದ್ದ VELC (Visible Emission Line Coronagraph) ಉಪಕರಣದ ಮೂಲಕ ವಿಜ್ಞಾನಿಗಳು ನಿಖರವಾಗಿ ಅಧ್ಯಯನ ಮಾಡಿದರು.&lt;/p&gt;&lt;p&gt;ಈ ಅಧ್ಯಯನದ ಪ್ರಕಾರ, ಕರೋನಲ್ ಮಾಸ್ ಇಜೆಕ್ಷನ್&zwnj; ಸ್ಫೋಟ ಸಂಭವಿಸಿದ 10 ಗಂಟೆಗಳ ಒಳಗಾಗಿ, ಕಡಿದುಹೋಗಿದ್ದ ಕಾಂತೀಯ ರೇಖೆಗಳು ಮತ್ತೆ ಮರುಸಂಪರ್ಕಗೊಂಡು ತಮ್ಮ ಮೂಲಸ್ಥಾನಕ್ಕೆ ಮರಳಿದವು. ಈ ಪ್ರಕ್ರಿಯೆಯಲ್ಲಿ ಸೂರ್ಯನು ತಾನು ಕಳೆದುಕೊಂಡ ಶಕ್ತಿಯನ್ನು ಮತ್ತೆ ಕರೋನಾಗೆ ತುಂಬಿದನು. ವಿಜ್ಞಾನಿಗಳ ಲೆಕ್ಕಾಚಾರದಂತೆ, ಮೇಲ್ಮೈ ಅಲೆಗಳು ಕೇವಲ 7% ಶಕ್ತಿಯನ್ನು ನೀಡಿದರೆ, ಕಾಂತೀಯ ರೇಖೆಗಳ ಈ ಪುನರ್ರಚನೆಯು 93% ನಷ್ಟು ಪ್ರಚಂಡ ಶಕ್ತಿಯನ್ನು ಕರೋನಾಗೆ ಮರಳಿ ನೀಡುತ್ತದೆ ಎಂಬುದು ಸಾಬೀತಾಗಿದೆ.&lt;/p&gt;&lt;h2&gt;ಈ ಸಂಶೋಧನೆಯ ಮಹತ್ವವೇನು?&lt;/h2&gt;&lt;p&gt;ಸೌರ ಭೌತಶಾಸ್ತ್ರದ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಆದಿತ್ಯ-L1 ನ ಈ ದತ್ತಾಂಶಗಳು ಪ್ರಮುಖ ಮಾನದಂಡವಾಗಿವೆ. ಸೂರ್ಯನ ಕಾಂತಕ್ಷೇತ್ರವು ಕೇವಲ ಸ್ಫೋಟಗಳನ್ನು ಉಂಟುಮಾಡುವುದಿಲ್ಲ, ಬದಲಿಗೆ ಕರೋನಾವನ್ನು ಅಸಾಧಾರಣ ತಾಪಮಾನದಲ್ಲಿ ಕಾಯ್ದುಕೊಳ್ಳಲು ನಿರಂತರ ಶಕ್ತಿಯನ್ನು ನೀಡುತ್ತದೆ ಎಂಬುದು ಸ್ಪಷ್ಟವಾಗಿದೆ. ಭಾರತದ ಆದಿತ್ಯ-L1 ಯೋಜನೆಯು ಬಾಹ್ಯಾಕಾಶ ಹವಾಮಾನವನ್ನು ಮುಂಚಿತವಾಗಿಯೇ ನಿಖರವಾಗಿ ಅಂದಾಜಿಸಲು ಮತ್ತು ಭೂಮಿಯ ಮೇಲಿನ ತಂತ್ರಜ್ಞಾನ ವ್ಯವಸ್ಥೆಗಳನ್ನು ಸೌರ ಬಿರುಗಾಳಿಗಳಿಂದ ರಕ್ಷಿಸಲು ಜಾಗತಿಕ ಮಟ್ಟದಲ್ಲಿ ಹೊಸ ದಾರಿದೀಪವಾಗಿದೆ.&lt;/p&gt;]]></content:encoded>
            <category><![CDATA[science]]></category>
            <dc:creator>Gowthami K</dc:creator>
            <atom:link href="https://kannada.asianetnews.com/science/india-s-aditya-l1-solves-decades-old-solar-mystery-reveals-why-sun-outer-atmosphere-is-millions-of-degrees-hotter-gdp/articleshow-itq9fwf"/>
        </item>
        <item>
            <title><![CDATA[ದೇಶಕ್ಕಾಗಿ ಹೋರಾಡಿದ ವೀರರ ಕಥೆಗಳು… Independence Dayಗೆ OTTಯಲ್ಲಿ ನೋಡಲೇಬೇಕಾದ ಸಿನಿಮಾಗಳಿವು!]]></title>
            <link>https://kannada.asianetnews.com/webstories/cine-world/must-watch-patriotic-movies-on-independence-day-in-ott-platforms-o53gxb9</link>
            <guid isPermaLink="true">https://kannada.asianetnews.com/webstories/cine-world/must-watch-patriotic-movies-on-independence-day-in-ott-platforms-o53gxb9</guid>
            <pubDate>Fri, 14 Aug 2026 13:47:40 +0530</pubDate>
            <description><![CDATA[Independence Day Movies: ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ OTT ಯಲ್ಲಿ ಮಿಸ್ ಮಾಡದೇ ನೋಡಬಹುದಾದ ದೇಶಭಕ್ತಿ ಹೆಚ್ಚಿಸುವ ಸಿನಿಮಾಗಳು. ದುರಂಧರ್ ನಿಂದ ರಂಗ್ ದೇ ಬಸಂತಿ ವರೆಗೂ ಯಾವೆಲ್ಲಾ ಸಿನಿಮಾ ನೋಡಬಹುದು ಇಲ್ಲಿದೆ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxjk496w0twtv33v27b3k02,imgname-indian-flag-logo-ideas-1786625233190.jpg" type="image/jpeg" height="390" width="690"/>
            <category><![CDATA[cine-world]]></category>
            <dc:creator>Pavna Das</dc:creator>
            <atom:link href="https://kannada.asianetnews.com/webstories/cine-world/must-watch-patriotic-movies-on-independence-day-in-ott-platforms-o53gxb9"/>
        </item>
        <item>
            <title><![CDATA[ರಿಷಬ್ ಶೆಟ್ಟಿಗೆ ಮತ್ತೊಂದು ಗೌರವ; 'ಲೀಡರ್‌ಶಿಪ್ ಇನ್ ಸಿನಿಮಾ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ!]]></title>
            <link>https://kannada.asianetnews.com/sandalwood/rishab-shetty-honored-with-leadership-in-cinema-award-best-director-award-for-kantara-a-legend-chapter-1/articleshow-6s38hus</link>
            <guid isPermaLink="true">https://kannada.asianetnews.com/sandalwood/rishab-shetty-honored-with-leadership-in-cinema-award-best-director-award-for-kantara-a-legend-chapter-1/articleshow-6s38hus</guid>
            <pubDate>Fri, 14 Aug 2026 13:43:18 +0530</pubDate>
            <description><![CDATA[ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzn91a7e8wmqb3wscsp6tw1,imgname-rishab-shetty-1786695157063.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;NAB IFFM Awards Night 2026-ಲೀಡರ್&zwnj;ಶಿಪ್ ಇನ್ ಸಿನಿಮಾ ಪ್ರಶಸ್ತಿ:&lt;/strong&gt; ಕಾಂತಾರ: ಎ ಲೆಜೆಂಡ್ &ndash; ಚಾಪ್ಟರ್ 1 ಚಿತ್ರಕ್ಕೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ 'ಲೀಡರ್&zwnj;ಶಿಪ್ ಇನ್ ಸಿನಿಮಾ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡುತ್ತಿರುವ ಕೊಡುಗೆ ಹಾಗೂ ನಮ್ಮ ನೆಲದ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಅವರ ಪ್ರಯತ್ನಕ್ಕೆ ಈ ಗೌರವ ಸಂದಿದೆ. ಈಗಾಗಲೇ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಕನ್ನಡಿದ ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಇದೀಗ ಮತ್ತೊಂದು ಪ್ರಶಸ್ತಿ ಸಿಕ್ಕಿದೆ, ಕನ್ನಡಿಗರ ಖುಷಿಗೆ ಮತ್ತೊಂದು ಸೇರ್ಪಡೆ ಆಗಿದೆ.&lt;/p&gt;&lt;p&gt;ಇದೇ ಸಂದರ್ಭದಲ್ಲಿ ಕಾಂತಾರ: ಎ ಲೆಜೆಂಡ್&ndash; ಚಾಪ್ಟರ್ 1 ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಪಡೆದಿದ್ದಾರೆ. ತಮ್ಮ ವಿಭಿನ್ನ ಕಥೆ ಹೇಳುವ ಶೈಲಿ ಮತ್ತು ನಿರ್ದೇಶನದ ಮೂಲಕ ಕನ್ನಡದ ಕಥೆಗಳನ್ನು ವಿಶ್ವದ ಪ್ರೇಕ್ಷಕರಿಗೆ ತಲುಪಿಸುತ್ತಿರುವ ಅವರ ಪ್ರಯತ್ನಕ್ಕೆ ಈ ಪ್ರಶಸ್ತಿ ಮತ್ತೊಂದು ಹೆಮ್ಮೆಯ ಗುರುತಾಗಿದೆ.&lt;/p&gt;&lt;p&gt;ಸಂಸ್ಕೃತಿ, ಪರಂಪರೆ ಮತ್ತು ನಮ್ಮ ಮಣ್ಣಿನ ಕಥೆಗಳನ್ನು ಜಗತ್ತಿಗೆ ಪರಿಚಯಿಸುತ್ತಾ, ರಿಷಬ್ ಶೆಟ್ಟಿ ಅವರು ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಎರಡೂ ಪ್ರಶಸ್ತಿಗಳು ಅವರ ಚಿತ್ರಯಾನದಲ್ಲಿ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದ್ದು, ಭಾರತೀಯ ಸಿನಿಮಾಗೆ ಅವರು ನೀಡುತ್ತಿರುವ ಕೊಡುಗೆಯನ್ನು ಸಂಭ್ರಮಿಸುವ ವಿಶೇಷ ಕ್ಷಣವಾಗಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/rishab-shetty-honored-with-leadership-in-cinema-award-best-director-award-for-kantara-a-legend-chapter-1/articleshow-6s38hus"/>
        </item>
        <item>
            <title><![CDATA[ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ದೆಹಲಿ ಹೈಕೋರ್ಟ್‌ನಿಂದ ರಿಲೀಫ್‌: ಆಕ್ಷೇಪಾರ್ಹ ವೀಡಿಯೋಗೆ ತಡೆಯಾಜ್ಞೆ]]></title>
            <link>https://kannada.asianetnews.com/india-news/delhi-hc-relief-to-shirdi-saibaba-sansthan-objectionable-videos-san/articleshow-o0mnhag</link>
            <guid isPermaLink="true">https://kannada.asianetnews.com/india-news/delhi-hc-relief-to-shirdi-saibaba-sansthan-objectionable-videos-san/articleshow-o0mnhag</guid>
            <pubDate>Fri, 14 Aug 2026 13:32:55 +0530</pubDate>
            <description><![CDATA[ಶಿರಡಿ ಸಾಯಿಬಾಬಾ ಮತ್ತು ಸಂಸ್ಥಾನ ಟ್ರಸ್ಟ್ ವಿರುದ್ಧದ ನಿಂದನಾತ್ಮಕ ಯೂಟ್ಯೂಬ್ ವೀಡಿಯೋಗಳ ಕುರಿತು ದೆಹಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ಮೇರೆಗೆ, ಈ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ನ್ಯಾಯಾಲಯ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzmmhwd730nhajrdmmxj63a,imgname-shirdi-saibaba-trust-1786694485901.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.14):&lt;/strong&gt; ಶಿರಡಿಯ ಶ್ರೀ ಸಾಯಿಬಾಬಾ ಹಾಗೂ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ವಿರುದ್ಧ ಯೂಟ್ಯೂಬ್&zwnj;ನಲ್ಲಿ (YouTube) ಹರಿಬಿಡಲಾಗಿದ್ದ ನಿಂದನಾತ್ಮಕ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಆಕ್ಷೇಪಾರ್ಹ ವೀಡಿಯೋಗಳಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್&zwnj; ಮಹತ್ವದ ನಿರ್ದೇಶನ ನೀಡಿದ್ದು, ಸಂಸ್ಥಾನಕ್ಕೆ ದೊಡ್ಡ ರಿಲೀಫ್&zwnj; ಸಿಕ್ಕಂತಾಗಿದೆ.&lt;/p&gt;&lt;p&gt;ಸಂಸ್ಥಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಸ್ವರ್ಣ ಕಾಂತ ಶರ್ಮಾ ಅವರಿದ್ದ ಪೀಠವು, ಮುಂದಿನ 7 ದಿನಗಳ ಒಳಗೆ ಈ ಕುರಿತು ಸೂಕ್ತ ನಿರ್ಧಾರ ಕೈಗೊಂಡು, ಆಗಸ್ಟ್ 19ರೊಳಗೆ ವರದಿ ಸಲ್ಲಿಸುವಂತೆ &lsquo;ಗ್ರೀವೆನ್ಸ್ ಅಪೆಲೇಟ್ ಕಮಿಟಿ&rsquo;ಗೆ (GAC) ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಎಲ್ಲಾ ಸೋಶಿಯಲ್&zwnj; ಮೀಡಿಯಾಗಳಿಂದ ಆಕ್ಷೇಪಾರ್ಹ ವೀಡಿಯೋಗಳನ್ನು ತೆಗೆದುಹಾಕಲು ಹಾದಿ ಸುಗಮವಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಶ್ರೀ ಸಾಯಿಬಾಬಾರವರ ವರ್ಚಸ್ಸು ಹಾಗೂ ಕೋಟ್ಯಂತರ ಭಕ್ತರ ನಂಬಿಕೆಯನ್ನು ರಕ್ಷಿಸುವ ಉದ್ದೇಶದಿಂದ, ಸಾಯಿ ಸಂಸ್ಥಾನದ ಸಿಇಒ ಗೋರಕ್ಷ ಗಡಿಲ್ಕರ್ ಅವರ ನೇತೃತ್ವದಲ್ಲಿ ಸಂಸ್ಥಾನದ ಪರವಾಗಿ ಈ ಕಾನೂನು ಹೋರಾಟ ನಡೆಸಲಾಗಿತ್ತು.&lt;/p&gt;&lt;p&gt;2026ರ ಜುಲೈನಲ್ಲಿ ಯೂಟ್ಯೂಬ್ ಸಂಸ್ಥೆಗೆ ಹತ್ತಾರು ಬಾರಿ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಷಯವನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಗ್ರೀವೆನ್ಸ್ ಅಪೆಲೇಟ್ ಕಮಿಟಿ (GAC) ಗಮನಕ್ಕೆ ತರಲಾಗಿತ್ತು. ಅಂತಿಮವಾಗಿ ಸಂಸ್ಥಾನವು ಹೈಕೋರ್ಟ್ ಮೆಟ್ಟಿಲೇರಿತು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಇಂತಹ ಆಕ್ಷೇಪಾರ್ಹ ವಿಷಯಗಳು ಸಂವಿಧಾನದ ವಿಧಿ 25 ರ ಅಡಿಯಲ್ಲಿ ಭಕ್ತರಿಗೆ ನೀಡಲಾಗಿರುವ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಗಂಭೀರವಾಗಿ ವೀಕ್ಷಿಸಿದೆ.&lt;/p&gt;&lt;p&gt;'ಸಾಯಿ ಭಕ್ತರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ಮತ್ತು ಸಂಸ್ಥಾನದ ಘನತೆಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಹೈಕೋರ್ಟ್ ನೀಡಿದ ಈ ಮಹತ್ವದ ನಿರ್ದೇಶನವು ಶ್ರೀ ಸಾಯಿಬಾಬಾ ಹಾಗೂ ಸಂಸ್ಥಾನದ ವಿರುದ್ಧ ಹರಡಲಾಗುತ್ತಿದ್ದ ಅಪಪ್ರಚಾರ ಮತ್ತು ನಿಂದನಾತ್ಮಕ ವೀಡಿಯೋಗಳ ಹರಿವಿಗೆ ಕಡಿವಾಣ ಹಾಕಲು ನೆರವಾಗಲಿದೆ' ಎಂದು ಗೋರಕ್ಷ ಗಡಿಲ್ಕರ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಕೋರ್ಟ್&zwnj;ನಲ್ಲಿ ವಾದ ಮಂಡಿಸಿದವರು ಯಾರು?&lt;/strong&gt;&lt;/h2&gt;&lt;p&gt;ಸಂಸ್ಥಾನದ ಪರವಾಗಿ ಹಿರಿಯ ವಕೀಲರಾದ ಪ್ರಮೋದ್ ಕುಮಾರ್ ದುಬೆ, ಸೌರವ್ ಅಗರ್ವಾಲ್, ರವಿ ಶರ್ಮಾ, ಪ್ರಾಚಿ ದುಬೆ, ರೂಪರಾಜ್ ಬ್ಯಾನರ್ಜಿ, ಸತ್ಯಂ ಶರ್ಮಾ, ಹರ್ಷ್ ಖಬರ್, ಆರ್ಯನ್ ಕುಮಾರ್ ತಿವಾರಿ, ಅನುಷಾ ಸಿನ್ಹಾ, ಖುಷಿ ಅರೋರಾ ಮತ್ತು ಶಂಭು ಪ್ರಸಾದ್ ಸಿಂಗ್ ವಾದ ಮಂಡಿಸಿದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಹಾಗೂ ಮುಖ್ಯ ಅಭಿಯೋಜಕ ವಿಜಯ್ ಜೋಶಿ ಹಾಜರಾಗಿದ್ದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/delhi-hc-relief-to-shirdi-saibaba-sansthan-objectionable-videos-san/articleshow-o0mnhag"/>
        </item>
        <item>
            <title><![CDATA[ಆಗಸ್ಟ್ ಮೂರನೇ ವಾರವು 7 ರಾಶಿಗಳ ಅದೃಷ್ಟವನ್ನು ಬದಲಾಯಿಸುತ್ತದೆ, ಇವರಿಗೆ ಹಣ, ಉದ್ಯೋಗ, ಪ್ರೀತಿ]]></title>
            <link>https://kannada.asianetnews.com/gallery/weekly-horoscope/weekly-horoscope-17-to-23-august-2026-aries-to-pisces-august-third-week-all-12-zodiac-signs-suh-sdwe4va</link>
            <guid isPermaLink="true">https://kannada.asianetnews.com/gallery/weekly-horoscope/weekly-horoscope-17-to-23-august-2026-aries-to-pisces-august-third-week-all-12-zodiac-signs-suh-sdwe4va</guid>
            <pubDate>Fri, 14 Aug 2026 13:32:06 +0530</pubDate>
            <description><![CDATA[ವಾರದ ಜಾತಕ ಆಗಸ್ಟ್ 17 ರಿಂದ 23, 2026: ಜ್ಯೋತಿಷ್ಯದ ಪ್ರಕಾರ, ಆಗಸ್ಟ್ ತಿಂಗಳ ಮೂರನೇ ವಾರ ಆಗಸ್ಟ್ 17 ರಿಂದ 23, 2026 ರವರೆಗೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ಇದು ಹೇಗಿರುತ್ತದೆ? ಕಂಡುಹಿಡಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kzaqmmt71jtbc1bdg1qcbz4b,imgname-sun-transit-2026-magha-nakshatra-shift-brings-fortune-for-5-zodiacs-1785992991558.jpg" type="image/jpeg" height="390" width="690"/>
            <content:encoded><![CDATA[&lt;p&gt;ವಾರದ ಜಾತಕ ಆಗಸ್ಟ್ 17 ರಿಂದ 23, 2026: ಜ್ಯೋತಿಷ್ಯದ ಪ್ರಕಾರ, ಆಗಸ್ಟ್ ತಿಂಗಳ ಮೂರನೇ ವಾರ ಆಗಸ್ಟ್ 17 ರಿಂದ 23, 2026 ರವರೆಗೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ಇದು ಹೇಗಿರುತ್ತದೆ? ಕಂಡುಹಿಡಿಯೋಣ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯವರಿಗೆ, ಈ ವಾರ ಆಗಸ್ಟ್ 17 ರಿಂದ 23, 2026 ರವರೆಗೆ ಬಾಕಿ ಇರುವ ಕೆಲಸಗಳು ಮುಗಿಯುವ ಸಾಧ್ಯತೆಯಿದೆ. ನೀವು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಹಣಕಾಸಿನ ವಹಿವಾಟುಗಳನ್ನು ಮಾಡುವಾಗ ಆತುರಪಡುವುದನ್ನು ತಪ್ಪಿಸಿ. ಪ್ರೇಮ ಸಂಬಂಧಗಳಲ್ಲಿ ಹೆಚ್ಚಿದ ಸಂವಹನವು ತಪ್ಪುಗ್ರಹಿಕೆಯನ್ನು ನಿವಾರಿಸುತ್ತದೆ. ಆರೋಗ್ಯ ಕಾರಣಗಳಿಗಾಗಿ ನಿದ್ರೆ ಮತ್ತು ವಿಶ್ರಾಂತಿಗೆ ಗಮನ ಕೊಡಿ.&lt;/p&gt;&lt;p&gt;ವೃಷಭ ರಾಶಿ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ವೃಷಭ ರಾಶಿಯವರಿಗೆ ಈ ವಾರ ಆರ್ಥಿಕ ವಿಷಯಗಳಲ್ಲಿ ತೃಪ್ತಿಕರವಾಗಿರಬಹುದು. ಹೆಚ್ಚುವರಿ ಆದಾಯದ ಮೂಲವನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಹಿರಿಯರಿಂದ ನಿಮಗೆ ಬೆಂಬಲ ಸಿಗುತ್ತದೆ. ಕುಟುಂಬದಲ್ಲಿನ ವಾತಾವರಣವು ಸಂತೋಷವಾಗಿರುತ್ತದೆ. ಆದಾಗ್ಯೂ, ಅನಗತ್ಯ ಖರ್ಚುಗಳನ್ನು ನಿಯಂತ್ರಣದಲ್ಲಿಡಿ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ಮಿಥುನ ರಾಶಿಯವರಿಗೆ ಕೆಲಸದಲ್ಲಿ ಅವರ ಆಲೋಚನೆಗಳಿಗಾಗಿ ಮೆಚ್ಚುಗೆ ದೊರೆಯುತ್ತದೆ. ನಿಮಗೆ ಹೊಸ ಯೋಜನೆ ಅಥವಾ ಜವಾಬ್ದಾರಿ ಸಿಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿವೆ, ಆದರೆ ದೊಡ್ಡ ಹೂಡಿಕೆ ಮಾಡುವ ಮೊದಲು ಯೋಚಿಸಿ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ.&lt;/p&gt;&lt;p&gt;ಕರ್ಕಾಟಕ ರಾಶಿ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ಕರ್ಕ ರಾಶಿಯವರಿಗೆ ಪ್ರಗತಿಯ ವಾರವಾಗಬಹುದು. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹಿರಿಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಹಣದ ಒಳಹರಿವು ಹೆಚ್ಚಾಗಬಹುದು, ಆದರೆ ಮನೆಯ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಭಾವನಾತ್ಮಕ ಬೆಂಬಲ ಸಿಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ಸಿಂಹ ರಾಶಿಯವರಿಗೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದಲ್ಲಿ ನಾಯಕತ್ವ ವಹಿಸಿಕೊಳ್ಳುವ ಅವಕಾಶ ಸಿಗಬಹುದು. ವ್ಯವಹಾರದಲ್ಲಿರುವವರಿಗೆ ಹೊಸ ಗ್ರಾಹಕರು ಅಥವಾ ಒಪ್ಪಂದಗಳು ಸಿಗುವ ಸಾಧ್ಯತೆ ಇದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಪ್ರೇಮ ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳಿರಬಹುದು. ಆದಾಗ್ಯೂ, ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಿ.&lt;/p&gt;&lt;p&gt;ಕನ್ಯಾ ರಾಶಿ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ಕನ್ಯಾ ರಾಶಿಯ ಜನರು ಯೋಜಿತ ರೀತಿಯಲ್ಲಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಅವಕಾಶ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿ ಉಳಿತಾಯದತ್ತ ಗಮನಹರಿಸಿ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು; ತಾಳ್ಮೆಯಿಂದ ವರ್ತಿಸಿ. ಆರೋಗ್ಯವು ಸಾಮಾನ್ಯವಾಗಿರುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ತುಲಾ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ಮಹತ್ವದ್ದಾಗಿರಬಹುದು. ಭವಿಷ್ಯದಲ್ಲಿ ಹೊಸ ಸಂಪರ್ಕಗಳು ಪ್ರಯೋಜನಕಾರಿಯಾಗುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅವಕಾಶವಿರುತ್ತದೆ. ಪ್ರೇಮ ಸಂಬಂಧಗಳಲ್ಲಿ ನಿಕಟತೆ ಹೆಚ್ಚಾಗುತ್ತದೆ. ಪ್ರಯಾಣಿಸುವ ಸಾಧ್ಯತೆಗಳಿವೆ. ಆದಾಗ್ಯೂ, ಕೆಲಸದ ಒತ್ತಡ ಹೆಚ್ಚಾಗದಂತೆ ಎಚ್ಚರವಹಿಸಿ.&lt;/p&gt;&lt;p&gt;ವೃಶ್ಚಿಕ ರಾಶಿ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ವೃಶ್ಚಿಕ ರಾಶಿಯವರು ಈ ವಾರ ಹಲವಾರು ದಿನಗಳಿಂದ ನಡೆಯುತ್ತಿರುವ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ವ್ಯವಹಾರದಲ್ಲಿ ಲಾಭದ ಸಾಧ್ಯತೆಯಿದೆ. ಕೆಲಸದಲ್ಲಿ ನಿಮ್ಮ ಸ್ಥಾನ ಅಥವಾ ಜವಾಬ್ದಾರಿ ಹೆಚ್ಚಾಗಬಹುದು. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಪ್ರೇಮ ಜೀವನದಲ್ಲಿ, ಹಳೆಯ ತಪ್ಪುಗ್ರಹಿಕೆಗಳನ್ನು ಚರ್ಚಿಸಿ ಪರಿಹರಿಸಬಹುದು.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಈ ವಾರ ಧನು ರಾಶಿಯವರಿಗೆ ಹೊಸ ಅವಕಾಶಗಳು ಸಿಗಬಹುದು. ಕೆಲಸ ಅಥವಾ ವ್ಯವಹಾರಕ್ಕಾಗಿ ಪ್ರಯಾಣಿಸುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ, ಆದರೆ ಹಠಾತ್ ವೆಚ್ಚಗಳು ಸಹ ಸಾಧ್ಯ. ವಿದ್ಯಾರ್ಥಿಗಳಿಗೆ ಈ ವಾರ ಅನುಕೂಲಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ನೀವು ಸಂತೋಷದ ಕ್ಷಣಗಳನ್ನು ಪಡೆಯುತ್ತೀರಿ.&lt;/p&gt;&lt;p&gt;ಮಕರ ರಾಶಿಯ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮಕರ ರಾಶಿಯವರು ಈ ವಾರ ತಮ್ಮ ವೃತ್ತಿಜೀವನದಲ್ಲಿ ಸ್ಥಿರತೆ ಮತ್ತು ಪ್ರಗತಿ ಎರಡನ್ನೂ ನೋಡುತ್ತಾರೆ. ನಿಮ್ಮ ಮೇಲಧಿಕಾರಿಗಳಿಂದ ನಿಮಗೆ ಪ್ರಮುಖ ಜವಾಬ್ದಾರಿಗಳು ಸಿಗಬಹುದು. ಹಣಕಾಸು ಯೋಜನೆ ಪ್ರಯೋಜನಕಾರಿಯಾಗಿದೆ. ಹೂಡಿಕೆಗಳಲ್ಲಿ ಆತುರಪಡಬೇಡಿ. ಪ್ರೇಮ ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರವು ಆರೋಗ್ಯಕ್ಕೆ ಅತ್ಯಗತ್ಯ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಕುಂಭ ರಾಶಿಯವರಿಗೆ ಈ ವಾರ ಹೊಸ ಉದ್ಯೋಗವನ್ನು ಪ್ರಾರಂಭಿಸುವ ಅವಕಾಶ ಸಿಗಬಹುದು. ಉದ್ಯೋಗ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಸಕಾರಾತ್ಮಕ ಸುದ್ದಿ ಬರಬಹುದು. ಆರ್ಥಿಕ ಲಾಭದ ಸಾಧ್ಯತೆ ಇದೆ. ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ನಿಮಗೆ ಸಹಾಯ ಸಿಗುತ್ತದೆ. ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಪರಿಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ.&lt;/p&gt;&lt;p&gt;ಮೀನ ರಾಶಿಯ&lt;/p&gt;&lt;p&gt;ಜ್ಯೋತಿಷ್ಯದ ಪ್ರಕಾರ, ಮೀನ ರಾಶಿಯವರಿಗೆ ಈ ವಾರ ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆಯುವ ಸಾಧ್ಯತೆಯಿದೆ. ಕೆಲಸದಲ್ಲಿ ನಿಮ್ಮ ಪ್ರಯತ್ನಗಳು ಗಮನಕ್ಕೆ ಬರುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ, ಆದರೆ ಸಾಲಗಳು ಅಥವಾ ದೊಡ್ಡ ಹಣಕಾಸಿನ ವಹಿವಾಟುಗಳಲ್ಲಿ ಎಚ್ಚರಿಕೆ ಅಗತ್ಯ. ಪ್ರೇಮ ಜೀವನದಲ್ಲಿ ಸಂತೋಷದ ವಾತಾವರಣವಿರುತ್ತದೆ. ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ.&lt;/p&gt;]]></content:encoded>
            <category><![CDATA[weekly-horoscope]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/weekly-horoscope/weekly-horoscope-17-to-23-august-2026-aries-to-pisces-august-third-week-all-12-zodiac-signs-suh-sdwe4va"/>
        </item>
        <item>
            <title><![CDATA[ಕರ್ನಾಟಕದಲ್ಲಿ ಇನ್ಮುಂದೆ ಮದುವೆ ಊಟದ ವೇಳೆ ಕೇಟರರ್ಸ್‌ಗಳು ಕ್ಯಾಲೋರಿ ಕೌಂಟ್‌ ಡಿಸ್‌ಪ್ಲೇ ಮಾಡುವುದು ಕಡ್ಡಾಯ!]]></title>
            <link>https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o</link>
            <guid isPermaLink="true">https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o</guid>
            <pubDate>Wed, 12 Aug 2026 18:08:32 +0530</pubDate>
            <description><![CDATA[ರಾಜ್ಯದಲ್ಲಿ 50ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಮದುವೆ ಹಾಗೂ ಸಮಾರಂಭಗಳಲ್ಲಿ ಬಡಿಸುವ ಆಹಾರಕ್ಕೆ ಕ್ಯಾಲೋರಿ ಚಾರ್ಟ್ ಪ್ರದರ್ಶನವನ್ನು ಕಡ್ಡಾಯಗೊಳಿಸಲು ಆಹಾರ ಸುರಕ್ಷತಾ ಇಲಾಖೆ ಸಿದ್ಧತೆ ನಡೆಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzmgyn75138xd7p5xr6f0bj,imgname-wedding-food-in-karnataka--1--1786694367651.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12):&lt;/strong&gt; ಮುಂದಿನ ದಿನಗಳಲ್ಲಿ ನೀವು ರಾಜ್ಯದಲ್ಲಿ ನಡೆಯುವ ಯಾವುದೇ ಅದ್ದೂರಿ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಭಾಗವಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಸವಿಯಲು ಮುಂದಾದರೆ, ಪ್ರವೇಶ ದ್ವಾರದಲ್ಲೇ 'ಕ್ಯಾಲೊರಿ ಚಾರ್ಟ್' (ಕ್ಯಾಲೋರಿಗಳ ಕೋಷ್ಟಕ) ನಿಮ್ಮನ್ನು ಎದುರುಗೊಳ್ಳುವ ಸಾಧ್ಯತೆಯಿದೆ! 50ಕ್ಕಿಂತ ಹೆಚ್ಚು ಜನರು ಭಾಗವಹಿಸುವ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ಬಡಿಸುವ ಆಹಾರ ಪದಾರ್ಥಗಳ ಕ್ಯಾಲೋರಿ ಮೌಲ್ಯವನ್ನು (Calorific Content) ಕಡ್ಡಾಯವಾಗಿ ಪ್ರದರ್ಶಿಸುವಂತೆ ಕೇಟರರ್ಸ್&zwnj;ಗಳಿಗೆ ನಿರ್ದೇಶಿಸಲು 'ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ' (FDA) ಶೀಘ್ರದಲ್ಲೇ ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ.&lt;/p&gt;&lt;p&gt;ದೊಡ್ಡ ಸಾಮಾಜಿಕ ಸಮಾರಂಭಗಳು ಹಾಗೂ ಮದುವೆಗಳಲ್ಲಿ ಜನರು ಮಿತಿಗಿಂತ ಹೆಚ್ಚಾಗಿ ಆಹಾರ ಸೇವಿಸುವುದನ್ನು (ಅತಿಯಾಗಿ ತಿನ್ನುವುದನ್ನು) ತಡೆಯುವ ಉದ್ದೇಶದಿಂದ ಈ ಹೊಸ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಮದುವೆಯಲ್ಲಿ 5 ಸಾವಿರ ಕ್ಯಾಲೋರಿ ಊಟ&lt;/strong&gt;&lt;/h2&gt;&lt;p&gt;ಈ ಕುರಿತು ಮಾಹಿತಿ ನೀಡಿರುವ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಆಯುಕ್ತರಾದ ಕೆ. ಶ್ರೀನಿವಾಸ್, &quot;ಸಾರ್ವಜನಿಕರು ಮದುವೆ ಅಥವಾ ಬೃಹತ್ ಸಮಾರಂಭಗಳಿಗೆ ಹೋದಾಗ ಮಟನ್ ಕರ್ರಿ, ಫಿಶ್ ಫ್ರೈ, ಬಿರಿಯಾನಿ, ಸಾಂಬಾರ್, ಅನ್ನ ಹಾಗೂ ಒಂದೆರಡು ಬಗೆಯ ಸಿಹಿ ತಿಂಡಿಗಳು ಸೇರಿದಂತೆ ಸಾಲು ಸಾಲು ಖಾದ್ಯಗಳನ್ನು ಬಡಿಸಲಾಗುತ್ತದೆ. ಇಂತಹ ಸಮಾರಂಭಗಳಲ್ಲಿ ಕೇವಲ ಒಂದೇ ಬಾರಿಯ ಊಟದಲ್ಲಿ ಒಬ್ಬ ವ್ಯಕ್ತಿಯು ಬರೋಬ್ಬರಿ 5,000 ಕ್ಯಾಲೋರಿಗಳಷ್ಟು ಆಹಾರವನ್ನು ಸೇವಿಸುವ ಸಾಧ್ಯತೆಯಿರುತ್ತದೆ&quot; ಎಂದು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಮುಂದುವರಿದು ಮಾತನಾಡಿದ ಅವರು, &quot;ದಿನದ ಇತರ ಸಮಯದ ಆಹಾರದ ಜೊತೆಗೆ ಈ ಅತಿಯಾದ ಸೇವನೆ ಸೇರಿದಾಗ ವ್ಯಕ್ತಿಯ ದೇಹದಲ್ಲಿ ಸಕ್ಕರೆ (ಶುಗರ್) ಮತ್ತು ಸೋಡಿಯಂ (ಉಪ್ಪು) ಮಟ್ಟ ದಿಢೀರನೆ ಹೆಚ್ಚಾಗುತ್ತದೆ. ಸುದೀರ್ಘ ಅವಧಿಯಲ್ಲಿ ಇಂತಹ ಆಹಾರ ಪದ್ಧತಿಯು ಅಧಿಕ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ (ಡಯಾಬಿಟಿಸ್) ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಕಾರ್ಯಕ್ರಮಗಳಲ್ಲಿ ಕ್ಯಾಲೊರಿ ಚಾರ್ಟ್ ಪ್ರದರ್ಶಿಸುವುದರಿಂದ, ಜನರು ತಾವು ಏನು ಸೇವಿಸುತ್ತಿದ್ದೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದೇವೆ ಎಂಬುದರ ಕುರಿತು ಹೆಚ್ಚು ಜಾಗರೂಕರಾಗಲು ಸಾಧ್ಯವಾಗುತ್ತದೆ&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಇದಲ್ಲದೆ, ನಗರದಲ್ಲಿ 'ಕ್ಲೌಡ್ ಕಿಚನ್&zwnj;'ಗಳು ಹಾಗೂ ಮನೆಗಳಲ್ಲೇ ಅಡುಗೆ ತಯಾರಿಸುವ 'ಹೋಮ್ ಶೆಫ್&zwnj;'ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಂಸ್ಥೆಗಳು ಬಳಸುವ ಪದಾರ್ಥಗಳ ಗುಣಮಟ್ಟ ಹಾಗೂ ಅವು ಅನುಸರಿಸುತ್ತಿರುವ ನೈರ್ಮಲ್ಯ ಮತ್ತು ಭದ್ರತಾ ಕ್ರಮಗಳನ್ನು ಪರಿಶೀಲಿಸಲು ವಿಶೇಷ ತಪಾಸಣಾ ಕಾರ್ಯಾಚರಣೆಗಳನ್ನು (Special Inspection Drives) ಕೈಗೊಳ್ಳಲು ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FDA) ಯೋಜನೆ ರೂಪಿಸಿದೆ.&lt;/p&gt;]]></content:encoded>
            <category><![CDATA[food]]></category>
            <dc:creator>Santosh Naik</dc:creator>
            <atom:link href="https://kannada.asianetnews.com/food/karnataka-fda-rule-calorie-chart-mandatory-for-wedding-caterers-san/articleshow-vcrgq9o"/>
        </item>
        <item>
            <title><![CDATA[Ghost: ಮಧ್ಯರಾತ್ರಿ ಗಜ್ಜೆ ಶಬ್ಧ, ಅಳು- ನಗು ಕೇಳಿ ಗಂಟುಮೂಟೆ ಕಟ್ಟಿದ್ದ ವಿದ್ಯಾರ್ಥಿಗಳು ! ಹಾಸ್ಟೇಲ್‌ ನಲ್ಲಿ ಭೂತ?]]></title>
            <link>https://kannada.asianetnews.com/india-news/608-students-ran-away-from-the-hostel-for-fear-of-ghost/articleshow-gdmwch6</link>
            <guid isPermaLink="true">https://kannada.asianetnews.com/india-news/608-students-ran-away-from-the-hostel-for-fear-of-ghost/articleshow-gdmwch6</guid>
            <pubDate>Fri, 14 Aug 2026 13:29:50 +0530</pubDate>
            <description><![CDATA[ghost hostel : ಮಹಾರಾಷ್ಟ್ರದ ಸರ್ಕಾರಿ ಆಶ್ರಮಶಾಲೆ ಈಗ ಭಾರೀ ಸುದ್ದಿಯಲ್ಲಿದೆ. ಹಾಸ್ಟೆಲ್ನಲ್ಲಿ ಭೂತವಿದೆ ಎಂಬ ಸುದ್ದಿ ವಿದ್ಯಾರ್ಥಿಗಳು ಹಾಸ್ಟೇಲ್‌ ಬಿಡುವಂತೆ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzmgrzryjzc3f5dwrdaghhp,imgname-ghost-hostel-1786694362104.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಸರ್ಕಾರಿ ಆಶ್ರಮ ಶಾಲೆಯೊಂದರ ಹಾಸ್ಟೇಲ್&zwnj; ಈಗ ಖಾಲಿಯಾಗಿದೆ. ಅಲ್ಲಿದ್ದ ಬಹುತೇಕ ಮಕ್ಕಳು ಹಾಸ್ಟೇಲ್&zwnj; ಬಿಟ್ಟಿದ್ದಾರೆ. ಇದಕ್ಕೆ ಕಾರಣ ಮಕ್ಕಳಲ್ಲಿ ಕಾಡ್ತಿರುವ ಭೂತದ ಭಯ. ಮಕ್ಕಳ ಹಾಸ್ಟೇಲ್&zwnj; ಬಿಡ್ತಿದ್ದಂತೆ ಆಡಳಿತಮಂಡಳಿ ತನಿಖೆ ಶುರು ಮಾಡಿದೆ.&lt;/p&gt;&lt;h2&gt;ರಾತ್ರಿ ಗಜ್ಜೆ - ನಗು ಶಬ್ಧ !&lt;/h2&gt;&lt;p&gt;ಈ ಘಟನೆ ನಡೆದಿರೋದು ಮಹಾರಾಷ್ಟ್ರದ ಚಿಖಲ್ದರಾ ತಾಲೂಕಿನ ಮೇಲ್ಘಾಟ್ ಪ್ರದೇಶದಲ್ಲಿರುವ ಡೋಮಾ ಸರ್ಕಾರಿ ಆಶ್ರಮಶಾಲೆಯಲ್ಲಿ. ಇಲ್ಲಿ ಕೆಲವು ವಿದ್ಯಾರ್ಥಿಗಳಿಗೆ ರಾತ್ರಿ ಗೆಜ್ಜೆ ಸದ್ದು ಕೇಳಿದೆಯಂತೆ. ಮತ್ತೆ ಕೆಲವರು ನಗುವ, ಅಳುವ ಶಬ್ಧ ಕೇಳಿಸಿಕೊಂಡಿದ್ದಾರಂತೆ. ಇದು ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿದೆ. ಆಶ್ರಮದಲ್ಲಿ ಈ ಮಾತು ಕೆಲವೇ ಸಮಯದಲ್ಲಿ ಇತರ ವಿದ್ಯಾರ್ಥಿಗಳಿಗೂ ಹರಡಿದೆ. ನಂತರ ಕೆಲವರು ಇದನ್ನು ಭೂತ ಅಥವಾ ಅಲೌಕಿಕ ಶಕ್ತಿಗೆ ಸಂಬಂಧಿಸಿದೆ ಎಂದು ನಂಬಲು ಆರಂಭಿಸಿದ್ದಾರೆ.&lt;/p&gt;&lt;p&gt;ಭಯದ ವಾತಾವರಣ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ಅವರು ಪಾಲಕರಿಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಾರೆ. ಸುಮಾರು 608 ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ತಮ್ಮ ಮನೆಗಳಿಗೆ ತೆರಳಿದ್ದಾರೆ. ಇವರಲ್ಲಿ 263 ವಿದ್ಯಾರ್ಥಿಗಳು ಹಾಗೂ 345 ವಿದ್ಯಾರ್ಥಿನಿಯರು ಸೇರಿದ್ದಾರೆ.&lt;/p&gt;&lt;p&gt;ವಿಷಯ ಗಂಭೀರವಾಗುತ್ತಿದ್ದಂತೆ ಶಾಲಾ ಆಡಳಿತ ಮತ್ತು ಆರೋಗ್ಯ ಇಲಾಖೆ ಮಧ್ಯಪ್ರವೇಶಿಸಿದೆ. ವಿಚಿತ್ರ ಶಬ್ದಗಳನ್ನು ಕೇಳಿರುವುದಾಗಿ ಹೇಳಿದ ಕೆಲವು ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ಕರೆದೊಯ್ದು ಮನೋವೈದ್ಯರಿಂದ ಪರೀಕ್ಷೆ ಮಾಡಿಸಲಾಗಿದೆ. ವೈದ್ಯಕೀಯ ಪರಿಶೀಲನೆಯಲ್ಲಿ ಸೀವಿಯರ್ ಹಿಸ್ಟೀರಿಯಾ ರೀತಿಯ ಕೆಲವು ಲಕ್ಷಣಗಳು ಕಂಡುಬಂದಿವೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.&lt;/p&gt;&lt;p&gt;ಚಿಖಲ್ದರಾ ತಾಲೂಕು ಆರೋಗ್ಯಾಧಿಕಾರಿ ಅಭಿಷೇಕ್ ನಾಯ್ಡು, ಇದು ಮಾನಸಿಕ ಆರೋಗ್ಯ, ಭಯ ಮತ್ತು ವದಂತಿಗಳ ಪರಿಣಾಮವಾಗಿರಬಹುದು ಎಂದಿದ್ದಾರೆ. ಮಕ್ಕಳಲ್ಲಿ ಉಂಟಾಗಿರುವ ಭಯವನ್ನು ಕಡಿಮೆ ಮಾಡಲು ಕೌನ್ಸೆಲಿಂಗ್ ಕೂಡ ನಡೆಸಲಾಗುತ್ತಿದೆ. ಮಕ್ಕಳ ಮನವೊಲಿಸಿ ಅವರನ್ನು ವಾಪಸ್&zwnj; ಕರೆತರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಾರಣವೇನು ಎಂಬ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/india-news/608-students-ran-away-from-the-hostel-for-fear-of-ghost/articleshow-gdmwch6"/>
        </item>
        <item>
            <title><![CDATA[NALSAR Row: 'ಇದರಲ್ಲಿ ಮೂಗು ತೂರಿಸಲು ಅವರು ಯಾರು?' ನಲ್ಸಾರ್ ವಿದ್ಯಾರ್ಥಿಗಳ ವಿಚಾರದಲ್ಲಿ BCIಗೆ ಸಿಜೆಐ ಸೂರ್ಯಕಾಂತ್ ಕ್ಲಾಸ್]]></title>
            <link>https://kannada.asianetnews.com/india-news/cji-surya-kant-defends-nalsar-students-questions-bcis-authority-in-row/articleshow-z6xhgk8</link>
            <guid isPermaLink="true">https://kannada.asianetnews.com/india-news/cji-surya-kant-defends-nalsar-students-questions-bcis-authority-in-row/articleshow-z6xhgk8</guid>
            <pubDate>Fri, 14 Aug 2026 13:29:13 +0530</pubDate>
            <description><![CDATA[ನಲ್ಸಾರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ವಿರುದ್ಧ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಹೊರಡಿಸಿದ್ದ ಸುತ್ತೋಲೆಗೆ ಸಿಜೆಐ ಸೂರ್ಯಕಾಂತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಇದು ನನ್ನ ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಾದ, ಇದರಲ್ಲಿ ಮೂಗು ತೂರಿಸಲು ಅವರು ಯಾರು?' ಎಂದು ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-741375e5-0cff-4e0d-b6ed-ff663eaf1ec4.jpg" type="image/jpeg" height="390" width="690"/>
            <content:encoded><![CDATA[&lt;p&gt;ನಲ್ಸಾರ್(NALSAR) ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ತಮ್ಮನ್ನು ಆಹ್ವಾನಿಸಿದ್ದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಸಂಬಂಧ ವಿದ್ಯಾರ್ಥಿಗಳ ವಿರುದ್ಧವೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಸುತ್ತೋಲೆ ಹೊರಡಿಸಿರುವುದು ಮತ್ತೊಂದು ರೀತಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಶುಕ್ರವಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು BCI ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ತಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ. ಇದಕ್ಕೂ ಬಿಸಿಐಗೂ ಯಾವುದೇ ಸಂಬಂಧವಿಲ್ಲ. ನಾವು ನಿಮ್ಮ ಜೊತೆಗಿದ್ದೇವೆ. ವಿದ್ಯಾರ್ಥಿಗಳು ನನಗೆ ಪತ್ರ ಬರೆದಿದ್ದಾರೆ. ಇದು ನನ್ನ ಮತ್ತು ವಿದ್ಯಾರ್ಥಿಗಳ ನಡುವಿನ ಸಂವಾದ. ಅನಗತ್ಯವಾಗಿ ಸುತ್ತೋಲೆ ಹೊರಡಿಸಲು ಅವರು ಯಾರು? ಎಂದು ಸಿಜೆಐ ಖಾರವಾಗಿ ಪ್ರಶ್ನಿಸಿದ್ದಾರೆ.&lt;/p&gt;&lt;p&gt;ನಲ್ಸಾರ್ ವಿದ್ಯಾರ್ಥಿಗಳು ಗುರುವಾರ BCI ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರಿದ್ದ ಪೀಠ ಈ ಅರ್ಜಿಯ ವಿಚಾರಣೆ ನಡೆಸಿದರು. ಈ ವೇಳೆ ಬಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸದ್ಯಕ್ಕೆ ಸುಪ್ರೀಂ ಕೋರ್ಟ್ BCIಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.&lt;/p&gt;&lt;h2&gt;BCI ಸುತ್ತೋಲೆ ಏಕೆ? ಸಿಜೆಐ ನಿಲುವು ಏನು?&lt;/h2&gt;&lt;p&gt;2026ರಲ್ಲಿ ಪದವಿ ಪಡೆಯಲಿರುವ ಯಾವುದೇ ನಲ್ಸಾರ್ ವಿದ್ಯಾರ್ಥಿಯನ್ನು ಮುಂದಿನ ಆದೇಶದವರೆಗೂ ನೋಂದಣಿ ಮಾಡಿಕೊಳ್ಳದಂತೆ ರಾಜ್ಯ ಬಾರ್ ಕೌನ್ಸಿಲ್&zwnj;ಗಳಿಗೆ BCI ಆರಂಭದಲ್ಲಿ ನಿರ್ದೇಶನ ನೀಡಿತ್ತು. ಈ ಸುತ್ತೋಲೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಜೊತೆಗೆ ಘಟಿಕೋತ್ಸವಕ್ಕೆ ಸಿಜೆಐ ಭಾಗವಹಿಸುವ ಬಗ್ಗೆ ನಡೆದ ಅಭಿಯಾನದ ಕುರಿತು ವರದಿ ನೀಡುವಂತೆ ಮತ್ತು ಇದರಲ್ಲಿ ಭಾಗಿಯಾದವರ ವಿವರಗಳನ್ನು ನೀಡುವಂತೆ ನಲ್ಸಾರ್ ಉಪಕುಲಪತಿಗಳಿಗೆ BCI ಸೂಚಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ BCI ತನ್ನ ನೋಂದಣಿ ನಿರ್ಬಂಧದ ನಿರ್ಧಾರವನ್ನು ಹಿಂಪಡೆದಿತ್ತು. 2026ರ ಬ್ಯಾಚ್&zwnj;ನ ಬಹುತೇಕ ವಿದ್ಯಾರ್ಥಿಗಳು ಮುಗ್ಧರು ಮತ್ತು ಸಿಜೆಐಗೆ ಅಗೌರವ ತೋರುವ ಯಾವುದೇ ಉದ್ದೇಶ ಅವರಿಗಿರಲಿಲ್ಲ ಎಂದು ನಮ್ಮ ಚರ್ಚೆಯಿಂದ ತಿಳಿದುಬಂದಿದೆ ಎಂದು BCI ಹೇಳಿತ್ತು. ಆದರೆ, ಉಪಕುಲಪತಿಗಳ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತೆರೆದಿಟ್ಟಿತ್ತು.&lt;/p&gt;&lt;p&gt;ವಿದ್ಯಾರ್ಥಿಗಳ ಅಭಿಪ್ರಾಯಗಳು ತಪ್ಪಾಗಿದ್ದರೂ, ಕಾನೂನುಬದ್ಧವಾಗಿ ತಮ್ಮ ಧ್ವನಿ ಎತ್ತಲು ಅವರಿಗೆ ಅವಕಾಶ ನೀಡಬೇಕು ಎಂದು ಸಿಜೆಐ ಹೇಳಿದ್ದಾರೆ. 'ನಾನು ಕಾಲೇಜಿನಲ್ಲಿದ್ದಾಗ, ವಿದ್ಯಾರ್ಥಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಕೆಲವೊಮ್ಮೆ ಅವರು ತಪ್ಪು ಹೇಳುತ್ತಿದ್ದರೂ, ಕಾನೂನುಬದ್ಧವಾಗಿ ಧ್ವನಿ ಎತ್ತುತ್ತಿದ್ದರೆ ಅದಕ್ಕೆ ಅವಕಾಶ ನೀಡಬೇಕು' ಎಂದು ಸಿಜೆಐ ಅಭಿಪ್ರಾಯಪಟ್ಟರು.&lt;/p&gt;&lt;h3&gt;ಕ್ರಮಕ್ಕೆ ಸುಪ್ರೀಂ ತಡೆ, ವಿದ್ಯಾರ್ಥಿಗಳಿಗೆ ಸಿಜೆಐ ಬೆಂಬಲ&lt;/h3&gt;&lt;p&gt;ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ BCIಗೆ ನಿರ್ದೇಶನ ನೀಡಿದೆ. ಈ ಮಧ್ಯೆ ಈ ಪತ್ರಗಳ ವಿಷಯಕ್ಕೆ ಸಂಬಂಧಿಸಿದಂತೆ ನಲ್ಸಾರ್&zwnj;ನ ಯಾವುದೇ ವಿದ್ಯಾರ್ಥಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಸ್ಪಷ್ಟವಾಗಿ ಆದೇಶಿಸಿದೆ.&lt;/p&gt;&lt;p&gt;ಆದೇಶದ ನಂತರ ಮಾತನಾಡಿದ ಸಿಜೆಐ ಅವರು, ಸಂಸ್ಥೆಗಳು ಟೀಕೆಗಳನ್ನು ವಿಶಾಲ ಹೃದಯದಿಂದ ಸ್ವೀಕರಿಸಬೇಕು ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿದ್ದಾಗ. ಯಾರಾದರೂ ನಮಗೆ ತಪ್ಪು ಎನಿಸುವ ಹೇಳಿಕೆ ನೀಡಿದರೂ... ಅದು ತಪ್ಪಾಗಿಯೇ ಇರಲಿ, ನಾವು ದೊಡ್ಡ ಮನಸ್ಸು ಮಾಡಬೇಕು ಎಂದರು; ಮುಂದುವರಿದು ಸಿಜೆಐ ತಮಾಷೆಯಾಗಿ, 'ಎಲ್ಲಾ ವಿದ್ಯಾರ್ಥಿಗಳಿಗೆ ಬೇಗನೆ ಪರವಾನಗಿ ಪಡೆದು ಸುಪ್ರೀಂ ಕೋರ್ಟ್ ಬಾರ್ ಸೇರಲು ಹೇಳಿ. ಅವರ ವೃತ್ತಿಜೀವನಕ್ಕೆ ಏನಾದರೂ ತೊಂದರೆಯಾದರೆ ನಾವು ಅವರನ್ನು ಕಾನೂನು ನೆರವು ಪ್ರಕರಣಗಳಿಗೆ ನೇಮಿಸಿಕೊಳ್ಳುತ್ತೇವೆ. ಅವರ ವೃತ್ತಿಜೀವನಕ್ಕೆ ಅಡ್ಡಿಪಡಿಸುವ ಎಲ್ಲರಿಗೂ ಇದು ತಕ್ಕ ಉತ್ತರವಾಗಿರುತ್ತದೆ' ಎಂದು ಹೇಳಿದರು.&lt;/p&gt;&lt;h3&gt;ಎಲ್ಲಾ ನಡಾವಳಿಗಳನ್ನು ಕೈಬಿಟ್ಟ BCI&lt;/h3&gt;&lt;p&gt;ನಿನ್ನೆ ಮಧ್ಯರಾತ್ರಿ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು 'X' (ಹಿಂದಿನ ಟ್ವಿಟರ್) ನಲ್ಲಿ, 2026ರ ನಲ್ಸಾರ್ ಬ್ಯಾಚ್ ವಿರುದ್ಧದ ಎಲ್ಲಾ ನಡಾವಳಿಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂದು ಘೋಷಿಸಿದರು. ಹಿರಿಯ ವಕೀಲರು, ಬಾರ್ ಸದಸ್ಯರು, ಕಾನೂನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬ್ಯಾಚ್&zwnj;ನ ವಿದ್ಯಾರ್ಥಿಗಳು ಯಾವುದೇ ಗೊಂದಲ ಅಥವಾ ಚಳವಳಿಯಲ್ಲಿ ಭಾಗಿಯಾಗಿಲ್ಲ ಎಂದು ಮನವರಿಕೆಯಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯದಲ್ಲಿ BCI ಇನ್ನು ಮುಂದೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. (ANI)&lt;/p&gt;&lt;p&gt;(ಈ ಸುದ್ದಿಯ ಹೆಡ್&zwnj;ಲೈನ್ ಹೊರತುಪಡಿಸಿ, ಉಳಿದಂತೆ ಸುದ್ದಿ ಸಂಸ್ಥೆಯಿಂದ ಬಂದಂತೆ ಪ್ರಕಟಿಸಲಾಗಿದೆ. ಇದನ್ನು ಏಷ್ಯಾನೆಟ್ ನ್ಯೂಸ್ ಸಂಪಾದಕೀಯ ಸಿಬ್ಬಂದಿ ಎಡಿಟ್ ಮಾಡಿಲ್ಲ.)&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/cji-surya-kant-defends-nalsar-students-questions-bcis-authority-in-row/articleshow-z6xhgk8"/>
        </item>
        <item>
            <title><![CDATA[Recharge Plan: ಕೇವಲ 1 ರೂಪಾಯಿಗೆ ಸಿಮ್, ಅನ್‌ಲಿಮಿಟೆಡ್ ಕಾಲ್ಸ್, ಮೊದಲ ರೀಚಾರ್ಜ್ ಕೂಡ ಫ್ರೀ! ಈ ಆಫರ್ ನೋಡಿ, ಜಿಯೋ, ಏರ್‌ಟೆಲ್ ಕಂಗಾಲು]]></title>
            <link>https://kannada.asianetnews.com/business/bsnl-freedom-plan-2-o-one-rupees-sim-recharge-offer-with-unlimited-calls-1gb-daily-data-kvn/articleshow-csqqh1m</link>
            <guid isPermaLink="true">https://kannada.asianetnews.com/business/bsnl-freedom-plan-2-o-one-rupees-sim-recharge-offer-with-unlimited-calls-1gb-daily-data-kvn/articleshow-csqqh1m</guid>
            <pubDate>Fri, 14 Aug 2026 13:15:57 +0530</pubDate>
            <description><![CDATA[80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ BSNL ಹೊಸ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ 24 ದಿನಗಳ ವ್ಯಾಲಿಡಿಟಿಯೊಂದಿಗೆ ಉಚಿತ ಕರೆ, ಡೇಟಾ ಮತ್ತು ಎಸ್‌ಎಂಎಸ್‌ ಸೌಲಭ್ಯಗಳಿವೆ. ಜೊತೆಗೆ, ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ನೀಡಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kdce2a6d29yer2r8jzdxvff4,imgname-recharge-plan-1766722709709.jpg" type="image/jpeg" height="390" width="690"/>
            <content:encoded><![CDATA[&lt;p&gt;BSNL ಮತ್ತೊಮ್ಮೆ ವಿಶೇಷ ಪ್ರೊಮೋಶನಲ್ ಆಫರ್ ತಂದಿದೆ. 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಹೊಸ BSNL ಸಂಪರ್ಕ ಪಡೆಯುವ ಗ್ರಾಹಕರಿಗಾಗಿ 'ಫ್ರೀಡಂ ಪ್ಲಾನ್ 2.0' ಅನ್ನು ಪರಿಚಯಿಸಿದೆ. ಈ ಪ್ಲಾನ್ ವಿಶೇಷತೆ ಏನು? ಆಫರ್ ಏನೆಲ್ಲಾ ಇದೆ ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;ಏನಿದು 'ಫ್ರೀಡಂ ಪ್ಲಾನ್ 2.0'?&lt;/strong&gt;&lt;/h2&gt;&lt;p&gt;ಈ ಪ್ರೊಮೋಶನ್&zwnj;ನಲ್ಲಿ ಸಾಮಾನ್ಯವಾಗಿ ರೀಚಾರ್ಜ್&zwnj;ಗೆ ಪಾವತಿಸಬೇಕಾದ ಮೊತ್ತವನ್ನು ಮನ್ನಾ ಮಾಡಲಾಗಿದೆ. 24 ದಿನಗಳ ವ್ಯಾಲಿಡಿಟಿ ಸಮಯದಲ್ಲಿ ಗ್ರಾಹಕರು ಯಾವುದೇ ಹೆಚ್ಚುವರಿ ರೀಚಾರ್ಜ್ ಮಾಡದೆ ಕರೆ, ಎಸ್&zwnj;ಎಂಎಸ್&zwnj; ಮತ್ತು ಡೇಟಾ ಬಳಸಬಹುದು. ಆದರೆ, ಈ ವಿಶೇಷ ಸೌಲಭ್ಯ ಹೊಸ BSNL ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ BSNL ಸಿಮ್ ಬಳಸುತ್ತಿರುವವರಿಗೆ ಈ ಆಫರ್ ಲಭ್ಯವಿಲ್ಲ.&lt;/p&gt;&lt;p&gt;ಈ ಫ್ರೀಡಂ ಪ್ಲಾನ್&zwnj;ನಲ್ಲಿ 24 ದಿನಗಳವರೆಗೆ ಅನ್&zwnj;ಲಿಮಿಟೆಡ್ ವಾಯ್ಸ್ ಕಾಲಿಂಗ್ ಸೌಲಭ್ಯ ಸಿಗುತ್ತೆ. ಇದರಿಂದ ದೇಶದಾದ್ಯಂತ ಯಾವುದೇ ನೆಟ್&zwnj;ವರ್ಕ್&zwnj;ಗೆ ಅನ್&zwnj;ಲಿಮಿಟೆಡ್ ಕರೆಗಳನ್ನು ಮಾಡಬಹುದು. ಡೇಟಾ ವಿಚಾರಕ್ಕೆ ಬಂದರೆ, ಪ್ರತಿದಿನ 1 GB ಹೈ-ಸ್ಪೀಡ್ ಡೇಟಾ ನೀಡಲಾಗುತ್ತಿದೆ. ದಿನದ ಡೇಟಾ ಮಿತಿ ಮುಗಿದ ನಂತರ ಇಂಟರ್&zwnj;ನೆಟ್&zwnj; ವೇಗ ಕಡಿಮೆಯಾಗುತ್ತದೆ. ಜೊತೆಗೆ, ಪ್ರತಿದಿನ 100 ಎಸ್&zwnj;ಎಂಎಸ್&zwnj; ಕಳುಹಿಸುವ ಪ್ರಯೋಜನವೂ ಇದೆ.&lt;/p&gt;&lt;h3&gt;&lt;strong&gt;ಕಳೆದ ವರ್ಷ ಆಜಾದಿ ಕಾ ಪ್ಲಾನ್ ಘೋಷಿಸಿದ್ದ ಬಿಎಸ್&zwnj;ಎನ್&zwnj;ಎಲ್&lt;/strong&gt;&lt;/h3&gt;&lt;p&gt;BSNL ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು 'ಆಜಾದಿ ಕಾ ಪ್ಲಾನ್' ಹೆಸರಿನಲ್ಲಿ 1 ರೂಪಾಯಿಯ ವಿಶೇಷ ಆಫರ್ ನೀಡಿತ್ತು. ಆಗ ಆ ಪ್ಲಾನ್&zwnj;ಗೆ 30 ದಿನಗಳ ವ್ಯಾಲಿಡಿಟಿ, ದಿನಕ್ಕೆ 2 GB ಡೇಟಾ ಮತ್ತು ಅನ್&zwnj;ಲಿಮಿಟೆಡ್ ಕರೆಗಳ ಸೌಲಭ್ಯವಿತ್ತು. ಈಗಿನ 'ಫ್ರೀಡಂ ಪ್ಲಾನ್ 2.0' ನಲ್ಲಿ ವ್ಯಾಲಿಡಿಟಿಯನ್ನು 24 ದಿನಗಳಿಗೆ ಮತ್ತು ಡೇಟಾವನ್ನು 1 GBಗೆ ಇಳಿಸಲಾಗಿದೆ. ಆದರೆ, ಅನ್&zwnj;ಲಿಮಿಟೆಡ್ ಕರೆಗಳು ಮತ್ತು 100 ಎಸ್&zwnj;ಎಂಎಸ್&zwnj; ಸೌಲಭ್ಯಗಳು ಮುಂದುವರಿದಿವೆ.&lt;/p&gt;&lt;p&gt;ಫ್ರೀಡಂ ಆಫರ್ ಜೊತೆಗೆ, BSNL ತನ್ನ ಈಗಿನ ಗ್ರಾಹಕರಿಗೂ ಒಂದು ಗುಡ್ ನ್ಯೂಸ್ ನೀಡಿದೆ. ₹2,399 ವಾರ್ಷಿಕ ಪ್ಲಾನ್ ಮೇಲೆ ಹೆಚ್ಚುವರಿ ವ್ಯಾಲಿಡಿಟಿ ಘೋಷಿಸಿದೆ. ಆಗಸ್ಟ್ 12 ರಿಂದ ಸೆಪ್ಟೆಂಬರ್ 12, 2026ರ ನಡುವೆ ರೀಚಾರ್ಜ್ ಮಾಡುವವರಿಗೆ 365 ದಿನಗಳ ಬದಲು 412 ದಿನಗಳ (ಹೆಚ್ಚುವರಿ 47 ದಿನ) ವ್ಯಾಲಿಡಿಟಿ ಸಿಗಲಿದೆ. ಈ ಪ್ಲಾನ್&zwnj;ನಲ್ಲಿ ದಿನಕ್ಕೆ 2 GB ಡೇಟಾ, 100 ಎಸ್&zwnj;ಎಂಎಸ್&zwnj; ಮತ್ತು ಅನ್&zwnj;ಲಿಮಿಟೆಡ್ ಕರೆಗಳು ಲಭ್ಯ.&lt;/p&gt;&lt;p&gt;BSNL ಘೋಷಿಸಿರುವ ಈ ಎರಡೂ ವಿಶೇಷ ಆಫರ್&zwnj;ಗಳು ಸೀಮಿತ ಅವಧಿಗೆ ಮಾತ್ರ ಲಭ್ಯ. 1 ರೂಪಾಯಿಯ 'ಫ್ರೀಡಂ ಪ್ಲಾನ್' ಮತ್ತು ₹2,399 ಪ್ಲಾನ್ ಮೇಲಿನ ಹೆಚ್ಚುವರಿ ವ್ಯಾಲಿಡಿಟಿ ಆಫರ್ ಸೆಪ್ಟೆಂಬರ್ 12, 2026ರವರೆಗೆ ಮಾತ್ರ ಇರಲಿದೆ. 4G ಸೇವೆ ವಿಸ್ತರಿಸುತ್ತಿರುವ ಈ ಸಮಯದಲ್ಲಿ, ಹೊಸ ಗ್ರಾಹಕರನ್ನು ಸೆಳೆಯಲು BSNL ಈ ಆಫರ್&zwnj;ಗಳನ್ನು ತಂದಿದೆ.&lt;/p&gt;&lt;p&gt;ಒಟ್ಟಾರೆಯಾಗಿ ಬಿಎಸ್&zwnj;ಎನ್&zwnj;ಎಲ್ ಘೋಷಿಸಿರುವ ಈ ಭರ್ಜರಿ ಪ್ಲಾನ್ ಪ್ರತಿಸ್ಪರ್ಧಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಹಾಗೂ ಏರ್&zwnj;ಟೆಲ್&zwnj;ನ ನಿದ್ದೆಕೆಡಿಸಿರುವುದಂತೂ ಸುಳ್ಳಲ್ಲ.&lt;/p&gt;]]></content:encoded>
            <category><![CDATA[business]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/business/bsnl-freedom-plan-2-o-one-rupees-sim-recharge-offer-with-unlimited-calls-1gb-daily-data-kvn/articleshow-csqqh1m"/>
        </item>
        <item>
            <title><![CDATA[ತಂದೆಯನ್ನು ಕಳೆದುಕೊಂಡ ಬೆಂಗಳೂರು ಉದ್ಯೋಗಿಗೆ ಧೈರ್ಯ ತುಂಬಿದ ಸಂಸ್ಥೆ: 4 ವಾರ ರಜೆ, ಚಿಕಿತ್ಸಾ ವೆಚ್ಚ ಭರಿಸಿ ಮಾನವೀಯತೆ!]]></title>
            <link>https://kannada.asianetnews.com/bengaluru-urban/coimbatore-company-supports-grieving-employee-leave-medical-bills-san/articleshow-g3dfptk</link>
            <guid isPermaLink="true">https://kannada.asianetnews.com/bengaluru-urban/coimbatore-company-supports-grieving-employee-leave-medical-bills-san/articleshow-g3dfptk</guid>
            <pubDate>Fri, 14 Aug 2026 13:09:31 +0530</pubDate>
            <description><![CDATA[ತಂದೆಯನ್ನು ಕಳೆದುಕೊಂಡ ಉದ್ಯೋಗಿಗೆ ಕೊಯಮತ್ತೂರಿನ ಖಾಸಗಿ ಸಂಸ್ಥೆಯೊಂದು ಚಿಕಿತ್ಸಾ ವೆಚ್ಚ ಭರಿಸಿ, 4 ವಾರಗಳ ಸುದೀರ್ಘ ರಜೆ ನೀಡಿದೆ. ಸಂಸ್ಥೆಯ ಅಧ್ಯಕ್ಷರು ವೈಯಕ್ತಿಕವಾಗಿ ಸಾಂತ್ವನ ಹೇಳಿದ್ದು, ಈ ಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzk91p21g4rkrycs2pe26av,imgname-coimbatore-company-has-earned-praise-for-putting-humanity-before-work-1786693060290.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ಉದ್ಯೋಗಿ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದಾಗ, ಆಕೆಗೆ ಸಾಂತ್ವನ ಹೇಳಿ, ಚಿಕಿತ್ಸಾ ವೆಚ್ಚ ಭರಿಸುವುದರ ಜೊತೆಗೆ ದುಃಖದಿಂದ ಹೊರಬರಲು 4 ವಾರಗಳ ಸುದೀರ್ಘ ರಜೆ ನೀಡುವ ಮೂಲಕ ಕೊಯಮತ್ತೂರು ಮೂಲದ ಖಾಸಗಿ ಸಂಸ್ಥೆಯೊಂದು ಮಾನವೀಯತೆ ಮೆರೆದಿದೆ. ಸಂಸ್ಥೆಯ ಈ ಅದ್ಭುತ ಮಾನವೀಯ ನಡೆಗೆ ಸೋಶಿಯಲ್&zwnj; ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಉದ್ಯೋಗಿಯ ಸಹೋದರ ಹಾಗೂ ಬೆಂಗಳೂರು ಮೂಲದ ಉದ್ಯಮಿ ವಿಬಿನ್ ಬಾಬುರಾಜನ್ ಎಂಬುವವರು ತಮ್ಮ ತಂಗಿ ಕೆಲಸ ಮಾಡುತ್ತಿರುವ ಸಂಸ್ಥೆಯ ಮಾನವೀಯ ನಡೆಯನ್ನು &lsquo;ಎಕ್ಸ್&rsquo; (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡ ನಂತರ ಈ ವಿಷಯ ಬೆಳಕಿಗೆ ಬಂದಿದೆ.&lt;/p&gt;&lt;p&gt;ವಿಬಿನ್ ಬಾಬುರಾಜನ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಅವರ ತಂಗಿ ಕೊಯಮತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸುದೀರ್ಘ ಇತಿಹಾಸವಿರುವ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಅವರ ತಂದೆ ನಿಧನರಾದಾಗ ಸಂಸ್ಥೆಯು ಉದ್ಯೋಗಿಯ ತಂದೆ ನಿಧನರಾಗುವ ಮುನ್ನ ಅವರಿಗಾದ ಒಟ್ಟು ವೈದ್ಯಕೀಯ ವೆಚ್ಚದಲ್ಲಿ ಶೇ. 20ರಷ್ಟು ಭಾಗವನ್ನು ಕಂಪನಿಯೇ ಭರಿಸಿದೆ. ತಂದೆಯ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳಲು ಹಾಗೂ ಕುಟುಂಬದ ಜೊತೆ ಇರಲು ಉದ್ಯೋಗಿಗೆ 4 ವಾರಗಳಿಗೂ ಹೆಚ್ಚು ಕಾಲ ರಜೆ ನೀಡಿದೆ. ಇವೆಲ್ಲಕ್ಕಿಂತ ಮಿಗಿಲಾಗಿ, ಕಂಪನಿಯ ಅಧ್ಯಕ್ಷರು (Chairman) ಸ್ವತಃ ಉದ್ಯೋಗಿಗೆ ವೈಯಕ್ತಿಕವಾಗಿ ಸಂದೇಶ ಕಳುಹಿಸಿ, ಆಕೆಯ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.&lt;/p&gt;&lt;h2&gt;&lt;strong&gt;4000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಬೃಹತ್ ಸಂಸ್ಥೆ!&lt;/strong&gt;&lt;/h2&gt;&lt;p&gt;ಇಲ್ಲಿ ಮತ್ತೊಂದು ಗಮನಾರ್ಹ ವಿಚಾರವೆಂದರೆ, ಈ ಸಂಸ್ಥೆಯು ಸಣ್ಣ ಪ್ರಮಾಣದ ಉದ್ಯಮವೇನಲ್ಲ. ಇದು 50 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿದ್ದು, 4,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಹಾಗೂ ವಿಶ್ವದ 40ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಸಾಮಾನ್ಯ ಸಣ್ಣ ಉದ್ಯಮಗಳಲ್ಲಿ ಮಾಲೀಕರಿಗೆ ಪ್ರತಿಯೊಬ್ಬ ಉದ್ಯೋಗಿಯ ಪರಿಚಯವಿರುತ್ತದೆ. ಆದರೆ ಇಷ್ಟೊಂದು ಬೃಹತ್ ಮಟ್ಟದಲ್ಲಿ ಬೆಳೆದಿದ್ದರೂ ಸಂಸ್ಥೆಯು ಪ್ರತಿಯೊಬ್ಬ ಉದ್ಯೋಗಿಯ ಕಷ್ಟಕ್ಕೆ ಮಿಡಿಯುವ ಗುಣವನ್ನು ಇಟ್ಟುಕೊಂಡಿರುವುದು ವಿಶೇಷ.&lt;/p&gt;&lt;p&gt;ಈ ಕುರಿತು ಬರೆದುಕೊಂಡಿರುವ ವಿಬಿನ್, &quot;ನಮ್ಮ ಪೋಷಕರು ತಮ್ಮ ಸಂಸ್ಥೆಗಳಿಗೆ ಏಕೆ ಅಷ್ಟೊಂದು ನಿಷ್ಠೆಯಿಂದ (Loyal) ಇರುತ್ತಿದ್ದರು ಎಂಬುದು ಈಗ ಅರ್ಥವಾಗುತ್ತಿದೆ. ದೊಡ್ಡ ಮಟ್ಟಕ್ಕೆ ಬೆಳೆದ ಮೇಲೆಯೂ ಕುಟುಂಬ ನಿರ್ವಹಣೆಯ ಮಾದರಿಯ ಉದ್ಯಮಗಳು (Family-run businesses) ತಮ್ಮ ಸಿಬ್ಬಂದಿಯನ್ನು ಹೇಗೆ ಕಾಳಜಿಯಿಂದ ನೋಡಿಕೊಳ್ಳುತ್ತವೆ ಎಂಬುದಕ್ಕೆ ಇದೇ ಸಾಕ್ಷಿ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ&lt;/strong&gt;&lt;/h2&gt;&lt;p&gt;ವಿಬಿನ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಕಾರ್ಪೊರೇಟ್ ಜಗತ್ತಿಗೆ ಮಾದರಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಲವು ನೆಟ್ಟಿಗರು ಕಾರ್ಪೊರೇಟ್ ಕಂಪನಿಗಳು ಮತ್ತು ಇಂತಹ ಸಾಂಪ್ರದಾಯಿಕ ಕುಟುಂಬ ಆಧಾರಿತ ಸಂಸ್ಥೆಗಳ ನಡುವಿನ ವ್ಯತ್ಯಾಸವನ್ನು ಬೊಟ್ಟು ಮಾಡಿದ್ದಾರೆ. ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದರೂ ಸಿಗದ ಮಾನವೀಯ ಸ್ಪಂದನೆ ಇಂತಹ ಸಂಸ್ಥೆಗಳಲ್ಲಿ ಸಿಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇನ್ನೂ ಕೆಲವರು ಹಳೆಯ ಕಾಲದ ಕಂಪನಿ ಸಂಸ್ಕೃತಿಯನ್ನು ನೆನಪಿಸಿಕೊಂಡಿದ್ದಾರೆ. ಹಿಂದೆ ಕಂಪನಿಗಳು ಪೆನ್ಷನ್, ಅಗ್ಗದ ದರದ ಗೆಸ್ಟ್ ಹೌಸ್ ಹಾಗೂ ಕ್ಯಾಂಟೀನ್ ಸೌಲಭ್ಯಗಳನ್ನು ನೀಡುತ್ತಿದ್ದವು. ಇಂದಿನ ಆಫೀಸುಗಳು ಆಧುನಿಕ ಹಾಗೂ ಹೈಟೆಕ್ ಆಗಿರಬಹುದು, ಆದರೆ ಉದ್ಯೋಗಿಗಳ ಜೊತೆಗಿನ ವೈಯಕ್ತಿಕ ಭಾವನಾತ್ಮಕ ಬಾಂಧವ್ಯ ಕಡಿಮೆಯಾಗಿದೆ. ಮಾಸ್ ಲೇಆಫ್&zwnj;ಗಳ (ಸಾಮೂಹಿಕ ವಜಾ) ಈ ದಿನಗಳಲ್ಲಿ ಉದ್ಯೋಗ ಭದ್ರತೆ ಮತ್ತು ಕಷ್ಟಕ್ಕೆ ಮಿಡಿಯುವ ಗುಣವೇ ನಿಜವಾದ ಮೌಲ್ಯ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಏಕೆ ಈ ಸುದ್ದಿ ಮುಖ್ಯವಾಗುತ್ತದೆ?&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಉದ್ಯೋಗಸ್ಥರ ಕುಟುಂಬದಲ್ಲಿ ಸಾವು ಸಂಭವಿಸಿದಾಗ ಕಂಪನಿಗಳು ಕೇವಲ 2 ರಿಂದ 3 ದಿನಗಳ ರಜೆ ನೀಡುವುದು ವಾಡಿಕೆ. ಆದರೆ, 4 ವಾರಗಳ ರಜೆ ನೀಡಿ, ಚಿಕಿತ್ಸಾ ವೆಚ್ಚವನ್ನೂ ಭರಿಸಿ, ಕಂಪನಿಯ ಉನ್ನತ ಅಧಿಕಾರಿಯೇ ಧೈರ್ಯ ತುಂಬುವುದು ಅಪರೂಪದಲ್ಲಿ ಅಪರೂಪದ ಸಂಗತಿ. ಸಂಬಳದ ಅಂಕಿ-ಅಂಶಗಳು ಅಥವಾ ಆಫೀಸಿನ ಜಾಲಿ ಆಫರ್&zwnj;ಗಳಿಗಿಂತ, ಜೀವನದ ಕಷ್ಟದ ಹಂತದಲ್ಲಿ ಸಂಸ್ಥೆಯು ತಮ್ಮನ್ನು ಹೇಗೆ ನಡೆಸಿಕೊಂಡಿತು ಎಂಬುದೇ ಉದ್ಯೋಗಿಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಈ ಕೊಯಮತ್ತೂರು ಮೂಲದ ಸಂಸ್ಥೆಯು ಪ್ರತಿಯೊಂದು ಕಂಪನಿಗೂ ಮಾದರಿಯಾಗಿದೆ.&lt;/p&gt;&lt;p&gt;my sister works for a traditional company that was built out of coimbatore.here&rsquo;s what her company did after she lost her dad last week:&rarr; beared 20% of the medical expenses&rarr; gave her over 4 weeks of leave&rarr; the chairman personally messaged to check in on hermind you,&hellip;&lt;/p&gt;&lt;p&gt;&mdash; Vibin Babuurajan  (@vibinbaburajan) August 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/coimbatore-company-supports-grieving-employee-leave-medical-bills-san/articleshow-g3dfptk"/>
        </item>
        <item>
            <title><![CDATA[KGF vs Zero: ಜೀರೋ vs ಕೆಜಿಎಫ್ ರಿಲೀಸ್ ಕ್ಲ್ಯಾಶ್! ಯಶ್‌ ಉತ್ತರಕ್ಕೆ ಬಾಲಿವುಡ್‌ ಫಿದಾ]]></title>
            <link>https://kannada.asianetnews.com/cine-world/zero-vs-kgf-release-clash-did-yash-take-revenge-on-shah-rukh-khan/articleshow-ghr685o</link>
            <guid isPermaLink="true">https://kannada.asianetnews.com/cine-world/zero-vs-kgf-release-clash-did-yash-take-revenge-on-shah-rukh-khan/articleshow-ghr685o</guid>
            <pubDate>Fri, 14 Aug 2026 13:09:22 +0530</pubDate>
            <description><![CDATA[ಎಲ್ಲಿ ನೋಡಿದ್ರೂ ಈಗ ರಾಕಿ ಭಾಯ್‌ ಯಶ್‌ ಹವಾ. ಟಾಕ್ಸಿಕ್‌ ಸಿನಿಮಾ ಮೂಲಕ ಮತ್ತೆ ಚರ್ಚೆಗೆ ಬಂದಿರುವ ಯಶ್‌, ಆಪ್‌ ಕಿ ಅದಾಲತ್‌ ನಲ್ಲಿ ಶಾರುಖ್‌ ಖಾನ್‌‌ ಬಗ್ಗೆ ಆಸಕ್ತಿಕರ ವಿಷ್ಯ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzk9yyjw2mb517k06r12nk0,imgname-yash-shah-rukh-khan-1786693090258.jpg" type="image/jpeg" height="390" width="690"/>
            <content:encoded><![CDATA[&lt;p&gt;ತಾವು ಬೆಳೆದು ಬಂದ ದಾರಿಯನ್ನು ಮರೆಯದೆ, ಹಿರಿಯರಿಗೆ ಸದಾ ಗೌರವ ನೀಡಬೇಕು ಎಂಬುದನ್ನು ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಯಶ್ ಅವರಿಂದ ಕಲಿಯಬೇಕು. ಬಾಲಿವುಡ್ನ ದೊಡ್ಡ ಸ್ಟಾರ್ಗಳನ್ನೇ ಮೀರಿಸುವಷ್ಟು ಎತ್ತರಕ್ಕೆ ಬೆಳೆದಿದ್ದರೂ ಯಶ್ ಎಂದಿಗೂ ಅಹಂಕಾರ ತೋರಿಸಿಲ್ಲ. ತಾವು ಇಷ್ಟಪಡುವ ನಟರಿಗೆ ಗೌರವ ನೀಡುವುದನ್ನು ಅವರು ಇಂದಿಗೂ ಬಿಟ್ಟಿಲ್ಲ.&lt;/p&gt;&lt;h2&gt;ಶಾರುಖ್ ಖಾನ್ ಅಭಿಮಾನಿ ಯಶ್&lt;/h2&gt;&lt;p&gt;ಯಶ್ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಅಭಿಮಾನಿ ಎಂಬುದು ಹಲವರಿಗೆ ಗೊತ್ತಿರುವ ವಿಚಾರ. ಇದನ್ನು ಯಶ್ ಕೂಡ ಹಲವು ಬಾರಿ ಹೇಳಿಕೊಂಡಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಿರೂಪಕ ರಜತ್ ಶರ್ಮಾ ಇದೇ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ನೀವು ಶಾರುಖ್ ಖಾನ್ ಅವರ ಅಭಿಮಾನಿ. ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಿರಿ. ಆದರೆ ನಿಮಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಶಾರುಖ್ ಖಾನ್ ಅವರ ಜೀರೋ ಸಿನಿಮಾ ಬಿಡುಗಡೆಯಾದ ದಿನವೇ ನೀವು &lsquo;ಕೆಜಿಎಫ್&rsquo; ಸಿನಿಮಾವನ್ನು ಬಿಡುಗಡೆ ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ಇದಕ್ಕೆ ನಗುತ್ತಲೇ ಉತ್ತರಿಸಿದ ಯಶ್, ನಾನು ಈಗಲೂ ಶಾರುಖ್ ಖಾನ್ ಅವರ ಅಭಿಮಾನಿ. ನಂದು ಸಣ್ಣ ಸಿನಿಮಾ, ಶಾರುಖ್ ಸರ್ ಅವರದ್ದು ದೊಡ್ಡ ಸಿನಿಮಾ. ಹಾಗಾಗಿ ನಾವು ಅದೇ ದಿನ ರಿಲೀಸ್ ಮಾಡಿದೆವು ಎಂದಿದ್ದಾರೆ.&lt;/p&gt;&lt;p&gt;ಇದಾದ ಬಳಿಕ ರಜತ್ ಶರ್ಮಾ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಸಿನಿಮಾ 250 ಕೋಟಿ ರೂಪಾಯಿ ಗಳಿಸಿತು. ಆದರೆ ಶಾರುಖ್ ಖಾನ್ ಅವರ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತ್ತು ಎಂದಾಗ, ಯಶ್ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;&lt;p&gt;ಅವರು ಸೂಪರ್ಸ್ಟಾರ್. ಅವರಿಗಿಂತ ನಾನು ದೊಡ್ಡವನು ಎಂದು ನಾನು ಯೋಚಿಸಿದ ದಿನವೇ ನನ್ನ ಕಥೆ ಮುಗಿಯಿತು ಎಂದು ಯಶ್ ಹೇಳಿದ್ದಾರೆ.&lt;/p&gt;&lt;p&gt;ಯಶ್ ಅವರ ಈ ಮಾತು ಅವರ ವ್ಯಕ್ತಿತ್ವವನ್ನು ಮತ್ತೊಮ್ಮೆ ತೋರಿಸಿದೆ. ಸಿನಿಮಾ ಕೋಟಿ ಕೋಟಿ ರೂಪಾಯಿ ಗಳಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಹಿರಿಯ ಕಲಾವಿದರಿಗೆ ನೀಡುವ ಗೌರವವನ್ನು ಅವರು ಕಳೆದುಕೊಂಡಿಲ್ಲ. ಯಶ್ ಅವರ ಈ ಮಾತುಗಳು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಶಾರುಖ್ ಖಾನ್ ಅಭಿಮಾನಿಗಳಿಗೂ ಮೆಚ್ಚುಗೆಯಾಗಿವೆ. ಅದಕ್ಕಾಗಿಯೇ ಯಶ್ ಅವರ ಸರಳತೆ ಮತ್ತು ಹಿರಿಯ ಕಲಾವಿದರ ಮೇಲಿನ ಗೌರವದ ಬಗ್ಗೆ ಈಗ ಸ್ಯಾಂಡಲ್ವುಡ್ ಮಾತ್ರವಲ್ಲ, ಬಾಲಿವುಡ್ನಲ್ಲೂ ಚರ್ಚೆಯಾಗುತ್ತಿದೆ.&lt;/p&gt;View this post on Instagram&lt;p&gt;A post shared by SANDALWOODGLAM (@sandalwoodglamm)&lt;/p&gt;&lt;p&gt;&lt;/p&gt;]]></content:encoded>
            <category><![CDATA[cine-world]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/zero-vs-kgf-release-clash-did-yash-take-revenge-on-shah-rukh-khan/articleshow-ghr685o"/>
        </item>
        <item>
            <title><![CDATA[ದಳಪತಿ ವಿಜಯ್-ತ್ರಿಷಾ ಬ್ರೇಕಪ್ ಆಗಿ 2 ತಿಂಗಳಾಯ್ತಾ? ಬೇರ್ಪಟ್ಟ ಅಸಲಿ ಕಾರಣ ಇದು, ಬೇರೇನೂ ಅಲ್ಲ..!]]></title>
            <link>https://kannada.asianetnews.com/news-entertainment/this-is-the-real-reason-behind-thalapathy-vijay-and-trisha-separation-since-2-months-and-nothing-else/articleshow-e1l7yfp</link>
            <guid isPermaLink="true">https://kannada.asianetnews.com/news-entertainment/this-is-the-real-reason-behind-thalapathy-vijay-and-trisha-separation-since-2-months-and-nothing-else/articleshow-e1l7yfp</guid>
            <pubDate>Fri, 14 Aug 2026 13:05:14 +0530</pubDate>
            <description><![CDATA[ಈ ಇಬ್ಬರು ಸ್ಟಾರ್‌ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಆದರೆ, ಬ್ರೇಕಪ್‌ಗೆ ಅಸಲಿ ಕಾರಣ ಅದಲ್ಲ, ಇದು.. ಈ ಸ್ಟೋರಿ ನೋಡಿ..]]></description>
            <media:content url="https://static.asianetnews.com/images/w-1280,h-720,format-jpg,imgid-01kzzk0k46kw72c1vgwvsd2wew,imgname-trisha-krishnan-thalapathy-vijay-1786692783238.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Thalapathy Vijay-Trisha Krishnan Break Up secret Story: ದಳಪತಿ ವಿಜಯ್-ತ್ರಿಶಾ ಸ್ನೇಹಕ್ಕೆ ಬಿತ್ತು 'AI' ಕೊಳ್ಳಿ: ಎರಡು ತಿಂಗಳ ಹಿಂದೆಯೇ ಕಟ್ ಆಯ್ತಾ ಕಿಂಗ್-ಕ್ವೀನ್ ಸಂಬಂಧ?&lt;/strong&gt;&lt;/p&gt;&lt;p&gt;ದಕ್ಷಿಣ ಭಾರತದ ಚಿತ್ರರಂಗದಲ್ಲಿ 'ಗಿಲ್ಲು' ಕಾಲದಿಂದ ಹಿಡಿದು ಇತ್ತೀಚಿನ 'ಲಿಯೋ'ವರೆಗೂ ವಿಜಯ್ ಮತ್ತು ತ್ರಿಶಾ ಜೋಡಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ತೆರೆಯ ಮೇಲೆ ಮಿಂಚುತ್ತಿದ್ದ ಈ ಜೋಡಿ, ತೆರೆಯ ಹಿಂದೆಯೂ ಅಷ್ಟೇ ಆತ್ಮೀಯವಾಗಿದೆ ಎಂಬ ಗುಸುಗುಸು ತಮಿಳುನಾಡಿನ ಗಲ್ಲಿ ಗಲ್ಲಿಗಳಲ್ಲೂ ಕೇಳಿಬರುತ್ತಿತ್ತು. ಆದರೆ, ಈಗ ಕೇಳಿ ಬರುತ್ತಿರುವ ಸುದ್ದಿ ಮಾತ್ರ ಅಭಿಮಾನಿಗಳಿಗೆ ಶಾಕ್ ನೀಡುವಂತಿದೆ. ಹೌದು, ತಮಿಳು ಚಿತ್ರರಂಗದ ಈ 'ಕ್ರೇಜಿ ಜೋಡಿ' ಈಗ ಕಿತ್ತಾಡಿಕೊಂಡು ದೂರಾಗಿದೆಯಂತೆ!&lt;/p&gt;&lt;h2&gt;ಆ ಒಂದು 'AI' ಫೋಟೋ ಮಾಡಿದ್ದೇ ಎಡವಟ್ಟು!&lt;/h2&gt;&lt;p&gt;ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ವಿಜಯ್ ಅವರ ಈ ವರ್ಷದ ಹುಟ್ಟುಹಬ್ಬದಂದು ನಟಿ ತ್ರಿಶಾ ಮಾಡಿದ ಒಂದು ಪೋಸ್ಟ್ ಇಡೀ ಕಥೆಯನ್ನೇ ಉಲ್ಟಾ ಮಾಡಿಬಿಟ್ಟಿದೆ. ವಿಜಯ್ ಅವರ ಬರ್ತ್&zwnj;ಡೇ ದಿನ ತ್ರಿಶಾ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಜೊತೆಗಿನ ಒಂದು AI (ಕೃತಕ ಬುದ್ಧಿಮತ್ತೆ) ಸೃಷ್ಟಿತ ಫೋಟೋವನ್ನು ಹಂಚಿಕೊಂಡು ವಿಶ್ ಮಾಡಿದ್ದರು. ನೋಡಲು ಈ ಫೋಟೋ ತುಂಬಾ ಆಪ್ತವಾಗಿತ್ತು. ಆದರೆ, ಮೂಲಗಳ ಪ್ರಕಾರ ಈ ಫೋಟೋ ನೋಡಿ ವಿಜಯ್ ಸಖತ್ ಗರಂ ಆಗಿದ್ದಾರಂತೆ. &quot;ಯಾಕೆ ಹೀಗೆ ಪೋಸ್ಟ್ ಮಾಡಿದೆ?&quot; ಎಂದು ಗಲಾಟೆ ನಡೆದು, ಅಲ್ಲಿಗೆ ಇಬ್ಬರ ಸಂಬಂಧಕ್ಕೆ ಬ್ರೇಕ್ ಬಿತ್ತು ಎಂಬುದು ಸದ್ಯದ ಹಾಟ್ ನ್ಯೂಸ್.&lt;/p&gt;&lt;p&gt;ಪತ್ರಕರ್ತ ಜೈಶಂಕರ್ ಬಿಚ್ಚಿಟ್ಟ ಸತ್ಯಗಳೇನು?&lt;/p&gt;&lt;p&gt;ರಾಜಕೀಯ ವಿಶ್ಲೇಷಕ ಹಾಗೂ ಪತ್ರಕರ್ತ ಚೆಗುವೆರಾ ಜೈಶಂಕರ್ ಅವರು ಈ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ. &quot;ವಿಜಯ್ ಮತ್ತು ತ್ರಿಶಾ ನಡುವಿನ ಆ 'ವಿಶೇಷ ಸಂಬಂಧ' ಈಗ ಅಧಿಕೃತವಾಗಿ ಮುಕ್ತಾಯವಾಗಿದೆ. ಬರ್ತ್&zwnj;ಡೇ ದಿನದ ಗಲಾಟೆಯ ನಂತರ ವಿಜಯ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗ ಅವರಿಬ್ಬರ ನಡುವೆ ಯಾವುದೇ ಮಾತುಕತೆ ಇಲ್ಲ&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;h3&gt;ಸಂಧಾನಕ್ಕೆ ಬಂದ ಖುಷ್ಬೂಗೆ ನಿರಾಸೆ!&lt;/h3&gt;&lt;p&gt;ಈ ಇಬ್ಬರು ಸ್ಟಾರ್&zwnj;ಗಳ ನಡುವೆ ಎಲ್ಲವನ್ನೂ ಸರಿಪಡಿಸಲು ನಟಿ ಖುಷ್ಬೂ ಸುಂದರ್ ಬಹಳ ಪ್ರಯತ್ನ ಪಟ್ಟರಂತೆ. ತಮ್ಮ ಮಗಳ ಮದುವೆಗೆ ವಿಜಯ್ ಅವರಿಗೆ ಆಮಂತ್ರಣ ನೀಡಿದಾಗ, ಅಲ್ಲಿ ತ್ರಿಶಾ ಕೂಡ ಇರುತ್ತಾರೆ ಎಂಬ ಕಾರಣಕ್ಕೆ ವಿಜಯ್ ಕಾರ್ಯಕ್ರಮಕ್ಕೇ ಹೋಗಲಿಲ್ಲವಂತೆ. ಖುಷ್ಬೂ ಎಷ್ಟೇ ಸಂಧಾನ ಮಾಡಿಸಲು ಹೋದರೂ, ವಿಜಯ್ ಮಾತ್ರ &quot;ನನಗೆ ಆ ಸಹವಾಸವೇ ಬೇಡ, ತ್ರಿಶಾ ಬಗ್ಗೆ ಯಾರು ಕೇಳಿದರೂ ನಾನು ಉತ್ತರಿಸುವುದಿಲ್ಲ&quot; ಎಂದು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಟ್ವಿಸ್ಟ್ ಕೊಟ್ಟ ಪತ್ನಿ ಸಂಗೀತಾ ಅವರ ನಿರ್ಧಾರ!&lt;/p&gt;&lt;p&gt;ಈ ಕಡೆ ತ್ರಿಶಾ ಜೊತೆಗಿನ ವಿವಾದ ಒಂದೆಡೆಯಾದರೆ, ಇನ್ನೊಂದೆಡೆ ವಿಜಯ್ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಕಳೆದ ಫೆಬ್ರವರಿಯಲ್ಲಿ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದು ವಿಜಯ್ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿತ್ತು. ಆದರೆ, ಈಗ ಸಿಕ್ಕಿರುವ ಲೇಟೆಸ್ಟ್ ಮಾಹಿತಿಯೆಂದರೆ, ಸಂಗೀತಾ ಅವರು ತಮ್ಮ ವಿಚ್ಛೇದನ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ! ಅಂದರೆ, ವಿಜಯ್ ತಮ್ಮ ವೈಯಕ್ತಿಕ ಜೀವನ ಮತ್ತು ಸಂಸಾರದ ಕಡೆಗೆ ಹೆಚ್ಚು ಗಮನ ಕೊಡಲು ನಿರ್ಧರಿಸಿ, ತ್ರಿಶಾ ಅವರಿಂದ ದೂರ ಸರಿದಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.&lt;/p&gt;&lt;p&gt;ಒಟ್ಟಿನಲ್ಲಿ, ತಮಿಳುನಾಡಿನ ಮುಖ್ಯಮಂತ್ರಿ 'ದಳಪತಿ' ವಿಜಯ್, ತಮ್ಮ ರಾಜಕೀಯ ಭವಿಷ್ಯ ಮತ್ತು ಕುಟುಂಬದ ಗೌರವಕ್ಕಾಗಿ ಸಿನಿಮಾದ ನಟಿಯ ಜೊತೆಗಿನ ಸ್ನೇಹಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇದು ಕೇವಲ ಗಾಳಿಸುದ್ದಿಯೋ ಅಥವಾ ಅಪ್ಪಟ ಸತ್ಯವೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಸದ್ಯಕ್ಕಂತೂ ತ್ರಿಶಾ ಮತ್ತು ವಿಜಯ್ ಅಭಿಮಾನಿಗಳು ಈ ಬ್ರೇಕಪ್ ಸುದ್ದಿಯಿಂದ ಕೊಂಚ ಅಪ್ಸೆಟ್ ಆಗಿರುವುದಂತೂ ನಿಜ!&lt;/p&gt;]]></content:encoded>
            <category><![CDATA[news-entertainment]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/news-entertainment/this-is-the-real-reason-behind-thalapathy-vijay-and-trisha-separation-since-2-months-and-nothing-else/articleshow-e1l7yfp"/>
        </item>
        <item>
            <title><![CDATA[ಮಂಗಳೂರಿನಲ್ಲಿ BSNL ಹೊಸ ಅಲೆ:  ಮೀನುಗಾರರಿಂದ ವ್ಯಾಪಕ ಬೇಡಿಕೆ? 1 ರೂಪಾಯಿಗೆ ಸಿಮ್]]></title>
            <link>https://kannada.asianetnews.com/karnataka-districts/dakshina-kannada-bsnl-satellite-phone-receives-good-response-in-mangaluru-too-mrq/articleshow-k8lzhht</link>
            <guid isPermaLink="true">https://kannada.asianetnews.com/karnataka-districts/dakshina-kannada-bsnl-satellite-phone-receives-good-response-in-mangaluru-too-mrq/articleshow-k8lzhht</guid>
            <pubDate>Fri, 14 Aug 2026 12:54:15 +0530</pubDate>
            <description><![CDATA[ಬಿಎಸ್‌ಎನ್‌ಎಲ್‌ ಇತ್ತೀಚೆಗೆ ಪರಿಚಯಿಸಿರುವ ಸ್ಯಾಟಲೈಟ್‌ ಫೋನ್‌ಗೆ ಮಂಗಳೂರಿನಲ್ಲಿ, ವಿಶೇಷವಾಗಿ ಮೀನುಗಾರರಿಂದ, ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಇದರೊಂದಿಗೆ, ಭಾರತ್‌ ನೆಟ್‌ ಯೋಜನೆಯಡಿ ಗ್ರಾಮೀಣ ಪ್ರದೇಶಗಳಿಗೆ ಬ್ರಾಡ್‌ಬ್ಯಾಂಡ್‌ ವಿಸ್ತರಣೆ ಮತ್ತು ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಕರ್ಷಕ ಸಿಮ್ ಹಾಗೂ ಎಫ್‌ಟಿಟಿಎಚ್‌ ಕೊಡುಗೆಗಳನ್ನು ಸಂಸ್ಥೆ ಘೋಷಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzjfavcsssg21r4n78r7yfw,imgname-bsnl-1786692217707.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ಭಾರತ್&zwnj; ಸಂಚಾರ ನಿಗಮ್&zwnj; ಲಿಮಿಟೆಡ್&zwnj; (ಬಿಎಸ್&zwnj;ಎನ್&zwnj;ಎಲ್&zwnj;) ಇತ್ತೀಚೆಗೆ ಹೊರ ತಂದಿರುವ ವಿಶೇಷ ಸ್ಯಾಟಲೈಟ್&zwnj; ಫೋನ್&zwnj;ಗೆ ವ್ಯಾಪಕ ಬೇಡಿಕೆ ವ್ಯಕ್ತವಾಗುತ್ತಿದ್ದು, ಮಂಗಳೂರಿನಲ್ಲೂ ಸ್ಯಾಟ್&zwnj;ಲೈಟ್&zwnj; ಫೋನ್&zwnj;ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಬಿಎಸ್&zwnj;ಎನ್&zwnj;ಎಲ್&zwnj; ಮಂಗಳೂರು ವಿಭಾಗದ ಮಹಾ ಪ್ರಬಂಧಕ ಹೇಮಂತ್&zwnj; ಸದಾಶಿವ ಬೊರಲೆ ತಿಳಿಸಿದರು.&lt;/p&gt;&lt;p&gt;ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಎಸ್&zwnj;ಎನ್&zwnj;ಎಲ್&zwnj;ನ ಸ್ಯಾಟಲೈಟ್&zwnj; ಫೋನ್&zwnj; ಸೇವೆಗಳಿಗೆ ಉತ್ತಮ ಸ್ಪಂದನೆ ದೊರಕಿದೆ. ಸಾಂಪ್ರದಾಯಿಕ ಮೊಬೈಲ್&zwnj; ಜಾಲ, ಬ್ರಾಡ್&zwnj;ಬ್ಯಾಂಡ್&zwnj; ಅಥವಾ ಭೂ ಆಧಾರಿತ ಸಂವಹನ ಸೌಲಭ್ಯಗಳು ಇಲ್ಲದ ಕಡೆಯೂ ಈ ಸ್ಯಾಟಲೈಟ್&zwnj; ಫೋನ್&zwnj; ಸೇವೆಗಳು ಸಹಕಾರಿಯಾಗುತ್ತಿದೆ. ದುರ್ಗಮ ಪ್ರದೇಶ, ವಿಪತ್ತು ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆ, ಮಹತ್ವದ ಸಂವಹನ ಅಗತ್ಯಗಳಿಗೆ ಈ ಸೇವೆ ಉಪಯುಕ್ತವಾಗಿದೆ. ಮಂಗಳೂರಿನಲ್ಲಿ ಮುಖ್ಯವಾಗಿ ಮೀನುಗಾರಿಕೆಗೆ ತೆರಳುವವರಿಗೆ ಇದು ಬಹಳಷ್ಟು ಪ್ರಯೋಜನವಾಗುತ್ತಿದೆ. ಈ ವ್ಯವಸ್ಥೆಯಡಿ 20ಕ್ಕೂ ಅಧಿಕ ಮಂದಿ ಸ್ಯಾಟ್&zwnj;ಲೈಟ್&zwnj; ಫೋನ್&zwnj; ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರ ಪರಿಶೀಲನಾ ಪ್ರಕ್ರಿಯೆ ನಡೆದು ಅಂತಿಮ ಹಂತದಲ್ಲಿದೆ ಎಂದರು.&lt;/p&gt;&lt;h2&gt;&lt;strong&gt;ಗ್ರಾಮೀಣ ಬ್ರಾಡ್&zwnj;ಬ್ಯಾಂಡ್&zwnj; ವಿಸ್ತರಣೆ:&lt;/strong&gt;&lt;/h2&gt;&lt;p&gt;ಭಾರತ್&zwnj; ನೆಟ್&zwnj; ಉದ್ಯಮಿ ಯೋಜನೆಯಡಿ 35 ಬಿಎನ್&zwnj;ಯು ಪಾಲುದಾರರು ಬಿಎಸ್&zwnj;ಎನ್&zwnj;ಎಲ್&zwnj;ನೊಂದಿಗೆ ಮಂಗಳೂರಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪಾಲುದಾರರು ಗ್ರಾಮೀಣ ಪ್ರದೇಶಗಳಲ್ಲಿ 88 ಒಎಲ್&zwnj;ಟಿ (ಒಪ್ಟಿಕಲ್&zwnj; ಲೈನ್&zwnj; ಟರ್ಮಿನಲ್&zwnj;)ಗಳನ್ನು ಸ್ಥಾಪಿಸಿದ್ದು, 5,000ಕ್ಕೂ ಹೆಚ್ಚು ಎಫ್&zwnj;ಟಿಟಿಎಚ್&zwnj; ಸಂಪರ್ಕಗಳನ್ನು ಒದಗಿಸಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್&zwnj;ಬ್ಯಾಂಡ್&zwnj; ಲಭ್ಯತೆ ಗಣನೀಯವಾಗಿ ಬಲಗೊಂಡಿದೆ. ಸುಳ್ಯ, ಕಡಬದ ಗ್ರಾಮೀಣ ಪ್ರದೇಶಗಳಿಗೂ ಈ ಮೂಲಕ ಬ್ರಾಡ್&zwnj;ಬ್ಯಾಂಡ್&zwnj; ತಲುಪಿದೆ ಎಂದರು.&lt;/p&gt;&lt;h3&gt;&lt;strong&gt;ಗ್ರಾಹಕರ ಸಂಖ್ಯೆ ಹೆಚ್ಚಳ:&lt;/strong&gt;&lt;/h3&gt;&lt;p&gt;ಬಿಎಸ್&zwnj;ಎನ್&zwnj;ಎಲ್&zwnj; ಗುಣಮಟ್ಟದ ಸೇವೆಗೆ ಆದ್ಯತೆ ನೀಡುತ್ತಿದ್ದು, 4ಜಿ ಜಾಲದ ವಿಸ್ತರಣೆಯಾಗುತ್ತಿದೆ. ಬಿಎಸ್&zwnj;ಎನ್&zwnj;ಎಲ್&zwnj; 4ಜಿ ಜಾಲವು 5ಜಿ ಸೇವೆಗಳ ವಿಕಾಸಕ್ಕೆ ಅಡಿಪಾಯವಾಗಿದ್ದು, ದೂರಸಂಪರ್ಕ ತಂತ್ರಜ್ಞಾನದಲ್ಲಿ ಭಾರತದ ಆತ್ಮನಿರ್ಭರತೆಯನ್ನು ಬಲಪಡಿಸುತ್ತದೆ. ಬಿಎಸ್&zwnj;ಎನ್&zwnj;ಎಲ್&zwnj; ಗ್ರಾಹಕರ ಸಂಖ್ಯೆಯೂ ಹೆಚ್ಚಳಗೊಂಡಿದೆ. ಗ್ರಾಮೀಣ ಭಾಗದಲ್ಲೂ ಗುಣಮಟ್ಟದ ಸೇವೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.&lt;/p&gt;&lt;p&gt;ಪ್ರಮುಖ ಅಧಿಕಾರಿಗಳಾದ ಕೃಷ್ಣ ಮೊಗೇರ, ವಿಜಿ ವಿ., ಮಮತಾ ಮತ್ತಿತರರು ಇದ್ದರು.&lt;/p&gt;&lt;h3&gt;&lt;strong&gt;1 ರು.ಗೆ ಬಿಎಸ್&zwnj;ಎನ್&zwnj;ಎಲ್&zwnj; ಸಿಮ್ !&lt;/strong&gt;&lt;/h3&gt;&lt;p&gt;ಬಿಎಸ್&zwnj;ಎನ್&zwnj;ಎಲ್&zwnj;ನಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹೊಸ ಸಿಮ್&zwnj; 1 ರು.ಗೆ ನೀಡಲಾಗುತ್ತಿದೆ. ಆ. 12ರಿಂದ ಆರಂಭಗೊಂಡಿರುವ ಈ ಕೊಡುಗೆ ಸೆ. 12ರವರೆಗೆ ಚಾಲ್ತಿಯಲ್ಲಿರಲಿದೆ. ಈ ಕೊಡುಗೆಯಡಿ 24 ದಿನಗಳ ಅವಧಿಗೆ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 1 ಜಿಬಿ ಡೇಟಾ, ಪ್ರತಿದಿನ 100 ಎಸ್&zwnj;ಎಂಎಸ್&zwnj;ಗಳ ಸೌಲಭ್ಯ ಗ್ರಾಹಕರಿಗೆ ದೊರಕಲಿದೆ. ಇದಲ್ಲದೆ 2,399 ರು.ಗಳ ವಾರ್ಷಿಕ ಪ್ಲಾನ್&zwnj; ಕೂಡಾ ನೀಡುತ್ತಿದ್ದು, 365 ದಿನಗಳೊಂದಿಗೆ ಹೆಚ್ಚುವರಿ 47 ದಿನಗಳ ಅವಧಿಯ ಕೊಡುಗೆ ಇದಾಗಿರಲಿದೆ ಎಂದರು.&lt;/p&gt;&lt;p&gt;ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 1ರಿಂದ ಆರಂಭಗೊಂಡು 90 ದಿನಗಳ ಅವಧಿಗೆ ಹೊಸ ಎಫ್&zwnj;ಟಿಟಿಎಚ್&zwnj; ಗ್ರಾಹಕರಿಗಾಗಿ ಬಿಎಸ್&zwnj;ಎನ್&zwnj;ಎಲ್&zwnj; ವಿಶೇಷ ಪ್ರಚಾರಾತ್ಮಕ ಕೊಡುಗೆಯನ್ನು ನೀಡುತ್ತಿದೆ. ಕೇರಳವನ್ನು ಹೊರತುಪಡಿಸಿ ಎಲ್ಲ ಟೆಲಿಕಾಂ ವಲಯಗಳಿಗೆ ಇದು ಅನ್ವಯಿಸುತ್ತದೆ. ಕರ್ನಾಟಕದ ಗ್ರಾಹಕರಿಗೆ ಈ ಕೊಡುಗೆ ಎಫ್&zwnj;ಎಂಸಿ 499 ರು. ಇರುವ ಫೈಬರ್&zwnj; ಬೇಸಿಕ್&zwnj; ಯೋಜನೆಗೆ ಅನ್ವಯಿಸುತ್ತದೆ. ಹೊಸ ಗ್ರಾಹಕರು ಎಫ್&zwnj;ಟಿಟಿಎ ಸಂಪರ್ಕ ಪಡೆದ ಕ್ಯಾಲೆಂಡರ್&zwnj; ತಿಂಗಳು ಸಂಪೂರ್ಣ ಉಚಿತವಾಗಿರುತ್ತದೆ ನಂತರ ಮೊದಲ ಮೂರು ತಿಂಗಳಲ್ಲಿ 100 ರು. ರಿಯಾಯಿತಿ ದೊರಕಲಿದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ:&amp;nbsp;&lt;/strong&gt;&lt;strong&gt; ಬಂಟ್ವಾಳ: ಬಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ದಾಸೋಹ ಸಿಬ್ಬಂದಿ ಜೀವ! ಸಿಎಂ ಮೆಚ್ಚುಗೆ&lt;/strong&gt;&lt;/p&gt;&lt;p&gt;------&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dakshina-kannada-bsnl-satellite-phone-receives-good-response-in-mangaluru-too-mrq/articleshow-k8lzhht"/>
        </item>
        <item>
            <title><![CDATA[ರಾಜ್ಯದ 18 ಪೊಲೀಸರಿಗೆ ರಾಷ್ಟ್ರಪತಿ ಪದಕದ ಗರಿ; ಜಿಲ್ಲಾವಾರು ಪದಕ ವಿಜೇತರ ಪಟ್ಟಿ ಇಲ್ಲಿದೆ ನೋಡಿ!]]></title>
            <link>https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m</link>
            <guid isPermaLink="true">https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m</guid>
            <pubDate>Fri, 14 Aug 2026 12:52:31 +0530</pubDate>
            <description><![CDATA[2026ರ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ, ಕರ್ನಾಟಕದ 17 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 'ರಾಷ್ಟ್ರಪತಿ ಪೊಲೀಸ್ ಪದಕ' ಘೋಷಿಸಲಾಗಿದೆ. ಸಿಸಿಬಿ ಎಸಿಪಿ ಹೆಚ್.ಎನ್. ಧರ್ಮೇಂದ್ರ ಅವರಿಗೆ 'ವಿಶಿಷ್ಟ ಸೇವಾ ಪದಕ' ಲಭಿಸಿದ್ದು, ಉಳಿದ 16 ಮಂದಿ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzj71gr4yc4rz8fsytgar8r,imgname-independence-day-president-medal-winner-karnataka-police-1786691946008.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;2026ರ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ದೇಶಸೇವೆಯಲ್ಲಿ ಗಣನೀಯ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕೇಂದ್ರ ಗೃಹ ಸಚಿವಾಲಯವು &lsquo;ರಾಷ್ಟ್ರಪತಿ ಪೊಲೀಸ್ ಪದಕ&rsquo;ಗಳನ್ನು ಘೋಷಿಸಿದೆ. ಈ ಬಾರಿ ಕರ್ನಾಟಕ ಪೊಲೀಸ್ ಪಡೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಪ್ರತಿಷ್ಠಿತ ಗೌರವಕ್ಕೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.&lt;/p&gt;&lt;p&gt;ಅಪರಾಧ ತಡೆ, ಕಾನೂನು ಸುವ್ಯವಸ್ಥೆ ಪರಿಪಾಲನೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ತೋರಿದ ನಿಷ್ಠೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಹೆಚ್.ಎನ್.ಧರ್ಮೇಂದ್ರ ಅವರಿಗೆ 'ವಿಶಿಷ್ಟ ಸೇವಾ ಪದಕ'&lt;/strong&gt;&lt;/h2&gt;&lt;p&gt;ಸಿಸಿಬಿ (CCB) ವಿಭಾಗದಲ್ಲಿ ಸಹಾಯಕ ಪೊಲೀಸ್ ಕಮಿಷನರ್ (ACP) ಆಗಿ ಕಾರ್ಯನಿರ್ವಹಿಸುತ್ತಿರುವ ಹೆಚ್.ಎನ್. ಧರ್ಮೇಂದ್ರ ಅವರಿಗೆ 2026ರ ಅತ್ಯುನ್ನತ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಘೋಷಣೆಯಾಗಿದೆ. ತಮ್ಮ ದೀರ್ಘಕಾಲದ ಸೇವೆಯಲ್ಲಿ ಹಲವು ಪ್ರಮುಖ ಹಾಗೂ ಸಂಕೀರ್ಣ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಇವರು ವಹಿಸಿದ ಪ್ರಮುಖ ಪಾತ್ರವನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಶ್ಲಾಘನೀಯ ಸೇವಾ ಪದಕ ವಿಜೇತರ ಸಂಪೂರ್ಣ ಪಟ್ಟಿ&lt;/strong&gt;&lt;/h2&gt;&lt;p&gt;ರಾಜ್ಯದ ವಿವಿಧ ವಿಭಾಗಗಳು, ಸಿಐಡಿ, ಸಶಸ್ತ್ರ ಪಡೆ ಹಾಗೂ ತರಬೇತಿ ಕೇಂದ್ರಗಳಲ್ಲಿ ಶ್ರಮಿಸಿದ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶ್ಲಾಘನೀಯ ಸೇವಾ ಪದಕ (Meritorious Service Medal) ಲಭಿಸಿದೆ. ಅವರ ವಿವರ ಇಲ್ಲಿದೆ:&lt;/p&gt;&lt;ol&gt; &lt;li&gt;ಸಾರಾ ಫಾತೀಮಾ &ndash; ಎಸ್ಪಿ (ರೈಲ್ವೇಸ್, ಬೆಂಗಳೂರು)&lt;/li&gt; &lt;li&gt;ಥಾಮಸ್ ಮ್ಯಾಥ್ಯೂ &ndash; ಕಮಾಂಡೆಂಟ್ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಮಹಾದೇವ್ &ndash; ಎಸಿಪಿ (ಆಗ್ನೇಯ ಸಂಚಾರ ವಿಭಾಗ, ಬೆಂಗಳೂರು)&lt;/li&gt; &lt;li&gt;ಪ್ರಮಾನಂದ್ &ndash; ಡಿವೈಎಸ್ಪಿ (ಡಿ.ಎ.ಆರ್, ರಾಯಚೂರು)&lt;/li&gt; &lt;li&gt;ಷಣ್ಮುಗವರ್ಮಾ &ndash; ಪೊಲೀಸ್ ಇನ್ಸ್&zwnj;ಪೆಕ್ಟರ್ (ಪೊಲೀಸ್ ತರಬೇತಿ ಶಾಲೆ, ಮೈಸೂರು)&lt;/li&gt; &lt;li&gt;ಭಾವುದ್ದೀನ್ ರುಕ್ಮುದ್ದೀನ್ &ndash; ಪೊಲೀಸ್ ಇನ್ಸ್&zwnj;ಪೆಕ್ಟರ್ (ಮಾಳಮಾರುತಿ ಠಾಣೆ)&lt;/li&gt; &lt;li&gt;ಗುರುಪ್ರಸಾದ್ ಗೋಪಾಲ್ ನಾಯಕ್ &ndash; ಇನ್ಸ್&zwnj;ಪೆಕ್ಟರ್ (ಸಿಐಡಿ)&lt;/li&gt; &lt;li&gt;ನಯೀಂ &ndash; ರಿಸರ್ವ್ ಪೊಲೀಸ್ ಇನ್ಸ್&zwnj;ಪೆಕ್ಟರ್ (ಲೋಕಭವನ)&lt;/li&gt; &lt;li&gt;ಶ್ರೀನಿವಾಸ &ndash; ಪಿ.ಎಸ್.ಐ (ಕೆ.ಪಿ.ಅಗ್ರಹಾರ ಠಾಣೆ, ಬೆಂಗಳೂರು)&lt;/li&gt; &lt;li&gt;ಜ್ಞಾನದೇವ್ ನವಲ ತರಾಸೆ &ndash; ಎ.ಆರ್.ಎಸ್.ಐ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಮಹದೇವಸ್ವಾಮಿ &ndash; ಹೆಡ್ ಕಾನ್ಸ್&zwnj;ಟೇಬಲ್ (ವಿಧಾನಸೌಧ ಭದ್ರತೆ)&lt;/li&gt; &lt;li&gt;ಮಾರಿಯಾ ಜೋಸೆಫ್ ದಿನೇಶ್ ಕುಮಾರ್ &ndash; ಹೆಡ್ ಕಾನ್ಸ್&zwnj;ಟೇಬಲ್ (ಡಿ.ಸಿ.ಆರ್.ಇ, ಕೆಜಿಎಫ್)&lt;/li&gt; &lt;li&gt;ಚಂದ್ರಶೇಖರ ಚಿಕ್ಕಣ್ಣನವರ್ &ndash; ಹೆಡ್ ಕಾನ್ಸ್&zwnj;ಟೇಬಲ್ (ಕೆ.ಎಸ್.ಆರ್.ಪಿ)&lt;/li&gt; &lt;li&gt;ಅಬ್ದುಲ್ ಕಮಾಲ್ &ndash; ಹೆಡ್ ಕಾನ್ಸ್&zwnj;ಟೇಬಲ್ (ತರೀಕೆರೆ)&lt;/li&gt; &lt;li&gt;ನಾಗೇಶ್ ಮಚ್ಚಯ್ಯ &ndash; ಹೆಡ್ ಕಾನ್ಸ್&zwnj;ಟೇಬಲ್ (ಸಿಐಡಿ)&lt;/li&gt; &lt;li&gt;ಮನೋಹರ್ &ndash; ಕಾನ್ಸ್&zwnj;ಟೇಬಲ್ (ಹುಣಸೂರು ಠಾಣೆ)&lt;/li&gt; &lt;li&gt;ಅಬ್ದುಲ್ ರಬ್ಬಾನಿ &ndash; ಡಿಪಿಒ (ಚಿಕ್ಕಮಗಳೂರು ಜಿಲ್ಲೆ)&lt;/li&gt;&lt;/ol&gt;&lt;h3&gt;&lt;strong&gt;ಹಿರಿಯ ಅಧಿಕಾರಿಗಳಿಂದ ಅಭಿನಂದನೆ&lt;/strong&gt;&lt;/h3&gt;&lt;p&gt;ಕರ್ತವ್ಯ ನಿಷ್ಠೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ರಾಷ್ಟ್ರಮಟ್ಟದಲ್ಲಿ ಗೌರವಕ್ಕೆ ಪಾತ್ರರಾದ ರಾಜ್ಯದ ಎಲ್ಲಾ 17 ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಹಿರಿಯ ಅಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.&lt;/p&gt;]]></content:encoded>
            <category><![CDATA[state-government-jobs]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state-government-jobs/independence-day-2026-presidents-police-medals-announced-for-17-karnataka-officers/articleshow-fandg5m"/>
        </item>
        <item>
            <title><![CDATA[Belagavi: ಚಿಕ್ಕೋಡಿಯಲ್ಲಿ ಶವ ತೆಗೆಯಲು ಕೋಳಿ ಬಲಿ ನೀಡಲು ಮುಂದಾದ್ರಾ ಅಧಿಕಾರಿಗಳು?]]></title>
            <link>https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois</link>
            <guid isPermaLink="true">https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois</guid>
            <pubDate>Fri, 14 Aug 2026 12:47:11 +0530</pubDate>
            <description><![CDATA[ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾದ ವ್ಯಕ್ತಿಯ ಶವವನ್ನು ಹೊರತೆಗೆಯುವ ಮೊದಲು ಅಧಿಕಾರಿಗಳು ಕೋಳಿ ಬಲಿ ನೀಡಲು ಮುಂದಾಗಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಾಗ ಈ ಪ್ರಯತ್ನವನ್ನು ಕೈಬಿಡಲಾಗಿದ್ದು, ಈ ಘಟನೆಯು ಸರ್ಕಾರಿ ಕಾರ್ಯಾಚರಣೆಯಲ್ಲಿನ ಮೂಢನಂಬಿಕೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzj2678jedqm0y2cczs8d4k,imgname-chikkodi-1786691786984.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವ ಹೊರತೆಗೆಯುವ ಕಾರ್ಯಾಚರಣೆಗೆ ಮುನ್ನ ಕೋಳಿ ಬಲಿ ನೀಡಲು ಪೊಲೀಸರು ಮತ್ತು ತಾಲೂಕಾಡಳಿತ ಮುಂದಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ ನೇತೃತ್ವದಲ್ಲಿ ಹೂತಿದ್ದ ಶವ ಹೊರತೆಗೆಯುವ ಕಾರ್ಯಕ್ಕೆ ಸಿದ್ಧತೆ ನಡೆಸಲಾಗಿತ್ತು.&lt;/p&gt;&lt;h2&gt;&lt;strong&gt;ಕೋಳಿ ಬಲಿ ನೀಡಲು ಮುಂದಾದ ಆರೋಪ&lt;/strong&gt;&lt;/h2&gt;&lt;p&gt;ಈ ವೇಳೆ ಶವ ಅಗೆಯುವ ಮೊದಲು ಕೋಳಿ ಬಲಿ ನೀಡಲು ಮುಂದಾಗಿದ್ದು, ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ ಬಳಿಕ ಕೋಳಿಯನ್ನು ಅಲ್ಲಿಂದ ವಾಪಸ್ ತೆಗೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ. ರಾಘು ಗಾವಡೆ (40) ಅವರನ್ನು ಕೊಲೆ ಮಾಡಿ ಅವರದೇ ಜಮೀನಿನಲ್ಲಿ ಹೂತು ಹಾಕಲಾಗಿತ್ತು. ಪ್ರಕರಣದ ತನಿಖೆಯ ಭಾಗವಾಗಿ ಶವ ಹೊರತೆಗೆಯುವ ಕಾರ್ಯ ಕೈಗೊಳ್ಳಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಳಗಾವಿ: ಸುಮಾರು 9 km ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣಕ್ಕೆ ಆಗ್ರಹ&lt;/strong&gt;&lt;/p&gt;&lt;p&gt;ವೈಜ್ಞಾನಿಕ ತನಿಖೆ ಮತ್ತು ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಸರ್ಕಾರಿ ಇಲಾಖೆಯ ಕಾರ್ಯಾಚರಣೆ ವೇಳೆ ಪ್ರಾಣಿ ಬಲಿ ನೀಡುವಂತಹ ಮೂಢನಂಬಿಕೆಗೆ ಮೊರೆ ಹೋಗಲು ಯತ್ನಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ:&lt;/strong&gt;&lt;strong&gt; ಸವದತ್ತಿ-ಬೆಂಗಳೂರು: 'ಪಲ್ಲಕ್ಕಿ'ಯ ಹೊಸ ಪಯಣ, ಎರಡು ಬಸ್&zwnj;ಗಳಿಗೆ ಚಾಲನೆ; ಸಮಯ ಈ ರೀತಿ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-chikkodi-did-the-governement-authorities-offer-to-sacrifice-a-chicken-to-remove-the-body-mrq/articleshow-3oyuois"/>
        </item>
        <item>
            <title><![CDATA[Independence Day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ನೋಡಲೇಬೇಕಾದ ಈ 5 ಸ್ಥಳಗಳಿವು!]]></title>
            <link>https://kannada.asianetnews.com/gallery/india-news/august-15-here-are-5-must-visit-places-in-delhi-on-independence-day-rav-smik6pi</link>
            <guid isPermaLink="true">https://kannada.asianetnews.com/gallery/india-news/august-15-here-are-5-must-visit-places-in-delhi-on-independence-day-rav-smik6pi</guid>
            <pubDate>Fri, 14 Aug 2026 12:44:19 +0530</pubDate>
            <description><![CDATA[ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ದೆಹಲಿಯಲ್ಲಿ ದೇಶದ ಸ್ವಾತಂತ್ರ್ಯ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ದೆಹಲಿಯ ಈ ಸ್ಥಳಗಳು ಮುಖ್ಯವಾದವು.]]></description>
            <media:content url="https://static.asianetnews.com/images/w-1280,h-720,format-jpg,imgid-01kzzht2v1na2jhv7bm2d9q5as,imgname-----------------------2026-08-14t124145.469-1786691521377.jpg" type="image/jpeg" height="390" width="690"/>
            <content:encoded><![CDATA[&lt;p&gt;ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ದೆಹಲಿಯಲ್ಲಿ ದೇಶದ ಸ್ವಾತಂತ್ರ್ಯ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ದೆಹಲಿಯ ಈ ಸ್ಥಳಗಳು ಮುಖ್ಯವಾದವು.&lt;/p&gt;&lt;img&gt;&lt;p&gt;ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ದೆಹಲಿಯಲ್ಲಿ ದೇಶದ ಸ್ವಾತಂತ್ರ್ಯ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ದೆಹಲಿಯ ಈ ಸ್ಥಳಗಳು ಮುಖ್ಯವಾದವು. ಪ್ರತಿ ಭಾರತೀಯನೂ ಇಲ್ಲಿಗೆ ಭೇಟಿ ನೀಡಬೇಕು. ಅವು ಯಾವ ಸ್ಥಳಗಳು, ಎಲ್ಲಿವೆ, ತಲುಪುವುದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.&lt;/p&gt;&lt;p&gt;&lt;strong&gt;ಕೆಂಪು ಕೋಟೆ&lt;/strong&gt;&lt;/p&gt;&lt;p&gt;ದೆಹಲಿಗೆ ಭೇಟಿ ನೀಡಿದ್ದರೆ ಮೊದಲು ಕೆಂಪು ಕೋಟೆ ನೋಡಲೇಬೇಕು. ಆಗಸ್ಟ್ 15, 1947 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರಿ ದ್ವಾರದಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಂದಿನಿಂದ, ಈ ಸಂಪ್ರದಾಯವು ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಮುಂದುವರಿಸಿಕೊಂಡ ಬರಲಾಗಿದೆ. ಪ್ರತಿ ವರ್ಷ, ಪ್ರಧಾನ ಮಂತ್ರಿಗಳು ಇಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾರೆ.&lt;/p&gt;&lt;img&gt;&lt;p&gt;ಮಹಾತ್ಮ ಗಾಂಧಿಯವರ ಸ್ಮಾರಕ ಇದು. ಯಮುನಾ ನದಿಯ ದಡದಲ್ಲಿರುವ ರಾಜ್&zwnj;ಘಾಟ್&zwnj;ನಲ್ಲಿದೆ. ಕಪ್ಪು ಅಮೃತಶಿಲೆಯ ವೇದಿಕೆಯ ಮೇಲೆ 'ಹೇ ರಾಮ್' ಎಂದು ಬರೆಯಲಾಗಿದೆ, ಇದು ಗಾಂಧೀಜಿಯವರ ಕೊನೆಯ ಮಾತುಗಳನ್ನು ನೆನಪಿಸುತ್ತದೆ. ಈ ಸ್ಥಳವು ಹಚ್ಚ ಹಸಿರಿನ ಮರಗಳು ಮತ್ತು ಸಸ್ಯಗಳಿಂದ ಆವೃತವಾಗಿದ್ದು. ಅತ್ಯಂತ ನಿಶ್ಯಬ್ದ, ಶಾಂತಿಯ ಸ್ಥಳವಾಗಿದೆ.&lt;/p&gt;&lt;img&gt;&lt;p&gt;ಯುದ್ಧದಲ್ಲಿ ಹೋರಾಡಿ ವೀರಮರಣ ಅಪ್ಪಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ದೆಹಲಿಯ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಇಂಡಿಯಾ ಗೇಟ್ ಒಂದು. ಅಷ್ಟೇ ಅಲ್ಲದೆ ಇಂಡಿಯಾ ಗೇಟ್ 1971 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ಅಮರ್ ಜವಾನ್ ಜ್ಯೋತಿಯನ್ನು ಸಹ ನೋಡಬಹುದು. ಅಮರ್ ಜವಾನ್ ಜ್ಯೋತಿಯನ್ನು ಈಗ ರಾಷ್ಟ್ರೀಯ ಯುದ್ಧ ಸ್ಮಾರಕದೊಳಗೆ ಇರಿಸಲಾಗಿದೆ.&lt;/p&gt;&lt;img&gt;&lt;p&gt;ರಾಷ್ಟ್ರೀಯ ಯುದ್ಧ ಸ್ಮಾರಕವು ಇಂಡಿಯಾ ಗೇಟ್ ಸಮೀಪದಲ್ಲೇ ಇದೆ. ಇಂಡಿಯಾ ಗೇಟ್&zwnj;ನಿಂದ ಸುಮಾರು 750 ಮೀಟರ್ ಅಷ್ಟೇ ದೂರದಲ್ಲಿದೆ. ಕಾಲ್ನಡಿಗೆಯಲ್ಲೇ ತಲುಪಬಹುದು. ರಾಷ್ಟ್ರೀಯ ಯುದ್ಧ ಸ್ಮಾರಕ ವಿಶಾಲವಾಗಿದೆ. ಸುಮಾರು 40 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ, ಭಾರತ-ಪಾಕಿಸ್ತಾನ, ಭಾರತ-ಚೀನಾ ಮತ್ತು ಕಾರ್ಗಿಲ್ ಯುದ್ಧಗಳು ಸೇರಿದಂತೆ ವಿವಿಧ ಯುದ್ಧಗಳಲ್ಲಿ ಹುತಾತ್ಮರಾದ 25,942 ಸೈನಿಕರ ಹೆಸರುಗಳನ್ನು 16 ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದಿನದಂದು ನೀವು ನೋಡಲೇಬೇಕಾದ ಸ್ಥಳವಿದು.&lt;/p&gt;&lt;img&gt;&lt;p&gt;ತೀನ್ ಮೂರ್ತಿ ಭವನದಲ್ಲಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವಿದೆ. ಇದರ ವಿಶೇಷತೆ ಎಂದರೆ ಇಲ್ಲಿನ ಸಂಗ್ರಹಾಲಯದಲ್ಲಿ ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ಬಗ್ಗೆ ಪರಿಚಯಿಸುತ್ತದೆ. ಇಲ್ಲಿನ ವಿನೂತನ ತಂತ್ರಜ್ಞಾನ, ಹೊಲೊಗ್ರಾಮ್&zwnj;ಗಳು, ಸ್ಕ್ರೀನ್&zwnj;ಗಳಲ್ಲಿ ಭಾರತ ಸ್ವಾತಂತ್ರ್ಯದ ನಂತರ ಬೆಳೆದು ನಿಂತ ಬಗ್ಗೆ ತೋರಿಸುತ್ತದೆ.&lt;/p&gt;&lt;img&gt;&lt;p&gt;ದೆಹಲಿ ಮೆಟ್ರೋ ಈ ಎಲ್ಲಾ ಸ್ಥಳಗಳಿಗೆ ಸುಲಭವಾಗಿ ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಕೆಂಪು ಕೋಟೆ, ಚಾಂದನಿ ಚೌಕ್ ಅನ್ನು ನೇರಳೆ ಮತ್ತು ಹಳದಿ ಮಾರ್ಗದ ರೈಲುಗಳು ತಲುಪುತ್ತವೆ. ದೆಹಲಿ ಗೇಟ್ ಮೆಟ್ರೋ ನಿಲ್ದಾಣವು ರಾಜ್&zwnj;ಘಾಟ್&zwnj;ಗೆ ಹತ್ತಿರದಲ್ಲಿದೆ.&lt;/p&gt;&lt;p&gt;ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ಇಂಡಿಯಾ ಗೇಟ್, ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯಕ್ಕೆ ಸುಲಭವಾಗಿ ತಲುಪಬಹುದು. ಅಲ್ಲಿಂದ ನೀವು ಉಳಿದ ಸ್ಥಳಗಳನ್ನು ಆಟೋ ಅಥವಾ ಕಾಲ್ನಡಿಗೆ ರೀಚ್ ಆಗಬಹುದಷ್ಟು ಸಮೀಪದಲ್ಲಿವೆ.&lt;/p&gt;&lt;p&gt;&lt;strong&gt;ಯಾವ ಸಮಯ ಬೆಸ್ಟ್? ಟಿಕೆಟ್ ಬುಕ್ ಮಾಡೋದು ಹೇಗೆ?&lt;/strong&gt;&lt;/p&gt;&lt;p&gt;ಆಗಸ್ಟ್ 15 ರ ಸುಮಾರಿಗೆ ಈ ಎಲ್ಲಾ ಸ್ಥಳಗಳಲ್ಲಿ ಭದ್ರತೆ ತುಂಬಾ ಹೆಚ್ಚಿಸಲಾಗಿರುತ್ತೆ. ಆದ್ದರಿಂದ, ಬೇಗನೆ ಮನೆಯಿಂದ ಹೊರಡುವುದು ಉತ್ತಮ. ಅದರಲ್ಲೂ ನಾಳೆ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಟಿಕೆಟ್&zwnj;ಗಳು, ಬುಕಿಂಗ್ ದಿನಾಂಕಗಳು ಸಮಯಗಳು ಪ್ರತಿ ವರ್ಷವೂ ಬದಲಾಗುತ್ತಿರುತ್ತೆ. ಆದ್ದರಿಂದ, ಹೋಗುವ ಮೊದಲು ಅಧಿಕೃತ ಆಹ್ವಾನ ಪೋರ್ಟಲ್&zwnj;ನಲ್ಲಿ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸಲು ಮರೆಯಬೇಡಿ.&lt;/p&gt;&lt;p&gt;ರಾಜ್&zwnj;ಘಾಟ್, ಇಂಡಿಯಾ ಗೇಟ್ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕದಂತಹ ಸ್ಥಳಗಳಿಗೆ ಸಾಮಾನ್ಯ ದಿನಗಳಲ್ಲಿ ಟಿಕೆಟ್&zwnj;ಗಳ ಅಗತ್ಯವಿರುವುದಿಲ್ಲ. ಆದಾಗ್ಯೂ, ಆಗಸ್ಟ್ 15 ರ ಸುಮಾರಿಗೆ ಭದ್ರತಾ ತಪಾಸಣೆಗಳು ಹೆಚ್ಚು ಕಠಿಣವಿರುತ್ತೆ. ಆದ್ದರಿಂದ ಸ್ಥಳಗಳಿಗೆ ಭೇಟಿ ನೀಡುವ ಮೊದಲು ನಿಯಮ ಪರಿಶೀಲಿಸಿ ಯಾವುದೇ ಬ್ಯಾಗ್&zwnj;, ನೀರಿನ ಬಾಟಲಿ, ಇನ್ನಿತರ ವಸ್ತುಗಳಿಲ್ಲದೆ ಹೋಗುವುದು ಉತ್ತಮ.&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/india-news/august-15-here-are-5-must-visit-places-in-delhi-on-independence-day-rav-smik6pi"/>
        </item>
        <item>
            <title><![CDATA[ಜಸ್ಟ್‌ 21 ಸಾವಿರಕ್ಕೆ ಬುಕ್‌ ಮಾಡಿ MG ಹೆಕ್ಟರ್ ಹಾಕ್, ಆಕರ್ಷಕ ಫೀಚರ್‌ ಇರುವ ಹೊಸ ಎಸ್‌ಯುವಿ ಆಗಸ್ಟ್ 26ಕ್ಕೆ ಗ್ರ್ಯಾಂಡ್ ಲಾಂಚ್!]]></title>
            <link>https://kannada.asianetnews.com/car-news/mg-hector-hawk-suv-booking-opens-august-26-launch-price-features-san/articleshow-prp59b6</link>
            <guid isPermaLink="true">https://kannada.asianetnews.com/car-news/mg-hector-hawk-suv-booking-opens-august-26-launch-price-features-san/articleshow-prp59b6</guid>
            <pubDate>Fri, 14 Aug 2026 12:36:34 +0530</pubDate>
            <description><![CDATA[ಎಂಜಿ ಹೆಕ್ಟರ್ ಹಾಕ್ ಪ್ರೀಮಿಯಂ ಎಸ್‌ಯುವಿ ಕಾರಿನ ಬುಕಿಂಗ್ ಆರಂಭವಾಗಿದ್ದು, ಇದು ಆಗಸ್ಟ್ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. 3-ಸಾಲಿನ ಆಸನ ವ್ಯವಸ್ಥೆ, ಆಕರ್ಷಕ ವಿನ್ಯಾಸ, ಮತ್ತು ಬೇಜ್ ಇಂಟೀರಿಯರ್ ಹೊಂದಿರುವ ಈ ಕಾರು, ಮೊದಲು ಇವಿ ಹಾಗೂ ನಂತರ ಪ್ಲಗ್-ಇನ್ ಹೈಬ್ರಿಡ್ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzh9d8qnetesmqesxa8jwp4,imgname-mg-hector-hawk-suv-1786690974998.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.14)&lt;/strong&gt;: ಭಾರತೀಯ ವಾಹನ ಮಾರುಕಟ್ಟೆಗೆ ಮತ್ತೊಂದು ಪ್ರೀಮಿಯಂ ಎಸ್&zwnj;ಯುವಿ ಲಗ್ಗೆ ಇಡಲು ಸಜ್ಜಾಗಿದೆ. 'ಎಂಜಿ ಹೆಕ್ಟರ್ ಹಾಕ್' (MG Hector Hawk) ಕಾರಿನ ಅಧಿಕೃತ ಬುಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಗ್ರಾಹಕರು ₹21,000 ಮುಂಗಡ ಹಣ ಪಾವತಿಸಿ ಕಾರನ್ನು ಕಾಯ್ದಿರಿಸಬಹುದಾಗಿದೆ. ಈ ನೂತನ ಎಸ್&zwnj;ಯುವಿ ಕಾರು ಮುಂಬರುವ ಆಗಸ್ಟ್ 26 ರಂದು ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಅತ್ಯಾಕರ್ಷಕ ಹೊಸ ವಿನ್ಯಾಸ, ಪ್ರೀಮಿಯಂ ಬೇಜ್&zwnj; ಕಂಟೆಂಟ್ ಇಂಟೀರಿಯರ್ ಹಾಗೂ 3-ಸಾಲಿನ (3-row) ಆಸನ ವ್ಯವಸ್ಥೆಯೊಂದಿಗೆ ಈ ಕಾರು ರಸ್ತೆಗಿಳಿಯಲಿದೆ.&lt;/p&gt;&lt;h2&gt;&lt;strong&gt;ಸ್ಟೈಲಿಶ್ ಹಾಗೂ ಮಾಡರ್ನ್ ವಿನ್ಯಾಸ!&lt;/strong&gt;&lt;/h2&gt;&lt;p&gt;ಬಿಡುಗಡೆಯಾಗಿರುವ ಟೀಸರ್&zwnj;ನಲ್ಲಿ 'ಹೆಕ್ಟರ್ ಹಾಕ್' ಅತ್ಯಂತ ಮಾಡರ್ನ್ ಹಾಗೂ ಪ್ರೀಮಿಯಂ ಲುಕ್&zwnj;ನಲ್ಲಿ ಕಂಗೊಳಿಸುತ್ತಿದೆ. ಕಾರಿನ ಮುಂಭಾಗದಲ್ಲಿ ಸ್ಪ್ಲಿಟ್ ಡಿಆರ್&zwnj;ಎಲ್&zwnj; (DRL) ಸೆಟಪ್, ಕ್ರೋಮ್ ಇನ್ಸರ್ಟ್ ಹೊಂದಿರುವ ಬ್ಲಾಕ್ ಗ್ರಿಲ್ ಹಾಗೂ ಮಧ್ಯದಲ್ಲಿ ಎಂಜಿ (MG) ಲೋಗೋ ನೀಡಲಾಗಿದೆ. ಇದರೊಂದಿಗೆ ಎಲ್&zwnj;ಇಡಿ ಹೆಡ್&zwnj;ಲ್ಯಾಂಪ್ ಹಾಗೂ ಹೊಸ ಸ್ಕಲ್ಪ್&zwnj;ಟೆಡ್ ಬೋನೆಟ್ ನೀಡಲಾಗಿದೆ.&lt;/p&gt;&lt;p&gt;ಕಾಂಟ್ರಾಸ್ಟ್ ಕಲರ್ ಸ್ಕಿಡ್ ಪ್ಲೇಟ್, ದೊಡ್ಡ ಗಾತ್ರದ ಡ್ಯುಯಲ್-ಟೋನ್ ಅಲಾಯ್ ವೀಲ್ಸ್&zwnj; ಹಾಗೂ ಬಾಡಿ ಕಲರ್ ಒಆರ್&zwnj;ವಿಎಮ್&zwnj; (ORVM) ಗಳಿವೆ. ಹಿಂಭಾಗದಲ್ಲಿ ರ&zwj;್ಯಾಪ್-ಅರೌಂಡ್ ಎಲ್&zwnj;ಇಡಿ ಟೇಲ್&zwnj;ಲ್ಯಾಂಪ್ಸ್, ಇಂಟಿಗ್ರೇಟೆಡ್ ಸ್ಪಾಯ್ಲರ್, ರಿಯರ್ ವೈಪರ್ ಮತ್ತು ವಾಷರ್ ಸೌಲಭ್ಯಗಳಿವೆ. ವಿಂಡೋ ಲೈನ್&zwnj;ನಲ್ಲಿ ಬ್ರಷ್ಡ್ ಅಲ್ಯೂಮಿನಿಯಂ ಫಿನಿಶಿಂಗ್, ಬ್ಲಾಕ್ ರೂಫ್, ಶಾರ್ಕ್-ಫಿನ್ ಆಂಟೆನಾ, ರೂಫ್ ರೇಲ್ಸ್ ಮತ್ತು ಬ್ಲಾಕ್ ಪಿಲ್ಲರ್&zwnj;ಗಳು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ.&lt;/p&gt;&lt;h2&gt;&lt;strong&gt;ಬೇಜ್ ಕಲರ್&zwnj;ನಲ್ಲಿ ಪ್ರೀಮಿಯಂ ಕೇಬಿನ್&lt;/strong&gt;&lt;/h2&gt;&lt;p&gt;ಇಂಟೀರಿಯರ್ ಚಿತ್ರಗಳ ಪ್ರಕಾರ, ಕಾರಿನ ಒಳಾಂಗಣವು 'ಬೇಜ್' (Beige) ಥೀಮ್&zwnj;ನಲ್ಲಿದ್ದು, ಅತ್ಯಂತ ಐಷಾರಾಮಿ ಅನುಭವ ನೀಡುತ್ತದೆ. ಮೂರೂ ಸಾಲಿನ ಸೀಟುಗಳಿಗೆ 'ಅಡ್ಜಸ್ಟಬಲ್ ಹೆಡ್&zwnj;ರೆಸ್ಟ್' ನೀಡಲಾಗಿದೆ. 2-ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಬೃಹತ್ ಪ್ರಮಾಣದ 'ಫ್ರೀ-ಸ್ಟ್ಯಾಂಡಿಂಗ್' ಟಚ್&zwnj;ಸ್ಕ್ರೀನ್ ಮತ್ತು ಸಂಪೂರ್ಣ ಡಿಜಿಟಲ್ ಕಂಟೆಂಟ್ ಇರುವ ಕಲರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಸೆಂಟರ್ ಕನ್ಸೋಲ್&zwnj;ನಲ್ಲಿ ಕಪ್ ಹೋಲ್ಡರ್&zwnj;ಗಳು, ಆರ್ಮ್&zwnj;ರೆಸ್ಟ್ ಮತ್ತು ಹೆಚ್ಚುವರಿ ಸಾಮಗ್ರಿಗಳನ್ನು ಇಡಲು ಸಾಕಷ್ಟು ಜಾಗ ನೀಡಲಾಗಿದ್ದು, ದೊಡ್ಡ ಕುಟುಂಬಗಳ ಅಗತ್ಯಕ್ಕೆ ತಕ್ಕಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಮೊದಲು ಇವಿ, ನಂತರ ಪ್ಲಗ್-ಇನ್ ಹೈಬ್ರಿಡ್ (PHEV) ಎಂಟ್ರಿ!&lt;/strong&gt;&lt;/h2&gt;&lt;p&gt;ಎಂಜಿ ಸಂಸ್ಥೆಯ ನೂತನ 'ಅಡಾಪ್ಟ್' (ADAPT) ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ತಯಾರಾಗುತ್ತಿರುವ ಮೊದಲ ಪ್ರೊಡಕ್ಷನ್ ಮಾಡೆಲ್ ಇದಾಗಿದೆ. ಭಾರತದಲ್ಲಿ ಮೊದಲಿಗೆ ಇದರ ಇವಿ (EV) ಆವೃತ್ತಿ ಲಾಂಚ್ ಆಗಲಿದೆ ಎನ್ನಲಾಗಿದೆ. ಗ್ಲೋಬಲ್ ಮಾಡೆಲ್&zwnj;ನಲ್ಲಿ 56.7kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು ಒಂದೇ ಚಾರ್ಜ್&zwnj;ಗೆ ಸುಮಾರು 530 ಕಿ.ಮೀ ರೇಂಜ್ (Range) ನೀಡುತ್ತದೆ.&lt;/p&gt;&lt;p&gt;ಇದರ ನಂತರ ಕಂಪನಿಯು 'ಪ್ಲಗ್-ಇನ್ ಹೈಬ್ರಿಡ್' (PHEV) ಮಾಡೆಲ್ ತರಲಿದೆ. ಇದರಲ್ಲಿ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಜೊತೆಗೆ 20.5kWh ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಸಿಗುವ ಸಾಧ್ಯತೆಯಿದೆ. ಈ ಸೆಟಪ್ ಸುಮಾರು 194 bhp ಪವರ್ ಹಾಗೂ 230 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.&lt;/p&gt;&lt;h2&gt;&lt;strong&gt;ಜೆಎಸ್&zwnj;ಡಬ್ಲ್ಯೂ 'ಜೆಟೂರ್ ಟಿ2' ಮೇಲೆಯೂ ಕಣ್ಣು!&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, JSW ಕಂಪನಿಯ ಮತ್ತೊಂದು ಪ್ರೀಮಿಯಂ ಎಸ್&zwnj;ಯುವಿ 'ಜೆಟೂರ್ ಟಿ2' (Jetour T2) ಕೂಡ ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. 4.78 ಮೀಟರ್ ಉದ್ದ ಹಾಗೂ 2.7 ಮೀಟರ್ ವೀಲ್&zwnj;ಬೇಸ್ ಹೊಂದಿರುವ ಈ ಕಾರು ಬಾಕ್ಸಿ ಮತ್ತು ರಗಡ್ ವಿನ್ಯಾಸದಲ್ಲಿದೆ. ಭಾರತದಲ್ಲಿ ಇದನ್ನು PHEV ಮತ್ತು ಪೆಟ್ರೋಲ್ ಆಯ್ಕೆಗಳಲ್ಲಿ ತರಲಿದ್ದು, ಪೆಟ್ರೋಲ್ ಆವೃತ್ತಿಯಲ್ಲಿ 2.0-ಲೀಟರ್ GDi ಟರ್ಬೊ-ಪೆಟ್ರೋಲ್ ಇಂಜಿನ್ ಜೊತೆಗೆ ಆಲ್-ವೀಲ್ ಡ್ರೈವ್ (AWD) ಸಿಸ್ಟಮ್ ಸಿಗಲಿದೆ. ಇದರ ಅಂದಾಜು ಬೆಲೆ ₹30 ಲಕ್ಷದಿಂದ ₹45 ಲಕ್ಷ ರೂಪಾಯಿಗಳಿರಬಹುದು ಎನ್ನಲಾಗಿದ್ದು, ಅಧಿಕೃತ ಬೆಲೆ ಲಾಂಚ್ ವೇಳೆಗೆ ತಿಳಿದುಬರಲಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/mg-hector-hawk-suv-booking-opens-august-26-launch-price-features-san/articleshow-prp59b6"/>
        </item>
        <item>
            <title><![CDATA[ಈ ಶ್ರಾವಣದಲ್ಲಿ ಅಪರೂಪದ ಮಹಾ ಸಂಯೋಗ; 23 ವರ್ಷಗಳ ನಂತರ, ಶ್ರಾವಣ ಸೋಮವಾರ ನಾಗಪಂಚಮಿ]]></title>
            <link>https://kannada.asianetnews.com/gallery/festivals/sawan-somwar-2026-rare-nag-panchami-yog-after-23-years-on-august-17-sawan-somwar-dates-suh-z3xmigq</link>
            <guid isPermaLink="true">https://kannada.asianetnews.com/gallery/festivals/sawan-somwar-2026-rare-nag-panchami-yog-after-23-years-on-august-17-sawan-somwar-dates-suh-z3xmigq</guid>
            <pubDate>Fri, 14 Aug 2026 12:28:13 +0530</pubDate>
            <description><![CDATA[ಆಗಸ್ಟ್ 17 ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ, ಸೋಮವಾರ ಮತ್ತು ನಾಗ ಪಂಚಮಿ ಒಂದೇ ದಿನ ಬರುವುದರಿಂದ 'ಸೋಮಾವತಿ ನಾಗ ಪಂಚಮಿ' ಎಂಬ ಅಪರೂಪದ ಮಹಾ ಸಂಯೋಗ ಸೃಷ್ಟಿಯಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzg6d5hhx2qtkeb4pwswp17,imgname-nag-panchami-1786689828017.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 17 ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ, ಸೋಮವಾರ ಮತ್ತು ನಾಗ ಪಂಚಮಿ ಒಂದೇ ದಿನ ಬರುವುದರಿಂದ 'ಸೋಮಾವತಿ ನಾಗ ಪಂಚಮಿ' ಎಂಬ ಅಪರೂಪದ ಮಹಾ ಸಂಯೋಗ ಸೃಷ್ಟಿಯಾಗುತ್ತದೆ.&lt;/p&gt;&lt;img&gt;&lt;p&gt;ಸನಾತನ ಸಂಪ್ರದಾಯದಲ್ಲಿ, ಶ್ರಾವಣ ಮಾಸವನ್ನು ಶಿವನಿಗೆ ಅತ್ಯಂತ ಶುಭಕರವಾದ ಮಾಸವೆಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಸೋಮವಾರಗಳಂದು ಉಪವಾಸ ಮಾಡಿ ಶಿವ ಮತ್ತು ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಮತ್ತು ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಶಿವಲಿಂಗಕ್ಕೆ ಜಲಭಿಷೇಕ ಮತ್ತು ರುದ್ರಾಭಿಷೇಕ ಮಾಡುವುದರಿಂದ ವಿಶೇಷವಾಗಿ ಫಲಪ್ರದವಾಗುತ್ತದೆ ಎಂದು ಭಕ್ತರು ನಂಬುತ್ತಾರೆ.&lt;/p&gt;&lt;img&gt;&lt;p&gt;ಶ್ರಾವಣ ಮಾಸದ ಮೂರನೇ ಸೋಮವಾರ, ಆಗಸ್ಟ್ 17, ಅತ್ಯಂತ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ, ಸೋಮವಾರ ಮತ್ತು ನಾಗ ಪಂಚಮಿ ಒಂದೇ ದಿನ ಬರುವುದರಿಂದ 'ಸೋಮಾವತಿ ನಾಗ ಪಂಚಮಿ' ಎಂಬ ಅಪರೂಪದ ಮಹಾ ಸಂಯೋಗ ಸೃಷ್ಟಿಯಾಗುತ್ತದೆ. 23 ವರ್ಷಗಳ ನಂತರ ಇಂತಹ ಸಂಯೋಗ ನಡೆಯುತ್ತಿದೆ ಎಂದು ಈ ಕಥೆ ಹೇಳುತ್ತದೆ. ಈ ದಿನದಂದು, ಶಿವಲಿಂಗಕ್ಕೆ ಶ್ರೀಗಂಧ ಮತ್ತು ಬಿಲ್ವಪತ್ರೆಗಳನ್ನು ಅರ್ಪಿಸಿ ಗಂಗಾ ನೀರಿನೊಂದಿಗೆ ಬೆರೆಸಿದ ಹಾಲಿನಿಂದ ಅಭಿಷೇಕ ಮಾಡುವುದರಿಂದ ವಿಶೇಷ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನದಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಶಿವ ವಾಸಂ ಕೂಡ ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಶಿವನ ಆರಾಧನೆಯ ಜೊತೆಗೆ, ನಾಗ ದೇವಿಯನ್ನು ಪೂಜಿಸುವುದು ಸಹ ವಿಶೇಷವೆಂದು ಪರಿಗಣಿಸಲಾಗಿದೆ.&lt;/p&gt;&lt;img&gt;&lt;p&gt;ಆಗಸ್ಟ್ 24 ಶ್ರಾವಣ ಮಾಸದ ಸೋಮವಾರ. ಈ ದಿನದಂದು ಸರ್ವಾರ್ಥ ಸಿದ್ಧಿ ಯೋಗವು ರೂಪುಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಶಿವಲಿಂಗಕ್ಕೆ ನೀರು ಮತ್ತು ಗಂಗಾ ಜಲದಿಂದ ಅಭಿಷೇಕ ಮಾಡಿ ನಂತರ ತೆಂಗಿನಕಾಯಿ, ಕಪ್ಪು ಎಳ್ಳು, ವೀಳ್ಯದೆಲೆ, ಧೂಪ, ದೀಪ ಮತ್ತು ನೈವೇದ್ಯಗಳನ್ನು ಅರ್ಪಿಸಿ ಆರತಿ ಮಾಡುವುದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂದು ಭಕ್ತರು ನಂಬುತ್ತಾರೆ.&lt;/p&gt;&lt;img&gt;&lt;p&gt;ಶ್ರಾವಣ ಸೋಮವಾರ ಮತ್ತು ನಾಗ ಪಂಚಮಿ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಈ ಬಾರಿ, 23 ವರ್ಷಗಳ ನಂತರ, ಎರಡೂ ಒಂದೇ ದಿನದಂದು ಬರುವುದರಿಂದ ಭಕ್ತರಲ್ಲಿ ಹೆಚ್ಚಿನ ಆಸಕ್ತಿ ಮೂಡಿದೆ. 'ಪಶುಪತಿನಾಥ' ಎಂದರೆ ಎಲ್ಲಾ ಜೀವಿಗಳ ಅಧಿಪತಿ. ಶಿವನನ್ನು ಪ್ರತಿಯೊಂದು ಆತ್ಮದ ರಕ್ಷಕ ಮತ್ತು ಮಾರ್ಗದರ್ಶಕ ಎಂದು ಉಲ್ಲೇಖಿಸುವ ಈ ಹೆಸರನ್ನು ಜಪಿಸುವುದರಿಂದ, ಲೌಕಿಕ ಬಂಧಗಳು ಮತ್ತು ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ ಮತ್ತು ಯಶಸ್ಸನ್ನು ತರುತ್ತದೆ ಎಂಬುದು ಆಧ್ಯಾತ್ಮಿಕ ನಂಬಿಕೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/sawan-somwar-2026-rare-nag-panchami-yog-after-23-years-on-august-17-sawan-somwar-dates-suh-z3xmigq"/>
        </item>
        <item>
            <title><![CDATA[ಶಾಸಕ ಸುರೇಶ್ ಗೌಡ ಪುತ್ರಿಯಿಂದ ಪಿಎಸ್‌ಐಗೆ ಕಪಾಳಮೋಕ್ಷ, ಮಗಳ ತಪ್ಪಿಗೆ ಕ್ಷಮೆಗೆ ಮುಂದಾದ ಅಪ್ಪ!]]></title>
            <link>https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</link>
            <guid isPermaLink="true">https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr</guid>
            <pubDate>Fri, 14 Aug 2026 12:25:56 +0530</pubDate>
            <description><![CDATA[ತುಮಕೂರು ಶಾಸಕ ಬಿ. ಸುರೇಶ್‌ಗೌಡರ ಪುತ್ರಿ ಐಶ್ವರ್ಯ, ದೇವಸ್ಥಾನದಲ್ಲಿ ದರ್ಶನ ವಿಳಂಬವಾದ ಕಾರಣಕ್ಕೆ ಮಹಿಳಾ ಪಿಎಸ್‌ಐ ಜೊತೆ ವಾಗ್ವಾದ ನಡೆಸಿ ಕಪಾಳಮೋಕ್ಷ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕರು ಪ್ರತಿಕ್ರಿಯಿಸಿದ್ದು, ಮಗಳದ್ದು ತಪ್ಪಿದ್ದರೆ ಕ್ಷಮೆ ಕೇಳುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzgpffnrrkz5115c5swxwp9,imgname-bjp-mla-suresh-gowda-daughter-1786690354677.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ಅವರು ದೇವಸ್ಥಾನದಲ್ಲಿ ದರ್ಶನ ತಡವಾದ ವಿಚಾರವಾಗಿ ಅಹಂಕಾರ ತೋರಿಸಿ ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ (PSI) ಅವರೊಂದಿಗೆ ವಾಗ್ವಾದ ನಡೆಸಿ, ಕಪಾಳಮೋಕ್ಷ ಮಾಡಿರುವ ಘಟನೆ ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ನಡೆದಿದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಶಾಸಕ ಸುರೇಶ್&zwnj;ಗೌಡ ಅವರು ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ನನ್ನ ಮಗಳ ತಪ್ಪಿದ್ದರೆ ನಾನು ಕ್ಷಮೆಯಾಚಿಸಲು ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಘಟನೆಯ ಹಿನ್ನೆಲೆ:&lt;/h2&gt;&lt;p&gt;ಭೀಮನ ಅಮಾವಾಸ್ಯೆಯ ಶುಭ ಸಂದರ್ಭದಲ್ಲಿ ಶಾಸಕ ಸುರೇಶ್&zwnj;ಗೌಡ ಅವರ ಪುತ್ರಿ, ಎಸಿಪಿ ಗೌತಮ್ ಪತ್ನಿ ಐಶ್ವರ್ಯ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ಮಂಡ್ಯ ಜಿಲ್ಲೆಯ ಶೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನಕ್ಕೆ ತೆರಳಿದ್ದರು. ತನ್ನ ಪ್ರಭಾವ ಬಳಸಿ ದೇಗುಲಕ್ಕೆ ಬಂದಿದ್ದ ಐಶ್ವರ್ಯಾ ವಿಐಪಿ (VIP) ಸಾಲಿನಲ್ಲಿ ನಿಂತು ದರ್ಶನಕ್ಕೆ ಕಾಯುತ್ತಿದ್ದರು. ದೇಗುಲದ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಮಹಿಳಾ ಸಬ್ ಇನ್ಸ್&zwnj;ಪೆಕ್ಟರ್ ಸುನೀತಾ ಪಾಟೀಲ್ ಕೇಳಿದಾಗ ಆ ರೀತಿಯ ನಿಯಮ ಇಲ್ಲ ಎಂದಿದ್ದಾರೆ. ಇದೇ ವೇಳೆ ಮಹಿಳಾ ಪೇದೆಯೊಬ್ಬರು ಕೆಲಸ ನಿಮಿತ್ತ ಗರ್ಭಗುಡಿಯ ಒಳಗೆ ಹೋದರು. ಆ ಸಮಯದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ನಾನು ಎಂಎಲ್&zwnj;ಎ ಮಗಳು ಎಸಿಪಿ ಪತ್ನಿ ಎಂದು ದರ್ಪ ತೋರಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್&zwnj;ಪೆಕ್ಟರ್ (CI) ಅವರು ಶಾಸಕರ ಪುತ್ರಿಯನ್ನು ಗುರುತಿಸಿ, ಅವರನ್ನು ದರ್ಶನಕ್ಕೆ ಒಳಗೆ ಬಿಟ್ಟಿದ್ದಾರೆ. ಈ ವೇಳೆ ಐಶ್ವರ್ಯ ಅವರು, &quot;ನನ್ನನ್ನು ಏಕೆ ತಡೆದಿರಿ?&quot; ಎಂದು ಸಬ್ ಇನ್ಸ್&zwnj;ಪೆಕ್ಟರ್ ಅವರನ್ನು ಮತ್ತೆ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವಾಗ್ವಾದದ ನಡುವೆ ಶಾಸಕರ ಪುತ್ರಿ ಐಶ್ವರ್ಯ ಅವರು ಸಬ್ ಇನ್ಸ್&zwnj;ಪೆಕ್ಟರ್ ಅವರ ಕಪಾಳಕ್ಕೆ ಹೊಡೆದಿದ್ದಾರೆಂದು ಆರೋಪಿಸಲಾಗಿದೆ.&lt;/p&gt;&lt;h2&gt;ಮಗಳು ಮಾಡಿದ ತಪ್ಪಿಗೆ ಕ್ಷಮೆ ಕೇಳೋದಾಗಿ ಹೇಳಿದ ಅಪ್ಪ&lt;/h2&gt;&lt;p&gt;ಈ ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಿ. ಸುರೇಶ್&zwnj;ಗೌಡ ಅವರು ಕಳಕಳಿ ಮತ್ತು ಹೊಣೆಗಾರಿಕೆಯ ಮಾತುಗಳನ್ನಾಡಿದ್ದಾರೆ.&lt;/p&gt;&lt;p&gt;&quot;ದೇವಸ್ಥಾನದಲ್ಲಿ ಗಲಾಟೆಯಾಗಿದ್ದು ನಿಜ ಎಂದು ನನ್ನ ಮಗಳು ಒಪ್ಪಿಕೊಂಡಿದ್ದಾಳೆ. ದೇವಸ್ಥಾನಕ್ಕೆ ಪ್ರತಿಯೊಬ್ಬರೂ ಮನಸ್ಸಿನ ಶಾಂತಿಗಾಗಿ ಹೋಗುತ್ತಾರೆ, ಅಲ್ಲಿ ಇಂತಹ ಗಲಾಟೆಗಳು ನಡೆಯಬಾರದಿತ್ತು. ಮಾಧ್ಯಮಗಳಲ್ಲಿ ನನ್ನ ಮಗಳು ಕಪಾಳಕ್ಕೆ ಹೊಡೆದಿದ್ದಾಳೆ ಎಂಬ ಸುದ್ದಿಗಳನ್ನು ನೋಡಿದ್ದೇನೆ. ಈ ಘಟನೆಯಲ್ಲಿ ಪರಿಶೀಲನೆ ನಡೆಸಿ, ಒಂದು ವೇಳೆ ನನ್ನ ಮಗಳದ್ದೇ ತಪ್ಪು ಅಂತ ಸಾಬೀತಾದರೆ, ನಾನು ಬಹಿರಂಗವಾಗಿ ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದಿದ್ದಾರೆ.&lt;/p&gt;&lt;h2&gt;ಪ್ರಭಾವಿಗಳ ಮಕ್ಕಳಿಗೇಕೆ ಈ ನಿಯಮ&lt;/h2&gt;&lt;p&gt;ಇನ್ನು ಘಟನೆ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್&zwnj;ಎಸ್&zwnj;ನ ಸೆಕ್ಷನ್&zwnj; 132, 115(2), 352 ಮತ್ತು 351(2) ಅಡಿಯಲ್ಲಿ ಎಫ್&zwnj;ಐಆರ್&zwnj; ದಾಖಲಾಗಿದೆ. ಇದೇ ವೇಳೆ, ಮಹಿಳಾ ಪಿಎಸ್&zwnj;ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ. ಶಾಸಕರ ಪುತ್ರಿಯನ್ನು ಪಿಎಸ್&zwnj;ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆಯಂತೆ.&lt;/p&gt;&lt;p&gt;ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಎಂಎಲ್&zwnj;ಎಗಳು, ಡಿವೈಎಸ್&zwnj;ಪಿ ಗಳು ಬಂದಾಗ ದೇಗುಲದಲ್ಲಿ ವಿಶೇಷ ದರ್ಶನ, ಗರ್ಭಗುಡಿ ಸಮೀಪ ಬಿಡುವುದು ಶಿಷ್ಟಾಚಾರ. ಪ್ರಭಾವಿಗಳ ಮಕ್ಕಳಿಗೆ ಏಕೆ ಎಂದು ಚರ್ಚೆ ಆರಂಭವಾಗಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/karnataka-bjp-mla-suresh-gowda-daughter-booked-for-allegedly-slapping-female-police-officer-at-srirangapatna-temple-gdp/articleshow-cpyz4wr"/>
        </item>
        <item>
            <title><![CDATA[36 ವರ್ಷಗಳ ಹಿಂದೆ ಇದೇ ದಿನ 17ರ ಪೋರನೊಬ್ಬ ಇತಿಹಾಸ ಬರೆದಿದ್ದ! ಸಚಿನ್ ತೆಂಡೂಲ್ಕರ್ ಮೊದಲ ಶತಕದ ರೋಚಕ ಕಥೆ]]></title>
            <link>https://kannada.asianetnews.com/cricket-sports/sachin-tendulkar-historic-first-century-turns-36-relive-his-iconic-119-vs-england-kvn/articleshow-04wcibl</link>
            <guid isPermaLink="true">https://kannada.asianetnews.com/cricket-sports/sachin-tendulkar-historic-first-century-turns-36-relive-his-iconic-119-vs-england-kvn/articleshow-04wcibl</guid>
            <pubDate>Fri, 14 Aug 2026 12:19:45 +0530</pubDate>
            <description><![CDATA[1990ರ ಆಗಸ್ಟ್ 14ರಂದು, 17 ವರ್ಷದ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ (119*) ಬಾರಿಸಿ, ಸೋಲಿನಂಚಿನಲ್ಲಿದ್ದ ಭಾರತ ತಂಡವನ್ನು ಪಾರುಮಾಡಿದರು. ಈ ಶತಕವು ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯ ಪ್ರಯಾಣಕ್ಕೆ ಮುನ್ನುಡಿ ಬರೆಯಿತು, ನಂತರ ಅವರು ಏಕದಿನದಲ್ಲೂ ತಮ್ಮ ಚೊಚ್ಚಲ ಶತಕವನ್ನು ಸಿಡಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01jy699pq4qpeqpj3s54zhygmy,imgname-stwr-1750410255076.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟ್ ಇತಿಹಾಸದಲ್ಲಿ ಆಗಸ್ಟ್ 14 ಅನ್ನೋ ತಾರೀಖಿಗೆ ಒಂದು ವಿಶೇಷ ಸ್ಥಾನವಿದೆ. ಯಾಕಂದ್ರೆ, 36 ವರ್ಷಗಳ ಹಿಂದೆ ಇದೇ ದಿನ ಕ್ರಿಕೆಟ್ ಜಗತ್ತು ಹೊಸ ದೇವರನ್ನು ಕಂಡಿತ್ತು. ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕ ಸಿಡಿಸಿ, ಬ್ಯಾಟ್ ಅನ್ನು ಆಕಾಶದತ್ತ ಎತ್ತಿ ತಮ್ಮ ಗುರುಗಳನ್ನು ಸ್ಮರಿಸಿದ್ದು ಇದೇ ದಿನ - ಆಗಸ್ಟ್ 14, 1990!&lt;/p&gt;&lt;p&gt;ಮಾಸ್ಟರ್ ಬ್ಲಾಸ್ಟರ್ ತಮ್ಮ ಶತಕಗಳ ಬೇಟೆಗೆ ಮುನ್ನುಡಿ ಬರೆದಿದ್ದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ. ಮ್ಯಾಂಚೆಸ್ಟರ್&zwnj;ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸಚಿನ್ ಅಜೇಯ 119 ರನ್ ಗಳಿಸಿದರು. ಆಗ ಅವರಿಗೆ ಕೇವಲ 17 ವರ್ಷ 112 ದಿನ ವಯಸ್ಸು. ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ದವಡೆಗೆ ಸಿಲುಕಿದ್ದಾಗ, ಸಚಿನ್ ತಂಡದ ರಕ್ಷಕರಾಗಿ ನಿಂತರು.&lt;/p&gt;&lt;h2&gt;&lt;strong&gt;ಭಾರತವನ್ನು ಸೋಲಿನಿಂದ ಪಾರು ಮಾಡಿದ್ದ ಸಚಿನ್ ಶತಕ&lt;/strong&gt;&lt;/h2&gt;&lt;p&gt;ಇಂಗ್ಲೆಂಡ್ ನೀಡಿದ್ದ 408 ರನ್&zwnj;ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಸಂಕಷ್ಟ ಎದುರಾಗಿತ್ತು. ತಂಡ 183 ರನ್&zwnj;ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲು ಖಚಿತ ಎಂಬ ಸ್ಥಿತಿಯಲ್ಲಿತ್ತು. ಆಗ ಭಾರತೀಯ ಕ್ಯಾಂಪ್&zwnj;ನಲ್ಲಿ ನಿರಾಸೆ ಮನೆ ಮಾಡಿತ್ತು. ಆದರೆ, ಕ್ರೀಸ್&zwnj;ನಲ್ಲಿದ್ದ ಆ 17 ವರ್ಷದ ಹುಡುಗ ಇಡೀ ಕ್ರಿಕೆಟ್ ಲೋಕವನ್ನೇ ಆಳುತ್ತಾನೆ ಅಂತ ಬಹುಶಃ ಯಾರೂ ಊಹಿಸಿರಲಿಲ್ಲ. ಮನೋಜ್ ಪ್ರಭಾಕರ್ ಜೊತೆಗೂಡಿ ಸಚಿನ್ ಆಡಿದ ಆ ಅಮೋಘ ಇನ್ನಿಂಗ್ಸ್, ಭಾರತವನ್ನು ಸೋಲಿನಿಂದ ಪಾರು ಮಾಡಿತು.&lt;/p&gt;&lt;p&gt;ಇನ್ನು ಏಕದಿನ ಮಾದರಿಯಲ್ಲಿ ತಮ್ಮ ಮೊದಲ ಶತಕ ಬಾರಿಸಲು ಸಚಿನ್ ನಾಲ್ಕು ವರ್ಷ ಕಾಯಬೇಕಾಯಿತು. 1994ರ ಸೆಪ್ಟೆಂಬರ್ 9ರಂದು ಸಿಂಗರ್ ವರ್ಲ್ಡ್ ಸೀರೀಸ್&zwnj;ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ತಮ್ಮ ಚೊಚ್ಚಲ ಏಕದಿನ ಶತಕ (110 ರನ್) ಸಿಡಿಸಿದರು. ತಮ್ಮ 79ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಸಚಿನ್, 130 ಎಸೆತಗಳಲ್ಲಿ ಅಬ್ಬರಿಸಿ ಗಳಿಸಿದ ಈ ರನ್&zwnj;ಗಳು ಭಾರತಕ್ಕೆ ಗೆಲುವು ತಂದುಕೊಟ್ಟವು. ಆ ಪಂದ್ಯದಲ್ಲಿ ಸಚಿನ್ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.&lt;/p&gt;&lt;h3&gt;&lt;strong&gt;ಹಲವು ದಾಖಲೆಗಳ ಒಡೆಯ ಮಾಸ್ಟರ್ ಬ್ಲಾಸ್ಟರ್&lt;/strong&gt;&lt;/h3&gt;&lt;p&gt;ಟೆಸ್ಟ್&zwnj;ನಲ್ಲಿ 51 ಮತ್ತು ಏಕದಿನದಲ್ಲಿ 49 ಶತಕಗಳು ಸೇರಿದಂತೆ, ಅಂತಾರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ 100 ಶತಕಗಳನ್ನು ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಸಚಿನ್&zwnj;ರದ್ದು. ಟೆಸ್ಟ್ ಮತ್ತು ಏಕದಿನ ಎರಡೂ ಮಾದರಿಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಅವರೇ. ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳು, ಏಕದಿನ ಕ್ರಿಕೆಟ್&zwnj;ನಲ್ಲಿ ಮೊದಲ ದ್ವಿಶತಕ, ಏಕದಿನ ವಿಶ್ವಕಪ್&zwnj;ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಹೀಗೆ ಸಚಿನ್ ಹೆಸರಿನಲ್ಲಿರುವ ದಾಖಲೆಗಳು ಒಂದೆರಡಲ್ಲ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/sachin-tendulkar-historic-first-century-turns-36-relive-his-iconic-119-vs-england-kvn/articleshow-04wcibl"/>
        </item>
        <item>
            <title><![CDATA[Yash-Kiara Advani: ಟಾಕ್ಸಿಕ್ ಚಿತ್ರದ ವೇಳೆ ಗರ್ಭಿಣಿಯಾಗಿದ್ದ ಕಿಯಾರಾ  - ನಟಿಗೆ ಬಾಡಿಗಾರ್ಡ್ ಆಗಿದ್ರಂತೆ ಯಶ್]]></title>
            <link>https://kannada.asianetnews.com/cine-world/kiara-advani-shot-for-toxic-while-pregnant-yash-was-anxious-and-said-he-looked-after-her-like-a-bodyguard/articleshow-swdrbuv</link>
            <guid isPermaLink="true">https://kannada.asianetnews.com/cine-world/kiara-advani-shot-for-toxic-while-pregnant-yash-was-anxious-and-said-he-looked-after-her-like-a-bodyguard/articleshow-swdrbuv</guid>
            <pubDate>Fri, 14 Aug 2026 12:16:22 +0530</pubDate>
            <description><![CDATA[ಟಾಕ್ಸಿಕ್‌ ಸಿನಿಮಾ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ. ಕಿಯಾರಾ ಅಡ್ವಾನಿ ಗರ್ಭಿಣಿಯಾಗಿದ್ದಾಗ ರಿಸ್ಕ್‌ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ. ಅದ್ರ ಬಗ್ಗೆ ನಟ ಯಶ್‌ ಹೇಳಿದ್ದೇನು ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kzzg73ms51xj0r021bmxhywq,imgname-kiara-advani-yash-1786689851033.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಗಾಗಿ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಆಗಸ್ಟ್ 26ರಂದು ಸಿನಿಮಾ ತೆರೆಗೆ ಬರಲಿದೆ. ಇದರ ನಡುವೆ ಚಿತ್ರದ ಆಲ್ಬಂ ಲಾಂಚ್ ಕಾರ್ಯಕ್ರಮದಲ್ಲಿ ಯಶ್ ತಮ್ಮ ಸಹನಟಿಯರ ಬಗ್ಗೆ ಮಾತನಾಡಿದ್ದು, ಕಿಯಾರಾ ಅಡ್ವಾಣಿ ಕುರಿತು ಹೇಳಿದ ಮಾತುಗಳು ಈಗ ಗಮನ ಸೆಳೆಯುತ್ತಿವೆ.&lt;/p&gt;&lt;h2&gt;ಕಿಯಾರಾ ಅಡ್ವಾನಿಗೆ ಯಶ್&zwnj; ಬಾಡಿಗಾರ್ಡ್&lt;/h2&gt;&lt;p&gt;ಕಿಯಾರಾ ಬಗ್ಗೆ ಮಾತನಾಡಿದ ಯಶ್, ಕಿಯಾರಾಗೆ ಕೆಲಸದ ಮೇಲಿರುವ ಶ್ರದ್ಧೆಯನ್ನು ಮನಸಾರೆ ಹೊಗಳಿದ್ದಾರೆ. ಅದರಲ್ಲೂ ಕಿಯಾರಾ ಗರ್ಭಿಣಿಯಾಗಿದ್ದರೂ ಸಿನಿಮಾದ ಚಿತ್ರೀಕರಣಕ್ಕೆ ನೀಡಿದ ಬದ್ಧತೆಯನ್ನು ಯಶ್ ವಿಶೇಷವಾಗಿ ಪ್ರಶಂಸಿಸಿದ್ದಾರೆ. ಟಾಕ್ಸಿಕ್ ಸಿನಿಮಾದ ಶೂಟಿಂಗ್ ಸುಲಭವಾಗಿರಲಿಲ್ಲ. ಕಿಯಾರಾ ಅವರ ಪಾತ್ರ ಸವಾಲಿನಿಂದ ಕೂಡಿತ್ತು. ಅದರ ಜೊತೆಗೆ ಕೆಲವು ಕಠಿಣ ದೃಶ್ಯಗಳನ್ನೂ ಅವರು ಶೂಟ್&zwnj; ಮಾಡ್ಬೇಕಾಗಿತ್ತು. ಹೀಗಾಗಿ ಕಿಯಾರಾ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್, ಕಿಯಾರಾ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಿದ್ದರಂತೆ.&lt;/p&gt;&lt;p&gt;ಇದಕ್ಕಿಂತ ವಿಶೇಷವಾಗಿ, ಯಶ್ ಹೇಳಿದ ಒಂದು ಮಾತು ಎಲ್ಲರ ಗಮನ ಸೆಳೆದಿದೆ. ನಾನು ಮತ್ತು ಗೀತು ಸೆಟ್ನಲ್ಲಿ ಕಿಯಾರಾಳನ್ನು ಬೌನ್ಸರ್ಗಳು ಮತ್ತು ಬಾಡಿಗಾರ್ಡ್ಗಳಂತೆ ನೋಡಿಕೊಂಡಿದ್ದೇವೆ ಎಂದು ಯಶ್ ಹೇಳಿದ್ದಾರೆ.&lt;/p&gt;&lt;p&gt;ಕಿಯಾರಾ ಗರ್ಭಿಣಿಯಾಗಿದ್ದರೂ ಸಿನಿಮಾಗಾಗಿ ಸಂಪೂರ್ಣ ಶ್ರಮ ಹಾಕಿದ್ದು ಯಶ್ ಅಚ್ಚರಿಗೆಗೆ ಕಾರಣವಾಗಿದೆ. ಕಿಯಾರಾ ರೇನ್ ಸೀಕ್ವೆನ್ಸ್ ಮಾಡಿದ್ದಾರೆಯೇ ಅಂತ ಅಚ್ಚರಿಯಿಂದ ಯಶ್ ಕೇಳಿದ್ದರಂತೆ. ಅದಕ್ಕೆ ಕಿಯಾರಾ, ಈ ಹಿಂದೆ ಅಂತಹ ದೃಶ್ಯ ಮಾಡಿಲ್ಲ ಎಂದಿದ್ದರಂತೆ. ಆದರೂ ಚಿತ್ರೀಕರಣದ ವೇಳೆ ಅವರು ತೋರಿದ ಆತ್ಮವಿಶ್ವಾಸ ಮತ್ತು ಡೆಡಿಕೇಶನ್ ಯಶ್ಗೆ ಮೆಚ್ಚುಗೆ ತಂದಿದೆ.&lt;/p&gt;&lt;p&gt;ಕಿಯಾರಾ ಕೂಡ ಪ್ರೆಗ್ನೆನ್ಸಿಯ ಸಂದರ್ಭದಲ್ಲಿ ಸುಮಾರು ಏಳು ತಿಂಗಳವರೆಗೆ ಕೆಲಸ ಮಾಡಿದ್ದಾಗಿ ಈ ಹಿಂದೆ ಹೇಳಿದ್ದರು. ತಮ್ಮ ಕಷ್ಟದ ನಡುವೆಯೂ ಸಿನಿಮಾಗೆ ಶೇಕಡಾ ನೂರು ಬದ್ಧತೆ ನೀಡಿದ ಕಿಯಾರಾಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಕಿಯಾರಾ, ಥ್ಯಾಂಕ್ ಯೂ. ನಿಮ್ಮ ಪರಿಶ್ರಮದಿಂದ ಈ ಸಿನಿಮಾ ಇನ್ನಷ್ಟು ವಿಶೇಷವಾಗಿದೆ ಎಂಬ ಯಶ್ ಹೇಳಿದ್ದಾರೆ.&lt;/p&gt;&lt;p&gt;ಟಾಕ್ಸಿಕ್ ನಲ್ಲಿ ಯಶ್ ಮತ್ತು ಕಿಯಾರಾ ಜೋಡಿಯ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿದೆ. ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ಯಕ್ರಮದಲ್ಲಿ ಯಶ್ ಹುಮಾ ಖುರೇಷಿಯನ್ನು ಚಾಲೆಂಜಿಂಗ್, ರುಕ್ಮಿಣಿ ವಸಂತ್ ಅವರನ್ನು ಲಾಂಗ್ ರೇಸ್ನ ಕುದುರೆ, ತಾರಾ ಸುತಾರಿಯಾರನ್ನು ಸ್ಟನ್ನಿಂಗ್ ಎಂದು ಯಶ್ ಬಣ್ಣಿಸಿದ್ದಾರೆ.&lt;/p&gt;]]></content:encoded>
            <category><![CDATA[cine-world]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/kiara-advani-shot-for-toxic-while-pregnant-yash-was-anxious-and-said-he-looked-after-her-like-a-bodyguard/articleshow-swdrbuv"/>
        </item>
        <item>
            <title><![CDATA[ಮುಖದ ಮೇಲಿನ ಮೊಡವೆಗೆ ವಿಕ್ಸ್ (Vicks) ಹಚ್ಚಬಹುದಾ? ಚರ್ಮರೋಗ ತಜ್ಞರ ಸಲಹೆ ನೀವೂ ತಿಳಿದುಕೊಳ್ಳಿ!]]></title>
            <link>https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre</link>
            <guid isPermaLink="true">https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre</guid>
            <pubDate>Fri, 14 Aug 2026 12:13:53 +0530</pubDate>
            <description><![CDATA[ಮೊಡವೆ ನಿವಾರಣೆಗೆ 'ವಿಕ್ಸ್' ಬಳಸುವವರ ಸಂಖ್ಯೆ ಹೆಚ್ಚಾಗಿದೆ. ನೀವೂ ಕೂಡ ವಿಕ್ಸ್ ಬಳಕೆ ಮಾಡಿದ ತಕ್ಷಣ ನೋವು ಕಡಿಮೆಯಾಗಿ ಸಂತಸಪಡುವವರಾಗಿದ್ದರೆ, ಮುಂದಾಗುವ ಅಪಾಯಗಳ ಬಗ್ಗೆ ತಿಳಿದುಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಮೊಡವೆಗೆ ವಿಕ್ಸ್ ಬಳಕೆ ಮಾಡುವುದರ ಹಿಂದಿರುವ ಅಪಾಯಗಳು ಇಲ್ಲಿವೆ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzfybwh4n7cw77m701hpmva,imgname-vicks-used-for-pimples-1786689564561.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಖದ ಮೇಲೆ ಒಂದು ಸಣ್ಣ ಮೊಡವೆ (Pimple) ಕಾಣಿಸಿಕೊಂಡರೂ ಸಾಕು, ಅದನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ಪ್ರತಿಯೊಬ್ಬರೂ ನಾನಾ ಸಾಹಸಗಳನ್ನು ಮಾಡುತ್ತಾರೆ. ಕೆಲವರು ದುಬಾರಿ ಸೌಂದರ್ಯ ವರ್ಧಕಗಳನ್ನು (Skin Care Products) ಬಳಸಿದರೆ, ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಮನೆಮದ್ದುಗಳನ್ನು ಯಥಾವತ್ತಾಗಿ ಪಾಲಿಸುತ್ತಾರೆ. ಅಂತಹ ಮನೆಮದ್ದುಗಳಲ್ಲಿ 'ವಿಕ್ಸ್ ವೇಪೊರಬ್' (Vicks Vaporub) ಹಚ್ಚುವುದೂ ಒಂದಾಗಿದೆ.&lt;/p&gt;&lt;p&gt;ವಿಕ್ಸ್ ಹಚ್ಚಿದರೆ ಮೊಡವೆಗಳು ಒಂದೇ ರಾತ್ರಿಯಲ್ಲಿ ಮಾಯವಾಗುತ್ತವೆ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ, ಇದು ನಿಜವೇ? ವಿಕ್ಸ್ ಹಚ್ಚುವುದು ಚರ್ಮಕ್ಕೆ ಸುರಕ್ಷಿತವೇ? ಈ ಬಗ್ಗೆ ಪ್ರಸಿದ್ಧ ಚರ್ಮರೋಗ ತಜ್ಞೆ (Dermatologist) ಡಾ. ಪ್ರಿಯಾಂಕಾ ರೆಡ್ಡಿ ನೀಡಿರುವ ಪ್ರಮುಖ ಮಾಹಿತಿಗಳು ಇಲ್ಲಿದೆ.&lt;/p&gt;&lt;h2&gt;&lt;strong&gt;ತಜ್ಞರು ಏನು ಹೇಳುತ್ತಾರೆ?&lt;/strong&gt;&lt;/h2&gt;&lt;p&gt;ವಿಕ್ಸ್&zwnj;ನಂತಹ ಉತ್ಪನ್ನಗಳನ್ನು ಮುಖದ ಮೇಲಿನ ಮೊಡವೆಗಳನ್ನು ಶಮನಗೊಳಿಸಲು ಅಥವಾ ಬಂದ್ ಆಗಿರುವ ಚರ್ಮದ ರಂಧ್ರಗಳನ್ನು (Pores) ತೆರೆಯಲು ತಯಾರಿಸಲಾಗಿಲ್ಲ. ವಿಕ್ಸ್ ಮೂಲತಃ ಶೀತ, ಕೆಮ್ಮು ಮತ್ತು ಮೂಗು ಕಟ್ಟುವಿಕೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಕೆಯಾಗುತ್ತದೆ. ವಿಕ್ಸ್&zwnj;ನಲ್ಲಿ ಕರ್ಪೂರ (Camphor), ಮೆಂಥಾಲ್ (Menthol), ಯೂಕಲಿಪ್ಟಸ್ ಎಣ್ಣೆ (Eucalyptus oil) ಹಾಗೂ ಗಟ್ಟಿಯಾದ ಪೆಟ್ರೋಲಿಯಂ ಬೇಸ್ (Petroleum Base) ಇರುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಚರ್ಮದ ಮೇಲೆ ದಪ್ಪನೆಯ ಪದರ ಉಂಟಾಗಿ, ರಂಧ್ರಗಳು ಮತ್ತಷ್ಟು ಮುಚ್ಚಿಹೋಗುತ್ತವೆ. ಇದರಿಂದ ಮೊಡವೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು.&lt;/p&gt;&lt;h2&gt;&lt;strong&gt;ತಂಪಾದ ಅನುಭವದ ಹಿಂದಿರುವ ನಿಜಾಂಶವೇನು?&lt;/strong&gt;&lt;/h2&gt;&lt;p&gt;ವಿಕ್ಸ್ ಹಚ್ಚಿದ ತಕ್ಷಣ ಮುಖದ ಮೇಲೆ ತಂಪಾದ ಅಥವಾ ಹಗುರವಾದ ಉರಿಯುವ ಅನುಭವವಾಗುತ್ತದೆ. ಇದನ್ನು ಕಂಡ ತಕ್ಷಣವೇ ಔಷಧಿ ಕೆಲಸ ಮಾಡುತ್ತಿದೆ, ಮೊಡವೆ ಒಣಗುತ್ತಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಈ ತಂಪಾದ ಅನುಭವ ಮೊಡವೆ ವಾಸಿಯಾಗುತ್ತಿರುವುದರ ಸಂಕೇತವಲ್ಲ. ಬದಲಿಗೆ, ವಿಕ್ಸ್&zwnj;ನಲ್ಲಿರುವ ಗ hisಸಾದ ಅಂಶಗಳಿಂದ ಚರ್ಮ ಕಿರಿಕಿರಿಯೊಳ್ಳುತ್ತಿರುವುದರ (Skin Irritation) ಸಂಕೇತವಾಗಿದೆ.&lt;/p&gt;&lt;h2&gt;&lt;strong&gt;ರಾತ್ರಿಯಿಡೀ ವಿಕ್ಸ್ ಹಚ್ಚಿ ಮಲಗಿದರೆ ಏನಾಗುತ್ತದೆ?&lt;/strong&gt;&lt;/h2&gt;&lt;p&gt;ರಾತ್ರಿಯಿಡೀ ಮೊಡವೆ ಮೇಲೆ ವಿಕ್ಸ್ ಹಚ್ಚಿ ಬಿಡುವುದರಿಂದ ಚರ್ಮ ತೀವ್ರವಾಗಿ ಹಾನಿಗೊಳಗಾಗುತ್ತದೆ. ಇದರಿಂದ ಮುಖದ ಮೇಲೆ ಕೆಂಪು ಅಥವಾ ಕಪ್ಪು ಕಲೆಗಳು (Post-Inflammatory Hyperpigmentation - PIH) ಮೂಡಬಹುದು. 'ಮೊಡವೆ ಕೆಲವೇ ದಿನಗಳಲ್ಲಿ ತಾನಾಗಿಯೇ ಮಾಯವಾಗಬಹುದು, ಆದರೆ ವಿಕ್ಸ್&zwnj;ನಂತಹ ಪ್ರಯೋಗಗಳಿಂದ ಉಂಟಾಗುವ ಕಪ್ಪು ಕಲೆಗಳು ಮುಖದ ಮೇಲೆ ಹಲವು ತಿಂಗಳುಗಳ ಕಾಲ ಹಾಗೆಯೇ ಉಳಿದುಬಿಡುತ್ತವೆ' ಎಂದು ಡಾ. ಪ್ರಿಯಾಂಕಾ ಎಚ್ಚರಿಸುತ್ತಾರೆ.&lt;/p&gt;&lt;h3&gt;&lt;strong&gt;ನಿಂಬೆ, ಬೆಳ್ಳುಳ್ಳಿ ಹಾಗೂ ಟೂತ್&zwnj;ಪೇಸ್ಟ್ ಸಹ ಅಪಾಯಕಾರಿ!&lt;/strong&gt;&lt;/h3&gt;&lt;p&gt;ಕೇವಲ ವಿಕ್ಸ್ ಮಾತ್ರವಲ್ಲದೆ, ಮೊಡವೆಗಳ ಮೇಲೆ ಟೂತ್&zwnj;ಪೇಸ್ಟ್ (Toothpaste), ನಿಂಬೆ ರಸ (Lemon) ಹಾಗೂ ಬೆಳ್ಳುಳ್ಳಿ ಹಚ್ಚುವ ಮನೆಮದ್ದುಗಳಿಂದಲೂ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ. ಇವುಗಳಲ್ಲಿರುವ ಅತಿಯಾದ ಆಮ್ಲೀಯತೆ ಮತ್ತು ರಾಸಾಯನಿಕಗಳು ಚರ್ಮಕ್ಕೆ ಸುಟ್ಟ ಗಾಯದಂತಹ ಹಾನಿಯನ್ನು ಉಂಟುಮಾಡಬಲ್ಲವು.&lt;/p&gt;&lt;h2&gt;&lt;strong&gt;ಮೊಡವೆ ಬಂದಾಗ ಏನು ಮಾಡಬೇಕು?&lt;/strong&gt;&lt;/h2&gt;&lt;ul&gt; &lt;li&gt;&lt;strong&gt;ಕೈಯಿಂದ ಮುಟ್ಟಬೇಡಿ: &lt;/strong&gt;ಮೊಡವೆಗಳನ್ನು ಚಿವುಟುವುದು ಅಥವಾ ಪದೇ ಪದೇ ಮುಟ್ಟುವುದು ಮಾಡಬೇಡಿ.&lt;/li&gt; &lt;li&gt;&lt;strong&gt;ಸಾಮಾಜಿಕ ಜಾಲತಾಣದ ಹ್ಯಾಕ್ಸ್ ತಪ್ಪಿಸಿ: &lt;/strong&gt;ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಪ್ರತಿಯೊಂದು DIY ವಿಡಿಯೋಗಳನ್ನು ಕಣ್ಣು ಮುಚ್ಚಿ ಅನುಕರಿಸಬೇಡಿ.&lt;/li&gt; &lt;li&gt;&lt;strong&gt;ತಜ್ಞರ ಸಲಹೆ ಪಡೆಯಿರಿ:&lt;/strong&gt; ಮೊಡವೆಗಳ ಸಮಸ್ಯೆ ಹೆಚ್ಚಾಗಿದ್ದರೆ ನಿಮ್ಮ ಚರ್ಮದ ಸ್ವಭಾವಕ್ಕೆ (Skin Type) ಅನುಗುಣವಾಗಿ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ.&lt;/li&gt;&lt;/ul&gt;&lt;p&gt;ಸ್ವಲ್ಪ ದಿನಗಳ ಮೊಡವೆ ನಿವಾರಣೆಗೆ ಹೋಗಿ ಮುಖದ ಮೇಲೆ ದೀರ್ಘಕಾಲದ ಕಲೆಗಳನ್ನು ತಂದುಕೊಳ್ಳಬೇಡಿ. ಸೌಂದರ್ಯ ಪ್ರಯೋಗಗಳನ್ನು ಮಾಡುವ ಮುನ್ನ ಜಾಗರೂಕರಾಗಿರಿ.&lt;/p&gt;]]></content:encoded>
            <category><![CDATA[life]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/life/does-vicks-vaporub-cure-pimples-dermatologist-warning-and-tips-kannada/articleshow-w2u8xre"/>
        </item>
        <item>
            <title><![CDATA[ನಾಗಸಂದ್ರ ಮೆಟ್ರೋ ಸಮೀಪದ ಐಕಿಯಾ ಭೂ ಒಪ್ಪಂದದಲ್ಲಿ ಎಡವಿದ BMRCL: 104 ಕೋಟಿ ರೂಪಾಯಿ ನಷ್ಟ ಎಂದ ಸಿಎಜಿ!]]></title>
            <link>https://kannada.asianetnews.com/bengaluru-urban/bmrcl-ikea-land-deal-cag-flags-104-crore-loss-nagasandra-san/articleshow-rgp923w</link>
            <guid isPermaLink="true">https://kannada.asianetnews.com/bengaluru-urban/bmrcl-ikea-land-deal-cag-flags-104-crore-loss-nagasandra-san/articleshow-rgp923w</guid>
            <pubDate>Fri, 14 Aug 2026 12:12:43 +0530</pubDate>
            <description><![CDATA[ಸಿಎಜಿ ವರದಿಯ ಪ್ರಕಾರ, ನಾಗಸಂದ್ರ ಬಳಿಯ ಭೂಮಿಯನ್ನು ಐಕಿಯಾಗೆ ಲೀಸ್ ನೀಡಿದ ಒಪ್ಪಂದದಲ್ಲಿ ಬಿಎಂಆರ್‌ಸಿಎಲ್‌ಗೆ ಸುಮಾರು 104 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಮೆಟ್ರೋ ನಿಲ್ದಾಣಗಳಲ್ಲಿನ ವಾಣಿಜ್ಯ ಸ್ಥಳಗಳನ್ನು ಬಾಡಿಗೆಗೆ ನೀಡದ ಕಾರಣದಿಂದಲೂ ಭಾರೀ ನಷ್ಟವಾಗಿದೆ ಎಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzg1vf8bkrysstmh0frrvzh,imgname-nagasandra-1786689678824.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ನಾಗಸಂದ್ರ ಮೆಟ್ರೋ ನಿಲ್ದಾಣದ ಬಳಿಯಿರುವ 14 ಎಕರೆ ಭೂಮಿಯನ್ನು ಐಕಿಯಾದೊಂದಿಗೆ ಲೀಸ್ ಮಾಡಿರುವ ಒಪ್ಪಂದದಲ್ಲಿ ಕನಿಷ್ಠ ಅಭಿವೃದ್ಧಿ ಪ್ರೀಮಿಯಂ (MDP) ಅನ್ನು ಕಡಿಮೆ ನಿಗದಿಪಡಿಸುವ ಮೂಲಕ ಸುಮಾರು 104 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ವರದಿ ಮಾಡಿದೆ. ಸಿಎಜಿ ಆಡಿಟ್ ವರದಿಯಲ್ಲಿ, ಆಸ್ತಿ ನಗದೀಕರಣ, ಯೋಜನಾ ಅಂದಾಜುಗಳು, ಭೂ ಪರಿಹಾರ ಮತ್ತು ಗುತ್ತಿಗೆದಾರರಿಗೆ ಭೂಮಿಯನ್ನು ಹಸ್ತಾಂತರಿಸುವಲ್ಲಿ ವಿಳಂಬಗಳನ್ನು ಒಳಗೊಂಡಂತೆ ಬಿಎಂಆರ್&zwnj;ಸಿಎಲ್&zwnj;ನ ಕಾರ್ಯನಿರ್ವಹಣೆಯ ಮೇಲೆ ತೀವ್ರ ಟೀಕೆಗಳನ್ನು ಮಾಡಲಾಗಿದೆ.&lt;/p&gt;&lt;p&gt;ವರದಿಯ ಪ್ರಕಾರ, ಭೂಮಿಯ ಮಾರ್ಗದರ್ಶಿ ಮೌಲ್ಯ ಹೆಚ್ಚಳವಾದರೂ, ಸಮಾಲೋಚಕರು ಶಿಫಾರಸು ಮಾಡಿದ 233 ಕೋಟಿ ರೂ. ನಿಂದ 332 ಕೋಟಿ ರೂ. ಪ್ರೀಮಿಯಂ ಶ್ರೇಣಿಯನ್ನು ಗಣನೆಗೆ ತೆಗೆದುಕೊಳ್ಳದೆ, ಬಿಎಂಆರ್&zwnj;ಸಿಎಲ್ ಎಂಡಿಪಿ ಅನ್ನು ಕೇವಲ 240 ಕೋಟಿ ರೂ.ಗೆ ನಿಗದಿಪಡಿಸಿದೆ. ಅಂತಿಮವಾಗಿ ಈ ಭೂಮಿಯನ್ನು ಐಕಿಯಾಗೆ 251 ಕೋಟಿ ರೂ.ಗೆ ನೀಡಲಾಗಿದೆ. ಸಿಎಜಿ ಅಂದಾಜಿನ ಪ್ರಕಾರ, ಬಿಎಂಆರ್&zwnj;ಸಿಎಲ್ ಸುಮಾರು 355 ಕೋಟಿ ರೂ. ವರೆಗೆ ಪ್ರೀಮಿಯಂ ಪಡೆಯುವ ಅವಕಾಶವಿತ್ತು.&lt;/p&gt;&lt;p&gt;ಮಾರ್ಚ್ 2015 ರಲ್ಲಿ ಸುಮಾರು 14 ಎಕರೆ ಭೂಮಿಯನ್ನು 320 ಕೋಟಿ ರೂ. ಎಂದು ಮೌಲ್ಯೀಕರಿಸಿದ್ದರು. ಬಿಎಂಆರ್&zwnj;ಸಿಎಲ್ ಪುನರ್ವಿಮರ್ಶೆಗೆ ಕೇಳಿದ ನಂತರ, ಮಾರ್ಚ್ 2016 ರಲ್ಲಿ ಶಿಫಾರಸು ಮಾಡಿದ ಪ್ರೀಮಿಯಂ 213 ಕೋಟಿ ರೂ. ನಿಂದ 304 ಕೋಟಿ ರೂ. ಎಂದು ನಿಗದಿಪಡಿಸಲಾಯಿತು. ಬಿಎಂಆರ್&zwnj;ಸಿಎಲ್ ತರುವಾಯ 240 ಕೋಟಿ ರೂ. ಎಂಡಿಪಿಯೊಂದಿಗೆ ಆರ್&zwnj;ಎಫ್&zwnj;ಪಿ ಫ್ಲೋಟ್ ಮಾಡಿತು.&lt;/p&gt;&lt;h2&gt;&lt;strong&gt;ಬಿಎಂಆರ್&zwnj;ಸಿಎಲ್ ಸಮರ್ಥನೆ ಮತ್ತು ಸಿಎಜಿ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಬಿಎಂಆರ್&zwnj;ಸಿಎಲ್ ಈ ಹೆಚ್ಚಿನ ಮೌಲ್ಯಮಾಪನ ಅತಿಯಾದ ಅಂದಾಜು ಮತ್ತು ಭೂಮಿ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದೆ. ಅಲ್ಲದೆ, ಮುದ್ರಣ ದೋಷದಿಂದಾಗಿ ತಪ್ಪು ಮಾರ್ಗದರ್ಶಿ ಮೌಲ್ಯವನ್ನು ಉಲ್ಲೇಖಿಸಲಾಗಿದೆ ಎಂದು ಬಿಎಂಆರ್&zwnj;ಸಿಎಲ್ ತಿಳಿಸಿದೆ. ಆದರೆ ಸಿಎಜಿ ಈ ಸಮರ್ಥನೆಯನ್ನು ತಿರಸ್ಕರಿಸಿದೆ. ಮೂಲಭೂತ ಸೌಕರ್ಯಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಹೋಲಿಸುವುದು ಸೂಕ್ತವಲ್ಲ ಎಂದು ಸಿಎಜಿ ಹೇಳಿದೆ.&lt;/p&gt;&lt;p&gt;2017 ರಲ್ಲಿ ಬಿಎಂಆರ್&zwnj;ಸಿಎಲ್ ಸುಮಾರು 13 ಎಕರೆ ಭೂಮಿಯನ್ನು ಐಕಿಯಾಗೆ 60 ವರ್ಷಗಳ ಕಾಲ ಲೀಸ್&zwnj;ಗೆ ನೀಡಿತು. ಈ ಒಪ್ಪಂದದಿಂದ 251 ಕೋಟಿ ರೂ. ಮರುಪಾವತಿಸಲಾಗದ ಮುಂಗಡ ಪಾವತಿ ಮತ್ತು ವಾರ್ಷಿಕವಾಗಿ ಸುಮಾರು 2 ಕೋಟಿ ರೂ. ಲಭಿಸಿದೆ.&lt;/p&gt;&lt;h2&gt;&lt;strong&gt;ಖಾಲಿ ಮೆಟ್ರೋ ಸ್ಥಳದಿಂದ 38 ಕೋಟಿ ರೂ. ನಷ್ಟ&lt;/strong&gt;&lt;/h2&gt;&lt;p&gt;ಬಿಎಂಆರ್&zwnj;ಸಿಎಲ್ ಆಸ್ತಿ ಅಭಿವೃದ್ಧಿಗಾಗಿ 2.46 ಲಕ್ಷ ಚದರ ಅಡಿ ನಿರ್ಮಿತ ಪ್ರದೇಶವನ್ನು ಅಭಿವೃದ್ಧಿಪಡಿಸಿತು. ಆದರೆ ಕೇವಲ 0.23 ಲಕ್ಷ ಚದರ ಅಡಿಯನ್ನು ಮಾತ್ರ ಬಳಸಲಾಗಿದೆ. ಇದು 2.23 ಲಕ್ಷ ಚದರ ಅಡಿ ಸ್ಥಳವನ್ನು ವರ್ಷಗಳ ಕಾಲ ಖಾಲಿ ಬಿಟ್ಟಿದೆ.&lt;/p&gt;&lt;p&gt;ಸಿಎಜಿ ಅಂದಾಜಿನ ಪ್ರಕಾರ, 43 ನಿಲ್ದಾಣಗಳಲ್ಲಿ ಖಾಲಿ ವಾಣಿಜ್ಯ ಸ್ಥಳದಿಂದ 2019 ಮತ್ತು 2022 ರ ನಡುವೆ ಸುಮಾರು 38.53 ಕೋಟಿ ರೂ. ಲೀಸ್ ಆದಾಯ ನಷ್ಟ ಸಂಭವಿಸಿದೆ. ಬಿಎಂಆರ್&zwnj;ಸಿಎಲ್ 2018 ರಲ್ಲಿ ರೀಟೇಲ್ ಔಟ್ಲೆಟ್ಗಳಿಗಾಗಿ ಟೆಂಡರ್ಗಳನ್ನು ಫ್ಲೋಟ್ ಮಾಡಿತ್ತು. ಆದರೆ ಆಸ್ತಿ ನಿರ್ವಹಣಾ ನೀತಿಯ ಅಗತ್ಯವಿದೆ ಎಂದು ನಿರ್ಧರಿಸಿದ ನಂತರ ಆರ್ಥಿಕ ಬಿಡ್&zwnj;ಗಳನ್ನು ತೆರೆಯಲಿಲ್ಲ. ಈ ನೀತಿಯನ್ನು ಮಾರ್ಚ್ 2023 ರ ವೇಳೆಗೆ ಇನ್ನೂ ರೂಪಿಸಲಾಗಿಲ್ಲ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bmrcl-ikea-land-deal-cag-flags-104-crore-loss-nagasandra-san/articleshow-rgp923w"/>
        </item>
        <item>
            <title><![CDATA[ಪ್ರೀತಿಸಿದ ಜೋಡಿ, ಮದುವೆ ನಿಶ್ಚಯವಾಗುತ್ತಿದ್ದಂತೆ ಪ್ರಾಣಬಿಟ್ಟ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಗಳು!]]></title>
            <link>https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz</link>
            <guid isPermaLink="true">https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz</guid>
            <pubDate>Fri, 14 Aug 2026 11:54:16 +0530</pubDate>
            <description><![CDATA[ಮುಂದಿನ ನಾಲ್ಕೈದು ತಿಂಗಳಲ್ಲಿ ಮದುವೆಗೆ ಸಿದ್ಧರಾಗಿದ್ದ ಎಸ್‌ಬಿಐ ಉದ್ಯೋಗಿಗಳಾದ ಯುವಕ ಮತ್ತು ಯುವತಿ, ಫೋನ್‌ನಲ್ಲಿ ಜಗಳವಾಡಿದ ನಂತರ ಸಾವಿಗೆ ಕೊರಳೊಡ್ಡಿದ್ದಾಳೆ. ಹುಣಸೂರಿನಲ್ಲಿ ಯುವತಿ ನೇಣಿಗೆ ಶರಣಾದರೆ, ಈ ಸುದ್ದಿ ತಿಳಿದು ಯುವಕ ಕೇರಳದಲ್ಲಿ ತನ್ನ ಪ್ರಾಣವನ್ನು ಕೊನೆಗೊಳಿಸಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzeky6szd1cmb0n7pxsx9d9,imgname-sbi-employees-vimal-and-anushree-death-1786688174297.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮೈಸೂರು (ಆ.14): &lt;/strong&gt;ಇನ್ನು ಕೆಲವೇ ತಿಂಗಳುಗಳಲ್ಲಿ ಹೊಸ ಜೀವನಕ್ಕೆ ಕಾಲಿಟ್ಟು, ಹಸೆಮಣೆ ಏರಬೇಕಿದ್ದ ಯುವ ಜೋಡಿಯೊಂದು ನೂರೆಂಟು ಕನಸುಗಳೊಂದಿಗೆ ಜೀವನವನ್ನೇ ಮುಗಿಸಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಎಸ್&zwnj;ಬಿಐ (SBI) ಬ್ಯಾಂಕ್ ಉದ್ಯೋಗಿಗಳಾಗಿದ್ದ ಮೂಲತಃ ಕೇರಳದ ಯುವಕ ಮತ್ತು ಯುವತಿ ಹುಣಸೂರು ಹಾಗೂ ಕೇರಳದ ಲಾಡ್ಜ್&zwnj; ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಹಾಗೂ ಕೇರಳದ ಇರಿಟ್ಟಿ ಮೂಲದ ಅಮಲ್ ಎಂದು ಗುರುತಿಸಲಾಗಿದೆ.&lt;/p&gt;&lt;h2&gt;&lt;strong&gt;ತರಬೇತಿ ವೇಳೆ ಚಿಗುರಿದ್ದ ಪ್ರೀತಿ!&lt;/strong&gt;&lt;/h2&gt;&lt;p&gt;ಮೃತ ಅನುಶ್ರೀ ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಉದ್ಯೋಗಕ್ಕೆ ಸೇರ್ಪಡೆಯಾಗಿದ್ದರು. ಪ್ರಸ್ತುತ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯಲ್ಲಿ ವಾಸವಾಗಿದ್ದರು. ಇತ್ತ ಅಮಲ್ ಕೇರಳದ ಎರ್ನಾಕುಲಂನ ಎಸ್&zwnj;ಬಿಐ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ನಡೆದ ತರಬೇತಿ (Training) ಅವಧಿಯಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಈ ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿ, ಇಬ್ಬರ ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಬರುವ ಡಿಸೆಂಬರ್ ತಿಂಗಳಿನಲ್ಲಿ ಅದ್ಧೂರಿಯಾಗಿ ಮದುವೆಯಾಗಲು ಇಬ್ಬರೂ ಸಿದ್ಧತೆ ನಡೆಸುತ್ತಿದ್ದರು.&lt;/p&gt;&lt;h2&gt;&lt;strong&gt;ಫೋನ್ ಜಗಳ ತಂದಿಟ್ಟ ದುರಂತ!&lt;/strong&gt;&lt;/h2&gt;&lt;p&gt;ಸಾವಿಗೂ ಮುನ್ನ ಅನುಶ್ರೀ ತಮ್ಮ ತಂದೆ, ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿ ಮೂಲಕ ಸಾಮಾನ್ಯವಾಗಿಯೇ ಮಾತನಾಡಿದ್ದರು. ಆದರೆ, ತದನಂತರ ಅನುಶ್ರೀ ಹಾಗೂ ಅಮಲ್ ನಡುವೆ ಫೋನ್&zwnj;ನಲ್ಲಿ ಮಾತನಾಡುವಾಗ ಯಾವುದೋ ವಿಚಾರಕ್ಕೆ ದೊಡ್ಡ ಮಟ್ಟದ ಜಗಳ ನಡೆದಿದೆ ಎನ್ನಲಾಗಿದೆ. ಜಗಳದಿಂದ ತೀವ್ರ ಮನನೊಂದ ಅನುಶ್ರೀ, ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಿಯತಮೆ ಸಾವಿನ ಸುದ್ದಿ ತಿಳಿದು ಪ್ರಿಯಕರನೂ ಜೀವಬಿಟ್ಟ&lt;/strong&gt;&lt;/h2&gt;&lt;p&gt;ಅತ್ತ ಅನುಶ್ರೀ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಅಮಲ್, ಕೇರಳದ ಇರಿಟ್ಟಿ ನಗರದ ಲಾಡ್ಜ್&zwnj; ಒಂದರಲ್ಲಿ ರೂಮ್ ಪಡೆದುಕೊಂಡು ಅಲ್ಲೇ ನೇಣಿಗೆ ಶರಣಾಗಿದ್ದಾರೆ. ಪ್ರೀತಿಸಿದ ಹುಡುಗಿ ಇಲ್ಲವಾದ ಮೇಲಷ್ಟೇ ತಾನೂ ಬದುಕಿರಲಾರೆ ಎಂದು ನಿರ್ಧರಿಸಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.&lt;/p&gt;&lt;p&gt;ಇಬ್ಬರೂ ಭವಿಷ್ಯದ ಬಗ್ಗೆ ಸಾಲು ಸಾಲು ಕನಸುಗಳನ್ನು ಕಂಡಿದ್ದರು. ಆದರೆ, ಸಣ್ಣ ಜಗಳ ಇಬ್ಬರ ಜೀವವನ್ನೇ ಬಲಿ ಪಡೆದಿದ್ದು, ಎರಡೂ ಕುಟುಂಬಗಳಲ್ಲಿ ಶೋಕಸಾಗರ ಆವರಿಸಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/karnataka-mysuru-hunsur-state-bank-of-india-employees-engaged-couple-died-separately/articleshow-p39ndsz"/>
        </item>
        <item>
            <title><![CDATA[Freedom Habba: ನಾಳೆ ವಿಧಾನಸೌಧದಲ್ಲಿ ನಡೆಯುವ ಫ್ರೀಡಂ ಹಬ್ಬಕ್ಕೆ ಹೋಗಬೇಕಾ? ನಿಮಗೆ ಪ್ರವೇಶ ಸಿಗಬೇಕು ಅಂದ್ರೆ ಈ ವಿಷಯ ತಿಳ್ಕೊಳ್ಳಿ!]]></title>
            <link>https://kannada.asianetnews.com/gallery/state/aug-15-freedom-habba-at-vidhana-soudha-timings-routes-and-traffic-advisory-rav-lgnc0d3</link>
            <guid isPermaLink="true">https://kannada.asianetnews.com/gallery/state/aug-15-freedom-habba-at-vidhana-soudha-timings-routes-and-traffic-advisory-rav-lgnc0d3</guid>
            <pubDate>Fri, 14 Aug 2026 11:27:48 +0530</pubDate>
            <description><![CDATA[ಆಗಸ್ಟ್ 15 ನಾಳೆ ಸ್ವಾತಂತ್ರ್ಯ ದಿನಾಚರಣೆ. ವಿಧಾನಸೌಧ ಎದುರು ನಡೆಯಲಿರುವ ವರ್ಣರಂಜಿತ ಫ್ರೀಡಂ ಹಬ್ಬ ನಡೆಯಲಿದೆ. ಕಾರ್ಯಕ್ರಮದ ಸಮಯ, ಮಾರ್ಗ, ರಿಜಿಸ್ಟ್ರೇಷನ್ ಕುರಿತು ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzcjtemps0eyrda17gdeamm,imgname-----------------------2026-08-14t105628.408-1786686040532.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 15 ನಾಳೆ ಸ್ವಾತಂತ್ರ್ಯ ದಿನಾಚರಣೆ. ವಿಧಾನಸೌಧ ಎದುರು ನಡೆಯಲಿರುವ ವರ್ಣರಂಜಿತ ಫ್ರೀಡಂ ಹಬ್ಬ ನಡೆಯಲಿದೆ. ಕಾರ್ಯಕ್ರಮದ ಸಮಯ, ಮಾರ್ಗ, ರಿಜಿಸ್ಟ್ರೇಷನ್ ಕುರಿತು ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ದಿನದಂದು ವಿಧಾನಸೌಧದ ಎದುರು ನಡೆಯುವ ವರ್ಣರಂಜಿತ ಫ್ರೀಡಂ ಹಬ್ಬದ ಸಿದ್ಧತೆ ಪೂರ್ಣಗೊಂಡಿದ್ದು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಫ್ರೀಡಂ ಪರೇಡ್, ಸಂಗೀತ ರಸಸಂಜೆ ಎಂಬ 3 ವಿಭಾಗಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಡಿಸಿಪಿ, ಎಸಿಪಿ ಸೇರಿದಂತೆ 3000 ಪೊಲೀಸರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ. ವಿಧಾನಸೌಧದ ಸುತ್ತ ಸಿಸಿಟಿವಿ ಕ್ಯಾಮರಾ ಕಣ್ಗಾವಲು ಜೊತೆಗೆ ಸೆಕ್ಟರ್ ಪದ್ಧತಿಯಲ್ಲಿ ಪೊಲೀಸರು ಭದ್ರತೆ ವಹಿಸಲಾಗುವುದು ಎಂದು ಜಿಬಿಎ ಆಯುಕ್ತ ಮಹೇಶ್ವರರಾವ್ ಹಾಗೂ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.&lt;/p&gt;&lt;img&gt;&lt;p&gt;ಆ.15ರಂದು ಬೆಳಿಗ್ಗೆ 12ರಿಂದ ರಾತ್ರಿ 10ಗಂಟೆವರೆಗೆ ನಡೆಯುವ ಕಾರ್ಯಕ್ರಮಗಳು 3 ವಿಭಾಗಗಳಲ್ಲಿ ನಡೆಯಲಿವೆ. 12ರಿಂದ 3ಗಂಟೆವರೆಗೆ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು, 3 ಗಂಟೆಯಿಂದ 5.30ರವರೆಗೆ ಅಂಬೇಡ್ಕರ್ ರಸ್ತೆಯಲ್ಲಿ ಫ್ರೀಡಂ ಪರೇಡ್, ಎಂ.ಡಿ.ಪಲ್ಲವಿ, ಸಂಜಿತ್ ಹೆಗ್ಡೆ, ರಘು ದೀಕ್ಷಿತ್ ಸೇರಿದಂತೆ 20 ಮಂದಿ ಕಲಾವಿದರಿಂದ ಬೃಹತ್ ವೇದಿಕೆಯಲ್ಲಿ ಸಂಜೆ 5.30ರಿಂದ ರಾತ್ರಿ 10ರವರೆಗೆ ಸಂಗೀತ ರಸಸಂಜೆ, ನೃತ್ಯ ಹಾಗೂ ವಿವಿಧ ರಾಜ್ಯಗಳ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.&lt;/p&gt;&lt;p&gt;ವಿಧಾನಸೌಧ ಹಾಗೂ ಹೈಕೋರ್ಟ್ ಮಧ್ಯದ ಅಂಬೇಡ್ಕರ್ ರಸ್ತೆಯಲ್ಲಿ ಗೋಪಾಲಗೌಡ ಸರ್ಕಲ್ ನಿಂದ ತಿಮ್ಮಯ್ಯ ವೃತ್ತದವರೆಗೆ ಫ್ರೀಡಂ ಪರೇಡ್ ನಡೆಯಲಿದೆ. ಪರೇಡ್ ನಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ 15ತಂಡಗಳು, ವಿವಿಧ ರಾಜ್ಯಗಳ 10 ಕಲಾತಂಡಗಳು ತಮ್ಮ ಕಲೆಗಳನ್ನು ಪ್ರದರ್ಶಿಸಲಿವೆ.&lt;/p&gt;&lt;img&gt;&lt;p&gt;ಮಕ್ಕಳಿಗಾಗಿ ಏರ್ಪಡಿಸಿರುವ ವಿಧಾನಸೌಧ ಪ್ರವಾಸದಲ್ಲಿ 25 ಜನರ ತಂಡದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮುನ್ನಡೆಸಲಿವೆ. ವಿಧಾನಸೌಧದ ಗ್ಯಾಲರಿ, ಸಭಾಧ್ಯಕ್ಷರ ಕೊಠಡಿಗಳು, ಶಾಸಕರು ಕುಳಿತುಕೊಳ್ಳುವ ಆಸನಗಳ ವಿವರಗಳನ್ನು ಗೈಡ್&zwnj;ಗಳು ವಿವರಿಸಲಿದ್ದಾರೆ. ಅಂದು ಗಾಂಧಿ ಪ್ರತಿಮೆ ಬಳಿ ಸ್ವಾತಂತ್ರ್ಯಹೋರಾಟಕ್ಕೆ ಹಿರಿಯರು ಮಾಡಿದ ತ್ಯಾಗ ಸ್ಮರಿಸುವ ಘಟನಾವಳಿಯ ಫ್ರೀಡಂ ವಾಲ್ ವಿಶೇಷ ಆಕರ್ಷಣೆಯಾಗಿದ್ದು, ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಘಟನಾವಳಿಗಳು ಇರಲಿವೆ. ಆಹಾರ ಮೇಳಗಳ ಸ್ಟಾಲ್&zwnj;ಗಳೂ ಇರಲಿವೆ.&lt;/p&gt;&lt;img&gt;&lt;p&gt;ಮೇಲಿನ ಎಲ್ಲಾ ಕಾರ್ಯಕ್ರಮಗಳಿಗೂ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು. 12 ವರ್ಷದೊಳಗಿನ ಮಕ್ಕಳಿಗೆ ಕ್ಯೂ ಆರ್ ಕೋಡ್ ಅಗತ್ಯವಿಲ್ಲ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೋಂದಣಿ ಕಡ್ಡಾಯ. ಕಾರ್ಯಕ್ರಮಕ್ಕೆ ಆಗಮಿಸುವವರು ಸರ್ಕಾರ ನೀಡಿರುವ ಗುರುತಿನ ಚೀಟಿ ತರುವುದು ಕಡ್ಡಾಯ. ಈಗಾಗಲೇ 18 ಸಾವಿರ ಮಂದಿ ನೋಂದಣಿ ಮಾಡಿದ್ದು, ಆ.14ರಂದು ನೋಂದಣಿ ನಡೆಯಲಿದೆ. ಕ್ಯೂ ಆರ್ ಕೋಡ್&zwnj;ನಲ್ಲಿ ನೋಂದಣಿಯಾದವರ ಮೊಬೈಲ್&zwnj;ಗಳಿಗೆ ಎಲ್ಲೆಲ್ಲಿ ಯಾವ ಕಾರ್ಯಕ್ರಮಗಳು ನಡೆಯಲಿವೆ ಎಂಬುದರ ಬಗ್ಗೆ ಸಂದೇಶ ಕಳುಹಿಸಲಾಗುವುದು. ಮಹಿಳೆಯರು, ಮಕ್ಕಳ ಭದ್ರತೆಗೆ ವಿಶೇಷ ಗಮನ ವಹಿಸಲಾಗುವುದು. ಇದಲ್ಲದೆ ಅಗ್ನಿಶಾಮಕದಳದ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.&lt;/p&gt;&lt;img&gt;&lt;p&gt;ವಿಧಾನಸೌಧಕ್ಕೆ ಪ್ರವೇಶ ಮಾಡುವವರು ಜಿಪಿಒ (ತಿಮ್ಮಯ್ಯ ವೃತ್ತ), ಕೆ.ಆರ್.ವೃತ್ತ, ಕಬ್ಬನ್ ಪಾರ್ಕ್ ಕಡೆಗಳಿಂದ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ತಲಾ 6 ಗೇಟ್&zwnj;ಗಳಂತೆ 3 ಕಡೆಗಳಿಂದ ಒಟ್ಟು 18 ಪ್ರವೇಶ ದ್ವಾರಗಳನ್ನು ನಿರ್ಮಾಣ ಮಾಡಲಿದ್ದು, ಅವುಗಳ ಮೂಲಕವೇ ಸಾರ್ವಜನಿಕರು ಪ್ರವೇಶಿಸಲು ಅವಕಾಶವಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಬೆಳಿಗ್ಗೆ 11ಗಂಟೆಯಿಂದ ಅಂಬೇಡ್ಕರ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ ಬಿಎಂಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ನಗರದ ಎಲ್ಲ ಪ್ರದೇಶಗಳಿಂದ ವಿಧಾನಸೌಧಕ್ಕೆ ಬಸ್ ಸಂಚಾರ ಕಲ್ಪಿಸಲಾಗಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಸ್&zwnj;ನಲ್ಲಿ ಆಗಮಿಸಿದರೆ ಸಂಚಾರದಟ್ಟಣೆ ಕಡಿಮೆಯಾಗಲಿದೆ ಎಂದು ಆಯುಕ್ತರು ತಿಳಿಸಿದರು.&lt;/p&gt;&lt;p&gt;&lt;strong&gt;ರಾತ್ರಿ ಮದ್ದು, ಪಟಾಕಿ ಸಿಡಿತ&lt;/strong&gt;&lt;/p&gt;&lt;p&gt;ವಿಧಾನಸೌಧದ 4 ಕಡೆಗಳಲ್ಲಿ ರಾತ್ರಿ ಮದ್ದು, ಪಟಾಕಿ ಸಿಡಿಸಲು ಸ್ಥಳ ಗುರುತಿಸಿ ಸಂಬಂಧಿಸಿದ ಇಲಾಖೆಗಳಿಂದ ಎನ್&zwnj;ಒಸಿ ಪಡೆಯಲು ಮನವಿ ಕೊಡಲಾಗಿದೆ. ಎನ್ಒಸಿ ಇನ್ನೂ ದೊರೆತಿಲ್ಲ. ವಿಧಾನಸೌಧದ ಯಾವ ಕಡೆಗಳಲ್ಲಿ ಅನುಮತಿ ದೊರೆಯುತ್ತದೆಯೋ ಆ ಸ್ಥಳದಲ್ಲಿ ಮದ್ದು, ಪಟಾಕಿ ಸಿಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.&lt;/p&gt;&lt;p&gt;&lt;strong&gt;ವಿಧಾನಸೌಧ ಮೆಟ್ರೋ ನಿಲ್ದಾಣ ಬಂದ್&lt;/strong&gt;&lt;/p&gt;&lt;p&gt;ಫ್ರೀಡಂ ಹಬ್ಬ ಆಯೋಜನೆ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣವನ್ನು ಬೆಳಗ್ಗೆ 10ರಿಂದ ರಾತ್ರಿ 9.30ರವರೆಗೆ ಪ್ರವೇಶ ಮತ್ತು ನಿರ್ಗಮನ ಸೇರಿ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಬಿಎಂಆರ್&zwnj;ಸಿಎಲ್ ತಿಳಿಸಿದೆ. ರಾತ್ರಿ 9.30ರ ನಂತರ ಜನರು ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ಬಾಗಿಲುಗಳನ್ನು ತೆಗೆಯಲಾಗುತ್ತದೆ. ಆದರೆ, ಪ್ರಯಾಣಿಕರು ವಿಧಾನಸೌಧ ನಿಲ್ದಾಣದಲ್ಲಿ ಇಳಿದು ಹೊರ ಬರಲು 10 ಗಂಟೆಯ ನಂತರ ಮಾತ್ರ ಅವಕಾಶ ನೀಡಲಾಗುತ್ತದೆ. ನಿಲ್ದಾಣ ಬಂದ್ ಆಗಿರುವ ಅವಧಿಯಲ್ಲಿ ಪ್ರಯಾಣಿಕರು ಕಬ್ಬನ್&zwnj;ಪಾರ್ಕ್ ಮೆಟ್ರೋ ನಿಲ್ದಾಣ ಅಥವಾ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣವನ್ನು ಬಳಸಬಹುದಾಗಿದೆ. ಅಂದು ರಾತ್ರಿ ಪ್ರಯಾಣಿಕರ ದಟ್ಟಣೆ ಮತ್ತು ಅಗತ್ಯತೆ ಅನುಸಾರ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತದೆ ಎಂದು ಬಿಎಂಆರ್&zwnj;ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.&lt;/p&gt;&lt;p&gt;&lt;strong&gt;ಸ್ವಯಂ ಸೇವಕರಿಂದ ಅಗತ್ಯ ನೆರವು ಪಡೆಯಿರಿ&lt;/strong&gt;&lt;/p&gt;&lt;p&gt;ಫ್ರೀಡಂ ಹಬ್ಬದಲ್ಲಿ ನಿಗದಿತ ಟಿ-ಶರ್ಟ್&zwnj;ಗಳ ಮೂಲಕ ಗುರುತಿಸಬಹುದಾದ May I Help You? ಸ್ವಯಂಸೇವಕರು ಕಾರ್ಯಕ್ರಮದ ಸ್ಥಳದ ಎಲ್ಲ ಕಡೆ ಸಂದರ್ಶಕರಿಗೆ ಅಗತ್ಯ ನೆರವು ನೀಡಲಿದ್ದಾರೆ. ನಗರದ 4 ವಿವಿಧ ದಿಕ್ಕುಗಳಲ್ಲಿ 4 ಆಂಬ್ಯುಲೆನ್ಸ್&zwnj;ಗಳನ್ನು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ. ತುರ್ತು ಸಂದರ್ಭದಲ್ಲಿ ಯಾವ ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಮಾಹಿತಿಯೂ ಅವರಿಗೆ ಲಭ್ಯವಿರಲಿದೆ. ರಾಣಿ ಚೆನ್ನಮ್ಮ ದಳದ ಸಹಯೋಗದೊಂದಿಗೆ ಮಹಿಳಾ ಸಹಾಯ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ಶಿಶುಗಳಿಗೆ ಹಾಲುಣಿಸುವ ಕೊಠಡಿ, ವಿಶ್ರಾಂತಿ ವ್ಯವಸ್ಥೆ ಹಾಗೂ ಸ್ಯಾನಿಟರಿ ಸೌಲಭ್ಯಗಳು ಲಭ್ಯವಿರಲಿವೆ. ಪ್ರತಿಯೊಂದು ಚಟುವಟಿಕೆಗೆ ಪೊಲೀಸ್, ಜಿಬಿಎ, ಆಯೋಜಕರು ಹಾಗೂ ಈವೆಂಟ್ ಪ್ರತಿನಿಧಿಗಳು ಸೇರಿದಂತೆ ತಲಾ 4 ಪ್ರತಿನಿಧಿಗಳನ್ನು ನಿಯೋಜಿಸಲಾಗುವುದು.&lt;/p&gt;]]></content:encoded>
            <category><![CDATA[state]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/state/aug-15-freedom-habba-at-vidhana-soudha-timings-routes-and-traffic-advisory-rav-lgnc0d3"/>
        </item>
        <item>
            <title><![CDATA[ಈ 5 ರಾಶಿಗೆ ಶುಭ ಸಮಯ ಪ್ರಾರಂಭವಾಗುತ್ತದೆ, ಶುಭ ಯೋಗದಿಂದ ಬಂಪರ್‌ ಅದೃಷ್ಟ]]></title>
            <link>https://kannada.asianetnews.com/gallery/astrology/good-times-begin-for-these-5-zodiac-signs-auspicious-yogas-bring-luck-and-success-suh-egmgzwf</link>
            <guid isPermaLink="true">https://kannada.asianetnews.com/gallery/astrology/good-times-begin-for-these-5-zodiac-signs-auspicious-yogas-bring-luck-and-success-suh-egmgzwf</guid>
            <pubDate>Fri, 14 Aug 2026 11:47:53 +0530</pubDate>
            <description><![CDATA[ನಾಲ್ಕು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ, ಅದನ್ನು ಚತುರ್ಗ್ರಹ ಯೋಗವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಗೌರಿ ಯೋಗವನ್ನು ಜ್ಯೋತಿಷ್ಯದಲ್ಲಿ ಪಾರ್ವತಿಯ ಆಶೀರ್ವಾದವನ್ನು ತರುವ ಶುಭ ಯೋಗವೆಂದು ಪರಿಗಣಿಸಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzemet1e0m0qvvrgzx1y8ea,imgname-good-times-begin-for-these-5-zodiac-signs-auspicious-yogas-bring-luck-and-success-1786688191297.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾಲ್ಕು ಪ್ರಮುಖ ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ, ಅದನ್ನು ಚತುರ್ಗ್ರಹ ಯೋಗವೆಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಗೌರಿ ಯೋಗವನ್ನು ಜ್ಯೋತಿಷ್ಯದಲ್ಲಿ ಪಾರ್ವತಿಯ ಆಶೀರ್ವಾದವನ್ನು ತರುವ ಶುಭ ಯೋಗವೆಂದು ಪರಿಗಣಿಸಲಾಗುತ್ತದೆ.&lt;/p&gt;&lt;img&gt;&lt;p&gt;ಮೇಷ ರಾಶಿಯವರಿಗೆ ಇಂದು ಅನುಕೂಲಕರವಾಗಿರುವ ಸಾಧ್ಯತೆಯಿದೆ. ಚತುರ್ಗ್ರಹ ಮತ್ತು ಗೌರಿ ಯೋಗದ ಪ್ರಭಾವದಿಂದ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯ ನಂಬುತ್ತದೆ. ವೃತ್ತಿಪರ ಜೀವನದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ನಿಮ್ಮ ನಾಯಕತ್ವದ ಗುಣಗಳು ಭವಿಷ್ಯದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಬಹುದು. ವ್ಯಾಪಾರ ಮಾಡುವವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಈ ಶುಭ ಯೋಗಗಳು ಮಕರ ರಾಶಿಯವರಿಗೆ ಮಾನಸಿಕ ಶಾಂತಿ ಮತ್ತು ಕುಟುಂಬ ಸಂತೋಷವನ್ನು ನೀಡಬಲ್ಲವು ಎಂದು ಜ್ಯೋತಿಷ್ಯ ಭವಿಷ್ಯವಾಣಿಗಳು ಹೇಳುತ್ತವೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಅವರ ಕಠಿಣ ಪರಿಶ್ರಮಕ್ಕೆ ಸೂಕ್ತ ಮನ್ನಣೆ ಸಿಗಬಹುದು. ಮೇಲಧಿಕಾರಿಗಳಿಂದ ಪ್ರಶಂಸೆ ಅಥವಾ ಬಡ್ತಿ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ಹಿಂದಿನದಕ್ಕೆ ಹೋಲಿಸಿದರೆ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ಈ ಗ್ರಹಗಳ ಸಂಯೋಜನೆಯು ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಹೆಚ್ಚಾಗಬಹುದು. ಹೊಸ ಆದಾಯದ ಮಾರ್ಗಗಳ ಸಾಧ್ಯತೆ ಇದೆ. ಭವಿಷ್ಯಕ್ಕಾಗಿ ಆಸ್ತಿ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರಿಗೆ ಇದು ಅನುಕೂಲಕರ ಸಮಯ ಎಂದು ಜ್ಯೋತಿಷ್ಯ ಮಾಹಿತಿ ಹೇಳುತ್ತದೆ. ಹೊಸ ಒಪ್ಪಂದಗಳು ಉದ್ಯಮಿಗಳಿಗೆ ಲಾಭವನ್ನು ತರಬಹುದು. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಅನುಕೂಲಕರವಾಗಿರಬಹುದು ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯ ಭವಿಷ್ಯವಾಣಿಗಳು ತುಲಾ ರಾಶಿಯ ಜನರು ಇಂದು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಹೇಳುತ್ತವೆ. ಕಲೆ, ಸಾಹಿತ್ಯ ಮತ್ತು ಮಾಧ್ಯಮದಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶಗಳನ್ನು ಪಡೆಯಬಹುದು. ದಾಂಪತ್ಯ ಜೀವನದಲ್ಲಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು ಮತ್ತು ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.&lt;/p&gt;&lt;img&gt;&lt;p&gt;ಧನು ರಾಶಿಯವರಿಗೆ ಅದೃಷ್ಟ ಬರುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗ ಹುಡುಕಲು ಪ್ರಯತ್ನಿಸುತ್ತಿರುವ ಯುವಕರಿಗೆ ಒಳ್ಳೆಯ ಸುದ್ದಿ ಸಿಗಬಹುದು ಎಂದು ಜ್ಯೋತಿಷ್ಯ ಮಾಹಿತಿ ಹೇಳುತ್ತದೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ದೇವಾಲಯ ಭೇಟಿಗಳು ಅಥವಾ ಕುಟುಂಬದೊಂದಿಗೆ ಪ್ರವಾಸಗಳು ಸಂತೋಷವನ್ನು ತರಬಹುದು. ತಾಯಿಯ ಆರೋಗ್ಯದಲ್ಲಿಯೂ ಸುಧಾರಣೆಯಾಗಬಹುದು ಎಂದು ಹೇಳಲಾಗುತ್ತದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/good-times-begin-for-these-5-zodiac-signs-auspicious-yogas-bring-luck-and-success-suh-egmgzwf"/>
        </item>
        <item>
            <title><![CDATA[Ballari  ಕೋಳೂರಿನಲ್ಲಿ ಜೈನ ಧರ್ಮದ 4 ಅಪರೂಪದ ಜಿನಮೂರ್ತಿ ಶಿಲ್ಪ ಪತ್ತೆ, ಇದು ಸಲ್ಲೇಖನ ಪ್ರತಿಜ್ಞೆ ಸಂಕೇತ]]></title>
            <link>https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp</link>
            <guid isPermaLink="true">https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp</guid>
            <pubDate>Fri, 14 Aug 2026 11:35:22 +0530</pubDate>
            <description><![CDATA[ಬಳ್ಳಾರಿಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಕೃಷಿ ಹೊಲಗಳಲ್ಲಿ, ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಂಡವು ಜೈನರ 'ಸಲ್ಲೇಖನ ವ್ರತ' ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ನಾಲ್ಕು ಅಪರೂಪದ ಗ್ರಾನೈಟ್ ಶಿಲ್ಪಗಳನ್ನು ಪತ್ತೆಹಚ್ಚಿದೆ. ಕಲ್ಯಾಣಿ ಚಾಲುಕ್ಯರ ಕಾಲದ ಶಾಸನದಿಂದ ಪ್ರೇರಿತವಾದ ಈ ಶೋಧವು, ಈ ಪ್ರದೇಶದ ಜೈನ ಧರ್ಮದ ಐತಿಹಾಸಿಕ ಮಹತ್ವದ ಮೇಲೆ ಹೊಸ ಬೆಳಕು ಚೆಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzdntchkbjjpec0m2zmqv7s,imgname-jain-sculptures-1786687187345.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕುರುಗೋಡು: &lt;/strong&gt;ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ಕೃಷಿ ಹೊಲಗಳಲ್ಲಿ ಜೈನ ಧರ್ಮದ &lsquo;ಸಲ್ಲೇಖನ ವ್ರತ&rsquo; ಹಾಗೂ ಸಾಂಸ್ಕೃತಿಕ ಪರಂಪರೆಯ ಮೇಲೆ ಬೆಳಕು ಚೆಲ್ಲುವ ನಾಲ್ಕು ಅಪರೂಪದ ಗ್ರಾನೈಟ್ ಶಿಲ್ಪಗಳನ್ನು ವಿಜಯನಗರ ಸಾಮ್ರಾಜ್ಯ ಸಂಶೋಧನಾ ತಿರುಗಾಟ ತಂಡವು ಪತ್ತೆಹಚ್ಚಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಅವರ ನೇತೃತ್ವದ ಅಧ್ಯಯನ ತಂಡವು ನಡೆಸಿದ ಕ್ಷೇತ್ರಕಾರ್ಯದ ವೇಳೆ ಈ ಪ್ರಮುಖ ಐತಿಹಾಸಿಕ ಕುರುಹುಗಳು ಬೆಳಕಿಗೆ ಬಂದಿದೆ.&lt;/p&gt;&lt;h2&gt;ಶಾಸನಗಳ ಅಧ್ಯಯನದಿಂದ ಶುರುವಾದ ಶೋಧ&lt;/h2&gt;&lt;p&gt;ಕೋಳೂರು ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸೂರ್ಯನಾರಾಯಣ ದೇವಸ್ಥಾನದಲ್ಲಿ ಲಭ್ಯವಿರುವ ಬೃಹತ್ ಶಾಸನವು ಈ ಮಹತ್ವದ ಶೋಧಕ್ಕೆ ಮೂಲ ಪ್ರೇರಣೆಯಾಗಿದೆ. ಈ ದೇವಾಲಯದಲ್ಲಿರುವ 103 ಸಾಲುಗಳ ಬೃಹತ್ ಕಲ್ಲಿನ ಶಾಸನವನ್ನು ಕನ್ನಡ ಲಿಪಿಯಲ್ಲಿ ಸಂಸ್ಕೃತ ಭಾಷೆಯ ಮೂಲಕ ಬರೆಯಲಾಗಿದೆ. ಕಲ್ಯಾಣಿ ಚಾಲುಕ್ಯರ ದೊರೆ ಜಗದೇಕಮಲ್ಲನ ಕಾಲದಲ್ಲಿ ಪಾಳೆಗಾರನಾಗಿದ್ದ (ಸಾಮಂತ) ಇಮ್ಮಡಿ ಭೀಮರಸನಿಗೆ ಸೇರಿದ ಈ ಶಾಸನವು ಈಗಾಗಲೇ ಬಳ್ಳಾರಿ ಜಿಲ್ಲಾ ಶಾಸನ ಸಂಪುಟದಲ್ಲಿ ಪ್ರಕಟಗೊಂಡಿದೆ. ಈ ಶಾಸನದಲ್ಲಿ ಪ್ರಾಚೀನ ನಂದ ಮತ್ತು ಮೌರ್ಯ ರಾಜವಂಶಗಳ ಉಲ್ಲೇಖವಿರುವುದನ್ನು ಗಮನಿಸಿದ ಸಂಶೋಧಕರ ತಂಡ, ಗ್ರಾಮದ ಸುತ್ತಮುತ್ತ ಆ ಕಾಲದ ಹೆಚ್ಚಿನ ಐತಿಹಾಸಿಕ ಆಧಾರಗಳು ಸಿಗಬಹುದು ಎಂಬ ನಿರೀಕ್ಷೆಯಿಂದ ತಪಾಸಣೆ ಕೈಗೊಂಡಿತು. ಅದರಂತೆ ಕೃಷಿ ಭೂಮಿಯ ಆಗ್ನೇಯ, ಈಶಾನ್ಯ, ನೈಋತ್ಯ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಸಮೀಕ್ಷೆ ನಡೆಸಿದಾಗ ಈ ಸುಂದರ ಜೀನಮೂರ್ತಿ ಶಿಲ್ಪಗಳು ಕಂಡುಬಂದವು.&lt;/p&gt;&lt;h2&gt;ಜಿನಮೂರ್ತಿಗಳ ಕಲಾತ್ಮಕ ವಿನ್ಯಾಸ ಮತ್ತು ವಿಶೇಷತೆ&lt;/h2&gt;&lt;p&gt;ಪತ್ತೆಯಾಗಿರುವ ನಾಲ್ಕು ಜಿನಮೂರ್ತಿ ಶಿಲ್ಪಗಳನ್ನು ಗಟ್ಟಿ ಗ್ರಾನೈಟ್ ಕಲ್ಲಿನಲ್ಲಿ ಅತ್ಯಂತ ಕಲಾತ್ಮಕವಾಗಿ ಕೆತ್ತಲಾಗಿದೆ. ಇವು ಜೈನ ಮುನಿಗಳು ಕೈಗೊಳ್ಳುತ್ತಿದ್ದ ಸಲ್ಲೇಖನ ಪ್ರತಿಜ್ಞೆ ಹಾಗೂ ಪೂಜಾ ಪರಂಪರೆಯನ್ನು ಪ್ರತಿನಿಧಿಸುತ್ತವೆ. ಈ ಪೈಕಿ ಒಂದು ಬೃಹತ್ ಶಿಲ್ಪವು ಸುಮಾರು 7 ಅಡಿ ಎತ್ತರ ಮತ್ತು 3 ಅಡಿ ಅಗಲವಿದ್ದು, ಇದರ ಒಂದು ಸಣ್ಣ ಭಾಗ ಹಾನಿಗೊಳಗಾಗಿದೆ. ಉಳಿದ ಮೂರು ಶಿಲ್ಪಗಳು ತಲಾ 5 ಅಡಿ ಎತ್ತರ ಹಾಗೂ 3 ಅಡಿ ಅಗಲವನ್ನು ಹೊಂದಿವೆ. ನಾಲ್ಕೂ ಶಿಲ್ಪಗಳಲ್ಲಿ ಜಿನ ಮುನಿಗಳನ್ನು ಮೂರು ಹಂತದ ಮೇಲಾವರಣದ (ಮುಕ್ಕೊಡೆ) ಕೆಳಗೆ ಪದ್ಮಾಸನ ಭಂಗಿಯಲ್ಲಿ ಪ್ರಶಾಂತವಾಗಿ ಕುಳಿತಿರುವಂತೆ ಚಿತ್ರಿಸಲಾಗಿದೆ.&lt;/p&gt;&lt;h2&gt;ಸೂರ್ಯ-ಚಂದ್ರ ಹಾಗೂ ಶಾಪಾಶಯದ ಕೆತ್ತನೆ&lt;/h2&gt;&lt;p&gt;ಜಿನಮೂರ್ತಿಗಳ ಮೇಲ್ಭಾಗದ ಎಡಬದಿಯಲ್ಲಿ ಚಂದ್ರ ಮತ್ತು ಬಲಬದಿಯಲ್ಲಿ ಸೂರ್ಯನ ಚಿತ್ರಗಳನ್ನು ಕೆತ್ತಲಾಗಿದ್ದು, ಇವು ಸೂರ್ಯ-ಚಂದ್ರರಿರುವವರೆಗೆ ಈ ಧರ್ಮ ಹಾಗೂ ಕೀರ್ತಿ ಸ್ಥಿರವಾಗಿರಲಿ ಎಂಬುದನ್ನು ಸೂಚಿಸುತ್ತವೆ. ಇನ್ನು ಶಿಲ್ಪದ ತಳಭಾಗದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಈ ಪವಿತ್ರ ಶಿಲ್ಪಗಳಿಗೆ ಹಾನಿ ಮಾಡುವವರು ಅಥವಾ ನಾಶಪಡಿಸುವವರು ಹಸುವನ್ನು ಕೊಂದ ಮಹಾಪಾಪಕ್ಕೆ ಗುರಿಯಾಗುತ್ತಾರೆ ಎಂಬ ಎಚ್ಚರಿಕೆಯ ಸಂಕೇತ ಇದಾಗಿದೆ.&lt;/p&gt;&lt;p&gt;ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ್ ಅವರು ನೀಡಿರುವ ಮಾಹಿತಿಯಂತೆ, ಈ ಶಿಲ್ಪಗಳಲ್ಲಿ ಯಾವುದೇ ರೀತಿಯ ಲಿಪಿ ಅಥವಾ ಅಕ್ಷರಗಳು ಕೆತ್ತಲ್ಪಟ್ಟಿಲ್ಲ. ಆದರೂ, ಇವುಗಳ ಶೈಲಿ, ಕಲಾತ್ಮಕ ಲಕ್ಷಣಗಳು , ಕುರುಹುಗಳು ಇವು ಜೈನ ಧರ್ಮಕ್ಕೆ ಸಂಪೂರ್ಣವಾಗಿ ಸಂಬಂಧಿಸಿದವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಈ ಪ್ರದೇಶದಲ್ಲಿ ಈ ಹಿಂದೆ ಜೈನಧರ್ಮದವರು ವಾಸವಾಗಿದ್ದರು ಎನ್ನುವುದಕ್ಕೆ ಈ ನಾಲ್ಕು ಶಿಲ್ಪಗಳು ಸಾಕ್ಷಿಯಾಗಿ ನಿಂತಿವೆ.&lt;/p&gt;&lt;h2&gt;ಸ್ಥಳೀಯರ ಆರಾಧನೆ ಮತ್ತು ಧಾರ್ಮಿಕ ಪರಿವರ್ತನೆ&lt;/h2&gt;&lt;p&gt;ದೃಶ್ಯಕಲಾ ವಿಭಾಗದ ಡಾ. ಕೃಷ್ಣೇಗೌಡ ಅವರು ತಿಳಿಸಿರುವಂತೆ, ಈ ಭಾಗದಲ್ಲಿ ಹಿಂದೆ ಜೈನ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದರು ಮತ್ತು ಜೈನ ಸಂಸ್ಕೃತಿ ಪ್ರಭಾವಶಾಲಿಯಾಗಿತ್ತು ಎಂಬುದಕ್ಕೆ ಈ ನಾಲ್ಕು ಶಿಲ್ಪಗಳೇ ಜ್ವಲಂತ ಸಾಕ್ಷಿಯಾಗಿವೆ. ಆದರೆ ಕಾಲಕ್ರಮೇಣ ಈ ಶಿಲ್ಪಗಳ ನೈಜ ಐತಿಹಾಸಿಕ ಹಿನ್ನೆಲೆಯ ಅರಿವಿಲ್ಲದೆ, ಸ್ಥಳೀಯ ಗ್ರಾಮಸ್ಥರು ಇವುಗಳನ್ನು ಬೇರೆ ಬೇರೆ ದೇವತೆಗಳ ಹೆಸರಿನಲ್ಲಿ ಪೂಜಿಸುತ್ತಾ ಬಂದಿದ್ದಾರೆ. ಈ ಶಿಲ್ಪಗಳಲ್ಲಿ ಒಂದನ್ನು 'ವೀರಭದ್ರ' ಎಂದು ಕರೆದರೆ, ಉಳಿದ ಮೂರು ಶಿಲ್ಪಗಳನ್ನು 'ಖಾಜಾಪಿರ್', 'ದೊಡ್ಡ ಸಂಕ್ರಮಣ' ಮತ್ತು 'ಸಣ್ಣ ಸಂಕ್ರಮಣ' ಎಂಬ ವಿಭಿನ್ನ ಹೆಸರುಗಳಿಂದ ಆರಾಧಿಸಲಾಗುತ್ತಿದೆ.&lt;/p&gt;&lt;h2&gt;ಸಂಶೋಧನಾ ತಂಡ ಮತ್ತು ಮುಂದಿನ ನಿರೀಕ್ಷೆಗಳು&lt;/h2&gt;&lt;p&gt;ಈ ಮಹತ್ವದ ಪತ್ತೆಯ ಕಾರ್ಯದಲ್ಲಿ ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಗೋವಿಂದ್, ಡಾ. ಕೃಷ್ಣೇಗೌಡ ಅವರೊಂದಿಗೆ ಸಂಶೋಧಕರಾದ ದಾದಾ ಖಲಂದರ್, ಇಸ್ಮಾಯಿಲ್ ಸಿದ್ದಿಕಿ, ಅಶೋಕ್ ನಾಯಕ್ ದಿಡ್ಡಿಗಿ, ಕೆ. ಶಿವರಾಮಪ್ಪ ಹಾಗೂ ಬಂಡ್ರಿ ಪಾಪಯ್ಯ ಭಾಗವಹಿಸಿದ್ದರು. ಕ್ಷೇತ್ರ ಅಧ್ಯಯನದ ಸಮಯದಲ್ಲಿ ಸ್ಥಳೀಯ ವಕೀಲರಾದ ಕೆ. ಲಕ್ಷ್ಮಣ್ ಮತ್ತು ಮಲ್ಲಿಕಾರ್ಜುನ ಅವರು ಸಂಶೋಧನಾ ತಂಡಕ್ಕೆ ಅಗತ್ಯ ಮಾರ್ಗದರ್ಶನ ಹಾಗೂ ನೆರವು ನೀಡಿದರು.&lt;/p&gt;&lt;p&gt;ಈ ಪ್ರದೇಶದಲ್ಲಿ ಪುರಾತತ್ವ ಇಲಾಖೆ ಹಾಗೂ ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಸಮಗ್ರ ಉತ್ಖನನ ಮತ್ತು ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಂಡರೆ, ಬಳ್ಳಾರಿ ಪ್ರದೇಶದಲ್ಲಿ ಜೈನ ಧರ್ಮದ ಹರಡುವಿಕೆ, ರಾಜ್ಯಶ್ರಯ ಮತ್ತು ಧಾರ್ಮಿಕ ಸಹವಾಳದ ಕುರಿತು ಇನ್ನಷ್ಟು ಅಪರೂಪದ ಐತಿಹಾಸಿಕ ಸಾಕ್ಷ್ಯಾಧಾರಗಳು ಬೆಳಕಿಗೆ ಬರಲಿವೆ ಎಂದು ಪ್ರೊ. ಎಚ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/rare-vijayanagara-era-jain-sculptures-discovered-in-kurugodu-kolur-village-in-ballari-gdp/articleshow-ag8iggp"/>
        </item>
        <item>
            <title><![CDATA[‘ಬಿಗ್ ಬಾಸ್‌’ ಅಶ್ವಿನಿ ಗೌಡ ಕಮ್‌ಬ್ಯಾಕ್: ಐದು ವರ್ಷಗಳ ಬಳಿಕ ಹೊಸ ಧಾರಾವಾಹಿಗೆ ಎಂಟ್ರಿ!]]></title>
            <link>https://kannada.asianetnews.com/tv-talk/big-boss-kannada-ashwini-gowda-new-serial-star-suvarna-comeback-san/articleshow-vkpgrm0</link>
            <guid isPermaLink="true">https://kannada.asianetnews.com/tv-talk/big-boss-kannada-ashwini-gowda-new-serial-star-suvarna-comeback-san/articleshow-vkpgrm0</guid>
            <pubDate>Fri, 14 Aug 2026 11:34:05 +0530</pubDate>
            <description><![CDATA[‘ಬಿಗ್‌ ಬಾಸ್‌ ಕನ್ನಡ ಸೀಸನ್‌-12’ರ ರನ್ನರ್‌ ಅಪ್‌ ಅಶ್ವಿನಿ ಗೌಡ, ಇದೀಗ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಐದು ವರ್ಷಗಳ ನಂತರ ಸ್ಟಾರ್‌ ಸುವರ್ಣ ವಾಹಿನಿಯ ಹೊಸ ಧಾರಾವಾಹಿಯಲ್ಲಿ ಪವರ್‌ಫುಲ್ ಪಾತ್ರದ ಮೂಲಕ ಅವರು ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfas3d5an0t7daj8k48t0k2s,imgname-new-project--65--1768814654634.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;&lsquo;ಬಿಗ್&zwnj; ಬಾಸ್&zwnj; ಕನ್ನಡ ಸೀಸನ್&zwnj;-12&rsquo;ರಲ್ಲಿ ರನ್ನರ್&zwnj; ಅಪ್&zwnj; ಪಟ್ಟ ಗೆದ್ದು, ತಮ್ಮ ರಗಡ್&zwnj; ಮತ್ತು ಬೋಲ್ಡ್&zwnj; ಆಟದ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಅಶ್ವಿನಿ ಗೌಡ ಇದೀಗ ಕಿರುತೆರೆಗೆ ಅದ್ಧೂರಿ ಕಮ್&zwnj;ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಬಿಗ್&zwnj; ಬಾಸ್&zwnj; ಶೋ ಮುಕ್ತಾಯದ ನಂತರ ಸಾರ್ವಜನಿಕ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅವರು, ಇದೀಗ ಬಹಳ ದಿನಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.&lt;/p&gt;&lt;p&gt;ಬಿಗ್&zwnj; ಬಾಸ್ ಮನೆಗೆ ಕಾಲಿಟ್ಟ ದಿನದಿಂದಲೂ ಅಶ್ವಿನಿ ಗೌಡ ಪ್ರತಿಯೊಂದು ವಿಚಾರದಲ್ಲೂ ತಮ್ಮದೇ ಆದ ಸ್ಪಷ್ಟ ನಿಲುವು ತೆಗೆದುಕೊಂಡು ಹೈಲೈಟ್ ಆಗಿದ್ದರು. ಶೋನಲ್ಲಿ ಸಹ-ಸ್ಪರ್ಧಿ ಹಾಗೂ ಹಾಸ್ಯನಟ ಗಿಲ್ಲಿ ನಟರಾಜ್&zwnj; ಅವರೊಂದಿಗಿನ ಜಿದ್ದಾಜಿದ್ದಿ, ಮ್ಯುಟೆಂಟ್&zwnj; ರಘು ಜೊತೆಗಿನ ಭರ್ಜರಿ ಡ್ಯಾನ್ಸ್&zwnj;, ಮತ್ತು ರಕ್ಷಿತಾ ಶೆಟ್ಟಿ ಅವರೊಂದಿಗಿನ ಕಿರಿಕ್&zwnj;ಗಳ ನಡುವೆಯೂ ಅವರು 'ಸ್ಟಾಂಡ್&zwnj;ಔಟ್&zwnj;' ಸ್ಪರ್ಧಿಯಾಗಿ ಕಂಟೆಂಟ್ ನೀಡಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.&lt;/p&gt;&lt;h2&gt;&lt;strong&gt;ಲಾಯರ್ ಪಾತ್ರದ ಮೂಲಕ ಧಮಾಕ!&lt;/strong&gt;&lt;/h2&gt;&lt;p&gt;ರಿಯಾಲಿಟಿ ಶೋ ಮುಗಿದ ಬೆನ್ನಲ್ಲೇ ಕಲರ್ಸ್&zwnj; ಕನ್ನಡ ವಾಹಿನಿಯ 'ಭಾರ್ಗವಿ ಎಲ್&zwnj;ಎಲ್&zwnj;ಬಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೋರ್ಟ್&zwnj; ಅಂಗಳದಲ್ಲಿ ಲಾಯರ್&zwnj; ಭಾರ್ಗವಿ ಪಾತ್ರಕ್ಕೆ ಸವಾಲು ಎಸೆಯುವ ಖಡಕ್&zwnj; ಲಾಯರ್ ಪಾತ್ರದಲ್ಲಿ ನಟಿಸಿ, ತಮ್ಮ ಅಭಿನಯದ ಛಾಪು ಮೂಡಿಸಿದ್ದರು.&lt;/p&gt;&lt;p&gt;ಅಶ್ವಿನಿ ಗೌಡ ಅವರು 2021ರಲ್ಲಿ ಸ್ಟಾರ್&zwnj; ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಟ್ ಧಾರಾವಾಹಿ &lsquo;ರಾಧೆ ಶ್ಯಾಮ&rsquo;ದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತನ್ವಿ ರಾವ್ ಹಾಗೂ ಅನೂಪ್&zwnj; ಗೌಡ ಮುಖ್ಯಭೂಮಿಕೆಯಲ್ಲಿದ್ದ ಈ ಧಾರಾವಾಹಿಯಲ್ಲಿ, ನಾಯಕನ ತಾಯಿಯಾಗಿ, ಖಡಕ್&zwnj; ಅತ್ತೆಯಾಗು ಹಳ್ಳಿ ಸಂಪ್ರದಾಯ-ಸಂಸ್ಕೃತಿಗೆ ಒತ್ತು ನೀಡುವ ಪಾತ್ರ ಮಾಡಿದ್ದರು.&lt;/p&gt;&lt;p&gt;ಇದೀಗ ಬರೋಬ್ಬರಿ ಐದು ವರ್ಷಗಳ ನಂತರ ಮತ್ತೆ ಅದೇ ಸ್ಟಾರ್&zwnj; ಸುವರ್ಣ ವಾಹಿನಿಗೆ ಮರಳುತ್ತಿದ್ದು, ಹೊಸ ಧಾರಾವಾಹಿಯಲ್ಲಿ ಮತ್ತೊಮ್ಮೆ ಪವರ್&zwnj;ಫುಲ್ ಹಾಗೂ ಖಡಕ್ ಲುಕ್&zwnj;ನಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಪ್ರಾಜೆಕ್ಟ್ ಕುರಿತು ಕಿರುತೆರೆ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಧಾರಾವಾಹಿ ಹೆಸರು ಹಾಗೂ ಉಳಿದ ವಿವರಗಳ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/big-boss-kannada-ashwini-gowda-new-serial-star-suvarna-comeback-san/articleshow-vkpgrm0"/>
        </item>
        <item>
            <title><![CDATA[ಧರ್ಮದ ಗೋಡೆ ದಾಟಿ ಮದುವೆಯಾದ ಯ್ಯೂಟ್ಯೂಬರ್ ಜೋಡಿ; ರಾಜ್ಯವನ್ನೇ ಎದುರು ಹಾಕಿಕೊಂಡವರ ಜೀವನ ಹೇಗಿದೆ?]]></title>
            <link>https://kannada.asianetnews.com/gallery/tv-talk/karnataka-youtuber-mukaleppa-khwaja-shirahatti-and-gayatri-love-story-marriage-life-z9pwxmr</link>
            <guid isPermaLink="true">https://kannada.asianetnews.com/gallery/tv-talk/karnataka-youtuber-mukaleppa-khwaja-shirahatti-and-gayatri-love-story-marriage-life-z9pwxmr</guid>
            <pubDate>Fri, 14 Aug 2026 11:12:53 +0530</pubDate>
            <description><![CDATA[ರಾಜ್ಯದ ಪ್ರಸಿದ್ಧ ಯ್ಯೂಟ್ಯೂಬರ್ ಜೋಡಿ, ಜಾತಿ-ಧರ್ಮ ಹಾಗೂ ಕುಟುಂಬದ ವಿರೋಧವನ್ನು ಕಟ್ಟಿಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಒಂದು ವರ್ಷದ ನಂತರ ಇದೀಗ ಸುಖ ಸಂಸಾರ ಹಾದಿಗೆ ಮರಳಿದ್ದಾರೆ. ಈ ಸುಂದರ ಯುವ ಜೋಡಿಗೆ ಇದೀಗ ಒಂದು ಮಗುವಾಗಿದ್ದು, ಸುಖ ಸಂಸಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k6wwkzvars5r8pjjxpdfc5ke,imgname-mukaleppa-gayatri-couple-1759758647145.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯದ ಪ್ರಸಿದ್ಧ ಯ್ಯೂಟ್ಯೂಬರ್ ಜೋಡಿ, ಜಾತಿ-ಧರ್ಮ ಹಾಗೂ ಕುಟುಂಬದ ವಿರೋಧವನ್ನು ಕಟ್ಟಿಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಒಂದು ವರ್ಷದ ನಂತರ ಇದೀಗ ಸುಖ ಸಂಸಾರ ಹಾದಿಗೆ ಮರಳಿದ್ದಾರೆ. ಈ ಸುಂದರ ಯುವ ಜೋಡಿಗೆ ಇದೀಗ ಒಂದು ಮಗುವಾಗಿದ್ದು, ಸುಖ ಸಂಸಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ರಾಜ್ಯದ ಪ್ರಸಿದ್ಧ ಯ್ಯೂಟ್ಯೂಬರ್ ಜೋಡಿ, ಜಾತಿ-ಧರ್ಮ ಹಾಗೂ ಕುಟುಂಬದ ವಿರೋಧವನ್ನು ಕಟ್ಟಿಕೊಂಡು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡು ಒಂದು ವರ್ಷದ ನಂತರ ಇದೀಗ ಸುಖ ಸಂಸಾರ ಹಾದಿಗೆ ಮರಳಿದ್ದಾರೆ. ಈ ಸುಂದರ ಯುವ ಜೋಡಿಗೆ ಇದೀಗ ಒಂದು ಮಗುವಾಗಿದ್ದು, ಸುಖ ಸಂಸಾರಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಎಲ್ಲರೂ ಅಪ್ಪ-ಅಮ್ಮ ಹಾಗೂ ಕುಟುಂಬವನ್ನು ಎದುರು ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ. ಜಾತಿ ಅಥವಾ ಧರ್ಮವನ್ನು ಮೀರಿ ಮದುವೆ ಮಾಡಿಕೊಂಡರೆ, ಜೀವನ ಕಟ್ಟಿಕೊಳ್ಳಲು ಹೆಣಗಾಡುತ್ತಾರೆ. ಆದರೆ, ಈ ಯ್ಯೂಟ್ಯೂಬರ್ ಜೋಡಿ ತಮ್ಮ ಧರ್ಮ ಬೇರೆ ಬೇರೆ ಆಗಿದ್ದರೂ ಅಪ್ಪ-ಅಮ್ಮ, ಕುಟುಂಬವನ್ನು ಎದುರು ಹಾಕಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ.&lt;/p&gt;&lt;p&gt;ಇವರಿಬ್ಬರ ಜೋಡಿಗೆ ಧರ್ಮ ವಿರೋಧಿ ಚಟುವಟಿಕೆ ಎಂದು ಇಡೀ ರಾಜ್ಯದ ಜನತೆ ಜನತೆ ಹಾಗೂ ಹಲವು ಸಂಘಟನೆಗಳು ಹೋರಾಟ, ಪ್ರತಿಭಟನೆ ಹಾಗೂ ಮುತ್ತಿಗೆಯನ್ನೂ ಹಾಕಿ ಧಮ್ಕಿ ಹಾಕುತ್ತಾರೆ. ಒಂದು ಹೆಜ್ಜೆ ಮುಂದೆ ಹೋದ ಸಂಘಟನೆಗಳು ಯುವತಿಯ ತಂದೆ-ತಾಯಿಯಿಂದ ಪೊಲೀಸ್ ಠಾಣೆಗೆ ದೂರು ಕೊಡಿಸುತ್ತಾರೆ. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹುಡುಗನನ್ನು ವಶಕ್ಕೆ ಪಡೆದರೆ ಹುಡುಗಿಯನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ಮದುವೆಗೆ ಎದುರಾಯಿತು ಕಂಟಕ, 'ಲವ್ ಜಿಹಾದ್' ಆರೋಪ!&lt;/strong&gt;&lt;/p&gt;&lt;p&gt;ಇಷ್ಟಲ್ಲಾ ನಡೆದ ಮೇಲೂ ಯ್ಯೂಟ್ಯೂಬರ್ ಜೋಡಿ ಮಾತ್ರ ಬೇರೆಯಾಗಲಿಲ್ಲ. ಆರಂಭದಲ್ಲಿ ಯ್ಯೂಟ್ಯೂಬ್&zwnj;ಗೆ ವಿಡಿಯೋ ಮಾಡುವ ನೆಪದಲ್ಲಿ ಒಂದಾದ ಜೋಡಿ ಇದೀಗ ದಾಂಪತ್ಯ ಜೀವನದಲ್ಲೂ ಒಂದಾಗಿದ್ದಾರೆ. ಮದುವೆಯಾಗಿ ವರ್ಷ ತುಂಬುವುದರೊಳಗೆ ಸುಖ ಸಂಸಾರವನ್ನೂ ಮಾಡಿಕೊಂಡು ಇಬ್ಬರೂ ತಮ್ಮನ್ನಾಡಿಕೊಂಡವರಿಗೆ ಒಳ್ಳೆಯ ಜೀವನದ ಪಾಠವನ್ನೇ ಕಲಿಸಿದ್ದಾರೆ. ಅನ್ಯ ಧರ್ಮೀಯರಾದರೂ ಯಾರದ್ದೇ ಆಚರಣೆಗೂ ಇಲ್ಲ ನಿರ್ಬಂಧವಿಲ್ಲ ಎಂದು ಇಬ್ಬರ ಧರ್ಮಗಳನ್ನು ಆಚರಣೆ ಮಾಡಿಕೊಂಡು ಸಂಸಾರ ಬಂಡಿ ಸಾಗಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಎಲ್ಲವನ್ನೂ ಮೀರಿ ಆರಂಭವಾಯ್ತು ಸುಖ ಸಂಸಾರ&lt;/strong&gt;&lt;/p&gt;&lt;p&gt;ಅಷ್ಟಕ್ಕೂ ಈವರೆಗೆ ಹೇಳಿದ ಕಥೆ ಯಾರದ್ದೆಂದು ಬಹುತೇಕರಿಗೆ ಅರ್ಥವಾಗಿರಬೇಕು. ಅದೇ ಉತ್ತರ ಕರ್ನಾಟಕದ ಯ್ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕುಳೆಪ್ಪ ಹಾಗೂ ಗಾಯತ್ರಿ ಅವರು ಜಾತಿ, ಧರ್ಮ ಹಾಗೂ ಕುಟುಂಬವನ್ನು ವಿರೋಧಿಸಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ಕ್ವಾಜಾ ಅವರು ಮುಸ್ಲಿಂ ಧರ್ಮೀಯರಾಗಿದ್ದರೆ, ಗಾಯತ್ರಿ ಅವರು ಹಿಂದೂ ಸಮುದಾಯದವರಾಗಿದ್ದರು.&lt;/p&gt;&lt;img&gt;&lt;p&gt;ಇಬ್ಬರೂ ಯ್ಯೂಟ್ಯೂಬರ್&zwnj;ಗಳಾಗಿದ್ದು, ವಿಡಿಯೋ ಮಾಡುತ್ತಲೇ ಪ್ರೀತಿ ಅಂಕುರಿಸಿ ಮದುವೆ ಮಾಡಿಕೊಂಡಿದ್ದರು. ಇವರ ಮದುವೆಯನ್ನು ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಲವ್ ಜಿ*ಹಾದ್ ಎಂದು ಆರೋಪ ಮಾಡಿ, ಪ್ರತಿಭಟನೆಗಳನ್ನು ನಡೆಸಿದ್ದರು. ಜೊತೆಗೆ, ಅವರ ಮದುವೆಯ ಡಿಜಿಸ್ಟರ್ ರದ್ದತಿ ಮಾಡುವಂತೆಯೂ ಆಗ್ರಹ ಮಾಡಲಾಗಿತ್ತು. ಕೊನೆಗೆ ಇಬ್ಬರೂ ಮೇಜರ್ ಆಗಿದ್ದರಿಂದ ಯಾರೂ ಕೂಡ ಅವರನ್ನು ಏನೂ ಮಾಡಲಾಗಲಿಲ್ಲ.&lt;/p&gt;&lt;img&gt;&lt;p&gt;&lt;strong&gt;ಸೀಮಂತ ಶಾಸ್ತ್ರದ ಮೂಲಕ ಲಭಿಸಿತು ಕುಟುಂಬದ ಸಮ್ಮತಿ!&lt;/strong&gt;&lt;/p&gt;&lt;p&gt;ಕ್ವಾಜಾ ಅವರ ಮನೆಗೆ ಗಾಯತ್ರಿ ಅವರನ್ನು ಮನೆಗೆ ತುಂಬಿಸಿಕೊಂಡು ತಮ್ಮ ಸಂಸಾರ ಜೀವನ ಆರಂಭಿಸಿದರು. ಈ ವೇಳೆ ನಮ್ಮಿಬ್ಬರನ್ನು ಜೀವನ ಮಾಡಲು ನಮ್ಮ ಪಾಡಿಗೆ ಬಿಡಿ ಎಂದು ದಂಪತಿ ಮನವಿ ಮಾಡಿಕೊಂಡಿದ್ದರು. ಇದಾದ ನಂತರ ತಕ್ಕಮಟ್ಟಿಗೆ ಅವರ ವಿರುದ್ಧ ಯಾವುದೇ ಚಟುವಟಿಕೆಗಳು ನಡೆಯಲಿಲ್ಲ. ದಿನ ಕಳೆದಂತೆ ಯುವತಿ ಗಾಯತ್ರಿ ಅವರ ಮನೆಯಲ್ಲೂ ಇವರಿಬ್ಬರ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಗರ್ಭಿಣಿ ಆಗಿದ್ದಕ್ಕೆ ಹಿಂದೂ ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಕಾರ್ಯಕ್ರಮವನ್ನೂ ಮಾಡಲಾಗಿತ್ತು. ಈ ವೇಳೆ ಕ್ವಾಜಾ ಅವರಿಗೆ ಹಣೆಗೆ ಕುಂಕುಮ ಇಟ್ಟು ಅಳಿಯನಿಗೆ ಸಲ್ಲಬೇಕಾದ ಗೌರವನ್ನೂ ನೀಡಲಾಗಿತ್ತು.&lt;/p&gt;&lt;p&gt;ಕಳೆದೊಂದು ವಾರದ ಹಿಂದೆ ಕ್ವಾಜಾ ಹಾಗೂ ಗಾಯತ್ರಿ ದಂಪತಿಗೆ ಮಗು ಜನಿಸಿದೆ. ಈ ಬಗ್ಗೆ ಅಧಿಕೃತವಾಗಿ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/karnataka-youtuber-mukaleppa-khwaja-shirahatti-and-gayatri-love-story-marriage-life-z9pwxmr"/>
        </item>
        <item>
            <title><![CDATA[ಕುಬೇರ+ಮಹಾಲಕ್ಷ್ಮಿ+ರಾಜಯೋಗ, ಈ 3 ರಾಶಿಗಳಿಗೆ ಒಟ್ಟಿಗೆ ಒಲಿಯಲಿದೆ ತ್ರಿವಳಿ ಅದೃಷ್ಟ]]></title>
            <link>https://kannada.asianetnews.com/gallery/astrology/three-zodiac-signs-to-gain-wealth-and-success-suh-hilzyv2</link>
            <guid isPermaLink="true">https://kannada.asianetnews.com/gallery/astrology/three-zodiac-signs-to-gain-wealth-and-success-suh-hilzyv2</guid>
            <pubDate>Fri, 14 Aug 2026 10:51:50 +0530</pubDate>
            <description><![CDATA[ಜ್ಯೋತಿಷ್ಯದ ಪ್ರಕಾರ, ಕುಬೇರನ ಸಂಪತ್ತು, ಮಹಾಲಕ್ಷ್ಮಿಯ ಕೃಪೆ ಮತ್ತು ರಾಜಯೋಗದ ಅದೃಷ್ಟ, ಈ ಮೂರು ಶಕ್ತಿಗಳು ಒಟ್ಟಿಗೆ ಕೈ ಹಿಡಿಯಲಿರುವ 3 ರಾಶಿಗಳ ಬಗ್ಗೆ ಕುತೂಹಲಕಾರಿ ಭವಿಷ್ಯವಾಣಿಗಳು ಹೊರಬಿದ್ದಿವೆ. ಈ ರಾಶಿಗಳಿಗೆ ಸುವರ್ಣಕಾಲ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzzb4pe8420ykhxks1prb957,imgname-three-zodiac-signs-to-gain-wealth-and-success-1786684529096.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದ ಪ್ರಕಾರ, ಕುಬೇರನ ಸಂಪತ್ತು, ಮಹಾಲಕ್ಷ್ಮಿಯ ಕೃಪೆ ಮತ್ತು ರಾಜಯೋಗದ ಅದೃಷ್ಟ, ಈ ಮೂರು ಶಕ್ತಿಗಳು ಒಟ್ಟಿಗೆ ಕೈ ಹಿಡಿಯಲಿರುವ 3 ರಾಶಿಗಳ ಬಗ್ಗೆ ಕುತೂಹಲಕಾರಿ ಭವಿಷ್ಯವಾಣಿಗಳು ಹೊರಬಿದ್ದಿವೆ. ಈ ರಾಶಿಗಳಿಗೆ ಸುವರ್ಣಕಾಲ ಆರಂಭವಾಗಲಿದೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಕೆಲವು ಗ್ರಹಗಳ ಸ್ಥಾನ ಮತ್ತು ಯೋಗಗಳು ನಿರ್ದಿಷ್ಟ ರಾಶಿಗಳಿಗೆ ಒಳ್ಳೆ ಫಲ ಕೊಡುತ್ತವೆ. ಅದರಲ್ಲೂ ಸಂಪತ್ತಿನ ಅಧಿಪತಿ ಕುಬೇರ, ಐಶ್ವರ್ಯದ ದೇವತೆ ಮಹಾಲಕ್ಷ್ಮಿ, ಮತ್ತು ರಾಜಯೋಗ ತರುವ ಗ್ರಹಗಳ ಬೆಂಬಲ, ಈ ಮೂರೂ ಒಂದೇ ಸಮಯದಲ್ಲಿ ಅನುಕೂಲಕರವಾದರೆ, ಜೀವನದಲ್ಲಿ ಅನಿರೀಕ್ಷಿತ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಸದ್ಯದ ಗ್ರಹಗಳ ಸ್ಥಿತಿ ಪ್ರಕಾರ, 3 ರಾಶಿಯವರಿಗೆ ಹಣದ ಹರಿವು, ಉದ್ಯೋಗದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಮತ್ತು ಹೊಸ ಅವಕಾಶಗಳು ಹೆಚ್ಚಾಗಲಿವೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.&lt;/p&gt;&lt;img&gt;&lt;p&gt;ವೃಷಭ ರಾಶಿಯವರಿಗೆ ಈ ಸಮಯವು ಆರ್ಥಿಕವಾಗಿ ಬಹಳ ಮುಖ್ಯವಾಗಿರಲಿದೆ. ಬಹಳ ದಿನಗಳಿಂದ ಬರಬೇಕಿದ್ದ ಹಣ ಕೈ ಸೇರುವ ಸಾಧ್ಯತೆಗಳಿವೆ. ವ್ಯಾಪಾರ ಅಥವಾ ಉದ್ಯಮದಲ್ಲಿ ಹೊಸ ಸಂಪರ್ಕಗಳು ಸಿಕ್ಕಿ, ಅನಿರೀಕ್ಷಿತ ಆದಾಯದ ಮೂಲಗಳು ಕೂಡ ಸೃಷ್ಟಿಯಾಗಬಹುದು. ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಸಿಗುವುದರ ಜೊತೆಗೆ, ಅದಕ್ಕೆ ತಕ್ಕ ಮನ್ನಣೆ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ. ಆಸ್ತಿ, ಹೂಡಿಕೆ ಅಥವಾ ಉಳಿತಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರಿಗೂ ಇದು ಒಳ್ಳೆ ಸಮಯ. ಇದರಿಂದ ವೃಷಭ ರಾಶಿಯವರಿಗೆ ಕುಬೇರನ ಸಂಪತ್ತು, ಮಹಾಲಕ್ಷ್ಮಿಯ ಕೃಪೆ ಮತ್ತು ರಾಜಯೋಗದ ಪ್ರಗತಿ, ಈ ಮೂರು ಫಲಗಳು ಒಟ್ಟಿಗೆ ಸಿಗುವ ಕಾಲ ಇದಾಗಿದೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ಈ ಸಮಯವು ಹಣ ಮಾತ್ರವಲ್ಲದೆ ಅಧಿಕಾರ, ಪದವಿ ಮತ್ತು ಸಮಾಜದಲ್ಲಿ ಗೌರವವನ್ನು ತಂದುಕೊಡಲಿದೆ. ಕೆಲಸ ಮಾಡುವ ಜಾಗದಲ್ಲಿ ನಿಮ್ಮ ನಿಲುಮೆ ಮೇಲಧಿಕಾರಿಗಳ ಗಮನ ಸೆಳೆಯಬಹುದು. ಬಹಳ ದಿನಗಳಿಂದ ಕಾಯುತ್ತಿದ್ದ ಬಡ್ತಿ ಅಥವಾ ಮುಖ್ಯವಾದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಸ್ವಂತ ಉದ್ಯಮ ಮಾಡುವವರು ಹೊಸ ಗ್ರಾಹಕರು ಅಥವಾ ಪ್ರಮುಖ ಪಾಲುದಾರಿಕೆ ಮೂಲಕ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಈ ಹಿಂದೆ ನಿಂತುಹೋಗಿದ್ದ ಕೆಲವು ಪ್ರಯತ್ನಗಳು ಮತ್ತೆ ವೇಗ ಪಡೆಯಬಹುದು. ಸಿಂಹ ರಾಶಿಯವರಿಗೆ &quot;ಹಣ + ಪದವಿ + ಕೀರ್ತಿ&quot; ಈ ಮೂರು ಪ್ರಮುಖ ಅಂಶಗಳು ಒಟ್ಟಿಗೆ ಕೆಲಸ ಮಾಡುವ ಸಮಯ ಇದಾಗಿರಬಹುದು.&lt;/p&gt;&lt;img&gt;&lt;p&gt;ಧನು ರಾಶಿಯವರಿಗೆ ಈ ಸಮಯದಲ್ಲಿ ಅದೃಷ್ಟದ ಬೆಂಬಲ ಹೆಚ್ಚಾಗಲಿದೆ. ಇಲ್ಲಿಯವರೆಗೆ ಪ್ರಯತ್ನಿಸಿದರೂ ಸಿಗದಿದ್ದ ಅವಕಾಶಗಳು ಇದ್ದಕ್ಕಿದ್ದಂತೆ ಸಿಗಬಹುದು. ಕೆಲಸ, ಉದ್ಯೋಗ, ವಿದೇಶಿ ಅವಕಾಶಗಳು, ಹೊಸ ಆದಾಯದ ಮೂಲಗಳಂತಹ ವಿಷಯಗಳಲ್ಲಿ ಪ್ರಗತಿ ಕಾಣಬಹುದು. ವಿಶೇಷವಾಗಿ ದೂರ ಪ್ರಯಾಣ ಅಥವಾ ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಇರುವವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ನಂಬಿಕೆಗಳು ಹೇಳುತ್ತವೆ. ಆರ್ಥಿಕವಾಗಿಯೂ ಹಂತ ಹಂತವಾಗಿ ಸುಧಾರಣೆ ಕಾಣಬಹುದು. ಉಳಿತಾಯ ಹೆಚ್ಚಿಸಲು ಅವಕಾಶ ಸಿಗುವುದರ ಜೊತೆಗೆ, ಕುಟುಂಬಕ್ಕೆ ಬೇಕಾದ ಪ್ರಮುಖ ವಸ್ತುಗಳನ್ನು ಖರೀದಿಸುವ சூழலும் ಬರಬಹುದು. ಧನು ರಾಶಿಯವರಿಗೆ ಈ ಸಮಯ ಅದೃಷ್ಟ, ಸಂಪತ್ತು ಮತ್ತು ಹೊಸ ಅವಕಾಶಗಳನ್ನು ಒಟ್ಟಿಗೆ ತರಲಿದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/three-zodiac-signs-to-gain-wealth-and-success-suh-hilzyv2"/>
        </item>
        <item>
            <title><![CDATA[ಶ್ರೀಲಂಕಾ ಕ್ಯಾಪ್ಟನ್‌ಗೆ ಕೋಚ್ ಆಗಿದ್ದ ವ್ಯಕ್ತಿಯ ದುರಂತ ಸಾವು! ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು?]]></title>
            <link>https://kannada.asianetnews.com/cricket-sports/sri-lankan-cricket-coach-sumith-fernando-dies-after-dispute-over-drinking-water-at-academy-kvn/articleshow-1nwfy72</link>
            <guid isPermaLink="true">https://kannada.asianetnews.com/cricket-sports/sri-lankan-cricket-coach-sumith-fernando-dies-after-dispute-over-drinking-water-at-academy-kvn/articleshow-1nwfy72</guid>
            <pubDate>Fri, 14 Aug 2026 10:46:01 +0530</pubDate>
            <description><![CDATA[ಕುಡಿಯುವ ನೀರಿನ ವಿಚಾರದಲ್ಲಿ ನಡೆದ ಜಗಳದಲ್ಲಿ ಮಧ್ಯಪ್ರವೇಶಿಸಿದ ಶ್ರೀಲಂಕಾದ 62 ವರ್ಷದ ಕ್ರಿಕೆಟ್ ಕೋಚ್ ಸುಮಿತ್ ಫೆರ್ನಾಂಡೊ ಗಾಯಗೊಂಡು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರನನ್ನು ಬಂಧಿಸಲಾಗಿದ್ದು, ಫೆರ್ನಾಂಡೊ ಅವರ ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01hx5ygae736f3fb1khydnevw8,imgname-cricket-ball-1714965457351.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಲಂಬೊ: ಕುಡಿಯುವ ನೀರಿನ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಶ್ರೀಲಂಕಾದ 62 ವರ್ಷದ ಕೋಚ್&zwnj; ಸುಮಿತ್&zwnj; ಫೆರ್ನಾಂಡೊ ನಿಧನರಾಗಿದ್ದಾರೆ. ಶ್ರೀಲಂಕಾ ಏಕದಿನ ತಂಡದ ನಾಯಕ ಕುಸಾಲ್ ಮೆಂಡಿಸ್ ಸೇರಿದಂತೆ ಹಲವು ಯುವ ಕ್ರಿಕೆಟಿಗರಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಸುಮಿತ್&zwnj; ಫೆರ್ನಾಂಡೊ ಮೈದಾನದಲ್ಲಿಯೇ ದುರಂತ ಸಾವು ಕಂಡಿದ್ದಾರೆ.&lt;/p&gt;&lt;h2&gt;&lt;strong&gt;ಅಷ್ಟಕ್ಕೂ ಆಗಿದ್ದೇನು?&lt;/strong&gt;&lt;/h2&gt;&lt;p&gt;ಆಗಸ್ಟ್&zwnj; 8ರಂದು ಅಕಾಡೆಮಿಯೊಂದರಲ್ಲಿ ಆಟಗಾರರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ನೀರಿನ ವಿಚಾರದಲ್ಲಿ ಮಾತಿನ ಘರ್ಷಣೆ ನಡೆದಿದೆ. ಈ ವೇಳೆ ಸುಮಿತ್&zwnj; ಮಧ್ಯಪ್ರವೇಶಿಸಿದ್ದಾರೆ. ಆದರೆ ಗಲಾಟೆಯಲ್ಲಿ ಅವರಿಗೆ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಎರಡು ದಿನಗಳ ಬಳಿಕ ಅಂದರೆ ಆಗಸ್ಟ್&zwnj; 10ರ ಮಂಗಳವಾರ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 17 ವರ್ಷದ ಆಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸಿದ ಕೊಲಂಬೊ ಮ್ಯಾಜಿಸ್ಟೇಟ್ ಕೋರ್ಟ್ ಆಗಸ್ಟ್&zwnj; 11ರಂದು ಅಪ್ರಾಪ್ತ ಆಗಿರುವುದರಿಂದ ಆತನನ್ನು ಬಾಲ ಮಂದಿರಕ್ಕೆ ಸೇರಿಸಲಾಗಿದೆ.&lt;/p&gt;&lt;p&gt;ಪೊಲೀಸರ ಪ್ರಕಾರ, ವಾಗ್ವಾದದ ವೇಳೆ ಫರ್ನಾಂಡೋ ಆಟಗಾರನೊಬ್ಬನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆಗ 17 ವರ್ಷದ ಆ ಆಟಗಾರ ಆತನಿಗೆ ಹೊಡೆದಿದ್ದಾನೆ ಎಂದು ವರದಿಯಾಗಿದೆ. ನಂತರ ತೀವ್ರವಾಗಿ ಗಾಯಗೊಂಡ ಫರ್ನಾಂಡೋ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.&lt;/p&gt;&lt;h3&gt;&lt;strong&gt;ಸಾವಿನ ತನಿಖೆ ಆರಂಭಿಸಿರುವ ಪೊಲೀಸರು&lt;/strong&gt;&lt;/h3&gt;&lt;p&gt;ಆದಾಗ್ಯೂ, ಅವರ ಸಾವಿಗೆ ಸಂಬಂಧಿಸಿದ ಸಂದರ್ಭಗಳ ಕುರಿತು ತನಿಖೆ ನಡೆಯುತ್ತಿದೆ. ಫರ್ನಾಂಡೋ ಅವರಿಗೆ ಮೊದಲೇ ಹೃದಯ ಸಂಬಂಧಿ ಸಮಸ್ಯೆ ಇತ್ತೆಂದು ವೈದ್ಯಕೀಯ ದಾಖಲೆಗಳು ಸೂಚಿಸಿವೆ; ಹೀಗಾಗಿ, ಅವರ ಸಾವಿಗೆ ಆರೋಪಿತ ಹಲ್ಲೆ ಕಾರಣವೋ ಅಥವಾ ಆಂತರಿಕ ವೈದ್ಯಕೀಯ ಸಮಸ್ಯೆಯೋ ಎಂಬುದನ್ನು ನಿರ್ಧರಿಸಲು ಅಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ನ್ಯಾಯಾಂಗ ವೈದ್ಯಾಧಿಕಾರಿಯು ನಿರ್ದಿಷ್ಟ ತೀರ್ಮಾನಕ್ಕೆ ಬರದೇ 'ಮುಕ್ತ ತೀರ್ಪು' (open verdict) ನೀಡಿದ್ದಾರೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಶದ ಮಾದರಿಗಳನ್ನು ಸರ್ಕಾರಿ ವಿಶ್ಲೇಷಕರಿಗೆ ಕಳುಹಿಸಲಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/sri-lankan-cricket-coach-sumith-fernando-dies-after-dispute-over-drinking-water-at-academy-kvn/articleshow-1nwfy72"/>
        </item>
        <item>
            <title><![CDATA[ನಿಮಗೆ ತಾಕತ್ ಇದ್ದರೆ ಆರೆಸ್ಸೆಸ್ ಬ್ಯಾನ್ ಮಾಡಿ: ಪ್ರಿಯಾಂಕ್ ಖರ್ಗೆಗೆ ವಿಜಯೇಂದ್ರ ನೇರ ಸವಾಲು!]]></title>
            <link>https://kannada.asianetnews.com/politics/ban-rss-if-you-have-the-guts-karnataka-bjp-state-president-vijayendra-challenge-to-priyank-kharge-rav/articleshow-uibqlf4</link>
            <guid isPermaLink="true">https://kannada.asianetnews.com/politics/ban-rss-if-you-have-the-guts-karnataka-bjp-state-president-vijayendra-challenge-to-priyank-kharge-rav/articleshow-uibqlf4</guid>
            <pubDate>Fri, 14 Aug 2026 10:30:22 +0530</pubDate>
            <description><![CDATA[ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಮಹಿಳೆಯರಿಗೆ ಮಾಡಿದ ಅವಮಾನ. ಆರೆಸ್ಸೆಸ್ ಬ್ಯಾನ್ ಮಾಡುವ ತಾಕತ್ತಿದ್ದರೆ ಮಾಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸವಾಲು ಹಾಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz9vdd3vrf8090pyfqdrs37,imgname-----------------------2026-08-14t102215.347-1786683176355.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು(ಆ.14)&lt;/strong&gt;: ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರಿಲ್ಲದೆ ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತಿದೆ. ರಾಜ್ಯದ ತಾಯಂದಿರಿಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;ಮಹಿಳಾ ಮೀಸಲಾತಿ ವಿರೋಧಿ ಕಾಂಗ್ರೆಸ್&lt;/h2&gt;&lt;p&gt;ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲ, ದೇಶದಲ್ಲಿ ಶೇ.50 ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರಿ ಸಮಪಾಲು ನೀಡಬೇಕು. ಪ್ರಧಾನಿ ಮೋದಿಯವರು ಮಹಿಳೆಯರಿಗೆ ಮೀಸಲಾತಿ ಕೊಡಲು ಹೋದರೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿದರು. ಇಲ್ಲೀಗ ಮಹಿಳೆಯರಿಗೆ ಸಚಿವ ಸ್ಥಾನ ಇಲ್ಲ, ಮೀಸಲಾತಿ ನೀಡಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ಸಚಿವ ಸಂಪುಟ ವಿಸ್ತರಣೆ ವೇಳೆ ಮಹಿಳೆಯ ಹೆಸರನ್ನು ಘೋಷಣೆ ಮಾಡಿ ಕೊನೆಗೆ ಕೈಬಿಟ್ಟಿದ್ದಾರೆ. ಆ ಮೂಲಕ ರಾಜ್ಯದ ಮಹಿಳೆಯರಿಗೆ ಅಪಮಾನ ಮಾಡುವ ಕೆಲಸ ಸಿಎಂ ಡಿಕೆ ಶಿವಕುಮಾರ್ ಮಾಡಿದ್ದಾರೆ. ಮಹಿಳೆಯರಿಲ್ಲದೆ ಸಚಿವ ಸಂಪುಟ ಸಭೆ ನಡೆತಿರೋದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದರು.&lt;/p&gt;&lt;h3&gt;ನಿಮಗೆ ತಾಕತ್ ಇದ್ರೆ ಆರೆಸ್ಸೆಸ್ ಬ್ಯಾನ್ ಮಾಡಿ&lt;/h3&gt;&lt;p&gt;ಇನ್ನು ಆರೆಸ್ಸೆಸ್ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಹೇಳಿಕೆ ಪ್ರಸ್ತಾಪಿಸಿದ ವಿಜಯೇಂದ್ರ ಅವರು, ಸಿಎಂ ಆಗಲಿ, ಪ್ರಿಯಾಂಕ್ ಖರ್ಗೆ ಅವರಿಗೆ ನಾನು ನೇರವಾಗಿ ಸವಾಲು ಹಾಕುತ್ತೇನೆ. ನಿಮಗೆ ತಾಕತ್ತು ಇದ್ರೆ ಆರೆಸ್ಸೆಸ್ ಬ್ಯಾನ್&zwnj; ಮಾಡಿ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.&lt;/p&gt;&lt;p&gt;ಪ್ರಿಯಾಂಕ್ ಖರ್ಗೆ ತಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆಯಾಗಲಿ, ತಮ್ಮ ಇಲಾಖೆಗೆ ಸಂಬಂಧಿಸಿದ ಬಗ್ಗೆಯಾಗಲಿ ಚಿಂತಿಸುತ್ತಿಲ್ಲ. ದಿನ ಬೆಳಗಾದರೆ ಆರೆಸ್ಸೆಸ್ ಬಗ್ಗೆಯೇ ಮಾತಾಡ್ತಾರೆ. ಪ್ರಿಯಾಂಕ್ ಖರ್ಗೆ ಅವರಿಗೆ ಆರೆಸ್ಸೆಸ್ ಬಗ್ಗೆ ಮಾತಾಡುವ ಚಟ ಇದ್ದರೆ ಇದಕ್ಕೆ ಒಂದು ಖಾತೆ ತೆಗೆದುಕೊಳ್ಳಲಿ ಎಂದು ಲೇವಡಿ ಮಾಡಿದರು.&lt;/p&gt;&lt;p&gt;ಯಾವ ಆಧಾರದ ಮೇಲೆ ಆರೆಸ್ಸೆಸ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಅಂತಾರೆ? ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಕ್ಷೇತ್ರ ಯಾವುದು ಡೆವೆಲಪ್ ಆಗಿದೆ? ಶಿಕ್ಷಣ, ಮೂಲಭೂತ ಸೌಕರ್ಯ? ಕಾನೂನು ಸುವ್ಯವಸ್ಥೆ? ಯಾವುದರಲ್ಲೂ ಉದ್ದಾರವಾಗಿಲ್ಲ. ಅಲ್ಲಿನ ಅಭಿವೃದ್ಧಿ ಬಗ್ಗೆ ಯೋಚನೆ ಇಲ್ಲ. ಕೇವಲ ಆರೆಸ್ಸೆಸ್ ಬಗ್ಗೆ ಮಾತು. ಆರೆಸ್ಸೆಸ್&zwnj; ಬ್ಯಾನ್ ಮಾಡಲು ಪ್ರಿಯಾಂಕ್ ಖರ್ಗೆ ಅವರ ತಂದೆ ಕೇಂದ್ರದಲ್ಲಿ ಗೃಹಸಚಿವರಿದ್ದಾಗಲೇ ಸಾಧ್ಯವಾಗಿಲ್ಲ. ಇನ್ನು ಇವರು ಬ್ಯಾನ್ ಮಾಡಲು ಆಗುತ್ತದೆಯೇ? ತಾಕತ್ತು ಇದ್ದರೆ ಆರೆಸ್ಸೆಸ್ ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/ban-rss-if-you-have-the-guts-karnataka-bjp-state-president-vijayendra-challenge-to-priyank-kharge-rav/articleshow-uibqlf4"/>
        </item>
        <item>
            <title><![CDATA[ಇಂದು ಅಗಸ್ಟ್ 14 ಬಳಿಕ ಅದ್ಭುತ, ಈ 5 ನಕ್ಷತ್ರದವರಿಗೆ ಸಕಲ ಸೌಭಾಗ್ಯ, ಮುಟ್ಟಿದ್ದೆಲ್ಲಾ ಚಿನ್ನ]]></title>
            <link>https://kannada.asianetnews.com/gallery/astrology/today-is-august-14th-five-star-signs-to-gain-immense-fortune-suh-1igah5a</link>
            <guid isPermaLink="true">https://kannada.asianetnews.com/gallery/astrology/today-is-august-14th-five-star-signs-to-gain-immense-fortune-suh-1igah5a</guid>
            <pubDate>Fri, 14 Aug 2026 10:26:08 +0530</pubDate>
            <description><![CDATA[ನವಗ್ರಹಗಳ ಶುಭ ಸಂಚಾರದಿಂದಾಗಿ ಐದು ನಕ್ಷತ್ರದವರಿಗೆ ಸುವರ್ಣಯುಗ ಆರಂಭವಾಗಲಿದೆ. ಈ ಸಮಯದಲ್ಲಿ ವೃತ್ತಿ ಬೆಳವಣಿಗೆ, ಸಾಲ ಪರಿಹಾರ, ಬಡ್ತಿ ಮತ್ತು ಸಕಲ ಸೌಭಾಗ್ಯಗಳು ಲಭಿಸಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzawmn9qshp97e79yejyx8nh,imgname-dwi-pushkar-yoga-brings-fortune-to-six-zodiac-signs-1785998234935.jpg" type="image/jpeg" height="390" width="690"/>
            <content:encoded><![CDATA[&lt;p&gt;ನವಗ್ರಹಗಳ ಶುಭ ಸಂಚಾರದಿಂದಾಗಿ ಐದು ನಕ್ಷತ್ರದವರಿಗೆ ಸುವರ್ಣಯುಗ ಆರಂಭವಾಗಲಿದೆ. ಈ ಸಮಯದಲ್ಲಿ ವೃತ್ತಿ ಬೆಳವಣಿಗೆ, ಸಾಲ ಪರಿಹಾರ, ಬಡ್ತಿ ಮತ್ತು ಸಕಲ ಸೌಭಾಗ್ಯಗಳು ಲಭಿಸಲಿವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.&lt;/p&gt;&lt;img&gt;&lt;p&gt;ಪವಿತ್ರ ತಿಂಗಳು, ಈ ಮಾಸದಲ್ಲಿ ದಿನದಂದು ಪರಾಶಕ್ತಿ ಉಮಾದೇವಿಯಾಗಿ ಅವತರಿಸಿದಳು ಮತ್ತು ಶ್ರೀವಿಲ್ಲಿಪುತ್ತೂರಿನಲ್ಲಿ ಗೋದಾ ಆಂಡಾಳ್ ಜನಿಸಿದಳು ಎಂಬ ನಂಬಿಕೆ ಇದೆ. ಹಾಗಾಗಿ ಈ ದಿನ ಬಹಳ ವಿಶೇಷ. ಈ ಮಂಗಳಕರ ದಿನದ ನಂತರ, ನವಗ್ರಹಗಳ ಶುಭ ದೃಷ್ಟಿ ಹಾಗೂ ಸಂಚಾರದಿಂದಾಗಿ ಕೆಲವು ನಿರ್ದಿಷ್ಟ ನಕ್ಷತ್ರದವರಿಗೆ ಸುವರ್ಣಯುಗ ಆರಂಭವಾಗಲಿದೆ.&lt;/p&gt;&lt;img&gt;ಕೇತು ಗ್ರಹದ ಆಧಿಪತ್ಯ ಹೊಂದಿರುವ ಅಶ್ವಿನಿ ನಕ್ಷತ್ರದವರಿಗೆ ಆಡಿ ಪೂರಂ ನಂತರ ಶುಭ ಯೋಗ ಆರಂಭವಾಗುತ್ತದೆ. ಇಷ್ಟು ದಿನ ನಿಮ್ಮ ನೆಮ್ಮದಿ ಕೆಡಿಸಿದ್ದ ಹಣದ ಕೊರತೆ ಮತ್ತು ಆರ್ಥಿಕ ಸಂಕಷ್ಟಗಳು ಸಂಪೂರ್ಣವಾಗಿ ದೂರವಾಗಲಿವೆ. ಅನಿರೀಕ್ಷಿತ ಮೂಲಗಳಿಂದ ಹಠಾತ್ ಧನಾಗಮನವಾಗಿ ನಿಮ್ಮ ಕೈಯಲ್ಲಿ ಹಣ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸ್ಥಗಿತಗೊಂಡಿದ್ದ ಯೋಜನೆಗಳು ಮತ್ತೆ ವೇಗ ಪಡೆದು, ಹೊಸ ಹೂಡಿಕೆಗಳಿಂದ ಭಾರಿ ಲಾಭ ತಂದುಕೊಡಲಿವೆ. ಹಳೆಯ ಸಾಲಗಳೆಲ್ಲ ಒಂದೊಂದಾಗಿ ತೀರಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಸಮಾಜ ಮತ್ತು ಸಂಬಂಧಿಕರ ನಡುವೆ ನಿಮ್ಮ ಗೌರವ ಮತ್ತು ಸ್ಥಾನಮಾನ ಹೆಚ್ಚಾಗಲಿದೆ.&lt;img&gt;ಮಂಗಳ ಗ್ರಹವನ್ನು ಅಧಿಪತಿಯಾಗಿ ಹೊಂದಿರುವ ಮೃಗಶಿರ ನಕ್ಷತ್ರದವರಿಗೆ ಆಡಿ ಪೂರಂ ನಂತರ ಭೂಮಿಕಾರಕನ ಅನುಗ್ರಹ ಸಂಪೂರ್ಣವಾಗಿ ಸಿಗಲಿದೆ. ಇದರಿಂದಾಗಿ, ಬಹಳ ದಿನಗಳಿಂದ ಮುಂದೂಡಲ್ಪಟ್ಟಿದ್ದ ಮದುವೆ, ಸಂತಾನ ಭಾಗ್ಯದಂತಹ ಶುಭ ಕಾರ್ಯಗಳು ನಿಮ್ಮ ಮನೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ನೆರವೇರಲಿವೆ. ಶುಭ ಖರ್ಚುಗಳು ಹೆಚ್ಚಾಗಿ ಕುಟುಂಬದಲ್ಲಿ ಸಂತೋಷ ತುಂಬಲಿದೆ. ಸ್ವಂತ ಹೊಸ ಮನೆ ಕಟ್ಟುವುದು, ಜಮೀನು ಅಥವಾ ಹೊಸ ವಾಹನ ಖರೀದಿಸುವ ಕನಸುಗಳು ನನಸಾಗುವ ಯೋಗವಿದೆ. ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಹೊಸ ಪ್ರಯತ್ನವೂ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಭಾರಿ ಲಾಭವನ್ನು ತಂದುಕೊಡಲಿದೆ.&lt;img&gt;ಸೂರ್ಯನ ಬಲ ಮತ್ತು ಕೇತುವಿನ ಪ್ರಭಾವ ಹೊಂದಿರುವ ಮಘ ನಕ್ಷತ್ರದವರಿಗೆ, ಆಡಿ ಪೂರಂ ಅಮ್ಮನವರ ಕೃಪೆಯಿಂದ ದೊಡ್ಡ ತಿರುವು ಸಿಗಲಿದೆ. ಉದ್ಯೋಗದಲ್ಲಿ ಕಳೆದುಹೋದ ಗೌರವ ಮತ್ತು ಪ್ರಭಾವವನ್ನು ನೀವು ಮರಳಿ ಪಡೆಯುತ್ತೀರಿ. ನಿಮ್ಮ ಅರ್ಹತೆಗೆ ತಕ್ಕಂತೆ ಹೊಸ ಉದ್ಯೋಗಾವಕಾಶಗಳು, ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಮತ್ತು ಸಂಬಳ ಹೆಚ್ಚಳ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಮೇಲಧಿಕಾರಿಗಳ ಸಂಪೂರ್ಣ ಬೆಂಬಲ ಮತ್ತು ಪ್ರಶಂಸೆ ನಿಮಗೆ ಸಿಗಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ನೀವು ಮಾಡುವ ಹೊಸ ಹೂಡಿಕೆಗಳಿಗೆ ದುಪ್ಪಟ್ಟು ಲಾಭ ಸಿಕ್ಕಿ, ನಿಮಗೇ ಆಶ್ಚರ್ಯವಾಗಲಿದೆ.&lt;img&gt;ರಾಹು ಗ್ರಹದ ಅನುಗ್ರಹ ಪಡೆದ ಸ್ವಾತಿ ನಕ್ಷತ್ರದವರಿಗೆ ಇನ್ನು ಮುಂದೆ 'ಮುಟ್ಟಿದ್ದೆಲ್ಲಾ ಬ್ಲಾಸ್ಟ್' ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದುವರೆಗೂ ನಿಮ್ಮನ್ನು ಕಟ್ಟಿಹಾಕಿದ್ದ ಅನಗತ್ಯ ಖರ್ಚುಗಳು, ಮಾನಸಿಕ ಒತ್ತಡ ಮತ್ತು ಕಾರ್ಯತಡೆಗಳು ಸೂರ್ಯನನ್ನು ಕಂಡ ಮಂಜಿನಂತೆ ಸಂಪೂರ್ಣವಾಗಿ ಕರಗಿ ಹೋಗಲಿವೆ. ವಿದೇಶ ಅಥವಾ ಹೊರ ರಾಜ್ಯಗಳ ಸಂಪರ್ಕದಿಂದ ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಧನಲಾಭವಾಗಲಿದೆ. ಹೊಸ ವ್ಯಾಪಾರ ಆರಂಭಿಸುವ ಪ್ರಯತ್ನಗಳಿಗೆ ಹೂಡಿಕೆದಾರರು ಸಿಗುತ್ತಾರೆ. ನಿಮ್ಮಿಂದ ದೂರವಾಗಿದ್ದ ಸಂಬಂಧಿಕರು ಮತ್ತು ಸ್ನೇಹಿತರು ನಿಮ್ಮ ಬದಲಾವಣೆಯನ್ನು ಕಂಡು ಮತ್ತೆ ನಿಮ್ಮನ್ನು ಹುಡುಕಿ ಬರುತ್ತಾರೆ.&lt;img&gt;&lt;p&gt;ಮಹಾಲಕ್ಷ್ಮಿ ದೇವಿಯ ಕೃಪೆ ಅನುರಾಧ ನಕ್ಷತ್ರದವರಿಗೆ, ಆಡಿ ಪೂರಂ ನಂತರ ಲಕ್ಷ್ಮಿ ಕಟಾಕ್ಷ ದುಪ್ಪಟ್ಟಾಗಲಿದೆ. ಕುಟುಂಬದಲ್ಲಿ ಗಂಡ-ಹೆಂಡತಿಯ ನಡುವಿನ ಜಗಳ, ಅನಗತ್ಯ ವಾಗ್ವಾದಗಳು ನಿಂತು, ಸಾಮರಸ್ಯ ಮತ್ತು ಶಾಂತಿ ನೆಲೆಸಲಿದೆ. ಆರ್ಥಿಕ ಸ್ಥಿತಿ ಅತಿ ಕಡಿಮೆ ಸಮಯದಲ್ಲಿ ಉತ್ತುಂಗಕ್ಕೇರಲಿದೆ. ಕುತ್ತಿಗೆಯನ್ನು ಹಿಂಡುತ್ತಿದ್ದ ಸಾಲದ ಹೊರೆ ಕಡಿಮೆಯಾಗಲಿದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಗೆಹರಿದು, ದೇಹಕ್ಕೆ ಹೊಸ ಚೈತನ್ಯ ಮತ್ತು ಹುಮ್ಮಸ್ಸು ಬರಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೈ ಮೇಲಾಗಲಿದ್ದು, ಶತ್ರುಗಳ ಎಲ್ಲಾ ಕುತಂತ್ರಗಳು ವಿಫಲವಾಗಲಿವೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/today-is-august-14th-five-star-signs-to-gain-immense-fortune-suh-1igah5a"/>
        </item>
        <item>
            <title><![CDATA[IVF ಪ್ರಕ್ರಿಯೆಗೆ ಇನ್ನೊಬ್ಬ ವ್ಯಕ್ತಿಯ ವೀರ್ಯ ಪತ್ನಿ ಪಡೆದುಕೊಳ್ಳಬಹುದೇ? ಹೈಕೋರ್ಟ್‌ಗೆ ನಿಯಮ ತಿಳಿಸಿದ ಕೇಂದ್ರ ಸರ್ಕಾರ]]></title>
            <link>https://kannada.asianetnews.com/relationship/husband-consent-mandatory-for-ivf-sperm-karnataka-hc-rules-san/articleshow-mrngg6y</link>
            <guid isPermaLink="true">https://kannada.asianetnews.com/relationship/husband-consent-mandatory-for-ivf-sperm-karnataka-hc-rules-san/articleshow-mrngg6y</guid>
            <pubDate>Fri, 14 Aug 2026 10:24:23 +0530</pubDate>
            <description><![CDATA[ಬೆಂಗಳೂರಿನ ಮಹಿಳೆಯೊಬ್ಬರು ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಿ ಗರ್ಭಧರಿಸಲು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಐವಿಎಫ್ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಮತ್ತು ART ಕಾಯ್ದೆ ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz7wn0fv4v5bp9vnv0981bbx,imgname-high-court-1785897583099.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14):&lt;/strong&gt; ಪತಿಯ ಅನುಮತಿಯಿಲ್ಲದೆ ಆತನ ಫ್ರೋಜನ್ ಸ್ಪರ್ಮ್ ಬಳಸಲು ಅಥವಾ ದಾನಿಗಳ ವೀರ್ಯದ ಮೂಲಕ ಗರ್ಭಧರಿಸಲು ಪತ್ನಿಗೆ ಕಾನೂನಿನಲ್ಲಿ ಅವಕಾಶವಿದೆಯೇ? ಎಂಬ ಪ್ರಮುಖ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್&zwnj;ಗೆ ಸ್ಪಷ್ಟನೆ ನೀಡಿದೆ. ಐವಿಎಫ್ (IVF) ಪ್ರಕ್ರಿಯೆ ಮತ್ತು ಸ್ಪರ್ಮ್ ಬಳಕೆ ಕುರಿತು ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ನಿಯಮಗಳನ್ನು ಕೇಂದ್ರ ಸರ್ಕಾರವು ಕೋರ್ಟ್&zwnj;ಗೆ ವಿವರಿಸಿದೆ. ತನ್ನ ಪತಿಯ ಫ್ರೋಜನ್ ಸ್ಪರ್ಮ್ ಬಳಸಿಕೊಂಡು ಐವಿಎಫ್ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ನಿಯಮದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದೆ..&lt;/p&gt;&lt;p&gt;ಬೆಂಗಳೂರು ಮೂಲದ ಮಹಿಳೆಯೊಬ್ಬರು ತಮ್ಮ ಪತಿಯ ಫ್ರೋಜನ್ ಸ್ಪರ್ಮ್ ಬಳಸಿಕೊಂಡು ಐವಿಎಫ್ ಚಿಕಿತ್ಸೆ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಕ್ಲಿನಿಕ್&zwnj;ನಿಂದ ಅನುಮತಿ ಕೋರಿದ್ದರೂ, ಪತಿಯ ಲಿಖಿತ ಸಮ್ಮತಿ ಇಲ್ಲದ ಕಾರಣ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಕ್ಲಿನಿಕ್ ತಿಳಿಸಿತ್ತು. ವಿವಾಹವಾದ ಎರಡು ವರ್ಷಗಳಲ್ಲೇ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅಲ್ಲದೆ, ಪತಿಯು ಕ್ರೂರತೆಯ ಆಧಾರದ ಮೇಲೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಕೂಡ ಸಲ್ಲಿಸಲಾಗಿದೆ.&lt;/p&gt;&lt;h2&gt;&lt;strong&gt;ಹೈಕೋರ್ಟ್&zwnj;ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?&lt;/strong&gt;&lt;/h2&gt;&lt;p&gt;ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು ಹೈಕೋರ್ಟ್&zwnj;ಗೆ ಮಾಹಿತಿ ನೀಡಿ, ವಿವಾಹ ಬಂಧನ ಜಾರಿಯಲ್ಲಿರುವವರೆಗೆ, ಪತಿಯ ಲಿಖಿತ ಸಮ್ಮತಿಯಿಲ್ಲದೆ ಆತನ ಸ್ಪರ್ಮ್ ಅನ್ನು ಬಳಸಲು ಪತ್ನಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗೆಯೇ ಆತನ ಅನುಮತಿಯಿಲ್ಲದೆ ಡೋನರ್ (ದಾನಿ) ಸ್ಪರ್ಮ್ ತೆಗೆದುಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಒಂದು ವೇಳೆ ಮಹಿಳೆ ತಾಯಿಯಾಗಲು ಬಯಸಿದರೆ, ಆಕೆಗೆ ಇರುವ ಏಕೈಕ ಆಯ್ಕೆಯೆಂದರೆ 'ಸಿಂಗಲ್ ವುಮನ್' (ಏಕಾಂಗಿ ಮಹಿಳೆ) ಆಗಿ ಡೋನರ್ ಸ್ಪರ್ಮ್ ಬಳಸುವುದು. ಆದರೆ ಇಲ್ಲೂ ಒಂದು ತಾಂತ್ರಿಕ ತೊಡಕಿದೆ. ಪತಿಯು 'ಇನ್&zwnj;ಫರ್ಟೈಲ್' (ಸಂತಾನೋತ್ಪತ್ತಿ ಸಾಮರ್ಥ್ಯವಿಲ್ಲದವನು) ಎಂದು ಸಾಬೀತಾದರೆ ಮಾತ್ರ ಡೋನರ್ ಸ್ಪರ್ಮ್ ಬಳಸಲು ಅವಕಾಶವಿರುತ್ತದೆ. ಅಂದರೆ, ಪತಿಯ ವೀರ್ಯದಿಂದ ಮಗು ಪಡೆಯಲು ಸಾಧ್ಯವಿಲ್ಲ ಎಂಬುದು ವೈದ್ಯಕೀಯವಾಗಿ ದೃಢಪಡಬೇಕು.&lt;/p&gt;&lt;h2&gt;&lt;strong&gt;ಕಾನೂನು ಏನು ಹೇಳುತ್ತದೆ?&lt;/strong&gt;&lt;/h2&gt;&lt;p&gt;'ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ರೆಗ್ಯುಲೇಶನ್) ಕಾಯ್ದೆ, 2021' ರ (ART Act) ಸೆಕ್ಷನ್ 22 ರ ಪ್ರಕಾರ, ಸಂಬಂಧಪಟ್ಟ ಎಲ್ಲಾ ಕಕ್ಷಿದಾರರ ಲಿಖಿತ ಮತ್ತು ಸ್ಪಷ್ಟ ಸಮ್ಮತಿಯಿಲ್ಲದೆ ಯಾವುದೇ ಕ್ಲಿನಿಕ್ ಐವಿಎಫ್&zwnj; ಅಥವಾ ಯಾವುದೇ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನಡೆಸುವಂತಿಲ್ಲ. ಹೈಕೋರ್ಟ್ ಕೂಡ ಈ ಕಾನೂನು ಚೌಕಟ್ಟನ್ನು ಬೆಟ್ಟುಮಾಡಿ ತೋರಿಸಿದ್ದು, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದಿದೆ.&lt;/p&gt;&lt;h2&gt;&lt;strong&gt;ಉಭಯ ಪಕ್ಷಗಳ ವಾದವೇನು?&lt;/strong&gt;&lt;/h2&gt;&lt;p&gt;ಪತಿಯ ವಕೀಲರ ಪ್ರಕಾರ, ಈ ಪರಿಸ್ಥಿತಿಯಲ್ಲಿ ಮೂರನೇ ವ್ಯಕ್ತಿಯ ಸ್ಪರ್ಮ್ (ಅಥವಾ ಅನುಮತಿಯಿಲ್ಲದ ಸ್ಪರ್ಮ್) ಮೂಲಕ ಮಗು ಜನಿಸಿದರೆ, ಅದನ್ನು 'ವಿವಾಹಬಾಹಿರ' ಎಂದು ಪರಿಗಣಿಸಬೇಕಾಗುತ್ತದೆ. ಇದು ಭವಿಷ್ಯದಲ್ಲಿ ಪತಿಯ ಆಸ್ತಿ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ವಾದಿಸಿದರು. ಮಹಿಳೆಯ ವಕೀಲರು, ಈ ಮಗುವಿಗೆ ಪತಿಯ ಆಸ್ತಿಯಲ್ಲಿ ಯಾವುದೇ ಹಕ್ಕಿರುವುದಿಲ್ಲ ಎಂದು ಲಿಖಿತ ಬಾಂಡ್ (Under-taking) ನೀಡಲು ಮಹಿಳೆ ಸಿದ್ಧರಿದ್ದಾರೆ. ಪ್ರಸ್ತುತ ಫ್ಯಾಮಿಲಿ ಕೋರ್ಟ್&zwnj;ನಲ್ಲಿ ರಾಜಿ ಸಂಧಾನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮಹಿಳೆಗೆ ಈಗಲೇ ವಿಚ್ಛೇದನ ಪಡೆಯಲು ಇಷ್ಟವಿಲ್ಲ ಎಂದು ವಾದ ಮಂಡಿಸಿದರು.&lt;/p&gt;&lt;h2&gt;&lt;strong&gt;ಹೈಕೋರ್ಟ್ ಕಳವಳ ಮತ್ತು ಆದೇಶ&lt;/strong&gt;&lt;/h2&gt;&lt;p&gt;ಈ ಪರಿಸ್ಥಿತಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು 'ಕ್ಯಾಚ್-22' (ಸಲಹೆ ಅಥವಾ ಪರಿಹಾರ ಕಂಡುಕೊಳ್ಳಲು ಕಷ್ಟವಿರುವ ಕ್ಲಿಷ್ಟಕರ ಸ್ಥಿತಿ) ಎಂದು ಬಣ್ಣಿಸಿದ್ದಾರೆ. &quot;ಹುಟ್ಟಲಿರುವ ಮಗುವಿನ ಆಸ್ತಿ ಹಕ್ಕನ್ನು ತಡೆಹಿಡಿಯುವ ಹಕ್ಕು ಅಥವಾ ಅಂಡರ್&zwnj;ಟೇಕಿಂಗ್ ನೀಡುವ ಅಧಿಕಾರ ತಾಯಿಗೆ ಇದೆಯೇ?&quot; ಎಂದು ಪ್ರಶ್ನಿಸಿದರು. ಕಾನೂನನ್ನು ಅತ್ಯಂತ ಆಳವಾಗಿ ಯೋಚಿಸಿ ರೂಪಿಸಲಾಗಿದ್ದು, ಅದನ್ನು ಇದ್ದಂತೆಯೇ ಜಾರಿಗೆ ತರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಸದ್ಯ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಕೀಲರಿಗೆ ಕಾನೂನಿನ ಇತರೆ ನಿಯಮಗಳು ಅಥವಾ ವ್ಯಾಖ್ಯಾನಗಳಿದ್ದರೆ ಅದನ್ನು ಕೋರ್ಟ್&zwnj;ಗೆ ಸಲ್ಲಿಸುವಂತೆ ಸೂಚನೆ ನೀಡಿದೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Santosh Naik</dc:creator>
            <atom:link href="https://kannada.asianetnews.com/relationship/husband-consent-mandatory-for-ivf-sperm-karnataka-hc-rules-san/articleshow-mrngg6y"/>
        </item>
        <item>
            <title><![CDATA[ಬ್ಯಾಗ್, ಪ್ಯಾಂಟ್, ಸ್ವೆಟರ್ 'ಜಿಪ್' ಕಿತ್ತು ಹೋಯ್ತಾ? ಈ ಟಿಪ್ಸ್ ಬಳಸಿ ಚಿಟಿಕೆ ಹೊಡೆಯುವಷ್ಟರಲ್ಲಿ ಸರಿ ಮಾಡಿ!]]></title>
            <link>https://kannada.asianetnews.com/gallery/life/how-to-fix-broken-zipper-at-home-5-easy-diy-life-hacks-znio74t</link>
            <guid isPermaLink="true">https://kannada.asianetnews.com/gallery/life/how-to-fix-broken-zipper-at-home-5-easy-diy-life-hacks-znio74t</guid>
            <pubDate>Fri, 14 Aug 2026 10:18:32 +0530</pubDate>
            <description><![CDATA[ಬ್ಯಾಗ್ ಅಥವಾ ಬಟ್ಟೆಯ ಹಾಳಾದ ಜಿಪ್‌ಗಳನ್ನು ಎಸೆಯುವ ಬದಲು, ಮನೆಯಲ್ಲಿಯೇ ಸಿಗುವ ಪ್ಲೈಯರ್ಸ್, ಪೆನ್ಸಿಲ್, ಸೋಪಿನಂತಹ ವಸ್ತುಗಳನ್ನು ಬಳಸಿ ಸುಲಭವಾಗಿ ಸರಿಪಡಿಸಬಹುದು. ಈ ಲೇಖನವು ಜಿಪ್ ರಿಪೇರಿ ಮಾಡುವ ಐದು ಸರಳ ಹಾಗೂ ಪರಿಣಾಮಕಾರಿ ವಿಧಾನಗಳನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz4y6mmjqrwsdjha2c6x2w4,imgname-zipper-repair--1--1786678024852.jpg" type="image/jpeg" height="390" width="690"/>
            <content:encoded><![CDATA[ಬ್ಯಾಗ್ ಅಥವಾ ಬಟ್ಟೆಯ ಹಾಳಾದ ಜಿಪ್&zwnj;ಗಳನ್ನು ಎಸೆಯುವ ಬದಲು, ಮನೆಯಲ್ಲಿಯೇ ಸಿಗುವ ಪ್ಲೈಯರ್ಸ್, ಪೆನ್ಸಿಲ್, ಸೋಪಿನಂತಹ ವಸ್ತುಗಳನ್ನು ಬಳಸಿ ಸುಲಭವಾಗಿ ಸರಿಪಡಿಸಬಹುದು. ಈ ಲೇಖನವು ಜಿಪ್ ರಿಪೇರಿ ಮಾಡುವ ಐದು ಸರಳ ಹಾಗೂ ಪರಿಣಾಮಕಾರಿ ವಿಧಾನಗಳನ್ನು ವಿವರಿಸುತ್ತದೆ.&lt;img&gt;&lt;p&gt;ಪ್ರಯಾಣ ಮಾಡುವಾಗ ಬ್ಯಾಗ್ ಜಿಪ್ ಹಾಳಾದರೆ ಅಥವಾ ಚಳಿಗಾಲದಲ್ಲಿ ನೆಚ್ಚಿನ ಸ್ವೆಟರ್ ಜಿಪ್ ಕಿತ್ತು ಹೋದರೆ ತುಂಬಾ ಕಿರಿಕಿರಿಯಾಗುತ್ತದೆ. ಜಿಪ್ ಹಾಳಾಯಿತೆಂದು ತಕ್ಷಣ ಬ್ಯಾಗ್ ಎಸೆಯುವ ಅಥವಾ ಟೈಲರ್ ಬಳಿ ಓಡುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸಬಹುದು.&lt;/p&gt;&lt;p&gt;ಅದಕ್ಕೆ ಇಲ್ಲಿದೆ 5 ಸರಳ ಹಾಗೂ ಉಪಯುಕ್ತ ಸಲಹೆಗಳು:&lt;/p&gt;&lt;img&gt;&lt;p&gt;&lt;strong&gt;1. ಪ್ಲೈಯರ್ಸ್ (Pliers) ತಂತ್ರ:&lt;/strong&gt;&lt;/p&gt;&lt;p&gt;ಜಿಪ್ ಹಾಕಿದರೂ ಹಲ್ಲುಗಳು ಸರಿಯಾಗಿ ಮುಚ್ಚಿಕೊಳ್ಳದೆ ತೆರೆದುಕೊಳ್ಳುತ್ತಿದ್ದರೆ, ಜಿಪ್&zwnj;ನ ರನ್ನರ್ (ಸ್ಲೈಡರ್) ಸಡಿಲವಾಗಿದೆ ಎಂದರ್ಥ. ಪ್ಲೈಯರ್ಸ್ ತೆಗೆದುಕೊಂಡು ರನ್ನರ್&zwnj;ನ ಹಿಂಭಾಗದ ಎರಡೂ ಬದಿಗಳನ್ನು ಮೆಲ್ಲಗೆ ಒತ್ತಿ. ಹೀಗೆ ಮಾಡುವುದರಿಂದ ರನ್ನರ್ ಬಿಗಿಯಾಗಿ, ಜಿಪ್ ಮತ್ತೆ ಸರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.&lt;/p&gt;&lt;img&gt;&lt;p&gt;&lt;strong&gt;2. ಪೆನ್ಸಿಲ್&zwnj;ನ ಗ್ರ್ಯಾಫೈಟ್ (Pencil Lead):&lt;/strong&gt;&lt;/p&gt;&lt;p&gt;ಜಿಪ್ ಮಧ್ಯದಲ್ಲೇ ಜಾಮ್ ಆಗಿ ಮುಂದೆ-ಹಿಂದೆ ಹೋಗದಿದ್ದರೆ, ಒಂದು ಪೆನ್ಸಿಲ್ ತೆಗೆದುಕೊಂಡು ಅದರ ತುದಿಯನ್ನು ಜಿಪ್&zwnj;ನ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿ. ಪೆನ್ಸಿಲ್&zwnj;ನಲ್ಲಿರುವ ಗ್ರ್ಯಾಫೈಟ್ ನೈಸರ್ಗಿಕ ಲ್ಯೂಬ್ರಿಕೆಂಟ್ ಆಗಿ ಕೆಲಸ ಮಾಡಿ, ಜಿಪ್ ಸರಾಗವಾಗಿ ಚಲಿಸುವಂತೆ ಮಾಡುತ್ತದೆ.&lt;/p&gt;&lt;img&gt;&lt;p&gt;&lt;strong&gt;3. ಮುಳ್ಳು ಚಮಚ (Fork) ಬಳಸಿ:&lt;/strong&gt;&lt;/p&gt;&lt;p&gt;ಜಿಪ್&zwnj;ನ ರನ್ನರ್ ಸಂಪೂರ್ಣವಾಗಿ ಹೊರಬಂದಿದ್ದರೆ, ಒಂದು ಫೋರ್ಕ್ (ಮುಳ್ಳು ಚಮಚ) ತುದಿಗೆ ರನ್ನರ್ ಅನ್ನು ಸಿಕ್ಕಿಸಿ ಗಟ್ಟಿಯಾಗಿ ಹಿಡಿದುಕೊಳ್ಳಿ. ನಂತರ ಬ್ಯಾಗ್ ಅಥವಾ ಸ್ವೆಟರ್&zwnj;ನ ಜಿಪ್&zwnj; ತುದಿಗಳನ್ನು ರನ್ನರ್&zwnj;ಗೆ ತಳ್ಳಿದರೆ ಜಿಪ್ ಸುಲಭವಾಗಿ ಲಾಕ್ ಆಗುತ್ತದೆ.&lt;/p&gt;&lt;img&gt;&lt;p&gt;&lt;strong&gt;4. ಪೇಪರ್ ಕ್ಲಿಪ್ ಅಥವಾ ಕೀ ರಿಂಗ್:&lt;/strong&gt;&lt;/p&gt;&lt;p&gt;ಜಿಪ್ ಎಳೆಯುವ ಹಿಡಿ (Pull tab) ಮುರಿದುಹೋದರೆ, ಅದರ ಸಣ್ಣ ರಂಧ್ರಕ್ಕೆ ಪೇಪರ್ ಕ್ಲಿಪ್ ಅಥವಾ ಹಳೆಯ ಕೀಲಿ ಕೈ ರಿಂಗ್ ಹಾಕಿ. ಇದು ತಾತ್ಕಾಲಿಕವಾಗಿ ಜಿಪ್ ಎಳೆಯಲು ಅದ್ಭುತವಾಗಿ ನೆರವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;5. ಸೋಪು ಅಥವಾ ವ್ಯಾಸಲೀನ್:&lt;/strong&gt;&lt;/p&gt;&lt;p&gt;ಜಿಪ್ ತುಂಬಾ ಬಿಗಿಯಾಗಿದ್ದರೆ, ಒಣ ಸೋಪಿನ ತುಂಡು, ವ್ಯಾಸಲೀನ್ ಅಥವಾ ಕೊಬ್ಬರಿ ಎಣ್ಣೆಯನ್ನು ಜಿಪ್ ಹಲ್ಲುಗಳಿಗೆ ಹಚ್ಚಿ. ನಂತರ 2-3 ಬಾರಿ ಜಿಪ್ ಎಳೆದರೆ ಅದು ತಕ್ಷಣವೇ ಸ್ಮೂತ್ ಆಗುತ್ತದೆ.&lt;/p&gt;&lt;p&gt;ಈ ಸರಳ ಉಪಾಯಗಳನ್ನು ಬಳಸಿದರೆ ನಿಮ್ಮ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ!&lt;/p&gt;]]></content:encoded>
            <category><![CDATA[life]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/how-to-fix-broken-zipper-at-home-5-easy-diy-life-hacks-znio74t"/>
        </item>
        <item>
            <title><![CDATA[ಕಂಬಿ ಹಿಂದೆ ದಾಸ ವಾಸವಾಗಿ ಒಂದು ವರ್ಷ; 'ಗಾಯ ಮಾಸಿಲ್ಲ, ನೋವು ತಡೆಯಲಾಗ್ತಿಲ್ಲ' ಎಂದು ವಿಜಯಲಕ್ಷ್ಮಿ ಭಾವುಕ ಪೋಸ್ಟ್!]]></title>
            <link>https://kannada.asianetnews.com/tv-talk/darshan-thoogudeepa-jail-one-year-vijayalakshmi-emotional-instagram-post-san/articleshow-ry5ahsg</link>
            <guid isPermaLink="true">https://kannada.asianetnews.com/tv-talk/darshan-thoogudeepa-jail-one-year-vijayalakshmi-emotional-instagram-post-san/articleshow-ry5ahsg</guid>
            <pubDate>Fri, 14 Aug 2026 10:00:14 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಒಂದು ವರ್ಷವಾದ ಹಿನ್ನೆಲೆಯಲ್ಲಿ, ಅವರ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಒಂದು ವರ್ಷವಾದರೂ ಗಾಯ ಮಾಸಿಲ್ಲ, ನೋವು ಅಸಹನೀಯವಾಗಿದೆ ಎಂದು ಬರೆದುಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz8ev0fvf1xfbp47y2s2cct,imgname-vijayalakshmi-darshan-new-story-1786681715727.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14):&lt;/strong&gt; ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಾನೂನು ಹೋರಾಟದಲ್ಲಿ ಕೋರ್ಟ್&zwnj; ನೀಡಿದ ಆದೇಶದಂತೆ ಸ್ಯಾಂಡಲ್&zwnj;ವುಡ್ ನಟ ದರ್ಶನ್ ತೂಗುದೀಪ ಮತ್ತೆ ಜೈಲು ಪಾಲಾಗಿ ಭರ್ತಿ ಒಂದು ವರ್ಷ ಕಳೆದಿದೆ. ಪತಿ ದೀರ್ಘಕಾಲದಿಂದ ಜೈಲಿನಲ್ಲೇ ಇರುವುದು ಮತ್ತು ಕೋರ್ಟ್&zwnj;ನಲ್ಲಿ ಪದೇ ಪದೇ ಹಿನ್ನಡೆಯಾಗುತ್ತಿರುವುದು ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿದೆ. ದರ್ಶನ್ ಮತ್ತೆ ಜೈಲಿಗೆ ತೆರಳಿ 1 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ, ವಿಜಯಲಕ್ಷ್ಮಿ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಶೇರ್&zwnj; ಮಾಡಿಕೊಂಡಿರುವ ಭಾವುಕ ಪೋಸ್ಟ್&zwnj; ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.&lt;/p&gt;&lt;p&gt;ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದು 2024ರ ಜೂನ್ 11ರಂದು. ಆನಂತರ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತಾದರೂ, 2025ರ ಆಗಸ್ಟ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಅವರನ್ನು ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಪ್ರಸ್ತುತ ದರ್ಶನ್ ಮತ್ತೆ ಜೈಲು ಸೇರಿ 1 ವರ್ಷ ಪೂರ್ಣಗೊಂಡಿದೆ.&lt;/p&gt;&lt;h2&gt;&lt;strong&gt;'ಗಾಯ ಇನ್ನೂ ವಾಸಿಯಾಗಿಲ್ಲ, ನೋವೂ ಅಸಹನೀಯ': ವಿಜಯಲಕ್ಷ್ಮಿ ಕಣ್ಣೀರಿನ ನುಡಿ&lt;/strong&gt;&lt;/h2&gt;&lt;p&gt;ದರ್ಶನ್ ಜೈಲಿನಲ್ಲಿ ಒಂದು ವರ್ಷ ಪೂರೈಸಿದ್ದರೂ, ವಿಜಯಲಕ್ಷ್ಮಿ ಅವರಿಗೆ ಪತಿಯ ಅಗಲಿಕೆಯ ನೋವು ಮತ್ತು ಸಮಾಜದಲ್ಲಿ ವ್ಯಕ್ತವಾಗುತ್ತಿರುವ ಚರ್ಚೆಗಳು ತಂದೊಡ್ಡಿದ ಗಾಯ ಮಾಸಿಲ್ಲ. ಪ್ರಕರಣದ ವಿಚಾರಣೆ ಹಾಗೂ ದಿನನಿತ್ಯದ ಕಾನೂನು ಹೋರಾಟವನ್ನು ಏಕಾಂಗಿಯಾಗಿ ಎದುರಿಸುತ್ತಿರುವ ಅವರು, ತಮ್ಮ ಮನದಾಳದ ಅಸಹನೀಯ ವೇದನೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಪತಿ ದರ್ಶನ್ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, ಒಂದು ವರ್ಷ ಕಳೆದುಹೋಗಿದೆ. ಆ ಗಾಯ ಇನ್ನೂ ಮಾಸಿಲ್ಲ, ಮತ್ತು ಆ ನೋವು ಕೂಡ ಇನ್ನೂ ಸಹಿಸಲಸಾಧ್ಯವಾಗಿದೆ. ಅರ್ಥಮಾಡಿಕೊಳ್ಳಲಾಗದ ವಿಷಯಗಳ ಬಗ್ಗೆ ಜಗತ್ತು ತನ್ನದೇ ಆದ ರೀತಿಯಲ್ಲಿ ತೀರ್ಪು ನೀಡಬಹುದು. ಆದರೆ ನಾನು ಈಗ ನನ್ನನ್ನು ಸಮರ್ಥಿಸಿಕೊಳ್ಳುವುದನ್ನೇ ಅಥವಾ ವಿವರಣೆ ನೀಡುವುದನ್ನೇ ನಿಲ್ಲಿಸಿದ್ದೇನೆ. ಈಗ ನಾನು ಕೇವಲ ನಗುತ್ತೇನೆ ಅಷ್ಟೇ. ಉಳಿದದ್ದನ್ನು ಕಾಲ ಹಾಗೂ ದೇವರ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;'ದೇವರಿಗೆ ಗೊತ್ತು ಅಷ್ಟೇ ಸಾಕು': ಕಾಮಾಕ್ಯ ದೇವಿ ಫೋಟೋ ಹಂಚಿಕೊಂಡ ಪತ್ನಿ&lt;/strong&gt;&lt;/h2&gt;&lt;p&gt;ಈ ಪೋಸ್ಟ್&zwnj;ಗೂ ಮುನ್ನ ವಿಜಯಲಕ್ಷ್ಮಿ ಅವರು ಕಾಮಾಕ್ಯ ದೇವಿಯ ಫೋಟೋ ಹಂಚಿಕೊಂಡು, ದೇವರಿಗೆ ಗೊತ್ತು ಅಷ್ಟೇ ಸಾಕು ಎಂದು ಬರೆದುಕೊಂಡಿದ್ದರು. ಜೊತೆಗೆ ಅದರ ಹಿನ್ನೆಲೆಯಲ್ಲಿ ಎಲ್ಲಿಗೆ ಓಡುವೆ ಓ ಮನುಜ.. ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ ಎಂಬ ಮಾರ್ಮಿಕ ಹಾಡನ್ನು ಸೇರಿಸಿದ್ದರು.&lt;/p&gt;&lt;p&gt;ದರ್ಶನ್ ಮತ್ತೆ ಬಂಧನಕ್ಕೊಳಗಾದ ದಿನದಿಂದಲೂ ಕುಟುಂಬವನ್ನು ಸಂಭಾಳಿಸುತ್ತಾ, ಅಭಿಮಾನಿಗಳನ್ನು ಶಾಂತವಾಗಿರುವಂತೆ ವಿನಂತಿಸುತ್ತಾ, ಮಾನಸಿಕವಾಗಿ ಗಟ್ಟಿಯಾಗಿ ನಿಲ್ಲಲು ವಿಜಯಲಕ್ಷ್ಮಿ ಶ್ರಮಿಸುತ್ತಿದ್ದಾರೆ. ದರ್ಶನ್ ಕೇಸ್&zwnj;ನಲ್ಲಿ ಮುಂದೇನಾಗಲಿದೆ ಎಂಬ ಆತಂಕದ ಬೆನ್ನಲ್ಲೇ ವಿಜಯಲಕ್ಷ್ಮಿ ಅವರ ಈ ಭಾವುಕ ಪೋಸ್ಟ್, ದರ್ಶನ್ ಕುಟುಂಬ ಹೊರಗಡೆ ಅನುಭವಿಸುತ್ತಿರುವ ನೋವಿಗೆ ಕನ್ನಡಿ ಹಿಡಿದಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/darshan-thoogudeepa-jail-one-year-vijayalakshmi-emotional-instagram-post-san/articleshow-ry5ahsg"/>
        </item>
        <item>
            <title><![CDATA[‘ದಾವಣಗೆರೆ ಎಕ್ಸ್‌ಪ್ರೆಸ್‌’ ವಿನಯ್‌ ಕುಮಾರ್‌ ಕರ್ನಾಟಕ ತಂಡದ ನೂತನ ಕೋಚ್‌!]]></title>
            <link>https://kannada.asianetnews.com/cricket-sports/karnataka-cricket-team-vinay-kumar-appointed-new-head-coach-ksca-announces-coaching-staff-kvn/articleshow-kmy34dt</link>
            <guid isPermaLink="true">https://kannada.asianetnews.com/cricket-sports/karnataka-cricket-team-vinay-kumar-appointed-new-head-coach-ksca-announces-coaching-staff-kvn/articleshow-kmy34dt</guid>
            <pubDate>Fri, 14 Aug 2026 09:59:00 +0530</pubDate>
            <description><![CDATA[ಭಾರತದ ಮಾಜಿ ವೇಗಿ ಹಾಗೂ 'ದಾವಣಗೆರೆ ಎಕ್ಸ್‌ಪ್ರೆಸ್‌' ಖ್ಯಾತಿಯ ವಿನಯ್‌ ಕುಮಾರ್‌ ಕರ್ನಾಟಕ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಯೆರೇ ಗೌಡ್‌ ಅವರ ಸ್ಥಾನವನ್ನು ತುಂಬಲಿರುವ ವಿನಯ್‌, ಈ ಹಿಂದೆ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹಲವು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಕೆಎಸ್‌ಸಿಎ ವಿವಿಧ ವಯೋಮಿತಿಯ ತಂಡಗಳಿಗೂ ನೂತನ ಕೋಚ್‌ಗಳನ್ನು ನೇಮಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cqp2j847152pxcrzjmxcyt3v,imgname-yere_vinay.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕರ್ನಾಟಕ ಕ್ರಿಕೆಟ್&zwnj; ತಂಡದ ನೂತನ ಕೋಚ್&zwnj; ಆಗಿ ಭಾರತದ ಮಾಜಿ ಕ್ರಿಕೆಟಿಗ, ದಾವಣಗೆರೆ ಎಕ್ಸ್&zwnj;ಪ್ರೆಸ್&zwnj; ಖ್ಯಾತಿಯ ವೇಗಿ ವಿನಯ್&zwnj; ಕುಮಾರ್&zwnj; ನೇಮಕಗೊಂಡಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಶಿಫಾರಸ್ಸಿನ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ರಾಜ್ಯ ಕ್ರಿಕೆಟ್&zwnj; ಸಂಸ್ಥೆ(ಕೆಎಸ್&zwnj;ಸಿಎ) ಗುರುವಾರ ಅಧಿಕೃವಾಗಿ ಪ್ರಕಟಿಸಿದೆ.&lt;/p&gt;&lt;p&gt;ಕಳೆದ 2 ವರ್ಷಗಳಿಂದ ಯೆರೇ ಗೌಡ್&zwnj; ಅವರು ಕೋಚ್&zwnj; ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸ್ಥಾನವನ್ನು ವಿನಯ್&zwnj; ತುಂಬಲಿದ್ದಾರೆ. ಕರ್ನಾಟಕ ಸತತವಾಗಿ 2 ರಣಜಿ(2013-14, 2014-15), ಇರಾನಿ ಕಪ್&zwnj;, ವಿಜಯ್&zwnj; ಹಜಾರೆ ಟ್ರೋಫಿ ಗೆದ್ದಾಗ ತಂಡದ ನಾಯಕನಾಗಿದ್ದ ವಿನಯ್&zwnj;, ಭಾರತದ ಪರ 1 ಟೆಸ್ಟ್&zwnj;, 31 ಏಕದಿನ, 9 ಟಿ20 ಪಂದ್ಯಗಳನ್ನಾಡಿದ್ದಾರೆ. ಇನ್ನು, ತಂಡದ ಫೀಲ್ಡಿಂಗ್&zwnj; ಕೋಚ್&zwnj; ಆಗಿ ದೀಪಕ್&zwnj; ಚೌಗುಲೆ ಅವರನ್ನು ನೇಮಿಸಲಾಗಿದೆ.&lt;/p&gt;&lt;p&gt;ಅಂಡರ್&zwnj;-23 ಪುರುಷರ ತಂಡಕ್ಕೆ ಗಣೇಶ್&zwnj; ಸತೀಶ್, ಅಂಡರ್&zwnj;-19 ತಂಡಕ್ಕೆ ಕುನಾಲ್&zwnj; ಕಪೂರ್&zwnj;, ಅಂಡರ್&zwnj;-16 ತಂಡಕ್ಕೆ ಆದಿತ್ಯ ಸಾಗರ್&zwnj;, ಅಂಡರ್&zwnj;-14 ತಂಡಕ್ಕೆ ಎಂ.ಗುರುಪ್ರಸಾದ್&zwnj; ಕೋಚ್&zwnj; ಆಗಿ ನೇಮಕಗೊಂಡಿದ್ದಾರೆ. ಎಸ್&zwnj;.ಎನ್&zwnj;.ಅಮೀತ್&zwnj; ಮಹಿಳಾ ತಂಡಕ್ಕೆ ಕೋಚ್&zwnj; ಆಗಿ ನೇಮಕಗೊಂಡಿದ್ದು, ರಕ್ಷಿತಾ ಕೃಷ್ಣಪ್ಪ ಫೀಲ್ಡಿಂಗ್&zwnj; ಕೋಚ್&zwnj; ಆಗಿರಲಿದ್ದಾರೆ. ಮಹಿಳಾ ಅಂಡರ್&zwnj;-23 ತಂಡಕ್ಕೂ ಅಮೀತ್&zwnj;, ಅಂಡರ್&zwnj;-19 ತಂಡಕ್ಕೆ ಮುಕುಂದ, ಅಂಡರ್-15 ತಂಡಕ್ಕೆ ಗುರುಪ್ರಸಾದ್ ಕೋಚ್&zwnj; ಆಗಿರಲಿದ್ದಾರೆ ಎಂದು ಕೆಎಸ್&zwnj;ಸಿಎ ತಿಳಿಸಿದೆ.&lt;/p&gt;&lt;h2&gt;--&lt;strong&gt;ಜು.17ಕ್ಕೇ ಮಾಹಿತಿ ನೀಡಿದ್ದ ಕನ್ನಡಪ್ರಭ&lt;/strong&gt;&lt;/h2&gt;&lt;p&gt;ವಿನಯ್&zwnj; ರಾಜ್ಯ ತಂಡಕ್ಕೆ ಕೋಚ್&zwnj; ಆಗಿ ನೇಮಕಗೊಳ್ಳುವ ಬಗ್ಗೆ ಕನ್ನಡಪ್ರಭ ಪತ್ರಿಕೆ ಜುಲೈ 17ರಂದೇ ವರದಿ ಪ್ರಕಟಿಸಿತ್ತು. ಅವರು ಹೆಚ್ಚಿನ ಸಂಭಾವನೆಗೆ ಬೇಡಿಕೆ ಇಟ್ಟಿದ್ದರಿಂದಾಗಿ ನೇಮಕ ವಿಳಂಬವಾಗುತ್ತಿರುವ ಬಗ್ಗೆ ಜು.18ರಂದು ಮತ್ತೊಂದು ವರದಿ ಪ್ರಕಟಿಸಿತ್ತು.&lt;/p&gt;&lt;h3&gt;&lt;strong&gt;ಗಾಲೆ ಟೆಸ್ಟ್&zwnj;ಗೆ ಭಾರತ ತಂಡದಲ್ಲಿ 3 ಸ್ಪಿನ್ನರ್ಸ್?&lt;/strong&gt;&lt;/h3&gt;&lt;p&gt;ಗಾಲೆ: ಆ.15ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್&zwnj; ಪಂದ್ಯದಲ್ಲಿ ಭಾರತ ತಂಡ ಮೂವರು ಸ್ಪಿನ್ನರ್&zwnj;ಗಳನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಸ್ವತಃ ಬೌಲಿಂಗ್&zwnj; ಕೋಚ್&zwnj; ಮೋರ್ನೆ ಮೋರ್ಕೆಲ್&zwnj; ಸುಳಿವು ನೀಡಿದ್ದಾರೆ.&lt;/p&gt;&lt;p&gt;ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, &lsquo;ತಂಡದಲ್ಲಿ ಕುಲ್ದೀಪ್&zwnj; ಇದ್ದಾರೆ. ಅವರು ನಮ್ಮಲ್ಲಿ ಆಟ್ಯಾಕಿಂಗ್&zwnj; ಮತ್ತು ಅನುಭವಿ ಸ್ಪಿನ್ನರ್&zwnj;. ಮಾನವ್&zwnj; ಸುತಾರ್&zwnj; ಹೆಚ್ಚಿನ ತಿರುವು ಕಂಡುಕೊಳ್ಳುತ್ತಾರೆ. ಜಡೇಜಾ ನಿಖರ ದಾಳಿ ಮಾಡಬಲ್ಲರು. ಹೀಗಾಗಿ, ಈ ವಿಚಾರದಲ್ಲಿ(ಮೂವರು ಸ್ಪಿನ್ನರ್ಸ್&zwnj; ಆಡಿಸುವುದು) ನಮಗೆ ದೊಡ್ಡ ತಲೆಬಿಸಿ ಇಲ್ಲ. ಅಲ್ಲದೆ, ಸಾಂಪ್ರದಾಯಿಕವಾಗಿ ಗಾಲೆ ಪಿಚ್&zwnj; ಹೇಗೆ ವರ್ತಿಸುತ್ತದೆ ಎಂಬುದು ನಮಗೆ ಗೊತ್ತಿದೆ&rsquo; ಎಂದಿದ್ದಾರೆ.&lt;/p&gt;&lt;p&gt;ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್&zwnj;ನಲ್ಲಿ ಭಾರತ ತಂಡ ಮೂವರು ಎಡಗೈ ಸ್ಪಿನ್ನರ್&zwnj;ಗಳನ್ನು ಕಣಕ್ಕಿಳಿಸುವ ಸಾಧ್ಯತೆ. ಈ ಬಗ್ಗೆ ಬೌಲಿಂಗ್&zwnj; ಕೋಚ್&zwnj; ಮೋರ್ನೆ ಮೋರ್ಕೆಲ್&zwnj; ಸುಳಿವು. ಜಡೇಜಾ, ಕುಲ್ದೀಪ್ ಜೊತೆ ಮಾನವ್&zwnj; ಸುತಾರ್&zwnj;ಗೆ ಅವಕಾಶ ನಿರೀಕ್ಷೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/karnataka-cricket-team-vinay-kumar-appointed-new-head-coach-ksca-announces-coaching-staff-kvn/articleshow-kmy34dt"/>
        </item>
        <item>
            <title><![CDATA[ಸಿಜೆಐ ಬಗ್ಗೆ ಆಕ್ಷೇಪಿಸಿದ ಲಾ ವಿವಿ ಪದವೀಧರರ ನೋಂದಣಿ ಇಲ್ಲ: ಬಿಸಿಐ]]></title>
            <link>https://kannada.asianetnews.com/india-news/bci-stops-registration-nalsar-graduates-protesting-cji-surya-kant-san/articleshow-2z14q9h</link>
            <guid isPermaLink="true">https://kannada.asianetnews.com/india-news/bci-stops-registration-nalsar-graduates-protesting-cji-surya-kant-san/articleshow-2z14q9h</guid>
            <pubDate>Fri, 14 Aug 2026 09:42:32 +0530</pubDate>
            <description><![CDATA[ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಆಹ್ವಾನವನ್ನು ವಿರೋಧಿಸಿ ಪ್ರತಿಭಟಿಸಿದ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ವಿವಿ ವಿದ್ಯಾರ್ಥಿಗಳ ಮೇಲೆ ಭಾರತದ ವಕೀಲರ ಪರಿಷತ್ತು ಕಠಿಣ ಕ್ರಮ ಕೈಗೊಂಡಿದೆ. 2026ರಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳ ನೋಂದಣಿಗೆ ತಡೆ ನೀಡಿದ್ದು, ವಿವಿಯಿಂದ ವರದಿ ಕೇಳಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxwx3thp3qgzv938xv73hhf,imgname-nalsar-1786636046161.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.14):&lt;/strong&gt; ಸುಪ್ರೀಂ ಕೋರ್ಟ್&zwnj;ನ ಮುಖ್ಯ ನ್ಯಾ। ಸೂರ್ಯಕಾಂತ್&zwnj; ಅವರನ್ನು ಘಟಿಕೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದ ಹೈದರಾಬಾದ್&zwnj;ನ ಎನ್&zwnj;ಎಎಲ್&zwnj;ಎಸ್&zwnj;ಎಆರ್&zwnj; ವಿಶ್ವವಿದ್ಯಾಲಯದಿಂದ 2026ರಲ್ಲಿ ಪದವಿ ಪಡೆದ ಯಾರೊಬ್ಬರನ್ನೂ ನೋಂದಣಿ ಮಾಡಿಕೊಳ್ಳದಂತೆ ಭಾರತದ ವಕೀಲರ ಪರಿಷತ್ತು ಎಲ್ಲಾ ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ದೇಶಿಸಿದೆ. ಮುಂದಿನ ಆದೇಶದ ವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ.&lt;/p&gt;&lt;p&gt;ಸಿಜೆಪಿ ಆಯೋಜಿತ ಸಂಸತ್&zwnj; ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯದ ವಿಡಿಯೋ ನೋಡಲು ಸಮಯವಿಲ್ಲ ಎಂದ ಸಿಜೆಐ ಅವರನ್ನು ಘಟಿಕೋತ್ಸವಕ್ಕೆ ಕರೆಯಬಾರದು ಎಂದು ವಿವಿಯ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ, ಆ ಪ್ರತಿಭಟನೆ ಬಗ್ಗೆ 3 ದಿನದಲ್ಲಿ ವರದಿ ಕೊಡುವಂತೆ ಕುಲಪತಿಗೆ ಬಾರ್&zwnj; ಕೌನ್ಸಿಲ್&zwnj; ಆದೇಶಿಸಿದೆ ಹಾಗೂ ಆ.19ರಂದು ಅದರ ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಜತೆಗೆ ಪ್ರತಿಭಟನೆಗೆ ಕರೆ ನೀಡಿದವರು, ಭಾಗಿಯಾದವರು ಯಾರು? ಯಾವುದಾದರೂ ವಿದ್ಯಾರ್ಥಿ ಸಂಘಟನೆ ಭಾಗಿಯಾಗಿತ್ತೇ? ಅಧ್ಯಾಪಕರು ಕೂಡ ಭಾಗಿಯಾಗಿದ್ದರೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೇಳಿದೆ. ಅಂತಿಮ ನಿರ್ಧಾರವನ್ನು ವಕೀಲರ ಕಾಯಿದೆ, 1961ರ ಅನ್ವಯ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bci-stops-registration-nalsar-graduates-protesting-cji-surya-kant-san/articleshow-2z14q9h"/>
        </item>
        <item>
            <title><![CDATA[Sukanta Majumdar: ಪ್ರತಿಪಕ್ಷಗಳಿಗೆ ಉತ್ತರ ಬೇಕು, ಸಂಸತ್ತಿನಲ್ಲಿ ಚರ್ಚೆ ಬೇಡ;  ವಿರೋಧಪಕ್ಷಗಳ ಅಸಲಿ ಆಟ ಬಯಲು ಮಾಡಿದ ಕೇಂದ್ರ ಸಚಿವ!]]></title>
            <link>https://kannada.asianetnews.com/india-news/union-minister-sukanta-majumdar-slams-opposition-for-avoiding-parliament-debate-on-key-issues-rav/articleshow-xdpryig</link>
            <guid isPermaLink="true">https://kannada.asianetnews.com/india-news/union-minister-sukanta-majumdar-slams-opposition-for-avoiding-parliament-debate-on-key-issues-rav/articleshow-xdpryig</guid>
            <pubDate>Fri, 14 Aug 2026 09:38:43 +0530</pubDate>
            <description><![CDATA[ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಯಿಂದ ನುಣುಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ. ಚರ್ಚೆಗೆ ಸರ್ಕಾರ ಸಿದ್ಧವಿದ್ದು, ವಿಪಕ್ಷಗಳು ಭಾಗವಹಿಸಲಿ ಎಂದು ಸವಾಲು ಹಾಕಿದ್ದಾರೆ. ಆರ್‌ಜಿ ಕರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಕ್ರಮ ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz6vp701eg9yg1n1513083y,imgname-----------------------2026-08-14t093018.695-1786680039647.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಧ್ಯಮಗಳ ಮುಂದೆ ಕೇಂದ್ರ ಉತ್ತರಿಸಬೇಕು ಎಂದು ಆಗ್ರಹಿಸುವ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಚರ್ಚೆಗೆ ಬರದೇ ನುಣುಚಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಆರೋಪಿಸಿದ್ದಾರೆ. ವಿಪಕ್ಷಗಳು ಎತ್ತಿರುವ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;h2&gt;ಪ್ರತಿಪಕ್ಷಗಳು ಚರ್ಚೆಗೆ ಯಾಕೆ ಹಿಂದೇಟು?&lt;/h2&gt;&lt;p&gt;ಪ್ರತಿಪಕ್ಷಗಳು ಎತ್ತಿರುವ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳ ಮುಂದೆ ಕೇಂದ್ರ ಉತ್ತರಿಸಬೇಕು, ಮೋದಿ ಉತ್ತರಿಸಬೇಕು, ಅಮಿತ್ ಶಾ ಉತ್ತರಿಸಬೇಕು ಎನ್ನುವ ವಿಪಕ್ಷಗಳು ಸಂಸತ್ತಿನೊಳಗೆ ಚರ್ಚೆಗೆ ಬರುತ್ತಿಲ್ಲ. ವಾಸ್ತವವಾಗಿ ನಮ್ಮ ವಿರೋಧಿಗಳಿಗೆ ಚರ್ಚೆ ಬೇಕಾಗಿಲ್ಲ. ಚರ್ಚೆ ನಡೆಯಬೇಕು, ಉತ್ತರ ಪಡೆಯಬೇಕು ಎಂದರೆ ವಿರೋಧಪಕ್ಷಗಳು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಕೇಂದ್ರ ಸಚಿವರು, ಸದನದಲ್ಲಿ ವಿವರವಾದ ಚರ್ಚೆ ನಡೆದರೆ ಹಲವು ವಿಷಯಗಳು ಬೆಳಕಿಗೆ ಬರುತ್ತವೆ ಎಂದರು.&lt;/p&gt;&lt;h3&gt;ಆರ್&zwnj;ಜಿ ಕರ್ ಪ್ರಕರಣದ ಬಗ್ಗೆ ಮಮತಾ ಕ್ರಮ ಏನು?&lt;/h3&gt;&lt;p&gt;ಕೋಲ್ಕತ್ತಾದ ಆರ್&zwnj;.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕಿರಿಯ ವೈದ್ಯೆಯ ಅತ್ಯಾ೧ಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ನಾಯಕ ನಿರ್ಮಲ್ ಘೋಷ್ ಅವರ ಬಂಧನದ ಬಗ್ಗೆಯೂ ಮಜುಂದಾರ್ ಪ್ರಸ್ತಾಪಿಸಿದ ಕೇಂದ್ರ ಸಚಿವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಪ್ರಕರಣದ ಸುತ್ತಲಿನ ಹಲವು ವಿಷಯಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ ಎಂದರು.&lt;/p&gt;&lt;p&gt;ಈ ಪ್ರಕರಣದಲ್ಲಿನ ಲೋಪದೋಷಗಳಿಗೆ, ಸಾಕ್ಷ್ಯ ನಾಶಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಲ್ ಘೋಷ್ ಮತ್ತು ಇಬ್ಬರು ಶಾಸಕರನ್ನು ಪೊಲೀಸರು ಬಂಧಿಸಿರುವುದನ್ನು ಅವರು ಉಲ್ಲೇಖಿಸಿದರು. ಅಕ್ರಮ ಎಸಗಿದವರು ಮತ್ತು ಸಾಕ್ಷ್ಯ ನಾಶ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬುದು ಸರ್ಕಾರದ ಸ್ಪಷ್ಟ ನಿಲುವು ಎಂದು ಕೇಂದ್ರ ಸಚಿವರು ಹೇಳಿದರು.&lt;/p&gt;&lt;p&gt;ಸಂಸತ್ತಿನಲ್ಲಿನ ಚರ್ಚೆಗಳು ಮತ್ತು ಆರ್&zwnj;.ಜಿ. ಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ರಾಜಕೀಯ ಸಂಘರ್ಷ ತಾರಕಕ್ಕೇರಿರುವ ಹೊತ್ತಲ್ಲೇ ಅವರ ಈ ಹೇಳಿಕೆಗಳು ಬಂದಿವೆ. (ANI)&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/union-minister-sukanta-majumdar-slams-opposition-for-avoiding-parliament-debate-on-key-issues-rav/articleshow-xdpryig"/>
        </item>
        <item>
            <title><![CDATA[ಹಾಕಿ ವಿಶ್ವಕಪ್‌ 2026: 1975ರ ಬಳಿಕ ಮತ್ತೊಂದು ವಿಶ್ವಕಪ್‌ ಮೇಲೆ ಭಾರತದ ಕಣ್ಣು; ಭಾರತ-ಪಾಕ್‌ ಪಂದ್ಯ ಯಾವಾಗ?]]></title>
            <link>https://kannada.asianetnews.com/hockey-sports/hockey-world-cup-2026-india-begin-title-hunt-after-50-years-full-schedule-and-key-details-kvn/articleshow-legm78g</link>
            <guid isPermaLink="true">https://kannada.asianetnews.com/hockey-sports/hockey-world-cup-2026-india-begin-title-hunt-after-50-years-full-schedule-and-key-details-kvn/articleshow-legm78g</guid>
            <pubDate>Fri, 14 Aug 2026 09:28:54 +0530</pubDate>
            <description><![CDATA[16ನೇ ಆವೃತ್ತಿಯ ಪುರುಷರ ಹಾಗೂ ಮಹಿಳಾ ಹಾಕಿ ವಿಶ್ವಕಪ್‌ಗೆ ನೆದರ್‌ಲೆಂಡ್ಸ್‌ ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯದಲ್ಲಿ ಚಾಲನೆ ಸಿಗಲಿದೆ. 1975ರ ಬಳಿಕ ಮತ್ತೊಂದು ವಿಶ್ವಕಪ್‌ ಗೆಲ್ಲುವ ಕನಸಿನಲ್ಲಿರುವ ಭಾರತ ತಂಡ, ಪಾಕಿಸ್ತಾನ ಸೇರಿದಂತೆ ಬಲಿಷ್ಠ ತಂಡಗಳನ್ನು ಎದುರಿಸಲಿದೆ. ಟೂರ್ನಿಯ ಸಂಪೂರ್ಣ ಮಾಹಿತಿ ಮತ್ತು ಭಾರತ ತಂಡದ ವೇಳಾಪಟ್ಟಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw2prdjbhntt7rsj72q9w29g,imgname-hockey-1782502405707.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಮ್ಸ್&zwnj;ಟೆಲ್ವೀನ್&zwnj;(ನೆದರ್&zwnj;ಲೆಂಡ್ಸ್&zwnj;): 16ನೇ ಆವೃತ್ತಿಯ ಪುರುಷ ಹಾಗೂ ಮಹಿಳಾ ಹಾಕಿ ವಿಶ್ವಕಪ್&zwnj; ಟೂರ್ನಿಗೆ ಶನಿವಾರ(ಆ.15) ಚಾಲನೆ ಸಿಗಲಿದೆ. 4 ವರ್ಷಗಳಿಗೊಮ್ಮೆ ನಡೆಯುವ ಹಾಕಿ ವಿಶ್ವಕಪ್&zwnj;ಗೆ ಈ ಬಾರಿ ನೆದರ್&zwnj;ಲೆಂಡ್ಸ್&zwnj; ಹಾಗೂ ಬೆಲ್ಜಿಯಂ ಜಂಟಿ ಆತಿಥ್ಯ ವಹಿಸಲಿವೆ. ಪುರುಷರ ವಿಭಾಗದಲ್ಲಿ ಮಾಜಿ ಚಾಂಪಿಯನ್&zwnj; ಭಾರತ, ಹಾಲಿ ಚಾಂಪಿಯನ್&zwnj; ಜರ್ಮನಿ, ಗರಿಷ್ಠ ಬಾರಿ(4) ಚಾಂಪಿಯನ್ ಪಾಕಿಸ್ತಾನ ಸೇರಿದಂತೆ ಒಟ್ಟು 5 ಖಂಡಗಳ 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಮಹಿಳಾ ವಿಭಾಗದಲ್ಲಿ ಭಾರತ, 9 ಬಾರಿ ಚಾಂಪಿಯನ್&zwnj; ನೆದರ್&zwnj;ಲೆಂಡ್ಸ್&zwnj; ಕಣಕ್ಕಿಳಿಯಲಿದೆ.&lt;/p&gt;&lt;p&gt;ಒಟ್ಟು 16 ದಿನಗಳ ಕಾಲ ನೆದರ್&zwnj;ಲೆಂಡ್ಸ್&zwnj;ನ ಆಮ್ಸ್&zwnj;ಟೆಲ್ವೀನ್&zwnj; ನಗರದ ವ್ಯಾಗನರ್&zwnj; ಸ್ಟೇಡಿಯಂ, ಬೆಲ್ಜಿಯಂನ ವಾವ್ರೆ ನಗರದಲ್ಲಿರುವ ಸ್ಟೇಡ್&zwnj; ಜಸ್ಟಿನ್ ಪೀಟರ್ಸ್&zwnj; ಕ್ರೀಡಾಂಗಣ ಹಾಗೂ ಬೆಲ್ಫಿಯುಸ್&zwnj; ಕ್ರೀಡಾಂಗಣದಲ್ಲಿ ತಲಾ 50 ಪಂದ್ಯಗಳು ನಡೆಯಲಿವೆ. ಫೈನಲ್&zwnj; ಪಂದ್ಯ ಆ.30ರಂದು ನಿಗದಿಯಾಗಿದೆ. ನೆದರ್&zwnj;ಲೆಂಡ್ಸ್&zwnj; ಈ ಹಿಂದೆ 3 ಬಾರಿ ಟೂರ್ನಿಗೆ ಆತಿಥ್ಯ ವಹಿಸಿದ್ದು, ಈಗ 4ನೇ ವಿಶ್ವಕಪ್&zwnj; ಆತಿಥ್ಯಕ್ಕೆ ಸಜ್ಜಾಗಿದೆ. ಬೆಲ್ಜಿಯಂನಲ್ಲಿ ಇದೇ ಮೊದಲ ಬಾರಿ ವಿಶ್ವಕಪ್&zwnj; ಪಂದ್ಯಗಳು ನಡೆಯಲಿವೆ.&lt;/p&gt;&lt;h2&gt;&lt;strong&gt;ಟೂರ್ನಿ ಮಾದರಿ ಹೇಗೆ?:&lt;/strong&gt;&lt;/h2&gt;&lt;p&gt;ವಿಶ್ವಕಪ್&zwnj; 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಗುಂಪಿನಲ್ಲಿ ಪ್ರತಿ ತಂಡಗಳು ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಪ್ರತಿ ತಂಡಕ್ಕೆ ತಲಾ 3 ಪಂದ್ಯಗಳು. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್&zwnj; ಫೈನಲ್&zwnj;(ಒಟ್ಟು 8 ತಂಡ) ಪ್ರವೇಶಿಸಲಿವೆ. ಅಲ್ಲಿ ಗೆದ್ದರೆ ಸೆಮಿಫೈನಲ್&zwnj; ಪ್ರವೇಶಿಸಲಿದ್ದು, ಬಳಿಕ ಫೈನಲ್&zwnj; ಪಂದ್ಯ ನಡೆಯಲಿದೆ.&lt;/p&gt;&lt;p&gt;ಹೆಚ್ಚು ಸಲ ವಿಶ್ವಕಪ್&zwnj; ಗೆದ್ದಿದ್ದು ಪಾಕಿಸ್ತಾನ&lt;/p&gt;&lt;p&gt;1971ರಿಂದ 2023ರ ವರೆಗೆ ನಡೆದ ಒಟ್ಟು 15 ಆವೃತ್ತಿಗಳ ಪುರುಷರ ವಿಶ್ವಕಪ್&zwnj;ಗಳಲ್ಲಿ ಗರಿಷ್ಠ ಬಾರಿ ಚಾಂಪಿಯನ್&zwnj; ಆಗಿದ್ದು ಪಾಕಿಸ್ತಾನ. ತಂಡ 1971, 1978, 1982 ಹಾಗೂ 1994ರಲ್ಲಿ ಚಾಂಪಿಯನ್&zwnj; ಆಗಿದೆ. ನೆದರ್&zwnj;ಲೆಂಡ್ಸ್&zwnj;, ಆಸ್ಟ್ರೇಲಿಯಾ, ಜರ್ಮನಿ ತಲಾ 3 ಬಾರಿ ಟ್ರೋಫಿ ಗೆದ್ದಿದ್ದು, ಭಾರತ ಹಾಗೂ ಬೆಲ್ಜಿಯಂ ತಲಾ ಒಮ್ಮೆ ಚಾಂಪಿಯನ್&zwnj; ಆಗಿವೆ. ಇನ್ನು, ಮಹಿಳಾ ವಿಭಾಗದಲ್ಲಿ ನೆದರ್&zwnj;ಲೆಂಡ್ಸ್&zwnj; 9 ಬಾರಿ ಕಪ್&zwnj; ಗೆದ್ದಿದೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಜರ್ಮನಿ ತಲಾ 2 ಬಾರಿ ಚಾಂಪಿಯನ್&zwnj; ಆಗಿವೆ.&lt;/p&gt;&lt;p&gt;----&lt;/p&gt;&lt;h3&gt;&lt;strong&gt;1975ರ ಬಳಿಕ ಮತ್ತೊಂದು ಕಪ್&zwnj; ಮೇಲೆ ಭಾರತದ ಕಣ್ಣು&lt;/strong&gt;&lt;/h3&gt;&lt;p&gt;ಆಮ್ಸ್&zwnj;ಟೆಲ್ವೀನ್&zwnj;: ಒಂದು ಕಾಲದಲ್ಲಿ ಹಾಕಿ ಜಗತ್ತನ್ನು ಆಳುತ್ತಿದ್ದ ಭಾರತ ತಂಡ ಈಗ ತನ್ನ ಸಾಂಪ್ರದಾಯಿಕ ಕ್ರೀಡೆಯಲ್ಲಿ ಮಂಕಾಗಿದೆ. ತಂಡ ಕಳೆದ 5 ದಶಕಗಳಲ್ಲಿ ಒಮ್ಮೆಯೂ ಹಾಕಿ ವಿಶ್ವಕಪ್&zwnj;ನಲ್ಲಿ ಚಾಂಪಿಯನ್&zwnj; ಆಗಿಲ್ಲ. ಈ ಅವಧಿಯಲ್ಲಿ ಒಂದು ಬಾರಿಯೂ ಸೆಮಿಫೈನಲ್&zwnj;ಗೂ ತಲುಪಿಲ್ಲ ಎಂಬುದು ಅಚ್ಚರಿ.&lt;/p&gt;&lt;p&gt;ಕಳೆದೆರಡು ಬಾರಿ ತವರಿನಲ್ಲಿ ವಿಶ್ವಕಪ್&zwnj; ನಡೆದಾಗಲೂ ಭಾರತ ಪುರುಷರ ತಂಡ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿಯೇ ಈ ಬಾರಿಯೂ ತಂಡಕ್ಕೆ ಕಠಿಣ ಸವಾಲು ಎದುರಾಗುವುದು ಖಚಿತ. 1971ರಲ್ಲಿ 3ನೇ ಸ್ಥಾನಿಯಾಗಿದ್ದ ತಂಡ, 1973ರಲ್ಲಿ ರನ್ನರ್&zwnj;-ಅಪ್ ಆಗಿತ್ತು. 1975ರಲ್ಲಿ ಅಜಿತ್&zwnj; ಪಾಲ್&zwnj; ಸಿಂಗ್&zwnj; ನಾಯಕತ್ವದಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಆ ಬಳಿಕ ತಂಡಕ್ಕೆ ಕಪ್&zwnj; ಸಿಕ್ಕಿಲ್ಲ.&lt;/p&gt;&lt;p&gt;ಈ ಬಾರಿ ತಂಡ &lsquo;ಡಿ&rsquo; ಗುಂಪಿನಲ್ಲಿದ್ದು, ಆ.15ರಂದು ಮೊದಲ ಪಂದ್ಯದಲ್ಲಿ ವೇಲ್ಸ್&zwnj; ವಿರುದ್ಧ ಆಡಲಿದೆ. ಬಳಿಕ ಆ.17ರಂದು ಇಂಗ್ಲೆಂಡ್&zwnj; ವಿರುದ್ಧ ಕಣಕ್ಕಿಳಿಯಲಿದ್ದು, ಅ.19ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.&lt;/p&gt;&lt;p&gt;ಇನ್ನು, ಮಹಿಳಾ ತಂಡ ಈವರೆಗೆ ಒಮ್ಮೆಯೂ ಫೈನಲ್&zwnj;ಗೇರಿಲ್ಲ. ತಂಡಕ್ಕೆ ಈ ಬಾರಿ ಚೀನಾ, ಇಂಗ್ಲೆಂಡ್&zwnj;, ದಕ್ಷಿಣ ಆಫ್ರಿಕಾ ಸವಾಲು ಎದುರಾಗಲಿದೆ.&lt;/p&gt;&lt;p&gt;&lt;strong&gt;ಭಾರತ ಪುರುಷರ ವೇಳಾಪಟ್ಟಿ&lt;/strong&gt;&lt;/p&gt;&lt;p&gt;ಎದುರಾಳಿ ದಿನಾಂಕ ಸಮಯ&lt;/p&gt;&lt;p&gt;ವೇಲ್ಸ್&zwnj; ಆ.15 ಸಂಜೆ 4.30&lt;/p&gt;&lt;p&gt;ಇಂಗ್ಲೆಂಡ್&zwnj; ಆ.17 ಸಂಜೆ 6.30&lt;/p&gt;&lt;p&gt;ಪಾಕಿಸ್ತಾನ ಆ.19 ಸಂಜೆ 6.30&lt;/p&gt;&lt;p&gt;&lt;strong&gt;ಭಾರತ ಮಹಿಳೆಯರ ವೇಳಾಪಟ್ಟಿ&lt;/strong&gt;&lt;/p&gt;&lt;p&gt;ಎದುರಾಳಿ ದಿನಾಂಕ ಸಮಯ&lt;/p&gt;&lt;p&gt;ಚೀನಾ ಆ.16 ಸಂಜೆ 4.30&lt;/p&gt;&lt;p&gt;ದ.ಆಫ್ರಿಕಾ ಆ.18 ಸಂಜೆ 6.30&lt;/p&gt;&lt;p&gt;ಇಂಗ್ಲೆಂಡ್&zwnj; ಆ.20 ಸಂಜೆ 6.30&lt;/p&gt;&lt;p&gt;(ವಿಶ್ವಕಪ್&zwnj; ಪಂದ್ಯಗಳು ಭಾರತದಲ್ಲಿ ಸ್ಟಾರ್&zwnj;ಸ್ಪೋರ್ಟ್ಸ್&zwnj; ಹಾಗೂ ಜಿಯೋ ಹಾಟ್&zwnj;ಸ್ಟಾರ್&zwnj;ನಲ್ಲಿ ಪ್ರಸಾರ)&lt;/p&gt;]]></content:encoded>
            <category><![CDATA[hockey-sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/hockey-sports/hockey-world-cup-2026-india-begin-title-hunt-after-50-years-full-schedule-and-key-details-kvn/articleshow-legm78g"/>
        </item>
        <item>
            <title><![CDATA[ಚಂದ್ರಶೇಖರನ್‌ ರಾಜೀನಾಮೆ ಬೆನ್ನಲ್ಲೇ 'ಬಾಂಬೆ ಹೌಸ್' ಮುಂದಿನ ಸಾರಥಿ ಯಾರು?: ರೇಸ್‌ನಲ್ಲಿದ್ದಾರೆ ಟಾಟಾ ಸ್ಟೀಲ್ ಎಂಡಿ!]]></title>
            <link>https://kannada.asianetnews.com/business/who-will-replace-chandrasekaran-tata-sons-chairman-tv-narendran-san/articleshow-sbu9zy3</link>
            <guid isPermaLink="true">https://kannada.asianetnews.com/business/who-will-replace-chandrasekaran-tata-sons-chairman-tv-narendran-san/articleshow-sbu9zy3</guid>
            <pubDate>Fri, 14 Aug 2026 08:47:57 +0530</pubDate>
            <description><![CDATA[ಎನ್ ಚಂದ್ರಶೇಖರನ್ ಅವರ ರಾಜೀನಾಮೆ ಘೋಷಣೆಯ ನಂತರ ಟಾಟಾ ಸನ್ಸ್‌ನ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುತೂಹಲ ಕೆರಳಿಸಿದೆ. ಕಾನೂನು ತೊಡಕುಗಳು ಮತ್ತು ನಿಯಮಾವಳಿಗಳ ಅಡ್ಡಿಗಳ ನಡುವೆ, ಟಾಟಾ ಸ್ಟೀಲ್‌ನ ಎಂಡಿ ಟಿ.ವಿ. ನರೇಂದ್ರನ್ ಅವರು ಈ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz491wt7nw7exk7xhck59mz,imgname-tv-narendran-1786677331866.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.14): &lt;/strong&gt;ಬಾಂಬೆ ಹೌಸ್&zwnj;ನಲ್ಲಿ (ಟಾಟಾ ಸಮೂಹದ ಪ್ರಧಾನ ಕಚೇರಿ) ನಾಯಕತ್ವ ಬದಲಾವಣೆ ಎಂದರೆ ಅಲ್ಲಿ ಒಂದಿಲ್ಲೊಂದು ದೊಡ್ಡ ಮಟ್ಟದ ಹೈಡ್ರಾಮಾಗಳು ನಡೆಯುವುದು ಕಳೆದ ಕೆಲವು ದಶಕಗಳಿಂದ ಮಾಮೂಲಾಗಿಬಿಟ್ಟಿದೆ. ಇದೀಗ ಎನ್&zwnj; ಚಂದ್ರಶೇಖರನ್ ಅವರ ದಿಢೀರ್ ರಾಜೀನಾಮೆ ಘೋಷಣೆಯು, ಕಳೆದ ಕೆಲವು ತಿಂಗಳುಗಳಿಂದ ಟಾಟಾ ಸನ್ಸ್ ಹಾಗೂ ಟಾಟಾ ಟ್ರಸ್ಟ್ ಆಡಳಿತ ಮಂಡಳಿಗಳ ನಡುವೆ ನಡೆಯುತ್ತಿದ್ದ ಜಟಾಪಟಿಗೆ ಮತ್ತಷ್ಟು ಗೊಂದಲ ಮತ್ತು ಕುತೂಹಲಗಳನ್ನು ಸೇರಿಸಿದೆ. ಚಂದ್ರಶೇಖರನ್ ಅವರ ನಿರ್ಗಮನದ ನಂತರ, &quot;ಟಾಟಾ ಸನ್ಸ್&zwnj;ನ ಮುಂದಿನ ಸಾರಥಿ ಯಾರು?&quot; ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡಲಾರಂಭಿಸಿದೆ. ಚಂದ್ರಶೇಖರನ್ ಅವರು ಫೆಬ್ರವರಿ 2027ರವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಹೀಗಾಗಿ ನಾಯಕತ್ವದ ಸುಸೂತ್ರ ಹಸ್ತಾಂತರಕ್ಕೆ ಟಾಟಾ ಸನ್ಸ್&zwnj;ಗೆ ಸಾಕಷ್ಟು ಸಮಯ ಲಭ್ಯವಿದೆ.&lt;/p&gt;&lt;h2&gt;&lt;strong&gt;ಆಯ್ಕೆ ಸಮಿತಿ ರಚನೆ ಮತ್ತು ಹೊಸ ಕಾನೂನು ತೊಡಕು&lt;/strong&gt;&lt;/h2&gt;&lt;p&gt;ಟಾಟಾ ಸನ್ಸ್ ನಿಯಮಾವಳಿಗಳ ಪ್ರಕಾರ, ಹೊಸ ಅಧ್ಯಕ್ಷರನ್ನು ಐದು ಸದಸ್ಯರ ಸಮಿತಿ ಆಯ್ಕೆ ಮಾಡುತ್ತದೆ. ಇದರಲ್ಲಿ ಮೂವರು ಸದಸ್ಯರನ್ನು 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್' ಮತ್ತು 'ಸರ್ ರತನ್ ಟಾಟಾ ಟ್ರಸ್ಟ್' (SRTT) ಜಂಟಿಯಾಗಿ ನಾಮನಿರ್ದೇಶನ ಮಾಡುತ್ತದೆ. ಟಾಟಾ ಸನ್ಸ್ ಆಡಳಿತ ಮಂಡಳಿಯಿಂದ ಒಬ್ಬ ಸದಸ್ಯರು ನಾಮನಿರ್ದೇಶನಗೊಳ್ಳುತ್ತಾರೆ. ಐದನೇ ವ್ಯಕ್ತಿ ಆಡಳಿತ ಮಂಡಳಿಯಿಂದ ಆಯ್ಕೆಯಾಗುವ ಸ್ವತಂತ್ರ ಸದಸ್ಯರಾಗಿರುತ್ತಾರೆ.&lt;/p&gt;&lt;p&gt;ಆದರೆ, ಇಲ್ಲಿ ಒಂದು ದೊಡ್ಡ ತೊಡಕು ಎದುರಾಗಿದೆ. ಮಹಾರಾಷ್ಟ್ರ ಚಾರಿಟಿ ಕಮಿಷನರ್ ನೀಡಿದ ನಿರ್ದೇಶನದ ನಂತರ 'ಸರ್ ರತನ್ ಟಾಟಾ ಟ್ರಸ್ಟ್'ಗೆ ಧರ್ಮದರ್ಶಿಗಳ (ಟ್ರಸ್ಟಿ) ಸಭೆಯನ್ನು ಕರೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಸ್ತುತ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅದಕ್ಕೆ ಸಾಧ್ಯವಾಗದಿರುವುದು ಚಂದ್ರಶೇಖರನ್ ಉತ್ತರಾಧಿಕಾರಿ ಆಯ್ಕೆಗೆ ದೊಡ್ಡ ಹಿನ್ನಡೆಯಾಗಿದೆ.&lt;/p&gt;&lt;h2&gt;&lt;strong&gt;ಮಧ್ಯಂತರ ಅಧ್ಯಕ್ಷರಾಗಲು ನೋಯೆಲ್ ಟಾಟಾಗೆ ನಿಯಮಾವಳಿ ಅಡ್ಡಿ!&lt;/strong&gt;&lt;/h2&gt;&lt;p&gt;ನೋಯೆಲ್ ಟಾಟಾ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಚರ್ಚೆಗಳು ನಡೆದಿದ್ದವು. ನೋಯೆಲ್ ಅವರು ಟಾಟಾ ಗ್ರೂಪ್&zwnj; ಇತರ ಕಂಪನಿಗಳ ನನ್-ಎಕ್ಸಿಕ್ಯೂಟಿವ್ ಡೈರೆಕ್ಟರ್&zwnj;ಗಳ ನಿವೃತ್ತಿ ವಯಸ್ಸು (70 ವರ್ಷ) ನಿಯಮದಂತೆ ನವೆಂಬರ್&zwnj;ನಲ್ಲಿ ನಿವೃತ್ತರಾಗಲಿದ್ದಾರೆ. ಆದರೆ, ಅವರು ಟ್ರಸ್ಟ್&zwnj;ನ ಪ್ರತಿನಿಧಿಯಾಗಿರುವುದರಿಂದ ಟಾಟಾ ಸನ್ಸ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ. ಏಕೆಂದರೆ ಟ್ರಸ್ಟ್ ಪ್ರತಿನಿಧಿಗಳಿಗೆ ಯಾವುದೇ ನಿವೃತ್ತಿ ವಯಸ್ಸಿನ ಮಿತಿ ಇರುವುದಿಲ್ಲ.&lt;/p&gt;&lt;p&gt;ಈ ಹಿಂದೆ 2016 ರಲ್ಲಿ ಸೈರಸ್ ಮಿಸ್ಟ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿದಾಗ, ಆ ಸಮಯದಲ್ಲಿ 78 ವರ್ಷದವರಾಗಿದ್ದ ರತನ್ ಟಾಟಾ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಸಂಸ್ಥೆಯಲ್ಲಿ ಸ್ಥಿರತೆ ತರಲು ಚಂದ್ರಶೇಖರನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೆ, ಈಗ ನೋಯೆಲ್ ಟಾಟಾ ಅವರಿಗೆ ರತನ್ ಟಾಟಾ ಹಾದಿ ತುಳಿಯಲು ಸಾಧ್ಯವಿಲ್ಲ. 2022 ರಲ್ಲಿ ತಂದ ತಿದ್ದುಪಡಿಯ ಪ್ರಕಾರ, ಟಾಟಾ ಟ್ರಸ್ಟ್ ಅಧ್ಯಕ್ಷರಾಗಿರುವವರು ಟಾಟಾ ಸನ್ಸ್ ಅಧ್ಯಕ್ಷರಾಗುವಂತಿಲ್ಲ! ಈ ಎರಡೂ ಹುದ್ದೆಗಳನ್ನು ಒಟ್ಟಿಗೆ ವಹಿಸಿಕೊಂಡಿದ್ದ ಕೊನೆಯ ವ್ಯಕ್ತಿ ರತನ್ ಟಾಟಾ ಮಾತ್ರ.&lt;/p&gt;&lt;h2&gt;&lt;strong&gt;ರೇಸ್&zwnj;ನಲ್ಲಿ ಟಾಟಾ ಸ್ಟೀಲ್ ಎಂಡಿ ಟಿ.ವಿ. ನರೇಂದ್ರನ್!&lt;/strong&gt;&lt;/h2&gt;&lt;p&gt;ಅಧ್ಯಕ್ಷ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರುಗಳಲ್ಲಿ ಟಾಟಾ ಸ್ಟೀಲ್&zwnj;ನ ಮ್ಯಾನೇಜಿಂಗ್ ಡೈರೆಕ್ಟರ್ 61 ವರ್ಷದ ಟಿ.ವಿ. ನರೇಂದ್ರನ್ ಅವರದ್ದು. 1988 ರಲ್ಲಿ ಟಾಟಾ ಗ್ರೂಪ್&zwnj;ಗೆ ಸೇರಿದ ನರೇಂದ್ರನ್ ಅವರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ಟಾಟಾ ಸ್ಟೀಲ್&zwnj;ನಲ್ಲೇ ಕಳೆದಿದ್ದಾರೆ. 2013 ರಿಂದ ಅವರು ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಟಾಟಾ ಸನ್ಸ್ ನಿರ್ದೇಶಕ ಹಾಗೂ ಟಾಟಾ ಟ್ರಸ್ಟ್ ಅಧ್ಯಕ್ಷರಾಗಿರುವ ನೋಯೆಲ್ ಟಾಟಾ ಅವರು ಟಾಟಾ ಸ್ಟೀಲ್&zwnj;ನ ವೈಸ್-ಚೇರ್ಮನ್ ಆಗಿದ್ದಾರೆ. ಸಂಸ್ಥೆ ಕಷ್ಟದಲ್ಲಿದ್ದ ಸಮಯದಲ್ಲಿ ರತನ್ ಟಾಟಾ ಅವರು ತಮಗೆ ಮಾರ್ಗದರ್ಶಕರಾಗಿದ್ದರು ಎಂದು ನರೇಂದ್ರನ್ ಈ ಹಿಂದೆ ಹಲವು ಬಾರಿ ಸ್ಮರಿಸಿಕೊಂಡಿದ್ದಾರೆ. ಹೀಗಾಗಿ, ಅನುಭವ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಟಿ.ವಿ. ನರೇಂದ್ರನ್ ಅವರು ಟಾಟಾ ಸನ್ಸ್&zwnj;ನ ಮುಂದಿನ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Santosh Naik</dc:creator>
            <atom:link href="https://kannada.asianetnews.com/business/who-will-replace-chandrasekaran-tata-sons-chairman-tv-narendran-san/articleshow-sbu9zy3"/>
        </item>
        <item>
            <title><![CDATA[Flipkart Freedom Sale: ಮೋಟೋರೋಲಾದ 50MP ಕ್ಯಾಮೆರಾ, AI ಫೀಚರ್‌ನ 5G ಫೋನ್‌ಗಳ ಮೇಲೆ ₹10,000 ಡಿಸ್ಕೌಂಟ್!]]></title>
            <link>https://kannada.asianetnews.com/mobiles/flipkart-freedom-sale-2026-motorola-5g-smartphones-heavy-discount-offers/articleshow-90h3ry5</link>
            <guid isPermaLink="true">https://kannada.asianetnews.com/mobiles/flipkart-freedom-sale-2026-motorola-5g-smartphones-heavy-discount-offers/articleshow-90h3ry5</guid>
            <pubDate>Fri, 14 Aug 2026 08:39:22 +0530</pubDate>
            <description><![CDATA[ಫ್ಲಿಪ್‌ಕಾರ್ಟ್‌ನ 'ಫ್ರೀಡಂ ಸೇಲ್ 2026' ಆರಂಭವಾಗಿದ್ದು, ಮೋಟೋರೋಲಾ 5G ಸ್ಮಾರ್ಟ್‌ಫೋನ್‌ಗಳ ಮೇಲೆ ₹10,000 ವರೆಗೆ ಭಾರಿ ರಿಯಾಯಿತಿ ಲಭ್ಯವಿದೆ. ಈ ಸೇಲ್‌ನಲ್ಲಿ AI ಫೀಚರ್‌ಗಳು, ಮಿಲಿಟರಿ ಗ್ರೇಡ್ ಬಾಳಿಕೆ ಮತ್ತು ವಾಟರ್ ಪ್ರೂಫ್ ರೇಟಿಂಗ್ ಹೊಂದಿರುವ ಬಜೆಟ್, ಮಿಡ್-ರೇಂಜ್ ಮತ್ತು ಪ್ರೀಮಿಯಂ ಫೋನ್‌ಗಳು ಆಕರ್ಷಕ ಬೆಲೆಯಲ್ಲಿ ಸಿಗುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz3pt821e940m5q35gwfmnn,imgname-flipkart-freedom-sale-1786676734208.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೊಸ 5G ಸ್ಮಾರ್ಟ್&zwnj;ಫೋನ್ ಖರೀದಿಸಲು ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ! ಪ್ರಖ್ಯಾತ ಇ-ಕಾಮರ್ಸ್ ದೈತ್ಯ ಫ್ಲಿಪ್&zwnj;ಕಾರ್ಟ್&zwnj;ನಲ್ಲಿ 'ಫ್ರೀಡಂ ಸೇಲ್ 2026' (Flipkart Freedom Sale 2026) ಆರಂಭವಾಗಿದೆ. ಈ ವಿಶೇಷ ಸೇಲ್&zwnj;ನಲ್ಲಿ ಮೋಟೋರೋಲಾ (Motorola) ಕಂಪನಿಯ AI ಫೀಚರ್&zwnj;ಗಳು, MIL-STD-810H ಮಿಲಿಟರಿ ಗ್ರೇಡ್ ಬಾಳಿಕೆ ಮತ್ತು IP68/IP69 ವಾಟರ್ ಪ್ರೂಫ್ ರೇಟಿಂಗ್ ಹೊಂದಿರುವ ಪ್ರಮುಖ 5G ಫೋನ್&zwnj;ಗಳ ಮೇಲೆ ಗರಿಷ್ಠ ₹10,000 ವರೆಗೆ ಭಾರಿ ಡಿಸ್ಕೌಂಟ್ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಬಜೆಟ್, ಮಿಡ್-ರೇಂಜ್ ಮತ್ತು ಪ್ರೀಮಿಯಂ ಸೆಗ್ಮೆಂಟ್&zwnj;ನ 6 ಅತ್ಯುತ್ತಮ ಮೋಟೋರೋಲಾ ಫೋನ್&zwnj;ಗಳ ಆಫರ್ ವಿವರ ಇಲ್ಲಿದೆ:&lt;/strong&gt;&lt;/h3&gt;&lt;h2&gt;&lt;strong&gt;1. ಮೋಟೋರೋಲಾ ರೇಝರ್ ಫೋಲ್ಡ್ (Motorola Razr Fold)&lt;/strong&gt;&lt;/h2&gt;&lt;p&gt;ಸೇಲ್&zwnj;ನಲ್ಲಿ ಅತ್ಯಂತ ದೊಡ್ಡ ರಿಯಾಯಿತಿ ಪಡೆದಿರುವ ಫೋಲ್ಡ್ ಶೈಲಿಯ ಫೋನ್ ಇದಾಗಿದೆ.&lt;/p&gt;&lt;p&gt;ಸಾಮಾನ್ಯ ಬೆಲೆ: ₹1,49,999 | ಸೇಲ್ ಬೆಲೆ: ₹1,39,999 (₹10,000 ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: 6.9 ಇಂಚಿನ LTPO AMOLED ಫೋಲ್ಡಬಲ್ ಡಿಸ್ಪ್ಲೇ, 3.6 ಇಂಚಿನ ಕವರ್ ಸ್ಕ್ರೀನ್, ಡ್ಯುಯಲ್ 50MP ಕ್ಯಾಮೆರಾ, 4,700mAh ಬ್ಯಾಟರಿ ಮತ್ತು 68W ಫಾಸ್ಟ್ ಚಾರ್ಜಿಂಗ್ ಬೆಂಬಲ.&lt;/p&gt;&lt;h2&gt;&lt;strong&gt;2. ಮೋಟೋರೋಲಾ ಸಿಗ್ನೇಚರ್ (Motorola Signature)&lt;/strong&gt;&lt;/h2&gt;&lt;p&gt;ಪ್ರೀಮಿಯಂ ಲುಕ್ ಮತ್ತು ಅತ್ಯುತ್ತಮ ಕ್ಯಾಮೆರಾ ಬಯಸುವವರಿಗೆ ಇದು ಸೂಕ್ತ.&lt;/p&gt;&lt;p&gt;ಸಾಮಾನ್ಯ ಬೆಲೆ: ₹57,499 | ಸೇಲ್ ಬೆಲೆ: ₹52,499 (₹5,000 ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: OLED ಡಿಸ್ಪ್ಲೇ, ಹೈ-ರೆಸಲ್ಯೂಶನ್ ಹೊಂದಿರುವ ನಾಲ್ಕು 50MP ಕ್ಯಾಮೆರಾಗಳು, ಅಡ್ವಾನ್ಸ್ಡ್ AI ಫೀಚರ್&zwnj;ಗಳು.&lt;/p&gt;&lt;h2&gt;&lt;strong&gt;3. ಮೋಟೋರೋಲಾ ಎಡ್ಜ್ 60 ಪ್ರೋ (Motorola Edge 60 Pro)&lt;/strong&gt;&lt;/h2&gt;&lt;p&gt;ಸಾಮಾನ್ಯ ಬೆಲೆ: ₹33,999 | ಸೇಲ್ ಬೆಲೆ: ₹28,999 (₹5,000 ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: 6.7 ಇಂಚಿನ ಕ್ವಾಡ್ ಕರ್ವ್ಡ್ pOLED ಡಿಸ್ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 8350 ಎಕ್ಸ್&zwnj;ಟ್ರೀಮ್ ಪ್ರೊಸೆಸರ್, 50MP Sony LYTIA OIS ಕ್ಯಾಮೆರಾ, 6000mAh ದೈತ್ಯ ಬ್ಯಾಟರಿ ಮತ್ತು 90W ಟರ್ಬೋಪವರ್ ಚಾರ್ಜಿಂಗ್.&lt;/p&gt;&lt;h2&gt;&lt;strong&gt;4. ಮೋಟೋ ಜಿ37 ಪವರ್ (Moto G37 Power)&lt;/strong&gt;&lt;/h2&gt;&lt;p&gt;ರಫ್ ಅಂಡ್ ಟಫ್ ಬಳಕೆಗೆ ಹೇಳಿಮಾಡಿಸಿದ ಬಜೆಟ್ ಫೋನ್.&lt;/p&gt;&lt;p&gt;ಆಫರ್ ಬೆಲೆ: ₹13,999 (₹6,000 ನೇರ ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: MIL-STD-810H ಮಿಲಿಟರಿ ಸ್ಟ್ಯಾಂಡರ್ಡ್ ಸರ್ಟಿಫೈಡ್ ಬಾಳಿಕೆ, ವೀಗನ್ ಲೆದರ್ ಬ್ಯಾಕ್ ಫಿನಿಶ್ ಮತ್ತು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನದ 50MP ಪ್ರಾಥಮಿಕ ಕ್ಯಾಮೆರಾ.&lt;/p&gt;&lt;h2&gt;&lt;strong&gt;5. ಮೋಟೋರೋಲಾ ಎಡ್ಜ್ 70 (Motorola Edge 70)&lt;/strong&gt;&lt;/h2&gt;&lt;p&gt;ಸಾಮಾನ್ಯ ಬೆಲೆ: ₹34,999 | ಸೇಲ್ ಬೆಲೆ: ₹27,999 (₹6,000 ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: 6.7 ಇಂಚಿನ 1.5K pOLED 120Hz ಡಿಸ್ಪ್ಲೇ, ಡೈಮೆನ್ಸಿಟಿ 7400 ಪ್ರೊಸೆಸರ್, 50MP Sony OIS ಕ್ಯಾಮೆರಾ, IP68/IP69 ರೇಟಿಂಗ್ ಹಾಗೂ ಮಿಲಿಟರಿ ಗ್ರೇಡ್ ಬಾಳಿಕೆ.&lt;/p&gt;&lt;h2&gt;&lt;strong&gt;6. ಮೋಟೋ ಜಿ37 (Moto G37)&lt;/strong&gt;&lt;/h2&gt;&lt;p&gt;ಕಡಿಮೆ ಬಜೆಟ್&zwnj;ನಲ್ಲಿ ಉತ್ತಮ 5G ಫೋನ್ ಹುಡುಕುತ್ತಿರುವವರಿಗೆ ಇದು ಬೆಸ್ಟ್ ಚಾಯ್ಸ್.&lt;/p&gt;&lt;p&gt;ಸಾಮಾನ್ಯ ಬೆಲೆ: ₹15,999 | ಸೇಲ್ ಬೆಲೆ: ₹13,999 (₹2,000 ರಿಯಾಯಿತಿ)&lt;/p&gt;&lt;p&gt;ಫೀಚರ್&zwnj;ಗಳು: 120Hz ಡಿಸ್ಪ್ಲೇ, 5G ಬೆಂಬಲ, 50MP AI ಕ್ಯಾಮೆರಾ ಮತ್ತು 5000mAh ಬ್ಯಾಟರಿ.&lt;/p&gt;&lt;p&gt;ಒಟ್ಟಾರೆಯಾಗಿ ಆಫರ್&zwnj;ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದ್ದು, ಬ್ಯಾಂಕ್ ಕಾರ್ಡ್&zwnj;ಗಳನ್ನು ಬಳಸಿದರೆ ಹೆಚ್ಚುವರಿ ಡಿಸ್ಕೌಂಟ್ ಹಾಗೂ ಎಕ್ಸ್&zwnj;ಚೇಂಜ್ ಆಫರ್&zwnj;ಗಳನ್ನು ಸಹ ಪಡೆಯಬಹುದು.&lt;/p&gt;]]></content:encoded>
            <category><![CDATA[mobiles]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/mobiles/flipkart-freedom-sale-2026-motorola-5g-smartphones-heavy-discount-offers/articleshow-90h3ry5"/>
        </item>
        <item>
            <title><![CDATA[ರಾಕೆಟ್‌ನಂತೆ ಚಲಿಸುತ್ತೆ ಚೀನಾದ ಹೊಸ ರೈಲು, ಗಂಟೆಗೆ 800 ಕಿ.ಮೀ ವೇಗ]]></title>
            <link>https://kannada.asianetnews.com/viral/china-maglev-train-sets-world-record-800-kmph-speed-san/articleshow-dn5c1d3</link>
            <guid isPermaLink="true">https://kannada.asianetnews.com/viral/china-maglev-train-sets-world-record-800-kmph-speed-san/articleshow-dn5c1d3</guid>
            <pubDate>Fri, 14 Aug 2026 08:11:50 +0530</pubDate>
            <description><![CDATA[ಚೀನಾದ ಮ್ಯಾಗ್ಲೇವ್‌ ಬುಲೆಟ್‌ ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗವನ್ನು ತಲುಪುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಈ ಕಾಂತೀಯ ತೇಲುವಿಕೆ ತಂತ್ರಜ್ಞಾನವನ್ನು ಸಾರ್ವಜನಿಕ ಸಾರಿಗೆಗೆ ಬಳಸಾಗೋದಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz277mbp579mnwfqz3z29qf,imgname-china-new-bullet-train-1786675175051.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀಜಿಂಗ್&zwnj; (ಆ.14): &lt;/strong&gt;ಚೀನಾದ ಮ್ಯಾಗ್ಲೇವ್&zwnj; ಬುಲೆಟ್&zwnj; ರೈಲು ಕೇವಲ 5.3 ಸೆಕೆಂಡುಗಳಲ್ಲಿ ಗಂಟೆಗೆ 800 ಕಿ.ಮೀ. ವೇಗ ಪಡೆಯುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದೆ. ಜತೆಗೆ, ಕಳೆದ 6 ತಿಂಗಳಲ್ಲಿ 3ನೇ ಬಾರಿ ತನ್ನದೇ ದಾಖಲೆಯನ್ನು ಮುರಿದಿದೆ. ಹುಬೆ ಪ್ರಾಂತ್ಯದ ಡೊಂಗು ಪ್ರಯೋಗಾಲಯದಲ್ಲಿರುವ 1 ಕಿ.ಮೀ. ಟ್ರ್ಯಾಕ್&zwnj;ನಲ್ಲಿ ರೈಲಿನ ಮಾದರಿಯನ್ನು ಮ್ಯಾಗ್ಲೇವ್&zwnj; (ಕಾಂತೀಯ ತೇಲುವಿಕೆ) ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಸ್ಟಾರ್ಟ್&zwnj; ಆದ 5.3 ಸೆಕೆಂಡುಗಳಲ್ಲೇ ಅದು, ಗಂಟೆಗೆ 800 ಕಿ.ಮೀ. ಕ್ರಮಿಸುವಷ್ಟು ವೇಗವಾಗಿ ಓಡಲು ಆರಂಭಿಸಿತು. ಹೀಗೆ 200 ಮೀ. ಓಡುತ್ತಿದ್ದಂತೆ ಅದನ್ನು ನಿಲ್ಲಿಸಲಾಯಿತು. ಈ ಮೂಲಕ, ಗರಿಷ್ಠ ವೇಗದಲ್ಲಿ ಚಲಿಸುತ್ತಿರುವಾಗ ಬ್ರೇಕಿಂಗ್&zwnj; ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಪರೀಕ್ಷಿಸಲಾಯಿತು.&lt;/p&gt;&lt;p&gt;2025ರ ಜೂನ್&zwnj;ನಲ್ಲಿ ನಡೆದ ಪರೀಕ್ಷೆ ವೇಳೆ ಈ ರೈಲು 7 ಸೆಕೆಂಡಲ್ಲಿ ಗಂಟೆಗೆ 650 ಕಿ.ಮೀ. ವೇಗ ಪಡೆದುಕೊಂಡಿತ್ತು. ಬಳಿಕ ಅಧಿಕ-ಶಕ್ತಿಯ ವಿದ್ಯುತ್&zwnj; ಪೂರೈಕೆ, ವಿದ್ಯುತ್&zwnj; ಕಾಂತೀಯ ಚಲನಾ ಶಕ್ತಿ (ಪ್ರೊಪಲ್ಷನ್), ತೇಲುವಿಕೆ ನಿಯಂತ್ರಣ ಮತ್ತು ತುರ್ತು ಬ್ರೇಕಿಂಗ್&zwnj;ನಂತಹ ತಂತ್ರಜ್ಞಾನಗಳ ಸಾಮರ್ಥ್ಯ ಹೆಚ್ಚಿಸುವ ಮೂಲಕ ರೈಲಿನ ವೇಗವನ್ನು ಕ್ರಮೇಣವಾಗಿ 700 ಕಿ.ಮೀ., 798 ಕಿ.ಮೀ.ಗೆ ಹೆಚ್ಚಿಸಲಾಯಿತು.&lt;/p&gt;&lt;p&gt;ಸದ್ಯ ಚೀನಾದಲ್ಲಿ ಓಡುತ್ತಿರುವ ಬುಲೆಟ್&zwnj; ರೈಲಿನ ಗರಿಷ್ಠ ವೇಗ ಗಂಟೆಗೆ 350 ಕಿ.ಮೀ. ಆಗಿದೆ. ಈಗ ಪರೀಕ್ಷಿಸಲಾಗಿರುವ ತಂತ್ರಜ್ಞಾನವನ್ನು ಸಾರ್ವಜನಿಕರ ಓಡಾಟಕ್ಕಿರುವ ರೈಲಿನಲ್ಲಿ ಬಳಸಲಾಗುವುದಿಲ್ಲ. ಬದಲಿಗೆ ಭವಿಷ್ಯದಲ್ಲಿ ರಾಕೆಟ್ ತಂತ್ರಜ್ಞಾನ, ಬಾಹ್ಯಾಕಾಶಯಾನದಂತಹ ಅತಿವೇಗದ ಚಲನೆಯ ಅಗತ್ಯವಿರುವ ಕೆಲಸಗಳಿಗೆ ಉಪಯೋಗಿಸಲಾಗುವುದು.&lt;/p&gt;&lt;h2&gt;&lt;strong&gt;ಏನಿದು ತಂತ್ರಜ್ಞಾನ?&lt;/strong&gt;&lt;/h2&gt;&lt;p&gt;ಮ್ಯಾಗ್&zwnj;ಲೆವ್&zwnj; ರೈಲುಗಳಿಗೆ ಚಕ್ರಗಳಿರುವುದಿಲ್ಲ ಹಾಗೂ ಅವು ಟ್ರ್ಯಾಕ್&zwnj; ಮೇಲೆ ಚಲಿಸುವುದಿಲ್ಲ. ಬದಲಿಗೆ, ಹಳಿಗಳಲ್ಲಿ ವಿದ್ಯುತ್&zwnj; ಹಾಯಿಸುವ ಮೂಲಕ ಅದನ್ನು ಅಯಸ್ಕಾಂತ ಮಾಡಲಾಗುವುದು (ಮ್ಯಾಗ್ನೆಟೈಸ್&zwnj;). ಈ ಮ್ಯಾಗ್ನೆಟಿಕ್&zwnj; ಗುಣವು ರೈಲನ್ನು ಟ್ರ್ಯಾಕ್&zwnj;ನಿಂದ ಕೊಂಚ ಎತ್ತರ ಎತ್ತಿ ಹಿಡಿಯುತ್ತದೆ ಹಾಗೂ ಚಲಿಸುವಂತೆ ಮಾಡುತ್ತದೆ. ರೈಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುವುದು.&lt;/p&gt;]]></content:encoded>
            <category><![CDATA[Viral News]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/viral/china-maglev-train-sets-world-record-800-kmph-speed-san/articleshow-dn5c1d3"/>
        </item>
        <item>
            <title><![CDATA[ಚರ್ಚೆಯೇ ನಡೆಯದೆ ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯ, 175 ಕೋಟಿ ರೂಪಾಯಿ ನಷ್ಟ!]]></title>
            <link>https://kannada.asianetnews.com/india-news/parliament-monsoon-session-ends-sine-die-175-crore-loss-vande-mataram-san/articleshow-x3qzwou</link>
            <guid isPermaLink="true">https://kannada.asianetnews.com/india-news/parliament-monsoon-session-ends-sine-die-175-crore-loss-vande-mataram-san/articleshow-x3qzwou</guid>
            <pubDate>Fri, 14 Aug 2026 08:00:52 +0530</pubDate>
            <description><![CDATA[ವಿಪಕ್ಷಗಳ ತೀವ್ರ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಯೊಂದಿಗೆ ಮುಕ್ತಾಯಗೊಂಡಿದೆ. ಚರ್ಚೆಯಿಲ್ಲದೆ 12 ಮಸೂದೆಗಳನ್ನು ಅಂಗೀಕರಿಸಲಾಗಿದ್ದು, ಅಧಿವೇಶನದ ಕೊನೆಯ ದಿನ ಉಭಯ ಸದನಗಳಲ್ಲಿ ಮೊದಲ ಬಾರಿಗೆ 'ವಂದೇ ಮಾತರಂ' ಗೀತೆಯನ್ನು ಪ್ರಸಾರ ಮಾಡಿ ಇತಿಹಾಸ ಬರೆಯಲಾಯಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kzwypa5v7ndamhjz47vh81hf,imgname-parliament-proceeding-cost-1786604366011.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.14): &lt;/strong&gt;ವಿಪಕ್ಷಗಳ ತೀವ್ರ ಗದ್ದಲ, ಪ್ರತಿಭಟನೆ ಹಾಗೂ ಧರಣಿಗಳ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನವು ಗುರುವಾರ ಮುಕ್ತಾಯಗೊಂಡಿದೆ. ಲೋಕಸಭೆ ಮತ್ತು ರಾಜ್ಯಸಭೆ ಎರಡನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು, ಜು.20ರಿಂದ ಆರಂಭವಾಗಿದ್ದ ಅಧಿವೇಶನವು ಅತ್ಯಂತ ಕಳಪೆ ಉತ್ಪಾದಕತೆಗೆ ಸಾಕ್ಷಿಯಾಗಿದೆ.&lt;/p&gt;&lt;p&gt;ಅಧಿವೇಶನದ ಉದ್ದಕ್ಕೂ ಪ್ರತಿಪಕ್ಷಗಳು ನೀಟ್&zwnj; ಪ್ರಶ್ನೆಪತ್ರಿಕೆ ಸೋರಿಕೆ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್&zwnj; ಕ್ರಮ ಹಾಗೂ ಅಯೋಧ್ಯೆ ರಾಮಮಂದಿರ ದೇಣಿಗೆ ಕಳವು ಪ್ರಕರಣಗಳನ್ನು ಮುನ್ನೆಲೆಗೆ ತಂದು ನಿರಂತರ ಪ್ರತಿಭಟನೆ ನಡೆಸಿದವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್&zwnj; ಶಾ ಅವರ ಉತ್ತರಕ್ಕೆ ಪಟ್ಟು ಹಿಡಿದವು. ಹೀಗಾಗಿ ಅಧಿವೇಶನದ ಬಹುತೇಕ ಸಮಯ ಗದ್ದಲದಲ್ಲೇ ವ್ಯರ್ಥವಾಯಿತು.&lt;/p&gt;&lt;p&gt;&lt;strong&gt;12 ಮಸೂದೆ ಅಂಗೀಕಾರ:&lt;/strong&gt; ವಿಪಕ್ಷಗಳ ತೀವ್ರ ಕೋಲಾಹಲದ ನಡುವೆಯೂ, ಈ ಬಾರಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಕೇವಲ ಒಂದು ಮಸೂದೆ ಬಗ್ಗೆ ಚರ್ಚೆ ನಡೆಸಿ ಅಂಗೀಕಾರ ಪಡೆಯಲಾಗಿದೆ. ಉಳಿದ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಧ್ವನಿಮತದ ಮೂಲಕ ಪಾಸು ಮಾಡಲಾಗಿದೆ. ಲೋಕಸಭೆ ಶೇ.19 ಹಾಗೂ ರಾಜ್ಯಸಭೆ ಶೇ.39ರಷ್ಟು ಉತ್ಪಾದಕತೆಯನ್ನು ಸಾಧಿಸಿವೆ.&lt;/p&gt;&lt;p&gt;&lt;strong&gt;ಆರೋಪ-ಪ್ರತ್ಯಾರೋಪ:&lt;/strong&gt; ಪ್ರತಿಪಕ್ಷಗಳು ಚರ್ಚೆಯಿಂದ ಓಡಿಹೋಗುತ್ತಿವೆ ಮತ್ತು ಕಲಾಪವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡುತ್ತಿವೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಮತ್ತು ಗೌರವ್ ಗೊಗೋಯ್, &lsquo;ಸರ್ಕಾರವೇ ಚರ್ಚೆಗೆ ಹೆದರಿ ಓಡಿಹೋಗುತ್ತಿದೆ. ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಮಾತನಾಡಲು ಸರ್ಕಾರಕ್ಕೆ ಆಸಕ್ತಿಯಿಲ್ಲ&rsquo; ಎಂದು ವಾಗ್ದಾಳಿ ನಡೆಸಿದ್ದಾರೆ.&lt;/p&gt;&lt;h3&gt;&lt;strong&gt;ಒಬ್ಬ ನಾಯಕನ ಅಹಂಕಾರ, ಅಶಿಸ್ತಿಗೆ ಅಧಿವೇಶನ ಬಲಿ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ಸಂಸತ್&zwnj; ಚರ್ಚೆ ವೇಳೆ ರಾಹುಲ್&zwnj; ಗಾಂಧಿ ಪದೇ ಪದೇ ತಮ್ಮ ಗುರಿಗಳನ್ನು ಬದಲಿಸುತ್ತಾರೆ. ಒಬ್ಬ ವ್ಯಕ್ತಿಯ ಅಹಂಕಾರ, ಅಶಿಸ್ತಿಗೆ ಇಡೀ ಅಧಿವೇಶನ ಬಲಿ ಆಯಿತು ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ವಕ್ತಾರ ರವಿಶಂಕರ್&zwnj; ಪ್ರಸಾದ್&zwnj;, &lsquo;ರಾಹುಲ್&zwnj;ಗೆ ರಾಜಕೀಯ ಔಚಿತ್ಯವೇ ಇಲ್ಲ. ಅವರೊಬ್ಬ ಜವಾಬ್ದಾರಿ ಇಲ್ಲದ ಅಪಕ್ವ ವ್ಯಕ್ತಿ. ಮೊದಲಿಗೆ ರಾಹುಲ್ ನೀಟ್&zwnj; ವಿಷಯದ ಬಗ್ಗೆ ಚರ್ಚೆಗೆ ಆಗ್ರಹಿಸಿದರು. ಸರ್ಕಾರ ಸಿದ್ಧ ಎಂದಾಗ ಮೋದಿಯೇ ಉತ್ತರ ನೀಡಬೇಕು ಎಂದರು. ಬಳಿಕ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಚರ್ಚೆ ಆಗಬೇಕು ಎಂದರು. ನಾವು ರೆಡಿ ಎಂದರೂ ಕಾಂಗ್ರೆಸ್&zwnj; ಕಲಾಪ ನಡೆಯಲೇ ಬಿಡಲಿಲ್ಲ&rsquo; ಎಂದು ಕಿಡಿಕಾರಿದರು.&lt;/p&gt;&lt;p&gt;ಈ ನಡುವೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಯಿಂದ ಹಿಂದೆ ಸರಿಯುವ ಮೂಲಕ ರಾಹುಲ್ ಗಾಂಧಿ ಸಂಸತ್ತಿನ ಹಿರಿಮೆಗೆ ಅಪಚಾರ ಎಸಗಿದ್ದಾರೆ. ಅವರು ಒಂದೆಡೆ ಸಂಸತ್ತಿನಲ್ಲಿ ಚರ್ಚೆಯಿಂದ ದೂರ ಉಳಿಯುತ್ತಾರೆ, ಆದರೆ ವಿದೇಶಿ ನೆಲದಲ್ಲಿ ನಿಂತು ದೇಶದ ಬಗ್ಗೆ ಮಾತುಗಳನ್ನು ಆಡುತ್ತಾರೆ ಎಂದು ಸಚಿವ ಪ್ರಹ್ಲಾದ್&zwnj; ಜೋಶಿ ಕಿಡಿಕಾರಿದ್ದಾರೆ.&lt;/p&gt;&lt;h3&gt;&lt;strong&gt;ಕೋತಿಯ ಗೊಂಬೆ ಪ್ರದರ್ಶಿಸಿ ಮೋದಿ ಬಗ್ಗೆ ಕಾಂಗ್ರೆಸ್&zwnj; ಅಣಕ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ, ಸಂಸತ್&zwnj; ಆವರಣ ನಾಟಕೀಯ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಕಾಂಗ್ರೆಸ್&zwnj;ನ ರಾಜ್ಯಸಭಾ ಸದಸ್ಯ ಪವನ್&zwnj; ಖೇರಾ ಕೋತಿಯ ಗೊಂಬೆಯೊಂದನ್ನು ಪ್ರದರ್ಶಿಸಿದರು. ಈ ವೇಳೆ ಉಳಿದ ಸದಸ್ಯರು, &lsquo;56 ಇಂಚಿನ ಪುಟ್ಟ ಕೋತಿಯೇ, ಬೇಗನೆ ಸದನಕ್ಕೆ ಬಾ&rsquo; ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಘೋಷಣೆ ಕೂಗಿದರು.&lt;/p&gt;&lt;p&gt;ಅತ್ತ ಜಾರ್ಖಂಡ್&zwnj;ನ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸ್&zwnj; ಕ್ರಮವನ್ನು ವಿರೋಧಿಸಿ ಎನ್&zwnj;ಡಿಎ ಸದಸ್ಯರೂ ಪ್ರತಿಭಟನೆ ನಡೆಸಿದರು. ಎರಡೂ ಕಡೆಯವರು ಸಂಸತ್ತಿನ ಮಕರ ದ್ವಾರದ ಬಳಿ ಮುಖಾಮುಖಿಯಾದಾಗ ಭದ್ರತಾ ಸಿಬ್ಬಂದಿ ತಡೆಗೋಡೆಯಾಗಿ ನಿಂತ ಪ್ರಸಂಗ ನಡೆಯಿತು.&lt;/p&gt;&lt;h3&gt;&lt;strong&gt;ಸಂಸತ್ತಿನಲ್ಲಿ &lsquo;ವಂದೇ ಮಾತರಂ&rsquo; ಪ್ರಸಾರ, ಇದೇ ಮೊದಲ ದಾಖಲೆ&lt;/strong&gt;&lt;/h3&gt;&lt;p&gt;&lt;strong&gt;ನವದೆಹಲಿ: &lt;/strong&gt;ಸಂಸತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಗಿದೆ. ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ಸಂಸತ್ತಿನ ಉಭಯ ಸದನಗಳಲ್ಲಿ ವಂದೇ ಮಾತರಂನ ಆರು ಚರಣಗಳನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಯಿತು. ರಾಷ್ಟ್ರೀಯ ಗೀತೆಗೆ ಕಾನೂನು ರಕ್ಷಣೆ ಮತ್ತು ಅಧಿಕೃತವಾಗಿ ಈ ಗೀತೆ ಹಾಡುವ ಸಂಬಂಧದ ನಿಯಮಗಳು ಜಾರಿಗೆ ಬಂದ ಬೆನ್ನಲ್ಲೇ ಸಂಸತ್ತಿನಲ್ಲಿ ವಂದೇ ಮಾತರಂ ಗೀತೆ ಮೊಳಗಿದೆ.&lt;/p&gt;&lt;p&gt;ಪ್ರಧಾನಿ ಮೋದಿ, ಕಾಂಗ್ರೆಸ್&zwnj; ಸಂಸದ, ಪ್ರತಿಪಕ್ಷ ನಾಯಕ ರಾಹುಲ್&zwnj; ಗಾಂಧಿ ಸೇರಿ ಬಹುತೇಕ ಎಲ್ಲ ಸಚಿವರು, ಸಂಸದರ ಉಪಸ್ಥಿತಿಯಲ್ಲಿ ವಂದೇ ಮಾತರಂ ಗೀತೆ ಪ್ರಸಾರ ಮಾಡಲಾಯಿತು. ವಂದೇ ಮಾತರಂ ಗೀತೆ ಪ್ರಸಾರದ ಬಳಿಕ ಲೋಕಸಭೆ ಹಾಗೂ ರಾಜ್ಯಸಭೆ ಎರಡೂ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.&lt;/p&gt;&lt;p&gt;ರಾಷ್ಟ್ರಗೀತೆ ಜನಗಣ ಮನದ ಮಾದರಿಯಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡಿಗೆ ಉದ್ದೇಶಪೂರ್ಕವಾಗಿ ಮಾಡುವ ಅಡ್ಡಿಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅನುಮೋದನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇಮಾತರಂನ ಆರು ಚರಣಗಳನ್ನು ಹಾಡುವುದು ಕಡ್ಡಾಯವಾಗಲಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/parliament-monsoon-session-ends-sine-die-175-crore-loss-vande-mataram-san/articleshow-x3qzwou"/>
        </item>
        <item>
            <title><![CDATA[ವಾಲ್ಮೀಕಿ ನಿಗಮ ಹಗರಣ: ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಬೃಹತ್ ಪಾದಯಾತ್ರೆಗೆ ಸಜ್ಜು!]]></title>
            <link>https://kannada.asianetnews.com/politics/valmiki-corporation-scam-bjp-decides-to-hold-a-padayatra-against-b-nagendra-in-north-karnataka-rav/articleshow-73cgwdd</link>
            <guid isPermaLink="true">https://kannada.asianetnews.com/politics/valmiki-corporation-scam-bjp-decides-to-hold-a-padayatra-against-b-nagendra-in-north-karnataka-rav/articleshow-73cgwdd</guid>
            <pubDate>Fri, 14 Aug 2026 07:56:33 +0530</pubDate>
            <description><![CDATA[ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ರಾಯಚೂರಿನಿಂದ ಬಳ್ಳಾರಿಯವರೆಗೆ ಈ ಯಾತ್ರೆ ನಡೆಯಲಿದ್ದು, ಸರ್ಕಾರದ ಮೇಲೆ ಒತ್ತಡ ಹೇರುವುದು ಇದರ ಪ್ರಮುಖ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzz0q2ks20y19nh3xeyy2av2,imgname-----------------------2026-08-14t074240.913-1786673597049.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಾಲ್ಮೀಕಿ ನಿಗಮ ಹಗರಣದ ಆರೋಪ ಹಿನ್ನೆಲೆ&lt;/li&gt; &lt;li&gt;ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ&lt;/li&gt; &lt;li&gt;ಮುಂದಿನ ವಾರ ಪಾದಯಾತ್ರೆ ಆರಂಭ ಸಾಧ್ಯತೆ&lt;/li&gt; &lt;li&gt;ರಾಯಚೂರಿಂದ ಬಳ್ಳಾರಿಗೆ ಸಾಗಲಿರುವ ಯಾತ್ರೆ&lt;/li&gt; &lt;li&gt;ಶ್ರೀರಾಮುಲು ನೇತೃತ್ವ, ಪಕ್ಷದ ಮುಖಂಡರ ಸಾಥ್&zwnj;&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಆರೋಪಿಯಾಗಿರುವ ನೂತನ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರಮುಖ ಪ್ರತಿಪಕ್ಷ ಬಿಜೆಪಿ ಕಲ್ಯಾಣ ಕರ್ನಾಟಕದಲ್ಲಿ ಪಾದಯಾತ್ರೆ ನಡೆಸಲು ಮುಂದಾಗಿದೆ.&lt;/p&gt;&lt;h2&gt;ರಾಯಚೂರು ಟು ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ಸಜ್ಜು&lt;/h2&gt;&lt;p&gt;ಪಕ್ಷದ ವರಿಷ್ಠರು ಒಪ್ಪಿಗೆ ನೀಡಿದಲ್ಲಿ ವಿಧಾನಮಂಡಲದ ಅಧಿವೇಶನದೊಳಗಾಗಿಯೇ ಅಂದರೆ, ಮುಂದಿನ ವಾರದ ವೇಳೆಗೆ ಮಾಜಿ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಲಿದೆ. ರಾಯಚೂರು ಜಿಲ್ಲೆಯಿಂದ ಆರಂಭವಾಗಿ ಯಾದಗಿರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳ ಮೂಲಕ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಉದ್ದೇಶವಿದೆ.&lt;/p&gt;&lt;h3&gt;ಹೈಕಮಾಂಡ್ ಒಪ್ಪಿದ್ರೆ ಮುಂದಿನ ವಾರವೇ ಪಾದಯಾತ್ರೆ?&lt;/h3&gt;&lt;p&gt;ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶ್ರೀರಾಮುಲು, ಮಾಜಿ ಸಚಿವ ಶಿವನಗೌಡ ನಾಯಕ ಸೇರಿದಂತೆ ಹಲವು ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರರೊಂದಿಗೆ ಪಾದಯಾತ್ರೆ ಬಗ್ಗೆ ಚರ್ಚೆ ನಡೆಸಿದರು. ತಾತ್ವಿಕವಾಗಿ ಒಪ್ಪಿಗೆ ನೀಡಿರುವ ವಿಜಯೇಂದ್ರ ಅವರು ವರಿಷ್ಠರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಅಲ್ಲದೆ, ಪಾದಯಾತ್ರೆಯ ರೂಪುರೇಷೆ ಸಿದ್ಧಪಡಿಸಿಕೊಳ್ಳುವಂತೆಯೂ ಸೂಚಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;h3&gt;ನಾಯಕ ಜನಾಂಗದ ಒಲವು ಗಳಿಸುವ ಲೆಕ್ಕಾಚಾರ?&lt;/h3&gt;&lt;p&gt;ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲು ನಿರಾಕರಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅವರ ಸೇರ್ಪಡೆಯನ್ನು ಬಲವಾಗಿ ಪ್ರತಿಪಾದಿಸುತ್ತಿರುವುದರಿಂದ ರಾಜ್ಯ ಸರ್ಕಾರದ ವಿರುದ್ಧ ಮುಗಿಬೀಳಲು ನಿರ್ಧರಿಸಿದೆ. ಹೀಗಾಗಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಬಿಜೆಪಿ ಪಾದಯಾತ್ರೆ ಹಮ್ಮಿಕೊಳ್ಳಲು ಮುಂದಾಗಿದೆ. ಈ ಮೂಲಕ ಪರಿಶಿಷ್ಟ ಪಂಗಡ ಸಮುದಾಯದ ಒಲವು ಗಳಿಸಬಹುದು ಎಂಬ ಲೆಕ್ಕಾಚಾರ ಅಡಗಿದೆ.&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/valmiki-corporation-scam-bjp-decides-to-hold-a-padayatra-against-b-nagendra-in-north-karnataka-rav/articleshow-73cgwdd"/>
        </item>
        <item>
            <title><![CDATA[ಸಭಾಪತಿ ಸ್ಥಾನಕ್ಕೆ ಇಂದು ಬಿಗ್ ಫೈಟ್! ಸಂಖ್ಯಾಬಲ ಇಲ್ಲದಿದ್ರೂ ಬಿಜೆಪಿ-ಜೆಡಿಎಸ್ ಸ್ಪರ್ಧಿಸಿದ್ದು ಏಕೆ ಗೊತ್ತಾ?]]></title>
            <link>https://kannada.asianetnews.com/politics/karnataka-congress-bjp-face-off-today-over-karnataka-legislative-council-speaker-s-election-rav/articleshow-9ou9h06</link>
            <guid isPermaLink="true">https://kannada.asianetnews.com/politics/karnataka-congress-bjp-face-off-today-over-karnataka-legislative-council-speaker-s-election-rav/articleshow-9ou9h06</guid>
            <pubDate>Fri, 14 Aug 2026 07:29:42 +0530</pubDate>
            <description><![CDATA[ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಸಿದ್ದು, ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟವು ಪಿ.ಎಚ್. ಪೂಜಾರ್ ಅವರನ್ನು ಕಣಕ್ಕಿಳಿಸಿ ಕುತೂಹಲ ಮೂಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzyzt75k8njsvdrw8c5fpmc7,imgname-----------------------2026-08-14t072619.190-1786672651443.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14): &lt;/strong&gt;ರಾಜ್ಯ ವಿಧಾನಪರಿಷತ್&zwnj; ಸಭಾಪತಿ ಸ್ಥಾನಕ್ಕೆ ಶುಕ್ರವಾರ (ಆ.14) ನಡೆಯಲಿರುವ ಚುಣಾವಣೆಗೆ ಕಾಂಗ್ರೆಸ್&zwnj; ಅಭ್ಯರ್ಥಿಯಾಗಿ ಸಲೀಂ ಅಹ್ಮದ್&zwnj; ನಾಮಪತ್ರ ಸಲ್ಲಿಸಿದ್ದಾರೆ. ಅತ್ತ ಎನ್&zwnj;ಡಿಎ ಅಭ್ಯರ್ಥಿಯಾಗಿ ಪಿ.ಎಚ್&zwnj;.ಪೂಜಾರ್&zwnj; ಅವರನ್ನು ಕಣಕ್ಕಿಳಿಸುವ ಮೂಲಕ ಪ್ರತಿಪಕ್ಷ ಬಿಜೆಪಿ, ಜೆಡಿಎಸ್&zwnj; ಆಡಳಿತ ಪಕ್ಷಕ್ಕೆ ಟಕ್ಕರ್&zwnj; ನೀಡಿವೆ.&lt;/p&gt;&lt;h2&gt;ಸಂಖ್ಯಾಬಲ ಇಲ್ಲದಿದ್ದರೂ ಪ್ರತಿಪಕ್ಷಗಳು ಎನ್&zwnj;ಡಿಎ ಅಭ್ಯರ್ಥಿ ಕಣಕ್ಕೆ ಇಳಿಸಿದ್ದೇಕೆ?&lt;/h2&gt;&lt;p&gt;ಸಂಖ್ಯಾಬಲ ಇಲ್ಲದಿದ್ದರೂ ಪ್ರತಿಪಕ್ಷಗಳು ಎನ್&zwnj;ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಕುತೂಹಲ ಮೂಡಿಸಿದೆ. ಪರಿಷತ್&zwnj;ನಲ್ಲಿ ಆಡಳಿತ ಪಕ್ಷಕ್ಕಿಂತ ಏಳು ಸ್ಥಾನಗಳ ಕಡಿಮೆ ಸಂಖ್ಯಾ ಬಲ ಹೊಂದಿರುವ ಪ್ರತಿಪಕ್ಷಗಳು ಆತ್ಮಸಾಕ್ಷಿ ಮತಗಳ ನಿರೀಕ್ಷೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಇದರಿಂದ ಸಲೀಂ ಅಹಮದ್&zwnj; ಅವರ ಅವಿರೋಧ ಆಯ್ಕೆಗೆ ಬ್ರೇಕ್&zwnj; ಬಿದ್ದಂತಾಗಿದೆ.&lt;/p&gt;&lt;p&gt;ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj;, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್&zwnj; ಅವರ ಸಮ್ಮುಖದಲ್ಲಿ ಸಲೀಂ ಅಹ್ಮದ್&zwnj; ಅವರು ವಿಧಾನ ಪರಿಷತ್&zwnj; ಕಾರ್ಯದರ್ಶಿ ಜ್ಯೋತಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮೇಲ್ಮನೆ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ವಿನಯ್&zwnj; ಕಾರ್ತಿಕ್&zwnj;, ನಾಗರಾಜ್&zwnj; ಯಾದವ್&zwnj; ಮತ್ತಿತರ ಸದಸ್ಯರು ಸಾಥ್&zwnj; ನೀಡಿದರು. ಸಂಪುಟ ವಿಸ್ತರಣೆಗೆ ಹೈಕಮಾಂಡ್&zwnj; ಅಂತಿಮಗೊಳಿಸಿದ್ದ ಪಟ್ಟಿಯಲ್ಲೇ ಸಭಾಪತಿ ಸ್ಥಾನಕ್ಕೂ ಸಲೀಂ ಅಹಮದ್&zwnj; ಅವರ ಹೆಸರನ್ನು ಕಾಂಗ್ರೆಸ್&zwnj; ಹೈಕಮಾಂಡ್&zwnj; ಕಳುಹಿಸಿತ್ತು.&lt;/p&gt;&lt;h3&gt;ಎನ್&zwnj;ಡಿಎ ಬಣದಿಂದ ಪೂಜಾರ್ ಕಣಕ್ಕೆ:&lt;/h3&gt;&lt;p&gt;ಎನ್&zwnj;ಡಿಎ ಅಭ್ಯರ್ಥಿಯಾಗಿ ಬಿಜೆಪಿ ಸದಸ್ಯ ಪಿ.ಎಚ್&zwnj;.ಪೂಜಾರ್&zwnj; ಅವರು ಕೂಡ ಪರಿಷತ್&zwnj; ಕಾರ್ಯದರ್ಶಿ ಅವರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ವೇಳೆ, ಮೇಲ್ಮನೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್&zwnj; ನಾಯಕ ಭೋಜೇಗೌಡ, ಉಪನಾಯಕ ಶರವಣ, ಸಿ.ಟಿ.ರವಿ, ರವಿಕುಮಾರ್&zwnj;, ಹೇಮಲತಾ ನಾಯಕ್&zwnj;, ಹಣಮಂತ ನಿರಾಣಿ ಸೇರಿದಂತೆ ಮೈತ್ರಿ ಪಕ್ಷಗಳ ವಿವಿಧ ಸದಸ್ಯರು ಉಪಸ್ಥಿತರಿದ್ದರು.&lt;/p&gt;&lt;p&gt;ವಿಧಾನ ಪರಿಷತ್&zwnj;ನಲ್ಲಿ ಕಾಂಗ್ರೆಸ್&zwnj; ಸಂಖ್ಯಾಬಲ ಹೆಚ್ಚಳವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯಪಾಲರು ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣ ಅವರನ್ನು ನೇಮಿಸಿದ್ದರು. ಮೊದಲ ದಿನ ಸಂತಾಪ ಸೂಚನೆ ಕಾರ್ಯಕಲಾಪ ನಡೆಸಿದ ಅವರು, ಶುಕ್ರವಾರ ನೂತನ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಸಲಿದ್ದಾರೆ. ಕಾಂಗ್ರೆಸ್&zwnj; ಸಂಖ್ಯಾಬಲ ಹೊಂದಿರುವುದರಿಂದ ದ್ವನಿ ಮತದ ಮೂಲಕ ಸಲೀಂ ಅಹಮದ್&zwnj; ಅವರು ಸಭಾಪತಿಯಾಗಿ ಆಯ್ಕೆಯಾಗುವುದು ಬಹುತೇಕ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ವಿಧಾನಪರಿಷತ್ ಬಲಾಬಲ&lt;/strong&gt;&lt;/p&gt;&lt;p&gt;&lt;strong&gt;ಒಟ್ಟು- 75&lt;/strong&gt;&lt;/p&gt;&lt;p&gt;ಕಾಂಗ್ರೆಸ್ - 38&lt;/p&gt;&lt;p&gt;&lt;strong&gt;ಎನ್&zwnj;ಡಿಎ- 31 (ಬಿಜೆಪಿ-25, ಜೆಡಿಎಸ್-6)&lt;/strong&gt;&lt;/p&gt;&lt;p&gt;ಪಕ್ಷೇತರ - 1&lt;/p&gt;&lt;p&gt;ಖಾಲಿ- 5.&lt;/p&gt;&lt;h3&gt;ಇಂದಿನ ಸಭಾಧ್ಯಕ್ಷರ ಚುನಾವಣೆಗೆ ಬಿಜೆಪಿಯ ಬಹಿಷ್ಕಾರ:&lt;/h3&gt;&lt;p&gt;ಕಾಂಗ್ರೆಸ್&zwnj; ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅಪಮಾನ ಮಾಡಿರುವುದರಿಂದ ಶುಕ್ರವಾರ ನಡೆಯಲಿರುವ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಯನ್ನು ಬಿಜೆಪಿ ಬಹಿಷ್ಕರಿಸಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್&zwnj;.ಅಶೋಕ್&zwnj; ಹೇಳಿದ್ದಾರೆ. ಗುರುವಾರ ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪೀಠದ ವಿರುದ್ಧದ ಪ್ರತಿಭಟನೆಯಲ್ಲ. ಲೆಟರ್&zwnj; ಹೆಡ್&zwnj; ಮತ್ತು ಕಾಂಗ್ರೆಸ್&zwnj;ನ ಸರ್ವಾಧಿಕಾರಿ ಧೋರಣೆ ವಿರುದ್ಧದ ಪ್ರತಿಭಟನೆಯಾಗಿ ಚುನಾವಣೆ ಬಹಿಷ್ಕರಿಸಲಿದ್ದೇವೆ. ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಸಭ್ಯಾಧ್ಯಕ್ಷರ ಪೀಠಕ್ಕೆ ಎಂದಿನಂತೆ ಗೌರವದಿಂದ ನಡೆದುಕೊಳ್ಳುತ್ತೇವೆ. ನೂತನ ಸಭಾಧ್ಯಕ್ಷರು ಪಕ್ಷಾತೀತವಾಗಿ ನಡೆದುಕೊಳ್ಳಬೇಕು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದರು.&lt;/p&gt;&lt;p&gt;&lt;strong&gt;ಸಂವಿಧಾನ ಬಾಹಿರ:&lt;/strong&gt;&lt;/p&gt;&lt;p&gt;ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಸದನಕ್ಕೆ ಸಾರ್ವಭೌಮತ್ವ ಇದೆ ಹಾಗೂ ವಿಧಾನಸಭಾ ಸದಸ್ಯರಿಗೆ ಹಕ್ಕು ಇದೆ. ಆದರೆ ಕಾಂಗ್ರೆಸ್&zwnj; ಪಕ್ಷ ಸಂವಿಧಾನ ಬಾಹಿರವಾಗಿ ತನ್ನ ಲೆಟರ್&zwnj;ಹೆಡ್&zwnj;ನಲ್ಲಿ ಆಯ್ಕೆ ಮಾಡಲಾಗುವ ಸಭಾಧ್ಯಕ್ಷರ ಹೆಸರನ್ನು ಉಲ್ಲೇಖ ಮಾಡಿದೆ. ಸದನದ ಸಾರ್ವಭೌಮತ್ವವನ್ನು ಕಸಿಯುವ ಕೆಲಸವನ್ನು ದೆಹಲಿಯ ನಕಲಿ ಗಾಂಧಿ ಕುಟುಂಬ ಮಾಡಿದೆ. ಪಕ್ಷದ ಪಟ್ಟಿಯಲ್ಲಿ ಸ್ಪೀಕರ್&zwnj; ಹೆಸರನ್ನು ಪ್ರಕಟಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಸಭಾಧ್ಯಕ್ಷರು ಸದನದಿಂದ ಚುನಾಯಿತರಾಗಬೇಕಿದ್ದರೂ, ಪಕ್ಷದಿಂದಲೇ ಚುನಾಯಿತರನ್ನಾಗಿ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಕಿಡಿಕಾರಿದರು.&lt;/p&gt;&lt;p&gt;&lt;strong&gt;ಸಂವಿಧಾನಕ್ಕೆ ಮಾಡಿದ ಅಪಚಾರ:&lt;/strong&gt;&lt;/p&gt;&lt;p&gt;ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುತ್ತೇನೆ ಎಂದಿದ್ದರೂ ಅವರ ಕಚೇರಿಗೆ ಶಾಸಕರು ನುಗ್ಗಿ ರಾಜೀನಾಮೆ ಪಡೆದಿದ್ದಾರೆ. ಇದು ಕೂಡ ಸಂವಿಧಾನಕ್ಕೆ ಮಾಡಿರುವ ಅಪಚಾರ. ಇಲ್ಲಿನ ಹೊಸ ಸಭಾಪತಿ ಹಾಗೂ ಉಪಸಭಾಪತಿಗಳ ಹೆಸರನ್ನು ಕೂಡ ಪಕ್ಷದ ಪಟ್ಟಿಯಲ್ಲಿ ತೋರಿಸಲಾಗಿದೆ. ಶಾಸಕ ಎ.ಎಸ್&zwnj;.ಪೊನ್ನಣ್ಣ ಅವರನ್ನು ಉಪ ಸಭಾಧ್ಯಕ್ಷ ಎಂದು ತೋರಿಸಲಾಗಿತ್ತು. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್&zwnj; ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ತಿಳಿಸದೆ ಗೊಂದಲದ ಗೂಡು ಮಾಡಿದ್ದಾರೆ. ಇವೆಲ್ಲವೂ ಸದನದ ನೀತಿ ನಿಯಮಗಳನ್ನು ಮೀರಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅಶೋಕ್&zwnj; ಆಕ್ರೋಶ ವ್ಯಕ್ತಪಡಿಸಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-congress-bjp-face-off-today-over-karnataka-legislative-council-speaker-s-election-rav/articleshow-9ou9h06"/>
        </item>
        <item>
            <title><![CDATA[ಬಂಟ್ವಾಳ: ಬಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ದಾಸೋಹ ಸಿಬ್ಬಂದಿ ಜೀವ! ಸಿಎಂ ಮೆಚ್ಚುಗೆ]]></title>
            <link>https://kannada.asianetnews.com/education/bantwal-class-5-boy-saves-school-cook-from-grater-mishap-cm-praised-him-rav/articleshow-k4ckyfe</link>
            <guid isPermaLink="true">https://kannada.asianetnews.com/education/bantwal-class-5-boy-saves-school-cook-from-grater-mishap-cm-praised-him-rav/articleshow-k4ckyfe</guid>
            <pubDate>Fri, 14 Aug 2026 07:03:21 +0530</pubDate>
            <description><![CDATA[ಬಂಟ್ವಾಳದ ನರಿಕೊಂಬು ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್, ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ಕಾಯಿ ತುರಿಯುವ ಯಂತ್ರಕ್ಕೆ ಸಿಲುಕಿದಾಗ ತಕ್ಷಣ ಸ್ವಿಚ್ ಆಫ್ ಮಾಡಿ ದೊಡ್ಡ ಅನಾಹುತ ತಪ್ಪಿಸಿದ್ದಾನೆ. ಈ ಬಾಲಕನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೆಚ್ಚುಗೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzyy5hbhcynpwnyhr5q5q17b,imgname-----------------------2026-08-14t065828.560-1786670925169.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬಂಟ್ವಾಳ: &lt;/strong&gt;ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಯ ಕೈಬೆರಳು ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಸಿಲುಕಿಕೊಂಡಾಗ ತಕ್ಷಣ 5ನೇ ತರಗತಿ ವಿದ್ಯಾರ್ಥಿ ತೋರಿದ ಸಮಯಪ್ರಜ್ಞೆ ಹಾಗೂ ಧೈರ್ಯವು ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದೆ.&lt;/p&gt;&lt;h2&gt;ವಿದ್ಯಾರ್ಥಿ ಮನ್ವಿತ್&zwnj; ಧೈರ್ಯಕ್ಕೆ ಡಿ.ಕೆ.ಶಿವಕುಮಾರ್ ಮೆಚ್ಚುಗೆ&lt;/h2&gt;&lt;p&gt;ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಮನ್ವಿತ್&zwnj; ಧೈರ್ಯಕ್ಕೆ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲಾ ಶಿಕ್ಷಕ ವೃಂದ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಶ್ಲಾಘಿಸಿದ್ದಾರೆ. ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿ ಕರ್ತವ್ಯ ನಿರತರಾಗಿದ್ದ ವೇಳೆ ವಿದ್ಯುತ್ ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಆಕಸ್ಮಿಕವಾಗಿ ಅವರ ಕೈಬೆರಳು ಸಿಲುಕಿಕೊಂಡಿದೆ. ನೋವಿನಿಂದ ಅವರು ಕಿರುಚಿಕೊಂಡಾಗ, ಶಾಲಾ ಅಂಗಳದಲ್ಲಿ ಆಟವಾಡುತ್ತಿದ್ದ ಮನ್ವಿತ್ ತಕ್ಷಣ ವಿದ್ಯುತ್ ಸ್ವಿಚ್ ಆಫ್ ಮಾಡಿದ್ದಾನೆ. ಇದರಿಂದ ಮತ್ತಷ್ಟು ಅಪಾಯ ಸಂಭವಿಸುವುದನ್ನು ತಪ್ಪಿಸಿದ್ದಾನೆ.&lt;/p&gt;&lt;h3&gt;ಬಾಲಕನ ಸಮಯಪ್ರಜ್ಞೆಗೆ ಸಿಎಂ ಎಕ್ಸ್ ಖಾತೆ ಪೋಸ್ಟ್&lt;/h3&gt;&lt;p&gt;ಬಾಲಕನ ಸಮಯಪ್ರಜ್ಞೆ, ಧೈರ್ಯ ಮತ್ತು ಸೂಕ್ತ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಕನ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎಕ್ಸ್&zwnj; ಖಾತೆಯಲ್ಲಿ ಶ್ಲಾಘಿಸಿದ್ದಾರೆ. ಬಾಲಕನ ಕಾರ್ಯ ನಿಜಕ್ಕೂ ಹೃದಯಸ್ಪರ್ಶಿ ಹಾಗೂ ಪ್ರಶಂಸನೀಯವಾಗಿದ್ದು, ಆತನ ಮುಂದಿನ ಭವಿಷ್ಯ ಉಜ್ವಲವಾಗಲಿ ಮತ್ತು ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಉತ್ತಮ ಪ್ರಜೆಯಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಅವರು ಹಾರೈಸಿದ್ದಾರೆ.&lt;/p&gt;&lt;p&gt;ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಹಾಗೂ ಸದಸ್ಯರು ವಿದ್ಯಾರ್ಥಿಯ ಸಮಯಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ಹಾಗೂ ಸಿಆರ್&zwnj;ಪಿ ಜ್ಯೋತಿ ಶಾಲೆಗೆ ಭೇಟಿ ನೀಡಿ ಬಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.&lt;/p&gt;]]></content:encoded>
            <category><![CDATA[education]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/education/bantwal-class-5-boy-saves-school-cook-from-grater-mishap-cm-praised-him-rav/articleshow-k4ckyfe"/>
        </item>
        <item>
            <title><![CDATA[ಇಂದಿನ ಜಾತಕ: ಮೇಷ ಮತ್ತು ವೃಷಭ ಸೇರಿದಂತೆ ಈ ಎರಡು ರಾಶಿಗೆ ಯಶಸ್ಸಿನ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ]]></title>
            <link>https://kannada.asianetnews.com/astrology/today-prediction-horoscope-of-14-august-2026-suh/articleshow-bvp4cmg</link>
            <guid isPermaLink="true">https://kannada.asianetnews.com/astrology/today-prediction-horoscope-of-14-august-2026-suh/articleshow-bvp4cmg</guid>
            <pubDate>Fri, 14 Aug 2026 07:03:05 +0530</pubDate>
            <description><![CDATA[ಜಾತಕ ಆಗಸ್ಟ್ 14, 2026: ಗ್ರಹಗಳ ಸ್ಥಾನಗಳನ್ನು ಪರಿಗಣಿಸಿ ಆಗಸ್ಟ್ 14, 2026 ರ ದಿನವು ಅನೇಕ ರಾಶಿಚಕ್ರ ಚಿಹ್ನೆಗಳಿಗೆ ವಿಶೇಷವಾಗಿರುತ್ತದೆ. ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಪ್ರಯೋಜನ ಪಡೆಯಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzqjc84cxbydapf80b1e05kp,imgname-navapanchama-yoga-2026-saturn-mercury-conjunction-blesses-5-zodiacs-1786423681164.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇಷ ರಾಶಿ&lt;/p&gt;&lt;p&gt;ಇಂದು ಸಮತೋಲನ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಪ್ರೇಮ ಸಂಬಂಧಗಳು ಹೆಚ್ಚು ಮಧುರವಾಗಿರುತ್ತವೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆದ ಕ್ಷಣಗಳು ನಿಮ್ಮ ಮುಖದಲ್ಲಿ ನಗುವನ್ನು ತರುತ್ತವೆ. ವೈವಾಹಿಕ ಜೀವನವೂ ಸಂತೋಷದಿಂದ ತುಂಬಿರುತ್ತದೆ. ನಿಮ್ಮ ಸಂಗಾತಿಯು ಕೆಲಸದಲ್ಲಿ ಗಮನಾರ್ಹ ಸಾಧನೆ, ಗೌರವ ಅಥವಾ ಬಡ್ತಿಯನ್ನು ಸಾಧಿಸುವ ಸಾಧ್ಯತೆಯಿದೆ, ಇದು ಇಡೀ ಕುಟುಂಬಕ್ಕೆ ಉತ್ಸಾಹವನ್ನು ತರುತ್ತದೆ. ನಿಮ್ಮ ಮಗುವಿನ ಭವಿಷ್ಯದ ಬಗ್ಗೆ ಗಂಭೀರ ಚರ್ಚೆಗಳು ನಡೆಯುವ ಸಾಧ್ಯತೆಯಿದೆ, ಮತ್ತು ನೀವು ಅವರ ಉಜ್ವಲ ಭವಿಷ್ಯಕ್ಕಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.&lt;/p&gt;&lt;p&gt;ವೃಷಭ ರಾಶಿ&lt;/p&gt;&lt;p&gt;ಇಂದು ಹೊಸ ಜವಾಬ್ದಾರಿಗಳು ಮತ್ತು ಸುವರ್ಣ ಅವಕಾಶಗಳನ್ನು ತರುತ್ತದೆ. ಕೆಲಸದಲ್ಲಿ ನಿಮಗೆ ಪ್ರಮುಖ ಕರ್ತವ್ಯಗಳು ವಹಿಸಿಕೊಡಲ್ಪಡಬಹುದು, ಅದನ್ನು ನೀವು ಸಮರ್ಪಣೆ ಮತ್ತು ಆತ್ಮವಿಶ್ವಾಸದಿಂದ ಪೂರೈಸುವಿರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯು ನಿಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸುತ್ತದೆ. ಸರ್ಕಾರಿ ಯೋಜನೆಗಳು ಅಥವಾ ಇತರ ಸರ್ಕಾರಿ ಪ್ರಾಯೋಜಿತ ಸೌಲಭ್ಯಗಳಿಂದ ನೀವು ಪ್ರಯೋಜನ ಪಡೆಯಬಹುದು. ಅನಗತ್ಯ ವಿವಾದಗಳು ಮತ್ತು ತೊಡಕುಗಳಿಂದ ದೂರವಿರುವುದು ಪ್ರಯೋಜನಕಾರಿ.&lt;/p&gt;&lt;p&gt;ಮಿಥುನ ರಾಶಿ&lt;/p&gt;&lt;p&gt;ಇಂದು, ನೀವು ಸಂಪೂರ್ಣವಾಗಿ ಸಕ್ರಿಯರಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಉತ್ಸಾಹದಿಂದ ಇರುತ್ತೀರಿ. ನಿಮ್ಮ ಸಿಹಿ ಮಾತುಗಳು ಮತ್ತು ಸಭ್ಯ ನಡವಳಿಕೆಯು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ನಿಮ್ಮ ಕೆಲಸದ ಮೇಲೆ ಗಮನಹರಿಸುವುದು ಇಂದು ನಿಮ್ಮ ದೊಡ್ಡ ಯಶಸ್ಸಿಗೆ ಪ್ರಮುಖವಾಗಿರುತ್ತದೆ. ಉದ್ಯಮಿಗಳು ತಮ್ಮ ಉತ್ಪನ್ನಗಳು ಅಥವಾ ಸೇವೆಗಳ ಗುಣಮಟ್ಟಕ್ಕೆ ವಿಶೇಷ ಗಮನ ನೀಡಬೇಕು, ಏಕೆಂದರೆ ಇದು ನಿಮ್ಮ ಗುರುತು ಮತ್ತು ಖ್ಯಾತಿಯನ್ನು ಬಲಪಡಿಸುತ್ತದೆ.&lt;/p&gt;&lt;p&gt;ಕರ್ಕಾಟಕ ರಾಶಿ&lt;/p&gt;&lt;p&gt;ಇಂದು, ನೀವು ನಿಮ್ಮ ಗುರಿಗಳ ಮೇಲೆ ಸಂಪೂರ್ಣ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ಏಕಾಗ್ರತೆ ಮತ್ತು ಶಿಸ್ತು ಮಾತ್ರ ನಿಮಗೆ ಯಶಸ್ಸನ್ನು ತರುತ್ತದೆ. ನಿಮ್ಮ ಫಿಟ್ನೆಸ್ ಮತ್ತು ಆರೋಗ್ಯವನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. ಭವಿಷ್ಯದ ಸಮಸ್ಯೆಗಳನ್ನು ತಪ್ಪಿಸಲು ಅತ್ಯಂತ ಎಚ್ಚರಿಕೆಯಿಂದ ಮತ್ತು ಲಿಖಿತ ಪುರಾವೆಗಳೊಂದಿಗೆ ಹಣಕಾಸಿನ ವಹಿವಾಟುಗಳನ್ನು ಮಾಡಿ. ಕಾನೂನು ವಿಷಯಗಳಲ್ಲಿ ಆತುರವನ್ನು ತಪ್ಪಿಸಿ ಮತ್ತು ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ತೆಗೆದುಕೊಳ್ಳಿ.&lt;/p&gt;&lt;p&gt;ಸಿಂಹ ರಾಶಿ&lt;/p&gt;&lt;p&gt;ಇಂದು ನೀವು ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಲು ಪ್ರೇರೇಪಿಸುವ ದಿನ. ನಿಮ್ಮ ಅಗತ್ಯತೆಗಳು ಮತ್ತು ಅನುಕೂಲಗಳಿಗಾಗಿ ಖರ್ಚುಗಳು ಹೆಚ್ಚಾಗಬಹುದು, ಆದರೆ ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಪ್ರೇಮ ಸಂಬಂಧಗಳಲ್ಲಿ ಪ್ರಣಯ ಮತ್ತು ಅನ್ಯೋನ್ಯತೆ ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಸಮಯ ಸಂಬಂಧವನ್ನು ಬಲಪಡಿಸುತ್ತದೆ. ಹಳೆಯ ಸ್ನೇಹಿತನನ್ನು ಭೇಟಿಯಾಗುವುದು ಹಳೆಯ ನೆನಪುಗಳನ್ನು ಪುನರುಜ್ಜೀವನಗೊಳಿಸಬಹುದು. ದೀರ್ಘಕಾಲದಿಂದ ಬಾಕಿ ಇರುವ ಮನೆಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಉತ್ತಮ ಅವಕಾಶ ಸಿಗುತ್ತದೆ.&lt;/p&gt;&lt;p&gt;ಕನ್ಯಾ ರಾಶಿ&lt;/p&gt;&lt;p&gt;ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡುವುದಕ್ಕಿಂತ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಇಂದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕುಟುಂಬದೊಳಗೆ ಉದ್ವಿಗ್ನತೆ ಇದ್ದರೆ, ಚರ್ಚೆಯಿಂದ ಅದನ್ನು ಪರಿಹರಿಸಬಹುದು. ಹಳೆಯ ವಿಷಯದ ಬಗ್ಗೆ ಗೊಂದಲ ಮುಂದುವರಿಯಬಹುದು, ವಿಶೇಷವಾಗಿ ಗುಪ್ತ ರಹಸ್ಯ ಬೆಳಕಿಗೆ ಬಂದರೆ. ಕುಟುಂಬ ಸದಸ್ಯರ ವಿವಾಹಕ್ಕೆ ಇರುವ ಅಡೆತಡೆಗಳನ್ನು ತೆಗೆದುಹಾಕುವಲ್ಲಿ ನೀವು ಪ್ರಮುಖ ಪಾತ್ರ ವಹಿಸುತ್ತೀರಿ.&lt;/p&gt;&lt;p&gt;ತುಲಾ:&lt;/p&gt;&lt;p&gt;ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಒಂದು ಪ್ರಮುಖ ಕೆಲಸವು ಕೊನೆಯ ಕ್ಷಣದಲ್ಲಿ ಸಿಲುಕಿಕೊಳ್ಳಬಹುದು, ಇದು ಸ್ವಲ್ಪ ನಿರಾಶೆಯನ್ನು ಉಂಟುಮಾಡಬಹುದು. ಉದ್ಯಮಿಗಳು ಯಾವುದೇ ಒಪ್ಪಂದ ಅಥವಾ ಒಪ್ಪಂದವನ್ನು ಸಂಪೂರ್ಣ ತನಿಖೆಯ ನಂತರವೇ ಅಂತಿಮಗೊಳಿಸಬೇಕು. ನಿಮ್ಮ ಮಕ್ಕಳ ಶಿಕ್ಷಣ, ವೃತ್ತಿ ಮತ್ತು ಕಂಪನಿಯ ಬಗ್ಗೆ ವಿಶೇಷ ಗಮನ ಕೊಡಿ. ನಿಮ್ಮ ಅತ್ತೆ-ಮಾವಂದಿರೊಂದಿಗೆ ವೈಯಕ್ತಿಕ ಅಥವಾ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ, ಏಕೆಂದರೆ ಇದು ನಂತರ ಸಂಘರ್ಷಕ್ಕೆ ಕಾರಣವಾಗಬಹುದು.&lt;/p&gt;&lt;p&gt;ವೃಶ್ಚಿಕ ರಾಶಿ&lt;/p&gt;&lt;p&gt;ಇಂದು ಮೊದಲಿಗೆ ಸ್ವಲ್ಪ ಜಟಿಲವೆನಿಸಬಹುದು, ಆದರೆ ಪರಿಸ್ಥಿತಿ ಕ್ರಮೇಣ ನಿಮ್ಮ ಪರವಾಗಿ ಬದಲಾಗುತ್ತದೆ. ನೀವು ವಿದೇಶ ಪ್ರವಾಸ ಅಥವಾ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದ ಕೆಲವು ಕೆಲಸಗಳನ್ನು ಯೋಜಿಸಬಹುದು. ಸಂಬಂಧಿಕರನ್ನು ಭೇಟಿಯಾದಾಗ ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಹಳೆಯ ಆಸೆ ಈಡೇರುವ ಸಾಧ್ಯತೆಯಿದೆ ಮತ್ತು ಹೊಸ ವಾಹನ ಖರೀದಿಸುವ ನಿಮ್ಮ ಕನಸು ಕೂಡ ನನಸಾಗಬಹುದು.&lt;/p&gt;&lt;p&gt;ಧನು ರಾಶಿ:&lt;/p&gt;&lt;p&gt;ಇಂದು, ಪಾಲುದಾರಿಕೆಯಲ್ಲಿ ಮಾಡಿದ ಕೆಲಸವು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಮ್ಮ ಕುಟುಂಬದೊಂದಿಗೆ ಒಟ್ಟಿಗೆ ಕುಳಿತು ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಇದು ಒಳ್ಳೆಯ ಸಮಯ. ನಿಮ್ಮ ಸಂಗಾತಿ ಅಥವಾ ಸಂಗಾತಿಯೊಂದಿಗೆ ನೀವು ವಿಹಾರಕ್ಕೆ ಯೋಜಿಸಬಹುದು, ಅದು ನಿಮ್ಮ ಸಂಬಂಧವನ್ನು ಮತ್ತಷ್ಟು ಸಿಹಿಗೊಳಿಸುತ್ತದೆ. ಭವಿಷ್ಯದ ಯೋಜನೆಗಳು ಮತ್ತು ಹಣಕಾಸಿನ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತವೆ.&lt;/p&gt;&lt;p&gt;ಮಕರ ರಾಶಿ:&lt;/p&gt;&lt;p&gt;ಇಂದು ಸಂತೋಷ ಮತ್ತು ಸಾಧನೆಗಳಿಂದ ತುಂಬಿದ ದಿನವಾಗಿರುತ್ತದೆ. ನೀವು ವೃತ್ತಿಜೀವನದ ಪ್ರಗತಿಗೆ ಹೊಸ ಅವಕಾಶಗಳನ್ನು ಕಂಡುಕೊಳ್ಳಬಹುದು ಮತ್ತು ನಿಮ್ಮ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಪ್ರೇಮ ಜೀವನವು ಮೊದಲಿಗಿಂತ ಹೆಚ್ಚು ಆಹ್ಲಾದಕರ ಮತ್ತು ಸಮತೋಲಿತವಾಗಿರುತ್ತದೆ. ಯಾವುದೇ ರಾಜಕೀಯ ಅಥವಾ ವಿವಾದಾತ್ಮಕ ಸಂದರ್ಭಗಳಿಂದ ದೂರವಿರುವುದು ಉತ್ತಮ. ನಿಮ್ಮ ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳನ್ನು ರಕ್ಷಿಸಲು ವಿಶೇಷ ಕಾಳಜಿ ವಹಿಸಿ.&lt;/p&gt;&lt;p&gt;ಕುಂಭ ರಾಶಿ :&lt;/p&gt;&lt;p&gt;ಇಂದು ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ನಿಮ್ಮ ಆಹಾರ ಪದ್ಧತಿಯನ್ನು ನಿರ್ಲಕ್ಷಿಸುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗಬಹುದು. ನೀವು ಕೆಲಸದಲ್ಲಿ ಪೂರ್ಣ ಉತ್ಸಾಹ ಮತ್ತು ಉತ್ಸಾಹದಿಂದ ಕೆಲಸ ಮಾಡುತ್ತೀರಿ, ಆದರೆ ಒಂದೇ ಬಾರಿಗೆ ಹಲವಾರು ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದರಿಂದ ನಿಮಗೆ ಸ್ವಲ್ಪ ತೊಂದರೆಯಾಗುತ್ತದೆ. ನಿಮ್ಮ ವ್ಯವಹಾರ ಪ್ರತಿಸ್ಪರ್ಧಿಗಳ ಮೇಲೆ ನಿಗಾ ಇರಿಸಿ. ವಾಹನ ಚಲಾಯಿಸುವಾಗ ವಿಶೇಷ ಎಚ್ಚರಿಕೆ ವಹಿಸಿ.&lt;/p&gt;&lt;p&gt;ಮೀನ:&lt;/p&gt;&lt;p&gt;ಇಂದು ಕೆಲಸದ ಒತ್ತಡ ಸ್ವಲ್ಪ ಹೆಚ್ಚಾಗಿರುತ್ತದೆ, ಆದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವು ಪ್ರತಿಯೊಂದು ಸವಾಲನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲಸದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ, ನಿಮ್ಮ ಮನೋಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ತಾಯಿ ನಿಮಗೆ ಒಂದು ಪ್ರಮುಖ ಜವಾಬ್ದಾರಿಯನ್ನು ನೀಡಬಹುದು, ಅದನ್ನು ನೀವು ಸಂಪೂರ್ಣ ಸಮರ್ಪಣೆಯೊಂದಿಗೆ ಪೂರೈಸುವಿರಿ. ನಿಮ್ಮ ಒಡಹುಟ್ಟಿದವರ ಬೆಂಬಲವು ನಿಮಗೆ ದೊಡ್ಡ ಶಕ್ತಿಯಾಗಲಿದೆ. ಹಿಂದಿನ ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಆರ್ಥಿಕ ಪರಿಹಾರವನ್ನು ಸಾಧಿಸಲಾಗುತ್ತದೆ. ಆದಾಗ್ಯೂ, ಯಾವುದೇ ಕಾನೂನು ವಿಷಯದಲ್ಲಿ ಜಾಗರೂಕರಾಗಿರುವುದು ಅವಶ್ಯಕ. ಚಿಂತನಶೀಲವಾಗಿ ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/astrology/today-prediction-horoscope-of-14-august-2026-suh/articleshow-bvp4cmg"/>
        </item>
        <item>
            <title><![CDATA[ಸಿದ್ದರಾಮಯ್ಯ ಪುತ್ರ ಯತೀಂದ್ರ ಮೊದಲ ಬಾರಿ ಸಚಿವ ಸ್ಥಾನ ಬೆನ್ನಲ್ಲೇ ಈಗ ವಿಧಾನಪರಿಷತ್‌ ಸಭಾನಾಯಕ!]]></title>
            <link>https://kannada.asianetnews.com/politics/yathindra-son-of-former-cm-siddaramaiah-now-legislative-council-leader-rav/articleshow-e57mf76</link>
            <guid isPermaLink="true">https://kannada.asianetnews.com/politics/yathindra-son-of-former-cm-siddaramaiah-now-legislative-council-leader-rav/articleshow-e57mf76</guid>
            <pubDate>Fri, 14 Aug 2026 06:34:22 +0530</pubDate>
            <description><![CDATA[ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kzywjcyrmjd2d6q5cgtsmgtg,imgname-----------------------2026-08-14t063023.824-1786669249496.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಧಾನ ಪರಿಷತ್&zwnj; (ಆ.14): &lt;/strong&gt;ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.&lt;/p&gt;&lt;h2&gt;ತಪ್ಪುಗಳಾದರೆ ಪ್ರತಿಪಕ್ಷ ಸದಸ್ಯರು ಸಹಕರಿಸಿ&lt;/h2&gt;&lt;p&gt;ಸಭಾಪತಿ ಪುಟ್ಟಣ್ಣ ಅವರು ಮಂಡಿಸಿದ ಸಂತಾಪ ಸೂಚನೆ ಅನುಮೋದಿಸಿ ಮಾತನಾಡುವ ಮುನ್ನ ಮಾತನಾಡಿದ ಯತೀಂದ್ರ ಅವರು, ಸಭಾನಾಯಕ ಸ್ಥಾನ ನೀಡಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಹೆಚ್ಚು ಅನುಭವ ಇಲ್ಲದ ಕಾರಣ ಏನಾದರೂ ತಪ್ಪುಗಳಾದರೆ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.&lt;/p&gt;&lt;h3&gt;ಮೊದಲ ಬಾರಿ ಸಚಿವ, ಸಭಾನಾಯಕ!&lt;/h3&gt;&lt;p&gt;ಇದಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಯತೀಂದ್ರ, ಮೊದಲ ಬಾರಿ ಸಚಿವನಾಗಿ, ಸಭಾನಾಯಕನಾಗಿ ಆಯ್ಕೆ ಆಗಿದ್ದೇನೆ. ಸಭೆ ಎದುರಿಸಲು ತಯಾರಿ ಮಾಡಿಕೊಂಡಿದ್ದೇನೆ. ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನ ಇದೆ. ತಂದೆಯವರ ಮಾರ್ಗದರ್ಶನ ಇದೆ ಎಂದರು.&lt;/p&gt;&lt;p&gt;ಮೊದಲ ಬಾರಿಗೆ ಸಚಿವ ಸ್ಥಾನದ ಜೊತೆಗೆ ಸಭಾನಾಯಕ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ತಪ್ಪುಗಳಾದರೆ ಪ್ರತಿಪಕ್ಷದ ಸದಸ್ಯರು ಸೇರಿದಂತೆ ಎಲ್ಲರೂ ಸಹಕರಿಸುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಮನವಿ ಮಾಡಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/yathindra-son-of-former-cm-siddaramaiah-now-legislative-council-leader-rav/articleshow-e57mf76"/>
        </item>
        <item>
            <title><![CDATA[ಲಂಚ ಪ್ರಕರಣದಲ್ಲಿ ವಶಕ್ಕೆ ಪಡೆದ ಹಣ ದೂರುದಾರನಿಗೆ ವಾಪಸ್ ನೀಡಿ: ಹೈಕೋರ್ಟ್ ಮಹತ್ವದ ತೀರ್ಪು]]></title>
            <link>https://kannada.asianetnews.com/state/karnataka-hc-bribe-trap-money-returned-to-complainants-without-waiting-for-trial-rav/articleshow-g7magwg</link>
            <guid isPermaLink="true">https://kannada.asianetnews.com/state/karnataka-hc-bribe-trap-money-returned-to-complainants-without-waiting-for-trial-rav/articleshow-g7magwg</guid>
            <pubDate>Fri, 14 Aug 2026 06:12:08 +0530</pubDate>
            <description><![CDATA[ಲಂಚ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಆರೋಪಿಯಿಂದ ವಶಪಡಿಸಿಕೊಂಡ 'ಟ್ರ್ಯಾಪ್ ಹಣ'ವನ್ನು ವಿಚಾರಣೆ ಮುಗಿಯುವವರೆಗೆ ಕಾಯದೆ, ರಾಜ್ಯದ ಬೊಕ್ಕಸದಿಂದ ದೂರುದಾರನಿಗೆ ಶೀಘ್ರವೇ ಹಿಂದಿರುಗಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.14):&lt;/strong&gt; ಲಂಚ ಪ್ರಕರಣಗಳಲ್ಲಿ ರೆಡ್&zwnj; ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿಯಿಂದ ವಶಪಡಿಸಿಕೊಂಡ &lsquo;ಟ್ರ್ಯಾಪ್ ಹಣ&rsquo;ವನ್ನು ವಿಚಾರಣೆ ತೀರ್ಮಾನ ಆಗುವವರೆಗೆ ವಿಚಾರಣಾ ಕೋರ್ಟ್&zwnj; ವಶದಲ್ಲೇ ಉಳಿಸಿಕೊಳ್ಳಬಾರದು ಹಾಗೂ ಪ್ರಕರಣ ಇತ್ಯರ್ಥಕ್ಕೆ ಕಾಯದೇ ರಾಜ್ಯದ ಬೊಕ್ಕಸದಿಂದ ದೂರುದಾರನಿಗೆ ಹಣವನ್ನು ಶೀಘ್ರವೇ ಹಿಂದಿರುಗಿಸಬೇಕು ಎಂದು ಹೈಕೋರ್ಟ್&zwnj; ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಲಂಚ ಪ್ರಕರಣವೊಂದರಲ್ಲಿ ಟ್ರ್ಯಾಪ್&zwnj; ಮಾಡಿದ ಸಂದರ್ಭದಲ್ಲಿ ತಮ್ಮಿಂದ ವಶಪಡಿಸಿಕೊಂಡ ₹80 ಸಾವಿರ &lsquo;ಟ್ರ್ಯಾಪ್&rsquo; ಹಣವನ್ನು ಬಡ್ಡಿಯೊಂದಿಗೆ ಬಿಡುಗಡೆ ಮಾಡಲು ಸಿಬಿಐಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿಯ ಗುತ್ತಿಗೆದಾರ ಜಿ.ಈಶ್ವರಯ್ಯ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಕುರಿತಂತೆ ಆದೇಶಿಸಿದೆ.&lt;/p&gt;&lt;p&gt;ಅಲ್ಲದೆ, ಪ್ರಕರಣದ ಅರ್ಜಿದಾರರಿಗೆ ಹಣ ಬಿಡುಗಡೆ ಮಾಡುವ ವಿಚಾರವನ್ನು ಸಿಬಿಐ ವಿಶೇಷ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದೆ.&lt;/p&gt;&lt;p&gt;ಭ್ರಷ್ಟಾಚಾರ ಕೃತ್ಯವನ್ನು ಪತ್ತೆಹಚ್ಚಲು ಪ್ರಕರಣದ ದೂರುದಾರರು ತಮ್ಮ ಸ್ವಂತ ಹಣ ಬಳಸುತ್ತಾರೆ. ಪ್ರಾಸಿಕ್ಯೂಷನ್&zwnj; ಸಂಸ್ಥೆಯು ಅಪರಾಧವನ್ನು ಬಯಲಿಗೆಳೆಯುವ ಸಾಧನವಾಗಿ ಮಾತ್ರ ಆ ಹಣವನ್ನು ಬಳಸಿಕೊಳ್ಳುತ್ತದೆ. ಆದ್ದರಿಂದ, ಆ ನೋಟುಗಳು ಕ್ಷಣಕಾಲ ಸಾಕ್ಷ್ಯ ಸ್ವರೂಪವನ್ನು ಪಡೆದುಕೊಂಡ ಮಾತ್ರಕ್ಕೆ, ಅವುಗಳ ಮಾಲೀಕರಿಂದ ಸರ್ಕಾರಕ್ಕೆ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ಮರೆಯಬಾರದು. ದೂರುದಾರರ ಹಣವನ್ನು ಅವರಿಗೆ ಶೀಘ್ರವೇ ಕೊಡಮಾಡುವುದರಿಂದ ಭ್ರಷ್ಟ ಸಾರ್ವಜನಿಕ ಸೇವಕರ ವಿರುದ್ಧ ದೂರು ನೀಡಲು ಪ್ರಾಮಾಣಿಕ ನಾಗರಿಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.&lt;/p&gt;&lt;p&gt;ಹಾಗೆಯೇ, ದೂರುದಾರರು ತಮ್ಮ ಹಣವನ್ನು ಮರಳಿ ಪಡೆಯಲು ವರ್ಷಗಟ್ಟಲೆ ಕಾಯುವಂತೆ ಒತ್ತಾಯಿಸುವುದು ಶಿಕ್ಷೆಯನ್ನಾಗಿ ಪರಿವರ್ತಿಸಿದಂತಾಗುತ್ತದೆ. ದೂರುದಾರರು ಸೂಕ್ತ ಅರ್ಜಿಯನ್ನು ಸಲ್ಲಿಸುವ ಮೂಲಕ, ತಾನು ವ್ಯವಸ್ಥೆ ಮಾಡಿದ್ದ &lsquo;ಟ್ರ್ಯಾಪ್ ಹಣ&rsquo;ಕ್ಕೆ ಸಮಾನವಾದ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಬಹುದು. ಅಂತಹ ಅರ್ಜಿಯನ್ನು ಸಲ್ಲಿಸಿದಾಗ, ವಿಶೇಷ ನ್ಯಾಯಾಲಯ ಪರಿಶೀಲಿಸಿ ವಿಲೇವಾರಿ ಮಾಡಬೇಕು ಎಂದು ಎಂದು ನಿರ್ದೇಶಿಸಿದೆ.&lt;/p&gt;&lt;h2&gt;ಪ್ರಕರಣದ ವಿವರ:&lt;/h2&gt;&lt;p&gt;ಈಶ್ವರಯ್ಯ ಅವರು, ತಮ್ಮ ಜಿಎಸ್&zwnj;ಟಿ ಬಾಕಿ ಚುಕ್ತಾ ಮಾಡುವ ಸಂಬಂಧ ಬಳ್ಳಾರಿಯ ಕೇಂದ್ರ ತೆರಿಗೆ (ಜಿಎಸ್&zwnj;ಟಿ) ವಿಭಾಗದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಮಧುಸೂಧನ ಅವರನ್ನು ಸಂಪರ್ಕಿಸಿದ್ದರು. ಆಗ ಮಧುಸೂಧನ ಒಂದು ಲಕ್ಷಕ್ಕೆ ಬೇಡಿಕೆ ಇಟ್ಟು ನಂತರ ₹80 ಸಾವಿರಕ್ಕೆ ಒಪ್ಪಿದ್ದರು. ಲಂಚದ ಹಣ ಪಡೆಯುತ್ತಿದ್ದಾಗ ಮಧುಸೂಧನ ರೆಡ್&zwnj; ಹ್ಯಾಂಡ್&zwnj; ಆಗಿ ಸಿಬಿಐ ಬಲೆಗೆ ಬಿದ್ದಿದ್ದರು.&lt;/p&gt;&lt;p&gt;ಈ ಪ್ರಕರಣವು ವಿಚಾರಣಾ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದ ಕಾರಣಕ್ಕೆ ಈಶ್ವರಯ್ಯ ಅವರು ಹೈಕೋರ್ಟ್&zwnj; ಮೆಟ್ಟಿಲೇರಿ, ಕಷ್ಟಪಟ್ಟು ದುಡಿದು ಸಂಪಾದಿಸಿದ ₹80 ಸಾವಿರ ತಮಗೆ ಇನ್ನೂ ಮರಳಿ ಕೈಸೇರಿಲ್ಲ. ನ್ಯಾಯಾಲಯದ ವಶದಲ್ಲಿಯೇ ಇದೆ. ಜಪ್ತಿ ಮಾಡಲಾದ ಟ್ರ್ಯಾಪ್ ಹಣವನ್ನು ಬಿಡುಗಡೆ ಮಾಡುವ ಕುರಿತಂತೆ ವಿಸ್ತೃತ ಕಾರ್ಯವಿಧಾನವನ್ನು ಒಳಗೊಂಡಿರುವ ಸಾಮಾನ್ಯ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರಿದ್ದರು.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-hc-bribe-trap-money-returned-to-complainants-without-waiting-for-trial-rav/articleshow-g7magwg"/>
        </item>
        <item>
            <title><![CDATA[ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮಕ್ಕೆ ಇನ್ಮುಂದೆ ‘ಪರ್ಮಿಷನ್’ ಕಡ್ಡಾಯ! RSS ಚಟುವಟಿಕೆಗಳಿಗೆ ಕಡಿವಾಣ ಹಾಕಲು ಹೊಸ ವಿಧೇಯಕ?]]></title>
            <link>https://kannada.asianetnews.com/state/permission-mandatory-for-events-at-educational-institutions-government-premises-rav/articleshow-k6iiap5</link>
            <guid isPermaLink="true">https://kannada.asianetnews.com/state/permission-mandatory-for-events-at-educational-institutions-government-premises-rav/articleshow-k6iiap5</guid>
            <pubDate>Fri, 14 Aug 2026 05:50:52 +0530</pubDate>
            <description><![CDATA[ಕರ್ನಾಟಕ ಸಚಿವ ಸಂಪುಟವು 'ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026'ಕ್ಕೆ ಅನುಮೋದನೆ ನೀಡಿದೆ. ಈ ಮೂಲಕ, ಆರ್‌ಎಸ್‌ಎಸ್‌ ಸೇರಿದಂತೆ ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಕಾನೂನುಬದ್ಧ ಅನುಮತಿ ಪಡೆಯುವುದು ಕಡ್ಡಾಯ.]]></description>
            <media:content url="https://static.asianetnews.com/images/w-1280,h-720,format-jpg,imgid-01h7a2h7yc1rhqq2bp0wqwfe4b,imgname-vidhana-soudha.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಆ.14): ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ &lsquo;ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ-2026&rsquo;ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.&lt;/p&gt;&lt;p&gt;ಆ ಮೂಲಕ ಆರ್&zwnj;ಎಸ್&zwnj;ಎಸ್&zwnj; ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಶಾಲಾ, ಕಾಲೇಜು, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಕಾನೂನು ಬದ್ಧ ಅನುಮತಿ ಕಡ್ಡಾಯ ಎಂಬ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.&lt;/p&gt;&lt;p&gt;ಇದೇ ಮಳೆಗಾಲದ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ.&lt;/p&gt;&lt;p&gt;2025ರಲ್ಲೇ ರಾಜ್ಯ ಸರ್ಕಾರವು ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನುಬದ್ಧವಾಗಿ ನಡೆಸಲು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸ್ಪಷ್ಟ ಮಾರ್ಗಸೂಚಿ ಪ್ರಕಟಿಸಿತ್ತು.&lt;/p&gt;&lt;p&gt;ಇದನ್ನು ಪುನಶ್ಚೇತನ ಸೇವಾ ಸಂಸ್ಥೆ ಎಂಬ ಸಂಘಟನೆಯು ಹೈಕೋರ್ಟ್&zwnj;ನಲ್ಲಿ ಪ್ರಶ್ನಿಸಿತ್ತು. ಈ ನಿರ್ಧಾರವು ನಾಗರಿಕರ ಸಭೆ ಸೇರುವ ಮತ್ತು ಸಂಘ ಕಟ್ಟುವ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ ಎಂದು ವಾದಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್&zwnj; ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇದಕ್ಕೆ ಪ್ರತ್ಯೇಕ ಕಾಯಿದೆ ಜಾರಿಗೆ ಸರ್ಕಾರ ನಿರ್ಧರಿಸಿದೆ.&lt;/p&gt;&lt;h2&gt;ಏನಿದು ವಿವಾದ?:&lt;/h2&gt;&lt;p&gt;2025ರಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಸ್ಥಳಗಳು, ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್&zwnj;ಎಸ್&zwnj;ಎಸ್&zwnj; ಸಂಘಟನೆಯು ಶಾಖೆ, ಸಾಂಘಿಕ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.&lt;/p&gt;&lt;p&gt;ಇದರ ಬೆನ್ನಲ್ಲೇ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳ, ಸರ್ಕಾರಿ ಶಾಲೆಗಳ ಮೈದಾನಗಳ ಸದ್ಬಳಕೆ ಮಾಡುವ ಸಂಬಂಧ ಸ್ಪಷ್ಟ ನೀತಿ ನಿಯಮ ಉಳ್ಳ ಸರ್ಕಾರ ಆದೇಶ ಹೊರಡಿಸಿದ್ದರು.&lt;/p&gt;&lt;p&gt;ಪೊಲೀಸ್ ಮಹಾನಿರ್ದೇಶಕರು 2025ರ ಅ.15ರಂದು ತಮ್ಮ ಪತ್ರದಲ್ಲಿ, ಹಲವಾರು ಖಾಸಗಿ ಸಂಸ್ಥೆಗಳು, ಸಂಘಗಳು ತಮ್ಮ ಚಟುವಟಿಕೆಗಳು, ಪ್ರಚಾರ, ತರಬೇತಿ, ಉತ್ಸವಗಳು ಹಾಗೂ ಸದಸ್ಯರ ಮತ್ತು ಬೆಂಬಲಿಗರ ಸಭೆಗಳು ನಡೆಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರದ ಆಸ್ತಿಗಳು, ಜಮೀನುಗಳು, ಆಟದ ಮೈದಾನಗಳು, ಸಾರ್ವಜನಿಕ ರಸ್ತೆಗಳನ್ನು ಬಳಸಿಕೊಳ್ಳುತ್ತಿವೆ. ಇದಕ್ಕೆ ಸರ್ಕಾರ ಅಥವಾ ಸಂಬಂಧಿತ ಇಲಾಖೆಯಿಂದ ಮುಂಚಿತವಾಗಿ ಅನುಮತಿ ಪಡೆಯುತ್ತಿಲ್ಲ. ಇಂತಹ ಕ್ರಿಯೆಗಳನ್ನು ಅಕ್ರಮ ಪ್ರವೇಶ ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದರು.&lt;/p&gt;&lt;p&gt;ಇದೀಗ ಪ್ರತ್ಯೇಕ ಕಾಯಿದೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಸಂಘಟನೆ, ಸಂಘ ಸಂಸ್ಥೆಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಆರ್&zwnj;ಎಸ್&zwnj;ಎಸ್ ಅಧಿಕೃತವಾಗಿ ನೋಂದಾಯಿತ ಅಲ್ಲದ ಸಂಸ್ಥೆ ಆಗಿರುವುದರಿಂದ ಅನುಮತಿ ಕೋರಲು ಕಷ್ಟವಾಗಬಹುದು. ಆ ಮೂಲಕ ಆರ್&zwnj;ಎಸ್&zwnj;ಎಸ್&zwnj; ಚಟುವಟಿಕೆಗೆ ನಿರ್ಬಂಧ ಹೇರಬಹುದು ಎಂಬ ಉದ್ದೇಶ ಸರ್ಕಾರದ್ದು ಎನ್ನಲಾಗಿದೆ.&lt;/p&gt;&lt;p&gt;ವಿಧೇಯಕದಲ್ಲಿ ಯಾವುದೇ ಚಟುವಟಿಕೆಗಳು ಸಾರ್ವಜನಿಕರಿಗೆ ಅನಾನುಕೂಲ ಉಂಟು ಮಾಡಿದರೆ ಸಂಸ್ಥೆಗಳ ಆವರಣ ಅಥವಾ ಜಾಗದಲ್ಲಿ ನಡೆಯುವ ಚಟುವಟಿಕೆಗಳಿಂದ ಆ ಸಂಸ್ಥೆಗಳ ಮೂಲ ಧ್ಯೇಯಕ್ಕೆ ಧಕ್ಕೆ ಉಂಟಾಗುವುದಾದರೆ ಅಂತಹ ಚಟುವಟಿಕೆಗಳ ಆಯೋಜನೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿಯನ್ನು ನಿರಾಕರಿಸಬೇಕು ಎಂದು ನಿಯಮ ಜಾರಿಗೆ ತರುವ ಸಾಧ್ಯತೆಯಿದೆ.&lt;/p&gt;&lt;p&gt;ಜತೆಗೆ ಯಾವ್ಯಾವ ಆಸ್ತಿಗಳಲ್ಲಿ ಕಾರ್ಯಕ್ರಮ ನಡೆಸಲು ಯಾವ್ಯಾವ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂಬುದನ್ನೂ ಸ್ಪಷ್ಟವಾಗಿ ತಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/permission-mandatory-for-events-at-educational-institutions-government-premises-rav/articleshow-k6iiap5"/>
        </item>
        <item>
            <title><![CDATA[Health Minister Warns: ಚೀಸ್‌, ಪನ್ನೀರ್‌, ಬೆಣ್ಣೆ ಸೇರಿ ಯಾವುದೇ ಕೃತಕ ಆಹಾರ ಉತ್ಪನ್ನ ಬಳಸುವಂತಿಲ್ಲ: ಖಾದರ್‌ ಎಚ್ಚರಿಕೆ]]></title>
            <link>https://kannada.asianetnews.com/state/health-minister-khader-warns-against-fake-cheese-panneer-butter-in-hotels-rav/articleshow-3ht0gxq</link>
            <guid isPermaLink="true">https://kannada.asianetnews.com/state/health-minister-khader-warns-against-fake-cheese-panneer-butter-in-hotels-rav/articleshow-3ht0gxq</guid>
            <pubDate>Fri, 14 Aug 2026 05:29:07 +0530</pubDate>
            <description><![CDATA[ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಕೃತಕ ಪನ್ನೀರ್, ಚೀಸ್‌ನಂತಹ ಆಹಾರ ಪದಾರ್ಥಗಳ ಉತ್ಪಾದನೆ ಮತ್ತು ಮಾರಾಟದ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಬೆಂಗಳೂರಿನ ಹಲವು ಹೋಟೆಲ್‌ಗಳ ಮೇಲೆ ವೈದ್ಯಾಧಿಕಾರಿಗಳು ದಾಳಿ ನಡೆಸಿ, ಅಶುಚಿತ್ವ ತ್ಯಾಜ್ಯ ವಿಂಗಡಿಸದ ಕಾರಣಕ್ಕಾಗಿ ಲಕ್ಷಾಂತರ ರೂಪಾಯಿ ದಂಡ ವಿಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzyrtm8ywy26ntxeq5m07h8t,imgname-----------------------2026-08-14t052246.958-1786665324830.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು (ಆ.14): ಪನ್ನೀರ್&zwnj; ಸೇರಿದಂತೆ ಯಾವುದೇ ಆಹಾರ ಪದಾರ್ಥಗಳ ಕೃತಕ ಉತ್ಪಾದನೆ ಮತ್ತು ಮಾರಾಟಕ್ಕೆ ಈಗಾಗಲೇ ನಮ್ಮ ಕಾನೂನಿನಲ್ಲಿ ನಿಷೇಧವಿದೆ. ಯಾವುದೇ ಕಂಪನಿಗಳು ಕಾನೂನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್&zwnj; ಎಚ್ಚರಿಸಿದರು.&lt;/p&gt;&lt;h2&gt;ಚೀಸ್ ಪನ್ನೀರ್, ಬೆಣ್ಣೆ ಕೃತಕ ಉತ್ಪಾದನೆ ಮಾಡಿದ್ರೆ ಎಚ್ಚರ&lt;/h2&gt;&lt;p&gt;ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀಸ್&zwnj;, ಪನ್ನೀರ್&zwnj;, ಬೆಣ್ಣೆ ಮಾತ್ರಲ್ಲ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಲು, ಮಾರಾಟ ಮಾಡಲು ರಾಜ್ಯದ ಕಾಯ್ದೆ, ಕಾನೂನಿನಲ್ಲಿ ಅವಕಾಶವಿಲ್ಲ. ಆರೋಗ್ಯಕ್ಕೆ ಹಾನಿಕಾರಕ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸಲು ನಿಷೇಧ ಹೇರಲಾಗಿದೆ. ಅಂತಹ ಯಾವುದೇ ಆಹಾರ ಪದಾರ್ಥಗಳನ್ನು ಕೃತಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿವುದು ಕಂಡುಬಂದರೆ ಅಂತಹ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಸಂಬಂಧ ಮತ್ತೊಂದು ವಿಶೇಷ ಆದೇಶವನ್ನೂ ಶೀಘ್ರ ಹೊರಡಿಸಲಾಗುವುದು ಎಂದು ಹೇಳಿದರು.&lt;/p&gt;&lt;p&gt;ನಮಗೆ ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಮುಖ್ಯ. ಸ್ಟಾರ್&zwnj; ಹೋಟೆಲ್&zwnj;, ಸಾಮಾನ್ಯ ಹೋಟೆಲ್&zwnj; ಅಥವಾ ಇಂದಿರಾ ಕ್ಯಾಂಟೀನ್&zwnj; ಇರಲಿ ಎಲ್ಲಾ ಕಡೆ ಉತ್ತಮ ಆರೋಗ್ಯಕರ ಹಾಗೂ ಗುಣಮಟ್ಟದ ಆಹಾರವನ್ನೇ ಜನರಿಗೆ ನೀಡಬೇಕು. ಹಾಗಾಗಿಯೇ ಎಲ್ಲ ಕಡೆಯೂ ದಾಳಿ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.&lt;/p&gt;&lt;h3&gt;ನಿಯಮ ಪಾಲಿಸದ ಹೊಟೇಲ್ ಮೇಲೆ ವೈದ್ಯಾಧಿಕಾರಿಗಳ ದಾಳಿ&lt;/h3&gt;&lt;p&gt;ನಗರದ ಉತ್ತರ ಪಾಲಿಕೆ ವ್ಯಾಪ್ತಿಯ ಹೋಟೆಲ್&zwnj;ಗಳ ಮೇಲೆ ದಾಳಿ ನಡೆಸಿದ ಬ್ಯಾಟರಾಯನಪುರ ಹಾಗೂ ಯಲಹಂಕ ವಿಭಾಗದ ವೈದ್ಯಾಧಿಕಾರಿಗಳ ತಂಡ ಕಸ ವಿಂಗಡಿಸದ ಅಶುಚಿತ್ವ ಉಂಟುಮಾಡಿದ್ದರಿಂದ 1.60 ಲಕ್ಷ ರು. ದಂಡ ವಿಧಿಸಿದ್ದಾರೆ.&lt;/p&gt;&lt;p&gt;ಇಲ್ಲಿನ ಹಯಾತ್ ಸೆಂಟ್ರಿಕ್ ನಲ್ಲಿ ತ್ಯಾಜ್ಯ ವಿಂಗಡಿಸದ ಕಾರಣ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ 40 ಸಾವಿರ ದಂಡ ವಿಧಿಸಲಾಗಿದೆ.&lt;/p&gt;&lt;p&gt;ಪೀಪಾಯ್ ಬ್ರೇವರಿ ಮತ್ತು ಕಿಚನ್&zwnj;ಗೆ 80 ಸಾವಿರ ರೂ, ತಲಸೇರಿ ರೆಸ್ಟೋರೆಂಟ್ ಗೆ 20 ಸಾವಿರ ರೂ ದಂಡ ವಿಧಿಸಲಾಗಿದೆ. ಚಿಕ್ ಪೇಟ್ ದೊನ್ನೆ ಬಿರಿಯಾನಿ ಆಹಾರ ಮಳಿಗೆಗೆ 5 ಸಾವಿರ ದಂಡ ವಿಧಿಸಲಾಗಿದೆ. ನಂದನ ಪ್ಯಾಲೇಸ್&zwnj;ನಲ್ಲಿ ತ್ಯಾಜ್ಯ ವಿಂಗಡಣೆ ಮಾಡದ ಕಾರಣ 15 ಸಾವಿರ ರು. ದಂಡ ವಿಧಿಸಲಾಗಿದೆ. ಸ್ವಾತಿ ಹೋಟೆಲ್&zwnj;ನಲ್ಲಿ ಅನೈರ್ಮಲ್ಯಕರ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/health-minister-khader-warns-against-fake-cheese-panneer-butter-in-hotels-rav/articleshow-3ht0gxq"/>
        </item>
        <item>
            <title><![CDATA[ಪಾಕ್ ಉಗ್ರರ ಜೊತೆ ನಂಟು; ಕಲಬುರಗಿಯಲ್ಲಿ ಇಬ್ಬರು ಶಂಕಿತರು ವಶಕ್ಕೆ!]]></title>
            <link>https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</link>
            <guid isPermaLink="true">https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd</guid>
            <pubDate>Fri, 14 Aug 2026 05:09:48 +0530</pubDate>
            <description><![CDATA[ಕಲಬುರಗಿಯಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಮತ್ತು ದೇಶ ವಿರೋಧಿ ಜಾಲತಾಣ ಚಟುವಟಿಕೆಗಳ ಶಂಕೆಯ ಮೇಲೆ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ವಶಕ್ಕೆ.. ವಿಚಾರಣೆ ಬಳಿಕ ಒಬ್ಬನನ್ನು ಬಿಡುಗಡೆ ಮಾಡಲಾಗಿದ್ದು, ಮತ್ತೊಬ್ಬ ಆರೋಪಿ ಸಮೀರ್‌ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzyqqaqrnkf5swz44qxhpm32,imgname-----------------------2026-08-14t050548.930-1786664168184.jpg" type="image/jpeg" height="390" width="690"/>
            <content:encoded><![CDATA[&lt;p&gt;ಉತ್ತರ ಪ್ರದೇಶ ಮೂಲದ ಯುವಕರು ವಶಕ್ಕೆ- ತೀವ್ರ ವಿಚಾರಣೆ ನಡೆಸಿದ ಬಳಿಕ ಒಬ್ಬನ ಬಿಡುಗಡೆ&lt;/p&gt;&lt;p&gt;ಕಲಬುರಗಿ (ಆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಸಂಪರ್ಕ ಶಂಕೆ ಮತ್ತು ಜಾಲತಾಣಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಕಲಬುರಗಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಘಟನೆ ನಡೆದಿದೆ.&lt;/p&gt;&lt;p&gt;ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸದಾರಪೂರ ಗ್ರಾಮದ ಮೊಹಮ್ಮದ್ ಸಮೀರ್ ಹಾಗೂ ಈತನ ಸಹೋದ್ಯೋಗಿ ಸಲ್ಮಾನ್&zwnj;ನನ್ನು ವಶಕ್ಕೆ ಪಡೆಯಲಾಗಿತ್ತು. ಏತನ್ಮಧ್ಯೆ ವಿಚಾರಣೆ ನಡೆಸಿ ಸಲ್ಮಾನ್&zwnj;ನನ್ನು ಬಿಡುಗಡೆ ಮಾಡಿರುವ ಪೊಲೀಸರು, ಸಮೀರ್&zwnj;ನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.&lt;/p&gt;&lt;p&gt;ದೇಶವಿರೋಧಿ ಹಾಗೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿವೆ ಎನ್ನಲಾದ ಹಲವು ಇನ್&zwnj;ಸ್ಟಾಗ್ರಾಂ ಖಾತೆಗಳನ್ನು ಆರೋಪಿ ಸಮೀರ್ ಫಾಲೋ ಮಾಡುತ್ತಿದ್ದ. ಸಹೋದ್ಯೋಗಿ ಸಲ್ಮಾನ್&zwnj; ಅವುಗಳಿಗೆ ಕಮೆಂಟ್&zwnj; ಮಾಡುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ತಿಳಿಸಿದ್ದಾರೆ.&lt;/p&gt;&lt;p&gt;ದೇಶ ವಿರೋಧಿ ರೀತಿಯ ಸಾಮಾಜಿಕ ಜಾಲತಾಣ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸಮೀರ್&zwnj;ನನ್ನು ಬಂಧಿಸಲಾಗಿದೆ. ಈ ಖಾತೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಪಾಕಿಸ್ತಾನ ಅಥವಾ ಭಾರತದ ಹೊರಗಿನ ಇತರ ಯಾವುದೇ ಪ್ರದೇಶಗಳೊಂದಿಗೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/pak-terror-links-ccb-police-detain-two-suspects-in-kalaburagi-rav/articleshow-0elfbzd"/>
        </item>
        <item>
            <title><![CDATA[ಗುಟ್ಕಾ ಬ್ಯಾನ್‌: ಕಂತೆ ಕಂತೆ ಹಣ ತಂದು ಗುಟ್ಕಾ ಖರೀದಿಸಿದ ಜನ!]]></title>
            <link>https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1</link>
            <guid isPermaLink="true">https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1</guid>
            <pubDate>Fri, 14 Aug 2026 04:55:08 +0530</pubDate>
            <description><![CDATA[ರಾಜ್ಯದಲ್ಲಿ ಗುಟ್ಕಾ ನಿಷೇಧದ ಸುದ್ದಿ ಹಬ್ಬುತ್ತಿದ್ದಂತೆ, ಕೊಪ್ಪಳ ಜಿಲ್ಲೆಯಲ್ಲಿ ಜನರು ಗುಟ್ಕಾ ಖರೀದಿಗೆ ಮುಗಿಬಿದ್ದಿದ್ದಾರೆ. ಸಾಲ ಮಾಡಿಕೊಂಡು ಬಂದು ಚೀಲಗಟ್ಟಲೆ ಗುಟ್ಕಾ ಖರೀದಿಸುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzypwv42vkmfyq5hpt4zbq1h,imgname-----------------------2026-08-14t044542.858-1786663300226.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಕೊಪ್ಪಳ (ಆ.14): &lt;/strong&gt;ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್&zwnj;ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.&lt;/p&gt;&lt;h2&gt;ಎಚ್ಚರವಾದ ವ್ಯಾಪಾರಸ್ಥರು:&lt;/h2&gt;&lt;p&gt;ಬೆಳಗ್ಗೆ ಗುಟ್ಕಾ ಖರೀದಿಗೆ ಬಂದವರಿಗೆ ಪ್ಯಾಕೆಟ್, ಚೀಲಗಟ್ಟಲೇ ಮಾರಾಟ ಮಾಡಿದವರು ಮಧ್ಯಾಹ್ನದ ವೇಳೆಗೆ ಗುಟ್ಕಾ ಸ್ಟಾಕ್&zwnj; ಇದ್ದರೂ ಮಾರಾಟ ಮಾಡದೆ ಖಾಲಿಯಾಗಿದೆ ಎಂದಿದ್ದಾರೆ. ಗೋದಾಮಿನಲ್ಲಿ ಗುಟ್ಕಾ ಇಟ್ಟರೆ ಸಮಸ್ಯೆಯಾಗುತ್ತದೆ ಎಂದು ಬೇರೆಡೆ ಸಾಗಿಸಿದ್ದಾರೆ.&lt;/p&gt;&lt;p&gt;ದುಬಾರಿ ಬೆಲೆ: ಯಾವುದೇ ಅಂಗಡಿಯಲ್ಲಿ ಗುಟ್ಕಾ ಕೇಳಿದರೂ ಇಲ್ಲ ಎನ್ನುತ್ತಿದ್ದಾರೆ. ಆದರೆ ಕದ್ದು ಮುಚ್ಚಿ ದುಬಾರಿ ಮೊತ್ತಕ್ಕೆ ಮಾರುತ್ತಿದ್ದಾರೆ. ₹25 ರು. ಇದ್ದ ಒಂದು ಗುಟ್ಕಾ ಪ್ಯಾಕೆಟ್&zwnj;ನ ಬೆಲೆ ಸದ್ಯ 100 ರು. ತಲುಪಿದೆ ಎಂದು ಹೇಳಲಾಗುತ್ತಿದೆ.&lt;/p&gt;&lt;p&gt;ರಾಜ್ಯದಲ್ಲಿ ಗುಟ್ಕಾ ಮಾರಾಟ ನಿಷೇಧ ಕುರಿತು ಮಾಧ್ಯಮದಲ್ಲಿ ವರದಿಯಾಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯಲ್ಲಿ ಗುಟ್ಕಾ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತು. ಸಾಲ ಮಾಡಿ ಕಂತೆ ಕಂತೆ ಹಣ ಕೈಯಲ್ಲಿ ಹಿಡಿದುಕೊಂಡು ಬಂದು ಗುಟ್ಕಾ ಖರೀದಿಸಿ ಹೋಗುತ್ತಿರುವುದು ಅಚ್ಚರಿ ಮೂಡಿಸಿತು. ಎಷ್ಟಾದರೂ ಇರಲಿ, ಗುಟ್ಕಾ ಕೊಡಿ ಎಂದು ಚೀಲದಲ್ಲಿ ತುಂಬಿಕೊಂಡು ಸೈಕಲ್, ಬೈಕ್&zwnj;ನಲ್ಲಿ ಹೇರಿಕೊಂಡು ಹೋಗುತ್ತಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gutkha-ban-fear-people-in-koppal-buying-packets-worth-hundreds-of-rupees-rav/articleshow-brp77w1"/>
        </item>
        <item>
            <title><![CDATA[Mangalsutra Designs: ಈ ಮಾಡರ್ನ್ ಮಾಂಗಲ್ಯ ಡಿಸೈನ್‌ಗಳನ್ನು ನೋಡಿ, ಮನಸೋಲದವರೇ ಇಲ್ಲ!]]></title>
            <link>https://kannada.asianetnews.com/webstories/fashion/stunning-modern-mangalsutra-designs-you-will-love-gvd-3muf8dh</link>
            <guid isPermaLink="true">https://kannada.asianetnews.com/webstories/fashion/stunning-modern-mangalsutra-designs-you-will-love-gvd-3muf8dh</guid>
            <pubDate>Fri, 14 Aug 2026 00:28:21 +0530</pubDate>
            <description><![CDATA[Mangalsutra Designs: ಈಗಿನ ಟ್ರೆಂಡ್‌ಗೆ ತಕ್ಕಂತೆ ಮಾಡರ್ನ್ ಮಾಂಗಲ್ಯಗಳನ್ನು ಸುಲಭವಾಗಿ ಖರೀದಿಸಬಹುದು. ಇದರಲ್ಲಿ ನಿಮಗೆ ಕ್ವಾಲಿಟಿ ಡಿಸೈನ್‌ಗಳು ಸಿಗುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxhvyyd1586g110xa7dye14,imgname-floral-pendant-mangalsutra-1786624474061.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/stunning-modern-mangalsutra-designs-you-will-love-gvd-3muf8dh"/>
        </item>
        <item>
            <title><![CDATA[ಉಪ್ಪು, ಹುಳಿ, ಖಾರ ಎಲ್ಲಾ ಸರಿಯಿದ್ರೂ ಅಡುಗೆ ಮೊದಲಿನಷ್ಟು ರುಚಿ ಬರ್ತಿಲ್ವಾ? ಪಾತ್ರೆ ಕಡೆ ಒಮ್ಮೆ ಕಣ್ಣಾಡಿಸಿ]]></title>
            <link>https://kannada.asianetnews.com/gallery/kitchen/why-your-food-doesnt-taste-the-same-the-role-of-right-cookware-05e93wp</link>
            <guid isPermaLink="true">https://kannada.asianetnews.com/gallery/kitchen/why-your-food-doesnt-taste-the-same-the-role-of-right-cookware-05e93wp</guid>
            <pubDate>Thu, 13 Aug 2026 23:50:00 +0530</pubDate>
            <description><![CDATA[Importance of cookware in cooking: ನಿಮ್ಮ ಫೇವರೇಟ್ ಫುಡ್ ಈಗ ಮೊದಲಿನಂತೆ 'ಕಿಕ್' ಕೊಡುತ್ತಿಲ್ಲವೇ? ರೆಸಿಪಿಯಲ್ಲಿ ತಪ್ಪಿಲ್ಲದಿದ್ದರೂ ರುಚಿ ವ್ಯತ್ಯಾಸವಾಗುತ್ತಿದ್ದರೆ, ನಿಮ್ಮ ಅಡುಗೆ ಮನೆಯ ಪಾತ್ರೆಗಳ ಮೇಲೆ ಒಮ್ಮೆ ಕಣ್ಣಾಡಿಸಿ.]]></description>
            <media:content url="https://static.asianetnews.com/images/w-1280,h-720,format-jpg,imgid-01gznpdn6e2997sg2djnq0014j,imgname-5-thing-you-should-not-cook-in-iron-cookware-1683281597645.jpg" type="image/jpeg" height="390" width="690"/>
            <content:encoded><![CDATA[&lt;p&gt;Importance of cookware in cooking: ನಿಮ್ಮ ಫೇವರೇಟ್ ಫುಡ್ ಈಗ ಮೊದಲಿನಂತೆ 'ಕಿಕ್' ಕೊಡುತ್ತಿಲ್ಲವೇ? ರೆಸಿಪಿಯಲ್ಲಿ ತಪ್ಪಿಲ್ಲದಿದ್ದರೂ ರುಚಿ ವ್ಯತ್ಯಾಸವಾಗುತ್ತಿದ್ದರೆ, ನಿಮ್ಮ ಅಡುಗೆ ಮನೆಯ ಪಾತ್ರೆಗಳ ಮೇಲೆ ಒಮ್ಮೆ ಕಣ್ಣಾಡಿಸಿ.&lt;/p&gt;&lt;img&gt;&lt;p&gt;&lt;strong&gt;ಅಡುಗೆ ಪಾತ್ರೆಗಳು&lt;/strong&gt;ನಾವು ಎಷ್ಟೇ ಸರಿಯಾಗಿ ಮಸಾಲೆ ಪದಾರ್ಥಗಳನ್ನು ಬಳಸಿದರೂ, ಕೆಲವೊಮ್ಮೆ ಅಡುಗೆ ಅಂದುಕೊಂಡಷ್ಟು ರುಚಿಯಾಗಿ ಬರುವುದಿಲ್ಲ. ಇಂತಹ ಸಮಯದಲ್ಲಿ ನಾವು ರೆಸಿಪಿಯಲ್ಲಿ ಏನಾದರೂ ತಪ್ಪಾಗಿದೆಯೇ ಎಂದು ಯೋಚಿಸುತ್ತೇವೆ. ಆದರೆ, ಅಡುಗೆಯ ರುಚಿ ಬದಲಾಗಲು ಕೇವಲ ರೆಸಿಪಿ ಮಾತ್ರವಲ್ಲ, ನೀವು ಬಳಸುವ ಅಡುಗೆ ಪಾತ್ರೆಗಳು (Cookware) ಕೂಡ ಪ್ರಮುಖ ಕಾರಣವಾಗಿರಬಹುದು!&lt;/p&gt;&lt;img&gt;&lt;p&gt;&lt;strong&gt;ಪಾತ್ರೆಗಳು ಅಡುಗೆಯ ರುಚಿಯನ್ನು ಹೇಗೆ ಬದಲಿಸುತ್ತವೆ?&lt;/strong&gt;ಸರಿಯಾದ ಅಡುಗೆ ಪಾತ್ರೆಗಳನ್ನು ಬಳಸುವುದರಿಂದ ಇಡೀ ಅಡುಗೆಯ ಅನುಭವವೇ ಬದಲಾಗುತ್ತದೆ. ಪಾತ್ರೆಯಲ್ಲಿ ಶಾಖವು (Heat) ಎಲ್ಲೆಡೆ ಸಮನಾಗಿ ಹರಡುವುದು ಮತ್ತು ಆಹಾರವು ಬೇಯುವ ರೀತಿ ಅಂತಿಮ ರುಚಿಯನ್ನು ನಿರ್ಧರಿಸುತ್ತದೆ. ಉತ್ತಮ ಗುಣಮಟ್ಟದ ಪಾತ್ರೆಗಳನ್ನು ಬಳಸಿದಾಗ ಅಡುಗೆ ಮಾಡುವ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ವ್ಯತ್ಯಾಸ ತಿಳಿಯುವುದು ಇಲ್ಲಿ&lt;/strong&gt;&lt;strong&gt;ಗರಿಗರಿಯಾದ ಪನಿಯಾರ (Paddu)&lt;/strong&gt;ಸರಿಯಾದ ಪಾತ್ರೆ ಬಳಸಿದಾಗ ಪಡ್ಡು ಹೊರಗಡೆ ಹೆಚ್ಚು ಗರಿಗರಿಯಾಗಿ ಮತ್ತು ಒಳಗಡೆ ಮೃದುವಾಗಿ ಬರುತ್ತವೆ.&lt;/p&gt;&lt;img&gt;&lt;p&gt;&lt;strong&gt;ಸಮನಾಗಿ ಬೇಯುವ ಉತ್ತಪ್ಪಂ&lt;/strong&gt;ಉತ್ತಪ್ಪಂಗಳು ಎಲ್ಲೂ ಸೀದುಹೋಗದೆ ಅಥವಾ ಹಸಿಯಾಗಿ ಉಳಿಯದೆ ಸಮನಾಗಿ ಬೇಯುತ್ತವೆ.&lt;/p&gt;&lt;img&gt;&lt;p&gt;&lt;strong&gt;ಪರಿಪೂರ್ಣ ಒಗ್ಗರಣೆ (Tadka)&lt;/strong&gt;ಅಡುಗೆಯ ಪ್ರಾಣವಾದ ಒಗ್ಗರಣೆಯು ಸರಿಯಾದ ಪಾತ್ರೆಯಲ್ಲಿ ಸಿದ್ಧವಾದಾಗ ಮಾತ್ರ ಇಡೀ ಅಡುಗೆಗೆ ವಿಶೇಷ ಘಮ ಮತ್ತು ರುಚಿ ನೀಡುತ್ತದೆ.&lt;/p&gt;&lt;img&gt;&lt;p&gt;&lt;strong&gt;ಪಾತ್ರೆಗಳ ಕಡೆ ಗಮನ ಕೊಡಿ&lt;/strong&gt;ಇವುಗಳು ಮೇಲ್ನೋಟಕ್ಕೆ ಸಣ್ಣ ಬದಲಾವಣೆಗಳಂತೆ ಕಂಡರೂ, ನಿಮ್ಮ ಊಟದ ರುಚಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ. ಹಾಗಾಗಿ, ಅಡುಗೆಯ ರುಚಿ ಹೆಚ್ಚಿಸಲು ಕೇವಲ ಮಸಾಲೆಗಳ ಮೇಲೆ ಗಮನ ಹರಿಸುವ ಬದಲು, ನಿಮ್ಮ ಅಡುಗೆ ಮನೆಯ ಪಾತ್ರೆಗಳನ್ನು ಅಪ್&zwnj;ಗ್ರೇಡ್ ಮಾಡುವುದು ಒಂದು ಸ್ಮಾರ್ಟ್ ನಿರ್ಧಾರವಾಗಬಲ್ಲದು.&lt;/p&gt;]]></content:encoded>
            <category><![CDATA[kitchen]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/why-your-food-doesnt-taste-the-same-the-role-of-right-cookware-05e93wp"/>
        </item>
        <item>
            <title><![CDATA[ಯಶ್ ‘ಟಾಕ್ಸಿಕ್’ ಕಥೆಗೆ ‘ವಿಜಯ ವಿಕ್ರಮ’, ‘ಬಭ್ರುವಾಹನ’ ಲಿಂಕ್? ಮೂರು ರೂಪ, ಮೂರು ಛಾಯೆ]]></title>
            <link>https://kannada.asianetnews.com/entertainment/yash-toxic-draws-comparisons-with-kannada-classics-vijay-vikram-and-babruvahana-gvd/articleshow-9wr1y7e</link>
            <guid isPermaLink="true">https://kannada.asianetnews.com/entertainment/yash-toxic-draws-comparisons-with-kannada-classics-vijay-vikram-and-babruvahana-gvd/articleshow-9wr1y7e</guid>
            <pubDate>Thu, 13 Aug 2026 23:10:24 +0530</pubDate>
            <description><![CDATA[ಯಶ್ ಅಭಿನಯದ ‘ಟಾಕ್ಸಿಕ್’ ಟ್ರೇಲರ್ ಬಳಿಕ ಹೊಸ ಥಿಯರಿಗಳು ಹರಿದಾಡುತ್ತಿವೆ. ರಾಯ, ನಾದಿಯಾ ಮತ್ತು ಟಿಕೆಟ್ ಪಾತ್ರಗಳ ನಡುವೆ ಏನು ಸಂಬಂಧ? ‘ವಿಜಯ ವಿಕ್ರಮ’ ಹಾಗೂ ‘ಬಭ್ರುವಾಹನ’ ಜೊತೆ ಹೋಲಿಕೆ ಯಾಕೆ?]]></description>
            <media:content url="https://static.asianetnews.com/images/w-1280,h-720,format-jpg,imgid-01kzy3746jr5xje8h6315f0yce,imgname-jjb-1786642665682.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಟಾಕ್ಸಿಕ್&rsquo; ಚಿತ್ರದ ಟ್ರೇಲರ್ ಬಂದ ಬಳಿಕ ವಿಶ್ಲೇಷಣೆಗಳು ಆರಂಭವಾಗಿವೆ. ಮುಖ್ಯವಾಗಿ ರಾಯ ಮತ್ತು ಟಿಕೆಟ್ ಪಾತ್ರಧಾರಿಯ ಕುರಿತು ಅನೇಕ ಪರಿಕಲ್ಪನೆಗಳು ಓಡಾಡುತ್ತಿವೆ. ಅದರಲ್ಲಿ ತುಂಬಾ ಇಂಟರೆಸ್ಟಿಂಗ್&zwnj; ಆದ ಪರಿಕಲ್ಪನೆ ಎಂದರೆ ವಿಷ್ಣುವರ್ಧನ್ ನಟನೆಯ &lsquo;ವಿಜಯ ವಿಕ್ರಮ&rsquo; ಚಿತ್ರದ ಹೋಲಿಕೆ.&lt;/p&gt;&lt;p&gt;&lsquo;ವಿಜಯ ವಿಕ್ರಮ&rsquo; ಸಿನಿಮಾದಲ್ಲಿ ವಿಷ್ಣುವರ್ಧನ್ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಂದೆ ವಿಕ್ರಮ್&zwnj; ಎಸ್ಟೇಟ್ ಮ್ಯಾನೇಜರ್ ಮಗಳನ್ನು ಅತ್ಯಾ*ಚಾರ ಮಾಡಿರುತ್ತಾನೆ. ಹಾಗೆ ಹುಟ್ಟಿದ ಮಗ ವಿಜಯ್. ಅನ್ಯಾಯ ಮಾಡಿದ ವಿಕ್ರಮ್ ವಿರುದ್ಧ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಅದೇ ಕತೆಯನ್ನು ಟಾಕ್ಸಿಕ್&zwnj;ಗೂ ಹೋಲಿಕೆ ಮಾಡಲಾಗುತ್ತಿದೆ. ಟ್ರೇಲರ್&zwnj;ನಲ್ಲಿ ನೋಡಿದರೆ ಯಶ್ ನಟನೆಯ ರಾಯ ಮತ್ತು ಕಿಯಾರ ಅಡ್ವಾಣಿ ನಟನೆಯ ನಾದಿಯಾ ಪಾತ್ರಕ್ಕೂ ಸಂಬಂಧ ಇರುವಂತೆ ಅನ್ನಿಸುತ್ತಿದೆ. ಅಲ್ಲದೇ ಸರ್ಕಸ್ ಹಿನ್ನೆಲೆಯೂ ಇರುವುದರಿಂದ ಟಿಕೆಟ್ ಪಾತ್ರ ಆ ಜೋಡಿಯ ಮಗನಿರಬಹುದು ಎಂಬ ಊಹೆ ಪ್ರೇಕ್ಷಕ ಅಭಿಮಾನಿಗಳದು.&lt;/p&gt;&lt;p&gt;ಹಾಗಂತ ಇದಕ್ಕೆ ಯಾವುದೇ ಅಧಿಕೃತ ಸ್ಪಷ್ಟನೆ ಇಲ್ಲ. ಚಿತ್ರತಂಡ ಏನು ಬೇಕಾದರೂ ಮಾತಾಡಿಕೊಳ್ಳಿ ಅಂತ ಸುಮ್ಮನೆ ಇದೆ. ಹಾಗೆ ನೋಡಿದರೆ ಈ ತಂದೆಯ ವಿರುದ್ಧ ಹೋರಾಡಲು ಬರುವ ಮಗನ ಪರಿಕಲ್ಪನೆ ಹೊಸತೇನೂ ಅಲ್ಲ. ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ &lsquo;ಬಭ್ರುವಾಹನ&rsquo; ಚಿತ್ರದಲ್ಲಿಯೂ ಇದೇ ಕತೆ. ತಂದೆ ಅರ್ಜುನನ ವಿರುದ್ಧ ಬಭ್ರುವಾಹನನ ಯುದ್ಧವೇ ಆ ಚಿತ್ರದ ಹೈಲೈಟ್. ಅಲ್ಲಿಯೂ ಡಾ. ರಾಜ್&zwnj;ಕುಮಾರ್ ಅವರು ತಂದೆ ಅರ್ಜುನ ಹಾಗೂ ಮಗ ಬಭ್ರುವಾಹನನಾಗಿ ದ್ವಿಪಾತ್ರದಲ್ಲಿ ಕ್ರಾಂತಿ ಮಾಡಿದ್ದರು. ಈ ಪರಿಕಲ್ಪನೆಯನ್ನು &lsquo;ಟಾಕ್ಸಿಕ್&rsquo;ನಲ್ಲಿಯೂ ತರಲಾಗಿದೆಯೇ ಅನ್ನುವುದು ಸಿನಿಮಾ ಬಿಡುಗಡೆಯಾದ ಬಳಿಕವಷ್ಟೇ ತಿಳಿಯಬೇಕಿದೆ.&lt;/p&gt;&lt;p&gt;&lt;strong&gt;ಟಾಕ್ಸಿಕ್ ಚಿತ್ರಕ್ಕೆ ಎ ಸರ್ಟಿಫಿಕೇಟ್&zwnj;&lt;/strong&gt;&lt;/p&gt;&lt;p&gt;ಯಶ್&zwnj; ನಟನೆಯ &lsquo;ಟಾಕ್ಸಿಕ್&zwnj;&rsquo; ಚಿತ್ರಕ್ಕೆ ಸೆನ್ಸಾರ್&zwnj; ಆಗಿದ್ದು ಎ ಸರ್ಟಿಫಿಕೇಟ್&zwnj; ಬಂದಿದೆ. ಯಾವುದೇ ದೃಶ್ಯಗಳ ಮ್ಯೂಟ್&zwnj;, ಕಟ್&zwnj; ಇಲ್ಲದೆ ಎ ಸರ್ಟಿಫಿಕೇಟ್&zwnj; ಪಡೆದುಕೊಂಡಿರುವ &lsquo;ಟಾಕ್ಸಿಕ್&zwnj;&rsquo; ಚಿತ್ರದ ರನ್ನಿಂಗ್&zwnj; ಟೈಮ್&zwnj; ಮೂರು ಗಂಟೆ ಹದಿನಾಲ್ಕು ನಿಮಿಷ ಹನ್ನೆರಡು ಸೆಕೆಂಡ್&zwnj; ಇದೆ ಎನ್ನಲಾಗಿದೆ. ಗೀತು ಮೋಹನದಾಸ್&zwnj; ನಿರ್ದೇಶನದ ಈ ಚಿತ್ರ ಆ.26ಕ್ಕೆ ತೆರೆಗೆ ಬರುತ್ತಿದೆ.&lt;/p&gt;&lt;p&gt;&lt;strong&gt;ಟಾಕ್ಸಿಕ್ ಅಲ್ಬಮ್&zwnj; ಬಿಡುಗಡೆ&lt;/strong&gt;&lt;/p&gt;&lt;p&gt;ಟಾಕ್ಸಿಕ್ ಸಿನಿಮಾದ 30:09 ನಿಮಿಷದ ಎಲ್ಲಾ ಹಾಡುಗಳು (ಅಲ್ಬಮ್&zwnj;) ಜೀ ಮ್ಯೂಸಿಕ್ ಸೌತ್ ಯೂಟ್ಯೂಬ್&zwnj;ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್&zwnj;ನತ್ತ ಸಾಗುತ್ತಿದೆ. ಈ ಬಗ್ಗೆ ಎಕ್ಸ್ ಪೇಜ್&zwnj;ನಲ್ಲಿ Tune in for Intoxication! Toxic : A Fairy Tale for Grown - Ups Full Music Album out now! ಎಂದು ಕೆವಿಎನ್ ಸಂಸ್ಥೆ ಪೋಸ್ಟ್ ಮಾಡಿದೆ.&lt;/p&gt;&lt;h2&gt;&lt;strong&gt;ದೇಶದ ಪ್ರಸಿದ್ಧ ಕಾರ್ಯಕ್ರಮಗಳಲ್ಲಿ ಯಶ್ ಟಾಕ್ಸಿಕ್&lt;/strong&gt;&lt;/h2&gt;&lt;p&gt;ಯಶ್ &lsquo;ಟಾಕ್ಸಿಕ್&zwnj;&rsquo; ಸಿನಿಮಾದ ಪ್ರಚಾರವೇ ವಿಭಿನ್ನವಾಗಿದೆ. ದೇಶದ ಅತ್ಯಂತ ಪ್ರಸಿದ್ಧ ಟಿವಿ ಶೋಗಳಲ್ಲಿ ಯಶ್ ಟಾಕ್ಸಿಕ್ ಸುದ್ದಿಯಾಗುತ್ತಿದೆ. ಅದರಲ್ಲೂ ವಿಶೇಷನಾಗಿ ಅಮಿತಾಬ್&zwnj; ಬಚ್ಚನ್&zwnj; ಅವರು ನಡೆಸಿಕೊಡುವ &lsquo;ಕೌನ್&zwnj; ಬನೇಗ ಕರೋಡ್&zwnj;ಪತಿ&rsquo; ಕಾರ್ಯಕ್ರಮದಲ್ಲೂ ಯಶ್&zwnj; ಕುರಿತಾದ ಪ್ರಶ್ನೆ ಬಂದಿದೆ. ಈ ಶೋದಲ್ಲಿ ಭಾರತದ ಸೂಪರ್&zwnj;ಸ್ಟಾರ್&zwnj;ಗಳಿಗೆ ಸಂಬಂಧಿಸಿ ಪ್ರಶ್ನೆಯೊಂದನ್ನು ಕೇಳಲಾಗಿದ್ದು, &lsquo;ರಜನಿಕಾಂತ್&zwnj; ಸೂಪರ್&zwnj; ಸ್ಟಾರ್, ಚಿರಂಜೀವಿ ಮೆಗಾ ಸ್ಟಾರ್&zwnj;, ಪವನ್&zwnj; ಕಲ್ಯಾಣ್&zwnj; ಪವರ್&zwnj; ಸ್ಟಾರ್&zwnj; ಆದರೆ ಯಶ್&zwnj; ಏನು?&rsquo; ಎಂಬ ಪ್ರಶ್ನೆ ಕೇಳಲಾಗಿತ್ತು. ಸ್ಪರ್ಧಿ &lsquo;ರಾಕಿಂಗ್&zwnj; ಸ್ಟಾರ್&zwnj;&rsquo; ಎನ್ನುವ ಮೂಲಕ ಸರಿಯುತ್ತರ ನೀಡಿದರು.&lt;/p&gt;&lt;p&gt;ಈ ವೇಳೆ ಅಮಿತಾಬ್&zwnj; ಬಚ್ಚನ್&zwnj; ಅವರು ಯಶ್&zwnj; ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿ ಈ ಮಟ್ಟಿಗೆ ಬೆಳೆದ ಯಶ್&zwnj; ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜತ್ ಶರ್ಮಾ ಅವರ &lsquo;ಆಪ್&zwnj; ಕಿ ಅದಾಲತ್&rsquo; ಕಾರ್ಯಕ್ರಮದಲ್ಲಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆ ಬೆಂಗಳೂರಿನ ಮೆಟ್ರೋ ರೈಲುಗಳಲ್ಲಿಯೂ ಟಾಕ್ಸಿಕ್&zwnj; ಪೋಸ್ಟರ್&zwnj;ಗಳೇ ರಾರಾಜಿಸುತ್ತಿವೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/yash-toxic-draws-comparisons-with-kannada-classics-vijay-vikram-and-babruvahana-gvd/articleshow-9wr1y7e"/>
        </item>
        <item>
            <title><![CDATA[ಕೆಲವೇ ದಿನದಲ್ಲಿ ಗ್ಲಾಸ್ ಸ್ಕಿನ್.. ಮೊಸರು ಬಳಸಿದ ಮೇಲೆ ಮ್ಯಾಜಿಕ್ ನೋಡಿ!]]></title>
            <link>https://kannada.asianetnews.com/webstories/fashion/dermatologist-recommended-3-curd-face-masks-for-glowing-skin-719xh2b</link>
            <guid isPermaLink="true">https://kannada.asianetnews.com/webstories/fashion/dermatologist-recommended-3-curd-face-masks-for-glowing-skin-719xh2b</guid>
            <pubDate>Thu, 13 Aug 2026 23:22:00 +0530</pubDate>
            <description><![CDATA[Curd for skin glow: ಡರ್ಮಟಾಲಜಿಸ್ಟ್ ಡಾ. ಆಂಚಲ್ ಹಂಚಿಕೊಂಡಿರುವ 3 ಮ್ಯಾಜಿಕಲ್ ಫೇಸ್ ಮಾಸ್ಕ್‌ ಬಗ್ಗೆ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01jcj9c0fh6tv7fx26tg8hp3e6,imgname-DIY-hibiscus-face-mask-for-glowin-skin-h-1731485630961.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/fashion/dermatologist-recommended-3-curd-face-masks-for-glowing-skin-719xh2b"/>
        </item>
        <item>
            <title><![CDATA[ಹೊಸ ಮಲ್ಲಿಯ ಮುಗಿಸಲು ಸಂಚು; ಹಳೆ ಮಲ್ಲಿ ಜತೆ ರೊಮಾನ್ಸ್​: Amruthadaare 'ಜೈ' ಜೋಡಿ ಕ್ಯೂಟ್​ ಫೋಟೋಸ್​]]></title>
            <link>https://kannada.asianetnews.com/gallery/relationship/jaidev-urf-ranav-gowda-and-bhargavi-llb-urf-radha-bhagavati-new-photoshoot-gone-viral-suc-e1n7i3r</link>
            <guid isPermaLink="true">https://kannada.asianetnews.com/gallery/relationship/jaidev-urf-ranav-gowda-and-bhargavi-llb-urf-radha-bhagavati-new-photoshoot-gone-viral-suc-e1n7i3r</guid>
            <pubDate>Thu, 13 Aug 2026 23:10:11 +0530</pubDate>
            <description><![CDATA[ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್ ಮತ್ತು ಮಲ್ಲಿ ಪಾತ್ರಗಳ ಮೂಲಕ ಜನಪ್ರಿಯರಾದ ನಟ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ, ಇದೀಗ ನಿಜ ಜೀವನದಲ್ಲಿಯೂ ಒಂದಾಗಲು ಸಜ್ಜಾಗಿದ್ದಾರೆ. ಇದೇ ವರ್ಷ ಸರಳವಾಗಿ ವಿವಾಹವಾಗುವುದಾಗಿ ಈ ಜೋಡಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzy367n8cgdsmwvhbxwvbz26,imgname-ranav-gowda-and-radha-bhagavati-1786642636456.jpg" type="image/jpeg" height="390" width="690"/>
            <content:encoded><![CDATA[&lt;p&gt;ಅಮೃತಧಾರೆ ಸೀರಿಯಲ್&zwnj;ನಲ್ಲಿ ಜೈದೇವ್ ಮತ್ತು ಮಲ್ಲಿ ಪಾತ್ರಗಳ ಮೂಲಕ ಜನಪ್ರಿಯರಾದ ನಟ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ, ಇದೀಗ ನಿಜ ಜೀವನದಲ್ಲಿಯೂ ಒಂದಾಗಲು ಸಜ್ಜಾಗಿದ್ದಾರೆ. ಇದೇ ವರ್ಷ ಸರಳವಾಗಿ ವಿವಾಹವಾಗುವುದಾಗಿ ಈ ಜೋಡಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;ಅಮೃತಧಾರೆಯಲ್ಲಿ ಪೆದ್ದು ಮಲ್ಲಿಯಾಗಿ ಎಲ್ಲರ ಮನಸ್ಸನ್ನು ಗೆದ್ದು ಇದೀಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿದ್ದಾರೆ ನಟಿ ರಾಧಾ ಭಗವತಿ. Amurthadhaare Serialನಲ್ಲಿ ಮೋಸ ಮಾಡಿ ಪ್ರೆಗ್ನೆಂಟ್​ ಮಾಡಿದ ಜೈದೇವ್​ನನ್ನೇ ರಿಯಲ್​ ಲೈಫ್​ನಲ್ಲಿ ಮದ್ವೆಯಾಗ್ತಿದ್ದಾರೆ ನಟಿ ರಾಧಾ. ಇವರ ಮದುವೆ ಡೇಟ್&zwnj; ಬಗ್ಗೆ ಇನ್ನೂ ಬಹಿರಂಗಗೊಳ್ಳದಿದ್ದರೂ, ಜೋಡಿ ಆಗಾಗ್ಗೆ ಫೋಟೋಶೂಟ್​ ಮಾಡಿಸಿಕೊಳ್ಳುತ್ತಲೇ ಇರುತ್ತದೆ.&lt;/p&gt;&lt;img&gt;&lt;p&gt;ರಾಧಾ ಅವರು ತಮ್ಮ ಹೊಸ ಚಿತ್ರ ನಾನು ಕರುಣಾಕರಕ್ಕೆ (Nanu Karunakara Movie) ಸಿದ್ಧತೆ ನಡೆಸಿದ್ದರೆ, ಅದೇ ಇನ್ನೊಂದೆಡೆ ಮದುವೆಗೂ ರೆಡಿ ಆಗ್ತಿದ್ದಾರೆ. ಆಗ ರಾಣವ್​ ಗೌಡ (Amruthadhaare Jaidev urf Ranav Gowda) ಅವರು, ಇದೇ ವರ್ಷ ಮದುವೆಯಾಗುತ್ತೇವೆ ಎಂದಿದ್ದಾರೆ. ಇದಾಗಲೇ ಡೇಟ್​ ಫಿಕ್ಸ್​ ಆಗಬೇಕಿತ್ತು. ಆದರೆ ಮದುವೆಗೆ ತುಂಬಾ ತಯಾರಿ ಅಗತ್ಯ ಎನ್ನುವ ಕಾರಣಕ್ಕೆ ಸ್ವಲ್ಪ ಪೋಸ್ಟ್​ಪೋನ್​ ಮಾಡಿದ್ದೇವೆ. ಆದರೆ ಖಂಡಿತವಾಗಿಯೂ ಇದೇ ವರ್ಷವೇ ಮದುವೆಯಾಗುತ್ತೇವೆ ಎಂದಿದ್ದಾರೆ. ಇನ್ನೇನು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಕೂಡ ಅಂತಿಮ ಸಂಚಿಕೆಗಳನ್ನು ಪ್ರಸಾರ ಮಾಡುತ್ತಿದೆ.&lt;/p&gt;&lt;img&gt;&lt;p&gt;ಸದ್ಯ ಅದೇ ರೀತಿಯ ಇನ್ನೊಂದು ಫೋಟೋ ವೈರಲ್​ ಆಗಿದೆ. ಅದಕ್ಕೆ ನೆಟ್ಟಿಗರು ತಮಾಷೆಗಾಗಿ ಅಮೃತಧಾರೆಯ ಹಳೆಯ ಮಲ್ಲಿಜೊತೆ ಜೈದೇವ್​ ರೊಮಾನ್ಸ್​ ಮಾಡುತ್ತಿದ್ದರೆ, ಹೊಸ ಮಲ್ಲಿಯನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾನೆ ಎನ್ನುತ್ತಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿಯ ಕುರಿತು ಹೇಳುವುದಾದರೆ, ರಾಧಾ ಭಗವತಿ ಅವರು &lsquo;ಆ 90 ದಿನಗಳು&rsquo;, &lsquo;ವಸಂತ ಕಾಲದ ಹೂಗಳು&rsquo;, &lsquo;ಅಪಾಯವಿದೆ ಎಚ್ಚರಿಕೆ&rsquo; ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ &lsquo;ಉಘೇ ಉಘೇ ಮಾದೇಶ್ವರ&rsquo; ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು &lsquo;ಬಾನಿಗೊಂದು ತಾರೆ&rsquo; ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ ಜೈದೇವ್​ JD ಪಾತ್ರದಲ್ಲಿ ನಟಿಸ್ತಿರೋ ನಟನ ಹೆಸರು ರಾಣವ್​ ರಾವ್​. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ತುಳಸಿ ಧಾರಾವಾಹಿಯಲ್ಲಿ, ಸುಧಾರಾಣಿಯವರ (Sudharani) ಜೊತೆ ಬಾಲನಟನಾಗಿ ನಟಿಸುವ ಮೂಲಕ ರಾಣವ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಆವಾಗ ರಾಣವ್ ಆರನೇ ತರಗತಿಯಲ್ಲಿ ಓದುತ್ತಿದ್ದರು. ಬಾಲ್ಯದಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ರಾಣವ್ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿವಹಿಸಿದ್ದೇ ಹೆಚ್ಚು. ಅದೇ ಕಾರಣದಿಂದ ಇವರು ಇಂಜಿನಿಯರಿಂಗ್ ಅರ್ಧದಲ್ಲೇ ಬಿಟ್ಟು, ಮತ್ತೆ ನಟನೆಯತ್ತ ಮುಖ ಮಾಡಿದರು.&lt;/p&gt;&lt;img&gt;&lt;p&gt;ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಉದಯ ಟಿವಿಯಲ್ಲಿ (Udaya Tv) ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಣವ್ ಮತ್ತೆ ಹಿಂದಿರುಗಿ ನೋಡೇ ಇಲ್ಲ. ಒಂದಾದ ಮೇಲೆ ಒಂದರಂತೆ ಹಲವು ಧಾರಾವಾಹಿಗಳಲ್ಲಿ ಇವರು ನಟಿಸಿದರು. ಬಿ.ಸುರೇಶ್ ಅವರ 'ಜೀವನದಿ&rsquo;, ಕಸ್ತೂರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಕುಮಾರಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ವರಲಕ್ಷ್ಮೀ ಸ್ಟೋರ್ಸ್ , ಮತ್ತೆ ವಸಂತ, ಝೀ ಕನ್ನಡದ ಕಮಲಿ ಧಾರಾವಾಹಿಯಲ್ಲೂ ನಟಿಸುವ ಮೂಲಕ ವೀಕ್ಷಕರ ಮನ ಗೆದ್ದಿದ್ದರು.&lt;/p&gt;&lt;img&gt;&lt;p&gt;ಸೆಲೆಬ್ರಿಟಿ ಅಂತ ಬಹಳ ದೊಡ್ಡದಾಗಿ ಮದುವೆ ಆಗುವುದಿಲ್ಲ. ಏಕೆಂದರೆ ನಾವೆಲ್ಲಾ ತುಂಬಾ ಚಿಕ್ಕ ಫ್ಯಾಮಿಲಿಯಿಂದ ಬಂದವರು. ತುಂಬಾ ಸಿಂಪಲ್​ ಆಗಿ ಮದುವೆಯಾಗುತ್ತೇವೆ. ಸ್ಥಳ ಇನ್ನೂ ಗೊತ್ತು ಮಾಡಿಲ್ಲ. ಮಾಡಿದ ಕೂಡಲೇ ತಿಳಿಸುತ್ತೇವೆ ಎಂದಿದ್ದಾರೆ. ನಮ್ಮದು ಆಡಂಬರ ಇಷ್ಟ ಪಡದೇ ಇರುವ ಜೋಡಿ. ಅದ್ದರಿಂದ ಸಿಂಪಲ್​ ಮದುವೆ ಎಂದಿದ್ದಾರೆ ರಾಧಾ.&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/jaidev-urf-ranav-gowda-and-bhargavi-llb-urf-radha-bhagavati-new-photoshoot-gone-viral-suc-e1n7i3r"/>
        </item>
        <item>
            <title><![CDATA[Toxic ಹವಾದ ಬೆನ್ನಲ್ಲೇ ಯಶ್​ ಕಾರಿನ ನಂಬರ್​ ಪ್ಲೇಟ್​ ಭಾರಿ ಸದ್ದು: ಏನಿದೆ ಅಂಥ ವಿಶೇಷತೆ- ಕುತೂಹಲ ಇಲ್ಲಿದೆ]]></title>
            <link>https://kannada.asianetnews.com/gallery/entertainment/yashs-cars-number-plate-8055-makes-a-loud-noise-after-the-toxic-movie-as-boss-suc-a2xfoey</link>
            <guid isPermaLink="true">https://kannada.asianetnews.com/gallery/entertainment/yashs-cars-number-plate-8055-makes-a-loud-noise-after-the-toxic-movie-as-boss-suc-a2xfoey</guid>
            <pubDate>Thu, 13 Aug 2026 22:53:14 +0530</pubDate>
            <description><![CDATA[ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇದರ ನಡುವೆ, ಚಿತ್ರದ ಮುಹೂರ್ತದ ವೇಳೆ ಯಶ್ ಬಳಸಿದ್ದ 'BOSS' ಎಂದು ವ್ಯಾಖ್ಯಾನಿಸಲಾದ 8055 ನಂಬರಿನ ರೇಂಜ್ ರೋವರ್ ಕಾರು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzy2945qfneq9erqs8hfx2qy,imgname-yash-s-car-1786641682614.jpg" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇದರ ನಡುವೆ, ಚಿತ್ರದ ಮುಹೂರ್ತದ ವೇಳೆ ಯಶ್ ಬಳಸಿದ್ದ 'BOSS' ಎಂದು ವ್ಯಾಖ್ಯಾನಿಸಲಾದ 8055 ನಂಬರಿನ ರೇಂಜ್ ರೋವರ್ ಕಾರು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ನಟ ಯಶ್ ಅವರು ಇದೀಗ ಟಾಕ್ಸಿಕ್​ ಚಿತ್ರದ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಹಾಡುಗಳು, ಟ್ರೈಲರ್​ಗಳು ಸಕತ್​ ಸೌಂಡ್​ ಮಾಡುತ್ತಿದ್ದು, ಈ ಚಿತ್ರದ ಬಿಡುಗಡೆಯಾಗಿ ಯಶ್​ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವದಾದ್ಯಂತ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;ಈಗಾಗಲೇ ವಿದೇಶಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಕೌಂಟರ್&zwnj;ಗಳು ತೆರೆದಿದ್ದು, ಆರಂಭಿಕ ಪ್ರತಿಕ್ರಿಯೆ ಗಮನ ಸೆಳೆಯುತ್ತಿದೆ. ಯಶ್ ಅವರ ಹಿಂದಿನ ಚಿತ್ರಗಳ ಯಶಸ್ಸಿನ ಬಳಿಕ &lsquo;ಟಾಕ್ಸಿಕ್&rsquo; ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಯಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಕ್ಷನ್ ಮತ್ತು ಗ್ಯಾಂಗ್&zwnj;ಸ್ಟರ್ ಕಥಾಹಂದರದ ಕಾರಣದಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಇದರ ಕ್ರೇಜ್ ಕೂಡ ಹೆಚ್ಚಾಗುತ್ತಿದೆ.&lt;/p&gt;&lt;img&gt;&lt;p&gt;ಇದರ ನಡುವೆಯೇ, ಯಶ್​ ಅವರು ಟಾಕ್ಸಿಕ್​ ಸಿನಿಮಾದ ಮುಹೂರ್ತದ ಸಮಯದಲ್ಲಿ ಬಂದಿದ್ದ ಕಾರಿನ ನಂಬರ್​ ಇದೀಗ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ವರ್ಷ ಈ ಸಿನಿಮಾ ಸೆಟ್ಟೇರುವ ಸಮಯದಲ್ಲಿ, ಯಶ್​ ಅವರು, ಶೂಟಿಂಗ್&zwnj;ಗೆ ತೆರಳುವಾಗ ತಮ್ಮ ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ಅದೀತ ಮತ್ತೆ ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಅಂದಹಾಗೆ, ಯಶ್ ಶೂಟಿಂಗ್&zwnj;ಗೆ ಕಾರು ಕಪ್ಪು ಬಣ್ಣದ ರೇಂಜ್&zwnj; ರೋವರ್ ಕಾರು ತಂದಿದ್ದರು. ಈ ಕಾರಿನ ಸಂಖ್ಯೆ KA 01 NA 8055. KA ಕರ್ನಾಟಕವನ್ನು ಪ್ರತಿನಿಧಿಸುವ ಈ ಕಾರು ಬೆಂಗಳೂರು ಕೇಂದ್ರ ಆರ್&zwnj;ಟಿಒನಲ್ಲಿ ನೊಂದಣಿಯಾಗಿದೆ ಹೀಗಾಗಿ NA 01 ಪಡೆದಿದೆ. 8055 ಸಂಖ್ಯೆಯನ್ನು BOSS ಸಾಮ್ಯತೆ ಇರುವುದರಿಂದ ನಮ್ಮ ಯಶ್&zwnj; ಬಾಸ್&zwnj; ಕರ್ನಾಟಕಕ್ಕೆ ನಂಬರ್ 1 ಎನ್ನುತ್ತಾರೆ ಫ್ಯಾನ್ಸ್&zwnj;. ಈ ಕಾರನ್ನು 2023ರ ಜನವರಿಯಲ್ಲಿ ಖರೀದಿಸಿದ್ದರು. ಇದರ ಬೆಲೆ ಸುಮಾರು 5 ಕೋಟಿ ರೂಪಾಯಿ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಯಶ್&zwnj; ಬಳಿ ಎಷ್ಟೇ ಕಾರುಗಳು ಇದ್ದರೂ ಅವರ ಸಂಪೂರ್ಣ ಆಸೆ ಇರುವುದು ಆರ್&zwnj;ಎಕ್ಸ್&zwnj; 100 ಬೈಕ್&zwnj; ಮೇಲೆ. ಏಕೆಂದರೆ ಹೈಸ್ಕೂಲ್&zwnj;ನಲ್ಲಿ ಇರುವಾಗಲೇ ಬೈಕ್&zwnj; ಬೇಕು ಎಂದು ತಂದೆ ಬಳಿ ಕೇಳಿದ್ದರಂತೆ ಹೀಗಾಗಿ ಕಾಲೇಜ್&zwnj;ಗೆ ಕಾಲಿಡುತ್ತಿದ್ದಂತೆ ಆರ್&zwnj;ಎಕ್ಸ್&zwnj; 100 ಬೈಕನ್ನು ತಂದೆ ಗಿಫ್ಟ್&zwnj; ನೀಡಿದ್ದರು. ಓದಿನ ಕಡೆ ಗಮನ ಕಡಿಮೆಯಾಗಿದೆ ಅದಕ್ಕೆ ಈ ಬೈಕ್ ಕಾರಣ ಎಂದು ಯಶ್ ತಂದೆ ಈ ಬೈಕನ್ನು ಮಾರಿಬಿಟ್ಟರಂತೆ. ಇನ್ನು ಕಾರುಗಳನ್ನು ಯಶ್ ಖರೀದಿಸಿದ ಮೊದಲ ಕಾರು ಮಹೀಂದ್ರಾ ಸ್ಕಾರ್ಪಿಯೋ ಇದರ ಬೇಲೆ ಆಗ ಇದ್ದಿದ್ದು 9 ಲಕ್ಷದಿಂದ 16 ಲಕ್ಷ. ಇದಾದ ಮೇಲೆ ಬಂದಿದ್ದೆಲ್ಲವೂ ಐಷಾರಾಮಿ ಕಾರುಗಳೇ...&lt;/p&gt;&lt;img&gt;&lt;p&gt;ಇನ್ನು ಸಿನಿಮಾದ ವಿಷಯಕ್ಕೆ ಬರುವುದಾದರೆ, &lsquo;ಟಾಕ್ಸಿಕ್&rsquo; ಅಡ್ವಾನ್ಸ್ ಬುಕಿಂಗ್&zwnj;ನಲ್ಲಿ ಉತ್ತರ ಅಮೆರಿಕಾದ ಮಾರುಕಟ್ಟೆಗಳು ಮುಂಚೂಣಿಯಲ್ಲಿವೆ. ಅಲ್ಲಿನ ಪ್ರೀಮಿಯರ್ ಶೋಗಳ ಮುಂಗಡ ಟಿಕೆಟ್ ಮಾರಾಟ ಈಗಾಗಲೇ 38 ಸಾವಿರ ಡಾಲರ್&zwnj;ಗಳ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಇನ್ನೂ ಬಿಡುಗಡೆಯಾಗುವ ಮುನ್ನವೇ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಯಶ್ ಅವರ ಜಾಗತಿಕ ಅಭಿಮಾನಿ ಬಳಗದ ಸಾಮರ್ಥ್ಯವನ್ನು ತೋರಿಸುತ್ತಿದೆ. ವಿದೇಶಗಳಲ್ಲಿ ಆಗಸ್ಟ್ 25ರಂದು ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆ. ಹೀಗಾಗಿ ಭಾರತಕ್ಕಿಂತ ಮುಂಚೆಯೇ ವಿದೇಶಿ ಅಭಿಮಾನಿಗಳಿಗೆ &lsquo;ಟಾಕ್ಸಿಕ್&rsquo; ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆ. ಈ ಆರಂಭಿಕ ಬುಕಿಂಗ್ ಟ್ರೆಂಡ್ ಭಾರತೀಯ ಮಾರುಕಟ್ಟೆಯ ಮೇಲೂ ದೊಡ್ಡ ನಿರೀಕ್ಷೆ ಮೂಡಿಸಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/entertainment/yashs-cars-number-plate-8055-makes-a-loud-noise-after-the-toxic-movie-as-boss-suc-a2xfoey"/>
        </item>
        <item>
            <title><![CDATA[ಸಿನಿಮಾಗೆ 50 ಕೋಟಿ ಬೇಕು ಅಂತಾ ಕೇಳಿದ್ರಂತೆ. 'ಇಲ್ಲ ಸರ್‌ ಅದಕ್ಕಿಂತ ಹೆಚ್ಚು' ಯಶ್‌ ಖಡಕ್‌ ಉತ್ತರ ಕೇಳಿ ಬಾಲಿವುಡ್‌ ಶಾಕ್‌!]]></title>
            <link>https://kannada.asianetnews.com/tv-talk/yash-aap-ki-adalat-show-toxic-movie-rejoinder-50-crore-san/articleshow-4vg5va3</link>
            <guid isPermaLink="true">https://kannada.asianetnews.com/tv-talk/yash-aap-ki-adalat-show-toxic-movie-rejoinder-50-crore-san/articleshow-4vg5va3</guid>
            <pubDate>Thu, 13 Aug 2026 22:52:27 +0530</pubDate>
            <description><![CDATA['ಟಾಕ್ಸಿಕ್‌' ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಟ ಯಶ್, ಇದೀಗ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ. ಶೋನಲ್ಲಿ ಪತ್ರಕರ್ತ ರಜತ್ ಶರ್ಮಾ ಅವರ ಸವಾಲಿನ ಪ್ರಶ್ನೆಗಳಿಗೆ ಯಶ್ ತಮ್ಮದೇ ಖದರ್‌ನಲ್ಲಿ ಉತ್ತರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzy278dvd2px2efyvsgxzxjj,imgname-yash-in-app-ki-adalat-show-1786641621434.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ಕೆಜಿಎಫ್&zwnj;-2 ರಿಲೀಸ್&zwnj; ಆದ 4 ವರ್ಷಗಳ ಬಳಿಕ ರಾಕಿಂಗ್&zwnj; ಸ್ಟಾರ್&zwnj; ಯಶ್&zwnj; ಥಿಯೇಟರ್&zwnj; ಪರದೆಯ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಹಲವು ಬಾರಿ ರಿಲೀಸ್ ಡೇಟ್&zwnj; ಘೋಷಣೆಯಾಗಿ ಮುಂದೂಡಿಕೆಯಾಗಿದ್ದ ಟಾಕ್ಸಿಕ್&zwnj; ಸಿನಿಮಾ ಇದೇ 26 ರಂದು ತೆರೆ ಕಾಣಲಿದ್ದು, ಎರಡು ವಾರಕ್ಕೆ ಮುನ್ನವೇ ಚಿತ್ರದ ಸೆನ್ಸಾರ್&zwnj; ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಎ ಸರ್ಟಿಫಿಕೇಟ್&zwnj; ಕೂಡ ಸಿಕ್ಕಿದೆ. ಇದರ ನಡುವೆ ಯಶ್&zwnj; ಸಿನಿಮಾದ ಪ್ರಮೋಷನ್&zwnj;ಗಳಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಸಿನಿಮಾದ ಟ್ರೇಲರ್&zwnj; ರಿಲೀಸ್&zwnj;ಗೆ ಸಿನಿಮಾದಲ್ಲಿ ನಟಿಸಿದ್ದ ಘಟನಾನುಘಟಿ ಸ್ಟಾರ್&zwnj;ಗಳನ್ನು ಅವರು ಸಿಲಿಕಾನ್&zwnj; ಸಿಟಿಗೆ ಕರೆಸಿದ್ದರು. ಈಗ ಅವರು ಮತ್ತೊಂದು ಮೈಲಿಗಲ್ಲು ನೆಟ್ಟಿದ್ದು, ಸುದೀರ್ಘ 34 ವರ್ಷಗಳಿಂದ ನಡೆದು ಬರುತ್ತಿರುವ ಇಂಡಿಯಾ ಟಿವಿಯ ಆಪ್&zwnj; ಕಿ ಅದಾಲತ್&zwnj; ಶೋನಲ್ಲಿ ಭಾಗವಹಿಸಿದ ಮೊದಲ ಕನ್ನಡಿಗ ಎನಿಸಿಕೊಂಡಿದ್ದಾರೆ.&lt;/p&gt;&lt;p&gt;ಹಿರಿಯ ಪತ್ರಕರ್ತ ರಜತ್&zwnj; ಶರ್ಮ ನಡೆಸಿಕೊಡಿವ ಈ ಶೋನಲ್ಲಿ ಕೋರ್ಟ್&zwnj; ಸೆಟ್&zwnj;ನಲ್ಲಿ ನಡೆಯುತ್ತದೆ. ಕಟೆಕಟೆಯಲ್ಲಿ ಗಣ್ಯರನ್ನು ಕೂರಿಸಿ ಅವರಿಗೆ ಸವಾಲ್&zwnj; ಹಾಕುವ ರೀತಿಯಲ್ಲಿ ರಜತ್&zwnj; ಶರ್ಮ ಶೋ ನಡೆಸಿಕೊಡುತ್ತಾರೆ. ಯಶ್&zwnj; ಭಾಗವಹಿಸಿದ ಆಪ್&zwnj; ಕಿ ಅದಾಲತ್&zwnj;ನ ಸಣ್ಣ ಟ್ರೇಲರ್&zwnj;ಅನ್ನು ಇಂಡಿಯಾ ಟಿವಿ ತನ್ನ ಯೂಟ್ಯೂಬ್&zwnj; ಚಾನೆಲ್&zwnj;ನಲ್ಲಿ ಹಂಚಿಕೊಂಡಿದ್ದು, ಯಶ್&zwnj; ಆಟಿಟ್ಯೂಡ್&zwnj;ಗೆ ಸ್ವತಃ ಟಿವಿಯವರೇ ದಂಗಾಗಾಗಿದ್ದಾರೆ. ಯಶ್&zwnj; ಕಾ ಆಟಿಟ್ಯೂಡ್&zwnj;...'ಮುಜೆ ಫರ್ಕ್&zwnj; ನಹಿ ಪಡ್ತಾ' (ಯಶ್&zwnj; ಆಟಿಟ್ಯೂಡ್&zwnj;.. ನನಗೆ ಅದ್ಯಾವುದೂ ಸಮಸ್ಯೆಯಲ್ಲ) ಎಂದು ಹೇಳಿದ್ದನ್ನು ಹೈಲೈಟ್&zwnj; ಮಾಡಿದೆ.&lt;/p&gt;&lt;p&gt;ಇದರಲ್ಲಿ ಯಶ್&zwnj; ಮಾತನಾಡಿರುವ ರೀತಿ ಅದೆಷ್ಟು ಆತ್ಮವಿಶ್ವಾಸದಿಂದ ಕೂಡಿದೆಯೆಂದರೆ ಕನ್ನಡಿಗರು ಮಾತ್ರವಲ್ಲ ಬಾಲಿವುಡ್&zwnj; ಮಂದಿ ಕೂಡ ಈ ಶೋ ವೀಕ್ಷಿಸಲು ಕಾತರದಿಂದ ಕಾಯ್ತಿದ್ದಾರೆ. ಇದರಲ್ಲಿ ಯಶ್&zwnj;ಗೆ ಪ್ರಶ್ನೆ ಮಾಡುವ ರಜತ್&zwnj; ಶರ್ಮ, 'ನೀವು ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಆರು ಫಿಲ್ಮ್&zwnj;ಗಳಲ್ಲಿ ನಟಿಸುವ ಆಫರ್&zwnj; ಬಂದಿತ್ತಂತೆ. ಆದರೆ ನೀವು ಆರೂ ಫಿಲ್ಮ್&zwnj; ಮಾಡುವವರಲ್ಲಿ ಸ್ಕ್ರಿಪ್ಟ್&zwnj; ಬೇಕು ಎಂದು ಕೇಳಿದ್ದರಂತೆ..' ಎಂದಿದ್ದಕ್ಕೆ, 'ಇದರಲ್ಲಿ ತಪ್ಪಿದೆಯೇ..?' ಎಂದು ಯಶ್&zwnj; ಉತ್ತರಿಸಿದ್ದಾರೆ.&lt;/p&gt;&lt;p&gt;'ಟಿವಿ ಸೀರಿಯಲ್&zwnj; ಮಾಡೋನು ಸ್ಕ್ರಿಪ್ಟ್&zwnj; ಕೇಳ್ತಾನೆ.. ಎಂದು ಅವರು ಮಾತನಾಡಿಕೊಂಡಿದ್ದರು..' ಎಂದು ರಜತ್&zwnj; ಶರ್ಮ ಹೇಳಿದ್ದಕ್ಕೆ, 'ಅವರು ಹೇಳಿರಬಹುದು ಸರ್&zwnj;.. ಆದರೆ, ಈಗ ಅವರು ಈಗ ಎಲ್ಲಿದ್ದಾರೆ ಅನ್ನೋದೇ ಗೊತ್ತಿಲ್ಲ..' ಎಂದು ಯಶ್&zwnj; ಹೇಳಿದ್ದಾರೆ. ಆದರೆ ನಿಮ್ಮ ಕೈಯಿಂದ ಆ ಏಳೂ ಸಿನಿಮಾಗಳು ಹೋದವಲ್ಲ ಅನ್ನೋ ಪ್ರಶ್ನೆಗೆ, ನನಗೆ ಅದರಿಂದ ಯಾವ ಸಮಸ್ಯೆಯೂ ಇಲ್ಲ ಎಂದು ರಾಕಿಂಗ್&zwnj; ಸ್ಟಾರ್&zwnj; ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಯಶ್&zwnj; ಮಾತಿಗೆ ಹಿಂದಿ ಲೋಕ ಶಾಕ್&zwnj;&lt;/strong&gt;&lt;/h2&gt;&lt;p&gt;ನೀವು ಚಿತ್ರರಂಗದಲ್ಲಿ ದೊಡ್ಡ ಸ್ಟಾರ್&zwnj; ಆದ ಬಳಿಕ, ನೀವು ಹೈಯೆಸ್ಟ್&zwnj; ಪೇಯ್ಡ್&zwnj; 50 ಕೋಟಿ ರೂಪಾಯಿ ಒಂದು ಸಿನಿಮಾಕ್ಕೆ ಬೇಕು ಎಂದು ಕೇಳಿದ್ದರಂತೆ ಎನ್ನುವ ಪ್ರಶ್ನೆಗೆ ಆಟಿಟ್ಯೂಡ್&zwnj;ನಲಲೇ ಉತ್ತರಿಸಿದ ಯಶ್&zwnj;, 'ಇಲ್ಲ ಸರ್&zwnj;..ಅದಕ್ಕಿಂತ ಹೆಚ್ಚೇ ಕೇಳಿದ್ದೇ..' ಎಂದು ಕೆಜಿಎಫ್&zwnj; ಸ್ಟೈಲ್&zwnj;ನಲ್ಲಿ ಉತ್ತರ ನೀಡಿದ್ದಾರೆ. ಇದು ಯಶ್&zwnj; ಆಪ್&zwnj; ಕೀ ಅದಾಲತ್&zwnj; ಶೋನಲ್ಲಿ ಮಾತನಾಡಿರುವ ಜಸ್ಟ್&zwnj; ಟೀಸರ್&zwnj; ಮಾತ್ರ. ಆದರೆ, ಇಡೀ ಶೋ ಇನ್ನಷ್ಟು ಖದರ್&zwnj; ಆಗಿರುವ ಸೂಚನೆಯಂತೂ ಇದರಿಂದ ಸಿಕ್ಕಿದೆ. ಶನಿವಾರ ರಾತ್ರಿ 10 ಗಂಟೆಗೆ ಇಂಡಿಯಾ ಟಿವಿಯಲ್ಲಿ ಈ ಶೋ ಪ್ರಸಾರವಾಗಲಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/yash-aap-ki-adalat-show-toxic-movie-rejoinder-50-crore-san/articleshow-4vg5va3"/>
        </item>
        <item>
            <title><![CDATA[Zameer Ahmed: ಖಾತೆ ಹಂಚಿಕೆ ಬೆನ್ನಲ್ಲೇ ಬಿಗ್ ಟ್ವಿಸ್ಟ್! ಉಸ್ತುವಾರಿ ಬೇಡ, ಧ್ವಜಾರೋಹಣಕ್ಕೂ ಹೋಗಲ್ಲ ಎಂದ ಜಮೀರ್; ಕೊಟ್ಟ ಕಾರಣವೇನು?]]></title>
            <link>https://kannada.asianetnews.com/karnataka-districts/zameer-ahmed-khan-district-in-charge-minister-flag-hoisting-request-karnataka-politics-bmk/articleshow-i6qzmci</link>
            <guid isPermaLink="true">https://kannada.asianetnews.com/karnataka-districts/zameer-ahmed-khan-district-in-charge-minister-flag-hoisting-request-karnataka-politics-bmk/articleshow-i6qzmci</guid>
            <pubDate>Thu, 13 Aug 2026 22:50:57 +0530</pubDate>
            <description><![CDATA[ಸಚಿವ ಜಮೀರ್ ಅಹಮದ್ ಖಾನ್ ಅವರು ತಮಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡದಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಆಗಸ್ಟ್ 15ರ ಧ್ವಜಾರೋಹಣ ಕಾರ್ಯಕ್ರಮದಿಂದಲೂ ವಿನಾಯಿತಿ ಕೋರಿದ್ದಾರೆ. ಕಾರಣವೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01kzy27yg8bc6d2qan8eaqd0bb,imgname-zameer-ahmed-khan-1786641644040.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಜ್ಯ ರಾಜಕೀಯದಲ್ಲಿ ಸಚಿವ ಖಾತೆ ಹಂಚಿಕೆ ವಿಚಾರದ ಚರ್ಚೆ ಇನ್ನೂ ಮುಂದುವರಿದಿರುವ ನಡುವೆಯೇ ಸಚಿವ **ಜಮೀರ್ ಅಹಮದ್ ಖಾನ್ ಅವರ ನಡೆ ಕುತೂಹಲ ಮೂಡಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡದಂತೆ ಮನವಿ ಮಾಡಿರುವ ಅವರು, ಇದೇ ವೇಳೆ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಿಂದಲೂ ತಮ್ಮನ್ನು ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಜಮೀರ್ ಅಹಮದ್ ಅವರ ಈ ಮನವಿ ಇದೀಗ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. **ಖಾತೆ ಹಂಚಿಕೆ ಬೆನ್ನಲ್ಲೇ ಈ ನಿರ್ಧಾರ ಏಕೆ? ಇದರ ಹಿಂದೆ ಬೇರೆ ಯಾವುದೇ ಕಾರಣವಿದೆಯೇ? ಎಂಬ ಚರ್ಚೆ ಆರಂಭವಾಗಿದೆ. ಆದರೆ ತಮ್ಮ ಮನವಿಗೆ ಜಮೀರ್ ಅವರು ನೀಡಿರುವ ಕಾರಣ ರಾಜಕೀಯಕ್ಕಿಂತ ಹೆಚ್ಚಾಗಿ ಮುಂದಿನ ದಿನಗಳಲ್ಲಿನ ಪಕ್ಷದ ಹಾಗೂ ಚುನಾವಣಾ ಚಟುವಟಿಕೆಗಳಿಗೆ ಸಂಬಂಧಿಸಿದೆ.&lt;/p&gt;&lt;h2&gt;&lt;strong&gt;ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಬೇಡ!&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹಲವು ಪ್ರಮುಖ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಲಿವೆ. ಅದರಲ್ಲೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಸೇರಿ ಹಲವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿವೆ. ಇದರ ಜೊತೆಗೆ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯುವ ಸಾಧ್ಯತೆಯೂ ಇದ್ದು, ಪಕ್ಷ ಸಂಘಟನೆಗೆ ಸಂಬಂಧಿಸಿದ ಹಲವು ಪ್ರಮುಖ ಕಾರ್ಯಗಳು ಮುಂದೆ ಬಾಕಿ ಇವೆ. ಈ ಎಲ್ಲಾ ಜವಾಬ್ದಾರಿಗಳ ಹಿನ್ನೆಲೆಯಲ್ಲಿ ತಮಗೆ ಯಾವುದೇ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡಬಾರದು ಎಂದು ಜಮೀರ್ ಅಹಮದ್ ಮನವಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಸಮಯದ ಅಭಾವವಂತೆ!&lt;/strong&gt;&lt;/h3&gt;&lt;p&gt;ತಮ್ಮನ್ನು ಒಂದು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದರೆ, ಆ ಜಿಲ್ಲೆಯ ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಚುನಾವಣೆಗಳು ಮತ್ತು ಪಕ್ಷ ಸಂಘಟನೆಯ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ನಿಭಾಯಿಸಲು **ಸಮಯದ ಅಭಾವ ಉಂಟಾಗಲಿದೆ** ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ರಾಜ್ಯದ ಯಾವುದೇ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನು ತಮಗೆ ನೀಡದಂತೆ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.&lt;/p&gt;&lt;h3&gt;&lt;strong&gt;ಧ್ವಜಾರೋಹಣಕ್ಕೂ ಗೈರಾಗಲಿದ್ದಾರಾ?&lt;/strong&gt;&lt;/h3&gt;&lt;p&gt;ಇದರ ಜೊತೆಗೆ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದ ವಿಚಾರದಲ್ಲೂ ಜಮೀರ್ ಅಹಮದ್ ಮನವಿ ಮಾಡಿದ್ದಾರೆ. 2026ರ ಆಗಸ್ಟ್ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಮಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಸ್ತುತ ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಹೊಣೆಗಾರಿಕೆಯನ್ನು ಜಮೀರ್ ಅಹಮದ್ ಅವರಿಗೆ ನೀಡಲಾಗಿದ್ದರೆ, ಆ ಜವಾಬ್ದಾರಿಯಿಂದ ತಮ್ಮನ್ನು ವಿನಾಯಿತಿ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ಬದಲಿಗೆ ಬೇರೊಬ್ಬ ಸಚಿವರನ್ನು ಕಾರ್ಯಕ್ರಮಕ್ಕೆ ನಿಯೋಜಿಸುವಂತೆ ಮುಖ್ಯಮಂತ್ರಿ ಅವರಿಗೆ ಪತ್ರದ ಮೂಲಕ ಕೋರಿದ್ದಾರೆ.&lt;/p&gt;&lt;h3&gt;&lt;strong&gt;ಮನವಿಯಲ್ಲಿರೋದೇನು?&lt;/strong&gt;&lt;/h3&gt;&lt;p&gt;ಜಮೀರ್ ಅವರ ಮನವಿಯಲ್ಲಿರುವ ಕಾರಣಗಳ ಪ್ರಕಾರ, ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣಾ ಚಟುವಟಿಕೆಗಳು, ಪಕ್ಷ ಸಂಘಟನೆ ಹಾಗೂ ಇತರ ಪ್ರಮುಖ ರಾಜಕೀಯ ಕಾರ್ಯಗಳಿಗೆ ಹೆಚ್ಚಿನ ಸಮಯ ನೀಡಬೇಕಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಖಾತೆ ಹಂಚಿಕೆ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಮತ್ತು ಧ್ವಜಾರೋಹಣ ಕಾರ್ಯಕ್ರಮದಿಂದ ಹಿಂದೆ ಸರಿಯುವ ಮನವಿ ಮಾಡಿರುವುದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಜಮೀರ್ ಅವರ ಈ ಮನವಿಗೆ ಸರ್ಕಾರದ ಅಂತಿಮ ನಿರ್ಧಾರ ಏನು ಎಂಬುದು ಇದೀಗ ಗಮನ ಸೆಳೆದಿದೆ. ಅವರ ಬದಲಿಗೆ ವಿಜಯನಗರದಲ್ಲಿ ಧ್ವಜಾರೋಹಣಕ್ಕೆ ಯಾವ ಸಚಿವರನ್ನು ನಿಯೋಜಿಸಲಾಗುತ್ತದೆ? ಜಿಲ್ಲಾ ಉಸ್ತುವಾರಿ ಜವಾಬ್ದಾರಿಯ ವಿಚಾರದಲ್ಲಿ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ? ಎಂಬುದನ್ನು ಕಾದು ನೋಡಬೇಕಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/zameer-ahmed-khan-district-in-charge-minister-flag-hoisting-request-karnataka-politics-bmk/articleshow-i6qzmci"/>
        </item>
        <item>
            <title><![CDATA[Sofa cleaning at home: ಸೋಫಾ ಕ್ಲೀನ್ ಮಾಡೋದು ಭಾಳ ಸುಲಭ ರೀ, ಜಸ್ಟ್ ಈ ಲಿಕ್ವಿಡ್ ಬಳಸ್ರಿ]]></title>
            <link>https://kannada.asianetnews.com/gallery/life/diy-sofa-cleaner-easy-home-remedy-to-remove-tough-stains-bozu8yr</link>
            <guid isPermaLink="true">https://kannada.asianetnews.com/gallery/life/diy-sofa-cleaner-easy-home-remedy-to-remove-tough-stains-bozu8yr</guid>
            <pubDate>Thu, 13 Aug 2026 22:44:52 +0530</pubDate>
            <description><![CDATA[Sofa cleaning at home: ನಿಮ್ಮ ಸೋಫಾದ ಮೇಲಿರುವ ಜಿಡ್ಡು ಮತ್ತು ಕಲೆಗಳನ್ನು ಕಂಡು ಬೇಸತ್ತಿದ್ದೀರಾ? ಮಾರುಕಟ್ಟೆಯ ದುಬಾರಿ ಕ್ಲೀನರ್‌ಗಳ ಬದಲಿಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸೋಫಾವನ್ನು ಹೊಸದರಂತೆ ಹೊಳೆಯುವಂತೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸ್ಮಾರ್ಟ್ ಕ್ಲೀನಿಂಗ್ ಟಿಪ್ಸ್.]]></description>
            <media:content url="https://static.asianetnews.com/images/w-1280,h-720,format-jpg,imgid-01kzy1wyzqp46wr1b93cd4c4q6,imgname-thumbnail---2026-08-13t224414.895-1786641284086.jpg" type="image/jpeg" height="390" width="690"/>
            <content:encoded><![CDATA[&lt;p&gt;Sofa cleaning at home: ನಿಮ್ಮ ಸೋಫಾದ ಮೇಲಿರುವ ಜಿಡ್ಡು ಮತ್ತು ಕಲೆಗಳನ್ನು ಕಂಡು ಬೇಸತ್ತಿದ್ದೀರಾ? ಮಾರುಕಟ್ಟೆಯ ದುಬಾರಿ ಕ್ಲೀನರ್&zwnj;ಗಳ ಬದಲಿಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಸೋಫಾವನ್ನು ಹೊಸದರಂತೆ ಹೊಳೆಯುವಂತೆ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸ್ಮಾರ್ಟ್ ಕ್ಲೀನಿಂಗ್ ಟಿಪ್ಸ್.&lt;/p&gt;&lt;img&gt;&lt;p&gt;&lt;strong&gt;ದುಬಾರಿ ಕೆಮಿಕಲ್ ಕ್ಲೀನರ್&zwnj; ಬೇಡ&amp;nbsp;&lt;/strong&gt;ಸೋಫಾ ಮನೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಪೀಠೋಪಕರಣ. ನಿರಂತರ ಬಳಕೆಯಿಂದಾಗಿ ಅದರ ಮೇಲೆ ಧೂಳು, ಕಾಫಿ, ಟೀ ಅಥವಾ ಎಣ್ಣೆಯ ಜಿಡ್ಡುಗಳು ಬೀಳುವುದು ಸಹಜ. ಇಂತಹ ಕಲೆಗಳನ್ನು ತೆಗೆಯಲು ಪ್ರತಿ ಬಾರಿ ಮಾರುಕಟ್ಟೆಯ ದುಬಾರಿ ಕೆಮಿಕಲ್ ಕ್ಲೀನರ್&zwnj;ಗಳನ್ನೇ ಖರೀದಿಸಬೇಕಿಲ್ಲ. ಮನೆಯಲ್ಲಿರುವ ಪದಾರ್ಥ ಬಳಸಿ ಸುಲಭವಾಗಿ ಕ್ಲೀನಿಂಗ್ ಸಲ್ಯೂಷನ್ ತಯಾರಿಸಬಹುದು.&lt;/p&gt;&lt;img&gt;&lt;p&gt;&lt;strong&gt;ಕ್ಲೀನಿಂಗ್ ಸಲ್ಯೂಷನ್ ತಯಾರಿಸುವ ವಿಧಾನ&lt;/strong&gt;ಒಂದು ಕಪ್ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಸಣ್ಣ ಚಮಚ ಮೈಲ್ಡ್ ಡಿಶ್&zwnj;ವಾಶ್ ಲಿಕ್ವಿಡ್ ಮತ್ತು ಒಂದು ಚಮಚ ಬೇಕಿಂಗ್ ಸೋಡಾ ಸೇರಿಸಿ. ನಂತರ ಸ್ವಲ್ಪ ಪ್ರಮಾಣದ ಬಿಳಿ ವಿನೆಗರ್ (White Vinegar) ಬೆರೆಸಿ. ವಿನೆಗರ್ ಹಾಕಿದಾಗ ನೊರೆ ಬರಬಹುದು, ಹಾಗಾಗಿ ನಿಧಾನವಾಗಿ ಮಿಶ್ರಣ ಮಾಡಿ. ಹೆಚ್ಚು ಡಿಶ್&zwnj;ವಾಶ್ ಲಿಕ್ವಿಡ್ ಬಳಸಬೇಡಿ, ಇದು ಸೋಫಾ ಮೇಲೆ ಅಂಟಂಟಾದ ಅಂಶವನ್ನು ಬಿಡಬಹುದು.&lt;/p&gt;&lt;img&gt;&lt;p&gt;&lt;strong&gt;ಧೂಳು ತೆಗೆಯಿರಿ&lt;/strong&gt;ಯಾವುದೇ ಲಿಕ್ವಿಡ್ ಬಳಸುವ ಮೊದಲು ಸೋಫಾವನ್ನು ವ್ಯಾಕ್ಯೂಮ್ ಕ್ಲೀನರ್ ಅಥವಾ ಮೃದುವಾದ ಬ್ರಷ್&zwnj;ನಿಂದ ಒರೆಸಿ ಧೂಳು ಮತ್ತು ಕೂದಲಿನ ಕಣಗಳನ್ನು ತೆಗೆಯಿರಿ.&lt;/p&gt;&lt;img&gt;&lt;p&gt;&lt;strong&gt;ಬಳಸುವ ವಿಧಾನ&lt;/strong&gt;ತಯಾರಿಸಿದ ಮಿಶ್ರಣವನ್ನು ನೇರವಾಗಿ ಸೋಫಾ ಮೇಲೆ ಸುರಿಯಬೇಡಿ. ಬದಲಿಗೆ ಒಂದು ಮೈಕ್ರೋಫೈಬರ್ ಬಟ್ಟೆಯನ್ನು ಅದರಲ್ಲಿ ಅದ್ದಿ, ಚೆನ್ನಾಗಿ ಹಿಂಡಿ. ನಂತರ ಕಲೆ ಇರುವ ಜಾಗದಲ್ಲಿ ಹಗುರವಾಗಿ ಒತ್ತಿ ಒರೆಸಿ. ಬಟ್ಟೆಯನ್ನು ಜೋರಾಗಿ ಉಜ್ಜಬೇಡಿ, ಇದು ಸೋಫಾ ಬಟ್ಟೆಯ ನೂಲನ್ನು ಹಾಳುಮಾಡಬಹುದು.&lt;/p&gt;&lt;img&gt;&lt;p&gt;&lt;strong&gt;ಶುದ್ಧ ನೀರಿನಲ್ಲಿ ಕ್ಲೀನ್ ಮಾಡಿ&lt;/strong&gt;ಕಲೆ ಹೋದ ನಂತರ, ಶುದ್ಧ ನೀರಿನಲ್ಲಿ ಅದ್ದಿ ಹಿಂಡಿದ ಮತ್ತೊಂದು ಬಟ್ಟೆಯಿಂದ ಆ ಜಾಗವನ್ನು ಒರೆಸಿ ಸಾಬೂನಿನ ಅಂಶವನ್ನು ತೆಗೆಯಿರಿ.&lt;/p&gt;&lt;img&gt;&lt;p&gt;&lt;strong&gt;ಒಣಗಿಸಿ&lt;/strong&gt;ಸೋಫಾವನ್ನು ಚೆನ್ನಾಗಿ ಗಾಳಿಯಾಡುವಂತೆ ಬಿಡಿ. ಅದು ಸಂಪೂರ್ಣವಾಗಿ ಒಣಗಿದ ನಂತರವೇ ಬಳಸಿ.&lt;/p&gt;&lt;img&gt;&lt;p&gt;&lt;strong&gt;ಗಮನಿಸಿ&lt;/strong&gt;ಈ ಮನೆಮದ್ದು ಎಲ್ಲ ರೀತಿಯ ಸೋಫಾಗಳಿಗೆ ಸೂಕ್ತವಲ್ಲ. ವಿಶೇಷವಾಗಿ ಚರ್ಮ (Leather), ವೆಲ್ವೆಟ್ (Velvet) ಅಥವಾ ಸೂಯೆಡ್ (Suede) ಸೋಫಾಗಳ ಮೇಲೆ ಇದನ್ನು ಬಳಸಬೇಡಿ. ಯಾವುದೇ ಕ್ಲೀನರ್ ಬಳಸುವ ಮೊದಲು ಸೋಫಾದ ಯಾವುದಾದರೂ ಮೂಲೆಯಲ್ಲಿ 'ಪ್ಯಾಚ್ ಟೆಸ್ಟ್' (Patch Test) ಮಾಡಿ ನೋಡಿ. ಬಣ್ಣ ಬದಲಾಗದಿದ್ದರೆ ಮಾತ್ರ ಪೂರ್ತಿ ಸೋಫಾ ಸ್ವಚ್ಛಗೊಳಿಸಲು ಮುಂದಾಗಿ.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/diy-sofa-cleaner-easy-home-remedy-to-remove-tough-stains-bozu8yr"/>
        </item>
        <item>
            <title><![CDATA[ಅಮೆರಿಕಾ ಅಮೆರಿಕಾ 2 ಸ್ತ್ರೀಕೇಂದ್ರಿತ ಸಿನಿಮಾ: ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸ್ಪಷ್ಟನೆ]]></title>
            <link>https://kannada.asianetnews.com/sandalwood/america-america-2-explores-a-womans-life-abroad-says-nagathihalli-chandrashekhar-gvd/articleshow-kqz2csm</link>
            <guid isPermaLink="true">https://kannada.asianetnews.com/sandalwood/america-america-2-explores-a-womans-life-abroad-says-nagathihalli-chandrashekhar-gvd/articleshow-kqz2csm</guid>
            <pubDate>Thu, 13 Aug 2026 22:31:08 +0530</pubDate>
            <description><![CDATA[ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಸೆಪ್ಟೆಂಬರ್ 11ರಂದು ಬಿಡುಗಡೆಯಾಗಲಿದೆ. ಸ್ತ್ರೀಕೇಂದ್ರಿತ ಕಥೆ ಮತ್ತು ಸಿನಿಮಾದ ಗಂಭೀರ ವಿಚಾರದ ಬಗ್ಗೆ ನಿರ್ದೇಶಕರು ಹೇಳಿದ್ದೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01kwesbj83pwbhca8m3x0tqmg7,imgname-gxg-1782907783427.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ಹೊರದೇಶಕ್ಕೆ ಹೋದ ಉದ್ಯೋಗಸ್ಥ ಹೆಣ್ಣುಮಗಳ ಭಾವನೆಗಳ ಚಿತ್ರಣ ಇದೆ. ಇಡೀ ಸಿನಿಮಾ ಸ್ತ್ರೀಕೇಂದ್ರಿತವಾಗಿದೆ. ಇದರಲ್ಲಿ ಗಂಭೀರವಾದ ವಿಚಾರವೊಂದರ ಪ್ರಸ್ತುತಿ ಇದೆ. ಅದನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ನನಗೆ ಆತಂಕವಿದೆ. &rsquo;&lt;/p&gt;&lt;p&gt;ಈ ಮಾತು ಹೇಳಿದ್ದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್&zwnj;. ಸಹನಾ ವಿಜಯಕುಮಾರ್&zwnj; ಅವರ &lsquo;ಕ್ಷಮೆ&rsquo; ಕಾದಂಬರಿ ಆಧರಿಸಿ ಅವರು ನಿರ್ದೇಶಿಸಿರುವ ಸಿನಿಮಾ &lsquo;ಅಮೆರಿಕಾ ಅಮೆರಿಕಾ 2&rsquo;. ಈ ಸಿನಿಮಾದ &lsquo;ರನ್&zwnj; ರನ್&zwnj;&rsquo; ಹಾಡನ್ನು &lsquo;ಕನ್ನಡಪ್ರಭ&rsquo;ದ ಸಂಪಾದಕ ಜೋಗಿ ಬಿಡುಗಡೆ ಮಾಡಿದರು. ಈ ಸಿನಿಮಾ ಸೆಪ್ಟೆಂಬರ್&zwnj; 11ರಂದು ಬಿಡುಗಡೆಯಾಗುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್&zwnj;, &lsquo;ನಮ್ಮ ಕನ್ನಡ ಸಿನಿಮಾ ಅಮೆರಿಕಾ, ಕೆನಡಾ, ಯುರೋಪ್&zwnj;, ಆಸ್ಟ್ರೇಲಿಯಾ ದೇಶಗಳಲ್ಲೂ ಬಿಡುಗಡೆಯಾಗಲಿದೆ. ಚಂಡಮಾರುತದಂಥಾ ಟಾಕ್ಸಿಕ್&zwnj; ರಿಲೀಸ್&zwnj; ಬೆನ್ನಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದೆ&rsquo; ಎಂದರು.&lt;/p&gt;&lt;h2&gt;&lt;strong&gt;ಜೆನ್ Zಗೆ ಕನೆಕ್ಟ್ ಆಗುವ ಹಾಡು&lt;/strong&gt;&lt;/h2&gt;&lt;p&gt;&lsquo;ಕನ್ನಡಪ್ರಭ&rsquo; ಸಂಪಾದಕ ಜೋಗಿ ಮಾತನಾಡಿ, &lsquo;ಅಮೆರಿಕಾ ಅಮೆರಿಕಾ 2 ಸಿನಿಮಾದ ರನ್&zwnj; ರನ್&zwnj; ಹಾಡು ಜೆನ್&zwnj; ಜೀಗಳ ಜೀವನದ ಹಾಡಿನಂತಿದೆ. ಅವರ ಟೇಸ್ಟ್&zwnj;ಗೆ ತಕ್ಕಂತೆ ರೂಪುಗೊಂಡಿದೆ. ಇನ್ನೊಂದೆಡೆ ಅಮೆರಿಕಾ ಬಿಡುಗಡೆಯ ದೇಶ ಎಂಬ ಭಾವನೆ ಇದೆ. ಆ ಬಿಡುಗಡೆಯಿಂದ ನಾಯಕಿ ಅನುಭವಿಸುವ ಕಷ್ಟಗಳೇನು ಅನ್ನುವುದನ್ನು ಸಿನಿಮಾ ಸಂವೇದನಾತ್ಮಕವಾಗಿ ಕಟ್ಟಿಕೊಡುತ್ತದೆ. ನಾಗತಿಹಳ್ಳಿ ಅವರು ಚಿತ್ರರಂಗಕ್ಕೆ ಮೇಷ್ಟ್ರರಂತಿರುವವರು. ಸದ್ಯ ಸಂಕಷ್ಟದಲ್ಲಿರುವ ಚಿತ್ರರಂಗಕ್ಕೆ ಅವರಂಥವರ ಅಗತ್ಯ ಹೆಚ್ಚಿದೆ&rsquo; ಎಂದರು.&lt;/p&gt;&lt;p&gt;ನಾಯಕಿ ಸಾನ್ವಿ ಶ್ರೀವಾಸ್ತವ್&zwnj;, &lsquo;ಮೂರು ವರ್ಷಗಳ ನಂತರ ನನ್ನ ನಟನೆಯ ಸಿನಿಮಾ ಬರುತ್ತಿದೆ ಅನ್ನೋದೆ ಖುಷಿ ಕೊಡುತ್ತದೆ&rsquo; ಎಂದರು. ನಾಯಕ ಪೃಥ್ವಿ ಅಂಬಾರ್&zwnj;, ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಚಿತ್ರತಂಡದವರು ಹಾಜರಿದ್ದರು. ಇದೇ ವೇಳೆ ಮನೋಮೂರ್ತಿ ಹಾಗೂ ನಾಗತಿಹಳ್ಳಿ ಚಂದ್ರಶೇಖರ್&zwnj; ಅವರು &lsquo;ಅಮೆರಿಕಾ ಅಮೆರಿಕಾ&rsquo; ಸಿನಿಮಾದಿಂದ &lsquo;ಅಮೆರಿಕಾ ಅಮೆರಿಕಾ 2&rsquo; ಸಿನಿಮಾವರೆಗೆ ಹಾಡುಗಳ ಜರ್ನಿಯನ್ನು ನೆನಪಿಸಿಕೊಂಡರು.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/america-america-2-explores-a-womans-life-abroad-says-nagathihalli-chandrashekhar-gvd/articleshow-kqz2csm"/>
        </item>
        <item>
            <title><![CDATA[ಟಾಟಾ ಗ್ರೂಪ್‌ನ ನಿಜವಾದ ಮಾಲೀಕರು ಯಾರು? ಲಕ್ಷಾಂತರ ಕೋಟಿ ಲಾಭದ ಹಣ ಎಲ್ಲಿಗೆ ಹೋಗುತ್ತೆ...]]></title>
            <link>https://kannada.asianetnews.com/business/who-owns-tata-group-tata-sons-shareholding-structure-explained-san/articleshow-qmtl5l8</link>
            <guid isPermaLink="true">https://kannada.asianetnews.com/business/who-owns-tata-group-tata-sons-shareholding-structure-explained-san/articleshow-qmtl5l8</guid>
            <pubDate>Thu, 13 Aug 2026 22:22:26 +0530</pubDate>
            <description><![CDATA[ಟಾಟಾ ಗ್ರೂಪ್‌ನ ಮಾಲೀಕತ್ವ ಯಾವುದೇ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಸೇರಿಲ್ಲ. ಇದರ ಪ್ರಮುಖ ಹೋಲ್ಡಿಂಗ್ ಕಂಪನಿಯಾದ 'ಟಾಟಾ ಸನ್ಸ್'ನ ಶೇ. 66ರಷ್ಟು ಷೇರುಗಳನ್ನು ವಿವಿಧ ಚಾರಿಟೇಬಲ್ ಟ್ರಸ್ಟ್‌ಗಳು ಹೊಂದಿದ್ದು, ಲಾಭಾಂಶವನ್ನು ಸಮಾಜ ಕಲ್ಯಾಣಕ್ಕೆ ಬಳಸಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ja04rf2t149z327hv9md2we0,imgname-tamil-news---2024-10-12t160510.146.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.13): &lt;/strong&gt;ಭಾರತದ ಅತ್ಯಂತ ದೊಡ್ಡ ಹಾಗೂ ಅತ್ಯಂತ ವಿಶ್ವಾಸಾರ್ಹ ಉದ್ಯಮ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಟಾಟಾ ಗ್ರೂಪ್' (Tata Group) ನೈಜ ಮಾಲೀಕರು ಯಾರು ಎಂಬ ಪ್ರಶ್ನೆ ಹಲವರಲ್ಲಿರಬಹುದು. ಆದರೆ, ಅಚ್ಚರಿಯ ವಿಷಯವೆಂದರೆ ಟಾಟಾ ಗ್ರೂಪ್&zwnj;ನ ಮಾಲೀಕತ್ವ ಯಾವುದೇ ಒಬ್ಬ ವ್ಯಕ್ತಿ ಅಥವಾ ಟಾಟಾ ಕುಟುಂಬದ ಏಕೈಕ ಸದಸ್ಯನ ಬಳಿಯಿಲ್ಲ!&lt;/p&gt;&lt;p&gt;ಟಾಟಾ ಸಮೂಹದ ಪ್ರಮುಖ ಹೋಲ್ಡಿಂಗ್ ಕಂಪನಿಯಾದ 'ಟಾಟಾ ಸನ್ಸ್' (Tata Sons) ಮಾಲೀಕತ್ವದ ರಚನೆಯು ದೇಶದ ಇತರ ಕುಟುಂಬ ಚಾಲಿತ ಉದ್ಯಮ ಸಂಸ್ಥೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಟಾಟಾ ಸನ್ಸ್&zwnj;ನ ಬಹುಪಾಲು ಷೇರುಗಳು ಟಾಟಾ ಕುಟುಂಬವು ಸ್ಥಾಪಿಸಿರುವ ವಿವಿಧ ದತ್ತಿ ಚಾರಿಟೇಬಲ್ ಟ್ರಸ್ಟ್&zwnj;ಗಳ (Charitable Trusts) ಬಳಿಯಿದ್ದು, ಅವುಗಳ ಮೂಲಕವೇ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.&lt;/p&gt;&lt;h2&gt;&lt;strong&gt;ಲಾಭಾಂಶದ ಸಿಂಹಪಾಲು ಚಾರಿಟೇಬಲ್ ಟ್ರಸ್ಟ್&zwnj;ಗಳಿಗೆ!&lt;/strong&gt;&lt;/h2&gt;&lt;p&gt;ಟಾಟಾ ಸನ್ಸ್ ಕಂಪನಿಯ ಸುಮಾರು ಶೇ. 66ರಷ್ಟು ಷೇರುಗಳು ವಿವಿಧ ಚಾರಿಟೇಬಲ್ ಟ್ರಸ್ಟ್&zwnj;ಗಳ ವಶದಲ್ಲಿವೆ. ಈ ಟ್ರಸ್ಟ್&zwnj;ಗಳು ಶಿಕ್ಷಣ, ಆರೋಗ್ಯ, ಉದ್ಯೋಗ ಸೃಷ್ಟಿ, ಜೀವನಾಧಾರ ಹಾಗೂ ಕಲೆ-ಸಂಸ್ಕೃತಿಯಂತಹ ವಿವಿಧ ಸಾಮಾಜಿಕ ಕ್ಷೇಮಾಭಿವೃದ್ಧಿ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಅಂದರೆ, ಟಾಟಾ ಕುಟುಂಬವು ಈ ಬೃಹತ್ ಉದ್ಯಮ ಸಮೂಹವನ್ನು ತಮ್ಮ ಸ್ವಂತ ಹೆಸರಿನಲ್ಲಿ ನಡೆಸುತ್ತಿಲ್ಲ. ಬದಲಾಗಿ, ಕುಟುಂಬದೊಂದಿಗೆ ಜೋಡಣೆಯಾಗಿರುವ ಚಾರಿಟೇಬಲ್ ಟ್ರಸ್ಟ್&zwnj;ಗಳ ಮೂಲಕ ನಡೆಸುತ್ತದೆ. ಇನ್ನು ಈ ಟ್ರಸ್ಟ್&zwnj;ಗಳ ಹೆಸರಲ್ಲೇ ಟಾಟಾ ಸನ್ಸ್&zwnj;ನ ಗರಿಷ್ಠ ಷೇರುಗಳಿವೆ.&lt;/p&gt;&lt;h2&gt;&lt;strong&gt;ಅತಿದೊಡ್ಡ ಷೇರುದಾರರು ಯಾರು?&lt;/strong&gt;&lt;/h2&gt;&lt;p&gt;ಟಾಟಾ ಸನ್ಸ್&zwnj;ನ ಅತಿದೊಡ್ಡ ಇಬ್ಬರು ಷೇರುದಾರರೆಂದರೆ 'ಸರ್ ದೊರಾಬ್ಜಿ ಟಾಟಾ ಟ್ರಸ್ಟ್' ಮತ್ತು 'ಸರ್ ರತನ್ ಟಾಟಾ ಟ್ರಸ್ಟ್'. ಈ ಎರಡೂ ಟ್ರಸ್ಟ್&zwnj;ಗಳು ಜಂಟಿಯಾಗಿ ಟಾಟಾ ಸನ್ಸ್&zwnj;ನಲ್ಲಿ ಶೇ. 51.54ರಷ್ಟು ಪ್ರಮುಖ ಷೇರುಗಳನ್ನು ಹೊಂದಿವೆ. ಶೇ. 51ಕ್ಕಿಂತ ಹೆಚ್ಚಿನ ಪಾಲು ಹೊಂದಿರುವ ಕಾರಣ, ಈ ಇಬ್ಬರೂ ಟ್ರಸ್ಟ್&zwnj;ಗಳು ಟಾಟಾ ಸನ್ಸ್&zwnj; ಬಹುತೇಕ ನಿರ್ಧಾರ ಮಾಡುವಷ್ಟು ಸ್ಪಷ್ಟ ಬಹುಮತವನ್ನು ಪಡೆದುಕೊಂಡಿವೆ.&lt;/p&gt;&lt;p&gt;ಇದರ ಜೊತೆಗೆ, ಟಾಟಾ ಕುಟುಂಬಕ್ಕೆ ಸೇರಿದ ಇತರ ಚಾರಿಟೇಬಲ್ ಟ್ರಸ್ಟ್&zwnj;ಗಳು ಹೊಂದಿರುವ ಷೇರುಗಳನ್ನು ಸೇರಿಸಿದರೆ ಒಟ್ಟು ಪಾಲುದಾರಿಕೆ ಶೇ. 66ರಷ್ಟಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ, ಈ ಟ್ರಸ್ಟ್&zwnj;ಗಳ ಬಳಿ ಇರುವ ಷೇರುಗಳು ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಆಸ್ತಿಯಲ್ಲ. 'ಬೋರ್ಡ್ ಆಫ್ ಟ್ರಸ್ಟೀಸ್' (Board of Trustees) ಸದಸ್ಯರು ಈ ಟ್ರಸ್ಟ್&zwnj;ಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.&lt;/p&gt;&lt;h2&gt;&lt;strong&gt;ನೋಯೆಲ್ ಟಾಟಾ, ಟಾಟಾ ಸನ್ಸ್&zwnj;ನ ಮಾಲೀಕರೇ?&lt;/strong&gt;&lt;/h2&gt;&lt;p&gt;'ಟಾಟಾ ಟ್ರಸ್ಟ್&zwnj;'ನ ಅಧ್ಯಕ್ಷರಾಗಿರುವ ನೋಯೆಲ್ ಟಾಟಾ (Noel Tata) ಅವರು ಟಾಟಾ ಸನ್ಸ್ ಷೇರುಗಳ ನಿಜವಾದ ಮಾಲೀಕರೇ ಎಂಬ ಪ್ರಶ್ನೆ ಹಲವರನ್ನು ಕಾಡಬಹುದು. ಆದರೆ ಉತ್ತರ 'ಖಂಡಿತ ಅಲ್ಲ'. ಚಾರಿಟೇಬಲ್ ಟ್ರಸ್ಟ್&zwnj;ಗಳ ಬಳಿ ಇರುವ ಷೇರುಗಳ ವೈಯಕ್ತಿಕ ಮಾಲೀಕರು ನೋಯೆಲ್ ಟಾಟಾ ಅವರಲ್ಲ. ಈ ಷೇರುಗಳು ಆಯಾ ಟ್ರಸ್ಟ್&zwnj;ಗಳ ಹೆಸರಿನಲ್ಲಿರುತ್ತವೆ ಮತ್ತು ಇವುಗಳಿಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಟ್ರಸ್ಟ್&zwnj;ನ ಧರ್ಮದರ್ಶಿಗಳ ಮಂಡಳಿಯು (Board of Trustees) ತೆಗೆದುಕೊಳ್ಳುತ್ತದೆ.&lt;/p&gt;&lt;h2&gt;&lt;strong&gt;ಟಾಟಾ ಗ್ರೂಪ್&zwnj;ನಲ್ಲಿ ಟಾಟಾ ಸನ್ಸ್ ಪಾತ್ರವೇನು?&lt;/strong&gt;&lt;/h2&gt;&lt;p&gt;ಟಾಟಾ ಸನ್ಸ್, ಟಾಟಾ ಗ್ರೂಪ್&zwnj;ನ ಪ್ರಮುಖ ಹೂಡಿಕೆ ಹಾಗೂ ಕೇಂದ್ರ ಹೋಲ್ಡಿಂಗ್ ಕಂಪನಿಯಾಗಿದೆ. ಇದನ್ನು ಈ ಸಮೂಹದ ಪ್ರಮುಖ ಪ್ರಮೋಟರ್ ಕಂಪನಿ ಎಂದೂ ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಹಲವು ಬೃಹತ್ ಕಂಪನಿಗಳು ಉದ್ಯಮ ನಡೆಸುತ್ತಿವೆ. ಪ್ರತಿಯೊಂದು ಕಂಪನಿಗೂ ತನ್ನದೇ ಆದ ಸ್ವತಂತ್ರ ಆಡಳಿತ ಮಂಡಳಿ (Board) ಹಾಗೂ ಮ್ಯಾನೇಜ್&zwnj;ಮೆಂಟ್ ಇರುತ್ತದೆ. ಅಂದರೆ, ಟಾಟಾ ಗ್ರೂಪ್&zwnj;ನ ಪ್ರತಿಯೊಂದು ಕಂಪನಿಯ ದೈನಂದಿನ ಕಾರ್ಯಚಟುವಟಿಕೆಗಳನ್ನು ಟಾಟಾ ಕುಟುಂಬದ ಸದಸ್ಯರು ನೇರವಾಗಿ ನಿರ್ವಹಿಸುವುದಿಲ್ಲ.&lt;/p&gt;&lt;h2&gt;&lt;strong&gt;ಎಂ.ಕೆ. ಟಾಟಾ ಟ್ರಸ್ಟ್ ಬಳಿಯೂ ಇವೆ ಷೇರುಗಳು!&lt;/strong&gt;&lt;/h2&gt;&lt;p&gt;ಟಾಟಾ ಸನ್ಸ್&zwnj;ನಲ್ಲಿ ಷೇರುಗಳನ್ನು ಹೊಂದಿರುವ ಟ್ರಸ್ಟ್&zwnj;ಗಳಲ್ಲಿ 'ಎಂ.ಕೆ. ಟಾಟಾ ಟ್ರಸ್ಟ್' (M. K. Tata Trust) ಕೂಡ ಒಂದಾಗಿದೆ. 2024ರ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ (ITAT) ತೀರ್ಪಿನ ಪ್ರಕಾರ, ಈ ಟ್ರಸ್ಟ್ ಬಳಿ ಟಾಟಾ ಸನ್ಸ್&zwnj;ನ 2,421 ಷೇರುಗಳಿವೆ. ಈ ಷೇರುಗಳನ್ನು 1959ರಲ್ಲಿ ಟ್ರಸ್ಟ್ ಸ್ಥಾಪನೆಯಾದ ಸಮಯದಲ್ಲಿ ಆರಂಭಿಕ ಸಂಪತ್ತಾಗಿ (Corpus) ಇರಿಸಲಾಗಿತ್ತು.&lt;/p&gt;&lt;h2&gt;&lt;strong&gt;ಇತರ ಕಾರ್ಪೊರೇಟ್ ಸಂಸ್ಥೆಗಳಿಗಿಂತ ಸಂಪೂರ್ಣ ಭಿನ್ನ&lt;/strong&gt;&lt;/h2&gt;&lt;p&gt;ಸಾಮಾನ್ಯವಾಗಿ ಇತರ ಕುಟುಂಬ ಚಾಲಿತ ಉದ್ಯಮ ಸಮೂಹಗಳಲ್ಲಿ ಆ ಕುಟುಂಬದ ಸದಸ್ಯರೇ ಕಂಪನಿಯ ಅತಿ ದೊಡ್ಡ ವೈಯಕ್ತಿಕ ಷೇರುದಾರರಾಗಿರುತ್ತಾರೆ. ಆದರೆ ಟಾಟಾ ಸಮೂಹದಲ್ಲಿ ಹಾಗಲ್ಲ! ಇಲ್ಲಿ ಟಾಟಾ ಕುಟುಂಬಕ್ಕೆ ಸೇರಿದ ಚಾರಿಟೇಬಲ್ ಟ್ರಸ್ಟ್&zwnj;ಗಳು ಟಾಟಾ ಸನ್ಸ್&zwnj;ನಲ್ಲಿ ಗರಿಷ್ಠ ಪಾಲುದಾರಿಕೆಯನ್ನು ಹೊಂದಿವೆ. ಈ ಟ್ರಸ್ಟ್&zwnj;ಗಳಿಗೆ ಹರಿದುಬರುವ ಲಾಭಾಂಶದ ಕೋಟ್ಯಂತರ ರೂಪಾಯಿ ಹಣವನ್ನು ಸಮಾಜ ಕಲ್ಯಾಣ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗಾಗಿ ವಿನಿಯೋಗಿಸಲಾಗುತ್ತದೆ. ಹೀಗಾಗಿ, ಟಾಟಾ ಗ್ರೂಪ್ ಎಂಬುದು ಟಾಟಾ ಕುಟುಂಬದ ಯಾವುದೇ ಒಬ್ಬ ವ್ಯಕ್ತಿಯ ಖಾಸಗಿ ಸ್ವತ್ತಲ್ಲ. ನಿಜವಾದ ಆಡಳಿತಾತ್ಮಕ ನಿಯಂತ್ರಣವು ಚಾರಿಟೇಬಲ್ ಟ್ರಸ್ಟ್&zwnj;ಗಳ ವಶದಲ್ಲಿದೆ. ಇದೇ ಕಾರಣಕ್ಕೆ ಟಾಟಾ ಸಮೂಹದ ಮಾಲೀಕತ್ವದ ಮಾದರಿಯನ್ನು ಭಾರತದ ಉಳಿದ ಎಲ್ಲಾ ಉದ್ಯಮಿ ಕುಟುಂಬಗಳಿಗಿಂತ ಅತ್ಯಂತ ವಿಶಿಷ್ಟ ಹಾಗೂ ಮಾದರಿ ಎಂದು ಪರಿಗಣಿಸಲಾಗುತ್ತದೆ.&lt;/p&gt;]]></content:encoded>
            <category><![CDATA[business]]></category>
            <dc:creator>Santosh Naik</dc:creator>
            <atom:link href="https://kannada.asianetnews.com/business/who-owns-tata-group-tata-sons-shareholding-structure-explained-san/articleshow-qmtl5l8"/>
        </item>
        <item>
            <title><![CDATA[IND Vs AFG: ಅಫ್ಘಾನಿಸ್ತಾನ-ಭಾರತ ಟೆಸ್ಟ್‌ ಸರಣಿಗೆ ಗಣೇಶ ಚತುರ್ಥಿ ಟ್ವಿಸ್ಟ್; ಬಿಸಿಸಿಐಗೆ ದಿನಾಂಕ ಬದಲಿಸುವಂತೆ ಅಫ್ಘಾನ್ ಪಟ್ಟು!]]></title>
            <link>https://kannada.asianetnews.com/cricket-sports/ind-vs-afg-t20-series-afghanistan-cricket-board-want-matchon-ganesh-festival-bmk/articleshow-oa7nrhg</link>
            <guid isPermaLink="true">https://kannada.asianetnews.com/cricket-sports/ind-vs-afg-t20-series-afghanistan-cricket-board-want-matchon-ganesh-festival-bmk/articleshow-oa7nrhg</guid>
            <pubDate>Thu, 13 Aug 2026 22:12:48 +0530</pubDate>
            <description><![CDATA[ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮುಂಬರುವ ಟಿ20 ಸರಣಿಯು ದೆಹಲಿಯಲ್ಲಿ ನಡೆಯಲಿದೆ. ಗಣೇಶ ಚತುರ್ಥಿ ಹಬ್ಬದ ರಜೆಯನ್ನು ಬಳಸಿಕೊಂಡು ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯಲು, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪಂದ್ಯದ ದಿನಾಂಕವನ್ನು ಬದಲಿಸುವಂತೆ ಬಿಸಿಸಿಐಗೆ ವಿಶೇಷ ಮನವಿಯೊಂದನ್ನು ಸಲ್ಲಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzy017tdnhjccfhq0ytt6qnk,imgname-ind-vs-afg-1786639327053.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ; ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಬಹುನಿರೀಕ್ಷಿತ ಟಿ20 ಕ್ರಿಕೆಟ್ ಸರಣಿಗೆ ವೇದಿಕೆ ಸಜ್ಜಾಗಿದೆ. ಏಷ್ಯನ್ ಕ್ರೀಡಾಕೂಟದ ಮಹತ್ವದ ತಯಾರಿಯ ದೃಷ್ಟಿಯಿಂದ ಅತ್ಯಂತ ಪ್ರಮುಖವೆನಿಸಿರುವ ಈ ಸರಣಿಯ ಕುರಿತು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ವಿಶೇಷವಾಗಿ ಪಂದ್ಯದ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ವಿಶೇಷ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.&lt;/p&gt;&lt;h2&gt;&lt;strong&gt;ಹೋಮ್ ಸರಣಿ; ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯ!&lt;/strong&gt;&lt;/h2&gt;&lt;p&gt;ಐಸಿಸಿಯ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (FTP) ಪ್ರಕಾರ, ಇದು ಅಫ್ಘಾನಿಸ್ತಾನ ತಂಡಕ್ಕೆ 'ತವರು ಸರಣಿ'ಯಾಗಿದೆ (Home Series). ಅಫ್ಘಾನಿಸ್ತಾನದಲ್ಲಿ ಭದ್ರತಾ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಕಳೆದ ಕೆಲವು ವರ್ಷಗಳಿಂದ ಭಾರತವನ್ನೇ ಅದು ತನ್ನ ತವರು ಮೈದಾನವಾಗಿ ಬಳಸಿಕೊಳ್ಳುತ್ತಿದೆ. ಈ ಸರಣಿಯ ಎಲ್ಲಾ ಮೂರು ಟಿ20 ಪಂದ್ಯಗಳು ದೆಹಲಿಯ ಐತಿಹಾಸಿಕ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಪ್ರಸ್ತುತ ನಿಗದಿಯಾಗಿರುವ ವೇಳಾಪಟ್ಟಿಯ ಪ್ರಕಾರ:&lt;/p&gt;&lt;p&gt;ಮೊದಲ ಟಿ20; ಸೆಪ್ಟೆಂಬರ್ 13 (ಭಾನುವಾರ)&lt;/p&gt;&lt;p&gt;ಎರಡನೇ ಟಿ20; ಸೆಪ್ಟೆಂಬರ್ 15 (ಮಂಗಳವಾರ)&lt;/p&gt;&lt;p&gt;ಮೂರನೇ ಟಿ20; ಸೆಪ್ಟೆಂಬರ್ 17 (ಗುರುವಾರ)&lt;/p&gt;&lt;h3&gt;&lt;strong&gt;ಗಣೇಶ ಚತುರ್ಥಿ ಟ್ವಿಸ್ಟ್; ದಿನಾಂಕ ಬದಲಾವಣೆಗೆ ಅಫ್ಘಾನ್ ಪಟ್ಟು!&lt;/strong&gt;&lt;/h3&gt;&lt;p&gt;ಆದರೆ, ಈಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಪ್ರಸ್ತುತ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಬಯಸಿದೆ. ಸೆಪ್ಟೆಂಬರ್ 13 ಅಥವಾ 15 ರಂದು ನಡೆಯಬೇಕಿರುವ ಪಂದ್ಯವನ್ನು ಸೆಪ್ಟೆಂಬರ್ 14ರ ಸೋಮವಾರದಂದು ನಡೆಸಬೇಕೆಂದು ಬಿಸಿಸಿಐ ಬಳಿ ಮನವಿ ಮಾಡಿದೆ. ಸಾಮಾನ್ಯವಾಗಿ ಸೋಮವಾರದಂದು ಪಂದ್ಯ ನಡೆದರೆ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಿರುತ್ತದೆ. ಆದರೆ, ಈ ಬಾರಿ ಸೆಪ್ಟೆಂಬರ್ 14ರ ಸೋಮವಾರದಂದು 'ಗಣೇಶ ಚತುರ್ಥಿ' ಹಬ್ಬದ ಸಾಲು ಸಾಲು ರಜೆ ಇದೆ. ಹಬ್ಬದ ವಾತಾವರಣ ಇರುವುದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಹರಿದು ಬರಲಿದ್ದಾರೆ ಮತ್ತು ಕ್ರೀಡಾಂಗಣ ಹೌಸ್&zwnj;ಫುಲ್ ಆಗಲಿದೆ ಎಂಬುದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ತಾರ್ಕಿಕ ಆಲೋಚನೆಯಾಗಿದೆ. ಒಂದು ವೇಳೆ ಬಿಸಿಸಿಐ ಈ ಪ್ರಸ್ತಾವನೆಗೆ ಅಂತಿಮ ಒಪ್ಪಿಗೆ ನೀಡಿದ್ದೇ ಆದಲ್ಲಿ, ಗಣೇಶ ಚತುರ್ಥಿಯ ಪವಿತ್ರ ದಿನದಂದು ದೆಹಲಿ ಮೈದಾನದಲ್ಲಿ ಭಾರತ-ಅಫ್ಘಾನ್ ಕ್ರೀಡಾ ಸ್ಪೂರ್ತಿಯ ಜೊತೆಗೆ ಭಾರತೀಯ ಸಾಂಸ್ಕೃತಿಕ ಬಣ್ಣಗಳೂ ಮಿಂಚಲಿವೆ.&lt;/p&gt;&lt;h3&gt;&lt;strong&gt;ಮಸುಕಾದ ಭಾರತ-ಬಾಂಗ್ಲಾದೇಶ ಸರಣಿಯ ಆಸೆ!&lt;/strong&gt;&lt;/h3&gt;&lt;p&gt;ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಸರಣಿ ಅಧಿಕೃತಗೊಳ್ಳುತ್ತಿದ್ದಂತೆಯೇ, ಅತ್ತ ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಬೇಕಿದ್ದ ಸರಣಿಯ ಸಾಧ್ಯತೆಗಳು ಸಂಪೂರ್ಣವಾಗಿ ಮಸುಕಾಗಿವೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸೆಪ್ಟೆಂಬರ್ 1 ರಿಂದ 6 ರವರೆಗೆ 3 ಏಕದಿನ ಪಂದ್ಯಗಳು ಹಾಗೂ ಸೆಪ್ಟೆಂಬರ್ 9 ರಿಂದ 13ರವರೆಗೆ 3 ಟಿ20 ಪಂದ್ಯಗಳ ಸರಣಿ ಆಯೋಜಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಎರಡೂ ದೇಶಗಳ ನಡುವಿನ ಪ್ರಸ್ತುತ ರಾಜಕೀಯ ಹಾಗೂ ಗಡಿ ಸಂಬಂಧಗಳನ್ನು ಗಮನದಲ್ಲಿಟ್ಟುಕೊಂಡು ಈ ಸರಣಿಗೆ ಕೇಂದ್ರ ಅನುಮತಿ ಅತ್ಯಗತ್ಯವಾಗಿತ್ತು. ಆದರೆ ಸರ್ಕಾರದ ಕಡೆಯಿಂದ ಹಸಿರು ನಿಶಾನೆ ಸಿಗದ ಕಾರಣ, ಬಾಂಗ್ಲಾ ಸರಣಿ ರದ್ದಾದಂತೆಯೇ ಸರಿ.&lt;/p&gt;&lt;h3&gt;&lt;strong&gt;ನೇರ ಪ್ರಸಾರದ ಹಕ್ಕುಗಳಿಗಾಗಿ ಭಾರಿ ಪೈಪೋಟಿ!&lt;/strong&gt;&lt;/h3&gt;&lt;p&gt;ಈ ಮಹತ್ವದ ಸರಣಿಯ ಪ್ರಸಾರ ಹಕ್ಕುಗಳನ್ನು ಪಡೆದುಕೊಳ್ಳಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಈಗಾಗಲೇ ಮಾತುಕತೆಗಳನ್ನು ಚುರುಕುಗೊಳಿಸಿದೆ. ಟಿವಿ ಪ್ರಸಾರಕ್ಕಾಗಿ ಪ್ರಸಿದ್ಧ ಕ್ರೀಡಾ ವಾಹಿನಿಗಳಾದ ಸೋನಿ ಸ್ಪೋರ್ಟ್ಸ್ ಜೊತೆ ಎಸಿಬಿ ಅಧಿಕಾರಿಗಳು ಗಂಭೀರ ಚರ್ಚೆ ನಡೆಸುತ್ತಿದ್ದಾರೆ. ಇನ್ನು ಡಿಜಿಟಲ್ ಓಟಿಟಿ ಲೋಕದಲ್ಲಿ ಈ ಪಂದ್ಯಗಳ ನೇರ ಪ್ರಸಾರವು 'ಫ್ಯಾನ್&zwnj;ಕೋಡ್' ಆ್ಯಪ್&zwnj;ನಲ್ಲಿ ಮೂಡಿಬರುವ ಸಾಧ್ಯತೆಗಳು ದಟ್ಟವಾಗಿವೆ. ಏಷ್ಯನ್ ಗೇಮ್ಸ್&zwnj;ಗೆ ಭಾರತ ಮತ್ತು ಅಫ್ಘಾನಿಸ್ತಾನ ಎರಡೂ ತಂಡಗಳಿಗೂ ಇದು ಕೊನೆಯ ಹಂತದ ಪ್ರಾಕ್ಟೀಸ್ ಸರಣಿಯಾಗಿರುವುದರಿಂದ ಕ್ರೀಡಾಂಗಣದಲ್ಲಿ ಭಾರಿ ರೋಚಕ ಪಂದ್ಯಗಳನ್ನು ನಿರೀಕ್ಷಿಸಬಹುದು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/cricket-sports/ind-vs-afg-t20-series-afghanistan-cricket-board-want-matchon-ganesh-festival-bmk/articleshow-oa7nrhg"/>
        </item>
        <item>
            <title><![CDATA[‘ಶಾಂತಿ ಕ್ರಾಂತಿ’ ರೀ-ರಿಲೀಸ್ ಯಾವಾಗ? ರವಿಚಂದ್ರನ್ ಸಹೋದರ ಬಾಲಾಜಿ ಕೊಟ್ಟ ಸ್ಪಷ್ಟನೆಯೇನು?]]></title>
            <link>https://kannada.asianetnews.com/sandalwood/shanti-kranti-re-release-ravichandran-fans-may-have-to-wait-longer-balaji-reveals-why-gvd/articleshow-paprd3w</link>
            <guid isPermaLink="true">https://kannada.asianetnews.com/sandalwood/shanti-kranti-re-release-ravichandran-fans-may-have-to-wait-longer-balaji-reveals-why-gvd/articleshow-paprd3w</guid>
            <pubDate>Thu, 13 Aug 2026 21:56:20 +0530</pubDate>
            <description><![CDATA[ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಶಾಂತಿ ಕ್ರಾಂತಿ’ ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxy62xew1skbb8kqhjbbtb3,imgname-jv-1786637388718.png" type="image/jpeg" height="390" width="690"/>
            <content:encoded><![CDATA[&lt;p&gt;ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ &lsquo;ಶಾಂತಿ ಕ್ರಾಂತಿ&rsquo; ಸಿನಿಮಾ ಮತ್ತೆ ಬೆಳ್ಳಿತೆರೆಗೆ ಬರಬೇಕು ಎಂಬ ಅಭಿಮಾನಿಗಳ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತ ಚರ್ಚೆ ಜೋರಾಗಿದೆ. ಆದರೆ ಸಿನಿಮಾ ಸೆಪ್ಟೆಂಬರ್ ಅಥವಾ ಅಕ್ಟೋಬರ್&zwnj;ನಲ್ಲಿ ರೀ-ರಿಲೀಸ್ ಆಗಲಿದೆ ಎಂಬ ಸುದ್ದಿ ಇದೀಗ ಕೇಳಿಬರುತ್ತಿರುವ ಬೆನ್ನಲ್ಲೇ, ಚಿತ್ರದ ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್ ಅವರ ಸಹೋದರ ಬಾಲಾಜಿ ವೀರಾಸ್ವಾಮಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;p&gt;ಸಿನಿಮಾವನ್ನು ಮತ್ತೆ ಪ್ರೇಕ್ಷಕರ ಮುಂದೆ ತರುವ ಆಸೆ ತಮ್ಮ ಕುಟುಂಬಕ್ಕೂ ಇದೆ. ಆದರೆ ಚಿತ್ರದ ಮೂಲ ನೆಗೆಟಿವ್ಸ್&zwnj;ಗಳು ಹಾಳಾಗಿರುವುದರಿಂದ ರೀ-ರಿಲೀಸ್ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಅಗತ್ಯ ಮೂಲಗಳನ್ನು ಪತ್ತೆಹಚ್ಚಿ, ತಾಂತ್ರಿಕವಾಗಿ ಸಿನಿಮಾವನ್ನು ಮರುಸಿದ್ಧಪಡಿಸಲು ಸಾಕಷ್ಟು ಸಮಯ ಬೇಕಾಗಬಹುದು ಎಂದು ಬಾಲಾಜಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಅಭಿಮಾನಿಗಳ ಪ್ರೀತಿಗೆ ಕುಟುಂಬದಿಂದಲೂ ಸ್ಪಂದನೆ&lt;/strong&gt;&lt;/p&gt;&lt;p&gt;&lsquo;ಶಾಂತಿ ಕ್ರಾಂತಿ&rsquo; ಸಿನಿಮಾದ ಬಗ್ಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಮತ್ತು ಉತ್ಸಾಹಕ್ಕೆ ಬಾಲಾಜಿ ವೀರಾಸ್ವಾಮಿ ಧನ್ಯವಾದ ತಿಳಿಸಿದ್ದಾರೆ. &ldquo;&lsquo;ಶಾಂತಿ ಕ್ರಾಂತಿ&rsquo; ಸಿನಿಮಾಗಾಗಿರಬಹುದು, ನಮ್ಮ ಅಣ್ಣನಿಗಾಗಿರಬಹುದು ಅಥವಾ ನಮಗಾಗಿರಬಹುದು, ನೀವು ತೋರಿಸುತ್ತಿರುವ ಪ್ರೀತಿ ಅಪಾರ. ಅದಕ್ಕೆ ನಾವು ಎಂದೆಂದಿಗೂ ಚಿರಋಣಿಗಳು. ಈ ಪ್ರೀತಿ ವ್ಯಕ್ತವಾಗಲು ಆರಂಭವಾದ ಎರಡು-ಮೂರು ದಿನಗಳಲ್ಲೇ ನಾನು ಮತ್ತು ನಮ್ಮ ಅಣ್ಣ ರೀ-ರಿಲೀಸ್ ಬಗ್ಗೆ ಮಾತನಾಡಿದ್ದೇವೆ. ಅಂದಿನಿಂದಲೇ ನಮ್ಮ ಪ್ರಯತ್ನವೂ ಶುರುವಾಗಿದೆ&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಹಾಳಾಗಿವೆ ಚಿತ್ರದ ಮೂಲ ನೆಗೆಟಿವ್ಸ್!&lt;/strong&gt;&lt;/p&gt;&lt;p&gt;ರೀ-ರಿಲೀಸ್&zwnj;ಗೆ ಎದುರಾಗಿರುವ ದೊಡ್ಡ ಸವಾಲಿನ ಬಗ್ಗೆಯೂ ಬಾಲಾಜಿ ಮಾಹಿತಿ ನೀಡಿದ್ದಾರೆ. &lsquo;ಶಾಂತಿ ಕ್ರಾಂತಿ&rsquo; ಚಿತ್ರದ ಮೂಲ ನೆಗೆಟಿವ್ಸ್&zwnj;ಗಳು ಹಾಳಾಗಿದ್ದು, ಅವುಗಳನ್ನು ಇಂದಿನ ತಂತ್ರಜ್ಞಾನಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸುವುದು ಸುಲಭದ ಕೆಲಸವಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಬೇರೆ ಮೂಲಗಳಲ್ಲಿ ಚಿತ್ರದ ನೆಗೆಟಿವ್ಸ್ ಅಥವಾ ಅಗತ್ಯವಿರುವ ಮೂಲ ಪ್ರತಿಗಳು ಲಭ್ಯವಿದೆಯೇ ಎಂಬುದನ್ನು ಹುಡುಕಲಾಗುತ್ತಿದೆ. ಯಾವುದಾದರೂ ಉತ್ತಮ ಮೂಲ ಸಿಕ್ಕರೆ, ಸಿನಿಮಾವನ್ನು ಖಂಡಿತವಾಗಿಯೂ ಮತ್ತೆ ಪ್ರೇಕ್ಷಕರ ಮುಂದೆ ತರುವ ಆಸೆ ಇದೆ ಎಂದು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ರೀ-ರಿಲೀಸ್&zwnj;ಗೆ 8-10 ತಿಂಗಳು ಬೇಕಾಗಬಹುದು!&lt;/strong&gt;&lt;/p&gt;&lt;p&gt;ಅಭಿಮಾನಿಗಳು ಈಗಲೇ ಸಿನಿಮಾ ಮತ್ತೆ ಯಾವಾಗ ತೆರೆಗೆ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಆದರೆ ತಕ್ಷಣವೇ ರೀ-ರಿಲೀಸ್ ಸಾಧ್ಯವಿಲ್ಲ ಎಂಬುದನ್ನು ಬಾಲಾಜಿ ಸ್ಪಷ್ಟಪಡಿಸಿದ್ದಾರೆ. &ldquo;ನಾಳೆಯೇ ಕೆಲಸ ಆರಂಭಿಸಿದರೂ ಸಿನಿಮಾ ಪೂರ್ಣಗೊಳ್ಳಲು 8ರಿಂದ 10 ತಿಂಗಳು ಅಥವಾ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯ ಬೇಕಾಗಬಹುದು. ಕಲರಿಂಗ್, ಹಾಳಾಗಿರುವ ನೆಗೆಟಿವ್ಸ್&zwnj;ಗಳ ದುರಸ್ತಿ, ಮ್ಯೂಸಿಕ್, ರೀ-ರೆಕಾರ್ಡಿಂಗ್, ಎಫೆಕ್ಟ್ಸ್, ಡಿಐ ಹಾಗೂ ಮತ್ತೆ ಸೆನ್ಸಾರ್ ಸೇರಿದಂತೆ ಸಾಕಷ್ಟು ಕೆಲಸಗಳಿವೆ&rdquo; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಹಳೆಯ ಸಿನಿಮಾ&hellip; ಹೊಸ ತಂತ್ರಜ್ಞಾನದಲ್ಲಿ!&lt;/strong&gt;&lt;/p&gt;&lt;p&gt;&lsquo;ಶಾಂತಿ ಕ್ರಾಂತಿ&rsquo;ಯನ್ನು ಕೇವಲ ಹಳೆಯ ಪ್ರತಿಯೊಂದಿಗೆ ರೀ-ರಿಲೀಸ್ ಮಾಡುವುದಲ್ಲ, ಇಂದಿನ ತಾಂತ್ರಿಕ ಗುಣಮಟ್ಟಕ್ಕೆ ತಕ್ಕಂತೆ ಮತ್ತಷ್ಟು ಅದ್ಧೂರಿಯಾಗಿ ಪ್ರೇಕ್ಷಕರಿಗೆ ನೀಡಬೇಕು ಎಂಬುದು ಚಿತ್ರತಂಡದ ಆಶಯ. &ldquo;ನಮ್ಮ ಅಣ್ಣ ಅದ್ಭುತ ತಾಂತ್ರಿಕ ಗುಣಮಟ್ಟದಲ್ಲಿ ಈ ಸಿನಿಮಾವನ್ನು ಕೊಟ್ಟಿದ್ದರು. ಈಗ ನಿಮ್ಮ ಆಸೆಯಂತೆ ಅದನ್ನು ಮತ್ತೆ ತೆರೆಗೆ ತರಬೇಕಾದರೆ, ಅದೇ ಗುಣಮಟ್ಟವನ್ನು ಉಳಿಸಿಕೊಳ್ಳಬೇಕು. ಇಂದಿನ ಪೀಳಿಗೆಗೆ ಇಷ್ಟವಾಗುವಂತಹ ಸೌಂಡ್ ಅನುಭವ ನೀಡಬೇಕು. ಡಾಲ್ಬಿ, ಡಿಟಿಎಸ್ ಮತ್ತು ಅಟ್ಮಾಸ್&zwnj;ನಂತಹ ತಂತ್ರಜ್ಞಾನಗಳಿಗೆ ಅಪ್&zwnj;ಗ್ರೇಡ್ ಮಾಡಬೇಕಿದೆ&rdquo; ಎಂದು ಬಾಲಾಜಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಸೆಪ್ಟೆಂಬರ್ ಅಥವಾ ಅಕ್ಟೋಬರ್&zwnj;ನಲ್ಲಿ ರಿಲೀಸ್&rsquo; ಸುದ್ದಿ ಸುಳ್ಳು!&lt;/strong&gt;&lt;/p&gt;&lt;p&gt;ಇದರ ನಡುವೆ &lsquo;ಶಾಂತಿ ಕ್ರಾಂತಿ&rsquo; ಸೆಪ್ಟೆಂಬರ್ ಅಥವಾ ಅಕ್ಟೋಬರ್&zwnj;ನಲ್ಲಿ ರೀ-ರಿಲೀಸ್ ಆಗಲಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸುದ್ದಿಗೂ ಬಾಲಾಜಿ ವೀರಾಸ್ವಾಮಿ ತೆರೆ ಎಳೆದಿದ್ದಾರೆ. &ldquo;ಮಾಧ್ಯಮಗಳು, ಅಭಿಮಾನಿಗಳು ಹಾಗೂ ಕಲಾಭಿಮಾನಿಗಳು ಕರೆ ಮಾಡಿ ಸೆಪ್ಟೆಂಬರ್ ಅಥವಾ ಅಕ್ಟೋಬರ್&zwnj;ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ಅದೆಲ್ಲವೂ ಸುಳ್ಳು. ಸದ್ಯಕ್ಕೆ ಅದು ನಮ್ಮ ಕೈಯಲ್ಲಾಗುವುದಿಲ್ಲ&rdquo; ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಮೊದಲು ಮೂಲ ಪ್ರತಿ ಹುಡುಕಾಟ&hellip; ನಂತರವೇ ರೀ-ರಿಲೀಸ್!&lt;/strong&gt;&lt;/h2&gt;&lt;p&gt;ಸದ್ಯ ಚಿತ್ರದ ಮೂಲ ಪ್ರತಿಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ. ಅದು ಸಿಕ್ಕ ನಂತರವೇ ಮುಂದಿನ ಹಂತದ ಕೆಲಸ ಆರಂಭವಾಗಲಿದೆ. ಸಿನಿಮಾ ರೀ-ರಿಲೀಸ್&zwnj;ಗೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆಯನ್ನೂ ಅಭಿಮಾನಿಗಳಿಗೆ ತಿಳಿಸಿಯೇ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಬಾಲಾಜಿ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಹೀಗಾಗಿ &lsquo;ಶಾಂತಿ ಕ್ರಾಂತಿ&rsquo; ಮತ್ತೆ ತೆರೆಗೆ ಬರಬೇಕು ಎಂಬ ಕ್ರೇಜಿಸ್ಟಾರ್ ಅಭಿಮಾನಿಗಳ ಬಹುದಿನಗಳ ಆಸೆ ಈಡೇರುವ ಸಾಧ್ಯತೆ ಇದ್ದರೂ, ಅದಕ್ಕೆ ಇನ್ನಷ್ಟು ಸಮಯ ಕಾಯಲೇಬೇಕಾಗಿದೆ. ಸಿನಿಮಾ ಯಾವಾಗ ರೀ-ರಿಲೀಸ್ ಆಗಲಿದೆ ಎಂಬುದಕ್ಕೆ ಸದ್ಯ ಯಾವುದೇ ಅಧಿಕೃತ ದಿನಾಂಕ ಇಲ್ಲ. ಮೂಲ ಪ್ರತಿಗಳು ಸಿಕ್ಕು ತಾಂತ್ರಿಕ ಕೆಲಸಗಳು ಪೂರ್ಣಗೊಂಡ ಬಳಿಕವಷ್ಟೇ ರೀ-ರಿಲೀಸ್ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/shanti-kranti-re-release-ravichandran-fans-may-have-to-wait-longer-balaji-reveals-why-gvd/articleshow-paprd3w"/>
        </item>
        <item>
            <title><![CDATA[9 ಬಾರಿ ಮದುಮಗಳಾದರೂ ನಾನಿನ್ನೂ ಅವಿವಾಹಿತೆ: ಅಚ್ಚರಿಯ ಘಟನೆ ತೆರೆದಿಟ್ಟ Annayya 'ಪಾರು']]></title>
            <link>https://kannada.asianetnews.com/gallery/relationship/nisha-ravikrishnan-about-9th-time-marriage-in-serials-and-single-in-real-life-suc-119y3pt</link>
            <guid isPermaLink="true">https://kannada.asianetnews.com/gallery/relationship/nisha-ravikrishnan-about-9th-time-marriage-in-serials-and-single-in-real-life-suc-119y3pt</guid>
            <pubDate>Thu, 13 Aug 2026 21:54:53 +0530</pubDate>
            <description><![CDATA['ಅಣ್ಣಯ್ಯ' ಸೀರಿಯಲ್‌ನ ಪಾರು ಖ್ಯಾತಿಯ ನಟಿ ನಿಶಾ ರವಿಕೃಷ್ಣನ್, ತೆರೆಯ ಮೇಲೆ ಈಗಾಗಲೇ 8 ಬಾರಿ ಮದುಮಗಳಾಗಿದ್ದಾರೆ. ಇದೀಗ 9ನೇ ಬಾರಿಗೆ ಮದುವೆಯಾಗಿದ್ದು, ಈ ಕುರಿತು ಸ್ವತಃ ಅವರೇ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ನಿಜ ಜೀವನದಲ್ಲಿ ಅವಿವಾಹಿತೆಯಾಗಿದ್ದಾರೆ ನಟಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxyw74cf68549f5bh4fmq67,imgname-nisha-ravikrishnan-1786638113932.jpg" type="image/jpeg" height="390" width="690"/>
            <content:encoded><![CDATA[&lt;p&gt;'ಅಣ್ಣಯ್ಯ' ಸೀರಿಯಲ್&zwnj;ನ ಪಾರು ಖ್ಯಾತಿಯ ನಟಿ ನಿಶಾ ರವಿಕೃಷ್ಣನ್, ತೆರೆಯ ಮೇಲೆ ಈಗಾಗಲೇ 8 ಬಾರಿ ಮದುಮಗಳಾಗಿದ್ದಾರೆ. ಇದೀಗ 9ನೇ ಬಾರಿಗೆ ಮದುವೆಯಾಗಿದ್ದು, ಈ ಕುರಿತು ಸ್ವತಃ ಅವರೇ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ನಿಜ ಜೀವನದಲ್ಲಿ ಅವಿವಾಹಿತೆಯಾಗಿದ್ದಾರೆ ನಟಿ.&lt;/p&gt;&lt;img&gt;&lt;p&gt;ಪಾರು ಎಂದಾಕ್ಷಣ ಸೀರಿಯಲ್​ ಪ್ರೇಮಿಗಳ ಗಮನಕ್ಕೆ ಹೋಗುವುದು ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್​ (Annayya Serial). ಪಾರು ಪಾತ್ರಧಾರಿಯಾಗಿರುವ ನಿಶಾ ರವಿ ಕೃಷ್ಣನ್​, ಪಾರು ಆಗುವುದಕ್ಕೂ ಮುನ್ನ ಗಟ್ಟಿಮೇಳದ ರೌಡಿ ಬೇಬಿ ಎಂದೇ ಫೇಮಸ್​ ಆದವರು.&lt;/p&gt;&lt;img&gt;&lt;p&gt;ಅಂದಹಾಗೆ ಪಾರು ಉರ್ಫ್​ ನಟಿ ನಿಶಾ ಅವರು ಇದಾಗಲೇ 8 ಬಾರಿ ಮದುಮಗಳಾಗಿದ್ದು, ಪಾರುವಾಗಿ ಅವರು ಮದುವೆಯಾಗಿದ್ದು 9ನೇ ಬಾರಿ! ಏನಪ್ಪಾ ಇದು ಎಂದು ನೋಡುವುದಾದರೆ, ರಿಯಲ್​ ಲೈಫ್​ನಲ್ಲಿ ನಟಿ ಇನ್ನೂ ಅವಿವಾಹಿತೆ. ಅವರಿಗೆ ಮದುವೆಯಾಗಲಿಲ್ಲ. ಆದರೆ ಸೀರಿಯಲ್​ಗಳಲ್ಲಿ ಇದಾಗಲೇ 8 ಬಾರಿ ಮದುವೆಯಾಗಿದ್ದು, 9ನೇ ಬಾರಿ ಇದೀಗ ಮದುವೆಯಾಗಿರುವ ರೋಚಕ ಘಟನೆಯನ್ನು ನಟಿ ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಅಣ್ಣಯ್ಯ ಸೀರಿಯಲ್​​ ಶೂಟಿಂಗ್​ ಸಮಯದಲ್ಲಿ ಈ ವಿಷಯವನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ನನೆ ಇದಾಗಲೇ ಏಳೆಂಟು ಮದ್ವೆಯಾಗಿದೆ ಎಂದಿದ್ದಾರೆ. ಅಷ್ಟಕ್ಕೂ ನಿಶಾ ಕೇವಲ ಕನ್ನಡ ಮಾತ್ರವಲ್ಲದೆ ತೆಲಗು ಸೀರಿಯಲ್​ನಲ್ಲಿಯೂ ಆ್ಯಕ್ಟೀವ್​ ಇರುವ ಕಾರಣದಿಂದ ಎರಡೂ ಭಾಷೆಗಳ ಸೀರಿಯಲ್​ ಸೇರಿ, ಇಷ್ಟೆಲ್ಲಾ ಬಾರಿ ಮದುವೆಯಾಗಿದೆ ಎಂದಿರೋ ನಟಿ, ಅದಕ್ಕಾಗಿಯೇ ಮದ್ವೆ ಎಂದರೆ ಬೇಜಾರು ಆಗಿಹೋಗಿದೆ ಎಂದು ತಮಾಷೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿಯ ರಿಯಲ್​ ಲೈಫ್​ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್​. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್​ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್​ ಲೈಫ್​ನಲ್ಲಿ ಸಿಂಪಲ್​ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.&lt;/p&gt;&lt;img&gt;&lt;p&gt;ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್​ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ &lsquo;ಸರ್ವಮಂಗಲ ಮಾಂಗಲ್ಯೆ&rsquo; ಸೀರಿಯಲ್​ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ &lsquo;ಗಟ್ಟಿಮೇಳ&rsquo; ಸೀರಿಯಲ್​ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್​ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.&lt;/p&gt;&lt;img&gt;&lt;p&gt;ಐದು ವರ್ಷ ಈ ಸೀರಿಯಲ್​ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್​ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್​ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು. &lsquo;&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/nisha-ravikrishnan-about-9th-time-marriage-in-serials-and-single-in-real-life-suc-119y3pt"/>
        </item>
        <item>
            <title><![CDATA[ಫ್ರಿಡ್ಜ್‌ನಲ್ಲಿ ಅತಿಯಾಗಿ ಐಸ್ ಕಟ್ಟುತ್ತಿದೆಯೇ? ಇದಕ್ಕೆ ಕಾರಣ ನೀವು ಮಾಡುತ್ತಿರುವ ಈ  ಸಣ್ಣ ತಪ್ಪು]]></title>
            <link>https://kannada.asianetnews.com/gallery/life/stop-fridge-ice-buildup-8-common-mistakes-to-avoid-ppkz6fn</link>
            <guid isPermaLink="true">https://kannada.asianetnews.com/gallery/life/stop-fridge-ice-buildup-8-common-mistakes-to-avoid-ppkz6fn</guid>
            <pubDate>Thu, 13 Aug 2026 21:43:09 +0530</pubDate>
            <description><![CDATA[Frost-free fridge hacks: ನಿಮ್ಮ ಫ್ರಿಡ್ಜ್‌ನಲ್ಲಿ ಅತಿಯಾಗಿ ಐಸ್ (Ice) ಕಟ್ಟುತ್ತಿದೆಯೇ? ಇದು ಫ್ರಿಡ್ಜ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುವುದಲ್ಲದೆ, ವಿದ್ಯುತ್ ಬಿಲ್ ಹೆಚ್ಚಳಕ್ಕೂ ಕಾರಣವಾಗಬಹುದು. ಅತಿಯಾದ ಐಸ್ ಶೇಖರಣೆಗೆ ಕಾರಣವಾಗುವ ನಮ್ಮ ತಪ್ಪು ಮತ್ತು ತಡೆಗಟ್ಟುವ 8 ಸುಲಭ ಉಪಾಯ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxxxbnk99yh8b5thwr1ft5g,imgname-thumbnail---2026-08-13t212717.797-1786637102771.jpg" type="image/jpeg" height="390" width="690"/>
            <content:encoded><![CDATA[&lt;p&gt;Frost-free fridge hacks: ನಿಮ್ಮ ಫ್ರಿಡ್ಜ್&zwnj;ನಲ್ಲಿ ಅತಿಯಾಗಿ ಐಸ್ (Ice) ಕಟ್ಟುತ್ತಿದೆಯೇ? ಇದು ಫ್ರಿಡ್ಜ್&zwnj;ನ ಕಾರ್ಯಕ್ಷಮತೆಯನ್ನು ಕುಗ್ಗಿಸುವುದಲ್ಲದೆ, ವಿದ್ಯುತ್ ಬಿಲ್ ಹೆಚ್ಚಳಕ್ಕೂ ಕಾರಣವಾಗಬಹುದು. ಅತಿಯಾದ ಐಸ್ ಶೇಖರಣೆಗೆ ಕಾರಣವಾಗುವ ನಮ್ಮ ತಪ್ಪು ಮತ್ತು ತಡೆಗಟ್ಟುವ 8 ಸುಲಭ ಉಪಾಯ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಕೆಲವು ಸಣ್ಣ ತಪ್ಪೇ ಕಾರಣ&lt;/strong&gt;ನಿಮ್ಮ ಫ್ರಿಡ್ಜ್&zwnj;ನಲ್ಲಿ ಅತಿಯಾಗಿ ಐಸ್ (Ice) ಕಟ್ಟುತ್ತಿದೆಯೇ? ನೀವು ತಿಳಿಯದೇ ಮಾಡುತ್ತಿರುವ ಕೆಲವು ಸಣ್ಣ ತಪ್ಪುಗಳೇ ಇದಕ್ಕೆ ಕಾರಣವಿರಬಹುದು. ಅವುಗಳನ್ನು ತಿದ್ದಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಹಳೆಯದಾದ ಡೋರ್ ಗ್ಯಾಸ್ಕೆಟ್ (Door Gasket)&lt;/strong&gt;ಫ್ರಿಡ್ಜ್&zwnj; ಬಾಗಿಲಿನ ರಬ್ಬರ್ (ಗ್ಯಾಸ್ಕೆಟ್) ಸಡಿಲವಾಗಿದ್ದರೆ ಅಥವಾ ಹಳೆಯದಾಗಿದ್ದರೆ, ಹೊರಗಿನ ಬಿಸಿ ಗಾಳಿ ಒಳಸೇರುತ್ತದೆ. ಈ ಗಾಳಿಯಲ್ಲಿನ ತೇವಾಂಶವೇ ಐಸ್ ಆಗಿ ಬದಲಾಗುತ್ತದೆ. ಹಾಗಾಗಿ ಬಾಗಿಲು ಸರಿಯಾಗಿ ಮುಚ್ಚುತ್ತಿದೆಯೇ ಎಂದು ಆಗಾಗ ಪರಿಶೀಲಿಸಿ.&lt;/p&gt;&lt;img&gt;&lt;p&gt;&lt;strong&gt;ಬಾಗಿಲನ್ನು ಪದೇ ಪದೇ ತೆರೆಯುವುದು&lt;/strong&gt;ಫ್ರಿಡ್ಜ್&zwnj; ಡೋರ್ ಅನ್ನು ಹೆಚ್ಚು ಹೊತ್ತು ತೆರೆದಿಡುವುದು ಅಥವಾ ಪದೇ ಪದೇ ತೆಗೆದು ಮುಚ್ಚುವುದರಿಂದ ಒಳಗಿನ ತಾಪಮಾನ ಏರುಪೇರಾಗುತ್ತದೆ. ಇದರಿಂದ ತೇವಾಂಶ ಹೆಚ್ಚಾಗಿ ಐಸ್ ಶೇಖರಣೆಯಾಗಲು ಶುರುವಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ತಾಪಮಾನ ಸೆಟ್ಟಿಂಗ್&zwnj;ನಲ್ಲಿನ ತಪ್ಪು&lt;/strong&gt;ಫ್ರಿಡ್ಜ್&zwnj;ನ ತಾಪಮಾನವನ್ನು (Thermostat) ಅತಿಯಾಗಿ ಕಡಿಮೆ ಮಟ್ಟಕ್ಕೆ ಸೆಟ್ ಮಾಡಿದರೆ ಕೂಲಿಂಗ್ ಜಾಸ್ತಿಯಾಗಿ ಐಸ್ ಗಡ್ಡೆ ಕಟ್ಟುತ್ತದೆ. ವಾತಾವರಣಕ್ಕೆ ಅನುಗುಣವಾಗಿ ತಾಪಮಾನವನ್ನು ಸರಿಯಾಗಿ ಹೊಂದಿಸುವುದು ಬಹಳ ಮುಖ್ಯ.&lt;/p&gt;&lt;img&gt;&lt;p&gt;&lt;strong&gt;ಬಿಸಿ ಆಹಾರ ಪದಾರ್ಥಗಳನ್ನು ಇಡುವುದು&lt;/strong&gt;ಬಿಸಿಯಾದ ಹಾಲು ಅಥವಾ ಸಾರುಗಳನ್ನು ನೇರವಾಗಿ ಫ್ರಿಡ್ಜ್&zwnj;ನಲ್ಲಿ ಇಡಬೇಡಿ. ಬಿಸಿ ಪದಾರ್ಥಗಳಿಂದ ಬರುವ ಆವಿ ತೇವಾಂಶವಾಗಿ ಬದಲಾಗಿ ಫ್ರೀಜರ್&zwnj;ನಲ್ಲಿ ಗಟ್ಟಿಯಾದ ಮಂಜುಗಡ್ಡೆಯ ರೂಪ ಪಡೆಯುತ್ತದೆ.&lt;/p&gt;&lt;img&gt;&lt;p&gt;&lt;strong&gt;ಡ್ರೈನ್ ಹೋಲ್ ಬ್ಲಾಕ್ ಆಗುವುದು (Drain Hole)&lt;/strong&gt;ಫ್ರಿಡ್ಜ್&zwnj;ನಲ್ಲಿ ಕರಗಿದ ನೀರು ಹೊರಗೆ ಹೋಗಲು ಸಣ್ಣ ದ್ವಾರವಿರುತ್ತದೆ. ಈ ಹೋಲ್ ಕೊಳಕಿನಿಂದ ಮುಚ್ಚಿಹೋದರೆ ನೀರು ಹೊರಹೋಗದೆ ಒಳಗೇ ಶೇಖರಣೆಯಾಗಿ ಗಟ್ಟಿಯಾದ ಐಸ್ ಗಡ್ಡೆ ಕಟ್ಟುತ್ತದೆ. ನೀರಿನ ಪೈಪ್ ಅನ್ನು ಆಗಾಗ ಸ್ವಚ್ಛಗೊಳಿಸಿ.&lt;/p&gt;&lt;img&gt;&lt;p&gt;&lt;strong&gt;ಅತಿಯಾದ ವಸ್ತುಗಳನ್ನು ತುಂಬುವುದು (Overloading)&lt;/strong&gt;ಫ್ರಿಡ್ಜ್&zwnj;ನಲ್ಲಿ ಮಿತಿಗಿಂತ ಹೆಚ್ಚು ಸಾಮಾನುಗಳನ್ನು ತುಂಬಿದರೆ ಒಳಗಿನ ಗಾಳಿಯ ಸಂಚಾರಕ್ಕೆ (Air Circulation) ಅಡ್ಡಿಯಾಗುತ್ತದೆ. ಗಾಳಿಯಾಡಲು ಜಾಗವಿಲ್ಲದಿದ್ದಾಗ ಐಸ್ ಸಮಸ್ಯೆ ಹೆಚ್ಚಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ತಾಂತ್ರಿಕ ದೋಷಗಳು&lt;/strong&gt;ಒಂದು ವೇಳೆ ಫ್ರಿಡ್ಜ್&zwnj;ನ ಆಟೋ-ಡಿಫ್ರಾಸ್ಟ್ (Auto-Defrost) ಫೀಚರ್ ಕೆಲಸ ಮಾಡದಿದ್ದರೆ ಅಥವಾ ಡಿಫ್ರಾಸ್ಟ್ ಸೆನ್ಸರ್&zwnj;ನಲ್ಲಿ ದೋಷವಿದ್ದರೆ ಐಸ್ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಕೂಡಲೇ ತಂತ್ರಜ್ಞರ (Technician) ಸಹಾಯ ಪಡೆಯುವುದು ಉತ್ತಮ.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/stop-fridge-ice-buildup-8-common-mistakes-to-avoid-ppkz6fn"/>
        </item>
        <item>
            <title><![CDATA[ಈ ಸಿನಿಮಾಗಳನ್ನು ನೋಡಿದ್ರೆ ದೇಶಭಕ್ತಿ ರಕ್ತದಲ್ಲಿ ಕುದಿಯುತ್ತೆ: ಕನ್ನಡದ ಎವರ್‌ಗ್ರೀನ್ ಚಿತ್ರಗಳಿವು]]></title>
            <link>https://kannada.asianetnews.com/sandalwood/independence-day-special-kannada-movies-that-brought-patriotism-to-the-big-screen-gvd/articleshow-vvn7y3c</link>
            <guid isPermaLink="true">https://kannada.asianetnews.com/sandalwood/independence-day-special-kannada-movies-that-brought-patriotism-to-the-big-screen-gvd/articleshow-vvn7y3c</guid>
            <pubDate>Thu, 13 Aug 2026 21:18:16 +0530</pubDate>
            <description><![CDATA[ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ದೇಶಪ್ರೇಮ, ಸ್ವಾತಂತ್ರ್ಯ ಹೋರಾಟ ಮತ್ತು ಸೈನಿಕರ ತ್ಯಾಗವನ್ನು ಕಟ್ಟಿಕೊಟ್ಟ ‘ಕಿತ್ತೂರು ಚೆನ್ನಮ್ಮ’, ‘ಮುತ್ತಿನ ಹಾರ’, ‘ವೀರಪ್ಪ ನಾಯ್ಕ’, ‘ಸಂಗೊಳ್ಳಿ ರಾಯಣ್ಣ’ ಸೇರಿದಂತೆ ಪ್ರಮುಖ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxwdegzj76v4xwf79vj2xfw,imgname-7-1786635532831.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ವಾತಂತ್ರ್ಯ ದಿನಾಚರಣೆ ಬಂದಾಗ ದೇಶಭಕ್ತಿ ಗೀತೆಗಳು, ತ್ರಿವರ್ಣ ಧ್ವಜ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನೆನಪುಗಳು ಮನಸ್ಸಿನಲ್ಲಿ ಮೂಡುತ್ತವೆ. ಭಾರತೀಯ ಚಿತ್ರರಂಗವೂ ದೇಶಪ್ರೇಮದ ಭಾವನೆಯನ್ನು ಬೆಳ್ಳಿತೆರೆಗೆ ತಂದು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಸ್ವಾತಂತ್ರ್ಯ ಹೋರಾಟ, ಬ್ರಿಟಿಷರ ವಿರುದ್ಧದ ಹೋರಾಟದಿಂದ ಹಿಡಿದು ದೇಶಕ್ಕಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರ ಕಥೆಗಳವರೆಗೆ ಹಲವು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮೂಡಿಬಂದಿವೆ. ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಕನ್ನಡ ಸಿನಿಮಾಗಳಲ್ಲಿ ದೇಶಪ್ರೇಮವನ್ನು ವಿಭಿನ್ನವಾಗಿ ಕಟ್ಟಿಕೊಟ್ಟ ಕೆಲವು ಪ್ರಮುಖ ಚಿತ್ರಗಳನ್ನು ಮೆಲುಕು ಹಾಕೋಣ.&lt;/p&gt;&lt;p&gt;&lt;strong&gt;&lsquo;ಕಿತ್ತೂರು ಚೆನ್ನಮ್ಮ&rsquo; - ಬೆಳ್ಳಿತೆರೆಗೆ ಬಂದ ವೀರವನಿತೆಯ ಕಥೆ&lt;/strong&gt;&lt;/p&gt;&lt;p&gt;ಕನ್ನಡ ಚಿತ್ರರಂಗದ ದೇಶಭಕ್ತಿ ಸಿನಿಮಾಗಳ ಪಟ್ಟಿಯಲ್ಲಿ ಮೊದಲು ನೆನಪಾಗುವ ಹೆಸರು &lsquo;ಕಿತ್ತೂರು ಚೆನ್ನಮ್ಮ&rsquo;. 1961ರಲ್ಲಿ ಬಿಡುಗಡೆಯಾದ ಈ ಸಿನಿಮಾ ಕಿತ್ತೂರು ರಾಣಿ ಚೆನ್ನಮ್ಮ ಅವರ ಬ್ರಿಟಿಷರ ವಿರುದ್ಧದ ಹೋರಾಟವನ್ನು ಅದ್ಭುತವಾಗಿ ತೆರೆಗೆ ತಂದಿತ್ತು. ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮುಂದಾದಾಗ, ಅವರ ವಿರುದ್ಧ ಧೈರ್ಯವಾಗಿ ಹೋರಾಡಿದ ವೀರರಾಣಿ ಚೆನ್ನಮ್ಮನ ಪಾತ್ರದಲ್ಲಿ ದಿವಂಗತ ನಟಿ ಬಿ. ಸರೋಜಾದೇವಿ ಮನೋಜ್ಞವಾಗಿ ಅಭಿನಯಿಸಿದ್ದರು. ವಿಶೇಷ ಪಾತ್ರದಲ್ಲಿ ಡಾ. ರಾಜ್&zwnj;ಕುಮಾರ್ ಕೂಡ ಕಾಣಿಸಿಕೊಂಡಿದ್ದರು. ಬಿ.ಆರ್. ಪಂತುಲು ನಿರ್ದೇಶನದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವವೂ ಲಭಿಸಿತ್ತು. ಇಂದಿಗೂ &lsquo;ಚೆನ್ನಮ್ಮ&rsquo; ಎಂದಾಕ್ಷಣ ಬಿ. ಸರೋಜಾದೇವಿಯವರ ಪಾತ್ರ ಕಣ್ಮುಂದೆ ಬರುವಷ್ಟು ಈ ಸಿನಿಮಾ ಜನಪ್ರಿಯವಾಗಿದೆ.&lt;img&gt;&lt;/p&gt;&lt;p&gt;&lt;strong&gt;&lsquo;ಮುತ್ತಿನ ಹಾರ&rsquo; - ಸೈನಿಕನ ಬದುಕಿನ ನೋವು-ನಲಿವು&lt;/strong&gt;&lt;/p&gt;&lt;p&gt;ದೇಶಪ್ರೇಮದ ಜೊತೆಗೆ ಯುದ್ಧದ ಹಿಂದಿರುವ ಭಾವನಾತ್ಮಕ ಜಗತ್ತನ್ನು ಕಟ್ಟಿಕೊಟ್ಟ ಸಿನಿಮಾ &lsquo;ಮುತ್ತಿನ ಹಾರ&rsquo;. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ಸುಹಾಸಿನಿ ಅಭಿನಯದ ಈ ಚಿತ್ರದಲ್ಲಿ ಕೊಡಗಿನ ವೀರಸೈನಿಕ ಅಚ್ಚಪ್ಪನ ಜೀವನ, ಸಾಹಸ, ದಾಂಪತ್ಯ ಹಾಗೂ ಯುದ್ಧದ ಸನ್ನಿವೇಶಗಳನ್ನು ಮನಮುಟ್ಟುವಂತೆ ತೋರಿಸಲಾಗಿತ್ತು. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಯುದ್ಧದ ವೈಭವದ ಜೊತೆಗೆ ಸೈನಿಕನ ವೈಯಕ್ತಿಕ ಬದುಕಿನ ತ್ಯಾಗವನ್ನೂ ತೋರಿಸಿದ್ದ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯ ಗೌರವ ಸಿಕ್ಕಿತ್ತು.&lt;img&gt;&lt;/p&gt;&lt;p&gt;&lt;strong&gt;&lsquo;ತಾಯಿ ಸಾಹೇಬ&rsquo; - ಸ್ವಾತಂತ್ರ್ಯ ಹೋರಾಟದ ಮತ್ತೊಂದು ಮುಖ&lt;/strong&gt;&lt;/p&gt;&lt;p&gt;ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲೇ ಮೂಡಿಬಂದ ಮತ್ತೊಂದು ಗಮನಾರ್ಹ ಸಿನಿಮಾ &lsquo;ತಾಯಿ ಸಾಹೇಬ&rsquo;. ಜಯಮಾಲಾ ಮತ್ತು ಸುರೇಶ್ ಹೆಬ್ಳೀಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ಸ್ವಾತಂತ್ರ್ಯಪೂರ್ವ ಭಾರತದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಯನ್ನು ತೆರೆದಿಟ್ಟಿತ್ತು. ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಸಿನಿಮಾ 1997ರ ಡಿಸೆಂಬರ್ 31ರಂದು ತೆರೆಕಂಡು ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು.&lt;/p&gt;&lt;p&gt;&lt;strong&gt;&lsquo;ವೀರಪ್ಪ ನಾಯ್ಕ&rsquo; - ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ!&lt;/strong&gt;&lt;/p&gt;&lt;p&gt;ಸಾಹಸಸಿಂಹ ವಿಷ್ಣುವರ್ಧನ್ ಅವರ ಮತ್ತೊಂದು ಗಮನಾರ್ಹ ದೇಶಭಕ್ತಿ ಚಿತ್ರ &lsquo;ವೀರಪ್ಪ ನಾಯ್ಕ&rsquo;. ಬೆಳಗಾವಿ ಸಮೀಪದ ಹಳ್ಳಿಯೊಂದರ ಗಾಂಧಿವಾದಿ ದೇಶಪ್ರೇಮಿಯ ಬದುಕಿನ ಸುತ್ತ ಕಥೆ ಸಾಗುತ್ತದೆ. ದೇಶಪ್ರೇಮದ ಮುಂದೆ ವೈಯಕ್ತಿಕ ಸಂಬಂಧಗಳಿಗೂ ಬೆಲೆ ಇಲ್ಲ ಎಂಬ ಕಠಿಣ ಸಂದೇಶವನ್ನು ಸಿನಿಮಾ ನೀಡಿತ್ತು. ದೇಶದ್ರೋಹದ ಹಾದಿ ಹಿಡಿದ ಸ್ವಂತ ಮಗನ ವಿರುದ್ಧವೇ ಕಠಿಣ ನಿರ್ಧಾರ ತೆಗೆದುಕೊಳ್ಳುವ ತಂದೆಯ ಪಾತ್ರದಲ್ಲಿ ವಿಷ್ಣುವರ್ಧನ್ ಗಮನ ಸೆಳೆದಿದ್ದರು. ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.&lt;img&gt;&lt;/p&gt;&lt;p&gt;&lt;strong&gt;&lsquo;ಹಗಲು ವೇಷ&rsquo; - ಬ್ರಿಟಿಷರ ವಿರುದ್ಧ ಶಿವಣ್ಣನ ಹೋರಾಟ&lt;/strong&gt;&lt;/p&gt;&lt;p&gt;ಲವರ್ ಬಾಯ್ ಮತ್ತು ಹಳ್ಳಿ ಹುಡುಗನ ಪಾತ್ರಗಳ ಮೂಲಕ ಜನಪ್ರಿಯರಾಗಿದ್ದ ಶಿವರಾಜ್&zwnj;ಕುಮಾರ್, &lsquo;ಹಗಲು ವೇಷ&rsquo; ಸಿನಿಮಾದಲ್ಲಿ ವಿಭಿನ್ನ ದೇಶಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಈ ಚಿತ್ರದಲ್ಲಿ ಬ್ರಿಟಿಷರ ಆಳ್ವಿಕೆಯ ವಿರುದ್ಧ ದಂಗೆ ಎದ್ದ ಸ್ವಾತಂತ್ರ್ಯ ಹೋರಾಟಗಾರನ ಕಥೆಯನ್ನು ಹೇಳಲಾಗಿತ್ತು. 2000ರ ಮಾರ್ಚ್ 24ರಂದು ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು.&lt;/p&gt;&lt;p&gt;&lt;strong&gt;&lsquo;ವಂದೇ ಮಾತರಂ&rsquo; - ಯುವಕರನ್ನು ಉಗ್ರವಾದದತ್ತ ಸೆಳೆಯುವ ಜಾಲ&lt;/strong&gt;&lt;/p&gt;&lt;p&gt;2001ರಲ್ಲಿ ಬಿಡುಗಡೆಯಾದ &lsquo;ವಂದೇ ಮಾತರಂ&rsquo; ದೇಶಭಕ್ತಿಯ ಜೊತೆಗೆ ಸಮಕಾಲೀನ ಸಾಮಾಜಿಕ ಸಮಸ್ಯೆಯನ್ನೂ ತೆರೆಗೆ ತಂದ ಸಿನಿಮಾ. ರೆಬಲ್ ಸ್ಟಾರ್ ಅಂಬರೀಷ್ ಮತ್ತು ವಿಜಯಶಾಂತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದಲ್ಲಿ ಯುವಕರನ್ನು ಹೇಗೆ ಬ್ರೈನ್&zwnj;ವಾಶ್ ಮಾಡಿ ಉಗ್ರಗಾಮಿ ಚಟುವಟಿಕೆಗಳತ್ತ ಸೆಳೆಯಲಾಗುತ್ತದೆ ಎಂಬುದನ್ನು ತೋರಿಸಲಾಗಿತ್ತು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾದ ದೇಶಭಕ್ತಿ ಗೀತೆಗಳು ಕೂಡ ಸಾಕಷ್ಟು ಜನಪ್ರಿಯವಾಗಿದ್ದವು.&lt;img&gt;&lt;/p&gt;&lt;p&gt;&lt;strong&gt;&lsquo;ಸೈನಿಕ&rsquo; - ಕಾರ್ಗಿಲ್ ಯುದ್ಧದ ಕಹಿ ನೆನಪು&lt;/strong&gt;&lt;/p&gt;&lt;p&gt;ಕಾರ್ಗಿಲ್ ಯುದ್ಧದ ಹಿನ್ನೆಲೆಯೊಂದಿಗೆ ಬಂದ ಸಿನಿಮಾ &lsquo;ಸೈನಿಕ&rsquo;. 2002ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹೆಸರಿನಲ್ಲೇ ದೇಶಸೇವೆಯ ಭಾವನೆ ಮೂಡಿಸುವ ಈ ಸಿನಿಮಾ ಯುದ್ಧಭೂಮಿಯಲ್ಲಿ ಸೈನಿಕರು ಎದುರಿಸುವ ಸವಾಲುಗಳು ಮತ್ತು ತ್ಯಾಗವನ್ನು ಕಥೆಯ ಮೂಲಕ ಹೇಳಲು ಪ್ರಯತ್ನಿಸಿತ್ತು. ಮಹೇಶ್ ಸುಖಧರೆ ನಿರ್ದೇಶನದ ಈ ಚಿತ್ರ ಸ್ಯಾಂಡಲ್&zwnj;ವುಡ್&zwnj;ನಲ್ಲಿ ಗಮನ ಸೆಳೆದಿತ್ತು.&lt;/p&gt;&lt;p&gt;&lt;strong&gt;&lsquo;ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ&rsquo; - ರಾಯಣ್ಣನಾಗಿ ದರ್ಶನ್ ಅಬ್ಬರ&lt;/strong&gt;&lt;/p&gt;&lt;p&gt;ಸ್ಯಾಂಡಲ್&zwnj;ವುಡ್&zwnj;ನ ಅದ್ಧೂರಿ ಐತಿಹಾಸಿಕ ಚಿತ್ರಗಳಲ್ಲಿ ಒಂದಾದ &lsquo;ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ&rsquo; ಕೂಡ ದೇಶಪ್ರೇಮದ ಕಿಚ್ಚು ಹೊತ್ತಿಸಿದ ಸಿನಿಮಾ. ದರ್ಶನ್ ಸಂಗೊಳ್ಳಿ ರಾಯಣ್ಣನಾಗಿ ನಟಿಸಿದ್ದ ಈ ಚಿತ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟದ ನಂತರ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮತ್ತಷ್ಟು ವೇಗ ನೀಡಿದ ರಾಯಣ್ಣನ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಬ್ರಿಟಿಷರ ಕೈಗೆ ಸಿಕ್ಕಿಬಿದ್ದರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣನ ಧೈರ್ಯ, ತ್ಯಾಗ ಮತ್ತು ದೇಶಪ್ರೇಮವನ್ನು ಸಿನಿಮಾ ಅದ್ಧೂರಿಯಾಗಿ ಕಟ್ಟಿಕೊಟ್ಟಿತ್ತು. ನಾಗಣ್ಣ ನಿರ್ದೇಶನದ ಈ ಸಿನಿಮಾ 2012ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡು, ದೀರ್ಘಕಾಲ ಪ್ರದರ್ಶನ ಕಂಡಿತ್ತು.&lt;img&gt;&lt;/p&gt;&lt;p&gt;&lt;strong&gt;&lsquo;1944&rsquo; - ಹಳ್ಳಿಯಲ್ಲೂ ಹೊತ್ತಿಕೊಂಡ ಸ್ವಾತಂತ್ರ್ಯದ ಕಿಚ್ಚು&lt;/strong&gt;&lt;/p&gt;&lt;p&gt;ಸ್ವಾತಂತ್ರ್ಯ ಹೋರಾಟದ ಕಥೆಯನ್ನು ನಗರದ ಹಿನ್ನೆಲೆಯ ಬದಲಿಗೆ ಉತ್ತರ ಕರ್ನಾಟಕದ ಗ್ರಾಮೀಣ ಪರಿಸರದಲ್ಲಿ ಕಟ್ಟಿಕೊಟ್ಟ ಸಿನಿಮಾ &lsquo;1944&rsquo;. ನವೀನ್ ಕೃಷ್ಣ ಮತ್ತು ಶೃತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರದ ಕಥೆ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಸ್ವಾತಂತ್ರ್ಯ ಹೋರಾಟದ ಸುತ್ತ ಸಾಗುತ್ತದೆ. &lsquo;ರೊಟ್ಟಿ ಋಣ&rsquo; ನಾಟಕವನ್ನು ಆಧರಿಸಿದ ಈ ಚಿತ್ರ ಗ್ರಾಮೀಣ ಜನರ ಬದುಕಿನೊಂದಿಗೆ ಸ್ವಾತಂತ್ರ್ಯ ಹೋರಾಟ ಹೇಗೆ ಬೆಸೆದುಕೊಂಡಿತ್ತು ಎಂಬುದನ್ನು ತೋರಿಸಿತ್ತು.&lt;img&gt;&lt;/p&gt;&lt;h2&gt;&lt;strong&gt;ದೇಶಪ್ರೇಮಕ್ಕೆ ಕನ್ನಡ ಸಿನಿಮಾಗಳ ಕೊಡುಗೆ&lt;/strong&gt;&lt;/h2&gt;&lt;p&gt;ಕನ್ನಡ ಚಿತ್ರರಂಗದ ದೇಶಭಕ್ತಿ ಸಿನಿಮಾಗಳ ವಿಶೇಷತೆ ಏನೆಂದರೆ, ಪ್ರತಿಯೊಂದು ಸಿನಿಮಾ ದೇಶಪ್ರೇಮವನ್ನು ಒಂದೇ ರೀತಿಯಲ್ಲಿ ಹೇಳಿಲ್ಲ. &lsquo;ಕಿತ್ತೂರು ಚೆನ್ನಮ್ಮ&rsquo; ಐತಿಹಾಸಿಕ ಹೋರಾಟವನ್ನು ಹೇಳಿದರೆ, &lsquo;ಮುತ್ತಿನ ಹಾರ&rsquo; ಸೈನಿಕನ ತ್ಯಾಗವನ್ನು ತೋರಿಸಿತು. &lsquo;ತಾಯಿ ಸಾಹೇಬ&rsquo; ಸ್ವಾತಂತ್ರ್ಯಪೂರ್ವ ಸಮಾಜದ ಮತ್ತೊಂದು ಮುಖವನ್ನು ತೆರೆದಿಟ್ಟಿತು. &lsquo;ವೀರಪ್ಪ ನಾಯ್ಕ&rsquo; ದೇಶಕ್ಕಾಗಿ ವೈಯಕ್ತಿಕ ಸಂಬಂಧವನ್ನೇ ತ್ಯಜಿಸುವ ಕಥೆ ಹೇಳಿತು. ಇನ್ನು &lsquo;ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ&rsquo; ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟದ ವೀರಗಾಥೆಯನ್ನು ಅದ್ಧೂರಿಯಾಗಿ ಕಟ್ಟಿಕೊಟ್ಟಿತು. ಹೀಗೆ ಇತಿಹಾಸದ ಪುಟಗಳಲ್ಲಿದ್ದ ಹೋರಾಟಗಾರರ ಕಥೆಗಳಿಂದ ಹಿಡಿದು ಸೈನಿಕರ ತ್ಯಾಗದವರೆಗೆ, ಕನ್ನಡದ ಬೆಳ್ಳಿತೆರೆ ದೇಶಪ್ರೇಮದ ಹಲವು ಮುಖಗಳನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಡುವೆ ಈ ಸಿನಿಮಾಗಳನ್ನು ನೆನಪಿಸಿಕೊಳ್ಳುವುದು ಕೂಡ ನಮ್ಮ ಸಿನಿಪರಂಪರೆಗೆ ಸಲ್ಲಿಸುವ ಒಂದು ಗೌರವವೇ ಸರಿ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/independence-day-special-kannada-movies-that-brought-patriotism-to-the-big-screen-gvd/articleshow-vvn7y3c"/>
        </item>
        <item>
            <title><![CDATA[KSP: ಮರು ಪರೀಕ್ಷೆಯೋ? ಕಾಯಂ ನಿರ್ಧಾರವೋ? ಪೊಲೀಸ್‌ ಅಭ್ಯರ್ಥಿಗಳಿಗೆ ಬಿಗ್‌ ಟ್ವಿಸ್ಟ್!  ಖಾಕಿ ಕನಸಿನ ಹಾದಿಯಲ್ಲಿ ಕಣ್ಣೀರು!]]></title>
            <link>https://kannada.asianetnews.com/state/karnataka-police-constable-exam-confusion-physical-test-preparation-bmk/articleshow-mwyrd23</link>
            <guid isPermaLink="true">https://kannada.asianetnews.com/state/karnataka-police-constable-exam-confusion-physical-test-preparation-bmk/articleshow-mwyrd23</guid>
            <pubDate>Thu, 13 Aug 2026 21:03:24 +0530</pubDate>
            <description><![CDATA[ಆಗಸ್ಟ್ 2ರಂದು ನಡೆದ ಪೊಲೀಸ್ ಸಿವಿಲ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬ ಮತ್ತು ಸೀರಿಯಲ್ ನಂಬರ್ ಗೊಂದಲದಂತಹ ಭಾರಿ ಲೋಪಗಳು ಉಂಟಾಗಿದ್ದವು. ಇಲಾಖೆ ನೀಡಿರುವ ಈ ಟ್ವಿಸ್ಟ್‌ಗೆ ಸರ್ಕಾರ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxw338msz5fza19dk0pebp8,imgname-ksp-1786635193619.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು; ದೇಹದ ಪ್ರತಿಯೊಂದು ನರ-ನರದಲ್ಲೂ ಖಾಕಿ ತೊಡಬೇಕೆಂಬ ಹಂಬಲ, ಹೊಟ್ಟೆ ಬಟ್ಟೆ ಕಟ್ಟಿ ಹಗಲು-ರಾತ್ರಿ ಒಂದಾಗಿಸಿ ಮಾಡಿದ ಸಿದ್ಧತೆ, ವರ್ಷಗಳ ಕಾಲ ಮನೆಯವರಿಂದ ದೂರವಿದ್ದು ಮೈ ಮುರಿದು ಮಾಡಿದ ಅಭ್ಯಾಸ. ಇಷ್ಟೆಲ್ಲಾ ಕಷ್ಟಪಟ್ಟು ಪರೀಕ್ಷಾ ಹಾಲ್&zwnj;ಗೆ ಕಾಲಿಟ್ಟ ಆ ಬಡ, ಗ್ರಾಮೀಣ ಯುವಕರ ಮುಖದಲ್ಲಿ ಇದ್ದದ್ದು ಒಂದೇ ಭರವಸೆ'ನನ್ನ ಶ್ರಮಕ್ಕೆ ಇವತ್ತು ಪ್ರತಿಫಲ ಸಿಗುತ್ತದೆ' ಎಂದು. ಆದರೆ, ಆಗಸ್ಟ್ 2ರಂದು ನಡೆದ ಆ ಒಂದು ಪರೀಕ್ಷೆ ಆ ಲಕ್ಷಾಂತರ ಯುವಕರ ಭವಿಷ್ಯವನ್ನೇ ಅಂಧಕಾರಕ್ಕೆ ದೂಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂದು ಅದೇ ಅಭ್ಯರ್ಥಿಗಳು ರಸ್ತೆಯಲ್ಲಿ ನಿಂತು ತಮಗೆ ನ್ಯಾಯ ಸಿಗದೇ ಕಣ್ಣೀರಿಡುತ್ತಿದ್ದಾರೆ. ಅವರ ಭವಿಷ್ಯಕ್ಕೆ ಯಾರು ಹೊಣೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;h2&gt;&lt;strong&gt;ಪರೀಕ್ಷಾ ಹಾಲ್&zwnj;ನಲ್ಲಿ ಅನುಭವಿಸಿದ ನರಕಯಾತನೆ!&lt;/strong&gt;&lt;/h2&gt;&lt;p&gt;ಆಗಸ್ಟ್ 02ರಂದು ನಡೆದ ಪೊಲೀಸ್ ಸಿವಿಲ್ ಪರೀಕ್ಷೆಯು ಅಭ್ಯರ್ಥಿಗಳ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ. ಪರೀಕ್ಷಾ ಕೇಂದ್ರಕ್ಕೆ ಹೋದ ಅಭ್ಯರ್ಥಿಗಳಿಗೆ ಎದುರಾಗಿದ್ದು ಒಂದಾ ಎರಡಾ ಗೊಂದಲಗಳು? ಪರೀಕ್ಷೆಗೆ ನಿಯಮಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಸಿಗಬೇಕಿತ್ತು. ಆದರೆ ಹಲವು ಕೇಂದ್ರಗಳಲ್ಲಿ ಭಾರಿ ವಿಳಂಬವಾಗಿ ಪ್ರಶ್ನೆ ಪತ್ರಿಕೆ ನೀಡಲಾಯಿತು. ಪ್ರಶ್ನೆ ಪತ್ರಿಕೆ ಮತ್ತು ಓಎಮ್&zwnj;ಆರ್ ಶೀಟ್&zwnj;ನ ಸಿರಿಯಲ್ ನಂಬರ್&zwnj;ಗಳೇ ಮ್ಯಾಚ್ ಆಗುತ್ತಿರಲಿಲ್ಲ. ಒಂದಕ್ಕೊಂದು ತಾಳಮೇಳವಿಲ್ಲದ ಕಾಗದಗಳನ್ನು ಹಿಡಿದು ಅಭ್ಯರ್ಥಿಗಳು ದಿಕ್ಕು ತೋಚದೆ ಗಲಿಬಿಲಿಗೊಂಡರು. ವಿಜಯಪುರದ ತಿಕೋಟಾದಲ್ಲಂತೂ ಈ ಸಿರಿಯಲ್ ನಂಬರ್ ಗೊಂದಲ ತಾಳಲಾರದೆ, ಇಡೀ ಪರೀಕ್ಷೆಯನ್ನೇ ಅಭ್ಯರ್ಥಿಗಳು ಕಣ್ಣೀರಧಾರೆಯೊಂದಿಗೆ ಬಹಿಷ್ಕರಿಸುವಂತಾಯಿತು. ವರ್ಷ ಪೂರ್ತಿ ತಪಸ್ಸಿನಂತೆ ಓದಿದ ವಿದ್ಯಾರ್ಥಿಗೆ ಪರೀಕ್ಷಾ ಹಾಲ್&zwnj;ನಲ್ಲಿ ಆದ ಈ ಎಡವಟ್ಟುಗಳು ಎಂತಹ ಮಾನಸಿಕ ಆಘಾತ ನೀಡಿರಬೇಡ? ಇದನ್ನು ಆಡಳಿತವೆ ಗಮನಿಸಬೇಕು.&lt;/p&gt;&lt;h3&gt;&lt;strong&gt;ಇಲಾಖೆಯ ಬಿಗ್&zwnj; ಟ್ವಿಸ್ಟ್! ತನಿಖೆಯೋ, ದೈಹಿಕ ಪರೀಕ್ಷೆಯೋ?&lt;/strong&gt;&lt;/h3&gt;&lt;p&gt;ಪರೀಕ್ಷೆಯಲ್ಲಾದ ಭಾರಿ ಲೋಪದೋಷಗಳ ಕುರಿತು ದೂರುಗಳು ಕೇಳಿಬಂದ ತಕ್ಷಣ, ಇಲಾಖೆಯು ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿತ್ತು. ನಮಗೆ ನ್ಯಾಯ ಸಿಗುತ್ತದೆ, ಲೋಪ ಸರಿಹೋಗುತ್ತದೆ ಅಥವಾ ಮರು ಪರೀಕ್ಷೆ ನಡೆಯುತ್ತದೆ ಎಂದು ಅಭ್ಯರ್ಥಿಗಳು ಭರವಸೆಯಲ್ಲಿದ್ದರು. ಆದರೆ, ಈಗ ಇಲಾಖೆ ನೀಡಿದ ಬಿಗ್ ಟ್ವಿಸ್ಟ್ ಎಂದರೆ ತನಿಖಾ ವರದಿಯ ಮಾಹಿತಿಯೂ ಇಲ್ಲ, ಸರ್ಕಾರದಿಂದ ಮರು ಪರೀಕ್ಷೆಯ ಸ್ಪಷ್ಟನೆಯೂ ಇಲ್ಲ. ಆದೇಶ ಬರುವುದಕ್ಕೂ ಮೊದಲೇ ಇಲಾಖೆಯು ಆತುರಾತುರವಾಗಿ ದೈಹಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದೆ. ಅತ್ತ ಮನಸ್ಸಿನಲ್ಲಿ ಮರು ಪರೀಕ್ಷೆ ನಡೆದುಬಿಡುತ್ತದೆಯೋ? ಎಂಬ ಆತಂಕದ ಬೆಂಕಿ ಉರಿಯುತ್ತಿದ್ದರೂ, ಇತ್ತ ದೈಹಿಕ ಪರೀಕ್ಷೆಯಲ್ಲಿ ಅನರ್ಹರಾಗಬಾರದೆಂದು ಕಾಲುಗಳಲ್ಲಿ ಶಕ್ತಿಯಿಲ್ಲದಿದ್ದರೂ ಮೈದಾನದಲ್ಲಿ ರನ್ನಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ ಅಭ್ಯರ್ಥಿಗಳು.&lt;/p&gt;&lt;h3&gt;&lt;strong&gt;ಕಣ್ಣಿಗೆ ಕಟ್ಟುವ ಅಭ್ಯರ್ಥಿಗಳ ರೋಧನ!&lt;/strong&gt;&lt;/h3&gt;&lt;p&gt;ಅತ್ತ ವಿಜಯಪುರದಲ್ಲಿ ಪರೀಕ್ಷೆ ಬಹಿಷ್ಕರಿಸಿದ ಆ ಬಡ ಯುವಕನ ಕಣ್ಣೀರಿಗೆ ಉತ್ತರಿಸುವವರು ಯಾರು? ಅಷ್ಟಕ್ಕೂ ಅವರ ತಪ್ಪೇನಿತ್ತು? ಇಲಾಖೆ ಹಾಗೂ ಪರೀಕ್ಷಾ ಮಂಡಳಿ ಮಾಡಿದ ಸಾಲು ಸಾಲು ಎಡವಟ್ಟುಗಳಿಗೆ ಇಂದು ಶಿಕ್ಷೆ ಅನುಭವಿಸುತ್ತಿರುವುದು ನಿರ್ದೋಷಿ, ಬಡ ಅಭ್ಯರ್ಥಿಗಳು. ಒಂದೆಡೆ ಮರು ಪರೀಕ್ಷೆಯ ತೂಗುಕತ್ತಿ, ಇನ್ನೊಂದೆಡೆ ಮೈದಾನದಲ್ಲಿ ಕಮರುತ್ತಿರುವ ಕಾಯಂ ನಿರ್ಧಾರದ ಭರವಸೆ. ಅತ್ತ ಮನೆಯಲ್ಲಿ ಮಗ ಖಾಕಿ ತೊಟ್ಟು ಬರುತ್ತಾನೆ ಎಂದು ಹಾದಿ ಕಾಯುತ್ತಿರುವ ಮುಗ್ಧ ಪೋಷಕರು. ಈ ಯುವಕರ ಭವಿಷ್ಯದ ಜೊತೆ ನಡೆಯುತ್ತಿರುವ ಈ ಆಟಕ್ಕೆ ಕೊನೆ ಎಂದು? ಇಲಾಖೆ ತನ್ನ ಮೌನ ಮುರಿದು, ಗೊಂದಲಕ್ಕೆ ಸ್ಪಷ್ಟತೆ ನೀಡಿ, ಸಂಕಷ್ಟದಲ್ಲಿರುವ ಈ ಲಕ್ಷಾಂತರ ಯುವಕರಿಗೆ ತಕ್ಷಣವೇ ನ್ಯಾಯ ಒದಗಿಸಬೇಕಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/state/karnataka-police-constable-exam-confusion-physical-test-preparation-bmk/articleshow-mwyrd23"/>
        </item>
        <item>
            <title><![CDATA[ಅಕ್ಟೋಬರ್‌ನಿಂದ ಬೆಂಗಳೂರಿನ ಔಟರ್‌ ರಿಂಗ್‌ ರೋಡ್‌ ವೈಟ್‌ ಟ್ಯಾಪಿಂಗ್‌, ಟೆಕ್ಕಿಗಳಿಗೆ WFH ನೀಡುವಂತೆ ಸರ್ಕಾರ ಸಲಹೆ]]></title>
            <link>https://kannada.asianetnews.com/bengaluru-urban/bengaluru-orr-white-topping-wfh-for-techies-krishna-byre-gowda-san/articleshow-4hfytwd</link>
            <guid isPermaLink="true">https://kannada.asianetnews.com/bengaluru-urban/bengaluru-orr-white-topping-wfh-for-techies-krishna-byre-gowda-san/articleshow-4hfytwd</guid>
            <pubDate>Thu, 13 Aug 2026 20:58:35 +0530</pubDate>
            <description><![CDATA[ಬೆಂಗಳೂರಿನ ಹೊರವರ್ತುಲ ರಸ್ತೆಯ (ORR) ವೈಟ್‌ಟಾಪಿಂಗ್ ಕಾಮಗಾರಿಯನ್ನು ಶೀಘ್ರಗೊಳಿಸಲು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಕಾಮಗಾರಿ ವೇಳೆ ಟ್ರಾಫಿಕ್ ದಟ್ಟಣೆ ತಡೆಯಲು, ಐಟಿ-ಬಿಟಿ ಕಂಪನಿಗಳಿಗೆ 50% ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' ನೀಡಲು ಮಾತುಕತೆ ನಡೆಸಲು ಆದೇಶಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxvpk5rpf3qqn6n3pc5qea2,imgname-bengaluru-orr-1786634783928.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹೊರವರ್ತುಲ ರಸ್ತೆಯ (ORR) ನವೀಕರಣ ಕಾಮಗಾರಿಯನ್ನು ವೇಗಗೊಳಿಸಲು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಯೋಜನೆಯಂತೆ ಅಕ್ಟೋಬರ್&zwnj;ನಲ್ಲಿ ವೈಟ್&zwnj;ಟಾಪಿಂಗ್ (White-topping) ಕಾಮಗಾರಿ ಆರಂಭವಾಗಲಿದ್ದು, ಜನವರಿ ವೇಳೆಗೆ ಪೂರ್ಣಗೊಳಿಸಲು ಗುರಿ ಹೊಂದಲಾಗಿದೆ.&lt;/p&gt;&lt;p&gt;ಈ ಕಾಮಗಾರಿ ನಡೆಯುವ ಅವಧಿಯಲ್ಲಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಕಿರಿಕಿರಿ ಉಂಟಾಗುವುದನ್ನು ತಡೆಯಲು ಮತ್ತು ನಿರ್ಮಾಣ ಕಾರ್ಯಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಲು, ಹೊರವರ್ತುಲ ರಸ್ತೆಯ ಪಕ್ಕದಲ್ಲಿರುವ ಐಟಿ-ಬಿಟಿ ಕಂಪನಿಗಳಲ್ಲಿ ಶೇಕಡಾ 50ರಷ್ಟು ಸಿಬ್ಬಂದಿಗೆ 'ವರ್ಕ್ ಫ್ರಮ್ ಹೋಮ್' (WFH - ಮನೆಯಿಂದಲೇ ಕೆಲಸ) ಸೌಲಭ್ಯ ಒದಗಿಸುವಂತೆ ಕಂಪನಿಗಳ ಜೊತೆ ಮಾತುಕತೆ ನಡೆಸಲು ಸಚಿವರೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.&lt;/p&gt;&lt;h2&gt;&lt;strong&gt;3 ಮೀಟರ್ ಅಗಲದ ಫುಟ್&zwnj;ಪಾತ್, ಅತಿಕ್ರಮಣ ತೆರವು&lt;/strong&gt;&lt;/h2&gt;&lt;p&gt;ಹೊರವರ್ತುಲ ರಸ್ತೆಯುದ್ದಕ್ಕೂ ಕನಿಷ್ಠ 3 ಮೀಟರ್ ಅಗಲದ ತಡೆರಹಿತ ಪಾದಚಾರಿ ಮಾರ್ಗಗಳನ್ನು (ಫುಟ್&zwnj;ಪಾತ್) ನಿರ್ಮಿಸಲು ಸಚಿವರು ಆದೇಶಿಸಿದ್ದಾರೆ. ಸ್ಲಿಪ್ ರಸ್ತೆಗಳಲ್ಲಿ (Slip roads) ಫುಟ್&zwnj;ಪಾತ್&zwnj;ಗಳು 1.8 ಮೀಟರ್&zwnj;ವರೆಗೆ ಇರಲಿವೆ. ರಸ್ತೆಬದಿಯ ಎಲ್ಲಾ ಅತಿಕ್ರಮಣಗಳನ್ನು ತಕ್ಷಣ ತೆರವುಗೊಳಿಸಲು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ಅಳವಡಿಸಿರುವ ಟ್ರಾನ್ಸ್&zwnj;ಫಾರ್ಮರ್&zwnj;ಗಳನ್ನು ಗುರುತಿಸಿ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.&lt;/p&gt;&lt;p&gt;ಸರ್ವಿಸ್ ರಸ್ತೆಗಳಲ್ಲಿ ಬಫರ್ ಜಾಗ ಲಭ್ಯವಿರುವ ಕಡೆಗಳಲ್ಲಿ ಬಸ್ ಮತ್ತು ಟ್ಯಾಕ್ಸಿಗಳ ಪಿಕ್-ಅಪ್ ಹಾಗೂ ಡ್ರಾಪ್-ಆಫ್ ಪಾಯಿಂಟ್&zwnj;ಗಳನ್ನು ಗುರುತಿಸಲಾಗುವುದು. ಇವುಗಳನ್ನು ಗುರುತಿಸಲು ನಿರ್ದಿಷ್ಟ ಬಣ್ಣಗಳ ಸಂಕೇತಗಳನ್ನು (Colour coding) ಬಳಸಲಾಗುತ್ತದೆ. ಜೊತೆಗೆ ಮುಖ್ಯ ರಸ್ತೆಯಲ್ಲೂ ಬಸ್ ಬೇಗಳನ್ನು ನಿರ್ಮಿಸಲಾಗುವುದು.&lt;/p&gt;&lt;h2&gt;&lt;strong&gt;ಟ್ರಾಫಿಕ್ ನಿರ್ವಹಣೆಗೆ ಪರ್ಯಾಯ ಮಾರ್ಗ&lt;/strong&gt;&lt;/h2&gt;&lt;p&gt;ವೈಟ್&zwnj;ಟಾಪಿಂಗ್ ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಆಂತರಿಕ ರಸ್ತೆಗಳನ್ನು (Internal roads) ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡು ಟ್ರಾಫಿಕ್ ಡೈವರ್ಷನ್ ಮಾಡಲು ಸಚಿವರು ಸೂಚಿಸಿದ್ದಾರೆ. ಈ ಟ್ರಾಫಿಕ್ ನಿರ್ವಹಣಾ ಯೋಜನೆಯನ್ನು 'ಔಟರ್ ರಿಂಗ್ ರೋಡ್ ಕಂಪನೀಸ್ ಅಸೋಸಿಯೇಷನ್' (ORRCA) ಹಾಗೂ ಸಂಚಾರ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಅಂತಿಮಗೊಳಿಸಲಾಗುವುದು.&lt;/p&gt;&lt;h2&gt;&lt;strong&gt;₹450 ಕೋಟಿ ವೆಚ್ಚದ ಹೈಟೆಕ್ ಕಾರಿಡಾರ್&zwnj; ಯೋಜನೆ&lt;/strong&gt;&lt;/h2&gt;&lt;p&gt;ಸುಮಾರು ₹450 ಕೋಟಿ ಅಂದಾಜು ವೆಚ್ಚದ ಈ ಯೋಜನೆಯಡಿ ಡೆಲಿವರಿ ಬಾಯ್&zwnj;ಗಳಿಗೆ ನೆರವಾಗಲು ನೆರಳಿನ ಆಸನ, ಫೋನ್ ಚಾರ್ಜಿಂಗ್, ವೈ-ಫೈ ಮತ್ತು ಕುಡಿಯುವ ನೀರಿನ ಸೌಲಭ್ಯವಿರುವ 'ಗಿಗ್ ಹಬ್'ಗಳನ್ನು (Gig hubs) ನಿರ್ಮಿಸಲಾಗುವುದು. ಇದರ ಜೊತೆಗೆ ಸೌರಶಕ್ತಿ ಚಾಲಿತ ಇ-ಸ್ಕೂಟರ್ ಹಾಗೂ ಸೈಕಲ್ ಚಾರ್ಜಿಂಗ್ ಡಾಕ್&zwnj;ಗಳು ಮತ್ತು ಆಟೋ ರಿಕ್ಷಾ ಲೇ-ಬೈಗಳನ್ನು ರೂಪಿಸಲಾಗುತ್ತಿದೆ.&lt;/p&gt;&lt;p&gt;ಅಲ್ಲದೆ, ರೇಷ್ಮೆ ಮಂಡಳಿ (Silk Board) ಯಿಂದ ಕೆ.ಆರ್. ಪುರಂವರೆಗಿನ 17 ಕಿಲೋಮೀಟರ್ ಕಾರಿಡಾರ್ ಅನ್ನು 'ಬಹುಮಾದರಿ ಸಂಚಾರ ಕಾರಿಡಾರ್' (Multimodal mobility corridor) ಆಗಿ ಪರಿವರ್ತಿಸಲಾಗುತ್ತಿದ್ದು, ಅಗಲವಾದ ಫುಟ್&zwnj;ಪಾತ್, ಸೈಕಲ್ ಟ್ರ್ಯಾಕ್, ಹೈಟೆಕ್ ಬಸ್ ತಂಗುದಾಣಗಳು, ಚರಂಡಿ ವ್ಯವಸ್ಥೆ ಹಾಗೂ ಜಂಕ್ಷನ್&zwnj;ಗಳ ಅಭಿವೃದ್ಧಿ ಕಾಮಗಾರಿ ನಡೆಯಲಿದೆ.&lt;/p&gt;&lt;h2&gt;&lt;strong&gt;ಮೆಟ್ರೋ ಸಂಚಾರ ಆರಂಭದ ಬಳಿಕ ಕಾಮಗಾರಿಗೆ ಸಾರ್ವಜನಿಕರ ಮನವಿ&lt;/strong&gt;&lt;/h2&gt;&lt;p&gt;ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಸೇವೆ ಆರಂಭವಾದ ನಂತರವೇ ವೈಟ್&zwnj;ಟಾಪಿಂಗ್ ಕೆಲಸ ಕೈಗೆತ್ತಿಕೊಳ್ಳಬೇಕು ಎಂದು ಹಲವು ನಿವಾಸಿಗಳು ಹಾಗೂ ಸವಾರರು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಿಎಂಆರ್&zwnj;ಸಿಎಲ್ ಅಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆದ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು, ಹೊರವರ್ತುಲ ರಸ್ತೆಯ ಬ್ಲೂ ಲೈನ್ (Blue Line) ಮೆಟ್ರೋ ಮಾರ್ಗದಲ್ಲಿ ಅಕ್ಟೋಬರ್ 2026ರ ವೇಳೆಗೆ ಪ್ರಾಯೋಗಿಕ ಸಂಚಾರ (Trial runs) ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದರು. ಆದರೆ, ಈ ಮಾರ್ಗದಲ್ಲಿ ಪೂರ್ಣ ಪ್ರಮಾಣದ ವಾಣಿಜ್ಯ ಮೆಟ್ರೋ ಸಂಚಾರ ಮುಂದಿನ ವರ್ಷವಷ್ಟೇ ಸಾರ್ವಜನಿಕರಿಗೆ ಲಭ್ಯವಾಗಲಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-orr-white-topping-wfh-for-techies-krishna-byre-gowda-san/articleshow-4hfytwd"/>
        </item>
        <item>
            <title><![CDATA[ಜಾಲತಾಣದಲ್ಲಿ ಸ್ಟೇಟಸ್​ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್​- ಪೊಲೀಸರ ಖಡಕ್​ ವಾರ್ನಿಂಗ್​]]></title>
            <link>https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z</link>
            <guid isPermaLink="true">https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z</guid>
            <pubDate>Thu, 13 Aug 2026 20:53:46 +0530</pubDate>
            <description><![CDATA[ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxvh5m0pgaeaycf3crftyvh,imgname-status-1786634606208.jpg" type="image/jpeg" height="390" width="690"/>
            <content:encoded><![CDATA[&lt;p&gt;ಇತ್ತೀಚಿನ ವರ್ಷಗಳಲ್ಲಿ ಮಾತುಕತೆಯ ಬದಲು ಮೆಸೇಜ್​ಗಳದ್ದೇ ಕಾರುಬಾರು. ಅದರಲ್ಲಿಯೂ ಯಾರಿಗಾದರೂ ಏನಾದರೂ ಮೆಸೇಜ್​ ಕಳುಹಿಸಬೇಕು ಎಂದರೆ, ವಾಟ್ಸ್​ಆ್ಯಪ್​ನಲ್ಲಿ ಹಾಕಿದ್ರೆ ನೋಡ್ತಾರೋಇಲ್ವೋ, ಆದರೆ ಸ್ಟೇಟಸ್​ನಲ್ಲಿ ಹಾಕಿದ ತಕ್ಷಣ ಗೊತ್ತಾಗಿಬಿಡತ್ತೆ. ಆದ್ದರಿಂದ ಸೋಷಿಯಲ್​ ಮೀಡಿಯಾಗಳಲ್ಲಿ ಸ್ಟೇಟಸ್​ ಅನ್ನೋದು ದೊಡ್ಡ ಹೆಮ್ಮಯ ವಿಷಯವಾಗಿದೆ. ಅದರಲ್ಲಿಯೂ ಪ್ರಯಾಣ ಮಾಡಿದಾಗ, ಯಾವುದೋ ಅಪರೂಪದ ಸ್ಥಳಗಳಿಗೆ ಭೇಟಿ ಕೊಟ್ಟಾಗ, ಮನೆಯಲ್ಲಿ ಏನಾದರೂ ಹೊಸತು ತೆಗೆದುಕೊಂಡಾಗ, ಸ್ಟೇಟಸ್​ ಹಾಕಿಕೊಂಡು, ಅದನ್ನು ಒಂದಷ್ಟು ಜನ ನೋಡಿದ್ರೆ ತುಂಬಾ ಖುಷಿ. ಇದು ಸಾಮಾನ್ಯ ಎಲ್ಲರೂ ಮಾಡುವಂಥದ್ದೇ.ಕೆಲವೊಮ್ಮೆ ಬೇರೆಯವರು ಹೊಟ್ಟೆ ಉರಿದುಕೊಳ್ಳಲಿ ಎಂದು ಸ್ಟೇಟಸ್​ ಹಾಕಿಕೊಂಡರೆ, ಮತ್ತೆ ಕೆಲವೊಮ್ಮೆ ತಮ್ಮ ಸಂತೋಷವನ್ನು ಈ ರೀತಿ ವ್ಯಕ್ತಪಡಿಸುವುದು ಇದೆ.&lt;/p&gt;&lt;p&gt;ಅವೆಲ್ಲವೂ ಸರಿ. ಆದರೆ, ಪ್ರವಾಸಕ್ಕೆ ಹೋಗಿದ್ದರೆ ಅಥವಾ ಹೊರಡುವುದಿದ್ದರೆ ಅದರ ಫುಲ್​ ಡಿಟೇಲ್ಸ್​ ಕೊಟ್ಟು ಸ್ಟೇಟಸ್​ ಹಾಕಿಕೊಂಡು ಬಿಡುವುದು ಮಾತ್ರ ಭಾರಿ ಡೇಂಜರ್​. ತಾನು ಎಂಜಾಯ್​ ಮಾಡುತ್ತಿರುವುದು ಬೇರೆಯವರಿಗೆ ತಿಳಿಯಲಿ ಎನ್ನುವುದು ಕೆಲವರ ಉದ್ದೇಶವಾಗಿದ್ದರೆ, ಅದನ್ನು ನೋಡಿ ಅವರಿಗೆ ಆಗದವರು ಯಾರೋ ಹೊಟ್ಟೆಕಿಚ್ಚು ಪಟ್ಟುಕೊಳ್ಳಲಿ ಎನ್ನುವ ಕಾರಣವೂ ಅದರಲ್ಲಿ ಅಡಗಿರುತ್ತದೆ. ಒಟ್ಟಿನಲ್ಲಿ ಸ್ಟೇಟಸ್​ ನೋಡಿದ್ರೆ ಆ ದಿನ ಆ ವ್ಯಕ್ತಿ ಯಾವ ಮೂಡ್​ನಲ್ಲಿ ಇದ್ದಾರೆ ಎನ್ನುವುದು ತಿಳಿಯುತ್ತದೆ. ಎಷ್ಟೋ ಬಾರಿ ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಕುವ ಸ್ಟೇಟಸ್​ಗಳೇ ಹೆಚ್ಚಾಗಿರುತ್ತವೆ.&lt;/p&gt;&lt;h2&gt;&lt;strong&gt;ಕಳ್ಳರಿಗೆ ಮನೆ ಕೀಲಿ&lt;/strong&gt;&lt;/h2&gt;&lt;p&gt;ಉದ್ದೇಶ ಏನೇ ಇರಲಿ. ಆದರೆ ಹೀಗೆ ಸೋಷಿಯಲ್​ ಮೀಡಿಯಾದಲ್ಲಿ ಎಷ್ಟೋ ಬಾರಿ ಹಾಕಿಕೊಳ್ಳುವ ಸ್ಟೇಟಸ್​ ನಿಮ್ಮ ಇರೋ ಬರೋ ಎಲ್ಲಾ ಸ್ಟೇಟಸ್​ಗಳನ್ನು ಮಣ್ಣುಪಾಲು ಮಾಡಬಹುದು. ಅರ್ಥಾತ್​, ಈ ಸ್ಟೇಟಸ್​ ಅನ್ನೋದು ಕಳ್ಳರಿಗೆ ನೀವೇ ನಿಮ್ಮ ಮನೆಯ ಬೀಗದ ಕೀಲಿ ಕೊಟ್ಟು ಕಳ್ಳತನ ಮಾಡಲು ಬಾ... ಎಂದು ಆಹ್ವಾನ ನೀಡಿದಂತೆ ಎಂದಿದ್ದಾರೆ. ಪ್ರವಾಸಗಳಿಗೆ ಹೋದ ಸಂದರ್ಭಗಳಲ್ಲಿ I am enjoying ಇಲ್ಲಿ.. ಅಲ್ಲಿ... ಎಂದೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ದೊಡ್ಡ ವರ್ಗವೇ ಇದೆ. ಎಷ್ಟೋ ಬಾರಿ ಇವರು ಪ್ರವಾಸಗಳನ್ನು ಎಂಜಾಯ್​ ಮಾಡಲು ಹೋಗಿದ್ದಾರೋ ಅಥವಾ ಫೋಟೋ ಕ್ಲಿಕ್ಕಿಸಿ ಅದನ್ನು ಅಪ್​ಲೋಡ್​ ಮಾಡಿಕೊಳ್ಳಲು ಹೋಗಿದ್ದಾರೋ ಎನ್ನುವುದು ಕನ್​ಫ್ಯೂಸ್​ ಆಗುವ ರೀತಿಯಲ್ಲಿ ಇರುತ್ತದೆ. ನೀವು ಹೀಗೆ ಹಾಕಿಕೊಳ್ಳುವ ಸ್ಟೇಟಸ್ಸು, ಅಪ್​ಲೋಡ್​ ಮಾಡುವ ಫೋಟೋಗಳು, ನೀವು ಎಲ್ಲಿದ್ದೀರಿ ಎಂದು ನೀಡುವ ಮಾಹಿತಿಗಳನ್ನು ನೋಡಿ ನಿಮ್ಮ ಸ್ನೇಹಿತರು ಲೈಕ್​ ಮಾಡಿ ಕಮೆಂಟ್​ ಮಾಡುತ್ತಾರೋ ಬಿಡುತ್ತಾರೋ, ಆದರೆ ಕಳ್ಳರಿಗೆ ಇದು ಆಹ್ವಾನ ನೀಡಿದಂತೆ ಎಂದು ಎಚ್ಚರಿಸಿದ್ದಾರೆ ಡಿವೈಎಸ್​ಪಿ ಎಲ್​.ವೈ ರಾಜೇಶ್​.&lt;/p&gt;&lt;h3&gt;&lt;strong&gt;ವಾಪಸ್​ ಬಂದ್ಮೇಲೆ ಹಾಕಿಕೊಳ್ಳಿ ಎಂದು ಸೂಚನೆ&lt;/strong&gt;&lt;/h3&gt;&lt;p&gt;ಇವರು ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ರಿವೀಲ್​ ಮಾಡಿದ್ದಾರೆ. ನಾವು ಹಾಕುವ ಸ್ಟೇಟಸ್​ನಿಂದ ಹೇಗೆ ಕಳ್ಳರನ್ನು ಆಹ್ವಾನಿಸುತ್ತೇವೆ ಎಂದು ತಿಳಿಸಿದ್ದಾರೆ. ಅದಕ್ಕೆ ಉದಾಹರಣೆ ಕೊಟ್ಟ ಡಿವೈಎಸ್​ಪಿ ರಾಜೇಶ್​ ಅವರು, ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ. ಒಬ್ಬಾತ I am Enjoying in Goa ಅಂತ ಸ್ಟೇಟಸ್​ ಹಾಕ್ಕೊಂಡಾ- ವಾಪಸ್​ ಮನೆಗೆ ಬಂದ್​ ನೋಡಿದ್ರೆ ಕಳ್ಳರು ಮನೆಯನ್ನೆಲ್ಲಾ ಕ್ಲೀನ್​ ಮಾಡಿ ಹೋಗಿದ್ರು. ಆಮೇಲೆ ಗೊತ್ತಾಗಿದ್ದು, ಈತನ ಸ್ಟೇಟಸ್​ ನೋಡಿ ಎಷ್ಟು ದಿನ ಆತ ಮನೆಗೆ ಬರುವುದಿಲ್ಲ ಎನ್ನುವುದೆಲ್ಲಾ ಕಳ್ಳರಿಗೆ ತಿಳಿದಿದೆ. ಆದ್ದರಿಂದ ಕರಾಮತ್ತು ತೋರಿಸಿದ್ದಾರೆ ಎಂದಿದ್ದಾರೆ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಿರೋದನ್ನು ಸೋಷಿಯಲ್​ ಮೀಡಿಯಾದ ಮೂಲಕ ಜಗಜ್ಜಾಹೀರ ಮಾಡಲೇಬೇಕು ಎಂದಾದರೆ ವಾಪಸ್​ ಬಂದ ಮೇಲೆ I enjoyed in Goa ಅಂತ ಹಾಕಿಕೊಳ್ಳಿ, ಆದರೆ ಹೋಗುವಾಗ ನಿಮ್ಮ ಮನೆ ಕೀಲಿಕೈಯನ್ನು ಕಳ್ಳರಿಗೆ ಕೊಟ್ಟು ಹೋಗ್ಬೇಡಿ ಎಂದಿದ್ದಾರೆ.&lt;/p&gt;]]></content:encoded>
            <category><![CDATA[crime]]></category>
            <dc:creator>Suchethana D</dc:creator>
            <atom:link href="https://kannada.asianetnews.com/crime/do-you-post-status-on-the-social-media-theif-may-steel-your-home-police-warning-suc/articleshow-g406t8z"/>
        </item>
        <item>
            <title><![CDATA[Goosebumps: ಥಟ್ಟಂತ ಮೈ ಜುಮ್ ಅನ್ನುತ್ತಾ? ಆ ಕ್ಷಣ ನಿಮ್ಮ ದೇಹದೊಳಗೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7</link>
            <guid isPermaLink="true">https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7</guid>
            <pubDate>Thu, 13 Aug 2026 20:41:23 +0530</pubDate>
            <description><![CDATA[ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್‌ನಲ್ಲಿ "Goosebumps" ಅಂತ ಕರೆಯುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxthf9hb00s292psrz8c1h2,imgname-hhvv-1786633567537.png" type="image/jpeg" height="390" width="690"/>
            <content:encoded><![CDATA[&lt;p&gt;ಚಳಿ, ಭಯ ಅಥವಾ ಇಷ್ಟದ ಹಾಡು ಕೇಳುವಾಗ ಇದ್ದಕ್ಕಿದ್ದಂತೆ ಮೈ ಜುಮ್ ಅನ್ನೋ ಅನುಭವ ನಮಗಾಗಿರುತ್ತೆ. ಆದ್ರೆ ಆ ಕೆಲವೇ ಸೆಕೆಂಡುಗಳಲ್ಲಿ ನಮ್ಮ ಮೆದುಳಿನಿಂದ ಹಿಡಿದು ಚರ್ಮದೊಳಗಿನ ಸಣ್ಣ ಸಣ್ಣ ಸ್ನಾಯುಗಳವರೆಗೆ ಏನೆಲ್ಲಾ ನಡೆಯುತ್ತೆ ಗೊತ್ತಾ? ಇದರ ಹಿಂದಿನ ಕಥೆ ತುಂಬಾ ಸ್ವಾರಸ್ಯಕರವಾಗಿದೆ! ಕೆಲವೊಮ್ಮೆ ಭಯ, ಚಳಿ, ಆಶ್ಚರ್ಯ ಅಥವಾ ತುಂಬಾ ಇಷ್ಟವಾದ ಹಾಡು ಕೇಳುವಾಗಲೂ ದೇಹದಲ್ಲಿ ಥಟ್ಟಂತ ಮೈ ಜುಮ್ ಅನ್ನುತ್ತದೆ. ಕೈ ಮೇಲಿನ ಕೂದಲು ನಿಮಿರಿ ನಿಲ್ಲುವ ಈ ಅನುಭವವನ್ನೇ ಇಂಗ್ಲಿಷ್&zwnj;ನಲ್ಲಿ &quot;Goosebumps&quot; ಅಂತ ಕರೆಯುತ್ತಾರೆ.&lt;/p&gt;&lt;p&gt;ಆದರೆ, ಇದು ಕೇವಲ ಒಂದು ಅನುಭವವಲ್ಲ. ಆ ಕೆಲವೇ ಸೆಕೆಂಡುಗಳಲ್ಲಿ ನಮ್ಮ ದೇಹದೊಳಗೆ ಒಂದು ಇಂಟರೆಸ್ಟಿಂಗ್ ಬಯಾಲಾಜಿಕಲ್ ಪ್ರಕ್ರಿಯೆಯೇ ನಡೆಯುತ್ತದೆ! ಚಳಿಯಾದಾಗ ಯಾಕೆ ಮೈ ಜುಮ್ ಅನ್ನುತ್ತೆ? ನಮ್ಮ ಚರ್ಮದಲ್ಲಿರುವ ಪ್ರತಿಯೊಂದು ಕೂದಲಿನ ಬುಡದಲ್ಲಿಯೂ ಒಂದು ಸಣ್ಣ ಸ್ನಾಯು ಇರುತ್ತದೆ. ಇದನ್ನು Arrector pili muscle ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಳಿಯ ಅನುಭವವಾದಾಗ, ಮೆದುಳಿಗೆ ಮಾಹಿತಿ ಹೋಗುತ್ತದೆ. ಇದಕ್ಕೆ ಪ್ರತಿಯಾಗಿ, Sympathetic nervous system ಆ ಸಣ್ಣ ಸ್ನಾಯುಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಏನಾಗುತ್ತೆ ಅಂದ್ರೆ: ಕೂದಲುಗಳು ನೇರವಾಗಿ ನಿಲ್ಲುತ್ತವೆ, ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಏಳುತ್ತವೆ, ನಮಗೆ &quot;ಮೈ ಜುಮ್&quot; ಆದ ಹಾಗೆ ಭಾಸವಾಗುತ್ತದೆ.&lt;/p&gt;&lt;p&gt;ಇಲ್ಲೇ ನೋಡಿ ವಿಷಯ ಇನ್ನೂ ಸ್ವಾರಸ್ಯಕರವಾಗೋದು. ಥಟ್ಟಂತ ಭಯವಾದಾಗ, ದೇಹ ಅದನ್ನು ಒಂದು ಅಪಾಯ ಎಂದು ಪರಿಗಣಿಸುತ್ತದೆ. ತಕ್ಷಣ ಮೆದುಳಿನ ನಿಯಂತ್ರಣದಲ್ಲಿ ದೇಹವು &quot;Fight or Flight&quot; ಎನ್ನುವ ತುರ್ತು ಪರಿಸ್ಥಿತಿಯ ಪ್ರತಿಕ್ರಿಯೆಗೆ ಹೋಗುತ್ತದೆ. ಆಗ Adrenaline ನಂತಹ ಹಾರ್ಮೋನುಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದರ ಒಂದು ಭಾಗವಾಗಿ ಚರ್ಮದಲ್ಲಿರುವ ಆ ಸಣ್ಣ ಸ್ನಾಯುಗಳು ಸಂಕುಚಿತಗೊಂಡು, ಕೂದಲುಗಳು ನಿಮಿರುತ್ತವೆ. ಅದಕ್ಕಾಗಿಯೇ, ಇದ್ದಕ್ಕಿದ್ದಂತೆ ಭಯಾನಕ ಘಟನೆ ನಡೆದಾಗ &quot;ಮೈಯೆಲ್ಲಾ ಜುಮ್ ಅನ್ನುಬಿಡ್ತು!&quot; ಅಂತ ನಾವು ಹೇಳೋದು.&lt;/p&gt;&lt;p&gt;ಹಾಡು ಕೇಳಿದಾಗಲೂ Goosebumps ಬರುತ್ತಾ? ಹೌದು! ಕೆಲವರಿಗೆ ತುಂಬಾ ಇಷ್ಟವಾದ ಹಾಡು, ಸಂಗೀತ, ಸಿನಿಮಾದ ದೃಶ್ಯ ಅಥವಾ ಭಾವನಾತ್ಮಕ ಕ್ಷಣಗಳನ್ನು ನೋಡುವಾಗಲೂ ಮೈ ಜುಮ್ ಅನ್ನಿಸಬಹುದು. ಆ ಸಮಯದಲ್ಲಿ ನಮ್ಮ ಮೆದುಳಿನಲ್ಲಿ ಭಾವನೆ ಮತ್ತು ಸಂತೋಷಕ್ಕೆ (reward) ಸಂಬಂಧಿಸಿದ ಭಾಗಗಳು ಹೆಚ್ಚು ಸಕ್ರಿಯವಾಗುತ್ತವೆ. ಇದರಿಂದ ಕೆಲವರಿಗೆ &quot;music chills&quot; ಎನ್ನುವ ನವಿರೇಳುವ ಅನುಭವ ಆಗುತ್ತದೆ. ಅಂದರೆ, ಮೈ ಜುಮ್ ಎನ್ನುವುದು ಕೇವಲ ಭಯದಿಂದ ಬರುವುದಿಲ್ಲ, ತೀವ್ರವಾದ ಭಾವನೆಗಳಿಂದಲೂ ಬರಬಹುದು.&lt;/p&gt;&lt;h2&gt;&lt;strong&gt;&quot;Goosebumps&quot; ಅಂತ ಯಾಕೆ ಹೆಸರು ಬಂತು?&lt;/strong&gt;&lt;/h2&gt;&lt;p&gt;ಈ ಹೆಸರಿನ ಹಿಂದೆ ಒಂದು ಸ್ವಾರಸ್ಯಕರ ಕಾರಣವಿದೆ. ಕೂದಲು ನಿಂತು ಚರ್ಮದ ಮೇಲೆ ಸಣ್ಣ ಗುಳ್ಳೆಗಳು ಎದ್ದಾಗ, ಅದು ಹೆಬ್ಬಾತು (goose) ಚರ್ಮದಂತೆ ಕಾಣುವುದರಿಂದ ಇಂಗ್ಲಿಷ್&zwnj;ನಲ್ಲಿ &quot;Goosebumps&quot; ಎಂಬ ಹೆಸರು ಜನಪ್ರಿಯವಾಯಿತು. ಕನ್ನಡದಲ್ಲಿ ನಾವು ಇದನ್ನು ಸಾಮಾನ್ಯವಾಗಿ ಮೈ ಜುಮ್ ಎನ್ನುವುದು, ನವಿರೇಳುವುದು, ಮೈ ರೋಮಾಂಚನಗೊಳ್ಳುವುದು ಅಂತ ಕರೆಯುತ್ತೇವೆ. ಇದು ನಮಗೆ ಈಗಲೂ ಯಾಕೆ ಆಗುತ್ತದೆ? ಇದರ ಹಿಂದೆ ವಿಕಾಸವಾದವೂ ಇದೆ. ಮನುಷ್ಯರ ದೇಹದಲ್ಲಿ ಈಗ ಕಡಿಮೆ ಇರುವ ಕೂದಲು, ನಮ್ಮ ಪೂರ್ವಜರಲ್ಲಿ ದಟ್ಟವಾಗಿತ್ತು. ಕೂದಲು ನಿಮಿರುವುದು ದೇಹವನ್ನು ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡುವುದರ ಜೊತೆಗೆ, ಚಳಿಗಾಲದಲ್ಲಿ ದೇಹದ ಶಾಖವನ್ನು ಉಳಿಸಿಕೊಳ್ಳಲು ಸ್ವಲ್ಪ ಮಟ್ಟಿಗೆ ಸಹಾಯ ಮಾಡಿರಬಹುದು.&lt;/p&gt;&lt;p&gt;ಆದರೆ ಮನುಷ್ಯರಲ್ಲಿ ದೇಹದ ಕೂದಲು ಕಡಿಮೆಯಾದ ಕಾರಣ, ಈ ಪ್ರಕ್ರಿಯೆಯು ಇಂದು ಹೆಚ್ಚಾಗಿ ಒಂದು ವಿಕಾಸದ ಕುರುಹಾಗಿ (evolutionary remnant) ನೋಡಲ್ಪಡುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ... ಚಳಿ / ಭಯ / ತೀವ್ರ ಭಾವನೆ-ನರಮಂಡಲದ ಪ್ರಚೋದನೆ-ಚರ್ಮದ ಸಣ್ಣ ಸ್ನಾಯುಗಳ ಸಂಕೋಚನ -ಕೂದಲು ನಿಮಿರುವುದು-ಚರ್ಮದ ಮೇಲೆ ಸಣ್ಣ ಗುಳ್ಳೆಗಳು-Goosebumps! ಹಾಗಾಗಿ, ಮುಂದಿನ ಬಾರಿ ಒಂದು ಹಾಡು ಕೇಳಿದಾಗ ಅಥವಾ ಥಟ್ಟಂತ ಭಯವಾದಾಗ ಮೈ ಜುಮ್ ಅಂದರೆ, &quot;ಏನಾಯ್ತು?&quot; ಅಂತ ಆಶ್ಚರ್ಯಪಡಬೇಡಿ. ನಿಮ್ಮ ಮೆದುಳು ಮತ್ತು ನರಮಂಡಲ ಆ ಕ್ಷಣದಲ್ಲಿ ವೇಗವಾಗಿ ಕೆಲಸ ಮಾಡುತ್ತಿವೆ ಅಂತ ಅರ್ಥ!&lt;/p&gt;]]></content:encoded>
            <category><![CDATA[health-life]]></category>
            <dc:creator>Govindaraj S</dc:creator>
            <atom:link href="https://kannada.asianetnews.com/health-life/why-do-we-get-goosebumps-the-fascinating-science-behind-it-gvd/articleshow-tvu4gc7"/>
        </item>
        <item>
            <title><![CDATA[ಬಾಕ್ಸಿಂಗ್‌ ರಿಂಗ್‌ಗೆ ಆಹ್ವಾನಿಸಿದ್ದ ಶ್ರೀಶಾಂತ್‌ಗೆ ಸೈಲೆಂಟ್‌ ಉತ್ತರ ನೀಡಿದ ಹರ್ಭಜನ್‌ ಸಿಂಗ್‌!]]></title>
            <link>https://kannada.asianetnews.com/cricket-sports/harbhajan-singh-sreesanth-slapgate-roommate-boxing-challenge-san/articleshow-akoevzv</link>
            <guid isPermaLink="true">https://kannada.asianetnews.com/cricket-sports/harbhajan-singh-sreesanth-slapgate-roommate-boxing-challenge-san/articleshow-akoevzv</guid>
            <pubDate>Thu, 13 Aug 2026 20:38:31 +0530</pubDate>
            <description><![CDATA[2008ರ ಐಪಿಎಲ್ 'ಸ್ಲ್ಯಾಪ್‌ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvgh6550rzk4qayzzdk2zpnt,imgname-harbhajan-singh-and-s-sreesanth-1781892584608.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.13): &lt;/strong&gt;ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 'ಸ್ಲ್ಯಾಪ್&zwnj;ಗೇಟ್' (Slapgate) ವಿವಾದದ ಮೂಲಕವೇ ದೊಡ್ಡ ಮಟ್ಟದ ಸುದ್ದಿಯಾಗಿದ್ದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ನಡುವಿನ ಜಗಳಕ್ಕೆ ಈಗ ಮತ್ತೊಂದು ಕುತೂಹಲಕಾರಿ ತಿರುವು ಸಿಕ್ಕಿದೆ. ಶ್ರೀಶಾಂತ್ ಅವರನ್ನು ತಮ್ಮ ರೂಮ್&zwnj;ಮೇಟ್ (Roommate) ಆಗಿ ನೀಡಿದರೆ ತಮಗೆ ಯಾವುದೇ ಅಭ್ಯಂತರವಿಲ್ಲ ಹಾಗೂ ಇದರಿಂದ ತಮ್ಮಿಬ್ಬರ ನಡುವಿನ ಹಲವು ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.&lt;/p&gt;&lt;p&gt;2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರೂ, ಹರ್ಭಜನ್ ಮತ್ತು ಶ್ರೀಶಾಂತ್ ನಡುವಿನ ಸಂಬಂಧ ಉತ್ತಮವಾಗೇನೂ ಇರಲಿಲ್ಲ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ತಿಳಿದಿರುವ ವಿಚಾರ. 2008ರ ಚೊಚ್ಚಲ ಆವೃತ್ತಿಯ ಐಪಿಎಲ್ ವೇಳೆ ಪಂದ್ಯ ಮುಗಿದ ನಂತರ ಹರ್ಭಜನ್ ಸಿಂಗ್ ಅವರು ಶ್ರೀಶಾಂತ್&zwnj;ಗೆ ಕೆನ್ನೆಗೆ ಹೊಡೆದದ್ದು ಕ್ರಿಕೆಟ್ ಲೋಕದ ಅತ್ಯಂತ ವಿವಾದಾತ್ಮಕ ಘಟನೆಗಳಲ್ಲಿ ಒಂದಾಗಿ ಉಳಿದುಕೊಂಡಿದೆ.&lt;/p&gt;&lt;h2&gt;&lt;strong&gt;ನಾವು ಒಂದೇ ರೂಮ್&zwnj;ನಲ್ಲಿದ್ದರೆ ಎಲ್ಲ ಸರಿ ಹೋಗಲಿದೆ&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಪಿಟಿಐ (PTI) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಹಳೆಯ ಘಟನೆಯನ್ನು ನೆನಪಿಸಿಕೊಂಡಿರುವ ಹರ್ಭಜನ್ ಸಿಂಗ್, ತಮ್ಮ ನಡುವಿನ ಬಾಂಧವ್ಯ ಸುಧಾರಿಸುವ ಕುರಿತು ಮಾತನಾಡಿದ್ದಾರೆ. &quot;ನಮ್ಮಿಬ್ಬರನ್ನೂ ಒಂದೇ ಕೊಠಡಿಯಲ್ಲಿ ಇರಿಸಿದರೆ, ನಮ್ಮ ನಡುವಿನ ಹಲವು ವಿಷಯಗಳು ಬಗೆಹರಿಯಲಿವೆ. ನಾನು ಅದನ್ನು ಆ ದೃಷ್ಟಿಕೋನದಿಂದ ನೋಡುತ್ತೇನೆ. ನೀವು ಅವರನ್ನು (ಶ್ರೀಶಾಂತ್) ನನ್ನ ರೂಮ್&zwnj;ಮೇಟ್ ಆಗಿ ಆಯ್ಕೆ ಮಾಡಬಹುದು, ನನಗೇನೂ ಅಭ್ಯಂತರವಿಲ್ಲ,&quot; ಎಂದು 'ಭಜ್ಜಿ' ಮುಕ್ತವಾಗಿ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಬಾಕ್ಸಿಂಗ್ ರಿಂಗ್&zwnj;ಗೆ ಆಹ್ವಾನಿಸಿದ್ದ ಶ್ರೀಶಾಂತ್!&lt;/strong&gt;&lt;/h2&gt;&lt;p&gt;ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ 'ಲಲ್ಲನ್&zwnj;ಟಾಪ್' (Lallantop) ಯೂಟ್ಯೂಬ್ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್&zwnj;ಗೆ ನೇರವಾಗಿ ಬಾಕ್ಸಿಂಗ್ ಪಂದ್ಯಕ್ಕೆ ಬರುವಂತೆ ಸವಾಲು ಹಾಕುವ ಮೂಲಕ ಈ ವಿವಾದಕ್ಕೆ ಹೊಸ ತಿರುವು ನೀಡಿದ್ದರು.&lt;/p&gt;&lt;p&gt;ಆ ಸಂದರ್ಶನದಲ್ಲಿ ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ಬಾಕ್ಸಿಂಗ್ ಗ್ಲೌಸ್ ಧರಿಸಿದ್ದ ಹಳೆಯ ಫೋಟೋ ಒಂದನ್ನು ತೋರಿಸಿದಾಗ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಶ್ರೀಶಾಂತ್, &quot;ಅದೇ ದೃಶ್ಯವನ್ನು ಮತ್ತೆ ಮರುಸೃಷ್ಟಿಸಲು ನಿನ್ನ ಬಳಿ ಧೈರ್ಯವಿದೆಯೇ? ನನ್ನ ಜೊತೆ ಬಾಕ್ಸಿಂಗ್ ರಿಂಗ್&zwnj;ಗೆ ಬರಲು ನಿನಗೆ ಧೈರ್ಯವಿದೆಯೇ? ಸಹಿ ಮಾಡಿ ರಿಂಗ್&zwnj;ಗೆ ಬರಲು ಸಾಧ್ಯವೇ? ಎಂದು ನಾನು ಅವರನ್ನು ಕೇಳುತ್ತಿದ್ದೇನೆ. ಈ ಗ್ಲೌಸ್&zwnj;ಗಳನ್ನು ಧರಿಸಿ ನನ್ನೊಂದಿಗೆ ರಿಂಗ್&zwnj;ಗೆ ಬರಲು ಧೈರ್ಯವಿದೆಯೇ? ಇದೇನೂ ಆಕ್ಟಿಂಗ್ ಅಲ್ಲ, ನಾನು ನಗುತ್ತಿದ್ದೇನೆ. ನೀನು ನಗುತ್ತಲೂ ಇಲ್ಲ, ನೀನೇನು ಮಾಡುತ್ತಿದ್ದೀಯೋ ನನಗಂತೂ ಗೊತ್ತಿಲ್ಲ. ನೋಡೇ ಬಿಡೋಣ, ಇದು ನನ್ನ ಓಪನ್ ಚಾಲೆಂಜ್,&quot; ಎಂದು ಕ್ಯಾಮೆರಾ ನೋಡಿ ಸವಾಲು ಎಸೆದಿದ್ದರು.&lt;/p&gt;&lt;p&gt;ಐಪಿಎಲ್ ಸ್ಲ್ಯಾಪ್&zwnj;ಗೇಟ್ ಘಟನೆಯ ಆಧಾರದ ಮೇಲೆ ಹರ್ಭಜನ್ ಸಿಂಗ್ ಜಾಹೀರಾತೊಂದರಲ್ಲಿ ಅಭಿನಯಿಸಿದ ನಂತರ ಇಬ್ಬರ ನಡುವೆ ಮತ್ತೆ ಮುನಿಸು ಮೂಡಿತ್ತು. ಇದೀಗ ಹರ್ಭಜನ್ ಸಿಂಗ್ ನೀಡಿರುವ ಈ ಶಾಂತಿ ಮಂತ್ರದ ಹೇಳಿಕೆಗೆ ಶ್ರೀಶಾಂತ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Santosh Naik</dc:creator>
            <atom:link href="https://kannada.asianetnews.com/cricket-sports/harbhajan-singh-sreesanth-slapgate-roommate-boxing-challenge-san/articleshow-akoevzv"/>
        </item>
        <item>
            <title><![CDATA['ಹೇಳಿದ್ರೆ ನೀವ್​ ನಂಬಲ್ಲ' ಎನ್ನುತ್ತಲೇ ಗಂಡನ ಆ ಗುಟ್ಟನ್ನೂ ರಿವೀಲ್​ ಮಾಡಿದ ನಟಿ ವೈಷ್ಣವಿ ಗೌಡ]]></title>
            <link>https://kannada.asianetnews.com/gallery/relationship/vaishnavi-gowda-says-his-husband-is-very-supportive-for-her-reels-and-videos-suc-dh41rza</link>
            <guid isPermaLink="true">https://kannada.asianetnews.com/gallery/relationship/vaishnavi-gowda-says-his-husband-is-very-supportive-for-her-reels-and-videos-suc-dh41rza</guid>
            <pubDate>Thu, 13 Aug 2026 20:26:16 +0530</pubDate>
            <description><![CDATA['ಸೀತಾರಾಮ' ಖ್ಯಾತಿಯ ನಟಿ ವೈಷ್ಣವಿ ಗೌಡ, ಸೇನಾಧಿಕಾರಿ ಅನುಕೂಲ್‌ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ಪತಿಯೊಂದಿಗೆ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಟ್ರೋಲ್‌ಗಳಿಗೆ ಉತ್ತರಿಸಿರುವ ಅವರು, ತಮ್ಮ ರೀಲ್ಸ್‌ಗಳಿಗೆ ಪತಿ ಮತ್ತು ಅತ್ತೆಯೇ ಸ್ಫೂರ್ತಿ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k7eqbwpr5kmfswk1ss47qf77,imgname-vaishnavi-gowda-jpg-1760357118677.jpg" type="image/jpeg" height="390" width="690"/>
            <content:encoded><![CDATA[&lt;p&gt;'ಸೀತಾರಾಮ' ಖ್ಯಾತಿಯ ನಟಿ ವೈಷ್ಣವಿ ಗೌಡ, ಸೇನಾಧಿಕಾರಿ ಅನುಕೂಲ್&zwnj; ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ಪತಿಯೊಂದಿಗೆ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಟ್ರೋಲ್&zwnj;ಗಳಿಗೆ ಉತ್ತರಿಸಿರುವ ಅವರು, ತಮ್ಮ ರೀಲ್ಸ್&zwnj;ಗಳಿಗೆ ಪತಿ ಮತ್ತು ಅತ್ತೆಯೇ ಸ್ಫೂರ್ತಿ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾರಾಮದ ಸೀತೆಯಾಗಿ ಮಿಂಚಿರೋ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್&zwnj; ಮಿಶ್ರಾ ಜೊತೆ ಮದುವೆಯಾಗಿ ಜಾಲಿ ಮೂಡ್​ನಲ್ಲಿದ್ದಾರೆ. ಕಳೆದ ಜೂನ್​ ತಿಂಗಳಿನಲ್ಲಿ ಇವರ ಮದುವೆ ನಡೆದಿದೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್&zwnj; ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್&zwnj; ಆಗಿತ್ತು. ಆದ್ರೆ ಸೀಕ್ರೇಟ್​ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್​ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.&lt;/p&gt;&lt;img&gt;&lt;p&gt;ಅನುಕೂಲ್&zwnj; ಮಿಶ್ರಾ ಅವರು ಇಂಡಿಯನ್&zwnj; ಆರ್ಮಿಯಲ್ಲಿ ಲೆಫ್ಟಿನೆಂಟ್&zwnj; ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್&zwnj; ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್&zwnj; ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಇದರ ನಡುವೆಯೇ ಸೋಷಿಯಲ್​ ಮೀಡಿಯಾದಲ್ಲಿಯೂ ವೈಷ್ಣವಿ ಸಕತ್​ ಫೇಮಸ್​ ಆಗಿದ್ದಾರೆ. ಮೊದಲು ಒಂಟಿಯಾಗಿ ರೀಲ್ಸ್​ ಮಾಡುತ್ತಿದ್ದ ನಟಿ, ಈಗ ಗಂಡನ ಜೊತೆ ಸಕತ್​ ಸ್ಟೆಪ್​ ಹಾಕುತ್ತಾರೆ. ಕುಣಿಯೋದು ಬಿಟ್ಟು ಮಗು ಮಾಡ್ಕೋಮ್ಮಾ ಎಂದು ಕೆಲವರು ಹೇಳಿದ್ರೆ, ಅಯ್ಯೋ ಪಾಪ ಹಿಂದಿವಾಲಾನ್ನ ನೆನೆಸಿಕೊಂಡ್ರೆ ಬೇಜಾರು ಆಗ್ತಿದೆ ಎಂದು ಕೆಲವರು ತಮಾಷೆ ಮಾಡುವುದು ಇದೆ. ಮತ್ತೆ ಕೆಲವರು ಏರ್​ಫೋರ್ಸ್​ ಕೆಲ್ಸ ಬಿಟ್ಟುಬಿಟ್ಟರಾ ಪತಿ ಎಂದು ಪ್ರಶ್ನಿಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಇದಕ್ಕೆಲ್ಲ, ವೈಷ್ಣವಿ ಗೌಡ (Vaishnavi Gowda) ರಿಪ್ಲೈ ಮಾಡಿದ್ದಾರೆ. ನೀವು ಹೇಳಿದ್ರೆ ನಂಬಲ್ಲ, ನನ್ನ ಗಂಡನೇ ನನಗೆ ರೀಲ್ಸ್​, ಡಾನ್ಸ್​ ಮಾಡಲು ಸಪೋರ್ಟ್​ ಮಾಡೋದು. ನಾನು ಹೀಗೆಯೇ ರೀಲ್ಸ್​ ಮಾಡು ಅಂತನನ್ನ ಗಂಡ ಮತ್ತು ಅತ್ತೆ ಸಪೋರ್ಟ್​ ಮಾಡ್ತಾರೆ. ಪತಿಯೇ ಇದರ ವಿಡಿಯೋ ಕೂಡ ಮಾಡ್ತಾರೆ. ಹೀಗೆ ಹೇಳಿದ್ರೆ ಹಲವರು ನಂಬಲಿಕ್ಕಿಲ್ಲ. ಆದರೆ ಇಬ್ಬರೂ ತುಂಬಾ ಸಪೋರ್ಟಿವ್​ ಆಗಿದ್ದಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಂದಹಾಗೆ, ವೈಷ್ಣವಿ ಮತ್ತು ಅವರ ಪತಿ ಜೋಡಿಯ ವಿಡಿಯೋ ಒಂದು ಈಚೆಗೆ ಸಕತ್​ ವೈರಲ್​ ಆಗಿತ್ತು. ಅದರಲ್ಲಿ ಅನುಕೂಲ್&zwnj; ಅವರು, ತಮ್ಮ ಪತ್ನಿ, ನಟಿ ವೈಷ್ಣವಿ ಗೌಡ ಅವರಿಗೆ ಎಲ್ಲರ ಎದುರೇ ಕೆನ್ನೆಗೆ ಹೊಡೆದಿದ್ದರು. ಅಷ್ಟಕ್ಕೂ ಆಗಿದ್ದೇನೆಂದರೆ, ಇದು ರಿಯಲ್​ ಆಗಿ ಕೆನ್ನೆಗೆ ಹೊಡೆದದ್ದಲ್ಲ, ಬದಲಿಗೆ ಇಬ್ಬರೂ ಸೇರಿ ಫನ್ನಿ ರೀಲ್ಸ್​ ಮಾಡಿದ್ದರು.&lt;/p&gt;&lt;img&gt;&lt;p&gt;ಇದರಲ್ಲಿ ಅನುಕೂಲ್&zwnj; ಅವರು ಏನೋ ಕೆಲಸ ಮಾಡುತ್ತಿರುವಾಗಿ ವೈಷ್ಣವಿ ಅಲ್ಲಿ ಬಂದು ಶೇಕ್​ಹ್ಯಾಂಡ್​ ಕೊಟ್ಟಿದ್ದಾರೆ. ಕೊನೆಗೆ ಇಬ್ಬರೂ ತಬ್ಬಿಕೊಂಡಿದ್ದಾರೆ. ಆದರೆ ತಮ್ಮ ಕೆಲಸ ಕೆಡಿಸಿರುವ ಕಾರಣಕ್ಕೆ ವೈಷ್ಣವಿ ಅವರಿಗೆ ಅನುಕೂಲ್&zwnj; ಹೊಡೆದಿದ್ದರು. ಹೀಗೆ ಜೋಡಿ ಫನ್ನಿ ರೀಲ್ಸ್​ ಕೂಡ ಹಂಚಿಕೊಳ್ಳತ್ತೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/vaishnavi-gowda-says-his-husband-is-very-supportive-for-her-reels-and-videos-suc-dh41rza"/>
        </item>
        <item>
            <title><![CDATA[Police: ಲಂಚದ ಹಣ ಕೈಸೇರುತ್ತಿದ್ದಂತೆ ರೇಡ್; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮಂಜುನಾಥ್!]]></title>
            <link>https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1</link>
            <guid isPermaLink="true">https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1</guid>
            <pubDate>Thu, 13 Aug 2026 20:22:41 +0530</pubDate>
            <description><![CDATA[ಹಾಸನ ಜಿಲ್ಲೆಯ ಹಳೇಬೀಡು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದೂರುದಾರರ ದೂರಿನ ಮೇರೆಗೆ ಪಕ್ಕಾ ಪ್ಲಾನ್ ಮಾಡಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದ ಸಮೇತ ಅಧಿಕಾರಿಯನ್ನು ರೆಡ್-ಹ್ಯಾಂಡಾಗಿ ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxsprebtqsx4fyrx2ergs9x,imgname-police-1-1786632692170.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಾಸನ; ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಟ್ಟುನಿಟ್ಟಿನ ಸಮರವನ್ನು ಮುಂದುವರಿಸಿದ್ದು, ಹಾಸನ ಜಿಲ್ಲೆಯಲ್ಲಿ ಮತ್ತೊಂದು ದೊಡ್ಡ 'ಲೋಕಾ' ಕಾರ್ಯಾಚರಣೆ ನಡೆದಿದೆ. ದೂರುದಾರರಿಂದ ಹಸನ್ಮುಖಿಯಾಗಿ ಬರೋಬ್ಬರಿ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಳೇಬೀಡು ಪೊಲೀಸ್ ಠಾಣೆಯ ಸಬ್&zwnj;ಇನ್&zwnj;ಸ್ಪೆಕ್ಟರ್ (PSI) ಮಂಜುನಾಥ್ ಅವರು ಲೋಕಾಯುಕ್ತ ಪೊಲೀಸರ ರೆಡ್-ಹ್ಯಾಂಡ್ ಬಲೆಗೆ ಬಿದ್ದಿದ್ದಾರೆ. ಖಾಕಿ ಉಡುಪಿನಲ್ಲಿದ್ದುಕೊಂಡೇ ಲಂಚದಾಸೆಗೆ ಬಿದ್ದು ಕಾನೂನು ಬಾಹಿರವಾಗಿ ಹಣ ಪಡೆಯುತ್ತಿದ್ದ ಅಧಿಕಾರಿಯೊಬ್ಬರು ಈಗ ಕಂಬಿ ಎಣಿಸುವಂತಾಗಿದೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ; ಏನಿದು ಘಟನೆ?&lt;/strong&gt;&lt;/h2&gt;&lt;p&gt;ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಐತಿಹಾಸಿಕ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅವರು ಸಬ್&zwnj;ಇನ್&zwnj;ಸ್ಪೆಕ್ಟರ್ (PSI) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟ್ಟದಹಳ್ಳಿ ಗ್ರಾಮದ ನಿವಾಸಿ ಸಂತೋಷ್ ಎಂಬುವವರಿಗೆ ಸಂಬಂಧಿಸಿದ ವಿಷಯವೊಂದರಲ್ಲಿ ಅಥವಾ ಪ್ರಕರಣವೊಂದರ ಸಹಾಯಕ್ಕಾಗಿ ಪಿಎಸ್&zwnj;ಐ ಮಂಜುನಾಥ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ. ಕೆಲಸ ಮಾಡಿಕೊಡಲು ಪಿಎಸ್&zwnj;ಐ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಬೇಸತ್ತ ಘಟ್ಟದಹಳ್ಳಿಯ ಸಂತೋಷ್, ಭ್ರಷ್ಟ ಅಧಿಕಾರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದರು. ಈ ಸಂಬಂಧ ಅವರು ತಡಮಾಡದೇ ಹಾಸನ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿ ಅಧಿಕೃತವಾಗಿ ದೂರು ನೀಡಿದ್ದರು.&lt;/p&gt;&lt;h3&gt;&lt;strong&gt;ಲೋಕಾಯುಕ್ತ ಮಾಸ್ಟರ್ ಪ್ಲಾನ್: ರೆಡ್-ಹ್ಯಾಂಡ್ ರೇಡ್!&lt;/strong&gt;&lt;/h3&gt;&lt;p&gt;ದೂರುದಾರ ಸಂತೋಷ್ ಅವರಿಂದ ಸತ್ಯಾಸತ್ಯತೆ ಅರಿತ ಲೋಕಾಯುಕ್ತ ಪೊಲೀಸರು, ಪಿಎಸ್&zwnj;ಐ ಮಂಜುನಾಥ್ ಅವರನ್ನು ಹಿಡಿಯಲು ಪಕ್ಕಾ ಸ್ಕೆಚ್ ಹಾಕಿದರು. ಪ್ಲಾನ್ ಪ್ರಕಾರ, ಸಂತೋಷ್ ಅವರು 20,000 ರೂಪಾಯಿ ಲಂಚದ ಹಣವನ್ನು ನೀಡಲು ಹಳೇಬೀಡು ಠಾಣೆಯ ವ್ಯಾಪ್ತಿಯಲ್ಲಿ ಪಿಎಸ್&zwnj;ಐ ಅವರನ್ನು ಭೇಟಿಯಾಗಿದ್ದರು. ಮಂಜುನಾಥ್ ಅವರು ಸಂತೋಷ್ ಅವರಿಂದ 20 ಸಾವಿರ ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಂತೆಯೇ, ಸುತ್ತಲೂ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ಕ್ಷಣಾರ್ಧದಲ್ಲಿ ದಾಳಿ (Trap) ನಡೆಸಿದರು. ಪಿಎಸ್&zwnj;ಐ ಮಂಜುನಾಥ್ ಚೇತರಿಸಿಕೊಳ್ಳುವಷ್ಟರಲ್ಲಿ, ಲಂಚದ ಹಣದೊಂದಿಗೆ ಅವರನ್ನು ರೆಡ್-ಹ್ಯಾಂಡಾಗಿ ವಶಕ್ಕೆ ಪಡೆದರು.&lt;/p&gt;&lt;h3&gt;&lt;strong&gt;ಲಂಚದ ಹಣ ಜಪ್ತಿ, ಪಿಎಸ್&zwnj;ಐ ಬಂಧನ!&lt;/strong&gt;&lt;/h3&gt;&lt;p&gt;ದಾಳಿಯ ವೇಳೆ ಪಿಎಸ್&zwnj;ಐ ಮಂಜುನಾಥ್ ಅವರಿಂದ ಲಂಚವಾಗಿ ಪಡೆದ 20,000 ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ತಕ್ಷಣವೇ ಮಂಜುನಾಥ್ ಅವರನ್ನು ವಶಕ್ಕೆ ಪಡೆದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿ ಹಾಗೂ ಠಾಣೆಯ ದಾಖಲೆಗಳ ಮಹಜರು ಪ್ರಕ್ರಿಯೆ ನಡೆಸಿದರು. ಬಂಧಿತ ಪಿಎಸ್&zwnj;ಐ ಮಂಜುನಾಥ್ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/haleebeedu-psi-manjunath-caught-by-lokayukta-while-accepting-bribe-bmk/articleshow-ze42wu1"/>
        </item>
        <item>
            <title><![CDATA[ವಿಮಾನದ ಕಿಟಕಿಗಳು ದುಂಡಾಗಿರುವುದೇಕೆ? ಇದರ ಹಿಂದಿದೆ ದೊಡ್ಡ ಸುರಕ್ಷತಾ ರಹಸ್ಯ!]]></title>
            <link>https://kannada.asianetnews.com/life/why-do-airplane-windows-have-rounded-edges-the-safety-secret-explained-gvd/articleshow-gdgu00a</link>
            <guid isPermaLink="true">https://kannada.asianetnews.com/life/why-do-airplane-windows-have-rounded-edges-the-safety-secret-explained-gvd/articleshow-gdgu00a</guid>
            <pubDate>Thu, 13 Aug 2026 20:19:22 +0530</pubDate>
            <description><![CDATA[ವಿಮಾನದಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡಲು ಕಿಟಕಿಯತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಆದರೆ ವಿಮಾನದ ಕಿಟಕಿಗಳು ಚೌಕಾಕಾರದಲ್ಲಿರದೆ ದುಂಡಾದ ಅಂಚುಗಳನ್ನು ಹೊಂದಿರುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kzxsj4q5ztw1vtzgzx2dfmzq,imgname-nl-1786632540901.png" type="image/jpeg" height="390" width="690"/>
            <content:encoded><![CDATA[&lt;p&gt;ವಿಮಾನದಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡಲು ಕಿಟಕಿಯತ್ತ ಕಣ್ಣು ಹಾಯಿಸುವುದು ಸಾಮಾನ್ಯ. ಆದರೆ ವಿಮಾನದ ಕಿಟಕಿಗಳು ಚೌಕಾಕಾರದಲ್ಲಿರದೆ ದುಂಡಾದ ಅಂಚುಗಳನ್ನು ಹೊಂದಿರುವುದೇಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಇದು ಕೇವಲ ವಿನ್ಯಾಸಕ್ಕಾಗಿ ಮಾಡಿರುವುದಲ್ಲ. ವಿಮಾನದ ಸುರಕ್ಷತೆಯ ಹಿಂದೆ ಅಡಗಿರುವ ಅತ್ಯಂತ ಪ್ರಮುಖ ವೈಜ್ಞಾನಿಕ ಕಾರಣವಿದು!&lt;/p&gt;&lt;p&gt;&lt;strong&gt;30,000 ಅಡಿ ಎತ್ತರದಲ್ಲಿ ಏನಾಗುತ್ತದೆ?&lt;/strong&gt;&lt;/p&gt;&lt;p&gt;ಸಾಮಾನ್ಯ ವಾಣಿಜ್ಯ ಪ್ರಯಾಣಿಕ ವಿಮಾನಗಳು ಸುಮಾರು 30,000 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ ಹಾರುತ್ತವೆ. ಅಷ್ಟು ಎತ್ತರದಲ್ಲಿ ವಾತಾವರಣದ ಗಾಳಿಯ ಒತ್ತಡ ಬಹಳ ಕಡಿಮೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಾನವ ದೇಹಕ್ಕೆ ಹಲವು ಗಂಭೀರ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ವಿಮಾನದೊಳಗೆ ಪ್ರಯಾಣಿಕರು ಉಸಿರಾಡಲು ಅನುಕೂಲವಾಗುವಂತೆ ನಿರ್ದಿಷ್ಟ ಮಟ್ಟದ ಗಾಳಿಯ ಒತ್ತಡವನ್ನು ಕಾಪಾಡಲಾಗುತ್ತದೆ. ವಿಮಾನ ಮೇಲಕ್ಕೆ ಏರಿದಂತೆ ಕ್ಯಾಬಿನ್&zwnj;ನ ಒಳಗಿನ ಒತ್ತಡ ಮತ್ತು ಹೊರಗಿನ ವಾತಾವರಣದ ಒತ್ತಡದ ನಡುವೆ ದೊಡ್ಡ ವ್ಯತ್ಯಾಸ ಉಂಟಾಗುತ್ತದೆ. ವಿಮಾನದ ಲೋಹದ ದೇಹ ಈ ಒತ್ತಡವನ್ನು ತಡೆದುಕೊಳ್ಳುವಷ್ಟು ಬಲಿಷ್ಠವಾಗಿದ್ದರೂ, ಕಿಟಕಿಗಳ ವಿನ್ಯಾಸದಲ್ಲಿ ಮಾತ್ರ ವಿಶೇಷ ಎಚ್ಚರಿಕೆ ಅಗತ್ಯ.&lt;/p&gt;&lt;p&gt;&lt;strong&gt;ಚೌಕಾಕಾರದ ಕಿಟಕಿ ಇದ್ದರೆ ಅಪಾಯವೇನು?&lt;/strong&gt;&lt;/p&gt;&lt;p&gt;ಇಲ್ಲೇ ಬರುತ್ತದೆ ಭೌತಶಾಸ್ತ್ರದ ಪ್ರಮುಖ ನಿಯಮ. ತೀಕ್ಷ್ಣವಾದ ಮೂಲೆಗಳಿರುವ ವಿನ್ಯಾಸದಲ್ಲಿ ಒತ್ತಡ ಒಂದೇ ಸ್ಥಳದಲ್ಲಿ ಹೆಚ್ಚು ಕೇಂದ್ರೀಕೃತವಾಗುತ್ತದೆ. ಪರಿಣಾಮವಾಗಿ ಆ ಭಾಗದಲ್ಲಿ ಸಣ್ಣ ಬಿರುಕು ಉಂಟಾದರೂ, ಅದು ವೇಗವಾಗಿ ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಆದರೆ ಕಿಟಕಿಯ ಅಂಚುಗಳನ್ನು ದುಂಡಾಗಿ ವಿನ್ಯಾಸಗೊಳಿಸಿದಾಗ ಒತ್ತಡವು ಒಂದೇ ಬಿಂದುವಿನಲ್ಲಿ ಕೇಂದ್ರೀಕರಿಸದೆ, ಕಿಟಕಿಯ ಸುತ್ತಲೂ ಹೆಚ್ಚು ಸಮವಾಗಿ ಹಂಚಿಕೆಯಾಗುತ್ತದೆ. ಇದರಿಂದ ಬಿರುಕು ಉಂಟಾಗುವ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆ. ಸರಳವಾಗಿ ಹೇಳುವುದಾದರೆ, ದುಂಡಾದ ಕಿಟಕಿ ವಿಮಾನದೊಳಗಿನ ಒತ್ತಡವನ್ನು ಹೆಚ್ಚು ಸುರಕ್ಷಿತವಾಗಿ ನಿಭಾಯಿಸಲು ಸಹಾಯ ಮಾಡುತ್ತದೆ.&lt;/p&gt;&lt;p&gt;&lt;strong&gt;ವಿಮಾನಯಾನ ಉದ್ಯಮಕ್ಕೆ ಈ ಪಾಠ ಕಲಿಸಿದ್ದು ಒಂದು ದುರಂತ!&lt;/strong&gt;&lt;/p&gt;&lt;p&gt;ಇದು ಕೇವಲ ಸಿದ್ಧಾಂತವಲ್ಲ. ವಿಮಾನಯಾನ ಉದ್ಯಮವು ಈ ಪಾಠವನ್ನು ಬಹಳ ಕಠಿಣ ರೀತಿಯಲ್ಲಿ ಕಲಿತಿದೆ. ಜೆಟ್ ಯುಗದ ಆರಂಭದಲ್ಲಿ ನಿರ್ಮಿಸಲಾದ ಮೊದಲ ವಾಣಿಜ್ಯ ಜೆಟ್&zwnj;ಲೈನರ್&zwnj;ಗಳಲ್ಲಿ ಒಂದಾದ de Havilland Comet ವಿಮಾನಗಳಲ್ಲಿ ಚೌಕಾಕಾರದ ಕಿಟಕಿಗಳನ್ನು ಬಳಸಲಾಗಿತ್ತು. 1954ರಲ್ಲಿ, ಸೇವೆಗೆ ಸೇರಿದ ಸುಮಾರು ಎರಡು ವರ್ಷಗಳ ಬಳಿಕ, ರೋಮ್&zwnj;ನಿಂದ ಟೇಕ್&zwnj;ಆಫ್ ಆದ ಕೆಲವೇ ಸಮಯದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದ ಒಂದು ವಿಮಾನ ಅಪಘಾತಕ್ಕೀಡಾಯಿತು. ನಂತರ ಅದೇ ಮಾದರಿಯ ಮತ್ತೊಂದು ವಿಮಾನವೂ ಅಪಘಾತಕ್ಕೀಡಾಯಿತು.&lt;/p&gt;&lt;p&gt;ನಂತರದ ತನಿಖೆಯಲ್ಲಿ ವಿಮಾನದ ಕಿಟಕಿಗಳ ಸುತ್ತಲಿನ ಭಾಗದಲ್ಲಿ ಉಂಟಾದ ಲೋಹದ ಆಯಾಸ (metal fatigue) ಪ್ರಮುಖ ಕಾರಣಗಳಲ್ಲಿ ಒಂದೆಂದು ತಿಳಿದುಬಂದಿತು. ಚೌಕಾಕಾರದ ಕಿಟಕಿಗಳ ಮೂಲೆಗಳಲ್ಲಿ ಒತ್ತಡ ಕೇಂದ್ರೀಕೃತವಾಗಿದ್ದರಿಂದ, ಅಲ್ಲಿಂದ ಬಿರುಕುಗಳು ವಿಸ್ತರಿಸಿ ವಿಮಾನದ ದೇಹದ ರಚನೆಗೆ ಹಾನಿಯಾಗಿತ್ತು. ಈ ಘಟನೆಗಳ ಬಳಿಕ ವಿಮಾನದ ಕಿಟಕಿಗಳ ವಿನ್ಯಾಸದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು.&lt;/p&gt;&lt;p&gt;&lt;strong&gt;ಇಂದಿನ ವಿಮಾನದ ಕಿಟಕಿ ಒಂದೇ ಗಾಜಲ್ಲ!&lt;/strong&gt;&lt;/p&gt;&lt;p&gt;ಇಂದಿನ ವಿಮಾನದ ಕಿಟಕಿಯನ್ನು ನೋಡಿದಾಗ ಅದು ಒಂದೇ ಗಾಜಿನ ಫಲಕದಂತೆ ಕಾಣಬಹುದು. ಆದರೆ ವಾಸ್ತವದಲ್ಲಿ ಅದು ಬಹುಪದರಗಳ ಸುರಕ್ಷತಾ ವ್ಯವಸ್ಥೆ ಹೊಂದಿರುತ್ತದೆ. ಸಾಮಾನ್ಯವಾಗಿ ಕಿಟಕಿಯಲ್ಲಿ ಹೊರಭಾಗದ ಬಲಿಷ್ಠ ಪೇನ್&zwnj;, ಮಧ್ಯದ ಪದರ ಮತ್ತು ಪ್ರಯಾಣಿಕರು ಒಳಗಿನಿಂದ ಸ್ಪರ್ಶಿಸುವ ಅಕ್ರಿಲಿಕ್ ಪದರ ಇರುತ್ತದೆ. ಇದಲ್ಲದೆ, ಮಧ್ಯದ ಪದರದಲ್ಲಿ ಒಂದು ಸಣ್ಣ ರಂಧ್ರ (pinhole) ಕೂಡ ಇರುತ್ತದೆ. ಇದು ಕ್ಯಾಬಿನ್&zwnj;ನ ಒಳಗಿನ ಒತ್ತಡದ ಒಂದು ಭಾಗವನ್ನು ಹೊರಗಿನ ಪದರದತ್ತ ನಿಯಂತ್ರಿತವಾಗಿ ಹರಿಯಲು ಸಹಾಯ ಮಾಡುತ್ತದೆ. ಹೀಗಾಗಿ ಒತ್ತಡದಲ್ಲಿ ಅಸಾಮಾನ್ಯ ಏರಿಕೆ ಉಂಟಾದರೂ, ಒಳಗಿನ ಸುರಕ್ಷತಾ ಪದರಗಳು ಪ್ರಯಾಣಿಕರಿಗೆ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತವೆ.&lt;/p&gt;&lt;h2&gt;&lt;strong&gt;ಕಿಟಕಿಯ ಆಕಾರದ ಹಿಂದೆ ಇಷ್ಟೊಂದು ದೊಡ್ಡ ವಿಜ್ಞಾನ!&lt;/strong&gt;&lt;/h2&gt;&lt;p&gt;ಹೀಗಾಗಿ ವಿಮಾನದ ಕಿಟಕಿಗಳು ದುಂಡಾಗಿ ಕಾಣಿಸುವುದು ಕೇವಲ ಆಕರ್ಷಕ ವಿನ್ಯಾಸಕ್ಕಾಗಿ ಅಲ್ಲ. ವಾಯು ಒತ್ತಡ, ಲೋಹದ ಬಲ, ಒತ್ತಡದ ಹಂಚಿಕೆ ಮತ್ತು ಹಿಂದಿನ ವಿಮಾನ ಅಪಘಾತಗಳಿಂದ ಕಲಿತ ಪಾಠಗಳು-ಇವೆಲ್ಲ ಸೇರಿ ಇಂದಿನ ದುಂಡಾದ ಕಿಟಕಿ ವಿನ್ಯಾಸ ರೂಪುಗೊಂಡಿದೆ. ಅಂದರೆ, ವಿಮಾನದಲ್ಲಿ ಕಿಟಕಿಯ ಪಕ್ಕದ ಸೀಟು ಸಿಕ್ಕಾಗ ಹೊರಗಿನ ಆಕಾಶವನ್ನು ಆನಂದಿಸುತ್ತಾ ಕುಳಿತುಕೊಳ್ಳಬಹುದು. ನಿಮ್ಮ ಪಕ್ಕದಲ್ಲಿರುವ ಆ ಸಣ್ಣ ದುಂಡಾದ ಕಿಟಕಿಯ ಹಿಂದೆ ಮಾತ್ರ ವಿಮಾನ ಸುರಕ್ಷತೆಯ ದೊಡ್ಡ ವಿಜ್ಞಾನವೇ ಅಡಗಿದೆ!&lt;/p&gt;]]></content:encoded>
            <category><![CDATA[life]]></category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-do-airplane-windows-have-rounded-edges-the-safety-secret-explained-gvd/articleshow-gdgu00a"/>
        </item>
        <item>
            <title><![CDATA[ರಸ್ತೆಯಲ್ಲೇ ಬಲಿಯಾದ ಯುವತಿ, ಒಂದು ವಾರದಲ್ಲಿ 'ದುರಂತನಗರ' ರೋಡ್‌ ಸರಿಪಡಿಸುವ ಭರವಸೆ ಕೊಟ್ಟ ಅಧಿಕಾರಿಗಳು!]]></title>
            <link>https://kannada.asianetnews.com/bengaluru-urban/anekal-ananth-nagar-road-accident-woman-death-protest-san/articleshow-htqkbyv</link>
            <guid isPermaLink="true">https://kannada.asianetnews.com/bengaluru-urban/anekal-ananth-nagar-road-accident-woman-death-protest-san/articleshow-htqkbyv</guid>
            <pubDate>Thu, 13 Aug 2026 20:10:50 +0530</pubDate>
            <description><![CDATA[ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಕೇರಳ ಮೂಲದ ಯುವತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ಅಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxs0cwr82mc362rpvbxyd2p,imgname-medha-electronic-city-death-1786631959448.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್ (ಆ.13): &lt;/strong&gt;ರಸ್ತೆಯ ಗುಂಡಿ ಹಾಗೂ ಹದಗೆಟ್ಟ ರಸ್ತೆಯಿಂದಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಯುವತಿ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಅನಂತನಗರದಲ್ಲಿ ನಡೆದಿದೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಹಾಗೂ ತಕ್ಷಣವೇ ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಸ್ಥಳದಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಬುಧವಾರ (ನಿನ್ನೆ) ಮೇಧಾ ಅವರು ಬೈಕ್&zwnj;ನಲ್ಲಿ ಹಿಂಬದಿ ಸವಾರೆಯಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ದಿಢೀರನೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ಬೈಕ್ ಸವಾರ ಕೂಡ ಅಪಘಾತ ತಪ್ಪಿಸಲು ತಕ್ಷಣವೇ ಬ್ರೇಕ್ ಹಾಕಿದ್ದಾನೆ. ಆದರೆ, ಹದಗೆಟ್ಟಿದ್ದ ರಸ್ತೆಯ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಮೇಧಾ ಅವರು ಕೆಳಗೆ ಬಿದ್ದ ತಕ್ಷಣವೇ, ಹಿಂದಿನಿಂದ ಬಂದ ಗೂಡ್ಸ್ ವಾಹನವೊಂದು ಅವರ ಮೇಲೆ ಹರಿದಿದೆ. ತೀವ್ರ ಗಾಯಗೊಂಡ ಮೇಧಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.&lt;/p&gt;&lt;h2&gt;&lt;strong&gt;ಸ್ಥಳೀಯರ ಆಕ್ರೋಶ, ಅಧಿಕಾರಿಗಳಿಗೆ ತರಾಟೆ!&lt;/strong&gt;&lt;/h2&gt;&lt;p&gt;ಘಟನೆಯಿಂದ ಆಕ್ರೋಶಗೊಂಡ ಅನಂತನಗರ ನಿವಾಸಿಗಳು ಹಾಗೂ ಸ್ಥಳೀಯರು, ಪ್ರದೇಶದಲ್ಲಿ ದಿನೇ ದಿನೇ ಹದಗೆಡುತ್ತಿರುವ ರಸ್ತೆಗಳೇ ಇಂತಹ ಸರಣಿ ಅಪಘಾತಗಳಿಗೆ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, &quot;ಕೂಡಲೇ ಅಪಘಾತಕ್ಕೆ ಕಾರಣವಾಗುತ್ತಿರುವ ರಸ್ತೆಗಳನ್ನು ಸರಿಪಡಿಸಬೇಕು ಮತ್ತು ಮೃತ ಮಹಿಳೆಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು&quot; ಎಂದು ಪಟ್ಟು ಹಿಡಿದರು.&lt;/p&gt;&lt;p&gt;ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ದೂರು ಆಲಿಸಿದ ಅಧಿಕಾರಿಗಳು ಮಾತನಾಡಿ, &quot;ಪ್ರಸ್ತುತ ಅನಂತನಗರದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ವತಿಯಿಂದ ಒಳಚರಂಡಿ (UGD) ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಪೂರ್ಣ ಪ್ರಮಾಣದ ರಸ್ತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು&quot; ಎಂದು ತಿಳಿಸಿದರು. ಅಲ್ಲದೆ, ತಾತ್ಕಾಲಿಕವಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ &quot;ಒಂದು ವಾರದ ಒಳಗಾಗಿ ಹಾನಿಗೊಳಗಾಗಿರುವ ರಸ್ತೆಗಳನ್ನು ಸರಿಪಡಿಸಲಾಗುವುದು&quot; ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/anekal-ananth-nagar-road-accident-woman-death-protest-san/articleshow-htqkbyv"/>
        </item>
        <item>
            <title><![CDATA[Bigg Boss 13ಕ್ಕೆ ಆಯ್ಕೆ: ಇವರಿಗೆ ಹೊಡೆಯಿತು ಜಾಕ್​ಪಾಟ್​? ಫೈನಲಿಸ್ಟ್​ ಆದ ಅದೃಷ್ಟವಂತರು ಇವರೇ  ನೋಡಿ]]></title>
            <link>https://kannada.asianetnews.com/gallery/tv-talk/bigg-boss-13-two-contestant-kumari-and-ratna-may-be-the-finalists-suc-ua1kf4l</link>
            <guid isPermaLink="true">https://kannada.asianetnews.com/gallery/tv-talk/bigg-boss-13-two-contestant-kumari-and-ratna-may-be-the-finalists-suc-ua1kf4l</guid>
            <pubDate>Thu, 13 Aug 2026 20:10:38 +0530</pubDate>
            <description><![CDATA[ಬಿಗ್ಬಾಸ್ 13ಕ್ಕೆ ಜನಸಾಮಾನ್ಯರ ಪ್ರವೇಶಕ್ಕಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ಸೆಗಣಿ ಮೆತ್ತಿಕೊಳ್ಳುವುದು, ತಲೆ ಬೋಳಿಸಿಕೊಳ್ಳುವಂತಹ ಕಠಿಣ ಸವಾಲುಗಳನ್ನು ನೀಡಲಾಯಿತು. ಈ ಎಲ್ಲಾ ಪರೀಕ್ಷೆಗಳನ್ನು ದಾಟಿ, 20 ವರ್ಷದ ಯುವತಿ ಮತ್ತು 72 ವರ್ಷದ ಹಿರಿಯ ಮಹಿಳೆ ಸ್ಪರ್ಧಿಗಳಾಗಿ ಗಮನ ಸೆಳೆದಿದ್ದಾರೆ]]></description>
            <media:content url="https://static.asianetnews.com/images/w-1280,h-720,format-jpg,imgid-01kzxrxdgge6ttcqeg9sc8h5yj,imgname-agni-03-1786631861776.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ 13ಕ್ಕೆ ಜನಸಾಮಾನ್ಯರ ಪ್ರವೇಶಕ್ಕಾಗಿ ನಡೆದ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಗಳಿಗೆ ಸೆಗಣಿ ಮೆತ್ತಿಕೊಳ್ಳುವುದು, ತಲೆ ಬೋಳಿಸಿಕೊಳ್ಳುವಂತಹ ಕಠಿಣ ಸವಾಲುಗಳನ್ನು ನೀಡಲಾಯಿತು. ಈ ಎಲ್ಲಾ ಪರೀಕ್ಷೆಗಳನ್ನು ದಾಟಿ, 20 ವರ್ಷದ ಯುವತಿ ಮತ್ತು 72 ವರ್ಷದ ಹಿರಿಯ ಮಹಿಳೆ ಸ್ಪರ್ಧಿಗಳಾಗಿ ಗಮನ ಸೆಳೆದಿದ್ದಾರೆ&lt;/p&gt;&lt;img&gt;&lt;p&gt;ಬಿಗ್​ಬಾಸ್​​ 13 (Bigg Boss 13) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಬಿಗ್​ಬಾಸ್​ ವಿಶೇಷತೆ ಎಂದರೆ ಜನ ಸಾಮಾನ್ಯರಿಗೂ ಅವಕಾಶ ಕಲ್ಪಿಸಿರುವುದು. ಇದಕ್ಕಾಗಿ ಲಕ್ಷಾಂತರ ಮಂದಿ ಬಿಗ್​ಬಾಸ್​ ಕನಸು ಕಂಡು ವಿಡಿಯೋ ಮಾಡಿ ಕಳುಹಿಸಿದ್ರು. ಅದರಲ್ಲಿ ಫೈನಲ್​ ಆಗಿ ಸೆಲೆಕ್ಟ್​ ಆಗಿದ್ದು 60 ಮಂದಿ ಮಾತ್ರ.&lt;/p&gt;&lt;img&gt;&lt;p&gt;ಈ 60 ಜನರ ಪೈಕಿ ಯಾರು ಬಿಗ್​ಬಾಸ್​​ ಮನೆಗೆ ಫೈನಲ್​ ಆಗಿ ಹೋಗಲಿದ್ದಾರೆ ಎನ್ನುವ ಬಗ್ಗೆ ಅವರಿಗೆ ಅಗ್ನಿ ಪರೀಕ್ಷೆ ನಡೆದಿದೆ. ಇದಕ್ಕೆ ಬಿಗ್​ಬಾಸ್​ ಅಗ್ನಿ ಪರೀಕ್ಷೆಗೆ ತೀರ್ಪುಗಾರರಾಗಿ ಬಿಗ್​ಬಾಸ್​ ವಿನ್ನರ್ಸ್​, ಫೈನಲಿಸ್ಟ್ಸ್​ ಹಾಗೂ ನಟರಾಗಿರುವ ಶೃತಿ, ಸಂಗೀತಾ ಶೃಂಗೇರಿ, ವಿನಯ್​ ಗೌಡ ಹಾಗೂ ಚಂದನ್​ ಶೆಟ್ಟಿ ಬಂದಿದ್ದರು. ಇವರು ಸ್ಪರ್ಧಿಗಳಿಗೆ ಥಹರೇವಾರಿ ಚಾಲೆಂಜಸ್​ ಕೊಟ್ಟಿದ್ದರು.&lt;/p&gt;&lt;img&gt;&lt;p&gt;ಸ್ಪರ್ಧಿಗಳಿಗೆ ವಿವಿಧ ಟಾಸ್ಕ್​ ನೀಡಲಾಗಿತ್ತು. ಕೆಲವರಿಗೆ ಸೆಗಣಿ ಮೆತ್ತಿಕೊಳ್ಳಲು ಹೇಳಿದ್ರೆ, ಅವರು ಮೆತ್ತಿಕೊಂಡಿದ್ದರು. ಮತ್ತೊಬ್ಬರಿಗೆ ಅವರಿಗೆ ಸಿಕ್ಕಿರುವ ಗಿನ್ನೆಸ್​ ಅವಾರ್ಡ್​ ಸರ್ಟಿಫಿಕೇಟ್​ ಹರಿಯಲು ಹೇಳಿದ್ರೆ ಅದನ್ನೂ ಮಾಡಿದ್ದರು. ಮತ್ತೆ ಕೆಲವರಿಗೆ ಇನ್ನೇನೋ ಮಾಡಲು ಹೇಳಿದ್ದರು. ಇನ್ನೋರ್ವ ಸ್ಪರ್ಧಿಗೆ ನೀವಾಗಿಯೇ ನೀವು ತಲೆ ಬೋಳಿಸಿಕೊಳ್ಳಿ ಎಂದರೆ, ಆ ಸ್ಪರ್ಧಿ ಅದನ್ನೂ ಮಾಡಿದ್ದರು. ಮತ್ತೊಬ್ಬ ಸ್ಪರ್ಧಿಗೆ ನಿಮಗೆ ಸಂಗೀತಾ ಕಂಡರೆ ಇಷ್ಟ ಎನ್ನಬೇಕು ಎಂದಾಗ, ಆ ಸ್ಪರ್ಧಿ, ನಾನು ಹೀಗೆಯೇ ಇರೋದು, ಹೀಗೆಯೇ ಹೋಗೋದು ಎಂದಿದ್ದಾರೆ. ಆಗ ಅವರಿಗೆ ವಿನಯ್​ ಗೌಡ ಹಾಗಿದ್ರೆ ಇಲ್ಲಿಗೆ ಬಂದದ್ದು ಯಾಕೆ, ಔಟ್​ ಎಂದು ಗದರಿಸಿದ್ದರು.&lt;/p&gt;&lt;img&gt;&lt;p&gt;ಇವೆಲ್ಲವುಗಳ ಬಳಿಕ, ಈಗ ಅಂತಿಮವಾಗಿ ಇಬ್ಬರು ಫೈನಲಿಸ್ಟ್​ ಆಗಿರುವ ಬಗ್ಗೆ ವಾಹಿನಿ ಪ್ರೊಮೋ ಶೇರ್​ ಮಾಡಿಕೊಂಡಿದೆ. 20 ವರ್ಷದ ಕುಮಾರಿ ಫೈನಲಿಸ್ಟ್​ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿದೆ. ಛೋಟಾ ಪ್ಯಾಕೆಟ್​, ಬಡಾ ಧಮಾಕಾ ಎನ್ನುತ್ತಲೇ ವೇದಿಕೆ ಮೇಲೆ ಬಂದ ಕುಮಾರಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾಗಿರುವ ನಟಿ ಶ್ರುತಿ ಅವರು ಈಕೆಯ ಮುಗ್ಧತೆ ನನಗೆ ಇಷ್ಟವಾಯ್ತು ಎಂದಿದ್ದಾರೆ. ಕೊನೆಗೆ ಆಕೆಯನ್ನು ಫೈನಲಿಸ್ಟ್​ ಎಂದು ಘೋಷಿಸಿದಾಗ, ತೀರ್ಪುಗಾರರಾಗಿರುವ ಸಂಗೀತಾ ಶೃಂಗೇರಿ ಅವರು ಮುತ್ತು ಕೊಟ್ಟು ಶುಭ ಹಾರೈಸಿದ್ದಾರೆ.&lt;/p&gt;&lt;img&gt;&lt;p&gt;ಇನ್ನೋರ್ವರು ಸುಮಾರು 72 ವರ್ಷದ ರತ್ನಾ ಅವರು. ಬಹುಶಃ ಇಲ್ಲಿಯವರೆಗಿನ ಅತಿ ಹಿರಿಯ ಸ್ಪರ್ಧಿ ಇವರೇ ಇರಬಹುದು. ಇವರ ಟ್ಯಾಲೆಂಟ್​ ನೋಡಿ, ತೀರ್ಪುಗಾರರು ಮೆಚ್ಚಿಕೊಂಡಿದ್ದು, ಇವರೂ ಫೈನಲಿಸ್ಟ್​ ಆಗುವ ಸಾಧ್ಯತೆ ಇದೆ. ಇವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು.&lt;/p&gt;&lt;img&gt;&lt;p&gt;ರತ್ನಾ ಅವರಿಗೆ ವಿನಯ್​ ಗೌಡ ಅವರು ಊಟದ ಕೊರತೆ ಎದುರಾದರೆ ಏನು ಮಾಡುವಿರಿ ಎಂದು ಪ್ರಶ್ನಿಸಿದಾಗ, ರತ್ನಾ ಅವರು ತೊಡೆ ತಟ್ಟಿ ಆಡುತ್ತೇನೆ ಎಂದರು. ಇದು ತೀರ್ಪುಗಾರರಿಗೆ ಇಷ್ಟವಾಗಿ, ವಿನಯ್​ ಅವರು ರತ್ನಾ ಅವರಿಗೆ ಬಂಗಾರಪೇಟೆಯ ಆನೆ ಎಂದು ಹೆಸರು ಇಟ್ಟರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-13-two-contestant-kumari-and-ratna-may-be-the-finalists-suc-ua1kf4l"/>
        </item>
        <item>
            <title><![CDATA[Panna Diamond Mine: ಮಣ್ಣು ತಂದ ಸೌಭಾಗ್ಯ... ಒಂದೇ ರಾತ್ರಿಯಲ್ಲಿ ಲಕ್ಷಾಧಿಪತಿಗಳಾದ 7 ಮಂದಿ ಕಾರ್ಮಿಕರು]]></title>
            <link>https://kannada.asianetnews.com/viral/rare-diamond-found-in-panna-7-workers-to-share-multi-lakh-fortune/articleshow-84bqk5w</link>
            <guid isPermaLink="true">https://kannada.asianetnews.com/viral/rare-diamond-found-in-panna-7-workers-to-share-multi-lakh-fortune/articleshow-84bqk5w</guid>
            <pubDate>Thu, 13 Aug 2026 20:07:31 +0530</pubDate>
            <description><![CDATA[Panna Diamond Mine: ಬಡತನದ ಬೇಗೆಯಲ್ಲಿ ಬೆಂದಿದ್ದ ಆ ಏಳು ಮಂದಿ ಕೂಲಿ ಕಾರ್ಮಿಕರ ಬದುಕು ಒಂದೇ ಒಂದು ರಾತ್ರಿಯಲ್ಲಿ ಬದಲಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಹೀಗೆ ಅದೃಷ್ಟ ಅರಸಿ ಬಂದ ರೋಚಕ ಕಥೆ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxrtmgncck1awajac5xjv2p,imgname-thumbnail---2026-08-13t200117.870-1786631770643.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ಅದೃಷ್ಟ ಎಂಬುದು ಯಾವಾಗ, ಯಾರ ಬಾಗಿಲು ತಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ&quot; ಎಂಬ ಮಾತಿಗೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಏಳು ಮಂದಿ ಕೂಲಿ ಕಾರ್ಮಿಕರ ಬದುಕೇ ಸಾಕ್ಷಿ. ಪ್ರತಿದಿನ ಬೆವರು ಸುರಿಸಿದರೂ ಹೊಟ್ಟೆಬಟ್ಟೆಗೆ ಪರದಾಡುತ್ತಿದ್ದ ಈ ಬಡ ಕುಟುಂಬಗಳ ಬದುಕು ಒಂದೇ ಒಂದು ವಜ್ರದಿಂದಾಗಿ ರಾತ್ರೋರಾತ್ರಿ ಬದಲಾಗಿ ಹೋಗಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಪನ್ನಾ ಜಿಲ್ಲೆಯ ಸರ್ಕೋಹಾ ಗ್ರಾಮದ ಲೀಸ್ ಪಡೆದ ಗಣಿಯೊಂದರಲ್ಲಿ ಏಳು ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಒಂದು ದಿನ ಮಳೆಯ ಸಮಯದಲ್ಲಿ ಗಣಿಯನ್ನು ಪರಿಶೀಲಿಸುತ್ತಿದ್ದಾಗ, ಮಣ್ಣಿನ ರಾಶಿಯಲ್ಲಿ ಏನೋ ಹೊಳೆಯುವುದನ್ನು ಗುತ್ತಿಗೆದಾರ ಅಖಿಲೇಶ್ ಪಾಲ್ ಗಮನಿಸಿದರು. ಹತ್ತಿರ ಹೋಗಿ ಮಣ್ಣು ಶುಚಿಗೊಳಿಸಿ ನೋಡಿದಾಗ, ಅದು ಸಾಮಾನ್ಯ ಕಲ್ಲಲ್ಲ, ಬದಲಾಗಿ ಬೃಹತ್ ವಜ್ರ ಎಂಬುದು ತಿಳಿದುಬಂದಿದೆ.&lt;/p&gt;&lt;p&gt;ಪರಿಶೀಲನೆಯ ನಂತರ, ಇದು ಬರೋಬ್ಬರಿ 17.96 ಕ್ಯಾರೆಟ್ ತೂಕದ ಅಪರೂಪದ ವಜ್ರ ಎಂದು ತಿಳಿದುಬಂದಿದೆ. ಪ್ರಸ್ತುತ ಮಾರುಕಟ್ಟೆ ಅಂದಾಜಿನ ಪ್ರಕಾರ ಇದರ ಮೌಲ್ಯ 50 ಲಕ್ಷ ರೂಪಾಯಿಗೂ ಅಧಿಕ ಎನ್ನಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಗ್ರಾಮವೇ ಈ ಅದೃಷ್ಟದ ವಜ್ರವನ್ನು ನೋಡಲು ಹರಿದುಬಂದಿದೆ.&lt;/p&gt;&lt;h2&gt;&lt;strong&gt;ಹಣದ ಹಂಚಿಕೆ ಹೇಗೆ?&lt;/strong&gt;&lt;/h2&gt;&lt;p&gt;ಸರ್ಕಾರದ ನಿಯಮದಂತೆ, ಈ ವಜ್ರವನ್ನು ಪನ್ನಾದ ವಜ್ರದ ಕಚೇರಿಯಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಶೀಘ್ರದಲ್ಲೇ ನಡೆಯಲಿರುವ ಬಹಿರಂಗ ಹರಾಜಿನಲ್ಲಿ ಇದರ ಅಂತಿಮ ಬೆಲೆ ನಿರ್ಧಾರವಾಗಲಿದೆ. ಹರಾಜಿನಲ್ಲಿ ಬಂದ ಒಟ್ಟು ಮೊತ್ತದಲ್ಲಿ ಸರ್ಕಾರದ ರಾಯಲ್ಟಿಯನ್ನು ಕಡಿತಗೊಳಿಸಿದ ನಂತರ, ಉಳಿದ ಸಂಪೂರ್ಣ ಹಣವನ್ನು ಈ ಏಳು ಮಂದಿ ಕೂಲಿ ಕಾರ್ಮಿಕರಿಗೆ ಸಮಾನವಾಗಿ ಹಂಚಲಾಗುತ್ತದೆ.&lt;/p&gt;&lt;h2&gt;&lt;strong&gt;ಬದಲಾಗಲಿದೆ ಬಡವರ ಬದುಕು&lt;/strong&gt;&lt;/h2&gt;&lt;p&gt;ಈ ಹಣವು ಕಾರ್ಮಿಕರ ಜೀವನದಲ್ಲಿ ಹೊಸ ಭರವಸೆ ಮೂಡಿಸಿದೆ. ವಿಶೇಷವಾಗಿ ಈ ತಂಡದಲ್ಲಿರುವ 30 ರಿಂದ 38 ವರ್ಷ ವಯಸ್ಸಿನ ಸಂತೋಷ್, ಶರ್ಮನ್ ಮತ್ತು ಅರುಣ್ ಎಂಬುವವರು ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಇದುವರೆಗೆ ಮದುವೆಯಾಗಿರಲಿಲ್ಲ. ಈಗ ಬಂದ ಹಣದಿಂದ ಮದುವೆಯಾಗಿ ಸಂಸಾರ ಹೂಡುವ ಕನಸು ಕಾಣುತ್ತಿದ್ದಾರೆ. ಉಳಿದವರು ತಮ್ಮ ಹಳೆಯ ಓರೆಕೋರೆ ಮನೆಗಳನ್ನು ಸರಿಪಡಿಸಿ ಪಕ್ಕಾ ಮನೆ ನಿರ್ಮಿಸಿಕೊಳ್ಳಲು ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನಿರ್ಧರಿಸಿದ್ದಾರೆ.&lt;/p&gt;&lt;p&gt;&quot;ನಮ್ಮ ಮಕ್ಕಳು ನಮ್ಮಂತೆ ಕೂಲಿಗಳಾಗಬಾರದು, ಅವರಿಗೆ ಉತ್ತಮ ಶಾಲೆಗಳಲ್ಲಿ ಓದಿಸುವುದೇ ನಮ್ಮ ಮೊದಲ ಆದ್ಯತೆ&quot; ಎಂದು ಕಾರ್ಮಿಕರು ಭಾವುಕರಾಗಿ ನುಡಿದಿದ್ದಾರೆ. ವರ್ಷಗಳ ಕಾಲ ಪಟ್ಟ ಕಷ್ಟಕ್ಕೆ ಹಾಗೂ ತಮ್ಮ ಒಗ್ಗಟ್ಟಿನ ಶ್ರಮಕ್ಕೆ ಭಗವಂತ ನೀಡಿದ ವರ ಇದಾಗಿದೆ ಎಂದು ಈ ಏಳು ಗೆಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Ashwini HR</dc:creator>
            <atom:link href="https://kannada.asianetnews.com/viral/rare-diamond-found-in-panna-7-workers-to-share-multi-lakh-fortune/articleshow-84bqk5w"/>
        </item>
        <item>
            <title><![CDATA[Yash: ಇನ್ನೂ ಸಿನಿಮಾ ತೆರೆಕಂಡಿಲ್ಲ, ಆಗಲೇ ‘ಟಾಕ್ಸಿಕ್’ಗೆ ಭರ್ಜರಿ ಡಿಮ್ಯಾಂಡ್! ಎಲ್ಲೆಲ್ಲೂ ಕನ್ನಡಿಗನದ್ದೇ ಹವಾ!]]></title>
            <link>https://kannada.asianetnews.com/gallery/tv-talk/rocking-yash-toxic-movie-advance-booking-international-market-response-2026-bmk-bn0554g</link>
            <guid isPermaLink="true">https://kannada.asianetnews.com/gallery/tv-talk/rocking-yash-toxic-movie-advance-booking-international-market-response-2026-bmk-bn0554g</guid>
            <pubDate>Thu, 13 Aug 2026 19:57:21 +0530</pubDate>
            <description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ, ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಬುಕಿಂಗ್ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzn9rnf3mf7ppmzbtmmyx8g4,imgname-rocking-star-yash-shivarajkumar-1786347541987.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿ, ಅಡ್ವಾನ್ಸ್ ಬುಕಿಂಗ್ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ. ಚಿತ್ರದ ಬುಕಿಂಗ್ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.&lt;/p&gt;&lt;img&gt;&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಗ್ಯಾಂಗ್&zwnj;ಸ್ಟರ್ ಆಕ್ಷನ್ ಸಿನಿಮಾ &lsquo;ಟಾಕ್ಸಿಕ್&rsquo; (Toxic) ಬಿಡುಗಡೆಗೂ ಮುನ್ನವೇ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವದಾದ್ಯಂತ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಈಗಾಗಲೇ ವಿದೇಶಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಕೌಂಟರ್&zwnj;ಗಳು ತೆರೆದಿದ್ದು, ಆರಂಭಿಕ ಪ್ರತಿಕ್ರಿಯೆ ಗಮನ ಸೆಳೆಯುತ್ತಿದೆ. ಯಶ್ ಅವರ ಹಿಂದಿನ ಚಿತ್ರಗಳ ಯಶಸ್ಸಿನ ಬಳಿಕ &lsquo;ಟಾಕ್ಸಿಕ್&rsquo; ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಯಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಕ್ಷನ್ ಮತ್ತು ಗ್ಯಾಂಗ್&zwnj;ಸ್ಟರ್ ಕಥಾಹಂದರದ ಕಾರಣದಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಇದರ ಕ್ರೇಜ್ ಕೂಡ ಹೆಚ್ಚಾಗುತ್ತಿದೆ.&lt;/p&gt;&lt;img&gt;&lt;p&gt;&lsquo;ಟಾಕ್ಸಿಕ್&rsquo; ಅಡ್ವಾನ್ಸ್ ಬುಕಿಂಗ್&zwnj;ನಲ್ಲಿ ಉತ್ತರ ಅಮೆರಿಕಾದ ಮಾರುಕಟ್ಟೆಗಳು ಮುಂಚೂಣಿಯಲ್ಲಿವೆ. ಅಲ್ಲಿನ ಪ್ರೀಮಿಯರ್ ಶೋಗಳ ಮುಂಗಡ ಟಿಕೆಟ್ ಮಾರಾಟ ಈಗಾಗಲೇ **38 ಸಾವಿರ ಡಾಲರ್&zwnj;ಗಳ ಗಡಿ ದಾಟಿದೆ** ಎಂದು ವರದಿಯಾಗಿದೆ. ಸಿನಿಮಾ ಇನ್ನೂ ಬಿಡುಗಡೆಯಾಗುವ ಮುನ್ನವೇ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಯಶ್ ಅವರ ಜಾಗತಿಕ ಅಭಿಮಾನಿ ಬಳಗದ ಸಾಮರ್ಥ್ಯವನ್ನು ತೋರಿಸುತ್ತಿದೆ. ವಿದೇಶಗಳಲ್ಲಿ ಆಗಸ್ಟ್ 25ರಂದು ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆ. ಹೀಗಾಗಿ ಭಾರತಕ್ಕಿಂತ ಮುಂಚೆಯೇ ವಿದೇಶಿ ಅಭಿಮಾನಿಗಳಿಗೆ &lsquo;ಟಾಕ್ಸಿಕ್&rsquo; ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆ. ಈ ಆರಂಭಿಕ ಬುಕಿಂಗ್ ಟ್ರೆಂಡ್ ಭಾರತೀಯ ಮಾರುಕಟ್ಟೆಯ ಮೇಲೂ ದೊಡ್ಡ ನಿರೀಕ್ಷೆ ಮೂಡಿಸಿದೆ.&lt;/p&gt;&lt;img&gt;&lt;p&gt;ಅಮೆರಿಕಾದಲ್ಲಿ &lsquo;ಟಾಕ್ಸಿಕ್&rsquo; ಸಿನಿಮಾಗೆ ವಿಭಿನ್ನ ಸ್ಕ್ರೀನ್&zwnj;ಗಳಿಗೆ ಅನುಗುಣವಾಗಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಪ್ರೀಮಿಯಂ ಲಾರ್ಜ್ ಫಾರ್ಮ್ಯಾಟ್&zwnj; (PLF) ಸ್ಕ್ರೀನ್&zwnj;ಗಳಲ್ಲಿ ಟಿಕೆಟ್ ಬೆಲೆ ಸುಮಾರು 23 ಡಾಲರ್ ಆಗಿದ್ದರೆ, ಸಾಮಾನ್ಯ ಸ್ಕ್ರೀನ್&zwnj;ಗಳಲ್ಲಿ ಸುಮಾರು 20 ಡಾಲರ್ ದರ ನಿಗದಿಯಾಗಿದೆ. ಆಕ್ಷನ್ ಪ್ರಧಾನ ಸಿನಿಮಾವಾಗಿರುವುದರಿಂದ ದೊಡ್ಡ ಪರದೆಯಲ್ಲಿ ಉತ್ತಮ ದೃಶ್ಯ ಅನುಭವ ಪಡೆಯಲು ಬಯಸುವ ಪ್ರೇಕ್ಷಕರು PLF ಸ್ಕ್ರೀನ್&zwnj;ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿದೇಶಗಳಲ್ಲಿ ಪ್ರೀಮಿಯಂ ಸ್ಕ್ರೀನ್&zwnj;ಗಳ ಬುಕಿಂಗ್&zwnj;ಗೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.&lt;/p&gt;&lt;img&gt;&lt;p&gt;ವಿದೇಶಗಳಲ್ಲಿ ಬುಕಿಂಗ್ ಆರಂಭವಾಗಿರುವ ಬೆನ್ನಲ್ಲೇ ಕರ್ನಾಟಕದ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಪ್ರೀಮಿಯಂ ಸ್ಕ್ರೀನ್&zwnj;ಗಳಿಗೆ ಸದಾ ಬೇಡಿಕೆ ಇರುವುದರಿಂದ &lsquo;ಟಾಕ್ಸಿಕ್&rsquo; ಬುಕಿಂಗ್ ಯಾವಾಗ ಆರಂಭವಾಗಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಐಮ್ಯಾಕ್ಸ್ ಸೇರಿದಂತೆ ದೊಡ್ಡ ಪರದೆಯಲ್ಲಿ ಸಿನಿಮಾ ವೀಕ್ಷಿಸಲು ಬಯಸುವ ಯಶ್ ಅಭಿಮಾನಿಗಳು ಈಗಿನಿಂದಲೇ ತಮ್ಮ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಮೊದಲ ದಿನದ ಶೋಗೆ ಭಾರಿ ಬೇಡಿಕೆ ಉಂಟಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾದ ನಂತರ ಪ್ರೇಕ್ಷಕರು BookMyShow, Paytm ಸೇರಿ ಪ್ರಮುಖ ಟಿಕೆಟ್ ಬುಕಿಂಗ್ ವೇದಿಕೆಗಳ ಮೂಲಕ ಟಿಕೆಟ್ ಖರೀದಿಸಬಹುದು. ಬುಕಿಂಗ್ ಓಪನ್ ಆಗುವ ಸಮಯದಲ್ಲಿ ಭಾರಿ ಬೇಡಿಕೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಭಿಮಾನಿಗಳು ಮುಂಚಿತವಾಗಿ ಸಿದ್ಧರಾಗುವುದು ಉತ್ತಮ. ಈ ಆ್ಯಪ್&zwnj;ಗಳಲ್ಲಿ &lsquo;ಟಾಕ್ಸಿಕ್&rsquo; ಸಿನಿಮಾಗೆ ಅಲರ್ಟ್ ಆನ್ ಮಾಡಿಕೊಂಡರೆ ಬುಕಿಂಗ್ ಆರಂಭವಾದ ತಕ್ಷಣ ನೋಟಿಫಿಕೇಶನ್ ಪಡೆಯಬಹುದು. ಇದರಿಂದ ಕೊನೆಯ ಕ್ಷಣದ ಗೊಂದಲ ತಪ್ಪಿಸಿ ಇಷ್ಟವಾದ ಸೀಟ್&zwnj;ಗಳನ್ನು ಬೇಗ ಬುಕ್ ಮಾಡಿಕೊಳ್ಳಲು ಸಹಾಯವಾಗಲಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/tv-talk/rocking-yash-toxic-movie-advance-booking-international-market-response-2026-bmk-bn0554g"/>
        </item>
        <item>
            <title><![CDATA['ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳೋದು ವಿದೇಶಾಂಗ ನೀತಿಯಲ್ಲ..' ಮೋದಿ ಬಗ್ಗೆ ಮಿಮಿಕ್ರಿ ಮಾಡಿ ಲೇವಡಿ ಮಾಡಿದ ರಾಹುಲ್‌ ಗಾಂಧಿ]]></title>
            <link>https://kannada.asianetnews.com/india-news/rahul-gandhi-mocks-pm-modi-foreign-policy-meloni-joke-san/articleshow-3tr4lcq</link>
            <guid isPermaLink="true">https://kannada.asianetnews.com/india-news/rahul-gandhi-mocks-pm-modi-foreign-policy-meloni-joke-san/articleshow-3tr4lcq</guid>
            <pubDate>Thu, 13 Aug 2026 19:54:38 +0530</pubDate>
            <description><![CDATA[ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxr2dwr9jwjn9kwjt6xnm3f,imgname-rahul-gandhi-1786630977432.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.13): &lt;/strong&gt;ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದು, &quot;ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆ ಎಂದು ಪ್ರಧಾನಿ ಭಾವಿಸಿದ್ದಾರೆ&quot; ಎಂದು ವ್ಯಂಗ್ಯವಾಡಿದ್ದಾರೆ. 'ರಚನಾತ್ಮಕ ಕಾಂಗ್ರೆಸ್' ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, &quot;ಅವರಿಗೆ ಈ ರೀತಿಯ ಕಲ್ಪನೆ ಎಲ್ಲಿಂದ ಬಂತೋ ನನಗಂತೂ ಗೊತ್ತಿಲ್ಲ. ಜನರ ತಲೆಯಲ್ಲಿ ಇಂತಹ ವಿಚಿತ್ರ ಕಲ್ಪನೆಗಳು ಹೊಳೆಯುತ್ತವೆ. ವಿದೇಶಾಂಗ ನೀತಿ ಎಂದರೆ ಇದೇ ಎಂದು ಅವರು ಅಂದುಕೊಂಡಿದ್ದಾರೆ,&quot; ಎಂದು ಹೇಳುತ್ತಲೇ ವೇದಿಕೆಯಲ್ಲಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಬಿಗಿಯಾಗಿ ಅಪ್ಪಿಕೊಂಡರು.&lt;/p&gt;&lt;p&gt;ಈ ವೇಳೆ ಸಂದೀಪ್ ದೀಕ್ಷಿತ್ ತಮಾಷೆಯಾಗಿ, &quot;ನೀವು ನನ್ನನ್ನು 'ಮೆಲೋನಿ' (ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ) ಎಂದು ಭಾವಿಸಿ ಅಪ್ಪಿಕೊಳ್ಳುತ್ತಿಲ್ಲವಲ್ಲ?&quot; ಎಂದು ಪ್ರಶ್ನಿಸಿದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ರಾಹುಲ್, &quot;ನಾನಿನ್ನೂ ಆ ಹಂತಕ್ಕೆ ತಲುಪಿಲ್ಲ!&quot; ಎಂದು ನಗೆಚಟಾಕಿ ಹಾರಿಸಿದ್ದು, ಉಪಸ್ಥಿತರಿದ್ದ ಸಭಿಕರಲ್ಲಿ ನಗೆಯ ಅಲೆ ಎಬ್ಬಿಸಿತು.&lt;/p&gt;&lt;h2&gt;&lt;strong&gt;ಇಂದಿರಾ ಗಾಂಧಿಯಂತಹ ನಾಯಕರಿದ್ದಿದ್ದರೆ ಭಾರತಕ್ಕೆ ದೊಡ್ಡ ಅವಕಾಶ ಸಿಗುತ್ತಿತ್ತು&lt;/strong&gt;&lt;/h2&gt;&lt;p&gt;ನಂತರ ಮತ್ತೆ ಪ್ರಧಾನಿ ಮೋದಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ರಾಹುಲ್, &quot;ವಿದೇಶಾಂಗ ನೀತಿ ಎಂದರೆ ಕೇವಲ ನಾಯಕರನ್ನು ಅಪ್ಪಿಕೊಳ್ಳುವುದು ಎನ್ನುವ ಆಲೋಚನೆ ಮೋದಿ ಅವರಿಗೆ ಎಲ್ಲಿಂದ ಬಂತೋ ನನಗಂತೂ ತಿಳಿದಿಲ್ಲ,&quot; ಎಂದು ಆಕ್ಷೇಪಿಸಿದರು. ಇದೇ ವೇಳೆ ಭಾರತ ಮತ್ತು ಅಮೆರಿಕ ಸಂಬಂಧಗಳ ಕುರಿತು ಮಾತನಾಡಿದ ಅವರು, ಇರಾನ್ ಸಂಘರ್ಷದ ವೇಳೆ ಮಧ್ಯಸ್ಥಿಕೆ ವಹಿಸುವಲ್ಲಿ ಪಾಕಿಸ್ತಾನ ವಹಿಸಿದ ಪಾತ್ರವನ್ನು ಉಲ್ಲೇಖಿಸಿ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ಭಾರತದ ರಾಜತಾಂತ್ರಿಕ ನಿಲುವನ್ನು ಪ್ರಶ್ನಿಸಿದರು.&lt;/p&gt;&lt;p&gt;ಇರಾನ್&zwnj;ನಲ್ಲಿ ಯುದ್ಧ ಪ್ರಾರಂಭವಾಯಿತು. ಭಾರತಕ್ಕೆ&mdash;ಅದು ತನ್ನದೇ ಆದ ಶಕ್ತಿಯನ್ನು ಅರಿತುಕೊಂಡಿದ್ದರೆ ಮತ್ತು ನಮ್ಮ ದೇಶದ ನಾಯಕಿ ಇಂದಿರಾ ಗಾಂಧಿಯವರಂತಿದ್ದರೆ&mdash;ಇದು ಜಗತ್ತಿನಲ್ಲೇ ಅತ್ಯಂತ ದೊಡ್ಡ ರಾಜತಾಂತ್ರಿಕ ಅವಕಾಶವಾಗುತ್ತಿತ್ತು. ಎಂತಹ ಅವಕಾಶ ಗೊತ್ತಾ? ಇರಾನ್ ನಮ್ಮ ಹಳೆಯ ಸ್ನೇಹಿತ ರಾಷ್ಟ್ರ, ಅಮೆರಿಕ ನಮಗೆ ಮಿತ್ರ ಹಾಗೂ ರಷ್ಯಾ ಕೂಡ ನಮ್ಮ ಮಿತ್ರರಾಷ್ಟ್ರವಾಗಿತ್ತು. ನಾವು ಮುಂದೆ ಬಂದು ಪ್ರಮುಖ ಪಾತ್ರ ವಹಿಸಿ, ಈ ಎಲ್ಲ ಮೈತ್ರಿಗಳನ್ನು ಭಾರತದ ಹಿತಾಸಕ್ತಿಗೆ ಬಳಸಿಕೊಳ್ಳಬಹುದಿತ್ತು. ಆದರೆ ವಾಸ್ತವವಾಗಿ ಆಗಿದ್ದೇನು? ಅಂತಹದ್ದೇನೂ ನಡೆಯಲಿಲ್ಲ. ಬದಲಾಗಿ, ನಮ್ಮ ಜಾಗಕ್ಕೆ ಪಾಕಿಸ್ತಾನ ಕಾಲಿಟ್ಟು ಮಧ್ಯಸ್ಥಿಕೆ ವಹಿಸಿತು; ಭಾರತ ಮತ್ತು ಮೋದಿ ಜೀ ಅವರು ಬರೀ ನೋಡುತ್ತಾ ಕುಳಿತರು,&quot; ಎಂದು ರಾಹುಲ್ ಕಿಡಿಕಾರಿದ್ದಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/rahul-gandhi-mocks-pm-modi-foreign-policy-meloni-joke-san/articleshow-3tr4lcq"/>
        </item>
        <item>
            <title><![CDATA[‘ದಿ ಒನ್‌ ಆ್ಯಂಡ್‌ ಓನ್ಲಿ...’ ಶ್ರೀದೇವಿಯನ್ನು ನೆನೆದು ಪ್ರಿಯಾಂಕಾ ಭಾವುಕ: ‘ಎಂಪ್ರೆಸ್’ ಫಸ್ಟ್ ಲುಕ್ ರಿವೀಲ್]]></title>
            <link>https://kannada.asianetnews.com/entertainment/priyanka-chopra-unveils-first-look-of-sridevi-biography-empress-on-her-birthday-gvd/articleshow-aw54pl4</link>
            <guid isPermaLink="true">https://kannada.asianetnews.com/entertainment/priyanka-chopra-unveils-first-look-of-sridevi-biography-empress-on-her-birthday-gvd/articleshow-aw54pl4</guid>
            <pubDate>Thu, 13 Aug 2026 19:29:02 +0530</pubDate>
            <description><![CDATA[Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxpnnc204tyc1y8z3vttrb5,imgname-knnk-1786629510530.png" type="image/jpeg" height="390" width="690"/>
            <content:encoded><![CDATA[&lt;p&gt;ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಪ್ರಿಯಾಂಕಾ ತಮ್ಮ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಶೇರ್ ಮಾಡಿದ ಈ ಫೋಟೋವನ್ನು ಶ್ರೀದೇವಿ ಪತಿ ಬೋನಿ ಕಪೂರ್ ಕೂಡ ಮರುಹಂಚಿಕೊಂಡಿದ್ದಾರೆ.&lt;/p&gt;&lt;p&gt;ಬಾಲಿವುಡ್&zwnj;ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ, ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು ಅವರ ಜೀವನಚರಿತ್ರೆ ಪುಸ್ತಕದ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ಶ್ರೀದೇವಿ ಅವರ ಜೀವನ, ವೃತ್ತಿ ಮತ್ತು ಪರಂಪರೆಯನ್ನು ಕಟ್ಟಿಕೊಡುವ 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಪ್ರಿಯಾಂಕಾ ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರೀಸ್&zwnj;ನಲ್ಲಿ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಧೀರಜ್ ಯು. ಕುಮಾರ್ ಈ ಪುಸ್ತಕವನ್ನು ಬರೆದಿದ್ದು, ವೆಸ್ಟ್&zwnj;ಲ್ಯಾಂಡ್ ಬುಕ್ಸ್ ಇದನ್ನು ಪ್ರಕಟಿಸುತ್ತಿದೆ. ಪುಸ್ತಕದ ಮುಖಪುಟದಲ್ಲಿ ಅಮಿತಾಭ್ ಬಚ್ಚನ್ ಅವರ ಮೆಚ್ಚುಗೆಯ ಮಾತಿದ್ದು, ಅವರು ಶ್ರೀದೇವಿಯನ್ನು &quot;ಅದ್ಭುತ ಪ್ರತಿಭೆಯ ಪ್ರತೀಕ&quot; ಎಂದು ಬಣ್ಣಿಸಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.&lt;/p&gt;&lt;p&gt;ಮುಖಪುಟವನ್ನು ಹಂಚಿಕೊಂಡ ಪ್ರಿಯಾಂಕಾ, &quot;ದಿ ಒನ್ ಆ್ಯಂಡ್ ಓನ್ಲಿ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಹ್ಯಾಪಿ ಹೆವನ್ಲಿ ಬರ್ತ್&zwnj;ಡೇ #Sridevi #Empress....ಶೀಘ್ರದಲ್ಲೇ ಬರಲಿದೆ&quot; ಎಂದು ಬರೆದುಕೊಂಡಿದ್ದಾರೆ. ಶ್ರೀದೇವಿ ಅವರ ಪತಿ ಬೋನಿ ಕಪೂರ್, ಪ್ರಿಯಾಂಕಾ ಅವರ ಈ ಪೋಸ್ಟ್&zwnj; ಅನ್ನು ತಮ್ಮ ಇನ್&zwnj;ಸ್ಟಾಗ್ರಾಮ್ ಸ್ಟೋರೀಸ್&zwnj;ನಲ್ಲಿ ಮರುಹಂಚಿಕೊಂಡಿದ್ದಾರೆ. ವೆಸ್ಟ್&zwnj;ಲ್ಯಾಂಡ್ ಬುಕ್ಸ್ 2023ರಲ್ಲಿ ಶ್ರೀದೇವಿ ಅವರ ಅಧಿಕೃತ ಜೀವನಚರಿತ್ರೆಯನ್ನು ಪ್ರಕಟಿಸುವುದಾಗಿ ಘೋಷಿಸಿತ್ತು. ಈ ಪುಸ್ತಕವು ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಅವರ ಪಯಣ, ಅವರ ವೈಭವದ ವೃತ್ತಿಜೀವನ, ವೈಯಕ್ತಿಕ ಜೀವನ ಮತ್ತು ಅವರು ಚಿತ್ರರಂಗದಲ್ಲಿ ಉಳಿಸಿಹೋದ ಪರಂಪರೆಯನ್ನು ವಿವರಿಸಲಿದೆ.&lt;/p&gt;&lt;h2&gt;&lt;strong&gt;ಶ್ರೀದೇವಿ ಜೀವನ ಮತ್ತು ಸಿನಿಪಯಣದ ಒಂದು ಝಲಕ್&lt;/strong&gt;&lt;/h2&gt;&lt;p&gt;ಶ್ರೀದೇವಿ ಬಾಲನಟಿಯಾಗಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. 1967ರಲ್ಲಿ, ತಮ್ಮ ನಾಲ್ಕನೇ ವಯಸ್ಸಿನಲ್ಲಿ 'ಕಂದನ್ ಕರುಣೈ' ಎಂಬ ತಮಿಳು ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 1972ರಲ್ಲಿ 'ರಾನಿ ಮೇರಾ ನಾಮ್' ಚಿತ್ರದ ಮೂಲಕ ಬಾಲಿವುಡ್&zwnj;ಗೆ ಎಂಟ್ರಿ ಕೊಟ್ಟರು. 1980 ಮತ್ತು 1990ರ ದಶಕಗಳಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಶ್ರೀದೇವಿ ಮಿಂಚಿದರು.&lt;/p&gt;&lt;p&gt;1996ರಲ್ಲಿ ಅವರು ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಈ ದಂಪತಿಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಅವರಿಬ್ಬರೂ ತಮ್ಮ ತಾಯಿಯ ಹಾದಿಯಲ್ಲೇ ಸಾಗಿ ಬಾಲಿವುಡ್&zwnj;ನಲ್ಲಿ ನಟನಾ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. 2018ರಲ್ಲಿ ದುಬೈನಲ್ಲಿ ಶ್ರೀದೇವಿ ದುರಂತ ಸಾವನ್ನಪ್ಪಿದರು. ಇನ್ನು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. 2013ರಲ್ಲಿ ಭಾರತ ಸರ್ಕಾರ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ 'ಪದ್ಮಶ್ರೀ' ನೀಡಿ ಗೌರವಿಸಿತು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/priyanka-chopra-unveils-first-look-of-sridevi-biography-empress-on-her-birthday-gvd/articleshow-aw54pl4"/>
        </item>
        <item>
            <title><![CDATA[Actor: ಸ್ಯಾಂಡಲ್​​ವುಡ್ ನಟಿ ತಂಗಿ ವಿರುದ್ಧ 'ಲವ್, ಸೆ*, ಧೋಖಾ' ಆರೋಪ!  15 ಲಕ್ಷ ಕಳೆದುಕೊಂಡು ಜೈಲು ಪಾಲಾದ ಪ್ರಿಯಕರ!]]></title>
            <link>https://kannada.asianetnews.com/karnataka-districts/sandalwood-actress-sister-cheating-case-raghavendra-arrested-bengaluru-bmk/articleshow-3txcqi0</link>
            <guid isPermaLink="true">https://kannada.asianetnews.com/karnataka-districts/sandalwood-actress-sister-cheating-case-raghavendra-arrested-bengaluru-bmk/articleshow-3txcqi0</guid>
            <pubDate>Thu, 13 Aug 2026 19:23:47 +0530</pubDate>
            <description><![CDATA[ಸ್ಯಾಂಡಲ್ವುಡ್ ನಟಿಯೊಬ್ಬರ ತಂಗಿ ಮತ್ತು ಆಕೆಯ ಪ್ರಿಯಕರನ ನಡುವಿನ ನಾಲ್ಕು ವರ್ಷಗಳ ಲಿವಿಂಗ್ ರಿಲೇಷನ್‌ಶಿಪ್, 15 ಲಕ್ಷ ರೂಪಾಯಿ ವಂಚನೆ ಆರೋಪದೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವಕ ವಂಚನೆ ದೂರು ನೀಡಿದರೆ, ಯುವತಿ ಲೈಂಗಿಕ ದುರ್ಬಳಕೆ ಆರೋಪದ ಮೇಲೆ ಕೌಂಟರ್ ದೂರು ದಾಖಲಿಸಿದ್ದು, ಇದೀಗ ಪ್ರಿಯಕರ ನ್ಯಾಯಾಂಗ ಬಂಧನದಲ್ಲಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxpbwwf5x6ha3gzjper9rz0,imgname-bengaluru--1786629190543.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು; ಚಿತ್ರರಂಗದ ಗ್ಲಾಮರ್ ಲೋಕದ ಗಲ್ಲಿಗಳಿಂದ ಪ್ರತಿದಿನವೂ ಹೊಸ ಹೊಸ ಕಥೆಗಳು ಹೊರಬರುತ್ತಿರುತ್ತವೆ. ಆದರೆ, ಈ ಬಾರಿ ಸ್ಯಾಂಡಲ್​​ವುಡ್&zwnj;ನ ಪ್ರಸಿದ್ಧ ನಟಿಯೊಬ್ಬರ ತಂಗಿ ಮತ್ತು ಅವರ ಪ್ರಿಯಕರನ ನಡುವಿನ ಕಥೆ ಕೋರ್ಟ್ ಹಾಗೂ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಪ್ರೀತಿಸಿದೆ, ಮದುವೆಯಾಗುತ್ತೇನೆ&quot; ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿದ್ದಾಳೆ ಎಂದು ಯುವಕ ದೂರುತ್ತಿದ್ದರೆ, ಅತ್ತ ಯುವತಿ ನೀಡಿದ 'ಲೈಂಗಿಕ ಕಿರುಕುಳ' ದೂರಿನ ಆಧಾರದ ಮೇಲೆ ಅದೇ ಯುವಕೀಗ ಕಂಬಿ ಎಣಿಸುವಂತಾಗಿದೆ! ಅಷ್ಟಕ್ಕೂ ಈ ಕಥೆಯ ಹಿಂದೆ ನಡೆದಿದ್ದೇನು? ಪ್ರೀತಿಯ ಹೆಸರಿನಲ್ಲಿ ನಡೆದ ಈ ಹೈಡ್ರಾಮಾದ ಅಸಲಿ ಕಥೆ ಇಲ್ಲಿದೆ.&lt;/p&gt;&lt;h2&gt;&lt;strong&gt;4 ವರ್ಷದ ಲಿವಿಂಗ್ ರಿಲೇಷನ್&zwnj;ಶಿಪ್, 15 ಲಕ್ಷ ವಂಚನೆ?&lt;/strong&gt;&lt;/h2&gt;&lt;p&gt;ಬೆಂಗಳೂರಿನ ತಲಘಟ್ಟಪುರದ ನಿವಾಸಿ ರಾಘವೇಂದ್ರ ಮತ್ತು ಸ್ಯಾಂಡಲ್​​ವುಡ್ ನಟಿಯ ತಂಗಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಲಿವಿಂಗ್ ರಿಲೇಷನ್&zwnj;ಶಿಪ್&zwnj;ನಲ್ಲಿದ್ದರು (Living Relationship) ಎಂದು ಹೇಳಲಾಗಿದೆ. ಮದುವೆಯಾಗುವುದಾಗಿ ನಂಬಿಸಿದ್ದ ನಟಿಯ ತಂಗಿ, ರಾಘವೇಂದ್ರ ಅವರೊಂದಿಗೆ ಇದ್ದುಕೊಂಡು ಹಂತ ಹಂತವಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡಿಸಿ, ಕೊನೆಗೆ ಕೈಕೊಟ್ಟಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.&lt;/p&gt;&lt;h3&gt;&lt;strong&gt;ಠಾಣೆಗೆ ದೂರು ನೀಡಿದ ರಾಘವೇಂದ್ರ!&lt;/strong&gt;&lt;/h3&gt;&lt;p&gt;ತನಗೆ ಭಾರಿ ಮೊತ್ತದ ಹಣ ವಂಚನೆಯಾಗಿದೆ ಎಂದು ಅರಿತ ರಾಘವೇಂದ್ರ, ಕಳೆದ ಮೇ 19ರಂದು ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಗೆ ತೆರಳಿ ನಟಿಯ ತಂಗಿಯ ವಿರುದ್ಧ ಅಧಿಕೃತವಾಗಿ ದೂರು ನೀಡಿದ್ದರು. ಆದರೆ, ದೂರು ನೀಡಿದ್ದರೂ ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ರಾಘವೇಂದ್ರ ಬಹಿರಂಗವಾಗಿ ಆರೋಪಿಸಿದ್ದರು.&lt;/p&gt;&lt;h3&gt;&lt;strong&gt;ನಟಿ ತಂಗಿಯಿಂದ 'ಕೌಂಟರ್ ಕಂಪ್ಲೇಂಟ್'; ಕಥೆಗೆ ಬಿಗ್ ಟ್ವಿಸ್ಟ್!&lt;/strong&gt;&lt;/h3&gt;&lt;p&gt;ರಾಘವೇಂದ್ರ ತಲಘಟ್ಟಪುರ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ, ಇತ್ತ ನಟಿಯ ತಂಗಿಯೂ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಜುಲೈ 7ರಂದು ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ತೆರಳಿದ ಯುವತಿ, ರಾಘವೇಂದ್ರ ವಿರುದ್ಧ ಭಾರಿ ಗಂಭೀರವಾದ 'ಕೌಂಟರ್ ದೂರು' ದಾಖಲಿಸಿದ್ದಾಳೆ. ತನ್ನ ದೂರಿನಲ್ಲಿ, &quot;ರಾಘವೇಂದ್ರ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾನೆ&quot; ಎಂದು ಗಂಭೀರ ಆರೋಪ ಹೊರಿಸಿದಳು. ಯುವತಿಯ ದೂರಿನ ಆಧಾರದ ಮೇಲೆ ಚಂದ್ರಾಲೇಔಟ್ ಪೊಲೀಸರು ನೂತನ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 69, 351(2) ಮತ್ತು 351(3) ರ ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಿಕೊಂಡರು.&lt;/p&gt;&lt;h3&gt;&lt;strong&gt;ಬಂಧನ ಭೀತಿಗೆ ಆತ್ಮಹತ್ಯೆಗೆ ಯತ್ನ!&lt;/strong&gt;&lt;/h3&gt;&lt;p&gt;ಯುವತಿ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಿಸುತ್ತಿದ್ದಂತೆ, ಬಂಧನದ ಭೀತಿಯಿಂದ ತೀವ್ರ ಆತಂಕಕ್ಕೊಳಗಾದ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಘವೇಂದ್ರ ಅವರನ್ನು ಆಗಸ್ಟ್ 4ರಂದು ಚಂದ್ರಾಲೇಔಟ್ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದುರ್ಬಳಕೆ ಮಾಡಿಕೊಂಡ ಪ್ರಕರಣದಡಿ ರಾಘವೇಂದ್ರ ಅವರನ್ನು ಬಂಧಿಸಿದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವು ಈಗ ಪೊಲೀಸ್ ತನಿಖೆಯ ಹಂತದಲ್ಲಿದ್ದು, 'ಪ್ರೀತಿಯ ಹೆಸರಿನಲ್ಲಾದ ವಂಚನೆ' ನಿಜವೇ ಅಥವಾ 'ಲೈಂಗಿಕ ದುರ್ಬಳಕೆ' ನಡೆದಿದೆಯೇ ಎಂಬ ಸತ್ಯಾಸತ್ಯತೆ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/sandalwood-actress-sister-cheating-case-raghavendra-arrested-bengaluru-bmk/articleshow-3txcqi0"/>
        </item>
        <item>
            <title><![CDATA[ಬುಕಿಂಗ್‌ ವೇಳೆಯೇ 'ಟಿಪ್ಸ್‌' ಕೇಳುವಂತಿಲ್ಲ: ಓಲಾ, ಉಬರ್‌ನಂತಹ ಕ್ಯಾಬ್‌ ಕಂಪನಿಗಳಿಗೆ ಕೇಂದ್ರದ ಖಡಕ್‌ ಸೂಚನೆ]]></title>
            <link>https://kannada.asianetnews.com/business/cab-apps-advance-tipping-option-banned-transport-ministry-san/articleshow-wzltczf</link>
            <guid isPermaLink="true">https://kannada.asianetnews.com/business/cab-apps-advance-tipping-option-banned-transport-ministry-san/articleshow-wzltczf</guid>
            <pubDate>Thu, 13 Aug 2026 19:05:34 +0530</pubDate>
            <description><![CDATA[ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxn8gpknzqqgpawx6k1bevr,imgname-pre-ride-tip-1786628031187.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.13):&lt;/strong&gt; ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ಸಮಯದಲ್ಲಿಯೇ ಚಾಲಕರಿಗೆ 'ಟಿಪ್ಸ್' ನೀಡುವಂತೆ ಪ್ರಯಾಣಿಕರಿಗೆ ಪ್ರೇರೇಪಿಸುವ ಅಥವಾ ಉತ್ತೇಜಿಸುವ ಯಾವುದೇ ಆಯ್ಕೆಗಳನ್ನು (Prompts/Options) ತಮ್ಮ ಮೊಬೈಲ್ ಆಪ್&zwnj;ಗಳಿಂದ ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಅಗ್ರಿಗೇಟರ್&zwnj;ಗಳಿಗೆ (ಕ್ಯಾಬ್ ಆಪ್ ಸಂಸ್ಥೆಗಳು) ಖಡಕ್ ಸೂಚನೆ ನೀಡಿದೆ. ಇಂತಹ ವೈಶಿಷ್ಟ್ಯಗಳು 'ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025'ರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ ಎಂದು ಸಚಿವಾಲಯ ಹೇಳಿದೆ.&lt;/p&gt;&lt;p&gt;ಆಪ್&zwnj;ಗಳಲ್ಲಿ ಪ್ರಯಾಣಿಕರಿಗೆ &quot;ಅಡ್ವಾನ್ಸ್ ಟಿಪ್&quot; (Advance Tip), &quot;ಚೂಸ್ ಆಡ್-ಆನ್&quot; (Choose an Add-on) ಮತ್ತು &quot;ರೈಡ್ ಶೀಘ್ರವೇ ಕನ್ಫರ್ಮ್ ಆಗುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಿ&quot; (Improve your chances of quicker ride confirmation) ಮುಂತಾದ ಆಯ್ಕೆಗಳನ್ನು ತೋರಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವಾಲಯವು ಈ ಹೊಸ ಆದೇಶವನ್ನು ಹೊರಡಿಸಿದೆ. ಅಲ್ಲದೆ, ಹೆಚ್ಚುವರಿ ಟಿಪ್ಸ್ ನೀಡಿದರೆ ಚಾಲಕರು ರೈಡ್ ಅನ್ನು ಬೇಗನೆ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಕೆಲವು ಆಪ್&zwnj;ಗಳು ಪ್ರಯಾಣಿಕರನ್ನು ದಾರಿ ತಪ್ಪಿಸುತ್ತಿರುವುದು ಕಂಡುಬಂದಿದೆ.&lt;/p&gt;&lt;p&gt;ಮಾರ್ಗಸೂಚಿಯ ಸ್ಪಷ್ಟ ನಿಯಮವನ್ನು ಉಲ್ಲೇಖಿಸಿರುವ ರಸ್ತೆ ಸಾರಿಗೆ ಸಚಿವಾಲಯ, &quot;ಪ್ರಯಾಣಿಕರು ತಮ್ಮ ಇಷ್ಟದಂತೆ ಚಾಲಕರಿಗೆ ಟಿಪ್ಸ್ ನೀಡಲು ಬಯಸಿದರೆ, ಅದು ಪ್ರಯಾಣ (Ride) ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಮಾತ್ರವೇ ನೀಡಲು ಅವಕಾಶವಿರಬೇಕು. ಜೊತೆಗೆ ಪ್ರಯಾಣಿಕರು ನೀಡುವ ಸಂಪೂರ್ಣ ಟಿಪ್ಸ್ ಹಣವನ್ನು ಆಪ್ ಸಂಸ್ಥೆಗಳು ಯಾವುದೇ ಕಡಿತವಿಲ್ಲದೆ ನೇರವಾಗಿ ಚಾಲಕನ ಖಾತೆಗೆ ಜಮೆ ಮಾಡುವುದು ಕಡ್ಡಾಯ&quot; ಎಂದು ತಿಳಿಸಿದೆ.&lt;/p&gt;&lt;p&gt;&quot;ಗ್ರಾಹಕ ರಕ್ಷಣೆ ಕಾಯ್ದೆ, 2019 ಮತ್ತು ಅದರಡಿಯಲ್ಲಿನ ನಿಯಮಗಳಿಗೆ ವಿರುದ್ಧವಾದ, ಗ್ರಾಹಕರನ್ನು ದಾರಿ ತಪ್ಪಿಸುವ ಅಥವಾ ಅವರ ಮೇಲೆ ಒತ್ತಡ ಹೇರುವ ಯಾವುದೇ ಟಿಪ್ಸ್ ಆಯ್ಕೆಗಳನ್ನು ಮೊಬೈಲ್ ಆಪ್&zwnj;ಗಳಲ್ಲಿ ಒದಗಿಸುವಂತಿಲ್ಲ&quot; ಎಂದು ನಿಯಮಾವಳಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.&lt;/p&gt;&lt;h2&gt;&lt;strong&gt;ಸಚಿವಾಲಯದ ಖಡಕ್ ಎಚ್ಚರಿಕೆ&lt;/strong&gt;&lt;/h2&gt;&lt;p&gt;ಪ್ರಯಾಣ ಆರಂಭವಾಗುವ ಮುನ್ನವೇ ಹೆಚ್ಚುವರಿ ಹಣ ಪಾವತಿಸುವುದರಿಂದ ರೈಡ್ ಬೇಗ ಕನ್ಫರ್ಮ್ ಆಗುತ್ತದೆ, ಚಾಲಕರು ಬೇಗ ಬುಕಿಂಗ್ ಒಪ್ಪಿಕೊಳ್ಳುತ್ತಾರೆ, ಕಾಯುವ ಸಮಯ ಕಡಿಮೆಯಾಗುತ್ತದೆ ಅಥವಾ ಉತ್ತಮ ಸೇವೆ ಸಿಗುತ್ತದೆ ಎಂದು &quot;ನೇರವಾಗಿ ಅಥವಾ ಪರೋಕ್ಷವಾಗಿ ಪ್ರೇರೇಪಿಸುವ, ಭ್ರಮೆ ಹುಟ್ಟಿಸುವ&quot; ಯಾವುದೇ ಫೀಚರ್&zwnj;ಗಳನ್ನು ಆಪ್&zwnj;ಗಳಲ್ಲಿ ಪ್ರದರ್ಶಿಸಬಾರದು ಎಂದು ಸಚಿವಾಲಯ ತಿಳಿಸಿದೆ.&lt;/p&gt;&lt;p&gt;ಇತ್ತೀಚೆಗಷ್ಟೇ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರವು (CCPA) ಸಹ ಇಂತಹ ಅನೈತಿಕ ಪದ್ಧತಿ ಹಾಗೂ ದಾರಿ ತಪ್ಪಿಸುವ ಆಯ್ಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ರೈಡ್-ಹೇಲಿಂಗ್ (ಕ್ಯಾಬ್/ಆಟೋ ಸೇವಾ) ಪ್ಲಾಟ್&zwnj;ಫಾರ್ಮ್&zwnj;ಗಳಿಗೆ ನಿರ್ದೇಶನ ನೀಡಿತ್ತು.&lt;/p&gt;]]></content:encoded>
            <category><![CDATA[business]]></category>
            <dc:creator>Santosh Naik</dc:creator>
            <atom:link href="https://kannada.asianetnews.com/business/cab-apps-advance-tipping-option-banned-transport-ministry-san/articleshow-wzltczf"/>
        </item>
        <item>
            <title><![CDATA[Viral News: ದುಬಾರಿ ಪೆಟ್ರೋಲ್‌ಗೆ ವ್ಯಕ್ತಿ ಕಂಡುಕೊಂಡ ಭರ್ಜರಿ ಉಪಾಯ! ಖರ್ಚು ಅರ್ಧಕ್ಕಿಂತಲೂ ಕಡಿಮೆ, ಟ್ರಿಕ್ ನೋಡಿ ಎಲ್ಲರೂ ಶಾಕ್!]]></title>
            <link>https://kannada.asianetnews.com/viral/man-came-up-with-such-brilliant-homegrown-solution-reduced-petrol-expenses-bmk/articleshow-gw9koaf</link>
            <guid isPermaLink="true">https://kannada.asianetnews.com/viral/man-came-up-with-such-brilliant-homegrown-solution-reduced-petrol-expenses-bmk/articleshow-gw9koaf</guid>
            <pubDate>Thu, 13 Aug 2026 18:37:24 +0530</pubDate>
            <description><![CDATA[ಗಗನಕ್ಕೇರಿದ ಪೆಟ್ರೋಲ್ ಬೆಲೆಯಿಂದ ಬೇಸತ್ತ ಉತ್ತರ ಪ್ರದೇಶದ ಬಿ.ಕಾಂ ಪದವೀಧರ ರೂಪೇಂದ್ರ ಆನಂದ್, ತಮ್ಮ ಪೆಟ್ರೋಲ್ ಬೈಕನ್ನು ಹೈಬ್ರಿಡ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದಾರೆ. ಈ ದೇಶಿ ತಂತ್ರಜ್ಞಾನದಿಂದಾಗಿ, ಅವರ ಮಾಸಿಕ ಪೆಟ್ರೋಲ್ ಖರ್ಚು ₹12,000 ದಿಂದ ₹2,500 ಕ್ಕೆ ಇಳಿದಿದ್ದು, ಸಾವಿರಾರು ರೂಪಾಯಿ ಉಳಿತಾಯ ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxkqq3vhy981f8saj54x6c3,imgname-viral-news-2-1786626432122.jpg" type="image/jpeg" height="390" width="690"/>
            <content:encoded><![CDATA[&lt;p&gt;ಅವಶ್ಯಕತೆಯೇ ಆವಿಷ್ಕಾರದ ತಾಯಿ ಎಂಬ ಪ್ರಸಿದ್ಧ ಮಾತಿದೆ. ಪರಿಸ್ಥಿತಿಗಳು ಮತ್ತು ಎದುರಾಗುವ ಸವಾಲುಗಳು ಮನುಷ್ಯನಿಗೆ ಹೊಸ ದಾರಿಯನ್ನು ಹುಡುಕಲು ಪ್ರೇರೇಪಿಸುತ್ತವೆ. ಈ ಮಾತು ನೂರಕ್ಕೆ ನೂರರಷ್ಟು ನಿಜ ಎಂಬುದನ್ನು ಉತ್ತರ ಪ್ರದೇಶದ ಗೋರಖ್&zwnj;ಪುರದ ನಿವಾಸಿ, ಪ್ರತಿಭಾನ್ವಿತ ಬಿ.ಕಾಂ ಪದವೀಧರ ರೂಪೇಂದ್ರ ಆನಂದ್ ಸಾಬೀತುಪಡಿಸಿದ್ದಾರೆ. ಗಗನಕ್ಕೇರಿರುವ ಪೆಟ್ರೋಲ್ ಬೆಲೆಯಿಂದ ಕಂಗಾಲಾಗಿದ್ದ ಅವರು, ತಮ್ಮದೇ ಸ್ವಂತ ಬುದ್ಧಿವಂತಿಕೆಯಿಂದ ಮಾಡಿದ ವಿಶಿಷ್ಟ ಆವಿಷ್ಕಾರವೊಂದು ಈಗ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದೆ.&lt;/p&gt;&lt;h2&gt;&lt;strong&gt;ಯಾರಿಗೂ ಹೊಳೆಯದ ಐಡಿಯಾ; ದೈನಂದಿನ ಗಡಿಬಿಡಿಗೆ ಬ್ರೇಕ್!&lt;/strong&gt;&lt;/h2&gt;&lt;p&gt;ರೂಪೇಂದ್ರ ಆನಂದ್ ಅವರು ಸ್ವಿಗ್ಗಿ, ಜೊಮಾಟೊ, ರ್ಯಾಪಿಡೊ ಮತ್ತು ಓಲಾದಂತಹ ಪ್ರಮುಖ ಡೆಲಿವರಿ ಹಾಗೂ ರೈಡ್-ಶೇರಿಂಗ್ ಸೇವೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಯುವಕ. ದಿನನಿತ್ಯ ನಗರದಾದ್ಯಂತ ಓಡಾಡಿ ಪಾರ್ಸಲ್ ಹಾಗೂ ಪ್ರಯಾಣಿಕರನ್ನು ತಲುಪಿಸುವುದು ಇವರ ಕೆಲಸವಾಗಿತ್ತು. ಆದರೆ, ಈ ದಿನನಿತ್ಯದ ಗಡಿಬಿಡಿಯಲ್ಲಿ ಅವರ ಬೈಕ್&zwnj;ಗೆ ಪ್ರತಿದಿನ ಸುಮಾರು 400 ರಿಂದ 500 ರೂಪಾಯಿಗಳ ಪೆಟ್ರೋಲ್** ಭಸ್ಮವಾಗುತ್ತಿತ್ತು. ತಿಂಗಳ ಕೊನೆಯಲ್ಲಿ ತಾವು ಸಂಪಾದಿಸಿದ ಹಣದ ಹೆಚ್ಚಿನ ಭಾಗ ಪೆಟ್ರೋಲ್ ಬಂಕ್&zwnj;ಗಳಿಗೇ ಪಾವತಿಯಾಗುತ್ತಿದ್ದುದನ್ನು ಕಂಡು ರೂಪೇಂದ್ರ ಅವರಿಗೆೀವ ತೀವ್ರ ನಿರಾಶೆಯಾಯಿತು. ಈ ಭಾರಿ ವೆಚ್ಚಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕು ಎಂದು ನಿರ್ಧರಿಸಿದ ಅವರು, ಕಳೆದ 5-6 ವರ್ಷಗಳಿಂದ ಒಂದು ಪ್ರತ್ಯೇಕ ಯೋಜನೆಯ ಮೇಲೆ ನಿರಂತರವಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಆ ಪರಿಶ್ರಮದ ಫಲವೇ ಈ ಮ್ಯಾಜಿಕ್ ಬೈಕ್.&lt;/p&gt;&lt;h3&gt;&lt;strong&gt;RTO ಕಿರಿಕಿರಿ ಇಲ್ಲದ ಹೈಬ್ರಿಡ್ ಬೈಕ್!&lt;/strong&gt;&lt;/h3&gt;&lt;p&gt;ರೂಪೇಂದ್ರ ಅವರು ತಮ್ಮ ಹಳೆಯ ಪೆಟ್ರೋಲ್ ಬೈಕ್&zwnj;ಗೆ ಅತ್ಯಂತ ಚಾಣಾಕ್ಷತನದಿಂದ ವಿಶೇಷ Non-RTO ಮೋಟಾರ್ ಮತ್ತು ಬ್ಯಾಟರಿ ವ್ಯವಸ್ಥೆಯನ್ನು ಅಳವಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಎರಡೂ ಇಂಧನಗಳ ನಿಯಂತ್ರಣ;&lt;/strong&gt; ಈ ವಿಶಿಷ್ಟ ಬೈಕ್ ಅನ್ನು ವಿದ್ಯುತ್ (EB) ಮತ್ತು ಪೆಟ್ರೋಲ್ ಎಂಜಿನ್ ಎರಡರಿಂದಲೂ ನಿಯಂತ್ರಿಸಬಹುದು. ಅಗತ್ಯವಿದ್ದಾಗ ಪೆಟ್ರೋಲ್, ಇಲ್ಲವಾದರೆ ಕರೆಂಟ್ ಮೂಲಕ ಓಡಿಸಬಹುದು.&lt;/h3&gt;&lt;h3&gt;&lt;strong&gt;ವೇಗ ಮತ್ತು ಅನುಕೂಲ&lt;/strong&gt;; ಈ ಮೋಟಾರ್ ಗಂಟೆಗೆ 35 ರಿಂದ 40 ಕಿಲೋಮೀಟರ್&zwnj;ಗಳ ಗರಿಷ್ಠ ವೇಗದಲ್ಲಿ ಚಲಿಸುತ್ತದೆ. ಇದು ನಗರದ ವ್ಯಾಪ್ತಿಯಲ್ಲಿ ಡೆಲಿವರಿ ಕೆಲಸಗಳನ್ನು ಮಾಡಲು ಅತ್ಯಂತ ಸೂಕ್ತವಾಗಿದೆ.&lt;/h3&gt;&lt;h3&gt;&lt;strong&gt;ದಾಖಲೆಗಳ ಕಿರಿಕಿರಿ ಇಲ್ಲ;&lt;/strong&gt; ಇದು Non-RTO ಮೋಟಾರ್ ಆಗಿರುವುದರಿಂದ, ಆರ್&zwnj;ಟಿಒ ನಿಯಮಗಳು, ಹೆಚ್ಚುವರಿ ಕಾಗದದ ಪತ್ರಗಳ ಹಸೀಲಿ ಅಥವಾ ಕಾನೂನು ತೊಂದರೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ.&lt;/h3&gt;&lt;p&gt;&lt;strong&gt;ಸುರಕ್ಷತೆ;&lt;/strong&gt; ಬೈಕ್&zwnj;ನಲ್ಲಿ ಲೀಡ್-ಆಸಿಡ್ ಬ್ಯಾಟರಿಯನ್ನು ಬಳಸಲಾಗಿದ್ದು, ಮಳೆ, ನೀರು ಅಥವಾ ಧೂಳಿನಿಂದ ರಕ್ಷಿಸಲು ವಿಶೇಷ ಸುರಕ್ಷಿತ ಪೆಟ್ಟಿಗೆಯೊಳಗೆ ಇರಿಸಿ ಲಾಕ್ ಮಾಡಲಾಗಿದೆ.&lt;/p&gt;&lt;h3&gt;&lt;strong&gt;ತಿಂಗಳಿಗೆ ಸಾವಿರಾರು ರೂಪಾಯಿ ಉಳಿತಾಯ!&lt;/strong&gt;&lt;/h3&gt;&lt;p&gt;ಈ ನವೀನ ಜುಗಾಡ್ ಆವಿಷ್ಕಾರವು ರೂಪೇಂದ್ರ ಅವರ ಜೀವನ ಶೈಲಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಈ ಯುವಕ ಪೆಟ್ರೋಲ್&zwnj;ಗಾಗಿ ತಿಂಗಳಿಗೆ ಭಾರಿ ಪ್ರಮಾಣದ 12,000 ದಿಂದ 15,000 ರೂಪಾಯಿಗಳನ್ನು ಜೇಬಿನಿಂದ ವೆಚ್ಚ ಮಾಡಬೇಕಾಗಿತ್ತು. ಆದರೆ, ಈ ಹೊಸ ಎಲೆಕ್ಟ್ರಿಕ್ ವ್ಯವಸ್ಥೆ ಅಳವಡಿಸಿಕೊಂಡ ನಂತರ, ಅವರ ಮಾಸಿಕ ವೆಚ್ಚ ಕೇವಲ 2,500 ರಿಂದ 3,000 ರೂಪಾಯಿಗಳಿಗೆ ಕುಸಿದಿದೆ. ಅಂದರೆ, ತಿಂಗಳಿಗೆ ಬರೋಬ್ಬರಿ 10,000 ರೂ.ಗೂ ಹೆಚ್ಚು ಹಣ ಅವರ ಜೇಬಿನಲ್ಲೇ ಉಳಿಯುತ್ತಿದೆ. ಈ ಸಂಪೂರ್ಣ ಉತ್ಪಾದನಾ ಘಟಕವನ್ನು ಸಿದ್ಧಪಡಿಸಲು ಅವರಿಗೆ ಆರಂಭದಲ್ಲಿ ಒಮ್ಮೆಗೆ ಸುಮಾರು 35,000 ದಿಂದ 40,000 ರೂಪಾಯಿಗಳ ವೆಚ್ಚ ಬಂದಿತ್ತು. ಆದರೆ, ಸುದೀರ್ಘಾವಧಿಯ ಉಳಿತಾಯವನ್ನು ಲೆಕ್ಕಹಾಕಿದರೆ ಈ ಹೂಡಿಕೆಯು ಅವರ ಪಾಲಿಗೆ ದೊಡ್ಡ ವರದಾನವಾಗಿದೆ.&lt;/p&gt;&lt;h3&gt;&lt;strong&gt;ಪ್ರಶಂಸೆಯ ಸುರಿಮಳೆ!&lt;/strong&gt;&lt;/h3&gt;&lt;p&gt;ಹೆಚ್ಚುತ್ತಿರುವ ಹಣದುಬ್ಬರ ಮತ್ತು ಪೆಟ್ರೋಲ್ ಬೆಲೆಯಿಂದ ಜನಸಾಮಾನ್ಯರು ತಂಪುನೆರಳಿಗಾಗಿ ಪರದಾಡುತ್ತಿರುವ ಈ ಯುಗದಲ್ಲಿ, ರೂಪೇಂದ್ರ ಆನಂದ್ ಅವರ ಈ ಆವಿಷ್ಕಾರವು ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಚರ್ಚೆಯ ವಿಷಯವಾಗಿದೆ. ಒಬ್ಬ ಸಾಮಾನ್ಯ ಬಿ.ಕಾಂ ಪದವೀಧರ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಕಂಡುಕೊಂಡ ಈ ದೇಶಿ 'ಜುಗಾಡ್' ಪರಿಹಾರಕ್ಕೆ ಸಾರ್ವಜನಿಕರು ಮತ್ತು ನೆಟ್ಟಿಗರು ಸಾಹಸವನ್ನು ಮುಕ್ತಕಂಠದಿಂದ ಹೊಗಳುತ್ತಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/man-came-up-with-such-brilliant-homegrown-solution-reduced-petrol-expenses-bmk/articleshow-gw9koaf"/>
        </item>
        <item>
            <title><![CDATA[‘ಟಾಕ್ಸಿಕ್’ ನಟಿಯರ ನಡುವೆ ಕೋಲ್ಡ್‌ವಾರ್? ಸಿದ್ಧಾರ್ಥ್ ಹಳೆ ಲವ್‌ಸ್ಟೋರಿಯಿಂದ ಶುರುವಾಯ್ತಾ ಮುನಿಸು?]]></title>
            <link>https://kannada.asianetnews.com/entertainment/kiara-advani-tara-sutaria-feud-sidharth-malhotra-connection-sparks-new-buzz-gvd/articleshow-lbz048g</link>
            <guid isPermaLink="true">https://kannada.asianetnews.com/entertainment/kiara-advani-tara-sutaria-feud-sidharth-malhotra-connection-sparks-new-buzz-gvd/articleshow-lbz048g</guid>
            <pubDate>Thu, 13 Aug 2026 18:29:11 +0530</pubDate>
            <description><![CDATA[ಸಿದ್ದಾರ್ಥ್ ಮಲ್ಹೋತ್ರಾ ಜೊತೆಗಿನ ಹಳೆ ಸಂಬಂಧದ ಕಾರಣಕ್ಕೆ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ನಡುವೆ ಎಲ್ಲವೂ ಸರಿ ಇಲ್ಲ ಅಂತೊಂದು ವಿಡಿಯೋ ವೈರಲ್ ಆಗಿದೆ. ಇವರಿಬ್ಬರ ನಡುವೆ ಮುನಿಸು ಇದ್ಯಾ? ಇಂಟರ್‌ನೆಟ್‌ನಲ್ಲಿ ಏನಿದು ಚರ್ಚೆ? ತಿಳಿಯಲು ಮುಂದೆ ಓದಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxk8a934x10swz84awjv6a8,imgname-nkn-1786625927459.png" type="image/jpeg" height="390" width="690"/>
            <content:encoded><![CDATA[&lt;p&gt;ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಇಂಟರ್&zwnj;ನೆಟ್&zwnj;ನಲ್ಲಿ ಸಖತ್ ಹೈಪ್ ಸೃಷ್ಟಿಸಿದೆ. ಸಿನಿಮಾದಲ್ಲಿ ಇಬ್ಬರೂ ನಟಿಯರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಆಕ್ಷನ್-ಡ್ರಾಮಾ ಜೊತೆಗೆ ಹಲವು ಟ್ವಿಸ್ಟ್&zwnj;ಗಳಿರುವ ನಿರೀಕ್ಷೆ ಇದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆದರೆ, ಈ ಕಾರ್ಯಕ್ರಮದಲ್ಲಿ ಕಿಯಾರಾ, ತನ್ನ ಸಹನಟಿ ತಾರಾ ಜೊತೆ ತುಂಬಾನೇ ಅನ್&zwnj;ಕಂಫರ್ಟಬಲ್ ಆಗಿದ್ದರು ಅಂತ ಅಭಿಮಾನಿಗಳು ಗುರುತಿಸಿದ್ದಾರೆ.&lt;/p&gt;&lt;p&gt;&lt;strong&gt;ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಡುವೆ ಮುನಿಸು?&lt;/strong&gt;&lt;/p&gt;&lt;p&gt;ಹೌದು, ನೀವು ಓದಿದ್ದು ನಿಜ. ಇವರಿಬ್ಬರ ನಡುವೆ ಏನೋ ಸರಿಯಿಲ್ಲ ಅನ್ನೋ ಮಾತು ಈಗ ಹೊಸದಲ್ಲ. 2020ರಲ್ಲೇ ಒಂದು ಮದುವೆ ಸಮಾರಂಭದಲ್ಲಿ ಕಿಯಾರಾ, ತಾರಾರನ್ನು ಕಡೆಗಣಿಸಿದ್ದರು ಅಂತ ವರದಿಯಾಗಿತ್ತು. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಒಬ್ಬರು ಇನ್&zwnj;ಫ್ಲುಯೆನ್ಸರ್ ಈ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ತಾರಾ ಹಿಂದೆ ಡೇಟಿಂಗ್&zwnj;ನಲ್ಲಿದ್ದರು ಅನ್ನೋ ಕಾರಣಕ್ಕೆ ಕಿಯಾರಾಗೆ ಅವರನ್ನು ಕಂಡರೆ ಒಂದು ಥರಾ 'ಬೆದರಿಕೆ' ಇದೆಯಂತೆ. ಸಿದ್ಧಾರ್ಥ್ ಮಾಜಿ ಪ್ರೇಯಸಿ ಆಲಿಯಾ ಭಟ್ ಜೊತೆ ಕಿಯಾರಾಗೆ ಈ ಸಮಸ್ಯೆ ಇಲ್ಲ, ಯಾಕಂದ್ರೆ ಆಲಿಯಾ 'ಬೇರೆ ಲೆವೆಲ್'ನಲ್ಲಿದ್ದಾರೆ, ಆದರೆ ತಾರಾ ವಿಚಾರದಲ್ಲಿ ಮಾತ್ರ ಕಿಯಾರಾ ಅಸಹಜವಾಗಿ ವರ್ತಿಸುತ್ತಾರೆ ಅಂತ ಆ ಇನ್&zwnj;ಫ್ಲುಯೆನ್ಸರ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನೆಟ್ಟಿಗರು ಹೇಳಿದ್ದೇನು?&lt;/strong&gt;&lt;/h2&gt;&lt;p&gt;ಒಬ್ಬ ಯೂಸರ್, &quot;ಕಿಯಾರಾ ಜೊತೆ ಸಂಬಂಧ ಶುರುವಾಗೋಕೂ ಮುಂಚೆಯೇ ಆಲಿಯಾ-ಸಿದ್ಧಾರ್ಥ್ ಬ್ರೇಕಪ್ ಮಾಡಿಕೊಂಡಿದ್ದರು. ಆದರೆ ಸಿದ್ಧಾರ್ಥ್-ತಾರಾ ವಿಷಯದಲ್ಲಿ ಹಾಗಲ್ಲ, ಟೈಮ್&zwnj;ಲೈನ್ ಹತ್ತಿರದಲ್ಲಿದೆ&quot; ಅಂತ ಬರೆದಿದ್ದಾರೆ. ಇನ್ನೊಬ್ಬರು, &quot;ತಾರಾಗೆ ಒಳ್ಳೆ ಪೊಟೆನ್ಶಿಯಲ್ ಇತ್ತು, ಅವರು ಶ್ರದ್ಧಾ ಕಪೂರ್ ಹಾದಿಯಲ್ಲಿ ಸಾಗಬಹುದಿತ್ತು. ಈ ಜನರೇಷನ್&zwnj;ನ ಆಲಿಯಾ-ಶ್ರದ್ಧಾ ಜೋಡಿಯಂತೆ ತಾರಾ-ಅನನ್ಯಾ ಆಗಬೇಕಿತ್ತು. ತಾರಾಗೆ ಬಾಲಿವುಡ್&zwnj;ನಲ್ಲಿ ಇನ್ನಷ್ಟು ಅವಕಾಶಗಳು ಸಿಗಲಿ&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬರು, &quot;ಸಿದ್ಧಾರ್ಥ್ ಎಲ್ಲರ ಜೊತೆನೂ ಸುತ್ತಾಡಿದ್ದಾರೆ, ಜಾಕ್ವೆಲಿನ್ ಕೂಡಾ. ಹಾಗಾದ್ರೆ ಯಾರು ಉಳಿದಿದ್ದಾರೆ? ಅಂದಹಾಗೆ, ಬಾಲಿವುಡ್&zwnj;ನಲ್ಲಿ ಓಪನ್ ಮ್ಯಾರೇಜ್, ರಣಬೀರ್ ಸೀರಿಯಲ್ ಚೀಟರ್, ಸಿದ್-ಕಿಯಾರಾ ಲ್ಯಾವೆಂಡರ್ ಹೋಮೋ ಮ್ಯಾರೇಜ್... ಹೀಗೆಲ್ಲಾ ಮಾತುಗಳಿವೆ. ಇದರಲ್ಲಿ ಯಾವುದು ನಿಜ? ಬಾಲಿವುಡ್&zwnj;ನಲ್ಲಿ ಯಾವುದೂ ನಿಜವಾದ ಮದುವೆಯಲ್ಲ&quot; ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kiara-advani-tara-sutaria-feud-sidharth-malhotra-connection-sparks-new-buzz-gvd/articleshow-lbz048g"/>
        </item>
        <item>
            <title><![CDATA[ಈ ವಿಷ್ಯದಲ್ಲಿ ಸಕ್ಸಸ್ ಬೇಕಾ? ಒಂದೇ ಒಂದು ಅಕ್ಕಿ ಕಾಳಿನಿಂದ ಇಷ್ಟು ಮಾಡಿ.. ನಂತ್ರ ಮ್ಯಾಜಿಕ್ ನೋಡಿ]]></title>
            <link>https://kannada.asianetnews.com/gallery/vaastu/viral-vastu-trick-boost-your-success-with-this-simple-rice-hack-e7xgk9r</link>
            <guid isPermaLink="true">https://kannada.asianetnews.com/gallery/vaastu/viral-vastu-trick-boost-your-success-with-this-simple-rice-hack-e7xgk9r</guid>
            <pubDate>Thu, 13 Aug 2026 18:24:40 +0530</pubDate>
            <description><![CDATA[Vastu remedies for success: ನಿಮ್ಮ ಮುಂದಿನ ಪರೀಕ್ಷೆ ಅಥವಾ ಕೆಲಸದಲ್ಲಿ ಗೆಲುವು ಸಿಗಬೇಕೆ? ಮನೆಯಿಂದ ಹೊರಡುವ ಮುನ್ನ ಅನುಸರಿಸಬೇಕಾದ ಒಂದು ಅದ್ಭುತ ವಾಸ್ತು ಹ್ಯಾಕ್ ಇಲ್ಲಿದೆ. ಕೇವಲ ಒಂದು ನಿಮಿಷದ ಈ ಪ್ರಕ್ರಿಯೆ ನಿಮ್ಮ ದಿನವನ್ನೇ ಬದಲಿಸಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzxjj5rt1ahqg00305fpqqfc,imgname-thumbnail---2026-08-13t180855.521-1786625201946.jpg" type="image/jpeg" height="390" width="690"/>
            <content:encoded><![CDATA[&lt;p&gt;Vastu remedies for success: ನಿಮ್ಮ ಮುಂದಿನ ಪರೀಕ್ಷೆ ಅಥವಾ ಕೆಲಸದಲ್ಲಿ ಗೆಲುವು ಸಿಗಬೇಕೆ? ಮನೆಯಿಂದ ಹೊರಡುವ ಮುನ್ನ ಅನುಸರಿಸಬೇಕಾದ ಒಂದು ಅದ್ಭುತ ವಾಸ್ತು ಹ್ಯಾಕ್ ಇಲ್ಲಿದೆ. ಕೇವಲ ಒಂದು ನಿಮಿಷದ ಈ ಪ್ರಕ್ರಿಯೆ ನಿಮ್ಮ ದಿನವನ್ನೇ ಬದಲಿಸಬಹುದು.&lt;/p&gt;&lt;img&gt;&lt;p&gt;&lt;strong&gt;ಸಕಾರಾತ್ಮಕ ಫಲಿತಾಂಶ ಸಿಗಲು&lt;/strong&gt;ಜೀವನದಲ್ಲಿ ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಬೇಕು ಎಂಬ ಹಂಬಲವಿರುತ್ತದೆ. ಅದು ಶಾಲಾ-ಕಾಲೇಜಿನ ಸಾಮಾನ್ಯ ಪರೀಕ್ಷೆಯಾಗಿರಲಿ, ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಯಾಗಿರಲಿ ಅಥವಾ ಉದ್ಯೋಗಕ್ಕಾಗಿ ಎದುರಿಸುವ ಸಂದರ್ಶನವೇ ಆಗಿರಲಿ, ತಯಾರಿ ಎಷ್ಟೇ ಇದ್ದರೂ ಕೊನೆಯ ಕ್ಷಣದ ಆತಂಕ ಎಲ್ಲರನ್ನೂ ಕಾಡುತ್ತದೆ. ಇಂತಹ ಸಮಯದಲ್ಲಿ ಮನಸ್ಸಿಗೆ ಆತ್ಮವಿಶ್ವಾಸ ತುಂಬಲು ಮತ್ತು ಕೆಲಸದಲ್ಲಿ ಸಕಾರಾತ್ಮಕ ಫಲಿತಾಂಶ ಪಡೆಯಲು ಈಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಶೇಷ ವಾಸ್ತು ಪರಿಹಾರ ಅಥವಾ ಆಧ್ಯಾತ್ಮಿಕ ನಂಬಿಕೆ ಹೆಚ್ಚು ಸದ್ದು ಮಾಡುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಏನಿದು ವಿಶೇಷ ಪರಿಹಾರ?&lt;/strong&gt;ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ನೀವು ಯಾವುದೇ ಪ್ರಮುಖ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಈ ಕೆಳಗಿನ ಕ್ರಮವನ್ನು ಅನುಸರಿಸಬಹುದು..&lt;/p&gt;&lt;p&gt;ಮನೆಯಿಂದ ಹೊರಬರುವಾಗ ಕೇವಲ ಒಂದು ಅಕ್ಕಿ ಕಾಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ.&lt;/p&gt;&lt;p&gt;ಮನೆಯ ಹೊಸ್ತಿಲು ದಾಟಿ ಹೊರಗೆ ನಿಂತುಕೊಂಡು, ಅತ್ಯಂತ ಭಕ್ತಿ ಮತ್ತು ನಂಬಿಕೆಯಿಂದ &quot;ಶ್ರೀ ಶಿವಾಯ ನಮಸ್ತುಭ್ಯಂ&quot; ಎಂಬ ಮಂತ್ರವನ್ನು ಒಂದು ಬಾರಿ ಪಠಿಸಿ.&lt;/p&gt;&lt;p&gt;ಆ ಅಕ್ಕಿ ಕಾಳನ್ನು ನಿಮ್ಮ ಮನೆಯ ಹತ್ತಿರವಿರುವ ಯಾವುದಾದರೂ ಒಂದು ಗಿಡದ ಮೇಲೆ ಅಥವಾ ಗಿಡದ ಕುಂಡದಲ್ಲಿ ಹಾಕಿ, ನಂತರ ನಿಮ್ಮ ಕೆಲಸಕ್ಕೆ ಹೊರಡಿ.&lt;/p&gt;&lt;img&gt;&lt;p&gt;&lt;strong&gt;ಇದರ ಹಿಂದಿನ ಉದ್ದೇಶವೇನು?&lt;/strong&gt;ಸನಾತನ ಸಂಪ್ರದಾಯದಲ್ಲಿ ಅಕ್ಕಿ ಅಥವಾ ಅಕ್ಷತೆಯನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶಿವನ ಮಂತ್ರವನ್ನು ಪಠಿಸುವುದರಿಂದ ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಪರೀಕ್ಷೆ ಅಥವಾ ಸಂದರ್ಶನದಂತಹ ಒತ್ತಡದ ಸಮಯದಲ್ಲಿ ಇಂತಹ ಸಣ್ಣ ಕ್ರಿಯೆಗಳು ವ್ಯಕ್ತಿಯಲ್ಲಿ ಧನಾತ್ಮಕ ಶಕ್ತಿಯನ್ನು (Positive Energy) ಹೆಚ್ಚಿಸುತ್ತವೆ ಮತ್ತು ಆತಂಕವನ್ನು ಕಡಿಮೆ ಮಾಡುತ್ತವೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಪರಿಶ್ರಮವೇ ಯಶಸ್ಸಿನ ಮೊದಲ ಮೆಟ್ಟಿಲು&lt;/strong&gt;ವಾಸ್ತು ಅಥವಾ ಜ್ಯೋತಿಷ್ಯ ಶಾಸ್ತ್ರದ ಇಂತಹ ಪರಿಹಾರಗಳು ನಂಬಿಕೆಯ ಮೇಲೆ ಆಧಾರಿತವಾಗಿವೆ. ಆದರೆ, ಯಶಸ್ಸು ಗಳಿಸಲು ಕೇವಲ ಇಂತಹ ಪರಿಹಾರಗಳ ಮೇಲೆ ಅವಲಂಬಿತವಾಗದೆ, ಅದರ ಜೊತೆಗೆ ಶ್ರದ್ಧೆ, ಕಠಿಣ ಪರಿಶ್ರಮ ಮತ್ತು ಸರಿಯಾದ ಸಿದ್ಧತೆ ಅತ್ಯಗತ್ಯ. ನಿಮ್ಮ ಪ್ರಯತ್ನಕ್ಕೆ ಈ ರೀತಿಯ ಸಣ್ಣ ನಂಬಿಕೆಗಳು 'ಅದೃಷ್ಟದ ಬೆಂಬಲ' ನೀಡಬಲ್ಲವು ಎಂಬುದು ಇದನ್ನು ಹಂಚಿಕೊಳ್ಳುತ್ತಿರುವವರ ಅಭಿಪ್ರಾಯ.&lt;/p&gt;&lt;p&gt;ಸದ್ಯ ಈ ಅಕ್ಕಿ ಕಾಳಿನ ಪರಿಹಾರವು ಇನ್&zwnj;ಸ್ಟಾಗ್ರಾಮ್ ಮತ್ತು ಫೇಸ್&zwnj;ಬುಕ್&zwnj;ನಂತಹ ವೇದಿಕೆಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದ್ದು, ನೀವೂ ಕೂಡ ಒಮ್ಮೆ ನಿಮ್ಮ ಮುಂದಿನ ಪ್ರಮುಖ ಕೆಲಸಕ್ಕೆ ಹೋಗುವಾಗ ಇದನ್ನು ಪ್ರಯತ್ನಿಸಿ ನೋಡಬಹುದು.&lt;/p&gt;]]></content:encoded>
            <category><![CDATA[vaastu]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/vaastu/viral-vastu-trick-boost-your-success-with-this-simple-rice-hack-e7xgk9r"/>
        </item>
        <item>
            <title><![CDATA[ಪುನೀತ್ ಕನಸನ್ನು 6 ವರ್ಷದಲ್ಲಿ ನನಸು ಮಾಡಿದ ಯಶ್; ಅಪ್ಪು ಮಾತನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದ ರಾಕಿಂಗ್ ಸ್ಟಾರ್!]]></title>
            <link>https://kannada.asianetnews.com/sandalwood/puneeth-rajkumar-dream-words-on-yash-historical-mythological-role-ramayana-ravana/articleshow-but9n2b</link>
            <guid isPermaLink="true">https://kannada.asianetnews.com/sandalwood/puneeth-rajkumar-dream-words-on-yash-historical-mythological-role-ramayana-ravana/articleshow-but9n2b</guid>
            <pubDate>Thu, 13 Aug 2026 18:18:47 +0530</pubDate>
            <description><![CDATA[ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರು ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಯಶ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ತಾವು ಕಂಡ ಕನಸನ್ನು ಹೇಳಿದ್ದರು. ಪುನೀತ್ ಮಾತನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡ ಯಶ್ ಕೇವಲ ಆರೇಳು ವರ್ಷದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನನಸು ಮಾಡಿದ್ದಾರೆ. ಟಾಕ್ಸಿಕ್ ಪಾತ್ರವಲ್ಲ, ಹಾಗಾದರೆ ಯಾವುದು? ಇಲ್ಲಿ ತಿಳಿಯಿರಿ]]></description>
            <media:content url="https://static.asianetnews.com/images/w-1280,h-720,format-jpg,imgid-01kzxjgd0g4yyjb6chazq9vxx2,imgname-puneeth-rajkumar-yash-1786625143822.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದ ಮರೆಯಲಾಗದ ನೆನವುಗಳಲ್ಲಿ ಒಬ್ಬರಾಗಿರುವ ಪುನೀತ್ ರಾಜ್&zwnj; ಕುಮಾರ್ ಅವರು ಸಿನಿಮಾಗಳು ಹಾಗೂ ನಾಯಕ ನಟರ ಬಗ್ಗೆ ಹೇಳಿದ ಬಹುತೇಕ ಮಾತುಗಳು ನೈಜ ಘಟನೆಗಳಾಗಿ ನಮ್ಮ ಕಣ್ಣಮುಂದೆ ಬಂದಿವೆ. ಅದರಲ್ಲಿಯೂ ನಟ ಯಶ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಪುನೀತ್ ರಾಜ್&zwnj;ಕುಮಾರ್ ಹೇಳಿದ ಮಾತನ್ನು ಇದೀಗ ಯಶ್ ನನಸು ಮಾಡಿದ್ದಾರೆ.&lt;/p&gt;&lt;p&gt;ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಗಜಕೇಸರಿ ಸಿನಿಮಾವನ್ನು ಮಾಡಿದಾಗಲೇ ಸುವರ್ಣ ನ್ಯೂಸ್&zwnj;ನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪುನೀತ್ ರಾಜ್ ಕುಮಾರ್ ಅವರನ್ನು ನಟಿ ತಾರಾ ಅವರು ಮಾತನಾಡಿಸಿದ್ದರು. ಈ ವೇಳೆ ನಟ ಯಶ್ ಕೂಡ ಹಾಜರಿದ್ದರು. ಆಗ ನಟಿ ತಾರಾ ಅವರು ಸುವರ್ಣ ನ್ಯೂಸ್ ಲೋಗೋ ಹಿಡಿದು 'ಪುನೀತ್ ಅವರೇ ನೀವು ಯಶ್ ಅವರನ್ನು ಯಾವ ಪಾತ್ರದಲ್ಲಿ ನೋಡಬೇಕು ಅಂತಾ ಇಷ್ಟ, ಅಂದರೆ ಯಾವ ರೀತಿ ಪರದೆ ಮೇಲೆ ನೋಡಬೇಕು ಅಂತಾ ಇಷ್ಟಪಡ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ&lt;/p&gt;&lt;p&gt;ಇದಕ್ಕೆ ಉತ್ತರಿಸಿದ ಪುನೀತ್ ರಾಜ್ ಕುಮಾರ್ ಅವರು, ಎಂದಿನಂತೆ ನಗುತ್ತಲೇ 'ರಾಕಿ ಬಾಯ್' ಎಂದು ಹೇಳುತ್ತಾರೆ. ಆಗ ಅದನ್ನ ಮಾಡಾಯ್ತು (ಕೆಜಿಎಫ್ ಸಿನಿಮಾ), ಆ ಬಗ್ಗೆ ಹಿಸ್ಟರಿ ಕೂಡ ಕ್ರಿಯೇಟ್ ಆಯ್ತು. ಅದನ್ನು ಬಿಟ್ಟು ಬೇರೆ ಯಾವುದು ಎಂದು ಪುನಃ ತಾರಾ ಅವರು ಪ್ರಶ್ನೆ ಮಾಡುತ್ತಾರೆ.&lt;/p&gt;&lt;h2&gt;&lt;strong&gt;ಇತಿಹಾಸ ಅಥವಾ ಪೌರಾಣಿಕ ಪಾತ್ರ&lt;/strong&gt;&lt;/h2&gt;&lt;p&gt;ಪುನೀತ್ ಮಾತು ಮುಂದುವರೆಸಿ, ಯಶ್ ಅವರು ಬೇರೆ ಮತ್ತೆ ಈಗ ಇರುವ ಯಶ್ ಗಡ್ಡಕ್ಕೆ ಹಾಗೂ ಕೂದಲಿನ ಉದ್ದಕ್ಕೆ ನನಗೆ ಅನ್ನಿಸುವ ಮಟ್ಟಿಗೆ ಹಿಸ್ಟೋರಿಕಲ್ ಅಥವಾ ಮೈಥಲಾಗಿಕಲ್ ಕ್ಯಾರೆಕ್ಟರ್ (ಐತಿಹಾಸಿಕ ಅಥವಾ ಪೌರಾಣಿಕ ಪಾತ್ರ) ಅನ್ನು ಮಾಡಬೇಕು. ಈಗಾಗಲೇ ಅದನ್ನು ಕೃಷ್ಣ ಡೈರೆಕ್ಷನ್ ಮಾಡಿರುವ ಸಿನಿಮಾ ಗಜಕೇಸರಿ ಸಿನಿಮಾದಲ್ಲಿ ಮಾಡಿದ್ದಾರೆ. ಆದರೆ, ಅದರಲ್ಲಿ ಕೇವಲ ಒಂದು ಬಿಟ್ (ಒಂದು ದೃಶ್ಯ) ಬಂದು ಹೋಗುತ್ತದೆ. ಭವಿಷ್ಯ ಈಗಿರುವ ತಂತ್ರಜ್ಞಾನ ಮತ್ತು ಜನರು ಇಚ್ಛೆಪಡುವಂತಹದ್ದನ್ನು ನೋಡಿದರೆ ಹಿಸ್ಟೋರಿಕಲ್ ಪಾತ್ರದಲ್ಲಿ ಯಶ್ ಬಂದರೆ ವೆರಿಗುಡ್ ಎಂದು ಹೇಳುತ್ತಾರೆ.&lt;/p&gt;&lt;p&gt;ಪುನೀತ್ ಅವರ ಕನಸಿನಂತೆ 2019ರಲ್ಲಿ ಹೇಳಿದ ಮಾತನ್ನು ಯಶ್ ಕೆಲವೇ ವರ್ಷಗಳನ್ನು ನನಸು ಮಾಡಿದ್ದಾರೆ. ಅದೂ ಕೂಡ ಪ್ಯಾನ್ ಇಂಡಿಯಾ ಮಟ್ಟಿಗೆ ದೊಡ್ಡದಾದ ಪಾತ್ರದಲ್ಲಿ ರಾಮಾಯಣದ ಪ್ರಮುಖ ಪಾತ್ರಧಾರಿ 'ರಾವಣ'ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಯಶ್ ಅವರು ತಮ್ಮೊಂದಿಗೆ ಒಡನಾಟವಿದ್ದ ಯಾವುದೇ ಗಣ್ಯರು ಹೇಳಿದ ಒಳ್ಳೆಯ ಮಾತನ್ನು ಎಂದಿಗೂ ಕಡೆಗಣಿಸುವುದಿಲ್ಲ ಎಂಬುದಕ್ಕೆ ಇದೂ ಕೂಡ ಒಂದು ಉದಾಹರಣೆಯಾಗಿದೆ. ಇನ್ನು ರಾಮಾಯಣ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಶ್ರೀರಾಮನಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ರಾವಣ ಪಾತ್ರಕ್ಕೂ ನೀಡುತ್ತಿರುವುದು ಯಶ್&zwnj;ಗೆ ಸಂದ ದೊಡ್ಡ ಗೌರವವೂ ಆಗಿದೆ.&lt;/p&gt;&lt;p&gt;ಹಳೆ ನೆನಪುಗಳು: ಬನ್ನಿ ಸವಿಯೋಣ.&amp;nbsp;ಅಪ್ಪು:-&amp;nbsp;&quot;Yash should do a historical or a mythological role.&quot;&amp;nbsp;ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೇ... ನಮಗೆ ನಿಮಗೆ ಯಾಕೆ ಟೆನ್ಶನು... #Yash #ToxicTheMovie pic.twitter.com/MGG5bOkaNV&lt;/p&gt;&lt;p&gt;&mdash; Cinema Premi✍ (@kalaavidanaanu) August 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[sandalwood]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/sandalwood/puneeth-rajkumar-dream-words-on-yash-historical-mythological-role-ramayana-ravana/articleshow-but9n2b"/>
        </item>
        <item>
            <title><![CDATA[ವರ್ಷಕ್ಕೆ 365 ಅಲ್ಲ, 372 ದಿನಗಳು!: ವಿಜ್ಞಾನಿಗಳಿಗೆ ಸಿಕ್ಕ ಅಪರೂಪದ ಶಂಖ ಬಿಚ್ಚಿಟ್ಟಿತು ಪ್ರಾಚೀನ ಭೂಮಿಯ ಗುಟ್ಟು!]]></title>
            <link>https://kannada.asianetnews.com/science/70-million-years-ago-earth-had-372-days-a-year-fossil-shell-study-san/articleshow-xntb4od</link>
            <guid isPermaLink="true">https://kannada.asianetnews.com/science/70-million-years-ago-earth-had-372-days-a-year-fossil-shell-study-san/articleshow-xntb4od</guid>
            <pubDate>Thu, 13 Aug 2026 18:13:54 +0530</pubDate>
            <description><![CDATA[ಸುಮಾರು 7 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಒಂದು ವರ್ಷಕ್ಕೆ 372 ದಿನಗಳಿದ್ದವು ಮತ್ತು ದಿನದ ಅವಧಿ 23.5 ಗಂಟೆಗಳಾಗಿತ್ತು ಎಂದು ಒಮಾನ್‌ನಲ್ಲಿ ಸಿಕ್ಕ 'ಟೊರೈಟಿಸ್ ಸಂಚೆಜಿ' ಎಂಬ ಶಂಖದ ಪಳೆಯುಳಿಕೆಯ ಅಧ್ಯಯನದಿಂದ ತಿಳಿದುಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxj6qwe294pwq2x5qrejz4z,imgname-fossil-shell-study-1786624827278.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್ (ಆ.13): &lt;/strong&gt;ಸುಮಾರು 7 ಕೋಟಿ ವರ್ಷಗಳ ಹಿಂದೆ ಅಂದರೆ 'ಕ್ರಿಟೇಶಿಯಸ್' (Cretaceous) ಯುಗದಲ್ಲಿ ಭೂಮಿಯಲ್ಲಿ ಒಂದು ವರ್ಷಕ್ಕೆ 365 ದಿನಗಳ ಬದಲಾಗಿ ಬರೋಬ್ಬರಿ 372 ದಿನಗಳಿದ್ದವು ಮತ್ತು ಅಂದಿನ ಒಂದು ದಿನದ ಅವಧಿ ಈಗಿಗಿಂತ ಸುಮಾರು ಅರ್ಧ ಗಂಟೆ ಕಮ್ಮಿಯಿತ್ತು, ಅಂದರೆ ಕೇವಲ 23 ಗಂಟೆ 31 ನಿಮಿಷವಾಗಿತ್ತು!&lt;/p&gt;&lt;p&gt;'ಅಡ್ವಾನ್ಸಿಂಗ್ ಅರ್ಥ್ ಅಂಡ್ ಸ್ಪೇಸ್ ಸೈನ್ಸಸ್' (Advancing Earth and Space Sciences) ಜರ್ನಲ್&zwnj;ನಲ್ಲಿ ಪ್ರಕಟವಾಗಿರುವ ಸಂಶೋಧನಾ ಪ್ರಬಂಧವೊಂದರಲ್ಲಿ ಈ ರೋಚಕ ಮಾಹಿತಿ ಬಹಿರಂಗವಾಗಿದೆ. ಒಮಾನ್ ದೇಶದ 'ಅಲ್-ಹಾಜರ್' ಪರ್ವತ ಶ್ರೇಣಿಯಲ್ಲಿ ದೊರೆತ 'ಟೊರೈಟಿಸ್ ಸಂಚೆಜಿ' (Torreites sanchezi) ಎಂಬ ಹೆಸರಿನ ಅತ್ಯಂತ ಪುರಾತನ 'ರುಡಿಸ್ಟ್ ಬೈವಾಲ್ವ್' (ಒಂದು ರೀತಿಯ ಶಂಖ/ಮೃದ್ವಂಗಿ) ಪಳೆಯುಳಿಕೆಯ ರಿಂಗ್&zwnj;ಗಳನ್ನು ಲೇಸರ್ ಆಧಾರಿತ ತಂತ್ರಜ್ಞಾನದ ಮೂಲಕ ಅಧ್ಯಯನ ಮಾಡಿದಾಗ ಈ ಐತಿಹಾಸಿಕ ರಹಸ್ಯ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಲೇಸರ್ ಪರೀಕ್ಷೆಯಿಂದ ಸಿಕ್ಕಿತು ದಿನಗಳ ಲೆಕ್ಕಾಚಾರ&lt;/strong&gt;&lt;/h2&gt;&lt;p&gt;ಸಂಶೋಧನೆಗೆ ಒಳಪಟ್ಟ ಈ ಜಲಚರ ಜೀವಿಯು ಸುಮಾರು 7 ಕೋಟಿ ವರ್ಷಗಳ ಹಿಂದೆ ಉಷ್ಣವಲಯದ ಆಳವಿಲ್ಲದ ಸಮುದ್ರದ ತಳದಲ್ಲಿ ಒಂಬತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜೀವಿಸಿತ್ತು. ಪ್ರಸ್ತುತ ಈ ಪ್ರದೇಶವು ಒಮಾನ್ ದೇಶದ ಒಣ ಭೂಮಿಯಾಗಿದೆ. ಈ ಮೃದ್ವಂಗಿಯು ದಿನನಿತ್ಯ ಬೆಳೆಯುತ್ತಾ ತನ್ನ ಚಿಪ್ಪಿನ ಮೇಲೆ 'ವಾರ್ಷಿಕ/ದೈನಂದಿನ ಉಂಗುರಗಳನ್ನು' (Growth Rings) ಸೃಷ್ಟಿಸಿಕೊಳ್ಳುತ್ತಿತ್ತು.&lt;/p&gt;&lt;p&gt;ಸಂಶೋಧಕರು 'LA-ICP-MS' ಎಂಬ ಅತ್ಯಾಧುನಿಕ ಲೇಸರ್ ತಂತ್ರಜ್ಞಾನವನ್ನು ಬಳಸಿ, ಮಾನವನ ಕೆಂಪು ರಕ್ತಕಣದಷ್ಟೇ ಸೂಕ್ಷ್ಮವಾದ (10 ಮೈಕ್ರೋಮೀಟರ್) ಭಾಗಗಳ ಮೇಲೆ ಲೇಸರ್ ಹಾಯಿಸಿ ಅಧ್ಯಯನ ನಡೆಸಿದರು. ಚಕ್ರದ ಉದ್ದದ ಅಂದಾಜು, ಮೈಕ್ರೋಸ್ಕೋಪ್ ಮೂಲಕ ಉಂಗುರಗಳ ಎಣಿಕೆ ಹಾಗೂ ರಾಸಾಯನಿಕ ಪದರಗಳ ಎಣಿಕೆ ಎಂಬ ಮೂರು ವಿಭಿನ್ನ ವಿಶ್ಲೇಷಣೆಗಳನ್ನು ನಡೆಸಿ ಫಲಿತಾಂಶವನ್ನು ದೃಢೀಕರಿಸಿಕೊಳ್ಳಲಾಯಿತು.&lt;/p&gt;&lt;p&gt;ಈ ಶಂಖದ ಚಿಪ್ಪಿನ ಮೇಲೆ ಪ್ರತಿ ವರ್ಷಕ್ಕೆ 372 ದೈನಂದಿನ ಬೆಳವಣಿಗೆಯ ಪದರಗಳು (Growth Laminae) ದಾಖಲಾಗಿರುವುದು ಕಂಡುಬಂದಿದೆ. ಅಂದರೆ ಆ ಕಾಲದಲ್ಲಿ ವರ್ಷಕ್ಕೆ 372 ದಿನಗಳಿದ್ದವು ಎಂಬುದು ಖಚಿತವಾಗಿದೆ.&lt;/p&gt;&lt;h2&gt;&lt;strong&gt;ದಿನಕ್ಕೆ 23 ಗಂಟೆ 31 ನಿಮಿಷ, ಚಂದ್ರನೂ ಹತ್ತಿರವಿದ್ದ!&lt;/strong&gt;&lt;/h2&gt;&lt;p&gt;ಭೂಮಿಯ ಸೂರ್ಯನ ಸುತ್ತಲಿನ ಕಕ್ಷೆಯ ವರ್ಷದ ಅವಧಿ ಭೌಗೋಳಿಕವಾಗಿ ಸ್ಥಿರವಾಗಿರುತ್ತದೆ. ಈ ಅವಧಿಯನ್ನು 372 ದಿನಗಳಿಂದ ಭಾಗಿಸಿದಾಗ, ಆ ಕಾಲದ ಒಂದು ದಿನದ ಅವಧಿ ಕೇವಲ 23 ಗಂಟೆ 31 ನಿಮಿಷ ಇತ್ತು ಎಂಬುದು ತಿಳಿದುಬಂದಿದೆ.&lt;/p&gt;&lt;p&gt;ಭೂಮಿ ತನ್ನ ಅಕ್ಷದ ಮೇಲೆ ತಿರುಗುವ ವೇಗವನ್ನು ಚಂದ್ರನ ಗುರುತ್ವಾಕರ್ಷಣೆಯ ಅಲೆಗಳ ಘರ್ಷಣೆಯು (Tidal Friction) ಕಾಲಕ್ರಮೇಣ ಕಡಿಮೆಗೊಳಿಸುತ್ತಾ ಬಂದಿದೆ. ಈ 23 ಗಂಟೆ 31 ನಿಮಿಷದ ಲೆಕ್ಕಾಚಾರವನ್ನು ಆಧರಿಸಿ ಸಂಶೋಧಕರು ಆ ಕಾಲದಲ್ಲಿದ್ದ ಭೂಮಿ ಮತ್ತು ಚಂದ್ರನ ನಡುವಿನ ದೂರವನ್ನು ಗಣನೆಗೆ ತಂದಿದ್ದಾರೆ.&lt;/p&gt;&lt;p&gt;ಅದರಂತೆ 7 ಕೋಟಿ ವರ್ಷಗಳ ಹಿಂದೆ ಭೂಮಿ ಮತ್ತು ಚಂದ್ರನ ನಡುವಿನ ಅಂತರ ಸುಮಾರು 3.83&times;10*8 ಮೀಟರ್ ಆಗಿತ್ತು. ಚಂದ್ರನು ಪ್ರತಿ ವರ್ಷ ಭೂಮಿಯಿಂದ ಸುಮಾರು 3.82 ಸೆಂಟಿಮೀಟರ್ ದೂರ ಸರಿಯುತ್ತಿದ್ದಾನೆ ಎಂಬ ಪ್ರಸ್ತುತ ವೈಜ್ಞಾನಿಕ ಮಾದರಿಗಳಿಗೆ ಈ ಸಂಶೋಧನೆಯು ಸಂಪೂರ್ಣವಾಗಿ ತಾಳೆಯಾಗುತ್ತದೆ.&lt;/p&gt;&lt;h2&gt;&lt;strong&gt;ಬಿಸಿ ಸಾಗರ ಮತ್ತು ದ್ಯುತಿಸಂಶ್ಲೇಷಣೆಯ ಕುರುಹು&lt;/strong&gt;&lt;/h2&gt;&lt;p&gt;ಈ ಅಧ್ಯಯನವು ಅಂದಿನ ಸಾಗರಗಳ ತಾಪಮಾನವು ಇಂದಿಗಿಂತ ಹಲವು ಡಿಗ್ರಿ ಸೆಲ್ಸಿಯಸ್&zwnj;ನಷ್ಟು ಹೆಚ್ಚಾಗಿತ್ತು ಎಂಬುದನ್ನು ತೋರಿಸಿದೆ. ಜೊತೆಗೆ, ಈ ಮೃದ್ವಂಗಿಯು ಆಧುನಿಕ ದೈತ್ಯ ಶಂಖಗಳಂತೆ (Giant Clams) ಸೂರ್ಯನ ಬೆಳಕನ್ನು ಬಳಸಿಕೊಂಡು ಆಹಾರ ತಯಾರಿಸುವ 'ದ್ಯುತಿಸಂಶ್ಲೇಷಕ ಸೂಕ್ಷ್ಮಜೀವಿಗಳ' (Photosynthetic Symbionts) ಜೊತೆ ಸಹಜೀವನ ನಡೆಸುತ್ತಿತ್ತು ಎಂಬ ಪ್ರಮುಖ ಸಾಕ್ಷ್ಯವೂ ಸಿಕ್ಕಿದೆ.&lt;/p&gt;&lt;p&gt;ಶಂಖದ ರಾಸಾಯನಿಕ ಬದಲಾವಣೆಗಳು ಋತುಮಾನಗಳಿಗಿಂತ ಹೆಚ್ಚಾಗಿ ಹಗಲು-ರಾತ್ರಿಯ ಚಕ್ರಕ್ಕೆ ತೀವ್ರವಾಗಿ ಸ್ಪಂದಿಸುತ್ತಿದ್ದವು ಎಂದು ಸಂಶೋಧಕ ಡೆ ವಿಂಟರ್ ತಿಳಿಸಿದ್ದಾರೆ. ಈ ವಿಷಯವನ್ನು ದೃಢೀಕರಿಸಿದ ಪ್ರಸಿದ್ಧ ಜೀವಶಾಸ್ತ್ರಜ್ಞ ಪೀಟರ್ ಸ್ಕೆಲ್ಟನ್, &quot;ಟೊರೈಟಿಸ್ ಜಾತಿಗೆ ಸೇರಿದ ಜಲಚರಗಳಲ್ಲಿ ದ್ಯುತಿಸಂಶ್ಲೇಷಕ ಸಹಜೀವನ ಇತ್ತು ಎಂಬುದಕ್ಕೆ ಸಿಕ್ಕ ಮೊದಲ ಬಲವಾದ ಸಾಕ್ಷ್ಯ ಇದಾಗಿದೆ&quot; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[science]]></category>
            <dc:creator>Santosh Naik</dc:creator>
            <atom:link href="https://kannada.asianetnews.com/science/70-million-years-ago-earth-had-372-days-a-year-fossil-shell-study-san/articleshow-xntb4od"/>
        </item>
        <item>
            <title><![CDATA[ಕನ್ನಡದ ‘777 ಚಾರ್ಲಿ’ ನಿರ್ದೇಶಕರಿಗೆ ಬಾಲಿವುಡ್‌ ಬಾಗಿಲು ಓಪನ್‌: ದೊಡ್ಡ ನಟರ ಜೊತೆ ಚರ್ಚೆ]]></title>
            <link>https://kannada.asianetnews.com/entertainment/kiran-raj-bollywood-debut-in-the-works-after-777-charlie-success-gvd/articleshow-fhcofgo</link>
            <guid isPermaLink="true">https://kannada.asianetnews.com/entertainment/kiran-raj-bollywood-debut-in-the-works-after-777-charlie-success-gvd/articleshow-fhcofgo</guid>
            <pubDate>Thu, 13 Aug 2026 18:04:27 +0530</pubDate>
            <description><![CDATA[ಕನ್ನಡದ ಹಿಟ್‌ ಸಿನಿಮಾ ‘777 ಚಾರ್ಲಿ’ ಮೂಲಕ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ಕಿರಣ್‌ ರಾಜ್‌ ಇದೀಗ ಬಾಲಿವುಡ್‌ನತ್ತ ಹೆಜ್ಜೆ ಇಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 2022ರಲ್ಲಿ ಬಿಡುಗಡೆಯಾದ ‘777 ಚಾರ್ಲಿ’ ಬಳಿಕ..]]></description>
            <media:content url="https://static.asianetnews.com/images/w-1280,h-720,format-jpg,imgid-01kzxhsaj0f81bb37czfa0xa78,imgname-kjjk-1786624387648.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ಹಿಟ್&zwnj; ಸಿನಿಮಾ &lsquo;777 ಚಾರ್ಲಿ&rsquo; ಮೂಲಕ ಪ್ರೇಕ್ಷಕರ ಮನಗೆದ್ದ ನಿರ್ದೇಶಕ ಕಿರಣ್&zwnj; ರಾಜ್&zwnj; ಇದೀಗ ಬಾಲಿವುಡ್&zwnj;ನತ್ತ ಹೆಜ್ಜೆ ಇಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 2022ರಲ್ಲಿ ಬಿಡುಗಡೆಯಾದ &lsquo;777 ಚಾರ್ಲಿ&rsquo; ಬಳಿಕ ತಮ್ಮ ಮುಂದಿನ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದ ನಿರ್ದೇಶಕರು, ಇದೀಗ ಮೊದಲ ಹಿಂದಿ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. &lsquo;777 ಚಾರ್ಲಿ&rsquo; ಬಳಿಕ ಕಿರಣ್&zwnj; ರಾಜ್&zwnj; ಅವರು ಧ್ರುವ ಸರ್ಜಾ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಕೇಳಿಬಂದಿತ್ತು. ಆ ಪ್ರಾಜೆಕ್ಟ್&zwnj; ಸದ್ಯ ಸ್ಕ್ರಿಪ್ಟಿಂಗ್&zwnj; ಹಂತದಲ್ಲಿದೆ ಎನ್ನಲಾಗಿದೆ. ಇದರ ನಡುವೆಯೇ ಕಿರಣ್&zwnj; ರಾಜ್&zwnj; ಅವರ ಬಾಲಿವುಡ್&zwnj; ಪ್ರಾಜೆಕ್ಟ್&zwnj; ಕೂಡ ವೇಗ ಪಡೆದುಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ.&lt;/p&gt;&lt;p&gt;&lt;strong&gt;ಸೈಫ್&zwnj; ಅಲಿ ಖಾನ್&zwnj;, ಕಾರ್ತಿಕ್&zwnj; ಆರ್ಯನ್&zwnj; ಜೊತೆ ಮಾತುಕತೆ?&lt;/strong&gt;&lt;/p&gt;&lt;p&gt;ಮೂಲಗಳ ಪ್ರಕಾರ, ಕಿರಣ್&zwnj; ರಾಜ್&zwnj; ಹಿಂದಿ ಚಿತ್ರರಂಗದ ಹಲವು ಪ್ರಮುಖ ನಟರನ್ನು ಭೇಟಿಯಾಗಿ ತಮ್ಮ ಸಿನಿಮಾದ ಕಥೆ ಹಾಗೂ ಐಡಿಯಾಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ನಟ ಜಾನ್&zwnj; ಅಬ್ರಹಾಂ ಜೊತೆ ಕಿರಣ್&zwnj; ರಾಜ್&zwnj; ಇರುವ ಫೋಟೋವೊಂದು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಇಬ್ಬರೂ ಸಿನಿಮಾ ಮಾಡಲಿದ್ದಾರೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದೀಗ ಕಿರಣ್&zwnj; ರಾಜ್&zwnj; ಅವರು ಸೈಫ್&zwnj; ಅಲಿ ಖಾನ್&zwnj; ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಕಾರ್ತಿಕ್&zwnj; ಆರ್ಯನ್&zwnj; ಜೊತೆಗೂ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಆದರೆ ಈ ನಟರ ಪೈಕಿ ಯಾರು ಕಿರಣ್&zwnj; ರಾಜ್&zwnj; ಅವರ ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಹಲವು ಪ್ರಮುಖ ನಟರಿಗೆ ತಮ್ಮ ಕಥೆಯ ಐಡಿಯಾವನ್ನು ಅವರು ವಿವರಿಸಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ದೊಡ್ಡ ನಿರ್ಮಾಣ ಸಂಸ್ಥೆಯ ಜೊತೆಗೂ ಚರ್ಚೆ?&lt;/strong&gt;&lt;/p&gt;&lt;p&gt;ಕಿರಣ್&zwnj; ರಾಜ್&zwnj; ಅವರ ಬಾಲಿವುಡ್&zwnj; ಎಂಟ್ರಿಗೆ ಮತ್ತೊಂದು ಮಹತ್ವದ ಬೆಳವಣಿಗೆಯೂ ನಡೆದಿದೆ ಎನ್ನಲಾಗಿದೆ. ಪ್ರಮುಖ ನಿರ್ಮಾಣ ಸಂಸ್ಥೆಯೊಂದರ ಜೊತೆ ನಿರ್ದೇಶಕರು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಾಜೆಕ್ಟ್&zwnj;ಗೆ ಸಂಬಂಧಿಸಿದ ಪ್ರಮುಖ ವಿವರಗಳು ಅಂತಿಮಗೊಂಡ ಬಳಿಕ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಕಿರಣ್&zwnj; ರಾಜ್&zwnj; ಅವರ ಮೊದಲ ಹಿಂದಿ ಸಿನಿಮಾ ಯಾವುದು? ಅದರಲ್ಲಿ ಯಾರು ನಾಯಕ? ಯಾವ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿದೆ? ಎಂಬ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ಸಿಗುವ ನಿರೀಕ್ಷೆಯಿದೆ.&lt;/p&gt;&lt;p&gt;&lt;strong&gt;&lsquo;777 ಚಾರ್ಲಿ&rsquo; ಬಳಿಕ ಪ್ಯಾನ್&zwnj; ಇಂಡಿಯಾ ಮಟ್ಟದಲ್ಲಿ ಗುರುತು&lt;/strong&gt;&lt;/p&gt;&lt;p&gt;ಕಿರಣ್&zwnj; ರಾಜ್&zwnj; ಕೆ. ನಿರ್ದೇಶನದ &lsquo;777 ಚಾರ್ಲಿ&rsquo; 2022ರ ಜೂನ್&zwnj;ನಲ್ಲಿ ಬಿಡುಗಡೆಯಾಗಿ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳ ಪ್ರೇಕ್ಷಕರನ್ನೂ ಸೆಳೆದಿತ್ತು. ರಕ್ಷಿತ್&zwnj; ಶೆಟ್ಟಿ ಅಭಿನಯದ ಈ ಸಿನಿಮಾ ಒಂಟಿತನದಲ್ಲಿದ್ದ ವ್ಯಕ್ತಿ ಮತ್ತು ಬೀದಿ ನಾಯಿಯ ನಡುವಿನ ಭಾವನಾತ್ಮಕ ಬಾಂಧವ್ಯದ ಸುತ್ತ ಸಾಗಿತ್ತು. ಅಡ್ವೆಂಚರ್&zwnj;, ಹಾಸ್ಯ ಮತ್ತು ಭಾವನಾತ್ಮಕ ಅಂಶಗಳನ್ನು ಬೆರೆಸಿದ್ದ ಸಿನಿಮಾ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಯಶಸ್ಸು ಕಿರಣ್&zwnj; ರಾಜ್&zwnj; ಅವರ ಕಥೆ ಹೇಳುವ ಶೈಲಿಗೆ ಕನ್ನಡದ ಗಡಿಯನ್ನು ಮೀರಿ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿತ್ತು.&lt;/p&gt;&lt;h2&gt;&lt;strong&gt;ಧ್ರುವ ಸರ್ಜಾ ಸಿನಿಮಾ ಏನಾಯ್ತು?&lt;/strong&gt;&lt;/h2&gt;&lt;p&gt;ಇದರ ನಡುವೆ ಕಿರಣ್&zwnj; ರಾಜ್&zwnj; ಮತ್ತು ಧ್ರುವ ಸರ್ಜಾ ಕಾಂಬಿನೇಷನ್&zwnj;ನ ಕನ್ನಡ ಸಿನಿಮಾ ಕೂಡ ಅಭಿವೃದ್ಧಿಯ ಹಂತದಲ್ಲಿದೆ. ಸದ್ಯ ಆ ಚಿತ್ರದ ಸ್ಕ್ರಿಪ್ಟಿಂಗ್&zwnj; ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ಹಾಗಾದರೆ ಮೊದಲು ಧ್ರುವ ಸರ್ಜಾ ಸಿನಿಮಾ ಸೆಟ್ಟೇರುತ್ತದೆಯೇ? ಅಥವಾ ಅದಕ್ಕೂ ಮುನ್ನ ಕಿರಣ್&zwnj; ರಾಜ್&zwnj; ಬಾಲಿವುಡ್&zwnj; ಸಿನಿಮಾ ಆರಂಭಿಸುತ್ತಾರೆಯೇ? ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಕಿರಣ್&zwnj; ರಾಜ್&zwnj; ಎರಡೂ ಪ್ರಾಜೆಕ್ಟ್&zwnj;ಗಳನ್ನು ತೆರೆದಿಟ್ಟುಕೊಂಡು ಮುಂದುವರಿಯುತ್ತಿರುವಂತೆ ಕಾಣುತ್ತಿದೆ. ಅಧಿಕೃತ ಘೋಷಣೆ ಹೊರಬಂದ ಬಳಿಕ &lsquo;777 ಚಾರ್ಲಿ&rsquo; ನಿರ್ದೇಶಕರ ಬಾಲಿವುಡ್&zwnj; ಪಯಣದ ಸಂಪೂರ್ಣ ಚಿತ್ರಣ ಸಿಗಲಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/kiran-raj-bollywood-debut-in-the-works-after-777-charlie-success-gvd/articleshow-fhcofgo"/>
        </item>
        <item>
            <title><![CDATA[Bengaluru: ಮನೆ ತಲುಪಲು ಜಸ್ಟ್ 3KM ಬಾಕಿ, ಹದಗೆಟ್ಟ ರಸ್ತೆಗೆ ಬಲಿಯಾದ ಮಹಿಳೆ; ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ]]></title>
            <link>https://kannada.asianetnews.com/karnataka-districts/bengaluru-woman-loses-life-due-to-bad-road-just-3-km-from-home-locals-outraged-at-government-sns/articleshow-012gtcb</link>
            <guid isPermaLink="true">https://kannada.asianetnews.com/karnataka-districts/bengaluru-woman-loses-life-due-to-bad-road-just-3-km-from-home-locals-outraged-at-government-sns/articleshow-012gtcb</guid>
            <pubDate>Thu, 13 Aug 2026 18:03:59 +0530</pubDate>
            <description><![CDATA[ಕೇರಳ ಮೇಧಾ ಆಕರ್ಷ್ ಅವರು ಇಪಿಎಫ್ಒದಲ್ಲಿ ಉದ್ಯೋಗಿಯಾಗಿದ್ದು, ಅವರಿಗೆ ಮೂರು ವರ್ಷದ ಮಗು ಕೂಡ ಇತ್ತು. ಕಳಪೆ ರಸ್ತೆಯೇ ಅಪಘಾತಕ್ಕೆ ಕಾರಣವಾಗಿದ್ದು, ಅವರ ನ್ಯಾಯಬೇಕು ಎಂದು ಸ್ಥಳೀಯರು ಪ್ರತಿಘಟನೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxh1bmqhx8vtfkmet2p4vep,imgname-bengaluru-medha--1786623602327.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಆನೇಕಲ್: &lt;/strong&gt;ಹದಗೆಟ್ಟ ರಸ್ತೆಯಲ್ಲಿ ಬೈಕ್ ಸ್ಕೀಡ್ ಆದ ಕಾರಣ 32 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಅನಂತ ನಗರದಲ್ಲಿ ನಡೆದಿದೆ. ಕೇರಳ ಮೂಲದ ಮೇಧಾ ಆಕರ್ಷ್ ಬೆಳಗ್ಗೆ ಎಂದಿನಿಂತೆ ಮನೆಯ ಕಡೆ ಸ್ಕೂಟರ್&zwnj;ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.&lt;/p&gt;&lt;h2&gt;&lt;strong&gt;ಮೂರು ವರ್ಷದ ಮಗ ಹೊಂದಿದ್ದ ಮೇಧಾ&lt;/strong&gt;&lt;/h2&gt;&lt;p&gt;ವ್ಯಕ್ತಿಯೊಬ್ಬರು ಏಕಾಏಕಿ ರಸ್ತೆಗೆ ಬಂದ ಕಾರಣ ಸ್ಕೂಟರ್ ಮುಂದೆ ಹೋಗುತ್ತಿದ್ದ ಕಾರು ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹಿಂಭಾಗದಲ್ಲಿ ಬರ್ತಿದ್ದ ಸ್ಕೂಟರ್ ಚಾಲಕ ಬ್ರೇಕ್ ಹಾಕಿದ್ದು, ಆದರೆ ರಸ್ತೆ ಸರಿ ಇಲ್ಲದ ಕಾರಣ ಸ್ಕೂಟರ್ ನಿಯಂತ್ರಣ ಕಳೆದುಕೊಂಡಿದೆ. ಇದರ ಪರಿಣಾಮ ಬೈಕ್ ಹಿಂಭಾಗದಲ್ಲಿ ಕುಳಿತ್ತಿದ್ದ ಮೇಧಾ ರಸ್ತೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಸಾಗುತ್ತಿದ್ದ ಗೂಡ್ಸ್ ಗಾಡಿ ಅವರ ಮೇಲೆ ಹರಿದಿದ್ದು, ಮೇಧಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಮೇಧಾ ಅವರಿಗೆ ಮೂರು ವರ್ಷದ ಮಗ ಇದ್ದು, ಇಡೀ ಕುಟುಂಬಸ್ಥರಿಗೆ ಈ ಅಪಘಾತ ಬಿಗ್ ಶಾಕ್ ನೀಡಿದೆ.&lt;/p&gt;&lt;p&gt;ಇನ್ನು, ಅಪಘಾತಕ್ಕೆ ಕಾರು ಚಾಲಕ ಸಡನ್ ಆಗಿ ಬ್ರೇಕ್ ಹಾಕಿದ್ದೆ ಕಾರಣ ಎಂದು ಪೊಲೀಸರು ಗುರುತಿಸಿದ್ದಾರೆ. ಆದರೆ ಕೆಸರುಮಯವಾಗಿದ್ದ ರಸ್ತೆಯಲ್ಲಿ ಸಡನ್ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ಬ್ಯಾಲೆನ್ಸ್ ಮಿಸ್ ಆಗಿ ದುರಂತ ನಡೆದಿದೆ ಅನ್ನೋದು ಕೂಡ ಇಲ್ಲಿ ಮುಖ್ಯವಾಗುತ್ತದೆ.&lt;/p&gt;&lt;h2&gt;&lt;strong&gt;ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ&lt;/strong&gt;&lt;/h2&gt;&lt;p&gt;ಮೇಧಾ ಅವರ ಸಾವಿನ ಬೆನ್ನಲ್ಲೇ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಚಂದಾಪುರ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಪಘಾತಗಳು ಹೆಚ್ಚಾಗಿದ್ದು, ಸ್ಥಳೀಯರು ಮೇಣದಬತ್ತಿ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅಪಘಾತಕ್ಕೆ ಗುಂಡಿಯೇ ಕಾರಣ, ರಸ್ತೆ ಅಭಿವೃದ್ಧಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ್ಯ ಮಾಡಲಾಗಿದೆ. ಹಲವು ಮಾರ್ಗದಗಳನ್ನು ದುರಸ್ತಿಯ ನೆಪದಲ್ಲಿ ಅಗೆದು ಬಿಟ್ಟುಬಿಟ್ಟಿದ್ದಾರೆ. ಮೃತ ಮಹಿಳೆ ಸಾವಿಗೆ ನ್ಯಾಯ ಒದಗಿಸುವಂತೆ ಅನಂತ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.&lt;/p&gt;&lt;p&gt;ಹದಗೆಟ್ಟ ರಸ್ತೆಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ರಸ್ತೆಗಳನ್ನು ಅಭಿವೃದ್ಧಿ ಮಾಡುವಂತೆ ಆಗ್ರಹಿಸಿರುವ ಸ್ಥಳೀಯರು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಪ್ರತಿಟನಾಕಾರರನ್ನು ಸಮಾಧಾನ ಮಾಡಿದ ಅಧಿಕಾರಿಗಳು, ಒಂದು ವಾರದಲ್ಲಿ ರಸ್ತೆಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅನಂತ ನಗರದಲ್ಲಿ ಯುಜಿಡಿ ಕಾಮಗಾರಿ ಪ್ರಗತಿಯಲ್ಲಿದೆ, BWSSB ವತಿಯಿಂದ ಕಾಮಗಾರಿ ಪ್ರಗತಿಯಲ್ಲಿದೆ. ಯುಜಿಡಿ ಕಾಮಗಾರಿ ಮುಗಿದ ಬಳಿಕ ಪೂರ್ಣ ಪ್ರಮಾಣದಲ್ಲಿ ರಸ್ತೆಗಳ ಅಭಿವೃದ್ಧಿ ಆಗಲಿದೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/bengaluru-woman-loses-life-due-to-bad-road-just-3-km-from-home-locals-outraged-at-government-sns/articleshow-012gtcb"/>
        </item>
        <item>
            <title><![CDATA[ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!]]></title>
            <link>https://kannada.asianetnews.com/relationship/indian-adoptees-reunited-separated-at-birth-then-friends-discovered-biological-sisters-via-dna-test-meena-and-minal-gdp/articleshow-mynpqp6</link>
            <guid isPermaLink="true">https://kannada.asianetnews.com/relationship/indian-adoptees-reunited-separated-at-birth-then-friends-discovered-biological-sisters-via-dna-test-meena-and-minal-gdp/articleshow-mynpqp6</guid>
            <pubDate>Thu, 13 Aug 2026 17:47:40 +0530</pubDate>
            <description><![CDATA[ನೆದರ್ಲ್ಯಾಂಡ್ಸ್‌ನಲ್ಲಿ ದತ್ತು ಪಡೆದು ಬೆಳೆದ ಇಬ್ಬರು ಭಾರತೀಯ ಹುಡುಗಿಯರು ಹದಿಹರೆಯದಲ್ಲಿ ಸ್ನೇಹಿತರಾಗುತ್ತಾರೆ. ವರ್ಷಗಳ ನಂತರ, ಡಿಎನ್‌ಎ ಪರೀಕ್ಷೆಯೊಂದು ಅವರಿಬ್ಬರೂ ಒಂದೇ ತಾಯಿಯ ಮಕ್ಕಳಾದ ಅಕ್ಕ-ತಂಗಿಯರು ಎಂಬ ಬೆರಗಿನ ಸತ್ಯವನ್ನು ಬಹಿರಂಗಪಡಿಸುತ್ತದೆ, ಇದು ಅವರ ಭಾವುಕ ಪುನರ್ಮಿಲನಕ್ಕೆ ಕಾರಣವಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxft1dxev7cg8re8sx1myfq,imgname-meena-and-minal-adopted-sisters-1786622313916.jpg" type="image/jpeg" height="390" width="690"/>
            <content:encoded><![CDATA[&lt;p&gt;ಅದು 1996 ರ ಸಮಯ. ನೆದರ್ಲ್ಯಾಂಡ್ಸ್&zwnj;ನಲ್ಲಿ ದತ್ತು ಪಡೆದ ಮಕ್ಕಳಿಗಾಗಿ ಒಂದು ಸ್ನೇಹಕೂಟ ಆಯೋಜನೆಗೊಂಡಿತ್ತು. ಅಲ್ಲಿಗೆ ಬಂದಿದ್ದ ಹದಿಹರೆಯದ ಇಬ್ಬರು ಹುಡುಗಿಯರು ಮೊದಲ ನೋಟದಲ್ಲೇ ಒಬ್ಬರಿಗೊಬ್ಬರು ಆಕರ್ಷಿತರಾದರು. ಅವರಿಬ್ಬರ ರೂಪ, ಸನ್ನೆಗಳು ಎಷ್ಟೊಂದು ಹೋಲಿಕೆ ಆಗುತ್ತಿತ್ತೆಂದರೆ, ಅದನ್ನು ನೋಡಿ ಜೊತೆಯಲ್ಲಿದ್ದ ಸ್ನೇಹಿತರೂ ಆಶ್ಚರ್ಯಚಕಿತರಾಗಿದ್ದರು. ತಮಾಷೆಯಾಗಿ ಇಬ್ಬರೂ ಒಬ್ಬರನ್ನೊಬ್ಬರು ಅಕ್ಕ ಎಂದು ಕರೆದುಕೊಳ್ಳಲು ಶುರು ಮಾಡಿದರು.&lt;/p&gt;&lt;p&gt;ಅವರಿಬ್ಬರಿಗೆ ತಾವಿಬ್ಬರೂ ಭಾರತದ ಬೇರೆ ಬೇರೆ ಅನಾಥಾಶ್ರಮಗಳಿಂದ ದತ್ತು ಪಡೆಯುವ ಮೂಲಕ, ಡಚ್ ಕುಟುಂಬಗಳನ್ನು ಸೇರಿದವರು ಎಂಬುದು ಮಾತ್ರ ತಿಳಿದಿತ್ತು. ಕೇವಲ 130 ಕಿಲೋಮೀಟರ್&zwnj;ಗಳ ಅಂತರದಲ್ಲಿ ಬೆಳೆಯುತ್ತಿದ್ದ ಆ ಹುಡುಗಿಯರು ಆ ಕಾರ್ಯಕ್ರಮದಲ್ಲಿ ವಿಳಾಸಗಳನ್ನು ವಿನಿಮಯ ಮಾಡಿಕೊಂಡು ಒಳ್ಳೆಯ ಸ್ನೇಹಿತರಾದರು. ಆದರೆ, ಕಾಲಕ್ರಮೇಣ ಹದಿಹರೆಯದ ಆ ಸ್ನೇಹ ದೂರವಾಯಿತು. ಮುಂದಿನ 15 ವರ್ಷಗಳ ಕಾಲ ಅವರಿಬ್ಬರ ನಡುವೆ ಭೇಟಿ ಬಿಡಿ ಯಾವುದೇ ಸಂಪರ್ಕವಿರಲಿಲ್ಲ.&lt;/p&gt;&lt;h2&gt;ಹೃದಯದಲ್ಲಿದ್ದ ಬಿಡುವು ಮತ್ತು ಅರಿಯದ ಕೊರತೆ&lt;/h2&gt;&lt;p&gt;ಬೆಳೆದು ದೊಡ್ಡವರಾದಂತೆ, ಮೀನಾ ಗೆಲ್ಟಿಂಕ್ (43) ಹಾಗೂ ಮಿನಾಲ್ ಟಿಜ್ಸೆನ್ (44) ತಮ್ಮದೇ ಆದ ಪ್ರತ್ಯೇಕ ಜೀವನವನ್ನು ಕಂಡುಕೊಂಡರು. ಪ್ರೀತಿಯಿಂದ ಸಾಕಿ ಬೆಳೆಸಿದ ಡಚ್ ಪೋಷಕರು, ಸ್ವಂತ ಕುಟುಂಬ, ಗಂಡ, ಮಕ್ಕಳು ಎಲ್ಲವೂ ಇದ್ದರೂ, ಇಬ್ಬರ ಮನಸ್ಸಿನ ಮೂಲೆಯಲ್ಲೊಮ್ಮೆ ವಿವರಿಸಲಾಗದ ಶೂನ್ಯತೆ ಕಾಡುತ್ತಿತ್ತು.&lt;/p&gt;&lt;p&gt;&quot;ವರ್ಷಗಳಿಂದ ನನ್ನ ಹೃದಯದಲ್ಲಿ ಏನೋ ಒಂದನ್ನು ಕಳೆದುಕೊಂಡ ಖಾಲಿಭಾವನೆ ಇತ್ತು&quot;&lt;/p&gt;&lt;p&gt;&mdash; ಮೀನಾ&lt;/p&gt;&lt;p&gt;ಅಷ್ಟಕ್ಕೂ ಆ ಖಾಲಿಭಾವನೆಗೆ ಕಾರಣ ಏನೆಂಬುದು ಅವರಿಗೆ ಅರಿವಿರಲಿಲ್ಲ. ತಮ್ಮ ಜನ್ಮ ನೀಡಿದ ತಂದೆ-ತಾಯಿಯ ಬಗ್ಗೆ ಯಾವುದೇ ದಾಖಲೆಗಳಿಲ್ಲದ ಕಾರಣ, ಜಗತ್ತಿನ ಯಾವುದೋ ಮೂಲೆಯಲ್ಲಿ ತಮಗೆ ರಕ್ತಸಂಬಂಧಿ ಇದ್ದಾರೆಂಬ ಕಲ್ಪನೆಯೂ ಅವರಿಗಿರಲಿಲ್ಲ.&lt;/p&gt;&lt;h2&gt;ಸೋಫಾದ ಮೇಲಿದ್ದಾಗ ಬಂದ ಆ ಒಂದು ಪಾಪ್-ಅಪ್ ಸಂದೇಶ!&lt;/h2&gt;&lt;p&gt;ಕಥೆಗೆ ರೋಮಾಂಚಕಾರಿ ತಿರುವು ಸಿಕ್ಕಿದ್ದು ಏಪ್ರಿಲ್ ತಿಂಗಳಲ್ಲಿ. ಮಿನಾಲ್ ತಮ್ಮ ಜೈವಿಕ ಬೇರುಗಳನ್ನು ಹುಡುಕುವ ಕುತೂಹಲದಿಂದ 'MyHeritage' DNA ಪರೀಕ್ಷೆಗೆ ಒಳಪಟ್ಟಿದ್ದರು. ಒಂದು ದಿನ ಮಿನಾಲ್ ತಮ್ಮ ಮನೆಯ ಸೋಫಾದ ಮೇಲೆ ಕುಳಿತಿದ್ದಾಗ, ಫೋನ್&zwnj;ನಲ್ಲಿ ಡಿಎನ್&zwnj;ಎ ಫಲಿತಾಂಶ ಬಂದಿರುವ ಪಾಪ್-ಅಪ್ ಬಂದಿತು. ಕುತೂಹಲದಿಂದ ಸ್ಕ್ರೀನ್ ನೋಡಿದ ಮಿನಾಲ್&zwnj;ಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅಲ್ಲಿ ಸ್ಪಷ್ಟವಾಗಿ ಬರೆದಿತ್ತು ಮೀನಾ ಸಹೋದರಿ ಎಂದು.&lt;/p&gt;&lt;h2&gt;ಅದು ಯಾವುದೇ ಸಾಧಾರಣ ಹೊಂದಾಣಿಕೆಯಾಗಿರಲಿಲ್ಲ!&lt;/h2&gt;&lt;p&gt;ಮೊದಲಿಗೆ ಮಿನಾಲ್&zwnj;ಗೆ ಇದು ತಾವು ಹದಿಹರೆಯದಲ್ಲಿ ಭೇಟಿಯಾದ ಅದೇ 'ಮೀನಾ' ಎಂದು ತಕ್ಷಣಕ್ಕೆ ತಿಳಿಯಲಿಲ್ಲ. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಛಾಯಾಚಿತ್ರಗಳನ್ನು ಹುಡುಕಿ ನೋಡಿದಾಗ, ಬಾಲ್ಯದ ಹಳೆಯ ನೆನಪುಗಳು ಸಾಲಾಗಿ ಬಂದು ನಿಂತವು. ಇಬ್ಬರೂ ಕೇವಲ ದತ್ತು ಪಡೆದ ಭಾರತೀಯ ಹೆಣ್ಣುಮಕ್ಕಳಲ್ಲ, ಬದಲಾಗಿ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಅಕ್ಕ- ತಂಗಿಯರು ಎಂಬ ಬೆರಗುಗೊಳಿಸುವ ಸತ್ಯ ಹೊರಬಿದ್ದಿತ್ತು!&lt;/p&gt;&lt;h2&gt;&quot;ನಿನ್ನನ್ನು ನೋಡಿದಾಗ, ನಾನು ಮನೆಗೆ ಮರಳಿದಂತಾಗುತ್ತದೆ...&quot;&lt;/h2&gt;&lt;p&gt;ದಶಕಗಳ ಕಾಯುವಿಕೆ ಮತ್ತು ವಿಧಿ ಆಡಿದ ಅದ್ಭುತ ಆಟಕ್ಕೆ ಆಗಸ್ಟ್ 11 ರಂದು ಅಂತಿಮ ತೆರೆಬಿದ್ದಿತು. ನೆದರ್ಲ್ಯಾಂಡ್ಸ್&zwnj;ನಲ್ಲಿ ಇಬ್ಬರು ಸಹೋದರಿಯರು ಮುಖಾಮುಖಿಯಾದರು. ಅಲ್ಲಿ ಮಾತಿನ ಅಗತ್ಯವಿರಲಿಲ್ಲ; ಕಣ್ಣೀರು, ಬಿಗಿಯಾದ ಅಪ್ಪುಗೆ ಮತ್ತು ಅಪಾರ ಪ್ರೀತಿ ಎಲ್ಲವೂ ಒಟ್ಟೊಟ್ಟಿಗೆ ಬಂತು. ವರ್ಷಗಳ ಕಾಲ ಪರಸ್ಪರ ಅಪರಿಚಿತರಂತೆ ಬದುಕಿದ್ದ ಇಬ್ಬರು ಸಹೋದರಿಯರು, ಕಣ್ಣೀರು ಒರೆಸಿಕೊಳ್ಳುತ್ತಾ ತಮ್ಮ ಜೀವಮಾನದ ಮೊದಲ ಸೆಲ್ಫಿ ತೆಗೆದುಕೊಂಡರು.&lt;/p&gt;&lt;p&gt;&quot;ನಾವು ಸಹೋದರಿಯರಾಗುವ ಮುನ್ನವೇ ಸ್ನೇಹಿತರಾಗಿದ್ದೆವು. ನಾವು ಆ ಸಮಯದಲ್ಲೂ ಸಹೋದರಿಯರೇ ಆಗಿದ್ದೆವು, ಆದರೆ ನಮಗೆ ಆ ಸತ್ಯ ತಿಳಿದಿರಲಿಲ್ಲ ಅಷ್ಟೇ,&quot; ಎಂದು ಮಿನಾಲ್ ಭಾವುಕರಾದರು.&lt;/p&gt;&lt;p&gt;ಮೀನಾ ತಮ್ಮ ತಂಗಿಯನ್ನು ತಬ್ಬಿಕೊಂಡು, &quot;ನಿನ್ನನ್ನು ನೋಡಿದಾಗ, ನಾನು ನನ್ನ ಸ್ವಂತ ಮನೆಗೆ ಬಂದಂತೆ ಭಾಸವಾಗುತ್ತದೆ. ನನ್ನ ಜೀವನದಲ್ಲಿ ಇಷ್ಟೂ ದಿನ ಕಾಣೆಯಾಗಿದ್ದ ಒಗಟಿನ ತುಂಡು ಈಗ ಅಂತಿಮವಾಗಿ ಸಿಕ್ಕಂತಾಗಿದೆ,&quot; ಎಂದರು.&lt;/p&gt;&lt;h2&gt;ಹೊಸ ಅಧ್ಯಾಯದ ಆರಂಭ&lt;/h2&gt;&lt;p&gt;ಪ್ರಸ್ತುತ ಮಿನಾಲ್ ತಮ್ಮ ಪತಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಫ್ರಾನ್ಸ್&zwnj;ನಲ್ಲಿ ವಾಸಿಸುತ್ತಿದ್ದರೆ, ಮೀನಾ ಮೂರು ಮಕ್ಕಳ ತಾಯಿಯಾಗಿ ನೆದರ್ಲ್ಯಾಂಡ್ಸ್&zwnj;ನಲ್ಲಿದ್ದಾರೆ. ಈಗ ಇಬ್ಬರೂ ಪ್ರತಿದಿನ ಗಂಟೆಗಟ್ಟಲೆ ಫೋನ್&zwnj;ನಲ್ಲಿ ಮಾತನಾಡುತ್ತಾರೆ, ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಮತ್ತು ಕಳೆದುಹೋದ ಸಮಯವನ್ನು ಪ್ರೀತಿಯಿಂದ ಸರಿದೂಗಿಸುತ್ತಿದ್ದಾರೆ.&lt;/p&gt;&lt;p&gt;ನಾವು ಜೀವನಪೂರ್ತಿ ಹುಡುಕುವ ನೆಮ್ಮದಿ ಅಥವಾ ಕುಟುಂಬದ ಬೆಸುಗೆ, ಕೆಲವೊಮ್ಮೆ ನಮಗೆ ತೀರಾ ಹತ್ತಿರದಲ್ಲೇ ಇರುತ್ತದೆ. ಮೀನಾ ಮತ್ತು ಮಿನಾಲ್ ವಿಷಯದಲ್ಲೂ ಅದೇ ಆಯಿತು. ಹದಿಹರೆಯದ ಸ್ನೇಹದ ರೂಪದಲ್ಲಿದ್ದ ಕೌಟುಂಬಿಕ ರಹಸ್ಯವೊಂದು, ಮೂರು ದಶಕಗಳ ನಂತರ ಅಪೂರ್ವ ಬಾಂಧವ್ಯವಾಗಿ ಮರುಜೀವ ಪಡೆದುಕೊಂಡಿದೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Gowthami K</dc:creator>
            <atom:link href="https://kannada.asianetnews.com/relationship/indian-adoptees-reunited-separated-at-birth-then-friends-discovered-biological-sisters-via-dna-test-meena-and-minal-gdp/articleshow-mynpqp6"/>
        </item>
        <item>
            <title><![CDATA[ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದಾದ ಸ್ತೂಪ ಶೋಧನೆಗೆ ಮುಂದಾದ ಸರ್ಕಾರ!]]></title>
            <link>https://kannada.asianetnews.com/india-news/deur-kothar-stupa-rewa-madhya-pradesh-sanchi-stupa-older-san/articleshow-dw5rl4u</link>
            <guid isPermaLink="true">https://kannada.asianetnews.com/india-news/deur-kothar-stupa-rewa-madhya-pradesh-sanchi-stupa-older-san/articleshow-dw5rl4u</guid>
            <pubDate>Thu, 13 Aug 2026 17:45:06 +0530</pubDate>
            <description><![CDATA[ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಬೌದ್ಧ ಸ್ತೂಪವು ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದು ಮತ್ತು ಬೃಹತ್ತಾದುದು ಎಂಬ ಚರ್ಚೆ ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxgmqvqcswhfaqmq08jzvhp,imgname-deur-kothar-stupa-1786623188855.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೋಪಾಲ್ (ಆ.13):&lt;/strong&gt; ಪುರಾತನ ಬೌದ್ಧ ಧಾರ್ಮಿಕ ಕ್ಷೇತ್ರಗಳಿಗೆ ವಿಶ್ವಪ್ರಸಿದ್ಧಿ ಪಡೆದಿರುವ ಮಧ್ಯಪ್ರದೇಶದಲ್ಲಿ ಮತ್ತೊಂದು ಅತ್ಯಂತ ಐತಿಹಾಸಿಕ ಬೌದ್ಧ ಸ್ತೂಪದ ಕುರಿತು ಸಾರ್ವಜನಿಕ ಮತ್ತು ಸಂಶೋಧಕರ ವಲಯದಲ್ಲಿ ಭಾರಿ ಚರ್ಚೆ ಪ್ರಾರಂಭವಾಗಿದೆ. ರಾಜ್ಯದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' (Deur Kothar) ಎಂಬ ಪ್ರದೇಶದಲ್ಲಿರುವ ಈ ಸ್ತೂಪವು, ವಿಶ್ವಪ್ರಸಿದ್ಧ 'ಸಾಂಚಿ ಸ್ತೂಪ'ಕ್ಕಿಂತಲೂ ಹಳೆಯದು ಹಾಗೂ ಬೃಹತ್ತಾದುದು ಎಂಬ ವಾದಗಳು ಮುನ್ನೆಲೆಗೆ ಬಂದಿವೆ. ಕ್ರಿ.ಪೂ. 3ನೇ ಶತಮಾನದಲ್ಲಿ ಅಂದರೆ ಸಾಮ್ರಾಟ್ ಅಶೋಕನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿರಬಹುದು ಎಂದು ಶಂಕಿಸಲಾಗಿರುವ ಈ ಕ್ಷೇತ್ರದಲ್ಲಿ ಹಲವಾರು ಬೌದ್ಧ ಸ್ತೂಪಗಳಿದ್ದು, ಈ ಪ್ರದೇಶವು 1982ರಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.&lt;/p&gt;&lt;h2&gt;&lt;strong&gt;ಈ ಐತಿಹಾಸಿಕ ಸ್ಥಳ ಪತ್ತೆಯಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಸುಮಾರು 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಪುರಾತನ ಕಾಲದಲ್ಲಿ ಪ್ರಮುಖ ವ್ಯಾಪಾರಿ ಮಾರ್ಗವಾಗಿದ್ದ 'ದಕ್ಷಿಣಾಪಥ'ದ ಹಾದಿಯಲ್ಲೇ ಈ ಕ್ಷೇತ್ರವಿತ್ತು ಎಂದು ನಂಬಲಾಗಿದೆ.&lt;/p&gt;&lt;p&gt;1982ರಲ್ಲಿ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಪಿ.ಕೆ. ಮಿಶ್ರಾ ಅವರು ಈ ಪ್ರದೇಶವನ್ನು ಪತ್ತೆಹಚ್ಚಿದರು. ಆ ಸಮಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ಭೋಪಾಲ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಫಣಿ ಕಾಂತ್ ಮಿಶ್ರಾ ಅವರ ಪ್ರಕಾರ, ಇಲ್ಲಿ ಸಿಕ್ಕಿರುವ ಶಾಸನಗಳು ಮತ್ತು ಕಂಬಗಳ ಅವಶೇಷಗಳನ್ನು ಗಮನಿಸಿದರೆ ಇದು ಸಾಂಚಿ ಸ್ತೂಪಕ್ಕಿಂತಲೂ ಪುರಾತನವಾದುದು ಎಂದು ತಿಳಿದುಬರುತ್ತದೆ. ಐತಿಹಾಸಿಕವಾಗಿ ಇದು ಸಾರನಾಥ ಮತ್ತು ಸಾಂಚಿ ನಡುವಿನ ಪ್ರಮುಖ ಕೇಂದ್ರ ಬಿಂದುವಿನಂತಿತ್ತು.&lt;/p&gt;&lt;h2&gt;&lt;strong&gt;ಉತ್ಖನನದಲ್ಲಿ ಏನೆಲ್ಲಾ ಸಿಕ್ಕಿವೆ?&lt;/strong&gt;&lt;/h2&gt;&lt;p&gt;ವರ್ಷ 1999-2000ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಇಲ್ಲಿ ಉತ್ಖನನ ನಡೆಸಿದಾಗ ಪುರಾತನ ಕಮಾನಿನ ಬಾಗಿಲುಗಳ ಭಾಗಗಳು, ಶಾಸನಗಳು, ಕೆತ್ತನೆಯ ಕಲ್ಲು ಚಪ್ಪಡಿಗಳು, ಕಂಬಗಳು ಹಾಗೂ ಹಳೆಯ ಮಡಕೆಯ ಚೂರುಗಳು ಲಭ್ಯವಾದವು. ಈ ಕುರುಹುಗಳನ್ನು ಪರಿಶೀಲಿಸಿದ ತಜ್ಞರು, ಪುರಾತನ ಕಾಲದಲ್ಲಿ ಭಾರ್ಹುತ್ ಮತ್ತು ಸಾಂಚಿಯಷ್ಟೇ ಅತ್ಯಂತ ಪ್ರಮುಖ ಹಾಗೂ ಬೃಹತ್ ಧಾರ್ಮಿಕ ಕೇಂದ್ರವಾಗಿ ದೇವುರ್ ಕೊಠಾರ್ ಕಾರ್ಯನಿರ್ವಹಿಸಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಇಲ್ಲಿಯವರೆಗೆ ನಡೆದ ಸಂಶೋಧನೆಗಳಲ್ಲಿ 4 ಬೌದ್ಧ ಮಠಗಳು, 33 ಸ್ತೂಪಗಳು ಹಾಗೂ 63 ಬಂಡೆಗಳ ಕೆಳಗಿನ ಪುರಾತನ ರಕ್ಷಣಾ ತಾಣಗಳು (Rock Cut Caves) ಪತ್ತೆಯಾಗಿವೆ. ಇಲ್ಲಿನ ಮುಖ್ಯ ಸ್ತೂಪವು ಸುಮಾರು 9 ಮೀಟರ್&zwnj;ಗಿಂತಲೂ ಹೆಚ್ಚು ಎತ್ತರವಿದ್ದು, ಇದನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಆದರೆ ಉಳಿದ ಸಣ್ಣ ಸ್ತೂಪಗಳನ್ನು ಕಲ್ಲುಗಳಿಂದ ಕಟ್ಟಲಾಗಿದೆ. ಇಲ್ಲಿ ಸಿಕ್ಕಿರುವ ಇಟ್ಟಿಗೆಗಳ ಮೇಲೆ ಕಮಲ ಹಾಗೂ ವಿವಿಧ ಹೂವುಗಳ ಸುಂದರ ಆಕೃತಿಗಳನ್ನು ಕೆತ್ತಲಾಗಿದೆ. ಇದು ಆ ಕಾಲದ ಬೌದ್ಧ ಕಲಾಕೌಶಲ್ಯಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಸ್ತೂಪದ ಸುತ್ತಲೂ ನಿರ್ಮಿಸಲಾಗಿದ್ದ ಭದ್ರತಾ ಗೋಡೆಯ (Relic Railing) ಭಾಗವೆನ್ನಲಾದ 30 ಅಡಿ ಎತ್ತರದ ಬೃಹತ್ ಕಲ್ಲಿನ ರಚನೆಯೂ ಇಲ್ಲಿದೆ.&lt;/p&gt;&lt;h2&gt;&lt;strong&gt;ಸಾಂಚಿ ಸ್ತೂಪಕ್ಕೆ ಹೇಗೆ ಹೋಲಿಕೆ?&lt;/strong&gt;&lt;/h2&gt;&lt;p&gt;ಭಾರತದ ಅತ್ಯಂತ ಪ್ರಸಿದ್ಧ ಬೌದ್ಧ ಸ್ತೂಪಗಳಲ್ಲಿ ಒಂದಾದ 'ಸಾಂಚಿ ಮಹಾಸ್ತೂಪ'ವು ಸುಮಾರು 36.6 ಮೀಟರ್ ವ್ಯಾಸ ಮತ್ತು 16.46 ಮೀಟರ್ ಎತ್ತರವನ್ನು ಹೊಂದಿದೆ. ದೇವುರ್ ಕೊಠಾರ್&zwnj;ನಲ್ಲಿ ಸಿಕ್ಕಿರುವ ಐತಿಹಾಸಿಕ ಅವಶೇಷಗಳು ಮತ್ತು ಅದರ ವಿಸ್ತೀರ್ಣವನ್ನು ಗಮನಿಸಿದಾಗ, ತನ್ನ ಉಚ್ಛ್ರಾಯ ಕಾಲದಲ್ಲಿ ಈ ಕ್ಷೇತ್ರವು ಸಾಂಚಿಯಷ್ಟೇ ಬೃಹತ್ತಾಗಿ ಮತ್ತು ಪ್ರಭಾವಶಾಲಿಯಾಗಿ ಬೆಳೆದಿತ್ತು ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿಯೇ ಇದನ್ನು ಸಾಂಚಿ ಸ್ತೂಪಕ್ಕೆ ಹೋಲಿಸಲಾಗುತ್ತದೆ ಹಾಗೂ ಸಾಂಚಿಗಿಂತಲೂ ಹಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಇದನ್ನು ಅಧಿಕೃತವಾಗಿ ದೃಢೀಕರಿಸಲು ಇನ್ನು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.&lt;/p&gt;&lt;h2&gt;&lt;strong&gt;ದೇವುರ್ ಕೊಠಾರ್ ವಿಶೇಷತೆ ಏನು?&lt;/strong&gt;&lt;/h2&gt;&lt;p&gt;ದೇವುರ್ ಕೊಠಾರ್ ಕೇವಲ ಸ್ತೂಪಗಳ ಸಮುಚ್ಚಯ ಮಾತ್ರವಲ್ಲ. ಇದು ಪ್ರಾಚೀನ ಭಾರತದಲ್ಲಿ ಹಾಗೂ ಮಧ್ಯಪ್ರದೇಶದ ಕರಾವಳಿ/ಒಳನಾಡು ಪ್ರದೇಶಗಳಲ್ಲಿ ಬೌದ್ಧ ಧರ್ಮ ಎಷ್ಟು ಆಳವಾಗಿ ಬೇರೂರಿತ್ತು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಲ್ಲಿ ದೊರೆತಿರುವ ಬ್ರಾಹ್ಮಿ ಲಿಪಿಯ ಶಾಸನಗಳು ಸಾಮ್ರಾಟ್ ಅಶೋಕನ ಆಡಳಿತಾವಧಿಯಲ್ಲಿ ಈ ಪ್ರದೇಶವು ಬೌದ್ಧ ಧರ್ಮಪ್ರಚಾರ ಹಾಗೂ ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಜೊತೆಗೆ, ಇಲ್ಲಿನ ಗುಹೆಗಳಲ್ಲಿ ಬೌದ್ಧ ಧರ್ಮದ ಆಗಮನಕ್ಕೂ ಮುಂಚಿನ ಪ್ರಾಚೀನ ಶಿಲಾ ಯುಗದ ವರ್ಣಚಿತ್ರಗಳು (Cave Paintings) ಸಿಕ್ಕಿರುವುದು ಈ ಜಾಗದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;h2&gt;&lt;strong&gt;ರಕ್ಷಣೆ ಮತ್ತು ನಿರ್ವಹಣೆಯ ಅಗತ್ಯ&lt;/strong&gt;&lt;/h2&gt;&lt;p&gt;ಇಷ್ಟೊಂದು ಅಗಾಧ ಐತಿಹಾಸಿಕ ಮೌಲ್ಯವನ್ನು ಹೊಂದಿದ್ದರೂ, ದೇವುರ್ ಕೊಠಾರ್ ಕ್ಷೇತ್ರಕ್ಕೆ ಇರಬೇಕಾದ ಸೂಕ್ತ ನಿರ್ವಹಣೆ ಮತ್ತು ರಕ್ಷಣೆ ಸಿಗುತ್ತಿಲ್ಲ ಎಂಬ ಕೊರಗಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಯಾವುದೇ ಬೃಹತ್ ಮಟ್ಟದ ಉತ್ಖನನ ಅಥವಾ ಸಂರಕ್ಷಣಾ ಕಾಮಗಾರಿಗಳು ನಡೆದಿಲ್ಲ. ಇದರಿಂದಾಗಿ ಅಪರೂಪದ ಅವಶೇಷಗಳು ನಾಶವಾಗುವ ಭೀತಿ ಎದುರಾಗಿದೆ. ಸರ್ಕಾರ ಮತ್ತು ಪುರಾತತ್ವ ಇಲಾಖೆಯು ತಕ್ಷಣವೇ ಗಮನಹರಿಸಿ, ಈ ಜಾಗವನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ, ಮುಂದಿನ ಹಂತದ ಉತ್ಖನನ ನಡೆಸಿದರೆ ಭಾರತದ ಬೌದ್ಧ ಇತಿಹಾಸದ ಹೊಸ ಪುಟಗಳು ಬಿಚ್ಚಿಕೊಳ್ಳಲಿವೆ. ಜೊತೆಗೆ ಮಧ್ಯಪ್ರದೇಶದ ಪ್ರವಾಸೋದ್ಯಮಕ್ಕೂ ಇದು ದೊಡ್ಡ ಬಲ ನೀಡಲಿದೆ ಎಂದು ಇತಿಹಾಸತಜ್ಞರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/deur-kothar-stupa-rewa-madhya-pradesh-sanchi-stupa-older-san/articleshow-dw5rl4u"/>
        </item>
        <item>
            <title><![CDATA[ಮನುಷ್ಯರನ್ನು ಕಂಡಾಕ್ಷಣ ಬಾಣ ಹೂಡುವುದೇಕೆ? ಈ ದ್ವೀಪದೊಳಗೆ ಅಡಗಿದೆ ಅಪಾಯಕಾರಿ ರಹಸ್ಯ!]]></title>
            <link>https://kannada.asianetnews.com/life/why-do-the-sentinelese-attack-outsiders-the-mystery-of-north-sentinel-island-gvd/articleshow-hgnf2xb</link>
            <guid isPermaLink="true">https://kannada.asianetnews.com/life/why-do-the-sentinelese-attack-outsiders-the-mystery-of-north-sentinel-island-gvd/articleshow-hgnf2xb</guid>
            <pubDate>Thu, 13 Aug 2026 17:40:23 +0530</pubDate>
            <description><![CDATA[Sentinelese Tribe: ಆಧುನಿಕ ನಾಗರಿಕತೆಯ ಸಂಪರ್ಕವನ್ನೇ ಹೊಂದದೆ, ಹೊರ ಜಗತ್ತಿನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬದುಕುತ್ತಿರುವ ಕೆಲವು ಬುಡಕಟ್ಟು ಸಮುದಾಯಗಳು ಇಂದಿಗೂ ವಿಶ್ವದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxgf5m1jqgsb38pm38q7q3b,imgname-kk-1786623006337.png" type="image/jpeg" height="390" width="690"/>
            <content:encoded><![CDATA[&lt;p&gt;Uncontacted Tribes: ಆಧುನಿಕ ನಾಗರಿಕತೆಯ ಸಂಪರ್ಕವನ್ನೇ ಹೊಂದದೆ, ಹೊರ ಜಗತ್ತಿನಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬದುಕುತ್ತಿರುವ ಕೆಲವು ಬುಡಕಟ್ಟು ಸಮುದಾಯಗಳು ಇಂದಿಗೂ ವಿಶ್ವದ ವಿವಿಧ ಭಾಗಗಳಲ್ಲಿ ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಅಂಡಮಾನ್&zwnj;ನ ನಾರ್ತ್ ಸೆಂಟಿನೆಲ್ ದ್ವೀಪದ ಸೆಂಟಿನಲೀಸ್ ಜನರು (Sentinelese) ಅತ್ಯಂತ ಕುತೂಹಲ ಮೂಡಿಸುವ ಸಮುದಾಯಗಳಲ್ಲಿ ಒಬ್ಬರು.&lt;/p&gt;&lt;p&gt;ಹೊರಗಿನ ವ್ಯಕ್ತಿಗಳು ತಮ್ಮ ದ್ವೀಪದತ್ತ ಬಂದಾಗ ಅವರನ್ನು ಬಾಣಗಳಿಂದ ಹಿಮ್ಮೆಟ್ಟಿಸುವುದಕ್ಕೆ ಈ ಜನರು ಪ್ರಸಿದ್ಧರಾಗಿದ್ದಾರೆ. ಆದರೆ ಇದರ ಹಿಂದೆ ಕೇವಲ ಆಕ್ರಮಣಕಾರಿ ಸ್ವಭಾವವಿಲ್ಲ. ತಮ್ಮ ನೆಲ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ರಕ್ಷಿಸಿಕೊಳ್ಳುವುದರ ಜೊತೆಗೆ, ಹೊರಗಿನವರಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಂದ ತಮ್ಮ ಸಮುದಾಯವನ್ನು ಕಾಪಾಡಿಕೊಳ್ಳುವುದು ಕೂಡ ಪ್ರಮುಖ ಕಾರಣವೆಂದು ಮಾನವಶಾಸ್ತ್ರಜ್ಞರು ವಿವರಿಸುತ್ತಾರೆ.&lt;/p&gt;&lt;p&gt;&lt;strong&gt;ವಿಶ್ವದ ಅತ್ಯಂತ ಪ್ರತ್ಯೇಕ ಮಾನವ ಸಮುದಾಯಗಳಲ್ಲಿ ಒಂದು&lt;/strong&gt;&lt;/p&gt;&lt;p&gt;ಭಾರತದ ಅಂಡಮಾನ್&zwnj; ದ್ವೀಪಸಮೂಹದಲ್ಲಿರುವ ನಾರ್ತ್ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಜನರು ವಾಸಿಸುತ್ತಾರೆ. ಸಾವಿರಾರು ವರ್ಷಗಳಿಂದ ಹೊರ ಜಗತ್ತಿನ ಸಂಪರ್ಕವನ್ನು ಬಹುತೇಕ ಸಂಪೂರ್ಣವಾಗಿ ತಪ್ಪಿಸಿಕೊಂಡು, ತಮ್ಮದೇ ಆದ ಸ್ವಾವಲಂಬಿ ಜೀವನಶೈಲಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಹೊರತಾಗಿ ದಕ್ಷಿಣ ಅಮೆರಿಕದ ಅಮೆಜಾನ್ ಕಾಡುಗಳು ಹಾಗೂ ಪಪುವಾ ನ್ಯೂಗಿನಿಯಾದ ಕೆಲವು ಪ್ರದೇಶಗಳಲ್ಲಿಯೂ ಹೊರ ಜಗತ್ತಿನಿಂದ ಪ್ರತ್ಯೇಕವಾಗಿ ಬದುಕುತ್ತಿರುವ ಬುಡಕಟ್ಟು ಸಮುದಾಯಗಳಿವೆ. ಆದರೆ ಸೆಂಟಿನಲೀಸ್ ಜನರ ವಿಶೇಷತೆ ಏನೆಂದರೆ, ಹೊರಗಿನವರ ಸಂಪರ್ಕವನ್ನು ಅವರು ಅತ್ಯಂತ ಕಟ್ಟುನಿಟ್ಟಾಗಿ ತಿರಸ್ಕರಿಸುತ್ತಾರೆ. ದ್ವೀಪದ ಬಳಿ ಅಪರಿಚಿತರು ಕಾಣಿಸಿಕೊಂಡರೆ ಎಚ್ಚರಿಕೆ ನೀಡುವುದು, ಬಾಣ ಹೂಡುವುದು ಅಥವಾ ಅವರನ್ನು ಅಲ್ಲಿಂದ ಹಿಮ್ಮೆಟ್ಟಿಸುವುದು ಅವರ ಪ್ರತಿಕ್ರಿಯೆಯಾಗಿರಬಹುದು.&lt;/p&gt;&lt;p&gt;&lt;strong&gt;ಹೊರಗಿನವರನ್ನು ಕಂಡರೆ ಬಾಣ ಹೂಡುವುದೇಕೆ?&lt;/strong&gt;&lt;/p&gt;&lt;p&gt;ಸೆಂಟಿನಲೀಸ್ ಜನರು ಹೊರಗಿನವರನ್ನು ವಿರೋಧಿಸುವುದರ ಹಿಂದೆ ಹಲವು ಐತಿಹಾಸಿಕ ಮತ್ತು ಆರೋಗ್ಯ ಸಂಬಂಧಿತ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಹೊರಗಿನವರೊಂದಿಗೆ ನಡೆದ ಕಹಿ ಅನುಭವಗಳು, ಬಲವಂತದ ಸಂಪರ್ಕದ ಪ್ರಯತ್ನಗಳು ಹಾಗೂ ಹೊರಗಿನಿಂದ ಬಂದ ರೋಗಗಳು ಇಂತಹ ಸಮುದಾಯಗಳಲ್ಲಿ ಭಾರೀ ಪರಿಣಾಮ ಬೀರಿರುವ ಸಾಧ್ಯತೆಯಿದೆ. ಮುಖ್ಯವಾಗಿ, ಹೊರ ಜಗತ್ತಿನ ಜನರಲ್ಲಿ ಸಾಮಾನ್ಯವಾಗಿರುವ ಕೆಲವು ಸಾಂಕ್ರಾಮಿಕ ರೋಗಗಳಿಗೆ ಈ ರೀತಿಯಾಗಿ ಪ್ರತ್ಯೇಕವಾಗಿ ಬದುಕುತ್ತಿರುವ ಸಮುದಾಯಗಳಲ್ಲಿ ಸಾಕಷ್ಟು ರೋಗನಿರೋಧಕ ಸಾಮರ್ಥ್ಯ ಇಲ್ಲದಿರಬಹುದು. ಹೀಗಾಗಿ ಸಾಮಾನ್ಯವಾಗಿ ಸಣ್ಣದಾಗಿ ಕಾಣಿಸುವ ಸೋಂಕು ಕೂಡ ಇಡೀ ಸಮುದಾಯಕ್ಕೆ ದೊಡ್ಡ ಅಪಾಯವನ್ನು ಉಂಟುಮಾಡುವ ಸಾಧ್ಯತೆಯಿದೆ. ಅದಕ್ಕಾಗಿಯೇ ಹೊರಗಿನವರಿಂದ ದೂರವಿರುವುದು ಅವರ ಪಾಲಿಗೆ ಕೇವಲ ಸಂಪ್ರದಾಯವಲ್ಲ; ಸಮುದಾಯದ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಪ್ರಮುಖ ಮಾರ್ಗವೂ ಆಗಿರಬಹುದು.&lt;/p&gt;&lt;p&gt;&lt;strong&gt;ಪ್ರಕೃತಿಯನ್ನೇ ನಂಬಿಕೊಂಡ ಜೀವನ&lt;/strong&gt;&lt;/p&gt;&lt;p&gt;ಸೆಂಟಿನಲೀಸ್ ಜನರ ಜೀವನಶೈಲಿ ಆಧುನಿಕ ಸಮಾಜಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಅವರು ಮುಖ್ಯವಾಗಿ ಬೇಟೆಯಾಡುವುದು, ಮೀನು ಹಿಡಿಯುವುದು ಮತ್ತು ಕಾಡಿನಲ್ಲಿ ದೊರೆಯುವ ನೈಸರ್ಗಿಕ ಆಹಾರವನ್ನು ಸಂಗ್ರಹಿಸುವ ಮೂಲಕ ಜೀವನ ಸಾಗಿಸುತ್ತಾರೆ. ಹೊರಗಿನ ಜಗತ್ತಿನ ಮೇಲೆ ಅವಲಂಬಿತರಾಗದೆ, ತಮ್ಮ ದ್ವೀಪದ ನೈಸರ್ಗಿಕ ಸಂಪನ್ಮೂಲಗಳನ್ನೇ ಬಳಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅವರ ಭಾಷೆ, ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ ಮತ್ತು ದೈನಂದಿನ ಜೀವನದ ಕುರಿತು ಹೊರ ಜಗತ್ತಿಗೆ ತಿಳಿದಿರುವ ಮಾಹಿತಿ ಕೂಡ ಬಹಳ ಸೀಮಿತವಾಗಿದೆ. ಇದಕ್ಕೆ ಪ್ರಮುಖ ಕಾರಣ ಅವರು ಹೊರಗಿನವರೊಂದಿಗೆ ಸಂಪರ್ಕ ಹೊಂದುವುದನ್ನು ನಿರಂತರವಾಗಿ ನಿರಾಕರಿಸುತ್ತಿರುವುದು.&lt;/p&gt;&lt;p&gt;&lt;strong&gt;ದ್ವೀಪದ ಸುತ್ತಲೂ ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧ&lt;/strong&gt;&lt;/p&gt;&lt;p&gt;ಸೆಂಟಿನಲೀಸ್ ಜನರ ಸುರಕ್ಷತೆ ಮತ್ತು ಅವರ ವಿಶಿಷ್ಟ ಜೀವನಶೈಲಿಯನ್ನು ರಕ್ಷಿಸುವ ಉದ್ದೇಶದಿಂದ ಭಾರತ ಸರ್ಕಾರ ನಾರ್ತ್ ಸೆಂಟಿನೆಲ್ ದ್ವೀಪದ ಸುತ್ತಲಿನ ಪ್ರದೇಶಕ್ಕೆ ಹೊರಗಿನವರ ಪ್ರವೇಶದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ದ್ವೀಪದಿಂದ ಸುಮಾರು 5 ನಾಟಿಕಲ್ ಮೈಲುಗಳ (ಸುಮಾರು 9 ಕಿ.ಮೀ.) ವ್ಯಾಪ್ತಿಯೊಳಗೆ ಹೊರಗಿನವರು ಪ್ರವೇಶಿಸುವಂತಿಲ್ಲ. ಈ ನಿರ್ಬಂಧವು ಸೆಂಟಿನಲೀಸ್ ಜನರನ್ನು ಹೊರಗಿನ ಹಸ್ತಕ್ಷೇಪದಿಂದ ಮಾತ್ರವಲ್ಲ, ಹೊರಗಿನಿಂದ ಹರಡಬಹುದಾದ ರೋಗಗಳಿಂದಲೂ ರಕ್ಷಿಸುವ ಉದ್ದೇಶ ಹೊಂದಿದೆ.&lt;/p&gt;&lt;h2&gt;&lt;strong&gt;ಹಾಗಾದರೆ ಅವರು ನಿಜಕ್ಕೂ ಅಪಾಯಕಾರಿ ಜನರೇ?&lt;/strong&gt;&lt;/h2&gt;&lt;p&gt;ಸೆಂಟಿನಲೀಸ್ ಜನರನ್ನು ಕೇವಲ &ldquo;ಹೊರಗಿನವರ ಮೇಲೆ ದಾಳಿ ಮಾಡುವ ಬುಡಕಟ್ಟು&rdquo; ಎಂದು ನೋಡುವುದು ಸರಿಯಾದ ಚಿತ್ರಣವಲ್ಲ. ಅವರ ವರ್ತನೆಯನ್ನು ಅವರ ಇತಿಹಾಸ, ಪ್ರತ್ಯೇಕ ಜೀವನಶೈಲಿ ಮತ್ತು ಹೊರಗಿನ ಜಗತ್ತಿನ ಸಂಪರ್ಕದಿಂದ ಉಂಟಾಗಬಹುದಾದ ಅಪಾಯಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ. ಅವರ ಪಾಲಿಗೆ ತಮ್ಮ ದ್ವೀಪವೇ ಮನೆ, ತಮ್ಮ ಸಂಸ್ಕೃತಿಯೇ ಅಸ್ತಿತ್ವ ಮತ್ತು ಹೊರಗಿನ ಸಂಪರ್ಕವೇ ಅಪಾಯವಾಗಿರಬಹುದು. ಆದ್ದರಿಂದ ಅವರಿಂದ ದೂರವಿರುವುದು ಕೇವಲ ಕಾನೂನಿನ ನಿಯಮವಲ್ಲ; ಅವರ ಸ್ವಾತಂತ್ರ್ಯ, ಆರೋಗ್ಯ ಮತ್ತು ಅಸ್ತಿತ್ವವನ್ನು ಗೌರವಿಸುವ ಜವಾಬ್ದಾರಿಯೂ ಹೌದು.&lt;/p&gt;]]></content:encoded>
            <category><![CDATA[life]]></category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-do-the-sentinelese-attack-outsiders-the-mystery-of-north-sentinel-island-gvd/articleshow-hgnf2xb"/>
        </item>
        <item>
            <title><![CDATA[GBA: ಮೂರು ವರ್ಷಗಳ ಬಳಿಕ ಮತ್ತೆ ಆ ಯೋಜನೆ ಜಾರಿ? GBAಯಿಂದ ಬಂತು ಬಿಗ್‌ ಅಪ್ಡೇಟ್‌; ಗೌರಿ ಗಣೇಶ ಹಬ್ಬಕ್ಕೆ ಬರಲಿದೆ ಬಂಪರ್‌ ಗಿಪ್ಟ್‌?]]></title>
            <link>https://kannada.asianetnews.com/karnataka-districts/gba-resumes-welfare-schemes-gowri-ganesha-festival-gift-bmk/articleshow-vu5hxnw</link>
            <guid isPermaLink="true">https://kannada.asianetnews.com/karnataka-districts/gba-resumes-welfare-schemes-gowri-ganesha-festival-gift-bmk/articleshow-vu5hxnw</guid>
            <pubDate>Thu, 13 Aug 2026 17:28:44 +0530</pubDate>
            <description><![CDATA[ಮೂರು ವರ್ಷಗಳ ದೀರ್ಘ ವಿರಾಮದ ನಂತರ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಕಲ್ಯಾಣ ಯೋಜನೆಯನ್ನು ಪುನರಾರಂಭಿಸಿದೆ. ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆ ಯೋಜನೆ ಯಾವುದು ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kzxfrm4752kbjc3ctzy66mwv,imgname-gba-1786622267527.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಳೆದ ಮೂರು ಸುದೀರ್ಘ ವರ್ಷಗಳಿಂದ ಆ ಒಂದು ಪ್ರಮುಖ ನಿರ್ಧಾರಕ್ಕಾಗಿ ಸಾವಿರಾರು ಬಡ ಮತ್ತು ಶ್ರಮಿಕ ವರ್ಗದ ಜನರು ಕಾದು ಕುಳಿತಿದ್ದರು. ಸರ್ಕಾರದ ಯೋಜನೆಗಳ ಲಾಭ ತಮಗೆ ಯಾವಾಗ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಕೊನೆಗೂ ಆ ಶುಭ ಸುದ್ದಿ ಸಿಕ್ಕಿದೆ! ಆದರೆ ಈ ಯೋಜನೆಯ ಅಸಲಿ ಪ್ಲಾನ್ ಏನು? ಯಾರಿಗೆಲ್ಲ ಸಿಗಲಿದೆ ಗೌರಿ-ಗಣೇಶ ಹಬ್ಬದ ಈ ಬಂಪರ್ ಗಿಫ್ಟ್? ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ತನ್ನ ಬಹುನಿರೀಕ್ಷಿತ ಕಲ್ಯಾಣ ಯೋಜನೆಯನ್ನು (Welfare Scheme) ಪುನರಾರಂಭಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಸುಮಾರು ಮೂರು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ನಗರದ ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರ ಬಾಳಿನಲ್ಲಿ ಬೆಳಕು ಚೆಲ್ಲಲು ಜಿಬಿಎ ಮುಂದಾಗಿದೆ.&lt;/p&gt;&lt;h2&gt;&lt;strong&gt;15,592 ಫಲಾನುಭವಿಗಳಿಗೆ ಹಬ್ಬದ ಮಹಾ ಕೊಡುಗೆ!&lt;/strong&gt;&lt;/h2&gt;&lt;p&gt;ಜಿಬಿಎ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಮುಂಬರುವ ಗೌರಿ-ಗಣೇಶ ಹಬ್ಬದ ವಿಶೇಷ ಕೊಡುಗೆಯಾಗಿ ಒಟ್ಟು 15,592 ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೇರ ನೆರವು ನೀಡಲಾಗುತ್ತಿದೆ. ವಿತರಣೆಯ ನಿಖರವಾದ ದಿನಾಂಕವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೌಲಭ್ಯಗಳ ವಿವರ ಹೀಗಿದೆ!&lt;/strong&gt;&lt;/h3&gt;&lt;p&gt;&lt;strong&gt;ವಿದ್ಯಾಭ್ಯಾಸಕ್ಕೆ ನೆರವು;&lt;/strong&gt; ಬಡ ಕುಟುಂಬದ 4,200 ವಿದ್ಯಾರ್ಥಿಗಳಿಗೆ ಶಾಲಾ ಮತ್ತು ಕಾಲೇಜು ಶುಲ್ಕದ ಮರುಪಾವತಿ ಮಾಡಲಾಗುವುದು.&lt;/p&gt;&lt;p&gt;&lt;strong&gt;ಹೊಲಿಗೆ ಯಂತ್ರಗಳು: &lt;/strong&gt;ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು 3,917 ಜನರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು.&lt;/p&gt;&lt;p&gt;&lt;strong&gt;&lsquo;ಒಂಟಿ ಮನೆ&rsquo; ಯೋಜನೆ:&lt;/strong&gt; ಈ ಯೋಜನೆಯಡಿಯಲ್ಲಿ 2,298 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ ನೇರ ಹಣಕಾಸಿನ ನೆರವು ಸಿಗಲಿದೆ.&lt;/p&gt;&lt;p&gt;&lt;strong&gt;ಆಟೋ ಹಾಗೂ ವೆಂಡಿಂಗ್ ಕಾರ್ಟ್ಸ್;&lt;/strong&gt; 1,507 ಜನರಿಗೆ ಇವಿ/ಸಿಎನ್&zwnj;ಜಿ ವೆಂಡಿಂಗ್ ತಳ್ಳುಗಾಡಿಗಳು ಮತ್ತು &lsquo;ಸಾರಥಿ&rsquo; ಯೋಜನೆಯಡಿಯಲ್ಲಿ 732 ಜನರಿಗೆ ಆಟೋ ರಿಕ್ಷಾಗಳನ್ನು ನೀಡಲಾಗುತ್ತಿದೆ.&lt;/p&gt;&lt;p&gt;&lt;strong&gt;ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು: &lt;/strong&gt;ಪೌರಕಾರ್ಮಿಕರು ಹಾಗೂ ಶೋಷಿತ ವರ್ಗದ ದುಡಿಯುವ ಮಹಿಳೆಯರು ಸೇರಿ 730 ಫಲಾನುಭವಿಗಳಿಗೆ ಇ-ಬೈಕ್&zwnj;ಗಳನ್ನು ನೀಡಲಾಗುವುದು.&lt;/p&gt;&lt;p&gt;&lt;strong&gt;ಉಚಿತ ಕೌಶಲ್ಯ ತರಬೇತಿ; &lt;/strong&gt;ಉದ್ಯೋಗಾವಕಾಶ ಹೆಚ್ಚಿಸಲು 675 ಜನರಿಗೆ ಸಂಪೂರ್ಣ ಉಚಿತ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.&lt;/p&gt;&lt;p&gt;&lt;strong&gt;ದಿವ್ಯಾಂಗರಿಗೆ ಆಸರೆ;&lt;/strong&gt; ವಿಶೇಷ ಚೇತನರಿಗಾಗಿ ಪ್ರತ್ಯೇಕ ಸೌಲಭ್ಯವಿದ್ದು, 592 ಜನರಿಗೆ ವಿಶೇಷ ವಿನ್ಯಾಸದ ದ್ವಿಚಕ್ರ ವಾಹನಗಳು ಹಾಗೂ 71 ಜನರಿಗೆ ಎಲೆಕ್ಟ್ರಿಕ್ ವೀಲ್&zwnj;ಚೇರ್&zwnj;ಗಳನ್ನು ವಿತರಿಸಲಾಗುವುದು.&lt;/p&gt;&lt;p&gt;&lt;strong&gt;ಇತರ ಸೌಲಭ್ಯಗಳು;&lt;/strong&gt; ಅಮೃತ ಮಹೋತ್ಸವ ಯೋಜನೆಯಡಿ 444 ಜನರು ಲಾಭ ಪಡೆಯಲಿದ್ದು, ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ 426 ಫಲಾನುಭವಿಗಳಿಗೆ ಅಗತ್ಯ ದಾಖಲೆಗಳನ್ನು ಹಸ್ತಾಂತರಿಸಲಾಗುವುದು.&lt;/p&gt;&lt;h3&gt;&lt;strong&gt;ಅಕ್ರಮ ಎಸಗಿದರೆ ಕಠಿಣ ಕ್ರಮ: ಜಿಬಿಎ ಖಡಕ್ ಎಚ್ಚರಿಕೆ!&lt;/strong&gt;&lt;/h3&gt;&lt;p&gt;ಉಚಿತ ಸೌಲಭ್ಯಗಳನ್ನು ನೀಡುವ ಜೊತೆಗೆ, ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಿಕರಿಯಾಗದಂತೆ ತಡೆಯಲು ಕಟ್ಟೆಚ್ಚರ ವಹಿಸಿದ್ದಾರೆ. ಸರ್ಕಾರದಿಂದ ಉಚಿತವಾಗಿ ಪಡೆಯುವ ಆಟೋ, ತಳ್ಳುಗಾಡಿ ಹಾಗೂ ದ್ವಿಚಕ್ರ ವಾಹನಗಳನ್ನು ಕೆಲವರು ಹಣಕ್ಕಾಗಿ ಹೊರಗಿನವರಿಗೆ ಮಾರಾಟ ಮಾಡುತ್ತಾರೆಯೇ ಎಂಬುದನ್ನು ತಪಾಸಣೆ ನಡೆಸಲಾಗುವುದು. ಅಷ್ಟೇ ಅಲ್ಲದೆ, ಪಾಲಿಕೆಯ ಕ್ವಾರ್ಟರ್ಸ್&zwnj;ಗಳನ್ನು ಪಡೆದು ಅದನ್ನು ಬಾಡಿಗೆಗೆ ನೀಡಿರುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳ ನಂತರ ಬಂದಿರುವ ಈ ಯೋಜನೆ ಅರ್ಹರ ಕೈಸೇರಿ ಅವರ ಜೀವನ ಮಟ್ಟ ಸುಧಾರಿಸಲಿ ಎಂಬುದೇ ಎಲ್ಲರ ಆಶಯ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/karnataka-districts/gba-resumes-welfare-schemes-gowri-ganesha-festival-gift-bmk/articleshow-vu5hxnw"/>
        </item>
        <item>
            <title><![CDATA[Bengaluru New parking policy: ವಾಹನ ಸವಾರರಿಗೆ ಬಿಗ್‌ಶಾಕ್; ಇನ್ಮೇಲೆ ರಸ್ತೆ ಪಕ್ಕ ವೆಹಿಕಲ್ ಪಾರ್ಕ್ ಮಾಡಿದರೆ ಕಟ್ಟಬೇಕು ಹಣ, ಇಲ್ಲಿದೆ ಶುಲ್ಕ ಪಟ್ಟಿ!]]></title>
            <link>https://kannada.asianetnews.com/karnataka-districts/new-parking-policy-ready-to-be-implemented-in-bengaluru-no-more-free-parking-sns/articleshow-pm94grv</link>
            <guid isPermaLink="true">https://kannada.asianetnews.com/karnataka-districts/new-parking-policy-ready-to-be-implemented-in-bengaluru-no-more-free-parking-sns/articleshow-pm94grv</guid>
            <pubDate>Thu, 13 Aug 2026 16:55:55 +0530</pubDate>
            <description><![CDATA[ಬೆಂಗಳೂರಿನಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕೆಲವೆಡೆ ಉಚಿತ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಬೈಸಿಕಲ್‌ ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್‌ ಶುಲ್ಕ ವಿಧಿಸಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kmkrxzz2f5nqfvej8qctzs4t,imgname----------------------30--1774485176290.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆಗೆ ಸರ್ಕಾರ ತೀಲಾಂಜಲಿ ಆಡಲು ಮುಂದಾಗಿದೆ. ಇಷ್ಟು ದಿನ ಮನೆ ಮುಂದಿನ ರಸ್ತೆಯಲ್ಲಿ ಉಚಿತವಾಗಿ ವಾಹನ ನಿಲ್ಲಿಸುತ್ತಿದ್ದ ಮಾಲೀಕರು ಇನ್ನು ಮುಂದೆ ಪಾರ್ಕಿಂಗ್ ಶುಲ್ಕ ಪಾವತಿ ಮಾಡಬೇಕಿದೆ. ಒಂದೊಮ್ಮೆ ಬಾಡಿಗೆದಾರರಿಗೆ ಪಾರ್ಕಿಂಗ್ಗೆ ಮಾಲೀಕರು ಸ್ಥಳಾವಕಾಶ ನೀಡಿಲ್ಲ ಎಂದರೇ ಮಾಲೀಕರೇ ಅವರ ಪಾರ್ಕಿಂಗ್ ಶುಲ್ಕವನ್ನು ಪಾವತಿ ಮಾಡಬೇಕಿದೆ.&lt;/p&gt;&lt;p&gt;ಹೌದು, ಬೆಂಗಳೂರಿನಲ್ಲಿ ಹೊಸ ಪಾರ್ಕಿಂಗ್&zwnj; ನೀತಿ ಜಾರಿಗೆ ಸಿದ್ಧತೆ ಗ್ರೇಟರ್ ಬೆಂಗಳೂರು ಆಥಾರಿಟಿ ಸಿದ್ಧತೆ ನಡೆಸಿದ್ದು, ಇದರಂತೆ ಪಾರ್ಕಿಂಗ್&zwnj; ವ್ಯವಸ್ಥೆ ಕ್ರಮಬದ್ಧಗೊಳಿಸಲು GBA ಹೊಸ ನೀತಿ ರೂಪಿಸಿದೆ. ಸರ್ಕಾರಿ ನಿಗಮಗಳ ಜಾಗದಲ್ಲಿ ಪಾರ್ಕಿಂಗ್&zwnj; ವ್ಯವಸ್ಥೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಆಫ್&zwnj;ಸ್ಟ್ರೀಟ್&zwnj; ಪಾರ್ಕಿಂಗ್&zwnj; ಬಳಸುವವರಿಗೆ ಮಾಸಿಕ ಪಾಸ್&zwnj; ಪಡೆದುಕೊಳ್ಳಲು ಅವಕಾಶ ನೀಡಿದೆ.&lt;/p&gt;&lt;p&gt;ವಿಶೇಷ ಎಂದರೆ, ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ ಕೆಲವೆಡೆ ಉಚಿತ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ಉಳಿದಂತೆ ಬೈಸಿಕಲ್&zwnj; ಹಾಗೂ ಆಟೋ ನಿಲ್ದಾಣಗಳಿಗೆ ಪಾರ್ಕಿಂಗ್&zwnj; ಶುಲ್ಕ ವಿಧಿಸಿಲ್ಲ. ಖಾಲಿ ನಿವೇಶನಗಳನ್ನು ಪಾರ್ಕಿಂಗ್&zwnj;ಗೆ ನೀಡಿದರೆ ಆಸ್ತಿ ತೆರಿಗೆ ವಿನಾಯಿತಿ ಪ್ರಸ್ತಾವನೆ ಮಾಡಲಾಗಿದ್ದು, ಬಾಡಿಗೆದಾರರ ಪಾರ್ಕಿಂಗ್&zwnj; ಶುಲ್ಕ ಮಾಲೀಕರೇ ಭರಿಸಬೇಕು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ. ಬಾಡಿಗೆದಾರರಿಗೆ ಪಾರ್ಕಿಂಗ್&zwnj; ಜಾಗ ಕಲ್ಪಿಸದ ಮಾಲೀಕರಿಗೆ ದಂಡ ವಿಧಿಸುವ ಪ್ರಸ್ತಾವನೆ ಕೂಡ ಇದ್ದು, ಮನೆ ಮುಂದೆ ವಾಹನ ನಿಲುಗಡೆಗೆ ಪಾರ್ಕಿಂಗ್&zwnj; ಶುಲ್ಕ ಪಾವತಿಸುವ ಹೊಣೆ ಮಾಲೀಕರಿಗೆ ನೀಡಲಾಗಿದೆ.&lt;/p&gt;&lt;h2&gt;ಆನ್&zwnj;ಸ್ಟ್ರೀಟ್&zwnj; ಪಾರ್ಕಿಂಗ್&zwnj; ಕನಿಷ್ಠ ದರ&lt;/h2&gt;&lt;table&gt; &lt;tbody&gt;  &lt;tr&gt;   &lt;td&gt;ಸಿ ಕೆಟಗರಿ:&lt;/td&gt;   &lt;td&gt;ದ್ವಿಚಕ್ರ ₹20&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹40&ndash;60 ಪ್ರತಿ ಗಂಟೆ&lt;/td&gt;  &lt;/tr&gt;  &lt;tr&gt;   &lt;td&gt;ಬಿ ಕೆಟಗರಿ:&lt;/td&gt;   &lt;td&gt;ದ್ವಿಚಕ್ರ ₹30&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹60 ಪ್ರತಿ ಗಂಟೆ&lt;/td&gt;  &lt;/tr&gt;  &lt;tr&gt;   &lt;td&gt;ಎ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹40&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹80 ಪ್ರತಿ ಗಂಟೆ&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;ಆಫ್&zwnj;ಸ್ಟ್ರೀಟ್&zwnj; ಪಾರ್ಕಿಂಗ್&zwnj; ಕನಿಷ್ಠ ದರ&lt;/h2&gt;&lt;table&gt; &lt;tbody&gt;  &lt;tr&gt;   &lt;td&gt;ಸಿ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹10&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹20 ಪ್ರತಿ ಗಂಟೆ&lt;/td&gt;  &lt;/tr&gt;  &lt;tr&gt;   &lt;td&gt;ಬಿ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹15&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹30 ಪ್ರತಿ ಗಂಟೆ&lt;/td&gt;  &lt;/tr&gt;  &lt;tr&gt;   &lt;td&gt;ಎ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹20&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹40 ಪ್ರತಿ ಗಂಟೆ&lt;/td&gt;  &lt;/tr&gt; &lt;/tbody&gt;&lt;/table&gt;&lt;h2&gt;ಮಾಸಿಕ ಆಫ್&zwnj;ಸ್ಟ್ರೀಟ್&zwnj; ಪಾರ್ಕಿಂಗ್&zwnj; ಪಾಸ್&zwnj;&lt;/h2&gt;&lt;table&gt; &lt;tbody&gt;  &lt;tr&gt;   &lt;td&gt;ಸಿ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹1,000&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹2,000&lt;/td&gt;  &lt;/tr&gt;  &lt;tr&gt;   &lt;td&gt;ಬಿ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹1,500&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹3,000&lt;/td&gt;  &lt;/tr&gt;  &lt;tr&gt;   &lt;td&gt;ಎ ಕೆಟಗರಿ&lt;/td&gt;   &lt;td&gt;ದ್ವಿಚಕ್ರ ₹2,000&lt;/td&gt;   &lt;td&gt;ಲಘು ವಾಹನ&lt;/td&gt;   &lt;td&gt;₹4,000&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;ಇನ್ನು, ಟ್ರಾಫಿಕ್ ಸಮಸ್ಯೆ ನಿವಾರಿಸಲು ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಮೆಟ್ರೋ ಹಾಗೂ ಬಸ್ ನಿಲ್ದಾಣಗಳು. ಮುಖ್ಯ ಸಂಪರ್ಕ ರಸ್ತೆಗಳು. ಟ್ರಾಫಿಕ್ ಸಿಗ್ನಲ್ ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ ವಾಹನ ಪಾರ್ಕಿಂಗ್ ಸಂಪೂರ್ಣ ನಿಷೇಧ ಮಾಡಲಾಗಿದೆ. ಉಳಿದರೆ ಮುಖ್ಯ ರಸ್ತೆಗಳ ಪ್ರಮುಖ ಜಂಕ್ಷನ್&zwnj;ನಿಂದ 26 ಮೀಟರ್ ವರೆಗೂ ಯಾವುದೇ ವಾಹನ ಪಾರ್ಕಿಂಗ್ ಮಾಡಲು ನಿಷೇಧಿಸಲಾಗಿದೆ.&lt;/p&gt;&lt;p&gt;ಈ ಬಗ್ಗೆ ಮಾತನಾಡಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪಾರ್ಕಿಂಗ್ ಪಾಲಿಸಿ ಬಗ್ಗೆ ಡ್ರಾಫ್ಟ್ ಬಿಡುಗಡೆ ಮಾಡಲಾಗಿದೆ. A, B, C ಕೆಟಗರಿ ಆಧಾರದ ಮೇಲೆ ಪಾಲಿಸಿ ಸಿದ್ದಪಡಿಸಲಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು, ಯಾವ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಎನ್ನುವುದನ್ನೂ ಇನ್ನೂ ಅಂತಿಮ ಮಾಡಿಲ್ಲ. ಮನೆ ಮಾಲೀಕರು ಬಾಡಿಗೆದಾರರಿಗೆ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿಕೊಡಬೇಕು. ನಗರದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಈ ತೀರ್ಮಾನ ಮಾಡಲಾಗಿದೆ. ಆಫ್ ಸ್ಟ್ರೀಟ್ ಮತ್ತು ಆನ್ ಸ್ಟ್ರೀಟ್ ಪಾರ್ಕಿಂಗ್ ಎಂದು ಎರಡು ಭಾಗವಾಗಿ ವಿಂಗಡಿಸಲಾಗಿದೆ. ಆನ್ ಸ್ಟ್ರೀಟ್ ಪಾರ್ಕಿಂಗ್ ದರದ ಅರ್ಧದಷ್ಟು ದರ ಆಫ್ ಸ್ಟ್ರೀಟ್ ಪಾರ್ಕಿಂಗ್ ನಲ್ಲಿ ಸಂಗ್ರಹಿಸಬೇಕು. ಡಲ್ಟ್, ಸಂಚಾರಿ ಪೊಲೀಸರ ಜತೆ ಚರ್ಚೆ ಮಾಡಿ ಕರಡು ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರಿಂದ ಆಕ್ಷೇಪಣೆ ನೋಡಿಕೊಂಡು ಬದಲಾವಣೆ ಮಾಡಲಾಗುವುದು, ಪಾರ್ಕಿಂಗ್ ಫೀ ಇಟ್ಟಿರುವುದು ಕಾನೂನು ಬದ್ದವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/new-parking-policy-ready-to-be-implemented-in-bengaluru-no-more-free-parking-sns/articleshow-pm94grv"/>
        </item>
        <item>
            <title><![CDATA[ಭಾರತದ ಟ್ರಾಫಿಕ್ ಕಂಡು ತಬ್ಬಿಬ್ಬಾದ ಟೆಸ್ಲಾ AI, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕಮೆಂಟ್ಸ್!]]></title>
            <link>https://kannada.asianetnews.com/car-news/tesla-ai-struggles-with-indian-traffic-viral-video-reactions-san/articleshow-ldrznbr</link>
            <guid isPermaLink="true">https://kannada.asianetnews.com/car-news/tesla-ai-struggles-with-indian-traffic-viral-video-reactions-san/articleshow-ldrznbr</guid>
            <pubDate>Thu, 13 Aug 2026 17:13:14 +0530</pubDate>
            <description><![CDATA[ಟೆಸ್ಲಾ ಕಾರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವ್ಯವಸ್ಥೆಯು ಭಾರತದ ಅಸ್ತವ್ಯಸ್ತ ಟ್ರಾಫಿಕ್ ಅನ್ನು ಅರ್ಥೈಸಿಕೊಳ್ಳಲು ಹೆಣಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxepgtrvqj448ms5b5jk2e6,imgname-tesla-ai-1786621150040.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.13): &lt;/strong&gt;ವಿಶ್ವದ ಪ್ರಸಿದ್ಧ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆಯಾದ 'ಟೆಸ್ಲಾ' (Tesla) ಕಾರಿನಲ್ಲಿರುವ ಅತ್ಯಾಧುನಿಕ 'ಆರ್ಟಿಫಿಶಿಯಲ್ ಇಂಟೆಲಿಜೆನ್ಸ್' (AI) ವ್ಯವಸ್ಥೆಯು ಭಾರತದ ರಸ್ತೆಗಳಲ್ಲಿನ ಅಸ್ತವ್ಯಸ್ತ ಹಾಗೂ ಕಾಂಪ್ಲೆಕ್ಸ್ ಟ್ರಾಫಿಕ್ ಅನ್ನು ಅರ್ಥೈಸಿಕೊಳ್ಳಲಾಗದೆ ಪರದಾಡುತ್ತಿರುವ ವಿಡಿಯೋ ಸೋಶಿಯಲ್&zwnj; ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು, &quot;ಇಂಡಿಯಾ ಎನ್ನುವುದು ಟೆಸ್ಲಾಗೆ ಹೇಳಿಮಾಡಿಸಿದ್ದಲ್ಲ!&quot; ಎಂದು ಕಾಮೆಂಟ್&zwnj; ಮಾಡಿದ್ದಾರೆ.&lt;/p&gt;&lt;p&gt;ವೈರಲ್ ಆಗಿರುವ ವಿಡಿಯೋ ಕ್ಲಿಪ್&zwnj;ನಲ್ಲಿ, ಟೆಸ್ಲಾ ಕಾರಿನ ಒಳಗಿರುವ ವಿಸ್ಯುವಲೈಸೇಶನ್ ಸ್ಕ್ರೀನ್ (Visualization Screen) ಎದುರಿನಿಂದ ಹಾಗೂ ವಿಭಿನ್ನ ದಿಕ್ಕುಗಳಿಂದ ಬರುವ ಸಾಲು ಸಾಲು ಜನರು ಮತ್ತು ವಾಹನಗಳನ್ನು ಟ್ರ್ಯಾಕ್ ಮಾಡಲು ಹೆಣಗಾಡುತ್ತಿರುವುದು ಕಂಡುಬರುತ್ತದೆ. ಅಷ್ಟರಲ್ಲೇ ಇದ್ದಕ್ಕಿದ್ದಂತೆ ಲಾರಿಯೊಂದು ಅಡ್ಡಬಂದಾಗ ಕಾರಿನ ಡಿಸ್ಪ್ಲೇ ಪರದೆಯಲ್ಲಿ ಹಲವು ಚಿತ್ರಗಳು ಗೊಂದಲಮಯವಾಗಿ ಮೂಡುತ್ತವೆ. ಭಾರತದ ರಸ್ತೆಗಳ ನೈಜ ಚಿತ್ರಣಕ್ಕೆ ಟೆಸ್ಲಾ ಸಿಲುಕಿಕೊಂಡ ಈ ದೃಶ್ಯ ನೆಟ್ಟಿಗರಿಗೆ ಭಾರಿ ಹಬ್ಬವನ್ನು ಒದಗಿಸಿದೆ.,ಆದರೆ, ಈ ವಿಡಿಯೋದ ಸತ್ಯಾಸತ್ಯತೆ ಹಾಗೂ ಇದು ಚಿತ್ರೀಕರಣಗೊಂಡ ಸ್ಥಳವನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ.&lt;/p&gt;&lt;h2&gt;&lt;strong&gt;ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಚಟಾಕಿ!&lt;/strong&gt;&lt;/h2&gt;&lt;p&gt;ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತಮಾಷೆಯ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಯೂಸರ್&zwnj; ಒಬ್ಬ, 'ಟೆಸ್ಲಾ AI ಮನಸ್ಸಿನಲ್ಲಿ 'ಇದೇನಿದು ಗುರು ವಿಚಿತ್ರ ಟೆಸ್ಟ್, ಇಷ್ಟೊಂದು ಕಷ್ಟಕರವಾಗಿದೆ' ಎಂದು ಅಂದುಕೊಳ್ಳುತ್ತಿರಬಹುದು&quot; ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಾರ್ವೆಲ್ ಸಿನಿಮಾದ ಶೀರ್ಷಿಕೆಯನ್ನು ಉಲ್ಲೇಖಿಸಿ &quot;ಟೆಸ್ಲಾ: ನೋ ವೇ ಹೋಮ್&quot; (Tesla: No Way Home) ಎಂದು ಕಾಲೆಳೆದಿದ್ದಾರೆ.&lt;/p&gt;&lt;p&gt;ಕಾರಿನ ನ್ಯಾವಿಗೇಷನ್ ಸಿಸ್ಟಮ್ ಈ ಸನ್ನಿವೇಶವನ್ನು ನೋಡಿ, &quot;ಸ್ವಾಮಿ... ನಮಗೆ ಭಾರತದ ರಸ್ತೆಯಲ್ಲಿ ಓಡಾಡಲು ಇನ್ನು ಹೆಚ್ಚಿನ 'ಕಂಪ್ಯೂಟಿಂಗ್ ಪವರ್' ಬೇಕಾಗಬಹುದು!&quot; ಎಂದು ಹೇಳುತ್ತಿರುವಂತಿದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು, &quot;ಎಲಾನ್ ಮಸ್ಕ್ ಭಾರತದಲ್ಲಿ ಕಾರಿನ ಬದಲಿಗೆ ಸ್ಕೂಟರ್&zwnj;ಗಳನ್ನು ಬಿಡುಗಡೆ ಮಾಡುವುದು ಉತ್ತಮ&quot; ಎಂದು ಸಲಹೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಟೆಸ್ಲಾದ ಎಫ್&zwnj;ಎಸ್&zwnj;ಡಿಗೆ 'ಇಂಡಿಯಾ ಟ್ರಾಫಿಕ್' ಸೂಪರ್ ಟೆಸ್ಟಿಂಗ್ ಗ್ರೌಂಡ್?&lt;/strong&gt;&lt;/h2&gt;&lt;p&gt;ಕೇವಲ ತಮಾಷೆಯಷ್ಟೇ ಅಲ್ಲದೆ, ಕೆಲ ತಂತ್ರಜ್ಞಾನ ಪ್ರಿಯರು ಈ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ. ಭಾರತದ ರಸ್ತೆಗಳ ಅಸ್ತವ್ಯಸ್ತ ವಾತಾವರಣವೇ ಟೆಸ್ಲಾದ 'ಫುಲ್ ಸೆಲ್ಫ್ ಡ್ರೈವಿಂಗ್' (FSD) ತಂತ್ರಜ್ಞಾನಕ್ಕೆ ಅತ್ಯುತ್ತಮ ನೈಜ ಪ್ರಪಂಚದ ಪರೀಕ್ಷಾ ಸ್ಥಳ (Real-world testing ground) ಎಂದು ವಾದಿಸಿದ್ದಾರೆ.&lt;/p&gt;&lt;p&gt;&quot;ಟೆಸ್ಲಾ ಎಫ್&zwnj;ಎಸ್&zwnj;ಡಿಗೆ ವಾಹನಗಳು ಮತ್ತು ಅದರ ಸುತ್ತಮುತ್ತಲಿನ ನಡೆನುಡಿಗಳ ಬಗ್ಗೆ ಸಿಗುವ ಡೇಟಾವೇ ಪ್ರಮುಖ ಇಂಧನ. ಈ ದೃಷ್ಟಿಯಿಂದ ಭಾರತದ ಅಸ್ತವ್ಯಸ್ತ ಟ್ರಾಫಿಕ್ ಟೆಸ್ಲಾಗೆ ಒಂದು ಬಂಗಾರದ ಗಣಿಯಿದ್ದಂತೆ. ಈ ಡೇಟಾದಿಂದ ಟೆಸ್ಲಾ ಎಐ ಮತ್ತಷ್ಟು ಬುದ್ಧಿವಂತವಾಗಲಿದೆ&quot; ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&quot;ಲಾರಿಯ ಮೇಲಿದ್ದ ಜನರ ಚಿತ್ರ ಹಾಗೂ ರಸ್ತೆಯ ಮಧ್ಯೆ ನಡೆಯುತ್ತಿದ್ದ ನೈಜ ಜನರ ನಡುವೆ ವ್ಯತ್ಯಾಸ ಗುರುತಿಸಲು ಕಾರಿನ ಸೆನ್ಸಾರ್&zwnj;ಗಳಿಗೆ ಸಾಧ್ಯವಾಗುತ್ತಿಲ್ಲ&quot; ಎಂದು ಇನ್ನು ಕೆಲವರು ಪಾಯಿಂಟ್ ಔಟ್ ಮಾಡಿದ್ದಾರೆ.&lt;/p&gt;&lt;p&gt;&quot;ನಮ್ಮಲ್ಲಿನ ಟ್ರಾಫಿಕ್ ಅತ್ಯಂತ ಜಾಣ ತಂತ್ರಜ್ಞಾನವನ್ನೇ ಬುದ್ಧಿವಂತಿಕೆಯಿಂದ ಸೋಲಿಸಬಲ್ಲದು. ಬಹುಶಃ ಭಾರತದ ರಸ್ತೆಗಳಲ್ಲಿ ಹೇಗೆ ಸಾಗಬೇಕು ಎಂದು ಎಐ (AI) ತಂತ್ರಜ್ಞಾನಕ್ಕೆ ಕಲಿಸುವ ಮೊದಲು, ನಾವು ನಮಗೆ ಸ್ವಲ್ಪ ಟ್ರಾಫಿಕ್ ಮತ್ತು ನಾಗರಿಕ ಪ್ರಜ್ಞೆಯನ್ನು ಕಲಿಸಿಕೊಳ್ಳಬೇಕಿದೆ! ಎಂದು ಬಯೋಕಾನ್&zwnj; ಅಧ್ಯಕ್ಷೆ ಕಿರಣ್&zwnj; ಮಜುಂದಾರ್&zwnj; ಟ್ವೀಟ್&zwnj; ಮಾಡಿದ್ದಾರೆ.&lt;/p&gt;&lt;p&gt;India is not for Tesla pic.twitter.com/KLVzkDYWaR&lt;/p&gt;&lt;p&gt;&mdash; T-Rex (@T_RexRoars) August 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[car-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/tesla-ai-struggles-with-indian-traffic-viral-video-reactions-san/articleshow-ldrznbr"/>
        </item>
        <item>
            <title><![CDATA[Jhumka Designs: ಈ ಕಾಲದ ಹುಡುಗಿಯರ ಮನಗೆದ್ದ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು!]]></title>
            <link>https://kannada.asianetnews.com/webstories/fashion/latest-trendy-jhumka-earring-designs-for-a-modern-look-kvn-28dgh6a</link>
            <guid isPermaLink="true">https://kannada.asianetnews.com/webstories/fashion/latest-trendy-jhumka-earring-designs-for-a-modern-look-kvn-28dgh6a</guid>
            <pubDate>Thu, 13 Aug 2026 17:10:43 +0530</pubDate>
            <description><![CDATA[ಸೀರೆ, ಡ್ರೆಸ್ ಅಥವಾ ಲೆಹೆಂಗಾ, ಯಾವುದೇ ಇರಲಿ, ನಿಮ್ಮ ಲುಕ್ ಅದ್ಭುತವಾಗಿ ಕಾಣಬೇಕೆಂದರೆ ಜುಮ್ಕಿ ಕಿವಿಯೋಲೆಗಳು ಇರಲೇಬೇಕು. ಈ ಕಾಲದ ಯುವತಿಯರು ಇಷ್ಟಪಡುವ ಕೆಲವು ಟ್ರೆಂಡಿ ಜುಮ್ಕಿ ಡಿಸೈನ್‌ಗಳು ಇಲ್ಲಿವೆ ನೋಡಿ...]]></description>
            <media:content url="https://static.asianetnews.com/images/w-1280,h-720,format-jpg,imgid-01kzx333g8ske1p9e51v244c34,imgname-whatsapp-image-2026-08-13-at-1.34.20-pm--1--1786608979464.jpeg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-trendy-jhumka-earring-designs-for-a-modern-look-kvn-28dgh6a"/>
        </item>
        <item>
            <title><![CDATA[ಹಾವು ಕನ್ನಡಿ ನೋಡಿದಾಗ ದಾಳಿ ಮಾಡುವುದು ಯಾಕೆ? ನಾಲಿಗೆ ಚಾಚುವುದರ ಹಿಂದಿನ ರಹಸ್ಯವೂ ಇದೇ!]]></title>
            <link>https://kannada.asianetnews.com/life/why-do-snakes-attack-their-own-reflection-in-a-mirror-the-science-explained-gvd/articleshow-ia0gmcr</link>
            <guid isPermaLink="true">https://kannada.asianetnews.com/life/why-do-snakes-attack-their-own-reflection-in-a-mirror-the-science-explained-gvd/articleshow-ia0gmcr</guid>
            <pubDate>Thu, 13 Aug 2026 17:09:49 +0530</pubDate>
            <description><![CDATA[Snake Psychology: ಹಾವಿನ ಮುಂದೆ ಕನ್ನಡಿಯನ್ನು ಇಟ್ಟರೆ, ಅದರಲ್ಲಿ ಕಾಣಿಸುವ ಪ್ರತಿಬಿಂಬವನ್ನು ಮತ್ತೊಂದು ಹಾವೆಂದು ಭಾವಿಸಿ ಅದು ವಿಚಿತ್ರವಾಗಿ ವರ್ತಿಸುವುದನ್ನು ಕೆಲವೊಮ್ಮೆ ಕಾಣಬಹುದು. ಕೆಲವೊಮ್ಮೆ ಹೆಡೆ ಎತ್ತುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzxepsw6m9tnfek7we1hv00t,imgname-sna-1786621159302.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡಿಯ ಮುಂದೆ ನಿಂತಾಗ ನಮ್ಮ ಪ್ರತಿಬಿಂಬವನ್ನು ನಾವು ಸುಲಭವಾಗಿ ಗುರುತಿಸಿಕೊಳ್ಳುತ್ತೇವೆ. ಮನುಷ್ಯರಷ್ಟೇ ಅಲ್ಲ, ಕೆಲವು ಪ್ರಾಣಿಗಳೂ ಕೂಡ ಕನ್ನಡಿಯಲ್ಲಿ ಕಾಣಿಸುವ ತಮ್ಮ ಪ್ರತಿಬಿಂಬವನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ. ಆದರೆ ಹಾವಿನ ವಿಚಾರದಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ಭಿನ್ನ.&lt;/p&gt;&lt;p&gt;ಹಾವಿನ ಮುಂದೆ ಕನ್ನಡಿಯನ್ನು ಇಟ್ಟರೆ, ಅದರಲ್ಲಿ ಕಾಣಿಸುವ ಪ್ರತಿಬಿಂಬವನ್ನು ಮತ್ತೊಂದು ಹಾವೆಂದು ಭಾವಿಸಿ ಅದು ವಿಚಿತ್ರವಾಗಿ ವರ್ತಿಸುವುದನ್ನು ಕೆಲವೊಮ್ಮೆ ಕಾಣಬಹುದು. ಕೆಲವೊಮ್ಮೆ ಹೆಡೆ ಎತ್ತುವುದು, ಬುಸುಗುಟ್ಟುವುದು ಅಥವಾ ಕನ್ನಡಿಯತ್ತ ದಾಳಿ ಮಾಡಲು ಪ್ರಯತ್ನಿಸುವುದೂ ಇದೆ. ಹಾಗಾದರೆ ಹಾವು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಏಕೆ ಗುರುತಿಸಿಕೊಳ್ಳುವುದಿಲ್ಲ? ಇದಕ್ಕೆ ಕಾರಣವೇನು ಎಂಬುದು ಸಾಕಷ್ಟು ಕುತೂಹಲಕಾರಿ.&lt;/p&gt;&lt;p&gt;&lt;strong&gt;ಹಾವಿಗೆ ಕಣ್ಣಿಗಿಂತ ವಾಸನೆಯೇ ಹೆಚ್ಚು ಮುಖ್ಯ!&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಹಲವು ಪ್ರಾಣಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಕಣ್ಣುಗಳ ಮೂಲಕ ಗ್ರಹಿಸುತ್ತವೆ. ಆದರೆ ಹಾವುಗಳು ದೃಷ್ಟಿಯ ಜೊತೆಗೆ ವಾಸನೆಯನ್ನೂ ಅತ್ಯಂತ ಪ್ರಮುಖವಾಗಿ ಬಳಸುತ್ತವೆ. ಹಾವಿನ ನಾಲಿಗೆ ಕೇವಲ ಹೊರಗೆ ಚಾಚಿಕೊಳ್ಳುವ ಅಂಗವಲ್ಲ. ಅದು ಸುತ್ತಮುತ್ತಲಿನ ಗಾಳಿಯಲ್ಲಿರುವ ರಾಸಾಯನಿಕ ಕಣಗಳನ್ನು ಸಂಗ್ರಹಿಸುವ ಪ್ರಮುಖ ಸಂವೇದನಾ ಅಂಗವಾಗಿದೆ. ಹಾವು ನಾಲಿಗೆಯನ್ನು ಹೊರಗೆ ಚಾಚಿ ಈ ರಾಸಾಯನಿಕ ಕಣಗಳನ್ನು ಸಂಗ್ರಹಿಸಿ, ಬಾಯಿಯ ಮೇಲ್ಭಾಗದಲ್ಲಿರುವ ಜಾಕೋಬ್ಸನ್ ಅಂಗ (Jacobson&rsquo;s organ) ಮೂಲಕ ಅವುಗಳನ್ನು ವಿಶ್ಲೇಷಿಸುತ್ತದೆ. ಇದರಿಂದಲೇ ಹಾವು ತನ್ನ ಸುತ್ತಮುತ್ತಲಿರುವ ಜೀವಿಗಳು ಹಾಗೂ ಪರಿಸರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತದೆ.&lt;/p&gt;&lt;p&gt;&lt;strong&gt;ಕನ್ನಡಿಯಲ್ಲಿ ಮತ್ತೊಂದು ಹಾವು ಕಂಡರೂ ವಾಸನೆ ಮಾತ್ರ ಸಿಗಲ್ಲ!&lt;/strong&gt;&lt;/p&gt;&lt;p&gt;ಹಾವು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದಾಗ, ಅದರ ಕಣ್ಣಿಗೆ ಮತ್ತೊಂದು ಹಾವು ಕಾಣಿಸಬಹುದು. ಆದರೆ ಆ &ldquo;ಹಾವು&rdquo;ನಿಂದ ಯಾವುದೇ ವಾಸನೆ ಅಥವಾ ರಾಸಾಯನಿಕ ಸಂಕೇತ ಸಿಗುವುದಿಲ್ಲ. ಇದೇ ಹಾವಿಗೆ ಗೊಂದಲ ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಣ್ಣಿಗೆ ಒಂದು ಜೀವಿ ಕಾಣಿಸುತ್ತಿದೆ, ಆದರೆ ಅದರ ವಾಸನೆ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಹಾವು ಆ ಪ್ರತಿಬಿಂಬವನ್ನು ತನ್ನದೇ ರೂಪವೆಂದು ಅರ್ಥಮಾಡಿಕೊಳ್ಳುವ ಬದಲು, ಎದುರಿನಲ್ಲಿರುವ ಮತ್ತೊಂದು ಜೀವಿ ಅಥವಾ ಸಂಭಾವ್ಯ ಬೆದರಿಕೆ ಎಂದು ಪ್ರತಿಕ್ರಿಯಿಸಬಹುದು. ಇದರ ಪರಿಣಾಮವಾಗಿ ಕೆಲವು ಸಂದರ್ಭಗಳಲ್ಲಿ ಹಾವು ಹೆಡೆ ಎತ್ತುವುದು, ಬುಸುಗುಟ್ಟುವುದು ಅಥವಾ ಕನ್ನಡಿಯ ಮೇಲೆಯೇ ದಾಳಿ ಮಾಡಲು ಮುಂದಾಗುವುದು ಕಂಡುಬರುತ್ತದೆ.&lt;/p&gt;&lt;p&gt;&lt;strong&gt;&lsquo;ಮಿರರ್ ಟೆಸ್ಟ್&zwnj;&rsquo;ನಲ್ಲಿ ಹಾವುಗಳ ವರ್ತನೆ ಹೇಗಿರುತ್ತದೆ?&lt;/strong&gt;&lt;/p&gt;&lt;p&gt;ಪ್ರಾಣಿಗಳ ಆತ್ಮ-ಅರಿವು (self-awareness) ಕುರಿತು ಅಧ್ಯಯನ ಮಾಡಲು ವಿಜ್ಞಾನಿಗಳು ಕೆಲವೊಮ್ಮೆ ಮಿರರ್ ಟೆಸ್ಟ್&zwnj; (Mirror Reflection Test) ಅನ್ನು ಬಳಸುತ್ತಾರೆ. ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬವನ್ನು ಪ್ರಾಣಿ ತನ್ನದೇ ಎಂದು ಗುರುತಿಸಿಕೊಳ್ಳುತ್ತದೆಯೇ ಎಂಬುದನ್ನು ತಿಳಿಯುವುದು ಈ ಪರೀಕ್ಷೆಯ ಪ್ರಮುಖ ಉದ್ದೇಶ. ಆದರೆ ಹಾವುಗಳಂತಹ ಸರೀಸೃಪಗಳಲ್ಲಿ ಈ ರೀತಿಯ ಪರೀಕ್ಷೆಯ ಫಲಿತಾಂಶಗಳು ಇತರ ಕೆಲವು ಪ್ರಾಣಿಗಳಿಗಿಂತ ಭಿನ್ನವಾಗಿರಬಹುದು. ಇದಕ್ಕೆ ಕಾರಣ ಹಾವುಗಳು ತಮ್ಮ ಪರಿಸರವನ್ನು ಕೇವಲ ದೃಷ್ಟಿಯ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದಿಲ್ಲ ಎಂಬುದು. ಕನ್ನಡಿಯಲ್ಲಿ ಕಾಣಿಸುವ ಪ್ರತಿಬಿಂಬಕ್ಕೆ ವಾಸನೆ ಇಲ್ಲದಿರುವುದರಿಂದ, ಅದನ್ನು ತನ್ನದೇ ಪ್ರತಿಬಿಂಬ ಎಂದು ಗುರುತಿಸುವ ಬದಲು ಹಾವು ಅದನ್ನು ಅಪರಿಚಿತ ಜೀವಿಯಂತೆ ಪರಿಗಣಿಸುವ ಸಾಧ್ಯತೆ ಇದೆ.&lt;/p&gt;&lt;h2&gt;&lt;strong&gt;ಅದಕ್ಕೇ ಹಾವು ಪದೇಪದೇ ನಾಲಿಗೆ ಹೊರಗೆ ಚಾಚುತ್ತದೆಯೇ?&lt;/strong&gt;&lt;/h2&gt;&lt;p&gt;ಹೌದು, ಹಾವು ಪದೇಪದೇ ನಾಲಿಗೆಯನ್ನು ಹೊರಗೆ ಚಾಚುವುದಕ್ಕೆ ಇದೇ ಅದರ ಪ್ರಮುಖ ಸಂವೇದನಾ ವ್ಯವಸ್ಥೆಯೊಂದಿಗಿನ ಸಂಬಂಧ. ಹಾವು ನಾಲಿಗೆಯ ಮೂಲಕ ಗಾಳಿಯಲ್ಲಿರುವ ರಾಸಾಯನಿಕ ಕಣಗಳನ್ನು ಸಂಗ್ರಹಿಸಿ, ಅವುಗಳನ್ನು ಜಾಕೋಬ್ಸನ್ ಅಂಗದ ಸಹಾಯದಿಂದ ವಿಶ್ಲೇಷಿಸುತ್ತದೆ. ಇದರ ಮೂಲಕ ಸುತ್ತಮುತ್ತಲಿನ ಜೀವಿಗಳು, ಬೇಟೆ ಹಾಗೂ ಪರಿಸರದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಹಾವಿನ ನಾಲಿಗೆ ಕೇವಲ &ldquo;ಬುಸುಗುಟ್ಟುವಾಗ ಹೊರಗೆ ಬರುವ&rdquo; ಅಂಗವಲ್ಲ; ಅದರ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಅತ್ಯಂತ ಪ್ರಮುಖ ಕೆಮಿಕಲ್ ಸೆನ್ಸಾರ್&zwnj; ಎಂದೇ ಹೇಳಬಹುದು.&lt;/p&gt;&lt;p&gt;ಒಟ್ಟಿನಲ್ಲಿ, ಹಾವು ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ವಿಚಿತ್ರವಾಗಿ ವರ್ತಿಸುವುದಕ್ಕೆ ಅದರ ವಿಶಿಷ್ಟ ಸಂವೇದನಾ ವ್ಯವಸ್ಥೆಯೂ ಒಂದು ಕಾರಣವಾಗಿರಬಹುದು. ಮನುಷ್ಯನಿಗೆ ಕನ್ನಡಿ ತನ್ನದೇ ಪ್ರತಿಬಿಂಬ ತೋರಿಸಿದರೆ, ಹಾವಿಗೆ ಮಾತ್ರ ಅದು ಇನ್ನೊಂದು ಜೀವಿಯ ಗೊಂದಲಕಾರಿ ಚಿತ್ರವಾಗಿಬಿಡಬಹುದು!&lt;/p&gt;]]></content:encoded>
            <category><![CDATA[life]]></category>
            <dc:creator>Govindaraj S</dc:creator>
            <atom:link href="https://kannada.asianetnews.com/life/why-do-snakes-attack-their-own-reflection-in-a-mirror-the-science-explained-gvd/articleshow-ia0gmcr"/>
        </item>
        <item>
            <title><![CDATA[ಭಾರತದ ಭವಿಷ್ಯದ ಕ್ರಾಂತಿಕಾರಿ ಉದ್ಯಮ ಯಾವುದು? ನಿಖಿಲ್ ಕಾಮತ್ ಮುಂದಿನ 'ಬಿಲಿಯನ್ ಡಾಲರ್' ಮಾಸ್ಟರ್ ಪ್ಲಾನ್!]]></title>
            <link>https://kannada.asianetnews.com/business/nikhil-kamath-wtf-podcast-next-gen-battery-tech-sodium-ion-india-manufacturing/articleshow-7g618md</link>
            <guid isPermaLink="true">https://kannada.asianetnews.com/business/nikhil-kamath-wtf-podcast-next-gen-battery-tech-sodium-ion-india-manufacturing/articleshow-7g618md</guid>
            <pubDate>Thu, 13 Aug 2026 17:08:58 +0530</pubDate>
            <description><![CDATA['ಪೀಪಲ್ ಬೈ WTF' ಪಾಡ್‌ಕಾಸ್ಟ್‌ನಲ್ಲಿ ಝೆರೋಧಾ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ಇನರ್ವೆನ್ಯೂ ಸಿಇಒ ಹೆನ್ನಿಂಗ್ ರಾಥ್ ಹಾಗೂ ಹೈನಾ ಬ್ಯಾಟರಿಯ ಕುನ್ ಟಾಂಗ್ ಅವರೊಂದಿಗೆ ಭಾರತದ ಬ್ಯಾಟರಿ ತಂತ್ರಜ್ಞಾನ ಮತ್ತು ಎನರ್ಜಿ ಟ್ರಾನ್ಸಿಷನ್ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಭಾರತದ ಭವಿಷ್ಯದ ಕ್ರಾಂತಿಕಾರಿ ಉದ್ಯಮ ಯಾವುದೆಂದು ರಿವೀಲ್ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01gx8t7zc3ss1w50z6spnkhk7z,imgname-Nikhil-kamath-youngest-indian-billionaire-1680701914499.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ತಂತ್ರಜ್ಞಾನ ಹಾಗೂ ವಾಹನ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಇದರ ಜೊತೆಗೆ ಲಿಥಿಯಂ-ಐಯಾನ್ (Lithium-ion) ಬ್ಯಾಟರಿಗಳು ದಿಢೀರನೆ ಬೆಂಕಿಗೆಾಹುತಿಯಾಗುತ್ತಿರುವ ಘಟನೆಗಳು ಜಾಗತಿಕವಾಗಿ ದೊಡ್ಡ ಕಳವಳವನ್ನು ಹುಟ್ಟುಹಾಕಿವೆ. ಲಿಥಿಯಂ ಬ್ಯಾಟರಿಗಳು ಏಕೆ ಪದೇ ಪದೆ ವಿಫಲಗೊಳ್ಳುತ್ತಿವೆ? ಚೀನಾದ ಅಪರೂಪದ ಖನಿಜಗಳ (Rare Earths) ಮೇಲಿನ ಅವಲಂಬನೆ ಇಲ್ಲದೆ ಭಾರತ ತನ್ನದೇ ಆದ ಬ್ಯಾಟರಿ ಉದ್ಯಮವನ್ನು ಕಟ್ಟಲು ಸಾಧ್ಯವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಝೆರೋಧಾ (Zerodha) ಸಹಸಂಸ್ಥಾಪಕ ಹಾಗೂ ಹೂಡಿಕೆದಾರ ನಿಖಿಲ್ ಕಾಮತ್ ಮಾಡಿದ್ದಾರೆ.&lt;/p&gt;&lt;p&gt;ತಮ್ಮ ಜನಪ್ರಿಯ 'ಪೀಪಲ್ ಬೈ WTF' (People by WTF) ಪಾಡ್&zwnj;ಕಾಸ್ಟ್&zwnj;ನ ಇತ್ತೀಚಿನ ಸಂಚಿಕೆಯಲ್ಲಿ ನಿಖಿಲ್ ಕಾಮತ್ ಅವರು 'ಇನರ್ವೆನ್ಯೂ' (EnerVenue) ಸಿಇಒ ಹೆನ್ನಿಂಗ್ ರಾಥ್ ಮತ್ತು 'ಹೈನಾ ಬ್ಯಾಟರಿ' (HiNa Battery) ಕಾರ್ಯಾಧ್ಯಕ್ಷ ಕುನ್ ಟಾಂಗ್ ಅವರೊಂದಿಗೆ ಸುದೀರ್ಘ ಸಂವಾದ ನಡೆಸಿದ್ದಾರೆ. ಈ ಚರ್ಚೆಯು ಬ್ಯಾಟರಿ ಕೆಮಿಸ್ಟ್ರಿ, ಕೈಗಾರಿಕಾ ನೀತಿ, ಇವಿ ತಯಾರಿಕೆ ಮತ್ತು ಎಐ (AI) ಮೂಲಸೌಕರ್ಯಗಳ ಸುತ್ತ ಸಾಗಿದೆ.&lt;/p&gt;&lt;h2&gt;&lt;strong&gt;ಲಿಥಿಯಂ ಬ್ಯಾಟರಿಗಳ ಅಪಾಯ ಮತ್ತು ಆಘಾತಕಾರಿ ಅಂಕಿ-ಅಂಶ:&lt;/strong&gt;&lt;/h2&gt;&lt;p&gt;ಪ್ರಸ್ತುತ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಲಿಥಿಯಂ-ಐರನ್-ಫಾಸ್ಫೇಟ್ (LFP) ಬ್ಯಾಟರಿಗಳನ್ನೇ ಬಳಸುತ್ತಿವೆ. ಸಂವಾದದ ವೇಳೆ, ಬ್ಯಾಟರಿಯಲ್ಲಿನ ತಾಪಮಾನ ಮಿತಿಮೀರಿದಾಗ 'ಥರ್ಮಲ್ ರನ್&zwnj;ಅವೇ' (Thermal Runaway) ಎಂಬ ಪ್ರಕ್ರಿಯೆ ನಡೆದು ಬ್ಯಾಟರಿ ಬೆಂಕಿಗೆಾಹುತಿಯಾಗುತ್ತದೆ ಎಂದು ಹೆನ್ನಿಂಗ್ ರಾಥ್ ವಿವರಿಸಿದರು.&lt;/p&gt;&lt;p&gt;ಇದೇ ವೇಳೆ ಹೈನಾ ಬ್ಯಾಟರಿಯ ಕುನ್ ಟಾಂಗ್ ಆಘಾತಕಾರಿ ಅಂಕಿ-ಅಂಶವೊಂದನ್ನು ಬಿಚ್ಚಿಟ್ಟರು. 2025ರ ಒಂದೇ ವರ್ಷದಲ್ಲಿ ಜಾಗತಿಕವಾಗಿ 14,000ಕ್ಕೂ ಹೆಚ್ಚು LFP ಬ್ಯಾಟರಿ ಬೆಂಕಿ ಅವಘಡಗಳು ವರದಿಯಾಗಿವೆ. ಹೆಚ್ಚಿನ ಶಕ್ತಿ ಸಾಮರ್ಥ್ಯವಿದ್ದಷ್ಟೂ ಭದ್ರತೆಯ ಸವಾಲುಗಳು ಹೆಚ್ಚಾಗುತ್ತವೆ ಮತ್ತು ಸಣ್ಣ ಪ್ರಮಾಣದ ಉತ್ಪಾದಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;h2&gt;&lt;strong&gt;ಲಿಥಿಯಂಗೆ ಪರ್ಯಾಯವೇನು? ಸೋಡಿಯಂ-ಐಯಾನ್ ಕ್ರಾಂತಿ!&lt;/strong&gt;&lt;/h2&gt;&lt;p&gt;ಲಿಥಿಯಂ ಬ್ಯಾಟರಿಗಳಿಗೆ ಅತ್ಯಂತ ಸುರಕ್ಷಿತ ಹಾಗೂ ಅಗ್ಗದ ಪರ್ಯಾಯವಾಗಿ 'ಸೋಡಿಯಂ-ಐಯಾನ್' (Sodium-Ion) ತಂತ್ರಜ್ಞಾನ ಹೊರಹೊಮ್ಮುತ್ತಿದೆ. ಸೋಡಿಯಂ ಬ್ಯಾಟರಿಯ ವೆಚ್ಚವು ಲಿಥಿಯಂ ಬ್ಯಾಟರಿಗಿಂತ ಹತ್ತನೇ ಒಂದು ಭಾಗದಷ್ಟಿರುತ್ತದೆ (1/10th Cost). ಇದರಲ್ಲಿ ಬಳಸುವ ಸೋಡಿಯಂ, ಐರನ್ ಮತ್ತು ಫಾಸ್ಫೇಟ್&zwnj;ಗಳನ್ನು ಯಾವುದೇ ದೇಶವು ದೇಶೀಯವಾಗಿಯೇ ಪೂರೈಸಿಕೊಳ್ಳಬಹುದು. ಕಾರುಗಳಂತಹ ದೀರ್ಘಾವಧಿ ವಾಹನಗಳಿಗೆ ಇದು ಸದ್ಯಕ್ಕೆ ಸೂಕ್ತವಲ್ಲದಿದ್ದರೂ, ಭಾರತದ ದ್ವಿಚಕ್ರ (Scooters) ಮತ್ತು ತ್ರಿಚಕ್ರ (Three-Wheelers) ವಾಹನಗಳಿಗೆ ಹಾಗೂ ಗ್ರಿಡ್ ಎನರ್ಜಿ ಸ್ಟೋರೇಜ್&zwnj;ಗೆ ಇದು ಅತ್ಯುತ್ತಮ ತಂತ್ರಜ್ಞಾನವಾಗಿದೆ.&lt;/p&gt;&lt;p&gt;ಮತ್ತೊಂದೆಡೆ, 'ಇನರ್ವೆನ್ಯೂ' ಸಂಸ್ಥೆಯು ನಾಸಾ (NASA) ತಂತ್ರಜ್ಞಾನದಿಂದ ಪ್ರೇರಿತವಾದ 'ನಿಕ್ಕಲ್ ಆಧಾರಿತ' (Nickel-based) ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು 30,000 ಚಾರ್ಜ್ ಸೈಕಲ್&zwnj;ಗಳವರೆಗೆ ಬಾಳಿಕೆ ಬರುತ್ತದೆ ಮತ್ತು ಬೆಂಕಿಯ ಅಪಾಯವಿಲ್ಲ.&lt;/p&gt;&lt;h2&gt;&lt;strong&gt;ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸಬೇಕೇ ಅಥವಾ ಬ್ಯಾಟರಿಯೇ?&lt;/strong&gt;&lt;/h2&gt;&lt;p&gt;ಇತ್ತೀಚಿನ ಚೀನಾ ಪ್ರವಾಸದ ನಂತರ ಭಾರತದಲ್ಲಿ ಹೊಸ ಉದ್ಯಮ ಪ್ರಾರಂಭಿಸುವ ಇಚ್ಛೆ ವ್ಯಕ್ತಪಡಿಸಿದ ನಿಖಿಲ್ ಕಾಮತ್, &quot;ನಾನು ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಕಂಪನಿ ತೆರೆಯಬೇಕೇ ಅಥವಾ ಬ್ಯಾಟರಿ ಕಂಪನಿ ತೆರೆಯಬೇಕೇ?&quot; ಎಂದು ಪ್ರಶ್ನಿಸಿದರು.&lt;/p&gt;&lt;p&gt;ಇದಕ್ಕೆ ಉತ್ತರಿಸಿದ ಹೆನ್ನಿಂಗ್ ರಾಥ್, &quot;ಖಂಡಿತವಾಗಿಯೂ ಕಾರು ಕಂಪನಿಯ ಆಲೋಚನೆ ಬಿಟ್ಟುಬಿಡಿ. ಲಿಥಿಯಂ ಮತ್ತು ಅಪರೂಪದ ಖನಿಜಗಳ ಮೇಲಿನ ಅವಲಂಬನೆ ಇಲ್ಲದ 'ಬ್ಯಾಟರಿ ಕಂಪನಿ'ಯನ್ನು ಭಾರತದಲ್ಲಿ ಸ್ಥಾಪಿಸಿ&quot; ಎಂದು ಖಚಿತ ಸಲಹೆ ನೀಡಿದರು. ಭಾರತದ ಬೃಹತ್ ಸ್ಕೂಟರ್ ಹಾಗೂ ಆಟೋ ಮಾರುಕಟ್ಟೆಗೆ ಸೋಡಿಯಂ-ಐಯಾನ್ ಬ್ಯಾಟರಿಗಳು ಕ್ರಾಂತಿಕಾರಿ ಬದಲಾವಣೆ ತರಬಲ್ಲವು.&lt;/p&gt;&lt;p&gt;ಒಟ್ಟಿನಲ್ಲಿ, ಮುಂಬರುವ ದಶಕದಲ್ಲಿ ವಿದ್ಯುದ್ದೀಕರಣ (Electrification), ಮ್ಯಾನುಫ್ಯಾಕ್ಚರಿಂಗ್ ಮತ್ತು ಎಐ ಸೂಪರ್ ಸೈಕಲ್&zwnj;ಗಳು ಒಂದಾಗುತ್ತಿದ್ದು, ಭಾರತೀಯ ಉದ್ಯಮಿಗಳಿಗೆ ಬ್ಯಾಟರಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ ಎಂಬುದನ್ನು ಈ ಸಂವಾದ ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/business/nikhil-kamath-wtf-podcast-next-gen-battery-tech-sodium-ion-india-manufacturing/articleshow-7g618md"/>
        </item>
        <item>
            <title><![CDATA[ಸಡನ್ನಾಗಿ ಮನೆಗೆ ಗೆಸ್ಟ್ ಬಂದ್ರೆ ಮೂರೇ ಮೂರು ಪದಾರ್ಥ ಬಳಸಿ ಹಲ್ವಾ ಮಾಡಿ.. ಸೂಪರ್ ಆಗಿರುತ್ತೆ]]></title>
            <link>https://kannada.asianetnews.com/food/how-to-make-soft-and-glossy-ash-gourd-halwa-at-home/articleshow-1oh2t00</link>
            <guid isPermaLink="true">https://kannada.asianetnews.com/food/how-to-make-soft-and-glossy-ash-gourd-halwa-at-home/articleshow-1oh2t00</guid>
            <pubDate>Thu, 13 Aug 2026 17:07:34 +0530</pubDate>
            <description><![CDATA[Ash Gourd Halwa recipe: ನಾಲಿಗೆಯಲ್ಲಿ ಕರಗುವ ಹಲ್ವಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ವಿಶೇಷವಾಗಿ ಮದುವೆ ಸಮಾರಂಭಗಳಲ್ಲಿ ಸವಿಯುವ ಆ ಘಮಘಮಿಸುವ 'ಕಾಶಿ ಹಲ್ವಾ'ವನ್ನು ಈಗ ನೀವು ಅತ್ಯಂತ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅದರ ಪರ್ಫೆಕ್ಟ್ ರೆಸಿಪಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxekadmyc8mfvyjxwvwffgc,imgname-thumbnail---2026-08-13t165636.025-1786621045172.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿ&lt;/strong&gt;ಹಿ ಪ್ರಿಯರಿಗೆ ಬೂದುಗುಂಬಳಕಾಯಿ ಹಲ್ವಾ (Ash Gourd Halwa) ಎಂದರೆ ಅಚ್ಚುಮೆಚ್ಚು. ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಕಾಶಿ ಹಲ್ವಾವನ್ನು ಈಗ ನೀವು ಅತ್ಯಂತ ಸರಳವಾಗಿ ಮತ್ತು ಮೂರೇ ಮೂರು ಪದಾರ್ಥಗಳನ್ನು ಬಳಸಿ ಮನೆಯಲ್ಲೇ ತಯಾರಿಸಬಹುದು. ಮೃದುವಾದ, ಹೊಳೆಯುವ ಮತ್ತು ಘಮಘಮಿಸುವ ಈ ಹಲ್ವಾ ಮಾಡುವ ವಿಧಾನ ಇಲ್ಲಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ತುರಿದ ಬೂದುಗುಂಬಳಕಾಯಿ - 3 ಕಪ್ಸಕ್ಕರೆ - ಮುಕ್ಕಾಲು ಕಪ್ (3/4 cup)ತುಪ್ಪ - 3 ದೊಡ್ಡ ಚಮಚಗೋಡಂಬಿ - 2 ಚಮಚದ್ರಾಕ್ಷಿ - 1 ಚಮಚಏಲಕ್ಕಿ ಪುಡಿ - ಕಾಲು ಚಮಚ&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;ಮೊದಲು ತುರಿದ ಬೂದುಗುಂಬಳಕಾಯಿಯನ್ನು ಒಂದು ಪಾತ್ರೆಗೆ ಹಾಕಿ, ಅದರ ನೀರಿನ ಅಂಶ ಕಡಿಮೆಯಾಗಿ ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ.&lt;/p&gt;&lt;p&gt;ಕಾಯಿ ಬೆಂದ ನಂತರ ಅದಕ್ಕೆ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗಿ ಮಿಶ್ರಣವು ಗಟ್ಟಿಯಾಗುವವರೆಗೆ ಕೈಯಾಡಿಸುತ್ತಿರಿ.&lt;/p&gt;&lt;p&gt;ಮಿಶ್ರಣವು ಗಟ್ಟಿಯಾಗತೊಡಗಿದಾಗ ಸ್ವಲ್ಪ ಸ್ವಲ್ಪವೇ ತುಪ್ಪವನ್ನು ಸೇರಿಸುತ್ತಾ ಬೇಯಿಸಿ. ಹಲ್ವಾ ಹೊಳಪು ಪಡೆದು ಪಾತ್ರೆಯನ್ನು ಬಿಡಲು ಪ್ರಾರಂಭಿಸಿದಾಗ ಅದು ಸಿದ್ಧವಾಗಿದೆ ಎಂದು ತಿಳಿಯಿರಿ.&lt;/p&gt;&lt;p&gt;ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.&lt;/p&gt;&lt;h2&gt;&lt;strong&gt;ವಿಶೇಷ ಸೂಚನೆ (Pro-Tip)&lt;/strong&gt;&lt;/h2&gt;&lt;p&gt;ಹಲ್ವಾ ಮಾಡುವಾಗ ಅವಸರ ಮಾಡಬೇಡಿ. ಇದನ್ನು ಸಣ್ಣ ಉರಿಯಲ್ಲಿ (Low flame) ನಿಧಾನವಾಗಿ ಬೇಯಿಸುವುದೇ ಇದರ ಅದ್ಭುತ ರುಚಿ ಮತ್ತು ವಿನ್ಯಾಸದ ರಹಸ್ಯ!&lt;/p&gt;&lt;h2&gt;&lt;strong&gt;ಬೆಲ್ಲದ ಪುಡಿ ಬಳಸ್ಬೋದಾ?&lt;/strong&gt;&lt;/h2&gt;&lt;p&gt;ಒಂದು ವೇಳೆ ನೀವು ಸಕ್ಕರೆ ಬಳಸಲು ಇಷ್ಟಪಡದಿದ್ದರೆ, ಆರೋಗ್ಯದ ದೃಷ್ಟಿಯಿಂದ ಬೆಲ್ಲದ ಪುಡಿಯನ್ನು ಕೂಡ ಬಳಸಬಹುದು. ಆದರೆ ಬೆಲ್ಲ ಬಳಸುವುದರಿಂದ ಹಲ್ವಾದ ಬಣ್ಣ ಸ್ವಲ್ಪ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.&lt;/p&gt;&lt;h2&gt;&lt;strong&gt;ಹಲ್ವಾ ಮಾಡುವಾಗ ಗಮನಿಸಬೇಕಾದ ವಿಷಯಗಳು&lt;/strong&gt;&lt;/h2&gt;&lt;h3&gt;&lt;strong&gt;ನೀರಿನ ಅಂಶವನ್ನು ಗಮನಿಸಿ&lt;/strong&gt;&lt;/h3&gt;&lt;p&gt;ಬೂದುಗುಂಬಳಕಾಯಿಯಲ್ಲಿ ನೀರಿನಂಶ ತುಂಬಾ ಇರುತ್ತದೆ. ನೀವು ತುರಿದ ನಂತರ ಅದನ್ನು ಕೈಯಿಂದ ಅಥವಾ ತೆಳುವಾದ ಬಟ್ಟೆಯಲ್ಲಿ ಹಾಕಿ ಸ್ವಲ್ಪ ಹಿಂಡಿ ನೀರು ತೆಗೆದರೆ, ಹಲ್ವಾ ಬೇಗನೆ ತಯಾರಾಗುತ್ತದೆ. ಇಲ್ಲದಿದ್ದರೆ ನೀರು ಆರಲು ತುಂಬಾ ಸಮಯ ಬೇಕಾಗುತ್ತದೆ. ಅಂದಹಾಗೆ ಹಿಂಡಿದ ನೀರನ್ನು ಚೆಲ್ಲಬೇಡಿ, ಅದಕ್ಕೆ ಸ್ವಲ್ಪ ಉಪ್ಪು ಅಥವಾ ಜೇನುತುಪ್ಪ ಸೇರಿಸಿ ಕುಡಿಯಬಹುದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.&lt;/p&gt;&lt;h3&gt;&lt;strong&gt;ಮದುವೆ ಸಮಾರಂಭದ ತರಹ ಬೇಕೆ?&lt;/strong&gt;&lt;/h3&gt;&lt;p&gt;ಮದುವೆ ಮನೆಗಳಲ್ಲಿ ಸಿಗುವ 'ಕಾಶಿ ಹಲ್ವಾ'ದ ಪರಿಮಳ ಬೇಕೆಂದರೆ, ಕೊನೆಯಲ್ಲಿ ಒಂದು ಚಿಟಿಕೆ ಪಚ್ಚ ಕರ್ಪೂರ (Edible Camphor) ಸೇರಿಸಿ. ಇದು ಹಲ್ವಾಕ್ಕೆ ಅದ್ಭುತವಾದ ಮದುವೆ ಮನೆಯ ರುಚಿ ನೀಡುತ್ತದೆ.&lt;/p&gt;&lt;h3&gt;&lt;strong&gt;ಸಕ್ಕರೆ ಹಾಕುವ ಮೊದಲು ಎಚ್ಚರ&lt;/strong&gt;&lt;/h3&gt;&lt;p&gt;ಬೂದುಗುಂಬಳಕಾಯಿ ತುರಿ ಸಂಪೂರ್ಣವಾಗಿ ಬೆಂದ ನಂತರವೇ ಸಕ್ಕರೆ ಸೇರಿಸಿ. ಒಂದು ವೇಳೆ ಕಾಯಿ ಬೇಯುವ ಮೊದಲೇ ಸಕ್ಕರೆ ಹಾಕಿದರೆ, ಕಾಯಿ ಸರಿಯಾಗಿ ಬೇಯದೆ ಗಟ್ಟಿಯಾಗಿ ಉಳಿಯಬಹುದು.&lt;/p&gt;&lt;h3&gt;&lt;strong&gt;ತುಪ್ಪದ ಅಳತೆ&lt;/strong&gt;&lt;/h3&gt;&lt;p&gt;ಹಲ್ವಾ ಪಾತ್ರೆಯ ಬದಿಗಳನ್ನು ಬಿಡಲು ಆರಂಭಿಸಿದಾಗ ಸ್ವಲ್ಪ ಜಾಸ್ತಿ ತುಪ್ಪ ಸೇರಿಸಿದರೆ, ಹಲ್ವಾ ದೀರ್ಘಕಾಲದವರೆಗೆ ಮೃದುವಾಗಿ ಮತ್ತು ಹೊಳೆಯುವಂತೆ (Glossy) ಇರುತ್ತದೆ.&lt;/p&gt;&lt;h3&gt;&lt;strong&gt;ಬೆಲ್ಲ ಬಳಸುವಾಗ&lt;/strong&gt;&lt;/h3&gt;&lt;p&gt;ನೀವು ಸಕ್ಕರೆ ಬದಲು ಬೆಲ್ಲ ಬಳಸುವುದಾದರೆ, ಸಾವಯವ ಬೆಲ್ಲ (Organic Jaggery) ಬಳಸಿ. ಇದು ಹಲ್ವಾಕ್ಕೆ ಗಾಢವಾದ ಕಂದು ಬಣ್ಣ ಮತ್ತು ವಿಶೇಷ ರುಚಿ ನೀಡುತ್ತದೆ.&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/how-to-make-soft-and-glossy-ash-gourd-halwa-at-home/articleshow-1oh2t00"/>
        </item>
        <item>
            <title><![CDATA[ಭಾರತದಲ್ಲಿ ನೂರಾರು ನದಿಗಳಿವೆ, ಆದರೆ ಈ ಒಂದು ನದಿ ಮಾತ್ರ ‘ಗಂಡು ನದಿ’! ಯಾಕೆ ಗೊತ್ತಾ?]]></title>
            <link>https://kannada.asianetnews.com/life/why-is-brahmaputra-called-india-only-male-river-here-is-the-interesting-story-kvn/articleshow-6fplcv7</link>
            <guid isPermaLink="true">https://kannada.asianetnews.com/life/why-is-brahmaputra-called-india-only-male-river-here-is-the-interesting-story-kvn/articleshow-6fplcv7</guid>
            <pubDate>Thu, 13 Aug 2026 16:58:22 +0530</pubDate>
            <description><![CDATA[ಭಾರತದಲ್ಲಿ ಬಹುತೇಕ ನದಿಗಳು ಹೆಣ್ಣಿನ ಹೆಸರನ್ನು ಹೊಂದಿದ್ದರೆ, ಬ್ರಹ್ಮಪುತ್ರವನ್ನು 'ಬ್ರಹ್ಮ ದೇವನ ಮಗ' ಎಂಬ ಅರ್ಥದಿಂದ 'ಗಂಡು ನದಿ' ಎಂದು ಕರೆಯಲಾಗುತ್ತದೆ. ಟಿಬೆಟ್‌ನಲ್ಲಿ ಹುಟ್ಟಿ, ಅಸ್ಸಾಂನ ಜೀವನಾಡಿಯಾಗಿ ಹರಿಯುವ ಈ ನದಿಯು ತನ್ನ ಬೃಹತ್ ಹರಿವು ಮತ್ತು ವಿಶ್ವದ ಅತಿದೊಡ್ಡ ನದಿ ದ್ವೀಪವಾದ ಮಜುಲಿಯನ್ನು ನಿರ್ಮಿಸಿರುವುದಕ್ಕೆ ಪ್ರಸಿದ್ಧವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khfev1wxvmrbs5n5z1zqxgar,imgname-----------------------2026-02-15t070219.442-1771119151005.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಹರಿಯೋ ನೂರಾರು ನದಿಗಳಿವೆ. ಗಂಗಾ, ಯಮುನಾ, ಕಾವೇರಿಯಿಂದ ಹಿಡಿದು ಬಹುತೇಕ ಎಲ್ಲಾ ನದಿಗಳ ಹೆಸರು ಹೆಣ್ಣಿನದ್ದೇ. ಹಾಗಾಗಿಯೇ ಅವನ್ನು ಹೆಣ್ಣು ನದಿಗಳೆಂದು ಕರೆಯುತ್ತಾರೆ. ಆದರೆ, ಭಾರತದಲ್ಲಿ ಒಂದೇ ಒಂದು ಗಂಡು ನದಿ ಇದೆ. ಅದರ ಹೆಸರೂ ಪುರುಷನದ್ದೇ. ಆ ನದಿ ಯಾವುದು, ಅದರ ವಿಶೇಷತೆ ಏನು? ಇಲ್ಲಿದೆ ನೋಡಿ.&lt;/p&gt;&lt;p&gt;ಭಾರತದಲ್ಲಿ ಗಂಗಾ, ಯಮುನಾ, ಗೋದಾವರಿ, ಕೃಷ್ಣೆ(ಕೃಷ್ಣಾ), ಕಾವೇರಿ, ನರ್ಮದಾ, ತಪತಿಯಂತಹ ಅನೇಕ ನದಿಗಳಿವೆ. ಈ ಎಲ್ಲಾ ನದಿಗಳ ಹೆಸರುಗಳು ಸ್ತ್ರೀಯರದ್ದೇ. ಆದರೆ ಬ್ರಹ್ಮಪುತ್ರ ನದಿ ಮಾತ್ರ ಇದಕ್ಕೆ ಸಂಪೂರ್ಣ ಭಿನ್ನ. 'ಬ್ರಹ್ಮಪುತ್ರ' ಅಂದರೆ 'ಬ್ರಹ್ಮ ದೇವನ ಮಗ' ಅಂತ ಅರ್ಥ. ಇದೇ ಕಾರಣಕ್ಕೆ ಬ್ರಹ್ಮಪುತ್ರವನ್ನು ಭಾರತದ ಏಕೈಕ 'ಗಂಡು ನದಿ' ಎಂದು ಕರೆಯುತ್ತಾರೆ. ಟಿಬೆಟ್&zwnj;ನಲ್ಲಿ ಹುಟ್ಟುವ ಈ ನದಿ, ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುತ್ತದೆ. ಅಲ್ಲಿ ಇದನ್ನು 'ಸಿಯಾಂಗ್' ಎಂದು ಕರೆಯುತ್ತಾರೆ. ನಂತರ ಅಸ್ಸಾಂ ತಲುಪಿದಾಗ ಬ್ರಹ್ಮಪುತ್ರವಾಗಿ, ಬಾಂಗ್ಲಾದೇಶದಲ್ಲಿ ಗಂಗೆಯೊಂದಿಗೆ ಸೇರಿ ಸಮುದ್ರ ಸೇರುತ್ತದೆ.&lt;/p&gt;&lt;p&gt;ಬ್ರಹ್ಮಪುತ್ರ ನದಿಯ ಬಗ್ಗೆ ಭಾರತೀಯ ಪುರಾಣಗಳಲ್ಲಿಯೂ ಕಥೆಗಳಿವೆ. ಪುರಾಣಗಳ ಪ್ರಕಾರ, ಈ ನದಿಯನ್ನು ಬ್ರಹ್ಮ ದೇವರ ಮಗನೆಂದು ಪರಿಗಣಿಸಲಾಗುತ್ತದೆ. ಸಂಸ್ಕೃತದಲ್ಲಿ 'ಪುತ್ರ' ಎಂದರೆ ಮಗ. ಇದೇ ಕಾರಣಕ್ಕೆ ಬ್ರಹ್ಮಪುತ್ರ ಹೆಸರು ಉಳಿದ ನದಿಗಳಿಗಿಂತ ಭಿನ್ನವಾಗಿದೆ. ಟಿಬೆಟ್&zwnj;ನಲ್ಲಿ ಇದನ್ನು 'ಯಾರ್ಲುಂಗ್ ಸಾಂಗ್&zwnj;ಪೋ' ಎಂದು ಕರೆದರೆ, ಭಾರತಕ್ಕೆ ಬಂದ ಮೇಲೆ 'ಸಿಯಾಂಗ್', 'ದಿಹಾಂಗ್' ಎಂದೂ ಕರೆಯುತ್ತಾರೆ. ಅಸ್ಸಾಂ ತಲುಪಿದ ನಂತರವೇ ಇದು ಬ್ರಹ್ಮಪುತ್ರ ಎಂದು ಪ್ರಸಿದ್ಧಿಯಾಗಿದೆ. ಬರೀ ಹೆಸರಲ್ಲ, ತನ್ನ ಅಗಾಧ ನೀರಿನ ಹರಿವು ಮತ್ತು ಮಳೆಗಾಲದ ಪ್ರವಾಹದಿಂದಲೂ ಇದು ವಿಶ್ವದ ಪ್ರಮುಖ ನದಿಗಳಲ್ಲಿ ಒಂದಾಗಿದೆ.&lt;/p&gt;&lt;h2&gt;&lt;strong&gt;ಅಸ್ಸಾಂ ರಾಜ್ಯದ ಜೀವನಾಡಿ&lt;/strong&gt;&lt;/h2&gt;&lt;p&gt;ಬ್ರಹ್ಮಪುತ್ರ ನದಿ ಈಶಾನ್ಯ ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ಅಸ್ಸಾಂ ರಾಜ್ಯದ ಜನರಿಗೆ ಜೀವನಾಡಿ. ಕೃಷಿ, ಮೀನುಗಾರಿಕೆ, ಸಾರಿಗೆ ಮತ್ತು ಕುಡಿಯುವ ನೀರು ಹೀಗೆ ಅನೇಕ ಅಗತ್ಯಗಳಿಗೆ ಈ ನದಿಯೇ ಆಧಾರ. ಆದರೆ, ಮಳೆಗಾಲದಲ್ಲಿ ಬ್ರಹ್ಮಪುತ್ರ ಉಕ್ಕಿ ಹರಿದರೆ ಅಸ್ಸಾಂನಲ್ಲಿ ದೊಡ್ಡ ಮಟ್ಟದ ಪ್ರವಾಹ ಉಂಟಾಗುತ್ತದೆ. ನದಿಯ ನೀರಿನ ಹರಿವು ತುಂಬಾ ರಭಸವಾಗಿರುವುದರಿಂದ ಅದರ ಸ್ವಭಾವವೂ ವಿಶಿಷ್ಟವಾಗಿದೆ. ಹಾಗಾಗಿಯೇ ಬ್ರಹ್ಮಪುತ್ರವನ್ನು 'ಗಂಡು ನದಿ' ಎಂದು ಕರೆಯಲು ಅದರ ಹೆಸರು ಮಾತ್ರವಲ್ಲ, ಅದರ ಬಲವಾದ ಪ್ರವಾಹವೂ ಒಂದು ಕಾರಣ. ಆದರೆ, ಭಾರತದ ಎಲ್ಲಾ ನದಿಗಳು 'ಹೆಣ್ಣು ನದಿಗಳು' ಎನ್ನುವುದು ವೈಜ್ಞಾನಿಕ ವರ್ಗೀಕರಣವಲ್ಲ. ಇದು ನಮ್ಮ ಭಾಷೆ, ಪುರಾಣ ಮತ್ತು ಸಂಪ್ರದಾಯಗಳಲ್ಲಿ ಬಂದಿರುವ ಹೆಸರುಗಳ ಆಧಾರದ ಮೇಲಿನ ನಂಬಿಕೆ.&lt;/p&gt;&lt;h3&gt;&lt;strong&gt;ಬ್ರಹ್ಮಪುತ್ರ ನದಿಯ ವಿಶೇಷತೆ:&lt;/strong&gt;&lt;/h3&gt;&lt;p&gt;&lt;strong&gt;ವಿಶ್ವದ ಅತಿ ದೊಡ್ಡ ನದಿ ದ್ವೀಪ:&lt;/strong&gt; ಅಸ್ಸಾಂನಲ್ಲಿ ಬ್ರಹ್ಮಪುತ್ರ ನದಿಯು ಜಗತ್ತಿನ ಅತಿ ದೊಡ್ಡ ಮಾನವ ವಾಸವಿರುವ ನದಿ ದ್ವೀಪವಾದ ಮಜುಲಿಯನ್ನು (Majuli) ನಿರ್ಮಿಸಿದೆ.&lt;/p&gt;&lt;p&gt;&lt;strong&gt;ದೊಡ್ಡ ಗಾತ್ರ ಮತ್ತು ಹರಿವು:&lt;/strong&gt; ಇದು ತುಂಬು ನೀರಿನಿಂದ ಹರಿಯುವ ಪ್ರಬಲ ನದಿಯಾಗಿದೆ. ಮಳೆಗಾಲದಲ್ಲಿ ಈ ನದಿಯ ಅಗಲವು ಕೆಲವು ಕಡೆಗಳಲ್ಲಿ 8 ಕಿಲೋಮೀಟರ್&zwnj;ಗಳಿಗೂ ಅಧಿಕವಿರುತ್ತದೆ.&lt;/p&gt;&lt;p&gt;&lt;strong&gt;ಅತಿ ಉದ್ದದ ನದಿಗಳಲ್ಲಿ ಒಂದು&lt;/strong&gt;: ಭಾರತ ಮತ್ತು ಬಾಂಗ್ಲಾದೇಶದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಇದರ ಒಟ್ಟು ಉದ್ದ ಸುಮಾರು 2,900 ಕಿಲೋಮೀಟರ್.&lt;/p&gt;]]></content:encoded>
            <category><![CDATA[life]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/life/why-is-brahmaputra-called-india-only-male-river-here-is-the-interesting-story-kvn/articleshow-6fplcv7"/>
        </item>
        <item>
            <title><![CDATA['ಮದುವೆಯಾಗಿದ್ದರೆ ಖಂಡಿತ ವಿಚ್ಛೇದನ ಪಡೆಯುತ್ತಿದ್ದೆ': ನಟಿ ಅನುಪಮಾ ಲವ್‌ ಲೈಫ್‌ನಲ್ಲಿ ಏನಾಗಿತ್ತು?]]></title>
            <link>https://kannada.asianetnews.com/entertainment/anupama-parameswaran-opens-up-about-2-years-of-narcissistic-abuse-gvd/articleshow-q1deegy</link>
            <guid isPermaLink="true">https://kannada.asianetnews.com/entertainment/anupama-parameswaran-opens-up-about-2-years-of-narcissistic-abuse-gvd/articleshow-q1deegy</guid>
            <pubDate>Thu, 13 Aug 2026 16:55:21 +0530</pubDate>
            <description><![CDATA[Anupama Parameswaran: ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxdwreqsnwe47gjqs92t1s8,imgname-bjb-1786620305879.png" type="image/jpeg" height="390" width="690"/>
            <content:encoded><![CDATA[&lt;p&gt;ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಜೀವನವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬ್ರೇಕಪ್&zwnj;, ಮಾನಸಿಕ ನೆಮ್ಮದಿ ಹಾಗೂ ವಿಷಕಾರಿ ಸಂಬಂಧದ ಕುರಿತು ಅವರು ಮಾಡಿದ್ದ ಪೋಸ್ಟ್&zwnj;ಗಳು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದವು. ಇದೀಗ ಪಾಡ್&zwnj;ಕಾಸ್ಟ್&zwnj;ವೊಂದರಲ್ಲಿ ತಮ್ಮ ಹಿಂದಿನ ಸಂಬಂಧದ ಬಗ್ಗೆ ಅನುಪಮಾ ಮೊದಲ ಬಾರಿಗೆ ಸುದೀರ್ಘವಾಗಿ ಮಾತನಾಡಿದ್ದು, ಅವರ ಹೇಳಿಕೆಗಳು ಸದ್ದು ಮಾಡುತ್ತಿವೆ.&lt;/p&gt;&lt;p&gt;ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳ ಮೂಲಕ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಈ ನಡುವೆ ಅವರ ಪ್ರೀತಿ ಮತ್ತು ಬ್ರೇಕಪ್&zwnj; ಕುರಿತು ಹಲವು ರೀತಿಯ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದ್ದಕ್ಕಿದ್ದಂತೆ ಅನುಪಮಾ ಮಾನಸಿಕ ನೆಮ್ಮದಿ ಮತ್ತು ಅನಗತ್ಯ ಸಂಬಂಧಗಳಿಂದ ದೂರ ಉಳಿಯುವ ಕುರಿತು ಪೋಸ್ಟ್&zwnj; ಮಾಡಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು. ಇದೀಗ ಆ ಪೋಸ್ಟ್&zwnj; ಹಿಂದಿನ ಕಾರಣವನ್ನು ಅನುಪಮಾ ಸ್ವತಃ ಬಹಿರಂಗಪಡಿಸಿದ್ದಾರೆ.&lt;/p&gt;&lt;p&gt;&lt;strong&gt;&ldquo;ಎರಡು ವರ್ಷ ನಾರ್ಸಿಸಿಸ್ಟಿಕ್ ಅಬ್ಯೂಸ್&zwnj; ಅನುಭವಿಸಿದೆ!&rdquo;&lt;/strong&gt;&lt;/p&gt;&lt;p&gt;ತಮ್ಮ ಜೀವನದ ಅತ್ಯಂತ ಕಠಿಣ ಅವಧಿಯ ಬಗ್ಗೆ ಮಾತನಾಡಿದ ಅನುಪಮಾ, ಸುಮಾರು ಎರಡು ವರ್ಷಗಳ ಕಾಲ ತಾವು ನಾರ್ಸಿಸಿಸ್ಟಿಕ್ ಅಬ್ಯೂಸ್&zwnj; ಎದುರಿಸಿದ್ದಾಗಿ ಹೇಳಿದ್ದಾರೆ. &ldquo;ನಾನು ಎರಡು ವರ್ಷಗಳ ಕಾಲ ನಾರ್ಸಿಸಿಸ್ಟಿಕ್ ಅಬ್ಯೂಸ್&zwnj; ಅನುಭವಿಸಿದೆ. ಆ ಸಮಯದಲ್ಲಿ ಮಾನಸಿಕವಾಗಿ ಮಾತ್ರವಲ್ಲ, ದೈಹಿಕವಾಗಿಯೂ ಸಾಕಷ್ಟು ನೋವು ಅನುಭವಿಸಿದ್ದೆ. ಆ ವ್ಯಕ್ತಿಯ ಹೆಸರನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ಆದರೆ ನಾನು ಅನುಭವಿಸಿದ ನೋವು ತುಂಬಾ ಕಠಿಣವಾಗಿತ್ತು&rdquo; ಎಂದು ಅವರು ಹೇಳಿದ್ದಾರೆ. ತಮ್ಮ ಮಾತುಗಳನ್ನು ಕೇಳಿದಾಗ ಈ ರೀತಿಯ ಸಂಬಂಧವನ್ನು ಎದುರಿಸುತ್ತಿರುವವರಿಗೆ ತಮ್ಮ ಅನುಭವ ಅರ್ಥವಾಗಬಹುದು ಎಂದಿರುವ ಅನುಪಮಾ, ಇಂತಹ ಪರಿಸ್ಥಿತಿಯನ್ನು ಗುರುತಿಸದೇ ಇರುವವರೇ ಹೆಚ್ಚು ಅಪಾಯದಲ್ಲಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;&lt;strong&gt;&ldquo;ಮೊದಲು ಪ್ರೀತಿ&hellip; ಮರುದಿನವೇ ಸಂಪೂರ್ಣ ನಿರ್ಲಕ್ಷ್ಯ!&rdquo;&lt;/strong&gt;&lt;/p&gt;&lt;p&gt;ಆ ಸಂಬಂಧದ ಸ್ವರೂಪವನ್ನು ವಿವರಿಸಿದ ಅನುಪಮಾ, ಆರಂಭದಲ್ಲಿ ಆ ವ್ಯಕ್ತಿ ತಮ್ಮ ಮೇಲೆ ಅಪಾರ ಪ್ರೀತಿ ತೋರಿಸುತ್ತಿದ್ದ ಎಂದು ಹೇಳಿದ್ದಾರೆ. &ldquo;ಆ ವ್ಯಕ್ತಿ ನನ್ನ ಜೀವನದಲ್ಲಿ ಸಿಕ್ಕಿದ್ದು ನಿಜವೇ? ಇದು ಕನಸೇನೋ ಎಂದು ಅನಿಸುವಷ್ಟು ಪ್ರೀತಿ ತೋರಿಸುತ್ತಿದ್ದರು. ಆದರೆ ಮರುದಿನವೇ ಸಂಪೂರ್ಣ ಬದಲಾಗುತ್ತಿದ್ದರು. ಯಾವುದೇ ಕಾಳಜಿ ಇಲ್ಲದಂತೆ, ತೀವ್ರ ನಿರ್ಲಕ್ಷ್ಯ ತೋರಿಸುತ್ತಿದ್ದರು. ನಂತರ ಮತ್ತೆ ಪಶ್ಚಾತ್ತಾಪಪಟ್ಟು ಮಗುವಿನಂತೆ ಅಳುತ್ತಾ, ಕ್ಷಮೆ ಕೇಳಿ, ಮುಂದೆ ಹೀಗೆ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದರು. ಮತ್ತೆ ಅದೇ ರೀತಿಯ ಪ್ರೀತಿ ತೋರಿಸಿ, ಕೆಲವೇ ದಿನಗಳಲ್ಲಿ ಮತ್ತೆ ಅದೇ ವರ್ತನೆ ಶುರುವಾಗುತ್ತಿತ್ತು&rdquo; ಎಂದು ಅನುಪಮಾ ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;&ldquo;3 ತಿಂಗಳಲ್ಲೇ ಮದುವೆ ಮಾತು; ನನ್ನ ವೃತ್ತಿಯನ್ನೇ ಬಿಡಿಸಲು ಪ್ರಯತ್ನ!&rdquo;&lt;/strong&gt;&lt;/p&gt;&lt;p&gt;ತಮ್ಮ ಸಂಬಂಧದ ಮತ್ತೊಂದು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ ಅನುಪಮಾ, ಕೇವಲ ಮೂರು ತಿಂಗಳ ಪರಿಚಯದಲ್ಲೇ ನಿಶ್ಚಿತಾರ್ಥ ಹಾಗೂ ಡೆಸ್ಟಿನೇಶನ್&zwnj; ವೆಡ್ಡಿಂಗ್&zwnj; ಬಗ್ಗೆ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ. ಆದರೆ ಕ್ರಮೇಣ ಆ ವ್ಯಕ್ತಿಯ ಉದ್ದೇಶ ತಮ್ಮನ್ನು ವೃತ್ತಿಯಿಂದ ದೂರ ಮಾಡಿ ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿದೆ ಎಂಬುದು ಅರ್ಥವಾಯಿತು ಎಂದು ಅವರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ನಿಶ್ಚಿತಾರ್ಥವನ್ನು ಪದೇಪದೇ ಮುಂದೂಡುತ್ತಾ ಬಂದಿದ್ದಾಗಿ ಹೇಳಿದ್ದಾರೆ. &ldquo;ಆ ಒತ್ತಡದಿಂದ ಹೊರಬರಲು ನಾನು ಔಷಧಿಗಳನ್ನೂ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ನನ್ನ ವೃತ್ತಿಜೀವನದ ದೊಡ್ಡ ಹಿಟ್&zwnj;ಗಳಲ್ಲಿ ಒಂದಾದ &lsquo;ಡ್ರ್ಯಾಗನ್&zwnj;&rsquo; ಸಿನಿಮಾದ ಪ್ರಮೋಷನ್&zwnj;ಗಳನ್ನೂ ಸರಿಯಾಗಿ ಮಾಡಲು ಸಾಧ್ಯವಾಗಲಿಲ್ಲ&rdquo; ಎಂದು ಅನುಪಮಾ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&ldquo;ಮದುವೆಯಾಗಿದ್ದರೆ ಖಂಡಿತಾ ವಿಚ್ಛೇದನ ಪಡೆಯುತ್ತಿದ್ದೆ!&rdquo;&lt;/strong&gt;&lt;/h2&gt;&lt;p&gt;ತಮ್ಮ ಜೀವನದ ಆ ಹಂತವನ್ನು ನೆನಪಿಸಿಕೊಂಡ ಅನುಪಮಾ, ಒಂದು ವೇಳೆ ಆ ವ್ಯಕ್ತಿಯನ್ನು ಮದುವೆಯಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತಿತ್ತು ಎಂದು ಹೇಳಿದ್ದಾರೆ. &ldquo;ನಾನು ಆ ವ್ಯಕ್ತಿಯನ್ನು ಮದುವೆಯಾಗಿದ್ದರೆ ಖಂಡಿತವಾಗಿಯೂ ವಿಚ್ಛೇದನ ಪಡೆಯುತ್ತಿದ್ದೆ&rdquo; ಎಂದು ಅನುಪಮಾ ನೇರವಾಗಿ ಹೇಳಿದ್ದಾರೆ. ಸದ್ಯ ಆ ಕಠಿಣ ಹಂತದಿಂದ ಸಂಪೂರ್ಣವಾಗಿ ಹೊರಬಂದಿರುವುದಾಗಿ ತಿಳಿಸಿರುವ ಅವರು, ತಮ್ಮ ಜೀವನದಲ್ಲಿ ಮತ್ತೆ ಸಂತೋಷ ಮತ್ತು ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಅನುಪಮಾ ತಮ್ಮ ಹಿಂದಿನ ಸಂಬಂಧದ ಬಗ್ಗೆ ಮಾಡಿರುವ ಈ ಮುಕ್ತ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್&zwnj; ಆಗುತ್ತಿದ್ದು, ಅಭಿಮಾನಿಗಳು ಅವರ ಧೈರ್ಯವನ್ನು ಮೆಚ್ಚುತ್ತಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/anupama-parameswaran-opens-up-about-2-years-of-narcissistic-abuse-gvd/articleshow-q1deegy"/>
        </item>
        <item>
            <title><![CDATA[Viral: ಪಾನ್‌ ಅಂಗಡಿಯವನ 1 ಕೋಟಿ ಆಸ್ತಿ, ಹೊಸ ಕಾರು! ಇದನ್ನು ನೋಡಿ ಬೆರಗಾದ ಎಂ.ಬಿ.ಎ ಪದವೀಧರ ಹೇಳಿದ್ದೇನು?]]></title>
            <link>https://kannada.asianetnews.com/viral/paan-shop-owner-builds-rs-one-crore-wealth-and-buy-car-jobless-mba-grad-questions-value-of-his-degree-bmk/articleshow-8mfv64g</link>
            <guid isPermaLink="true">https://kannada.asianetnews.com/viral/paan-shop-owner-builds-rs-one-crore-wealth-and-buy-car-jobless-mba-grad-questions-value-of-his-degree-bmk/articleshow-8mfv64g</guid>
            <pubDate>Thu, 13 Aug 2026 16:54:36 +0530</pubDate>
            <description><![CDATA[ಕೆಲಸವಿಲ್ಲದೆ ಹುಡುಕಾಟ ನಡೆಸುತ್ತಿದ್ದ ಎಂಬಿಎ ಪದವೀಧರರೊಬ್ಬರು, ತಮ್ಮ ನೆರೆಹೊರೆಯ ಪಾನ್ ಅಂಗಡಿಯ ಮಾಲೀಕ 1 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾಡಿರುವುದನ್ನು ಕಂಡು ಬೆರಗಾಗುತ್ತಾರೆ. ಈ ಘಟನೆಯು, ಕಾರ್ಪೊರೇಟ್ ಉದ್ಯೋಗಗಳಿಗಿಂತ ಸಣ್ಣ, ಸ್ಥಳೀಯ ಉದ್ಯಮಗಳು ಹೇಗೆ ಹೆಚ್ಚಿನ ಆರ್ಥಿಕ ಯಶಸ್ಸನ್ನು ತಂದುಕೊಡಬಲ್ಲವು ಎಂಬುದರ ಕುರಿತು ಅವರ ದೃಷ್ಟಿಕೋನವನ್ನು ಬದಲಾಯಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxdv6egsm7n70pyeyz8v83y,imgname-viral-news-1-1786620254672.jpg" type="image/jpeg" height="390" width="690"/>
            <content:encoded><![CDATA[&lt;p&gt;ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಅಂಗಡಿಗಳು ಅಥವಾ ಕಿಯೋಸ್ಕ್ ಶಾಪ್&zwnj;ಗಳು ಹೊರಗಿನಿಂದ ನೋಡಲು ಅತ್ಯಂತ ಸಾಧಾರಣವಾಗಿ ಕಾಣಿಸಬಹುದು. ಆದರೆ, ಆ ಸಣ್ಣ ಉದ್ಯಮಗಳ ಮಾಲೀಕರು ವರ್ಷಗಳ ಅವಧಿಯಲ್ಲಿ ಗಳಿಸುವ ಆದಾಯ ಮತ್ತು ನಿರ್ಮಿಸುವ ಸಂಪತ್ತು ದೊಡ್ಡ ಕಂಪನಿಗಳ ಉದ್ಯೋಗಿಗಳನ್ನು ಬೆರಗುಗೊಳಿಸುವಂತಿರುತ್ತದೆ. ಇತ್ತೀಚೆಗೆ 34 ವರ್ಷದ ಎಂಬಿಎ ಪದವೀಧರರೊಬ್ಬರು ತಮಗಾದ ಇಂತಹದ್ದೇ ಒಂದು ವಿಶಿಷ್ಟ ಅನುಭವವನ್ನು 'ರೆಡ್ಡಿಟ್' ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.&lt;/p&gt;&lt;h2&gt;&lt;strong&gt;1 ಕೋಟಿ ರೂ. ಮೌಲ್ಯದ ಆಸ್ತಿ ಮಾಡಿದ ಪಾನ್ ಅಂಗಡಿಯವ!&lt;/strong&gt;&lt;/h2&gt;&lt;p&gt;ರೆಡ್ಡಿಟ್ ಬಳಕೆದಾರರಾದ 34 ವರ್ಷದ ಈ ಯುವಕ, ಟೈಯರ್-3 (Tier-3) ಕಾಲೇಜಿನಿಂದ ಎಂಬಿಎ ಪದವಿ ಪಡೆದಿದ್ದರು. ತೀವ್ರ ಬೆನ್ನುನೋವಿನ ಸಮಸ್ಯೆಯಿಂದಾಗಿ ಕೆಲಸ ತೊರೆದಿದ್ದ ಇವರು, ಪ್ರಸ್ತುತ ಸೂಕ್ತವಾದ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ನೆರೆಹೊರೆಯ ಪಾನ್ ಅಂಗಡಿಯೊಂದಕ್ಕೆ ಭೇಟಿ ನೀಡಿದಾಗ ಅವರಿಗೆ ಆಶ್ಚರ್ಯಕರ ವಿಷಯವೊಂದು ತಿಳಿಯಿತು. ಆ ಪಾನ್ ಅಂಗಡಿಯ ಮಾಲೀಕ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಸ್ವಂತ ಕಾರು ಮತ್ತು ಅಂಗಡಿಯನ್ನು ಖರೀದಿಸಿದ್ದಾನೆ. ಶಿಕ್ಷಣವಿದ್ದರೂ ಸೂಕ್ತ ಕೆಲಸವಿಲ್ಲದೆ ಹೆಣಗಾಡುತ್ತಿರುವ ಈ ಎಂಬಿಎ ಪದವೀಧರನಿಗೆ, ಈ ಘಟನೆಯು ತೀವ್ರ ವೈಯಕ್ತಿಕ ಹೋಲಿಕೆ ಮತ್ತು ಆತ್ಮಾವಲೋಕನಕ್ಕೆ ಕಾರಣವಾಯಿತು. ಈ ಒಂದು ಘಟನೆ ಅವರ ಸುತ್ತಮುತ್ತಲಿನ ಸಣ್ಣ ಉದ್ಯಮಿಗಳನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿತು.&lt;/p&gt;&lt;h3&gt;&lt;strong&gt;ಸ್ಥಳೀಯ ಸಣ್ಣ ಉದ್ಯಮಿಗಳ ಆರ್ಥಿಕ ಯಶಸ್ಸು&lt;/strong&gt;&lt;/h3&gt;&lt;p&gt;ಪಾನ್ ಅಂಗಡಿಯೊಂದೇ ಅಲ್ಲದೆ, ತಮ್ಮ ಸುತ್ತಮುತ್ತಲಿನ ಅನೇಕ ಸ್ವ-ಉದ್ಯೋಗಿಗಳು ಭಾರಿ ಪ್ರಮಾಣದ ಸಂಪತ್ತು ಮತ್ತು ಆಸ್ತಿಗಳನ್ನು ನಿರ್ಮಿಸುತ್ತಿರುವುದನ್ನು ಅವರು ಗಮನಿಸಿದರು.&lt;/p&gt;&lt;p&gt;&lt;strong&gt;ದೈನಂದಿನ ಕೆಲಸಗಾರರು;&lt;/strong&gt; ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಪ್ಲಂಬರ್&zwnj;ಗಳು, ಎಲೆಕ್ಟ್ರಿಷಿಯನ್&zwnj;ಗಳು, ಜ್ಯೂಸ್ ಮಾರಾಟಗಾರರು ಮತ್ತು ಕಿಯೋಸ್ಕ್ ಮಾಲೀಕರು ಅತ್ಯುತ್ತಮ ನಿವ್ವಳ ಮೌಲ್ಯವನ್ನು ನಿರ್ಮಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕುಟುಂಬಕ್ಕೆ ಉದ್ಯೋಗ;&lt;/strong&gt; ಇಷ್ಟೇ ಅಲ್ಲದೆ, ಇವರು ತಮ್ಮ ನಿಕಟ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೂ ತಮ್ಮ ವ್ಯಾಪಾರದಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಕಡಿಮೆ ಶಿಕ್ಷಣ - ಹೆಚ್ಚಿನ ಜಾಣ್ಮೆ; &lt;/strong&gt;ನಮ್ಮ ಪ್ರದೇಶದಲ್ಲೊಬ್ಬ ಹೆಚ್ಚು ಓದದಿರುವ ವ್ಯಕ್ತಿಯಿದ್ದು, ಆತ ಭಾರತದಲ್ಲಿ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಉನ್ನತ ದರ್ಜೆಯ ಮೊಬೈಲ್ ಫೋನ್&zwnj;ಗಳನ್ನು ಮಾರಾಟ ಮಾಡುವ ಯಶಸ್ವಿ ಉದ್ಯಮ ನಡೆಸುತ್ತಿದ್ದಾನೆ ಎಂದು ಬಳಕೆದಾರರು ಉಲ್ಲೇಖಿಸಿದ್ದಾರೆ.&lt;/p&gt;&lt;p&gt;ಇಂತಹ ಸಣ್ಣ ಉದ್ಯಮಿಗಳು ಕಾಲಕ್ಕೆ ತಕ್ಕಂತೆ ತಮ್ಮ ವ್ಯಾಪಾರ ಶೈಲಿಯನ್ನು ನವೀಕರಿಸಿಕೊಳ್ಳುತ್ತಾರೆ ಮತ್ತು ಗ್ರಾಹಕರೊಂದಿಗೆ ಅದ್ಭುತವಾದ ನಡವಳಿಕೆಯನ್ನು ಹೊಂದಿರುತ್ತಾರೆ ಎಂದು ಅವರು ಪ್ರಶಂಸಿಸಿದ್ದಾರೆ.&lt;/p&gt;&lt;p&gt;&lt;strong&gt;ಉದ್ಯೋಗದ ಗುಳ್ಳೆಯಿಂದ ಹೊರಬನ್ನಿ:&lt;/strong&gt; ನೆಟ್ಟಿಗರ ಸಮಾಲೋಚನೆ&lt;/p&gt;&lt;p&gt;ಈ ಪೋಸ್ಟ್&zwnj;ಗೆ ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಅತ್ಯಂತ ವ್ಯಾಪಾರ-ಕೇಂದ್ರಿತ ದೃಷ್ಟಿಕೋನದ ಪ್ರತಿಕ್ರಿಯೆ ನೀಡಿದ್ದಾರೆ. ಬಹಳಷ್ಟು ಸಣ್ಣ ಉದ್ಯಮಗಳ ಮಾಲೀಕರು, ಕಾರ್ಪೊರೇಟ್ ಉದ್ಯೋಗಗಳಲ್ಲಿ ಅತ್ಯುನ್ನತ ಶಿಕ್ಷಣ ಪಡೆದ ಜನರಿಗಿಂತಲೂ ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಇದು ಇಂದಿನ ನಿಜವಾದ ವಾಸ್ತವ. ರೆಡ್ಡಿಟ್&zwnj;ನಲ್ಲಿ ವರ್ಷಕ್ಕೆ 20 ರಿಂದ 30 ಲಕ್ಷ ಆದಾಯವನ್ನು ಅತ್ಯಂತ ಅಪರೂಪ ಅಥವಾ ದೊಡ್ಡ ವಿಷಯ ಎಂದು ಪರಿಗಣಿಸುವ ಜನರನ್ನು ನೋಡಿದರೆ ನಗು ಬರುತ್ತದೆ. ಜನರು ತಮ್ಮ ಉದ್ಯೋಗದಿಂದ ಹೊರಬಂದು ಸುತ್ತಲಿನ ಪ್ರಪಂಚ ನೋಡಬೇಕಿದೆ.&lt;/p&gt;&lt;h3&gt;&lt;strong&gt;20-30 ಲಕ್ಷ ಸರಾಸರಿ ಆದಾಯವಾಗಲಿ!&lt;/strong&gt;&lt;/h3&gt;&lt;p&gt;ಇಂದಿನ ದಿನಗಳಲ್ಲಿ ಶ್ರೇಣಿ-1 ಮತ್ತು ಶ್ರೇಣಿ-2 (Tier-2) ನಗರಗಳಲ್ಲಿ ವರ್ಷಕ್ಕೆ 20-30 ಲಕ್ಷ ರೂಪಾಯಿ ಆದಾಯ ಎಂಬುದು ಸಣ್ಣ ಉದ್ಯಮಿಗಳಿಗೆ ಅತ್ಯಂತ ಸಾಮಾನ್ಯ ವಿಷಯವಾಗಿದೆ ಮತ್ತು ಶೀಘ್ರದಲ್ಲೇ ಇದು ಸರಾಸರಿ ಆದಾಯವಾಗಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.&lt;/p&gt;&lt;h3&gt;&lt;strong&gt;ಅಂತಿಮ ತೀರ್ಮಾನ!&lt;/strong&gt;&lt;/h3&gt;&lt;p&gt;ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ಕೆಲಸಗಳಷ್ಟೇ ಯಶಸ್ಸಿನ ಹಾದಿಯಲ್ಲ, ಸ್ಥಳೀಯ ಮಾರುಕಟ್ಟೆಯಲ್ಲಿನ ಸಣ್ಣ ಉದ್ಯಮಗಳು, ಕೌಶಲ್ಯ ಆಧಾರಿತ ಕೆಲಸಗಳು ಮತ್ತು ಸ್ವ-ಉದ್ಯೋಗಗಳು ಸಹ ಅಪಾರ ಪ್ರಮಾಣದ ಸಂಪತ್ತನ್ನು ತಂದುಕೊಡಬಲ್ಲವು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/viral/paan-shop-owner-builds-rs-one-crore-wealth-and-buy-car-jobless-mba-grad-questions-value-of-his-degree-bmk/articleshow-8mfv64g"/>
        </item>
        <item>
            <title><![CDATA[ರೇಣುಕಾಸ್ವಾಮಿ ಕೇಸ್: ಜೈಲಲ್ಲಿ ಹೆಡ್‌ಫೋನ್ ಬಳಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾದ ಪವಿತ್ರಾ ಗೌಡ!]]></title>
            <link>https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f</link>
            <guid isPermaLink="true">https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f</guid>
            <pubDate>Thu, 13 Aug 2026 16:52:55 +0530</pubDate>
            <description><![CDATA[ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ, ನ್ಯಾಯಾಧೀಶರು ಪವಿತ್ರಾ ಗೌಡರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದರ್ಶನ್ ಖುದ್ದು ಹಾಜರಾತಿ ಕುರಿತ ಆದೇಶವನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದ್ದು, ಮಾಫಿ ಸಾಕ್ಷಿ ವಿಚಾರವಾಗಿ ದರ್ಶನ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kerstrhhj4kqbe0bnyvbfv00,imgname-actress-pavithra-gowda-1768211440177.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ತೀವ್ರ ಕುತೂಹಲಕಾರಿಯಾಗಿ ನಡೆದಿದ್ದು, ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಮತ್ತೊಂದು ಕಡೆ ನಟ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್&zwnj;ನಲ್ಲಿ ನಡೆಯುತ್ತಿದೆ.&lt;/p&gt;&lt;h2&gt;ದರ್ಶನ್ ಖುದ್ದು ಹಾಜರಾತಿ: ಸೋಮವಾರಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ&lt;/h2&gt;&lt;p&gt;ಪ್ರಕರಣದ ಪ್ರಮುಖ ಎರಡನೇ ಆರೋಪಿಯಾಗಿರುವ ನಟ ದರ್ಶನ್ ನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು, ಈ ಕುರಿತ ನಿರ್ಧಾರವನ್ನು ಸೋಮವಾರಕ್ಕೆ ಕಾಯ್ದಿರಿಸಿದ್ದಾರೆ. ಹೀಗಾಗಿ ದರ್ಶನ್ ಕೋರ್ಟ್&zwnj;ಗೆ ಖುದ್ದು ಹಾಜರಾಗಬೇಕೇ ಅಥವಾ ವಿಡಿಯೋ ಕಾನ್ಫರೆನ್ಸ್ (VC) ಮೂಲಕ ಹಾಜರಾಗಬೇಕೇ ಎಂಬ ಕುರಿತು ಸೋಮವಾರ ಅಂತಿಮ ಆದೇಶ ಹೊರಬೀಳಲಿದೆ.&lt;/p&gt;&lt;h2&gt;'ಎ1' ಪವಿತ್ರಾ ಗೌಡ ವಿಚಾರದಲ್ಲಿ ಗರಂ ಆದ ನ್ಯಾಯಾಧೀಶರು&lt;/h2&gt;&lt;p&gt;ಇನ್ನು ವಿಚಾರಣೆ ವೇಳೆ ಜೈಲಾಧಿಕಾರಿಗಳ ನಡೆ ಹಾಗೂ 'ಎ1' ಆರೋಪಿ ಪವಿತ್ರಾ ಗೌಡ ಅವರ ನಡವಳಿಕೆ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕಾರಾಗೃಹದ ಅಧಿಕಾರಿಗಳಿಗೆ ಕ್ಲಾಸ್ ತಗೆದುಕೊಂಡರು.&lt;/p&gt;&lt;p&gt;ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ವೀಡಿಯೋ ಕಾನ್ಫರೆನ್ಸ್&zwnj;ಗೆ ಲೇಟಾಗಿ ಹಾಜರಾಗಿದ್ದೇಕೆ? ವಿಚಾರಣೆಗೆ ತಡವಾಗಲು ಕಾರಣವೇನು? ಅವರು ಹೆಡ್&zwnj;ಫೋನ್ ಯಾಕೆ ಬಳಸುತ್ತಿದ್ದಾರೆ? ಕೋರ್ಟ್ ವಿಚಾರಣೆ ವೇಳೆ ಹೆಡ್&zwnj;ಫೋನ್ ಬಳಸಲು ಯಾರು ಪರ್ಮಿಷನ್ ಕೊಟ್ರು? ವುಮೆನ್ಸ್ ಸೆಲ್&zwnj;ನಲ್ಲಿ ಆರೋಪಿಗಳಿಗೆ ಹೆಡ್&zwnj;ಫೋನ್ಸ್ ಕೊಡ್ತಾರಾ? ನಾನು ಇದನ್ನು ಸ್ಪಷ್ಟವಾಗಿ ಗಮನಿಸಿದ್ದೇನೆ ಎಂದು ಜಡ್ಜ್ ಗರಂ ಆದರು.&lt;/p&gt;&lt;p&gt;ಈ ಸಂದರ್ಭದಲ್ಲಿ ವೀಡಿಯೋ ಕಾನ್ಫರೆನ್ಸ್&zwnj;ನಲ್ಲಿಯೇ ಉತ್ತರಿಸಿದ ಪವಿತ್ರಾಗೌಡ, ಇಲ್ಲ ಮೇಡಂ, ನಾನು ಹೆಡ್&zwnj;ಫೋನ್ ಬಳಸಿಲ್ಲ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಆದರೆ ಅದನ್ನು ಒಪ್ಪದ ನ್ಯಾಯಾಧೀಶರು, ನಾನು ಸ್ವತಃ ಕಣ್ಣಾರೆ ನೋಡಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಲ್ಲದೆ, ಈ ಶಿಸ್ತುಬದ್ಧ ಲೋಪದ ಕುರಿತು ತಕ್ಷಣವೇ ಸೂಕ್ತ ಸ್ಪಷ್ಟನೆ (Clarification) ನೀಡುವಂತೆ ಜೈಲಾಧಿಕಾರಿಗಳಿಗೆ ಆದೇಶಿಸಿದರು. ಕೂಡಲೇ ಈ ಕುರಿತು ಜೈಲಾಧಿಕಾರಿಗಳಿಂದ ಲಿಖಿತ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಧೀಶೆ ಸುಜಾತ ಎಂ. ಸಂಬ್ರಾಣಿ ಅವರು ಆದೇಶಿಸಿದರು.&lt;/p&gt;&lt;h2&gt;ಮಾಫಿ ಸಾಕ್ಷಿ ವಿಚಾರಣೆ ಪ್ರಶ್ನಿಸಿ ಹೈಕೋರ್ಟ್&zwnj;ಗೆ ದರ್ಶನ್ ಮೇಲ್ಮನವಿ&lt;/h2&gt;&lt;p&gt;59ನೇ ಸಿಸಿಎಚ್ (CCH) ಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್&zwnj;ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಈ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.&lt;/p&gt;&lt;p&gt;ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಪ್ರಕ್ರಿಯೆಯಲ್ಲಿ ನಟ ದರ್ಶನ್ ಅವರ ಪರ ವಾದ ಮಂಡಿಸಲು ಕೆಳ ನ್ಯಾಯಾಲಯ ಅನುಮತಿ ನೀಡಿಲ್ಲ. ಪ್ರಕ್ರಿಯೆಯಲ್ಲಾಗಿರುವ ಲೋಪದೋಷಗಳ ಕುರಿತು ವಾದಿಸಲು ನಮಗೆ ಅವಕಾಶ ಕೋರಲಾಗಿತ್ತಾದರೂ, ನ್ಯಾಯಾಲಯ ಅದಕ್ಕೆ ಸಮ್ಮತಿಸಲಿಲ್ಲ. ವಾದಕ್ಕೆ ಸೂಕ್ತ ಅವಕಾಶ ನೀಡದಿರುವುದರಿಂದಲೇ ನಾವು ಹೈಕೋರ್ಟ್ ಮೆಟ್ಟಿಲೇರಬೇಕಾಯಿತು ಎಂದು ಅವರು ವಾದಿಸಿದರು. ಅರ್ಜಿದಾರರ ಪರ ವಕೀಲರ ಮನವಿಯನ್ನು ಆಲಿಸಿದ ಹೈಕೋರ್ಟ್, ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕರಿಗೆ (SPP) ತಕ್ಷಣ ಮಾಹಿತಿ ನೀಡುವಂತೆ ಅರ್ಜಿದಾರರಿಗೆ ಸೂಚಿಸಿತಲ್ಲದೆ, ವಿಚಾರಣೆಯನ್ನು ಮುಂದೂಡಿತು&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/renukaswamy-case-court-reserves-order-on-darshan-physical-appearance-judge-angry-jail-officials-over-pavithra-gowda-gdp/articleshow-l1lwr2f"/>
        </item>
        <item>
            <title><![CDATA[ವಿಜಯಪುರದ ದೇವರಹಿಪ್ಪರಗಿಯಲ್ಲಿ ₹453 ಕೋಟಿಯ ಎಥನಾಲ್ ಪ್ಲ್ಯಾಂಟ್‌ ನಿರ್ಮಾಣ ಯೋಜನೆಗೆ ಸರ್ಕಾರ ಒಪ್ಪಿಗೆ!]]></title>
            <link>https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w</link>
            <guid isPermaLink="true">https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w</guid>
            <pubDate>Thu, 13 Aug 2026 16:41:29 +0530</pubDate>
            <description><![CDATA[ಕರ್ನಾಟಕ ಸರ್ಕಾರವು ₹6,253 ಕೋಟಿ ಮೌಲ್ಯದ 83 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxd007exnnznvptcwytrzkw,imgname-ethanol-project-vijayapura-1786619363566.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ರಾಜ್ಯದಲ್ಲಿ ಕೈಗಾರಿಕಾ ವಲಯಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ವಿಜಯಪುರ ಜಿಲ್ಲೆಯಲ್ಲಿ ಬರೋಬ್ಬರಿ 453 ಕೋಟಿ ರೂಪಾಯಿ ವೆಚ್ಚದ ಸಕ್ಕರೆ ಹಾಗೂ ಎಥನಾಲ್ ಉತ್ಪಾದನಾ ಯೋಜನೆಗೆ ಅನುಮೋದನೆ ನೀಡಿದೆ. ಇದರೊಂದಿಗೆ ಒಟ್ಟು 6,253 ಕೋಟಿ ರೂಪಾಯಿ ಮೊತ್ತದ 83 ಕೈಗಾರಿಕಾ ಯೋಜನೆಗಳಿಗೆ ರಾಜ್ಯ ಸರ್ಕಾರ ಬುಧವಾರ ಹಸಿರು ನಿಶಾನೆ ತೋರಿದೆ.&lt;/p&gt;&lt;p&gt;ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ 'ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರಿ' (Shrishail Mallikarjun Distillery) ಸಂಸ್ಥೆಯು ಈ ಸಕ್ಕರೆ ಕಾರ್ಖಾನೆ ಹಾಗೂ ಎಥನಾಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮತಿ ಸಮಿತಿ (SLSWCC) ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;&lsquo;ಬಿಯಾಂಡ್ ಬೆಂಗಳೂರು&rsquo; ಚಾಲನೆಗೆ ಒತ್ತು&lt;/strong&gt;&lt;/h2&gt;&lt;p&gt;ಸಮಿತಿಯು ಅನುಮೋದನೆ ನೀಡಿರುವ ಒಟ್ಟು 83 ಯೋಜನೆಗಳ ಪೈಕಿ, 69 ಕೈಗಾರಿಕೆಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹೊರಗೆ ಸ್ಥಾಪನೆಯಾಗಲಿವೆ. ಇದು ಸಮಗ್ರ ಕರ್ನಾಟಕದಾದ್ಯಂತ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ 'ಬಿಯಾಂಡ್ ಬೆಂಗಳೂರು' (Beyond Bengaluru) ಯೋಜನೆಗೆ ಭಾರಿ ಬೆಂಬಲ ನೀಡಲಿದೆ.&lt;/p&gt;&lt;p&gt;ಈ ಯೋಜನೆಯಡಿ ₹50 ಕೋಟಿಗಿಂತ ಹೆಚ್ಚು ಬಂಡವಾಳ ಹೂಡಿಕೆಯ ದೊಡ್ಡ ಯೋಜನೆಗಳು ಒಟ್ಟು ₹4,703 ಕೋಟಿ ಪಾಲು ಹೊಂದಿವೆ. ₹15 ಕೋಟಿಯಿಂದ ₹50 ಕೋಟಿವರೆಗಿನ ಹೂಡಿಕೆಯ 57 ಯೋಜನೆಗಳು ಸುಮಾರು ₹1,292 ಕೋಟಿ ಮೊತ್ತವನ್ನು ಒಳಗೊಂಡಿವೆ. ಅನುಮೋದನೆ ಪಡೆದ ಈ ಯೋಜನೆಗಳು ಏರೋಸ್ಪೇಸ್ ಮತ್ತು ರಕ್ಷಣೆ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ (IT) ಸೇವೆಗಳು, ಸಂಯೋಜಿತ ಕೈಗಾರಿಕಾ ಪಾರ್ಕ್&zwnj;ಗಳು (Integrated Industrial Parks), ಸಕ್ಕರೆ ಮತ್ತು ಎಥನಾಲ್ ಹಾಗೂ ಪುನರುತ್ಪಾದಕ ಇಂಧನ (Renewable Energy) ಸೇರಿದಂತೆ ವಿವಿಧ ಪ್ರಮುಖ ವಲಯಗಳಲ್ಲಿ ವ್ಯಾಪಿಸಿವೆ.&lt;/p&gt;&lt;h2&gt;&lt;strong&gt;ಇತರ ಪ್ರಮುಖ ಬೃಹತ್ ಯೋಜನೆಗಳು&lt;/strong&gt;&lt;/h2&gt;&lt;p&gt;ಹೈದರಾಬಾದ್ ಮೂಲದ 'ಜಸ್ವಿನ್ ವೆಂಚರ್ಸ್' (Jaswin Ventures) ಸಂಸ್ಥೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಯೋಜಿತ ಕೈಗಾರಿಕಾ ಪಾರ್ಕ್ ಮತ್ತು ಮಿಶ್ರ-ಬಳಕೆಯ ಟೌನ್&zwnj;ಶಿಪ್ ಅಭಿವೃದ್ಧಿಪಡಿಸಲು ₹475 ಕೋಟಿ ಹೂಡಿಕೆ ಮಾಡಲಿದೆ. ಅದೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಗೋದಾಮು (Warehousing), ಲಾಜಿಸ್ಟಿಕ್ಸ್, ವಸತಿ ಮತ್ತು ವಾಣಿಜ್ಯ ಸೌಲಭ್ಯಗಳನ್ನು ಒಳಗೊಂಡ ಸಂಯೋಜಿತ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು 'ಜಂಪನ ಕನ್ಸ್ಟ್ರಕ್ಷನ್' (Jampana Construction) ಸಂಸ್ಥೆಯು ₹465 ಕೋಟಿ ಹೂಡಿಕೆ ಮಾಡಲಿದೆ.&lt;/p&gt;&lt;p&gt;ಈ ಹೊಸ ಹೂಡಿಕೆಗಳು ಮತ್ತು ಯೋಜನೆಗಳ ಅನುಮೋದನೆಯು ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದಲ್ಲದೆ, ಭಾರಿ ಸಂಖ್ಯೆಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಜೊತೆಗೆ ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುವ ಸರ್ಕಾರದ ಪ್ರಯತ್ನಕ್ಕೆ ದೊಡ್ಡ ಶಕ್ತಿ ತುಂಬಲಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/karnataka-approves-453-crore-ethanol-project-vijayapura-mb-patil-san/articleshow-sxv2h1w"/>
        </item>
        <item>
            <title><![CDATA[ವಿಜಯಲಕ್ಷ್ಮಿ ದರ್ಶನ್‌ ಹೊಸ ಪೋಸ್ಟ್‌: 'ದೇವರಿಗೆ ಗೊತ್ತು' ಕ್ಯಾಪ್ಷನ್‌, ಹುಟ್ಟಿಕೊಂಡಿವೆ ಹಲವು ಪ್ರಶ್ನೆಗಳು!]]></title>
            <link>https://kannada.asianetnews.com/sandalwood/vijayalakshmi-darshan-new-post-sparks-curiosity-what-does-her-caption-mean-gvd/articleshow-aly5gfq</link>
            <guid isPermaLink="true">https://kannada.asianetnews.com/sandalwood/vijayalakshmi-darshan-new-post-sparks-curiosity-what-does-her-caption-mean-gvd/articleshow-aly5gfq</guid>
            <pubDate>Thu, 13 Aug 2026 16:38:08 +0530</pubDate>
            <description><![CDATA[Vijayalakshmi Darshan Instagram Post: ನಟ ದರ್ಶನ್‌ ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್‌ಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxcw22chdakv8x6nkay544f,imgname-vh-1786619234319.png" type="image/jpeg" height="390" width="690"/>
            <content:encoded><![CDATA[&lt;p&gt;ನಟ ದರ್ಶನ್&zwnj; ಜೈಲು ಸೇರಿದ ಬಳಿಕ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್&zwnj; ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಪೋಸ್ಟ್&zwnj;ಗಳು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿವೆ. ಇದೀಗ ಅವರು ಹಂಚಿಕೊಂಡಿರುವ ಮತ್ತೊಂದು ಪೋಸ್ಟ್&zwnj; ಕೂಡ ಅಭಿಮಾನಿಗಳು ಹಾಗೂ ನೆಟ್ಟಿಗರ ಗಮನ ಸೆಳೆದಿದೆ.&lt;/p&gt;&lt;p&gt;ವಿಜಯಲಕ್ಷ್ಮಿ ತಮ್ಮ ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಮಾಕ್ಯ ದೇವಿಯ ಫೋಟೋವನ್ನು ಹಂಚಿಕೊಂಡಿದ್ದು, ಅದರೊಂದಿಗೆ &ldquo;ದೇವರಿಗೆ ಗೊತ್ತು, ಅಷ್ಟೇ ಸಾಕು&rdquo; ಎಂಬ ಅರ್ಥಪೂರ್ಣ ಕ್ಯಾಪ್ಷನ್&zwnj; ಬರೆದಿದ್ದಾರೆ. ಇದಕ್ಕೆ ಜೊತೆಯಾಗಿ &ldquo;ಎಲ್ಲಿಗೆ ಓಡುವೆ ಓ ಮನುಜ, ನಿನ್ನ ಕರ್ಮಗಳೆಲ್ಲಾ ಇಲ್ಲೇ ಕೊನೆ&rdquo; ಎಂಬ ಹಾಡನ್ನೂ ಹಾಕಿಕೊಂಡಿದ್ದಾರೆ.&lt;/p&gt;&lt;p&gt;ಈ ಒಂದು ಪೋಸ್ಟ್&zwnj; ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ವಿಜಯಲಕ್ಷ್ಮಿ ಯಾವ ಸಂದರ್ಭವನ್ನು ಉದ್ದೇಶಿಸಿ ಈ ಮಾತುಗಳನ್ನು ಬರೆದಿದ್ದಾರೆ? ಯಾರಿಗಾದರೂ ಪರೋಕ್ಷ ಸಂದೇಶ ನೀಡಿದ್ದಾರಾ? ಅಥವಾ ತಮ್ಮ ವೈಯಕ್ತಿಕ ಭಾವನೆಗಳನ್ನು ಹಂಚಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ನೆಟ್ಟಿಗರಲ್ಲಿ ಮೂಡಿವೆ.&lt;/p&gt;&lt;p&gt;ಇದರ ನಡುವೆ ರೇಣುಕಾಸ್ವಾಮಿ ಕೊಲೆ ಪ್ರಕರಣವೂ ಕಾನೂನು ಹಂತದಲ್ಲಿ ಹೊಸ ಬೆಳವಣಿಗೆಗಳನ್ನು ಕಾಣುತ್ತಿದೆ. ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್&zwnj; ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದು ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ. ಈ ಬೆಳವಣಿಗೆಗಳ ನಡುವೆಯೇ ವಿಜಯಲಕ್ಷ್ಮಿ ಅವರ ಹೊಸ ಪೋಸ್ಟ್&zwnj; ಬಂದಿರುವುದು ಮತ್ತಷ್ಟು ಗಮನ ಸೆಳೆದಿದೆ.&lt;/p&gt;&lt;h2&gt;&lt;strong&gt;ಇದರ ಹಿಂದಿನ ಅರ್ಥವೇನು?&lt;/strong&gt;&lt;/h2&gt;&lt;p&gt;ವಿಜಯಲಕ್ಷ್ಮಿ ಈ ಹಿಂದೆ ಕೂಡ &ldquo;ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ, ವ್ಯಕ್ತಿಯಾಗಲಿ&rdquo; ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಕರ್ಮ ಹಾಗೂ ದೇವರನ್ನು ಉಲ್ಲೇಖಿಸಿರುವ ಪೋಸ್ಟ್&zwnj; ಹಾಕಿರುವುದರಿಂದ, ಇದರ ಹಿಂದಿನ ಅರ್ಥವೇನು ಎಂಬ ಚರ್ಚೆ ಜೋರಾಗಿದೆ.&lt;/p&gt;&lt;p&gt;ಆದರೆ ವಿಜಯಲಕ್ಷ್ಮಿ ತಮ್ಮ ಪೋಸ್ಟ್&zwnj;ನಲ್ಲಿ ಯಾರನ್ನೂ ನೇರವಾಗಿ ಉಲ್ಲೇಖಿಸಿಲ್ಲ. ಹೀಗಾಗಿ ಈ ಸಂದೇಶದ ನಿಜವಾದ ಉದ್ದೇಶವೇನು ಎಂಬುದು ಸದ್ಯಕ್ಕೆ ಅವರಿಗೇ ಗೊತ್ತು. ಒಂದು ಸಣ್ಣ ಕ್ಯಾಪ್ಷನ್&zwnj;, ಆದರೆ ಅದರಿಂದ ಹುಟ್ಟಿಕೊಂಡಿರುವ ಪ್ರಶ್ನೆಗಳು ಮಾತ್ರ ಹಲವು!&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/vijayalakshmi-darshan-new-post-sparks-curiosity-what-does-her-caption-mean-gvd/articleshow-aly5gfq"/>
        </item>
        <item>
            <title><![CDATA[ಶಂಖವನ್ನು ಮನೆಯ ಯಾವ ದಿಕ್ಕಿನಲ್ಲಿಡಬೇಕು? ಲಕ್ಷ್ಮೀ ದೇವಿಯ ಕೃಪೆಗಾಗಿ ಅನುಸರಿಸಬೇಕಾದ ನಿಯಮಗಳು ಇಲ್ಲಿವೆ!]]></title>
            <link>https://kannada.asianetnews.com/vaastu/vastu-tips-for-shankha-at-home-rules-for-placing-conch-shell-puja-room-kannada/articleshow-c29mdze</link>
            <guid isPermaLink="true">https://kannada.asianetnews.com/vaastu/vastu-tips-for-shankha-at-home-rules-for-placing-conch-shell-puja-room-kannada/articleshow-c29mdze</guid>
            <pubDate>Thu, 13 Aug 2026 16:35:13 +0530</pubDate>
            <description><![CDATA[ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ಶಂಖವನ್ನು ಮನೆಯಲ್ಲಿಡುವುದು ಶುಭವೆಂದು ಪರಿಗಣಿಸಲಾಗಿದೆ. ಆದರೆ, ವಾಸ್ತು ಪ್ರಕಾರ ಶಂಖವನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ನಿಯಮಬದ್ಧವಾಗಿ ಇಟ್ಟಾಗ ಮಾತ್ರ ಲಕ್ಷ್ಮೀ ದೇವಿಯ ಅನುಗ್ರಹದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯ. ಈ ಲೇಖನವು ಶಂಖವನ್ನು ಸ್ಥಾಪಿಸುವ ಸರಿಯಾದ ವಿಧಾನ ಮತ್ತು ಅದರ ಮಹತ್ವವನ್ನು ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ggkpe6m1wdkyjyzq5vmyxawb,imgname-you-will-be-surprised-to-know-these-amazing-benefits-of-blowing-shankha.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೂ ಪೂಜಾ ಪದ್ಧತಿಯಲ್ಲಿ ಶಂಖಕ್ಕೆ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ಸ್ಥಾನವಿದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ದಿವ್ಯ ವಸ್ತುಗಳಲ್ಲಿ ಶಂಖವೂ ಒಂದ ಎಂಬುದು ಪುರಾಣಗಳ ನಂಬಿಕೆ. ದೇವಸ್ಥಾನ ಹಾಗೂ ಮನೆಗಳ ಪೂಜಾ ಕೋಣೆಯಲ್ಲಿ ಗಂಟೆ, ದೀಪ ಮತ್ತು ಕಳಶದ ಜೊತೆಗೆ ಶಂಖವನ್ನು ಇಡುವುದು ಅನಾದಿ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಶಂಖನಾದ ಮೊಳಗುವ ಸ್ಥಳದಲ್ಲಿ ನಕಾರಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗುತ್ತದೆ.&lt;/p&gt;&lt;p&gt;ಶಂಖವು ವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು ಮಾತ್ರವಲ್ಲದೆ, ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಯಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಶಂಖವನ್ನು ತಂದು ಎಲ್ಲೆಂದರಲ್ಲಿ ಇಡುವುದು ವಾಸ್ತು ಪ್ರಕಾರ ಸರಿಯಲ್ಲ. ಅದನ್ನು ಸೂಕ್ತ ದಿಕ್ಕು ಮತ್ತು ನಿಯಮಗಳಂತೆ ಇಟ್ಟಾಗ ಮಾತ್ರ ಶುಭ ಫಲಗಳು ದೊರೆಯುತ್ತವೆ.&lt;/p&gt;&lt;h2&gt;&lt;strong&gt;ಶಂಖವನ್ನು ಯಾವ ದಿಕ್ಕಿನಲ್ಲಿಡಬೇಕು?&lt;/strong&gt;&lt;/h2&gt;&lt;p&gt;ವಾಸ್ತು ಹಾಗೂ ಸಂಪ್ರದಾಯಗಳ ಪ್ರಕಾರ ಮನೆಯ ಪೂಜಾ ಕೋಣೆಯ ಪೂರ್ವ ದಿಕ್ಕಿನಲ್ಲಿ (East Direction) ಶಂಖವನ್ನು ಸ್ಥಾಪಿಸುವುದು ಅತ್ಯಂತ ಶುಭಪ್ರದ. ಸೂರ್ಯೋದಯದ ದಿಕ್ಕಾದ ಪೂರ್ವಕ್ಕೆ ಆಧ್ಯಾತ್ಮಿಕವಾಗಿ ವಿಶೇಷ ಪ್ರಾಮುಖ್ಯತೆಯಿದೆ. ಈ ದಿಕ್ಕಿನಲ್ಲಿ ಶಂಖವನ್ನು ಇಟ್ಟು ನಿತ್ಯ ಪೂಜಿಸುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ದೊರೆತು, ಆರ್ಥಿಕ ಕಷ್ಟಗಳು ನಿವಾರಣೆಯಾಗುತ್ತವೆ. ಶಂಖವನ್ನು ನೇರವಾಗಿ ಬರಿ ನೆಲದ ಮೇಲೆ ಇಡದೆ, ಪವಿತ್ರವಾದ ಪೂಜಾ ಪೀಠದ ಮೇಲೆ ಇಡಬೇಕು.&lt;/p&gt;&lt;h2&gt;&lt;strong&gt;ಕೆಂಪು ಅಥವಾ ಹಳದಿ ಬಟ್ಟೆಯ ಬಳಕೆ:&lt;/strong&gt;&lt;/h2&gt;&lt;p&gt;ಶಂಖವನ್ನು ಪೂಜಾ ಪೀಠದ ಮೇಲಿಡುವಾಗ ಕೆಂಪು ಅಥವಾ ಹಳದಿ ಬಣ್ಣದ ಶುಭ್ರವಾದ ರೇಷ್ಮೆ/ಹತ್ತಿ ಬಟ್ಟೆಯನ್ನು ಹಾಸಿ, ಅದರ ಮೇಲೆ ಶಂಖವನ್ನು ಗೌರವಪೂರ್ವಕವಾಗಿ ಸ್ಥಾಪಿಸಬೇಕು. ಶಂಖವಿಡುವ ಸ್ಥಳವು ಯಾವಾಗಲೂ ಸ್ವಚ್ಛವಾಗಿರಬೇಕು. ಅದನ್ನು ಇತರ ಅನಗತ್ಯ ವಸ್ತುಗಳೊಂದಿಗೆ ಬೆರೆಸಿ ಇಡಬಾರದು.&lt;/p&gt;&lt;h2&gt;&lt;strong&gt;ಶಂಖವನ್ನು ಯಾವಾಗ ಊದಬೇಕು?&lt;/strong&gt;&lt;/h2&gt;&lt;p&gt;ಪೂಜೆಯ ಆರಂಭದಲ್ಲಿ ಅಥವಾ ಆರತಿಯ ಕೊನೆಯಲ್ಲಿ ಶಂಖನಾದ ಮಾಡುವುದು ಪವಿತ್ರ ಆಚಾರವಾಗಿದೆ. ಶಂಖದಿಂದ ಹೊರಹೊಮ್ಮುವ ದಿವ್ಯ ಧ್ವನಿಯು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಓಡಿಸಿ, ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ. ಆದರೆ, ವಾಸ್ತು ಪ್ರಕಾರ ಪೂಜೆಗೆ ಬಳಸುವ ಶಂಖ ಮತ್ತು ಊದಲು ಬಳಸುವ ಶಂಖವನ್ನು ಬೇರೆ ಬೇರೆಯಾಗಿ ಇಡುವುದು ಉತ್ತಮ.&lt;/p&gt;&lt;h2&gt;&lt;strong&gt;ಶಂಖ ಊದಿದ ನಂತರ ಅನುಸರಿಸಬೇಕಾದ ನಿಯಮಗಳು:&lt;/strong&gt;&lt;/h2&gt;&lt;p&gt;ಶಂಖವನ್ನು ಊದಿದ ನಂತರ ಅದನ್ನು ಹಾಗೆಯೇ ಇಡದೆ, ಪವಿತ್ರ ಗಂಗಾಜಲ ಅಥವಾ ಶುದ್ಧ ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ಒರೆಸಿ ಪೂಜಾ ಸ್ಥಳದಲ್ಲಿ ಇಡಬೇಕು. ಶಂಖದ ಒಳಗೆ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ.&lt;/p&gt;&lt;h2&gt;&lt;strong&gt;ಶಂಖ ಖರೀದಿಸುವಾಗ ವಹಿಸಬೇಕಾದ ಎಚ್ಚರ:&lt;/strong&gt;&lt;/h2&gt;&lt;p&gt;ಹೊಸ ಶಂಖವನ್ನು ಮನೆಗೆ ತರುವಾಗ ಅದು ಎಲ್ಲಿಯೂ ಬಿರುಕು ಬಿಟ್ಟಿರಬಾರದು (Damage) ಅಥವಾ ಒಡೆದಿರಬಾರದು. ಸಂಪೂರ್ಣವಾಗಿ ಸುಸ್ಥಿತಿಯಲ್ಲಿರುವ ಶಂಖವನ್ನು ತಂದು, ಗಂಗಾಜಲದಿಂದ ಶುದ್ಧೀಕರಿಸಿ ನಂತರ ಪೂಜಾ ಕೋಣೆಯಲ್ಲಿ ವಿಧಿವಿಧಾನವಾಗಿ ಪ್ರತಿಷ್ಠಾಪಿಸಬೇಕು.&lt;/p&gt;]]></content:encoded>
            <category><![CDATA[vaastu]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/vaastu/vastu-tips-for-shankha-at-home-rules-for-placing-conch-shell-puja-room-kannada/articleshow-c29mdze"/>
        </item>
        <item>
            <title><![CDATA[ಗೆಳತಿ ದೂರ ಹೋಗುವ ನೋವು, ಭವಿಷ್ಯದ ಗೊಂದಲ; 19 ನಿಮಿಷದಲ್ಲಿ ಮನಸ್ಸು ಮುಟ್ಟುವ Bobby Beauty Parlour]]></title>
            <link>https://kannada.asianetnews.com/movie-reviews/bobby-beauty-parlour-review-small-film-with-big-feelings-suh/articleshow-lgw0g5x</link>
            <guid isPermaLink="true">https://kannada.asianetnews.com/movie-reviews/bobby-beauty-parlour-review-small-film-with-big-feelings-suh/articleshow-lgw0g5x</guid>
            <pubDate>Thu, 13 Aug 2026 16:31:55 +0530</pubDate>
            <description><![CDATA[ಬಾಲ್ಯದ ಗೆಳೆತನದಿಂದ ದೊಡ್ಡವರಾಗುವ ಹಂತದಲ್ಲಿ ಎದುರಾಗುವ ಬದಲಾವಣೆ ಇಬ್ಬರು ಯುವತಿಯರ ಭಾವನಾತ್ಮಕ ಪಯಣವನ್ನು 19 ನಿಮಿಷಗಳಲ್ಲಿ ಮನಮುಟ್ಟುವಂತೆ ಹೇಳುವ ಕಿರುಚಿತ್ರವೇ Bobby Beauty Parlour]]></description>
            <media:content url="https://static.asianetnews.com/images/w-1280,h-720,format-jpg,imgid-01kzxc7wqkhjb15hdra0t986sr,imgname-bobby-beauty-parlour-short-film-review-1786618573555.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲ್ಯದ ಗೆಳೆತನ, ಬೆಳೆದು ದೊಡ್ಡವರಾಗುವ ಹಂತದಲ್ಲಿ ಎದುರಾಗುವ ಬದಲಾವಣೆ, ಸ್ನೇಹಿತರಿಂದ ದೂರವಾಗುವ ನೋವು&mdash;ಇವೆಲ್ಲವನ್ನೂ ಸರಳವಾಗಿ ಕಟ್ಟಿಕೊಡುವ &lsquo;Bobby Beauty Parlour&rsquo; ಕಿರುಚಿತ್ರ ಇದೀಗ ಗಮನ ಸೆಳೆಯುತ್ತಿದೆ. 19 ನಿಮಿಷಗಳ ಈ ಕಿರುಚಿತ್ರವನ್ನು ಶಶ್ವತ್ ದ್ವಿವೇದಿ ನಿರ್ದೇಶಿಸಿದ್ದು, ಜಾನ್ಹವಿ ಅಸ್ಥಾನ ಅವರ ಕಥೆಯನ್ನು ಆಧರಿಸಿದೆ.&lt;/p&gt;&lt;h2&gt;ಇಬ್ಬರು ಸ್ನೇಹಿತೆಯರ ಕೊನೆಯ ದಿನ&lt;/h2&gt;&lt;p&gt;ಕಥೆಯ ಕೇಂದ್ರದಲ್ಲಿ 16 ವರ್ಷದ ಮನು (ಪರುಲ್ ರಾಣಾ) ಮತ್ತು ಆಕೆಯ ಆತ್ಮೀಯ ಗೆಳತಿ ಈಲು (ಅದ್ರಿಜಾ ಸಿನ್ಹಾ) ಇದ್ದಾರೆ. ನೋಯ್ಡಾದ ಬ್ಯೂಟಿ ಸಲೂನ್&zwnj;ನಲ್ಲಿ ಕೆಲಸ ಕಲಿಯುತ್ತಿರುವ ಮನು, ತನ್ನ ಗೆಳತಿ ಈಲು ಪುಣೆಯಲ್ಲಿ ಎಂಜಿನಿಯರಿಂಗ್ ಕಾಲೇಜಿಗೆ ತೆರಳಲಿರುವುದರಿಂದ ಆಕೆಯನ್ನು ಕಳೆದುಕೊಳ್ಳುವ ನೋವಿನಲ್ಲಿರುತ್ತಾಳೆ. ಈಲು ಪಟ್ಟಣ ಬಿಡುವ ಮುನ್ನ ಇಬ್ಬರೂ ಕೊನೆಯ ದಿನವನ್ನು ಒಟ್ಟಿಗೆ ಕಳೆಯಬೇಕೆಂದುಕೊಂಡಿದ್ದರೂ, ಬಿಸಿಗಾಳಿ ಮತ್ತು ಸಲೂನ್ ಕೆಲಸದಿಂದಾಗಿ ಮನು ತನ್ನ ಬೇಸರವನ್ನು ಕೆಲಸದಲ್ಲೇ ಮುಚ್ಚಿಡುತ್ತಾಳೆ.&lt;/p&gt;&lt;h2&gt;ಒಂದೇ ರೀತಿಯ ಸ್ನೇಹಿತೆಯರು.. ಆದರೆ ಕನಸುಗಳು ಬೇರೆ&lt;/h2&gt;&lt;p&gt;ಮನು ಮತ್ತು ಈಲು ಒಂದೇ ರೀತಿಯ ವಾತಾವರಣದಲ್ಲಿ ಬೆಳೆದವರು. ಒಂದೇ ರೀತಿಯ ಉಡುಗೆ, ಮಾತಿನ ಶೈಲಿ ಮತ್ತು ಜೀವನಶೈಲಿ ಹೊಂದಿದ್ದರೂ, ಅವರ ವ್ಯಕ್ತಿತ್ವದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಈಲು ಹೆಚ್ಚು ಧೈರ್ಯಶಾಲಿ ಮತ್ತು ಮುಂದಿನ ಜೀವನದ ಬಗ್ಗೆ ಸ್ಪಷ್ಟವಾದ ಕನಸುಗಳನ್ನು ಹೊಂದಿದ್ದಾಳೆ. ಆದರೆ ಮನು ತನ್ನ ಭವಿಷ್ಯದ ಬಗ್ಗೆ ಗೊಂದಲದಲ್ಲಿದ್ದಾಳೆ. ತಾನು &lsquo;ಡ್ರಾಪ್&zwnj;ಔಟ್ ಪರ್ಸನಾಲಿಟಿ&rsquo; ಎಂದು ಹೇಳಿಕೊಳ್ಳುವ ಮನು, ತನ್ನ ಜೀವನ ಎಲ್ಲಿಗೆ ಹೋಗುತ್ತಿದೆ ಎಂಬ ಆತಂಕದಲ್ಲಿರುತ್ತಾಳೆ.&lt;/p&gt;&lt;h2&gt;ಅಕ್ವೇರಿಯಂ ದೃಶ್ಯವೇ ಕಥೆಯ ಹೃದಯ&lt;/h2&gt;&lt;p&gt;ಸಿನಿಮಾದಲ್ಲಿ ಅಕ್ವೇರಿಯಂನಲ್ಲಿರುವ ಮೀನುಗಳನ್ನು ನೋಡುತ್ತಾ ಇಬ್ಬರೂ ನಡೆಸುವ ಸಂಭಾಷಣೆ ಅವರ ಸ್ನೇಹ ಮತ್ತು ಜೀವನದ ನಡುವಿನ ವ್ಯತ್ಯಾಸವನ್ನು ಚೆನ್ನಾಗಿ ತೋರಿಸುತ್ತದೆ. ಒಂದೇ ಜಾಗದಲ್ಲಿ ಒಂದೇ ರೀತಿಯ ಜೀವನ ನಡೆಸುವ ಮೀನುಗಳಿಗೆ ಬೇಸರವಾಗುವುದಿಲ್ಲವೇ ಎಂಬ ಮನುಳ ಪ್ರಶ್ನೆ, ವಾಸ್ತವದಲ್ಲಿ ತನ್ನದೇ ಜೀವನದ ಬಗ್ಗೆ ಆಕೆಯೊಳಗಿರುವ ಅಸಮಾಧಾನವನ್ನು ಪ್ರತಿಬಿಂಬಿಸುತ್ತದೆ.&lt;/p&gt;&lt;h2&gt;ಸ್ನೇಹದಲ್ಲಿ ಬಿರುಕು.. ಬೇರ್ಪಡುವ ನೋವು&lt;/h2&gt;&lt;p&gt;ಕಥೆ ಮುಂದುವರಿದಂತೆ ಇಬ್ಬರ ನಡುವಿನ ಸಣ್ಣ-ಪುಟ್ಟ ಅಸಮಾಧಾನಗಳು ದೊಡ್ಡ ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗುತ್ತವೆ. ಹಲವು ವರ್ಷಗಳಿಂದ ಮನಸ್ಸಿನಲ್ಲಿದ್ದ ಅಸುರಕ್ಷತೆ, ತಪ್ಪು ತಿಳುವಳಿಕೆ ಮತ್ತು ಹೇಳಲಾಗದ ಮಾತುಗಳು ಹೊರಬರುತ್ತವೆ. ಆದರೆ ಚಿತ್ರದ ಅತ್ಯಂತ ಪರಿಣಾಮಕಾರಿ ಕ್ಷಣಗಳಲ್ಲಿ ಒಂದು ಇಬ್ಬರಿಗೂ ಏಕಕಾಲದಲ್ಲಿ ಫೋನ್ ಕರೆ ಬರುವ ದೃಶ್ಯ. ತಮ್ಮ ಬೇರ್ಪಡುವ ಸಮಯ ಹತ್ತಿರ ಬಂದಿದೆ ಎಂಬ ಅರಿವು ಇಬ್ಬರಿಗೂ ಮೂಡುತ್ತದೆ.&lt;/p&gt;&lt;h2&gt;ಸರಳತೆಯಲ್ಲೇ ಸಿನಿಮಾದ ಸೌಂದರ್ಯ&lt;/h2&gt;&lt;p&gt;&lsquo;Bobby Beauty Parlour&rsquo;ನ ವಿಶೇಷತೆ ಅದರ ಸರಳ ನಿರೂಪಣೆ. ಕ್ಯಾಸೆಟ್ ಪ್ಲೇಯರ್&zwnj;ಗಳು, ಹಳೆಯ ಅಲಂಕಾರಿಕ ವಸ್ತುಗಳು ಸೇರಿದಂತೆ ಸಾಮಾನ್ಯ ದೃಶ್ಯಗಳ ಮೂಲಕ ನಿರ್ದೇಶಕರು ಒಂದು ನಾಸ್ಟಾಲ್ಜಿಕ್ ವಾತಾವರಣವನ್ನು ಸೃಷ್ಟಿಸಿದ್ದಾರೆ. ಪಂಜಾಬಿ ಜಾನಪದ ಗೀತೆ &lsquo;Charkha&rsquo; ಆಧಾರಿತ ಸಂಗೀತವೂ ಸಿನಿಮಾದ ಭಾವನಾತ್ಮಕ ವಾತಾವರಣಕ್ಕೆ ಮತ್ತಷ್ಟು ಬಲ ನೀಡುತ್ತದೆ.&lt;/p&gt;&lt;h2&gt;ಒಟ್ಟಿನಲ್ಲಿ ಹೇಗಿದೆ?&lt;/h2&gt;&lt;p&gt;&lsquo;Bobby Beauty Parlour&rsquo; ದೊಡ್ಡ ಘಟನೆಗಳಿರುವ ಸಿನಿಮಾ ಅಲ್ಲ; ಬದಲಿಗೆ ಜೀವನದಲ್ಲಿ ನಿಧಾನವಾಗಿ ಬದಲಾಗುವ ಸಂಬಂಧಗಳ ಕಥೆ. ಸ್ನೇಹಿತರು ಬೇರೆ ದಾರಿಯಲ್ಲಿ ಸಾಗುವಾಗ ಉಂಟಾಗುವ ಖಾಲಿತನ, ಬೆಳೆಯುವ ವಯಸ್ಸಿನ ಗೊಂದಲ ಮತ್ತು ಹಳೆಯ ನೆನಪುಗಳನ್ನು ಸಿನಿಮಾ ಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ. ಚಿತ್ರವನ್ನು YouTubeನಲ್ಲಿ ವೀಕ್ಷಿಸಬಹುದು.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/movie-reviews/bobby-beauty-parlour-review-small-film-with-big-feelings-suh/articleshow-lgw0g5x"/>
        </item>
        <item>
            <title><![CDATA[7 ಎಪಿಸೋಡ್, ಶಾಕಿಂಗ್ ಕ್ಲೈಮ್ಯಾಕ್ಸ್…  ಈ ಕ್ರೈಂ ಥ್ರಿಲ್ಲರ್ ಮಿಸ್ ಮಾಡದೆ ನೋಡಿ]]></title>
            <link>https://kannada.asianetnews.com/gallery/cine-world/must-watch-suspense-thriller-web-series-in-amazon-mx-player-9nreu0k</link>
            <guid isPermaLink="true">https://kannada.asianetnews.com/gallery/cine-world/must-watch-suspense-thriller-web-series-in-amazon-mx-player-9nreu0k</guid>
            <pubDate>Thu, 13 Aug 2026 16:25:14 +0530</pubDate>
            <description><![CDATA[Web Series:ಅಮೆಜಾನ್ MX ಪ್ಲೇಯರ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸೀರೀಸ್ ವೀಕ್ಷಕರನ್ನು ಆಕರ್ಷಿಸುತ್ತಿದೆ. ಈ ಸರಣಿಯು ಅಪರಾಧ, ಸಸ್ಪೆನ್ಸ್ ಮತ್ತು ನಿಗೂಢತೆ ಕಥೆಯನ್ನು ಹೊಂದಿದೆ. ಸೀರೀಸ್ ನ ಪ್ರತಿ ಎಪಿಸೋಡ್ ಸಸ್ಪೆನ್ಸ್, ಥ್ರಿಲ್ಲರ್ ನಿಂದ ಕೂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxc2nvjphsgze6qjs23yq4v,imgname-aditya-case-file1-1786618402674.jpg" type="image/jpeg" height="390" width="690"/>
            <content:encoded><![CDATA[&lt;p&gt;Web Series:ಅಮೆಜಾನ್ MX ಪ್ಲೇಯರ್&zwnj;ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸೀರೀಸ್ ವೀಕ್ಷಕರನ್ನು ಆಕರ್ಷಿಸುತ್ತಿದೆ. ಈ ಸರಣಿಯು ಅಪರಾಧ, ಸಸ್ಪೆನ್ಸ್ ಮತ್ತು ನಿಗೂಢತೆ ಕಥೆಯನ್ನು ಹೊಂದಿದೆ. ಸೀರೀಸ್ ನ ಪ್ರತಿ ಎಪಿಸೋಡ್ ಸಸ್ಪೆನ್ಸ್, ಥ್ರಿಲ್ಲರ್ ನಿಂದ ಕೂಡಿದೆ.&lt;/p&gt;&lt;img&gt;&lt;p&gt;ಇಂದಿನ ಡಿಜಿಟಲ್ ಯುಗದಲ್ಲಿ, ಜನರು ಮನರಂಜನೆಗಾಗಿ ಹಲವಾರು ಪ್ಲಾಟ್ ಫಾರಂಗಳಿವೆ. OTT ಪ್ಲಾಟ್&zwnj;ಫಾರ್ಮ್ Amazon MX ಪ್ಲೇಯರ್ ಬಗ್ಗೆ ಮಾಹಿತಿ ಇಲ್ಲಿದೆ , ಇದು ಇತ್ತೀಚೆಗೆ ಪ್ರೇಕ್ಷಕರನ್ನು ಆಕರ್ಷಿಸುವ ಸಿರೀಸ್ ಬಿಡುಗಡೆ ಮಾಡಿತು. ಈ ಸೀರೀಸ್ ನೋಡಿದ ನಂತರ, ಎಲ್ಲರೂ ಇದನ್ನು ಪಂಕಜ್ ತ್ರಿಪಾಠಿ ಅವರ ವೆಬ್ ಸೀರೀಸ್ &quot;ಕ್ರಿಮಿನಲ್ ಜಸ್ಟೀಸ್&quot; ಗೆ ಹೋಲಿಸುತ್ತಿದ್ದಾರೆ. ಈ ಸೀರೀಸ್ ತನಿಖೆ ಮತ್ತು ಸಸ್ಪೆನ್ಸ್&zwnj;ನ ಥ್ರಿಲ್ಲರ್ ಕಥೆಯನ್ನು ಹೊಂದಿದೆ.&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲರೂ OTT ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ವೆಬ್ ಸೀರೀಸ್ ನೋಡಿ ಎಂಜಾಯ್ ಮಾಡ್ತಿದ್ದಾರೆ. ಈ ಸೀರೀಸ್ ಕ್ರೈಮ್ ಮತ್ತು ಸಸ್ಪೆನ್ಸ್ ಕಥೆಯನ್ನು ಹೊಂದಿದೆ. ನಾವು ಮಾತನಾಡುತ್ತಿರುವ ಸೀರೀಸ್ &quot;ಆದಿತ್ಯ ಕೇಸ್ ಫೈಲ್ಸ್&quot; ಕುರಿತು. ಈ ಸೀರೀಸ್ ಪ್ರಸ್ತುತ OTT ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಟಾಪ್ 10 ಸ್ಥಾನವನ್ನು ಪಡೆದುಕೊಂಡಿದೆ.&lt;/p&gt;&lt;img&gt;&lt;p&gt;ಈ ಸೀರೀಸ್ ನೋಡಿದ ನಂತರ, &quot;ಕ್ರಿಮಿನಲ್ ಜಸ್ಟೀಸ್&quot; ನಂತಹ ಸರಣಿಗಳು ಸಹ ಮಸುಕಾಗಿ ಕಾಣುತ್ತವೆ. ಈ ಕಥೆಯು ಆದಿತ್ಯ ಮಜುಂದಾರ್ ಸುತ್ತ ಸುತ್ತುತ್ತದೆ, ಈ ಹಿಂದೆ ಸಣ್ಣ ಪ್ರಕರಣಗಳನ್ನು ಪರಿಹರಿಸಿದ್ದ ಖಾಸಗಿ ಪತ್ತೇದಾರಿ ಇವರು. ಆದರೆ, ಅವರು ಪ್ರಸಿದ್ಧ ನಟಿಯ ಮಗಳ ಪ್ರಕರಣವನ್ನು ಕೈಗೆತ್ತಿಕೊಂಡಾಗ ಅವರ ಜೀವನ ತಲೆಕೆಳಗಾಗುತ್ತದೆ. ಯಾವ ರೀತಿ ಕಥೆ ಸಸ್ಪೆನ್ಸ್ ಜೊತೆಗೆ ಹಲವು ತಿರುವುಗಳನ್ನು ಪದೆಯುತ್ತದೆ ಎನ್ನುವುದನ್ನು ಕಾಣಬಹುದು.&lt;/p&gt;&lt;img&gt;&lt;p&gt;ಈ ಸೀರೀಸ್ ನಲ್ಲಿ, ಪ್ರಸಿದ್ಧ ನಟಿಯೊಬ್ಬರು ತಮ್ಮ ಮಗಳಿಗೆ ಸಹಾಯ ಮಾಡಲು ಖಾಸಗಿ ಪತ್ತೇದಾರಿ ಆದಿತ್ಯ ಮಜುಂದಾರ್ ಅವರನ್ನು ನೇಮಿಸಿಕೊಳ್ಳುತ್ತಾರೆ. ಆದರೆ, ನಟಿ ತನ್ನನ್ನು ಯಾರೋ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಅನುಮಾನಿಸುತ್ತಾರೆ. ಕೊನೆಗೆ ಇದು ಯಾವ ಹಂತಕ್ಕೆ ಸಾಗುತ್ತದೆ ಅನ್ನೋದು ಕಥೆ. ಈ ಸರಣಿಯು ತನಿಖೆ ಮತ್ತು ಸಸ್ಪೆನ್ಸ್ ಅನ್ನು ಒಳಗೊಂಡಿರುತ್ತದೆ.&lt;/p&gt;&lt;img&gt;&lt;p&gt;ಈ ಸರಣಿಯು ಆರಂಭದಿಂದ ಅಂತ್ಯದವರೆಗೆ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ಪ್ರತಿ ಸಂಚಿಕೆಯು 20 ರಿಂದ 25 ನಿಮಿಷಗಳಷ್ಟು ಉದ್ದವಾಗಿದೆ. ಈ ಸರಣಿಯನ್ನು ಅಮೆಜಾನ್ MX ಪ್ಲೇಯರ್&zwnj;ನಲ್ಲಿ 7 ಸಂಚಿಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.&lt;/p&gt;]]></content:encoded>
            <category><![CDATA[cine-world]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/cine-world/must-watch-suspense-thriller-web-series-in-amazon-mx-player-9nreu0k"/>
        </item>
        <item>
            <title><![CDATA[E20 ಇಂಧನ: ಆಟೋ ರಂಗದ ಆಂತರಿಕ ವರದಿಯಲ್ಲಿ ಬೆಚ್ಚಿಬೀಳಿಸೋ ಸತ್ಯ, ಅಪಾಯಕಾರಿ ಮಟ್ಟದ ಕ್ಲೋರೈಡ್ ಪತ್ತೆ, ಮೈಲೇಜ್ ಕುಸಿತ!]]></title>
            <link>https://kannada.asianetnews.com/business/e20-petrol-fuel-controversy-indian-auto-industry-internal-test-results-revealed-damaging-car-engine-high-chloride-gdp/articleshow-sg8m9bx</link>
            <guid isPermaLink="true">https://kannada.asianetnews.com/business/e20-petrol-fuel-controversy-indian-auto-industry-internal-test-results-revealed-damaging-car-engine-high-chloride-gdp/articleshow-sg8m9bx</guid>
            <pubDate>Thu, 13 Aug 2026 16:20:36 +0530</pubDate>
            <description><![CDATA[ದೇಶಾದ್ಯಂತ E20 ಪೆಟ್ರೋಲ್ ಬಳಕೆಯಿಂದ ವಾಹನಗಳ ಮೈಲೇಜ್ ಕುಸಿತ ಮತ್ತು ಎಂಜಿನ್ ಹಾನಿಯಂತಹ ದೂರುಗಳು ಹೆಚ್ಚಾಗಿವೆ. ಆಟೋ ಉದ್ಯಮದ ಆಂತರಿಕ ತನಿಖೆಯಲ್ಲಿ ಇಂಧನದಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ. ಆದರೆ, ಆಟೋಮೊಬೈಲ್ ತಯಾರಕರ ಸಂಘವು (SIAM) ಸರ್ಕಾರಕ್ಕೆ ನೀಡಿದ್ದ ದೂರನ್ನು ಹಿಂಪಡೆದಿದ್ದು, ಸಾರ್ವಜನಿಕರಲ್ಲಿ ಗೊಂದಲ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyh7zrp8hvvrkkg6ww8yx60k,imgname-chatgpt-image-jul-27--2026--01-04-51-pm-1785137717960.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೊಸದೆಹಲಿ: &lt;/strong&gt;ದೇಶಾದ್ಯಂತ ಕಾರುಗಳಲ್ಲಿ ಎಥೆನಾಲ್ ಮಿಶ್ರಿತ E20 ಪೆಟ್ರೋಲ್ ಬಳಕೆಯ ಪರಿಣಾಮಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ನಡುವೆಯೇ, ಆಟೋಮೊಬೈಲ್ ಉದ್ಯಮದ ಹಿರಿಯ ಅಧಿಕಾರಿಗಳ ನಡುವೆ ವಿನಿಮಯವಾದ ಆಂತರಿಕ ಸಂವಹನಗಳು (ಇಮೇಲ್&zwnj;ಗಳು) ಇಂಧನ ಮಾಲಿನ್ಯದ ಕುರಿತಾದ ನೈಜ ಕಳವಳಗಳನ್ನು ಬಹಿರಂಗಪಡಿಸಿವೆ. E20 ಪೆಟ್ರೋಲ್ (20% ಎಥೆನಾಲ್ ಮಿಶ್ರಿತ) ಬಿಡುಗಡೆಯಾದಂದಿನಿಂದ ವಾಹನ ಚಾಲಕರಲ್ಲಿ ತೀವ್ರ ಅತೃಪ್ತಿ ವ್ಯಕ್ತವಾಗುತ್ತಿದೆ. ಈ ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದೆ, ಎಂಜಿನ್ ಮತ್ತು ಬಿಡಿಭಾಗಗಳು ಬೇಗನೆ ಸವೆಯುತ್ತಿವೆ ಎಂದು ನೂರಾರು ಗ್ರಾಹಕರು ದೂರಿದ್ದಾರೆ. ಈ ಪೈಕಿ ಕನಿಷ್ಠ ಒಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.&lt;/p&gt;&lt;h2&gt;ರಾಯಿಟರ್ಸ್ ಬೆಚ್ಚಿಬೀಳಿಸುವ ವರದಿ&lt;/h2&gt;&lt;p&gt;ಇಂಧನದಲ್ಲಿರುವ ಅತಿಯಾದ ಕ್ಲೋರೈಡ್ ಅಂಶವು ವಾಹನದ ಆಟೋಮೋಟಿವ್ ಭಾಗಗಳನ್ನು ಸವೆಸಬಹುದು ಮತ್ತು ತೇವಾಂಶವು (Moisture) ಇಂಧನ ತುಂಬಿದ ತಕ್ಷಣವೇ ವಾಹನ ಸ್ತಬ್ಧಗೊಳ್ಳುವಂತೆ ಮಾಡಬಹುದು ಎಂದು 'ಭಾರತೀಯ ಆಟೋಮೊಬೈಲ್ ತಯಾರಕರ ಸಂಘ' (SIAM) ಈ ಹಿಂದೆ ಎಚ್ಚರಿಸಿತ್ತು.&lt;/p&gt;&lt;p&gt;ರಾಯಿಟರ್ಸ್ ಸಂಸ್ಥೆ ಪರಿಶೀಲಿಸಿದ ಆಂತರಿಕ ದಾಖಲೆಗಳ ಪ್ರಕಾರ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ ಕಂಪನಿಗಳ ಹಿರಿಯ ಅಧಿಕಾರಿಗಳು ಇಂಧನ ಮಾಲಿನ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಈ ಮೂರು ಕಂಪನಿಗಳು ಭಾರತದ ಪ್ರಯಾಣಿಕ ವಾಹನ ಮಾರುಕಟ್ಟೆಯ ಶೇ. 67ರಷ್ಟು ಪಾಲನ್ನು ಹೊಂದಿವೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಕಚ್ಚಾ ತೈಲ ಆಮದು ಕಡಿಮೆ ಮಾಡಲು E20 ಜಾರಿಗೆ ತಂದ ನಂತರ, ಆಟೋ ಉದ್ಯಮವು ದೇಶದ 21 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 250ಕ್ಕೂ ಹೆಚ್ಚು ಪಂಪ್&zwnj;ಗಳಿಂದ ಇಂಧನ ಮಾದರಿಗಳನ್ನು ಸಂಗ್ರಹಿಸಿ ವ್ಯಾಪಕ ಪರೀಕ್ಷೆ ನಡೆಸಿತ್ತು.&lt;/p&gt;&lt;h2&gt;ಆಂತರಿಕ ತನಿಖೆಯಲ್ಲಿ ಬೆಳಕಿಗೆ ಬಂದ ಭೀಕರ ಸತ್ಯವೇನು?&lt;/h2&gt;&lt;p&gt;ಆಟೋ ಉದ್ಯಮ ನಡೆಸಿದ ಪರೀಕ್ಷೆಯಲ್ಲಿ 18 ರಾಜ್ಯಗಳ ಇಂಧನ ಮಾದರಿಗಳಲ್ಲಿ ಅಪಾಯಕಾರಿ ಮಟ್ಟದ ಕ್ಲೋರೈಡ್ ಮತ್ತು ತೇವಾಂಶ ಪತ್ತೆಯಾಗಿದೆ.&lt;/p&gt;&lt;p&gt;&lt;strong&gt;ಕ್ಲೋರೈಡ್ ಮಟ್ಟ: &lt;/strong&gt;ಸರ್ಕಾರ ನಿಗದಿಪಡಿಸಿದ ಗರಿಷ್ಠ ಮಿತಿ 3 ppm (ಪಾರ್ಟ್ಸ್ ಪರ್ ಮಿಲಿಯನ್). ಆದರೆ ಪರೀಕ್ಷೆಯಲ್ಲಿ ರಾಜಸ್ಥಾನದಲ್ಲಿ 570 ppm, ದೆಹಲಿಯಲ್ಲಿ 420 ppm ಮತ್ತು ಮಹಾರಾಷ್ಟ್ರದಲ್ಲಿ 357 ppm ವರೆಗೆ ಕ್ಲೋರೈಡ್ ಕಂಡುಬಂದಿದೆ!&lt;/p&gt;&lt;p&gt;&lt;strong&gt;ತೇವಾಂಶ ಮಟ್ಟ: &lt;/strong&gt;ಸರ್ಕಾರದ ಮಿತಿ 3,000 ppm ಇದ್ದರೆ, ಆಂಧ್ರಪ್ರದೇಶದಲ್ಲಿ 13,000 ppm ಹಾಗೂ ಉತ್ತರ ಪ್ರದೇಶದಲ್ಲಿ 12,500 ppm ವರೆಗೆ ತೇವಾಂಶ ದಾಖಲಾಗಿದೆ.&lt;/p&gt;&lt;h2&gt;ಭಾರತೀಯ ಆಟೋಮೊಬೈಲ್ ಉದ್ಯಮದ ಖಾಸಗಿ ಇಂಧನ ಪರೀಕ್ಷೆಯ ವರದಿ&lt;/h2&gt;&lt;p&gt;&lt;strong&gt;ರಾಜಸ್ಥಾನದಲ್ಲಿ ಗರಿಷ್ಠ ಮಾಲಿನ್ಯ:&lt;/strong&gt; ರಾಜಸ್ಥಾನದಿಂದ ಸಂಗ್ರಹಿಸಲಾದ 14 ಇಂಧನ ಮಾದರಿಗಳಲ್ಲಿ ಗರಿಷ್ಠ ಅಂದರೆ 6.0 ರಿಂದ 570 ppm ವರೆಗೆ ಕ್ಲೋರೈಡ್ ಪತ್ತೆಯಾಗಿದ್ದು, ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ.&lt;/p&gt;&lt;p&gt;&lt;strong&gt;ಮಧ್ಯಪ್ರದೇಶ ಮತ್ತು ದೆಹಲಿ: &lt;/strong&gt;ಮಧ್ಯಪ್ರದೇಶದಲ್ಲಿ ಪರೀಕ್ಷಿಸಲಾದ 11 ಮಾದರಿಗಳಲ್ಲಿ 550 ppm ವರೆಗೆ ಹಾಗೂ ದೆಹಲಿ/ಎನ್&zwnj;ಸಿಆರ್&zwnj;ನ 28 ಮಾದರಿಗಳಲ್ಲಿ 420 ppm ವರೆಗೆ ಅಪಾಯಕಾರಿ ಮಟ್ಟದ ಕ್ಲೋರೈಡ್ ಕಂಡುಬಂದಿದೆ.&lt;/p&gt;&lt;p&gt;&lt;strong&gt;ಕರ್ನಾಟಕ ಮತ್ತು ಕೇರಳದಲ್ಲಿ ಸುರಕ್ಷಿತ ಮಟ್ಟ:&lt;/strong&gt; ಕರ್ನಾಟಕದಲ್ಲಿ ಪರೀಕ್ಷಿಸಿದ 15 ಮಾದರಿಗಳು (1-2.2 ppm) ಮತ್ತು ಕೇರಳದ 24 ಮಾದರಿಗಳಲ್ಲಿ (1.0-2.2 ppm) ಕ್ಲೋರೈಡ್ ಪ್ರಮಾಣವು ಸರ್ಕಾರದ ಗರಿಷ್ಠ ಮಿತಿಯಾದ 3 ppm ಗಿಂತಲೂ ಕಡಿಮೆ ಇದ್ದು, ಇಂಧನವು ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಇತರ ರಾಜ್ಯಗಳ ಸ್ಥಿತಿ: &lt;/strong&gt;ಉತ್ತರ ಪ್ರದೇಶದಲ್ಲಿ (175 ppm), ಪಂಜಾಬ್&zwnj;ನಲ್ಲಿ (110 ppm), ಮಹಾರಾಷ್ಟ್ರದಲ್ಲಿ (357 ppm) ಮತ್ತು ತಮಿಳುನಾಡಿನಲ್ಲಿ (24.0 ppm) ಕೂಡ ಅನುಮತಿಸಿದ ಮಿತಿಗಿಂತ ಹೆಚ್ಚಿನ ಕ್ಲೋರೈಡ್ ದಾಖಲಾಗಿದೆ.&lt;/p&gt;&lt;h2&gt;ತಜ್ಞರು ಏನಂತಾರೆ?&lt;/h2&gt;&lt;p&gt;ಮಾರುತಿ ಸುಜುಕಿ ಹಿರಿಯ ಅಧಿಕಾರಿ ಅನೂಪ್ ಭಟ್ ಹೇಳಿಕೆ ಪ್ರಕಾರ ಹಾಲಿ ಇರುವ ಇಂಧನ ಇಂಜೆಕ್ಟರ್&zwnj;ಗಳು ಗರಿಷ್ಠ 1 ppm ಕ್ಲೋರೈಡ್ ಅನ್ನು ಮಾತ್ರ ಸಹಿಸಿಕೊಳ್ಳಬಲ್ಲವು. ಅಂತರರಾಷ್ಟ್ರೀಯ ಮಾನದಂಡವೂ ಇದನ್ನೇ ಹೇಳುತ್ತದೆ ಎಂದಿದ್ದಾರೆ.&lt;/p&gt;&lt;p&gt;ಮಹೀಂದ್ರಾ ಹಿರಿಯ ಎಂಜಿನಿಯರ್ ಆರ್. ರಾಮಪ್ರಭು ಅವರು ಇಂಧನದಲ್ಲಿರುವ ಸಾವಯವ ಕ್ಲೋರೈಡ್ ತ್ವರಿತ ವಾಹನ ವೈಫಲ್ಯಕ್ಕೆ ಕಾರಣವಾಗುತ್ತಿದೆ. ಇಂಧನ ತುಂಬಿದ 200 ಕಿ.ಮೀ. ಒಳಗಾಗಿಯೇ ಎಂಜಿನ್&zwnj;ಗಳು ತೀವ್ರ ಹಾನಿಗೊಳಗಾಗುತ್ತಿವೆ. ಇದಕ್ಕೆ ನಮ್ಮ ಬಳಿ ಬಲವಾದ ಪುರಾವೆಗಳಿವೆ ಎಂದಿದ್ದಾರೆ.&lt;/p&gt;&lt;h2&gt;ಸರ್ಕಾರದ ಸ್ಪಷ್ಟನೆ, ದೂರು ಹಿಂಪಡೆದ SIAM, ಕಂಪನಿಗಳ ಮರು-ಹೇಳಿಕೆ:&lt;/h2&gt;&lt;p&gt;ಕಳಪೆ ಇಂಧನದ ಕುರಿತು ಜುಲೈ 28 ರಂದು ಸರ್ಕಾರಕ್ಕೆ ಸಲ್ಲಿಸಿದ್ದ ದೂರನ್ನು SIAM ಏಕಾಏಕಿ ಹಿಂತೆಗೆದುಕೊಂಡಿತು. ಸರ್ಕಾರದಿಂದ ಬಂದ ತೀವ್ರ ಟೀಕೆಗಳ ನಂತರ, ಸಲ್ಲಿಸಲಾದ ಅಂಕಿಅಂಶಗಳು ಅಲ್ಪಮಟ್ಟದ ಮಾದರಿಗಳನ್ನು ಆಧರಿಸಿದ್ದವು, ಇನ್ನು ಹೆಚ್ಚಿನ ವೈಜ್ಞಾನಿಕ ಪರಿಶೀಲನೆ ಅಗತ್ಯವಿದೆ ಎಂದು ಹೇಳಿ SIAM ತನ್ನ ದೂರನ್ನು ಅಜಾಗರೂಕತೆಯಿಂದ ಕಳುಹಿಸಲಾದ ಪತ್ರವೆಂದು ಸಮಜಾಯಿಷಿ ನೀಡಿತು.&lt;/p&gt;&lt;p&gt;ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ತೈಲ ಮಾರುಕಟ್ಟೆ ಕಂಪನಿಗಳು ನಡೆಸಿದ ಕಠಿಣ ಪರೀಕ್ಷೆಯಲ್ಲಿ ಕೇವಲ 4 ಕಡೆಗಳಲ್ಲಿ ಮಾತ್ರ ದೋಷ ಪತ್ತೆಯಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಮಹೀಂದ್ರಾ ಕಂಪನಿಯು ಆಂತರಿಕ ಇಮೇಲ್&zwnj;ಗಳಿಂದ ತಪ್ಪಾದ ತೀರ್ಮಾನಕ್ಕೆ ಬರಬಾರದು, E20 ಇಂಧನದಿಂದ ಯಾವುದೇ ತೊಂದರೆ ಕಂಡುಬಂದಿಲ್ಲ ಎಂದು ನಂತರ ಸಮರ್ಥಿಸಿಕೊಂಡರೆ, ಮಾರುತಿ ಮತ್ತು ಟಾಟಾ ಸಂಸ್ಥೆಗಳು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿವೆ. ಏಪ್ರಿಲ್ 1 ರಿಂದ E20 ಪೆಟ್ರೋಲ್ ಪ್ರಮುಖ ಇಂಧನವಾಗಿ ಲಭ್ಯವಿರುವುದರಿಂದ, ವಾಹನಗಳ ಬಾಳಿಕೆ ಮತ್ತು ಕಾರ್ಯಕ್ಷಮತೆಯ ಮೇಲಿನ ಅದರ ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮಾತ್ರ ಇನ್ನೂ ದೂರವಾಗಿಲ್ಲ.&lt;/p&gt;]]></content:encoded>
            <category><![CDATA[business]]></category>
            <dc:creator>Gowthami K</dc:creator>
            <atom:link href="https://kannada.asianetnews.com/business/e20-petrol-fuel-controversy-indian-auto-industry-internal-test-results-revealed-damaging-car-engine-high-chloride-gdp/articleshow-sg8m9bx"/>
        </item>
        <item>
            <title><![CDATA[Viral: ಬೆಂಕಿಯಿಲ್ಲದೆ ಮಾಡಿ ಚಿಕನ್ ಫ್ರೈ! ಇನ್ಮುಂದೆ ಚಿಕನ್ ಬೇಯಿಸಲು ಗ್ಯಾಸ್ ಬೇಕಿಲ್ಲ; ವೈರಲ್ ಆಯ್ತು ಈ ವಿಚಿತ್ರ ಸತ್ಯ!]]></title>
            <link>https://kannada.asianetnews.com/gallery/viral/can-chicken-cook-with-23034-slaps-viral-physics-claim-explains-heat-energy-behind-strange-cooking-idea-bmk-ih2imld</link>
            <guid isPermaLink="true">https://kannada.asianetnews.com/gallery/viral/can-chicken-cook-with-23034-slaps-viral-physics-claim-explains-heat-energy-behind-strange-cooking-idea-bmk-ih2imld</guid>
            <pubDate>Thu, 13 Aug 2026 16:18:51 +0530</pubDate>
            <description><![CDATA[ಗ್ಯಾಸ್ ಅಥವಾ ಬೆಂಕಿಯಿಲ್ಲದೆ ಕೋಳಿಯನ್ನು ಬೇಯಿಸಬಹುದು ಎಂಬ ವೈರಲ್ ಸುದ್ದಿಯೊಂದು ಹರಿದಾಡುತ್ತಿದೆ. ಇದು ಸೈದ್ಧಾಂತಿಕವಾಗಿ ಸಾಧ್ಯವಾದರೂ, ಹೇಗೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6zm17zwg6tq46v9m869a0b,imgname-chicken-6-1782645916927.jpg" type="image/jpeg" height="390" width="690"/>
            <content:encoded><![CDATA[&lt;p&gt;ಗ್ಯಾಸ್ ಅಥವಾ ಬೆಂಕಿಯಿಲ್ಲದೆ ಕೋಳಿಯನ್ನು ಬೇಯಿಸಬಹುದು ಎಂಬ ವೈರಲ್ ಸುದ್ದಿಯೊಂದು ಹರಿದಾಡುತ್ತಿದೆ. ಇದು ಸೈದ್ಧಾಂತಿಕವಾಗಿ ಸಾಧ್ಯವಾದರೂ, ಹೇಗೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಕೋಳಿ ಮಾಂಸದ ಅಡುಗೆ ಮಾಡಬೇಕೆಂದರೆ ನಮಗೆ ಗ್ಯಾಸ್ ಸ್ಟೌವ್, ಒಲೆ, ಮೈಕ್ರೋವೇವ್ ಓವನ್, ಗ್ರಿಲ್ ಅಥವಾ ಇತರ ಶಾಖದ (Heat) ಮೂಲಗಳ ಅಗತ್ಯವಿರುತ್ತದೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಿತ್ರ ಸುದ್ದಿಯೊಂದು ನೆಟ್ಟಿಗರ ಹುಬ್ಬೇರಿಸಿದೆ. ಗ್ಯಾಸ್ ಅಥವಾ ಬೆಂಕಿಯ ಸಹಾಯವಿಲ್ಲದೆಯೇ, ಬರಿ ಕೈಯಿಂದ ಕೋಳಿಯನ್ನು ಹೊಡೆಯುತ್ತಾ ಹೋದರೆ ಅದು ಪೂರ್ತಿಯಾಗಿ ಬೇಯುತ್ತದೆ ಎಂಬ ವಾದವೊಂದು ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಅಷ್ಟೇ ಅಲ್ಲ, ಈ ವೈರಲ್ ಪೋಸ್ಟ್&zwnj;ನಲ್ಲಿ ಕೋಳಿಯನ್ನು ಬೇಯಿಸಲು ನಿರ್ದಿಷ್ಟವಾಗಿ 23,034 ಕಪಾಳಮೋಕ್ಷಗಳು ಬೇಕಾಗುತ್ತವೆ ಎಂದು ಉಲ್ಲೇಖಿಸಲಾಗಿದೆ! ಕೋಳಿಗೆ ಸತತವಾಗಿ ಹಲವು ಬಾರಿ ಹೊಡೆಯುವುದರಿಂದ ಸೃಷ್ಟಿಯಾಗುವ ಶಾಖವು ಅದನ್ನು ಬೇಯಿಸಲು ಸಾಕಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಕೆಲವರು, ಒಬ್ಬ ವ್ಯಕ್ತಿಯ ಹೊಡೆತದಲ್ಲಿ ಅತ್ಯಂತ ಅಗಾಧವಾದ ಶಕ್ತಿಯಿದ್ದರೆ, ಕೇವಲ ಒಂದೇ ಒಂದು ಶಕ್ತಿಯುತ ಕಪಾಳಮೋಕ್ಷದಿಂದಲೂ ಕೋಳಿಯನ್ನು ಬೇಯಿಸಬಹುದು ಎಂದೂ ವಾದಿಸುತ್ತಿದ್ದಾರೆ.&lt;/p&gt;&lt;p&gt;&lt;strong&gt;ಏನಿದು ವಿಚಿತ್ರ ವಿಷಯ?&lt;/strong&gt;&lt;/p&gt;&lt;p&gt;ಇದರ ಹಿಂದಿನ ವಿಜ್ಞಾನವೇನು? ಮೇಲ್ನೋಟಕ್ಕೆ ಇದು ಕೇವಲ ತಮಾಷೆ ಅಥವಾ ಇಂಟರ್ನೆಟ್&zwnj;ನ ಮತ್ತೊಂದು ವೈರಲ್ ಹುಚ್ಚಾಟದಂತೆ ಕಂಡರೂ, ಇದರ ಹಿಂದೆ ಭೌತಶಾಸ್ತ್ರದ ಅತ್ಯಂತ ಆಸಕ್ತಿದಾಯಕ ಸಿದ್ಧಾಂತವೊಂದಿದೆ.&lt;/p&gt;&lt;img&gt;&lt;p&gt;ಭೌತಶಾಸ್ತ್ರದ ನಿಯಮದಂತೆ, ಒಂದು ವಸ್ತುವು ಹೆಚ್ಚಿನ ವೇಗದಲ್ಲಿ ಚಲಿಸಿ ಮತ್ತೊಂದು ವಸ್ತುವಿಗೆ ಡಿಕ್ಕಿ ಹೊಡೆದಾಗ, ಅದರ ಚಲನ ಶಕ್ತಿಯು ಶಾಖದ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಹೊಡೆತಗಳಿಂದ ಚಿಕನ್ ಬೇಯಿಸುವುದು ಎಂಬ ಸಿದ್ಧಾಂತವು ಸಂಪೂರ್ಣವಾಗಿ ಈ ತತ್ವದ ಮೇಲೆಯೇ ಆಧಾರಿತವಾಗಿದೆ. ಆದರೆ, ಸೈದ್ಧಾಂತಿಕವಾಗಿ ಇದು ಸಾಧ್ಯವೆನಿಸಿದರೂ, ನಿಜವಾದ ಪ್ರಪಂಚದ ಪ್ರಯೋಗಗಳಲ್ಲಿ ಸನ್ನಿವೇಶಗಳು ಅಷ್ಟು ಸರಳವಾಗಿರುವುದಿಲ್ಲ.&lt;/p&gt;&lt;img&gt;&lt;p&gt;ಈ ವೈರಲ್ ಹಕ್ಕನ್ನು ವಿವರವಾಗಿ ಅರ್ಥಮಾಡಿಕೊಳ್ಳಲು, ನಾವು ಚಲನ ಶಕ್ತಿಯ ಸ್ವಭಾವವನ್ನು ತಿಳಿಯಬೇಕು.&lt;/p&gt;&lt;p&gt;&lt;strong&gt;1. ಚಲನ ಶಕ್ತಿ:&lt;/strong&gt; ನಿಮ್ಮ ಕೈಯನ್ನು ಗಾಳಿಯಲ್ಲಿ ವೇಗವಾಗಿ ಬೀಸಿದಾಗ, ಆ ಚಲನೆಯಿಂದಾಗಿ ಕೈಯಲ್ಲಿ ಶಕ್ತಿಯು ಸಂಗ್ರಹವಾಗುತ್ತದೆ.&lt;/p&gt;&lt;p&gt;&lt;strong&gt;2. ಶಕ್ತಿಯ ವರ್ಗಾವಣೆ; &lt;/strong&gt;ಅದೇ ಕೈಯಿಂದ ಕೋಳಿಯ ಮಾಂಸಕ್ಕೆ ಹೊಡೆದಾಗ, ಕೈಯಲ್ಲಿದ್ದ ಶಕ್ತಿಯು ಕೋಳಿಗೆ ವರ್ಗಾವಣೆಯಾಗುತ್ತದೆ.&lt;/p&gt;&lt;p&gt;&lt;strong&gt;3. ರೂಪಾಂತರ;&lt;/strong&gt; ಈ ಘರ್ಷಣೆಯ ಸಮಯದಲ್ಲಿ, ಶಕ್ತಿಯು ಶಬ್ದ (Sound), ಚಲನೆ ಮತ್ತು ಮುಖ್ಯವಾಗಿ ಶಾಖವಾಗಿ ರೂಪಾಂತರಗೊಳ್ಳುತ್ತದೆ. ಆದ್ದರಿಂದ, ಮಾಂಸದ ಮೇಲೆ ಪದೇ ಪದೇ ಹೊಡೆಯುವುದರಿಂದ ಸಣ್ಣ ಪ್ರಮಾಣದ ಉಷ್ಣತೆಯು ಉತ್ಪತ್ತಿಯಾಗುತ್ತಾ ಹೋಗುತ್ತದೆ.&lt;/p&gt;&lt;img&gt;&lt;p&gt;ಇದಕ್ಕೆ ಅತ್ಯಂತ ಸರಳ ಉದಾಹರಣೆಯೆಂದರೆ ನಾವೆಲ್ಲರೂ ಚಳಿಗಾಲದಲ್ಲಿ ಮಾಡುವ ಕೈಜ್ಜುವಿಕೆ. ನಿಮ್ಮ ಎರಡೂ ಅಂಗೈಗಳನ್ನು ವೇಗವಾಗಿ ಮತ್ತು ಬಲವಾಗಿ ಉಜ್ಜಿದಾಗ, ಕೆಲವೇ ಸೆಕೆಂಡುಗಳಲ್ಲಿ ಅಂಗೈಗಳು ಬೆಚ್ಚಗಾಗುವುದನ್ನು ನೀವು ಗಮನಿಸಬಹುದು. ಇಲ್ಲಿ ನಿಮ್ಮ ಕೈಗಳ ಯಾಂತ್ರಿಕ ಶಕ್ತಿಯು ಘರ್ಷಣೆಯ ಮೂಲಕ ಉಷ್ಣ ಶಕ್ತಿಯಾಗಿ ಬದಲಾಗುತ್ತಿದೆ.&lt;/p&gt;&lt;img&gt;&lt;p&gt;ಇದೇ ತತ್ವವನ್ನು ಬೃಹತ್ ಪ್ರಮಾಣದಲ್ಲಿ ಕೋಳಿಯ ಮೇಲೆ ಅನ್ವಯಿಸಿದಾಗ, ಸತತ ಹೊಡೆತಗಳಿಂದ ಪ್ರತಿ ಬಾರಿಯೂ ಸಣ್ಣ ಪ್ರಮಾಣದ ಶಾಖ ಬಿಡುಗಡೆಯಾಗಿ, ಕೋಳಿಯ ತಾಪಮಾನವು ಹೆಚ್ಚಾಗುತ್ತಾ ಹೋಗುತ್ತದೆ. ಸೈದ್ಧಾಂತಿಕ ಲೆಕ್ಕಾಚಾರದ ಪ್ರಕಾರ 23,034 ಬಾರಿ ಹೊಡೆದಾಗ ಮಾಂಸ ಬೇಯಲು ಬೇಕಾದ ತಾಪಮಾನ ತಲುಪುತ್ತದೆ.&lt;/p&gt;&lt;img&gt;&lt;p&gt;ಸೈದ್ಧಾಂತಿಕವಾಗಿ ಇದು ಸರಿ ಎನಿಸಿದರೂ ಪ್ರಾಯೋಗಿಕವಾಗಿ ನೈಜ ಜಗತ್ತಿನಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ, ಒಂದು ಹೊಡೆತದಿಂದ ಸಿಗುವ ಶಾಖವು ಅತ್ಯಂತ ಕಡಿಮೆಯಿರುತ್ತದೆ. ಮುಂದಿನ ಹೊಡೆತ ಬೀಳುವಷ್ಟರಲ್ಲಿ ಹಿಂದಿನ ಶಾಖವು ವಾತಾವರಣದಲ್ಲಿ ತಂಪಾಗಿ ಹೋಗುತ್ತದೆ (Heat Loss). ಅಲ್ಲದೆ, 23,000ಕ್ಕೂ ಹೆಚ್ಚು ಬಾರಿ ಹೊಡೆಯುವಷ್ಟರಲ್ಲಿ ಕೋಳಿಯ ಮಾಂಸವು ಬೇಯುವ ಬದಲು ಪೂರ್ತಿಯಾಗಿ ನಜ್ಜುಗುಜ್ಜಾಗಿ ಹಾಳಾಗುತ್ತದೆ. ಆದ್ದರಿಂದ, ಇದು ಭೌತಶಾಸ್ತ್ರದ ತತ್ವವನ್ನು ವಿವರಿಸಲು ಬಳಸಿದ ಒಂದು ಕುತೂಹಲಕಾರಿ ಉದಾಹರಣೆಯಷ್ಟೇ ಹೊರತು, ಮನೆಯಲ್ಲಿ ಅಡುಗೆ ಮಾಡಲು ಬಳಸಬಹುದಾದ ವಿಧಾನವಲ್ಲ.&lt;/p&gt;]]></content:encoded>
            <category><![CDATA[Viral News]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/viral/can-chicken-cook-with-23034-slaps-viral-physics-claim-explains-heat-energy-behind-strange-cooking-idea-bmk-ih2imld"/>
        </item>
        <item>
            <title><![CDATA[ಮೆಟ್ರೋ ಪ್ರಯಾಣಿಕರೇ ಗಮನಿಸಿ; ಆ.15ರಂದು ನಿಮ್ಮ ರೈಲು ಡಾ.ಬಿ.ಆರ್. ಅಂಬೇಡ್ಕರ್ ರೈಲು ನಿಲ್ದಾಣ ವಿಧಾನ ಸೌಧಕ್ಕೆ ನಿಲ್ಲುವುದಿಲ್ಲ!]]></title>
            <link>https://kannada.asianetnews.com/bengaluru-urban/bengaluru-namma-metro-dr-br-ambedkar-vidhana-soudha-station-closed-august-15-independence-day-2026/articleshow-zkky1fp</link>
            <guid isPermaLink="true">https://kannada.asianetnews.com/bengaluru-urban/bengaluru-namma-metro-dr-br-ambedkar-vidhana-soudha-station-closed-august-15-independence-day-2026/articleshow-zkky1fp</guid>
            <pubDate>Thu, 13 Aug 2026 16:06:57 +0530</pubDate>
            <description><![CDATA[2026ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ 'ಫ್ರೀಡಂ ಹಬ್ಬ'ದ ಪ್ರಯುಕ್ತ, ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರವೇಶ ಮತ್ತು ನಿರ್ಗಮನವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪ್ರಯಾಣಿಕರು ಪರ್ಯಾಯವಾಗಿ ಕಬ್ಬನ್ ಪಾರ್ಕ್ ಮತ್ತು ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣಗಳನ್ನು ಬಳಸಲು ನಮ್ಮ ಮೆಟ್ರೋ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxb32jw1ftxv35k1dtbpn6d,imgname-bengaluru-namma-metro--2--1786617367132.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.13): ದೇ&lt;/strong&gt;ಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದು, ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಬೃಹತ್ 'ಫ್ರೀಡಂ ಹಬ್ಬ' ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಯ ಹಿತದೃಷ್ಟಿಯಿಂದ, ಆಗಸ್ಟ್ 15, 2026 ರಂದು ಡಾ. ಬಿ.ಆರ್. ಅಂಬೇಡ್ಕರ್ - ವಿಧಾನಸೌಧ ಮೆಟ್ರೋ ನಿಲ್ದಾಣದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಿ ನಮ್ಮ ಮೆಟ್ರೋ (BMRCL) ಮಾಧ್ಯಮ ಪ್ರಕಟಣೆ ಹೊರಡಿಸಿದೆ.&lt;/p&gt;&lt;p&gt;ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರ ಸೂಚನೆ ಹಾಗೂ ಭದ್ರತಾ ನಿಯಮಗಳ ಅನ್ವಯ BMRCL ಈ ನಿರ್ಧಾರ ಕೈಗೊಂಡಿದೆ. ಪ್ರಯಾಣಿಕರು ಯಾವುದೇ ಅಡಚಣೆಯಿಲ್ಲದೆ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರಿಗೆ ನಿಲ್ದಾಣದ ಪ್ರಮುಖ ಸಮಯ ಮತ್ತು ನಿರ್ಬಂಧಗಳ ವಿವರ:&lt;/strong&gt;&lt;/h2&gt;&lt;p&gt;&lt;strong&gt;ಬೆಳಿಗ್ಗೆ 10:00 ರಿಂದ ರಾತ್ರಿ 9:30 ರವರೆಗೆ:&lt;/strong&gt; ಈ ಅವಧಿಯಲ್ಲಿ ವಿಧಾನಸೌಧ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರ ಪ್ರವೇಶ (Entry) ಮತ್ತು ನಿರ್ಗಮನವನ್ನು (Exit) ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ. ಈ ಸಮಯದಲ್ಲಿ ಮೆಟ್ರೋ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲದೆ ನೇರವಾಗಿ ಚಲಿಸಲಿವೆ.&lt;/p&gt;&lt;p&gt;&lt;strong&gt;ರಾತ್ರಿ 9:30 ರಿಂದ ಪ್ರವೇಶ ಪ್ರಾರಂಭ:&lt;/strong&gt; ಕಾರ್ಯಕ್ರಮ ಮುಗಿದ ಬಳಿಕ ಸಾರ್ವಜನಿಕರು ಹಾಗೂ ಪ್ರಯಾಣಿಕರು ತಮ್ಮ ಮನೆಗಳಿಗೆ ತೆರಳಲು ಅನುಕೂಲವಾಗುವಂತೆ ರಾತ್ರಿ 9:30 ರಿಂದ ನಿಲ್ದಾಣದ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.&lt;/p&gt;&lt;p&gt;&lt;strong&gt;ರಾತ್ರಿ 10:00 ಗಂಟೆಯವರೆಗೆ ಮಾತ್ರ ನಿರ್ಗಮನ: &lt;/strong&gt;ನಿಲ್ದಾಣದಿಂದ ಹೊರಬರುವ (Exit) ಸೌಲಭ್ಯವು ರಾತ್ರಿ 10:00 ಗಂಟೆಯವರೆಗೆ ಮಾತ್ರ ಸೀಮಿತವಾಗಿರಲಿದೆ.&lt;/p&gt;&lt;p&gt;&lt;strong&gt;ಹೆಚ್ಚುವರಿ ಮೆಟ್ರೋ ರೈಲು ಸೇವೆ:&lt;/strong&gt; ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಮೆಟ್ರೋ ರೈಲುಗಳ ಸೇವೆಯನ್ನು ಒದಗಿಸಲಾಗುವುದು ಎಂದು ಬಿಎಂಆರ್&zwnj;ಸಿಎಲ್ ತಿಳಿಸಿದೆ.&lt;/p&gt;&lt;h2&gt;&lt;strong&gt;ಪರ್ಯಾಯ ಮೆಟ್ರೋ ನಿಲ್ದಾಣಗಳನ್ನು ಬಳಸಿ:&lt;/strong&gt;&lt;/h2&gt;&lt;p&gt;ವಿಧಾನಸೌಧ ನಿಲ್ದಾಣ ಬಂದ್ ಇರುವ ಸಮಯದಲ್ಲಿ ಪ್ರಯಾಣಿಕರು ತಮ್ಮ ಸಾರಿಗೆ ಅಗತ್ಯಗಳಿಗಾಗಿ ಹತ್ತಿರದ ಈ ಕೆಳಗಿನ ನಿಲ್ದಾಣಗಳನ್ನು ಬಳಸಬಹುದಾಗಿದೆ:&lt;/p&gt;&lt;ul&gt; &lt;li&gt;ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ (Cubbon Park Metro Station)&lt;/li&gt; &lt;li&gt;ಸರ್ ಎಂ. ವಿಶ್ವೇಶ್ವರಯ್ಯ - ಸೆಂಟ್ರಲ್ ಕಾಲೇಜು ಮೆಟ್ರೋ ನಿಲ್ದಾಣ (Sir M. Visvesvaraya - Central College Metro Station)&lt;/li&gt;&lt;/ul&gt;&lt;p&gt;ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಮತ್ತು ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಬಿಎಂಆರ್&zwnj;ಸಿಎಲ್ ಆಡಳಿತ ಮಂಡಳಿ ಮನವಿ ಮಾಡಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/bengaluru-urban/bengaluru-namma-metro-dr-br-ambedkar-vidhana-soudha-station-closed-august-15-independence-day-2026/articleshow-zkky1fp"/>
        </item>
        <item>
            <title><![CDATA[ನಲ್ಲಿ ಹಿಂದಿನ ಗೋಡೆ ಅಥವಾ ಟೈಲ್ಸ್ ಮೇಲೆ  ಪದೇ ಪದೇ ಜಿಡ್ಡು, ಕೊಳೆ ಕೂರುತ್ತಿದ್ದರೆ ಈ ಟ್ರಿಕ್ಸ್‌ ಫಾಲೋ ಮಾಡಿ]]></title>
            <link>https://kannada.asianetnews.com/gallery/life/keep-kitchen-tiles-clean-with-this-simple-foil-hack-lytzw73</link>
            <guid isPermaLink="true">https://kannada.asianetnews.com/gallery/life/keep-kitchen-tiles-clean-with-this-simple-foil-hack-lytzw73</guid>
            <pubDate>Thu, 13 Aug 2026 16:06:34 +0530</pubDate>
            <description><![CDATA[Kitchen cleaning hacks: ಪಾತ್ರೆ ತೊಳೆಯುವಾಗ ನಲ್ಲಿಯ ಹಿಂದಿನ ಟೈಲ್ಸ್‌ ಗಲೀಜಾಗುವುದು ಸಾಮಾನ್ಯ ಸಮಸ್ಯೆ. ಇನ್ನು ಇದನ್ನು ಸ್ವಚ್ಛಗೊಳಿಸುವುದು ದೊಡ್ಡ ತಲೆನೋವಿನ ಕೆಲಸ. ಆದರೆ ಯಾವುದೇ ಹೆಚ್ಚಿನ ಖರ್ಚಿಲ್ಲದೆ ಕಿಚನ್ ಟೈಲ್ಸ್‌ಗಳನ್ನು ಹೇಗೆ ಹೊಳೆಯುವಂತೆ ಇಟ್ಟುಕೊಳ್ಳಬಹುದು ಎಂಬ ಸುಲಭ ಉಪಾಯ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzxandyyn5fz8p78632z3h8f,imgname-thumbnail---2026-08-13t154852.501-1786616920030.jpg" type="image/jpeg" height="390" width="690"/>
            <content:encoded><![CDATA[&lt;p&gt;Kitchen cleaning hacks: ಪಾತ್ರೆ ತೊಳೆಯುವಾಗ ನಲ್ಲಿಯ ಹಿಂದಿನ ಟೈಲ್ಸ್&zwnj; ಗಲೀಜಾಗುವುದು ಸಾಮಾನ್ಯ ಸಮಸ್ಯೆ. ಇನ್ನು ಇದನ್ನು ಸ್ವಚ್ಛಗೊಳಿಸುವುದು ದೊಡ್ಡ ತಲೆನೋವಿನ ಕೆಲಸ. ಆದರೆ ಯಾವುದೇ ಹೆಚ್ಚಿನ ಖರ್ಚಿಲ್ಲದೆ ಕಿಚನ್ ಟೈಲ್ಸ್&zwnj;ಗಳನ್ನು ಹೇಗೆ ಹೊಳೆಯುವಂತೆ ಇಟ್ಟುಕೊಳ್ಳಬಹುದು ಎಂಬ ಸುಲಭ ಉಪಾಯ ಇಲ್ಲಿದೆ.&lt;/p&gt;&lt;img&gt;&lt;p&gt;&lt;strong&gt;ಹೆಚ್ಚಿನ ಖರ್ಚು ಕೂಡ ಆಗಲ್ಲ&lt;/strong&gt;ಅಡುಗೆಮನೆಯಲ್ಲಿ ನಲ್ಲಿಯ ಹಿಂದಿನ ಗೋಡೆ ಅಥವಾ ಟೈಲ್ಸ್ ಕೊಳಕಾಗುವುದು ಬಹಳ ಸಾಮಾನ್ಯ ವಿಷಯ. ಇದರಿಂದ ಗೋಡೆಯ ಸೌಂದರ್ಯ ಹಾಳಾಗುವುದಲ್ಲದೆ, ಇಡೀ ಅಡುಗೆಮನೆಯ ಲುಕ್ ಕೂಡ ಮಂಕಾದಂತೆ ಕಾಣುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಒಂದು ಸುಲಭವಾದ ಹ್ಯಾಕ್ ಅನುಸರಿಸಬಹುದು. ಇದಕ್ಕೆ ಹೆಚ್ಚಿನ ಖರ್ಚು ಕೂಡ ಆಗುವುದಿಲ್ಲ.&lt;/p&gt;&lt;img&gt;&lt;p&gt;&lt;strong&gt;ಟೈಲ್ಸ್ ಗಲೀಜಾಗದಂತೆ ತಡೆಯುವ ಹ್ಯಾಕ್&lt;/strong&gt;ಅಡುಗೆಮನೆಯ ಸಿಂಕ್ ಬಳಿ ಪಾತ್ರೆಗಳನ್ನು ತೊಳೆಯುವಾಗ ಟೈಲ್ಸ್&zwnj;ಗಳ ಮೇಲೆ ನೀರು ಮತ್ತು ಸೋಪಿನ ಹನಿಗಳು ಸಿಡಿಯುವುದು ಸಾಮಾನ್ಯ. ಆದರೆ ಕಾಲಾನಂತರದಲ್ಲಿ ಈ ಕಲೆಗಳನ್ನು ಸ್ವಚ್ಛಗೊಳಿಸದಿದ್ದರೆ, ಗೋಡೆಯ ಅಂದ ಕೆಡುತ್ತದೆ. ಒಂದು ವೇಳೆ ನೀವು ಕೂಡ ನಲ್ಲಿಯ ಹಿಂದಿನ ಟೈಲ್ಸ್&zwnj;ಗಳ ಮೇಲೆ ಜಮೆಯಾಗಿರುವ ಜಿಡ್ಡು ಮತ್ತು ಕೊಳಕು ಕಲೆಗಳಿಂದ ಬೇಸತ್ತಿದ್ದರೆ, ಈ ಮಾಹಿತಿ ನಿಮಗಾಗಿ. ಇಂದು ನಾವು ನಿಮಗೆ ಟೈಲ್ಸ್ ಗಲೀಜಾಗದಂತೆ ತಡೆಯುವ ಒಂದು ಹ್ಯಾಕ್ ಅನ್ನು ಹೇಳಿಕೊಡಲಿದ್ದೇವೆ.&lt;/p&gt;&lt;img&gt;&lt;p&gt;&lt;strong&gt;ಅಲ್ಯೂಮಿನಿಯಂ ಫಾಯಿಲ್ ಬಳಸಿ&lt;/strong&gt;ನಲ್ಲಿಯ ಹಿಂದಿನ ಟೈಲ್ಸ್ ಸ್ವಚ್ಛವಾಗಿಡಲು ನೀವು ಅಲ್ಯೂಮಿನಿಯಂ ಫಾಯಿಲ್ (Aluminum Foil) ಬಳಸಬಹುದು. ಅಲ್ಯೂಮಿನಿಯಂ ಫಾಯಿಲ್ ನೀರಿನ ಹನಿಗಳು ಮತ್ತು ಗೋಡೆಯ ನಡುವೆ ಒಂದು ರಕ್ಷಣಾತ್ಮಕ ಪದರವಾಗಿ ಕೆಲಸ ಮಾಡುತ್ತದೆ. ಫಾಯಿಲ್ ತೆಳುವಾಗಿರುವುದರಿಂದ ಇದನ್ನು ನಲ್ಲಿಯ ಸುತ್ತಲೂ ಸುಲಭವಾಗಿ ಅಂಟಿಸಬಹುದು. ಇದು ಗಲೀಜಾದಾಗ ನೀವು ಇದನ್ನು ಸುಲಭವಾಗಿ ಬದಲಾಯಿಸಬಹುದು.&lt;/p&gt;&lt;img&gt;&lt;p&gt;&lt;strong&gt;ಹಚ್ಚುವುದು ಹೇಗೆ?&lt;/strong&gt;*ಅಲ್ಯೂಮಿನಿಯಂ ಫಾಯಿಲ್ ಹಚ್ಚುವ ಮೊದಲು, ನಲ್ಲಿಯ ಹಿಂದಿನ ಗೋಡೆ ಮತ್ತು ಟೈಲ್ಸ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒಣಗಲು ಬಿಡಿ.&lt;/p&gt;&lt;p&gt;*ನಂತರ ನೀವು ಎಷ್ಟು ಜಾಗವನ್ನು ಕವರ್ ಮಾಡಬೇಕೆಂದು ಬಯಸುತ್ತೀರೋ, ಅಷ್ಟು ಉದ್ದದ ಫಾಯಿಲ್ ತುಂಡನ್ನು ಕತ್ತರಿಸಿ. ಕೇವಲ ನೀರು ಸಿಡಿಯುವ ಜಾಗವನ್ನು ಮಾತ್ರ ಆಯ್ದುಕೊಳ್ಳಿ.&lt;/p&gt;&lt;p&gt;*ಫಾಯಿಲ್&zwnj;ನ ಒಂದು ಪದರ ಸುಲಭವಾಗಿ ಹರಿದು ಹೋಗಬಹುದು, ಆದ್ದರಿಂದ ಯಾವಾಗಲೂ 2-3 ಪದರಗಳನ್ನು (layers) ಬಳಸಿ.&lt;/p&gt;&lt;p&gt;ಫಾಯಿಲ್ ಅನ್ನು ಮಡಚಿ ನಲ್ಲಿಯ ಹಿಂದೆ ಗೋಡೆಗೆ ಸರಿಯಾಗಿ ಹೊಂದಿಸಿ.&lt;/p&gt;&lt;p&gt;*ಫಾಯಿಲ್ ಒಂದೇ ಕಡೆ ಭದ್ರವಾಗಿ ಇರಲು ನೀವು ತೆಗೆಯಬಹುದಾದ (removable) ಅಂಟನ್ನು ಬಳಸಬಹುದು.&lt;/p&gt;&lt;img&gt;&lt;p&gt;&lt;strong&gt;ಗಮನಿಸಬೇಕಾದ ಅಂಶ&lt;/strong&gt;ಅಲ್ಯೂಮಿನಿಯಂ ಫಾಯಿಲ್ ಹ್ಯಾಕ್ ಅತ್ಯಂತ ಪ್ರಯೋಜನಕಾರಿ. ಏಕೆಂದರೆ ಇದನ್ನು ಸುಲಭವಾಗಿ ತೆಗೆದು ಬದಲಾಯಿಸಬಹುದು. ಒಂದು ವೇಳೆ ಅದರ ಮೇಲೆ ನೀರು, ಸೋಪು ಅಥವಾ ಆಹಾರದ ಕಲೆಗಳು ಜಮೆಯಾದರೆ, ಆ ಫಾಯಿಲ್ ಅನ್ನು ತೆಗೆದು ಹಾಕಿ, ಜಾಗವನ್ನು ಸ್ವಚ್ಛಗೊಳಿಸಿ ಮತ್ತೊಮ್ಮೆ ಹೊಸ ಫಾಯಿಲ್ ಹಚ್ಚಬಹುದು.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/keep-kitchen-tiles-clean-with-this-simple-foil-hack-lytzw73"/>
        </item>
        <item>
            <title><![CDATA[ಆ ಒಂದು ಶತಕ ನನ್ನ ವೃತ್ತಿಜೀವನವನ್ನೇ ರೂಪಿಸಿತು; ಆರ್‌ಸಿಬಿ ವಿರುದ್ಧದ ಆಟ ನೆನೆದ 'ಕಿಲ್ಲರ್' ಮಿಲ್ಲರ್]]></title>
            <link>https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</link>
            <guid isPermaLink="true">https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve</guid>
            <pubDate>Thu, 13 Aug 2026 16:02:30 +0530</pubDate>
            <description><![CDATA[2013ರ ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧ ಸಿಡಿಸಿದ ಅಜೇಯ 101 ರನ್‌ಗಳೇ ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ಇನ್ನಿಂಗ್ಸ್ ಎಂದು ಡೇವಿಡ್ ಮಿಲ್ಲರ್ ಹೇಳಿದ್ದಾರೆ. ಆ ಒತ್ತಡದ ಚೇಸಿಂಗ್ ತನ್ನ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು ಎಂದಿದ್ದಾರೆ. ಜೊತೆಗೆ, 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆ ಐಪಿಎಲ್ ಟ್ರೋಫಿ ಗೆದ್ದಿದ್ದು ತಮ್ಮ ನೆಚ್ಚಿನ ಕ್ಷಣ ಎಂದು ಅವರು ನೆನಪಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx09qqjc5488tpsafy5ccq9,imgname-david-miller---ipl-2013-1786606050976.jpg" type="image/jpeg" height="390" width="690"/>
            <content:encoded><![CDATA[&lt;p&gt;ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ತಾವು ಬಾರಿಸಿದ್ದ ಅಜೇಯ 101 ರನ್&zwnj;ಗಳ ಇನ್ನಿಂಗ್ಸ್ ಅನ್ನು ತಮ್ಮ ವೃತ್ತಿಜೀವನದಲ್ಲಿಯೇ ಅತ್ಯಂತ ಹೆಮ್ಮೆಯ ಆಟ ಎಂದು ಬಣ್ಣಿಸಿದ್ದಾರೆ. ಆ ಒತ್ತಡದ ಚೇಸಿಂಗ್ ತಮ್ಮ ವೃತ್ತಿಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅವರು ಹೇಳಿದ್ದಾರೆ. ಸದ್ಯ 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ ಸದರ್ನ್ ಬ್ರೇವ್ ತಂಡವನ್ನು ಪ್ರತಿನಿಧಿಸುತ್ತಿರುವ ಮಿಲ್ಲರ್, ಜಿಯೋಸ್ಟಾರ್ ಜೊತೆ ಮಾತನಾಡುತ್ತಾ ತಮ್ಮ ವೃತ್ತಿಜೀವನ ಮತ್ತು ಐಪಿಎಲ್&zwnj;ನ ಸ್ಮರಣೀಯ ಪ್ರದರ್ಶನಗಳನ್ನು ನೆನಪಿಸಿಕೊಂಡರು.&lt;/p&gt;&lt;h2&gt;&lt;strong&gt;'ಅದು ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು': ಮಿಲ್ಲರ್ ಮಾತು&lt;/strong&gt;&lt;/h2&gt;&lt;p&gt;ಒಂದು ದಶಕಕ್ಕೂ ಹೆಚ್ಚು ಕಾಲದ ತಮ್ಮ ವೃತ್ತಿಜೀವನದಲ್ಲಿ, ಈ ಎಡಗೈ ಬ್ಯಾಟರ್ ಟಿ20 ಕ್ರಿಕೆಟ್&zwnj;ನ ಅತ್ಯಂತ ನಂಬಿಕಸ್ಥ ಮಿಡಲ್-ಆರ್ಡರ್ ಫಿನಿಶರ್&zwnj;ಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದಾರೆ. &quot;ನನ್ನ ಪ್ರಕಾರ, ಆರ್&zwnj;ಸಿಬಿ ವಿರುದ್ಧ ನಾನು ಗಳಿಸಿದ 101 ರನ್&zwnj;ಗಳ ಆ ಇನ್ನಿಂಗ್ಸ್ ಇದೆಯಲ್ಲ, ಅದು ನನ್ನ ಪಾಲಿಗೆ ತುಂಬಾನೇ ಸ್ಪೆಷಲ್. ಅದೊಂದು ಚೇಸಿಂಗ್ ಆಗಿತ್ತು, ಗುರಿ ಬೆನ್ನಟ್ಟಿ ಶತಕ ಬಾರಿಸಿದ್ದು, ಐಪಿಎಲ್&zwnj;ನಲ್ಲಿ ನನ್ನ ಮೊದಲ ಶತಕ, ನನ್ನ ಮೊದಲ ಟಿ20 ಶತಕ ಕೂಡ ಅದೇ ಆಗಿತ್ತು. ಈಗ ಹಿಂತಿರುಗಿ ನೋಡಿದರೆ, ಆ ಒಂದು ಇನ್ನಿಂಗ್ಸ್ ನನ್ನ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು ಅನ್ನಿಸುತ್ತೆ. ಹಾಗೆಯೇ, ಡರ್ಬನ್&zwnj;ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಇನ್ನೊಂದು ಇನ್ನಿಂಗ್ಸ್ ಕೂಡ ನನಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತೆ. ಅಲ್ಲೂ ನಾವು ಗುರಿ ಬೆನ್ನಟ್ಟಿದ್ದೆವು, ನಾನು 118 ರನ್ ಗಳಿಸಿ ಅಜೇಯನಾಗಿ ಉಳಿದಿದ್ದೆ. ಹೀಗೆ ಒತ್ತಡದಲ್ಲಿ ಶತಕ ಬಾರಿಸಿದ ಈ ಎರಡು ಇನ್ನಿಂಗ್ಸ್&zwnj;ಗಳು ಯಾವಾಗಲೂ ವಿಶೇಷವಾಗಿ ನಿಲ್ಲುತ್ತವೆ,&quot; ಎಂದು ಮಿಲ್ಲರ್ ಹೇಳಿದರು.&lt;/p&gt;&lt;p&gt;2013ರ ಆವೃತ್ತಿಯಲ್ಲಿ ಕಿಂಗ್ಸ್ XI ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ಪರ ಆಡುತ್ತಿದ್ದ ಮಿಲ್ಲರ್, ಆರ್&zwnj;ಸಿಬಿ ವಿರುದ್ಧ ಕೇವಲ 38 ಎಸೆತಗಳಲ್ಲಿ 101 ರನ್ ಚಚ್ಚಿದ್ದರು. ಇದು ಅವರ ಐಪಿಎಲ್ ವೃತ್ತಿಜೀವನದ ಅತ್ಯಂತ ಸ್ಮರಣೀಯ ಇನ್ನಿಂಗ್ಸ್&zwnj;ಗಳಲ್ಲಿ ಒಂದಾಗಿ ಉಳಿದಿದೆ. ಈ ಪ್ರದರ್ಶನವು ಅವರನ್ನು ಮಿಡಲ್ ಆರ್ಡರ್&zwnj;ನಲ್ಲಿ ವಿನಾಶಕಾರಿ ಬ್ಯಾಟರ್ ಆಗಿ ಜಗತ್ತಿಗೆ ಪರಿಚಯಿಸಿತು ಮತ್ತು 'ಫಿನಿಶರ್' ಎಂಬ ಅವರ ಖ್ಯಾತಿಗೆ ಬುನಾದಿ ಹಾಕಿತು.&lt;/p&gt;&lt;h2&gt;&lt;strong&gt;ಫಿನಿಶಿಂಗ್ ಕಲೆಯ ಮಾಸ್ಟರ್!&lt;/strong&gt;&lt;/h2&gt;&lt;p&gt;ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಇನ್ನಿಂಗ್ಸ್&zwnj;ಗಳನ್ನು ಮುಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವುದೇ ತಮಗೆ ಅತ್ಯಂತ ತೃಪ್ತಿ ನೀಡಿದ ವಿಷಯ ಎಂದು ಈ ದಕ್ಷಿಣ ಆಫ್ರಿಕಾದ ಆಟಗಾರ ಹೇಳಿದ್ದಾರೆ. &quot;ನಾನು ಮಿಡಲ್ ಆರ್ಡರ್&zwnj;ನಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯಗಳನ್ನು ಫಿನಿಶ್ ಮಾಡುವ ಮೂಲಕವೇ ನನ್ನ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದೇನೆ. ಇದಕ್ಕಾಗಿ ನಾನು ಹೆಚ್ಚು ಹೆಮ್ಮೆಪಡುತ್ತೇನೆ. ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ನಾನಿನ್ನೂ ಕಲಿಯುತ್ತಲೇ ಇದ್ದೇನೆ, ಆದರೆ ಈ ವಿಭಾಗದಲ್ಲಿ ನಾನು ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದೇನೆ ಮತ್ತು ವಿಶೇಷವಾಗಿ ಚೇಸಿಂಗ್ ಇನ್ನಿಂಗ್ಸ್&zwnj;ಗಳನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ,&quot; ಎಂದರು.&lt;/p&gt;&lt;h2&gt;&lt;strong&gt;ಐಪಿಎಲ್ ಪಯಣ ಮತ್ತು ನೆಚ್ಚಿನ ಕ್ಷಣ!&lt;/strong&gt;&lt;/h2&gt;&lt;p&gt;2012ರಲ್ಲಿ ಪಾದಾರ್ಪಣೆ ಮಾಡಿದ ನಂತರ ಮಿಲ್ಲರ್ 15 ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ್ದಾರೆ. ಅವರು ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ದಕ್ಷಿಣ ಆಫ್ರಿಕಾದ ಆಟಗಾರರ ಪೈಕಿ ಅತಿ ಹೆಚ್ಚು ಐಪಿಎಲ್ ಸೀಸನ್&zwnj;ಗಳಲ್ಲಿ ಆಡಿದ ದಾಖಲೆ ಅವರ ಹೆಸರಿನಲ್ಲಿದೆ. 2022ರಲ್ಲಿ ಗುಜರಾತ್ ಟೈಟಾನ್ಸ್ ಜೊತೆಗಿನ ಆವೃತ್ತಿ ಅವರ ಪಾಲಿಗೆ ಅತ್ಯಂತ ಯಶಸ್ವಿಯಾಗಿತ್ತು. ಚೊಚ್ಚಲ ಸೀಸನ್&zwnj;ನಲ್ಲೇ ಫ್ರಾಂಚೈಸಿ ಪ್ರಶಸ್ತಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಜಿಟಿಯ ಮಿಡಲ್ ಆರ್ಡರ್&zwnj;ನ ಬೆನ್ನೆಲುಬಾಗಿದ್ದ ಮಿಲ್ಲರ್, ಆ ಐತಿಹಾಸಿಕ ಓಟದಲ್ಲಿ ಹಲವಾರು ಪಂದ್ಯ-ಗೆಲ್ಲುವ ಪ್ರದರ್ಶನಗಳನ್ನು ನೀಡಿದ್ದರು.&lt;/p&gt;&lt;p&gt;ತಮ್ಮ ನೆಚ್ಚಿನ ಐಪಿಎಲ್ ಕ್ಷಣದ ಬಗ್ಗೆ ಮಾತನಾಡಿದ ಮಿಲ್ಲರ್, ಗುಜರಾತ್ ಟೈಟಾನ್ಸ್ ಜೊತೆಗಿನ ಆ ಗೆಲುವನ್ನು ಆಯ್ಕೆ ಮಾಡಿಕೊಂಡರು. &quot;ಐಪಿಎಲ್&zwnj;ನಲ್ಲಿ ನನ್ನ ನೆಚ್ಚಿನ ಕ್ಷಣ... ಹಲವಾರು ಇವೆ, ಆದರೆ ನಾವು ಆಡುವುದೇ ಗೆಲ್ಲಲು. ಹಾಗಾಗಿ, ಗುಜರಾತ್ ಟೈಟಾನ್ಸ್&zwnj;ಗಾಗಿ 2022ರಲ್ಲಿ ಐಪಿಎಲ್ ಗೆದ್ದಿದ್ದು ಖಂಡಿತವಾಗಿಯೂ ನನ್ನ ನೆಚ್ಚಿನ ಕ್ಷಣ,&quot; ಎಂದು ಅವರು ಹೇಳಿದರು.&lt;/p&gt;&lt;h2&gt;&lt;strong&gt;ಯಶಸ್ವಿ ಟಿ20 ವೃತ್ತಿಜೀವನ&lt;/strong&gt;&lt;/h2&gt;&lt;p&gt;ಮಿಲ್ಲರ್ ತಮ್ಮ ವೃತ್ತಿಜೀವನದಲ್ಲಿ 152 ಐಪಿಎಲ್ ಪಂದ್ಯಗಳಿಂದ 3,288 ರನ್ ಗಳಿಸಿದ್ದಾರೆ. ಅವರು ಕೊನೆಯ ಓವರ್&zwnj;ಗಳ ಸ್ಫೋಟಕ ಬ್ಯಾಟಿಂಗ್ ಮತ್ತು ಯಶಸ್ವಿ ಚೇಸಿಂಗ್&zwnj;ಗಳಿಗೆ ಹೆಸರುವಾಸಿಯಾಗಿದ್ದಾರೆ. 'ದಿ ಹಂಡ್ರೆಡ್ 2026' ಟೂರ್ನಿಯಲ್ಲಿ, ಸದರ್ನ್ ಬ್ರೇವ್ ಪರ 8 ಪಂದ್ಯಗಳಲ್ಲಿ 166 ರನ್ ಗಳಿಸಿದ್ದಾರೆ, ಆದರೆ ಅವರ ಫ್ರಾಂಚೈಸಿ ನಾಕೌಟ್ ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು. 37 ವರ್ಷದ ಈ ಆಟಗಾರ, ವಿಶ್ವಾದ್ಯಂತ ಟಿ20 ಲೀಗ್&zwnj;ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ತಮ್ಮ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/david-miller-reveals-how-century-against-rcb-in-ipl-2013-shaped-his-cricket-career/articleshow-9qzxcve"/>
        </item>
        <item>
            <title><![CDATA[ಮೊದಲ ದಿನವೇ ಆಸ್ಟ್ರೇಲಿಯಾದ ಸೊಕ್ಕಡಗಿಸಿದ ಬಾಂಗ್ಲಾದೇಶ..! ವೇಗಿಗಳ ದಾಳಿಗೆ ತವರಿನಲ್ಲೇ ಮಂಕಾದ ಕಾಂಗರೂ ಪಡೆ]]></title>
            <link>https://kannada.asianetnews.com/cricket-sports/bangladesh-shock-australia-in-darwin-test-as-hasan-mahmud-claims-6-wickets-kvn/articleshow-ck9vu9g</link>
            <guid isPermaLink="true">https://kannada.asianetnews.com/cricket-sports/bangladesh-shock-australia-in-darwin-test-as-hasan-mahmud-claims-6-wickets-kvn/articleshow-ck9vu9g</guid>
            <pubDate>Thu, 13 Aug 2026 15:52:23 +0530</pubDate>
            <description><![CDATA[23 ವರ್ಷಗಳ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್‌ನ ಮೊದಲ ದಿನವೇ ಆತಿಥೇಯರನ್ನು 198 ರನ್‌ಗಳಿಗೆ ಕಟ್ಟಿಹಾಕಿದೆ. ಹಸನ್ ಮಹಮೂದ್ ಅವರ 6 ವಿಕೆಟ್‌ಗಳ ನೆರವಿನಿಂದ ಈ ಸಾಧನೆ ಮಾಡಿದ ಬಾಂಗ್ಲಾ, ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx7gadv8e4f3gx2wyrfh7z9,imgname-hasan-mahmud-1786613606843.jpeg" type="image/jpeg" height="390" width="690"/>
            <content:encoded><![CDATA[&lt;p&gt;ಡಾರ್ವಿನ್: 23 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ಬಾಂಗ್ಲಾದೇಶ, ಮೊದಲ ಟೆಸ್ಟ್&zwnj;ನ ಮೊದಲ ದಿನವೇ ಆತಿಥೇಯರಿಗೆ ಶಾಕ್ ನೀಡಿದೆ. ಡಾರ್ವಿನ್&zwnj;ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾ ಬೌಲರ್&zwnj;ಗಳು ಆಸೀಸ್ ತಂಡವನ್ನು ಕೇವಲ 198 ರನ್&zwnj;ಗಳಿಗೆ ಕಟ್ಟಿಹಾಕಿದ್ದಾರೆ. ಮಾಜಿ ನಾಯಕ ಸ್ಟೀವ್ ಸ್ಮಿತ್ 71 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಉಳಿದವರಿಂದ ನಿರೀಕ್ಷಿತ ಆಟ ಬರಲಿಲ್ಲ. ಇನ್ನು&lt;/p&gt;&lt;p&gt;ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡವು ಮೊದಲ ದಿನದಾಟದಂತ್ಯಕ್ಕೆ ಕೇವಲ ಒಂದು ವಿಕೆಟ್ ಕಳೆದುಕೊಂಡು 96 ರನ್&zwnj; ಗಳಿಸಿದ್ದು ಇನ್ನು ಕೇವಲ 102 ರನ್&zwnj;ಗಳ ಹಿನ್ನಡೆಯಲ್ಲಿದೆ. ಇದರೊಂದಿಗೆ ಕಾಂಗರೂ ನಾಡಿನಲ್ಲಿ ಮೊದಲ ದಿನವೇ ಆಸೀಸ್ ಸೊಕ್ಕಡಗಿಸುವಲ್ಲಿ ಬಾಂಗ್ಲಾದೇಶ ಹುಲಿಗಳು ಯಶಸ್ವಿಯಾಗಿವೆ. ಮೊಮಿನುಲ್ ಹಕ್ (35) ಮತ್ತು ತನ್ಜಿದ್ ಹಸನ್ ತಮೀಮ್ (32) ಕ್ರೀಸ್&zwnj;ನಲ್ಲಿದ್ದಾರೆ. ಶಾದ್ಮಾನ್ ಇಸ್ಲಾಂ (20) ಔಟಾದರು.&lt;/p&gt;&lt;h2&gt;&lt;strong&gt;ಹಸನ್ ಮಹಮೂದ್ ಮಾರಕ ದಾಳಿ&lt;/strong&gt;&lt;/h2&gt;&lt;p&gt;ಬಾಂಗ್ಲಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ವೇಗಿ ಹಸನ್ ಮಹಮೂದ್, ಆಸೀಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಕೇವಲ 55 ರನ್ ನೀಡಿ 6 ವಿಕೆಟ್ ಪಡೆದ ಅವರು, ತಮ್ಮ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ನೀಡಿದರು. ಇದು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಬಾಂಗ್ಲಾ ವೇಗಿಯೊಬ್ಬರ ಮೂರನೇ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಅವರಿಗೆ ತಸ್ಕಿನ್ ಅಹ್ಮದ್ ಮತ್ತು ಇಬಾದತ್ ಹುಸೇನ್ ಉತ್ತಮ ಸಾಥ್ ನೀಡಿದರು.&lt;/p&gt;&lt;p&gt;ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾವನ್ನು ಬಾಂಗ್ಲಾ ಬೌಲರ್&zwnj;ಗಳು ಕೇವಲ 53 ಓವರ್&zwnj;ಗಳಲ್ಲಿ ಆಲೌಟ್ ಮಾಡಿದರು. ಆರಂಭಿಕರಾದ ಟ್ರಾವಿಸ್ ಹೆಡ್ (22) ಮತ್ತು ಜೇಕ್ ವೆದರಾಲ್ಡ್ (23) ಮೊದಲ ವಿಕೆಟ್&zwnj;ಗೆ 45 ರನ್ ಸೇರಿಸಿ ಉತ್ತಮ ಆರಂಭ ನೀಡಿದರೂ, ನಂತರ ತಂಡ ಕುಸಿತ ಕಂಡಿತು. ಸತತ ಓವರ್&zwnj;ಗಳಲ್ಲಿ ಇಬ್ಬರನ್ನೂ ಔಟ್ ಮಾಡಿದ ಹಸನ್ ಮಹಮೂದ್, ಆಸೀಸ್ ಪತನಕ್ಕೆ ಮುನ್ನುಡಿ ಬರೆದರು. ನಂತರ ಬಂದ ಮಾರ್ನಸ್ ಲಬುಶೇನ್ (1) ಮತ್ತು ಕ್ಯಾಮರೂನ್ ಗ್ರೀನ್ (13) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ.&lt;/p&gt;&lt;p&gt;A scintillating bowling display gave Bangladesh the upper hand on Day 1 of the Darwin Test against Australia #WTC27 : https://t.co/gIQtdBGVou pic.twitter.com/SOyIzJNiwl&lt;/p&gt;&lt;p&gt;&mdash; ICC (@ICC) August 13, 2026&lt;/p&gt;&lt;p&gt;&lt;/p&gt;&lt;p&gt;ಅಂದಹಾಗೆ ಇದು ಬಾಂಗ್ಲಾದೇಶ ವಿರುದ್ಧ ಟೆಸ್ಟ್&zwnj;ನಲ್ಲಿ ಆಸ್ಟ್ರೇಲಿಯಾದ ಅತ್ಯಂತ ಕಡಿಮೆ ಮೊದಲ ಇನ್ನಿಂಗ್ಸ್ ಸ್ಕೋರ್ ಆಗಿದೆ. ಈ ಹಿಂದೆ 2017ರಲ್ಲಿ ಮೀರ್&zwnj;ಪುರ್&zwnj;ನಲ್ಲಿ 217 ರನ್&zwnj;ಗಳಿಗೆ ಆಲೌಟ್ ಆಗಿದ್ದು ಕನಿಷ್ಠ ಸ್ಕೋರ್ ಆಗಿತ್ತು.&lt;/p&gt;&lt;h3&gt;&lt;strong&gt;ಎಲ್ಲರ ಕಣ್ಣು ಎರಡನೇ ದಿನದ ಮೇಲೆ:&lt;/strong&gt;&lt;/h3&gt;&lt;p&gt;ಇನ್ನು ಕೇವಲ 102 ರನ್&zwnj;ಗಳ ಹಿನ್ನಡೆಯಲ್ಲಿರುವ ಬಾಂಗ್ಲಾದೇಶ ತಂಡವು ಇದೀಗ ಆಸೀಸ್ ಬೌಲರ್&zwnj;ಗಳ ಎದುರು ಎರಡನೇ ದಿನದಾಟದಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದೆ ಎನ್ನುವ ಬಗ್ಗೆ ಕುತೂಹಲ ಜೋರಾಗಿದೆ. ಇನ್ನು ಬಾಂಗ್ಲಾದೇಶ ಕೈಯಲ್ಲಿ 9 ವಿಕೆಟ್&zwnj;ಗಳಿದ್ದು, ಒಂದು ವೇಳೆ ಎರಡನೇ ದಿನದಾಟದಲ್ಲಿ ಬಾಂಗ್ಲಾದೇಶ ಬ್ಯಾಟರ್&zwnj;ಗಳು ದಿಟ್ಟ ಹೋರಾಟ ತೋರಿ ದೊಡ್ಡ ಮೊತ್ತ ಕಲೆಹಾಕಿದರೆ, ಆತಿಥೇಯ ಆಸೀಸ್ ಮೇಲೆ ಒತ್ತಡ ಬೀಳುವ ಸಾಧ್ಯತೆಯಿದೆ. ಹೀಗಾಗಿ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/bangladesh-shock-australia-in-darwin-test-as-hasan-mahmud-claims-6-wickets-kvn/articleshow-ck9vu9g"/>
        </item>
        <item>
            <title><![CDATA[Arranged Marriage: ​‘ಎಕ್ಸೆಲ್ ಶೀಟ್’ನಲ್ಲೇ ಮದುವೆ ಮ್ಯಾಚ್ ಹುಡುಕಿದ್ದ Gen Z ಯುವಕ! ವರ್ಷದ ಬಳಿಕ ಕನೆಕ್ಟ್ ಆಯ್ತು ಲೈಫ್ 'ಫಾರ್ಮುಲಾ'!]]></title>
            <link>https://kannada.asianetnews.com/viral/gen-z-youth-looking-for-marriage-match-with-excel-sheet-finnalu-found-one-after-1-year-sns/articleshow-d9kxqqi</link>
            <guid isPermaLink="true">https://kannada.asianetnews.com/viral/gen-z-youth-looking-for-marriage-match-with-excel-sheet-finnalu-found-one-after-1-year-sns/articleshow-d9kxqqi</guid>
            <pubDate>Thu, 13 Aug 2026 15:51:15 +0530</pubDate>
            <description><![CDATA[ಹಿರಿಯರು ನೋಡಿ ನಿರ್ಧರಿಸಿದ ಮದುವೆ ಸಂಬಂಧಗಳನ್ನು ಸುಲಭವಾಗಿ ನಿರ್ವಹಿಸಲು ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ಒಂದು ಎಕ್ಸ್ ಎಲ್ ಶೀಟ್ ತಯಾರಿಸಿದ್ದರು. ಪೋಷಕರು ಬಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಉತ್ತರಿಸಲು, ಈಗಾಗಲೇ ನೀಡಿದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಶೀಟ್‌ಅನ್ನು ಬಳಕೆ ಮಾಡುತ್ತಿದ್ದ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx9xxszjqy80zntkw42tx08,imgname-marriage-excel-sheet--1786616149823.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಮಾಡಿಕೊಳ್ಳಬೇಕು ಎಂದರೆ, ಅತ್ತ ಏಳು ತಲೆಮಾರು, ಇತ್ತ ಏಳು ತಲೆಮಾರು ನೋಡಬೇಕು ಎಂದು ಹಿರಿಯರು ಹೇಳುತ್ತಾರೆ. ಈಗ ಅಷ್ಟು ಚರಿತ್ರೆಯನ್ನು ನೋಡುವ ತಾಳ್ಮೆ ಯಾರಿಗೂ ಇಲ್ಲ. ಆದರೆ ಹಿರಿಯರು ನಿರ್ಧರಿಸಿದ ವಿವಾಹ ಆಗಲಿ, ಇಬ್ಬರ ನಡುವಿನ ಅಭಿರುಚಿ, ಆಲೋಚನೆಗಳು ಒಂದಾಗಬೇಕು ಎಂದು ಇಂದಿನ ಯುವ ಜನತೆ ನೋಡುತ್ತಾರೆ. ಒಂದು ವಿಚಾರದಲ್ಲಿ ರಾಜಿಯದರೂ ಸಮಸ್ಯೆಗಳು ಎದುರಾಗುತ್ತದೆ ಎಂದು ಬಹಳ ಯೋಚನ ಮಾಡ್ತಾರೆ. ಇಂತಹದ್ದೇ ಯೋಚನೆಯಲ್ಲಿದ್ದ ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ತಮ್ಮ ಮದುವೆ ಸಂಬಂಧಗಳ ಕುರಿತ ಅಪ್ ಡೇಟ್ಸ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ಎಕ್ಸ್ ಎಲ್ ಶೀಟ್ ಮಾಡಿದ್ದ. 29 ವರ್ಷ ಈ ಯುವಕ ಒಂದು ವರ್ಷ ವಧುವಿನ ಹುಡುಕಾಟ ಮಾಡಿ, ಸುಮಾರು 55 ಮ್ಯಾಚ್&zwnj;ಗಳನ್ನು ನೋಡಿದ ಬಳಿಕ ಕೊನೆಗೂ ಮದುವೆಗೆ ಓಕೆ ಅಂದಿದ್ದಾನೆ. ಆತನ ವಿವಾಹ ಕಾರ್ಯಕ್ರಮವೂ 2027 ಜೂನ್&zwnj;ಗೆ ನಿಗದಿಯಾಗಿದೆಯಂತೆ.&lt;/p&gt;&lt;h2&gt;55 ಪ್ರಪೋಸಲ್ ಕೊನೆಗೂ ಸಿಕ್ಕಳು!&lt;/h2&gt;&lt;p&gt;ವೃತ್ತಿಯಲ್ಲಿ ಮ್ಯಾನೇಜರ್ ಆಗಿರುವ ವಿಕಾಸ್, ಜೊತೆ ಜೊತೆ ಕಂಟೆಂಟ್ ಕ್ರಿಯೇಟ್ ಮಾಡುವ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದರಂತೆ ತಮ್ಮ ಒಂದು ವರ್ಷದ ಹುಡುಕಾಟದಲ್ಲಿ 55 ಪ್ರಪೋಸಲ್&zwnj;ಗಳನ್ನು ಟ್ರ್ಯಾಕ್ ಮಾಡಿ ಕೊನೆಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಮದುವೆಗೂ ಮುನ್ನ ಒಬ್ಬರನ್ನು ಒಬ್ಬರು ಅರಿತುಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದಾರಂತೆ.&lt;/p&gt;&lt;h2&gt;ಏನೆಲ್ಲಾ ಮಾಹಿತಿ ಇತ್ತು?&lt;/h2&gt;&lt;p&gt;ಈ ಕುರಿತಂತೆ ತಮ್ಮ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿರುವ ವಿಕಾಸ್, 2025 ನವೆಂಬರ್ ನಿಂದ 2026 ಜುಲೈ ವರೆಗೂ ಸುಮಾರು 55ಕ್ಕೂ ಹೆಚ್ಚು ಮಹಿಳೆಯೊಂದಿಗೆ ಚಾಟ್ ಮಾಡಿದ್ದು, ಅವುಗಳನ್ನು ಟ್ರ್ಯಾಕ್ ಮಾಡಲು ಎಕ್ಸ್ ಎಲ್ ಶೀಟ್ ಮಾಡಿದ್ದೆ. ಇದರಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇನೆ, ಯಾರು ರಿಜೆಕ್ಟ್ ಮಾಡಿದ್ದಾರೆ, ಯಾರನ್ನು ಮಾತನಾಡಬೇಕಿದೆ, ಯಾರೊಂದಿಗೆ ಯಾವ ವಿಚಾರಗಳನ್ನು ಹಂಚಿಕೊಂಡಿದ್ದೇನೆ ಎಂಬ ವಿವರಗಳನ್ನು ದಾಖಲು ಮಾಡಿದ್ದೆ. ಇದರಲ್ಲಿ ಪೋಷಕರ ಪ್ರತಿಕ್ರಿಯೆ ಏನು? ಸಂಬಂಧ ಮುಚ್ಚಿದೆಯೇ, ಉತ್ತಮ ಸಂಭಾಷಣೆಗಳು ಯಾವುದಿದೆ, ಉತ್ತಮ ಸ್ಥಿತಿಗಳು ಯಾವುದು ಎಂಬ ವಿವರಗಳನ್ನು ಈ ಶೀಟ್&zwnj;ನಲ್ಲಿ ಪಾಯಿಂಟ್ಸ್ ಮಾಡಿ ಸೇವ್ ಮಾಡುತ್ತಿದ್ದರಂತೆ.&lt;/p&gt;&lt;h2&gt;ವಿಕಾಸ್ ಹೇಳಿದ್ದೇನು?&lt;/h2&gt;&lt;p&gt;ಇನ್ನು, ಹೊಸ ಪೋಸ್ಟ್ ವಿಕಾಸ್, ನಾನು ನನ್ನವಳನ್ನು ಹುಡುಕಾಟ ಮಾಡಿದ್ದು, ಜೂನ್ 2027ರಲ್ಲಿ ಮದುವೆ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ. ವಿಕಾಸ್ ಅವರ ಈ ಪ್ರಯಾಣವನ್ನು ನೋಡಿದ ನೆಟ್ಟಿಗರು, ಕೊನೆಗೂ ಒಬ್ಬರನ್ನು ಕಂಡುಕೊಂಡಿದ್ದೀರಿ ಶುಭಾಶಯಗಳು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ತಮ್ಮದೇ ಪ್ರತಿಕ್ರಿಯೆ ನೀಡಿದ್ದು, ಎಕ್ಸ್ ಎಲ್ ಶೀಟ್ ಸರಿಯಾದ ಬಳಕೆ ಇದಾಗಿದೆ. ಇಡೀ ವಿವಾಹ ಸಮುದಾಯದ ಪರವಾಗಿ ನಿಮಗೆ ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;View this post on Instagram&lt;p&gt;A post shared by Vikas (@thevikkchapter)&lt;/p&gt;&lt;p&gt;&lt;/p&gt;&lt;p&gt;ಈ ಕುರಿತಂತೆ ಮನಿಕಂಟ್ರೋಲ್ ಜೊತೆ ಮಾತನಾಡರುವ ವಿಕಾಸ್, ಇಬ್ಬರೂ ಹರಿಯಾಣ ಮೂಲದವರು, ಇಬ್ಬರು ಕೆಲಸ ಮಾಡುತ್ತಿದ್ದೇವೆ. ಮೊದಲ ಬಾರಿಗೆ ಆಕೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ನನಗೆ ಬರುತ್ತಿರುವ ಸಂಬಳದಲ್ಲಿ ಅರ್ಧ ಮೊತ್ತವನ್ನು ಮಾತ್ರ ಹೇಳಿದ್ದೆ. ಇಬ್ಬರ ನಡುವಿನ ಸಾಮಾನ್ಯ ಸಂಗತಿಗಳಿಗೆ ಒಟ್ಟಾಗಲು ಕಾರಣವಾಯ್ತು. ಏಕೆಂದರೆ ನಾನು ಮಾತನಾಡಿದ ಹಲವು ಯುವತಿಯರಿಗೆ ತಮ್ಮಗೆ ಸಂಗತಿಯಾಗುವ ವ್ಯಕ್ತಿ ಎಷ್ಟು ಸಂಪಾದನೆ ಮಾಡಬೇಕು ಎಂಬ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು. ನಾವು ಇಬ್ಬರು ಕೆಲಸ ಮಾಡುತ್ತಿರುವ ಕಾರಣ ಉತ್ತಮ ಜೀವನ ನಡೆಸಬಹುದು. ಆದರೆ ಕೆಲ ಮಾತುಕತೆಗಳ ಬಳಿಕ ಆಕೆಗೆ ನಿಜವಾದ ಸಂಬಳ ಎಷ್ಟು ಅಂತ ಹೇಳ್ದೆ, ಆಗ ಇಬ್ಬರ ಮುಖದಲ್ಲಿ ನಗು ಇತ್ತು ಎಂದು ವಿವರಿಸಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Sumanth SN</dc:creator>
            <atom:link href="https://kannada.asianetnews.com/viral/gen-z-youth-looking-for-marriage-match-with-excel-sheet-finnalu-found-one-after-1-year-sns/articleshow-d9kxqqi"/>
        </item>
        <item>
            <title><![CDATA[ಕಾಲಿನಿಂದಲೇ ಬರೆಯುತ್ತೇನೆ, ಓದನ್ನು ಬಿಡಲ್ಲ; 13 ವರ್ಷದ ಲಕ್ಷ್ಮಿಯ ಛಲಕ್ಕೆ ಭಾರೀ ಮೆಚ್ಚುಗೆ]]></title>
            <link>https://kannada.asianetnews.com/viral/13-year-old-lakshmi-writes-with-her-feet-refuses-to-let-disability-stop-her-suh/articleshow-q7fmvcs</link>
            <guid isPermaLink="true">https://kannada.asianetnews.com/viral/13-year-old-lakshmi-writes-with-her-feet-refuses-to-let-disability-stop-her-suh/articleshow-q7fmvcs</guid>
            <pubDate>Thu, 13 Aug 2026 15:20:07 +0530</pubDate>
            <description><![CDATA[ದೈಹಿಕ ಸವಾಲುಗಳು ಎದುರಾದರೂ ಶಿಕ್ಷಣದ ಮೇಲಿನ ಆಸೆಯನ್ನು ಬಿಡದೆ, ಕಾಲಿನಿಂದಲೇ ಪುಸ್ತಕ ಹಿಡಿದು ಬರೆಯುತ್ತಿರುವ 13 ವರ್ಷದ ಲಕ್ಷ್ಮಿಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಗಮನ ಸೆಳೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx8eqmd4frmntv9589j1w8p,imgname-13-year-old-lakshmi-writes-with-her-feet-refuses-to-let-disability-stop-her-1786614603404.jpg" type="image/jpeg" height="390" width="690"/>
            <content:encoded><![CDATA[&lt;p&gt;ದೈಹಿಕ ಸವಾಲುಗಳು ಎದುರಾದರೂ ಶಿಕ್ಷಣದ ಮೇಲಿನ ಆಸೆಯನ್ನು ಬಿಡದೆ, ಕಾಲಿನಿಂದಲೇ ಪುಸ್ತಕ ಹಿಡಿದು ಬರೆಯುತ್ತಿರುವ 13 ವರ್ಷದ ಲಕ್ಷ್ಮಿಯ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಗಮನ ಸೆಳೆಯುತ್ತಿದೆ. ಬಿಹಾರದ ಕತಿಹಾರ್&zwnj;ನ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಲಕ್ಷ್ಮಿ, ತನ್ನ ದೈಹಿಕ ಸವಾಲುಗಳ ನಡುವೆಯೂ ಶಾಲೆಗೆ ತೆರಳಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ. ಕೈಗಳ ಬದಲಿಗೆ ಕಾಲುಗಳನ್ನು ಬಳಸಿ ಶಾಲಾ ಬ್ಯಾಗ್ ತೆರೆಯುವುದು, ಪುಸ್ತಕ-ಪೆನ್ ತೆಗೆದುಕೊಳ್ಳುವುದು, ಪುಟಗಳನ್ನು ತಿರುಗಿಸುವುದು ಮತ್ತು ಬರೆಯುವ ದೃಶ್ಯವಿರುವ ವಿಡಿಯೋವೊಂದು ವೈರಲ್ ಆಗಿದೆ.&lt;/p&gt;&lt;h2&gt;ಕಾಲುಗಳೇ ಆಕೆಯ ಬರವಣಿಗೆಯ ಶಕ್ತಿ&lt;/h2&gt;&lt;p&gt;ವಿಡಿಯೋದಲ್ಲಿ ಲಕ್ಷ್ಮಿ ನೆಲದ ಮೇಲೆ ಕುಳಿತು ತನ್ನ ಶಾಲಾ ಬ್ಯಾಗ್ ಅನ್ನು ಕಾಲಿನಿಂದಲೇ ತೆರೆಯುತ್ತಾರೆ. ಬಳಿಕ ನೋಟ್ಬುಕ್ ಮತ್ತು ಪೆನ್ ತೆಗೆದುಕೊಂಡು, ಪುಸ್ತಕದ ಪುಟಗಳನ್ನು ಕಾಲಿನ ಸಹಾಯದಿಂದ ತಿರುಗಿಸಿ ಬರೆಯಲು ಆರಂಭಿಸುತ್ತಾರೆ.&lt;/p&gt;&lt;p&gt;ಸಾಮಾನ್ಯವಾಗಿ ಮಕ್ಕಳು ಸುಲಭವಾಗಿ ಮಾಡುವ ಈ ಕೆಲಸಗಳೇ ಲಕ್ಷ್ಮಿಗೆ ದೊಡ್ಡ ಸವಾಲಾಗಿದ್ದರೂ, ಆಕೆ ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಓದಿನತ್ತ ಗಮನಹರಿಸುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.&lt;/p&gt;&lt;h2&gt;ಓದಿನ ಮೇಲಿನ ಆಸೆಗೆ ಸವಾಲುಗಳು ಅಡ್ಡಿಯಾಗಲಿಲ್ಲ&lt;/h2&gt;&lt;p&gt;ದೈಹಿಕ ಸವಾಲುಗಳಿದ್ದರೂ ಲಕ್ಷ್ಮಿ ಶಾಲೆಗೆ ಹಾಜರಾಗುವುದನ್ನು ಮುಂದುವರಿಸಿದ್ದಾರೆ. ತನ್ನ ದೈನಂದಿನ ಕೆಲಸಗಳಿಗೆ ಹೊಂದಿಕೊಳ್ಳುವ ಮೂಲಕ ಶಿಕ್ಷಣದಿಂದ ದೂರವಾಗದೆ, ಕಲಿಯುವ ಹಂಬಲವನ್ನು ಮುಂದುವರಿಸುತ್ತಿದ್ದಾರೆ.&lt;/p&gt;&lt;p&gt;ಆಕೆಯ ಈ ಛಲವು ದೈಹಿಕ ಮಿತಿಗಳು ಮಕ್ಕಳ ಕನಸುಗಳಿಗೆ ಮಿತಿ ಹಾಕಬೇಕೆಂದಿಲ್ಲ ಎಂಬುದನ್ನು ತೋರಿಸುತ್ತದೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ&lt;/h2&gt;&lt;p&gt;ಲಕ್ಷ್ಮಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಹಲವರು ಬಾಲಕಿಯ ಆತ್ಮವಿಶ್ವಾಸ ಮತ್ತು ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಆಕೆಯ ಭವಿಷ್ಯಕ್ಕಾಗಿ ಶುಭ ಹಾರೈಸಿರುವ ನೆಟ್ಟಿಗರು, ಇಂತಹ ಛಲ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.&lt;/p&gt;&lt;h2&gt;ಲಕ್ಷ್ಮಿಯ ಕಥೆ ಹೇಳುವ ಸಂದೇಶ&lt;/h2&gt;&lt;p&gt;ಕಷ್ಟಗಳು ಎದುರಾದಾಗ ಹಿಂದೆ ಸರಿಯುವುದಕ್ಕಿಂತ, ಪರಿಸ್ಥಿತಿಗೆ ತಕ್ಕಂತೆ ದಾರಿ ಕಂಡುಕೊಂಡು ಮುಂದೆ ಸಾಗುವುದು ಎಷ್ಟು ಮುಖ್ಯ ಎಂಬುದನ್ನು ಲಕ್ಷ್ಮಿ ತೋರಿಸಿಕೊಟ್ಟಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/viral/13-year-old-lakshmi-writes-with-her-feet-refuses-to-let-disability-stop-her-suh/articleshow-q7fmvcs"/>
        </item>
        <item>
            <title><![CDATA[ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರರಣಕ್ಕೆ ಟ್ವಿಸ್ಟ್, ನನಗೆ ಭಾರತದ ಕಾನೂನು ಅನ್ವಯವಾಗಲ್ಲ ಆಪ್ತ ಗೆಳೆಯನ ವಾದ!]]></title>
            <link>https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h</link>
            <guid isPermaLink="true">https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h</guid>
            <pubDate>Thu, 13 Aug 2026 15:20:01 +0530</pubDate>
            <description><![CDATA[ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರಿಗೆ ಆಪ್ತ ಗೆಳೆಯನೇ ಸಂಕಷ್ಟ ತಂದೊಡ್ಡಿದ್ದಾನೆ. ತಾನೇ ಚಿನ್ನ ನೀಡಿದ್ದಾಗಿ ಒಪ್ಪಿಕೊಂಡಿರುವ ಆತ, ಅದನ್ನು ದುಬೈನಲ್ಲಿ ನೀಡಿರುವುದರಿಂದ ಭಾರತದ ಕಾನೂನು ತನಗೆ ಅನ್ವಯವಾಗುವುದಿಲ್ಲ ಎಂದು ವಾದಿಸಿ, ಪ್ರಕರಣದ ಸಂಪೂರ್ಣ ಹೊಣೆಯನ್ನು ನಟಿಯ ಮೇಲೆ ಹಾಕಲು ಯತ್ನಿಸಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k0bj6e2fq0m67gjjyjxjgpqx,imgname-ranya-rao-1752734840911.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡಿ ಪ್ರಸ್ತುತ ವಿಚಾರಣೆಯಲ್ಲಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಕರಣದಲ್ಲಿ ದಿನಕ್ಕೊಂದು ಹೊಸ ತಿರುವುಗಳು ಸಿಗುತ್ತಿದ್ದು, ಇದೀಗ ಮತ್ತೊಂದು ಸ್ಫೋಟಕ ಸತ್ಯ ಹೊರಬಿದ್ದಿದೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನೀಡಿದ ಶೋಕಾಸ್ ನೋಟಿಸ್&zwnj;ಗೆ ಬೆದರಿರುವ ಸ್ಮಗ್ಲರ್&zwnj;ಗಳು, ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ನೀಡುವ ನೆಪದಲ್ಲಿ ಹೊಸ ಅವಾಂತರ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ, ನಟಿ ರನ್ಯಾ ರಾವ್ ಅವರ ಆಪ್ತ ಗೆಳೆಯನೇ ಆಕೆಗೆ ಕೊಳ್ಳಿ ಇಡುವ ಕೆಲಸಕ್ಕೆ ಮುಂದಾಗಿದ್ದು ಬಿಗ್ ಶಾಕ್ ನೀಡಿದ್ದಾನೆ.&lt;/p&gt;&lt;h2&gt;ಕೋರ್ಟ್ ಮೆಟ್ಟಿಲೇರಿದ ಗೆಳೆಯನ ವಿಚಿತ್ರ ವಾದ!&lt;/h2&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾ ರಾವ್ ಅವರ ಆಪ್ತ ಗೆಳೆಯ ನ್ಯಾಯಾಲಯಕ್ಕೆ ಸುದೀರ್ಘ ಮನವಿಯೊಂದನ್ನು ಸಲ್ಲಿಸಿದ್ದು, ನಟಿಗೆ ಚಿನ್ನದ ಬಿಸ್ಕತ್ತುಗಳನ್ನು ತಾನೇ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಭಾರತದ ಕಾನೂನಿನಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರ ಹೆಣೆದಿರುವ ಆತ, ಕೋರ್ಟ್ ಮುಂದೆ ವಿಚಿತ್ರ ವಾದ ಮಂಡಿಸಿದ್ದಾನೆ. ನಾನು ರನ್ಯಾ ರಾವ್ ಅವರಿಗೆ ಚಿನ್ನದ ಬಿಸ್ಕತ್ತುಗಳನ್ನು ನೀಡಿದ್ದು ನಿಜ. ಆದರೆ, ನಾನು ಆ ಚಿನ್ನವನ್ನು ನೀಡಿದ್ದು ದುಬೈನಲ್ಲಿ, ಭಾರತದಲ್ಲಲ್ಲ. ನಾನು ದುಬೈನಲ್ಲಿ ಚಿನ್ನ ನೀಡಿರುವುದರಿಂದ ನನಗೆ ಅಲ್ಲಿನ ಕಾನೂನು ಮಾತ್ರ ಅನ್ವಯವಾಗಬೇಕೇ ಹೊರತು, ಭಾರತದ ಕಾನೂನಲ್ಲ. ನಾನು ಭಾರತದ ಗಡಿಯೊಳಗೆ ಯಾವುದೇ ರೀತಿಯ ಅಕ್ರಮ ಅಥವಾ ಹಣಕಾಸಿನ ಅವ್ಯವಹಾರಗಳನ್ನು ಮಾಡಿಲ್ಲ, ಹಾಗೂ ಚಿನ್ನವನ್ನು ಮಾರಾಟ ಮಾಡುವ ಯತ್ನವನ್ನೂ ನಡೆಸಿಲ್ಲ. ನಾನು ದುಬೈನಲ್ಲಿ ಕೊಟ್ಟ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ (Smuggle) ಮಾಡಿದ್ದು ಸ್ವತಃ ರನ್ಯಾ ರಾವ್. ಹೀಗಾಗಿ ಈ ಅಪರಾಧಕ್ಕೆ ಭಾರತದ ಕಾನೂನಿನಡಿ ಆಕೆ ಮಾತ್ರ ಹೊಣೆಯಾಗಬೇಕೇ ಹೊರತು ನಾನು ಅಲ್ಲ ಎಂದಿದ್ದಾನೆ.&lt;/p&gt;&lt;h2&gt;ಪ್ರಕರಣದಿಂದ ಮುಕ್ತಿ ಕೋರಿದ ಆಪ್ತ&lt;/h2&gt;&lt;p&gt;ತಾನು ಕೇವಲ ದುಬೈನಲ್ಲಿ ಚಿನ್ನ ಹಸ್ತಾಂತರಿಸಿದ್ದೇನೆ ಮತ್ತು ಕಳ್ಳಸಾಗಾಣಿಕೆಯಲ್ಲಿ ನೇರ ಭಾಗಿಯಾಗಿಲ್ಲ ಎಂದು ಹೇಳಿಕೊಂಡಿರುವ ಈತ, ತನ್ನನ್ನು ಈ ಪ್ರಕರಣದಿಂದ ತಕ್ಷಣವೇ ಮುಕ್ತಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ. ಈ ಮೂಲಕ ತನಿಖೆಯಿಂದ ತಾನು ಪಾರಾಗಲು ಯತ್ನಿಸುತ್ತಲೇ, ತನ್ನ ಆಪ್ತ ಗೆಳತಿ ರನ್ಯಾ ರಾವ್ ಳನ್ನು ಸಂಪೂರ್ಣವಾಗಿ ಸಿಲುಕಿಸುವ ಕೆಲಸ ಮಾಡಿದ್ದಾನೆ.&lt;/p&gt;&lt;p&gt;ವಿದೇಶದಿಂದ ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ತಂದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಪ್ರಸ್ತುತ ಜೈಲಿನಲ್ಲಿದ್ದಾಳೆ. ಈಗ ಆಕೆಯ ಸ್ವಂತ ಗೆಳೆಯನೇ ನೀಡಿರುವ ಈ ಸಾಕ್ಷ್ಯಾಧಾರಗಳು ಮತ್ತು ಹೇಳಿಕೆಗಳು ನಟಿಗೆ ತೀವ್ರ ಮುಜುಗರ ಹಾಗೂ ಕಾನೂನು ಸಂಕಷ್ಟವನ್ನು ತಂದೊಡ್ಡಿದ್ದು, ಪ್ರಕರಣ ಎಲ್ಲಿಗೆ ಹೋಗಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.&lt;/p&gt;&lt;h2&gt;ಪ್ರಕರಣದ ಹಿನ್ನೆಲೆ:&lt;/h2&gt;&lt;p&gt;2025ರ ಮಾ.3ರಂದು ವಿದೇಶದಿಂದ ₹12.56 ಕೋಟಿ ಮೌಲ್ಯದ 14 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡುವಾಗ ನಟಿ ರನ್ಯಾ ರಾವ್&zwnj; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್&zwnj;ಐ) ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬಳಿಕ ಆಕೆಯ ಮನೆ ಮೇಲೆ ದಾಳಿ ನಡೆಸಿ ಶೋಧಿಸಿದಾಗ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ₹2.67 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿತ್ತು. ಬಳಿಕ, ಈಕೆಯ ಸಹಚರರಾದ ಸಾಹಿಲ್&zwnj; ಸಕಾರಿಯಾ ಜೈನ್&zwnj;, ಭರತ್&zwnj; ಕುಮಾರ್&zwnj; ಜೈನ್&zwnj; ಮತ್ತು ತರುಣ್&zwnj; ಕೊಂಡರಾಜು ಅವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಡಿಆರ್&zwnj;ಐ ಮತ್ತು ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇ.ಡಿ.(ಜಾರಿ ನಿರ್ದೇಶನಾಲಯ) ಪ್ರಕರಣದ ತನಿಖೆ ಆರಂಭಿಸಿತ್ತು.&lt;/p&gt;&lt;p&gt;ಆರೋಪಿಗಳು ಒಂದು ವರ್ಷದ ಅವಧಿಯಲ್ಲಿ ಸುಮಾರು ₹102.55 ಕೋಟಿ ಮೌಲ್ಯದ ಬರೋಬ್ಬರಿ 127 ಕೆ.ಜಿ. ಕಳ್ಳಸಾಗಣೆ ಮಾಡಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳ ವಿರುದ್ಧ ಪಿಎಂಎಲ್&zwnj;ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯವು ವಿಚಾರಣೆ ಆರಂಭಿಸಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/actress-ranya-rao-gold-smuggling-case-shocking-twist-as-associate-appeals-in-court-indian-law-doesnot-apply-to-me-gdp/articleshow-wrt4t6h"/>
        </item>
        <item>
            <title><![CDATA[ಈ ರಾಶಿಯವರನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ;  ಮನಸ್ಥಿತಿ, ನಡವಳಿಕೆ ವಿಭಿನ್ನ]]></title>
            <link>https://kannada.asianetnews.com/gallery/festivals/kannada-astrology-most-mysterious-zodiac-signs-pisces-scorpio-gemini-aquarius-mrq-q2eocg3</link>
            <guid isPermaLink="true">https://kannada.asianetnews.com/gallery/festivals/kannada-astrology-most-mysterious-zodiac-signs-pisces-scorpio-gemini-aquarius-mrq-q2eocg3</guid>
            <pubDate>Thu, 13 Aug 2026 15:15:16 +0530</pubDate>
            <description><![CDATA[ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರ ಮನಸ್ಥಿತಿ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ರಾಹು-ಕೇತು, ಚಂದ್ರನಂತಹ ಗ್ರಹಗಳ ಪ್ರಭಾವದಿಂದಾಗಿ, ತಮ್ಮ ನಿಜವಾದ ಯೋಚನೆಗಳನ್ನು ಮುಖವಾಡದ ಹಿಂದೆ ಬಚ್ಚಿಟ್ಟುಕೊಳ್ಳುವ ನಿಗೂಢ ರಾಶಿಯವರು ಯಾರು ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kzx7fqgdepx3mscmh8nhrqhd,imgname-zodiac-signs-1786613587469.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರ ಮನಸ್ಥಿತಿ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ರಾಹು-ಕೇತು, ಚಂದ್ರನಂತಹ ಗ್ರಹಗಳ ಪ್ರಭಾವದಿಂದಾಗಿ, ತಮ್ಮ ನಿಜವಾದ ಯೋಚನೆಗಳನ್ನು ಮುಖವಾಡದ ಹಿಂದೆ ಬಚ್ಚಿಟ್ಟುಕೊಳ್ಳುವ ನಿಗೂಢ ರಾಶಿಯವರು ಯಾರು ಗೊತ್ತಾ?&lt;/p&gt;&lt;img&gt;&lt;p&gt;ಮನುಷ್ಯರ ಸ್ವಭಾವ ಮತ್ತು ಅವರ ಭಾವನೆಗಳನ್ನು ಅರಿಯುವಲ್ಲಿ ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತೆ. ಕೆಲವು ರಾಶಿಯವರ ಮನಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಕೆಲವು ರಾಶಿಯವರ ಆಲೋಚನೆ, ನಿರ್ಧಾರ ಮತ್ತು ನಡವಳಿಕೆಗಳು ಇತರರಿಗೆ ಯಾವಾಗಲೂ ಒಗಟಾಗಿ ಉಳಿಯುತ್ತವೆ. ಇವರು ಏನು ಯೋಚಿಸುತ್ತಾರೆ, ಯಾವಾಗ ಏನು ಮಾಡುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ&lt;/p&gt;&lt;img&gt;&lt;p&gt;ಮೀನ ರಾಶಿಯವರು ನಿಜವಾದ ಜಗತ್ತು ಮತ್ತು ಕಾಲ್ಪನಿಕ ಜಗತ್ತಿನ ನಡುವೆ ಯಾವಾಗಲೂ ಓಲಾಡುತ್ತಿರುತ್ತಾರೆ. ಇವರು ಇತರರ ದುಃಖವನ್ನು ಬೇಗನೆ ಗ್ರಹಿಸುವುದರಿಂದ, ಇವರ ಮನಸ್ಥಿತಿ ಥಟ್ಟನೆ ಬದಲಾಗುತ್ತದೆ. ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ಇವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಮೊದಲೇ ಊಹಿಸುವುದು ತುಂಬಾ ಕಷ್ಟ.&lt;/p&gt;&lt;img&gt;&lt;p&gt;ವೃಶ್ಚಿಕ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ಹೊರ ಜಗತ್ತಿಗೆ ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ಇವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆಪ್ತ ಸ್ನೇಹಿತರಿಂದಲೂ ಊಹಿಸಲು ಸಾಧ್ಯವಿಲ್ಲ. ಹೊರಗಿನಿಂದ ಶಾಂತವಾಗಿ ಕಂಡರೂ, ಇವರ ಒಳಗೆ ತೀವ್ರವಾದ ಭಾವನೆಗಳು ಮತ್ತು ತೀಕ್ಷ್ಣವಾದ ಗ್ರಹಣಾ ಶಕ್ತಿ ಇರುತ್ತದೆ.&lt;/p&gt;&lt;img&gt;&lt;p&gt;ಮಿಥುನ ರಾಶಿಯ ಅಧಿಪತಿ ಬುಧ ಆಗಿರುವುದರಿಂದ, ಇವರ ಆಲೋಚನಾ ವೇಗ ಇತರರಿಗಿಂತ ಹೆಚ್ಚಾಗಿರುತ್ತದೆ. ಇವರು ಒಂದೇ ಸಮಯದಲ್ಲಿ ಎರಡು ವಿಭಿನ್ನ ಅಭಿಪ್ರಾಯಗಳನ್ನು ಬೆಂಬಲಿಸಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಈ ದ್ವಂದ್ವ ಮನಸ್ಥಿತಿಯು ಇತರರಿಗೆ ಆಗಾಗ ಗೊಂದಲವನ್ನು ಉಂಟುಮಾಡುತ್ತದೆ.&lt;/p&gt;&lt;img&gt;&lt;p&gt;ಕುಂಭ ರಾಶಿಯವರು ಸಮಾಜದೊಂದಿಗೆ ಬೆರೆಯುವಂತೆ ಕಂಡರೂ, ಮಾನಸಿಕವಾಗಿ ಯಾವಾಗಲೂ ಅಂತರ ಕಾಯ್ದುಕೊಳ್ಳುತ್ತಾರೆ. ಇವರು ಸಾಂಪ್ರದಾಯಿಕ ಯೋಚನೆಗಳ ಬದಲು, ಹೊಸ ಮತ್ತು ವಿಚಿತ್ರ ಕೋನಗಳಲ್ಲಿ ಯೋಚಿಸುತ್ತಾರೆ. ಒಂದು ಕ್ಷಣದಲ್ಲಿ ಅತಿಯಾದ ಪ್ರೀತಿ ತೋರಿಸುವ ಇವರು, ಮರುಕ್ಷಣವೇ ಸಂಪೂರ್ಣ ಅಪರಿಚಿತರಂತೆ ವರ್ತಿಸಿ ಅಚ್ಚರಿ ಮೂಡಿಸುತ್ತಾರೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/kannada-astrology-most-mysterious-zodiac-signs-pisces-scorpio-gemini-aquarius-mrq-q2eocg3"/>
        </item>
        <item>
            <title><![CDATA[ಗಂಡ ಸತ್ತು 42 ದಿನಗಳ ಬಳಿಕ 'ನಿಮ್ಮ ಪತಿ ಗುಣಮುಖರಾಗಿದ್ದಾರೆ' ಎಂದು ಮೆಸೇಜ್ ಕಳಿಸಿದ ಆರೋಗ್ಯ ಇಲಾಖೆ! ಅಂತ್ಯಕ್ರಿಯೆ ಮಾಡಿದ್ದು ಯಾರನ್ನ?]]></title>
            <link>https://kannada.asianetnews.com/viral/chhattisgarh-dead-constable-declared-alive-ayushman-bharat-42-days-shocking-sms/articleshow-t2gtfwy</link>
            <guid isPermaLink="true">https://kannada.asianetnews.com/viral/chhattisgarh-dead-constable-declared-alive-ayushman-bharat-42-days-shocking-sms/articleshow-t2gtfwy</guid>
            <pubDate>Thu, 13 Aug 2026 15:04:28 +0530</pubDate>
            <description><![CDATA[ಸರ್ಕಾರದ ಇಲಾಖೆಗಳು ಮಾಡುವ ಎಡವಟ್ಟುಗಳು ಅಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಎಷ್ಟರಮಟ್ಟಿಗೆ ನಿರ್ಲಕ್ಯದಿಂದ ಕೆಲಸ ಮಾಡುಯತ್ತಾರೆ ಎಂಬುದಕ್ಕೆ ಉದಾಹರಣೆ ಆಗಿರುತ್ತವೆ. ಇಲ್ಲೊಬ್ಬ ಮಹಿಳೆಯ ಗಂಡ ಸತ್ತು 42 ದಿನಗಳಾದ ಬಳಿಕ ನಿಮ್ಮ ಗಂಡ ಗುಣಮುಖರಾಗಿದ್ದು, ಮನೆಗೆ ವಾಪಸ್ ಬರುತ್ತಿದ್ದಾರೆ' ಎಂದು ಸಂದೇಶವನ್ನು ಕಳಿಸಿದೆ. ಆದರೆ, ಅಂತ್ಯಕ್ರಿಯೆ ಮಾಡಿದ್ದು ಯಾರನ್ನ? ತಿಳಿಯಿರಿ]]></description>
            <media:content url="https://static.asianetnews.com/images/w-1280,h-720,format-jpg,imgid-01kzx7hx49jmptmfm32hj0dgqn,imgname-ayushman-bharat-scheme-1786613658761.jpg" type="image/jpeg" height="390" width="690"/>
            <content:encoded><![CDATA[&lt;p&gt;ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ತಾಂತ್ರಿಕ ಎಡವಟ್ಟುಗಳಿಗೆ ಕೊನೆಯೇ ಇಲ್ಲವೇನೋ ಎಂಬಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪೊಲೀಸ್ ಕಾನ್ಸ್&zwnj;ಟೇಬಲ್&zwnj; ಒಬ್ಬರು ಜೂನ್ ತಿಂಗಳಿನಲ್ಲೇ ಮರಣ ಹೊಂದಿದ್ದರೂ, ಆಯುಷ್ಮಾನ್ ಭಾರತ್ ಯೋಜನೆಯ ದಾಖಲೆಗಳಲ್ಲಿ ಅವರು ಸತತ 42 ದಿನಗಳ ಕಾಲ 'ಬದುಕಿದ್ದಾರೆ' ಎಂದು ನಮೂದಾಗಿತ್ತು! ಅಷ್ಟೇ ಅಲ್ಲದೆ, ಗಂಡ ಸತ್ತು ಒಂದೂವರೆ ತಿಂಗಳ ಬಳಿಕ ಅವರ ಪತಿಗೆ 'ನಿಮ್ಮ ಪತಿ ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ಮರಳುತ್ತಿದ್ದಾರೆ' ಎಂಬ ತಾಂತ್ರಿಕ ಆಟೋಮೇಟೆಡ್ ಮೆಸೇಜ್ ಕಳುಹಿಸಿ ಸರ್ಕಾರಿ ವ್ಯವಸ್ಥೆ ದೊಡ್ಡ ಮುಖಭಂಗ ಅನುಭವಿಸಿದೆ.&lt;/p&gt;&lt;h2&gt;&lt;strong&gt;ಏನಿದು ಆರೋಗ್ಯ ಇಲಾಖೆ ಎಡವಟ್ಟು?&lt;/strong&gt;&lt;/h2&gt;&lt;p&gt;ಈ ಘಟನೆ ಛತ್ತೀಸ್&zwnj;ಗಢದ ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ. ಛತ್ತೀಸ್&zwnj;ಗಢದ ಸಶಸ್ತ್ರ ಪಡೆ ಪಡೆಗಳಲ್ಲಿ ಕಾನ್ಸ್&zwnj;ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ದೇವನಾರಾಯಣ್ ರಾಮ್ ಎಂಬುವರು ತೀವ್ರ ಅನಾರೋಗ್ಯದ ಕಾರಣ ಜೂನ್ 26 ರಂದು ಅಂಬಿಕಾಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 30 ರಂದೇ ಅವರು ಕೊನೆಯುಸಿರೆಳೆದರು. ಆಸ್ಪತ್ರೆಯ ಸಿಬ್ಬಂದಿ ಅಧಿಕೃತ ಮರಣ ಪ್ರಮಾಣಪತ್ರವನ್ನೂ ನೀಡಿದ್ದರು. ಕುಟುಂಬಸ್ಥರು ದುಃಖದಲ್ಲೇ ಅವರ ಅಂತ್ಯಕ್ರಿಯೆಯನ್ನೂ ಪೂರ್ಣಗೊಳಿಸಿದ್ದರು.&lt;/p&gt;&lt;p&gt;ಆದರೆ ಆಯುಷ್ಮಾನ್ ಭಾರತ್ ಯೋಜನೆಯ ಸಾಫ್ಟ್&zwnj;ವೇರ್&zwnj;ನಲ್ಲಿ ದೇವನಾರಾಯಣ್ ಅವರ ಚಿಕಿತ್ಸೆ ಮುಂದುವರಿದಂತೆ ದಾಖಲಾಗಿತ್ತು. ಮೃತರ ಪತ್ನಿ ಸೀಮಾ ಕುಜೂರ್&zwnj; ಅವರು ಸ್ವತಃ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಆಗಸ್ಟ್ ತಿಂಗಳಿನಲ್ಲಿ ಅವರ ಮೊಬೈಲ್&zwnj;ಗೆ 'ಆಯುಷ್ಮಾನ್ ಸಾರಥಿ' ಸಿಸ್ಟಮ್&zwnj;ನಿಂದ ಒಂದು ಸ್ವಯಂಚಾಲಿತ ಎಸ್&zwnj;ಎಂಎಸ್ (Automated SMS) ಬಂದಿದೆ. 'ಪ್ರಿಯ ದೇವನಾರಾಯಣ್, ನೀವು ಸಂಪೂರ್ಣವಾಗಿ ಗುಣಮುಖರಾಗಿದ್ದು, ಮನೆಗೆ ಮರಳುತ್ತಿದ್ದೀರಿ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ...' ಎಂಬ ಸಂದೇಶವನ್ನು ನೋಡಿ ಪತ್ನಿ ಸಂಪೂರ್ಣ ಶಾಕ್ ಆಗಿದ್ದಾರೆ.&lt;/p&gt;&lt;h2&gt;&lt;strong&gt;ದೊಡ್ಡ ಮಟ್ಟದ ತನಿಖೆಗೆ ಪತ್ನಿ ಆಗ್ರಹ:&lt;/strong&gt;&lt;/h2&gt;&lt;p&gt;ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ ಸೀಮಾ ಕುಜೂರ್, 'ವ್ಯಕ್ತಿಯೊಬ್ಬರು ಮೃತಪಟ್ಟು 42 ದಿನಗಳಾದರೂ ಆರೋಗ್ಯ ಇಲಾಖೆಯ ಆಯುಷ್ಮಾನ್ ವ್ಯವಸ್ಥೆಗೆ ಮಾಹಿತಿ ಇಲ್ಲದಿರುವುದು ಹೇಗೆ ಸಾಧ್ಯ? ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೇ ಈ ಸ್ಥಿತಿ ಎದುರಾದರೆ, ಇನ್ನು ಸಾಮಾನ್ಯ ಹಾಗೂ ಬುಡಕಟ್ಟು ಜನರಿಗೆ ಏನೆಲ್ಲಾ ಮೋಸ ಆಗುತ್ತಿರಬೇಡ? ಇದರ ಹಿಂದೆ ದೊಡ್ಡ ಮಟ್ಟದ ಅಕ್ರಮ ಅಥವಾ ದಂಧೆ ಅಡಗಿದೆಯೇ ಎಂಬುದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು' ಎಂದು ಆಗ್ರಹಿಸಿದ್ದಾರೆ.&lt;/p&gt;&lt;h2&gt;&lt;strong&gt;ಆಸ್ಪತ್ರೆ ಆಡಳಿತ ಮಂಡಳಿಯ ಸ್ಪಷ್ಟನೆ:&lt;/strong&gt;&lt;/h2&gt;&lt;p&gt;ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಂಬಿಕಾಪುರ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಆರ್.ಸಿ. ಆರ್ಯ, 'ಮೃತರ ಚಿಕಿತ್ಸೆಗಾಗಿ ಕೇವಲ ₹16,500 ಮಾತ್ರ ವಿನಿಯೋಗಿಸಲಾಗಿದೆಯೇ ಹೊರತು ಅವರ ಮರಣದ ನಂತರ ಯಾವುದೇ ಹಣ ದುರ್ಬಳಕೆಯಾಗಿಲ್ಲ. ಈ ಎಸ್&zwnj;ಎಂಎಸ್ ಸ್ವಯಂಚಾಲಿತ ಸಿಸ್ಟಮ್&zwnj;ನಿಂದ ಬಂದಿದ್ದಾಗಿದೆ. ಪ್ರಕರಣ ಮುಕ್ತಾಯಗೊಂಡ ಮೇಲೆಯೂ ಇಂತಹ ಮೆಸೇಜ್&zwnj;ಗಳು ಮೃತರ ಕುಟುಂಬಸ್ಥರಿಗೆ ಹೋಗದಂತೆ ತಡೆಯಲು ಇಲಾಖೆಗೆ ಪತ್ರ ಬರೆಯುತ್ತೇವೆ' ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/viral/chhattisgarh-dead-constable-declared-alive-ayushman-bharat-42-days-shocking-sms/articleshow-t2gtfwy"/>
        </item>
        <item>
            <title><![CDATA[ಗಂಡಂದಿರ ಹತ್ಯೆ ಪ್ರಕರಣದಲ್ಲಿ MP ದೇಶದಲ್ಲೇ ನಂ. 2! 6 ತಿಂಗಳಲ್ಲಿ 36 ಕೇಸ್, 12,577 ಜನ ಸಹಾಯಕ್ಕೆ ಮೊರೆ!]]></title>
            <link>https://kannada.asianetnews.com/crime/in-6-month-36-husband-murder-case-registered-in-madhyapradesh/articleshow-i4q74xf</link>
            <guid isPermaLink="true">https://kannada.asianetnews.com/crime/in-6-month-36-husband-murder-case-registered-in-madhyapradesh/articleshow-i4q74xf</guid>
            <pubDate>Thu, 13 Aug 2026 15:03:07 +0530</pubDate>
            <description><![CDATA[ಮಧ್ಯಪ್ರದೇಶದಲ್ಲಿ ಪತಿಯ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಘಾತಕಾರಿ ಅಂಕಿಅಂಶಗಳು ಹೊರಹೊಮ್ಮಿವೆ. ಜನವರಿ ಮತ್ತು ಜೂನ್ 2026 ರ ನಡುವೆ, 36 ಪತಿಯ ಹತ್ಯೆ ಪ್ರಕರಣಗಳು ವರದಿಯಾಗಿದ್ದು, ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಮಧ್ಯೆ, ಪುರುಷರ ಹಕ್ಕುಗಳ ಸಹಾಯವಾಣಿಗೆ ಬರುತ್ತಿರುವ ಪುರುಷರ ಕರೆ ಕೂಡ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jxc1pbftm6vxnqc3wp80w2qh,imgname-sonam-raghuvanshi-02-1749529865722.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಪತಿಯ ಹತ್ಯೆ ಪ್ರಕರಣದಲ್ಲಿ ಮಧ್ಯಪ್ರದೇಶ ದೇಶಕ್ಕೆ ನಂ 2&lt;/strong&gt;&lt;/h2&gt;&lt;p&gt;ಮಧ್ಯಪ್ರದೇಶದಲ್ಲಿ ಪುರುಷರನ್ನು ಒಳಗೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೊರಹೊಮ್ಮುತ್ತಿರುವ ಅಂಕಿಅಂಶಗಳು ಹೊಸ ಚರ್ಚೆಯನ್ನು ಹುಟ್ಟುಹಾಕಿವೆ. 2026 ರ ಜನವರಿ ಮತ್ತು ಜೂನ್ ನಡುವೆ, ರಾಜ್ಯದಲ್ಲಿ 36 ಪತಿಯ ಕೊಲೆ ಪ್ರಕರಣಗಳು ದಾಖಲಾಗಿದ್ದು, ಮಧ್ಯಪ್ರದೇಶ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಪುರುಷ ಹಕ್ಕುಗಳ ಸಂಘಟನೆಗಳು ಹೇಳಿಕೊಂಡಿವೆ. ಇದಲ್ಲದೇ, ಮಹಿಳೆಯರು, ಕೌಟುಂಬಿಕ ಉದ್ವಿಗ್ನತೆ ಮತ್ತು ವೈವಾಹಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿವಾದಗಳಿಗೆ ಸಹಾಯ ಕೋರುವ ಪುರುಷರ ಸಂಖ್ಯೆಯೂ ತೀವ್ರವಾಗಿ ಹೆಚ್ಚಾಗಿದೆ.&lt;/p&gt;&lt;h3&gt;&lt;strong&gt;ಆರು ತಿಂಗಳಲ್ಲಿ 36 ಕೊಲೆ ಪ್ರಕರಣಗಳು ವರದಿ&lt;/strong&gt;&lt;/h3&gt;&lt;p&gt;ಪುರುಷರ ಹಕ್ಕುಗಳ ಸಂಘಟನೆಗಳು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಜನವರಿ ಮತ್ತು ಜೂನ್ 2026 ರ ನಡುವೆ 36 ಪತಿಯ ಕೊಲೆ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶವು 93 ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇದರ ಆಧಾರದ ಮೇಲೆ, ಪತಿಯ ಕೊಲೆ ಪ್ರಕರಣಗಳಲ್ಲಿ ಮಧ್ಯಪ್ರದೇಶವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶದಲ್ಲಿ ಅತ್ಯಂತ ಹೈಪ್ರೊಫೈಲ್ ಪ್ರಕರಣವೆಂದರೆ ಇಂದೋರ್&zwnj;ನ ಸೋನಮ್ ರಘುವಂಶಿ ಪ್ರಕರಣ.&lt;/p&gt;&lt;p&gt;&lt;strong&gt;ಸಹಾಯವಾಣಿಗಳಲ್ಲಿ ಸಹಾಯ ಪಡೆಯುವ ಸಂಖ್ಯೆ ಹೆಚ್ಚಳ&lt;/strong&gt;&lt;/p&gt;&lt;p&gt;ಮಹಿಳಾ ಸಂಬಂಧಿತ ವಿವಾದಗಳು ಮತ್ತು ವೈವಾಹಿಕ ಸಮಸ್ಯೆಗಳಿಗೆ ಸಹಾಯಕ್ಕಾಗಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಹಾಯವಾಣಿಗಳನ್ನು ಆಶ್ರಯಿಸುತ್ತಿದ್ದಾರೆ. ದತ್ತಾಂಶದ ಪ್ರಕಾರ, 2025 ರಲ್ಲಿ, ಮಧ್ಯಪ್ರದೇಶದಲ್ಲಿ ಪುರುಷರ ಹಕ್ಕುಗಳ ಸಹಾಯವಾಣಿಗೆ 8,108 ಕರೆಗಳು ಬಂದಿವೆ. ಜೂನ್ 2026 ರ ಹೊತ್ತಿಗೆ ಈ ಸಂಖ್ಯೆ 12,577 ಕ್ಕೆ ಏರಿದೆ. ಈ ಪರಿಸ್ಥಿತಿ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಪುರುಷ ಹಕ್ಕುಗಳ ಸಂಘಟನೆಗಳು ತಿಳಿಸಿವೆ. 2025 ರಲ್ಲಿ, ಸಹಾಯವಾಣಿಗೆ ದೇಶಾದ್ಯಂತ 58,289 ಕರೆಗಳು ಬಂದವು, ಆದರೆ 2026 ರ ಮೊದಲ ಆರು ತಿಂಗಳಲ್ಲಿ ಈ ಸಂಖ್ಯೆ 87,969 ಕ್ಕೆ ಏರಿತು. ಕೌಟುಂಬಿಕ ವಿವಾದಗಳು, ವೈವಾಹಿಕ ಉದ್ವಿಗ್ನತೆಗಳು ಮತ್ತು ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಪುರುಷರು ಸಹಾಯವಾಣಿಯನ್ನು ಹೆಚ್ಚಾಗಿ ಸಂಪರ್ಕಿಸುತ್ತಿದ್ದಾರೆ .&lt;/p&gt;&lt;p&gt;&lt;strong&gt;ಆತ್ಮಹತ್ಯೆ ಪ್ರಕರಣಗಳ ಬಗ್ಗೆಯೂ ಹೆಚ್ಚುತ್ತಿರುವ ಕಳವಳ&lt;/strong&gt;&lt;/p&gt;&lt;p&gt;ಜನವರಿ ಮತ್ತು ಜೂನ್ 2026 ರ ನಡುವೆ ಮಧ್ಯಪ್ರದೇಶದಲ್ಲಿ 232 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು. ಮಾನಸಿಕ ಒತ್ತಡ, ಕೌಟುಂಬಿಕ ಕಲಹಗಳು ಮತ್ತು ಸಾಮಾಜಿಕ ಒತ್ತಡದಂತಹ ಅಂಶಗಳನ್ನು ಸಹ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಪುರುಷ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ. ಈ ಪ್ರಕರಣಗಳ ಆಧಾರದ ಮೇಲೆ, ರಾಷ್ಟ್ರೀಯ ಪುರುಷ ಆಯೋಗದ ಸ್ಥಾಪನೆಯ ಬೇಡಿಕೆ ಮತ್ತೆ ವೇಗವನ್ನು ಪಡೆಯುತ್ತಿದೆ. ಪುರುಷರಿಗೆ ತಮ್ಮ ದೂರುಗಳು ಮತ್ತು ಸಮಸ್ಯೆಗಳನ್ನು ಕೇಳಲು ಒಂದು ವೇದಿಕೆ ಇರಬೇಕು ಎಂದು ಆಂದೋಲನಕ್ಕೆ ಸಂಬಂಧಿಸಿದ ಸಂಸ್ಥೆಗಳು ಹೇಳುತ್ತವೆ. ದೇಶಾದ್ಯಂತ ಸುಮಾರು 70 ಎನ್&zwnj;ಜಿಒಗಳು ಮತ್ತು 10,000 ರಿಂದ 12,000 ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ ಮತ್ತು ನಿರಂತರವಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದ್ದಾರೆ&lt;/p&gt;]]></content:encoded>
            <category><![CDATA[crime]]></category>
            <dc:creator>Pavna Das</dc:creator>
            <atom:link href="https://kannada.asianetnews.com/crime/in-6-month-36-husband-murder-case-registered-in-madhyapradesh/articleshow-i4q74xf"/>
        </item>
        <item>
            <title><![CDATA[45 ದಿನ ಮುಂಚೆನೇ ಲೀವ್ ಕೇಳಿದ್ರೂ ಮ್ಯಾನೇಜರ್ No ಅಂದ..! ಟೆಕ್ಕಿಯ ರೆಡ್ಡಿಟ್ ಪೋಸ್ಟ್ ಫುಲ್ ವೈರಲ್!]]></title>
            <link>https://kannada.asianetnews.com/viral/45-days-notice-yet-leave-denied-techie-reddit-post-goes-viral-kvn/articleshow-qerihrg</link>
            <guid isPermaLink="true">https://kannada.asianetnews.com/viral/45-days-notice-yet-leave-denied-techie-reddit-post-goes-viral-kvn/articleshow-qerihrg</guid>
            <pubDate>Thu, 13 Aug 2026 14:53:37 +0530</pubDate>
            <description><![CDATA[45 ದಿನಗಳ ಮುಂಚಿತವಾಗಿ ರಜೆ ಕೇಳಿದರೂ ಮ್ಯಾನೇಜರ್ ಅನುಮತಿ ನಿರಾಕರಿಸಿದ್ದಕ್ಕೆ ಟೆಕ್ಕಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಪೂರ್ವ-ಯೋಜಿತ ಪ್ರವಾಸಕ್ಕೆ ರಜೆ ನಿರಾಕರಿಸಿದ ಈ ಘಟನೆಯು, ಭಾರತೀಯ ಐಟಿ ಕಂಪನಿಗಳಲ್ಲಿನ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳ ಹಕ್ಕುಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx2xrvggcem5q5enzasrvfq,imgname-leave-denied-1786608804719.png" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ವಾರಗಟ್ಟಲೆ ಮುಂಚೆ ರಜೆ ಕೇಳಿದ್ರೂ ಮ್ಯಾನೇಜರ್ ಒಪ್ಪಿಗೆ ಕೊಡಲಿಲ್ಲ ಅಂತ ಟೆಕ್ಕಿಯೊಬ್ಬರು ಹಾಕಿದ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಭಾರತದ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ತಮ್ಮ ಪತ್ನಿಗೆ, 45 ದಿನಗಳ ಮುಂಚೆಯೇ ರಜೆಗೆ ಅರ್ಜಿ ಹಾಕಿದ್ರೂ ಮ್ಯಾನೇಜರ್ ಅನುಮತಿ ನಿರಾಕರಿಸಿದ್ದಾರೆ ಎಂದು ಪತಿ ರೆಡ್ಡಿಟ್&zwnj;ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;&lsquo;ಡೆವಲಪರ್ಸ್ ಇಂಡಿಯಾ&rsquo; ಅನ್ನೋ ರೆಡ್ಡಿಟ್ ಗ್ರೂಪ್&zwnj;ನಲ್ಲಿ &lsquo;ಹಿಸ್ಟಾರಿಕಲ್-ಡೇ-364&rsquo; ಎಂಬ ಯೂಸರ್ ಈ ಅನುಭವ ಹಂಚಿಕೊಂಡಿದ್ದಾರೆ. ಸುಮಾರು ಒಂದೂವರೆ ತಿಂಗಳ ನಂತರ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿದ್ದೆವು, ಅದಕ್ಕಾಗಿ ನನ್ನ ಪತ್ನಿ ಮೊದಲೇ ಮ್ಯಾನೇಜರ್&zwnj;ಗೆ ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;&lsquo;45 ದಿನಕ್ಕೂ ಮುಂಚೆ ತಿಳಿಸಲಾಗಿತ್ತು&rsquo;&lt;/strong&gt;&lt;/h2&gt;&lt;p&gt;ತಮ್ಮ ಪತ್ನಿ ಕೆಲಸ ಮಾಡುವ ಸಂಸ್ಥೆ ಭಾರತದ ದೊಡ್ಡ ಐಟಿ ಸೇವಾ ಕಂಪನಿಗಳಲ್ಲಿ ಒಂದು ಎಂದು ಆ ಟೆಕ್ಕಿ ಹೇಳಿದ್ದಾರೆ. ಪ್ರವಾಸಕ್ಕೆ ಒಂದೂವರೆ ತಿಂಗಳು ಇರುವಾಗಲೇ ರಜೆಯ ಬಗ್ಗೆ ಮ್ಯಾನೇಜರ್ ಮತ್ತು ಟೀಮ್ ಲೀಡ್&zwnj;ಗೆ ಮಾಹಿತಿ ನೀಡಲಾಗಿತ್ತು. ಆದರೆ, ಇಷ್ಟು ಬೇಗ ತಿಳಿಸಿದರೂ ಮ್ಯಾನೇಜರ್ ರಜೆ ನೀಡಲು ಸಿದ್ಧರಿಲ್ಲ. ಬದಲಾಗಿ, ಪ್ರವಾಸದ ದಿನಾಂಕವನ್ನು ಬದಲಾಯಿಸುವಂತೆ ಮ್ಯಾನೇಜರ್ ಕೇಳಿದ್ದಾರೆ ಎಂದು ಅವರು ದೂರಿದ್ದಾರೆ.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಪ್ರವಾಸಕ್ಕೆ ಈಗಾಗಲೇ ಬುಕ್ ಮಾಡಲಾಗಿದೆ&lt;/strong&gt;&lt;/h3&gt;&lt;p&gt;ರಜೆಯ ದಿನಾಂಕಗಳನ್ನು ಬದಲಾಯಿಸುವುದು ಸುಲಭವಲ್ಲ, ಯಾಕಂದ್ರೆ ಕುಟುಂಬ ಈಗಾಗಲೇ ಪ್ರವಾಸಕ್ಕೆ ಬೇಕಾದ ಬುಕಿಂಗ್ ಮಾಡಿದೆ ಎಂದು ಟೆಕ್ಕಿ ಸ್ಪಷ್ಟಪಡಿಸಿದ್ದಾರೆ. ದಿನಾಂಕ ಬದಲಿಸಿದರೆ ಹೆಚ್ಚುವರಿ ಖರ್ಚು ಮತ್ತು ಇತರ ಅನಾನುಕೂಲಗಳು ಉಂಟಾಗುತ್ತವೆ. ಹೀಗಾಗಿ, ಮೊದಲೇ ತಿಳಿಸಿ ರಜೆ ನಿರಾಕರಿಸಿದ್ದು ನಮಗೆ ತುಂಬಾ ಕಷ್ಟವಾಗಿದೆ ಎಂದು ಪೋಸ್ಟ್&zwnj;ನಲ್ಲಿ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;&lsquo;ಕೆಲಸ ಅಷ್ಟೇನೂ ಪ್ರಾಮುಖ್ಯವಲ್ಲ&rsquo;&lt;/strong&gt;&lt;/h3&gt;&lt;p&gt;ನನ್ನ ಪತ್ನಿ ಐದು ವರ್ಷಗಳಿಂದ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಬಳಿ ಸಾಕಷ್ಟು ರಜೆ ಬಾಕಿ ಇದೆ ಎಂದು ಟೆಕ್ಕಿ ಹೇಳಿದ್ದಾರೆ. ಅವರು ನಿಭಾಯಿಸುವ ಕೆಲಸಗಳು ಕಂಪನಿಯ ಯಾವುದೇ ನಿರ್ಣಾಯಕ ಕಾರ್ಯಾಚರಣೆಗಳಿಗೆ ನೇರವಾಗಿ ಸಂಬಂಧಿಸಿಲ್ಲ. ಅದನ್ನು ಕೆಲವು ದಿನಗಳವರೆಗೆ ಮುಂದೂಡಬಹುದು. ಒಂದು ವೇಳೆ ತುರ್ತು ಕೆಲಸ ಬಂದರೆ, ಸ್ಲಾಕ್ (Slack) ಅಥವಾ ವಾಟ್ಸ್​ಆ್ಯಪ್ (WhatsApp) ಮೂಲಕ ಸಂಪರ್ಕಿಸಲು ಸಿದ್ಧ ಎಂದು ನನ್ನ ಪತ್ನಿ ತಂಡದ ಸದಸ್ಯರಿಗೆ ತಿಳಿಸಿದ್ದರು. ಅಷ್ಟೇ ಅಲ್ಲ, ಸಾಮಾನ್ಯ ಕೆಲಸಗಳನ್ನು ನಿಭಾಯಿಸಲು ಒಬ್ಬ ಇಂಟರ್ನ್&zwnj;ಗೂ ಸಾಧ್ಯವಿದೆ ಎಂದು ಅವರು ವಾದಿಸಿದ್ದಾರೆ. ಆದರೂ, ಮ್ಯಾನೇಜರ್ ತಮ್ಮ ನಿಲುವನ್ನು ಬದಲಾಯಿಸಲು ಸಿದ್ಧರಿಲ್ಲವಂತೆ.&lt;/p&gt;&lt;h3&gt;&lt;strong&gt;&lsquo;ರಜೆಯನ್ನೇ ಒಂದು ಚರ್ಚೆಯಾಗಿಸಿದ್ದಾರೆ&rsquo;&lt;/strong&gt;&lt;/h3&gt;&lt;p&gt;ರಜೆ ನೀಡುವುದನ್ನು ಬಿಟ್ಟು, ಮ್ಯಾನೇಜರ್ ಅದನ್ನೊಂದು &lsquo;ಚರ್ಚೆ&rsquo;ಯನ್ನಾಗಿ ಮಾಡುತ್ತಿದ್ದಾರೆ ಎಂದು ಟೆಕ್ಕಿ ಆರೋಪಿಸಿದ್ದಾರೆ. ಭಾರತೀಯ ಕಂಪನಿಗಳಲ್ಲಿ ಇಂತಹ ವರ್ತನೆ ಸಾಮಾನ್ಯ. ನಾನೂ ಕೂಡ ಇದೇ ರೀತಿಯ ಸೇವಾ ಆಧಾರಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಮುಂದೆ ಏನು ಮಾಡಬೇಕು ಎಂದು ಅವರು ರೆಡ್ಡಿಟ್ ಬಳಕೆದಾರರನ್ನು ಕೇಳಿದ್ದಾರೆ. ಪ್ರವಾಸದ ದಿನಾಂಕಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ ಎಂದು ಮ್ಯಾನೇಜರ್&zwnj;ಗೆ ಮತ್ತೊಮ್ಮೆ ಸ್ಪಷ್ಟಪಡಿಸಬೇಕೇ ಅಥವಾ ಈ ವಿಷಯವನ್ನು ಎಚ್&zwnj;ಆರ್ ವಿಭಾಗಕ್ಕೆ ತಿಳಿಸಬೇಕೇ ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;h3&gt;&lt;strong&gt;&lsquo;ರಜೆ ಕೇಳುವುದಲ್ಲ, ತಿಳಿಸಬೇಕು&rsquo;&lt;/strong&gt;&lt;/h3&gt;&lt;p&gt;ಈ ಪೋಸ್ಟ್&zwnj;ಗೆ ಹಲವಾರು ಮಂದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉದ್ಯೋಗಿಗಳಿಗೆ ನೀಡಿರುವ ರಜೆ ತೆಗೆದುಕೊಳ್ಳುವುದು ಅವರ ಹಕ್ಕು. ಹೀಗಾಗಿ ರಜೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವುದು ಸರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ರಜೆಯ ಕಾರಣವನ್ನು ಮ್ಯಾನೇಜರ್&zwnj;ಗೆ ವಿವರಿಸುವ ಅಗತ್ಯವಿಲ್ಲ, ಪ್ರವಾಸ ಅಥವಾ ಕುಟುಂಬದಂತಹ ವೈಯಕ್ತಿಕ ಕಾರಣಗಳಿಗೆ ಉದ್ಯೋಗಿಗಳು ರಜೆ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;h3&gt;&lt;strong&gt;&lsquo;ಕೆಲಸ ಬದಲಿಸುವುದೇ ಉತ್ತಮ&rsquo;&lt;/strong&gt;&lt;/h3&gt;&lt;p&gt;ಕೆಲವು ಮ್ಯಾನೇಜರ್&zwnj;ಗಳು ಉದ್ಯೋಗಿಗಳ ರಜೆಗೆ ಅನಗತ್ಯವಾಗಿ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಕೆಲವರು ಆರೋಪಿಸಿದ್ದಾರೆ. ಇಂತಹ ಪರಿಸ್ಥಿತಿಗಳು ಪದೇ ಪದೇ ಮರುಕಳಿಸುತ್ತಿದ್ದರೆ, ಕೆಲಸ ಬದಲಾಯಿಸುವ ಬಗ್ಗೆ ಯೋಚಿಸಬೇಕು ಎಂದು ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&lsquo;ಜೀವನ ತುಂಬಾ ಚಿಕ್ಕದು, ಇಂತಹ ವಿಷಯಗಳಿಗಾಗಿ ನಿರಂತರವಾಗಿ ಹೋರಾಡುವುದನ್ನು ತಪ್ಪಿಸಲು ಕೆಲಸ ಬದಲಿಸಿ&rsquo; ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅದೇನೇ ಇರಲಿ, ಉದ್ಯೋಗಿಗಳ ಹಕ್ಕುಗಳು, ರಜೆ ನೀತಿ ಮತ್ತು ಮ್ಯಾನೇಜರ್ ಅಧಿಕಾರದ ಬಗ್ಗೆ ಪ್ರತಿ ಸಂಸ್ಥೆಯ ನಿಯಮಗಳು ಮತ್ತು ಒಪ್ಪಂದಗಳು ಬೇರೆ ಬೇರೆಯಾಗಿರುತ್ತವೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/viral/45-days-notice-yet-leave-denied-techie-reddit-post-goes-viral-kvn/articleshow-qerihrg"/>
        </item>
        <item>
            <title><![CDATA[Cab Booking Rules Changed: ರೈಡ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್; ಓಲಾ, ಉಬರ್, ರ್ಯಾಪಿಡೋಗೆ ಕೇಂದ್ರದ ಬಿಗ್ ಶಾಕ್!]]></title>
            <link>https://kannada.asianetnews.com/car-news/good-news-for-ride-bookers-cab-booking-rules-changed-big-shock-for-ola-uber-rapido-sns/articleshow-d0m19f9</link>
            <guid isPermaLink="true">https://kannada.asianetnews.com/car-news/good-news-for-ride-bookers-cab-booking-rules-changed-big-shock-for-ola-uber-rapido-sns/articleshow-d0m19f9</guid>
            <pubDate>Thu, 13 Aug 2026 14:51:55 +0530</pubDate>
            <description><![CDATA[ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx6jk8rwfh0n754msgt3c2h,imgname-cab-ride-1786612632856.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ಯಾಬ್ ಬುಕ್ ಮಾಡುವವರಿಗೆ ಕೇಂದ್ರ ಸರ್ಕಾರ ಪ್ರಮುಖ ಸೂಚನೆಯನ್ನು ನೀಡಿದೆ. ಪ್ರಯಾಣ ಆರಂಭ ಆಗುವ ಮುನ್ನವೇ ಪ್ರಯಾಣಿಕರಿಗೆ ಟಿಪ್ ನೀಡಿ ಅಂತ ಪ್ರೋತ್ಸಾಹಿಸುವ ವಿಧಾನಗಳನ್ನು ಕ್ಯಾಬ್ ಅಗ್ರಿಗೇಟರ್&zwnj;ಗಳು ತಮ್ಮ ಆಪ್&zwnj;ನಿಂದ ತೆಗೆದು ಹಾಕಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ನೀಡಿದೆ. ಮೊದಲೇ ಟಿಪ್ ನೀಡಿದರೆ ಆ ಬಳಿಕ ಕ್ಯಾಬ್ ಬೇಗ ಸಿಗುತ್ತದೆ ಎಂಬ ಭಾವನೆಯನ್ನು ಮೂಡಿಸುವಂತಹ ಸಂದೇಶಗಳನ್ನು, ಆಯ್ಕೆಗಳನ್ನು ತೋರಿಸುವಂತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;h2&gt;ಒತ್ತಡ ಹಾಕುವ ತಂತ್ರ!&lt;/h2&gt;&lt;p&gt;ಕೆಲವೊಂದು ಕ್ಯಾಬ್ ಬುಕ್ಕಿಂಗ್ ಆಪ್&zwnj;ಗಳಲ್ಲಿ 'Advance Tip', 'Choose An Add-on' ನಂತಹ ಆಯ್ಕೆಗಳನ್ನು ನೀಡುತ್ತಿರುವುದು ಕೇಂದ್ರದ ಗಮನಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ಟಿಪ್ ನೀಡಿದರೆ ಚಾಲಕ ಬೇಗ ರೈಡ್ ಅಂಗೀಕರಿಸುವ ಅವಕಾಶ ಇರುತ್ತೆ ಎಂಬ ಭಾವನೆ ಮಾಡಿಸುವ ಸಂದೇಶಗಳನ್ನು ಕೂಡ ಕಳುಹಿಸುವುದನ್ನು ಇಲಾಖೆ ಗುರುತಿಸಿದೆ. ಇಂತಹ ಫೀಚರ್&zwnj;ಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುವ, ಹಣವನ್ನು ಹೆಚ್ಚುವರಿಯಾಗಿ ನೀಡಲು ಒತ್ತಡ ಹಾಕುವ ಅವಕಾಶವಿದೆ ಎಂದು ಕೇಂದ್ರ ಹೇಳಿದೆ.&lt;/p&gt;&lt;h2&gt;ಆದೇಶದಲ್ಲಿ ಏನಿದೆ?&lt;/h2&gt;&lt;p&gt;ಟಿಪ್ ನೀಡುವುದರಿಂದ ರೈಡ್ ಬೇಗ ಅಧಿಕೃತ ಆಗುತ್ತೆ, ಚಾಲಕ ವೇಗ ರೈಡ್ ಅಂಗೀಕಾರ ಮಾಡ್ತಾನೆ, ಡ್ರೈವರ್&zwnj;ಗಳ ನಿಯೋಜನೆ, ಕಾಯುವ ಸಮಯ ಅಥವಾ ಸೇವೆ ನೀಡುವ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ಗ್ರಾಹಕರಿಗೆ ಮೂಡಿಸುವ ರೀತಿಯಲ್ಲಿ ಯಾವುದೇ ರೀತಿಯ ಫೀಚರ್&zwnj;ಗಳು ಆಪ್&zwnj;ನಲ್ಲಿ ತೋರಿಸುವಂತೆ ಇಲ್ಲ ಎಂದು ಕೇಂದ್ರ ಸ್ಪಷ್ಟವಾದ ಆದೇಶವನ್ನು ಜಾರಿ ಮಾಡಿದೆ.&lt;/p&gt;&lt;h2&gt;ನಿಯಮಗಳು ಏನು ಹೇಳುತ್ತವೆ?&lt;/h2&gt;&lt;p&gt;ಆಗಸ್ಟ್&zwnj; 11ರಂದು ಜಾರಿಗೆ ಬಂದ ಆದೇಶದ ಅನ್ವಯ, ಎಲ್ಲಾ ಮೋಟಾರ್ ವೆಹಿಕಲ್ ಅಗ್ರಿಗ್ರೇಟರ್&zwnj;ಗಳು ತಮ್ಮ ಮೊಬೈಲ್ ಆಪ್, ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಕೂಡಲೇ ಪರಿಶೀಲನೆ ನಡೆಸಿ ಹೊಸದಾಗಿ ನೀಡಿರುವ ಮಾರ್ಗಸೂಚಿಗಳ ಅನ್ವಯ ಬದಲಾವಣೆಗಳನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.&lt;/p&gt;&lt;p&gt;ಯಾರಿಗೆ ಆದರೂ ಟಿಪ್ ನೀಡುವುದು ಗ್ರಾಹಕನ ಸ್ವತಃ ನಿರ್ಧಾರ, ಒಂದೊಮ್ಮೆ ಪ್ರಯಾಣಿಕ ಟಿಪ್ ಕೊಟ್ಟರೆ ಈ ಅಷ್ಟು ಮೊತ್ತವನ್ನು ಅಗ್ರಿಗೇಟರ್&zwnj; ಯಾವುದೇ ಹಣವನ್ನು ಕಟ್ ಮಾಡಿಕೊಳ್ಳದೇ, ಚಾಲಕನಿಗೆ ನೀಡಬೇಕಾಗುತ್ತದೆ ಎಂದು ಕೇಂದ್ರ ಇದೇ ವೇಳೆ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಆದರೆ, ಇಲ್ಲಿ ಕೇಂದ್ರ ಸರ್ಕಾರ ಚಾಲಕರಿಗೆ ಟಿಪ್ ನೀಡುವ ಗ್ರಾಹಕರನ ಆಯ್ಕೆಯನ್ನು ಕಡಿತಗೊಳಿಸಲ್ಲ. ಮೋಟಾರು ವಾಹನ ಮಾರ್ಗಸೂಚಿಗಳ ಅನ್ವಯ, ಪ್ರಯಾಣಿಕರು ತಮ್ಮ ಪ್ರಯಾಣದ ಬಳಿಕ ಚಾಲಕನಿಗೆ ಟಿಪ್ ನೀಡಲು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲಿ ಪ್ರಮುಖ ಷರತ್ತು ಎಂದರೆ, ಟ್ರಿಪ್ ಪೂರ್ಣಗೊಂಡ ನಂತರವೇ ಈ ಆಯ್ಕೆ ಲಭ್ಯವಾಗುವಂತೆ ಮಾಡಬೇಕು. ಕೇಂದ್ರದ ಈ ನಿರ್ಧಾರವೂ ಗ್ರಾಹಕರ ಮೇಲೆ ಅನಗತ್ಯವಾಗಿ ಹೇರುತ್ತಿದ್ದ ಒತ್ತಡವನ್ನು ಕಡಿಮೆ ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Sumanth SN</dc:creator>
            <atom:link href="https://kannada.asianetnews.com/car-news/good-news-for-ride-bookers-cab-booking-rules-changed-big-shock-for-ola-uber-rapido-sns/articleshow-d0m19f9"/>
        </item>
        <item>
            <title><![CDATA[Chanakya Niti: ನಿಮ್ಮ ಮನೆಗೆ ಈ ರೀತಿಯ ಐದು ಜನರು ಬರ್ತಿದ್ದಾರಾ? ಹಾಗಿದ್ರೆ ಎಚ್ಚರ!]]></title>
            <link>https://kannada.asianetnews.com/gallery/festivals/acharya-chanakya-s-advice-on-five-types-of-guests-who-come-to-spoil-the-happiness-and-peace-of-the-house-mrq-05r5bbl</link>
            <guid isPermaLink="true">https://kannada.asianetnews.com/gallery/festivals/acharya-chanakya-s-advice-on-five-types-of-guests-who-come-to-spoil-the-happiness-and-peace-of-the-house-mrq-05r5bbl</guid>
            <pubDate>Thu, 13 Aug 2026 14:50:51 +0530</pubDate>
            <description><![CDATA[ಆಚಾರ್ಯ ಚಾಣಕ್ಯರ ಪ್ರಕಾರ, ಮನೆಗೆ ಬರುವ ಎಲ್ಲಾ ಅತಿಥಿಗಳು ಒಳ್ಳೆಯವರಲ್ಲ. ಕೆಲವು ಅತಿಥಿಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡಬಹುದು. ಆದ್ದರಿಂದ, ಇಂತಹ ಅತಿಥಿಗಳಿಂದ ಎಚ್ಚರಿಕೆಯಿಂದ ಇರುವುದು ಉತ್ತಮ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx6cphydmd60btfj6wmm26d,imgname-chanakya-niti--2--1786612439614.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಚಾರ್ಯ ಚಾಣಕ್ಯರ ಪ್ರಕಾರ, ಮನೆಗೆ ಬರುವ ಎಲ್ಲಾ ಅತಿಥಿಗಳು ಒಳ್ಳೆಯವರಲ್ಲ. ಕೆಲವು ಅತಿಥಿಗಳು ಮನೆಯ ಶಾಂತಿ ಮತ್ತು ನೆಮ್ಮದಿಯನ್ನು ಹಾಳುಮಾಡಬಹುದು. ಆದ್ದರಿಂದ, ಇಂತಹ ಅತಿಥಿಗಳಿಂದ ಎಚ್ಚರಿಕೆಯಿಂದ ಇರುವುದು ಉತ್ತಮ.&lt;/p&gt;&lt;img&gt;&lt;p&gt;ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನಿ ಮತ್ತು ಬುದ್ದಿವಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಯಶಸ್ವಿ, ಸಮೃದ್ಧ ಮತ್ತು ಸಂತೋಷಕರ ಜೀವನ ನಡೆಸಬೇಕಾದ್ರೆ ಚಾಣಕ್ಯ ನೀತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅನುಭವಿಗಳು ಹೇಳುತ್ತಾರೆ. ಚಾಣಕ್ಯ ಅವರು ಹೇಳಿದ ಮಾತುಗಳು ಇಂದಿಗೂ ಜೀವಂತವಾಗಿದ್ದು, ಇವುಗಳನ್ನು ನೀತಿ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಶದಲ್ಲಿ &quot;ಅತಿಥಿ ದೇವೋ ಭವ&quot; ಎಂಬ ಮಾತಿನ ಅರ್ಥ ಅತಿಥಿ ದೇವರಿಗೆ ಸಮಾನ. ಅತಿಥಿಗಳು ಮನೆಗೆ ಭೇಟಿ ನೀಡಿದ ಸಂದರ್ಭದ ಬಗ್ಗೆ ಕೌಟಿಲ್ಯ ತಮ್ಮ ನೀತಿಗಳಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;img&gt;&lt;p&gt;ಚಾಣಕ್ಯ ಅವರ ಪ್ರಕಾರ, ಮನೆಗೆ ಬರುವ ಎಲ್ಲಾ ಅತಿಥಿಗಳು ಒಳ್ಳೆಯವರಾಗಿರಲ್ಲ. ಹಾಗಾಗಿ ಮನೆಗೆ ಎಂಥಹವರು ಬರುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಇಲ್ಲವಾದ್ರೆ ಇಂಥವರ ಆಗಮನದಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ. ಇಂತಹ ಅತಿಥಿಗಳಿಂದ ನೀವು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಲೇಖನದಲ್ಲಿ ಆ ಅತಿಥಿಗಳು ಯಾರು ಎಂಬುದನ್ನು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಯಾವುದೇ ಕಾರಣವಿಲ್ಲದೇ ಅಥವಾ ಸೂಚನೆ ನೀಡದೇ ಪದೇ ಪದೇ ಮನೆಗೆ ಆಗಮಿಸುವ ಅತಿಥಿಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದಿರಬೇಕು. ನೀವು ಮನೆಯಲ್ಲಿ ಪ್ರಮುಖ ಕೆಲಸ ಮಾಡುತ್ತಿರುವಾಗ ಅಥವಾ ವಿಶ್ರಾಂತಿ ಪಡೆದುಕೊಳ್ಳುತ್ತಿರುವಾಗ ಅಥವಾ ಖಾಸಗಿ ಸಮಯ ಆನಂದಿಸುತ್ತಿರುವಾಗ ಇಂತಹ ಜನರ ಆಗಮನ ಕಿರಿಕಿರಿಯನ್ನುಂಟು ಮಾಡುತ್ತದೆ. ಇಂತಹ ಅತಿಥಿಗಳು ನಿಮ್ಮ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇದು ನಿಮ್ಮ ಮಾನಸಿಕ ಅಶಾಂತಿಗೆ ಕಾರಣವಾಗಬಹುದು.&lt;/p&gt;&lt;img&gt;&lt;p&gt;ಕೆಲ ಅತಿಥಿಗಳು ಮನೆಗೆ ಬಂದಗೆಲ್ಲಾ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುತ್ತಾರೆ. ಬೇರೆಯವರ ಮನೆ ಅನ್ನೋದನ್ನು ಮರೆತು ಗಂಟೆಗಟ್ಟಲೇ ಕುಳಿತು ಹರಟೆ ಹೊಡೆಯುತ್ತಾರೆ. ಈ ರೀತಿಯ ಜನರು ಬೇರೆಯವರ ಮನೆಗೆ ಹೋಗಿ ನಿಮ್ಮ ವಿಷಯಗಳನ್ನು ಸಹ ಮಾತನಾಡುವ ಅಥವಾ ಚಾಡಿ ಹೇಳುವ ಗುಣವನ್ನು ಹೊಂದಿರುತ್ತಾರೆ. ಹಾಗಾಗಿ ಗಾಸಿಪ್ ಮಾಡೋ ಜನರಿಂದ ದೂರವಿರೋದು ಯಾವಾಗಲೂ ಉತ್ತಮ ಎಂದು ಚಾಣಕ್ಯರು ಹೇಳುತ್ತಾರೆ.&lt;/p&gt;&lt;img&gt;&lt;p&gt;ಮನೆಯಲ್ಲಿನ ಸಂತೋಷ ನೆಲೆಸಬೇಕಾದ್ರೆ ಅಸೂಯೆ ಅಥವಾ ಹೊಟ್ಟೆಕಿಚ್ಚು ಪಡೋ ಜನರಿಂದ ದೂರವಿರಿ. ಹಾಗೆಯೇ ಮನೆಯಿಂದ ದೂರವಿಟ್ಟುಕೊಳ್ಳಿ. ಇಂತಹ ಜನರು ನಿಮ್ಮೊಂದಿಗೆ ಚೆನ್ನಾಗಿ ಮಾತನಾಡಬಹುದು. ಆದ್ರೆ ಅವರ ಮನಸ್ಸಿನಲ್ಲಿ ನಿಮ್ಮ ಬಗ್ಗೆ ಕೆಟ್ಟದಾಗಿ ಯೋಚಿಸುತ್ತಿರುತ್ತಾರೆ. ಇವರ ದುಷ್ಟದೃಷ್ಟಿ ಅಥವಾ ಅಸೂಯೆ ಸ್ವಭಾವ ಮನೆಯ ನೆಮ್ಮದಿಯನ್ನು ನಾಶ ಮಾಡಬಹುದು. ಇಂತಹ ಅತಿಥಿಗಳನ್ನು ಆದಷ್ಟು ಮನೆಯಿಂದ ದೂರವಿಡಲು ಪ್ರಯತ್ನಿಸಬೇಕು.&lt;/p&gt;&lt;img&gt;&lt;p&gt;ಕೆಲವರು ತಮ್ಮ ಕೆಲಸಗಳಿದ್ದಾಗ ಮಾತ್ರ ನಿಮ್ಮ ಮನೆಗೆ ಬರುತ್ತಿರುತ್ತಾರೆ. ನಿಮ್ಮಿಂದ ಲಾಭ ಅಥವಾ ಕೆಲಸ ಆಗಬೇಕಾದ್ರೆ ಮಾತ್ರ ಅಗಮಿಸಿ ನಿಮ್ಮನ್ನು ನಷ್ಟಕ್ಕೆ ದೂಡುವ ಸಾಧ್ಯತೆಗಳಿರುತ್ತವೆ. ಸ್ವಾರ್ಥಿಗಳ ಜೊತೆಗಿನ ಸ್ನೇಹ ನಿಮ್ಮನ್ನು ಕಷ್ಟಕ್ಕೆ ತಳ್ಳುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಕೆಲಸದ ಬಳಿಕ ಇವರು ನಿಮ್ಮಿಂದ ಅಂತರ ಕಾಯ್ದುಕೊಂಡು ನಿಮ್ಮ ವಿರುದ್ಧವೇ ದ್ವೇಷ ಸಾಧಿಸುತ್ತಾರೆ. ಆದ್ದರಿಂದ ಸ್ವಾರ್ಥಿ ಅತಿಥಿಗಳನ್ನು ಎಂದಿಗೂ ಕುರುಡರಾಗಿ ನಂಬಬಾರದು ಎಂದು ಆಚಾರ್ಯ ಚಾಣಕ್ಯ ಸಲಹೆ ನೀಡುತ್ತಾರೆ.&lt;/p&gt;&lt;img&gt;&lt;p&gt;ಕೋಪ ಸ್ವಭಾವದ ಜನರು ಕಠೋರರಾಗಿದ್ದುಮ ನಿರಂತರವಾಗಿ ಕೊರಗುತ್ತಿರುತ್ತಾರೆ. ಇಂತಹ ಜನರ ಉಪಸ್ಥಿತಿ ಇಡೀ ವಾತಾವರಣವನ್ನು ಹಾಳು ಮಾಡುತ್ತದೆ. ಕೋಪ ಸ್ವಭಾವದ ಜನರ ಮಾತುಗಳು ಕಿರಿಕಿರಿಯನ್ನುಂಟು ಮಾಡುತ್ತದೆ. ಅತಿಥಿಗಳು ಬಂದಾಗ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಬೇಕೇ ಹೊರತು ನಕಾರಾತ್ಮಕ ಪಸರಿಸುವಂತಿರಬಾರದು. ಒತ್ತಡ ಮತ್ತು ನಕಾರಾತ್ಮಕತೆಯನ್ನು ಹರಡುವವರಿಂದ ಸಾಧ್ಯವಾದಷ್ಟು ದೂರವನ್ನು ಕಾಯ್ದುಕೊಳ್ಳಲು ನೀವು ಪ್ರಯತ್ನಿಸಬೇಕು.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/acharya-chanakya-s-advice-on-five-types-of-guests-who-come-to-spoil-the-happiness-and-peace-of-the-house-mrq-05r5bbl"/>
        </item>
        <item>
            <title><![CDATA[ಯಶ್ ದಂಪತಿಗೆ ಮದುವೆ ಆಹ್ವಾನ ನೀಡಿದ ಚಿಕ್ಕಣ್ಣ; ಕುಚಿಕು ಗೆಳೆಯನ ಮದುವೆಗೆ ರಾಕಿಂಗ್ ಸ್ಟಾರ್ ಬರ್ತಾರಾ?]]></title>
            <link>https://kannada.asianetnews.com/sandalwood/comedy-actor-chikkanna-invites-toxic-hero-yash-radhika-pandit-wedding/articleshow-4uofrdw</link>
            <guid isPermaLink="true">https://kannada.asianetnews.com/sandalwood/comedy-actor-chikkanna-invites-toxic-hero-yash-radhika-pandit-wedding/articleshow-4uofrdw</guid>
            <pubDate>Thu, 13 Aug 2026 14:41:41 +0530</pubDate>
            <description><![CDATA[ಹಾಸ್ಯ ನಟ ಚಿಕ್ಕಣ್ಣ ತಮ್ಮ ಮದುವೆಗೆ ಆಪ್ತ ಗೆಳೆಯ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯನ್ನು ಖುದ್ದಾಗಿ ಆಹ್ವಾನಿಸಿದ್ದಾರೆ. ಯಶ್ ಮತ್ತು ಚಿಕ್ಕಣ್ಣ ಅವರ ಹಳೆಯ ಸ್ನೇಹದ ಹಿನ್ನೆಲೆಯಲ್ಲಿ, 'ಟಾಕ್ಸಿಕ್' ಸಿನಿಮಾ ಪ್ರಚಾರದ ನಡುವೆ ಯಶ್ ಮದುವೆಗೆ ಹಾಜರಾಗುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx61fvmsqe56mbrtrc86jrc,imgname-chikkanna-invites-yash-to-marriage-1786612072307.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಯಾಂಡಲ್&zwnj;ವುಡ್&zwnj;ನ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರ ಮದುವೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಸುದ್ದಿಗಳಲ್ಲೊಂದು. ಇದೀಗ ತಮ್ಮ ಆಪ್ತ ಗೆಳೆಯ ಹಾಗೂ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಅವರನ್ನು ಮದುವೆಗೆ ಆಹ್ವಾನಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಯಶ್ ದಂಪತಿಯನ್ನು ಖುದ್ದಾಗಿ ಭೇಟಿಯಾಗಿ ಚಿಕ್ಕಣ್ಣ ಮದುವೆಯ ಆಮಂತ್ರಣ ನೀಡಿರುವ ಕ್ಷಣದ ಫೋಟೋ ವೈರಲ್ ಆಗಿದ್ದು, 'ಗೆಳೆಯನ ಮದುವೆಗೆ ಯಶ್ ಬರುತ್ತಾರಾ?' ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.&lt;/p&gt;&lt;p&gt;ಯಶ್ ಮತ್ತು ಚಿಕ್ಕಣ್ಣ ಅವರ ಸ್ನೇಹ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಳೆಯದು. ಚಿಕ್ಕಣ್ಣ ಅವರ ಸಿನಿಮಾರಂಗದ ಆರಂಭಕ್ಕೂ ಯಶ್ ಅವರೊಂದಿಗೆ ಇರುವ ನಂಟಿಗೂ ವಿಶೇಷ ಸಂಬಂಧವಿದೆ. ಚಿಕ್ಕಣ್ಣ ಅವರು ಯಶ್ ಅಭಿನಯದ &lsquo;ಕಿರಾತಕ&rsquo; ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಗಮನ ಸೆಳೆದರು. ನಂತರ &lsquo;ರಾಜಾಹುಲಿ&rsquo; ಹಾಗೂ &lsquo;ಮಾಸ್ಟರ್&zwnj;ಪೀಸ್&rsquo; ಸೇರಿದಂತೆ ಹಲವು ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. &lsquo;ಮಾಸ್ಟರ್&zwnj;ಪೀಸ್&rsquo; ವೇಳೆಗೆ ಯಶ್ ಅವರು ಚಿಕ್ಕಣ್ಣ ಅವರನ್ನು ತಮ್ಮ ಸಹೋದರನಂತೆಯೇ ಪರಿಗಣಿಸುವುದಾಗಿ ಹೇಳಿಕೊಂಡಿದ್ದರು.&lt;/p&gt;&lt;h2&gt;&lt;strong&gt;ಇದೇ ಆ.30ರಂದು ಚಿಕ್ಕಣ್ಣ ಮದುವೆ&lt;/strong&gt;&lt;/h2&gt;&lt;p&gt;ಇದೀಗ ಇದೇ ಆತ್ಮೀಯ ಸ್ನೇಹದ ಕಾರಣಕ್ಕೆ ಚಿಕ್ಕಣ್ಣ ತಮ್ಮ ಮದುವೆಯ ಆಹ್ವಾನವನ್ನು ಯಶ್ ದಂಪತಿಗೆ ಖುದ್ದಾಗಿ ನೀಡಿದ್ದಾರೆ. ಹೀಗಾಗಿ ಆಗಸ್ಟ್ 29 ಮತ್ತು 30ರಂದು ನಡೆಯಲಿರುವ ಚಿಕ್ಕಣ್ಣ ಅವರ ಮದುವೆ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಜರಾಗುತ್ತಾರಾ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ ಚಿಕ್ಕಣ್ಣ ಮದುವೆ ಸಿದ್ಧತೆಯ ನಡುವೆಯೂ ತಮ್ಮ ಸಿನಿಮಾ ಕೆಲಸಗಳನ್ನು ಮುಂದುವರಿಸಿದ್ದಾರೆ. &lsquo;ಜೋಡೆತ್ತು&rsquo; ಸಿನಿಮಾದ ಟಾಕಿ ಭಾಗದ ಚಿತ್ರೀಕರಣವನ್ನೂ ಅವರು ಪೂರ್ಣಗೊಳಿಸಿದ್ದಾರೆ.&lt;/p&gt;&lt;p&gt;ಇನ್ನು ಚಿಕ್ಕಣ್ಣ ಅವರ ಮದುವೆ ವಿಚಾರ ಮೊದಲ ಬಾರಿಗೆ 2025ರ ಆಗಸ್ಟ್&zwnj;ನಲ್ಲಿ ಸುದ್ದಿಯಾಗಿತ್ತು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನಾ ಅವರೊಂದಿಗೆ ಮದುವೆ ನಿಶ್ಚಯವಾಗಿದೆ ಎಂದು ಅವರು ಬಳಿಕ ಸ್ಪಷ್ಟಪಡಿಸಿದ್ದರು. ಮದುವೆ ಮಾತುಕತೆ ಕುಟುಂಬದವರ ಸಮ್ಮುಖದಲ್ಲಿ ನಡೆದಿದ್ದು, ಹೂ ಮುಡಿಸುವ ಶಾಸ್ತ್ರವೂ ನಡೆದಿತ್ತು. ಮದುವೆ ನಿಶ್ಚಯವಾಗಿದ್ದ ವಿಚಾರ ತಡವಾಗಿ ಬಹಿರಂಗವಾಗಿದೆ ಎಂದು ಸ್ವತಃ ಚಿಕ್ಕಣ್ಣ ಹೇಳಿದ್ದರು.&lt;/p&gt;&lt;h2&gt;&lt;strong&gt;ಆ.26ರಂದು ಟಾಕ್ಸಿಕ್ ರಿಲೀಸ್&lt;/strong&gt;&lt;/h2&gt;&lt;p&gt;ಇತ್ತ ಯಶ್ ಕೂಡ ಸದ್ಯ ತಮ್ಮ ಬಹುನಿರೀಕ್ಷಿತ &lsquo;ಟಾಕ್ಸಿಕ್&rsquo; ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆಗಸ್ಟ್ 8ರಂದು ಚಿತ್ರದ ಟ್ರೇಲರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಸಿನಿಮಾದ ಪ್ರಚಾರ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. &lsquo;ಟಾಕ್ಸಿಕ್&rsquo; ಚಿತ್ರ ಆಗಸ್ಟ್ 26, 2026ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಯಶ್ ಹಾಗೂ ಚಿತ್ರತಂಡ ಈಗಾಗಲೇ ಘೋಷಿಸಿದೆ.&lt;/p&gt;&lt;p&gt;ಹೀಗಾಗಿ ಚಿಕ್ಕಣ್ಣ ಅವರ ಮದುವೆ ಆಗಸ್ಟ್ 29 ಮತ್ತು 30ರಂದು ನಡೆಯಲಿರುವ ಸಂದರ್ಭದಲ್ಲಿ, &lsquo;ಟಾಕ್ಸಿಕ್&rsquo; ಬಿಡುಗಡೆಯಾದ ಕೆಲವೇ ದಿನಗಳ ಬಳಿಕ ಯಶ್ ತಮ್ಮ ಆಪ್ತ ಗೆಳೆಯನ ಮದುವೆಗೆ ಸಮಯ ಮಾಡಿಕೊಂಡು ಬರುತ್ತಾರಾ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ. ಆಹ್ವಾನ ಸ್ವೀಕರಿಸಿರುವ ಯಶ್ ದಂಪತಿಯ ಹಾಜರಾತಿ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಆದರೆ, ವರ್ಷಗಳ ಸ್ನೇಹ ಹೊಂದಿರುವ ಈ ಇಬ್ಬರು ಕಲಾವಿದರ ಆತ್ಮೀಯತೆ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿರುವುದಂತೂ ಸತ್ಯ.&lt;/p&gt;&lt;p&gt;Chikanna Invited Rocking Couple to bless and grace his marriage ❤️@TheNameIsYash pic.twitter.com/xyQoCUhYt4&lt;/p&gt;&lt;p&gt;&mdash; Film updates (@ba59blu) August 13, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[sandalwood]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/sandalwood/comedy-actor-chikkanna-invites-toxic-hero-yash-radhika-pandit-wedding/articleshow-4uofrdw"/>
        </item>
        <item>
            <title><![CDATA[ಮೀನ ರಾಶಿಯಲ್ಲಿ ಶನಿಯಿಂದ ಮಹಾ ಭಾಗ್ಯ ಯೋಗ, ಈ 4 ರಾಶಿ ಕಷ್ಟಕಾಲ ಮುಗೀತು, ಶುರುವಾಗಲಿದೆ ಸುವರ್ಣಯುಗ]]></title>
            <link>https://kannada.asianetnews.com/gallery/astrology/saturn-retrograde-creates-maha-bhagya-yoga-for-these-4-zodiacs-suh-u9fkxos</link>
            <guid isPermaLink="true">https://kannada.asianetnews.com/gallery/astrology/saturn-retrograde-creates-maha-bhagya-yoga-for-these-4-zodiacs-suh-u9fkxos</guid>
            <pubDate>Thu, 13 Aug 2026 14:26:17 +0530</pubDate>
            <description><![CDATA[ಮೀನ ರಾಶಿಯಲ್ಲಿ ಶನಿಯ ವಕ್ರ ಸಂಚಾರದಿಂದ 'ಮಹಾ ಭಾಗ್ಯ ಯೋಗ' ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಯವರ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಆರ್ಥಿಕವಾಗಿ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರಕ್ಕೇರಿಸುವ ಸುವರ್ಣ ಕಾಲವನ್ನು ತರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz39j2t63s2mhn1rk6ns56tp,imgname-shani-special-blessings-upon-people-born-on-specific-dates-wealth-fame-after-age-40-1785743346502.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೀನ ರಾಶಿಯಲ್ಲಿ ಶನಿಯ ವಕ್ರ ಸಂಚಾರದಿಂದ 'ಮಹಾ ಭಾಗ್ಯ ಯೋಗ' ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಯವರ ಜೀವನದಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಆರ್ಥಿಕವಾಗಿ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿನ ಶಿಖರಕ್ಕೇರಿಸುವ ಸುವರ್ಣ ಕಾಲವನ್ನು ತರಲಿದೆ.&lt;/p&gt;&lt;img&gt;&lt;p&gt;ಯೋಗ ಫಲ: ವೃಷಭ ರಾಶಿಯವರಿಗೆ ಲಾಭದ ಮನೆಯಲ್ಲಿ ಶನಿಯ ವಕ್ರ ದೃಷ್ಟಿ ಬಲಗೊಳ್ಳುವುದರಿಂದ, ಈ ಸಮಯವು ಅವರಿಗೆ ಬಂಗಾರದ ಯುಗದಂತೆ ಇರಲಿದೆ. ವಿಶೇಷ ಲಾಭ: ನಿರೀಕ್ಷಿತ ಮೂಲಗಳಿಂದ ಹಣದ ಹರಿವು ಹೆಚ್ಚಾಗುತ್ತದೆ. ದೀರ್ಘಕಾಲದಿಂದ ನಿಂತುಹೋಗಿದ್ದ ವ್ಯವಹಾರಗಳು ಮತ್ತೆ ಲಾಭದಾಯಕವಾಗಿ ನಡೆಯಲು ಪ್ರಾರಂಭಿಸುತ್ತವೆ. ಷೇರು ಮಾರುಕಟ್ಟೆ ಮತ್ತು ದೀರ್ಘಾವಧಿಯ ಹೂಡಿಕೆಗಳಿಂದ ಅನಿರೀಕ್ಷಿತ ಧನಲಾಭ ಸಿಗಲಿದೆ.&lt;/p&gt;&lt;img&gt;&lt;p&gt;ಯೋಗ ಫಲ: ಸಿಂಹ ರಾಶಿಯವರಿಗೆ ಅಷ್ಟಮ ಶನಿಯ ಪ್ರಭಾವ ಸ್ವಲ್ಪ ಕಡಿಮೆಯಾಗಿ, ಮಹಾ ಭಾಗ್ಯ ಯೋಗದಿಂದಾಗಿ ಪರೋಕ್ಷ ಧನಲಾಭ ಮತ್ತು ಹಠಾತ್ ಅದೃಷ್ಟಗಳು ಉಂಟಾಗುತ್ತವೆ. ವಿಶೇಷ ಲಾಭ: ಪೂರ್ವಜರ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ನಿಮಗೆ ಅನುಕೂಲಕರ ತೀರ್ಪು ಬರುತ್ತದೆ. ಸಾಲದ ಬಾಧೆಗಳೆಲ್ಲಾ ಮುಗಿದು ಮನಸ್ಸಿಗೆ ನೆಮ್ಮದಿ ಸಿಗಲಿದೆ.&lt;/p&gt;&lt;img&gt;&lt;p&gt;ಯೋಗ ಫಲ: ವೃಶ್ಚಿಕ ರಾಶಿಯವರ ಐದನೇ ಮನೆಯಲ್ಲಿ ಶನಿಯ ವಕ್ರ ಚಲನೆಯಿಂದಾಗಿ, ಬುದ್ಧಿವಂತಿಕೆ ಮತ್ತು ಯೋಜನಾ ಸಾಮರ್ಥ್ಯ ಹೆಚ್ಚಾಗುತ್ತದೆ. ವಿಶೇಷ ಲಾಭ: ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಾರೆ. ಮಕ್ಕಳಿಂದ ಕುಟುಂಬಕ್ಕೆ ಹೆಮ್ಮೆ ಮತ್ತು ಸಂತೋಷ ಸಿಗಲಿದೆ. ಹೊಸ ಕೆಲಸ ಹುಡುಕುತ್ತಿರುವವರಿಗೆ ಇಷ್ಟವಾದ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳು ಲಭಿಸುತ್ತವೆ.&lt;/p&gt;&lt;img&gt;&lt;p&gt;ಯೋಗ ಫಲ: ನಿಮ್ಮ ರಾಶಿಯ ಅಧಿಪತಿಯಾದ ಶನಿಯ ಈ ಸಂಚಾರದಿಂದ, ನೀವು ಹಿಂದೆ ಅನುಭವಿಸಿದ ಕಷ್ಟಗಳಿಗೆ ಮತ್ತು ಮಾಡಿದ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉನ್ನತ ಸ್ಥಾನಮಾನ ಮತ್ತು ಗೌರವ ಸಿಗಲಿದೆ. ವಿಶೇಷ ಲಾಭ: ಉದ್ಯೋಗದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಅವಕಾಶಗಳು ಖಚಿತವಾಗಲಿವೆ. ಹೊಸ ಆಸ್ತಿ ಖರೀದಿಸುವ ಯೋಗ ಕೂಡಿಬರಲಿದೆ. ಕುಟುಂಬದಲ್ಲಿದ್ದ ಗೊಂದಲಗಳು ನಿವಾರಣೆಯಾಗಿ, ಒಗ್ಗಟ್ಟು ಹೆಚ್ಚಾಗುತ್ತದೆ.&lt;/p&gt;&lt;p&gt;ಹಕ್ಕು ನಿರಾಕರಣೆ: ಈ ಲೇಖನವು ಜ್ಯೋತಿಷ್ಯದ ನಂಬಿಕೆಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗಳನ್ನು ಆಧರಿಸಿ, ಸಾಮಾನ್ಯ ಮುನ್ಸೂಚನೆಗಳಿಗಾಗಿ ಮಾತ್ರ ನೀಡಲಾಗಿದೆ. ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/saturn-retrograde-creates-maha-bhagya-yoga-for-these-4-zodiacs-suh-u9fkxos"/>
        </item>
        <item>
            <title><![CDATA[ವಿಜಯ್ ಮಲ್ಯ ಬೆಂಗಳೂರಿಗೆ ವಾಪಸ್? ದಶಕದ ಕಾನೂನು ಸಮರ ಅಂತ್ಯಗೊಳಿಸಲು ಬಾಂಬೆ ಹೈಕೋರ್ಟ್ ಸೂಚನೆ!]]></title>
            <link>https://kannada.asianetnews.com/business/vijay-mallya-bombay-high-court-sbi-consortium-ed-asset-dispute-settlement/articleshow-oi2c5g3</link>
            <guid isPermaLink="true">https://kannada.asianetnews.com/business/vijay-mallya-bombay-high-court-sbi-consortium-ed-asset-dispute-settlement/articleshow-oi2c5g3</guid>
            <pubDate>Thu, 13 Aug 2026 14:22:39 +0530</pubDate>
            <description><![CDATA[ವಿಜಯ್ ಮಲ್ಯ ಮತ್ತು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ನಡುವಿನ 9,000 ಕೋಟಿ ರೂ. ಸಾಲದ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್ ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿದೆ. ಈ ಕಾನೂನು ಸಮರ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದು, ಒಪ್ಪಂದವಾದರೆ ಮಲ್ಯ ಭಾರತಕ್ಕೆ ಮರಳುವ ಸಾಧ್ಯತೆಗಳಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g7nwg8f389atsxc8mrpbmc6q,imgname-vijay-mallya.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್&zwnj;ಗಳಲ್ಲಿ ಬರೋಬ್ಬರಿ 9,000 ಕೋಟಿ ರೂಪಾಯಿ ಸಾಲ ಸುಸ್ತಿದಾರ ಹಾಗೂ ತಲೆಮರೆಸಿಕೊಂಡಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ನೇತೃತ್ವದ ಬ್ಯಾಂಕ್&zwnj;ಗಳ ಒಕ್ಕೂಟದ ನಡುವಿನ ದಶಕದ ಸುದೀರ್ಘ ಕಾನೂನು ಸಮರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಅತ್ಯಂತ ಮಹತ್ವದ ಆದೇಶ ಹಾಗೂ ಟಿಪ್ಪಣಿ ನೀಡಿದೆ.&lt;/p&gt;&lt;p&gt;ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ವಾಣಿಜ್ಯ ವಿವಾದವನ್ನು ಈಗಲಾದರೂ ಪರಸ್ಪರ ಮಾತುಕತೆ ಅಥವಾ ಸೂಕ್ತ ಮಾರ್ಗದ ಮೂಲಕ ಮುಕ್ತಾಯಗೊಳಿಸಬೇಕು ಎಂದು ಬಾಂಬೆ ಹೈಕೋರ್ಟ್&zwnj;ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಮಿಲಿಂದ್ ಜಾಧವ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಪ್ರಕರಣವನ್ನು ಮುಂದುವರಿಸುತ್ತಲೇ ಹೋದರೆ ದೇಶದ ಅರ್ಥವ್ಯವಸ್ಥೆಯ ಮೇಲೆಯೇ ನೇರ ಹಾಗೂ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.&lt;/p&gt;&lt;h2&gt;&lt;strong&gt;ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ: ಹೈಕೋರ್ಟ್ ಕಳವಳ&lt;/strong&gt;&lt;/h2&gt;&lt;p&gt;ಪ್ರಕರಣದ ವಿಚಾರಣೆ ವೇಳೆ ಖಡಕ್ ಟಿಪ್ಪಣಿ ಮಾಡಿದ ನ್ಯಾಯಾಲಯ, 'ವಾಣಿಜ್ಯ ವಿವಾದಗಳ ಪರಿಹಾರವು ಆಯಾ ವಿವಾದದ ಆಂತರಿಕ ಚೌಕಟ್ಟಿನಲ್ಲೇ ಅಡಗಿರುತ್ತದೆ. ಸಂಬಂಧಪಟ್ಟ ಎರಡೂ ಕಡೆಯವರು ಈ ಕಾನೂನು ಸಮರದಿಂದ ಮುಂದುವರಿದು (Move Forward) ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗದಿದ್ದರೆ, ಅದು ಭಾರತದ ಅರ್ಥವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ' ಎಂದು ಎಚ್ಚರಿಸಿದೆ. ಸುಮಾರು ಒಂದು ದಶಕದಿಂದ ನೆನೆಗುದಿಗೆ ಬಿದ್ದಿರುವ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವುದು ಅತ್ಯಗತ್ಯವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.&lt;/p&gt;&lt;h2&gt;&lt;strong&gt;PMLA ಕೋರ್ಟ್ ಆದೇಶ ಸವಾಲು ಮಾಡಿದ್ದ ಮಲ್ಯ:&lt;/strong&gt;&lt;/h2&gt;&lt;p&gt;ವಿಜಯ್ ಮಲ್ಯ ಸಲ್ಲಿಸಿದ್ದ 2020ರ ಅರ್ಜಿಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ. ಈ ಹಿಂದೆ ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದ್ದ ಮಲ್ಯ ಅವರ ಸ್ವತ್ತು ಹಾಗೂ ಆಸ್ತಿಗಳನ್ನು ಎಸ್&zwnj;ಬಿಐ ನೇತೃತ್ವದ ಬ್ಯಾಂಕ್&zwnj;ಗಳ ಒಕ್ಕೂಟವು ಸಾಲ ವಸೂಲಾತಿಗಾಗಿ ಬಳಸಿಕೊಳ್ಳಲು ಹವಾಲಾ ತಡೆ ಕಾಯ್ದೆ (PMLA) ವಿಶೇಷ ನ್ಯಾಯಾಲಯ ಅನುಮತಿ ನೀಡಿತ್ತು. ವಿಶೇಷ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ಮಲ್ಯ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮಗೆ ಸೇರಿದ ಜಪ್ತಿಯಾದ ಆಸ್ತಿಗಳನ್ನು ಬ್ಯಾಂಕ್&zwnj;ಗಳಿಗೆ ಹಸ್ತಾಂತರಿಸುವುದು ಕಾನೂನುಬಾಹಿರ ಎಂದು ವಾದಿಸಿದ್ದರು. ಆದರೆ ಹೈಕೋರ್ಟ್, ನಿರಂತರ ಕಾನೂನು ಹೋರಾಟ ನಡೆಸುವ ಬದಲು ಪ್ರಾಯೋಗಿಕ ಮತ್ತು ಪರಸ್ಪರ ಒಪ್ಪಿತ ಪರಿಹಾರ ಕಂಡುಕೊಳ್ಳುವುದು ಸೂಕ್ತ ಎಂದು ತಿಳಿಸಿದೆ.&lt;/p&gt;&lt;h2&gt;&lt;strong&gt;ಜಾರಿ ನಿರ್ದೇಶನಾಲಯಕ್ಕೆ (ED) ನೋಟೀಸ್ ಜಾರಿ:&lt;/strong&gt;&lt;/h2&gt;&lt;p&gt;ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಬಾಂಬೆ ಹೈಕೋರ್ಟ್, ಜಾರಿ ನಿರ್ದೇಶನಾಲಯಕ್ಕೆ (ED) ನೋಟೀಸ್ ಜಾರಿ ಮಾಡಿದೆ. ಮಲ್ಯ ವಿರುದ್ಧ ನಡೆಯುತ್ತಿರುವ ತನಿಖೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಇಲ್ಲಿಯವರೆಗೆ ಜಪ್ತಿ ಮಾಡಲಾಗಿರುವ ಎಲ್ಲಾ ಸ್ಥಿರ ಮತ್ತು ಚರ ಆಸ್ತಿಗಳ ಸಂಪೂರ್ಣ ವಿವರಗಳನ್ನು ಹೊಂದಿದ ನಿಖರ ವರದಿಯನ್ನು ಸಲ್ಲಿಸುವಂತೆ ಇಡಿ ಉಪ ನಿರ್ದೇಶಕರಿಗೆ ಆದೇಶಿಸಿದೆ. ಜಪ್ತಿಯಾದ ಆಸ್ತಿಗಳನ್ನು ಬ್ಯಾಂಕ್&zwnj;ಗಳು ಸಾಲ ಮರುಪಾವತಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯಲು ಇಡಿ ಸಲ್ಲಿಸುವ ವರದಿ ಮುಂದಿನ ವಿಚಾರಣೆಯಲ್ಲಿ ಅತ್ಯಂತ ನಿರ್ಣಾಯಕವಾಗಲಿದೆ.&lt;/p&gt;&lt;h2&gt;&lt;strong&gt;ಮತ್ತೆ ಬೆಂಗಳೂರಿಗೆ ಬರ್ತಾರಾ ವಿಜಯ್ ಮಲ್ಯ?&lt;/strong&gt;&lt;/h2&gt;&lt;p&gt;ಬಾಂಬೆ ಹೈಕೋರ್ಟ್&zwnj;ನ ಈ ಪ್ರಮುಖ ಸುಳಿವು ಹಾಗೂ ಮಧ್ಯಸ್ಥಿಕೆಯ ಸೂಚನೆಯಿಂದಾಗಿ, ಮಲ್ಯ ಅವರೊಂದಿಗಿನ ಬ್ಯಾಂಕ್&zwnj;ಗಳ ವ್ಯವಹಾರ ಇತ್ಯರ್ಥವಾಗುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಬ್ಯಾಂಕ್&zwnj;ಗಳು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಒಪ್ಪಂದ ಏರ್ಪಟ್ಟರೆ, ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ತಮ್ಮ ನೆಚ್ಚಿನ ಬೆಂಗಳೂರಿಗೆ ಮರಳುವ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸ್ವದೇಶಕ್ಕೆ ಹಿಂದಿರುಗುವ ದಾರಿ ಸುಗಮವಾಗಬಹುದು ಎಂಬ ಚರ್ಚೆಗಳು ವಾಣಿಜ್ಯ ವಲಯದಲ್ಲಿ ಆರಂಭವಾಗಿವೆ.&lt;/p&gt;]]></content:encoded>
            <category><![CDATA[business]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/business/vijay-mallya-bombay-high-court-sbi-consortium-ed-asset-dispute-settlement/articleshow-oi2c5g3"/>
        </item>
        <item>
            <title><![CDATA[ಸೈಕಲ್‌ನಿಂದ ಶುರುವಾದ ಪಯಣ, ಈಗ ಸ್ವಂತ ಮನೆಯತ್ತ: ಕಠಿಣ ಪರಿಶ್ರಮದಿಂದಲೇ ಗೆದ್ದ ಬೆಂಗಳೂರಿನ ಡೆಲಿವರಿ ಪಾರ್ಟ್‌ನರ್‌ ಯಶೋಗಾಥೆ]]></title>
            <link>https://kannada.asianetnews.com/karnataka-districts/swiggy-delivery-partner-success-story-sanjay-mandal-bengaluru-journey-from-bicycle-to-own-house-dream-gdp/articleshow-u11gh0d</link>
            <guid isPermaLink="true">https://kannada.asianetnews.com/karnataka-districts/swiggy-delivery-partner-success-story-sanjay-mandal-bengaluru-journey-from-bicycle-to-own-house-dream-gdp/articleshow-u11gh0d</guid>
            <pubDate>Thu, 13 Aug 2026 14:12:25 +0530</pubDate>
            <description><![CDATA[ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದ ಸಂಜಯ್ ಮಂಡಲ್, ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಆಗಿ ಕಠಿಣ ಪರಿಶ್ರಮದಿಂದ ಯಶಸ್ಸು ಕಂಡಿದ್ದಾರೆ. ಸೈಕಲ್‌ನಲ್ಲಿಯೇ ಕೆಲಸ ಆರಂಭಿಸಿ, ಬೈಕ್ ಖರೀದಿಸಿ, ಇದೀಗ ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾ ಸ್ವಂತ ಮನೆಯ ಕನಸು ಕಾಣುತ್ತಿದ್ದಾರೆ. ಅವರ ಈ ಯಶೋಗಾಥೆ ಅನೇಕರಿಗೆ ಸ್ಫೂರ್ತಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx479nkedrx7nyd8mza9mhq,imgname-swiggy-delivery-partner-success-story-sanjay-mandal-1786610165425.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಕನಸುಗಳ ನಗರ. ಇಲ್ಲಿ ಕಷ್ಟಪಟ್ಟು ದುಡಿದವರು ಖಂಡಿತಾ ಮೇಲೆ ಬಂದೇ ಬರುತ್ತಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದ ಸಂಜಯ್ ಮಂಡಲ್ ಅವರೇ ಜೀವಂತ ಸಾಕ್ಷಿ. ಬರಿಗೈಯಲ್ಲಿ ಬಂದು ಹೋಟೆಲ್&zwnj;ನಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ, ಇಂದು ತನ್ನ ಕಠಿಣ ಪರಿಶ್ರಮದಿಂದಲೇ ಸ್ವಂತ ಕಾಲ ಮೇಲೆ ನಿಂತಿರುವ ಯಶೋಗಾಥೆ ಇದು.&lt;/p&gt;&lt;p&gt;ತನ್ನ ಕುಟುಂಬಕ್ಕೊಂದು ಭದ್ರವಾದ ಭವಿಷ್ಯ ಕಟ್ಟಿಕೊಡುವ ಕನಸು ಹೊತ್ತು ಸಂಜಯ್ ಮಂಡಲ್&zwnj; 2014ರಲ್ಲಿ ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಆರಂಭದಲ್ಲಿ ರೆಸ್ಟೋರೆಂಟ್&zwnj;ವೊಂದರಲ್ಲಿ ಅವರು ಕ್ಯಾಪ್ಟನ್ ಆಗಿ ಕೆಲಸಕ್ಕೆ ಸೇರಿದ್ದರು. ಆದರೆ, ಅಲ್ಲಿ ಅವರಿಗೆ ಸಿಗುತ್ತಿದ್ದದ್ದು ತಿಂಗಳಿಗೆ ಕೇವಲ 10,000 ರೂ. ಸಂಬಳ. ದಿನೇ ದಿನೇ ಬೆಳೆಯುತ್ತಿರುವ ಮಹಾನಗರದಲ್ಲಿ ಆ ಸಣ್ಣ ಮೊತ್ತ ಅವರ ಭವಿಷ್ಯದ ಕನಸುಗಳನ್ನು ಈಡೇರಿಸಲು, ಕುಟುಂಬ ನಿರ್ವಹಣೆಗೆ ಏನೇನೂ ಸಾಲುತ್ತಿರಲಿಲ್ಲ.&lt;/p&gt;&lt;h2&gt;ಸೈಕಲ್ ತುಳಿದು ಬೈಕ್ ಖರೀದಿಸಿದ ಛಲವಂತ&lt;/h2&gt;&lt;p&gt;ಹೀಗಾಗಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಂಜಯ್ ಹೊಸ ದಾರಿ ಹುಡುಕುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದಿದ್ದೇ ಒಂದು ಸ್ವಿಗ್ಗಿ ಜಾಹೀರಾತು. &quot;ʼಸ್ವಿಗ್ಗಿಯಲ್ಲಿ ಡೆಲಿವರಿ ಪಾರ್ಟ್&zwnj;ನರ್ ಆಗಿ ಸೇರಿಕೊಳ್ಳಿʼ ಎಂಬ ಜಾಹೀರಾತು ನನ್ನ ಗಮನ ಸೆಳೆಯಿತು. ನನ್ನ ಬದುಕು ಬದಲಾಯಿಸಿಕೊಳ್ಳಲು ಇದೊಂದು ಅತ್ಯುತ್ತಮ ಅವಕಾಶ ಎಂದು ನನಗೆ ಅನಿಸಿತು,&rdquo; ಅಂತ ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಸಂಜಯ್.&lt;/p&gt;&lt;p&gt;ಹೀಗೆ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಆರಂಭಿಸಿದರು. ಆದರೆ, ಇದಕ್ಕೆ ಅಗತ್ಯವಾಗಿದ್ದ ಬೈಕೇ ಅವರ ಬಳಿ ಇರಲಿಲ್ಲ. ಅದಕ್ಕೂ ಎದೆಗುಂದದ ಸಂಜಯ್&zwnj;, ಸೈಕಲ್ ಮೂಲಕವೇ ಗ್ರಾಹಕರಿಗೆ ಆಹಾರ ತಲುಪಿಸಲು ಶುರು ಮಾಡಿದರು.&lt;/p&gt;&lt;p&gt;ಬೆಳಗಿನ ಜಾವದಿಂದ ತಡರಾತ್ರಿಯವರೆಗೂ ಸೈಕಲ್ ತುಳಿದು ಆರ್ಡರ್ ತಲುಪಿಸುತ್ತಿದ್ದರು. ಈ ರೀತಿಯೇ ಒಂದಿಷ್ಟು ಹಣ ಉಳಿತಾಯ ಮಾಡಿದರು. ಆ ಹಣದಿಂದ ಬರೀ ಎರಡೇ ತಿಂಗಳಿನಲ್ಲಿ ತಮ್ಮ ಮೊದಲ ಬೈಕ್ ಖರೀದಿಸಿದರು. &quot;ನನ್ನ ಕಷ್ಟದ ದುಡಿಮೆಯಲ್ಲಿ ಮೊದಲ ಬೈಕ್ ಕೊಂಡುಕೊಂಡ ಆ ಕ್ಷಣ, ನನ್ನ ಬದುಕಿನ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು,&rdquo; ಎನ್ನುತ್ತಾರೆ ಸಂಜಯ್.&lt;/p&gt;&lt;h2&gt;ನನಸಾದ ಅಪ್ಪನ ಕನಸು&lt;/h2&gt;&lt;p&gt;ಕಳೆದ ಹತ್ತು ವರ್ಷಗಳಿಂದ ಬಿಸಿಲು, ಮಳೆ ಎನ್ನದೆ ಫುಡ್ ಡೆಲಿವರಿ ಮಾಡುತ್ತಿರುವ ಸಂಜಯ್ ಅವರ ಶ್ರಮಕ್ಕೆ ಫಲ ಸಿಕ್ಕಿದೆ ಈ ನಿರಂತರ ದುಡಿಮೆ ಅವರ ಕುಟುಂಬದ ಜೀವನಮಟ್ಟವನ್ನು ಸುಧಾರಿಸಿದೆ. &quot;ನನ್ನ ಮಗನಿಗೊಂದು ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಅಪ್ಪನಾಗಿ ನನ್ನ ಅತಿದೊಡ್ಡ ಕನಸಾಗಿತ್ತು. ಈಗ ನನ್ನ ಶ್ರಮದಿಂದ ಆತನನ್ನು ಒಂದು ಒಳ್ಳೆಯ ಖಾಸಗಿ ಶಾಲೆಗೆ ಸೇರಿಸಿದ್ದೇನೆ,&rdquo; ಎಂದು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.&lt;/p&gt;&lt;h2&gt;ಮುಂದಿನ ಗುರಿ 'ಸ್ವಂತ ಮನೆ'&lt;/h2&gt;&lt;p&gt;ಮಗನಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಸಂಜಯ್ ಈಗ ಮತ್ತೊಂದು ದೊಡ್ಡ ಕನಸಿನತ್ತ ಹೆಜ್ಜೆ ಹಾಕಿದ್ದಾರೆ. &quot;ಕುಟುಂಬಕ್ಕಾಗಿ ಒಂದು ಸ್ವಂತ ಮನೆ ಮಾಡಬೇಕು ಎಂಬುದು ನನ್ನ ಮುಂದಿನ ಗುರಿ. ನಿರಂತರ ಶ್ರಮವೇ ನನ್ನನ್ನು ಆ ಗುರಿಗೂ ತಲುಪಿಸುತ್ತದೆ ಎಂಬ ನಂಬಿಕೆ ನನಗಿದೆ,&rdquo; ಎಂದು ವಿಶ್ವಾಸದಿಂದ ನುಡಿಯುತ್ತಾರೆ ಸಂಜಯ್&zwnj;.&lt;/p&gt;&lt;p&gt;ಛಲ, ನಿರಂತರ ಪ್ರಯತ್ನವಿದ್ದರೆ ಯಾವುದೇ ಕನಸನ್ನಾದರೂ ನನಸು ಮಾಡಬಹುದು ಎಂಬ ಸಂಜಯ್ ಅವರ ಅನುಭವದ ಮಾತು, ಬದುಕು ಕಟ್ಟಿಕೊಳ್ಳಲು ದಿನನಿತ್ಯ ಹೋರಾಡುತ್ತಿರುವ ಪ್ರತಿಯೊಬ್ಬ ಶ್ರಮಿಕನಿಗೂ ದೊಡ್ಡ ಸ್ಫೂರ್ತಿಯಾಗಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/swiggy-delivery-partner-success-story-sanjay-mandal-bengaluru-journey-from-bicycle-to-own-house-dream-gdp/articleshow-u11gh0d"/>
        </item>
        <item>
            <title><![CDATA[ವರ್ಷಕ್ಕೆ 1 ಕೋಟಿ ಸಂಬಳ ಬಂದ್ರೂ ನೆಮ್ಮದಿ ಇಲ್ವಂತೆ! ₹20,000 ದುಡಿಯುವಾಗಲೇ ಖುಷಿಯಾಗಿದ್ದೆ ಎಂದ ಟೆಕ್ಕಿ: ಕಾರಣವೇನು?]]></title>
            <link>https://kannada.asianetnews.com/viral/from-14300-salary-to-1-crore-package-why-this-techie-says-money-is-not-everything/articleshow-5ne2wok</link>
            <guid isPermaLink="true">https://kannada.asianetnews.com/viral/from-14300-salary-to-1-crore-package-why-this-techie-says-money-is-not-everything/articleshow-5ne2wok</guid>
            <pubDate>Thu, 13 Aug 2026 14:00:48 +0530</pubDate>
            <description><![CDATA[₹14,300 ತಿಂಗಳ ಸಂಬಳದಿಂದ ಆರಂಭಿಸಿದ ಟೆಕ್ಕಿ ಇಂದು ವರ್ಷಕ್ಕೆ ₹1.05 ಕೋಟಿ ಗಳಿಸುತ್ತಿದ್ದಾರೆ. ₹50 ಲಕ್ಷಕ್ಕೂ ಹೆಚ್ಚು ESOP, ಹಲವು ಹೂಡಿಕೆಗಳಿದ್ದರೂ 10 ವರ್ಷದ ಕಾರನ್ನೇ ಬಳಸುತ್ತಾರೆ. ಹೆಚ್ಚಿನ ಸಂಬಳದ ಜೊತೆಗೆ ಬಂದ ಒತ್ತಡದ ನಡುವೆ ಈಗ ಅವರ ಗುರಿ ಮತ್ತಷ್ಟು ಹಣವಲ್ಲ; ಸ್ವಂತ ಪ್ರಾಜೆಕ್ಟ್‌ಗಳ ಮೂಲಕ ಆರ್ಥಿಕ ಸ್ವಾತಂತ್ರ್ಯ ಪಡೆಯುವುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzv9vrs2hrz6a80svhb1g339,imgname-techie-chasing-financial-freedom--1--1786548970273.jpg" type="image/jpeg" height="390" width="690"/>
            <content:encoded><![CDATA[&lt;p&gt;ತಿಂಗಳಿಗೆ ₹14,300 ಸಂಬಳದಿಂದ ವೃತ್ತಿಜೀವನ ಆರಂಭಿಸಿದ ಟೆಕ್ನಾಲಜಿ ವೃತ್ತಿಪರರೊಬ್ಬರು ಇಂದು ವರ್ಷಕ್ಕೆ ₹1.05 ಕೋಟಿ ಗಳಿಸುತ್ತಿದ್ದಾರೆ. ಜೊತೆಗೆ ₹50 ಲಕ್ಷಕ್ಕೂ ಹೆಚ್ಚು ಮೌಲ್ಯದ ESOPಗಳನ್ನೂ ಹೊಂದಿದ್ದಾರೆ. ಆದರೆ ಇಷ್ಟೆಲ್ಲ ಆದಾಯ ಬಂದರೂ ಅವರ ಜೀವನದ ದೊಡ್ಡ ಗುರಿ ಈಗ ಮತ್ತಷ್ಟು ದೊಡ್ಡ ಸಂಬಳವಲ್ಲ&mdash;ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಂತ ಕೆಲಸದ ಮೇಲಿನ ನಿಯಂತ್ರಣ.&lt;/p&gt;&lt;p&gt;Redditನಲ್ಲಿ ಹಂಚಿಕೊಂಡಿರುವ ಅವರ ಅನುಭವದ ಪ್ರಕಾರ, 2012ರಲ್ಲಿ Tier-3 ಕಾಲೇಜಿನಿಂದ ಪದವಿ ಪಡೆದ ನಂತರ ಸುಮಾರು ಆರು ತಿಂಗಳು ಉದ್ಯೋಗ ಹುಡುಕಿದ್ದರು. ಮೊದಲ ಸಂಬಳ ₹14,300. ನಂತರ ₹20,000, ₹32,000 ಮತ್ತು ₹60,000 ಹಂತಗಳನ್ನು ದಾಟಿ, ವಾರ್ಷಿಕ ಪ್ಯಾಕೇಜ್ ₹13 ಲಕ್ಷದಿಂದ ₹25 ಲಕ್ಷಕ್ಕೆ ಏರಿತು. ಬೆಂಗಳೂರಿಗೆ ಬಂದ ಬಳಿಕ ₹40 ಲಕ್ಷ, ₹60 ಲಕ್ಷ, ₹80 ಲಕ್ಷ ದಾಟಿ ಇದೀಗ ₹1.05 ಕೋಟಿಗೆ ತಲುಪಿದೆ.&lt;/p&gt;&lt;p&gt;&lt;strong&gt;₹20,000 ಸಂಬಳವೇ ಏಕೆ ಹೆಚ್ಚು ವಿಶೇಷ..!&lt;/strong&gt;&lt;/p&gt;&lt;p&gt;ಆಶ್ಚರ್ಯವೆಂದರೆ, ಅವರ ವೃತ್ತಿಜೀವನದ ಅತ್ಯಂತ ಸಂತೋಷದ ಸಂಬಳ ₹1 ಕೋಟಿಗೂ ಅಧಿಕವಲ್ಲ. ತಿಂಗಳಿಗೆ ₹20,000 ಗಳಿಸಲು ಆರಂಭಿಸಿದ ಸಮಯವೇ ಹೆಚ್ಚು ವಿಶೇಷ ಎಂದು ಅವರು ಹೇಳುತ್ತಾರೆ. ಆಗ ಸಾರ್ವಜನಿಕ ಬಸ್ ಬದಲಿಗೆ ತಮ್ಮ ಕನಸಿನ 150cc ಬೈಕ್ ಖರೀದಿಸಲು ಸಾಧ್ಯವಾಗಿತ್ತು.&lt;/p&gt;&lt;p&gt;&lt;strong&gt;ದೊಡ್ಡ ಸಂಬಳ, ದೊಡ್ಡ ಒತ್ತಡ!&lt;/strong&gt;&lt;/p&gt;&lt;p&gt;ಹೆಚ್ಚಿನ ಆದಾಯ ಆರ್ಥಿಕ ಭದ್ರತೆ ನೀಡಿದರೂ, ಕೆಲಸದ ಒತ್ತಡ ಕಡಿಮೆಯಾಗಲಿಲ್ಲ. ಕಚೇರಿ ರಾಜಕೀಯ, ಹೆಚ್ಚಿದ ಜವಾಬ್ದಾರಿ ಮತ್ತು ನಿರಂತರ ನಿರೀಕ್ಷೆಗಳು ಭಾವನಾತ್ಮಕವಾಗಿ ಒತ್ತಡ ತಂದಿವೆ ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;₹25&ndash;30 ಲಕ್ಷದ ನಂತರದ ಪ್ರತಿಯೊಂದು ವೇತನ ಹೆಚ್ಚಳವೂ ಜೀವನಶೈಲಿಗಿಂತ ಹೂಡಿಕೆಗಳಿಗೆ ಹೆಚ್ಚು ನೆರವಾಗುತ್ತದೆ ಎಂಬುದು ಅವರ ಅನುಭವ.&lt;/p&gt;&lt;p&gt;&lt;strong&gt;ಹಳೆಯ ಕಾರಿನಲ್ಲೇ ಓಡಾಟ, ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ!&lt;/strong&gt;&lt;/p&gt;&lt;p&gt;₹1.05 ಕೋಟಿ ಆದಾಯವಿದ್ದರೂ ಅವರು 10 ವರ್ಷ ಹಳೆಯ ಕಾರನ್ನೇ ಬಳಸುತ್ತಾರೆ. ರಿಯಲ್ ಎಸ್ಟೇಟ್, ಷೇರುಗಳು, ಮ್ಯೂಚುವಲ್ ಫಂಡ್&zwnj;ಗಳು, ಕ್ರಿಪ್ಟೋ ಮತ್ತು ವಾಣಿಜ್ಯ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ ಕ್ರಿಪ್ಟೋ ಟ್ರೇಡಿಂಗ್&zwnj;ನಲ್ಲಿ ₹20&ndash;25 ಲಕ್ಷ ನಷ್ಟವಾಗಿರುವುದನ್ನೂ ಅವರು ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;&lt;strong&gt;ಮುಂದಿರುವ ಗುರಿ ಸ್ವಂತ ಆದಾಯದ ಮೂಲ!&lt;/strong&gt;&lt;/p&gt;&lt;p&gt;ಈಗ ಅವರು ಮೈಕ್ರೋ-SaaS ಮತ್ತು ಸಣ್ಣ ಉತ್ಪನ್ನಗಳನ್ನು ನಿರ್ಮಿಸುತ್ತಿದ್ದಾರೆ. ಸ್ವಂತ ಪ್ರಾಜೆಕ್ಟ್&zwnj;ಗಳಿಂದ ತಿಂಗಳಿಗೆ $1,000&ndash;2,000 ಪುನರಾವರ್ತಿತ ಆದಾಯ ಬರಲು ಆರಂಭಿಸಿದರೆ ಉದ್ಯೋಗ ತೊರೆಯುವ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.&lt;/p&gt;&lt;p&gt;&ldquo;ಹಣ ಹಲವು ಸಮಸ್ಯೆಗಳನ್ನು ಪರಿಹರಿಸಿತು; ಆದರೆ ಜೀವನದಲ್ಲಿ ನಿಜವಾಗಿ ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ&rdquo; ಎಂಬ ಅವರ ಮಾತು ಈ ಕಥೆಯ ಪ್ರಮುಖ ಸಂದೇಶವಾಗಿದೆ.&lt;/p&gt;&lt;p&gt;My salary from ₹14,300 per month to ₹1,05,00,000 per yearby u/ in r/Indian_flex&lt;/p&gt;&lt;p&gt;&lt;/p&gt;]]></content:encoded>
            <category><![CDATA[Viral News]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/viral/from-14300-salary-to-1-crore-package-why-this-techie-says-money-is-not-everything/articleshow-5ne2wok"/>
        </item>
        <item>
            <title><![CDATA[ತಮಿಳುನಾಡಿಗೆ ನಮ್ಮ ಮೆಟ್ರೋ ವಿಸ್ತರಣೆ ಇಲ್ಲ, ಹೊಸ 9 ನಿಲ್ದಾಣದೊಂದಿದೆ ಹಳದಿ ಮಾರ್ಗ ಅತ್ತಿಬೆಲೆವರೆಗೆ ವಿಸ್ತರಣೆ]]></title>
            <link>https://kannada.asianetnews.com/karnataka-districts/namma-metro-yellow-line-extension-bmrcl-plans-from-bommasandra-to-attibele-with-9-new-stations-gdp/articleshow-ducgsd7</link>
            <guid isPermaLink="true">https://kannada.asianetnews.com/karnataka-districts/namma-metro-yellow-line-extension-bmrcl-plans-from-bommasandra-to-attibele-with-9-new-stations-gdp/articleshow-ducgsd7</guid>
            <pubDate>Thu, 13 Aug 2026 13:56:04 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಹೊಸೂರಿಗೆ ಅಂತರರಾಜ್ಯ ಮೆಟ್ರೋ ನಿರ್ಮಾಣಕ್ಕೆ ಸದ್ಯಕ್ಕೆ ಮುಂದಾಗದೆ, ನಮ್ಮ ಮೆಟ್ರೋದ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ ರಾಜ್ಯದ ಗಡಿಭಾಗವಾದ ಅತ್ತಿಬೆಲೆವರೆಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಈ 10.5 ಕಿ.ಮೀ. ಉದ್ದದ ಮಾರ್ಗದಲ್ಲಿ 9 ಹೊಸ ನಿಲ್ದಾಣಗಳು ಬರಲಿದ್ದು, ಇದು ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಕೈಗಾರಿಕಾ ಪ್ರದೇಶದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kyj0edkzq7dhazetejcxz30c,imgname-namma-metro-1785163363966.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಕರ್ನಾಟಕ ಸರ್ಕಾರವು ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿನವರೆಗೆ ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಮಾರ್ಗವನ್ನು ನಿರ್ಮಿಸಲು ಉತ್ಸುಕವಾಗಿಲ್ಲ. ಹೀಗಾಗಿ, ನಮ್ಮ ಮೆಟ್ರೋದ 'ಹಳದಿ ಮಾರ್ಗವನ್ನು' (Yellow Line) ತಮಿಳುನಾಡು ಗಡಿಯ ಸನ್ನಿಹಿತ ಪ್ರದೇಶವಾದ ಅತ್ತಿಬೆಲೆಯವರೆಗೆ ಮಾತ್ರ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಪ್ರಸ್ತಾವಿತ ಯೋಜನೆಯ ಪ್ರಕಾರ, ಬೊಮ್ಮಸಂದ್ರದಿಂದ ಅತ್ತಿಬೆಲೆಯವರೆಗೆ 10.5 ಕಿಲೋಮೀಟರ್ ಉದ್ದದ ಎತ್ತರಿಸಿದ (Elevated) ಕಾರಿಡಾರ್ ನಿರ್ಮಾಣವಾಗಲಿದ್ದು, ಇದರಲ್ಲಿ ಒಟ್ಟು 9 ನೂತನ ನಿಲ್ದಾಣಗಳು ನಿರ್ಮಾಣವಾಗಲಿದೆ.&lt;/p&gt;&lt;h2&gt;ಪ್ರಸ್ತಾವಿತ 9 ನೂತನ ಮೆಟ್ರೋ ನಿಲ್ದಾಣಗಳು&lt;/h2&gt;&lt;p&gt;BMRCL ಸಿದ್ಧಪಡಿಸಿರುವ ಕಾರ್ಯಸಾಧ್ಯತಾ ವರದಿಯ ಪ್ರಕಾರ, ಬೊಮ್ಮಸಂದ್ರದ ಅಸ್ತಿತ್ವದಲ್ಲಿರುವ ಕೊನೆಯ ಟರ್ಮಿನಲ್ ನಿಲ್ದಾಣದಿಂದ ಅತ್ತಿಬೆಲೆಯವರೆಗೆ ಈ ಕೆಳಗಿನ ಸ್ಥಳಗಳಲ್ಲಿ ನಿಲ್ದಾಣಗಳನ್ನು ಗುರುತಿಸಲಾಗಿದೆ.&lt;/p&gt;&lt;p&gt;1.ನಾರಾಯಣ ಇನ್&zwnj;ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ (ಬೊಮ್ಮಸಂದ್ರ ಟರ್ಮಿನಲ್&zwnj;ನಿಂದ ದಕ್ಷಿಣಕ್ಕೆ ಸುಮಾರು 1.5 ಕಿ.ಮೀ.),&lt;/p&gt;&lt;p&gt;2.ಚಂದಾಪುರ ವೃತ್ತ (ನಾರಾಯಣ ಹೃದಯಾಲಯ ನಿಲ್ದಾಣದಿಂದ ಸುಮಾರು 1.8 ಕಿ.ಮೀ.),&lt;/p&gt;&lt;p&gt;3.ಹಳೆಯ ಚಂದಾಪುರ,&lt;/p&gt;&lt;p&gt;4.ತಿರುಮಗೊಂಡನಹಳ್ಳಿ,&lt;/p&gt;&lt;p&gt;5.ಬಾಲಗರನಹಳ್ಳಿ (ನೇರಲೂರು, ಚಂದಾಪುರ, ಮಸ್ರೂರು ಮತ್ತು ಸೂರ್ಯನಗರದ ಪ್ರಯಾಣಿಕರಿಗೆ ಅನುಕೂಲ)&lt;/p&gt;&lt;p&gt;6.ಅತ್ತಿಬೆಲೆ ಕೈಗಾರಿಕಾ ಪ್ರದೇಶ&lt;/p&gt;&lt;p&gt;7.ಯಾದವನಹಳ್ಳಿ (ಜಿಗಣಿ, ಗಿಡ್ಡೇನಹಳ್ಳಿ ಮತ್ತು ಕೃಷ್ಣಸಾಗರ ಪ್ರದೇಶಗಳಿಗೆ ಸಂಪರ್ಕ)&lt;/p&gt;&lt;p&gt;8.ಅತ್ತಿಬೆಲೆ&lt;/p&gt;&lt;p&gt;9.ಅತ್ತಿಬೆಲೆ ಟರ್ಮಿನಲ್ (ಗಡಿ ಪ್ರದೇಶ)&lt;/p&gt;&lt;h2&gt;ಅಂತರರಾಜ್ಯ ಮೆಟ್ರೋಗೆ ಕರ್ನಾಟಕದ ತಾಂತ್ರಿಕ ಅಭ್ಯಂತರ&lt;/h2&gt;&lt;p&gt;ತಮಿಳುನಾಡು ಸರ್ಕಾರವು ಇತ್ತೀಚಿನ ತನ್ನ ಬಜೆಟ್&zwnj;ನಲ್ಲಿ ಹೊಸೂರಿನಿಂದ ಬೊಮ್ಮಸಂದ್ರದವರೆಗೆ 23 ಕಿ.ಮೀ ಉದ್ದದ (ಕರ್ನಾಟಕದಲ್ಲಿ 12 ಕಿ.ಮೀ ಹಾಗೂ ತಮಿಳುನಾಡಿನಲ್ಲಿ 11 ಕಿ.ಮೀ) ಅಂತರರಾಜ್ಯ ಮೆಟ್ರೋ ಮಾರ್ಗ ನಿರ್ಮಿಸುವುದಾಗಿ ಪ್ರಕಟಿಸಿತ್ತು. ಚೆನ್ನೈ ಮೆಟ್ರೋ ರೈಲು ನಿಗಮವು (CMRL) ಈ ಕುರಿತು ಕಾರ್ಯಸಾಧ್ಯತಾ ಅಧ್ಯಯನವನ್ನೂ ನಡೆಸಿತ್ತು.&lt;/p&gt;&lt;p&gt;ಆದರೆ, ಎರಡು ರಾಜ್ಯಗಳ ನಡುವೆ ಕಾರ್ಯಾಚರಣೆ ನಡೆಸಲು ಹಲವು ತಾಂತ್ರಿಕ, ಆಡಳಿತಾತ್ಮಕ ಮತ್ತು ತೆರಿಗೆ ಸಂಬಂಧಿತ ಮಿತಿಗಳಿರುವುದರಿಂದ, ಪ್ರಸ್ತುತ ಹಂತದಲ್ಲಿ ಅಂತರರಾಜ್ಯ ಮೆಟ್ರೋ ನಿರ್ಮಾಣ ಸಾಧ್ಯವಿಲ್ಲ ಎಂದು ಕರ್ನಾಟಕ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ BMRCL ತನ್ನ ಮೆಟ್ರೋ ಸೇವೆಯನ್ನು ರಾಜ್ಯದ ಗಡಿಭಾಗವಾದ ಅತ್ತಿಬೆಲೆಯವರೆಗೆ ಸೀಮಿತಗೊಳಿಸಲು ನಿರ್ಧರಿಸಿದೆ.&lt;/p&gt;&lt;h2&gt;ಯೋಜನೆಯ ಪ್ರಸ್ತುತ ಸ್ಥಿತಿ ಮತ್ತು ಮುಂದಿನ ಹಂತ&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ (ಹೊಸೂರು ರಸ್ತೆ) ವ್ಯಾಪ್ತಿಯಲ್ಲಿ ಹಾದುಹೋಗುವ ಈ ಮಾರ್ಗದ ನಿಲ್ದಾಣಗಳಿಗೆ ಪಾದಚಾರಿ ಮೇಲ್ಸೇತುವೆಗಳು (Skywalks), ಸಬ್&zwnj;ವೇಗಳು ಮತ್ತು ಮಲ್ಟಿ-ಮೋಡಲ್ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.&lt;/p&gt;&lt;p&gt;BMRCL ಈಗಾಗಲೇ ಈ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರವು ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲು ಸೂಚಿಸಿದ್ದು, ಶೀಘ್ರದಲ್ಲೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಈ ವಿಸ್ತರಣೆಯಿಂದಾಗಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ ಕೈಗಾರಿಕಾ ಪ್ರದೇಶಗಳಿಗೆ ಸಂಚರಿಸುವ ಲಕ್ಷಾಂತರ ಉದ್ಯೋಗಿಗಳಿಗೆ ಹಾಗೂ ಗಡಿಭಾಗದ ಸಾರ್ವಜನಿಕರಿಗೆ ಸುಲಭ ಮತ್ತು ವೇಗದ ಸಾರಿಗೆ ಸೌಲಭ್ಯ ದೊರೆಯಲಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/namma-metro-yellow-line-extension-bmrcl-plans-from-bommasandra-to-attibele-with-9-new-stations-gdp/articleshow-ducgsd7"/>
        </item>
        <item>
            <title><![CDATA[ಮನೆ ಸೇರಿ 100 ಕೋಟಿ ಆಸ್ತಿ ಮೆಡಿಕಲ್‌ ಕಾಲೇಜಿಗೆ ದಾನ ಮಾಡಿದ ವೈದ್ಯ]]></title>
            <link>https://kannada.asianetnews.com/life/77-year-old-man-donates-assets-worth-100-crore-transfers-land-and-bungalow-to-a-medical-college/articleshow-bw47ann</link>
            <guid isPermaLink="true">https://kannada.asianetnews.com/life/77-year-old-man-donates-assets-worth-100-crore-transfers-land-and-bungalow-to-a-medical-college/articleshow-bw47ann</guid>
            <pubDate>Thu, 13 Aug 2026 13:55:47 +0530</pubDate>
            <description><![CDATA[property donation : ಹಿಮಾಲಯದ ನಿವೃತ್ತ ವೈದ್ಯರೊಬ್ಬರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ತೀರ್ಮಾನ ಎಲ್ಲರನ್ನು ಆಶ್ಚರ್ಯಗೊಳಿಸಿದೆ. 100 ಕೋಟಿ ಆಸ್ತಿಯನ್ನು ದಾನ ಮಾಡಲು ಕಾರಣ ಏನು ಗೊತ್ತಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kzx3d8pd8khvachx9h3zmd5s,imgname-doctor-dr.-rajendra-kanwar-1786609312461.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಣ ನೋಡಿದ್ರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಮಾತಿದೆ. ಹಣ, ಆಸ್ತಿಗಾಗಿ ಜನ ಆಪ್ತರ ಪ್ರಾಣ ತೆಗೆಯೋಕೆ ಸಿದ್ಧವಿದ್ದಾರೆ. ಸಾಯುವವರೆಗೂ ಹಣ ಕೂಡಿಹಾಕಿ, ಬಂದಿದ್ದನ್ನು ಬಾಚಿಕೊಳ್ಳವವರ ಸಂಖ್ಯೆ ಹೆಚ್ಚಿರುವ ಈ ಜಗತ್ತಿನಲ್ಲಿ ಹಿಮಾಚಲದ ವ್ಯಕ್ತಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ.&lt;/p&gt;&lt;h2&gt;100 ಕೋಟಿ ಆಸ್ತಿ ದಾನ !&lt;/h2&gt;&lt;p&gt;ಹಿಮಾಚಲ ಪ್ರದೇಶದ ನದೌನ್ನ ಜೋಲಾಸ್ಪಾಡ್ನ 77 ವರ್ಷದ ಪ್ರಸಿದ್ಧ ವೈದ್ಯ ಡಾ. ರಾಜೇಂದ್ರ ಕನ್ವರ್ ಕೆಲಸ ಎಲ್ಲರನ್ನು ಅಚ್ಚರಿಗೊಳಿಸಿದೆ. ಅವರು ತಮ್ಮ ಮತ್ತು ದಿವಂಗತ ಪತ್ನಿ ಕೃಷ್ಣ ಕನ್ವರ್ ಸಂಪಾದಿಸಿದ ಸುಮಾರು 100 ಕೋಟಿ ಮೌಲ್ಯದ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. 2021 ರಲ್ಲಿ, ಡಾ. ಕನ್ವರ್ ತಮ್ಮ ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಈಗ ಆಗಸ್ಟ್ 5, 2026 ರಂದು, ತಮ್ಮ ಜೀವಿತಾವಧಿಯಲ್ಲಿ ಅವರು ಸ್ವಯಂಪ್ರೇರಣೆಯಿಂದ ಉಡುಗೊರೆ ಪತ್ರಕ್ಕೆ ಸಹಿ ಹಾಕಿ ಸರ್ಕಾರಕ್ಕೆ ಆಸ್ತಿಯನ್ನು ವರ್ಗಾಯಿಸಿದ್ದಾರೆ.&lt;/p&gt;&lt;p&gt;ಅವರ ಈ ಉಡುಗೊರೆ ಆಸ್ತಿಯನ್ನು ರಾಜ್ಯ ಸರ್ಕಾರ, ಹಮೀರ್ಪುರದ ಡಾ. ರಾಧಾಕೃಷ್ಣನ್ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ನೋಂದಾಯಿಸಿದೆ. ಡಾ. ಕನ್ವರ್ ತಮ್ಮ ಮರಣದ ನಂತರ ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ವೈದ್ಯಕೀಯ ಕಾಲೇಜಿನ ಅಂಗರಚನಾಶಾಸ್ತ್ರ ವಿಭಾಗಕ್ಕೆ ಲಿಖಿತ ಒಪ್ಪಿಗೆಯನ್ನು ನೀಡಿದ್ದಾರೆ.&lt;/p&gt;&lt;h3&gt;ಈ ನಿರ್ಧಾರಕ್ಕೆ ಕಾರಣ ಏನು?&lt;/h3&gt;&lt;p&gt;ಡಾ. ರಾಜೇಂದ್ರ ಕನ್ವರ್, ಸಮಾಜದ ಹಿತಕ್ಕಾಗಿ ತಮ್ಮ ಆಸ್ತಿಯನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಅವರಿಗೆ ಮಕ್ಕಳಿಲ್ಲ. ಉಡುಗೊರೆ ಪತ್ರದಲ್ಲಿ ಎರಡು ಅಂತಸ್ತಿನ ಬಂಗಲೆ, ಸರಿಸುಮಾರು ಐದು ಕನಾಲ್ಗಳು ಮತ್ತು ಐದು ಮಾರ್ಲಾ ಭೂಮಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಭರಣಗಳು, ಕಾರುಗಳು, ಪೀಠೋಪಕರಣಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿದಂತೆ ಇತರ ಆಸ್ತಿಗಳು ಸೇರಿವೆ. ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಲೆಕ್ಕ ಹಾಕಿದ್ರೆ ಆಸ್ತಿ ಮೌಲ್ಯ 100 ಕೋಟಿ ಮೀರಿದೆ. ಡಾ. ಕನ್ವರ್, ಆರೋಗ್ಯ ಕ್ಷೇತ್ರದಲ್ಲಿ ಅಗತ್ಯವಿರುವವರಿಗೆ ಹಾಗೂ ವೃದ್ಧಾಶ್ರಮಕ್ಕೆ ಇದನ್ನು ಬಳಸಲು ಅವರು ಬಯಸುತ್ತಾರೆ. ತಮ್ಮ ದಿವಂಗತ ಪತ್ನಿಯ ನೆನಪಿಗಾಗಿ ಸಂಸ್ಥೆಗೆ 'ಕೃಷ್ಣ ರಾಜೇಂದ್ರ' ಎಂದು ಹೆಸರಿಸಬೇಕೆಂದು ಅವರು ಬಯಸುತ್ತಾರೆ.&lt;/p&gt;&lt;p&gt;ಡಾ. ಕನ್ವರ್ ಕುಟುಂಬ ಡಾ. ಕನ್ವರ್ ಅವರ ಪತ್ನಿ ಕೃಷ್ಣ ಕನ್ವರ್, ಸುಮಾರು 32 ವರ್ಷಗಳ ಕಾಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಂತರ 2011 ರಲ್ಲಿ ಬಡಾದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿ ನಿವೃತ್ತರಾದರು. ಅವರು ಡಿಸೆಂಬರ್ 6, 2020 ರಂದು ನಿಧನರಾದರು. ಅವರ ಮರಣದ ಮೊದಲು, ದಂಪತಿ ತಮ್ಮ ಆಸ್ತಿಯನ್ನು ಸಮಾಜಕ್ಕೆ ಅರ್ಪಿಸಲು ನಿರ್ಧರಿಸಿದ್ದರು. ಡಾ. ರಾಜೇಂದ್ರ ಕನ್ವರ್ ಜನವರಿ 3, 1977 ರಂದು ಆರೋಗ್ಯ ಇಲಾಖೆಯಲ್ಲಿ ವೈದ್ಯಾಧಿಕಾರಿಯಾಗಿ ಸೇರಿದರು ಮತ್ತು ಸುಮಾರು 33 ವರ್ಷಗಳ ಸರ್ಕಾರಿ ಸೇವೆಯ ನಂತರ, 2010 ರಲ್ಲಿ ಕಂಗುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿರಿಯ ವೈದ್ಯರಾಗಿ ನಿವೃತ್ತರಾದರು.&lt;/p&gt;]]></content:encoded>
            <category><![CDATA[life]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/life/77-year-old-man-donates-assets-worth-100-crore-transfers-land-and-bungalow-to-a-medical-college/articleshow-bw47ann"/>
        </item>
        <item>
            <title><![CDATA[ಕೋಲಾರ: ಪಕ್ಕದ ಸೀಟಲ್ಲಿ ಕುಳಿತ ಮಹಿಳೆಯ ಮೈಕೈ ಮುಟ್ಟಿ ಅಸಭ್ಯ ವರ್ತನೆ: ಕಾಮುಕ ಅಂಕಲ್‌ಗೆ ಹಿಗ್ಗಾಮುಗ್ಗಾ ಗೂಸಾ! ವಿಡಿಯೋ ವೈರಲ್]]></title>
            <link>https://kannada.asianetnews.com/karnataka-districts/kolar-inicident-woman-thrashing-man-who-harassed-her-on-a-bus-goes-viral/articleshow-pvhwfys</link>
            <guid isPermaLink="true">https://kannada.asianetnews.com/karnataka-districts/kolar-inicident-woman-thrashing-man-who-harassed-her-on-a-bus-goes-viral/articleshow-pvhwfys</guid>
            <pubDate>Thu, 13 Aug 2026 13:45:12 +0530</pubDate>
            <description><![CDATA[ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ, ಪಕ್ಕದ ಸೀಟಿನಲ್ಲಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಆತನಿಗೆ ಬಸ್‌ನಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆರೋಪಿಯು ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಪರಾರಿಯಾಗಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx30mzdxhm8s9012156km3k,imgname-----------------------2026-08-13t134428.298-1786608899053.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲಾರ (ಆ.13): &lt;/strong&gt;ಪಕ್ಕದ ಸೀಟಲ್ಲಿ ಕುಳಿತಿದ್ದ ಮಹಿಳೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಕಿರುಕುಳಕ್ಕೊಳಗಾದ ಮಹಿಳೆ ಬಸ್&zwnj;ನಲ್ಲೇ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಬಸ್&zwnj;ನಲ್ಲಿ ನಡೆದಿದೆ.&lt;/p&gt;&lt;p&gt;ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅಂಕಲ್ KGF ಮೂಲದವರೆಂದು ಗುರುತಿಸಲಾಗಿದೆ. ಇನ್ನು ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಂಗಾರಪೇಟೆಯವರು ಎನ್ನಲಾಗಿದೆ.&lt;/p&gt;&lt;h2&gt;ವಿಡಿಯೋ ವೈರಲ್, ಬಸ್&zwnj;ನಲ್ಲಿ ನಡೆದಿದ್ದೇನು&lt;/h2&gt;&lt;p&gt;ಕೋಲಾರದಿಂದ ಬಂಗಾರಪೇಟೆ ಕಡೆಗೆ ಹೊರಟಿದ್ದ ಕೆಎಸ್&zwnj;ಆರ್&zwnj;ಟಿಸಿ&lt;/p&gt;&lt;p&gt;ಕೋಲಾರದಿಂದ - ಬಂಗಾರಪೇಟೆಗೆ ತೆರಳುತ್ತಿದ್ದ Ka 51-f4452 ಸಂಖ್ಯೆಯ KSRTC ಬಸ್. ಇದೆ ಬಸ್ ಹತ್ತಿದ್ದ ಕಾಮುಕ ಅಂಕಲ್ ಮಹಿಳೆಯ ಪಕ್ಕ ಕುಳಿತಿದ್ದಾನೆ. ಬಸ್ ಚಲಿಸುವಾಗ ಅಲುಗಾಡುತ್ತಾ ಮಹಿಳೆ ಮೈಕೈ ಸ್ಪರ್ಶಿಸಿರುವ ಕಾಮುಕ ಅಂಕಲ್. ಇದು ಸಹಜವೆಂದು ಮೊದಲಿಗೆ ಸುಮ್ಮನಿದ್ದ ಮಹಿಳೆ. ಆದರೆ ಪದೇಪದೆ ಇದೇ ರೀತಿ ಮೈಕೈ ಮುಟ್ಟಿ ಕೈಗೆ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ರೌದ್ರಾವತಾರ ತಾಳಿದ ಮಹಿಳೆ ಆನ್ ದಿ ಸ್ಪಾಟ್ ಬಸ್&zwnj;ನಲ್ಲೇ ಕಾಮುಕನಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಈ ಘಟನೆಯಿಂದ ಬಸ್&zwnj;ನಲ್ಲಿದ್ದ ಇತರೆ ಪ್ರಯಾಣಿಕರು ಕೂಡ ಆರೋಪಿ ಗೂಸಾ ಕೊಟ್ಟಿದ್ದಾರೆ.&lt;/p&gt;&lt;h3&gt;ಚಲಿಸುವ ಬಸ್&zwnj;ನಿಂದ ಹೊರಕ್ಕೆ ಜಿಗಿದು ಪರಾರಿ&lt;/h3&gt;&lt;p&gt;ಯಾವಾಗ ಮಹಿಳೆ ತಿರುಗಿಬಿದ್ದಳೋ ಆಗ ಆಂಕಲ್ 'ತಪ್ಪಾಗಿದೆ ಬಿಟ್ಟುಬಿಡಿ' ಅಂತಾ ಮಹಿಳೆಯ ಕೈಕಾಲು ಬೀಳುವ ನಾಟಕ ಶುರು ಮಾಡಿದ್ದಾನೆ. ಅಷ್ಟೊತ್ತಿಗಾಗಲೆ ಮಹಿಳೆ ಚೆನ್ನಾಗಿ ಬೆಂಡೆತ್ತಿದ್ದಾರೆ. ಪ್ರಯಾಣಿಕರು ಕೂಡ ಗೂಸಾ ಕೊಟ್ಟಿದ್ದಾರೆ ಇನ್ನು ಇಲ್ಲೇ ಇದ್ದರೆ ಉಳಿಯುವುದಿಲ್ಲ ಎಂದವನೇ ಚಲಿಸುವ ಬಸ್&zwnj;ನಿಂದ ಹೊರಕ್ಕೆ ಜಿಗಿದು ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.&lt;/p&gt;&lt;h3&gt;ಮಹಿಳೆಯರಿಗೆ ಸುರಕ್ಷತೆ ತಾಣ ಯಾವುದು?&lt;/h3&gt;&lt;p&gt;ಮಹಿಳೆಯರಿಗೆ ಬಸ್&zwnj;ಸ್ಟ್ಯಾಂಡಲ್ಲೂ ಸುರಕ್ಷತೆಯಿಲ್ಲ, ಬಸ್&zwnj;ನಲ್ಲೂ ಇಲ್ಲ ಎಂಬಂತಾಗಿದೆ. ಶಕ್ತಿ ಯೋಜನೆಯಿಂದ ಯಾವಾಗಲೂ ರಶ್ ಇರುವ ಬಸ್&zwnj;ಗಳು ಇದನ್ನೇ ಬಂಡಾವಳ ಮಾಡಿಕೊಂಡ ಕಾಮುಕರು. ಮಹಿಳೆಯರನ್ನ ಸ್ಪರ್ಶಿಸಿ ಕಿರುಕುಳ ನೀಡುವುದು ದಿನನಿತ್ಯ ಬಸ್&zwnj;ಗಳಲ್ಲಿ ನಡೆಯುತ್ತಿವೆ. ಸಿಸಿಟಿವಿ ಹಾಕಿದರೂ ಕಿರುಕುಳ ಕಡಿಮೆಯಾಗಿಲ್ಲ. ಮಹಿಳೆಯರ ಪ್ರಯಾಣಿಸಲು ಸುರಕ್ಷಿತವಲ್ಲ ವಾತಾವರಣನಿರ್ಮಾಣವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/kolar-inicident-woman-thrashing-man-who-harassed-her-on-a-bus-goes-viral/articleshow-pvhwfys"/>
        </item>
        <item>
            <title><![CDATA[IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ]]></title>
            <link>https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</link>
            <guid isPermaLink="true">https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug</guid>
            <pubDate>Thu, 13 Aug 2026 13:33:15 +0530</pubDate>
            <description><![CDATA[ಕಳೆದ ಐಪಿಎಲ್ ಸೀಸನ್‌ನಲ್ಲಿ ನೀರಸ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಮುಂಬರುವ ಹರಾಜಿಗೂ ಮುನ್ನ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಕಳಪೆ ಪ್ರದರ್ಶನ ತೋರಿದ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಟ್ರೆಂಟ್ ಬೌಲ್ಟ್ ಸೇರಿದಂತೆ ಮೂವರು ಪ್ರಮುಖ ಬೌಲರ್‌ಗಳನ್ನು ತಂಡದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kr3hc87saxnf33ybt2d2e7w0,imgname-mumbai-indians-1778235351289.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಐಪಿಎಲ್&zwnj;ನ ಯಶಸ್ವಿ ತಂಡಗಳಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಆದರೆ 2021ರಿಂದೀಚೆಗೆ ಯಾಕೋ ನೀತಾ ಅಂಬಾನಿ ಮಾಲಿಕತ್ವದ ಮುಂಬೈ ಇಂಡಿಯನ್ಸ್ ಅದೃಷ್ಟ ಯಾಕೋ ಕೈಕೊಟ್ಟಂತಿದೆ. ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವು ನೀರಸ ಪ್ರದರ್ಶನ ತೋರುತ್ತಿದೆ. ಹೀಗಾಗಿ 2027ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಮೇಲ್ನೋಟಕ್ಕೆ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ, ಬೌಲಿಂಗ್ ವಿಭಾಗ ಕೈಕೊಡುತ್ತಿರುವುದು ಮುಂಬೈ ಫ್ರಾಂಚೈಸಿಯ ನಿದ್ದೆಗೆಡುವಂತೆ ಮಾಡಿದೆ. 2026ರ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ 9ನೇ ಸ್ಥಾನಿಯಾಗಿ ತನ್ನ ಅಭಿಯಾನ ಮುಗಿಸಿತ್ತು. ಹೀಗಾಗಿ ಮುಂಬೈ ಫ್ರಾಂಚೈಸಿಯು ಮುಂಬರುವ ಐಪಿಎಲ್ ಹರಾಜಿಗೂ ಮುನ್ನ ಈ ಮೂರು ಬೌಲರ್&zwnj;ಗಳಿಗೆ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ. ಈ ಬೌಲರ್&zwnj;ಗಳ ಪೈಕಿ 12.5 ಕೋಟಿ ರುಪಾಯಿಗೆ ಖರೀದಿಸಿದ್ದ ಮಾರಕ ಎಡಗೈ ವೇಗಿಯೂ ಇದ್ದಾರೆ ಎನ್ನುವುದು ವಿಶೇಷ. ಈ ಲಿಸ್ಟ್&zwnj;ನಲ್ಲಿರುವ ಮೂವರು ಬೌಲರ್&zwnj;ಗಳು ಯಾರು ನೋಡೋಣ ಬನ್ನಿ.&lt;/p&gt;&lt;h2&gt;&lt;strong&gt;1. ದೀಪಕ್ ಚಹರ್:&lt;/strong&gt;&lt;/h2&gt;&lt;p&gt;ಭಾರತದ ವೇಗಿ ದೀಪಕ್ ಚಹರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 9.25 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಗಾಯದ ಸಮಸ್ಯೆಯ ಹೊರತಾಗಿಯೂ ದೀಪಕ್ ಚಹರ್ ಮೇಲೆ ಮುಂಬೈ ಫ್ರಾಂಚೈಸಿ ನಂಬಿಕೆಯಿಟ್ಟಿತ್ತು. ಆದರೆ ದೀಪಕ್ ಚಹರ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪರ 3 ಪಂದ್ಯಗಳನ್ನಾಡಿ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಚಹರ್&zwnj;ಗೆ ಮುಂಬೈ ತಂಡದಿಂದ ಗೇಟ್&zwnj;ಪಾಸ್ ಸಿಗೋದು ಬಹುತೇಕ ಖಚಿತ ಎನ್ನಲಾಗಿದೆ.&lt;/p&gt;&lt;h3&gt;&lt;strong&gt;2. ಶಾರ್ದೂಲ್ ಠಾಕೂರ್:&lt;/strong&gt;&lt;/h3&gt;&lt;p&gt;2026ರ ಐಪಿಎಲ್ ಟೂರ್ನಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2 ಕೋಟಿ ರುಪಾಯಿ ನೀಡಿ ಲಖನೌ ಸೂಪರ್&zwnj; ಜೈಂಟ್ಸ್ ತಂಡದಿಂದ ಶಾರ್ದೂಲ್ ಠಾಕೂರ್ ಅವರನ್ನು ಕರೆ ತಂದಿತು. ಶಾರ್ದೂಲ್ ಠಾಕೂರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟುಕೊಂಡು ಮುಂಬೈ ಫ್ರಾಂಚೈಸಿ ಈ ಡೀಲ್&zwnj;ಗೆ ಕೈ ಹಾಕಿತ್ತು. ಆದರೆ ಶಾರ್ದೂಲ್ ಠಾಕೂರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳನ್ನಾಡಿ ಕೇವಲ ಆರು ವಿಕೆಟ್ ಕಬಳಿಸಿ ನಿರೀಕ್ಷೆ ಹುಸಿಗೊಳಿಸಿದರು. ಹೀಗಾಗಿ ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆ ಹೆಚ್ಚಿದೆ.&lt;/p&gt;&lt;h3&gt;&lt;strong&gt;3. ಟ್ರೆಂಟ್ ಬೌಲ್ಟ್:&lt;/strong&gt;&lt;/h3&gt;&lt;p&gt;ಕಿವೀಸ್ ಮೂಲದ ಅನುಭವಿ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 2026ರ ಐಪಿಎಲ್ ಟೂರ್ನಿಗೂ ಮುನ್ನ ಬರೋಬ್ಬರಿ 12.5 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಪವರ್&zwnj; ಪ್ಲೇ ಹಾಗೂ ಡೆತ್ ಓವರ್&zwnj;ಗಳಲ್ಲಿ ಮಿಂಚಿನ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಬೌಲ್ಟ್, ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಬೌಲ್ಟ್ ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿ 11.62ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ ಎರಡು ವಿಕೆಟ್ ಅಷ್ಟೇ ಕಬಳಿಸಿದ್ದರು. ಹೀಗಾಗಿ ಬೌಲ್ಟ್&zwnj; ಅವರಿಗೆ ಮುಂಬೈ ಫ್ರಾಂಚೈಸಿ ಗೇಟ್&zwnj;ಪಾಸ್ ನೀಡಲು ರೆಡಿಯಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/ipl-2027-mumbai-indians-may-release-these-3-bowlers-after-poor-2026-season-kvn/articleshow-f85beug"/>
        </item>
        <item>
            <title><![CDATA[Cleaning Hacks: ವೈಟ್ ಕುರ್ಚಿಗಳ ಮೇಲಿನ ಕೊಳೆ ತೆಗೆಯುವ ಮೂರು ಸರಳ ವಿಧಾನ ಇಲ್ಲಿವೆ]]></title>
            <link>https://kannada.asianetnews.com/gallery/life/kannada-cleaning-hacks-easy-ways-to-clean-white-plastic-chairs-at-home-mrq-znf601i</link>
            <guid isPermaLink="true">https://kannada.asianetnews.com/gallery/life/kannada-cleaning-hacks-easy-ways-to-clean-white-plastic-chairs-at-home-mrq-znf601i</guid>
            <pubDate>Thu, 13 Aug 2026 13:30:33 +0530</pubDate>
            <description><![CDATA[ಬಿಳಿ ಪ್ಲಾಸ್ಟಿಕ್ ಕುರ್ಚಿಗಳ ಮೇಲಿನ ಹಠಮಾರಿ ಕಲೆಗಳು ಮತ್ತು ಹಳದಿ ಬಣ್ಣವನ್ನು ತೆಗೆದುಹಾಕಲು ಸರಳ ಮನೆಮದ್ದುಗಳನ್ನು ಬಳಸಬಹುದು. ಈ ವಿಧಾನಗಳಿಂದ ಕಡಿಮೆ ಸಮಯದಲ್ಲಿ ಕುರ್ಚಿಗಳಿಗೆ ಹೊಸ ಹೊಳಪನ್ನು ನೀಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzx1t2t1kc366c7yh9dedrvj,imgname-chair-cleaning-tips--4--1786607635265.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಳಿ ಪ್ಲಾಸ್ಟಿಕ್ ಕುರ್ಚಿಗಳ ಮೇಲಿನ ಹಠಮಾರಿ ಕಲೆಗಳು ಮತ್ತು ಹಳದಿ ಬಣ್ಣವನ್ನು ತೆಗೆದುಹಾಕಲು ಸರಳ ಮನೆಮದ್ದುಗಳನ್ನು ಬಳಸಬಹುದು. ಈ ವಿಧಾನಗಳಿಂದ ಕಡಿಮೆ ಸಮಯದಲ್ಲಿ ಕುರ್ಚಿಗಳಿಗೆ ಹೊಸ ಹೊಳಪನ್ನು ನೀಡಬಹುದು.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ಕುರ್ಚಿಗಳಿರುತ್ತವೆ. ಮನೆಯಲ್ಲಿದ್ರೂ ಈ ಕುರ್ಚಿಗಳು ಕೊಳಕು ಆಗುತ್ತವೆ. ಕುರ್ಚಿ ಹಿಂಭಾಗ ಬಹುತೇಕರು ಗಮನಿಸಿರುವುದಿಲ್ಲ. ನೋಡುವಷ್ಟರಲ್ಲಿ ಬಿಳಿ ಬಣ್ಣ ಕಪ್ಪು ಅಥವಾ ಹಳದಿಯಾಗಿ ಬದಲಾಗಿರುತ್ತವೆ. ಕೆಲವೊಮ್ಮೆ ಎಷ್ಟೇ ಉಜ್ಜಿದ್ರೂ ಕುರ್ಚಿಗಳು ಕ್ಲೀನ್ ಆಗಲ್ಲ. ಈ ಸಂದರ್ಭದಲ್ಲಿ ಕೆಲವು ಸರಳ ವಿಧಾನಗಳಿಂದ ಕುರ್ಚಿಗಳನ್ನು ಸುಲಭ ಮತ್ತು ಕಡಿಮೆ ಸಮಯದಲ್ಲಿ ಕ್ಲೀನ್ ಮಾಡಬಹುದು. ಆ ವಿಧಾನಗಳು ಯಾವವು ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಬಿಳಿ ಕುರ್ಚಿಗಳ ಮೇಲೆ ಮೊಂಡು ಕಲೆಗಳಿದ್ರೆ ಮನೆಯಲ್ಲಿರುವ ಅಡುಗೆಸೋಡಾ ಅಂದ್ರೆ ಬೇಕಿಂಗ್ ಸೋಡಾ ಬಳಕೆ ಮಾಡಹುದು. ಬೇಕಿಂಗ್&zwnj;ಸೋಡಾಗೆ ಸ್ವಲ್ಪವೇ ನೀರು ಸೇರಿಸಿ ಪೇಸ್ಟ್ ರೀತಿ ಸಿದ್ಧಪಡಿಸಿಕೊಳ್ಳಿ. ಅನಂತರ ಕುರ್ಚಿ ಮೇಲಿರುವ ಕಲೆ ಮೇಲೆ ಸ್ಪಾಂಜ್ ಅಥವಾ ಬ್ರಷ್&zwnj;ನಿಂದ ಪೇಸ್ಟ್ ಸವರಬೇಕು. 10 ರಿಂದ 15 ನಿಮಿಷ ಬಳಿಕ ಸ್ಪಾಂಜ್/ಬ್ರಷ್&zwnj;ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ತೊಳೆದ್ರೆ ಕಲೆಗಳೆಲ್ಲಾ ಮಾಯವಾಗುತ್ತವೆ.&lt;/p&gt;&lt;img&gt;&lt;p&gt;ಇಡೀ ಕುರ್ಚಿಯೆಲ್ಲಾ ಹಳದಿಯಾಗಿದ್ರೆ ಅಥವಾ ಅಲ್ಲಲ್ಲಿ ಕಲೆಗಳಿದ್ರೆ ನಿಂಬೆ ರಸ ಮತ್ತು ಉಪ್ಪು ಬಳಸಿ. ಮೊದಲಿಗೆ ನಿಂಬೆಹಣ್ಣನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಈಗ ನಿಂಬೆಹಣ್ಣಿನ ಮೇಲೆ ಉಪ್ಪು ಹಚ್ಚಿ ಕುರ್ಚಿ ಮೇಲೆ ನಯವಾಗಿ ಉಜ್ಜಬೇಕು. ನಂತರ 10 ನಿಮಿಷಗಳ ಬಳಿಕ ಸ್ವಚ್ಛವಾದ ನೀರಿನಿಂದ ತೊಳದ್ರೆ ಕುರ್ಚಿ ಸ್ವಚ್ಛವಾಗುತ್ತದೆ.&lt;/p&gt;&lt;img&gt;&lt;p&gt;ಒಂದು ಅಥವಾ ಎರಡು ಕುರ್ಚಿಗಳಿದ್ರೆ ಮೇಲಿನ ಎರಡು ವಿಧಾನಗಳನ್ನು ಬಳಸಿಕೊಳ್ಳಬಹುದು. ಆದ್ರೆ ಕುರ್ಚಿಗಳ ಸಂಖ್ಯೆ ಹೆಚ್ಚಿದ್ದಾಗ ಉಗುರು ಬೆಚ್ಚಗಿನ ನೀರಿಗೆ ಡಿಟರ್ಜೆಂಟ್ ಸೇರಿಸಿಕೊಳ್ಳಿ. ನಂತರ ಈ ನೀರನ್ನು ಕುರ್ಚಿಗಳ ಮೇಲೆ ಹಾಕಿ 10 ನಿಮಿಷ ಬಿಡಿ. ಆನಂತರ ಉಜ್ಜಿ ಸ್ವಚ್ಛವಾದ ನೀರಿನಿಂದ ತೊಳೆದ್ರೆ ಕೊಳೆಯೆಲ್ಲಾ ಹೋಗುತ್ತದೆ.&lt;/p&gt;&lt;img&gt;&lt;p&gt;ಕುರ್ಚಿಗಳನ್ನು ತೊಳೆಯಲು ಯಾವುದೇ ಕೆಮಿಕಲ್ ಬಳಕೆ ಮಾಡೋದನ್ನು ತಪ್ಪಿಸೋದು ಒಳ್ಳೆಯದು. ಹಾಗೆಯೇ ಕುರ್ಚಿ ತೊಳೆದ ನಂತರ ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿಕೊಳ್ಳಿ. ಆನಂತರ ಕುರ್ಚಿಗಳ ಮೇಲಿರುವ ತೇವಾಂಶ ಒಣಗೋವರೆಗೂ ವೇಟ್ ಮಾಡಿ. ಆನಂತರವೇ ಕುರ್ಚಿಗಳನ್ನು ಒಂದರೊಳಗೆ ಮತ್ತೊಂದು ಹಾಕಿ ಮನೆಯೊಳಗೆ ಇಟ್ಕೊಳ್ಳಿ.&lt;/p&gt;]]></content:encoded>
            <category><![CDATA[life]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/life/kannada-cleaning-hacks-easy-ways-to-clean-white-plastic-chairs-at-home-mrq-znf601i"/>
        </item>
        <item>
            <title><![CDATA[Coin on Wi-Fi router: ವೈಫೈ ರೂಟರ್ ಮೇಲೆ ನಾಣ್ಯ ಯಾಕೆ ಇಡುತ್ತಾರೆ? ವೈರಲ್ ಟ್ರೆಂಡ್ ಬಗ್ಗೆ ತಜ್ಞರು ಹೇಳುತ್ತಿರೋದು ಏನು?]]></title>
            <link>https://kannada.asianetnews.com/viral/why-keep-a-coin-on-wi-fi-router-what-are-experts-saying-about-the-viral-trend-fact-check-sns/articleshow-4rbpur8</link>
            <guid isPermaLink="true">https://kannada.asianetnews.com/viral/why-keep-a-coin-on-wi-fi-router-what-are-experts-saying-about-the-viral-trend-fact-check-sns/articleshow-4rbpur8</guid>
            <pubDate>Thu, 13 Aug 2026 13:20:37 +0530</pubDate>
            <description><![CDATA[ರೂಟರ್‌ನ ಮೇಲೆ ನಾಣ್ಯ ಇರಿಸುವುದರಿಂದ ವೈ-ಫೈ ವೇಗ ಅಥವಾ ಸಿಗ್ನಲ್ ಸುಧಾರಿಸುತ್ತದೆ ಎಂಬುದನ್ನು ದೃಢೀಕರಿಸುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಲ್ಲದೆ, ವಸ್ತುಗಳಿಂದ ರೂಟರ್‌ನ ಗಾಳಿಯಾಡುವ ರಂಧ್ರಗಳನ್ನು ಮುಚ್ಚುವುದರಿಂದ ಅದು ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಆದ್ದರಿಂದ, ಈ ವೈರಲ್ ತಂತ್ರವನ್ನು ಪ್ರಯತ್ನಿಸುವ ಬದಲು, ರೂಟರ್ ಅನ್ನು ಸೂಕ್ತವಾದ ಸ್ಥಳದಲ್ಲಿ ಇರಿಸುವುದು ಉತ್ತಮ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx1cepers1g5ww0xr961ehy,imgname-wifi--1786607188686.jpg" type="image/jpeg" height="390" width="690"/>
            <content:encoded><![CDATA[&lt;p&gt;ರೂಟರ್ ಮೇಲೆ ನಾಣ್ಯ ಇಡುವುದರಿಂದ ಸಿಗ್ನಲ್ ಗುಣಮಟ್ಟ ಹೆಚ್ಚಾಗುವುದಿಲ್ಲ, ಅಲ್ಲದೇ ರೂಟರ್ ಬಿಸಿಯನ್ನು ಹೊರಕ್ಕೆ ಹಾಕುವ ಮಾರ್ಗಕ್ಕೆ ಅಡ್ಡ ಆಗುವ ಅಪಾಯ ಇರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್ ಆಗುತ್ತಿರುವ ಈ ಟ್ರಿಕ್ ಹಿಂದಿನ ಸತ್ಯ ಏನು? ರೂಟರ್ ಅನ್ನು ಮನೆಯಲ್ಲಿ ಯಾವ ಭಾಗದಲ್ಲಿಟ್ಟರೆ ಸಿಗ್ನಲ್ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.&lt;/p&gt;&lt;h2&gt;ರೂಟರ್ ಮೇಲೆ ನಾಣ್ಯ ಯಾಕೆ ಇಡುತ್ತಿದ್ದಾರೆ?&lt;/h2&gt;&lt;p&gt;ರೂಟರ್ ಮೇಲೆ ನಾಣ್ಯ ಇಟ್ಟರೆ ಸಿಗ್ನಲ್ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಕೆಲವು ಟ್ರಿಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಲೋಹದಿಂದ ತಯಾರಿಸಿದ ನಾಣ್ಯವೂ ಒಂದು ರೀತಿ ಅಂಟೇನಾ ರೀತಿ ಕೆಲಸ ಮಾಡುತ್ತಿದೆ. ಇದರಿಂದ ಸಿಗ್ನಲ್ ಗುಣಮಟ್ಟ ಹೆಚ್ಚಾಗುತ್ತದೆ ಎಂದು ಕೆಲವರು ಸುದ್ದಿ ಹರಡುತ್ತಿದ್ದಾರೆ. ಈ ಇದು ಸತ್ಯ ಅಂತ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ.&lt;/p&gt;&lt;h2&gt;ಇಂಟರ್ ನೆಟ್ ಸ್ಪೀಡ್ ಹೆಚ್ಚಾಗುತ್ತಾ?&lt;/h2&gt;&lt;p&gt;ನಾಣ್ಯ ಇಡುವುದರಿಂದ ವೈಫೈ ವೇಗ ಹೆಚ್ಚಾಗುತ್ತದೆ ಎಂಬುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇಲ್ಲ. ತಜ್ಞರ ಪ್ರಕಾರ, 2.4GHz, 5GHz ವೈಫೈ ತರಂಗಗಳ ಮೇಲೆ ಒಂದು ಸಣ್ಣ ಯಾವುದೇ ಪ್ರಭಾವ ತೋರುವ ಅವಕಾಶ ಬಹಳ ಕಡಿಮೆ ಎಂದು ಹೇಳಿದ್ದಾರೆ.&lt;/p&gt;&lt;h2&gt;ನಾಣ್ಯ ಇಡುವುದರಿಂದ ಏನು ಉಪಯೋಗವಿದೆ?&lt;/h2&gt;&lt;p&gt;ಕೆಲವು ಸಂದರ್ಭಗಳ್ಲಿ ರೂಟರ್ ತೂಕ ಕಡಿಮೆ ಇದ್ದರೆ, ಅಥವಾ ಅದರ ಟೇಬಲ್ ಸ್ಥಿರವಾಗಿ ಇಲ್ಲ ಎಂದರೆ, ಆಗ ನಾಣ್ಯ ಅದನ್ನು ಸ್ಥಿರವಾಗಿ ಇರುವಂತೆ ಮಾಡಲು ಬಹಳಕೆ ಮಾಡಬಹುದು. ಆದರೆ ಇದಕ್ಕೂ ವೈಫೈ ಸಿಗ್ನಲ್ ಹೆಚ್ಚಿಸುವ ಟ್ರಿಕ್ನಿಕ್&zwnj;ಗೂ ಯಾವುದೇ ಸಂಬಂಧವಿಲ್ಲ.&lt;/p&gt;&lt;h2&gt;ರೂಟರ್ ಮೇಲೆ ವಸ್ತುಗಳು ಇಡೋದು ಅಪಾಯಕ್ಕೆ ಕಾರಣ!&lt;/h2&gt;&lt;p&gt;ರೂಟರ್ ಕೆಲಸ ಮಾಡುವ ಸಂದರ್ಭದಲ್ಲಿ ಬಿಸಿಯನ್ನು ಉತ್ಪಾದನೆ ಮಾಡುತ್ತದೆ. ಈ ಕಾರಣದಿಂದಲೇ ಬಿಸಿ ಹೊರಹೋಗಲು ರಂಧ್ರಗಳನ್ನು ಮಾಡ್ತಾರೆ. ಆದರೆ ರೂಟರ್ ಮೇಲೆ ಅನಗತ್ಯ ವಸ್ತುಗಳನ್ನು ಇಟ್ಟರೆ ಅದರ ಬಿಸಿ ಹೆಚ್ಚಾಗಿ ರೂಟರ್ ಹಾಳಾಗುವ ಅಪಾಯ ಇರುತ್ತದೆ. ಅಥವಾ ರೂಟರ್ ಕೆಲಸ ಮಾಡುವ ಗುಣಮಟ್ಟ ಕಡಿಮೆಯಾಗುವ ಅವಕಾಶ ಇರುತ್ತದೆ.&lt;/p&gt;&lt;h2&gt;ರೂಟರ್ ಅನ್ನು ಎಲ್ಲಿ ಅಳವಡಿಸಬೇಕು?&lt;/h2&gt;&lt;p&gt;ರೂಟರ್ ಮೇಲೆ ಹೆಚ್ಚು ನಾಣ್ಯಗಳು ಇಟ್ಟರೆ ಇದರಿಂದ ಸಿಗ್ನಲ್ ವೀಕ್ ಆಗುವ ಅವಕಾಶ ಇರುತ್ತದೆ. ಇದರಿಂದ ಮನೆಯ ಕೆಲವು ಪ್ರದೇಶಗಳಿಗೆ ಸಿಗ್ನಲ್ ಸರಿಯಾಗಿ ತಲುಪದೆ ಇರಬಹದು. ಅಡುಗೆ ಕೋಣೆ, ಮನೆಯ ಕಿಟಕಿ, ದೊಡ್ಡ ಎಲೆಕ್ಟ್ರಿಕ್ ವಸ್ತುಗಳ ಬಳಿ ರೂಟರ್ ಅಳವಡಿಕೆ ಮಾಡುವುದು ಸರಿಯಲ್ಲ. ರೂಟರ್ ಸುತ್ತ ಖಾಲಿ ಸ್ಥಳ ಇರುವಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.&lt;/p&gt;&lt;p&gt;ರೂಟರ್ ಮೇಲೆ ನಾಣ್ಯ ಇಡುವುದಕ್ಕಿಂತ, ರೂಟರ್ ಅನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಅಳವಡಿಸುವುದು ಉತ್ತಮ. ದೊಡ್ಡ ಲೋಹ ಯಂತ್ರಗಳು ಅಥವಾ ವಸ್ತುಗಳು, ಬಿಸಿ ಹೆಚ್ಚಾಗಿರುವ ಪ್ರದೇಶಗಳಿಗೆ ದೂರವಾಗಿ ಅಳವಡಿಸುವುದರಿಂದ ಸಿಗ್ನಲ್ ಗುಣಮುಟ್ಟ ಉತ್ತಮವಾಗಿರುತ್ತದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Sumanth SN</dc:creator>
            <atom:link href="https://kannada.asianetnews.com/viral/why-keep-a-coin-on-wi-fi-router-what-are-experts-saying-about-the-viral-trend-fact-check-sns/articleshow-4rbpur8"/>
        </item>
        <item>
            <title><![CDATA[₹59,750 ಕೊಟ್ಟು 5 ಗ್ರಾಂ ಚಿನ್ನ ಆರ್ಡರ್, ಡೆಲಿವರಿ ಮಾಡದೆ ಕ್ಯಾನ್ಸಲ್ ಮಾಡಿದ Myntraಗೆ ₹60,000 ದಂಡ]]></title>
            <link>https://kannada.asianetnews.com/business/myntra-failed-deliver-order-customer-lost-chance-buy-5-gram-gold-lower-price-consumer-court-orders-rs-60000-payout-suh/articleshow-fmk9ftl</link>
            <guid isPermaLink="true">https://kannada.asianetnews.com/business/myntra-failed-deliver-order-customer-lost-chance-buy-5-gram-gold-lower-price-consumer-court-orders-rs-60000-payout-suh/articleshow-fmk9ftl</guid>
            <pubDate>Thu, 13 Aug 2026 13:17:02 +0530</pubDate>
            <description><![CDATA[ಆನ್‌ಲೈನ್ ಶಾಪಿಂಗ್ ವೇಳೆ ಆರ್ಡರ್ ಮಾಡಿದ ವಸ್ತು ಸಿಗದೆ ಗ್ರಾಹಕರು ಪರದಾಡುವ ಘಟನೆಗಳು ಆಗಾಗ್ಗೆ ನಡೆಯುತ್ತವೆ. ಆದರೆ ಈ ಬಾರಿ 5 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿ, ಡೆಲಿವರಿಗಾಗಿ ಕಾಯುತ್ತಿದ್ದ ಗ್ರಾಹಕರಿಗೆ Myntra ನೀಡಿದ ಶಾಕ್‌ ಇದೀಗ ಗ್ರಾಹಕ ಕೋರ್ಟ್‌ವರೆಗೂ ಹೋಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx1cb4x7trnjr8t6e2xtb2h,imgname-myntra-failed-deliver-order-customer-lost-chance-buy-5-gram-gold-lower-price-consumer-court-orders-rs-60000-payout-1786607185051.jpg" type="image/jpeg" height="390" width="690"/>
            <content:encoded><![CDATA[&lt;p&gt;ಆನ್&zwnj;ಲೈನ್ ಶಾಪಿಂಗ್ ವೇಳೆ ಆರ್ಡರ್ ಮಾಡಿದ ವಸ್ತು ಸಿಗದೆ ಗ್ರಾಹಕರು ಪರದಾಡುವ ಘಟನೆಗಳು ಆಗಾಗ್ಗೆ ನಡೆಯುತ್ತವೆ. ಆದರೆ ಈ ಬಾರಿ 5 ಗ್ರಾಂ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿ, ಡೆಲಿವರಿಗಾಗಿ ಕಾಯುತ್ತಿದ್ದ ಗ್ರಾಹಕರಿಗೆ Myntra ನೀಡಿದ ಶಾಕ್&zwnj; ಇದೀಗ ಗ್ರಾಹಕ ಕೋರ್ಟ್&zwnj;ವರೆಗೂ ಹೋಗಿದೆ. ಪ್ರಕರಣದಲ್ಲಿ Myntraಗೆ ಒಟ್ಟು ₹60,000 ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.&lt;/p&gt;&lt;h2&gt;₹59,750 ಕೊಟ್ಟು 5 ಗ್ರಾಂ ಚಿನ್ನ ಆರ್ಡರ್&lt;/h2&gt;&lt;p&gt;ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲ್ ನಿವಾಸಿಯಾಗಿರುವ 32 ವರ್ಷದ ಗ್ರಾಹಕರು 2025ರ ಅಕ್ಟೋಬರ್ 5ರಂದು Myntra ಮೂಲಕ Kalyan Jewellersನ 24K (999 ಪ್ಯೂರಿಟಿ) 5 ಗ್ರಾಂ ಚಿನ್ನದ ನಾಣ್ಯ ಆರ್ಡರ್ ಮಾಡಿದ್ದರು. ಇದಕ್ಕಾಗಿ ಅವರು ₹59,750 ಅನ್ನು UPI ಮೂಲಕ ಪಾವತಿಸಿದ್ದರು. Myntra ಆರ್ಡರ್ ಅನ್ನು ದೃಢಪಡಿಸಿ, ಅಕ್ಟೋಬರ್ 22ರೊಳಗೆ ಡೆಲಿವರಿ ಮಾಡುವುದಾಗಿ ತಿಳಿಸಿತ್ತು.&lt;/p&gt;&lt;h2&gt;ಡೆಲಿವರಿ ಇಲ್ಲ, ಕ್ಯಾನ್ಸಲ್&zwnj;ಗೂ ಅವಕಾಶ ಇಲ್ಲ&lt;/h2&gt;&lt;p&gt;ಆದರೆ ನಿಗದಿತ ಸಮಯದಲ್ಲಿ ಚಿನ್ನದ ನಾಣ್ಯ ಡೆಲಿವರಿ ಆಗಲಿಲ್ಲ. ಗ್ರಾಹಕರು ಹಲವು ಬಾರಿ ಇ-ಮೇಲ್ ಮತ್ತು ಚಾಟ್ ಮೂಲಕ Myntra ಅನ್ನು ಸಂಪರ್ಕಿಸಿ, ಚಿನ್ನವನ್ನು ಡೆಲಿವರಿ ಮಾಡಿ ಅಥವಾ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಮನವಿ ಮಾಡಿದರು. ಆದರೆ 41 ದಿನಗಳಿಗೂ ಹೆಚ್ಚು ಕಾಲ ಆರ್ಡರ್ ಕ್ಯಾನ್ಸಲ್ ಮಾಡಲು Myntra ಅವಕಾಶ ನೀಡಲಿಲ್ಲ. ಚಿನ್ನದ ಉತ್ಪನ್ನಗಳಿಗೆ ಕ್ಯಾನ್ಸಲೇಶನ್ ಅನ್ವಯಿಸುವುದಿಲ್ಲ ಎಂಬ ತನ್ನ ನಿಯಮವನ್ನು ಕಂಪನಿ ಉಲ್ಲೇಖಿಸಿತ್ತು.&lt;/p&gt;&lt;h2&gt;ಕೊನೆಗೆ Myntraನೇ ಆರ್ಡರ್ ಕ್ಯಾನ್ಸಲ್ ಮಾಡಿತು&lt;/h2&gt;&lt;p&gt;ಗ್ರಾಹಕರಿಗೆ ಚಿನ್ನ ಸಿಗಲಿಲ್ಲ, ಕ್ಯಾನ್ಸಲ್ ಮಾಡಲು ಕೂಡ ಅವಕಾಶ ಸಿಗಲಿಲ್ಲ. ಹೀಗಿರುವಾಗ ಕೊನೆಗೆ Myntra ಯಾವುದೇ ಸ್ಪಷ್ಟ ಕಾರಣ ನೀಡದೆ ಆರ್ಡರ್ ಅನ್ನು ಏಕಪಕ್ಷೀಯವಾಗಿ ಕ್ಯಾನ್ಸಲ್ ಮಾಡಿತು. ಇದರ ನಡುವೆ ಚಿನ್ನದ ಬೆಲೆ ಏರಿಕೆಯಾಗಿತ್ತು. ಹೀಗಾಗಿ ಗ್ರಾಹಕರು ಅದೇ ಮೊತ್ತಕ್ಕೆ 5 ಗ್ರಾಂ ಚಿನ್ನವನ್ನು ಮತ್ತೆ ಖರೀದಿಸುವ ಅವಕಾಶವನ್ನೂ ಕಳೆದುಕೊಂಡರು.&lt;/p&gt;&lt;h2&gt;Myntraಗೆ ₹60,000 ಪಾವತಿಸುವಂತೆ ಕೋರ್ಟ್ ಆದೇಶ&lt;/h2&gt;&lt;p&gt;ಈ ಪ್ರಕರಣವನ್ನು ಕರ್ನೂಲ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ವಿಚಾರಣೆ ನಡೆಸಿತು. 2026ರ ಜುಲೈ 22ರಂದು ಆಯೋಗ ತನ್ನ ಆದೇಶ ನೀಡಿದೆ. Myntra ಗ್ರಾಹಕರಿಗೆ ₹50,000 ಪರಿಹಾರ ನೀಡಬೇಕು. ಇದರ ಜೊತೆಗೆ ₹10,000 ವ್ಯಾಜ್ಯ ವೆಚ್ಚ ಪಾವತಿಸಬೇಕು ಎಂದು ಆದೇಶಿಸಲಾಗಿದೆ. ಅಂದರೆ ಒಟ್ಟು ₹60,000 ಪಾವತಿಸಬೇಕಾಗಿದೆ.&lt;/p&gt;&lt;h2&gt;ನಾವು ಕೇವಲ ಮಧ್ಯವರ್ತಿಗಳು ಎಂದ Myntra&lt;/h2&gt;&lt;p&gt;ವಿಚಾರಣೆ ವೇಳೆ Myntra ತನ್ನದು ಕೇವಲ ಇ-ಕಾಮರ್ಸ್ ಮಧ್ಯವರ್ತಿ ವೇದಿಕೆ ಎಂಬ ವಾದ ಮುಂದಿಟ್ಟಿತ್ತು. ಆದರೆ ಗ್ರಾಹಕ ಆಯೋಗ ಈ ವಾದವನ್ನು ಒಪ್ಪಲಿಲ್ಲ.ಗ್ರಾಹಕರಿಂದ ಪಾವತಿ ಸ್ವೀಕರಿಸುವುದು ಮತ್ತು ಪ್ಲಾಟ್&zwnj;ಫಾರ್ಮ್ ಶುಲ್ಕ ಪಡೆಯುವುದು ಸೇರಿದಂತೆ ವಹಿವಾಟಿನಲ್ಲಿ Myntra ನೇರವಾಗಿ ಭಾಗಿಯಾಗಿರುವುದರಿಂದ, ಸೇವೆಯ ಕೊರತೆಗೆ ಕಂಪನಿಯೂ ಜವಾಬ್ದಾರಿಯಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿತು.&lt;/p&gt;]]></content:encoded>
            <category><![CDATA[business]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/business/myntra-failed-deliver-order-customer-lost-chance-buy-5-gram-gold-lower-price-consumer-court-orders-rs-60000-payout-suh/articleshow-fmk9ftl"/>
        </item>
        <item>
            <title><![CDATA[ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ದಿ.ಚೆನ್ನಮ್ಮ ಹೆಸರಿಡುವಂತೆ ಜೆಡಿಎಸ್ ಶಾಸಕ ಶರವಣ ಮನವಿ]]></title>
            <link>https://kannada.asianetnews.com/gallery/state/jds-mla-ts-sharavana-requests-that-midday-meal-scheme-for-government-schools-be-named-after-hd-chennamma-mrq-5ri4qxv</link>
            <guid isPermaLink="true">https://kannada.asianetnews.com/gallery/state/jds-mla-ts-sharavana-requests-that-midday-meal-scheme-for-government-schools-be-named-after-hd-chennamma-mrq-5ri4qxv</guid>
            <pubDate>Thu, 13 Aug 2026 13:09:33 +0530</pubDate>
            <description><![CDATA[ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕೆಂದು ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್‌ನಲ್ಲಿ ಮನವಿ ಮಾಡಿದ್ದಾರೆ. ಸಂತಾಪ ಸೂಚನೆ ವೇಳೆ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzx0jgyjvcvk9enn6twrqghe,imgname-sharavana-1-1786606339026.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಜಿ ಪ್ರಧಾನಿ ಹೆಚ್&zwnj;ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರನ್ನು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇಡಬೇಕೆಂದು ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್&zwnj;ನಲ್ಲಿ ಮನವಿ ಮಾಡಿದ್ದಾರೆ. ಸಂತಾಪ ಸೂಚನೆ ವೇಳೆ ಈ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಬೆಂಗಳೂರು: ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಮಾಜಿ ಪ್ರಧಾನಿ ಹೆಚ್&zwnj;ಡಿ ದೇವೇಗೌಡರ ಪತ್ನಿ ದಿ.ಚೆನ್ನಮ್ಮರ ಹೆಸರಿಡುವಂತೆ ವಿಧಾನ ಪರಿಷತ್&zwnj;ನಲ್ಲಿ ಜೆಡಿಎಸ್ ಶಾಸಕ ಶರವಣ ಅವರು ವಿಧಾನ ಪರಿಷತ್&zwnj;ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸಂತಾಪ ಸೂಚನೆ ನಿರ್ಣಯದ ವೇಳೆ ಚೆನ್ನಮ್ಮ ದೇವೇಗೌಡರ ಬಗ್ಗೆ ಶಾಸಕ ಶರವಣ ಮಾತನಾಡಿರು.&lt;/p&gt;&lt;img&gt;&lt;p&gt;ಚೆನ್ನಮ್ಮ ಹೆಸರು ಅವಿಸ್ಮರಣೀಯವಾಗಿಸಲು ಬಿಸಿಯೂಟ ಯೋಜನೆಗೆ ಹೆಸರಿಡಲು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇನ್ನು ವಿಧಾನಸಭೆಯಲ್ಲಿ ಚೆನ್ನಮ್ಮನವರಿಗೆ ಗೌರವ ಸಲ್ಲಿಸಿದ್ದಕ್ಕೆ ಸರ್ಕಾರಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬುರಿಂದ ಧನ್ಯವಾದ ಸಲ್ಲಿಕೆ ಮಾಡಿದರು.&lt;/p&gt;&lt;img&gt;&lt;p&gt;ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಸಿಎಂ ಡಿಕೆ ಶಿವಕುಮಾರ್ ಅವರು, ಚೆನ್ನಮ್ಮನವರ ನಿಧನಕ್ಕೆ ಸಂತಾಪ ಸೂಚಿಸಿದರು. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ಇವತ್ತು ನಮ್ಮ ಜೊತೆಯಲ್ಲಿ ಇಲ್ಲ. ಓರ್ವ ರಾಜಕಾರಣಿಯ ಮನೇಲಿ ಯಾವ ರೀತಿಯ ಇರಬೇಕು ಅನ್ನೋದಕ್ಕೆ ಚೆನ್ನಮ್ಮನವರು ಸಾಕ್ಷಿ. ಪ್ರತಿ ಸಂದರ್ಭದಲ್ಲೂ ದೇವೇಗೌಡರ ಕುಟುಂಬದ ಜೊತೆಯಲ್ಲಿದ್ದರು ಎಂದರು ಹೇಳಿದರು.&lt;/p&gt;&lt;img&gt;&lt;p&gt;ತ್ಯಾಗದ ಹೆಣ್ಣು ಎಂದು ಹೇಳಿಕೊಳ್ಳಲು ನಮಗೆಲ್ಲರಿಗೂ ಹೆಮ್ಮೆ. ಅವರಿಗೆ ಸರ್ಕಾರದ ಗೌರವ ಕೊಡಬೇಕು ಎಂದಾಗ ಚರ್ಚೆ ಬಂತು. ಪ್ರಧಾನ ಮಂತ್ರಿಯಾದವರ ಹೆಂಡತಿಗೆ ಕೊಡೋಕೆ ಆಗುದಿಲ್ಲ ಎಂದೆಲ್ಲ ಚರ್ಚೆ ಬಂತು. ಕೊನೆಗೆ ನಾನು ದಿಟ್ಟ ನಿರ್ಧಾರ ತೆಗೆದುಕೊಂಡು ಅಧಿಕಾರಿಗಳಿಗೆ ಹೇಳಿದೆ. ನಮಗೆ ಅಧಿಕಾರ ಇದ್ದಾಗ ಹೃದಯ ಶ್ರೀಮಂತಿಕೆ ತೋರಿಸಬೇಕು ಎಂದರು.&lt;/p&gt;&lt;img&gt;&lt;p&gt;ಅಧಿಕಾರ ಇದ್ದಾಗ ದೊಡ್ಡ ಮಹಿಳೆ ರಾಜ್ಯಕ್ಕೆ ದೊಡ್ಡ ಮಕ್ಕಳನ್ನು ಕೊಟ್ಟಿದ್ದಾರೆ. ಅಂತಹವರಿಗೆ ನಾವು ಗೌರವ ಕೊಡಬೇಕೆಂದು ಅತಿ ಹೆಚ್ಚು ಗೌರವ ಕೊಟ್ಟಿದ್ದೇವೆ. ಆ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ಸಾವು ಯಾವಾಗ ಬರುತ್ತದೋ ಸಂತೋಷದಿಂದಲೇ ಸ್ವೀಕಾರ ಮಾಡಬೇಕು. ಅಗಲಿದ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದರು.&lt;/p&gt;]]></content:encoded>
            <category><![CDATA[state]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/state/jds-mla-ts-sharavana-requests-that-midday-meal-scheme-for-government-schools-be-named-after-hd-chennamma-mrq-5ri4qxv"/>
        </item>
        <item>
            <title><![CDATA[ಸಹೋದರಿ ಜೊತೆ ಮಾತನಾಡ್ತಾರೆ ಸುಶಾಂತ್ ಸಿಂಗ್ ! ಧೋನಿ ಮೇಲೆ ಕುಟುಂಬದ ಮುನಿಸು]]></title>
            <link>https://kannada.asianetnews.com/cine-world/sushant-singh-rajput-sister-reveals-she-talked-brother-ms-dhoni-not-contacted/articleshow-pr3imru</link>
            <guid isPermaLink="true">https://kannada.asianetnews.com/cine-world/sushant-singh-rajput-sister-reveals-she-talked-brother-ms-dhoni-not-contacted/articleshow-pr3imru</guid>
            <pubDate>Thu, 13 Aug 2026 13:04:17 +0530</pubDate>
            <description><![CDATA[ಸುಶಾಂತ್ ಸಿಂಗ್ ರಜಪೂತ್ ಈಗ್ಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರನ್ನು ಸದಾ ನೆನಪಿಸಿಕೊಳ್ಳುವ ಸಹೋದರಿ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅನೇಕ ವಿಷ್ಯಗಳನ್ನು ಬಿಚ್ಚಿಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jxmpg2ksx3k4mmgtg50rjhgy,imgname-sushant-singh-rajput-rejected-films-1749820115576.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಆರು ವರ್ಷಗಳು ಕಳೆದಿವೆ. ಅವ್ರ ನಿಧನದ ಬಗ್ಗೆ ಇನ್ನೂ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡ್ತಿವೆ. ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸುಶಾಂತ್ ನೆನಪಿಸಿಕೊಂಡು ಈಗ್ಲೂ ಕಣ್ಣೀರಿಡ್ತಿದ್ದಾರೆ. ಅವರ ಜೊತೆ ಅದೆಷ್ಟೋ ಬಾರಿ ಕನಸಿನಲ್ಲಿ ಮಾತನಾಡಿದ್ದೇನೆ ಅಂತ ಶ್ವೇತಾ ಹೇಳ್ಕೊಂಡಿದ್ದಾರೆ.&lt;/p&gt;&lt;h2&gt;ಸುಶಾಂತ್ ಸಿಂಗ್ ಜೊತೆಯಲ್ಲಿರುವ ಅನುಭವ&lt;/h2&gt;&lt;p&gt;ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಶ್ವೇತಾ, ತಮ್ಮ ಕನಸಿನಲ್ಲಿ ಸುಶಾಂತ್ ಸಿಂಗ್ ಬರ್ತಾರೆ, ಅವರ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ಪಾಟ್ನಾದಲ್ಲಿ ನಡೆದ ಘಟನೆಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಪಾಟ್ನಾಕ್ಕೆ ಚಿತಾಭಸ್ಮ ವಿಸರ್ಜನೆಗೆ ಹೋದಾಗ, ಅವರ ರೂಮಿನಲ್ಲೇ ಚಿತಾಭಸ್ಮ ಇಟ್ಟಿದ್ದರಂತೆ. ರಾತ್ರಿ ಮಲಗಿದಾಗ ಅವರ ಮುಂದೆ ಸುಶಾಂತ್ ಬಂದಿದ್ರಂತೆ. ಸುಶಾಂತ್ ಜೊತೆ ಗಂಟೆಗಟ್ಟಲೆ ಮಾತನಾಡಿದ್ದರಂತೆ. ಅವರು ನನ್ನನ್ನು ತಬ್ಬಿಕೊಂಡಿದ್ದರು. ನನಗೆ ತುಂಬಾ ಪ್ರಶ್ನೆಗಳಿದ್ದವು. ನಾನು ಕೇಳಿದ ಎಲ್ಲದಕ್ಕೂ ಅವರು ಉತ್ತರ ನೀಡಿದರು. ನನ್ನ ಕೆನ್ನೆಗೆ ಮುತ್ತಿಟ್ಟಿದ್ದರು. ಅವರ ವಾಸನೆ ಮತ್ತು ಉಸಿರನ್ನು ನಾನು ಅನುಭವಿಸಿದೆ. ಅದು ನನಗೆ ಆತ್ಮಸ್ಥೈರ್ಯವನ್ನು ನೀಡಿತು ಎಂದು ಶ್ವೇತಾ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಸುಶಾಂತ್ ಸಾವಿನ ನೋವನ್ನು ಹಲವು ಬಾರಿ ಅನುಭವಿಸಿದ್ದೇನೆ ಎಂದು ಶ್ವೇತಾ ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಾವಿನ ಸುದ್ದಿ ತಿಳಿದಾಗ ಏನಾಯ್ತು ಎಂಬುದನ್ನೂ ಶ್ವೇತಾ ಹೇಳಿದ್ದಾರೆ. ಆ ಟೈಮ್ ನಲ್ಲಿ ಶ್ವೇತಾ ಕ್ಯಾಲಿಫೋರ್ನಿಯಾದಲ್ಲಿದ್ದರು. ರಾತ್ರಿ ಮಲಗಿದ್ದಾಗ ಅವರಿಗೆ ಈ ಸುದ್ದಿ ತಿಳಿತು. ತಕ್ಷಣ ನನ್ನ ದೇಹ ಜಡವಾಯ್ತು. ನಾನು ಶಾಂತವಾಗಿದ್ದೆ. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ನಾನು ಜೋರಾಗಿ ಅಳಲು ಪ್ರಾರಂಭಿಸಿದೆ. ಕೊರೊನಾ ಕಾರಣದಿಂದಾಗಿ ನಾನು ಭಾರತಕ್ಕೆ ಬರಲಾಗ್ಲಿಲ್ಲ. ಸುಶಾಂತ್ ಗೆ ಅಂತಿಮ ವಿದಾಯ ಹೇಳಲು ಸಹ ನನಗೆ ಸಾಧ್ಯವಾಗಲಿಲ್ಲ ಅಂತ ಶ್ವೇತಾ ಹೇಳ್ಕೊಂಡಿದ್ದಾರೆ.&lt;/p&gt;&lt;h3&gt;ಧೋನಿ ಭೇಟಿಯಾಗಿಲ್ಲ&lt;/h3&gt;&lt;p&gt;ಸುಶಾಂತ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಯಾದ ಎಂಎಸ್ ಧೋನಿ - ದಿ ಅನ್ಟೋಲ್ಡ್ ಸ್ಟೋರಿಯಲ್ಲಿ ಕೆಲಸ ಮಾಡಿದ್ದರು. ಈ ಸಿನಿಮಾ, ಸುಶಾಂತ್ ಅವರ ವೃತ್ತಿಜೀವನವನ್ನು ಉನ್ನತ ಸ್ಥಾನಕ್ಕೆ ಏರಿಸಿತ್ತು. ಸುಶಾಂತ್ ಸಾವು ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತವಾಗಿತ್ತು. ಆದ್ರೆ ನಟನ ಮರಣದ ನಂತರ, ಧೋನಿ ಅವರ ಕುಟುಂಬವನ್ನು ಸಂಪರ್ಕಿಸಲಿಲ್ವಂತೆ. ಧೋನಿ ನಮ್ಮನ್ನು ಸಂಪರ್ಕಿಸಿಲ್ಲ. ಕಂಗನಾ ರನೌತ್ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ನಮ್ಮನ್ನು ಸಂಪರ್ಕಿಸಿದ್ದರು ಎಂದು ಶ್ವೇತಾ ಹೇಳಿದ್ದಾರೆ.&lt;/p&gt;]]></content:encoded>
            <category><![CDATA[cine-world]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/cine-world/sushant-singh-rajput-sister-reveals-she-talked-brother-ms-dhoni-not-contacted/articleshow-pr3imru"/>
        </item>
        <item>
            <title><![CDATA[ಟಾಟಾ ಸನ್ಸ್ ಚುಕ್ಕಾಣಿ ಬಿಟ್ಟ ಚಂದ್ರಶೇಖರನ್, ದಿಢೀರ್ ಬೆಳವಣಿಗೆ ಬೆನ್ನಲ್ಲೇ ಟಾಟಾ ಗ್ರೂಪ್‌ನಲ್ಲಿ ಅಧಿಕಾರದ ಹೋರಾಟ!]]></title>
            <link>https://kannada.asianetnews.com/gallery/business/tata-group-power-struggle-n-chandrasekaran-steps-down-noel-tata-influence-grows-gdp-m51695q</link>
            <guid isPermaLink="true">https://kannada.asianetnews.com/gallery/business/tata-group-power-struggle-n-chandrasekaran-steps-down-noel-tata-influence-grows-gdp-m51695q</guid>
            <pubDate>Thu, 13 Aug 2026 12:42:49 +0530</pubDate>
            <description><![CDATA[ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್‌ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kztc9h0d8v4at42865ahsd8h,imgname-tata-group-stocks-plunge-1786517963789.png" type="image/jpeg" height="390" width="690"/>
            <content:encoded><![CDATA[&lt;p&gt;ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್&zwnj;ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.&lt;/p&gt;&lt;img&gt;&lt;p&gt;ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದ ಅತಿದೊಡ್ಡ ಕೈಗಾರಿಕಾ ಸಂಘಟಿತ ಸಂಸ್ಥೆಯಾದ ಟಾಟಾ ಸಮೂಹವು ತೀವ್ರ ನಾಯಕತ್ವದ ಬಿಕ್ಕಟ್ಟಿಗೆ ಸಿಲುಕಿದೆ. ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್&zwnj;ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದಾಗಿ ಎನ್. ಚಂದ್ರಶೇಖರನ್ ಘೋಷಿಸಿದ ಬೆನ್ನಲ್ಲೇ ಟಾಟಾ ಗ್ರೂಪ್ ಮತ್ತು ಟಾಟಾ ಟ್ರಸ್ಟ್&zwnj;ಗಳ ನಡುವೆ ನಡೆಯುತ್ತಿರುವ ಆಂತರಿಕ ಅಧಿಕಾರ ಹೋರಾಟ ಹಾಗೂ ಭಿನ್ನಾಭಿಪ್ರಾಯಗಳು ಮತ್ತೆ ಮುನ್ನೆಲೆಗೆ ಬಂದಿದೆ. ರಾಜೀನಾಮೆ ನಿರ್ಧಾರವು ಕಾರ್ಪೊರೇಟ್ ಜಗತ್ತು, ಹೂಡಿಕೆದಾರರು ಮತ್ತು ಸರ್ಕಾರದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಸುಮಾರು ಒಂದು ದಶಕದ ಕಾಲ ಟಾಟಾ ಸಂಸ್ಥೆಯನ್ನು ಮುನ್ನಡೆಸಿದ ಚಂದ್ರ ಅವರ ಈ ನಿರ್ಗಮನವು, ಮುಂದಿನ ಐದು ವರ್ಷಗಳಲ್ಲಿ ಗುಂಪು ಯೋಜಿಸಿದ್ದ $120 ಬಿಲಿಯನ್ (ಸುಮಾರು 12,000 ಕೋಟಿ ಡಾಲರ್) ಬೃಹತ್ ಮರುಹೂಡಿಕೆ ಕಾರ್ಯಕ್ರಮದ ಮೇಲೆ ಅನಿಶ್ಚಿತತೆಯ ನೆರಳನ್ನು ಚೆಲ್ಲಿದೆ.&lt;/p&gt;&lt;img&gt;&lt;p&gt;2024 ರಲ್ಲಿ ರತನ್ ಟಾಟಾ ಅವರ ನಿಧನದ ನಂತರ, ಅವರ ಮಲಸಹೋದರ ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್&zwnj;ಗಳ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಟಾಟಾ ಗ್ರೂಪ್&zwnj;ನ ನಾಯಕತ್ವ ಚಲನಶೀಲತೆಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಟಾಟಾ ಸನ್ಸ್&zwnj;ನಲ್ಲಿ ಸುಮಾರು ಶೇ. 66 ರಷ್ಟು ಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್ಸ್, ಸಮೂಹದ ದೀರ್ಘಕಾಲೀನ ಕಾರ್ಯತಂತ್ರದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಮಂಡಳಿಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ರತನ್ ಟಾಟಾ ಅವರ ಆಪ್ತರಾಗಿದ್ದ ವಿಜಯ್ ಸಿಂಗ್ ಮತ್ತು ಮೆಹ್ಲಿ ಮಿಸ್ತ್ರಿ ಅವರಂತಹ ಹಿರಿಯ ನಾಯಕರು ಟ್ರಸ್ಟ್&zwnj;ನ ಪ್ರಮುಖ ಹುದ್ದೆಗಳಿಂದ ನಿರ್ಗಮಿಸಿದ್ದಾರೆ. ಸ್ವತಂತ್ರ ನಿರ್ದೇಶಕರಾದ ಅಜಯ್ ಪಿರಾಮಲ್ ಮತ್ತು ರಾಲ್ಫ್ ಸ್ಪೆತ್ ನಿವೃತ್ತರಾಗಿದ್ದು, ಮಂಡಳಿಯ ಸ್ವರೂಪ ಸಂಪೂರ್ಣ ಬದಲಾಗಿದೆ.&lt;/p&gt;&lt;img&gt;&lt;p&gt;ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯಾದ 'ಟಾಟಾ ಸನ್ಸ್' ಬಹುಪಾಲು ಪಾಲನ್ನು ಹಲವು ಟ್ರಸ್ಟ್&zwnj;ಗಳು ಹೊಂದಿವೆ. ಸರ್ ದೊರಾಬ್ಜಿ ಟಾಟಾ ಟ್ರಸ್ಟ್ (SDTT): ಶೇ. 27.98 ಮತ್ತು ಸರ್ ರತನ್ ಟಾಟಾ ಟ್ರಸ್ಟ್ (SRTT): ಶೇ. 23.56, (ಈ ಎರಡು ಮುಖ್ಯ ಟ್ರಸ್ಟ್&zwnj;ಗಳು ಸೇರಿ ಒಟ್ಟು ಶೇ. 51.54 ರಷ್ಟು ಪಾಲು ಹೊಂದಿವೆ.) ಇತರ ಟ್ರಸ್ಟ್&zwnj;ಗಳು ಅಂದರೆ ಜೆ.ಆರ್.ಡಿ. ಟಾಟಾ ಟ್ರಸ್ಟ್, ಟಾಟಾ ಎಜುಕೇಶನ್ ಟ್ರಸ್ಟ್ ಸೇರಿದಂತೆ ಉಳಿದ ಸಂಸ್ಥೆಗಳು ಒಟ್ಟಾಗಿ ಶೇ. 14.5 ಕ್ಕಿಂತ ಹೆಚ್ಚು ಪಾಲು ಹೊಂದಿವೆ. ಶಪೂರ್ಜಿ ಪಲ್ಲೊಂಜಿ ಕುಟುಂಬ ಇದರಲ್ಲಿ ಶೇ. 18.37 ಪಾಲು ಹೊಂದಿದೆ.&lt;/p&gt;&lt;img&gt;&lt;h3&gt;1.ಹೂಡಿಕೆ ಮತ್ತು ಬಂಡವಾಳ ವಿಸ್ತರಣೆಯ ವೇಗ:&lt;/h3&gt;&lt;p&gt;ಚಂದ್ರಶೇಖರನ್ ನಾಯಕತ್ವದಲ್ಲಿ ಟಾಟಾ ಗ್ರೂಪ್ ವಿಮಾನಯಾನ (ಏರ್ ಇಂಡಿಯಾ), ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಡಿಜಿಟಲ್ ಕ್ಷೇತ್ರಗಳಲ್ಲಿ $120 ಬಿಲಿಯನ್&zwnj;ನಷ್ಟು ಬೃಹತ್ ಹೂಡಿಕೆ ಮಾಡಲು ಯೋಜನೆ ರೂಪಿಸಿತ್ತು. ಆದರೆ ನೋಯೆಲ್ ಟಾಟಾ ನೇತೃತ್ವದ ಆಡಳಿತ ಮಂಡಳಿಯು ಬೃಹತ್ ವೆಚ್ಚದ ಯೋಜನೆಗಳ ವೇಗವನ್ನು ಕಡಿಮೆ ಮಾಡಿ, ತಕ್ಷಣದ ಆದಾಯ ತರುವ ಯೋಜನೆಗಳ ಕಡೆಗೆ ಗಮನಹರಿಸಬೇಕು ಎಂದು ಒತ್ತಾಯಿಸಿತು. ಹೂಡಿಕೆಯ ವೇಗ ಮತ್ತು ಪ್ರತಿಯೊಂದು ದೊಡ್ಡ ಖರ್ಚಿಗೂ ಪ್ರತಿಫಲದ ಪುರಾವೆ (Proof of Return) ನೀಡಬೇಕೆಂಬ ಮಂಡಳಿಯ ಪಟ್ಟು ಇಬ್ಬರ ನಡುವಿನ ವೈಚಾರಿಕ ಬಿರುಕನ್ನು ಹೆಚ್ಚಿಸಿತು.&lt;/p&gt;&lt;img&gt;&lt;p&gt;ಟಾಟಾ ಸನ್ಸ್ ಸಂಸ್ಥೆಯನ್ನು ಷೇರು ಮಾರುಕಟ್ಟೆಯಲ್ಲಿ ನೋಂದಾಯಿಸಬೇಕೇ ಎಂಬ ವಿಷಯದಲ್ಲೂ ಅಭಿಪ್ರಾಯ ಮೂಡಿದೆ. ಆರ್&zwnj;ಬಿಐ ನಿಯಮಗಳ ಪ್ರಕಾರ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾಗಿರುವ (NBFC) ಟಾಟಾ ಸನ್ಸ್ ಪಟ್ಟಿಯಾಗುವುದು ಅಗತ್ಯ ಎಂಬ ವಾದವಿದೆ. ನೋಯೆಲ್ ಟಾಟಾ ಇದನ್ನು ತೀವ್ರವಾಗಿ ವಿರೋಧಿಸಿದರೆ, ಟ್ರಸ್ಟ್&zwnj;ನ ಉಪಾಧ್ಯಕ್ಷರಾದ ವೇಣು ಶ್ರೀನಿವಾಸನ್ ಮತ್ತು ವಿಜಯ್ ಸಿಂಗ್ ಪಟ್ಟಿ ಮಾಡುವುದನ್ನು ಬೆಂಬಲಿಸಿದ್ದರು. ಪಟ್ಟಿಯಾದರೆ ಟ್ರಸ್ಟ್ ತನ್ನ ವೀಟೋ ಅಧಿಕಾರವನ್ನು ಕಳೆದುಕೊಳ್ಳಬಹುದು ಎಂಬ ಆತಂಕ ನೋಯೆಲ್ ಟಾಟಾ ಅವರಿಗಿದೆ.&lt;/p&gt;&lt;img&gt;&lt;p&gt;ಚಂದ್ರಶೇಖರನ್ ಅವರಿಗೆ ಮುಂದಿನ 5 ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲು ಹೆಚ್ಚಿನ ಮಂಡಳಿ ಸದಸ್ಯರು ಬೆಂಬಲ ನೀಡಿದ್ದರೂ, ಮಂಡಳಿಯ ಒಬ್ಬ ಪ್ರಮುಖ ಸದಸ್ಯರು ಬೆಂಬಲ ನೀಡಲಿಲ್ಲ. ಆರು ತಿಂಗಳಿನಿಂದ ಈ ವಿಷಯ ಇತ್ಯರ್ಥವಾಗದ ಕಾರಣ, ಸಂಸ್ಥೆಯ ಹಿತದೃಷ್ಟಿಯಿಂದ ಚಂದ್ರಶೇಖರನ್ ತಾವಾಗಿಯೇ ಮುಂದಿನ ಅವಧಿಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಅನಿಶ್ಚಿತತೆಯ ನಡುವೆ, ಚಂದ್ರಶೇಖರನ್ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ಮಂಡಳಿಗೆ ನಾಲ್ಕು ಸಾಲುಗಳ ಪತ್ರ ಬರೆದು ತಮ್ಮ ರಾಜೀನಾಮೆಯನ್ನು ಘೋಷಿಸಿದರು.&lt;/p&gt;&lt;img&gt;&lt;p&gt;ಚಂದ್ರಶೇಖರನ್ ಅವರ ಈ ಹಠಾತ್ ನಿರ್ಧಾರದಿಂದಾಗಿ ಟಾಟಾ ಗ್ರೂಪ್&zwnj;ನ ಹಲವು ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಜಾಗತಿಕ ಮಟ್ಟದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್, ತಾಜ್ ಹೋಟೆಲ್&zwnj;ಗಳಿಂದ ಹಿಡಿದು ಉಕ್ಕು, ಟಾಟಾ ಟೀ ಮತ್ತು ಸಾಫ್ಟ್&zwnj;ವೇರ್ (TCS) ವರೆಗೆ ವ್ಯಾಪಿಸಿರುವ ಟಾಟಾ ಸಮೂಹವು ಭಾರತದ ಆರ್ಥಿಕತೆಗೆ ಒಂದು ದೊಡ್ಡ ಪ್ರಾಕ್ಸಿಯಾಗಿದೆ. ಸೆಮಿಕಂಡಕ್ಟರ್, ಇವಿ ಬ್ಯಾಟರಿ ಮತ್ತು ಎಐ ಡೇಟಾ ಸೆಂಟರ್&zwnj;ಗಳಂತಹ ತಂತ್ರಜ್ಞಾನ ಆಧಾರಿತ ಉದ್ಯಮಗಳಲ್ಲಿ ಭಾರತವನ್ನು ಮುನ್ನಡೆಸಲು ಟಾಟಾ ಸಂಸ್ಥೆ ಹೂಡಿಕೆ ಮಾಡುತ್ತಿತ್ತು.&lt;/p&gt;&lt;img&gt;&lt;p&gt;ಚಂದ್ರ ಅವರ ನಿರ್ಗಮನದಿಂದಾಗಿ ಹಲವು ಪ್ರಮುಖ ಯೋಜನೆಗಳು ನಿಧಾನಗೊಳ್ಳುವ ಅಥವಾ ಮರುಪರಿಶೀಲನೆಗೆ ಒಳಗಾಗುವ ಸಾಧ್ಯತೆಯಿದೆ. ಏರ್ ಇಂಡಿಯಾದ ನವೀಕರಣ ಮತ್ತು ಗಿಗಾಫ್ಯಾಕ್ಟರಿಗಳ ಹೂಡಿಕೆಗಳ ಮೇಲಿನ ನಿಯಂತ್ರಣ ಹೆಚ್ಚಾಗಬಹುದು. ಭಾರತವನ್ನು ಜಾಗತಿಕ ಉತ್ಪಾದನಾ ಶಕ್ತಿಯಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಯೋಜನೆಗೆ ಟಾಟಾ ಪ್ರಮುಖ ಪಾಲುದಾರನಾಗಿದ್ದು, ಈ ಮಂದಗತಿಯು ಸರ್ಕಾರದ ಗುರಿಗಳ ಮೇಲೆಯೂ ಪ್ರಭಾವ ಬೀರಬಹುದು. ಈಗ ನಾಯಕತ್ವದ ಶೂನ್ಯತೆ ನಿರ್ಮಾಣವಾಗಿರುವುದರಿಂದ, ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲು ಶೋಧನಾ ಸಮಿತಿಯನ್ನು ರಚಿಸಲು ಟಾಟಾ ಟ್ರಸ್ಟ್ಸ್ ನಿರ್ಧರಿಸಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/tata-group-power-struggle-n-chandrasekaran-steps-down-noel-tata-influence-grows-gdp-m51695q"/>
        </item>
        <item>
            <title><![CDATA[KBC 18ರಲ್ಲಿ 'ರಾಕಿಂಗ್ ಸ್ಟಾರ್' ಯಶ್ ಹವಾ: ಅಮಿತಾಭ್ ಬಚ್ಚನ್ ಕೇಳಿದ ಈ ಪ್ರಶ್ನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್!]]></title>
            <link>https://kannada.asianetnews.com/tv-talk/kbc-18-amitabh-bachchan-ask-rocking-star-yash-toxic-movie-viral-video/articleshow-dm6rxcb</link>
            <guid isPermaLink="true">https://kannada.asianetnews.com/tv-talk/kbc-18-amitabh-bachchan-ask-rocking-star-yash-toxic-movie-viral-video/articleshow-dm6rxcb</guid>
            <pubDate>Thu, 13 Aug 2026 12:42:14 +0530</pubDate>
            <description><![CDATA[ಕೌನ್ ಬನೇಗಾ ಕರೋಡ್‌ಪತಿ 18ನೇ ಆವೃತ್ತಿಯಲ್ಲಿ, ನಿರೂಪಕ ಅಮಿತಾಭ್ ಬಚ್ಚನ್ ಅವರು 'ರಾಕಿಂಗ್ ಸ್ಟಾರ್' ಯಶ್ ಅವರ ಬಿರುದಿನ ಬಗ್ಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಶ್ ಅವರ ರಾಷ್ಟ್ರವ್ಯಾಪಿ ಜನಪ್ರಿಯತೆಗೆ ಸಾಕ್ಷಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwz6yd0xr6nb65420ed0pm9,imgname-kbc-18-yash-question-1786604911008.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕ್ವಿಜ್ ಶೋ 'ಕೌನ್ ಬನೇಗಾ ಕರೋಡ್&zwnj;ಪತಿ' (KBC) ತನ್ನ 18ನೇ ಆವೃತ್ತಿಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದೆ. ಬಾಲಿವುಡ್&zwnj;ನ ಶಹನ್&zwnj;ಶಾ ಅಮಿತಾಭ್ ಬಚ್ಚನ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮದ ಇತ್ತೀಚಿನ ಎಪಿಸೋಡ್ ಒಂದರ ವೀಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಅದಕ್ಕೆ ಪ್ರಮುಖ ಕಾರಣ ಕನ್ನಡಿಗರ ಹೆಮ್ಮೆಯ ಪPan-India ನಟ, 'ರಾಕಿಂಗ್ ಸ್ಟಾರ್' ಯಶ್ ಕುರಿತು ಕೇಳಲಾದ ಆಸಕ್ತಿದಾಯಕ ಪ್ರಶ್ನೆ!&lt;/p&gt;&lt;p&gt;'ಕೆಜಿಎಫ್' ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಯಶ್, ಇದೀಗ ತಮ್ಮ ಮುಂಬರುವ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ವೇದಿಕೆಯಾದ ಕೆಬಿಸಿಯಲ್ಲಿ ದಕ್ಷಿಣ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಯಶ್ ಹೆಸರು ಪ್ರಸ್ತಾಪವಾಗಿರುವುದು ಅಭಿಮಾನಿಗಳಲ್ಲಿ ಅಪಾರ ಹರ್ಷ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕೆಬಿಸಿಯಲ್ಲಿ ಯಶ್ ಕುರಿತು ಕೇಳಿದ ಪ್ರಶ್ನೆ ಏನು?&lt;/strong&gt;&lt;/h2&gt;&lt;p&gt;ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಅಮಿತಾಭ್ ಬಚ್ಚನ್ ಅವರು ಹಾಟ್&zwnj;ಸೀಟ್&zwnj;ನಲ್ಲಿದ್ದ ಸ್ಪರ್ಧಿಗೆ ರೂ. 20,000 ಮೌಲ್ಯದ ಪ್ರಶ್ನೆಯೊಂದನ್ನು ಕೇಳುತ್ತಾರೆ.&lt;/p&gt;&lt;p&gt;&lt;strong&gt;ಪ್ರಶ್ನೆ ಹೀಗಿತ್ತು: &lt;/strong&gt;&quot;ರಜನಿಕಾಂತ್ 'ಸೂಪರ್', ಚಿರಂಜೀವಿ 'ಮೆಗಾ', ಮತ್ತು ಪವನ್ ಕಲ್ಯಾಣ್ 'ಪವರ್' ಎಂದಾದರೆ, ಯಶ್ ಯಾರು?&quot;&lt;/p&gt;&lt;p&gt;&lt;strong&gt;ಆಯ್ಕೆಗಳು: &lt;/strong&gt;ಎ) ಡ್ಯಾನ್ಸಿಂಗ್, ಬಿ) ಫ್ಲಾಂಬೋಯೆಂಟ್, &lt;strong&gt;ಸಿ) ರಾಕಿಂಗ್,&lt;/strong&gt; ಡಿ) ಡೈನಾಮಿಕ್.&lt;/p&gt;&lt;p&gt;ಈ ಪ್ರಶ್ನೆಗೆ ಸ್ಪರ್ಧಿ ಯಾವುದೇ ಗೊಂದಲವಿಲ್ಲದೆ ಸರಿಯಾದ ಉತ್ತರ 'ರಾಕಿಂಗ್' (Rocking) ಎಂದು ಆಯ್ಕೆ ಮಾಡಿ ರೂ. 20,000 ಬಹುಮಾನ ಗೆದ್ದುಕೊಂಡರು. ಕೆಬಿಸಿಯಂತಹ ಬೃಹತ್ ವೇದಿಕೆಯಲ್ಲಿ ಯಶ್ ಅವರ ಬಿರುದಿನ ಬಗ್ಗೆ ಪ್ರಶ್ನೆ ಬಂದಿರುವುದು ಯಶ್ ಅವರ ಅಗಾಧ ಕ್ರೇಜ್&zwnj;ಗೆ ಸಾಕ್ಷಿಯಾಗಿದೆ.&lt;/p&gt;&lt;h3&gt;&lt;strong&gt;'ಬಂಟ್ವಾರಾ 1947' ಪ್ರಚಾರಕ್ಕೆ ಬಂದಿದ್ದ ಆಮಿರ್, ಸನ್ನಿ, ಪ್ರೀತಿ ಜಿಂಟಾ!&lt;/strong&gt;&lt;/h3&gt;&lt;p&gt;ಇನ್ನು ಕೆಬಿಸಿ 18ರ ಗ್ರ್ಯಾಂಡ್ ಪ್ರೀಮಿಯರ್ ಎಪಿಸೋಡ್&zwnj;ನಲ್ಲಿ ಬಾಲಿವುಡ್&zwnj;ನ ದಿಗ್ಗಜ ನಟರಾದ ಆಮಿರ್ ಖಾನ್, ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಹಾಟ್&zwnj;ಸೀಟ್&zwnj;ನಲ್ಲಿ ಕಾಣಿಸಿಕೊಂಡಿದ್ದರು. ಆಮಿರ್ ಖಾನ್ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಬಂಟ್ವಾರಾ 1947' ಸಿನಿಮಾದ ಪ್ರಚಾರಕ್ಕಾಗಿ ಈ ನಟರು ಆಗಮಿಸಿದ್ದರು. ಅವರು ಗೆದ್ದ ಹಣವನ್ನು ಚಾರಿಟಬಲ್ ಸಂಸ್ಥೆಗೆ ದೇಣಿಗೆಯಾಗಿ ನೀಡಲಾಯಿತು.&lt;/p&gt;&lt;p&gt;ಆದರೆ, 25 ಲಕ್ಷ ರೂಪಾಯಿ ಮೌಲ್ಯದ 13ನೇ ಪ್ರಶ್ನೆಗೆ ಉತ್ತರಿಸುವಾಗ ಈ ಮೂವರೂ ನಟರು ಗೊಂದಲಕ್ಕೊಳಗಾದರು. ಪ್ರಸಿದ್ಧ ಉರ್ದು ಕವಿಯ ಸಾಲುಗಳಾದ 'ಕಭಿ ಕಿಸಿ ಕೊ ಮುಕಮ್ಮಲ್ ಜಹಾ ನಹಿ ಮಿಲ್ತಾ, ಕಹಿ ಝಮೀನ್ ಕಹಿ ಆಸ್ಮಾನ್ ನಹಿ ಮಿಲ್ತಾ...' ಈ ಸಾಲುಗಳನ್ನು ಬರೆದ ಕವಿ ಯಾರು? ಎಂಬ ಪ್ರಶ್ನೆಗೆ ಮಿರ್ಜಾ ಗಾಲಿಬ್ ಅಥವಾ ಫೈಜ್ ಅಹಮದ್ ಫೈಜ್ ಇರಬಹುದು ಎಂದು ಆಮಿರ್ ಮತ್ತು ಪ್ರೀತಿ ಊಹಿಸಿದ್ದರು. ಆದರೆ, ಕೊನೆಗೆ ಲೈಫ್&zwnj;ಲೈನ್ ಬಳಸಿ ಉತ್ತರಿಸದೆ ಬಿಟ್ಟಾಗ, ಅದರ ಸರಿಯಾದ ಉತ್ತರ 'ನಿದಾ ಫಾಜ್ಲಿ' (Nida Fazli) ಎಂದಾಗಿತ್ತು.&lt;/p&gt;&lt;p&gt;ಒಟ್ಟಿನಲ್ಲಿ, ಒಂದು ಕಡೆ ಕೆಬಿಸಿ 18ರ ಆರಂಭಿಕ ಸೀಸನ್ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದ್ದರೆ, ಇನ್ನೊಂದೆಡೆ 'ಟಾಕ್ಸಿಕ್' ರಿಲೀಸ್&zwnj;ಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ಹೆಸರು ರಾಷ್ಟ್ರೀಯ ವೇದಿಕೆಯಲ್ಲಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.&lt;/p&gt;&lt;p&gt;Yesterday&rsquo;s KBC featured a question about Rocking Star @TheNameIsYash #Yash #ToxicTheMovie pic.twitter.com/jeFZXc6icj&lt;/p&gt;&lt;p&gt;&mdash;  ᵀᵒˣᶦᶜ &sup2;⁶⁻⁰⁸⁻&sup2;⁶ (@NameIsShreyash) August 13, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/tv-talk/kbc-18-amitabh-bachchan-ask-rocking-star-yash-toxic-movie-viral-video/articleshow-dm6rxcb"/>
        </item>
        <item>
            <title><![CDATA[ಮಂಗಳೂರು: ಮಧ್ಯರಾತ್ರಿ ಕಾರಲ್ಲಿ ಅಪ್ರಾಪ್ತಳನ್ನ ಕರೆದೊಯ್ದವನಿಗೆ ಕಾರು ಅಡ್ಡಗಟ್ಟಿ ಗುಂಪು ಹಲ್ಲೆ; ಎಫ್‌ಐಆರ್, ಐವರು ವಶಕ್ಕೆ!]]></title>
            <link>https://kannada.asianetnews.com/karnataka-districts/mangaluru-shociking-incident-man-who-allegation-kidnapped-minor-girl-assaulted-by-mob-fir-rav/articleshow-m7o11a7</link>
            <guid isPermaLink="true">https://kannada.asianetnews.com/karnataka-districts/mangaluru-shociking-incident-man-who-allegation-kidnapped-minor-girl-assaulted-by-mob-fir-rav/articleshow-m7o11a7</guid>
            <pubDate>Thu, 13 Aug 2026 12:37:25 +0530</pubDate>
            <description><![CDATA[ಪುತ್ತೂರಿನ ಕೊಕ್ಕಡದಲ್ಲಿ, ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಶೇಕ್ ಮುಖ್ತಾರ್ ಎಂಬಾತನಿಗೆ ಸ್ಥಳೀಯ ಯುವಕರ ಗುಂಪು ಹಲ್ಲೆ ನಡೆಸಿದೆ. ಬಾಲಕಿಯ ತಾಯಿ ಅಪಹರಣದ ದೂರು ನೀಡಿದ್ದು, ಹಲ್ಲೆಗೊಳಗಾದ ವ್ಯಕ್ತಿ ಕೂಡ ಪ್ರತಿ ದೂರು ದಾಖಲಿಸಿದ್ದು, ಪೊಲೀಸರಿಂದ ಮುಂದುವರಿದ ತನಿಖೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwyv143ghaeq5hz19bhn4wv,imgname-----------------------2026-08-13t123142.355-1786604520579.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು(ಆ.13):&lt;/strong&gt; ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಆರೋಪ ಕೇಳಿಬಂದ ತಕ್ಷಣ ಬಾಲಕಿಯ ರಕ್ಷಣೆಗೆ ಮುಂದಾದ ಯುವಕರ ಗುಂಪು ಕಾರು ಅಡ್ಡಗಟ್ಟಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ಕೊಕ್ಕಡದಲ್ಲಿ ನಡೆದಿದೆ.&lt;/p&gt;&lt;h2&gt;ಮಧ್ಯರಾತ್ರಿ ಅಪ್ರಾಪ್ತಳನ್ನ ಕರೆದೊಯ್ಯುತ್ತಿದ್ದ ಶೇಕ್ ಮುಖ್ತಾರ್&lt;/h2&gt;&lt;p&gt;ಕುಟುಂಬಸ್ಥರ ಅನುಮತಿ ಇಲ್ಲದೆ ಮಂಗಳೂರಿನಿಂದ ಹಾಸನದ ಕಡೆಗೆ ಶೇಕ್ ಮುಖ್ತಾರ್ ಎಂಬಾತ ಕಾರಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ರಾತ್ರಿ ವೇಳೆ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರ ಗುಂಪೊಂದು ಕಾರನ್ನು ತಡೆದಿದೆ. ಈ ವೇಳೆ ಶೇಕ್ ಮುಖ್ತಾರ್ ಗುಂಪಿನ ನಡುವೆ ಮಾತು ಬೆಳೆದು ಹಲ್ಲೆ ನಡೆದಿದೆ.&lt;/p&gt;&lt;h3&gt;ನನ್ನ ಮಗಳನ್ನ ಬಲವಂತವಾಗಿ ಕರೆದೊಯ್ದ: ತಾಯಿ ಗಂಭೀರ ಆರೋಪ&lt;/h3&gt;&lt;p&gt;ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ಆತಂಕ ವ್ಯಕ್ತಪಡಿಸಿದ್ದು, 'ನನ್ನ ಮಗಳನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ, ಕಾಪಾಡುವಂತೆ ಅಂಗಲಾಚಿದ್ದಾಳೆ. ತಾಯಿ ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಶೇಕ್ ಮುಖ್ತಾರ್ ವಿರುದ್ಧ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ ಕಾರನ್ನು ತಡೆದ ಗುಂಪು ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಶೇಕ್ ಮುಖ್ತಾರ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಖ್ತಾರ್ ನೀಡಿದ ದೂರಿನ ಮೇರೆಗೆ ಧನುಷ್ (23), ದಿನೇಶ್ (45), ಪೂರ್ಷಾಕ್ಷ (40), ಸೂರಜ್ (25) ಹಾಗೂ ರಂಜಿತ್ ಭಂಡಾರಿ (29) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ಅಪ್ರಾಪ್ತ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಪ್ರಕರಣ ಒಂದೆಡೆಯಾದರೆ, ಈ ವಿಚಾರದಲ್ಲಿ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆದಿದೆ ಎಂಬ ಆರೋಪ ಮತ್ತೊಂದೆಡೆ ಕೇಳಿಬಂದಿದೆ. ಎರಡೂ ದೂರುಗಳ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/karnataka-districts/mangaluru-shociking-incident-man-who-allegation-kidnapped-minor-girl-assaulted-by-mob-fir-rav/articleshow-m7o11a7"/>
        </item>
        <item>
            <title><![CDATA[Independence Day Wishes in Kannada: ಪ್ರೀತಿಪಾತ್ರರಿಗೆ ಕಳುಹಿಸಲು ಬೆಸ್ಟ್ ಶುಭಾಶಯ, ಮೆಸೇಜ್‌ಗಳು ಮತ್ತು ಕೋಟ್ಸ್]]></title>
            <link>https://kannada.asianetnews.com/gallery/life/happy-independence-day-wishes-in-kannada-best-quotes-and-messages-to-share-with-loved-ones-on-august-15-suh-1iaxsk7</link>
            <guid isPermaLink="true">https://kannada.asianetnews.com/gallery/life/happy-independence-day-wishes-in-kannada-best-quotes-and-messages-to-share-with-loved-ones-on-august-15-suh-1iaxsk7</guid>
            <pubDate>Thu, 13 Aug 2026 12:34:20 +0530</pubDate>
            <description><![CDATA[ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ಈ ವಿಶೇಷ ದಿನದಂದು ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ಕಳುಹಿಸುವ ಮೂಲಕ ದೇಶಭಕ್ತಿಯ ಸಂಭ್ರಮ ಹಂಚಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kzwa672nvvp6ak7tk4m70ec2,imgname-independence-day-wishes-in-kannada--1--1786582867028.jpg" type="image/jpeg" height="390" width="690"/>
            <content:encoded><![CDATA[&lt;p&gt;ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ಈ ವಿಶೇಷ ದಿನದಂದು ಕುಟುಂಬ, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ಕಳುಹಿಸುವ ಮೂಲಕ ದೇಶಭಕ್ತಿಯ ಸಂಭ್ರಮ ಹಂಚಿಕೊಳ್ಳಬಹುದು.&lt;/p&gt;&lt;img&gt;&lt;p&gt;ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು! ನಮ್ಮ ತ್ರಿವರ್ಣ ಧ್ವಜ ಸದಾ ಹೆಮ್ಮೆಯಿಂದ ಹಾರಾಡಲಿ.&lt;/p&gt;&lt;p&gt;ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲ ವೀರರಿಗೆ ನಮನ. ಸ್ವಾತಂತ್ರ್ಯ ದಿನದ ಶುಭಾಶಯಗಳು!&lt;/p&gt;&lt;p&gt;ನಮ್ಮ ದೇಶದ ಏಕತೆ, ಶಾಂತಿ ಮತ್ತು ಸಮೃದ್ಧಿ ಸದಾ ಹೆಚ್ಚಾಗಲಿ. ಸ್ವಾತಂತ್ರ್ಯ ದಿನದ ಶುಭಾಶಯಗಳು!&lt;/p&gt;&lt;p&gt;ಭಾರತೀಯನಾಗಿ ಹುಟ್ಟಿರುವ ಹೆಮ್ಮೆ ನಮ್ಮಲ್ಲಿ ಸದಾ ಇರಲಿ. ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು!&lt;/p&gt;&lt;img&gt;&lt;p&gt;ಸ್ವಾತಂತ್ರ್ಯ ನಮಗೆ ದೊರೆತ ಅಮೂಲ್ಯ ಕೊಡುಗೆ. ಅದನ್ನು ಗೌರವಿಸಿ, ಕಾಪಾಡೋಣ. ಜೈ ಹಿಂದ್!&lt;/p&gt;&lt;p&gt;ನಮ್ಮ ದೇಶದ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ. ಸ್ವಾತಂತ್ರ್ಯ ದಿನದ ಶುಭಾಶಯಗಳು!&lt;/p&gt;&lt;p&gt;ವೈವಿಧ್ಯತೆಯಲ್ಲಿ ಏಕತೆ ನಮ್ಮ ಭಾರತದ ಶಕ್ತಿ. ಈ ಹೆಮ್ಮೆಯ ದಿನದ ಶುಭಾಶಯಗಳು!&lt;/p&gt;&lt;p&gt;ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ನಿಮಗೆ ಸ್ವಾತಂತ್ರ್ಯ ದಿನದ ಶುಭಾಶಯಗಳು.&lt;/p&gt;&lt;img&gt;&lt;p&gt;ನಮ್ಮ ತ್ರಿವರ್ಣ ಧ್ವಜದಂತೆ ನಮ್ಮ ದೇಶದ ಕೀರ್ತಿಯೂ ಸದಾ ಎತ್ತರದಲ್ಲಿರಲಿ. ಜೈ ಹಿಂದ್!&lt;/p&gt;&lt;p&gt;ಸ್ವಾತಂತ್ರ್ಯದ ಸಂಭ್ರಮ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಹೊಸ ಭರವಸೆ ತರಲಿ.&lt;/p&gt;&lt;p&gt;ಸ್ವಾತಂತ್ರ್ಯ ಕೇವಲ ಹಕ್ಕಲ್ಲ, ಅದರೊಂದಿಗೆ ಜವಾಬ್ದಾರಿಯೂ ಇದೆ. ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆ ನೀಡೋಣ.&lt;/p&gt;&lt;p&gt;ನಮ್ಮ ಪೂರ್ವಜರ ತ್ಯಾಗವನ್ನು ಸ್ಮರಿಸುತ್ತಾ, ಉತ್ತಮ ಭಾರತದ ನಿರ್ಮಾಣಕ್ಕೆ ಕೈಜೋಡಿಸೋಣ.&lt;/p&gt;&lt;img&gt;&lt;p&gt;ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಅಸಂಖ್ಯಾತ ವೀರರ ತ್ಯಾಗವಿದೆ. ಅವರನ್ನು ಸದಾ ಸ್ಮರಿಸೋಣ.&lt;/p&gt;&lt;p&gt;ಭಾರತದ ಭವಿಷ್ಯ ನಮ್ಮ ಕೈಯಲ್ಲಿದೆ. ಉತ್ತಮ ದೇಶಕ್ಕಾಗಿ ಇಂದು ಎಲ್ಲರೂ ಉತ್ತಮ ಹೆಜ್ಜೆ ಇಡೋಣ.&lt;/p&gt;&lt;p&gt;ಭಿನ್ನತೆಗಳ ನಡುವೆಯೂ ಒಂದಾಗಿ ನಿಲ್ಲೋಣ. ನಮ್ಮ ಏಕತೆಯೇ ಭಾರತದ ಶಕ್ತಿ.&lt;/p&gt;&lt;p&gt;ಸ್ವಾತಂತ್ರ್ಯದ ಮೌಲ್ಯವನ್ನು ಅರಿತು, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ಕಟ್ಟೋಣ.&lt;/p&gt;&lt;img&gt;&lt;p&gt;ಭಿನ್ನತೆಗಳ ನಡುವೆಯೂ ಒಂದಾಗಿ ನಿಲ್ಲೋಣ. ನಮ್ಮ ಏಕತೆಯೇ ಭಾರತದ ಶಕ್ತಿ.&lt;/p&gt;&lt;p&gt;ಸ್ವಾತಂತ್ರ್ಯದ ಮೌಲ್ಯವನ್ನು ಅರಿತು, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ಕಟ್ಟೋಣ.&lt;/p&gt;&lt;p&gt;ನಮ್ಮ ಕನಸುಗಳು ದೊಡ್ಡದಾಗಿರಲಿ, ನಮ್ಮ ಗುರಿ ಭಾರತದ ಪ್ರಗತಿಯಾಗಿರಲಿ.&lt;/p&gt;&lt;p&gt;ಹಿಂದಿನ ತ್ಯಾಗಗಳಿಂದ ಸ್ಫೂರ್ತಿ ಪಡೆದು, ಭವಿಷ್ಯದ ಭಾರತವನ್ನು ನಿರ್ಮಿಸೋಣ.&lt;/p&gt;&lt;p&gt;ಸ್ವಾತಂತ್ರ್ಯವನ್ನು ಸಂಭ್ರಮಿಸುವುದರ ಜೊತೆಗೆ ದೇಶದ ಜವಾಬ್ದಾರಿಯನ್ನೂ ನೆನಪಿಸಿಕೊಳ್ಳೋಣ.&lt;/p&gt;]]></content:encoded>
            <category><![CDATA[life]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/happy-independence-day-wishes-in-kannada-best-quotes-and-messages-to-share-with-loved-ones-on-august-15-suh-1iaxsk7"/>
        </item>
        <item>
            <title><![CDATA[ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿದ ಬಿಜೆಪಿ; ದಲಿತರಿಗಾದ ಅವಮಾನ ಎಂದ ಖರ್ಗೆ!]]></title>
            <link>https://kannada.asianetnews.com/politics/mallikarjun-kharge-haldwani-rally-stage-purification-controversy-rajya-sabha-row-dalit-insult/articleshow-bdtxsv1</link>
            <guid isPermaLink="true">https://kannada.asianetnews.com/politics/mallikarjun-kharge-haldwani-rally-stage-purification-controversy-rajya-sabha-row-dalit-insult/articleshow-bdtxsv1</guid>
            <pubDate>Thu, 13 Aug 2026 12:30:15 +0530</pubDate>
            <description><![CDATA[ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಘಟನೆ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಖರ್ಗೆಯವರು ಸಂಸತ್ತಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತನಿಖೆಯ ಭರವಸೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwyqjf5cw0gvjckqvznwmpr,imgname-mallikarjun-kharge-uttarakhand-1786604407268.jpg" type="image/jpeg" height="390" width="690"/>
            <content:encoded><![CDATA[&lt;p&gt;ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಭಾಷಣ ಮಾಡಿ ತೆರಳಿದ ನಂತರ, ಆ ವೇದಿಕೆಯನ್ನು ಶುದ್ಧೀಕರಣಗೊಳಿಸಿದ ಪ್ರಕರಣ ಇದೀಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯನ್ನು ಖಂಡಿಸಿ ಸಂಸತ್ತಿನ ರಾಜ್ಯಸಭೆಯಲ್ಲಿ ವಿಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸುತ್ತ ಜೋರು ವಾಗ್ದಂಡನೆ ನಡೆದಿದೆ.&lt;/p&gt;&lt;h2&gt;&lt;strong&gt;ದಲಿತ ಸಮುದಾಯಕ್ಕಾದ ಅವಮಾನ - ಖರ್ಗೆ ಆಕ್ರೋಶ:&lt;/strong&gt;&lt;/h2&gt;&lt;p&gt;ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಕನ್ನಡಿಗ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಭಾಷಣದ ನಂತರ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಿಗೆ ಸೇರಿದವರು ವೇದಿಕೆಯನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 'ನಾನು ದಲಿತ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕಾಗಿ ಈ ರೀತಿ ವೇದಿಕೆ ಶುದ್ಧೀಕರಣ ಮಾಡಿ ನನಗೆ ಹಾಗೂ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ. ನಾನು ಇದನ್ನು ರಾಜಕಾರಣಗೊಳಿಸಲು ಬಯಸುವುದಿಲ್ಲ' ಎಂದು ಭಾವುಕರಾಗಿ ಹೇಳಿದರು.&lt;/p&gt;&lt;p&gt;ತಮ್ಮ ಪಾರ್ಲಿಮೆಂಟರಿ ಜೀವನವನ್ನು ಸ್ಮರಿಸಿದ ಖರ್ಗೆ, &lsquo;ನಾನು ಯಾವುದೇ ಧರ್ಮ ಅಥವಾ ಜಾತಿಯ ವಿರುದ್ಧ ಮಾತನಾಡಿಲ್ಲ. ಹಲವು ವರ್ಷಗಳಿಂದ ಸಂಸದನಾಗಿ ದೇಶದ ಸೇವೆ ಮಾಡುತ್ತಿದ್ದೇನೆ. ದಲಿತ ಎಂಬ ಕಾರಣಕ್ಕೆ ನಾನು ಯಾರ ಮುಂದೆಯೂ ಭಿಕ್ಷೆ ಬೇಡಿಲ್ಲ. ಬಿಜೆಪಿ ಬೆಂಬಲಿತ ಸಂಘಟನೆಗಳು ನನ್ನನ್ನು ಹಾಗೂ ನನ್ನ ಜಾತಿಯನ್ನು ಅವಮಾನಿಸಿವೆ. ಈ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು&rsquo; ಎಂದು ಸರ್ಕಾರದ ಮುಂದೆ ಬಿಗಿ ಪಟ್ಟು ಹಿಡಿದರು. &lsquo;ನನಗೆ ಹೋರಾಟ ಮಾಡುವ ಶಕ್ತಿ ಇದೆ, ಸಂವಿಧಾನಿಕವಾಗಿ ನಾನು ಈ ಅನ್ಯಾಯದ ವಿರುದ್ಧ ಹೋರಾಡುತ್ತೇನೆ&rsquo; ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.&lt;/p&gt;&lt;h2&gt;&lt;strong&gt;ಸೋನಿಯಾ ಗಾಂಧಿ ಸಾಥ್ - ಜೆ.ಪಿ. ನಡ್ಡಾ ಸ್ಪಷ್ಟನೆ:&lt;/strong&gt;&lt;/h2&gt;&lt;p&gt;ಖರ್ಗೆ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಕಳಕಳಿಯಿಂದ ಪ್ರಸ್ತಾಪಿಸುತ್ತಿದ್ದಾಗ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ಎಲ್ಲಾ ಸಂಸದರು ಎದ್ದು ನಿಂತು ಬಿಜೆಪಿ ವಿರುದ್ಧ 'ಶೇಮ್ ಶೇಮ್' (Shame Shame) ಎಂದು ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.&lt;/p&gt;&lt;p&gt;ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣವೇ ಮಧ್ಯಪ್ರವೇಶಿಸಿದ ರಾಜ್ಯಸಭೆಯ ಆಡಳಿತ ಪಕ್ಷದ ನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಇಂತಹ ಜಾತಿ ಆಧಾರಿತ ಅಥವಾ ತಾರತಮ್ಯದ ಚಟುವಟಿಕೆಗಳನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. &quot;ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು&quot; ಎಂದು ಸದನಕ್ಕೆ ಭರವಸೆ ನೀಡಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/politics/mallikarjun-kharge-haldwani-rally-stage-purification-controversy-rajya-sabha-row-dalit-insult/articleshow-bdtxsv1"/>
        </item>
        <item>
            <title><![CDATA[Airtel Recharge Plans: ಗ್ರಾಹಕರಿಗೆ ಏರ್ಟೆಲ್‌ ಶಾಕ್‌ !  ಕೆಲ ಜನಪ್ರಿಯ ರಿಚಾರ್ಜ್‌ ಪ್ಲಾನ್‌ ಬಂದ್‌]]></title>
            <link>https://kannada.asianetnews.com/mobiles/airtel-shocks-customers-popular-recharge-plans-discontinued/articleshow-xwp05zu</link>
            <guid isPermaLink="true">https://kannada.asianetnews.com/mobiles/airtel-shocks-customers-popular-recharge-plans-discontinued/articleshow-xwp05zu</guid>
            <pubDate>Thu, 13 Aug 2026 12:18:51 +0530</pubDate>
            <description><![CDATA[Airtel plan : ಏರ್ಟೆಲ್ ತನ್ನ ಹಲವಾರು ಜನಪ್ರಿಯ ಬಜೆಟ್ ಪ್ರಿಪೇಯ್ಡ್ ಯೋಜನೆಗಳನ್ನು ಸ್ಥಗಿತಗೊಳಿಸಿದೆ.ಇನ್ನೂ ಕೆಲವು ಬೆಲೆಗಳನ್ನು ಹೆಚ್ಚಿಸಿದೆ. ಇದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ‌]]></description>
            <media:content url="https://static.asianetnews.com/images/w-1280,h-720,format-jpg,imgid-01kz5q9k4nskcma3gnst6enph6,imgname-----------------------2026-08-04t115722.515-1785824857237.jpg" type="image/jpeg" height="390" width="690"/>
            <content:encoded><![CDATA[&lt;p&gt;ಏರ್ಟೆಲ್ , ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ತನ್ನ ಪೋರ್ಟ್ಫೋಲಿಯೊದಿಂದ ಹಲವಾರು ಜನಪ್ರಿಯ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ತೆಗೆದುಹಾಕಿದೆ.&lt;/p&gt;&lt;h2&gt;ಗ್ರಾಹಕರಿಗೆ ಏರ್ಟೆಲ್ ಶಾಕ್&lt;/h2&gt;&lt;p&gt;ಏರ್ಟೆಲ್ ನ ಕೆಲ ಪ್ರಸಿದ್ಧ ರಿಚಾರ್ಜ್ ಪ್ಲಾನ್ ಇನ್ಮುಂದೆ ಗ್ರಾಹಕರಿಗೆ ಸಿಗೋದಿಲ್ಲ. ಏರ್ಟೆಲ್ ಕೈಗೆಟುಕುವ ರೀಚಾರ್ಜ್ ಯೋಜನೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಇದ್ರಲ್ಲಿ 299 ರೂಪಾಯಿ, 319 ರೂಪಾಯಿ, 579 ರೂಪಾಯಿ, 619 ರೂಪಾಯಿ, 649 ರೂಪಾಯಿ ಮತ್ತು 799 ರೂಪಾಯಿ ಪ್ಲಾನ್ ಸೇರಿದೆ.&lt;/p&gt;&lt;h3&gt;299 ಯೋಜನೆ ಏಕೆ ವಿಶೇಷವಾಗಿತ್ತು?&lt;/h3&gt;&lt;p&gt;ಏರ್ಟೆಲ್ ನ 299 ರೂಪಾಯಿ ಯೋಜನೆ ಬಜೆಟ್ ಬಳಕೆದಾರರಲ್ಲಿ ಬಹಳ ಜನಪ್ರಿಯವಾಗಿತ್ತು. ಇದು ದಿನಕ್ಕೆ 1GB ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು 28 ದಿನಗಳ ಮಾನ್ಯತೆಯೊಂದಿಗೆ 100 ಎಸ್ ಎಂಎಸ್ ಸೌಲಭ್ಯವನ್ನು ನೀಡುತ್ತಿತ್ತು.&lt;/p&gt;&lt;p&gt;ಏರ್ಟೆಲ್ ನ 319 ರೂಪಾಯಿ, 649 ಮತ್ತು 799 ರೂಪಾಯಿ ಪ್ಲಾನ್, ಪ್ರಿಪೇಯ್ಡ್ ಪ್ಲಾನ್ ಆಗಿವೆ. ಈ ಪ್ಲಾನ್ ಗಳು ವಿಭಿನ್ನ ಮಾನ್ಯತೆಯೊಂದಿಗೆ 1.5GB ದೈನಂದಿನ ಡೇಟಾದಂತಹ ಪ್ರಯೋಜನಗಳನ್ನು ನೀಡುತ್ತಿದ್ದವು. ಈ ಪ್ಲಾನ್ ಗಳನ್ನು ಏಕೆ ರದ್ದು ಮಾಡಿದೆ ಎನ್ನುವ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.&lt;/p&gt;&lt;p&gt;ಏರ್ಟೆಲ್ ನ 579 ರೂಪಾಯಿ ಮತ್ತು 619 ರೂಪಾಯಿ ಯೋಜನೆಗಳನ್ನು ಏಕಕಾಲದಲ್ಲಿ ಸ್ಥಗಿತಗೊಳಿಸಿಲ್ಲ. ಪ್ರಸ್ತುತ, ಈ ಯೋಜನೆಗಳು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ವಲಯಗಳಲ್ಲಿ ಲಭ್ಯವಿಲ್ಲ. ಆದರೆ ಉಳಿದ ಪ್ರದೇಶದ ಜನರು ಈ ಪ್ಲಾನ್ ಲಾಭ ಪಡೆಯಬಹುದು.&lt;/p&gt;&lt;p&gt;ಕೆಲ ಪ್ಲಾನ್ ರದ್ದು ಮಾಡಿರುವ ಏರ್ಟೆಲ್ ಕೆಲ ಪ್ಲಾನ್ ಬೆಲೆ ಏರಿಸಿದೆ. ಏರ್ಟೆಲ್ ತನ್ನ 859 ಪ್ರಿಪೇಯ್ಡ್ ಯೋಜನೆಯ ಬೆಲೆಯನ್ನು ಏರಿಸಿದೆ. ಗ್ರಾಹಕರು ಈಗ 859 ರೂಪಾಯಿ ಬದಲು 899 ರೂಪಾಯಿ ಪಾವತಿಸಬೇಕು. ಆದ್ರೆ ಬೆಲೆ ಏರಿದ್ರೂ ಯಾವುದೇ ಹೆಚ್ಚುವರಿ ಸೌಲಭ್ಯವನ್ನು ಯೋಜನೆಯಲ್ಲಿ ನೀಡಲಾಗ್ತಿಲ್ಲ. ಬೆಲೆ ಏರಿಕೆ ಹಾಗೂ ಪ್ರಸಿದ್ಧ ಪ್ಲಾನ್ ರದ್ದಾಗಿರುವ ಬಗ್ಗೆ ಗ್ರಾಹಕರಲ್ಲಿ ಟೆನ್ಷನ್ ಹೆಚ್ಚಾಗಿದೆ. ಭವಿಷ್ಯದಲ್ಲಿ ಏರ್ಟೆಲ್ ಉಳಿದ ಪ್ಲಾನ್ ಬೆಲೆ ಏರಿಕೆಯಾಗುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗ್ತಿದೆ.&lt;/p&gt;]]></content:encoded>
            <category><![CDATA[mobiles]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/mobiles/airtel-shocks-customers-popular-recharge-plans-discontinued/articleshow-xwp05zu"/>
        </item>
        <item>
            <title><![CDATA[Vijayanagara: ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಲಾಕಪ್‌ ಡೆತ್ ಪ್ರಕರಣದಲ್ಲಿ ಇಬ್ಬರು ಪೊಲೀಸರು ಸಿಐಡಿ ವಶಕ್ಕೆ]]></title>
            <link>https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b</link>
            <guid isPermaLink="true">https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b</guid>
            <pubDate>Thu, 13 Aug 2026 12:15:59 +0530</pubDate>
            <description><![CDATA[ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kzwxr0xa7sayv2m1gs7b27qe,imgname-hagaribommanahalli-police-station-1786603373482.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯನಗರ: &lt;/strong&gt;ಗಂಡ-ಹೆಂಡತಿ ಕೇಸ್, ಹಗರಿಬೊಮ್ಮನಹಳ್ಳಿ ಕಟ್ಟಡ ಕಾರ್ಮಿಕ ಸಾವನ್ನಪ್ಪಿದ ಪ್ರಕರಣಕ್ಕೆ ಸಿಐಡಿ ಎಂಟ್ರಿ ಕೊಟ್ಟಿದೆ. ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗಂಡ ಹೆಂಡತಿ ನಡುವಿನ ಜಗಳದ ವಿಚಾರದಲ್ಲಿ ಆರಂಭವಾದ ಪ್ರಕರಣ ಇದೀಗ ಪೊಲೀಸರಿಗೆ ಕಂಟಕವಾಗಿದೆ.&lt;/p&gt;&lt;p&gt;ಹಗರಿಬೊಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಕಟ್ಟಡ ಕಾರ್ಮಿಕನ ಸಾವನ್ನು ಲಾಕಪ್ ಡೆತ್ ಎಂದು ಆರೋಪಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಹಿನ್ನೆಲೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.&lt;/p&gt;&lt;h2&gt;ಏನಿದು ಪ್ರಕರಣ?&lt;/h2&gt;&lt;p&gt;ಇದೇ ತಿಂಗಳ ಆರಂಭದಲ್ಲಿ ಅಂದರೆ ಆಗಸ್ಟ್ ಒಂದರಂದು ಪತ್ನಿ ಕಟ್ಟಡ ಕಾರ್ಮಿಕನಾಗಿದ್ದ ಪತಿಯ ಮೇಲೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದರು. ಆದರೆ ಪೊಲೀಸ್ ಠಾಣೆಗೆ ಕರೆದುಕೊಂಡ ಬಳಿಕ 38 ವರ್ಷದ ಕಟ್ಟಡ ಕಾರ್ಮಿಕ ಖಲೀಲ್ ಸಾವನ್ನಪ್ಪಿದ್ದ. ಈ ವೇಳೆ ಪೊಲೀಸರು ಮಾತ್ರ, ಆತನಿಗೆ ಠಾಣೆಯಲ್ಲಿ ಫಿಟ್ಸ್ ಬಂದು ಸಾವನ್ನಪ್ಪಿದ್ದ ಎಂದು ವಾದ ಮಾಡಿದ್ದರು.&lt;/p&gt;&lt;p&gt;ಇದರ ಬೆನ್ನಲ್ಲೇ ಪೊಲೀಸರ ಹಲ್ಲೆಯಿಂದ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ತನ್ನ ಗಂಡನ ಸಾವಾಗಿದೆ ಎಂದು ಮೃತನ ಪತ್ನಿ ಹಾಗೂ ಕುಟುಂಸ್ಥರು ಆರೋಪ ಮಾಡಿದ್ದರು. ಹೀಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ಒತ್ತಡ ಇದ್ದ ಹಿನ್ನೆಲೆ ಕಳೆದ ವಾರ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.&lt;/p&gt;&lt;p&gt;ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮೃತ ಖಲೀಲ್ ಬೆನ್ನು ಹಾಗೂ ತಲೆಗೆ ಏಟುಗಳು ಬಿದ್ದಿರುವುದು ಗೊತ್ತಾಗಿತ್ತು. ಅಲ್ಲದೇ ಕಿವಿ ಹಾಗೂ ಮೂಗಿನಲ್ಲಿಯೂ ತೀವ್ರ ರಸ್ತಸ್ರಾವ ಹಿನ್ನೆಲೆ ಹಲ್ಲೆಯಾಗಿರೋದು ಮೇಲ್ನೋಟಕ್ಕೆ ಧೃಡವಾಗಿತ್ತು. ಇದರೊಂದಿಗೆ ಅಂದು ಫಿಟ್ಸ್ ಬಂದು ಸಾವಾಗಿದೆ ಎಂದಿದ್ದ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಲಾಗಿತ್ತು. ಸದ್ಯ ಮೃತ ಖಲೀಲ್ ಪತ್ನಿ ಶೈನಾಜ್ ದೂರಿನ ಮೇಲೆ ಹೆಡ್ ಕಾನ್ಸ್&zwnj;ಟೇಬಲ್ ರಾಘವೇಂದ್ರ ಹಾಗೂ ಕಾನ್ಸ್&zwnj;ಟೇಬಲ್ ವೆಂಕಟೇಶ್ ಮೇಲೆ ಎಫ್ ಐಆರ್ ದಾಖಲಾಗಿದ್ದು, ಇದೀಗ ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;p&gt;ತಮ್ಮ ಪತಿಯ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಶೈನಾಜ್ ಮನವಿ ಮಾಡಿದ್ದು, ನಮ್ಮ ಮನೆಯವರು ಕುಡಿದು ಬಂದಿದ್ದರು. ಆದ್ದರಿಂದ ನ್ಯಾಯ ಕೊಡಿಸಿ ಎಂದು ಗಂಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದೆ. ಬೆಳಗ್ಗೆ ಕುಟುಂಬಸ್ಥರ ಕರೆದುಕೊಂಡು ಬಂದು ಮಾತುಕತೆ ಬಗೆಹರಿಸುಕೊಳ್ಳುವ ಬಗ್ಗೆ ಹೇಳಿದ್ದೆ. ಆದರೆ ಠಾಣೆಯಲ್ಲಿ ಇರಿಸಿಕೊಳ್ಳಲು ಆಗೋದಿಲ್ಲ ಎಂದು ಹೇಳಿದ್ದರು. ಆದರೆ ನಾನೇ ಅವರಿಗೆ ಮನವಿ ಮಾಡಿ ಬೆಳಗ್ಗೆವರೆಗೂ ಇರಿಸಿಕೊಳ್ಳಲು ಮನವಿ ಮಾಡಿದ್ದೆ. ಕೆಲ ಸಮಯದ ಬಳಿಕ ಗಂಡ ಕೂಗಿಕೊಳ್ಳುವ ಸದ್ದು ಕೇಳಿ ಹೋಗಿದ್ದೆ. ಆ ವೇಳೆಗಾಗಲೇ ಗಂಡ ಸಾವನ್ನಪ್ಪಿದ್ದ, ಮೂಗು-ಕಿವಿಯಲ್ಲಿ ರಕ್ತ ಬಂದಿತ್ತು. ಕೂಡಲೇ ಪೊಲೀಸರು ಟಾಟಾ ಏಸ್ ವಾಹನ ಮೂಲಕ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು, ಒಂದು ಅಂಬುಲೆನ್ಸ್ ಕೂಡ ಕರೆಸಲಿಲ್ಲ. ಕಷ್ಟ ಇದೇ ಅಂತ ಹೋದರೆ ಪೊಲೀಸರಿಗೆ ಹೀಗೆ ಮಾಡಿದ್ರು, ಆದ್ದರಿಂದ ನನ್ನ ಗಂಡನ ಸಾವಿಗೆ ನ್ಯಾಯ ಬೇಕಿದೆ ಎಂದು ಹೇಳಿದ್ದಾರೆ. (ವರದಿ: ನರಸಿಂಹಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯನಗರ)&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/vijayanagara-two-police-personnel-taken-into-cid-custody-in-connection-with-hagaribommanahalli-lock-up-death-case-sns/articleshow-77fc52b"/>
        </item>
        <item>
            <title><![CDATA[ಸ್ಟಿಫನ್ ಫ್ಲೆಮಿಂಗ್ ಜಾಗಕ್ಕೆ ಸರ್‌ಪ್ರೈಸ್ ಎಂಟ್ರಿ? ಸಿಎಸ್‌ಕೆ ಹೊಸ ಕೋಚ್ ಬಗ್ಗೆ ಬಿಗ್ ಹಿಂಟ್ ಕೊಟ್ಟ ರವಿಚಂದ್ರನ್ ಅಶ್ವಿನ್..!]]></title>
            <link>https://kannada.asianetnews.com/cricket-sports/csk-coach-update-eoin-morgan-could-replace-stephen-fleming-says-ravichandran-ashwin-kvn/articleshow-1ag9diy</link>
            <guid isPermaLink="true">https://kannada.asianetnews.com/cricket-sports/csk-coach-update-eoin-morgan-could-replace-stephen-fleming-says-ravichandran-ashwin-kvn/articleshow-1ag9diy</guid>
            <pubDate>Thu, 13 Aug 2026 12:14:40 +0530</pubDate>
            <description><![CDATA[ಸಿಎಸ್‌ಕೆ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿಯುವ ಸಾಧ್ಯತೆಯಿದ್ದು, ಅವರ ಸ್ಥಾನಕ್ಕೆ ಇಯಾನ್ ಮಾರ್ಗನ್ ಬರಬಹುದು ಎಂದು ಆರ್. ಅಶ್ವಿನ್ ಸುಳಿವು ನೀಡಿದ್ದಾರೆ. ಇದೇ ವೇಳೆ, ಮುಂದಿನ ಸೀಸನ್‌ನಲ್ಲಿ ಎಂ.ಎಸ್. ಧೋನಿಯೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k3n3ch9vykwwc8pzr345krv2,imgname-ravichandran-ashwin-retired-1756276081979.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೆನ್ನೈ: ಐಪಿಎಲ್&zwnj;ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್&zwnj;ಕೆ) ತಂಡದ ಹೆಡ್ ಕೋಚ್ ಹುದ್ದೆಯಿಂದ ಸ್ಟೀಫನ್ ಫ್ಲೆಮಿಂಗ್ ಕೆಳಗಿಳಿದಿದ್ದಾರೆ. ಅವರ ಜಾಗಕ್ಕೆ ಇಂಗ್ಲೆಂಡ್&zwnj;ನ ಮಾಜಿ ನಾಯಕ ಇಯಾನ್ ಮಾರ್ಗನ್ ಬರಬಹುದು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಲವಾದ ಸುಳಿವು ನೀಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ಮಾತನಾಡಿದ ಅಶ್ವಿನ್, ಮುಂದಿನ ವಾರದೊಳಗೆ ಮಾರ್ಗನ್ ನೇಮಕದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಬಹುದು ಎಂದಿದ್ದಾರೆ.&lt;/p&gt;&lt;p&gt;ಸ್ಟಿಫನ್ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್&zwnj;ಕೆ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದೆ. ಹೀಗಾಗಿ, ಅವರ ಸ್ಥಾನಕ್ಕೆ ತಕ್ಕನಾದ ವ್ಯಕ್ತಿಯನ್ನು ಹುಡುಕುವುದು ಸುಲಭವಲ್ಲ. ಇಯಾನ್ ಮಾರ್ಗನ್ 2023ರಲ್ಲಿ ಕ್ರಿಕೆಟ್&zwnj;ಗೆ ನಿವೃತ್ತಿ ಹೇಳಿ, ಸದ್ಯ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕೋಚಿಂಗ್ ಮಾಡಿದ ಅನುಭವ ಇಲ್ಲ. ಆದರೂ, 2019ರಲ್ಲಿ ತಮ್ಮ ಆಕ್ರಮಣಕಾರಿ ನಾಯಕತ್ವದಿಂದ ಇಂಗ್ಲೆಂಡ್&zwnj;ಗೆ ಮೊದಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಮಾರ್ಗನ್ ಅವರ ಈ ತಂತ್ರಗಾರಿಕೆಯೇ ಸಿಎಸ್&zwnj;ಕೆ ಮ್ಯಾನೇಜ್&zwnj;ಮೆಂಟ್&zwnj;ಗೆ ಇಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;h2&gt;&lt;strong&gt;ಇಂಗ್ಲೆಂಡ್&zwnj;ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ ಮಾರ್ಗನ್:&lt;/strong&gt;&lt;/h2&gt;&lt;p&gt;ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದವರು ಇಂಗ್ಲೆಂಡ್&zwnj;ನವರು. ಹೀಗಿದ್ದೂ ಇಂಗ್ಲೆಂಡ್ ತಂಡವು 2019ಕ್ಕಿಂತ ಮೊದಲು ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಇದನ್ನು ಸವಾಲಾಗಿ ತೆಗೆದುಕೊಂಡ ಇಯಾನ್ ಮಾರ್ಗನ್, ನಾಯಕರಾಗುತ್ತಿದ್ದಂತೆಯೇ ತಮ್ಮ ಎರಡನೇ ಪ್ರಯತ್ನದಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಮಾರ್ಗನ್ ಮೇಲೆ ಸಿಎಸ್&zwnj;ಕೆ ಫ್ರಾಂಚೈಸಿ ವಿಶ್ವಾಸವಿಟ್ಟಿದೆ ಎನ್ನಲಾಗಿದೆ.&lt;/p&gt;&lt;p&gt;ಒಂದು ವೇಳೆ ಮಾರ್ಗನ್ ಕೋಚ್ ಆದರೆ, ಅವರಿಗೆ ಹಲವು ಸವಾಲುಗಳಿವೆ. ಅವರಿಗೆ ದೇಶೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋಚಿಂಗ್ ಅನುಭವ ಇಲ್ಲ. ಜೊತೆಗೆ, ಸತತ ಮೂರು ಸೀಸನ್&zwnj;ಗಳಿಂದ ಪ್ಲೇಆಫ್ ಪ್ರವೇಶಿಸದ ಸಿಎಸ್&zwnj;ಕೆ ತಂಡದಲ್ಲಿ ಈಗ ತಲೆಮಾರುಗಳ ಬದಲಾವಣೆಯಾಗುತ್ತಿದೆ. ಇದೆಲ್ಲವೂ ಅವರಿಗೆ ದೊಡ್ಡ ಸವಾಲಾಗಲಿದೆ.&lt;/p&gt;&lt;h3&gt;&lt;strong&gt;ಇನ್ನೊಂದು ಸಾಧ್ಯತೆ ಮುಂದಿಟ್ಟ ಅಶ್ವಿನ್&lt;/strong&gt;&lt;/h3&gt;&lt;p&gt;ಇದೇ ವೇಳೆ, ಅಶ್ವಿನ್ ಮತ್ತೊಂದು ಸಾಧ್ಯತೆಯನ್ನೂ ಮುಂದಿಟ್ಟಿದ್ದಾರೆ. ಐಪಿಎಲ್ ಮೆಗಾ ಹರಾಜಿಗೆ ಇನ್ನು ಕೇವಲ ಒಂದು ವರ್ಷ ಬಾಕಿ ಇದೆ. ಹೀಗಾಗಿ, ಮುಂಬರುವ ಸೀಸನ್&zwnj;ನಲ್ಲಿ ಎಂ.ಎಸ್. ಧೋನಿ ಅವರೇ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಅವಸರದಲ್ಲಿ ಹೊಸ ಕೋಚ್ ನೇಮಿಸುವುದಕ್ಕಿಂತ, ಧೋನಿ ಅವರೇ ಪೂರ್ಣ ಹಿಡಿತ ತೆಗೆದುಕೊಂಡು, ಉಳಿದವರು ಅವರ ಕೆಳಗೆ ಕೆಲಸ ಮಾಡುವುದು ಉತ್ತಮ ಎಂಬುದು ಅಶ್ವಿನ್ ಮಾತು. ಕಳೆದ ಸೀಸನ್&zwnj;ನಲ್ಲಿ ಧೋನಿ ಆಟಗಾರನಾಗಿ ತಂಡದಲ್ಲಿದ್ದರೂ, ಗಾಯದ ಕಾರಣ ಒಂದೂ ಪಂದ್ಯವನ್ನು ಆಡಿರಲಿಲ್ಲ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/csk-coach-update-eoin-morgan-could-replace-stephen-fleming-says-ravichandran-ashwin-kvn/articleshow-1ag9diy"/>
        </item>
        <item>
            <title><![CDATA[ತಿಳಿದುಕೊಳ್ಳಿ! ಅನುಮತಿ ಇಲ್ಲದೇ ಯಾರಾದರೂ ನಿಮ್ಮ ವಿಡಿಯೋ ಮಾಡಿದ್ರೆ ಕಾನೂನಿಲ್ಲಿ ಏನು ಶಿಕ್ಷೆ ಕೊಡಿಸಬಹುದು?]]></title>
            <link>https://kannada.asianetnews.com/special/filmed-without-consent-here-are-the-strict-legal-punishments-for-recording-videos-without-permission-gkn/articleshow-395eelh</link>
            <guid isPermaLink="true">https://kannada.asianetnews.com/special/filmed-without-consent-here-are-the-strict-legal-punishments-for-recording-videos-without-permission-gkn/articleshow-395eelh</guid>
            <pubDate>Thu, 13 Aug 2026 12:02:46 +0530</pubDate>
            <description><![CDATA[ಸ್ಮಾರ್ಟ್‌ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwx4s8x7rt0yq0294t2hymw,imgname-girls-video-1786602743069.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಂದಿನ ಸ್ಮಾರ್ಟ್&zwnj;ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳ (Social Media) ಯುಗದಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ತುಂಬಾ ಸುಲಭ. ಪ್ರತಿಯೊಂದು ರೆಕಾರ್ಡಿಂಗ್ ಕೂಡ ಕಾನೂನುಬದ್ಧವಾಗಿ ಸರಿಯಾಗಿರುತ್ತದೆ ಎಂದರ್ಥವಲ್ಲ. ಯಾರನ್ನಾದರೂ ಅವರ ಅನುಮತಿಯಿಲ್ಲದೆ ರಹಸ್ಯವಾಗಿ ಚಿತ್ರೀಕರಿಸುವುದು ಅಪರಾಧವೇ ಅಥವಾ ಅಲ್ಲವೇ ಎಂಬುದು ಆ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ? ಏನನ್ನು ರೆಕಾರ್ಡ್ ಮಾಡಲಾಗಿದೆ? ಅವರ ಒಪ್ಪಿಗೆ ಪಡೆಯಲಾಗಿದೆಯೇ? ಮತ್ತು ಆ ವಿಡಿಯೋವನ್ನು ಮುಂದೆ ಹೇಗೆ ಬಳಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಭಾರತೀಯ ಕಾನೂನಿನಲ್ಲಿ ಖಾಸಗಿತನದ ಉಲ್ಲಂಘನೆ (Voyeurism), ಅಶ್ಲೀಲತೆ, ಮಾನಹಾನಿ ಮತ್ತು ಬ್ಲ್ಯಾಕ್&zwnj;ಮೇಲ್ ವಿರುದ್ಧ ಕಟ್ಟುನಿಟ್ಟಾದ ರಕ್ಷಣೆಯನ್ನು ನೀಡಲಾಗಿದೆ. ಈ ಕುರಿತು ಪ್ರಮುಖ ಕಾನೂನು ನಿಯಮಗಳು ಇಲ್ಲಿವೆ..&lt;/p&gt;&lt;h2&gt;&lt;strong&gt;ರಹಸ್ಯವಾಗಿ ರೆಕಾರ್ಡ್ ಮಾಡಿದರೆ ಜೈಲು&lt;/strong&gt;&lt;/h2&gt;&lt;p&gt;ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 77 ವಿಶೇಷವಾಗಿ 'ವಾಯರಿಸಂ' (Voyeurism - ರಹಸ್ಯವಾಗಿ ನೋಡುವುದು ಅಥವಾ ಚಿತ್ರೀಕರಿಸುವುದು) ವಿಷಯಕ್ಕೆ ಸಂಬಂಧಿಸಿದೆ.&lt;/p&gt;&lt;ul&gt; &lt;li&gt;ಮಹಿಳೆಯೊಬ್ಬರು ತನ್ನ ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವಾಗ (ಉದಾಹರಣೆಗೆ: ವಾಶ್&zwnj;ರೂಮ್ ಬಳಸುವುದು, ಬಟ್ಟೆ ಬದಲಾಯಿಸುವುದು ಅಥವಾ ಇತರೆ ಖಾಸಗಿ ಕ್ಷಣಗಳು) ಆಕೆಯ ಅನುಮತಿಯಿಲ್ಲದೆ ಫೋಟೋ ಅಥವಾ ವಿಡಿಯೋ ತೆಗೆಯುವುದು ಅಥವಾ ಅದನ್ನು ಹಂಚಿಕೊಳ್ಳುವುದು ಈ ಸೆಕ್ಷನ್ ಅಡಿಯಲ್ಲಿ ಅಪರಾಧವಾಗುತ್ತದೆ.&lt;/li&gt; &lt;li&gt;ಮೊದಲ ಬಾರಿಗೆ ಈ ಅಪರಾಧ ಸಾಬೀತಾದರೆ ಕನಿಷ್ಠ 1 ವರ್ಷದಿಂದ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಎರಡನೇ ಬಾರಿ ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಅಪರಾಧವೆಸಗಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.&lt;/li&gt; &lt;li&gt;ಒಂದು ವೇಳೆ ಮಹಿಳೆಯು ವಿಡಿಯೋ ಮಾಡಲು ಒಪ್ಪಿಗೆ ನೀಡಿದ್ದರೂ ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡದಿದ್ದರೆ ಅಂತಹ ವಿಡಿಯೋವನ್ನು ಶೇರ್ ಮಾಡುವುದು ಸಹ ಸೆಕ್ಷನ್ 77 ರ ಅಡಿಯಲ್ಲಿ ಅಪರಾಧ.&lt;/li&gt;&lt;/ul&gt;&lt;h2&gt;&lt;strong&gt;ಐಟಿ ಕಾಯ್ದೆ ಸೆಕ್ಷನ್ 66E (ಮಾಹಿತಿ ತಂತ್ರಜ್ಞಾನ ಕಾಯ್ದೆ 2000)&lt;/strong&gt;&lt;/h2&gt;&lt;p&gt;ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66E ಖಾಸಗಿತನದ ಉಲ್ಲಂಘನೆಗೆ ಸಂಬಂಧಿಸಿದೆ.&lt;/p&gt;&lt;ul&gt; &lt;li&gt;ಯಾವುದೇ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ವೈಯಕ್ತಿಕ ಭಾಗಗಳ ಚಿತ್ರಗಳನ್ನು ಉದ್ದೇಶಪೂರ್ವಕವಾಗಿ ಸೆರೆಹಿಡಿಯುವುದು, ಪ್ರಕಟಿಸುವುದು ಅಥವಾ ರವಾನಿಸುವುದನ್ನು ಇದು ನಿಷೇಧಿಸುತ್ತದೆ. ಈ ಕಾನೂನು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ.&lt;/li&gt; &lt;li&gt;ಈ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ, 2,00,000 ರೂಪಾಯಿಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.&lt;/li&gt;&lt;/ul&gt;&lt;h2&gt;&lt;strong&gt;ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಿದರೆ ಕಠಿಣ ಶಿಕ್ಷೆ&lt;/strong&gt;&lt;/h2&gt;&lt;p&gt;ರೆಕಾರ್ಡ್ ಮಾಡಿದ ವಿಡಿಯೋಗಳನ್ನು ಆನ್&zwnj;ಲೈನ್&zwnj;ನಲ್ಲಿ ಅಪ್&zwnj;ಲೋಡ್ ಮಾಡಿದರೆ ಅಥವಾ ಹಂಚಿಕೊಂಡರೆ ಕಾನೂನು ಕ್ರಮಗಳು ಮತ್ತಷ್ಟು ಕಠಿಣವಾಗುತ್ತವೆ. ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67A ಪ್ರಕಾರ, ಡಿಜಿಟಲ್ ರೂಪದಲ್ಲಿ ಅಶ್ಲೀಲ ಅಥವಾ ಲೈಂಗಿಕವಾಗಿ ಸ್ಪಷ್ಟವಾಗಿರುವ ವಿಷಯವನ್ನು ಪ್ರಕಟಿಸುವುದು ಅಥವಾ ರವಾನಿಸುವುದು ಗಂಭೀರ ಅಪರಾಧ. ವಾಟ್ಸಾಪ್, ಟೆಲಿಗ್ರಾಮ್, ಇನ್&zwnj;ಸ್ಟಾಗ್ರಾಮ್ ಅಥವಾ ಯಾವುದೇ ಇತರ ವೇದಿಕೆಯಲ್ಲಿ ಇಂತಹ ವೈಯಕ್ತಿಕ ವಿಡಿಯೋಗಳನ್ನು ಫಾರ್ವರ್ಡ್ ಮಾಡುವುದು ಕೇವಲ ಕಳುಹಿಸುವವರ ಮತ್ತು ಸ್ವೀಕರಿಸುವವರ ನಡುವಿನ ವೈಯಕ್ತಿಕ ವಿಷಯವಾಗಿ ಉಳಿಯುವುದಿಲ್ಲ, ಇದು ಕಾನೂನಿನಡಿಯಲ್ಲಿ ದೊಡ್ಡ ಅಪರಾಧವಾಗುತ್ತದೆ.&lt;/p&gt;&lt;h2&gt;&lt;strong&gt;ಬ್ಲ್ಯಾಕ್&zwnj;ಮೇಲ್ ಅಥವಾ ಸುಲಿಗೆ&lt;/strong&gt;&lt;/h2&gt;&lt;p&gt;ಒಂದು ವೇಳೆ ಯಾರದ್ದಾದರೂ ವಿಡಿಯೋವನ್ನು ಇಟ್ಟುಕೊಂಡು ಅವರನ್ನು ಹೆದರಿಸಲು ಅಥವಾ ಅವರಿಂದ ಹಣ ವಸೂಲಿ ಮಾಡಲು (ಸುಲಿಗೆ) ಬಳಸಿದರೆ, ಪ್ರಕರಣವು ಮತ್ತಷ್ಟು ಗಂಭೀರವಾಗುತ್ತದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 308 ರ ಪ್ರಕಾರ, ಹಾನಿ ಮಾಡುವ ಭಯವನ್ನು ಹುಟ್ಟಿಸಿ, ಅಕ್ರಮವಾಗಿ ಹಣ, ಆಸ್ತಿ ಅಥವಾ ಯಾವುದೇ ಅಮೂಲ್ಯ ವಸ್ತುವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವುದು ಅಪರಾಧವಾಗಿದೆ. ಈ ಅಪರಾಧಕ್ಕಾಗಿ 7 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು.&lt;/p&gt;&lt;h2&gt;&lt;strong&gt;ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ರೆಕಾರ್ಡ್ ಮಾಡುವುದು ಕಾನೂನುಬಾಹಿರವೇ?&lt;/strong&gt;&lt;/h2&gt;&lt;p&gt;ರಸ್ತೆ, ಮಾರುಕಟ್ಟೆ, ರೈಲ್ವೆ ನಿಲ್ದಾಣ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಂತಹ ಸ್ಥಳಗಳಲ್ಲಿ ಜನರ ವಿಡಿಯೋ ರೆಕಾರ್ಡಿಂಗ್ ಮಾಡುವುದು ಕೇವಲ ಅವರ ಒಪ್ಪಿಗೆ ಇಲ್ಲ ಎಂಬ ಕಾರಣಕ್ಕೆ ಅಪರಾಧವಾಗುವುದಿಲ್ಲ. ಪತ್ರಕರ್ತರು, ಬ್ಲಾಗರ್&zwnj;ಗಳು ಮತ್ತು ಸಾಮಾನ್ಯ ಜನರು ಸಾರ್ವಜನಿಕ ಸ್ಥಳಗಳ ದೃಶ್ಯಗಳನ್ನು ರೆಕಾರ್ಡ್ ಮಾಡಬಹುದು. ಆದರೆ ಇಲ್ಲಿ ಸಂದರ್ಭಗಳು ಮುಖ್ಯವಾಗುತ್ತವೆ: ಯಾರನ್ನಾದರೂ ಬೆನ್ನಟ್ಟುವುದು (Stalking), ಹೆದರಿಸುವುದು, ಕಿರುಕುಳ ನೀಡುವುದು ಅಥವಾ ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶದಿಂದ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ರೆಕಾರ್ಡ್ ಮಾಡುವುದು ಕಾನೂನು ಸಮಸ್ಯೆಗೆ ಕಾರಣವಾಗಬಹುದು.&lt;/p&gt;&lt;h2&gt;&lt;strong&gt;ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ 2023 (DPDP Act)&lt;/strong&gt;&lt;/h2&gt;&lt;p&gt;ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ 2023 (DPDP Act) ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ಮತ್ತು ಬಳಸಲು ಒಂದು ದೊಡ್ಡ ಚೌಕಟ್ಟನ್ನು ಒದಗಿಸುತ್ತದೆ. ಇದರಲ್ಲಿ ಬಳಕೆದಾರರ ಒಪ್ಪಿಗೆ ಮತ್ತು ಕಾನೂನುಬದ್ಧ ಬಳಕೆಯ ನಿಯಮಗಳು ಸೇರಿವೆ. ಆದರೆ ಇದು ಪ್ರಕರಣದ ಸಂದರ್ಭ ಮತ್ತು ಸಂಬಂಧಿತ ನಿಬಂಧನೆಗಳ ಆಧಾರದ ಮೇಲೆ ಅನ್ವಯಿಸುತ್ತದೆ. ಸ್ಮಾರ್ಟ್&zwnj;ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.&lt;/p&gt;]]></content:encoded>
            <category><![CDATA[special]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/special/filmed-without-consent-here-are-the-strict-legal-punishments-for-recording-videos-without-permission-gkn/articleshow-395eelh"/>
        </item>
        <item>
            <title><![CDATA[ಅಣ್ಣಯ್ಯ ಧಾರಾವಾಹಿ ಅರ್ಧಕ್ಕೆ ಬಿಟ್ಟು 'ಬಿಗ್ ಬಾಸ್ ಮನೆಗೆ ಹೊರಟ' ಜಿಮ್ ಸೀನ! ನಟ ಸುಷ್ಮಿತ್ ಜೈನ್ ಹೇಳಿದ್ದೇನು?]]></title>
            <link>https://kannada.asianetnews.com/gallery/tv-talk/annayya-serial-gym-seena-sushmith-jain-quits-fans-comments-entry-in-bigg-boss-kannada-13-vfzcfyo</link>
            <guid isPermaLink="true">https://kannada.asianetnews.com/gallery/tv-talk/annayya-serial-gym-seena-sushmith-jain-quits-fans-comments-entry-in-bigg-boss-kannada-13-vfzcfyo</guid>
            <pubDate>Thu, 13 Aug 2026 11:53:38 +0530</pubDate>
            <description><![CDATA['ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್ ಸೀನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಸುಷ್ಮಿತ್ ಜೈನ್, ಧಾರಾವಾಹಿಯಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ಅವರು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಬಲವಾಗಿ ಊಹಿಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzww1ebv7s8ez7yqxab5r91g,imgname-annayya-serial-sushmith-jain-entry-bigg-boss-13--1--1786601585019.jpg" type="image/jpeg" height="390" width="690"/>
            <content:encoded><![CDATA['ಅಣ್ಣಯ್ಯ' ಧಾರಾವಾಹಿಯಲ್ಲಿ ಜಿಮ್ ಸೀನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಸುಷ್ಮಿತ್ ಜೈನ್, ಧಾರಾವಾಹಿಯಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ, ಅವರು ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಬಲವಾಗಿ ಊಹಿಸುತ್ತಿದ್ದಾರೆ.&lt;img&gt;&lt;p&gt;ಅಣ್ಣಯ್ಯ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಆಗಿದ್ದ ಯುವ ನಟ ಸುಷ್ಮಿತ್ ಜೈನ್ ಅವರು ಇದೀಗ ಧಾರಾವಾಹಿಯನ್ನು ಅರ್ಧಕ್ಕೆ ಬಿಟ್ಟು ಹೋಗುತ್ತಿದ್ದಾರೆ. ಗುಂಡಮ್ಮನ ಗಂಡನಾಗಿ ಪಿಂಕಿಯ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಜಿಮ್ ಸೀನ ಇದೀಗ ಏಕಾಏಕಿ ಧಾರಾವಾಹಿ ತೊರೆದಿದ್ದು, ಇನ್ನುಮುಂದೆ ಬರುವ ಹೊಸ ನಟನಿಗೂ ನಿಮ್ಮ ಬೆಂಬಲ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಧಾರಾವಾಹಿ ಬಿಟ್ಟು ಅರ್ಧಕ್ಕೆ ಹೋಗುವಂತಹ ಕಾರಣವೇನಿತ್ತು ಎಂದು ಹುಡುಕಾಡಿದರೆ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಹೋಗುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ.&lt;/p&gt;&lt;img&gt;&lt;p&gt;ಹೌದು, ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜನ ಸಾಮಾನ್ಯರಿಗೂ ಈ ಬಾರಿ ಬಿಗ್ ಬಾಸ್ ಮನೆಗೆ ಪ್ರವೇಶ ಇರುವುದರಿಂದ ಅವರಿಗೆ ಅವಕಾಶ ನೀಡಲು ಹಲವು ಹಂತಗಳನ್ನು ಕಲರ್ಸ್ ಕನ್ನಡ ತಂಡವು ಮಾಡುತ್ತಿದೆ. ಇದೀಗ ಜನ ಸಾಮಾನ್ಯರ ಆಯ್ಕೆಯು ಮೂರು ಹಂತಗಳನ್ನು ದಾಟಿ ಅಗ್ನಿ ಪರೀಕ್ಷೆ ಹಂತವನ್ನು ತಲುಪಿದ್ದು, 10ಕ್ಕಿಂತ ಕಡಿಮೆ ಜನರನ್ನು ಮನೆಯೊಳಗೆ ಕಳಿಸಲು ಸಿದ್ಧತೆ ಮಾಡಲಾಗುತ್ತಿದೆ.&lt;/p&gt;&lt;img&gt;&lt;p&gt;ಜನ ಸಾಮಾನ್ಯರ ಆಯ್ಕೆ ಒಂದು ಕಡೆ ನಡೆಯುತ್ತಿದ್ದರೆ ಸೆಲೆಬ್ರಿಟಿಗಳು ಯಾರಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಲೆಕ್ಕಾಚಾರದಲ್ಲಿ ಈವರೆಗೆ ಕಾಣಿಸಿಕೊಳ್ಳದ ಸುಷ್ಮತ್ ಜೈನ್ ಇದೀಗ ಧಾರಾವಾಹಿ ಅರ್ಧಕ್ಕೆ ಬಿಟ್ಟು ಹೊರನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಒಂದು ವೇಳೆ ಸುಷ್ಮಿತ್ ಜೈನ್ ಅವರು ಬಿಗ್ ಬಾಸ್ ಮನೆಗೆ ಬಂದಲ್ಲಿ ಹಿಂದಿನ ಸೀಸನ್&zwnj;ನ ಸೂರಜ್&zwnj; ಸಿಂಗ್ ಸ್ಥಾನವನ್ನು ತುಂಬಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.&lt;/p&gt;&lt;img&gt;&lt;p&gt;ಸುಷ್ಮಿತ್ ಜೈನ್ ಇನ್ನೂ ಯುವನಟ ಆಗಿದ್ದು, ಕಟ್ಟುಮಸ್ತಾದ ದೇಹವನ್ನಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವಂತಹ ಟಾಸ್ಕ್ ಹಾಗೂ ಲವ್ ಗೇಮ್&zwnj;ಗಳಿಗೂ ಹೇಳಿ ಮಾಡಿಸಿದ ವ್ಯಕ್ತಿತ್ವವಾಗಿದೆ. ಇನ್ನು ಅಣ್ಣಯ್ಯ ಧಾರಾವಾಹಿಯಲ್ಲಿ ಪಿಂಕಿ ಜೊತೆಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡ ಜಿಮ್ ಸೀನ ಕೊನೆಗೆ ಹುಡುಗಿ ಕೈಕೊಟ್ಟು ಬೇರೊಬ್ಬನ ಜೊತೆಗೆ ಮದುವೆ ಮಾಡಿಕೊಂಡು ಹೋಗಿದ್ದಾಳೆ.&lt;/p&gt;&lt;img&gt;&lt;p&gt;ಇದರಿಂದ ಹಳೆ ಹೆಂಡ್ತಿ ಪಾದವೇ ಗತಿ ಎನ್ನುವಂತೆ ಗುಂಡಮ್ಮನಿಗೆ ಒಳ್ಳೆಯ ಗಂಡನಾಗಿ ಜೀವನ ಮಾಡಲು ಮುಂದಾಗುತ್ತಾನೆ. ಇಂತಹ ಸಂದರ್ಭದಲ್ಲಿ ದಿಢೀರನೆ ಧಾರಾವಾಹಿ ಬಿಟ್ಟು ಹೊರಗೆ ಹೋಗುತ್ತಿರುವುದಾಗಿ ಘೋಷಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಹೊಸಬರಿಗೂ ಪ್ರೋತ್ಸಾಹ ನೀಡುವಂತೆ ಮನವಿ:&lt;/strong&gt;&lt;/p&gt;&lt;p&gt;ಧಾರಾವಾಹಿ ತೊರೆಯುವ ಮುನ್ನ ಜೀ ಕನ್ನಡ ವಾಹಿನಿಯ ಸಾಮಾಜಿಕ ಜಾಲತಾಣ ಇನ್&zwnj;ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸುಷ್ಮಿತ್ ಜೈನ್ ಅವರು 'ನಾನು ವೈಯಕ್ತಿಕ ಕಾರಣದಿಂದ ಇನ್ನುಮುಂದೆ ಜಿಮ್ ಸೀನ ಪಾತ್ರವನ್ನು ಮುಂದುವರಿಸಲು ಆಗುತ್ತಿಲ್ಲ. ಹೀಗಾಗಿ ಮುಂದೆ ನನ್ನ ಪಾತ್ರವನ್ನು ಯಾರು ಹೊಸಬರು ಮಾಡಲು ಬರುತ್ತಾರೋ ಅವರಿಗೂ ಅದೇ ಪ್ರೀತಿ, ಬೆಂಬಲ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ' ಎಂದು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/annayya-serial-gym-seena-sushmith-jain-quits-fans-comments-entry-in-bigg-boss-kannada-13-vfzcfyo"/>
        </item>
        <item>
            <title><![CDATA[ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ]]></title>
            <link>https://kannada.asianetnews.com/viral/uncovering-koskarli-cave-12900-year-old-stone-tools-hunter-gatherer-artifacts-found-in-turkey-gdp/articleshow-rndt4yf</link>
            <guid isPermaLink="true">https://kannada.asianetnews.com/viral/uncovering-koskarli-cave-12900-year-old-stone-tools-hunter-gatherer-artifacts-found-in-turkey-gdp/articleshow-rndt4yf</guid>
            <pubDate>Thu, 13 Aug 2026 11:49:46 +0530</pubDate>
            <description><![CDATA[ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯದಾದ ಕೊಸ್ಕಾರ್ಲಿ ಗುಹೆಯು ಪತ್ತೆಯಾಗಿದ್ದು, ಇದು ಎಪಿಪಾಲಿಯೊಲಿಥಿಕ್ ಅವಧಿಯ ಮಾನವ ಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಈ ಉತ್ಖನನದಲ್ಲಿ ಪ್ರಾಚೀನ ಅಗ್ನಿಕುಂಡ, ಕಲ್ಲಿನ ಉಪಕರಣಗಳು ಮತ್ತು ವೈಯಕ್ತಿಕ ಆಭರಣಗಳು ದೊರೆತಿದ್ದು, ಇದು ಅನಾಟೋಲಿಯಾ ಮತ್ತು ಕಾಕಸಸ್ ನಡುವಿನ ಸಾಂಸ್ಕೃತಿಕ ಸಂಪರ್ಕವನ್ನು ಸೂಚಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzww1tgt2knvkchckqxegjnh,imgname-koskarli-cave-1786601597465.jpg" type="image/jpeg" height="390" width="690"/>
            <content:encoded><![CDATA[&lt;p&gt;ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯದಾದ ಗುಹೆಯೊಂದು ಪತ್ತೆಯಾಗಿದ್ದು, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣಗಳು ಹಾಗೂ ವೈಯಕ್ತಿಕ ಆಭರಣಗಳ ಅವಶೇಷಗಳನ್ನು ಬಹಿರಂಗಪಡಿಸುವ ಮೂಲಕ ಬೇಟೆಗಾರ ಮರೆತುಹೋದ ಸಂಗ್ರಹವು ಜಗತ್ತಿಗೆ ಹೊಸ ಬೆಳಕು ಚೆಲ್ಲಿದೆ.&lt;/p&gt;&lt;h2&gt;2019 ರಲ್ಲಿ ಪತ್ತೆಯಾದ ಕೊಸ್ಕಾರ್ಲಿ ಗುಹೆ&lt;/h2&gt;&lt;p&gt;ಟರ್ಕಿಯ ಪೂರ್ವ ಕಪ್ಪು ಸಮುದ್ರ ಪ್ರದೇಶದ ಟ್ರಾಬ್ಜಾನ್ ಬಳಿ ಇರುವ ಕೊಸ್ಕಾರ್ಲಿ ಗುಹೆಯನ್ನು 2019 ರ ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಸಮಯದಲ್ಲಿ ಗುರುತಿಸಲಾಯಿತು. ಇದು ಟ್ರಾಬ್ಜಾನ್&zwnj;ನಿಂದ ದಕ್ಷಿಣಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿ, ಸಮುದ್ರ ಮಟ್ಟದಿಂದ 1,030 ಮೀಟರ್ ಎತ್ತರದಲ್ಲಿರುವ ಸೊಗ್ಯುಟ್ಲು ಕಣಿವೆಯಲ್ಲಿದೆ. ಪ್ರದೇಶದ ಪ್ರಮುಖ ಜಲಮಾರ್ಗವಾದ ಸೊಗ್ಯುಟ್ಲು ಕ್ರೀಕ್ ಎಂಬ ತೊರೆಗೆ ಇದು ತೀರಾ ಹತ್ತಿರದಲ್ಲಿದೆ.&lt;/p&gt;&lt;p&gt;2024 ರಲ್ಲಿ ಟ್ರಾಬ್ಜಾನ್ ವಸ್ತುಸಂಗ್ರಹಾಲಯ ಮತ್ತು ಕರಡೆನಿಜ್ ತಾಂತ್ರಿಕ ವಿಶ್ವವಿದ್ಯಾಲಯದ ಜಂಟಿ ಮಾರ್ಗದರ್ಶನದಲ್ಲಿ ಇಲ್ಲಿ ವ್ಯವಸ್ಥಿತ ಉತ್ಖನನಗಳು ಪ್ರಾರಂಭವಾದವು. 'ಆಂಟಿಕ್ವಿಟಿ' ಜರ್ನಲ್&zwnj;ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಗುಹೆಯು ಎಪಿಪಾಲಿಯೊಲಿಥಿಕ್ (Epipaleolithic) ಅವಧಿಯಲ್ಲಿ మానವ ಚಟುವಟಿಕೆಗಳು ನಡೆದಿದ್ದವು ಎಂಬುದಕ್ಕೆ ಅತ್ಯಂತ ಅಪರೂಪದ ಸಾಕ್ಷ್ಯವನ್ನು ಒದಗಿಸುತ್ತದೆ.&lt;/p&gt;&lt;h2&gt;ಪೈರೋಕ್ಲಾಸ್ಟಿಕ್ ರಚನೆ ಮತ್ತು ಭೌಗೋಳಿಕ ಮಹತ್ವ&lt;/h2&gt;&lt;p&gt;ಈ ಗುಹೆಯು ಪೈರೋಕ್ಲಾಸ್ಟಿಕ್ (ಅಗ್ನಿಪರ್ವತಜನ್ಯ) ಭೂವೈಜ್ಞಾನಿಕ ರಚನೆಯೊಳಗೆ ರೂಪುಗೊಂಡಿದೆ. ಪೂರ್ವ ಕಪ್ಪು ಸಮುದ್ರ ಪ್ರದೇಶವು ಅನಾಟೋಲಿಯಾ ಮತ್ತು ಕಾಕಸಸ್ ನಡುವಿನ ಭೌಗೋಳಿಕ ಜಂಕ್ಷನ್&zwnj;ನಲ್ಲಿ ಇರುವುದರಿಂದ, ಇತಿಹಾಸಪೂರ್ವ ಜನರ ಚಲನವಲನ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ವಿನಿಮಯಕ್ಕೆ ಇದು ಪ್ರಮುಖ ಹಾದಿಯಾಗಿತ್ತು ಎಂದು ಪುರಾತತ್ತ್ವಜ್ಞರು ಭಾವಿಸುತ್ತಾರೆ.&lt;/p&gt;&lt;p&gt;2024 ರ ಮೊದಲ ಉತ್ಖನನ ಋತುವಿನಲ್ಲಿ, ಸಂಶೋಧಕರು ಗುಹೆಯ ಒಳಗಿನ ಹಾಗೂ ಹೊರಗಿನ ಸುಮಾರು 16 ಚದರ ಮೀಟರ್ ಪ್ರದೇಶವನ್ನು ಅಗೆದು ಪರಿಶೀಲಿಸಿದರು. ಮೇಲ್ಮೈಯಲ್ಲಿ ವಿವಿಧ ಕಾಲಘಟ್ಟದ ಕದಲಿದ ಅವಶೇಷಗಳು ಸಿಕ್ಕರೂ, ಅದರ ಕೆಳಗೆ ಎಪಿಪಾಲಿಯೊಲಿಥಿಕ್ ಅವಧಿಗೆ ಸೇರಿದ ಸುಸ್ಥಿತಿಯಲ್ಲಿರುವ ಅಖಂಡ ಪದರವೊಂದು ಪತ್ತೆಯಾಯಿತು.&lt;/p&gt;&lt;h2&gt;12,900 ವರ್ಷಗಳಷ್ಟು ಹಳೆಯದಾದ ಜೀವಂತ ಪದರ&lt;/h2&gt;&lt;p&gt;ಈ ಅಖಂಡ ಪದರವು ಸುಮಾರು 20 ರಿಂದ 40 ಸೆಂಟಿಮೀಟರ್ ದಪ್ಪವಿದ್ದು, ಬೂದಿ, ಇದ್ದಿಲು, ಸುಟ್ಟ ಕೆಸರು ಮತ್ತು ಕಲ್ಲಿನ ತುಂಡುಗಳನ್ನು ಒಳಗೊಂಡಿದೆ. ಸಂಶೋಧಕರು ಇಲ್ಲಿ ಮೂಲ ಅಗ್ನಿಕುಂಡದ ಕುರುಹುಗಳನ್ನು ಗುರುತಿಸಿದ್ದಾರೆ. ಅಂದರೆ, ಅಲ್ಲಿನ ಬೆಂಕಿಯ ಬಳಕೆಯು ಬೇರೆಡೆಯಿಂದ ಬಂದದ್ದಲ್ಲ, ಬದಲಾಗಿ ಗುಹೆಯೊಳಗೇ ನಡೆದ ಸಜೀವ ಚಟುವಟಿಕೆಯಾಗಿದೆ.&lt;/p&gt;&lt;p&gt;ಮೂಳೆ ಮತ್ತು ಇದ್ದಿಲಿನ ರೇಡಿಯೊಕಾರ್ಬನ್ ಡೇಟಿಂಗ್ (Radiocarbon Dating) ಪರೀಕ್ಷೆಯ ಪ್ರಕಾರ, ಈ ಮಾನವ ವಸತಿಯು ಕ್ರಿಸ್ತಪೂರ್ವ 13 ನೇ ಸಹಸ್ರಮಾನದ ಅಂತ್ಯಕ್ಕೆ (ಸರಿಹೊಂದಿಸಿದಾಗ 12,916&ndash;12,070 Cal BC) ಸೇರಿದ್ದಾಗಿದೆ. ಅಂದರೆ, ಲೇಟ್ ಪ್ಲೆಸ್ಟೊಸೀನ್ ಯುಗದ ಮುಕ್ತಾಯ ಹಾಗೂ ಹೋಲೋಸೀನ್ ಯುಗದ ಆರಂಭದ ಅವಧಿಯಲ್ಲಿ (ಸುಮಾರು 12,900&ndash;12,000 ವರ್ಷಗಳ ಹಿಂದೆ) ಜನರು ಇಲ್ಲಿ ವಾಸಿಸುತ್ತಿದ್ದರು.&lt;/p&gt;&lt;h2&gt;ಉಪಕರಣಗಳು, ಆಭರಣಗಳು ಮತ್ತು ಸಾಂಸ್ಕೃತಿಕ ಕೊಂಡಿಗಳು&lt;/h2&gt;&lt;p&gt;ಉತ್ಖನನದಲ್ಲಿ ವಿಭಿನ್ನ ಬಣ್ಣದ ಫ್ಲಿಂಟ್, ಅಬ್ಸಿಡಿಯನ್ ಮತ್ತು ಡ್ಯಾಸಿಟಿಕ್ ಬಂಡೆಗಳಿಂದ ಮಾಡಿದ ಸಣ್ಣ ಪ್ರಮಾಣದ ಕಲ್ಲಿನ ಉಪಕರಣಗಳು ಸಿಕ್ಕಿವೆ. ಇವುಗಳಲ್ಲಿ ಚಾಕುಗಳು (Blades), ಚೂಪಾದ ಮೊನೆಗಳು (Points), ರಂಧ್ರ ಕೊರೆಯುವ ಉಪಕರಣಗಳು (Perforators) ಮತ್ತು ಸಣ್ಣ ಅರ್ಧಚಂದ್ರಾಕಾರದ ಉಪಕರಣಗಳು (Lunates) ಸೇರಿವೆ. ಜೊತೆಗೆ ಉಪಕರಣ ತಯಾರಿಕೆಯ ತ್ಯಾಜ್ಯ ವಸ್ತುಗಳು ಪತ್ತೆಯಾಗಿರುವುದರಿಂದ, ಈ ಗುಹೆಯೊಳಗೇ ಉಪಕರಣಗಳನ್ನು ತಯಾರಿಸಲಾಗುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ.&lt;/p&gt;&lt;p&gt;ಈ ಕಲ್ಲಿನ ತಂತ್ರಜ್ಞಾನವು ಅನಾಟೋಲಿಯಾ, ಲೆವಂಟ್ ಮತ್ತು ಕಾಕಸಸ್ ಪ್ರದೇಶಗಳಲ್ಲಿ ಕಂಡುಬರುವ ಎಪಿಪಾಲಿಯೊಲಿಥಿಕ್ ಸಂಸ್ಕೃತಿಯನ್ನು ಹೋಲುತ್ತದೆ. ಇದರಿಂದಾಗಿ ವಿವಿಧ ಪ್ರಾದೇಶಿಕ ಸಮುದಾಯಗಳ ನಡುವಿನ ಸಂಪರ್ಕ ಮತ್ತು ತಾಂತ್ರಿಕ ವಿನಿಮಯವನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.&lt;/p&gt;&lt;h2&gt;ವೈಯಕ್ತಿಕ ಅಲಂಕಾರ ಮತ್ತು ಪರಿಸರ ವ್ಯವಸ್ಥೆ&lt;/h2&gt;&lt;p&gt;ಇಲ್ಲಿ ಕೇವಲ ಜೀವನಾಧಾರ ಉಪಕರಣಗಳು ಮಾತ್ರವಲ್ಲದೆ, ಕೊಂಬಿನಿಂದ ಮಾಡಿದ ತೋಡು ತುಣುಕು ಹಾಗೂ ರಂಧ್ರವಿರುವ ಪ್ರಾಣಿಯ ಹಲ್ಲು ಪತ್ತೆಯಾಗಿವೆ. ಇವುಗಳನ್ನು ಪ್ರಾಚೀನ ಜನರು ವೈಯಕ್ತಿಕ ಆಭರಣ ಅಥವಾ ಅಲಂಕಾರಕ್ಕಾಗಿ ಬಳಸುತ್ತಿದ್ದರು ಎಂಬುದನ್ನು ಸೂಚಿಸುತ್ತವೆ.&lt;/p&gt;&lt;p&gt;ಅಷ್ಟೇ ಅಲ್ಲದೆ, ಪ್ರಾಣಿಗಳ ಅವಶೇಷಗಳು ಮತ್ತು ಮೃದ್ವಂಗಿಗಳ (Molluscs) ಚಿಪ್ಪುಗಳು ಪತ್ತೆಯಾಗಿದ್ದು, ಅವುಗಳ ತನಿಖೆ ಮುಂದುವರಿದಿದೆ. ಮುಂಬರುವ ದಿನಗಳಲ್ಲಿ ನಡೆಯುವ ಸಸ್ಯ ಮತ್ತು ಪ್ರಾಣಿ ಅವಶೇಷಗಳ ವಿಶ್ಲೇಷಣೆಯು ಈ ಬೇಟೆಗಾರ-ಸಂಗ್ರಹಕಾರರ ಆಹಾರ ಪದ್ಧತಿ ಹಾಗೂ ಪರಿಸರಕ್ಕೆ ಅವರು ಹೇಗೆ ಹೊಂದಿಕೊಂಡಿದ್ದರು ಎಂಬುದರ ಕುರಿತು ಇನ್ನಷ್ಟು ವಿವರಗಳನ್ನು ನೀಡಲಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Gowthami K</dc:creator>
            <atom:link href="https://kannada.asianetnews.com/viral/uncovering-koskarli-cave-12900-year-old-stone-tools-hunter-gatherer-artifacts-found-in-turkey-gdp/articleshow-rndt4yf"/>
        </item>
        <item>
            <title><![CDATA[ಕನ್ಯಾಕುಮಾರಿ ಟು ಕಾಶ್ಮೀರ: ರಾಹುಲ್ ಗಾಂಧಿ ಪ್ರಧಾನಿ ಆಗಲೆಂದು ಆಂಧ್ರದ ವಕೀಲರ ಪಾದಯಾತ್ರೆ, ಕೂಡ್ಲಿಗಿಯಲ್ಲಿ ಶಾಸಕ ಶ್ರೀನಿವಾಸ ಸಾಥ್]]></title>
            <link>https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93</link>
            <guid isPermaLink="true">https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93</guid>
            <pubDate>Thu, 13 Aug 2026 11:38:03 +0530</pubDate>
            <description><![CDATA[ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kzwvb7e80jp44bpz8zve5dfa,imgname-----------------------2026-08-13t113039.580-1786600857032.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕೂಡ್ಲಿಗಿಗೆ ಆಗಮಿಸಿತು.&lt;/p&gt;&lt;img&gt;&lt;p&gt;ರಾಹುಲ್ ಗಾಂಧಿ(Rahul Gandhi) ದೇಶದ ಪ್ರಧಾನಿಯಾಗಬೇಕು. ದೇಶದಲ್ಲಿ ಏಕತೆ, ಪ್ರಜಾಪ್ರಭುತ್ವ ಉಳಿಸಿ, ಸಾಮಾಜಿಕ ನ್ಯಾಯವನ್ನು ಬಲಪಡಿಸಬೇಕು ಎಂದು ಆಗ್ರಹಿಸಿ ಆಂಧ್ರಪ್ರದೇಶದ ವಕೀಲ ಕಾಟೂರಿ ವೆಂಕಟೇಶ್ವರಲು ಬೃಹತ್ ಪಾದಯಾತ್ರೆ ನಡೆಸುತ್ತಿದ್ದಾರೆ ಇಂದು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕೂಡ್ಲಿಗಿಗೆ ಆಗಮಿಸಿದರು.&lt;/p&gt;&lt;img&gt;&lt;p&gt;ಕನ್ಯಾಕುಮಾರಿಯಿಂದ ಕಾಶ್ಮೀರ(Kanyakumari to kashmir padayatre)ದವರೆಗೆ ಪಾದಯಾತ್ರೆ ಸಂಕಲ್ಪ ಮಾಡಿರುವ ಕಾಟೂರಿ ವೆಂಕಟೇಶ್ವರಲು, 'ರಾಹುಲ್ ಗಾಂಧಿಗಾಗಿ ಭಾರತ ಒಂದಾಗಬೇಕು&rsquo; ಎಂಬ ಸಂದೇಶದೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮಕ್ಕೆ ಪಾದಯಾತ್ರಿಗಳ ತಂಡ ಆಗಮಿಸಿತು.&lt;/p&gt;&lt;img&gt;&lt;p&gt;ಕೂಡ್ಲಿಗಿ ಶಾಸಕ ಎನ್.ಟಿ. ಶ್ರೀನಿವಾಸ ಅವರು ಪಾದಯಾತ್ರಿಗಳ ತಂಡವನ್ನು ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು. ಈ ವೇಳೆ &lsquo;ದೇಶಕ್ಕಾಗಿ ರಾಹುಲ್ ಗಾಂಧಿ ಬೇಕು&rsquo; ಎಂದು ಘೋಷಣೆ ಕೂಗುತ್ತಾ ಪಾದಯಾತ್ರಿಕರೊಂದಿಗೆ ಹೆಜ್ಜೆ ಹಾಕುವ ಮೂಲಕ ಶಾಸಕರು ಬೆಂಬಲ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ದೇಶದ ಏಕತೆ, ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರುತ್ತಿರುವ ಈ ಬೃಹತ್ ಪಾದಯಾತ್ರೆಯಲ್ಲಿ ಶಾಸಕ ಎನ್.ಟಿ. ಶ್ರೀನಿವಾಸ ತಂಡವನ್ನು ಬರಮಾಡಿಕೊಂಡರಷ್ಟೇ ಅಲ್ಲದೆ ತಂಡದೊಂದಿಗೆ ಸುಮಾರು ಐದು ಕಿಮೀಟರ್ ವರೆಗೂ ಪಾದಯಾತ್ರಿಕರೊಂದಿಗೆ ನಡೆಯುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/politics/ap-lawyer-on-kanyakumari-kashmir-padayatra-for-rahul-gandhi-next-pm-reaches-kudligi-at-vijayangar-rav-3flof93"/>
        </item>
        <item>
            <title><![CDATA[Toyota Hiluxಗೆ ಟಕ್ಕರ್ ಕೊಡಲು ಮಹೀಂದ್ರಾ ಹೊಸ ಅಸ್ತ್ರ,  Scorpio-N Pickup ಆಗಸ್ಟ್ 14ಕ್ಕೆ ಗ್ರ್ಯಾಂಡ್ ಎಂಟ್ರಿ]]></title>
            <link>https://kannada.asianetnews.com/gallery/car-news/mahindra-scorpio-n-pickup-teased-ahead-of-august-14-2026-debut-suh-72qdahd</link>
            <guid isPermaLink="true">https://kannada.asianetnews.com/gallery/car-news/mahindra-scorpio-n-pickup-teased-ahead-of-august-14-2026-debut-suh-72qdahd</guid>
            <pubDate>Thu, 13 Aug 2026 11:36:38 +0530</pubDate>
            <description><![CDATA[ಮಹೀಂದ್ರಾ ತನ್ನ ಬಹುನಿರೀಕ್ಷಿತ Scorpio-N ಆಧಾರಿತ Pickup‌ನ ಟೀಸರ್ ಬಿಡುಗಡೆ ಮಾಡಿದ್ದು, ಆಗಸ್ಟ್ 14ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ; ಇದು Toyota Hiluxಗೆ ಪ್ರಮುಖ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwtfjx1t3sqzz9jsky90ktq,imgname-mahindra-scorpio-n-pickup-teased-ahead-of-august-14-2026-debut--3--1786599951265.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹೀಂದ್ರಾ ತನ್ನ ಬಹುನಿರೀಕ್ಷಿತ Scorpio-N ಆಧಾರಿತ Pickup&zwnj;ನ ಟೀಸರ್ ಬಿಡುಗಡೆ ಮಾಡಿದ್ದು, ಆಗಸ್ಟ್ 14ರಂದು ಜಾಗತಿಕವಾಗಿ ಅನಾವರಣಗೊಳ್ಳಲಿದೆ; ಇದು Toyota Hiluxಗೆ ಪ್ರಮುಖ ಪ್ರತಿಸ್ಪರ್ಧಿಯಾಗುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆ ಮಹೀಂದ್ರಾ ತನ್ನ ಬಹುನಿರೀಕ್ಷಿತ ಸ್ಕಾರ್ಪಿಯೋ-N ಆಧಾರಿತ ಪಿಕಪ್ ಟ್ರಕ್&zwnj;ನ ಹೊಸ ಟೀಸರ್ ಬಿಡುಗಡೆ ಮಾಡಿದೆ. ಈ ಹೊಸ ಪಿಕಪ್&zwnj;ಗೆ ಆಗಸ್ಟ್ 14, 2026ರಂದು ಜಾಗತಿಕ ಅನಾವರಣ ನಿಗದಿಯಾಗಿದೆ.&lt;/p&gt;&lt;p&gt;ಸ್ಕಾರ್ಪಿಯೋ-N ಪಿಕಪ್&zwnj;ನ ಹೊಸ ಟೀಸರ್ ಬಿಡುಗಡೆ&lt;/p&gt;&lt;p&gt;ಮಹೀಂದ್ರಾ ಬಿಡುಗಡೆ ಮಾಡಿರುವ ಟೀಸರ್&zwnj;ನಲ್ಲಿ ಹೊಸ ಪಿಕಪ್&zwnj;ನ ರಗಡ್ ವಿನ್ಯಾಸದ ಕೆಲವು ಪ್ರಮುಖ ಅಂಶಗಳು ಕಾಣಿಸಿಕೊಂಡಿವೆ. ಇದು 2023ರಲ್ಲಿ ತೋರಿಸಿದ್ದ Global Pik Up Conceptನ ಉತ್ಪಾದನಾ ಆವೃತ್ತಿಯಾಗುವ ನಿರೀಕ್ಷೆಯಿದೆ.&lt;/p&gt;&lt;p&gt;ಸ್ಕಾರ್ಪಿಯೋ-Nನ ವಿನ್ಯಾಸದಿಂದ ಪ್ರೇರಣೆ ಪಡೆದಿರುವ ಈ ಪಿಕಪ್, ಸಾಮಾನ್ಯ ಕಮರ್ಷಿಯಲ್ ಪಿಕಪ್&zwnj;ಗಿಂತ ಹೆಚ್ಚು ಪ್ರೀಮಿಯಂ ಹಾಗೂ ಲೈಫ್&zwnj;ಸ್ಟೈಲ್ ವಾಹನವಾಗಿ ಗುರುತಿಸಿಕೊಳ್ಳುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಹೊಸ ಮಹೀಂದ್ರಾ ಪಿಕಪ್ ಅನ್ನು Toyota Hiluxಗೆ ಪ್ರತಿಸ್ಪರ್ಧಿಯಾಗಿ ನೋಡಲಾಗುತ್ತಿದೆ. ಉತ್ತಮ ಆಫ್-ರೋಡ್ ಸಾಮರ್ಥ್ಯ, ರಗಡ್ ಲುಕ್ ಮತ್ತು ಲೈಫ್&zwnj;ಸ್ಟೈಲ್ ಪಿಕಪ್ ವಿಭಾಗದಲ್ಲಿ ಆಕರ್ಷಕ ಬೆಲೆ ಇದರ ಪ್ರಮುಖ ಅಸ್ತ್ರವಾಗಬಹುದು.&lt;/p&gt;&lt;p&gt;ಈ ವಾಹನಕ್ಕೆ 4WD ಆಯ್ಕೆ ಸಿಗುವ ನಿರೀಕ್ಷೆಯೂ ಇದೆ. ಆದರೆ ಎಂಜಿನ್, ಪವರ್, ಟಾರ್ಕ್, ವೇರಿಯೆಂಟ್&zwnj;ಗಳು ಹಾಗೂ ಬೆಲೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಮಹೀಂದ್ರಾ ಆಗಸ್ಟ್ 14ರ ಅನಾವರಣದ ವೇಳೆ ಬಹಿರಂಗಪಡಿಸುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಹೊಸ ಪಿಕಪ್&zwnj;ನ ಜಾಗತಿಕ ಅನಾವರಣ ನಡೆಯಲಿದ್ದು, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಂತಹ ಮಾರುಕಟ್ಟೆಗಳು ಮಹೀಂದ್ರಾದ ಪ್ರಮುಖ ಗುರಿಗಳಾಗಿವೆ ಎಂದು ವರದಿಗಳು ಸೂಚಿಸುತ್ತವೆ. ಭಾರತದಲ್ಲಿ ಮಾರಾಟವಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.&lt;/p&gt;&lt;p&gt;ಅಂದರೆ, ಸ್ಕಾರ್ಪಿಯೋ-Nನ ಜನಪ್ರಿಯತೆಯನ್ನು ಬಳಸಿಕೊಂಡು ಮಹೀಂದ್ರಾ ಜಾಗತಿಕ ಲೈಫ್&zwnj;ಸ್ಟೈಲ್ ಪಿಕಪ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಬಲಪಡಿಸಲು ಸಜ್ಜಾಗಿದೆ.&lt;/p&gt;&lt;img&gt;&lt;p&gt;2023ರಲ್ಲಿ ಕಾನ್ಸೆಪ್ಟ್ ಆಗಿ ಗಮನ ಸೆಳೆದಿದ್ದ Mahindra Global Pik Up, ಇದೀಗ ಉತ್ಪಾದನಾ ರೂಪದಲ್ಲಿ ಜಗತ್ತಿನ ಮುಂದೆ ಬರಲು ಸಿದ್ಧವಾಗಿದೆ. ಸ್ಕಾರ್ಪಿಯೋ-Nನ ರಗಡ್ ಡಿಎನ್&zwnj;ಎ, ಪಿಕಪ್&zwnj;ನ ಪ್ರಾಯೋಗಿಕತೆ ಮತ್ತು ಆಫ್-ರೋಡ್ ಸಾಮರ್ಥ್ಯದ ಕಾಂಬಿನೇಷನ್ ಹೇಗಿರಲಿದೆ ಎಂಬ ಕುತೂಹಲ ಇದೀಗ ವಾಹನ ಪ್ರಿಯರಲ್ಲಿ ಹೆಚ್ಚಾಗಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/car-news/mahindra-scorpio-n-pickup-teased-ahead-of-august-14-2026-debut-suh-72qdahd"/>
        </item>
        <item>
            <title><![CDATA[ಮುಸ್ಲಿಂ ಜೊತೆ ಮದುವೆ, ಡುಮ್ಮಿ, ಕೊಳಕು ಟ್ರೋಲ್‌ಗೆ ಪ್ರತಿಕ್ರಿಯಿಸಿದ ಸ್ವರಾ ಭಾಸ್ಕರ್]]></title>
            <link>https://kannada.asianetnews.com/entertainment/actress-swara-bhasker-has-given-befitting-reply-to-those-who-trolled-her-for-weight-gain-after-marriage-childbirth-mrq/articleshow-56ni79q</link>
            <guid isPermaLink="true">https://kannada.asianetnews.com/entertainment/actress-swara-bhasker-has-given-befitting-reply-to-those-who-trolled-her-for-weight-gain-after-marriage-childbirth-mrq/articleshow-56ni79q</guid>
            <pubDate>Thu, 13 Aug 2026 11:35:29 +0530</pubDate>
            <description><![CDATA[ನಟಿ ಸ್ವರಾ ಭಾಸ್ಕರ್ ಅವರು ಮದುವೆ ಮತ್ತು ಹೆರಿಗೆಯ ನಂತರದ ತೂಕ ಏರಿಕೆಗೆ ಸಂಬಂಧಿಸಿದಂತೆ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ ನೀಡಿದ್ದಾರೆ. ತಾಯಿಯಾದ ನಂತರ ದೇಹದಲ್ಲಿ ಆಗುವ ಬದಲಾವಣೆಗಳು ಸಹಜವಾಗಿದ್ದು, ಟೀಕೆಗಳಿಗೆ ಹೆದರಿ ತೂಕ ಇಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwvk1k79jq95dngxjxxyj39,imgname-swara-bhasker-1786601113191.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ: &lt;/strong&gt;ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Bollywood Actress Swara Bhasker) ಅವರು ಫಹಾದ್ ಅಹ್ಮದ್ ಜೊತೆ ಮದುವೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್&zwnj;ಗೆ ಒಳಗಾದವರು. ಇದಕ್ಕೆ ಕಾರಣ ಇಸ್ಲಾಂ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದು. ಇದಾದ ಬಳಿಕ ಹೆಣ್ಣು ಮಗುವಿಗೆ ತಾಯಿಯಾದ ಬಳಿಕ ಸ್ವರಾ ಭಾಸ್ಕರ್ ತೂಕದಲ್ಲಿ ಏರಿಕೆಯಾಗಿತ್ತು. ತೂಕ ಏರಿಕೆಯ ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಟ್ರೋಲ್&zwnj; ಹೆಸರಿನಲ್ಲಿ ವಿವಿಧ ಶೀರ್ಷಿಕೆಯಡಿ ಸ್ವರಾ ಭಾಸ್ಕರ್ ವಿರುದ್ಧ ಕ್ಯಾಂಪೇನ್ ಶುರುವಾಗಿತ್ತು. ಕೆಲ ಟ್ರೋಲಿಗರು ಎಲ್ಲಾ ಎಲ್ಲೆಗಳನ್ನು ಮೀರಿ, ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರಿಂದ ಡುಮ್ಮಿ ಮತ್ತು ಕೊಳಕಾಗಿ ಕಾಣಿಸ್ತಿದ್ದಾರೆ ಎಂದು ಕೆಟ್ಟದಾಗಿ ಟ್ರೋಲ್ ಮಾಡಿದ್ದರು. ಇದೀಗ ಈ ಎಲ್ಲಾ ಟ್ರೋಲ್&zwnj;ಗಳಿಗೆ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ.&lt;/p&gt;&lt;p&gt;ಪಾಡ್&zwnj;ಕಾಸ್ಟ್&zwnj;ಕ್ಕೆ ಸಂದರ್ಶನ ನೀಡಿರುವ ಸ್ವರಾ ಭಾಸ್ಕರ್, ಮದುವೆಯಿಂದ ಬಾಡಿ ಶೇಮಿಂಗ್&zwnj; ಕುರಿತ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ನೀವು ಇಷ್ಟೊಂದು ಖಾಲಿಯಾಗಿ ಕುಳಿತಿದ್ದೀರಾ? ಬೇರೆಯವರ ತೂಕದ ನಿಮಗ್ಯಾಕೆ ಚಿಂತೆ? ನಿಮ್ಮಿಂದ ನನ್ನ ಜೀವನ ನಡೆಯುತ್ತಿಲ್ಲ? ನಿಮಗೆ ಸೆ*ಕ್ಸಿ ಹುಡುಗಿಯನ್ನು ನೋಡಬೇಕೆನಿಸಿದ್ರೆ ಬೇರೆ ಪೇಜ್&zwnj;ಗಳಿಗೆ ಹೋಗಿ. ನಿಮಗೆ ನನ್ನ ಪೇಜ್&zwnj;ಗೆ ಬರುವಂತೆ ಹೇಳಿದ್ಯಾರು ಎಂದು ಸ್ವರಾ ಭಾಸ್ಕರ್ ಪ್ರಶ್ನೆ ಮಾಡಿದ್ದಾರೆ.&lt;/p&gt;&lt;h2&gt;&lt;strong&gt;ಜೀವನ ಬದಲಾಗುತ್ತೆ ಮತ್ತು ಬದಲಾಗಲೇಬೇಕು&lt;/strong&gt;&lt;/h2&gt;&lt;p&gt;ಎರಡೂವರೆ ವರ್ಷದ ಹಿಂದೆ ನನಗೆ ಮಗು ಆಯ್ತು. ತಾಯಿಯಾದ ಬಳಿಕ ಮಹಿಳೆ ದೇಹದಲ್ಲಿ ಹಲವು ಬದಲಾವಣೆ ಆಗುತ್ತದೆ. ಸದಾ ಯೌವನವನ್ನು ಕಾಪಾಡಿಕೊಳ್ಳುವ ಉದ್ಯಮದಿಂದ ನಾನು ಬಂದಿದ್ದೇನೆ. ಇಲ್ಲಿ ಸುಂದರವಾಗಿ ಕಾಣಿಸಿಕೊಳ್ಳಲು ಬೊಟೊಕ್ಸ್, ಇಂಜೆಕ್ಷನ್, ಪ್ಲಾಸ್ಟಿಕ್ ಸರ್ಜರಿ ಸಹಜ ಅನ್ನೋದು ನನಗೆ ಗೊತ್ತಿದ. ಆದ್ರೆ ಸತ್ಯ ಇದು ಅಲ್ಲ. ಕಾಲ ಕಳೆದಂತೆ ಜೀವನ ಬದಲಾಗುತ್ತೆ ಮತ್ತು ಬದಲಾಗಲೇಬೇಕು ಎಂದು ಸ್ವರಾ ಭಾಸ್ಕರ್ ಹೇಳುತ್ತಾರೆ.&lt;/p&gt;&lt;h3&gt;&lt;strong&gt;ತಾಯಿಯಾದ ಬಳಿಕ ಮಹಿಳೆ ಸೂಕ್ಷ್ಮವಾಗ್ತಾಳೆ!&lt;/strong&gt;&lt;/h3&gt;&lt;p&gt;45ನೇ ವಯಸ್ಸಿನಲ್ಲಿ 16 ವರ್ಷದಂತೆ ನಡೆದುಕೊಂಡ್ರೆ ನಿಮಗೆ ಹೇಗೆ ಅನ್ನಿಸುತ್ತೆ ಎಂದು ಒಮ್ಮೆ ಯೋಚಿಸಿ. ಚಿಕ್ಕ ಹುಡುಗಿಯಂತೆ ನಡೆದುಕೊಂಡ್ರೆ ನೀವೇ ಆಗ ಅಜ್ಜಿಯ ಎಂದು ಕರೆಯುತ್ತೀರಿ. ಹಾಗೆಯೇ ವಯಸ್ಸಾದ್ರೂ ಇಷ್ಟೊಂದು ಶೋಕಿ ಯಾಕೆ ಎಂದು ಪ್ರಶ್ನೆ ಮಾಡಿ ಟ್ರೋಲ್ ಮಾಡಲಾರಂಭಿಸುತ್ತಾರೆ. ಇನ್ನು ನಾನಂತು ಕೆಟ್ಟ ಪದಗಳನ್ನು ಕೇಳಿಸಿಕೊಂಡಿದ್ದೇನೆ. ಮಗುವಾದ ನಂತರ ಮಹಿಳೆ ತುಂಬಾ ಸೂಕ್ಷ್ಮವಾಗುತ್ತಾಳೆ ಎಂದು ಸ್ವರಾ ಭಾಸ್ಕರ್ ಹೇಳುತ್ತಾರೆ.&lt;/p&gt;&lt;p&gt;ಪತಿ ಜೊತೆ ಚುನಾವಣಾ ಪ್ರಚಾರ ನಡೆಸುವಾಗ ತುಂಬಾನೇ ಅವಮಾನಕ್ಕೊಳಗಾದೆ. ಆ ಸಂದರ್ಭದಲ್ಲಿ ಮೇಕಪ್ ಮಾಡಿಕೊಳ್ಳದೇ ಹೋಗುತ್ತಿದ್ದೆ. ಆ ವೇಳೆ ಕ್ಲಿಕ್ಕಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದವು. ನಂತರ ನಡೆದಿದ್ದು ಎಲ್ಲರಿಗೂ ಗೊತ್ತಿದೆ.&lt;/p&gt;&lt;h3&gt;&lt;strong&gt;ಟೀಕೆಗಳಿಗೆ ಹೆದರಿ ತೂಕ ಇಳಿಸಿಕೊಳ್ಳಲ್ಲ&lt;/strong&gt;&lt;/h3&gt;&lt;p&gt;ಜನರು ನನ್ನ ಹಳೆ ಮತ್ತು ಹೊಸ ಫೋಟೋ ಸೇರಿಸಿ ಹೋಲಿಕೆ ಮಾಡಲು ಆರಂಭಿಸಿದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ನಾನು ದಪ್ಪ ಮತ್ತು ಕೊಳಕಾದೆ ಎಂದು ಹೇಳಲು ಆರಂಭಿಸಿದರು. ಇದರಿಂದ ಗಂಡ ಫಹಾದ್ ಸಹ ಟೆನ್ಷನ್&zwnj;ಗೆ ಒಳಗಾಗಿದ್ದರು. ಮುಂದುವರಿದು ಮಾತನಾಡಿದ ಸ್ವರಾ ಭಾಸ್ಕರ್, ನಾನು ಸಹ ಹಠವಂತೆ, ನಿಮ್ಮಗಳ ಟೀಕೆಯಿಂದ ತೂಕ ಕಡಿಮೆ ಮಾಡಿಕೊಳ್ಳಲು ಹೋಗಲ್ಲ. ಇನ್&zwnj;ಸ್ಟಾಗ್ರಾಂನಲ್ಲಿ ಚಬ್ಬಿ ಚಬ್ಬಿಯಾಗಿರೋ ಫೋಟೋ ಶೇರ್ ಮಾಡಿಕೊಳ್ಳುವೆ. ನಮ್ಮ ಉದ್ಯಮ ಅಥವಾ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲೆ ಹಲವು ರೀತಿಯ ಒತ್ತಡಗಳಿರುತ್ತವೆ ಎಂಬುವುದು ಸತ್ಯ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;'ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..' ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್&zwnj; ಕಿಡಿ!&lt;/strong&gt;&lt;/p&gt;]]></content:encoded>
            <category><![CDATA[entertainment]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/entertainment/actress-swara-bhasker-has-given-befitting-reply-to-those-who-trolled-her-for-weight-gain-after-marriage-childbirth-mrq/articleshow-56ni79q"/>
        </item>
        <item>
            <title><![CDATA[Gold Haaram: 5 ತೊಲದಲ್ಲಿ ಎಲ್ಲರ ಗಮನ ಸೆಳೆಯುವಂತೆ ಕಾಣೋ ಗೋಲ್ಡ್ ಚೈನ್ ಡಿಸೈನ್ಸ್]]></title>
            <link>https://kannada.asianetnews.com/webstories/fashion/latest-gold-chain-designs-in-50-grams-all-must-try-once-kvn-gcc7xzq</link>
            <guid isPermaLink="true">https://kannada.asianetnews.com/webstories/fashion/latest-gold-chain-designs-in-50-grams-all-must-try-once-kvn-gcc7xzq</guid>
            <pubDate>Thu, 13 Aug 2026 11:00:34 +0530</pubDate>
            <description><![CDATA[ಚಿನ್ನದ ಸುಂದರ ಹಾರ ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಅದರಲ್ಲೂ 5 ತೊಲ, ಅಂದ್ರೆ 50 ಗ್ರಾಂನಲ್ಲಿ ಸಿಗುವ ಬೆಸ್ಟ್ ಗೋಲ್ಡ್ ಚೈನ್ ಡಿಸೈನ್‌ಗಳ ಲಿಸ್ಟ್ ಇಲ್ಲಿದೆ. ಇವು ನಿಮ್ಮ ಕತ್ತಿನ ಅಂದವನ್ನು ಇಮ್ಮಡಿಗೊಳಿಸೋದು ಗ್ಯಾರಂಟಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kztckcefkjp6k2yq03b2btw2,imgname-4-1786518286799.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/fashion/latest-gold-chain-designs-in-50-grams-all-must-try-once-kvn-gcc7xzq"/>
        </item>
        <item>
            <title><![CDATA[ಪತ್ನಿಗಾಗಿ ಏನು ಬೇಕಾದರೂ ಮಾಡುವ 5 ರಾಶಿಗಳು, ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುವ ಗಂಡ]]></title>
            <link>https://kannada.asianetnews.com/gallery/astrology/zodiac-signs-of-husbands-who-treat-their-wives-like-royalty-suh-ubb350u</link>
            <guid isPermaLink="true">https://kannada.asianetnews.com/gallery/astrology/zodiac-signs-of-husbands-who-treat-their-wives-like-royalty-suh-ubb350u</guid>
            <pubDate>Thu, 13 Aug 2026 10:58:08 +0530</pubDate>
            <description><![CDATA[ಜ್ಯೋತಿಷ್ಯದ ಪ್ರಕಾರ, ಪತ್ನಿಯ ಸಂತೋಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ಪ್ರೀತಿ, ವಾತ್ಸಲ್ಯ ಮತ್ತು ಗೌರವದಿಂದ ಸಂಗಾತಿಯನ್ನು ರಾಣಿಯಂತೆ ಕಾಣುವ 5 ರಾಶಿಗಳ ಬಗ್ಗೆ ಇಲ್ಲಿ ತಿಳಿಯಿರಿ. ನಿಮ್ಮ ಪತಿಯ ರಾಶಿಯೂ ಇದರಲ್ಲಿ ಇದ್ರೆ, ನೀವು ತುಂಬಾ ಲಕ್ಕಿ!]]></description>
            <media:content url="https://static.asianetnews.com/images/w-1280,h-720,format-jpg,imgid-01kzwsa46z2qskzekjkqenjk52,imgname-zodiac-signs-of-husbands-who-treat-their-wives-like-royalty-1786598723807.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದ ಪ್ರಕಾರ, ಪತ್ನಿಯ ಸಂತೋಷಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು, ಪ್ರೀತಿ, ವಾತ್ಸಲ್ಯ ಮತ್ತು ಗೌರವದಿಂದ ಸಂಗಾತಿಯನ್ನು ರಾಣಿಯಂತೆ ಕಾಣುವ 5 ರಾಶಿಗಳ ಬಗ್ಗೆ ಇಲ್ಲಿ ತಿಳಿಯಿರಿ. ನಿಮ್ಮ ಪತಿಯ ರಾಶಿಯೂ ಇದರಲ್ಲಿ ಇದ್ರೆ, ನೀವು ತುಂಬಾ ಲಕ್ಕಿ!&lt;/p&gt;&lt;img&gt;&lt;p&gt;ವೃಷಭ ರಾಶಿಯವರು ಕೌಟುಂಬಿಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂದು ಜ್ಯೋತಿಷ್ಯ ಹೇಳುತ್ತದೆ. ಶುಕ್ರನ ಆಧಿಪತ್ಯದಲ್ಲಿರುವ ಈ ರಾಶಿಯವರು ಪ್ರೀತಿ, ವಾತ್ಸಲ್ಯ, ಸೌಕರ್ಯ ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ. ಮದುವೆಯ ನಂತರ, ಇವರು ಪತ್ನಿಯ ಇಷ್ಟಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ನಡೆಯಲು ಪ್ರಯತ್ನಿಸುತ್ತಾರೆ. ಪತ್ನಿಗೆ ಇಷ್ಟವಾದ ವಸ್ತುಗಳನ್ನು ಖರೀದಿಸುವುದು, ಕುಟುಂಬಕ್ಕಾಗಿ ಹಣ ಖರ್ಚು ಮಾಡುವುದು ಮತ್ತು ಮನೆಯಲ್ಲಿ ಶಾಂತಿ ಕಾಪಾಡುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಪತ್ನಿ ಸಂತೋಷವಾಗಿದ್ದರೆ ಇಡೀ ಕುಟುಂಬವೇ ಸಂತೋಷವಾಗಿರುತ್ತದೆ ಎಂಬುದು ಇವರ ನಂಬಿಕೆ. ಕೆಲವೊಮ್ಮೆ ಪತ್ನಿಯ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಲು ಕೂಡ ಇವರು ಹೆಚ್ಚು ಶ್ರಮಿಸುತ್ತಾರೆ.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯವರು ಭಾವನಾತ್ಮಕ ಜೀವಿಗಳು ಮತ್ತು ಕುಟುಂಬವನ್ನು ಹೆಚ್ಚು ಪ್ರೀತಿಸುವವರು. ಚಂದ್ರನ ಆಧಿಪತ್ಯದಲ್ಲಿರುವ ಈ ರಾಶಿಯವರು ಸಂಬಂಧಗಳಲ್ಲಿ ಭದ್ರತೆ ಮತ್ತು ವಾತ್ಸಲ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇವರು ತಮ್ಮ ಪತ್ನಿಯ ಭಾವನೆಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಪತ್ನಿ ದುಃಖದಲ್ಲಿದ್ದರೆ, ಅದರ ಕಾರಣ ತಿಳಿದು ಸಮಾಧಾನ ಮಾಡಲು ಪ್ರಯತ್ನಿಸುತ್ತಾರೆ. ಕುಟುಂಬದ ಅಗತ್ಯಗಳಿಗಾಗಿ ತಮ್ಮ ಇಷ್ಟಗಳನ್ನೇ ಬಿಟ್ಟುಕೊಡಲು ಸಹ ಇವರು ಹಿಂಜರಿಯುವುದಿಲ್ಲ. ಪತ್ನಿಗೆ ಬೆಂಬಲವಾಗಿ ನಿಲ್ಲುವುದು, ಕುಟುಂಬದ ನಿರ್ಧಾರಗಳಲ್ಲಿ ಆಕೆಯ ಅಭಿಪ್ರಾಯಕ್ಕೆ ಪ್ರಾಮುಖ್ಯತೆ ನೀಡುವುದು ಇವರ ಗುಣ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರು ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳಿಗೆ ಹೆಸರುವಾಸಿ. ಆದರೆ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಇವರ ಇನ್ನೊಂದು ಮುಖ ಅನಾವರಣಗೊಳ್ಳಬಹುದು. ಇವರು ತಮಗೆ ಇಷ್ಟವಾದವರನ್ನು ಉನ್ನತ ಸ್ಥಾನದಲ್ಲಿಟ್ಟು ನೋಡುತ್ತಾರೆ. ಹಾಗಾಗಿಯೇ, ತಮ್ಮ ಪತ್ನಿಯನ್ನೂ ವಿಶೇಷವಾಗಿ ಕಾಣಬೇಕು ಎಂದು ಬಯಸುತ್ತಾರೆ. ಪತ್ನಿಯ ಸಾಧನೆಗಳನ್ನು ಬಹಿರಂಗವಾಗಿ ಹೊಗಳುವುದು, ಆಕೆಗೆ ಬೇಕಾದ ಬೆಂಬಲ ನೀಡುವುದರಲ್ಲಿ ಇವರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. 'ನನ್ನ ಹೆಂಡತಿ ಖುಷಿಯಾಗಿರಬೇಕು' ಎಂಬ ಯೋಚನೆ ಇವರನ್ನು ಹಲವು ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಕುಟುಂಬ ಮತ್ತು ಸಮಾಜದಲ್ಲಿ ಪತ್ನಿಗೆ ಗೌರವ ಸಿಗಬೇಕೆಂಬುದರಲ್ಲಿ ಇವರು ಜಾಗರೂಕರಾಗಿರುತ್ತಾರೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರು ಸಮತೋಲನ ಮತ್ತು ಸಂಬಂಧಗಳನ್ನು ಇಷ್ಟಪಡುವ ರಾಶಿ ಎಂದು ಜ್ಯೋತಿಷ್ಯ ಹೇಳುತ್ತದೆ. ಶುಕ್ರನ ಪ್ರಭಾವದಿಂದಾಗಿ ಇವರು ಪ್ರೀತಿ, ಸೌಂದರ್ಯ, ವಾತ್ಸಲ್ಯ ಮತ್ತು ಸಂಗಾತಿಯ ಸಂತೋಷಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬಂದರೆ, ಜಗಳವಾಡುವುದಕ್ಕಿಂತ ಹೆಚ್ಚಾಗಿ ಮಾತನಾಡಿ ಬಗೆಹರಿಸಲು ಪ್ರಯತ್ನಿಸುತ್ತಾರೆ. ಪತ್ನಿಯ ಅಭಿಪ್ರಾಯ ಕೇಳುವುದು, ಪ್ರಮುಖ ನಿರ್ಧಾರಗಳಲ್ಲಿ ಆಕೆಯನ್ನೂ ಸೇರಿಸಿಕೊಳ್ಳುವುದು ಇವರ ಗುಣ. ಪತ್ನಿಗೆ ಇಷ್ಟವಾದ ಸ್ಥಳಗಳಿಗೆ ಕರೆದೊಯ್ಯುವುದು, ಸಣ್ಣಪುಟ್ಟ ಸರ್ಪ್ರೈಸ್ ನೀಡುವುದು, ವಿಶೇಷ ದಿನಗಳನ್ನು ನೆನಪಿಟ್ಟುಕೊಂಡು ಆಚರಿಸುವುದರಲ್ಲಿ ಇವರು ಆಸಕ್ತಿ ತೋರಬಹುದು.&lt;/p&gt;&lt;img&gt;&lt;p&gt;ಮೀನ ರಾಶಿಯವರು ಕನಸು ಕಾಣುವ ಸ್ವಭಾವ ಮತ್ತು ಆಳವಾದ ಭಾವನೆಗಳನ್ನು ಹೊಂದಿದವರು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಗುರುವಿನ ಆಧಿಪತ್ಯದಲ್ಲಿರುವ ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಆಳವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುತ್ತಾರೆ. ಇವರು ಪತ್ನಿಯ ಕಷ್ಟಗಳನ್ನು ತಮ್ಮ ಕಷ್ಟವೆಂದು ಭಾವಿಸಿ ಆಕೆಗೆ ಬೆಂಬಲವಾಗಿ ನಿಲ್ಲುತ್ತಾರೆ. ಪತ್ನಿಯ ಕನಸು ಮತ್ತು ಆಸೆಗಳಿಗೆ ಬೆಂಬಲ ನೀಡುವುದು ಇವರಿಗೆ ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಪತ್ನಿಗಾಗಿ ತಮ್ಮ ಸೌಕರ್ಯಗಳನ್ನೇ ಬಿಟ್ಟುಕೊಡುವಷ್ಟು ಭಾವನಾತ್ಮಕವಾಗಿ ವರ್ತಿಸುತ್ತಾರೆ. ಜೀವನದ ಏಳುಬೀಳುಗಳಲ್ಲಿ ಪತ್ನಿಗೆ ದೃಢವಾದ ಆಸರೆಯಾಗಿರುವುದೇ ತಮ್ಮ ಕರ್ತವ್ಯ ಎಂದು ಇವರು ಭಾವಿಸಬಹುದು.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/zodiac-signs-of-husbands-who-treat-their-wives-like-royalty-suh-ubb350u"/>
        </item>
        <item>
            <title><![CDATA[Gold Rally Back: ಚಿನ್ನದ ದರ ಕುಸಿತ ಅಂತ್ಯ, ಇನ್ಮುಂದೆ ತೀವ್ರ ಏರಿಕೆ; ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್!]]></title>
            <link>https://kannada.asianetnews.com/business/gold-rally-returns-sharp-rise-ahead-peter-schiff-makes-prediction-sns/articleshow-pepfzug</link>
            <guid isPermaLink="true">https://kannada.asianetnews.com/business/gold-rally-returns-sharp-rise-ahead-peter-schiff-makes-prediction-sns/articleshow-pepfzug</guid>
            <pubDate>Thu, 13 Aug 2026 10:56:57 +0530</pubDate>
            <description><![CDATA[ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01krmp6e6qbavpz2ch13xnxsxr,imgname-chatgpt-image-may-15--2026--07-34-22-am--1--1778810829014.png" type="image/jpeg" height="390" width="690"/>
            <content:encoded><![CDATA[&lt;p&gt;ಅಮೆರಿಕ ಡಾಲರ್ ಮೌಲ್ಯ ಬಲಹೀನಗೊಂಡ ಕಾರಣ ಅಂತರಾಷ್ಟ್ರೀಯ ಮತ್ತು ದೇಶಿಯ ಮಾರ್ಕೆಟ್&zwnj;ನಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಸ್ವಲ್ಪ ಲಾಭದೊಂದಿಗೆ ಸ್ಥಿರವಾಗಿದೆ. ಅಮೆರಿಕ ಸಿಪಿಐ ಅಂಕಿಅಂಶಗಳು ಬಿಡುಗಡೆಗೂ ಮುನ್ನ ಹೂಡಿಕೆದಾರರು ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಸ್ಪಾಟ್ ಮಾರ್ಕೆಟ್&zwnj;ನಲ್ಲಿ ಗೋಲ್ಡ್ ಸತತರವಾಗಿ ಎರಡನೇ ಸೆಷನ್&zwnj;ನಲ್ಲಿ ಔನ್ಸ್ಗೆ 4,300 ಡಾಲರ್&zwnj;ಗೆ ಹೆಚ್ಚಾಗಿ ಸ್ಥಿರವಾಗಿ ನಿಂತಿದೆ.&lt;/p&gt;&lt;h2&gt;&lt;strong&gt;ಬುಲಿಯನ್ ಮಾರ್ಕೆಟ್&zwnj;ಗೆ ಉತ್ತೇಜನ&lt;/strong&gt;&lt;/h2&gt;&lt;p&gt;ಅಂತರಾಷ್ಟ್ರೀಯ ಮಾರ್ಕೆಟ್&zwnj;ನಲ್ಲಿ ಸ್ಪಾಟ್ ಗೋಲ್ಡ್ ದರ ಶೇಕಡಾ 0.3 ಡಾಲರ್ಗೆ ಹೆಚ್ಚಳವಾಗಿ ಔನ್ಸ್&zwnj;ಗೆ 4,381.60 ರೂಪಾಯಿಗೆ ಟ್ರೆಡ್ ಆದರೆ, ಏಷ್ಯಾ ಟ್ರೆಡಿಂಗ್&zwnj;ನಲ್ಲಿ ಒಂದು ಹಂತದಲ್ಲಿ 4,412 ಡಾಲರ್ ಮಾರ್ಕ್&zwnj;ಅನ್ನು ಮುಟ್ಟಿತ್ತು. ಇದೇ ವೇಳೆ ಸ್ಪಾಟ್ ಸಿಲ್ವರ್ ದರ ಶೇಕಡಾ 0.5 ರಷ್ಟು ಹೆಚ್ಚಾಗಿ ಔನ್ಸ್&zwnj;ಗೆ 65 ಡಾಲರ್ ಬಳಿ ಮುಂದುವರೆದಿತ್ತು.&lt;/p&gt;&lt;p&gt;ಭಾರತದ ಎಂಸಿಎಕ್ಸ್ ಮಾರ್ಕೆಟ್&zwnj;ನಲ್ಲಿ 10 ಗ್ರಾಂ ಗೋಲ್ಡ್ ದರ ಶೇಕಡಾ 0.68 ರಷ್ಟು ಲಾಭ ಪಡೆದು 154812 ರೂಪಾಯಿ ಬಳಿ ಟ್ರೆಡ್ ಆದರೆ, ಕೆಜಿ ಬೆಳ್ಳಿ ದರ 1.65 ರಷ್ಟು ಹೆಚ್ಚಾಗಿ 239545 ರೂಪಾಯಿ ಹೆಚ್ಚಾಗಿತ್ತು. ಅದರಲ್ಲೂ ಆರು ಪ್ರಮುಖ ಅಂತರಾಷ್ಟ್ರೀಯ ಕರೆನ್ಸಿಗಳ ವಿರುದ್ಧ ಡಾಲರ್ ಮೌಲ್ಯವನ್ನು ಅಳೆಯುವ ಯುಎಸ್ ಡಾಲರ್ ಸೂಚ್ಯಂಕವೂ 99.81 ರಷ್ಟಿದ್ದು, ಇದು ಬುಲಿಯನ್ ಮಾರ್ಕೆಟ್&zwnj;ಗೆ ಉತ್ತೇಜನ ನೀಡಿತ್ತು.&lt;/p&gt;&lt;h2&gt;ಪೀಟರ್ ಸ್ಕಿಫ್ ಹೇಳಿದ್ದೇನು?&lt;/h2&gt;&lt;p&gt;ಇದರೊಂದಿಗೆ ಅಮೆರಿಕದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮತ್ತು ಸ್ಕಿಫ್&zwnj;ಗೋಲ್ಡ್ನ ಅಧ್ಯಕ್ಷ ಪೀಟರ್ ಸ್ಕಿಫ್, ಚಿನ್ನದ ಬೆಲೆ ಕುಸಿತವು ಮುಗಿದಿದೆ. ಶೀಘ್ರದಲ್ಲೇ ಚಿನ್ನದ ದರ $5,000 ಗಡಿ ದಾಟಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಇರಾನ್ ಯುದ್ಧದ ಕಾರಣದಿಂದ ಚಿನ್ನದ ಬೆಲೆಯಲ್ಲಿನ ತಾತ್ಕಾಲಿಕ ಕುಸಿತ ಅಂತ್ಯಗೊಂಡಿದೆ. ಇದನ್ನು ಚಿನ್ನದ ಬುಲ್ ಓಟದ ಅಂತ್ಯ ಎಂದು ಪರಿಗಣಿಸಬಾರದು. ಚಿನ್ನದ ಬೆಲೆಯಲ್ಲಿ ಸಂಭವಿಸಿದ ತಾತ್ಕಾಲಿಕ ದರ ಕುಸಿತವೂ ದೀರ್ಘಾವಧಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಒಂದು ಉತ್ತಮ ಅವಕಾಶ ನೀಡಿತ್ತು ಎಂದು ಸ್ಕಿಫ್ ವಿಶ್ಲೇಷಣೆ ಮಾಡಿದ್ದಾರೆ ಎಂದು ಗೂಡ್ ರಿಟರ್ನ್ಸ್ ವರದಿ ಮಾಡಿದೆ.&lt;/p&gt;&lt;h2&gt;ಚಿನ್ನದ ಮೇಲೆ ಹೂಡಿಕೆ ಮಾಡಲು ಒಲವು!&lt;/h2&gt;&lt;p&gt;ಪಶ್ಚಿಮ ಏಷ್ಯಾದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚಳ ಹಾಗೂ ಯುಎಸ್ ಫೆಡರಲ್ ರಿಸರ್ವ್ ಮತ್ತೆ ಬಡ್ಡಿದರಗಳನ್ನು ಹೆಚ್ಚಿಸಬಹುದು ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಜುಲೈನಲ್ಲಿ ಚಿನ್ನದ ಬೆಲೆಗಳು ತೀವ್ರವಾಗಿ ಕುಸಿತಗೊಂಡಿದ್ದವು ಎಂದು ಬ್ಲೂಮ್ ಬರ್ಗ್ ವರದಿ ಮಾಡಿತ್ತು. ಹಣದುಬ್ಬರದ ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಬಡ್ಡಿದರಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಫೆಡ್ ಗವರ್ನರ್ ಕ್ರಿಸ್ಟೋಫರ್ ವಾಲರ್ ಹೇಳಿದ ಬಳಿಕ ಒಂದೇ ದಿನದಲ್ಲಿ ಚಿನ್ನದ ದರ ಶೇಕಡಾ 3.2ರಷ್ಟು ಕುಸಿದು ಬೌನ್ಸ್ಗೆ $4,000ಕ್ಕಿಂತ ಕಡಿಮೆಯಾಗಿತ್ತು.&lt;/p&gt;&lt;p&gt;ಆದರೆ, ಡಾಲರ್ ದುರ್ಬಲಗೊಳ್ಳುತ್ತಿರುವ ಕಾರಣ ವಿದೇಶಿ ಹೂಡಿಕೆದಾರರಿಗೆ ಚಿನ್ನವೂ ಅಗ್ಗವಾಗಿ ಸಿಗುವಂತೆ ಮಾಡಿದ್ದು, ಹೂಡಿಕೆದಾರರು ರಾಜಕೀಯ ಅನಿಶ್ಚಿತತೆಯ ಕಾರಣ ಚಿನ್ನದ ಮೇಲಿನ ಹೂಡಿಕೆಯೇ ಬಗ್ಗೆ ಆಕರ್ಷಣೆಗೆ ಒಳಗಾಗಿದ್ದಾರೆ. ಇನ್ನು, ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಮುಂದಿನ ದಿನಗಳಲ್ಲಿ ಗೋಲ್ಡ್ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಎಂಬ ಸುದ್ದಿಗೆ ಬಲ ನೀಡುತ್ತಿದೆ. ಜಾಗತಿಕ ಯುದ್ಧಗಳು, ಡಾಲರ್ ಮೌಲ್ಯದ ಕುಸಿತ, ಆರ್&zwnj;ಬಿಐ ಬಡ್ಡಿದರಗಳು ಚಿನ್ನದ ದರ ಮೇಲೆ ಹೆಚ್ಚು ಪ್ರಭಾವ ಉಂಟು ಮಾಡುತ್ತಿದೆ. Disclaimer: ಈ ಮೇಲಿನ ವಿಶ್ಲೇಷಣೆಯೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಆಧಾರ ಮೇರೆಗೆ ನೀಡಲಾಗಿದ್ದು, ಇವು ಏಷ್ಯಾನೆಟ್ ಸುವರ್ಣದ ಅಧಿಕೃತ ಅಭಿಪ್ರಾಯವಲ್ಲ. ಈ ಮಾಹಿತಿಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ನಾವು ಖಾತರಿಪಡಿಸುತ್ತಿಲ್ಲ. ಈ ಮಾಹಿತಿಯನ್ನು ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾತ್ರ ನೀಡಲಾಗಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Sumanth SN</dc:creator>
            <atom:link href="https://kannada.asianetnews.com/business/gold-rally-returns-sharp-rise-ahead-peter-schiff-makes-prediction-sns/articleshow-pepfzug"/>
        </item>
        <item>
            <title><![CDATA[ಸಿನಿಮಾ ಚಾನ್ಸ್ ಸಿಗದೇ ಮೊಬೈಲ್ ಗೀಳಿಗೆ ಬಲಿಯಾದ ಶಕೀಲಾ; ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!]]></title>
            <link>https://kannada.asianetnews.com/gallery/tv-talk/veteran-actress-shakila-rs-3-lakh-neck-surgery-due-to-mobile-gaming-habit-after-no-movie-chance-ao4y1vq</link>
            <guid isPermaLink="true">https://kannada.asianetnews.com/gallery/tv-talk/veteran-actress-shakila-rs-3-lakh-neck-surgery-due-to-mobile-gaming-habit-after-no-movie-chance-ao4y1vq</guid>
            <pubDate>Thu, 13 Aug 2026 10:52:56 +0530</pubDate>
            <description><![CDATA[ಖ್ಯಾತ ನಟಿ ಶಕೀಲಾ ಅವರು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಗಂಭೀರ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ನೋಡುವುದರ ಪರಿಣಾಮವಾಗಿ ಈ ದುಸ್ಥಿತಿ ಎದುರಾಗಿದ್ದು, ತಮ್ಮ ಈ ಅನುಭವದ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwr3kdqms0tyyggw7gzzewj,imgname-veteran-actress-shakila-1786597461430.jpg" type="image/jpeg" height="390" width="690"/>
            <content:encoded><![CDATA[ಖ್ಯಾತ ನಟಿ ಶಕೀಲಾ ಅವರು ಅತಿಯಾದ ಮೊಬೈಲ್ ಬಳಕೆಯಿಂದಾಗಿ ಗಂಭೀರ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಪ್ಪಾದ ಭಂಗಿಯಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ನೋಡುವುದರ ಪರಿಣಾಮವಾಗಿ ಈ ದುಸ್ಥಿತಿ ಎದುರಾಗಿದ್ದು, ತಮ್ಮ ಈ ಅನುಭವದ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.&lt;img&gt;&lt;p&gt;ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಇಂದಿನ ಆಧುನಿಕ ಯುಗದಲ್ಲಿ ಸ್ಮಾರ್ಟ್&zwnj;ಫೋನ್ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಇದೇ ಮೊಬೈಲ್ ಫೋನ್&zwnj;ನ ಅತಿಯಾದ ಬಳಕೆ ಹಾಗೂ ತಪ್ಪಾದ ಭಂಗಿಯಿಂದಾಗಿ (Improper Posture) ದಕ್ಷಿಣ ಭಾರತದ ಖ್ಯಾತ ನಟಿ ಶಕೀಲಾ ಗಂಭೀರ ಕುತ್ತಿಗೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.&lt;/p&gt;&lt;p&gt;ಇತ್ತೀಚೆಗಷ್ಟೇ ಕುತ್ತಿಗೆಯ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿರುವ ನಟಿ ಶಕೀಲಾ, ತಮ್ಮ ಯೂಟ್ಯೂಬ್ ಚಾನೆಲ್&zwnj;ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಈ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಮೊಬೈಲ್&zwnj;ನಲ್ಲಿ ಗಂಟೆಗಟ್ಟಲೆ ಗೇಮ್ ಆಡುವುದು ಮತ್ತು ರೀಲ್ಸ್ ನೋಡುವುದರಿಂದ ತಮಗೆ ಎದುರಾದ ಭೀಕರ ಪರಿಣಾಮದ ಬಗ್ಗೆ ಅಭಿಮಾನಿಗಳಿಗೆ ಮುಕ್ತವಾಗಿ ಎಚ್ಚರಿಕೆ ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರೂ. 3 ಲಕ್ಷ ವೆಚ್ಚದ ಶಸ್ತ್ರಚಿಕಿತ್ಸೆ: ಗೇಮಿಂಗ್ ಹುಚ್ಚಿಗೆ ಬಂದೊದಗಿದ ಗಂಡಾಂತರ!&lt;/strong&gt;&lt;/p&gt;&lt;p&gt;ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುತ್ತಿಗೆಗೆ ಬೆಂಬಲ ನೀಡುವ ನೆಕ್ ಕಾಲರ್ ಧರಿಸಿರುವ ಶಕೀಲಾ, ತಮಗೆ ಎದುರಾದ ಸಂಕಟವನ್ನು ವಿವರಿಸಿದ್ದಾರೆ. ಪ್ರಸ್ತುತ ಹಾಸಿಗೆಯಿಂದ ಏಳಲು, ಕುಳಿತುಕೊಳ್ಳಲು ಹಾಗೂ ಊಟ ಮಾಡಲು ಸಹ ಸಹಾಯಕರ ನೆರವು ಬೇಕಾಗಿದೆ ಎಂದು ಅವರು ಸ್ವತಃ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ನಟಿ ಶಕೀಲಾ ಅವರ ಮಾತುಗಳಲ್ಲೇ ಹೇಳುವುದಾದರೆ:&lt;/strong&gt;&lt;/p&gt;&lt;p&gt;'ನಾನು ಹಾಸಿಗೆಯ ಮೇಲೆ ಒಂದು ಮಗ್ಗುಲಿನಲ್ಲಿ ಮಲಗಿ ಸತತವಾಗಿ 4 ಗಂಟೆಗಳ ಕಾಲ ಮೊಬೈಲ್&zwnj;ನಲ್ಲಿ ಗೇಮ್ ಆಡುತ್ತಿದ್ದೆ. ಮಧ್ಯದಲ್ಲಿ ಟೀ ಅಥವಾ ಕಾಫಿ ಕುಡಿಯಲು ಮಾತ್ರ ಏಳುತ್ತಿದ್ದೆ. ನಂತರ ಮತ್ತೆ ಬಂದು ಅದೇ ಗೇಮ್ ಮುಂದುವರಿಸುತ್ತಿದ್ದೆ. ತದನಂತರ ಯೂಟ್ಯೂಬ್ ಮತ್ತು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಗಂಟೆಗಟ್ಟಲೆ ರೀಲ್ಸ್ ನೋಡುತ್ತಿದ್ದೆ. ಈ ರೀತಿ ತಪ್ಪಾದ ಭಂಗಿಯಲ್ಲಿ ಸತತವಾಗಿ ಮೊಬೈಲ್ ಬಳಸಿದ್ದರಿಂದ ನನ್ನ ಕುತ್ತಿಗೆಯ ಪ್ರಮುಖ ನರಗಳಿಗೆ ತೀವ್ರ ಹಾನಿಯಾಗಿ, ಶಸ್ತ್ರಚಿಕಿತ್ಸೆ ಮಾಡುವ ಪರಿಸ್ಥಿತಿ ಬಂದೊದಗಿತು.'&lt;/p&gt;&lt;img&gt;&lt;p&gt;&lt;strong&gt;ಅಭಿಮಾನಿಗಳಿಗೆ ಮತ್ತು ಪೋಷಕರಿಗೆ ಖಡಕ್ ಎಚ್ಚರಿಕೆ:&lt;/strong&gt;&lt;/p&gt;&lt;p&gt;ತಮಗೆ ಎದುರಾದ ಈ ಕಹಿ ಅನುಭವದ ನಂತರ ಶಕೀಲಾ ಅವರು ಜನರಿಗೆ ಮತ್ತು ಪೋಷಕರಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. 'ಮೊಬೈಲ್ ಅತ್ಯಂತ ಉಪಯುಕ್ತ ಸಾಧನ, ಆದರೆ ಅದನ್ನು ಅಗತ್ಯಕ್ಕಿಂತ ಹೆಚ್ಚು ಬಳಸಬೇಡಿ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್ ಕೊಡಬೇಡಿ. ಅನಗತ್ಯ ವೀಡಿಯೊಗಳನ್ನು ನೋಡಿ ಸಮಯ ಹಾಗೂ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಇಲ್ಲದಿದ್ದರೆ ನನ್ನಂತೆ ರೂ. 3 ಲಕ್ಷ ಹಣ ಕಳೆದುಕೊಳ್ಳುವುದರ ಜೊತೆಗೆ ತಡೆಯಲಾಗದ ಶಾರೀರಿಕ ನೋವನ್ನು ಅನುಭವಿಸಬೇಕಾಗುತ್ತದೆ' ಎಂದು ಅವರು ಕಳಕಳಿಯ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;'ಶಕೀಲಾ ತರಂಗಂ' ಎಂಬ ಅದ್ಭುತ ಚಿತ್ರಪಯಣ:&lt;/strong&gt;&lt;/p&gt;&lt;p&gt;ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಶಕೀಲಾ ಸಿ ಬೆಗಮ್, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸಂಚಲನ ಮೂಡಿಸಿದವರು. 2000ನೇ ಇಸವಿಯಲ್ಲಿ ಬಿಡುಗಡೆಯಾದ ಆರ್.ಜೆ. ಪ್ರಸಾದ್ ನಿರ್ದೇಶನದ 'ಕಿನ್ನಾರತುಂಬಿಕಲ್' ಚಿತ್ರವು ಕೇವಲ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿ, ಬರೊಬ್ಬರಿ 4 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ 'ಶಕೀಲಾ ತರಂಗಂ' (ಶಕೀಲಾ ಅಲೆ) ಆರಂಭವಾಯಿತು.&lt;/p&gt;&lt;img&gt;&lt;p&gt;ಆ ಕಾಲಘಟ್ಟದಲ್ಲಿ ಮುಖ್ಯವಾಹಿನಿಯ ಪ್ರಮುಖ ನಾಯಕರ ಸಿನಿಮಾಗಳಿಗಿಂತ ಶಕೀಲಾ ಅಭಿನಯದ ಸಿನಿಮಾಗಳೇ ಬಾಕ್ಸ್ ಆಫೀಸ್&zwnj;ನಲ್ಲಿ ಹೆಚ್ಚಿನ ಗಳಿಕೆ ಮಾಡುತ್ತಿದ್ದವು. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲೂ ಇವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೋಹನ್&zwnj;ಲಾಲ್ ಅವರ 'ಚೋಟಾ ಮುಂಬೈ', ಪೃಥ್ವಿರಾಜ್ ಅಭಿನಯದ 'ತೇಜಾ ಭಾಯ್ &amp;amp; ಫ್ಯಾಮಿಲಿ', ತಮಿಳಿನ 'ಮರು ಮಲರ್ಚಿ', 'ಅಳಗಿಯ ತಮಿಳ್ ಮಗನ್', 'ಶಿವ ಮನಸುಲ ಶಕ್ತಿ', 'ಬಾಸ್ ಎಂಗಿರ ಭಾಸ್ಕರನ್' ಹಾಗೂ ಕನ್ನಡದ 'ಮೋನಾಲಿಸಾ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/veteran-actress-shakila-rs-3-lakh-neck-surgery-due-to-mobile-gaming-habit-after-no-movie-chance-ao4y1vq"/>
        </item>
        <item>
            <title><![CDATA[40ನೇ ವಯಸ್ಸಿನಲ್ಲಿ ಉದ್ಯೋಗ ಕಳೆದುಕೊಂಡ ಕಾರ್ಪೊರೇಟ್ ಉದ್ಯೋಗಿ ಹಂಚಿಕೊಂಡ 3 ಮುಖ್ಯ ಜೀವನ ಪಾಠಗಳು]]></title>
            <link>https://kannada.asianetnews.com/viral/mid-career-layoff-insights-3-crucial-life-lessons-from-an-18-year-corporate-veteran-laid-off-in-his-40s-gdp/articleshow-vlg8d8n</link>
            <guid isPermaLink="true">https://kannada.asianetnews.com/viral/mid-career-layoff-insights-3-crucial-life-lessons-from-an-18-year-corporate-veteran-laid-off-in-his-40s-gdp/articleshow-vlg8d8n</guid>
            <pubDate>Thu, 13 Aug 2026 10:39:53 +0530</pubDate>
            <description><![CDATA[ಕಾರ್ಪೊರೇಟ್ ವಲಯದಲ್ಲಿ 18 ವರ್ಷಗಳ ಅನುಭವದ ನಂತರ ಕೆಲಸ ಕಳೆದುಕೊಂಡ ಉದ್ಯೋಗಿಯೊಬ್ಬರು ತಮ್ಮ ಅನುಭವದಿಂದ ಕಲಿತ ಮೂರು ಪ್ರಮುಖ ಪಾಠಗಳನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ನಿಜವಾದ ಹಿತೈಷಿಗಳನ್ನು ಗುರುತಿಸಲು, ಆರ್ಥಿಕ ವಾಸ್ತವವನ್ನು ಅರಿಯಲು ಮತ್ತು ಕೆಲಸದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಲು ಹೇಗೆ ಸಹಾಯ ಮಾಡಿತು ಎಂಬುದನ್ನು ಅವರು ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1fb7pbcxtcj9f0vv2rwvz8,imgname-microsoft-soft-layoff-voluntary-buyout-8500-employees-ai-cost-cutting-tech-industry-trends-2-1777092370123.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಾರ್ಪೊರೇಟ್ ವಲಯದಲ್ಲಿ 18 ವರ್ಷಗಳ ಸುದೀರ್ಘ ಅನುಭವದ ನಂತರ ದಿಢೀರನೆ ಕೆಲಸದಿಂದ ವಜಾಗೊಂಡ ಉದ್ಯೋಗಿಯೊಬ್ಬರು ತಮ್ಮ ಅನುಭವದಿಂದ ಕಲಿತ ಮೂರು ಪ್ರಮುಖ ಪಾಠಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಸ್ತುತ ನೆಟ್ಟಿಗರ ಗಮನ ಸೆಳೆದಿದ್ದಾರೆ. Instagramನಲ್ಲಿ '@midlifereboot43' ಎಂಬ ಖಾತೆಯ ಮೂಲಕ ಪೋಸ್ಟ್ ಹಂಚಿಕೊಂಡಿರುವ ಅವರು, 40ರ ಹರೆಯದಲ್ಲಿ ಎದುರಾದ ಈ ಉದ್ಯೋಗ ನಷ್ಟವು ಜೀವನ, ಸೌಹಾರ್ದತೆ, ಆರ್ಥಿಕ ಸ್ಥಿರತೆ ಮತ್ತು ಬೌಂಡರಿಗಳ ಕುರಿತು ತಮಗೆ ಸಂಪೂರ್ಣ ಭಿನ್ನವಾದ ಹೊಸ ದೃಷ್ಟಿಕೋನವನ್ನು ನೀಡಿದೆ ಎಂದು ವಿವರಿಸಿದ್ದಾರೆ.&lt;/p&gt;&lt;p&gt;ವೃತ್ತಿಜೀವನದ ಮಧ್ಯಭಾಗದಲ್ಲಿ ಇಂತಹ ದಿಢೀರ್ ಆಘಾತ ಎದುರಾದಾಗ ಹೆಚ್ಚಿನವರು ಕಂಗಾಲಾಗುವುದು ಸಹಜ. ಆದರೆ, ಈ ಅನುಭವವು ಸಾಮಾನ್ಯ ಉದ್ಯೋಗದಲ್ಲಿದ್ದಾಗ ಸಾಧ್ಯವಾಗದ 'ಮರುಚಿಂತನೆ ಮತ್ತು ಮರುಹೊಂದಾಣಿಕೆ'ಗೆ ಉತ್ತಮ ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಅವರು ಹಂಚಿಕೊಂಡ 3 ಮುಖ್ಯ ಪಾಠಗಳು:&lt;/h2&gt;&lt;p&gt;&lt;strong&gt;ನಿಜವಾದ ಹಿತೈಷಿಗಳ ಗುರುತಿಸುವಿಕೆ: &lt;/strong&gt;ಸಂಕಷ್ಟದ ಸಮಯದಲ್ಲಿ ನಿಮ್ಮ ನಿಜವಾದ ಆಪ್ತರು ಯಾರೆಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ಸಾಂತ್ವನ ಹೇಳುವವರು, ನೇರವಾಗಿ ಬೆಂಬಲಕ್ಕೆ ನಿಲ್ಲುವವರು ಮತ್ತು ಕೇವಲ ಒಂದೇ ಸಾಲಿನ ಬೆಂಬಲದ ಸಂದೇಶ ಕಳುಹಿಸಿ ಮಾಯವಾಗುವ ಸಹೋದ್ಯೋಗಿಗಳ ನಡುವಿನ ವ್ಯತ್ಯಾಸ ತಕ್ಷಣವೇ ಅರ್ಥವಾಗುತ್ತದೆ.&lt;/p&gt;&lt;p&gt;&lt;strong&gt;ಆರ್ಥಿಕ ವಾಸ್ತವದ ಅರಿವು: &lt;/strong&gt;ಆದಾಯವು ರಾತ್ರೋರಾತ್ರಿ ಶೂನ್ಯಕ್ಕೆ ಕುಸಿದಾಗ ವಜಾಗೊಳ್ಳುವಿಕೆಯು ಆರ್ಥಿಕ ಸ್ಥಿತಿಯ ನಿಜವಾದ ಕನ್ನಡಿ ಹಿಡಿಯುತ್ತದೆ. ತಕ್ಷಣವೇ ನಿಮ್ಮ ಖರ್ಚು-ವೆಚ್ಚಗಳ ಲೆಕ್ಕಪರಿಶೋಧನೆ ಆರಂಭವಾಗುತ್ತದೆ. ಅನಗತ್ಯ ಜೀವನಶೈಲಿ ಹಾಗೂ ಐಷಾರಾಮಿ ವೆಚ್ಚಗಳಿಗಿಂತ ಜೀವನಕ್ಕೆ ನಿಜವಾಗಿಯೂ ಅಗತ್ಯವಿರುವುದು ಏನು ಎಂಬ ಅರಿವು ಮೂಡುತ್ತದೆ.&lt;/p&gt;&lt;p&gt;&lt;strong&gt;ಕೆಲಸದ ಮೇಲಿನ ದೃಷ್ಟಿಕೋನ ಬದಲಾವಣೆ: &lt;/strong&gt;ಉದ್ಯೋಗ ನಷ್ಟವು ಕಾರ್ಪೊರೇಟ್ ಜಗತ್ತಿನ ಸುರಕ್ಷತೆಯ ಭ್ರಮೆ ಯನ್ನು ಸಂಪೂರ್ಣವಾಗಿ ಒಡೆದುಹಾಕುತ್ತದೆ. ಮತ್ತೆ ತಂಡಗಳನ್ನು ಮುನ್ನಡೆಸುವ ಹುದ್ದೆಗೆ ಮರಳಿದ ನಂತರವೂ, ಆಫೀಸಿನ ಸಣ್ಣಪುಟ್ಟ ರಾಜಕೀಯ ಅಥವಾ ಒತ್ತಡಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಇದೆಲ್ಲವೂ ಎಷ್ಟು ಕ್ಷಣಿಕ ಎಂಬುದು ನನಗೀಗ ಅರ್ಥವಾಗಿದೆ ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ&lt;/h2&gt;&lt;p&gt;ಈ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನನಗೆ ಈ ರೀತಿಯ ಅನುಭವವಾಗಿಲ್ಲ, ಆದರೆ ಇತರರ ಉದ್ಯೋಗ ನಷ್ಟದ ಕಥೆಗಳು ನನಗೂ ಸಾಕಷ್ಟು ಪಾಠ ಕಲಿಸಿವೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಇದು ನೂರಕ್ಕೆ ನೂರರಷ್ಟು ನಿಜ ಎಂದಿದ್ದಾರೆ.&lt;/p&gt;&lt;p&gt;ಇಂದಲ್ಲ ನಾಳೆ ಯಾರಿಗಾದರೂ ಇದು ಸಂಭವಿಸಬಹುದು. ನಿವೃತ್ತಿ ನಂತರದ ಸರಿಯಾದ ಯೋಜನೆಗಳು ನಿಮ್ಮಲ್ಲಿದ್ದರೆ ಉದ್ಯೋಗ ನಷ್ಟಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಮೂರನೆಯವರು ಸಲಹೆ ನೀಡಿದ್ದಾರೆ. ಕೆಲಸದಲ್ಲೇ ನಿಮ್ಮ ಗುರುತನ್ನು ಹುಡುಕಿಕೊಳ್ಳುವುದನ್ನು ಮತ್ತು ಶ್ಲಾಘನೆಗಾಗಿ ಕಾಯುವುದನ್ನು ನಿಲ್ಲಿಸಿ. ನಾನಿನ್ನೂ ವಜಾಗೊಂಡಿಲ್ಲ, ಆದರೆ ಟಾಕ್ಸಿಕ್ ಕೆಲಸದ ವಾತಾವರಣವೇ ನನಗೂ ಈ ಪಾಠ ಕಲಿಸಿದೆ ಎಂದು ನಾಲ್ಕನೆಯ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Gowthami K</dc:creator>
            <atom:link href="https://kannada.asianetnews.com/viral/mid-career-layoff-insights-3-crucial-life-lessons-from-an-18-year-corporate-veteran-laid-off-in-his-40s-gdp/articleshow-vlg8d8n"/>
        </item>
        <item>
            <title><![CDATA[Google Pixel Fold: ಭಾರತಕ್ಕೆ ಕಾಲಿಟ್ಟ ಗೂಗಲ್ ಫೋಲ್ಡಬಲ್ ಫೋನ್! ಹೊಸ ಫೀಚರ್ಸ್ ಏನು? ಬೆಲೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್]]></title>
            <link>https://kannada.asianetnews.com/gallery/whats-new-technology/google-pixel-11-pro-fold-arrives-in-india-at-rs-1-86-lakh-with-tensor-g6-chip-rav-1i2bcgr</link>
            <guid isPermaLink="true">https://kannada.asianetnews.com/gallery/whats-new-technology/google-pixel-11-pro-fold-arrives-in-india-at-rs-1-86-lakh-with-tensor-g6-chip-rav-1i2bcgr</guid>
            <pubDate>Thu, 13 Aug 2026 10:36:37 +0530</pubDate>
            <description><![CDATA[ಗೂಗಲ್ ತನ್ನ ಹೊಸ ಪಿಕ್ಸೆಲ್ 11 ಸೀರಿಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಪಿಕ್ಸೆಲ್ 11 ಪ್ರೊ ಫೋಲ್ಡ್. ಇದರ ಬೆಲೆ 1,86,999 ರೂ. ಆಗಿದ್ದು, ಟೆನ್ಸರ್ G6 ಚಿಪ್ ಮತ್ತು ಜೆಮಿನಿ AI ತಂತ್ರಜ್ಞಾನವನ್ನು ಹೊಂದಿದೆ. ಈಗಾಗಲೇ ಪ್ರೀ-ಆರ್ಡರ್ ಕೂಡ ಶುರುವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwq1tdt1dg3m085k9zw016s,imgname-----------------------2026-08-13t101332.035-1786596354489.jpg" type="image/jpeg" height="390" width="690"/>
            <content:encoded><![CDATA[&lt;p&gt;ಗೂಗಲ್ ತನ್ನ ಹೊಸ ಪಿಕ್ಸೆಲ್ 11 ಸೀರಿಸ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಇದರಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಪಿಕ್ಸೆಲ್ 11 ಪ್ರೊ ಫೋಲ್ಡ್. ಇದರ ಬೆಲೆ 1,86,999 ರೂ. ಆಗಿದ್ದು, ಟೆನ್ಸರ್ G6 ಚಿಪ್ ಮತ್ತು ಜೆಮಿನಿ AI ತಂತ್ರಜ್ಞಾನವನ್ನು ಹೊಂದಿದೆ. ಈಗಾಗಲೇ ಪ್ರೀ-ಆರ್ಡರ್ ಕೂಡ ಶುರುವಾಗಿದೆ.&lt;/p&gt;&lt;img&gt;&lt;p&gt;ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್(Google Pixel Fold) ಸೀರಿಸ್&zwnj;ನ ಹೊಸ ಫೋನ್&zwnj;ಗಳು ಕೊನೆಗೂ ಮಾರುಕಟ್ಟೆ ಲಗ್ಗೆ ಇಟ್ಟಿವೆ. ಗೂಗಲ್ ತನ್ನ ಪಿಕ್ಸೆಲ್ ಸೀರಿಸ್&zwnj; ಅನ್ನು ಭಾರತದಲ್ಲಿ ವಿಸ್ತರಿಸಿದ್ದು ಹೊಸ ಪಿಕ್ಸೆಲ್ 11 ಸೀರಿಸ್ ಅನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದರಲ್ಲಿ ಪಿಕ್ಸೆಲ್ 11, ಪಿಕ್ಸೆಲ್ 11 ಪ್ರೊ, ಪಿಕ್ಸೆಲ್ 11 ಪ್ರೊ XL, ಮತ್ತು ಪಿಕ್ಸೆಲ್ 11 ಪ್ರೊ ಫೋಲ್ಡ್ ಜೊತೆಗೆ ಪಿಕ್ಸೆಲ್ ವಾಚ್ 5 ಕೂಡ ಲಾಂಚ್ ಆಗಿದೆ. ಗೂಗಲ್&zwnj;ನ ಈ ಹೊಸ ಫೋಲ್ಡಬಲ್ ಫೋನ್ ಬೆಲೆ 1,86,999 ರೂ. ಆಗಿದ್ದರೆ, ಪಿಕ್ಸೆಲ್ 11 ಆರಂಭಿಕ ಬೆಲೆ 89,999 ರೂ. ಇದೆ. ಈ ಫೋನ್, ಆಪಲ್&zwnj;ನ ಮುಂಬರುವ ಫೋಲ್ಡಬಲ್ ಐಫೋನ್ ಮತ್ತು ಸ್ಯಾಮ್&zwnj;ಸಂಗ್&zwnj;ನ ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾಗೆ ನೇರ ಸ್ಪರ್ಧೆ ನೀಡಲಿದೆ. ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಗೂಗಲ್ ಪಿಕ್ಸೆಲ್ 11 ಪ್ರೊ ಫೋಲ್ಡ್(Google Pixel 11 Pro Fold) ಬೆಲೆ 1,86,999 ರೂ. ಇದೆ. ಇದರ ಜೊತೆಗೆ, ಕಂಪನಿಯು ತಿಂಗಳಿಗೆ 7,374.96 ರೂ.ಗಳಿಂದ ಶುರುವಾಗುವ EMI ಆಯ್ಕೆಯನ್ನೂ ನೀಡುತ್ತಿದೆ. ಗೂಗಲ್ ಸ್ಟೋರ್ ಪೇಜ್ ಪ್ರಕಾರ, ಈ ಫೋನ್ ಖರೀದಿಸುವಾಗ ಗ್ರಾಹಕರು 45,376 ರೂ. ತನಕ ರಿಯಾಯಿತಿ ಪಡೆಯಬಹುದು. ಇದರಲ್ಲಿ 9,000 ರೂ. ಎಕ್ಸ್&zwnj;ಚೇಂಜ್ ಬೋನಸ್, 10,000 ರೂ. ತನಕ ತಕ್ಷಣದ ರಿಯಾಯಿತಿ, ಮತ್ತು EMI ಮೇಲೆ 26,376 ರೂ. ತನಕ ಉಳಿತಾಯ ಸೇರಿದೆ. ಈ ಆಫರ್&zwnj;ಗಳಿಗೆ ನಿಬಂಧನೆಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.&lt;/p&gt;&lt;img&gt;&lt;p&gt;ಪಿಕ್ಸೆಲ್ 11 ಪ್ರೊ ಫೋಲ್ಡ್ ಫೋನ್&zwnj;ಗಾಗಿ ಭಾರತದ ಗೂಗಲ್ ಸ್ಟೋರ್&zwnj;ನಲ್ಲಿ ಪ್ರೀ-ಆರ್ಡರ್&zwnj;ಗಳು ಶುರುವಾಗಿವೆ. ಗ್ರಾಹಕರು ಅಧಿಕೃತ ಗೂಗಲ್ ಸ್ಟೋರ್&zwnj;ಗೆ ಭೇಟಿ ನೀಡಿ, ಪಿಕ್ಸೆಲ್ 11 ಪ್ರೊ ಫೋಲ್ಡ್ ಆಯ್ಕೆ ಮಾಡಬಹುದು. ವಿವಿಧ ಪೇಮೆಂಟ್ ಮತ್ತು ಎಕ್ಸ್&zwnj;ಚೇಂಜ್ ಆಫರ್&zwnj;ಗಳ ಮೂಲಕ ಬುಕ್ ಮಾಡಬಹುದುದಾಗಿದೆ. ಪಿಕ್ಸೆಲ್ 11, ಪಿಕ್ಸೆಲ್ 11 ಪ್ರೊ, ಮತ್ತು ಪಿಕ್ಸೆಲ್ 11 ಪ್ರೊ XL ಫೋನ್&zwnj;ಗಳು ಆಗಸ್ಟ್ 20 ರಂದು ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಆದರೆ, ಪ್ರೊ ಫೋಲ್ಡ್ ಬಿಡುಗಡೆ ದಿನಾಂಕ ಬೇರೆಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.&lt;/p&gt;&lt;img&gt;&lt;p&gt;ಪಿಕ್ಸೆಲ್ 11 ಪ್ರೊ ಫೋಲ್ಡ್, ಗೂಗಲ್&zwnj;ನ ಹೊಸ ಟೆನ್ಸರ್ G6 ಪ್ರೊಸೆಸರ್&zwnj;ನಿಂದ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು ಮತ್ತು ಜೆಮಿನಿ AI ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮ ಗುಣಮಟ್ಟ ಬಳಸಿಕೊಳ್ಳಲಾಗಿದೆ. ಈ ಹೊಸ ಫೋನ್&zwnj;ಗಳು ದಿನನಿತ್ಯದ ಬಳಕೆಯಲ್ಲಿ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚು ಸ್ಮಾರ್ಟ್ ಆದ AI ಪವರ್ಡ್ ಎಂದು ಗೂಗಲ್ ಹೇಳಿದೆ.&lt;/p&gt;&lt;p&gt;ಈ ಡಿವೈಸ್ 6.5-ಇಂಚಿನ OLED ಕವರ್ ಡಿಸ್&zwnj;ಪ್ಲೇ ಮತ್ತು 8-ಇಂಚಿನ OLED ಫೋಲ್ಡಿಂಗ್ ಡಿಸ್&zwnj;ಪ್ಲೇ ಹೊಂದಿದೆ. ಎರಡೂ ಸ್ಕ್ರೀನ್&zwnj;ಗಳು 1Hz ನಿಂದ 120Hz ವರೆಗಿನ ಅಡಾಪ್ಟಿವ್ ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತವೆ ಮತ್ತು 3,600 ನಿಟ್ಸ್ ಗರಿಷ್ಠ ಬ್ರೈಟ್&zwnj;ನೆಸ್ ಹೊಂದಿವೆ. ಹೊರಗಿನ ಸ್ಕ್ರೀನ್ 1080 x 2342 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದರೆ, ಒಳಗಿನ ಡಿಸ್&zwnj;ಪ್ಲೇ 2076 x 2152 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ.&lt;/p&gt;&lt;img&gt;&lt;p&gt;ಪಿಕ್ಸೆಲ್ 11 ಪ್ರೊ ಫೋಲ್ಡ್, ಗೂಗಲ್&zwnj;ನ ಹೊಸ ಟೆನ್ಸರ್ G6 ಪ್ರೊಸೆಸರ್ ಮತ್ತು ಟೈಟಾನ್ M3 ಸೆಕ್ಯುರಿಟಿ ಚಿಪ್&zwnj;ನೊಂದಿಗೆ ಬರುತ್ತದೆ. ಈ ಫೋಲ್ಡಬಲ್ ಫೋನ್ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಹೊಂದಿದೆ.&lt;/p&gt;]]></content:encoded>
            <category><![CDATA[whats-new-technology]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/whats-new-technology/google-pixel-11-pro-fold-arrives-in-india-at-rs-1-86-lakh-with-tensor-g6-chip-rav-1i2bcgr"/>
        </item>
        <item>
            <title><![CDATA[ಆಗಸ್ಟ್ 15, 2026: ಇದು ಭಾರತದ 79ನೇಯೋ ಅಥವಾ 80ನೇ ಸ್ವಾತಂತ್ರ್ಯ ದಿನಾಚರಣೆಯೋ? ಗೊಂದಲಕ್ಕೆ ಇಲ್ಲಿದೆ ಉತ್ತರ!]]></title>
            <link>https://kannada.asianetnews.com/india-news/80th-independence-day-or-79-years-of-freedom-heres-the-real-calculation-for-august-15-2026/articleshow-2rcqq2e</link>
            <guid isPermaLink="true">https://kannada.asianetnews.com/india-news/80th-independence-day-or-79-years-of-freedom-heres-the-real-calculation-for-august-15-2026/articleshow-2rcqq2e</guid>
            <pubDate>Thu, 13 Aug 2026 10:31:40 +0530</pubDate>
            <description><![CDATA[2026ರ ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. 1947ರ ಮೊದಲ ಆಚರಣೆಯಿಂದ ಲೆಕ್ಕ ಹಾಕಿದರೆ ಇದು 80ನೇ ಆಚರಣೆಯಾಗುತ್ತದೆ. ಆದರೆ, 1947ರಿಂದ 2026ರ ನಡುವೆ 79 ವರ್ಷಗಳು ಕಳೆದಿರುವುದರಿಂದ ದೇಶವು ಸ್ವತಂತ್ರವಾಗಿ 79 ವರ್ಷಗಳನ್ನು ಪೂರೈಸಿದಂತಾಗುತ್ತದೆ. ಹೀಗಾಗಿ 2026ರ ಆಗಸ್ಟ್ 15 ಭಾರತದ 80ನೇ ಸ್ವಾತಂತ್ರ್ಯ ದಿನೋತ್ಸವ ಹಾಗೂ 79 ವರ್ಷಗಳ ಸ್ವಾತಂತ್ರ್ಯದ ಸಂಕೇತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwqke51hc7f59machbvvkdt,imgname-80th-independence-day-of-india--1--1786596931744.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;2026ರ ಆಗಸ್ಟ್ 15: 79ನೇ ಅಥವಾ 80ನೇ ಸ್ವಾತಂತ್ರ್ಯ ದಿನಾಚರಣೆ?&lt;/strong&gt;&lt;/p&gt;&lt;p&gt;ಆಗಸ್ಟ್ 15, 2026ರಂದು ಭಾರತವು ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಿದೆ. ಆದರೆ, ಈ ದಿನದಂದು ದೇಶವು ಆಚರಿಸುತ್ತಿರುವುದು 79ನೇ ಸ್ವಾತಂತ್ರ್ಯ ದಿನವೋ ಅಥವಾ 80ನೇ ದಿನವೋ ಎಂಬ ಸಣ್ಣ ಗೊಂದಲ ಅನೇಕರಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗೆ ಸರಳ ಮತ್ತು ಸ್ಪಷ್ಟ ಉತ್ತರ ಇಲ್ಲಿದೆ.&lt;/p&gt;&lt;p&gt;&lt;strong&gt;ಆಚರಣೆಯ ಲೆಕ್ಕಾಚಾರ: 80ನೇ ಸ್ವಾತಂತ್ರ್ಯ ದಿನಾಚರಣೆ!&lt;/strong&gt;&lt;/p&gt;&lt;p&gt;ಭಾರತವು ಆಗಸ್ಟ್ 15, 1947ರಂದು ಬ್ರಿಟಿಷರ ಆಡಳಿತದಿಂದ ಸ್ವತಂತ್ರವಾಯಿತು. ಅದೇ ದಿನವನ್ನು ದೇಶದ ಮೊದಲ (1st) ಸ್ವಾತಂತ್ರ್ಯ ದಿನವೆಂದು ಆಚರಿಸಲಾಯಿತು. ಆ ಆಚರಣೆಗಳ ಸಂಖ್ಯೆಯ ಆಧಾರದ ಮೇಲೆ ಲೆಕ್ಕ ಹಾಕಿದರೆ:&lt;/p&gt;&lt;ul&gt; &lt;li&gt;1947 &ndash; 1ನೇ ಸ್ವಾತಂತ್ರ್ಯ ದಿನ&lt;/li&gt; &lt;li&gt;1948 &ndash; 2ನೇ ಸ್ವಾತಂತ್ರ್ಯ ದಿನ&lt;/li&gt; &lt;li&gt;2025 &ndash; 79ನೇ ಸ್ವಾತಂತ್ರ್ಯ ದಿನ&lt;/li&gt; &lt;li&gt;2026 &ndash; 80ನೇ ಸ್ವಾತಂತ್ರ್ಯ ದಿನಾಚರಣೆ&lt;/li&gt;&lt;/ul&gt;&lt;p&gt;&lt;strong&gt;ವರ್ಷಗಳ ಲೆಕ್ಕಾಚಾರ: 79 ವರ್ಷಗಳ ಸ್ವಾತಂತ್ರ್ಯ ಪೂರ್ಣಗೊಂಡಿದೆ!&lt;/strong&gt;&lt;/p&gt;&lt;p&gt;ನಾವು ಸ್ವಾತಂತ್ರ್ಯ ದೊರೆತ ನಂತರ ಪೂರ್ಣಗೊಂಡ ಒಟ್ಟು ವರ್ಷಗಳನ್ನು ಲೆಕ್ಕ ಹಾಕಿದರೆ: (2026 - 1947 = 79). ಇದರರ್ಥ, 2026ರ ಆಗಸ್ಟ್ 15ರ ವೇಳೆಗೆ ಭಾರತವು ಸ್ವತಂತ್ರವಾಗಿ 79 ವರ್ಷಗಳನ್ನು ಯಶಸ್ವಿಯಾಗಿ ಪೂರೈಸುತ್ತದೆ.&lt;/p&gt;&lt;p&gt;&lt;strong&gt;ಗೊಂದಲಕ್ಕೆ ಸರಳ ಲೆಕ್ಕಾಚಾರ!&lt;/strong&gt;&lt;/p&gt;&lt;ul&gt; &lt;li&gt;ಪೂರ್ಣಗೊಂಡ ಸ್ವಾತಂತ್ರ್ಯದ ವರ್ಷಗಳು: 79 ವರ್ಷಗಳು.&lt;/li&gt; &lt;li&gt;ಆಚರಿಸಲಾಗುವ ಸ್ವಾತಂತ್ರ್ಯ ದಿನೋತ್ಸವ: 80ನೇ ಆಚರಣೆ.&lt;/li&gt;&lt;/ul&gt;&lt;p&gt;ಸಂಕ್ಷಿಪ್ತವಾಗಿ ಹೇಳುವುದಾದರೆ, 2026ರ ಆಗಸ್ಟ್ 15ರಂದು ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸಲಿದೆ. ಈ ಮಹತ್ವದ ದಿನದಂದು ನಾಡಿನ ವೀರ ಹಿರಿಯರ ತ್ಯಾಗವನ್ನು ಸ್ಮರಿಸಿ, ಒಗ್ಗಟ್ಟಿನಿಂದ ಮುನ್ನಡೆಯೋಣ. ಜೈ ಹಿಂದ್!&lt;/p&gt;]]></content:encoded>
            <category><![CDATA[india-news]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/india-news/80th-independence-day-or-79-years-of-freedom-heres-the-real-calculation-for-august-15-2026/articleshow-2rcqq2e"/>
        </item>
        <item>
            <title><![CDATA[ಏಷ್ಯನ್ ಗೇಮ್ಸ್‌ 2026: ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ನಡೆಯೋದೇ ಇಲ್ವಾ? ಅಚ್ಚರಿ ಮೂಡಿಸಿದ ಹೊಸ ವೇಳಾಪಟ್ಟಿ!]]></title>
            <link>https://kannada.asianetnews.com/cricket-sports/asian-games-2026-india-vs-pakistan-cricket-match-suspense-medal-matches-condition-sat/articleshow-kc76xcq</link>
            <guid isPermaLink="true">https://kannada.asianetnews.com/cricket-sports/asian-games-2026-india-vs-pakistan-cricket-match-suspense-medal-matches-condition-sat/articleshow-kc76xcq</guid>
            <pubDate>Thu, 13 Aug 2026 10:17:49 +0530</pubDate>
            <description><![CDATA[2026ರ ನಾಗೋಯಾ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಆರಂಭಿಕ ಹಂತದಲ್ಲಿ ಮುಖಾಮುಖಿಯಾಗುವುದಿಲ್ಲ. ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆದಿರುವ ಈ ಸಾಂಪ್ರದಾಯಿಕ ಎದುರಾಳಿಗಳು, ಫೈನಲ್ ಅಥವಾ ಕಂಚಿನ ಪದಕದ ಪಂದ್ಯದಲ್ಲಿ ಮಾತ್ರವೇ ಎದುರಾಗುವ ಸಾಧ್ಯತೆಯಿದೆ. ಇದೇ ಮಾದರಿಯು ಮಹಿಳಾ ಕ್ರಿಕೆಟ್ ವಿಭಾಗಕ್ಕೂ ಅನ್ವಯಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kh1vd70vv83hccz67cp1pa9g,imgname-india-pakistan-1770662566939.jpg" type="image/jpeg" height="390" width="690"/>
            <content:encoded><![CDATA[&lt;p&gt;ಜಪಾನ್&zwnj;ನ ನಾಗೋಯಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವ ಕ್ರೀಡಾಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ಏಷ್ಯನ್ ಗೇಮ್ಸ್&zwnj;ನಲ್ಲಿ ಈ ಸಾಂಪ್ರದಾಯಿಕ ವೈರಿಗಳ ನಡುವೆ ಆರಂಭಿಕ ಹಂತದಲ್ಲಿ ಯಾವುದೇ ಪಂದ್ಯ ನಡೆಯುವುದಿಲ್ಲ!&lt;/p&gt;&lt;p&gt;ಸಾಮಾನ್ಯವಾಗಿ ಯಾವುದೇ ಏಷ್ಯನ್ ಕ್ರಿಕೆಟ್ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲೇ ಮುಖಾಮುಖಿಯಾಗುವಂತೆ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತದೆ. ಆದರೆ, ಈ ಬಾರಿ ನಾಗೋಯಾ ಏಷ್ಯನ್ ಗೇಮ್ಸ್&zwnj;ನಲ್ಲಿ ಕ್ರಿಕ್&zwnj;ಬಜ್ ನೀಡಿರುವ ವರದಿಯ ಪ್ರಕಾರ, ಉಭಯ ತಂಡಗಳು ಆರಂಭಿಕ ಅಥವಾ ಲೀಗ್ ಪಂದ್ಯಗಳಲ್ಲಿ ಎದುರಾಗುವುದಿಲ್ಲ. ಇವೆರಡೂ ತಂಡಗಳು ಮುಖಾಮುಖಿಯಾಗಬೇಕಾದರೆ ಕೇವಲ ಒಂದೇ ಒಂದು ಶರತ್ತು ಅನ್ವಯಿಸುತ್ತದೆ &ndash; ಅದೇನೆಂದರೆ ಇವೆರಡೂ ತಂಡಗಳು ಮೆಡಲ್ ಪಂದ್ಯ ತಲುಪಬೇಕು!&lt;/p&gt;&lt;h2&gt;&lt;strong&gt;ಕ್ವಾರ್ಟರ್ ಫೈನಲ್&zwnj;ಗೆ ನೇರ ಪ್ರವೇಶ ಪಡೆದ ಭಾರತ-ಪಾಕ್:&lt;/strong&gt;&lt;/h2&gt;&lt;p&gt;ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಶ್ರೇಷ್ಠ ಶ್ರೇಯಾಂಕ (Top Seeded) ಹೊಂದಿರುವ ಕಾರಣ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಅಫ್ಘಾನಿಸ್ತಾನ, ನೇಪಾಳ, ಹಾಂಗ್ ಕಾಂಗ್, ಚೀನಾ, ಜಪಾನ್, ಮಲೇಷ್ಯಾ ಮತ್ತು ಒಮಾನ್ ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಾಡಿ ಕ್ವಾರ್ಟರ್ ಫೈನಲ್&zwnj;ಗೆ ಅರ್ಹತೆ ಪಡೆಯಲಿವೆ.&lt;/p&gt;&lt;p&gt;ಭಾರತ ತಂಡವು ಕ್ವಾರ್ಟರ್ ಫೈನಲ್-2 ರಲ್ಲಿ (Q2) ಆಡಲಿದ್ದರೆ, ಪಾಕಿಸ್ತಾನ ತಂಡವು ಕ್ವಾರ್ಟರ್ ಫೈನಲ್-1 ರಲ್ಲಿ (Q1) ಕಣಕ್ಕಿಳಿಯಲಿದೆ. ಹೀಗಾಗಿ ಇತ್ತಂಡಗಳು ಲೀಗ್ ಹಂತದಲ್ಲಾಗಲಿ ಅಥವಾ ಕ್ವಾರ್ಟರ್ ಫೈನಲ್&zwnj;ನಲ್ಲಾಗಲಿ ಮುಖಾಮುಖಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.&lt;/p&gt;&lt;h2&gt;&lt;strong&gt;ಸೆಮಿಫೈನಲ್&zwnj;ನಲ್ಲೂ ಇಲ್ಲ ಮುಖಾಮುಖಿ ಸಂಭವ!&lt;/strong&gt;&lt;/h2&gt;&lt;p&gt;ವರದಿಗಳ ಪ್ರಕಾರ, ಮೊದಲ ಸೆಮಿಫೈನಲ್ ಪಂದ್ಯವು Q1 (ಪಾಕಿಸ್ತಾನ) ಮತ್ತು Q4 ವಿಜೇತರ ನಡುವೆ ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯವು Q2 (ಭಾರತ) ಮತ್ತು Q3 ವಿಜೇತರ ನಡುವೆ ನಡೆಯಲಿದೆ. ಹೀಗಾಗಿ ಸೆಮಿಫೈನಲ್&zwnj;ನಲ್ಲೂ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲು ಸಾಧ್ಯವಿಲ್ಲ!&lt;/p&gt;&lt;h2&gt;&lt;strong&gt;ಮೆಡಲ್ ಪಂದ್ಯದಲ್ಲಷ್ಟೇ ಮುಖಾಮುಖಿ ಶರತ್ತು!&lt;/strong&gt;&lt;/h2&gt;&lt;p&gt;ಹೀಗಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಾದರೆ ಕೇವಲ ಎರಡು ಸನ್ನಿವೇಶಗಳಲ್ಲಿ ಮಾತ್ರ ಸಾಧ್ಯ:&lt;/p&gt;&lt;p&gt;&lt;strong&gt;ಗೋಲ್ಡ್ ಮೆಡಲ್ ಪಂದ್ಯ (ಫೈನಲ್): &lt;/strong&gt;ಉಭಯ ತಂಡಗಳು ತಮ್ಮ ತಮ್ಮ ಸೆಮಿಫೈನಲ್ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿದರೆ ಬಂಗಾರದ ಪದಕಕ್ಕಾಗಿ ಹೋರಾಡಲಿವೆ.&lt;/p&gt;&lt;p&gt;&lt;strong&gt;ಬ್ರಾಂಜ್ ಮೆಡಲ್ ಪಂದ್ಯ (ಮೂರನೇ ಸ್ಥಾನ):&lt;/strong&gt; ಒಂದು ವೇಳೆ ಎರಡೂ ತಂಡಗಳು ಸೆಮಿಫೈನಲ್&zwnj;ನಲ್ಲಿ ಸೋತರೆ, ಕಂಸಾಳ ಪದಕಕ್ಕಾಗಿ ಪರಸ್ಪರ ಸೆಣಸಲಿವೆ.&lt;/p&gt;&lt;p&gt;ಒಂದು ವೇಳೆ ಸೆಮಿಫೈನಲ್&zwnj;ನಲ್ಲಿ ಒಂದು ತಂಡ ಗೆದ್ದು, ಇನ್ನೊಂದು ತಂಡ ಸೋತರೆ, ಈ ಬಾರಿಯ ಏಷ್ಯನ್ ಗೇಮ್ಸ್&zwnj;ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಪಂದ್ಯ ನಡೆಯುವುದೇ ಇಲ್ಲ. ಈ ಎಲ್ಲಾ ನಿರ್ಣಾಯಕ ಮೆಡಲ್ ಪಂದ್ಯಗಳು ಅಕ್ಟೋಬರ್ 3 ರಂದು ನಿಗದಿಯಾಗಿವೆ.&lt;/p&gt;&lt;h2&gt;&lt;strong&gt;ಮಹಿಳೆಯರ ವಿಭಾಗದಲ್ಲೂ ಇದೇ ರೋಚಕ ಫಾರ್ಮ್ಯಾಟ್:&lt;/strong&gt;&lt;/h2&gt;&lt;p&gt;ಮಹಿಳೆಯರ ಕ್ರಿಕೆಟ್ ಸ್ಪರ್ಧೆಯಲ್ಲೂ ಇದೇ ಮಾದರಿಯ ಡ್ರಾ ಸಿದ್ಧಪಡಿಸಲಾಗಿದೆ. ಭಾರತ ಮಹಿಳಾ ತಂಡ ಟಾಪ್ ಸೀಡ್ ಆಗಿದ್ದರೆ, ಪಾಕಿಸ್ತಾನ 4ನೇ ಶ್ರೇಯಾಂಕದಲ್ಲಿದೆ. ಭಾರತ ಕ್ವಾರ್ಟರ್ ಫೈನಲ್&zwnj;ನಲ್ಲಿ ಜಪಾನ್ ವಿರುದ್ಧ ಆಡಲಿದ್ದು, ಸೆಮಿಫೈನಲ್&zwnj;ನಲ್ಲಿ ಬಾಂಗ್ಲಾದೇಶ ಅಥವಾ ಹಾಂಗ್ ಕಾಂಗ್ ಎದುರಿಸುವ ಸಾಧ್ಯತೆಯಿದೆ. ಪಾಕಿಸ್ತಾನ ಮಹಿಳಾ ತಂಡ ಕ್ವಾರ್ಟರ್ ಫೈನಲ್&zwnj;ನಲ್ಲಿ ಥೈಲ್ಯಾಂಡ್ ವಿರುದ್ಧ ಆಡಲಿದೆ. ಮಹಿಳೆಯರ ವಿಭಾಗದಲ್ಲೂ ಭಾರತ-ಪಾಕ್ ಕೇವಲ ಗೋಲ್ಡ್ ಅಥವಾ ಬ್ರಾಂಜ್ ಮೆಡಲ್ ಪಂದ್ಯದಲ್ಲಷ್ಟೇ (ಸೆಪ್ಟೆಂಬರ್ 22) ಮುಖಾಮುಖಿಯಾಗಲು ಸಾಧ್ಯ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/cricket-sports/asian-games-2026-india-vs-pakistan-cricket-match-suspense-medal-matches-condition-sat/articleshow-kc76xcq"/>
        </item>
        <item>
            <title><![CDATA[₹23 ಲಕ್ಷದ ಕಾರು ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿ: “ಕ್ಯಾಶ್ ಕೊಟ್ಟು ತಗೊಂಡಿದ್ದೇವೆ ಅಂತಾರೆ, ನಮ್ಮ ಕಷ್ಟ ನಮಗೆ ಗೊತ್ತು” ಎಂದ ತಾರೇಶ್]]></title>
            <link>https://kannada.asianetnews.com/gallery/tv-talk/kannada-youtuber-tharesh-and-swathi-23-lakh-car-negative-comments-struggle-story-suh-uy4ciqs</link>
            <guid isPermaLink="true">https://kannada.asianetnews.com/gallery/tv-talk/kannada-youtuber-tharesh-and-swathi-23-lakh-car-negative-comments-struggle-story-suh-uy4ciqs</guid>
            <pubDate>Thu, 13 Aug 2026 10:12:39 +0530</pubDate>
            <description><![CDATA[₹23 ಲಕ್ಷದ MG Windsor ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿಗೆ ಬಂದ ನೆಗೆಟಿವ್ ಕಾಮೆಂಟ್‌ಗಳಿಗೆ ತಾರೇಶ್, “ನಮ್ಮ ಕಷ್ಟ ನಮಗೆ ಗೊತ್ತು” ಎಂದು ಖಡಕ್ ಉತ್ತರ ನೀಡಿದ್ದಾರೆ. ಹಾಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwph6rw4w554p22hr1jwfs3,imgname-kannada-youtuber-tharesh-and-swathi-23-lakh-car-negative-comments-struggle-story-1786595810076.jpg" type="image/jpeg" height="390" width="690"/>
            <content:encoded><![CDATA[&lt;p&gt;₹23 ಲಕ್ಷದ MG Windsor ಖರೀದಿಸಿದ ಕನ್ನಡ ಯೂಟ್ಯೂಬರ್ ಜೋಡಿಗೆ ಬಂದ ನೆಗೆಟಿವ್ ಕಾಮೆಂಟ್&zwnj;ಗಳಿಗೆ ತಾರೇಶ್, &ldquo;ನಮ್ಮ ಕಷ್ಟ ನಮಗೆ ಗೊತ್ತು&rdquo; ಎಂದು ಖಡಕ್ ಉತ್ತರ ನೀಡಿದ್ದಾರೆ. ಹಾಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿರುವ ಯೂಟ್ಯೂಬರ್ ಜೋಡಿಯೊಂದು ಇತ್ತೀಚೆಗೆ ಸುಮಾರು ₹23 ಲಕ್ಷ ಮೌಲ್ಯದ MG Windsor ಎಲೆಕ್ಟ್ರಿಕ್ ಕಾರು ಖರೀದಿಸಿದೆ. ಆದರೆ ಕಾರು ಖರೀದಿಸಿದ ಬಳಿಕ ಕೆಲವರು, ₹19 ಲಕ್ಷ ಸಾಲ ಮಾಡದೆ ಕ್ಯಾಶ್ ಕೊಟ್ಟು ಕಾರು ಖರೀದಿಸಿದ್ದಾರೆ ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿರುವುದು ಈ ಜೋಡಿಯ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ತಾರೇಶ್, ನಮ್ಮ ಕಷ್ಟ ಏನು ಅನ್ನೋದು ನಮಗೆ ಗೊತ್ತು. ಒಡವೆ ಇಟ್ಟು, ಸಾಲ ಮಾಡಿ ಕಾರು ತೆಗೆದುಕೊಂಡಿದ್ದೇವೆ ಎಂದು ತಮ್ಮ ಕಾರು ಖರೀದಿಯ ಹಿಂದಿನ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ .&lt;/p&gt;&lt;h2&gt;₹23 ಲಕ್ಷದ ಕಾರು ಖರೀದಿಸಿದ ಜೋಡಿ&lt;/h2&gt;&lt;p&gt;ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಹಲವು ಆಧುನಿಕ ಫೀಚರ್&zwnj;ಗಳನ್ನು ಹೊಂದಿರುವ MG Windsor EV ಅನ್ನು ಈ ಯೂಟ್ಯೂಬರ್ ಜೋಡಿ ಖರೀದಿಸಿದೆ. ಕಾರು ಖರೀದಿಸಿ ಸುಮಾರು ಮೂರು ತಿಂಗಳಾಗಿದ್ದು, ಮೊದಲ ಸರ್ವಿಸ್ ಕೂಡ ಪೂರ್ಣಗೊಂಡಿದೆ. ಇದೀಗ ತಮ್ಮ ಹೊಸ ಕಾರಿನ ಅನುಭವ, ಕಂಫರ್ಟ್, ಫೀಚರ್&zwnj;ಗಳು ಸೇರಿದಂತೆ ಸಂಪೂರ್ಣ ರಿವ್ಯೂ ಅನ್ನು ವೀಡಿಯೊ ಮೂಲಕ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕಾರಿನ ಬಗ್ಗೆ ಮಾತನಾಡಿರುವ ತಾರೇಶ್, MG ಬ್ರ್ಯಾಂಡ್ ತಮ್ಮ ನೆಚ್ಚಿನ ಬ್ರ್ಯಾಂಡ್&zwnj;ಗಳಲ್ಲಿ ಒಂದಾಗಿತ್ತು ಎಂದು ಹೇಳಿದ್ದಾರೆ. ಕೆಲಸಕ್ಕೆ ಹೋಗುವ ದಾರಿಯಲ್ಲಿ MG ಶೋರೂಮ್ ಕಾಣಿಸುತ್ತಿತ್ತು. ಪ್ರತಿಬಾರಿ ಅದನ್ನು ನೋಡಿದಾಗ, ಒಂದು ದಿನ MG ಕಾರು ತೆಗೆದುಕೊಳ್ಳಬೇಕು&rdquo; ಎಂದುಕೊಳ್ಳುತ್ತಿದ್ದೆವು. ಆದರೆ ಇದೇ ಕಾರನ್ನು ಖರೀದಿಸುತ್ತೇವೆ ಎಂಬ ಯಾವುದೇ ಯೋಜನೆ ಇರಲಿಲ್ಲ. ಇದು ಅನಿರೀಕ್ಷಿತವಾಗಿ ಕೈಗೂಡಿದ ಕನಸು ಎಂದು ತಾರೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಕಾರಿನ ಸೀಟ್&zwnj;ಗಳು ಹಾಗೂ ಕಂಫರ್ಟ್ ಬಗ್ಗೆಯೂ ತಾರೇಶ್ ಅವರ ತಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;&lt;strong&gt;ಕಾರಿಗಾಗಿ ಅಮ್ಮನ ಒಡವೆ ಕೂಡ ಇಟ್ಟಿದ್ದರು&lt;/strong&gt;&lt;/p&gt;&lt;p&gt;ಹೊಸ ಕಾರಿನ ಖರೀದಿಯ ಹಿಂದೆ ತಮ್ಮ ಕುಟುಂಬದ ದೊಡ್ಡ ಹೋರಾಟವಿದೆ ಎಂದು ತಾರೇಶ್ ಭಾವುಕರಾಗಿ ಹೇಳಿದ್ದಾರೆ. ತಮ್ಮ ಹಳೆಯ ಸ್ವಿಫ್ಟ್ ಕಾರನ್ನು ಕೇವಲ ₹4 ಲಕ್ಷಕ್ಕೆ ಮಾರಾಟ ಮಾಡಬೇಕಾಯಿತು. ಕಾರು ಖರೀದಿಗೆ ಹಣ ಹೊಂದಿಸಲು ಅಮ್ಮನ ಒಡವೆಗಳನ್ನು ಕೂಡ ಇಡಬೇಕಾಯಿತು ಎಂದು ತಿಳಿಸಿದ್ದಾರೆ. ಕಾರು, ಇಂಟೀರಿಯರ್ ಹಾಗೂ ಇತರ ಖರ್ಚುಗಳನ್ನು ಸೇರಿಸಿದರೆ ಒಟ್ಟಾರೆ ಸುಮಾರು ₹25 ಲಕ್ಷದಷ್ಟು ಹಣ ಖರ್ಚಾಗಿದೆ ಎಂದು ಅವರು ಹೇಳಿದ್ದಾರೆ. ಹೀಗಾಗಿ ಹೊರಗಿನಿಂದ ನೋಡಿದವರಿಗೆ ಇದು ಸುಲಭವಾಗಿ ಖರೀದಿಸಿದ ಕಾರಿನಂತೆ ಕಾಣಬಹುದು. ಆದರೆ ಅದರ ಹಿಂದೆ ತಮ್ಮ ಕುಟುಂಬದ ಹಣಕಾಸಿನ ಕಷ್ಟ ಮತ್ತು ಹಲವು ತ್ಯಾಗಗಳಿವೆ ಎಂಬುದು ತಾರೇಶ್ ಮಾತಿನ ಅರ್ಥ.&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾರಿನ ಬಗ್ಗೆ ಬಂದಿರುವ ಕೆಲವೊಂದು ಕಾಮೆಂಟ್&zwnj;ಗಳು ಮತ್ತು ವಿಡಿಯೋಗಳ ಬಗ್ಗೆಯೂ ತಾರೇಶ್ ಮಾತನಾಡಿದ್ದಾರೆ. ಯಾರೋ ಒಬ್ಬರು ವಿಡಿಯೋ ಮಾಡಿ ₹19 ಲಕ್ಷ ಲೋನ್ ಮಾಡದೇ ಕ್ಯಾಶ್ ಕೊಟ್ಟು ಕಾರು ತೆಗೆದುಕೊಂಡಿದ್ದಾರೆ ಅಂತ ಹಾಕಿದ್ದಾರೆ. ನಮಗೆ ಗೊತ್ತು ನಮ್ಮ ಕಷ್ಟ ಏನು ಅಂತ. ನಾವು ಒಡವೆ ಇಟ್ಟು, ಲೋನ್ ಮಾಡಿ ಕಾರು ತಗೊಂಡಿದ್ದು ಎಂದು ಅವರು ಹೇಳಿದ್ದಾರೆ.&lt;/p&gt;&lt;img&gt;&lt;p&gt;ನಾವು ಎಷ್ಟೇ ಪಾಸಿಟಿವ್ ಆಗಿರಲು ಪ್ರಯತ್ನಿಸಿದರೂ, ಒಂದು ಸಣ್ಣ ನೆಗೆಟಿವ್ ಕಮೆಂಟ್ ನಮ್ಮ ಇಡೀ ದಿನದ ನೆಮ್ಮದಿಯನ್ನು ಕೆಡಿಸಬಹುದು. &quot;ನಾವು ಮಾಡ್ತಿರೋದು ತಪ್ಪಾ?&quot;, &quot;ಜನ ಯಾಕೆ ಈ ರೀತಿ ಮಾತನಾಡುತ್ತಾರೆ?&quot; ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡಲು ಪ್ರಾರಂಭಿಸುತ್ತವೆ. ಸ್ಕ್ರೀನ್&zwnj;ನಿಂದ ದೂರವಿರಿ: ನೆಗೆಟಿವ್ ಕಮೆಂಟ್ ಕಂಡ ತಕ್ಷಣ ಫೋನ್ ಪಕ್ಕಕ್ಕಿಟ್ಟು ನಿಮ್ಮ ಕೆಲಸದತ್ತ ಗಮನಹರಿಸಿ.&lt;/p&gt;&lt;p&gt;ಪ್ರತಿಕ್ರಿಯಿಸದಿರಿ: ಪ್ರತಿಯೊಂದು ಕಾಮೆಂಟ್&zwnj;ಗೂ ಉತ್ತರ ನೀಡುತ್ತಾ ಕೂತರೆ ನಮ್ಮ ಶಕ್ತಿ ಮತ್ತು ಸಮಯ ಎರಡೂ ಪೋಲಾಗುತ್ತದೆ. ಅವಾಯ್ಡ್ ಮಾಡುವುದನ್ನು ಕಲಿಯಿರಿ: ಅಂತಹ ಕಮೆಂಟ್ಸ್&zwnj;ಗಳನ್ನು ಆದಷ್ಟು ನಿರ್ಲಕ್ಷಿಸುವುದೇ ಮನಸ್ಸಿನ ಶಾಂತಿಗೆ ಉತ್ತಮ ಮಾರ್ಗ. ಎಂದು ಹೇಳಿದ್ದಾರೆ, ಕನ್ನಡ ಯೂಟ್ಯೂಬರ್ ತಾರೇಶ್-ಸ್ವಾತಿ.&lt;/p&gt;&lt;img&gt;&lt;p&gt;ನಾವು ನಿಯತ್ತಾಗಿ, ಪ್ರಾಮಾಣಿಕವಾಗಿ ಮುನ್ನಡೆಯುತ್ತಿರುವಾಗ ಬರುವ ಅನಗತ್ಯ ಟೀಕೆಗಳು ಮನಸ್ಸಿಗೆ ಆಳವಾಗಿ ತಾಗುತ್ತವೆ. ನಿಮಗೆ ಒಬ್ಬರ ವಿಡಿಯೋ ಅಥವಾ ಕೆಲಸ ಇಷ್ಟವಾಗದಿದ್ದರೆ, ದಯವಿಟ್ಟು ಅವರನ್ನು ಡಿಮೋಟಿವೇಟ್ ಮಾಡಲು ಹೋಗಬೇಡಿ. ನೆಗೆಟಿವ್ ಕಮೆಂಟ್ ಹಾಕುವುದರಿಂದ ನಿಮಗೂ ಏನೂ ಸಿಗುವುದಿಲ್ಲ, ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/tv-talk/kannada-youtuber-tharesh-and-swathi-23-lakh-car-negative-comments-struggle-story-suh-uy4ciqs"/>
        </item>
        <item>
            <title><![CDATA[ಕೇರಳದ ಘಟನೆಯಾಧಾರಿತ ತಮಿಳಿನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; OTTಯಲ್ಲಿ ಹಲ್‌-ಚಲ್]]></title>
            <link>https://kannada.asianetnews.com/gallery/movie-reviews/tamil-movie-stephen-based-on-a-true-incident-that-took-place-in-kerala-in-2021-is-on-netflix-ott-mrq-neig6p0</link>
            <guid isPermaLink="true">https://kannada.asianetnews.com/gallery/movie-reviews/tamil-movie-stephen-based-on-a-true-incident-that-took-place-in-kerala-in-2021-is-on-netflix-ott-mrq-neig6p0</guid>
            <pubDate>Thu, 13 Aug 2026 09:59:45 +0530</pubDate>
            <description><![CDATA[ಕೇರಳದಲ್ಲಿ 2021ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ತಮಿಳಿನ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ಯುವತಿಯರನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ತನಿಖೆಯ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwnnf37rbpr3b7n7zsp8wq8,imgname-stephen-movie--1--1786594901095.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇರಳದಲ್ಲಿ 2021ರಲ್ಲಿ ನಡೆದ ಸತ್ಯ ಘಟನೆಯಾಧಾರಿತ ತಮಿಳಿನ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾ ಅವಕಾಶದ ಆಮಿಷವೊಡ್ಡಿ ಯುವತಿಯರನ್ನು ಕೊಲ್ಲುವ ಸೀರಿಯಲ್ ಕಿಲ್ಲರ್ ಮತ್ತು ಪೊಲೀಸ್ ತನಿಖೆಯ ಸುತ್ತ ಈ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಸಾಗುತ್ತದೆ.&lt;/p&gt;&lt;img&gt;&lt;p&gt;ಓಟಿಟಿ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲಿ ಬೇರೆ ಬೇರೆ ಜಾನರ್&zwnj;ನ ಸಿನಿಮಾಗಳು ಮತ್ತು ವೆಬ್ ಸೀರೀಸ್&zwnj;ಗಳು ಬಿಡುಗಡೆಯಾಗುತ್ತಿದ್ದರೂ, ಸಸ್ಪೆನ್ಸ್, ಕ್ರೈಮ್, ಹಾರರ್ ಮತ್ತು ಥ್ರಿಲ್ಲರ್ ಕಥೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸತ್ಯ ಘಟನೆಯೊಂದು ಆಧರಿತ ಸಿನಿಮಾವೊಂದು ಒಟಿಟಿ ಪ್ಲಾಟ್&zwnj;ಫಾರಂನಲ್ಲಿ ಹಲ್&zwnj;-ಚಲ್ ಸೃಷ್ಟಿಸಿದೆ. ಯಾವುದು ಆ ಸಿನಿಮಾ ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;ಈ ಸಿನಿಮಾದ ಕಥೆ ಕೇರಳದಲ್ಲಿ 2021ರ ವೇಳೆ ನಡೆದ ಘಟನೆಯನ್ನಾಧರಿಸಿ ಬರೆಯಲಾಗಿದೆ. ಓರ್ವ ಸೀರಿಯಲ್ ಕಿಲ್ಲರ್ ಸುತ್ತ ಸಿನಿಮಾದ ಕಥೆ ಸಾಗುತ್ತದೆ. ಕೊ*ಲೆಗಾರ ಸಿನಿಮಾದಲ್ಲಿ ಅವಕಾಶಗಳನ್ನು ಕೊಡಿಸೋದಾಗ ಹೇಳಿ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡುತ್ತಿರುತ್ತಾನೆ. ಸರಣಿ ಕೊ&amp;amp;ಲೆಗಳು, ಅವುಗಳ ಹಿಂದಿನ ರಹಸ್ಯ ಸೇರಿದಂತೆ ಪೊಲೀಸ್ ತನಿಖೆ ಹೇಗೆ ನಡೆಯುತ್ತೆ ಎಂಬುದನ್ನು ಈ ಸಸ್ಪೆನ್ಸ್ ಸಿನಿಮಾದಲ್ಲಿ ವೀಕ್ಷಿಸಬಹುದು.&lt;/p&gt;&lt;img&gt;&lt;p&gt;ತಮಿಳಿನ ಸ್ಟೀಫನ್ ಸಿನಿಮಾದ ಬಗ್ಗೆ ನಾವು ಹೇಳುತ್ತಿದ್ದೇವೆ. ಹಂತಕ ಸ್ಟೀಫನ್ ಜಬರಾಜ್ ಸುತ್ತವೇ ಈ ಚಿತ್ರದ ಕಥೆ ಸಾಗುತ್ತದೆ. ಚಿತ್ರದಲ್ಲಿನ ಅನಿರೀಕ್ಷಿತ ತಿರುವುಗಳು ನಿಮ್ಮನ್ನು ಕುರ್ಚಿಯ ತುದಿಗೆ ತಂದು ಕೂರಿಸುತ್ತದೆ. ಪ್ರೇಕ್ಷಕರು ಸುಲಭವಾಗಿ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಕಥೆಯನ್ನು ತೆರೆ ಮೇಲೆ ತೆಗೆದುಕೊಂಡು ಬರಲಾಗಿದೆ.&lt;/p&gt;&lt;img&gt;&lt;p&gt;ಸ್ಟೀಫನ್ ಯಾಕೆ ಈ ಕೊ*ಲೆ ಮಾಡುತ್ತಿದ್ದ? ಸ್ಟೀಫನ್&zwnj;ನ ಗತಕಾಲದಲ್ಲಿ ಏನಾಗಿತ್ತು? ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದ ಆಘಾತಕಾರಿ ಮಾಹಿತಿ ಏನು? ಎಂಬುದೇ ಸಿನಿಮಾದ ಪ್ರಮುಖ ಪ್ರಶ್ನೆಗಳಾಗಿವೆ. ನ್ಯಾಯಾಲಯದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಳ್ಳುವುದು ಕಥೆಗೆ ಮತ್ತಷ್ಟು ರೋಚಕತೆಯನ್ನು ನೀಡುತ್ತದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ನೀವು ಸ್ಟೀಫನ್ ಸಿನಿಮಾವನ್ನು ನೋಡಬೇಕಾಗುತ್ತದೆ.&lt;/p&gt;&lt;img&gt;&lt;p&gt;ಮಿಥುನ್ ಬಾಲಾಜಿ ನಿರ್ದೇಶನದ ಈ ಸಿನಿಮಾದಲ್ಲಿ ಸ್ಟೀಫನ್ ಆಗಿ ಗೋಮತಿ ಶಂಕರ್ ನಟಿಸಿದ್ದಾರೆ. ಮೈಕೆಲ್ ತಂಗದುರೈ, ಸ್ಮೃತಿ ವೆಂಕಟ್, ಕುಬೇರನ್, ವಿಜಯಶ್ರೀ, ಅಮರ ರಮೇಶ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲೂ ಈ ಚಿತ್ರವನ್ನು ನೋಡಬಹುದು. ನೆಟ್&zwnj;ಫ್ಲಿಕ್ಸ್&zwnj;ನಲ್ಲಿ ಸ್ಟೀಫನ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.&lt;/p&gt;]]></content:encoded>
            <category><![CDATA[movie-reviews]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/movie-reviews/tamil-movie-stephen-based-on-a-true-incident-that-took-place-in-kerala-in-2021-is-on-netflix-ott-mrq-neig6p0"/>
        </item>
        <item>
            <title><![CDATA[Shocking: ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಬ್ಯಾಗ್‌ನಲ್ಲಿ ತಲೆಬುರಡೆ ಪತ್ತೆ!]]></title>
            <link>https://kannada.asianetnews.com/india-news/passenger-with-skull-in-hand-luggage-detained-at-delhi-igi-airport/articleshow-w9r7t8o</link>
            <guid isPermaLink="true">https://kannada.asianetnews.com/india-news/passenger-with-skull-in-hand-luggage-detained-at-delhi-igi-airport/articleshow-w9r7t8o</guid>
            <pubDate>Thu, 13 Aug 2026 09:51:04 +0530</pubDate>
            <description><![CDATA[ಆಗಸ್ಟ್ 10 ರಂದು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿ, ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ತಲೆಬುರುಡೆಯೊಂದನ್ನು ಪತ್ತೆ ಮಾಡಿದ್ದಾರೆ. ಹೈದರಾಬಾದ್‌ಗೆ ಹೊರಟಿದ್ದ ಈ ಪ್ರಯಾಣಿಕ, ಅದು ಕೋತಿಯ ತಲೆಬುರುಡೆ ಎಂದು ಹೇಳಿಕೊಂಡಿದ್ದಾನೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-a8b48dbe-f768-48c5-9211-e346a5b67c7c.jpg" type="image/jpeg" height="390" width="690"/>
            <content:encoded><![CDATA[&lt;p&gt;ದೆಹಲಿ(ಆ.13): ಹೊಸದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ಪ್ರಯಾಣಿಕರೊಬ್ಬರ ಹ್ಯಾಂಡ್ ಬ್ಯಾಗ್&zwnj;ನಲ್ಲಿ ಬಚ್ಚಿಟ್ಟಿದ್ದ ತಲೆಬುರುಡೆಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಆಗಸ್ಟ್ 10 ರಂದು ಈ ಘಟನೆ ನಡೆದಿದೆ. ದೆಹಲಿಯಿಂದ ಹೈದರಾಬಾದ್&zwnj;ಗೆ ಪ್ರಯಾಣಿಸಲು ಸಿದ್ಧನಾಗಿದ್ದ ವ್ಯಕ್ತಿಯ ಬ್ಯಾಗೇಜ್&zwnj;ನ್ನು ಭದ್ರತಾ ತಪಾಸಣೆ ಮಾಡುವಾಗ ಸಿಐಎಸ್&zwnj;ಎಫ್ ಸಿಬ್ಬಂದಿಗೆ ಈ ಅನುಮಾನಾಸ್ಪದ ವಸ್ತು ಸಿಕ್ಕಿದೆ. ತೆಗೆದು ನೋಡಿದಾಗ ತಲೆಬುರುಡೆ ಕಂಡು ಭದ್ರತಾ ಸಿಬ್ಬಂದಿ ಕ್ಷಣಕಾಲ ಬೆಚ್ಚಿಬಿದ್ದಿದ್ದಾರೆ.&lt;/p&gt;&lt;p&gt;ಪ್ರಯಾಣಿಕನ ಹ್ಯಾಂಡ್ ಬ್ಯಾಗೇಜ್ ಸ್ಕ್ಯಾನ್ ಮಾಡುವಾಗ, ಭದ್ರತಾ ಸಿಬ್ಬಂದಿ ಲಗೇಜ್&zwnj;ನೊಳಗೆ ಅನುಮಾನಾಸ್ಪದ ವಸ್ತು ಗಮನಿಸಿದ್ದಾರೆ. ನಂತರ ಸಿಐಎಸ್&zwnj;ಎಫ್(CISF) ಸಿಬ್ಬಂದಿ ಅದನ್ನು ಪರಿಶೀಲಿಸಿದಾಗ ಅದು ತಲೆಬುರುಡೆ ಎಂಬುದು ಗೊತ್ತಾಗಿದೆ. ಈ ಬಗ್ಗೆ ಅಧಿಕಾರಿಗಳು ಪ್ರಯಾಣಿಕನನ್ನು ಪ್ರಶ್ನಿಸಿದ್ದಾರೆ. ಆಗ ಆತ ಅದು ಕೋತಿಯ ತಲೆಬುರುಡೆ ಎಂದು ಹೇಳಿಕೆ ನೀಡಿದ್ದಾನೆ.&lt;/p&gt;&lt;p&gt;ಸಿಕ್ಕಿರುವ ಈ ತಲೆಬುರಡೆ ಸಂರಕ್ಷಿತ ವನ್ಯಜೀವಿಗೆ ಸಂಬಂಧಿಸಿರಬಹುದು ಎಂಬ ಸಾಧ್ಯತೆ ಹಿನ್ನೆಲೆ ಸಿಐಎಸ್&zwnj;ಎಫ್ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಹೆಚ್ಚಿನ ಕಾನೂನು ಕ್ರಮಕ್ಕಾಗಿ ಪ್ರಯಾಣಿಕನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.&lt;/p&gt;&lt;p&gt;ಈ ಪ್ರಕರಣವನ್ನು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಅಡಿಯಲ್ಲಿ ನಿಭಾಯಿಸಲಾಗುತ್ತಿದೆ. ಈ ಕಾಯ್ದೆಯು ವನ್ಯಜೀವಿಗಳಿಗೆ ಕಾನೂನುಬದ್ಧ ರಕ್ಷಣೆ ನೀಡುತ್ತದೆ ಮತ್ತು ನಿರ್ದಿಷ್ಟ ವನ್ಯಜೀವಿ ವಸ್ತುಗಳು ಹಾಗೂ ಪ್ರಾಣಿಗಳ ಭಾಗಗಳ ಸಾಗಾಟ, ವ್ಯಾಪಾರ ಮತ್ತು ಬಳಕೆಯನ್ನು ನಿಯಂತ್ರಿಸುತ್ತದೆ.&lt;/p&gt;&lt;p&gt;ಮುಂದುವರಿದ ತನಿಖೆ&lt;/p&gt;&lt;p&gt;ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಇಲ್ಲಿ, ಭದ್ರತಾ ಸಿಬ್ಬಂದಿ ಎಷ್ಟು ಜಾಗರೂಕರಾಗಿರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ವಿಮಾನಯಾನ ಭದ್ರತಾ ಕಾರ್ಯವಿಧಾನಗಳ ಭಾಗವಾಗಿ ಸಿಐಎಸ್&zwnj;ಎಫ್ ಸಿಬ್ಬಂದಿ, ಅನುಮಾನಾಸ್ಪದ ಮತ್ತು ನಿಷೇಧಿತ ವಸ್ತುಗಳನ್ನು ಗುರುತಿಸಲು ವಿಶೇಷ ತರಬೇತಿ ಪಡೆದಿರುತ್ತಾರೆ.&lt;/p&gt;&lt;p&gt;ಈ ಪ್ರಕರಣದಲ್ಲಿ, ಪ್ರಯಾಣಿಕ ಬೋರ್ಡಿಂಗ್&zwnj;ಗೆ ಹೋಗುವ ಮುನ್ನವೇ ಬ್ಯಾಗೇಜ್ ಸ್ಕ್ಯಾನಿಂಗ್ ವೇಳೆ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಅದು ಪ್ರಾಣಿಯ ತಲೆಬುರುಡೆ ಎಂದು ಖಚಿತವಾದ ನಂತರ, ಪ್ರಯಾಣಿಕನಿಗೆ ಪ್ರಯಾಣ ಮುಂದುವರಿಸಲು ಅನುಮತಿ ನೀಡಿಲ್ಲ. ಬದಲಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳ ಅಡಿಯಲ್ಲಿ ತನಿಖೆ ಮತ್ತು ಸೂಕ್ತ ಕ್ರಮಕ್ಕಾಗಿ ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ವಹಿಸಲಾಗಿದೆ.&lt;/p&gt;&lt;p&gt;ಅಧಿಕಾರಿಗಳು ಈಗ ತಲೆಬುರುಡೆಯ ನಿಖರ ಸ್ವರೂಪ ಮತ್ತು ಮೂಲವನ್ನು ಪತ್ತೆಹಚ್ಚಲಿದ್ದಾರೆ. ಜೊತೆಗೆ ಅದನ್ನು ಯಾವ ಸಂದರ್ಭಗಳಲ್ಲಿ ಪಡೆಯಲಾಗಿದೆ ಮತ್ತು ಪ್ರಯಾಣಿಕನ ಬ್ಯಾಗೇಜ್&zwnj;ನಲ್ಲಿ ಏಕೆ ಸಾಗಿಸಲಾಗುತ್ತಿತ್ತು ಎಂಬುದನ್ನು ಪರಿಶೀಲಿಸಲಿದ್ದಾರೆ. ಸದ್ಯ ಪ್ರಯಾಣಿಕನ ಗುರುತು, ತಲೆಬುರುಡೆಯ ಮೂಲ ಮತ್ತು ಪ್ರಕರಣದಲ್ಲಿ ದಾಖಲಾದ ನಿಖರ ಸೆಕ್ಷನ್&zwnj;ಗಳ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.&lt;/p&gt;&lt;p&gt;ವಿಮಾನ ನಿಲ್ದಾಣಗಳ ಮೂಲಕ ವನ್ಯಜೀವಿಗಳು ಮತ್ತು ಅವುಗಳಿಂದ ತಯಾರಿಸಿದ ವಸ್ತುಗಳ ಅಕ್ರಮ ಸಾಗಾಟವನ್ನು ತಡೆಯಲು ಭದ್ರತಾ ಮತ್ತು ಜಾರಿ ಸಂಸ್ಥೆಗಳು ನಿರಂತರ ಪ್ರಯತ್ನಗಳನ್ನು ನಡೆಸುತ್ತಿವೆ. ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ಕಾಡು ಪ್ರಾಣಿಗಳನ್ನು ರಕ್ಷಿಸುವ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿ ಹೊಂದಿದೆ.&lt;/p&gt;&lt;p&gt;ಈ ಪ್ರಕರಣದಲ್ಲಿ ಮುಂದಿನ ಯಾವುದೇ ಕ್ರಮವು ಸಂಬಂಧಪಟ್ಟ ಅಧಿಕಾರಿಗಳು ನಡೆಸುವ ತನಿಖೆ ಮತ್ತು ವಶಪಡಿಸಿಕೊಂಡ ವಸ್ತುವಿನ ಪರಿಶೀಲನೆಯನ್ನು ಅವಲಂಬಿಸಿರುತ್ತದೆ. ಸದ್ಯ ಪ್ರಯಾಣಿಕನು ಸ್ಥಳೀಯ ಪೊಲೀಸರು ಮತ್ತು ಇತರ ಸಂಬಂಧಿತ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಒಳಪಟ್ಟಿದ್ದಾನೆ. (ANI)&lt;/p&gt;&lt;p&gt;(ಶೀರ್ಷಿಕೆ ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/passenger-with-skull-in-hand-luggage-detained-at-delhi-igi-airport/articleshow-w9r7t8o"/>
        </item>
        <item>
            <title><![CDATA[ಹುಬ್ಬಳ್ಳಿ-ವಾರಣಾಸಿ ರೈಲು ಸೇವೆ ವಾರಕ್ಕೆ 3 ದಿನ ವಿಸ್ತರಣೆ, ಯಾರಿಗೆಲ್ಲ ಅನುಕೂಲ? ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ!]]></title>
            <link>https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui</link>
            <guid isPermaLink="true">https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui</guid>
            <pubDate>Thu, 13 Aug 2026 09:49:03 +0530</pubDate>
            <description><![CDATA[ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿಗೆ ಸ್ಪಂದಿಸಿ, ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸಲು ಮತ್ತು ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಹೊಂದಿರುವ ಹುಬ್ಬಳ್ಳಿ ನಿಲ್ದಾಣವನ್ನು 'ಹೈಟೆಕ್' ಸೌಲಭ್ಯಗಳೊಂದಿಗೆ ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವು ಉತ್ತರ ಕರ್ನಾಟಕದ ಯಾತ್ರಿಕರು ಮತ್ತು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwnc2mn2dfwfs7a080me8tb,imgname-hubballi-railway-station-1786594593429.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹುಬ್ಬಳ್ಳಿ:&lt;/strong&gt; ಉತ್ತರ ಕರ್ನಾಟಕದ ಜನತೆಗೆ ಹಾಗೂ ಧಾರ್ಮಿಕ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಬಹುದಿನಗಳ ಬೇಡಿಕೆಯಾಗಿದ್ದ ಹುಬ್ಬಳ್ಳಿ-ವಾರಣಾಸಿ ರೈಲು (ರೈಲು ಸಂಖ್ಯೆ: 07323/07324) ಸೇವೆಯನ್ನು ಶೀಘ್ರದಲ್ಲೇ ವಾರಕ್ಕೆ ಮೂರು ದಿನಗಳಿಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ್ದಾರೆ. ಅಲ್ಲದೆ, ವಿಶ್ವದ ಅತಿ ಉದ್ದದ ಪ್ಲಾಟ್&zwnj;ಫಾರ್ಮ್ ಹೊಂದಿರುವ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅತ್ಯಾಧುನಿಕ 'ಹೈಟೆಕ್' ಸೌಲಭ್ಯಗಳೊಂದಿಗೆ ವಿಶ್ವದರ್ಜೆಗೆ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.&lt;/p&gt;&lt;h2&gt;ಪ್ರಹ್ಲಾದ್ ಜೋಶಿ ಮನವಿಗೆ ವೈಷ್ಣವ್ ಸಕಾರಾತ್ಮಕ ಸ್ಪಂದನೆ:&lt;/h2&gt;&lt;p&gt;ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಉತ್ತರ ಕರ್ನಾಟಕ ಹಾಗೂ ಪುಣ್ಯಕ್ಷೇತ್ರ ಕಾಶಿ (ವಾರಣಾಸಿ) ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವಂತೆ ಸುದೀರ್ಘ ಚರ್ಚೆ ನಡೆಸಿ ಮನವಿ ಪತ್ರ ಸಲ್ಲಿಸಿದರು. ಪ್ರಸ್ತುತ ವಾರಕ್ಕೆ ಒಂದು ದಿನ ಮಾತ್ರ ಸಂಚರಿಸುತ್ತಿರುವ ಹುಬ್ಬಳ್ಳಿ-ವಾರಣಾಸಿ ರೈಲು ಸೇವೆಯನ್ನು ಶೀಘ್ರದಲ್ಲೇ ಮೂರು ದಿನಗಳಿಗೆ ಹೆಚ್ಚಿಸುವಂತೆ ಒತ್ತಾಯಿಸಿದರು. ಜೋಶಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಶೀಘ್ರದಲ್ಲೇ ಹೆಚ್ಚುವರಿ ದಿನಗಳ ರೈಲು ಸಂಚಾರದ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ತಿಳಿಸಿದರು.&lt;/p&gt;&lt;h2&gt;ಯಾರಿಗೆಲ್ಲ ಅನುಕೂಲ?&lt;/h2&gt;&lt;p&gt;ಶ್ರಾವಣ ಮಾಸದ ಈ ಪವಿತ್ರ ಸಮಯದಲ್ಲಿ ಕಾಶಿ ಮತ್ತು ವಾರಣಾಸಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವ ಉತ್ತರ ಕರ್ನಾಟಕದ ಭಕ್ತಾದಿಗಳಿಗೆ ಈ ನಿರ್ಧಾರದಿಂದ ಅತ್ಯಂತ ಹೆಚ್ಚಿನ ಅನುಕೂಲವಾಗಲಿದೆ. ಕೇವಲ ಯಾತ್ರಿಕರು ಮಾತ್ರವಲ್ಲದೆ, ಪ್ರವಾಸಿಗರು, ಉದ್ಯೋಗಿಗಳು ಹಾಗೂ ವಾಣಿಜ್ಯ ಮತ್ತು ವ್ಯಾಪಾರ ಉದ್ದೇಶಕ್ಕಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೂ ರೈಲು ಸಂಚಾರದ ಆವರ್ತನ (Frequency) ಹೆಚ್ಚಳದಿಂದ ಸಾರಿಗೆ ಸಂಪರ್ಕ ಸುಲಭವಾಗಲಿದೆ.&lt;/p&gt;&lt;h2&gt;ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ 'ಹೈಟೆಕ್' ರೂಪಾಂತರ:&lt;/h2&gt;&lt;p&gt;ಇದೇ ವೇಳೆ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಮತ್ತಷ್ಟು ಆಧುನೀಕರಿಸಲು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ನಿಲ್ದಾಣದ ಆವರಣದಲ್ಲಿ ಸುಧಾರಿತ ಪಾರ್ಕಿಂಗ್ ವ್ಯವಸ್ಥೆ, ಮಲ್ಟಿಪ್ಲೆಕ್ಸ್, ಶಾಪಿಂಗ್ ಮಾಲ್, ರೆಸ್ಟೋರೆಂಟ್&zwnj;ಗಳು, ವಾಣಿಜ್ಯ ಮಳಿಗೆಗಳು ಹಾಗೂ ವಿಶ್ವದರ್ಜೆಯ ಪ್ರಯಾಣಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ಜೋಶಿ ಒತ್ತಾಯಿಸಿದ್ದು, ಇದನ್ನು ಪರಿಗಣಿಸಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ.&lt;/p&gt;&lt;h2&gt;ಪ್ರಧಾನಿ ಮೋದಿ ಹಾಗೂ ರೈಲ್ವೆ ಸಚಿವರಿಗೆ ಧನ್ಯವಾದ:&lt;/h2&gt;&lt;p&gt;ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಹಾಗೂ ಯಾತ್ರಿಕರ ಹಿತದೃಷ್ಟಿಯಿಂದ ಈ ಪ್ರಮುಖ ನಿರ್ಧಾರ ಕೈಗೊಂಡಿದ್ದಕ್ಕಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/hubballi-varanasi-train-service-increased-to-3-days-a-week-high-tech-upgrade-approved-for-hubballi-railway-station-gdp/articleshow-p6x78ui"/>
        </item>
        <item>
            <title><![CDATA[ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಭಾರತಕ್ಕೆ ಮತ್ತೊಂದು ಶಾಕ್! ಬುಮ್ರಾ, ಸುದರ್ಶನ್ ಬಳಿಕ ಮತ್ತೋರ್ವ ಆಟಗಾರ ಕೂಡ ಔಟ್]]></title>
            <link>https://kannada.asianetnews.com/cricket-sports/india-suffer-another-injury-blow-ahead-of-sri-lanka-test-series-washington-sundar-set-to-miss-kvn/articleshow-9yzsitp</link>
            <guid isPermaLink="true">https://kannada.asianetnews.com/cricket-sports/india-suffer-another-injury-blow-ahead-of-sri-lanka-test-series-washington-sundar-set-to-miss-kvn/articleshow-9yzsitp</guid>
            <pubDate>Thu, 13 Aug 2026 09:47:18 +0530</pubDate>
            <description><![CDATA[ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ, ಜಸ್ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಬಳಿಕ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಗಾಯದ ಕಾರಣ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಪ್ರಮುಖ ಆಟಗಾರರ ಅಲಭ್ಯತೆ ತಂಡಕ್ಕೆ ಸವಾಲಾಗಿದ್ದರೂ, ಅಭ್ಯಾಸ ಪಂದ್ಯದಲ್ಲಿನ ಜಯವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfnj4zjajsev8e8gedgqvbsz,imgname-gettyimages-1898647786-1769176464969.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೊಲಂಬೊ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಟೀಂ ಇಂಡಿಯಾಗೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಬ್ಯಾಟರ್ ಸಾಯಿ ಸುದರ್ಶನ್ ಈಗಾಗಲೇ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಈಗ ಆಲ್&zwnj;ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಗಾಯದ ಕಾರಣ ಇಡೀ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.&lt;/p&gt;&lt;h2&gt;&lt;strong&gt;ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಸುಂದರ್&lt;/strong&gt;&lt;/h2&gt;&lt;p&gt;ಇಂಗ್ಲೆಂಡ್ ಪ್ರವಾಸದ ವೇಳೆ ಸುಂದರ್&zwnj;ಗೆ ಹ್ಯಾಮ್&zwnj;ಸ್ಟ್ರಿಂಗ್ ಇಂಜುರಿ ಆಗಿತ್ತು. ಅದರಿಂದ ಅವರು ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಮೊದಲ ಟೆಸ್ಟ್&zwnj;ನಿಂದ ಅವರನ್ನು ಕೈಬಿಡಲಾಗಿತ್ತು. ಎರಡನೇ ಟೆಸ್ಟ್&zwnj;ನಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಸಿಸಿಐ ವೈದ್ಯಕೀಯ ತಂಡ ಮತ್ತು ಟೀಮ್ ಮ್ಯಾನೇಜ್&zwnj;ಮೆಂಟ್, ಸುಂದರ್ ಅವರನ್ನು ಆಡಿಸಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದೆ. ಸದ್ಯ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್&zwnj;ನಲ್ಲಿರುವ ಸುಂದರ್ ಬಗ್ಗೆ ಮುಂದಿನ ವಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.&lt;/p&gt;&lt;p&gt;ಈ ಮೊದಲು, ಕಾಲ್ಬೆರಳಿನ ಗಾಯದಿಂದಾಗಿ ಹೊರಗುಳಿದಿದ್ದ ಸಾಯಿ ಸುದರ್ಶನ್ ಬದಲಿಗೆ ಮುಂಬೈ ಬ್ಯಾಟರ್ ಸರ್ಫರಾಜ್ ಖಾನ್&zwnj;ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಗೆ ಅವಕಾಶ ನೀಡಲಾಗಿತ್ತು.&lt;/p&gt;&lt;p&gt;ಆಗಸ್ಟ್ 15 ರಂದು ಗಾಲೆಯಲ್ಲಿ ಮೊದಲ ಟೆಸ್ಟ್ ಮತ್ತು ಆಗಸ್ಟ್ 23 ರಂದು ಕೊಲಂಬೊದಲ್ಲಿ ಎರಡನೇ ಟೆಸ್ಟ್ ಆರಂಭವಾಗಲಿದೆ. ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಂಡಕ್ಕೆ ಸವಾಲಾಗಿದೆ. ಆದರೂ, ಶ್ರೀಲಂಕನ್ ಕ್ರಿಕೆಟ್ XI ವಿರುದ್ಧ ನಡೆದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರ ಶತಕದ (142) ನೆರವಿನಿಂದ ಭಾರತ 6 ವಿಕೆಟ್&zwnj;ಗಳ ಭರ್ಜರಿ ಜಯ ಸಾಧಿಸಿದೆ. ಇದು ನಾಯಕ ಶುಭಮನ್ ಗಿಲ್ ಮತ್ತು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.&lt;/p&gt;&lt;h3&gt;&lt;strong&gt;ಶ್ರೀಲಂಕಾ ಎದುರಿನ ಮೊದಲ ಟೆಸ್ಟ್&zwnj;ಗೆ ಭಾರತ ಸಂಭಾವ್ಯ ತಂಡ ಹೀಗಿದೆ:&lt;/strong&gt;&lt;/h3&gt;&lt;p&gt;ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್&zwnj;ಮನ್ ಗಿಲ್(ನಾಯಕ), ರಿಷಭ್ ಪಂತ್, ಸರ್ಫರಾಜ್ ಖಾನ್/ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಸಾರಾನ್ಶ್&zwnj; ಜೈನ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಗುರ್ನೂರ್ ಬ್ರಾರ್/ಪ್ರಸಿದ್ದ್ ಕೃಷ್ಣ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-suffer-another-injury-blow-ahead-of-sri-lanka-test-series-washington-sundar-set-to-miss-kvn/articleshow-9yzsitp"/>
        </item>
        <item>
            <title><![CDATA[ಇದು ಸಾಮಾನ್ಯ ಸಂಚಾರವಲ್ಲ, ಮಂಗಳನಿಂದ ಅಪರೂಪದ ಯೋಗ, 5 ರಾಶಿಗಳಿಗೆ ಜಾಕ್‌ಪಾಟ್]]></title>
            <link>https://kannada.asianetnews.com/gallery/astrology/mars-transit-in-gemini-2026-creates-rare-yoga-for-5-zodiac-signs-suh-ri3x32n</link>
            <guid isPermaLink="true">https://kannada.asianetnews.com/gallery/astrology/mars-transit-in-gemini-2026-creates-rare-yoga-for-5-zodiac-signs-suh-ri3x32n</guid>
            <pubDate>Thu, 13 Aug 2026 09:36:43 +0530</pubDate>
            <description><![CDATA[ಮಂಗಳನ ಅಪರೂಪದ ಸಂಚಾರದಿಂದಾಗಿ ಒಂದು ವಿಶೇಷ ಯೋಗ ಸೃಷ್ಟಿಯಾಗುತ್ತಿದೆ. ಇದು 5 ರಾಶಿಯವರ ಜೀವನದಲ್ಲಿ ದೊಡ್ಡ ತಿರುವುಗಳನ್ನು ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವೃತ್ತಿ, ಹಣಕಾಸು, ಹೊಸ ಪ್ರಯತ್ನಗಳು ಹೀಗೆ ಹಲವು ವಿಷಯಗಳಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆಯೇ?]]></description>
            <media:content url="https://static.asianetnews.com/images/w-1280,h-720,format-jpg,imgid-01kzaswnbghz7cb579p8jed5p5,imgname-jupiter-mars-conjunction-2026-1785995351407.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳನ ಅಪರೂಪದ ಸಂಚಾರದಿಂದಾಗಿ ಒಂದು ವಿಶೇಷ ಯೋಗ ಸೃಷ್ಟಿಯಾಗುತ್ತಿದೆ. ಇದು 5 ರಾಶಿಯವರ ಜೀವನದಲ್ಲಿ ದೊಡ್ಡ ತಿರುವುಗಳನ್ನು ತರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ವೃತ್ತಿ, ಹಣಕಾಸು, ಹೊಸ ಪ್ರಯತ್ನಗಳು ಹೀಗೆ ಹಲವು ವಿಷಯಗಳಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆಯೇ?&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ಮಂಗಳನನ್ನು ಧೈರ್ಯ, ಶಕ್ತಿ, ಕ್ರಿಯಾಶೀಲತೆ, ಭೂಮಿ, ತಂತ್ರಜ್ಞಾನ, ಸ್ಪರ್ಧೆ ಮತ್ತು ಚೈತನ್ಯದ ಕಾರಕ ಎಂದು ಪರಿಗಣಿಸಲಾಗುತ್ತದೆ. ಮಂಗಳ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಾಗಿದಾಗ, ಅದು ಕೇವಲ ಆ ರಾಶಿಯವರ ಮೇಲೆ ಮಾತ್ರವಲ್ಲದೆ, ಉಳಿದ ರಾಶಿಗಳ ಜೀವನದ ಮೇಲೂ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದು ಜ್ಯೋತಿಷ್ಯದ ನಂಬಿಕೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2026ರ ಆಗಸ್ಟ್ 2ರಂದು ರಾತ್ರಿ ಸುಮಾರು 10:59ಕ್ಕೆ ಮಂಗಳ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಈ ಸಂಚಾರವು ಸುಮಾರು ಸೆಪ್ಟೆಂಬರ್ ಮಧ್ಯದವರೆಗೆ ಮಿಥುನ ರಾಶಿಯಲ್ಲಿ ಮುಂದುವರಿಯುತ್ತದೆ. ಮಿಥುನ ರಾಶಿಯು ಬುಧನ ಆಳ್ವಿಕೆಗೆ ಒಳಪಟ್ಟಿದೆ. ಜ್ಯೋತಿಷ್ಯದಲ್ಲಿ ಇದನ್ನು ಮಾತು, ಸಂವಹನ, ಬುದ್ಧಿವಂತಿಕೆ, ಕಲಿಕೆ, ಪ್ರಯಾಣ ಮತ್ತು ವ್ಯಾಪಾರ ಸಂಪರ್ಕಗಳೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ.&lt;/p&gt;&lt;p&gt;ಹಾಗಾಗಿ, ಮಂಗಳನ ಶಕ್ತಿಯು ಮಿಥುನ ರಾಶಿಯಲ್ಲಿರುವುದು, ನಮ್ಮ ಆಲೋಚನೆ ಮತ್ತು ಕ್ರಿಯೆ ಎರಡಕ್ಕೂ ವೇಗ ನೀಡುವ ಸಮಯವೆಂದು ನೋಡಲಾಗುತ್ತದೆ. ಈ ಸಂಚಾರ ಯಾಕೆ ಮುಖ್ಯ?ಈ ಸಂಚಾರದ ಆರಂಭದಲ್ಲಿ ಮಂಗಳನ ಜೊತೆ ಬುಧನ ಸಂಯೋಗವು ಅಲ್ಪಾವಧಿಗೆ ಉಂಟಾಗಿತ್ತು. ಆಗಸ್ಟ್ 5ರ ಸುಮಾರಿಗೆ ಬುಧನು ಕಟಕ ರಾಶಿಗೆ ಸಾಗಿದ್ದರಿಂದ, ಆ ಸಂಯೋಗ ಹೆಚ್ಚು ಕಾಲ ಉಳಿಯಲಿಲ್ಲ. ಆದರೂ, ಆ ಅವಧಿಯು ಮಾತುಕತೆ, ನಿರ್ಧಾರ ಕೈಗೊಳ್ಳುವಿಕೆ, ವ್ಯಾಪಾರ ಯೋಜನೆಗಳು ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ಹೆಚ್ಚಿನ ವೇಗವನ್ನು ಸೃಷ್ಟಿಸುವ ಸಮಯವಾಗಿತ್ತು ಎಂದು ಜ್ಯೋತಿಷ್ಯ ವಿಶ್ಲೇಷಣೆಗಳು ಹೇಳುತ್ತವೆ. ಇದರಿಂದಾಗಿ, &quot;ಅವಕಾಶ ಸಿಕ್ಕಾಗ ತಕ್ಷಣ ಬಳಸಿಕೊಳ್ಳಬೇಕು&quot; ಎಂಬ ಮನಸ್ಥಿತಿ ಕೆಲವರಲ್ಲಿ ಹೆಚ್ಚಾಗಬಹುದು. ಅದೇ ಸಮಯದಲ್ಲಿ, ಆತುರದ ನಿರ್ಧಾರಗಳು ಮತ್ತು ಕೋಪದಲ್ಲಿ ಮಾತನಾಡುವಂತಹ ವಿಷಯಗಳಲ್ಲಿ ಎಚ್ಚರಿಕೆ ಕೂಡಾ ಅಗತ್ಯ.&lt;/p&gt;&lt;img&gt;&lt;p&gt;ಧೈರ್ಯದ ನಿರ್ಧಾರಗಳಿಗೆ ಗೆಲುವು! ಮೇಷ ರಾಶಿಗೆ ಮಂಗಳನೇ ಅಧಿಪತಿಯಾಗಿರುವುದರಿಂದ, ಈ ಸಂಚಾರವು ನಿಮಗೆ ಹೆಚ್ಚಿನ ಪ್ರೇರಣೆ ನೀಡಲಿದೆ. ಬಹಳ ದಿನಗಳಿಂದ ಮುಂದೂಡಿದ್ದ ಒಂದು ಪ್ರಯತ್ನವನ್ನು ಮತ್ತೆ ಶುರು ಮಾಡುವ ಯೋಚನೆ ಬರಬಹುದು. ಕೆಲಸಕ್ಕೆ ಸಂಬಂಧಿಸಿದ ಹೊಸ ಜವಾಬ್ದಾರಿಗಳು, ಪ್ರಯಾಣ, ಸಂಪರ್ಕಗಳು ಅಥವಾ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶಗಳು ಸೃಷ್ಟಿಯಾಗಬಹುದು. ಅದರಲ್ಲೂ ಮಾತು ಮತ್ತು ಸಂವಹನದ ಮೂಲಕ ಸಿಗುವ ಅವಕಾಶಗಳು ನಿಮಗೆ ಲಾಭ ತರಬಹುದು. ಆದರೆ ಒಂದೇ ಒಂದು ವಿಷಯದಲ್ಲಿ ಗಮನವಿರಲಿ: ವೇಗವಾಗಿ ಮಾತನಾಡಿ ನಂತರ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳಿ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ಮಿಥುನದಲ್ಲಿರುವ ಮಂಗಳ, ನಿಮ್ಮ ಸಾಮಾಜಿಕ ವಲಯ ಮತ್ತು ಗುರಿಗಳ ಕಡೆಗಿನ ಚಟುವಟಿಕೆಯನ್ನು ಬಲಪಡಿಸುವ ಸಮಯವಾಗಿದೆ. ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಹಳೆಯ ಸಂಪರ್ಕಗಳ ಮೂಲಕ ಹೊಸ ಅವಕಾಶಗಳು ಬರಬಹುದು. ವೃತ್ತಿ ಅಥವಾ ವ್ಯಾಪಾರದಲ್ಲಿ ನೆಟ್ವರ್ಕಿಂಗ್ ಪ್ರಮುಖ ಪಾತ್ರ ವಹಿಸಬಹುದು. ವಿಶೇಷವಾಗಿ ಆನ್&zwnj;ಲೈನ್ ಕೆಲಸ, ಮಾಧ್ಯಮ, ಸಂವಹನ, ಮಾರಾಟ, ಮಾರ್ಕೆಟಿಂಗ್&zwnj;ನಂತಹ ಕ್ಷೇತ್ರಗಳಲ್ಲಿರುವವರಿಗೆ ಹೊಸ ಪ್ರಯತ್ನಗಳನ್ನು ಕೈಗೊಳ್ಳುವ ಸನ್ನಿವೇಶ ಸೃಷ್ಟಿಯಾಗಬಹುದು.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರಿಗೆ ಈ ಅವಧಿಯು ಕೆಲಸ ಮತ್ತು ವೃತ್ತಿ ಸಂಬಂಧಿತ ವಿಷಯಗಳಲ್ಲಿ ಗಮನ ಹರಿಸಬೇಕಾದ ಸಮಯವಾಗಿರಬಹುದು. ನೀವು ಇದುವರೆಗೆ ಸದ್ದಿಲ್ಲದೆ ಮಾಡುತ್ತಿದ್ದ ಕೆಲಸವನ್ನು ಇತರರು ಗಮನಿಸಲು ಪ್ರಾರಂಭಿಸಬಹುದು. ಹೊಸ ಜವಾಬ್ದಾರಿ, ಹೊಸ ಪ್ರಾಜೆಕ್ಟ್ ಅಥವಾ ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಅವಕಾಶ ಸಿಗಬಹುದು. &quot;ಇದನ್ನು ನಾನು ಮಾಡಲು ಸಾಧ್ಯವೇ?&quot; ಎಂಬ ಅನುಮಾನಕ್ಕಿಂತ &quot;ಒಂದು ಬಾರಿ ಪ್ರಯತ್ನಿಸಿ ನೋಡೋಣ&quot; ಎಂಬ ಆಲೋಚನೆ ಯಶಸ್ಸಿನ ಬಾಗಿಲನ್ನು ತೆರೆಯಬಹುದು.&lt;/p&gt;&lt;img&gt;&lt;p&gt;ತುಲಾ ರಾಶಿಯವರಿಗೆ ಮಿಥುನದಲ್ಲಿರುವ ಮಂಗಳ, ಉನ್ನತ ಶಿಕ್ಷಣ, ದೂರದ ಪ್ರಯಾಣ, ಹೊಸ ಜ್ಞಾನ ಮತ್ತು ಜೀವನವನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು. ಬೇರೆ ಊರು ಅಥವಾ ವಿದೇಶಕ್ಕೆ ಸಂಬಂಧಿಸಿದ ಅವಕಾಶಗಳು, ಹೊಸ ಕೋರ್ಸ್, ಸರ್ಟಿಫಿಕೇಟ್ ಕೋರ್ಸ್ ಅಥವಾ ವೃತ್ತಿಪರ ಕೌಶಲ್ಯವನ್ನು ಸುಧಾರಿಸುವ ಪ್ರಯತ್ನಗಳತ್ತ ನಿಮ್ಮ ಗಮನ ಹೋಗಬಹುದು. ಕೆಲವರಿಗೆ, ಬಹಳ ದಿನಗಳಿಂದ ಯೋಜಿಸುತ್ತಿದ್ದ ಪ್ರಯಾಣ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಯತ್ನವನ್ನು ಪ್ರಾರಂಭಿಸುವ ಅವಕಾಶ ಸಿಗಬಹುದು.&lt;/p&gt;&lt;img&gt;&lt;p&gt;ಮಂಗಳನು ವೃಶ್ಚಿಕ ರಾಶಿಯ ಅಧಿಪತಿಯೂ ಆಗಿರುವುದರಿಂದ, ಈ ಸಂಚಾರವು ನಿಮಗೆ ಮಾನಸಿಕವಾಗಿ ಹೆಚ್ಚಿನ ಕ್ರಿಯಾಶೀಲತೆಯನ್ನು ನೀಡಬಹುದು. ಸಾಲ, ಹೂಡಿಕೆ, ಜಂಟಿ ನಿಧಿ, ವಿಮೆಯಂತಹ ವಿಷಯಗಳಲ್ಲಿ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಅದೇ ಸಮಯದಲ್ಲಿ, ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತಪ್ಪಿಸುವುದು ಬಹಳ ಮುಖ್ಯ. ಹೆಚ್ಚು ಲಾಭ ಸಿಗುತ್ತದೆ ಎಂಬ ಆಸೆಯಲ್ಲಿ, ಅರ್ಥವಾಗದ ಹೂಡಿಕೆಗಳಲ್ಲಿ ಹಣ ಹಾಕದೆ, ಸಂಪೂರ್ಣವಾಗಿ ಸಂಶೋಧನೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/mars-transit-in-gemini-2026-creates-rare-yoga-for-5-zodiac-signs-suh-ri3x32n"/>
        </item>
        <item>
            <title><![CDATA[ಕಣಿವೆ ನಾಡಲ್ಲಿ ಮತ್ತೆ ಕ್ರಿಕೆಟ್ ಕಹಳೆ: 40 ವರ್ಷಗಳ ಬಳಿಕ ಮತ್ತೆ ಮಹತ್ವದ ಕ್ರಿಕೆಟ್‌ ಪಂದ್ಯ!]]></title>
            <link>https://kannada.asianetnews.com/cricket-sports/irani-cup-final-to-be-held-in-kashmir-after-40-years-srinagar-to-host-j-and-k-vs-rest-of-india-kvn/articleshow-elipz5c</link>
            <guid isPermaLink="true">https://kannada.asianetnews.com/cricket-sports/irani-cup-final-to-be-held-in-kashmir-after-40-years-srinagar-to-host-j-and-k-vs-rest-of-india-kvn/articleshow-elipz5c</guid>
            <pubDate>Thu, 13 Aug 2026 09:30:45 +0530</pubDate>
            <description><![CDATA[ಬರೋಬ್ಬರಿ 40 ವರ್ಷಗಳ ಬಳಿಕ, ಶ್ರೀನಗರದ ಶೇರ್‌ ಎ ಕಾಶ್ಮೀರ ಕ್ರೀಡಾಂಗಣವು ಇರಾನಿ ಕಪ್ ಫೈನಲ್‌ಗೆ ಆತಿಥ್ಯ ವಹಿಸುವ ಮೂಲಕ ಪ್ರಮುಖ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಈ ಪಂದ್ಯವು ಹಾಲಿ ರಣಜಿ ಚಾಂಪಿಯನ್‌ ಜಮ್ಮು-ಕಾಶ್ಮೀರ ಮತ್ತು ರೆಸ್ಟ್‌ ಆಫ್‌ ಇಂಡಿಯಾ ತಂಡಗಳ ನಡುವೆ ನಡೆಯಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjjdfj1tgse14bwws13t2d4k,imgname-jammu-and-kashmir-ranji-trophy-1772292130873.jpeg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀನಗರ: ಬರೋಬ್ಬರಿ 40 ವರ್ಷಗಳ ಬಳಿಕ ಮತ್ತೊಮ್ಮೆ ಕಾಶ್ಮೀರ ಪ್ರಮುಖ ಕ್ರಿಕೆಟ್&zwnj; ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಬಾರಿ ಇರಾನಿ ಕಪ್&zwnj; ದೇಸಿ ಕ್ರಿಕೆಟ್&zwnj; ಟೂರ್ನಿಯಲ್ಲಿ ಹಾಲಿ ರಣಜಿ ಚಾಂಪಿಯನ್&zwnj; ಜಮ್ಮು-ಕಾಶ್ಮೀರ ಹಾಗೂ ರೆಸ್ಟ್&zwnj; ಆಫ್&zwnj; ಇಂಡಿಯಾ(ಶೇಷ ಭಾರತ) ತಂಡಗಳ ನಡುವಿನ ಫೈನಲ್&zwnj; ಪಂದ್ಯ ಅ.1ರಿಂದ 5ರ ವರೆಗೆ ಶ್ರೀನಗರದ ಶೇರ್&zwnj; ಎ ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆಯಲಿದೆ.&lt;/p&gt;&lt;p&gt;1986ರಲ್ಲಿ ಸೆಪ್ಟೆಂಬರ್&zwnj;ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಈ ಕ್ರೀಡಾಂಗಣದಲ್ಲಿ ಕೊನೆ ಬಾರಿ ಏಕದಿನ ಪಂದ್ಯ ನಡೆದಿತ್ತು. ಆ ಬಳಿಕ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಾಶ್ಮೀರ ಆತಿಥ್ಯ ವಹಿಸಿಲ್ಲ. ದೇಸಿ ಕ್ರಿಕೆಟ್&zwnj; ಟೂರ್ನಿಯ ಪ್ರಮುಖ ಪಂದ್ಯಗಳೂ ಕಾಶ್ಮೀರದಲ್ಲಿ ನಡೆದಿರಲಿಲ್ಲ. ಆದರೆ ಈ ಬಾರಿ ರಣಜಿ ಟ್ರೋಫಿಯಲ್ಲಿ ಜಮ್ಮು-ಕಾಶ್ಮೀರ ಚಾಂಪಿಯನ್&zwnj; ಆಗಿರುವುದರಿಂದ, ಅದರದೇ ತವರಿನಲ್ಲಿ ಇರಾನಿ ಕಪ್&zwnj; ಫೈನಲ್&zwnj; ಆಯೋಜನೆಗೊಳ್ಳಲಿದೆ. 2025-26ರ ರಣಜಿ ಫೈನಲ್&zwnj;ನಲ್ಲಿ ಜಮ್ಮು-ಕಾಶ್ಮೀರ ತಂಡ ಕರ್ನಾಟಕ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ಇದೀಗ ಕಣಿವೆ ನಾಡಿನಲ್ಲಿ ಮಹತ್ವದ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುತ್ತಿರುವುದು ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತೆ ಆಗಿದೆ.&lt;/p&gt;&lt;h2&gt;&lt;strong&gt;ಸೆ.13, 15, 17ರಂದು ದೆಹಲಿಯಲ್ಲಿ ಭಾರತ vs ಅಫ್ಘಾನಿಸ್ತಾನ ಟಿ20&lt;/strong&gt;&lt;/h2&gt;&lt;p&gt;ನವದೆಹಲಿ: ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಬುಧವಾರ ಬಿಸಿಸಿಐ ಹಾಗೂ ಅಫ್ಘಾನಿಸ್ತಾನ ಕ್ರಿಕೆಟ್&zwnj; ಮಂಡಳಿ ಜಂಟಿಯಾಗಿ ಈ ವೇಳಾಪಟ್ಟಿ ಪ್ರಕಟಿಸಿದವು. ಆಫ್ಘಾನಿಸ್ತಾನ ಆತಿಥ್ಯ ವಹಿಸಲಿರುವ ಈ ಸರಣಿಯ ಪಂದ್ಯಗಳು ಸೆ.13, 15 ಹಾಗೂ 17ರಂದು ನವದೆಹಲಿಯ ಅರುಣ್&zwnj; ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರೊಂದಿಗೆ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸರಣಿ ನಡೆಯುವ ಸಾಧ್ಯತೆ ಕಡಿಮೆಯಾಗಿದೆ. ಸೆಪ್ಟೆಂಬರ್&zwnj;ನಲ್ಲಿ ಭಾರತ-ಬಾಂಗ್ಲಾ ಸರಣಿ ಸಾಧ್ಯತೆ ಇತ್ತಾದರೂ, ಈ ಸಮಯದಲ್ಲೇ ಆಫ್ಘನ್&zwnj; ವಿರುದ್ಧ ಭಾರತ ಆಡಲಿರುವುದರಿಂದಾಗಿ ಬಾಂಗ್ಲಾ ಸರಣಿ ರದ್ದಾಗುವ ಸಾಧ್ಯತೆ ಹೆಚ್ಚು.&lt;/p&gt;&lt;h3&gt;&lt;strong&gt;ಭಾರತ vs ಶ್ರೀಲಂಕಾ ಟೆಸ್ಟ್&zwnj; ಸರಣಿಗೆ ರಹಾನೆ ಕಾಮೆಂಟ್ರಿ&lt;/strong&gt;&lt;/h3&gt;&lt;p&gt;ಮುಂಬೈ: ಇತ್ತೀಚೆಗಷ್ಟೇ ಕ್ರಿಕೆಟ್&zwnj;ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಅವರು ಶನಿವಾರದಿಂದ ಆರಂಭವಾಗಲಿರುವ ಭಾರತ-ಶ್ರೀಲಂಕಾ ನಡುವಿನ 2 ಟೆಸ್ಟ್&zwnj; ಸರಣಿಗೆ ಕಾಮೆಂಟ್ರಿ ಮಾಡಲಿದ್ದಾರೆ. ಸೋನಿ ಸ್ಪೋರ್ಟ್ಸ್&zwnj; ನೆಟ್ವರ್ಕ್&zwnj;ನ ಕಾಮೆಂಟ್ರಿ ತಂಡ ಕೂಡಿಕೊಳ್ಳಲಿರುವ ಅವರು ಇದೇ ಮೊದಲ ಬಾರಿ ಪಂದ್ಯವೊಂದರ ವೀಕ್ಷಕ ವಿವರಣೆಗಾರ ಜವಾಬ್ದಾರಿ ನಿರ್ವಹಿಸಲಿದ್ದಾರೆ.&lt;/p&gt;&lt;p&gt;ಈ ಬಗ್ಗೆ ರಹಾನೆ ಸಂತಸ ವ್ಯಕ್ತಪಡಿಸಿದ್ದು, &lsquo;ಭಾರತದ ಶ್ರೀಲಂಕಾ ಪ್ರವಾಸಕ್ಕೆ ವೀಕ್ಷಕ ವಿವರಣೆಗಾರನಾಗಿ ಪಾದಾರ್ಪಣೆ ಮಾಡಲು ನಾನು ಉತ್ಸುಕನಾಗಿದ್ದೇನೆ. ಕ್ರಿಕೆಟ್&zwnj; ಅನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅವಕಾಶ ಸಿಕ್ಕಿರುವುದು ಸೌಭಾಗ್ಯ&rsquo; ಎಂದಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/irani-cup-final-to-be-held-in-kashmir-after-40-years-srinagar-to-host-j-and-k-vs-rest-of-india-kvn/articleshow-elipz5c"/>
        </item>
        <item>
            <title><![CDATA[ಜಾಮರ್ ಅಳವಡಿಸಿದ್ರು ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸಿದ್ದು ಹೇಗೆ? ಏರ್‌ಟೆಲ್ ವಿರುದ್ಧ ಎಫ್‌ಐಆರ್]]></title>
            <link>https://kannada.asianetnews.com/karnataka-districts/bengaluru-parappana-agrahara-jail-ccb-raid-prajwal-revanna-mobile-phone-scandal-asp-suspended-airtel-fir-gdp/articleshow-q1o1c8m</link>
            <guid isPermaLink="true">https://kannada.asianetnews.com/karnataka-districts/bengaluru-parappana-agrahara-jail-ccb-raid-prajwal-revanna-mobile-phone-scandal-asp-suspended-airtel-fir-gdp/articleshow-q1o1c8m</guid>
            <pubDate>Thu, 13 Aug 2026 09:27:20 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ದಿಢೀರ್ ದಾಳಿ ನಡೆಸಿದ್ದು, ಪ್ರಜ್ವಲ್ ರೇವಣ್ಣ ಮೊಬೈಲ್ ಬಳಸುತ್ತಿರುವುದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಕರ್ತವ್ಯಲೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲಿನ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಜೈಲಿನಲ್ಲಿ ಸಿಗ್ನಲ್ ನೀಡುತ್ತಿದ್ದ ಏರ್‌ಟೆಲ್‌ ಕಂಪನಿ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwm4wwqrnearat38gg4q2wa,imgname-prajwal-revanna-mobile-phone-1786593309591.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿಥ್ಯ ಮತ್ತು ನಿಯಮಬಾಹಿರ ಚಟುವಟಿಕೆಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದ ಬೆನ್ನಲ್ಲೇ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಅಧಿಕಾರಿಗಳು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಅಧಿಕಾರಿಗಳ ಕರ್ತವ್ಯಲೋಪ ಮತ್ತು ಅಕ್ರಮಗಳು ಸಾಬೀತಾಗಿದ್ದು, ಜೈಲಿನ ಅಸಿಸ್ಟಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ.&lt;/p&gt;&lt;h2&gt;ಸಿಸಿಬಿ ದಾಳಿ ತಡೆಗೆ ಯತ್ನಿಸಿದ್ದ ಎಎಸ್&zwnj;ಪಿ ಈರಣ್ಣ&lt;/h2&gt;&lt;p&gt;ಜೈಲಿನಲ್ಲಿ ಹಿಂದೆ ನಡೆದ ದಾಳಿಗಳ ಸಂದರ್ಭದಲ್ಲೆಲ್ಲಾ ಅಕ್ರಮಗಳು ಸಿಗದಂತೆ ಖೈದಿಗಳನ್ನು ಜಾಗೃತಗೊಳಿಸುವಲ್ಲಿ ಎಎಸ್&zwnj;ಪಿ ಈರಣ್ಣ ಸಕ್ರಿಯರಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಅವರನ್ನು ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ಒಳಗೆ ಬಿಡದೆ ತಡೆದು, ಖೈದಿಗಳು ಮೊಬೈಲ್ ಹಾಗೂ ಇತರ ನಿಷೇಧಿತ ವಸ್ತುಗಳನ್ನು ಬಚ್ಚಿಡಲು ಸಮಯ ಮಾಡಿಕೊಡುತ್ತಿದ್ದರು ಎನ್ನಲಾಗಿದೆ. ಆದರೆ, ಈ ಬಾರಿಯ ದಾಳಿಯಲ್ಲಿ ಸಿಸಿಬಿ ಅಧಿಕಾರಿಗಳು ಈರಣ್ಣ ಅವರ ಮಾತಿಗೆ ಕ್ಯಾರೇ ಎನ್ನದೆ ಏಕಾಏಕಿ ಜೈಲಿನೊಳಗೆ ನುಗ್ಗಿ ಕಾರ್ಯಾಚರಣೆ ನಡೆಸಿದ್ದಾರೆ.&lt;/p&gt;&lt;h2&gt;ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ವಿಡಿಯೋ ವೈರಲ್, ಸಂಭಾಷಣೆ ಏನು?&lt;/h2&gt;&lt;p&gt;ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಜೈಲಿನ ಸೆಲ್&zwnj;ನಲ್ಲಿ ನಿಂತು ನಗುತ್ತಾ ಆಪ್ತರೊಂದಿಗೆ ಮೊಬೈಲ್&zwnj;ನಲ್ಲಿ ಮಾತನಾಡುತ್ತಿರುವ 17 ಸೆಕೆಂಡ್&zwnj;ಗಳ ವಿಡಿಯೋ ಬಹಿರಂಗಗೊಂಡು ವೈರಲ್ ಆಗಿದೆ. ಈ ಸಂಭಾಷಣೆಯಲ್ಲಿ ಆಪ್ತನು &quot;ನೀವು ಫೋನೇ ಮಾಡಿಲ್ಲವೆಂದು ಅಳುತ್ತಿದ್ದಾರೆ, ಮೊದಲು ಹೊರಗೆ ಬನ್ನಿ&quot; ಎಂದಾಗ, ಪ್ರಜ್ವಲ್ &quot;ನಾನು ಅವರಿಗೆ ಮೊನ್ನೆ ತಾನೇ ಫೋನ್ ಮಾಡಿದ್ದೆ&quot; ಎಂದು ಉತ್ತರಿಸುವುದು ದಾಖಲಾಗಿದೆ.&lt;/p&gt;&lt;p&gt;ಈ ವಿಡಿಯೋ ಮೂರ್ನಾಲ್ಕು ತಿಂಗಳ ಹಳೆಯದ್ದು ಎಂದು ಶಂಕಿಸಲಾಗಿದ್ದು, ಹಲವು ತಿಂಗಳುಗಳಿಂದ ಜೈಲಾಧಿಕಾರಿಗಳು ಹಣ ಪಡೆದು ಪ್ರಜ್ವಲ್&zwnj;ಗೆ ಮೊಬೈಲ್ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದರೆ ಎಂಬ ಅನುಮಾನ ಮೂಡಿದೆ. ಆಗಸ್ಟ್ 6 ರಂದು ಜೈಲು ಸಿಬ್ಬಂದಿ ನಡೆಸಿದ್ದ ಬ್ಯಾರಕ್ ಪರಿಶೀಲನೆ ಕೇವಲ ಕಾಟಾಚಾರಕ್ಕಿತ್ತೇ ಎಂಬ ಪ್ರಶ್ನೆಗಳು ಎದ್ದಿವೆ.&lt;/p&gt;&lt;h2&gt;ವರ್ಗಾವಣೆ ಬೆನ್ನಲ್ಲೇ ಅಮಾನತು ಆದೇಶ&lt;/h2&gt;&lt;p&gt;ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಈರಣ್ಣ ಅವರನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಡಿಜಿಪಿ ಅಲೋಕ್ ಅವರು ಮಂಗಳವಾರವಷ್ಟೇ ಆದೇಶಿಸಿದ್ದರು. ಆದರೆ ವರ್ಗಾವಣೆ ಆದೇಶ ತಲುಪುವ ಮುನ್ನವೇ ಸಿಸಿಬಿ ದಾಳಿ ನಡೆದು ಪ್ರಜ್ವಲ್ ಸೆಲ್&zwnj;ನಲ್ಲಿ ಮೊಬೈಲ್ ಪತ್ತೆಯಾಗಿದೆ. ಪ್ರಜ್ವಲ್ ಇದ್ದ ವಿಭಾಗದ ಭದ್ರತಾ ಉಸ್ತುವಾರಿ ವಹಿಸಿದ್ದ ಈರಣ್ಣ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.&lt;/p&gt;&lt;h2&gt;ಏರ್&zwnj;ಟೆಲ್&zwnj; ಕಂಪನಿ ವಿರುದ್ಧ ಎಫ್&zwnj;ಐಆರ್ ದಾಖಲು&lt;/h2&gt;&lt;p&gt;ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್&zwnj;ಗಳನ್ನು ಅಳವಡಿಸಲಾಗಿದ್ದರೂ, ಆಂಧ್ರಪ್ರದೇಶ ಮೂಲದ ಏರ್&zwnj;ಟೆಲ್&zwnj; ಸಿಮ್&zwnj;ಗಳು ಮಾತ್ರ ತಡೆರಹಿತವಾಗಿ ಸಕ್ರಿಯವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜಾಮರ್ ಇದ್ದರೂ ಏರ್&zwnj;ಟೆಲ್ ಸಿಗ್ನಲ್&zwnj;ಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಕಂಪನಿಯ ಅಧಿಕಾರಿಗಳಿಂದ ಸೂಕ್ತ ವಿವರಣೆ ಸಿಗದ ಹಿನ್ನೆಲೆಯಲ್ಲಿ, ಏರ್&zwnj;ಟೆಲ್ ಕಂಪನಿ ವಿರುದ್ಧ ಎಫ್&zwnj;ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಸೂಚಿಸಿದ್ದಾರೆ.&lt;/p&gt;&lt;h2&gt;ಮನೆ ಊಟ ಹಾಗೂ ಮಂಚದ ಸೌಲಭ್ಯಕ್ಕೆ ಬ್ರೇಕ್&lt;/h2&gt;&lt;p&gt;ಈ ಹಿಂದೆ ಅನಾರೋಗ್ಯದ ನೆಪವೊಡ್ಡಿ ಸೆಲ್&zwnj;ನಲ್ಲಿ ಪಡೆಯಲಾಗಿದ್ದ ದಿವಾನ್ ಕಾಟ್ (ಮಂಚ) ಹಾಗೂ ನ್ಯಾಯಾಲಯದ ಅನುಮತಿಯೊಂದಿಗೆ ನೀಡಲಾಗುತ್ತಿದ್ದ ಮನೆ ಊಟದ ಸೌಲಭ್ಯವನ್ನು ಕಾರಾಗೃಹ ಅಧಿಕಾರಿಗಳು ಈಗ ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ. ಪ್ರಜ್ವಲ್ ಅವರಿಗೆ ಸಜಾ ಖೈದಿಯ ನಿಯಮಾವಳಿಗಳು ಅನ್ವಯವಾಗುವುದರಿಂದ ಮಂಚವನ್ನು ತೆರವುಗೊಳಿಸಿ, ಜೈಲಿನ ಊಟವನ್ನೇ ಕಡ್ಡಾಯಗೊಳಿಸಲಾಗಿದೆ.&lt;/p&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಜೈಲಿನಲ್ಲಿ ಅಕ್ರಮಗಳಿಗೆ ಸಹಕರಿಸಿದ ಮತ್ತಷ್ಟು ಸಿಬ್ಬಂದಿಯ ವಿರುದ್ಧ ಕ್ರಮ ಜರುಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-parappana-agrahara-jail-ccb-raid-prajwal-revanna-mobile-phone-scandal-asp-suspended-airtel-fir-gdp/articleshow-q1o1c8m"/>
        </item>
        <item>
            <title><![CDATA[ಏರ್‌ಫೋರ್ಸ್‌ ಒನ್‌ ಬಿಟ್ಟು  ಟ್ರಕ್ ಹತ್ತಿದ್ದೇಕೆ ಟ್ರಂಪ್? ಇರಾನ್ ದಾಳಿ ಭಯ ಶುರುವಾಯ್ತಾ ದೊಡ್ಡಣ್ಣನಿಗೆ]]></title>
            <link>https://kannada.asianetnews.com/world-news/trump-s-secret-flight-switch-indicates-severity-of-assassination-threat-by-iran-rav/articleshow-uqwl0g2</link>
            <guid isPermaLink="true">https://kannada.asianetnews.com/world-news/trump-s-secret-flight-switch-indicates-severity-of-assassination-threat-by-iran-rav/articleshow-uqwl0g2</guid>
            <pubDate>Thu, 13 Aug 2026 09:14:43 +0530</pubDate>
            <description><![CDATA[ಇರಾನ್‌ನಿಂದ ಹತ್ಯೆ ಯತ್ನದ ಬೆದರಿಕೆ ಹಿನ್ನೆಲೆಯಲ್ಲಿ, ಏರ್‌ಫೋರ್ಸ್‌ ಒನ್‌ ಬದಲು ತಮ್ಮನ್ನು ಕೇಟರಿಂಗ್ ಟ್ರಕ್‌ ಮೂಲಕ ಬೇರೊಂದು ವಿಮಾನಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಹೋರ್ಮುಜ್ ಜಲಸಂಧಿ ಅಮೆರಿಕ ಸೇನೆ ಹಿಡಿತದಲ್ಲಿದೆ, ಇರಾನ್ ಗೂಂಡಾಗಿರಿ ನಡೆಯೊಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwk9heb3hyd7zmcxv9tm8h4,imgname-----------------------2026-08-13t090911.318-1786592413131.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್&zwnj; (ಆ.13):&lt;/strong&gt; ನ್ಯಾಟೋ ಶೃಂಗಸಭೆಗೆಂದು ಟರ್ಕಿಗೆ ತೆರಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj;(Donald trump) ಅವರು ಅಲ್ಲಿಂದ ಮರಳುವ ವೇಳೆ, ಕತಾರ್&zwnj;ನಿಂದ ಉಡುಗೊರೆಯಾಗಿ ಸಿಕ್ಕಿದ್ದ ಏರ್&zwnj;ಫೋರ್ಸ್&zwnj; ಒನ್&zwnj; ವಿಮಾನದ ಬದಲು ಇನ್ನೊಂದು ವಿಮಾನ ಹತ್ತಿದ್ದರು ಹಾಗೂ ಅಲ್ಲಿಯ ವರೆಗೆ ಟ್ರಕ್&zwnj;ನಲ್ಲಿ ಪ್ರಯಾಣಿಸಿದ್ದರು ಎಂದು ಅಮೆರಿಕದ ಪತ್ರಿಕೆ ವಾಷಿಂಗ್ಟನ್&zwnj; ಪೋಸ್ಟ್&zwnj; ವರದಿ ಮಾಡಿತ್ತು. ಇದನ್ನೀಗ ಸ್ವತಃ ಟ್ರಂಪ್&zwnj; ಒಪ್ಪಿಕೊಂಡಿದ್ದಾರೆ.&lt;/p&gt;&lt;p&gt;&lsquo;ನನ್ನನ್ನು ಹತ್ಯೆ ಮಾಡುವ ಉದ್ದೇಶದಿಂದ ಇರಾನ್&zwnj; ದಾಳಿ ಮಾಡಬಹುದು ಎಂಬ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸೀಕ್ರೆಟ್&zwnj; ಸರ್ವಿಸ್&zwnj; ಹಾಗೂ ಸೇನೆ ನನ್ನನ್ನು ಏರ್&zwnj;ಫೋರ್ಸ್&zwnj; ಒನ್&zwnj; ವಿಮಾನದಿಂದ ಇಳಿಸಿತು ಹಾಗೂ ಕೇಟರಿಂಗ್&zwnj; ಟ್ರಕ್&zwnj; ಮೂಲಕ ಇನ್ನೊಂದು ವಿಮಾನಕ್ಕೆ ಹತ್ತಿಸಿತು&rsquo; ಎಂದು ಟ್ರಂಪ್ ಹೇಳಿದರು. ಜತೆಗೇ, &lsquo;ಇಂಥ ಬೆದರಿಕೆಗಳು ಆಗಾಗ ಬರುತ್ತಿರುವ ಕಾರಣ ನನಗೇನೂ ಭಯವಿರಲಿಲ್ಲ&rsquo; ಎಂದೂ ಹೇಳಿದರು.&lt;/p&gt;&lt;h2&gt;ಹೋರ್ಮುಜ್&zwnj; ಈಗ ನಮ್ಮ ನಿಯಂತ್ರಣದಲ್ಲಿ: ಟ್ರಂಪ್&zwnj;&lt;/h2&gt;&lt;p&gt;ಹೋರ್ಮುಜ್ ಜಲಸಂಧಿಯ ಮೇಲೆ ಅಮೆರಿಕ &lsquo;ಸಂಪೂರ್ಣ ನಿಯಂತ್ರಣ&rsquo; ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಅಮೆರಿಕದ ನೌಕಾ ದಿಗ್ಬಂಧನವನ್ನು ಶ್ಲಾಘಿಸಿದ ಟ್ರಂಪ್, ಅದನ್ನು ಉಕ್ಕಿನ ಗೋಡೆ ಎಂದು ಬಣ್ಣಿಸಿದರು,ಇದೇ ವೇಳೆ ಇರಾನ್&zwnj; ದಿವಾಳಿಯಾಗಿದೆ. ಆ ದೇಶದಲ್ಲಿ ಹಣವಿಲ್ಲ. ಮಧ್ಯಪ್ರಾಚ್ಯದ ಗೂಂಡಾಗಿರಿ ಇನ್ನು ಮುಂದೆ ನಡೆಯಲ್ಲ ಎಂದ ಅವರು, &lsquo;ಅಲ್ಲಾಹನಿಗೆ ಸ್ತುತಿ!&rsquo;ಎಂದು ತಮ್ಮ ಮಾತು ಮುಗಿಸಿದ್ದಾರೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/trump-s-secret-flight-switch-indicates-severity-of-assassination-threat-by-iran-rav/articleshow-uqwl0g2"/>
        </item>
        <item>
            <title><![CDATA[ಚಂದ್ರ-ಮಂಗಳ ಯೋಗದಿಂದ 4 ರಾಶಿಗಳಿಗೆ ಸುವರ್ಣಕಾಲ, ಅದೃಷ್ಟದ ಬಾಗಿಲು ತೆರೆಯಲಿದೆ]]></title>
            <link>https://kannada.asianetnews.com/gallery/astrology/chandra-mangala-yoga-brings-golden-period-for-four-zodiac-signs-suh-umkm2rg</link>
            <guid isPermaLink="true">https://kannada.asianetnews.com/gallery/astrology/chandra-mangala-yoga-brings-golden-period-for-four-zodiac-signs-suh-umkm2rg</guid>
            <pubDate>Thu, 13 Aug 2026 09:10:48 +0530</pubDate>
            <description><![CDATA[ಜ್ಯೋತಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳ ಸಂಯೋಗ ಅಥವಾ ಪರಸ್ಪರ ದೃಷ್ಟಿ ಅತ್ಯಂತ ಶಕ್ತಿಶಾಲಿಯಾದ 'ಚಂದ್ರ-ಮಂಗಳ ಯೋಗ'ವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz2yp3y2m6qtpzx6sry7cx8p,imgname-weekly-lucky-zodiac-sign-3-to-9-august-2026-trigrah-yog-budh-surya-and-guru-yuti-give-profit-5-zodiac-signs-1785731944386.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳ ಸಂಯೋಗ ಅಥವಾ ಪರಸ್ಪರ ದೃಷ್ಟಿ ಅತ್ಯಂತ ಶಕ್ತಿಶಾಲಿಯಾದ 'ಚಂದ್ರ-ಮಂಗಳ ಯೋಗ'ವನ್ನು ಸೃಷ್ಟಿಸುತ್ತದೆ. ಇದರಿಂದಾಗಿ ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಆರಂಭವಾಗಲಿದೆ.&lt;/p&gt;&lt;img&gt;&lt;p&gt;ಯೋಗದ ಫಲಗಳು: ವೃಷಭ ರಾಶಿಯವರಿಗೆ ಈ ಯೋಗದ ದೃಷ್ಟಿ ಧೈರ್ಯ ಮತ್ತು ಲಾಭದ ಸ್ಥಾನಗಳ ಮೇಲೆ ಬೀಳುವುದರಿಂದ, ಈ ಸಮಯವು ಸುವರ್ಣಕಾಲವಾಗಲಿದೆ. ವಿಶೇಷ ಲಾಭ: ಬಹಳ ದಿನಗಳಿಂದ ನಿಂತುಹೋಗಿದ್ದ ಆಸ್ತಿ ವ್ಯವಹಾರಗಳು ಮತ್ತು ಪೂರ್ವಜರ ಆಸ್ತಿ ವ್ಯಾಜ್ಯಗಳಲ್ಲಿ ನಿಮಗೆ சாதಕವಾದ ತೀರ್ಪು ಬರಲಿದೆ. ವ್ಯಾಪಾರದಲ್ಲಿ ಹೊಸ ಹೂಡಿಕೆಗಳು ಲಾಭ ತರುತ್ತವೆ. ಕುಟುಂಬದಲ್ಲಿ ಸಂತೋಷ ತುಂಬಿ ತುಳುಕಲಿದೆ.&lt;/p&gt;&lt;img&gt;&lt;p&gt;ಯೋಗದ ಫಲಗಳು: ಕನ್ಯಾ ರಾಶಿಯವರಿಗೆ ಮಂಗಳನ ಈ ಸಂಚಾರದಿಂದ ಅನಿರೀಕ್ಷಿತ ಧನಲಾಭ ಮತ್ತು ಲಾಭದಾಯಕ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ವಿಶೇಷ ಲಾಭ: ಷೇರು ಮಾರುಕಟ್ಟೆ ಮತ್ತು ದೀರ್ಘಾವಧಿಯ ಹೂಡಿಕೆಗಳಿಂದ ನೀವು ಅನಿರೀಕ್ಷಿತ ಲಾಭವನ್ನು ಗಳಿಸುವಿರಿ. ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ಬಹುಕಾಲದ ಕನಸುಗಳು ನನಸಾಗಲಿವೆ.&lt;/p&gt;&lt;img&gt;&lt;p&gt;ಯೋಗದ ಫಲಗಳು: ನಿಮ್ಮ ರಾಶಿಯ ಅಧಿಪತಿಯಾದ ಮಂಗಳ ಗ್ರಹವು ಚಂದ್ರನ ಮನೆಯಲ್ಲಿ ಕುಳಿತು ಈ ಯೋಗವನ್ನು ಸೃಷ್ಟಿಸುತ್ತಿರುವುದರಿಂದ, ಆಧ್ಯಾತ್ಮ, ಉನ್ನತ ಶಿಕ್ಷಣ ಮತ್ತು ವಿದೇಶಿ ಸಂಪರ್ಕಗಳಲ್ಲಿ ನಿಮಗೆ ವಿಶೇಷ ಸ್ಥಾನ ಮತ್ತು ಗೌರವ ಸಿಗಲಿದೆ. ವಿಶೇಷ ಲಾಭ: ವಿದ್ಯಾರ್ಥಿಗಳು ಹೊಸ ಕ್ಷೇತ್ರಗಳಿಗೆ ಸಂಬಂಧಿಸಿದ ತರಬೇತಿ, ಸರ್ಕಾರಿ ಉದ್ಯೋಗಾವಕಾಶಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಾರೆ. ತಂದೆಯ ಕಡೆಯಿಂದ ಸಹಾಯ ಲಭಿಸಲಿದೆ.&lt;/p&gt;&lt;img&gt;&lt;p&gt;ಯೋಗದ ಫಲಗಳು: ಮೀನ ರಾಶಿಯವರಿಗೆ ಈ ಗ್ರಹ ಸಂಚಾರ ಮತ್ತು ಚಂದ್ರ-ಮಂಗಳ ಯೋಗವು ಹೊಸ ಚೈತನ್ಯ ಮತ್ತು ಧೈರ್ಯವನ್ನು ನೀಡುತ್ತದೆ. ನಿಮ್ಮ ನಿಂತುಹೋಗಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ವಿಶೇಷ ಲಾಭ: ಕಲಾ ಕ್ಷೇತ್ರದಲ್ಲಿ ಇರುವವರು ಮತ್ತು ಸ್ವಂತ ಉದ್ಯೋಗ ಮಾಡುವವರಿಗೆ ಹೊಸ ಒಪ್ಪಂದಗಳು ಸಿಗಲಿವೆ. ಆರ್ಥಿಕ ಹೊರೆ ಕಡಿಮೆಯಾಗಿ ಉಳಿತಾಯ ಹೆಚ್ಚಾಗುತ್ತದೆ.&lt;/p&gt;&lt;p&gt;ಹಕ್ಕುತ್ಯಾಗ: ಈ ಲೇಖನವನ್ನು ಜ್ಯೋತಿಷ್ಯದ ನಂಬಿಕೆಗಳು ಮತ್ತು ಸಾಂಪ್ರದಾಯಿಕ ಶಾಸ್ತ್ರಗಳನ್ನು ಆಧರಿಸಿ ಸಾಮಾನ್ಯ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ವೈಯಕ್ತಿಕ ಜಾತಕಕ್ಕೆ ಅನುಗುಣವಾಗಿ ಫಲಿತಾಂಶಗಳು ಬದಲಾಗಬಹುದು&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/chandra-mangala-yoga-brings-golden-period-for-four-zodiac-signs-suh-umkm2rg"/>
        </item>
        <item>
            <title><![CDATA[ಶೀಘ್ರದಲ್ಲೇ ಜಂತರ್‌ ಮಂತರ್‌ ಸೀಸನ್‌ 2: ನಿಗೂಢ ಹೋರಾಟದ ಮುನ್ಸೂಚನೆ ನೀಡಿದ ದೀಪ್ಕೆ]]></title>
            <link>https://kannada.asianetnews.com/gallery/india-news/cockroach-janata-party-founder-abhijeet-dipke-has-announced-2nd-season-of-jantar-mantar-struggle-will-begin-soon-mrq-pb7gsu2</link>
            <guid isPermaLink="true">https://kannada.asianetnews.com/gallery/india-news/cockroach-janata-party-founder-abhijeet-dipke-has-announced-2nd-season-of-jantar-mantar-struggle-will-begin-soon-mrq-pb7gsu2</guid>
            <pubDate>Thu, 13 Aug 2026 08:59:34 +0530</pubDate>
            <description><![CDATA[Abhijeet Dipke: ಕಾಕ್ರೋಚ್‌ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್‌ ದೀಪ್ಕೆ, 'ಜಂತರ್‌ ಮಂತರ್‌ ಹೋರಾಟದ 2ನೇ ಸೀಸನ್‌' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಹೋರಾಟದ ಸ್ವರೂಪವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ದೇಶವ್ಯಾಪಿ 'ಲಿಸನಿಂಗ್ ಟೂರ್' ನಡೆಸುವುದಾಗಿ ತಿಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kz5msd52pxwzapg098afwftr,imgname-----------------------2026-08-04t111331.872-1785822229666.jpg" type="image/jpeg" height="390" width="690"/>
            <content:encoded><![CDATA[&lt;p&gt;Abhijeet Dipke: ಕಾಕ್ರೋಚ್&zwnj; ಜನತಾ ಪಾರ್ಟಿ ಸ್ಥಾಪಕ ಅಭಿಜೀತ್&zwnj; ದೀಪ್ಕೆ, 'ಜಂತರ್&zwnj; ಮಂತರ್&zwnj; ಹೋರಾಟದ 2ನೇ ಸೀಸನ್&zwnj;' ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ. ಆದರೆ, ಹೋರಾಟದ ಸ್ವರೂಪವನ್ನು ಬಹಿರಂಗಪಡಿಸಿಲ್ಲ, ಬದಲಾಗಿ ದೇಶವ್ಯಾಪಿ 'ಲಿಸನಿಂಗ್ ಟೂರ್' ನಡೆಸುವುದಾಗಿ ತಿಳಿಸಿದ್ದಾರೆ.&lt;/p&gt;&lt;img&gt;&lt;p&gt;&lsquo;ಸಚಿವರ ರಾಜೀನಾಮೆಗೆ ಕಾರಣವಾಗಿದ್ದ ಜಂತರ್&zwnj; ಮಂತರ್&zwnj; ಹೋರಾಟದ 2ನೇ ಸೀಸನ್&zwnj; ಅತಿಶೀಘ್ರ ಆರಂಭವಾಗಲಿದೆ&rsquo; ಎಂದು ಕಾಕ್ರೋಚ್&zwnj; ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್&zwnj; ದೀಪ್ಕೆ ಹೇಳಿದ್ದಾರೆ. ಆದರೆ ಹೋರಾಟದ ಸ್ವರೂಪದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.&lt;/p&gt;&lt;img&gt;&lt;p&gt;ದೆಹಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, &lsquo;ಜಂತರ್&zwnj; ಮಂತರ್&zwnj; ಸೀಸನ್&zwnj; 2 ಯಾವಾಗ ಶುರುವಾಗುತ್ತದೆ? ಎಂದು ಸುಮಾರು ಜನ ಇನ್&zwnj;ಸ್ಟಾಗ್ರಾಂನಲ್ಲಿ ಕೇಳುತ್ತಿದ್ದಾರೆ. ಅದು ಆದಷ್ಟು ಬೇಗ ಆರಂಭವಾಗಲಿದೆ&rsquo; ಎಂದು ತಿಳಿಸಿದರು. ಆದರೆ ಯಾವ ವಿಷಯವನ್ನೆತ್ತಿಕೊಂಡು ಪ್ರತಿಭಟನೆ ಆರಂಭಿಸಲಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.&lt;/p&gt;&lt;img&gt;&lt;p&gt;ಇದೇ ವೇಳೆ ಮಾತನಾಡಿದ ಸಿಜೆಪಿ ವಕ್ತಾರ ಸೌರವ್&zwnj; ದಾಸ್&zwnj;, &lsquo;ಸೀಸನ್&zwnj; 2 ಎಂದರೆ ದೆಹಲಿಗೆ ಬಂದು ಪ್ರತಿಭಟಿಸುತ್ತೇವೆ ಎಂದಲ್ಲ. ಈಗಾಗುತ್ತಿರುವುದೇ ಸೀಸನ್&zwnj; 2&rsquo; ಎಂದಿದ್ದಾರೆ. ಜಾರ್ಖಂಡ್&zwnj; ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ರೀತಿ ಹೇಳಿರಬಹುದು ಎನ್ನಲಾಗುತ್ತಿದೆ. ಜತೆಗೆ, ಜನರ ಸಮಸ್ಯೆಗಳಿಗೆ ಕಿವಿಯಾಗಲು ದೇಶವ್ಯಾಪಿ &lsquo;ಲಿಸನಿಂಗ್&zwnj; ಟೂರ್&zwnj;&rsquo; ಮಾಡುವುದಾಗಿಯೂ ತಿಳಿಸಿದರು.&lt;/p&gt;&lt;img&gt;&lt;p&gt;ಇನ್ನು ದೀಪ್ಕೆ ಅವರು, &lsquo;ದಿಲ್ಲಿಯಲ್ಲಿ ನಮಗೆ ಸಭೆ ನಡೆಸಲು ಸ್ಥಳಾವಕಾಶ ನೀಡುತ್ತಿಲ್ಲ. ನಮಗೆ ಸಭೆಗೆ ಅವಕಾಶ ನೀಡದಂತೆ ಸಭಾಂಗಣಗಳ ಸಿಬ್ಬಂದಿಗೆ ಪೊಲೀಸರು ಬೆದರಿಸುತ್ತಿದ್ದಾರೆ&rsquo; ಎಂದಿದ್ದಾರೆ. ಸೋಮವಾರವಷ್ಟೇ ದೀಪ್ಕೆ, ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಆಂದೋಲನ ಶುರು ಮಾಡುವುದಾಗಿ ಹೇಳಿದ್ದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/cockroach-janata-party-founder-abhijeet-dipke-has-announced-2nd-season-of-jantar-mantar-struggle-will-begin-soon-mrq-pb7gsu2"/>
        </item>
        <item>
            <title><![CDATA[ಗಾಲೆ ಟೆಸ್ಟ್: ಭಾರತ ತಂಡದಲ್ಲಿ ಆ ಒಂದು ಸ್ಥಾನಕ್ಕೆ ಪೈಪೋಟಿ! ಆಯ್ಕೆ ಗೊಂದಲದಲ್ಲಿ ಟೀಂ ಇಂಡಿಯಾ]]></title>
            <link>https://kannada.asianetnews.com/cricket-sports/india-vs-sri-lanka-1st-test-big-selection-dilemma-over-no-6-and-bowling-combination-kvn/articleshow-tobgus3</link>
            <guid isPermaLink="true">https://kannada.asianetnews.com/cricket-sports/india-vs-sri-lanka-1st-test-big-selection-dilemma-over-no-6-and-bowling-combination-kvn/articleshow-tobgus3</guid>
            <pubDate>Thu, 13 Aug 2026 08:55:21 +0530</pubDate>
            <description><![CDATA[ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಸಜ್ಜಾಗಿದ್ದು, ಆಡುವ ಬಳಗದ ಆಯ್ಕೆ ಗೊಂದಲ ಎದುರಾಗಿದೆ. 6ನೇ ಕ್ರಮಾಂಕಕ್ಕೆ ಧ್ರುವ್‌ ಜುರೆಲ್‌ ಮತ್ತು ಸರ್ಫರಾಜ್‌ ಖಾನ್‌ ನಡುವೆ ಪೈಪೋಟಿ ಇದ್ದರೆ, ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ಹೆಚ್ಚುವರಿ ಸ್ಪಿನ್ನರ್ ಆಡಿಸಬೇಕೇ ಎಂಬ ಚಿಂತೆಯೂ ತಂಡಕ್ಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kykgz778xh3pm838ymhskjys,imgname-kl-rahl-and-shubman-gill-1785214246120.jpg" type="image/jpeg" height="390" width="690"/>
            <content:encoded><![CDATA[&lt;p&gt;ಗಾಲೆ: ಭಾರತ ಕ್ರಿಕೆಟ್&zwnj; ತಂಡದಲ್ಲಿ ಪ್ರತಿ ಸರಣಿ, ಟೂರ್ನಿಯಲ್ಲೂ ಆಯ್ಕೆ ಗೊಂದಲ ಸಾಮಾನ್ಯ. ಆದರೆ ಕೆಲವೊಂದು ಸರಣಿಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಆಟಗಾರರ ನಡುವೆ ಪೈಪೋಟಿ ಕಂಡುಬರುತ್ತದೆ. ಆ.15ರಿಂದ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್&zwnj; ಸರಣಿಯಲ್ಲೂ ಭಾರತ ತಂಡದಲ್ಲಿ ಕೆಲ ಸ್ಥಾನಗಳಿಗೆ ಆಯ್ಕೆ ಗೊಂದಲು ಎದುರಾಗುವುದು ಖಚಿತ.&lt;/p&gt;&lt;p&gt;ಆರಂಭಿಕ ಆಟಗಾರರ ಸ್ಥಾನ ಈಗಾಗಲೇ ಭದ್ರವಾಗಿದ್ದು, ಯಶಸ್ವಿ ಜೈಸ್ವಾಲ್&zwnj; ಜೊತೆ ಕನ್ನಡಿಗ ಕೆ.ಎಲ್&zwnj;.ರಾಹುಲ್ ಇನ್ನಿಂಗ್ಸ್&zwnj; ಆರಂಭಿಸಲಿದ್ದಾರೆ. ಸಾಯಿ ಸುದರ್ಶನ್&zwnj; ಗಾಯದಿಂದಾಗಿ ಹೊರಬಿದ್ದಿರುವ ಕಾರಣ, 3ನೇ ಕ್ರಮಾಂಕಕ್ಕೆ ಕರ್ನಾಟಕದ ಯುವ ಬ್ಯಾಟರ್&zwnj; ದೇವದತ್&zwnj; ಪಡಿಕ್ಕಲ್&zwnj; ಆಯ್ಕೆಯಾಗುವುದು ಬಹುತೇಕ ಖಚಿತ. ಅವರು ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ತಮ್ಮ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ನಾಯಕ ಶುಭ್&zwnj;ಮನ್&zwnj; ಗಿಲ್&zwnj; 4ನೇ ಕ್ರಮಾಂಕದಲ್ಲಿ ಆಡಲಿದ್ದು, 5ನೇ ಬ್ಯಾಟರ್&zwnj; ಆಗಿ ವಿಕೆಟ್&zwnj; ಕೀಪರ್&zwnj; ರಿಷಭ್ ಪಂತ್&zwnj; ಕಣಕ್ಕಿಳಿಯಲಿದ್ದಾರೆ.&lt;/p&gt;&lt;h2&gt;&lt;strong&gt;ಆರನೇ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಗೊಂದಲ&lt;/strong&gt;&lt;/h2&gt;&lt;p&gt;ಆದರೆ 6ನೇ ಕ್ರಮಾಂಕದ ಬ್ಯಾಟಿಂಗ್&zwnj; ಬಗ್ಗೆ ತಂಡಕ್ಕೆ ಗೊಂದಲವಿದೆ. ಧ್ರುವ್&zwnj; ಜುರೆಲ್&zwnj; ಹಾಗೂ ಸರ್ಫರಾಜ್&zwnj; ಖಾನ್&zwnj; ನಡುವೆ ಈ ಸ್ಥಾನಕ್ಕೆ ಪೈಪೋಟಿ ಎದುರಾಗಬಹುದು. ಜುರೆಲ್&zwnj; ಸದ್ಯ ಭಾರತ ಟೆಸ್ಟ್&zwnj; ತಂಡದಲ್ಲಿ ನಿಯಮಿತವಾಗಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅವರ ದಾಖಲೆ ಕೂಡಾ ಉತ್ತಮವಾಗಿದೆ. 10 ಟೆಸ್ಟ್&zwnj;ಗಳಲ್ಲಿ ಶತಕ ಹಾಗೂ ಅರ್ಧಶತಕ ಸೇರಿದಂತೆ 478 ರನ್&zwnj; ಕಲೆಹಾಕಿದ್ದಾರೆ. ಆದರೆ ಲಂಕಾ ಸರಣಿಗೆ ಸ್ಪಿನ್ನರ್&zwnj;ಗಳ ವಿರುದ್ಧ ದಾಖಲೆಯನ್ನು ಪರಿಗಣಿಸಿದರೆ, 6ನೇ ಕ್ರಮಾಂಕಕ್ಕೆ ಜುರೆಲ್&zwnj; ಬದಲು ಸರ್ಫರಾಜ್&zwnj; ಖಾನ್&zwnj;ಗೆ ಮಣೆ ಹಾಕುವ ಸಾಧ್ಯತೆಯಿದೆ.&lt;/p&gt;&lt;p&gt;ಜುರೆಲ್&zwnj;ಗೆ ಹೋಲಿಸಿದರೆ ಸರ್ಫರಾಜ್&zwnj; ಸ್ಪಿನ್ನರ್&zwnj;ಗಳ ವಿರುದ್ಧ ಉತ್ತಮವಾಗಿ ಆಡುತ್ತಾರೆ. ಜುರೆಲ್&zwnj; ಲಂಕಾ ವಿರುದ್ಧ ಅಭ್ಯಾಸ ಪಂದ್ಯದಲ್ಲೂ ಸ್ಪಿನ್ನರ್&zwnj;ಗಳ ವಿರುದ್ಧ ಪರದಾಡಿದ್ದು, ಸುಲಭದಲ್ಲಿ ವಿಕೆಟ್&zwnj; ಕೈಚೆಲ್ಲಿದ್ದಾರೆ. ಸರ್ಫರಾಜ್&zwnj; 6 ಟೆಸ್ಟ್&zwnj; ಆಡಿದ್ದು, 1 ಶತಕ, 3 ಅರ್ಧಶತಕ ಸೇರಿದಂತೆ ಒಟ್ಟು 371 ರನ್&zwnj; ಗಳಿಸಿದ್ದಾರೆ.&lt;/p&gt;&lt;h3&gt;&lt;strong&gt;ವೇಗಿ vs ಸ್ಪಿನ್ನರ್?:&lt;/strong&gt;&lt;/h3&gt;&lt;p&gt;ಲಂಕಾದಲ್ಲಿ ಸ್ಪಿನ್ನರ್&zwnj;ಗಳಿಗೆ ಹೆಚ್ಚು ನೆರವು ನೀಡುವುದರಿಂದಾಗಿ ಭಾರತ ಹೆಚ್ಚುವರಿ ಸ್ಪಿನ್ನರ್&zwnj;ಗಳನ್ನು ಆಡಿಸುತ್ತದೆಯೇ ಅಥವಾ ಎಂದಿನಂತೆ ಮೂವರು ವೇಗಿಗಳನ್ನು ಆಡಿಸುತ್ತದೆಯೇ ಎಂಬ ಕುತೂಹಲವಿದೆ. ವೇಗದ ಬೌಲಿಂಗ್&zwnj; ಪಡೆಯನ್ನು ಮೊಹಮ್ಮದ್&zwnj; ಸಿರಾಜ್&zwnj; ಮುನ್ನಡೆಸಲಿದ್ದು, ಅವರ ಜೊತೆ ಕನ್ನಡಿಗ ಪ್ರಸಿದ್ಧ್&zwnj; ಕೃಷ್ಣ ಕೂಡಾ ಕಣಕ್ಕಿಳಿಯಬಹುದು. 3ನೇ ವೇಗಿಯನ್ನು ಆಡಿಸಿದರೆ ಗುರ್ನೂರ್&zwnj; ಬ್ರಾರ್&zwnj; ಅಥವಾ ಆಖಿಬ್&zwnj; ನಬಿಗೆ ಸ್ಥಾನ ಸಿಗಬಹುದು.&lt;/p&gt;&lt;p&gt;3ನೇ ವೇಗಿ ಅಗತ್ಯವಿಲ್ಲದಿದ್ದರೆ ಹೆಚ್ಚುವರಿ ಸ್ಪಿನ್ನರ್&zwnj; ಆಯ್ಕೆ ತಂಡಕ್ಕಿದೆ. ರವೀಂದ್ರ ಜಡೇಜಾ, ಕುಲ್ದೀಪ್&zwnj; ಯಾದವ್&zwnj; ತಂಡದಲ್ಲಿ ಸ್ಥಾನ ಪಡೆಯಲಿದ್ದು, ಅವರ ಜೊತೆ ಮತ್ತೋರ್ವ ಸ್ಪಿನ್&zwnj; ಆಲ್ರೌಂಡರ್&zwnj; ಆಗಿ ಸಾರಂಶ್&zwnj; ಜೈನ್&zwnj; ಅಥವಾ ಮಾನವ್&zwnj; ಸುತಾರ್&zwnj;ಗೆ ಸ್ಥಾನ ಸಿಗಬಹುದು.&lt;/p&gt;&lt;h3&gt;&lt;strong&gt;ಗಂಭೀರ್&zwnj;, ಕೋಟಕ್ ಪರಿಶೀಲನೆ ಬೆನ್ನಲ್ಲೇ ಪಿಚ್&zwnj;ನ ಹುಲ್ಲಿಗೆ ಕತ್ತರಿ&lt;/strong&gt;&lt;/h3&gt;&lt;p&gt;ಮುಖ್ಯ ಕೋಚ್&zwnj; ಗಂಭೀರ್&zwnj; ಹಾಗೂ ಬ್ಯಾಟಿಂಗ್&zwnj; ಕೋಚ್&zwnj; ಸಿತಾನ್ಶು ಕೋಟಕ್&zwnj; ಬುಧವಾರ ಗಾಲೆ ಕ್ರೀಡಾಂಗಣಕ್ಕೆ ಆಗಮಿಸಿ ಪಿಚ್&zwnj; ಪರಿಶೀಲಿಸಿದರು. ಆದರೆ ಅವರು ಪಿಚ್&zwnj;ನಿಂದ ನಿರ್ಗಮಿಸಿದ ಕೆಲ ಗಂಟೆಗಳಲ್ಲೇ ಗಾಲೆ ಪಿಚ್&zwnj; ಸಿಬ್ಬಂದಿ ಹುಲ್ಲು ಕತ್ತರಿಸುವ ಯಂತ್ರವನ್ನು ಪಿಚ್&zwnj; ಮೇಲೆ ಹಾಯಿಸಿ, ಅಲ್ಪ ಪ್ರಮಾಣದಲ್ಲಿ ಹುಲ್ಲು ಕತ್ತರಿಸಿದ್ದಾರೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/india-vs-sri-lanka-1st-test-big-selection-dilemma-over-no-6-and-bowling-combination-kvn/articleshow-tobgus3"/>
        </item>
        <item>
            <title><![CDATA[2026ರ ಬುಧ ಸಂಚಾರ:  4 ರಾಶಿಗಳಿಗೆ ದುಡ್ಡು ಸುರಿಯಲಿದೆ, ನಿಮ್ಮ ರಾಶಿ ಇದೆಯಾ ನೋಡಿ?]]></title>
            <link>https://kannada.asianetnews.com/gallery/festivals/kannada-astrology-mercury-transit-2026-update-budhaditya-yoga-four-zodiac-signs-to-gain-wealth-mrq-5so6tmo</link>
            <guid isPermaLink="true">https://kannada.asianetnews.com/gallery/festivals/kannada-astrology-mercury-transit-2026-update-budhaditya-yoga-four-zodiac-signs-to-gain-wealth-mrq-5so6tmo</guid>
            <pubDate>Thu, 13 Aug 2026 08:47:56 +0530</pubDate>
            <description><![CDATA[2026ರ ಆಗಸ್ಟ್ 22ರಂದು ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಸೂರ್ಯನೊಂದಿಗೆ ಸೇರಿ 'ಬುಧಾದಿತ್ಯ ಯೋಗ'ವನ್ನು ಸೃಷ್ಟಿಸಲಿದೆ. ಈ ಯೋಗದಿಂದಾಗಿ 4 ರಾಶಿಯವರಿಗೆ ವೃತ್ತಿ, ಹಣಕಾಸು ಮತ್ತು ಕೌಟುಂಬಿಕ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwhngk0vpxgcsyatw78dz91,imgname-lakshmi-yoga-1786590708320.jpg" type="image/jpeg" height="390" width="690"/>
            <content:encoded><![CDATA[&lt;p&gt;2026ರ ಆಗಸ್ಟ್ 22ರಂದು ಬುಧ ಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದು, ಸೂರ್ಯನೊಂದಿಗೆ ಸೇರಿ 'ಬುಧಾದಿತ್ಯ ಯೋಗ'ವನ್ನು ಸೃಷ್ಟಿಸಲಿದೆ. ಈ ಯೋಗದಿಂದಾಗಿ 4 ರಾಶಿಯವರಿಗೆ ವೃತ್ತಿ, ಹಣಕಾಸು ಮತ್ತು ಕೌಟುಂಬಿಕ ಜೀವನದಲ್ಲಿ ಅನುಕೂಲಕರ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹದ ಸಂಚಾರವು 12 ರಾಶಿಗಳ ಮೇಲೆ ಬೇರೆ ಬೇರೆ ಪರಿಣಾಮ ಬೀರುತ್ತೆ. ಅದೇ ರೀತಿ, 2026ರ ಆಗಸ್ಟ್ 22ರಂದು ಬುಧ ಗ್ರಹದ ಪ್ರಮುಖ ಸಂಚಾರ ನಡೆಯಲಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದಕ್ಕೂ ಮುನ್ನ ಆಗಸ್ಟ್ 17ರಂದು ಸೂರ್ಯ ಕೂಡ ಸಿಂಹ ರಾಶಿಗೆ ಬರುವುದರಿಂದ, ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿ 'ಬುಧಾದಿತ್ಯ ಯೋಗ'ವನ್ನು ಸೃಷ್ಟಿಸುತ್ತವೆ. ಈ ಯೋಗವು ಜ್ಞಾನ, ಮಾತು, ವೃತ್ತಿ ಮತ್ತು ಆರ್ಥಿಕ ವಿಚಾರಗಳಲ್ಲಿ ಕೆಲವು ರಾಶಿಗಳಿಗೆ ಅನುಕೂಲಕರ ಬದಲಾವಣೆಗಳನ್ನು ತರಬಹುದು ಎಂಬ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಅನಿರೀಕ್ಷಿತ ಹಣಕಾಸಿನ ಲಾಭ ಸಿಗುವ ಸಾಧ್ಯತೆ, ಆದಾಯ ಹೆಚ್ಚಾಗಬಹುದು. ವ್ಯಾಪಾರ, ಉದ್ಯಮ ಮಾಡುವವರಿಗೆ ಹೊಸ ಅವಕಾಶ, ಲಾಭ ಸಿಗಲಿದೆ. ಬಹಳ ಸಮಯದಿಂದ ಕಾಯುತ್ತಿದ್ದ ಕೆಲವು ನಿರ್ಧಾರಗಳು ನಿಮಗೆ ಲಾಭವನ್ನುಂಟು ಮಾಡಲಿವೆ. ಸಮಾಜದಲ್ಲಿ ಗೌರವ ಸಿಗಲಿದೆ. ಕೆಲಸ ಅಥವಾ ವೃತ್ತಿಯ ಕಾರಣದಿಂದ ದೂರದ ಪ್ರಯಾಣ ಮಾಡಬೇಕಾಗಬಹುದು. ಈ ಪ್ರಯಾಣ ಭವಿಷ್ಯದ ಬೆಳವಣಿಗೆಗೆ ಉಪಯುಕ್ತವಾಗಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ.&lt;/p&gt;&lt;img&gt;&lt;p&gt;ಬುಧನ ಈ ಸಿಂಹ ರಾಶಿಯ ಸಂಚಾರ ಮೇಷ ರಾಶಿಯವರಿಗೆ ಹಲವು ರೀತಿಯಲ್ಲಿ ಅನುಕೂಲಕರವಾಗಿರಲಿದೆ ಅಂತ ಜ್ಯೋತಿಷ್ಯ ಹೇಳುತ್ತದೆ. ಆದಾಯಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಪ್ರಗತಿ, ಬಹಳ ದಿನಗಳಿಂದ ನಿಂತುಹೋಗಿದ್ದ ಕೆಲವು ಕೆಲಸಗಳು ಮತ್ತೆ ವೇಗ ಪಡೆದು ಪೂರ್ಣಗೊಳ್ಳುವ ಸಾಧ್ಯತೆ, ಕುಟುಂಬದಲ್ಲೂ ಸಂತೋಷದ ವಾತಾವರಣ, ಕೆಲಸ ಮತ್ತು ವೃತ್ತಿ ಸಂಬಂಧಿತ ವಿಷಯಗಳಲ್ಲಿ ಹೊಸ ಅವಕಾಶಗಳು ಸಿಗಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವಸರ ಮಾಡದಿರುವುದು ಉತ್ತಮ.&lt;/p&gt;&lt;img&gt;&lt;p&gt;ಈ ಸಂಚಾರವು ಧನು ರಾಶಿಯವರಿಗೆ ಹಲವು ರೀತಿಯಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡಲಿದೆ ಎಂಬುದು ಜ್ಯೋತಿಷ್ಯದ ನಂಬಿಕೆ. ಆದಾಯ ಹೆಚ್ಚಾಗುವ ಅವಕಾಶಗಳು ಸೃಷ್ಟಿ, ಸಮಾಜದಲ್ಲಿ ಗೌರವ ಮತ್ತು ಮನ್ನಣೆ, ಕುಟುಂಬದಲ್ಲಿ ಸಂತೋಷದ ವಾತಾವರಣ, ಬಹಳ ದಿನಗಳಿಂದ ವಿದೇಶಕ್ಕೆ ಹೋಗಲು ಯೋಜಿಸುತ್ತಿರುವವರಿಗೆ, ಆ ಪ್ರಯತ್ನಗಳಲ್ಲಿ ಪ್ರಗತಿ ಕಾಣಬಹುದು. ಕೆಲಸ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುವ ಸಮಯ ಇದಾಗಿರಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.&lt;/p&gt;&lt;img&gt;&lt;p&gt;ಈ ಸಂಚಾರವು ಆದಾಯ ಮತ್ತು ವೃತ್ತಿ ವಿಷಯಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಕೆಲಸ ಹುಡುಕುತ್ತಿರುವವರಿಗೆ ಹೊಸ ಅವಕಾಶಗಳು ಸಿಗಬಹುದು. ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಗಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಬರಬಹುದು. ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ಕಾರ್ಯಕ್ರಮಗಳು ನಡೆಯುವ ಸನ್ನಿವೇಶ ಸೃಷ್ಟಿಯಾಗಬಹುದು.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/kannada-astrology-mercury-transit-2026-update-budhaditya-yoga-four-zodiac-signs-to-gain-wealth-mrq-5so6tmo"/>
        </item>
        <item>
            <title><![CDATA[ಜನ್ಮಾಷ್ಟಮಿ ಗೌರಿ ಯೋಗದ ಜೊತೆ ಕುಬೇರನ ಕೃಪೆ; 5 ರಾಶಿಗೆ ಡಬಲ್ ಜಾಕ್‌ಪಾಟ್, ರಾಜಯೋಗ!]]></title>
            <link>https://kannada.asianetnews.com/gallery/festivals/kannada-astrology-krishna-janmashtami-gouri-yoga-with-kubera-blessing-auspicious-capricorn-aries-taurus-leo-libra-mrq-4gvwfz2</link>
            <guid isPermaLink="true">https://kannada.asianetnews.com/gallery/festivals/kannada-astrology-krishna-janmashtami-gouri-yoga-with-kubera-blessing-auspicious-capricorn-aries-taurus-leo-libra-mrq-4gvwfz2</guid>
            <pubDate>Thu, 13 Aug 2026 08:29:42 +0530</pubDate>
            <description><![CDATA[ಜನ್ಮಾಷ್ಟಮಿಯಂದು ರೂಪುಗೊಳ್ಳುವ ಗೌರಿ ಯೋಗವು 5 ರಾಶಿಗಳಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ಯೋಗದಿಂದಾಗಿ 5 ರಾಶಿಯವರಿಗೆ ಹಣಕಾಸು, ವೃತ್ತಿ, ಕುಟುಂಬ ಮತ್ತು ಆಸ್ತಿ ವಿಷಯಗಳಲ್ಲಿ ಅನುಕೂಲಕರ ಬದಲಾವಣೆಗಳು ಮತ್ತು ಯಶಸ್ಸು ಸಿಗುವ ಸಾಧ್ಯತೆಗಳಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwgf6chhtwwzsr7zm92wn3m,imgname-gauri-yoga-1786589452689.jpg" type="image/jpeg" height="390" width="690"/>
            <content:encoded><![CDATA[&lt;p&gt;ಜನ್ಮಾಷ್ಟಮಿಯಂದು ರೂಪುಗೊಳ್ಳುವ ಗೌರಿ ಯೋಗವು 5 ರಾಶಿಗಳಿಗೆ ವಿಶೇಷ ಫಲಗಳನ್ನು ನೀಡಲಿದೆ. ಈ ಯೋಗದಿಂದಾಗಿ 5 ರಾಶಿಯವರಿಗೆ ಹಣಕಾಸು, ವೃತ್ತಿ, ಕುಟುಂಬ ಮತ್ತು ಆಸ್ತಿ ವಿಷಯಗಳಲ್ಲಿ ಅನುಕೂಲಕರ ಬದಲಾವಣೆಗಳು ಮತ್ತು ಯಶಸ್ಸು ಸಿಗುವ ಸಾಧ್ಯತೆಗಳಿವೆ.&lt;/p&gt;&lt;img&gt;&lt;p&gt;ಈ ಯೋಗವು ಹಣದ ಹರಿವು, ವೃತ್ತಿಜೀವನದ ಪ್ರಗತಿ, ಕುಟುಂಬ ಸಂತೋಷ, ಆಸ್ತಿ ಖರೀದಿ ಸೇರಿದಂತೆ ವಿವಿಧ ವಿಷಯಗಳಲ್ಲಿ ಉತ್ತಮ ಬದಲಾವಣೆಗಳನ್ನು ತರಬಹುದು. ಕೆಲವು ರಾಶಿಯವರಿಗೆ ಬಹಳ ದಿನಗಳಿಂದ ಕಾಯುತ್ತಿದ್ದ ವಿಷಯಗಳು ಕೈಗೂಡುವ ಸಾಧ್ಯತೆಯೂ ಇದೆ. ಹಾಗಾದರೆ, ಜನ್ಮಾಷ್ಟಮಿ ಸಮಯದಲ್ಲಿ ಗೌರಿ ಯೋಗದ ಅನುಕೂಲಕರ ಫಲಗಳನ್ನು ಪಡೆಯುವ 5 ರಾಶಿಗಳು ಯಾವುವು ನೋಡೋಣ.&lt;/p&gt;&lt;img&gt;&lt;p&gt;ಮಕರ ರಾಶಿಯವರಿಗೆ ಜನ್ಮಾಷ್ಟಮಿಯಂದು ರೂಪುಗೊಳ್ಳುವ ಗೌರಿ ಯೋಗವು ಪ್ರಮುಖ ನಿರ್ಧಾರಗಳನ್ನು ಸ್ಪಷ್ಟವಾಗಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಕುಟುಂಬದ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ವಿಷಯಗಳಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವುದು ನಿಮಗೆ ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಮೇಲಿನ ನಂಬಿಕೆ ಮತ್ತು ಬೆಂಬಲ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ.&lt;/p&gt;&lt;img&gt;&lt;p&gt;ಮೇಷ ರಾಶಿಯವರಿಗೆ ಈ ಗೌರಿ ಯೋಗವು ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮಾಡುವ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ವ್ಯಾಪಾರ ಮಾಡುವವರಿಗೆ ನಿರೀಕ್ಷೆಗಿಂತ ಉತ್ತಮ ಲಾಭ ಸಿಗುವ ಸನ್ನಿವೇಶ ಸೃಷ್ಟಿಯಾಗಬಹುದು. ಆರ್ಥಿಕ ಸ್ಥಿತಿ ಹಂತಹಂತವಾಗಿ ಬಲಗೊಳ್ಳಲಿದೆ. ಅನಿರೀಕ್ಷಿತ ಆದಾಯದ ಅವಕಾಶಗಳು ಬರಬಹುದು. ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಬಹಳ ದಿನಗಳಿಂದ ಯೋಜಿಸುತ್ತಿದ್ದ ಮನೆ ಅಥವಾ ವಾಹನ ಖರೀದಿಸುವ ಪ್ರಯತ್ನದಲ್ಲೂ ಪ್ರಗತಿ ಕಾಣಬಹುದು.&lt;/p&gt;&lt;img&gt;&lt;p&gt;ಚಂದ್ರನು ವೃಷಭ ರಾಶಿಯಲ್ಲಿ ಸಂಚರಿಸುವುದರಿಂದ, ಈ ರಾಶಿಯವರಿಗೆ ಗೌರಿ ಯೋಗದ ಫಲಗಳು ನೇರವಾಗಿ ಸಿಗಲಿವೆ. ವಿಶೇಷವಾಗಿ ಹಣಕಾಸಿನ ವಿಷಯಗಳಲ್ಲಿ ಪ್ರಗತಿ ಸಾಧಿಸಲು ಅವಕಾಶಗಳು ಹೆಚ್ಚಾಗುತ್ತವೆ. ಬಹಳ ದಿನಗಳಿಂದ ಇದ್ದ ಸಾಲವನ್ನು ತೀರಿಸುವ ಸನ್ನಿವೇಶ ಸೃಷ್ಟಿಯಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆ ಗುರುತಿಸಲ್ಪಟ್ಟು ಪ್ರಶಂಸೆ ಗಳಿಸುವಿರಿ. ಈಗಾಗಲೇ ಮಾಡಿದ ಹೂಡಿಕೆಗಳಿಂದ ನಿರೀಕ್ಷಿತ ಲಾಭ ಸಿಗಬಹುದು. ವ್ಯಾಪಾರ ಮಾಡುವವರಿಗೆ ಹೊಸ ಗ್ರಾಹಕರು ಅಥವಾ ಲಾಭದಾಯಕ ಒಪ್ಪಂದಗಳು ಸಿಗುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ಚಂದ್ರನ ಸಂಚಾರವು ಹಲವು ವಿಧಗಳಲ್ಲಿ ಅನುಕೂಲಕರ ಬದಲಾವಣೆಗಳನ್ನು ತರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿರುವವರು ಆದಾಯವನ್ನು ಹೆಚ್ಚಿಸುವ ಅವಕಾಶಗಳನ್ನು ಪಡೆಯಬಹುದು. ನಿಮ್ಮ ಸಂಗಾತಿಯ ಬೆಂಬಲವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಾಲ ಅಥವಾ ಅನಗತ್ಯ ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುವ ಪ್ರಯತ್ನಗಳಲ್ಲಿ ಪ್ರಗತಿ ಕಾಣಬಹುದು. ಹೊಸ ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭಿಸುವ ಆಲೋಚನೆಯಿದ್ದರೆ, ಅದನ್ನು ಕಾರ್ಯಗತಗೊಳಿಸಲು ಧೈರ್ಯ ಸಿಗುತ್ತದೆ.&lt;/p&gt;&lt;img&gt;&lt;p&gt;ತುಲಾ ರಾಶಿಯವರಿಗೆ ಈ ಜನ್ಮಾಷ್ಟಮಿಯು ಹಲವು ನೆಮ್ಮದಿಯ ಬದಲಾವಣೆಗಳನ್ನು ತರಬಹುದು. ಹಿಂದೆ ಪ್ರಯತ್ನಿಸಿ ವಿಫಲವಾದ ಕೆಲವು ವಿಷಯಗಳಲ್ಲಿ ಮತ್ತೆ ಅವಕಾಶ ಸಿಕ್ಕಿ ಯಶಸ್ಸು ಸಾಧಿಸಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧ ಸುಧಾರಿಸುತ್ತದೆ. ಕೆಲಸದ ಹೊರೆ ಕಡಿಮೆಯಾಗಿ ಮಾನಸಿಕ ಒತ್ತಡ ತಿಳಿಯಾಗಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ವಾತಾವರಣ ಸೃಷ್ಟಿಯಾಗಬಹುದು. ಹೊಸ ವಾಹನ ಖರೀದಿಸುವ ಅವಕಾಶ ಸಿಗಬಹುದು.&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/kannada-astrology-krishna-janmashtami-gouri-yoga-with-kubera-blessing-auspicious-capricorn-aries-taurus-leo-libra-mrq-4gvwfz2"/>
        </item>
        <item>
            <title><![CDATA[ಬೆಂಗಳೂರು: ಭೀಕರ ಬೆಂಕಿ ಅವಘಡಕ್ಕೆ ಪಾರ್ಕಿಂಗ್‌ ನಲ್ಲಿದ್ದ  400 ಇವಿ ಬೈಕ್‌ ಗಳು  ಸುಟ್ಟು ಬೂದಿ!]]></title>
            <link>https://kannada.asianetnews.com/karnataka-districts/bengaluru-fire-breakout-over-400-rental-evs-destroyed-in-devastating-short-circuit-gdp/articleshow-wigxw1p</link>
            <guid isPermaLink="true">https://kannada.asianetnews.com/karnataka-districts/bengaluru-fire-breakout-over-400-rental-evs-destroyed-in-devastating-short-circuit-gdp/articleshow-wigxw1p</guid>
            <pubDate>Thu, 13 Aug 2026 08:25:26 +0530</pubDate>
            <description><![CDATA[ಬೆಂಗಳೂರಿನ ಕೆ.ಆರ್. ಪುರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ, ಡೆಲಿವರಿ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ. ಈ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಶಂಕಿಸಲಾಗಿದ್ದರೂ, ಕಿಡಿಗೇಡಿಗಳ ಕೃತ್ಯದ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwgkrq2ewf8065q7xbmqzg4,imgname-fire-1786589602530.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನ ಕೆ.ಆರ್. ಪುರದ ಎನ್&zwnj;ಆರ್&zwnj;ಐ ಲೇಔಟ್&zwnj;ನಲ್ಲಿ ಗುರುವಾರ ಸಂಜೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಪಾರ್ಕಿಂಗ್ ಆವರಣದಲ್ಲಿದ್ದ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ (EV) ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಈ ವಾಹನಗಳನ್ನು 'ಇವೀಸ್' (Evis) ಕಂಪನಿಯು ಝೆಪ್ಟೋ (Zepto), ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೊ (Zomato) ಮುಂತಾದ ಪ್ರಮುಖ ಡೆಲಿವರಿ ಸಂಸ್ಥೆಗಳ ಸಿಬ್ಬಂದಿಗೆ ದಿನಬಾಡಿಗೆ ಆಧಾರದ ಮೇಲೆ ನೀಡುತ್ತಿತ್ತು.&lt;/p&gt;&lt;p&gt;ಸಂಜೆ ಸುಮಾರು 7 ಗಂಟೆಯ ವೇಳೆಗೆ ವಾಹನಗಳಿದ್ದ ಆವರಣದ ಗೇಟ್ ಲಾಕ್ ಮಾಡಿದ ಕೆಲವೇ ಕ್ಷಣಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಪ್ರಕಾರ ಶಾರ್ಟ್ ಸರ್ಕ್ಯೂಟ್&zwnj;ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ, ಘಟನೆಯ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಕೆಲಸ ಮುಗಿಸಿ ಪಾರ್ಕಿಂಗ್&zwnj;ಗೆ ತಂದಿದ್ದ ಹಾಗೂ ಸರ್ವೀಸ್&zwnj;ಗಾಗಿ ಕಾಯ್ದಿರಿಸಲಾಗಿದ್ದ ನೂರಾರು ವಾಹನಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಸಂಪೂರ್ಣ ನಾಶವಾಗಿವೆ.&lt;/p&gt;&lt;p&gt;ಇವೀಸ್ ಕಂಪನಿಯ ಅಡ್ಮಿನ್ ಹರೀಶ್ ಪ್ರತಿಕ್ರಿಯೆ ನೀಡಿ, ಸಂಜೆ 7 ಗಂಟೆಯ ಸುಮಾರಿಗೆ ಜಾಗದ ಮಾಲೀಕರು ಫೋನ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದರು. ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿದೆವು. ದಿನನಿತ್ಯ ಕೆಲಸ ಮುಗಿದ ನಂತರ ವಾಹನಗಳನ್ನು ಪಾರ್ಕ್ ಮಾಡಲು ಮತ್ತು ಸರ್ವೀಸ್&zwnj;ಗೆ ಬಂದ ಗಾಡಿಗಳನ್ನು ಇಡಲು ಈ ಜಾಗವನ್ನು ಬಾಡಿಗೆಗೆ ಪಡೆದಿದ್ದೆವು. ಈ ಹಿಂದೆ ಎಂದೂ ಇಂತಹ ಘಟನೆ ನಡೆದಿಲ್ಲ. ಇದು ಶಾರ್ಟ್ ಸರ್ಕ್ಯೂಟ್&zwnj;ನಿಂದ ನಡೆದ ಅಪಘಾತವಲ್ಲ, ಬದಲಿಗೆ ಯಾರೋ ಬೇಕಂತಲೇ ಕಿಡಿಗೇಡಿತನದಿಂದ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಇದೆ ಎಂದಿದ್ದಾರೆ.&lt;/p&gt;&lt;p&gt;ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರಾದರೂ, ಅದಾಗಲೇ ಕೋಟ್ಯಂತರ ರೂಪಾಯಿ ಮೌಲ್ಯದ ವಾಹನಗಳು ಸುಟ್ಟು ಬೂದಿಯಾಗಿದ್ದವು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆಯೇ ಎಂಬ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದಾರೆ.&lt;/p&gt;&lt;h2&gt;ಸೈಕಲ್&zwnj; ಗೋದಾಮಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತು ಹಾನಿ&lt;/h2&gt;&lt;p&gt;ದೊಡ್ಡಬಳ್ಳಾಪುರ: ಇಲ್ಲಿನ ಮುಕ್ತಾಂಬಿಕಾ ರಸ್ತೆಯ ತಮಿಳ್&zwnj;ನಾಡ್&zwnj; ಮರ್ಕಂಟೈಲ್&zwnj; ಬ್ಯಾಂಕ್&zwnj;ನ ನೆಲಮಹಡಿಯಲ್ಲಿದ್ದ ಸೈಕಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರುಪಾಯಿ ಮೌಲ್ಯದ ಸೈಕಲ್&zwnj; ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್&zwnj;ನಿಂದ ಸೈಕಲ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಘಟನೆಯಲ್ಲಿ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.&lt;/p&gt;&lt;p&gt;ಗಾಣಿಗರಪೇಟೆ ಬಳಿಯ ಕಾಳಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀಕೃಷ್ಣ ಸ್ಟೋರ್ ಮಾಲೀಕರಿಗೆ ಸೇರಿದ ಗೋದಾಮು ಇದಾಗಿದೆ. ಸೋಮವಾರ ಗೋದಾಮಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಗೋದಾಮಿನಲ್ಲಿದ್ದ ಸೈಕಲ್&zwnj;ಗಳು ಹಾಗೂ ಇತರೆ ವಸ್ತುಗಳಿಗೆ ವ್ಯಾಪಿಸಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ದೊಡ್ಡಬಳ್ಳಾಪುರನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 6 ಟ್ಯಾಂಕರ್&zwnj;ಗಳಷ್ಟು ನೀರು ಬಳಸಿದ್ದು, ಬೆಂಕಿ ನಿಯಂತ್ರಣಕ್ಕೆ ತರಲು ಹರಸಾಹಸ ನಡೆಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.&lt;/p&gt;&lt;h2&gt;ಸುರತ್ಕಲ್&zwnj;: ಭೀಕರ ಅಗ್ನಿ ಅವಘಡ, 1.60 ಕೋಟಿ ರು. ನಷ್ಟ&lt;/h2&gt;&lt;p&gt;ಮಂಗಳೂರು: ಸುರತ್ಕಲ್&zwnj;ನ ಗುಡ್ಡೆಕೊಪ್ಲದಲ್ಲಿರುವ ಆವಿಷ್ಕಾರ್ ಗ್ರಾಫಿಕ್ಸ್ ಸೆಂಟರ್&zwnj;ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 1.60 ಕೋಟಿ ರು. ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಅಗ್ನಿ ಅವಘಡದಲ್ಲಿ ಮುದ್ರಣ ಕೇಂದ್ರದಲ್ಲಿದ್ದ ಹಲವು ಮುದ್ರಣ ಯಂತ್ರಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆಯಿಂದ ಮುದ್ರಣ ಕೇಂದ್ರಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ. ರಾತ್ರಿ ವೇಳೆ ಸ್ಥಳೀಯ ನಿವಾಸಿಗಳು ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆಯ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಕುರಿತು ಪರಿಶೀಲನೆ ನಡೆಯುತ್ತಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-fire-breakout-over-400-rental-evs-destroyed-in-devastating-short-circuit-gdp/articleshow-wigxw1p"/>
        </item>
        <item>
            <title><![CDATA[ಲಕ್ಕುಂಡಿ ಗ್ರಾ. ಪಂಚಾಯಿತಿಯಲ್ಲಿ ದಿಢೀರ್ ಬದಲಾವಣೆ; ಆಡಳಿತಾಧಿಕಾರಿ, PDO ವರ್ಗಾವಣೆ]]></title>
            <link>https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq</link>
            <guid isPermaLink="true">https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq</guid>
            <pubDate>Thu, 13 Aug 2026 07:48:04 +0530</pubDate>
            <description><![CDATA[ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂಲ ಸೌಲಭ್ಯಗಳ ವೈಫಲ್ಯವನ್ನು ಖಂಡಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಯಶಸ್ವಿಯಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆಡಳಿತಾಧಿಕಾರಿ ಹಾಗೂ ಪಿಡಿಒ ಅವರನ್ನು ವರ್ಗಾವಣೆಗೊಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwed1mv7ear02dbcyksv2ge,imgname-lakkundi-1786587285147.jpg" type="image/jpeg" height="390" width="690"/>
            <content:encoded><![CDATA[&lt;p&gt;ಗದಗ: ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತಾಧಿಕಾರಿಗಳು ಮತ್ತು ಪಿಡಿಒ ಅವರ ವೈಫಲ್ಯ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆ ಆಡಳಿತಾಧಿಕಾರಿಯ ಕರ್ತವ್ಯ ಬಿಡುಗಡೆ ಹಾಗೂ ಪಿಡಿಒ ಅವರ ವರ್ಗಾವಣೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಜನಗಿ ಆದೇಶಿಸಿದರು.&lt;/p&gt;&lt;p&gt;ಈ ಕುರಿತು ಕಳೆದ ಎರಡು ದಿನಗಳಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತ ಆಡಳಿತಾಧಿಕಾರಿಗಳ ಬದಲಾವಣೆಗೆ ಪಟ್ಟು ಹಿಡಿದಿದ್ದರು. ತಾಪಂ ಇಒ ಡಾ. ಎಚ್.ಎಸ್. ಜನಗಿ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು.&lt;/p&gt;&lt;h2&gt;&lt;strong&gt;ಆಡಳಿತ ನಡೆಸುವ ವಿಫಲತೆ&lt;/strong&gt;&lt;/h2&gt;&lt;p&gt;ಅಸಮರ್ಪಕ ಕುಡಿಯುವ ನೀರು, ಅವೈಜ್ಞಾನಿಕ ಜೆಜೆಎಂ ಕಾಮಗಾರಿ, ರಸ್ತೆಗಳ ಅಸ್ವಚ್ಛತೆ, ಬೀದಿದೀಪ, ರಾಜಬೀದಿ ದುರಸ್ತಿ, ಸಿಬ್ಬಂದಿಯ ವಿಳಂಬ ವೇತನ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಆಡಳಿತ ನಡೆಸುವ ವಿಫಲತೆಯನ್ನು ಎತ್ತಿ ತೋರಿಸಿದಾಗ ಮನವೊಲಿಕೆಗೆ ಆಗಮಿಸಿದ್ದ ಅಧಿಕಾರಿಗಳು ತಕ್ಷಣವೇ ಆಡಳಿತಾಧಿಕಾರಿ ಶರಣು ಗೋಗೇರಿ ಅವರಿಂದ ಕರ್ತವ್ಯ ಬಿಡುಗಡೆಯ ಪತ್ರ ಹಾಗೂ ಪಿಡಿಒ ಅಮೀರನಾಯಕ ಅವರಿಂದ ವರ್ಗಾವಣೆ ಮನವಿ ಪತ್ರವನ್ನು ಪಡೆದರು.&lt;/p&gt;&lt;p&gt;ನಂತರ ಮಾತನಾಡಿದ ಅವರು, ಜಿಪಂ ಹಾಗೂ ತಾಪಂನಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಅಭಿವೃದ್ಧಿ ಸೇರಿದಂತೆ ಅಧಿಕ ಅನುದಾನವಿದ್ದು, ಅವುಗಳನ್ನು ಸಮರ್ಪಕ ಬಳಕೆ ಮಾಡುವುದರೊಂದಿಗೆ ಐತಿಹಾಸಿಕ ಲಕ್ಕುಂಡಿ ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು ಎಂದರು.&lt;/p&gt;&lt;h3&gt;&lt;strong&gt;6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ&lt;/strong&gt;&lt;/h3&gt;&lt;p&gt;ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ ಹಾಗೂ ನಜೀರಅಹ್ಮದ ಕಿರಿಟಗೇರಿ ಮಾತನಾಡಿ, ಕಳೆದ 6 ತಿಂಗಳಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆ ಹಾಗೂ ಇಬ್ಬರು ಅಧಿಕಾರಿಗಳ ಸಮನ್ವಯ ಕೊರತೆ ಕುರಿತು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.&lt;/p&gt;&lt;p&gt;ಹಲವಾರು ಸಲ ಗ್ರಾಮದ ಹಲವಾರು ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳಿಗೂ ಸಹ ತಿಳಿಸಿದರೂ ಕಾಳಜಿ ವಹಿಸಿರಲಿಲ್ಲ. ಆದ್ದರಿಂದ ಆಡಳಿತ ಅಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗಳು ಪರಿಸ್ಥಿತಿಯ ಗಂಭಿರತೆಯನ್ನು ಅರಿತು ಇಬ್ಬರು ಅಧಿಕಾರಿಗಳನ್ನು ಹಿಂಪಡೆದು ನೂತನ ಅಧಿಕಾರಿಗಳನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ. ಲಕ್ಕುಂಡಿ ಗ್ರಾಮದ ಅಭಿವೃದ್ಧಿಗೆ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.&lt;/p&gt;&lt;p&gt;ಶಿವಪ್ಪ ಸಜ್ಜನರ, ಗ್ರಾಪಂ ಮಾಜಿ ಸದಸ್ಯ ಬಿ.ಬಿ. ಮಾಡಲಗೇರಿ, ಮರಿಯಪ್ಪ ವಡ್ಡರ, ಕಳಕೇಶ ಟೆಂಗಿನಕಾಯಿ, ಚಂದ್ರಗೌಡ ಪಾಟೀಲ, ಚನ್ನಪ್ಪ ಹುಬ್ಬಳ್ಳಿ, ಬಸವರಾಜ ಮುಳ್ಳಾಳ, ಬಸವರಾಜ ಕವಲೂರು, ಪ್ರವೀಣ ಕಲಾಲ, ವಿನಾಯಕ ಡಿಗ್ಗಾವಿ, ಮಂಜುನಾಥ ತಡಹಾಳ, ಬಸವರಾಜ ಕುಂಬಾರ, ವೀರಣ್ಣ ಅರಹುಣಶಿ, ಶಿವಪ್ಪ ಭಜಂತ್ರಿ, ರವಿ ಕವಲೂರು ಇತರರು ಇದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/gadag-taluk-lakkundi-gram-panchayat-administrator-pdo-transfer-mrq/articleshow-52kq8gq"/>
        </item>
        <item>
            <title><![CDATA[Organ Donation Explain: ಸತ್ತ ಬಳಿಕವೂ ಬದುಕಬೇಕಿದ್ದರೆ ಅಂಗಾಂಗ ದಾನ ಮಾಡಿ!]]></title>
            <link>https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o</link>
            <guid isPermaLink="true">https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o</guid>
            <pubDate>Thu, 13 Aug 2026 07:45:05 +0530</pubDate>
            <description><![CDATA[ಭಾರತದಲ್ಲಿ ಲಕ್ಷಾಂತರ ಜನರಿಗೆ ಅಂಗಾಂಗಗಳ ಅವಶ್ಯಕತೆಯಿದ್ದರೂ, ದಾನಿಗಳ ಕೊರತೆಯಿಂದಾಗಿ ಜೀವಹಾನಿಯಾಗುತ್ತಿದೆ. ಮೆದುಳು ನಿಷ್ಕ್ರಿಯಗೊಂಡ (ಬ್ರೈನ್ ಡೆತ್) ವ್ಯಕ್ತಿಗಳಿಂದ ಅಂಗಾಂಗ ದಾನ, ಅದರ ಕಾನೂನು ಪ್ರಕ್ರಿಯೆ ಮತ್ತು ಮಹತ್ವವನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwe6mxbwds0ma3rcq91y138,imgname-----------------------2026-08-13t073945.142-1786587075499.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಡಾ। ಮುರಲೀ ಮೋಹನ್ ಚೂಂತಾರು&lt;/strong&gt;&lt;/p&gt;&lt;p&gt;ಆಗಸ್ಟ್ 13 ಅನ್ನು ವಿಶ್ವದಾದ್ಯಂತ &lsquo;ಆಂಗಾಂಗ ದಾನಿಗಳ&rsquo; ಎಂದು ಆಚರಿಸಲಾಗುತ್ತಿದೆ. ಆಂಗಾಂಗ ದಾನವನ್ನು ಪ್ರಚೋದಿಸಲು ಮತ್ತು ಪ್ರೇರೇಪಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತಿದೆ. ವಿಪರ್ಯಾಸದ ವಿಷಯವೆಂದರೆ 140 ಕೋಟಿಗೂ ಜಾಸ್ತಿ ಜನಸಂಖ್ಯೆ ಇರುವ ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್, ಹೃದಯ, ಪಿತ್ತಜನಾಕಾಂಗ ಮತ್ತು ಶ್ವಾಸಕೋಶಗಳ ತುರ್ತು ಅಗತ್ಯ ಇದೆ. ನಮ್ಮ ಬೃಹತ್ ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಇವೆಯಾದರೂ, ದಾನಿಗಳ ಕೊರತೆ ಕಾಡುತ್ತಿದೆ. ಕೇವಲ ಸಾವಿರಗಳ ಸಂಖ್ಯೆಯಲ್ಲಿರುವ ಅಂಗಾಂಗ ದಾನಿಗಳಿಂದಾಗಿ ಲಕ್ಷಾಂತರ ಮಂದಿ ಜೀವ ನಷ್ಟವಾಗುತ್ತಿದೆ. ಸಾಕಷ್ಟು ಮಾಹಿತಿಯ ಕೊರತೆ, ಕಾನೂನಿನ ಅಡಚಣೆ ಮತ್ತು ಸೂಕ್ತ ಮಾರ್ಗದರ್ಶನ ಲಭ್ಯವಿಲ್ಲದ ಕಾರಣ ಬದುಕಿ ಬಾಳಬೇಕಾದ ಜೀವಗಳು ಕಮರಿ ಹೋಗುತ್ತಿವೆ. ಉದಾಹರಣೆಯೆಂದರೆ, ವಾರ್ಷಿಕ ಸರಾಸರಿ 2.5 ಲಕ್ಷ ಮಂದಿಗೆ ಭಾರತದಲ್ಲಿ ಕಿಡ್ನಿ ಕಸಿಯ ಅವಶ್ಯಕತೆ ಇದೆ. ಅದರೆ ಕೇವಲ 4ರಿಂದ 5 ಸಾವಿರ ಮಂದಿಗೆ ಮಾತ್ರ ದಾನಿಗಳು ಸಿಗುತ್ತಾರೆ. ಈ ನಿಟ್ಟಿನಲ್ಲಿ ಅಂಗಾಂಗ ದಾನಗಳ ಬಗ್ಗೆ ಜಾಗೃತಿ ನೀಡುವ ಮಹತ್ಕಾರ್ಯ ಆಗಲೇಬೇಕು. ಸತ್ತ ಮೇಲೂ ಬದುಕುವುದಲ್ಲಿಯೇ ನಿಜವಾದ ಸಾರ್ಥಕತೆ ಇದೆ.&lt;/p&gt;&lt;h2&gt;ಏನಿದು ಅಂಗಾಂಗ ದಾನ?:ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.&lt;/h2&gt;&lt;p&gt;&lt;strong&gt;1.ಜೀವಂತ ವ್ಯಕ್ತಿಗಳು ಮಾಡುವ ದಾನ:&lt;/strong&gt;&lt;/p&gt;&lt;p&gt;ವ್ಯಕ್ತಿಯ ದೇಹದಲ್ಲಿ ಮರುಸೃಷ್ಟಿಯಾಗುವ ಅಂಗಾಂಗಗಳನ್ನು, ಜೀವಕೋಶಗಳನ್ನು ಮತ್ತು ದ್ರವ್ಯಗಳನ್ನು ದಾನ ಮಾಡುವುದು.&lt;/p&gt;&lt;p&gt;ಉದಾಹರಣೆಗೆ:&lt;/p&gt;&lt;p&gt;ರಕ್ತದಾನ, ವೀರ್ಯದಾನ, ಚರ್ಮದಾನ, ಅಸ್ಥಿಮಜ್ಜೆ ದಾನ ಇತ್ಯಾದಿ. ಇನ್ನೊಂದು ವಿಧವೆಂದರೆ ದೇಹದ ಯಾವುದಾದರೂ ಅಂಗಗಳನ್ನು ಅಥವಾ ಅದರ ಭಾಗಗಳನ್ನು ಇನ್ನೊಬ್ಬನಿಗೆ ದಾನ ಮಾಡುವುದು. ಉದಾಹರಣೆಗೆ ಎರಡು ಕಿಡ್ನಿಗಳಲ್ಲಿ ಒಂದನ್ನು ನೀಡುವುದು, ಯಕೃತಿನ ಒಂದು ಭಾಗ ಅಥವಾ ಸಣ್ಣ ಕರುಳಿನ ಒಂದು ಭಾಗ ಇತ್ಯಾದಿ.&lt;/p&gt;&lt;p&gt;&lt;strong&gt;2. ಎರಡನೇಯ ದಾನ:&lt;/strong&gt;&lt;/p&gt;&lt;p&gt;ಮೃತ ಅಥವಾ ಮೆದುಳು ನಿಷ್ಕ್ರೀಯಗೊಂಡ (Brain Death) ವ್ಯಕ್ತಿಗಳ ಅಂಗಾಂಗವನ್ನು ಇನ್ನೊಂದು ರೋಗಿಗೆ ನೀಡುವುದು ಅಥವಾ ಜೋಡಿಸುವುದು.&lt;/p&gt;&lt;p&gt;ಉದಾ:&lt;/p&gt;&lt;p&gt;ಹೃದಯ, ಶ್ವಾಸಕೋಶ, ಪಿತ್ತ ಜನಕಾಂಗ, ಸಣ್ಣ ಕರುಳು, ಮೋದೋಜಿರಕಾಂಗ, ಕಾರ್ನಿಯಾ (ಅಶ್ವಪಟಲ) ಮೂಳೆಗಳು, ಹೃದಯದ ಕವಾಟಗಳು ಇತ್ಯಾದಿ.&lt;/p&gt;&lt;p&gt;ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ ಅಂಶಗಳ ಪ್ರಕಾರ, ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದಲ್ಲಿ ನಿಮಿಷಕ್ಕೆ 8 ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ.&lt;/p&gt;&lt;p&gt;&lt;strong&gt;ಏನಿದು ಬ್ರೈನ್ ಡೆತ್?:&lt;/strong&gt;&lt;/p&gt;&lt;p&gt;ಅಫಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ನಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆಯೂ ಸ್ಥಗಿತವಾಗಿರುತ್ತದೆ. ಆದರೆ ಹೃದಯ, ಶ್ವಾಸಕೋಶ ತನ್ನ ಪಾಡಿಗೆ ತಾನು ಕಾರ್ಯ ಮಾಡುತ್ತಿರುತ್ತದೆ. ವ್ಯಕ್ತಿಯನ್ನು ತೀವ್ರ ನಿಗಾ ವಿಭಾಗದಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ಮುಖಾಂತರ, ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಪೂರೈಕೆ ನಡೆಯುತ್ತಿರುತ್ತದೆ. ಹೃದಯ, ಶ್ವಾಸಕೋಶ, ಪಿತ್ತಜನಾಕಾಂಗ, ಮೂತ್ರಪಿಂಡಗಳಿಗೆ ಆಮ್ಲಜನಕ ಸರಬರಾಜು ಆಗುತ್ತಲೇ ಇರುತ್ತದೆ. ವ್ಯಕ್ತಿ ಮಾತ್ರ ಬದುಕಿದ್ದು, ಸತ್ತಿರುತ್ತಾನೆ. ವ್ಶೆದ್ಯಕಿಯ ಭಾಷೆಯಲ್ಲಿ ಇದನ್ನು ಬ್ರೈನ್ ಡೆತ್ ಅಥವಾ ಮೆದುಳು ನಿಷ್ಕ್ರಿಯತೆ ಎಂದು ಹೇಳುತ್ತಾರೆ. ಇಂತಹ ವ್ಯಕ್ತಿಯ ದೇಹದಿಂದ ಅಗತ್ಯ ರೋಗಿಗಳಿಗೆ ಅಂಗಾಂಗಗಳನ್ನು ತೆಗೆದು, ವ್ಯಕ್ತಿಯ ಬಂಧುಗಳ ಸಮ್ಮತಿಯೊಂದಿಗೆ ಜೋಡಿಸಬಹುದು. ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳು ಕೃತಕ ಉಸಿರಾಟದ ವ್ಯವಸ್ಥೆ ತೆಗೆದೊಡನೆಯೋ ಸಾಯುತ್ತಾರೆ. ಅಂಗಾಂಗ ದಾನ ಮಾಡಿದಲ್ಲಿ ಸತ್ತು ಹುತಾತ್ಮರಾಗುವುದರ ಜೊತೆಗೆ ಮತ್ತೊಬ್ಬ ವ್ಯಕ್ತಿಯಲ್ಲಿ ಮರುಜನ್ಮ ಪಡೆಯುತ್ತಾರೆ ಮತ್ತು ಸಾವಲ್ಲೂ ಸಾರ್ಥಕತೆಯನ್ನು ಪಡೆಯುತ್ತಾರೆ. ವೈದ್ಯರು ಲಿಖಿತ ರೂಪದಲ್ಲಿ ಬ್ರೈನ್ ಡೆತ್ ಎಂದು ವರದಿ ನೀಡಿದ ಬಳಿಕವೇ, ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಅನುಸರಿಸಿ ಅಂಗಾಂಗ ದಾನಕ್ಕೆ ಸಮ್ಮತಿ ನೀಡಲಾಗುತ್ತದೆ. ಈ ರೀತಿ ದಾನಿಗಳಿಂದ ಪಡೆದ ಹೃದಯವನ್ನು ನಾಲ್ಕೈದು ಗಂಟೆಗಳ ಒಳಗೆ, ಹತ್ತು ಹನ್ನೆರಡು ಗಂಟೆಗಳ ಒಳಗೆ ಪಿತ್ತಕೋಶಜನಾಕಾಂಗ ಹಾಗೂ 24 ಗಂಟೆಗಳ ಒಳಗೆ ಮೂತ್ರಪಿಂಡವನ್ನು ಅಗತ್ಯ ರೋಗಿಗಳಿಗೆ ಜೋಡಿಸಲಾಗುತ್ತದೆ. ಇದೇ ರೀತಿ ಚರ್ಮ, ಹೃದಯದ ಕವಾಟಗಳು, ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸಹಜವಾಗಿ ಸತ್ತ ವ್ಯಕ್ತಿಗಳಿಂದ ನೇತ್ರದಾನವನ್ನು 4ರಿಂದ 5 ಗಂಟೆ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಒಟ್ಟಿನಲ್ಲಿ ಸತ್ತು ಮಣ್ಣಾಗುವ ಹಲವಾರು ಅಂಗಾಂಗಗಳು ಮತ್ತೆ ಬೇರೊಬ್ಬ ರೋಗಿಯಲ್ಲಿ ಬದುಕಿ ಬಾಳುತ್ತವೆ. ಒಟ್ಟಿನಲ್ಲಿ ರಕ್ತದಾನ, ದೇಹದಾನ, ನೇತ್ರದಾನದಂತೆಯೇ ಅಂಗಾಂಗ ದಾನವೂ ಬಹಳ ಪವಿತ್ರವಾದ ದಾನವಾಗಿರುತ್ತದೆ.&lt;/p&gt;&lt;p&gt;&lt;strong&gt;ಯಾರು ದಾನ ಮಾಡಬಹುದು?:&lt;/strong&gt;&lt;/p&gt;&lt;p&gt;ಅಂಗಾಂಗ ದಾನಕ್ಕೆ ಯಾವುದೇ ರೀತಿಯ ಚೌಕಟ್ಟಿಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡಾ ಅಂಗಾಂಗ ದಾನ ಮಾಡಬಹುದು. ಸ್ವ ಇಚ್ಛೆಯಿಂದ ಯಾರು ಬೇಕಾದರೂ ಅಂಗಾಂಗ ದಾನ ಮಾಡಬಹುದು. ಸಂಪೂರ್ಣವಾಗಿ ಅಂಗಾಂಗಗಳಿಲ್ಲದ ದೇಹಕ್ಕೆ ಅಂತ್ಯಕ್ರಿಯೆ ಮಾಡಿದಲ್ಲಿ ಪರಲೋಕ ಪ್ರಾಪ್ತಿ ಆಗುವುದಿಲ್ಲ, ಮೋಕ್ಷ ಸಿಗುವುದಿಲ್ಲ ಎಂಬ ಮೂಢನಂಬಿಕೆಯಿಂದಾಗಿ ಅಂಗಾಂಗ ದಾನಿಗಳ ಸಂಖ್ಯೆಯ ಕೊರತೆ ಬಾಧಿಸುತ್ತಿದೆ. ಅದೇ ರೀತಿ ಸರಿಯಾದ ನಿಯಂತ್ರಣ ಮತ್ತು ಸೂಕ್ತ ಕಾನೂನಿನ ಚೌಕಟ್ಟು ಇಲ್ಲದ ಕಾರಣ 80 ಮತ್ತು 90ರ ದಶಕದಲ್ಲಿ ಅಂಗಾಂಗ ಮಾರಾಟ ದಂದೆ ವ್ಯಾಪಕವಾಗಿ ಹುಟ್ಟಿಕೊಂಡಿತ್ತು.&lt;/p&gt;&lt;p&gt;ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸ್ವಯಂ ಸೇವಕ ಸಂಘಗಳು, ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು ಮತ್ತು ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ತುರ್ತು ಅಗತ್ಯ ಇದೆ. ಅಂಗಾಂಗ ದಾನಿಗಳು ಮತ್ತು ದಾನ ಪಡೆಯುವ ವ್ಯಕ್ತಿಗಳ ನಡುವಿನ ಅಂತರ ಕಡಿಮೆ ಮಾಡುವ ದಾನಿಗಳ ಬ್ಯಾಂಕ್ ಸ್ಥಾಪಿಸುವ ತುರ್ತು ಅವಶ್ಯಕತೆ ಇದೆ.&lt;/p&gt;&lt;p&gt;&lt;strong&gt;ಕಾನೂನು ಏನನ್ನುತ್ತದೆ?:&lt;/strong&gt;&lt;/p&gt;&lt;p&gt;ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರಕಾರ ಕಾನೂನು ಬದ್ಧಗೊಳಿಸಿದೆ. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡದ ಕಸಿ ಮಾಡಲಾಯಿತು ಮತ್ತು 1994ರಲ್ಲಿ ಬದಲಿ ಹೃದಯವನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು ಮತ್ತು 1995ರಲ್ಲಿ ಮದ್ರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಯಶಸ್ವಿಯಾಗಿ ಮಾಡಲಾಯಿತು. ಭಾರತದಾದ್ಯಂತ ಅಂಗಾಂಗ ಜೋಡಿಸುವ ನೂರಾರು ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ ದುರಾದೃಷ್ಟವೆಂದರೆ ಅಂಗಾಂಗ ದಾನಿಗಳ ತೀವ್ರ ಕೊರತೆಯಿದೆ. ಅಂಕಿಅಂಶಗಳ ಪ್ರಕಾರ 2022ರಲ್ಲಿ ಸುಮಾರು 2 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು ಮತ್ತು ಇದರಲ್ಲಿ ಕೇವಲ ಒಂದು ಶೇಕಡಾ ಮಂದಿ ಮಾತ್ರ ಅಂಗಾಂಗ ದಾನ ಮಾಡಿದ್ದಾರೆ ಎಂಬುದು ಬಹಳ ಖೇದಕರ ವಿಚಾರ. ಅಂದಾಜಿನ ಪ್ರಕಾರ ಭಾರತದಲ್ಲಿ ವರ್ಷಕ್ಕೆ 2 ಲಕ್ಷ ಮಂದಿಗೆ ಕಿಡ್ನಿಯ ಅಗತ್ಯವಿದೆ. ಆದರೆ ಕೇವಲ 6000 ರಿಂದ 7000 ಮಂದಿಗೆ ಮಾತ್ರ ಕಿಡ್ನಿ ಸಿಗುತ್ತದೆ. 50 ರಿಂದ 55 ಮಂದಿಗೆ ಹೃದಯದ ಅಗತ್ಯವಿದೆ ಆದರೆ ಕೇವಲ ಹತ್ತಿಪ್ಪತ್ತು ಮಂದಿಗೆ ಹೃದಯ ದೊರಕುತ್ತಿದೆ. 50,000 ಮಂದಿಗೆ ಯಕೃತ್ತಿನ ಅವಶ್ಯಕತೆ ಇದ್ದು ಕೇವಲ 800 ರಿಂದ 1000 ಮಂದಿಗೆ ಮಾತ್ರ ಈ ಭಾಗ್ಯ ದೊರಕುತ್ತಿದೆ. ಸಂತೋಷದ ವಿಚಾರವೆಂದರೆ ನೇತ್ರದಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.&lt;/p&gt;&lt;p&gt;&lt;strong&gt;ನಾವೇನು ಮಾಡಬೇಕು?:&lt;/strong&gt;&lt;/p&gt;&lt;p&gt;ನಮ್ಮ ಬಂಧುಗಳು, ಸ್ನೇಹಿತರು ಅಫಘಾತದಲ್ಲಿ ಮೃತ ಪಟ್ಟಲ್ಲಿ ಅವರನ್ನು ತಿಳಿಹೇಳಿ ಅಂಗಾಂಗ ದಾನಕ್ಕೆ ಒಪ್ಪಿಸಬೇಕು. ನಾವು ಕೂಡಾ ದೇಹದಾನ ಮತ್ತು ನೇತ್ರದಾನಕ್ಕೆ ಒಪ್ಪಿಗೆ ನೀಡಬೇಕು. ಆಕಸ್ಮಿಕವಾಗಿ ಸಾವು ಬಂದಲ್ಲಿ ಅಂಗಾಂಗ ದಾನಕ್ಕೂ ಮೊದಲೇ ಒಪ್ಪಿಗೆ ನೀಡಿದಲ್ಲಿ ಮತ್ತಷ್ಟು ಜೀವಗಳು ಉಳಿಯಬಹುದು. ಇನ್ನೇಕೆ ತಡಮಾಡುತ್ತೀರಿ ಗೆಳೆಯರೇ, ತಮ್ಮ ಹೆಸರನ್ನು ಸ್ಥಳೀಯ ನೇತ್ರದಾಮಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ನೋಂದಾಯಿಸಿ ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನಕ್ಕೆ ಸಿದ್ಧರಾಗಿ. ಸತ್ತ ಬಳಿಕವೂ ಬದುಕುವುದರಲ್ಲಿಯೇ ಸಾರ್ಥಕತೆ ಅಡಗಿದೆ. ನಾವು ಸತ್ತ ಬಳಿಕವೂ ನಮ್ಮ ಕಣ್ಣುಗಳಿಂದ ಇನ್ನೊಬ್ಬರು ನೋಡುವುದಕ್ಕಿಂತ ದೊಡ್ಡ ಭಾಗ್ಯ ಇನ್ಯಾವುದೂ ಇಲ್ಲ. ನಮ್ಮ ಸಾವಿನ ಬಳಿಕವೂ ನಮ್ಮ ಹೃದಯ ಇನ್ನೊಬ್ಬರ ದೇಹದಲ್ಲಿ ಲಬ್-ಡಬ್ ಎಂದು ಬಡಿದು ಕೊಳ್ಳುತ್ತಲೇ ಇರುವುದರಿಂದ ಸಿಗುವ ಆತ್ಮತೃಪ್ತಿ, ನೆಮ್ಮದಿ ಮತ್ತು ಶಾಂತಿ ಎಷ್ಟೇ ಹಣ ನೀಡಿದರೂ ನಮ್ಮ ಕುಟುಂಬ ವರ್ಗಕ್ಕೆ ದೊರಕಲಿಕ್ಕಿಲ್ಲ. ನಾವು ಸತ್ತ ಬಳಿಕ ನಮ್ಮ ದೇಹ ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕಿಂತ ಅಂಗಾಂಗಗಳನ್ನು ದಾನ ಮಾಡಿದ್ದಲ್ಲಿ ನಾಲ್ಕಾರು ಜೀವಗಳು ಬದುಕಿ ಬಾಳಬಹುದು. ಜಾತಿ, ಮತ, ಕೋಮು ದ್ವೇಷ ದಳ್ಳುರಿಗಳಿಂದ ಬಾಳುತ್ತಿರುವ ಈ ಕಾಲಘಟ್ಟದಲ್ಲಿ ಅಂಗಾಂಗ ದಾನದ ಶಪಥ ಮಾಡಿ ಸಾವನ್ನೇ ಗೆಲ್ಲೋಣ, ಸತ್ತ ಬಳಿಕವೂ ಮತ್ತೆ ಬದುಕೋಣ, ಮಾನವತೆಯನ್ನು ಎತ್ತಿ ಹಿಡಿಯೋಣ.&lt;/p&gt;]]></content:encoded>
            <category><![CDATA[health-life]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/health-life/organ-donation-explain-donate-your-organs-if-you-wish-to-live-on-even-after-death-rav/articleshow-i17wm3o"/>
        </item>
        <item>
            <title><![CDATA[ಸಕಲೇಶಪುರ - ಸುಬ್ರಹ್ಮಣ್ಯ ರೋಡ್‌: ವಂದೇ ಭಾರತ್ ರೈಲಿನ ಪರೀಕ್ಷಾರ್ಥ ಸಂಚಾರ ಯಶಸ್ವಿ]]></title>
            <link>https://kannada.asianetnews.com/karnataka-districts/indian-railways-sakaleshpur-subrahmanya-road-vande-bharat-express-train-runs-successfully-mrq/articleshow-ifzg7a3</link>
            <guid isPermaLink="true">https://kannada.asianetnews.com/karnataka-districts/indian-railways-sakaleshpur-subrahmanya-road-vande-bharat-express-train-runs-successfully-mrq/articleshow-ifzg7a3</guid>
            <pubDate>Thu, 13 Aug 2026 07:37:42 +0530</pubDate>
            <description><![CDATA[ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರದ ಪೂರ್ವಭಾವಿಯಾಗಿ, ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಮಾರ್ಗದಲ್ಲಿ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ರೈಲು, ವೇಗ ನಿಯಂತ್ರಣ ಮತ್ತು ತುರ್ತು ಬ್ರೇಕ್ ವ್ಯವಸ್ಥೆಗಳ ಪರೀಕ್ಷೆಗೆ ಒಳಪಟ್ಟಿದ್ದು, ಮುಂದಿನ ಪರೀಕ್ಷೆಗಳು ಯಶಸ್ವಿಯಾದರೆ ಈ ಮಾರ್ಗದಲ್ಲಿ ಸೇವೆ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwdph9kmjaxheff7hrpsr4z,imgname-subramanya-vande-bharat-1786586547507.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು: &lt;/strong&gt;ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್&zwnj;ಪ್ರೆಸ್ ರೈಲು ಸಂಚಾರ ಆರಂಭಿಸುವ ಪೂರ್ವಭಾವಿಯಾಗಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟಿ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಮೊದಲ ಪ್ರಾಯೋಗಿಕ ಸಂಚಾರವನ್ನು ಬುಧವಾರ ಯಶಸ್ವಿಯಾಗಿ ನಡೆಸಿತು.&lt;/p&gt;&lt;p&gt;ಸ್ವಯಂಚಾಲಿತ ತುರ್ತು ಬ್ರೇಕ್ (ಎಇಬಿ) ವ್ಯವಸ್ಥೆ ಅಳವಡಿಸಿರುವ ವಿಶೇಷ 20 ಬೋಗಿಗಳ ವಂದೇ ಭಾರತ್ ರೈಲು ಬೆಳಗ್ಗೆ 6.42ಕ್ಕೆ ಸಕಲೇಶಪುರ ರೈಲು ನಿಲ್ದಾಣದಿಂದ ಹೊರಟು, ಬೆಳಗ್ಗೆ 10.55ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣ ತಲುಪಿತು. ಬಳಿಕ ರೈಲು ಸುಬ್ರಹ್ಮಣ್ಯ ರೋಡ್&zwnj;ನಿಂದ ಸಕಲೇಶಪುರದತ್ತ ಘಾಟಿ ಏರುವ ದಿಕ್ಕಿನಲ್ಲಿಯೂ ಪ್ರಾಯೋಗಿಕ ಸಂಚಾರ ನಡೆಸಿತು.&lt;/p&gt;&lt;p&gt;ಘಾಟಿ ಮಾರ್ಗದಲ್ಲಿ ಒಟ್ಟು ಸುಮಾರು 55 ಕಿ.ಮೀ. ಉದ್ದದ ಪ್ರದೇಶದಲ್ಲಿ ವಿವಿಧ ಹಂತಗಳ ಪರೀಕ್ಷೆ ನಡೆಯಲಿದೆ. ರೈಲ್ವೆ ಸಚಿವಾಲಯದ ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಮಾನದಂಡ ಸಂಸ್ಥೆ (ಆರ್&zwnj;ಡಿಎಸ್&zwnj;ಒ) ತಜ್ಞರ ತಂಡ ವೇಗ ನಿಯಂತ್ರಣ, ರೈಲಿನ ನಿಯಂತ್ರಣ ಸಾಮರ್ಥ್ಯ, ತುರ್ತು ಬ್ರೇಕ್ ಹಾಕಿದಾಗ ರೈಲು ನಿಲ್ಲಲು ಬೇಕಾಗುವ ಅಂತರ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸುತ್ತಿದೆ.&lt;/p&gt;&lt;h2&gt;&lt;strong&gt;30 ಕಿ.ಮೀ. ವೇಗ ಮಿತಿ&lt;/strong&gt;&lt;/h2&gt;&lt;p&gt;ಘಾಟಿ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಎಇಬಿ ವ್ಯವಸ್ಥೆಯನ್ನು ಗಂಟೆಗೆ 30 ಕಿ.ಮೀ. ವೇಗಕ್ಕೆ ಪೂರ್ವ ನಿಗದಿಪಡಿಸಲಾಗಿದೆ. ಘಾಟಿ ಪ್ರದೇಶದಲ್ಲಿ ರೈಲು ಈ ವೇಗವನ್ನು ಮೀರದಂತೆ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಸಕಲೇಶಪುರ-ಸುಬ್ರಹ್ಮಣ್ಯ ಘಾಟಿ ಮಾರ್ಗದಲ್ಲಿ 1.50ರಷ್ಟು ತೀವ್ರ ಇಳಿಜಾರು/ಏರುಗತಿಯಾಗಿರುವ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಗಂಟೆಗೆ 30 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಆ.13ರಿಂದ ಮತ್ತೆ ಪರೀಕ್ಷೆ&lt;/strong&gt;&lt;/h3&gt;&lt;p&gt;ಆ.13ರಂದು ಹಾಗೂ ಆ.17ರಿಂದ 19ರ ವರೆಗೆ ಘಾಟಿ ಮಾರ್ಗದಲ್ಲಿ ಮತ್ತಷ್ಟು ಪ್ರಾಯೋಗಿಕ ಸಂಚಾರ ನಡೆಯಲಿದೆ. ಆ.20ರ ವರೆಗೂ ವಿವಿಧ ಹಂತಗಳ ಪರೀಕ್ಷೆ ಮುಂದುವರಿಯುವ ಸಾಧ್ಯತೆಯಿದೆ. ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಬೆಂಗಳೂರು-ಮಂಗಳೂರು ಹಾಗೂ ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಸೇವೆ ಆರಂಭಿಸುವ ಸಾಧ್ಯತೆ ಹೆಚ್ಚಲಿದೆ.&lt;/p&gt;&lt;p&gt;ವಂದೇ ಭಾರತ್ ರೈಲಿನ ಪ್ರಯೋಗಾತ್ಮಕ ಸಂಚಾರದ ಹಿನ್ನೆಲೆಯಲ್ಲಿ ಯಶವಂತಪುರ&ndash;ಮಂಗಳೂರು ಜಂಕ್ಷನ್/ಕಾರವಾರ ನಡುವೆ ಸಂಚರಿಸುವ ಹಗಲು ರೈಲುಗಳನ್ನು ಗರಿಷ್ಠ 30 ನಿಮಿಷಗಳವರೆಗೆ ನಿಯಂತ್ರಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಶೇಷ ವಂದೇ ಭಾರತ್ ರೇಕ್:&lt;/strong&gt;&lt;/p&gt;&lt;p&gt;ಸಾಮಾನ್ಯ ಡೀಸೆಲ್ ಅಥವಾ ವಿದ್ಯುತ್ ಎಂಜಿನ್&zwnj;ಗಳಿಂದ ಎಳೆಯುವ ರೈಲುಗಳಿಗೆ ಘಾಟಿ ಪ್ರದೇಶದಲ್ಲಿ ವೇಗ ನಿಯಂತ್ರಿಸಲು ಬ್ಯಾಂಕರ್ ಲೋಕೊಮೋಟಿವ್&zwnj;ಗಳನ್ನು ಬಳಸಲಾಗುತ್ತದೆ. ಈ ಲೋಕೊಗಳಿಗೆ 30 ಕಿ.ಮೀ. ವೇಗ ಮಿತಿಯ ಎಇಬಿ ವ್ಯವಸ್ಥೆ ಅಳವಡಿಸಲಾಗಿದೆ. ಏರುಗತಿ ಅಥವಾ ಇಳಿಜಾರಿನಲ್ಲಿ ರೈಲುಗಳ ನಿಯಂತ್ರಣಕ್ಕೆ ಇವುಗಳನ್ನು ಹೆಚ್ಚುವರಿ ಎಂಜಿನ್&zwnj;ಗಳಾಗಿ ಜೋಡಿಸಲಾಗುತ್ತದೆ.&lt;/p&gt;&lt;p&gt;ಆದರೆ ವಂದೇ ಭಾರತ್ ರೇಕ್&zwnj;ಗೆ ತಾಂತ್ರಿಕ ಹಾಗೂ ವಿನ್ಯಾಸದ ಕಾರಣಗಳಿಂದ ಬ್ಯಾಂಕರ್ ಲೋಕೊ ಜೋಡಿಸಲು ಸಾಧ್ಯವಿಲ್ಲ. ಹೀಗಾಗಿ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಘಾಟಿ ಮಾರ್ಗದ ಸಂಚಾರಕ್ಕೆ ಅನುಗುಣವಾಗಿ ವಿಶೇಷ 20 ಬೋಗಿಗಳ ವಂದೇ ಭಾರತ್ ರೇಕ್ ನಿರ್ಮಿಸಲಾಗಿದೆ. ಈ ರೇಕ್ ಕಳೆದ ವಾರ ಮೈಸೂರಿಗೆ ಆಗಮಿಸಿದ್ದು, ಆ.11ರಂದು ಮೈಸೂರಿನಲ್ಲಿ ಸ್ಥಿರ ಪರೀಕ್ಷೆ ನಡೆಸಿದ ಬಳಿಕ ಅದೇ ರಾತ್ರಿ ಸಕಲೇಶಪುರಕ್ಕೆ ತರಲಾಗಿತ್ತು.&lt;/p&gt;&lt;p&gt;ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾದರೆ ಬೆಂಗಳೂರು-ಮಂಗಳೂರು ವಂದೇ ಭಾರತ್ ಸಂಚಾರಕ್ಕೆ ಮಾರ್ಗ ಸುಗಮವಾಗಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Vande Bharat Express: ಸಕಲೇಶಪುರದಲ್ಲಿ ವಂದೇ ಭಾರತ್ ರೈಲಿಗೆ ಸ್ವಾಗತ ಬೆನ್ನಲ್ಲೇ ಸಿಕ್ಕಿತು ಮತ್ತೊಂದು ಗುಡ್&zwnj;ನ್ಯೂಸ್&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/indian-railways-sakaleshpur-subrahmanya-road-vande-bharat-express-train-runs-successfully-mrq/articleshow-ifzg7a3"/>
        </item>
        <item>
            <title><![CDATA[organ donation registration ಅಂಗಾಂಗ ದಾನ ನೋಂದಣೀಲಿ ರಾಜ್ಯಕ್ಕೆ ಧಾರವಾಡ ನಂಬರ್ ಒನ್!]]></title>
            <link>https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8</link>
            <guid isPermaLink="true">https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8</guid>
            <pubDate>Thu, 13 Aug 2026 07:24:01 +0530</pubDate>
            <description><![CDATA[ಆರೋಗ್ಯ ಇಲಾಖೆಯ ಜಾಗೃತಿ ಅಭಿಯಾನದ ಫಲವಾಗಿ ಕರ್ನಾಟಕದಲ್ಲಿ 67,632 ಜನರು ಅಂಗಾಂಗ ದಾನಕ್ಕೆ ವಾಗ್ದಾನ ಮಾಡಿದ್ದಾರೆ. ಈ ಪೈಕಿ, 12,534 ನೋಂದಣಿಗಳೊಂದಿಗೆ ಧಾರವಾಡ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಸ್ಥಳೀಯ ಮಟ್ಟದ ಅಭಿಯಾನದ ಯಶಸ್ಸನ್ನು ಸಾಬೀತುಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwcrs2rhkb9tjf2x5kqhevf,imgname-----------------------2026-08-13t071541.528-1786585572440.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಜೀಜಅಹ್ಮದ ಬಳಗಾನೂರ&lt;/strong&gt;&lt;/p&gt;&lt;p&gt;ಹುಬ್ಬಳ್ಳಿ (ಆ.13): ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಬರೋಬ್ಬರಿ 67,632 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆವೊಂದರಲ್ಲಿಯೇ 12,534 ಜನರು ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.&lt;/p&gt;&lt;p&gt;ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅಥವಾ ಮರಣದ ನಂತರ ತನ್ನ ಆರೋಗ್ಯಕರ ಅಂಗಗಳನ್ನು ಮತ್ತೊಬ್ಬ ರೋಗಿಯ ಜೀವ ಉಳಿಸಲು ನೀಡುವ ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದೆ. 18 ವರ್ಷ ಮೇಲ್ಪಟ್ಟ ಯಾರಾದರೂ ಅಂಗಾಂಗ ನೋಂದಣಿ ಮಾಡಿಸಿಕೊಳ್ಳಬಹುದು. ಈ ಕುರಿತು ಆರೋಗ್ಯ ಇಲಾಖೆಯು ನಿರಂತರವಾಗಿ ಜನಜಾಗೃತಿ, ಅಭಿಯಾನ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸಿದ ಪರಿಣಾಮ ಇಂದು ಅದು ಪ್ರತಿಫಲ ನೀಡಲು ಆರಂಭಿಸಿದೆ.&lt;/p&gt;&lt;h2&gt;ವಿಜಯನಗರಕ್ಕೆ ಕೊನೆಯ ಸ್ಥಾನ&lt;/h2&gt;&lt;p&gt;ಧಾರವಾಡದ ನಂತರ ಬಳ್ಳಾರಿ (12,222) ದ್ವಿತೀಯ, ಗದಗ (6,070) ತೃತೀಯ ಸ್ಥಾನದಲ್ಲಿವೆ. ಕ್ರಮವಾಗಿ ಬೆಂಗಳೂರು 5,702, ವಿಜಯಪುರ 2,960, ಬೆಳಗಾವಿ 2,957, ದಕ್ಷಿಣ ಕನ್ನಡ 2,581 ಹಾಗೂ ಕೋಲಾರ 2,031, ಕೊಪ್ಪಳ 1,972, ಬಾಗಲಕೋಟೆ ಹಾಗೂ ಹಾವೇರಿಯಲ್ಲಿ ತಲಾ 1,667, ಉಡುಪಿ 1,256, ಮೈಸೂರು 1,195 ಮತ್ತು ಕಲಬುರಗಿಯಲ್ಲಿ 1,085 ನೋಂದಣಿಯಾಗಿವೆ. ವಿಜಯನಗರ ಜಿಲ್ಲೆಯಲ್ಲಿ 301 ನೋಂದಣಿಯಾಗುವ ಮೂಲಕ ಕೊನೆಯ ಸ್ಥಾನ ಪಡೆದಿದೆ.&lt;/p&gt;&lt;h3&gt;ಜಾಗೃತಿಯ ಫಲ:&lt;/h3&gt;&lt;p&gt;ಆರೋಗ್ಯ ಇಲಾಖೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯತಂತ್ರದಡಿ ಶಾಲಾ- ಕಾಲೇಜು, ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸಮುದಾಯ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಿಬಿರಗಳಲ್ಲಿ ಕ್ಯೂಆರ್&zwnj; ಕೋಡ್&zwnj; ಮೂಲಕವೂ ಆನ್&zwnj;ಲೈನ್&zwnj;ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.&lt;/p&gt;&lt;p&gt;&lt;strong&gt;ಒಬ್ಬ ದಾನಿ 8 ಜೀವಕ್ಕೆ ಆಸರೆ:&lt;/strong&gt;&lt;/p&gt;&lt;p&gt;ಒಬ್ಬ ಮೃತ ಅಂಗಾಂಗ ದಾನಿಯಿಂದ 8 ಜನರ ಜೀವ ಉಳಿಸಬಹುದು. ಮೆದುಳಿನ ಕಾರ್ಯ ಶಾಶ್ವತವಾಗಿ ಸ್ಥಗಿತಗೊಂಡಿರುವುದು ವೈದ್ಯಕೀಯವಾಗಿ ದೃಢಪಟ್ಟ ಬಳಿಕ, ಕಾನೂನುಬದ್ಧ ಪ್ರಕ್ರಿಯೆ ಮತ್ತು ಕುಟುಂಬದ ಒಪ್ಪಿಗೆಯೊಂದಿಗೆ ಹೃದಯ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಸೇರಿದಂತೆ ವಿವಿಧ ಅಂಗಾಂಗಗಳನ್ನು ಕಸಿ ಮಾಡಬಹುದಾಗಿದೆ. ಕಣ್ಣುಗಳ ದಾನವೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡಬಲ್ಲದು.&lt;/p&gt;&lt;p&gt;&lt;strong&gt;ಎನ್&zwnj;ಒಟಿಟಿಒ ಅಭಿಯಾನಕ್ಕೆ ಪೂರಕ:&lt;/strong&gt;&lt;/p&gt;&lt;p&gt;ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎನ್&zwnj;ಒಟಿಟಿಒ) 2023ರಿಂದ ದೇಶಾದ್ಯಂತ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ಧಾರವಾಡ ಆರೋಗ್ಯ ಇಲಾಖೆ ಸ್ಥಳೀಯ ಮಟ್ಟದಲ್ಲಿ ಅಭಿಯಾನ ನಡೆಸುತ್ತಿದೆ. ಜಿಲ್ಲೆಯಲ್ಲಿ 2024ರಲ್ಲಿ 4, 2025ರಲ್ಲಿ 4 ಹಾಗೂ 2026ರಲ್ಲಿ ಓರ್ವ ಸೇರಿದಂತೆ ಒಟ್ಟು 9 ವಾಗ್ದಾನದಾರರ ಅಂಗಾಂಗಗಳನ್ನು ಕಸಿ ಪ್ರಕ್ರಿಯೆಗೆ ಬಳಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.&lt;/p&gt;&lt;p&gt;&lt;strong&gt;ನಿರಂತರ ಜಾಗೃತಿಯಿಂದ ಯಶಸ್ಸು:&lt;/strong&gt;&lt;/p&gt;&lt;p&gt;ಆರಂಭಿಕ ಹಂತದಲ್ಲಿ ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು ಎಂಬ ಸಂದೇಶವನ್ನು ಆರೋಗ್ಯ ಮೇಳ, ಶಿಬಿರ, ವಿಶೇಷ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನರಿಗೆ ತಲುಪಿಸಿದ ಪರಿಣಾಮ ನೋಂದಣಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ 2 ವರ್ಷಗಳಿಂದ ಧಾರವಾಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.&lt;/p&gt;&lt;p&gt;ಡಾ. ಪರಶುರಾಮ ಎಫ್.ಕೆ. ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ&lt;/p&gt;&lt;p&gt;&lt;strong&gt;ಅಗ್ರ 10 ಜಿಲ್ಲೆಗಳು&lt;/strong&gt; ಜಿಲ್ಲೆ ನೋಂದಣಿ&lt;/p&gt;&lt;ol&gt; &lt;li&gt;ಧಾರವಾಡ 12,534&lt;/li&gt; &lt;li&gt;ಬಳ್ಳಾರಿ 12,222&lt;/li&gt; &lt;li&gt;ಗದಗ 6,070&lt;/li&gt; &lt;li&gt;ಬೆಂಗಳೂರು 5,702&lt;/li&gt; &lt;li&gt;ವಿಜಯಪುರ 2,960&lt;/li&gt; &lt;li&gt;ಬೆಳಗಾವಿ 2,957&lt;/li&gt; &lt;li&gt;ದಕ್ಷಿಣ ಕನ್ನಡ 2,581&lt;/li&gt; &lt;li&gt;ಕೋಲಾರ 2,031&lt;/li&gt; &lt;li&gt;ಕೊಪ್ಪಳ 1,972&lt;/li&gt; &lt;li&gt;ಬಾಗಲಕೋಟೆ 1,667&lt;/li&gt; &lt;li&gt;ಹಾವೇರಿ 1,667&lt;/li&gt;&lt;/ol&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dharwad-ranks-first-in-the-karnataka-for-organ-donation-registration-rav/articleshow-f3mmmw8"/>
        </item>
        <item>
            <title><![CDATA[ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿ ಶುಲ್ಕ: ದಾವಣಗೆರೆಯ Zudio ಮಳಿಗೆಗೆ ₹ 30,000 ದಂಡ]]></title>
            <link>https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0</link>
            <guid isPermaLink="true">https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0</guid>
            <pubDate>Thu, 13 Aug 2026 07:22:14 +0530</pubDate>
            <description><![CDATA[ದಾವಣಗೆರೆಯಲ್ಲಿ, ಗ್ರಾಹಕರಿಂದ ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ ₹10 ಶುಲ್ಕ ವಿಧಿಸಿದ್ದಕ್ಕಾಗಿ ಜುಡಿಯೊ ಮಳಿಗೆಗೆ ಜಿಲ್ಲಾ ಗ್ರಾಹಕರ ಆಯೋಗ ₹30,000 ದಂಡ ವಿಧಿಸಿದೆ. ಕ್ಯಾರಿ ಬ್ಯಾಗ್‌ಗೆ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಮತ್ತು ಸೇವಾ ನ್ಯೂನತೆ ಎಂದು ಆಯೋಗ ತೀರ್ಪು ನೀಡಿದ್ದು, ಈ ಆದೇಶ ಎಲ್ಲಾ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgc3d4218vgg858de1meqkrm,imgname-zudio--3--1769932755009.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದಾವಣಗೆರೆ:&lt;/strong&gt; ಗ್ರಾಹಕರಿಂದ ಕ್ಯಾರಿ ಬ್ಯಾಗ್&zwnj;ಗೆ ಹೆಚ್ಚುವರಿಯಾಗಿ ದಂಡ ಅಥವಾ ಶುಲ್ಕ ವಸೂಲಿ ಮಾಡುವುದು ಅನ್ಯಾಯದ ವ್ಯಾಪಾರ ಹಾಗೂ ಸೇವೆಯಲ್ಲಾದ ನಿರ್ಲಕ್ಷ್ಯ ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.&lt;/p&gt;&lt;p&gt;ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯ ಜುಡಿಯೊ (ತೋಶಾನಿ ಎಂಪೋರಿಯಂ ಅವೆನ್ಯೂ) ಮಳಿಗೆಯಲ್ಲಿ ಬಟ್ಟೆ ಖರೀದಿಸಿದ್ದ ದೂರುದಾರ ರಾಜೇಂದ್ರ ಎಂಬವರಿಂದ ಕ್ಯಾರಿ ಬ್ಯಾಗ್&zwnj;ಗಾಗಿ ಹೆಚ್ಚುವರಿಯಾಗಿ ₹10 ವಸೂಲಿ ಮಾಡಿದ್ದಕ್ಕಾಗಿ ಆಯೋಗವು ಈ ಆದೇಶ ಹೊರಡಿಸಿದೆ.&lt;/p&gt;&lt;h2&gt;&lt;strong&gt;ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು&lt;/strong&gt;&lt;/h2&gt;&lt;p&gt;ಜುಡಿಯೊ ಮಳಿಗೆಯಲ್ಲಿ ಬಟ್ಟೆಗಳನ್ನು ಖರೀದಿಸಿದ ರಾಜೇಂದ್ರ ಅವರಿಂದ ಕ್ಯಾರಿ ಬ್ಯಾಗ್&zwnj;ಗೆ ಹೆಚ್ಚುವರಿಯಾಗಿ ₹10 ಶುಲ್ಕ ಪಡೆಯಲಾಗಿತ್ತು. ಇದರ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರು ಪರಿಶೀಲಿಸಿದ ಆಯೋಗವು, ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ವಸೂಲಿ ಮಾಡುವುದು ಕಾನೂನುಬಾಹಿರ ಹಾಗೂ ಸೇವಾ ಲೋಪ ಎಂದು ಸ್ಪಷ್ಟಪಡಿಸಿದೆ.&lt;/p&gt;&lt;p&gt;ಸೇವೆಯಲ್ಲಾದ ನಿರ್ಲಕ್ಷ್ಯ, ಅನ್ಯಾಯದ ವ್ಯಾಪಾರ ಮತ್ತು ದೂರಿನ ಖರ್ಚು ಸೇರಿ ದೂರುದಾರರಿಗೆ ಒಟ್ಟು ₹10,000 ಪರಿಹಾರ ಹಾಗೂ ಪಾವತಿಸಿದ್ದ ₹10 ಹಿಂತಿರುಗಿಸುವಂತೆ ಜುಡಿಯೊ ಸಂಸ್ಥೆಗೆ ಆಯೋಗ ಆದೇಶಿಸಿದೆ. ಇದರೊಂದಿಗೆ ಗ್ರಾಹಕ ಕಾನೂನು ನೆರವು ಖಾತೆಗೆ ₹20,000 ಜಮಾ ಮಾಡಲು ಸಹ ಸೂಚಿಸಿದೆ. ಒಟ್ಟು ₹30,000 ಮೊತ್ತವನ್ನು ಆದೇಶದ ದಿನಾಂಕದಿಂದ ಒಂದು ತಿಂಗಳೊಳಗೆ ಪಾವತಿಸಲು ಆದೇಶಿಸಲಾಗಿದೆ.&lt;/p&gt;&lt;h3&gt;&lt;strong&gt;ಎಲ್ಲಾ ಮಳಿಗೆಗಳಿಗೂ ಆದೇಶ ಅನ್ವಯ:&lt;/strong&gt;&lt;/h3&gt;&lt;p&gt;ಉತ್ಪನ್ನಗಳನ್ನು ಖರೀದಿಸುವ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ಕ್ಯಾರಿ ಬ್ಯಾಗ್&zwnj;ಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಈ ಆದೇಶವು ಕೇವಲ ಸದರಿ ಮಳಿಗೆಗೆ ಮಾತ್ರವಲ್ಲದೆ ಎಲ್ಲಾ ಸಗಟು ವ್ಯಾಪಾರಿಗಳು, ರಿಟೇಲ್ ಮಾರಾಟಗಾರರು, ದೊಡ್ಡ ಮಾಲ್&zwnj;ಗಳು, ಮೋರ್, ರಿಲಯನ್ಸ್, ಟ್ರೆಂಡ್ಸ್ ಹಾಗೂ ಇನ್ನಿತರ ಎಲ್ಲಾ ಮಾರಾಟ ಮಳಿಗೆಗಳಿಗೂ ಅನ್ವಯಿಸುತ್ತದೆ ಎಂದು ಆಯೋಗ ತಿಳಿಸಿದೆ.&lt;/p&gt;&lt;p&gt;ಈ ಆದೇಶವನ್ನು ದಾವಣಗೆರೆ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ, ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರನ್ನು ಒಳಗೊಂಡ ಪೀಠವು ಹೊರಡಿಸಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಅಚ್ಚರಿಯ ಬೆಳವಣಿಗೆ: ZUDIO ಶಾಪಿಂಗ್&zwnj;ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು! ಕಾರಣ ಏನು?&lt;/strong&gt;&lt;/p&gt;]]></content:encoded>
            <category><![CDATA[business]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/business/district-consumer-commission-extra-charge-for-carry-bag-davanagere-s-zudio-store-fined-rs-30000-mrq/articleshow-kt50rh0"/>
        </item>
        <item>
            <title><![CDATA[Yash ಟಾಕ್ಸಿಕ್ ವಿರುದ್ಧ ಕಿಡಿ ಕಾರಿದ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್]]></title>
            <link>https://kannada.asianetnews.com/gallery/entertainment/sandalwood-director-rajendra-singh-babu-s-daughter-rishika-singh-sparks-controversy-over-yash-toxic-movie-mrq-0xzmrnv</link>
            <guid isPermaLink="true">https://kannada.asianetnews.com/gallery/entertainment/sandalwood-director-rajendra-singh-babu-s-daughter-rishika-singh-sparks-controversy-over-yash-toxic-movie-mrq-0xzmrnv</guid>
            <pubDate>Thu, 13 Aug 2026 07:14:10 +0530</pubDate>
            <description><![CDATA[ನಟಿ ರಿಷಿಕಾ ಸಿಂಗ್, ಯಶ್ ಅವರ 'ಟಾಕ್ಸಿಕ್' ಚಿತ್ರದ ನೋಟವನ್ನು 'ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ' ಎಂದು ಕಟುವಾಗಿ ಟೀಕಿಸಿದ್ದಾರೆ. ಯಶ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿರುವ ಅವರ ವಿಡಿಯೋ, ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzwc83dp7jtzdmd4cn5yv929,imgname-rishika-singh-1786585025974.jpg" type="image/jpeg" height="390" width="690"/>
            <content:encoded><![CDATA[ನಟಿ ರಿಷಿಕಾ ಸಿಂಗ್, ಯಶ್ ಅವರ 'ಟಾಕ್ಸಿಕ್' ಚಿತ್ರದ ನೋಟವನ್ನು 'ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ' ಎಂದು ಕಟುವಾಗಿ ಟೀಕಿಸಿದ್ದಾರೆ. ಯಶ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿರುವ ಅವರ ವಿಡಿಯೋ, ಯಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.&lt;img&gt;&lt;p&gt;ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್&zwnj; ಬಾಬು ಪುತ್ರಿ, ನಟಿ ರಿಷಿಕಾ ಸಿಂಗ್&zwnj; ಯಶ್&zwnj; ಅವರ &lsquo;ಟಾಕ್ಸಿಕ್&zwnj;&rsquo; ಟ್ರೇಲರ್&zwnj; ವಿರುದ್ಧ ವಾಚಾಮಗೋಚರವಾಗಿ ಮಾತು ಹರಿಯಬಿಟ್ಟಿದ್ದಾರೆ. ಇದು ಯಶ್&zwnj; ಫ್ಯಾನ್ಸ್&zwnj; ಕೆಂಗಣ್ಣಿಗೆ ಗುರಿಯಾಗಿದೆ.&lt;/p&gt;&lt;img&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ರಿಷಿಕಾ, &lsquo;ಹೆಣ್ಮಕ್ಳಿಗೆ ಅಂದ ಇದ್ರೆ ಚಂದ, ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ, ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ ಎಂದು ಟೀಕಿಸಿದ್ದಾರೆ.&lt;/p&gt;&lt;img&gt;&lt;p&gt;ಮನೆಯಲ್ಲಿ ಹೆಂಡ್ತಿ ಇದಾಳೆ, ಇದೇನು ಹೀರೋಯಿನ್​​​ಗಳ ಜೊತೆ ನಿನ್ನ ಚಕ್ಕಂದ ಕಂದ. ನಿಂಗೂ ಹೆಣ್ ಮಗ್ಳು ಇದಾಳೆ ದೊಡ್ಡದಾಗಿ ಡೈಲಾಗ್ ಹೊಡೆಯೋಕೆ ಬಂದ. ಹೆಣ್ಮಕ್ಕಳಿಗೆ ರೆಸ್ಪೆಕ್ಟ್ ಇರ್ಲಿ, ಇಲ್ಲಾಂದ್ರ ಜಾಗ ಖಾಲಿ ಮಾಡ್ಸಿಬಿಡ್ತೀವಿ ಕರ್ನಾಟಕದಿಂದ. ಐ ಆಮ್ ಟಾಕ್ಸಿಕ್&rsquo;ಎಂದು ವಿಚಿತ್ರ ರೀತಿಯಲ್ಲಿ ರಿಷಿಕಾ ಸಿಂಗ್ ಮಾತನಾಡಿದ್ದಾರೆ.&lt;/p&gt;&lt;img&gt;&lt;p&gt;ಟ್ರೇಲರ್&zwnj; ಲಾಂಚ್&zwnj; ವೇಳೆ ಯಶ್&zwnj;, ಇನ್ನುಮುಂದೆ ಕನ್ನಡ, ಹಿಂದಿ, ತೆಲುಗು ಸಿನಿಮಾ ಎಂಬ ಪ್ರತ್ಯೇಕತೆ ಇರಲ್ಲ. ಟಾಕ್ಸಿಕ್&zwnj; ಯಶ್ ಚಿತ್ರ ಅಲ್ಲ, ಅದು ಭಾರತೀಯ ಸಿನಿಮಾ. ಇಂಡಿಯನ್&zwnj; ಸಿನಿಮಾಕ್ಕೆ ಟಾಕ್ಸಿಕ್ ಒಂದು ಲೇಬಲ್. ನಾವೆಲ್ಲ ಭಾರತೀಯ ಸಿನಿಮಾ ಮೂಲಕ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ನಮ್ಮ ಸಿನಿಮಾಗಳನ್ನು ತಲುಪಿಸಬೇಕು. ದಾರಿ ಯಾವುದೇ ಇರಬಹುದು, ಗುರಿ ಮುಟ್ಟಬೇಕು ಎಂದು ಹೇಳಿದ್ದರು.&lt;/p&gt;&lt;img&gt;&lt;p&gt;ಕಾಲಕ್ಕೆ ತಕ್ಕ ಹಾಗೆ ಕುಣಿಯಬೇಕು. ತಾಳಕ್ಕೆ ತಕ್ಕ ಹಾಗೆ ಕುಣಿಯಬೇಕು. ಸಿನಿಮಾ ನಿರ್ಮಾಣ ಮಾಡುವುದು ಇಡೀ ಜಗತ್ತಿನ ವಿರುದ್ಧ ಮಾಡಿದಂತೆ. ಎಷ್ಟೋ ಸಲ ಒಂದೊಳ್ಳೆ ಸಿನಿಮಾ ಶುರುವಾದ ಹತ್ತಿಪ್ಪತ್ತು ದಿನಗಳಲ್ಲೇ ಚಿತ್ರ ಸ್ಥಗಿತಗೊಂಡಿದೆ ಎಂಬ ಸುಳ್ಳು ಸುದ್ದಿ ಬರುತ್ತದೆ. ಇದನ್ನೆಲ್ಲ ಅರಗಿಸಿಕೊಳ್ಳುವುದು ಕಷ್ಟ. ಟಾಕ್ಸಿಕ್ ಸಿನಿಮಾಕ್ಕೆ ಎರಡು ವರ್ಷನ್&zwnj;ಗಳಲ್ಲಿ 200 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ ಎಂಬ ಮಾಹಿತಿಯನ್ನು ಯಶ್ ಹಂಚಿಕೊಂಡಿದ್ದರು.&lt;/p&gt;]]></content:encoded>
            <category><![CDATA[entertainment]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/entertainment/sandalwood-director-rajendra-singh-babu-s-daughter-rishika-singh-sparks-controversy-over-yash-toxic-movie-mrq-0xzmrnv"/>
        </item>
        <item>
            <title><![CDATA[ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ; ಮಾಜಿ ಜಡ್ಜ್ ಯಶವಂತ್ ವರ್ಮಾ ಮೇಲಿನ ಆರೋಪ ಸಾಬೀತು]]></title>
            <link>https://kannada.asianetnews.com/india-news/case-of-finding-currency-notes-in-house-accusations-against-judge-yashwant-verma-proven-mrq/articleshow-slw3dlg</link>
            <guid isPermaLink="true">https://kannada.asianetnews.com/india-news/case-of-finding-currency-notes-in-house-accusations-against-judge-yashwant-verma-proven-mrq/articleshow-slw3dlg</guid>
            <pubDate>Thu, 13 Aug 2026 06:58:03 +0530</pubDate>
            <description><![CDATA[ದೆಹಲಿ ಹೈಕೋರ್ಟ್‌ ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಪ್ರಕರಣದ ತನಿಖಾ ವರದಿಯು ಸಂಸತ್ತಿನಲ್ಲಿ ಮಂಡನೆಯಾಗಿದೆ. ವರದಿಯು ನ್ಯಾ. ವರ್ಮಾ ವಿರುದ್ಧದ ಮೂರೂ ಗಂಭೀರ ಆರೋಪಗಳು ಸಾಬೀತಾಗಿವೆ ಎಂದು ಸ್ಪಷ್ಟಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jq62mnd165v9mfq7m1xyppg7,imgname-justice-Yashwant-Verma-Controversy-Allahabad-high-court-lawyers-protest-transfer-corruption-case-1742887081377.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ, ದೆಹಲಿ ಹೈಕೋರ್ಟ್&zwnj; ಮಾಜಿ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಕಂತೆಕಂತೆ ನೋಟುಗಳು ಸಿಕ್ಕ ಪ್ರಕರಣದ ತನಿಖಾ ವರದಿ ಸಂಸತ್ತಿನಲ್ಲಿ ಮಂಡನೆ ಆಗಿ ಬಹಿರಂಗವಾಗಿದೆ ಹಾಗೂ ಅವರ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿವೆ.&lt;/p&gt;&lt;p&gt;ನ್ಯಾ। ವರ್ಮಾ ಈಗಾಗಲೇ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದು ಇನ್ನೂ ಅಂಗೀಕಾರಗೊಂಡಿಲ್ಲ. ಆದಾಗ್ಯೂ ನಿಯಮಾನುಸಾರ ಒಮ್ಮೆ ಜಡ್ಜ್&zwnj; ರಾಜೀನಾಮೆ ನೀಡಿದರೆ, ಅದು ಅಂಗೀಕಾರವಾಗದೇ ಹೋದರೂ ಅವರಿಗೆ ವಾಗ್ದಂಡನೆ ಪ್ರಕ್ರಿಯೆ ಅನ್ವಯಿಸುವುದಿಲ್ಲ. ಹೀಗಾಗಿ ಅವರು ವಾಗ್ದಂಡನೆಯಿಂದ ಪಾರಾಗಲಿದ್ದಾರೆ ಎಂದು ಮೂಲಗಳು ಹೇಳಿವೆ. .&lt;/p&gt;&lt;h2&gt;&lt;strong&gt;ವರದಿಯಲ್ಲೇನಿದೆ?:&lt;/strong&gt;&lt;/h2&gt;&lt;p&gt;ಈ ತನಿಖಾ ವರದಿಯಲ್ಲಿ ನ್ಯಾ. ವರ್ಮಾ ಅವರ ವಿರುದ್ಧ ಹೊರಿಸಲಾಗಿದ್ದ ಮೂರೂ ಮುಖ್ಯ ಆರೋಪಗಳು (ಆರ್ಟಿಕಲ್ ಆಫ್ ಚಾರ್ಜಸ್ I, II ಮತ್ತು III) ಸಾಬೀತಾಗಿವೆ ಎಂದು ಸಮಿತಿ ಸ್ಪಷ್ಟಪಡಿಸಿದೆ.&lt;/p&gt;&lt;p&gt;ತಮ್ಮ ನಿವಾಸದ ಸ್ಟೋರ್ ರೂಂನಲ್ಲಿ ಪತ್ತೆಯಾದ ನಗದಿನ ಮೂಲ, ಉಪಸ್ಥಿತಿ ಮತ್ತು ಮಾಲೀಕತ್ವದ ಬಗ್ಗೆ ನ್ಯಾ.ವರ್ಮಾ ನೀಡಿದ ವಿವರಣೆಗಳು ಸಂಪೂರ್ಣವಾಗಿ ಅತೃಪ್ತಿಕರ, ಅಸ್ಪಷ್ಟ ಹಾಗೂ ಕಪಟತನದಿಂದ ಕೂಡಿದ್ದವು. ಸ್ವತಂತ್ರ ಸರ್ಕಾರಿ ಸಾಕ್ಷಿಗಳು ಮತ್ತು ಸಾಂದರ್ಭಿಕ ಪುರಾವೆಗಳನ್ನು ಪರಿಶೀಲಿಸಿದಾಗ ಅವರ ವಾದಗಳು ಸುಳ್ಳೆಂದು ಸಾಬೀತಾಗಿವೆ ಎಂದು ವರದಿ ಉಲ್ಲೇಖಿಸಿದೆ.&lt;/p&gt;&lt;p&gt;ತನಿಖಾಧಿಕಾರಿಗಳು ಹಾಗೂ ಪೊಲೀಸರು ಸ್ಥಳವನ್ನು ಕಾನೂನುಬದ್ಧವಾಗಿ ಸೀಲ್ ಮಾಡಿ ತಪಾಸಣೆ ನಡೆಸುವ ಮುನ್ನವೇ, ಸ್ಟೋರ್ ರೂಂನಲ್ಲಿದ್ದ ಸಾಕ್ಷ್ಯಾಧಾರಗಳನ್ನು ಮರೆಮಾಚುವ ಮತ್ತು ಪರಿಸ್ಥಿತಿಯನ್ನು ಬದಲಾಯಿಸುವ ಯತ್ನಗಳು ನಡೆದಿವೆ ಎಂದು ಸಮಿತಿ ತೀರ್ಮಾನಿಸಿದೆ.&lt;/p&gt;&lt;p&gt;ಜತೆಗೆ, ಉನ್ನತ ನ್ಯಾಯಾಂಗ ಹುದ್ದೆಯಲ್ಲಿದ್ದುಕೊಂಡು ತೋರಬೇಕಿದ್ದ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸಾಂಸ್ಥಿಕ ಜವಾಬ್ದಾರಿಯನ್ನು ಪ್ರದರ್ಶಿಸಲು ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿದೆ.&lt;/p&gt;&lt;h3&gt;&lt;strong&gt;ಪ್ರಕರಣದ ಹಿನ್ನೆಲೆ:&lt;/strong&gt;&lt;/h3&gt;&lt;p&gt;2025ರ ಮಾ.14ರ ರಾತ್ರಿ ನ್ಯಾ. ಯಶವಂತ್ ವರ್ಮಾ ಅವರ ದೆಹಲಿಯ ಅಧಿಕೃತ ಬಂಗಲೆಯಲ್ಲಿ ಹಠಾತ್ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ಸಿಬ್ಬಂದಿಗೆ ಅಲ್ಲಿನ ಸ್ಟೋರ್ ರೂಂನಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ 500 ರು. ಮುಖಬೆಲೆಯ ಕೋಟ್ಯಂತರ ರು. ನೋಟುಗಳ ಕಟ್ಟುಗಳು ಪತ್ತೆಯಾಗಿದ್ದವು. ಈ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು ಹಾಗೂ ತನಿಖೆಗೆ ಆಂತರಿಕ ಸಮಿತಿ ರಚನೆ ಆಗಿತ್ತು. ಸಮಿತಿಯಲ್ಲಿ ಕನ್ನಡಿಗ ಬಿ.ವಿ. ಆಚಾರ್ಯ ಕೂಡ ಇದ್ದರು. ಇದರ ನಡುವೆ, 2025ರ ಜುಲೈನಲ್ಲಿ 200ಕ್ಕೂ ಹೆಚ್ಚು ಸಂಸದರು ನ್ಯಾ.ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸಂಸತ್ತಿನಲ್ಲಿ ವಾಗ್ದಂಡನೆ ಪ್ರಸ್ತಾವನೆಗೆ ಸಹಿ ಹಾಕಿದ್ದರು.&lt;/p&gt;&lt;p&gt;ನಂತರ ನ್ಯಾ। ವರ್ಮಾರನ್ನು ಅಲಹಾಬಾದ್&zwnj; ಹೈಕೋರ್ಟ್&zwnj;ಗೆ ವರ್ಗಾಯಿಸಲಾಗಿತ್ತು. ಬಳಿಕ ಅವರು ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಇನ್ನೂ ರಾಷ್ಟ್ರಪತಿಗಳಿಂದ ಅಂಗೀಕಾರವಾಗಿಲ್ಲ. ಆದಾಗ್ಯೂ ಒಮ್ಮೆ ರಾಜೀನಾಮೆ ನೀಡಿದರೆ, ಸ್ವೀಕಾರವಾಗಲಿ, ಬಿಡಲಿ ವಾಗ್ದಂಡನೆ ಪ್ರಕ್ರಿಯೆ ಅನ್ವಯಿಸಲ್ಲ ಎಂದು ಎಂದು ಗೊತ್ತಾಗಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/case-of-finding-currency-notes-in-house-accusations-against-judge-yashwant-verma-proven-mrq/articleshow-slw3dlg"/>
        </item>
        <item>
            <title><![CDATA[ಡ್ರಗ್ಸ್ ಪ್ರಕರಣದಲ್ಲಿ ಜೈಲಲ್ಲಿರುವ ನೈಜೀರಿಯಾ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡಿ: ಹೈಕೋರ್ಟ್‌]]></title>
            <link>https://kannada.asianetnews.com/state/karnataka-hc-orders-deportation-of-nigerian-nationals-imprisoned-in-a-drug-case-to-their-home-country-rav/articleshow-5zou7dt</link>
            <guid isPermaLink="true">https://kannada.asianetnews.com/state/karnataka-hc-orders-deportation-of-nigerian-nationals-imprisoned-in-a-drug-case-to-their-home-country-rav/articleshow-5zou7dt</guid>
            <pubDate>Thu, 13 Aug 2026 06:57:49 +0530</pubDate>
            <description><![CDATA[ಮಾದಕ ದ್ರವ್ಯ ಮಾರಾಟ ಆರೋಪದಡಿ ದಾಖಲಾಗಿದ್ದ ಎಫ್‌ಐಆರ್‌ ರದ್ದು ಕೋರಿ ನೈಜೀರಿಯಾ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್, ರಾಜ್ಯದಲ್ಲಿರುವ ಪ್ರತಿ ನೈಜೀರಿಯಾ ಪ್ರಜೆ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktn8g40cfn90np10t5g1zgyr,imgname-----------------------2026-06-09t090917.634-1780977504268.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಆ.13): &lt;/strong&gt;ರಾಜ್ಯದಲ್ಲಿರುವ ಪ್ರತಿ ನೈಜೀರಿಯಾ ಪ್ರಜೆ ಮಾದಕ ದ್ರವ್ಯ ಪೆಡ್ಲಿಂಗ್&zwnj;ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್&zwnj;, ವಿದೇಶಿಯರ ಬಂಧನ ಕೇಂದ್ರದಲ್ಲಿರುವ ನೈಜೀರಿಯಾ ಪ್ರಜೆಗಳನ್ನು ತಕ್ಷಣ ಅವರ ದೇಶಕ್ಕೆ ಗಡಿಪಾರು ಮಾಡಬೇಕೆಂದು ನುಡಿಯಿತು.&lt;/p&gt;&lt;p&gt;ಮಾದಕ ದ್ರವ್ಯ ಮಾರಾಟ ಮಾಡಿದ ಆರೋಪದ ಮೇಲೆ ಮಂಗಳೂರು ಪೊಲೀಸ್&zwnj; ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್&zwnj;ಐಆರ್&zwnj; ರದ್ದು ಕೋರಿ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿರುವ ನೈಜೀರಿಯಾ ಪ್ರಜೆ ಅಡೆವೋಲ್ ಅಡೆಟುಟು ಆನು ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮೌಖಿಕವಾಗಿ ನುಡಿದಿದೆ.&lt;/p&gt;&lt;p&gt;ಅರ್ಜಿದಾರರ ಮೊಬೈಲ್&zwnj; ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪ್ರಯೋಗಾಲಯದ ವರದಿಯಲ್ಲಿ ಅರ್ಜಿದಾರನ ವಿರುದ್ಧದ ಆರೋಪಗಳನ್ನು ದೃಢೀಕರಿಸುವ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.&lt;/p&gt;&lt;p&gt;ಇದಕ್ಕೂ ಮುನ್ನ ಅರ್ಜಿ ವಿಚಾರಣೆಗೆ ವೇಳೆ ಸರ್ಕಾರಿ ವಕೀಲರು ಅರ್ಜಿದಾರರು ನೈಜೀರಿಯಾ ಪ್ರಜೆಯಾಗಿದ್ದು, ಆತನ ವಿರುದ್ಧ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪವಿದೆ ಎಂದರು. ಇದಕ್ಕೆ ಅರ್ಜಿದಾರನ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರನ ಪಾತ್ರವನ್ನು ಸಾಬೀತುಪಡಿಸುವ ಯಾವ ದಾಖಲೆ ಇಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯ ವರದಿಯಲ್ಲಿ ಅರ್ಜಿದಾರ ತಪ್ಪು ಮಾಡಿರುವುದು ಸಾಬೀತಾದರೆ ಅರ್ಜಿ ಹಿಂಪಡೆಯಲಾಗುವುದು. ಅರ್ಜಿದಾರ ಸೇರಿದಂತೆ ಬಂಧನಕ್ಕೆ ಒಳಗಾದವರು ವಿದೇಶಿಯರ ಬಂಧನ ಕೇಂದ್ರದಲ್ಲಿರುತ್ತಾರೆ ಎಂದು ಮಾಹಿತಿ ನೀಡಿದರು.&lt;/p&gt;&lt;p&gt;ಅದಕ್ಕೆ ನ್ಯಾಯಪೀಠ, ವಿದೇಶಿಯರ ಬಂಧನ ಕೇಂದ್ರದಲ್ಲಿರುವ ನೈಜೀರಿಯಾ ಪ್ರಜೆಗಳನ್ನು ಈಗ ಅವರ ದೇಶಕ್ಕೆ ಗಡಿಪಾರು ಮಾಡಬೇಕು. ಪ್ರತಿ ನೈಜೀರಿಯಾ ಪ್ರಜೆಯೂ ಮಾದಕ ದ್ರವ್ಯ ಪೆಡ್ಲಿಂಗ್&zwnj;ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿತು. ಸರ್ಕಾರದ ಪರ ವಕೀಲರು, ಅರ್ಜಿದಾರರು ಹಾಗೂ ಮತ್ತೊಬ್ಬ ವ್ಯಕ್ತಿ ಮಾದಕ ದ್ರವ್ಯ ಖರೀದಿ ಮಾಡುವ ವಿಚಾರದಲ್ಲಿ ಚರ್ಚಿಸಿರುವ ಬಗ್ಗೆ ವಾಟ್ಸಪ್&zwnj; ಚಾಟಿಂಗ್&zwnj;ನಲ್ಲಿ ಕಂಡುಬಂದಿದೆ. ಅರ್ಜಿದಾರ ಇತರೆ ಆರೋಪಿಗಳಿಗೆ ಮಾದಕ ದ್ರವ್ಯ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಉಭಯ ಕಡೆಯ ವಾದ ಪ್ರತಿವಾದ ಪರಿಗಣಿಸಿದ ಪೀಠ, ಅರ್ಜಿದಾರನ ವಿರುದ್ಧದ ಆರೋಪವನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಲು ಪೊಲೀಸರಿಗೆ ಸೂಚಿಸಿತು.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/karnataka-hc-orders-deportation-of-nigerian-nationals-imprisoned-in-a-drug-case-to-their-home-country-rav/articleshow-5zou7dt"/>
        </item>
        <item>
            <title><![CDATA[ಕಾವಡ ಯಾತ್ರೆ: ಶ್ರೀಕ್ಷೇತ್ರ ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!]]></title>
            <link>https://kannada.asianetnews.com/gallery/india-news/kanwar-yatra-2026-urine-bottles-7000-tons-of-garbage-piled-up-at-haridwar-mrq-h76w3l1</link>
            <guid isPermaLink="true">https://kannada.asianetnews.com/gallery/india-news/kanwar-yatra-2026-urine-bottles-7000-tons-of-garbage-piled-up-at-haridwar-mrq-h76w3l1</guid>
            <pubDate>Thu, 13 Aug 2026 06:46:04 +0530</pubDate>
            <description><![CDATA[ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzdjbst8f31161ymjsw2wev4,imgname-kanwar-yatra-1786088122183.png" type="image/jpeg" height="390" width="690"/>
            <content:encoded><![CDATA[ಶ್ರಾವಣ ಮಾಸದ ಕಾವಡ ಯಾತ್ರೆಯ ನಂತರ ಹರಿದ್ವಾರದಲ್ಲಿ ಸುಮಾರು 7000 ಟನ್ ಕಸ ಸಂಗ್ರಹವಾಗಿದೆ. 4.8 ಕೋಟಿ ಯಾತ್ರಿಕರು ಭಾಗವಹಿಸಿದ್ದ ಈ ಯಾತ್ರೆಯ ಬಳಿಕ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಮೂತ್ರ ತುಂಬಿದ ಬಾಟಲಿಗಳು ಎಲ್ಲೆಡೆ ಬಿದ್ದಿದ್ದು, ಸ್ವಚ್ಛತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.&lt;img&gt;&lt;p&gt;ಹರಿದ್ವಾರ: ಶ್ರಾವಣ ಮಾಸದ ನಿಮಿತ್ತ ಉತ್ತರಾಖಂಡದ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ನಡೆದ ಕಾವಡ ಯಾತ್ರೆ ಬಳಿಕ ಮೂತ್ರದ ಬಾಟಲುಗಳ ರಾಶಿ ಮತ್ತು 7000 ಟನ್&zwnj; ಕಸ ಸಂಗ್ರಹವಾಗಿದೆ.&lt;/p&gt;&lt;img&gt;&lt;p&gt;ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಈ ವೇಳೆ ಅಪಾರ ಪ್ರಮಾಣದ ತ್ಯಾಜ್ಯಗಳು ಘಾಟ್&zwnj;, ಮೇಳಗಳ ಮೈದಾನಗಳು, ಪಾರ್ಕಿಂಗ್&zwnj; ಪ್ರದೇಶ ಸ್ಥಳಗಳಲ್ಲಿ ಹಾಗೆಯೇ ಉಳಿದುಕೊಂಡಿವೆ.&lt;/p&gt;&lt;p&gt;ಈ ವರ್ಷ ಸರಿಸುಮಾರು 4.8 ಕೋಟಿ ಕಾವಡ ಯಾತ್ರಿಕರು ಗಂಗಾ ನದಿ ನೀರನ್ನು ಸಂಗ್ರಹಿಸಿದ್ದಾರೆ. ಆದರೆ ಈ ವೇಳೆ ಅಪಾರ ಪ್ರಮಾಣದ ತ್ಯಾಜ್ಯಗಳು ಘಾಟ್&zwnj;, ಮೇಳಗಳ ಮೈದಾನಗಳು, ಪಾರ್ಕಿಂಗ್&zwnj; ಪ್ರದೇಶ ಸ್ಥಳಗಳಲ್ಲಿ ಹಾಗೆಯೇ ಉಳಿದುಕೊಂಡಿವೆ.&lt;/p&gt;&lt;img&gt;&lt;p&gt;ಪ್ಲಾಸ್ಟಿಕ್&zwnj; ತಟ್ಟೆಗಳು, ಬಳಸಿ ಎಸೆದ ಬಟ್ಟೆಗಳು, ಮೂತ್ರ ಮಾಡಿ ಬಿಸಾಕಿದ ಬಾಟಲಿ, ಇನ್ನಿತರ ವಸ್ತುಗಳು ಸೇರಿದಂತೆ ಪುರಸಭೆಯ ನೈರ್ಮಲ್ಯ ಸಿಬ್ಬಂದಿ 7000 ಟನ್&zwnj; ಕಸವನ್ನು ಸಂಗ್ರಹಿಸಿದ್ದಾರೆ. ಇದರ ಜತೆಗೆ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಮೂತ್ರದ ಬಾಟಲಿಗಳು ಪತ್ತೆಯಾಗಿದ್ದು, ಯಾತ್ರಿಕರು ಸ್ಚಚ್ಛತೆ ಕಾಯ್ದುಕೊಳ್ಳದರ ಬಗ್ಗೆ ಚರ್ಚೆ ಶುರುವಾಗಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/india-news/kanwar-yatra-2026-urine-bottles-7000-tons-of-garbage-piled-up-at-haridwar-mrq-h76w3l1"/>
        </item>
        <item>
            <title><![CDATA[ಇಂದಿನ ಜಾತಕ ಆಗಸ್ಟ್ 13: ಕರ್ಕ ರಾಶಿಯವರಿಗೆ ಆರ್ಥಿಕ ಲಾಭಗಳು ಸಿಗುತ್ತವೆ, ತುಲಾ ರಾಶಿಯವರಿಗೆ ಪ್ರಗತಿಯ ಹೊಸ ಮಾರ್ಗ]]></title>
            <link>https://kannada.asianetnews.com/astrology/today-prediction-horoscope-of-13-august-2026-suh/articleshow-uynzfcv</link>
            <guid isPermaLink="true">https://kannada.asianetnews.com/astrology/today-prediction-horoscope-of-13-august-2026-suh/articleshow-uynzfcv</guid>
            <pubDate>Thu, 13 Aug 2026 06:44:26 +0530</pubDate>
            <description><![CDATA[ಆಗಸ್ಟ್ 13 ರ ಜಾತಕ: ಆಗಸ್ಟ್ 13, 2026 ರಂದು ಬರುವ ದಿನವು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿ, ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ವಿಭಿನ್ನ ಸೂಚನೆಗಳನ್ನು ತರುತ್ತದೆ. ಕೆಲವರಿಗೆ ಇಂದು ವೃತ್ತಿ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉತ್ತಮ ಅವಕಾಶಗಳನ್ನು ತರಬಹುದು]]></description>
            <media:content url="https://static.asianetnews.com/images/w-1280,h-720,format-jpg,imgid-01kzjjgd69p7fb6ds79188c7jq,imgname-surya-grahanam-2026-golden-days-after-solar-eclipse-everything-turns-to-gold-for-these-4-zodiac-1786256045257.jpg" type="image/jpeg" height="390" width="690"/>
            <content:encoded><![CDATA[&lt;p&gt;ಮೇಷ ರಾಶಿ&lt;/p&gt;&lt;p&gt;ಇಂದು ಕಾರ್ಯನಿರತ ಮತ್ತು ಒತ್ತಡದ ದಿನವಾಗಿರಬಹುದು. ಬಹು ಜವಾಬ್ದಾರಿಗಳು ನಿಮ್ಮ ಮನಸ್ಸಿನ ಮೇಲೆ ಒತ್ತಡವನ್ನು ಉಂಟುಮಾಡಬಹುದು, ಆದರೆ ನಿಮ್ಮ ತಿಳುವಳಿಕೆಯು ಪ್ರತಿಯೊಂದು ಸವಾಲನ್ನು ಸುಲಭಗೊಳಿಸುತ್ತದೆ. ಒಂದು ಸಣ್ಣ ವಾದದ ಸಾಧ್ಯತೆ ಇದೆ, ಆದ್ದರಿಂದ ನಿಮ್ಮ ಮಾತನ್ನು ನಿಯಂತ್ರಿಸಿ. ನಿಮ್ಮ ಸಭ್ಯತೆ ಮತ್ತು ಆಹ್ಲಾದಕರ ವರ್ತನೆಯು ಹದಗೆಡುತ್ತಿರುವ ಪರಿಸ್ಥಿತಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಮತ್ತು ರುಚಿಕರವಾದ ಆಹಾರವನ್ನು ಆನಂದಿಸಲು ನಿಮಗೆ ಅವಕಾಶವಿರುತ್ತದೆ. ಆದಾಗ್ಯೂ, ನಿಮ್ಮ ಆರೋಗ್ಯಕ್ಕೆ ತೊಂದರೆಯಾಗದಂತೆ ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಿ. ನಿಮ್ಮ ತಾಯಿಯ ಮಾತುಗಳು ಅಥವಾ ಅಸಮಾಧಾನವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ತಾಳ್ಮೆಯಿಂದ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ.&lt;/p&gt;&lt;p&gt;ವೃಷಭ ರಾಶಿ&lt;/p&gt;&lt;p&gt;ಇಂದು ಸಾಧನೆಗಳು ಮತ್ತು ಗೌರವಗಳಿಂದ ತುಂಬಿದ ದಿನವಾಗಿರುತ್ತದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ ನಿಮ್ಮ ಭವಿಷ್ಯಕ್ಕೆ ಹೊಸ ಅವಕಾಶಗಳು ಸಿಗಬಹುದು. ನಿಮ್ಮ ಕೆಲಸದ ನೀತಿ ಮತ್ತು ಕಠಿಣ ಪರಿಶ್ರಮವನ್ನು ಸಾರ್ವತ್ರಿಕವಾಗಿ ಪ್ರಶಂಸಿಸಲಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ಆರ್ಥಿಕ ಲಾಭದ ಉತ್ತಮ ಅವಕಾಶಗಳಿವೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣವಿರುತ್ತದೆ. ಆದಾಗ್ಯೂ, ಕೆಲಸದ ಜೊತೆಗೆ, ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ನಿಮ್ಮ ಹೆತ್ತವರ ಆಶೀರ್ವಾದವು ಸ್ಥಗಿತಗೊಂಡ ಕೆಲಸಗಳನ್ನು ವೇಗಗೊಳಿಸುತ್ತದೆ ಮತ್ತು ದೀರ್ಘಕಾಲದ ಆಸೆ ಈಡೇರಬಹುದು.&lt;/p&gt;&lt;p&gt;ಮಿಥುನ ರಾಶಿ&lt;/p&gt;&lt;p&gt;ಇಂದು ಸಂತೋಷ ಮತ್ತು ಶಾಂತಿಯಿಂದ ತುಂಬಿದ ದಿನವಾಗಿರುತ್ತದೆ. ಕೆಲಸದಲ್ಲಿ ಸರಿಯಾದ ನಿರ್ದೇಶನ ಮತ್ತು ಮಾರ್ಗದರ್ಶನದೊಂದಿಗೆ, ಅನೇಕ ಪ್ರಮುಖ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ನೀವು ರಾಜಕೀಯ, ಸಾಮಾಜಿಕ ವಲಯ ಅಥವಾ ಯಾವುದೇ ಹೊಸ ಉದ್ಯಮಕ್ಕೆ ಪ್ರವೇಶಿಸಲು ಯೋಜಿಸುತ್ತಿದ್ದರೆ, ಪ್ರತಿಯೊಂದು ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಕುಟುಂಬದ ಮುಂದೆ ಹಳೆಯ ವಿಷಯ ಬಹಿರಂಗವಾಗಬಹುದು, ಆದ್ದರಿಂದ ತಾಳ್ಮೆಯಿಂದಿರಿ. ಆಸ್ತಿ ವಿಷಯಗಳಿಗೆ ಸಂಬಂಧಿಸಿದಂತೆ ಸಣ್ಣಪುಟ್ಟ ವಾದಗಳು ಸಾಧ್ಯ, ಆದರೆ ತಾಳ್ಮೆಯಿಂದ, ಪರಿಸ್ಥಿತಿ ನಿಮ್ಮ ಪರವಾಗಿ ತಿರುಗುತ್ತದೆ.&lt;/p&gt;&lt;p&gt;ಕರ್ಕಾಟಕ ರಾಶಿ&lt;/p&gt;&lt;p&gt;ಇಂದು, ನಿಮ್ಮ ಆತ್ಮವಿಶ್ವಾಸವು ನಿಮ್ಮ ದೊಡ್ಡ ಶಕ್ತಿಯಾಗಲಿದೆ. ಒಂದು ಪ್ರಮುಖ ವ್ಯವಹಾರ ಒಪ್ಪಂದವು ಸದ್ಯಕ್ಕೆ ಸ್ಥಗಿತಗೊಳ್ಳಬಹುದು, ಆದರೆ ಹತಾಶೆಗೊಳ್ಳುವ ಅಗತ್ಯವಿಲ್ಲ. ಸರಿಯಾದ ಸಮಯ ಬಂದಾಗ, ಸಂದರ್ಭಗಳು ನಿಮ್ಮ ಪರವಾಗಿ ತಿರುಗುತ್ತವೆ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭಗಳು ಕಂಡುಬರುತ್ತವೆ. ಕುಟುಂಬ ಪ್ರವಾಸವನ್ನು ಯೋಜಿಸಬಹುದು, ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ನೆರೆಹೊರೆಯವರು ಅಥವಾ ಹತ್ತಿರದ ಜನರೊಂದಿಗೆ ಅನಗತ್ಯ ವಿವಾದಗಳನ್ನು ತಪ್ಪಿಸಿ. ಸರ್ಕಾರಿ ಕೆಲಸದಲ್ಲಿ ಅಸಡ್ಡೆ ತೋರುವ ಬದಲು, ಪ್ರತಿಯೊಂದು ದಾಖಲೆ ಮತ್ತು ಕಾರ್ಯವಿಧಾನದ ಬಗ್ಗೆ ಹೆಚ್ಚು ಗಮನ ಹರಿಸಿ.&lt;/p&gt;&lt;p&gt;ಸಿಂಹ ರಾಶಿ :&lt;/p&gt;&lt;p&gt;ಇಂದು, ನೀವು ಮನೆ ಮತ್ತು ಕೆಲಸದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ, ಆದರೆ ನಿಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವು ಯಶಸ್ಸನ್ನು ಖಚಿತಪಡಿಸುತ್ತದೆ. ವಿದೇಶದಲ್ಲಿ ಕೆಲಸ ಮಾಡುವವರಿಗೆ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಪ್ರೇಮ ಸಂಬಂಧಗಳು ಹೆಚ್ಚು ಆತ್ಮೀಯ ಮತ್ತು ಸಿಹಿಯಾಗುತ್ತವೆ, ಆದರೆ ಕುಟುಂಬ ಜೀವನದಲ್ಲಿ ವಿವೇಕ ಅತ್ಯಗತ್ಯ. ಆತುರದ ನಿರ್ಧಾರವು ನಂತರ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಆಸ್ತಿ ಖರೀದಿಯನ್ನು ಯೋಜಿಸುತ್ತಿದ್ದರೆ, ಸಾಲಗಳು ಅಥವಾ ಹಣಕಾಸಿನ ವ್ಯವಸ್ಥೆಗಳ ಬಗ್ಗೆ ಚರ್ಚೆಗಳು ಅಗತ್ಯವಾಗಬಹುದು.&lt;/p&gt;&lt;p&gt;ಕನ್ಯಾ ರಾಶಿ:&lt;/p&gt;&lt;p&gt;ಇಂದು, ಸಮಾಜದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಸೃಜನಶೀಲ ಚಿಂತನೆ ಮತ್ತು ಪ್ರತಿಭೆ ಜನರನ್ನು ಮೆಚ್ಚಿಸುತ್ತದೆ. ಭವಿಷ್ಯದ ಆರ್ಥಿಕ ತೊಂದರೆಗಳನ್ನು ತಪ್ಪಿಸಲು ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಮನರಂಜನೆಯಲ್ಲಿ ಭಾಗವಹಿಸುವುದು ಸಂತೋಷವನ್ನು ತರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ನಿಮ್ಮ ಕಚೇರಿ ಜವಾಬ್ದಾರಿಗಳನ್ನು ಸಂಪೂರ್ಣ ಪ್ರಾಮಾಣಿಕತೆಯಿಂದ ಪೂರೈಸುತ್ತೀರಿ, ಇದು ನಿಮ್ಮ ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಗಳಿಸುತ್ತದೆ.&lt;/p&gt;&lt;p&gt;ತುಲಾ ರಾಶಿ:&lt;/p&gt;&lt;p&gt;ಇಂದು ಬದಲಾವಣೆ ಮತ್ತು ಹೊಸ ಆರಂಭಗಳ ದಿನ. ಉದ್ಯೋಗಗಳನ್ನು ಬದಲಾಯಿಸಲು ಅಥವಾ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅವಕಾಶಗಳು ಬರಬಹುದು. ನಿಮಗೆ ಹೊಸ ಮತ್ತು ನೆಚ್ಚಿನದನ್ನು ಖರೀದಿಸುವ ಅನಿಸುತ್ತದೆ. ನಿಮ್ಮ ಸಂಗಾತಿಗೆ ಒಂದು ಸಣ್ಣ ಅಚ್ಚರಿಯು ನಿಮ್ಮ ಸಂಬಂಧಕ್ಕೆ ಹೊಸ ತಿರುವು ನೀಡುತ್ತದೆ. ನಿಮ್ಮ ಸುತ್ತಮುತ್ತಲಿನವರನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಒಪ್ಪಂದ ಅಥವಾ ಯೋಜನೆ ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ, ಇದು ಅಪಾರ ಸಂತೋಷವನ್ನು ತರುತ್ತದೆ.&lt;/p&gt;&lt;p&gt;ವೃಶ್ಚಿಕ ರಾಶಿ :&lt;/p&gt;&lt;p&gt;ಇಂದು ನೀವು ಸಂತೋಷವಾಗಿರಲು ಹಲವು ಕಾರಣಗಳನ್ನು ಕಂಡುಕೊಳ್ಳುವಿರಿ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭವಾಗುತ್ತದೆ ಮತ್ತು ಪ್ರತಿ ಹಂತದಲ್ಲೂ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸುಧಾರಣೆಯು ಗಮನಾರ್ಹ ಪರಿಹಾರವನ್ನು ತರುತ್ತದೆ. ಪ್ರವಾಸದ ಸಮಯದಲ್ಲಿ ನೀವು ಪ್ರಮುಖ ಮಾಹಿತಿ ಅಥವಾ ಹೊಸ ಅವಕಾಶವನ್ನು ಪಡೆಯಬಹುದು. ಹಳೆಯ ಕುಟುಂಬ ಭಿನ್ನಾಭಿಪ್ರಾಯಗಳನ್ನು ಸಂವಾದ ಮತ್ತು ತಿಳುವಳಿಕೆಯ ಮೂಲಕ ಪರಿಹರಿಸಲಾಗುತ್ತದೆ, ಸಂತೋಷ ಮತ್ತು ಸಕಾರಾತ್ಮಕ ವಾತಾವರಣವನ್ನು ಪುನಃಸ್ಥಾಪಿಸಲಾಗುತ್ತದೆ.&lt;/p&gt;&lt;p&gt;ಧನು ರಾಶಿ:&lt;/p&gt;&lt;p&gt;ಇಂದು ಕಾರ್ಯನಿರತ ದಿನವಾಗಿರುತ್ತದೆ, ಆದರೆ ನಿಮ್ಮ ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಸಮಯಕ್ಕೆ ಸರಿಯಾಗಿ ಜವಾಬ್ದಾರಿಗಳನ್ನು ಪೂರ್ಣಗೊಳಿಸುವ ನಿಮ್ಮ ಅಭ್ಯಾಸವು ನಿಮ್ಮನ್ನು ಇತರರಿಂದ ಪ್ರತ್ಯೇಕಿಸುತ್ತದೆ. ನಿಮ್ಮ ಸಂಗಾತಿಯಿಂದ ಬರುವ ಅಚ್ಚರಿ ಅಥವಾ ಪ್ರೀತಿಯ ಉಡುಗೊರೆ ನಿಮ್ಮ ದಿನವನ್ನು ಸ್ಮರಣೀಯವಾಗಿಸುತ್ತದೆ. ಪ್ರವಾಸದ ಸಮಯದಲ್ಲಿ, ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಮಾಹಿತಿಯನ್ನು ನೀವು ಪಡೆಯಬಹುದು. ನಿಮ್ಮ ಮಗುವಿನ ಯಶಸ್ಸು ಅಥವಾ ಒಳ್ಳೆಯ ಸುದ್ದಿ ಇಡೀ ಕುಟುಂಬಕ್ಕೆ ನಗು ತರುತ್ತದೆ.&lt;/p&gt;&lt;p&gt;ಮಕರ ರಾಶಿ :&lt;/p&gt;&lt;p&gt;ತಂತ್ರಜ್ಞಾನ, ಶಿಕ್ಷಣ ಮತ್ತು ಜ್ಞಾನದಲ್ಲಿ ತೊಡಗಿರುವವರಿಗೆ ಇಂದು ಅನುಕೂಲಕರ ದಿನವಾಗಿರುತ್ತದೆ. ಹೊಸ ವಿಷಯಗಳನ್ನು ಕಲಿಯಲು ನಿಮಗೆ ಅವಕಾಶವಿರುತ್ತದೆ ಮತ್ತು ಪ್ರತಿ ಅನುಭವದಿಂದ ನೀವು ಹೊಸದನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ, ಇದು ಸಕಾರಾತ್ಮಕ ಶೈಕ್ಷಣಿಕ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಸರ್ಕಾರಿ ಕೆಲಸದಲ್ಲಿ ಕೆಲವು ವಿಳಂಬಗಳು ಅಥವಾ ಆತುರಗಳು ಸಾಧ್ಯ, ಆದ್ದರಿಂದ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಇತರರ ಮೇಲೆ ಹೆಚ್ಚು ಅವಲಂಬಿತರಾಗುವುದನ್ನು ತಪ್ಪಿಸಿ. ನಿಮ್ಮ ವೈವಾಹಿಕ ಜೀವನದಲ್ಲಿ, ಸಣ್ಣ ವಿಷಯಗಳನ್ನು ನಿರ್ಲಕ್ಷಿಸುವ ಮೂಲಕ ನಿಮ್ಮ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತೀರಿ.&lt;/p&gt;&lt;p&gt;ಕುಂಭ ರಾಶಿ :&lt;/p&gt;&lt;p&gt;ಇಂದು ಹೊಸ ಆರಂಭಗಳಿಗೆ ಅನುಕೂಲಕರ ಸಮಯ. ಹೊಸ ಯೋಜನೆಯನ್ನು ಪ್ರಾರಂಭಿಸುವ ಅಥವಾ ಹೊಸ ಯೋಜನೆಯನ್ನು ಮುಂದುವರಿಸುವ ಆಲೋಚನೆ ಯಶಸ್ವಿಯಾಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಲು ತೆಗೆದುಕೊಳ್ಳುವ ಕ್ರಮಗಳು ಭವಿಷ್ಯದ ಪ್ರಯೋಜನಗಳನ್ನು ನೀಡುತ್ತವೆ. ಕುಟುಂಬದ ಬೆಂಬಲ ಮತ್ತು ಸಹಕಾರವು ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ನಿಮಗೆ ವಿಶ್ವಾಸವನ್ನು ನೀಡುತ್ತದೆ. ಹಳೆಯ ಸಾಲಗಳು ಅಥವಾ ಆರ್ಥಿಕ ಜವಾಬ್ದಾರಿಗಳನ್ನು ಕಡಿಮೆ ಮಾಡುವಲ್ಲಿ ಉತ್ತಮ ಪ್ರಗತಿ ಸಾಧಿಸಲಾಗುತ್ತದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ ಮತ್ತು ಅಗತ್ಯವಿದ್ದರೆ ಸಕಾಲಿಕ ವೈದ್ಯಕೀಯ ಸಲಹೆಯನ್ನು ಪಡೆಯಿರಿ.&lt;/p&gt;&lt;p&gt;ಮೀನ ರಾಶಿ :&lt;/p&gt;&lt;p&gt;ಇಂದು, ನೀವು ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿನ ಸಕಾರಾತ್ಮಕ ಚಿಹ್ನೆಗಳನ್ನು ನೋಡುತ್ತೀರಿ. ಹೊಸ ಯೋಜನೆಗಳಿಗೆ ವೆಚ್ಚಗಳು ಖಂಡಿತವಾಗಿಯೂ ಹೆಚ್ಚಾಗುತ್ತವೆ, ಆದರೆ ಆ ಹೂಡಿಕೆಗಳು ಭವಿಷ್ಯದಲ್ಲಿ ಲಾಭವನ್ನು ನೀಡುತ್ತವೆ. ದೀರ್ಘಕಾಲದ ಸಮಸ್ಯೆಯ ಪರಿಹಾರವು ಪರಿಹಾರವನ್ನು ತರುತ್ತದೆ. ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅತ್ಯಗತ್ಯ. ಬೆಲೆಬಾಳುವ ವಸ್ತುಗಳು ಮತ್ತು ಪ್ರಮುಖ ದಾಖಲೆಗಳ ಸುರಕ್ಷತೆಗೆ ವಿಶೇಷ ಗಮನ ಕೊಡಿ. ನಿಮ್ಮ ಸಂಗಾತಿಯೊಂದಿಗೆ ಸಮನ್ವಯ ಮತ್ತು ಪರಸ್ಪರ ತಿಳುವಳಿಕೆಯನ್ನು ಕಾಪಾಡಿಕೊಳ್ಳುವುದರಿಂದ ಪ್ರತಿಯೊಂದು ಯೋಜನೆಯೂ ಯಶಸ್ವಿಯಾಗುತ್ತದೆ ಎಂದು ಖಚಿತಪಡಿಸುತ್ತದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/astrology/today-prediction-horoscope-of-13-august-2026-suh/articleshow-uynzfcv"/>
        </item>
        <item>
            <title><![CDATA[ಜೈಲಲ್ಲೂ ಅಶ್ಲೀಲ ವಿಡಿಯೋ ನೋಡ್ತಿದ್ದ ಪ್ರಜ್ವಲ್‌! ಪೆನ್‌ಡ್ರೈವ್‌ನಲ್ಲಿ 70ಕ್ಕೂ ಹೆಚ್ಚು ವಿಡಿಯೋಗಳು ಪತ್ತೆ!]]></title>
            <link>https://kannada.asianetnews.com/state/prajwal-revanna-watched-obscene-videos-in-jail-admitted-using-mobile-phone-and-pen-drive-rav/articleshow-kfstpts</link>
            <guid isPermaLink="true">https://kannada.asianetnews.com/state/prajwal-revanna-watched-obscene-videos-in-jail-admitted-using-mobile-phone-and-pen-drive-rav/articleshow-kfstpts</guid>
            <pubDate>Thu, 13 Aug 2026 06:33:17 +0530</pubDate>
            <description><![CDATA[ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ನಡೆಸಿದ ದಾಳಿಯಲ್ಲಿ, ಅತ್ಯಾ೧ಚಾರ ಪ್ರಕರಣದ ಸಜಾ ಕೈದಿ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳಿದ್ದ ಪೆನ್‌ಡ್ರೈವ್‌ ಪತ್ತೆ. ಈ ಸಂಬಂಧ ಪ್ರಜ್ವಲ್ ವಿರುದ್ಧ ಎಫ್‌ಐಆರ್. ಸಾಮಾನ್ಯ ಕೈದಿಗಳ ಕೊಠಡಿಗೆ ಸ್ಥಳಾಂತರ.]]></description>
            <media:content url="https://static.asianetnews.com/images/w-1280,h-720,format-jpg,imgid-01kzw9rvw6gzds4wb86x5tfej3,imgname-----------------------2026-08-13t062230.322-1786582429574.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಆ.13): &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ನಡೆಸಿದ ದಾಳಿ ವೇಳೆ ಅತ್ಯಾ೧ಚಾರ ಪ್ರಕರಣದ ಸಜಾ ಕೈದಿ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಕೊಠಡಿಯಲ್ಲಿ (ಸೆಲ್&zwnj;) ಮೊಬೈಲ್ ಹಾಗೂ ಪೆನ್&zwnj;ಡ್ರೈವ್&zwnj;ಗಳು ಪತ್ತೆಯಾಗಿವೆ.&lt;/p&gt;&lt;p&gt;ಜಪ್ತಿಯಾದ ಪೆನ್&zwnj;ಡ್ರೈವ್&zwnj;ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳು ಮತ್ತು ಅವರ ಕೋಣೆಯಲ್ಲಿದ್ದ ಹಾಸಿಗೆ ಕೆಳಗೆ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಗಳ ಅರೆನಗ್ನ ಫೋಟೋಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಅತ್ಯಾ೧ಚಾರ ಪ್ರಕರಣದಲ್ಲಿ ಜೈಲಿಗೆ ಹೋಗಿ ಎರಡು ವರ್ಷಗಳು ಉರುಳಿದರೂ ಪ್ರಜ್ವಲ್&zwnj; ಬದಲಾಗಿಲ್ಲ ಎಂಬುದನ್ನು ಇದು ತೋರಿಸುತ್ತಿದೆ.&lt;/p&gt;&lt;p&gt;ಮೊಬೈಲ್ ಮತ್ತು ಪೆನ್&zwnj;ಡ್ರೈವ್&zwnj; ಪತ್ತೆಯಾದ ಬೆನ್ನಲ್ಲೇ ಪ್ರಜ್ವಲ್&zwnj; ರೇವಣ್ಣ ಹಾಗೂ ಸಹ ಕೈದಿ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ. ಹಾಗೆಯೇ ವಿಶೇಷ ಭದ್ರತಾ ವಿಭಾಗದಿಂದ ಸಾಮಾನ್ಯ ಕೈದಿಗಳ ಬ್ಯಾರಕ್&zwnj;ಗೆ ಪ್ರಜ್ವಲ್ ಅವರನ್ನು ಕಾರಾಗೃಹ ಅಧಿಕಾರಿಗಳು ಎತ್ತಂಗಡಿ ಮಾಡಿದ್ದಾರೆ.&lt;/p&gt;&lt;p&gt;ಪ್ರಜ್ವಲ್ ಅವರ ಸೆಲ್&zwnj;ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಸಾಮಾಜಿಕ ಜಾಲತಾಣಗಳ ಆ್ಯಪ್&zwnj;ಗಳು ಡೌನ್&zwnj;ಲೋಡ್ ಆಗಿರುವುದು ಪತ್ತೆಯಾಗಿದೆ. ಜೈಲಿನಲ್ಲಿದ್ದ ಟಿವಿಗೆ ಪೆನ್&zwnj;ಡ್ರೈವ್ ಕನೆಕ್ಟ್&zwnj; ಮಾಡಿ ಚಲನಚಿತ್ರ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಅಕ್ರಮ ಚಟುವಟಿಕೆಗಳ ಶಂಕೆಯ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದ್ದರು. ಆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್&zwnj; ರಾಯ್&zwnj; ಇರುವ ಸೆಲ್&zwnj;ನಲ್ಲಿ ಮೊಬೈಲ್&zwnj;, ಪೆನ್&zwnj;ಡ್ರೈವ್&zwnj;, ಮೊಬೈಲ್ ಚಾರ್ಜ್&zwnj; ಹಾಗೂ ನೋಟ್ ಬುಕ್ ಸಿಕ್ಕಿದೆ. ಈ ಸಂಬಂಧ ಸಿಸಿಬಿ ಮಾದಕ ವಸ್ತು ದ್ರವ್ಯ ನಿಗ್ರಹ ದಳದ ಇನ್ಸ್&zwnj;ಪೆಕ್ಟರ್&zwnj; ಎಂ.ಎಲ್&zwnj;.ಸುಬ್ರಹ್ಮಣ್ಯ ನೀಡಿದ ದೂರಿನ ಮೇರೆಗೆ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;ತಮ್ಮ ಮನೆ ಕೆಲಸದಾಳು ಮೇಲಿನ ಅತ್ಯಾ೧ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿ ಪ್ರಜ್ವಲ್ ಶಿಕ್ಷೆ ಅನುಭವಿಸುತ್ತಿದ್ದಾರೆ. ಅದೇ ಸೆಲ್&zwnj;ನಲ್ಲಿ ಪೋಕ್ಸೋ ಪ್ರಕರಣದ ಮತ್ತೊಬ್ಬ ಕೈದಿ ಪಶ್ಚಿಮ ಬಂಗಾಳ ಮೂಲದ ಪ್ರತಾಪ್ ರಾಯ್ ಇದ್ದಾನೆ.&lt;/p&gt;&lt;h2&gt;ಮೊಬೈಲ್ ಬಳಕೆ ಒಪ್ಪಿಕೊಂಡ ಪ್ರಜ್ವಲ್&zwnj;:&lt;/h2&gt;&lt;p&gt;ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ)ರ ಆದೇಶದ ಮೇರೆಗೆ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಬಳಸುತ್ತಿದ್ದ ಮೊಬೈಲ್, ಡ್ರಗ್ಸ್&zwnj; ಹಾಗೂ ಇತರೆ ನಿಷೇಧಿತ ವಸ್ತುಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು. ಆಗ ಕಾರಾಗೃಹದ ಬಿಗಿ ಭದ್ರತಾ (ಹೈ-ಸೆಕ್ಯೂರಿಟಿ) ಬ್ಯಾರಕ್&zwnj;ಗಳನ್ನು ಶೋಧಿಸಲಾಯಿತು. ಆ ವಿಭಾಗದ ಮೊದಲ ಮಹಡಿಯ 1ರಿಂದ 3ನೇ ನಂಬರ್&zwnj; ಸೆಲ್&zwnj;ಗಳನ್ನು ತಪಾಸಣೆ ನಡೆಸಲಾಯಿತು.&lt;/p&gt;&lt;p&gt;ಆಗ ಸೆಲ್&zwnj; 4ರಲ್ಲಿ ಒಂದು ತಿಳಿ ನೀಲಿ ಬಣ್ಣದ ರೆಡ್&zwnj;ಮಿ 5ಜಿ ಐಎಂಇಐ ನಂ-860894070725085/860894070725093, ಮೊಬೈಲ್ ನಂ-7995011547, ಬಿಳಿ ಬಣ್ಣದ ಚಾರ್ಜರ್, ಒಂದು ನೀಲಿ ಬಣ್ಣದ ಪಾಕೆಟ್ ನೋಟ್ ಪುಸ್ತಕ ಮತ್ತು ಒಂದು ಕಪ್ಪು ಬಣ್ಣದ ಸ್ಯಾನ್&zwnj; ಡಿಸ್ಕ್ ಪೆನ್&zwnj;ಡ್ರೈವ್ ಸಿಕ್ಕಿದ್ದವು. ಆ ಸೆಲ್&zwnj;ನಲ್ಲಿದ್ದ ಕೈದಿಗಳಾದ ಪ್ರಜ್ವಲ್ ಹಾಗೂ ಪ್ರತಾಪ್ ರಾಯ್ ಇದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪ್ರಜ್ವಲ್ ಅ&zwj;ವರು ನೋಟ್ ಪುಸ್ತಕ ತಮ್ಮದೆಂದು ತಿಳಿಸಿದರು. ಮೊಬೈಲ್, ಚಾರ್ಜರ್ ಮತ್ತು ಪೆನ್&zwnj;ಡ್ರೈವ್ ನನ್ನವು ಎಂದು ಪ್ರತಾಪ್ ಹೇಳಿಕೆ ನೀಡಿದ. ಆದರೆ ತಾನು ಆಗಾಗ್ಗೆ ಸಂಬಂಧಿಕರು ಹಾಗೂ ವಕೀಲರಿಗೆ ಕರೆ ಮಾಡಲು ಪ್ರತಾಪ್&zwnj;ನ ಮೊಬೈಲ್ ಅನ್ನು ಬಳಸಿದ್ದಾಗಿ ಪ್ರಜ್ವಲ್ ತಿಳಿಸಿರುವುದಾಗಿ ಎಫ್&zwnj;ಐಆರ್&zwnj;ನಲ್ಲಿ ಉಲ್ಲೇಖವಾಗಿದೆ. ==&lt;/p&gt;&lt;h2&gt;ಫೇಸ್&zwnj;ಬುಕ್&zwnj;, ವಾಟ್ಸಾಪ್ ಚಾಟಿಂಗ್: ಜೈಲಿನಲ್ಲೂ ಒಟಿಟಿಗಳ ವೀಕ್ಷಣೆ&lt;/h2&gt;&lt;p&gt;ಪ್ರಜ್ವಲ್ ಅವರ ಸೆಲ್&zwnj;ನಲ್ಲಿ ಪತ್ತೆಯಾದ ಮೊಬೈಲ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಫೇಸ್&zwnj;ಬುಕ್, ವಾಟ್ಸಾಪ್, ಇನ್&zwnj; ಸ್ಟಾಗ್ರಾಂ, ನೆಟ್&zwnj;ಫ್ಲಿಕ್ಸ್, ಪ್ರೈಮ್ ವಿಡಿಯೋ ಮುಂತಾದ ಅಪ್ಲಿಕೇಷನ್&zwnj;ಗಳನ್ನು ಡೌನ್ ಲೋಡ್ ಆಗಿರುವುದು ಪತ್ತೆಯಾಗಿದೆ. ಆದರೆ ಅವುಗಳ ಪಾಸ್&zwnj;ವರ್ಡ್ ಪ್ರೊಟೆಕ್ಟ್ ಆಗಿವೆ. ಪಾಸ್&zwnj;ವರ್ಡ್ ಕೇಳಿದಾಗ ಆ ಇಬ್ಬರು ಕೈದಿಗಳು ತಮಗೆ ತಿಳಿದಿರುವುದಿಲ್ಲ ಎಂದಿದ್ದಾರೆ.&lt;/p&gt;&lt;h3&gt;ಪೆನ್&zwnj;ಡ್ರೈವ್&zwnj;-ಮೊಬೈಲ್&zwnj;ನಲ್ಲಿ ಅಶ್ಲೀಲ ವಿಡಿಯೋ&lt;/h3&gt;&lt;p&gt;ಇನ್ನು ಸೆಲ್&zwnj;ನಲ್ಲಿ ಸಿಕ್ಕಿದ ಪೆನ್&zwnj;ಡ್ರೈವ್&zwnj; ಹಾಗೂ ಮೊಬೈಲ್&zwnj;ನಲ್ಲಿ ಅಶ್ಲೀಲ ವಿಡಿಯೋಗಳಿದ್ದವು ಎಂದು ತಿಳಿದು ಬಂದಿದೆ. ಜೈಲಿನ ಟಿವಿಗೆ ಪೆನ್&zwnj;ಡ್ರೈವ್ ಕನೆಕ್ಟ್&zwnj; ಮಾಡಿ ಸಿನಿಮಾ ನೋಡಿದ್ದಾಗಿ ಸಿಸಿಬಿ ವಿಚಾರಣೆ ವೇಳೆ ಪ್ರಜ್ವಲ್ ಹಾಗೂ ಪ್ರತಾಪ್ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಆ ಪೆನ್&zwnj; ಡ್ರೈವ್&zwnj;ನಲ್ಲಿ 70ಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋಗಳಿದ್ದವು. ಅದೇ ರೀತಿ ಮೊಬೈಲ್&zwnj; ನಲ್ಲಿ &lsquo;ಜಿಂಗ್ರಾ&rsquo; ಹೆಸರಿನ ಗೇಮಿಂಗ್ ಆ್ಯಪ್&zwnj;ನಲ್ಲಿ ಕೆಲ ಅಶ್ಲೀಲ ವಿಡಿಯೋಗಳು ಡೌನ್ ಲೋಡ್ ಆಗಿದ್ದವು. ಹಾಸಿಗೆ ಕೆಳಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ನಟಿಯರು ಹಾಗೂ ರೂಪದರ್ಶಿಯರು ಒಳ ಉಡುಪು ಧರಿಸಿ ತೆಗೆಸಿದ್ದ ಚಿತ್ರಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.&lt;/p&gt;&lt;h3&gt;ಸಾಮಾನ್ಯ ಸೆಲ್&zwnj;ಗೆ ಶಿಫ್ಟ್&lt;/h3&gt;&lt;p&gt;ಇದುವರೆಗೆ ವಿಐಪಿ ಬ್ಯಾರಕ್&zwnj;ನಲ್ಲಿ &lsquo;ಬಿಂದಾಸ್&zwnj;&rsquo; ಬದುಕು ಸವೆಸುತ್ತಿದ್ದ ಪ್ರಜ್ವಲ್ ಅವರೀಗ ಸಾಮಾನ್ಯ ಸೆಲ್&zwnj;ಗೆ ಎತ್ತಂಗಡಿಗೊಂಡಿದ್ದಾರೆ. ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಅವರನ್ನು ಕೂಡಲೇ ಸಜಾ ಕೈದಿಗಳ ಬ್ಯಾರಕ್&zwnj;ಗೆ ಕಾರಾಗೃಹ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಈ ಬ್ಯಾರಕ್&zwnj;ನಲ್ಲಿ ಪ್ರಜ್ವಲ್ ಅವರೊಂದಿಗೆ 60 ವರ್ಷ ದಾಟಿದ ಸುಮಾರು 20 ಕೈದಿಗಳಿದ್ದಾರೆ ಎಂದು ಮೂಲಗಳು ಹೇಳಿವೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/prajwal-revanna-watched-obscene-videos-in-jail-admitted-using-mobile-phone-and-pen-drive-rav/articleshow-kfstpts"/>
        </item>
        <item>
            <title><![CDATA[ಸಚಿವರ ಶಪಥದ 10 ದಿನ ಬಳಿಕ, ಅಧಿವೇಶನಕ್ಕೆ 1 ದಿನ ಮುನ್ನ ಖಾತೆ ಹಂಚಿಕೆ! ಯಾರಾರಿಗೆ ಯಾವ ಖಾತೆ ಸಿಕ್ತು? ತಂಗಡಗಿ ಅಸಮಾಧಾನ ಏಕೆ?]]></title>
            <link>https://kannada.asianetnews.com/politics/karnataka-cabinet-on-the-eve-of-monsoon-session-portfolios-finally-allocated-rav/articleshow-a6yzz7e</link>
            <guid isPermaLink="true">https://kannada.asianetnews.com/politics/karnataka-cabinet-on-the-eve-of-monsoon-session-portfolios-finally-allocated-rav/articleshow-a6yzz7e</guid>
            <pubDate>Thu, 13 Aug 2026 06:08:15 +0530</pubDate>
            <description><![CDATA[ಹಲವು ದಿನಗಳ ಬಿಕ್ಕಟ್ಟಿನ ನಂತರ ನೂತನ 19 ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಅಸಮಾಧಾನದ ನಡುವೆ ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರಿಗೆ ಪ್ರಬಲ ಖಾತೆಗಳು ಲಭಿಸಿದ್ದು, ಕೆ.ಎಚ್. ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆಗಳನ್ನು ಬದಲಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzw8f0vbr1q0t74bcqtqkasg,imgname-----------------------2026-08-13t060030.344-1786581058411.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಆ.13): &lt;/strong&gt;ಸಂಪುಟ ವಿಸ್ತರಣೆಯಿಂದ ಭುಗಿಲೆದ್ದಿದ್ದ ಅಸಮಾಧಾನ, ಪ್ರಮುಖ ಖಾತೆಗಳಿಗಾಗಿ ಸಚಿವರು ಪಟ್ಟು ಹಿಡಿದಿದ್ದರಿಂದ ಉಂಟಾಗಿದ್ದ ಬಿಕ್ಕಟ್ಟಿನ ನಡುವೆ ಕೊನೆಗೂ ನೂತನ 19 ಮಂದಿ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.&lt;/p&gt;&lt;p&gt;ನೂತನ ಸಚಿವರ ಪೈಕಿ ಅಲ್ಪಸಂಖ್ಯಾತರು ಹಾಗೂ ಒಕ್ಕಲಿಗರಿಗೆ ಪ್ರಬಲ ಖಾತೆಗಳು ಲಭಿಸಿವೆ. ಉಳಿದಂತೆ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಪಂಗಡಗಳ ಸಚಿವರು ಸಾಮಾನ್ಯ ಖಾತೆಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.&lt;/p&gt;&lt;p&gt;ಈ ತಿಂಗಳ 3ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಚಿವರಿಗೆ ಹತ್ತು ದಿನಗಳ ಬಳಿಕ ವಿಧಾನಮಂಡಲ ಅಧಿವೇಶನ ಶುರುವಾಗುವ ಹಿಂದಿನ ದಿನವಾದ ಬುಧವಾರ ಸಂಜೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರಿಂದ ಅಧಿಕೃತವಾಗಿ ಅಧಿಸೂಚನೆ ಹೊರಬಿದ್ದಿದೆ.&lt;/p&gt;&lt;p&gt;ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಎಂ. ಕೃಷ್ಣಪ್ಪ ಹಾಗೂ ಬಸವರಾಜ ಶಿವಣ್ಣನವರ್&zwnj; ಅವರಿಗೆ ಈವರೆಗೂ ಅವಕಾಶ ಕಲ್ಪಿಸಿಲ್ಲ. ಒಂದು ಸಚಿವ ಸ್ಥಾನವನ್ನು ಖಾಲಿ ಉಳಿಸಿಕೊಂಡಿದ್ದು, ಮಹಿಳಾ ಸಚಿವರಿಲ್ಲದ 33 ಸದಸ್ಯರ ಸಂಪುಟದೊಂದಿಗೆ ಡಿ.ಕೆ.ಶಿವಕುಮಾರ್&zwnj; ಅಧಿವೇಶನ ಎದುರಿಸಲಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆಯಿಂದ ಉಂಟಾಗಿದ್ದ ಅಸಮಾಧಾನ ಮುಂದುವರೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಇನ್ನು ಖಾತೆ ಹಂಚಿಕೆ ಪಟ್ಟಿಯಲ್ಲಿ ಮುಖ್ಯಮಂತ್ರಿ ಶಿವಕುಮಾರ್&zwnj; ಅವರ ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ತಮಗೆ ಇಷ್ಟವಿಲ್ಲದ ಖಾತೆ ನೀಡಿರುವ ಬಗ್ಗೆ ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಪರಿಣಾಮ ನೂತನ ಸಚಿವರ ಖಾತೆ ಹಂಚಿಕೆ ವೇಳೆ ಮುನಿಯಪ್ಪ ಹಾಗೂ ರಾಮಲಿಂಗಾರೆಡ್ಡಿ ಅವರ ಖಾತೆಗಳನ್ನೂ ಬದಲಿಸಲಾಗಿದೆ.&lt;/p&gt;&lt;h2&gt;ಹಠ ಸಾಧಿಸಿ ಗೆದ್ದ ಮುನಿಯಪ್ಪ:&lt;/h2&gt;&lt;p&gt;ಮೊದಲ ಹಂತದ ಸಂಪುಟದಲ್ಲಿ ಆಹಾರ ಇಲಾಖೆಯನ್ನೇ ಮುಂದುವರೆಸಿದ್ದರಿಂದ ಅಸಮಾಧಾನಗೊಂಡಿದ್ದ ಕೆ.ಎಚ್. ಮುನಿಯಪ್ಪ ಸಮಾಜ ಕಲ್ಯಾಣ ಖಾತೆಗಾಗಿ ಪಟ್ಟು ಹಿಡಿದಿದ್ದರು. ಮುನಿಯಪ್ಪ ಅವರ ಜತೆಗೆ ಪಿ.ಎಂ. ನರೇಂದ್ರ ಸ್ವಾಮಿ ಹಾಗೂ ಶಿವರಾಜ್ ತಂಗಡಗಿ ಅವರು ಸಹ ಸಮಾಜ ಕಲ್ಯಾಣ ಇಲಾಖೆ ಖಾತೆಗಾಗಿ ತೀವ್ರ ಲಾಬಿ ನಡೆಸಿದ್ದರು. ಅಂತಿಮವಾಗಿ ತಮ್ಮ ಹಠ ಸಾಧಿಸುವಲ್ಲಿ ಮುನಿಯಪ್ಪ ಯಶಸ್ವಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಗಿಟ್ಟಿಸಿದ್ದಾರೆ.&lt;/p&gt;&lt;h3&gt;ತಂಗಡಗಿ ಅಸಮಾಧಾನ:&lt;/h3&gt;&lt;p&gt;ಸಮಾಜ ಕಲ್ಯಾಣ ಇಲಾಖೆ ಮೇಲೆ ಆಸಕ್ತಿ ಹೊಂದಿದ್ದ ಶಿವರಾಜ್&zwnj; ತಂಗಡಗಿ ಅವರು ತೀವ್ರ ಪ್ರಯತ್ನ ನಡೆಸಿದ್ದರು. ವರಿಷ್ಠರಿಂದ ಭರವಸೆಯೂ ದೊರೆತಿತ್ತು ಎನ್ನಲಾಗಿದೆ. ಇದರ ನಡುವೆಯೂ ಹಿಂದೆ ಇದ್ದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೇ ಮುಂದುವರೆಸಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.&lt;/p&gt;&lt;p&gt;ಖಾತೆ ಹಂಚಿಕೆ ಬಳಿಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಲು ಸಹ ನಿರಾಕರಿಸಿರುವುದು ಇದಕ್ಕೆ ಪುಷ್ಟಿ ನೀಡಿದೆ.&lt;/p&gt;&lt;h3&gt;ರಾಮಲಿಂಗಾರೆಡ್ಡಿ ಖಾತೆ ಬದಲು:&lt;/h3&gt;&lt;p&gt;ಮೊದಲ ಹಂತದ ಸಂಪುಟ ವಿಸ್ತರಣೆ ವೇಳೆ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದಿದ್ದ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಖುದ್ದು ಶಿವಕುಮಾರ್&zwnj; ಅವರು ತಡರಾತ್ರಿವರೆಗೆ ಮನವೊಲಿಸಿದ್ದರು. ಇದೀಗ ಸಂಪುಟ ವಿಸ್ತರಣೆ ವೇಳೆ ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಬದಲಿಗೆ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.&lt;/p&gt;&lt;h3&gt;ಅಲ್ಪಸಂಖ್ಯಾತರಿಗೆ ಆದ್ಯತೆ:&lt;/h3&gt;&lt;p&gt;ಖಾತೆ ಹಂಚಿಕೆಯಲ್ಲೂ ಅಲ್ಪಸಂಖ್ಯಾತ ಸಚಿವರಿಗೆ ಆದ್ಯತೆ ನೀಡಲಾಗಿದೆ. ಜಮೀರ್&zwnj; ಅಹ್ಮದ್&zwnj;ಖಾನ್&zwnj; ಅವರಿಗೆ ವಸತಿ ಇಲಾಖೆ ತಪ್ಪಿಸಲು ತೀವ್ರ ಪ್ರಯತ್ನ ನಡೆದ ಹೊರತಾಗಿಯೂ ಜಮೀರ್&zwnj; ಅವರು ವಸತಿ ಇಲಾಖೆ ಉಳಿಸಿಕೊಂಡಿದ್ದಾರೆ. ಯು.ಟಿ. ಖಾದರ್&zwnj;, ರಿಜ್ವಾನ್&zwnj; ಅರ್ಷದ್ ಅವರಿಗೂ ಪ್ರಮುಖ ಖಾತೆಗಳನ್ನು ನೀಡುವ ಮೂಲಕ ಸಂಪುಟದಲ್ಲಿ ಆದ್ಯತೆ ನೀಡಲಾಗಿದೆ.&lt;/p&gt;&lt;h3&gt;ಹಾಲಿ ಸಚಿವರ ಬದಲಾದ ಖಾತೆಗಳು&lt;/h3&gt;&lt;p&gt;ಸಿದ್ದರಾಮಯ್ಯ ಅವರ ಸಂಪುಟದಲ್ಲಿ ವಸತಿ, ಅಲ್ಪಸಂಖ್ಯಾತ ಹಾಗೂ ಹಜ್&zwnj;, ವಕ್ಫ್&zwnj; ಖಾತೆಗಳನ್ನು ಹೊಂದಿದ್ದ ಬಿ.ಝಡ್&zwnj;. ಜಮೀರ್&zwnj; ಅಹ್ಮದ್&zwnj;ಖಾನ್&zwnj; ಅವರ ಬಳಿ ವಸತಿ ಖಾತೆ ಮಾತ್ರ ಉಳಿಸಲಾಗಿದೆ. ಉಳಿದಂತೆ ಅಲ್ಪಸಂಖ್ಯಾತ ಹಾಗೂ ಹಜ್&zwnj;, ವಕ್ಫ್&zwnj; ಖಾತೆಯನ್ನು ಸಚಿವ ಯು.ಟಿ. ಖಾದರ್&zwnj; ಅವರಿಗೆ ಆರೋಗ್ಯ ಇಲಾಖೆಯ ಜತೆ ಹೆಚ್ಚುವರಿಯಾಗಿ ವಹಿಸಲಾಗಿದೆ.&lt;/p&gt;&lt;p&gt;ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಚಲುವರಾಯಸ್ವಾಮಿ ಅವರಿಗೆ ರಾಮಲಿಂಗಾರೆಡ್ಡಿ ಅವರಿಂದ ತೆರವಾದ ಬೃಹತ್&zwnj; ಮತ್ತು ಮಧ್ಯಮ ನೀರಾವರಿ ಇಲಾಖೆ ಹೊಣೆ ನೀಡಲಾಗಿದೆ.&lt;/p&gt;&lt;p&gt;&lt;strong&gt;ಹಳೆ ಖಾತೆಯಲ್ಲೇ ಮುಂದುವರೆದವರು:&lt;/strong&gt;&lt;/p&gt;&lt;p&gt;ಸಂತೋಷ್&zwnj; ಲಾಡ್&zwnj; ಅವರಿಗೆ ಕಾರ್ಮಿಕ ಮತ್ತು ಉದ್ಯೋಗ ಖಾತೆ, ಎಸ್&zwnj;.ಎಸ್&zwnj;. ಮಲ್ಲಿಕಾರ್ಜುನ ಅವರಿಗೆ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಖಾತೆ, ಮಧು ಬಂಗಾರಪ್ಪ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಶಿವರಾಜ್&zwnj; ತಂಗಡಗಿ ಅವರ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳೇ ಮುಂದುವರೆಸಲಾಗಿದೆ.&lt;/p&gt;&lt;h3&gt;ಹೊಸಬರಿಗೆ ಯಾವ ಖಾತೆ?&lt;/h3&gt;&lt;p&gt;ಕೆ.ಎಚ್. ಮುನಿಯಪ್ಪ ಅವರಿಂದ ತೆರವಾದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ನೂತನ ಸಚಿವ ರಿಜ್ವಾನ್&zwnj; ಅರ್ಷದ್ ಅವರಿಗೆ ನೀಡಲಾಗಿದೆ. ಹೊಸದಾಗಿ ಸಂಪುಟ ಸೇರಿರುವ ಲಕ್ಷ್ಮಣ ಸವದಿ ಅವರಿಗೆ ಕೃಷಿ ಮಾರುಕಟ್ಟೆ ಹೊರತುಪಡಿಸಿ ಸಹಕಾರ ಇಲಾಖೆ, ರುದ್ರಪ್ಪ ಲಮಾಣಿ ಅವರಿಗೆ ಸಕ್ಕರೆ ಮತ್ತು ಜವಳಿ, ಟಿ. ರಘು ಮೂರ್ತಿ ಅವರಿಗೆ ಪರಿಶಿಷ್ಟ ಪಂಡಗಳ ಕಲ್ಯಾಣ ಇಲಾಖೆ, ಡಾ. ಅಜಯ್&zwnj; ಸಿಂಗ್&zwnj; ಅವರಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಇಲಾಖೆ, ಬಸವರಾಜ ರಾಯರಡ್ಡಿ ಅವರಿಗೆ ಉನ್ನತ ಶಿಕ್ಷಣ, ಶಿವಲಿಂಗೇಗೌಡ ಅವರಿಗೆ ಅಬಕಾರಿ, ಪುಟ್ಟರಂಗಶೆಟ್ಟಿ ಅವರಿಗೆ ವೆಂಕಟೇಶ್&zwnj; ಅವರಿಂದ ತೆರವಾದ ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ, ವಿಜಯಾನಂದ ಕಾಶಪ್ಪನವರ್&zwnj; ಅವರಿಗೆ ಸಣ್ಣ ಕೈಗಾರಿಕೆ ಜವಾಬ್ದಾರಿ ನೀಡಲಾಗಿದೆ.&lt;/p&gt;&lt;p&gt;ಮೊದಲ ಬಾರಿಗೆ ಶಾಸಕರಾಗಿ ಮೊದಲ ಯತ್ನದಲ್ಲೇ ಸಂಪುಟ ಸೇರಿರುವ ಕೆ.ಎಸ್&zwnj;. ಬಸವಂತಪ್ಪ ಅವರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳ ಸಾರಿಗೆ ಇಲಾಖೆಗಳ ಹೊಣೆ ವಹಿಸಲಾಗಿದೆ.&lt;/p&gt;&lt;p&gt;&lt;strong&gt;ನರೇಂದ್ರಸ್ವಾಮಿಗೆ ಕೃಷಿ ಖಾತೆ:&lt;/strong&gt;&lt;/p&gt;&lt;p&gt;ಸಮಾಜ ಕಲ್ಯಾಣದ ಮೇಲೆ ಕಣ್ಣಿಟ್ಟಿದ್ದ ನರೇಂದ್ರ ಸ್ವಾಮಿ ಅವರಿಗೆ ಕೃಷಿ ಖಾತೆ ನೀಡಲಾಗಿದೆ. ಎಚ್.ಸಿ. ಬಾಲಕೃಷ್ಣ ಅವರಿಗೆ ಪೌರಾಡಳಿತ, ಬಿ. ನಾಗೇಂದ್ರ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ನೀಡಲಾಗಿದೆ.&lt;/p&gt;&lt;p&gt;ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಖಾತೆ ವಹಿಸಿಕೊಂಡಿದ್ದ ನಾಗೇಂದ್ರ ಅವರು ಮತ್ತೆ ಅದೇ ಖಾತೆ ಮೇಲೆ ಕಣ್ಣಿಟ್ಟಿದ್ದರು. ಆದರೆ ವಾಲ್ಮೀಕಿ ಹಗರಣದ ಆರೋಪದ ಹಿನ್ನೆಲೆ ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಖಾತೆಯ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಲಾಗಿದೆ.&lt;/p&gt;&lt;h3&gt;ಸಿಎಂ ಬಳಿಯೇ ಉಳಿದ ಖಾತೆಗಳು:&lt;/h3&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರ ಬಳಿ ಯಾರಿಗೂ ಹಂಚಿಕೆಯಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಜತೆಗೆ ಪ್ರಮುಖ ಏಳು ಖಾತೆಗಳು ಉಳಿದುಕೊಂಡಿವೆ.&lt;/p&gt;&lt;p&gt;ಹಣಕಾಸು, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್), ಗುಪ್ತಚರ, ಮಾಹಿತಿ, ಕಾನೂನು ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ನಗರ ಮತ್ತು ಪಟ್ಟಣ ಯೋಜನೆ ಆಯುಕ್ತಾಲಯ, ಬಿಡಿಎ ಹಾಗೂ ಬಿಎಆರ್&zwnj;ಡಿಎ ಶಿವಕುಮಾರ್&zwnj; ಬಳಿಯೇ ಉಳಿದಿವೆ.&lt;/p&gt;&lt;p&gt;ಪೌರ ಕಾರ್ಮಿಕ ದಂಪತಿ ಪುತ್ರನಿಗೆ 2 ಖಾತೆ:&lt;/p&gt;&lt;p&gt;ಪೌರಕಾರ್ಮಿಕ ದಂಪತಿಯ ಪುತ್ರ ಕೆ.ಎಸ್&zwnj;.ಬಸವಂತಪ್ಪ ಅವರಿಗೆ ಎರಡು ಪ್ರಮುಖ ಖಾತೆಗಳ ಜವಾಬ್ದಾರಿ ನೀಡಲಾಗಿದೆ. ಮುಜರಾಯಿ ಹಾಗೂ ಬಂದರು, ಮೀನುಗಾರಿಕೆ, ಒಳನಾಡ ಸಾರಿಗೆ ವಹಿಸಲಾಗಿದೆ.&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/karnataka-cabinet-on-the-eve-of-monsoon-session-portfolios-finally-allocated-rav/articleshow-a6yzz7e"/>
        </item>
        <item>
            <title><![CDATA[ರಾಜ್ಯದಲ್ಲಿ ಪಾನ್‌ ಮಸಾಲ, ಗುಟ್ಕಾ ಸಂಪೂರ್ಣ ನಿಷೇಧ: ಆಹಾರ ಇಲಾಖೆಯಿಂದ ಮಹತ್ವದ ಆದೇಶ! ಅಡಕೆ ಬೆಳೆಗಾರರ ಮೇಲೆ ಪರಿಣಾಮವೇನು?]]></title>
            <link>https://kannada.asianetnews.com/state/complete-ban-on-pan-masala-and-gutkha-in-karnataka-food-department-order-what-impact-on-arecanut-growers-rav/articleshow-4gcyz88</link>
            <guid isPermaLink="true">https://kannada.asianetnews.com/state/complete-ban-on-pan-masala-and-gutkha-in-karnataka-food-department-order-what-impact-on-arecanut-growers-rav/articleshow-4gcyz88</guid>
            <pubDate>Thu, 13 Aug 2026 05:47:30 +0530</pubDate>
            <description><![CDATA[ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಎಲ್ಲಾ ರೀತಿಯ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ಒಂದು ವರ್ಷದ ಕಾಲ ಸಂಪೂರ್ಣವಾಗಿ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzw7ak0574paf54y10pdjkgh,imgname-----------------------2026-08-13t054039.438-1786579864581.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ರಾಜ್ಯದಲ್ಲಿ ಈಗಾಗಲೇ ನಿಕೋಟಿನ್&zwnj; ಉಳ್ಳ ಗುಟ್ಕಾ, ಪಾನ್ ಮಸಾಲಾ ಮಾರಾಟಕ್ಕೆ ನಿಷೇಧ ಇದೆ&lt;/li&gt; &lt;li&gt;ಆದರೆ ನಿಷೇಧ ತಪ್ಪಿಸಲು ಪ್ರತ್ಯೇಕ ಪ್ಯಾಕಲ್ಲಿ ಗುಟ್ಕಾ, ಪಾನ್ ಮಸಾಲಾ ಮಾರುತ್ತಿದ್ದ ಕಂಪನಿಗಳು&lt;/li&gt; &lt;li&gt;ಗುಟ್ಕಾದಲ್ಲಿ ಡ್ರಗ್ಸ್&zwnj; ಮಿಶ್ರಣ ಬಗ್ಗೆ ಸಿಎಂ ಡಿಕೆಶಿ ಎಚ್ಚರಿಕೆ ಬೆನ್ನಲ್ಲೇ ಇಂಥ ಮಾರಾಟಕ್ಕೂ ನಿಷೇಧ&lt;/li&gt; &lt;li&gt;ಇಂಥ ಉತ್ಪನ್ನ ತಯಾರಿ, ಸಂಗ್ರಹ, ಮಾರಾಟ ಪತ್ತೆಗೆ ರಾಜ್ಯವ್ಯಾಪಿ ಅಭಿಯಾನಕ್ಕೆ ಸರ್ಕಾರ ಸಜ್ಜು&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ತಂಬಾಕು ಹಾಗೂ ನಿಕೋಟಿನ್&zwnj; ಹೊಂದಿರುವ ಎಲ್ಲ ರೀತಿಯ ಗುಟ್ಕಾ, ಪಾನ್&zwnj; ಮಸಾಲ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಹಾಗೂ ಮಾರಾಟವನ್ನು ಸಂಪೂರ್ಣ ನಿಷೇಧ ಮಾಡಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ.&lt;/p&gt;&lt;p&gt;ಅಧಿಸೂಚನೆ ಹೊರಡಿಸಿರುವ ಆ.10ರಿಂದ ಅನ್ವಯವಾಗುವಂತೆ ಒಂದು ವರ್ಷದ ಕಾಲ ಒಟ್ಟಾಗಿ ಅಥವಾ ಪ್ರತ್ಯೇಕ ಸ್ಯಾಚೆಟ್&zwnj;, ಪೌಚ್&zwnj;, ಪ್ಯಾಕೆಟ್&zwnj;, ಡಬ್ಬಿ ಸೇರಿ ಇತರೆ ಯಾವುದೇ ಮಾದರಿಯಲ್ಲಿ ತಂಬಾಕು ಹಾಗೂ ನಿಕೋಟಿನ್&zwnj; ಉಳ್ಳ ಗುಟ್ಕಾ ಅಥವಾ ಪಾನ್&zwnj; ಮಸಾಲ ಮಾರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಇದರಿಂದಾಗಿ ಗುಟ್ಕಾ ನಿಷೇಧದಿಂದ ಪಾರಾಗಲು ತಂಬಾಕು ಹಾಗೂ ಅಡಕೆಯನ್ನು ಬಿಡಿಬಿಡಿಯಾಗಿ ಮಾರುತ್ತಿದ್ದ ಕಂಪನಿಗಳ ಅಡ್ಡದಾರಿಗೆ ಬ್ರೇಕ್&zwnj; ಬಿದ್ದಂತಾಗಿದೆ. ಈ ನಿರ್ಧಾರದಿಂದ ಅಡಕೆ ಬೆಳೆಗಾರರ ಮೇಲೆ ಆಗುವ ಪರಿಣಾಮ ಏನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.&lt;/p&gt;&lt;p&gt;ಇತ್ತೀಚೆಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್&zwnj; ಅವರು, ಪಾನ್ ಮಸಾಲಾ ಮತ್ತು ಗುಟ್ಕಾದಲ್ಲಿ ನಿಷೇಧಿತ ನಶೆ ಪದಾರ್ಥಗಳನ್ನು ಬೆರೆಸುತ್ತಿರುವುದು ದೃಢಪಟ್ಟರೆ, ರಾಜ್ಯದಲ್ಲಿ ಎಲ್ಲ ರೀತಿಯ ಪಾನ್ ಮಸಾಲಾ ಮತ್ತು ಗುಟ್ಕಾ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಈ ಮಹತ್ವದ ಆದೇಶ ಹೊರ ಬಿದ್ದಿದೆ.&lt;/p&gt;&lt;p&gt;ಈ ಮೊದಲಿನಿಂದಲೂ ನಿಷೇಧಿತ ನಿಕೋಟಿನ್ ಉತ್ಪನ್ನ ಉಳ್ಳ ಗುಟ್ಕಾ ಹಾಗೂ ಪಾನ್&zwnj; ಮಸಾಲಾ ರಾಜ್ಯದಲ್ಲಿ ನಿಷೇಧದಲ್ಲಿದೆ. ಆದರೆ, ಗುಟ್ಕಾ ಕಂಪನಿಗಳು ಗುಟ್ಕಾ ಹಾಗೂ ನಿಷೇಧಿತ ನಿಕೋಟಿನ್&zwnj; ಮತ್ತಿತರ ಉತ್ಪನ್ನಗಳನ್ನು ಪ್ರತ್ಯೇಕ ಸ್ಯಾಚೆಟ್&zwnj;ಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿವೆ. ಹೀಗಾಗಿ ಆರೋಗ್ಯ ಇಲಾಖೆಯು ಈ ಕ್ರಮ ಕೈಗೊಂಡಿದೆ.&lt;/p&gt;&lt;h2&gt;ಅಧಿಸೂಚನೆಯಲ್ಲಿ ಏನಿದೆ?:&lt;/h2&gt;&lt;p&gt;ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್&zwnj; ಉಳ್ಳ ಗುಟ್ಕಾ ಹಾಗೂ ಪಾನ್&zwnj; ಮಸಾಲ ಮಾರಾಟ, ಸಂಗ್ರಹಣ, ಸಾಗಣೆ, ಉತ್ಪಾದನೆ ನಿಷೇಧಿಸಲಾಗಿದೆ. ಅಲ್ಲದೆ, ತಂಬಾಕು ಹಾಗೂ ನಿಕೋಟಿನ್&zwnj; ಉಳ್ಳ ಯಾವುದೇ ಹೆಸರಿನ ಯಾವುದೇ ಉತ್ಪನ್ನವೂ ನಿಷೇಧವಾಗಲಿದೆ.&lt;/p&gt;&lt;p&gt;ಅದು ಪ್ಯಾಕೇಜ್ಡ್&zwnj; ಆಗಿರಲಿ ಪ್ಯಾಕೇಜ್ಡ್ ಅಲ್ಲದಿರಲಿ, ಎರಡೂ ಉತ್ಪನ್ನಗಳನ್ನು ಪ್ರತ್ಯೇಕ ಪಾಕೆಟ್&zwnj;ಗಳಲ್ಲೇ ಮಾರಾಟ ಮಾಡುತ್ತಿದ್ದರೆ ಅದನ್ನು ನಿಷೇಧಿಸಲಾಗಿದೆ. ಗುಟ್ಕಾ ಕಂಪನಿಗಳು ನಿಷೇಧ ವಸ್ತುಗಳನ್ನು ಪ್ರತ್ಯೇಕ ಪ್ಯಾಕೆಟ್&zwnj;ನಲ್ಲಿ ನೀಡಿ ಗ್ರಾಹಕರು ಮಿಶ್ರಣ ಮಾಡಿ ಬಳಕೆ ಮಾಡಲು ಉತ್ತೇಜನ ನೀಡುತ್ತಿದ್ದವು. ಹೀಗಾಗಿ ತಂಬಾಕು, ನಿಕೋಟಿನ್&zwnj; ಉಳ್ಳ ಯಾವುದೇ ಗುಟ್ಕಾ, ಪಾನ್&zwnj; ಮಸಾಲ ಉತ್ಪನ್ನಗಳ ಯಾವುದೇ ಪ್ಯಾಕೇಜಿಂಗ್&zwnj;ನಲ್ಲಿ ಲಭ್ಯವಿದ್ದರೂ ಅದು ಅಕ್ರಮ. ಮುಂದಿನ ಒಂದು ವರ್ಷದವರೆಗೆ ರಾಜ್ಯದಲ್ಲಿ ಯಾವುದೇ ರೂಪದಲ್ಲೂ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.&lt;/p&gt;&lt;h3&gt;ರಾಜ್ಯಾದ್ಯಂತ ದಾಳಿಗೆ ಸಿದ್ಧತೆ:&lt;/h3&gt;&lt;p&gt;ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಂಬಾಕು ಹಾಗೂ ನಿಕೋಟಿನ್&zwnj; ಹೊಂದಿರುವ ಉತ್ಪನ್ನಗಳ ವಿರುದ್ಧ ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ವಿಶೇಷ ತಪಾಸಣೆ ಜಾರಿ:&lt;/strong&gt;&lt;/p&gt;&lt;p&gt;ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರ ಕಲಂ 30(2)(ಎ) ಅನ್ವಯ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್&zwnj; ಹೊಂದಿರುವ ಉತ್ಪನ್ನಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಆ.10 ರಂದು ಸರ್ಕಾರಿ ಅಧಿಸೂಚನೆ ಹೊರಡಿಸಲಾಗಿದೆ.&lt;/p&gt;&lt;p&gt;ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ಆರೋಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸುವಂತೆ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ಜಾಗೃತಿ ಮೂಡಿಸಲಾಗುವುದು. ಜತೆಗೆ ಅಕ್ರಮ ದಾಸ್ತಾನು, ಮಾರಾಟ ಮಾಡುವವರ ವಿರುದ್ಧ ದಾಳಿ ಮಾಡಲಾಗುವುದು ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/complete-ban-on-pan-masala-and-gutkha-in-karnataka-food-department-order-what-impact-on-arecanut-growers-rav/articleshow-4gcyz88"/>
        </item>
        <item>
            <title><![CDATA[ಇಂದಿನಿಂದ ವಿಧಾನಮಂಡಲ ಅಧಿವೇಶನ: ಸಿಎಂ ಡಿಕೆಗೆ ಅಗ್ನಿಪರೀಕ್ಷೆ; ನಾಗೇಂದ್ರ ಸೇರ್ಪಡೆ, ಬಿಡದಿ ಗದ್ದಲ ಸಂಭವ]]></title>
            <link>https://kannada.asianetnews.com/state/a-testing-legislature-session-for-cm-dk-shivakumar-as-oppn-to-target-cong-govt-on-multiple-fronts-rav/articleshow-f9kxqt9</link>
            <guid isPermaLink="true">https://kannada.asianetnews.com/state/a-testing-legislature-session-for-cm-dk-shivakumar-as-oppn-to-target-cong-govt-on-multiple-fronts-rav/articleshow-f9kxqt9</guid>
            <pubDate>Thu, 13 Aug 2026 05:30:31 +0530</pubDate>
            <description><![CDATA[ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ವಿಧಾನಮಂಡಲ ಅಧಿವೇಶನವು ಗುರುವಾರದಿಂದ ಆರಂಭವಾಗಲಿದ್ದು, ಸಚಿವ ಬಿ.ನಾಗೇಂದ್ರ ಅವರ ಮರುಸೇರ್ಪಡೆ ಮತ್ತು ಬಿಡದಿ ಟೌನ್‌ಶಿಪ್ ಯೋಜನೆ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಸಂಘರ್ಷ ನಡೆಯುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzw69a36qzqdyb0gj2h000c6,imgname-----------------------2026-08-13t052232.882-1786578774118.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ವಾಲ್ಮೀಕಿ ಕೇಸಿನ ಆರೋಪಿ ಸಚಿವ ನಾಗೇಂದ್ರ ಕೈಬಿಡದಿದ್ರೆ ಕಲಾಪಕ್ಕೆ ಬಿಡಲ್ಲ ಎಂದು ವಿಪಕ್ಷ ಪಟ್ಟು&lt;/li&gt; &lt;li&gt;ಇದರ ಜೊತೆಗೆ ಬಿಡದಿ ಟೌನ್&zwnj;ಶಿಪ್&zwnj; ಬಗ್ಗೆಯೂ ಸರ್ಕಾರ ಕಟ್ಟಿಹಾಕಲು ಬಿಜೆಪಿ, ಜೆಡಿಎಸ್&zwnj; ತಂತ್ರ&lt;/li&gt; &lt;li&gt;ಗ್ಯಾರಂಟಿ ಯೋಜನೆ ಪರಿಷ್ಕರಣೆ ಬಳಿಕ ಉಂಟಾಗಿರುವ ಗೊಂದಲ ಬಗ್ಗೆಯೂ ತರಾಟೆಗೆ ಸಜ್ಜು&lt;/li&gt; &lt;li&gt;ವಿಪಕ್ಷಗಳನ್ನು ಎದುರಿಸಲು ಹೊಸ ಸಚಿವ ಸಂಪುಟದೊಂದಿಗೆ ಸಜ್ಜಾಗಿರುವ ಮುಖ್ಯಮಂತ್ರಿ ಡಿಕೆಶಿ&lt;/li&gt;&lt;/ul&gt;&lt;p&gt;&lt;strong&gt;ಬೆಂಗಳೂರು (ಆ.13): &lt;/strong&gt;ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ವಿಧಾನಮಂಡಲದ ಉಭಯ ಸದನಗಳ ಮೊದಲ ಅಧಿವೇಶನ ಗುರುವಾರದಿಂದ ಆರಂಭವಾಗಲಿದ್ದು, ನೂತನ ಸಚಿವ ಬಿ.ನಾಗೇಂದ್ರ ಅವರ ಸೇರ್ಪಡೆ ಹಾಗೂ ಬಿಡದಿ ಟೌನ್&zwnj;ಶಿಪ್ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್&zwnj; ಮತ್ತು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಡುವೆ ಜಂಗೀ ಕುಸ್ತಿ ನಡೆಯುವ ಸಾಧ್ಯತೆಯಿದೆ.&lt;/p&gt;&lt;p&gt;ಮೊದಲ ದಿನ ಸಂಪ್ರದಾಯಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ನಂತರದ ದಿನಗಳಲ್ಲಿ ಕ್ಲೀನ್&zwnj;ಚಿಟ್&zwnj;ಗೂ ಮೊದಲೇ ಬಿ.ನಾಗೇಂದ್ರಗೆ ಸಚಿವ ಸ್ಥಾನ ನೀಡಿರುವುದು, ಬಿಡದಿ ಟೌನ್&zwnj;ಶಿಪ್&zwnj;, ಕಾವೇರಿ ನದಿ ನೀರು ವಿಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಉಭಯ ಸದನಗಳಲ್ಲೂ ಕದನ ಏರ್ಪಡುವುದು ನಿಶ್ಚಿತವಾಗಿದೆ.&lt;/p&gt;&lt;p&gt;ಶಿವಕುಮಾರ್&zwnj; ಅವರು ಸಚಿವರಾಗಿ, ಉಪಮುಖ್ಯಮಂತ್ರಿ ಹಲವು ಅಧಿವೇಶನಗಳಲ್ಲಿ ಭಾಗಿಯಾಗಿದ್ದಾರೆ. ಆದರೆ, ಮುಖ್ಯಮಂತ್ರಿಯಾಗಿ ಅವರಿಗೆ ಇದು ಮೊದಲ ಅಧಿವೇಶನ. ಅವರಷ್ಟೇ ಅಲ್ಲದೆ ಅವರ ಸಂಪುಟದ ಹಲವು ಸಚಿವರಿಗೂ ಮೊದಲ ಅಧಿವೇಶನವಾಗಿದೆ. ಅಧಿವೇಶನದಲ್ಲಿ ವಿಧಾನಸಭೆಗೆ ಹೊಸ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ, ವಿಧಾನ ಪರಿಷತ್&zwnj;ನಲ್ಲೂ ಹೊಸ ಸಭಾಪತಿ, ಉಪಸಭಾಪತಿ ಆಯ್ಕೆ ಪ್ರಕ್ರಿಯೆಗಳು ನಡೆಯಲಿದ್ದು ಭಾರೀ ಕುತೂಹಲ ಮೂಡಿಸಿದೆ.&lt;/p&gt;&lt;p&gt;ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ಆರೋಪದಲ್ಲಿ ಕ್ಲೀನ್&zwnj;ಚಿಟ್&zwnj; ಸಿಗುವ ಮೋದಲೇ ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವ ನಾಗೇಂದ್ರ ಅವರನ್ನು ಕೈಬಿಡುವಂತೆ ಆಗ್ರಹಿಸಿ ಅಧಿವೇಶನಕ್ಕೂ ಮೊದಲೇ ಹೋರಾಟ ಶುರು ಮಾಡಿರುವ ಪ್ರತಿಪಕ್ಷ ಬಿಜೆಪಿಯವರು, ಅವರನ್ನು ಸಂಪುಟದಿಂದ ಕೈಬಿಡುವವರೆಗೆ ಅಧಿವೇಶನ ನಡೆಸಲೂ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.&lt;/p&gt;&lt;p&gt;ಇದರ ಜೊತೆಗೆ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ನಿರಂತರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಿಡದಿ ಟೌನ್&zwnj;ಶಿಪ್&zwnj;, ಕೆಪಿಎಸ್ಸಿ ಹಗರಣದ ವಿಚಾರಗಳು ಬಿಸಿಬಿಸಿ ಚರ್ಚೆ, ಆರೋಪ, ಪ್ರತ್ಯಾರೋಪ, ಕೋಲಾಹಲಕ್ಕೆ ಕಾರಣವಾಗುವ ಎಲ್ಲಾ ನಿರೀಕ್ಷೆಗಳಿವೆ. ಇವುಗಳ ಜೊತೆಗೆ ಕಾವೇರಿ ವಿವಾದ, ಬರ ನಿರ್ವಹಣೆ ವೈಫಲ್ಯ, ರೈತರ ಆತ್ಮಹತ್ಯೆ, ಗೃಹಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯಿಂದಾಗುತ್ತಿರುವ ಸಮಸ್ಯೆ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ.&lt;/p&gt;&lt;p&gt;ವಿಧಾನ ಪರಿಷತ್&zwnj;ನಲ್ಲಿ ಸಭಾಪತಿ ಸ್ಥಾನದಿಂದ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಳಿಸಿದ್ದು, ಸಭಾಪತಿ ಸ್ಥಾನ ಪಕ್ಷಾತೀತವಾದರೂ ಕಾಂಗ್ರೆಸ್&zwnj; ಪಕ್ಷದ ಲೆಟರ್&zwnj;ಹೆಡ್&zwnj;ನಲ್ಲಿ ಅಭ್ಯರ್ಥಿ ಹೆಸರು ಪ್ರಕಟಿಸಿದ ವಿಚಾರಗಳು ಜಟಾಪಟಿಗೆ ಕಾರಣವಾಗುವ ಸಾಧ್ಯತೆ ಇದೆ. ಇದೆಲ್ಲದಕ್ಕೂ ಪ್ರತ್ಯುತ್ತರ ನೀಡಲು ಆಡಳಿತ ಪಕ್ಷ ತಯಾರಿ ಮಾಡಿಕೊಂಡಿದೆ. ಇವುಗಳ ನಡುವೆ ಸಂಪುಟ ವಿಸ್ತರಣೆ ಅಸಮಾಧಾನ, ಖಾತೆ ಹಂಚಿಕೆ ಗೊಂದಲದಂತ ಆಂತರಿಕ ವಿಚಾರಗಳಿಗೆ ಆಡಳಿತ ಪಕ್ಷ ಕಾಂಗ್ರೆಸ್&zwnj; ಸದನದಲ್ಲಿ ಉತ್ತರ ನೀಡಬೇಕಾದ ಪರಿಸ್ಥಿತಿ ಎದುರಿಸಬೇಕಾಗಬಹುದು.==&lt;/p&gt;&lt;h2&gt;ಆ.14 ರಂದು ಸಭಾಧ್ಯಕ್ಷ, ಸಭಾಪತಿ ಚುನಾವಣೆ:&lt;/h2&gt;&lt;p&gt;ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಆ.14ರಂದು ಚುನಾವಣೆ ನಡೆಯಲಿದ್ದು, ಈ ಕುರಿತು ರಾಜ್ಯಪಾಲ ಥಾವರಚಂದ್&zwnj; ಗೆಹಲೋತ್&zwnj; ಅಧಿಸೂಚನೆ ಹೊರಡಿಸಿದ್ದಾರೆ. ಸಭಾಧ್ಯಕ್ಷರಾಗಿ ರೋಣ ಕ್ಷೇತ್ರದ ಶಾಸಕ ಜಿ.ಎಸ್&zwnj;. ಪಾಟೀಲ ಹಾಗೂ ಸಭಾಪತಿ ಸ್ಥಾನಕ್ಕೆ ಸಲೀಂ ಅಹಮದ್&zwnj; ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್&zwnj; ಈಗಾಗಲೇ ಘೋಷಿಸಿದೆ. ಈ ಇಬ್ಬರೂ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.&lt;/p&gt;&lt;p&gt;ಉಭಯ ಸದನಗಳಲ್ಲಿ ಮೊದಲ ದಿನ ಅಗಲಿದ ಗಣ್ಯರಿಗೆ ಮೊದಲ ದಿನ ಸಂತಾಪ ಸೂಚನೆ ನಡೆಯಲಿದೆ. ಮರುದಿನ ಸಭಾಧ್ಯಕ್ಷ, ಸಭಾಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ.&lt;/p&gt;&lt;p&gt;ಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್&zwnj; ಸಚಿವರಾಗಿರುವುದರಿಂದ ಹಂಗಾಮಿ ಸಭಾಧ್ಯಕ್ಷರಾಗಿ ಕಾಂಗ್ರೆಸ್&zwnj;ನ ಟಿ.ಬಿ. ಜಯಚಂದ್ರ ಕಾರ್ಯನಿರ್ವಹಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ನಂತರ, ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಲಾಗಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/a-testing-legislature-session-for-cm-dk-shivakumar-as-oppn-to-target-cong-govt-on-multiple-fronts-rav/articleshow-f9kxqt9"/>
        </item>
        <item>
            <title><![CDATA[Toe Rings: ನೋಡಿದ ತಕ್ಷಣ ಇಷ್ಟವಾಗುವ ಕಾಲುಂಗುರದ ಡಿಸೈನ್‌ಗಳಿವು: ನಿಮ್ಮ ಸೌಂದರ್ಯ ಹೆಚ್ಚಿಸೋದು ಗ್ಯಾರಂಟಿ!]]></title>
            <link>https://kannada.asianetnews.com/webstories/fashion/latest-toe-ring-designs-for-shravan-festival-gvd-ne3y9oa</link>
            <guid isPermaLink="true">https://kannada.asianetnews.com/webstories/fashion/latest-toe-ring-designs-for-shravan-festival-gvd-ne3y9oa</guid>
            <pubDate>Thu, 13 Aug 2026 00:28:59 +0530</pubDate>
            <description><![CDATA[ಶ್ರಾವಣ ಮಾಸದಲ್ಲಿ ಕಾಲಿಗೆ ಹಾಕಿಕೊಳ್ಳಲು ಹೊಸ ಕಾಲುಂಗುರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ. ಇಲ್ಲಿ ಲೀಫ್ ಡಿಸೈನ್, ಗೋಲ್ಡ್ ಪ್ಲೇಟೆಡ್, ಸಿಂಪಲ್, ಹೆವಿ ಮತ್ತು ಲಾಂಗ್ ಲೀಫ್‌ನಂತಹ ಹಲವು ಆಕರ್ಷಕ ಕಾಲುಂಗುರಗಳ ಡಿಸೈನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxqp3xjrfnse7s1qnc62t2vy,imgname-toe-rings-7-1784280118872.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-toe-ring-designs-for-shravan-festival-gvd-ne3y9oa"/>
        </item>
        <item>
            <title><![CDATA[ಗೆಲುವು ಕೊಟ್ಟ ನಿರ್ದೇಶಕರು ಕಾಣೆಯಾಗಿದ್ದಾರೆ: ಸ್ಯಾಂಡಲ್‌ವುಡ್‌ನಲ್ಲಿ ಏನಾಗುತ್ತಿದೆ?]]></title>
            <link>https://kannada.asianetnews.com/sandalwood/where-are-sandalwood-hit-directors-now-the-big-question-facing-kannada-cinema-gvd/articleshow-o6u1e1w</link>
            <guid isPermaLink="true">https://kannada.asianetnews.com/sandalwood/where-are-sandalwood-hit-directors-now-the-big-question-facing-kannada-cinema-gvd/articleshow-o6u1e1w</guid>
            <pubDate>Wed, 12 Aug 2026 23:33:36 +0530</pubDate>
            <description><![CDATA[ಕನ್ನಡ ಚಿತ್ರರಂಗಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ ಕಿರಣ್‌ ರಾಜ್‌, ಸಂತೋಷ್‌ ಆನಂದ್‌ರಾಮ್‌, ನರ್ತನ್‌, ಪವನ್‌ ಕುಮಾರ್‌, ತರುಣ್‌ ಸುಧೀರ್‌ ಸೇರಿದಂತೆ ಹಲವು ನಿರ್ದೇಶಕರ ಮುಂದಿನ ಸಿನಿಮಾ ಏನು? ಸ್ಯಾಂಡಲ್‌ವುಡ್‌ನ ಸದ್ಯದ ಸ್ಥಿತಿಯ ಕುರಿತ ವಿಶೇಷ ವರದಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvg8xqycb7w2dqm1p6rkgfd,imgname-bnj-1786555692798.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;777 ಚಾರ್ಲಿ&rsquo; ಸಿನಿಮಾ ಕೊಟ್ಟ ಕಿರಣ್&zwnj; ರಾಜ್&zwnj;, &lsquo;ಮಿಸ್ಟರ್&zwnj; ಆಂಡ್&zwnj; ಮಿಸಸ್&zwnj; ರಾಮಾಚಾರಿ&rsquo;, &lsquo;ರಾಜಕುಮಾರ&rsquo;, &lsquo;ಯುವರತ್ನ&rsquo; ಚಿತ್ರಗಳ ಸಂತೋಷ್&zwnj; ಆನಂದ್&zwnj;ರಾಮ್&zwnj;, &lsquo;ಮಫ್ತಿ&rsquo; ಚಿತ್ರದ ನರ್ತನ್&zwnj;, &lsquo;ಲೂಸಿಯಾ&rsquo;, &lsquo;ಯೂ ಟರ್ನ್&zwnj;&rsquo; ಚಿತ್ರಗಳ ಪವನ್&zwnj; ಕುಮಾರ್&zwnj;, &lsquo;ಕಾಟೇರ&rsquo; ನಿರ್ದೇಶಕ ತರುಣ್&zwnj; ಸುಧೀರ್&zwnj;, &lsquo;ಗುರುಶಿಷ್ಯರು&rsquo; ಜಡೇಶ್ ಹಂಪಿ ಇವರೆಲ್ಲಾ ಯಾವ ಸಿನಿಮಾ ಮಾಡುತ್ತಿದ್ದಾರೆ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ.&lt;/p&gt;&lt;p&gt;ತರುಣ್&zwnj; ಸುಧೀರ್&zwnj; ಕಿರುತೆರೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ನರ್ತನ್&zwnj; ರೈಟಿಂಗ್&zwnj;ನಲ್ಲಿ ಬ್ಯುಸಿ ಇದ್ದೇನೆ ಎನ್ನುತ್ತಾರೆ. ಪ್ರಯೋಗ ಮತ್ತು ಕಂಟೆಂಟ್&zwnj; ಸಿನಿಮಾಗಳ ಪವನ್&zwnj; ಕುಮಾರ್&zwnj; ಯಾವ ಚಿತ್ರವನ್ನೂ ಘೋಷಣೆ ಮಾಡಿಲ್ಲ. ಸಂತೋಷನ್&zwnj; ಆನಂದರಾಮ್&zwnj; ಅವರು &lsquo;ಯುವ&rsquo; ನಂತರ ಕಾಣೆಯಾಗಿದ್ದಾರೆ. ಕ್ಲಾಸ್&zwnj; ಸಿನಿಮಾ ಮಾಡಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಿದ ಕಿರಣ್&zwnj; ರಾಜ್&zwnj; ಅವರ ಮುಂದಿನ ಸಿನಿಮಾ ಯಾವಾಗ ಗೊತ್ತಿಲ್ಲ.&lt;/p&gt;&lt;p&gt;&lsquo;ನಿರ್ದೇಶಕ ಹೇಳಿದ ಕತೆ ಸರಿ ಇದ್ದರೆ ಅದಕ್ಕೆ ನಿರ್ಮಾಪಕನ ಬಜೆಟ್&zwnj; ತೂಗಲ್ಲ. ಕತೆ, ಬಜೆಟ್&zwnj; ಎರಡೂ ಇದ್ದಾಗ ಹೀರೋ ಕಾಲ್&zwnj;ಶೀಟ್&zwnj; ಸಿಗಲ್ಲ. ಹೋಗಲಿ ಹೊಸ ಹೀರೋಗಳ ಜತೆಗೆ ಸಿನಿಮಾ ಮಾಡೋಣ ಅಂದರೆ ನಿರ್ಮಾಪಕರು ರಿಟರ್ನ್&zwnj; ಗ್ಯಾರಂಟಿ ಕೇಳ್ತಾರೆ&rsquo; ಎನ್ನುತ್ತಾರೆ ನಿರ್ದೇಶಕರೊಬ್ಬರು. &lsquo;ನಾನು ಸ್ಟಾರ್&zwnj; ಹೀರೋಗೇ ಸಿನಿಮಾ ಮಾಡಬೇಕು ಅಂತ ಕಾಯುತ್ತಿಲ್ಲ. ಆದರೆ, ಹೊಸ ಹೀರೋ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದರೆ ನಿರ್ಮಾಪಕರೇ ಒಪ್ಪಲ್ಲ. ಯಾಕೆಂದರೆ ಕಾಂಬಿನೇಶನ್ ವರ್ಕ್&zwnj; ಆಗಲ್ಲ ಅಂತಾರೆ&rsquo; ಅಂತಾರೆ ಮತ್ತೊಬ್ಬ ನಿರ್ದೇಶಕ.&lt;/p&gt;&lt;p&gt;&lsquo;ನಮ್ಮಲ್ಲಿ ಬ್ಯಾನರ್&zwnj;, ಪ್ರೊಡಕ್ಷನ್&zwnj; ಹೌಸ್&zwnj; ಕಲ್ಚರ್&zwnj; ಕಣ್ಮರೆಯಾಗಿದೆ. ಈ ಹಿಂದೆ ವಜ್ರೇಶ್ವರಿ ಕಂಬೈನ್ಸ್&zwnj;, ಈಶ್ವರಿ ಪ್ರೊಡಕ್ಷನ್&zwnj;, ಕೆಸಿಎನ್&zwnj;, ರಾಕ್&zwnj;ಲೈನ್&zwnj; ಸಿನಿಮಾಸ್&zwnj;, ಜಯಣ್ಣ- ಭೋಗೇಂದ್ರ ಸಿನಿಮಾಸ್&zwnj;, ದ್ವಾರಕೀಶ್&zwnj; ಫಿಲಮ್ಸ್&zwnj; ಹೀಗೆ ಹೆಸರಿನಿಂದಲೇ ಗಮನ ಸೆಳೆಯುತ್ತಿದ್ದ ನಿರ್ಮಾಪಕ ಹಾಗೂ ನಿರ್ಮಾಣ ಸಂಸ್ಥೆಗಳು ಇದ್ದವು. ಅವರಿಗೆ ಕತೆಗಳು ಬರುತ್ತಿದ್ದವು. ಆ ಕತೆಗಳಿಗೆ ಅವರು ನಿರ್ದೇಶಕ, ನಟ- ನಟಿಯರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಎಲ್ಲರೂ ಒಂದು ನಂಬಿಕೆಯ ಮೇಲೆ ಸಿನಿಮಾ ಮಾಡುತ್ತಿದ್ದರು.&lt;/p&gt;&lt;p&gt;ನಂಬಿಕೆಯ ಕೊಂಡಿಗಳಾಗಿರುವ ಬ್ಯಾನರ್&zwnj; ಸಂಸ್ಕೃತಿ ಈಗಿಲ್ಲ. ಯಾರು ಯಾರನ್ನೂ ನಂಬುತ್ತಿಲ್ಲ. ನಿರ್ದೇಶಕ ಸಿನಿಮಾ ಮಾಡೋ ಜೊತೆಗೆ ನಿರ್ಮಾಪಕನಿಗೆ ಬ್ಯುಸಿನೆಸ್&zwnj; ಗ್ಯಾರಂಟಿ ಕೊಡಬೇಕಿದೆ. ಆದರೂ ಯಾರೋ ಒಬ್ಬರು ರಿಸ್ಕ್&zwnj; ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಮಾತುಕತೆ ಮಾಡಬೇಕು. ಕನ್ನಡದ ಹೀರೋಗಳು, ಕಲಾವಿದರು, ತಂತ್ರಜ್ಞರು ಮೊದಲು ಕನ್ನಡದಲ್ಲೇ ಸಿನಿಮಾ ಮಾಡಿ ಎಂದು ಹೇಳುವವರು ಬೇಕು. ಹೀಗೆ ಮಾಡಿದರೆ ಖಂಡಿತ ಬದಲಾವಣೆ ಸಾಧ್ಯ&rsquo; ಎನ್ನುವುದು ಯಶಸ್ವಿ ನಿರ್ದೇಶಕರೊಬ್ಬರ ನಂಬಿಕೆ.&lt;/p&gt;&lt;h2&gt;&lt;strong&gt;ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ&lt;/strong&gt;&lt;/h2&gt;&lt;p&gt;&lsquo;ಪ್ರತಿ ಚಿತ್ರವೂ ಕೆಜಿಎಫ್&zwnj; ಆಗಬೇಕು, ಎಲ್ಲವೂ ಕಾಂತಾರ ಆಗಬೇಕು ಅನ್ನೋ ನಿರ್ಮಾಪಕರ ಸಂಖ್ಯೆ ಹೆಚ್ಚಿದೆ. ನಾವು ಅವರ ಮೂಗಿನ ನೇರಕ್ಕೆ ಸಿನಿಮಾ ಮಾಡಬೇಕು. ಇದು ಸಾಧ್ಯವಿಲ್ಲ. ಯಾಕೆಂದರೆ ಒಬ್ಬೊಬ್ಬ ನಿರ್ದೇಶಕನ ಸಿನಿಮಾ ಶೈಲಿಯೂ ಒಂದೊಂದು ರೀತಿ ಇರುತ್ತದೆ. ಕೆಜಿಎಫ್&zwnj; ಅಥವಾ ಕಾಂತಾರ ಸಿನಿಮಾಗಳ ಯಶಸ್ಸು ನಮಗೆ ಸ್ಫೂರ್ತಿ ಆಗಬೇಕೆ ಹೊರತು, ಅದೇ ರೀತಿಯ ಸಿನಿಮಾ ಮಾಡಿ ಅಂತ ಹೇಳಬಾರದು. ಈ ವಿಚಾರದಲ್ಲಿ ನಿರ್ಮಾಪಕರು ಬದಲಾದರೆ. ನಾವು ಖಾಲಿ ಕೂರಬೇಕಿಲ್ಲ&rsquo; ಎನ್ನುತ್ತಾರೆ ಯುವ ನಿರ್ದೇಶಕ.&lt;/p&gt;&lt;p&gt;ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರು ಸಿಗುತ್ತಾರೆ, ಈ ಎಲ್ಲಾ ನಿರ್ದೇಶಕರನ್ನು ದುಡಿಸಿಕೊಳ್ಳುವ ಸವಾಲನ್ನು ನಿರ್ಮಾಪಕರು ಸ್ವೀಕರಿಸಬೇಕಿದೆ ಅನ್ನುವುದು ಬಹುತೇಕ ನಿರ್ದೇಶಕರ ಮಾತು. ಯಾಕೆಂದರೆ ಎಲ್ಲರಿಗೂ ಪ್ರಶಾಂತ್&zwnj; ನೀಲ್&zwnj; ಬೇಕು ಅಂದರೆ ಸಿಗಲ್ಲ. ಯಶ್&zwnj;, ರಿಷಬ್&zwnj; ಶೆಟ್ಟಿ ಬ್ಯುಸಿ ಮತ್ತು ದುಬಾರಿ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/where-are-sandalwood-hit-directors-now-the-big-question-facing-kannada-cinema-gvd/articleshow-o6u1e1w"/>
        </item>
        <item>
            <title><![CDATA[ಪ್ರತಿದಿನ ಅಲೋವೆರಾ ಜೆಲ್ ಮುಖಕ್ಕೆ ಹಚ್ಚಿದ್ರೆ ಏನಾಗುತ್ತೆ ಗೊತ್ತಾ?]]></title>
            <link>https://kannada.asianetnews.com/webstories/fashion/what-happens-if-you-apply-aloe-vera-daily-sk5kzt6</link>
            <guid isPermaLink="true">https://kannada.asianetnews.com/webstories/fashion/what-happens-if-you-apply-aloe-vera-daily-sk5kzt6</guid>
            <pubDate>Wed, 12 Aug 2026 23:27:16 +0530</pubDate>
            <description><![CDATA[Aloe Vera for face benefits: ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಅಲೋವೆರಾವನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ದಿನಾ ಮುಖಕ್ಕೆ ಅಲೋವೆರಾ ಹಚ್ಚುವುದರಿಂದ ತ್ವಚೆಯ ಹತ್ತಾರು ಸಮಸ್ಯೆಗಳು ದೂರವಾಗುತ್ತವೆ ಎಂದು ಯೋಗಗುರು ಬಾಬಾ ರಾಮದೇವ್ ಹೇಳುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j7g934z0kk8cgcw6h8hecnp8,imgname-aloe-vera-hair-mask-for-frizzy-hair-home-remedy-a-1726049522655.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/fashion/what-happens-if-you-apply-aloe-vera-daily-sk5kzt6"/>
        </item>
        <item>
            <title><![CDATA[NEET Row: ಎಲ್ಲಾ ಪ್ರಶ್ನೆಗೂ ಉತ್ತರ ಕೊಡ್ತೀನಿ, ಚರ್ಚೆಗೆ ಬನ್ನಿ; ವಿರೋಧ ಪಕ್ಷಗಳ ನಾಯಕರಿಗೆ ಅಮಿತ್ ಶಾ ಸವಾಲು]]></title>
            <link>https://kannada.asianetnews.com/politics/amit-shah-ready-for-neet-debate-in-parliament-as-opposition-demands-accountability/articleshow-ea74mzx</link>
            <guid isPermaLink="true">https://kannada.asianetnews.com/politics/amit-shah-ready-for-neet-debate-in-parliament-as-opposition-demands-accountability/articleshow-ea74mzx</guid>
            <pubDate>Wed, 12 Aug 2026 23:11:21 +0530</pubDate>
            <description><![CDATA[ನೀಟ್ ಪರೀಕ್ಷೆ ವಿವಾದದ ಬಗ್ಗೆ ಸಂಸತ್ತಿನಲ್ಲಿ ಗದ್ದಲ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚರ್ಚೆಗೆ ಸಿದ್ಧರಿದ್ದು, 'ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ' ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಈ ಮೂಲಕ ಕಲಾಪದ ಬಿಕ್ಕಟ್ಟು ಬಗೆಹರಿಸಲು ಮುಂದಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-993a2493-6cc2-420c-b3c7-a66f98a0fb68.jpg" type="image/jpeg" height="390" width="690"/>
            <content:encoded><![CDATA[&lt;p&gt;ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ&lt;/p&gt;&lt;p&gt;ನೀಟ್ ಪೇಪರ್ ಲೀಕ್ ವಿವಾದದ ಬಗ್ಗೆ ಸಂಸತ್ತಿನಲ್ಲಿ ನಡೆಯುತ್ತಿರುವ ಗದ್ದಲ ಬುಧವಾರ ತಾರಕಕ್ಕೇರಿದೆ. ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಬಲ ಪ್ರಯೋಗ ಮಾಡಲಾಗಿದೆ ಇದಕ್ಕೆ ಗೃಹಸಚಿವ ಅಮಿತ್ ಶಾ ಉತ್ತರ ನೀಡಬೇಕು ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ವಾದ್ರಾ ಸೇರಿದಂತೆ ಇಂಡಿಯಾ ಒಕ್ಕೂಟದ ಲೀಡರ್&zwnj;ಗಳು ಟೀಕಿಸಿದ್ದರು. ಇದೀಗ ಈ ಗದ್ದಲದ ನಡುವೆಯೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 'ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು' ತಾವು ಸಿದ್ಧ ಎಂದು ಘೋಷಿಸಿದ್ದಾರೆ.&lt;/p&gt;&lt;p&gt;ಕಲಾಪದ ಬಿಕ್ಕಟ್ಟು ಬಗೆಹರಿಸಲು, ಅಮಿತ್ ಶಾ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಪರಸ್ಪರ ಒಮ್ಮತದ ಮೂಲಕ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಅವರು ಸ್ಪೀಕರ್&zwnj;ಗೆ ಮನವಿ ಮಾಡಿದ್ದಾರೆ. ಚರ್ಚೆಯುದ್ದಕ್ಕೂ ತಾವೇ ಖುದ್ದು ಹಾಜರಿದ್ದು ಸದನದ ಎಲ್ಲಾ ಕಳವಳಗಳಿಗೆ ಉತ್ತರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.&lt;/p&gt;&lt;h2&gt;ವಿಪಕ್ಷಗಳ ಹೋರಾಟ ತೀವ್ರ&lt;/h2&gt;&lt;p&gt;ಗೃಹ ಸಚಿವರು 'ಕಾಣೆಯಾಗಿದ್ದಾರೆ', 'ಪರಾರಿಯಾಗಿದ್ದಾರೆ' ಎಂದು ವಿಪಕ್ಷಗಳು ಸಂಸತ್ತಿನ ಆವರಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದವು. ಆದರೆ ಸದನ ನಡೆಯಲು ವಿಪಕ್ಷಗಳೇ ಬಿಡುತ್ತಿಲ್ಲ. ತಮ್ಮ ಈ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಆರೋಪಗಳನ್ನು ಮಾಡುತ್ತಿವೆ ಎಂದು ಅಮಿತ್ ಶಾ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;'ಬಿಸಿನೆಸ್ ಅಡ್ವೈಸರಿ ಕಮಿಟಿ ಸಭೆಯಲ್ಲಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನೀಟ್ ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ಸರ್ಕಾರದ ಪರವಾಗಿ ಒಪ್ಪಿಕೊಂಡಿದ್ದಾರೆ' ಎಂದು ಶಾ ಹೇಳಿದ್ದಾರೆ.&lt;/p&gt;&lt;p&gt;ವಿಪಕ್ಷಗಳೊಂದಿಗೆ ಸಮಾಲೋಚಿಸಿ, ಪರಸ್ಪರ ಒಮ್ಮತದ ಮೂಲಕ, ನಿಮಗೆ ಸೂಕ್ತವೆನಿಸುವಷ್ಟು ಸಮಯವನ್ನು ಚರ್ಚೆಗೆ ನಿಗದಿಪಡಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ. ಇಂದಿನಿಂದಲೇ ಚರ್ಚೆ ಆರಂಭವಾದರೂ ಸರಿ. ನಾನು ಸದನದಲ್ಲಿ ಹಾಜರಿದ್ದು, ವಿಪಕ್ಷಗಳು ಎತ್ತುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ' ಎಂದು ಶಾ ಸ್ಪೀಕರ್&zwnj;ಗೆ ತಿಳಿಸಿದ್ದಾರೆ.&lt;/p&gt;&lt;p&gt;ಇದಕ್ಕೂ ಮುನ್ನ, ವಿಪಕ್ಷ ನಾಯಕರು 'ಅಮಿತ್ ಶಾ ಜವಾಬ್ ದೋ&quot; (ಅಮಿತ್ ಶಾ, ಉತ್ತರ ಕೊಡಿ) ಎಂದು ಘೋಷಣೆ ಕೂಗುತ್ತಾ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ವಿಪಕ್ಷಗಳು ಗೃಹ ಸಚಿವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದವು.&lt;/p&gt;&lt;p&gt;ಸಂಸತ್ ಅಧಿವೇಶನ ಆರಂಭವಾದಾಗಿನಿಂದ ನಾನು ನಿರಂತರವಾಗಿ ಸಂಸತ್ತಿಗೆ ಬಂದು ನನ್ನ ಕಚೇರಿಯಲ್ಲಿ ಕುಳಿತಿರುತ್ತೇನೆ. ಎರಡೂ ಸದನಗಳಲ್ಲಿ ವಿಪಕ್ಷಗಳು ಕಲಾಪ ನಡೆಯಲು ಬಿಡದಿದ್ದಾಗ, ಅಲ್ಲಿಗೆ ಹೋಗಿ ಯಾರೇನು ಮಾಡಲು ಸಾಧ್ಯ? ಚರ್ಚೆಯ ವಿಷಯಕ್ಕೆ ಬಂದರೆ, ನಮ್ಮ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ನೀಟ್ ಕುರಿತ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರತಿಯೊಂದು ಆಯಾಮದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಚರ್ಚೆಗೆ ಸಮಯ ನಿಗದಿಪಡಿಸಲಿ, ವಿಪಕ್ಷಗಳು ಸಿದ್ಧವಾಗಲಿ. ಮೊದಲು ಅವರೂ ಇದನ್ನೇ ಕೇಳುತ್ತಿದ್ದರು. ನಾವು ಸರಿ ಎಂದಿದ್ದೇವೆ. ನನ್ನ ಕಡೆಯಿಂದ, ಸಂಸತ್ತಿನಲ್ಲಿ ಯಾವುದೇ ಪ್ರಶ್ನೆಗೆ ಉತ್ತರಿಸಲು ಸಿದ್ಧನಿದ್ದೇನೆ ಎಂದೂ ಹೇಳಿದ್ದೇನೆ. ಆದರೆ ಅವರಿಗೆ ಚರ್ಚೆಯೇ ಬೇಡ. ಈಗ ಯಾರು ಓಡಿಹೋಗುತ್ತಿದ್ದಾರೆಂದು ಜನರೇ ನಿರ್ಧರಿಸಲಿ. ಇಂದಿಗೂ ನಾನು ಹೇಳುತ್ತೇನೆ, ಇಂದು ಮಧ್ಯಾಹ್ನ 3:00 ಗಂಟೆಯೊಳಗೆ ಸ್ಪೀಕರ್&zwnj;ಗೆ ಪತ್ರ ನೀಡಲಿ' ಎಂದರು.&lt;/p&gt;&lt;p&gt;ಬುಧವಾರ ಮಧ್ಯಾಹ್ನ 3:00 ಗಂಟೆಗೆ ಚರ್ಚೆ ಆರಂಭವಾಗಿ, ಗುರುವಾರ ಮಧ್ಯಾಹ್ನ 3 ಗಂಟೆಗೆ ಮುಕ್ತಾಯಗೊಳಿಸೋಣ ಎಂದು ಗೃಹ ಸಚಿವರು ಪ್ರಸ್ತಾಪಿಸಿದರು. ಚರ್ಚೆಯ ಸಮಯದಲ್ಲಿ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದಾಗಿಯೂ ಅವರು ಭರವಸೆ ನೀಡಿದರು.&lt;/p&gt;&lt;h3&gt;ಬಲಪ್ರಯೋಗದ ಬಗ್ಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ&lt;/h3&gt;&lt;p&gt;ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶಾದ್ಯಂತ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಲಾಠಿ ಮತ್ತು ಪೆಲ್ಲೆಟ್ ಗನ್&zwnj;ಗಳನ್ನು ಬಳಸಿರುವ ಬಗ್ಗೆ ಸರ್ಕಾರದ ಹೊಣೆಗಾರಿಕೆಯನ್ನು ಅವರು ಪ್ರಶ್ನಿಸಿದ್ದಾರೆ.&lt;/p&gt;&lt;p&gt;ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಯುವಕರು ತಮ್ಮ ಭವಿಷ್ಯಕ್ಕಾಗಿ ಧ್ವನಿ ಎತ್ತಿದಾಗ ಅವರ ಮೇಲೆ ಈ ರೀತಿ ದೌರ್ಜನ್ಯ ನಡೆಸುವುದಕ್ಕೆ ಯಾರು ಹೊಣೆ ಎಂದು ನೀವು ಭಾವಿಸುತ್ತೀರಿ? ಸಾವಿರಾರು ವಿದ್ಯಾರ್ಥಿಗಳು ಒಂದೇ ಒಂದು ಬೇಡಿಕೆಯೊಂದಿಗೆ ಸೇರಿದಾಗ, ನೀವು ಅವರ ಮೇಲೆ ಲಾಠಿ ಬೀಸುತ್ತೀರಿ, ಪೆಲ್ಲೆಟ್ ಗನ್ ಹಾರಿಸುತ್ತೀರಿ, ಬಿಹಾರದಲ್ಲಿ ಅವರ ವಿರುದ್ಧ ಎಕೆ-47 ಬಳಸುತ್ತೀರಿ' ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದರು.&lt;/p&gt;&lt;p&gt;&lt;strong&gt;'ಸಮಯದ ಮಿತಿ' ಬಗ್ಗೆ ಅಖಿಲೇಶ್ ಯಾದವ್ ಕಿಡಿ&lt;/strong&gt;&lt;/p&gt;&lt;p&gt;ಸಮಾಜವಾದಿ ಪಕ್ಷದ (ಎಸ್&zwnj;ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ಸಂಸತ್ತಿನಲ್ಲಿ ಉತ್ತರ ನೀಡಲು 'ಸಮಯದ ಮಿತಿ'ಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿರುವುದನ್ನು 'ಪ್ರಜಾಪ್ರಭುತ್ವ ವಿರೋಧಿ' ಎಂದು ಕರೆದಿದ್ದಾರೆ. ಇದು ನಿಜವಾದ ಉತ್ತರಗಳ ಬದಲು 'ಖಾಲಿ ಹೇಳಿಕೆ'ಗಳನ್ನು ನೀಡುವ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.&lt;/p&gt;&lt;p&gt;ನೀಟ್ ಪೇಪರ್ ಲೀಕ್ ಕುರಿತ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಗ್ಗೆ ಮಧ್ಯಾಹ್ನ 3 ಗಂಟೆಯಿಂದ ಸಂಸತ್ತಿನಲ್ಲಿ ವಿವರವಾದ ಚರ್ಚೆ ನಡೆಸುವ ಅಮಿತ್ ಶಾ ಅವರ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಖಿಲೇಶ್ ಯಾದವ್ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ. 'ಸಂಸತ್ತಿನಲ್ಲಿ ಪ್ರತಿಕ್ರಿಯಿಸಲು ಸರ್ಕಾರ ನಿಗದಿಪಡಿಸಲು ಬಯಸುವ ಸಮಯದ ಮಿತಿಯೇ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ವಾಸ್ತವವಾಗಿ, ಇದು ಉತ್ತರವಾಗುವುದಿಲ್ಲ; ಇದು ಖಾಲಿ ಹೇಳಿಕೆಯಾಗುತ್ತದೆ' ಎಂದು ಯಾದವ್ ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಕಾಂಗ್ರೆಸ್ ನಾಯಕರ ಖಡಕ್ ನಿಲುವು&lt;/strong&gt;&lt;/p&gt;&lt;p&gt;ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷಗಳು ಸಂಸತ್ತಿನಲ್ಲಿ ತಮ್ಮ ನಿಲುವನ್ನು ಮುಂದುವರಿಸಲಿವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗದ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಉತ್ತರವನ್ನು ಅವರು ಒತ್ತಾಯಿಸಿದ್ದಾರೆ.&lt;/p&gt;&lt;p&gt;ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ನಾಳೆ ಏನೂ ಆಗುವುದಿಲ್ಲ. ನಾವು ಇದುವರೆಗೆ ಏನು ಮಾಡುತ್ತಿದ್ದೇವೆಯೋ ಅದನ್ನೇ ಮುಂದುವರಿಸುತ್ತೇವೆ ಎಂದರು.&lt;/p&gt;&lt;p&gt;ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಅಮಿತ್ ಶಾ ನಮಗೆ ಉಪನ್ಯಾಸ ನೀಡುವುದರಲ್ಲಿ ನಮಗೆ ಆಸಕ್ತಿಯಿಲ್ಲ ಎಂದು ವಿಪಕ್ಷಗಳು ಸ್ಪಷ್ಟವಾಗಿ ಹೇಳಿವೆ. 'ನಾವು' ಎಂದರೆ ಈ ದೇಶದ ಯುವ ಪೀಳಿಗೆ. ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದು ಯಾರು? ಮೊಳೆಗಳಿದ್ದ ಲಾಠಿಗಳಿಂದ ವಿದ್ಯಾರ್ಥಿಗಳನ್ನು ಥಳಿಸಲು ಆದೇಶ ನೀಡಿದ್ದು ಯಾರು? ನಮ್ಮ ಮಕ್ಕಳ ಮೇಲೆ ಗುಂಡು ಹಾರಿಸಲು ಅಮಿತ್ ಶಾ ಈ ಆದೇಶ ನೀಡಿದ್ದಾರೆಯೇ? ಹಾಗಿದ್ದರೆ, ಅವರು ರಾಜೀನಾಮೆ ನೀಡಬೇಕು. ಕಳೆದ 20 ದಿನಗಳಿಂದ ಅಮಿತ್ ಶಾ ಕಾಣೆಯಾಗಿದ್ದಾರೆ. ಭಾರತದ ಗೃಹ ಸಚಿವರಿಗೆ ಧೈರ್ಯವಿಲ್ಲ; ಅವರು ಸದನಕ್ಕೆ ಬರಲು ಸಾಧ್ಯವಿಲ್ಲ' ಎಂದು ಹೇಳಿದರು.&lt;/p&gt;&lt;p&gt;&lt;strong&gt;ಬಿಜೆಪಿ ಸಂಸದರಿಂದ ತಿರುಗುಬಾಣ&lt;/strong&gt;&lt;/p&gt;&lt;p&gt;ಇದೇ ವೇಳೆ, ಜಾರ್ಖಂಡ್&zwnj;ನ ಬಿಜೆಪಿ ಸಂಸದರು ಬುಧವಾರ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಾಂಚಿಯಲ್ಲಿ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದ ಲಾಠಿಚಾರ್ಜ್ ಅನ್ನು ಖಂಡಿಸಿದ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.&lt;/p&gt;&lt;p&gt;ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸುವ ರಾಹುಲ್ ಗಾಂಧಿ, ಜಾರ್ಖಂಡ್&zwnj;ನಲ್ಲಿ ಜೆಎಂಎಂ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ವಿದ್ಯಾರ್ಥಿಗಳ ಮೇಲೆ ನಡೆಸಿದ 'ಅಮಾನವೀಯ' ದೌರ್ಜನ್ಯದ ಬಗ್ಗೆ ಮೌನವಾಗಿದ್ದಾರೆ. ಇದು ಅವರ 'ದ್ವಂದ್ವ ನೀತಿ'ಯನ್ನು ತೋರಿಸುತ್ತದೆ ಎಂದು ಬಿಜೆಪಿ ಸಂಸದರು ಆರೋಪಿಸಿದರು.&lt;/p&gt;&lt;p&gt;ಈ ಪ್ರತಿಭಟನೆಯ ನಡುವೆಯೂ, ವಿಪಕ್ಷ ನಾಯಕರು 'ಅಮಿತ್ ಶಾ ಜವಾಬ್ ದೋ' ಎಂದು ಘೋಷಣೆ ಕೂಗುತ್ತಾ ಕೇಂದ್ರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. (ANI)&lt;/p&gt;&lt;p&gt;(ಈ ಸುದ್ದಿಯ ಶೀರ್ಷಿಕೆ ಹೊರತುಪಡಿಸಿ, ಉಳಿದ ಭಾಗವನ್ನು ಏಷ್ಯಾನೆಟ್ ನ್ಯೂಸಬಲ್ ಇಂಗ್ಲಿಷ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category><![CDATA[politics]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/politics/amit-shah-ready-for-neet-debate-in-parliament-as-opposition-demands-accountability/articleshow-ea74mzx"/>
        </item>
        <item>
            <title><![CDATA[ಲಂಕಾ ಟೆಸ್ಟ್ ಸರಣಿ ಭಾರತಕ್ಕೆ ಏಕೆ ಮುಖ್ಯ? ಟೀಂ ಇಂಡಿಯಾದ ಮಾಜಿ ಸ್ಟಾರ್‍‌ ಕಾರ್ತಿಕ್ ಕೊಟ್ಟ ಕಾರಣ ಹೀಗಿದೆ..!]]></title>
            <link>https://kannada.asianetnews.com/cricket-sports/team-india-ex-star-murali-karthik-on-sri-lanka-test-series-team-india-ind-vs-sl-gkn/articleshow-ofzlby7</link>
            <guid isPermaLink="true">https://kannada.asianetnews.com/cricket-sports/team-india-ex-star-murali-karthik-on-sri-lanka-test-series-team-india-ind-vs-sl-gkn/articleshow-ofzlby7</guid>
            <pubDate>Wed, 12 Aug 2026 23:06:44 +0530</pubDate>
            <description><![CDATA[ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಮತ್ತು ತಂಡದ ಪರಿವರ್ತನೆಯ ಹಂತದ ದೃಷ್ಟಿಯಿಂದ ಈ ಶ್ರೀಲಂಕಾ ಸರಣಿ ಅತ್ಯಂತ ನಿರ್ಣಾಯಕವಾಗಿದೆ. ರವೀಂದ್ರ ಜಡೇಜಾ ಅವರಂತಹ ಹಿರಿಯರ ನಂತರ ಸ್ಪಿನ್ ವಿಭಾಗವನ್ನು ಮುನ್ನಡೆಸುವ ಮುಂದಿನ ಪೀಳಿಗೆಯ ಬೌಲರ್‌ಗಳನ್ನು ಗುರುತಿಸಲು ಇದು ಒಂದು ಉತ್ತಮ ವೇದಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvgqx5ncgajccekcbfmm6sy,imgname-team-india-test-1786556183733.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೊಲೊಂಬೊ:&lt;/strong&gt; ಭಾರತೀಯ ಕ್ರಿಕೆಟ್ ತಂಡವು ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದು ಆತಿಥೇಯರ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ (WTC) ದೃಷ್ಟಿಯಿಂದ ಈ ಸರಣಿಯು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ. ಆದರೆ, ಕೇವಲ ಪಾಯಿಂಟ್ಸ್ ಪಟ್ಟಿಯಷ್ಟೇ ಅಲ್ಲದೆ ಭವಿಷ್ಯದ ದೃಷ್ಟಿಯಿಂದಲೂ ಈ ಸರಣಿ ಏಕೆ ಮುಖ್ಯ ಎಂಬುದನ್ನು ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ವಿವರಿಸಿದ್ದಾರೆ.&lt;/p&gt;&lt;h2&gt;&lt;strong&gt;ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ಮೇಲೆ ಕಣ್ಣು&lt;/strong&gt;&lt;/h2&gt;&lt;p&gt;ಭಾರತ ತಂಡವು ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್ ಫೈನಲ್ ಪ್ರವೇಶಿಸುವ ಗುರಿ ಹೊಂದಿದೆ. ಫೈನಲ್ ರೇಸ್&zwnj;ನಲ್ಲಿ ಜೀವಂತವಾಗಿರಬೇಕಾದರೆ ಭಾರತಕ್ಕೆ ಈ ಸರಣಿಯಲ್ಲಿ ಜಯ ಅನಿವಾರ್ಯ. ಶ್ರೀಲಂಕಾದ ಗಾಲ ಮತ್ತು ಕೊಲೊಂಬೊ ಮೈದಾನಗಳಲ್ಲಿ ನಡೆಯುವ ಪಂದ್ಯಗಳು ಭಾರತದ ಭವಿಷ್ಯವನ್ನು ನಿರ್ಧರಿಸಲಿವೆ.&lt;/p&gt;&lt;h2&gt;&lt;strong&gt;ಸ್ಪಿನ್ ವಿಭಾಗದ ಮುಂದಿನ ಪೀಳಿಗೆಯ ಹುಡುಕಾಟ&lt;/strong&gt;&lt;/h2&gt;&lt;p&gt;ಭಾರತದ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಪ್ರಕಾರ, ಈ ಸರಣಿಯು ಭಾರತದ ಸ್ಪಿನ್ ಬೌಲಿಂಗ್&zwnj;ನ ಮುಂದಿನ ಪೀಳಿಗೆಯನ್ನು ಸಿದ್ಧಪಡಿಸಲು ಒಂದು ದೊಡ್ಡ ವೇದಿಕೆಯಾಗಿದೆ. ರವೀಂದ್ರ ಜಡೇಜಾ ಅವರಂತಹ ಅನುಭವಿ ಆಲ್&zwnj;ರೌಂಡರ್ ಈಗ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಜಡೇಜಾ ನಂತರ ತಂಡವನ್ನು ಮುನ್ನಡೆಸುವ ಸ್ಪಿನ್ನರ್ ಯಾರು ಎಂಬುದು ಈ ಸರಣಿಯಲ್ಲಿ ತಿಳಿಯಲಿದೆ ಎಂದು ಕಾರ್ತಿಕ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಬದಲಾವಣೆಯ ಹಂತದಲ್ಲಿ ಟೀಮ್ ಇಂಡಿಯಾ&lt;/strong&gt;&lt;/h2&gt;&lt;p&gt;ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಂತಹ ಹಿರಿಯ ಆಟಗಾರರು ನಿವೃತ್ತಿಯ ಹಾದಿಯಲ್ಲಿದ್ದಾರೆ ಅಥವಾ ತಂಡದಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ಟೆಸ್ಟ್ ತಂಡವು ದೊಡ್ಡ ಬದಲಾವಣೆಯ ಹಂತದಲ್ಲಿದೆ. ಮಾನವ್ ಸುತಾರ್, ಸಾರಂಶ್ ಜೈನ್ ಮತ್ತು ಕುಲದೀಪ್ ಯಾದವ್ ಅವರಂತಹ ಯುವ ಆಟಗಾರರು ಈ ಸರಣಿಯಲ್ಲಿ ಎಷ್ಟರ ಮಟ್ಟಿಗೆ ಮಿಂಚುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.&lt;/p&gt;&lt;h2&gt;&lt;strong&gt;ಕುಲದೀಪ್ ಯಾದವ್ ಮುಂದೆ ದೊಡ್ಡ ಸವಾಲು&lt;/strong&gt;&lt;/h2&gt;&lt;p&gt;ಕುಲದೀಪ್ ಯಾದವ್ ಅವರ ಪ್ರತಿಭೆಯ ಬಗ್ಗೆ ಮಾತನಾಡಿದ ಮುರಳಿ ಕಾರ್ತಿಕ್, ಕುಲದೀಪ್ ಒಬ್ಬ ಮ್ಯಾಚ್ ವಿನ್ನರ್. ಆದರೆ ದುರದೃಷ್ಟವಶಾತ್ ಅವರಿಗೆ ಸತತವಾಗಿ ಅವಕಾಶಗಳು ಸಿಕ್ಕಿಲ್ಲ. ಅಶ್ವಿನ್ ಮತ್ತು ಜಡೇಜಾ ಅವರ ನೆರಳಿನಲ್ಲಿಯೇ ಅವರು ಹೆಚ್ಚಿನ ಸಮಯ ಕಳೆದಿದ್ದಾರೆ. ಈಗ ಜಡೇಜಾ ನಿರ್ಗಮನದ ಹಂತದಲ್ಲಿದ್ದು, ಕುಲದೀಪ್ ಭಾರತದ ಸ್ಪಿನ್ ವಿಭಾಗದ 'ಲೀಡರ್' ಆಗಬಲ್ಲರಾ? ಎಂಬ ಪ್ರಶ್ನೆಗೆ ಈ ಸರಣಿ ಉತ್ತರ ನೀಡಲಿದೆ ಎಂದಿದ್ದಾರೆ.&lt;/p&gt;&lt;p&gt;ಜೊತೆಗೆ ಯುವ ಸ್ಪಿನ್ನರ್ ಮಾನವ್ ಸುತಾರ್ ಅವರು ಅಫ್ಘಾನಿಸ್ತಾನ ವಿರುದ್ಧ ತೋರಿದ ಪ್ರದರ್ಶನವನ್ನು ಕಾರ್ತಿಕ್ ಶ್ಲಾಘಿಸಿದ್ದಾರೆ. ಹಳೆಯ ಶೈಲಿಯ ಸ್ಪಿನ್ ಬೌಲಿಂಗ್ ಮಾಡುವ ಸುತಾರ್ ಅವರಿಂದ ಭಾರತಕ್ಕೆ ಹೆಚ್ಚಿನ ಲಾಭವಾಗುವ ನಿರೀಕ್ಷೆಯಿದೆ.&lt;/p&gt;&lt;h2&gt;&lt;strong&gt;ಮುರಳಿ ಕಾರ್ತಿಕ್ ಹೇಳಿದ್ದೇನು?&lt;/strong&gt;&lt;/h2&gt;&lt;p&gt;ನಾವು ಟೆಸ್ಟ್ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸುವುದಾದರೆ, ಇದು ಕೇವಲ ಸ್ಪಿನ್ನರ್&zwnj;ಗಳ ದೃಷ್ಟಿಯಿಂದ ಮಾತ್ರವಲ್ಲ, WTC ದೃಷ್ಟಿಯಿಂದಲೂ ಬಹಳ ಮುಖ್ಯವಾದ ಪ್ರವಾಸವಾಗಿದೆ. ಇತ್ತೀಚಿನ ದಿನಗಳಲ್ಲಿ ಐದನೇ ಕ್ರಮಾಂಕದಲ್ಲಿ ನಮ್ಮ ಬ್ಯಾಟಿಂಗ್ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಅಶ್ವಿನ್ ಮತ್ತು ಜಡೇಜಾ ಅವರಂತಹ ದಿಗ್ಗಜರ ಸ್ಥಾನವನ್ನು ತುಂಬುವುದು ಸುಲಭದ ಮಾತಲ್ಲ. ಇದು ಯುವ ಆಟಗಾರರಿಗೆ ದೊಡ್ಡ ಸವಾಲಾಗಿದೆ ಎಂದು ಸೋನಿ ಸ್ಪೋರ್ಟ್ಸ್ ನೆಟ್&zwnj;ವರ್ಕ್ ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಶ್ರೀಲಂಕಾ ಪ್ರವಾಸವು ಭಾರತ ತಂಡದ ಭವಿಷ್ಯದ ತಾರೆಯರನ್ನು ಗುರುತಿಸಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್&zwnj;ಶಿಪ್&zwnj;ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಿಕ್ಕಿರುವ ದೊಡ್ಡ ಅವಕಾಶವಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/team-india-ex-star-murali-karthik-on-sri-lanka-test-series-team-india-ind-vs-sl-gkn/articleshow-ofzlby7"/>
        </item>
        <item>
            <title><![CDATA[ಭಾರತೀಯ ರೈಲ್ವೆಯೊಂದಿಗೆ ಕೊಂಕಣ್‌ ರೈಲ್ವೆ ವಿಲೀನಕ್ಕೆ ವಿಘ್ನ: ಗೋವಾ ಒಪ್ಪಿಗೆ, ಮಹಾರಾಷ್ಟ್ರ, ಕರ್ನಾಟಕದಿಂದ ಕಂಡಿಷನ್!]]></title>
            <link>https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</link>
            <guid isPermaLink="true">https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk</guid>
            <pubDate>Wed, 12 Aug 2026 23:02:40 +0530</pubDate>
            <description><![CDATA[ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kt3n5qcdeknrs04fxpwy231v,imgname-konkan-railway-1780386815373.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12):&lt;/strong&gt; ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ರೈಲ್ವೆ ಜಾಲದ ಸಾಮರ್ಥ್ಯ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸಲು 'ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್' (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ಈ ವಿಲೀನ ಪ್ರಕ್ರಿಯೆಗೆ ಪಾಲುದಾರ ರಾಜ್ಯಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ (ಆಗಸ್ಟ್ 12) ಲೋಕಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಕೊಂಕಣ ರೈಲ್ವೆಯಲ್ಲಿ ಪಾಲುದಾರಿಕೆ ಹೊಂದಿರುವ ರಾಜ್ಯಗಳ ಪೈಕಿ ಗೋವಾ ಸರ್ಕಾರ ಮಾತ್ರವೇ ತನ್ನ ಶೇರುಗಳನ್ನು ಉಚಿತವಾಗಿ ರೈಲ್ವೆ ಸಚಿವಾಲಯಕ್ಕೆ ವರ್ಗಾಯಿಸಲು ಸಮ್ಮತಿಸಿದೆ ಎಂದು ತಿಳಿಸಿದ್ದಾರೆ.&lt;/p&gt;&lt;p&gt;ಆದರೆ, ಮಹಾರಾಷ್ಟ್ರ ಸರ್ಕಾರವು ತಾವು ಹೂಡಿಕೆ ಮಾಡಿರುವ ಬಂಡವಾಳವನ್ನು (Share Capital) ಮರಳಿಸುವಂತೆ ಪಟ್ಟು ಹಿಡಿದಿದ್ದರೆ, ಕರ್ನಾಟಕ ಸರ್ಕಾರವು ವಿವಿಧ ರೀತಿಯ ಎಕ್ಸಿಟ್ (ಹೊರನಡೆಯುವ) ಆಯ್ಕೆಗಳನ್ನು ನೀಡುವಂತೆ ಕೋರಿದೆ.&lt;/p&gt;&lt;h2&gt;&lt;strong&gt;ಕೊಂಕಣ ರೈಲ್ವೆಯ ಪಾಲುದಾರಿಕೆ ಮತ್ತು ಪ್ರಸ್ತುತ ಸ್ಥಿತಿ&lt;/strong&gt;&lt;/h2&gt;&lt;p&gt;ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರ್&zwnj;ವರೆಗೆ ಮುಂಬೈ ಮತ್ತು ಮಂಗಳೂರನ್ನು ಸಂಪರ್ಕಿಸುವ 739 ಕಿಲೋಮೀಟರ್ ಉದ್ದದ ಕರಾವಳಿ ರೈಲು ಮಾರ್ಗದ ನಿರ್ಮಾಣಕ್ಕಾಗಿ 1990ರಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್&zwnj; ಅನ್ನು ಸ್ಥಾಪಿಸಲಾಯಿತು. ಪ್ರಸ್ತುತ ಈ ಸಂಸ್ಥೆಯಲ್ಲಿ ಐದು ಪ್ರಮುಖ ಪಾಲುದಾರರಿದ್ದಾರೆ. ರೈಲ್ವೆ ಸಚಿವಾಲಯ (ಕೇಂದ್ರ): ಶೇ. 66.79 ಪಾಲು ಹೊಂದಿದ್ದರೆ, ಮಹಾರಾಷ್ಟ್ರ ಸರ್ಕಾರ ಶೇ. 14.91, ಕರ್ನಾಟಕ ಸರ್ಕಾರ ಶೇ. 10.17, ಗೋವಾ ಸರ್ಕಾರ ಶೇ. 4.07 ಹಾಗೂ ಕೇರಳ ಸರ್ಕಾರ ಶೇ. 4.07 ಪಾಲು ಹೊಂದಿದೆ.&lt;/p&gt;&lt;p&gt;ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, &quot;ಕೊಂಕಣ ರೈಲ್ವೆಯ ಮೂಲಸೌಕರ್ಯಗಳಿಗೆ ಸುಮಾರು 30 ವರ್ಷಗಳಾಗಿದ್ದು, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈಲುಗಳ ಸಂಚಾರ ಸಾಮರ್ಥ್ಯವನ್ನು ಹೆಚ್ಚಿಸಲು ಬೃಹತ್ ಪ್ರಮಾಣದ ಬಂಡವಾಳದ ಅಗತ್ಯವಿದೆ. ಸುರಂಗಗಳ ನವೀಕರಣ, ಹಳೆಯ ಆಸ್ತಿಗಳ ಬದಲಿ ವ್ಯವಸ್ಥೆ ಸೇರಿದಂತೆ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಭಾರಿ ಹಣದ ಅಗತ್ಯವಿದೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಸಚಿವಾಲಯ ನೀಡಿದ ಪ್ರಸ್ತಾವನೆ ಏನು?&lt;/strong&gt;&lt;/h2&gt;&lt;p&gt;ಈ ಹಣಕಾಸಿನ ಅಗತ್ಯವನ್ನು ಪೂರೈಸಲು ರೈಲ್ವೆ ಸಚಿವಾಲಯವು ಎಲ್ಲ ಪಾಲುದಾರ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ತಮಗೆ ಇರುವ ಶೇರುಗಳಿಗೆ ಅನುಗುಣವಾಗಿ ಅಗತ್ಯವಿರುವ ಬಂಡವಾಳ ವೆಚ್ಚವನ್ನು (Capex) ಭರಿಸುವುದು ಅಥವಾ ತಮ್ಮ ಶೇರುಗಳನ್ನು ಭಾರತೀಯ ರೈಲ್ವೆ ಸಚಿವಾಲಯಕ್ಕೆ ಬಿಟ್ಟುಕೊಡುವುದು. ಆದರೆ, ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ (Indian Railways) ಸಂಪೂರ್ಣವಾಗಿ ವಿಲೀನಗೊಳಿಸಬೇಕಾದರೆ, ಅದು ಶೇ. 100ರಷ್ಟು ಕೇಂದ್ರ ಸರ್ಕಾರದ ಮಾಲೀಕತ್ವದ ಸಂಸ್ಥೆಯಾಗುವುದು ಕಡ್ಡಾಯವಾಗಿದೆ. ಕಾನೂನಾತ್ಮಕ, ಕಾರ್ಪೊರೇಟ್ ಮತ್ತು ಆಡಳಿತಾತ್ಮಕ ಅನುಮೋದನೆಗಳೊಂದಿಗೆ ಪಾಲುದಾರ ಶೇರುದಾರರ ಒಪ್ಪಂದಕ್ಕೆ ಬದ್ಧವಾಗಿ ಈ ಪ್ರಕ್ರಿಯೆ ನಡೆಯಬೇಕಿದೆ.&lt;/p&gt;&lt;h2&gt;&lt;strong&gt;ಅಭಿವೃದ್ಧಿ ಕಾಮಗಾರಿಗಳ ಪ್ರಗತಿ&lt;/strong&gt;&lt;/h2&gt;&lt;p&gt;ಕೊಂಕಣ ರೈಲ್ವೆಯ 739 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೋಹಾ-ವೀರ್ ಹಾಗೂ ಮಡಗಾಂವ್-ಮಜೋರ್ಡಾ ನಡುವಿನ ಸುಮಾರು 55 ಕಿಲೋಮೀಟರ್ ಮಾರ್ಗದ ದ್ವಿಪಥ (Doubling) ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಉಳಿದಂತೆ ಸಾಮರ್ಥ್ಯ ಹೆಚ್ಚಿಸಲು ಗುರುತಿಸಲಾದ 263 ಕಿಲೋಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲು ಅಗತ್ಯವಿರುವ ಸಾಧ್ಯತಾ ಸಮೀಕ್ಷೆಗೆ (Feasibility Survey) ಅನುಮೋದನೆ ನೀಡಲಾಗಿದೆ. ಅಲ್ಲದೆ, ಪ್ರಯಾಣಿಕರ ಸೌಲಭ್ಯಗಳು, ಆಸ್ತಿಗಳ ನವೀಕರಣ, ಸುರಕ್ಷತೆ ಮತ್ತು ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದಂತೆ KRCLನ ಮೂರನೇ ಆರ್ಥಿಕ ಪುನರ್ರಚನೆಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Santosh Naik</dc:creator>
            <atom:link href="https://kannada.asianetnews.com/karnataka-districts/centre-seeks-konkan-railway-ownership-states-reluctant-san/articleshow-w5fnbmk"/>
        </item>
        <item>
            <title><![CDATA[ಮಗಳಿಗಾಗಿ ತಂದೆಯ ಹೋರಾಟ, ಅಯ್ಯಪ್ಪ ಭಕ್ತನ ರೌದ್ರಾವತಾರ: ರವಿತೇಜ 'ಇರುಮುಡಿ' ಟ್ರೇಲರ್‌ ಹೇಗಿದೆ?]]></title>
            <link>https://kannada.asianetnews.com/entertainment/ravi-teja-irmudi-trailer-raises-expectations-with-emotion-action-and-family-drama-gvd/articleshow-cit10ok</link>
            <guid isPermaLink="true">https://kannada.asianetnews.com/entertainment/ravi-teja-irmudi-trailer-raises-expectations-with-emotion-action-and-family-drama-gvd/articleshow-cit10ok</guid>
            <pubDate>Wed, 12 Aug 2026 22:52:10 +0530</pubDate>
            <description><![CDATA[ಮಾಸ್ ಮಹಾರಾಜ ರವಿತೇಜ ನಟನೆಯ 'ಇರುಮುಡಿ' ಸಿನಿಮಾದ ಟ್ರೇಲರ್‌ ರಿಲೀಸ್ ಆಗಿದೆ. ಕುತೂಹಲ ಕೆರಳಿಸಿರುವ ಈ ಟ್ರೇಲರ್‌, ರವಿತೇಜ ಅವರ ಮಾಮೂಲಿ ಮಾಸ್ ಮಸಾಲಾ ಸಿನಿಮಾಗಳಿಗಿಂತ ವಿಭಿನ್ನವಾಗಿದೆ ಅನ್ನೋದು ವಿಶೇಷ.]]></description>
            <media:content url="https://static.asianetnews.com/images/w-1280,h-720,format-jpg,imgid-01kzve23ctvq5zf0rwqs5p91bh,imgname-bjb-1786553372058.png" type="image/jpeg" height="390" width="690"/>
            <content:encoded><![CDATA[&lt;p&gt;ಟ್ರೇಲರ್&zwnj; ಪ್ರಕಾರ, ರವಿತೇಜ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುತ್ತಾರೆ. ಮಗಳೇ ಅವರ ಪ್ರಪಂಚ. ಪತ್ನಿಯ ಪಾತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ನಟಿಸಿದ್ದಾರೆ. ರವಿತೇಜ ಪ್ರತಿ ವರ್ಷ ಅಯ್ಯಪ್ಪ ಮಾಲೆ ಧರಿಸುತ್ತಾರೆ. ಮಾಲೆ ಇಲ್ಲದಿದ್ದಾಗ ಮದ್ಯ ಸೇವಿಸುತ್ತಾರೆ. ಮಗಳು ಐದನೇ ತರಗತಿ ಮುಗಿಸಿದಾಗ ಫಂಕ್ಷನ್ ಕೂಡ ಮಾಡುತ್ತಾರೆ. ಆದರೆ ಆ ಊರಿನಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇರುವುದಿಲ್ಲ. ದುಷ್ಕರ್ಮಿಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸಲು ರವಿತೇಜ ಹೋರಾಡುತ್ತಾರೆ.&lt;/p&gt;&lt;p&gt;ರವಿತೇಜ ತನ್ನ ಮಗಳ ಜೊತೆಗೆ ಊರಿನ ಎಲ್ಲಾ ಹೆಣ್ಣುಮಕ್ಕಳನ್ನು ದತ್ತು ತೆಗೆದುಕೊಂಡಂತೆ ನೋಡಿಕೊಳ್ಳಲು ಬಯಸುತ್ತಾರೆ. ಮಾಲೆ ಧರಿಸಿದಾಗ ಶಾಂತವಾಗಿ, ಭಕ್ತಿಯಿಂದ ಇರುವ ರವಿತೇಜ, ಮಾಲೆ ತೆಗೆದಾಗ ಶತ್ರುಗಳಿಗೆ ಯಮನಂತೆ ಕಾಣುತ್ತಾರೆ. ಒಂದು ಹಂತದಲ್ಲಿ ಅವರ ರೌದ್ರಾವತಾರ ನೋಡಿ ಮಗಳೇ ಹೆದರುತ್ತಾಳೆ. ಭಾವನೆ, ಆ್ಯಕ್ಷನ್, ಸೆಂಟಿಮೆಂಟ್ ಮತ್ತು ಕೌಟುಂಬಿಕ ಅಂಶಗಳ ಮಿಶ್ರಣದೊಂದಿಗೆ ಶಿವ ನಿರ್ವಾಣ ಈ ಸಿನಿಮಾ ಮಾಡಿದ್ದಾರೆ. ಇದು ರವಿತೇಜ ಅವರ ಇತ್ತೀಚಿನ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದೆ.&lt;/p&gt;&lt;p&gt;ಟ್ರೇಲರ್&zwnj; ಸದ್ಯಕ್ಕೆ ಕುತೂಹಲ ಮೂಡಿಸಿದ್ದು, ಸಿನಿಮಾ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ. ರವಿತೇಜ ಅವರ ಮಾಮೂಲಿ ಮಾಸ್ ಮಸಾಲಾ ಚಿತ್ರಗಳಿಗಿಂತ ಭಿನ್ನವಾಗಿರುವುದರಿಂದ ಈ ಬಾರಿ ಹಿಟ್ ಗ್ಯಾರಂಟಿ ಎಂಬ ಭಾವನೆ ಮೂಡಿಸುತ್ತಿದೆ. 'ಖುಷಿ' ನಂತರ ನಿರ್ದೇಶಕ ಶಿವ ನಿರ್ವಾಣ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಸಿನಿಮಾ ಆಗಸ್ಟ್ 21 ರಂದು ಬಿಡುಗಡೆಯಾಗಲಿದೆ.&lt;/p&gt;&lt;h2&gt;&lt;strong&gt;ರವಿತೇಜಗೆ ಹಿಟ್ ಗ್ಯಾರಂಟಿ?&lt;/strong&gt;&lt;/h2&gt;&lt;p&gt;ಸದ್ಯ ಬಿಡುಗಡೆಯಾಗಿರುವ ಟ್ರೇಲರ್&zwnj; ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ರವಿತೇಜ ಅವರ ಮಾಮೂಲಿ ಕಮರ್ಷಿಯಲ್, ಮಾಸ್ ಮಸಾಲಾ ಚಿತ್ರಗಳಿಗಿಂತ ಇದು ಭಿನ್ನವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ರವಿತೇಜಗೆ ಹಿಟ್ ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ. ಚಿತ್ರಮಂದಿರದಲ್ಲಿ ಸಿನಿಮಾ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ಸೆಳೆಯಲಿದೆ ಎಂಬುದನ್ನು ಕಾದು ನೋಡಬೇಕು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ravi-teja-irmudi-trailer-raises-expectations-with-emotion-action-and-family-drama-gvd/articleshow-cit10ok"/>
        </item>
        <item>
            <title><![CDATA[ನೆನೆಸೋದು ಬೇಡ, ರುಬ್ಬೋದು ಬೇಡ... ಕೇವಲ ಹತ್ತು ನಿಮಿಷದಲ್ಲಿ ಮಸಾಲ ವಡೆ ಮಾಡುವ ಟ್ರಿಕ್ ಇಲ್ಲಿದೆ]]></title>
            <link>https://kannada.asianetnews.com/food/10-minute-crispy-masala-vada-hack/articleshow-n3mgmab</link>
            <guid isPermaLink="true">https://kannada.asianetnews.com/food/10-minute-crispy-masala-vada-hack/articleshow-n3mgmab</guid>
            <pubDate>Wed, 12 Aug 2026 22:47:28 +0530</pubDate>
            <description><![CDATA[Instant Masala Vada: ಬೇಳೆ ನೆನೆಸದೆ, ಹಿಟ್ಟು ರುಬ್ಬದೆ ಗರಿಗರಿಯಾದ ಮಸಾಲ ವಡೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ! ಬ್ಯುಸಿ ಲೈಫ್‌ನಲ್ಲಿ ಅಡುಗೆಯನ್ನು ಸುಲಭವಾಗಿಸುವ ಒಂದು ಮ್ಯಾಜಿಕ್ ಪ್ರಿಮಿಕ್ಸ್ ಮತ್ತು ಅದರ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬೇಳೆ ನೆನೆಸಲು ಮರೆತ ದಿನಗಳಲ್ಲಿ ಈ ಟ್ರಿಕ್ ನಿಮಗೆ ಸಂಜೀವಿನಿಯಂತೆ ಕೆಲಸ ಮಾಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvfk0fab1tny34fp8fsgybn,imgname-thumbnail---2026-08-12t223740.786-1786554974697.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಂ&lt;/strong&gt;ಜೆಯ ಚಹಾ ಸಮಯಕ್ಕೆ ಗರಿಗರಿಯಾದ ಮಸಾಲ ವಡೆ ತಿನ್ನಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಮಸಾಲ ವಡೆ ಮಾಡಬೇಕೆಂದರೆ ಕನಿಷ್ಠ 3-4 ಗಂಟೆಗಳ ಮೊದಲೇ ಬೇಳೆಯನ್ನು ನೆನೆಸಿಡಬೇಕು. ಒಂದು ವೇಳೆ ಬೇಳೆ ನೆನೆಸಲು ಮರೆತರೆ ವಡೆ ತಿನ್ನುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಆದರೆ ಈಗ ಚಿಂತೆ ಮಾಡುವ ಅಗತ್ಯವಿಲ್ಲ! ಬೇಳೆ ನೆನೆಸದೆಯೇ ಕೇವಲ ಹತ್ತು ನಿಮಿಷಗಳಲ್ಲಿ ರುಚಿಕರವಾದ ಮಸಾಲ ವಡೆ ಮಾಡುವ 'ಇನ್&zwnj;ಸ್ಟಂಟ್ ಟ್ರಿಕ್' ಇಲ್ಲಿದೆ.&lt;/p&gt;&lt;p&gt;ಇದಕ್ಕಾಗಿ ನೀವು ಒಮ್ಮೆ 'ಮಸಾಲ ವಡೆ ಪ್ರಿಮಿಕ್ಸ್' ತಯಾರಿಸಿಟ್ಟುಕೊಂಡರೆ, ಯಾವಾಗ ಬೇಕಾದರೂ ಧಿಡೀರ್ ಆಗಿ ವಡೆ ತಯಾರಿಸಬಹುದು.&lt;/p&gt;&lt;p&gt;&lt;strong&gt;ಮಸಾಲ ವಡೆ ಪ್ರಿಮಿಕ್ಸ್ (ಈ ಪುಡಿಯನ್ನು ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟರೆ ತಿಂಗಳುಗಟ್ಟಲೆ ಬಳಸಬಹುದು)&amp;nbsp;&lt;/strong&gt;&lt;/p&gt;&lt;h2&gt;&lt;strong&gt;ಬೇಕಾಗುವ ಸಾಮಗ್ರಿಗಳು&lt;/strong&gt;&lt;/h2&gt;&lt;p&gt;ಕಡಲೆ ಬೇಳೆ - 1 ಕಪ್ಹೆಸರು ಬೇಳೆ - ಅರ್ಧ ಕಪ್ಜೀರಿಗೆ - 2 ಟೀಸ್ಪೂನ್ಒಣ ಮೆಣಸಿನಕಾಯಿ - 6 ರಿಂದ 8ಕರಿಬೇವು - ಸ್ವಲ್ಪ&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;ಮೊದಲು ಕಡಲೆ ಬೇಳೆ ಮತ್ತು ಹೆಸರು ಬೇಳೆಯನ್ನು ಬಾಣಲೆಯಲ್ಲಿ ಹಾಕಿ ಕೆಂಪಗಾಗುವವರೆಗೆ ಮತ್ತು ಘಮ ಬರುವವರೆಗೆ ಹುರಿಯಿರಿ.&lt;/p&gt;&lt;p&gt;ನಂತರ ಜೀರಿಗೆ, ಒಣ ಮೆಣಸಿನಕಾಯಿ ಮತ್ತು ಕರಿಬೇವನ್ನು ಪ್ರತ್ಯೇಕವಾಗಿ ಹುರಿಯಿರಿ. ಈ ಎಲ್ಲ ಪದಾರ್ಥಗಳು ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನೆನಪಿಡಿ, ಪುಡಿ ತೀರಾ ನುಣ್ಣಗಾಗಬಾರದು, ಸ್ವಲ್ಪ ತರಿತರಿಯಾಗಿದ್ದರೆ ಮಾತ್ರ ವಡೆ ರುಚಿಯಾಗಿರುತ್ತದೆ.&lt;/p&gt;&lt;h2&gt;&lt;strong&gt;ಈಗ 10 ನಿಮಿಷದಲ್ಲಿ ವಡೆ ಮಾಡುವುದು ಹೇಗೆ?&lt;/strong&gt;&lt;/h2&gt;&lt;p&gt;&lt;strong&gt;ಬೇಳೆ ನೆನೆಸದೆ ವಡೆ ಮಾಡುವ ಸುಲಭ ಹಂತಗಳು ಇಲ್ಲಿವೆ..&lt;/strong&gt;&lt;/p&gt;&lt;p&gt;&lt;strong&gt;ನಿಮಗೆ ಬೇಕಾಗಿರುವುದು&lt;/strong&gt;&lt;/p&gt;&lt;p&gt;ಸಿದ್ಧಪಡಿಸಿದ ಪ್ರಿಮಿಕ್ಸ್ ಪುಡಿ, 1 ಚಮಚ ರವೆ, 1 ಚಮಚ ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ಉಪ್ಪು ಮತ್ತು ಸ್ವಲ್ಪ ಬಿಸಿ ನೀರು.&lt;/p&gt;&lt;h2&gt;&lt;strong&gt;ಮಾಡುವ ಹಂತಗಳು&lt;/strong&gt;&lt;/h2&gt;&lt;p&gt;1. ಒಂದು ಪಾತ್ರೆಯಲ್ಲಿ ಪ್ರಿಮಿಕ್ಸ್ ಪುಡಿ, ರವೆ ಮತ್ತು ಮೊಸರನ್ನು ಹಾಕಿಕೊಳ್ಳಿ.&lt;/p&gt;&lt;p&gt;2. ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.&lt;/p&gt;&lt;p&gt;3. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ಸ್ವಲ್ಪವೇ ಬಿಸಿ ನೀರನ್ನು ಸೇರಿಸುತ್ತಾ ಹಿಟ್ಟನ್ನು ಕಲಸಿಕೊಳ್ಳಿ.&lt;/p&gt;&lt;p&gt;4. ಈ ಮಿಶ್ರಣವನ್ನು ಕೇವಲ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಬಿಸಿ ನೀರು ಮತ್ತು ಮೊಸರು ಬೇಳೆ ಪುಡಿಯನ್ನು ತಕ್ಷಣವೇ ಮೃದುಗೊಳಿಸುತ್ತದೆ.&lt;/p&gt;&lt;p&gt;5. ನಂತರ ಸಣ್ಣ ಉಂಡೆಗಳನ್ನು ಮಾಡಿ ವಡೆಯ ಆಕಾರ ನೀಡಿ, ಕಾದ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ.&lt;/p&gt;&lt;h2&gt;&lt;strong&gt;ವಿಶೇಷ ಸೂಚನೆ&lt;/strong&gt;&lt;/h2&gt;&lt;p&gt;ಒಂದು ವೇಳೆ ಹಿಟ್ಟು ಸರಿಯಾಗಿ ಬೈಂಡಿಂಗ್ ಆಗುತ್ತಿಲ್ಲ ಎನಿಸಿದರೆ ಒಂದು ಚಮಚ ಕಡಲೆ ಹಿಟ್ಟನ್ನು ಸೇರಿಸಿಕೊಳ್ಳಬಹುದು.&lt;/p&gt;&lt;p&gt;ನೆನೆಸುವ ಮತ್ತು ರುಬ್ಬುವ ಗೋಜಿಲ್ಲದೆ ತಯಾರಾಗುವ ಈ ವಡೆಗಳು ಅಷ್ಟೇ ಗರಿಗರಿಯಾಗಿರುತ್ತವೆ. ಈ ಸಂಜೆ ನಿಮ್ಮ ಮನೆಯಲ್ಲೂ ಈ ಇನ್&zwnj;ಸ್ಟಂಟ್ ಮಸಾಲ ವಡೆ ಪ್ರಯತ್ನಿಸಿ ನೋಡಿ!&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/10-minute-crispy-masala-vada-hack/articleshow-n3mgmab"/>
        </item>
        <item>
            <title><![CDATA[Arunachal Pradesh: ಚೀನಾ ಕ್ಯಾತೆ ನಡುವೆ ಭಾರತದಿಂದ ಮಹತ್ವದ ನಿರ್ಧಾರ; ಅರುಣಾಚಲಕ್ಕೆ 72 ಸ್ಪೆಷಲಿಸ್ಟ್ ವೈದ್ಯರ ನೇಮಕ!]]></title>
            <link>https://kannada.asianetnews.com/india-news/arunachal-pradesh-appoints-72-specialist-doctors-to-strengthen-state-healthcare/articleshow-67cpm69</link>
            <guid isPermaLink="true">https://kannada.asianetnews.com/india-news/arunachal-pradesh-appoints-72-specialist-doctors-to-strengthen-state-healthcare/articleshow-67cpm69</guid>
            <pubDate>Wed, 12 Aug 2026 22:46:42 +0530</pubDate>
            <description><![CDATA[ಅರುಣಾಚಲ ಪ್ರದೇಶ ಸರ್ಕಾರವು ರಾಜ್ಯದ ಆರೋಗ್ಯ ಸೇವೆಗಳನ್ನು ಬಲಪಡಿಸಲು 72 ತಜ್ಞ ವೈದ್ಯರನ್ನು ನೇಮಿಸಿದೆ. ಮುಖ್ಯಮಂತ್ರಿ ಪೇಮಾ ಖಂಡು ಅವರು ಈ ನೇಮಕಾತಿ ಪತ್ರಗಳನ್ನು ವಿತರಿಸಿದ್ದು, ಶೀಘ್ರದಲ್ಲೇ ಇನ್ನಷ್ಟು ನೇಮಕಾತಿ, ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಬಗ್ಗೆಯೂ ಘೋಷಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-external,imgname-image-1325243b-c256-42e4-b7cd-36c8e4cda2b6.jpg" type="image/jpeg" height="390" width="690"/>
            <content:encoded><![CDATA[&lt;p&gt;ಅರುಣಾಚಲ ಪ್ರದೇಶ(Arunachala pradesh)ದ ಮುಖ್ಯಮಂತ್ರಿ ಪೇಮಾ ಖಂಡು ಅವರು ಬುಧವಾರ 72 ನೂತನ ತಜ್ಞ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ನೀಡಿ ಅಭಿನಂದಿಸಿದ್ದಾರೆ. ವೈದ್ಯಕೀಯ ತಜ್ಞರ ನೇಮಕಾತಿ ಪರೀಕ್ಷೆ-2026ರಲ್ಲಿ (MSR) ಯಶಸ್ವಿಯಾದ ಈ ಅಭ್ಯರ್ಥಿಗಳ ಸೇರ್ಪಡೆಯಿಂದ ರಾಜ್ಯದ ವಿಶೇಷ ಆರೋಗ್ಯ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ ಎಂದು ಅವರು ಬಣ್ಣಿಸಿದ್ದಾರೆ.&lt;/p&gt;&lt;p&gt;ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರ ನಡೆಸಿದ ನೇಮಕಾತಿಗಳ ಜೊತೆಗೆ, ಈ 72 ತಜ್ಞ ವೈದ್ಯರ ನೇಮಕದಿಂದ ಆರೋಗ್ಯ ಕ್ಷೇತ್ರದಲ್ಲಿನ ಸಿಬ್ಬಂದಿ ಕೊರತೆಯನ್ನು ನೀಗಿಸಲು ದೊಡ್ಡ ಮಟ್ಟದಲ್ಲಿ ಸಹಾಯವಾಗಿದೆ ಎಂದು ಖಂಡು ಹೇಳಿದ್ದಾರೆ. ಇನ್ನೂ ಕೆಲವು ಹುದ್ದೆಗಳು ಖಾಲಿ ಇವೆ. ಟೊಮೊ ರಿಬಾ ಇನ್&zwnj;ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸಸ್ (TRIHMS) ನಲ್ಲಿ 35 ತಜ್ಞ ವೈದ್ಯರ ಹುದ್ದೆಗಳು, ಸರ್ಕಾರಿ ಆಸ್ಪತ್ರೆಗಳಲ್ಲಿ 61 ತಜ್ಞರ ಹುದ್ದೆಗಳು ಮತ್ತು 79 ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (GDMO) ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.&lt;/p&gt;&lt;h2&gt;ಆರೋಗ್ಯ ಸೇವೆ ಮತ್ತು ಮೂಲಸೌಕರ್ಯಕ್ಕೆ ಒತ್ತು&lt;/h2&gt;&lt;p&gt;&lsquo;ಈ ತಜ್ಞರ ನೇಮಕದಿಂದ ರಾಜ್ಯದಾದ್ಯಂತ, ವಿಶೇಷವಾಗಿ ದುರ್ಗಮ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷ ವೈದ್ಯಕೀಯ ಸೇವೆಗಳು ಸುಲಭವಾಗಿ ಲಭ್ಯವಾಗಲಿವೆ&rsquo; ಎಂದು ಖಂಡು ತಿಳಿಸಿದ್ದಾರೆ. ರಾಜ್ಯದೊಳಗೆಯೇ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು, ಇದಕ್ಕಾಗಿ ಜನರು ಅರುಣಾಚಲ ಪ್ರದೇಶದಿಂದ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ ಎಂದರು.&lt;/p&gt;&lt;p&gt;ನಮ್ಮ ರಾಜ್ಯದ ಜನರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳು ರಾಜ್ಯದೊಳಗೇ ಸಿಗಬೇಕು ಎನ್ನುವುದು ನಮ್ಮ ಗುರಿ' ಎಂದು ಅವರು ಸ್ಪಷ್ಟಪಡಿಸಿದರು.&lt;/p&gt;&lt;p&gt;ರಾಜ್ಯದ ಆರೋಗ್ಯ ಜಾಲದ ಬಗ್ಗೆ ಮಾತನಾಡಿದ ಖಂಡು, ಅರುಣಾಚಲ ಪ್ರದೇಶದಲ್ಲಿ ಸದ್ಯ 6 ವಲಯ ಆಸ್ಪತ್ರೆಗಳು, 17 ಜಿಲ್ಲಾ ಆಸ್ಪತ್ರೆಗಳು, 57 ಸಮುದಾಯ ಆರೋಗ್ಯ ಕೇಂದ್ರಗಳು, 162 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು 647 ಉಪ-ಆರೋಗ್ಯ ಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು. ಮೂಲಸೌಕರ್ಯ ವಿಸ್ತರಣೆಯ ಜೊತೆಗೆ, ದುರ್ಗಮ ಪ್ರದೇಶಗಳ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವುದಕ್ಕೆ ಸರ್ಕಾರ ಹೆಚ್ಚಿನ ಗಮನ ಹರಿಸಿದೆ ಎಂದರು.&lt;/p&gt;&lt;h3&gt;TRIHMS ಆಸ್ಪತ್ರೆಯಲ್ಲಿ ಹೊಸ ಸೌಲಭ್ಯಗಳು&lt;/h3&gt;&lt;p&gt;ರಾಜ್ಯದ ಏಕೈಕ ವೈದ್ಯಕೀಯ ಕಾಲೇಜಾದ TRIHMSನ ಪ್ರಗತಿಯ ಬಗ್ಗೆಯೂ ಖಂಡು ಮಾತನಾಡಿದರು. 2017ರಲ್ಲಿ 50 ಎಂಬಿಬಿಎಸ್ ಸೀಟುಗಳೊಂದಿಗೆ ಆರಂಭವಾದ ಈ ಕಾಲೇಜಿನಲ್ಲಿ, ಕಳೆದ ವರ್ಷದಿಂದ ಸೀಟುಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗಿದೆ ಎಂದರು. ಶೀಘ್ರದಲ್ಲೇ TRIHMSನಲ್ಲಿ ಎಂಡಿ ಮತ್ತು ಎಂಎಸ್ ತಜ್ಞ ಕೋರ್ಸ್&zwnj;ಗಳನ್ನು ಪರಿಚಯಿಸಲಾಗುವುದು, ಇದರಿಂದ ರಾಜ್ಯದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ತಜ್ಞ ವೈದ್ಯರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು.&lt;/p&gt;&lt;h3&gt;ಅಂಗಾಂಗ ಕಸಿ ಸೌಲಭ್ಯ ಮತ್ತು ಆರ್ಥಿಕ ನೆರವು&lt;/h3&gt;&lt;p&gt;ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಸಹಯೋಗದೊಂದಿಗೆ TRIHMS ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಸೌಲಭ್ಯವನ್ನು ಆರಂಭಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ಖಂಡು ತಿಳಿಸಿದರು. TRIHMSನಲ್ಲಿ ಈಗಾಗಲೇ 'ಆರ್ಗನ್ ಪರ್ಫ್ಯೂಷನ್ ಸಿಸ್ಟಮ್' ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಕಿಡ್ನಿ ಕಸಿ ಸೌಲಭ್ಯ ಆರಂಭವಾಗಲಿದೆ ಎಂದರು.&lt;/p&gt;&lt;p&gt;ಇದೇ ವೇಳೆ, 'ಮುಖ್ಯಮಂತ್ರಿಗಳ ಅಂಗಾಂಗ ಕಸಿ ಯೋಜನೆ' (CMOTS) ಅಡಿಯಲ್ಲಿ ಆರ್ಥಿಕ ನೆರವು ನೀಡುವುದಾಗಿಯೂ ಖಂಡು ಘೋಷಿಸಿದ್ದಾರೆ. ಈ ಯೋಜನೆಯಡಿ, ಕಿಡ್ನಿ ಕಸಿಗೆ 12 ಲಕ್ಷ ರೂ., ಮೂಳೆ ಮಜ್ಜೆ ಕಸಿಗೆ 17 ಲಕ್ಷ ರೂ. ಮತ್ತು ಯಕೃತ್ತಿನ (ಲಿವರ್) ಕಸಿಗೆ 22 ಲಕ್ಷ ರೂ. ವರೆಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ.&lt;/p&gt;&lt;p&gt;ಈ ಯೋಜನೆಯು ದುಬಾರಿ ಕಸಿ ಚಿಕಿತ್ಸೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯ ಮಾಡಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.&lt;/p&gt;&lt;p&gt;&lt;strong&gt;ವೈದ್ಯಕೀಯ ಶಿಕ್ಷಣದ ವಿಸ್ತರಣೆ&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಇನ್ನೂ ಎರಡು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು. ಒಂದು ಕಾಲೇಜನ್ನು ನಮ್ಸಾಯ್&zwnj;ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದ್ದು, ಈ ವರ್ಷವೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ಮೂರನೇ ವೈದ್ಯಕೀಯ ಕಾಲೇಜು ಸ್ಥಾಪಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು.&lt;/p&gt;&lt;p&gt;&lt;strong&gt;ಪಾರದರ್ಶಕ ನೇಮಕಾತಿ ಪ್ರಕ್ರಿಯೆ&lt;/strong&gt;&lt;/p&gt;&lt;p&gt;ನೇಮಕಾತಿ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಖಂಡು, ಯಶಸ್ವಿ 72 ಅಭ್ಯರ್ಥಿಗಳನ್ನು ಅಭಿನಂದಿಸಿದರು. ಅರುಣಾಚಲ ಪ್ರದೇಶ ಲೋಕಸೇವಾ ಆಯೋಗ (APPSC) ಪಾರದರ್ಶಕವಾಗಿ, ಅರ್ಹತೆಯ ಆಧಾರದ ಮೇಲೆ ಮತ್ತು ನಿಗದಿತ ಸಮಯದಲ್ಲಿ ಈ ಪರೀಕ್ಷೆಯನ್ನು ನಡೆಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಏಪ್ರಿಲ್ 13, 2026 ರಂದು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಬಂದ 117 ಅರ್ಜಿಗಳಲ್ಲಿ, 116 ಅಭ್ಯರ್ಥಿಗಳು ಜೂನ್ 22 ರಿಂದ 29 ರವರೆಗೆ ನಡೆದ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಅಂತಿಮವಾಗಿ 72 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ.&lt;/p&gt;&lt;p&gt;&lt;strong&gt;'ವಿಕಸಿತ ಅರುಣಾಚಲ'ದ ಭಾಗವಾಗಿ ಆರೋಗ್ಯ ಕ್ಷೇತ್ರ&lt;/strong&gt;&lt;/p&gt;&lt;p&gt;ಪ್ರಧಾನಿ ನರೇಂದ್ರ ಮೋದಿಯವರ 'ವಿಕಸಿತ ಭಾರತ 2047' ಗುರಿಯಂತೆ, ಅರುಣಾಚಲ ಪ್ರದೇಶ ಕೂಡ 'ವಿಕಸಿತ ಅರುಣಾಚಲ 2047' ಆಗುವ ಗುರಿ ಹೊಂದಿದೆ ಎಂದು ಖಂಡು ಹೇಳಿದರು.&lt;/p&gt;&lt;p&gt;'ವಿಕಸಿತ ಅರುಣಾಚಲದ ಪ್ರಮುಖ ಆಧಾರಸ್ತಂಭಗಳಲ್ಲಿ ಆರೋಗ್ಯ ಕ್ಷೇತ್ರವೂ ಒಂದು. ನಮ್ಮ ಜನರಿಗೆ ರಾಜ್ಯದೊಳಗೆಯೇ ಗುಣಮಟ್ಟದ ಚಿಕಿತ್ಸೆ ಸಿಗುವಂತಹ ವ್ಯವಸ್ಥೆಯನ್ನು ನಿರ್ಮಿಸುವುದರ ಮೇಲೆ ನಾವು ಗಮನ ಹರಿಸಬೇಕು' ಎಂದರು. ರಾಜ್ಯದಾದ್ಯಂತ ರೋಗಿಗಳಿಗೆ ಸೇವೆ ಸಲ್ಲಿಸುವಾಗ ವೃತ್ತಿಪರತೆ, ಸಹಾನುಭೂತಿ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುವಂತೆ ಅವರು ನೂತನ ವೈದ್ಯರಿಗೆ ಕಿವಿಮಾತು ಹೇಳಿದರು. (ANI)&lt;/p&gt;&lt;p&gt;(ಶೀರ್ಷಿಕೆ ಹೊರತುಪಡಿಸಿ, ಈ ಸುದ್ದಿಯನ್ನು ಏಷ್ಯಾನೆಟ್ ನ್ಯೂಸ್ ಸಂಪಾದಕೀಯ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್&zwnj;ನಿಂದ ಪ್ರಕಟಿಸಲಾಗಿದೆ.)&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/arunachal-pradesh-appoints-72-specialist-doctors-to-strengthen-state-healthcare/articleshow-67cpm69"/>
        </item>
        <item>
            <title><![CDATA[30 ಸಾವಿರ ಸಾಲಕ್ಕಾಗಿ 21 ದಿನದ ಕಂದಮ್ಮನ ಕಿಡ್ನ್ಯಾಪ್.. ಮನುಷ್ಯತ್ವ ಇಲ್ಲದ ದುಷ್ಟರು!]]></title>
            <link>https://kannada.asianetnews.com/india-news/a-21-day-old-baby-was-kidnapped-over-a-rs-30000-debt-in-hyderabads-rajendranagar-gkn/articleshow-gcdfyul</link>
            <guid isPermaLink="true">https://kannada.asianetnews.com/india-news/a-21-day-old-baby-was-kidnapped-over-a-rs-30000-debt-in-hyderabads-rajendranagar-gkn/articleshow-gcdfyul</guid>
            <pubDate>Wed, 12 Aug 2026 22:40:55 +0530</pubDate>
            <description><![CDATA[ಹೈದರಾಬಾದ್‌ನ ರಾಜೇಂದ್ರನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, 30,000 ರೂಪಾಯಿ ಸಾಲದ ವಿಚಾರವಾಗಿ 21 ದಿನದ ಹಸುಗೂಸನ್ನು ಅಪಹರಿಸಲಾಗಿತ್ತು. ಆದರೆ, ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎರಡು ಗಂಟೆಯೊಳಗೆ ಮಗುವನ್ನು ರಕ್ಷಿಸಿ ತಾಯಿಯ ಬಳಿಗೆ ತಲುಪಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvf7hwd6asw7a54ccvcqz7b,imgname-police-1786554599309.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಹೈದರಾಬಾದ್: &lt;/strong&gt;ಸಾಲದ ಹಣ ತೀರಿಸಲಿಲ್ಲ ಎಂಬ ಕಾರಣಕ್ಕೆ ಕೇವಲ 21 ದಿನದ ಹಸುಗೂಸನ್ನು ಕಿಡ್ನ್ಯಾಪ್ ಮಾಡಿದ ಅಮಾನುಷ ಕೃತ್ಯ ಹೈದರಾಬಾದ್&zwnj;ನ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಹಣದ ದಾಹಕ್ಕಾಗಿ ಮನುಷ್ಯ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಾನ್ ನಗರದಲ್ಲಿ ಘಟನೆ ನಡೆದಿದೆ. ಅನಿತಾ ಮತ್ತು ಆಕೆಯ ಪತಿ ರಾಘವೇಂದ್ರ ಅವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದ ಅವಶ್ಯಕತೆಗಾಗಿ ಹಫೀಜ್&zwnj;ಪೇಟ್ ನಿವಾಸಿ ಮಂಜುಳಾ ಎಂಬಾಕೆಯಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಈ ಸಾಲದ ಹಣವನ್ನು ಮರಳಿ ನೀಡುವ ವಿಚಾರದಲ್ಲಿ ಇತ್ತಂಡಗಳ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.&lt;/p&gt;&lt;p&gt;ಸೋಮವಾರ ಮಂಜುಳಾ ಪರವಾಗಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಆಟೋದಲ್ಲಿ ಅನಿತಾ ಅವರ ಮನೆಗೆ ಬಂದಿದ್ದಾರೆ. ಸಾಲದ ಹಣಕ್ಕಾಗಿ ವಾಗ್ವಾದ ನಡೆಸಿದ ಅವರು, ಕೊನೆಗೆ ಮನೆಯಲ್ಲಿದ್ದ 21 ದಿನದ ಹಸುಗೂಸನ್ನು ಬಲವಂತವಾಗಿ ಎತ್ತುಕೊಂಡು ಹೋಗಿದ್ದಾರೆ. ತನ್ನ ಮಗುವನ್ನು ಬಿಟ್ಟುಬಿಡಿ ಎಂದು ಅನಿತಾ ಕಿಡ್ನ್ಯಾಪರ್&zwnj;ಗಳ ಕಾಲು ಹಿಡಿದು ಬೇಡಿಕೊಂಡರೂ, ಆಕೆಯನ್ನು ಪಕ್ಕಕ್ಕೆ ತಳ್ಳಿ ಮಗುವಿನೊಂದಿಗೆ ಪರಾರಿಯಾಗಿದ್ದಾರೆ.&lt;/p&gt;&lt;p&gt;ಮಗು ಅಪಹರಣಕ್ಕೊಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೇಂದ್ರನಗರ ಪೊಲೀಸರು ಅಲರ್ಟ್ ಆದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಪೊಲೀಸರ ಸಮಯಪ್ರಜ್ಞೆ ಮತ್ತು ಚುರುಕಿನ ಕಾರ್ಯಾಚರಣೆಯಿಂದಾಗಿ ಕೇವಲ ಎರಡು ಗಂಟೆಗಳ ಒಳಗಾಗಿ ಮಗುವನ್ನು ಪತ್ತೆ ಹಚ್ಚಲಾಯಿತು.&lt;/p&gt;&lt;p&gt;ಅಪಹರಣಕಾರರ ಕಪಿಮುಷ್ಠಿಯಿಂದ ಮಗುವನ್ನು ರಕ್ಷಿಸಿದ ಪೊಲೀಸರು, ತಾಯಿ ಅನಿತಾ ಅವರಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಕಳೆದುಹೋಗಿದ್ದ ಮಗು ಮರಳಿ ಕೈಗೆ ಸಿಗುತ್ತಿದ್ದಂತೆಯೇ ತಾಯಿ ಮತ್ತು ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.&lt;/p&gt;&lt;p&gt;ಕೇವಲ 30 ಸಾವಿರ ರೂಪಾಯಿ ಸಾಲದ ವಿಚಾರಕ್ಕೆ ಹಸುಗೂಸನ್ನು ಅಪಹರಿಸಿದ ಆರೋಪಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಂಜುಳಾ ಸೇರಿದಂತೆ ಕಿಡ್ನ್ಯಾಪ್&zwnj;ನಲ್ಲಿ ಭಾಗಿಯಾದ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಣದ ವಿವಾದ ಏನೇ ಇದ್ದರೂ ಇಂತಹ ಅಮಾನುಷ ಕೃತ್ಯ ಎಸಗುವುದು ಕ್ಷಮಾರ್ಹವಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/a-21-day-old-baby-was-kidnapped-over-a-rs-30000-debt-in-hyderabads-rajendranagar-gkn/articleshow-gcdfyul"/>
        </item>
        <item>
            <title><![CDATA[ಎಲೆಕ್ಟ್ರಾನಿಕ್‌ ಸಿಟಿ ಆಕ್ಸಿಡೆಂಟ್‌, ಮಹಿಳೆ ಸಾವು]]></title>
            <link>https://kannada.asianetnews.com/bengaluru-urban/bengaluru-road-accident-epf-employee-dies-electronic-city-san/articleshow-7ibcfcn</link>
            <guid isPermaLink="true">https://kannada.asianetnews.com/bengaluru-urban/bengaluru-road-accident-epf-employee-dies-electronic-city-san/articleshow-7ibcfcn</guid>
            <pubDate>Wed, 12 Aug 2026 22:33:30 +0530</pubDate>
            <description><![CDATA[ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ಬಳಿ ಕೆಟ್ಟ ರಸ್ತೆಯಿಂದಾಗಿ ಬೈಕ್‌ನಿಂದ ಬಿದ್ದ ಕೇರಳ ಮೂಲದ ಯುವತಿ ಮೇಧಾ ಪೃಥ್ವಿರಾಜ್ ಮೇಲೆ ಗೂಡ್ಸ್‌ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯು ಅನಂತನಗರದ ರಸ್ತೆಗಳ ದುಸ್ಥಿತಿಯನ್ನು ಎತ್ತಿ ತೋರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzverh85ecwq28j42n7y95ss,imgname-bengaluru-road-accident-electronic-city-1786554107141.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12): &lt;/strong&gt;ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೆಂಗಳೂರಿನ 'ಮಹಾನ್&zwnj;' ರಸ್ತೆಯ ಕಾರಣದಿಂದ ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಯುವತಿಯ ಮೇಲೆ ಗೂಡ್ಸ್&zwnj; ವಾಹನ ಹರಿದು ಭೀಕರವಾಗಿ ಯುವತಿಯೊಬ್ಬಳು ಸಾವು ಕಂಡಿದ್ದಾಳೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್&zwnj; ಸಿಟಿಯ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ದಾರುಣ ಘಟನೆ ನಡೆದಿದ್ದು, ಕೇರಳ ಮೂಲದ ಯುವತಿ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್&zwnj; ಸಿಟಿಯ ಉದ್ಯೋಗಿಗಳ ಭವಿಷ್ಯ ನಿಧಿ (EPF) ಕಚೇರಿಯಲ್ಲಿ ಕೆಲಸದಲ್ಲಿದ್ದ ಕೇರಳ ಮೂಲದ ಮೇಧಾ ಪೃಥ್ವಿರಾಜ್ (32) ಮೃತಪಟ್ಟ ದುರ್ದೈವಿ.&lt;/p&gt;&lt;h2&gt;&lt;strong&gt;ಅಪಘಾತ ಸಂಭವಿಸಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಯ ಸುಮಾರಿಗೆ ಮೇಧಾ ಅವರು ತಮ್ಮ ಸ್ನೇಹಿತ ಅಜಯ್ ಗುರು ಅವರೊಂದಿಗೆ ಬೈಕ್&zwnj;ನಲ್ಲಿ ಕಚೇರಿಗೆ ತೆರಳುತ್ತಿದ್ದರು. ಆದರೆ, ಅನಂತನಗರದ ರಸ್ತೆಗಳು ದೇವರಿಗೆ ಪ್ರೀತಿ. ಒಂದೆಡೆ ಚರಂಡಿ ಇಲ್ಲ, ಇನ್ನೊಂದೆಡೆ ವರ್ಷಗಳ ಕಾಲ ಡಾಂಬರು ಕಾಣದೆ ಗುಂಡಿಬಿದ್ದಿರುವ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮುಂದೆ ಹೋಗುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ. ಈ ವೇಳೆ ಬೈಕ್&zwnj;ನ ಹಿಂಬದಿ ಕುಳಿತಿದ್ದ ಮೇಧಾ ಅವರು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಹಿಂಬದಿಯಿಂದ ಬಂದ ವೇಗದ ಗೂಡ್ಸ್ ವಾಹನವೊಂದು ಮೇಧಾ ಅವರ ಕತ್ತಿನ ಮೇಲೆಯೇ ಹರಿದಿದೆ. ತೀವ್ರವಾಗಿ ಗಾಯಗೊಂಡ ಅವರನ್ನು ರಕ್ಷಿಸಲು ತಕ್ಷಣವೇ ಯತ್ನಿಸಲಾಯಿತಾದರೂ, ಗಂಭೀರ ಗಾಯಗಳಿಂದಾಗಿ ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;&lt;p&gt;ಅಪಘಾತದ ಬಳಿಕ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಶವಪರೀಕ್ಷೆಯ ನಂತರ ಮೃತದೇಹವನ್ನು ಕೇರಳದಲ್ಲಿರುವ ಅವರ ಸ್ವಂತ ಊರಿಗೆ ಸಾಗಿಸಲಾಯಿತು.&lt;/p&gt;&lt;h2&gt;&lt;strong&gt;ಆಕ್ರೋಶ ಹಾಗೂ ಸಂತಾಪ&lt;/strong&gt;&lt;/h2&gt;&lt;p&gt;ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮೌನಾಚರಣೆ ನಡೆಸಿ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದರು. ಎಲೆಕ್ಟ್ರಾನಿಕ್&zwnj; ಸಿಟಿ ಹಾಗೂ ಅನಂತ ನಗರ ವ್ಯಾಪ್ತಿಯಲ್ಲಿ ರಸ್ತೆಗಳ ಅತ್ಯಂತ ಕೆಟ್ಟ ವ್ಯವಸ್ಥೆಯೇ ಇಂತಹ ಸರಣಿ ಅಪಘಾತಗಳಿಗೆ ಕಾರಣವಾಗುತ್ತಿದ್ದು, ತಕ್ಷಣವೇ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಆಕ್ರೋಶದೊಂದಿಗೆ ಆಗ್ರಹಿಸಿದ್ದಾರೆ. ಇಡೀ ಅನಂತನಗರದಲ್ಲಿ ಯಾವೊಂದು ರಸ್ತೆಯೂ ಸುಸ್ಥಿತಿಯಲ್ಲಿ ಇಲ್ಲ. ನಗರದ ಮುಖ್ಯ ರಸ್ತೆಯ ಕಥೆಯೇ ಹೀಗಾಗದರೆ, ಒಳರಸ್ತೆಗಳನ್ನು ಕೇಳುವುದೇ ಬೇಡ ಎನ್ನುವುದು ಸ್ಥಳೀಯರ ಮಾತು.&lt;/p&gt;&lt;h2&gt;&lt;strong&gt;ಕುಟುಂಬ ವಿವರ ಮತ್ತು ಅಂತ್ಯಕ್ರಿಯೆ&lt;/strong&gt;&lt;/h2&gt;&lt;p&gt;ಮೃತ ಮೇಧಾ ಅವರು ಕೇರಳದ ಕೊಟ್ಟಕ್ಕಾಟ್ ನಿವಾಸಿ, ನಿವೃತ್ತ ಶಾಲಾ ಶಿಕ್ಷಕ ಪೃಥ್ವಿರಾಜ್ ಮುಡಕಲ್ಲೂರು ಅವರ ಪುತ್ರಿಯಾಗಿದ್ದಾರೆ. ಅವರ ಅಂತ್ಯಕ್ರಿಯೆಯು ಗುರುವಾರ ಬೆಳಿಗ್ಗೆ 10 ಗಂಟೆಗೆ ಕೊಟ್ಟಕ್ಕಾಟ್&zwnj;ನಲ್ಲಿರುವ ಅವರ ಕುಟುಂಬದ ನಿವಾಸದಲ್ಲಿ ನಡೆಯಲಿದೆ. ಮೃತ ಮೇಧಾ ಅವರು ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿರುವ ಪತಿ ಎಸ್&zwnj;ಎಲ್ ಆಕರ್ಷ್ ಮತ್ತು ಪುಟ್ಟ ಮಗ ದಕ್ಷ್ ಆಕರ್ಷ್ ಅವರನ್ನು ಅಗಲಿದ್ದಾರೆ. ಮೃತರ ತಾಯಿ ಉಷಾ ಅವರು ತರಿಯೋಡ್&zwnj;ನ ಗ್ರೀನ್ ಮೌಂಟ್ ಪಬ್ಲಿಕ್ ಶಾಲೆಯ ನಿವೃತ್ತ ಶಿಕ್ಷಕಿಯಾಗಿದ್ದು, ಸಹೋದರ ಗೌತಮ್ ಪೃಥ್ವಿರಾಜ್ ಪ್ರಸ್ತುತ ಪುದುಚೇರಿಯಲ್ಲಿ ಎಂಬಿಎ (MBA) ವ್ಯಾಸಂಗ ಮಾಡುತ್ತಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-road-accident-epf-employee-dies-electronic-city-san/articleshow-7ibcfcn"/>
        </item>
        <item>
            <title><![CDATA[ಸ್ಟೀಲ್ ಸಿಂಕ್‌ ಮೇಲಿನ ಕಲೆ, ಮಂಕು ಕ್ಷಣದಲ್ಲೇ ಹೋಗಬೇಕಾ? ಹೊಳಪು ತರಲು ಇಲ್ಲಿವೆ 6 ಸುಲಭ ಟಿಪ್ಸ್]]></title>
            <link>https://kannada.asianetnews.com/kitchen/6-simple-ways-to-make-your-stainless-steel-sink-shine-again-gvd/articleshow-5yfkx4l</link>
            <guid isPermaLink="true">https://kannada.asianetnews.com/kitchen/6-simple-ways-to-make-your-stainless-steel-sink-shine-again-gvd/articleshow-5yfkx4l</guid>
            <pubDate>Wed, 12 Aug 2026 22:15:43 +0530</pubDate>
            <description><![CDATA[Sink Cleaning Hacks: ಸ್ಟೇನ್‌ಲೆಸ್ ಸ್ಟೀಲ್ ಸಿಂಕ್ ಮಂಕಾಗಿ ಕಾಣಿಸುತ್ತಿದೆಯೇ? ಕಲೆ, ಖನಿಜಾಂಶ ಹಾಗೂ ಸ್ಕ್ರಾಚ್‌ಗಳಿಂದ ಸಿಂಕ್‌ ಹೊಳಪು ಕಳೆದುಕೊಳ್ಳದಂತೆ ಮಾಡಲು ಈ 6 ಸರಳ ಕ್ಲೀನಿಂಗ್ ಟಿಪ್ಸ್‌ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvcqap2f6kqj1xh7a5rh3vq,imgname-jb-1786551970498.png" type="image/jpeg" height="390" width="690"/>
            <content:encoded><![CDATA[&lt;p&gt;ಸ್ಟೇನ್&zwnj;ಲೆಸ್ ಸ್ಟೀಲ್ ಸಿಂಕ್&zwnj; ಅನ್ನು ಎಷ್ಟೇ ಚೆನ್ನಾಗಿ ತೊಳೆದರೂ ಕೆಲವೊಮ್ಮೆ ಅದರ ಮೇಲ್ಮೈ ಮಂಕಾಗಿ, ಕಲೆಗಳಿರುವಂತೆ ಅಥವಾ ಸ್ಟ್ರೀಕ್&zwnj;ಗಳು ಕಾಣುವಂತಾಗುತ್ತದೆ. ಹೀಗಾದಾಗ ಇನ್ನಷ್ಟು ಜೋರಾಗಿ ಸ್ಕ್ರಬ್&zwnj; ಮಾಡುವುದು ಸಾಮಾನ್ಯ ಅಭ್ಯಾಸ. ಆದರೆ ಇದೇ ಕ್ರಮ ಸಿಂಕ್&zwnj;ನ ಮೇಲ್ಮೈಯನ್ನು ಮತ್ತಷ್ಟು ಹಾಳು ಮಾಡಬಹುದು.&lt;/p&gt;&lt;p&gt;ತಜ್ಞರ ಪ್ರಕಾರ, ಸ್ಟೇನ್&zwnj;ಲೆಸ್ ಸ್ಟೀಲ್ ಸಿಂಕ್&zwnj; ಸ್ವಚ್ಛಗೊಳಿಸಲು ದುಬಾರಿ ಕ್ಲೀನಿಂಗ್&zwnj; ಪ್ರಾಡಕ್ಟ್&zwnj;ಗಳ ದೊಡ್ಡ ಪಟ್ಟಿಯೇ ಬೇಕಿಲ್ಲ. ಗಟ್ಟಿಯಾದ ನೀರಿನಲ್ಲಿರುವ ಖನಿಜಾಂಶಗಳು, ಸಾಬೂನಿನ ಅವಶೇಷಗಳು, ಎಣ್ಣೆಯ ಕಲೆಗಳು, ಕ್ಲೀನಿಂಗ್&zwnj; ಪ್ರಾಡಕ್ಟ್&zwnj;ಗಳ ಪದರ ಹಾಗೂ ತಪ್ಪಾದ ರೀತಿಯಲ್ಲಿ ಸ್ಕ್ರಬ್&zwnj; ಮಾಡುವುದರಿಂದ ಸಿಂಕ್&zwnj; ತನ್ನ ಹೊಳಪು ಕಳೆದುಕೊಳ್ಳಬಹುದು. ಹಾಗಾದರೆ ಸಿಂಕ್&zwnj;ಗೆ ಮತ್ತೆ ಹೊಳಪು ತರಲು ಏನು ಮಾಡಬೇಕು? ಇಲ್ಲಿವೆ 6 ಸರಳ ಹಾಗೂ ಪರಿಣಾಮಕಾರಿ ವಿಧಾನಗಳು.&lt;/p&gt;&lt;p&gt;&lt;strong&gt;1. ಮೊದಲು ಬೆಚ್ಚಗಿನ ನೀರು ಮತ್ತು ಡಿಶ್&zwnj;ವಾಶ್&zwnj; ಲಿಕ್ವಿಡ್&zwnj; ಬಳಸಿ&lt;/strong&gt;&lt;/p&gt;&lt;p&gt;ಸಿಂಕ್&zwnj; ಸ್ವಲ್ಪ ಮಂಕಾಗಿ ಕಾಣುತ್ತಿದ್ದರೆ ಮೊದಲಿಗೆ ಕಠಿಣ ವಿಧಾನಗಳಿಗೆ ಹೋಗಬೇಡಿ. ಬೆಚ್ಚಗಿನ ನೀರಿಗೆ ಕೆಲವು ಹನಿಗಳಷ್ಟು ಸೌಮ್ಯವಾದ ಡಿಶ್&zwnj;ವಾಶ್&zwnj; ಲಿಕ್ವಿಡ್&zwnj; ಸೇರಿಸಿ. ಮೃದುವಾದ ಬಟ್ಟೆಯಿಂದ ಸಿಂಕ್&zwnj; ಅನ್ನು ನಿಧಾನವಾಗಿ ಒರೆಸಿ. ಬಳಿಕ ನೀರಿನಿಂದ ಚೆನ್ನಾಗಿ ತೊಳೆಯಿರಿ. ಸಾಬೂನಿನ ಅವಶೇಷಗಳು ಮೇಲ್ಮೈಯಲ್ಲಿ ಉಳಿಯದಂತೆ ಕೊನೆಯಲ್ಲಿ ಸ್ವಚ್ಛ ನೀರಿನಿಂದ ರಿನ್ಸ್&zwnj; ಮಾಡುವುದು ಮುಖ್ಯ.&lt;/p&gt;&lt;p&gt;&lt;strong&gt;2. ಗಟ್ಟಿನೀರಿನ ಕಲೆಗಳಿಗೆ ವೈಟ್&zwnj; ವಿನೆಗರ್&zwnj; ಸಹಕಾರಿ&lt;/strong&gt;&lt;/p&gt;&lt;p&gt;ಸ್ವಚ್ಛಗೊಳಿಸಿದ ನಂತರವೂ ಸಿಂಕ್&zwnj; ಮೇಲೆ ಬಿಳಿ ಅಥವಾ ಚಾಕ್&zwnj;ನಂತಿರುವ ಕಲೆಗಳು ಕಾಣಿಸುತ್ತಿದ್ದರೆ, ಅದಕ್ಕೆ ಹಾರ್ಡ್&zwnj; ವಾಟರ್&zwnj;ನಲ್ಲಿರುವ ಖನಿಜಾಂಶಗಳು ಕಾರಣವಾಗಿರಬಹುದು. ಇಂತಹ ಕಲೆಗಳನ್ನು ಕಡಿಮೆ ಮಾಡಲು ನೀರಿನಲ್ಲಿ ದುರ್ಬಲಗೊಳಿಸಿದ ವೈಟ್&zwnj; ವಿನೆಗರ್&zwnj; ಬಳಸಬಹುದು. ಆದರೆ ಬಳಸಿದ ಬಳಿಕ ಸಿಂಕ್&zwnj; ಅನ್ನು ಚೆನ್ನಾಗಿ ನೀರಿನಿಂದ ತೊಳೆಯಬೇಕು. ನಂತರ ಸಂಪೂರ್ಣವಾಗಿ ಒಣಗಿಸುವುದನ್ನು ಮರೆಯಬೇಡಿ.&lt;/p&gt;&lt;p&gt;&lt;strong&gt;3. ಹಠಮಾರಿ ಕಲೆಗಳಿಗೆ ಬೇಕಿಂಗ್&zwnj; ಸೋಡಾ&lt;/strong&gt;&lt;/p&gt;&lt;p&gt;ಸುಲಭವಾಗಿ ಹೋಗದ ಮಂಕಾದ ಕಲೆಗಳಿದ್ದರೆ ಸ್ವಲ್ಪ ಬೇಕಿಂಗ್&zwnj; ಸೋಡಾವನ್ನು ಒದ್ದೆಯಾದ ಸಿಂಕ್&zwnj; ಮೇಲ್ಮೈಯಲ್ಲಿ ಸಿಂಪಡಿಸಿ. ಬಳಿಕ ಮೃದುವಾಗಿ, ಸ್ಟೇನ್&zwnj;ಲೆಸ್ ಸ್ಟೀಲ್&zwnj;ನ ಗ್ರೇನ್&zwnj; ಇರುವ ದಿಕ್ಕಿನಲ್ಲೇ ಒರೆಸಿ. ಅತಿಯಾದ ಒತ್ತಡದಿಂದ ಸ್ಕ್ರಬ್&zwnj; ಮಾಡಬೇಡಿ. ಸ್ವಚ್ಛಗೊಳಿಸಿದ ಬಳಿಕ ಸಾಕಷ್ಟು ನೀರಿನಿಂದ ತೊಳೆಯಿರಿ.&lt;/p&gt;&lt;p&gt;&lt;strong&gt;4. ಸ್ಟೀಲ್&zwnj;ನ ಗ್ರೇನ್&zwnj; ಇರುವ ದಿಕ್ಕಿನಲ್ಲೇ ಒರೆಸಿ&lt;/strong&gt;&lt;/p&gt;&lt;p&gt;ಸ್ಟೇನ್&zwnj;ಲೆಸ್ ಸ್ಟೀಲ್&zwnj; ಸಿಂಕ್&zwnj; ಅನ್ನು ಗಮನಿಸಿದರೆ ಅದರ ಮೇಲ್ಮೈಯಲ್ಲಿ ಸಣ್ಣ ಗೆರೆಗಳು ಒಂದೇ ದಿಕ್ಕಿನಲ್ಲಿ ಕಾಣಿಸುತ್ತವೆ. ಇದನ್ನೇ ಸ್ಟೀಲ್&zwnj;ನ &lsquo;ಗ್ರೇನ್&zwnj;&rsquo; ಎಂದು ಕರೆಯಲಾಗುತ್ತದೆ. ಸಿಂಕ್&zwnj; ಒರೆಸುವಾಗ ಈ ಗೆರೆಗಳಿಗೆ ವಿರುದ್ಧವಾಗಿ ಪದೇಪದೇ ಒರೆಸುವುದರಿಂದ ಸ್ಕ್ರಾಚ್&zwnj;ಗಳು ಹೆಚ್ಚು ಎದ್ದು ಕಾಣಬಹುದು. ಹೀಗಾಗಿ ಯಾವಾಗಲೂ ಗ್ರೇನ್&zwnj; ಇರುವ ದಿಕ್ಕಿನಲ್ಲೇ ಮೃದುವಾಗಿ ಒರೆಸುವುದು ಉತ್ತಮ.&lt;/p&gt;&lt;p&gt;&lt;strong&gt;5. ನೀರು ಹಾಗೆಯೇ ಉಳಿಯದಂತೆ ಒಣಗಿಸಿ&lt;/strong&gt;&lt;/p&gt;&lt;p&gt;ಇದು ತುಂಬಾ ಸರಳವಾದ ಟಿಪ್&zwnj; ಎನಿಸಿದರೂ ಸಿಂಕ್&zwnj;ನ ಹೊಳಪಿಗೆ ಬಹಳ ಮುಖ್ಯ. ಸಿಂಕ್&zwnj; ತೊಳೆದ ಬಳಿಕ ಅದರ ಮೇಲೆ ನೀರು ಹಾಗೆಯೇ ಒಣಗಲು ಬಿಡಬೇಡಿ. ಸ್ವಚ್ಛ ಮೈಕ್ರೋಫೈಬರ್&zwnj; ಬಟ್ಟೆಯಿಂದ ನೀರನ್ನು ಸಂಪೂರ್ಣವಾಗಿ ಒರೆಸಿ. ವಿಶೇಷವಾಗಿ ಟ್ಯಾಪ್&zwnj; ಸುತ್ತಮುತ್ತ ಹಾಗೂ ಮೂಲೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಈ ಭಾಗಗಳಲ್ಲೇ ಖನಿಜಾಂಶಗಳ ಕಲೆಗಳು ಹೆಚ್ಚು ಕಾಣಿಸಿಕೊಳ್ಳಬಹುದು.&lt;/p&gt;&lt;p&gt;&lt;strong&gt;6. ಗಟ್ಟಿಯಾದ ಸ್ಕ್ರಬ್ಬರ್&zwnj; ಮತ್ತು ಕ್ಲೋರಿನ್&zwnj; ಕ್ಲೀನರ್&zwnj;ಗಳಿಗೆ ಗುಡ್&zwnj;ಬೈ!&lt;/strong&gt;&lt;/p&gt;&lt;p&gt;ಸ್ಟೀಲ್&zwnj; ವೂಲ್&zwnj;, ಒರಟಾದ ಸ್ಕ್ರಬ್ಬಿಂಗ್&zwnj; ಪ್ಯಾಡ್&zwnj;ಗಳು ಹಾಗೂ ಕ್ಲೋರಿನ್&zwnj; ಆಧಾರಿತ ಕ್ಲೀನರ್&zwnj;ಗಳನ್ನು ಸ್ಟೇನ್&zwnj;ಲೆಸ್ ಸ್ಟೀಲ್&zwnj; ಸಿಂಕ್&zwnj; ಮೇಲೆ ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಇವು ಮೇಲ್ಮೈಯಲ್ಲಿ ಸಣ್ಣ ಸ್ಕ್ರಾಚ್&zwnj;ಗಳನ್ನು ಉಂಟುಮಾಡಬಹುದು ಅಥವಾ ಸಿಂಕ್&zwnj;ನ ಹೊಳಪನ್ನು ಮತ್ತಷ್ಟು ಕಡಿಮೆ ಮಾಡಬಹುದು. ದಿನನಿತ್ಯದ ಸ್ವಚ್ಛತೆಗೆ ಮೃದುವಾದ ಬಟ್ಟೆ ಹಾಗೂ ಸೂಕ್ತವಾದ ಕ್ಲೀನರ್&zwnj;ಗಳನ್ನು ಬಳಸುವುದು ಉತ್ತಮ.&lt;/p&gt;&lt;p&gt;&lt;strong&gt;ಹೆಚ್ಚು ಸ್ಕ್ರಬ್&zwnj; ಮಾಡಿದರೆ ಹೆಚ್ಚು ಹೊಳಪು ಬರುತ್ತದೆ ಎಂಬುದು ತಪ್ಪು!&lt;/strong&gt;&lt;/p&gt;&lt;p&gt;ಸಿಂಕ್&zwnj; ಅನ್ನು ಹೆಚ್ಚು ಜೋರಾಗಿ ತೊಳೆಯುವುದರಿಂದ ಅದು ಇನ್ನಷ್ಟು ಹೊಳೆಯುತ್ತದೆ ಎಂಬುದು ಸಾಮಾನ್ಯ ತಪ್ಪು ಕಲ್ಪನೆ. ಸಿಂಕ್&zwnj; ಸಂಪೂರ್ಣವಾಗಿ ಸ್ವಚ್ಛವಾಗಿದ್ದರೂ ಅದರ ಮೇಲ್ಮೈಯಲ್ಲಿ ಸಾಬೂನಿನ ಪದರ, ಖನಿಜಾಂಶಗಳು ಉಳಿದಿದ್ದರೆ ಅದು ಮಂಕಾಗಿ ಕಾಣಬಹುದು. ಇನ್ನು ಕೆಲವೊಮ್ಮೆ ಸಮಸ್ಯೆ ಕೊಳಕು ಅಲ್ಲ, ಮೇಲ್ಮೈಯ ಹಾನಿಯಾಗಿರಬಹುದು. ಸಿಂಕ್&zwnj; ಮೇಲೆ ಕಾಣುವ ಮಂಕು ಶಾಶ್ವತವಾಗಿದ್ದು, ಕೈಯಿಂದ ಮುಟ್ಟಿದಾಗ ಸ್ಕ್ರಾಚ್&zwnj;ಗಳು ಸ್ಪಷ್ಟವಾಗಿ ಅನುಭವವಾಗುತ್ತಿದ್ದರೆ, ಅದು ಸ್ವಚ್ಛತೆಯ ಸಮಸ್ಯೆಗಿಂತ ಮೇಲ್ಮೈ ಹಾನಿಯ ಸೂಚನೆಯಾಗಿರಬಹುದು.&lt;/p&gt;&lt;h2&gt;&lt;strong&gt;ಪ್ರತಿದಿನದ ಸಣ್ಣ ಕಾಳಜಿ ಸಾಕು!&lt;/strong&gt;&lt;/h2&gt;&lt;p&gt;ಸಿಂಕ್&zwnj; ತುಂಬಾ ಕೊಳಕಾಗುವವರೆಗೆ ಕಾಯ್ದು ನಂತರ ಅರ್ಧ ಗಂಟೆ ಜೋರಾಗಿ ಸ್ಕ್ರಬ್&zwnj; ಮಾಡುವುದಕ್ಕಿಂತ, ಪ್ರತಿದಿನ ಕೆಲವೇ ನಿಮಿಷಗಳನ್ನು ಸ್ವಚ್ಛತೆಗೆ ಮೀಸಲಿಡುವುದು ಉತ್ತಮ. ಆಹಾರದ ಕಣಗಳನ್ನು ತಕ್ಷಣ ತೆಗೆದುಹಾಕಿ, ಸಾಬೂನಿನ ಅವಶೇಷಗಳನ್ನು ತೊಳೆಯಿರಿ ಮತ್ತು ಬಳಕೆಯ ನಂತರ ಸಿಂಕ್&zwnj; ಅನ್ನು ಒಣಗಿಸಿ. ಹೀಗಾಗಿ ಮುಂದಿನ ಬಾರಿ ನಿಮ್ಮ ಸ್ಟೇನ್&zwnj;ಲೆಸ್ ಸ್ಟೀಲ್&zwnj; ಸಿಂಕ್&zwnj; ಸ್ವಚ್ಛಗೊಳಿಸಿದ ನಂತರವೂ ಮಂಕಾಗಿ ಕಾಣಿಸಿದರೆ, ಮತ್ತಷ್ಟು ಗಟ್ಟಿಯಾದ ಕ್ಲೀನರ್&zwnj; ಅಥವಾ ಸ್ಕ್ರಬ್ಬರ್&zwnj; ಬಳಸುವ ಮುನ್ನ ಒಮ್ಮೆ ಯೋಚಿಸಿ. ಹೆಚ್ಚು ಒತ್ತಡವಲ್ಲ, ಸರಿಯಾದ ವಿಧಾನವೇ ಸಿಂಕ್&zwnj;ನ ಹೊಳಪಿನ ರಹಸ್ಯ!&lt;/p&gt;&lt;p&gt;&lt;strong&gt;ಗಮನಿಸಿ: &lt;/strong&gt;ವಿವಿಧ ಕ್ಲೀನಿಂಗ್&zwnj; ಉತ್ಪನ್ನಗಳನ್ನು ಬಳಸುವ ಮೊದಲು ಅವುಗಳ ಲೇಬಲ್&zwnj;ನಲ್ಲಿರುವ ಬಳಕೆ ಸೂಚನೆಗಳನ್ನು ಪರಿಶೀಲಿಸಿ. ವಿಭಿನ್ನ ಕ್ಲೀನಿಂಗ್&zwnj; ರಾಸಾಯನಿಕಗಳನ್ನು ಪರಸ್ಪರ ಮಿಶ್ರಣ ಮಾಡಬೇಡಿ.&lt;/p&gt;]]></content:encoded>
            <category><![CDATA[kitchen]]></category>
            <dc:creator>Govindaraj S</dc:creator>
            <atom:link href="https://kannada.asianetnews.com/kitchen/6-simple-ways-to-make-your-stainless-steel-sink-shine-again-gvd/articleshow-5yfkx4l"/>
        </item>
        <item>
            <title><![CDATA[Jr NTR health update: ಜ್ಯೂ.ಎನ್‌ಟಿಆರ್‌ಗೆ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ! ಕಿಮ್ಸ್ ಆಸ್ಪತ್ರೆಯಿಂದ ಹೆಲ್ತ್‌ ಅಪ್‌ಡೇಟ್ ರಿಲೀಸ್]]></title>
            <link>https://kannada.asianetnews.com/cine-world/jr-ntr-health-update-dragon-actor-thanks-fans-after-successful-surgery-says-i-m-doing-well-see-you-soon/articleshow-o0znanf</link>
            <guid isPermaLink="true">https://kannada.asianetnews.com/cine-world/jr-ntr-health-update-dragon-actor-thanks-fans-after-successful-surgery-says-i-m-doing-well-see-you-soon/articleshow-o0znanf</guid>
            <pubDate>Wed, 12 Aug 2026 22:14:58 +0530</pubDate>
            <description><![CDATA[ಭುಜದ ಗಾಯದಿಂದ ಬಳಲುತ್ತಿದ್ದ ಜೂನಿಯರ್ ಎನ್ ಟಿಆರ್ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. 'RRR' ಮತ್ತು 'ದೇವರ' ಚಿತ್ರಗಳ ಯಶಸ್ಸಿನ ನಂತರ, ಅವರು ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kxmzeeydmdbq95e9wbqgkc89,imgname-jr-ntr-1784189238221.jpg" type="image/jpeg" height="390" width="690"/>
            <content:encoded><![CDATA[&lt;p&gt;ಜೂನಿಯರ್ ಎನ್ ಟಿಆರ್(Jr NTR) ಅಭಿಮಾನಿಗಳಿಗೆ ಗುಡ್&zwnj;ನ್ಯೂಸ್. ಶಸ್ತ್ರಚಿಕಿತ್ಸೆಯ ನಂತರ ಅವರು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಜೂನಿಯರ್ ಎನ್ ಟಿಆರ್ ಭುಜದ ಗಾಯದಿಂದ ಬಳಲುತ್ತಿದ್ದ ಹಿನ್ನೆಲೆ ಬುಧವಾರ ಕಿಮ್ಸ್ ಆಸ್ಪತ್ರೆ(KIMS)ಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ.&lt;/p&gt;&lt;h2&gt;ಜೂನಿಯರ್ ಎನ್&zwnj;ಟಿಆರ್ ಆರೋಗ್ಯ ಹೇಗಿದೆ ಈಗ?&lt;/h2&gt;&lt;p&gt;ವೈದ್ಯಕೀಯ ತಪಾಸಣೆ ಬಳಿಕ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದ್ದು, ಸದ್ಯ ಜೂನಿಯರ್ ಎನ್&zwnj;ಟಿಆರ್ ಅವರ ಆರೋಗ್ಯ ಚೆನ್ನಾಗಿದೆ. ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ಹೊರಡಿಸಿದ ಅಧಿಕೃತ ಆರೋಗ್ಯ ಬುಲೆಟಿನ್&zwnj;ನಲ್ಲಿ, ವೈದ್ಯಕೀಯ ತಂಡವು ಕಾರ್ಯವಿಧಾನದ ನಂತರ ಎನ್&zwnj;ಟಿಆರ್ ಅವರ ಸ್ಥಿತಿಯ ಕುರಿತು ಅಪ್&zwnj;ಡೇಟ್ ಶೇರ್ ಮಾಡಿದೆ. 'ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಜೂನಿಯರ್ ಎನ್&zwnj;ಟಿಆರ್ ಚೆನ್ನಾಗಿದ್ದಾರೆ. ಅವರು ಈಗ ವೈದ್ಯಕೀಯ ನಿಗಾದಲ್ಲಿದ್ದಾರೆ. ಇನ್ನು 2 ರಿಂದ 3 ತಿಂಗಳೊಳಗೆ ಸಾಮಾನ್ಯ ಸ್ಥಿತಿಗೆ ಮರಳುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.&lt;/p&gt;&lt;h3&gt;ಸಂಚಲನ ಸೃಷ್ಟಿಸಿದ ಆರ್&zwnj;ಆರ್&zwnj;ಆರ್&lt;/h3&gt;&lt;p&gt;ಜೂನಿಯರ್ ಎನ್ ಟಿಆರ್ ಅವರಿಗೆ 43 ವರ್ಷ ವಯಸ್ಸಾಗಿದ್ದು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಯಶಸ್ವಿ ನಟರಾಗಿದ್ದಾರೆ. ಅವರ ಚಿತ್ರಗಳನ್ನು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇಷ್ಟಪಡುತ್ತಾರೆ. ಜೂನಿಯರ್ ಎನ್ ಟಿಆರ್ ಅವರ ಇತ್ತೀಚಿನ RRR ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಸೃಷ್ಟಿಸಿತು. ಅವರು ರಾಮ್ ಚರಣ್ ಜೊತೆ ನಟಿಸಿದರು ಮತ್ತು ಎಸ್ ಎಸ್ ರಾಜಮೌಳಿ ಅದನ್ನು ನಿರ್ದೇಶಿಸಿದರು. ಈ ಚಿತ್ರ ಬಿಡುಗಡೆಯಾದ ನಂತರ ದಾಖಲೆಯ ಗಳಿಕೆಯನ್ನು ಗಳಿಸಲು ಪ್ರಾರಂಭಿಸಿತು. ಇದು ವಿಶ್ವಾದ್ಯಂತ ₹13 ಬಿಲಿಯನ್ ಗಳಿಸಿದೆ. ಜೂನಿಯರ್ ಎನ್ ಟಿಆರ್ ಈ ಚಿತ್ರದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದರು ಮತ್ತು ತಮ್ಮ ನಟನೆಯಿಂದ ಅಭಿಮಾನಿಗಳನ್ನು ಮೆಚ್ಚಿಸಿದರು. ಈ ಚಿತ್ರದ 'ನಾಟು ನಾಟು' ಹಾಡು ಆಸ್ಕರ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿದೆ.&lt;/p&gt;&lt;p&gt;ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು ಜಾನ್ವಿ ಕಪೂರ್ ನಟಿಸಿದ 'ದೇವರ: ಭಾಗ 1' ಚಿತ್ರದಲ್ಲಿ. ಈ ಚಿತ್ರ ಕಮರ್ಶಿಯಲ್&zwnj; ಆಗಿ ಯಶಸ್ವಿಯಾಗಿದೆ. 2024 ರಲ್ಲಿ ಬಿಡುಗಡೆಯಾದ ಇದು ಕೊರಟಾಲ ಶಿವ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿತ್ತು.&lt;/p&gt;&lt;p&gt;NTR Health Bulletin released by KIMS hospital.&amp;nbsp;⁦@tarak9999⁩ pic.twitter.com/A1wgn2KFEv&lt;/p&gt;&lt;p&gt;&mdash; .... (@ynakg2) August 12, 2026&lt;/p&gt;&lt;p&gt;&lt;/p&gt;&lt;h3&gt;ಮುಂದಿನ ಚಿತ್ರ ಯಾವುದು?&lt;/h3&gt;&lt;p&gt;ಜೂನಿಯರ್ ಎನ್ ಟಿಆರ್ ಮುಂದಿನ ಚಿತ್ರ 'ಡ್ರ್ಯಾಗನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, 2027 ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಥ್ರಿಲ್ಲರ್ ಆಗಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ&lt;/p&gt;]]></content:encoded>
            <category><![CDATA[cine-world]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/cine-world/jr-ntr-health-update-dragon-actor-thanks-fans-after-successful-surgery-says-i-m-doing-well-see-you-soon/articleshow-o0znanf"/>
        </item>
        <item>
            <title><![CDATA[ಪ್ರಜ್ವಲ್ ರೇವಣ್ಣ ಜೈಲಲ್ಲಿ ಜಾಲಿ ಜಾಲಿ.. ಬಿಂದಾಸ್ ಆಗಿ ಫೋನ್‌ನಲ್ಲಿ ಮಾತಾಡೋ ವಿಡಿಯೋ ವೈರಲ್]]></title>
            <link>https://kannada.asianetnews.com/bengaluru-urban/prajwal-revanna-seen-chilling-in-jail-video-of-him-casually-talking-on-phone-goes-viral-gkn/articleshow-zz2kqo8</link>
            <guid isPermaLink="true">https://kannada.asianetnews.com/bengaluru-urban/prajwal-revanna-seen-chilling-in-jail-video-of-him-casually-talking-on-phone-goes-viral-gkn/articleshow-zz2kqo8</guid>
            <pubDate>Wed, 12 Aug 2026 22:13:44 +0530</pubDate>
            <description><![CDATA[ಪರಪ್ಪನ ಅಗ್ರಹಾರದ ಜೈಲಿನ ಬ್ಯಾರೆಕ್‌ನಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್‌ನಲ್ಲಿ ಧೈರ್ಯವಾಗಿ ಮಾತನಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸಿಸಿಬಿ ದಾಳಿಯ ಬೆನ್ನಲ್ಲೇ ಈ ಆಘಾತಕಾರಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಕರ್ತವ್ಯ ನಿರ್ಲಕ್ಷ್ಯ ತೋರಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvdmh036bvc8sqjahp3hdb8,imgname-prajwal-revanna-video-1786552927235.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮತ್ತೊಂದು ಮುಖ ಬಯಲಾಗಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಪ್ರಜ್ವಲ್ ರೇವಣ್ಣ ಮೊಬೈಲ್ ಫೋನ್ ಹಿಡಿದು ಬಿಂದಾಸ್ ಆಗಿ ಮಾತನಾಡುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜೈಲು ಆಡಳಿತ ಮಂಡಳಿಯ ನಿದ್ದೆಗೆಡಿಸಿದೆ.&lt;/p&gt;&lt;h2&gt;&lt;strong&gt;ಬ್ಯಾರಕ್&zwnj;ನಲ್ಲಿ ಪ್ರಜ್ವಲ್ 'ಫೋನ್' ಚಾಟಿಂಗ್!&lt;/strong&gt;&lt;/h2&gt;&lt;p&gt;ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೈಲಿನ ತಮ್ಮ ಬ್ಯಾರಕ್&zwnj;ನಲ್ಲಿ ಮೊಬೈಲ್ ಹಿಡಿದು ರಾಜಾರೋಷವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಯಾವುದೇ ಭಯವಿಲ್ಲದೆ, ಅತ್ಯಂತ ಬಿಂದಾಸ್ ಆಗಿ ಅವರು ಫೋನ್&zwnj;ನಲ್ಲಿ ಸಂಭಾಷಣೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಪ್ರಜ್ವಲ್ ಫೋನ್&zwnj;ನಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಮತ್ತೊಂದು ಮೊಬೈಲ್ ಮೂಲಕ ಗುಟ್ಟಾಗಿ ರೆಕಾರ್ಡ್ ಮಾಡಲಾಗಿದೆ. ಅಂದರೆ ಜೈಲಿನೊಳಗೆ ಒಂದಲ್ಲ, ಎರಡಲ್ಲ, ಹತ್ತಾರು ಮೊಬೈಲ್&zwnj;ಗಳು ರಾಜಾರೋಷವಾಗಿ ಓಡಾಡುತ್ತಿವೆಯೇ ಎಂಬ ಸಂಶಯ ಈಗ ದಟ್ಟವಾಗಿದೆ.&lt;/p&gt;&lt;h2&gt;&lt;strong&gt;ಸಿಸಿಬಿ ದಾಳಿ ವೇಳೆ ಬಯಲಾದ ಸತ್ಯ&lt;/strong&gt;&lt;/h2&gt;&lt;p&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರಿದ್ದ ಬ್ಯಾರಕ್&zwnj;ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದು ರಾಜ್ಯಾದ್ಯಂತ ಭಾರಿ ಚರ್ಚೆಗೆ ಮತ್ತು ಟೀಕೆಗೆ ಕಾರಣವಾಗಿತ್ತು. ಈಗ ಆ ಮೊಬೈಲ್ ಅನ್ನು ಪ್ರಜ್ವಲ್ ಹೇಗೆ ಬಳಸುತ್ತಿದ್ದರು ಎಂಬುದಕ್ಕೆ ಈ ವಿಡಿಯೋ ಪ್ರಬಲ ಸಾಕ್ಷಿಯಂತಿದೆ.&lt;/p&gt;&lt;p&gt;ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಭದ್ರತಾ ಲೋಪದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್ ಬ್ಯಾರಕ್&zwnj;ನಲ್ಲಿ ಪತ್ತೆಯಾದ ಮೊಬೈಲ್&zwnj;ನಲ್ಲಿ ಆಂಧ್ರ ಮೂಲದ ಏರ್&zwnj;ಟೆಲ್ ಸಿಮ್ ಬಳಸಲಾಗಿದೆ. ಜೈಲಿನ ಜಾಮರ್ ಇದ್ದರೂ ಏರ್&zwnj;ಟೆಲ್ 5G ನೆಟ್&zwnj;ವರ್ಕ್ ಹೇಗೆ ಸಿಗುತ್ತಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಜೈಲಿನ ಓರ್ವ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಮತ್ತು ಎಸ್ಪಿಗೆ ನೋಟಿಸ್ ನೀಡಲಾಗಿದೆ.&lt;/p&gt;&lt;p&gt;ಜೈಲಿನ ನಿಯಮಗಳನ್ನು ಗಾಳಿಗೆ ತೂರಿ, ಸಮವಸ್ತ್ರ ಕೂಡ ಧರಿಸದೆ ಪ್ರಜ್ವಲ್ ರೇವಣ್ಣ ನಡೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.&lt;/p&gt;&lt;p&gt;Rape accused &amp;amp; former MP Prajwal Revanna seen casually talking on the phone inside his prison cell while wearing personal clothes instead of the prison uniform. The exact date when video was taken is unknown. CCB had conducted raids &amp;amp; found a phone yesterday in his cell. pic.twitter.com/GtWIT7EVzS&lt;/p&gt;&lt;p&gt;&mdash; Deepak Bopanna (@dpkBopanna) August 12, 2026&lt;/p&gt;&lt;p&gt;&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/prajwal-revanna-seen-chilling-in-jail-video-of-him-casually-talking-on-phone-goes-viral-gkn/articleshow-zz2kqo8"/>
        </item>
        <item>
            <title><![CDATA['ಜೀವನ ನೋಡುವ ದೃಷ್ಟಿಕೋನವೇ ಬದಲಾಯ್ತು..' ಬೆಂಗಳೂರು ಬ್ಯೂಟಿ ಬಗ್ಗೆ ಯುವತಿಯ ಭಾವುಕ ಪೋಸ್ಟ್ ವೈರಲ್]]></title>
            <link>https://kannada.asianetnews.com/bengaluru-urban/gurgaon-to-bengaluru-relocation-woman-viral-instagram-post-san/articleshow-39e6vd2</link>
            <guid isPermaLink="true">https://kannada.asianetnews.com/bengaluru-urban/gurgaon-to-bengaluru-relocation-woman-viral-instagram-post-san/articleshow-39e6vd2</guid>
            <pubDate>Wed, 12 Aug 2026 22:08:41 +0530</pubDate>
            <description><![CDATA[ಕಂಟೆಂಟ್ ಕ್ರಿಯೇಟರ್ ಸುರುಚಿ, ಗುರುಗ್ರಾಮ್‌ನಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಾಗ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಒಂಟಿತನ ಮತ್ತು ಮನೆ ನೆನಪಿನಿಂದ ಬಳಲಿದ ಅವರು, ನಂತರ ಬೆಂಗಳೂರಿನ ಫಿಲ್ಟರ್ ಕಾಫಿ, ಹವಾಮಾನ ಮತ್ತು ಸ್ವತಂತ್ರ ಬದುಕನ್ನು ಪ್ರೀತಿಸಲು ಆರಂಭಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzvdassxc36g7n24902cp41k,imgname-women-on-bengaluru-city-1786552608573.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12):&lt;/strong&gt; 'ನಾನು ಕೇವಲ ನಗರವನ್ನು ಮಾತ್ರ ಬದಲಾಯಿಸುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ, ಕಳೆದ ಐದು ವರ್ಷಗಳಿಂದ ನಾನು ಜೀವಿಸಿದ್ದ ನನ್ನ ಜೀವನದ ಸಂಪೂರ್ಣ ಅಧ್ಯಾಯವನ್ನೇ ಹಿಂದಿಟ್ಟು ಬರುತ್ತಿದ್ದೇನೆ ಎಂಬ ಅರಿವು ನನಗಿರಲಿಲ್ಲ..' ಗುರುಗ್ರಾಮ್&zwnj;ನ ಗಾಜಿನ ಗೋಪುರಗಳ ಕಚೇರಿಯನ್ನು ತೊರೆದು, ಬೆಂಗಳೂರಿನ ಉದ್ಯಾನನಗರಿಗೆ ಹೆಜ್ಜೆ ಇಟ್ಟ 10 ತಿಂಗಳ ನಂತರ ಕಂಟೆಂಟ್ ಕ್ರಿಯೇಟರ್ ಸುರುಚಿ (Suruchi) ಎಂಬ ಯುವತಿ ಹಂಚಿಕೊಂಡಿರುವ ಇನ್&zwnj;ಸ್ಟಾಗ್ರಾಮ್&zwnj; ಪೋಸ್ಟ್&zwnj;ನ ವಿಚಾರವಿದು..&lt;/p&gt;&lt;p&gt;ಆಗಸ್ಟ್ 9ರಂದು ಅವರು ಹಂಚಿಕೊಂಡಿರುವ ಈ ವೈರಲ್ ಪೋಸ್ಟ್, ವೃತ್ತಿಜೀವನಕ್ಕಾಗಿ ಸ್ವಂತ ಊರು ತೊರೆದು ಹೊಸ ನಗರಗಳಿಗೆ ಗುಳೆ ಹೋಗುವ ಸಾವಿರಾರು ಯುವಜನರ, ವಿಶೇಷವಾಗಿ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಯುವತಿಯರ ಅಂತರಂಗದ ಭಾವನೆಗಳಿಗೆ ಕನ್ನಡಿ ಹಿಡಿದಿದೆ.&lt;/p&gt;&lt;h2&gt;&lt;strong&gt;ದೂರವಾದ ಮನೆ, ಬಿಡುವಿಲ್ಲದ ಕೆಲಸ ಮತ್ತು ವಾರಾಂತ್ಯದ ಒಂಟಿತನ&lt;/strong&gt;&lt;/h2&gt;&lt;p&gt;ಉದ್ಯೋಗಕ್ಕಾಗಿ ಹೊಸ ನಗರಕ್ಕೆ ಬಂದಾಗ ದೂರದ ಊರಿನಲ್ಲಿರುವ ಸ್ವಂತ ಮನೆ ತಲುಪುವುದು ಅಷ್ಟು ಸುಲಭವಲ್ಲ. &quot;ಮನೆಯ ನೆನಪು (Homesickness) ಕಾಡುವುದು ತೀರಾ ಸಹಜ. ಗುರುಗ್ರಾಮ್&zwnj;ನಲ್ಲಿದ್ದಾಗ ರಾತ್ರಿ ಓವರ್&zwnj;ನೈಟ್ ಬಸ್ ಬುಕ್ ಮಾಡಿ ಸುಲಭವಾಗಿ ಮನೆಗೆ ಹೋಗುತ್ತಿದ್ದೆ. ಆದರೆ ಈಗ ಬೆಂಗಳೂರಿನಿಂದ ಮನೆಗೆ ಹೋಗಬೇಕೆಂದರೆ ಸಾಕಷ್ಟು ಪ್ಲಾನಿಂಗ್, ರಜೆಗಳ ಹೊಂದಾಣಿಕೆ ಮತ್ತು ಮುಂಚಿತವಾಗಿಯೇ ಫ್ಲೈಟ್ ಟಿಕೆಟ್ ಬುಕ್ ಮಾಡುವುದು ಅನಿವಾರ್ಯವಾಗಿದೆ&quot; ಎಂದು ಸುರುಚಿ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಕೆಲಸದ ಬದಲಾವಣೆಯೇ ನಗರ ತೊರೆಯಲು ಮುಖ್ಯ ಕಾರಣವಾಗಿರುವುದರಿಂದ, ದೈನಂದಿನ ಜೀವನ ಸಂಪೂರ್ಣವಾಗಿ ಕೆಲಸಮಯವಾಗುತ್ತದೆ. &quot;ವಾರಾಂತ್ಯಗಳಿಗಿಂತ ವಾರದ ಕೆಲಸದ ದಿನಗಳನ್ನೇ ಎದುರು ನೋಡುವ ಮಟ್ಟಿಗೆ ದಿನವಿಡೀ ಕೆಲಸದಲ್ಲೇ ಮುಳುಗಿಹೋಗುತ್ತೇವೆಯೇ ಎಂಬ ಅನುಮಾನ ಕಾಡುತ್ತದೆ. ಗುರುಗ್ರಾಮ್&zwnj;ನಲ್ಲಿದ್ದಾಗ ವಾರಾಂತ್ಯಗಳಲ್ಲಿ ಸದಾ ಸ್ನೇಹಿತರು, ಜನರ ನಡುವೆ ಇರುತ್ತಿದ್ದೆ, ವೀಕೆಂಡ್ ಲೈವ್ಲಿಯಾಗಿರುತ್ತಿತ್ತು. ಆದರೆ ಬೆಂಗಳೂರಿನಲ್ಲಿ ಈಗ ಆಲೋಚಿಸಲು ಸಾಕಷ್ಟು ಸಮಯ ಸಿಗುತ್ತದೆ, ಕೆಲವೊಮ್ಮೆ ಇದು ಅತಿಯಾದ ಮೌನ ಮತ್ತು ಒಂಟಿತನ ನೀಡುತ್ತದೆ&quot; ಎಂದಿದ್ದಾರೆ.&lt;/p&gt;&lt;h2&gt;&lt;strong&gt;ಫಿಲ್ಟರ್ ಕಾಫಿ, ದೋಸೆ ಮತ್ತು ಸಿಕ್ಕ ಸ್ವತಂತ್ರ ಬದುಕು!&lt;/strong&gt;&lt;/h2&gt;&lt;p&gt;ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಹೊಸ ಬದುಕು ಸುಂದರವೆನಿಸಲು ಪ್ರಾರಂಭವಾಗಿದೆ. &quot;ನಮಗಾಗಿಯೇ ಒಂದು ಜಾಗವನ್ನು ಸೃಷ್ಟಿಸಿಕೊಳ್ಳುವುದು, ನಮಗೆ ಇಷ್ಟ ಬಂದಂತೆ ಅದನ್ನು ಅಲಂಕರಿಸಿಕೊಂಡು 'ಸ್ವಂತ ಮನೆ'ಯಂತೆ ಮಾಡಿಕೊಳ್ಳುವ ಆ ಸ್ವಾತಂತ್ರ್ಯ ಮತ್ತು ಖುಷಿಯೇ ಬೇರೆ&quot; ಎಂದು ಸುರುಚಿ ಬರೆದುಕೊಂಡಿದ್ದಾರೆ.&lt;/p&gt;&lt;p&gt;ಬೆಂಗಳೂರಿನ ಕ್ರೇಜ್&zwnj;ಗಳಾದ 'ಮಸಾಲ ದೋಸೆ ಮತ್ತು ಫಿಲ್ಟರ್ ಕಾಫಿ', ಹಾಗೂ ಇಲ್ಲಿನ ಪ್ರಸಿದ್ಧ 'ವೆದರ್' ಅವರನ್ನು ಸಂಪೂರ್ಣವಾಗಿ ಮೋಡಿ ಮಾಡಿದೆ. &quot;ಸಂಜೆ ಸೂರ್ಯಾಸ್ತದ ಸುಂದರ ದೃಶ್ಯವನ್ನು ನೋಡುತ್ತಾ ಫಿಲ್ಟರ್ ಕಾಫಿ ಹೀರಿದಾಗಲೇ 'ಬೆಂಗಳೂರು ಮಾಸಮ್ ಸೂಪರ್ ಯಾರ್' (ಹವಾಮಾನ ಅದ್ಭುತವಾಗಿದೆ) ಎಂದು ಪ್ರತಿಯೊಬ್ಬರೂ ಏಕೆ ಹೇಳುತ್ತಾರೆ ಎಂಬ ಸತ್ಯದ ಅರಿವಾಯಿತು&quot; ಎಂದು ಬರೆದುಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;ಹಳೆಯ ನೆನಪು ಮತ್ತು ಪ್ರಸ್ತುತ ಜೀವನದ ನಡುವಿನ ಸಮತೋಲನ&lt;/strong&gt;&lt;/h2&gt;&lt;p&gt;ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಈ ಪ್ರಯಾಣದಲ್ಲಿ, ಹೊಸ ಜೀವನಕ್ಕೆ ಕಾಲಿಡುವುದೆಂದರೆ ಹಳೆಯ ನೆನಪುಗಳನ್ನು ಮರೆಯುವುದು ಎಂದರ್ಥವಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. &quot;ಹಿಂದಿನ ಜೀವನ, ಅಲ್ಲಿದ್ದ ಜಾಗಗಳು ಹಾಗೂ ಜನರನ್ನು ನಾನು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಅದೇ ಸಮಯದಲ್ಲಿ, ಬೆಂಗಳೂರಿನಲ್ಲಿ ನಾನು ಕಟ್ಟಿಕೊಂಡಿರುವ ಈ ಹೊಸ ಬದುಕನ್ನೂ ಪ್ರೀತಿಸುತ್ತಿದ್ದೇನೆ. ಕೊನೆಗೆ, ಈ ಎರಡೂ ಭಾವನೆಗಳು ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯ ಎಂಬ ಸತ್ಯ ನನಗೀಗ ಅರ್ಥವಾಗಿದೆ&quot; ಎಂದು ಅವರು ತಮ್ಮ ಪೋಸ್ಟ್ ಮುಗಿಸಿದ್ದಾರೆ.&lt;/p&gt;View this post on Instagram&lt;p&gt;A post shared by Suruchi  (@weekendescapeswithher)&lt;/p&gt;&lt;p&gt;&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/gurgaon-to-bengaluru-relocation-woman-viral-instagram-post-san/articleshow-39e6vd2"/>
        </item>
        <item>
            <title><![CDATA[‘ಇದಯಂ ಮುರಳಿ’ ಸಿನಿಮಾ ಕಲಿಸುವ ಪ್ರೀತಿಯ 6 ಪಾಠಗಳು: ಹೇಳಬೇಕಾದ ಮಾತನ್ನು ಸಮಯವಿದ್ದಾಗಲೇ ಹೇಳಿ!]]></title>
            <link>https://kannada.asianetnews.com/entertainment/6-things-idhayam-murali-movie-teaches-us-about-love-timing-and-regret-gvd/articleshow-ycs8670</link>
            <guid isPermaLink="true">https://kannada.asianetnews.com/entertainment/6-things-idhayam-murali-movie-teaches-us-about-love-timing-and-regret-gvd/articleshow-ycs8670</guid>
            <pubDate>Wed, 12 Aug 2026 21:48:43 +0530</pubDate>
            <description><![CDATA[‘ಇದಯಂ ಮುರಳಿ’ ನೀಡುವ ಅತಿದೊಡ್ಡ ಪಾಠಗಳಲ್ಲಿ ಇದೂ ಒಂದು. ಇದಯಾ ತನ್ನ ಜೀವನದಲ್ಲಿ ಹಲವು ಬಾರಿ ಯಾರನ್ನೋ ಇಷ್ಟಪಡುತ್ತಾನೆ. ಆದರೆ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಸಮಯ ಬಂದಾಗ ಮಾತ್ರ..]]></description>
            <media:content url="https://static.asianetnews.com/images/w-1280,h-720,format-jpg,imgid-01kzvb0e53xdj44zfsy1bb94de,imgname-bvjv-1786550171811.png" type="image/jpeg" height="390" width="690"/>
            <content:encoded><![CDATA[&lt;p&gt;ಕೆಲವು ಪ್ರೇಮಕಥೆಗಳು ನಮ್ಮನ್ನು ಸರಿಯಾದ ವ್ಯಕ್ತಿಯ ಬಳಿಗೆ ಕರೆದೊಯ್ಯುತ್ತವೆ. ಆದರೆ ಇನ್ನೂ ಕೆಲವು ಕಥೆಗಳು ತಪ್ಪಿಹೋದ ಅವಕಾಶಗಳು, ಹೇಳಲಾಗದೆ ಉಳಿದ ಮಾತುಗಳು ಮತ್ತು &lsquo;ಅಂದು ಹೇಳಿದ್ದರೆ...&rsquo; ಎಂಬ ಪಶ್ಚಾತ್ತಾಪದ ಸುತ್ತ ಸಾಗುತ್ತವೆ. &lsquo;ಇದಯಂ ಮುರಳಿ&rsquo; ಕೂಡ ಇದೇ ಸಾಲಿಗೆ ಸೇರುವ ಸಿನಿಮಾ. ಆಕಾಶ್ ಬಾಸ್ಕರನ್ ನಿರ್ದೇಶನದ ಈ ತಮಿಳು ರೊಮ್ಯಾಂಟಿಕ್ ಡ್ರಾಮಾದಲ್ಲಿ ಅಥರ್ವ ಮುರಳಿ, ಕಾಯಡು ಲೋಹರ್ ಮತ್ತು ಪ್ರೀತಿ ಮುಖುಂದನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ್ಟಿ ಸುಬ್ರಮಣಿಯಂ, ಎಸ್. ಥಮನ್, ನಿಹಾರಿಕಾ ಎನ್&zwnj;ಎಂ, ರಕ್ಷನ್, ಏಂಜಲೀನ್ ಬಿ ಹಾಗೂ ಜೋನಿತಾ ಗಾಂಧಿ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.&lt;/p&gt;&lt;p&gt;ಫಹಾದ್ ಫಾಸಿಲ್ ಮತ್ತು ಮಾಳವಿಕಾ ಮೋಹನನ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 10, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ &lsquo;ಇದಯಂ ಮುರಳಿ&rsquo;, ಇದೀಗ ಆಗಸ್ಟ್ 7ರಿಂದ ನೆಟ್&zwnj;ಫ್ಲಿಕ್ಸ್&zwnj;ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಾಲ್ಯದಿಂದ ಆರಂಭವಾಗುವ ಇದಯಾ (ಅಥರ್ವ ಮುರಳಿ) ಅವರ ಪ್ರೇಮಕಥೆ, ಜೀವನದ ವಿವಿಧ ಹಂತಗಳಲ್ಲಿ ಪ್ರೀತಿ ಹೇಗೆ ಎದುರಾಗುತ್ತದೆ ಮತ್ತು ಅದನ್ನು ವ್ಯಕ್ತಪಡಿಸಲು ಅವರು ಪದೇಪದೇ ಹೇಗೆ ಹಿಂದೆ ಸರಿಯುತ್ತಾರೆ ಎಂಬುದನ್ನು ತೋರಿಸುತ್ತದೆ. ಚಿತ್ರದ ಕಥೆ ಹಾಗೂ ಪಾತ್ರಗಳ ಮೂಲಕ ಪ್ರೀತಿ, ಸಂಬಂಧ ಮತ್ತು ಬದುಕಿನ ಬಗ್ಗೆ ಸಿಗುವ ಆರು ಪ್ರಮುಖ ಪಾಠಗಳು ಇಲ್ಲಿವೆ.&lt;/p&gt;&lt;p&gt;&lt;strong&gt;1. ಅವಕಾಶ ಸಿಕ್ಕಾಗ ಮನಸ್ಸಿನ ಮಾತನ್ನು ಹೇಳಿಬಿಡಿ&lt;/strong&gt;&lt;/p&gt;&lt;p&gt;&lsquo;ಇದಯಂ ಮುರಳಿ&rsquo; ನೀಡುವ ಅತಿದೊಡ್ಡ ಪಾಠಗಳಲ್ಲಿ ಇದೂ ಒಂದು. ಇದಯಾ ತನ್ನ ಜೀವನದಲ್ಲಿ ಹಲವು ಬಾರಿ ಯಾರನ್ನೋ ಇಷ್ಟಪಡುತ್ತಾನೆ. ಆದರೆ ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಸಮಯ ಬಂದಾಗ ಮಾತ್ರ ಹಿಂದೆ ಸರಿಯುತ್ತಾನೆ. ಅಮುದಾ ಜೊತೆಗಿನ ಸಂಬಂಧ ಇದಕ್ಕೆ ಅತ್ಯುತ್ತಮ ಉದಾಹರಣೆ. ವಿದ್ಯಾಭ್ಯಾಸ ಮುಗಿಸಿ ಅಮುದಾ ಹೊರಡುವಾಗ ಇದಯಾ ಆಕೆಯೊಂದಿಗೆ ರೈಲ್ವೆ ನಿಲ್ದಾಣದವರೆಗೂ ಹೋಗುತ್ತಾನೆ. ಆದರೆ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ಮಾತ್ರ ಸಾಧ್ಯವಾಗುವುದಿಲ್ಲ. ವರ್ಷಗಳ ಬಳಿಕ ಅಮುದಾಗೆ ಕೂಡ ತನ್ನ ಮೇಲೆ ಪ್ರೀತಿ ಇತ್ತು ಎಂಬ ಸತ್ಯ ಆತನಿಗೆ ತಿಳಿಯುತ್ತದೆ. ಪ್ರೀತಿಯಲ್ಲಿ ಒಪ್ಪಿಗೆ ಸಿಗುತ್ತದೆಯೇ ಅಥವಾ ನಿರಾಕರಣೆ ಎದುರಾಗುತ್ತದೆಯೇ ಎನ್ನುವುದಕ್ಕಿಂತ, ನಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಂಡೆವು ಎಂಬ ನೆಮ್ಮದಿ ಮುಖ್ಯ. ಇಲ್ಲದಿದ್ದರೆ ಜೀವನಪೂರ್ತಿ &lsquo;ಅಂದು ಹೇಳಿದ್ದರೆ ಏನಾಗುತ್ತಿತ್ತು?&rsquo; ಎಂಬ ಪ್ರಶ್ನೆ ಕಾಡಬಹುದು.&lt;/p&gt;&lt;p&gt;&lt;strong&gt;2. ಪ್ರೀತಿಯಲ್ಲಿ ಟೈಮಿಂಗ್&zwnj; ಕೂಡ ತುಂಬಾ ಮುಖ್ಯ&lt;/strong&gt;&lt;/p&gt;&lt;p&gt;ಇದಯಾ ತನ್ನ ಜೀವನದ ಬೇರೆ ಬೇರೆ ಹಂತಗಳಲ್ಲಿ ಸರಿಯಾದ ವ್ಯಕ್ತಿಗಳನ್ನು ಭೇಟಿಯಾಗುತ್ತಾನೆ. ಆದರೆ ಭಾವನೆಗಳನ್ನು ವ್ಯಕ್ತಪಡಿಸುವ ಹೊತ್ತಿಗೆ ಕಾಲ ಮೀರಿರುತ್ತದೆ. ವರ್ಷಗಳ ಬಳಿಕ ಅಮುದಾಳನ್ನು ಮತ್ತೆ ಭೇಟಿಯಾದಾಗ, ಆಕೆ ತನ್ನಲ್ಲೂ ಇದಯಾ ಬಗ್ಗೆ ಪ್ರೀತಿ ಇತ್ತು ಎಂದು ಹೇಳುತ್ತಾಳೆ. ಆದರೆ ಆಗ ಆಕೆ ಮದುವೆಯಾಗಿ ಮಕ್ಕಳೊಂದಿಗೆ ಸಂತೋಷವಾಗಿರುತ್ತಾಳೆ. ಅದೇ ರೀತಿ ವರ್ಷಗಳ ನಂತರ ಸಮಂತಾಳನ್ನು ಭೇಟಿಯಾದಾಗ, ಇದಯಾ ಜೀವನ ಕೂಡ ಮತ್ತೊಂದು ದಿಕ್ಕಿಗೆ ತಿರುಗಿರುತ್ತದೆ. ಹೀಗಾಗಿ ಪ್ರೀತಿ ಎಂದರೆ ಕೇವಲ ಸರಿಯಾದ ವ್ಯಕ್ತಿಯನ್ನು ಭೇಟಿಯಾಗುವುದು ಮಾತ್ರವಲ್ಲ; ಸರಿಯಾದ ಸಮಯದಲ್ಲಿ ಆ ವ್ಯಕ್ತಿಯನ್ನು ಭೇಟಿಯಾಗುವುದು ಮತ್ತು ಆ ಕ್ಷಣವನ್ನು ಧೈರ್ಯವಾಗಿ ಬಳಸಿಕೊಳ್ಳುವುದೂ ಹೌದು.&lt;/p&gt;&lt;p&gt;&lt;strong&gt;3. ಭಯ ನಿಮ್ಮ ನಿರ್ಧಾರಗಳನ್ನು ನಿಯಂತ್ರಿಸದಿರಲಿ&lt;/strong&gt;&lt;/p&gt;&lt;p&gt;ಇದಯಾ ತನ್ನ ಭಾವನೆಗಳನ್ನು ಹೇಳಿದರೆ ಏನಾಗಬಹುದು ಎಂಬ ಭಯದಲ್ಲೇ ಜೀವನದ ಬಹುಭಾಗವನ್ನು ಕಳೆಯುತ್ತಾನೆ. ನೋವು ಎದುರಾಗಬಾರದು ಎಂಬ ಕಾರಣಕ್ಕೆ ಆತ ಹೆಜ್ಜೆ ಇಡಲು ಹಿಂಜರಿಯುತ್ತಾನೆ. ಆದರೆ ಕೊನೆಗೆ ಆ ಭಯವೇ ಮತ್ತಷ್ಟು ಪಶ್ಚಾತ್ತಾಪಕ್ಕೆ ಕಾರಣವಾಗುತ್ತದೆ. ಪ್ರೀತಿಯಲ್ಲಿ ರಿಸ್ಕ್ ಇದ್ದೇ ಇರುತ್ತದೆ. ನೀವು ಬಯಸಿದ ಉತ್ತರವೇ ಸಿಗುತ್ತದೆ ಎಂಬ ಖಾತರಿ ಇರುವುದಿಲ್ಲ. ಆದರೆ ಪ್ರಯತ್ನಿಸದೇ ಉಳಿಯಲು ಭಯವೇ ಕಾರಣವಾಗಬಾರದು.&lt;/p&gt;&lt;p&gt;&lt;strong&gt;4. ಪ್ರೀತಿಸುವ ವ್ಯಕ್ತಿಯೊಂದಿಗೆ ಪ್ರಾಮಾಣಿಕವಾಗಿರಿ&lt;/strong&gt;&lt;/p&gt;&lt;p&gt;ಇದಯಾ ಮತ್ತೆ ಸಮಂತಾಳನ್ನು ಭೇಟಿಯಾದಾಗ ಅವರ ನಡುವೆ ಹೊಸ ಅವಕಾಶವೊಂದು ಮೂಡುತ್ತದೆ. ಆದರೆ ಆತ ಈಗಾಗಲೇ ಎಂಗೇಜ್ ಆಗಿರುವ ವಿಚಾರವನ್ನು ಸಮಂತಾಳಿಂದ ಮುಚ್ಚಿಡುತ್ತಾನೆ. ನಂತರ ಸತ್ಯ ತಿಳಿದಾಗ ಆಕೆ ನೋವು ಮತ್ತು ಕೋಪಕ್ಕೆ ಒಳಗಾಗುತ್ತಾಳೆ. ಇದಯಾಗೆ ಕೆಟ್ಟ ಉದ್ದೇಶವಿರಲಿಲ್ಲವಾದರೂ, ಇಷ್ಟು ಪ್ರಮುಖ ವಿಚಾರವನ್ನು ಮುಚ್ಚಿಟ್ಟಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಪ್ರೀತಿಯಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ. ವಿಶೇಷವಾಗಿ ಇನ್ನೊಬ್ಬ ವ್ಯಕ್ತಿಯ ಭಾವನೆಗಳು ಒಳಗೊಂಡಿರುವಾಗ ಯಾವುದೇ ಸತ್ಯವನ್ನು ಮುಚ್ಚಿಡುವುದು ಸಂಬಂಧಕ್ಕೆ ದೊಡ್ಡ ಸಮಸ್ಯೆಯಾಗಬಹುದು.&lt;/p&gt;&lt;p&gt;&lt;strong&gt;5. ನಿಮ್ಮ ಸಂತೋಷಕ್ಕೂ ಪ್ರೀತಿಯಲ್ಲಿ ಜಾಗ ಇರಬೇಕು&lt;/strong&gt;&lt;/p&gt;&lt;p&gt;ಚಿತ್ರದ ಕೊನೆಯ ಹಂತದಲ್ಲಿ ಇದಯಾ ಅಧಿತಿಯನ್ನು ಮದುವೆಯಾಗಲು ಸಿದ್ಧನಾಗುತ್ತಾನೆ. ಆದರೆ ಆತನ ಮನಸ್ಸು ಮಾತ್ರ ಮತ್ತೊಬ್ಬರ ಕಡೆ ಇರುತ್ತದೆ. ಕೊನೆಗೆ ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿಯೇ ಎಂಬ ಪ್ರಶ್ನೆಯನ್ನು ಆತನೇ ಕೇಳಿಕೊಳ್ಳಲು ಆರಂಭಿಸುತ್ತಾನೆ. ಪ್ರೀತಿ ಎನ್ನುವುದು ಒತ್ತಡ, ಅಪರಾಧಿ ಭಾವನೆ ಅಥವಾ ಬೇರೆಯವರನ್ನು ನಿರಾಶೆಗೊಳಿಸಬಾರದು ಎಂಬ ಭಯದಿಂದ ಆಗಬಾರದು. ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಬದುಕಿನ ಅತಿ ದೊಡ್ಡ ನಿರ್ಧಾರಗಳಲ್ಲಿ ಒಂದು. ಇಬ್ಬರೂ ಪರಸ್ಪರ ಮನಸ್ಸಿನಿಂದ ಆ ಸಂಬಂಧದಲ್ಲಿ ಇರಲು ಬಯಸಿದಾಗ ಮಾತ್ರ ಆ ಸಂಬಂಧಕ್ಕೆ ನಿಜವಾದ ಅರ್ಥ ಬರುತ್ತದೆ.&lt;/p&gt;&lt;p&gt;&lt;strong&gt;6. ಪ್ರೀತಿಗೆ ಸಮಯಕ್ಕಿಂತ ಸ್ಪಷ್ಟತೆ ಮುಖ್ಯ&lt;/strong&gt;&lt;/p&gt;&lt;p&gt;ಲಾಡೋ ಮತ್ತು ಸಚಿನ್&zwnj; ಅವರ ಸಂಬಂಧ ಮತ್ತೊಂದು ಪ್ರಮುಖ ವಿಚಾರವನ್ನು ಹೇಳುತ್ತದೆ. ವರ್ಷಗಳ ಕಾಲ ಒಟ್ಟಿಗೆ ಇದ್ದ ಮಾತ್ರಕ್ಕೆ ಆ ಸಂಬಂಧ ಮದುವೆಯ ಹಂತಕ್ಕೆ ಹೋಗುತ್ತದೆ ಎಂದೇನಿಲ್ಲ. ಸಚಿನ್&zwnj; ಕೊನೆಗೆ ಮತ್ತೊಬ್ಬರನ್ನು ಮದುವೆಯಾಗಲು ನಿರ್ಧರಿಸಿದಾಗ ಲಾಡೋಗೆ ತೀವ್ರ ನೋವಾಗುತ್ತದೆ. ಇಷ್ಟು ವರ್ಷಗಳ ಸಂಬಂಧಕ್ಕೆ ಬೇರೆ ಅರ್ಥವಿದೆ ಎಂದು ಆಕೆ ಭಾವಿಸಿದ್ದಳು. ಆದರೆ ಇಬ್ಬರ ಭವಿಷ್ಯದ ನಿರೀಕ್ಷೆಗಳು ಒಂದೇ ಆಗಿರಲಿಲ್ಲ. ಹೀಗಾಗಿ ಸಂಬಂಧದಲ್ಲಿ ನಾವು ಏನು ಬಯಸುತ್ತೇವೆ, ಮುಂದಿನ ಹೆಜ್ಜೆ ಏನು ಎಂಬುದರ ಬಗ್ಗೆ ಸ್ಪಷ್ಟವಾಗಿ ಮಾತನಾಡುವುದು ಬಹಳ ಮುಖ್ಯ. ಎಷ್ಟು ವರ್ಷ ಒಟ್ಟಿಗೆ ಇದ್ದೆವು ಎನ್ನುವುದಕ್ಕಿಂತ, ಇಬ್ಬರೂ ಒಂದೇ ಭವಿಷ್ಯವನ್ನು ಬಯಸುತ್ತಿದ್ದಾರೆಯೇ ಎಂಬುದೇ ಮುಖ್ಯ. ಪ್ರೀತಿಗೆ ಸಂವಹನ, ಬದ್ಧತೆ ಮತ್ತು ಸ್ಪಷ್ಟತೆ ಅಗತ್ಯ.&lt;/p&gt;&lt;h2&gt;&lt;strong&gt;ಕೊನೆಗೆ ಹೇಳಬೇಕಾದ ಮಾತು ಒಂದೇ...&lt;/strong&gt;&lt;/h2&gt;&lt;p&gt;&lsquo;ಇದಯಂ ಮುರಳಿ&rsquo;ಯ ಹೃದಯದಲ್ಲಿರುವುದು, ತನ್ನ ಮನಸ್ಸಿನಲ್ಲಿರುವ ಮೂರು ಸರಳ ಪದಗಳನ್ನು ಹೇಳಲು ವರ್ಷಗಳ ಕಾಲ ಹಿಂಜರಿಯುವ ಒಬ್ಬ ವ್ಯಕ್ತಿಯ ಕಥೆ. ಬಾಲ್ಯದ ಕ್ರಶ್&zwnj;ನಿಂದ ಆರಂಭವಾಗುವ ಇದಯಾ ಅವರ ಪಯಣ, ಭಾವನೆಗಳನ್ನು ಹೇಳದೆ ಉಳಿಸಿದಾಗ ಪ್ರೀತಿ ಹೇಗೆ ನಿಧಾನವಾಗಿ ಪಶ್ಚಾತ್ತಾಪವಾಗಿ ಬದಲಾಗಬಹುದು ಎಂಬುದನ್ನು ತೋರಿಸುತ್ತದೆ. ಸಿನಿಮಾ ಪ್ರೀತಿಯನ್ನು ಹೇಳಿಕೊಂಡರೆ ಖಂಡಿತ ಸುಖಾಂತ್ಯ ಸಿಗುತ್ತದೆ ಎಂದು ಭರವಸೆ ನೀಡುವುದಿಲ್ಲ. ಆದರೆ ಒಂದು ಮುಖ್ಯ ಸಂದೇಶವನ್ನು ಮಾತ್ರ ನೀಡುತ್ತದೆ. ಇನ್ನು ನೀವು ನಿಜವಾಗಿಯೂ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಹೇಳಲು ಇನ್ನೂ ಅವಕಾಶವಿರುವಾಗಲೇ ನಿಮ್ಮ ಮನಸ್ಸಿನ ಮಾತನ್ನು ಹೇಳಿಬಿಡಿ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/6-things-idhayam-murali-movie-teaches-us-about-love-timing-and-regret-gvd/articleshow-ycs8670"/>
        </item>
        <item>
            <title><![CDATA[Viral Video: ಆರ್ಡರ್‌ಗಳ ಸುರಿಮಳೆಗೆ ಕಣ್ಣೀರಿಟ್ಟ ಚಿಕನ್ ಶಾಪ್ ಹುಡುಗ; 'ಟೈಮ್ ತಗೋ, ಅವಸರ ಬೇಡ' ಅಂದ ಡೆಲಿವರಿ ಬಾಯ್ಸ್!]]></title>
            <link>https://kannada.asianetnews.com/viral/overwhelmed-chinese-fried-chicken-worker-breaks-down-riders-offer-comfort-in-viral-video/articleshow-vx91vnv</link>
            <guid isPermaLink="true">https://kannada.asianetnews.com/viral/overwhelmed-chinese-fried-chicken-worker-breaks-down-riders-offer-comfort-in-viral-video/articleshow-vx91vnv</guid>
            <pubDate>Wed, 12 Aug 2026 21:40:22 +0530</pubDate>
            <description><![CDATA[ಚೀನಾದ ಗುವಾಂಗ್‌ಡಾಂಗ್‌ನಲ್ಲಿರೋ ಫ್ರೈಡ್ ಚಿಕನ್ ಅಂಗಡಿಯೊಂದರಲ್ಲಿ ಒಬ್ಬನೇ ಕೆಲಸ ಮಾಡ್ತಿದ್ದ ಹುಡುಗ, ರಾತ್ರಿ ಹೊತ್ತು ಆರ್ಡರ್‌ಗಳ ಸುರಿಮಳೆ ನೋಡಿ ಕಣ್ಣೀರಿಟ್ಟಿದ್ದಾನೆ. ಈ ದೃಶ್ಯ ಈಗ ವೈರಲ್ ಆಗಿದೆ. ಡೆಲಿವರಿ ರೈಡರ್‌ಗಳು 'ಅವಸರ ಮಾಡ್ಬೇಡ, ನಿಧಾನವಾಗಿ ಮಾಡು' ಅಂತ ಸಮಾಧಾನ ಹೇಳಿದ್ದಾರೆ ಈ ವಿಡಿಯೊ ವೈರಲ್]]></description>
            <media:content url="https://static.asianetnews.com/images/w-1280,h-720,format-jpg,imgid-01kzv690et2c5npytwf7zdg2tm,imgname-china-fried-chicken-worker-1786545209809.jpg" type="image/jpeg" height="390" width="690"/>
            <content:encoded><![CDATA[&lt;p&gt;ಚೀನಾದ ಗುವಾಂಗ್&zwnj;ಡಾಂಗ್&zwnj;ನಲ್ಲಿರುವ ಫ್ರೈಡ್ ಚಿಕನ್ ಅಂಗಡಿಯೊಂದರ ದೃಶ್ಯವಿದು. ರಾತ್ರಿ ಹೊತ್ತು ಒಬ್ಬನೇ ಕೆಲಸ ಮಾಡ್ತಿದ್ದ ಯುವಕ, ಒಂದೇ ಸಮನೆ ಬಂದ ಆರ್ಡರ್&zwnj;ಗಳನ್ನ ನೋಡಿ ತಡೆದುಕೊಳ್ಳಲಾಗದೆ ಕಣ್ಣೀರು ಹಾಕಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ, ಅದರಲ್ಲೂ X (ಹಿಂದಿನ ಟ್ವಿಟರ್) ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.&lt;/p&gt;&lt;p&gt;ಅಂಗಡಿ ಮುಚ್ಚೋ ಸಮಯಕ್ಕೆ ಸರಿಯಾಗಿ ದಿಢೀರ್ ಅಂತ ಆರ್ಡರ್&zwnj;ಗಳ ಸುರಿಮಳೆಯೇ ಆಗಿದೆ. ಇಷ್ಟೊಂದು ಆರ್ಡರ್&zwnj;ಗಳನ್ನು ನಿಭಾಯಿಸಲು ಆತ ಹರಸಾಹಸ ಪಟ್ಟಿದ್ದಾನೆ. ಈ ಒತ್ತಡವನ್ನು ತಡೆಯಲಾಗದೆ ಆತ ಕಣ್ಣೀರು ಹಾಕಿದ್ದಾನೆ.&lt;/p&gt;&lt;h2&gt;ಡೆಲಿವರಿ ರೈಡರ್&zwnj;ಗಳ ಸಮಾಧಾನದ ಮಾತು ವೈರಲ್&lt;/h2&gt;&lt;p&gt;ವರದಿಗಳ ಪ್ರಕಾರ ಈ ಘಟನೆ ನಡೆದಿದ್ದು ದಕ್ಷಿಣ ಚೀನಾದ ಗುವಾಂಗ್&zwnj;ಡಾಂಗ್&zwnj;ನಲ್ಲಿ, ಆಗಸ್ಟ್ 10 ರಂದು. ಫ್ರೈಡ್ ಚಿಕನ್ ಅಂಗಡಿಯಲ್ಲಿ ಆ ಯುವಕ ಒಬ್ಬನೇ ಇದ್ದ. ವೈರಲ್ ಆಗಿರುವ ವಿಡಿಯೋದಲ್ಲಿ, ಆತ ಒಂದೆಡೆ ಫ್ರೈಡ್ ಚಿಕನ್ ಅಡುಗೆ ಮಾಡಿ ಪ್ಯಾಕ್ ಮಾಡ್ತಾನೆ, ಇನ್ನೊಂದೆಡೆ ಒತ್ತಡ ತಾಳಲಾರದೆ ಅಳುತ್ತಾನೆ. ಹೊರಗಡೆ ಆರ್ಡರ್&zwnj;ಗಳಿಗಾಗಿ ಕಾಯುತ್ತಿದ್ದ ಡೆಲಿವರಿ ರೈಡರ್&zwnj;ಗಳು ಈ ದೃಶ್ಯವನ್ನು ನೋಡಿದ್ದಾರೆ.&lt;/p&gt;&lt;p&gt;ತಮ್ಮ ಡೆಲಿವರಿ ತಡವಾದರೂ ಪರವಾಗಿಲ್ಲ ಎಂದು ಅವರು ತಮ್ಮ ಟೈಮ್&zwnj;ಲೈನ್ ಬದಿಗಿಟ್ಟು, ಆ ಯುವಕನಿಗೆ ಧೈರ್ಯ ತುಂಬಿದ್ದಾರೆ. 'ಅವಸರ ಮಾಡ್ಬೇಡ, ನಿಧಾನವಾಗಿ ಮಾಡು' ಅಂತ ಸಮಾಧಾನ ಹೇಳಿದ್ದಾರೆ.&lt;/p&gt;&lt;p&gt;stress / seizure due to pressure ?&amp;nbsp;he worked alone while the boss in the background do not help until he collapsed.. something seem wrong here@Natie2Natie @Chiuchiyin @wilding_gyres @Whatis7777777&amp;nbsp;*Unable to keep up with the overwhelming orders for fried chicken delivery pic.twitter.com/No9JXucBZi&lt;/p&gt;&lt;p&gt;&mdash; whitemonkey1 (@babywhitemonkey) August 12, 2026&lt;/p&gt;&lt;p&gt;&lt;/p&gt;&lt;p&gt;ಗಿಗ್ ಎಕಾನಮಿಯ ವೇಗದ ಜಗತ್ತಿನಲ್ಲಿ ಅನಿರೀಕ್ಷಿತವಾಗಿ ಸಿಗುವ ಇಂತಹ ಸಣ್ಣ ಸಮಾಧಾನಗಳು ಎಷ್ಟು ಮುಖ್ಯ ಅನ್ನೋದನ್ನು ಈ ಘಟನೆ ತೋರಿಸುತ್ತದೆ. ಕೆಲಸಗಾರರು ಮತ್ತು ಡೆಲಿವರಿ ಸಿಬ್ಬಂದಿ ನಡುವಿನ ಒತ್ತಡವನ್ನು ಮಾನವೀಯತೆ ಹೇಗೆ ಕಡಿಮೆ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.&lt;/p&gt;&lt;p&gt;ಚೀನಾದಲ್ಲಿ ಫ್ರಂಟ್&zwnj;ಲೈನ್ ಸೇವಾ ನೌಕರರ ಬದುಕು ಹೇಗಿದೆ?&lt;/p&gt;&lt;p&gt;ಚೀನಾದಲ್ಲಿ ಕ್ಷಿಪ್ರ ನಗರೀಕರಣ, ತೀವ್ರ ಸ್ಪರ್ಧೆ ಮತ್ತು ಆನ್&zwnj;-ಡಿಮಾಂಡ್ ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳ ಬೆಳವಣಿಗೆಯಿಂದಾಗಿ ಸೇವಾ ವಲಯದ ಉದ್ಯೋಗಿಗಳಿಗೆ ವಿಪರೀತ ಒತ್ತಡದ ವಾತಾವರಣ ನಿರ್ಮಾಣವಾಗಿದೆ.&lt;/p&gt;&lt;p&gt;ಇದು ಕೇವಲ ಹೆಚ್ಚು ಗಂಟೆಗಳ ಕೆಲಸ ಅಥವಾ ಕಠಿಣ ಡೆಡ್&zwnj;ಲೈನ್&zwnj;ಗಳ ಬಗ್ಗೆ ಮಾತ್ರವಲ್ಲ. ಈ ಹೈಪರ್-ಕನೆಕ್ಟಿವಿಟಿ ಯುಗದಲ್ಲಿ ಬದುಕಲು ಬೇಕಾದ ಮಾನಸಿಕ ಸ್ಥೈರ್ಯವನ್ನೂ ಇದು ಪರೀಕ್ಷಿಸುತ್ತದೆ. ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳು ಮತ್ತು ಕಡಿಮೆ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡವು ಯಾರನ್ನಾದರೂ ಕುಸಿಯುವಂತೆ ಮಾಡಬಹುದು.&lt;/p&gt;&lt;p&gt;ಚೀನಾದಲ್ಲಿ 'ನೈಜುವಾನ್' (Neijuan/Involution) ಎಂಬ ವಿದ್ಯಮಾನವಿದೆ. ಇದರರ್ಥ, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವ್ಯಕ್ತಿಗಳು ನಿರಂತರವಾಗಿ ಅತಿಯಾದ ಕೆಲಸ ಮತ್ತು ತೀವ್ರ ಸ್ಪರ್ಧೆಯ ಚಕ್ರದಲ್ಲಿ ಸಿಲುಕಿಕೊಳ್ಳುವುದು. ಚೀನಾದ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಮುಂದುವರಿಯಲು ಕಾರ್ಮಿಕರು ಮತ್ತು ವ್ಯವಹಾರಗಳು ಎದುರಿಸುತ್ತಿರುವ ಒತ್ತಡವನ್ನು ವಿವರಿಸಲು ಈ ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ.&lt;/p&gt;Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ&lt;p&gt;CHINA MINUTES (@chinaminutes) ರಿಂದ ಹಂಚಿಕೊಂಡ ಪೋಸ್ಟ್&lt;/p&gt;&lt;p&gt;ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳು ದಕ್ಷತೆಯ ಗಡಿಗಳನ್ನು ಮೀರಿ ಬೆಳೆಯುತ್ತಿರುವಾಗ ಈ ರೀತಿಯ ಘಟನೆಗಳು ಸಂಖ್ಯೆಗಳ ಆಚೆಗೂ ನೋಡುವ ಮತ್ತು ಆಧುನಿಕ ಗಿಗ್ ಎಕಾನಮಿಯಲ್ಲಿ ಕಾರ್ಮಿಕರು ತೆರುವ ಬೆಲೆಯನ್ನು ಗುರುತಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತವೆ.&lt;/p&gt;&lt;p&gt;ಈ ವೈರಲ್ ವಿಡಿಯೋ, ಕಾರ್ಪೊರೇಟ್ ಒತ್ತಡ ಮತ್ತು ಮಾನವೀಯತೆಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸಿದೆ. ಇದು ಆನ್&zwnj;ಲೈನ್&zwnj;ನಲ್ಲಿ ಕಂಪನಿಗಳ ಜವಾಬ್ದಾರಿ, ಮ್ಯಾನೇಜ್&zwnj;ಮೆಂಟ್ ಬೆಂಬಲ ಮತ್ತು ಕಾರ್ಮಿಕರ ಕಲ್ಯಾಣದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/viral/overwhelmed-chinese-fried-chicken-worker-breaks-down-riders-offer-comfort-in-viral-video/articleshow-vx91vnv"/>
        </item>
        <item>
            <title><![CDATA[ಆಟಿ ಅಮಾವಾಸ್ಯೆ ವಿಶೇಷ! ಅಮೃತಕ್ಕೆ ಸಮಾನ ಹಾಲೆ ಮರದ ಕಷಾಯ.. ತುಳುನಾಡಿನಲ್ಲಿ ಇವತ್ತು ಇದನ್ನ ಕುಡಿಯೋದು ಯಾಕೆ?]]></title>
            <link>https://kannada.asianetnews.com/gallery/udupi/ati-amavasya-special-why-is-the-nectar-like-pale-tree-decoction-traditionally-consumed-in-tulu-nadu-today-gkn-nyt8g1g</link>
            <guid isPermaLink="true">https://kannada.asianetnews.com/gallery/udupi/ati-amavasya-special-why-is-the-nectar-like-pale-tree-decoction-traditionally-consumed-in-tulu-nadu-today-gkn-nyt8g1g</guid>
            <pubDate>Wed, 12 Aug 2026 21:39:53 +0530</pubDate>
            <description><![CDATA[ತುಳುನಾಡಿನಾದ್ಯಂತ ಪಾರಂಪರಿಕ 'ಪಾಲೆ' ಮರದ ತೊಗಟೆಯ ಕಷಾಯ ಮತ್ತು ಪಿತೃ ಕಾರ್ಯಗಳೊಂದಿಗೆ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕೇರಳ ಸಮಾಜಂ ವತಿಯಿಂದ ಮಲ್ಪೆ ಕಡಲತೀರದಲ್ಲಿ ಕೇರಳ ಶೈಲಿಯ 'ಬಲಿತರ್ಪಣಂ' ಆಯೋಜಿಸಲಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kzvankcfzgcjp5hkf851wsjg,imgname-ati-amavasya-was-celebrated-across-tulu-nadu--5--1786549816719.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಳುನಾಡಿನಾದ್ಯಂತ ಪಾರಂಪರಿಕ 'ಪಾಲೆ' ಮರದ ತೊಗಟೆಯ ಕಷಾಯ ಮತ್ತು ಪಿತೃ ಕಾರ್ಯಗಳೊಂದಿಗೆ ಆಟಿ ಅಮಾವಾಸ್ಯೆಯನ್ನು ಆಚರಿಸಲಾಯಿತು. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಕೇರಳ ಸಮಾಜಂ ವತಿಯಿಂದ ಮಲ್ಪೆ ಕಡಲತೀರದಲ್ಲಿ ಕೇರಳ ಶೈಲಿಯ 'ಬಲಿತರ್ಪಣಂ' ಆಯೋಜಿಸಲಾಗಿತ್ತು.&lt;/p&gt;&lt;img&gt;&lt;p&gt;ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಎಂದರೆ ಅದು ಕೇವಲ ಒಂದು ತಿಥಿಯಲ್ಲ, ಅದು ಪ್ರಕೃತಿ ನೀಡುವ ಔಷಧ ಮತ್ತು ಪೂರ್ವಜರಿಗೆ ಸಲ್ಲಿಸುವ ಕೃತಜ್ಞತೆಯ ಸಮಾಗಮ. ಈ ಬಾರಿ ಉಡುಪಿಯಲ್ಲಿ ಒಂದು ವಿಶೇಷ ಇತಿಹಾಸ ಸೃಷ್ಟಿಯಾಯಿತು. ಸಾಮಾನ್ಯವಾಗಿ ಕೇರಳದ ಓಣಂ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ ಉಡುಪಿಯ 'ಕೇರಳ ಸಮಾಜಂ' ಇದೇ ಮೊದಲ ಬಾರಿಗೆ ಪಿತೃಗಳಿಗೆ ತರ್ಪಣ ಬಿಡುವ 'ಬಲಿತರ್ಪಣಂ' ಕಾರ್ಯಕ್ರಮವನ್ನು ಕೇರಳದ ಶೈಲಿಯಲ್ಲೇ ಆಯೋಜಿಸಿ ಗಮನ ಸೆಳೆಯಿತು.&lt;/p&gt;&lt;img&gt;&lt;p&gt;ಉಡುಪಿಯಲ್ಲಿ ನೆಲೆಸಿರುವ ಕೇರಳ ಮೂಲದ ನೂರಾರು ಕುಟುಂಬಗಳು ಇಷ್ಟು ವರ್ಷಗಳ ಕಾಲ ಸ್ಥಳೀಯ ಪದ್ಧತಿಯಂತೆ ತರ್ಪಣ ಬಿಡುತ್ತಿದ್ದವು. ಆದರೆ ಈ ವರ್ಷ ಕೇರಳದಿಂದಲೇ ನುರಿತ ತಂತ್ರಿಗಳನ್ನು ಕರೆಸಲಾಗಿತ್ತು. ಮಲ್ಪೆ ಕಡಲತೀರದ ಅಲೆಗಳ ಸದ್ದಿನ ನಡುವೆ, ಕೇರಳದ ವಿಶಿಷ್ಟ ವಿಧಿವಿಧಾನಗಳೊಂದಿಗೆ ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಅಗಲಿದ ಪಿತೃಗಳಿಗೆ ಬಲಿತರ್ಪಣಂ ಸಲ್ಲಿಸಿದವು. ಮೃತರ ಆತ್ಮಕ್ಕೆ ಅವರವರ ಸಂಪ್ರದಾಯದಂತೆಯೇ ಸದ್ಗತಿ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಡಲತೀರದಲ್ಲಿ ಕೇರಳ ಮೂಲದ ಬಾಂಧವರು ಭಕ್ತಿಭಾವದಿಂದ ಪಿತೃಕಾರ್ಯ ಮುಗಿಸಿ ಸಂತೃಪ್ತಿ ವ್ಯಕ್ತಪಡಿಸಿದರು.&lt;/p&gt;&lt;img&gt;&lt;p&gt;ಇನ್ನೊಂದೆಡೆ, ತುಳುನಾಡಿನ ಪ್ರತಿಯೊಂದು ಮನೆಯಲ್ಲೂ ಸೂರ್ಯೋದಯಕ್ಕೂ ಮುನ್ನವೇ ಸಂಭ್ರಮ ಮನೆಮಾಡಿತ್ತು. ಆಟಿ ಅಮಾವಾಸ್ಯೆಯಂದು ಹಾಲೆ ಮರದ (ಪಾಲೆ ಮರ) ಕಷಾಯ ಕುಡಿಯುವುದು ಇಲ್ಲಿನ ಅನಾದಿಕಾಲದ ಸಂಪ್ರದಾಯ. ನಂಬಿಕೆಯ ಪ್ರಕಾರ, ಈ ದಿನ ಹಾಲೆ ಮರದ ತೊಗಟೆಯಲ್ಲಿ 640 ಬಗೆಯ ಔಷಧೀಯ ಗುಣಗಳು ಅಡಗಿರುತ್ತವೆ.&lt;/p&gt;&lt;p&gt;ಮನೆಯ ಪುರುಷರು ಸೂರ್ಯೋದಯಕ್ಕೂ ಮುನ್ನ ಕಾಡಿಗೆ ಹೋಗಿ, ಮರದ ತೊಗಟೆಯನ್ನು ತರುತ್ತಾರೆ. ಮಹಿಳೆಯರು ಅದನ್ನು ಬೆಣಚು ಕಲ್ಲಿನಿಂದ ಜಜ್ಜಿ, ಕಾಳು ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಕಷಾಯ ಸಿದ್ಧಪಡಿಸುತ್ತಾರೆ. ಮನೆಯವರೆಲ್ಲರೂ ಈ ಕಹಿ ಕಷಾಯವನ್ನು ಕುಡಿದು 'ಸರ್ವರೋಗ ನಿವಾರಣೆ'ಗೆ ಪ್ರಾರ್ಥಿಸುತ್ತಾರೆ. ಕಷಾಯದ ಕಹಿ ತಣಿಸಲು ನಂತರ ಮೆಂತ್ಯೆ ಗಂಜಿಯನ್ನು ಸವಿಯುವುದು ಇಲ್ಲಿನ ವಿಶೇಷ. ಇದು ಶರೀರದ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪುಗೊಳಿಸುತ್ತದೆ.&lt;/p&gt;&lt;img&gt;&lt;p&gt;ಉಡುಪಿ ಜಿಲ್ಲೆಯ ಮರುವಂತೆಯ ಮಹಾರಾಜ ವರಾಹ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಡಗರದ ವಾತಾವರಣ. ಆಟಿ ಅಮಾವಾಸ್ಯೆಯ ಅಂಗವಾಗಿ ಲಕ್ಷಾಂತರ ಭಕ್ತರು ಮರುವಂತೆ ಕಡಲಿನಲ್ಲಿ ಪುಣ್ಯಸ್ನಾನ ಮಾಡಿದರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಸಾಗರ ಮತ್ತು ನದಿ ಭೇಟಿಯಾಗುವ ಈ ಪುಣ್ಯಕ್ಷೇತ್ರದಲ್ಲಿ ಸಮುದ್ರ ಸ್ನಾನ ಮಾಡಿ ವರಾಹ ಸ್ವಾಮಿಯ ದರ್ಶನ ಪಡೆಯುವುದು ಕರ್ಕಾಟಕ ಅಮಾವಾಸ್ಯೆಯ ವಿಶೇಷತೆಯಾಗಿದೆ.&lt;/p&gt;&lt;img&gt;&lt;p&gt;ಒಟ್ಟಾರೆಯಾಗಿ ಈ ಬಾರಿಯ ಆಟಿ ಅಮಾವಾಸ್ಯೆಯು ತುಳುನಾಡಿನ ಸಾಂಪ್ರದಾಯಿಕ ಕಷಾಯದ ಆರೋಗ್ಯ ಮತ್ತು ಕೇರಳ ಶೈಲಿಯ ತರ್ಪಣದ ಭಕ್ತಿಯೊಂದಿಗೆ ವಿಶಿಷ್ಟವಾಗಿ ಆಚರಿಸಲ್ಪಟ್ಟಿತು. ಮನುಷ್ಯನ ಆರೋಗ್ಯ ಮತ್ತು ಪೂರ್ವಜರ ಆತ್ಮಕ್ಕೆ ಶಾಂತಿ ಕೋರುವ ಈ ದಿನವು ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.&lt;/p&gt;]]></content:encoded>
            <category><![CDATA[udupi]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/udupi/ati-amavasya-special-why-is-the-nectar-like-pale-tree-decoction-traditionally-consumed-in-tulu-nadu-today-gkn-nyt8g1g"/>
        </item>
        <item>
            <title><![CDATA['2 ವರ್ಷದ ಮಗನನ್ನು ಹೊರಗೆ ನಿಲ್ಲಿಸಿ, ಲ್ಯಾಪ್‌ಟಾಪ್‌ ಕೊಟ್ಟು ಬಂದೆ..' ಲೇಆಫ್ ಬೆನ್ನಲ್ಲೇ ಆಫೀಸ್‌ನಲ್ಲಿ ಬೆಂಗಳೂರು ಉದ್ಯೋಗಿಗೆ ಕಹಿ ಅನುಭವ!]]></title>
            <link>https://kannada.asianetnews.com/bengaluru-urban/bengaluru-laid-off-employee-viral-reddit-post-laptop-return-san/articleshow-h8ic2kr</link>
            <guid isPermaLink="true">https://kannada.asianetnews.com/bengaluru-urban/bengaluru-laid-off-employee-viral-reddit-post-laptop-return-san/articleshow-h8ic2kr</guid>
            <pubDate>Wed, 12 Aug 2026 21:12:49 +0530</pubDate>
            <description><![CDATA[ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ಕಂಪನಿಯ ಲ್ಯಾಪ್‌ಟಾಪ್ ಹಿಂತಿರುಗಿಸಲು ತಮ್ಮ 2 ವರ್ಷದ ಮಗನೊಂದಿಗೆ ಕಚೇರಿಗೆ ಹೋದಾಗ ಅವಮಾನ ಎದುರಿಸಿದ್ದಾರೆ. ಮಗುವನ್ನು ಒಳಗೆ ಬಿಡದ ಈ ಘಟನೆಯು ಕಾರ್ಪೊರೇಟ್ ಜಗತ್ತಿನ ಸ್ವಾರ್ಥ ಸ್ವರೂಪವನ್ನು ಬಯಲು ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzva483km4tj6c4zgaskcfqz,imgname-bengaluru-employee-1786549248115.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12): &lt;/strong&gt;ಇತ್ತೀಚೆಗಷ್ಟೇ ಕಂಪನಿಯಿಂದ ಲೇಆಫ್ ಆದ ಬೆಂಗಳೂರಿನ ಉದ್ಯೋಗಿಯೊಬ್ಬರು, ತಮಗೆ ಎದುರಾದ ಮುಜುಗರದ ಸನ್ನಿವೇಶ ಮತ್ತು ಕಾರ್ಪೊರೇಟ್ ಜಗತ್ತಿನಲ್ಲಿ ಕಂಪನಿ ಹಾಗೂ ಉದ್ಯೋಗಿ ನಡುವಿನ ಸಂಬಂಧ ಎಷ್ಟೊಂದು ಸ್ವಾರ್ಥಪೂರಿತವಾಗಿರುತ್ತದೆ ಎಂಬುದನ್ನು ತಮ್ಮ ಅನುಭವದ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ರೆಡ್ಡಿಟ್ (Reddit) ಜಾಲತಾಣದಲ್ಲಿ ಅವರು ಹಂಚಿಕೊಂಡಿರುವ ಈ ಪೋಸ್ಟ್ ಇದೀಗ ವೈರಲ್ ಆಗಿದೆ.&lt;/p&gt;&lt;p&gt;ಕೆಲಸದಿಂದ ವಜಾಗೊಂಡ ನಂತರ ತಮ್ಮ ಕೊನೆಯ ದಿನದ ಫಾರ್ಮಾಲಿಟೀಸ್ ಪೂರ್ಣಗೊಳಿಸಲು ಮತ್ತು ಕಂಪನಿಯ ಲ್ಯಾಪ್&zwnj;ಟಾಪ್ ಮರಳಿಸಲು ಅವರು ಆಫೀಸ್&zwnj;ಗೆ ತೆರಳಿದ್ದರು. ಪತ್ನಿಯೂ ಕೆಲಸದಲ್ಲಿದ್ದ ಕಾರಣ ಹಾಗೂ ಅಂದು ಮಗನನ್ನು ನೋಡಿಕೊಳ್ಳಲು ಬೇರೆ ಯಾವುದೇ ಚೈಲ್ಡ್&zwnj;ಕೇರ್ ವ್ಯವಸ್ಥೆ ಇಲ್ಲದ ಕಾರಣ, 2 ವರ್ಷದ ಮಗನನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದೆ. ಆದರೆ, ಆಫೀಸ್ ತಲುಪಿದ ತಕ್ಷಣ ಸೆಕ್ಯುರಿಟಿ ಹಾಗೂ ಸಿಬ್ಬಂದಿ ಮಗುವನ್ನು ಕಂಪನಿಯ ಕಟ್ಟಡದ ಒಳಗಡೆ ಕರೆದೊಯ್ಯಲು ಅನುಮತಿ ನೀಡಲಿಲ್ಲ!&lt;/p&gt;&lt;p&gt;ತಮ್ಮ ಪರಿಸ್ಥಿತಿಯನ್ನು ವಿವರಿಸಿ, 'ಲ್ಯಾಪ್&zwnj;ಟಾಪ್ ಕೊಟ್ಟು ಕೇವಲ 5 ನಿಮಿಷದಲ್ಲೇ ವಾಪಸ್ ಬರುತ್ತೇನೆ' ಎಂದು ಮನವಿ ಮಾಡಿದರೂ ಕಂಪನಿ ಸಿಬ್ಬಂದಿ ಒಪ್ಪಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ, ಅವರು ತಮ್ಮ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಿ, 5 ನಿಮಿಷ ಮಗನನ್ನು ನೋಡಿಕೊಳ್ಳುವಂತೆ ವಿನಂತಿ ಮಾಡಿದ್ದರು. ಆದರೆ ಆ ಪ್ರಕ್ರಿಯೆ ಮುಗಿಯಲು ಸುಮಾರು 15 ನಿಮಿಷಗಳೇ ಬೇಕಾದವು.&lt;/p&gt;&lt;p&gt;ಬ್ಲ್ಯಾಕ್&zwnj;ರಾಕ್ (BlackRock) ಕಂಪನಿಯ ಅಂಗಸಂಸ್ಥೆಯಾದ ಪ್ರೀಕ್ವಿನ್ (Preqin) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಮಾಜಿ ಉದ್ಯೋಗಿ, ತಾವು ಯಾವುದೇ ಕಂಪನಿ ನೀತಿ ಉಲ್ಲಂಘನೆಯ ಆರೋಪ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. &quot;ಕಂಪನಿಗಳಲ್ಲಿ ವಿಸಿಟರ್ಸ್&zwnj; ಮತ್ತು ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿರುತ್ತವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಲೇಆಫ್ ಆದ ತಕ್ಷಣವೇ ನನಗೆ ಎದುರಾದ ಈ ಅನುಭವ ಒಂದು ಮಹತ್ವದ ಸತ್ಯವನ್ನು ನೆನಪಿಸಿತು. ಅದೇನೆಂದರೆ, 'ಕಂಪನಿ ಎಂದರೆ ಕೇವಲ ಅದೊಂದು ಬಿಸಿನೆಸ್ ಸಂಸ್ಥೆಯಷ್ಟೇ' ಎನ್ನುವುದು.&lt;/p&gt;&lt;h2&gt;&lt;strong&gt;ಕೆಲಸ ಮತ್ತು ಜೀವನದ ನಡುವಿನ ಅಂತರ ತಿಳಿಸಿದ ಪಾಠ&lt;/strong&gt;&lt;/h2&gt;&lt;p&gt;ಈ ಕಹಿ ಘಟನೆಯನ್ನು ಮೆಲುಕು ಹಾಕಿರುವ ಅವರು, &quot;ಉದ್ಯೋಗಿಗಳು ತಮ್ಮ ವರ್ಷಗಟ್ಟಲೆ ಸಮಯ, ಶ್ರಮ, ನಂಬಿಕೆ ಮತ್ತು ಭಾವನಾತ್ಮಕ ಶಕ್ತಿಯನ್ನು ಕಂಪನಿಗೆ ಧಾರೆ ಎರೆಯುತ್ತಾರೆ. ಆದರೆ ಕೆಲಸ ಮುಗಿದ ಮೇಲೆ ಅದೊಂದು ಕೇವಲ 'ವ್ಯಾವಹಾರಿಕ ನಿರ್ಧಾರ' (Business Decision) ಎಂಬುದಷ್ಟೇ ಸತ್ಯ. ನಿಮ್ಮ ಕಚೇರಿಯ ಕೆಲಸವನ್ನು ನಿಮ್ಮ ಇಡೀ ಜೀವನದ ಗುರುತನ್ನಾಗಿ (Identity) ಮಾಡಿಕೊಳ್ಳಬೇಡಿ. ಕುಟುಂಬವನ್ನು ನೋಡಿಕೊಳ್ಳಿ, ಕೆಲಸದ ಆಚೆಗೂ ನಿಮಗೊಂದು ಸುಂದರ ಜೀವನವನ್ನು ಕಟ್ಟಿಕೊಳ್ಳಿ&quot; ಎಂದು ಇತರ ಉದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.&lt;/p&gt;&lt;p&gt;ಅಲ್ಲದೆ, ಹಿಂದೆ ತಮ್ಮದೇ ಕಂಪನಿಯ ಹೆಚ್&zwnj;ಆರ್&zwnj; (HR) ಸಿಬ್ಬಂದಿಯೊಬ್ಬರು ಮಗುವನ್ನು ಆಫೀಸ್&zwnj;ಗೆ ಕರೆತಂದಿದ್ದನ್ನು ನೋಡಿದ್ದರಿಂದ, ಮಗುವನ್ನು ಕರೆದೊಯ್ಯುವುದು ನಿಯಮಬಾಹಿರವಲ್ಲ ಎಂದು ತಾವು ಭಾವಿಸಿದ್ದಾಗಿಯೂ ಅವರು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ರೆಡ್ಡಿಟ್&zwnj;ನಲ್ಲಿ ಉದ್ಯೋಗಿಗಳ ಆಕ್ರೋಶ&amp;nbsp;&lt;/strong&gt;&lt;/h2&gt;&lt;p&gt;ಈ ವೈರಲ್ ಪೋಸ್ಟ್&zwnj;ಗೆ ನೆಟ್ಟಿಗರು ಹಾಗೂ ಇತರೆ ಉದ್ಯೋಗಿಗಳಿಂದ ಭಾರಿ ಬೆಂಬಲ ಮತ್ತು ಆಕ್ರೋಶ ವ್ಯಕ್ತವಾಗಿದೆ. ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಗಳಿಗೆ ಲ್ಯಾಪ್&zwnj;ಟಾಪ್&zwnj; ಮರಳಿಸಲು ಕಂಪನಿಗಳೇ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿಬಂದಿದೆ. 'ಮುಂದಿನ ಬಾರಿ ಲೇಆಫ್ ಆದಾಗ ನೀವೇ ಆಫೀಸ್&zwnj;ಗೆ ಹೋಗಿ ಸಮಯ ವ್ಯರ್ಥ ಮಾಡಬೇಡಿ. ಕಂಪನಿಯವರೇ ಪ್ರೀ-ಲೇಬಲ್ಡ್ ಬಾಕ್ಸ್ ಕಳುಹಿಸಿ ಲ್ಯಾಪ್&zwnj;ಟಾಪ್ ತರಿಸಿಕೊಳ್ಳಲಿ, ಅವರಿಗೆ ಹಣ ಮತ್ತು ಸಮಯ ಉಳಿಸಲು ನೀವೇಕೆ ಕಷ್ಟಪಡುತ್ತೀರಿ?' ಎಂದು ಕಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ನನಗೆ ಕಂಪನಿಯು ಕೊರಿಯರ್ ಮೂಲಕ ಲ್ಯಾಪ್&zwnj;ಟಾಪ್ ಕಳುಹಿಸಲು ಹೇಳಿದಾಗ, ನಾನು ಅತ್ಯಂತ ದುಬಾರಿಯಾದ ಎಕ್ಸ್&zwnj;ಪ್ರೆಸ್ ಓವರ್&zwnj;ನೈಟ್ ಏರ್ ಶಿಪ್ಪಿಂಗ್ ಆಯ್ಕೆ ಮಾಡಿಕೊಂಡೆ. ಪ್ರೀಮಿಯಂ ಪ್ಯಾಕಿಂಗ್&zwnj;ನೊಂದಿಗೆ ಸುಮಾರು 350 ಡಾಲರ್ (ಅಂದಾಜು ₹29,000) ಬಿಲ್ ಅನ್ನು ಕಂಪನಿಯ ಖಾತೆಗೇ ಹಾಕಿದೆ ಎಂದು ಬರೆದುಕೊಂಡಿದ್ದಾರೆ.&lt;/p&gt;&lt;p&gt;'ಕೆಲಸದಿಂದ ತೆಗೆದುಹಾಕಿದ ಮೇಲೆ ಉದ್ಯೋಗಿ ತನ್ನ ಸ್ವಂತ ಹಣ ಹಾಗೂ ಸಮಯ ವ್ಯರ್ಥ ಮಾಡಿ ಕಂಪನಿ ಆಸ್ತಿಯನ್ನು ವಾಪಸ್ ತಲುಪಿಸಬೇಕು ಎಂದು ನಿರೀಕ್ಷಿಸುವುದೇ ತಪ್ಪು. ಬಾಕ್ಸ್ ಕಳುಹಿಸಿ ಪಿಕ್&zwnj;ಅಪ್ ಮಾಡಿಕೊಳ್ಳಿ ಇಲ್ಲವೇ ನಷ್ಟವನ್ನು ತಾವೇ ಭರಿಸಿ' ಎಂದು ತಾರಾಟೆಗೆ ತೆಗೆದುಕೊಂಡಿದ್ದಾರೆ.&lt;/p&gt;&lt;p&gt;&quot;ಹೆಲ್ತ್&zwnj;ಕೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬರು ವರ್ಕ್ ಕಾಲ್&zwnj;ನಲ್ಲಿದ್ದಾಗ ಮಗುವಿನ ಅಳುವಿನ ಶಬ್ದ ಕೇಳಿಸಿತು. ತಕ್ಷಣ ಸೂಪರ್&zwnj;ವೈಸರ್, ಮ್ಯಾನೇಜರ್ ಮತ್ತು ಹೆಚ್&zwnj;ಆರ್ ಪ್ರತಿನಿಧಿ ಸೇರಿ ಸಭೆ ಕರೆದು, ರೋಗಿಗಳ ಗೌಪ್ಯತೆ ಮತ್ತು ಕಚೇರಿಯ ಭದ್ರತೆಯ ನೆಪವೊಡ್ಡಿ ಆಕೆಗೆ ನೋಟಿಸ್ ನೀಡಿದ್ದರು&quot; ಎಂದು ಕಾರ್ಪೊರೇಟ್ ಕಂಪನಿಗಳ ಅಮಾನವೀಯ ನಡೆಯನ್ನು ಬಯಲು ಮಾಡಿದ್ದಾರೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Santosh Naik</dc:creator>
            <atom:link href="https://kannada.asianetnews.com/bengaluru-urban/bengaluru-laid-off-employee-viral-reddit-post-laptop-return-san/articleshow-h8ic2kr"/>
        </item>
        <item>
            <title><![CDATA[ರಿಷಬ್‌ ಶೆಟ್ಟಿ ‘ಜೈ ಹನುಮಾನ್‌’ನಲ್ಲಿ ವಾಮಿಕಾ ಗಬ್ಬಿ? ಈ ಪಾತ್ರದ ಹಿಂದೆ ಏನಿದೆ ಸೀಕ್ರೆಟ್‌?]]></title>
            <link>https://kannada.asianetnews.com/entertainment/wamiqa-gabbi-to-join-rishab-shetty-jai-hanuman-big-update-gvd/articleshow-ry68te6</link>
            <guid isPermaLink="true">https://kannada.asianetnews.com/entertainment/wamiqa-gabbi-to-join-rishab-shetty-jai-hanuman-big-update-gvd/articleshow-ry68te6</guid>
            <pubDate>Wed, 12 Aug 2026 21:09:28 +0530</pubDate>
            <description><![CDATA[Wamiqa Gabbi Jai Hanuman: ನಟ ರಿಷಬ್‌ ಶೆಟ್ಟಿ ಇದೀಗ ನಿರ್ದೇಶಕ ಪ್ರಶಾಂತ್‌ ವರ್ಮಾ ಅವರ ಬಹುನಿರೀಕ್ಷಿತ ‘ಜೈ ಹನುಮಾನ್‌’ ಸಿನಿಮಾದಲ್ಲಿ ಭಗವಾನ್‌ ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv9j26cs9qhezsr8ncmtd76,imgname-jj-1786548652236.png" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಕಾಂತಾರ: ಚಾಪ್ಟರ್&zwnj; 1&rsquo; ಬಳಿಕ ಪ್ಯಾನ್&zwnj; ಇಂಡಿಯಾ ಮಟ್ಟದಲ್ಲಿ ಮತ್ತೊಂದು ದೊಡ್ಡ ಪ್ರಾಜೆಕ್ಟ್&zwnj;ನೊಂದಿಗೆ ಸದ್ದು ಮಾಡಲು ಸಜ್ಜಾಗಿರುವ ನಟ ರಿಷಬ್&zwnj; ಶೆಟ್ಟಿ, ಇದೀಗ ನಿರ್ದೇಶಕ ಪ್ರಶಾಂತ್&zwnj; ವರ್ಮಾ ಅವರ ಬಹುನಿರೀಕ್ಷಿತ &lsquo;ಜೈ ಹನುಮಾನ್&zwnj;&rsquo; ಸಿನಿಮಾದಲ್ಲಿ ಭಗವಾನ್&zwnj; ಹನುಮಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿರುವ ನಡುವೆಯೇ, ಸಿನಿಮಾದ ತಾರಾಬಳಗಕ್ಕೆ ಬಾಲಿವುಡ್&zwnj; ನಟಿ ವಾಮಿಕಾ ಗಬ್ಬಿ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.&lt;/p&gt;&lt;p&gt;ಮೂಲಗಳ ಪ್ರಕಾರ, ವಾಮಿಕಾ ಗಬ್ಬಿ ಅವರು &lsquo;ಜೈ ಹನುಮಾನ್&zwnj;&rsquo; ಸಿನಿಮಾದಲ್ಲಿ ಪ್ರಮುಖ ಹಾಗೂ ಪ್ರಬಲ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಅವರ ಪಾತ್ರದ ಸ್ವರೂಪವೇನು? ಕಥೆಯಲ್ಲಿ ಅವರ ಪಾತ್ರಕ್ಕಿರುವ ಮಹತ್ವವೇನು? ಎಂಬುದನ್ನು ಚಿತ್ರತಂಡ ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.&lt;/p&gt;&lt;p&gt;&lt;strong&gt;&lsquo;ಜೈ ಹನುಮಾನ್&zwnj;&rsquo;ಗೆ ವಾಮಿಕಾ ಗಬ್ಬಿ ಎಂಟ್ರಿ?&lt;/strong&gt;&lt;/p&gt;&lt;p&gt;ಬಾಲಿವುಡ್&zwnj; ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿರುವ ವಾಮಿಕಾ ಗಬ್ಬಿ, ಸದ್ಯ ವೃತ್ತಿಜೀವನದ ಅತ್ಯಂತ ಬ್ಯುಸಿ ಹಂತದಲ್ಲಿದ್ದಾರೆ. ಇದೀಗ ಅವರು ಪ್ರಶಾಂತ್&zwnj; ವರ್ಮಾ ನಿರ್ದೇಶನದ &lsquo;ಜೈ ಹನುಮಾನ್&zwnj;&rsquo; ಸಿನಿಮಾದ ಭಾಗವಾಗಿದ್ದಾರೆ ಎಂಬ ವರದಿ ಸಿನಿಪ್ರಿಯರ ಗಮನ ಸೆಳೆದಿದೆ. ವರದಿಗಳ ಪ್ರಕಾರ, ವಾಮಿಕಾ ಅವರಿಗೆ ಸಿನಿಮಾದಲ್ಲಿ ಮಹತ್ವದ ಪಾತ್ರವನ್ನು ನೀಡಲಾಗಿದೆಯಂತೆ. ಆದರೆ ಪಾತ್ರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಮಾಹಿತಿಯನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಹೀಗಾಗಿ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಈಗಲೇ ಶುರುವಾಗಿದೆ.&lt;/p&gt;&lt;p&gt;&lt;strong&gt;ಹೈದರಾಬಾದ್&zwnj; ಶೆಡ್ಯೂಲ್&zwnj;ನಲ್ಲಿ ವಾಮಿಕಾ?&lt;/strong&gt;&lt;/p&gt;&lt;p&gt;&lsquo;ಜೈ ಹನುಮಾನ್&zwnj;&rsquo; ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮುಂದಿನ ಕೆಲವು ವಾರಗಳಲ್ಲಿ ವಾಮಿಕಾ ಗಬ್ಬಿ ಕೂಡ ಹೈದರಾಬಾದ್&zwnj; ಶೆಡ್ಯೂಲ್&zwnj;ಗೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 2024ರಲ್ಲಿ ತೆರೆಕಂಡ &lsquo;ಹನುಮಾನ್&zwnj;&rsquo; ಸಿನಿಮಾದ ಮುಂದುವರಿದ ಭಾಗವಾಗಿರುವ &lsquo;ಜೈ ಹನುಮಾನ್&zwnj;&rsquo; ಚಿತ್ರದ ಕೆಲಸಗಳು ಸದ್ಯ ಭರದಿಂದ ನಡೆಯುತ್ತಿವೆ.&lt;/p&gt;&lt;p&gt;&lt;strong&gt;ರಿಷಬ್&zwnj; ಶೆಟ್ಟಿ ಭಗವಾನ್&zwnj; ಹನುಮಂತನಾಗಿ!&lt;/strong&gt;&lt;/p&gt;&lt;p&gt;ಪ್ರಶಾಂತ್&zwnj; ವರ್ಮಾ ನಿರ್ದೇಶನದ &lsquo;ಹನುಮಾನ್&zwnj;&rsquo; ಸಿನಿಮಾ 2024ರಲ್ಲಿ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ತೇಜ ಸಜ್ಜಾ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಪ್ರಶಾಂತ್&zwnj; ವರ್ಮಾ ಸಿನಿಮ್ಯಾಟಿಕ್&zwnj; ಯೂನಿವರ್ಸ್&zwnj; (PVCU)ಗೆ ಭದ್ರ ಬುನಾದಿ ಹಾಕಿತ್ತು. ಇದೀಗ ಅದರ ಮುಂದುವರಿದ ಭಾಗವಾದ &lsquo;ಜೈ ಹನುಮಾನ್&zwnj;&rsquo;ನಲ್ಲಿ ರಿಷಬ್&zwnj; ಶೆಟ್ಟಿ ಭಗವಾನ್&zwnj; ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಿಷಬ್&zwnj; ಅವರ ಲುಕ್&zwnj;, ಪಾತ್ರದ ಪ್ರಸ್ತುತಿ ಹಾಗೂ ಸಿನಿಮಾದ ಕಥಾಹಂದರದ ಬಗ್ಗೆ ಭಾರೀ ಕುತೂಹಲ ಮೂಡಿದೆ.&lt;/p&gt;&lt;p&gt;&lt;strong&gt;ಪೌರಾಣಿಕ ಕಥೆಗೆ ಅದ್ಧೂರಿ ಟಚ್&zwnj;!&lt;/strong&gt;&lt;/p&gt;&lt;p&gt;&lsquo;ಜೈ ಹನುಮಾನ್&zwnj;&rsquo; ಕೇವಲ ಸೂಪರ್&zwnj;ಹೀರೋ ಸಿನಿಮಾವಲ್ಲ. ಹನುಮಂತನ ಶಕ್ತಿ, ಭಕ್ತಿ ಹಾಗೂ ಕಲಿಯುಗದಲ್ಲಿನ ಅವರ ಅಸ್ತಿತ್ವವನ್ನು ಆಧರಿಸಿದ ಭರ್ಜರಿ ಪೌರಾಣಿಕ ಆ್ಯಕ್ಷನ್&zwnj; ಎಪಿಕ್&zwnj; ಆಗಿ ಚಿತ್ರವನ್ನು ರೂಪಿಸಲಾಗುತ್ತಿದೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮದೊಂದಿಗೆ ಸಿನಿಮಾದ ನಿರ್ಮಾಣಕ್ಕೆ ಅಧಿಕೃತ ಚಾಲನೆ ನೀಡಲಾಗಿತ್ತು. ಹನುಮಂತನ ಜನ್ಮಸ್ಥಳದೊಂದಿಗೆ ಸಂಬಂಧ ಹೊಂದಿರುವ ಸ್ಥಳದಲ್ಲೇ ಸಿನಿಮಾ ಆರಂಭವಾಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತ್ತು.&lt;/p&gt;&lt;h2&gt;&lt;strong&gt;2027ರಲ್ಲಿ ತೆರೆಗೆ ಬರಲಿದೆ &lsquo;ಜೈ ಹನುಮಾನ್&zwnj;&rsquo;!&lt;/strong&gt;&lt;/h2&gt;&lt;p&gt;ಟಿ-ಸೀರೀಸ್&zwnj; ಪ್ರಸ್ತುತಪಡಿಸುತ್ತಿರುವ &lsquo;ಜೈ ಹನುಮಾನ್&zwnj;&rsquo; ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್&zwnj; ಬೆಂಬಲವಿದೆ. ಪ್ರಶಾಂತ್&zwnj; ವರ್ಮಾ ಅವರ ಪ್ರಶಾಂತ್&zwnj; ವರ್ಮಾ ಸಿನಿಮ್ಯಾಟಿಕ್&zwnj; ಯೂನಿವರ್ಸ್&zwnj;ನ ಮುಂದಿನ ಪ್ರಮುಖ ಅಧ್ಯಾಯವಾಗಿರುವ ಈ ಸಿನಿಮಾ 2027ರ ದ್ವಿತೀಯಾರ್ಧದಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗುತ್ತಿದೆ ಎನ್ನಲಾಗಿದೆ. ಇನ್ನು ರಿಷಬ್&zwnj; ಶೆಟ್ಟಿ ಹನುಮಂತನಾಗಿ, ಇದೀಗ ವಾಮಿಕಾ ಗಬ್ಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ... ಈ ಕಾಂಬಿನೇಷನ್&zwnj; ನಿಜವಾದರೆ &lsquo;ಜೈ ಹನುಮಾನ್&zwnj;&rsquo; ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ. ಆದರೆ ವಾಮಿಕಾ ಅವರ ಪಾತ್ರದ ಬಗ್ಗೆ ಅಧಿಕೃತ ಘೋಷಣೆ ಹೊರಬರುವವರೆಗೂ ಕಾದು ನೋಡಬೇಕಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/wamiqa-gabbi-to-join-rishab-shetty-jai-hanuman-big-update-gvd/articleshow-ry68te6"/>
        </item>
        <item>
            <title><![CDATA[ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್! ರಾಜ್ಯ ಸರ್ಕಾರದಿಂದ ಖಡಕ್ ಆದೇಶ]]></title>
            <link>https://kannada.asianetnews.com/karnataka-districts/gutka-and-pan-masala-banned-in-karnataka-state-government-issues-strict-order-gkn/articleshow-l68ggll</link>
            <guid isPermaLink="true">https://kannada.asianetnews.com/karnataka-districts/gutka-and-pan-masala-banned-in-karnataka-state-government-issues-strict-order-gkn/articleshow-l68ggll</guid>
            <pubDate>Wed, 12 Aug 2026 20:44:04 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಗುಟ್ಕಾ ಮತ್ತು ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಒಂದು ವರ್ಷದ ಅವಧಿಗೆ ನಿಷೇಧಿಸಿದೆ. 'ವ್ಯಸನಮುಕ್ತ ಕರ್ನಾಟಕ' ನಿರ್ಮಾಣದ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv8gmvx6ez8fzq4nkdkk4r9,imgname-karnataka-pan-masala-gutka-1786547557245.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ವಿರುದ್ಧ ರಾಜ್ಯಾದ್ಯಂತ ಸಮರ ಸಾರಲಾಗಿದ್ದು, ಇವುಗಳ ಮಾರಾಟ ಮತ್ತು ವಿತರಣೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.&lt;/p&gt;&lt;h2&gt;&lt;strong&gt;ಸಂಪೂರ್ಣ ನಿಷೇಧ ಜಾರಿ&lt;/strong&gt;&lt;/h2&gt;&lt;p&gt;ರಾಜ್ಯ ಸರ್ಕಾರವು 10-08-2026ರಂದು ಹೊರಡಿಸಿರುವ ಅಧಿಸೂಚನೆಯಂತೆ, ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಈ ಕೆಳಗಿನ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.&lt;/p&gt;&lt;ul&gt; &lt;li&gt;ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಸುವುದು ಮತ್ತು ಗೋದಾಮುಗಳಲ್ಲಿ ಸಂಗ್ರಹಿಸಿಡುವುದು ಶಿಕ್ಷಾರ್ಹ ಅಪರಾಧ.&lt;/li&gt; &lt;li&gt;ಈ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದು ಅಥವಾ ವಿತರಿಸುವುದನ್ನು ನಿಲ್ಲಿಸಲಾಗಿದೆ.&lt;/li&gt; &lt;li&gt;ಚಿಲ್ಲರೆ ಅಥವಾ ಸಗಟು ರೂಪದಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.&lt;/li&gt;&lt;/ul&gt;&lt;h2&gt;&lt;strong&gt;ಕಠಿಣ ಕಾಯ್ದೆ ಅಡಿ ಕ್ರಮ&lt;/strong&gt;&lt;/h2&gt;&lt;p&gt;ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006'ರ ಕಲಂ 30(2)(a) ಹಾಗೂ 'ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲೆ ನಿಷೇಧ ಮತ್ತು ನಿರ್ಬಂಧಗಳು) ನಿಯಮಗಳು-2011'ರ ಅಡಿ ಈ ಕ್ರಮ ಕೈಗೊಂಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಯಾವುದೇ ಆಹಾರ ಪದಾರ್ಥಗಳ ಮಾರಾಟವು ಮಾನವನ ಆರೋಗ್ಯಕ್ಕೆ ಹಾನಿಕಾರಕ ಎಂಬ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ವಿಶೇಷ ಕಾರ್ಯಾಚರಣೆ&lt;/strong&gt;&lt;/h2&gt;&lt;p&gt;ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಹಾರ ಸುರಕ್ಷತಾ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ರಾಜ್ಯದಾದ್ಯಂತ ಅಂಗಡಿಗಳು, ಗೋದಾಮುಗಳು ಮತ್ತು ತಯಾರಿಕಾ ಘಟಕಗಳ ಮೇಲೆ ವಿಶೇಷ ತಪಾಸಣೆ ನಡೆಯಲಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಮತ್ತು ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ.&lt;/p&gt;&lt;p&gt;ಆರೋಗ್ಯಕರ ಹಾಗೂ ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಸರ್ಕಾರ ಮನವಿ ಮಾಡಿದೆ. ಎಲ್ಲಾದರೂ ನಿಷೇಧಿತ ಉತ್ಪನ್ನಗಳ ತಯಾರಿಕೆ ಅಥವಾ ಮಾರಾಟ ಕಂಡುಬಂದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ನಿಮ್ಮ ಸುತ್ತಮುತ್ತ ಅಕ್ರಮವಾಗಿ ಗುಟ್ಕಾ ಅಥವಾ ಪಾನ್ ಮಸಾಲಾ ಮಾರಾಟ ನಡೆಯುತ್ತಿದ್ದರೆ, ಅದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕೆಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/gutka-and-pan-masala-banned-in-karnataka-state-government-issues-strict-order-gkn/articleshow-l68ggll"/>
        </item>
        <item>
            <title><![CDATA[ಬ್ಲ್ಯಾಕ್‌ ಲುಕ್‌ನಲ್ಲಿ ಬಂದ ಹುಂಡೈನ ಸಣ್ಣ SUV, ಭರ್ಜರಿ ಫೀಚರ್ಸ್‌ನೊಂದಿಗೆ 8.13 ಲಕ್ಷದಿಂದ ಬುಕ್ಕಿಂಗ್‌ ಶುರು!]]></title>
            <link>https://kannada.asianetnews.com/car-news/hyundai-exter-knight-edition-launched-price-features-specs-san/articleshow-pdp797o</link>
            <guid isPermaLink="true">https://kannada.asianetnews.com/car-news/hyundai-exter-knight-edition-launched-price-features-specs-san/articleshow-pdp797o</guid>
            <pubDate>Wed, 12 Aug 2026 20:39:05 +0530</pubDate>
            <description><![CDATA[ಹುಂಡೈ ತನ್ನ ಜನಪ್ರಿಯ ಸಣ್ಣ ಎಸ್‌ಯುವಿ 'ಎಕ್ಸ್‌ಟರ್'ನ ಹೊಸ 'ನೈಟ್ ಎಡಿಷನ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಕಪ್ಪು ಬಣ್ಣದ ಥೀಮ್ ಹೊಂದಿರುವ ಈ ಕಾರು, ಸ್ಪೋರ್ಟಿ ವಿನ್ಯಾಸ ಮತ್ತು ಆಕರ್ಷಕ ಇಂಟೀರಿಯರ್‌ನೊಂದಿಗೆ ಲಭ್ಯವಿದ್ದು, ಇದರ ಆರಂಭಿಕ ಬೆಲೆ ₹8.13 ಲಕ್ಷ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv87tk50mbqwyk9n2dvp9pq,imgname-hyundai-exter-knight-edition-1786547268197.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12): &lt;/strong&gt;ಭಾರತೀಯ ವಾಹನ ಮಾರುಕಟ್ಟೆಯ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಹುಂಡೈ (Hyundai), ತನ್ನ ಜನಪ್ರಿಯ ಸಣ್ಣ ಎಸ್&zwnj;ಯುವಿ 'ಎಕ್ಸ್&zwnj;ಟರ್'ನ (Exter) ಹೊಸ 'ನೈಟ್ ಎಡಿಷನ್' (Knight Edition) ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಂಪೂರ್ಣ ಬ್ಲ್ಯಾಕ್ ಥೀಮ್&zwnj;ನಲ್ಲಿ ಕಂಗೊಳಿಸುತ್ತಿರುವ ಈ ಹೊಸ ಎಸ್&zwnj;ಯುವಿಯ ಆರಂಭಿಕ ಬೆಲೆಯನ್ನು 8.13 ಲಕ್ಷ ರೂಪಾಯಿ (ಎಕ್ಸ್-ಶೋರೂಮ್) ಎಂದು ನಿಗದಿಪಡಿಸಲಾಗಿದೆ. ಇದರ ಟಾಪ್ ವೇರಿಯೆಂಟ್ ಬೆಲೆ 9.60 ಲಕ್ಷ ರೂಪಾಯಿವರೆಗೆ ಇದೆ.&lt;/p&gt;&lt;p&gt;ಹೊಸ 'ಎಕ್ಸ್&zwnj;ಟರ್ ನೈಟ್' ಆವೃತ್ತಿಯನ್ನು ಸಂಪೂರ್ಣ ಕಪ್ಪು ಬಣ್ಣದ ಥೀಮ್&zwnj;ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಇದು ಎಸ್&zwnj;ಯುವಿಗೆ ಮೊದಲಿಗಿಂತಲೂ ಹೆಚ್ಚು ಸ್ಪೋರ್ಟಿ ಹಾಗೂ ರಗಡ್ ಲುಕ್ ನೀಡಿದೆ. ಕಸ್ಟಮರ್&zwnj;ಗಳಿಗೆ ಪೆಟ್ರೋಲ್ ಮ್ಯಾನುವಲ್, ಪೆಟ್ರೋಲ್ ಎಎಮ್&zwnj;ಟಿ (AMT) ಹಾಗೂ 'ಹೈ-ಸಿಎನ್&zwnj;ಜಿ ಡ್ಯುಯೊ' (Hy-CNG Duo) ಸೇರಿದಂತೆ ಒಟ್ಟು ನಾಲ್ಕು ವೇರಿಯೆಂಟ್&zwnj;ಗಳಲ್ಲಿ ಈ ಮಾಡೆಲ್ ಲಭ್ಯವಿರಲಿದೆ.&lt;/p&gt;&lt;p&gt;ಕಂಪನಿಯು ಈ ನೈಟ್ ಎಡಿಷನ್&zwnj;ನಲ್ಲಿ ಎಂಜಿನ್ ಅಥವಾ ಇತರ ಮೆಕ್ಯಾನಿಕಲ್ ಭಾಗಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಬದಲಾಗಿ, ಮುಖ್ಯವಾಗಿ ಇದರ ವಿನ್ಯಾಸ (Exterior Design) ಮತ್ತು ಇಂಟೀರಿಯರ್&zwnj;ನಲ್ಲಿ ಆಕರ್ಷಕ ಎನಿಸುವಂಥ ಬದಲಾವಣೆಗಳನ್ನು ತರಲಾಗಿದೆ.&lt;/p&gt;&lt;h2&gt;&lt;strong&gt;ಬ್ಲ್ಯಾಕ್ ಥೀಮ್&zwnj;ನಲ್ಲಿ ಮಿಂಚುವ ಎಕ್ಸ್&zwnj;ಟರ್ ಲುಕ್&lt;/strong&gt;&lt;/h2&gt;&lt;p&gt;ಹೊರಭಾಗದಿಂದ ಎಕ್ಸ್&zwnj;ಟರ್ ನೈಟ್ ಆವೃತ್ತಿಗೆ ಸಂಪೂರ್ಣ ವಿಭಿನ್ನ ಹಾಗೂ ಸ್ಪೆಷಲ್ ಲುಕ್ ನೀಡಲು ಕಂಪನಿ ಶ್ರಮಿಸಿದೆ. ಇದರಲ್ಲಿ ಮ್ಯಾಟ್ ಬ್ಲ್ಯಾಕ್ ಬಣ್ಣದ 'Hyundai' ಮತ್ತು 'Exter' ಲೋಗೋ ಬ್ಯಾಡ್ಜ್&zwnj;ಗಳನ್ನು ನೀಡಲಾಗಿದೆ. ಮುಂಭಾಗ ಹಾಗೂ ಹಿಂಭಾಗದ ಬಂಪರ್&zwnj;ಗಳಲ್ಲಿ ಡಾರ್ಕ್ ಗ್ರೇ ಗಾರ್ನಿಶ್ ನೀಡಲಾಗಿದ್ದರೆ, ಸೈಡ್&zwnj; ಪ್ರೊಫೈಲ್&zwnj;ನಲ್ಲೂ ಡಾರ್ಕ್ ಗ್ರೇ ಟಚ್ ನೀಡಲಾಗಿದೆ.&lt;/p&gt;&lt;p&gt;ಇದಲ್ಲದೆ, ಕಾರಿನ ಸೈಡ್&zwnj;ನಲ್ಲಿ ವಿಶೇಷ 'Knight' ಬ್ಯಾಡ್ಜಿಂಗ್ ಹಾಗೂ 15-ಇಂಚಿನ ಬ್ಲ್ಯಾಕ್ ಅಲಾಯ್ ವೀಲ್&zwnj;ಗಳನ್ನು ಕೊಡಲಾಗಿದೆ. ಮುಂಭಾಗದ ಬ್ರೇಕ್ ಕ್ಯಾಲಿಪರ್&zwnj;ಗಳಿಗೆ ರೆಡ್ ಕಲರ್ ನೀಡಲಾಗಿದ್ದು, ಇದು ಕಪ್ಪು ಬಣ್ಣದ ಥೀಮ್&zwnj;ನೊಂದಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಕೆಲವು ಲೋವರ್ ವೇರಿಯೆಂಟ್&zwnj;ಗಳಲ್ಲಿ ಡಾರ್ಕ್ ಗ್ರೇ ಶೈಲಿಯ ಸ್ಟೀಲ್ ವೀಲ್&zwnj;ಗಳು ಲಭ್ಯವಿರಲಿವೆ. ಪ್ರಸ್ತುತ ಈ ಕಾರನ್ನು ಟೈಟಾನಿಯಂ ಬ್ಲ್ಯಾಕ್, ಅಟ್ಲಾಸ್ ವೈಟ್, ಸ್ಟಾರ್ರಿ ನೈಟ್, ಟೈಟಾನ್ ಗ್ರೇ ಮತ್ತು ಗೋಲ್ಡನ್ ಬ್ರಾಂಜ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.&lt;/p&gt;&lt;h2&gt;&lt;strong&gt;ಆಕರ್ಷಕ ಆಲ್-ಬ್ಲ್ಯಾಕ್ ಇಂಟೀರಿಯರ್&lt;/strong&gt;&lt;/h2&gt;&lt;p&gt;ಎಸ್&zwnj;ಯುವಿಯ ಕ್ಯಾಬಿನ್&zwnj; ಒಳಗೂ ಸಹ ಸಂಪೂರ್ಣ ಬ್ಲ್ಯಾಕ್ ಥೀಮ್ ಅನ್ನೇ ಮುಂದುವರಿಸಲಾಗಿದೆ. ಡ್ಯಾಶ್&zwnj;ಬೋರ್ಡ್ ಮತ್ತು ಕ್ಯಾಬಿನ್&zwnj; ಹಲವೆಡೆ ಗ್ರಾಸ್&zwnj;/ಬ್ರಾಸ್ ಬಣ್ಣದ ಸುಂದರ ಟಚ್ ನೀಡಲಾಗಿದೆ. ಇದರಲ್ಲಿ ಬ್ಲ್ಯಾಕ್ ಸೆಮಿ-ಫ್ಯಾಬ್ರಿಕ್ ಸೀಟ್&zwnj;ಗಳು, ಆಂಬರ್ ಫುಟ್&zwnj;ವೆಲ್ ಆಂಬಿಯೆಂಟ್ ಲೈಟಿಂಗ್ ಹಾಗೂ ಕೆಲವು ವೇರಿಯೆಂಟ್&zwnj;ಗಳಲ್ಲಿ ಬ್ಲ್ಯಾಕ್ ಡಿ-ಕಟ್ ಸ್ಟೀರಿಂಗ್ ವೀಲ್ ನೀಡಲಾಗಿದೆ. ಫೀಚರ್ಸ್&zwnj;ಗಳ ಬಗ್ಗೆ ಹೇಳುವುದಾದರೆ, ಇದರಲ್ಲಿ ಟಚ್&zwnj;ಸ್ಕ್ರೀನ್ ಇನ್ಫೋಟೈನ್&zwnj;ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ತಂತ್ರಜ್ಞಾನ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಲವಾರು ಸುಧಾರಿತ ಸುರಕ್ಷತಾ (Safety) ಫೀಚರ್ಸ್&zwnj;ಗಳು ಲಭ್ಯವಿವೆ.&lt;/p&gt;&lt;h2&gt;&lt;strong&gt;ಎಂಜಿನ್&zwnj;ನಲ್ಲಿ ಯಾವುದೇ ಬದಲಾವಣೆಯಿಲ್ಲ&lt;/strong&gt;&lt;/h2&gt;&lt;p&gt;ಎಕ್ಸ್&zwnj;ಟರ್ ನೈಟ್&zwnj;ನಲ್ಲಿ ಮೊದಲಿನಂತೆಯೇ 1.2-ಲೀಟರ್ ಕಪ್ಪಾ (Kappa) ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಸ್ಮಾರ್ಟ್ ಎಎಮ್&zwnj;ಟಿ ಗೇರ್&zwnj;ಬಾಕ್ಸ್&zwnj;ನೊಂದಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಗೇರ್&zwnj;ಬಾಕ್ಸ್ ಹೊಂದಿರುವ 1.2-ಲೀಟರ್ ಹೈ-ಸಿಎನ್&zwnj;ಜಿ ಡ್ಯುಯೊ ಎಂಜಿನ್ ಆಯ್ಕೆಯನ್ನೂ ನೀಡುತ್ತಿದೆ.&lt;/p&gt;&lt;p&gt;ಹುಂಡೈ ಸಂಸ್ಥೆಯ ಪ್ರಕಾರ, ಕಂಪನಿಯ 'ನೈಟ್ ಎಡಿಷನ್' ಮಾಡೆಲ್&zwnj;ಗಳಿಗೆ ಗ್ರಾಹಕರಿಂದ ಭಾರಿ ಸ್ಪಂದನೆ ಸಿಕ್ಕಿದೆ. 2022ರಲ್ಲಿ ಈ ಎಡಿಷನ್ ಆರಂಭಿಸಿದಾಗಿನಿಂದ ಇದುವರೆಗೆ ಹುಂಡೈ ಬರೋಬ್ಬರಿ 1 ಲಕ್ಷಕ್ಕೂ ಹೆಚ್ಚು 'ನೈಟ್' ಎಡಿಷನ್ ಕಾರುಗಳನ್ನು ಮಾರಾಟ ಮಾಡಿದೆ. ಈಗಿನ ಹೊಸ ಎಕ್ಸ್&zwnj;ಟರ್ ನೈಟ್ ಎಡಿಷನ್ ಮೂಲಕ ಸಣ್ಣ ಎಸ್&zwnj;ಯುವಿ ವಿಭಾಗದಲ್ಲಿ ಗ್ರಾಹಕರಿಗೆ ಮತ್ತಷ್ಟು ಸ್ಪೋರ್ಟಿ ಹಾಗೂ ಪ್ರೀಮಿಯಂ ಆಯ್ಕೆಯನ್ನು ನೀಡಲು ಕಂಪನಿ ಮುಂದಾಗಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/car-news/hyundai-exter-knight-edition-launched-price-features-specs-san/articleshow-pdp797o"/>
        </item>
        <item>
            <title><![CDATA[ಕನ್ನಡದ ಚೆಲುವೆಗೆ ಬಂಪರ್‌ ಚಾನ್ಸ್‌: ಯಶ್‌, ಜೂ.ಎನ್‌ಟಿಆರ್‌ ಬಳಿಕ ರುಕ್ಮಿಣಿ ವಸಂತ್‌ ಮುಂದಿನ ಹೆಜ್ಜೆ ಏನು?]]></title>
            <link>https://kannada.asianetnews.com/gallery/entertainment/rukmini-vasanth-bags-big-films-with-yash-jr-ntr-and-more-gvd-n57k102</link>
            <guid isPermaLink="true">https://kannada.asianetnews.com/gallery/entertainment/rukmini-vasanth-bags-big-films-with-yash-jr-ntr-and-more-gvd-n57k102</guid>
            <pubDate>Wed, 12 Aug 2026 20:33:36 +0530</pubDate>
            <description><![CDATA[Rukmini Vasanth: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್‌, ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvj8v7remjqswkqw7eadebve,imgname-rukmini-vasanth-1781950947086.jpeg" type="image/jpeg" height="390" width="690"/>
            <content:encoded><![CDATA[&lt;p&gt;Rukmini Vasanth: ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್&zwnj;, ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಪ್ಯಾನ್&zwnj; ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ರುಕ್ಮಿಣಿ ವಸಂತ್&zwnj;, ಇದೀಗ ಸಾಲು ಸಾಲು ಸಿನಿಮಾಗಳ ಮೂಲಕ ಪ್ಯಾನ್&zwnj; ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ವಿಭಿನ್ನ ಪಾತ್ರಗಳು ಹಾಗೂ ತಮ್ಮ ಸಹಜ ಅಭಿನಯದ ಮೂಲಕ ಗಮನ ಸೆಳೆದಿರುವ ಈ ಚೆಲುವೆ, ಸದ್ಯ ಹಲವು ಬಹುನಿರೀಕ್ಷಿತ ಸಿನಿಮಾಗಳ ಭಾಗವಾಗಿದ್ದಾರೆ.&lt;/p&gt;&lt;img&gt;&lt;p&gt;ರುಕ್ಮಿಣಿ ವಸಂತ್&zwnj; ಅವರು 2019ರಲ್ಲಿ ತೆರೆಕಂಡ ಕನ್ನಡ ಸಿನಿಮಾ &lsquo;ಬೀರ್&zwnj;ಬಲ್&zwnj;&rsquo; ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಸಿನಿಮಾದಲ್ಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದ ಅವರು, ಬಳಿಕ ಹಿಂದಿಯ &lsquo;ಅಪ್&zwnj;ಸ್ಟೈರ್ಸ್&zwnj;&rsquo; ಸಿನಿಮಾದಲ್ಲೂ ನಟಿಸಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಆದರೆ ರುಕ್ಮಿಣಿ ವಸಂತ್&zwnj; ಅವರ ಸಿನಿಮಾ ಬದುಕಿಗೆ ದೊಡ್ಡ ತಿರುವು ಸಿಕ್ಕಿದ್ದು 2023ರಲ್ಲಿ.&lt;/p&gt;&lt;img&gt;&lt;p&gt;ರಕ್ಷಿತ್&zwnj; ಶೆಟ್ಟಿ ನಾಯಕನಾಗಿ ನಟಿಸಿದ್ದ &lsquo;ಸಪ್ತ ಸಾಗರದಾಚೆ ಎಲ್ಲೋ&rsquo; ಸಿನಿಮಾ ರುಕ್ಮಿಣಿ ವಸಂತ್&zwnj; ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಚಿತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರು ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಸಿನಿಮಾದ ಯಶಸ್ಸಿನ ಬಳಿಕ ರುಕ್ಮಿಣಿಗೆ ಕನ್ನಡ ಮಾತ್ರವಲ್ಲದೆ, ದಕ್ಷಿಣ ಭಾರತದ ಇತರ ಚಿತ್ರರಂಗಗಳಿಂದಲೂ ಅವಕಾಶಗಳು ಹರಿದುಬರಲು ಆರಂಭಿಸಿದವು.&lt;/p&gt;&lt;img&gt;&lt;p&gt;ಹೊಂಬಾಳೆ ಫಿಲ್ಮ್ಸ್&zwnj;ನ ಬಹುನಿರೀಕ್ಷಿತ &lsquo;ಕಾಂತಾರ: ಚಾಪ್ಟರ್&zwnj; 1&rsquo; ಸಿನಿಮಾದಲ್ಲೂ ರುಕ್ಮಿಣಿ ವಸಂತ್&zwnj; ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೂಲಕ ಅವರ ಜನಪ್ರಿಯತೆ ಮತ್ತಷ್ಟು ದೊಡ್ಡ ಮಟ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಇದೇ ವೇಳೆ ತೆಲುಗು ಚಿತ್ರರಂಗಕ್ಕೂ ರುಕ್ಮಿಣಿ ವಸಂತ್&zwnj; ಕಾಲಿಟ್ಟಿದ್ದಾರೆ. ನಿಖಿಲ್&zwnj; ಸಿದ್ಧಾರ್ಥ್&zwnj; ಜೊತೆಗಿನ &lsquo;ಅಪ್ಪುಡ್ ಇಪ್ಪುಡ್ ಎಪ್ಪುಡ್&rsquo; ಸಿನಿಮಾದ ಮೂಲಕ ಅವರು ತೆಲುಗು ಪ್ರೇಕ್ಷಕರಿಗೆ ಪರಿಚಿತರಾದರು.&lt;/p&gt;&lt;img&gt;&lt;p&gt;ರುಕ್ಮಿಣಿ ವಸಂತ್&zwnj; ಅವರ ಕೈಯಲ್ಲಿರುವ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ರಾಕಿಂಗ್&zwnj; ಸ್ಟಾರ್&zwnj; ಯಶ್&zwnj; ಅಭಿನಯದ &lsquo;ಟಾಕ್ಸಿಕ್&zwnj;: ಎ ಫೇರಿ ಟೇಲ್&zwnj; ಫಾರ್ ಗ್ರೋನ್-ಅಪ್ಸ್&zwnj;&rsquo; ಕೂಡ ಪ್ರಮುಖವಾದದ್ದು. ಭರ್ಜರಿ ನಿರೀಕ್ಷೆ ಮೂಡಿಸಿರುವ ಈ ಸಿನಿಮಾದಲ್ಲಿ ರುಕ್ಮಿಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಅವರ ಪಾತ್ರಕ್ಕೆ ಮತ್ತಷ್ಟು ಗಮನ ಸಿಗುವ ಸಾಧ್ಯತೆ ಇದೆ.&lt;/p&gt;&lt;img&gt;&lt;p&gt;ಇಷ್ಟಕ್ಕೇ ರುಕ್ಮಿಣಿ ವಸಂತ್&zwnj; ಅವರ ಸಿನಿ ಜರ್ನಿ ನಿಲ್ಲುತ್ತಿಲ್ಲ. ಮ್ಯಾನ್&zwnj; ಆಫ್&zwnj; ಮಾಸಸ್&zwnj; ಜೂ.ಎನ್&zwnj;ಟಿಆರ್&zwnj; ನಾಯಕನಾಗಿ ನಟಿಸುತ್ತಿರುವ &lsquo;ಡ್ರ್ಯಾಗನ್&zwnj;&rsquo; ಸಿನಿಮಾದಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಒಂದೆಡೆ ಯಶ್&zwnj; ಜೊತೆ &lsquo;ಟಾಕ್ಸಿಕ್&zwnj;&rsquo;, ಮತ್ತೊಂದೆಡೆ ಜೂ.ಎನ್&zwnj;ಟಿಆರ್&zwnj; ಜೊತೆ &lsquo;ಡ್ರ್ಯಾಗನ್&zwnj;&rsquo;... ಹೀಗೆ ಒಂದರ ಹಿಂದೆ ಒಂದರಂತೆ ದೊಡ್ಡ ಸಿನಿಮಾಗಳು ರುಕ್ಮಿಣಿ ವಸಂತ್&zwnj; ಅವರ ಕೈ ಸೇರುತ್ತಿವೆ.&lt;/p&gt;&lt;img&gt;&lt;p&gt;&lsquo;ಬೀರ್&zwnj;ಬಲ್&zwnj;&rsquo; ಮೂಲಕ ನಾಯಕಿಯಾಗಿ ಆರಂಭವಾದ ರುಕ್ಮಿಣಿ ವಸಂತ್&zwnj; ಅವರ ಪಯಣ, &lsquo;ಸಪ್ತ ಸಾಗರದಾಚೆ ಎಲ್ಲೋ&rsquo; ಮೂಲಕ ವೇಗ ಪಡೆದುಕೊಂಡಿತು. ಇದೀಗ ಕನ್ನಡದ ಗಡಿ ದಾಟಿ ತೆಲುಗು, ಹಿಂದಿ ಹಾಗೂ ಪ್ಯಾನ್&zwnj; ಇಂಡಿಯಾ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವ ಮೂಲಕ ತಮ್ಮದೇ ಆದ ಸ್ಥಾನವನ್ನು ಗಟ್ಟಿಗೊಳಿಸುತ್ತಿದ್ದಾರೆ. ಇನ್ನು ಯಶ್&zwnj;, ಜೂ.ಎನ್&zwnj;ಟಿಆರ್&zwnj; ಸೇರಿದಂತೆ ದೊಡ್ಡ ಸ್ಟಾರ್&zwnj;ಗಳ ಸಿನಿಮಾಗಳ ಭಾಗವಾಗಿರುವ ರುಕ್ಮಿಣಿ ವಸಂತ್&zwnj; ಅವರ ಮುಂದಿನ ಹೆಜ್ಜೆ ಇದೀಗ ಸಿನಿಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/gallery/entertainment/rukmini-vasanth-bags-big-films-with-yash-jr-ntr-and-more-gvd-n57k102"/>
        </item>
        <item>
            <title><![CDATA[ನೆಟ್‌ವರ್ಕ್ ಕಂಪನಿಗಳ ಬುಡಕ್ಕೆ ತಂದಿಟ್ಟ ಪ್ರಜ್ವಲ್ ರೇವಣ್ಣ -ಏರ್‍‌ಟೆಲ್ ಕಂಪನಿಗೆ ಅಲೋಕ್ ಕುಮಾರ್ ಎಚ್ಚರಿಕೆ]]></title>
            <link>https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti</link>
            <guid isPermaLink="true">https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti</guid>
            <pubDate>Wed, 12 Aug 2026 20:26:00 +0530</pubDate>
            <description><![CDATA[ಜೈಲಿನ ಜಾಮರ್‌ಗಳನ್ನು ಮೀರಿ ಆಂಧ್ರ ಮೂಲದ 5ಜಿ ಸಿಮ್‌ಗಳನ್ನು ಅಕ್ರಮವಾಗಿ ಬಳಸುತ್ತಿರುವುದನ್ನು ಉಲ್ಲೇಖಿಸಿದ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ರೇವಣ್ಣ ಮೊಬೈಲ್ ಪತ್ತೆ ಪ್ರಕರಣದಲ್ಲಿ ಏರ್‌ಟೆಲ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅವರನ್ನು 'ಸಹ ಆರೋಪಿ' ಎಂದು ಹೆಸರಿಸಲು ಸೂಚಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv7hct6wpxd1rr8zccnh799,imgname-dgp-alok-kumar-on-prajwal-revanna--1--1786546533190.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರೆಕ್&zwnj;ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಈಗ ಮೊಬೈಲ್ ನೆಟ್&zwnj;ವರ್ಕ್ ಕಂಪನಿಗಳ ಬುಡಕ್ಕೆ ಬಂದಿದೆ. ಈ ಅಕ್ರಮದಲ್ಲಿ ನೆಟ್&zwnj;ವರ್ಕ್ ಒದಗಿಸುತ್ತಿರುವ ಏರ್&zwnj;ಟೆಲ್ (Airtel) ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್, ಕಂಪನಿಯನ್ನು ಈ ಪ್ರಕರಣದಲ್ಲಿ 'ಸಹ ಆರೋಪಿ' (Co-accused) ಮಾಡಲು ಸೂಚನೆ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಏರ್&zwnj;ಟೆಲ್&zwnj; ಮೇಲೆ ಡಿಜಿಪಿ ಗರಂ ಆಗಿದ್ದೇಕೆ?&lt;/strong&gt;&lt;/h2&gt;&lt;p&gt;ಜೈಲಿನಲ್ಲಿ ಮೊಬೈಲ್ ಬಳಕೆ ತಡೆಯಲು ಜಾಮರ್&zwnj;ಗಳನ್ನು ಅಳವಡಿಸಲಾಗಿದೆ. ಆದರೆ ಈ ಜಾಮರ್&zwnj;ಗಳ ನಡುವೆಯೂ ಏರ್&zwnj;ಟೆಲ್ ನೆಟ್&zwnj;ವರ್ಕ್ ಮಾತ್ರ ಲಭ್ಯವಾಗುತ್ತಿದೆ ಎನ್ನಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಡಿಜಿಪಿ ಅಲೋಕ್ ಕುಮಾರ್ .. ಪ್ರಜ್ವಲ್ ಬ್ಯಾರೆಕ್&zwnj;ನಲ್ಲಿ ಸಿಕ್ಕ ಮೊಬೈಲ್&zwnj;ನಲ್ಲಿ ಆಂಧ್ರಪ್ರದೇಶ ಮೂಲದ ಏರ್&zwnj;ಟೆಲ್ ಸಿಮ್ ಬಳಸಲಾಗಿದೆ. ಜೈಲಿನಲ್ಲಿ ಬೇರೆ ಯಾವುದೇ ನೆಟ್&zwnj;ವರ್ಕ್ ಸಿಗದಿದ್ದರೂ ಏರ್&zwnj;ಟೆಲ್ 5G ನೆಟ್&zwnj;ವರ್ಕ್ ಮಾತ್ರ ಲಭ್ಯವಾಗುತ್ತಿದೆ. ಎಷ್ಟೇ ಎಚ್ಚರಿಕೆ ನೀಡಿದರೂ ಏರ್&zwnj;ಟೆಲ್ ಸಂಸ್ಥೆಯವರು ಜೈಲಿನೊಳಗೆ ನೆಟ್&zwnj;ವರ್ಕ್ ಸಿಗದಂತೆ ಕ್ರಮ ವಹಿಸುತ್ತಿಲ್ಲ. ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್ ಕಳೆದ ಮಾರ್ಚ್ ತಿಂಗಳಿನಿಂದಲೇ ಬಳಕೆಯಲ್ಲಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಸೋಷಿಯಲ್ ಮೀಡಿಯಾ ಬಳಕೆ&lt;/strong&gt;&lt;/h2&gt;&lt;p&gt;ಜೈಲಿನ ಒಳಗೆ ವೈಫೈ (WiFi) ಆಫ್ ಮಾಡಿಸಿದ್ದರೂ ಏರ್&zwnj;ಟೆಲ್ 5G ನೆಟ್&zwnj;ವರ್ಕ್ ವೇಗವಾಗಿ ಸಿಗುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಸೋಷಿಯಲ್ ಮೀಡಿಯಾ ಕೂಡ ಬಳಕೆ ಮಾಡುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ನೆಟ್&zwnj;ವರ್ಕ್ ಸಿಗುತ್ತಿರುವ ಕಾರಣ ಅವರು ಸಾಮಾಜಿಕ ಜಾಲತಾಣ ಬಳಸಿರಬಹುದು. ಹೀಗಾಗಿ ನಾವು ಏರ್&zwnj;ಟೆಲ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಪಿ ತಿಳಿಸಿದ್ದಾರೆ.&lt;/p&gt;&lt;p&gt;ಈ ಅಕ್ರಮದಲ್ಲಿ ಜೈಲಾಧಿಕಾರಿಗಳ ಶಾಮೀಲಾಗಿರುವ ಸಾಧ್ಯತೆಯೂ ದಟ್ಟವಾಗಿದೆ. ಭದ್ರತಾ ಲೋಪದ ಬಗ್ಗೆ ವಿವರಣೆ ನೀಡುವಂತೆ ಜೈಲು ಎಸ್ಪಿಗೆ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಸಂಬಂಧಪಟ್ಟ ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ವಿಶೇಷವೆಂದರೆ ಈ ಅಧಿಕಾರಿಯನ್ನು ನಿನ್ನೆ ಬೆಳಗ್ಗೆಯಷ್ಟೇ ವರ್ಗಾವಣೆ ಮಾಡಲಾಗಿತ್ತು ಸಂಜೆ ರೇಡ್ ನಡೆದಾಗ ಅಕ್ರಮ ಬಯಲಾಗಿದೆ ಎಂದರು.&lt;/p&gt;&lt;p&gt;ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದರು. ನಮ್ಮ ವ್ಯವಸ್ಥೆ ಸರಿಯಾಗಬೇಕು ಎಂದರೆ ಇಂತಹ ಕಠಿಣ ಕ್ರಮಗಳು ಅನಿವಾರ್ಯ. ಯಾರೇ ಆಗಿರಲಿ ಕಾನೂನು ಕ್ರಮ ಎದುರಿಸಲೇಬೇಕು ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಜೈಲಿನೊಳಗೆ ಆಂಧ್ರದ ಸಿಮ್&zwnj;ಗಳು ಹೇಗೆ ಬರುತ್ತವೆ? ಜಾಮರ್ ಇದ್ದರೂ ಏರ್&zwnj;ಟೆಲ್ ಸಿಗ್ನಲ್ ಹೇಗೆ ಲಭ್ಯವಾಗುತ್ತಿದೆ? ಎಂಬ ಬಗ್ಗೆ ಈಗ ಆಳವಾದ ತನಿಖೆ ಆರಂಭವಾಗಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/prajwal-revanna-mobile-use-case-in-jail-dgp-alok-kumar-warns-airtel-gkn/articleshow-uueprti"/>
        </item>
        <item>
            <title><![CDATA[ಹಿಟ್‌ಮ್ಯಾನ್‌ಗೆ ಬಿಗ್ ಶಾಕ್ ಕೊಟ್ಟ ಗಂಭೀರ್ ಮಾಸ್ಟರ್ ಪ್ಲಾನ್! 2027ರ ವಿಶ್ವಕಪ್ ಟೀಮ್‌ನಲ್ಲಿ ದೊಡ್ಡ ಬದಲಾವಣೆ?]]></title>
            <link>https://kannada.asianetnews.com/cricket-sports/rohit-sharmas-final-odi-chapter-tv-debut-adds-fuel-to-retirement-speculation/articleshow-flpvqv6</link>
            <guid isPermaLink="true">https://kannada.asianetnews.com/cricket-sports/rohit-sharmas-final-odi-chapter-tv-debut-adds-fuel-to-retirement-speculation/articleshow-flpvqv6</guid>
            <pubDate>Wed, 12 Aug 2026 20:16:07 +0530</pubDate>
            <description><![CDATA[ರೋಹಿತ್ ಶರ್ಮಾ ಅವರ 2027ರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಚರ್ಚೆ ಜೋರಾಗಿದೆ. ಆಯ್ಕೆದಾರರು ಯುವ ಆಟಗಾರರತ್ತ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದ್ದು, ರೋಹಿತ್ ಇನ್ನೂ ವಿಶ್ವಕಪ್ ಆಡುವ ಆಸೆ ಹೊಂದಿದ್ದಾರೆ ಎಂಬ ವರದಿಗಳಿವೆ. ಇದೇ ವೇಳೆ ಅವರ ಹೊಸ ಟಿವಿ ಶೋ ಕೂಡ ಗಮನ ಸೆಳೆದಿದ್ದು, ನಿವೃತ್ತಿ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv5zsacp64zm5dker3448my,imgname-rohit-sharma-gambhit-and-ajit-agarkar-1786544907595.jpg" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕೆಲವು ವರದಿಗಳ ಪ್ರಕಾರ, ರಾಷ್ಟ್ರೀಯ ಆಯ್ಕೆದಾರರು ಮತ್ತು ತಂಡದ ಆಡಳಿತ ಮಂಡಳಿ 2027ರ ಏಕದಿನ ವಿಶ್ವಕಪ್&zwnj;ಗಾಗಿ ಯುವ ಆಟಗಾರರತ್ತ ಹೆಚ್ಚು ಗಮನ ಹರಿಸುತ್ತಿದೆ. ಹೀಗಾಗಿ ರೋಹಿತ್ ಅವರ ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣದ ಬಗ್ಗೆ ಅನಿಶ್ಚಿತತೆ ಮೂಡಿದೆ.&lt;/p&gt;&lt;p&gt;&lt;strong&gt;ರೋಹಿತ್&zwnj;ಗೆ ಇನ್ನೂ ವಿಶ್ವಕಪ್ ಆಡುವ ಆಸೆ?&lt;/strong&gt;&lt;/p&gt;&lt;p&gt;ವರದಿಗಳ ಪ್ರಕಾರ, ರೋಹಿತ್ ಇನ್ನೂ ಏಕದಿನ ಕ್ರಿಕೆಟ್ ಮುಂದುವರಿಸಿ 2027ರ ವಿಶ್ವಕಪ್&zwnj;ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದಾರೆ. ಆದರೆ ತಂಡದ ಭವಿಷ್ಯದ ಯೋಜನೆಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.&lt;/p&gt;&lt;p&gt;ಯಶಸ್ವಿ ಜೈಸ್ವಾಲ್, ವೈಭವ ಸೂರ್ಯವಂಶಿ ಸೇರಿದಂತೆ ಯುವ ಬ್ಯಾಟರ್&zwnj;ಗಳಿಗೆ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಅವಕಾಶ ನೀಡುವ ಮೂಲಕ ಮುಂದಿನ ವಿಶ್ವಕಪ್&zwnj;ಗೆ ತಂಡವನ್ನು ಸಿದ್ಧಪಡಿಸುವುದು ಆಯ್ಕೆದಾರರ ಉದ್ದೇಶವಾಗಿರಬಹುದು ಎಂಬ ಮಾತು ಕೇಳಿಬರುತ್ತಿದೆ.&lt;/p&gt;&lt;p&gt;&lt;strong&gt;ಟಿವಿ ಶೋಗೆ ಎಂಟ್ರಿ: ಕ್ರಿಕೆಟ್ ಭವಿಷ್ಯಕ್ಕೆ ಇದೊಂದು ಸುಳಿವೇ?&lt;/strong&gt;&lt;/p&gt;&lt;p&gt;ಈ ನಡುವೆ ರೋಹಿತ್ ಶರ್ಮಾ ಮನರಂಜನಾ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಮತ್ತು ಸೋನಿ ಲೈವ್ ಮೂಲಕ ಅವರ ಹೊಸ ಕಾರ್ಯಕ್ರಮ ಪ್ರಸಾರವಾಗಲಿದೆ. ಕಾರ್ಯಕ್ರಮದ ಸಂಪೂರ್ಣ ಸ್ವರೂಪವನ್ನು ಆರಂಭದಲ್ಲಿ ಬಹಿರಂಗಪಡಿಸದಿದ್ದರೂ, Sony ಅಧಿಕೃತವಾಗಿ &lsquo;Rohit Sharma Show&rsquo; ಅನ್ನು ತನ್ನ ಪ್ಲಾಟ್&zwnj;ಫಾರ್ಮ್&zwnj;ನಲ್ಲಿ ಪಟ್ಟಿ ಮಾಡಿದೆ.&lt;/p&gt;&lt;p&gt;ಇದರಿಂದ ರೋಹಿತ್ ಕ್ರಿಕೆಟ್&zwnj;ನಿಂದ ದೂರ ಸರಿಯಲು ಸಿದ್ಧರಾಗುತ್ತಿದ್ದಾರೆ ಎಂಬ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ. ಆದರೆ ಟಿವಿ ಕಾರ್ಯಕ್ರಮಕ್ಕೆ ಒಪ್ಪಿಕೊಂಡಿರುವುದೇ ನಿವೃತ್ತಿಯ ಖಚಿತ ಸೂಚನೆ ಎಂದು ಹೇಳಲು ಸಾಧ್ಯವಿಲ್ಲ.&lt;/p&gt;&lt;p&gt;SPORTS YAARI EXCLUSIVEROHIT SHARMA RETIREMENT TWIST! Rohit reportedly wants to keep his 2027 World Cup dream alive, while the management is looking towards youngsters like Jaiswal &amp;amp; Suryavanshi. At the same time, Rohit&rsquo;s reported 6-month entertainment show could give&hellip; pic.twitter.com/81jPZeUYRZ&lt;/p&gt;&lt;p&gt;&mdash; Sports Yaari (@YaariSports) August 11, 2026&lt;/p&gt;&lt;p&gt;&lt;/p&gt;&lt;p&gt;&lt;strong&gt;ಮುಂದಿನ ಕೆಲವು ತಿಂಗಳು ನಿರ್ಣಾಯಕ?&lt;/strong&gt;&lt;/p&gt;&lt;p&gt;ರೋಹಿತ್ ಅವರ ODI ಭವಿಷ್ಯವನ್ನು ನಿರ್ಧರಿಸುವಲ್ಲಿ ಅವರ ಫಿಟ್&zwnj;ನೆಸ್, ಫಾರ್ಮ್ ಮತ್ತು ಮುಂದಿನ ಪಂದ್ಯಗಳಲ್ಲಿನ ಪ್ರದರ್ಶನ ಪ್ರಮುಖವಾಗಲಿದೆ. ಅನುಭವ ಮತ್ತು ಯುವಶಕ್ತಿಯ ನಡುವೆ ಸಮತೋಲನ ಸಾಧಿಸುವುದು ಆಯ್ಕೆದಾರರ ಮುಂದಿರುವ ದೊಡ್ಡ ಸವಾಲಾಗಿದೆ.&lt;/p&gt;&lt;p&gt;ಹೀಗಾಗಿ ರೋಹಿತ್ ಶರ್ಮಾ 2027ರ ವಿಶ್ವಕಪ್&zwnj;ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಅಥವಾ ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್&zwnj;ಗೆ ವಿದಾಯ ಹೇಳುತ್ತಾರೆಯೇ ಎಂಬ ಪ್ರಶ್ನೆಗೆ ಈಗಲೇ ಖಚಿತ ಉತ್ತರ ನೀಡಲು ಸಾಧ್ಯವಿಲ್ಲ. ಸದ್ಯಕ್ಕೆ ಇದು ವರದಿಗಳು ಮತ್ತು ಊಹಾಪೋಹಗಳ ಹಂತದಲ್ಲಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Chandrashekar GS</dc:creator>
            <atom:link href="https://kannada.asianetnews.com/cricket-sports/rohit-sharmas-final-odi-chapter-tv-debut-adds-fuel-to-retirement-speculation/articleshow-flpvqv6"/>
        </item>
        <item>
            <title><![CDATA[Why Mongoose kills Snakes: ಮುಂಗುಸಿ-ಹಾವಿನ ನಡುವಿನ ದ್ವೇಷ ಎಲ್ಲಿಂದ ಪ್ರಾರಂಭವಾಯಿತು ಗೊತ್ತಾ?]]></title>
            <link>https://kannada.asianetnews.com/gallery/life/mongoose-and-snake-a-rivalry-older-than-time-itself-69imanc</link>
            <guid isPermaLink="true">https://kannada.asianetnews.com/gallery/life/mongoose-and-snake-a-rivalry-older-than-time-itself-69imanc</guid>
            <pubDate>Wed, 12 Aug 2026 20:14:54 +0530</pubDate>
            <description><![CDATA[Why Mongoose kills Snakes: ಇವುಗಳ ನಡುವಿನ ವೈರತ್ವಕ್ಕೆ ಪುರಾಣದ ಶಾಪ ಮತ್ತು ವಂಶವಾಹಿಗಳ ಪ್ರಭಾವ ಎರಡೂ ಕಾರಣ ಎನ್ನುತ್ತಾರೆ ತಜ್ಞರು. ಜನ್ಮಜಾತ ವೈರಿಗಳಾದ ಇವುಗಳ ದ್ವೇಷದ ಇತಿಹಾಸವನ್ನು ಕೆದಕಿದಾಗ ಹೊರಬಂದ ಅಚ್ಚರಿಯ ಸಂಗತಿಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv6kgkpvt1ae61pyg7sz6kb,imgname-thumbnail---2026-08-12t200237.987-1786545554038.jpg" type="image/jpeg" height="390" width="690"/>
            <content:encoded><![CDATA[&lt;p&gt;Why Mongoose kills Snakes: ಇವುಗಳ ನಡುವಿನ ವೈರತ್ವಕ್ಕೆ ಪುರಾಣದ ಶಾಪ ಮತ್ತು ವಂಶವಾಹಿಗಳ ಪ್ರಭಾವ ಎರಡೂ ಕಾರಣ ಎನ್ನುತ್ತಾರೆ ತಜ್ಞರು. ಜನ್ಮಜಾತ ವೈರಿಗಳಾದ ಇವುಗಳ ದ್ವೇಷದ ಇತಿಹಾಸವನ್ನು ಕೆದಕಿದಾಗ ಹೊರಬಂದ ಅಚ್ಚರಿಯ ಸಂಗತಿಗಳು ಇಲ್ಲಿವೆ.&lt;/p&gt;&lt;img&gt;&lt;p&gt;&lt;strong&gt;ಈ ಮಟ್ಟದ ದ್ವೇಷ ಎಲ್ಲಿಂದ ಶುರುವಾಯಿತು?&lt;/strong&gt;ಹಾವು ಮತ್ತು ಮುಂಗುಸಿ ಕಾಳಗದ ಬಗ್ಗೆ ನಾವು ಬಾಲ್ಯದಿಂದಲೂ ಕೇಳುತ್ತಲೇ ಬಂದಿದ್ದೇವೆ. ಇವೆರಡೂ ಮುಖಾಮುಖಿಯಾದರೆ ಸಾಕು, ಅಲ್ಲಿ ಯುದ್ಧ ಖಚಿತ. ಆದರೆ ಇವೆರಡರ ನಡುವೆ ಈ ಮಟ್ಟದ ದ್ವೇಷ ಎಲ್ಲಿಂದ ಶುರುವಾಯಿತು? ಯಾಕೆ ಇವೆರಡೂ ಒಂದಕ್ಕೊಂದು ಆಗಿಬರುವುದಿಲ್ಲ? ಇದರ ಹಿಂದೆ ಪುರಾಣಗಳ ಕಥೆ ಮತ್ತು ವೈಜ್ಞಾನಿಕ ಕಾರಣಗಳೆರಡೂ ಇವೆ. ಅವುಗಳ ಬಗ್ಗೆ ಇಲ್ಲಿದೆ ವಿವರವಾದ ಮಾಹಿತಿ.&lt;/p&gt;&lt;img&gt;&lt;p&gt;&lt;strong&gt;ಪುರಾಣ ಹೇಳುವ ಶಾಪದ ಕಥೆ&lt;/strong&gt;ಪುರಾಣಗಳ ಪ್ರಕಾರ, ಕಶ್ಯಪ ಪ್ರಜಾಪತಿಗೆ ಕದ್ರು ಮತ್ತು ವಿನತೆ ಎಂಬ ಇಬ್ಬರು ಪತ್ನಿಯರಿದ್ದರು. ಕದ್ರು ಹಾವುಗಳ ತಾಯಿಯಾದರೆ, ವಿನತೆ ಗರುಡ ಮತ್ತು ಅರುಣನ ತಾಯಿ. ಕದ್ರುವಿಗೆ ವಿನತೆಯ ಮೇಲೆ ವಿಪರೀತ ದ್ವೇಷವಿತ್ತು. ಒಮ್ಮೆ ಇವರಿಬ್ಬರ ನಡುವೆ ಪಂದ್ಯವೊಂದು ನಡೆಯುತ್ತದೆ. ಆ ಪಂದ್ಯದಲ್ಲಿ ಕದ್ರು ಮೋಸ ಮಾಡಿ ವಿನತೆ ಸೋಲುವಂತೆ ಮಾಡುತ್ತಾಳೆ ಮತ್ತು ಅವಳನ್ನು ತನ್ನ ದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ.&lt;/p&gt;&lt;img&gt;&lt;p&gt;&lt;strong&gt;ಹಾವುಗಳಿಗೆ ಶಾಪ ನೀಡಿದ ವಿನತೆ&lt;/strong&gt;ನಂತರ ಈ ಮೋಸದ ಬಗ್ಗೆ ತಿಳಿದ ವಿನತೆ, ಹಾವುಗಳಿಗೆ ಶಾಪ ನೀಡುತ್ತಾಳೆ. ಅಂದಿನಿಂದ ವಿನತೆಯ ಮಗನಾದ ಗರುಡನು ಹಾವುಗಳನ್ನು ಕೊಂದು ತಿನ್ನಲು ಪ್ರಾರಂಭಿಸುತ್ತಾನೆ. ಹೀಗೆ ಗರುಡ ಜಾತಿಗೆ ಸೇರಿದ ಪಕ್ಷಿಗಳು ಮತ್ತು ಹಾವುಗಳ ನಡುವೆ ವೈರತ್ವ ಶುರುವಾಯಿತು ಎಂದು ಹೇಳಲಾಗುತ್ತದೆ. ವಿಶೇಷವೆಂದರೆ, ಮುಂಗುಸಿಯನ್ನು ನೆಲ ಗರುಡ (Terrestrial Garuda) ಎಂದು ಕರೆಯಲಾಗುತ್ತದೆ. ಗರುಡನು ಆಕಾಶದಲ್ಲಿ ಹಾವುಗಳನ್ನು ಬೇಟೆಯಾಡಿದರೆ, ಮುಂಗುಸಿಯು ನೆಲದ ಮೇಲೆ ಹಾವುಗಳನ್ನು ಬೇಟೆಯಾಡಿ ಕೊಲ್ಲುತ್ತದೆ ಎಂಬುದು ಪೌರಾಣಿಕ ನಂಬಿಕೆ.&lt;/p&gt;&lt;img&gt;&lt;p&gt;&lt;strong&gt;ಆಹಾರಕ್ಕಾಗಿ ಸಂಘರ್ಷ&lt;/strong&gt;ಇನ್ನು ವೈಜ್ಞಾನಿಕ ಮತ್ತು ಪ್ರಕೃತಿಯ ದೃಷ್ಟಿಕೋನದಿಂದ ನೋಡುವುದಾದರೆ, ಹಾವು ಮತ್ತು ಮುಂಗುಸಿ ಎರಡೂ ಸಹ ಒಂದೇ ರೀತಿಯ ಆಹಾರವನ್ನು (ಸಣ್ಣ ಪ್ರಾಣಿಗಳು, ಇಲಿಗಳು ಇತ್ಯಾದಿ) ಅವಲಂಬಿಸಿವೆ. ಇವು ಹೆಚ್ಚಾಗಿ ಆಹಾರಕ್ಕಾಗಿ ಬೇಟೆಯಾಡುವ ಸಂದರ್ಭದಲ್ಲೇ ಮುಖಾಮುಖಿಯಾಗುತ್ತವೆ. ತನ್ನ ಆಹಾರದ ಮೇಲೆ ಮತ್ತೊಬ್ಬರು ಹಕ್ಕು ಸಾಧಿಸಬಾರದು ಎಂಬ ಪೈಪೋಟಿಯಿಂದ ಇವುಗಳ ನಡುವೆ ಹೋರಾಟ ನಡೆಯುತ್ತದೆ ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;&lt;strong&gt;ವಿಷವನ್ನು ತಡೆಯುವ ಶಕ್ತಿ&lt;/strong&gt;ಹಾವಿನ ವಿಷವು ಮುಂಗುಸಿಯ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಮುಂಗುಸಿಯ ದೇಹವು ಹಾವಿನ ವಿಷವನ್ನು ತಡೆದುಕೊಳ್ಳುವ ವಿಶೇಷ ಶಕ್ತಿಯನ್ನು ಹೊಂದಿದೆ. ಈ ಧೈರ್ಯದಿಂದಲೇ ಮುಂಗುಸಿಯು ಹಾವಿನ ಜೊತೆ ನೇರವಾಗಿ ಹೋರಾಡುತ್ತದೆ ಮತ್ತು ತನ್ನ ವೇಗದಿಂದ ಹಾವನ್ನು ಸೋಲಿಸಿ ಆಹಾರವನ್ನು ದಕ್ಕಿಸಿಕೊಳ್ಳುತ್ತದೆ.&lt;/p&gt;&lt;p&gt;ಒಟ್ಟಾರೆಯಾಗಿ ಹೇಳುವುದಾದರೆ, ಹಾವು ಮತ್ತು ಮುಂಗುಸಿಯ ವೈರತ್ವಕ್ಕೆ ಶಾಪದ ಕಥೆಯ ಜೊತೆಗೆ ಬದುಕಿನ ಉಳಿವಿಗಾಗಿ ನಡೆಸುವ ಹೋರಾಟವೂ ಒಂದು ಪ್ರಮುಖ ಕಾರಣವಾಗಿದೆ.&lt;/p&gt;&lt;p&gt;&lt;strong&gt;Disclaimer: &lt;/strong&gt;ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ಕಥೆಗಳನ್ನು ಆಧರಿಸಿದೆ. ಇದು ಪಂಡಿತರು ಮತ್ತು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದೆ. ಇದನ್ನು ಕೇವಲ ಓದುಗರ ಆಸಕ್ತಿಯ ಮೇರೆಗೆ ಒದಗಿಸಲಾಗಿದ್ದು, ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/mongoose-and-snake-a-rivalry-older-than-time-itself-69imanc"/>
        </item>
        <item>
            <title><![CDATA[Fashion Mistakes: ವಯಸ್ಸಿಗಿಂತ ಚಿಕ್ಕವರಾಗಿ ಕಾಣಬೇಕಾ? ಈ ಫ್ಯಾಷನ್‌ ತಪ್ಪುಗಳನ್ನು ಮಾತ್ರ ಮಾಡಬೇಡಿ!]]></title>
            <link>https://kannada.asianetnews.com/fashion/want-to-look-younger-avoid-these-fashion-mistakes-gvd/articleshow-qb9d2fe</link>
            <guid isPermaLink="true">https://kannada.asianetnews.com/fashion/want-to-look-younger-avoid-these-fashion-mistakes-gvd/articleshow-qb9d2fe</guid>
            <pubDate>Wed, 12 Aug 2026 20:14:17 +0530</pubDate>
            <description><![CDATA[ನಾವು ಧರಿಸುವ ಬಟ್ಟೆ, ಆಯ್ಕೆ ಮಾಡಿಕೊಳ್ಳುವ ಬಣ್ಣ, ಆಭರಣ, ಶೂ ಹಾಗೂ ಮೇಕಪ್‌-ಇವೆಲ್ಲವೂ ನಮ್ಮ ಒಟ್ಟಾರೆ ಲುಕ್‌ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಫ್ಯಾಷನ್‌ ಬಗ್ಗೆ ಮಾಡುವ ಸಣ್ಣ ತಪ್ಪುಗಳೇ ನಮ್ಮ..]]></description>
            <media:content url="https://static.asianetnews.com/images/w-1280,h-720,format-jpg,imgid-01kzv6w6w6c202f0c9t41z4rd2,imgname-mbj-1786545838982.png" type="image/jpeg" height="390" width="690"/>
            <content:encoded><![CDATA[&lt;p&gt;ನಾವು ಧರಿಸುವ ಬಟ್ಟೆ, ಆಯ್ಕೆ ಮಾಡಿಕೊಳ್ಳುವ ಬಣ್ಣ, ಆಭರಣ, ಶೂ ಹಾಗೂ ಮೇಕಪ್&zwnj;-ಇವೆಲ್ಲವೂ ನಮ್ಮ ಒಟ್ಟಾರೆ ಲುಕ್&zwnj; ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಫ್ಯಾಷನ್&zwnj; ಬಗ್ಗೆ ಮಾಡುವ ಸಣ್ಣ ತಪ್ಪುಗಳೇ ನಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದವರಂತೆ ಕಾಣುವಂತೆ ಮಾಡಬಹುದು. ಹಾಗಾದರೆ ಯಂಗ್&zwnj; ಹಾಗೂ ಫ್ರೆಶ್&zwnj; ಲುಕ್&zwnj; ಪಡೆಯಲು ಯಾವ ವಿಚಾರಗಳ ಬಗ್ಗೆ ಗಮನ ಕೊಡಬೇಕು? ಇಲ್ಲಿದೆ ಕೆಲವು ಸರಳ ಫ್ಯಾಷನ್&zwnj; ಟಿಪ್ಸ್&zwnj;.&lt;/p&gt;&lt;p&gt;&lt;strong&gt;ಬಟ್ಟೆಯ ಫಿಟ್&zwnj; ಬಗ್ಗೆ ಇರಲಿ ಗಮನ&lt;/strong&gt;&lt;/p&gt;&lt;p&gt;ತುಂಬಾ ಲೂಸ್&zwnj; ಅಥವಾ ಅತಿಯಾಗಿ ಟೈಟ್&zwnj; ಆಗಿರುವ ಬಟ್ಟೆಗಳು ನಿಮ್ಮ ಲುಕ್&zwnj; ಅನ್ನು ಹಾಳು ಮಾಡಬಹುದು. ಓವರ್&zwnj;ಸೈಜ್&zwnj; ಬಟ್ಟೆಗಳು ದೇಹದ ಆಕಾರವನ್ನು ಸಂಪೂರ್ಣವಾಗಿ ಮರೆಮಾಚಿದರೆ, ತುಂಬಾ ಬಿಗಿಯಾದ ಉಡುಪುಗಳು ಅಸೌಕರ್ಯದ ಜೊತೆಗೆ ಲುಕ್&zwnj;ಗೂ ಧಕ್ಕೆ ತರಬಹುದು. ಹೀಗಾಗಿ ನಿಮ್ಮ ದೇಹದ ಆಕಾರಕ್ಕೆ ಹೊಂದಿಕೊಳ್ಳುವ, ಸರಿಯಾದ ಫಿಟ್&zwnj; ಇರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಉತ್ತಮ. ಸರಿಯಾದ ಫಿಟ್ಟಿಂಗ್&zwnj; ಇರುವ ಉಡುಪು ನಿಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಎಲಿಗಂಟ್&zwnj; ಲುಕ್&zwnj; ನೀಡುತ್ತದೆ.&lt;/p&gt;&lt;p&gt;&lt;strong&gt;ಯಾವಾಗಲೂ ಕಪ್ಪು ಬಟ್ಟೆಯನ್ನೇ ಆಯ್ಕೆ ಮಾಡಬೇಡಿ!&lt;/strong&gt;&lt;/p&gt;&lt;p&gt;ಕಪ್ಪು ಬಣ್ಣ ಯಾವತ್ತಿಗೂ ಕ್ಲಾಸಿಕ್&zwnj; ಆಯ್ಕೆ. ಆದರೆ ಪ್ರತಿಬಾರಿಯೂ ಸಂಪೂರ್ಣ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಕೆಲವೊಮ್ಮೆ ಮುಖದ ಹೊಳಪು ಕಡಿಮೆಯಾಗಿ ಕಾಣಬಹುದು. ಇದಕ್ಕೆ ಬದಲಾಗಿ ಪಿಂಕ್&zwnj;, ಲೈಟ್&zwnj; ಬ್ಲೂ, ವೈಟ್&zwnj; ಸೇರಿದಂತೆ ಲೈಟ್&zwnj; ಹಾಗೂ ಬ್ರೈಟ್&zwnj; ಶೇಡ್&zwnj;ಗಳನ್ನು ನಿಮ್ಮ ವಾರ್ಡ್&zwnj;ರೋಬ್&zwnj;ಗೆ ಸೇರಿಸಿಕೊಳ್ಳಿ. ಇಂತಹ ಬಣ್ಣಗಳು ಮುಖಕ್ಕೆ ಫ್ರೆಶ್&zwnj;ನೆಸ್&zwnj; ನೀಡುವುದರ ಜೊತೆಗೆ ಲುಕ್&zwnj; ಅನ್ನು ಯಂಗ್&zwnj; ಆಗಿ ಕಾಣುವಂತೆ ಮಾಡಬಹುದು.&lt;/p&gt;&lt;p&gt;&lt;strong&gt;ಹಳೆಯ ಸ್ಟೈಲ್&zwnj; ಆಕ್ಸೆಸರೀಸ್&zwnj;ಗೆ ಹೇಳಿ ಗುಡ್&zwnj;ಬೈ!&lt;/strong&gt;&lt;/p&gt;&lt;p&gt;ನಿಮ್ಮ ಉಡುಪು ಎಷ್ಟೇ ಸ್ಟೈಲಿಶ್&zwnj; ಆಗಿದ್ದರೂ, ಹಳೆಯ ವಿನ್ಯಾಸದ ಕನ್ನಡಕ, ಅತಿಯಾಗಿ ದೊಡ್ಡದಾದ ಆಭರಣಗಳು ಅಥವಾ ಸವೆದುಹೋದ ಶೂಗಳು ಇಡೀ ಲುಕ್&zwnj; ಅನ್ನು ಹಾಳು ಮಾಡಬಹುದು. ಹೀಗಾಗಿ ಸಿಂಪಲ್&zwnj; ಹಾಗೂ ಮಾಡರ್ನ್&zwnj; ಡಿಸೈನ್&zwnj;ನ ಆಕ್ಸೆಸರೀಸ್&zwnj; ಆಯ್ಕೆ ಮಾಡುವುದು ಉತ್ತಮ. ಅದೇ ರೀತಿ ಕ್ಲೀನ್&zwnj; ಆಗಿ, ಸರಿಯಾಗಿ ಮೆಂಟೇನ್&zwnj; ಮಾಡಿರುವ ಹಾಗೂ ನಿಮ್ಮ ಉಡುಪಿಗೆ ಹೊಂದುವ ಶೂ ಧರಿಸುವುದರಿಂದ ಲುಕ್&zwnj; ಇನ್ನಷ್ಟು ಪ್ರೀಮಿಯಂ ಆಗಿ ಕಾಣುತ್ತದೆ.&lt;/p&gt;&lt;p&gt;&lt;strong&gt;ಮೇಕಪ್&zwnj; ಕೂಡ ಇರಲಿ ನ್ಯಾಚುರಲ್&zwnj;&lt;/strong&gt;&lt;/p&gt;&lt;p&gt;ಯಂಗ್&zwnj; ಲುಕ್&zwnj;ಗಾಗಿ ಮೇಕಪ್&zwnj; ಮಾಡುವಾಗ ಅತಿಯಾಗಿ ಪ್ರಾಡಕ್ಟ್&zwnj;ಗಳನ್ನು ಬಳಸುವ ಅಗತ್ಯವಿಲ್ಲ. ವಿಶೇಷವಾಗಿ ಕಣ್ಣಿನ ಕೆಳಭಾಗದಲ್ಲಿ ತುಂಬಾ ಡಾರ್ಕ್&zwnj; ಮೇಕಪ್&zwnj; ಅಥವಾ ಅತಿಯಾದ ಐಲೈನರ್&zwnj; ಬಳಸುವುದರಿಂದ ಮುಖದ ಸಣ್ಣ ಗೆರೆಗಳು ಮತ್ತಷ್ಟು ಎದ್ದು ಕಾಣಬಹುದು. ಇದಕ್ಕೆ ಬದಲಾಗಿ ಲೈಟ್&zwnj; ಹಾಗೂ ನ್ಯಾಚುರಲ್&zwnj; ಮೇಕಪ್&zwnj; ಲುಕ್&zwnj; ಆಯ್ಕೆ ಮಾಡಬಹುದು. ಕಡಿಮೆ ಮೇಕಪ್&zwnj;ನಲ್ಲೇ ಮುಖದ ನೈಸರ್ಗಿಕ ಸೌಂದರ್ಯವನ್ನು ಹೈಲೈಟ್&zwnj; ಮಾಡುವುದರಿಂದ ಫ್ರೆಶ್&zwnj; ಲುಕ್&zwnj; ಸಿಗುತ್ತದೆ.&lt;/p&gt;&lt;p&gt;&lt;strong&gt;ವಾಚ್&zwnj; ಆಯ್ಕೆಯಲ್ಲೂ ಇರಲಿ ಕಾಳಜಿ&lt;/strong&gt;&lt;/p&gt;&lt;p&gt;ನಿಮ್ಮ ಕೈಗೆ ಅತಿಯಾಗಿ ದೊಡ್ಡದಾಗಿರುವ ಅಥವಾ ತುಂಬಾ ದಪ್ಪವಾದ ಡಯಲ್&zwnj; ಹೊಂದಿರುವ ವಾಚ್&zwnj; ಕೆಲವೊಮ್ಮೆ ಒಟ್ಟಾರೆ ಲುಕ್&zwnj;ಗೆ ಭಾರವಾಗಬಹುದು. ನಿಮ್ಮ ಕೈಗೆ ಸರಿಹೊಂದುವ, ಸಿಂಪಲ್&zwnj; ಹಾಗೂ ಎಲಿಗಂಟ್&zwnj; ಡಿಸೈನ್&zwnj;ನ ವಾಚ್&zwnj; ಆಯ್ಕೆ ಮಾಡುವುದು ಹೆಚ್ಚು ಸ್ಟೈಲಿಶ್&zwnj; ಆಗಿ ಕಾಣಿಸಬಹುದು.&lt;/p&gt;&lt;h2&gt;&lt;strong&gt;ಚಿಕ್ಕ ಬದಲಾವಣೆ, ದೊಡ್ಡ ವ್ಯತ್ಯಾಸ!&lt;/strong&gt;&lt;/h2&gt;&lt;p&gt;ಯಂಗ್&zwnj; ಆಗಿ ಕಾಣಲು ದುಬಾರಿ ಬಟ್ಟೆ ಅಥವಾ ಹೆಚ್ಚು ಮೇಕಪ್&zwnj; ಅಗತ್ಯವಿಲ್ಲ. ಸರಿಯಾದ ಫಿಟ್&zwnj;, ಫ್ರೆಶ್&zwnj; ಬಣ್ಣಗಳು, ಮಾಡರ್ನ್&zwnj; ಆಕ್ಸೆಸರೀಸ್&zwnj;, ಕ್ಲೀನ್&zwnj; ಫುಟ್&zwnj;ವೇರ್&zwnj; ಹಾಗೂ ನ್ಯಾಚುರಲ್&zwnj; ಮೇಕಪ್&zwnj;-ಈ ಕೆಲವು ಸರಳ ಬದಲಾವಣೆಗಳೇ ನಿಮ್ಮ ಒಟ್ಟಾರೆ ಲುಕ್&zwnj;ಗೆ ಹೊಸತನ ನೀಡಬಹುದು.&lt;/p&gt;&lt;p&gt;&lt;strong&gt;ಗಮನಿಸಿ:&lt;/strong&gt; ಇದು ಸಾಮಾನ್ಯ ಫ್ಯಾಷನ್&zwnj; ಮತ್ತು ಲೈಫ್&zwnj;ಸ್ಟೈಲ್&zwnj; ಮಾಹಿತಿ ಮಾತ್ರ. ವೈಯಕ್ತಿಕ ಸೌಂದರ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆ ಪಡೆಯುವುದು ಸೂಕ್ತ.&lt;/p&gt;]]></content:encoded>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/fashion/want-to-look-younger-avoid-these-fashion-mistakes-gvd/articleshow-qb9d2fe"/>
        </item>
        <item>
            <title><![CDATA[ಸ್ಯಾಂಡಲ್‌ವುಡ್‌ನಲ್ಲಿ ಭೀಮನ ಅಮವಾಸ್ಯೆ ಕಳೆ ಹೆಚ್ಚಿಸಿದ ನಟಿ-ನಟಿಯರು!]]></title>
            <link>https://kannada.asianetnews.com/gallery/tv-talk/sandalwood-celebrities-celebrate-bheemana-amavasya-festival-san-hx7cgiw</link>
            <guid isPermaLink="true">https://kannada.asianetnews.com/gallery/tv-talk/sandalwood-celebrities-celebrate-bheemana-amavasya-festival-san-hx7cgiw</guid>
            <pubDate>Wed, 12 Aug 2026 20:03:23 +0530</pubDate>
            <description><![CDATA[ಭೀಮನ ಅಮಾವಾಸ್ಯೆಯ ಪ್ರಯುಕ್ತ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ತಾರೆಯರು ತಮ್ಮ ಪತಿಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ, ಪಾದಪೂಜೆ ನೆರವೇರಿಸಿದ್ದಾರೆ. ನೆನಪಿರಲಿ ಪ್ರೇಮ್ ಪತ್ನಿ, ಉಗ್ರಂ ಮಂಜು ದಂಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv5mj09qr8ywwxm035esk1x,imgname-bheemana-amavasyye-kannada-actress--3--1786544539657.jpg" type="image/jpeg" height="390" width="690"/>
            <content:encoded><![CDATA[&lt;p&gt;ಭೀಮನ ಅಮಾವಾಸ್ಯೆಯ ಪ್ರಯುಕ್ತ ಸ್ಯಾಂಡಲ್&zwnj;ವುಡ್ ಹಾಗೂ ಕಿರುತೆರೆಯ ತಾರೆಯರು ತಮ್ಮ ಪತಿಯರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿ, ಪಾದಪೂಜೆ ನೆರವೇರಿಸಿದ್ದಾರೆ. ನೆನಪಿರಲಿ ಪ್ರೇಮ್ ಪತ್ನಿ, ಉಗ್ರಂ ಮಂಜು ದಂಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸಂಪ್ರದಾಯಬದ್ಧವಾಗಿ ಹಬ್ಬ ಆಚರಿಸಿದ್ದಾರೆ.&lt;/p&gt;&lt;img&gt;&lt;p&gt;ಪತಿಯ ಆರೋಗ್ಯ, ಸುಖ-ಸಂಪತ್ತು ಹಾಗೂ ದೀರ್ಘಾಯುಷ್ಯಕ್ಕಾಗಿ ವಿವಾಹಿತ ಮಹಿಳೆಯರು ಆಚರಿಸುವ 'ಭೀಮನ ಅಮಾವಾಸ್ಯೆ' ಹಬ್ಬವನ್ನು ಕನ್ನಡ ಚಿತ್ರರಂಗದ ಪ್ರಮುಖ ತಾರೆಯರು ಅತ್ಯಂತ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ. ಪತಿಗೆ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆಯುವ ಮೂಲಕ ಹಬ್ಬದ ಸಂಭ್ರಮದಲ್ಲಿದ್ದಾರೆ. ಚಿತ್ರದಲ್ಲಿ ಭೀಮನ ಅಮವಾಸ್ಯೆಯಂದು ಗಂಡ ವಿನಯ್&zwnj; ಪಾದಪೂಜೆ ಮಾಡಿದ ಐಶ್ವರ್ಯಾ.&lt;/p&gt;&lt;img&gt;&lt;p&gt;'ಲವ್ಲಿ ಸ್ಟಾರ್' ನೆನಪಿರಲಿ ಪ್ರೇಮ್ ಅವರ ಪತ್ನಿ ಜ್ಯೋತಿ ಅವರು ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿಯೂ ಭೀಮನ ಅಮಾವಾಸ್ಯೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ್ದಾರೆ. ಪತಿ ಪ್ರೇಮ್ ಅವರಿಗೆ ಪಾದಪೂಜೆ ನೆರವೇರಿಸಿ ಪತಿಯ ಆಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಜೊತೆಯಲ್ಲಿ'ಬಿಗ್ ಬಾಸ್' ಖ್ಯಾತಿಯ ರಂಜಿತ್ - ಮಾನಸಾ ದಂಪತಿ ಕೂಡ ಸಂಭ್ರಮವನ್ನು ಆಚರಿಸಿದರು.&lt;/p&gt;&lt;img&gt;&lt;p&gt;ಕೇವಲ ಸಿನಿಮಾರಂಗ ಮಾತ್ರವಲ್ಲದೆ ಕಿರುತೆರೆಯ ಹಲವು ಜನಪ್ರಿಯ ನಟ-ನಟಿಯರು ಕೂಡ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಇತ್ತೀಚೆಗೆ ವಿವಾಹವಾಗಿರುವ 'ಉಗ್ರಂ' ಮಂಜು - ಸಂಧ್ಯಾ ದಂಪತಿ ಭೀಮನ ಅಮವಾಸ್ಯೆ ಆಚರಿಸಿ ಚೆಂದದ ಫೋಟೋಗಳಿಗೆ ಪೋಸ್ ನೀಡಿದ್ದಾರೆ.&lt;/p&gt;&lt;img&gt;&lt;p&gt;'ಮಜಾ ಭಾರತ' ಮೂಲಕ ಮನೆಮಾತಾಗಿರುವ ಸುಷ್ಮಿತಾ - ಜಗಪ್ಪ ದಂಪತಿ ಕೂಡ ಸಂಪ್ರದಾಯ ತಪ್ಪದೇ ಭೀಮನ ಅಮಾವಾಸ್ಯೆ ಪೂಜೆಯನ್ನು ನೆರವೇರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಅಮೃತವರ್ಷಿಣಿ ಸೀರಿಯಲ್&zwnj; ಮೂಲಕ ಮನೆಮಾತಾಗಿದ್ದ ನಟಿ ರಜಿನಿ ಗಂಡ ಅರುಣ್&zwnj; ಅವರ ಪಾದಪೂಜೆ ಮಾಡಿ ಫೋಟೋ ಹಂಚಿಕೊಂಡಿದ್ದಾರೆ. ಕನ್ನಡ ತಾರೆಯರ ಈ ಭೀಮನ ಅಮಾವಾಸ್ಯೆ ಆಚರಣೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/gallery/tv-talk/sandalwood-celebrities-celebrate-bheemana-amavasya-festival-san-hx7cgiw"/>
        </item>
        <item>
            <title><![CDATA[40 ವರ್ಷಗಳ ಕಲಾ ಪಯಣಕ್ಕೆ ತಾರಾ ಅನುರಾಧ: ನೆನಪುಗಳ ಹಾದಿಯಲ್ಲಿ ಭಾವುಕರಾದ ‘ತಾರಮ್ಮ’!]]></title>
            <link>https://kannada.asianetnews.com/sandalwood/tara-anuradha-completes-40-years-in-kannada-cinema-actress-gets-emotional-gvd/articleshow-tgzkb7c</link>
            <guid isPermaLink="true">https://kannada.asianetnews.com/sandalwood/tara-anuradha-completes-40-years-in-kannada-cinema-actress-gets-emotional-gvd/articleshow-tgzkb7c</guid>
            <pubDate>Wed, 12 Aug 2026 19:39:41 +0530</pubDate>
            <description><![CDATA[ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿವೆ. 1986ರ ಆಗಸ್ಟ್‌ 10ರಂದು ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದ ಹಿರಿಯ ನಟಿ ತಾರಾ ಅನುರಾಧ, ಇದೀಗ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv4wbkgr08hbnns994tm7xr,imgname-kbn-1786543746672.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಬೆಳ್ಳಿ ತೆರೆಗೆ ಕಾಲಿಟ್ಟು ನಾಲ್ಕು ದಶಕಗಳೇ ಕಳೆದಿವೆ. 1986ರ ಆಗಸ್ಟ್&zwnj; 10ರಂದು ನಾಯಕಿಯಾಗಿ ಸಿನಿಪಯಣ ಆರಂಭಿಸಿದ್ದ ಹಿರಿಯ ನಟಿ ತಾರಾ ಅನುರಾಧ, ಇದೀಗ ಚಿತ್ರರಂಗದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. ನಾಯಕಿಯಿಂದ ಪೋಷಕ ನಟಿಯವರೆಗೆ, ವೈವಿಧ್ಯಮಯ ಪಾತ್ರಗಳಿಂದ ಪ್ರಶಸ್ತಿ-ಪುರಸ್ಕಾರಗಳವರೆಗೆ ಸುದೀರ್ಘ ಪಯಣ ಕಂಡಿರುವ ತಾರಾ, ಈ ವಿಶೇಷ ಸಂದರ್ಭದಲ್ಲಿ ತಮ್ಮ ಸಿನಿಮಾ ಬದುಕನ್ನು ಮೆಲುಕು ಹಾಕಿದ್ದಾರೆ.&lt;/p&gt;&lt;p&gt;ತಮ್ಮ 40 ವರ್ಷಗಳ ಕಲಾ ಪಯಣದ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತಾರಾ, ತಮ್ಮನ್ನು ಬೆಳೆಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಚಿತ್ರೀಕರಣದ ಸೆಟ್&zwnj;ನಲ್ಲೂ ಚಿತ್ರತಂಡ ವಿಶೇಷವಾಗಿ ಕೇಕ್ ಕತ್ತರಿಸಿ ಅವರ ನಾಲ್ಕು ದಶಕಗಳ ಸಿನಿ ಪಯಣವನ್ನು ಸಂಭ್ರಮಿಸಿದೆ.&lt;/p&gt;&lt;p&gt;&lt;strong&gt;ನಾಯಕಿಯಾಗಿ ಬಂದು 40 ವರ್ಷ... ನೆನಪುಗಳ ಬುತ್ತಿ ತೆರೆದ ತಾರಾ!&lt;/strong&gt;&lt;/p&gt;&lt;p&gt;ತಮ್ಮ ಇನ್&zwnj;ಸ್ಟಾಗ್ರಾಂ ಪೋಸ್ಟ್&zwnj;ನಲ್ಲಿ ಭಾವುಕವಾಗಿ ಬರೆದುಕೊಂಡಿರುವ ತಾರಾ, ನಾಯಕಿಯಾಗಿ ತಮ್ಮನ್ನು ತಾವು ಬೆಳ್ಳಿ ಪರದೆಯ ಮೇಲೆ ನೋಡಿಕೊಂಡು 40 ವರ್ಷಗಳು ಕಳೆದಿರುವುದನ್ನು ನೆನಪಿಸಿಕೊಂಡಿದ್ದಾರೆ. ವಿವಿಧ ಭಾಷೆಗಳಲ್ಲಿ, ನಾನಾ ರೀತಿಯ ಪಾತ್ರಗಳಲ್ಲಿ ನಟಿಸಿದ ಅನುಭವ, ಹಿರಿಯ-ಕಿರಿಯ ಕಲಾವಿದರೊಂದಿಗೆ ಕೆಲಸ ಮಾಡಿದ ಕ್ಷಣಗಳು, ಸವಾಲುಗಳು, ಪ್ರಶಸ್ತಿ-ಗೌರವಗಳು ಸೇರಿದಂತೆ ತಮ್ಮ ಬದುಕಿನ ಹಲವು ಮಧುರ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಉದ್ಯೋಗದ ಜೊತೆಗೆ ವೈಯಕ್ತಿಕ ಬದುಕು, ಜೀವನ ಸಂಗಾತಿ ಸೇರಿದಂತೆ ಬದುಕು ತಮಗೆ ನೀಡಿದ ಪ್ರತಿಯೊಂದು ಅನುಭವಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ನನ್ನನ್ನು ಪೋಷಿಸಿದ ನಿರ್ಮಾಪಕರಿಗೆ, ರೂಪಿಸಿದ ನಿರ್ದೇಶಕರಿಗೆ ಧನ್ಯವಾದ&rsquo;&lt;/strong&gt;&lt;/p&gt;&lt;p&gt;ತಮ್ಮ ಯಶಸ್ಸಿನ ಹಿಂದೆ ನಿಂತ ನಿರ್ಮಾಪಕರು, ನಿರ್ದೇಶಕರು, ಸಾಹಿತಿಗಳು, ಬರಹಗಾರರು ಹಾಗೂ ಸಹ ಕಲಾವಿದರನ್ನು ತಾರಾ ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ. ತಮ್ಮನ್ನು ಕಲಾವಿದೆಯಾಗಿ ರೂಪಿಸಿದ ನಿರ್ದೇಶಕರು, ಅವಕಾಶ ನೀಡಿದ ನಿರ್ಮಾಪಕರು ಹಾಗೂ ತಮ್ಮೊಂದಿಗೆ ಕೆಲಸ ಮಾಡಿದ ತಾಂತ್ರಿಕ ವರ್ಗದ ಹಿರಿಯ-ಕಿರಿಯರಿಗೆ ಧನ್ಯವಾದ ಅರ್ಪಿಸಿರುವ ಅವರು, ಪತ್ರಿಕಾ ಮತ್ತು ಮಾಧ್ಯಮ ಬಳಗ ಹಾಗೂ ನಾಲ್ಕು ದಶಕಗಳಿಂದ ತಮ್ಮನ್ನು ಪ್ರೀತಿಸುತ್ತಿರುವ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.&lt;/p&gt;View this post on Instagram&lt;p&gt;A post shared by Tharaanooradha (@dr.tharanooradha_official)&lt;/p&gt;&lt;p&gt;&lt;/p&gt;&lt;p&gt;&lt;strong&gt;ಕುಟುಂಬದವರನ್ನು ಮರೆಯದ ತಾರಾ!&lt;/strong&gt;&lt;/p&gt;&lt;p&gt;40 ವರ್ಷಗಳ ಈ ಪಯಣದಲ್ಲಿ ಕುಟುಂಬದ ಬೆಂಬಲವನ್ನು ತಾರಾ ವಿಶೇಷವಾಗಿ ಸ್ಮರಿಸಿದ್ದಾರೆ. ತಮ್ಮ ತಂದೆ-ತಾಯಿ, ಸಹೋದರ-ಸಹೋದರಿ ಹಾಗೂ ಅತ್ತೆಯಮ್ಮನನ್ನು ನೆನಪಿಸಿಕೊಂಡಿರುವ ಅವರು, ತಾವು ಚಿತ್ರರಂಗಕ್ಕೆ ಬರಲು ಪ್ರಮುಖ ಕಾರಣರಾದ ದೊಡ್ಡಮ್ಮ ಲೀಲಮ್ಮ ಹಾಗೂ ತಾತ ನಾರಾಯಣಸ್ವಾಮಿ ಅವರನ್ನೂ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಜೊತೆಯಾಗಿ ನಿಂತ ಅಭಿಮಾನಿಗಳು ಹಾಗೂ ತಾವು ನಂಬಿರುವ ದೇವರಿಗೂ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿದ್ದಾರೆ.&lt;/p&gt;&lt;p&gt;&lt;strong&gt;ಸೆಟ್&zwnj;ನಲ್ಲೂ ಡಬಲ್ ಸಂಭ್ರಮ!&lt;/strong&gt;&lt;/p&gt;&lt;p&gt;ತಾರಾ ಅವರ 40 ವರ್ಷಗಳ ಸಿನಿ ಪಯಣದ ಸಂಭ್ರಮ ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿಲ್ಲ. ಚಿತ್ರೀಕರಣದ ಸೆಟ್&zwnj;ನಲ್ಲೇ ಚಿತ್ರತಂಡ ವಿಶೇಷ ಕೇಕ್ ತರಿಸಿ ತಾರಾ ಅವರಿಂದ ಕೇಕ್ ಕತ್ತರಿಸಿದೆ. ಈ ಸುಂದರ ಕ್ಷಣಗಳ ವಿಡಿಯೊವನ್ನು ನಟಿ ತಮ್ಮ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಹಾಗೂ ಪೋಸ್ಟ್&zwnj;ಗೆ ಅಭಿಮಾನಿಗಳು, ಸ್ಯಾಂಡಲ್&zwnj;ವುಡ್&zwnj;ನ ಕಲಾವಿದರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. &lsquo;ಕನ್ನಡ ಚಿತ್ರರಂಗದ ಹೆಮ್ಮೆಯ ತಾರಮ್ಮ&rsquo; ಎಂದು ಹಲವರು ನಟಿಯನ್ನು ಕೊಂಡಾಡಿದ್ದಾರೆ.&lt;/p&gt;View this post on Instagram&lt;p&gt;A post shared by Tharaanooradha (@dr.tharanooradha_official)&lt;/p&gt;&lt;p&gt;&lt;/p&gt;&lt;h2&gt;&lt;strong&gt;ನಾಯಕಿಯಿಂದ &lsquo;ತಾರಮ್ಮ&rsquo;ವರೆಗೆ... ನಾಲ್ಕು ದಶಕಗಳ ಪಯಣ!&lt;/strong&gt;&lt;/h2&gt;&lt;p&gt;ನಾಯಕಿಯಾಗಿ ಆರಂಭವಾದ ತಾರಾ ಅನುರಾಧ ಅವರ ಸಿನಿ ಪಯಣ ಇಂದು ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟಿಯರ ಸಾಲಿನಲ್ಲಿ ಅವರನ್ನು ನಿಲ್ಲಿಸಿದೆ. ನಟನೆಗಾಗಿ ಹಲವು ಗೌರವಗಳು, ಪ್ರಶಸ್ತಿಗಳನ್ನು ಪಡೆದಿರುವ ಅವರು, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಾಲ್ಕು ದಶಕಗಳ ಹಿಂದೆ ನಾಯಕಿಯಾಗಿ ಬೆಳ್ಳಿ ತೆರೆಗೆ ಬಂದ &lsquo;ತಾರಮ್ಮ&rsquo;, ಇಂದಿಗೂ ಅದೇ ಪ್ರೀತಿಯೊಂದಿಗೆ ಪ್ರೇಕ್ಷಕರ ಮನದಲ್ಲಿ ಉಳಿದಿರುವುದೇ ಅವರ ಕಲಾ ಪಯಣದ ದೊಡ್ಡ ಗೆಲುವು.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/tara-anuradha-completes-40-years-in-kannada-cinema-actress-gets-emotional-gvd/articleshow-tgzkb7c"/>
        </item>
        <item>
            <title><![CDATA[ಕಡಿಮೆ ಖರ್ಚಲ್ಲಿ ಭರ್ಜರಿ ಲುಕ್​ ನೀಡುವ ಚಿನ್ನದ ಉಂಗುರಗಳ ಡಿಸೈನ್ಸ್​: ಇಲ್ಲಿವೆ ಫೋಟೋಸ್​]]></title>
            <link>https://kannada.asianetnews.com/gallery/life/gold-ring-designs-that-give-a-great-look-at-a-low-cost-here-are-the-photos-suc-1ytrzzs</link>
            <guid isPermaLink="true">https://kannada.asianetnews.com/gallery/life/gold-ring-designs-that-give-a-great-look-at-a-low-cost-here-are-the-photos-suc-1ytrzzs</guid>
            <pubDate>Wed, 12 Aug 2026 19:37:23 +0530</pubDate>
            <description><![CDATA[ಚಿನ್ನದ ಬೆಲೆ ಏರಿಕೆಯ ನಡುವೆಯೂ, ಹಬ್ಬಗಳಿಗೆ, ಕಚೇರಿಗೆ ಅಥವಾ ದೈನಂದಿನ ಬಳಕೆಗೆ ಹೊಂದುವ ಬಜೆಟ್ ಸ್ನೇಹಿ ಚಿನ್ನದ ಉಂಗುರಗಳ ವಿನ್ಯಾಸಗಳನ್ನು ಈ ಲೇಖನ ಪರಿಚಯಿಸುತ್ತದೆ. ಹೂವಿನ, ಹೃದಯಾಕಾರದ ಹಾಗೂ ಸರಳ ವಿನ್ಯಾಸಗಳಂತಹ ಸುಂದರ ಆಯ್ಕೆಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಎಲ್ಲರ ಗಮನ ಸೆಳೆಯುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv4hhz7neqyg8vqb5ymk753,imgname-gold-rings-00-1786543392743.jpg" type="image/jpeg" height="390" width="690"/>
            <content:encoded><![CDATA[ಚಿನ್ನದ ಬೆಲೆ ಏರಿಕೆಯ ನಡುವೆಯೂ, ಹಬ್ಬಗಳಿಗೆ, ಕಚೇರಿಗೆ ಅಥವಾ ದೈನಂದಿನ ಬಳಕೆಗೆ ಹೊಂದುವ ಬಜೆಟ್ ಸ್ನೇಹಿ ಚಿನ್ನದ ಉಂಗುರಗಳ ವಿನ್ಯಾಸಗಳನ್ನು ಈ ಲೇಖನ ಪರಿಚಯಿಸುತ್ತದೆ. ಹೂವಿನ, ಹೃದಯಾಕಾರದ ಹಾಗೂ ಸರಳ ವಿನ್ಯಾಸಗಳಂತಹ ಸುಂದರ ಆಯ್ಕೆಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಎಲ್ಲರ ಗಮನ ಸೆಳೆಯುತ್ತವೆ.&lt;img&gt;&lt;p&gt;ನೀವು ಈ ಹಬ್ಬದ ಋತುವಿನಲ್ಲಿ ಚಿನ್ನದ ಆಭರಣಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಆದರೆ ಬೆಲೆ ಏರಿಕೆಯಿಂದಾಗಿ ನಿಮ್ಮ ಆಸೆ ಕುಗ್ಗಿದ್ದರೆ, ಚಿಂತಿಸಬೇಡಿ. ಈ ಹಬ್ಬದ ದಿನಗಳಲ್ಲಿ ನೀವು ಈ ಸುಂದರವಾದ ಚಿನ್ನದ ಉಂಗುರವನ್ನು ಪಡೆಯಬಹುದು. ರಾಖಿ ಹಬ್ಬದಲ್ಲಾದರೆ, ಈ ಬಜೆಟ್ ಸ್ನೇಹಿ ಚಿನ್ನದ ಉಂಗುರ ವಿನ್ಯಾಸವನ್ನು ಬಳಸಿ ಮಾಡಿದ ಉಂಗುರವನ್ನು ನೀವು ನಿಮ್ಮ ಸಹೋದರಿಗೆ ಉಡುಗೊರೆಯಾಗಿ ನೀಡಬಹುದು.&lt;/p&gt;&lt;img&gt;&lt;p&gt;ಈ ಉಂಗುರಗಳ ವಿನ್ಯಾಸಗಳು ಅನನ್ಯ ಮತ್ತು ಬಜೆಟ್ ಸ್ನೇಹಿ. ನೀವು ಈ ಉಂಗುರಗಳನ್ನು ಪ್ರತಿದಿನ ಅಥವಾ ಕಚೇರಿಗೆ ಧರಿಸಬಹುದು. ನೀವು ಈ ಚಿನ್ನದ ಉಂಗುರಗಳನ್ನು ಮದುವೆ ಅಥವಾ ಪಾರ್ಟಿಗೆ ಧರಿಸಿದಾಗ, ಎಲ್ಲರೂ ಅಂತಹ ಸುಂದರವಾದ ಉಂಗುರದ ಬೆಲೆ ಎಷ್ಟು ಎಂದು ಕೇಳುತ್ತಾರೆ. ಅಂತಹ ಕೈಗೆಟುಕುವ ಚಿನ್ನದ ಉಂಗುರವನ್ನು ನೋಡಿದಾಗ ಅವರು ಖಂಡಿತವಾಗಿಯೂ ನಿಮ್ಮ ವಿನ್ಯಾಸದ ಫೋಟೋ ತೆಗೆದುಕೊಳ್ಳಲು ಬಯಸುತ್ತಾರೆ.&lt;/p&gt;&lt;img&gt;&lt;p&gt;ನೀವು ಹೂವುಗಳು ಮತ್ತು ಎಲೆಗಳನ್ನು ಇಷ್ಟಪಟ್ಟರೆ, ನೀವು ಈ ಸುಂದರವಾದ ಚಿನ್ನದ ಉಂಗುರ ವಿನ್ಯಾಸವನ್ನು ಪಡೆಯಬಹುದು. ಈ ಚಿನ್ನದ ಉಂಗುರವು ಕಾಲೇಜು ವಯಸ್ಸಿನ ಹುಡುಗಿಯರಲ್ಲಿ ಅಚ್ಚುಮೆಚ್ಚಿನದು. ಉಂಗುರದ ಮೇಲಿನ ಸಣ್ಣ ಹೂವುಗಳು ತುಂಬಾ ಸುಂದರವಾಗಿ ಕಾಣುತ್ತವೆ. ಇದು ಬಜೆಟ್ ಸ್ನೇಹಿ ಉಂಗುರ.&lt;/p&gt;&lt;img&gt;&lt;p&gt;ನೀವು ನಿಮ್ಮ ಬಜೆಟ್&zwnj;ನಲ್ಲಿ ಚಿನ್ನದ ಉಂಗುರವನ್ನು ಪಡೆಯಲು ಬಯಸಿದರೆ, ಈ ಚಿನ್ನದ ಉಂಗುರವು ಪರಿಪೂರ್ಣ ಆಯ್ಕೆಯಾಗಿದೆ. ಈ ವಿನ್ಯಾಸವು ಮಹಿಳೆಯರು ಸಾಮಾನ್ಯವಾಗಿ ಧರಿಸುತ್ತಾರೆ. ಇದು ಸಂಪೂರ್ಣವಾಗಿ ಚಿನ್ನದಿಂದ ಮಾಡಲ್ಪಟ್ಟಿದೆ ಮತ್ತು ವಜ್ರದಂತೆ ಕಾಣುವ ರತ್ನವನ್ನು ಹೊಂದಿದೆ.&lt;/p&gt;&lt;img&gt;&lt;p&gt;ನೀವು ಹೊಸದಾಗಿ ವಿವಾಹಿತರಾಗಿದ್ದರೆ ಮತ್ತು ನಿಮ್ಮ ಬಜೆಟ್&zwnj;ನಲ್ಲಿ ಸುಂದರವಾದ ಚಿನ್ನದ ಉಂಗುರವನ್ನು ಹುಡುಕುತ್ತಿದ್ದರೆ, ನೀವು ಈ ಸುಂದರವಾದ ಚಿನ್ನದ ವಿನ್ಯಾಸವನ್ನು ಪ್ರಯತ್ನಿಸಬಹುದು. ಈ ವಿನ್ಯಾಸವು ಎರಡು ಹೃದಯ ಆಕಾರಗಳನ್ನು ಒಟ್ಟಿಗೆ ಜೋಡಿಸಲಾಗಿದೆ. ಇದು ಕಚೇರಿ ಆಭರಣಗಳಲ್ಲಿ ನವವಿವಾಹಿತರಲ್ಲಿ ಅಚ್ಚುಮೆಚ್ಚಿನದು. ಇದಲ್ಲದೆ, ಇದು ನಿಮ್ಮ ಬಜೆಟ್&zwnj;ನಲ್ಲಿ ಮಾಡಬಹುದಾದ ಬಜೆಟ್ ಸ್ನೇಹಿ ವಿನ್ಯಾಸವಾಗಿದೆ.&lt;/p&gt;&lt;img&gt;&lt;p&gt;ಹಾಗಾದರೆ, ಏಕೆ ಕಾಯಬೇಕು? ಇಂದು ಅಕ್ಕಸಾಲಿಗರನ್ನು ಭೇಟಿ ಮಾಡಿ ಮತ್ತು ಈ ಸುಂದರವಾದ ಚಿನ್ನದ ಉಂಗುರವನ್ನು ಮಾಡಿಸಿ. ಕಚೇರಿಗೆ ಹೋಗುವ ಮಹಿಳೆಯರು ಈ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಇದು ತುಂಬಾ ಭಾರವಾಗಿಲ್ಲ, ಮತ್ತು ಇದು ತುಂಬಾ ಸರಳವೂ ಅಲ್ಲ.&lt;/p&gt;]]></content:encoded>
            <category><![CDATA[life]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/life/gold-ring-designs-that-give-a-great-look-at-a-low-cost-here-are-the-photos-suc-1ytrzzs"/>
        </item>
        <item>
            <title><![CDATA[ಪ್ರಜ್ವಲ್ ರೇವಣ್ಣಗೆ ಮೊದಲೇ ವಾರ್ನ್‌ ಮಾಡಿದ್ವಿ - ಅಲೋಕ್ ಕುಮಾರ್ ಬಿಚ್ಚಿಟ್ರು ಅಸಲಿ ಸತ್ಯ]]></title>
            <link>https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g</link>
            <guid isPermaLink="true">https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g</guid>
            <pubDate>Wed, 12 Aug 2026 19:35:34 +0530</pubDate>
            <description><![CDATA[ಎಚ್ಚರಿಕೆ ನೀಡಿದ ಹೊರತಾಗಿಯೂ ಪ್ರಜ್ವಲ್ ರೇವಣ್ಣ ಕಡ್ಡಾಯವಾದ ಬಿಳಿ ಸಮವಸ್ತ್ರ ಧರಿಸಲು ನಿರಾಕರಿಸುವ ಮೂಲಕ ಜೈಲಿನ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಡಿಜಿಪಿ ಅಲೋಕ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅವರ ಬ್ಯಾರೆಕ್‌ನಲ್ಲಿ ಮೊಬೈಲ್ ಪತ್ತೆಯಾದ ಸಿಸಿಬಿ ದಾಳಿಯ ಬೆನ್ನಲ್ಲೇ, ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಜೈಲು ಎಸ್ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ]]></description>
            <media:content url="https://static.asianetnews.com/images/w-1280,h-720,format-jpg,imgid-01kzv4mhkc6fwcm7jt3mx7e3z0,imgname-dgp-alok-kumar-on-prajwal-revanna-1786543490668.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧಿಯಾಗಿರುವ ಜೈಲಿನ ಕೊಠಡಿಯಲ್ಲಿ ಮೊಬೈಲ್ ಪತ್ತೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಸ್ವತಃ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿ, ಪ್ರಜ್ವಲ್ ರೇವಣ್ಣ ಜೈಲಿನ ಕಟ್ಟುನಿಟ್ಟಿನ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಜೈಲಿನಲ್ಲಿರುವ ಕೈದಿಗಳು ಕಡ್ಡಾಯವಾಗಿ ಧರಿಸಬೇಕಾದ ಬಿಳಿ ಸಮವಸ್ತ್ರವನ್ನು ಧರಿಸಲು ಪ್ರಜ್ವಲ್ ನಿರಾಕರಿಸುತ್ತಿದ್ದಾರೆ ಎಂದಿದ್ದಾರೆ.&lt;/p&gt;&lt;p&gt;ಮಾಧ್ಯಮಗಳ ಜೊತೆ ಮಾತನ್ನಾಡಿರುವ ಅಲೋಕ್ ಕುಮಾರ್, ಜೈಲಿನ ನಿಯಮಾವಳಿ ಪ್ರಕಾರ ಪ್ರತಿಯೊಬ್ಬ ಕೈದಿಯೂ ಬಿಳಿ ಬಟ್ಟೆಯನ್ನು ಧರಿಸಬೇಕು. ಆದರೆ ಪ್ರಜ್ವಲ್ ರೇವಣ್ಣ ಬಿಳಿ ವಸ್ತ್ರ ಧರಿಸಿಲ್ಲ. ಈ ಬಗ್ಗೆ ನಾವು ಈಗಾಗಲೇ ವಾರ್ನ್ ಮಾಡಿದ್ದೆವು. ಆದರೂ ಆತ ಸಮವಸ್ತ್ರ ಧರಿಸದೆ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ರೇಡ್ ವೇಳೆ ಸಿಕ್ಕ ಮೊಬೈಲ್&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಗೃಹ ಸಚಿವರ ಸೂಚನೆಯಂತೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ಮಿಂಚಿನ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರೆಕ್&zwnj;ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಸಂಚಲನ ಮೂಡಿಸಿದೆ. ಜೈಲಿನ ಅತ್ಯಂತ ಸುರಕ್ಷಿತ ವಲಯದಲ್ಲಿರುವ ಪ್ರಜ್ವಲ್ ಕೈಗೆ ಮೊಬೈಲ್ ಫೋನ್ ಸಿಕ್ಕಿದ್ದು ಹೇಗೆ? ಇದಕ್ಕೆ ಯಾರು ಸಹಕರಿಸಿದರು ಎಂಬ ಬಗ್ಗೆ ಈಗ ಸಿಸಿಬಿ ಮತ್ತು ಕಾರಾಗೃಹ ಇಲಾಖೆ ತೀವ್ರ ತನಿಖೆ ನಡೆಸುತ್ತಿದೆ.&lt;/p&gt;&lt;h2&gt;&lt;strong&gt;ಅಧಿಕಾರಿಗಳ ವಿರುದ್ಧ ಕ್ರಮದ ಅಸ್ತ್ರ&lt;/strong&gt;&lt;/h2&gt;&lt;p&gt;ಈ ಗಂಭೀರ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಡಿಜಿಪಿ ಅಲೋಕ್ ಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಕಾರಾಗೃಹ ಎಸ್ಪಿ ಅನ್ಶುಕುಮಾರ್&zwnj;ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಜೈಲಿನ ಉಸ್ತುವಾರಿ ವಹಿಸಿರುವ ಎಸ್ಪಿಗೆ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ. ಮೊಬೈಲ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಓರ್ವ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ನಮ್ಮ ಅಧಿಕಾರಿಗಳಿಗೆ ತೊಂದರೆ ಕೊಡುವುದು ನನ್ನ ಉದ್ದೇಶವಲ್ಲ. ಆದರೆ ವ್ಯವಸ್ಥೆ ಸರಿಯಾಗಬೇಕೆಂದರೆ ಕಠಿಣ ಕ್ರಮ ಅನಿವಾರ್ಯ. ಯಾರೇ ಆಗಿರಲಿ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಎದುರಿಸಲೇಬೇಕು ಎಂದು ಡಿಜಿಪಿ ತಿಳಿಸಿದ್ದಾರೆ. ಪ್ರಜ್ವಲ್ ಬ್ಯಾರೆಕ್&zwnj;ಗೆ ಮೊಬೈಲ್ ಸರಬರಾಜು ಮಾಡಿದವರು ಯಾರು? ಜೈಲಿನ ಸಿಬ್ಬಂದಿಯೇ ಇದಕ್ಕೆ ಸಾಥ್ ನೀಡಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೈಲಿನ ನಿಯಮಗಳನ್ನೇ ಲೆಕ್ಕಿಸದ ಪ್ರಜ್ವಲ್ ರೇವಣ್ಣ ಅವರ ನಡೆ ಈಗ ಜೈಲು ಆಡಳಿತ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/bengaluru-urban/prajwal-revanna-mobile-use-in-jail-dgp-alok-kumar-warn-to-prajwal-revanna-gkn/articleshow-kzdny9g"/>
        </item>
        <item>
            <title><![CDATA[ಮಗುವಿನ ಜೀವನವನ್ನೇ ಬದಲಿಸಬಲ್ಲ ಆ ಮೊದಲ 1000 ದಿನಗಳು.. ತಾಯಿ ಹಾಲಿನಲ್ಲಿದೆ ಅಮೃತವನ್ನೂ ಮೀರಿದ ಶಕ್ತಿ]]></title>
            <link>https://kannada.asianetnews.com/health-life/first-1000-days-child-nutrition-secrets-revealed/articleshow-u0mp52v</link>
            <guid isPermaLink="true">https://kannada.asianetnews.com/health-life/first-1000-days-child-nutrition-secrets-revealed/articleshow-u0mp52v</guid>
            <pubDate>Wed, 12 Aug 2026 19:16:05 +0530</pubDate>
            <description><![CDATA[Mother’s Milk Benefits: ತಾಯಿಯ ಎದೆಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳಿಗೂ ಮಗುವಿನ ಮೆದುಳಿನ ಬೆಳವಣಿಗೆಗೂ ಇರುವ ಸಂಬಂಧವೇನು? ಇಂದಿನ ಡಿಜಿಟಲ್ ಜಗತ್ತಿನಲ್ಲಿ ಡಯಟ್ ಬಗ್ಗೆ ನಮಗಿರುವ ತಪ್ಪು ಕಲ್ಪನೆಗಳೇನು? ಈ ಎಲ್ಲಾ ಕುತೂಹಲಕಾರಿ ವಿಷಯಗಳ ಬಗ್ಗೆ ಬೆಂಗಳೂರಿನ 'ದಿ ಎಡ್ಜ್ ಆಫ್ ನ್ಯೂಟ್ರಿಷನ್' ಶೃಂಗಸಭೆಯಲ್ಲಿ ಹೊರಬಿದ್ದ ಅಚ್ಚರಿಯ ಸಂಗತಿಗಳು ಇಲ್ಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01g9c703607txkzeajvkxparz6,imgname-collage-maker-01-aug-2022-01-34-pm--1-.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ತಾ&lt;/strong&gt;ಯಿಯ ಎದೆಹಾಲು ಕೇವಲ ಮಗುವಿನ ಹಸಿವು ನೀಗಿಸುವ ದ್ರವವಲ್ಲ, ಅದು ಮಗುವಿನ ಇಡೀ ಜೀವನದ ಆರೋಗ್ಯವನ್ನು ನಿರ್ಧರಿಸುವ ಅದ್ಭುತ ಸಂಜೀವಿನಿ. ಎದೆಹಾಲಿನಲ್ಲಿರುವ ಪ್ರತಿಯೊಂದು ಸೂಕ್ಷ್ಮಾಣುಜೀವಿಯೂ ಮಗುವಿನ ಭವಿಷ್ಯದ ಬದುಕಿಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ ಎಂಬ ಮಹತ್ವದ ವಿಚಾರಗಳು ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಶೃಂಗಸಭೆಯಲ್ಲಿ ವ್ಯಕ್ತವಾದವು. ಇತ್ತೀಚೆಗೆ ಆಯೋಜಿಸಿದ್ದ 'ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026' ವಾರ್ಷಿಕ ಶೃಂಗಸಭೆಯಲ್ಲಿ ದೇಶದ ಖ್ಯಾತ ಪೌಷ್ಟಿಕಾಂಶ ತಜ್ಞರು ಮತ್ತು ವೈದ್ಯರು ಭಾಗವಹಿಸಿ, ಪೌಷ್ಟಿಕಾಂಶದ ಹೊಸ ಆಯಾಮಗಳ ಬಗ್ಗೆ ಚರ್ಚಿಸಿದರು.&lt;/p&gt;&lt;h2&gt;&lt;strong&gt;ಜೀವನದ ಮೊದಲ 1000 ದಿನಗಳು ಚಿನ್ನದಂತಹ ಅವಧಿ&lt;/strong&gt;&lt;/h2&gt;&lt;p&gt;ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಗರ್ಭಧಾರಣೆಯ ದಿನಗಳಿಂದ ಹಿಡಿದು ಮಗುವಿಗೆ ಎರಡು ವರ್ಷ ತುಂಬುವವರೆಗಿನ (ಒಟ್ಟು 1,000 ದಿನಗಳು) ಸಮಯ ಅತ್ಯಂತ ನಿರ್ಣಾಯಕ. ಈ ಅವಧಿಯಲ್ಲಿ ಸಿಗುವ ಪೌಷ್ಟಿಕಾಂಶವು ಜೀವನಪರ್ಯಂತದ ಆರೋಗ್ಯಕ್ಕೆ ಬುನಾದಿ ಹಾಕುತ್ತದೆ. ಎದೆಹಾಲಿನಲ್ಲಿರುವ ಎಚ್&zwnj;ಎಂಒ (Human Milk Oligosaccharides) ಎಂಬ ಅಂಶವು ಮಗುವಿನ ಕರುಳಿನಲ್ಲಿ 'ಒಳ್ಳೆಯ ಬ್ಯಾಕ್ಟೀರಿಯಾ'ಗಳನ್ನು ವೃದ್ಧಿಸಿ, ಮೆದುಳಿನ ವಿಕಾಸ ಹಾಗೂ ರೋಗನಿರೋಧಕ ಶಕ್ತಿಯನ್ನು ಪ್ರಬಲಗೊಳಿಸುತ್ತದೆ ಎಂದು ತಜ್ಞರು ವಿವರಿಸಿದರು.&lt;/p&gt;&lt;h2&gt;&lt;strong&gt;ತಾಯಿಗೆ ಬೇಕು ಕುಟುಂಬದ ಬೆಂಬಲ&lt;/strong&gt;&lt;/h2&gt;&lt;p&gt;ಈ ಸಂದರ್ಭದಲ್ಲಿ ಡಾ. ಆಶಾ ಬೆನಕಪ್ಪ ಮಾತನಾಡಿ, &quot;ತಾಯಿಯ ಹಾಲಿನಲ್ಲಿರುವ ಸೂಕ್ಷ್ಮಾಣುಜೀವಿಗಳು (ಮೈಕ್ರೋಬಯೋಮ್) ಕರುಳು ಮತ್ತು ಮೆದುಳಿನ ನಡುವೆ ಅದ್ಭುತ ಸಂಪರ್ಕ ಸೇತುವೆಯಾಗುತ್ತವೆ. ಆದರೆ, ತಾಯಿ ಮಗುವಿಗೆ ಸರಿಯಾಗಿ ಹಾಲುಣಿಸಲು ಕೇವಲ ಪೌಷ್ಟಿಕಾಂಶವಿದ್ದರೆ ಸಾಲದು; ಕುಟುಂಬ, ಗಂಡ ಹಾಗೂ ಸಮಾಜ ಆಕೆಗೆ ಉತ್ತಮ ಮಾನಸಿಕ ನೆಮ್ಮದಿ ಮತ್ತು ಬೆಂಬಲ ನೀಡಬೇಕು&quot; ಎಂದು ಕರೆ ನೀಡಿದರು.&lt;/p&gt;&lt;h2&gt;&lt;strong&gt;ಆ್ಯಪ್&zwnj;ಗಳಿಗಿಂತ ತಜ್ಞರ ಸಲಹೆ ಮಿಗಿಲು&lt;/strong&gt;&lt;/h2&gt;&lt;p&gt;ಆರೋಗ್ಯ ಮತ್ತು ಡಯೆಟ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಶೀಲಾ ಕೃಷ್ಣಸ್ವಾಮಿ, ಡಾ. ನಂದಿತಾ ಅಯ್ಯರ್ ಮತ್ತು ಅದಿತಿ ಪ್ರಸಾದ್ ಆಪ್ಟೆ ಅವರು ಇಂದಿನ ತಂತ್ರಜ್ಞಾನದ ಅತಿಯಾದ ಅವಲಂಬನೆಯ ಬಗ್ಗೆ ಎಚ್ಚರಿಸಿದರು. &quot;ಆರೋಗ್ಯ ಎಂದರೆ ಕೇವಲ ಡೇಟಾ ಅಥವಾ ಟೆಸ್ಟ್ ರಿಪೋರ್ಟ್ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯ ನಿದ್ದೆ, ಜೀವನಶೈಲಿ ಮತ್ತು ಕೌಟುಂಬಿಕ ಹಿನ್ನೆಲೆಗೆ ಅನುಗುಣವಾಗಿ ಡಯೆಟ್ ಇರಬೇಕು. ಸ್ಮಾರ್ಟ್ ಆ್ಯಪ್&zwnj;ಗಳು ಅಥವಾ ಯಂತ್ರಗಳು ಎಂದಿಗೂ ಒಬ್ಬ ಅನುಭವೀ ವೈದ್ಯರಿಗೆ ಪರ್ಯಾಯವಾಗಲು ಸಾಧ್ಯವಿಲ್ಲ,&quot; ಎಂದು ಅಭಿಪ್ರಾಯಪಟ್ಟರು.&lt;/p&gt;&lt;h2&gt;&lt;strong&gt;ಸಮತೋಲಿತ ಜೀವನಶೈಲಿಯ ಪಾಠ&lt;/strong&gt;&lt;/h2&gt;&lt;p&gt;ರಘು ಕೃಷ್ಣನ್ ಮಾತನಾಡಿ, ಸಂಕೀರ್ಣವಾದ ವಿಜ್ಞಾನವನ್ನು ಜನಸಾಮಾನ್ಯರಿಗೆ ಸರಳವಾಗಿ ಅರ್ಥೈಸುವುದೇ ಈ ಶೃಂಗಸಭೆಯ ಮುಖ್ಯ ಉದ್ದೇಶ ಎಂದರು. ಇನ್ನು ಸಮಾರಂಭದಲ್ಲಿ ಡಾ. ಉಮೇಶ್ ವಧ್ವಾನಿ ಅವರು 'ಡಯಟಿಂಗ್ ಕಾ ಮಜಾಕ್' ಎಂಬ ಹಾಸ್ಯದ ಮೂಲಕ ಜನರಿಗಿರುವ ತಪ್ಪು ಕಲ್ಪನೆಗಳನ್ನು ಕಿಚಾಯಿಸುತ್ತಲೇ, ಸಮತೋಲಿತ ಜೀವನಶೈಲಿಯ ಪಾಠ ಮಾಡಿದರು.&lt;/p&gt;&lt;p&gt;ಒಟ್ಟಾರೆಯಾಗಿ, ಈ ಶೃಂಗಸಭೆಯು ಉತ್ತಮ ಆರೋಗ್ಯಕ್ಕಾಗಿ ಕೇವಲ ಯಂತ್ರಗಳನ್ನಲ್ಲ, ಬದಲಿಗೆ ಸರಿಯಾದ ತಿಳುವಳಿಕೆ ಮತ್ತು ಸಂಪ್ರದಾಯದ ಜೊತೆಗೆ ವಿಜ್ಞಾನದ ಸಮನ್ವಯದ ಹಾದಿಯನ್ನು ಕಂಡುಕೊಳ್ಳುವಂತೆ ಪ್ರೇರೇಪಿಸಿತು.&lt;/p&gt;]]></content:encoded>
            <category><![CDATA[health-life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/health-life/first-1000-days-child-nutrition-secrets-revealed/articleshow-u0mp52v"/>
        </item>
        <item>
            <title><![CDATA[Karna Serial ಊಹಿಸದ ಟ್ವಿಸ್ಟ್​: ಅತ್ತ ಕರ್ಣನ ರಹಸ್ಯ ಅಪ್ಪಂಗೆ ಗೊತ್ತಾಯ್ತು, ಇತ್ತ ಅಮ್ಮನ ಜಾಡು ಹಿಡಿದು ಹೊರಟ ಮಗ]]></title>
            <link>https://kannada.asianetnews.com/gallery/tv-talk/karna-serial-karna-in-search-of-seetha-unknowing-that-she-is-his-mother-suc-hmpu14u</link>
            <guid isPermaLink="true">https://kannada.asianetnews.com/gallery/tv-talk/karna-serial-karna-in-search-of-seetha-unknowing-that-she-is-his-mother-suc-hmpu14u</guid>
            <pubDate>Wed, 12 Aug 2026 19:15:08 +0530</pubDate>
            <description><![CDATA[ಕರ್ಣ ಸೀರಿಯಲ್‌ನಲ್ಲಿ ರಮೇಶ್-ಮಾಲತಿ ಡಿವೋರ್ಸ್ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ತನ್ನ ಹೆತ್ತವರ ಕುರಿತ ಸತ್ಯದ ಜಾಡು ಹಿಡಿದಿರುವ ಕರ್ಣನಿಗೆ, ರಮೇಶ್‌ನ ನಿಜ ಸ್ವರೂಪದ ಬಗ್ಗೆ ಅನುಮಾನ ಮೂಡಿದೆ. ಹೆತ್ತಮ್ಮ ಮತ್ತು ಸಾಕಿದ ತಾಯಿಯ ನಡುವೆ ಕರ್ಣ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ?]]></description>
            <media:content url="https://static.asianetnews.com/images/w-1280,h-720,format-jpg,imgid-01kzv3bjh694ph2gaq7aeye54f,imgname-karna-serial-1786542148134.jpg" type="image/jpeg" height="390" width="690"/>
            <content:encoded><![CDATA[&lt;p&gt;ಕರ್ಣ ಸೀರಿಯಲ್&zwnj;ನಲ್ಲಿ ರಮೇಶ್-ಮಾಲತಿ ಡಿವೋರ್ಸ್ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ತನ್ನ ಹೆತ್ತವರ ಕುರಿತ ಸತ್ಯದ ಜಾಡು ಹಿಡಿದಿರುವ ಕರ್ಣನಿಗೆ, ರಮೇಶ್&zwnj;ನ ನಿಜ ಸ್ವರೂಪದ ಬಗ್ಗೆ ಅನುಮಾನ ಮೂಡಿದೆ. ಹೆತ್ತಮ್ಮ ಮತ್ತು ಸಾಕಿದ ತಾಯಿಯ ನಡುವೆ ಕರ್ಣ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ?&lt;/p&gt;&lt;img&gt;&lt;p&gt;ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಮಾಲತಿ ಮತ್ತು ರಮೇಶ್​ ಡಿವೋರ್ಸ್​ ಪ್ರಕರಣ ನಡೆಯುತ್ತಿದೆ. ಮಾಲತಿ ಇಲ್ಲದೇ ರಮೇಶ್​ಗೆ ಪೇಚಾಟ ಆಗುತ್ತಿದೆ. ಎಲ್ಲದಕ್ಕೂ ಪತ್ನಿಯ ಮೇಲೆ ಅವಲಂಬಿತ ಆಗಿರೋ ರಮೇಶ್​ಗೆ ಏನು ಮಾಡುವುದಕ್ಕೂ ಕಷ್ಟ ಆಗ್ತಿದೆ. ಇದನ್ನೇ ಮನೆಯಲ್ಲಿ ಎಲ್ಲರೂ ಬಯಸಿದ್ದು.&lt;/p&gt;&lt;img&gt;&lt;p&gt;ಆದರೆ, ಪದೇಪದೇ ಡಿವೋರ್ಸ್​ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಕರ್ಣನಿಗೆ ರಮೇಶ್​ ಮೇಲೆ ಏನೋ ಡೌಟ್​ ಬಂದಿದೆ. ಬಳಿಕ ಇದ್ದಕ್ಕಿದ್ದ ಹಾಗೆ ಸೀತಾಳ ಬಗ್ಗೆ ಅನುಮಾನ ಶುರುವಾಗಿದೆ. ಸೀತಾಳ ಹೆಸರು ಹೇಳುತ್ತಿದ್ದಂತೆಯೇ, ರಮೇಶ್​ನಲ್ಲಿ ಆದ ಬದಲಾವಣೆ ಕಂಡ ಅವನಿಗೆ, ಪದೇ ಪದೇ ಡಿವೋರ್ಸ್​ ವಿಷಯ ಮಾತನಾಡುವುದಕ್ಕೂ, ಈ ಸೀತಾಗೂ ಲಿಂಕ್​ ಇದ್ಯಾ ಎಂದು ಅವನು ಜಾಡು ಹಿಡಿದು ಹೊರಟಿದ್ದಾನೆ. ಅದೇ ಸೀತಾ ಉರ್ಫ್​ ಭುವನೇಶ್ವರಿ ತನ್ನ ಹೆತ್ತಮ್ಮ ಎನ್ನುವುದು ಆತನಿಗೆ ತಿಳಿದಿಲ್ಲ.&lt;/p&gt;&lt;img&gt;&lt;p&gt;ಅದೇ ಇನ್ನೊಂದೆಡೆ, ಕರ್ಣನಿಗೆ ಅಪಘಾತ ಮಾಡಿಸಿದ್ದಾನೆ ರಮೇಶ್​. ಆಗ ಅವನಿಗೆ ಬರುತ್ತಿದ್ದ ಫೋನ್​ ಕಾಲ್​ ಮೂಲಕ, ತಾನೇ ಕರ್ಣನ ಅಪ್ಪ ಎನ್ನುವ ಸತ್ಯ ಗೊತ್ತಾಗಿದೆ. ಹಾಗಿದ್ದರೆ ಅವನ ಮುಂದಿನ ನಡೆ ಏನು ಎನ್ನುವ ಬಗ್ಗೆ ಕುತೂಹಲವಿದೆ.&lt;/p&gt;&lt;img&gt;&lt;p&gt;ಒಂದು ವೇಳೆ ಭುವನೇಶ್ವರಿಯೇ ತನ್ನ ಅಮ್ಮ ಎನ್ನುವುದು ಕರ್ಣನಿಗೆ ತಿಳಿದರೆ, ರಮೇಶ್​ ತನ್ನ ಅಪ್ಪ ಎನ್ನುವುದು ತಿಳಿಯತ್ತದೆ. ಆಗ ಮಾಲತಿ ಗತಿ?&lt;/p&gt;&lt;img&gt;&lt;p&gt;ತನ್ನ ಹೆತ್ತ ಅಮ್ಮ ಮತ್ತು ಅಪ್ಪನನ್ನು ಕರ್ಣ ಒಂದು ಮಾಡ್ತಾನಾ ಅಥವಾ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಸಾಕು ಅಮ್ಮ ಮಾಲತಿ ಮತ್ತು ರಮೇಶ್​ ಒಗ್ಗಟ್ಟಾಗಿ ಇರುವಂತೆ ಮಾಡುತ್ತಾನಾ?&lt;/p&gt;&lt;img&gt;&lt;p&gt;ಸದ್ಯ ಯಾರೂ ಊಹಿಸದ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ ಕರ್ಣ ಸೀರಿಯಲ್​ (Karna Serial). ಮುಂದೇನು ಮುಂದೇನು ಎನ್ನುವ ಕುತೂಹಲವನ್ನು ಕೆರಳಿಸುತ್ತಾ ಸಾಗಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-karna-in-search-of-seetha-unknowing-that-she-is-his-mother-suc-hmpu14u"/>
        </item>
        <item>
            <title><![CDATA['ನಾವಾಡಿದ ಒಂದ್‌ ಮಾತು ಅವರಿಗೆ ಅರ್ಥ ಆಗಿಲ್ಲ!': ಪತಿ ಅನುಕೂಲ್ ಕಾಲೆಳೆದ ನಟಿ ವೈಷ್ಣವಿ ಗೌಡ!]]></title>
            <link>https://kannada.asianetnews.com/tv-talk/vaishnavi-gowda-funny-comments-about-husband-gelathi-gayathri-san/articleshow-fu5y8x5</link>
            <guid isPermaLink="true">https://kannada.asianetnews.com/tv-talk/vaishnavi-gowda-funny-comments-about-husband-gelathi-gayathri-san/articleshow-fu5y8x5</guid>
            <pubDate>Wed, 12 Aug 2026 19:01:44 +0530</pubDate>
            <description><![CDATA[ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ, 'ಗೆಳತಿ ಗಾಯತ್ರಿ' ಎಂಬ ಹೊಸ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳುತ್ತಿದ್ದಾರೆ. ಇಬ್ಬರು ಗೆಳತಿಯರ ಕಥೆಯುಳ್ಳ ಈ ಸೀರಿಯಲ್‌ನಲ್ಲಿ ಅವರು ಪಾರ್ವತಿ ಎಂಬ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv2g7ahw6e71axs4nxre97k,imgname-gelathi-gayathri-vaishnavi-gowda-1786541251921.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಆ.12): &lt;/strong&gt;ಸುದೀರ್ಘ ವಿರಾಮದ ಬಳಿಕ ಅಗ್ನಿಸಾಕ್ಷಿ ನಟಿ ವೈಷ್ಣವಿ ಗೌಡ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಇಬ್ಬರು ಗೆಳತಿಯರ ಭಾವನಾತ್ಮಕ ಪಯಣದ ಕಥೆಯನ್ನು ಹೊಂದಿರುವ ಗೆಳತಿ ಗಾಯತ್ರಿ ಸೀರಿಯಲ್&zwnj; ಮೂಲಕ ಆ.17 ರಿಂದ ಅವರು ಮತ್ತೆ ಟಿವಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಗೆಳತಿ ಗಾಯತ್ರಿ ಸೀರಿಯಲ್&zwnj; ವಿಚಾರವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಇಡೀ ಟೀಮ್&zwnj; ಹಾಜರಿತ್ತು. ಈ ವೇಳೆ ವೈಷ್ಣವಿ ಗೌಡ ಕೂಡ ಆಕರ್ಷಕವಾಗಿ ಕಾಣಿಸಿಕೊಂಡರು. ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಂಡನ ಕೈ-ಕೈ ಹಿಡಿದು ಬಂದ ವೈಷ್ಣವಿ ಗೌಡ, ಸೀರಿಯಲ್&zwnj;ನಿಂದ ಭಾರೀ ನಿರೀಕ್ಷೆಯಲ್ಲಿದ್ದಾರೆ.&lt;/p&gt;&lt;p&gt;ಸುದ್ದಿಗೋಷ್ಠಿಯ ವೇದಿಕೆಯಲ್ಲೇ ತನ್ನ ಗಂಡ ಅನುಕೂಲ್&zwnj; ಮಿಶ್ರಾ ಅವರ ಕಾಲೆಳೆದ ವೈಷ್ಣವಿ ಗೌಡ, ಅವರಿಗೆ ಇಲ್ಲಿಯವರೆಗೂ ನಾವಾಡಿರುವ ಒಂದು ಮಾತು ಕೂಡ ಅರ್ಥ ಆಗಿರಲಿಕ್ಕಿಲ್ಲ ಎಂದರು.&lt;/p&gt;&lt;p&gt;ಈ ಸಂಜೆಯ ಬಹಳ ಸ್ಪೆಷಲ್&zwnj; ಆಗಿರೋದು ನನ್ನ ಪತಿ ಹಾಗೂ ಅತ್ತೆ-ಮಾವ ಬಂದಿರುವುದು. ನನ್ನ ಇವೆಂಟ್&zwnj;ಗಳಲ್ಲಿ ಅವರು ಭಾಗಿಯಾದರೆ ನನಗೆ ಬಹಳ ಸಂತೋಷ. ಅವರಿಗೂ ಕೂಡ ಥ್ಯಾಂಕ್&zwnj; ಯು. ನಾವು ಏನೇ ಕೆಲಸ ಮಾಡಿದರೂ, ಫ್ಯಾಮಿಲಿ ಅನ್ನೋದು ತುಂಬಾ ಇಂಪಾರ್ಟೆಂಟ್&zwnj;. ಮನೇಲಿ ಶಾಂತಿ ಇಲ್ಲ, ಸಪೋರ್ಟ್&zwnj; ಇಲ್ಲ, ಅರ್ಥ ಮಾಡಿಕೊಳ್ಳುವವರು ಇಲ್ಲ ಎಂದಾದಾಗ ನಾವೇನೂ ಕೆಲಸ ಮಾಡೋದಕ್ಕೂ ಸಾಧ್ಯವಿಲ್ಲ. ಆ ಒಂದು ಶಾಂತಿ, ನೆಮ್ಮದಿ ಹಾಗೂ ಸಪೋರ್ಟ್&zwnj;ಅನ್ನು ಕೊಟ್ಟಿರೋದು ನನ್ನ ಪತಿ. ಅವರು ಯಾವಾಗಲೂ ಹೇಳ್ತಾ ಪ್ರೋತ್ಸಾಹ ಮಾಡ್ತಾ ಇರ್ತಾರೆ. ಏನಾದ್ರೂ ಒಂದು ಕೆಲಸ ಮಾಡು, ಸುಮ್ಮನೆ ಇರಬೇಡ ಅಂತಾ. ಅವರಿಗೆ ಈ ಹಂತದಲ್ಲಿ ಥ್ಯಾಂಕ್ಸ್&zwnj; ಹೇಳ್ತೇನೆ' ಎಂದು ಹೇಳಿದರು.&lt;/p&gt;&lt;p&gt;ಅವರಿಗೆ ಕನ್ನಡ ಸೀರಿಯಲ್&zwnj;ಗಳು ಅರ್ಥ ಆಗುತ್ತಾ ಅನ್ನೋ ಪ್ರಶ್ನೆಗೆ, ಇಲ್ಲಿಯವರೆಗೂ ಸೀರಿಯಲ್&zwnj; ವಿಚಾರದಲ್ಲಿ ಏನು ಟೆಲಿಕಾಸ್ಟ್&zwnj; ಆಗಿದೆಯೋ ಅವರಿಗೆ ಅದರಲ್ಲಿನ ಒಂದ್&zwnj; ಮಾತು ಕೂಡ ಅರ್ಥ ಆಗಿರಲ್ಲ. ಸೀರಿಯಲ್&zwnj;ಗೆ ಸಬ್&zwnj;ಟೈಟಲ್&zwnj;ಗಳು ಇಲ್ವಾ ಅಂತಾ ಕೇಳ್ತಿದ್ರು. ಆದರೆ ನಾನು ಅವರಿಗೆ ಒಂದಷ್ಟು ಸ್ಟೋರಿಯನ್ನು ಹೇಳಿದ್ದೇನೆ. ಅದರ ಮೂಲಕ ಸೀರಿಯಲ್&zwnj; ವಿಚಾರವನ್ನ ಕನೆಕ್ಟ್&zwnj; ಮಾಡಿಕೊಂಡಿರ್ತಾರೆ. ಇನ್ಮುಂದೆ ಅವರು ದಿನ ಎಪಿಸೋಡ್&zwnj; ನೋಡ್ತಾರೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಗೆಳತಿ ಗಾಯತ್ರಿ ಒಪ್ಪಿಕೊಳ್ಳೋಕೆ ಕಾರಣ ತಿಳಿಸಿದ ವೈಷ್ಣವಿ&lt;/strong&gt;&lt;/h2&gt;&lt;p&gt;ಇನ್ನು ಈ ಸೀರಿಯಲ್&zwnj; ಒಪ್ಪಿಕೊಳ್ಳೋಕೆ ಕಾರಣವೇನು ಅನ್ನೋದಕ್ಕೆ, ಇದರಲ್ಲಿನ ಪಾತ್ರ ಎಂದು ಉತ್ತರಿಸಿದರು. ತುಂಬಾ ವಿಭಿನ್ನವಾಗಿರುವ ಪಾತ್ರ. ಇಲ್ಲಿಯವರೆಗಿನ ಸೀರಿಯಲ್&zwnj; ಪ್ರಯಾಣದಲ್ಲಿ ಈ ರೀತಿಯ ಪಾತ್ರ ಮಾಡಿರಲಿಲ್ಲ. ತುಂಬಾ ಎನರ್ಜಿ ಇರುವಂಥ, ಡಾಮಿನೆಂಟ್&zwnj; ಇರುವಂಥ ಪಾತ್ರ.ಸ್ವಲ್ಪ ಚಾಲೆಂಜಿಂಗ್&zwnj; ಕೂಡ ಆಗಿತ್ತು ಎಂದು ಹೇಳಿದ್ದಾರೆ.&lt;/p&gt;&lt;p&gt;ಆ. 17 ರಿಂದ ಸನ್&zwnj; ಉದಯದಲ್ಲಿ ಸಂಜೆ 7 ಗಂಟೆಗೆ ಸೋಮವಾರದಿಂದ ಶನಿವಾರದವರೆಗೆ ಪ್ರಸಾರ ಕಾಣಲಿದೆ. ಸೀರಿಯಲ್&zwnj;ನಲ್ಲಿ ಪಾರ್ವತಿಯಾಗಿ ವೈಷ್ಣವಿ ಗೌಡ, ಗಾಯತ್ರಿಯಾಗಿ ಕೃತಿಕಾ ನಟಿಸುತ್ತಿದ್ದು, ನಾಗಾರ್ಜುನ ಅವರು ಸೀರಿಯಲ್&zwnj;ನ ನಾಯಕಿಯಾಗಿದ್ದಾರೆ. ಮಿಲನ ಪ್ರಕಾಶ್&zwnj; ಅವರ ನಿರ್ಮಾಣ ಸಂಸ್ಥೆ ಶ್ರೀ ಜೈ ಮಾತಾ ಕಂಬೈನ್ಸ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧಾರಾವಾಹಿಗೆ ಯಶವಂತ ಪಾಂಡು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Santosh Naik</dc:creator>
            <atom:link href="https://kannada.asianetnews.com/tv-talk/vaishnavi-gowda-funny-comments-about-husband-gelathi-gayathri-san/articleshow-fu5y8x5"/>
        </item>
        <item>
            <title><![CDATA[ಬಿಗ್ ಬಾಸ್ 20ರ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಸ್ಪರ್ಧಿಗಳಿಗೆ ಇದೆ ಜೀವದಾನ]]></title>
            <link>https://kannada.asianetnews.com/tv-talk/bigg-boss-20-elimination-process-gets-major-change-contestants-get-extra-jeevadan/articleshow-z6irtg1</link>
            <guid isPermaLink="true">https://kannada.asianetnews.com/tv-talk/bigg-boss-20-elimination-process-gets-major-change-contestants-get-extra-jeevadan/articleshow-z6irtg1</guid>
            <pubDate>Wed, 12 Aug 2026 18:50:45 +0530</pubDate>
            <description><![CDATA[ಬಿಗ್ ಬಾಸ್ 20ರ ಹಲವು ಬದಲಾವಣೆ ಮೂಲಕ ಆರಂಭಗೊಳ್ಳುತ್ತಿದೆ. ವಿಶೇಷವಾಗಿ ಸ್ಪರ್ಧಿಗಳ ಎಲಿಮಿನೇಶನ್ ಪ್ರಕ್ರಿಯೆ ಸಂಪರ್ಣ ಬದಲಾಗುತ್ತಿದೆ. ಸ್ಪರ್ಧಿಗಳಿಗೆ ಜೀವದಾನದ ಆಯ್ಕೆ ನೀಡಲಾಗಿದೆ. ಏನಿದು ಹೊಸ ರೂಲ್ಸ್?]]></description>
            <media:content url="https://static.asianetnews.com/images/w-1280,h-720,format-jpg,imgid-01kty5a7x2rtmrx54ngsaz93ng,imgname-bigg-boss-20-1781276155810.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಆ.12) &lt;/strong&gt;ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ರಿಯಾಲಿಟಿ ಶೋ ಈ ಬಾರಿ ಕೆಲ ಬದಲಾವಣೆಯೊಂದಿಗೆ ಆರಂಭಗೊಳ್ಳುತ್ತಿದೆ. ಬಿಗ್ ಬಾಸ್ 20ನೇ ಆವೃತ್ತಿಯ ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಟ್ರೇಲರ್&zwnj;ನಲ್ಲಿ ಬಿಗ್ ಬಾಸ್ ಆಟದ ಮನೆಯ ನಿಯಮವನ್ನೇ ಬದಲಿಸಲಾಗಿದೆ. ರೋಚಕತೆ, ಟ್ವಿಸ್ಟ್ ಕೊಡಲು ಸ್ಪರ್ಧಿಗಳ ಎಲಿಮಿನೇಶನ್ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಹೌದು, ಸಲ್ಮಾನ್ ಖಾನ್ ಹೋಸ್ಟ್ ಮಾಡುವ ಬಿಗ್ ಬಾಸ್ 20ನೇ ಆವೃತ್ತಿಯಲ್ಲಿ ಭಾರಿ ಬದಲಾವಣೆ ತರಲಾಗಿದೆ. ಈ ಬದಲಾವಣೆ ಕಿಚ್ಚ ಸುದೀಪ್ ಹೋಸ್ಟ್ ಮಾಡುವ ಕನ್ನಡದಲ್ಲೂ ಜಾರಿಯಾಗುವ ಸಾಧ್ಯತೆ ಇದೆ.&lt;/p&gt;&lt;h2&gt;ಸ್ಪರ್ಧಿಗಳಿಗೆ ಜೀವದಾನ&lt;/h2&gt;&lt;p&gt;ಬಿಗ್ ಬಾಸ್ 20ರಲ್ಲಿ ಹೊಸದಾಗಿ ಜೀವದಾನ ನಿಯಮ ಜಾರಿಗೆ ತರಲಾಗುತ್ತಿದೆ. ಇದರಿಂದ ಕೊನೆಯ ಕ್ಷಣದಲ್ಲಿ ಎಲಿಮಿನೇಶನ್ ಸ್ಪರ್ಧಿಗಿ ಒಂದು ಹೆಚ್ಚಿನ ಜೀವನದಾನ ಸಿಗಲಿದೆ. ಈ ಬದಲಾವಣೆ ಬಿಗ್ ಬಾಸ್ ಆಟದ ಮನೆಯ ಎಲಿಮಿನೇಶನ್ ಪ್ರಕ್ರಿಯೆಯನ್ನೇ ಬದಲಿಸಲಿದೆ.&lt;/p&gt;&lt;p&gt;ಟ್ರೇಲರ್&zwnj; ಆರಂಭದಲ್ಲಿ ಯುದ್ಧ ಕಾಳಗವನ್ನು ತೋರಿಸಲಾಗಿದೆ. ರೋಚಕ ಯುದ್ಧದ ಕಾದಾಡುವ ದೃಶ್ಯದ ನಡುವೆ ಸಲ್ಮಾನ್ ಖಾನ್ ಎಂಟಿಕೊಡುತ್ತಾರೆ. ಯುದ್ಧವನ್ನು ದಿಢೀರ್ ತಡೆಯುವ ಸಲ್ಮಾನ್ ಖಾನ್, ಬಿಗ್ ಬಾಸ್&zwnj;ನಲ್ಲಿ ಸಿಗಲಿದೆ ಮೇರಿ ಜಾನ್, ಎಕ್ಸ್&zwnj;ಟ್ರಾ ಜೀವದಾನ್ ಎಂದಿದ್ದಾರೆ. ಈ ಮೂಲಕ ಹೊಸ ಆವೃತ್ತಿ ಹಲವು ಸರ್ಪ್ರೈಸ್&zwnj;ಗಳನ್ನು ನೀಡಲಿದೆ ಅನ್ನೋ ಸುಳಿವು ನೀಡಿದ್ದಾರೆ.&lt;/p&gt;&lt;h2&gt;ಎಲಿಮಿನೇಶ್ ಟ್ವಿಸ್ಟ್&lt;/h2&gt;&lt;p&gt;ಬಿಗ್ ಬಾಸ್ ಆಟದಲ್ಲಿ ಎಲಿಮಿನೇಶನ್ ಮೂಲಕ ಎಲಿಮಿನೇಟ್ ಆದ ಸ್ಪರ್ಧಿಯ ಆಟ ಕೊನೆಗೊಳ್ಳುತ್ತದೆ. ಆಧರೆ ಹೊಸ ನಿಯಮದಲ್ಲಿ ಎಲಿಮಿನೇಟ್ ಆಗೋ ಸ್ಪರ್ಧಿಗೆ ಎರಡನೇ ಅವಕಾಶವೊಂದು ಸಿಗಲಿದೆ. ಜೀವದಾನ ಮೂಲಕ ಸ್ಪರ್ಧಿ ಮತ್ತೆ ಆಟದಲ್ಲಿ ಮುಂದುವರಿಯುವ ಅವಕಾಶವನ್ನು ನೀಡಲಾಗುತ್ತದೆ. ಇದು ಎಲ್ಲಾ ಸ್ಪರ್ಧಿಗಳಿಗೂ ಇದೆಯಾ, ಅಥವಾ ಒಬ್ಬ ಸ್ಪರ್ಧಿಗೆ ಒಂದು ಬಾರಿ ಮಾತ್ರ ಬಳಸುವ ಅವಕಾಶವೇ ಸೇರಿದಂತೆ ಹಲವು ಕುತೂಹಲಕ್ಕೆ ಸ್ಪಷ್ಟ ಉತ್ತ ಸಿಕ್ಕಿಲ್ಲ. ಇದೇ ವೇಳೆ ಸೇಫ್ ಗೇಮ್&zwnj;ಗೆ ಯಾವುದೇ ಅವಕಾಶವಿಲ್ಲ. ಏನಿದ್ದರು ಜಿದ್ದಾಜಿದ್ದಿನ ಕಾಳಗ ಅನ್ನೋ ಸ್ಪಷ್ಟನೆ ಸೂಚನೆಯನ್ನು ಬಿಗ್ ಬಾಸ್ ನೀಡಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/tv-talk/bigg-boss-20-elimination-process-gets-major-change-contestants-get-extra-jeevadan/articleshow-z6irtg1"/>
        </item>
        <item>
            <title><![CDATA[Chamarajanagara: ಹುಲಿ ಹಲ್ಲು, ಉಗುರು ಮಾರಾಟಕ್ಕೆ ಯತ್ನ; ಮೂವರ ಬಂಧನ]]></title>
            <link>https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v</link>
            <guid isPermaLink="true">https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v</guid>
            <pubDate>Wed, 12 Aug 2026 18:44:51 +0530</pubDate>
            <description><![CDATA[ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv1a24q2s8ccfxb29f23v25,imgname-chamarajanagar-tiger-1786540001431.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಹುಲಿಯ ಹಲ್ಲುಗಳು ಹಾಗೂ ಉಗುರನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ, ವನ್ಯಜೀವಿ ಅಂಗಾಂಗಗಳು ಹಾಗೂ ಆಟೋವನ್ನು ವಶಪಡಿಸಿಕೊಂಡಿದ್ದಾರೆ.&lt;/p&gt;&lt;h2&gt;ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನ&lt;/h2&gt;&lt;p&gt;ರಾಷ್ಟ್ರೀಯ ಹೆದ್ದಾರಿ-948ರ ಹರದನಹಳ್ಳಿ ಗ್ರಾಮದ ಕೆರೆ ಸಮೀಪ ಆ.11ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ, ಬಂಡೀಪುರ-ನಾಗರಹೊಳೆ ಹಾಗೂ ಜಿ.ಎಸ್ ಬೆಟ್ಟ ವಲಯದ ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದರು. ಬಂಧಿತರನ್ನು ಹೊಸಪೋಡು ಗ್ರಾಮದ ಮಹದೇವ ಬಿನ್ ಜಡಿಯ, ಮಾವತ್ತೂರು ಗ್ರಾಮದ ರಮೇಶ ಬಿನ್ ಆಲುವಯ್ಯ ಹಾಗೂ ವಡೆಯರಪಾಳ್ಯ ಗ್ರಾಮದ ಮಣಿ ಬಿನ್ ರಾಮು ಎಂದು ಗುರುತಿಸಲಾಗಿದೆ.&lt;/p&gt;&lt;p&gt;ಆರೋಪಿಗಳಿಂದ ನಾಲ್ಕು ಹುಲಿಯ ಕೋರೆ ಹಲ್ಲುಗಳು, ಎರಡು ದವಡೆ ಹಲ್ಲುಗಳು, ಒಂದು ಹುಲಿ ಉಗುರು ಹಾಗೂ ವನ್ಯಜೀವಿ ಅಂಗಾಂಗಗಳ ಸಾಗಣೆಗೆ ಬಳಸುತ್ತಿದ್ದ ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ವನ್ಯಜೀವಿ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.&lt;/p&gt;&lt;h2&gt;ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ&lt;/h2&gt;&lt;p&gt;ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮೂವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡ ಹುಲಿ ಹಲ್ಲುಗಳು ಹಾಗೂ ಉಗುರನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವಶದಲ್ಲಿರಿಸಲಾಗಿದೆ.&lt;/p&gt;&lt;p&gt;ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಶುಭಂ ಸಿಂಗ್ ತನ್ವರ್ ಅವರ ನಿರ್ದೇಶನದ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಎಂ, ಜಿ.ಎಸ್.ಬೆಟ್ಟ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್ ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ ಎಂ, ಕಾರ್ತಿಕ್ ಯಾದವ್, ಶ್ರೀಕಾಂತ್ ಹಾಗೂ ಜಿ.ಎಸ್ ಬೆಟ್ಟ ವಲಯದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. (ವರದಿ: ಪುಟ್ಟರಾಜು ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ)&lt;/p&gt;&lt;p&gt;&lt;img&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sumanth SN</dc:creator>
            <atom:link href="https://kannada.asianetnews.com/karnataka-districts/chamarajanagara-attempt-to-sell-tiger-teeth-and-claws-three-arrested-sns/articleshow-n4pgi9v"/>
        </item>
        <item>
            <title><![CDATA[ಪತ್ನಿ ಜೊತೆ ಜಗಳ, 6 ವರ್ಷದ ಮಗನ ನದಿಗೆ ಎಸೆದ ಅಪ್ಪ.. ಅಯ್ಯೋ ಪಾಪಿ..]]></title>
            <link>https://kannada.asianetnews.com/india-news/father-throws-6-year-old-son-into-ravi-river-after-fight-with-wife-in-himachals-chamba-gkn/articleshow-yueugcz</link>
            <guid isPermaLink="true">https://kannada.asianetnews.com/india-news/father-throws-6-year-old-son-into-ravi-river-after-fight-with-wife-in-himachals-chamba-gkn/articleshow-yueugcz</guid>
            <pubDate>Wed, 12 Aug 2026 18:42:00 +0530</pubDate>
            <description><![CDATA[ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನ ರಭಸವಾಗಿ ಹರಿಯುತ್ತಿದ್ದ ರಾವಿ ನದಿಗೆ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಆಗಿದ್ದೇನು ಅನ್ನೋ ವಿವರ ಈ ಸ್ಟೋರಿಯಲ್ಲಿದೆ..]]></description>
            <media:content url="https://static.asianetnews.com/images/w-1280,h-720,format-jpg,imgid-01kzv1jbbwk6zrffxsnnp0kt5n,imgname-himachal-man-throws-6-year-old-son-in-river-1786540273020.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಮ್ಲಾ: &lt;/strong&gt;ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮನುಕುಲವೇ ತಲೆ ತಗ್ಗಿಸುವಂಥ ಕೃತ್ಯ ನಡೆದಿದೆ. ಪತ್ನಿಯ ಮೇಲಿನ ಕೋಪಕ್ಕೆ ತಂದೆಯೊಬ್ಬ ತನ್ನ ಆರು ವರ್ಷದ ಮಗುವನ್ನ ರಭಸವಾಗಿ ಹರಿಯುತ್ತಿದ್ದ ರಾವಿ ನದಿಗೆ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಆರೋಪಿ ಹಿತೇಶ್ ಕುಮಾರ್ ಎಂಬಾತ ಚಂಬಾದ ಪರೇಲ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಈತನ ಪತ್ನಿ ಕಳೆದ ಒಂದು ತಿಂಗಳಿನಿಂದ ತನ್ನ ಕಿರಿಯ ಮಗನೊಂದಿಗೆ ಅಮೃತಸರದಲ್ಲಿರುವ ತಾಯಿ ಮನೆಯಲ್ಲಿ ವಾಸವಿದ್ದರು. ಆರು ವರ್ಷದ ಹಿರಿಯ ಮಗ ಗಗನ್&zwnj;ದೀಪ್ ತಂದೆಯ ಜೊತೆಗಿದ್ದ. ಸೋಮವಾರ ರಾತ್ರಿ ಹಿತೇಶ್ ತನ್ನ ಪತ್ನಿಯೊಂದಿಗೆ ಫೋನ್&zwnj;ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಜೋರಾದ ಜಗಳ ನಡೆದಿದೆ.&lt;/p&gt;&lt;p&gt;ಪತ್ನಿಯೊಂದಿಗಿನ ಜಗಳದಿಂದ ಆಕ್ರೋಶಗೊಂಡ ಹಿತೇಶ್, ತನ್ನ ಮಗ ಗಗನ್&zwnj;ದೀಪ್&zwnj;ನನ್ನು ಕರೆದುಕೊಂಡು ಹೋಗಿ ಪರೇಲ್ ಸೇತುವೆಯ ಮೇಲಿಂದ ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿದ್ದಾನೆ. ಮರುದಿನ ಬೆಳಿಗ್ಗೆ (ಮಂಗಳವಾರ) ತಾನೇ ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಿ, ಮಗನನ್ನು ನದಿಗೆ ಎಸೆದಿರುವುದಾಗಿ ತಿಳಿಸಿದ್ದಾನೆ.&lt;/p&gt;&lt;p&gt;ಆರಂಭದಲ್ಲಿ ಪೊಲೀಸರು ಹಿತೇಶ್ ಹೇಳಿಕೆಯನ್ನು ನಂಬಲಿಲ್ಲ. ಆದರೆ ಆತನ ಬಾಡಿಗೆ ಮನೆಗೆ ಹೋಗಿ ಪರಿಶೀಲಿಸಿದಾಗ ಮಗು ನಾಪತ್ತೆಯಾಗಿರುವುದು ದೃಢಪಟ್ಟಿದೆ. ಕೂಡಲೇ ಹಿತೇಶ್&zwnj;ನನ್ನು ಬಂಧಿಸಿದ ಪೊಲೀಸರು, ನದಿಯಲ್ಲಿ ಮಗುವಿನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು ಮತ್ತು ನೀರಿನ ಹರಿವು ತೀವ್ರವಾಗಿರುವುದರಿಂದ ಮಗುವಿನ ದೇಹ ಇನ್ನು ಪತ್ತೆಯಾಗಿಲ್ಲ.&lt;/p&gt;&lt;p&gt;ಪೊಲೀಸರು ಹಿತೇಶ್&zwnj;ನ ಪತ್ನಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಘಟನೆಗೆ ಮುನ್ನ ದಂಪತಿ ನಡುವೆ ನಡೆದ ಸಂಭಾಷಣೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹಿತೇಶ್ ಕುಮಾರ್ ಈ ಹಿಂದೆ ಬದ್ದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಸದ್ಯ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪತ್ನಿಯ ಮೇಲಿನ ಕೋಪಕ್ಕೆ ಅಮಾಯಕ ಮಗುವನ್ನು ಬಲಿಪಡೆದ ತಂದೆಯ ಕ್ರೌರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/india-news/father-throws-6-year-old-son-into-ravi-river-after-fight-with-wife-in-himachals-chamba-gkn/articleshow-yueugcz"/>
        </item>
        <item>
            <title><![CDATA[ಕಾರು ಇದ್ದವರು ಮಾಡುವ 6 ಮಹಾ ತಪ್ಪುಗಳು; ಕಾರಿನಿಂದ ಇಳಿವಾಗ ಮಾಡುವ ಈ ಪ್ರಮಾದಗಳು ಕುಟುಂಬಕ್ಕೆ ದೊಡ್ಡ ನಷ್ಟ ತರುತ್ತೆ!]]></title>
            <link>https://kannada.asianetnews.com/car-news/never-leave-these-5-things-inside-your-parked-car-safety-and-health-risks/articleshow-fg3yo90</link>
            <guid isPermaLink="true">https://kannada.asianetnews.com/car-news/never-leave-these-5-things-inside-your-parked-car-safety-and-health-risks/articleshow-fg3yo90</guid>
            <pubDate>Wed, 12 Aug 2026 18:41:52 +0530</pubDate>
            <description><![CDATA[ಕಾರನ್ನು ನಿಲ್ಲಿಸಿ ಹೋಗುವಾಗ ಯಾವುದೇ ಕಾರಣಕ್ಕೂ ನೀವು ಈ 6 ವಸ್ತುಗಳನ್ನು ಕಾರಲ್ಲಿ ಬಿಟ್ಟು ಹೋಗಬೇಡಿ. ಈ ವಸ್ತುಗಳನ್ನು ಕಾರಲ್ಲಿ ಬಿಟ್ಟು ಹೋಗುವ ಸಣ್ಣ ತಪ್ಪಿನಿಂದ ನಿಮ್ಮ ಜೀವಮಾನದಲ್ಲಿ ದೊಡ್ಡ ನಷ್ಟವನ್ನೇ ಅನುಭವಿಸಬೇಕಾಗುತ್ತದೆ. ನೀವು ಕೂಡ ಈ ತಪ್ಪು ಮಾಡುತ್ತಿದ್ದರೆ ಈಗಿನಿಂದಲೇ ನಿಮ್ಮ ಕೆಟ್ಟ ಅಭ್ಯಾಸ ತಪ್ಪಿಸಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv1fy8wvbrqvkryv8f8q70e,imgname-car-owners-making-mistakes-1786540194076.jpg" type="image/jpeg" height="390" width="690"/>
            <content:encoded><![CDATA[&lt;p&gt;ಈಗಿನ ಕಾಲದಲ್ಲಿ ಕಾರು ಕೇವಲ ಓಡಾಡೋಕೆ ಮಾತ್ರ ಅಲ್ಲ, ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಹಾಗಾಗಿ, ಆತುರದಲ್ಲಿ ಬ್ಯಾಗ್&zwnj;ಗಳು, ಎಲೆಕ್ಟ್ರಾನಿಕ್ ಗ್ಯಾಜೆಟ್&zwnj;ಗಳು, ಔಷಧಿಗಳು ಮತ್ತು ಇತರ ಸಾಮಾನುಗಳನ್ನು ಕಾರಿನಲ್ಲೇ ಬಿಟ್ಟು ಹೋಗುವುದು ಸಹಜ. ಆದರೆ ಈ ಅಭ್ಯಾಸ ಕೆಲವೊಮ್ಮೆ ದೊಡ್ಡ ತೊಂದರೆಗೆ ಕಾರಣವಾಗಬಹುದು. ಅದರಲ್ಲೂ ಬೇಸಿಗೆಯಲ್ಲಿ, ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನ ಒಳಗಿನ ತಾಪಮಾನ ಬಹಳ ಬೇಗನೆ ಹೆಚ್ಚಾಗುತ್ತದೆ. ಇದು ಕೆಲವು ವಸ್ತುಗಳನ್ನು ಹಾಳುಮಾಡುವುದಲ್ಲದೆ, ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ. ಮಳೆಗಾಲದಲ್ಲೂ ಸಹ, ಹೆಚ್ಚು ಹೊತ್ತು ಕಾರಿನೊಳಗೆ ಕೆಲವು ವಸ್ತುಗಳನ್ನು ಇಡುವುದು ಒಳ್ಳೆಯದಲ್ಲ. ಕಾರಿನಿಂದ ಇಳಿಯುವಾಗ ನೀವು ಖಂಡಿತವಾಗಿಯೂ ಜೊತೆಗೆ ತೆಗೆದುಕೊಂಡು ಹೋಗಬೇಕಾದ ಕೆಲವು ವಸ್ತುಗಳು ಇಲ್ಲಿವೆ.&lt;/p&gt;&lt;h2&gt;&lt;strong&gt;ಔಷಧಿಗಳನ್ನು ಕಾರಲ್ಲಿ ಇಡಬೇಡಿ&lt;/strong&gt;&lt;/h2&gt;&lt;p&gt;ನೀವು ಪ್ರತಿದಿನ ಬಳಸುವ ಔಷಧಿಗಳನ್ನು ಕಾರಿನಲ್ಲಿ ಬಿಟ್ಟು ಹೋಗುವುದನ್ನು ತಪ್ಪಿಸಿ. ಬಿಸಿಲಿನಲ್ಲಿ ನಿಲ್ಲಿಸಿದ ಕಾರಿನ ಒಳಗಿನ ತಾಪಮಾನ ಬೇಗನೆ ಏರುತ್ತದೆ. ಈ ಅತಿಯಾದ ಶಾಖವು ಕೆಲವು ಔಷಧಿಗಳ ಗುಣಮಟ್ಟ ಮತ್ತು ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರಬಹುದು. ಔಷಧಿಗಳನ್ನು ಯಾವಾಗಲೂ ಸೂಚಿಸಲಾದ ತಾಪಮಾನದಲ್ಲಿಯೇ ಇಡುವುದು ಸುರಕ್ಷಿತ. ಆದ್ದರಿಂದ, ಕಾರಿನಿಂದ ಇಳಿಯುವಾಗ ನಿಮ್ಮ ಔಷಧಿಗಳನ್ನು ಜೊತೆಯಲ್ಲೇ ಕೊಂಡೊಯ್ಯಲು ಮರೆಯಬೇಡಿ.&lt;/p&gt;&lt;h2&gt;&lt;strong&gt;ಮೊಬೈಲ್ ಫೋನ್, ಲ್ಯಾಪ್&zwnj;ಟಾಪ್&zwnj;ಗಳನ್ನು ಮರೆತು ಬಿಡಬೇಡಿ&lt;/strong&gt;&lt;/h2&gt;&lt;p&gt;ಮೊಬೈಲ್ ಫೋನ್, ಲ್ಯಾಪ್&zwnj;ಟಾಪ್, ಟ್ಯಾಬ್ಲೆಟ್, ಪೆನ್&zwnj;ಡ್ರೈವ್&zwnj;ನಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್&zwnj;ಗಳನ್ನು ಬಿಸಿಯಾದ ಕಾರಿನೊಳಗೆ ಹೆಚ್ಚು ಹೊತ್ತು ಇಡಬೇಡಿ. ಅತಿಯಾದ ಶಾಖವು ಈ ಗ್ಯಾಜೆಟ್&zwnj;ಗಳ ಬ್ಯಾಟರಿ ಮತ್ತು ಆಂತರಿಕ ಭಾಗಗಳನ್ನು ಹಾಳುಮಾಡಬಹುದು. ಹೆಚ್ಚು ಹೊತ್ತು ಬಿಸಿಲಿನಲ್ಲಿಟ್ಟರೆ ಗ್ಯಾಜೆಟ್&zwnj;ಗಳು ಸಂಪೂರ್ಣವಾಗಿ ಕೆಟ್ಟುಹೋಗುವ ಸಾಧ್ಯತೆಯೂ ಇದೆ. ಇದಲ್ಲದೆ, ಕಾರಿನೊಳಗೆ ಬೆಲೆಬಾಳುವ ಎಲೆಕ್ಟ್ರಾನಿಕ್ ವಸ್ತುಗಳು ಕಾಣಿಸಿದರೆ ಕಳ್ಳರ ಗಮನ ಸೆಳೆಯಬಹುದು. ಅವರು ಕಾರಿನ ಗಾಜು ಒಡೆದು ಕ್ಷಣಾರ್ಧದಲ್ಲಿ ಇವುಗಳನ್ನು ಕದಿಯಬಹುದು. ಹಾಗಾಗಿ, ಎಲೆಕ್ಟ್ರಾನಿಕ್ ಗ್ಯಾಜೆಟ್&zwnj;ಗಳನ್ನು ಕಾರಿನಲ್ಲಿ ಬಿಡದೆ ಜೊತೆಗೆ ಕೊಂಡೊಯ್ಯುವುದೇ ಸುರಕ್ಷಿತ.&lt;/p&gt;&lt;h2&gt;&lt;strong&gt;ಸನ್&zwnj;ಸ್ಕ್ರೀನ್ ಕೂಡ ಕಾರಲ್ಲಿ ಬೇಡ&lt;/strong&gt;&lt;/h2&gt;&lt;p&gt;ಬಿಸಿಯಾದ ಕಾರಿನೊಳಗೆ ಸನ್&zwnj;ಸ್ಕ್ರೀನ್ ಅನ್ನು ಹೆಚ್ಚು ಹೊತ್ತು ಇಡುವುದನ್ನು ತಪ್ಪಿಸುವುದು ಉತ್ತಮ. ಹೆಚ್ಚಿನ ತಾಪಮಾನವು ಸನ್&zwnj;ಸ್ಕ್ರೀನ್&zwnj;ನಲ್ಲಿರುವ ಕೆಲವು ರಾಸಾಯನಿಕಗಳ ಮೇಲೆ ಪರಿಣಾಮ ಬೀರಿ, ಅದರ ಪರಿಣಾಮಕಾರಿತ್ವವನ್ನು ಕಡಿಮೆ ಮಾಡಬಹುದು. ಶಾಖವು ಅದರ ಪ್ಯಾಕೇಜಿಂಗ್ ಮೇಲೂ ಪರಿಣಾಮ ಬೀರಬಹುದು. ಟ್ಯೂಬ್ ಅಥವಾ ಬಾಟಲ್ ಲೀಕ್ ಆದರೆ, ಕಾರಿನ ಸೀಟುಗಳು ಮತ್ತು ಇತರ ಒಳಭಾಗಗಳಲ್ಲಿ ಕಲೆ ಮತ್ತು ಹಾನಿ ಉಂಟಾಗಬಹುದು. ಆದ್ದರಿಂದ, ಸನ್&zwnj;ಸ್ಕ್ರೀನ್ ಅನ್ನು ಕಾರಿನಲ್ಲಿ ಬಿಡುವ ಬದಲು ನಿಮ್ಮ ಬ್ಯಾಗ್&zwnj;ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.&lt;/p&gt;&lt;h2&gt;&lt;strong&gt;ಬಿಸಿಯಾದ ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯಬೇಡಿ&lt;/strong&gt;&lt;/h2&gt;&lt;p&gt;ಕಾರಿನಲ್ಲಿ ನೀರಿನ ಬಾಟಲಿ ಇಡುವುದು ಸಾಮಾನ್ಯ. ಆದರೆ ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಂತಿದ್ದ ಕಾರಿನ ಪ್ಲಾಸ್ಟಿಕ್ ಬಾಟಲಿಯಲ್ಲಿರುವ ನೀರನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಶಾಖದ ಪ್ರಭಾವದಿಂದ ಪ್ಲಾಸ್ಟಿಕ್&zwnj;ನಲ್ಲಿರುವ ಕೆಲವು ರಾಸಾಯನಿಕಗಳು ನೀರಿಗೆ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಕಾರಿನಲ್ಲಿ ನೀರು ಇಡಲೇಬೇಕಾದ ಸಂದರ್ಭ ಬಂದರೆ, ಸ್ಟೀಲ್ ಬಾಟಲಿಯಂತಹ ಸುರಕ್ಷಿತ ಪರ್ಯಾಯಗಳನ್ನು ಬಳಸಿ. ಹೆಚ್ಚು ಹೊತ್ತು ಬಿಸಿಲಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯ ನೀರನ್ನು ಕುಡಿಯದಿರುವುದೇ ಜಾಣತನ.&lt;/p&gt;&lt;h2&gt;&lt;strong&gt;ಪರ್ಸ್ ಮತ್ತು ಮೊಬೈಲ್ ಫೋನ್&zwnj; ಸೀಟಿನ ಮೇಲೆ ಬೇಡ&lt;/strong&gt;&lt;/h2&gt;&lt;p&gt;ಕಾರು ಪಾರ್ಕ್ ಮಾಡಿದ ನಂತರ ಪರ್ಸ್, ಹ್ಯಾಂಡ್&zwnj;ಬ್ಯಾಗ್, ಮೊಬೈಲ್ ಫೋನ್&zwnj;ಗಳನ್ನು ಸೀಟಿನ ಮೇಲೆ ಎಲ್ಲರಿಗೂ ಕಾಣುವಂತೆ ಇಡುವುದು ಅಪಾಯಕಾರಿ. ಸಣ್ಣ ಬ್ಯಾಗ್&zwnj; ಕೂಡ ಕಾರಿನ ಹೊರಗಿನಿಂದ ಕಾಣುವಂತಿದ್ದರೆ ಕಳ್ಳರ ಗಮನ ಸೆಳೆಯಬಹುದು. ಅವರು ಕಿಟಕಿಯ ಗಾಜು ಒಡೆದು ಹಣ, ದಾಖಲೆಗಳು, ಮೊಬೈಲ್ ಫೋನ್&zwnj;ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುವ ಸಾಧ್ಯತೆಯಿದೆ. ವಸ್ತುಗಳನ್ನು ಕಾರಿನಲ್ಲೇ ಇಡಬೇಕಾದ ಅನಿವಾರ್ಯತೆಯಿದ್ದರೆ, ಅವುಗಳನ್ನು ಸೀಟಿನ ಮೇಲೆ ಇಡದೆ ಡಿಕ್ಕಿಯಲ್ಲಿ ಇಡುವುದು ತುಲನಾತ್ಮಕವಾಗಿ ಸುರಕ್ಷಿತ. ಆದರೆ, ಬೆಲೆಬಾಳುವ ವಸ್ತುಗಳನ್ನು ಕಾರಿನಲ್ಲಿ ಬಿಡದಿರುವುದೇ ಅತ್ಯುತ್ತಮ.&lt;/p&gt;&lt;h2&gt;&lt;strong&gt;ಸಣ್ಣ ಅಜಾಗರೂಕತೆ, ದೊಡ್ಡ ನಷ್ಟ&lt;/strong&gt;&lt;/h2&gt;&lt;p&gt;ಕಾರಿನೊಳಗೆ ತಪ್ಪು ವಸ್ತುಗಳನ್ನು ಬಿಡುವುದರಿಂದ ಕೇವಲ ವಸ್ತುಗಳಿಗೆ ಹಾನಿಯಾಗುವುದಲ್ಲ, ನಿಮ್ಮ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಬಹುದು. ಶಾಖವು ಔಷಧಿಗಳ ಗುಣಮಟ್ಟವನ್ನು ಹಾಳುಮಾಡಬಹುದು. ಎಲೆಕ್ಟ್ರಾನಿಕ್ ಗ್ಯಾಜೆಟ್&zwnj;ಗಳು ಹಾಳಾದರೆ, ಅವುಗಳ ದುರಸ್ತಿಗೆ ಅಥವಾ ಹೊಸದನ್ನು ಖರೀದಿಸಲು ದೊಡ್ಡ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಕಳ್ಳತನವಾದರೆ ನಷ್ಟ ಇನ್ನೂ ದೊಡ್ಡದು.&lt;/p&gt;&lt;h2&gt;&lt;strong&gt;ಕಾರು ಲಾಕ್ ಮಾಡುವ ಮುನ್ನ ಒಮ್ಮೆ ಚೆಕ್ ಮಾಡಿ&lt;/strong&gt;&lt;/h2&gt;&lt;p&gt;ಕಾರು ಲಾಕ್ ಮಾಡುವ ಮುನ್ನ ಕೆಲವೇ ಸೆಕೆಂಡುಗಳ ಕಾಲ ಪರಿಶೀಲನೆ ನಡೆಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮುಂಭಾಗದ ಸೀಟುಗಳು, ಹಿಂಬದಿಯ ಸೀಟು, ಡ್ಯಾಶ್&zwnj;ಬೋರ್ಡ್ ಮತ್ತು ಡಿಕ್ಕಿಯನ್ನು ಒಮ್ಮೆ ಪರೀಕ್ಷಿಸಿ. ಮೊಬೈಲ್ ಫೋನ್, ಲ್ಯಾಪ್&zwnj;ಟಾಪ್, ಔಷಧಿಗಳು, ನೀರಿನ ಬಾಟಲಿ, ಸನ್&zwnj;ಸ್ಕ್ರೀನ್, ಪರ್ಸ್&zwnj;ನಂತಹ ವಸ್ತುಗಳು ಕಾರಿನಲ್ಲಿ ಉಳಿದಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ಸಣ್ಣ ಜಾಗರೂಕತೆ ದೊಡ್ಡ ನಷ್ಟವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಕಾರು ಪಾರ್ಕ್ ಮಾಡಿ ಲಾಕ್ ಮಾಡುವ ಮುನ್ನ ಈ ಸರಳ ಪರಿಶೀಲನೆಯನ್ನು ರೂಢಿಸಿಕೊಳ್ಳುವುದು ನಿಮ್ಮ ಸುರಕ್ಷತೆ ಮತ್ತು ವಾಹನದ ರಕ್ಷಣೆಗೆ ಒಳ್ಳೆಯದು.&lt;/p&gt;]]></content:encoded>
            <category><![CDATA[car-news]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/car-news/never-leave-these-5-things-inside-your-parked-car-safety-and-health-risks/articleshow-fg3yo90"/>
        </item>
        <item>
            <title><![CDATA[ವಿಶ್ವವನ್ನೇ ಬೆರಗುಗೊಳಿಸಿದ ಕೈಬರಹ! ಮುತ್ತು ಪೋಣಿಸಿಟ್ಟಂತೆ ಬರೆದಾಕೆಗೆ ವಿಶ್ವ ದಾಖಲೆಯ ಮತ್ತೊಂದು ಕಿರೀಟ]]></title>
            <link>https://kannada.asianetnews.com/education/who-is-prakriti-malla-the-girl-with-the-most-beautiful-handwriting-in-the-world-suc/articleshow-63ihevv</link>
            <guid isPermaLink="true">https://kannada.asianetnews.com/education/who-is-prakriti-malla-the-girl-with-the-most-beautiful-handwriting-in-the-world-suc/articleshow-63ihevv</guid>
            <pubDate>Wed, 12 Aug 2026 18:37:58 +0530</pubDate>
            <description><![CDATA[ಡಿಜಿಟಲ್ ಯುಗದಲ್ಲಿ ಕೈಬರಹ ಮರೆಯಾಗುತ್ತಿರುವಾಗ, ನೇಪಾಳ ಮೂಲದ ಪ್ರಕೃತಿ ಮಲ್ಲಾ ಎಂಬ ಯುವತಿ ತನ್ನ ಅತಿ ಸುಂದರ ಕೈಬರಹದಿಂದಲೇ ವಿಶ್ವಖ್ಯಾತಿ ಗಳಿಸಿದ್ದಾರೆ. 8ನೇ ತರಗತಿಯಲ್ಲಿದ್ದಾಗಲೇ ಸದ್ದು ಮಾಡಿದ್ದ ಅವರ ಕೈಬರಹಕ್ಕೆ 'ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ' ಎಂಬ ಬಿರುದು ಸಿಕ್ಕಿದ್ದು, ಹಲವು ಪ್ರಶಸ್ತಿಗಳು ಹಾಗೂ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv1bsxzc7xjybfnxy0w4wxs,imgname-prakruthi-malla-1786540058559.jpg" type="image/jpeg" height="390" width="690"/>
            <content:encoded><![CDATA[&lt;p&gt;ಹಿಂದೆಲ್ಲಾ ಕೈಬರಹ ನೋಡಿ, ಒಬ್ಬರ ಗುಣ ಹೇಳುವವರು ಇದ್ದರು. ಕೈಬರಹದ ಜ್ಯೋತಿಷವದು. ಕೈಬರಹದಲ್ಲಿಯೇ ಅವರ ಸಂಪೂರ್ಣ ಭವಿಷ್ಯ, ಅವರ ಜಾತಕವನ್ನೇ ಬಿಚ್ಚಿಡುವವರಿದ್ದರು. ಈಗ ಅಂಥ ಮೇಧಾವಿಗಳು ಇದ್ದರೂ, ಕೈಬರಹ ಬರೆಯುವವರೇ ಕ್ರಮೇಣ ಮಾಯವಾಗುತ್ತಿದ್ದಾರೆ! ಮೊಬೈಲ್​, ಕಂಪ್ಯೂಟರ್​ನ ಈ ಜಮಾನಾದಲ್ಲಿ ಪೆನ್ನನ್ನು ಹಿಡಿಯುವವರೇ ಬಲು ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿಯೂ ಎಲ್ಲವೂ ಕಂಪ್ಯೂಟರ್​ನಲ್ಲಿಯೇ ಕಲಿಕೆ. ಪಟ್ಟಿ-ಪೆನ್ನು ಎನ್ನುವ ಕಲ್ಪನೆಯೇ ಹೋಗಿದ್ಯೋ ಎನ್ನುವಂಥ ಸ್ಥಿತಿ. ಇನ್ನು ಕಚೇರಿಗಳಲ್ಲಿ ಕೊನೆಯ ಪಕ್ಷ ಹಾಜರಾತಿ ಹಾಕಲು ಸಹಿ ಮಾಡಲು ಪೆನ್​ ಬಳಸಲಾಗುತ್ತಿತ್ತು. ಆದರೆ ಅಲ್ಲೂ ಈಗ ಡಿಜಿಟಲ್​ ವ್ಯವಸ್ಥೆ ಆವರಿಸಿಕೊಂಡಿದೆ. ಆದ್ದರಿಂದ ಕೈಬರಹ ಎನ್ನುವುದು ಇನ್ನು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೂ ಅಚ್ಚರಿಯೇನಿಲ್ಲ.&lt;/p&gt;&lt;p&gt;ಆದರೆ ಇಂದಿಗೂ ಹಲವೆಡೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸದ್ಯಕ್ಕಂತೂ ಪೆನ್ನೇ ಅನಿವಾರ್ಯ ಆಗಿದೆ ಎನ್ನುವುದೇ ಸಮಾಧಾನಪಟ್ಟುಕೊಳ್ಳಬೇಕಾದ ಸಂಗತಿ. ಆದರೆ ಇದು ಎಷ್ಟು ವರ್ಷ ಎನ್ನುವುದು ಕೂಡ ಚರ್ಚೆಯನ್ನು ಹುಟ್ಟುಹಾಕಿದೆ. ಹೋಮ್​ವರ್ಕ್​ ಕೂಡ ಪಿಡಿಎಫ್​ ರೂಪದಲ್ಲಿ ವಾಟ್ಸ್​ಆ್ಯಪ್​ನಲ್ಲಿಯೇ ಕಳುಹಿಸುವ ಹಲವು ಶಾಲೆಗಳು ಇರುವುದರಿಂದ ಹೋಮ್​ವರ್ಕ್​ ಕೂಡ ಕೈಬರಹ ಬರೆಯದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಇದರ ಮಧ್ಯೆ ಸುಂದರ ಹ್ಯಾಂಡ್​ರೈಟಿಂಗ್​ ಎನ್ನುವ ಕಲ್ಪನೆಯೇ ದೂರವಾಗಿದೆ. ಕೈಯಲ್ಲಿ ಬರೆಯಲು ಬಂದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೇ 18ರ ಯುವತಿಯೊಬ್ಬಳು ತನ್ನ ಕೈಬರದಿಂದಲೇ ವಿಶ್ವಖ್ಯಾತಿ ಗಳಿಸಿದ್ದಾಳೆ. ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾಳೆ. ಕಳೆದ ವರ್ಷವಷ್ಟೇ ಈಕೆಗೆ ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಕೂಡ ಸಿಕ್ಕಿತ್ತು. ಅದಾದ ಬಳಿಕ ಅವಳಷ್ಟು ಸುಂದರ ಕೈಬರಹ ಎಲ್ಲಿಯೂ ಕಾಣದ ಹಿನ್ನೆಲೆಯಲ್ಲಿ ದಾಖಲೆ ಪಟ್ಟಿಯನ್ನು ಹೆಚ್ಚಿಕೊಳ್ಳುತ್ತಲೇ ಸಾಗಿದ್ದಾಳೆ.&lt;/p&gt;&lt;h2&gt;&lt;strong&gt;ಯಾರೀ ಯುವತಿ?&lt;/strong&gt;&lt;/h2&gt;&lt;p&gt;ಈ ಯುವತಿಯ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರದಿಂದಾಗಿ ಫೇಮಸ್​ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್​ರೈಟರ್​ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ. ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್​ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು. ಇದೀಗ ಅವರನ್ನು ಮೀರಿಸುವವರು ಯಾರೂ ಇಲ್ಲವಾಗಿದೆ.&lt;/p&gt;&lt;h3&gt;&lt;strong&gt;ದಾಖಲೆ ಮೇಲೆ ದಾಖಲೆ&lt;/strong&gt;&lt;/h3&gt;&lt;p&gt;ಯುನೈಟೆಡ್​ ಅರಬ್ ಎಮಿರೆಟ್ಸ್​ನ 51ನೇ ಸ್ಪಿರಿಟ್ ಆಫ್​ ಯುನಿಯನ್​ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್​ ಆಗುತ್ತಿವೆ. ಪ್ರಕೃತಿ ಅವರಿಗೆ ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ. ಇದಾದ ಬಳಿಕ ಇತ್ತೀಚೆಗೆ ಈಕೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅದರ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಯುವತಿಯ ಹ್ಯಾಂಡ್​ರೈಟ್​ ಮೋಡಿಗೆ ಎಲ್ಲರೂ ಬೆರಗಾಗಿದ್ದಾರೆ.&lt;/p&gt;]]></content:encoded>
            <category><![CDATA[education]]></category>
            <dc:creator>Suchethana D</dc:creator>
            <atom:link href="https://kannada.asianetnews.com/education/who-is-prakriti-malla-the-girl-with-the-most-beautiful-handwriting-in-the-world-suc/articleshow-63ihevv"/>
        </item>
        <item>
            <title><![CDATA[ಅರುಣ್​ ಸಾಗರ್ ಪುತ್ರಿಗೆ ನಾಯಕಿ ಪಟ್ಟ: ಡಾಲಿ ಧನಂಜಯ ‘ಹೆಗ್ಗಣ ಮುದ್ದು’ಗೆ ರಿಲೀಸ್ ಡೇಟ್ ಫಿಕ್ಸ್]]></title>
            <link>https://kannada.asianetnews.com/sandalwood/heggana-muddu-daali-dhananjaya-produced-film-gets-release-date-gvd/articleshow-vm34uyx</link>
            <guid isPermaLink="true">https://kannada.asianetnews.com/sandalwood/heggana-muddu-daali-dhananjaya-produced-film-gets-release-date-gvd/articleshow-vm34uyx</guid>
            <pubDate>Wed, 12 Aug 2026 18:33:08 +0530</pubDate>
            <description><![CDATA[ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv12frbpsjvz6h6ejy89hmx,imgname-vjv-1786539753226.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ತಮ್ಮದೇ ಛಾಪು ಮೂಡಿಸಿರುವ ಡಾಲಿ ಧನಂಜಯ, ಇದೀಗ ಮತ್ತೊಂದು ವಿಭಿನ್ನ ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. &lsquo;ಬಡವ ರಾಸ್ಕಲ್&zwnj;&rsquo;, &lsquo;ಹೆಡ್&zwnj; ಬುಷ್&zwnj;&rsquo;, &lsquo;ಟಗರು ಪಲ್ಯ&rsquo; ಸೇರಿದಂತೆ ಹಲವು ಸಿನಿಮಾಗಳನ್ನು ಬೆಂಬಲಿಸಿರುವ ಅವರ ಡಾಲಿ ಪಿಕ್ಚರ್ಸ್&zwnj; ನಿರ್ಮಾಣದ ಹೊಸ ಚಿತ್ರ &lsquo;ಹೆಗ್ಗಣ ಮುದ್ದು&rsquo; ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಸಂಬಂಧಗಳ ಸುತ್ತ ಹೆಣೆದಿರುವ ಈ ಸಿನಿಮಾದ ರಿಲೀಸ್&zwnj; ಡೇಟ್&zwnj; ಕೂಡ ಫಿಕ್ಸ್&zwnj; ಆಗಿದ್ದು, ಸೆಪ್ಟೆಂಬರ್&zwnj; 25ರಂದು &lsquo;ಹೆಗ್ಗಣ ಮುದ್ದು&rsquo; ಚಿತ್ರಮಂದಿರಕ್ಕೆ ಬರಲಿದೆ.&lt;/p&gt;&lt;p&gt;&lt;strong&gt;&lsquo;ಹೆತ್ತವರಿಗೆ ಹೆಗ್ಗಣ ಮುದ್ದು&rsquo; ಈಗ ಸಿನಿಮಾ!&lt;/strong&gt;&lt;/p&gt;&lt;p&gt;&lsquo;ಹೆತ್ತವರಿಗೆ ಹೆಗ್ಗಣ ಮುದ್ದು&rsquo; ಎಂಬ ಜನಪ್ರಿಯ ಗಾದೆ ಮಾತು ಕನ್ನಡಿಗರಿಗೆ ಚಿರಪರಿಚಿತ. ಇದೇ ಸಾಲಿನಿಂದ ಪ್ರೇರಣೆ ಪಡೆದಂತೆ ಕಾಣುವ &lsquo;ಹೆಗ್ಗಣ ಮುದ್ದು&rsquo; ಎಂಬ ವಿಭಿನ್ನ ಶೀರ್ಷಿಕೆ ಈಗಾಗಲೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಡಾಲಿ ಧನಂಜಯ್&zwnj; ನಟಿಸಿಲ್ಲ. ಬದಲಿಗೆ ತಮ್ಮ ಡಾಲಿ ಪಿಕ್ಚರ್ಸ್&zwnj; ಬ್ಯಾನರ್&zwnj; ಮೂಲಕ ಚಿತ್ರವನ್ನು ನಿರ್ಮಿಸಿದ್ದಾರೆ. ಸೆಪ್ಟೆಂಬರ್&zwnj; 25ರಂದು ಸಿನಿಮಾ ತೆರೆಗೆ ಬರಲಿದೆ ಎಂಬುದನ್ನು ಧನಂಜಯ್&zwnj; ಹಾಗೂ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್&zwnj; ಹಂಚಿಕೊಂಡು, ನವಿರು ಹಾಸ್ಯ, ಭರಪೂರ ಭಾವನೆಗಳು ಹಾಗೂ ಸಾಂಸಾರಿಕ-ಸಾಮಾಜಿಕ ಅಂಶಗಳನ್ನು ಒಳಗೊಂಡ ಸಿನಿಮಾ ಎಂದು ಪರಿಚಯಿಸಿದೆ.&lt;/p&gt;&lt;p&gt;&lt;strong&gt;ಹೊಸಬ ನಿರ್ದೇಶಕನಿಗೆ ಡಾಲಿ ಧನಂಜಯ್&zwnj; ಸಾಥ್&zwnj;!&lt;/strong&gt;&lt;/p&gt;&lt;p&gt;&lsquo;ಹೆಗ್ಗಣ ಮುದ್ದು&rsquo; ಮೂಲಕ ಅವಿನಾಶ್&zwnj; ಬಳೆಕ್ಕಳ ನಿರ್ದೇಶಕರಾಗಿ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಡುತ್ತಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆಯುತ್ತಿರುವ ಡಾಲಿ ಪಿಕ್ಚರ್ಸ್&zwnj;, ಮತ್ತೊಮ್ಮೆ ಹೊಸ ನಿರ್ದೇಶಕರಿಗೆ ವೇದಿಕೆ ಕಲ್ಪಿಸಿದೆ. ಸಿನಿಮಾದಲ್ಲಿ ಬರಹಗಾರ-ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣ ಮೈಸೂರು ಅವರಿಗೆ ನಾಯಕಿಯಾಗಿ ಅದಿತಿ ಸಾಗರ್&zwnj; ಜೋಡಿಯಾಗಿದ್ದಾರೆ.&lt;/p&gt;&lt;p&gt;&lt;strong&gt;&lsquo;ವೇದ&rsquo; ನಂತರ ಪೂರ್ಣ ಪ್ರಮಾಣದ ನಾಯಕಿಯಾಗಿ ಅದಿತಿ ಸಾಗರ್&zwnj;!&lt;/strong&gt;&lt;/p&gt;&lt;p&gt;ನಟ ಹಾಗೂ ಕಲಾ ನಿರ್ದೇಶಕ ಅರುಣ್&zwnj; ಸಾಗರ್&zwnj; ಅವರ ಪುತ್ರಿ ಅದಿತಿ ಸಾಗರ್&zwnj; ಈಗಾಗಲೇ ಹ್ಯಾಟ್ರಿಕ್&zwnj; ಹೀರೋ ಶಿವರಾಜ್&zwnj;ಕುಮಾರ್&zwnj; ಅಭಿನಯದ &lsquo;ವೇದ&rsquo; ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ &lsquo;ಹೆಗ್ಗಣ ಮುದ್ದು&rsquo; ಮೂಲಕ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಹೀಗಾಗಿ ಅದಿತಿ ಸಾಗರ್&zwnj; ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲವೂ ಮೂಡಿದೆ. ಸಂಬಂಧಗಳ ಸುತ್ತ ಸಾಗುವ ಕಥೆಯಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;ಸೈಲೆಂಟ್&zwnj; ಆಗಿ ಶೂಟಿಂಗ್&zwnj; ಮುಗಿಸಿದ ಚಿತ್ರತಂಡ!&lt;/strong&gt;&lt;/p&gt;&lt;p&gt;ಯಾವುದೇ ದೊಡ್ಡ ಮಟ್ಟದ ಪ್ರಚಾರವಿಲ್ಲದೆ &lsquo;ಹೆಗ್ಗಣ ಮುದ್ದು&rsquo; ಸಿನಿಮಾದ ಶೂಟಿಂಗ್&zwnj; ಅನ್ನು ಚಿತ್ರತಂಡ ಪೂರ್ಣಗೊಳಿಸಿದೆ. ಇದೀಗ ಬಹುತೇಕ ಪೋಸ್ಟ್&zwnj; ಪ್ರೊಡಕ್ಷನ್&zwnj; ಕೆಲಸಗಳೂ ಮುಗಿದಿದ್ದು, ರಿಲೀಸ್&zwnj;ಗೆ ಸಿದ್ಧತೆ ನಡೆದಿದೆ. ಕಾರ್ತಿಕ್&zwnj; ಚೆನ್ನೂಜಿ ರಾವ್&zwnj; ಹಾಗೂ ರೋಣದ ಬಕ್ಕೆಶ್&zwnj; ಸಂಗೀತ ಸಂಯೋಜನೆ ಮಾಡಿದ್ದು, ನಚಿಕೇತ್&zwnj; ಬಳೆಕ್ಕಳ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.&lt;/p&gt;&lt;h2&gt;&lt;strong&gt;&lsquo;ಹೆಗ್ಗಣ ಮುದ್ದು&rsquo; ಮೇಲೆ ನಿರೀಕ್ಷೆ ಯಾಕೆ?&lt;/strong&gt;&lt;/h2&gt;&lt;p&gt;ಡಾಲಿ ಧನಂಜಯ್&zwnj; ಅವರ ಡಾಲಿ ಪಿಕ್ಚರ್ಸ್&zwnj; ಈ ಹಿಂದೆ ವಿಭಿನ್ನ ಕಂಟೆಂಟ್&zwnj; ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ. ಇದೀಗ ಅದೇ ಸಾಲಿಗೆ &lsquo;ಹೆಗ್ಗಣ ಮುದ್ದು&rsquo; ಕೂಡ ಸೇರುತ್ತಿದೆ. ವಿಶೇಷವೆಂದರೆ ಸಿನಿಮಾದ ಟೈಟಲ್&zwnj; ಕೇಳಿದ ಕೂಡಲೇ ಕುತೂಹಲ ಮೂಡಿಸುವಂತಿದೆ. ಹಾಸ್ಯ, ಭಾವನೆ ಹಾಗೂ ಸಂಬಂಧಗಳ ಕಥೆಯನ್ನು ಒಳಗೊಂಡಿರುವುದಾಗಿ ಚಿತ್ರತಂಡ ಹೇಳಿಕೊಂಡಿರುವುದರಿಂದ ಸಿನಿಮಾ ಹೇಗಿರಲಿದೆ ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿದೆ. ಸದ್ಯ ಸೆಪ್ಟೆಂಬರ್&zwnj; 25ರಂದು &lsquo;ಹೆಗ್ಗಣ ಮುದ್ದು&rsquo; ಚಿತ್ರಮಂದಿರಕ್ಕೆ ಬರಲು ಸಜ್ಜಾಗಿದೆ. ಡಾಲಿ ಧನಂಜಯ್&zwnj; ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ವಿಭಿನ್ನ ಶೀರ್ಷಿಕೆಯ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುತ್ತದೆಯೇ ಎಂಬುದನ್ನು ರಿಲೀಸ್&zwnj; ಬಳಿಕ ನೋಡಬೇಕಿದೆ.&lt;/p&gt;View this post on Instagram&lt;p&gt;A post shared by Daali Pictures (@daalipictures)&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/heggana-muddu-daali-dhananjaya-produced-film-gets-release-date-gvd/articleshow-vm34uyx"/>
        </item>
        <item>
            <title><![CDATA[ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳ ಹರಾಜಿನಿಂದ ಹರಿದುಬಂತು ಕೋಟಿ ಕೋಟಿ ಹಣ!]]></title>
            <link>https://kannada.asianetnews.com/business/pm-modi-gifts-mementos-e-auction-fetches-over-52-crore-san/articleshow-hau22l6</link>
            <guid isPermaLink="true">https://kannada.asianetnews.com/business/pm-modi-gifts-mementos-e-auction-fetches-over-52-crore-san/articleshow-hau22l6</guid>
            <pubDate>Wed, 12 Aug 2026 18:28:28 +0530</pubDate>
            <description><![CDATA[ಪ್ರಧಾನಿ ನರೇಂದ್ರ ಮೋದಿಯವರಿಗೆ ലഭಿಸಿದ ಉಡುಗೊರೆಗಳ ಇ-ಹರಾಜಿನಿಂದ 2021 ರಿಂದ 2025ರ ಅವಧಿಯಲ್ಲಿ ಒಟ್ಟು 52.2 ಕೋಟಿ ರೂಪಾಯಿ ಸಂಗ್ರಹವಾಗಿದೆ. 2023ರಲ್ಲಿ ನಡೆದ ಹರಾಜಿನಲ್ಲಿ ಸಾರ್ವಕಾಲಿಕ ಗರಿಷ್ಠ ಮೊತ್ತ ಸಂಗ್ರಹವಾಗಿದ್ದು, ಈ ಹಣವನ್ನು ರಾಷ್ಟ್ರೀಯ ಯೋಜನೆಗಳಿಗೆ ಬಳಸಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kybsg3pdnfmd1pnnwp0c0xf9,imgname-modi-1-1784954752717.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12):&lt;/strong&gt; ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೇಶ-ವಿದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳು, ಪ್ರವಾಸಗಳ ಸಂದರ್ಭದಲ್ಲಿ ನೀಡಲಾದ ನೆನಪಿನ ಕಾಣಿಕೆಗಳು (mementos) ಹಾಗೂ ಉಡುಗೊರೆಗಳ ಇ-ಹರಾಜಿನಿಂದ (e-auction) ಕಳೆದೆರಡು ವರ್ಷಗಳಲ್ಲಿ ಭಾರಿ ಮೊತ್ತದ ಹಣ ಸಂಗ್ರಹವಾಗಿದೆ. ಕೇಂದ್ರ ಸಾಂಸ್ಕೃತಿಕ ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, 2021 ರಿಂದ 2025ರ ಅವಧಿಯಲ್ಲಿ ನಡೆದ ಏಳು ಆವೃತ್ತಿಗಳ ಇ-ಹರಾಜಿನಲ್ಲಿ ಕಲಾಕೃತಿಗಳು, ಶಿಲ್ಪಕಲೆಗಳು ಹಾಗೂ ಕರಕುಶಲ ವಸ್ತುಗಳು ಸೇರಿದಂತೆ ಸಾವಿರಾರು ಉಡುಗೊರೆಗಳನ್ನು ಹರಾಜು ಹಾಕಲಾಗಿದ್ದು, ಬರೋಬ್ಬರಿ 52.2 ಕೋಟಿ ರೂಪಾಯಿ ಸಂಗ್ರಹವಾಗಿದೆ.&lt;/p&gt;&lt;p&gt;2019 ಕ್ಕಿಂತ ಮೊದಲು, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ (NGMA) ಸ್ಮರಣಿಕೆಗಳು ಮತ್ತು ಉಡುಗೊರೆಗಳ ಹರಾಜನ್ನು ಆಯೋಜಿಸಿರಲಿಲ್ಲ. ಈ ಮಾಹಿತಿಯನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ವರ್ಷವಾರು ಹರಾಜು ಆದಾಯದ ವಿವರ (ಕೋಟಿ ರೂಪಾಯಿಗಳಲ್ಲಿ)&lt;/strong&gt;&lt;/h2&gt;&lt;ul&gt; &lt;li&gt;1ನೇ ಆವೃತ್ತಿ (2021): ₹3.1 ಕೋಟಿ&lt;/li&gt; &lt;li&gt;2ನೇ ಆವೃತ್ತಿ (2022): ₹3.6 ಕೋಟಿ&lt;/li&gt; &lt;li&gt;3ನೇ ಆವೃತ್ತಿ (2023): ₹15.8 ಕೋಟಿ (ಸಾರ್ವಕಾಲಿಕ ಗರಿಷ್ಠ)&lt;/li&gt; &lt;li&gt;4ನೇ ಆವೃತ್ತಿ (2023): ₹14.4 ಕೋಟಿ&lt;/li&gt; &lt;li&gt;5ನೇ ಆವೃತ್ತಿ (2024): ₹11.2 ಕೋಟಿ&lt;/li&gt; &lt;li&gt;6ನೇ ಆವೃತ್ತಿ (2024): ₹2.2 ಕೋಟಿ&lt;/li&gt; &lt;li&gt;7ನೇ ಆವೃತ್ತಿ (2025): ₹1.9 ಕೋಟಿ&lt;/li&gt;&lt;/ul&gt;&lt;h2&gt;&lt;strong&gt;2023ರಲ್ಲೇ ಸಾರ್ವಕಾಲಿಕ ದಾಖಲೆ&lt;/strong&gt;&lt;/h2&gt;&lt;p&gt;ಮಾಹಿತಿಯ ಪ್ರಕಾರ, 2023ರ ಅವಧಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಅತ್ಯಂತ ಹೆಚ್ಚಿನ ಆಸಕ್ತಿ ತೋರಿದ್ದು, ಭಾರಿ ಪ್ರಮಾಣದ ಹಣ ಸಂಗ್ರಹವಾಗಿದೆ. 2023ರಲ್ಲಿ ನಡೆದ 3ನೇ ಆವೃತ್ತಿಯಲ್ಲಿ ₹15.8 ಕೋಟಿ ಹಾಗೂ 4ನೇ ಆವೃತ್ತಿಯಲ್ಲಿ ₹14.4 ಕೋಟಿ ಲಭಿಸುವ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ ₹30.2 ಕೋಟಿ ಹರಿದುಬಂದಿದೆ.&lt;/p&gt;&lt;p&gt;ಅದೇ ರೀತಿ 2024ರಲ್ಲಿ ನಡೆದ 5ನೇ ಆವೃತ್ತಿಯಲ್ಲಿ ₹11.2 ಕೋಟಿ ಹಾಗೂ 6ನೇ ಆವೃತ್ತಿಯಲ್ಲಿ ₹2.2 ಕೋಟಿ ಸಂಗ್ರಹವಾದರೆ, ಇತ್ತೀಚೆಗೆ 2025ರಲ್ಲಿ ನಡೆದ 7ನೇ ಆವೃತ್ತಿಯಲ್ಲಿ ₹1.9 ಕೋಟಿ ರೂ. ಆದಾಯ ಬಂದಿದೆ. ಪ್ರಧಾನಿಗೆ ಸಿಗುವ ಪ್ರತಿಯೊಂದು ಉಡುಗೊರೆಯನ್ನು ದೇಶದ ಸಾರ್ವಜನಿಕ ಆಸ್ತಿಯನ್ನಾಗಿ ಪರಿವರ್ತಿಸಿ, ಅದರಿಂದ ಬರುವ ಹಣವನ್ನು ರಾಷ್ಟ್ರೀಯ ಯೋಜನೆಗೆ ಬಳಸಿಕೊಳ್ಳುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Santosh Naik</dc:creator>
            <atom:link href="https://kannada.asianetnews.com/business/pm-modi-gifts-mementos-e-auction-fetches-over-52-crore-san/articleshow-hau22l6"/>
        </item>
        <item>
            <title><![CDATA[ಇನ್ನೇನು  ಈ ಜೋಡಿ ಒಂದಾಗಬೇಕು ಎನ್ನುವಷ್ಟರಲ್ಲಿ 'ಅಣ್ಣಯ್ಯ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಬದಲಾವಣೆ]]></title>
            <link>https://kannada.asianetnews.com/gallery/tv-talk/major-twist-popular-actor-says-goodbye-to-annayya-serial-lrsl3nu</link>
            <guid isPermaLink="true">https://kannada.asianetnews.com/gallery/tv-talk/major-twist-popular-actor-says-goodbye-to-annayya-serial-lrsl3nu</guid>
            <pubDate>Wed, 12 Aug 2026 18:28:10 +0530</pubDate>
            <description><![CDATA[Annayya Serial Zee Kannada: ಕಿರುತೆರೆಯ ಹಿಟ್ ಧಾರಾವಾಹಿಯಲ್ಲಿ ಒಂದಾದ 'ಅಣ್ಣಯ್ಯ'ದಲ್ಲಿ ಇಷ್ಟು ದಿನ ರಂಜಿಸಿದ್ದ ಈ ನಟನ ಜಾಗಕ್ಕೆ ಈಗ ಹೊಸ ನಟ ಬರುತ್ತಿದ್ದು, ಮುಂದಿನ ಸಂಚಿಕೆಗಳಲ್ಲಿ ಕಥೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮನೆಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjw9ptwkke32w8rk2hwy1dat,imgname-annayya2-1772623719315.jpg" type="image/jpeg" height="390" width="690"/>
            <content:encoded><![CDATA[&lt;p&gt;Annayya Serial Zee Kannada: ಕಿರುತೆರೆಯ ಹಿಟ್ ಧಾರಾವಾಹಿಯಲ್ಲಿ ಒಂದಾದ 'ಅಣ್ಣಯ್ಯ'ದಲ್ಲಿ ಇಷ್ಟು ದಿನ ರಂಜಿಸಿದ್ದ ಈ ನಟನ ಜಾಗಕ್ಕೆ ಈಗ ಹೊಸ ನಟ ಬರುತ್ತಿದ್ದು, ಮುಂದಿನ ಸಂಚಿಕೆಗಳಲ್ಲಿ ಕಥೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮನೆಮಾಡಿದೆ.&lt;/p&gt;&lt;img&gt;&lt;p&gt;&lt;strong&gt;ಧಾರಾವಾಹಿಯಲ್ಲಿ ಪ್ರಮುಖ ಬದಲಾವಣೆ&lt;/strong&gt;ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ 'ಅಣ್ಣಯ್ಯ' ಕೂಡ ಒಂದು. ಅಣ್ಣ ಮತ್ತು ತಂಗಿಯರ ಬಾಂಧವ್ಯ ಹಾಗೂ ವಿಶಿಷ್ಟ ಕಥಾಹಂದರದ ಮೂಲಕ ಅಲ್ಪ ಕಾಲದಲ್ಲೇ ವೀಕ್ಷಕರ ಮನಗೆದ್ದಿರುವ ಈ ಸೀರಿಯಲ್&zwnj;ನಲ್ಲಿ ಈಗ ಪ್ರಮುಖ ಬದಲಾವಣೆಯಾಗಲಿದೆ.&lt;/p&gt;&lt;img&gt;&lt;p&gt;&lt;strong&gt;ಸೀರಿಯಲ್&zwnj;ನಿಂದ ಹೊರಬಂದ ಸುಷ್ಮಿತ್ ಜೈನ್&lt;/strong&gt;ಹೌದು. ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದಾದ ಜಿಮ್ ಸೀನಾ ಪಾತ್ರಧಾರಿ ಬದಲಾಗುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಧಾರಾವಾಹಿಯಲ್ಲಿ ಜಿಮ್ ಸೀನಾ ಎಂಬ ಕುತೂಹಲಕಾರಿ ಪಾತ್ರಕ್ಕೆ ಜೀವ ತುಂಬಿದ್ದ ನಟ ಸುಷ್ಮಿತ್ ಜೈನ್ ಈಗ ಧಾರಾವಾಹಿಯಿಂದ ಹೊರಬಂದಿದ್ದಾರೆ. ಈ ಹಿಂದೆ 'ಸತ್ಯಂ ಶಿವಂ ಸುಂದರಂ' ಮತ್ತು 'ದೊರೆಸಾನಿ'ಯಂತಹ ಹಿಟ್ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಸುಷ್ಮಿತ್, ಅಣ್ಣಯ್ಯ ಧಾರಾವಾಹಿಯಲ್ಲೂ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದರು.&lt;/p&gt;&lt;img&gt;&lt;p&gt;&lt;strong&gt;ಹೊಸ ನಟನ ಎಂಟ್ರಿ&lt;/strong&gt;ಸುಷ್ಮಿತ್, ವೈಯಕ್ತಿಕ ಕಾರಣಗಳಿಂದಾಗಿ ಈ ಸೀರಿಯಲ್&zwnj;ಗೆ ಗುಡ್&zwnj;ಬೈ ಹೇಳಿದ್ದು, ಅವರ ಸ್ಥಾನಕ್ಕೆ ಈಗ ಹೊಸ ನಟನ ಎಂಟ್ರಿಯಾಗಲಿದೆ. ಸದ್ಯದಲ್ಲೇ ಆ ಹೊಸ ಮುಖ ಯಾರು ಎಂಬುದು ವೀಕ್ಷಕರಿಗೆ ತಿಳಿಯಲಿದೆ.&lt;/p&gt;&lt;img&gt;&lt;p&gt;&lt;strong&gt;ಕಥೆಯಲ್ಲಿ ರೋಚಕ ತಿರುವು&lt;/strong&gt;ಧಾರಾವಾಹಿಯ ಕಥೆಯಲ್ಲಿ ಈಗ ಅತ್ಯಂತ ಕುತೂಹಲಕಾರಿ ಘಟ್ಟವೊಂದು ಎದುರಾಗಿದೆ. ರಶ್ಮಿ ಮತ್ತು ಸೀನಾ ಅವರ ಫಸ್ಟ್ ನೈಟ್ ನಡೆಯಬೇಕಿದೆ. ಆದರೆ, ಇದಕ್ಕೆ ಸೀನಾ ಅಮ್ಮ ಅಡ್ಡಗಾಲಾಗಿ ನಿಂತಿದ್ದಾಳೆ. ಇತ್ತೀಚಿನವರೆಗೂ ಪಿಂಕಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸೀನಾ, ಈಗ ದಿಢೀರನೆ ಹೆಂಡತಿ ರಶ್ಮಿ ಜೊತೆ ಸುಖ ಸಂಸಾರ ನಡೆಸಲು ನಿರ್ಧರಿಸಿದ್ದಾನೆ.&lt;/p&gt;&lt;img&gt;&lt;p&gt;&lt;strong&gt;ಮುಂದಿನ ಸಂಚಿಕೆಗಳಲ್ಲಿ ಬಯಲಾಗುತ್ತೆ&lt;/strong&gt;ಸೀನಾ ಈ ದಿಢೀರ್ ಮನಃಪರಿವರ್ತನೆ ವೀಕ್ಷಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸೀನಾ ನಿಜವಾಗಿಯೂ ರಶ್ಮಿಯ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದಾನಾ? ಅಥವಾ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ನಡೆಸುತ್ತಿರುವ ತಂತ್ರವಿದಾ? ಎಂಬುದು ಮುಂದಿನ ಸಂಚಿಕೆಗಳಲ್ಲಿ ಬಯಲಾಗಬೇಕಿದೆ.&lt;/p&gt;&lt;img&gt;&lt;p&gt;&lt;strong&gt;ದಿನದಿಂದ ದಿನಕ್ಕೆ ಹೊಸ ತಿರುವು&lt;/strong&gt;ಪಾತ್ರಧಾರಿಯ ಬದಲಾವಣೆಯ ನಡುವೆಯೇ ಕಥೆಯಲ್ಲೂ ಇಂತಹ ಗಂಭೀರ ತಿರುವು ಬಂದಿರುವುದು ವೀಕ್ಷಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ.ಹೊಸ ನಟ ಜಿಮ್ ಸೀನಾ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸುತ್ತಾರೆ ಮತ್ತು ರಶ್ಮಿ-ಸೀನಾ ಅವರ ಬಾಂಧವ್ಯ ಮುಂದಕ್ಕೆ ಎತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ 'ಅಣ್ಣಯ್ಯ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವುಗಳ ಮೂಲಕ ಟಿಆರ್&zwnj;ಪಿ ರೇಟಿಂಗ್&zwnj;ನಲ್ಲಿ ಮುನ್ನುಗ್ಗುತ್ತಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/tv-talk/major-twist-popular-actor-says-goodbye-to-annayya-serial-lrsl3nu"/>
        </item>
        <item>
            <title><![CDATA[ಬೀದರ್ ಎಟಿಎಂ ₹83 ಲಕ್ಷ ದರೋಡೆ: 19 ತಿಂಗಳ ಬಳಿಕ ಬಿಹಾರದಲ್ಲಿ ಖದೀಮರ ಬೇಟೆಯಾಡಿದ ಕರ್ನಾಟಕ ಪೊಲೀಸರು!]]></title>
            <link>https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</link>
            <guid isPermaLink="true">https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d</guid>
            <pubDate>Wed, 12 Aug 2026 18:18:15 +0530</pubDate>
            <description><![CDATA[ಬೀದರ್‌ನಲ್ಲಿ 19 ತಿಂಗಳ ಹಿಂದೆ ನಡೆದಿದ್ದ ಹಾಡಹಗಲು ಎಟಿಎಂ ದರೋಡೆ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಬ್ಬಂದಿಯೊಬ್ಬರನ್ನು ಕೊಂದು 83 ಲಕ್ಷ ರೂ. ದೋಚಿದ್ದ ಇಬ್ಬರು ಆರೋಪಿಗಳನ್ನು, ಬೀದರ್ ಪೊಲೀಸರು ಬಿಹಾರದಲ್ಲಿ ಗೌಪ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಬೀದರ್‌ಗೆ ಕರೆತರಲಾಗುತ್ತಿದ್ದು, ತನಿಖೆ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzv041c1346adp7b8q8kb6ky,imgname-bidar-sbi-atm-robbery-gang-arrest-in-bihar-1786538755457.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೀದರ್ (ಆ.12): ಕ&lt;/strong&gt;ಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಬೀದರ್ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದ, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಡಹಗಲಿನ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ಬಿಗ್ ಕ್ಲೈಮ್ಯಾಕ್ಸ್ ಸಿಕ್ಕಿದೆ! ಪ್ರಕರಣ ನಡೆದ ಭೀಕರ ಘಟನೆಗೆ ಭರ್ತಿ 1 ವರ್ಷ 7 ತಿಂಗಳ (19 ತಿಂಗಳು) ಬಳಿಕ, ಪ್ರಕರಣದ ಇಬ್ಬರು ಕುಖ್ಯಾತ ದರೋಡೆಕೋರರ ಹೆಡೆಮುರಿಯನ್ನು ಬೀದರ್ ಪೊಲೀಸರು ಬಿಹಾರದಲ್ಲಿ ಕಟ್ಟಿದ್ದಾರೆ.&lt;/p&gt;&lt;p&gt;ಬಂಧಿತ ಆರೋಪಿಗಳನ್ನು ಬಿಹಾರ ಮೂಲದ ಅಮನ್&zwnj;ಕುಮಾರ್ ಸಿಂಗ್ ಹಾಗೂ ಅಲೋಕ್&zwnj;ಕುಮಾರ್ ಎಂದು ಗುರುತಿಸಲಾಗಿದೆ. ಬಿಹಾರದ ವೈಶಾಲಿ ಜಿಲ್ಲೆಯ ಧಾಮೋದರ್ ಗ್ರಾಮದಲ್ಲಿ ಇಂದು ಮಧ್ಯಾಹ್ನ ಬೀದರ್ ಪೊಲೀಸರು ಅತ್ಯಂತ ಚಾಣಾಕ್ಷತನದ ಕಾರ್ಯಾಚರಣೆ ನಡೆಸಿ ಈ ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.&lt;/p&gt;&lt;h2&gt;&lt;strong&gt;ಹಾಡಹಗಲೇ ನಡೆದಿದ್ದ ಆ ಭೀಕರ ದರೋಡೆ ಏನು?&lt;/strong&gt;&lt;/h2&gt;&lt;p&gt;ಜನವರಿ 16, 2025ರಂದು ಬೀದರ್ ನಗರದ ಹೃದಯಭಾಗದಲ್ಲಿರುವ ಎಸ್&zwnj;ಬಿಐ (SBI) ಬ್ಯಾಂಕ್ ಹಾಗೂ ಎಟಿಎಂ ಮುಂಭಾಗದಲ್ಲಿ ಅತ್ಯಂತ ಭೀಕರ ದರೋಡೆ ನಡೆದಿತ್ತು. ಸಿಎಮ್&zwnj;ಎಸ್ (CMS) ಏಜೆನ್ಸಿಯ ಕ್ಯಾಶ್ ವ್ಯಾನ್&zwnj;ನಿಂದ ಹಣ ತುಂಬಲು ಬಂದಿದ್ದ ಸಿಬ್ಬಂದಿಯ ಮೇಲೆ ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸಿಎಮ್&zwnj;ಎಸ್ ಸಿಬ್ಬಂದಿ ಗಿರಿ ವೆಂಕಟೇಶ್ ಎಂಬುವವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರೆ, ಶಿವಕುಮಾರ್ ಗುನ್ನಳ್ಳಿ ಎಂಬ ಇನ್ನೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು. ದುಷ್ಕರ್ಮಿಗಳು ಸ್ಥಳದಲ್ಲೇ ಬರೋಬ್ಬರಿ 83 ಲಕ್ಷ ರೂಪಾಯಿ ನಗದನ್ನು ದರೋಡೆ ಮಾಡಿ ಪರಾರಿಯಾಗಿದ್ದರು.&lt;/p&gt;&lt;h2&gt;&lt;strong&gt;ಯಾರ ಸಹಾಯವೂ ಇಲ್ಲದೇ 'ಬೀದರ್ ಸಿಂಹಗಳ' ಕಾರ್ಯಾಚರಣೆ:&lt;/strong&gt;&lt;/h2&gt;&lt;p&gt;ಪ್ರಕರಣ ನಡೆದ ದಿನದಿಂದಲೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಬೀದರ್ ಪೊಲೀಸರಿಗೆ ಕಳೆದ 20 ದಿನಗಳ ಹಿಂದೆ ಆರೋಪಿಗಳ ಖಚಿತ ಸುಳಿವು ಸಿಕ್ಕಿತ್ತು. ಸುಳಿವು ಸಿಕ್ಕ ತಕ್ಷಣವೇ ಕಾರ್ಯಪ್ರವೃತ್ತರಾದ ಬೀದರ್ ಖಾಕಿ ಪಡೆ, ಕಳೆದ 20 ದಿನಗಳಿಂದ ಬಿಹಾರದಲ್ಲೇ ಬೀಡುಬಿಟ್ಟು ಆರೋಪಿಗಳ ಪ್ರತಿಯೊಂದು ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿತ್ತು. ವಿಶೇಷವೆಂದರೆ, ಈ ಕಾರ್ಯಾಚರಣೆಯಲ್ಲಿ ಬಿಹಾರ ಅಥವಾ ಇತರ ಯಾವುದೇ ರಾಜ್ಯದ ಪೊಲೀಸರ ಸಹಾಯವನ್ನು ಪಡೆಯದೇ, ಮಾಹಿತಿ ಸೋರಿಕೆಯಾಗದಂತೆ ಅತ್ಯಂತ ಗೌಪ್ಯವಾಗಿ ಬೀದರ್ ಪೊಲೀಸರೇ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.&lt;/p&gt;&lt;h2&gt;&lt;strong&gt;ಖಡಕ್ ಆಪರೇಷನ್ ನಡೆಸಿದ ಪೊಲೀಸ್ ತಂಡ:&lt;/strong&gt;&lt;/h2&gt;&lt;p&gt;ಬೀದರ್ ಎಸ್&zwnj;ಪಿ ಪ್ರದೀಪ್ ಗುಂಟಿ ಅವರ ನೇರ ಉಸ್ತುವಾರಿಯಲ್ಲಿ ಈ ಹೈ-ವೋಲ್ಟೇಜ್ ಆಪರೇಷನ್ ನಡೆದಿದೆ. ಈ ಕ್ರೈಂ ಆಪರೇಷನ್&zwnj; ತಂಡದಲ್ಲಿ:&lt;/p&gt;&lt;ul&gt; &lt;li&gt;ಓರ್ವ ಎಸ್&zwnj;ಪಿ (SP)&lt;/li&gt; &lt;li&gt;ಇಬ್ಬರು ಡಿವೈಎಸ್ಪಿ (DySP)&lt;/li&gt; &lt;li&gt;ಇಬ್ಬರು ಸಿಪಿಐ (CPI)&lt;/li&gt; &lt;li&gt;ನಾಲ್ಕು ಪಿಎಸ್&zwnj;ಐ (PSI)&lt;/li&gt; &lt;li&gt;20 ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ&lt;/li&gt; &lt;li&gt;ಕ್ರೈಮ್ ವಿಭಾಗದ (Crime Branch) 12 ನುರಿತ ಸಿಬ್ಬಂದಿ ಸೇರಿ ಒಟ್ಟು ದೊಡ್ಡ ಪಡೆಯೇ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.&lt;/li&gt;&lt;/ul&gt;&lt;h2&gt;&lt;strong&gt;ದರೋಡೆ ನಡೆದ ಸ್ಥಳದಲ್ಲೇ ಸಾರ್ವಜನಿಕರ ಸಂಭ್ರಮಾಚರಣೆ!&lt;/strong&gt;&lt;/h2&gt;&lt;p&gt;ಕಳೆದ 19 ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಹಂತಕ ದರೋಡೆಕೋರರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ, ಬೀದರ್&zwnj;ನ ಎಸ್&zwnj;ಬಿಐ ಬ್ಯಾಂಕ್ ಮುಂಭಾಗ ಸಾರ್ವಜನಿಕರು ಹಾಗೂ ಬ್ಯಾಂಕ್ ಸಿಬ್ಬಂದಿ ಸಂಭ್ರಮಾಚರಣೆ ನಡೆಸಿದರು. ಸತತ ಪ್ರಯತ್ನ ನಡೆಸಿ ಖದೀಮರ ಹೆಡೆಮುರಿ ಕಟ್ಟಿದ ಎಸ್&zwnj;ಪಿ ಪ್ರದೀಪ್ ಗುಂಟಿ ಹಾಗೂ ಅವರ ಇಡೀ ತಂಡಕ್ಕೆ ಬೀದರ್ ಜನತೆ ಸಾಷ್ಟಾಂಗ ನಮನ ಸಲ್ಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಸದ್ಯ ಬಂಧಿತ ಆರೋಪಿಗಳನ್ನು ಬಿಹಾರದಿಂದ ಬೀದರ್&zwnj;ಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತಿದ್ದು, ವಿಚಾರಣೆಯ ಬಳಿಕ ದರೋಡೆ ಮಾಡಿದ 83 ಲಕ್ಷ ರೂಪಾಯಿ ಹಣ, ಬಳಸಿದ ಮಾರಕಾಸ್ತ್ರಗಳು ಹಾಗೂ ಈ ಕೃತ್ಯದ ಹಿಂದೆ ಇರುವ ಇತರ ಜಾಲದ ಬಗ್ಗೆ ಇನ್ನಷ್ಟು ಸ್ಫೋಟಕ ಸತ್ಯಗಳು ಹೊರಬರುವ ಸಾಧ್ಯತೆಯಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/bidar-sbi-atm-83-lakh-cash-robbery-2-notorious-bihar-criminals-arrested-after-19-months/articleshow-afuwr0d"/>
        </item>
        <item>
            <title><![CDATA[700 ವರ್ಷ ಹಿಂದಿನ ಕಥೆ, 400ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌: ಶ್ರೀಮುರಳಿ ‘ಉಗ್ರಾಯುಧಮ್’ ಶೂಟಿಂಗ್‌ ಜೋರು!]]></title>
            <link>https://kannada.asianetnews.com/sandalwood/srimurali-ugrayudham-gains-momentum-with-bengaluru-schedule-gvd/articleshow-4gw8k89</link>
            <guid isPermaLink="true">https://kannada.asianetnews.com/sandalwood/srimurali-ugrayudham-gains-momentum-with-bengaluru-schedule-gvd/articleshow-4gw8k89</guid>
            <pubDate>Wed, 12 Aug 2026 18:16:39 +0530</pubDate>
            <description><![CDATA[ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಉಗ್ರಾಯುಧಮ್’ ಸಿನಿಮಾ ಇದೀಗ ಶೂಟಿಂಗ್‌ ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್‌..]]></description>
            <media:content url="https://static.asianetnews.com/images/w-1280,h-720,format-jpg,imgid-01kzv04vfmrpa6zjf3st7wsxcd,imgname-nkn-1786538782196.png" type="image/jpeg" height="390" width="690"/>
            <content:encoded><![CDATA[&lt;p&gt;ರೋರಿಂಗ್&zwnj; ಸ್ಟಾರ್&zwnj; ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ &lsquo;ಉಗ್ರಾಯುಧಮ್&rsquo; ಸಿನಿಮಾ ಇದೀಗ ಶೂಟಿಂಗ್&zwnj; ಹಂತದಲ್ಲಿ ವೇಗ ಪಡೆದುಕೊಂಡಿದೆ. 700 ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಒಳಗೊಂಡಿರುವ ಈ ಪೀರಿಯಡ್&zwnj; ಡ್ರಾಮಾ ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಬರೋಬ್ಬರಿ 400ಕ್ಕೂ ಹೆಚ್ಚು ಜೂನಿಯರ್&zwnj; ಆರ್ಟಿಸ್ಟ್&zwnj;ಗಳು ಭಾಗಿಯಾಗಿರುವ ಪ್ರಮುಖ ದೃಶ್ಯಗಳನ್ನು ಚಿತ್ರತಂಡ ಸೆರೆಹಿಡಿಯುತ್ತಿದೆ.&lt;/p&gt;&lt;p&gt;&lt;strong&gt;ಬೆಂಗಳೂರಿನಲ್ಲಿ ಭರ್ಜರಿ ಶೂಟಿಂಗ್&zwnj;!&lt;/strong&gt;&lt;/p&gt;&lt;p&gt;&lsquo;ಉಗ್ರಾಯುಧಮ್&rsquo; ಸಿನಿಮಾದ ಸದ್ಯದ ಶೆಡ್ಯೂಲ್&zwnj; ಬೆಂಗಳೂರಿನ ರಾಕ್&zwnj;ಲೈನ್&zwnj; ಸ್ಟುಡಿಯೋದಲ್ಲಿ ನಡೆಯುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಹೊರಾಂಗಣ ಚಿತ್ರೀಕರಣಕ್ಕೆ ಕೊಂಚ ಬ್ರೇಕ್&zwnj; ನೀಡಿ, ಸ್ಟುಡಿಯೋದಲ್ಲಿ ನಿರ್ಮಿಸಿರುವ ಅದ್ಧೂರಿ ಸೆಟ್&zwnj;ಗಳಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಕಲಾ ನಿರ್ದೇಶಕ ಅಮರ್&zwnj; ಅವರ ನೇತೃತ್ವದಲ್ಲಿ ಸಿನಿಮಾಗಾಗಿ ಒಳಾಂಗಣ ಸೆಟ್&zwnj;ಗಳನ್ನು ನಿರ್ಮಿಸಲಾಗಿದೆ. ಮೂಲತಃ ಬಹುತೇಕ ಹೊರಾಂಗಣದಲ್ಲೇ ಚಿತ್ರೀಕರಿಸಲು ಯೋಜಿಸಿರುವ ಸಿನಿಮಾ ಇದಾಗಿದ್ದು, ಮಳೆ ಕಡಿಮೆಯಾದ ಬಳಿಕ ಚಿತ್ರತಂಡ ತೀರ್ಥಹಳ್ಳಿಯತ್ತ ತೆರಳಲಿದೆ ಎನ್ನಲಾಗಿದೆ.&lt;/p&gt;&lt;p&gt;&lt;strong&gt;700 ವರ್ಷಗಳ ಹಿಂದಿನ ಕಥೆ!&lt;/strong&gt;&lt;/p&gt;&lt;p&gt;&lsquo;ಉಗ್ರಾಯುಧಮ್&rsquo; ಕಥೆ ಸುಮಾರು 700 ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯಲಿದೆ. ಹೀಗಾಗಿ ಸಿನಿಮಾದಲ್ಲಿ ಆ ಕಾಲದ ವಾತಾವರಣ, ಜೀವನಶೈಲಿ ಹಾಗೂ ಕಥೆಯ ಜಗತ್ತನ್ನು ಕಟ್ಟಿಕೊಡಲು ಚಿತ್ರತಂಡ ವಿಶೇಷ ತಯಾರಿ ಮಾಡಿಕೊಂಡಿದೆ. ಈ ಚಿತ್ರದ ಮೂಲಕ ಪುನೀತ್&zwnj; ರುದ್ರನಾಗ್&zwnj; ನಿರ್ದೇಶಕರಾಗಿ ಸ್ಯಾಂಡಲ್&zwnj;ವುಡ್&zwnj;ಗೆ ಎಂಟ್ರಿ ಕೊಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದು, ಮಂಜು ಅಥರ್ವ ಚಿತ್ರಕಥೆಗೆ ಸಹಕರಿಸಿದ್ದಾರೆ. ಸಂಕೇತ್&zwnj; ಛಾಯಾಗ್ರಹಣ ಮಾಡುತ್ತಿದ್ದಾರೆ.&lt;/p&gt;&lt;p&gt;&lt;strong&gt;ಶ್ರೀಮುರಳಿ ಲುಕ್&zwnj;, ಪಾತ್ರ ಹೇಗಿರಲಿದೆ?&lt;/strong&gt;&lt;/p&gt;&lt;p&gt;&lsquo;ಉಗ್ರಾಯುಧಮ್&rsquo;ನಲ್ಲಿ ಶ್ರೀಮುರಳಿ ಈ ಹಿಂದೆ ಕಾಣಿಸಿಕೊಂಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಆದರೆ ಅವರ ಪಾತ್ರದ ಸ್ವರೂಪ ಹಾಗೂ ಕಥೆಯ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ವಿವರಗಳನ್ನು ಶೀಘ್ರದಲ್ಲೇ ಘೋಷಿಸುವ ಸಾಧ್ಯತೆ ಇದೆ.&lt;/p&gt;&lt;p&gt;&lt;strong&gt;&lsquo;ಉಗ್ರಾಯುಧಮ್&rsquo; ನಿರ್ಮಿಸುತ್ತಿರುವವರು ಯಾರು?&lt;/strong&gt;&lt;/p&gt;&lt;p&gt;ಸುರಂ ಮೂವೀಸ್&zwnj; ಬ್ಯಾನರ್&zwnj;ನಲ್ಲಿ ಜಯರಾಮ್&zwnj; ದೇವಸಮುದ್ರ &lsquo;ಉಗ್ರಾಯುಧಮ್&rsquo; ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. &lsquo;ನಿದ್ರಾದೇವಿ ನೆಕ್ಸ್ಟ್&zwnj; ಡೋರ್&zwnj;&rsquo; ಮೂಲಕ ನಿರ್ಮಾಪಕರಾಗಿ ಪದಾರ್ಪಣೆ ಮಾಡಿದ್ದ ಜಯರಾಮ್&zwnj;, ಬಳಿಕ &lsquo;ಎಲ್&zwnj;ಎಸ್&zwnj;ಡಿ&rsquo; ಹಾಗೂ &lsquo;ನೀ ನಂಗೆ ಅಲ್ಲವಾ&rsquo; ಸಿನಿಮಾಗಳಿಗೂ ಬಂಡವಾಳ ಹೂಡಿದ್ದಾರೆ. ಈ ಎರಡೂ ಸಿನಿಮಾಗಳು ಬಿಡುಗಡೆಯ ಹಂತದಲ್ಲಿವೆ.&lt;/p&gt;&lt;h2&gt;&lt;strong&gt;&lsquo;ಪರಾಕ್&zwnj;&rsquo;ನಲ್ಲೊಂದು ಲುಕ್&zwnj;, &lsquo;ಉಗ್ರಾಯುಧಮ್&rsquo;ನಲ್ಲಿ ಮತ್ತೊಂದು ಅವತಾರ!&lt;/strong&gt;&lt;/h2&gt;&lt;p&gt;ಶ್ರೀಮುರಳಿ ಅವರ ಕೈಯಲ್ಲಿ ಸದ್ಯ ಹಲವು ಕುತೂಹಲಕಾರಿ ಸಿನಿಮಾಗಳಿವೆ. ಹಾಲೇಶ್&zwnj; ಕೊಗುಂಡಿ ನಿರ್ದೇಶನದ &lsquo;ಪರಾಕ್&zwnj;&rsquo; ಸಿನಿಮಾ ಕೂಡ ಬಿಡುಗಡೆಯ ನಿರೀಕ್ಷೆಯಲ್ಲಿದೆ. &lsquo;ಪರಾಕ್&zwnj;&rsquo;ನಲ್ಲಿ ಸಮಕಾಲೀನ ಕಥಾಹಂದರದಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಮುರಳಿ, &lsquo;ಉಗ್ರಾಯುಧಮ್&rsquo;ನಲ್ಲಿ ಸಂಪೂರ್ಣ ವಿಭಿನ್ನವಾದ ಐತಿಹಾಸಿಕ ಹಿನ್ನೆಲೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಒಂದೇ ಸಮಯದಲ್ಲಿ ಎರಡು ವಿಭಿನ್ನ ಜಾನರ್&zwnj;ಗಳ ಸಿನಿಮಾಗಳ ಮೂಲಕ ಶ್ರೀಮುರಳಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. &lsquo;ಉಗ್ರಾಯುಧಮ್&rsquo;ನ ಕಥೆ, ಶ್ರೀಮುರಳಿ ಅವರ ಪಾತ್ರ ಹಾಗೂ 700 ವರ್ಷಗಳ ಹಿಂದಿನ ಆ ಜಗತ್ತು ತೆರೆ ಮೇಲೆ ಹೇಗೆ ಮೂಡಿಬರಲಿದೆ ಎಂಬುದೇ ಈಗ ಸಿನಿಮಂದಿಯ ಕುತೂಹಲಕ್ಕೆ ಕಾರಣವಾಗಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/srimurali-ugrayudham-gains-momentum-with-bengaluru-schedule-gvd/articleshow-4gw8k89"/>
        </item>
        <item>
            <title><![CDATA[ಹಿಂದೂ ದೇವತೆಗಳ ಅವಮಾನ:  ಧ್ರುವ್​ ರಾಠಿ ಯುಟ್ಯೂಬ್​ ವಿಡಿಯೋ ಡಿಲೀಟ್​- ಗೂಗಲ್​ ಮಾಹಿತಿ]]></title>
            <link>https://kannada.asianetnews.com/crime/dhruv-rathee-video-on-hindu-deities-withheld-in-india-google-tells-delhi-hc-suc/articleshow-grhcpv9</link>
            <guid isPermaLink="true">https://kannada.asianetnews.com/crime/dhruv-rathee-video-on-hindu-deities-withheld-in-india-google-tells-delhi-hc-suc/articleshow-grhcpv9</guid>
            <pubDate>Wed, 12 Aug 2026 18:15:33 +0530</pubDate>
            <description><![CDATA[ಯೂಟ್ಯೂಬರ್ ಧ್ರುವ್ ರಾಠಿ, ಹಿಂದೂ ದೇವರುಗಳ ಆಹಾರ ಪದ್ಧತಿ ಕುರಿತು ಮಾಡಿದ ವಿಡಿಯೋ ಭಾರಿ ವಿವಾದ ಸೃಷ್ಟಿಸಿದೆ. ಈ ಅವಹೇಳನಕಾರಿ ವಿಡಿಯೋ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ, ದೆಹಲಿ ಹೈಕೋರ್ಟ್ ಆದೇಶದಂತೆ ಗೂಗಲ್ ಭಾರತದಲ್ಲಿ ಈ ವಿಡಿಯೋವನ್ನು ಡಿಲೀಟ್ ಮಾಡಿದೆ. ವಿಶ್ವಾದ್ಯಂತ ಇದನ್ನು ತೆಗೆದುಹಾಕುವ ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01j5ar2zdg5vycwa1tr9jwwnez,imgname-dhruv-rathee-video.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೇಂದ್ರ ಸರ್ಕಾರದ ಹಾಗೂ ಹಿಂದೂಗಳ ವಿರುದ್ಧ ಸದಾ ವಿವಾದಿತ ವಿಡಿಯೋ ಹಾಕುವಲ್ಲಿ ಫೇಮಸ್​ ಆಗಿರೋ ಯುಟ್ಯೂಬರ್​ ಧ್ರುವ್​ ರಾಠಿ ಬಗ್ಗೆ ಆಗಾಗ್ಗೆ ಸುದ್ದಿಗಳು ಸದ್ದು ಮಾಡುತ್ತಲೇ ಇರುತ್ತವೆ. ಇವರ ನಿಜವಾದ ಹೆಸರು ಬದ್ರು ಹಾಗೂ ಪತ್ನಿ ಪಾಕಿಸ್ತಾನಿ. ಇವರು ಹಿಂದೂವಲ್ಲ ಎಂಬೆಲ್ಲಾ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದವು. ಇದಕ್ಕೆ ದಾಖಲೆ ಸಹಿತ ನೀಡುವುದಾಗಿ ಕೆಲವರು ಏನೇನೋ ದಾಖಲೆಗಳನ್ನೂ ನೀಡಿದ್ದುಂಟು. ಅದನ್ನು ಖುದ್ದು ಧ್ರುವ್​ ಅವರು ನಿರಾಕರಿಸುತ್ತಲೇ ಹಿಂದೂ ದೇವರ ವಿರುದ್ಧ ಅವಹೇಳನ ಎನ್ನುವಂಥ ವಿಡಿಯೋ ಮಾಡಿದ್ದು, ಅದೀಗ ಭಾರಿ ವಿವಾದ ಸೃಷ್ಟಿಸಿದೆ. ಭಾರತದಲ್ಲಿ ಆ ವಿಡಿಯೋ ಡಿಲೀಟ್​ ಮಾಡಲಾಗಿದ್ದು, ವಿಶ್ವಾದ್ಯಂತ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಗೂಗಲ್​ ದೆಹಲಿ ಹೈಕೋರ್ಟ್​ಗೆ ತಿಳಿಸಿದೆ.&lt;/p&gt;&lt;h2&gt;&lt;strong&gt;ದಿ ಕೇರಳ ಸ್ಟೋರಿ&lt;/strong&gt;&lt;/h2&gt;&lt;p&gt;ದಿ ಕೇರಳ ಸ್ಟೋರಿಯಲ್ಲಿ ಸತ್ಯಾಂಶವೇ ಇಲ್ಲ, ಅವೆಲ್ಲಾ ಕಪೋಕಲ್ಪಿತ. ಲವ್​ ಜಿಹಾದ್​ ಎನ್ನುವುದು ನಡೆಯುವುದೇ ಇಲ್ಲ ಎನ್ನುವವರಲ್ಲಿ ಧ್ರುವ್​ ಕೂಡ ಒಬ್ಬರು. ಅದೇ ರೀತಿ, ಅವರು ದಿ ಕೇರಳ ಸ್ಟೋರಿ 2' ಚಿತ್ರದ ಕುರಿತು ವಿಡಿಯೋ ಮಾಡಿದಾಗ, ಹಿಂದೂ ದೇವರ ಆಹಾರದ ಪದ್ಧತಿಯ ಕುರಿತು ಮಾತನಾಡಿದ್ದರು. ಪ್ರಾಚೀನ ಗ್ರಂಥಗಳು, ಶಾಸ್ತ್ರಗಳು ಮತ್ತು ಆಧುನಿಕ ಸಮೀಕ್ಷೆಗಳನ್ನು ಉಲ್ಲೇಖಿಸಿದ್ದ ಅವರು, ರಾಮಾಯಣ ಮತ್ತು ಮಹಾಭಾರತ ಕಾಲದ ಯೋಧರು ತಮ್ಮ ವನವಾಸದ ಸಮಯದಲ್ಲಿ ಜಿಂಕೆ ಮಾಂಸ ಸೇರಿದಂತೆ ಇತರ ಮಾಂಸ ಮತ್ತು ಮದ್ಯ ಸೇವಿಸುತ್ತಿದ್ದರು ಎಂದಿದ್ದರು. ಈ ವಿಡಿಯೋದಲ್ಲಿ ಶ್ರೀರಾಮಚಂದ್ರ, ಶ್ರೀಕೃಷ್ಣ ಮತ್ತು ಪಾಂಡವರ ಹೆಸರುಗಳನ್ನು ಪ್ರಸ್ತಾಪಿಸಿದ್ದರು.&lt;/p&gt;&lt;p&gt;ಈ ಹಿನ್ನೆಲೆಯಲ್ಲಿ, ಅವರ ವಿರುದ್ಧ ವಕೀಲೆ ಅಮಿತಾ ಸಚ್&zwnj;ದೇವ ಅವರು ಕೋರ್ಟ್​ಮೊರೆ ಹೋಗಿದ್ದರು. ಹಿಂದೂ ದೇವರ ಬಗ್ಗೆ ಅವಹೇಳನ ಮಾಡಲಾಗಿದೆ. ಈ ವಿಡಿಯೋ ತೆಗೆಸುವಂತೆ ಗೂಗಲ್​ಗೆ ಆದೇಶಿಸುವಂತೆ ಅವರು ಮನವಿ ಮಾಡಿದ್ದರಿಂದ ಕೋರ್ಟ್​ ಈ ಆದೇಶ ಹೊರಡಿಸಿತ್ತು. ಅದರ ಬೆನ್ನಲ್ಲೇ, ಗೂಗಲ್&zwnj; ಪರ ವಕೀಲರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಹೈಕೋರ್ಟ್​ಗೆ ಈ ಮಾಹಿತಿ ನೀಡಿದ್ದಾರೆ. ಸದ್ಯ ಭಾರತದಲ್ಲಿ ಈ ವಿಡಿಯೋ ಡಿಲೀಟ್​ ಮಾಡಲಾಗಿದೆ. ಆದರೆ ಜಾಗತಿಕವಾಗಿ ತೆಗೆದುಹಾಕುವ ವಿನಂತಿಯು ಹೈಕೋರ್ಟ್&zwnj;ನ ವಿಭಾಗೀಯ ಪೀಠದ ಮುಂದೆ ಬಾಕಿ ಇದೆ ಎಂದು ವಕೀಲರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಅರ್ಜಿದಾರರ ಆರೋಪವೇನು?&lt;/strong&gt;&lt;/h3&gt;&lt;p&gt;ಈ ವೀಡಿಯೊ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮವಾಗಿದೆ ಎಂದು ಅರ್ಜಿದಾರರಾಗಿರುವ ಅಮಿತಾ ಸಚ್&zwnj;ದೇವ ಆರೋಪಿಸಿದ್ದಾರೆ. ರಾಠಿ ವಿರುದ್ಧ ಮ್ಯಾಜಿಸ್ಟ್ರೇಟ್ ಮುಂದೆ ಕ್ರಿಮಿನಲ್ ದೂರು ದಾಖಲಿಸಿದ್ದಾರೆ, ಅವರು ಹಿಂದೂ ಧರ್ಮಗ್ರಂಥಗಳನ್ನು ವಿರೂಪಗೊಳಿಸಿದ್ದಾರೆ ಮತ್ತು &quot;ಸನಾತನ ಧರ್ಮದ ಪಾವಿತ್ರ್ಯವನ್ನು ಅಪಹಾಸ್ಯ ಮಾಡಿದ್ದಾರೆ&quot; ಎಂದು ಆರೋಪಿಸಿದ್ದಾರೆ. ಜುಲೈ 3 ರಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸೂಚಿಸಿದ ನಂತರ, ಕೇಂದ್ರ ಸರ್ಕಾರದ ಕುಂದುಕೊರತೆ ಮೇಲ್ಮನವಿ ಸಮಿತಿಯು ವೀಡಿಯೊವನ್ನು ನಿರ್ಬಂಧಿಸಲು ಆದೇಶಿಸಿತ್ತು. ಜಾಗತಿಕವಾಗಿ ಇದನ್ನು ಡಿಲೀಟ್​ ಮಾಡಿಸುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ಕೋರ್ಟ್​ ಮುಂದಿನ ತಿಂಗಳಿಗೆ ಮುಂದೂಡಿದೆ.&lt;/p&gt;]]></content:encoded>
            <category><![CDATA[crime]]></category>
            <dc:creator>Suchethana D</dc:creator>
            <atom:link href="https://kannada.asianetnews.com/crime/dhruv-rathee-video-on-hindu-deities-withheld-in-india-google-tells-delhi-hc-suc/articleshow-grhcpv9"/>
        </item>
        <item>
            <title><![CDATA[ಹ್ಯುಂಡೈನ ಅಗ್ಗದ ಎಸ್‌ಯುವಿ ಎಕ್ಸ್‌ಟರ್ ನೈಟ್ ಎಡಿಶನ್ ಕಾರು ಲಾಂಚ್, ಬೆಲೆ ಎಷ್ಟು?]]></title>
            <link>https://kannada.asianetnews.com/car-news/hyundai-exter-night-edition-launched-in-india-check-price-and-details/articleshow-z1rkw5e</link>
            <guid isPermaLink="true">https://kannada.asianetnews.com/car-news/hyundai-exter-night-edition-launched-in-india-check-price-and-details/articleshow-z1rkw5e</guid>
            <pubDate>Wed, 12 Aug 2026 18:12:42 +0530</pubDate>
            <description><![CDATA[ಹ್ಯುಂಡೈನ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಗೆ ಲಭ್ಯವಿರುವ ಎಸ್‌ಯುವಿ ಕಾರು ಎಕ್ಸ್‌ಟರ್ ಇದೀಗ ನೈಟ್ ಎಡಿಶನ್ ಮೂಲಕ ಬಿಡುಗಡೆಯಾಗಿದೆ. ಹೊಸ ಕಾರಿನ ಬೆಲೆ, ಫೀಚರ್ಸ್ ಸೇರಿದಂತೆ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztzv26kpvfgdjy6ckj68fxf,imgname-hyundai-exter-night-edition-suv-1786538461395.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಆ.12)&lt;/strong&gt; ಭಾರತದಲ್ಲಿ ಹ್ಯುಂಡೈ ಕಾರು ಅತೀ ದೊಡ್ಡ ಮಾರುಕಟ್ಟೆ ಹೊಂದಿದೆ. ಕ್ರೆಟಾ, ಐ20, ವೆನ್ಯೂ ಸೇರಿದಂತೆ ಹಲವು ಕಾರುಗಳ ಮೂಲಕ ತೀವ್ರ ಪೈಪೋಟಿ ನೀಡುತ್ತಿದೆ. ಹ್ಯುಂಡೈ ಕಾರುಗಳ ಪೈಕಿ ಅತೀ ಕಡಿಮೆ ಬೆಲೆಯ ಎಸ್&zwnj;ಯುವಿ ಕಾರಾಗಿರುವ ಎಕ್ಸ್&zwnj;ಟರ್ ಇದೀಗ ನೈಟ್ ಎಡಿಶನ್ ಕಾರು ಲಾಂಚ್ ಮಾಡಿದೆ. ಹ್ಯುಂಡೈ ಈಗಾಗಲೇ ಕ್ರೆಟಾ ಸೇರಿದಂತೆ ಕೆಲ ಕಾರುಗಳ ನೈಟ್ ಎಡಿಶನ್ ಕಾರು ಲಾಂಚ್ ಮಾಡಿದೆ. ಇದೀಗ ಎಕ್ಸ್&zwnj;ಟರ್ ನೈಟ್ ಎಡಿಶನ್ ಕಾರು ಬಿಡುಗಡೆ ಮಾಡಿದೆ.&lt;/p&gt;&lt;h2&gt;ಎಕ್ಸ್&zwnj;ಟರ್ ನೈಟ್ ಎಡಿಶನ್ ಬೆಲೆ&lt;/h2&gt;&lt;p&gt;ಸಬ್ 4 ಮೀಟರ್ ಸಣ್ಣ ಎಸ್&zwnj;ಯುವಿ ಎಕ್ಸ್&zwnj;ಟರ್ ನೈಟ್ ಎಡಿಶನ್ ಕಾರು 8.13 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಟಾಪ್ ಮಾಡೆಲ್ 9.60 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸ್ಪೋರ್ಟೀವ್ ಲುಕ್ ಜೊತೆಗೆ ಬ್ಲಾಕ್&zwnj;ಔಟ್ ಥೀಮ್&zwnj;ನಲ್ಲಿರುವ ಹೊಸ ಕಾರು ಹಲವು ವಿಶೇಷತೆ ಹೊಂದಿದೆ.&lt;/p&gt;&lt;h2&gt;ಕಾರಿನ ಆಕರ್ಷಕ ಲುಕ್&lt;/h2&gt;&lt;p&gt;HX 6 ಹಾಗೂ HX 10 ಎರಡು ಟ್ರಿಮ್ ಮೂಲಕು ನಾಲ್ಕು ವೇರಿಯೆಂಟ್&zwnj;ಗಳಲ್ಲಿ ಹೊಸ ಬ್ಲಾಕ್ ಎಡಿಶನ್ ಕಾರು ಲಭ್ಯವಿದೆ. ಕಂಪ್ಲೀಟ್ ಡಾರ್ಕ್ ಥೀಮ್&zwnj;ನಲ್ಲಿರುವ ಕಾರಿನಲ್ಲಿ ಎಕ್ಸ್&zwnj;ಟರ್ ಮ್ಯಾಟ್ ಬ್ಲಾಕ್ ಫಿನಿಶಿಂಗ್ ಲೋಗೋ ನೀಡಲಾಗಿದೆ. ಫ್ರಂಟ್ ಹಾಗೂ ರೇರ್ ಬಂಬರ್ ಲುಕ್ ಮತ್ತಷ್ಟು ಆಕರ್ಷಕವಾಗಿದೆ. ಗಾರ್ನಿಷ್ ಹಾಗೂ ಸೈಡ್ ಸಿಲ್ ಭಾಗದಲ್ಲಿ ಡಾರ್ಕ್ ಗ್ರೇ ಗಿಲ್ ನೀಡಲಾಗಿದೆ. 15 ಇಂಚಿನ ಅಲಾಯ್ ಬ್ಲಾಕ್ ಅಲಾಯ್ ವ್ಹೀಲ್, ಜೊತೆಗೆ ಫ್ರಂಟ್ ರೇಡ್ ಬ್ರೇಕ್ ಕ್ಯಾಲಿಪರ್ ನೀಡಲಾಗಿದೆ. ಹೀಗಾಗಿ ಕಾರಿನ ಲುಕ್ ಮತ್ತಷ್ಟು ಹೆಚ್ಚಾಗಿದೆ. ಟೇಲ್&zwnj;ಗೇಟ್ ಮೇಲೆ ನೈಟ್ ಎಡಿಶನ್ ಬ್ಯಾಡ್ಜ್ ನೀಡಲಾಗಿದೆ. ಕಾರು 5 ಬಣ್ಣಗಳಲ್ಲಿ ಲಭ್ಯವಿದೆ.&lt;/p&gt;&lt;p&gt;ಆಲ್ ಬ್ಲಾಕ್ ಕ್ಯಾಬಿನ್ ಥೀಮ್&zwnj;ನಲ್ಲಿ ಹೊಸ ಕಾರು ಬಿಡುಗಡೆಯಾಗಿದೆ. ಬ್ಲಾಕ್ ಸೆಮಿ ಫ್ಯಾಬ್ರಿಕ್ ಸೀಟ್, 8 ಇಂಚಿನ ಟಚ್&zwnj;ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ಸನ್ ರೂಫ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ವೈಯರ್&zwnj;ಲೆಸ್ ಫೋನ್ ಚಾರ್ಜಿಂಗ್, ಕನೆಕ್ಟೆಡ್ ಕಾರು ಫೀಚರ್ ಸೇರಿದಂತೆ ಹಲವು ಸೌಲಭ್ಯಗಳಿದೆ.&lt;/p&gt;&lt;p&gt;1.2 ಲೀಟರ್ ಎಂಜಿನ್ ಹೊಂದಿದೆ. 83ಹೆಚ್&zwnj;ಪಿ ಪವರ್ ಹಾಗೂ 114 ಎನ್ಎಂ ಟಾರ್ಕ್ ನೀಡಲಿದೆ. 5 ಸ್ಪೀಡ್ ಟ್ರಾನ್ಸ್&zwnj;ಮಿಶನ್ ಹಾಗೂ 5 ಸ್ಪೀಡ್ ಎಂಎಂಟಿ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ. ಸಿಎನ್&zwnj;ಜಿ ವೇರಿಯೆಂಟ್ ಕೂಡ ಲಭ್ಯವಿದೆ. ಬ್ಲಾಕ್ ಎಡಿಶನ್ ಕಾರು ಬಯಸುವ ಗ್ರಾಹಕರಿಗೆ ಇದು ಸೂಕ್ತ ಆಯ್ಕೆಯಾಗಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/car-news/hyundai-exter-night-edition-launched-in-india-check-price-and-details/articleshow-z1rkw5e"/>
        </item>
        <item>
            <title><![CDATA[Marriage Market: ವಧು ಕುಟುಂಬದ ಡಿಮ್ಯಾಂಡ್, 'ಮದುವೆಯಾಗಬೇಕೆಂದರೆ ಆಸ್ತಿ ಹುಡುಗಿ ಹೆಸರಿಗೆ ಬರೆಯಿರಿ'!]]></title>
            <link>https://kannada.asianetnews.com/viral/marriage-market-bride-s-family-demands-if-you-want-to-get-married-transfer-the-property-to-the-girl-s-name-sns/articleshow-tm1fcgd</link>
            <guid isPermaLink="true">https://kannada.asianetnews.com/viral/marriage-market-bride-s-family-demands-if-you-want-to-get-married-transfer-the-property-to-the-girl-s-name-sns/articleshow-tm1fcgd</guid>
            <pubDate>Wed, 12 Aug 2026 18:01:38 +0530</pubDate>
            <description><![CDATA[ಮದುವೆ ಸಂಬಂಧ ಸಮಯದಲ್ಲಿ ನಡೆದ ಚರ್ಚೆಯೊಂದರ ಸಂದರ್ಭದಲ್ಲಿ ವರನ ಆಸ್ತಿ, ಆದಾಯ, ಉದ್ಯೋಗದಂತಹ ಅಂಶಗಳ ಬಗ್ಗೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kzg44x90592r2d29m277g0sr,imgname-untitled-design--25--1786173879584.jpg" type="image/jpeg" height="390" width="690"/>
            <content:encoded><![CDATA[&lt;p&gt;ಮದುವೆ ಸಂಬಂಧ ಅಂದರೆ ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿ ಉಳಿದಿಲ್ಲ. ಉದ್ಯೋಗ, ಸಂಬಳ, ಕುಟುಂಬದೊಂದಿಗೆ ಈಗ ಆಸ್ತಿಗಳ ವಿವರ ಕೂಡ ಪ್ರಮುಖ ಸಂಗತಿಯಾಗಿದೆ. ಉತ್ತಮ ಸಂಬಳ ಬರುವ ಕೆಲಸವಿದ್ದರೂ, ಹುಡುಗ ಉತ್ತನ ನಡವಳಿಕೆ ಹೊಂದಿದ್ದರು, ಕೂಡ ಆತನ ಕುಟುಂಬಕ್ಕೆ ಭಾರೀ ಪ್ರಮಾಣದಲ್ಲಿ ಆಸ್ತಿ ಇರ್ಬೇಕು. ಇಂತಹ ಯುವಕರನ್ನು ಮದುವೆಯಾಗಲು ಈಗ ಹಲವರು ಮುಂದಾಗುತ್ತಿದ್ದಾರೆ. ಈ ವಿಚಾರದ ಕುರಿತಂತೆ ರೆಡಿಟ್ ನಲ್ಲಿ ಮಹಿಳೆಯೊಬ್ಬರು ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಈ ಪೋಸ್ಟ್&zwnj;ನಲ್ಲಿದ್ದ ಕೆಲವು ಅಂಶಗಳು ನೆಟ್ಟಿಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ.&lt;/p&gt;&lt;h2&gt;ಯುವಕನಿಗೆ 2-3 ಕೋಟಿ ಆಸ್ತಿ ಇರ್ಬೇಕು!&lt;/h2&gt;&lt;p&gt;ಸಾಮಾಜಿಕ ಜಾಲತಾಣದಲ್ಲಿ ಮದುವೆ ಸಂಬಂಧದ ಸಮಯಲ್ಲಿ ಆಸ್ತಿ, ಆದಾಯ, ಉದ್ಯೋಗದಂತಹ ಅಂಶಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಕೆಲವು ಯುವತಿಯರು ಯುವಕನಿಗೆ 2-3 ಕೋಟಿ ಆಸ್ತಿ ಇರ್ಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರಂತೆ.&lt;/p&gt;&lt;p&gt;ಇಂತಹ ಕೆಲವು ಮದುವೆ ಸಂಬಂಧಗಳನ್ನು ನೋಡಿದ ಬಳಿಕ ಮಹಿಳೆಯೊಬ್ಬರು ಈ ಕುರಿತಂತೆ ಪೋಸ್ಟ್ ಮಾಡಿದ್ದು, ವರನ ಕುಟುಂಬದ ಆಸ್ತಿಗಳ ಮೌಲ್ಯ, ಉದ್ಯೋಗ, ಆರ್ಥಿಕ ಸ್ಥಿತಿ, ಆದಾಯದಂತಹ ಅಂಶಗಳನ್ನು ವಿಶೇಷವಾಗಿ ಪರಿಶೀಲನೆ ನಡೆಸುತ್ತಿದ್ದಾರಂತೆ. ಅದರಲ್ಲೂ ವರನಿಗೆ ಒಟ್ಟು ಎಷ್ಟು ಆಸ್ತಿ ಬರುತ್ತದೆ ಅಂತ ನೋಡುತ್ತಿದ್ದಾರಂತೆ. ಅದರಲ್ಲೂ ಭಾರೀ ಆಸ್ತಿ ಹೊಂದಿರುವ ವರನ ವಿವರಗಳನ್ನೇ ಹೆಚ್ಚು ಮಂದಿ ಕೇಳುತ್ತಿದ್ದಾರಂತೆ.&lt;/p&gt;&lt;h2&gt;ಇಬ್ಭಾಗವಾದ ನೆಟ್ಟಿಗರು, ಹೇಳಿದ್ದೇನು?&lt;/h2&gt;&lt;p&gt;ಈ ಪೋಸ್ಟ್ ನೆಟ್ಟಿಗರನ್ನು ಎರಡು ವರ್ಗಗಳಾಗಿ ವಿಭಜನೆ ಮಾಡಿದ್ದು, ಮದುವೆ ಅನ್ನೋದು ಇಬ್ಬರು ವ್ಯಕ್ತಿಗಳ ಜೀವನಕ್ಕೆ ಸಂಬಂಧಿಸಿದ ನಿರ್ಧಾರ, ಇಲ್ಲಿ ಆರ್ಥಿಕ ಸ್ಥಿತಿಯನ್ನು ಮಾತ್ರ ನೋಡುವುದು ಸರಿ ಅಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಮತ್ತೆ ಕೆಲವರು, ವಿವಾಹದ ವಿಚಾರದಲ್ಲಿ ಆರ್ಥಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಒಂದು ಸಹಜ ಪ್ರಕ್ರಿಯೆ ಎಂದು ಕೆಲವರು ಹೇಳಿದ್ದಾರೆ. ಇಂತಹ ವಿಚಾರಗಳ ಬಗ್ಗೆ ಸ್ಪಂಧಿಸಿರುವ ಕೆಲವರು, ವಧುವಿನ ಕುಟುಂಬಸ್ಥರು ಇಂತಹ ಡಿಮ್ಯಾಂಡ್ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಪೂರವೆಗಳು ಇಲ್ಲ. ಆದ್ದರಿಂದ ಈ ಪೋಸ್ಟ್ ಎಲ್ಲರಿಗೂ ಅನ್ವಯ ಆಗೋದಿಲ್ಲ ಎಂದಿದ್ದಾರೆ.&lt;/p&gt;&lt;h2&gt;ಪೋಷಕರು ಜೊತೆಗೆ ಇರುವಂತೆ ಇಲ್ಲ!&lt;/h2&gt;&lt;p&gt;ಅದರಲ್ಲೂ ಇಂತಹ ಡಿಮ್ಯಾಂಡ್&zwnj;ಗಳು ಕುಟುಂಬ ನೋಡಿ ಮಾಡುವ ಅರೇಂಜ್ ಮ್ಯಾರೇಜ್&zwnj;ಗಳಲ್ಲಿ ಹೆಚ್ಚು. ರೆಡಿಟ್&zwnj;ನಲ್ಲಿ ಮಹಿಳೆ ಹಂಚಿಕೊಂಡಿರುವ ಮಾಹಿತಿಯಂತೆ, ಇಬ್ಬರು ಸಹೋದರರಿಗೆ ಅಂದರೆ 31 ಮತ್ತು 32 ವರ್ಷದ ಇಬ್ಬರು ಯುವಕರಿಗೆ ಕುಟುಂಬಸ್ಥರು ಅರೇಂಜ್ ಮ್ಯಾರೇಜ್ ಮಾಡಲು ವಧುವಿನ ಹುಡುಕಾಟದಲ್ಲಿದ್ದು, ಇಬ್ಬರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ವರ್ಷಕ್ಕೆ 21 ಲಕ್ಷ ರೂಪಾಯಿ ಪ್ಯಾಕೇಜ್ ಹೊಂದಿದ್ದಾರಂತೆ. ಅಲ್ಲದೇ ಇಬ್ಬರಿಗೂ ನರಗದಲ್ಲಿ ಮನೆ ಇದ್ದು, ಯಾವುದೇ ಸಾಲ ಕೂಡ ಇಲ್ಲವಂತೆ.&lt;/p&gt;&lt;p&gt;Families of women are engaging in reverse dowry and very proudly nowThey know all the laws are for women and they can demand whatever they want without any consequences whatsoever&amp;nbsp;Marriage in 2026 for Boys pic.twitter.com/bvfP7I1OQF&lt;/p&gt;&lt;p&gt;&mdash; Deepika Narayan Bhardwaj (@DeepikaBhardwaj) August 9, 2026&lt;/p&gt;&lt;p&gt;&lt;/p&gt;&lt;h2&gt;ವರ್ಷಕ್ಕೆ ಒಂದು ವಿದೇಶಿ ಪ್ರವಾಸ!&lt;/h2&gt;&lt;p&gt;ಇನ್ನು, ಆ ಇಬ್ಬರಿಗೂ ಯಾರು ಸಹೋದರರು ಇಲ್ಲ, ಪೋಷಕರಿಗೆ ಏಕೈಕ ಸಂತನವಾಗಿದ್ದಾರೆ. ಜೊತೆ ಹಳ್ಳಿಯಲ್ಲೂ ಕೃಷಿ ಭೂಮಿಯೊಂದಿಗೆ ಅಪಾರ ಆಸ್ತಿ ಇದೆ. ಆದರೆ 2020-21ರಿಂದಲೂ ಹಲವರು ವಧುವಿನ ಕುಟುಂಬಸ್ಥರು ಇವರ ಪ್ರಪೋಸಲ್ ರಿಜೆಕ್ಟ್ ಮಾಡಿದ್ದರಂತೆ. ಕೆಲವರಂತೂ ಒಬ್ಬನೇ ಮಗ ಇದ್ದರೂ ಆತನ ಪೋಷಕರು ಮದುವೆ ಬಳಿಕ ಅವರೊಂದಿಗೆ ಇರದೆ ಪ್ರತ್ಯೇಕವಾಗಿ ವಾಸಿಸಲು ಷರತ್ತು ಹಾಕಿದ್ದರಂತೆ. ಅಲ್ಲದೇ ಕೆಲವರು ವರನಿಗೆ ಕನಿಷ್ಠ 2-3 ಕೋಟಿ ರೂಪಾಯಿ ಆಸ್ತಿ ಇರ್ಬೇಕು, ಮದುವೆ ಸಂದರ್ಭದಲ್ಲಿ 20-25 ಗ್ರಾಂ ಗೋಲ್ಡ್ ಹುಡುಗಿಗೆ ನೀಡಬೇಕು ಅಂತ ಹೇಳಿದ್ದರಂತೆ.&lt;/p&gt;&lt;p&gt;Is this the future of Arranged marriage?by u/sam_patches in Visakhapatnam&lt;/p&gt;&lt;p&gt;&lt;/p&gt;&lt;h2&gt;ಸ್ವಲ್ಪ ಆಸ್ತಿ ಹುಡುಗಿ ಹೆಸರಿಗೆ ಬರೆಯಿರಿ!&lt;/h2&gt;&lt;p&gt;ಇನ್ನು, ಈ ಪೋಸ್ಟ್&zwnj;ಗೆ ಪ್ರತಿಕ್ರಿಯೆ ನೀಡಿರುವ ಹಲವರು ಯುವಕರು ತಮಗೆ ಎದುರಾದ ಅನುಭವಗಳು ಅಂದರೆ ಕಂಡಿಷನ್ಸ್ ಗಳನ್ನು ಹಂಚಿಕೊಂಡಿದ್ದು, ಒಮ್ಮೆ ಹುಡುಗಿ ಪ್ರತಿ ವರ್ಷ ಒಂದು ಬಾರಿ ಆದರೂ ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು ಅಂತ ಹೇಳಿದ್ದಳಂತೆ. ಇನ್ನು ಕೆಲವರಂತು ಮದುವೆಯಾಗ ಬೇಕು ಎಂದರೆ ಯುವಕನ ಹೆಸರಿಗೆ ಇದ್ದ ಸ್ವಲ್ಪ ಆಸ್ತಿಯನ್ನು ಯುವತಿ ಹೆಸರಿಗೆ ರಿಜಿಸ್ಟರ್ ಮಾಡಿಸಬೇಕು ಅಂತಲೂ ಕೇಳಿದ್ದರಂತೆ.&lt;/p&gt;]]></content:encoded>
            <category><![CDATA[Viral News]]></category>
            <dc:creator>Sumanth SN</dc:creator>
            <atom:link href="https://kannada.asianetnews.com/viral/marriage-market-bride-s-family-demands-if-you-want-to-get-married-transfer-the-property-to-the-girl-s-name-sns/articleshow-tm1fcgd"/>
        </item>
        <item>
            <title><![CDATA[‘ಅಯೋಗ್ಯ 2’ ಸಕ್ಸಸ್‌ ಬೆನ್ನಲ್ಲೇ ಬಿಗ್‌ ಅಪ್‌ಡೇಟ್‌: ರವಿಚಂದ್ರನ್‌ ಪಾತ್ರಕ್ಕೇ ಪ್ರತ್ಯೇಕ ಸಿನಿಮಾ ಮಾಡ್ತಾರಂತೆ ನಿರ್ದೇಶಕ!]]></title>
            <link>https://kannada.asianetnews.com/sandalwood/ayogya-2-success-director-mahesh-kumar-plans-ravichandran-prequel-gvd/articleshow-lzk5uof</link>
            <guid isPermaLink="true">https://kannada.asianetnews.com/sandalwood/ayogya-2-success-director-mahesh-kumar-plans-ravichandran-prequel-gvd/articleshow-lzk5uof</guid>
            <pubDate>Wed, 12 Aug 2026 18:01:26 +0530</pubDate>
            <description><![CDATA[ಸತೀಶ್‌ ನೀನಾಸಂ ಹಾಗೂ ರಚಿತಾ ರಾಮ್‌ ಅಭಿನಯದ ‘ಅಯೋಗ್ಯ 2’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲಿ ₹6 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztz79rvckqycdhkssrygbtr,imgname-jj-1786537813787.png" type="image/jpeg" height="390" width="690"/>
            <content:encoded><![CDATA[&lt;p&gt;ಸತೀಶ್&zwnj; ನೀನಾಸಂ ಹಾಗೂ ರಚಿತಾ ರಾಮ್&zwnj; ಅಭಿನಯದ &lsquo;ಅಯೋಗ್ಯ 2&rsquo; ಸಿನಿಮಾ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಮೊದಲ ಮೂರು ದಿನಗಳಲ್ಲಿ ₹6 ಕೋಟಿಗೂ ಅಧಿಕ ಕಲೆಕ್ಷನ್&zwnj; ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಸಿನಿಮಾದ ನಿರ್ದೇಶಕ ಮಹೇಶ್&zwnj; ಕುಮಾರ್&zwnj; ಫ್ರಾಂಚೈಸಿಯ ಮುಂದಿನ ಹೆಜ್ಜೆ ಬಗ್ಗೆ ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. &lsquo;ಅಯೋಗ್ಯ 2&rsquo; ಸಿನಿಮಾದಲ್ಲಿ ಕ್ರೇಜಿಸ್ಟಾರ್&zwnj; ರವಿಚಂದ್ರನ್&zwnj; ಅವರ ಪಾತ್ರವನ್ನು ಚಿತ್ರತಂಡ ಕೊನೆಯವರೆಗೂ ಸೀಕ್ರೆಟ್&zwnj; ಆಗಿಟ್ಟಿತ್ತು. ಸಿನಿಮಾ ಬಿಡುಗಡೆಯಾದ ಬಳಿಕ ರವಿಚಂದ್ರನ್&zwnj; ಅವರ ಎಂಟ್ರಿ ಹಾಗೂ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಇದೀಗ ಇದೇ ಪಾತ್ರವನ್ನು ಇಟ್ಟುಕೊಂಡು ಪ್ರತ್ಯೇಕ ಸಿನಿಮಾ ಮಾಡುವ ಆಲೋಚನೆ ನಿರ್ದೇಶಕರಿಗಿದೆ!&lt;/p&gt;&lt;p&gt;&lt;strong&gt;&lsquo;ಅಯೋಗ್ಯ 3&rsquo;ಗಿಂತ ಮೊದಲು ರವಿಚಂದ್ರನ್&zwnj; ಪಾತ್ರದ ಕಥೆ!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo;ನಲ್ಲಿ ಸತೀಶ್&zwnj; ನೀನಾಸಂ ಅವರ ತಂದೆಯಾಗಿ ರವಿಚಂದ್ರನ್&zwnj; ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರ ಸ್ವಲ್ಪ ತಡವಾಗಿ ಎಂಟ್ರಿ ಕೊಟ್ಟರೂ, ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಜೋರಾಗಿದೆ. ಇದೇ ಕಾರಣಕ್ಕೆ ರವಿಚಂದ್ರನ್&zwnj; ಅವರ ಪಾತ್ರದ ಹಿಂದಿನ ಕಥೆಯನ್ನು ತೆರೆಗೆ ತರಲು ಮಹೇಶ್&zwnj; ಕುಮಾರ್&zwnj; ಯೋಚಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಮಹೇಶ್&zwnj; ಕುಮಾರ್&zwnj;, ರವಿಚಂದ್ರನ್&zwnj; ಅವರ ಪಾತ್ರದ ಸುತ್ತ ಈಗಾಗಲೇ ಒಂದು ಕಥೆಯ ಐಡಿಯಾ ತಮ್ಮಲ್ಲಿದೆ ಎಂದು ಹೇಳಿದ್ದಾರೆ. &ldquo;ರವಿಚಂದ್ರನ್&zwnj; ಸರ್&zwnj; ಅವರ ಪಾತ್ರದ ಸುತ್ತ ಒಂದು ಕಥೆಯನ್ನು ನಾನು ಈಗಾಗಲೇ ಯೋಚಿಸಿದ್ದೆ. &lsquo;ಅಯೋಗ್ಯ 2&rsquo;ಗೆ ಸಿಗುತ್ತಿರುವ ಪ್ರತಿಕ್ರಿಯೆ ಆ ಆಲೋಚನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮೊದಲು ಆ ಕಥೆಯನ್ನು ಪ್ರೀಕ್ವೆಲ್&zwnj; ಆಗಿ ಮಾಡುವ ಆಸಕ್ತಿ ಇದೆ. ಅದರ ನಂತರವಷ್ಟೇ &lsquo;ಅಯೋಗ್ಯ 3&rsquo; ಬಗ್ಗೆ ಯೋಚಿಸಲು ಇಷ್ಟಪಡುತ್ತೇನೆ&rdquo; ಎಂದು ಮಹೇಶ್&zwnj; ಕುಮಾರ್&zwnj; ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 3&rsquo;ಗೆ ಆತುರ ಇಲ್ಲ!&lt;/strong&gt;&lt;/p&gt;&lt;p&gt;ಸಾಮಾನ್ಯವಾಗಿ ಸಿನಿಮಾ ಯಶಸ್ವಿಯಾದ ಕೂಡಲೇ ಮುಂದಿನ ಭಾಗದ ಕೆಲಸ ಶುರುವಾಗುತ್ತದೆ. ಆದರೆ ಮಹೇಶ್&zwnj; ಕುಮಾರ್&zwnj; ಮಾತ್ರ ಸದ್ಯಕ್ಕೆ &lsquo;ಅಯೋಗ್ಯ 3&rsquo; ಮಾಡುವ ಆತುರದಲ್ಲಿಲ್ಲ. &lsquo;ಅಯೋಗ್ಯ&rsquo; ಸಿನಿಮಾದ ಗ್ರಾಮೀಣ ಹಿನ್ನೆಲೆಯ ಜಗತ್ತಿನಲ್ಲಿ ಇನ್ನೂ ಹಲವು ಕಥೆಗಳಿಗೆ ಅವಕಾಶವಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. ಅದರಲ್ಲೂ ರವಿಚಂದ್ರನ್&zwnj; ಅವರ ಪಾತ್ರದ ಬದುಕಿನಲ್ಲಿ ನಡೆದ ಘಟನೆಗಳನ್ನು ಪ್ರೇಕ್ಷಕರಿಗೆ ತೋರಿಸುವ ಮೂಲಕ ಫ್ರಾಂಚೈಸಿಗೆ ಹೊಸ ಆಯಾಮ ನೀಡುವ ಯೋಚನೆಯಲ್ಲಿದ್ದಾರೆ. ಆದರೆ ಸದ್ಯಕ್ಕೆ &lsquo;ಅಯೋಗ್ಯ 2&rsquo; ಯಶಸ್ಸನ್ನು ಎಂಜಾಯ್&zwnj; ಮಾಡಬೇಕು. ಜೊತೆಗೆ ಈ ಹಿಂದೆ ಒಪ್ಪಿಕೊಂಡಿರುವ ಕೆಲವು ಕೆಲಸಗಳನ್ನು ಮುಗಿಸಿದ ಬಳಿಕವಷ್ಟೇ ಫ್ರಾಂಚೈಸಿಗೆ ಮರಳುವುದಾಗಿ ಮಹೇಶ್&zwnj; ಕುಮಾರ್&zwnj; ಹೇಳಿದ್ದಾರೆ.&lt;/p&gt;&lt;p&gt;&lt;strong&gt;&lsquo;ಅಯೋಗ್ಯ 2&rsquo;ಗೆ ವೀಕೆಂಡ್&zwnj;ನಲ್ಲಿ ಭರ್ಜರಿ ರೆಸ್ಪಾನ್ಸ್&zwnj;!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo; ಸಿನಿಮಾಗೆ ಕರ್ನಾಟಕದ ಬಾಕ್ಸ್&zwnj; ಆಫೀಸ್&zwnj;ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರತಂಡದ ಮಾಹಿತಿ ಪ್ರಕಾರ, ಬಿಡುಗಡೆಯಾದ ಮೊದಲ ವೀಕೆಂಡ್&zwnj;ನಲ್ಲಿ ಸಿನಿಮಾಗೆ 2,200ಕ್ಕೂ ಹೆಚ್ಚು ಶೋಗಳು ನಡೆದಿದ್ದು, ಸುಮಾರು 4 ಲಕ್ಷ ಟಿಕೆಟ್&zwnj;ಗಳು ಮಾರಾಟವಾಗಿವೆ. ವೀಕೆಂಡ್&zwnj; ಮಾತ್ರವಲ್ಲದೆ ವಾರದ ದಿನಗಳಲ್ಲೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ ಎನ್ನಲಾಗಿದೆ. ಮಲ್ಟಿಪ್ಲೆಕ್ಸ್&zwnj; ಹಾಗೂ ಸಿಂಗಲ್&zwnj; ಸ್ಕ್ರೀನ್&zwnj; ಚಿತ್ರಮಂದಿರಗಳಲ್ಲೂ ಪ್ರೇಕ್ಷಕರ ಹಾಜರಾತಿ ನಿರೀಕ್ಷೆಗಿಂತ ಉತ್ತಮವಾಗಿದ್ದು, ನಾಲ್ಕನೇ ದಿನದಿಂದ 20ಕ್ಕೂ ಹೆಚ್ಚು ಸ್ಕ್ರೀನ್&zwnj;ಗಳನ್ನು ಹೆಚ್ಚಿಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ರವಿಚಂದ್ರನ್&zwnj; ಎಂಟ್ರಿ ಮಾತ್ರವಲ್ಲ, ಕಾಮಿಡಿಗೂ ಫುಲ್&zwnj; ಮಾರ್ಕ್ಸ್!&lt;/strong&gt;&lt;/p&gt;&lt;p&gt;&lsquo;ಅಯೋಗ್ಯ 2&rsquo;ನಲ್ಲಿ ರವಿಚಂದ್ರನ್&zwnj; ಅವರ ಸರ್ಪ್ರೈಸ್&zwnj; ಎಂಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿರುವುದರ ಜೊತೆಗೆ ಸಿನಿಮಾದ ಕಾಮಿಡಿ ಕೂಡ ಮೆಚ್ಚುಗೆ ಪಡೆಯುತ್ತಿದೆ. ಸಾಧುಕೋಕಿಲ, ತಬಲಾ ನಾಣಿ, ಸುಂದರ್&zwnj; ರಾಜ್&zwnj;, ಶಿವರಾಜ್&zwnj; ಕೆ.ಆರ್&zwnj;. ಪೇಟೆ, ಗಿಲ್ಲಿ ನಟ, ಅರುಣಾ ಬಾಲರಾಜ್&zwnj;, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಪ್ರಜ್ಞಾ ಅವರು ಹಾಡೊಂದರಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಸತೀಶ್&zwnj; ನೀನಾಸಂ ಹಾಗೂ ರವಿಶಂಕರ್&zwnj; ನಡುವಿನ ದೃಶ್ಯಗಳು ಕೂಡ ಪ್ರೇಕ್ಷಕರ ಗಮನ ಸೆಳೆದಿವೆ.&lt;/p&gt;&lt;h2&gt;&lt;strong&gt;&lsquo;ಅಯೋಗ್ಯ&rsquo; ಫ್ರಾಂಚೈಸಿಗೆ ಮುಂದಿನ ಕಥೆ ಯಾವುದು?&lt;/strong&gt;&lt;/h2&gt;&lt;p&gt;&lsquo;ಅಯೋಗ್ಯ 2&rsquo;ಗೆ ಸಿಗುತ್ತಿರುವ ಪ್ರತಿಕ್ರಿಯೆ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದೆ. ಸದ್ಯ ಸಿನಿಮಾ ಸಕ್ಸಸ್&zwnj; ಎಂಜಾಯ್&zwnj; ಮಾಡುತ್ತಿರುವ ನಿರ್ದೇಶಕ ಮಹೇಶ್&zwnj; ಕುಮಾರ್&zwnj;, ಮುಂದಿನ ದಿನಗಳಲ್ಲಿ ರವಿಚಂದ್ರನ್&zwnj; ಅವರ ಪಾತ್ರದ ಹಿನ್ನೆಲೆಯನ್ನು ಆಧರಿಸಿದ ಪ್ರೀಕ್ವೆಲ್&zwnj; ಮಾಡುವ ಆಲೋಚನೆಯಲ್ಲಿದ್ದಾರೆ. ಹೀಗಾಗಿ &lsquo;ಅಯೋಗ್ಯ 3&rsquo;ಗೂ ಮುನ್ನ ರವಿಚಂದ್ರನ್&zwnj; ಅವರ ಪಾತ್ರದ ಕಥೆಯೇ ಪ್ರತ್ಯೇಕ ಸಿನಿಮಾವಾಗುತ್ತಾ? ಎಂಬ ಕುತೂಹಲ ಇದೀಗ &lsquo;ಅಯೋಗ್ಯ&rsquo; ಅಭಿಮಾನಿಗಳಲ್ಲಿ ಮೂಡಿದೆ. &lsquo;ಅಯೋಗ್ಯ 2&rsquo; ಚಿತ್ರವನ್ನು ಎಸ್&zwnj;ವಿಸಿ ಫಿಲ್ಮ್ಸ್&zwnj; ಬ್ಯಾನರ್&zwnj;ನಲ್ಲಿ ಎಂ. ಮುನೇಗೌಡ ನಿರ್ಮಿಸಿದ್ದಾರೆ. ಅರ್ಜುನ್&zwnj; ಜನ್ಯ ಸಂಗೀತ, ಚೇತನ್&zwnj; ಕುಮಾರ್&zwnj; ಸಾಹಿತ್ಯ, ಮಾಸ್ತಿ ಉಪ್ಪರಹಳ್ಳಿ ಸಂಭಾಷಣೆ ಹಾಗೂ ವಿಶ್ವಜಿತ್&zwnj; ರಾವ್&zwnj; ಛಾಯಾಗ್ರಹಣ ಚಿತ್ರಕ್ಕಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/ayogya-2-success-director-mahesh-kumar-plans-ravichandran-prequel-gvd/articleshow-lzk5uof"/>
        </item>
        <item>
            <title><![CDATA[ಸಂಪೂರ್ಣ ಸೂರ್ಯಗ್ರಹಣದ ವೇಳೆ ಮಗು ಜನಿಸಿದರೆ ಕೆಟ್ಟದಾಗುತ್ತಾ? ಇಲ್ಲಿದೆ ಜ್ಯೋತಿಷ್ಯ ವಿಜ್ಞಾನದ ಉತ್ತರ]]></title>
            <link>https://kannada.asianetnews.com/festivals/baby-born-during-solar-eclipse-effects-and-remedies-are-here/articleshow-vvvtfxl</link>
            <guid isPermaLink="true">https://kannada.asianetnews.com/festivals/baby-born-during-solar-eclipse-effects-and-remedies-are-here/articleshow-vvvtfxl</guid>
            <pubDate>Wed, 12 Aug 2026 17:43:29 +0530</pubDate>
            <description><![CDATA[Solar Eclipse: ಸೂರ್ಯ ಗ್ರಹಣದ ಸಮಯದಲ್ಲಿ ಜನಿಸುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಹಾಗೂ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ? ಇದರಿಂದ ಶುಭವಾಗುತ್ತದೆಯೋ? ಮಗುವಿನ ವೃತ್ತಿ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುತ್ತಾ ಇಲ್ಲಿದೆ ಸಂಪೂರ್ಣ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kzty7scdbzx07kd59f6p90j0,imgname-surya-grahana-1786536781182.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸಂಪೂರ್ಣ ಸೂರ್ಯಗ್ರಹಣದ ವೇಳೆ ಜನಿಸಿದರೆ ಏನಾಗುತ್ತೆ?&lt;/strong&gt;&lt;/h2&gt;&lt;p&gt;ಕುಟುಂಬದಲ್ಲಿ ಮಗುವೊಂದು ಸೂರ್ಯಗ್ರಹಣದ ಸಮಯದಲ್ಲಿ ಜನಿಸಿದಾಗ, ಸಂತೋಷದ ಜೊತೆಗೆ ತಿಳಿಯದ ಆತಂಕವೂ ಮನಸ್ಸಿನಲ್ಲಿ ಮೂಡುತ್ತದೆ. ಮಗುವಿನ ಜೀವನ ಕಷ್ಟಗಳಿಂದ ಕೂಡಿರುತ್ತದೆಯೇ? ಗ್ರಹಣದ ನೆರಳು ಅದರ ವೃತ್ತಿಜೀವನ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಈ ವಿಷಯವನ್ನು ವೈದಿಕ ಜ್ಯೋತಿಷ್ಯದ ಪ್ರಾಮಾಣಿಕ ಗ್ರಂಥಗಳು ಮತ್ತು ಆಧುನಿಕ ವಿಜ್ಞಾನ ಈ ಎರಡೂ ದೃಷ್ಟಿಕೋನಗಳಿಂದ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.&lt;/p&gt;&lt;h3&gt;&lt;strong&gt;ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?&lt;/strong&gt;&lt;/h3&gt;&lt;p&gt;ವೈದಿಕ ಜ್ಯೋತಿಷ್ಯದ ಪ್ರಮುಖ ಗ್ರಂಥಗಳಲ್ಲಿ ಒಂದಾದ &lsquo;ಬೃಹತ್ ಪರಾಶರ ಹೋರಾ ಶಾಸ್ತ್ರ&rsquo;ದ 91ನೇ ಅಧ್ಯಾಯದಲ್ಲಿ ಗ್ರಹಣದ ಸಮಯದಲ್ಲಿ ಜನಿಸುವುದರಿಂದ ಉಂಟಾಗುತ್ತದೆ ಎಂದು ಹೇಳಲಾಗುವ ಪರಿಣಾಮಗಳ ಕುರಿತು ಒಂದು ಶ್ಲೋಕದ ಮೂಲಕ ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lsquo;ಸೂರ್ಯೇಂದುಗ್ರಹಣೇ ಕಾಲೇ ಯೇಷಾಂ ಜನ್ಮ ಭವೇದ್ ದ್ವಿಜ।&lt;/p&gt;&lt;p&gt;ವ್ಯಾಧಿಃ ಕಷ್ಟಂ ಚ ದಾರಿದ್ರ್ಯಂ ತೇಷಾಂ ಮೃತ್ಯುಭಯಂ ಭವೇತ್।।&lt;/p&gt;&lt;p&gt;ಇದರ ಅರ್ಥವೆಂದರೆ ಗ್ರಹಣದ ಸಮಯದಲ್ಲಿ ಜನಿಸಿದ ಶಿಶು ಜೀವನದಲ್ಲಿ ಆರೋಗ್ಯ ಸಂಬಂಧಿತ ತೊಂದರೆಗಳು, ಕಠಿಣ ಮಾನಸಿಕ ಮತ್ತು ದೈಹಿಕ ಹೋರಾಟಗಳು ಹಾಗೂ ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.&lt;/p&gt;&lt;p&gt;ಇದರ ಹಿಂದಿನ ಪ್ರಮುಖ ಕಾರಣವೆಂದರೆ ಸನಾತನ ಪರಂಪರೆಯಲ್ಲಿ ಸೂರ್ಯನನ್ನು ಕೇವಲ ಒಂದು ಗ್ರಹ ಅಥವಾ ನಕ್ಷತ್ರವೆಂದು ಪರಿಗಣಿಸಲಾಗುವುದಿಲ್ಲ. ಸೂರ್ಯನು ವ್ಯಕ್ತಿಯ ಆತ್ಮ, ಮುಖದ ತೇಜಸ್ಸು, ಆತ್ಮವಿಶ್ವಾಸ, ಸಮಾಜದಲ್ಲಿ ದೊರೆಯುವ ಗೌರವ, ತಂದೆಯ ಸುಖ ಮತ್ತು ಜೀವನಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಸೂರ್ಯನ ಮೇಲೆ ರಾಹುವಿನ ಪ್ರಭಾವ ಗಾಢವಾಗಿರುತ್ತದೆ. ಇದರಿಂದ ಸೂರ್ಯನ ಸಹಜ ತೇಜಸ್ಸು ಕ್ಷೀಣಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಇದೇ ಕಾರಣದಿಂದ ಜನ್ಮ ಕುಂಡಲಿಯನ್ನು ವಿಶ್ಲೇಷಿಸುವಾಗ ಜ್ಯೋತಿಷಿಗಳು ಸೂರ್ಯ ಮತ್ತು ರಾಹುವಿನ ನಡುವಿನ &lsquo;ಡಿಗ್ರಿ ಅಂತರ&rsquo;ವನ್ನು ಗಮನಿಸುತ್ತಾರೆ. ಸೂರ್ಯ ಮತ್ತು ರಾಹು ಬಹಳ ಹತ್ತಿರದಲ್ಲಿದ್ದರೆ ಪರಿಣಾಮ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡೂ ಗ್ರಹಗಳ ನಡುವಿನ ಅಂತರ ಹೆಚ್ಚಿದ್ದರೆ ಅಥವಾ ಕುಂಡಲಿಯಲ್ಲಿ ಇತರ ಶುಭ ಗ್ರಹಗಳ ಸ್ಥಾನ ಬಲವಾಗಿದ್ದರೆ, ನಕಾರಾತ್ಮಕ ಪರಿಣಾಮಗಳು ಬಹಳಷ್ಟು ಕಡಿಮೆಯಾಗುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.&lt;/p&gt;&lt;p&gt;&lt;strong&gt;ದೋಷ ನಿವಾರಣೆ ಮತ್ತು ಶಾಂತಿ ಪರಿಹಾರಗಳು&lt;/strong&gt;&lt;/p&gt;&lt;p&gt;ಯಾವುದೇ ಮಗು ಗ್ರಹಣದ ಸಮಯದಲ್ಲಿ ಜನಿಸಿದರೂ ಭಯಪಡುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಇದಕ್ಕಾಗಿ ಕೆಲವು ಸರಳ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.&lt;/p&gt;&lt;p&gt;&lt;strong&gt;ಸೂರ್ಯ-ರಾಹು ಶಾಂತಿ ಪೂಜೆ: &lt;/strong&gt;ಮಗುವಿನ ಜನನದ ನಂತರ ಸೂರ್ಯದೇವ ಮತ್ತು ರಾಹುವಿನ ಪ್ರತಿಮೆಗಳನ್ನು ಸ್ಥಾಪಿಸಿ ವಿಧಿವತ್ತಾಗಿ ಪೂಜೆ ಹಾಗೂ ಮಂತ್ರ ಜಪ ಮಾಡಲಾಗುತ್ತದೆ.&lt;/p&gt;&lt;p&gt;&lt;strong&gt;ದಾನ-ಧರ್ಮ: &lt;/strong&gt;ಸೂರ್ಯನಿಗೆ ಸಂಬಂಧಿಸಿದ ವಸ್ತುಗಳಾದ ಗೋಧಿ, ತಾಮ್ರ, ಕೆಂಪು ಬಟ್ಟೆ ಅಥವಾ ಬೆಲ್ಲವನ್ನು ದಾನ ಮಾಡುವುದರಿಂದ ಗ್ರಹಣ ದೋಷದ ಪರಿಣಾಮ ನಿವಾರಣೆಯಾಗುತ್ತದೆ.&lt;/p&gt;&lt;p&gt;&lt;strong&gt;ವಿಜ್ಞಾನ ಏನು ಹೇಳುತ್ತದೆ?&lt;/strong&gt;&lt;/p&gt;&lt;p&gt;ವಿಜ್ಞಾನದ ಪ್ರಕಾರ, ಬಾಹ್ಯಾಕಾಶದಲ್ಲಿ ನಡೆಯುವ ಈ ಖಗೋಳೀಯ ವಿದ್ಯಮಾನಕ್ಕೂ ಭೂಮಿಯಲ್ಲಿ ಜನಿಸುವ ಯಾವುದೇ ಮಗುವಿನ ಅದೃಷ್ಟ, ಬುದ್ಧಿವಂತಿಕೆ, ಯಶಸ್ಸು ಅಥವಾ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ.&lt;/p&gt;]]></content:encoded>
            <category><![CDATA[festivals]]></category>
            <dc:creator>Pavna Das</dc:creator>
            <atom:link href="https://kannada.asianetnews.com/festivals/baby-born-during-solar-eclipse-effects-and-remedies-are-here/articleshow-vvvtfxl"/>
        </item>
        <item>
            <title><![CDATA[ಕನ್ನಡಕ್ಕೆ ಬರಲು ರೆಡಿಯಾದ್ರಾ ಮಾಧುರಿ ದೀಕ್ಷಿತ್‌? ಶಿವಣ್ಣನ ‘ಎ ಫಾರ್‌ ಆನಂದ್‌’ಗೆ ಬಾಲಿವುಡ್‌ ಚೆಲುವೆ!]]></title>
            <link>https://kannada.asianetnews.com/sandalwood/madhuri-dixit-approached-for-a-key-role-in-shivarajkumar-a-for-anand-gvd/articleshow-lgmzpgz</link>
            <guid isPermaLink="true">https://kannada.asianetnews.com/sandalwood/madhuri-dixit-approached-for-a-key-role-in-shivarajkumar-a-for-anand-gvd/articleshow-lgmzpgz</guid>
            <pubDate>Wed, 12 Aug 2026 17:36:53 +0530</pubDate>
            <description><![CDATA[ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಎ ಫಾರ್‌ ಆನಂದ್‌’ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ‘ಘೋಸ್ಟ್‌’ ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztxvx346nt3r22c2vwzpnc6,imgname-ch-1786536391780.png" type="image/jpeg" height="390" width="690"/>
            <content:encoded><![CDATA[&lt;p&gt;ಹ್ಯಾಟ್ರಿಕ್&zwnj; ಹೀರೋ ಶಿವರಾಜ್&zwnj;ಕುಮಾರ್&zwnj; ಅಭಿನಯದ ಬಹುನಿರೀಕ್ಷಿತ &lsquo;ಎ ಫಾರ್&zwnj; ಆನಂದ್&zwnj;&rsquo; ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. &lsquo;ಘೋಸ್ಟ್&zwnj;&rsquo; ಬಳಿಕ ನಿರ್ದೇಶಕ ಶ್ರೀನಿ ಮತ್ತು ಶಿವಣ್ಣ ಮತ್ತೊಮ್ಮೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದರ ನಡುವೆ ಸಿನಿಮಾಗೆ ಬಾಲಿವುಡ್&zwnj;ನ ಖ್ಯಾತ ನಟಿ ಮಾಧುರಿ ದೀಕ್ಷಿತ್&zwnj; ಎಂಟ್ರಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.&lt;/p&gt;&lt;p&gt;ಮೂಲಗಳ ಪ್ರಕಾರ, ನಿರ್ದೇಶಕ ಶ್ರೀನಿ ಅವರು ಸಿನಿಮಾದ ಪ್ರಮುಖ ಪಾತ್ರವೊಂದಕ್ಕಾಗಿ ಮಾಧುರಿ ದೀಕ್ಷಿತ್&zwnj; ಅವರನ್ನು ಸಂಪರ್ಕಿಸಿದ್ದು, ಈ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದರೆ ಮಾತುಕತೆ ಫಲ ನೀಡಿದರೆ, ಇದೇ ಮೊದಲ ಬಾರಿಗೆ ಮಾಧುರಿ ದೀಕ್ಷಿತ್&zwnj; ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.&lt;/p&gt;&lt;p&gt;&lt;strong&gt;ಶಿವಣ್ಣ ಜೊತೆ ಮೊದಲ ಬಾರಿಗೆ ಮಾಧುರಿ ದೀಕ್ಷಿತ್&zwnj;!&lt;/strong&gt;&lt;/p&gt;&lt;p&gt;&lsquo;ಎ ಫಾರ್&zwnj; ಆನಂದ್&zwnj;&rsquo; ಚಿತ್ರದಲ್ಲಿ ಶಿವರಾಜ್&zwnj;ಕುಮಾರ್&zwnj; ಮತ್ತು ಮಾಧುರಿ ದೀಕ್ಷಿತ್&zwnj; ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ, ಇದು ಸಿನಿಪ್ರೇಕ್ಷಕರಿಗೆ ವಿಶೇಷ ಕಾಂಬಿನೇಷನ್&zwnj; ಆಗಲಿದೆ. ದಶಕಗಳಿಂದ ಬಾಲಿವುಡ್&zwnj;ನಲ್ಲಿ ತಮ್ಮದೇ ಆದ ಜನಪ್ರಿಯತೆ ಉಳಿಸಿಕೊಂಡಿರುವ ಮಾಧುರಿ ದೀಕ್ಷಿತ್&zwnj;, ದಕ್ಷಿಣ ಭಾರತದ ಹಲವು ನಿರ್ದೇಶಕರಿಂದ ಸಿನಿಮಾಗಳ ಆಫರ್&zwnj;ಗಳನ್ನು ಪಡೆದಿದ್ದಾರೆ. ಆದರೆ ಇದುವರೆಗೆ ದಕ್ಷಿಣ ಭಾರತದಲ್ಲಿ ಅವರ ಯಾವುದೇ ಸಿನಿಮಾ ಪ್ರಮುಖ ಪಾತ್ರದಲ್ಲಿ ತೆರೆಗೆ ಬಂದಿಲ್ಲ. ಹೀಗಾಗಿ ಶ್ರೀನಿ ಅವರ ಪ್ರಯತ್ನ ಯಶಸ್ವಿಯಾದರೆ, ಮಾಧುರಿ ದೀಕ್ಷಿತ್&zwnj; ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಮತ್ತೊಂದು ವಿಶೇಷ ದಾಖಲೆಯಾಗಲಿದೆ.&lt;/p&gt;&lt;p&gt;&lt;strong&gt;&lsquo;ಎ ಫಾರ್&zwnj; ಆನಂದ್&zwnj;&rsquo; ಟೈಟಲ್&zwnj;ಗಿದೆ ಶಿವಣ್ಣನ ಜೊತೆ ಭಾವನಾತ್ಮಕ ನಂಟು&lt;/strong&gt;&lt;/p&gt;&lt;p&gt;ಈ ಸಿನಿಮಾದ ಶೀರ್ಷಿಕೆ ಕೂಡ ಶಿವರಾಜ್&zwnj;ಕುಮಾರ್&zwnj; ಅಭಿಮಾನಿಗಳಿಗೆ ವಿಶೇಷ. &lsquo;ಆನಂದ್&zwnj;&rsquo; ಎಂಬುದು ಶಿವಣ್ಣ ಅವರ ಸಿನಿಪಯಣದ ಆರಂಭದ ಸಿನಿಮಾದ ಹೆಸರು. ಇದೀಗ ಅದೇ ಹೆಸರನ್ನು ಮತ್ತೆ ಬಳಸಿಕೊಂಡು ಹೊಸ ಕಥೆಯೊಂದಿಗೆ ಶ್ರೀನಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅಂದಹಾಗೆ, &lsquo;ಘೋಸ್ಟ್&zwnj;&rsquo; ಸಿನಿಮಾದ ಯಶಸ್ಸಿನ ಬಳಿಕ ಶ್ರೀನಿ ಮತ್ತು ಶಿವರಾಜ್&zwnj;ಕುಮಾರ್&zwnj; ಮತ್ತೆ ಒಂದಾಗಿರುವುದರಿಂದ ಈ ಚಿತ್ರಕ್ಕೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ.&lt;/p&gt;&lt;h2&gt;&lt;strong&gt;ಗುರು-ಶಿಷ್ಯರ ಸಂಬಂಧದ ಸುತ್ತ ಕಥೆ!&lt;/strong&gt;&lt;/h2&gt;&lt;p&gt;ಈ ಹಿಂದೆ ಸಿನಿಮಾದ ಬಗ್ಗೆ ಮಾತನಾಡಿದ್ದ ನಿರ್ದೇಶಕ ಶ್ರೀನಿ, &lsquo;ಎ ಫಾರ್&zwnj; ಆನಂದ್&zwnj;&rsquo; ಗುರು-ಶಿಷ್ಯರ ನಡುವಿನ ಬಾಂಧವ್ಯವನ್ನು ಸಂಭ್ರಮಿಸುವ ಕಥೆ ಎಂದು ಹೇಳಿಕೊಂಡಿದ್ದರು. ಶಿವರಾಜ್&zwnj;ಕುಮಾರ್&zwnj; ಅವರಲ್ಲಿರುವ ಆತ್ಮೀಯತೆ ಮತ್ತು ಸಹಜವಾದ ಸ್ಕ್ರೀನ್&zwnj; ಪ್ರೆಸೆನ್ಸ್&zwnj; ಈ ಪಾತ್ರಕ್ಕೆ ಸೂಕ್ತವಾಗಿರುವುದರಿಂದ ಅವರನ್ನು ಆನಂದ್&zwnj; ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶ್ರೀನಿ ತಿಳಿಸಿದ್ದರು. ಚಿತ್ರದ ಉಳಿದ ತಾರಾಗಣದ ಬಗ್ಗೆ ಚಿತ್ರತಂಡ ಯಾವುದೇ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಹೀಗಾಗಿ ಮಾಧುರಿ ದೀಕ್ಷಿತ್&zwnj; ಅವರ ಎಂಟ್ರಿ ಕುರಿತ ಸುದ್ದಿ ನಿಜವಾಗುತ್ತದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.&lt;/p&gt;&lt;p&gt;ಶಿವಣ್ಣ ಬರ್ತ್&zwnj;ಡೇಗೆ ಸಿಕ್ಕಿತ್ತು ವಿಶೇಷ ಝಲಕ್&zwnj; ಗೀತಾ ಶಿವರಾಜ್&zwnj;ಕುಮಾರ್&zwnj; ನಿರ್ಮಾಣದ ಗೀತಾ ಪಿಕ್ಚರ್ಸ್&zwnj; ಬ್ಯಾನರ್&zwnj;ನಲ್ಲಿ &lsquo;ಎ ಫಾರ್&zwnj; ಆನಂದ್&zwnj;&rsquo; ಸಿನಿಮಾ ನಿರ್ಮಾಣವಾಗುತ್ತಿದೆ. ಶಿವರಾಜ್&zwnj;ಕುಮಾರ್&zwnj; ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕಳೆದ ತಿಂಗಳು ಸಿನಿಮಾದ ಪ್ರಮೋಷನಲ್&zwnj; ಝಲಕ್&zwnj;ವೊಂದನ್ನು ಚಿತ್ರತಂಡ ಅನಾವರಣಗೊಳಿಸಿತ್ತು. ಸದ್ಯ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲು ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಮಾಧುರಿ ದೀಕ್ಷಿತ್&zwnj; ಅವರ ಹೆಸರು ಕೇಳಿಬಂದಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಾಧುರಿ ದೀಕ್ಷಿತ್&zwnj; ನಿಜವಾಗಿಯೂ &lsquo;ಎ ಫಾರ್&zwnj; ಆನಂದ್&zwnj;&rsquo; ಮೂಲಕ ಕನ್ನಡಕ್ಕೆ ಬರುತ್ತಾರಾ? ಶಿವಣ್ಣ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಾರಾ? ಈ ಪ್ರಶ್ನೆಗಳಿಗೆ ಅಧಿಕೃತ ಘೋಷಣೆ ಬರುವವರೆಗೂ ಕಾಯಬೇಕಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Govindaraj S</dc:creator>
            <atom:link href="https://kannada.asianetnews.com/sandalwood/madhuri-dixit-approached-for-a-key-role-in-shivarajkumar-a-for-anand-gvd/articleshow-lgmzpgz"/>
        </item>
        <item>
            <title><![CDATA[ಭಾರತದ ಮೊದಲ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಒಡೆಯನಾದ ಒಲಿಂಪಿಕ್ ಹೀರೋ ಪಿ.ಆರ್. ಶ್ರೀಜೇಶ್!]]></title>
            <link>https://kannada.asianetnews.com/bike-news/olympic-medalist-pr-sreejeesh-becomes-first-india-owner-of-2026-yezdi-roadster-green-mamba-gdp/articleshow-80s8dkz</link>
            <guid isPermaLink="true">https://kannada.asianetnews.com/bike-news/olympic-medalist-pr-sreejeesh-becomes-first-india-owner-of-2026-yezdi-roadster-green-mamba-gdp/articleshow-80s8dkz</guid>
            <pubDate>Wed, 12 Aug 2026 17:36:49 +0530</pubDate>
            <description><![CDATA[ಒಲಿಂಪಿಕ್ ಪದಕ ವಿಜೇತ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್, ಹೊಸ '2026 ಯೆಜ್ಡಿ ರೋಡ್‌ಸ್ಟರ್' ಬೈಕ್ ಖರೀದಿಸಿದ ಭಾರತದ ಮೊದಲ ಗ್ರಾಹಕರಾಗಿದ್ದಾರೆ. ಅವರು 'ಯೆಜ್ಡಿ ಗ್ರೀನ್ ಮಾಂಬಾ ರೋಡ್‌ಸ್ಟರ್' ಮಾದರಿಯನ್ನು ಡೆಲಿವರಿ ಪಡೆದುಕೊಂಡಿದ್ದು, ಈ ಬೈಕ್‌ನ ವಿಶಿಷ್ಟ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kztxtsdjzcqkew9759amxzd7,imgname-pr-sreejeesh--1--1786536355250.jpg" type="image/jpeg" height="390" width="690"/>
            <content:encoded><![CDATA[&lt;p&gt;ಒಲಿಂಪಿಕ್ ಪದಕ ವಿಜೇತ ಹಾಗೂ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಪಿ.ಆರ್. ಶ್ರೀಜೇಶ್ ಅವರು ಹೊಸದೊಂದು ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ. ಜಾವಾ - ಯೆಜ್ಡಿ ಮೋಟಾರ್&zwnj;ಸೈಕಲ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ '2026 ಯೆಜ್ಡಿ ರೋಡ್&zwnj;ಸ್ಟರ್ʼ ಬೈಕ್ ಅನ್ನು ಖರೀದಿಸಿದ ಭಾರತದ ಮೊಟ್ಟಮೊದಲ ಗ್ರಾಹಕ ಎಂಬ ಹೆಗ್ಗಳಿಕೆಗೆ ಶ್ರೀಜೇಶ್ ಪಾತ್ರರಾಗಿದ್ದಾರೆ. ಅವರು ವಿಶಿಷ್ಟವಾದ 'ಯೆಜ್ಡಿ ಗ್ರೀನ್ ಮಾಂಬಾ ರೋಡ್&zwnj;ಸ್ಟರ್' ಬೈಕ್&zwnj;ನ ಡೆಲಿವರಿ ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಇತ್ತೀಚೆಗೆ ಕೇರಳದಲ್ಲಿ ನಡೆದ ರಾಷ್ಟ್ರೀಯ ಬಿಡುಗಡೆ ಸಮಾರಂಭದಲ್ಲಿ ಈ ಬೈಕ್ ಅನ್ನು ನೋಡಿದ್ದ ಶ್ರೀಜೇಶ್, ಅದರ ವಿಶಿಷ್ಟ ಸ್ಟೈಲ್ ಮತ್ತು ರಾಯಲ್ ಲುಕ್&zwnj;ಗೆ ಮಾರುಹೋಗಿದ್ದರು. ಇದೀಗ ಅದೇ ಬೈಕ್&zwnj; ಅನ್ನು ಖರೀದಿಸಿ, ಡೆಲಿವರಿ ಪಡೆದುಕೊಂಡಿದ್ದಾರೆ. ಆಟದ ಮೈದಾನದಲ್ಲಿ ಅಪಾರ ಆತ್ಮವಿಶ್ವಾಸ ಮತ್ತು ಛಲದಿಂದ ಎದುರಾಳಿಗಳನ್ನು ಎದುರಿಸುವ ʼಗೋಡೆʼ ಖ್ಯಾತಿಯ ಶ್ರೀಜೇಶ್ ಅವರ ವ್ಯಕ್ತಿತ್ವಕ್ಕೆ ಈ ಯೆಜ್ಡಿ ರೋಡ್&zwnj;ಸ್ಟರ್ ಬೈಕ್ ಹೇಳಿಮಾಡಿಸಿದಂತಿದೆ.&lt;/p&gt;&lt;h2&gt;ಏನು ಈ ಗ್ರೀನ್ ಮಾಂಬಾ ರೋಡ್&zwnj;ಸ್ಟರ್&zwnj;ನ ವಿಶೇಷತೆ?&lt;/h2&gt;&lt;p&gt;ರಸ್ತೆಯಲ್ಲಿ ಸಾಗುವಾಗ ಎಲ್ಲರೂ ಒಮ್ಮೆ ತಿರುಗಿ ನೋಡುವಂತಹ ಆಕರ್ಷಕ ವಿನ್ಯಾಸವನ್ನು ಇದು ಹೊಂದಿದೆ.&lt;/p&gt;&lt;p&gt;ಮ್ಯಾಟ್-ಗ್ರೀನ್ ಬಣ್ಣದ ಈ ಬೈಕ್&zwnj;ಗೆ, ಅರೇಬಿಕಾ-ಬ್ರೌನ್&zwnj; ಬಣ್ಣದ ಕುಶನ್ ಸೀಟ್ ಹಾಗೂ ತಾಮ್ರದ ಬಣ್ಣದ ಡೀಕ್ಯಾಲ್&zwnj;ಗಳನ್ನು ನೀಡಲಾಗಿದ್ದು, ಇದು ಬೈಕ್&zwnj;ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.&lt;/p&gt;&lt;p&gt;ಇದು 334ಸಿಸಿ ಸಾಮರ್ಥ್ಯದ ಲಿಕ್ವಿಡ್-ಕೂಲ್ಡ್ ಆಲ್ಫಾ2 ಇಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್&zwnj;ಬಾಕ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಎಬಿಎಸ್ ಮತ್ತು ಮಾಡ್ಯುಲರ್ ಸೀಟಿಂಗ್&zwnj;ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.&lt;/p&gt;&lt;h2&gt;ಸಂತಸ ಹಂಚಿಕೊಂಡ ಮಾಜಿ ನಾಯಕ ಶ್ರೀಜೇಶ್&zwnj;&lt;/h2&gt;&lt;p&gt;ಬೈಕ್&zwnj; ಖರೀದಿಯ ಸಂತಸ ಹಂಚಿಕೊಂಡ ಶ್ರೀಜೇಶ್&zwnj;, &quot;ಆಟದ ಮೈದಾನದಷ್ಟೇ, ಮೈದಾನದ ಹೊರಗಿನ ಜೀವನವೂ ಬಹಳ ಮುಖ್ಯ ಎಂದು ನಾನು ನಂಬಿದ್ದೇನೆ. ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ ಈ ಬೈಕ್&zwnj;ನ ಡಿಸೈನ್ ಹಾಗೂ ಲುಕ್ ನನ್ನನ್ನು ಮೊದಲ ನೋಟದಲ್ಲೇ ಸೆಳೆದಿತ್ತು. ಯೆಜ್ಡಿ ಬೈಕ್&zwnj;ಗಳಿಗೆ ತಲೆಮಾರುಗಳು ಮೆಚ್ಚುವಂತಹ ದೊಡ್ಡ ಇತಿಹಾಸವಿದೆ. ಆ ಇತಿಹಾಸದ ಒಂದು ಭಾಗವಾಗಲು ನಾನು ಇಷ್ಟಪಟ್ಟೆ. ಆಟದ ಮೈದಾನವಿರಲಿ, ರಸ್ತೆಯಿರಲಿ ಅಥವಾ ಜೀವನವಿರಲಿ. ನಮಗೆ ಇಷ್ಟವಾದದ್ದನ್ನು ನಾವು ಬೆನ್ನಟ್ಟಬೇಕು ಎಂಬುದನ್ನೇ ಈ ಬೈಕ್ ನನಗೆ ನೆನಪಿಸುತ್ತದೆ&quot; ಎಂದರು.&lt;/p&gt;&lt;p&gt;ಈ ಬಗ್ಗೆ ಮಾತನಾಡಿದ ಜಾವಾ - ಯೆಜ್ಡಿ ಬ್ರ್ಯಾಂಡ್&zwnj;ನ ಮಾತೃಸಂಸ್ಥೆಯಾದ ಕ್ಲಾಸಿಕ್ ಲೆಜೆಂಡ್ಸ್&zwnj;ನ ಸಹ ಸಂಸ್ಥಾಪಕ ಅನುಪಮ್ ಥರೇಜಾ, &quot;ರೋಡ್&zwnj;ಸ್ಟರ್ ಬೈಕ್ ಎಂದರೆ ಧೈರ್ಯ, ಆತ್ಮವಿಶ್ವಾಸ ಮತ್ತು ಚಾಲೆಂಜರ್ ಸ್ಪಿರಿಟ್. ಇಂತಹ ಬೈಕ್&zwnj;ನ ಮೊದಲ ಗ್ರಾಹಕನಾಗಿ ಶ್ರೀಜೇಶ್ ಅವರಂತಹ ಕ್ರೀಡಾ ದಿಗ್ಗಜರು ಸೇರ್ಪಡೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅವರ ಛಲ ಮತ್ತು ಸಾಧನೆ ನಮ್ಮ ಬ್ರ್ಯಾಂಡ್&zwnj;ಗೆ ಕನ್ನಡಿಯಂತಿದೆ. ಶ್ರೀಜೇಶ್ ಅವರೊಂದಿಗೆ ನಮ್ಮ 2026ರ ಹೊಸ ಸರಣಿಯ ಬೈಕ್&zwnj;ಗಳ ಜರ್ನಿ ಶುರುವಾಗಿರುವುದು ರೋಮಾಂಚನಕಾರಿಯಾಗಿದೆ,&rdquo; ಎಂದರು.&lt;/p&gt;&lt;h2&gt;ಗ್ರೀನ್ ಮಾಂಬಾ ರೋಡ್&zwnj;ಸ್ಟರ್ ನಿಂದ ಡೆಲಿವರಿ&lt;/h2&gt;&lt;p&gt;ಶ್ರೀಜೇಶ್ ಅವರಿಗೆ ಗ್ರೀನ್ ಮಾಂಬಾ ರೋಡ್&zwnj;ಸ್ಟರ್ ಡೆಲಿವರಿ ಮಾಡುವುದರೊಂದಿಗೆ ಯೆಜ್ಡಿಯ 2026ರ ಹೊಸ ಸರಣಿಯ ಬೈಕ್&zwnj;ಗಳ ಡೆಲಿವರಿ ಭಾರತದಾದ್ಯಂತ ಅಧಿಕೃತವಾಗಿ ಶುರುವಾಗಿದೆ.&lt;/p&gt;&lt;p&gt;ಜಾವಾ, ಯೆಜ್ಡಿ ಹಾಗೂ ಬಿಎಸ್&zwnj;ಎನಂತಹ ಐಕಾನಿಕ್ ಮೋಟಾರ್&zwnj;ಸೈಕಲ್ ಬ್ರ್ಯಾಂಡ್&zwnj;ಗಳಿಗೆ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಮರುಜೀವ ನೀಡುವ ದೃಷ್ಟಿಯಿಂದ ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆ ಸ್ಥಾಪನೆಯಾಗಿದೆ. ಗ್ರಾಹಕರಿಗೆ ಅತ್ಯುತ್ತಮ ಮೋಟಾರ್&zwnj;ಸೈಕಲ್ ಅನುಭವವನ್ನು ನೀಡುವುದು ಈ ಕಂಪನಿಯ ಗುರಿಯಾಗಿದೆ.&lt;/p&gt;]]></content:encoded>
            <category><![CDATA[bike-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/bike-news/olympic-medalist-pr-sreejeesh-becomes-first-india-owner-of-2026-yezdi-roadster-green-mamba-gdp/articleshow-80s8dkz"/>
        </item>
    </channel>
</rss>
