<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Wed, 29 Apr 2026 11:41:27 +0530</lastBuildDate>
        <atom:link href="https://kannada.asianetnews.com/rss" rel="self" type="application/rss+xml"/>
        <item>
            <title><![CDATA[ಶಾಲು ಬಿಟ್ಟು ನೀವು ಏನೂ ಹಾಕಲ್ವಲ್ಲಾ ಸಾರ್​ ಎಂದು ಸಿಎಂಗೆ ಹೇಳಿದ ನಟಿ ಜಯಮಾಲಾ: ವಿಡಿಯೋ ವೈರಲ್​]]></title>
            <link>https://kannada.asianetnews.com/karnataka-districts/jayamala-meets-cm-siddaramaiah-and-greets-with-shawl-video-gone-viral-suc/articleshow-pwc0pqu</link>
            <guid isPermaLink="true">https://kannada.asianetnews.com/karnataka-districts/jayamala-meets-cm-siddaramaiah-and-greets-with-shawl-video-gone-viral-suc/articleshow-pwc0pqu</guid>
            <pubDate>Fri, 20 Feb 2026 15:13:11 +0530</pubDate>
            <description><![CDATA[ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಆಯ್ಕೆಯಾದ ನಟಿ ಜಯಮಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಶಾಲು ಹೊದಿಸುವಾಗ ನಡೆದ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khx6vkvjdg92stwasyd4dbcr,imgname-jayamala-meets-siddaramaiah-1771580542834.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದೇ ಫೆಬ್ರುವರಿ 1ರಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ. ಒಟ್ಟು 846 ಮತಗಳು ಚಲಾವಣೆಯಾಗಿದ್ದು, ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ, ಚಲನಚಿತ್ರದಲ್ಲಿನ ಸಮಸ್ಯೆಗಳ ಕುರಿತು ನಟಿ ಜಯಮಾಲಾ ಅವರು ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಲು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಈಚೆಗೆ ಭೇಟಿಯಾಗಿ, ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿನ ವಿಡಿಯೋ ಒಂದು ವೈರಲ್​ ಆಗ್ತಿದೆ.&lt;/p&gt;&lt;h2&gt;&lt;strong&gt;ಶಾಲೇಕೇ ತಂದ್ರಿ ಎಂದು ಕೇಳಿದ ಸಿಎಂ&lt;/strong&gt;&lt;/h2&gt;&lt;p&gt;ಮೊದಲಿಗೆ ಜಯಮಾಲಾ ಅವರು, ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಅವರಿಗೆ ಪುಷ್ಪಗುಚ್ಚವನ್ನು ನೀಡಿದರು. ಅವರ ಜೊತೆಗೆ, ಮಂಡಳಿಯ ಉಪಾಧ್ಯಕ್ಷರಾದ ಎಂ.ಕೆ. ಸುಂದರ್ ರಾಜನ್, ಎಂ.ಮಂಜು ಮತ್ತಿತರರು ಸಿದ್ದರಾಮಯ್ಯನವರ ಭೇಟಿಗೆ ತೆರಳಿದ್ದರು. ಆಗ ಜಯಮಾಲಾ ಅವರು ತಮ್ಮ ಜೊತೆ ಬಂದಿದ್ದವರನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಿದರು. ಆರಂಭದಲ್ಲಿ ಕೊಟ್ಟ ಬೊಕ್ಕೆಯನ್ನು ಸಿದ್ದರಾಮಯ್ಯ ಖುಷಿಯಿಂದ ಸ್ವೀಕರಿಸಿದರು. ಬಳಿಕ ಜಯಮಾಲಾ ಅವರು ಶಾಲು ಹೊದಿಸಲು ಮುಂದಾದಾಗ, ಶಾಲನ್ನೇಕೆ ತಂದ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅದಕ್ಕೆ ಜಯಮಾಲಾ ಅವರು, ನೀವು ಶಾಲನ್ನು ಬಿಟ್ಟರೆ ಬೇರೇನನ್ನೂ ಹಾಕುವುದಿಲ್ಲವಲ್ಲ ಸರ್​, ಅದಕ್ಕೇ ತಂದೆ ಎಂದರು. ಬಳಿಕ ಸಿದ್ದರಾಮಯ್ಯ ಅವರಿಗೆ ಈ ಶಾಲನ್ನು ಹೊದಿಸಿದರು.&lt;/p&gt;&lt;h3&gt;&lt;strong&gt;ಸಮಸ್ಯೆ ಪರಿಹಾರ&lt;/strong&gt;&lt;/h3&gt;&lt;p&gt;ಇದೇ ವೇಳೆ ಜಯಮಾಲಾ ಅವರು ದೇವರಿಗೆ ಹಾಕಿದಂತೆ ನಾನು ನಿಮಗೆ ಶಾಲನ್ನು ಹೊದಿಸುತ್ತಿದ್ದೇನೆ ಎಂದು ಶಾಲು ಹೊದಿಸಿ ಕೈಮುಗಿದರು. ಬಳಿಕ ಎಲ್ಲರನ್ನೂ ಪರಿಚಯಿಸಿ ತಾವು ತಂದ ಮನವಿ ಪತ್ರವನ್ನು ಸಿಎಂ ಮುಂದೆ ಇಟ್ಟರು. ಅದರಲ್ಲಿ ಚಿತ್ರರಂಗದ ಕೆಲವೊಂದು ಸಮಸ್ಯೆಗಳ ಬಗ್ಗೆ ಬರೆಯಲಾಗಿದೆ. ಇವೆಲ್ಲವನ್ನೂ ತಾವು ಪರಿಹರಿಸುತ್ತೀರಿ ಎಂದು ನಂಬುತ್ತೇನೆ ಎಂದಾಗ, ಅಲ್ಲಿ ಇದ್ದವರು ನಂಬುತ್ತೇನೆ ಅಲ್ಲ, ಪರಿಹರಿಸಿ ಎಂದು ಕೇಳಿಕೊಳ್ಳಿ ಎಂದರು. ಆಗ ತಕ್ಷಣ ಜಯಮಾಲಾ ಅವರು, ಸಿದ್ದರಾಮಯ್ಯ ಅವರು ಖಂಡಿತವಾಗಿಯೂ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತಾರೆ ಎಂದರು.&lt;/p&gt;&lt;h3&gt;&lt;strong&gt;ವಿಡಿಯೋ ವೈರಲ್​&lt;/strong&gt;&lt;/h3&gt;&lt;p&gt;ಸಿದ್ದರಾಮಯ್ಯನವರು ಬೇರೇನನ್ನೂ ಸ್ವೀಕರಿಸುವುದಿಲ್ಲ ಎನ್ನುವ ವಿಷಯವನ್ನು ಹೈಲೈಟ್​ ಮಾಡಿದ್ದ ನಟಿ ಜಯಮಾಲಾ ತಾವು ಶಾಲನ್ನು ತಂದಿರುವುದಾಗಿ ಹೇಳಿದ್ದರು. ಆದರೆ ಬೇರೇನನ್ನೂ ಹಾಕುವುದಿಲ್ಲ ಎಂದಿರುವ ಅವರ ಮಾತುಗಳ ವಿಡಿಯೋ ಅಷ್ಟೇ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದಕ್ಕೆ ವಿಭಿನ್ನ ರೀತಿಯ ಕಮೆಂಟ್ಸ್ ಬರುತ್ತಿವೆ. ಸಿದ್ದರಾಮಯ್ಯನವರು ಆಗ್ಗಾಗ್ಗೆ ತಮಾಷೆ ಮಾಡುವುದು ಉಂಟು. ಅದೇ ರೀತಿ ಇಲ್ಲಿಯೂ ಶಾಲ್​ ಯಾಕೆ ತಂದ್ರಿ ಎಂದು ತಮಾಷೆ ಮಾಡಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಇಂಥ ವಿಡಿಯೋಗಳಿಗಾಗಿಯೇ ಕಾಯುತ್ತಿರುವ ದೊಡ್ಡ ವರ್ಗವೇ ಇದೆ. ತಮಗೆ ಬೇಕಾದದ್ದಷ್ಟನ್ನೇ ಟ್ರಿಮ್​ ಮಾಡಿ ಅದನ್ನು ಹಾಕುವವರು ಹೆಚ್ಚಾಗಿದ್ದಾರೆ. ಅದೇ ರೀತಿ ಈ ಮಾತಿನ ವಿಡಿಯೋ ಈಗ ವೈರಲ್​ ಆಗ್ತಿದೆ. shankar_punarv ಎನ್ನುವವರು ಶೇರ್​ ಮಾಡಿರುವ ವಿಡಿಯೋ ಇಲ್ಲಿದೆ.&amp;nbsp;&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Shankar Murthy (@shankar_punarv)&lt;/p&gt;&lt;p&gt;&amp;nbsp;&lt;/p&gt;&lt;p&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Suchethana D</dc:creator>
            <atom:link href="https://kannada.asianetnews.com/karnataka-districts/jayamala-meets-cm-siddaramaiah-and-greets-with-shawl-video-gone-viral-suc/articleshow-pwc0pqu"/>
        </item>
        <item>
            <title><![CDATA[ನಿಮ್ಮನ್ನು ಕಾಡುವ ಮಾನಸಿಕ ಅಶಾಂತಿ, ಆರ್ಥಿಕ ಸಮಸ್ಯೆಗೆ ಒಂದೇ ಪರಿಹಾರ]]></title>
            <link>https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</link>
            <guid isPermaLink="true">https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw</guid>
            <pubDate>Wed, 29 Apr 2026 11:35:36 +0530</pubDate>
            <description><![CDATA[ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kqbx3b8dvex68tbe9jxqykf5,imgname-clove-water-1777442336013.jpg" type="image/jpeg" height="390" width="690"/>
            <content:encoded><![CDATA[&lt;p&gt;ಮನೆ ಮಂದಿಯೆಲ್ಲ ಆರೋಗ್ಯವಾಗಿದ್ರೂ, ಕೈತುಂಬ ಸಂಬಳ ಬರ್ತಿದ್ರೂ ಏನೋ ಕಿರಿಕಿರಿ ಮನೆಯಲ್ಲಿರುತ್ತೆ. ಕುಟುಂಬದಲ್ಲಿ ಸಂತೋಷ, ನೆಮ್ಮದಿ ಕಾಣಿಸೋದಿಲ್ಲ. ಮನೆ ಮಂದಿ ಮನಸ್ಸು ಶಾಂತವಾಗಿರೋದಿಲ್ಲ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಇದಕ್ಕೆಲ್ಲ ಕಾರಣ. ಅದನ್ನು ಅತ್ಯಂತ ಸರಳ ಉಪಾಯದಿಂದ ಬಗೆ ಹರಿಸ್ಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಮನೆಯಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಜನರು ಬದುಕ್ತಿದ್ದರೆ ಅದಕ್ಕೆ ಕಾರಣ ವಾಸ್ತು. ಎಷ್ಟೇ ಹಣ ಇರ್ಲಿ, ಎಷ್ಟೇ ಆರೋಗ್ಯ ಇರಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ ಅಂದ್ರೆ ಜೀವನ ಕಷ್ಟ. ಇದಕ್ಕೆ ನಿಮ್ಮ ಮನೆ ವಾಸ್ತು ಮುಖ್ಯ ಕಾರಣವಾಗಿರುತ್ತೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ನೀವು ಮನೆ ಬದಲಿಸಬೇಕಾಗಿಲ್ಲ. ಅತ್ಯಂತ ಸರಳ ವಿಧಾನವನ್ನು ಫಾಲೋ ಮಾಡುವ ಮೂಲಕ ನೀವು ನೆಮ್ಮದಿ ಕಂಡುಕೊಳ್ಳಬಹುದು.&lt;/p&gt;&lt;img&gt;&lt;p&gt;ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಇರುವ ವಸ್ತು ಇದು. ಇದನ್ನು ಮಸಾಲೆ ಪದಾರ್ಥವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗುತ್ತದೆ. ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ, ಮಾನಸಿಕ ಕಿರಿಕಿರಿ ಏನೇ ಇರಲಿ ಈ ಲವಂಗದ ನೀರು ನಿಮ್ಮೆಲ್ಲ ಸಮಸ್ಯೆಗೆ ಪರಿಹಾರವಾಗಬಹುದು ಅಂತ ಜನರು ನಂಬಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಲವಂಗದ ನೀರು ಹೆಚ್ಚು ಚರ್ಚೆ ಆಗ್ತಿದೆ.&lt;/p&gt;&lt;img&gt;&lt;p&gt;ಲವಂಗದ ನೀರು ತಯಾರಿಸೋದು ಬಹಳ ಸುಲಭ. ಹೆಚ್ಚಿನ ಪದಾರ್ಥದ ಅಗತ್ಯವಿಲ್ಲ. ಲವಂಗ ಹಾಗೂ ನೀರನ್ನು ಬಳಸಿದ್ರೆ ಸಾಕು. ಮೊದಲು ಒಂದು ಗಾಜಿನ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಿ. ಅದಕ್ಕೆ 5 -7 ಲವಂಗವನ್ನು ಹಾಕಿ. ನಂತ್ರ ನೀರನ್ನು ಹಾಕಿ. ಇದನ್ನು ಸುಮಾರು 2 ರಿಂದ 3 ಗಂಟೆ ನೆನೆಹಾಕಿ. ಇದನ್ನು ದೇವರ ಮುಂದಿಷ್ಟು ಪ್ರಾರ್ಥನೆ ಮಾಡಿ ಬಳಕೆ ಮಾಡ್ಬಹುದು. ಹಾಗೆ ಮಾಡಿದ್ರೆ ಸಕಾರಾತ್ಮಕ ಶಕ್ತಿ ದುಪ್ಪಟ್ಟಾಗುತ್ತೆ ಎನ್ನುವ ನಂಬಿಕೆ ಇದೆ.&lt;/p&gt;&lt;img&gt;&lt;p&gt;ಲವಂಗದ ನೀರನ್ನು ನೀವು ಶಕ್ತಿವಾತಾವರಣ ಬದಲಾಗುವ, ಶಕ್ತಿಯ ಹರಿವು ಭಿನ್ನವಾಗಿರುವ ಸಮಯದಲ್ಲಿ ಬಳಸಬೇಕು. ಅಂದ್ರೆ ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಈ ನೀರನ್ನು ನೀವು ಮನೆಗೆ ಸಿಂಪಡಿಸಬೇಕು. ಇದನ್ನು ಮನೆಯ ಮುಖ್ಯದ್ವಾರದಿಂದ ಸಿಂಪಡಿಸಬೇಕು. ಮುಖ್ಯದ್ವಾರದಿಂದ ಮನೆಯ ಎಲ್ಲ ಜಾಗಕ್ಕೆ ಇದನ್ನು ಸಿಂಪಡಿಸಬೇಕು. ಆದ್ರೆ ಯಾವುದೇ ಕಾರಣಕ್ಕೂ ಬಾತ್ ರೂಮ್, ಶೌಚಾಲಯ ಹಾಗೂ ಸಿಂಕ್ ಗೆ ಇದನ್ನು ಹಾಕಬೇಡಿ. ನೀವು ನಿಮ್ಮಿಷ್ಟದ ಮಂತ್ರವನ್ನು ಪಠಿಸಬಹುದು. ಇಲ್ಲವೆ ಸಕಾರಾತ್ಮಕ ಆಲೋಚನೆಯಲ್ಲಿ ಈ ನೀರನ್ನು ಸಿಂಪಡಿಸಿ.&lt;/p&gt;&lt;img&gt;&lt;p&gt;ಮನೆಗೆ ಲವಂಗದ ನೀರನ್ನು ಸಿಂಪಡಿಸುವುದ್ರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ. ಲವಂಗದ ಸುವಾಸನೆ ಮನೆಯನ್ನು ತಾಜಾಗೊಳಿಸುತ್ತದೆ. ಆರ್ಥಿಕ ಚಿಂತೆ ಕಡಿಮೆಯಾಗುತ್ತದೆ. ಮನಸ್ಸು ಹಗುರವಾದ ಅನುಭವವಾಗುತ್ತದೆ. ಸಂಬಂಧಗಳಲ್ಲಿ ಕಾಣಿಸಿಕೊಂಡ ಉದ್ವಿಗ್ನತೆ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶಾಂತವಾಗಿ ನೀವು ಜೀವನದ ನಿರ್ದಾರ ತೆಗೆದುಕೊಳ್ಳಲು ಇದು ಸಹಕಾರಿ.&lt;/p&gt;]]></content:encoded>
            <category><![CDATA[festivals]]></category>
            <dc:creator>Roopa Hegde</dc:creator>
            <atom:link href="https://kannada.asianetnews.com/gallery/festivals/astro-tips-sprinkling-clove-water-creates-light-and-cheerful-atmosphere-in-your-home-hq69esw"/>
        </item>
        <item>
            <title><![CDATA[ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೊಸ ಸೌಲಭ್ಯ, ಮೇಕ್‌ ಮೈ ಟ್ರಿಪ್‌ ಮೂಲಕ ಆನ್‌ಲೈನ್‌ನಲ್ಲೇ ಡ್ಯೂಟಿ-ಫ್ರೀ, ಪ್ರೀ-ಬುಕಿಂಗ್!]]></title>
            <link>https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v</link>
            <guid isPermaLink="true">https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v</guid>
            <pubDate>Wed, 29 Apr 2026 11:38:23 +0530</pubDate>
            <description><![CDATA[ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ಲಿ. ಮತ್ತು ಮೇಕ್‌ ಮೈ ಟ್ರಿಪ್ ಹೊಸ ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ ಮಂಗಳೂರು ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು 'ಡ್ಯೂಟಿ-ಫ್ರೀ' ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮುಂಗಡವಾಗಿ ಕಾಯ್ದಿರಿಸಬಹುದು. ಇದು ಪ್ರಯಾಣಿಕರ ಸಮಯ ಉಳಿತಾಯ ಮಾಡುವುದಲ್ಲದೆ, ವಿಶೇಷ ರಿಯಾಯಿತಿಗಳನ್ನು ಸಹ ನೀಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfn9wk9fq0gyjw73aqcc3nz6,imgname----------------------45--1769167801647.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಕರ್ನಾಟಕದಿಂದ ಅಂತಾರಾಷ್ಟ್ರೀಯ ಪ್ರಯಾಣ ಬೆಳೆಸುವವರಿಗೆ ಹಾಗೂ ವಿದೇಶದಿಂದ ಮರಳುವವರಿಗೆ ಒಂದು ಭರ್ಜರಿ ಸಿಹಿಸುದ್ದಿ. ವಿಮಾನ ನಿಲ್ದಾಣಗಳಲ್ಲಿ ಶಾಪಿಂಗ್ ಮಾಡುವುದನ್ನು ಇನ್ನಷ್ಟು ಸುಲಭವಾಗಿಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ 'ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ.' (ಎಎಎಚ್&zwnj;ಎಲ್&zwnj;) ಮತ್ತು ಪ್ರಮುಖ ಆನ್&zwnj;ಲೈನ್ ಟ್ರಾವೆಲ್ ಕಂಪನಿ 'ಮೇಕ್&zwnj; ಮೈ ಟ್ರಿಪ್' ಹೊಸ ಒಪ್ಪಂದವೊಂದನ್ನು ಮಾಡಿಕೊಂಡಿವೆ.&lt;/p&gt;&lt;h2&gt;'ಆನ್&zwnj;ಲೈನ್ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್' ಸೇವೆ&lt;/h2&gt;&lt;p&gt;ಈ ಪಾಲುದಾರಿಕೆಯ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 'ಆನ್&zwnj;ಲೈನ್ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್' ಸೇವೆಯನ್ನು ಆರಂಭಿಸಲಾಗಿದೆ.ಇದರ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ ಅಥವಾ ನಿರ್ಗಮಿಸುವ ಮೊದಲು ತಮ್ಮ ನೆಚ್ಚಿನ 'ಡ್ಯೂಟಿ-ಫ್ರೀ' ಉತ್ಪನ್ನಗಳನ್ನು ಮೇಕ್&zwnj; ಮೈ ಟ್ರಿಪ್&zwnj; ಆ್ಯಪ್ ಅಥವಾ ವೆಬ್&zwnj;ಸೈಟ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು. ಕರ್ನಾಟಕದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅದಾನಿ ಗ್ರೂಪ್ ನಿರ್ವಹಿಸುತ್ತಿರುವ ಏರ್&zwnj;ಪೋರ್ಟ್&zwnj;ಗಳಲ್ಲಿ ಈ ಸೌಲಭ್ಯ ಲಭ್ಯವಿರಲಿದೆ.&lt;/p&gt;&lt;h2&gt;100ಕ್ಕೂ ಹೆಚ್ಚು ಬ್ರ್ಯಾಂಡ್&zwnj;&lt;/h2&gt;&lt;p&gt;ಪ್ರಯಾಣಿಕರು ಈಗ 10ಕ್ಕೂ ಹೆಚ್ಚು ವಿಭಾಗಗಳಲ್ಲಿ ಲಭ್ಯವಿರುವ 100ಕ್ಕೂ ಅಧಿಕ ಬ್ರ್ಯಾಂಡ್&zwnj;ಗಳ, 14,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಆನ್&zwnj;ಲೈನ್&zwnj;ನಲ್ಲಿ ವೀಕ್ಷಿಸಬಹುದು. ಆನ್&zwnj;ಲೈನ್ ಮೂಲಕ ಪ್ರೀ-ಬುಕ್ ಮಾಡುವವರಿಗೆ ವಿಶೇಷ ರಿಯಾಯಿತಿಗಳು ಹಾಗೂ ಆಫರ್&zwnj;ಗಳು ಕೂಡ ಸಿಗಲಿವೆ. ಈ ಮೂಲಕ ಪ್ರಯಾಣಿಕರು ತಮ್ಮ ಶಾಪಿಂಗ್ ಅನ್ನು ಮೊದಲೇ ಪ್ಲಾನ್ ಮಾಡಿಕೊಳ್ಳಬಹುದು.&lt;/p&gt;&lt;h2&gt;ಸುಲಭ ಶಾಪಿಂಗ್, ಉಳಿಯಲಿದೆ ಸಮಯ&lt;/h2&gt;&lt;p&gt;ವಿಮಾನ ನಿಲ್ದಾಣಗಳಲ್ಲಿ ವಸ್ತುಗಳನ್ನು ಹುಡುಕುತ್ತಾ ಸರತಿಯ ಸಾಲಿನಲ್ಲಿ ನಿಲ್ಲುವ ಕಿರಿಕಿರಿಯನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಪ್ರಯಾಣಿಕರು ತಮ್ಮ ಪ್ರವಾಸವನ್ನು ಯೋಜಿಸುವಾಗಲೇ ಶಾಪಿಂಗ್ ಕೂಡ ಮಾಡುವುದರಿಂದ, ಏರ್&zwnj;ಪೋರ್ಟ್&zwnj;ನಲ್ಲಿ ಚೆಕ್-ಇನ್ ಹಾಗೂ ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಸಾಕಷ್ಟು ಸಮಯ ಉಳಿತಾಯವಾಗಲಿದೆ.&lt;/p&gt;&lt;p&gt;ಆನ್&zwnj;ಲೈನ್&zwnj;ನಲ್ಲಿ ಬುಕ್ ಮಾಡಿದ ಉತ್ಪನ್ನಗಳನ್ನು ಅದಾನಿ ನಿರ್ವಹಿಸುವ ವಿಮಾನ ನಿಲ್ದಾಣಗಳ ಪಿಕ್-ಅಪ್ ಪಾಯಿಂಟ್&zwnj;ಗಳಲ್ಲಿ ಸುಲಭವಾಗಿ ಪಡೆದುಕೊಳ್ಳಬಹುದು.&lt;/p&gt;&lt;p&gt;ಪ್ರಸ್ತುತ ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ. ಮುಂಬೈ, ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳಲ್ಲಿ ಡ್ಯೂಟಿ-ಫ್ರೀ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಮೇಕ್&zwnj; ಮೈ ಟ್ರಿಪ್ ಜೊತೆಗಿನ ಈ ಒಪ್ಪಂದವು ಭಾರತೀಯ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮತ್ತಷ್ಟು ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ನೆರವಾಗಲಿದೆ.&lt;/p&gt;&lt;p&gt;&quot;ಮೇಕ್ ಮೈ&zwnj; ಟ್ರಿಪ್ ಮೂಲಕ ಡ್ಯೂಟಿ-ಫ್ರೀ ಪ್ರೀ-ಬುಕಿಂಗ್ ಸೌಲಭ್ಯವನ್ನು ಒದಗಿಸುವ ಮೂಲಕ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಪ್ರಯಾಣಿಕರು ಮುಂಚಿತವಾಗಿಯೇ ಶಾಪಿಂಗ್ ಪ್ಲಾನ್ ಮಾಡಿಕೊಳ್ಳಬಹುದು, ವಿಮಾನ ನಿಲ್ದಾಣದಲ್ಲಿ ಸಮಯ ಉಳಿಸಬಹುದು ಮತ್ತು ವಿಶೇಷ ಆಫರ್&zwnj;ಗಳನ್ನು ಪಡೆಯಬಹುದು&quot; ಎಂದು ಅದಾನಿ ಏರ್&zwnj;ಪೋರ್ಟ್ ಹೋಲ್ಡಿಂಗ್ಸ್ ಲಿ.ನ ಸಿಇಒ ಅರುಣ್ ಬನ್ಸಾಲ್ ಹೇಳಿದ್ದಾರೆ.&lt;/p&gt;&lt;p&gt;&quot;ಈ ಒಪ್ಪಂದವು ನಮ್ಮ 'ಕನೆಕ್ಟೆಡ್ ಟ್ರಿಪ್ಸ್' ತಂತ್ರದ ಒಂದು ಭಾಗವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಡ್ಯೂಟಿ-ಫ್ರೀ ಖರೀದಿಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವ ಮೂಲಕ ಸ್ಮಾರ್ಟ್ ಆಗಿ ಪ್ಲಾನ್ ಮಾಡಬಹುದು, ಉತ್ತಮ ಆಯ್ಕೆಗಳನ್ನು ಮಾಡಬಹುದು ಮತ್ತು ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು&quot; ಎಂದು ಮೇಕ್&zwnj; ಮೈ ಟ್ರಿಪ್&zwnj;ನ ಸಹ-ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸೇವೆಯಡಿ ಹಂತ - ಹಂತವಾಗಿ ಇನ್ನಷ್ಟು ಹೊಸ ಸೌಲಭ್ಯಗಳನ್ನು ಪರಿಚಯಿಸಲು ಎರಡು ಸಂಸ್ಥೆಗಳು ತೀರ್ಮಾನಿಸಿವೆ.&lt;/p&gt;]]></content:encoded>
            <category><![CDATA[travel]]></category>
            <dc:creator>Gowthami K</dc:creator>
            <atom:link href="https://kannada.asianetnews.com/travel/adani-airport-holdings-limited-partners-with-makemytrip-to-launch-online-duty-free-pre-booking-gdp/articleshow-aynfw9v"/>
        </item>
        <item>
            <title><![CDATA[ನೀವು ಖರೀದಿಸುವ ಮಟನ್ ತಾಜಾವೇ? ಮೋಸ ಹೋಗುವ ಮೊದಲು ಈ 4 ವಿಧಾನದಿಂದ ಸುಲಭವಾಗಿ ಪತ್ತೆಹಚ್ಚಿ!]]></title>
            <link>https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft</link>
            <guid isPermaLink="true">https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft</guid>
            <pubDate>Wed, 29 Apr 2026 11:36:15 +0530</pubDate>
            <description><![CDATA[ಮಾಂಸ: ತಾಜಾ ಮಟನ್ ಮತ್ತು ಹಳಸಿದ ಮಾಂಸವನ್ನು ಗುರುತಿಸುವುದು ಹೇಗೆಂದು ತಿಳಿಯುವುದು ಬಹಳ ಮುಖ್ಯ. ನಿಮ್ಮ ಆರೋಗ್ಯ ಕೆಡದಂತೆ ಇರಬೇಕಾದರೆ, ಮಟನ್ ಖರೀದಿಸುವ ಮೊದಲು ಈ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.]]></description>
            <media:content url="https://static.asianetnews.com/images/w-1280,h-720,format-jpg,imgid-01k5etvj3qthhhq9vmdc8kxjwz,imgname-red-meat-health-risks-1758213294199.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಾಂಸ: ತಾಜಾ ಮಟನ್ ಮತ್ತು ಹಳಸಿದ ಮಾಂಸವನ್ನು ಗುರುತಿಸುವುದು ಹೇಗೆಂದು ತಿಳಿಯುವುದು ಬಹಳ ಮುಖ್ಯ. ನಿಮ್ಮ ಆರೋಗ್ಯ ಕೆಡದಂತೆ ಇರಬೇಕಾದರೆ, ಮಟನ್ ಖರೀದಿಸುವ ಮೊದಲು ಈ ಸಣ್ಣ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.&lt;/p&gt;&lt;img&gt;&lt;p&gt;ಭಾನುವಾರ ಬಂತೆಂದರೆ ಮಟನ್&zwnj;ಗೆ ಬೇಡಿಕೆ ಹೆಚ್ಚು. ಆದರೆ, ನೀವು ಖರೀದಿಸುವ ಮಟನ್ ತಾಜಾವೇ? ಕೆಲವು ವ್ಯಾಪಾರಿಗಳು ಹಳಸಿದ ಮಾಂಸಕ್ಕೆ ಬಣ್ಣ ಬೆರೆಸಿ ಮಾರುತ್ತಾರೆ. ಇದು ಫುಡ್ ಪಾಯ್ಸನ್&zwnj;ಗೆ ಕಾರಣವಾಗಬಹುದು. ಹೀಗಾಗಿ ಮಟನ್ ಖರೀದಿಸುವಾಗ ಎಚ್ಚರವಿರಲಿ.&lt;/p&gt;&lt;img&gt;&lt;p&gt;ಮಟನ್ ಅಂಗಡಿಗೆ ಹೋದಾಗ ಮೊದಲು ಮಾಂಸದ ಬಣ್ಣ ನೋಡಿ. ತಾಜಾ ಮಟನ್ ಯಾವಾಗಲೂ ತಿಳಿ ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಹೊಳೆಯುತ್ತದೆ. ಮಾಂಸವು ಕಡು ಬಣ್ಣಕ್ಕೆ ತಿರುಗಿದ್ದರೆ, ಕಪ್ಪು ಕಲೆಗಳಿದ್ದರೆ ಅಥವಾ ಬಣ್ಣ ಕಳೆದುಕೊಂಡಿದ್ದರೆ ಅದು ಹಳಸಿದ ಮಾಂಸ ಎಂದರ್ಥ.&lt;/p&gt;&lt;img&gt;&lt;p&gt;ಮಟನ್ ತಾಜಾವಾಗಿದೆಯೇ ಎಂದು ತಿಳಿಯಲು ಅದನ್ನು ಮುಟ್ಟಿ ನೋಡುವುದು ಉತ್ತಮ. ತಾಜಾ ಮಟನ್ ಸ್ವಲ್ಪ ಗಟ್ಟಿಯಾಗಿ, ಸ್ಪ್ರಿಂಗ್&zwnj;ನಂತೆ ಇರುತ್ತದೆ. ಬೆರಳಿನಿಂದ ಒತ್ತಿದಾಗ ಗುಂಡಿ ತಕ್ಷಣವೇ ತುಂಬಬೇಕು. ಮೆತ್ತಗಿದ್ದರೆ ಅಥವಾ ಜಿಗುಟಾಗಿದ್ದರೆ ಅದು ಹಳಸಿದ ಮಾಂಸ.&lt;/p&gt;&lt;img&gt;&lt;p&gt;ಮಾಂಸಕ್ಕೆ ಒಂದು ಸಹಜ ವಾಸನೆ ಇರುತ್ತದೆ. ಆದರೆ ಅದು ಅಸಹ್ಯವಾಗಿರುವುದಿಲ್ಲ. ನೀವು ಖರೀದಿಸುವ ಮಟನ್&zwnj;ನಿಂದ ವಿಚಿತ್ರವಾದ, ಹುಳಿ ಅಥವಾ ಅಮೋನಿಯಾದಂತಹ ವಾಸನೆ ಬರುತ್ತಿದ್ದರೆ, ಅದು ಖಂಡಿತವಾಗಿಯೂ ಹಾಳಾಗಿದೆ. ಮಾಂಸದಿಂದ ನೀರು ಸೋರುತ್ತಿದ್ದರೆ ಅದು ಹಳೆಯ ಮಾಂಸ.&lt;/p&gt;&lt;img&gt;&lt;p&gt;ಮಟನ್ ಖರೀದಿಸುವಾಗ ಅಂಗಡಿಯ ಸ್ವಚ್ಛತೆಯನ್ನೂ ಗಮನಿಸಿ. ಪರವಾನಗಿ ಇರುವ, ಸ್ವಚ್ಛವಾದ ಸ್ಥಳಗಳಲ್ಲಿ ಮಾತ್ರ ಮಾಂಸವನ್ನು ಖರೀದಿಸಿ. ಧೂಳು ಮತ್ತು ನೊಣಗಳಿರುವ ಕಡೆ ಖರೀದಿಸಬೇಡಿ. ಖರೀದಿಸಿದ ನಂತರ ಬೇಗನೆ ಅಡುಗೆ ಮಾಡಿ ಅಥವಾ ಫ್ರಿಜ್&zwnj;ನಲ್ಲಿಡಿ.&lt;/p&gt;]]></content:encoded>
            <category><![CDATA[food]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/food/how-to-identify-fresh-vs-stale-mutton-simple-tips-to-avoid-food-poisoning-kvn-mfwkzft"/>
        </item>
        <item>
            <title><![CDATA[ಬೇಸಿಗೆಯಲ್ಲಿ ಈ ತಪ್ಪು ಮಾಡ್ಬೇಡಿ, ಗ್ಯಾಸ್ ಸಿಲಿಂಡರ್‌ನಂತೆ ಫ್ರಿಡ್ಜ್ ಕೂಡ ಸ್ಫೋಟಗೊಳ್ಳಬಹುದು!]]></title>
            <link>https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb</link>
            <guid isPermaLink="true">https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb</guid>
            <pubDate>Wed, 29 Apr 2026 11:33:35 +0530</pubDate>
            <description><![CDATA[Fridge safety tips summer: ಈ ಬಿಸಿಲಿಗೆ ಫ್ರಿಡ್ಜ್ ಎಲ್ಲರಿಗೂ ಅವಶ್ಯಕ. ಆದರೆ ಹೆಚ್ಚುತ್ತಿರುವ ತಾಪಮಾನದ ನಡುವೆ ಫ್ರಿಡ್ಜ್‌ಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ನಾವು ಮಾಡುವ ಸಣ್ಣಪುಟ್ಟ ತಪ್ಪು, ನಿರ್ಲಕ್ಷ್ಯ ಈ ಅಪಾಯಕಾರಿ ಅನಾಹುತಕ್ಕೆ ಕಾರಣವಾಗಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01jmpe4pp3cc8jz107ksgga017,imgname-untitled-design---2025-02-22t142905.013.jpg" type="image/jpeg" height="390" width="690"/>
            <content:encoded><![CDATA[&lt;p&gt;Fridge safety tips summer: ಈ ಬಿಸಿಲಿಗೆ ಫ್ರಿಡ್ಜ್ ಎಲ್ಲರಿಗೂ ಅವಶ್ಯಕ. ಆದರೆ ಹೆಚ್ಚುತ್ತಿರುವ ತಾಪಮಾನದ ನಡುವೆ ಫ್ರಿಡ್ಜ್&zwnj;ಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ. ನಾವು ಮಾಡುವ ಸಣ್ಣಪುಟ್ಟ ತಪ್ಪು, ನಿರ್ಲಕ್ಷ್ಯ ಈ ಅಪಾಯಕಾರಿ ಅನಾಹುತಕ್ಕೆ ಕಾರಣವಾಗಬಹುದು. &amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್&zwnj;ಗಳ ಮಾದರಿಯಲ್ಲೇ ಫ್ರಿಡ್ಜ್&zwnj;ಗಳು ಕೂಡ ಸ್ಫೋಟಗೊಳ್ಳುತ್ತಿರುವ ಸುದ್ದಿಯನ್ನು ನಾವು ಕೇಳುತ್ತಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಫ್ರಿಡ್ಜ್ ಅನ್ನು ಸರಿಯಾದ ಸ್ಥಳದಲ್ಲಿ ಇಡದಿರುವುದು ಮತ್ತು ಮಿತಿಮೀರಿದ ಬಳಕೆ. ಫ್ರಿಡ್ಜ್ ಹಿಂಭಾಗದಲ್ಲಿರುವ ಸಂಕೋಚಕ (Compressor) ಬಿಸಿಯಾದಾಗ ಅದಕ್ಕೆ ಸರಿಯಾದ ಗಾಳಿ ಸಿಗದಿದ್ದರೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.&lt;/p&gt;&lt;img&gt;&lt;p&gt;&lt;strong&gt;ಸರಿಯಾದ ಅಂತರವಿರಲಿ&lt;/strong&gt;ಫ್ರಿಡ್ಜ್ ಅನ್ನು ಎಂದಿಗೂ ಗೋಡೆಗೆ ಅಂಟಿಸಿ ಇಡಬಾರದು. ಗೋಡೆ ಮತ್ತು ಫ್ರಿಡ್ಜ್ ನಡುವೆ ಕನಿಷ್ಠ 6 ಇಂಚುಗಳಷ್ಟು ಜಾಗ ಇರಬೇಕು. ಇದರಿಂದ ಗಾಳಿಯ ಸಂಚಾರ (Air circulation) ಸುಲಲಿತವಾಗಿ ನಡೆದು ಕಂಪ್ರೆಸರ್ ತಂಪಾಗಿರುತ್ತದೆ.&lt;/p&gt;&lt;img&gt;&lt;p&gt;ಫ್ರಿಡ್ಜ್&zwnj;ನಲ್ಲಿ ವಸ್ತುಗಳನ್ನು ಕಿಕ್ಕಿರಿದು ತುಂಬಿಸಬಾರದು. ಗಾಳಿ ಆಡಲು ಸ್ವಲ್ಪ ಜಾಗವಿದ್ದಾಗ ಮಾತ್ರ ಕೂಲಿಂಗ್ ಎಲ್ಲಾ ಕಡೆ ಸಮಾನವಾಗಿ ಹರಡುತ್ತದೆ. ಇಲ್ಲದಿದ್ದರೆ ಕೂಲಿಂಗ್ ಕಡಿಮೆಯಾಗಿ ಆಹಾರ ಪದಾರ್ಥಗಳು ಬೇಗನೆ ಹಾಳಾಗುತ್ತವೆ.&lt;/p&gt;&lt;img&gt;&lt;p&gt;ಮಳೆ ಬೀಳುವಾಗ ಅಥವಾ ಗುಡುಗು ಸಹಿತ ಮಿಂಚು ಬರುವಾಗ ವಿದ್ಯುತ್ ಏರಿಳಿತದ (Power fluctuations) ಕಾರಣದಿಂದ ಬೋರ್ಡ್&zwnj;ಗಳು ಸುಟ್ಟುಹೋಗುವ ಅಪಾಯವಿರುತ್ತದೆ. ಅಂತಹ ಸಮಯದಲ್ಲಿ ಫ್ರಿಡ್ಜ್ ಸ್ವಿಚ್ ಆಫ್ ಮಾಡಿ ಪ್ಲಗ್ ತೆಗೆಯುವುದು ಅತ್ಯಂತ ಸುರಕ್ಷಿತ.&lt;/p&gt;&lt;img&gt;&lt;p&gt;ಫ್ರೀಜರ್&zwnj;ನಲ್ಲಿ ಐಸ್ ಹೆಚ್ಚಾಗಿ ಗಡ್ಡೆ ಕಟ್ಟಿದಾಗ ಚಾಕು ಅಥವಾ ಸ್ಕ್ರೂ ಡ್ರೈವರ್&zwnj;ನಿಂದ ಚುಚ್ಚಬಾರದು. ಇದರಿಂದ ಗ್ಯಾಸ್ ಪೈಪ್&zwnj;ಗಳು ಲೀಕ್ ಆಗಿ ಫ್ರಿಡ್ಜ್ ಹಾಳಾಗುತ್ತದೆ. ಕೇವಲ 'ಡಿಫ್ರಾಸ್ಟ್' (Defrost) ಬಟನ್ ಒತ್ತಿ ಐಸ್ ಕರಗುವವರೆಗೆ ಕಾಯಬೇಕು.&lt;/p&gt;&lt;img&gt;&lt;p&gt;ಉಪ್ಪಿನಕಾಯಿ, ಹುಣಸೆಹಣ್ಣಿನಂತಹ ವಸ್ತುಗಳನ್ನು ಫ್ರಿಡ್ಜ್&zwnj;ನಲ್ಲಿ ಇಡುವ ಅಗತ್ಯವಿಲ್ಲ. ಇವುಗಳನ್ನು ಇಡುವುದರಿಂದ ಫ್ರಿಡ್ಜ್&zwnj;ನಲ್ಲಿ ಕೆಟ್ಟ ವಾಸನೆ ಬರುವುದು ಮಾತ್ರವಲ್ಲದೆ, ಅನಗತ್ಯವಾಗಿ ಜಾಗವೂ ವ್ಯರ್ಥವಾಗುತ್ತದೆ.&lt;/p&gt;&lt;p&gt;ಈ ಸರಳ ಕ್ರಮಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ನಿಮ್ಮ ಫ್ರಿಡ್ಜ್ ಅನ್ನು ಸುರಕ್ಷಿತವಾಗಿರಿಸಿಕೊಳ್ಳಿ ಮತ್ತು ವಿದ್ಯುತ್ ಬಿಲ್ ಅನ್ನು ಕೂಡ ಉಳಿಸಿ.&amp;nbsp;&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/is-your-refrigerator-safe-important-dos-and-donts-for-using-a-fridge-in-extreme-heat-q3xspnb"/>
        </item>
        <item>
            <title><![CDATA[ಈ ರಾಶಿಗೆ ಮೇ 2026 ರಿಂದ 100% ಯಶಸ್ಸು ಗ್ಯಾರಂಟಿ, ಇನ್ಮುಂದೆ ಏರುಮುಖವೇ]]></title>
            <link>https://kannada.asianetnews.com/gallery/astrology/aries-monthly-horoscope-may-2026-predictions-and-success-suh-ag5vsog</link>
            <guid isPermaLink="true">https://kannada.asianetnews.com/gallery/astrology/aries-monthly-horoscope-may-2026-predictions-and-success-suh-ag5vsog</guid>
            <pubDate>Wed, 29 Apr 2026 11:28:13 +0530</pubDate>
            <description><![CDATA[Aries Monthly Horoscope 2026ರ ಮೇ ತಿಂಗಳು ಮೇಷ ರಾಶಿಯವರಿಗೆ 100% ಯಶಸ್ಸು ತರಲಿದೆ. ರಾಶ್ಯಾಧಿಪತಿ ಮಂಗಳನ ಸಂಚಾರ ಮತ್ತು ಗುರುಬಲದಿಂದ ನಿಮ್ಮ ಜೀವನದಲ್ಲಿ ಯಾವೆಲ್ಲಾ ತಿರುವುಗಳು ಬರಲಿವೆ? ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfn7n20radprsghyxc3r1nd0,imgname-zodiac-sign--33--1769165457432.jpg" type="image/jpeg" height="390" width="690"/>
            <content:encoded><![CDATA[&lt;p&gt;Aries Monthly Horoscope 2026ರ ಮೇ ತಿಂಗಳು ಮೇಷ ರಾಶಿಯವರಿಗೆ 100% ಯಶಸ್ಸು ತರಲಿದೆ. ರಾಶ್ಯಾಧಿಪತಿ ಮಂಗಳನ ಸಂಚಾರ ಮತ್ತು ಗುರುಬಲದಿಂದ ನಿಮ್ಮ ಜೀವನದಲ್ಲಿ ಯಾವೆಲ್ಲಾ ತಿರುವುಗಳು ಬರಲಿವೆ? ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;2026ರ ಮೇ ತಿಂಗಳು ಮೇಷ ರಾಶಿಯವರಿಗೆ 100% ಯಶಸ್ಸನ್ನು ಖಚಿತಪಡಿಸಲಿದೆ. ರಾಶ್ಯಾಧಿಪತಿ ಮಂಗಳನ ಸಂಚಾರ ಮತ್ತು ಗುರುಬಲದಿಂದ ನಿಮ್ಮ ಜೀವನದಲ್ಲಿ ಯಾವೆಲ್ಲಾ ತಿರುವುಗಳು ಬರಲಿವೆ? ವೃತ್ತಿ ಹಾಗೂ ಆರ್ಥಿಕ ಭವಿಷ್ಯದ ಬಗ್ಗೆ ಇಲ್ಲಿ ವಿವರವಾಗಿ ನೋಡೋಣ.&lt;/p&gt;&lt;img&gt;ಈ ತಿಂಗಳು ಮೇಷ ರಾಶಿಯವರಿಗೆ ಅನೇಕ ಪ್ರಮುಖ ಬದಲಾವಣೆಗಳನ್ನು ತರಲಿದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ವಿಶೇಷವಾಗಿ ಮೇ 1 ರಿಂದ 12ರವರೆಗಿನ ಸಮಯವು ಭೂಮಿ, ಮನೆ ಮತ್ತು ಆಸ್ತಿ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬಹಳ ಅನುಕೂಲಕರವಾಗಿದೆ. ಅರ್ಧಕ್ಕೆ ನಿಂತಿದ್ದ ಮನೆ ಕಟ್ಟುವ ಕೆಲಸವನ್ನು ಪುನರಾರಂಭಿಸಲು ಮತ್ತು ಆಸ್ತಿ ವಿಭಜನೆ ಹಾಗೂ ಭೂಮಿ ಸಂಬಂಧಿತ ಕಾನೂನು ಹೋರಾಟಗಳಲ್ಲಿ ಗೆಲುವು ಸಾಧಿಸಲು ಇದು ಅತ್ಯುತ್ತಮ ಸಮಯ.&lt;img&gt;&lt;p&gt;ಆರ್ಥಿಕವಾಗಿ, ಈ ತಿಂಗಳು ಮೇಷ ರಾಶಿಯವರಿಗೆ ದೊಡ್ಡ ನಿರಾಳತೆ ನೀಡಲಿದೆ. ಮೇ 17ರೊಳಗೆ ಹಣಕಾಸಿನ ಮುಗ್ಗಟ್ಟಿನಿಂದ ಉಂಟಾದ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಸಾಲ ತೀರಿಸಲು ಹೊಸ ದಾರಿಗಳು ತೆರೆದುಕೊಳ್ಳಲಿವೆ. ಆದರೆ, ಗ್ರಹಗಳು ದಾರಿ ತೋರಿಸಿದರೂ, ನಿಮ್ಮ ವೈಯಕ್ತಿಕ ಪ್ರಯತ್ನವೇ ಯಶಸ್ಸನ್ನು ತಂದುಕೊಡುತ್ತದೆ ಎಂಬುದನ್ನು ಮರೆಯಬಾರದು.&lt;/p&gt;&lt;img&gt;ಉದ್ಯೋಗದ ವಿಷಯದಲ್ಲಿ, ಮೇ 12 ರಿಂದ 16ರವರೆಗಿನ ನಾಲ್ಕು ದಿನಗಳು ಬಹಳ ಪ್ರಬಲವಾಗಿವೆ. ಈ ಸಮಯದಲ್ಲಿ 'ಸೂರ್ಯ ಮಂಗಳ ಯೋಗ' ಮತ್ತು 'ಬುಧ ಆದಿತ್ಯ ಯೋಗ' ಉಂಟಾಗುವುದರಿಂದ, ವಿದೇಶಕ್ಕೆ ಹೋಗಲು ಬಯಸುವವರಿಗೆ ಮತ್ತು ಹೊಸ ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಮದುವೆ ಮತ್ತು ಕೌಟುಂಬಿಕ ಜೀವನದ ದೃಷ್ಟಿಯಿಂದಲೂ ಈ ತಿಂಗಳು ಒಂದು ಮಹತ್ವದ ತಿರುವು ನೀಡಲಿದೆ.&lt;img&gt;ಗುರು ಗ್ರಹವು ಜೂನ್&zwnj;ನಲ್ಲಿ ರಾಶಿ ಬದಲಾಯಿಸುವ ಮೊದಲು, ಮೇ ತಿಂಗಳಲ್ಲಿ ಮದುವೆ ಅಡೆತಡೆಗಳನ್ನು ನಿವಾರಿಸಲು ಸಂಪೂರ್ಣವಾಗಿ ಅನುಗ್ರಹಿಸಲಿದ್ದಾನೆ. ಬಹಳ ದಿನಗಳಿಂದ தடைಪಟ್ಟಿದ್ದ ವಿವಾಹ ಪ್ರಯತ್ನಗಳು ಈ ತಿಂಗಳು ಕೈಗೂಡಲಿವೆ. ಅಲ್ಲದೆ, ಮೇ 16ರ ನಂತರ ಸಂತಾನ ಭಾಗ್ಯವಿಲ್ಲದವರಿಗೆ ಅದಕ್ಕೆ ಸಂಬಂಧಿಸಿದ ಶುಭ ಸುದ್ದಿ ಸಿಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ, ಮೇ ತಿಂಗಳು ಮೇಷ ರಾಶಿಯವರಿಗೆ 100% ಸಕಾರಾತ್ಮಕ ಬದಲಾವಣೆಗಳನ್ನು ತರುವ ತಿಂಗಳಾಗಲಿದೆ.]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/aries-monthly-horoscope-may-2026-predictions-and-success-suh-ag5vsog"/>
        </item>
        <item>
            <title><![CDATA[Exclusive: ದರ್ಶನ್‌ಗೆ ಸಂಬಂಧಿಸಿದ ಅತಿದೊಡ್ಡ ಸುದ್ದಿ; ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇಕೆ?]]></title>
            <link>https://kannada.asianetnews.com/entertainment/kannada-actor-darshan-moves-supreme-court-for-bail-in-renukaswamy-case-mrq/articleshow-x2t5yqn</link>
            <guid isPermaLink="true">https://kannada.asianetnews.com/entertainment/kannada-actor-darshan-moves-supreme-court-for-bail-in-renukaswamy-case-mrq/articleshow-x2t5yqn</guid>
            <pubDate>Wed, 29 Apr 2026 11:01:34 +0530</pubDate>
            <description><![CDATA[ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಜೈಲುವಾಸದಿಂದ ಮುಕ್ತಿ ನೀಡುವಂತೆ ದರ್ಶನ್ ಮನವಿ ಮಾಡಿಕೊಂಡಿರುವ ಮಾಹಿತಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkxwdt4x6xjpvj11yhd2hstp,imgname-darshan-1773750642845.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಜೈಲುವಾಸದಿಂದ ಮುಕ್ತಿ ನೀಡುವಂತೆ ದರ್ಶನ್ ಮನವಿ ಮಾಡಿಕೊಂಡಿರುವ ಮಾಹಿತಿ ಏಷ್ಯಾನೆಟ್ ಸುವರ್ಣನ್ಯೂಸ್&zwnj;ಗೆ ಲಭ್ಯವಾಗಿದೆ. ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್&zwnj;ಗೆ ಜಾಮೀನು ಸಿಕ್ಕಿತ್ತು. ಇದಾದ ಬಳಿಕ ಜಾಮೀನು ರದ್ದಾದ ಹಿನ್ನೆಲೆ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿತ್ತು. ಪರಪ್ಪನ ಅಗ್ರಹಾರ ಸೇರಿ ಸುಮಾರು ಎಂಟೂವರೆ ತಿಂಗಳಾಗಿದ್ದು,ಇದೀಗ ಜಾಮೀನಿಗಾಗಿ ವಕೀಲ ರಂಜಿತ್ ರೋಹಟಗಿ ಮೂಲಕ ಸುಪ್ರೀಂಕೋರ್ಟ್&zwnj;ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಮೇ 4ರಂದು ದರ್ಶನ್ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆಗೆ ಬರಲಿದೆ. ಅರ್ಜಿಯಲ್ಲಿ ಮನವಿ ಅಂಶಗಳು ಇನ್ನಷ್ಟೇ ಹೊರಬರಬೇಕಿದೆ&lt;/p&gt;&lt;p&gt;&lt;img&gt;&lt;/p&gt;]]></content:encoded>
            <category><![CDATA[entertainment]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/entertainment/kannada-actor-darshan-moves-supreme-court-for-bail-in-renukaswamy-case-mrq/articleshow-x2t5yqn"/>
        </item>
        <item>
            <title><![CDATA[ಶ್ರೀಲಂಕಾದಲ್ಲಿ ತಮ್ಮ ಗ್ಯಾಂಗ್ ಜೊತೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನಟಿ ಮಿಲನಾ ನಾಗರಾಜ್]]></title>
            <link>https://kannada.asianetnews.com/gallery/sandalwood/milana-nagaraj-celebrates-her-birthday-at-srilanka-as36wcz</link>
            <guid isPermaLink="true">https://kannada.asianetnews.com/gallery/sandalwood/milana-nagaraj-celebrates-her-birthday-at-srilanka-as36wcz</guid>
            <pubDate>Wed, 29 Apr 2026 10:56:27 +0530</pubDate>
            <description><![CDATA[Milana Nagaraj: ನಟಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಪುಟ್ಟ ಗ್ಯಾಂಗ್ ಜೊತೆ ಶ್ರೀಲಂಕಾಕ್ಕೆ ಹಾರಿದ ಮಿಲನಾ ಅಲ್ಲಿಯೇ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbv5ahvqxd54etvdfhadgfe,imgname-milana-nagaraj-1777440303674.jpg" type="image/jpeg" height="390" width="690"/>
            <content:encoded><![CDATA[&lt;p&gt;Milana Nagaraj: ನಟಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಪುಟ್ಟ ಗ್ಯಾಂಗ್ ಜೊತೆ ಶ್ರೀಲಂಕಾಕ್ಕೆ ಹಾರಿದ ಮಿಲನಾ ಅಲ್ಲಿಯೇ ಸಿಂಪಲ್ ಆಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಚಂದನವನದ ಸುಂದರಿ ಮಿಲನಾ ನಾಗರಾಜ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಲು ಮಿಲನಾ ತಮ್ಮ ಪುಟ್ಟ ಗ್ಯಾಂಗ್ ಜೊತೆಗೆ ಶ್ರೀಲಂಕಾಗೆ ಹಾರಿದ್ದಾರೆ, ಅಲ್ಲಿ ಕಡಲ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ.&lt;/p&gt;&lt;img&gt;&lt;p&gt;ಶ್ರೀಲಂಕಾದಲ್ಲಿ ವೆಕೇಶನ್ ಮೂಡ್ ನಲ್ಲಿರುವ ಮಿಲನಾ ನಾಗರಾಜ್, ತಮ್ಮ ಪತಿ ಡಾರ್ಲಿಂಗ್ ಕೃಷ್ಣ ಹಾಗೂ ಮಗಳು ಪರಿ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇವರ ಜೊತೆ ಅಮೃತಾ ಅಯ್ಯಂಗಾರ್ ಹಾಗೂ ಇನ್ನಿತರ ಸ್ನೇಹಿತರು ಸಹ ಜೊತೆಯಾಗಿದ್ದಾರೆ.&lt;/p&gt;&lt;img&gt;&lt;p&gt;ಬರ್ತ್ ಡೇ ಸೆಲೆಬ್ರೇಶನ್ ಗಾಗಿ ಮಿಲನಾ-ಕೃಷ್ಣ ಮತ್ತು ಸ್ನೇಹಿತರ ಬಳಗ, ಶ್ರೀಲಂಕಾಕ್ಕೆ ಹಾರಿದ್ದು, ಈ ಸಮ್ಮರ್ ವೆಕೇಶನ್ ನಲ್ಲಿ ಶ್ರೀಲಂಕಾದ ಕಡಲ ತೀರದಲ್ಲಿ ಎಂಜಾಯ್ ಮಾಡ್ತಿದ್ದಾರೆ. ಈ ಹಿಂದೆಯೂ ಇವರ ತಂಡ ಶ್ರೀಲಂಕಾದಲ್ಲಿ ವೆಕೇಶನ್ ಎಂಜಾಯ್ ಮಾಡಿ ಬಂದಿದ್ದರು.&lt;/p&gt;&lt;img&gt;&lt;p&gt;ಮಿಲನಾ ನಾಗರಾಜ್ ಎಪ್ರಿಲ್ 25, 1989ರಂದು ಹುಟ್ಟಿದ್ದು, ಇದೀಗ ಮಿಲನಾ ತಮ್ಮ 37 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2021ರ ಫೆಬ್ರವರಿ 14ರಂದು ಮಿಲನಾ ತಮ್ಮ ಬಹುಕಾಲದ ಗೆಳೆಯ ಡಾರ್ಲಿಂಗ್ ಕೃಷ್ಣಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.&lt;/p&gt;&lt;img&gt;&lt;p&gt;ಡಾರ್ಲಿಂಗ್ ಕೃಷ್ಣ ನಟಿಸಿ ನಿರ್ದೇಶನ ಮಾಡಿರುವ &lsquo;ಲವ್ ಮಾಕ್ಟೇಲ್ 3&rsquo; ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಯಶಸ್ಸಿನ ಬಳಿಕ ಬ್ರೇಕ್, ಬರ್ತ್ ಡೇ ವೆಕೇಶನ್, ಸೆಲೆಬ್ರೇಶನ್ ಎಲ್ಲಾ ಸೇರಿ ಶ್ರೀಲಂಕಾದಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ.&lt;/p&gt;&lt;img&gt;&lt;p&gt;ಮಿಲನಾ ನಾಗರಾಜ್ ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡಿದ್ದರು. ಬಳಿಕ ಇಲ್ಲಿವರೆಗೆ ಸುಮಾರು 17 ಸಿನಿಮಾಗಳಲ್ಲಿ ಮಿಲನಾ ನಟಿಸಿದ್ದಾರೆ. ಬೆಲ್ಲ ಎನ್ನುವ ಸಿನಿಮಾ ಇನ್ನೇನು ರಿಲೀಸ್ ಆಗಲಿದೆ.&lt;/p&gt;&lt;img&gt;&lt;p&gt;ಜೊತೆ ಮಿಲನಾ ನಮ್ ದುನಿಯಾ ನಮ್ ಸ್ಟೈಲ್, ಚಾರ್ಲಿ, ಲವ್ ಮಾಕ್ಟೇಲ್ 1,2,ಮತ್ತು 3 ಸೀರೀಸ್, ಮಿಸ್ಟರ್ ಬ್ಯಾಚುಲರ್ಸ್, ಲವ್ ಬರ್ಡ್ಸ್, ಕೌಸಲ್ಯ ಸುಪ್ರಜಾ ರಾಮ, ಸಿನಿಮಾಗಳಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ನಟಿಸಿದ್ದರು. ಇದರಲ್ಲಿ ಲವ್ ಮಾಕ್ಟೇಲ್ ಸೀರೀಸ್ ಸೂಪರ್ ಹಿಟ್ ಆಗಿದ್ದವು.&lt;/p&gt;]]></content:encoded>
            <category><![CDATA[sandalwood]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/milana-nagaraj-celebrates-her-birthday-at-srilanka-as36wcz"/>
        </item>
        <item>
            <title><![CDATA[ದಿನಾಂಕ 13 ರ ರಹಸ್ಯವೇನು? ನೀವು ಇದೇ ದಿನ ಹುಟ್ಟಿದ್ರೆ ಈ 3 ತಪ್ಪು ಮಾಡ್ಬೇಡಿ]]></title>
            <link>https://kannada.asianetnews.com/gallery/festivals/karmic-number-13-avoid-these-mistakes-if-you-born-on-these-day-gkpy8g7</link>
            <guid isPermaLink="true">https://kannada.asianetnews.com/gallery/festivals/karmic-number-13-avoid-these-mistakes-if-you-born-on-these-day-gkpy8g7</guid>
            <pubDate>Wed, 29 Apr 2026 11:02:28 +0530</pubDate>
            <description><![CDATA[Karmic Number 13: ಕರ್ಮ ಸಂಖ್ಯೆ 13 ರ ನಿಜವಾದ ರಹಸ್ಯವನ್ನು ತಿಳಿಯಿರಿ. ನೀವು ಯಾವುದೇ ತಿಂಗಳ 13 ನೇ ತಾರೀಖಿನಂದು ಜನಿಸಿದರೆ, ಈ ಮೂರು ತಪ್ಪುಗಳನ್ನು ತಪ್ಪಿಸಿ ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ದಿನಾಂಕ 13 ರ ರಹಸ್ಯವೇನು? ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01kd58k0bcj80tjjmqw8j0yczy,imgname-numerology-1766482084203.jpg" type="image/jpeg" height="390" width="690"/>
            <content:encoded><![CDATA[&lt;p&gt;Karmic Number 13: ಕರ್ಮ ಸಂಖ್ಯೆ 13 ರ ನಿಜವಾದ ರಹಸ್ಯವನ್ನು ತಿಳಿಯಿರಿ. ನೀವು ಯಾವುದೇ ತಿಂಗಳ 13 ನೇ ತಾರೀಖಿನಂದು ಜನಿಸಿದರೆ, ಈ ಮೂರು ತಪ್ಪುಗಳನ್ನು ತಪ್ಪಿಸಿ ಇಲ್ಲದಿದ್ದರೆ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ದಿನಾಂಕ 13 ರ ರಹಸ್ಯವೇನು? ತಿಳಿಯೋಣ.&lt;/p&gt;&lt;img&gt;&lt;p&gt;ನೀವು ಯಾವುದೇ ತಿಂಗಳ 13 ನೇ ತಾರೀಖಿನಂದು ಜನಿಸಿದರೆ, ಜಾಗರೂಕರಾಗಿರಿ. ಈ ಸಂಖ್ಯೆಯು ನಿಮ್ಮನ್ನು ಹೆದರಿಸುವ ಉದ್ದೇಶವನ್ನು ಹೊಂದಿಲ್ಲ, ಬದಲಿಗೆ ಈ ಮೂರು ಪ್ರಮುಖ ತಪ್ಪುಗಳ ಬಗ್ಗೆ ಪಶ್ಚಾತ್ತಾಪ ಪಡುವ ಸಂಕೇತವಾಗಿದೆ. ಸಂಖ್ಯಾಶಾಸ್ತ್ರದಲ್ಲಿ ಜಗತ್ತು ದುರದೃಷ್ಟಕರವೆಂದು ಭಯಪಡುವುದು ಕರ್ಮ ಸಾಲದ ಬಗ್ಗೆ. ಅಂದರೆ ಇದು ಹಿಂದಿನ ಜನ್ಮದ ಅಪೂರ್ಣ ಖಾತೆಗಳ ಹೊರೆಯಾಗಿದ್ದು, ಈ ಜನ್ಮದಲ್ಲಿ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯ ಮೂಲಕ ಅದನ್ನು ತೀರಿಸಬೇಕು.&lt;/p&gt;&lt;img&gt;&lt;p&gt;ಇವತ್ತು ಯಾವುದೇ ತಿಂಗಳ 13 ನೇ ತಾರೀಕಿನಂದು ಜನಿಸಿದವರ ಜನ್ಮ ರಹಸ್ಯ, ಕರ್ಮದ ಬಗ್ಗೆ ತಿಳಿಯೋಣ.13 ನೇ ಸಂಖ್ಯೆಯು ಹಿಂದಿನ ಜನ್ಮದ ಹಣದ ಶಾಪವನ್ನು ಹೊಂದಿರುತ್ತಾರೆ. ಆದ್ದರಿಂದ, ಈ ದಿನಾಂಕದಂದು ಜನಿಸಿದ ಜನರು ಸಾಮಾನ್ಯವಾಗಿ ಹಣಕಾಸಿನ ತೊಂದರೆಗಳನ್ನು ಅಥವಾ ಹಣದ ವಿಷಯಗಳಲ್ಲಿ ಮತ್ತೆ ಮತ್ತೆ ಸವಾಲುಗಳನ್ನು ಎದುರಿಸುತ್ತಾರೆ. ಹಾಗಾಗಿ ಇವರು ಕೆಲವೊಂದು ತಪ್ಪುಗಳನ್ನು ಅವಾಯ್ಡ್ ಮಾಡಬೇಕು. ಅದರಲ್ಲೂ ಈ ಮೂರು ತಪ್ಪುಗಳನ್ನು ತಪ್ಪಿಯೂ ಮಾಡಬಾರದು.&lt;/p&gt;&lt;img&gt;&lt;p&gt;ಪ್ರಕೃತಿಯು ನಿಮಗೆ ತ್ವರಿತವಾಗಿ ಹಣ ಗಳಿಸುವ ಅವಕಾಶಗಳನ್ನು ಪದೇ ಪದೇ ಒದಗಿಸುತ್ತದೆ. ಇದು ನಿಜವಾಗಿಯೂ ನಿಮಗೆ ಒಂದು ಪರೀಕ್ಷೆಯಾಗಿದೆ. ನೆನಪಿಡಿ, ಯಾವುದೇ ತಿಂಗಳ 13 ನೇ ತಾರೀಕಿನಂದು ಜನಿಸಿದವರಿಗೆ, ಶಾರ್ಟ್&zwnj;ಕಟ್&zwnj;ಗಳು ಯಾವಾಗಲೂ ಗಮನಾರ್ಹ ಆರ್ಥಿಕ ನಷ್ಟ ಮತ್ತು ಮಾನಸಿಕ ಒತ್ತಡವನ್ನು ತರುತ್ತದೆ. ಹಾಗಾಗಿ ಯಾವತ್ತೂ ಶಾರ್ಟ್ ಕಟ್ ಬಳಕೆ ಮಾಡಬೇಡಿ. .&lt;/p&gt;&lt;img&gt;&lt;p&gt;13 (1+3=4) ಅಂದ್ರೆ 4 ರಾಹುವಿನ ಸಂಖ್ಯೆ. ಇಲ್ಲಿ ತಂತ್ರ ಕೆಲಸ ಮಾಡುವುದಿಲ್ಲ. ನೀವು ವಿಳಂಬ ಮಾಡಿದರೆ ಅಥವಾ ಸೋಮಾರಿಯಾಗಿದ್ದರೆ, ಯಶಸ್ಸು ತಪ್ಪಿಹೋಗುತ್ತದೆ. ಕಠಿಣ ಶಿಸ್ತು ಈ ಸಂಖ್ಯೆಗೆ ಏಕೈಕ ಮಾರ್ಗವಾಗಿದೆ. ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.&lt;/p&gt;&lt;img&gt;&lt;p&gt;ಹಠಮಾರಿತನ ಮತ್ತು ಇತರರನ್ನು ಕೀಳಾಗಿ ನೋಡುವುದು ನಿಮ್ಮ ದೊಡ್ಡ ಪತನ.ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ನಿಮ್ಮ ಕರ್ಮದ ಹೊರೆಯನ್ನು ಹೆಚ್ಚಿಸುತ್ತದೆ. ವಿನಮ್ರರಾಗಿ ಉಳಿಯುವ ಮೂಲಕ ಮಾತ್ರ ನೀವು ಈ ಸಂಖ್ಯೆಯ ನಕಾರಾತ್ಮಕ ಶಕ್ತಿಯನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಭಯವನ್ನು ಬಿಟ್ಟು ನಿಮ್ಮ ಕ್ರಿಯೆಗಳನ್ನು ಸುಧಾರಿಸಿಕೊಳ್ಳಿ. ಪ್ರಾಮಾಣಿಕ ಕಠಿಣ ಪರಿಶ್ರಮ ಮತ್ತು ಶಿಸ್ತು ಬದ್ಧ ದಿನಚರಿಯನ್ನು ಅಳವಡಿಸಿಕೊಳ್ಳಿ. ನೀವು ನಿಮ್ಮನ್ನು ಸಂಪೂರ್ಣವಾಗಿ ಶಿಸ್ತುಬದ್ಧಗೊಳಿಸಿದಾಗ, ಈ ನಿಗೂಢ ಸಂಖ್ಯೆಯು ನಿಮ್ಮನ್ನು ಅಪಾರ ಯಶಸ್ಸು ಮತ್ತು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು. 13 ನೇ ಸಂಖ್ಯೆಯು ನಿಮ್ಮನ್ನು ನಾಶಮಾಡಲು ಅಲ್ಲ, ಬದಲಾಗಿ ನಿಮ್ಮ ವ್ಯಕ್ತಿತ್ವವನ್ನು ಬಲಪಡಿಸಲು ಇರುವಂತಹ ಸಂಖ್ಯೆ. ಈ ಮೂರು ತಪ್ಪುಗಳನ್ನು ಸರಿಪಡಿಸಿ ಮತ್ತು ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಉಪಯ್ಗಿಸಿದರೆ. ಯಶಸ್ಸು ಖಚಿತಾ.&lt;/p&gt;]]></content:encoded>
            <category><![CDATA[festivals]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/festivals/karmic-number-13-avoid-these-mistakes-if-you-born-on-these-day-gkpy8g7"/>
        </item>
        <item>
            <title><![CDATA[ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೊದಲ ಸ್ಯಾಲರಿ ತೋರಿಸಿದ ಬ್ಯಾಂಕ್ ಆಫ್ ಬರೋಡಾ ಪ್ರೊಬೇಷನರಿ ಅಧಿಕಾರಿ: ಆಮೇಲೇನಾಯ್ತು?]]></title>
            <link>https://kannada.asianetnews.com/business/bank-of-baroda-po-shows-his-first-salary-slip-on-social-media-what-happened/articleshow-dw21wdb</link>
            <guid isPermaLink="true">https://kannada.asianetnews.com/business/bank-of-baroda-po-shows-his-first-salary-slip-on-social-media-what-happened/articleshow-dw21wdb</guid>
            <pubDate>Wed, 29 Apr 2026 11:08:57 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾದ ಪ್ರೊಬೆಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಮೊದಲ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅವರ ವೇತನ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಪ್ರೊಬೆಷನರಿ ಅಧಿಕಾರಿಗೆ ಇರುವ ವೇತನ ಹಾಗೂ ಸವಲತ್ತುಗಳೇನು ಇಲ್ಲಿದೆ ಡಿಟೇಲ್ ಸ್ಟೋರಿ…]]></description>
            <media:content url="https://static.asianetnews.com/images/w-1280,h-720,format-jpg,imgid-01kqbvby8b1wtyv90bz004pkdt,imgname-probationary-officer-salary-slip-1777440520458.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಸ್ಯಾಲರಿ ಸ್ಲಿಪ್&lt;/strong&gt;&lt;/h2&gt;&lt;p&gt;ಬ್ಯಾಂಕ್ ಉದ್ಯೋಗಿಗಳ ಸ್ಯಾಲರಿ ಹೇಗಿರಬಹುದು ಎಂಬ ಕುತೂಹಲ ಅನೇಕರಿಗಿರುತ್ತದೆ. ಪ್ರತಿವರ್ಷವೂ ಲಕ್ಷಾಂತರ ಜನ ಐಬಿಪಿಎಸ್&zwnj; ಪರೀಕ್ಷೆ ಬರೆಯುತ್ತಾರೆ. ಅದರಲ್ಲಿ ಸಾವಿರಾರು ಜನ ಪಾಸಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಭದ್ರಪಡಿಸಿಕೊಳ್ಳುತ್ತಾರೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟಿರಬಹುದು ಎಂಬ ಕುತೂಹಲ ಅನೇಕರದ್ದು, ಅಂತಹ ಅನೇಕರ ಕುತೂಹಲವನ್ನು ಬ್ಯಾಂಕಿಂಗ್ ಅಧಿಕಾರಿಯೊಬ್ಬರು ತಣಿಸಿದ್ದಾರೆ. ಹೌದು ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡುವ ಒಬ್ಬರು ತಮ್ಮ ಸ್ಯಾಲರಿ ಸ್ಲಿಪ್ ಅನ್ನು ರಿವೀಲ್ ಮಾಡಿದ್ದಾರೆ. ಸ್ಯಾಲರಿಯ ಜೊತೆಗೆ ಅವರಿಗೆ ಸಿಗುವ ಸವಲತ್ತುಗಳ ವಿವರವನ್ನು ಅವರು ನೀಡಿದ್ದು, ಇದು ಸಾರ್ವಜನಿಕ ವಲಯದ ಬ್ಯಾಂಕಿಂಗ್ ವೃತ್ತಿಜೀವನದ ಆರ್ಥಿಕ ಪ್ರಯೋಜನಗಳು ಮತ್ತು ಸ್ಥಿರತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.&lt;/p&gt;&lt;h3&gt;&lt;strong&gt;ಬ್ಯಾಂಕ್ ಆಫ್ ಬರೋಡಾ ಪ್ರೊಬೆಷನರಿ ಅಧಿಕಾರಿ ಸಂಬಳ ಎಷ್ಟು ಗೊತ್ತಾ?&lt;/strong&gt;&lt;/h3&gt;&lt;p&gt;ಇನ್&zwnj;ಸ್ಟಾಗ್ರಾಮ್ ವೀಡಿಯೊದಲ್ಲಿ, ಬ್ಯಾಂಕ್ ಆಫ್ ಬರೋಡಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕೆಲಸ ಮಾಡುವ ಪಂಕಜ್ ಕುಮಾರ್ ದಾಸ್ ಅವರು ಮೇ 2025 ರ ತಮ್ಮ ಮೊದಲ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಕಾಣುವಂತೆ ಅವರಿಗೆ ಕೈಗೆ ಸಿಗುವ ಹಣ 98,745 ರೂ. ಈ ಹಣವೂ 40 ದಿನದ ಕೆಲಸ ಮಾಡಿದ್ದಕ್ಕೆ ಸಿಕ್ಕಿರುವುದು ಎಂದು ಅವರು ಹೇಳಿಕೊಂಡಿದ್ದಾರೆ.&lt;/p&gt;&lt;p&gt;ಈ ಸ್ಯಾಲರಿ ಸ್ಲಿಪ್&zwnj;ನಲ್ಲಿ ಅವರ ಮೂಲವೇತನ (basic pay),ಮನೆ ಬಾಡಿಗೆ ಭತ್ಯೆ(HRA),ತುಟ್ಟಿ ಭತ್ಯೆ(DA) ಮುಂತಾದವುಗಳ ಸಂಪೂರ್ಣ ವಿವರವಿದೆ. ಸಂಬಳದ ಹೊರತಾಗಿ ಪಂಕಜ್&zwnj;ಕುಮಾರ್ ದಾಸ್ ಒಬ್ಬ ಪ್ರೊಬೇಷನರಿ ಅಧಿಕಾರಿಯಾಗಿ ತಮಗೆ ಲಭ್ಯವಿರುವ ಇತರ ಸೌಲಭ್ಯಗಳ ವಿವರ ನೀಡಿದ್ದಾರೆ. ಇದರಲ್ಲಿ ಗುತ್ತಿಗೆ ವಸತಿ, ಪೆಟ್ರೋಲ್ ಭತ್ಯೆ, ವೃತ್ತಪತ್ರಿಕೆ ಭತ್ಯೆ, ಮನರಂಜನಾ ಭತ್ಯೆ, ವೈದ್ಯಕೀಯ ಬೆಂಬಲ, ಉಪಹಾರ ಭತ್ಯೆ, ಮನೆ ನಿರ್ವಹಣೆ, ಮೊಬೈಲ್ ಮತ್ತು ರೀಚಾರ್ಜ್ ವೆಚ್ಚಗಳು ಮತ್ತು ಕಣ್ಣಿನ ತಪಾಸಣೆಯೂ ಸೇರಿವೆ. ಇದರ ಜೊತೆಗೆ ಹೆಚ್ಚುವರಿಯಾಗಿ ದೀರ್ಘಾವಧಿಯ ಸವಲತ್ತುಗಳ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;p&gt;ಅದರಲ್ಲಿ ಬಳಕೆಯಾಗದ ಸವಲತ್ತು ರಜೆಗಳನ್ನು(privilege leaves)ವೇತನವಾಗಿಸಿಕೊಳ್ಳುವ ಸೌಲಭ್ಯ, ರಜಾ ದಿನಗಳಲ್ಲಿ ಬ್ಯಾಂಕ್ ಅತಿಥಿ ಗೃಹಗಳ ಬಳಸುವ ಸವಲತ್ತು. ರಜಾ ಗೃಹಗಳಿಗೆ ಪ್ರವೇಶದಂತಹ ಹೆಚ್ಚುವರಿ ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ಅವರು ಗಮನ ಸೆಳೆದರು. ಇದು ನನ್ನ 40 ದಿನದ ವೇತನದ ಚೀಟಿ ಎಂದು ಬರೆದು ಅವರು ಇನ್ಸ್ಟಾಗ್ರಾಮ್&zwnj;ನಲ್ಲಿ ಪೋಸ್ಟ್ ಮಾಡಿದ್ದು ಬರೀ ವೈರಲ್ ಆಗಿದೆ.&lt;/p&gt;&lt;p&gt;ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS exam) ನಡೆಸಿದ ಪಿಒ ಪರೀಕ್ಷೆಯಲ್ಲಿ ಪಾಸಾದ ಪಂಕಜ್&zwnj;ಕುಮಾರ್ ದಾಸ್ ತಾವು ಆರ್&zwnj;ಆರ್&zwnj;ಬಿಯ ಸಿಎಸ್&zwnj;ಎ ಪರೀಕ್ಷೆಯಲ್ಲೂ ಪಾಸಾಗಿರೋದಾಗಿ ಹೇಳಿದ್ದಾರೆ. ಇವರ ವೀಡಿಯೋ ಈಗ ಸಾಕಷ್ಟು ಆನ್&zwnj;ಲೈನ್ ಚರ್ಚೆಗೆ ಕಾರಣವಾಗಿದೆ. ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಉದ್ಯೋಗಗಳು ನೀಡುವ ಆರ್ಥಿಕ ಸ್ಥಿರತೆ ಮತ್ತು ಜೀವನಶೈಲಿಯ ಕುರಿತು ಈ ವೀಡಿಯೊ ಆನ್&zwnj;ಲೈನ್&zwnj;ನಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಒಳ್ಳೆ ಆರೋಗ್ಯಕ್ಕೆಂದು ವಾಕ್ ಹೋದವರು ಅಪಘಾತಕ್ಕೆ ಬಲಿಯಾದರು: ಕಾರು ಡಿಕ್ಕಿಯಾಗಿ ಇಬ್ಬರು ಪಾದಚಾರಿಗಳು ಸಾವು&lt;/strong&gt;&lt;/p&gt;&lt;p&gt;ಇದಕ್ಕೂ ಮೊದಲು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಪ್ರೊಬೇಷನರಿ ಅಧಿಕಾರಿಯೊಬ್ಬರು ತಮ್ಮ ಮಾಸಿಕ ಸಂಬಳವನ್ನು ಹಂಚಿಕೊಂಡ ನಂತರ ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ವೈರಲ್ ಆಗಿದ್ದರು. ವೀಡಿಯೊವೊಂದರಲ್ಲಿ, ಅವರು 2.5 ವರ್ಷಗಳ ಸೇವೆಯ ನಂತರ 5 ಬಾರಿ ವೇತನ ಹೆಚ್ಚಳ ಸೇರಿದಂತೆ ಸುಮಾರು 95,000 ರೂ.ಗಳನ್ನು ಗಳಿಸುತ್ತಾರೆ ಎಂದು ಬಹಿರಂಗಪಡಿಸಿದ್ದರು.&lt;/p&gt;&lt;p&gt;ಬ್ಯಾಂಕ್ ಪ್ರೊಬೇಷನರಿ ಆಫೀಸರ್ (ಪಿಒ) ಎಂಬುದು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಆರಂಭಿಕ ಹಂತದ ಜೂನಿಯರ್ ಮ್ಯಾನೇಜ್ಮೆಂಟ್ ಗ್ರೇಡ್-1 ಹುದ್ದೆಯಾಗಿದೆ. ಇದು ಪದವೀಧರರಿಗೆ ಹೆಚ್ಚು ಬೇಡಿಕೆಯ ವೃತ್ತಿಯಾಗಿದ್ದು, 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ತೀವ್ರವಾದ ತರಬೇತಿ, ಉದ್ಯೋಗ ಪರಿಭ್ರಮಣ(job rotation), ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಕಾರ್ಯಾಚರಣೆಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಪ್ರಮುಖ ಪರೀಕ್ಷೆಗಳಲ್ಲಿ ಎಸ್&zwnj;ಬಿಐ ಪಿಒ, ಐಬಿಪಿಎಸ್ ಪಿಒ ಮತ್ತು ಆರ್&zwnj;ಬಿಐ ಗ್ರೇಡ್ ಬಿ ಸೇರಿವೆ, ಇದನ್ನು ಸಾಮಾನ್ಯವಾಗಿ 20 ರಿಂದ 30 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ವಾರ್ಷಿಕವಾಗಿ ನಡೆಸಲಾಗುತ್ತದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ತಂಪರೆಯಲಿರುವ ವರುಣ&lt;/strong&gt;&lt;/p&gt;&lt;p&gt;ಪಿಒಗಳು ಗ್ರಾಹಕ ಸೇವೆಗಳು, ಸಾಲ ಸಂಸ್ಕರಣೆ, ನಗದು ನಿರ್ವಹಣೆ ಮತ್ತು ವ್ಯವಹಾರ ಅಭಿವೃದ್ಧಿ ಸೇರಿದಂತೆ ದೈನಂದಿನ ಬ್ಯಾಂಕ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾರೆ.&lt;/p&gt;]]></content:encoded>
            <category><![CDATA[business]]></category>
            <dc:creator>Anusha Kb</dc:creator>
            <atom:link href="https://kannada.asianetnews.com/business/bank-of-baroda-po-shows-his-first-salary-slip-on-social-media-what-happened/articleshow-dw21wdb"/>
        </item>
        <item>
            <title><![CDATA[ಈ ರಾಶಿಗೆ ಲಾಭದ ಜೊತೆ ನಷ್ಟ, ಮೇ 2026ರ ಗ್ರಹಗತಿಗಳು ಎಲ್ಲಾ ಉಲ್ಠಾ ಪಲ್ಟಾ]]></title>
            <link>https://kannada.asianetnews.com/gallery/astrology/taurus-may-2026-monthly-horoscope-predictions-and-remedies-suh-k1n4o2m</link>
            <guid isPermaLink="true">https://kannada.asianetnews.com/gallery/astrology/taurus-may-2026-monthly-horoscope-predictions-and-remedies-suh-k1n4o2m</guid>
            <pubDate>Wed, 29 Apr 2026 11:05:05 +0530</pubDate>
            <description><![CDATA[Taurus May 2026 Monthly Horoscope 2026ರ ಮೇ ತಿಂಗಳಲ್ಲಿ ವೃಷಭ ರಾಶಿಯವರ ಜಾತಕದಲ್ಲಿ ಆಗುವ ಬದಲಾವಣೆಗಳು ಲಾಭ ತರುತ್ತವೆಯೇ ಅಥವಾ ಎಚ್ಚರಿಕೆ ವಹಿಸಬೇಕೇ? ಈ ಬಗ್ಗೆ ವಿವರವಾಗಿ ತಿಳಿಯೋಣ.]]></description>
            <media:content url="https://static.asianetnews.com/images/w-1280,h-720,format-jpg,imgid-01k096xa598yanx79ztdqyyvcz,imgname-budh-vakri-2025-18-july-impact-on-zodiac-signs-1752655898793.jpg" type="image/jpeg" height="390" width="690"/>
            <content:encoded><![CDATA[&lt;p&gt;Taurus May 2026 Monthly Horoscope 2026ರ ಮೇ ತಿಂಗಳಲ್ಲಿ ವೃಷಭ ರಾಶಿಯವರ ಜಾತಕದಲ್ಲಿ ಆಗುವ ಬದಲಾವಣೆಗಳು ಲಾಭ ತರುತ್ತವೆಯೇ ಅಥವಾ ಎಚ್ಚರಿಕೆ ವಹಿಸಬೇಕೇ? ಈ ಬಗ್ಗೆ ವಿವರವಾಗಿ ತಿಳಿಯೋಣ.&lt;/p&gt;&lt;img&gt;&lt;p&gt;2026ರ ಮೇ ತಿಂಗಳು ವೃಷಭ ರಾಶಿಯವರಿಗೆ ಸವಾಲಿನ ಜೊತೆಗೆ ಕೆಲವು சாதಕವಾದ ತಿರುವುಗಳನ್ನು ನೀಡಲಿದೆ. ನಿಮ್ಮ ರಾಶ್ಯಾಧಿಪತಿ ಶುಕ್ರ ಮತ್ತು ಬುದ್ಧಿಕಾರಕ ಬುಧನ ಸಂಚಾರವು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಗಳನ್ನು ತರಲಿದೆ. ಗ್ರಹಗಳ ಈ ಆಟವು ನಿಮ್ಮ ಜೀವನದಲ್ಲಿ ಯಾವ ರಹಸ್ಯಗಳನ್ನು ಬಚ್ಚಿಟ್ಟಿದೆ ಎಂಬುದನ್ನು ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ಮೇ ತಿಂಗಳ ಆರಂಭದಲ್ಲಿ, ಬುಧನು ಮೇಷ ರಾಶಿಯಲ್ಲಿ ಸಂಚರಿಸುವುದು ನಿಮ್ಮ ರಾಶಿಯ 12ನೇ ಮನೆಯಾದ ವ್ಯಯ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅನಗತ್ಯ ವೈದ್ಯಕೀಯ ಅಥವಾ ಅನಿರೀಕ್ಷಿತ ಪ್ರಯಾಣದ ಖರ್ಚುಗಳು ಉಂಟಾಗಬಹುದು. ಉದ್ಯೋಗದಲ್ಲಿರುವವರಿಗೆ ಕೆಲಸದ ಹೊರೆ ಹೆಚ್ಚಾಗಬಹುದು. ಆದಾಗ್ಯೂ, ತಿಂಗಳ ಎರಡನೇ ಭಾಗದಲ್ಲಿ ಸೂರ್ಯ ಮತ್ತು ಬುಧನ ಚಲನೆಯು ವೃತ್ತಿಯಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಪಾಲುದಾರಿಕೆ ವ್ಯವಹಾರ ಮಾಡುವವರು ಒಪ್ಪಂದಗಳಿಗೆ ಸಹಿ ಹಾಕುವಾಗ ಹೆಚ್ಚು ಜಾಗರೂಕರಾಗಿರಬೇಕು.&lt;/p&gt;&lt;img&gt;&lt;p&gt;ಮೇ ತಿಂಗಳಲ್ಲಿ ಮಂಗಳನ ದೃಷ್ಟಿ ನಿಮ್ಮ ಕುಟುಂಬ ಸ್ಥಾನದ ಮೇಲೆ ಬೀಳುವುದರಿಂದ, ಸಣ್ಣಪುಟ್ಟ ವಾಗ್ವಾದಗಳು ಉಂಟಾಗುವ ಸಾಧ್ಯತೆಯಿದೆ. ವಿಶೇಷವಾಗಿ ಜೀವನ ಸಂಗಾತಿಯೊಂದಿಗೆ ಮಾತನಾಡುವಾಗ ಸಂಯಮ ಬೇಕು. ಮಾತಿನಲ್ಲಿ ಸೌಮ್ಯತೆ ಪಾಲಿಸುವುದು ಸಂಬಂಧಗಳಲ್ಲಿ ಬಿರುಕು ಮೂಡದಂತೆ ತಡೆಯುತ್ತದೆ. ಶುಭ ಕಾರ್ಯಗಳ ಮಾತುಕತೆಗಳು ತಿಂಗಳ ಕೊನೆಯಲ್ಲಿ ಮುಗಿಯಲಿವೆ.&lt;/p&gt;&lt;img&gt;&lt;p&gt;ಬುಧ ಸಂಚಾರದ ಪ್ರಭಾವದಿಂದ ನರ ಸಂಬಂಧಿ ಸಮಸ್ಯೆಗಳು ಅಥವಾ ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಳೆಯ ಕಾಯಿಲೆಗಳು ಮತ್ತೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಆಹಾರದ ವಿಷಯದಲ್ಲಿ ಹಿಡಿತ ಅಗತ್ಯ. ಧ್ಯಾನ ಮತ್ತು ಯೋಗ ಮಾಡುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಈ ಬುಧ ಸಂಚಾರದ ಪ್ರಭಾವದಿಂದ ವೃಷಭ ರಾಶಿಯವರ ಆರೋಗ್ಯದಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ನರಮಂಡಲಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳು ಅಥವಾ ರಾತ್ರಿ ಸರಿಯಾಗಿ ನಿದ್ದೆ ಬಾರದೆ ಕಾಡುವ ನಿದ್ರಾಹೀನತೆ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಗುಣಮುಖವಾಗಿದೆ ಎಂದು ಭಾವಿಸಿದ್ದ ಹಳೆಯ ಕಾಯಿಲೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಆದ್ದರಿಂದ, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರು ಸೂಕ್ತ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ. ಜೀರ್ಣಾಂಗ ವ್ಯವಸ್ಥೆ ದುರ್ಬಲಗೊಳ್ಳುವ ಸಾಧ್ಯತೆಯಿರುವುದರಿಂದ, ಎಣ್ಣೆಯುಕ್ತ ಪದಾರ್ಥಗಳನ್ನು ಹೊರತುಪಡಿಸಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಅವಶ್ಯಕ.&lt;/p&gt;&lt;img&gt;&lt;p&gt;ಅನಗತ್ಯ ಚಿಂತೆಗಳಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಪ್ರತಿದಿನ ಕನಿಷ್ಠ 15 ನಿಮಿಷ ಧ್ಯಾನ ಅಥವಾ ಸರಳ ಯೋಗಾಸನಗಳನ್ನು ಮಾಡುವುದು ನಿಮ್ಮನ್ನು ಉತ್ಸಾಹದಿಂದ ಇರಿಸಲು ಸಹಾಯ ಮಾಡುತ್ತದೆ. ತಿಂಗಳ ಮೊದಲಾರ್ಧದಲ್ಲಿ ಮನಸ್ಸಿನ ಗೊಂದಲ ಅಥವಾ ಗಮನದ ಕೊರತೆ ಉಂಟಾಗಬಹುದು. ಇದರಿಂದ ಓದಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಸಣ್ಣಪುಟ್ಟ ತೊಂದರೆಗಳು ಬರಬಹುದು.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/taurus-may-2026-monthly-horoscope-predictions-and-remedies-suh-k1n4o2m"/>
        </item>
        <item>
            <title><![CDATA[ಮತ್ತೆ ಮುಂದೋಯ್ತು ಬಹು ನಿರೀಕ್ಷಿತ 'ಟಾಕ್ಸಿಕ್' ಬಿಡುಗಡೆ ದಿನಾಂಕ; ಯಶ್ ಮಹತ್ವದ ಅಪ್‌ಡೇಟ್‌]]></title>
            <link>https://kannada.asianetnews.com/gallery/sandalwood/the-release-date-of-the-much-awaited-movie-the-toxic-starring-rocking-star-yash-has-been-postponed-once-again-mrq-bl1kqht</link>
            <guid isPermaLink="true">https://kannada.asianetnews.com/gallery/sandalwood/the-release-date-of-the-much-awaited-movie-the-toxic-starring-rocking-star-yash-has-been-postponed-once-again-mrq-bl1kqht</guid>
            <pubDate>Wed, 29 Apr 2026 10:51:38 +0530</pubDate>
            <description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ದಿ ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಈ ಹಿಂದೆ ಜೂನ್ 4ಕ್ಕೆ ನಿಗದಿಯಾಗಿದ್ದ ದಿನಾಂಕವನ್ನು ಮತ್ತೆ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01khwq3cn1qg70d30k0sz9kjp4,imgname-yash-film-toxic-official-hindi-teaser-1771564020385.jpg" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ದಿ ಟಾಕ್ಸಿಕ್' ಸಿನಿಮಾದ ಬಿಡುಗಡೆ ದಿನಾಂಕ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಈ ಹಿಂದೆ ಜೂನ್ 4ಕ್ಕೆ ನಿಗದಿಯಾಗಿದ್ದ ದಿನಾಂಕವನ್ನು ಮತ್ತೆ ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ.&amp;nbsp;&lt;/p&gt;&lt;img&gt;&lt;p&gt;ಭಾರತದ ಬಹು ನಿರೀಕ್ಷಿತ ರಾಕಿಂಗ್ ಸ್ಟಾರ್ ಅಭಿನಯದ ಯಶ್&zwnj; ನಟನೆಯ 'ದಿ ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿದೆ. ಈ ಹಿಂದೆ ಮಾರ್ಚ್ 19ಕ್ಕೆ ಚಿತ್ರ ಬಿಡುಗಡೆಗೆ ದಿನಾಂಕ ನಿಗಧಿಯಾಗಿತ್ತು.&lt;/p&gt;&lt;img&gt;&lt;p&gt;ಮಧ್ಯಪ್ರಾಚ್ಯದಲ್ಲಿನ ಯುದ್ಧದ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಮತ್ತೆ ಚಿತ್ರದ ದಿನಾಂಕ ಮುಂದೂಡಿಕೆಯಾಗಿರುವ ಮಾಹಿತಿಯನ್ನು ನಟ ಯಶ್ ಶೇರ್ ಮಾಡಿಕೊಂಡಿದ್ದಾರೆ. ಆದರೆ ಯಾವಾಗ ಚಿತ್ರ ಥಿಯೇಟರ್&zwnj;ಗೆ ಬರಲಿದೆ ಎಂಬುದರ ಮಾಹಿತಿಯನ್ನು ಚಿತ್ರತಂಡ ತಿಳಿಸಿಲ್ಲ. ಶೀಘ್ರದಲ್ಲಿಯೇ ಬರಲಿದೆ ಎಂಬ ಮಾಹಿತಿಯನ್ನು ತಿಳಿಸಿದೆ.&lt;/p&gt;&lt;img&gt;&lt;p&gt;ಈಗಾಗಲೇ ಟೀಸರ್, ಟ್ರೈಲರ್ ಮತ್ತು ಕಲಾವಿದರ ಲುಕ್ ರಿವೀಲ್ ಆಗಿದ್ದು, ಸಿನಿಮಾದ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಮೂಂದೂಡಿಕೆ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. &amp;nbsp;ಇನ್ನು ಕೆಲವರು ನಾವು ಕಾಯುತ್ತೇವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಇತ್ತೀಚೆಗೆ ಸಂದರ್ಶನದಲ್ಲಿ ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್&zwnj; ದಾಸ್&zwnj; ಅವರ ಬಗ್ಗೆ ನಟ ಯಶ್ ಮಾತನಾಡಿದ್ದರು.ಗ್ಯಾಂಗ್&zwnj;ಸ್ಟರ್ ಕತೆಯಲ್ಲಿ ಮಹಿಳಾ ನಿರ್ದೇಶಕಿಯೊಬ್ಬರು ಶೃಂಗಾರ, ಬಯಕೆ ಮತ್ತು ಬೋಲ್ಡ್ ದೃಶ್ಯಗಳನ್ನು ಕಟ್ಟಿಕೊಡುವ ರೀತಿ ವಿಭಿನ್ನವಾಗಿದ್ದು, ತಮಗೆ ಅಚ್ಚರಿ ತಂದಿದೆ ಎಂದು ಮೆಚ್ಚುಗೆ ಸೂಚಿಸಿದ್ದರು.&lt;/p&gt;]]></content:encoded>
            <category><![CDATA[sandalwood]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/sandalwood/the-release-date-of-the-much-awaited-movie-the-toxic-starring-rocking-star-yash-has-been-postponed-once-again-mrq-bl1kqht"/>
        </item>
        <item>
            <title><![CDATA[ನೀವು ಹಸಿವು ಎಂದೊಡನೆ ನಿಮ್ಮಿಷ್ಟದ ಊಟ ಆರ್ಡರ್: ಸ್ವಿಗ್ಗಿಯಿಂದ ಹೊಸ ಕ್ರಾಂತಿ, 'ಬಿಲ್ಡರ್ಸ್ ಕ್ಲಬ್' ಶುರು!]]></title>
            <link>https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv</link>
            <guid isPermaLink="true">https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv</guid>
            <pubDate>Wed, 29 Apr 2026 10:40:49 +0530</pubDate>
            <description><![CDATA[ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್‌ಗಳು ಎಐ ಏಜೆಂಟ್‌ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbs47zx9sm0vpskfjezqyab,imgname-swiggy-1777438171133.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ವಿಗ್ಗಿ ಸಂಸ್ಥೆಯು 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದ್ದು, ಡೆವಲಪರ್&zwnj;ಗಳು ಎಐ ಏಜೆಂಟ್&zwnj;ಗಳನ್ನು ನಿರ್ಮಿಸಲು ಆಹ್ವಾನಿಸಿದೆ. ಈ ತಂತ್ರಜ್ಞಾನವು ಗ್ರಾಹಕರ ಇಷ್ಟಗಳನ್ನು ಅರಿತು, 'ನನಗೆ ಹಸಿವಾಗ್ತಿದೆ' ಎಂದು ಟೈಪ್ ಮಾಡಿದರೆ ಸಾಕು, ತಾನಾಗಿಯೇ ಊಟವನ್ನು ಆರ್ಡರ್ ಮಾಡಲಿದೆ.&lt;/p&gt;&lt;img&gt;&lt;p&gt;ಬೆಂಗಳೂರು: ನಾವು ಸಾಮಾನ್ಯವಾಗಿ ಯಾವುದಾದರೂ ಅಗ್ರಿಗೇಟರ್&zwnj; ಆ್ಯಪ್ ಓಪನ್ ಮಾಡಿ, ನಮಗೆ ಬೇಕಾದ ಊಟವನ್ನು ಹುಡುಕಿ ಆರ್ಡರ್ ಮಾಡುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ನೀವು ಕೇವಲ &quot;ನನಗೆ ಹಸಿವಾಗ್ತಿದೆ&quot; ಎಂದು ಟೈಪ್ ಮಾಡಿದರೆ ಸಾಕು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನವೇ ನಿಮ್ಮಿಷ್ಟದ ಊಟವನ್ನು ಸ್ವಿಗ್ಗಿಯಲ್ಲಿ ತಾನಾಗಿಯೇ ಆರ್ಡರ್ ಮಾಡಲಿದೆ!ಇಂಥಹದ್ದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸ್ವಿಗ್ಗಿ ಸಂಸ್ಥೆ ಇದೀಗ ಸಾಫ್ಟ್&zwnj;ವೇರ್ ಡೆವಲಪರ್&zwnj;ಗಳಿಗೆ, ಸ್ಟಾರ್ಟ್&zwnj;ಅಪ್&zwnj;ಗಳಿಗೆ ಮತ್ತು ಐಟಿ ಕಂಪನಿಗಳಿಗೆ ಮುಕ್ತ ಆಹ್ವಾನ ನೀಡಿದ್ದು, ಇದಕ್ಕಾಗಿ 'ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್' ಎಂಬ ಹೊಸ ವೇದಿಕೆಯನ್ನು ಆರಂಭಿಸಿದೆ.&lt;/p&gt;&lt;img&gt;&lt;p&gt;ಸರಳವಾಗಿ ಹೇಳಬೇಕೆಂದರೆ, ಸ್ವಿಗ್ಗಿ ತನ್ನ ಒಳಗಿನ 'ಸಾಫ್ಟ್&zwnj;ವೇರ್ ಸಿಸ್ಟಮ್' ಅನ್ನು (ಇದನ್ನು ತಾಂತ್ರಿಕ ಭಾಷೆಯಲ್ಲಿ ಎಪಿಐ ಮತ್ತು ಎಂಸಿಪಿ ಎನ್ನುತ್ತಾರೆ) ಹೊರಗಿನ ಡೆವಲಪರ್&zwnj;ಗಳಿಗೆ ಬಳಸಲು ನೀಡುತ್ತಿದೆ. ಆರಂಭಿಕ ಹಂತದಲ್ಲಿ 3 ಎಂಸಿಪಿ ಸರ್ವರ್&zwnj;ಗಳು ಮತ್ತು 18ಕ್ಕೂ ಹೆಚ್ಚು ಎಪಿಐ ಟೂಲ್&zwnj;ಗಳನ್ನು ನೀಡಲಾಗುತ್ತದೆ.&lt;/p&gt;&lt;p&gt;ಇದನ್ನು ಬಳಸಿಕೊಂಡು ಸಾಫ್ಟ್&zwnj;ವೇರ್ ಎಂಜಿನಿಯರ್&zwnj;ಗಳು ಹೊಸ 'ಎಐ ಏಜೆಂಟ್' ಅಥವಾ ಸ್ಮಾರ್ಟ್ ಅಸಿಸ್ಟೆಂಟ್&zwnj;ಗಳನ್ನು ಸೃಷ್ಟಿಸಬಹುದು. ಈ ಎಐ ಏಜೆಂಟ್&zwnj;ಗಳು ಆಯಾ ಗ್ರಾಹಕರ ಅಭ್ಯಾಸಗಳನ್ನು ಗಮನಿಸಿ ನಂತರ ಮನುಷ್ಯರಂತೆಯೇ ಯೋಚಿಸಿ, ಸ್ವಿಗ್ಗಿಯಲ್ಲಿ ಊಟ ಆರ್ಡರ್ ಮಾಡುವುದು, ಇನ್&zwnj;ಸ್ಟಾಮಾರ್ಟ್&zwnj;ನಲ್ಲಿ ದಿನಸಿ ತರಿಸುವುದು ಅಥವಾ ಡೈನ್&zwnj;ಔಟ್ ಮೂಲಕ ಹೋಟೆಲ್&zwnj;ನಲ್ಲಿ ಟೇಬಲ್ ಬುಕ್ ಮಾಡುವಂತಹ ಕೆಲಸಗಳನ್ನು ಮಾಡಲಿವೆ.&lt;/p&gt;&lt;img&gt;&lt;p&gt;ಸ್ವಿಗ್ಗಿಯ ಈ ಬಿಲ್ಡರ್ಸ್ ಕ್ಲಬ್ ಸಂಪೂರ್ಣವಾಗಿ ಅಮೆಜಾನ್&zwnj;ನ ಎಂಟರ್&zwnj;ಪ್ರೈಸ್-ಗ್ರೇಡ್ ಎಐ ತಂತ್ರಜ್ಞಾನದ (ಎಡಬ್ಲ್ಯೂಎಸ್&zwnj;) ಮೇಲೆ ಕಾರ್ಯನಿರ್ವಹಿಸಲಿದೆ. ಡೆವಲಪರ್&zwnj;ಗಳಿಗೆ ಸುಲಭವಾಗಿ ತಂತ್ರಜ್ಞಾನವನ್ನು ಡೆವಲಪ್&zwnj; ಮಾಡಲು ಮೂರು ಪ್ರಮುಖ ಸೌಲಭ್ಯಗಳನ್ನು ಸಹ ನೀಡಲಾಗಿದೆ.&lt;/p&gt;&lt;p&gt;&lt;strong&gt;ಅಮೆಜಾನ್&zwnj; ಬೆಡ್&zwnj;ರಾಕ್&zwnj;:&lt;/strong&gt; ಇದು ಮೆಟಾ, ಮಿಸ್ಟ್ರಲ್ ಎಐನಂತಹ ಜಗತ್ತಿನ ಟಾಪ್ ಎಐ ತಂತ್ರಜ್ಞಾನಗಳನ್ನು ಒಂದೇ ಕಡೆ ಒದಗಿಸಲಿದೆ.&lt;/p&gt;&lt;p&gt;&lt;strong&gt;ಎಡಬ್ಲ್ಯೂಎಸ್&zwnj; ಟ್ರೈನಿಯಮ್:&lt;/strong&gt; ಇವು ಎಐಗಾಗಿ ವಿನ್ಯಾಸಗೊಳಿಸಲಾದ ವಿಶೇಷ 'ಚಿಪ್'ಗಳಾಗಿದ್ದು, ಎಐ ತರಬೇತಿ ವೆಚ್ಚದಲ್ಲಿ ಶೇ. 50ರಷ್ಟು ಹಣ ಉಳಿಸುತ್ತವೆ. ಅಷ್ಟೇ ಅಲ್ಲದೆ ಶೇ. 30-40ರಷ್ಟು ವೇಗವಾಗಿ ಕೆಲಸ ಮಾಡುತ್ತವೆ.&lt;/p&gt;&lt;p&gt;&lt;strong&gt;ಅಮೆಜಾನ್&zwnj; ಏಜೆಂಟ್&zwnj;ಕೋರ್&zwnj;: &lt;/strong&gt;ಡೆವಲಪರ್&zwnj;ಗಳು ಸುಲಭವಾಗಿ ಎಐ ಏಜೆಂಟ್&zwnj;ಗಳನ್ನು (ಸ್ಮಾರ್ಟ್ ಅಸಿಸ್ಟೆಂಟ್) ನಿರ್ಮಿಸಲು ಸಹಾಯ ಮಾಡುವ ಸಾಫ್ಟ್&zwnj;ವೇರ್ ಇದಾಗಿದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿಯ ಸಿಟಿಒ ಮಧುಸೂಧನ್ ರಾವ್, &quot;ನಾವು ಡೆವಲಪರ್&zwnj;ಗಳಿಗೆ ನಮ್ಮ ತಂತ್ರಜ್ಞಾನವನ್ನು ನೀಡುತ್ತಿದ್ದೇವೆ. ಅವರು ಸ್ವಿಗ್ಗಿಯ ಮೇಲೆ ದೊಡ್ಡ ಮಟ್ಟದ ಎಐ ಅಪ್ಲಿಕೇಶನ್&zwnj;ಗಳನ್ನು ನಿರ್ಮಿಸಬಹುದು. ಈ ಮೂಲಕ ಸ್ವಿಗ್ಗಿ ಕೇವಲ ಒಂದು ಆ್ಯಪ್ ಆಗಿ ಉಳಿಯದೆ, ಹೊಸ ತಂತ್ರಜ್ಞಾನಗಳು ಹುಟ್ಟುವ 'ಎಕೋಸಿಸ್ಟಮ್' ಆಗಿ ಬದಲಾಗುತ್ತಿದೆ,&rdquo; ಎಂದರು.&lt;/p&gt;&lt;p&gt;ಎ&quot;ಸ್ವಿಗ್ಗಿ ಬಿಲ್ಡರ್ಸ್ ಕ್ಲಬ್ ಎಐ-ಚಾಲಿತ ಕಾಮರ್ಸ್&zwnj;ನ ಮುಂದಿನ ಹಂತವಾಗಿದೆ. ಡೆವಲಪರ್&zwnj;ಗಳಿಗೆ ಮಿತಿಯಿಲ್ಲದೆ ಹೊಸ ಆವಿಷ್ಕಾರಗಳನ್ನು ಮಾಡಲು ನಾವು ಅಮೆಜಾನ್ ಬೆಡ್&zwnj;ರಾಕ್ ಮತ್ತು ಟ್ರೈನಿಯಮ್ ಮೂಲಕ ಮೂಲಸೌಕರ್ಯವನ್ನು ಒದಗಿಸುತ್ತಿದ್ದೇವೆ&quot; ಎಂದು ಡಬ್ಲ್ಯೂಎಸ್&zwnj; ಇಂಡಿಯಾದ ಅಧ್ಯಕ್ಷ ಸಂದೀಪ್ ದತ್ತಾ ತಿಳಿಸಿದರು.&lt;/p&gt;&lt;img&gt;&lt;p&gt;ತಂತ್ರಜ್ಞಾನದ ಬಗ್ಗೆ ಅರಿವಿರುವ ಡೆವಲಪರ್&zwnj;ಗಳು, ಸ್ಟಾರ್ಟ್&zwnj;ಅಪ್&zwnj;ಗಳು ಮತ್ತು ಕಂಪನಿಗಳು mcp.swiggy.com/builders ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ವಿಗ್ಗಿ ಇದನ್ನು ಪರಿಶೀಲಿಸಿ ತನ್ನ ವೇದಿಕೆಗೆ ಪ್ರವೇಶವನ್ನು ನೀಡುತ್ತದೆ. ಆಯ್ಕೆಯಾದ ಟೆಕ್ಕಿಗಳಿಗೆ ಸ್ವಿಗ್ಗಿಯಿಂದಲೇ ನೇರ ಎಂಜಿನಿಯರಿಂಗ್ ಬೆಂಬಲ, ಜೊತೆಯಾಗಿ ಬ್ರ್ಯಾಂಡಿಂಗ್ ಮಾಡುವ ಅವಕಾಶ ಮತ್ತು ವ್ಯಾಪಾರ ಬೆಳೆಸಲು ಪಾಲುದಾರಿಕೆ ಕೂಡ ಸಿಗಲಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Gowthami K</dc:creator>
            <atom:link href="https://kannada.asianetnews.com/gallery/business/swiggy-launches-ai-builders-club-soon-your-food-will-be-ordered-automatically-gdp-naxgckv"/>
        </item>
        <item>
            <title><![CDATA[ಈ 3 ರಾಶಿಯವ್ರು ಯಾವ ಬ್ಯುಸಿನೆಸ್ ಮಾಡಿದ್ರೂ ಸಕ್ಸಸ್ ಗ್ಯಾರಂಟಿ]]></title>
            <link>https://kannada.asianetnews.com/gallery/business/astrology-predicts-business-success-for-aries-leo-and-sagittarius-suh-w31rnf3</link>
            <guid isPermaLink="true">https://kannada.asianetnews.com/gallery/business/astrology-predicts-business-success-for-aries-leo-and-sagittarius-suh-w31rnf3</guid>
            <pubDate>Wed, 29 Apr 2026 10:39:01 +0530</pubDate>
            <description><![CDATA[Astrology Predicts Business ಜ್ಯೋತಿಷ್ಯದ ಪ್ರಕಾರ ಧೈರ್ಯ, ನಾಯಕತ್ವ ಮತ್ತು ಅದೃಷ್ಟದಂತಹ ಗುಣಗಳಿಂದ, ಇವರು ಯಾವುದೇ ವ್ಯವಹಾರ ಶುರು ಮಾಡಿದರೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpaawdmm5c8mt98z8kzjzhy9,imgname-astrology-1776315938452.jpg" type="image/jpeg" height="390" width="690"/>
            <content:encoded><![CDATA[&lt;p&gt;Astrology Predicts Business ಜ್ಯೋತಿಷ್ಯದ ಪ್ರಕಾರ ಧೈರ್ಯ, ನಾಯಕತ್ವ ಮತ್ತು ಅದೃಷ್ಟದಂತಹ ಗುಣಗಳಿಂದ, ಇವರು ಯಾವುದೇ ವ್ಯವಹಾರ ಶುರು ಮಾಡಿದರೂ ಸುಲಭವಾಗಿ ಗೆಲುವು ಸಾಧಿಸುತ್ತಾರೆ.&lt;/p&gt;&lt;img&gt;ಜ್ಯೋತಿಷ್ಯದಲ್ಲಿ ಕೆಲವು ರಾಶಿಗಳು ಹುಟ್ಟಿನಿಂದಲೇ ಯಶಸ್ಸಿನ ರಹಸ್ಯವನ್ನು ಹೊಂದಿರುತ್ತವೆ. ಅವರು ಯಾವುದೇ ವ್ಯವಹಾರವನ್ನು ಶುರು ಮಾಡಿದರೂ, ಅದರಲ್ಲಿ ಗೆಲ್ಲುವುದು ಗ್ಯಾರಂಟಿ. ಯಾಕಂದ್ರೆ, ಅವರ ರಾಶಿಯ ಗುಣ, ಗ್ರಹಗಳ ಬಲ ಮತ್ತು ಅವರಲ್ಲಿರುವ ಸಾಮರ್ಥ್ಯ ಅವರನ್ನು ಮುಂದೆ ತಳ್ಳುತ್ತದೆ. ಇಂದು ನಾವು ಮೇಷ, ಸಿಂಹ ಮತ್ತು ಧನು ರಾಶಿಯವರ ಬಗ್ಗೆ ಮಾತಾಡೋಣ. ಈ ಮೂರು ರಾಶಿಯವರು ಬ್ಯುಸಿನೆಸ್ ಜಗತ್ತಿನಲ್ಲಿ 'ನಾನು ಮಾಡಿಯೇ ತೀರುತ್ತೇನೆ' ಎಂಬ ಹುಮ್ಮಸ್ಸಿನಲ್ಲಿರುತ್ತಾರೆ. ಐಡಿಯಾ ಬಂದ ತಕ್ಷಣ ಫೀಲ್ಡಿಗಿಳಿದು ಗೆದ್ದು ಬೀಗುತ್ತಾರೆ. ಬನ್ನಿ, ವಿವರವಾಗಿ ನೋಡೋಣ!&lt;img&gt;ಮೇಷ ರಾಶಿಯವರು ಸೂರ್ಯನ ಪ್ರಭಾವದಲ್ಲಿರುತ್ತಾರೆ. ಇವರಿಗೆ ಧೈರ್ಯ, ವೇಗ, ನಾಯಕತ್ವದ ಗುಣಗಳು ಹುಟ್ಟಿನಿಂದಲೇ ಬಂದಿರುತ್ತವೆ. ಯಾವುದೇ ಬ್ಯುಸಿನೆಸ್ ಶುರು ಮಾಡಿದರೂ, ಮೊದಲ ದಿನದಿಂದಲೇ ಲಾಭ ಶುರುವಾಗುತ್ತೆ. ಉದಾಹರಣೆಗೆ, ರಿಯಲ್ ಎಸ್ಟೇಟ್, ಆಟೋಮೊಬೈಲ್ ಅಥವಾ ಫಾಸ್ಟ್ ಫುಡ್ ಬ್ಯುಸಿನೆಸ್ ಇವರಿಗೆ ಸೂಕ್ತ. ಯಾಕಂದ್ರೆ, ಇವರು ರಿಸ್ಕ್ ತೆಗೆದುಕೊಳ್ಳಲು ಸದಾ ಸಿದ್ಧರಿರುತ್ತಾರೆ. ಒಬ್ಬ ಮೇಷ ರಾಶಿಯ ಬ್ಯುಸಿನೆಸ್&zwnj;ಮ್ಯಾನ್, ಸಣ್ಣ ಅಂಗಡಿಯಿಂದ ಶುರುಮಾಡಿ ಅಂತಾರಾಷ್ಟ್ರೀಯ ಕಂಪನಿಯಾಗಿ ಬೆಳೆಯುವ ಸಾಧ್ಯತೆ ಹೆಚ್ಚು. ಯಾಕಂದ್ರೆ, ಮೇಷ ರಾಶಿಯವರಿಗೆ ಹೆಚ್ಚು ಯೋಚಿಸದೆ, ಅವಕಾಶಗಳನ್ನು ಹಿಡಿಯುವ ಅದೃಷ್ಟವಿರುತ್ತದೆ. ಗ್ರಹಗಳ ಪ್ರಕಾರ, ಮಂಗಳ ಗ್ರಹವು ಅವರಿಗೆ ಶಕ್ತಿ ನೀಡುತ್ತದೆ. 2026ರಲ್ಲಿ ಗುರು ಸಂಚಾರವು ಅವರ ಬ್ಯುಸಿನೆಸ್&zwnj; ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಯೋಚನೆ ಮಾಡ್ತಾ ಕೂರದೆ, ಫೀಲ್ಡಿಗಿಳೀರಿ ಬಾಸ್! ಇವರು ಸೋಲಿಗೆ ಹೆದರುವುದಿಲ್ಲ. ಯಾವುದೇ ಸವಾಲು ಬಂದರೂ, ಅದನ್ನು ಅವಕಾಶವಾಗಿ ಬದಲಾಯಿಸುತ್ತಾರೆ. ಇದರಿಂದ, ಅವರ ಬ್ಯುಸಿನೆಸ್ ಯಾವಾಗಲೂ ಲಾಭದಾಯಕವಾಗಿರುತ್ತದೆ.&lt;img&gt;ಸಿಂಹ ರಾಶಿಯು ಸೂರ್ಯನ ಸ್ವಂತ ಮನೆ. ಇವರು ಹುಟ್ಟಿನಿಂದಲೇ ನಾಯಕರು. ಬ್ಯುಸಿನೆಸ್&zwnj;ನಲ್ಲಿ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿದರೂ, ತಮ್ಮ ಉದ್ಯೋಗಿಗಳನ್ನು ಮತ್ತು ಗ್ರಾಹಕರನ್ನು ಆಕರ್ಷಿಸಿ ಯಶಸ್ಸು ಗಳಿಸುತ್ತಾರೆ. ಜ್ಯುವೆಲರಿ, ಸಿನಿಮಾ, ಹೋಟೆಲ್ ಅಥವಾ ಫ್ಯಾಷನ್ ಬ್ಯುಸಿನೆಸ್ ಇವರಿಗೆ ಸೂಪರ್ ಹಿಟ್. ಒಬ್ಬ ಸಿಂಹ ರಾಶಿಯ ಉದ್ಯಮಿ, ಸಣ್ಣ ಶಾಪಿಂಗ್ ಮಾಲ್ ಶುರು ಮಾಡಿದರೂ, ಅದು ಹಲವು ಫ್ರಾಂಚೈಸಿಗಳನ್ನು ಹೊಂದುವಂತೆ ಬೆಳೆಯುತ್ತದೆ. ಇದರ ರಹಸ್ಯ? ಅವರ ವರ್ಚಸ್ಸು! ಗ್ರಹಗಳು ಅನುಕೂಲಕರವಾಗಿದ್ದಾಗ, ಶನಿ ಮತ್ತು ಗುರುವಿನ ಸಂಯೋಗವು ಅವರಿಗೆ ದೊಡ್ಡ ಲಾಭವನ್ನು ತರುತ್ತದೆ. 2026ರಲ್ಲಿ ರಾಹುಕಾಲವು ಇವರನ್ನು ತಡೆಯುವುದಿಲ್ಲ, ಯಾಕಂದ್ರೆ ಅವರು ಧೈರ್ಯದಿಂದ ಮುನ್ನುಗ್ಗುತ್ತಾರೆ. ಐಡಿಯಾ ಬಂದರೆ, ತಕ್ಷಣ ಕಾರ್ಯರೂಪಕ್ಕೆ ತರುತ್ತಾರೆ! ಇವರು ಹಣವನ್ನು ಆಕರ್ಷಿಸುವ ಕಾಂತದಂತೆ. ಇವರ ಬ್ಯುಸಿನೆಸ್ ಯಾವಾಗಲೂ ಸಮೃದ್ಧವಾಗಿರುತ್ತದೆ, ಯಾಕಂದ್ರೆ ಇವರು ರಾಜರಂತೆ ಆಳ್ವಿಕೆ ಮಾಡುತ್ತಾರೆ.&lt;img&gt;ಧನು ರಾಶಿಯವರನ್ನು ಗುರು ಗ್ರಹವು ಆಳುತ್ತದೆ. ಇವರಿಗೆ ಅದೃಷ್ಟ, ಜ್ಞಾನ ಮತ್ತು ವಿಸ್ತರಣೆಯ ಗುಣಗಳು ಸಹಜವಾಗಿರುತ್ತವೆ. ರಫ್ತು, ಪ್ರವಾಸೋದ್ಯಮ, ಶಿಕ್ಷಣ ಅಥವಾ ಸ್ಟಾಕ್ ಮಾರ್ಕೆಟ್ ಬ್ಯುಸಿನೆಸ್ ಇವರಿಗೆ ಸೂಕ್ತ. ಯಾವುದೇ ರಿಸ್ಕ್ ಇವರನ್ನು ಬಾಧಿಸುವುದಿಲ್ಲ. ಒಬ್ಬ ಧನು ರಾಶಿಯ ವ್ಯಾಪಾರಿ, ಸಣ್ಣ ಟ್ರಾವೆಲ್ ಏಜೆನ್ಸಿಯನ್ನು ಜಾಗತಿಕ ಸಂಸ್ಥೆಯಾಗಿ ಪರಿವರ್ತಿಸುವ ಶಕ್ತಿ ಹೊಂದಿದ್ದಾರೆ. ಯಾಕಂದ್ರೆ, ಗುರುವಿನ ಕೃಪೆಯಿಂದ ಅವಕಾಶಗಳು ತಾವಾಗಿಯೇ ಬರುತ್ತವೆ. 2026ರಲ್ಲಿ ಶುಕ್ರ ಸಂಚಾರವು ಅವರ ಲಾಭವನ್ನು ದ್ವಿಗುಣಗೊಳಿಸುತ್ತದೆ. ಇವರು ಯೋಚಿಸಿ ಮುಗಿಸುವ ಮೊದಲೇ, ಬ್ಯುಸಿನೆಸ್ ಓಡಲು ಶುರು ಮಾಡಿರುತ್ತದೆ. ಫೀಲ್ಡಿಗಿಳಿದರೆ, ಗೆಲುವು ಖಚಿತ!]]></content:encoded>
            <category><![CDATA[business]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/astrology-predicts-business-success-for-aries-leo-and-sagittarius-suh-w31rnf3"/>
        </item>
        <item>
            <title><![CDATA[ಗದಗ: ಕಾರು ಚಾಲಕನ ನಿದ್ದೆ ಮಂಪರಿಗೆ ವಾಕಿಂಗ್ ಮಾಡುತ್ತಿದ್ದ ಇಬ್ಬರು ಪಾದಚಾರಿಗಳು ಬಲಿ]]></title>
            <link>https://kannada.asianetnews.com/state/two-killed-as-car-loses-control-and-runs-over-pedestrians-in-gadag/articleshow-q0dpwv5</link>
            <guid isPermaLink="true">https://kannada.asianetnews.com/state/two-killed-as-car-loses-control-and-runs-over-pedestrians-in-gadag/articleshow-q0dpwv5</guid>
            <pubDate>Wed, 29 Apr 2026 10:34:18 +0530</pubDate>
            <description><![CDATA[ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಚಾಲಕನ ನಿದ್ದೆ ಮಂಪರಿನಿಂದಾಗಿ ಕಾರೊಂದು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbsmggp006p9r917fkyscqr,imgname-acccident-in-gadag-1777438704149.jpg" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ಬೆಳ್ಳಂಬೆಳಗ್ಗೆ ವಾಕಿಂಗ್&zwnj;ಗೆ ಹೋದವರ ಪಾಲಿಗೆ ಮೃತ್ಯುವಾದ ಕಾರು.&lt;/strong&gt;&lt;/h2&gt;&lt;p&gt;ಗದಗ: ರಸ್ತೆ ಬದಿ ನಡೆದು ಹೋಗುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಲಕ್ಷ್ಮೇಶ್ವರ ಪಟ್ಟಣದ ಚನ್ನಮ್ಮ ಕಾಲೇಜ್ ಬಳಿ ಕಾರು ಚಾಲಕನೋರ್ವ ನಿದ್ದೆ ಮಂಪರಿನಲ್ಲಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು 48 ವರ್ಷದ ಶಿವಾನಂದ ಹುಲಕೋಟಿ ಹಾಗೂ 40 ವರ್ಷದ ಅಶೋಕ್ ಸರ್ವಿ ಎಂದು ಗುರುತಿಸಲಾಗಿದೆ. ಈ ಕಾರು ಮಹಾರಾಷ್ಟ್ರದಿಂದ ಲಕ್ಷೇಶ್ವರಕ್ಕೆ ಬರುತ್ತಿತ್ತು.&lt;/p&gt;&lt;p&gt;ಚನ್ನಮ್ಮ ಸರ್ಕಲ್&zwnj;ಗೆ ಬರುತ್ತಿದ್ದಂತೆ ಕಾರು ಚಾಲಕನಿಗೆ ನಿದ್ದೆ ಮಂಪರು ಆಗಿದ್ದು, ಪರಿಣಾಮ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಡೆದು ಹೋಗುತ್ತಿದ್ದ ಪಾದಚಾರಿಗಳ ಮೇಲೆ ಹತ್ತಿದೆ. ಘಟನೆಯಲ್ಲಿ ಮತ್ತೊಬ್ಬ ಪಾದಚಾರಿಯೂ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇದೆ.&lt;/p&gt;&lt;h3&gt;&lt;strong&gt;ಒಳ್ಳೆ ಆರೋಗ್ಯಕ್ಕೆಂದು ವಾಕ್ ಹೋದವರು ಅಪಘಾತಕ್ಕೆ ಬಲಿಯಾದರು&lt;/strong&gt;&lt;/h3&gt;&lt;p&gt;ಅಪಘಾತದಲ್ಲಿ ಮೃತರಾದ ಅಶೋಕ್ ಹಾಗೂ ಶಿವಾನಂದ ಬೆಳಗಿನ ಜಾವ ಅಂಬೇಡ್ಕರ್ ಬಡಾವಣೆಯಿಂದ ವಾಕ್ ಬಂದಿದ್ದರು. ಅವರು ನಡೆದು ಬರುತ್ತಿದ್ದಾಗಲೇ ಏಕಾಏಕಿ ಎದುರಿಗೆ ಬಂದ ಹುಂಡೈ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಲಕ್ಷ್ಮೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಿಸಿಲಿಗೆ ಬೆಂದ ಬೆಂಗಳೂರು ಜನರಿಗೆ ಸಿಹಿ ಸುದ್ದಿ: ಸಿಲಿಕಾನ್ ಸಿಟಿಯಲ್ಲಿ ತಂಪರೆಯಲಿರುವ ವರುಣ&lt;/strong&gt;&lt;/p&gt;]]></content:encoded>
            <category><![CDATA[state]]></category>
            <dc:creator>Anusha Kb</dc:creator>
            <atom:link href="https://kannada.asianetnews.com/state/two-killed-as-car-loses-control-and-runs-over-pedestrians-in-gadag/articleshow-q0dpwv5"/>
        </item>
        <item>
            <title><![CDATA[KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​:  ಕಿಚ್ಚ ಹೇಳಿದ್ದೇನು]]></title>
            <link>https://kannada.asianetnews.com/gallery/sandalwood/kichcha-sudeep-about-kd-filsm-seraga-sarse-song-and-says-dont-make-too-much-hate-suc-lssaqvw</link>
            <guid isPermaLink="true">https://kannada.asianetnews.com/gallery/sandalwood/kichcha-sudeep-about-kd-filsm-seraga-sarse-song-and-says-dont-make-too-much-hate-suc-lssaqvw</guid>
            <pubDate>Tue, 28 Apr 2026 19:44:28 +0530</pubDate>
            <description><![CDATA[ಕೆಡಿ ಸಿನಿಮಾದ 'ಸೆರಗ ಸರ್ಸೆ' ಹಾಡಿನ ವಿವಾದದ ಬಗ್ಗೆ ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಪರವಾಗಿ ಮಾತನಾಡಿದ ಅವರು, ಒಂದು ಹಾಡಿಗಾಗಿ ಇಷ್ಟು ಕಠಿಣವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ನಮ್ಮವರ ಬಗ್ಗೆಯೇ ಇಷ್ಟು ಹಾರ್ಶ್ ಆಗಬೇಕಾ ಎಂದು ಅವರು ಪ್ರಶ್ನಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6zgrw1kv4pawrnmh79pxv,imgname-kd-film-song-1777385587484.jpg" type="image/jpeg" height="390" width="690"/>
            <content:encoded><![CDATA[ಕೆಡಿ ಸಿನಿಮಾದ 'ಸೆರಗ ಸರ್ಸೆ' ಹಾಡಿನ ವಿವಾದದ ಬಗ್ಗೆ ನಟ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಪ್ರೇಮ್ ಅವರ ಪರವಾಗಿ ಮಾತನಾಡಿದ ಅವರು, ಒಂದು ಹಾಡಿಗಾಗಿ ಇಷ್ಟು ಕಠಿಣವಾಗಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ನಮ್ಮವರ ಬಗ್ಗೆಯೇ ಇಷ್ಟು ಹಾರ್ಶ್ ಆಗಬೇಕಾ ಎಂದು ಅವರು ಪ್ರಶ್ನಿಸಿದ್ದಾರೆ.&lt;img&gt;&lt;p&gt;ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ಅಭಿನಯಿಸಿರುವಂತಹ ಕೆಡಿ ಸಿನಿಮಾದ ಸೆರಗ ಸರ್ಸೆ ಹಾಡು ಯಾವ ಪರಿಯಲ್ಲಿ ಸದ್ದು ಮಾಡಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಇದರಲ್ಲಿನ ಅಶ್ಲೀಲ ಸಾಹಿತ್ಯದ ವಿರುದ್ಧ ಸಿಕ್ಕಾಪಟ್ಟೆ ಸೋಷಿಯಲ್&zwnj; ಮೀಡಿಯಾದಲ್ಲಿ ಗದ್ದಲವಾಗುತ್ತಲೇ, ಇದರ ಬಗ್ಗೆ ದೂರು ಕೂಡ ದಾಖಲಾಗಿತ್ತು. ಆ ಹಾಡನ್ನು ತೆಗೆದು ಈಗ ಸಿನಿಮಾ ರಿಲೀಸ್&zwnj; ಮಾಡಲಾಗಿದೆ.&lt;/p&gt;&lt;img&gt;&lt;p&gt;ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಲಾಗಿತ್ತು. ಅದರಲ್ಲಿ ಸುದೀಪ್&zwnj; ಕೂಡ ಹಾಜರಿದ್ದರು. ಈ ಸಂದರ್ಭದಲ್ಲಿ ಅವರು ಸೆರಗ ಸರ್ಸೆ ಕುರಿತು ಕೇಳಿದ &zwnj;ಪ್ರಶ್ನೆಯೊಂದಕ್ಕೆ ತಮ್ಮದೇ ಆದ ಶೈಲಿಯಲ್ಲಿ ಉತ್ತರಿಸಿದರು,&lt;/p&gt;&lt;img&gt;&lt;p&gt;ಈ ಹಾಡಿನಲ್ಲಿ ತಪ್ಪಿದೆ ಎಂದು ನಾನು ಹೇಳುವುದಿಲ್ಲ. ಕೆಲವು ಟೈಂ ಕೆಲವು ವರ್ಕ್ ಆಗಲ್ವಲ್ಲಾ, ಈಗಲೂ ಹಾಗೆಯೇ ಆಗಿದೆ ಅಷ್ಟೇ. ಗಲ್ಲ, ಒಪಿನಿಯನ್ಸ್ ಬೇಗ ಎಲ್ಲಾ ಕಡೆ ರೀಚ್ ಆಗುತ್ತೆ. ಏನೋ ಆಗಿರುತ್ತೆ, ಅದಕ್ಕಾಗಿ ಹೀಗಾಗಿದೆ ಎಂದಿದ್ದಾರೆ, ಈ ಮೂಲಕ ಈ ಹಿಂದೆಯೂ ಅಶ್ಲೀಲ ಎನ್ನುವಂಥ ಸಾಹಿತ್ಯದ ಹಲವು ಹಾಡುಗಳು ಬಂದಿರುವ ಬಗ್ಗೆ ಪರೋಕ್ಷವಾಗಿ ನಟ ನುಡಿದಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಸೆರಗ ಸರ್ಸೆ ವಿವಾದ ಆಗಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುದೀಪ್&zwnj;, ಇದರಿಂದ ಬೇಸರವಾಯ್ತು. ಏಕೆಂದರೆ, ಪ್ರೇಮ್&zwnj; ಅವರು, ತಾಯಿ ಬಗ್ಗೆ, ಎಮೋಷನ್ ಬಗ್ಗೆ ಎಷ್ಟೊಂದು ಸಾಂಗ್&zwnj; ಬರೆದಿದ್ದಾರೆ. ಎಷ್ಟೋ ಮಂದಿ ಈ ಹಾಡುಗಳನ್ನು ಹಾಕ್ಕೊಂಡು ಹಾಕ್ಕೊಂಡು ಕೇಳಿ ಕೇಳಿ, ಮನೆಗಳಲ್ಲಿ ನಮ್ಮ ತಂದೆ ತಾಯಂದಿರಿಂದ ದೂರ ಆದವರು ಎಲ್ಲರೂ ಹೋಗಿ ಹತ್ತಿರ ಆಗಿದ್ದಾರೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಆದರೆ ಈಗ ಈ ಒಂದು ಹಾಡಿನಿಂದ ಈ ರೀತಿ ಮಾತನಾಡುವುದು ಸರಿಯಲ್ಲ. ಒಬ್ಬರನ್ನು ತುಂಬಾ ಸಣ್ಣ ಎನ್ನುವಂತೆ ಫೀಲ್ ಮಾಡಿಸೋದು, ಏನೋ ಒಂದು ದೊಡ್ಡ ತಪ್ಪು ಮಾಡಿಬಿಟ್ರು ಅನ್ನೋದು ಸರಿಯಲ್ಲ ಎಂದಿದ್ದಾರೆ ಸುದೀಪ್&zwnj;.&lt;/p&gt;&lt;img&gt;&lt;p&gt;ನಾವು ನಮ್ಮ ಜನರ ಬಗ್ಗೆಯೇ ಇಷ್ಟು ಹಾರ್ಶ್ ಆಗೋದು ಯಾಕೆ? ಕನ್ನಡದ ಒಬ್ಬ ನಿರ್ದೇಶಕರು, ಕನ್ನಡದ ಒಬ್ಬ ಸಾಹಿತಿ, ನಾವು ನಮ್ಮ ಜನರ ಬಗ್ಗೆಯೇ ಇಷ್ಟು ಹಾರ್ಶ್ ಆಗಬೇಕಾ ಎಂದು ಸುದೀಪ್&zwnj; ಪ್ರಶ್ನಿಸಿದ್ದಾರೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/kichcha-sudeep-about-kd-filsm-seraga-sarse-song-and-says-dont-make-too-much-hate-suc-lssaqvw"/>
        </item>
        <item>
            <title><![CDATA[ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ]]></title>
            <link>https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3</link>
            <guid isPermaLink="true">https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3</guid>
            <pubDate>Tue, 28 Apr 2026 19:55:13 +0530</pubDate>
            <description><![CDATA['ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ತಮ್ಮ ಮಧುಚಂದ್ರಕ್ಕಾಗಿ ಆಫ್ರಿಕಾದ ತಾಂಜೇನಿಯಾ ಬಳಿಯಿರುವ ವಿಶೇಷ ಮ್ನೆಂಬಾ ದ್ವೀಪಕ್ಕೆ ತೆರಳಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa7hm8459p6fcjanmcgn5vj,imgname-sanjana-burli-04-1777386180868.jpg" type="image/jpeg" height="390" width="690"/>
            <content:encoded><![CDATA['ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಈ ಜೋಡಿ ತಮ್ಮ ಮಧುಚಂದ್ರಕ್ಕಾಗಿ ಆಫ್ರಿಕಾದ ತಾಂಜೇನಿಯಾ ಬಳಿಯಿರುವ ವಿಶೇಷ ಮ್ನೆಂಬಾ ದ್ವೀಪಕ್ಕೆ ತೆರಳಿದ್ದು, ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.&lt;img&gt;&lt;p&gt;ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್&zwnj; ಮಾಡುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗಿದ್ದಾರೆ. ಮದುವೆಗಾಗಿ ಸೀರಿಯಲ್​ನಿಂದ ಹೊರಕ್ಕೆ ಬಂದಿರೋ ನಟಿ ಇದೀಗ ಹನಿಮೂನ್&zwnj;ಗೆ ಹೋಗಿದ್ದಾರೆ.&lt;/p&gt;&lt;img&gt;&lt;p&gt;ಏಷ್ಯಾನೆಟ್&zwnj; ಸುವರ್ಣ ಜೊತೆಗಿನ ಸಂದರ್ಶನದ ವೇಳೆ ಹನಿಮೂನ್&zwnj; ಸ್ಥಳದ ಬಗ್ಗೆ ಪತಿ ಕೇಳಲು ಹೋದಾಗ, ಅಡ್ಡ ತಡೆದಿದ್ದ ಸಂಜನಾ, ಈಗಲೇ ರಿವೀಲ್&zwnj; ಮಾಡಬೇಡಿ ಎಂದಿದ್ದರು. ಅಲ್ಲಿಗೆ ತಾವು ಎಲ್ಲಿಗೆ ಹೋಗುತ್ತೇವೆ ಎಂದು ಅವರು ಗುಟ್ಟಾಗಿ ಇಟ್ಟಿದ್ದರು. ಇದರಿಂದ ಅದೊಂದು ವಿಶೇಷ ಸ್ಥಳ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದು, ಅದೀಗ ನಿಜವಾಗಿದೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ಜೋಡಿ ಹನಿಮೂನ್&zwnj;ಗೆ ಹೋಗಿರುವುದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ದ್ವೀಪಕ್ಕೆ. (Tanzania Mnemba) ಅದರ ಫೋಟೋಗಳನ್ನು ನಟಿ ಶೇರ್&zwnj; ಮಾಡಿಕೊಂಡಿದ್ದಾರೆ. ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀರು ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ ಈ ದ್ವೀಪ.&lt;/p&gt;&lt;img&gt;&lt;p&gt;ಈ ದ್ವೀಪದ ವಿಶೇಷತೆ ಏನೆಂದ್ರೆ, ಇಲ್ಲಿ ಇದು ಸಂರಕ್ಷಿತ ಪ್ರದೇಶವಾಗಿದ್ದು, ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್&zwnj;ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದು ಎಂದು ಇದನ್ನು ಬಣ್ಣಿಸಲಾಗಿದೆ. ಇಲ್ಲಿಯ ವಾಸ ಸಕತ್&zwnj; ದುಬಾರಿ ಎನ್ನಲಾಗಿದೆ.&lt;/p&gt;&lt;img&gt;&lt;p&gt;ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್&zwnj;ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/relationship/puttakkana-makkalu-sneha-sanjana-burli-honeymoon-in-anzania-mnemba-suc-gwtifw3"/>
        </item>
        <item>
            <title><![CDATA[Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ]]></title>
            <link>https://kannada.asianetnews.com/gallery/tv-talk/bigg-boss-rajath-apologises-after-stunt-being-trolled-heavily-suc-p7z2r5i</link>
            <guid isPermaLink="true">https://kannada.asianetnews.com/gallery/tv-talk/bigg-boss-rajath-apologises-after-stunt-being-trolled-heavily-suc-p7z2r5i</guid>
            <pubDate>Tue, 28 Apr 2026 22:10:46 +0530</pubDate>
            <description><![CDATA[ಬಿಗ್ಬಾಸ್ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqaf4zz04c6sx2dtv08djrx6,imgname-bigg-boss-rajath-1777394155485.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಿಗ್​ಬಾಸ್​ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. &amp;nbsp;ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.&lt;/p&gt;&lt;img&gt;&lt;p&gt;ಕೆಲವರಿಗೆ ಬಹುಶಃ ಹೇಗಾದರೂ ಮಾಡಿ ಸುದ್ದಿಯಲ್ಲಿ ಇರುವ ಆಸೆ. ಅದಕ್ಕೆ ಅವರಿಗೆ ಸಿಗುವುದು ಕಾಂಟ್ರವರ್ಸಿಗಳೇ. ಏಕೆಂದರೆ ಜನರಿಗೂ ಒಳ್ಳೆಯ ಮಾರ್ಗದಲ್ಲಿ ಹೋದರೆ, ಅವರ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ, ಆದ್ರೆ ಕಾಂಟ್ರವರ್ಸಿ ಮಾಡಿಕೊಂಡರೆ ಸಾಕು, ಒಳ್ಳೊಳ್ಳೆ ಆಫರ್​ಗಳು ಬರುತ್ತವೆ, ಜೊತೆಗೆ ಇಂಥ ಕಾಂಟ್ರವರ್ಸಿಗಳಿಗಾಗಿಯೇ ಬಾಗಿಲು ತೆರೆಯುವ ದೊಡ್ಡ ದೊಡ್ಡ ರಿಯಾಲಿಟಿ ಷೋಗಳು ಕೈಬೀಸಿ ಕರೆಯುತ್ತವೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಜೊತೆಗೆ ಜಾಹೀರಾತು ಕಂಪೆನಿಗಳು ಕೂಡ ಯಾರು ಹಾಳಾದ್ರೆ ಏನಂತೆ, ಕಾಂಟ್ರವರ್ಸಿಯಾದರೆ ಅದನ್ನು ಹೆಚ್ಚೆಚ್ಚು ಜನ ನೋಡಿ ತಮ್ಮ ಪ್ರಾಡಕ್ಟ್​​ ಹೆಚ್ಚು ಪ್ರಚಾರ ಆಗುತ್ತದೆ ಎನ್ನುವುದು ಅವರಿಗೂ ಗೊತ್ತಿದೆ.&lt;/p&gt;&lt;img&gt;&lt;p&gt;ಇದೀಗ ಬಿಗ್​ಬಾಸ್​ ರಿಯಾಲಿಟಿ ಷೋಗೆ ಹೋಗಿ ಬಂದ ಮೇಲೆ ಸದಾ ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಂತೆ ಕಾಣುತ್ತಿದ್ದಾರೆ ರಜತ್​. ಈ ಹಿಂದೆ ಬಾಯ್ಸ್ ವರ್ಸಸ್ ಗರ್ಲ್ಸ್&rsquo; ಶೋ ಶೂಟಿಂಗ್ ಮಧ್ಯೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ವಿರುದ್ಧ ಕೇಸ್&zwnj; ದಾಖಲಾಗಿತ್ತು. ಇವರನ್ನು ಜೈಲಿಗೂ ಕಳುಹಿಸಲಾಗಿತ್ತು.&lt;/p&gt;&lt;img&gt;&lt;p&gt;ಇದಾದ ಬಳಿಕ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿಸಿ ರಜತ್ ಸಂಕಷ್ಟಕ್ಕೆ ಸಿಲುಕಿದ್ದರು. ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಾ ವಿಲನ್ ಲುಕ್&zwnj;ನಲ್ಲಿ ಪೋಸ್ ಕೊಟ್ಟಿರುವ ರ ಈ ಚಿತ್ರಗಳನ್ನು ಅವರು ತಮ್ಮ ಅಧಿಕೃತ ಇನ್&zwnj;ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.&lt;/p&gt;&lt;img&gt;&lt;p&gt;ಇದೀಗ ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಮಾದರಿಯ ಭೀಕರ ಸ್ಫೋಟ ನಡೆಸಿ ಅದನ್ನು ವೀಡಿಯೊ ಚಿತ್ರೀಕರಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಭಾರಿ ಟ್ರೋಲ್​ ಆಗುತ್ತಲೇ ಲೈವ್​ನಲ್ಲಿ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ ರಜತ್​. ಇದು ಯಾರಿಗೂ ನೋವು ಮಾಡುವ ವಿಡಿಯೋ ಅಲ್ಲ. ಹಾಗೆಯೇ ಮಿಡಿಯಾದವರು ಕಾಲ್ ಮಾಡುವವರೆಗೂ ಈ ವಿಡಿಯೋ ಇಷ್ಟು ಸುದ್ದಿ ಆಗಿದೆ ಅನ್ನೋದೇ ಗೊತ್ತಿಲ್ಲ ಎಂದು ರಜತ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಇದೊಂದು ಪ್ರಮೋಷನ್ ವಿಡಿಯೋ ಅಷ್ಟೇ. ನನಗೆ ಯಾವ ರೀತಿ ಆಕ್ಟ್ ಮಾಡಬೇಕು ಎಂದು ಹೇಳಿದ್ರೋ ಆ ರೀತಿ ಆಕ್ಟ್ ಮಾಡಿದ್ದೀನಿ. ಹಾಗೆಯೇ ಮುಖ್ಯವಾಗಿ ಸೇಫ್ಟಿ ಪ್ರಿಕಾಷನ್ ತಗೊಂಡು ವಿಡಿಯೋ ಮಾಡಲಾಗಿದೆ. ಅಷ್ಟೇ ಅಲ್ಲದೆ ಜನ ಇಲ್ಲದಾಗ ಸ್ಥಳೀಯರ ಅನುಮತಿ ಪಡೆದು ವಿಡಿಯೋ ಮಾಡಲಾಗಿದೆ. ಆದರೆ ಇಷ್ಟೆಲ್ಲಾ ಕಾಂಟ್ರವರ್ಸಿ ಆಗುತ್ತದೆ, ಜನರಿಗೆ ಇದರಿಂದ ಹರ್ಟ್​ ಆಗುತ್ತದೆ ಎನ್ನುವುದು ಗೊತ್ತೇ ಆಗಲಿಲ್ಲ ಎಂದು ರಜತ್ ಸ್ಪಷ್ಟನೆ&zwnj; ನೀಡಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಈ ವಿಡಿಯೋದಲ್ಲಿ, ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್&zwnj;ನ ರಜತ್ ಶೇರ್&zwnj; ಮಾಡಿಕೊಂಡಿದ್ದರು. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ&rsquo;&rsquo; ಎಂದು ರಜತ್ ಬರೆದುಕೊಂಡಿದ್ದಾರೆ. &lsquo;&rsquo;ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ ಹೆಲ್ಮೆಟ್ ಧರಿಸಿಲ್ಲ. ಇದು ಅಸುರಕ್ಷಿತ. ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ&rsquo;&rsquo; ಎಂಬ ಡಿಸ್&zwnj;ಕ್ಲೈಮರ್&zwnj;ನ ತಮ್ಮ ರೀಲ್ಸ್&zwnj; ಜೊತೆಗೆ ಹಾಕಿದ್ದರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/bigg-boss-rajath-apologises-after-stunt-being-trolled-heavily-suc-p7z2r5i"/>
        </item>
        <item>
            <title><![CDATA['ಲೋ ಅರ್ಜುನ, ನಿಂಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು?' Karna Serial ಫ್ಯಾನ್ಸ್​ ಆಕ್ರೋಶ]]></title>
            <link>https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af</link>
            <guid isPermaLink="true">https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af</guid>
            <pubDate>Tue, 28 Apr 2026 22:40:02 +0530</pubDate>
            <description><![CDATA[ಕರ್ಣ ಸೀರಿಯಲ್‌ನಲ್ಲಿ, ಅಕ್ಕ ನಿತ್ಯಾಳ ಪ್ರೀತಿಗಾಗಿ ತಂಗಿ ನಿಧಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರ್ಜುನ್‌ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ, ಹಾರ್ಟ್ ಸರ್ಜನ್ ಆಗಿರುವ ಅರ್ಜುನ್‌ಗೆ ನಿಧಿಯ ಮನಸ್ಸಿನ ದುಃಖ ಅರ್ಥವಾಗದಿರುವುದು ನೆಟ್ಟಿಗರ ಟ್ರೋಲ್‌ಗೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqagyfph859wkwb136z3hz2k,imgname-karna-serial-1777396039377.jpg" type="image/jpeg" height="390" width="690"/>
            <content:encoded><![CDATA[ಕರ್ಣ ಸೀರಿಯಲ್&zwnj;ನಲ್ಲಿ, ಅಕ್ಕ ನಿತ್ಯಾಳ ಪ್ರೀತಿಗಾಗಿ ತಂಗಿ ನಿಧಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ಅರ್ಜುನ್&zwnj;ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಆದರೆ, ಹಾರ್ಟ್ ಸರ್ಜನ್ ಆಗಿರುವ ಅರ್ಜುನ್&zwnj;ಗೆ ನಿಧಿಯ ಮನಸ್ಸಿನ ದುಃಖ ಅರ್ಥವಾಗದಿರುವುದು ನೆಟ್ಟಿಗರ ಟ್ರೋಲ್&zwnj;ಗೆ ಕಾರಣವಾಗಿದೆ.&lt;img&gt;&lt;p&gt;ಕರ್ಣ ಸೀರಿಯಲ್​​ನಲ್ಲಿ ಸದ್ಯ ನಿತ್ಯಾ ಮತ್ತು ನಿಧಿಯ ನಡುವಿನ ತೊಳಲಾಟದಲ್ಲಿ ನಿತ್ಯಾ ಗೆಲುವು ಸಾಧಿಸಿದ್ದಾಳೆ. ಕರ್ಣನ ಮೇಲೆ ತನಗೆ ಲವ್​ ಆಗಿರುವ ವಿಷಯವನ್ನು ಅವಳು ತಂಗಿ ನಿಧಿ ಎದುರಿಗೆ ಹೇಳಿಕೊಂಡು ಬಿಟ್ಟಿದ್ದಾಳೆ.&lt;/p&gt;&lt;img&gt;&lt;p&gt;ತನ್ನ ಅಕ್ಕನಿಗೆ ತನ್ನ ಲವ್​ ವಿಷ್ಯ ಹೇಳೋಣ ಎಂದುಕೊಂಡು ಕಾತರದಿಂದ ನಿಧಿ ಕಾಯುತ್ತಿದ್ದಳು. ಆದರೆ ಅದಕ್ಕೂ ಮುಂಚೆ ನಿತ್ಯಾ ತನಗೆ ಕರ್ಣನ ಮೇಲೆ ಲವ್​ ಆಗಿರೋ ವಿಷ್ಯ ತಿಳಿಸಿಬಿಟ್ಟಿದ್ದರಿಂದ ನಿಧಿ ಅಕ್ಕನಿಗಾಗಿ ತ್ಯಾಗ ಮಾಡಲು ಸಿದ್ಧ ಆಗಿದ್ದಾಳೆ.&lt;/p&gt;&lt;img&gt;&lt;p&gt;ನಿಧಿ ಮತ್ತು ಅರ್ಜುನ್​ ಮದುವೆ ಮಾತುಕತೆ ನಡೆಯುತ್ತಿರುವ ಕಾರಣ, ಅವನನ್ನು ಮದುವೆಯಾಗಲು ತಾನು ಸಿದ್ಧ ಎಂದು ನಿಧಿ ಹೇಳಿಬಿಟ್ಟಿದ್ದಾಳೆ. ಇದನ್ನು ಕೇಳಿ ಕರ್ಣನಿಗೆ ಶಾಕ್ ಆಗಿದೆ.&lt;/p&gt;&lt;img&gt;&lt;p&gt;ನಿತ್ಯಾ ಅಳುತ್ತಾ ಈ ವಿಷಯವನ್ನು ಹೇಳಿದರೂ, ಅದು ಅರ್ಜುನ್​ಗೆ ಗೊತ್ತೇ ಆಗಲಿಲ್ಲ. ನಿಧಿ ಮದುವೆಗೆ ಒಪ್ಪಿದ್ದು ನೋಡಿ ಖುಷಿಯಿಂದ ಕುಣಿದಾಡಿದ್ದಾನೆ.&lt;/p&gt;&lt;img&gt;&lt;p&gt;ಹೇಳಿ ಕೇಳಿ ಅವನು ಹಾರ್ಟ್​ ಸರ್ಜನ್​. ನಿಧಿ ಅಳುತ್ತಾ ಇರುವುದನ್ನು ನೋಡದಿದ್ದರೂ ಅವಳ ಮುಖ ನೋಡಿಯಾದರೂ ಅವನಿಗೆ ಅವಳಿಗೆ ಈ ಮದುವೆ ಇಷ್ಟ ಇಲ್ಲ ಎನ್ನುವುದು ತಿಳಿಯಬೇಕಿತ್ತು. ಆದರೆ ನಿಧಿ ಅಳುತ್ತಾ ಇದ್ದರೂ ಅವನಿಗೆ ಗೊತ್ತೇ ಆಗಲಿಲ್ಲ.&lt;/p&gt;&lt;img&gt;&lt;p&gt;ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಅರ್ಜುನ್​ಗೆ ಹಾರ್ಟ್​ ಸರ್ಜನ್​ ಸರ್ಟಿಫಿಕೇಟ್​ ಕೊಟ್ಟವರು ಯಾರು, ಅವರನ್ನು ಎಳೆದುಕೊಂಡು ಬನ್ನಿ ಎಂದು ನೆಟ್ಟಿಗರು ತಮಾಷೆಯ ಕಮೆಂಟ್ಸ್​ ಮಾಡುತ್ತಿದ್ದಾರೆ. ನಿಧಿಯ ಮುಖ ನೋಡಿದ್ರೂ ಅವಳ ಹೃದಯದಲ್ಲಿ ತಾನಿಲ್ಲ ಎನ್ನುವುದು ಅವನಿಗೆ ಗೊತ್ತಾಗಲಿಲ್ಲ ಎಂದ ಮೇಲೆ ಅವನನ್ನು ಹಾರ್ಟ್​ ಸರ್ಜನ್​ ಎಂದು ರೋಲ್ ಕೊಡುವ ಅಗತ್ಯ ಏನಿತ್ತು ಎಂದೂ ಪ್ರಶ್ನಿಸುತ್ತಿದ್ದಾರೆ ನೆಟ್ಟಿಗರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-arjun-who-is-heart-surgeon-not-knowing-nidhis-heart-trolled-suc-xi648af"/>
        </item>
        <item>
            <title><![CDATA[Mangaluru: ಯೆನೆಪೋಯ ಆಸ್ಪತ್ರೆಯಲ್ಲಿ ಐತಿಹಾಸಿಕ ಶಸ್ತ್ರಚಿಕಿತ್ಸೆ; ಇದು ದೇಶದಲ್ಲಿಯೇ ಮೊದಲು]]></title>
            <link>https://kannada.asianetnews.com/karnataka-districts/a-rare-surgery-that-lasted-13-hours-at-yenepoya-medical-college-hospital-deralakatte-mangaluru-mrq/articleshow-3r3l1pr</link>
            <guid isPermaLink="true">https://kannada.asianetnews.com/karnataka-districts/a-rare-surgery-that-lasted-13-hours-at-yenepoya-medical-college-hospital-deralakatte-mangaluru-mrq/articleshow-3r3l1pr</guid>
            <pubDate>Wed, 29 Apr 2026 10:27:10 +0530</pubDate>
            <description><![CDATA[ಕ್ಯಾನ್ಸರ್‌ನಿಂದಾಗಿ ಕಾಲು ಕಳೆದುಕೊಳ್ಳುವ ಹಂತದಲ್ಲಿದ್ದ ರೋಗಿಗೆ ಯೆನೆಪೋಯ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಭಾರತದಲ್ಲೇ ಪ್ರಥಮ ಎನ್ನಲಾದ ಈ 13 ಗಂಟೆಗಳ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ, ಕ್ಯಾನ್ಸರ್ ಪೀಡಿತ ಮೂಳೆ ಮತ್ತು ಸ್ನಾಯುಗಳನ್ನು ತೆಗೆದು, ಕಾಲನ್ನು ಪುನರ್ ನಿರ್ಮಿಸಿ ರೋಗಿ ಮತ್ತೆ ನಡೆಯುವಂತೆ ಮಾಡುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbs9mp1qzhjhv1azd2yxt4m,imgname-yenepoya-specialty-hospital-1777438347969.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಂಗಳೂರು&lt;/strong&gt;: ಕ್ಯಾನ್ಸರ್ ನಿಂದ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಗೆ ಸವಾಲಿನ ಹಾಗೂ ಅತ್ಯಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ಅಂಗವನ್ನು ಉಳಿಸಿಕೊಳ್ಳುವ ಐತಿಹಾಸಿಕ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.&lt;/p&gt;&lt;p&gt;ಈ ಶಸ್ತ್ರಚಿಕಿತ್ಸೆಯು ವೈದ್ಯಕೀಯ ಇತಿಹಾಸದಲ್ಲಿ ಭಾರತದಲ್ಲಿ ಪ್ರಪ್ರಥಮ ಬಾರಿಗೆ ನಡೆದಿದ್ದರೆ, ವಿಶ್ವ ಮಟ್ಟದಲ್ಲಿ ಮೂರನೆದಾಗಿ ದಾಖಲಾಗುವ ಮೂಲಕ ಯೆನೆಪೋಯ ಆಸ್ಪತ್ರೆ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ದೇರಳಕಟ್ಟೆ ಯೆನೆಪೋಯ ಅಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಜಲಾಲುದ್ದೀನ್ ಅಕ್ಬರ್ ಹೇಳಿದರು.&lt;/p&gt;&lt;h2&gt;&lt;strong&gt;ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಉಂಟಾದ ಕ್ಯಾನ್ಸರ್&zwnj;&lt;/strong&gt;&lt;/h2&gt;&lt;p&gt;ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಮೂಲದ ಸುಮಾರು 39 ವರ್ಷದ ರೋಗಿಯೊಬ್ಬರು ತೊಡೆಯ ಮೂಳೆ ಮತ್ತು ಸ್ನಾಯುಗಳಲ್ಲಿ ಉಂಟಾದ ಕ್ಯಾನ್ಸರ್&zwnj;ನಿಂದ ಬಳಲುತ್ತಿದ್ದರು. ವಿವಿಧ ಹೆಸರಾಂತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರ ಬಲ ಕಾಲನ್ನು ಸಂಪೂರ್ಣವಾಗಿ ತುಂಡರಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಹಿನ್ನೆಲೆ ಯೆನೆಪೋಯ ಆಸ್ಪತ್ರೆಗೆ ಬಂದ ರೋಗಿಗೆ, ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಾಜಿಯ ತಜ್ಞ ವೈದ್ಯರ ತಂಡವು ಹೊಸ ಪರಿಹಾರ ಕ್ರಮಕ್ಕೆ ಮುಂದಾಯಿತು. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಜಲಾಲುದ್ಧೀನ್ ಅಕ್ಬರ್ ಅವರ ನೇತೃತ್ವದ ತಂಡ ಸವಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಯಿತು.&lt;/p&gt;&lt;h3&gt;&lt;strong&gt;13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ&lt;/strong&gt;;&lt;/h3&gt;&lt;p&gt;ಮಾ. 10ರಂದು ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಾ. ಜಲಾಲುದ್ಧೀನ್ ಅಕ್ಬರ್ ನೇತೃತ್ವದ ತಂಡದಲ್ಲಿ ಸುಮಾರು 13 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಕ್ಯಾನ್ಸರ್ ಪೀಡಿತ ತೊಡೆಯ ಮೂಳೆ ಮತ್ತು ಸ್ನಾಯುಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. ಬಳಿಕ ಟೈಟಾನಿಯಂ ಮೆಗಾಪ್ರೊಸ್ಟೆಸಿಸ್ ಮೂಲಕ ಮೂಳೆಯನ್ನು ಪುನರ್ ನಿರ್ಮಿಸಲಾಗಿದ್ದು, ಮೈಕ್ರೋನ್ಯೂರೋವಾಸ್ಕ್ಯುಲರ್ ತಂತ್ರಜ್ಞಾನ ಬಳಸಿ ಎದೆಗೋಡೆಯ ಸ್ನಾಯುಗಳನ್ನು ವರ್ಗಾಯಿಸಿ ಅಂಗದ ಕಾರ್ಯಕ್ಷಮತೆಯನ್ನು ಪುನಃ ಸ್ಥಾಪಿಸಲಾಯಿತು. ಶಸ್ತ್ರಚಿಕಿತ್ಸೆ ನಂತರ ರೋಗಿ ಮತ್ತೆ ನಡೆಯಲು ಸಾಧ್ಯವಾಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ. ವೈದ್ಯರಾದ ಡಾ. ರೋಹನ್ ಶೆಟ್ಟಿ, ಡಾ.ಎಚ್.ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್, ಡಾ. ದೇವಿಪ್ರಸಾದ್, ಡಾ.ಚಾಂದಿನಿ, ಡಾ.ಶೃತಿ, ಡಾ. ತೇಜೇಶ್ ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಡಾ. ಪ್ರೀತಿ ಹಾಗೂ ಡಾ. ಮಹಮ್ಮದ್ ಚೌಧರಿ ಸೇರಿದಂತೆ ಹಲವರು ಈ ಶಸ್ತ್ರ ಚಿಕಿತ್ಸೆಯಲ್ಲಿ ಭಾಗವಹಿಸಿದ್ದರು.&lt;/p&gt;&lt;p&gt;ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ಸಹ ಕುಲಾಧಿಪತಿಗಳಾದ ಫರ್ಹಾದ್ ಯೆನೆಪೋಯ, ಡಾ.ಎಂ. ವಿಜಯ ಕುಮಾರ್ ಹಾಗೂ ಉಪಕುಲಪತಿ ಡಾ. ಗಂಗಾಧರ ಸೋಮಯಾಜಿ ಅವರು ವೈದ್ಯರ ತಂಡದ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಯೆನೆಪೋಯ ವಿವಿ ಸಹಕುಲಾಧಿಪತಿ ಡಾ. ಎಂ. ವಿಜಯ ಕುಮಾರ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್, ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜಲಾಲುದ್ದೀನ್ ಅಕ್ಬರ್, ಸಹ ಪ್ರಾಧ್ಯಾಪಕರಾದ ಡಾ. ರೋಹನ್&zwnj;ಶೆಟ್ಟಿ, ಡಾ. ಎಚ್.ಟಿ. ಅಮರ್ ರಾವ್, ಡಾ. ನೂರ್&zwnj; ಮೊಹಮ್ಮದ್, ವೈದ್ಯಕೀಯ ಕ್ಯಾನ್ಸರ್ ತಜ್ಞರಾದ ಡಾ. ತೇಜೇಶ್&zwnj; ಕೃಷ್ಣ, ಡಾ. ಲಕ್ಷ್ಮಿ ಶೆಣೈ, ಇಂಟರ್ ವೆನ್ನನಲ್ ರೇಡಿಯೋಲಾಜಿಸ್ಟ್ ಡಾ.ಟಿ.ವಿ. ಸತೀಶ್ ಬಾಬು, ಆರ್ಥೋಪೆಡಿಕ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ. ಅಭಿಷೇಕ್ ಶೆಟ್ಟಿ, ಡಾ. ಲೋಕೇಶ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ&lt;/p&gt;&lt;p&gt;ಡಾ. ದೇವಿಪ್ರಸಾದ್, ಡಾ. ಚಾಂದಿನಿ,ಡಾ. ಶೃತಿ, ಕ್ಯಾನ್ಸರ್ ಅರಿವಳಿಕೆ ತಜ್ಞೆ ಡಾ. ಪ್ರೀತಿ ಹಾಗೂ ಆಕ್ಯುಪೇಶನಲ್ ಥೆರಪಿಸ್ಟ್ ಡಾ. ಮಹಮ್ಮದ್ ಚೌಧರಿ ಸುದ್ದಿಗೋಷ್ಠಿಯಲ್ಲಿದ್ದರು&zwnj;.&lt;/p&gt;&lt;p&gt;&lt;strong&gt;ಸಹಕುಲಾಧಿಪತಿ ಡಾ.ಎಂ. ವಿಜಯ್ ಕುಮಾರ್&lt;/strong&gt;&lt;/p&gt;&lt;p&gt;ಕಾಲು ತುಂಡರಿಸಿ ತೆಗೆಯುವುದು ಬಹಳ ಸುಲಭ. ಆದರೆ ರೋಗಿಯ ಕಾಲನ್ನು ಉಳಿಸುವುದು ನಮ್ಮ ಬಳಿ ಇದ್ದ ದೊಡ್ಡ ಸವಾಲಿನ ಕೆಲಸವಾಗಿತ್ತು. ರೋಗಿಯ ಕಾಲನ್ನು ತೆಗೆಯದೆ ಅದರಲ್ಲಿನ ಕ್ಯಾನ್ಸರ್&zwnj;ನ್ನು ತೆಗೆದಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಈ ಸಾಧನೆಗೆ ಕೈಜೋಡಿಸಿದ ನಮ್ಮ ತಂಡದ ಎಲ್ಲ ಸದಸ್ಯರಿಗೂ ಹೃತ್ಪೂರ್ವಕ ಅಭಿನಂದನೆಗಳು. ಈ ಶಸ್ತ್ರಚಿಕಿತ್ಸೆ ಬಹಳ ಸಂಕೀರ್ಣ ಮತ್ತು ಸವಾಲಿನದ್ದಾಗಿದೆ. ಇದು ನಮ್ಮ ದೇಶದಲ್ಲೇ ಮೊದಲ ಸಾಧನೆ ಎಂದು ಹೇಳಬಹುದು ಎಂದು ಯೆನೆಪೋಯ ಪರಿಗಣಿತ ವಿವಿಯ ಸಹಕುಲಾಧಿಪತಿ ಡಾ.ಎಂ. ವಿಜಯ್ ಕುಮಾರ್ ಹೇಳುತ್ತಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/a-rare-surgery-that-lasted-13-hours-at-yenepoya-medical-college-hospital-deralakatte-mangaluru-mrq/articleshow-3r3l1pr"/>
        </item>
        <item>
            <title><![CDATA[10ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನು ಪ್ರಭಾಕರ್-ರಘು ಮುಖರ್ಜಿ]]></title>
            <link>https://kannada.asianetnews.com/gallery/sandalwood/anu-prabhakar-and-raghu-mukherjee-celebrates-10th-wedding-anniversary-qyhl7yr</link>
            <guid isPermaLink="true">https://kannada.asianetnews.com/gallery/sandalwood/anu-prabhakar-and-raghu-mukherjee-celebrates-10th-wedding-anniversary-qyhl7yr</guid>
            <pubDate>Tue, 28 Apr 2026 23:15:02 +0530</pubDate>
            <description><![CDATA[Anu-Raghu Anniversary: ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಾದ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ತಮ್ಮ 10 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಕುಟುಂಬದ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqak0mjv9x9xm66gjtt5xrn4,imgname-anu-prabhakar--3--1777398207067.jpg" type="image/jpeg" height="390" width="690"/>
            <content:encoded><![CDATA[&lt;p&gt;Anu-Raghu Anniversary: ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿಗಳಾದ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ತಮ್ಮ 10 ವರ್ಷದ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಕುಟುಂಬದ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಕನ್ನಡ ಚಿತ್ರರಂಗದ ತಾರಾ ಜೋಡಿಗಳಾದ ರಘು ಮುಖರ್ಜಿ ಮತ್ತು ಅನು ಪ್ರಭಾಕರ್ ಜೋಡಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ತಮ್ಮ ಮಗಳು, ಪೋಷಕರು ಹಾಗೂ ಸ್ನೇಹಿತರ ಜೊತೆ ಸಿಂಪಲ್ ಆಗಿ ಸಂಭ್ರಮಿಸಿದ್ದಾರೆ.&lt;/p&gt;&lt;img&gt;&lt;p&gt;ಅನು ಪ್ರಭಾಕಾರ್ ಹಾಗೂ ರಘು ಮುಖರ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 10 ವರ್ಷಗಳು ಕಳೆದಿವೆ. ಏಪ್ರಿಲ್ 25, 2016 ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ದಶಕ ತುಂಬಿದ ಸಂಭ್ರಮದಲ್ಲಿ ಕುಟುಂಬದ ಜೊತೆ ಆನಿವರ್ಸರಿ ಆಚರಿಸ್ಸಿದ್ದಾರೆ.&lt;/p&gt;&lt;img&gt;&lt;p&gt;ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಹತ್ತು ವರ್ಷಗಳ ಹಿಂದೆ ಈ ಜೋಡಿ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆತ್ಮೀಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರ ಅಮ್ಮನವರು ಹಾಗೂ ಸ್ನೇಹಿತರ ಜೊತೆ ಆನಿವರ್ಸರಿ ಸಂಭ್ರಮಿಸಿದ್ದಾರೆ.&lt;/p&gt;&lt;img&gt;&lt;p&gt;ರಘು ಮತ್ತು ಅನು ಪ್ರಭಾಕರ್ ಇಬ್ಬರೂ ವಿಚ್ಚೇದನ ಪಡೆದವರಾಗಿರುವುದರಿಂದ, ಇಬ್ಬರು ಇಷ್ಟಪಟ್ಟು ಲವ್ ಮಾಡಿ ಮದುವೆಯಾದದ್ದು ಅಲ್ಲವಂತೆ, ಸ್ನೇಹಿತರಾಗಿದ್ದಾಗ, ಇಬ್ಬರ ಮನೆಯವರು ಒಂದಾಗಿ ನಿರ್ಧರಿಸಿದಂತಹ ನಿರ್ಧಾರ ಇದಾಗಿದೆ ಎಂದು ಹಿಂದೊಮ್ಮೆ ಅನು ಪ್ರಭಾಕರ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.&lt;/p&gt;&lt;img&gt;&lt;p&gt;'ಸೂಪರ್' ಕಾರ್ಯಕ್ರಮದಲ್ಲಿ ರಘು ಜೊತೆಗೆ ಅನು ಕೂಡ ಜಡ್ಜ್ ಆಗಿದ್ದರು. ಅದಾದ್ಮೇಲೆ ಫ್ರೆಂಡ್ಸ್ ಆಗಿದ್ದರು, ಬಳಿಕ ಕಷ್ಟದಲ್ಲಿ ಇರುವಾಗ ಸ್ನೇಹ ಗಟ್ಟಿ ಆಯ್ತು. ಮದುವೆ ಆಗುವ ಯೋಚನೆ ಖಂಡಿತವಾಗಿಯೂ ಅನುಗೆ ಇರಲಿಲ್ಲ. ವಿದ್ಯಾಭ್ಯಾಸ, ಸಿನಿಮಾ ಅಂತ ಅನು ಇದ್ರೆ, ಕುಟುಂಬದವರೇ ಮುಂದೆ ಬಂದು ಮಾತುಕತೆ ನಡೆಸಿದರಂತೆ, ತುಂಬಾ ಟೈಮ್ ತೆಗೆದುಕೊಂಡು ಇಬ್ಬರೂ ಮದುವೆಗೆ ಒಪ್ಪಿಕೊಂಡರಂತೆ. .&lt;/p&gt;&lt;img&gt;&lt;p&gt;ಇನ್ನು ರಘು ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ತುಂಬಾನೆ ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಅನು ಪ್ರಭಾಕರ್ ಹೇಳಿದ್ದಾರೆ. ಇನ್ನು ಅನು ಇತ್ತೀಚೆಗೆ ಜೀ ಕನ್ನಡದ &lsquo;ಕೃಷ್ಣ ರುಕ್ಕು&rsquo; ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದರು. ಇನ್ನು ಗಂಡ ಹೆಂಡತಿ ಜೋಡಿಯಾಗಿ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.&lt;/p&gt;]]></content:encoded>
            <category><![CDATA[sandalwood]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/sandalwood/anu-prabhakar-and-raghu-mukherjee-celebrates-10th-wedding-anniversary-qyhl7yr"/>
        </item>
        <item>
            <title><![CDATA[ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು]]></title>
            <link>https://kannada.asianetnews.com/gallery/sandalwood/kichcha-sudeep-answering-to-the-question-in-kd-movie-promotion-suc-srl5fzf</link>
            <guid isPermaLink="true">https://kannada.asianetnews.com/gallery/sandalwood/kichcha-sudeep-answering-to-the-question-in-kd-movie-promotion-suc-srl5fzf</guid>
            <pubDate>Tue, 28 Apr 2026 23:18:16 +0530</pubDate>
            <description><![CDATA[ಕೆಡಿ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ನಟ ಸುದೀಪ್ ತಮ್ಮದೇ ಶೈಲಿಯಲ್ಲಿ ಚಟಾಕಿ ಹಾರಿಸಿ ಉತ್ತರಿಸಿದ್ದಾರೆ. ಪ್ರೇಮ್ ಮತ್ತು ಧ್ರುವ ಸರ್ಜಾರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಅವರು, 'ನನ್ನನ್ನು ಮುಗಿಸಲು ಆಗಲ್ಲ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kqajw1hmzx05ftqcm72mz2hg,imgname-kichcha-sudeep-01-1777398056500.jpg" type="image/jpeg" height="390" width="690"/>
            <content:encoded><![CDATA[ಕೆಡಿ ಚಿತ್ರದ ಪ್ರಮೋಷನ್ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ನಟ ಸುದೀಪ್ ತಮ್ಮದೇ ಶೈಲಿಯಲ್ಲಿ ಚಟಾಕಿ ಹಾರಿಸಿ ಉತ್ತರಿಸಿದ್ದಾರೆ. ಪ್ರೇಮ್ ಮತ್ತು ಧ್ರುವ ಸರ್ಜಾರಲ್ಲಿ ಯಾರು ಇಷ್ಟ ಎಂಬ ಪ್ರಶ್ನೆಗೆ ಜಾಣ್ಮೆಯ ಉತ್ತರ ನೀಡಿದ ಅವರು, 'ನನ್ನನ್ನು ಮುಗಿಸಲು ಆಗಲ್ಲ' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದರು.&lt;img&gt;&lt;p&gt;KD ಚಿತ್ರ ಇದಾಗಲೇ ಸೆರಗ ಸರ್ಸೆ ಹಾಡಿನಿಂದಾಗಿ ಟ್ರೋಲ್​ ಆಗುವ ಜೊತೆಗೆ ಫೇಮಸ್​ ಕೂಡ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರ ಇದೇ 30 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಸುದೀಪ್ ಅವರು 'ಕಾಲ ಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಕೆಡಿ ಚಿತ್ರದ ಪ್ರಮೋಷನ್​ ವೇಳೆ ಸುದೀಪ್​ ಅವರಿಗೆ ಪತ್ರಕರ್ತರು ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಸುದೀಪ್​ ಎಂದಿನಂತೆ ತಮಾಷೆಯಾಗಿ ಉತ್ತರಿಸಿದರು. ಪತ್ರಕರ್ತೆ ಒಬ್ಬರು, ನಿಮಗೆ ಪ್ರೇಮ್​ ಸರ್​ ಡಾರ್ಲಿಂಗ್​ ಎನ್ನುತ್ತಾರೆ, ಧ್ರುವ ಸರ್ಜಾ ಬ್ರದರ್​ ಅಂತಾರೆ. ನಿಮಗೆ ಇವರಲ್ಲಿ ಯಾರು ಇಷ್ಟ ಎಂದು ಪ್ರಶ್ನಿಸಿದರು.&lt;/p&gt;&lt;img&gt;&lt;p&gt;ಅದಕ್ಕೆ ಸುದೀಪ್​, ನಿಮ್ಮದೊಳ್ಳೆ ಪ್ರಶ್ನೆಯಾಯಿತು. ಹೆಂಡ್ತಿ ಇಷ್ಟನೋ, ಮಗಳು ಇಷ್ಟನೋ ಒಂದನ್ನು ಆಯ್ಕೆ ಮಾಡಿ ಅಂದ್ರೆ ನಾನು ಯಾರನ್ನು ಆಯ್ಕೆ ಮಾಡಲಿ, ಮನೆಗೆ ಹೋಗಬೇಕೋ ಬೇಡ್ವೋ ಎಂದು ಪ್ರಶ್ನಿಸಿದರು.&lt;/p&gt;&lt;img&gt;&lt;p&gt;ಎಡಗೈ ಬೇಕೋ, ಬಲಗೈ ಬೇಕೋ ಒಂದನ್ನು ಆಯ್ಕೆ ಮಾಡಿ ಎಂದ ಹಾಗಾಯ್ತು ನಿಮ್ಮ ಪ್ರಶ್ನೆ. ನೆನಪಿರಲಿ. ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ ಎಂದು ಚಟಾಕಿ ಹಾರಿಸಿದರು.&lt;/p&gt;&lt;img&gt;&lt;p&gt;ಇದೇ ವೇಳೆ ಸರ್, ಒಂದೇ ಒಂದು ಲಾಸ್ಟ್ ಪ್ರಶ್ನೆ, ಮುಗಿಸಿಬಿಡ್ತೀನಿ ಎಂದಾಗ ಸುದೀಪ್​ ಅವರು, ಯಾರನ್ನು ಮುಗಿಸುತ್ತೀರಿ, ಕನಸಿನಲ್ಲೂ ಅನ್ಕೋಬೇಡಿ ನನ್ನನ್ನ ಮುಗಿಸ್ತೀನಿ ಅಂತ, ಅದೆಲ್ಲಾ ಆಗಲ್ಲ ಎಂದರು.&lt;/p&gt;&lt;img&gt;&lt;p&gt;ಇನ್ನು ಕೆಡಿ ಸಿನಿಮಾದ ಕುರಿತು ಹೇಳುವುದಾದರೆ, ಇದು ಜೋಗಿ ಪ್ರೇಮ್ ನಿರ್ದೇಶದ್ದು, ಧ್ರುವ ಸರ್ಜಾ ನಾಯಕರಾಗಿದ್ದಾರೆ. ಇದು 1970ರ ದಶಕದ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಆಧರಿಸಿದೆ. ಇದರಲ್ಲಿ ಸುದೀಪ್​ ಅವರ ಪಾತ್ರ ಕಥೆಗೆ ಪ್ರಮುಖ ತಿರುವು ನೀಡುವ ಪಾತ್ರ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/sandalwood/kichcha-sudeep-answering-to-the-question-in-kd-movie-promotion-suc-srl5fzf"/>
        </item>
        <item>
            <title><![CDATA[ಮೇ 8, 2026ರಿಂದ ಈ 3 ರಾಶಿಗಳಿಗೆ 'ಕುಬೇರ ಯೋಗ', ಶುಕ್ರದೆಸೆ ಶುರು!]]></title>
            <link>https://kannada.asianetnews.com/gallery/astrology/venus-transit-2026-effects-on-aries-taurus-libra-zodiac-signs-suh-bibkn7t</link>
            <guid isPermaLink="true">https://kannada.asianetnews.com/gallery/astrology/venus-transit-2026-effects-on-aries-taurus-libra-zodiac-signs-suh-bibkn7t</guid>
            <pubDate>Wed, 29 Apr 2026 10:16:04 +0530</pubDate>
            <description><![CDATA[Venus Transit 2026 ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಮೇ 08, 2026 ರಂದು ಶುಕ್ರನು ಮೃಗಶಿರ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ನಕ್ಷತ್ರ ಬದಲಾವಣೆಯಿಂದಾಗಿ ಮೂರು ರಾಶಿಯವರಿಗೆ ರಾಜವೈಭೋಗದ ಜೀವನ ಆರಂಭವಾಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk3qrvstjje6yy66fbgyf3wc,imgname-shukra-peyarchi-2026-in-mesha-rasi-1772873346874.png" type="image/jpeg" height="390" width="690"/>
            <content:encoded><![CDATA[&lt;p&gt;Venus Transit 2026 ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಮೇ 08, 2026 ರಂದು ಶುಕ್ರನು ಮೃಗಶಿರ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಈ ನಕ್ಷತ್ರ ಬದಲಾವಣೆಯಿಂದಾಗಿ ಮೂರು ರಾಶಿಯವರಿಗೆ ರಾಜವೈಭೋಗದ ಜೀವನ ಆರಂಭವಾಗಲಿದೆ.&lt;/p&gt;&lt;img&gt;ಜ್ಯೋತಿಷ್ಯದಲ್ಲಿ ಶುಕ್ರನನ್ನು ಐಷಾರಾಮಿ, ಸಂಪತ್ತು, ಪ್ರೀತಿ ಮತ್ತು ಸಂತೋಷದ ಅಧಿಪತಿ ಎಂದು ಕರೆಯುತ್ತಾರೆ. ಒಬ್ಬರ ಜಾತಕದಲ್ಲಿ ಶುಕ್ರನು ಬಲವಾಗಿದ್ದರೆ, ಅವರಿಗೆ ರಾಜಯೋಗದ ಜೀವನ ಸಿಗುತ್ತದೆ ಎಂಬ ನಂಬಿಕೆ ಇದೆ. ಇದೀಗ, ಮೇ 08, 2026 ರಂದು ಶುಕ್ರನು ಮೃಗಶಿರ ನಕ್ಷತ್ರಕ್ಕೆ ಸಾಗಲಿದ್ದಾನೆ. ಈ ಗ್ರಹ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಿದರೂ, ನಿರ್ದಿಷ್ಟ 3 ರಾಶಿಯವರಿಗೆ ಜಾಕ್&zwnj;ಪಾಟ್ ಹೊಡೆಯಲಿದೆ. ಆ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವ ರೀತಿಯ ಅದೃಷ್ಟ ಸಿಗಲಿದೆ ಎಂಬುದನ್ನು ನೋಡೋಣ.&lt;img&gt;ಶುಕ್ರನ ಈ ನಕ್ಷತ್ರ ಸಂಚಾರವು ಮೇಷ ರಾಶಿಯವರಿಗೆ ಹೊಸ ಭರವಸೆ ನೀಡಲಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಇನ್ನು ಮುಂದೆ ಸುಲಭವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದಲ್ಲಿನ ಮನಸ್ತಾಪಗಳು ದೂರವಾಗಿ, ದೂರ ಆಗಿದ್ದ ಸಂಬಂಧಗಳು ಮತ್ತೆ ಒಂದಾಗುತ್ತವೆ. ಹೊಸ ಮನೆ, ಜಮೀನು ಖರೀದಿಸಲು ಇದು ಸುವರ್ಣಾವಕಾಶ. ಅವಿವಾಹಿತ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿ ಸಿಗಲಿದ್ದಾರೆ.&lt;img&gt;ಶುಕ್ರನನ್ನು ರಾಶ್ಯಾಧಿಪತಿಯಾಗಿ ಹೊಂದಿರುವ ವೃಷಭ ರಾಶಿಯವರಿಗೆ ಇದು 'ಬಡ್ತಿ'ಯ ಕಾಲ. ಉದ್ಯೋಗದಲ್ಲಿರುವವರಿಗೆ ನಿರೀಕ್ಷಿತ ಸಂಬಳ ಏರಿಕೆ ಮತ್ತು ಬಡ್ತಿ ಸಿಗಲಿದೆ. ಉದ್ಯಮಿಗಳು ತಮ್ಮ ವ್ಯಾಪಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸೃಜನಶೀಲತೆ ಹೆಚ್ಚಾಗುತ್ತದೆ. ಕಠಿಣ ಸವಾಲುಗಳನ್ನು ಸಹ ನೀವು ಸುಲಭವಾಗಿ ನಿಭಾಯಿಸಿ ಗೆಲ್ಲುತ್ತೀರಿ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮತ್ತು ಸಂತೋಷ ಹೆಚ್ಚಾಗುತ್ತದೆ. ಮನೆಯಲ್ಲಿ ಶುಭ ಸುದ್ದಿಗಳು ಕೇಳಿಬಂದು, ಸಂತೋಷ ದುಪ್ಪಟ್ಟಾಗಲಿದೆ.&lt;img&gt;ತುಲಾ ರಾಶಿಯವರಿಗೆ ಈ ಸಂಚಾರವು ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ. ಹಲವು ಮೂಲಗಳಿಂದ ಹಣದ ಹರಿವು ಹೆಚ್ಚಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಏರಿಕೆಯಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಶೈಲಿ ಇತರರನ್ನು ಆಕರ್ಷಿಸುವುದರಿಂದ, ನೀವು ಕೈಗೊಳ್ಳುವ ಎಲ್ಲಾ ಪ್ರಯತ್ನಗಳು ಲಾಭದಲ್ಲಿ ಕೊನೆಗೊಳ್ಳುತ್ತವೆ. ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಅತ್ಯಂತ ಅನುಕೂಲಕರ ಸಮಯ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪೂರ್ಣ ಫಲ ಸಿಗಲಿದೆ.]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/venus-transit-2026-effects-on-aries-taurus-libra-zodiac-signs-suh-bibkn7t"/>
        </item>
        <item>
            <title><![CDATA[ಕೇವಲ 36 ಎಸೆತಗಳಲ್ಲಿ ಶತಕ, ಧೋನಿ ತಂಡಕ್ಕೆ ಮುಂಬೈ 'ಬಾಹುಬಲಿ'! ಯಾರು ಈ ಆಯುಷ್ ವರ್ತಕ್?]]></title>
            <link>https://kannada.asianetnews.com/gallery/cricket-sports/chennai-super-kings-eyes-mumbai-sensation-ayush-vartak-for-ipl-trials-kvn-dqdottl</link>
            <guid isPermaLink="true">https://kannada.asianetnews.com/gallery/cricket-sports/chennai-super-kings-eyes-mumbai-sensation-ayush-vartak-for-ipl-trials-kvn-dqdottl</guid>
            <pubDate>Wed, 29 Apr 2026 10:12:12 +0530</pubDate>
            <description><![CDATA[36 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಮುಂಬೈನ ಯುವ ಆಟಗಾರ ಆಯುಷ್ ವರ್ತಕ್‌ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರಯಲ್ಸ್‌ಗೆ ಬರುವಂತೆ ಆಹ್ವಾನ ನೀಡಿದೆ. ಇದು ಧೋನಿಯ ಮತ್ತೊಂದು ಮಾಸ್ಟರ್ ಪ್ಲಾನ್ ಎಂದೇ ಹೇಳಲಾಗುತ್ತಿದೆ. ಹಾಗಿದ್ರೆ, ಯಾರು ಈ ಆಯುಷ್ ವರ್ತಕ್?]]></description>
            <media:content url="https://static.asianetnews.com/images/w-1280,h-720,format-jpg,imgid-01kpz3khjhecee9kdcrw1wf7te,imgname-ipl-2026-33rd-match-csk-vs-mi-1777012950609.jpg" type="image/jpeg" height="390" width="690"/>
            <content:encoded><![CDATA[36 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಮುಂಬೈನ ಯುವ ಆಟಗಾರ ಆಯುಷ್ ವರ್ತಕ್&zwnj;ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರಯಲ್ಸ್&zwnj;ಗೆ ಬರುವಂತೆ ಆಹ್ವಾನ ನೀಡಿದೆ. ಇದು ಧೋನಿಯ ಮತ್ತೊಂದು ಮಾಸ್ಟರ್ ಪ್ಲಾನ್ ಎಂದೇ ಹೇಳಲಾಗುತ್ತಿದೆ. ಹಾಗಿದ್ರೆ, ಯಾರು ಈ ಆಯುಷ್ ವರ್ತಕ್?&lt;img&gt;ಐಪಿಎಲ್ ಮಿನಿ ಹರಾಜಿನಲ್ಲಿ ಯಾರೂ ಕೊಂಡುಕೊಳ್ಳದ ಯುವ ಆಟಗಾರನಿಗೆ ಈಗ ಅದೃಷ್ಟ ಖುಲಾಯಿಸಿದೆ. ಮುಂಬೈನ 21 ವರ್ಷದ ಯುವ ಆಟಗಾರ ಆಯುಷ್ ವರ್ತಕ್&zwnj;ಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಟ್ರಯಲ್ಸ್&zwnj;ಗೆ ಬರುವಂತೆ ಕರೆ ನೀಡಿದೆ. ಅಂಡರ್-23 ಕ್ರಿಕೆಟ್&zwnj;ನಲ್ಲಿ ಸಿಕ್ಸರ್&zwnj;ಗಳ ಮಳೆ ಸುರಿಸುತ್ತಿದ್ದರೂ ಹರಾಜಿನಲ್ಲಿ ಬಿಕರಿಯಾಗದ ಈ ಯುವ ಪ್ರತಿಭೆಗೆ, ಈಗ ಐದು ಬಾರಿಯ ಚಾಂಪಿಯನ್ ಸಿಎಸ್&zwnj;ಕೆ ತಂಡವನ್ನು ಸೇರುವ ಅವಕಾಶ ಸಿಕ್ಕಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಹೀನಾಯ ಸೋಲಿನ ನಂತರ, ಚೆನ್ನೈ ತನ್ನ ಬ್ಯಾಟಿಂಗ್ ಲೈನ್-ಅಪ್ ಬಲಪಡಿಸಲು ಯೋಚಿಸುತ್ತಿದೆ. ಗಾಯಗೊಂಡಿದ್ದ ಖಲೀಲ್ ಅಹ್ಮದ್ ಬದಲಿಗೆ ಈಗಾಗಲೇ ಆಕಾಶ್ ಮಧ್ವಾಲ್&zwnj;ರನ್ನು ತಂಡಕ್ಕೆ ಸೇರಿಸಿಕೊಂಡಿರುವ ಸಿಎಸ್&zwnj;ಕೆ, ಖಾಲಿ ಇರುವ ಮತ್ತೊಂದು ಸ್ಥಾನಕ್ಕೆ ಆಯುಷ್ ವರ್ತಕ್&zwnj;ನನ್ನು ಪರಿಗಣಿಸುತ್ತಿದೆ.&lt;img&gt;&lt;p&gt;ವಾಸ್ತವವಾಗಿ, ಆಯುಷ್ ವರ್ತಕ್ ದೇಶೀಯ ಕ್ರಿಕೆಟ್&zwnj;ನಲ್ಲಿ ಕೆಲವು ಸಮಯದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಮುಂಬೈ ಜೂನಿಯರ್ ತಂಡದ ಪರ ಆಡುವಾಗ ಕಾಂಗಾ ಲೀಗ್&zwnj;ನಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಒಂದು ವರ್ಷದ ಹಿಂದೆ ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿದ್ದರೂ, ಲೆಕ್ಕಿಸದೆ ಬ್ಯಾಟಿಂಗ್ ಮಾಡಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದರು.&lt;/p&gt;&lt;img&gt;&lt;p&gt;ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಅವರು ಸಿಎಸ್&zwnj;ಕೆ ಸ್ಕೌಟಿಂಗ್ ತಂಡದ ಕೆಲಸವನ್ನು ಶ್ಲಾಘಿಸಿದ್ದಾರೆ. 'ಭವಿಷ್ಯಕ್ಕಾಗಿ ಉತ್ತಮ ತಂಡವನ್ನು ನಿರ್ಮಿಸುವಲ್ಲಿ ಸಿಎಸ್&zwnj;ಕೆ ಬಹಳ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಹರಾಜಿನ ನಡುವೆ ಇಂತಹ ಪ್ರತಿಭಾವಂತ ಆಟಗಾರರನ್ನು ಗುರುತಿಸುವುದು ತಂಡವನ್ನು ಬಲಪಡಿಸಲು ಉತ್ತಮ ಮಾರ್ಗ. ಮಹಾರಾಷ್ಟ್ರದ ಯುವ ಆಟಗಾರ ಆಯುಷ್ ವರ್ತಕ್&zwnj;ಗೆ ಶುಭಾಶಯಗಳು' ಎಂದು ಅಶ್ವಿನ್ 'ಎಕ್ಸ್' ನಲ್ಲಿ ಬರೆದುಕೊಂಡಿದ್ದಾರೆ.&amp;nbsp;&lt;/p&gt;&lt;p&gt;CSK have been very diligent with their scouting during the season to build a good core for the future.Upgrading in between auctions through such smart recruitments and trades is the best way to realign squads.Young talented Ayush Vartak from Maharashtra. pic.twitter.com/9P0YzJOgdi&lt;/p&gt;&lt;p&gt;&mdash; Ashwin  (@ashwinravi99) April 27, 2026&lt;/p&gt;&lt;img&gt;&lt;p&gt;ಸ್ಟೇಟ್ ಎ ಟ್ರೋಫಿ 2025 ರಲ್ಲಿ ಆಯುಷ್ ವರ್ತಕ್ ಅವರ ಫಾರ್ಮ್ ಅದ್ಭುತವಾಗಿತ್ತು. ಕೇವಲ ಆರು ಇನ್ನಿಂಗ್ಸ್&zwnj;ಗಳಲ್ಲಿ 363 ರನ್ ಗಳಿಸಿದ್ದಾರೆ. ಇದರಲ್ಲಿ 26 ಸಿಕ್ಸರ್&zwnj;ಗಳು ಸೇರಿವೆ. ಎಲ್&zwnj;ಎಸ್&zwnj;ಜಿ ದುಬಾರಿ ಬೆಲೆಗೆ ಖರೀದಿಸಿದ ಮುಕುಲ್ ಚೌಧರಿ ನಂತರ ಅತಿ ಹೆಚ್ಚು ಸಿಕ್ಸರ್&zwnj;ಗಳನ್ನು ಬಾರಿಸಿದ ಆಟಗಾರ ಇವರೇ. ಈ ಟೂರ್ನಿಯಲ್ಲಿ 132, 92 ನಾಟೌಟ್, 75 ರನ್&zwnj;ಗಳಂತಹ ಪ್ರಮುಖ ಇನ್ನಿಂಗ್ಸ್&zwnj;ಗಳೊಂದಿಗೆ ಮುಂಬೈ ಪರ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.&amp;nbsp;&lt;/p&gt;&lt;p&gt;ಇದಲ್ಲದೆ, ಕರ್ನಲ್ ಸಿಕೆ ನಾಯುಡು ಟ್ರೋಫಿ (2024-26) ಯ 9 ಪಂದ್ಯಗಳಲ್ಲಿ ಬರೋಬ್ಬರಿ 770 ರನ್ ಗಳಿಸಿದ್ದಾರೆ. ಇದರಲ್ಲಿ 192, 102, 105 ರನ್&zwnj;ಗಳಂತಹ ಬೃಹತ್ ಶತಕಗಳು ಸೇರಿವೆ. ಈ ಅದ್ಭುತ ಪ್ರದರ್ಶನಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ನಿಂದ 2024 ರ ಸೀಸನ್&zwnj;ಗೆ 'ಅಂಡರ್-23 ಅತ್ಯುತ್ತಮ ಪ್ರದರ್ಶನ' ಪ್ರಶಸ್ತಿಯನ್ನೂ ಪಡೆದಿದ್ದಾರೆ.&lt;/p&gt;&lt;img&gt;&lt;p&gt;ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಗೆದ್ದು, ನೆಗೆಟಿವ್ ರನ್ ರೇಟ್&zwnj;ನಿಂದ ಸಂಕಷ್ಟದಲ್ಲಿದೆ. ಮುಂದಿನ ಪಂದ್ಯ ಮೇ 2 ರಂದು ತವರಿನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧವೇ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಆಯುಷ್ ವರ್ತಕ್ ಟ್ರಯಲ್ಸ್&zwnj;ನಲ್ಲಿ ಗಮನ ಸೆಳೆದರೆ, ತಂಡ ಸೇರುವ ಅವಕಾಶ ಸಿಗಬಹುದು.&lt;/p&gt;&lt;img&gt;&lt;p&gt;ಈ ಹಿಂದೆ ಆಯುಷ್ ಮುಂಬೈ ಇಂಡಿಯನ್ಸ್, ಸನ್&zwnj;ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ತಂಡಗಳ ಟ್ರಯಲ್ಸ್&zwnj;ನಲ್ಲೂ ಭಾಗವಹಿಸಿದ್ದರು. ಆದರೆ ಈಗ ಸಿಕ್ಕಿರುವ ಸಿಎಸ್&zwnj;ಕೆ ಅವಕಾಶ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅವರು ತಂಡಕ್ಕೆ ಬಂದರೆ ಸಿಎಸ್&zwnj;ಕೆ ಮಿಡಲ್ ಆರ್ಡರ್ ಇನ್ನಷ್ಟು ಬಲಗೊಳ್ಳಲಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/gallery/cricket-sports/chennai-super-kings-eyes-mumbai-sensation-ayush-vartak-for-ipl-trials-kvn-dqdottl"/>
        </item>
        <item>
            <title><![CDATA[IPL 2026: ನಿನ್ನೆ ನಡೆದ ಪಂಜಾಬ್ ಕಿಂಗ್ಸ್ - ರಾಜಸ್ಥಾನ ರಾಯಲ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?]]></title>
            <link>https://kannada.asianetnews.com/cricket-sports/who-won-yesterday-punjab-kings-vs-rajasthan-royals-ipl-match-kvn/articleshow-pgh25u7</link>
            <guid isPermaLink="true">https://kannada.asianetnews.com/cricket-sports/who-won-yesterday-punjab-kings-vs-rajasthan-royals-ipl-match-kvn/articleshow-pgh25u7</guid>
            <pubDate>Wed, 29 Apr 2026 09:43:05 +0530</pubDate>
            <description><![CDATA[ಮುಲ್ಲಾನ್‌ಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ಅದರ ಅಜೇಯ ಓಟಕ್ಕೆ ಅಂತ್ಯ ಹಾಡಿದೆ. ಪಂಜಾಬ್ ನೀಡಿದ 223 ರನ್‌ಗಳ ಬೃಹತ್ ಗುರಿಯನ್ನು ರಾಜಸ್ಥಾನ ಯಶಸ್ವಿಯಾಗಿ ಬೆನ್ನಟ್ಟಿದ್ದು, ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ವೇಗದ 400 ರನ್‌ಗಳ ದಾಖಲೆ ನಿರ್ಮಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kqaq6cbejycvy0gwv6m8pe3x,imgname-rr-vs-pbks-match-results-1777402589550.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಲ್ಲಾನ್&zwnj;ಪುರ: ಈ ಬಾರಿ ಐಪಿಎಲ್&zwnj;ನಲ್ಲಿ ಪಂಜಾಬ್&zwnj; ಕಿಂಗ್ಸ್&zwnj; ತಂಡ ಮೊದಲ ಸೋಲು ಅನುಭವಿಸಿದೆ. 6 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿದ್ದ ಪಂಜಾಬ್&zwnj; ಮಂಗಳವಾರ ರಾಜಸ್ಥಾನ ರಾಯಲ್ಸ್&zwnj; ವಿರುದ್ಧ 6 ವಿಕೆಟ್&zwnj;ನಿಂದ ಪರಾಭವಗೊಂಡಿತು. ರಾಯಲ್ಸ್&zwnj;ಗೆ ಇದು 9 ಪಂದ್ಯಗಳಲ್ಲಿ 6ನೇ ಗೆಲುವು.&lt;/p&gt;&lt;p&gt;ಮೊದಲು ಬ್ಯಾಟ್&zwnj; ಮಾಡಿದ ಪಂಜಾಬ್&zwnj; 4 ವಿಕೆಟ್&zwnj; ನಷ್ಟದಲ್ಲಿ 222 ರನ್&zwnj; ಕಲೆಹಾಕಿತು. ಎಂದಿನಂತೆ ಪಂಜಾಬ್&zwnj; ಈ ಪಂದ್ಯದಲ್ಲೂ ಸ್ಫೋಟಕ ಆರಂಭ ಪಡೆಯಿತು. ಪ್ರಿಯಾನ್ಶ್ ಆರ್ಯ 11 ಎಸೆತಕ್ಕೆ 29 ರನ್&zwnj; ಗಳಿಸಿದರೆ, ಕೂಪರ್&zwnj; ಕೊನೊಲಿ 14 ಎಸೆತಕ್ಕೆ 30 ರನ್&zwnj; ಬಾರಿಸಿದರು. ಪ್ರಭ್&zwnj;ಸಿಮ್ರನ್&zwnj; 44 ಎಸೆತಕ್ಕೆ 59, ಶ್ರೇಯಸ್&zwnj; ಅಯ್ಯರ್&zwnj; 27 ಎಸೆತಕ್ಕೆ 30 ರನ್&zwnj; ಗಳಿಸಿದರು. ಮಧ್ಯಮ ಓವರ್&zwnj;ಗಳಲ್ಲಿ ತಂಡದ ರನ್&zwnj; ವೇಗಕ್ಕೆ ಕಡಿವಾಣ ಬಿದ್ದರೂ ಕೊನೆಯಲ್ಲಿ ಆರ್ಭಟಿಸಿದ ಸ್ಟೋಯ್ನಿಸ್&zwnj;, ಕೇವಲ 22 ಎಸೆತಗಳಲ್ಲಿ ಔಟಾಗದೆ 62 ರನ್&zwnj; ಸಿಡಿಸಿದರು.&lt;/p&gt;&lt;h2&gt;&lt;strong&gt;ರಾಜಸ್ಥಾನ ರಾಯಲ್ಸ್&zwnj; ಸ್ಫೋಟಕ ಆರಂಭ:&lt;/strong&gt;&lt;/h2&gt;&lt;p&gt;ವೈಭವ್&zwnj; ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್&zwnj; ಸ್ಫೋಟಕ ಆರಂಭ ರಾಯಲ್ಸ್&zwnj;ಗೆ ನೆರವಾಯಿತು. ಈ ಜೋಡಿ 3.2 ಓವರ್&zwnj;ಗಳಲ್ಲಿ 51 ರನ್&zwnj; ಸೇರಿಸಿತು. ವೈಭವ್&zwnj; 16 ಎಸೆತಕ್ಕೆ 43 ರನ್&zwnj; ಸಿಡಿಸಿ ಔಟಾದರೆ, ಯಶಸ್ವಿ ಜೈಸ್ವಾಲ್&zwnj; 27 ಎಸೆತಗಳಲ್ಲಿ 51 ರನ್&zwnj; ಬಾರಿಸಿದರು. ಬಳಿಕ ಡೊನೊವನ್&zwnj; ಫೆರಿಯೆರಾ 25 ಎಸೆತಕ್ಕೆ ಔಟಾಗದೆ 52 ಹಾಗೂ ಶುಭಮ್&zwnj; ದುಬೆ 12 ಎಸೆತಕ್ಕೆ ಔಟಾಗದೆ 31 ರನ್&zwnj; ಗಳಿಸಿ ತಂಡವನ್ನು 19.2 ಓವರ್&zwnj;ಗಳಲ್ಲಿ ಗೆಲುವಿನ ದಡ ಸೇರಿಸಿದರು.&lt;/p&gt;&lt;p&gt;ಸ್ಕೋರ್: ಪಂಜಾಬ್&zwnj; 20 ಓವರಲ್ಲಿ 222/4 (ಸ್ಟೋಯ್ನಿಸ್&zwnj; 62, ಪ್ರಭ್&zwnj;ಸಿಮ್ರನ್&zwnj; 59, ಯಶ್&zwnj;ರಾಜ್&zwnj; 2-41), ರಾಜಸ್ಥಾನ 19.2 ಓವರಲ್ಲಿ 228/4 (ಫೆರಿಯೆರಾ ಔಟಾಗದೆ 52, ಜೈಸ್ವಾಲ್&zwnj; 51, ವೈಭವ್&zwnj; 43, ಚಹಲ್&zwnj; 3-36)&lt;/p&gt;&lt;p&gt;--&lt;/p&gt;&lt;h3&gt;&lt;strong&gt;167 ಎಸೆತಗಳಲ್ಲಿ 400 ರನ್&zwnj;: ವೈಭವ್&zwnj; ದಾಖಲೆ&lt;/strong&gt;&lt;/h3&gt;&lt;p&gt;ಐಪಿಎಲ್&zwnj; ಆವೃತ್ತಿಯೊಂದರಲ್ಲಿ ಅತಿ ವೇಗವಾಗಿ 400 ರನ್&zwnj; ಕಲೆಹಾಕಿದ ಆಟಗಾರ ಎಂಬ ಖ್ಯಾತಿಗೆ ವೈಭವ್&zwnj; ಸೂರ್ಯವಂಶಿ ತ್ರರಾಗಿದ್ದಾರೆ. ಅವರು ಈ ಬಾರಿ 400 ರನ್&zwnj; ಗಳಿಸಲು ಕೇವಲ 167 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಈ ಮೂಲಕ 2019ರಲ್ಲಿ ಆ್ಯಂಡ್ರೆ ರಸೆಲ್&zwnj; ನಿರ್ಮಿಸಿದ್ದ ದಾಖಲೆ(188 ಎಸೆತ) ಮುರಿದರು. 2024ರಲ್ಲಿ ಅಭಿಷೇಕ್&zwnj; ಶರ್ಮಾ 195 ಎಸೆತ, 2025ರಲ್ಲಿ ನಿಕೋಲಸ್&zwnj; ಪೂರನ್&zwnj; 197 ಎಸೆತ ಹಾಗೂ 2014ರಲ್ಲಿ ಗ್ಲೆನ್&zwnj; ಮ್ಯಾಕ್ಸ್&zwnj;ವೆಲ್&zwnj; 200 ಎಸೆತಗಳಲ್ಲಿ 400 ರನ್&zwnj; ಮೈಲುಗಲ್ಲು ಸಾಧಿಸಿದ್ದರು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/cricket-sports/who-won-yesterday-punjab-kings-vs-rajasthan-royals-ipl-match-kvn/articleshow-pgh25u7"/>
        </item>
        <item>
            <title><![CDATA[ಅಡೆತಡೆಗಳನ್ನೇ ಮೆಟ್ಟಿಲಾಗಿಸಿ ಮುನ್ನುಗ್ಗುವ ರಾಶಿ: ಮೇ ತಿಂಗಳಲ್ಲಿ ಕಾದಿದೆ ಮಹತ್ವದ ತಿರುವು!]]></title>
            <link>https://kannada.asianetnews.com/gallery/festivals/kannada-astrology-aquarius-horoscope-may-2026-personal-life-career-growth-and-financial-insights-mrq-my9uhst</link>
            <guid isPermaLink="true">https://kannada.asianetnews.com/gallery/festivals/kannada-astrology-aquarius-horoscope-may-2026-personal-life-career-growth-and-financial-insights-mrq-my9uhst</guid>
            <pubDate>Wed, 29 Apr 2026 09:30:12 +0530</pubDate>
            <description><![CDATA[ಜನ್ಮ ಶನಿಯ ಸಂಕಷ್ಟಗಳನ್ನು ದಾಟಿ, ಗುರುಬಲದ ಅನುಗ್ರಹದಿಂದ ಯಶಸ್ಸಿನತ್ತ ಸಾಗುತ್ತಿರುವ ಕುಂಭ ರಾಶಿಯವರಿಗೆ ಈ ಮೇ ತಿಂಗಳು ಒಂದು ಮಹತ್ವದ ತಿರುವು ನೀಡಲಿದೆ. ತಾಳ್ಮೆ ಮತ್ತು ಸಂಯಮವನ್ನು ನಿಮ್ಮ ಅಸ್ತ್ರವಾಗಿಸಿಕೊಂಡರೆ, ಈ ತಿಂಗಳ ಸವಾಲುಗಳೆಲ್ಲವೂ ಸಾಧನೆಗಳಾಗಿ ಬದಲಾಗಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbnzc2xwfmzyvpz92qp1qn1,imgname-gemini-generated-image-9ooryj9ooryj9oor-1777434865757.png" type="image/jpeg" height="390" width="690"/>
            <content:encoded><![CDATA[ಜನ್ಮ ಶನಿಯ ಸಂಕಷ್ಟಗಳನ್ನು ದಾಟಿ, ಗುರುಬಲದ ಅನುಗ್ರಹದಿಂದ ಯಶಸ್ಸಿನತ್ತ ಸಾಗುತ್ತಿರುವ ಕುಂಭ ರಾಶಿಯವರಿಗೆ ಈ ಮೇ ತಿಂಗಳು ಒಂದು ಮಹತ್ವದ ತಿರುವು ನೀಡಲಿದೆ. ತಾಳ್ಮೆ ಮತ್ತು ಸಂಯಮವನ್ನು ನಿಮ್ಮ ಅಸ್ತ್ರವಾಗಿಸಿಕೊಂಡರೆ, ಈ ತಿಂಗಳ ಸವಾಲುಗಳೆಲ್ಲವೂ ಸಾಧನೆಗಳಾಗಿ ಬದಲಾಗಲಿವೆ.&lt;img&gt;&lt;p&gt;ಕುಂಭ ರಾಶಿಯವರಿಗೆ (ಅವಿಟ್ಟ 3, 4ನೇ ಪಾದ, ಶತಭಿಷ, ಪೂರ್ವಾಭಾದ್ರ 1, 2, 3ನೇ ಪಾದ) ಈ 2026ರ ಮೇ ತಿಂಗಳು, ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗುವ ಜೊತೆಗೆ ಕೆಲವು ಸವಾಲುಗಳನ್ನೂ ತಂದೊಡ್ಡಲಿದೆ. ನಿಮ್ಮ ರಾಶ್ಯಾಧಿಪತಿ ಶನಿ ನಿಮ್ಮ ರಾಶಿಯಲ್ಲೇ ಇರುವುದರಿಂದ, ಜವಾಬ್ದಾರಿಗಳು ಹೆಚ್ಚಾದರೂ ಆತ್ಮವಿಶ್ವಾಸದಿಂದ ಮುನ್ನುಗ್ಗುವಿರಿ.&lt;/p&gt;&lt;h2&gt;&lt;strong&gt;ವೃತ್ತಿ ಮತ್ತು ಉದ್ಯೋಗ&lt;/strong&gt;&lt;/h2&gt;&lt;p&gt;ಕೆಲಸ ಹುಡುಕುತ್ತಿರುವವರಿಗೆ ಈ ತಿಂಗಳು ಹೊಸ ಅವಕಾಶಗಳು ಸಿಗಲಿವೆ. ಆದರೆ, ನೀವು ನಿರೀಕ್ಷಿಸಿದ ಸಂಬಳ ಅಥವಾ ಹುದ್ದೆ ಸಿಗಲು ಸ್ವಲ್ಪ ತಡವಾಗಬಹುದು.&lt;/p&gt;&lt;p&gt;ಉದ್ಯೋಗದಲ್ಲಿರುವವರು: ಆಫೀಸ್&zwnj;ನಲ್ಲಿ ನಿಮ್ಮ ಮೇಲಿನ ಕೆಲಸದ ಹೊರೆ ಹೆಚ್ಚಾಗಲಿದೆ. ಅದರಲ್ಲೂ ಮೇ ತಿಂಗಳ ಎರಡನೇ ಭಾಗದಲ್ಲಿ ಮೇಲಧಿಕಾರಿಗಳ ಜೊತೆ ಮಾತನಾಡುವಾಗ ತಾಳ್ಮೆ ಇರಲಿ. ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಕಷ್ಟಪಟ್ಟು ದುಡಿಯಬೇಕಾಗುತ್ತದೆ.&lt;/p&gt;&lt;p&gt;ಉದ್ಯಮಿಗಳು: ಹೊಸ ಬ್ರಾಂಚ್ ತೆರೆಯುವುದು ಅಥವಾ ದೊಡ್ಡ ಹೂಡಿಕೆ ಮಾಡುವಂತಹ ನಿರ್ಧಾರಗಳನ್ನು ತಿಂಗಳ ಕೊನೆಯಲ್ಲಿ ತೆಗೆದುಕೊಂಡರೆ ಉತ್ತಮ. ಪಾಲುದಾರರೊಂದಿಗೆ (Partners) ಮುಕ್ತವಾಗಿ ಮಾತನಾಡುವುದು ಅಗತ್ಯ.&lt;/p&gt;&lt;img&gt;&lt;p&gt;ಹಣದ ಹರಿವು ತೃಪ್ತಿಕರವಾಗಿದ್ದರೂ, ಶುಭ ಖರ್ಚುಗಳು ಸಾಲುಗಟ್ಟಿ ನಿಲ್ಲಲಿವೆ.&lt;/p&gt;&lt;p&gt;&lt;strong&gt;ಆದಾಯ:&lt;/strong&gt; ಹಳೆಯ ಸಾಲಗಳು ವಸೂಲಾಗುವ ಸಾಧ್ಯತೆ ಇದೆ. ಪೂರ್ವಜರ ಆಸ್ತಿಯಿಂದ ಲಾಭ ಸಿಗಬಹುದು.&lt;/p&gt;&lt;p&gt;&lt;strong&gt;ಖರ್ಚು&lt;/strong&gt;: ಮನೆ ರಿಪೇರಿ, ವಾಹನ ದುರಸ್ತಿ ಅಥವಾ ವೈದ್ಯಕೀಯ ಖರ್ಚುಗಳಂತಹ ದಿಢೀರ್ ಖರ್ಚುಗಳು ಎದುರಾಗಬಹುದು.&lt;/p&gt;&lt;p&gt;&lt;strong&gt;ಹೂಡಿಕೆ&lt;/strong&gt;: ಷೇರು ಮಾರುಕಟ್ಟೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.&lt;/p&gt;&lt;h2&gt;&lt;strong&gt;ಕುಟುಂಬ ಮತ್ತು ಸಂಬಂಧಗಳು&lt;/strong&gt;&lt;/h2&gt;&lt;p&gt;ಕೌಟುಂಬಿಕ ಜೀವನದಲ್ಲಿ ಮಿಶ್ರ ಫಲಿತಾಂಶಗಳು ಸಿಗಲಿವೆ.&lt;/p&gt;&lt;p&gt;ಸಂಬಂಧಗಳು: ಗಂಡ-ಹೆಂಡತಿ ನಡುವೆ ಸಣ್ಣಪುಟ್ಟ ವಾಗ್ವಾದಗಳು ಉಂಟಾಗಬಹುದು. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಹೊಂದಾಣಿಕೆಯಿಂದ ಸಾಗಿದರೆ ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ.&lt;/p&gt;&lt;p&gt;ಮಕ್ಕಳು: ಮಕ್ಕಳ ಶಿಕ್ಷಣದಲ್ಲಿ ಪ್ರಗತಿ ಕಾಣಲಿದೆ. ಅವರ ಉನ್ನತ ಶಿಕ್ಷಣದ ಬಗ್ಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ.&lt;/p&gt;&lt;p&gt;ಶುಭ ಕಾರ್ಯಗಳು: ಮನೆಯಲ್ಲಿ ನಿಂತುಹೋಗಿದ್ದ ಶುಭ ಕಾರ್ಯಗಳು ಮತ್ತೆ ಆರಂಭವಾಗಲು ಅನುಕೂಲಕರ ವಾತಾವರಣವಿದೆ.&lt;/p&gt;&lt;img&gt;&lt;p&gt;'ಜನ್ಮ ಶನಿ' ನಡೆಯುತ್ತಿರುವುದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.&lt;/p&gt;&lt;p&gt;ದೇಹದ ಆರೋಗ್ಯ: ಕಾಲು ನೋವು, ಕೀಲು ನೋವು ಅಥವಾ ನರ ಸಂಬಂಧಿ ಸಮಸ್ಯೆಗಳು ಬಂದು ಹೋಗಬಹುದು.&lt;/p&gt;&lt;p&gt;ಆಹಾರ ಪದ್ಧತಿ: ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಉಷ್ಣ ಸಂಬಂಧಿ ಕಾಯಿಲೆಗಳನ್ನು ತಡೆಯಲು ತಂಪು ಪದಾರ್ಥಗಳನ್ನು ಸೇವಿಸಿ.&lt;/p&gt;&lt;p&gt;ಮಾನಸಿಕ ಆರೋಗ್ಯ: ಕೆಲಸದ ಒತ್ತಡದಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಧ್ಯಾನ ಮತ್ತು ಯೋಗ ಮಾಡುವುದು ಉತ್ತಮ.&lt;/p&gt;&lt;img&gt;&lt;p&gt;ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಗಮನ ಹರಿಸಬೇಕಾದ ತಿಂಗಳು ಇದು. ಅನಗತ್ಯ ಮನರಂಜನೆಗಳು ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಬಹುದು. ಯೋಜನಾಬದ್ಧವಾಗಿ ಓದಿದರೆ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ. ವಿಶೇಷವಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಕಾರ್ಯಗಳಲ್ಲಿ ಪ್ರಗತಿ ಕಾಣುವರು.&lt;/p&gt;&lt;h2&gt;&lt;strong&gt;ವಿಶೇಷ ಫಲಗಳು ಮತ್ತು ಎಚ್ಚರಿಕೆಗಳು&lt;/strong&gt;&lt;/h2&gt;&lt;p&gt;&lt;strong&gt;ಪ್ರಯಾಣ:&lt;/strong&gt; ವಿದೇಶಿ ಪ್ರಯಾಣಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಸುದ್ದಿ ಬರಲಿದೆ. ಆದರೂ, ರಸ್ತೆ ಪ್ರಯಾಣದ ವೇಳೆ ವೇಗವನ್ನು ಕಡಿಮೆ ಮಾಡುವುದು ಉತ್ತಮ.&lt;/p&gt;&lt;p&gt;ಮಹಿಳೆಯರು: ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬಡ್ತಿ ಸಿಗುವ ಲಕ್ಷಣಗಳು ಕಾಣಿಸುತ್ತವೆ.&lt;/p&gt;&lt;img&gt;&lt;p&gt;&lt;strong&gt;ಶನಿವಾರ:&lt;/strong&gt; ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ, ಕಾಗೆಗೆ ಅನ್ನ ಇಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ.&lt;/p&gt;&lt;p&gt;&lt;strong&gt;ಗುರುವಾರ: &lt;/strong&gt;ಗುರುವನ್ನು ಪೂಜಿಸಿ ಹಳದಿ ಹೂವುಗಳಿಂದ ಅರ್ಚನೆ ಮಾಡುವುದರಿಂದ ಆರ್ಥಿಕವಾಗಿ ಏಳಿಗೆಯನ್ನು ಕಾಣಬಹುದು.&lt;/p&gt;&lt;p&gt;&lt;strong&gt;ಹನುಮಾನ್ ಪೂಜೆ: &lt;/strong&gt;ಶನಿಯ ಪ್ರಭಾವವನ್ನು ಕಡಿಮೆ ಮಾಡಲು ಹನುಮಾನ್ ಚಾಲೀಸಾ ಪಠಣ ಮಾಡುವುದರಿಂದ ಮನೋಬಲ ಹೆಚ್ಚುತ್ತದೆ.&lt;/p&gt;&lt;p&gt;ಒಟ್ಟಾರೆಯಾಗಿ: ಈ ಮೇ ತಿಂಗಳು ಕುಂಭ ರಾಶಿಯವರಿಗೆ 'ತಾಳ್ಮೆ' ಮತ್ತು 'ಶ್ರಮ' ಎರಡನ್ನೂ ಬಂಡವಾಳವಾಗಿಸಿಕೊಂಡು ಮುನ್ನಡೆಯಬೇಕಾದ ಸಮಯ. ಕಠಿಣ ಪರಿಶ್ರಮಕ್ಕೆ ಖಂಡಿತವಾಗಿಯೂ ಫಲವಿದೆ!&lt;/p&gt;]]></content:encoded>
            <category><![CDATA[festivals]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/festivals/kannada-astrology-aquarius-horoscope-may-2026-personal-life-career-growth-and-financial-insights-mrq-my9uhst"/>
        </item>
        <item>
            <title><![CDATA[ರಷ್ಯಾದಿಂದ ಬಂತು ನಾಲ್ಕನೇ ಅಸ್ತ್ರ: ಭಾರತದ ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ನಡುಕ]]></title>
            <link>https://kannada.asianetnews.com/india-news/the-fourth-of-the-five-s-400-missile-systems-india-has-purchased-from-russia-is-set-to-arrive-soon-mrq/articleshow-tyesecp</link>
            <guid isPermaLink="true">https://kannada.asianetnews.com/india-news/the-fourth-of-the-five-s-400-missile-systems-india-has-purchased-from-russia-is-set-to-arrive-soon-mrq/articleshow-tyesecp</guid>
            <pubDate>Wed, 29 Apr 2026 09:07:09 +0530</pubDate>
            <description><![CDATA[ರಷ್ಯಾದಿಂದ ಭಾರತ ಖರೀದಿಸಿರುವ ಐದು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಪೈಕಿ ನಾಲ್ಕನೆಯದು ಶೀಘ್ರದಲ್ಲೇ ಬರಲಿದೆ. ಈ ಹಿಂದೆ 'ಆಪರೇಷನ್ ಸಿಂದೂರ'ದ ಯಶಸ್ಸಿಗೆ ಕಾರಣವಾಗಿದ್ದ ಈ ವ್ಯವಸ್ಥೆಯು, ಭಾರತದ ವಾಯುರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbmxda9s5gevpsgx7xtmx37,imgname-missile-1777433752905.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ರಷ್ಯಾದಿಂದ ಭಾರತ ಖರೀದಿಸಿರುವ 5 ಎಸ್&zwnj;-400 ಕ್ಷಿಪಣಿ ದಾಳಿ, ತಡೆ ವ್ಯವಸ್ಥೆಯ ಪೈಕಿ 4ನೇಯದ್ದು ಶೀಘ್ರವೇ ಭಾರತವನ್ನು ತಲುಪಲಿದೆ. ಇದು ಭಾರತದ ವಾಯುರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಪಹಲ್ಗಾಂನಲ್ಲಿ ಪಾಕ್&zwnj; ಉಗ್ರರು ನಡೆಸಿದ್ದ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ್ದ ಆಪರೇಷನ್&zwnj; ಸಿಂದೂರ ದಾಳಿ ಗೆಲ್ಲಲು ಇದೇ ವ್ಯವಸ್ಥೆ ನೆರವಾಗಿತ್ತು.&lt;/p&gt;&lt;h2&gt;&lt;strong&gt;5 ಎಸ್&zwnj;-400 ಕ್ಷಿಪಣಿ ವ್ಯವಸ್ಥೆ&lt;/strong&gt;&lt;/h2&gt;&lt;p&gt;2018ರಲ್ಲಿ ಭಾರತ, ರಷ್ಯಾದಿಂದ ಅಂದಾಜು 35000 ಕೋಟಿ ರು. ವೆಚ್ಚದಲ್ಲಿ 5 ಎಸ್&zwnj;-400 ಕ್ಷಿಪಣಿ ವ್ಯವಸ್ಥೆ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೂರು ಈಗಾಗಲೇ ಭಾರತವನ್ನು ತಲುಪಿ ವಿವಿಧ ಸ್ಥಳಗಳಲ್ಲಿ ನಿಯೋಜನೆಗೊಂಡಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಇನ್ನೊಂದು ವ್ಯವಸ್ಥೆಯನ್ನು ಈಗಾಗಲೇ ಭಾರತದತ್ತ ರವಾನಿಸಲಾಗಿದ್ದು, ಅದು ಮೇ ತಿಂಗಳ ಮೊದಲ ಅಥವಾ ಎರಡನೇ ವಾರ ತಲುಪುವ ನಿರೀಕ್ಷೆ ಇದೆ.&amp;nbsp;&lt;/p&gt;&lt;p&gt;ಮೂಲಗಳ ಪ್ರಕಾರ ಇದನ್ನು ರಾಜಸ್ಥಾನ ಗಡಿಯಲ್ಲಿ ನಿಯೋಜಿಸುವ ಸಾಧ್ಯತೆ ಇದೆ. 5ನೇ ವ್ಯವಸ್ಥೆ ನವೆಂಬರ್&zwnj;ನಲ್ಲಿ ಭಾರತ ತಲುಪುವ ನಿರೀಕ್ಷೆ ಇದೆ. ಈ ಹಿಂದೆ ಮಾಡಿಕೊಂಡಿದ್ದ 5ರ ಜೊತೆಗೆ ಮತ್ತೂ 5 ಎಸ್&zwnj;-400 ಖರೀದಿಗೆ ಭಾರತ ಕಳೆದ ತಿಂಗಳಷ್ಟೇ ನಿರ್ದರಿಸಿತ್ತು&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಚೀನಾ, ರಷ್ಯಾದಿಂದ ಹೈಪರ್&zwnj;ಸಾನಿಕ್ ಮಿಸೈಲ್ ದಾಳಿ ನಡೆದರೆ ತಡೆಯೋ ಶಕ್ತಿ ನಮಗಿಲ್ಲ; ಬಯಲಾಯ್ತು ಅಮೆರಿಕ ಸೇನೆಯ ಅಸಹಾಯಕ ಮಾತು!&lt;/strong&gt;&lt;/p&gt;&lt;h3&gt;&lt;strong&gt;ಎಸ್&zwnj; 400 ಮಹತ್ವ&lt;/strong&gt;&lt;/h3&gt;&lt;p&gt;ಇದು ವಿಶ್ವದ ಅತ್ಯಾಧುನಿಕ ಕ್ಷಿಪಣಿ ದಾಳಿ ಮತ್ತು ತಡೆ ವ್ಯವಸ್ಥೆ. ಏಕಕಾಲಕ್ಕೆ 300 ಕ್ಷಿಪಣಿ, ಡ್ರೋನ್&zwnj;ಗಳ ದಾಳಿಯನ್ನು 300-400 ಕಿ.ಮೀ ದೂರದಲ್ಲೇ ಪತ್ತೆ ಮಾಡಿ ಅದನ್ನು ಹೊಡೆದುರುಳಿಸಬಲ್ಲದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Missile Test: ಉ.ಕೊರಿಯಾ ಸರ್ವಾಧಿಕಾರಿ ಕಿಮ್&zwnj;ನಿಂದ ಮತ್ತೊಂದು ಪ್ರಚೋದನೆ: 136 ಕಿ.ಮೀ ದೂರದ ದ್ವೀಪವನ್ನೇ ಧ್ವಂಸ ಮಾಡಿದ 5 ಮಿಸೈಲ್ಸ್!&lt;/strong&gt;&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/the-fourth-of-the-five-s-400-missile-systems-india-has-purchased-from-russia-is-set-to-arrive-soon-mrq/articleshow-tyesecp"/>
        </item>
        <item>
            <title><![CDATA[ಬಿಸಿಲಿಗೆ ಬಳಲಿರೋ ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್ : ಬೆಂಗಳೂರಿಗೆ ಬರಲಿದೆ ಮಳೆ]]></title>
            <link>https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09</link>
            <guid isPermaLink="true">https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09</guid>
            <pubDate>Wed, 29 Apr 2026 08:57:24 +0530</pubDate>
            <description><![CDATA[ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jx4ch71vtbcbtewbf1w11z7p,imgname-----------------------2025-06-07t103613.555-1749272796219.jpg" type="image/jpeg" height="390" width="690"/>
            <content:encoded><![CDATA[ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಬೆಂಗಳೂರು ಜನರಿಗೆ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ನಿರೀಕ್ಷಿಸಲಾಗಿದೆ.&lt;img&gt;&lt;p&gt;ಈ ಬಾರಿಯ ಬೇಸಿಗೆಯ ಬಿಸಿಲು ಸಿಲಿಕಾನ್ ಸಿಟಿ ಜನರನ್ನು ಅಕ್ಷರಶಃ ಬಿಸಿಯಿಂದ ಬೇಯುವಂತೆ ಮಾಡಿದೆ. ಜನರು ಸೆಖೆಯ ಧಗೆ ತಾಳಲಾರದೇ ಗೋಳಾಡುತ್ತಿದ್ದಾರೆ. ರಾತ್ರಿ ಸೆಖೆಗೆ ನಿದ್ದೇನೇ ಬರ್ತಿಲ್ಲ ಎಂಬುದು ಅನೇಕರ ಗೋಳು. ಹೀಗಿರುವಾಗ ಸೆಖೆಯಿಂದ ಬೆಂದ ಗಾರ್ಡನ್ ಸಿಟಿ ಜನರಿಗೆ ಒಂದು ಗುಡ್ ನ್ಯೂಸ್ ಇದೆ.&lt;/p&gt;&lt;img&gt;&lt;p&gt;ಇಂದಿನಿಂದ ನಾಲ್ಕು ದಿನ ಬೆಂಗಳೂರಿನಲ್ಲಿ ಚೆನ್ನಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದ್ದು, ಬಿಸಿಲ ತಾಪಕ್ಕೆ ಕಂಗೆಟ್ಟ ಜನರಿಗೆ ಕೊಂಚ ನೆಮ್ಮದಿ ನೀಡಿದೆ.&lt;/p&gt;&lt;img&gt;&lt;p&gt;ಇಂದಿನಿಂದ&amp;nbsp;ನಾಲ್ಕು ದಿನ ಬೆಂಗಳೂರಿಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಇವತ್ತು 26 ಜಿಲ್ಲೆಗಳಿಗೆ ಎಲ್ಲೋ ಆಲರ್ಟ್ ನೀಡಿದ್ದು, ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ ಸೇರಿದಂತೆ 26 ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.&lt;/p&gt;&lt;img&gt;&lt;p&gt;ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ವಿಜಯಪುರ, ಬೆಳಗಾವಿ, ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ,&lt;/p&gt;&lt;p&gt;ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ &amp;amp; ದಕ್ಷಿಣ ಕನ್ನಡ, ಚಿಕ್ಕ ಮಗಳೂರು ಹಾಸನ, ತುಮಕೂರು, ಕೊಡಗು, ಮೈಸೂರು ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.&lt;/p&gt;]]></content:encoded>
            <category><![CDATA[state]]></category>
            <dc:creator>Anusha Kb</dc:creator>
            <atom:link href="https://kannada.asianetnews.com/gallery/state/good-news-for-the-people-of-silicon-city-rain-is-coming-to-bengaluru-yfizu09"/>
        </item>
        <item>
            <title><![CDATA[ಸಬ್ ಇನ್ಸ್‌ಪೆಕ್ಟರ್ ತಿಪ್ಪೇಶ್ ಪತ್ನಿ ನೇಣಿಗೆ ಶರಣು; ಪ್ರೀತಿಸಿ ಮದುವೆಯಾಗಿದ್ದ ಜೋಡಿ]]></title>
            <link>https://kannada.asianetnews.com/gallery/karnataka-districts/sub-inspector-tippesh-s-wife-hangs-herself-birur-kadur-taluk-of-chikkamagaluru-district-mrq-puq8dx3</link>
            <guid isPermaLink="true">https://kannada.asianetnews.com/gallery/karnataka-districts/sub-inspector-tippesh-s-wife-hangs-herself-birur-kadur-taluk-of-chikkamagaluru-district-mrq-puq8dx3</guid>
            <pubDate>Wed, 29 Apr 2026 08:57:17 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ತಿಪ್ಪೇಶ್ ಅವರ 35 ವರ್ಷದ ಪತ್ನಿ ಪದ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbkzws30bm6mfae617begee,imgname-sub-inspector-wife-1777432785699.jpg" type="image/jpeg" height="390" width="690"/>
            <content:encoded><![CDATA[ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆಯ ಸಬ್&zwnj;ಇನ್&zwnj;ಸ್ಪೆಕ್ಟರ್ ತಿಪ್ಪೇಶ್ ಅವರ 35 ವರ್ಷದ ಪತ್ನಿ ಪದ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.&lt;img&gt;&lt;p&gt;ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆಯ ಸಬ್&zwnj;ಇನ್&zwnj;ಸ್ಪೆಕ್ಟರ್ ತಿಪ್ಪೇಶ್ ಎಂಬವರ ಪತ್ನಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. 35 ವರ್ಷದ ಪದ್ಮಾ ಮೃತ ಮಹಿಳೆ.&lt;/p&gt;&lt;img&gt;&lt;p&gt;ಕೌಟುಂಬಿಕ ಕಲಹದಿಂದ ನೊಂದು ಪದ್ಮಾ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿಯನ್ನು ಖಚಿತಪಡಿಸಿಕೊಂಡಿಲ್ಲ. ರಾತ್ರಿ ಮನೆಯಲ್ಲಿ ಪದ್ಮಾ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಪದ್ಮಾ ಮತ್ತು ತಿಪ್ಪೇಶ್ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸಬ್ ಇನ್ಸ್&zwnj;ಪೆಕ್ಟರ್ ತಿಪ್ಪೇಶ್ ಬೀರೂರಿನ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತರಾಗಿ ವಾಸವಾಗಿದ್ದರು.ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.&lt;/p&gt;&lt;img&gt;&lt;p&gt;ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆಗಳಿವೆ. ಸದ್ಯ ಪೊಲೀಸರು ಪದ್ಮಾ ಕುಟುಂಬಸ್ಥರಿಗಾಗಿ ಕಾಯುತ್ತಿದ್ದಾರೆ. ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/sub-inspector-tippesh-s-wife-hangs-herself-birur-kadur-taluk-of-chikkamagaluru-district-mrq-puq8dx3"/>
        </item>
        <item>
            <title><![CDATA[ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ..! ₹20,000 ಕೋಟಿ ಟಿಡಿಆರ್‌ ಕೇಸ್‌ ದಾಖಲೆ ನಾಪತ್ತೆ! ಇ.ಡಿಗೆ ದೂರು]]></title>
            <link>https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364</link>
            <guid isPermaLink="true">https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364</guid>
            <pubDate>Wed, 29 Apr 2026 08:52:44 +0530</pubDate>
            <description><![CDATA[ಬೆಂಗಳೂರಿನಲ್ಲಿ 20 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಟಿಡಿಆರ್‌ ಹಗರಣ ಬೆಳಕಿಗೆ ಬಂದಿದ್ದು, ಬಿಬಿಎಂಪಿ ಕಚೇರಿಯಿಂದ 2014-17ರ ಅವಧಿಯ ಮಹತ್ವದ ದಾಖಲೆಗಳು ನಾಪತ್ತೆಯಾಗಿವೆ. ಈ ಸಂಬಂಧ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್‌.ಆರ್‌.ರಮೇಶ್‌ ಅವರು ಇ.ಡಿ ಮತ್ತು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01khd48xyqnbss7jh7fyewr9x4,imgname-----------------------2026-02-14t091852.923-1771040962519.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಸುಮಾರು 20 ಸಾವಿರ ಕೋಟಿ ರು.ಗೂ ಅಧಿಕ ಮೊತ್ತದ ಟಿಡಿಆರ್&zwnj; ಹಗರಣ ಸಂಬಂಧ ಮೂರು ವರ್ಷಗಳ ಅವಧಿಯ ಮಹತ್ವದ ದಾಖಲೆಗಳು ಗ್ರೇಟರ್&zwnj; ಬೆಂಗಳೂರು ಪ್ರಾಧಿಕಾರದ (ಜಿಬಿಎ) ಭೂಸ್ವಾಧೀನ ಮತ್ತು ಟಿಡಿಆರ್&zwnj; ವಿಭಾಗದ ಕಚೇರಿಯಿಂದ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮಹತ್ವದ ದಾಖಲೆಗಳ ನಾಪತ್ತೆ ಹಿಂದಿರುವ ಬಿಬಿಎಂಪಿ ಭ್ರಷ್ಟ ಅಧಿಕಾರಿಗಳು ಹಾಗೂ ಟಿಡಿಆರ್&zwnj; ಮಾಫಿಯಾ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮತ್ತು ಲೋಕಾಯುಕ್ತಕ್ಕೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್&zwnj;.ಆರ್&zwnj;.ರಮೇಶ್&zwnj; ದೂರು ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಟಿಡಿಆರ್&zwnj; ಮಾಫಿಯಾ:&amp;nbsp;&lt;/strong&gt;&lt;/h2&gt;&lt;p&gt;ಈ ಟಿಡಿಆರ್&zwnj; ನಿಯಮಗಳಲ್ಲಿನ ಸಣ್ಣ ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕರಾಳ ದಂಧೆ ಬೃಹತ್&zwnj; ಪ್ರಮಾಣದಲ್ಲಿ ಬೆಳೆದು ನಿಂತಿದೆ. ಈ ಟಿಡಿಆರ್&zwnj; ಮಾಫಿಯಾಗಳು ಜನ್ಮ ತಾಳಿ ಬಿಬಿಎಂಪಿ ಮತ್ತು ಬಿಡಿಎ ಭ್ರಷ್ಟ ಅಧಿಕಾರಿಗಳ ಕಾನೂನು ಬಾಹಿರ ಸಹಕಾರದಿಂದ ಬೆಂಗಳೂರು ಮಹಾನಗರವೊಂದರಲ್ಲಿಯೇ ಸುಮಾರು 50 ಸಾವಿರ ಕೋಟಿ ರು.ಗೂ ಹೆಚ್ಚು ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.&lt;/p&gt;&lt;h3&gt;&lt;strong&gt;ಹಲವು ಪ್ರಕರಣ ತನಿಖಾ ಹಂತದಲ್ಲಿ:&lt;/strong&gt;&lt;/h3&gt;&lt;p&gt;2007-08 ರಿಂದ 2017ರ ಮಾರ್ಚ್&zwnj;ವರೆಗೆ ಬಿಬಿಎಂಪಿ ಅಧೀನದಲ್ಲಿದ್ದ ಟಿಡಿಆರ್&zwnj; ವಿಭಾಗವು 2017ರ ಏ.1ರಿಂದ ಬಿಡಿಎಗೆ ಹಸ್ತಾಂತರ ಮಾಡಿ ರಾಜ್ಯ ಸರ್ಕಾರವು ಆದೇಶಿಸಿತ್ತು. ಭೂಮಿಯ ಬೆಲೆ ಹೆಚ್ಚಿರುವ ಹಿಂದಿನ ಮಹದೇವಪುರ ವಲಯ, ಯಲಹಂಕ ವಲಯ, ಬೊಮ್ಮನಹಳ್ಳಿ ವಲಯ ಮತ್ತು ಪೂರ್ವ ವಲಯಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಟಿಡಿಆರ್&zwnj; ಅಕ್ರಮಗಳು ನಡೆದಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಲ್ಲಿ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ತನಿಖಾ/ ವಿಚಾರಣಾ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಮೂರು ವರ್ಷಗಳ ದಾಖಲೆ ನಾಪತ್ತೆ!:&lt;/strong&gt;&lt;/h3&gt;&lt;p&gt;2026ರ ಮಾ.6ರಂದು ಆರ್&zwnj;ಟಿಐ ಅರ್ಜಿ ಸಲ್ಲಿಸಿ 2010 ಏ.1ರಿಂದ 2017 ಮಾ.31ರ ವರೆಗಿನ ಅವಧಿಯಲ್ಲಿ ಬಿಬಿಎಂಪಿಯಿಂದ ನೀಡಲಾಗಿರುವ ಟಿಡಿಆರ್&zwnj;/ಡಿಆರ್&zwnj;ಸಿಗಳ ಪ್ರತಿ/ಮಾಹಿತಿ ಒದಗಿಸುವಂತೆ ಭೂಸ್ವಾಧೀನ ಮತ್ತು ಟಿಡಿಆರ್&zwnj; ವಿಭಾಗದ ಉಪ ಆಯುಕ್ತರಿಗೆ ಮನವಿ ಮಾಡಿದ್ದೆ. ಇದಕ್ಕೆ 2014ರ ಮಾ.31ರ ವರೆಗೆ ಮಾತ್ರ ಮಾಹಿತಿ ನೀಡಿದ್ದು, 2014 ಏ.1ರಿಂದ 2017 ಮಾ.31ರ ವರೆಗಿನ ಮೂರು ವರ್ಷಗಳ ಟಿಡಿಆರ್&zwnj;/ಡಿಆರ್&zwnj;ಸಿ ದಾಖಲೆಗಳು ಲಭ್ಯವಿಲ್ಲ ಎಂದು ಲಿಖಿತ ಮಾಹಿತಿ ನೀಡಿದ್ದಾರೆ. ಈ ಮೂರು ವರ್ಷ ಅವಧಿಯಲ್ಲೇ ಭಾರೀ ಪ್ರಮಾಣದ ಟಿಡಿಆರ್&zwnj;/ಡಿಆರ್&zwnj;ಸಿ ಅಕ್ರಮಗಳು ನಡೆದಿದ್ದು, ಅದೇ ಅವಧಿಯ ದಾಖಲೆಗಳೇ ಮಾಯವಾಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ.&lt;/p&gt;&lt;p&gt;ಈ ಟಿಡಿಆರ್&zwnj; ಹಗರಣದ ತನಿಖೆ/ವಿಚಾರಣೆ ಅಂತಿಮ ಹಂತ ತಲುಪಿರುವ ಈ ಸಂದರ್ಭದಲ್ಲಿ ಮೂರು ವರ್ಷಗಳ ದಾಖಲೆಗಳು ಕಾಣೆಯಾಗಿವೆ. ಇದರ ಹಿಂದಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಮೇಶ್&zwnj; ಆಗ್ರಹಿಸಿದ್ದಾರೆ.&lt;/p&gt;&lt;p&gt;ನ್ಯಾಯಾಂಗ ಅಥವಾ ಸಿಐಡಿ ತನಿಖೆಗೆ ಆಗ್ರಹ: ಈ ಟಿಡಿಆರ್&zwnj; ಹಗರಣ ಸಂಬಂಧ ಮೂರು ವರ್ಷಗಳ ದಾಖಲೆಗಳ ನಾಪತ್ತೆ ಸಂಬಂಧ ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್&zwnj; ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದಾಖಲೆಗಳ ಸಹಿತ ಪತ್ರ ಬರೆದು ಒತ್ತಾಯಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/20000-crore-rupees-tdr-scam-key-documents-missing-from-bbmp-office-kvn/articleshow-gut2364"/>
        </item>
        <item>
            <title><![CDATA[ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯೆಂದು ಅಪ್ರಾಪ್ತೆ ಮೇಲೆ ಹಲ್ಲೆ: ಕೈ ಮುಖಂಡನ ಸೆರೆ!]]></title>
            <link>https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw</link>
            <guid isPermaLink="true">https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw</guid>
            <pubDate>Wed, 29 Apr 2026 08:31:14 +0530</pubDate>
            <description><![CDATA[ಬೆಂಗಳೂರಿನ ಕಾಂಗ್ರೆಸ್ ಮುಖಂಡ ಆನಂದ್ ಪಿ. ಎಂಬುವವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ. ವ್ಯಕ್ತಿಯೊಬ್ಬರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಅವರ ಅಪ್ರಾಪ್ತ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ದೂರುದಾರರ ಮೇಲೆ ಹಲ್ಲೆ ನಡೆಸಿ ಆಸ್ತಿ ಕಬಳಿಸಿದ ಗಂಭೀರ ಆರೋಪಗಳು ಆತನ ಮೇಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kcc2vc689z6q8067y7mdcsnt,imgname-congress-flag-1765637206216.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ವ್ಯಕ್ತಿಯೊಬ್ಬರ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಆತನ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ನಗರದ ಕಾಂಗ್ರೆಸ್&zwnj; ಮುಖಂಡನೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;p&gt;ಮಾಳಗಾಳದ ನಿವಾಸಿಯಾದ 40 ವರ್ಷದ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿ ಆನಂದ್&zwnj; ಪಿ. (ಆನಂದ್ ನಾಯ್ಡು) ಎಂಬುವರನ್ನು ಬಂಧಿಸಲಾಗಿದೆ. ದೂರುದಾರರ ಅಪ್ರಾಪ್ತ ಪುತ್ರಿ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.&lt;/p&gt;&lt;p&gt;ದೂರುದಾರರು 2008ರಲ್ಲಿ ಪರಿಚಯವಾದ ಯುವತಿಯೊಬ್ಬರನ್ನು ಮದುವೆ ಆಗಿದ್ದರು. ಆದರೆ, ಆಕೆ ತನಗೆ ಈಗಾಗಲೇ ಮದುವೆಯಾಗಿ ಒಂದು ಹೆಣ್ಣು ಮಗು ಇರುವುದನ್ನು ಮುಚ್ಚಿಟ್ಟು ನನ್ನನ್ನು ವಿವಾಹವಾಗಿ ವಂಚಿಸಿದ್ದರು. ಆದರೂ ತಾನು ಆಕೆ ಜತೆ ಸಂಸಾರ ಮಾಡುತ್ತಿದ್ದೆ. ಈ ಮಧ್ಯೆ ತಮಗೆ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ತಂದೆಯ ವ್ಯಾಪಾರ ನೋಡಿಕೊಳ್ಳಲು ಆರಂಭಿಸಿದ್ದು, ಮಾಳಗಾಳದಲ್ಲಿ ನಿವೇಶನ ಖರೀದಿಸಿ ಹೊಸ ಮನೆ ಕಟ್ಟಿದ್ದೆ. ಆದರೆ, ಪತ್ನಿ 2016ರಲ್ಲಿ ಜಿಮ್&zwnj;ವೊಂದಕ್ಕೆ ಸೇರಿಕೊಂಡಿದ್ದರು. ನಂತರ ಜಿಮ್&zwnj; ಟ್ರೈನರ್&zwnj; ಪ್ರಶಾಂತ್ ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ 2018ರಲ್ಲಿ ಮತ್ತೊಂದು ಜಿಮ್&zwnj;ಗೆ ಸೇರಿಕೊಂಡು ಉಮೇಶ್&zwnj; ಜತೆ ಅಕ್ರಮ ಸಂಬಂಧ ಹೊಂದಿದ್ದರು. ನಂತರ ಸುಂಕದಕಟ್ಟೆ ಶಿವು ಎಂಬಾತನ ಜತೆಯೂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರ ಪ್ರಶ್ನಿಸಿದಾಗ ತನ್ನ ಹತ್ಯೆಗೆ ಸಂಚು ರೂಪಿಸಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ನನ್ನ ಆಸ್ತಿ ಕಬಳಿಕೆ ಆಗಿದೆ:&lt;/strong&gt;&lt;/h2&gt;&lt;p&gt;2022ರಲ್ಲಿ ಹಣಕಾಸಿನ ವಿಚಾರವಾಗಿ ಆನಂದ್&zwnj; ಎಂಬಾತನ ಪರಿಚಯವಾಗಿತ್ತು. ನಂತರ ಆತ ನನ್ನ ಪತ್ನಿಯನ್ನು ಪರಿಚಯಿಸಿಕೊಂಡು ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಈ ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತೇವೆ ಎಂದು ತನಗೂ ಹಾಗೂ ನನ್ನ ಮಕ್ಕಳ ಮೇಲೆ ಇಬ್ಬರು ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಅಲ್ಲದೆ, ಆನಂದ್&zwnj; ತನ್ನ ಅಪ್ರಾಪ್ತ ಪುತ್ರಿ ಜತೆ ಅನುಚಿತವಾಗಿ ವರ್ತಿಸಿದ್ದ. ಅದರೊಂದಿಗೆ ತನಗೆ ಪ್ರಾಣ ಬೆದರಿಕೆ ಹಾಕಿ, ನನ್ನಿಂದ ಆಸ್ತಿಯ ಹಕ್ಕು ಬಿಡುಗಡೆ ಪತ್ರ ಮತ್ತು ದಾನಪತ್ರವನ್ನು ಬರೆಸಿಕೊಂಡಿದ್ದಾರೆ. ನಂತರ ತನ್ನನ್ನು ಮನೆಯಿಂದ ಹೊರಗಡೆ ಹಾಕಿದರು. ಆ ಬಳಿಕವೂ ತನ್ನ ಮಕ್ಕಳ ನೋಡಲು ಬರುತ್ತಿದ್ದಾಗ, ಮಕ್ಕಳು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡರು. ಹೀಗಾಗಿ ಪತ್ನಿ ಮತ್ತು ಆಕೆಯ ಪ್ರಿಯಕರ ಆನಂದ್&zwnj; ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.&lt;/p&gt;&lt;h3&gt;&lt;strong&gt;ಪತ್ನಿಯ ವಿಚಾರಣೆ ನಡೆಸಿರುವ ಪೊಲೀಸರು:&amp;nbsp;&lt;/strong&gt;&lt;/h3&gt;&lt;p&gt;ದೂರಿನ ಹಿನ್ನೆಲೆಯಲ್ಲಿ ಆನಂದ್&zwnj; ಸೇರಿ ಮಹಿಳೆಯ ವಿರುದ್ಧ ಪೋಕ್ಸೋ ಹಾಗೂ ಇತರೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ. ದೂರುದಾರರ ಪತ್ನಿಯನ್ನು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಆನಂದ್ ಬೆಂಗಳೂರು ಉತ್ತರ ಜಿಲ್ಲೆ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಎಂದು ತಿಳಿದುಬಂದಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-congress-leader-arrested-under-pocso-for-alleged-assault-on-minor-kvn/articleshow-wvzk3nw"/>
        </item>
        <item>
            <title><![CDATA[Shivamogga: 2ನೇ ಪತ್ನಿಯ ಆತ್ಮ*ಹತ್ಯೆ:  ಸೊರಬದ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ಬಂಧನ]]></title>
            <link>https://kannada.asianetnews.com/gallery/karnataka-districts/shivamogga-soraba-bjp-leader-prabhu-maestri-arrested-mrq-ae9g96g</link>
            <guid isPermaLink="true">https://kannada.asianetnews.com/gallery/karnataka-districts/shivamogga-soraba-bjp-leader-prabhu-maestri-arrested-mrq-ae9g96g</guid>
            <pubDate>Wed, 29 Apr 2026 08:21:07 +0530</pubDate>
            <description><![CDATA[ಸೊರಬದ ಬಿಜೆಪಿ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಮಂಜುಳಾ ಅವರ ಆತ್ಮ*ಹತ್ಯೆಗೆ ಪತಿಯ ಕಿರುಕುಳವೇ ಕಾರಣ ಎಂದು ಮಂಜುಳಾ ಅವರ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbhx529c2d62fc3dg4bes4h,imgname-soraba--2--1777430598729.jpg" type="image/jpeg" height="390" width="690"/>
            <content:encoded><![CDATA[&lt;p&gt;ಸೊರಬದ ಬಿಜೆಪಿ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಮಂಜುಳಾ ಅವರ ಆತ್ಮ*ಹತ್ಯೆಗೆ ಪತಿಯ ಕಿರುಕುಳವೇ ಕಾರಣ ಎಂದು ಮಂಜುಳಾ ಅವರ ಪೋಷಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.&lt;/p&gt;&lt;img&gt;&lt;p&gt;ಶಿವಮೊಗ್ಗ ಜಿಲ್ಲೆಯ ಸೊರಬದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಭು ಮೇಸ್ತ್ರಿ ಬಂಧಿತ ಬಿಜೆಪಿ ಮುಖಂಡನಾಗಿದ್ದು, ಸೊರಬ ಪುರಸಭೆ ಮಾಜಿ ಅಧ್ಯಕ್ಷ. ಹಾರ್ಡ್&zwnj;ವೇರ್ ವ್ಯವಹಾರ ಜೊತೆ ಪ್ರಭು ಮೇಸ್ತ್ರಿ ರಾಜಕೀಯದಲ್ಲಿಯೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದನು.&lt;/p&gt;&lt;img&gt;&lt;p&gt;ಭಾನುವಾರ ಪ್ರಭು ಮೇಸ್ತ್ರಿ ಪತ್ನಿ ಮಂಜುಳಾ (39) ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯ ನಿವಾಸದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿಗೆ ಪತಿಯ ಕಿರುಕುಳ ಕಾರಣ ಎಂದು ಮಂಜುಳಾ ಪೋಷಕರು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಬಂಧನ ಮಾಡಿದ್ದಾರೆ.&lt;/p&gt;&lt;img&gt;&lt;p&gt;2024ರಲ್ಲಿ ಹಾವೇರಿಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ ಜೊತೆ ಪ್ರಭು ಮೇಸ್ತ್ರಿ ಮದುವೆಯಾಗಿತ್ತು. ಎರಡನೇ ಮದುವೆ ಬಳಿಕವೂ ಪ್ರಭು ಮೇಸ್ತ್ರಿ ಮಹಿಳೆ ಜೊತೆ ಒಡನಾಟ ಹೊಂದಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ರಾಜೀ ಪಂಚಾಯ್ತಿಯೂ ನಡೆದಿತ್ತು ಎಂದು ತಿಳಿದು ಬಂದಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಪತ್ನಿಯನ್ನ ಕೊಂದು ಕಾಂಕ್ರೀಟ್&zwnj; ಹಾಕಿ ಸಮಾಧಿ ಮಾಡಿದ ಪತಿ! ಮಗನ ಕೈಗೆ ಸಿಕ್ಕ ಚೀಟಿಯಿಂದ ಬಯಲಾಯ್ತು ಪ್ರಕರಣ!&lt;/strong&gt;&lt;/p&gt;&lt;img&gt;&lt;p&gt;ರಾಜೀ ಪಂಚಾಯ್ತಿ ಬಳಿಕವೂ ಪ್ರಭು ಮತ್ತೆ ಅದೇ ಮಹಿಳೆಯೊಂದಿಗೆ ಓಡಾಡ್ತಿದ್ದ ಆರೋಪವಿದೆ. ಈ ಹಿನ್ನೆಲೆ ಮಂಜುಳಾ ಅವರಿಗೆ ಕಿರುಕುಳ ನೀಡುತ್ತಿದ್ದ. ಪತಿ ಪ್ರಭು ಮೇಸ್ತ್ರಿಯ ಕಿರುಕುಳ ತಾಳಲಾರದೇ ಮಗಳು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಿ ಮಂಜುಳಾ ತಾಯಿ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Bengaluru: ಬೆತ್ತಲೆ ಸ್ಥಿತಿಯಲ್ಲಿ ಜಾರ್ಖಂಡ್ ಮೂಲದ ಯುವತಿಯ ಅರೆಕೊಳೆತ ಶವ ಪತ್ತೆ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/shivamogga-soraba-bjp-leader-prabhu-maestri-arrested-mrq-ae9g96g"/>
        </item>
        <item>
            <title><![CDATA[ಪಂಚರಾಜ್ಯ ಚುನಾವಣೆ ಮುಗಿಯುವ ಮುನ್ನವೇ 7 ರಾಜ್ಯಗಳಲ್ಲಿ ಕಮಲ ಅರಳಿಸಲು ಮುಂದಾದ ಬಿಜೆಪಿ]]></title>
            <link>https://kannada.asianetnews.com/india-news/bjp-has-started-preparations-for-the-elections-in-7-states-to-be-held-in-2027-mrq/articleshow-eprrqq8</link>
            <guid isPermaLink="true">https://kannada.asianetnews.com/india-news/bjp-has-started-preparations-for-the-elections-in-7-states-to-be-held-in-2027-mrq/articleshow-eprrqq8</guid>
            <pubDate>Wed, 29 Apr 2026 07:52:00 +0530</pubDate>
            <description><![CDATA[ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಯದೆ ಬಿಜೆಪಿ 2027ರಲ್ಲಿ ನಡೆಯಲಿರುವ 7 ರಾಜ್ಯಗಳ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದು, ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k85w0nc6e38d9g1d30sm8wah,imgname-bihar-election-2025-pm-modi-amit-shah-rallies-double-power-day-1761133745542.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ದೇಶ ಹಾಗೂ ಅನ್ಯ ಪಕ್ಷಗಳ ಗಮನವೆಲ್ಲಾ ಪಂಚರಾಜ್ಯ ಚುನಾವಣೆ ಮತ್ತು ಅವುಗಳ ಫಲಿತಾಂಶದ ಮೇಲೆ ನೆಟ್ಟಿರುವ ಹೊತ್ತಿನಲ್ಲೇ ಬಿಜೆಪಿಯು ಮುಂದಿವ ವರ್ಷ 7 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ತಯಾರಿಯನ್ನು ಆರಂಭಿಸಿದೆ. ಇದು, &lsquo;ಬಿಜೆಪಿ ಎಂದೂ ಮಲಗದು&rsquo; ಎಂಬ ಮಾತನ್ನು, ಕಳೆದ 3-4 ದಿನದಲ್ಲಿ ಆಗಿರುವ ಕೆಲಸ ಸಾಬೀತುಪಡಿಸುತ್ತದೆ ಮೂಲಗಳು ಹೇಳಿವೆ.&lt;/p&gt;&lt;p&gt;&lsquo;ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್&zwnj; ಶಾ ಅವರ ನೇತೃತ್ವದಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್&zwnj; ನವೀನ್&zwnj; ಬೇರುಮಟ್ಟದಲ್ಲಿ ಕೆಲಸಗಳನ್ನು ಆರಂಭಿಸಿದ್ದಾರೆ. ಬಿಜೆಪಿಯ ಪಾಲಿಗೆ ಒಂದು ಚುನಾವಣೆಯ ಮುಕ್ತಾಯವು ಮುಂದಿನ ಎಲೆಕ್ಷನ್&zwnj; ತಯಾರಿಯ ಆರಂಭವಾಗಿದೆ. ಪಕ್ಷವು ವರ್ಷದ ಎಲ್ಲಾ ದಿನ 24*7 ಕೆಲಸ ಮಾಡುತ್ತಿರುತ್ತದೆಯೇ ಹೊರತು, ಬೇರೆ ಪಾರ್ಟಿಗಳಂತೆ ಕಾದುನೋಡುವ ತಂತ್ರವನ್ನು ಅನುಸರಿಸುವುದಿಲ್ಲ. ಪಂಚರಾಜ್ಯಗಳಲ್ಲಿ ಗೆಲುವು ಖಚಿತ. ಈಗ ನಮ್ಮ ಗುರಿಯಿರುವುದು ಬಿಜೆಪಿ ಆಡಳಿತವಿರುವಲ್ಲಿ ಹಿಡಿತವನ್ನು ಬಲಗೊಳಿಸುವುದು ಮತ್ತು ಇಲ್ಲದಿರುವ ಕಡೆಗಳಿಗೆ ವಿಸ್ತರಿಸುವುದು&rsquo; ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;2027ರಲ್ಲಿ ಗೋವಾ, ಗುಜರಾತ್, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಚುನಾವಣೆಗೆ ವೇದಿಕೆಯಾಗಲಿವೆ.&lt;/p&gt;&lt;h2&gt;&lt;strong&gt;ಹೇಗಾಗುತ್ತಿದೆ ತಯಾರಿ?&lt;/strong&gt;&lt;/h2&gt;&lt;p&gt;ತಾವು ರಾಷ್ಟ್ರಾಧ್ಯಕ್ಷ ಹುದ್ದೆಗೇರಿದ ಬಳಿಕ ಎದುರಾದ ಮೊದಲು ಪಂಚರಾಜ್ಯ ಚುನಾವಣೆಯಾಗಿದ್ದು, ಎಲ್ಲಾ ರಾಜ್ಯಗಳಿಗೆ ಖುದ್ದಾಗಿ ಭೇಟಿ ನೀಡಿ ಸಭೆಗಳನ್ನು ನಡೆಸುವ ಮೂಲಕ ನವೀನ್&zwnj; ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅದರ ಜೊತೆಜೊತೆಗೇ ಗೋವಾ, ಗುಜರಾತ್&zwnj;, ಉತ್ತರಪ್ರದೇಶಗಳಿಗೂ ತೆರಳಿ ಕಾರ್ಯಕ್ರಮಗಳಲ್ಲಿ ಭಾಗಿಯಾದರು ಹಾಗೂ ಹಲವು ಗೌಪ್ಯ ಸಭೆಗಳನ್ನು ನಡೆಸಿದರು. ಆ ವೇಳೆಗಾಗಲೇ 2027ರಲ್ಲಿ ನಡೆಯಲಿರುವ ಚುನಾವಣೆಗೆ ರಣತಂತ್ರ ಹೆಣೆಯುವ ಕೆಲಸ ಶುರುವಾಗಿತ್ತು.&lt;/p&gt;&lt;h3&gt;&lt;strong&gt;ಮಹಿಳಾ ಮೀಸಲು ಜಾರಿ ಮಾಡಿಯೇ ಸಿದ್ಧ: ಮೋದಿ&lt;/strong&gt;&lt;/h3&gt;&lt;p&gt;ವಾರಾಣಸಿ: &lsquo;ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಹಕ್ಕನ್ನು ಜಾರಿಗೆ ತರಲು ನಮ್ಮ ಸರ್ಕಾರ ಸಿದ್ಧವಾಗಿದೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ&rsquo; ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗೆ ಮತ್ತೊಮ್ಮೆ ಭರವಸೆ ನೀಡಿದ್ದಾರೆ.&lt;/p&gt;&lt;p&gt;ಸ್ವಕ್ಷೇತ್ರ ವಾರಾಣಸಿಯಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ಕಾಂಗ್ರೆಸ್, ಸಮಾಜವಾದಿ, ಟಿಎಂಸಿ ಮತ್ತು ಡಿಎಂಕೆ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದುವರೆದಂತೆ ಮಾತನಾಡಿದ ಅವರು, &lsquo;ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೆ ತರುವುದಕ್ಕೆ ನಮ್ಮ ಸರ್ಕಾರ ಸಿದ್ಧವಾಗಿದೆ. ಮೀಸಲಾತಿಯ ಹಕ್ಕನ್ನು ಜಾರಿಗೆ ತರಲು ನಾನು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ನನ್ನ ಎಲ್ಲಾ ಸಹೋದರಿಯರಿಗೆ ಮತ್ತೊಮ್ಮೆ ಭರವಸೆ ನೀಡುತ್ತೇನೆ. ಕಾಂಗ್ರೆಸ್&zwnj;, ಎಸ್ಪಿ, ಟಿಎಂಸಿ ಮತ್ತು ಡಿಎಂಕೆಯಂತಹ ಪರಿವಾರವಾದಿಗಳು ಮತ್ತೊಮ್ಮೆ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಈ ಪಕ್ಷಗಳು ಹೆಣ್ಣುಮಕ್ಕಳು ಶಾಸಕಾಂಗ ಪ್ರವೇಶಿಸುವುದನ್ನು ಬಯಸುವುದಿಲ್ಲ. ಈ ಪಕ್ಷಗಳು ಕಳೆದ 40 ವರ್ಷಗಳಿಂದ ಮಹಿಳಾ ಮೀಸಲಾತಿಗೆ ಬ್ರೇಕ್ ಹಾಕಿವೆ&rsquo; ಎಂದು ಹರಿಹಾಯ್ದರು.&lt;/p&gt;&lt;h3&gt;&lt;strong&gt;ವಿಪಕ್ಷಗಳಿಂದ ಮಹಿಳೆಯರಿಗೆ ದ್ರೋಹ&lt;/strong&gt;&lt;/h3&gt;&lt;p&gt;ಮುಂದುವರೆದಂತೆ &lsquo;40 ವರ್ಷಗಳಿಂದ ಮಹಿಳೆಯರ ಈ ಹಕ್ಕು ಬಾಕಿ ಇತ್ತು. 2023 ರಲ್ಲಿ ನಾವು ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಅಂಗೀಕರಿಸಿದ್ದೇವೆ. ಆದರೆ ವಿಪಕ್ಷಗಳು ಅದಕ್ಕೆ ದ್ರೋಹ ಎಸಗಿವೆ. ವಂಶಪಾರಂಪರ್ಯ ರಾಜಕೀಯ ಮತ್ತು ಓಲೈಕೆಯಿಂದ ನಡೆಸಲ್ಪಡುವ ಈ ಪಕ್ಷಗಳು ಮಹಿಳಾ ಶಕ್ತಿಯ ಬಗ್ಗೆ ಭಯಪಡುತ್ತವೆ&rsquo; ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/bjp-has-started-preparations-for-the-elections-in-7-states-to-be-held-in-2027-mrq/articleshow-eprrqq8"/>
        </item>
        <item>
            <title><![CDATA[ಯುದ್ಧದ ಮಧ್ಯೆ ‘ಒಪೆಕ್‌’ಗೆ  ಯುಎಇ ಗುಡ್‌ಬೈ! ತೈಲಬೆಲೆ ಮೇಲೆ ಎಫೆಕ್ಟ್?]]></title>
            <link>https://kannada.asianetnews.com/world-news/uae-to-exit-opec-move-likely-to-impact-global-oil-prices-kvn/articleshow-824lpfy</link>
            <guid isPermaLink="true">https://kannada.asianetnews.com/world-news/uae-to-exit-opec-move-likely-to-impact-global-oil-prices-kvn/articleshow-824lpfy</guid>
            <pubDate>Wed, 29 Apr 2026 07:49:08 +0530</pubDate>
            <description><![CDATA[ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪೆಕ್ ಮತ್ತು ಒಪೆಕ್+ ಕೂಟದಿಂದ ಹೊರಬರಲು ನಿರ್ಧರಿಸಿದೆ. ತನ್ನ ಆರ್ಥಿಕ ಹಿತಾಸಕ್ತಿ, ಉತ್ಪಾದನಾ ಗುರಿಗಳು ಮತ್ತು ಸೌದಿ ಅರೇಬಿಯಾದೊಂದಿಗಿನ ಹದಗೆಟ್ಟ ಸಂಬಂಧಗಳು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqaabzgzmeb7wnzxnwbfxedj,imgname-uae-1777389141534.png" type="image/jpeg" height="390" width="690"/>
            <content:encoded><![CDATA[&lt;p&gt;ದುಬೈ: ಜಾಗತಿಕ ತೈಲ ಬಿಕ್ಕಟ್ಟಿನ ನಡುವೆಯೇ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟವಾದ ಒಪೆಕ್&zwnj; ಮತ್ತು ಒಪೆಕ್&zwnj; + ನಿಂದ ಮೇ 1ರಿಂದ ಹೊರ ಬರುವುದಾಗಿ ಯುನೈಟೆಡ್&zwnj; ಅರಬ್&zwnj; ಎಮಿರೇಟ್ಸ್&zwnj; (ಯುಎಇ) ಘೋಷಿಸಿದೆ. 1967ರಿಂದಲೂ ಒಪೆಕ್&zwnj;ನ ಸದಸ್ಯ ರಾಷ್ಟ್ರವಾಗಿದ್ದ ಯುಎಇನ ನಿರ್ಧಾರ, ಜಾಗತಿಕ ತೈಲ ಬೆಲೆಯ ಮೇಲೆ ಪರಿಣಾಮ ಬೀರಲಿದೆ.&lt;/p&gt;&lt;p&gt;ಇತ್ತೀಚೆಗೆ ನೆರೆಯ ಸೌದಿ ಅರೇಬಿಯಾದೊಂದಿಗೆ ಹದೆಗೆಟ್ಟ ಸಂಬಂಧ, ಉತ್ಪಾದನೆಗಳ ಮೇಲೆ ನಿರ್ಬಂಧ, ಆರ್ಥಿಕ ಪೈಪೋಟಿ ವದಂತಿಗಳ ನಡುವೆ ಯುಎಇ ಈ ನಿರ್ಧಾರ ಕೈಗೊಂಡಿದೆ. ಒಪೆಕ್&zwnj;ನ ಅತ್ಯಂತ ವಿಶ್ವಾಸಾರ್ಹ ಸದಸ್ಯ ರಾಷ್ಟ್ರವಾದ ಈ ನಿರ್ಧಾರವು ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡುವೆ ತೈಲ ಮಾರುಕಟ್ಟೆ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ.&lt;/p&gt;&lt;h2&gt;&lt;strong&gt;ಕಾರಣವೇನು?:&lt;/strong&gt;&lt;/h2&gt;&lt;p&gt;ಒಪೆಕ್&zwnj; ಕೂಟದ ಕೆಲ ನಿಯಮಗಳು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ತೊಡಕಾಗುತ್ತಿದ್ದವು ಎಂಬ ಕಾರಣಕ್ಕೆ ಯುಎಇ ಅದರಿಂದ ಹೊರಬರಲು ನಿರ್ಧರಿಸಿದೆ ಎನ್ನಲಾಗಿದೆ.&lt;/p&gt;&lt;p&gt;ಈ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳು ರಫ್ತು ಮಾಡುವ ತೈಲದ ಪ್ರಮಾಣವನ್ನು ನಿರ್ಧರಿಸುತ್ತದೆ. ಇದರಿಂದಾಗಿ, ಸದ್ಯ ದಿನಕ್ಕೆ 34 ಲಕ್ಷ ಬ್ಯಾರಲ್&zwnj;ಗಳನ್ನು ರಫ್ತು ಮಾಡುತ್ತಿರುವ ದೇಶವು 2027ರ ವೇಳೆಗೆ ಇದನ್ನು 50 ಲಕ್ಷಕ್ಕೆ ಏರಿಸುವ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳುವತ್ತ ಕೆಲಸ ಮಾಡುತ್ತಿರುವ ಯುಎಇಗೆ ಗುರಿ ಸಾಧನೆ ಸಾಧ್ಯವಾಗುತ್ತಿಲ್ಲ. ರಫ್ತು ಪ್ರಮಾಣ ಸೇರಿದಂತೆ ತನ್ನ ದೀರ್ಘಕಾಲೀನ ಕಾರ್ಯತಂತ್ರ ಮತ್ತು ಆರ್ಥಿಕ ಗುರಿಗಳನ್ನು ಸಾಧಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಕೆಲ ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಒಪೆಕ್&zwnj; ಕೂಟದ ಉತ್ಪಾದನೆಯಲ್ಲಿ ಕುಸಿತ&lt;/strong&gt;&lt;/h3&gt;&lt;p&gt;ಅತ್ತ ಜಾಗತಿಕ ಅಸ್ಥಿರತೆಯ ಸಮಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಒಪೆಕ್&zwnj; ಕೂಟದ ಕರ್ತವ್ಯವಾದರೂ ಸದ್ಯದ ಮಧ್ಯಪ್ರಾಚ್ಯ ಯುದ್ಧದ ವೇಳೆ ಇದರ ಸದಸ್ಯರ ಉತ್ಪಾದನೆ ಶೇ.27ರಷ್ಟು ಭಾರೀ ಕುಸಿತ ಕಂಡಿತ್ತು. ಹಾಗಾಗಿ, ಕೂಟವು ತನ್ನ ಉದ್ದೇಶಕ್ಕೆ ಬದ್ಧವಾಗಿಲ್ಲ ಎಂಬ ಅಸಮಾಧಾನವೂ ಯುಎಇಗೆ ಇದ್ದಂತಿದೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/uae-to-exit-opec-move-likely-to-impact-global-oil-prices-kvn/articleshow-824lpfy"/>
        </item>
        <item>
            <title><![CDATA[ಬ್ರಹ್ಮಾಸ್ತ್ರವೇ ಆಯ್ತು ಇರಾನ್‌ಗೆ ಹೊಸ ತಲೆನೋವು; ಅಮೆರಿಕ ಚಕ್ರವ್ಯೂಹದಲ್ಲಿ ಖಮೇನಿ?]]></title>
            <link>https://kannada.asianetnews.com/world-news/iran-unable-to-export-oil-due-to-us-naval-embargo-country-s-economy-is-in-further-trouble-mrq/articleshow-io5gzo0</link>
            <guid isPermaLink="true">https://kannada.asianetnews.com/world-news/iran-unable-to-export-oil-due-to-us-naval-embargo-country-s-economy-is-in-further-trouble-mrq/articleshow-io5gzo0</guid>
            <pubDate>Wed, 29 Apr 2026 07:28:20 +0530</pubDate>
            <description><![CDATA[ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಗ್ರಹಾಗಾರಗಳು ತುಂಬಿದ್ದು, ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಜನ ದಂಗೆ ಏಳುವ ಸಾಧ್ಯತೆಯನ್ನೂ ಸೃಷ್ಟಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq90yfbbyn6hec7bhjxtxqsx,imgname-iran-hormuz-strait-reopen-conditions-trump-rejects-nuclear-talk-delay-us-iran-tensions-oil-crisis-2-1777345707371.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಟೆಹರಾನ್&zwnj;/ವಾಷಿಂಗ್ಟನ್&zwnj;: &lt;/strong&gt;ಹೋರ್ಮುಜ್&zwnj; ಜಲಸಂಧಿಯಲ್ಲಿ ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್&zwnj;ಗೆ ಹೊಸ ತಲೆನೋವು ಸೃಷ್ಟಿಯಾಗಿದೆ. ಉತ್ಪಾದಿಸಿದ ತೈಲವನ್ನು ರಫ್ತು ಮಾಡಲಾಗದ ಸ್ಥಿತಿ ಒಂದೆಡೆಯಾದರೆ. ಮತ್ತೊಂದೆಡೆ ಅವುಗಳನ್ನು ಸಂಗ್ರಹಿಸಿಡಲೂ ಸಾಧ್ಯವಾಗದ ಸ್ಥಿತಿಗೆ ಇರಾನ್&zwnj; ತಲುಪಿದೆ. ಇದು ಇರಾನ್&zwnj; ತೈಲ ಉತ್ಪಾದನೆ ಕಡಿತಕ್ಕೆ ದಾರಿಮಾಡಿಕೊಡುವುದಷ್ಟೇ ಅಲ್ಲದೆ, ದೇಶದ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.&lt;/p&gt;&lt;h2&gt;&lt;strong&gt;ಉತ್ಪಾದನೆ ಸ್ಥಗಿತಗೊಳಿಸಿದರೆ ಘಟಕಗಳಿಗೆ ಹಾನಿ&lt;/strong&gt;&lt;/h2&gt;&lt;p&gt;ಇಂಧನ ಸಂಶೋಧನಾ ಸಂಸ್ಥೆ ಕೆಪ್ಲರ್&zwnj; ಪ್ರಕಾರ, ಇರಾನ್&zwnj; ಬಳಿ ಇನ್ನು ಕೇವಲ 12-22 ದಿನಗಳ ತೈಲ ಸಂಗ್ರಹ ಸಾಮರ್ಥ್ಯವಷ್ಟೇ ಇದೆ. ಒಂದು ವೇಳೆ ಇದು ಕೂಡ ಭರ್ತಿಯಾದರೆ ನಿತ್ಯ 1.5 ದಶಲಕ್ಷ ಬ್ಯಾರೆಲ್&zwnj;ನಷ್ಟು ತೈಲ ಉತ್ಪಾದನೆ ಕಡಿತಗೊಳಿಸಬೇಕಾದ ಸ್ಥಿತಿಗೆ ಇರಾನ್&zwnj; ಸಿಲುಕಲಿದೆ. ಈಗಾಗಲೇ ಇರಾನ್&zwnj; 2.5 ದಶಲಕ್ಷ ಬ್ಯಾರೆಲ್&zwnj; ತೈಲ ಉತ್ಪಾದನೆ ಕಡಿತಗೊಳಿಸಿದೆ.&lt;/p&gt;&lt;p&gt;ಮಾರ್ಚ್&zwnj;ನಲ್ಲಿ ಇರಾನ್&zwnj;ನ ತೈಲ ರಫ್ತು 18.5 ಲಕ್ಷ ಬ್ಯಾರೆಲ್&zwnj;ನಷ್ಟಿತ್ತು. ಇದೀಗ ಅದು 5.67 ಲಕ್ಷ ಬ್ಯಾರೆಲ್&zwnj;ಗೆ ಇಳಿದಿದೆ. ಸದ್ಯಕ್ಕೆ ಇದರಿಂದ ದೇಶದ ಮೇಲೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗದಿದ್ದರೂ ಮೂರ್ನಾಲ್ಕು ತಿಂಗಳ ಬಳಿಕ ನಿರ್ಬಂಧದ ಬಿಸಿ ತಟ್ಟಲಿದೆ.&lt;/p&gt;&lt;h3&gt;&lt;strong&gt;ಇರಾನ್&zwnj;ನಲ್ಲಿ ಮತ್ತೆ ಜನರ ದಂಗೆ?&lt;/strong&gt;&lt;/h3&gt;&lt;p&gt;ಯುದ್ಧದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೆಲವೇ ವಾರಗಳಲ್ಲಿ ಇರಾನ್&zwnj;ನಲ್ಲಿ ಜನ ಮತ್ತೆ ದಂಗೆ ಏಳುವ ನಿರೀಕ್ಷೆ ಇದೆ. ಕಳೆದ ಜನವರಿಯಲ್ಲಷ್ಟೇ ಜನ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದು, ಅದನ್ನು ಧಮನ ಮಾಡಲಾಗಿತ್ತು. ಸದ್ಯದ ಸ್ಥಿತಿಯಲ್ಲಿ ಇರಾನ್&zwnj;ನ ಆಡಳಿತವು ಆರರಿಂದ ಎಂಟು ವಾರಗಳಷ್ಟು ಕಾಲ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆ ಬಳಿಕ ಜನ ದಂಗೆ ಏಳುವುದನ್ನು ತಪ್ಪಿಸಲು ಅಸಾಧ್ಯ ಎಂದು ಪರಮೋಚ್ಚ ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/iran-unable-to-export-oil-due-to-us-naval-embargo-country-s-economy-is-in-further-trouble-mrq/articleshow-io5gzo0"/>
        </item>
        <item>
            <title><![CDATA[ಧಾರವಾಡದ ಪೆಟ್ರೋಲ್ ಬಂಕ್‌ಗಳ ಮುಂದೆ ಮತ್ತೆ ನೋ ಸ್ಟಾಕ್ ಬೋರ್ಡ್; ಕೃತಕ ಅಭಾವ ಸೃಷ್ಟಿಯ ಆರೋಪ]]></title>
            <link>https://kannada.asianetnews.com/karnataka-districts/no-stock-boards-again-in-front-of-petrol-pumps-in-dharwad-accusations-of-creating-artificial-scarcity-mrq/articleshow-wxaa6rq</link>
            <guid isPermaLink="true">https://kannada.asianetnews.com/karnataka-districts/no-stock-boards-again-in-front-of-petrol-pumps-in-dharwad-accusations-of-creating-artificial-scarcity-mrq/articleshow-wxaa6rq</guid>
            <pubDate>Wed, 29 Apr 2026 07:19:07 +0530</pubDate>
            <description><![CDATA[ಮಧ್ಯಪ್ರಾಚ್ಯ ಯುದ್ಧದ ನಂತರ ಧಾರವಾಡ ಜಿಲ್ಲೆಯಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಪೆಟ್ರೋಲ್ ಬಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಮುಂಗಡ ಹಣ ಪಾವತಿಸಿದರೂ ಡಿಪೋಗಳಿಂದ ಸಮರ್ಪಕ ತೈಲ ಪೂರೈಕೆಯಾಗದ ಕಾರಣ, ಗ್ರಾಮೀಣ ಭಾಗದ ಹಲವು ಬಂಕ್‌ಗಳು 'ನೋ ಸ್ಟಾಕ್' ಬೋರ್ಡ್ ಹಾಕಿ ಮುಚ್ಚುತ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kjw9cn5k0gvgj15jdc4293sw,imgname-1-1772623385778.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಅಜೀಜ್ ಅಹ್ಮದ್ ಬಳಗಾನೂರ&lt;/strong&gt;&lt;/p&gt;&lt;p&gt;&lt;strong&gt;ಹುಬ್ಬಳ್ಳಿ&lt;/strong&gt;: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಿಲ್ಲೆಯ ಪೆಟ್ರೋಲ್ ಬಂಕ್&zwnj;ಗಳಿಗೆ ಸಮರ್ಪಕ ಇಂಧನ ಪೂರೈಕೆಯಾಗದೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಮುಂಗಡ ಹಣ ಪಾವತಿಸಿದರೂ ನಿಗದಿತ ಪ್ರಮಾಣದ ಇಂಧನ ದೊರೆಯದೆ ಬಂಕ್&zwnj;ಗಳಲ್ಲಿ ನೋ ಸ್ಟಾಕ್&zwnj; ಬೋರ್ಡ್ ರಾರಾಜಿಸುತ್ತಿವೆ.&lt;/p&gt;&lt;p&gt;ಯುದ್ಧ ಪ್ರಾರಂಭವಾದ ಹದಿನೈದು ದಿನದ ಬಳಿಕ ಇಂಧನದ ತೀವ್ರ ಸಮಸ್ಯೆಯಾಗಿತ್ತು. ಈ ವೇಳೆ ಸ್ವತಃ ಜಿಲ್ಲಾಧಿಕಾರಿ ಮುಂದೆ ನಿಂತು, ಪೆಟ್ರೋಲ್&zwnj; ಬಂಕ್&zwnj;ಗಳಿಗೆ ಅಧಿಕಾರಿಗಳ ತಂಡ ಕರೆದುಕೊಂಡು ಹೋಗಿ ವಸ್ತುಸ್ಥಿತಿ ಅ&zwj;ವಲೋಕಿಸಿ ಸಮಸ್ಯೆ ಪರಿಹರಿಸಿದ್ದರು. ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ಇಂಧನ ಸಂಗ್ರಹವಿದೆ. ಬಂಕ್&zwnj;ಗಳಿಗೆ ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.&lt;/p&gt;&lt;h2&gt;&lt;strong&gt;ನಿಲ್ಲದ ಸಮಸ್ಯೆ&lt;/strong&gt;&lt;/h2&gt;&lt;p&gt;ಕಳೆದೊಂದು ವಾರದಿಂದ ಮತ್ತೆ ಬಂಕ್&zwnj;ಗಳಲ್ಲಿ ಇಂಧನ ಸಮಸ್ಯೆ ಎದುರಾಗಿದೆ. ಆದರೆ, ಈ ಸಮಸ್ಯೆ ಕೊಂಚ ಭಿನ್ನವಾಗಿದೆ. ಎಚ್&zwnj;ಪಿಸಿ, ಬಿಪಿಸಿ, ಐಒಸಿ ಡಿಪೋಗಳಲ್ಲಿ ಅಗತ್ಯ ಪ್ರಮಾಣದ ತೈಲ ಸಂಗ್ರಹವಿದ್ದರೂ ಬಂಕ್&zwnj;ಗಳಿಗೆ ಸಮರ್ಪಕವಾಗಿ ಪೂರೈಸದಿರುವುದು ಬಂಕ್&zwnj; ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಗಡವಾಗಿ ಹಣ ತುಂಬಿದರೂ ಇಂಧನ ಪೂರೈಕೆ ಮಾಡುತ್ತಿಲ್ಲ ಎಂಬುದು ಬಂಕ್&zwnj; ಮಾಲೀಕರ ಆರೋಪ.&lt;/p&gt;&lt;h3&gt;&lt;strong&gt;ಗ್ರಾಮೀಣ ಭಾಗದ ಬಂಕ್&zwnj;ಗಳು ಬಂದ್&lt;/strong&gt;&lt;/h3&gt;&lt;p&gt;ಕಳೆದ 8-10 ದಿನಗಳಿಂದ ಈ ಸಮಸ್ಯೆ ಉದ್ಭವಿಸಿದ್ದು, ಅನಿವಾರ್ಯವಾಗಿ ಗ್ರಾಮೀಣ ಭಾಗದಲ್ಲಿರುವ ಹಲವು ಬಂಕ್&zwnj;ಗಳು ಬಂದ್&zwnj; ಆಗಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಹೊರತುಪಡಿಸಿ, ಕುಂದಗೋಳ, ನವಲಗುಂದ, ಕಲಘಟಗಿ, ನಗರದ ಹೊರಭಾಗ, ಅಂಚಟಗೇರಿ, ದಾಸ್ತಿಕೊಪ್ಪ ಸೇರಿದಂತೆ ಹಲವೆಡೆ ವಾರದಲ್ಲಿ 4 ದಿನ ತೆರೆದರೆ, 3 ದಿನ ಇಂಧನವಿಲ್ಲದೇ ಬಂದ್&zwnj; ಮಾಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಸ್ಟಾಕ್&zwnj; ಇದ್ದರೂ ಕೊಡುತ್ತಿಲ್ಲ&lt;/strong&gt;&lt;/h3&gt;&lt;p&gt;ಯುದ್ಧ ಪ್ರಾರಂಭವಾಗುವ ಮೊದಲು ರಜಾ ದಿನಗಳಲ್ಲಿ ಮುಂಗಡವಾಗಿ ಇಂಧನ ನೀಡಲಾಗುತ್ತಿತ್ತು. ಮಾರಾಟ ಮಾಡಿದ ಬಳಿಕ ಡಿಪೋಗಳಿಗೆ ಹಣ ನೀಡುತ್ತಿದ್ದೆವು. ಆದರೆ, ಇದೀಗ ಮುಂಗಡ ಹಣ ನೀಡಿದರೂ ಮೂರ್ನಾಲ್ಕು ದಿನ ಇಂಧನ ಪೂರೈಕೆಯಾಗುತ್ತಿಲ್ಲ.&lt;/p&gt;&lt;p&gt;ಈ ಕುರಿತು ಪ್ರಶ್ನಿಸಿದರೆ ತೈಲಬೆಲೆ ಏರಿಕೆಯಾಗಿದೆ. ನಾವು ನಷ್ಟ ಮಾಡಿಕೊಂಡು ಮೊದಲಿನ ದರದಲ್ಲಿಯೇ ಇಂಧನ ಪೂರೈಸುತ್ತಿದ್ದೇವೆ. ಈ ಸಮಸ್ಯೆ ಸರಿಯಾಗುವ ವರೆಗೂ ಅಲ್ಪ ಪ್ರಮಾಣದ ತೊಂದರೆಯಾಗಲಿದೆ ಎಂದು ಡಿಪೋದವರು ಹೇಳುತ್ತಿದ್ದಾರೆ ಎಂಬುದು ಬಂಕ್&zwnj; ಮಾಲಿಕರ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಧಾರವಾಡ ಜಿಲ್ಲೆಯಲ್ಲಿವೆ 204 ಬಂಕ್&zwnj;&lt;/strong&gt;&lt;/h3&gt;&lt;p&gt;ಧಾರವಾಡ ಜಿಲ್ಲೆಯ ನಗರ ಪ್ರದೇಶದಲ್ಲಿ ಎಚ್&zwnj;ಪಿಸಿ 13, ಬಿಪಿಸಿ 30, ಐಒಸಿ 25 ಸೇರಿ ಒಟ್ಟು 68 ಬಂಕ್&zwnj;ಗಳಿದ್ದರೆ, ಗ್ರಾಮೀಣ ಭಾಗಗಳಲ್ಲಿ ಎಚ್&zwnj;ಪಿಸಿ 35, ಬಿಪಿಸಿ 35, ಐಒಸಿ 54 ಸೇರಿ ಒಟ್ಟು 192 ಬಂಕ್&zwnj;ಗಳಿವೆ. ಇನ್ನಿತರೆ 12 ಖಾಸಗಿ ಪೆಟ್ರೋಲ್&zwnj; ಬಂಕ್&zwnj; ಸೇರಿ ಜಿಲ್ಲೆಯಲ್ಲಿ ಒಟ್ಟು 204 ಪೆಟ್ರೋಲ್&zwnj; ಬಂಕ್&zwnj;ಗಳಿವೆ.&lt;/p&gt;&lt;p&gt;&lt;strong&gt;ಡಿಸಿ ಭೇಟಿಗೆ ನಿರ್ಧಾರ&lt;/strong&gt;&lt;/p&gt;&lt;p&gt;ಸಮರ್ಪಕವಾಗಿ ಇಂಧನ ಪೂರೈಕೆ ಆಗದಿರುವುದರಿಂದ ಪಟ್ಟಣ, ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬಂದು ಇಂಧನ ಹಾಕಿಸಿಕೊಳ್ಳುತ್ತಿದ್ದಾರೆ. ಜತೆಗೆ ಕಳೆದ ಒಂದು ವಾರದಿಂದ ನಗರ ಪ್ರದೇಶದಲ್ಲೂ ಸಮರ್ಪಕ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಭೇಟಿಯಾಗಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ.&lt;/p&gt;&lt;p&gt;&lt;strong&gt;ಶಾಂತರಾಜ ಪೋಳ, ಅಧ್ಯಕ್ಷರು- ಧಾರವಾಡ ಜಿಲ್ಲಾ ಪೆಟ್ರೋಲಿಯಂ ಮಾಲಿಕರು ಹಾಗೂ ಡಿಲರ್ಸ್ ಅಸೋಸಿಯೇಷನ್&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/no-stock-boards-again-in-front-of-petrol-pumps-in-dharwad-accusations-of-creating-artificial-scarcity-mrq/articleshow-wxaa6rq"/>
        </item>
        <item>
            <title><![CDATA[ಪಾಕಿಸ್ತಾನ ಬಳಿ ಒಂದು ದಿನಕ್ಕೂ ಆಗುವಷ್ಟು ತೈಲ ದಾಸ್ತಾನು ಇಲ್ಲ! ಖುದ್ದು ಪಾಕ್‌ ತೈಲ ಸಚಿವನಿಂದ ದೇಶದ ದುಸ್ಥಿತಿ ಬಹಿರಂಗ]]></title>
            <link>https://kannada.asianetnews.com/world-news/pakistan-minister-praises-india-oil-reserves-admits-lack-of-strategic-storage-kvn/articleshow-x7km1z0</link>
            <guid isPermaLink="true">https://kannada.asianetnews.com/world-news/pakistan-minister-praises-india-oil-reserves-admits-lack-of-strategic-storage-kvn/articleshow-x7km1z0</guid>
            <pubDate>Wed, 29 Apr 2026 07:18:16 +0530</pubDate>
            <description><![CDATA[ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ 60-70 ದಿನಗಳ ಬೇಡಿಕೆ ಪೂರೈಸಬಲ್ಲದು, ಆದರೆ ಪಾಕಿಸ್ತಾನದಲ್ಲಿ ಒಂದು ದಿನದ ಸಂಗ್ರಹವೂ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq77kgh932en1fgw057hdza5,imgname-pakistan--4--1777285579305.jpg" type="image/jpeg" height="390" width="690"/>
            <content:encoded><![CDATA[&lt;p&gt;ಇಸ್ಲಾಮಾಬಾದ್&zwnj;: ಮಧ್ಯಪ್ರಾಚ್ಯ ಸಂಘರ್ಷದಿಂದ ಎದುರಾದ ತೈಲ ಬಿಕ್ಕಟ್ಟು ನಿರ್ವಹಣೆ ಕುರಿತು ಭಾರತ ಸರ್ಕಾರದ ವಿರುದ್ಧ ಭಾರತದ ವಿಪಕ್ಷಗಳು ಕಿಡಿಕಾರುತ್ತಿದ್ದರೆ, ಅತ್ತ ಭಾರತದ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಪಾಕಿಸ್ತಾನದ ಪೆಟ್ರೋಲಿಯಂ ಖಾತೆ ಸಚಿವ ಅಲಿ ಮಲಿಕ್&zwnj; ಹಾಡಿ ಹೊಗಳಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಪ್ರಮಾಣದ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಪಾಕ್ ದಯನೀಯ ಸ್ಥಿತಿ ಬಿಚ್ಚಿಟ್ಟ ಪೆಟ್ರೋಲಿಯಂ ಸಚಿವ&lt;/strong&gt;&lt;/h2&gt;&lt;p&gt;ಸಮಾ ಟೀವಿಗೆ ನೀಡಿದ ಸಂದರ್ಶನದಲ್ಲಿ ದೇಶದ ತೈಲ ಬಿಕ್ಕಟ್ಟಿನ ಕುರಿತು ಬೆಳಕು ಚೆಲ್ಲಿರುವ ಅಲಿ, &lsquo;ನಮ್ಮ ದೇಶದಲ್ಲೀಗ ದೇಶದ 5-7 ದಿನಗಳ ಅಗತ್ಯ ಪೂರೈಸಬಹುದಾದ ವಾಣಿಜ್ಯ ಕಚ್ಚಾತೈಲ ಮಾತ್ರ ಇದೆ. ತೈಲ ಮಾರಾಟ ಕಂಪನಿಗಳ ಬಳಿಯೂ ಕೇವಲ 20-21 ದಿನಗಳ ಅಗತ್ಯ ಪೂರೈಸುವ ತೈಲ ಸಂಗ್ರಹವಿದೆ. ನಮ್ಮ ಬಳಿ ಕನಿಷ್ಠ ಒಂದು ದಿನ ಅಗತ್ಯ ಪೂರೈಸಬಹುದಾದ ಯಾವುದೇ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೇ ಇಲ್ಲ&rsquo; ಎಂದು ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಭಾರತದ ವ್ಯೂಹಾತ್ಮಕ ತೈಲ ಸಂಗ್ರಹಾಗಾರ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಅಲಿ, &lsquo;ಭಾರತದ ಬಳಿ 60-70 ದಿನಗಳ ಬೇಡಿಕೆ ಪೂರೈಸುವಷ್ಟು ಕಚ್ಚಾತೈಲ ಸಂಗ್ರಹವಿದೆ. ಒಂದು ಸಹಿ ಬಿದ್ದರೆ ಅಷ್ಟೂ ತೈಲ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ&rsquo; ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ವ್ಯೂಹಾತ್ಮಕ ಸಂಗ್ರಹಾಗಾರ:&lt;/strong&gt;&lt;/h3&gt;&lt;p&gt;ದೈನಂದಿನ ಬೇಡಿಕೆ ಹೊರತಾಗಿ, ಜಾಗತಿಕ ಬಿಕ್ಕಟ್ಟು, ತೈಲ ಪೂರೈಕೆ ಕೊರತೆ ಸಂದರ್ಭದಲ್ಲಿ ವಿದೇಶಗಳಿಂದ ತೈಲ ಪೂರೈಕೆ ಆಗದೇ ಇದ್ದರೂ ಆ ಪರಿಸ್ಥಿತಿ ಎದುರಿಸಲು ಪ್ರತಿ ದೇಶ ಪ್ರತ್ಯೇಕವಾಗಿ ಭೂಗತ ತೈಲ ಸಂಗ್ರಹಾಗಾರ ನಿರ್ಮಿಸಿಕೊಳ್ಳುತ್ತವೆ. ಅಗತ್ಯ ಬಿದ್ದಾಗ ಅದರಿಂದ ತೈಲ ಹೊರತೆಗೆದು ಬಳಸಿಕೊಳ್ಳುತ್ತವೆ. ಪ್ರಸಕ್ತ ಭಾರತದಲ್ಲಿ ಕರ್ನಾಟಕದ ಮಂಗಳೂರು, ಪಾದೂರು, ವಿಶಾಖಪಟ್ಟಣದಲ್ಲಿ ಬೃಹತ್&zwnj; ಭೂಗತ ತೈಲ ಸಂಗ್ರಹಾಗಾರವಿದೆ. ಇವುಗಳ ಸಂಗ್ರಹ ಸಾಮರ್ಥ್ಯ 53.3 ಲಕ್ಷ ಮೆಟ್ರಿಕ್&zwnj; ಟನ್&zwnj;ನಷ್ಟಿದೆ ಅಂದರೆ 36.92 ದಶಲಕ್ಷ ಬ್ಯಾರೆಲ್&zwnj;. ಇದು ದೇಶದ 60- 70 ದಿನಳ ಬೇಡಿಕೆ ಪೂರೈಸಬಲ್ಲದು.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/pakistan-minister-praises-india-oil-reserves-admits-lack-of-strategic-storage-kvn/articleshow-x7km1z0"/>
        </item>
        <item>
            <title><![CDATA[ಇಂದು 4 ಶುಭ ಯೋಗ, 6 ರಾಶಿಗೆ ಹಣದ ಹರಿವು, ಆಸ್ತಿಪಾಸ್ತಿ ವೃದ್ಧಿ! 12 ರಾಶಿಗಳ ನಿಖರ ಭವಿಷ್ಯ]]></title>
            <link>https://kannada.asianetnews.com/gallery/astrology/kannada-astrology-daily-horoscope-april-29-2026-predictions-for-all-12-zodiac-signs-mrq-lr7xzam</link>
            <guid isPermaLink="true">https://kannada.asianetnews.com/gallery/astrology/kannada-astrology-daily-horoscope-april-29-2026-predictions-for-all-12-zodiac-signs-mrq-lr7xzam</guid>
            <pubDate>Wed, 29 Apr 2026 07:09:47 +0530</pubDate>
            <description><![CDATA[ಏಪ್ರಿಲ್ 29, 2026ರ ಬುಧವಾರದಂದು ವ್ಯಾಘಾತ, ಹರ್ಷಣ, ಪ್ರಜಾಪತಿ ಮತ್ತು ಸೌಮ್ಯ ಎಂಬ 4 ಶುಭ ಯೋಗಗಳು ದಿನವಿಡೀ ಇರಲಿವೆ. ಈ ಯೋಗಗಳ ಪ್ರಭಾವದಿಂದ ಇಂದಿನ ದಿನವು 12 ರಾಶಿಗಳಿಗೆ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01knphscf5vx0ad8a6vhe73cv9,imgname-atchaya-thiruthiyai-2026-rasi-palangal--1--1775652090341.png" type="image/jpeg" height="390" width="690"/>
            <content:encoded><![CDATA[ಏಪ್ರಿಲ್ 29, 2026ರ ಬುಧವಾರದಂದು ವ್ಯಾಘಾತ, ಹರ್ಷಣ, ಪ್ರಜಾಪತಿ ಮತ್ತು ಸೌಮ್ಯ ಎಂಬ 4 ಶುಭ ಯೋಗಗಳು ದಿನವಿಡೀ ಇರಲಿವೆ. ಈ ಯೋಗಗಳ ಪ್ರಭಾವದಿಂದ ಇಂದಿನ ದಿನವು 12 ರಾಶಿಗಳಿಗೆ ಹೇಗಿರಲಿದೆ ಎಂಬುದನ್ನು ತಿಳಿಯೋಣ ಬನ್ನಿ.&lt;img&gt;ಮೇಷ ರಾಶಿಯವರು ಇಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಮುಂದೆ ಕಷ್ಟಪಡಬೇಕಾಗಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂದು ಯಾರಿಗೂ ಸಾಲ ಕೊಡಬೇಡಿ, ಕೊಟ್ಟರೆ ಹಣ ವಾಪಸ್ ಬರುವುದು ಕಷ್ಟ. ಮಕ್ಕಳ ಕುರಿತ ಚಿಂತೆಗಳು ದೂರಾಗಲಿವೆ.&lt;img&gt;ವೃಷಭ ರಾಶಿಯವರಿಗೆ ಕೆಲಸದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ. ವ್ಯಾಪಾರದಲ್ಲಿ ದೊಡ್ಡ ಒಪ್ಪಂದವೊಂದು ಅಂತಿಮಗೊಳ್ಳಬಹುದು. ಅತ್ತೆಯ ಕಡೆಯಿಂದ ಆರ್ಥಿಕ ಸಹಾಯ ಸಿಗುವ ಸಾಧ್ಯತೆ ಇದೆ. ಮನೆ ಅಥವಾ ಹೊಸ ವಾಹನ ಖರೀದಿಸುವ ಯೋಚನೆಯಲ್ಲಿದ್ದರೆ, ಅದರಲ್ಲಿ ಯಶಸ್ಸು ಸಿಗಲಿದೆ. ಅನಾವಶ್ಯಕವಾಗಿ ಯಾರೊಂದಿಗೂ ಜಗಳವಾಡಬೇಡಿ.&lt;img&gt;ಕೆಲಸ ಮಾಡುವ ಸ್ಥಳದಲ್ಲಿ ಯಾರಾದರೂ ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಕುಟುಂಬದ ಹಿರಿಯರ ಸಹಾಯದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಆ ಆಸೆ ಈ ಸಮಯದಲ್ಲಿ ಈಡೇರಬಹುದು. ಹೂಡಿಕೆ ಮಾಡುವಾಗ ಬಹಳ ಜಾಗರೂಕರಾಗಿರಿ.&lt;img&gt;ಕರ್ಕಾಟಕ ರಾಶಿಯವರಿಗೆ ಇಂದು ಗೌರವ, ಮರ್ಯಾದೆ ಹೆಚ್ಚಾಗಲಿದೆ. ನಿಂತುಹೋಗಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಬರಬಹುದು. ಕುಟುಂಬಕ್ಕೆ ಹೊಸ ಸದಸ್ಯರ ಆಗಮನದಿಂದ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಉದ್ಯೋಗಸ್ಥರಿಗೂ ಉತ್ತಮ ಫಲಗಳು ಸಿಗಲಿವೆ.&lt;img&gt;ಹೂಡಿಕೆಗಳ ಮೂಲಕ ಲಾಭ ಗಳಿಸುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಲು ಬಯಸುವವರ ಆಸೆ ಈಡೇರಬಹುದು. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಅಧಿಕಾರಿಗಳ ಬೆಂಬಲ ಸಿಗಲಿದೆ. ವೈವಾಹಿಕ ಜೀವನವೂ ಸಂತೋಷದಿಂದ ಕೂಡಿರುತ್ತದೆ. ಆರೋಗ್ಯದ ಬಗ್ಗೆ ಗಮನ ಹರಿಸಿ.&lt;img&gt;ವ್ಯಾಪಾರದಲ್ಲಿ ದೊಡ್ಡ ಒಪ್ಪಂದವೊಂದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು ಬಾಧಿಸಬಹುದು. ನಿಮ್ಮ ವೈಯಕ್ತಿಕ ವಿಷಯವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ನೀವೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವಿರಿ.&lt;img&gt;ಭೂಮಿ, ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಶುಭ ಕಾರ್ಯವೊಂದು ನಡೆಯಬಹುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಬಹುದು. ಮಹಿಳೆಯರು ಇಂದು ಹಣವನ್ನು ನೋಡಿ ಖರ್ಚು ಮಾಡಿ.&lt;img&gt;ವೃಶ್ಚಿಕ ರಾಶಿಯವರಿಗೆ ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಬಹುದು. ಈಗ ಮಾಡುವ ಒಳ್ಳೆಯ ಕಾರ್ಯಗಳ ಫಲ ಶೀಘ್ರದಲ್ಲೇ ಸಿಗಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಲು ಇದು ಸರಿಯಾದ ಸಮಯ. ಕಚೇರಿಯಲ್ಲಿ ನಿಮ್ಮ ಕೆಲಸದಿಂದ ಎಲ್ಲರೂ ಸಂತೋಷವಾಗಿರುತ್ತಾರೆ.&lt;img&gt;ವೈವಾಹಿಕ ಜೀವನದಲ್ಲಿನ ಜಗಳಗಳು ಬಗೆಹರಿಯಬಹುದು. ಈ ಸಮಯದಲ್ಲಿ ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿ ಬರಬಹುದು. ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶಗಳು ಬರಬಹುದು. ಹೂಡಿಕೆಗಳ ಮೂಲಕ ಲಾಭ ಗಳಿಸಬಹುದು. ಮದುವೆ ಮಾತುಕತೆಗಳು ಯಶಸ್ವಿಯಾಗಿ ಮುಗಿಯಲಿವೆ.&lt;img&gt;ಮಕರ ರಾಶಿಯವರಿಗೆ ಸಮಾಜದಲ್ಲಿ ಗೌರವ, ಮರ್ಯಾದೆ ಸಿಗಲಿದೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ, ಆಹಾರದ ವಿಷಯದಲ್ಲಿ ಗಮನವಿರಲಿ. ಸ್ಥಿರಾಸ್ತಿ ಅಥವಾ ವಾಹನ ಖರೀದಿಸಲು ಯೋಚಿಸುತ್ತಿದ್ದರೆ, ಸಮಯ ಅನುಕೂಲಕರವಾಗಿದೆ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಸಿಗಬಹುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮವೊಂದು ನಡೆಯಬಹುದು.&lt;img&gt;ಶತ್ರುಗಳು ಪ್ರಯತ್ನಿಸಿದರೂ ನಿಮಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಕೋರ್ಟ್, ಕೇಸ್ ವಿಷಯಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರುವ ಲಕ್ಷಣಗಳಿವೆ. ಮಕ್ಕಳಿಂದ ಒಳ್ಳೆಯ ಸುದ್ದಿ ಬರಬಹುದು. ಇತರರ ಮಾತನ್ನು ಕೇಳಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ.&lt;img&gt;ಮೀನ ರಾಶಿಯವರು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಇವರ ಜೀವನದಲ್ಲಿ ಸಂತೋಷ ನೆಲೆಸಿರುತ್ತದೆ. ಅನಗತ್ಯ ಜಗಳಗಳಿಂದ ದೂರವಿರುವುದು ಉತ್ತಮ. ಕೆಲಸ, ವ್ಯವಹಾರದ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಮಕ್ಕಳಿಂದ ಸಂತೋಷ ಸಿಗಲಿದೆ. ತಂದೆ-ತಾಯಿಯ ಸಹಾಯದಿಂದ ನಿಂತುಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.&lt;img&gt;ಈ ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿಯು ಜ್ಯೋತಿಷ್ಯದ ಅಭಿಪ್ರಾಯಗಳು, ಧಾರ್ಮಿಕ ಗ್ರಂಥಗಳು ಮತ್ತು ಪಂಚಾಂಗವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಪರಿಶೀಲಿಸಿಲ್ಲ. ಮಾಹಿತಿಯನ್ನು ಒದಗಿಸುವುದು ಮಾತ್ರ ನಮ್ಮ ಉದ್ದೇಶ. ಇದರ ನಿಖರತೆ, ವಿಶ್ವಾಸಾರ್ಹತೆ ಮತ್ತು ಪರಿಣಾಮಗಳಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಯಾವುದೇ ರೀತಿಯಲ್ಲಿ ಜವಾಬ್ದಾರನಾಗಿರುವುದಿಲ್ಲ.]]></content:encoded>
            <category><![CDATA[astrology]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/astrology/kannada-astrology-daily-horoscope-april-29-2026-predictions-for-all-12-zodiac-signs-mrq-lr7xzam"/>
        </item>
        <item>
            <title><![CDATA[ಅಮಿತ್‌ ಶಾ ವಿಶೇಷ ಕರ್ತವ್ಯಾಧಿಕಾರಿ ಎಂದು ನಂಬಿಸಿ ವೈದ್ಯನಿಗೆ 2.70 ಕೋಟಿ ರು. ವಂಚನೆ]]></title>
            <link>https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu</link>
            <guid isPermaLink="true">https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu</guid>
            <pubDate>Wed, 29 Apr 2026 05:41:04 +0530</pubDate>
            <description><![CDATA[ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ, ಆರೋಪಿ ಎಚ್‌.ಎನ್‌.ಸುಜಯೇಂದ್ರ ವಿರುದ್ಧ ವಿಜಯನಗರ ಠಾಣೆ ಪೊಲೀಸರು ದೋಷಾರೋಪಟ್ಟಿ ಸಲ್ಲಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbdja8qdae2d2074pexc9yt,imgname-cheating-1777426049303.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು&lt;/strong&gt;: ಕೇಂದ್ರ ಗೃಹ ಸಚಿವ ಅಮಿತ್&zwnj; ಶಾ ಅವರ ವಿಶೇಷ ಕರ್ತವ್ಯಾಧಿಕಾರಿ ಎಂದು ಹೇಳಿಕೊಂಡು ಜಮ್ಮು ಕಾಶ್ಮೀರದ ವೈದ್ಯರೊಬ್ಬರಿಗೆ ಜಮೀನು ಕೊಡಿಸುವುದಾಗಿ ನಂಬಿಸಿ 2.70 ಕೋಟಿ ರು. ವಂಚಿಸಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಜಯನಗರ ಠಾಣೆ ಪೊಲೀಸರು, ಆರೋಪಿ ಎಚ್&zwnj;.ಎನ್&zwnj;.ಸುಜಯೇಂದ್ರ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದಾರೆ.&lt;/p&gt;&lt;p&gt;ವಿಜಯನಗರದ ಆರ್&zwnj;ಪಿಸಿ ಲೇಔಟ್&zwnj; ನಿವಾಸಿ ಆಗಿರುವ ಆರೋಪಿ ಸುಜಯೇಂದ್ರ ಮಲ್ಲೇಶ್ವರ ಯದುಗಿರಿ ಯತಿರಾಜ ಮಠದ ಭಕ್ತನಾಗಿ ಬಳಿಕ ಮಠದ ಅಭಿವೃದ್ಧಿಗೆ ಧನಸಹಾಯ ಮಾಡುತ್ತಾ ಸ್ವಾಮೀಜಿ ನಂಬಿಕೆ ಗಿಟ್ಟಿಸಿದ್ದ. ಸ್ವಾಮೀಜಿ ಅವರು ದೇಶಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಈತನನ್ನು ಕರೆದೊಯ್ಯುತ್ತಿದ್ದರು.&lt;/p&gt;&lt;h2&gt;&lt;strong&gt;ಪ್ರಭಾವಿಗಳ ಸಂಪರ್ಕವಿದೆ ಎಂದು ಫೋಸು&lt;/strong&gt;&lt;/h2&gt;&lt;p&gt;ಈ ವೇಳೆ ಪ್ರಭಾವಿ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಸಚಿವರು, ಪ್ರಭಾವಿ ವ್ಯಕ್ತಿಗಳ ಸಂಪರ್ಕ ಬೆಳೆಸುತ್ತಿದ್ದ. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಇದನ್ನೇ ದಾಳವಾಗಿ ಮಾಡಿಕೊಂಡು ಮಠಕ್ಕೆ ಬರುವ ಭಕ್ತರಿಗೆ ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಫೋಟೋ ತೋರಿಸಿ ತಾನೂ ಸಹ ಪ್ರಭಾವಿ ಎಂದು ಬಿಂಬಿಸಿಕೊಳ್ಳುತ್ತಿದ್ದ.&lt;/p&gt;&lt;p&gt;ಅದರಂತೆ 2021ನೇ ಸಾಲಿನಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಯದುಗಿರಿ ಯತಿರಾಜ ಮಠದ ಶಾಖೆಗೆ ಹೋಗಿದ್ದಾಗ ಮಠದ ಭಕ್ತ ವೈದ್ಯ ಡಾ.ರಾಜಾ ಲಂಗರ್&zwnj; ಅವರನ್ನು ಪರಿಚಯಿಸಿಕೊಂಡಿದ್ದ. ಲಂಗರ್&zwnj; ಅವರು ಕುಟುಂಬ ಸಮೇತ ಬೆಂಗಳೂರಿನ ಮಠಕ್ಕೂ ಬರುತ್ತಿದ್ದರು. ಈ ವೇಳೆ ಆರೋಪಿಯು ನಾನು ಮಠದ ಸೇವೆ ಜೊತೆಗೆ ರಿಯಲ್&zwnj; ಎಸ್ಟೇಟ್&zwnj; ವ್ಯವಹಾರ ನಡೆಸುತ್ತೇನೆ. ನನಗೆ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ ಎಂದು ಪುಸಲಾಯಿಸಿದ್ದ.&lt;/p&gt;&lt;p&gt;2023ನೇ ಸಾಲಿನಲ್ಲಿ ಡಾ.ರಾಜಾ ಲಂಗರ್&zwnj; ಬೆಂಗಳೂರಿನ ಯತಿರಾಜ ಮಠಕ್ಕೆ ಬಂದಾಗ, ಮನೆಗೆ ಕೊರೆದೊಯ್ದಿದ್ದ ಆರೋಪಿಯು ಬೆಂಗಳೂರು ಏರ್&zwnj;ಪೋರ್ಟ್&zwnj; ಸಮೀಪ ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದ ಜಮೀನು ಇದ್ದು, ಆ ಜಮೀನನ್ನು ಹೆರಿಟೇಜ್&zwnj; ಹೋಮ್ಸ್ ಆಗಿ ಅಭಿವೃದ್ಧಿಪಡಿಸಿ 1.50 ಕೋಟಿ ರು.ಗೆ ಮಾರಾಟ ಮಾಡುತ್ತೇನೆ. ಇದನ್ನು ಮುಂದೆ ಹೆಚ್ಚಿನ ಲಾಭಕ್ಕೆ ಮಾರಬಹುದು ಎಂದಿದ್ದ. ಹೀಗಾಗಿ ನೀವೇ ಖರೀದಿಸಿ ಎಂದು ಪುಸಲಾಯಿಸಿದ್ದ.&lt;/p&gt;&lt;h3&gt;&lt;strong&gt;ಕಂಪನಿ ಖಾತೆಗೆ ಹಣ ವರ್ಗಾವಣೆ&lt;/strong&gt;&lt;/h3&gt;&lt;p&gt;ಈತನ ಮಾತು ನಂಬಿದ್ದ ಡಾ.ರಾಜಾ ಲಂಗರ್&zwnj; 40/60 ವಿಸ್ತೀರ್ಣದ ನಿವೇಶನ ಖರೀದಿಸಲು ನಿರ್ಧರಿಸಿದ್ದರು. ಅದರಂತೆ ಆರೋಪಿ ಮಾಲೀಕನಾಗಿರುವ ಶ್ರೀನಿವಾಸ ಕನ್&zwnj;ಸ್ಟ್ರಕ್ಷನ್&zwnj; ಕಂಪನಿ ಬ್ಯಾಂಕ್ ಖಾತೆಗೆ ಡಾ.ರಾಜಾ ಲಂಗರ್&zwnj; 1.50 ಕೋಟಿ ರು. ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಯು ನಿವೇಶನ ಕೊಡಿಸದೆ ಸುಮ್ಮನಿದ್ದ. ಕೆಲ ದಿನಗಳ ಬಳಿಕ ಪ್ರಶ್ನೆ ಮಾಡಿದಾಗ ತಾಂತ್ರಿಕ ಕಾರಣಗಳಿಂದ ಸಮಸ್ಯೆಯಾಗಿದೆ ಎಂದು ಹೇಳಿದ್ದ. ಮತ್ತೆ ಕೇಳಿದಾಗ ಹೆಚ್ಚುರಿಯಾಗಿ 1.20 ಕೋಟಿ ರು. ಕೊಡುವಂತೆ ಕೇಳಿದ್ದ. ಇಲ್ಲವಾದರೆ, 1.50 ಕೋಟಿ ರು. ವಾಪಾಸ್&zwnj; ನೀಡುವುದಿಲ್ಲ ಎಂದು ಹೆದರಿಸಿದ್ದ. ಹೀಗಾಗಿ ಅವರು ಆರೋಪಿ ಕಂಪನಿ ಖಾತೆಗೆ 1.20 ಕೋಟಿ ರು. ವರ್ಗಾಯಿಸಿದ್ದರು.&lt;/p&gt;&lt;h3&gt;&lt;strong&gt;5 ಚೆಕ್&zwnj; ಬೌನ್ಸ್&zwnj;&lt;/strong&gt;&lt;/h3&gt;&lt;p&gt;ಬಳಿಕ ಆರೋಪಿಯು ನಾನು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ನಿಮಗೆ ಮತ್ತು ನಿಮ್ಮ ತಂದೆ ಉನ್ನತ ಸ್ಥಾನಮಾನ ಕೊಡಿಸುವುದಾಗಿ ಡಾ.ರಾಜಾ ಲಂಗರ್&zwnj;ಗೆ ನಂಬಿಸಿದ್ದ. ಕೆಲ ದಿನಗಳ ಬಳಿಕ ನಿವೇಶನ ನೋಂದಣಿ ಮಾಡಿಕೊಡವಂತೆ ಕೇಳಿದಾಗ ನಿವೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಹಣ ವಾಪಾಸ್&zwnj; ಕೊಡುವುದಾಗಿ ಹೇಳಿ ಕಾಲ ದೂಡುತ್ತಿದ್ದ. ಇದರಿಂದ ಗಾಬರಿಗೊಂಡ ಡಾ.ರಾಜಾ ಲಂಗರ್&zwnj;, ಮಠದ ಸ್ವಾಮೀಜಿ ಮತ್ತು ಆಡಳಿತಾಧಿಕಾರಿಯನ್ನು ಭೇಟಿಯಾಗಿ ಕೇಳಿದಾಗ, ಅವರು ನಮಗೇನು ಗೊತ್ತಿಲ್ಲ ಎಂದಿದ್ದರು. ಆಗ ರಾಜಾ ಲಂಗರ್ ಈ ಬಗ್ಗೆ ದೂರು ನೀಡುವುದಾಗಿ ಹೇಳಿದಾಗ, ಆರೋಪಿ ಸುಜಯೇಂದ್ರ 2.70 ಕೋಟಿ ರು.ಗೆ 5 ಚೆಕ್&zwnj; ನೀಡಿದ್ದ. ಬಳಿಕ ಆ ಚೆಕ್&zwnj;ಗಳು ಬೌನ್ಸ್&zwnj; ಆಗಿದ್ದವು. ಬಳಿಕ ರಾಜಾ ಲಂಗರ್&zwnj; ಅವರು ಆರೋಪಿ ಸುಜಯೇಂದ್ರ, ಮಠದ ಸ್ವಾಮೀಜಿ ಹಾಗೂ ಆಡಳಿತಾಧಿಕಾರಿ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಜಾರ್ಜ್&zwnj;ಶಿಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h3&gt;&lt;strong&gt;ಕೇಂದ್ರ, ರಾಜ್ಯ ಸರ್ಕಾರದ ಸೀಲುಗಳ ದುರುಪಯೋಗ&lt;/strong&gt;&lt;/h3&gt;&lt;p&gt;ಆರೋಪಿ ಸುಜಯೇಂದ್ರ ವಂಚಿಸುವ ಉದ್ದೇಶದಿಂದಲೇ ಡಾ.ರಾಜಾ ಲಂಗರ್&zwnj; ಅವರಿಂದ ಹಣ ಪಡೆದಿದ್ದ. ಆರೋಪಿಯು ಯತಿರಾಜಮಠದ ಟ್ರಸ್ಟಿಯಾದ ಬಳಿಕ ಕೇಂದ್ರ ಗೃಹ ಸಚಿವಾಲಯದ ಸೀಲುಗಳು, ರಾಜ್ಯ ಸರ್ಕಾರ ಸೀಲುಗಳನ್ನು ನಕಲು ಮಾಡಿ, ಸರ್ಕಾರದ ಉನ್ನತಾಧಿ ಕಾರಿಯಂತೆ ನಕಲಿ ಲೆಟರ್&zwnj; ಹೆಡ್&zwnj;ಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಯತಿರಾಜ ಮಠದ ಹೆಸರಿನಲ್ಲಿ ಮಠದ ನಿವೇಶನ ಮತ್ತು ಜಮೀನು ಅಭಿವೃದ್ಧಿಪಡಿಸಿ ಮಾರಾಟ ಮಾಡುವುದಾಗಿ ನಂಬಿಸಿ ಹಲವರಿಗೆ ವಂಚನೆ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಾರ್ಜ್&zwnj; ಶೀಟ್&zwnj;ನಲ್ಲಿ ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-doctor-cheated-of-rs-2-point-70-crore-by-pretending-to-be-amit-shah-s-officer-on-special-duty-mrq/articleshow-5we6tyu"/>
        </item>
        <item>
            <title><![CDATA[ಪ್ಲೀಸ್ ಒಂದು ಸಹಿ ಮಾಡಿ ಪುಣ್ಯ ಕಟ್ಕೊಳ್ಳಿ: ಭಾರತದ ಮುಂದೆ ಮತ್ತೆ ಕೈ ಚಾಚಿದ ಪಾಕಿಸ್ತಾನ]]></title>
            <link>https://kannada.asianetnews.com/world-news/pakistan-s-petroleum-minister-ali-malik-has-praised-india-s-oil-storage-capacity-mrq/articleshow-gg2evee</link>
            <guid isPermaLink="true">https://kannada.asianetnews.com/world-news/pakistan-s-petroleum-minister-ali-malik-has-praised-india-s-oil-storage-capacity-mrq/articleshow-gg2evee</guid>
            <pubDate>Wed, 29 Apr 2026 06:55:57 +0530</pubDate>
            <description><![CDATA[ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ತಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಸಂಗ್ರಹಾಗಾರವೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01d40gkkzz9751ygbkc88j1myx,imgname-Pak-India.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇಸ್ಲಾಮಾಬಾದ್&zwnj;: &lt;/strong&gt;ಮಧ್ಯಪ್ರಾಚ್ಯ ಸಂಘರ್ಷದಿಂದ ಎದುರಾದತೈಲ ಬಿಕ್ಕಟ್ಟು ನಿರ್ವಹಣೆ ಕುರಿತು ಭಾರತ ಸರ್ಕಾರದ ವಿರುದ್ಧ ಭಾರತದ ವಿಪಕ್ಷಗಳು ಕಿಡಿಕಾರುತ್ತಿದ್ದರೆ, ಅತ್ತ ಭಾರತದ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಪಾಕಿಸ್ತಾನದ ಪೆಟ್ರೋಲಿಯಂ ಖಾತೆ ಸಚಿವ ಅಲಿ ಮಲಿಕ್&zwnj; ಹಾಡಿ ಹೊಗಳಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಪ್ರಮಾಣದ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೂ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಸಮಾ ಟೀವಿಗೆ ನೀಡಿದ ಸಂದರ್ಶನದಲ್ಲಿ ದೇಶದ ತೈಲ ಬಿಕ್ಕಟ್ಟಿನ ಕುರಿತು ಬೆಳಕು ಚೆಲ್ಲಿರುವ ಅಲಿ, 'ನಮ್ಮ ದೇಶದಲ್ಲೀಗ ದೇಶದ 5-1 ದಿನಗಳ ಅಗತ್ಯ ಪೂರ ಸಬಹುದಾದ ವಾಣಿಜ್ಯ ಕಚ್ಚಾತೈಲ ಮಾತ್ರ ಇದೆ.&lt;/p&gt;&lt;p&gt;ತೈಲ ಮಾರಾಟ ಕಂಪನಿಗಳ ಬಳಿಯೂ ಕೇವಲ 20-21 ದಿನಗಳ ಅಗತ್ಯ ಪೂರೈಸುವ ತೈಲ ಸಂಗ್ರಹವಿದೆ. ನಮ್ಮ ಬಳಿ ಕನಿಷ್ಠ ಒಂದು ದಿನ ಅಗತ್ಯ ಪೂರೈಸಬಹುದಾದ ಯಾವುದೇ ವ್ಯೂಹಾತ್ಮಕ ತೈಲ ಸಂಗ್ರಹಾಗಾರವೇ ಇಲ್ಲ' ಎಂದು ಹೇಳಿದ್ದಾರೆ.&lt;/p&gt;&lt;p&gt;ಇದೇ ವೇಳೆ ಭಾರತದ ವ್ಯೂಹಾತ್ಮಕತೈಲ ಸಂಗ್ರಹಾಗಾರ ಸಾಮರ್ಥ್ಯದ ಬಗ್ಗೆ ಮಾತನಾಡಿರುವ ಅಲಿ, 'ಭಾರತದ ಬಳಿ 60-70 ದಿನಗಳ ಬೇಡಿಕೆ ಪೂರೈಸುವಷ್ಟು ಕಚ್ಚಾತೈಲ ಸಂಗ್ರಹವಿದೆ. ಒಂದು ಸಹಿ ಬಿದ್ದರೆ ಅಷ್ಟೂ ತೈಲ ಮಾರುಕಟ್ಟೆಗೆ ಬಿಡುಗಡೆಯಾಗುತ್ತದೆ' ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವ್ಯೂಹಾತ್ಮಕ ಸಂಗ್ರಹಾಗಾರ&lt;/strong&gt;&lt;/h2&gt;&lt;p&gt;ದೈನಂದಿನ ಬೇಡಿಕೆ ಹೊರತಾಗಿ, ಜಾಗತಿಕ ಬಿಕ್ಕಟ್ಟು, ತೈಲ ಪೂರೈಕೆ ಕೊರತೆ ಸಂದರ್ಭದಲ್ಲಿ ವಿದೇಶಗಳಿಂದ ತೈಲ ಪೂರೈಕೆ ಆಗದೇ ಇದ್ದರೂ ಆ ಪರಿಸ್ಥಿತಿ ಎದುರಿಸಲು ಪ್ರತಿ ದೇಶ ಪ್ರತ್ಯೇಕವಾಗಿ ಭೂಗತ ತೈಲ ಸಂಗ್ರಹಾಗಾರ ನಿರ್ಮಿಸಿಕೊಳ್ಳುತ್ತವೆ. ಅಗತ್ಯ ಬಿದ್ದಾಗ ಅದರಿಂದ ತೈಲ ಹೊರತೆಗೆದು ಬಳಸಿಕೊಳ್ಳುತ್ತವೆ. ಪ್ರಸಕ್ತ ಭಾರತದಲ್ಲಿ ಕರ್ನಾಟಕದ ಮಂಗಳೂರು, ಪಾದೂರು, ವಿಶಾಖಪಟ್ಟಣದಲ್ಲಿ ಬೃಹತ್ ಭೂಗತ ತೈಲ ಸಂಗ್ರಹಾಗಾರವಿದೆ. ಇವುಗಳ ಸಂಗ್ರಹ ಸಾಮರ್ಥ್ಯ 53.3 ಲಕ್ಷ ಮೆಟ್ರಿಕ್ ಟನ್&zwnj;ನಷ್ಟಿದೆ ಅಂದರೆ 36.92 ದಶಲಕ್ಷ ಬ್ಯಾರೆಲ್. ಇದು ದೇಶದ 60- 70 ದಿನಳ ಬೇಡಿಕೆ ಪೂರೈಸಬಲ್ಲದು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Iran-US Talks: ಪಾಕಿಸ್ತಾನದಲ್ಲಿ ಅಣ್ವಸ್ತ್ರ ಮಾತುಕತೆ ಇಲ್ಲ, ಇದು ಬರೀ ದ್ವಿಪಕ್ಷೀಯ ಭೇಟಿಯಷ್ಟೇ ಎಂದ ಇರಾನ್&lt;/strong&gt;&lt;strong&gt;!&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್, ಪಾಕಿಸ್ತಾನ ಗಲಿಬಿಲಿ&lt;/strong&gt;&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/pakistan-s-petroleum-minister-ali-malik-has-praised-india-s-oil-storage-capacity-mrq/articleshow-gg2evee"/>
        </item>
        <item>
            <title><![CDATA[ಅಧಿಕಾರ ಹಂಚಿಕೆ ಗೊಂದಲ ಶೀಘ್ರ ಬಗೆಹರಿಸಿ: ಕೈ ಹೈಕಮಾಂಡ್‌ಗೆ ಮನವಿ]]></title>
            <link>https://kannada.asianetnews.com/state/kh-muniyappa-hc-mahadevappa-urge-high-command-to-decide-on-karnataka-leadership-row-kvn/articleshow-2e5y1ni</link>
            <guid isPermaLink="true">https://kannada.asianetnews.com/state/kh-muniyappa-hc-mahadevappa-urge-high-command-to-decide-on-karnataka-leadership-row-kvn/articleshow-2e5y1ni</guid>
            <pubDate>Wed, 29 Apr 2026 06:45:27 +0530</pubDate>
            <description><![CDATA[ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ಗೊಂದಲದ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಸಚಿವರಾದ ಕೆ.ಎಚ್ ಮುನಿಯಪ್ಪ ಮತ್ತು ಎಚ್‌.ಸಿ.ಮಹದೇವಪ್ಪ ದೆಹಲಿಯಲ್ಲಿ ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದಾರೆ. ಇದರ ಜೊತೆಗೆ, ಅಹಿಂದ ಸಮಾವೇಶ ನಡೆಸಲು ಅವಕಾಶ ನೀಡಬೇಕೆಂದೂ ಅವರು ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01k2dw9ppfe5q5wc7adjk3k7h2,imgname-kh-muniyappa-on-bpl-card-1754960026319.jpg" type="image/jpeg" height="390" width="690"/>
            <content:encoded><![CDATA[&lt;p&gt;ನವದೆಹಲಿ: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗೊಂದಲ ವಿಚಾರದಲ್ಲಿ ಹೈಕಮಾಂಡ್&zwnj; ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಹಾಗೂ ಅಹಿಂದ ಸಮಾವೇಶ ನಡೆಸಲು ಅವಕಾಶ ಕೊಡಬೇಕು ಎಂದು ಸಚಿವರಾದ ಕೆ.ಎಚ್ ಮುನಿಯಪ್ಪ ಹಾಗೂ ಎಚ್&zwnj;.ಸಿ.ಮಹದೇವಪ್ಪ ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ.&lt;/p&gt;&lt;p&gt;ಉಪ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್&zwnj;ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ದೆಹಲಿಯಲ್ಲಿ ಮಂಗಳವಾರ ಸಮಾಜ ಕಲ್ಯಾಣ ಸಚಿವ ಎಚ್&zwnj;.ಸಿ.ಮಹದೇವಪ್ಪ ಅವರು ರಾಜ್ಯ ಕಾಂಗ್ರೆಸ್&zwnj; ಉಸ್ತುವಾರಿ ರಣದೀಪ್ ಸಿಂಗ್&zwnj; ಸುರ್ಜೇವಾಲ ಅವರನ್ನು ಭೇಟಿ ಮಾಡಿ, ಸಿಎಂ ಬದಲಾವಣೆ ಹಾಗೂ ಅಹಿಂದ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಸಿದರು.&lt;/p&gt;&lt;h2&gt;&lt;strong&gt;ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸಿ&lt;/strong&gt;&lt;/h2&gt;&lt;p&gt;ಅಧಿಕಾರ ಹಂಚಿಕೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಹೈಕಮಾಂಡ್ &zwnj;ಮಧ್ಯಪ್ರವೇಶ ಮಾಡಬೇಕು, ಆದಷ್ಟು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗದಲ್ಲಿ ಇದು ಗೊಂದಲಕ್ಕೆ ಕಾರಣವಾಗಲಿದೆ ಎಂದು ಮನವಿ ಮಾಡಿದರು. ಅಲ್ಲದೆ ಅಹಿಂದ ವರ್ಗ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು, ಈ ನಿಟ್ಟಿನಲ್ಲಿ ಅಹಿಂದ ಸಮಾವೇಶ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.&lt;/p&gt;&lt;p&gt;ಬಳಿಕ, ಮಧ್ಯಾಹ್ನ 12:30ಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್&zwnj;.ಮುನಿಯಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ, ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಇನ್ನಷ್ಟು ತಡ ಮಾಡಬಾರದು. ಸಿಎಂ ಸ್ಥಾನದ ಗೊಂದಲವನ್ನು ತಕ್ಷಣ ಬಗೆಹರಿಸಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೇವೆ. ಹೈಕಮಾಂಡ್&zwnj; ನಾಯಕರು ಏನಾದರೂ ಒಂದು ನಿರ್ಧಾರವನ್ನು ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಬಹುತೇಕ ಈ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬಳಿಕ, ಮೇ ಅಂತ್ಯದ ವೇಳೆಗೆ ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬಹುದು ಎಂದು ತಿಳಿಸಿದರು.&lt;/p&gt;&lt;p&gt;ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. 50 ಸಾವಿರ ಕೋಟಿ ವೆಚ್ಚದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಐದು ಕೋಟಿಯಷ್ಟು ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆ. ಇಂತಹ ಸಮಯದಲ್ಲಿ ಈ ಹಂತದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಸರಿಯಲ್ಲ ಎಂದು ಮನವಿ ಮಾಡಿದ್ದೇನೆ. ಒಂದು ವೇಳೆ, ಸಿದ್ದರಾಮಯ್ಯ-ಡಿಕೆಶಿಯವರಿಗೆ 2.5 ವರ್ಷದ ಮಾತು ಕೊಟ್ಟಿದ್ದರೆ, ಹೈಕಮಾಂಡ್&zwnj;ಗೆ ಅದು ಗೊತ್ತಿರುತ್ತದೆ ಎಂದರು.&lt;/p&gt;&lt;h3&gt;&lt;strong&gt;ಅಹಿಂದ ಬೆಳ್ಳಿ ಸಂಭ್ರಮ ಮಾಡಿಯೇ ಮಾಡುತ್ತೇವೆ: ಸಿದ್ದು ಬೆಂಬಲಿಗರು&lt;/strong&gt;&lt;/h3&gt;&lt;p&gt;ಈ ಮಧ್ಯೆ ದೆಹಲಿಯಲ್ಲಿ ವರಿಷ್ಠರ ಭೇಟಿ ವೇಳೆ ಸಿದ್ದು ಬಣದ ಆಪ್ತರು, ಅಹಿಂದ ಬೆಳ್ಳಿಯ ಸಂಭ್ರಮ ಸಮಾವೇಶ ನಡೆಸಲು ಅವಕಾಶ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.&lt;/p&gt;&lt;p&gt;ಸೋಮವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಸುರ್ಜೇವಾಲ ಹಾಗೂ ಖರ್ಗೆ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಮಾಡಿದ್ದರು. ಮಂಗಳವಾರ ಸುರ್ಜೇವಾಲ ಭೇಟಿ ವೇಳೆಯೂ ಎಚ್.ಸಿ.ಮಹದೇವಪ್ಪ ಅವರು ಅಹಿಂದ ಸಂಭ್ರಮಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.&lt;/p&gt;&lt;p&gt;ಈ ಮಧ್ಯೆ, ಸಂಸದ ಸುನೀಲ್ ಬೋಸ್&zwnj; ಅವರ ನಿವಾಸದಲ್ಲಿ ಸೋಮವಾರ ರಾತ್ರಿ ಭೋಜನ ಕೂಟ ಆಯೋಜಿಸಲಾಗಿತ್ತು. ಮಹದೇವಪ್ಪ, ಬಿ.ಕೆ.ಹರಿಪ್ರಸಾದ್, ಶಾಸಕರಾದ ಹಂಪನಗೌಡ ಬಾದರ್ಲಿ, ಎಂಎಲ್ಸಿ ಸಲೀಂ ಅಹಮದ್ ಮತ್ತಿತರ ನಾಯಕರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಈ ವೇಳೆಯೂ ಅಹಿಂದ ಸಮಾವೇಶ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/kh-muniyappa-hc-mahadevappa-urge-high-command-to-decide-on-karnataka-leadership-row-kvn/articleshow-2e5y1ni"/>
        </item>
        <item>
            <title><![CDATA[ಇರಾನ್‌ ಶಾಂತಿ ಪ್ರಸ್ತಾಪಗಳಿಗೆ ಡೊನಾಲ್ಡ್ ಟ್ರಂಪ್‌ ನಕಾರ; ಅಣ್ವಸ್ತ್ರ ಬಿಟ್ಟು ಚರ್ಚೆ ಇಲ್ಲ]]></title>
            <link>https://kannada.asianetnews.com/world-news/us-president-donald-trump-rejects-iran-peace-proposals-no-talks-except-nuclear-weapons-mrq/articleshow-46d5o7f</link>
            <guid isPermaLink="true">https://kannada.asianetnews.com/world-news/us-president-donald-trump-rejects-iran-peace-proposals-no-talks-except-nuclear-weapons-mrq/articleshow-46d5o7f</guid>
            <pubDate>Wed, 29 Apr 2026 06:39:41 +0530</pubDate>
            <description><![CDATA[ಮಧ್ಯಪ್ರಾಚ್ಯ ಯುದ್ಧ ಸ್ಥಗಿತಗೊಳಿಸಲು ಇರಾನ್ ಮುಂದಿಟ್ಟಿದ್ದ ಮೂರು ಹಂತದ ಶಾಂತಿ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಅಣ್ವಸ್ತ್ರ ವಿಷಯವನ್ನು ಕೊನೆಯ ಹಂತಕ್ಕೆ ಸೇರಿಸಿದ್ದೇ ಅಮೆರಿಕದ ನಕಾರಕ್ಕೆ ಕಾರಣವಾಗಿದ್ದು, ಇದರಿಂದಾಗಿ ಉಭಯ ದೇಶಗಳ ನಡುವೆ ಸಂಧಾನದ ಆಸೆ ದೂರವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpz94y4pxtpzm3e5ea0pa7dc,imgname-donald-trump--2--1777018763413.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದುಬೈ: &lt;/strong&gt;ಮಧ್ಯಪ್ರಾಚ್ಯ ಯುದ್ಧ ಸ್ಥಗಿತ ಸಂಬಂಧ ಮೂರು ಹಂತದ ಚರ್ಚೆಯ ಪ್ರಸ್ತಾವದ ಬಗ್ಗೆ ಅಮೆರಿಕ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಧಾನ ಮಾತುಕತೆಯ ಆಸೆ ಮತ್ತೆ ದೂರವಾಗಿದ್ದು, ಯುದ್ಧ ಆರಂಭದ ಕಾರ್ಮೋಡ ಕವಿಯುವಂತೆ ಮಾಡಿದೆ.&lt;/p&gt;&lt;p&gt;ಹೋರ್ಮುಜ್&zwnj;ನಲ್ಲಿ ಅಮೆರಿಕ ತನ್ನ ಹಡಗಿಗೆ ಹೇರಿರುವ ತಡೆಯನ್ನು ಹಿಂಪಡೆದರೆ ತಾನು ಕೂಡಾ ಹೋರ್ಮುಜ್&zwnj; ತಡೆ ತೆರವುಗೊಳಿಸುವ ಪ್ರಸ್ತಾಪವನ್ನು ಇರಾನ್&zwnj; ಮುಂದಿಟ್ಟಿತ್ತು. ಜೊತೆಗೆ ಮೂರು ಹಂತದ ಚರ್ಚೆಯ ಪ್ರಸ್ತಾಪ ಮಾಡಿತ್ತು. ಆದರೆ ಈ ಪೈಕಿ ಅಣ್ವಸ್ತ್ರ ವಿಷಯವನ್ನು ಕೊನೆಯ ಹಂತಕ್ಕೆ ಸೇರಿಸಿದ್ದು ಅಮೆರಿಕದ ತಿರಸ್ಕಾರಕ್ಕೆ ಕಾರಣವಾಗಿದೆ.&lt;/p&gt;&lt;p&gt;ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಿದೇಶಾಂಗ ಸಚಿವ ಮಾರ್ಕ್&zwnj; ರುಬಿಯೋ, &lsquo;ನಾವು ಯಾವುದೇ ಒಪ್ಪಂದ ಮಾಡಿಕೊಂಡರೂ ಅದು ಯಾವುದೇ ಹಂತದಲ್ಲೂ ಇರಾನ್&zwnj; ಅಣ್ವಸ್ತ್ರ ಶಕ್ತವಾಗುವುದನ್ನು ತಡೆಯುವ ಉದ್ದೇಶ ಹೊಂದಿದೆ&rsquo; ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಇರಾನ್&zwnj;ನ ಪ್ರಸ್ತಾವ ತಿರಸ್ಕರಿಸಿದ್ದಾರೆ.&lt;/p&gt;&lt;h2&gt;&lt;strong&gt;ಇರಾನ್&zwnj; ಪತನದತ್ತ&lt;/strong&gt;&lt;/h2&gt;&lt;p&gt;ಈ ನಡುವೆ ಹೋರ್ಮುಜ್&zwnj; ಜಲಸಂಧಿ ಮುಚ್ಚಿರುವ ಕಾರಣ ದೇಶ ಪತನದ ಅಂಚಿಗೆ ತಲುಪಿದೆ ಎಂದು ಸ್ವತಃ ಇರಾನ್&zwnj; ನಮಗೆ ಮಾಹಿತಿ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್&zwnj; ಟ್ರಂಪ್&zwnj; ಹೇಳಿದ್ದಾರೆ. ಈ ಕುರಿತು ಟ್ರುತ್&zwnj; ಸೋಷಿಯಲ್&zwnj;ನಲ್ಲಿ ಮಂಗಳವಾರ ಪೋಸ್ಟ್&zwnj; ಹಾಕಿರುವ ಟ್ರಂಪ್&zwnj;, &lsquo;ನಾವು ಆದಷ್ಟು ಬೇಗ ಹೋರ್ಮುಜ್ ಜಲಸಂಧಿಯನ್ನು ಇರಾನ್&zwnj; ಹಡಗಿಗೆ ಮುಕ್ತಗೊಳಿಸಬೇಕು ಎಂದು ಅವರು ಬಯಸಿದ್ದಾರೆ. ಜೊತೆಗೆ ನಮ್ಮ ನಾಯಕತ್ವದಲ್ಲಿನ ಬಿಕ್ಕಟ್ಟಿನ ಬಗ್ಗೆ ನಾವು ಆದಷ್ಟು ಬೇಗ ಪರಿಹಾರ ಕಂಡುಕೊಂಡು ಅಮೆರಿಕದ ಜೊತೆಗೆ ಸಂಧಾನಕ್ಕೆ ಮುಂದಾಗುತ್ತೇವೆ&rsquo; ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಆದರೆ ಯಾರು ಯಾರ ಬಳಿ ಹೀಗೆ ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/world-news/us-president-donald-trump-rejects-iran-peace-proposals-no-talks-except-nuclear-weapons-mrq/articleshow-46d5o7f"/>
        </item>
        <item>
            <title><![CDATA[Bengaluru: ರಾಜಧಾನಿಯ ಮೂಲಸೌಕರ್ಯ ನಿರ್ವಹಣೆಗೆ 1 ದಿನಕ್ಕೆ ₹100 ಕೋಟಿ, ವರ್ಷಕ್ಕೆ 38,455 ಕೋಟಿ]]></title>
            <link>https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz</link>
            <guid isPermaLink="true">https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz</guid>
            <pubDate>Wed, 29 Apr 2026 06:31:18 +0530</pubDate>
            <description><![CDATA[ಬೆಂಗಳೂರಿನ ಮೂಲಸೌಕರ್ಯ ನಿರ್ವಹಣೆಗೆ ವಾರ್ಷಿಕವಾಗಿ 38,455 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತಿದೆ ಎಂದು ಜನಾಗ್ರಹ ಸಂಸ್ಥೆ ವರದಿ ಮಾಡಿದೆ. ಈ ಅಪಾರ ಪ್ರಮಾಣದ ಸಾರ್ವಜನಿಕ ಹಣದ ಖರ್ಚಿನ ಬಗ್ಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಜನರಿಗೆ ಯಾವುದೇ ಸೂಕ್ತ ಮಾಹಿತಿ ಅಥವಾ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpzank4tnxvrzpf8z8df7kt4,imgname-bengaluru-real-estate-1777020357786.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ಬೆಂಗಳೂರಿನಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ನಗರದ ಮೂಲಸೌಕರ್ಯ ನಿರ್ವಹಣೆಗೆ ದಿನಕ್ಕೆ ಸುಮಾರು 100 ಕೋಟಿ ರು.ನಂತೆ ವರ್ಷಕ್ಕೆ 38,455 ಕೋಟಿ ರು.ಗೂ ಹೆಚ್ಚು ಹಣ ಖರ್ಚಾಗುತ್ತಿದ್ದು, ಅದರ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಎಂದು ಸರ್ಕಾರೇತರ ಸಂಸ್ಥೆ ಜನಾಗ್ರಹ ಆರೋಪಿಸಿದೆ.&lt;/p&gt;&lt;p&gt;ಅತಿಯಾದ ಟ್ರಾಫಿಕ್ ಜಾಮ್, ಪ್ರವಾಹ ಪರಿಸ್ಥಿತಿ, ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ, ಅಸಮರ್ಪಕ ಸಮೂಹ ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನಗರ ಬಳಲುತ್ತಿದೆ. ಇದಕ್ಕೆ ನಿತ್ಯ ನೂರಾರು ಕೋಟಿ ರು. ವಿನಿಯೋಗಿಸಲಾಗುತ್ತಿದೆ. ಆದರೆ, ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಕುರಿತು ತೆರಿಗೆದಾರರಿಗೆ, ನಗರದ ಪ್ರಜೆಗಳಿಗೆ ಯಾವುದೇ ಲೆಕ್ಕವನ್ನು ನೀಡುತ್ತಿಲ್ಲ.&lt;/p&gt;&lt;p&gt;2021-22ನೇ ಸಾಲಿನಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಸೇರಿದಂತೆ 13 ಇಲಾಖೆಗಳಿಂದ ಸುಮಾರು 70ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲನೆ ನಡೆಸಿ ಲೆಕ್ಕ ಹಾಕಲಾಗಿದೆ ಎಂದು ಜನಾಗ್ರಹ ತಿಳಿಸಿದೆ.&lt;/p&gt;&lt;h2&gt;&lt;strong&gt;ಬಿಬಿಎಂಪಿಯಿಂದ ಶೇ.20ರಷ್ಟು ಖರ್ಚು&lt;/strong&gt;&lt;/h2&gt;&lt;p&gt;ಒಟ್ಟಾರೆ 38,455 ಕೋಟಿ ರು. ಖರ್ಚಿನಲ್ಲಿ ಜನಪ್ರತಿನಿಧಿಗಳು ಇಲ್ಲದ ಬಿಬಿಎಂಪಿಯೇ ಶೇ.20ರಷ್ಟು ಹಣವನ್ನು ಖರ್ಚು ಮಾಡಿವೆ. ಉಳಿದ ಶೇ.80ರಷ್ಟು ಹಣವೂ ಜನಪ್ರತಿನಿಧಿಗಳು ಎಂದಿಗೂ ಇರದ ಸರ್ಕಾರದ ಬೇರೆ ಬೇರೆ ಇಲಾಖೆಗಳು ಖರ್ಚು ಮಾಡಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜನಾಗ್ರಹ ಸಂಸ್ಥೆ ಹೇಳಿದೆ.&lt;/p&gt;&lt;h3&gt;&lt;strong&gt;ಎಲ್ಲಾ ಸಂಸ್ಥೆಗಳು ಲೆಕ್ಕಪತ್ರ ನೀಡಲಿ&lt;/strong&gt;&lt;/h3&gt;&lt;p&gt;ಹಾಲಿ ಪಾಲಿಕೆಗಳು ಮಾತ್ರ ಬಜೆಟ್ ರೀತಿಯಲ್ಲಿ ಲೆಕ್ಕ ನೀಡುತ್ತಿವೆ. ಅದೇ ರೀತಿ ಸರ್ಕಾರದ ಎಲ್ಲಾ ಸಂಸ್ಥೆಗಳು ಪ್ರತಿ ವರ್ಷ ಆರ್ಥಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾದ ಅಗತ್ಯವಿದೆ. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2003 ಅನ್ನು ಬಲಪಡಿಸುವ ಮೂಲಕ ಎಲ್ಲಾ ಸಂಸ್ಥೆಗಳು ಲೆಕ್ಕ ಪತ್ರವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಬೇಕು. ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ತನ್ನ ವಾರ್ಷಿಕ ಲೆಕ್ಕಪತ್ರ ನೀಡಬೇಕು. ನಿಯಮಿತವಾಗಿ ತಾತ್ಕಾಲಿಕ ಲೆಕ್ಕಪತ್ರಗಳು, ಲೆಕ್ಕಪರಿಶೋಧನೆ ಹಣಕಾಸು ಸ್ಟೇಟ್&zwnj;ಮೆಂಟ್ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಸೇವಾ ಕಾರ್ಯಕ್ಷಮತೆಯ ವರದಿಯನ್ನು ನೀಡಬೇಕು ಎಂದು ಜನಾಗ್ರಹ ಒತ್ತಾಯಿಸಿದೆ.&lt;/p&gt;&lt;h3&gt;&lt;strong&gt;ನಗರ ಸಂಸ್ಥೆಗಳಿಗೆ ಜನರ ಆಗ್ರಹ ಏನು?&amp;nbsp;&lt;/strong&gt;&lt;/h3&gt;&lt;p&gt;*ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಹಂತಗಳು, ಟೆಂಡರ್ ವಿವರಗಳು, ಅನುಷ್ಠಾನದ ಸ್ಥಿತಿ ಮತ್ತು ಹೆಚ್ಚುವರಿ ವೆಚ್ಚಗಳ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರ ಹಣ ಎಲ್ಲಿಗೆ ಹೋಗುತ್ತಿದೆ ಎಂದು ನಾಗರಿಕರು ತಿಳಿಯಬಹುದು&lt;/p&gt;&lt;p&gt;*ವಲಯವಾರು ಮತ್ತು ವಾರ್ಡ್&zwnj;ವಾರು ಖರ್ಚು ಮಾಡಿದ ಹಣದ ದತ್ತಾಂಶವನ್ನು ಆಯಾ ವಲಯಗಳ (ನೀರು, ಸಾರಿಗೆ, ರಸ್ತೆಗಳು, ತ್ಯಾಜ್ಯ) ಆಧಾರದ ಮೇಲೆ ಮತ್ತು ವಾರ್ಡ್&zwnj;ವಾರು ಲಭ್ಯವಾಗುವಂತೆ ಮಾಡಬೇಕು. ಇದರಿಂದ ನಿವಾಸಿಗಳಿಗೆ ತಮ್ಮ ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಹುದು.&lt;/p&gt;&lt;p&gt;*ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡಿದ ಹಣಕ್ಕೆ ತಕ್ಕಂತೆ ಯೋಜನೆಗಳು, ಕೆಲಸಗಳು ಜಾರಿಯಾಗಿವೆಯೇ? ಎಂಬುದರ ಲೆಕ್ಕ ಇಡಬೇಕು. ರಸ್ತೆಯ ಗುಣಮಟ್ಟ, ಪ್ರಯಾಣದ ಸಮಯ ಮತ್ತು ನೀರು ಸರಬರಾಜು, ಕಸ ಸಂಗ್ರಹಣೆಯಲ್ಲಿ ದಕ್ಷತೆಯ ವಿವರಗಳನ್ನು ಜನರಿಗೆ ನೀಡಬೇಕು&lt;/p&gt;&lt;p&gt;*ಎಲ್ಲಾ ಬಜೆಟ್&zwnj;ಗಳು, ಟೆಂಡರ್&zwnj;ಗಳು ಮತ್ತು ಯೋಜನೆಯ ದತ್ತಾಂಶಗಳನ್ನು ಒಂದೇ ವೆಬ್&zwnj;ಸೈಟ್&zwnj;ನಲ್ಲಿ ಕ್ರೋಢೀಕರಿಸಿ ಒದಗಿಸಬೇಕು. ಜನಪ್ರತಿನಿಧಿಗಳ ಸಭೆಗಳಲ್ಲಿ ಚರ್ಚೆಯಾಗಬೇಕು&lt;/p&gt;&lt;h3&gt;&lt;strong&gt;ಯಾವ ಸಂಸ್ಥೆಯಿಂದ ಎಷ್ಟು ಖರ್ಚ ಆಗುತ್ತಿದೆ?&lt;/strong&gt;&lt;/h3&gt;&lt;table&gt; &lt;tbody&gt;  &lt;tr&gt;   &lt;td&gt;ಸಾರ್ವಜನಿಕ ಸಂಸ್ಥೆ&lt;/td&gt;   &lt;td&gt;ಪಾಲು&lt;/td&gt;  &lt;/tr&gt;  &lt;tr&gt;   &lt;td&gt;ಬೆಸ್ಕಾಂ&lt;/td&gt;   &lt;td&gt;ಶೇ.47.30&lt;/td&gt;  &lt;/tr&gt;  &lt;tr&gt;   &lt;td&gt;ಬಿಬಿಎಂಪಿ&lt;/td&gt;   &lt;td&gt;ಶೇ.19.60&lt;/td&gt;  &lt;/tr&gt;  &lt;tr&gt;   &lt;td&gt;ಬಿಎಂಆರ್&zwnj;ಸಿಎಲ್&lt;/td&gt;   &lt;td&gt;ಶೇ.13.40&lt;/td&gt;  &lt;/tr&gt;  &lt;tr&gt;   &lt;td&gt;ಜಲಮಂಡಳಿ&lt;/td&gt;   &lt;td&gt;ಶೇ.8.80&lt;/td&gt;  &lt;/tr&gt;  &lt;tr&gt;   &lt;td&gt;ಬಿಎಂಟಿಸಿ&lt;/td&gt;   &lt;td&gt;ಶೇ.6.30&lt;/td&gt;  &lt;/tr&gt;  &lt;tr&gt;   &lt;td&gt;ಬೆಂಗಳೂರು ಪೊಲೀಸ್&lt;/td&gt;   &lt;td&gt;ಶೇ.2.40&lt;/td&gt;  &lt;/tr&gt;  &lt;tr&gt;   &lt;td&gt;ಇತರೆ&lt;/td&gt;   &lt;td&gt;ಶೇ.2.30&lt;/td&gt;  &lt;/tr&gt; &lt;/tbody&gt;&lt;/table&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/bengaluru-rs-100-crore-per-day-for-infrastructure-maintenance-in-the-capital-city-mrq/articleshow-s5srraz"/>
        </item>
        <item>
            <title><![CDATA[ಬೆಂಗಳೂರಿನಲ್ಲಿ ಗಾಂಜಾ ಸಿಗದ್ದಕ್ಕೆ ಸಿಟ್ಟಿಗೆದ್ದು 12 ಶೆಡ್‌ಗೆ ಬೆಂಕಿ ಹಚ್ಚಿದ ಪುಂಡರು!]]></title>
            <link>https://kannada.asianetnews.com/state/fire-breaks-out-in-12-sheds-in-bengaluru-somesandrapalya-no-casualties-reported-kvn/articleshow-nqigs29</link>
            <guid isPermaLink="true">https://kannada.asianetnews.com/state/fire-breaks-out-in-12-sheds-in-bengaluru-somesandrapalya-no-casualties-reported-kvn/articleshow-nqigs29</guid>
            <pubDate>Wed, 29 Apr 2026 06:21:53 +0530</pubDate>
            <description><![CDATA[ಬೆಂಗಳೂರಿನ ಸೋಮಸಂದ್ರಪಾಳ್ಯದಲ್ಲಿ ಪಶ್ಚಿಮ ಬಂಗಾಳ ಮೂಲದವರು ವಾಸವಿದ್ದ 12 ಶೆಡ್‌ಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ನಿವಾಸಿಗಳು ಊರಿಗೆ ತೆರಳಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಂಜಾ ಸಿಗದಿದ್ದಕ್ಕೆ ಸ್ಥಳೀಯ ವ್ಯಸನಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಾಸಕ ಸತೀಶ್ ರೆಡ್ಡಿ ಆರೋಪಿಸಿದ್ದು, ತನಿಖೆ ಮುಂದುವರೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqbbd15rqcxkdbywf94semh9,imgname-drugs-godan-1777423778999.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಪಶ್ಚಿಮ ಬಂಗಾಳದವರು ವಾಸವಾಗಿದ್ದ 12 ಶೆಡ್&zwnj;ಗಳಿಗೆ ಬೆಂಕಿ ತಗುಲಿದ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ಬಂಡೆಪಾಳ್ಯ ಠಾಣೆ ವ್ಯಾಪ್ತಿಯ ಸೋಮಸಂದ್ರಪಾಳ್ಯದಲ್ಲಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಚ್&zwnj;ಎಸ್&zwnj;ಆರ್ 2ನೇ ವಲಯದ 1ನೇ ಮುಖ್ಯರಸ್ತೆಯಲ್ಲಿ ಪ್ರಕಾಶ್ ಎಂಬುವರಿಗೆ ಸೇರಿದ 1.2 ಎಕರೆ ಜಾಗದಲ್ಲಿ ಭಾನುವಾರ ಮುಂಜಾನೆ 3 ಗಂಟೆ ಸುಮಾರಿಗೆ ದುರ್ಘಟನೆ ನಡೆದಿದೆ.&lt;/p&gt;&lt;p&gt;ಪಶ್ಚಿಮ ಬಂಗಾಳ ಮೂಲದ ಸುಮಾರು 100ಕ್ಕೂ ಹೆಚ್ಚು ಮಂದಿ ಚಿಂದಿ ಆಯುವ ಕೆಲಸ ಮಾಡಿಕೊಂಡು ಸೋಮಸಂದ್ರ ಪಾಳ್ಯದಲ್ಲಿರುವ ಪ್ರಕಾಶ್&zwnj; ಎಂಬುವರಿಗೆ ಸೇರಿದ ಜಾಗದಲ್ಲಿರುವ ಶೆಡ್&zwnj;ಗಳಲ್ಲಿ ವಾಸವಾಗಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಎಲ್ಲರೂ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಈ ಮಧ್ಯೆ ಮುಂಜಾನೆ 3 ಗಂಟೆ ಸುಮಾರಿಗೆ ಶೆಡ್&zwnj;ನಲ್ಲಿ ಆಕಸ್ಮಿಕ ಬೆಂಕಿ ತಗುಲಿ, ಶೆಡ್&zwnj;ನಲ್ಲಿದ್ದ 6 ಕ್ಕೂ ಹೆಚ್ಚು 5 ಕೆ.ಜಿ. ತೂಕದ ಸಿಲಿಂಡರ್&zwnj;ಗಳು, ಫ್ರಿಜ್&zwnj;ಗಳು ಸ್ಫೋಟಗೊಂಡಿವೆ. ಬೈಕ್&zwnj;ಗಳು, ಅಡುಗೆ ಮನೆಯ ವಸ್ತುಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್&zwnj; ಶೆಡ್&zwnj;ನಲ್ಲಿ ಯಾರು ಇಲ್ಲದ ಪರಿಣಾಮ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&lt;/p&gt;&lt;p&gt;ಗಾಂಜಾ ಸೇವಿಸಿದ್ದವರಿಂದ ಕೃತ್ಯ ನಡೆದಿದೆ ಎಂಬ ಆರೋಪವಿದೆ. ಆದರೆ, ಖಾಲಿ ಜಾಗವಾದರಿಂದ ಕೆಲ ಯುವಕರು ಬಂದು ಗುಂಪು ಸೇರುತ್ತಿದ್ದರು. ಗಾಂಜಾ ಸೇವನೆಯಿಂದ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಗಾಂಜಾ ಸೇವಿಸಿದವರಿಂದ ಕೃತ್ಯ?&lt;/strong&gt;&lt;/h2&gt;&lt;p&gt;ಸೆಕೆಗೆ ನಿದ್ದೆ ಬರುತ್ತಿರಲಿಲ್ಲ. ಬಾಗಿಲು ತೆರೆದು ಹೊರಗೆ ಬಂದಾಗ ಬೆಂಕಿ ಉರಿಯುತ್ತಿತ್ತು. ಜನರೆಲ್ಲರೂ ಸೇರಿದ್ದರು. ಅದಕ್ಕೂ ಮೊದಲು ಗಾಂಜಾ ಸೇವಿಸಿದ್ದ ಹುಡುಗರು ಗಲಾಟೆ ಮಾಡುತ್ತಿದ್ದರು. ಗಲಾಟೆ ಬಳಿಕ ದುರಂತ ಸಂಭವಿಸಿದೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್&zwnj; ಮತ್ತು ಬಂಡೇಪಾಳ್ಯ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಗಾಂಜಾ ಸಿಗದಿದ್ದಕ್ಕೆ ಬೆಂಕಿ ಹಚ್ಚಲಾಗಿದೆ: ಸತೀಶ್&zwnj; ರೆಡ್ಡಿ&amp;nbsp;&lt;/strong&gt;&lt;/h3&gt;&lt;p&gt;ಸೋಮಸಂದ್ರ ಪಾಳ್ಯ ಸುತ್ತ-ಮುತ್ತ ಅಕ್ರಮ ವಾಸಿಗಳು ಹೆಚ್ಚಾಗಿದ್ದು, ಬಾಂಗ್ಲಾದೇಶದಿಂದ ಬಂದು ಪಶ್ಚಿಮ ಬಂಗಾಳ ಎಂದು ದಾಖಲೆ ತೋರಿಸುತ್ತಿದ್ದಾರೆ. ಮೊದಲು ಕಸ ಆಯುತ್ತಿದ್ದರು. ಇದೀಗ ಗಾಂಜಾ ಮಾರಾಟ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕಳೆದ ಎರಡು ದಿನದಿಂದ ಎಲ್ಲರು ಊರಿಗೆ ಹೋಗಿದ್ದಾರೆ. ಸ್ಥಳೀಯ ಗಾಂಜಾ ಗಿರಾಕಿಗಳು ಬಂದು ಗಲಾಟೆ ಮಾಡಿದ್ದಾರೆ. ಗಾಂಜಾ ಸಿಕ್ತಿಲ್ಲ ಎಂಬ ಸಿಟ್ಟಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂದಿದೆ. ಈ ಹಿಂದೆಯೂ ಗಾಂಜಾ ಸಂಬಂಧ ಪೊಲೀಸರಿಗೆ ದೂರು ಕೊಡಲಾಗಿತ್ತು. ಕೆಲವರನ್ನು ಬಂಧಿಸಿದ್ದರು. ಆದರೆ, ಸರಿಯಾದ ಕ್ರಮ ಆಗಿಲ್ಲ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್&zwnj; ರೆಡ್ಡಿ ಆರೋಪಿಸಿದ್ದಾರೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/fire-breaks-out-in-12-sheds-in-bengaluru-somesandrapalya-no-casualties-reported-kvn/articleshow-nqigs29"/>
        </item>
        <item>
            <title><![CDATA[ಬೆಂಗಳೂರ ದಕ್ಷಿಣ ಜಿಲ್ಲೆಯಲ್ಲಿ  995 ಉಪಗ್ರಾಮಗಳ ರಚನೆ; ಯಾವ ತಾಲೂಕಿನಲ್ಲಿ ಎಷ್ಟು?]]></title>
            <link>https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt</link>
            <guid isPermaLink="true">https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt</guid>
            <pubDate>Wed, 29 Apr 2026 06:16:57 +0530</pubDate>
            <description><![CDATA[ದಾಖಲೆಗಳಿಲ್ಲದ 995 ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ತರಲು ಉಪಗ್ರಾಮಗಳಾಗಿ ರಚಿಸಲಾಗುತ್ತಿದೆ. ಈ ಯೋಜನೆಯು ನಿವಾಸಿಗಳಿಗೆ ಇ-ಖಾತೆ, ನಮೂನೆ 11 ನಂತಹ ಅಧಿಕೃತ ದಾಖಲೆಗಳನ್ನು ಒದಗಿಸಿ, ಸರ್ಕಾರದ ಸೌಲಭ್ಯಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸುಲಭಗೊಳಿಸುವ ಗುರಿ ಹೊಂದಿದೆ]]></description>
            <media:content url="https://static.asianetnews.com/images/w-1280,h-720,format-jpg,imgid-01kqbb6dyg0h8ka9fdcwakkwb1,imgname-village-1777423562704.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ: &lt;/strong&gt;ಜಿಲ್ಲೆಯಲ್ಲಿ ದಾಖಲೆಗಳಿಲ್ಲದ ಜನವಸತಿ ಪ್ರದೇಶಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸಿ ಒಟ್ಟು 995 ಹೊಸ ಉಪಗ್ರಾಮಗಳನ್ನು ರಚಿಸುವ ಕಾರ್ಯ ಭರದಿಂದ ಸಾಗಿದೆ.&lt;/p&gt;&lt;p&gt;ಈ ಮೊದಲು 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಆನಂತರ ಕೇವಲ ಒಂದು ತಿಂಗಳಲ್ಲಿ ಇನ್ನೂ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ 995 ಹೊಸ ಉಪ ಗ್ರಾಮಗಳನ್ನು ರಚಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.&lt;/p&gt;&lt;p&gt;ಅತಿ ಹೆಚ್ಚು ಮಾಗಡಿ ತಾಲೂಕಿನಲ್ಲಿ 354 ಹಾಗೂ ಅತಿ ಕಡಿಮೆ ಹಾರೋಹಳ್ಳಿ ತಾಲೂಕಿನಲ್ಲಿ 67 ಉಪ ಗ್ರಾಮಗಳು ರಚನೆಯಾಗುತ್ತಿವೆ. ಉಳಿದಂತೆ ರಾಮನಗರ ತಾಲೂಕಿನಲ್ಲಿ 241, ಕನಕಪುರ ತಾಲೂಕಿನಲ್ಲಿ 260 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 73 ಉಪ ಗ್ರಾಮಗಳ ರಚಿಸಲು ಉದ್ದೇಶಿಸಲಾಗಿದೆ.&lt;/p&gt;&lt;h2&gt;&lt;strong&gt;116 ಉಪ ಗ್ರಾಮಗಳ ಅಧಿಸೂಚನೆ&lt;/strong&gt;&lt;/h2&gt;&lt;p&gt;ಮೊದಲ ಹಂತದಲ್ಲಿ ಗುರುತಿಸಿದ್ದ 420 ಉಪ ಗ್ರಾಮಗಳ ಪೈಕಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ 372 ಜನವಸತಿ ಪ್ರದೇಶಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ 138 ಉಪ ಗ್ರಾಮಗಳು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, 234 ಬಾಕಿ ಇವೆ. ಅಂತಿಮ ಅಧಿಸೂಚನೆ ಹೊರಡಿಸಲು 13 ಜನವಸತಿಪ್ರದೇಶಗಳ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ 116 ಉಪ ಗ್ರಾಮಗಳು ಅಂತಿಮ ಅಧಿಸೂಚನೆ ಹೊರ ಬಿದ್ದಿದೆ.&lt;/p&gt;&lt;p&gt;2026ರ ಮಾರ್ಚ್ 16ರ ನಂತರ ಗುರುತಿಸಿರುವ 575 ಉಪ ಗ್ರಾಮಗಳನ್ನು ಗುರುತಿಸಲಾಗಿದ್ದು, ಈಗಷ್ಟೇ ಪ್ರಕ್ರಿಯೆಗಳು ಪ್ರಾರಂಭಗೊಳ್ಳಬೇಕಿದೆ. 2 ಇ ಅಧಿಸೂಚನೆ, ಪ್ರಾಥಮಿಕ ಅಧಿಸೂಚನೆ ಮುಗಿದು ಅಂತಿಮ ಅಧಿಸೂಚನೆ ಹೊರ ಬೀಳಲು ಕನಿಷ್ಠ 6 ತಿಂಗಳು ಬೇಕಾಗಿದೆ.&lt;/p&gt;&lt;h3&gt;&lt;strong&gt;ಈಗ ಏನಾಗಿದೆ ?&lt;/strong&gt;&lt;/h3&gt;&lt;p&gt;ಗ್ರಾಮಗಳಲ್ಲಿ ವಾಸ ಮಾಡುತ್ತಿದ್ದರೂ ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಸೂಕ್ತ ದಾಖಲೆಗಳು ಇಲ್ಲದೆ ಬಹುತೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ 2019ರ ಅಕ್ಟೋಬರ್ 15ರಂದು ಉಪಗ್ರಾಮಗಳ ರಚನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಜಿಲ್ಲೆಯ 420 ಗ್ರಾಮಗಳು ಉಪಗ್ರಾಮಗಳಾಗಿ ಗ್ರಾಮಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡಲಾಯಿತು. ಇವುಗಳ ಜೊತೆಗೆ ಹೊಸದಾಗಿ 575 ಹೊಸ ಉಪಗ್ರಾಮಗಳನ್ನು ಗುರುತಿಸಲಾಗಿದೆ.&lt;/p&gt;&lt;p&gt;ಹಲವಾರು ವರ್ಷಗಳಿಂದಲೂ ಜನರು ಗ್ರಾಮ ಠಾಣೆಗೆ ಹೊಂದಿರುವ ಸರ್ವೆ ನಂಬರ್, ಖಾಸಗಿ ಜಮೀನುಗಳು ಸೇರಿ ಇತರ ಕಡೆಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಈ ಮನೆಗಳು ಗ್ರಾಮಠಾಣಾ ವ್ಯಾಪ್ತಿಗೆ ಸೇರದ ಕಾರಣ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ.&lt;/p&gt;&lt;p&gt;ಜೊತೆಗೆ ತಮ್ಮದೇ ಮನೆ ಹಾಗೂ ನಿವೇಶನಗಳಿಗೆ ನಮೂನೆ 11, ಇ-ಖಾತೆ ಪಡೆಯಲು ಆಗುತ್ತಿರಲಿಲ್ಲ. ಇದರಿಂದ ಜನರಿಗೆ ಮೂಲಸೌಲಭ್ಯ ದೊರೆಯುತ್ತಿರಲಿಲ್ಲ. ಇದನ್ನು ಮನಗಂಡು ಇಂತಹ ನಿವಾಸಿಗಳಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಉಪಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಉಪಗ್ರಾಮಗಳ ಘೋಷಣೆ ಹೇಗೆ?&lt;/strong&gt;&lt;/h3&gt;&lt;p&gt;ಯಾವುದೇ ಒಂದು ದಾಖಲೆರಹಿತ ಜನವಸತಿ ಪ್ರದೇಶ ಮೂಲ ಗ್ರಾಮಠಾಣಾದಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇದ್ದರೆ ಇದನ್ನು ಮೂಲ ಗ್ರಾಮದ ಭಾಗವೆಂದು ಪರಿಗಣಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 5ರಂತೆ ಉಪಗ್ರಾಮ ಎಂದು ಘೋಷಣೆ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಾಗಿ ಬೇಕಾದ ನಕ್ಷೆ ಸಿದ್ಧಪಡಿಸಲಾಗುತ್ತದೆ. ಈ ವೇಳೆ ಜನವಸತಿ ಪ್ರದೇಶ, ರಸ್ತೆ, ಸರ್ಕಾರಿ ಶಾಲೆಗಳು, ಖಾಸಗಿ ಸ್ವತ್ತು ಇದ್ದರೂ ಇದನ್ನು ಗ್ರಾಮಠಾಣಾ ಎಂದು ಪರಿಗಣಿಸಿ, ಉಪಗ್ರಾಮವೆಂದು ಘೋಷಣೆ ಮಾಡಲಾಗುತ್ತದೆ.&lt;/p&gt;&lt;h3&gt;&lt;strong&gt;ಅಧಿಕೃತ ದಾಖಲೆಗಳು ಲಭ್ಯ&lt;/strong&gt;&lt;/h3&gt;&lt;p&gt;ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಸೂಕ್ತ ರಸ್ತೆ ಇಲ್ಲದೆ, ಮನೆಗಳಿಗೆ ಇ-ಖಾತೆ, ನಮೂನೆ 11 ಸೇರಿ ಯಾವುದೇ ದಾಖಲೆಗಳು ಇಲ್ಲದೆ ಕಷ್ಟದಲ್ಲಿಯೇ ಜೀವನ ನಡೆಸುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಒಂದು ವೇಳೆ ಮನೆ /ಆಸ್ತಿ ಮಾರಾಟ ಮಾಡಬೇಕಾದರೂ ಸರ್ವೆ ನಂಬರ್ ಲೆಕ್ಕದಲ್ಲಿಯೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಇತ್ತು. ಸರ್ಕಾರ ಸಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದೆ ಬರುತ್ತಿರಲಿಲ್ಲ. ಆದರೀಗ ಉಪಗ್ರಾಮಗಳೆಂದು ಘೋಷಣೆ ಮಾಡುವುದರಿಂದ ಇದು ಗ್ರಾಮಠಾಣಾ ವ್ಯಾಪ್ತಿಗೆ ಒಳಪಡಲಿದ್ದು, ಅಧಿಕೃತ ದಾಖಲೆಗಳು ದೊರೆಯುವ ಜತೆಗೆ, ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ದೊರೆಯಲಿದೆ.&lt;/p&gt;&lt;p&gt;ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2026ರ ಮಾರ್ಚ್ 16ರವರೆಗೆ 420 ಉಪ ಗ್ರಾಮಗಳನ್ನು ಗುರುತಿಸಲಾಗಿತ್ತು. ಇದಾದ ಬಳಿಕ ಮತ್ತೆ ಹೊಸದಾಗಿ 575 ಉಪ ಗ್ರಾಮಗಳನ್ನು ಗುರುತು ಮಾಡಿದ್ದೇವೆ. ಈಗ ಒಟ್ಟು 995 ಉಪ ಗ್ರಾಮಗಳ ಪೈಕಿ 116 ಉಪ ಗ್ರಾಮಗಳ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಉಳಿದ ಉಪ ಗ್ರಾಮಗಳನ್ನು ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಕಾರ್ಯ ವೇಗವಾಗಿ ನಡೆದಿದೆ ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆಯ , ಉಪನಿರ್ದೇಶಕ ಬಿ.ಆರ್.ಹನುಮೇಗೌಡ ಹೇಳುತ್ತಾರೆ.&lt;/p&gt;&lt;table&gt; &lt;tbody&gt;  &lt;tr&gt;   &lt;td&gt;ತಾಲೂಕು&lt;/td&gt;   &lt;td&gt;2026-16&lt;/td&gt;   &lt;td&gt;2026-16ರ ಬಳಿಕ&lt;/td&gt;   &lt;td&gt;ಒಟ್ಟು&lt;/td&gt;  &lt;/tr&gt;  &lt;tr&gt;   &lt;td&gt;ರಾಮನಗರ&lt;/td&gt;   &lt;td&gt;69&lt;/td&gt;   &lt;td&gt;173&lt;/td&gt;   &lt;td&gt;241&lt;/td&gt;  &lt;/tr&gt;  &lt;tr&gt;   &lt;td&gt;ಕನಕಪುರ&lt;/td&gt;   &lt;td&gt;119&lt;/td&gt;   &lt;td&gt;141&lt;/td&gt;   &lt;td&gt;260&lt;/td&gt;  &lt;/tr&gt;  &lt;tr&gt;   &lt;td&gt;ಹಾರೋಹಳ್ಳಿ&lt;/td&gt;   &lt;td&gt;45&lt;/td&gt;   &lt;td&gt;22&lt;/td&gt;   &lt;td&gt;67&lt;/td&gt;  &lt;/tr&gt;  &lt;tr&gt;   &lt;td&gt;ಚನ್ನಪಟ್ಟಣ&lt;/td&gt;   &lt;td&gt;38&lt;/td&gt;   &lt;td&gt;35&lt;/td&gt;   &lt;td&gt;73&lt;/td&gt;  &lt;/tr&gt;  &lt;tr&gt;   &lt;td&gt;ಮಾಗಡಿ&lt;/td&gt;   &lt;td&gt;150&lt;/td&gt;   &lt;td&gt;204&lt;/td&gt;   &lt;td&gt;354&lt;/td&gt;  &lt;/tr&gt;  &lt;tr&gt;   &lt;td&gt;ಒಟ್ಟು&lt;/td&gt;   &lt;td&gt;420&lt;/td&gt;   &lt;td&gt;575&lt;/td&gt;   &lt;td&gt;995&lt;/td&gt;  &lt;/tr&gt; &lt;/tbody&gt;&lt;/table&gt;]]></content:encoded>
            <category><![CDATA[bengaluru-rural]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-rural/995-sub-villages-to-be-formed-in-bengaluru-south-district-how-many-in-which-taluk-mrq/articleshow-bk0edkt"/>
        </item>
        <item>
            <title><![CDATA[ಗೂಗಲ್‌ ಟಾಪ್‌-10ರಲ್ಲಿ ಕ್ಯಾಂಪ್ಕೋ ಚಾಕೋಲೆಟ್‌; ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ ಅಧಿಕೃತ ಸ್ಥಾನ]]></title>
            <link>https://kannada.asianetnews.com/business/campco-s-chocolate-has-been-ranked-among-the-top-10-chocolate-brands-mrq/articleshow-k4ck7el</link>
            <guid isPermaLink="true">https://kannada.asianetnews.com/business/campco-s-chocolate-has-been-ranked-among-the-top-10-chocolate-brands-mrq/articleshow-k4ck7el</guid>
            <pubDate>Wed, 29 Apr 2026 06:01:31 +0530</pubDate>
            <description><![CDATA[ಅಡಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಚಾಕೋಲೆಟ್‌, ಗೂಗಲ್‌ನಲ್ಲಿ ಪ್ರಕಟವಾದ ಸಮೀಕ್ಷೆಯಲ್ಲಿ ಭಾರತದ ಟಾಪ್-10 ಚಾಕೋಲೆಟ್‌ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿದೆ. ಈ ಯಶಸ್ಸಿನೊಂದಿಗೆ, ಸಂಸ್ಥೆ ಮಿಲೆಟ್ ಎನರ್ಜಿ ಬಾರ್ ಮತ್ತು ಡಾರ್ಕ್ ಚಾಕೋಲೆಟ್‌ಗಳಂತಹ ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸಜ್ಜಾಗಿದೆ]]></description>
            <media:content url="https://static.asianetnews.com/images/w-1280,h-720,format-jpg,imgid-01kqbaac4mr0gn8w4ew6aezd1q,imgname-campco-1777422643348.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಂಗಳೂರು: ಇಂಡಸ್ಟ್ರಿಯಲ್&zwnj; ಇಂಟಲಿಜೆನ್ಸ್&zwnj; ಆ್ಯಂಡ್&zwnj; ಮಲ್ಟಿಪುಲ್&zwnj; ಮಾರ್ಕೆಟ್&zwnj; ರಿಸರ್ಚ್&zwnj; ನಡೆಸಿದ ಸಮೀಕ್ಷೆಯಲ್ಲಿ ಅಡಕೆ ಬೆಳೆಗಾರರ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಚಾಕೋಲೆಟ್&zwnj;, ಟಾಪ್&zwnj;-10ರ ಚಾಕೋಲೆಟ್&zwnj; ಬ್ರ್ಯಾಂಡ್&zwnj;ಗಳಲ್ಲಿ ಸ್ಥಾನ ಪಡೆದುಕೊಂಡಿದೆ.&lt;/p&gt;&lt;h2&gt;&lt;strong&gt;ಬ್ರ್ಯಾಂಡ್&zwnj;ಗಳ ಪಟ್ಟಿಯಲ್ಲಿ ಕ್ಯಾಂಪ್ಕೋ ಬ್ರ್ಯಾಂಡ್&zwnj; ಅಧಿಕೃತವಾಗಿ ಸ್ಥಾನ&lt;/strong&gt;&lt;/h2&gt;&lt;p&gt;ದೇಶ, ವಿದೇಶದ ಪ್ರಸಿದ್ಧ ಚಾಕೋಲೆಟ್&zwnj; ಬ್ರ್ಯಾಂಡ್&zwnj;ಗಳ ಬಗ್ಗೆ ಈ ಏಜೆನ್ಸಿ ಸಮೀಕ್ಷೆ ನಡೆಸಿ, ಅದರ ವರದಿಯನ್ನು ಗೂಗಲ್&zwnj;ನಲ್ಲಿ ಪ್ರಕಟಿಸಿದೆ. ಟಾಪ್&zwnj;-10 ಚಾಕೋಲೆಟ್ ಬ್ರ್ಯಾಂಡ್&zwnj;ಗಳನ್ನು ಪಟ್ಟಿ ಮಾಡಿ ಸ್ಥಾನ ನೀಡಿದ್ದು, ಈ ಪಟ್ಟಿಯಲ್ಲಿ ಕ್ಯಾಡ್&zwnj;ಬರಿ ಡೈರಿ ಮಿಲ್ಕ್&zwnj; ಮೊದಲ ಸ್ಥಾನದಲ್ಲಿದೆ. ನೆಸ್ಲೆ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಕ್ಯಾಂಪ್ಕೋ ಚಾಕೋಲೆಟ್&zwnj; 8ನೇ ಸ್ಥಾನದಲ್ಲಿದೆ. ಆ ಮೂಲಕ ಭಾರತದ ಟಾಪ್&zwnj; 10 ಚಾಕೋಲೆಟ್&zwnj; ಬ್ರ್ಯಾಂಡ್&zwnj;ಗಳ ಪಟ್ಟಿಯಲ್ಲಿ ಕ್ಯಾಂಪ್ಕೋ ಬ್ರ್ಯಾಂಡ್&zwnj; ಅಧಿಕೃತವಾಗಿ ಸ್ಥಾನ ಪಡೆದುಕೊಂಡಂತಾಗಿದೆ. 8ನೇ ಸ್ಥಾನ ಹೊಂದಿರುವ ಕ್ಯಾಂಪ್ಕೋ ಚಾಕೋಲೆಟ್&zwnj;ಗೆ ಶೇ.1-2 ಅಂಕ ನೀಡಲಾಗಿದೆ.&lt;/p&gt;&lt;h3&gt;&lt;strong&gt;ಏಷ್ಯಾದ ಅತಿ ದೊಡ್ಡ ಫ್ಯಾಕ್ಟರಿ&lt;/strong&gt;&lt;/h3&gt;&lt;p&gt;1986ರಲ್ಲಿ ಕ್ಯಾಂಪ್ಕೋ ಚಾಕೋಲೆಟ್&zwnj; ಉತ್ಪಾದನೆ ಪ್ರಾರಂಭವಾಗಿದ್ದು, ಪುತ್ತೂರಿನಲ್ಲಿ ಏಷ್ಯಾದ ಅತಿ ದೊಡ್ಡ ಫ್ಯಾಕ್ಟರಿಯನ್ನು ಹೊಂದಿದೆ. ಪ್ರಸ್ತುತ 35 ಬಗೆಯ ಚಾಕೋಲೆಟ್&zwnj; ಉತ್ಪನ್ನಗಳನ್ನು ಹೊರತರುತ್ತಿದೆ. ಈಗ ಗೂಗಲ್&zwnj;ನಲ್ಲಿ ಸ್ಥಾನಮಾನ ಲಭಿಸಿರುವುದು ಕ್ಯಾಂಪ್ಕೋ ಬ್ರ್ಯಾಂಡ್&zwnj; ಜಾಗತಿಕವಾಗಿ ಇನ್ನಷ್ಟು ಉತ್ತಂಗಕ್ಕೆ ಪಸರಿಸಲು ಸುಲಭ ಸಾಧ್ಯವಾಗಲಿದೆ.&lt;/p&gt;&lt;p&gt;ಕ್ಯಾಂಪ್ಕೋ ಚಾಕೋಲೆಟ್&zwnj;ನ್ನು ಈಗಿನ ಪೀಳಿಗೆ ಆಸ್ವಾದಿಸುವಂತೆ ಉತ್ಪಾದನೆಯಲ್ಲಿ ಮಾರ್ಪಾಟು ಮಾಡಲು ಕ್ಯಾಂಪ್ಕೋ ಗಂಭೀರ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮಿಲೆಟ್&zwnj; ಹೊಂದಿರುವ ಎನರ್ಜಿ ಬಾರ್&zwnj; ಚಾಕಲೇಟ್ ಉತ್ಪಾದಿಸಲು ಮುಂದಾಗಿದೆ. ಇದಲ್ಲದೆ ಎರಡು ವಿಧದ ಡಾರ್ಕ್&zwnj; ಚಾಕೋಲೆಟ್&zwnj;ನ್ನು ಪರಿಚಯಿಸಲಿದೆ. ಒಂದು ಚಾಕೋಲೆಟ್&zwnj;ನಲ್ಲಿ ಶೇ.55ರಷ್ಟು ಕೋಕೋ ಮಿಶ್ರಣ ಇದ್ದರೆ, ಇನ್ನೊಂದರಲ್ಲಿ ಡ್ರೈಫ್ರುಟ್ಸ್&zwnj; ಮಿಕ್ಸ್&zwnj; ಇರಲಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಮೈಸೂರು ಸ್ಯಾಂಡಲ್ 110 ವರ್ಷಗಳಲ್ಲಿ ಮೊದಲ ಬಾರಿಗೆ 2,016 ಕೋಟಿ ರೂ. ವಹಿವಾಟು, 507 ಕೋಟಿ ಲಾಭ!&lt;/strong&gt;&lt;/p&gt;&lt;p&gt;ಆನ್&zwnj;ಲೈನ್&zwnj; ಮಾರುಕಟ್ಟೆಯಾದ ಇ-ಕಾಮರ್ಸ್&zwnj;ನಲ್ಲೂ ಕ್ಯಾಂಪ್ಕೋ ಉತ್ಪನ್ನಗಳು ಸದ್ದು ಮಾಡುತ್ತಿವೆ. ಅಮೆಜಾನ್&zwnj;ನಲ್ಲಿ ಕ್ಯಾಂಪ್ಕೋದ 6 ಉತ್ಪನ್ನಗಳು ಹಾಗೂ ಕ್ಯಾಂಪ್ಕೋ ಕಾರ್ಟ್&zwnj;ನಲ್ಲಿ ಕ್ಯಾಂಪ್ಕೋದ ಎಲ್ಲ ಉತ್ಪನ್ನಗಳು ಆನ್&zwnj;ಲೈನ್&zwnj; ಮೂಲಕ ಗ್ರಾಹಕರನ್ನು ತಲುಪುತ್ತಿವೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಗೂಗಲ್&zwnj; ಹಿಂದಿಕ್ಕಿ ಭಾರತದ ಅತಿದೊಡ್ಡ ಡೇಟಾ ಸೆಂಟರ್ ನಿರ್ಮಿಸಲಿದೆ ರಿಲಯನ್ಸ್: 1.6 ಲಕ್ಷ ಕೋಟಿ ರೂ.ಗಳ ಮಹಾ ಯೋಜನೆ&lt;/strong&gt;&lt;/p&gt;]]></content:encoded>
            <category><![CDATA[business]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/campco-s-chocolate-has-been-ranked-among-the-top-10-chocolate-brands-mrq/articleshow-k4ck7el"/>
        </item>
        <item>
            <title><![CDATA[ಮೇ 15ಕ್ಕೆ ಬರ್ತಾರಾ ಹೊಸ ಸಿಎಂ? ದೆಹಲಿಗೆ ಶಾಸಕರ ದೌಡು, ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ]]></title>
            <link>https://kannada.asianetnews.com/politics/will-the-new-cm-come-on-may-15-mlas-rush-to-delhi-new-calculations-in-congress-mrq/articleshow-ta5d56a</link>
            <guid isPermaLink="true">https://kannada.asianetnews.com/politics/will-the-new-cm-come-on-may-15-mlas-rush-to-delhi-new-calculations-in-congress-mrq/articleshow-ta5d56a</guid>
            <pubDate>Wed, 29 Apr 2026 05:50:31 +0530</pubDate>
            <description><![CDATA[ಶಾಸಕ ಇಕ್ಬಾಲ್ ಹುಸೇನ್ ಅವರು ಮೇ 15 ರಂದು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಇತರ ನಾಯಕರು ಅಲ್ಲಗಳೆದಿದ್ದು, ನಾಯಕತ್ವ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kb6k4bhxy3rdf83wzfj2r6en,imgname-siddaramaiah-dk-shivakumar-1764379209277.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ&lt;/strong&gt;: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಹುಟ್ಟುಹಬ್ಬ ದಿನವಾದ ಮೇ 15ರಂದು ಮುಖ್ಯಮಂತ್ರಿ ಆಗುವುದು ನಿಶ್ಚಿತ. ಇದೇ ನಾನು ಹೇಳುವ ಅಂತಿಮ ದಿನಾಂಕ ಎಂದು ರಾಮನಗರ ಕ್ಷೇತ್ರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಕೇತೋಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಾನು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವ ಕುರಿತು 2-3 ದಿನಾಂಕಗಳನ್ನು ಹೇಳಿದ್ದೆ. ಆದರೀಗ ಮೇ 15 ಅಂತಿಮ ದಿನಾಂಕ. ಈ ಅ&zwj;ವಧಿಯಲ್ಲಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ. ಅವರಿಗೆ ಅವಕಾಶ ಸಿಗಬೇಕು ಎಂಬುದು ಎಲ್ಲರ ಬಯಕೆಯಾಗಿದೆ ಎಂದರು. ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯೇ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಸಿಗುತ್ತದೆ ಎಂಬ ವಿಶ್ವಾಸವಿದೆ. ಅವರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮೆಲ್ಲರ ಆಸೆಯಾಗಿದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ದೆಹಲಿಯಲ್ಲಿ ಮತ್ತೆ &lsquo;ಮಿನಿಸ್ಟರ್ ಲಾಬಿ&rsquo;: ಶಾಸಕರು ದೌಡು&lt;/strong&gt;&lt;/h2&gt;&lt;p&gt;ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಸಂಪುಟ ಪುನಾರಚನೆ ಕುರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಚಿವಾಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟು ಸಚಿವ ಸ್ಥಾನಕ್ಕಾಗಿ ಲಾಬಿ ಶುರು ಮಾಡಿದ್ದಾರೆ.&lt;/p&gt;&lt;p&gt;ಸಚಿವ ಎಚ್&zwnj;.ಸಿ.ಮಹದೇವಪ್ಪ ಅವರು ಪಕ್ಷದ ರಾಜ್ಯ ಪ್ರಭಾರಿ ಸುರ್ಜೇವಾಲ ಅವರನ್ನು ಹಾಗೂ ಸಚಿವ ಕೆ.ಎಚ್&zwnj;.ಮುನಿಯಪ್ಪ ಅವರು ಮಲ್ಲಿಕಾರ್ಜುನ ಖರ್ಗೆಯವರನ್ನು ಮಂಗಳವಾರ ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸಿದರು. ಇದೇ ವೇಳೆ, ಸಚಿವಾಕಾಂಕ್ಷಿಗಳಾದ ಬಸವರಾಜ ರಾಯರೆಡ್ಡಿ, ರಿಜ್ವಾನ್ ಹರ್ಷದ್, ಹಂಪನಗೌಡ ಬಾರ್ದಲಿ, ಸಲೀಂ ಅಹಮದ್ ಕೂಡ ಮಂಗಳವಾರ ದೆಹಲಿಗೆ ಆಗಮಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ವರಿಷ್ಠ ನಾಯಕರನ್ನು ಭೇಟಿ ಮಾಡಿ, ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.&lt;/p&gt;&lt;h3&gt;&lt;strong&gt;ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿರುವೆ: ತಂಗಡಗಿ&lt;/strong&gt;&lt;/h3&gt;&lt;p&gt;ಕಾರಟಗಿ (ಕೊಪ್ಪಳ): ಜನರ ಆಶೀರ್ವಾದ, ಕನಕಾಚಲಪತಿ ಕೃಪೆಯಿಂದ ಸಚಿವ ಸಂಪುಟ ಸರ್ಜರಿ ಬಳಿಕವೂ ಸಚಿವನಾಗಿ ಇರುತ್ತೇನೆ ಎಂಬ ಭರವಸೆ ನನಗಿದೆ ಎಂದು ಸಚಿವ ಶಿವರಾಜ ತಂಗಡಗಿ ವಿಶ್ವಾಸ ವ್ಯಕ್ತಪಡಿಸಿದರು. ಯರಡೋಣಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಚಿವ ಸಂಪುಟ ಸರ್ಜರಿ ಬಳಿಕ ನಿಮ್ಮ ಸ್ಥಾನಮಾನದ ಕತೆ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಚಿವ ಸಂಪುಟ ಸರ್ಜರಿ ಅವಶ್ಯಕತೆ ಇದೆ. ಏಳೆಂಟು ವರ್ಷಗಳಿಂದ ಶಾಸಕರಾಗಿ ಇರುವವರಿಗೆ ಸಚಿವರಾಗುವ ಆಸೆ ಇದ್ದೇ ಇದೆ. ಹೀಗಾಗಿ ಹೈಕಮಾಂಡ್ ಭೇಟಿಗೆ ಹೋಗುವುದು ಸಹಜ. ಜನರ ಆಶೀರ್ವಾದ, ಕನಕಾಚಲಪತಿಯ ಕೃಪೆಯಿಂದ ಮುಂದೆ ಸಹ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತೇನೆ ಎಂದರು.&lt;/p&gt;&lt;h3&gt;&lt;strong&gt;ನಾಯಕತ್ವ ಬದಲಾವಣೆಯು ಕೇವಲ ಮಾಧ್ಯಮಗಳ ಸೃಷ್ಟಿ: ಹಿಟ್ನಾಳ&lt;/strong&gt;&lt;/h3&gt;&lt;p&gt;ಕೊಪ್ಪಳ: ನಾಯಕತ್ವ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು, ನಾಯಕತ್ವ ಗಟ್ಟಿಯಾಗಿಯೇ ಇದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ ಸೇರಿದಂತೆ ನಾವೆಲ್ಲ ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ. ಸಿಎಂ ಖುರ್ಚಿ ಖಾಲಿ ಇಲ್ಲವಾದ್ದರಿಂದ ಬೇರೆಯವರು ಸಿಎಂ ಆಗಬೇಕು ಎನ್ನುವ ಚರ್ಚೆ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಈ ಹಿಂದೆ ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆ ಆಗಬೇಕು. ಇತರರಿಗೂ ಅವಕಾಶ ನೀಡಬೇಕು ಎನ್ನಲಾಗಿತ್ತು. ಆದರೆ ಈಗ ನಾವು ಕೇಳುತ್ತಿದ್ದೇವೆ. ಅದರಲ್ಲಿ ತಪ್ಪೇನೂ ಇಲ್ಲ. 3 ಬಾರಿ ಆಯ್ಕೆಯಾದವರು ಸೇರಿದಂತೆ ಹಿರಿಯರು ಹೈಕಮಾಂಡ್ ಭೇಟಿಯಾಗಿ ಬಂದಿದ್ದೇವೆ. ಅಗತ್ಯ ಬಿದ್ದರೆ ಮತ್ತೊಮ್ಮೆ ಹೋಗಿ ಮನವಿ ಮಾಡುತ್ತೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧ ಎಂದರು.&lt;/p&gt;&lt;h3&gt;&lt;strong&gt;ಸಿಎಂ ಬದಲು ವರಿಷ್ಠರಿಗಷ್ಟೇ ಬಿಟ್ಟ ವಿಚಾರ: ಆಂಜನೇಯ&lt;/strong&gt;&lt;/h3&gt;&lt;p&gt;ಬೀರೂರು: ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್&zwnj; ಹೈಕಂಮಾಡ್&zwnj;ಗೆ ಬಿಟ್ಟದ್ದು. ಈಗಾಗಲೇ ಉತ್ತಮ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ. ಹಾಗಾಗಿ ಮೇ 15ಕ್ಕೆ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವವರು ಸ್ವಲ್ಪ ಯೋಚಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ಶಾಸಕ ಇಕ್ಬಾಲ್ ಹುಸೇಸ್&zwnj;ಗೆ ಟಾಂಗ್&zwnj; ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಯನ್ನು ಆಡಳಿತ ಪಕ್ಷದ ಶಾಸಕಾಂಗ ಪಕ್ಷ ಆಯ್ಕೆ ಮಾಡಲಿದೆ. ಅದರಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಯಾರೋ ಒಬ್ಬ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವುದೆಲ್ಲಾ ಸುಳ್ಳು. ಡೇಟ್ ನಿಗದಿ ಪಡಿಸುವ ಅಧಿಕಾರಿ ಇಲ್ಬಾಲ್ ಹುಸೇನ್&zwnj;ಗೆ ಇಲ್ಲ. ಇಂತಹ ತಾರೀಖಿಗೆ ಮಂತ್ರಿಮಂಡಲ ಆಗಬೇಕು. ಇಂತಹ ತಾರೀಖಿಗೆ ಬದಲಾವಣೆ ಆಗಬೇಕು ಅಂತ ಹೇಳುವುದು ಸರಿಯಲ್ಲ ಎಂದರು.&lt;/p&gt;]]></content:encoded>
            <category><![CDATA[politics]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/politics/will-the-new-cm-come-on-may-15-mlas-rush-to-delhi-new-calculations-in-congress-mrq/articleshow-ta5d56a"/>
        </item>
        <item>
            <title><![CDATA[ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು: ಇಂದು ಸಮೀಕ್ಷೆ ಪ್ರಕಟ,  ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ]]></title>
            <link>https://kannada.asianetnews.com/india-news/who-will-win-in-the-five-state-election-survey-released-today-final-phase-of-voting-in-west-bengal-mrq/articleshow-a31crs8</link>
            <guid isPermaLink="true">https://kannada.asianetnews.com/india-news/who-will-win-in-the-five-state-election-survey-released-today-final-phase-of-voting-in-west-bengal-mrq/articleshow-a31crs8</guid>
            <pubDate>Wed, 29 Apr 2026 05:34:27 +0530</pubDate>
            <description><![CDATA[ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನದೊಂದಿಗೆ ಪಂಚರಾಜ್ಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೇ 4 ರ ಅಧಿಕೃತ ಫಲಿತಾಂಶಕ್ಕೂ ಮುನ್ನ, ಇಂದು ಸಂಜೆ ಪ್ರಕಟವಾಗಲಿರುವ ಮತದಾನೋತ್ತರ ಸಮೀಕ್ಷೆಗಳು ಸಂಭವನೀಯ ಗೆಲುವಿನ ಸುಳಿವು ನೀಡಲಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpxcanpmm1m1ndgfx9de1d3q,imgname-tn-vote-1776954988244.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕೋಲ್ಕತಾ:&lt;/strong&gt; ಪಂಚರಾಜ್ಯ ಚುನಾವಣೆ ನಡೆದ ರಾಜ್ಯಗಳ ಪೈಕಿ ಒಂದಾದ ಪಶ್ಚಿಮ ಬಂಗಾಳದಲ್ಲಿ 2ನೇ ಹಾಗೂ ಕೊನೆ ಹಂತದ ಚುನಾವಣೆ ಬುಧವಾರ ನಡೆಯಲಿದೆ. ಇದರೊಂದಿಗೆ ಎಲ್ಲ 5 ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಸಂಜೆ 6 ಗಂಟೆಯ ಬಳಿಕ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಲಿವೆ.&lt;/p&gt;&lt;p&gt;ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಮೇ 4ಕ್ಕೆ ಪ್ರಕಟವಾಗಲಿದೆಯಾದರೂ, ಸಮೀಕ್ಷೆಗಳು ಅದರ ಸುಳಿವು ನೀಡುವ ಕಾರಣ ಎಲ್ಲರ ಗಮನ ಸಮೀಕ್ಷೆಗಳ ಮೇಲೆ ನಿಟ್ಟಿದೆ.ಹಾಲಿ ಅಸ್ಸಾಂನಲ್ಲಿ ಬಿಜೆಪಿ, ತಮಿಳ್ನಾಡಲ್ಲಿ ಡಿಎಂಕೆ ಕೂಟ, ಕೇರಳದಲ್ಲಿ ಎಲ್&zwnj;ಡಿಎಫ್&zwnj;, ಬಂಗಾಲದಲ್ಲಿ ಟಿಎಂಸಿ ಮತ್ತು ಪುದುಚೇರಿಯಲ್ಲಿ ಆಲ್&zwnj; ಇಂಡಿಯಾ ಎನ್&zwnj;ಆರ್&zwnj; ಕಾಂಗ್ರೆಸ್&zwnj; ಮತ್ತು ಬಿಜೆಪಿ ಅಧಿಕಾರದಲ್ಲಿವೆ.&lt;/p&gt;&lt;h2&gt;&lt;strong&gt;ಬಂಗಾಳ 2ನೇ ಹಂತ:&lt;/strong&gt;&lt;/h2&gt;&lt;p&gt;ಏ.23ರಂದು ಬಂಗಾಳದ 152 ಸ್ಥಾನಗಳಿಗೆ ಮತದಾನ ನಡೆದಿದ್ದು, 2ನೇ ಹಂತದಲ್ಲಿ 142 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮೊದಲ ಹಂತದ ಚುನಾವಣೆ ನಡೆದ ರಾಜ್ಯದ ಉತ್ತರ ಭಾಗಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ದಕ್ಷಿಣದಲ್ಲಿ ಟಿಎಂಸಿ ಪ್ರಾಬಲ್ಯವಿದೆ. ಒಂದು ವೇಳೆ ದಕ್ಷಿಣದಲ್ಲಿನ ದೀದಿ ಭದ್ರ ಕೋಟೆ ಒಡೆಯಲು ಬಿಜೆಪಿ ಸಫಲವಾದರೆ ಮೊದಲ ಸಲ ಅಧಿಕಾರ ಸಿಕ್ಕಲಿದೆ. ಇಲ್ಲವಾದಲ್ಲಿ ಸತತ 4ನೇ ಸಲ ಮಮತಾಗೆ ಸಿಎಂ ಗಾದಿ ಒಲಿಯಲಿದೆ.&lt;/p&gt;&lt;p&gt;ಮೊದಲ ಹಂತದ ಚುನಾವಣೆಯಲ್ಲಿ ಬಂಗಾಳದಲ್ಲಿ ದಾಖಲೆಯ ಶೇ.93.19ರಷ್ಟು ಮತ ಚಲಾವಣೆಯಾಗಿತ್ತು.&lt;/p&gt;&lt;h3&gt;&lt;strong&gt;ಬಂಗಾಳದಲ್ಲೀಗ ಸಿಂಗಂ ವರ್ಸಸ್&zwnj; ಪುಷ್ಪಾ!&lt;/strong&gt;&lt;/h3&gt;&lt;p&gt;ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಮತದಾನಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಚುನಾವಣಾ ಆಯೋಗವು &lsquo;ಎನ್&zwnj;ಕೌಂಟರ್&zwnj; ಸ್ಪೆಷಲಿಸ್ಟ್&zwnj;&rsquo; ಎಂದೇ ಖ್ಯಾತರಾಗಿರುವ ಯುಪಿಯ ಐಪಿಎಸ್&zwnj; ಅಧಿಕಾರಿ ಅಜಯ್&zwnj; ಪಾಲ್&zwnj; ಶರ್ಮ ಅವರನ್ನು ಪೊಲೀಸ್&zwnj; ವೀಕ್ಷಕರಾಗಿ ನೇಮಿಸಿರುವುದು ಟಿಎಂಸಿ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.&lt;/p&gt;&lt;p&gt;ಫಾಲ್ಟಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಟಿಎಂಸಿಯ ಜೆಹಾಂಗಿರ್&zwnj; ಖಾನ್&zwnj; ಅವರ ಬಗ್ಗೆ ಜನರ ದೂರನ್ನು ಆಲಿಸಿದ ಶರ್ಮ ಸೀದಾ ಅವರ ಮನೆಗೆ ತೆರಳಿ, &lsquo;ಅವರ(ಖಾನ್&zwnj;) ಕಡೆಯವರು ಜನರನ್ನು ಬೆದರಿಸುವುದನ್ನು ಮುಂದುವರೆಸಿದರೆ ತಕ್ಕ ಶಾಸ್ತಿ ಮಾಡಲಾಗುತ್ತದೆ. ಆಮೇಲೆ ಅಳಬೇಡಿ&rsquo; ಎಂದು ಖಾನ್&zwnj;ರ ಪರಿವಾರವನ್ನುದ್ದೇಶಿಸಿ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ, &lsquo;ಬಿಜೆಪಿಗೆ ಚುನಾವಣೆಯಲ್ಲಿ ಸಹಾಯವಾಗಲಿ ಎಂದು ಇವರು ಹೀಗೆ ಮಾಡುತ್ತಿದ್ದಾರೆ. ಕಾರಣ ಅವರಿಗೆ ಸೋಲಿನ ಭಯ ಕಾಡುತ್ತಿದೆ&rsquo; ಎಂದು ಆರೋಪಿಸಿರುವ ಖಾನ್&zwnj;, &lsquo;ಅವರು ಸಿಂಗಂ ಆದರೆ ನಾನು ಪುಷ್ಟ&rsquo; ಎಂದು ಅಲ್ಲು ಅರ್ಜುನ್&zwnj; ಚಿತ್ರವೊಂದರಲ್ಲಿ ನಟಿಸಿದ್ದ ಪಾತ್ರವನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.&lt;/p&gt;&lt;p&gt;2011ನೇ ಬ್ಯಾಚ್&zwnj;ನ ಉತ್ತರಪ್ರದೇಶದ ಐಪಿಎಸ್&zwnj; ಅಧಿಕಾರಿಯಾಗಿರುವ ಶರ್ಮ, 500ಕ್ಕೂ ಹೆಚ್ಚು ಎನ್&zwnj;ಕೌಂಟರ್&zwnj;ಗಳನ್ನು ಮಾಡಿದ್ದಾರೆ. 22 ತಿಂಗಳಲ್ಲಿ 136 ಎನ್&zwnj;ಕೌಂಟರ್&zwnj;ಗಳನ್ನು ಇವರು ಮಾಡಿದ್ದರು ಎಂಬುದು ಗಮನಾರ್ಹ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/who-will-win-in-the-five-state-election-survey-released-today-final-phase-of-voting-in-west-bengal-mrq/articleshow-a31crs8"/>
        </item>
        <item>
            <title><![CDATA[ಸಿಎಂ ಆಗಲು ಆಶೀರ್ವದಿಸಿ, ಇಡೀ ರಾಜ್ಯದ ಚಿತ್ರಣವೇ ಬದಲಿಸುವೆ: ಶಾಸಕ ಬಸನಗೌಡ ಯತ್ನಾಳ]]></title>
            <link>https://kannada.asianetnews.com/karnataka-districts/basanagouda-patil-yatnal-vijayapura-development-cm-aspiration-gvd/articleshow-e0rxwwx</link>
            <guid isPermaLink="true">https://kannada.asianetnews.com/karnataka-districts/basanagouda-patil-yatnal-vijayapura-development-cm-aspiration-gvd/articleshow-e0rxwwx</guid>
            <pubDate>Wed, 29 Apr 2026 00:25:01 +0530</pubDate>
            <description><![CDATA[2018ರಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ವಿಜಯಪುರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01k2p8y50hy1cyydz1b1tjek6g,imgname-basanagowda-patil-yatnal-1755241714705.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ (ಏ.29): &lt;/strong&gt;2018ರಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿದ್ದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ವಿಜಯಪುರವನ್ನು ಮಾದರಿ ನಗರವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವದಿಸಿದರೆ, ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.&lt;/p&gt;&lt;p&gt;ನಗರದ ವಾರ್ಡ್ ನಂ.32ರಲ್ಲಿ ಜೋರಾಪುರ ಪೇಠ ದುರ್ಗಾದೇವಿ ದೇವಸ್ಥಾನದ ಹತ್ತಿರ 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 20 ಲಕ್ಷ ರೂ. ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ. ಸೇರಿ ಒಟ್ಟು 30 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.&lt;/p&gt;&lt;p&gt;ದೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ಸುಸಜ್ಜಿತ ಸಿಸಿ ರಸ್ತೆಗಳು, ಒಳಚರಂಡಿ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ರಸ್ತೆ ಮಹಾಪುರುಷರ ಹೆಸರು ನಾಮಕರಣ, ವೃತ್ತಗಳ ನಿರ್ಮಾಣ, ಕಾಯಿಪಲ್ಲೆ ಮಾರುಕಟ್ಟೆ, ದೇವಸ್ಥಾನಗಳು ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಶಾಲಾ ಕೊಠಡಿಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ವಿಜಯಪುರ ಅತ್ಯಂತ ಶುದ್ಧ ಗಾಳಿ ಬಿಸುವ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.&lt;/p&gt;&lt;h2&gt;&lt;strong&gt;ಕಾಮಗಾರಿ ಆರಂಭ&lt;/strong&gt;&lt;/h2&gt;&lt;p&gt;ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿವಾಜಿ ವೃತ್ತದಿಂದ ಡಾ.ಬಾಬು ಜಗಜೀವನರಾಮ ವೃತ್ತದವರೆಗೆ ಶೀಘ್ರದಲ್ಲೇ ರಸ್ತೆ ಅಗಲೀಕರಣಗೊಳಿಸಿ, ಅನುಷ್ಠಾನಗೊಳಿಸಲು ಅಗತ್ಯವಿರುವ 32 ಕೋಟಿ ರೂ. ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರಸ್ತೆ ಆಗಲೀಕರಣದಲ್ಲಿ ಬರುವ ಖಾಸಗಿ ಒಡೆತನದ ಆಸ್ತಿಗಳಿಗೆ ಪರಿಹಾರ ನೀಡಿಯೇ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/basanagouda-patil-yatnal-vijayapura-development-cm-aspiration-gvd/articleshow-e0rxwwx"/>
        </item>
        <item>
            <title><![CDATA[6 ಬೋಲ್ಡ್ ಪ್ಲಂಗಿಂಗ್ ಬ್ಲೌಸ್ ಡಿಸೈನ್‌ಗಳು: ಪಾರ್ಟಿಗಳಲ್ಲಿ ಲುಕ್ ಮಸ್ತಾಗಿರುತ್ತೆ!]]></title>
            <link>https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf</link>
            <guid isPermaLink="true">https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf</guid>
            <pubDate>Tue, 28 Apr 2026 23:44:32 +0530</pubDate>
            <description><![CDATA[ಸೀರೆ ಮತ್ತು ಲೆಹೆಂಗಾಗಳ ಜೊತೆ ಪ್ಲಂಗಿಂಗ್ ನೆಕ್ ಬ್ಲೌಸ್ ಡಿಸೈನ್‌ಗಳು ಈಗ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಈ ಡಿಸೈನ್‌ಗಳು ಪಾರ್ಟಿ ಲುಕ್‌ಗೆ ಗ್ಲಾಮರಸ್, ಮಾಡರ್ನ್ ಹಾಗೂ ಸ್ಟೈಲಿಶ್ ಟಚ್ ಕೊಡುತ್ತವೆ. ಇಲ್ಲಿವೆ 6 ಸುಂದರ ಬ್ಲೌಸ್ ಡಿಸೈನ್‌ಗಳು.]]></description>
            <media:content url="https://static.asianetnews.com/images/w-1280,h-720,format-jpg,imgid-01jfempektbej4es8mrtdff508,imgname-Embroidered-Plunging-Neckline-Blouse-e-1734584515194.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/six-plunging-blouse-designs-to-elevate-your-party-look-gvd-kymy5tf"/>
        </item>
        <item>
            <title><![CDATA[ಡೊನಾಲ್ಡ್‌ ಟ್ರಂಪ್‌ ಸರ್ಕಾರಕ್ಕೆ ಈಗ ಪೆಂಟಗನ್‌ ಮೇಲೆಯೇ ಅನುಮಾನ?]]></title>
            <link>https://kannada.asianetnews.com/world-news/jd-vance-fears-pentagon-misleading-trump-iran-war-missile-stockpile-depletion-san/articleshow-1wkwi08</link>
            <guid isPermaLink="true">https://kannada.asianetnews.com/world-news/jd-vance-fears-pentagon-misleading-trump-iran-war-missile-stockpile-depletion-san/articleshow-1wkwi08</guid>
            <pubDate>Tue, 28 Apr 2026 23:19:07 +0530</pubDate>
            <description><![CDATA[ಇರಾನ್ ವಿರುದ್ಧದ ಯುದ್ಧದ ಕುರಿತು ಪೆಂಟಗನ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನಿಖರವಾದ ಮಾಹಿತಿ ನೀಡುತ್ತಿಲ್ಲ ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಗಂಭೀರ ಸಂಶಯ ವ್ಯಕ್ತಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpq1t03xdha4602ag0ntvm11,imgname-iran-us-peace-talks-mojtaba-khamenei-approval-ceasefire-islamabad-negotiations-jd-vance-1-1776742629501.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಾಷಿಂಗ್ಟನ್ (ಏ.28): &lt;/strong&gt;ಇರಾನ್ ವಿರುದ್ಧ ನಡೆಯುತ್ತಿರುವ ಭೀಕರ ಯುದ್ಧದ ಕುರಿತು ಅಮೆರಿಕದ ರಕ್ಷಣಾ ಕೇಂದ್ರವಾದ 'ಪೆಂಟಗನ್', ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನಿಖರವಾದ ಮಾಹಿತಿ ನೀಡುತ್ತಿಲ್ಲವೇ ಎಂಬ ಗಂಭೀರ ಸಂಶಯವನ್ನು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ವ್ಯಕ್ತಪಡಿಸಿದ್ದಾರೆ ಎಂದು 'ದಿ ಅಟ್ಲಾಂಟಿಕ್' ವರದಿ ಮಾಡಿದೆ. ಯುದ್ಧದಲ್ಲಿ ಅಮೆರಿಕದ ಕ್ಷಿಪಣಿ ದಾಸ್ತಾನುಗಳು (Missile Stockpiles) ವೇಗವಾಗಿ ಖಾಲಿಯಾಗುತ್ತಿರುವುದನ್ನು ಪೆಂಟಗನ್ ಮುಚ್ಚಿಡುತ್ತಿರಬಹುದು ಎಂಬುದು ವ್ಯಾನ್ಸ್ ಅವರ ಪ್ರಮುಖ ಆತಂಕವಾಗಿದೆ.&lt;/p&gt;&lt;h2&gt;&lt;strong&gt;ಕ್ಷಿಪಣಿ ದಾಸ್ತಾನುಗಳ ಕೊರತೆ ಭೀತಿ&lt;/strong&gt;&lt;/h2&gt;&lt;p&gt;ಮುಚ್ಚಿದ ಬಾಗಿಲಿನ ಸಭೆಗಳಲ್ಲಿ ವ್ಯಾನ್ಸ್ ಅವರು ಅಮೆರಿಕದ ಯುದ್ಧ ಸನ್ನದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವು ಆಂತರಿಕ ಅಂದಾಜಿನ ಪ್ರಕಾರ, ನಿರ್ಣಾಯಕ ಕ್ಷಿಪಣಿ ಪ್ರತಿಬಂಧಕಗಳು ಮತ್ತು ದೂರಗಾಮಿ ಶಸ್ತ್ರಾಸ್ತ್ರಗಳ ಪೈಕಿ ಶೇ. 50 ಕ್ಕಿಂತ ಹೆಚ್ಚು ಈಗಾಗಲೇ ಬಳಕೆಯಾಗಿವೆ. ಒಂದು ವೇಳೆ ಇರಾನ್ ಯುದ್ಧಕ್ಕೆ ಅಮೆರಿಕದ ಶಸ್ತ್ರಾಸ್ತ್ರಗಳು ವ್ಯಯವಾದರೆ, ಮುಂದೆ ತೈವಾನ್, ದಕ್ಷಿಣ ಕೊರಿಯಾ ಅಥವಾ ಯುರೋಪ್&zwnj;ನಲ್ಲಿ ಬಿಕ್ಕಟ್ಟು ಎದುರಾದಾಗ ಅಮೆರಿಕ ಹೇಗೆ ಸ್ಪಂದಿಸುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.&lt;/p&gt;&lt;h2&gt;&lt;strong&gt;ಪೆಂಟಗನ್ ಮತ್ತು ಶ್ವೇತಭವನದ ನಡುವೆ ಭಿನ್ನಾಭಿಪ್ರಾಯ?&lt;/strong&gt;&lt;/h2&gt;&lt;p&gt;ಒಂದೆಡೆ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಮತ್ತು ಜಂಟಿ ಮುಖ್ಯಸ್ಥರ ಅಧ್ಯಕ್ಷ ಡಾನ್ ಕೈನ್ ಅವರು ಅಮೆರಿಕದ ಶಸ್ತ್ರಾಸ್ತ್ರಗಳ ದಾಸ್ತಾನು ಸದೃಢವಾಗಿದೆ ಮತ್ತು ಇರಾನ್ ಸೇನೆಗೆ ಭಾರಿ ಹಾನಿಯಾಗಿದೆ ಎಂದು ಹೇಳುತ್ತಿದ್ದಾರೆ. ಅಧ್ಯಕ್ಷ ಟ್ರಂಪ್ ಕೂಡ ಅಮೆರಿಕದ ಸಾಮರ್ಥ್ಯ &quot;ಅಪಾರ&quot; ಎಂದು ಬಣ್ಣಿಸಿದ್ದಾರೆ. ಆದರೆ, ಉಪಾಧ್ಯಕ್ಷ ವ್ಯಾನ್ಸ್ ಈ ಅಂಕಿಅಂಶಗಳ ಬಗ್ಗೆ ಪೆಂಟಗನ್&zwnj;ನಿಂದ ಸ್ಪಷ್ಟನೆ ಕೋರಿದ್ದಾರೆ ಮತ್ತು ಈ ವಿಷಯವನ್ನು ಟ್ರಂಪ್ ಅವರೊಂದಿಗೆ ನೇರವಾಗಿ ಚರ್ಚಿಸಿದ್ದಾರೆ.&lt;/p&gt;&lt;h2&gt;&lt;strong&gt;ಇರಾನ್ ಶಕ್ತಿ ಇನ್ನು ಕುಂದಿಲ್ಲ&lt;/strong&gt;&lt;/h2&gt;&lt;p&gt;ಯುದ್ಧ ಆರಂಭವಾಗಿ ವಾರಗಳೇ ಕಳೆದಿದ್ದರೂ, ಇರಾನ್&zwnj;ನ ಮಿಲಿಟರಿ ಶಕ್ತಿ ಇನ್ನೂ ಗಣನೀಯ ಪ್ರಮಾಣದಲ್ಲಿ ಉಳಿದಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ. ಇರಾನ್&zwnj;ನ ಕ್ಷಿಪಣಿ ಉಡಾವಣಾ ಸಾಮರ್ಥ್ಯ ಮತ್ತು ನೌಕಾಪಡೆಗಳು ಜಾಗತಿಕ ಹಡಗು ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯಲ್ಲಿ ಇಂದಿಗೂ ಭೀತಿ ಹುಟ್ಟಿಸುತ್ತಿವೆ. ಕದನ ವಿರಾಮದ ಸಮಯದಲ್ಲಿ ಇರಾನ್ ತನ್ನ ಕ್ಷಿಪಣಿ ಮೂಲಸೌಕರ್ಯಗಳನ್ನು ಭಾಗಶಃ ಪುನರ್ನಿರ್ಮಿಸಿಕೊಂಡಿರುವುದು ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದೆ.&lt;/p&gt;&lt;h2&gt;&lt;strong&gt;ಟ್ರಂಪ್ ತಂಡದಲ್ಲಿ ರಾಜಕೀಯ ಪ್ರತಿಷ್ಠೆ&lt;/strong&gt;&lt;/h2&gt;&lt;p&gt;ಈ ಯುದ್ಧದ ಫಲಿತಾಂಶವು ಜೆ.ಡಿ. ವ್ಯಾನ್ಸ್ ಮತ್ತು ಪೀಟ್ ಹೆಗ್ಸೆತ್ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ವ್ಯಾನ್ಸ್ ಅವರು ಮೊದಲಿನಿಂದಲೂ ಸುದೀರ್ಘ ವಿದೇಶಿ ಯುದ್ಧಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಆದರೆ ಹೆಗ್ಸೆತ್ ಅವರು ಯುದ್ಧದ ಪರವಾಗಿ ಆಕ್ರಮಣಕಾರಿ ನಿಲುವನ್ನು ಹೊಂದಿದ್ದು, ಟ್ರಂಪ್&zwnj;ಗೆ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಮುಗಿಯುತ್ತದೆ ಎಂದು ನಿರೀಕ್ಷಿಸಲಾಗಿದ್ದ ಈ ಯುದ್ಧವು ಈಗ ಅನಿಶ್ಚಿತ ತಿರುವು ಪಡೆದಿದೆ. ಸಂಧಾನದ ಮಾತುಕತೆಗಳು ವಿಫಲವಾಗಿದ್ದು, ಮಧ್ಯಪ್ರಾಚ್ಯದ ಪರಿಸ್ಥಿತಿ ಕ್ಷಣಕ್ಷಣಕ್ಕೂ ಸ್ಫೋಟಕವಾಗುತ್ತಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[world-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/jd-vance-fears-pentagon-misleading-trump-iran-war-missile-stockpile-depletion-san/articleshow-1wkwi08"/>
        </item>
        <item>
            <title><![CDATA[ಅತ್ತೆ ಮದುವೆಗೆ ರೆಡಿಯಾಗ್ತಿದ್ದಾಳೆ ಪುಟಾಣಿ: ಇಲ್ಲಿವೆ ಸುಂದರ ಮೆಹಂದಿ ಡಿಸೈನ್ಸ್!]]></title>
            <link>https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv</link>
            <guid isPermaLink="true">https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv</guid>
            <pubDate>Tue, 28 Apr 2026 22:55:16 +0530</pubDate>
            <description><![CDATA[ಮನೆಯಲ್ಲಿ ಅತ್ತೆಯ ಮದುವೆ ಸಂಭ್ರಮ. ಪುಟಾಣಿ ಮಗಳು ಮೆಹಂದಿ ಹಾಕಿಸಬೇಕು ಅಂತ ಹಠ ಮಾಡುತ್ತಿದ್ದಾಳಾ? ಯಾವ ಡಿಸೈನ್ ಹಾಕಿಸೋದು ಅಂತ ಗೊಂದಲದಲ್ಲಿದ್ದರೆ, ಇಲ್ಲಿವೆ 7 ಸುಲಭ ಹಾಗೂ ಹೊಸ ಮೆಹಂದಿ ಡಿಸೈನ್ಸ್.]]></description>
            <media:content url="https://static.asianetnews.com/images/w-1280,h-720,format-jpg,imgid-01kq9zmmkbftc2vpass6zwzm0y,imgname-mehndi-designs-for-kids-simple-5-1777377890922.png" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/simple-and-cute-mehndi-designs-for-kids-wedding-season-gvd-ay7fctv"/>
        </item>
        <item>
            <title><![CDATA[ಅಲ್ಲು ಅರ್ಜುನ್ ಮಗನ ಫೇವರಿಟ್ ಹೀರೋ ಯಾರು? ಅಪ್ಪ, ಚಿರು ತಾತನಿಗೂ ಶಾಕ್ ಕೊಟ್ಟ ಅಯಾನ್!]]></title>
            <link>https://kannada.asianetnews.com/entertainment/allu-arjun-son-allu-ayaan-reveals-favorite-hero-not-bunny-gvd/articleshow-7h4ub7l</link>
            <guid isPermaLink="true">https://kannada.asianetnews.com/entertainment/allu-arjun-son-allu-ayaan-reveals-favorite-hero-not-bunny-gvd/articleshow-7h4ub7l</guid>
            <pubDate>Tue, 28 Apr 2026 22:52:41 +0530</pubDate>
            <description><![CDATA[ಅಲ್ಲು ಅರ್ಜುನ್ ಭಾರತದ ದೊಡ್ಡ ಸೂಪರ್‌ಸ್ಟಾರ್. ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆದರೆ, ಸ್ವಂತ ಮಗನ ಮನಸ್ಸು ಗೆಲ್ಲಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲು ಅಯಾನ್‌ಗೆ ಅವರಪ್ಪ ಬನ್ನಿ ಫೇವರಿಟ್ ಹೀರೋ ಅಲ್ವಂತೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqagnvk5hpqk2d8qbvd42ddq,imgname-bkbk-1777395756645.png" type="image/jpeg" height="390" width="690"/>
            <content:encoded><![CDATA[&lt;p&gt;ಅಲ್ಲು ಅರ್ಜುನ್ ಸದ್ಯ 'ಐಕಾನ್ ಸ್ಟಾರ್' ಆಗಿ ಮಿಂಚುತ್ತಿದ್ದಾರೆ. ಈಗ 'ರಾಕ' ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಆಗುವತ್ತ ಕಣ್ಣಿಟ್ಟಿದ್ದಾರೆ. ಜಗತ್ತಿನಾದ್ಯಂತ ತಮ್ಮ ಸಾಮರ್ಥ್ಯ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಇಂಥ ದೊಡ್ಡ ಸ್ಟಾರ್ ಆಗಿದ್ದರೂ, ಸ್ವಂತ ಮಗನ ವಿಷಯದಲ್ಲಿ ಅವರಿಗೆ ಶಾಕ್ ಆಗಿದೆ. ಬನ್ನಿ, ತನ್ನ ಮಗನ ಮೆಚ್ಚಿನ ಹೀರೋ ಆಗದಿರುವುದು ಗಮನಾರ್ಹ. ಹಾಗಾದರೆ ಅಲ್ಲು ಅಯಾನ್&zwnj;ಗೆ ಇಷ್ಟವಾದ ನಟ ಯಾರು? ಆತ ಇಷ್ಟಪಟ್ಟ ಸಿನಿಮಾ ಯಾವುದು ನೋಡೋಣ.&lt;/p&gt;&lt;p&gt;ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ದಂಪತಿಗೆ ಅಲ್ಲು ಅಯಾನ್ ಎಂಬ ಮಗ ಹಾಗೂ ಅಲ್ಲು ಅರ್ಹಾ ಎಂಬ ಮಗಳಿದ್ದಾಳೆ. ಅಯಾನ್, ತನ್ನ ತಾತ ರಾಮಲಿಂಗಯ್ಯ ಮತ್ತು ಅಲ್ಲು ಅರವಿಂದ್ ಅವರಂತೆ ತುಂಬಾ ಚೂಟಿಯಾಗಿರುತ್ತಾನಂತೆ. ಅಪ್ಪನ ಮಾತನ್ನೂ ಕೇಳದೆ ತನಗನಿಸಿದ್ದನ್ನು ಮಾಡುತ್ತಾನಂತೆ. ಈ ವಿಚಾರವನ್ನು ಬನ್ನಿಯೇ ಹಲವು ಬಾರಿ ಹೇಳಿದ್ದಾರೆ. ಒಮ್ಮೆ ಶೂಟಿಂಗ್&zwnj;ಗೆ ಬರುತ್ತೇನೆ ಎಂದಾಗ ಅಲ್ಲು ಅರ್ಜುನ್ ಬೇಡ ಎಂದರಂತೆ. 'ನನಗೆ ಬೇಡ ಅನ್ನೋಕೆ ನೀವ್ಯಾರು' ಎಂದು ಸೆಟ್&zwnj;ಗೆ ಬಂದು ಕೂತಿದ್ದನಂತೆ.&lt;/p&gt;&lt;p&gt;ಆ ಚಿತ್ರದ ನಿರ್ಮಾಪಕ ಅಲ್ಲು ಅರವಿಂದ್. 'ಇದು ನಮ್ಮ ತಾತನ ಸಿನಿಮಾ' ಎಂದು ನಿರ್ಮಾಪಕರ ಕುರ್ಚಿಯಲ್ಲಿ ಕುಳಿತು ಶಾಕ್ ಕೊಟ್ಟಿದ್ದನಂತೆ. ಇಂಥ ಅಯಾನ್, ತನ್ನ ಫೇವರಿಟ್ ಹೀರೋ ವಿಷಯದಲ್ಲಿ ಅಪ್ಪನಿಗೆ ಮತ್ತು ಚಿರಂಜೀವಿ ತಾತನಿಗೂ ಶಾಕ್ ನೀಡಿದ್ದಾನೆ. ಅಲ್ಲು ಅಯಾನ್&zwnj;ಗೆ ಇಷ್ಟವಾದ ಹೀರೋ ಪ್ರಭಾಸ್ ಅಂತೆ. ಅವರು ನಟಿಸಿದ 'ಬಾಹುಬಲಿ' ಸಿನಿಮಾ ಎಂದರೆ ಬಹಳ ಇಷ್ಟವಂತೆ. ಅವರ ಆ್ಯಕ್ಷನ್ ಚೆನ್ನಾಗಿರುತ್ತದೆ ಎಂದು ಹೇಳಿದ್ದಾನೆ. ಚಿರಂಜೀವಿ ತಾತನ ಡ್ಯಾನ್ಸ್ ಕೂಡ ಇಷ್ಟ, ಆದರೆ ಒಟ್ಟಾರೆಯಾಗಿ ನೋಡಿದರೆ ಪ್ರಭಾಸ್ ಅವರೇ ಫೇವರಿಟ್ ಹೀರೋ ಎಂದು ಅಯಾನ್ ತಿಳಿಸಿದ್ದಾನೆ.&lt;/p&gt;&lt;p&gt;ಅಲ್ಲು ಅರ್ಜುನ್ ಮುಂದೆಯೇ ಬಾಲಕೃಷ್ಣ ಜೊತೆ ಈ ವಿಷಯವನ್ನು ಅಯಾನ್ ಹಂಚಿಕೊಂಡಿದ್ದ. ಬಾಲಕೃಷ್ಣ ಹೋಸ್ಟ್ ಮಾಡಿದ 'ಅನ್&zwnj;ಸ್ಟಾಪಬಲ್ ವಿತ್ ಎನ್&zwnj;ಬಿಕೆ' ಟಾಕ್ ಶೋಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ತಮ್ಮ ಇಬ್ಬರು ಮಕ್ಕಳಾದ ಅಯಾನ್ ಮತ್ತು ಅರ್ಹಾರನ್ನು ಕರೆತಂದಿದ್ದರು. ಆಗ 'ನಿನಗೆ ಇಷ್ಟವಾದ ಹೀರೋ ಯಾರು?' ಎಂದು ಕೇಳಿದಾಗ, ಅಯಾನ್ 'ಪ್ರಭಾಸ್' ಎಂದು ಹೇಳಿದ್ದ. ಇದಕ್ಕೆ ಬನ್ನಿ ನಕ್ಕಿದ್ದು ವಿಶೇಷ. ಹೀಗೆ ಎಲ್ಲರ ಮುಂದೆ ಅಪ್ಪನಿಗೆ ಅಯಾನ್ ಶಾಕ್ ಕೊಟ್ಟಿದ್ದ.&lt;/p&gt;&lt;h2&gt;&lt;strong&gt;ಮೈ ಜುಮ್ಮೆನಿಸುವಂತಿದೆ ಫಸ್ಟ್ ಲುಕ್&lt;/strong&gt;&lt;/h2&gt;&lt;p&gt;ಸದ್ಯ ಅಲ್ಲು ಅರ್ಜುನ್ 'ರಾಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸೈನ್ಸ್ ಫಿಕ್ಷನ್ ಅಂಶಗಳೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಬನ್ನಿಯ ಫಸ್ಟ್ ಲುಕ್ ಮೈ ಜುಮ್ಮೆನಿಸುವಂತಿದೆ. ಇದರಲ್ಲಿ ತೋಳವನ್ನು ಹೋಲುವಂತೆ ಬನ್ನಿ ಲುಕ್ ಇದೆ. ಅವರು ಇದರಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅವರದ್ದು ಇನ್ನೊಂದು ಪಾತ್ರವೂ ಇದ್ದು, ಅದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/allu-arjun-son-allu-ayaan-reveals-favorite-hero-not-bunny-gvd/articleshow-7h4ub7l"/>
        </item>
        <item>
            <title><![CDATA[2 ವರ್ಷದ ಮಗಳ ಪುಟ್ಟ ಪಾದಗಳಿಗೆ 6 ಹಗುರವಾದ ಬೆಳ್ಳಿ ಗೆಜ್ಜೆ ಡಿಸೈನ್ಸ್!]]></title>
            <link>https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb</link>
            <guid isPermaLink="true">https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb</guid>
            <pubDate>Tue, 28 Apr 2026 22:26:30 +0530</pubDate>
            <description><![CDATA[2 ವರ್ಷದ ಹೆಣ್ಣು ಮಗುವಿಗೆ ಸ್ಟರ್ಲಿಂಗ್ ಸಿಲ್ವರ್ 925 ಗೆಜ್ಜೆ ಒಂದು ಸುಂದರ ಉಡುಗೊರೆ. ಮಕ್ಕಳ ಪುಟ್ಟ ಪಾದಗಳಿಗೆ ಫ್ಯಾನ್ಸಿ ಹಾಗೂ ಆಕರ್ಷಕ ಲುಕ್ ನೀಡುವ ಸ್ಟೋನ್ ವರ್ಕ್, ಗೆಜ್ಜೆ, ಮೀನಾಕಾರಿ ಮತ್ತು ಎಲೆ ವಿನ್ಯಾಸದ ಲೇಟೆಸ್ಟ್ ಡಿಸೈನ್‌ಗಳ ಬಗ್ಗೆ ಇಲ್ಲಿ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9mbq72mrpfj4jcda0zxhgj,imgname-2-year-girl-silver-payal-1777366064354.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/lightweight-silver-anklet-designs-for-2-year-old-baby-girl-gvd-ugiu6bb"/>
        </item>
        <item>
            <title><![CDATA[ಬ್ಯಾಂಕ್ ಆಫ್ ಬರೋಡಾ ಅಧಿಕಾರಿಯ ಮೊದಲ ಪೇ ಸ್ಲಿಪ್‌ ವೈರಲ್: ಕೈಗೆ ಬರುವ ಹಣ ಎಷ್ಟು? ಸೌಲಭ್ಯಗಳ ಪಟ್ಟಿ ಕೇಳಿದ್ರೆ ಬೆರಗಾಗ್ತೀರಿ!]]></title>
            <link>https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf</link>
            <guid isPermaLink="true">https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf</guid>
            <pubDate>Tue, 28 Apr 2026 22:12:10 +0530</pubDate>
            <description><![CDATA[ಬ್ಯಾಂಕ್ ಆಫ್ ಬರೋಡಾದ ಪ್ರೊಬೇಷನರಿ ಅಧಿಕಾರಿಯೊಬ್ಬರು ತಮ್ಮ 40 ದಿನಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದು, ಅದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಮ್ಮ 98,745 ರೂ. ಸಂಬಳ ಮತ್ತು ಪೆಟ್ರೋಲ್ ಭತ್ಯೆ, ವಸತಿ ಸೌಲಭ್ಯದಂತಹ ಅನೇಕ ಸೌಲಭ್ಯಗಳ ವಿವರಗಳನ್ನು ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqafamjd4gw3q8b39cvbfgfa,imgname-pankaj-kumar-das-1777394340429.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.28): &lt;/strong&gt;ಸಾರ್ವಜನಿಕ ವಲಯದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಇಂದಿಗೂ ಅನೇಕರ ಕನಸು. ಇದಕ್ಕೆ ಸಾಕ್ಷಿ ಎಂಬಂತೆ, ಬ್ಯಾಂಕ್ ಆಫ್ ಬರೋಡಾದ (BoB) ಪ್ರೊಬೇಷನರಿ ಆಫೀಸರ್ (PO) ಒಬ್ಬರು ತಮ್ಮ ಮೊದಲ ತಿಂಗಳ ವೇತನ ಮತ್ತು ಸಿಗುವ ಸೌಲಭ್ಯಗಳ ವಿವರವನ್ನು ಹಂಚಿಕೊಂಡಿದ್ದು, ಇದು ಇಂಟರ್ನೆಟ್&zwnj;ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಪಂಕಜ್ ಕುಮಾರ್ ದಾಸ್ ಎಂಬುವವರು ತಮ್ಮ ಇನ್&zwnj;ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಬ್ಯಾಂಕ್ ಉದ್ಯೋಗದ ಆರ್ಥಿಕ ಭದ್ರತೆ ಮತ್ತು ವೈಭೋಗದ ಜೀವನಶೈಲಿಯನ್ನು ತೆರೆದಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ವೇತನದ ವಿವರ ಹೀಗಿದೆ&lt;/strong&gt;&lt;/h2&gt;&lt;p&gt;ಪಂಕಜ್ ದಾಸ್ ತಮ್ಮ 2025ರ ಮೇ ತಿಂಗಳ ಸಂಬಳದ ಸ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಕೈಗೆ ಬಂದ ಒಟ್ಟು ಮೊತ್ತ (In-hand salary) 98,745 ರೂಪಾಯಿ. ಆದರೆ, ಈ ಮೊತ್ತವು ಕೇವಲ ಒಂದು ತಿಂಗಳದ್ದಲ್ಲ, ಬದಲಾಗಿ 40 ದಿನಗಳ ಕೆಲಸದ ಸಂಬಳ ಎಂದು ಅವರು ನಂತರ ಸ್ಪಷ್ಟಪಡಿಸಿದ್ದಾರೆ. ಸಂಬಳದ ಸ್ಲಿಪ್&zwnj;ನಲ್ಲಿ ಮೂಲ ವೇತನ (Basic Pay), ಮನೆ ಬಾಡಿಗೆ ಭತ್ಯೆ (HRA), ತುಟ್ಟಿಭತ್ಯೆ (DA) ಸೇರಿದಂತೆ ವಿವಿಧ ಕಡಿತಗಳ ನಂತರದ ವಿವರವಾದ ಅಂಕಿಅಂಶಗಳನ್ನು ನೀಡಲಾಗಿದೆ.&lt;/p&gt;&lt;h2&gt;&lt;strong&gt;ಸೌಲಭ್ಯಗಳ ಸುರಿಮಳೆ&lt;/strong&gt;&lt;/h2&gt;&lt;p&gt;ಕೇವಲ ಸಂಬಳ ಮಾತ್ರವಲ್ಲದೆ, ಬ್ಯಾಂಕ್ ಅಧಿಕಾರಿಯಾಗಿ ತಮಗೆ ಸಿಗುವ ದೀರ್ಘಕಾಲದ ಸೌಲಭ್ಯಗಳ ಪಟ್ಟಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಪೆಟ್ರೋಲ್ ಭತ್ಯೆ, ದಿನಪತ್ರಿಕೆ ಭತ್ಯೆ, ಮನರಂಜನಾ ಭತ್ಯೆ (Entertainment allowance), ಉಪಾಹಾರ ಭತ್ಯೆ (Refreshment allowance) ಜೊತೆಯಲ್ಲಿ, ಮನೆ ನಿರ್ವಹಣೆ ವೆಚ್ಚ, ಮೊಬೈಲ್ ಮತ್ತು ರೀಚಾರ್ಜ್ ವೆಚ್ಚಗಳು, ವೈದ್ಯಕೀಯ ನೆರವು ಮತ್ತು ಕಣ್ಣಿನ ತಪಾಸಣೆಯ (Eye check-up) ಕವರೇಜ್ ಕೂಡ ಲಭ್ಯವಿದೆ.ಅದರೊಂದಿಗೆ ಲೀಸ್ ಆಧಾರಿತ ವಸತಿ ಸೌಲಭ್ಯ (Leased Accommodation), ಬಳಕೆಯಾಗದ ರಜೆಗಳ ನಗದೀಕರಣ (Leave Encashment) ಮತ್ತು ರಜಾದಿನಗಳಲ್ಲಿ ಬ್ಯಾಂಕ್&zwnj;ನ ಅತಿಥಿ ಗೃಹಗಳು ಹಾಗೂ ಹಾಲಿಡೇ ಹೋಮ್&zwnj;ಗಳನ್ನು ಬಳಸಿಕೊಳ್ಳುವ ಅವಕಾಶ ಕೂಡ ಇದರಲ್ಲಿದೆ.&lt;/p&gt;&lt;p&gt;ಇನ್&zwnj;ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಡೆಸುವ ಪಿಒ (PO) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಾಸ್, ತಮ್ಮ ಬಯೋದಲ್ಲಿ ಆರ್&zwnj;ಆರ್&zwnj;ಬಿ ಸಿಎಸ್&zwnj;ಎ (RRB CSA) ಪರೀಕ್ಷೆಯನ್ನೂ ಪೂರ್ಣಗೊಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by Pankaj Kumar Das (@mr__pankaj_000)&lt;/p&gt;&lt;p&gt;&amp;nbsp;&lt;/p&gt;&lt;h2&gt;&lt;strong&gt;ಎಸ್&zwnj;ಬಿಐ ಅಧಿಕಾರಿಯ ಸಂಬಳವೂ ವೈರಲ್&lt;/strong&gt;&lt;/h2&gt;&lt;p&gt;ಇದೇ ಸಂದರ್ಭದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಮಹಿಳಾ ಅಧಿಕಾರಿಯ ವಿಡಿಯೋ ಕೂಡ ಸದ್ದು ಮಾಡುತ್ತಿದೆ. ಆಕೆ 2.5 ವರ್ಷಗಳ ಸೇವೆ ಮತ್ತು 5 ಇನ್ಕ್ರಿಮೆಂಟ್ ಪಡೆದ ನಂತರ ತಿಂಗಳಿಗೆ ಸುಮಾರು 95,000 ರೂಪಾಯಿ ವೇತನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಜೈಬ್/ಕೈಬ್ (JAIIB/CAIIB) ಸರ್ಟಿಫಿಕೇಶನ್&zwnj;ಗಳು ಅವರ ವೇತನ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿವೆ. ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಉದ್ಯೋಗಗಳು ಎಷ್ಟು ಲಾಭದಾಯಕ ಮತ್ತು ಸ್ಥಿರವಾಗಿವೆ ಅನ್ನೋದಕ್ಕೆ ಇವು ಸಾಕ್ಷಿ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[central-government-jobs]]></category>
            <dc:creator>Santosh Naik</dc:creator>
            <atom:link href="https://kannada.asianetnews.com/central-government-jobs/bank-of-baroda-po-salary-slip-viral-perks-benefits-pankaj-kumar-das-san/articleshow-icgyvqf"/>
        </item>
        <item>
            <title><![CDATA[ಕೆಎಎಸ್‌ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ: ಸಿಎಂ ಸಿದ್ದರಾಮಯ್ಯ]]></title>
            <link>https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27</link>
            <guid isPermaLink="true">https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27</guid>
            <pubDate>Tue, 28 Apr 2026 21:48:55 +0530</pubDate>
            <description><![CDATA[ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್‌ (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kpd4e4reqsw40dzqxj6zwhga,imgname-----------------------2026-04-17t124020.451-1776409842446.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): &lt;/strong&gt;ನಾವು ಅಧಿಕಾರದಲ್ಲಿ ಇರಬೇಕಾದರೆ ಪ್ರತಿ 5 ವರ್ಷಕ್ಕೊಮ್ಮೆ ರಿನೀವಲ್&zwnj; (ನವೀಕರಿಸಬೇಕು) ಮಾಡಿಕೊಳ್ಳಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಒಮ್ಮೆ ಸೇವೆಗೆ ಸೇರ್ಪಡೆಯಾದರೆ 30ರಿಂದ 35 ವರ್ಷ ಕೆಲಸದಿಂದ ತೆಗೆಯಲಾಗದು. ಹೀಗಾಗಿ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ಜನರ ಸಮಸ್ಯೆಗಳನ್ನು ಅರಿತು ನಿವಾರಿಸುವ ಕೆಲಸ ಮಾಡಿದರೆ ಜೀವನ ಸಾರ್ಥಕವಾಗಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.&lt;/p&gt;&lt;p&gt;ಕೆಎಎಸ್&zwnj; ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ನಾವು ಪ್ರಭುಗಳಲ್ಲ. ಆದರೆ, ನಾವೆಲ್ಲರೂ ಪ್ರಜೆಗಳಿಗಾಗಿಯೇ ಕೆಲಸ ಮಾಡಬೇಕು. ನಮ್ಮನ್ನು ಪ್ರತಿನಿಧಿಗಳಾಗಿ ಅವರು ಆಯ್ಕೆ ಮಾಡಿದರೆ, ನಿಮ್ಮನ್ನು ಸೇವಕರಾಗಿ ನೇಮಕ ಮಾಡಲಾಗಿರುತ್ತದೆ. ಆದರೆ, ನಾವು ಒಟ್ಟಾಗಿ ಜನರ ಹಿತ ಕಾಪಾಡುತ್ತಾ ಕೆಲಸ ಮಾಡಬೇಕು. ನಾವು ಕೆಲಸ ಮಾಡಲು ಪ್ರತಿ 5 ವರ್ಷಗಳಲ್ಲಿ ನವೀಕರಿಸಿಕೊಳ್ಳಬೇಕು.&lt;/p&gt;&lt;p&gt;ಆದರೆ, ಕೆಎಎಸ್&zwnj; ಸೇರಿದಂತೆ ಸರ್ಕಾರಿ ಅಧಿಕಾರಿಗಳು ಒಮ್ಮೆ ಕೆಲಸಕ್ಕೆ ಸೇರಿದರೆ 30 ರಿಂದ 35 ವರ್ಷಗಳವರೆಗೆ ಕೆಲಸ ಮಾಡುತ್ತಿರಬಹುದು. ಅದನ್ನು ಬಳಸಿಕೊಂಡು ಆತ್ಮಸಾಕ್ಷಿಗೆ ಒಪ್ಪಿಗೆಯಾಗುವಂತೆ ಜನರ ಸೇವೆ ಮಾಡಬೇಕು ಎಂದರು. ಅಧಿಕಾರಿಗಳು ತಮ್ಮ ಕೆಲಸ ಮಾಡಲು ಕಾನೂನಿನ ಅರಿವಿರಬೇಕು. ಅದಕ್ಕಿಂತ ಮುಖ್ಯವಾಗಿ ಸಾಮಾನ್ಯ ಜ್ಞಾನ ಇರಬೇಕು. ಸಮಾಜ ಏನು ಎಂಬುದನ್ನು ಅರಿತಿರಬೇಕು. ಯಾರಿಗೆ ಸಮಾಜದ ಅರಿವಿರುವುದಿಲ್ಲವೋ ಅವರು ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸಮಾಜದ ಬಗ್ಗೆ ಅರ್ಥವಾಗಬೇಕು. ಆಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಕೆಎಎಸ್&zwnj; ಅಧಿಕಾರಿಗಳ ಬಳಿ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುತ್ತಾರೆ.&lt;/p&gt;&lt;p&gt;ಅವರು ಅಧಿಕಾರಿಗಳ ಬಳಿ ಮಾತನಾಡಲು ಹೆದರುತ್ತಾರೆ. ಹೀಗಾಗಿ ಅವರನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಸಮಸ್ಯೆ ಅರಿತು ನಿವಾರಿಸುವ ಕೆಲಸ ಮಾಡಬೇಕು. ಆಗ ಅವರು ನಿಮ್ಮನ್ನು ಯಾವಾಗಲೂ ಮರೆಯುವುದಿಲ್ಲ ಎಂದು ಹೇಳಿದರು. ಸಾರಿಗೆ ಇಲಾಖೆಯ ಆರ್&zwnj;ಟಿಒ ಕಚೇರಿಗಳಲ್ಲಿ ಹೆಚ್ಚಾಗಿ ಮಧ್ಯವರ್ತಿಗಳ ಹಾವಳಿಯಿದೆ. ಅವರಿಲ್ಲದೆ ಯಾವುದೇ ಕೆಲಸವೂ ಆಗುವುದಿಲ್ಲ. ಮಧ್ಯವರ್ತಿಗಳಿಗೆ ಯಾವುದೇ ರೀತಿಯಲ್ಲೂ ಅವಕಾಶ ನೀಡಬಾರದು. ಅಧಿಕಾರಿಗಳು ಮಧ್ಯವರ್ತಿಗಳನ್ನು ಕಚೇರಿಗೆ ಬಿಟ್ಟುಕೊಳ್ಳದೆ ಹೊರಗೆ ಕಳುಹಿಸಬೇಕು. ಸರ್ಕಾರ ರೂಪಿಸುವ ಯೋಜನೆಗಳ ಅನುಷ್ಠಾನ ಮತ್ತು ರೂಪಿಸುವ ನೀತಿಗಳನ್ನು ಸಮರ್ಪಕ ಜಾರಿ ಅಧಿಕಾರಿಗಳಿಂದ ಮಾತ್ರ ಸಾಧ್ಯ. ಅದನ್ನು ಸಮರ್ಪಕವಾಗಿ ಮಾಡಬೇಕು ಎಂದರು.&lt;/p&gt;&lt;h2&gt;&lt;strong&gt;ಲೋಹಿಯಾ ಅಭಿಪ್ರಾಯಕ್ಕೆ ನನ್ನ ಸಹಮತ&lt;/strong&gt;&lt;/h2&gt;&lt;p&gt;ರಾಮಮನೋಹರ್&zwnj; ಲೋಹಿಯಾ ಅವರು ಐಎಎಸ್&zwnj; ಅಧಿಕಾರಿಗಳ ಅವಶ್ಯಕತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. ಆಗಲೇ ರಾಜ್ಯ ಅಧಿಕಾರಿಗಳ ಹುದ್ದೆ ಸೃಷ್ಟಿಯಾಯಿತು. ಲೋಹಿಯಾ ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಆದರೆ, ಆಡಳಿತದಲ್ಲಿ ಐಎಎಸ್&zwnj; ಅಧಿಕಾರಿಗಳೇ ಬೇಡ ಎಂದು ಹೇಳಲಾಗದು. ಅವರ ಅವಶ್ಯಕತೆ ಅತ್ಯಗತ್ಯ. ಇನ್ನು, ಕೆಎಎಸ್&zwnj; ಅಧಿಕಾರಿಗಳಿಗೆ ಜನರ ಕೆಲಸ ಮಾಡುವ ಅವಕಾಶ ನಿಮಗೆ ದೊರೆತಿದೆ. ಅದರಿಂದ ಆತ್ಮತೃಪ್ತಿ ಸಿಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಲು ನೀವು ಮಾಡುವ ಸೇವೆ ತೃಪ್ತಿಕರವಾಗಿರಬೇಕು. ಜನರ ಕೆಲಸದಲ್ಲಿ ವಿಳಂಬ ಮಾಡಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/siddaramaiah-message-to-officers-public-service-kas-officers-gvd/articleshow-y4cir27"/>
        </item>
        <item>
            <title><![CDATA[ಬಿರು ಬಿಸಿಲಿನ ನಡುವೆ ಹಂಪಿ ಸೌಂದರ್ಯದಲ್ಲಿ ಕಳೆದು ಹೋದ ದುನಿಯಾ ವಿಜಯ್ ಪುತ್ರಿ]]></title>
            <link>https://kannada.asianetnews.com/webstories/sandalwood/duniya-vijya-daughter-rithanya-visits-hampi-in-summer-haod10m</link>
            <guid isPermaLink="true">https://kannada.asianetnews.com/webstories/sandalwood/duniya-vijya-daughter-rithanya-visits-hampi-in-summer-haod10m</guid>
            <pubDate>Tue, 28 Apr 2026 21:37:19 +0530</pubDate>
            <description><![CDATA[ದುನಿಯಾ ವಿಜಯ್ ಪುತ್ರಿ ರಿತನ್ಯಾ ವಿಜಯ್ ಈ ಬಿರು ಬೇಸಿಗೆಯಲ್ಲಿ ಹಂಪಿಗೆ ತೆರಳಿದ್ದು, ಅಲ್ಲಿನ ಸುಂದರ ಶಿಲ್ಪಕಲಾಕೃತಿಗಳನ್ನು ನೋಡಿ ನಟಿ ಕಳೆದು ಹೋಗಿದ್ದಾರೆ. ಹಂಪಿಯಲ್ಲಿ ಕಳೆದ ಕ್ಷಣಗಳನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqadc3a9akmqsvtz94493hr6,imgname-rithanya-vijay--3--1777392291145.jpg" type="image/jpeg" height="390" width="690"/>
            <category><![CDATA[sandalwood]]></category>
            <dc:creator>Pavna Das</dc:creator>
            <atom:link href="https://kannada.asianetnews.com/webstories/sandalwood/duniya-vijya-daughter-rithanya-visits-hampi-in-summer-haod10m"/>
        </item>
        <item>
            <title><![CDATA[ಮುಂಬೈಗೆ  ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ]]></title>
            <link>https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h</link>
            <guid isPermaLink="true">https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h</guid>
            <pubDate>Tue, 28 Apr 2026 21:34:00 +0530</pubDate>
            <description><![CDATA[ಮುಂಬೈನ ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣಾ ಕಾಮಗಾರಿಯಿಂದಾಗಿ ಮೇ 19ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಮತ್ತು ತೇಜಸ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ದಾದರ್ ಮತ್ತು ಥಾಣೆಯಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಜೊತೆಗೆ, ಪರಶುರಾಮ್ ಎಕ್ಸ್‌ಪ್ರೆಸ್ ಸೇವೆಯನ್ನೂ ಭಾಗಶಃ ರದ್ದುಪಡಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kd36v76hehqfa55j3kyrq74g,imgname-konkan-railway--1--1766413147345.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣದಲ್ಲಿ ಪ್ಲಾಟ್&zwnj;ಫಾರ್ಮ್ ಸಂಖ್ಯೆ 16 ಮತ್ತು 17ರ ವಿಸ್ತರಣಾ ಕಾಮಗಾರಿಗಳು ಭರದಿಂದ ಸಾಗುತ್ತಿರುವ ಹಿನ್ನೆಲೆ, ಮೇ 19ರವರೆಗೆ ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಇಲಾಖೆ ತನ್ನ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.&lt;/p&gt;&lt;p&gt;ಈ ಕಾಮಗಾರಿಗಳ ಕಾರಣದಿಂದಾಗಿ ಮುಂಬೈಗೆ ಆಗಮಿಸುವ ಕೆಲವು ಪ್ರಮುಖ ರೈಲುಗಳು ಸಿಎಸ್&zwnj;ಎಂಟಿ ತಲುಪುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬದಲಿಗೆ ದಾದರ್ ಮತ್ತು ಥಾಣೆ ನಿಲ್ದಾಣಗಳಲ್ಲಿಯೇ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಲಿವೆ. ಈ ಕ್ರಮವು ಏಪ್ರಿಲ್ 27ರಿಂದ ಮೇ 19ರವರೆಗೆ ಒಟ್ಟು 23 ದಿನಗಳ ಕಾಲ ಜಾರಿಯಲ್ಲಿರಲಿದೆ.&lt;/p&gt;&lt;h2&gt;ಪ್ರಮುಖ ರೈಲುಗಳಲ್ಲಿ ಬದಲಾವಣೆ&lt;/h2&gt;&lt;p&gt;ಮಂಗಳೂರು ಜಂಕ್ಷನ್&ndash;ಮುಂಬೈ ಸಿಎಸ್&zwnj;ಎಂಟಿ ಸೂಪರ್&zwnj;ಫಾಸ್ಟ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 12134) ಮೇ 19ರವರೆಗೆ ಥಾಣೆ ನಿಲ್ದಾಣದಲ್ಲಿಯೇ ತನ್ನ ಸಂಚಾರವನ್ನು ಮುಕ್ತಾಯಗೊಳಿಸಲಿದೆ. ಇದೇ ರೀತಿ, ಏಪ್ರಿಲ್ 26ರಿಂದ ಮೇ 18ರವರೆಗೆ ಮಂಗಳೂರಿನಿಂದ ಹೊರಡುವ ಈ ರೈಲು ಥಾಣೆಯವರೆಗೆ ಮಾತ್ರ ಸಂಚರಿಸುವುದಾಗಿ ಪ್ರಕಟಿಸಲಾಗಿದೆ.&lt;/p&gt;&lt;p&gt;ಇನ್ನೊಂದೆಡೆ, ಮಡಗಾಂವ್&ndash;ಮುಂಬೈ ತೇಜಸ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 22120) ಏಪ್ರಿಲ್ 26ರಿಂದ ಮೇ 17ರವರೆಗೆ ಮುಂಬೈ ಸಿಎಸ್&zwnj;ಎಂಟಿ ತಲುಪದೇ ದಾದರ್ ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ಬದಲಾವಣೆಗಳು ದಕ್ಷಿಣ ಭಾರತ ಮತ್ತು ಕೊಂಕಣ ಭಾಗದಿಂದ ಬರುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.&lt;/p&gt;&lt;p&gt;ಈ ಕುರಿತು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಹೊರಡಿಸಿರುವ ಪ್ರಕಟಣೆಗಳಲ್ಲಿ, ಪ್ಲಾಟ್&zwnj;ಫಾರ್ಮ್ ವಿಸ್ತರಣಾ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಈ ಕ್ರಮ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.&lt;/p&gt;&lt;h2&gt;ಪರಶುರಾಮ್ ಎಕ್ಸ್&zwnj;ಪ್ರೆಸ್&zwnj; ಭಾಗಶಃ ರದ್ದು&lt;/h2&gt;&lt;p&gt;ಇದಲ್ಲದೆ, ಮಂಗಳೂರು ಸೆಂಟ್ರಲ್&ndash;ಕನ್ಯಾಕುಮಾರಿ ಪರಶುರಾಮ್ ಎಕ್ಸ್&zwnj;ಪ್ರೆಸ್ (ರೈಲು ಸಂಖ್ಯೆ 16649/16650) ಸೇವೆಯಲ್ಲಿಯೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 29 ಮತ್ತು 30ರಂದು ಸಂಚರಿಸುವ ಈ ರೈಲು ನಾಗರಕೋಯಿಲ್ ಜಂಕ್ಷನ್ ಮತ್ತು ಕನ್ಯಾಕುಮಾರಿ ನಡುವಿನ ಭಾಗದಲ್ಲಿ ಭಾಗಶಃ ರದ್ದುಗೊಂಡಿರುತ್ತದೆ.&lt;/p&gt;&lt;p&gt;ತಿರುವನಂತಪುರಂ ವಿಭಾಗದ ನಾಗರಕೋಯಿಲ್ ಜಂಕ್ಷನ್ ಯಾರ್ಡ್&zwnj;ನಲ್ಲಿ ಸೇತುವೆ ಸಂಖ್ಯೆ 8ರ ಆರ್&zwnj;ಸಿಸಿ ಬಾಕ್ಸ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ, ರೈಲು ಸಂಖ್ಯೆ 16650 ಕನ್ಯಾಕುಮಾರಿ&ndash;ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್&zwnj;ಪ್ರೆಸ್ ಏಪ್ರಿಲ್ 30ರಂದು ನಾಗರಕೋಯಿಲ್ ಜಂಕ್ಷನ್&zwnj;ನಿಂದ ಬೆಳಿಗ್ಗೆ 4.10ಕ್ಕೆ ಪ್ರಯಾಣ ಆರಂಭಿಸಲಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಮುಂಬೈ ಸಿಎಸ್&zwnj;ಎಂಟಿ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆ ಈ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿ ಯೋಜನೆ ರೂಪಿಸಿಕೊಳ್ಳುವುದು ಸೂಕ್ತವಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ರೈಲು ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆಯಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/indian-railways-update-csmt-platform-work-extends-train-diversions-to-dadar-thane-till-may-19-gdp/articleshow-ro4om1h"/>
        </item>
        <item>
            <title><![CDATA[ಸಮಂತಾ ನಟನೆಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 5 ಸಿನಿಮಾಗಳು ಯಾವುವು ಗೊತ್ತಾ?]]></title>
            <link>https://kannada.asianetnews.com/entertainment/samantha-ruth-prabhu-top-5-highest-grossing-movies-list-gvd/articleshow-pbec4s1</link>
            <guid isPermaLink="true">https://kannada.asianetnews.com/entertainment/samantha-ruth-prabhu-top-5-highest-grossing-movies-list-gvd/articleshow-pbec4s1</guid>
            <pubDate>Tue, 28 Apr 2026 21:32:27 +0530</pubDate>
            <description><![CDATA[ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ ಸಮಂತಾ ರುತ್ ಪ್ರಭು ಅವರ ಸಿನಿ ಕೆರಿಯರ್‌ನಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ 5 ಚಿತ್ರಗಳು ಯಾವುವು.]]></description>
            <media:content url="https://static.asianetnews.com/images/w-1280,h-720,format-jpg,imgid-01kda3qt6xze02eewkjvmr2ebr,imgname-samantha-ruth-prabhu-1766644771037.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ನಟಿ ಸಮಂತಾ ರುತ್ ಪ್ರಭು. ತಮ್ಮ ವಿಭಿನ್ನ ನಟನೆ ಮತ್ತು ಪ್ರತಿಭೆಯಿಂದಲೇ ಮುಂಚೂಣಿಗೆ ಬಂದರು. ಕೆರಿಯರ್&zwnj;ನ ಉತ್ತುಂಗದಲ್ಲಿದ್ದಾಗಲೇ ಮದುವೆಯಾದರು. ನಂತರ ವಿಚ್ಛೇದನ, ಮಯೋಸಿಟಿಸ್&zwnj;ನಂತಹ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಿ, ಇಂದಿಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಅವರ ನಟನೆಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 5 ಚಿತ್ರಗಳ ಪಟ್ಟಿ ಇಲ್ಲಿದೆ.&lt;/p&gt;&lt;p&gt;&lt;strong&gt;ಪುಷ್ಪ: ದಿ ರೈಸ್&lt;/strong&gt;&lt;/p&gt;&lt;p&gt;2021ರಲ್ಲಿ ಅಲ್ಲು ಅರ್ಜುನ್ ನಟನೆಯಲ್ಲಿ ತೆರೆಕಂಡ ಈ ಚಿತ್ರವನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸಿದ್ದರು. ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದರೂ, 'ಊ ಅಂತೀಯಾ ಮಾಮ' ಎಂಬ ಒಂದೇ ಒಂದು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಮಂತಾ ಇಡೀ ದೇಶದ ಗಮನ ಸೆಳೆದರು. ಅಭಿಮಾನಿಗಳು ಅಲ್ಲು ಅರ್ಜುನ್&zwnj;ಗೆ ಸರಿಸಮನಾಗಿ ಸಮಂತಾಗೂ ಕಟೌಟ್ ಹಾಕಿ ಸಂಭ್ರಮಿಸಿದ್ದರು. ಈ ಚಿತ್ರವು 365 ಕೋಟಿ ರೂಪಾಯಿಗೂ ಹೆಚ್ಚು ಹಣ ಗಳಿಸಿ ದಾಖಲೆ ಬರೆಯಿತು.&lt;/p&gt;&lt;p&gt;&lt;strong&gt;ರಂಗಸ್ಥಳಂ&lt;/strong&gt;&lt;/p&gt;&lt;p&gt;2018ರಲ್ಲಿ ತೆಲುಗಿನಲ್ಲಿ ತೆರೆಕಂಡ ಹಳ್ಳಿ ಸೊಗಡಿನ ಸಿನಿಮಾ 'ರಂಗಸ್ಥಳಂ'. ರಾಮ್ ಚರಣ್ ನಾಯಕನಾಗಿ ನಟಿಸಿದ್ದರೆ, ಸಮಂತಾ 'ರಾಮಲಕ್ಷ್ಮಿ' ಎಂಬ ಪಾತ್ರದಲ್ಲಿ ಮಿಂಚಿದ್ದರು. ಕುಟುಂಬ, ಪ್ರೀತಿ ಮತ್ತು ಹಾಸ್ಯದ ವಿಶಿಷ್ಟ ಕಥಾಹಂದರವನ್ನು ಈ ಚಿತ್ರ ಹೊಂದಿತ್ತು. ಸಮಂತಾ ಅವರ ವೃತ್ತಿಜೀವನದಲ್ಲಿ ಇದೊಂದು ಪ್ರಮುಖ ಚಿತ್ರವಾಯಿತು. ಈ ಸಿನಿಮಾ ಬಾಕ್ಸ್ ಆಫೀಸ್&zwnj;ನಲ್ಲಿ 214 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.&lt;/p&gt;&lt;p&gt;&lt;strong&gt;ತೆರಿ&lt;/strong&gt;&lt;/p&gt;&lt;p&gt;2016ರಲ್ಲಿ ತಮಿಳಿನಲ್ಲಿ ತೆರೆಕಂಡ 'ತೆರಿ' ಚಿತ್ರವನ್ನು ಅಟ್ಲೀ ನಿರ್ದೇಶಿಸಿದ್ದರು. ವಿಜಯ್ ನಾಯಕನಾಗಿದ್ದ ಈ ಚಿತ್ರದಲ್ಲಿ, ಸಮಂತಾ 'ಮಿತ್ರಾ' ಎಂಬ ವೈದ್ಯೆಯ ಪಾತ್ರದಲ್ಲಿ ವಿಜಯ್&zwnj;ಗೆ ಜೋಡಿಯಾಗಿ ನಟಿಸಿದ್ದರು. ಈ ಆ್ಯಕ್ಷನ್ ಎಂಟರ್&zwnj;ಟೈನರ್ ಸಿನಿಮಾ ಸುಮಾರು 150 ರಿಂದ 160 ಕೋಟಿ ರೂಪಾಯಿಗಳವರೆಗೆ ಗಳಿಕೆ ಮಾಡಿತ್ತು.&lt;/p&gt;&lt;p&gt;&lt;strong&gt;ಮಹಾನಟಿ&lt;/strong&gt;&lt;/p&gt;&lt;p&gt;2018ರಲ್ಲಿ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದಲ್ಲಿ ಬಂದ 'ಮಹಾನಟಿ' ಚಿತ್ರವು ದಿವಂಗತ ನಟಿ ಸಾವಿತ್ರಿ ಅವರ ಜೀವನಚರಿತ್ರೆಯಾಗಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದರೂ, ಸಮಂತಾ ಕೂಡ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. ಈ ಚಿತ್ರವು 85 ರಿಂದ 90 ಕೋಟಿ ರೂಪಾಯಿಗಳವರೆಗೆ ಕಲೆಕ್ಷನ್ ಮಾಡಿತ್ತು.&lt;/p&gt;&lt;h2&gt;&lt;strong&gt;ಯೇ ಮಾಯಾ ಚೇಸಾವೆ&lt;/strong&gt;&lt;/h2&gt;&lt;p&gt;ಸಮಂತಾ ಅವರ ಸಿನಿ ಬದುಕಿಗೆ ತಿರುವು ನೀಡಿದ ಚಿತ್ರವಿದು. ತೆಲುಗಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಮೊದಲ ಸಿನಿಮಾ 'ಯೇ ಮಾಯಾ ಚೇಸಾವೆ'. ಇದು ತಮಿಳಿನ 'ವಿಣ್ಣೈತಾಂಡಿ ವರುವಾ ಯಾ' ಚಿತ್ರದ ತೆಲುಗು ರಿಮೇಕ್. ಸಿಂಬು ಪಾತ್ರದಲ್ಲಿ ನಾಗ ಚೈತನ್ಯ ಮತ್ತು ತ್ರಿಶಾ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಗೌತಮ್ ಮೆನನ್ ನಿರ್ದೇಶನದ ಈ ಚಿತ್ರ 30 ರಿಂದ 35 ಕೋಟಿ ರೂಪಾಯಿ ಗಳಿಸಿತ್ತು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/samantha-ruth-prabhu-top-5-highest-grossing-movies-list-gvd/articleshow-pbec4s1"/>
        </item>
        <item>
            <title><![CDATA[ಏಪ್ರಿಲ್‌ 29ರ ನಂತರ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದುಬಾರಿ: ರಾಹುಲ್‌ ಗಾಂಧಿ]]></title>
            <link>https://kannada.asianetnews.com/india-news/rahul-gandhi-petrol-diesel-price-hike-warning-after-april-29-elections-san/articleshow-z1gxgi2</link>
            <guid isPermaLink="true">https://kannada.asianetnews.com/india-news/rahul-gandhi-petrol-diesel-price-hike-warning-after-april-29-elections-san/articleshow-z1gxgi2</guid>
            <pubDate>Tue, 28 Apr 2026 21:30:22 +0530</pubDate>
            <description><![CDATA[ವಿಧಾನಸಭಾ ಚುನಾವಣೆ ಮುಗಿದ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಲಿವೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ ಸರ್ಕಾರ ಈ ಆರೋಪವನ್ನು ನಿರಾಕರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpfwmhtx0mnwr49wj7hqd7fb,imgname-fotojet--76--1776502327133.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.28): &lt;/strong&gt;ವಿಧಾನಸಭಾ ಚುನಾವಣೆಗಳ ಮತದಾನ ಪ್ರಕ್ರಿಯೆ ಏಪ್ರಿಲ್ 29ಕ್ಕೆ ಮುಕ್ತಾಯಗೊಳ್ಳಲಿದ್ದು, ಅದರ ಬೆನ್ನಲ್ಲೇ ದೇಶದಲ್ಲಿ ಇಂಧನ ದರಗಳು ಗಗನಕ್ಕೇರಲಿವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದಾಗ ಲಾಭ ಮಾಡಿಕೊಂಡಿದ್ದ ಕೇಂದ್ರ ಸರ್ಕಾರ, ಈಗ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲೆ ಹಾಕುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಈ ಕುರಿತು ಹಿಂದಿಯಲ್ಲಿ ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, &quot;ಚುನಾವಣಾ ಸವಲತ್ತು ಮುಗಿಯಿತು, ಹಣದುಬ್ಬರದ ಶಾಖ ಬರಲಿದೆ! ಏಪ್ರಿಲ್ 29ರ ನಂತರ ಎಚ್ಚರದಿಂದಿರಿ - ಪೆಟ್ರೋಲ್, ಡೀಸೆಲ್ ಮತ್ತು ಉಳಿದೆಲ್ಲವೂ ದುಬಾರಿಯಾಗಲಿವೆ,&quot; ಎಂದು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಸರ್ಕಾರದ ವಿರುದ್ಧ ಪ್ರಮುಖ ಆರೋಪಗಳು&lt;/strong&gt;&lt;/h2&gt;&lt;p&gt;ಕಚ್ಚಾ ತೈಲ ಅಗ್ಗವಾಗಿದ್ದಾಗ ಮೋದಿ ಸರ್ಕಾರ ತನ್ನ ಜೇಬು ತುಂಬಿಸಿಕೊಂಡಿತು. ಈಗ ತೈಲ ಬೆಲೆ ಏರಿಕೆಯಾಗುತ್ತಿದ್ದು, ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೊರಿಸಲಾಗುತ್ತಿದೆ. ಬೆಲೆ ಅಗ್ಗವಾಗಿದ್ದಾಗ ಲೂಟಿ ಮಾಡುವ ಸರ್ಕಾರ, ಹಣದುಬ್ಬರದ ಹೊಡೆತವನ್ನು ಸಾರ್ವಜನಿಕರೇ ಅನುಭವಿಸುವಂತೆ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದ್ದಾರೆ.&lt;/p&gt;&lt;h2&gt;&lt;strong&gt;ಜಾಗತಿಕ ತೈಲ ಬಿಕ್ಕಟ್ಟು ಮತ್ತು ಹಿನ್ನೆಲೆ&lt;/strong&gt;&lt;/h2&gt;&lt;p&gt;ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನ ಏಪ್ರಿಲ್ 29 ರಂದು ನಡೆಯಲಿದೆ. ಕೇರಳ, ಅಸ್ಸಾಂ, ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಈಗಾಗಲೇ ಚುನಾವಣೆ ಮುಗಿದಿದ್ದು, ಮೇ 4 ರಂದು ಫಲಿತಾಂಶ ಪ್ರಕಟವಾಗಲಿದೆ.&lt;/p&gt;&lt;p&gt;ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆ ಏರುತ್ತಿದೆ. ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ರಾಷ್ಟ್ರಗಳು ಇರಾನ್ ಮೇಲೆ ದಾಳಿ ನಡೆಸಿದ ನಂತರ, 'ಹಾರ್ಮುಜ್ ಜಲಸಂಧಿ' ಮುಚ್ಚಲ್ಪಟ್ಟಿದ್ದು, ಜಾಗತಿಕ ತೈಲ ಪೂರೈಕೆ ಸರಪಳಿಗೆ ಭಾರಿ ಅಡ್ಡಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಶೇ. 50 ಕ್ಕಿಂತ ಹೆಚ್ಚು ಏರಿಕೆಯಾಗಿದೆ.&lt;/p&gt;&lt;p&gt;&lt;img&gt;&lt;/p&gt;&lt;h2&gt;&lt;strong&gt;ಸರ್ಕಾರದ ಸ್ಪಷ್ಟನೆ ಏನು?&lt;/strong&gt;&lt;/h2&gt;&lt;p&gt;ದರ ಏರಿಕೆಯ ವದಂತಿಗಳನ್ನು ತಳ್ಳಿಹಾಕಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, &quot;ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ,&quot; ಎಂದು ಸ್ಪಷ್ಟಪಡಿಸಿದ್ದಾರೆ.&lt;/p&gt;&lt;p&gt;ಕಳೆದ ನಾಲ್ಕು ವರ್ಷಗಳಿಂದ ರೀಟೇಲ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗದೆ ಉಳಿದಿವೆ. ಆದರೆ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿವೆ. ಕೆಲವು ಅಂದಾಜಿನ ಪ್ರಕಾರ, ಈ ಕಂಪನಿಗಳಿಗೆ ದಿನಕ್ಕೆ ಸುಮಾರು 2,400 ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಹೀಗಾಗಿ ಚುನಾವಣೆ ಮುಗಿದ ನಂತರ ಬೆಲೆ ಏರಿಕೆ ಅನಿವಾರ್ಯ ಎಂಬ ಚರ್ಚೆಗಳು ಜೋರಾಗಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/rahul-gandhi-petrol-diesel-price-hike-warning-after-april-29-elections-san/articleshow-z1gxgi2"/>
        </item>
        <item>
            <title><![CDATA[ಪಂಜಾಬ್ ರೈಲು ಸ್ಫೋಟಕ್ಕೆ ಉಗ್ರರ ಬೃಹತ್ ಸಂಚು: ವಿಫಲವಾದ ಭಯಾನಕ ಯತ್ನ, ಓರ್ವ ಉಗ್ರ ಸಾವು]]></title>
            <link>https://kannada.asianetnews.com/india-news/punjab-railway-blast-attempt-fails-terror-plot-blow-up-railway-track-in-punjab-foiled-one-dead-four-arrested-gdp/articleshow-os48049</link>
            <guid isPermaLink="true">https://kannada.asianetnews.com/india-news/punjab-railway-blast-attempt-fails-terror-plot-blow-up-railway-track-in-punjab-foiled-one-dead-four-arrested-gdp/articleshow-os48049</guid>
            <pubDate>Tue, 28 Apr 2026 21:05:39 +0530</pubDate>
            <description><![CDATA[ಪಂಜಾಬ್‌ನ ಪಟಿಯಾಲಾ ಬಳಿ ರೈಲು ಹಳಿ ಸ್ಫೋಟಿಸುವ ಸಂಚು ವಿಫಲವಾಗಿದ್ದು, ಸ್ಫೋಟಕ ಅಳವಡಿಸುತ್ತಿದ್ದ ಶಂಕಿತ ಉಗ್ರನೇ ಸಾವನ್ನಪ್ಪಿದ್ದಾನೆ. ಈ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದ್ದು, ಇದರ ಹಿಂದೆ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನಿ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqabdat1n6h0saxz3syx2g30,imgname-punjab-railway-blast-1777390234433.jpg" type="image/jpeg" height="390" width="690"/>
            <content:encoded><![CDATA[&lt;p&gt;ಪಂಜಾಬ್&zwnj;ನಲ್ಲಿ ರೈಲು ಹಳಿ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತ ಉಗ್ರರ ಯತ್ನವು ಅದೃಷ್ಟವಶಾತ್&zwnj; ವಿಫಲಗೊಂಡ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಪಟಿಯಾಲಾ ಸಮೀಪ ನಡೆದ ಈ ಘಟನೆದಲ್ಲಿ ಸ್ಫೋಟಕ್ಕೆ ಯತ್ನಿಸಿದ ವ್ಯಕ್ತಿಯೇ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್&zwnj;ಐ ಹಾಗೂ ಖಲಿಸ್ತಾನಿ ಉಗ್ರ ಸಂಘಟನೆಗಳ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಪಂಜಾಬ್&zwnj;ನಲ್ಲಿ ಶಾಂತಿ-ಸುವ್ಯವಸ್ಥೆ ಕದಡುವ ಉದ್ದೇಶದಿಂದ ಸಂಚು ರೂಪಿಸಲಾಗಿತ್ತೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.&lt;/p&gt;&lt;h2&gt;ಸ್ಫೋಟ ಯತ್ನ ವಿಫಲ &ndash; ಶಂಕಿತ ಉಗ್ರ ಸಾವು&lt;/h2&gt;&lt;p&gt;ಸೋಮವಾರ ಸಂಜೆ ಪಟಿಯಾಲಾ ಮತ್ತು ಶಂಭು ನಡುವಿನ ರೈಲು ಮಾರ್ಗದ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದಾಗ ಛಿದ್ರಗೊಂಡ ಶವ ಪತ್ತೆಯಾಗಿದೆ. ತನಿಖೆಯಲ್ಲಿ ಇದು ರೈಲ್ವೆ ಹಳಿ ಸ್ಫೋಟಿಸಲು ನಡೆಸಿದ ಯತ್ನವಾಗಿದ್ದು, ಸ್ಫೋಟಕವನ್ನು ಅಳವಡಿಸುವ ವೇಳೆ ಆಕಸ್ಮಿಕವಾಗಿ ಸ್ಫೋಟಗೊಂಡು ಶಂಕಿತ ಉಗ್ರ ಸಾವನ್ನಪ್ಪಿದ್ದಾನೆ ಎಂಬುದು ದೃಢಪಟ್ಟಿದೆ. ಈ ಸ್ಫೋಟದಿಂದ ಹಳಿಗೆ ಅಲ್ಪ ಪ್ರಮಾಣದ ಹಾನಿ ಉಂಟಾಗಿದೆ ಹೊರತು, ಯಾವುದೇ ದೊಡ್ಡ ದುರಂತ ಸಂಭವಿಸಿಲ್ಲ.&lt;/p&gt;&lt;h2&gt;ಮೃತನ ಗುರುತು ಪತ್ತೆ&lt;/h2&gt;&lt;p&gt;ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಜಗರೂಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ತರಣ್ ತರಣ್ ಜಿಲ್ಲೆಯ ಪಂಜಾವರ್ ಗ್ರಾಮದ ನಿವಾಸಿ. ಇತ್ತೀಚಿನ ವರ್ಷಗಳಲ್ಲಿ ಈತ ಕಠಿಣ ಧಾರ್ಮಿಕ ಮನೋಭಾವದತ್ತ ತಿರುಗಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ ಮನೆಯಿಂದ ಹೊರಡುವ ವೇಳೆ &ldquo;ದೇವರಿಗಾಗಿ ನನ್ನ ಪ್ರಾಣ ತ್ಯಾಗ ಮಾಡುತ್ತಿದ್ದೇನೆ&rdquo; ಎಂದು ಹೇಳಿ ಹೋಗಿದ್ದಾನೆ ಎಂಬ ಮಾಹಿತಿ ಕುಟುಂಬ ಮೂಲಗಳಿಂದ ಲಭ್ಯವಾಗಿದೆ.&lt;/p&gt;&lt;h2&gt;ನಾಲ್ವರು ಆರೋಪಿಗಳ ಬಂಧನ&lt;/h2&gt;&lt;p&gt;ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಿಯಾಲಾ ಪೊಲೀಸರು ಪರ್ದೀಪ್ ಸಿಂಗ್ ಖಾಲ್ಸಾ, ಕುಲ್ದೀಪ್ ಸಿಂಗ್, ಗುರುಪ್ರೀತ್ ಸಿಂಗ್ ಹಾಗೂ ಸತ್ನಾಮ್ ಸಿಂಗ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳು ವಿದೇಶದಲ್ಲಿರುವ, ವಿಶೇಷವಾಗಿ ಮಲೇಷ್ಯಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬನ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಬಂಧಿತರಿಂದ ಪಿಸ್ತೂಲ್&zwnj;ಗಳು, ಜೀವಂತ ಗುಂಡುಗಳು ಹಾಗೂ ಐಇಡಿ ತಯಾರಿಕೆಗೆ ಬಳಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;p&gt;ವಿಚಾರಣೆ ವೇಳೆ ಆರೋಪಿಗಳು ಐಎಸ್&zwnj;ಐ ಮತ್ತು ವಿದೇಶದಲ್ಲಿರುವ ಖಲಿಸ್ತಾನಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಅವರ ಉದ್ದೇಶ ಪಂಜಾಬ್&zwnj;ನಲ್ಲಿ ಉಗ್ರ ಚಟುವಟಿಕೆಗಳ ಮೂಲಕ ಭೀತಿಯ ವಾತಾವರಣ ಸೃಷ್ಟಿಸುವುದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h2&gt;ಬಹು ಸಂಸ್ಥೆಗಳ ತನಿಖೆ&lt;/h2&gt;&lt;p&gt;ಘಟನೆಯ ತಕ್ಷಣವೇ ಪಟಿಯಾಲಾ ಎಸ್&zwnj;ಎಸ್&zwnj;ಪಿ ವರುಣ್ ಶರ್ಮಾ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರಿ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆ (RPF) ತಂಡಗಳು ಕೂಡ ತನಿಖೆಯಲ್ಲಿ ಭಾಗಿಯಾಗಿವೆ. ಸ್ಫೋಟದ ಸ್ವರೂಪ ಹಾಗೂ ಕಾರಣ ಪತ್ತೆಹಚ್ಚಲು ವಿಧಿವಿಜ್ಞಾನ ತಜ್ಞರನ್ನು ಕರೆಸಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.&lt;/p&gt;&lt;h2&gt;ರಾಜಕೀಯ ಪ್ರತಿಕ್ರಿಯೆ&lt;/h2&gt;&lt;p&gt;ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಿರೋಮಣಿ ಅಕಾಲಿ ದಳ ಸರ್ಕಾರದ ವಿರುದ್ಧ ಕಿಡಿಕಾರಿದೆ. ಪಕ್ಷದ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ, ಇಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದು ರಾಜ್ಯದಲ್ಲಿ ಭದ್ರತಾ ವೈಫಲ್ಯವನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ. ಸಿರ್ಹಿಂದ್ ಹಾಗೂ ಗುರುದಾಸ್ಪುರದಲ್ಲಿ ನಡೆದ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ, ಪಂಜಾಬ್&zwnj;ನಲ್ಲಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ ಎಂದು ಹೇಳಿದ್ದಾರೆ.&lt;/p&gt;&lt;p&gt;ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರ ಈ ವಿಷಯದಲ್ಲಿ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿ, ಭದ್ರತಾ ವಿಚಾರಗಳಲ್ಲಿ ರಾಜಕೀಯ ಪ್ರಭಾವ ಹೆಚ್ಚಾಗಿದೆ ಎಂಬ ಆರೋಪ ಮಾಡಿದರು. 1980-90ರ ದಶಕದಂತೆಯೇ ಅಶಾಂತಿಯ ಪರಿಸ್ಥಿತಿ ಮತ್ತೆ ಉಂಟಾಗುವ ಭೀತಿಯೂ ವ್ಯಕ್ತಪಡಿಸಿದರು.&lt;/p&gt;&lt;h2&gt;ಒಟ್ಟಾರೆ ಚಿತ್ರಣ&lt;/h2&gt;&lt;p&gt;ಒಟ್ಟಿನಲ್ಲಿ, ರೈಲು ಹಳಿ ಸ್ಫೋಟಿಸಲು ನಡೆದ ಯತ್ನ ವಿಫಲವಾದರೂ, ಪಂಜಾಬ್&zwnj;ನಲ್ಲಿ ಭದ್ರತಾ ಸವಾಲುಗಳು ಮತ್ತೆ ತಲೆದೋರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಯಕ್ಕೆ ಸರಿಯಾಗಿ ಪೊಲೀಸರು ಕ್ರಮ ಕೈಗೊಂಡಿರುವುದರಿಂದ ದೊಡ್ಡ ದುರಂತ ತಪ್ಪಿದರೂ, ಇಂತಹ ಘಟನೆಗಳು ಮುಂದುವರಿಯದಂತೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳ ಅಗತ್ಯತೆ ಮತ್ತೊಮ್ಮೆ ಮನವರಿಕೆಯಾಗುತ್ತಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Gowthami K</dc:creator>
            <atom:link href="https://kannada.asianetnews.com/india-news/punjab-railway-blast-attempt-fails-terror-plot-blow-up-railway-track-in-punjab-foiled-one-dead-four-arrested-gdp/articleshow-os48049"/>
        </item>
        <item>
            <title><![CDATA[ಮಗನ ಸಿನಿಮಾಕ್ಕಾಗಿ ಹಾಡುಗಾರನಾದ ಆಮಿರ್ ಖಾನ್: ವೇದಿಕೆ ಮೇಲೆ ಹಾಡಿ ಫ್ಯಾನ್ಸ್‌ಗೆ ಸರ್ಪ್ರೈಸ್]]></title>
            <link>https://kannada.asianetnews.com/entertainment/aamir-khan-sings-for-junaid-khans-film-ek-din-in-surprise-performance-gvd/articleshow-itn7gyi</link>
            <guid isPermaLink="true">https://kannada.asianetnews.com/entertainment/aamir-khan-sings-for-junaid-khans-film-ek-din-in-surprise-performance-gvd/articleshow-itn7gyi</guid>
            <pubDate>Tue, 28 Apr 2026 20:48:38 +0530</pubDate>
            <description><![CDATA['ಏಕ್ ದಿನ್' ಚಿತ್ರದ ಸಂಗೀತ ಕಾರ್ಯಕ್ರಮದಲ್ಲಿ ಆಮಿರ್ ಖಾನ್ ವೇದಿಕೆ ಏರಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ. ಗಾಯಕಿ ಮೇಘನಾ ಮಿಶ್ರಾ ಜೊತೆ ಸೇರಿ ಚಿತ್ರದ ಟೈಟಲ್ ಸಾಂಗ್ ಹಾಡಿದ್ದಾರೆ. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ ಈ ಸಿನಿಮಾ 2026ರ ಮೇ 1 ರಂದು ತೆರೆಗೆ ಬರಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpaw6mcrdwn1h5v3h2mr0w4a,imgname-aamir-khan-ashneer-grover-biopic-1776334098840.jpg" type="image/jpeg" height="390" width="690"/>
            <content:encoded><![CDATA[&lt;p&gt;&lsquo;ಏಕ್ ದಿನ್&rsquo; ಸಿನಿಮಾ ರಿಲೀಸ್&zwnj;ಗೆ ಹತ್ತಿರವಾಗ್ತಿದ್ದಂತೆ, ಚಿತ್ರತಂಡ &lsquo;ಏಕ್ ದಿನ್ ಕಿ ಮೆಹಫಿಲ್&rsquo; ಅನ್ನೋ ವಿಶೇಷ ಸಂಗೀತ ಕಾರ್ಯಕ್ರಮವನ್ನ ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮದ ಅತಿದೊಡ್ಡ ಹೈಲೈಟ್ ಆಗಿದ್ದು ಆಮಿರ್ ಖಾನ್. ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ನಟನೆಯ ಈ ರೊಮ್ಯಾಂಟಿಕ್ ಡ್ರಾಮಾ ಸಿನಿಮಾದ ಹಾಡುಗಳನ್ನ ಸಂಭ್ರಮಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ಕಾದಿತ್ತು.&lt;/p&gt;&lt;p&gt;ಆಮಿರ್ ಖಾನ್, ಗಾಯಕಿ ಮೇಘನಾ ಮಿಶ್ರಾ ಜೊತೆ ವೇದಿಕೆ ಏರಿ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದರು. ಈ ಹಾಡನ್ನು ಮೂಲತಃ ಅರಿಜಿತ್ ಸಿಂಗ್ ಜೊತೆ ಸೇರಿ ಮೇಘನಾ ಮಿಶ್ರಾ ಹಾಡಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ಈಗ ಆನ್&zwnj;ಲೈನ್&zwnj;ನಲ್ಲಿ ವೈರಲ್ ಆಗಿವೆ. ಆಮಿರ್ ಅವರ ಸಹಜ ಮತ್ತು ಮನಮುಟ್ಟುವ ಗಾಯನಕ್ಕೆ ಅನೇಕರು ಭೇಷ್ ಎಂದಿದ್ದಾರೆ. ಚಿತ್ರತಂಡ ಕೂಡ ಈ ವಿಡಿಯೋ ಕ್ಲಿಪ್ ಶೇರ್ ಮಾಡಿಕೊಂಡು, &quot;ಯಾರಿಗೆ ಗೊತ್ತಿತ್ತು... ಏಕ್ ದಿನ್, ಆಮಿರ್ ಖಾನ್ ಹಾಡುತ್ತಾರೆ ಅಂತ. #EkDin ಸಿನಿಮಾ ಮೇ 1, 2026 ರಂದು ಥಿಯೇಟರ್&zwnj;ಗಳಲ್ಲಿ ಮಾತ್ರ ನೋಡಿ&quot; ಎಂದು ಬರೆದುಕೊಂಡಿದೆ.&lt;/p&gt;&lt;h2&gt;&lt;strong&gt;ಭಾವನಾತ್ಮಕ ಪ್ರೇಮಕಥೆ&lt;/strong&gt;&lt;/h2&gt;&lt;p&gt;ಇತ್ತೀಚೆಗೆ ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿತ್ತು. ಪ್ರಾಮಾಣಿಕವಾಗಿ ಗಂಟೆ ಬಾರಿಸಿದರೆ ನಿಜವಾದ ಪ್ರೀತಿ ಸಿಗುತ್ತದೆ ಎಂಬ ನಂಬಿಕೆಯಿರುವ 'ಫಾರ್ಚೂನ್ ಬೆಲ್' ಸುತ್ತ ಈ ಕಥೆ ಸಾಗುತ್ತದೆ. ಟ್ರೇಲರ್&zwnj;ನಲ್ಲಿ, ಜುನೈದ್ ಖಾನ್ ಪಾತ್ರವು ಸಾಯಿ ಪಲ್ಲವಿ ಪಾತ್ರವಾದ ಮೀರಾಳಿಗಾಗಿ ಪ್ರಾರ್ಥಿಸುವುದನ್ನು ಕಾಣಬಹುದು. 'ಒಂದೇ ದಿನಕ್ಕಾದರೂ ಈ ಆಸೆ ನಿಜವಾಗಲಿ' ಎಂದು ಆತ ಹೇಳುತ್ತಾನೆ. ಈ ಝಲಕ್, ಒಂದು ಸುಂದರ ಮತ್ತು ಭಾವನಾತ್ಮಕ ಪ್ರೇಮಕಥೆಯ ಸುಳಿವು ನೀಡಿದ್ದು, ಪ್ರೇಕ್ಷಕರು ಮುಖ್ಯ ಜೋಡಿಯ ಕೆಮಿಸ್ಟ್ರಿಯನ್ನು ಮೆಚ್ಚಿಕೊಂಡಿದ್ದಾರೆ.&lt;/p&gt;&lt;p&gt;ನಾಯಕನಾಗಿ ಜುನೈದ್ ಖಾನ್ ಅವರ ಮೂರನೇ ಪ್ರಮುಖ ಸಿನಿಮಾ ಇದಾಗಿದೆ. ಇನ್ನು, ಈ ಚಿತ್ರದ ಮೂಲಕ ಸಾಯಿ ಪಲ್ಲವಿ ಬಾಲಿವುಡ್&zwnj;ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆಮಿರ್ ಖಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸುನಿಲ್ ಪಾಂಡೆ ನಿರ್ದೇಶಿಸಿದ್ದಾರೆ. ಸಿನಿಮಾ 2026ರ ಮೇ 1 ರಂದು ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಲಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/aamir-khan-sings-for-junaid-khans-film-ek-din-in-surprise-performance-gvd/articleshow-itn7gyi"/>
        </item>
        <item>
            <title><![CDATA[ಬೇಸಿಗೆಯಲ್ಲಿ ತಿನ್ನಬೇಕಾದ 7 ಹಣ್ಣುಗಳು! ಇಲ್ದಿದ್ರೆ ಆರೋಗ್ಯಕ್ಕೆ ಹಾನಿ ಗ್ಯಾರಂಟಿ!]]></title>
            <link>https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr</link>
            <guid isPermaLink="true">https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr</guid>
            <pubDate>Tue, 28 Apr 2026 20:47:18 +0530</pubDate>
            <description><![CDATA[ಬೇಸಿಗೆಯ ಬಿಸಿಲಿನಿಂದ ದೇಹವನ್ನು ತಂಪಾಗಿಡಲು ಮತ್ತು ಆರೋಗ್ಯವಾಗಿರಲು ಕೆಲವು ಹಣ್ಣುಗಳು ತುಂಬಾ ಸಹಕಾರಿ. ಅಂತಹ 7 ಪ್ರಮುಖ ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq71mg0efvb8pf3cspmbpy5q,imgname-fruits-1777279320078.jpg" type="image/jpeg" height="390" width="690"/>
            <category><![CDATA[food]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/webstories/food/summer-seven-fruits-you-must-eat-for-hydration-and-good-health-sat-ogzh8mr"/>
        </item>
        <item>
            <title><![CDATA[ಬೈಕ್ ಟ್ಯಾಕ್ಸಿ ಫೈಟ್ ಈಗ ಸುಪ್ರೀಂ ಅಂಗಳಕ್ಕೆ! ಹೈಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಮೆಟ್ಟಿಲೇರಿದ ರಾಜ್ಯ ಸರ್ಕಾರ]]></title>
            <link>https://kannada.asianetnews.com/india-news/karnataka-govt-supreme-court-appeal-bike-taxi-ban-high-court-order-challenge-san/articleshow-hegi52h</link>
            <guid isPermaLink="true">https://kannada.asianetnews.com/india-news/karnataka-govt-supreme-court-appeal-bike-taxi-ban-high-court-order-challenge-san/articleshow-hegi52h</guid>
            <pubDate>Tue, 28 Apr 2026 20:46:13 +0530</pubDate>
            <description><![CDATA[ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧವನ್ನು ತೆರವುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಬೈಕ್ ಟ್ಯಾಕ್ಸಿ ನಿಷೇಧವನ್ನು ಅಸಂವಿಧಾನಿಕ ಎಂದು ಹೈಕೋರ್ಟ್ ಹೇಳಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kfw7tz5apjnfc9am35qt7g7p,imgname-new-project---2026-01-26t093618.043-1769400532138.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ/ಬೆಂಗಳೂರು (ಏ.28): &lt;/strong&gt;ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿ ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಈಗ ಸುಪ್ರೀಂ ಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾನೂನುಬದ್ಧತೆಯ ಹೋರಾಟ ಈಗ ರಾಷ್ಟ್ರ ಮಟ್ಟದಲ್ಲಿ ಅಂತಿಮ ಹಂತಕ್ಕೆ ತಲುಪಿದೆ. ಬೈಕ್ ಟ್ಯಾಕ್ಸಿಗಳ ಮೇಲಿನ ಸಂಪೂರ್ಣ ನಿಷೇಧವು ಅಸಂವಿಧಾನಿಕ ಮತ್ತು ಇದು 1988ರ ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ಸುಮಾರು ಮೂರು ತಿಂಗಳ ಹಿಂದೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಕೇವಲ 'ದ್ವಿಚಕ್ರ ವಾಹನ' ಎಂಬ ಕಾರಣ ನೀಡಿ ಸರ್ಕಾರವು ಪರವಾನಗಿ (Permit) ನೀಡಲು ನಿರಾಕರಿಸುವಂತಿಲ್ಲ ಎಂದು ಕೋರ್ಟ್ ಹೇಳಿತ್ತು.&lt;/p&gt;&lt;h2&gt;&lt;strong&gt;ಕೋರ್ಟ್ ಕಲಾಪದ ಹಾದಿ&lt;/strong&gt;&lt;/h2&gt;&lt;p&gt;ಈ ಮೊದಲು 2025ರ ಏಪ್ರಿಲ್&zwnj;ನಲ್ಲಿ ನ್ಯಾಯಮೂರ್ತಿ ಬಿ. ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠವು, ರಾಜ್ಯ ಸರ್ಕಾರವು ಒಂದು ನಿಯಂತ್ರಣ ನೀತಿಯನ್ನು ರೂಪಿಸುವವರೆಗೆ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಓಲಾ, ಉಬರ್ ಮತ್ತು ರ&zwj;್ಯಾಪಿಡೋದಂತಹ ಸಂಸ್ಥೆಗಳು ಪ್ರಶ್ನಿಸಿದ್ದವು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ಪೀಠವು ಏಕ ಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿತು.&lt;/p&gt;&lt;h2&gt;&lt;strong&gt;ಹೈಕೋರ್ಟ್ ನೀಡಿದ್ದ ಪ್ರಮುಖ ಕಾರಣಗಳು&lt;/strong&gt;&lt;/h2&gt;&lt;p&gt;ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸುವುದು ಸಂವಿಧಾನದ ವಿಧಿ 19(1)(g) ಅಡಿಯಲ್ಲಿ ನಾಗರಿಕರಿಗೆ ಇರುವ ವ್ಯಾಪಾರ ಮಾಡುವ ಹಕ್ಕಿನ ಮೇಲೆ ಹೇರಿದ ಅಸಮಂಜಸ ನಿರ್ಬಂಧವಾಗಿದೆ. ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಮೋಟಾರ್ ಸೈಕಲ್&zwnj;ಗಳು ಕೂಡ 'ಸಾರಿಗೆ ವಾಹನ'ಗಳ ವ್ಯಾಖ್ಯಾನಕ್ಕೆ ಬರುತ್ತವೆ. ಆದ್ದರಿಂದ ಅವುಗಳಿಗೆ ಟ್ಯಾಕ್ಸಿಗಳಾಗಿ ಪರವಾನಗಿ ನೀಡಲು ನಿರಾಕರಿಸುವಂತಿಲ್ಲ. ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ನಿಯಂತ್ರಿಸಲು ಮತ್ತು ಕಾಯ್ದೆಯ ಸೆಕ್ಷನ್ 74(2) ಅಡಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಲು ಸ್ವತಂತ್ರವಾಗಿದೆ. ಆದರೆ 'ಬೈಕ್' ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ.&lt;/p&gt;&lt;h2&gt;&lt;strong&gt;ಈಗ ಏನಾಗಲಿದೆ?&lt;/strong&gt;&lt;/h2&gt;&lt;p&gt;ಹೈಕೋರ್ಟ್ ಆದೇಶ ಹೊರಬಿದ್ದ ಮೂರು ತಿಂಗಳ ನಂತರ ರಾಜ್ಯ ಸರ್ಕಾರವು ಕಳೆದ ವಾರ ಸುಪ್ರೀಂ ಕೋರ್ಟ್&zwnj;ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯು ಇನ್ನೂ ವಿಚಾರಣೆಗೆ ಪಟ್ಟಿಯಾಗಿಲ್ಲ (Listing). ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಯಾವ ತೀರ್ಪು ನೀಡಲಿದೆ ಎಂಬುದರ ಮೇಲೆ ಬೆಂಗಳೂರಿನಂತಹ ನಗರಗಳಲ್ಲಿ ಸಾವಿರಾರು ಬೈಕ್ ಟ್ಯಾಕ್ಸಿ ಸವಾರರ ಭವಿಷ್ಯ ನಿರ್ಧಾರವಾಗಲಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/karnataka-govt-supreme-court-appeal-bike-taxi-ban-high-court-order-challenge-san/articleshow-hegi52h"/>
        </item>
        <item>
            <title><![CDATA[ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ; SC-C ಕೆಟಗರಿಯಲ್ಲಿದೆ ಟ್ವಿಸ್ಟ್!]]></title>
            <link>https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</link>
            <guid isPermaLink="true">https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4</guid>
            <pubDate>Tue, 28 Apr 2026 20:39:02 +0530</pubDate>
            <description><![CDATA[ಕರ್ನಾಟಕ ಸರ್ಕಾರವು ಹೈಕೋರ್ಟ್‌ನ ಮಧ್ಯಂತರ ಆದೇಶದ ಮೇರೆಗೆ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ನಿಯಮದ ಅಡಿಯಲ್ಲಿ, 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ. ಈ ಮೀಸಲಾತಿಯನ್ನು ಪ್ರವರ್ಗ-ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01cmhbvs9q5f2p3b9b489b69dd,imgname-banner.00_02_04_18.Still176.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಕ&lt;/strong&gt;ರ್ನಾಟಕದ ಪರಿಶಿಷ್ಟ ಜಾತಿ (SC) ಸಮುದಾಯಗಳಲ್ಲಿ ದಶಕಗಳಿಂದ ನಡೆಯುತ್ತಿದ್ದ ಒಳಮೀಸಲಾತಿ ಹೋರಾಟಕ್ಕೆ ಈಗ ದೊಡ್ಡ ತಾರ್ಕಿಕ ಅಂತ್ಯ ಸಿಕ್ಕಿದೆ. ಮಾನ್ಯ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಒಳಮೀಸಲಾತಿಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಬಹಳ ದಿನಗಳಿಂದ ಬಾಕಿ ಉಳಿದಿದ್ದ 56,432 ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಮೀಸಲಾತಿ ಪ್ರಮಾಣದಲ್ಲಿ ಬದಲಾವಣೆ:&lt;/strong&gt;&lt;/h2&gt;&lt;p&gt;ಸರ್ಕಾರದ ಹೊಸ ಆದೇಶದ ಪ್ರಕಾರ, ಈ ಹಿಂದೆ ಶೇಕಡಾ 17ರಷ್ಟಿದ್ದ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಹೈಕೋರ್ಟ್&zwnj;ನ ಮಧ್ಯಂತರ ಆದೇಶದ ಅನ್ವಯ ತಾತ್ಕಾಲಿಕವಾಗಿ ಶೇಕಡಾ 15ಕ್ಕೆ ಮಿತಗೊಳಿಸಲಾಗಿದೆ. ಈ ಬದಲಾವಣೆಯು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.&lt;/p&gt;&lt;h2&gt;&lt;strong&gt;ಒಳಮೀಸಲಾತಿ ವರ್ಗೀಕರಣ ಹೇಗೆ?&lt;/strong&gt;&lt;/h2&gt;&lt;p&gt;ಪರಿಶಿಷ್ಟ ಜಾತಿಯಲ್ಲಿರುವ ವಿವಿಧ ಉಪಜಾತಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮೀಸಲಾತಿಯನ್ನು ಮೂರು ಪ್ರಮುಖ ಪ್ರವರ್ಗಗಳಾಗಿ ವಿಂಗಡಿಸಲಾಗಿದೆ:&lt;/p&gt;&lt;ul&gt; &lt;li&gt;&lt;strong&gt;ಪ್ರವರ್ಗ-ಎ (SC-A):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಬಿ (SC-B):&lt;/strong&gt; ಶೇಕಡಾ 5.25 ರಷ್ಟು ಮೀಸಲಾತಿ.&lt;/li&gt; &lt;li&gt;&lt;strong&gt;ಪ್ರವರ್ಗ-ಸಿ (SC-C):&lt;/strong&gt; ಶೇಕಡಾ 4.5 ರಷ್ಟು ಮೀಸಲಾತಿ.&lt;/li&gt;&lt;/ul&gt;&lt;p&gt;ವಿಶೇಷವೆಂದರೆ, ಪ್ರವರ್ಗ-ಸಿ ಅಡಿಯಲ್ಲಿ ಬರುವ ಒಟ್ಟು ಹುದ್ದೆಗಳಲ್ಲಿ ಶೇಕಡಾ 20ರಷ್ಟು ಹುದ್ದೆಗಳನ್ನು ಪರಿಶಿಷ್ಟ ಜಾತಿಯಲ್ಲಿರುವ 59 ಅತ್ಯಂತ ಹಿಂದುಳಿದ ಜಾತಿಗಳಿಗೆ ಮೀಸಲಿಡಲಾಗಿದೆ. ಒಂದು ವೇಳೆ ಈ ಗುಂಪಿನ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಆ ಹುದ್ದೆಗಳನ್ನು ಪ್ರವರ್ಗ-ಸಿ ಅಡಿಯಲ್ಲಿರುವ ಇತರ ಜಾತಿಗಳ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅವಕಾಶ ನೀಡಲಾಗಿದೆ.&lt;/p&gt;&lt;h2&gt;&lt;strong&gt;56,432 ಹುದ್ದೆಗಳ ಭರ್ತಿಗೆ ಆದೇಶ:&lt;/strong&gt;&lt;/h2&gt;&lt;p&gt;ಉದ್ಯೋಗಾಕಾಂಕ್ಷಿಗಳಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದೆ. ಈಗಾಗಲೇ ಆರ್ಥಿಕ ಇಲಾಖೆಯಿಂದ ಅನುಮೋದನೆ ಪಡೆದಿರುವ ವಿವಿಧ ಇಲಾಖೆಗಳ ಒಟ್ಟು 56,432 ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಸರ್ಕಾರ ಸೂಚಿಸಿದೆ. ಈ ನೇಮಕಾತಿಗಳಲ್ಲಿ 400 ಬಿಂದುಗಳ ರೋಸ್ಟರ್ ಪದ್ಧತಿಯನ್ನು ಅನುಸರಿಸಲು ನಿರ್ದೇಶನ ನೀಡಲಾಗಿದೆ. ಒಳಮೀಸಲಾತಿ ಅಳವಡಿಸದೆ ಹೊರಡಿಸಲಾಗಿದ್ದ ಹಳೆಯ ಅಧಿಸೂಚನೆಗಳನ್ನು ಹಿಂಪಡೆದು, ಹೊಸ ಒಳಮೀಸಲಾತಿ ನಿಯಮದಡಿ ತಕ್ಷಣವೇ ಮರು-ಅಧಿಸೂಚನೆ ಹೊರಡಿಸಲು ಆದೇಶದಲ್ಲಿ ತಿಳಿಸಲಾಗಿದೆ.&lt;/p&gt;&lt;h3&gt;&lt;strong&gt;ಸಮರ್ಪಕ ಜಾರಿಗಾಗಿ ಸೂಚನೆ:&lt;/strong&gt;&lt;/h3&gt;&lt;p&gt;ಈ ಹೊಸ ಮೀಸಲಾತಿ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರವು 400 ಬಿಂದುಗಳ ರೋಸ್ಟರ್ ವರ್ತುಲಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಯಾವುದೇ ವೃಂದದಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳಿದ್ದಲ್ಲಿ, ಅಂತಹ ಹುದ್ದೆಗಳನ್ನು 'ಪರಿಶಿಷ್ಟ ಜಾತಿ ಸಾಮಾನ್ಯ' ಎಂದು ಪರಿಗಣಿಸಿ ನೇಮಕಾತಿ ಮಾಡಲು ಸೂಚಿಸಲಾಗಿದೆ.&lt;/p&gt;&lt;p&gt;ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಪರಿಶಿಷ್ಟ ಜಾತಿಯೊಳಗಿನ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ನಿರೀಕ್ಷೆಯಿದೆ. ಈ ಐತಿಹಾಸಿಕ ಬದಲಾವಣೆಯು ರಾಜ್ಯದ ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಮೂಡಿಸಲಿದೆ.&lt;/p&gt;&lt;p&gt;&lt;/p&gt;]]></content:encoded>
            <category><![CDATA[state]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/state/karnataka-govt-issues-order-on-scheduled-castes-internal-reservation-56432-jobs-recruitment-sat/articleshow-303tac4"/>
        </item>
        <item>
            <title><![CDATA[AR Rahman: ಲಂಡನ್‌ನಲ್ಲಿ ರಹಮಾನ್ ಸಂಗೀತದ ರಂಗು: ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಭಾರತೀಯ ಸಂಗೀತದ ರಸದೌತಣ]]></title>
            <link>https://kannada.asianetnews.com/entertainment/ar-rahman-and-royal-philharmonic-orchestra-unite-for-sold-out-london-show-gvd/articleshow-3x86hs0</link>
            <guid isPermaLink="true">https://kannada.asianetnews.com/entertainment/ar-rahman-and-royal-philharmonic-orchestra-unite-for-sold-out-london-show-gvd/articleshow-3x86hs0</guid>
            <pubDate>Tue, 28 Apr 2026 20:22:02 +0530</pubDate>
            <description><![CDATA[ಜಾಗತಿಕ ಸಂಗೀತ ಪಯಣದಲ್ಲಿ ಸಂಗೀತ ಮಾಂತ್ರಿಕ ರಹಮಾನ್ ಅವರ ಸನ್‌ಶೈನ್ ಆರ್ಕೆಸ್ಟ್ರಾದ ಯುವ ಪ್ರತಿಭೆಗಳು ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಜೊತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01jtfzrr4r92djr67rhs22grs1,imgname-richest-bollywood-singers-4-1746440839320.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ಅವರ ಲಂಡನ್&zwnj;ನ ರಾಯಲ್ ಆಲ್ಬರ್ಟ್ ಹಾಲ್ ಶೋ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ರಶೀಲ್ ರಂಜನ್ ಜೊತೆಗೂಡಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾರತೀಯ ಮತ್ತು ಪಾಶ್ಚಿಮಾತ್ಯ ಸಂಗೀತದ ಅದ್ಭುತ ಸಮ್ಮಿಲನ ಸಿಕ್ಕಿತು. ರಹಮಾನ್ ಅವರ ಸನ್&zwnj;ಶೈನ್ ಆರ್ಕೆಸ್ಟ್ರಾದ ಯುವ ಪ್ರತಿಭೆಗಳು ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಜೊತೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.&lt;/p&gt;&lt;p&gt;ಸಂಗೀತ ಮಾಂತ್ರಿಕ ಎ.ಆರ್.ರಹಮಾನ್ ತಮ್ಮ ಜಾಗತಿಕ ಸಂಗೀತ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಲಂಡನ್&zwnj;ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್&zwnj;ನಲ್ಲಿ ನಡೆದ ಅವರ ಮೂರು ದಿನಗಳ ಆರ್ಕೆಸ್ಟ್ರಾ ಶೋ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ಸಂಯೋಜಕ ಮತ್ತು ಸಹ ಕಲಾವಿದ ರಶೀಲ್ ರಂಜನ್ ಅವರ ಸಹಯೋಗದಲ್ಲಿ ಮೂಡಿಬಂದ ಈ ಕಾರ್ಯಕ್ರಮ, ಭಾರತೀಯ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಪರಂಪರೆಗಳನ್ನು ಒಂದೇ ವೇದಿಕೆಯಲ್ಲಿ ಬೆಸೆಯಿತು. ಇದರಲ್ಲಿ ಉದಯೋನ್ಮುಖ ಪ್ರತಿಭೆಗಳು ಮತ್ತು ವಿಶ್ವದರ್ಜೆಯ ಸಂಗೀತಗಾರರು ಒಟ್ಟಿಗೆ ಸೇರಿದ್ದರು.&lt;/p&gt;&lt;p&gt;&lt;strong&gt;ಸೂಫಿ ತತ್ವದಿಂದ ಪ್ರೇರಿತವಾದ 'ರಂಗ್ರೇಝಾ'&lt;/strong&gt;&lt;/p&gt;&lt;p&gt;'ಎ.ಆರ್.ರಹಮಾನ್ x ರಶೀಲ್ ರಂಜನ್' ಶೀರ್ಷಿಕೆಯ ಈ ಶೋ, ಕೇವಲ ತನ್ನ ಅದ್ಧೂರಿತನದಿಂದ ಮಾತ್ರವಲ್ಲದೆ, ಮುಂದಿನ ಪೀಳಿಗೆಯ ಸಂಗೀತಗಾರರನ್ನು ಜಾಗತಿಕ ವೇದಿಕೆಯಲ್ಲಿ ಮುಖ್ಯವಾಗಿರಿಸಿದ್ದಕ್ಕಾಗಿ ಗಮನ ಸೆಳೆಯಿತು. ರಹಮಾನ್ ಮತ್ತು ರಂಜನ್ ಜಂಟಿಯಾಗಿ ಸಂಯೋಜಿಸಿದ 'ರಂಗ್ರೇಝಾ' ಎಂಬ ಹೊಸ ಕೃತಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸೂಫಿ ತತ್ವವನ್ನು ಆಧರಿಸಿದ ಈ ಸಂಯೋಜನೆಯು, ವಿಭಿನ್ನ ಸಂಸ್ಕೃತಿಗಳ ನಡುವಿನ ಆಧ್ಯಾತ್ಮಿಕ ಮತ್ತು ಸಂಗೀತ ಭಾಷೆಯನ್ನು ಪರಿಶೋಧಿಸಿತು. ಮೆಲ್ವಿನ್ ಟೇ ಅವರ ನೇತೃತ್ವದಲ್ಲಿ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಮತ್ತು ಲಂಡನ್ ವಾಯ್ಸಸ್ ತಂಡಗಳು ಸಹ ಕಲಾವಿದೆ ಅಬಿ ಸಂಪಾ ಜೊತೆಗೂಡಿ ಇದನ್ನು ಪ್ರಸ್ತುತಪಡಿಸಿದವು.&lt;/p&gt;&lt;p&gt;&lt;strong&gt;ಮುಂದಿನ ಪೀಳಿಗೆಯನ್ನು ಬೆಳೆಸುವ ಪ್ರಯತ್ನ&lt;/strong&gt;&lt;/p&gt;&lt;p&gt;ಈ ಸಂಜೆಯ ಅತ್ಯಂತ ಭಾವನಾತ್ಮಕ ಕ್ಷಣವೆಂದರೆ, ರಹಮಾನ್ ಅವರ ಕೆಎಂ ಮ್ಯೂಸಿಕ್ ಕನ್ಸರ್ವೇಟರಿ ಮತ್ತು ಸನ್&zwnj;ಶೈನ್ ಆರ್ಕೆಸ್ಟ್ರಾದ ಸಂಗೀತಗಾರರು ವೇದಿಕೆ ಹಂಚಿಕೊಂಡಿದ್ದು. ಹಿಂದುಳಿದ ಸಮುದಾಯಗಳ ಯುವ ಪ್ರತಿಭೆಗಳಿಗೆ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ನೀಡುವ ಯೋಜನೆ ಈ ಸನ್&zwnj;ಶೈನ್ ಆರ್ಕೆಸ್ಟ್ರಾ. ವಿಶ್ವದ ಅತ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಒಂದಾದ ಇಲ್ಲಿ, ಅಂತರಾಷ್ಟ್ರೀಯ ಆರ್ಕೆಸ್ಟ್ರಾ ಜೊತೆ ಅವರು ಪ್ರದರ್ಶನ ನೀಡಿದ್ದು ಒಂದು ಅಪರೂಪದ ಮತ್ತು ಅರ್ಥಪೂರ್ಣ ಕ್ಷಣವಾಗಿತ್ತು.&lt;/p&gt;&lt;p&gt;ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ರಹಮಾನ್, &quot;ನಮ್ಮ ಸನ್&zwnj;ಶೈನ್ ಆರ್ಕೆಸ್ಟ್ರಾ, ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ ಜೊತೆ ವೇದಿಕೆ ಹಂಚಿಕೊಂಡಿದ್ದು ನೋಡಲು ಬಹಳ ವಿಶೇಷ ಎನಿಸಿತು. ಒಬ್ಬ ಶಿಕ್ಷಕನಾಗಿ, ಇಂತಹ ಕ್ಷಣಗಳು ನಾವು ಈ ಕೆಲಸವನ್ನು ಯಾಕೆ ಶುರು ಮಾಡಿದೆವು ಎಂಬುದನ್ನು ನೆನಪಿಸುತ್ತವೆ. ಯಾವುದೇ ನಿರೀಕ್ಷೆಯಿಲ್ಲದೆ, ಒಳ್ಳೆಯದಾಗಲಿ ಎಂದು ನೀವು ಬೀಜ ಬಿತ್ತಿದಾಗ, ಜೀವನವು ಸುಂದರವಾದ ರೀತಿಯಲ್ಲಿ ನಿಮ್ಮನ್ನು ಅಚ್ಚರಿಗೊಳಿಸುತ್ತದೆ. ಈ ಯುವ ಸಂಗೀತಗಾರರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತರುತ್ತಿರುವುದು ಮಾತ್ರವಲ್ಲ, ಸಂಗೀತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ&quot; ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಹೊಸ ರೂಪ ಪಡೆದ ಹಳೆಯ ಹಾಡುಗಳು&lt;/strong&gt;&lt;/h2&gt;&lt;p&gt;ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸಾರ್ಥಕ್ ಕಲ್ಯಾಣಿ ಮತ್ತು ತಾಳವಾದ್ಯ ವಾದಕ ಜನನ್ ಸತಿಯೇಂದ್ರನ್ ಕೂಡ ಭಾಗವಹಿಸಿದ್ದರು. ಪ್ರಸಿದ್ಧ ಸಮಕಾಲೀನ ನೃತ್ಯಗಾರ ಆಕಾಶ್ ಒಡೆದ್ರಾ ಅವರ ನೃತ್ಯ ಸಂಯೋಜನೆಯು ಆರ್ಕೆಸ್ಟ್ರಾದ ಅನುಭವಕ್ಕೆ ದೃಶ್ಯ ವೈಭವವನ್ನು ಸೇರಿಸಿತು. ಹೊಸ ಸಂಯೋಜನೆಗಳ ಜೊತೆಗೆ, ರಹಮಾನ್ ಅವರ ಜನಪ್ರಿಯ ಚಲನಚಿತ್ರಗಳಾದ 'ಜೋಧಾ ಅಕ್ಬರ್', 'ಗುರು', '127 ಅವರ್ಸ್', ಮತ್ತು 'ರಾಕ್&zwnj;ಸ್ಟಾರ್' ನಂತಹ ಚಿತ್ರಗಳ ಹಾಡುಗಳನ್ನು ಆರ್ಕೆಸ್ಟ್ರಾ ಶೈಲಿಯಲ್ಲಿ ಮರುಸಂಯೋಜಿಸಿ ಪ್ರೇಕ್ಷಕರಿಗೆ ಉಣಬಡಿಸಲಾಯಿತು.&lt;/p&gt;&lt;p&gt;ಭಾರತೀಯ ಚಲನಚಿತ್ರ ಸಂಗೀತವನ್ನು ಜಾಗತಿಕವಾಗಿ ಪ್ರಸ್ತುತಪಡಿಸುವ ರೀತಿಯಲ್ಲಿ ಆಗುತ್ತಿರುವ ಬದಲಾವಣೆಗೆ ಈ ಶೋ ಸಾಕ್ಷಿಯಾಯಿತು. ಇದು ಕೇವಲ ಒಂದು ಸಂಗೀತ ಕಛೇರಿಯಾಗಿರದೆ, ಉದಯೋನ್ಮುಖ ಭಾರತೀಯ ಸಂಗೀತಗಾರರನ್ನು ಅಂತರಾಷ್ಟ್ರೀಯ ಕಲಾ ಸಂವಾದದ ಮುಂಚೂಣಿಯಲ್ಲಿ ನಿಲ್ಲಿಸಿದ ಒಂದು ಸಾಂಸ್ಕೃತಿಕ ಸಂಗಮವಾಗಿತ್ತು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ar-rahman-and-royal-philharmonic-orchestra-unite-for-sold-out-london-show-gvd/articleshow-3x86hs0"/>
        </item>
        <item>
            <title><![CDATA[ಗೂಗಲ್‌ ಹಿಂದಿಕ್ಕಿ ಭಾರತದ ಅತಿದೊಡ್ಡ ಡೇಟಾ ಸೆಂಟರ್ ನಿರ್ಮಿಸಲಿದೆ ರಿಲಯನ್ಸ್: 1.6 ಲಕ್ಷ ಕೋಟಿ ರೂ.ಗಳ ಮಹಾ ಯೋಜನೆ!]]></title>
            <link>https://kannada.asianetnews.com/business/reliance-to-build-india-largest-data-center-visakhapatnam-1-6-lakh-crore-investment-san/articleshow-vxrzh37</link>
            <guid isPermaLink="true">https://kannada.asianetnews.com/business/reliance-to-build-india-largest-data-center-visakhapatnam-1-6-lakh-crore-investment-san/articleshow-vxrzh37</guid>
            <pubDate>Tue, 28 Apr 2026 20:07:09 +0530</pubDate>
            <description><![CDATA[ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.6 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಿ 1.5 ಗಿಗಾವ್ಯಾಟ್ ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ಗೂಗಲ್ ಯೋಜನೆಯನ್ನೂ ಮೀರಿಸುವ ಈ ಕೇಂದ್ರವು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಆಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kegggm5vyshrk4p0gq1m67t8,imgname-india-us-policy-venezuela-crude-oil-supply-reliance-interest-news-05-1767933235387.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಶಾಖಪಟ್ಟಣಂ (ಏ.28): &lt;/strong&gt;ದಕ್ಷಿಣ ಭಾರತದಲ್ಲಿ ತಂತ್ರಜ್ಞಾನ ಕ್ರಾಂತಿ ಮೂಡಿಸಲು ಸಜ್ಜಾಗಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 1.5 ಗಿಗಾವ್ಯಾಟ್ (GW) ಸಾಮರ್ಥ್ಯದ ಬೃಹತ್ ಡೇಟಾ ಸೆಂಟರ್ ಸ್ಥಾಪಿಸಲು ನಿರ್ಧರಿಸಿದೆ. ಗೂಗಲ್ ಸಂಸ್ಥೆಯ 1.4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್&zwnj;ಗಿಂತಲೂ ದೊಡ್ಡದಾದ ಈ ಯೋಜನೆಗೆ ರಿಲಯನ್ಸ್ 1.6 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.&lt;/p&gt;&lt;p&gt;ಸೌರ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆಯನ್ನು ಒಳಗೊಂಡಿರುವ ಈ ಡೇಟಾ ಸೆಂಟರ್ ಕ್ಲಸ್ಟರ್ ಪೂರ್ಣಗೊಂಡಾಗ, ಇದು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆಂಧ್ರಪ್ರದೇಶ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಕುತೂಹಲಕಾರಿ ವಿಷಯವೆಂದರೆ, ಗೂಗಲ್ ಕೂಡ ಇಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಸ್ಥಾಪಿಸುವುದಾಗಿ ಘೋಷಿಸಿದೆ.&lt;/p&gt;&lt;h2&gt;&lt;strong&gt;ಮೂರು ಹಂತಗಳಲ್ಲಿ ಅನುಷ್ಠಾನ&lt;/strong&gt;&lt;/h2&gt;&lt;p&gt;ಒಟ್ಟು 935 ಎಕರೆ ವಿಸ್ತೀರ್ಣದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು, ಮೂರು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. 300 ಎಕರೆ ಪ್ರದೇಶದಲ್ಲಿ 500 ಮೆಗಾವ್ಯಾಟ್ (MW) ಸಾಮರ್ಥ್ಯದ ಡೇಟಾ ಸೆಂಟರ್ ನಿರ್ಮಾಣವಾಗಲಿದೆ. ಇದು 2028ರ ಅಂತ್ಯದ ವೇಳೆಗೆ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ. ನಂತರದ ಹಂತದಲ್ಲಿ 600 ಎಕರೆ ಭೂಮಿಯಲ್ಲಿ ಹೆಚ್ಚುವರಿ 1 ಗಿಗಾವ್ಯಾಟ್ ಸಾಮರ್ಥ್ಯವನ್ನು ಸೇರಿಸಲಾಗುತ್ತದೆ. ಈ ಬೃಹತ್ ಕೇಂದ್ರವು ವಿಶಾಖಪಟ್ಟಣಂನ ಹೊಸ ಭೋಗಾಪುರಂ ವಿಮಾನ ನಿಲ್ದಾಣದ ಸಮೀಪ ತಲೆ ಎತ್ತಲಿದೆ.&lt;/p&gt;&lt;h2&gt;&lt;strong&gt;ಡೇಟಾ ಸೆಂಟರ್ ಸಿಟಿಯಾಗಲಿರುವ ವಿಶಾಖಪಟ್ಟಣಂ&lt;/strong&gt;&lt;/h2&gt;&lt;p&gt;ರಿಲಯನ್ಸ್ ಮಾತ್ರವಲ್ಲದೆ ಹಲವು ದಿಗ್ಗಜ ಕಂಪನಿಗಳು ಇಲ್ಲಿ ಹೂಡಿಕೆಗೆ ಮುಂದೆ ಬಂದಿವೆ. ಗೂಗಲ್ ಇಲ್ಲಿ 15 ಬಿಲಿಯನ್ ಡಾಲರ್ (1.4 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. Zyphy 500 ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿದೆ. ಡಿಜಿಟಲ್ ಕನೆಕ್ಷನ್ ಇಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯವನ್ನು ಸ್ಥಾಪಿಸಲಿದೆ. ಆನಂದ್ ರಾಜ್ ಕ್ಲೌಡ್ 300 ಮೆಗಾವ್ಯಾಟ್ ಸಾಮರ್ಥ್ಯದ ಕೇಂದ್ರ ನಿರ್ಮಾಣ ಮಾಡಲಿದೆ. ಆಂಧ್ರಪ್ರದೇಶ ಸರ್ಕಾರವು ಒಟ್ಟಾರೆಯಾಗಿ ರಾಜ್ಯದಲ್ಲಿ 6 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್&zwnj;ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಕಂಪನಿಗಳಿಗೆ ರಿಯಾಯಿತಿ ಹಾಗೂ ಪ್ರೋತ್ಸಾಹಕಗಳನ್ನು ಘೋಷಿಸಿದೆ.&lt;/p&gt;&lt;h2&gt;&lt;strong&gt;ರಿಲಯನ್ಸ್ ಷೇರುಗಳಲ್ಲಿ ಜಿಗಿತ:&lt;/strong&gt;&lt;/h2&gt;&lt;p&gt;ಈ ಬೃಹತ್ ಯೋಜನೆಯ ಸುದ್ದಿ ಹೊರಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರಿಕೆ ಕಂಡಿವೆ. ಆರಂಭದಲ್ಲಿ ನಷ್ಟದಲ್ಲಿ ವ್ಯವಹಾರ ಆರಂಭಿಸಿದ್ದ ಷೇರುಗಳು, ದಿನದ ಅಂತ್ಯಕ್ಕೆ ಶೇ. 2ರಷ್ಟು ಲಾಭದೊಂದಿಗೆ ಪ್ರತಿ ಷೇರಿಗೆ 1,393 ರೂಪಾಯಿ ದರದಲ್ಲಿ ವಹಿವಾಟು ಮುಗಿಸಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[business]]></category>
            <dc:creator>Santosh Naik</dc:creator>
            <atom:link href="https://kannada.asianetnews.com/business/reliance-to-build-india-largest-data-center-visakhapatnam-1-6-lakh-crore-investment-san/articleshow-vxrzh37"/>
        </item>
        <item>
            <title><![CDATA[ಬೆಂಗಳೂರು ಎಂ.ಜಿ. ರಸ್ತೆ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿಗೆ 'ರೇ*ಪ್' ಬೆದರಿಕೆ; ಬಟ್ಟೆ ಹರಿಯಲು ಯತ್ನ!]]></title>
            <link>https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6</link>
            <guid isPermaLink="true">https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6</guid>
            <pubDate>Tue, 28 Apr 2026 19:48:06 +0530</pubDate>
            <description><![CDATA[ಬೆಂಗಳೂರಿನ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಯುವತಿಯೊಬ್ಬರಿಗೆ ಮ್ಯಾನೇಜರ್ ರೇಪ್ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೋಟೆಲ್ ಆಡಳಿತ ಮಂಡಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಅಳಿಸಿಹಾಕಿದೆ ಎಂಬ ಆರೋಪ ಕೇಳಿಬಂದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6y46rc2vcyr62jffhq2pv,imgname-bengaluru-mg-road-hotel-crime-1777385541848.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಜನನಿಬಿಡ ಮತ್ತು ಪ್ರತಿಷ್ಠಿತ ಪ್ರದೇಶವಾದ ಎಂ.ಜಿ. ರಸ್ತೆಯ ಖಾಸಗಿ ಹೋಟೆಲ್&zwnj;ವೊಂದರಲ್ಲಿ ಯುವತಿಯೊಬ್ಬರ ಮೇಲೆ ಹೋಟೆಲ್ ಮ್ಯಾನೇಜರ್ ದರ್ಪ ತೋರಿರುವ ಘಟನೆ ನಡೆದಿದೆ. ಊಟಕ್ಕೆ ಬಂದಿದ್ದ ಯುವತಿಗೆ ನಿನ್ನ ರೇ*ಪ್ ಮಾಡೋದಾಗಿ ಬೆದರಿಕೆ ಹಾಕಿ, ಹಲ್ಲೆ ನಡೆಸಿರುವ ಆರೋಪದ ಮೇಲೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್&zwnj;ಐಆರ್ ದಾಖಲಾಗಿದೆ.&lt;/p&gt;&lt;p&gt;&lt;strong&gt;ಘಟನೆಯ ವಿವರ:&lt;/strong&gt;&lt;/p&gt;&lt;p&gt;ನಿನ್ನೆ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಕೀರ್ತಿ ಎಂಬ ಯುವತಿ ತಮ್ಮ ಸ್ನೇಹಿತರೊಂದಿಗೆ ಎಂ.ಜಿ. ರಸ್ತೆಯಲ್ಲಿರುವ 'ಖಾಸಗಿ ಹೋಟೆಲ್&zwnj;ಗೆ ಊಟಕ್ಕೆ ಹೋಗಿದ್ದರು. ಊಟ ಮುಗಿಸಿ ಹೋಟೆಲ್&zwnj;ನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಹೋಟೆಲ್ ಮ್ಯಾನೇಜರ್ ರವಿ ಎಂಬಾತ ಯುವತಿಯೊಂದಿಗೆ ಕಿರಿಕ್ ತೆಗೆದಿದ್ದಾನೆ. ಯಾವುದೇ ಕಾರಣವಿಲ್ಲದೆ ಏಕವಚನದಲ್ಲಿ ಮಾತನಾಡಲು ಶುರು ಮಾಡಿದ್ದಾನೆ.&lt;/p&gt;&lt;h3&gt;&lt;strong&gt;'ನಿನ್ನನ್ನ ರೇ*ಪ್ ಮಾಡ್ತೀನಿ' ಎಂದು ಬೆದರಿಕೆ:&lt;/strong&gt;&lt;/h3&gt;&lt;p&gt;ಮ್ಯಾನೇಜರ್&zwnj;ನ ಅಸಭ್ಯ ವರ್ತನೆಯನ್ನು ಕೀರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ಆರೋಪಿ ರವಿ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, 'ನಿನ್ನನ್ನು ರೇಪ್ ಮಾಡ್ತೀನಿ' ಎಂದು ಸಾರ್ವಜನಿಕವಾಗಿಯೇ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ ಯುವತಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿ, ಆಕೆಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವತಿಯ ಕೈಗೆ ಗಾಯಗಳಾಗಿವೆ.&lt;/p&gt;&lt;h2&gt;&lt;strong&gt;ಸಿಸಿಟಿವಿ ಪುರಾವೆ ನಾಶಕ್ಕೆ ಯತ್ನ?&lt;/strong&gt;&lt;/h2&gt;&lt;p&gt;ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆಯೇ ಹೋಟೆಲ್ ಆಡಳಿತ ಮಂಡಳಿಯು ಅಂದಿನ ಸಿಸಿಟಿವಿ ದೃಶ್ಯಾವಳಿಗಳನ್ನು (CCTV Footage) ಡಿಲೀಟ್ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮ್ಯಾನೇಜರ್ ಮಾಡಿರುವ ಕೃತ್ಯವನ್ನು ಮುಚ್ಚಿ ಹಾಕಲು ಈ ಪ್ರಯತ್ನ ನಡೆದಿದೆ ಎನ್ನಲಾಗುತ್ತಿದೆ.&lt;/p&gt;&lt;h3&gt;&lt;strong&gt;ಪೊಲೀಸ್ ತನಿಖೆ ಚುರುಕು:&lt;/strong&gt;&lt;/h3&gt;&lt;p&gt;ಯುವತಿಯ ದೂರಿನ ಅನ್ವಯ ಹಲಸೂರು ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಐಪಿಸಿ ವಿವಿಧ ಸೆಕ್ಷನ್&zwnj;ಗಳ ಅಡಿಯಲ್ಲಿ ಎಫ್&zwnj;ಐಆರ್ ದಾಖಲಿಸಿದ್ದಾರೆ. ಹೋಟೆಲ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸುತ್ತಿದ್ದು, ತಾಂತ್ರಿಕವಾಗಿ ಡಿಲೀಟ್ ಮಾಡಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಹೋಟೆಲ್&zwnj;ನಲ್ಲೇ ಮಹಿಳೆಯರಿಗೆ ಸುರಕ್ಷತೆ ಇಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-mg-road-private-hotel-manager-threatens-rape-girl-customer-fir-registered-sat/articleshow-ro8fop6"/>
        </item>
        <item>
            <title><![CDATA[ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ]]></title>
            <link>https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</link>
            <guid isPermaLink="true">https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa</guid>
            <pubDate>Tue, 28 Apr 2026 19:45:35 +0530</pubDate>
            <description><![CDATA[ದೆಹಲಿ ದಂಗೆ ಆರೋಪಿ ಉಮರ್ ಖಾಲಿದ್ ಕುರಿತ 'ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್' ಕಾರ್ಯಕ್ರಮವು ಬೆಂಗಳೂರಿನಲ್ಲಿ ತೀವ್ರ ವಿವಾದ ಮತ್ತು ಪ್ರತಿಭಟನೆಗಳ ನಡುವೆ ನಡೆಯಿತು. ಬಿಜೆಪಿ ಕಾರ್ಯಕರ್ತರ ವಿರೋಧದ ಮಧ್ಯೆಯೂ, ನಟ ಪ್ರಕಾಶ್ ರಾಜ್ ಭಾಗವಹಿಸಿದ್ದ ಈ ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಅಭೂತಪೂರ್ವ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01kqa6znsmb6k7j6ems5mw84a5,imgname-umar-khalid-event-in-bengaluru-1777385592628.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;2020ರ ದೆಹಲಿ ದಂಗೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಅವರನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಹಿನ್ನೆಲೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ, ಆಕ್ರೋಶ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿವೆ. ಇಷ್ಟೆಕ್ಕ ವಿವಾದ ಪ್ರತಿಭಟನೆಗಳ ನಡುವೆ ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮ ಪೊಲೀಸ್ ಭದ್ರತೆಯಲ್ಲಿ ನಡೆದಿದೆ.&lt;/p&gt;&lt;h2&gt;ಗೋಡೆ ಬರಹಗಳಿಂದ ವಿವಾದಕ್ಕೆ ಶುರು&lt;/h2&gt;&lt;p&gt;ನಗರದ ಗಾಂಧಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ &ldquo;Free Umar Khalid&rdquo;, &ldquo;Justice for Umar Khalid&rdquo;, &ldquo;India stands with Umar&rdquo; ಎಂಬ ಬರಹಗಳು ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದವು. ಈ ಬರಹಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿ ವಿವಾದಕ್ಕೆ ಕಾರಣವಾದವು. ಬಳಿಕ ಕೆಲವು ಬಿಜೆಪಿ ಕಾರ್ಯಕರ್ತರು ಇಂತಹ ಬರಹಗಳನ್ನು ವಿರೋಧಿಸಿ, ಗೋಡೆಗಳ ಮೇಲೆ ಕಪ್ಪು ಬಣ್ಣ ಹಚ್ಚಿ ಅವನ್ನು ಅಳಿಸಿರುವ ಘಟನೆ ನಡೆದಿದೆ. ಈ ಬರಹಗಳು ಗೋಡೆಗಳಲ್ಲಿ ಬೃಹತ್ ಮಟ್ಟದಲ್ಲಿ ಇದ್ದವು ಎನ್ನಲಾಗಿದೆ.&lt;/p&gt;&lt;h2&gt;ಪುಸ್ತಕ ವಿಮರ್ಶೆ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ&lt;/h2&gt;&lt;p&gt;ದೊಮ್ಮಲೂರು ಪ್ರದೇಶದಲ್ಲಿರುವ ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ ನಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಲ್ಲಿ ಉಮರ್ ಖಾಲಿದ್ ಅಂಡ್ ಹಿಸ್ ವರ್ಲ್ಡ್ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ಆ ಪರಿಸರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಗಳನ್ನು ಎರಡೂ ಬದಿ ಬಂದ್ ಮಾಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದವರ ವಿವರಗಳನ್ನು ದಾಖಲಿಸಿಕೊಂಡರು. ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರತಿಯೊಬ್ಬರ ಮಾಹಿತಿ ಪಡೆದ ಪೊಲೀಸರು. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಂದಿಯ ಮೊಬೈಲ್ ನಂಬರ್ ಕೂಡ ಪಡೆದು ಹೆಸರು ನಮೂದಿಸಿಕೊಂಡರು. ಇನ್ನು ನಟ ಪ್ರಕಾಶ್ ರಾಜ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.&lt;/p&gt;&lt;h2&gt;ಪ್ರತಿಭಟನೆ ಮತ್ತು ಪೊಲೀಸ್ ಕ್ರಮ&lt;/h2&gt;&lt;p&gt;ಕಾರ್ಯಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಾಜಿ ಮೇಯರ್ ಗೌತಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್&zwnj;ಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಅವರನ್ನು ತಡೆದಿದ್ದು, ಕೆಲವರನ್ನು ವಶಕ್ಕೂ ಪಡೆದಿದ್ದಾರೆ. ಉಮರ್ ಖಾಲಿದ್ ಭಾವಚಿತ್ರವಿರುವ ಪ್ಲೆಕ್ಸ್ ಹಿಡಿದು ಪ್ರತಿಭಟನೆ. ಪ್ರತಿಭಟನಾ ಕಾರರನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನೆಗೆ ಪೂರ್ವಾನುಮತಿ ಇರದ ಕಾರಣ, ಪ್ರತಿಭಟನೆಗೆ ಅನುಮತಿ ನಿರಾಕರಿಸಿ ಪೊಲೀಸರು ಹಿಂದೂ ಪರ ನಾಯಕರಿಗೆ ನೋಟೀಸ್ ನೀಡಿದರು.&lt;/p&gt;&lt;h2&gt;ಭದ್ರತಾ ವ್ಯವಸ್ಥೆ&lt;/h2&gt;&lt;p&gt;ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿ ಇರಲು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪೂರ್ವ ವಿಭಾಗದ ಡಿಸಿಪಿ ವಿಕ್ರಂ ಅಮ್ಟೆ ಅವರ ನೇತೃತ್ವದಲ್ಲಿ, ಒಬ್ಬ ಡಿಸಿಪಿ ಹಾಗೂ ಮೂವರು ಎಸಿಪಿಗಳ ಮೇಲ್ವಿಚಾರಣೆಯಲ್ಲಿ ಭದ್ರತೆ ಒದಗಿಸಲಾಯಿತು.&lt;/p&gt;&lt;h2&gt;ವಿವಿಧ ವಲಯಗಳಿಂದ ಪ್ರತಿಕ್ರಿಯೆ&lt;/h2&gt;&lt;p&gt;ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, 2020 ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಕಾರಣವಾಗಿದ್ದ ಅಂತ ಮನುಷ್ಯನನ್ನ ಕರೆಸಿ ಕಾರ್ಯಕ್ರಮ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರ ನೀಚ ಸರ್ಕಾರ ಇಂತಹ ಕಾರ್ಯಕ್ರಮ ಮಾಡ್ತಿದ್ದಾರೆ. ಪೊಲೀಸರ ಭಧ್ರತೆಯಲ್ಲಿ ಕಾರ್ಯಕ್ರಮ ಮಾಡ್ತಿರೋದು ನಾಚಿಕೆಗೇಡು. ಬುದ್ಧಿ ಜೀವಿಗಳು ಅಂತಾರೆ ಇವರೆಲ್ಲ ನಗರ ನಕ್ಸಲರು. ಇಂತಹ ಕಾರ್ಯಕ್ರಮ ಮಾಡ್ತಿರೋದು ದುರಂತ. ಪ್ರತಿಭಟನೆ ಮಾಡುವವರನ್ನ ಬಂಧಿಸಿದ್ದಾರೆ . ಇಂತಹ ದೇಶ ವಿರೋಧಿ ಕಾರ್ಯಕ್ರಮಕ್ಕೆ ಬಂದವರು ಎಂತವರು ಅಲ್ವಾ ಎಂದು ಕಿಡಿ ಕಾರಿದರು.&lt;/p&gt;&lt;p&gt;ಒಟ್ಟಿನಲ್ಲಿ, ಉಮರ್ ಖಾಲಿದ್ ಕುರಿತ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆ, ಪ್ರತಿಭಟನೆ ಹಾಗೂ ಭದ್ರತಾ ಕಾವಲು ಹೆಚ್ಚಿದದ್ದು ಗಮನಾರ್ಹವಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಉಳಿದಿದೆ.&lt;/p&gt;&lt;p&gt;&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/umar-khalid-event-in-bengaluru-sparks-protests-heavy-police-security-deployed-gdp/articleshow-qovmoxa"/>
        </item>
        <item>
            <title><![CDATA[Wing Earrings: ರೆಕ್ಕೆಯಂತಹ 5 ಟ್ರೆಂಡಿ ಇಯರಿಂಗ್ಸ್ ಧರಿಸಿ, ನಿಮ್ಮ ಲುಕ್ ಬದಲಿಸಿ]]></title>
            <link>https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg</link>
            <guid isPermaLink="true">https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg</guid>
            <pubDate>Tue, 28 Apr 2026 19:42:39 +0530</pubDate>
            <description><![CDATA[ಡೈಲಿ ಯೂಸ್‌ಗೆ ಇಯರಿಂಗ್ಸ್ ಹಾಕಿಕೊಳ್ಳುವುದು ಸಾಮಾನ್ಯ. ಆದರೆ, ವಿಭಿನ್ನ ಡಿಸೈನ್‌ನ ಓಲೆಗಳು ನಿಮ್ಮ ಕಾನ್ಫಿಡೆನ್ಸ್ ಹೆಚ್ಚಿಸುತ್ತವೆ. ಇಲ್ಲಿವೆ 5 ಟ್ರೆಂಡಿ ವಿಂಗ್ ಇಯರಿಂಗ್ಸ್.]]></description>
            <media:content url="https://static.asianetnews.com/images/w-1280,h-720,format-jpg,imgid-01kgps03gve97tx7jtesjm77s4,imgname-danglar-earring-1770290941467.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-wing-earring-designs-for-a-stylish-look-gvd-codcbtg"/>
        </item>
        <item>
            <title><![CDATA[ಹನಿಮೂನ್‌ನಲ್ಲಿ ಪತಿ ಹ*ತ್ಯೆ ಮಾಡಿಸಿದ್ದ ಪತ್ನಿ ಈಗ ಫ್ರೀ! ಇಂದೋರ್‌ನ ಸೋನಂ ರಘುವಂಶಿಗೆ ಜಾಮೀನು ನೀಡಿದ ಕೋರ್ಟ್!]]></title>
            <link>https://kannada.asianetnews.com/india-news/sonam-raghuvanshi-granted-bail-meghalaya-honeymoon-husband-murder-case-san/articleshow-sw7vaem</link>
            <guid isPermaLink="true">https://kannada.asianetnews.com/india-news/sonam-raghuvanshi-granted-bail-meghalaya-honeymoon-husband-murder-case-san/articleshow-sw7vaem</guid>
            <pubDate>Tue, 28 Apr 2026 19:29:42 +0530</pubDate>
            <description><![CDATA[ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದಾಗ, ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿಗೆ ನ್ಯಾಯಾಲಯ ಜಾಮೀನು ನೀಡಿದೆ. 2025ರಲ್ಲಿ ನಡೆದ ಈ ಹತ್ಯೆ ಪ್ರಕರಣದಲ್ಲಿ, ಚಿರಾಪುಂಜಿ ಬಳಿ ಪತಿಯ ಶವ ಪತ್ತೆಯಾಗಿತ್ತು.]]></description>
            <media:content url="https://static.asianetnews.com/images/w-1280,h-720,format-jpg,imgid-01jyfx1rfas8vb4gr6ntb1r72y,imgname-sonam-raghuvanshi-case-update-1750732956138.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಶಿಲ್ಲಾಂಗ್/ಮೇಘಾಲಯ (ಏ.28): &lt;/strong&gt;ತನ್ನ ಹನಿಮೂನ್ ಪ್ರವಾಸದ ಅವಧಿಯಲ್ಲೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿಗೆ ಮೇಘಾಲಯದ ನ್ಯಾಯಾಲಯವು ಮಂಗಳವಾರ ಜಾಮೀನು ನೀಡಿದೆ. 2025ರಲ್ಲಿ ನಡೆದ ಈ ಭೀಕರ ಹತ್ಯೆ ಪ್ರಕರಣವು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇಂದೋರ್ ನಿವಾಸಿಗಳಾದ ರಾಜಾ ರಘುವಂಶಿ ಮತ್ತು ಸೋನಂ ರಘುವಂಶಿ ಮದುವೆಯ ನಂತರ ಹನಿಮೂನ್&zwnj;ಗಾಗಿ ಈಶಾನ್ಯ ರಾಜ್ಯವಾದ ಮೇಘಾಲಯಕ್ಕೆ ತೆರಳಿದ್ದರು. ಕಳೆದ ವರ್ಷ ಮೇ 23 ರಂದು ಪ್ರವಾಸದ ವೇಳೆಯಲ್ಲಿ ಪತಿ ರಾಜಾ ರಘುವಂಶಿ ಹಠಾತ್ತನೆ ನಾಪತ್ತೆಯಾಗಿದ್ದರು.&lt;/p&gt;&lt;p&gt;ರಾಜಾ ನಾಪತ್ತೆಯಾದ ಸುಮಾರು ಹತ್ತು ದಿನಗಳ ನಂತರ, ಅಂದರೆ ಜೂನ್ 2 ರಂದು ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಸುಂದರ ಪ್ರವಾಸಿ ತಾಣ ಸೋಹ್ರಾ (ಚಿರಾಪುಂಜಿ) ಬಳಿಯ ಜಲಪಾತದ ಸಮೀಪ ಅವರ ವಿರೂಪಗೊಂಡ ಶವ ಪತ್ತೆಯಾಗಿತ್ತು.&lt;/p&gt;&lt;h2&gt;&lt;strong&gt;ಹತ್ಯೆಯ ಹಿಂದೆ ಪತ್ನಿ ಮತ್ತು ಪ್ರಿಯಕರ?&lt;/strong&gt;&lt;/h2&gt;&lt;p&gt;ಪತಿ ನಾಪತ್ತೆಯಾದಾಗ ಸೋನಂ ನಾಟಕವಾಡಿದ್ದರೂ, ತನಿಖೆ ನಡೆಸಿದ ಮೇಘಾಲಯ ಪೊಲೀಸರಿಗೆ ಆಕೆಯ ನಡವಳಿಕೆಯಲ್ಲಿ ಅನುಮಾನ ಬಂದಿತ್ತು. ಪೊಲೀಸರ ತನಿಖೆಯ ವೇಳೆ, ಸೋನಂ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎನ್ನುವುದು ಗೊತ್ತಾಗಿತ್ತು.ಪ್ರಿಯಕರ ಮತ್ತು ಇತರ ಕೆಲವು ಸಹಚರರು ಈ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಮೇಲೆ ಸೋನಂ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.&lt;/p&gt;&lt;h2&gt;&lt;strong&gt;ಜಾಮೀನು ಮತ್ತು ಮುಂದಿನ ಕ್ರಮ&lt;/strong&gt;&lt;/h2&gt;&lt;p&gt;&quot;ಆರೋಪಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದಾಗ್ಯೂ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಲಾಗುತ್ತಿದೆ ಮತ್ತು ಪೊಲೀಸರು ಕಾನೂನಿನ ಪ್ರಕಾರ ಈ ಪ್ರಕರಣವನ್ನು ಮುಂದುವರಿಸಲಿದ್ದಾರೆ,&quot; ಎಂದು ಎಸ್&zwnj;ಪಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/sonam-raghuvanshi-granted-bail-meghalaya-honeymoon-husband-murder-case-san/articleshow-sw7vaem"/>
        </item>
        <item>
            <title><![CDATA[ಗಾಜಿನ ಬಳೆ ಬದಲು ಅಕ್ರಿಲಿಕ್ ಬಳೆ ಟ್ರೈ ಮಾಡಿ: ಟ್ರೆಂಡಿ ಲುಕ್ ನಿಮ್ಮದಾಗಿಸಿಕೊಳ್ಳಿ]]></title>
            <link>https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy</link>
            <guid isPermaLink="true">https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy</guid>
            <pubDate>Tue, 28 Apr 2026 19:26:48 +0530</pubDate>
            <description><![CDATA[ಕೈಗಳಲ್ಲಿ ಗಾಜಿನ ಬಳೆಗಳನ್ನು ಧರಿಸುವ ಬದಲು, ನೀವು ಅಕ್ರಿಲಿಕ್ ಬಳೆಗಳನ್ನು ಧರಿಸಬಹುದು. ಇವು ಸದ್ಯ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇವು ಗಾಜಿನಂತೆ ಹೊಳೆಯುವ ನೋಟವನ್ನು ನೀಡುತ್ತವೆ, ಆದರೆ ಹೆಚ್ಚು ಮಾಡರ್ನ್, ಚಂಕಿ ಮತ್ತು ಕ್ಲಾಸಿ ಲುಕ್ ಕೊಡುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpwf70z175b0hzqknqf53dsh,imgname-acrylic-bangles-design-1-1776924460001.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/latest-acrylic-bangle-designs-for-a-modern-trendy-look-gvd-5xqk1zy"/>
        </item>
        <item>
            <title><![CDATA[ಮನೆಯಂಗಳದ ಮಧುಮಾಲತಿ ಹೂವಿನಿಂದ ಕೂದಲು ಅಲಂಕರಿಸಿ: 5 ಟ್ರೆಂಡಿ ಹೇರ್‌ಸ್ಟೈಲ್ ನೋಡಿ!]]></title>
            <link>https://kannada.asianetnews.com/webstories/fashion/5-trendy-madhumalti-flower-hairstyles-for-a-fresh-look-gvd-9lkor2v</link>
            <guid isPermaLink="true">https://kannada.asianetnews.com/webstories/fashion/5-trendy-madhumalti-flower-hairstyles-for-a-fresh-look-gvd-9lkor2v</guid>
            <pubDate>Tue, 28 Apr 2026 19:15:29 +0530</pubDate>
            <description><![CDATA[ಮಧುಮಾಲತಿ ಹೂವಿನಿಂದ 5 ಟ್ರೆಂಡಿ ಹೇರ್‌ಸ್ಟೈಲ್ ಮಾಡಿಕೊಳ್ಳಿ. ಇದು ನಿಮ್ಮ ಲುಕ್‌ಗೆ ಫ್ರೆಶ್ ಹಾಗೂ ಅಂದದ ಟಚ್ ನೀಡುತ್ತದೆ. ಬ್ರೇಡೆಡ್, ಬನ್, ಹಾಫ್-ಅಪ್ ಹಾಗೂ ಫ್ಲೋರಲ್ ಹೇರ್‌ಬ್ಯಾಂಡ್‌ನಂತಹ ಸುಲಭ ಸ್ಟೈಲ್‌ಗಳಿಂದ ಇನ್‌ಸ್ಟಾಗ್ರಾಮ್‌ಗೆ ಪರ್ಫೆಕ್ಟ್ ಲುಕ್ ಪಡೆಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kq1vb70hsak195dx6znp6yrm,imgname-madhumalti-flower-hairstyle--1777104952337.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/5-trendy-madhumalti-flower-hairstyles-for-a-fresh-look-gvd-9lkor2v"/>
        </item>
        <item>
            <title><![CDATA[ಪಾದರಾಯನಪುರ ಅಪ್ರಾಪ್ತ ಓಡಿಸುವ ಸ್ಕೂಟರ್‌ನಲ್ಲಿ 6 ಜನ ಮಕ್ಕಳ ಸವಾರಿ; ಟ್ವೀಟ್ ಬೆನ್ನಲ್ಲೇ ಪೊಲೀಸ್ ಕೇಸ್!]]></title>
            <link>https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob</link>
            <guid isPermaLink="true">https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob</guid>
            <pubDate>Tue, 28 Apr 2026 19:12:45 +0530</pubDate>
            <description><![CDATA[ಬೆಂಗಳೂರಿನ ಪಾದರಾಯನಪುರದಲ್ಲಿ ಅಪ್ರಾಪ್ತರು ಸ್ಕೂಟರ್ ಚಲಾಯಿಸುತ್ತಿದ್ದ ಫೋಟೋವನ್ನು ನಾಗರಿಕರೊಬ್ಬರು ಟ್ವೀಟ್ ಮಾಡಿದ ನಂತರ, ಸಂಚಾರಿ ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿದ್ದಾರೆ. ಈ ಘಟನೆಯು ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa56ek0ss78z0z7adc0aha5,imgname-bengaluru-minor-boy-scooter-ride-1777383717469.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಏ.28): ಸಿ&lt;/strong&gt;ಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪ್ರಾಪ್ತ ವಯಸ್ಕರ ವಾಹನ ಚಾಲನೆ ಹಾಗೂ ಅಪಾಯಕಾರಿ ರೈಡಿಂಗ್&zwnj;ಗೆ ಬ್ರೇಕ್ ಹಾಕಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಪಾದರಾಯನಪುರದಲ್ಲಿ ಮಕ್ಕಳು ಸ್ಕೂಟರ್ ಚಲಾಯಿಸುತ್ತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಬೆಂಗಳೂರು ಸಂಚಾರಿ ಪೊಲೀಸರು ಎಫ್&zwnj;ಐಆರ್ (FIR) ದಾಖಲಿಸಿದ್ದಾರೆ.&lt;/p&gt;&lt;h3&gt;&lt;strong&gt;ಘಟನೆಯ ವಿವರ:&lt;/strong&gt;&lt;/h3&gt;&lt;p&gt;ಏಪ್ರಿಲ್ 26, 2026ರ ಶನಿವಾರ ಬೆಳಿಗ್ಗೆ ಸುಮಾರು 10:45ಕ್ಕೆ ಪಾದರಾಯನಪುರ ಮುಖ್ಯರಸ್ತೆಯ ಗೌರಿಪಾಳ್ಯ ಸಮೀಪದ ಹೊಸ ಮೇಲ್ಸೇತುವೆ ಬಳಿ ಈ ಘಟನೆ ನಡೆದಿದೆ. ಕೆಎ 05 ಜೆಜೆಡ್ 9065 (KA05JZ9065) ಸಂಖ್ಯೆಯ ಸ್ಕೂಟರ್&zwnj;ನಲ್ಲಿ ಅಪ್ರಾಪ್ತ ಮಕ್ಕಳು ಕಾನೂನುಬಾಹಿರವಾಗಿ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿದ ಶ್ರೇಯಸ್ ಎಂಬ ಜಾಗೃತ ನಾಗರಿಕರು ತಕ್ಷಣವೇ ಫೋಟೋ ತೆಗೆದು ಬೆಂಗಳೂರು ನಗರ ಪೊಲೀಸ್ ಮತ್ತು ಸಂಚಾರಿ ಪೊಲೀಸರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.&lt;/p&gt;&lt;h2&gt;&lt;strong&gt;ಟ್ವೀಟ್ ಬೆನ್ನಲ್ಲೇ ಪೊಲೀಸರ ಆಕ್ಷನ್:&lt;/strong&gt;&lt;/h2&gt;&lt;p&gt;ಶ್ರೇಯಸ್ ಅವರ ಟ್ವೀಟ್&zwnj;ಗೆ ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರು, ಈ ಕುರಿತು ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತರಿಗೆ ವಾಹನ ನೀಡಿದ ವಾಹನ ಮಾಲೀಕರು ಅಥವಾ ಪೋಷಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೊಲೀಸರು ಮುಂದಾಗಿದ್ದಾರೆ.&lt;/p&gt;&lt;h3&gt;&lt;strong&gt;ಜಾಗೃತ ನಾಗರಿಕನಿಗೆ ಪ್ರಶಂಸೆ:&lt;/strong&gt;&lt;/h3&gt;&lt;p&gt;ಪೊಲೀಸರ ಈ ತ್ವರಿತ ಕ್ರಮಕ್ಕೆ ಶ್ರೇಯಸ್ ಅಭಿನಂದನೆ ಸಲ್ಲಿಸಿದ್ದಾರೆ. 'ತಕ್ಷಣವೇ ಸ್ಪಂದಿಸಿದ ಬೆಂಗಳೂರು ಸಂಚಾರಿ ಪೊಲೀಸರಿಗೆ ಧನ್ಯವಾದಗಳು. ಅಪ್ರಾಪ್ತರಿಗೆ ವಾಹನ ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮವಾಗಲಿ' ಎಂದು ಅವರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುರಳಿ ಎಂಬುವವರು, 'ಇದು ಉತ್ತಮ ಹೆಜ್ಜೆ. ಇಂತಹ ಅಕ್ರಮಗಳನ್ನು ಕಂಡಾಗ ಫೋಟೋ ತೆಗೆದು ಪೊಲೀಸರಿಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಶ್ಲಾಘಿಸಿದ್ದಾರೆ.&lt;/p&gt;&lt;h3&gt;&lt;strong&gt;ಪೋಷಕರಿಗೆ ಎಚ್ಚರಿಕೆ:&lt;/strong&gt;&lt;/h3&gt;&lt;p&gt;ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ವಾಹನ ಮಾಲೀಕರು ಅಥವಾ ಪೋಷಕರಿಗೆ ದಂಡ ಮಾತ್ರವಲ್ಲದೆ ಜೈಲು ಶಿಕ್ಷೆ ವಿಧಿಸುವ ಅವಕಾಶವೂ ಇದೆ. ಅಲ್ಲದೆ, ಅಪ್ರಾಪ್ತರು ಚಲಾಯಿಸಿದ ವಾಹನದ ನೋಂದಣಿಯನ್ನು ರದ್ದುಗೊಳಿಸುವ ಅಧಿಕಾರವೂ ಪೊಲೀಸರಿಗಿದೆ. ನಿಮ್ಮ ಮಕ್ಕಳ ಪ್ರಾಣ ಹಾಗೂ ನಿಮ್ಮ ಕಾನೂನು ಸುರಕ್ಷತೆಯ ದೃಷ್ಟಿಯಿಂದ ಮಕ್ಕಳ ಕೈಗೆ ವಾಹನ ನೀಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;This is haappend on today 26/04/2026 morning 10:45 am those kid's illegally ridding scooter No. ( KA05JZ9065 ) on location ( Padarayanapura main road near gowripalya on opposite of total engineer auto gas ) new Bridge. please take necessary. @BlrCityPolice @blrcitytraffic pic.twitter.com/S4rrOE8vbD&lt;/p&gt;&lt;p&gt;&mdash; Shreyas Shreyu (@Shreyas35240282) April 26, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/bengaluru-minor-driving-case-padarayanapura-fir-magadi-road-traffic-police-sat/articleshow-k9xk0ob"/>
        </item>
        <item>
            <title><![CDATA[ಇದೊಂದನ್ನು ಹಾಕಿದ್ರೆ ಸಾಕು, ಕರಿಬೇವಿನ ಗಿಡ ಹುಲುಸಾಗಿ ಬೆಳೆಯುತ್ತೆ!]]></title>
            <link>https://kannada.asianetnews.com/webstories/life/how-to-make-your-curry-leaf-plant-grow-faster-and-bushier-azqgyvi</link>
            <guid isPermaLink="true">https://kannada.asianetnews.com/webstories/life/how-to-make-your-curry-leaf-plant-grow-faster-and-bushier-azqgyvi</guid>
            <pubDate>Tue, 28 Apr 2026 19:08:30 +0530</pubDate>
            <description><![CDATA[Curry leaf plant growth tips: ನಿಮ್ಮ ಮನೆಯಲ್ಲಿರುವ ಕರಿಬೇವಿನ ಗಿಡ ಸರಿಯಾಗಿ ಬೆಳೀತಾ ಇಲ್ವಾ? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ನಿಮಗಾಗಿ. ಇದೊಂದನ್ನು ಹಾಕಿದ್ರೆ ಸಾಕು, ನಿಮ್ಮ ಕರಿಬೇವಿನ ಗಿಡ ವೇಗವಾಗಿ, ಹಚ್ಚ ಹಸುರಾಗಿ, ದಟ್ಟವಾಗಿ ಬೆಳೆಯುತ್ತೆ. ಅದೇನು ಅಂತ ನೋಡೋಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01jwrd01xjnqdm11mp5k078wak,imgname-how-to-grow-curry-leaf-plant-indoors-with-seeds-1748870629298.jpg" type="image/jpeg" height="390" width="690"/>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/webstories/life/how-to-make-your-curry-leaf-plant-grow-faster-and-bushier-azqgyvi"/>
        </item>
        <item>
            <title><![CDATA[Mardaani 3: ಈ ಜರ್ನಿ ಸಖತ್ ಎಮೋಷನಲ್: ಯಶಸ್ಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರಾಣಿ ಮುಖರ್ಜಿ]]></title>
            <link>https://kannada.asianetnews.com/entertainment/mardaani-3-netflix-30-days-rani-mukerji-reaction-success-gvd/articleshow-shpwxn0</link>
            <guid isPermaLink="true">https://kannada.asianetnews.com/entertainment/mardaani-3-netflix-30-days-rani-mukerji-reaction-success-gvd/articleshow-shpwxn0</guid>
            <pubDate>Tue, 28 Apr 2026 19:04:12 +0530</pubDate>
            <description><![CDATA[ತಮ್ಮ 'ಮರ್ದಾನಿ 3' ಸಿನಿಮಾ ಥಿಯೇಟರ್‌ ಬಳಿಕ ನೆಟ್‌ಫ್ಲಿಕ್ಸ್‌ನಲ್ಲೂ 30 ದಿನ ಪೂರೈಸಿದ ಬಗ್ಗೆ ರಾಣಿ ಮುಖರ್ಜಿ ಖುಷಿ ಹಂಚಿಕೊಂಡಿದ್ದಾರೆ. ಈ ಯಶಸ್ಸು, ಮಹಿಳಾ ಪ್ರಧಾನ ಮತ್ತು ಸತ್ಯದ ಕಥೆಗಳನ್ನು ಜನ ಇಷ್ಟಪಡುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kfb40mcpq0csm59vw14w81fe,imgname-rani-mukerji-3-1768826098070.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟಿ ರಾಣಿ ಮುಖರ್ಜಿ ತಮ್ಮ ಇತ್ತೀಚಿನ ಸಿನಿಮಾ 'ಮರ್ದಾನಿ 3' ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಥಿಯೇಟರ್&zwnj;ನಲ್ಲಿ ಉತ್ತಮ ಪ್ರದರ್ಶನ ಕಂಡ ನಂತರ, ಈ ಸಿನಿಮಾ ನೆಟ್&zwnj;ಫ್ಲಿಕ್ಸ್&zwnj;ನಲ್ಲಿ 30 ದಿನಗಳನ್ನು ಪೂರೈಸಿದೆ. ಈ ಮೂಲಕ ಓಟಿಟಿಯಲ್ಲೂ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.&lt;/p&gt;&lt;p&gt;&lt;strong&gt;ಸಿನಿಮಾದ 'ಭಾವನಾತ್ಮಕ' ಜರ್ನಿ ಬಗ್ಗೆ ರಾಣಿ ಮಾತು&lt;/strong&gt;&lt;/p&gt;&lt;p&gt;ಈ ಯಶಸ್ಸಿನ ಬಗ್ಗೆ ರಾಣಿ ಮುಖರ್ಜಿ ಒಂದು ಹೇಳಿಕೆಯಲ್ಲಿ ಮಾತನಾಡಿದ್ದು, ಈ ಜರ್ನಿಯನ್ನು 'ನಂಬಲಾಗದಷ್ಟು ಭಾವನಾತ್ಮಕ' ಎಂದು ಬಣ್ಣಿಸಿದ್ದಾರೆ. 'ಮರ್ದಾನಿ 3' ಸಿನಿಮಾದ ಜರ್ನಿ ನನಗೆ ತುಂಬಾ ಎಮೋಷನಲ್ ಆಗಿದೆ. ಯಾಕಂದ್ರೆ, ಈ ಸಿನಿಮಾ ಮೊದಲು ಥಿಯೇಟರ್&zwnj;ನಲ್ಲಿ, ಈಗ ನೆಟ್&zwnj;ಫ್ಲಿಕ್ಸ್ ಮೂಲಕ ಇಡೀ ಜಗತ್ತಿನ ಜನರನ್ನು ತಲುಪಿದೆ. ಥಿಯೇಟರ್&zwnj;ನಲ್ಲೂ ಈ ಸಿನಿಮಾ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರವಾಗಿ ಹಲವು ಮೈಲಿಗಲ್ಲುಗಳನ್ನು ದಾಟಿತ್ತು.&lt;/p&gt;&lt;p&gt;ಈಗ ಒಂದು ತಿಂಗಳಿಂದ ಸ್ಟ್ರೀಮಿಂಗ್&zwnj;ನಲ್ಲಿ ಟಾಪ್ ಲಿಸ್ಟ್&zwnj;ನಲ್ಲಿ ಟ್ರೆಂಡ್ ಆಗ್ತಿರೋದನ್ನು ನೋಡಿದ್ರೆ, ನನಗೆ ತುಂಬಾ ಖುಷಿ ಹಾಗೂ ವಿನಮ್ರ ಭಾವನೆ ಬರ್ತಿದೆ. ಈ ಯಶಸ್ಸು ಒಂದು ಬದಲಾವಣೆಯನ್ನು ಸೂಚಿಸುತ್ತಿದೆ. ಜನ ಈಗ ಪವರ್&zwnj;ಫುಲ್, ಮಹಿಳಾ ಪ್ರಧಾನ ಕಥೆಗಳನ್ನು ಎಲ್ಲಾ ಪ್ಲಾಟ್&zwnj;ಫಾರ್ಮ್&zwnj;ಗಳಲ್ಲೂ ಒಪ್ಪಿಕೊಳ್ತಿದ್ದಾರೆ. ಧೈರ್ಯ, ನ್ಯಾಯ ಮತ್ತು ನಿಜವಾದ ಸಮಸ್ಯೆಗಳ ಬಗ್ಗೆ ಹೇಳುವ ಕಥೆಗಳು ಕಮರ್ಷಿಯಲ್ ಆಗಿ ಯಶಸ್ವಿಯಾಗಬಲ್ಲವು, ಜೊತೆಗೆ ಸಾಂಸ್ಕೃತಿಕವಾಗಿಯೂ ಪ್ರಭಾವ ಬೀರಬಲ್ಲವು ಅನ್ನೋದನ್ನು ಇದು ಸಾಬೀತುಪಡಿಸಿದೆ,&quot; ಎಂದು ಅವರು ಹೇಳಿದ್ದಾರೆ.&lt;/p&gt;&lt;p&gt;ಮಹಿಳಾ ಪ್ರಧಾನ ಸಿನಿಮಾಗಳು ಪ್ರೇಕ್ಷಕರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ರಾಣಿ ವಿವರಿಸಿದ್ದಾರೆ. &quot;ಒಂದು ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾ ಥಿಯೇಟರ್&zwnj;ನಲ್ಲೂ ಹಿಟ್ ಆಗಿ, ನಂತರ ವಾರಗಟ್ಟಲೆ ಸ್ಟ್ರೀಮಿಂಗ್&zwnj;ನಲ್ಲೂ ಟಾಪ್&zwnj;ನಲ್ಲಿ ಟ್ರೆಂಡ್ ಆಗುತ್ತೆ ಅಂದ್ರೆ, ಅದಕ್ಕೊಂದು ಸ್ಪಷ್ಟ ಕಾರಣವಿದೆ: ಜನರಿಗೆ ಪವರ್, ಪರ್ಪಸ್ ಮತ್ತು ಸತ್ಯ ಇರುವ ಕಥೆಗಳು ಬೇಕು. ಪ್ರಾಮಾಣಿಕತೆ, ಭಾವನೆ ಮತ್ತು ಗಟ್ಟಿಯಾದ ನೈತಿಕ ದನಿಯಿರುವ ಕಥೆಗಳು ಎಲ್ಲಿಗೆ ಬೇಕಾದರೂ ತಲುಪಬಲ್ಲವು. ಅವು ಥಿಯೇಟರ್&zwnj;ನಿಂದ ಶುರುವಾಗಿ, ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ಜಾಗ ಮಾಡಿಕೊಳ್ಳಬಲ್ಲವು&quot; ಎಂದು ಅವರು ಸೇರಿಸಿದ್ದಾರೆ.&lt;/p&gt;&lt;h2&gt;&lt;strong&gt;'ಮರ್ದಾನಿ' ಫ್ರಾಂಚೈಸ್&zwnj;ನ ನಿರಂತರ ಯಶಸ್ಸು&lt;/strong&gt;&lt;/h2&gt;&lt;p&gt;ನಟಿ 'ಮರ್ದಾನಿ' ಫ್ರಾಂಚೈಸ್&zwnj;ನ ಜರ್ನಿ ಮತ್ತು ಅದರ ಹೆಚ್ಚುತ್ತಿರುವ ಪ್ರಭಾವದ ಬಗ್ಗೆಯೂ ಮಾತನಾಡಿದ್ದಾರೆ. 'ಮರ್ದಾನಿ' ಫ್ರಾಂಚೈಸ್&zwnj;ನ ಸಿನಿಮಾಗಳು ಸುಮಾರು ಮೂರು ತಿಂಗಳಿಂದ ಸ್ಟ್ರೀಮಿಂಗ್&zwnj;ನಲ್ಲಿ ಟ್ರೆಂಡಿಂಗ್&zwnj;ನಲ್ಲಿವೆ. ಅಂದ್ರೆ, ಈ ಫ್ರಾಂಚೈಸ್ ಜನರಿಗೆ ಮುಖ್ಯ ಎನಿಸುವ ವಿಷಯಗಳ ಬಗ್ಗೆ ಮಾತನಾಡುತ್ತಿದೆ. ಶಿವಾನಿ ಶಿವಾಜಿ ರಾಯ್ ಈಗ ಕೇವಲ ಒಂದು ಪಾತ್ರವಾಗಿ ಉಳಿದಿಲ್ಲ. ಭಾರತ ಮತ್ತು ಜಗತ್ತಿನಾದ್ಯಂತ ಜನರ ಮನಸ್ಸಿನಲ್ಲಿ ಆಕೆ ಜಾಗ ಪಡೆದಿದ್ದಾಳೆ. ಇದೇ ಕಾರಣಕ್ಕೆ ಈ ಫ್ರಾಂಚೈಸ್&zwnj;ಗೆ ಇಂದಿಗೂ ಅಷ್ಟೊಂದು ಪ್ರೀತಿ ಸಿಗುತ್ತಿದೆ,&quot; ಎಂದು ಅವರು ಹೇಳಿದ್ದಾರೆ. ಅಭಿರಾಜ್ ಮಿನಾವಾಲಾ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ 'ಮರ್ದಾನಿ 3' ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲಿ ಈ ಸಿನಿಮಾ 53 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/mardaani-3-netflix-30-days-rani-mukerji-reaction-success-gvd/articleshow-shpwxn0"/>
        </item>
        <item>
            <title><![CDATA[ಅನಿಲ್ ಅಂಬಾನಿಗೆ ಇಡಿ ಶಾಕ್: ಮುಂಬೈ ಫ್ಲ್ಯಾಟ್, ಖಂಡಾಲ ಫಾರ್ಮ್‌ಹೌಸ್ ಜಪ್ತಿ!]]></title>
            <link>https://kannada.asianetnews.com/india-news/anil-ambani-ed-action-mumbai-flat-khandala-farmhouse-seized-money-laundering-san/articleshow-heqv3e1</link>
            <guid isPermaLink="true">https://kannada.asianetnews.com/india-news/anil-ambani-ed-action-mumbai-flat-khandala-farmhouse-seized-money-laundering-san/articleshow-heqv3e1</guid>
            <pubDate>Tue, 28 Apr 2026 19:01:50 +0530</pubDate>
            <description><![CDATA[ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದಲ್ಲಿ, ED ಸುಮಾರು 3,034 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ಮುಂಬೈನ ಫ್ಲ್ಯಾಟ್, ಖಂಡಾಲದ ಫಾರ್ಮ್‌ಹೌಸ್ ಮತ್ತು ಷೇರುಗಳು ಸೇರಿದಂತೆ ಈ ಕ್ರಮದಿಂದ, ಜಪ್ತಿಯಾದ ಒಟ್ಟು ಆಸ್ತಿ ಮೌಲ್ಯ 19,344 ಕೋಟಿ ರೂ.ಗೆ ಏರಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk0r8w006js7dxfmc60ae7vb,imgname-anil-ambani-ed-raids-mumbai-money-laundering-probe-reliance-communications-yes-bank-loan-fraud-investigation-india-3-1772773208064.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮುಂಬೈ (ಏ.28): &lt;/strong&gt;ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ (RAAG) ವಿರುದ್ಧದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ED) ಮತ್ತೊಂದು ಬೃಹತ್ ಕಾರ್ಯಾಚರಣೆ ನಡೆಸಿದೆ. ಈ ಬಾರಿ ಸುಮಾರು 3,034 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡುವ ಮೂಲಕ ಉದ್ಯಮಿ ಅನಿಲ್ ಅಂಬಾನಿಗೆ ಭಾರಿ ಪೆಟ್ಟು ನೀಡಿದೆ. ಈ ಕ್ರಮದೊಂದಿಗೆ, ಈವರೆಗೆ ಸಮೂಹದ ಜಪ್ತಿಯಾದ ಒಟ್ಟು ಆಸ್ತಿಯ ಮೌಲ್ಯ 19,344 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.&lt;/p&gt;&lt;h2&gt;&lt;strong&gt;ಜಪ್ತಿಯಾದ ಪ್ರಮುಖ ಆಸ್ತಿಗಳು ಯಾವುವು?&lt;/strong&gt;&lt;/h2&gt;&lt;p&gt;ಪಿಎಂಎಲ್&zwnj;ಎ (PMLA) ಕಾಯ್ದೆಯ ಅಡಿಯಲ್ಲಿ ಇಡಿ ಅಧಿಕಾರಿಗಳು ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ (R-Infra) ಸಂಸ್ಥೆಗಳಿಗೆ ಸಂಬಂಧಿಸಿದ ಈ ಕೆಳಗಿನ ಬೆಲೆಬಾಳುವ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಬೈನಲ್ಲಿರುವ ಐಷಾರಾಮಿ ಫ್ಲ್ಯಾಟ್ ಮತ್ತು ಪ್ರವಾಸಿ ತಾಣ ಖಂಡಾಲದಲ್ಲಿರುವ ಬೃಹತ್ ಫಾರ್ಮ್&zwnj;ಹೌಸ್. ಅಹಮದಾಬಾದ್ ಸಮೀಪದ ಸಾನಂದ್&zwnj;ನಲ್ಲಿರುವ ದೊಡ್ಡ ವಿಸ್ತೀರ್ಣದ ಜಮೀನು. ರೈಸ್ ಇ (RiseE) ಟ್ರಸ್ಟ್ ಅಡಿಯಲ್ಲಿ ಇರಿಸಲಾಗಿದ್ದ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್&zwnj;ನ 7.71 ಕೋಟಿ ರೂಪಾಯಿ ಮೌಲ್ಯದ ಷೇರುಗಳು ವಶಪಡಿಸಿಕೊಳ್ಳಲಾಗಿದೆ.&lt;/p&gt;&lt;h2&gt;&lt;strong&gt;ತನಿಖೆಯ ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಬ್ಯಾಂಕುಗಳಿಗೆ ವಂಚನೆ ಮತ್ತು ಹಣದ ದುರುಪಯೋಗ (Diversion of Funds) ಮಾಡಿರುವ ಗಂಭೀರ ಆರೋಪ ಅನಿಲ್ ಅಂಬಾನಿ ಸಮೂಹದ ಮೇಲಿದೆ. ಬ್ಯಾಂಕುಗಳಿಂದ ಯಾವ ಉದ್ದೇಶಕ್ಕಾಗಿ ಸಾಲ ಪಡೆಯಲಾಗಿತ್ತೋ, ಆ ಉದ್ದೇಶಕ್ಕೆ ಹಣ ಬಳಸುವ ಬದಲು ಬೇರೆಡೆಗೆ ವರ್ಗಾಯಿಸಿ ಅಕ್ರಮ ಹಣ ವರ್ಗಾವಣೆ (Money Laundering) ಮಾಡಲಾಗಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ದೀರ್ಘಕಾಲದಿಂದ ಈ ಕಂಪನಿಗಳ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಟ್ಟಿದ್ದ ಇಡಿ, ಈಗ ಈ ಆಸ್ತಿಗಳನ್ನು ತಾತ್ಕಾಲಿಕವಾಗಿ (Provisionally Attached) ಜಪ್ತಿ ಮಾಡಿ ತನಿಖೆಯನ್ನು ಚುರುಕುಗೊಳಿಸಿದೆ.&lt;/p&gt;&lt;h2&gt;&lt;strong&gt;ಉದ್ಯಮ ಲೋಕದಲ್ಲಿ ಸಂಚಲನ&lt;/strong&gt;&lt;/h2&gt;&lt;p&gt;ಒಂದರ ಮೇಲೆ ಒಂದರಂತೆ ಕಾನೂನು ಸಂಕಷ್ಟಗಳಲ್ಲಿ ಸಿಲುಕುತ್ತಿರುವ ಅನಿಲ್ ಅಂಬಾನಿ, ಈ 19,000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಆಸ್ತಿ ಜಪ್ತಿ ಪ್ರಕರಣದಿಂದ ಹೇಗೆ ಹೊರಬರುತ್ತಾರೆ ಎಂಬುದು ಈಗ ಕಾರ್ಪೊರೇಟ್ ಜಗತ್ತಿನಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹೂಡಿಕೆದಾರರು ಕೂಡ ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/anil-ambani-ed-action-mumbai-flat-khandala-farmhouse-seized-money-laundering-san/articleshow-heqv3e1"/>
        </item>
        <item>
            <title><![CDATA[ಏ.29ರ ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಏರುತ್ತಾ? ಕೇಂದ್ರ ಹೇಳಿದ್ದೇನು?]]></title>
            <link>https://kannada.asianetnews.com/business/fuel-price-hike-after-elections-centre-clarifies-on-petrol-rates/articleshow-h1bfev4</link>
            <guid isPermaLink="true">https://kannada.asianetnews.com/business/fuel-price-hike-after-elections-centre-clarifies-on-petrol-rates/articleshow-h1bfev4</guid>
            <pubDate>Tue, 28 Apr 2026 18:55:14 +0530</pubDate>
            <description><![CDATA[ಏ.29ರ ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಏರುತ್ತಾ? ಕೇಂದ್ರ ಹೇಳಿದ್ದೇನು?, ಬಂಗಾಳದ 2ನೇ ಹಂತದ ಮತದಾನದ ಬಳಿಕ ಕೇಂದ್ರ ಸರ್ಕಾರ ಇಂಧನ ಬೆಲೆ ಏರಿಕೆ ಮಾಡುತ್ತೆ ಅನ್ನೋ ಮಾತು ಕೇಳಿಬರುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmprj2w7mtntgjf53at82e4x,imgname-india-cuts-excise-duty-on-petrol-diesel-amid-iran-war-crude-oil-price-surge-hormuz-crisis-fuel-price-impact-5--2--1774585449351.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.28)&lt;/strong&gt; ಪಂಜ ರಾಜ್ಯಗಳ ಚುನಾವಣೆ ನಾಳೆ (ಏ.29)ಯೊಂದಿಗೆ ಅಂತ್ಯಗೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ನಾಳೆ 2ನೇ ಹಾಗೂ ಅಂತಿಮ ಹಂತದ ಮತದಾನ ನಡೆಯಲಿದೆ. ಈ ಮೂಲಕ ಐದು ರಾಜ್ಯಗಳ ಚುನಾವಣೆ ಅಂತ್ಯಗೊಳ್ಳಲಿದೆ. ಮೇ ನಾಲ್ಕರಂದು ಫಲಿತಾಂಶ ಘೋಷಣೆಯಾಗಲಿದೆ. ಇದೀಗ ಮತದಾನದ ಮರುದಿನವೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಈ ರೀತಿಯ ಯಾವುದೇ ಬದಲಾವಣೆ, ಏರಿಕೆ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.&lt;/p&gt;&lt;h2&gt;ಪೆಟ್ರೋಲ್ ಡೀಸೆಲ್ ಬೆಲೆ&lt;/h2&gt;&lt;p&gt;ಪಂಚ ರಾಜ್ಯಗಳ ಚುನಾವಣೆ ಕಾರಣ ಮದ್ಯಪ್ರಾಚ್ಯ ಯುದ್ಧದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದರೂ ಭಾರತದಲ್ಲಿ ವ್ಯತ್ಯಾಸವಾಗದೆ ನೋಡಿಕೊಳ್ಳಲಾಗಿತ್ತು. ಆದರೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಏರಿಕೆಯಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ ಯಾರು ಆತಂಕ ಪಡುವ ಅಗತ್ಯವಿಲ್ಲ. ಆತುರಕ್ಕೆ ಬಿದ್ದು ಇಂಧನ ಖರೀದಿಸಬೇಕಾದ ಅನಿವಾರ್ಯತೆ ಇಲ್ಲ. ಕಾರಣ ಕೇಂದ್ರ ಸರ್ಕಾರದ ಮುಂದೆ ಬೆಲೆ ಏರಿಕೆಯ ಯಾವುದೇ ಪ್ರಸ್ತಾವನೆ, ನಿರ್ಧಾರಗಳಿಲ್ಲ ಎಂದು ಪೆಟ್ರೋಲಿಯಂ ಗ್ಯಾಸ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತ ಶರ್ಮಾ ಹೇಳಿದ್ದಾರೆ.&lt;/p&gt;&lt;h2&gt;ಆತಂಕ ಪಡುವ ಅಗತ್ಯವಿಲ್ಲ&lt;/h2&gt;&lt;p&gt;ಊಹಾಪೋಹಗಳಿಗೆ ಕಿವಿಗೊಡಬೇಡಿ. ಕೇಂದ್ರ ಸರ್ಕಾರ ಯಾವುದೇ ರೀತಿಯ ಬೆಲೆ ಏರಿಕೆ ಮಾಡುತ್ತಿಲ್ಲ. ಆತಂಕಕ್ಕೆ ಒಳಗಾಗಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿ ಶೇಖರಣೆ ಮಾಡಿಕೊಳ್ಳುವ ಅಗತ್ಯವಿಲ್ಲ. ಭಾರತದಲ್ಲಿ ಪೆಟ್ರೋಲ್, ಡೀಸೆಲ್, ಎಲ್&zwnj;ಪಿಜಿ ಗ್ಯಾಸ್ ಪೂರ್ಣ ಪ್ರಮಾಣದಲ್ಲಿ ಸರಬರಾಜು ಆಗುತ್ತಿದೆ. ಯಾವುದೇ ವ್ಯತ್ಯಯವಿಲ್ಲ. ಯುದ್ಧ ಕಾರಣದಿಂದ ಕೆಲ ದಿನಗಳ ಕಾಲ ವ್ಯತ್ಯಾಸಗಳಾಗಿತ್ತು. ಸದ್ಯ ಎಲ್ಲವೂ ಸಾಮಾನ್ಯವಾಗಿದೆ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ.&lt;/p&gt;&lt;p&gt;ಭಾರತದ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಮೇಲೆ 20 ರೂಪಾಯಿ ನಷ್ಟವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ವೇಳೆ ಭಾರತದಲ್ಲಿ ಯಾವುದೇ ಏರಿಕೆ ಮಾಡದೇ ಇಂಧನ ನೀಡಲಾಗಿತ್ತು. ಹೀಗಾಗಿ 2400 ಕೋಟಿ ರೂಪಾಯಿ ನಷ್ಟವಾಗಿದೆ. ಸದ್ಯ ಕೆಲ ಮಾರ್ಪಡು ಮಾಡಲಾಗಿದೆ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[business]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/business/fuel-price-hike-after-elections-centre-clarifies-on-petrol-rates/articleshow-h1bfev4"/>
        </item>
        <item>
            <title><![CDATA[ಮಮ್ಮುಟ್ಟಿ ಯೂಟ್ಯೂಬರ್, ಹಾಗಿದ್ರೆ ಮೋಹನ್‌ಲಾಲ್ ಪಾತ್ರವೇನು? ವೈರಲ್ ಆಯ್ತು ಸೆನ್ಸಾರ್ ಸರ್ಟಿಫಿಕೇಟ್!]]></title>
            <link>https://kannada.asianetnews.com/entertainment/patriot-movie-story-leak-mammootty-mohanlal-censor-details-gvd/articleshow-85iz8yx</link>
            <guid isPermaLink="true">https://kannada.asianetnews.com/entertainment/patriot-movie-story-leak-mammootty-mohanlal-censor-details-gvd/articleshow-85iz8yx</guid>
            <pubDate>Tue, 28 Apr 2026 18:47:51 +0530</pubDate>
            <description><![CDATA[18 ವರ್ಷಗಳ ಬಳಿಕ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ನಟಿಸುತ್ತಿರುವ 'ಪೇಟ್ರಿಯಟ್' ಚಿತ್ರದ ಕಥೆಯ ಬಗ್ಗೆ ಕುತೂಹಲಕಾರಿ ಮಾಹಿತಿ ಲೀಕ್ ಆಗಿದೆ. ಸೆನ್ಸಾರ್ ಸರ್ಟಿಫಿಕೇಟ್‌ನಿಂದ ಚಿತ್ರದ ಕಥಾಸಾರಾಂಶ ಹೊರಬಿದ್ದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpx2jy6ppycgytptnq58r6dd,imgname-fotojet---2026-04-23t170243.474-1776944773334.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ 'ಪೇಟ್ರಿಯಟ್'. ಇದಕ್ಕೆ ಮುಖ್ಯ ಕಾರಣ, ಮಲಯಾಳಂನ ಇಬ್ಬರು ದಿಗ್ಗಜ ನಟರಾದ ಮಮ್ಮುಟ್ಟಿ ಮತ್ತು ಮೋಹನ್&zwnj;ಲಾಲ್ ಬರೋಬ್ಬರಿ 18 ವರ್ಷಗಳ ನಂತರ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು. ಮೇ 1 ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದ್ದು, ಇಂದಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಶುರುವಾಗಿದೆ.&lt;/p&gt;&lt;p&gt;ಮಮ್ಮುಟ್ಟಿ, ಮೋಹನ್&zwnj;ಲಾಲ್ ಜೊತೆಗೆ ಫಹದ್ ಫಾಸಿಲ್ ಮತ್ತು ನಯನತಾರಾ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಇಷ್ಟು ದಿನ ಚಿತ್ರದ ಪಾತ್ರಗಳ ಹೆಸರು ಬಿಟ್ಟರೆ, ಕಥೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಈಗ, ಚಿತ್ರದ ಕಥೆಯ ಮೂಲ ಎಳೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್&zwnj;ನಲ್ಲಿರುವ ಕಥಾಸಾರಾಂಶವೇ ಈಗ ಸಿನಿಪ್ರಿಯರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ.&lt;/p&gt;&lt;h2&gt;&lt;strong&gt;ಯೂಟ್ಯೂಬರ್ ಪಾತ್ರದಲ್ಲಿ ಮಮ್ಮುಟ್ಟಿ&lt;/strong&gt;&lt;/h2&gt;&lt;p&gt;ಈ ಮಾಹಿತಿ ಪ್ರಕಾರ, ಮಮ್ಮುಟ್ಟಿ ಅವರು ಡಾ. ಡೇನಿಯಲ್ ಜೇಮ್ಸ್ ಎಂಬ ಹೆಸರಾಂತ ಮಲಯಾಳಿ ಯೂಟ್ಯೂಬರ್ ಪಾತ್ರದಲ್ಲಿ ನಟಿಸಿದ್ದಾರೆ. ಕೇರಳದ ಭ್ರಷ್ಟ ರಾಜಕಾರಣಿ ಜೆ.ಪಿ. ಸುಂದರಂ ಅವರ ಬಣ್ಣವನ್ನು ಬಯಲು ಮಾಡಲು ಡೇನಿಯಲ್ ಪ್ರಯತ್ನಿಸುತ್ತಾರೆ. ಆದರೆ, ಇದಕ್ಕೆ ಪ್ರತೀಕಾರವಾಗಿ ಜೆ.ಪಿ. ಸುಂದರಂ, ಡೇನಿಯಲ್ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರನ್ನು ಸಿಕ್ಕಿಹಾಕಿಸುತ್ತಾನೆ. ತನ್ನ ಮೇಲಿನ ಆರೋಪಗಳಿಂದ ಹೊರಬಂದು, ತಾನು ನಿರಪರಾಧಿ ಎಂದು ಸಾಬೀತುಪಡಿಸಲು ಡೇನಿಯಲ್ ಜೇಮ್ಸ್ ನಡೆಸುವ ಹೋರಾಟವೇ ಈ ಚಿತ್ರದ ಕಥಾವಸ್ತು ಎಂದು ಸೆನ್ಸಾರ್ ಸರ್ಟಿಫಿಕೇಟ್ ಹೇಳುತ್ತದೆ.&lt;/p&gt;&lt;p&gt;ಈ ಚಿತ್ರದ ಒಟ್ಟು ಅವಧಿ ಮೂರು ಗಂಟೆಗಳಾಗಿದ್ದು, U/A 16+ ಪ್ರಮಾಣಪತ್ರವನ್ನು ಪಡೆದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ 'ಅರಿಯಿಪ್ಪು' ಚಿತ್ರದ ನಂತರ ಮಹೇಶ್ ನಾರಾಯಣನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಂಟೋ ಜೋಸೆಫ್ ಫಿಲ್ಮ್ ಕಂಪನಿ ಮತ್ತು ಕಿಚ್ಚಪ್ಪು ಫಿಲ್ಮ್ಸ್ ಬ್ಯಾನರ್&zwnj;ಗಳ ಅಡಿಯಲ್ಲಿ ಆಂಟೋ ಜೋಸೆಫ್ ಮತ್ತು ಕೆ.ಜಿ. ಅನಿಲ್&zwnj;ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.&lt;/p&gt;&lt;p&gt;ರೇವತಿ, ರಾಜೀವ್ ಮೆನನ್, ಜಿನು ಜೋಸೆಫ್, ಡ್ಯಾನಿಶ್ ಹುಸೇನ್, ಶಹೀನ್ ಸಿದ್ದಿಕ್, ಸನಲ್ ಅಮನ್, ದರ್ಶನಾ ರಾಜೇಂದ್ರನ್, ಸೆರೀನ್ ಶಿಹಾಬ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾನುಷ್ ನಂದನ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತ, ಮಹೇಶ್ ನಾರಾಯಣನ್ ಮತ್ತು ರಾಹುಲ್ ರಾಧಾಕೃಷ್ಣನ್ ಸಂಕಲನ, ಶಾಜಿ ಮತ್ತು ಜಿಬಿನ್ ಜೇಕಬ್ ಪ್ರೊಡಕ್ಷನ್ ಡಿಸೈನ್, ವಿಷ್ಣು ಗೋವಿಂದ್ ಆಡಿಯೋಗ್ರಫಿ ಮತ್ತು ಡಿಕ್ಸನ್ ಪೊಡುತ್ತಾಸ್ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/patriot-movie-story-leak-mammootty-mohanlal-censor-details-gvd/articleshow-85iz8yx"/>
        </item>
        <item>
            <title><![CDATA[ಮೀನಿನ ಸಾರನ್ನು ಎಷ್ಟು ದಿನದವರೆಗೆ ತಿನ್ಬೋದು? ಹೆಚ್ಚು ದಿನಗಳ ಕಾಲ ಕೆಡದಂತಿರಲು ಈ ಟಿಪ್ಸ್ ಪಾಲಿಸಿ!]]></title>
            <link>https://kannada.asianetnews.com/gallery/food/how-long-does-fish-curry-last-in-the-fridge-essential-storage-and-safety-tips-lxyiuoz</link>
            <guid isPermaLink="true">https://kannada.asianetnews.com/gallery/food/how-long-does-fish-curry-last-in-the-fridge-essential-storage-and-safety-tips-lxyiuoz</guid>
            <pubDate>Tue, 28 Apr 2026 18:38:57 +0530</pubDate>
            <description><![CDATA[Storing fish curry in fridge: ಮೀನಿನ ಸಾರು ಸಾಮಾನ್ಯವಾಗಿ ಅಡುಗೆ ಮಾಡಿದ ಮರುದಿನ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಆದರೆ, ಫ್ರಿಡ್ಜ್‌ನಲ್ಲಿಟ್ಟ ಮೀನಿನ ಸಾರನ್ನು ಎಷ್ಟು ದಿನಗಳವರೆಗೆ ತಿನ್ನಬಹುದು? ಹೇಗೆ ಸಂಗ್ರಹಿಸಿಡಬೇಕು? ಎಂಬ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.]]></description>
            <media:content url="https://static.asianetnews.com/images/w-1280,h-720,format-jpg,imgid-01g6mt9zkbtazjd9052rpfk4he,imgname-maxresdefault-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;Storing fish curry in fridge: ಮೀನಿನ ಸಾರು ಸಾಮಾನ್ಯವಾಗಿ ಅಡುಗೆ ಮಾಡಿದ ಮರುದಿನ ತಿಂದರೆ ಹೆಚ್ಚು ರುಚಿಯಾಗಿರುತ್ತದೆ. ಆದರೆ, ಫ್ರಿಡ್ಜ್&zwnj;ನಲ್ಲಿಟ್ಟ ಮೀನಿನ ಸಾರನ್ನು ಎಷ್ಟು ದಿನಗಳವರೆಗೆ ತಿನ್ನಬಹುದು? ಹೇಗೆ ಸಂಗ್ರಹಿಸಿಡಬೇಕು? ಎಂಬ ವಿಷಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು.&amp;nbsp;&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಎಲ್ಲಾ ಬಗೆಯ ಖಾದ್ಯಗಳಿಗಿಂತ ಮೀನಿನ ಸಾರಿಗೆ ಒಂದು ವಿಶೇಷತೆಯಿದೆ. ಮಾಡಿದ ತಕ್ಷಣ ತಿನ್ನುವುದಕ್ಕಿಂತ, ಒಂದು ದಿನ ಇಟ್ಟು ತಿಂದರೆ ಆ ರುಚಿಯೇ ಬೇರೆ. ಅದಕ್ಕಾಗಿಯೇ ಅನೇಕರು ಹೆಚ್ಚು ಪ್ರಮಾಣದಲ್ಲಿ ಸಾರು ಮಾಡಿ ಫ್ರಿಡ್ಜ್&zwnj;ನಲ್ಲಿ ಎತ್ತಿಡುತ್ತಾರೆ. ಆದರೆ, ಅದು ಎಷ್ಟು ದಿನಗಳವರೆಗೆ ಸುರಕ್ಷಿತವಾಗಿರುತ್ತದೆ ಎಂಬುದು ತಿಳಿಯುವುದು ಮುಖ್ಯ. ಮೀನಿನ ಸಾರನ್ನು (Fish Gravy) ಫ್ರಿಡ್ಜ್&zwnj;ನಲ್ಲಿ ಎಷ್ಟು ದಿನ ಇಡಬಹುದು ಮತ್ತು ತಿನ್ನುವಾಗ ತೆಗೆದುಕೊಳ್ಳಬೇಕಾದ ಜಾಗ್ರತೆಗಳೇನು ಎಂಬ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ಸಾಮಾನ್ಯವಾಗಿ ಮೀನಿನ ಸಾರನ್ನು ಫ್ರಿಡ್ಜ್&zwnj;ನಲ್ಲಿ 3-4 ದಿನಗಳವರೆಗೆ ಸಂಗ್ರಹಿಸಿಡಬಹುದು. ಅದಕ್ಕಿಂತ ಹೆಚ್ಚು ದಿನಗಳಾದರೆ ಅದರಲ್ಲಿರುವ ಪ್ರೋಟೀನ್&zwnj;ಗಳು ವಿಘಟನೆಯಾಗಿ ಆರೋಗ್ಯಕ್ಕೆ ಹಾನಿ ಉಂಟುಮಾಡಬಹುದು. ಆದ್ದರಿಂದ 4 ದಿನ ಕಳೆದ ನಂತರ ಆ ಸಾರನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ವೇಳೆ ನೀವು ಡೀಪ್ ಫ್ರೀಜರ್&zwnj;ನಲ್ಲಿ ಇಟ್ಟರೆ ಒಂದು ವಾರದವರೆಗೆ ಇರುತ್ತದೆ, ಆದರೆ ಅದರ ರುಚಿ ಕಡಿಮೆಯಾಗುತ್ತದೆ. ಮೀನಿನ ಸಾರಿನಲ್ಲಿ ಹುಣಸೆಹಣ್ಣನ್ನು ಹೆಚ್ಚಾಗಿ ಬಳಸುತ್ತೇವೆ. ಇದು ನೈಸರ್ಗಿಕ ಸಂರಕ್ಷಕದಂತೆ (Preservative) ಕೆಲಸ ಮಾಡಿ ಸಾರು ಬೇಗನೆ ಕೆಡದಂತೆ ನೋಡಿಕೊಳ್ಳುತ್ತದೆ.&lt;/p&gt;&lt;img&gt;&lt;p&gt;ಸಾರನ್ನು ಬಿಸಿಬಿಸಿಯಾಗಿರುವಾಗಲೇ ಫ್ರಿಡ್ಜ್&zwnj;ನಲ್ಲಿ ಇಡಬೇಡಿ. ಇದು ಫ್ರಿಡ್ಜ್ ಒಳಗಿನ ತೇವಾಂಶವನ್ನು ಹೆಚ್ಚಿಸಿ ಇತರ ಪದಾರ್ಥಗಳು ಕೆಡುವಂತೆ ಮಾಡುತ್ತದೆ. ಒಂದು ವೇಳೆ ನೀವು ಮೀನಿನ ಸಾರನ್ನು ಫ್ರಿಡ್ಜ್&zwnj;ನಲ್ಲಿ ಇಡುವುದಾದರೆ, ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್&zwnj;ನ ಏರ್-ಟೈಟ್ ಡಬ್ಬಗಳನ್ನು ಬಳಸಿ. ಇದರಿಂದ ಮೀನಿನ ವಾಸನೆ ಫ್ರಿಡ್ಜ್&zwnj;ನಲ್ಲಿರುವ ಇತರ ಪದಾರ್ಥಗಳಿಗೆ ಹರಡುವುದಿಲ್ಲ. ಫ್ರಿಡ್ಜ್&zwnj;ನಿಂದ ತೆಗೆದ ಸಾರನ್ನು ನೇರವಾಗಿ ಅನ್ನಕ್ಕೆ ಹಾಕಿಕೊಳ್ಳಬೇಡಿ. ನಿಮಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೇರೆ ಪಾತ್ರೆಗೆ ತೆಗೆದುಕೊಂಡು ಬಿಸಿ ಮಾಡಿ. ಇಡೀ ಸಾರನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ ಮತ್ತು ಮೀನಿನ ತುಂಡುಗಳು ಪುಡಿಯಾಗುತ್ತವೆ.&lt;/p&gt;&lt;img&gt;&lt;p&gt;ಒಂದು ವೇಳೆ ಸಾರಿನ ಮೇಲೆ ಬಿಳಿ ಪದರದಂತೆ ಕಂಡುಬಂದರೂ, ಸಾರು ಜಿಗುಟು ಎನಿಸಿದರೂ ಅಥವಾ ವಿಚಿತ್ರ ವಾಸನೆ ಬರುತ್ತಿದ್ದರೆ ಅದು ಕೆಟ್ಟಿದೆ ಎಂದರ್ಥ. ಇಂತಹ ಆಹಾರ ಸೇವಿಸಿದರೆ ವಾಂತಿ, ಭೇದಿಯಂತಹ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಮೀನಿನ ಸಾರು ರುಚಿಯಾಗಿರಲು ಸಂಗ್ರಹಿಸಿಡುವುದು ಒಳ್ಳೆಯದೇ, ಆದರೆ ಅದು ಆರೋಗ್ಯದ ಮಿತಿಯೊಳಗಿರಲಿ. ಸಾಧ್ಯವಾದಷ್ಟು 2-3 ದಿನಗಳಲ್ಲೇ ಖಾಲಿ ಮಾಡುವುದು ಉತ್ತಮ.&amp;nbsp;&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/food/how-long-does-fish-curry-last-in-the-fridge-essential-storage-and-safety-tips-lxyiuoz"/>
        </item>
        <item>
            <title><![CDATA[ಡೇಟ್ ಆಫ್ ಬರ್ತ್ ಸೇರಿ 5 ಕೆಲಸಗಳಿಗೆ ಆಧಾರ್ ಕಾರ್ಡ್ ದಾಖಲೆ ಆಗಲ್ಲ, UIDAI ಹೊಸ ಆದೇಶ]]></title>
            <link>https://kannada.asianetnews.com/gallery/india-news/aadhaar-not-valid-for-5-services-including-date-of-birth-says-uidai-gl18t3c</link>
            <guid isPermaLink="true">https://kannada.asianetnews.com/gallery/india-news/aadhaar-not-valid-for-5-services-including-date-of-birth-says-uidai-gl18t3c</guid>
            <pubDate>Tue, 28 Apr 2026 18:32:38 +0530</pubDate>
            <description><![CDATA[ಡೇಟ್ ಆಫ್ ಬರ್ತ್ ಸೇರಿ 5 ಕೆಲಸಗಳಿಗೆ ಆಧಾರ್ ಕಾರ್ಡ್ ದಾಖಲೆ ಆಗಲ್ಲ, UIDAI ಹೊಸ ಆದೇಶ, ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಿಮ್ ಕಾರ್ಡ್ ಪಡೆಯುವವರೆಗೆ ಎಲ್ಲದಕ್ಕೂ ಆಧಾರ್ ಬೇಕೇಬೇಕು. ಆದರೆ ಇದೀಗ ಹೊಸ ಆದೇಶದಲ್ಲಿ ಕೆಲ ಬದಲಾವಣೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jy0yw77xxxwab3744agzz6j7,imgname-aadhaar-1750231555324.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಡೇಟ್ ಆಫ್ ಬರ್ತ್ ಸೇರಿ 5 ಕೆಲಸಗಳಿಗೆ ಆಧಾರ್ ಕಾರ್ಡ್ ದಾಖಲೆ ಆಗಲ್ಲ, UIDAI ಹೊಸ ಆದೇಶ, ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸಿಮ್ ಕಾರ್ಡ್ ಪಡೆಯುವವರೆಗೆ ಎಲ್ಲದಕ್ಕೂ ಆಧಾರ್ ಬೇಕೇಬೇಕು. ಆದರೆ ಇದೀಗ ಹೊಸ ಆದೇಶದಲ್ಲಿ ಕೆಲ ಬದಲಾವಣೆಯಾಗಿದೆ.&lt;/strong&gt;&lt;/p&gt;&lt;img&gt;&lt;p&gt;UIDAI ಸ್ಪಷ್ಟಪಡಿಸಿರುವ ಪ್ರಕಾರ, ಆಧಾರ್ ಕಾರ್ಡ್ ನಿಮ್ಮ ಗುರುತಿನ ಪುರಾವೆಯೇ (ID Proof) ಹೊರತು, ನಿಮ್ಮ ವಯಸ್ಸಿನ ಪುರಾವೆ (Birth Proof) ಅಲ್ಲ. ನಿಮ್ಮ ಕಾರ್ಡ್&zwnj;ನಲ್ಲಿ ಜನ್ಮ ದಿನಾಂಕ ಮುದ್ರಿತವಾಗಿದ್ದರೂ, ಕಾನೂನುಬದ್ಧವಾಗಿ ಅದನ್ನು ಜನ್ಮ ಪ್ರಮಾಣಪತ್ರಕ್ಕೆ ಸಮಾನವೆಂದು ಪರಿಗಣಿಸಲಾಗುವುದಿಲ್ಲ. ವ್ಯಕ್ತಿಯ ಗುರುತನ್ನು (ಬಯೋಮೆಟ್ರಿಕ್ಸ್ ಮೂಲಕ) ಸಾಬೀತುಪಡಿಸುವುದೇ ಆಧಾರ್&zwnj;ನ ಮುಖ್ಯ ಉದ್ದೇಶವೇ ಹೊರತು, ವಯಸ್ಸನ್ನು ದೃಢೀಕರಿಸುವುದಲ್ಲ ಎಂದು UIDAI ಹೇಳಿದೆ.&lt;/p&gt;&lt;img&gt;&lt;p&gt;ಆಧಾರ್ ಕಾರ್ಡ್ ಮಾಡಿಸುವಾಗ, ಅನೇಕರು ತಮ್ಮ ಹುಟ್ಟಿದ ವರ್ಷವನ್ನು ಮಾತ್ರ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ, ಸಿಸ್ಟಮ್ ತಾನಾಗಿಯೇ ಆ ವರ್ಷದ ಜನವರಿ 1 ಅನ್ನು ಜನ್ಮ ದಿನಾಂಕವೆಂದು ದಾಖಲಿಸಿಕೊಳ್ಳುತ್ತದೆ. ಈ ಮಾಹಿತಿ ಹಲವು ಬಾರಿ ಅಂದಾಜಿನ ಮೇಲೆ ನೀಡಿರುವುದರಿಂದ, ಅದನ್ನು 100% ನಿಖರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ, ಸರಿಯಾದ ವಯಸ್ಸಿನ ಮಾಹಿತಿ ಅಗತ್ಯವಿರುವ ಸರ್ಕಾರಿ ಕೆಲಸ, ಪಿಂಚಣಿ ಅಥವಾ ಇತರ ಯೋಜನೆಗಳಲ್ಲಿ ಇನ್ನು ಮುಂದೆ ಆಧಾರ್ ಅನ್ನು ವಯಸ್ಸಿನ ಪುರಾವೆಯಾಗಿ ಬಳಸಲು ಸಾಧ್ಯವಾಗುವುದಿಲ್ಲ.&lt;/p&gt;&lt;img&gt;&lt;ol&gt; &lt;li&gt;ವಯಸ್ಸಿನ ಆಧಾರದ ಮೇಲೆ ಹಣ ಸಿಗುವ ಪಿಂಚಣಿ ಮತ್ತು ಸರ್ಕಾರಿ ಯೋಜನೆಗಳು.&lt;/li&gt; &lt;li&gt;ಹೊಸ ಉದ್ಯೋಗಕ್ಕೆ ಸೇರುವಾಗ ಕಂಪನಿಗಳಲ್ಲಿ ಜನ್ಮ ದಿನಾಂಕದ ಪರಿಶೀಲನೆಗೆ.&lt;/li&gt; &lt;li&gt;ಪಾಸ್&zwnj;ಪೋರ್ಟ್ ಮಾಡಿಸಲು ಇನ್ನುಮುಂದೆ ಶಾಲಾ ಪ್ರಮಾಣಪತ್ರ ಅಥವಾ ಜನನ ಪ್ರಮಾಣಪತ್ರ ನೀಡುವುದು ಕಡ್ಡಾಯ.&lt;/li&gt; &lt;li&gt;ವಿಮಾ (Insurance) ಪಾಲಿಸಿಯ ಪ್ರೀಮಿಯಂ ನಿರ್ಧರಿಸಲು ವಯಸ್ಸಿನ ದೃಢೀಕೃತ ಪುರಾವೆ ಬೇಕಾಗುತ್ತದೆ.&lt;/li&gt; &lt;li&gt;ಯಾವುದೇ ಕೋರ್ಟ್-ಕಚೇರಿ ಅಥವಾ ಉಯಿಲು ಪತ್ರದಂತಹ ಕಾನೂನು ದಾಖಲೆಗಳಿಗಾಗಿ.&lt;/li&gt;&lt;/ol&gt;&lt;img&gt;&lt;ul&gt; &lt;li&gt;ಜನನ ಪ್ರಮಾಣಪತ್ರ (Birth Certificate)&lt;/li&gt; &lt;li&gt;ಹೈಸ್ಕೂಲ್ ಅಂಕಪಟ್ಟಿ ಅಥವಾ ಪ್ರಮಾಣಪತ್ರ&lt;/li&gt; &lt;li&gt;ಪಾಸ್&zwnj;ಪೋರ್ಟ್&lt;/li&gt; &lt;li&gt;ಪ್ಯಾನ್ ಕಾರ್ಡ್&lt;/li&gt;&lt;/ul&gt;&lt;img&gt;&lt;p&gt;ನೀವು ಎಲ್ಲಿಯಾದರೂ ಫಾರ್ಮ್ ಭರ್ತಿ ಮಾಡುವಾಗ, ಆಧಾರ್ ಕಾರ್ಡನ್ನು ನಿಮ್ಮ ಫೋಟೋ ಮತ್ತು ವಿಳಾಸದ ಗುರುತಿಗಾಗಿ ಮಾತ್ರ ಬಳಸಿ. ಅಲ್ಲಿ ಜನ್ಮ ದಿನಾಂಕ (DOB) ನಮೂದಿಸಲು ಕೇಳಿದರೆ, ನಿಮ್ಮ 10ನೇ ತರಗತಿ ಅಂಕಪಟ್ಟಿ ಅಥವಾ ಜನನ ಪ್ರಮಾಣಪತ್ರವನ್ನು ಜೊತೆಯಲ್ಲಿಟ್ಟುಕೊಳ್ಳಿ. ಇದರಿಂದ ನಿಮ್ಮ ಕೆಲಸ ಒಂದೇ ಬಾರಿಗೆ ಮುಗಿಯುತ್ತದೆ ಮತ್ತು ಮತ್ತೆ ಮತ್ತೆ ಅಲೆಯುವುದು ತಪ್ಪುತ್ತದೆ.&lt;/p&gt;&lt;p&gt;ಆಧಾರ್ ಬಗ್ಗೆ ಉಪಯುಕ್ತ ಮಾಹಿತಿ&lt;/p&gt;]]></content:encoded>
            <category><![CDATA[india-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/india-news/aadhaar-not-valid-for-5-services-including-date-of-birth-says-uidai-gl18t3c"/>
        </item>
        <item>
            <title><![CDATA[ಹಿಂದಿ ಬರಲ್ಲ, ಇವ್ರು ಸೀತೆನಾ? 'ರಾಮಾಯಣ' ನಟಿ ಸಾಯಿ ಪಲ್ಲವಿಗೆ ಸೋಷಿಯಲ್ ಮೀಡಿಯಾದಲ್ಲಿ ತರಾಟೆ]]></title>
            <link>https://kannada.asianetnews.com/entertainment/sai-pallavi-faces-backlash-for-ramayana-role-over-hindi-skills-gvd/articleshow-idyz5fz</link>
            <guid isPermaLink="true">https://kannada.asianetnews.com/entertainment/sai-pallavi-faces-backlash-for-ramayana-role-over-hindi-skills-gvd/articleshow-idyz5fz</guid>
            <pubDate>Tue, 28 Apr 2026 18:32:00 +0530</pubDate>
            <description><![CDATA[ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಭಾರತದ ಅತಿದೊಡ್ಡ ಬಜೆಟ್ ಚಿತ್ರವಾಗಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಆದರೆ, ಸಾಯಿ ಪಲ್ಲವಿ ಆಯ್ಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa26xmbvqb84f29gchgsncw,imgname-v-vcj-1777380587147.png" type="image/jpeg" height="390" width="690"/>
            <content:encoded><![CDATA[&lt;p&gt;ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಭಾರತದ ಅತಿದೊಡ್ಡ ಬಜೆಟ್ ಚಿತ್ರವಾಗಲಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಕೆಜಿಎಫ್ ಖ್ಯಾತಿಯ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಆದರೆ, ಸಾಯಿ ಪಲ್ಲವಿ ಆಯ್ಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ನಿತೀಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ, ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್&zwnj;ನ ಚಿತ್ರ ಅನ್ನೋ ಹೆಗ್ಗಳಿಕೆಯೊಂದಿಗೆ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;p&gt;ನಮಿತಾ ಮಲ್ಹೋತ್ರಾ ನಿರ್ಮಾಣದ ಈ ಸಿನಿಮಾ ಈ ವರ್ಷದ ದೀಪಾವಳಿಗೆ ತೆರೆಗೆ ಬರುವ ಸಾಧ್ಯತೆ ಇದೆ. ಇನ್ನು, ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ, ರವಿ ದುಬೆ ಲಕ್ಷ್ಮಣನಾಗಿ ಮತ್ತು ಸನ್ನಿ ಡಿಯೋಲ್ ಹನುಮಂತನಾಗಿ ನಟಿಸುತ್ತಿದ್ದಾರೆ. ಆದರೆ, ಈಗ ಈ ಚಿತ್ರದ ನಾಯಕಿ ಸಾಯಿ ಪಲ್ಲವಿ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಸೈಬರ್ ದಾಳಿ ಶುರುವಾಗಿದೆ. &quot;ಹಿಂದಿ ಸರಿಯಾಗಿ ಮಾತಾಡೋಕೆ ಬರದ ಸಾಯಿ ಪಲ್ಲವಿಯನ್ನ ಯಾಕೆ ಸೀತೆಯ ಪಾತ್ರಕ್ಕೆ ನಿತೀಶ್ ತಿವಾರಿ ಆಯ್ಕೆ ಮಾಡಿದ್ರು?&quot; ಅಂತ ನೆಟ್ಟಿಗರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.&lt;/p&gt;&lt;h2&gt;&lt;strong&gt;ನಟನೆಗೆ ಭಾಷೆ ಮುಖ್ಯವಲ್ಲ&lt;/strong&gt;&lt;/h2&gt;&lt;p&gt;ಈ ಹಿಂದೆ, ರಾಮನ ಪಾತ್ರಧಾರಿ ರಣಬೀರ್ ಕಪೂರ್ ಆಯ್ಕೆ ಬಗ್ಗೆಯೂ ವಿವಾದ ಎದ್ದಿತ್ತು. &quot;ಮಾಂಸಾಹಾರ ಸೇವಿಸುವ ರಣಬೀರ್&zwnj;ನನ್ನು ಯಾಕೆ ರಾಮನ ಪಾತ್ರಕ್ಕೆ ಹಾಕಿಕೊಂಡಿದ್ದೀರಿ?&quot; ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಯಿ ಪಲ್ಲವಿ ಪರವಾಗಿಯೂ ಅನೇಕರು ಧ್ವನಿ ಎತ್ತಿದ್ದಾರೆ. &quot;ನಟನೆಗೆ ಭಾಷೆ ಮುಖ್ಯವಲ್ಲ&quot; ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, &quot;ಮೂಲ ರಾಮಾಯಣ ಇದ್ದಿದ್ದು ಸಂಸ್ಕೃತದಲ್ಲಿ ಅಲ್ವಾ? ಹಾಗಾಗಿ ಇಲ್ಲಿ ಹಿಂದಿ ಭಾಷೆಯದ್ದೇನು ಸಮಸ್ಯೆ?&quot; ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.&amp;nbsp;&lt;/p&gt;&lt;p&gt;What was Nitesh tiwari even thinking while casting Sai pallavi for Sita maa&rsquo;s role who can&rsquo;t even speak proper hindi? Horrendous casting man pic.twitter.com/tKdjgdh4Kq&lt;/p&gt;&lt;p&gt;&mdash; ` (@8eenpoint5) April 27, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಜೊತೆಗೆ ವಿಶ್ವಪ್ರಸಿದ್ಧ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಕೂಡ ಕೈಜೋಡಿಸಿರುವುದು ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಶ್ರೀಧರ್ ರಾಘವನ್ ಮತ್ತು ನಿತೀಶ್ ತಿವಾರಿ ಸೇರಿ ಚಿತ್ರಕಥೆ ಬರೆದಿದ್ದಾರೆ. ವರದಿಗಳ ಪ್ರಕಾರ, ಮೊದಲ ಭಾಗ ಈ ವರ್ಷದ ದೀಪಾವಳಿಗೆ ಮತ್ತು ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸುಮಾರು 875 ಕೋಟಿ ರೂಪಾಯಿ ಬಜೆಟ್ ಅಂದಾಜಿಸಲಾಗಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/sai-pallavi-faces-backlash-for-ramayana-role-over-hindi-skills-gvd/articleshow-idyz5fz"/>
        </item>
        <item>
            <title><![CDATA[ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಓಪೆಕ್ ಒಕ್ಕೂಟದಿಂದ ಯುಎಇ ಹೊರಕ್ಕೆ: ಸೌದಿ ಅರೇಬಿಯಾಕ್ಕೆ ಭಾರಿ ಹಿನ್ನಡೆ!]]></title>
            <link>https://kannada.asianetnews.com/world-news/uae-exits-opec-plus-global-energy-crisis-saudi-arabia-oil-market-shock-san/articleshow-xr2nmae</link>
            <guid isPermaLink="true">https://kannada.asianetnews.com/world-news/uae-exits-opec-plus-global-energy-crisis-saudi-arabia-oil-market-shock-san/articleshow-xr2nmae</guid>
            <pubDate>Tue, 28 Apr 2026 18:28:36 +0530</pubDate>
            <description><![CDATA[ಯುನೈಟೆಡ್ ಅರಬ್ ಎಮಿರೇಟ್ಸ್ (UAE) 'ಓಪೆಕ್' ಮತ್ತು 'ಓಪೆಕ್ ಪ್ಲಸ್' ಒಕ್ಕೂಟದಿಂದ ಹೊರಬರುವುದಾಗಿ ಘೋಷಿಸಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮತ್ತು ಇರಾನ್ ಸಂಘರ್ಷದ ನಡುವೆ ತೆಗೆದುಕೊಂಡ ಈ ನಿರ್ಧಾರ, ಸೌದಿ ಅರೇಬಿಯಾಕ್ಕೆ ಹಿನ್ನಡೆಯಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kkp4nb203f28ds3vyc9mfz1j,imgname-whatsapp-image-2026-03-14-at-5.49.09-pm-1773490842688.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ದುಬೈ/ರಿಯಾದ್ (ಏ.28): &lt;/strong&gt;ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮನೆಮಾಡಿರುವ ಬೆನ್ನಲ್ಲೇ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತೈಲ ಉತ್ಪಾದಕ ರಾಷ್ಟ್ರಗಳ ಪ್ರಭಾವಿ ಒಕ್ಕೂಟವಾದ 'ಓಪೆಕ್' (OPEC) ಮತ್ತು 'ಓಪೆಕ್ ಪ್ಲಸ್' (OPEC+) ನಿಂದ ಹೊರಬರುವುದಾಗಿ ಘೋಷಿಸಿದೆ. ಇರಾನ್ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಈ ಸಂಕಷ್ಟದ ಸಮಯದಲ್ಲಿ ಯುಎಇ ತೆಗೆದುಕೊಂಡಿರುವ ಈ ನಿರ್ಧಾರವು ಜಾಗತಿಕ ಇಂಧನ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ.&lt;/p&gt;&lt;p&gt;ಮಂಗಳವಾರ ಅಧಿಕೃತಗೊಂಡ ಈ ನಿರ್ಧಾರವು ಓಪೆಕ್ ಒಕ್ಕೂಟದ ನಾಯಕತ್ವ ವಹಿಸಿರುವ ಸೌದಿ ಅರೇಬಿಯಾಕ್ಕೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ದಶಕಗಳಿಂದ ಓಪೆಕ್&zwnj;ನ ಅತ್ಯಂತ ವಿಶ್ವಾಸಾರ್ಹ ಸದಸ್ಯ ರಾಷ್ಟ್ರವಾಗಿದ್ದ ಯುಎಇ ಹೊರಹೋಗಿರುವುದು, ತೈಲ ಮಾರುಕಟ್ಟೆ ಮತ್ತು ಪೂರೈಕೆ ಮಾರ್ಗಗಳು ಒತ್ತಡದಲ್ಲಿರುವ ಈ ಸಮಯದಲ್ಲಿ ಒಕ್ಕೂಟದೊಳಗಿನ ಸಮನ್ವಯತೆಯನ್ನು ದುರ್ಬಲಗೊಳಿಸುವ ಅಪಾಯವನ್ನು ತಂದೊಡ್ಡಿದೆ.&lt;/p&gt;&lt;h2&gt;&lt;strong&gt;ಯುಎಇ ಇಂಧನ ಸಚಿವರ ಹೇಳಿಕೆ&lt;/strong&gt;&lt;/h2&gt;&lt;p&gt;ಯುಎಇ ಇಂಧನ ಸಚಿವ ಸುಹೈಲ್ ಅಲ್ ಮಜ್ರೂಯಿ ಈ ಬಗ್ಗೆ ಸೋಶಿಯಲ್&zwnj; ಮೀಡಿಯಾ 'X' ನಲ್ಲಿ ಮಾಹಿತಿ ನೀಡಿದ್ದು, &quot;ಓಪೆಕ್&zwnj;ನಿಂದ ಹೊರಬರುವ ಯುಎಇ ನಿರ್ಧಾರವು ಇಂಧನ ವಲಯದ ನೀತಿ ಆಧಾರಿತ ಬೆಳವಣಿಗೆಗಳಿಗೆ ಅನುಗುಣವಾಗಿದೆ ಮತ್ತು ದೀರ್ಘಕಾಲೀನ ಮಾರುಕಟ್ಟೆ ಮೂಲಭೂತ ಅಂಶಗಳೊಂದಿಗೆ ಹೊಂದಿಕೆಯಾಗುತ್ತದೆ,&quot; ಎಂದು ತಿಳಿಸಿದ್ದಾರೆ.&lt;/p&gt;&lt;p&gt;&quot;ದಶಕಗಳ ಕಾಲದ ರಚನಾತ್ಮಕ ಸಹಕಾರಕ್ಕಾಗಿ ನಾವು ಓಪೆಕ್ ಮತ್ತು ಸದಸ್ಯ ರಾಷ್ಟ್ರಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಜಾಗತಿಕ ಮಾರುಕಟ್ಟೆಯ ಸ್ಥಿರತೆಯನ್ನು ಬೆಂಬಲಿಸಲು ಮತ್ತು ಕಡಿಮೆ-ಹೊರಸೂಸುವಿಕೆಯ ಇಂಧನ ಪೂರೈಕೆಯನ್ನು ಒದಗಿಸುವ ಮೂಲಕ ಇಂಧನ ಭದ್ರತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ,&quot; ಎಂದು ಅವರು ಸೇರಿಸಿದ್ದಾರೆ.&lt;/p&gt;&lt;h2&gt;&lt;strong&gt;ಹಿನ್ನೆಲೆ ಮತ್ತು ಹಾರ್ಮುಜ್ ಜಲಸಂಧಿಯ ಭೀತಿ&lt;/strong&gt;&lt;/h2&gt;&lt;p&gt;ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ವಾರಗಳಲ್ಲಿ ಇರಾನ್ ಸಂಬಂಧಿತ ದಾಳಿಗಳು ಮತ್ತು ಬೆದರಿಕೆಗಳು ಹೆಚ್ಚಾಗಿವೆ. ಪ್ರಪಂಚದ ಐದನೇ ಒಂದು ಭಾಗದಷ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯಾಗುವ 'ಹಾರ್ಮುಜ್ ಜಲಸಂಧಿ'ಯಲ್ಲಿ ತೈಲ ಪೂರೈಕೆಗೆ ಭಾರಿ ಅಡ್ಡಿಯಾಗಿದೆ. ಈ ಭದ್ರತಾ ಬಿಕ್ಕಟ್ಟಿನ ನಡುವೆ ಯುಎಇ ತನ್ನ ಸ್ವಂತ ಹಾದಿಯನ್ನು ಹಿಡಿಯಲು ನಿರ್ಧರಿಸಿದೆ.&lt;/p&gt;&lt;h2&gt;&lt;strong&gt;ಡೊನಾಲ್ಡ್ ಟ್ರಂಪ್&zwnj;ಗೆ ರಾಜಕೀಯ ಜಯ?&lt;/strong&gt;&lt;/h2&gt;&lt;p&gt;ಓಪೆಕ್ ಒಕ್ಕೂಟವು ತೈಲ ಬೆಲೆಗಳನ್ನು ಕೃತಕವಾಗಿ ಏರಿಸುವ ಮೂಲಕ ಇಡೀ ಜಗತ್ತನ್ನು ಸುಲಿಗೆ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಪದೇ ಪದೇ ಟೀಕಿಸಿದ್ದರು. &quot;ಅಮೆರಿಕವು ಕೊಲ್ಲಿ ರಾಷ್ಟ್ರಗಳಿಗೆ ಮಿಲಿಟರಿ ರಕ್ಷಣೆ ನೀಡುತ್ತಿದೆ, ಆದರೆ ಅವರು ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನು ಶೋಷಿಸುತ್ತಿದ್ದಾರೆ,&quot; ಎಂದು ಅವರು ಆರೋಪಿಸಿದ್ದರು. ಈಗ ಯುಎಇ ಈ ಒಕ್ಕೂಟದಿಂದ ಹೊರಬಂದಿರುವುದನ್ನು ಟ್ರಂಪ್ ತಮ್ಮ ರಾಜಕೀಯ ಗೆಲುವು ಎಂದು ಬಿಂಬಿಸುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[world-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/world-news/uae-exits-opec-plus-global-energy-crisis-saudi-arabia-oil-market-shock-san/articleshow-xr2nmae"/>
        </item>
        <item>
            <title><![CDATA[ಈ ಸಂಖ್ಯೆ ಹೊಂದಿರುವ ಜನರು ಶ್ರೀಮಂತರಾಗಲು ಹುಟ್ಟಿದವರು, ಇವರೇ ನಂಬರ್ ಒನ್]]></title>
            <link>https://kannada.asianetnews.com/gallery/business/mulank-1-3-6-rich-people-numerology-lucky-number-in-kannada-suh-egfd2py</link>
            <guid isPermaLink="true">https://kannada.asianetnews.com/gallery/business/mulank-1-3-6-rich-people-numerology-lucky-number-in-kannada-suh-egfd2py</guid>
            <pubDate>Tue, 28 Apr 2026 18:26:55 +0530</pubDate>
            <description><![CDATA[ಸಾಮಾನ್ಯವಾಗಿ, ಕೆಲವರು ಹೆಚ್ಚು ಶ್ರಮವಿಲ್ಲದೆ ಶ್ರೀಮಂತರಾಗುತ್ತಾರೆ. ಅವರಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವಿದೆಯಂತೆ. ಸಂಖ್ಯಾಶಾಸ್ತ್ರದ ಪ್ರಕಾರ, ಇದು ಅವರ ಜನ್ಮ ಸಂಖ್ಯೆಯಿಂದಾಗಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kmd6keaxwafp1begn0s0e02z,imgname-these-5-zodiac-signs-have-a-chance-of-getting-a-new-job-in-the-new-year-2026-1765430088268-1774264629597.jpg" type="image/jpeg" height="390" width="690"/>
            <content:encoded><![CDATA[&lt;p&gt;ಸಾಮಾನ್ಯವಾಗಿ, ಕೆಲವರು ಹೆಚ್ಚು ಶ್ರಮವಿಲ್ಲದೆ ಶ್ರೀಮಂತರಾಗುತ್ತಾರೆ. ಅವರಿಗೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವಿದೆಯಂತೆ. ಸಂಖ್ಯಾಶಾಸ್ತ್ರದ ಪ್ರಕಾರ, ಇದು ಅವರ ಜನ್ಮ ಸಂಖ್ಯೆಯಿಂದಾಗಿ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ನಿಮ್ಮ ರಾಡಿಕ್ಸ್ ಸಂಖ್ಯೆಯನ್ನು ಕಂಡುಹಿಡಿಯಲು, ನೀವು ನಿಮ್ಮ ಜನ್ಮ ದಿನಾಂಕವನ್ನು ಸೇರಿಸಬೇಕಾಗುತ್ತದೆ. ಉದಾಹರಣೆಗೆ, ಯಾವುದೇ ತಿಂಗಳ 3, 12, 21 ಮತ್ತು 30 ನೇ ತಾರೀಖಿನಂದು ಜನಿಸಿದ ಜನರು 3 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಜನ್ಮ ದಿನಾಂಕಗಳನ್ನು ಒಟ್ಟಿಗೆ ಸೇರಿಸಿದಾಗ 3 + 0 = 3 ಸಿಗುತ್ತದೆ, ಅಂದರೆ ನಿಮ್ಮ ರಾಡಿಕ್ಸ್ ಸಂಖ್ಯೆ 3.&lt;/p&gt;&lt;img&gt;&lt;p&gt;ಸಂಖ್ಯೆ 1 - ಅದ್ಭುತ ನಾಯಕತ್ವ ಕೌಶಲ್ಯಗಳು&lt;/p&gt;&lt;p&gt;1, 10, 19 ಮತ್ತು 28 ನೇ ತಾರೀಖಿನಂದು ಜನಿಸಿದವರು 1 ನೇ ಸಂಖ್ಯೆಯನ್ನು ಹೊಂದಿರುತ್ತಾರೆ. ಸೂರ್ಯನ ಪ್ರಭಾವದಡಿಯಲ್ಲಿ, 1 ನೇ ಸಂಖ್ಯೆಯಲ್ಲಿ ಜನಿಸಿದವರು ಗಮನಾರ್ಹ ನಾಯಕತ್ವ ಕೌಶಲ್ಯ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಅವರು ವ್ಯಾಪಾರ, ರಾಜಕೀಯ ಅಥವಾ ಉದ್ಯೋಗವನ್ನು ಅನುಸರಿಸುತ್ತಿದ್ದರೂ, ಅವರು ಉನ್ನತ ಸ್ಥಾನಗಳನ್ನು ಸಾಧಿಸುತ್ತಾರೆ, ಗಣನೀಯ ಸಂಪತ್ತು ಮತ್ತು ಪ್ರತಿಷ್ಠೆಯನ್ನು ಗಳಿಸುತ್ತಾರೆ.&lt;/p&gt;&lt;img&gt;&lt;p&gt;ಸಂಖ್ಯೆ 3 - ಜ್ಞಾನದಲ್ಲಿ ಪ್ರಥಮ ಸ್ಥಾನ&lt;/p&gt;&lt;p&gt;3, 12, 21 ಮತ್ತು 30 ನೇ ತಾರೀಖಿನಂದು ಜನಿಸಿದವರು 3 ನೇ ಸಂಖ್ಯೆಯನ್ನು ಹೊಂದಿದ್ದಾರೆ. ಬುದ್ಧಿವಂತಿಕೆಯ ದೇವರು ಗುರುವಿನ ಆಶೀರ್ವಾದದಿಂದಾಗಿ, 3 ನೇ ಸಂಖ್ಯೆಯಿಂದ ಜನಿಸಿದವರು ಹೆಚ್ಚಿನ ಜ್ಞಾನ ಮತ್ತು ಅದೃಷ್ಟವಂತರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಖ್ಯಾತಿಯನ್ನು ಸಾಧಿಸುತ್ತಾರೆ ಮತ್ತು ಜೀವನದಲ್ಲಿ ಸುಲಭವಾಗಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ, ಜೊತೆಗೆ ಸಂಪತ್ತು ಮತ್ತು ಗೌರವವನ್ನು ಪಡೆಯುತ್ತಾರೆ.&lt;/p&gt;&lt;img&gt;&lt;p&gt;ಸಂಖ್ಯೆ 6 - ಐಷಾರಾಮಿ ಜೀವನ ನಡೆಸಿ&lt;/p&gt;&lt;p&gt;6, 15 ಮತ್ತು 24 ನೇ ತಾರೀಖಿನಂದು ಜನಿಸಿದ ಜನರು 6 ನೇ ಸಂಖ್ಯೆಯನ್ನು ಹೊಂದಿರುತ್ತಾರೆ. 6 ನೇ ಸಂಖ್ಯೆಯನ್ನು ಹೊಂದಿರುವವರು ಶ್ರೀಮಂತರಾಗಲು ಜನಿಸುತ್ತಾರೆ ಎಂದು ಹೇಳಲಾಗುತ್ತದೆ, ಏಕೆಂದರೆ ಅವರ ಆಡಳಿತ ಗ್ರಹವಾದ ಶುಕ್ರನು ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿ ಅಂಶವಾಗಿದೆ. ಅವರ ಪೋಷಕ ದೇವತೆ ಸಂಪತ್ತಿನ ದೇವತೆ ಲಕ್ಷ್ಮಿ ದೇವತೆ. ಆದ್ದರಿಂದ, ಈ ಜನರು ಅಪಾರ ಸಂಪತ್ತಿನ ಮಾಲೀಕರಾಗುತ್ತಾರೆ ಮತ್ತು ರಾಜಮನೆತನದ ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಈ ಶ್ರೀಮಂತ ಸಂಖ್ಯೆಗಳ ಪಟ್ಟಿಯಲ್ಲಿ ನಿಮ್ಮ ಸಂಖ್ಯೆಯೂ ಸೇರಿದೆಯೇ ಎಂದು ಪರಿಶೀಲಿಸಿ.&lt;/p&gt;]]></content:encoded>
            <category><![CDATA[business]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/mulank-1-3-6-rich-people-numerology-lucky-number-in-kannada-suh-egfd2py"/>
        </item>
        <item>
            <title><![CDATA[ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ವಿವಾದ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟನೆ]]></title>
            <link>https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</link>
            <guid isPermaLink="true">https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte</guid>
            <pubDate>Tue, 28 Apr 2026 18:26:15 +0530</pubDate>
            <description><![CDATA[ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಿಸಿಟಿವಿ ಸಮಸ್ಯೆಯು ಖಾಸಗಿ ಮಾರಾಟಗಾರರ ಆಂತರಿಕ ವಿವಾದವಾಗಿದ್ದು, ಪೊಲೀಸ್ ಭದ್ರತಾ ವ್ಯವಸ್ಥೆಯ ಭಾಗವಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಘ ಸ್ಪಷ್ಟಪಡಿಸಿದೆ. ಸಾರ್ವಜನಿಕ ಪ್ರವೇಶಕ್ಕೂ ಮುನ್ನವೇ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸಂಘವು ಖಚಿತಪಡಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kmg6swpj74zbndt7e2gewc04,imgname-gettyimages-2210880947-1774365504210.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಟಿವಿ ಕ್ಯಾಮೆರಾ ಸಮಸ್ಯೆ ಎದುರಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್&zwnj; ಸಂಘ (Karnataka State Cricket Association) ಸ್ಪಷ್ಟನೆ ನೀಡಿದೆ. ಇತ್ತೀಚೆಗೆ ಈ ವಿಷಯದ ಬಗ್ಗೆ ಕೆಲವು ವರದಿಗಳು ಮತ್ತು ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ಸಂಘವು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.&lt;/p&gt;&lt;p&gt;ಕ್ರಿಕೆಟ್&zwnj; ಅಸೋಸೊಯೇಷನ್ ಹೇಳಿಕೆಯ ಪ್ರಕಾರ, ಕ್ರೀಡಾಂಗಣದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳು ಖಾಸಗಿ ವ್ಯವಸ್ಥೆಯ ಭಾಗವಾಗಿದ್ದು, ಅವುಗಳನ್ನು ಮಾರಾಟಗಾರರು ತಮ್ಮ ಆಂತರಿಕ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಸ್ಥಾಪಿಸಿದ್ದಾರೆ. ಈ ಕ್ಯಾಮೆರಾಗಳು ಪೊಲೀಸ್ ಇಲಾಖೆಯ ಭದ್ರತಾ ಮೂಲಸೌಕರ್ಯದ ಭಾಗವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.&lt;/p&gt;&lt;h2&gt;ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ&lt;/h2&gt;&lt;p&gt;ಇನ್ನು, ಕ್ರೀಡಾಂಗಣದಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆ ಸ್ವತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಖಾಸಗಿ ಸಿಸಿಟಿವಿ ವ್ಯವಸ್ಥೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಲಾಗಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದ ತೊಂದರೆ ಮಾರಾಟಗಾರ ಮತ್ತು ನೌಕರರ ನಡುವಿನ ಆಂತರಿಕ ವಿಷಯವಾಗಿದ್ದು, ಪಾವತಿ ಸಂಬಂಧಿತ ಸಮಸ್ಯೆಯಿಂದ ಉಂಟಾಗಿದೆ ಎಂದು ಹೇಳಲಾಗಿದೆ.&lt;/p&gt;&lt;p&gt;ಸಂಬಂಧಪಟ್ಟ ಸರ್ವರ್ ಕೊಠಡಿಗಳು ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳು ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯಲ್ಲಿದ್ದವು. ಇದರಲ್ಲಿ ಪೊಲೀಸ್ ಇಲಾಖೆ ಅಥವಾ ಕೆಎಸ್&zwnj;ಸಿಎಯ ಪ್ರಮುಖ ಭದ್ರತಾ ಚೌಕಟ್ಟಿನ ಯಾವುದೇ ಪಾತ್ರವಿಲ್ಲ ಎಂದು ಸಂಘ ತಿಳಿಸಿದೆ.&lt;/p&gt;&lt;h2&gt;ಭದ್ರತಾ ವೈಫಲ್ಯ ಉಂಟಾಗಿಲ್ಲ&lt;/h2&gt;&lt;p&gt;ಮುಖ್ಯವಾಗಿ, ಕ್ರೀಡಾಂಗಣದ ದ್ವಾರಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯುವ ಮೊದಲು ಈ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹರಿಸಲಾಗಿದೆ. ಈ ಘಟನೆಯಿಂದ ಯಾವುದೇ ಭದ್ರತಾ ವೈಫಲ್ಯ ಉಂಟಾಗಿಲ್ಲ ಹಾಗೂ ಕಾರ್ಯಾಚರಣೆಯಲ್ಲಿ ಯಾವುದೇ ಅಡ್ಡಿ ಎದುರಾಗಿಲ್ಲ ಎಂದು ಕೆಎಸ್&zwnj;ಸಿಎ ಸ್ಪಷ್ಟಪಡಿಸಿದೆ.&lt;/p&gt;&lt;p&gt;ಪ್ರೇಕ್ಷಕರು, ಆಟಗಾರರು ಅಥವಾ ಅಧಿಕಾರಿಗಳ ಸುರಕ್ಷತೆಗೆ ಯಾವುದೇ ಅಪಾಯ ಉಂಟಾಗಿಲ್ಲ. ಯಾವುದೇ ವಿಧ್ವಂಸಕ ಕೃತ್ಯಗಳು ನಡೆದಿಲ್ಲ ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ ಎಂದು ಸಂಘ ತಿಳಿಸಿದೆ.&lt;/p&gt;&lt;p&gt;ಒಟ್ಟಿನಲ್ಲಿ, ಸಿಸಿಟಿವಿ ಸಮಸ್ಯೆ ಕುರಿತು ಹರಿದಾಡುತ್ತಿದ್ದ ಆತಂಕಗಳಿಗೆ ತೆರೆ ಎಳೆದಿರುವ ಕೆಎಸ್&zwnj;ಸಿಎ, ಕ್ರೀಡಾಂಗಣದ ಭದ್ರತಾ ವ್ಯವಸ್ಥೆ ಸದಾ ದೃಢವಾಗಿಯೇ ಇರುತ್ತದೆ ಎಂಬುದನ್ನು ಪುನರುಚ್ಚರಿಸಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Gowthami K</dc:creator>
            <atom:link href="https://kannada.asianetnews.com/cricket-sports/ksca-clarifies-cctv-issue-at-m-chinnaswamy-stadium-no-security-lapse-reported-gdp/articleshow-ms45gte"/>
        </item>
        <item>
            <title><![CDATA[ಇಂಧನ ಸಚಿವರ ಜಿಲ್ಲೆಯಲ್ಲೇ ಪವರ್ ಕಟ್; ಲೋಡ್ ಶೆಡ್ಡಿಂಗ್‌ಗೆ ಕಂಗೆಟ್ಟು ಮೆಸ್ಕಾಂ ವಿರುದ್ಧ ರೈತರ ರಣಕಹಳೆ!]]></title>
            <link>https://kannada.asianetnews.com/karnataka-districts/chikkamagaluru-power-crisis-farmers-protest-against-mescom-energy-minister-kj-george-sat/articleshow-5ghgvk3</link>
            <guid isPermaLink="true">https://kannada.asianetnews.com/karnataka-districts/chikkamagaluru-power-crisis-farmers-protest-against-mescom-energy-minister-kj-george-sat/articleshow-5ghgvk3</guid>
            <pubDate>Tue, 28 Apr 2026 18:17:06 +0530</pubDate>
            <description><![CDATA[ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ರೈತರು ಅಘೋಷಿತ ಲೋಡ್ ಶೆಡ್ಡಿಂಗ್‌ನಿಂದ ತತ್ತರಿಸಿದ್ದಾರೆ. ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿದ್ದು, ಹೈನುಗಾರಿಕೆಗೂ ಹೊಡೆತ ಬಿದ್ದಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ರೈತರು ಮೆಸ್ಕಾಂ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa21tc0z07nqjaghvk0hfha,imgname-chikkamagaluru-farmers-protest-1777380419968.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್&lt;/strong&gt;&lt;/p&gt;&lt;p&gt;&lt;strong&gt;ಚಿಕ್ಕಮಗಳೂರು (ಏ.28): ಕಾ&lt;/strong&gt;ಫಿನಾಡು ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗದ ರೈತರಿಗೆ ಈಗ ವಿದ್ಯುತ್ ಅಭಾವವೇ ಶಾಪವಾಗಿ ಪರಿಣಮಿಸಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡಬೇಕಾದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರೇ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಸಹ, ಇಲ್ಲಿನ ರೈತರು ಮಾತ್ರ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಅಘೋಷಿತ ಲೋಡ್ ಶೆಡ್ಡಿಂಗ್&zwnj;ನಿಂದಾಗಿ ಕೃಷಿ ಚಟುವಟಿಕೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರೈತರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ.&lt;/p&gt;&lt;h3&gt;&lt;strong&gt;ಒಣಗುತ್ತಿದೆ ಬೆಳೆ, ಕೈಮೀರುತ್ತಿದೆ ಬಂಡವಾಳ:&lt;/strong&gt;&lt;/h3&gt;&lt;p&gt;ಜಿಲ್ಲೆಯ ಬಯಲುಸೀಮೆ ಭಾಗದ ರೈತರು ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದರೂ, ಪೂರಕವಾಗಿ ಪಂಪ್&zwnj;ಸೆಟ್&zwnj;ಗಳ ಮೂಲಕ ನೀರಾವರಿ ಅವಲಂಬಿಸಿದ್ದಾರೆ. ಆದರೆ, ನಿರಂತರ ವಿದ್ಯುತ್ ಕಡಿತದಿಂದಾಗಿ ತೋಟಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕಣ್ಣೆದುರೇ ಹಚ್ಚ ಹಸಿರಾಗಿ ಬೆಳೆಯಬೇಕಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಹೂಡಿಕೆ ಮಾಡಿದ ಬಂಡವಾಳವೂ ಮರಳಿ ಬರುವುದಿಲ್ಲವೇನೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.&lt;/p&gt;&lt;h2&gt;&lt;strong&gt;ಹೈನುಗಾರಿಕೆ ಹಾಗೂ ದೈನಂದಿನ ಬದುಕಿಗೆ ಕಂಟಕ:&lt;/strong&gt;&lt;/h2&gt;&lt;p&gt;ವಿದ್ಯುತ್ ಕೊರತೆ ಕೇವಲ ಕೃಷಿಗೆ ಮಾತ್ರವಲ್ಲದೆ ಹೈನುಗಾರಿಕೆಗೂ ಮಾರಕವಾಗಿದೆ. ಪಂಪ್&zwnj;ಗಳು ಕೆಲಸ ಮಾಡದ ಕಾರಣ ದನಕರುಗಳಿಗೆ ಕುಡಿಯುವ ನೀರು ಒದಗಿಸುವುದು ದೊಡ್ಡ ಸವಾಲಾಗಿದೆ. ಇದು ಹಾಲಿನ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಇನ್ನು ತೋಟದ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಇಡೀ ರಾತ್ರಿ ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಮಕ್ಕಳ ಶಿಕ್ಷಣಕ್ಕೂ ಈ ವಿದ್ಯುತ್ ವ್ಯತ್ಯಯ ಅಡ್ಡಿಯಾಗುತ್ತಿದ್ದು, ಸಾರ್ವಜನಿಕರ ದೈನಂದಿನ ಬದುಕು ನರಕಸದೃಶವಾಗಿದೆ.&lt;/p&gt;&lt;h3&gt;&lt;strong&gt;ಮೆಸ್ಕಾಂ ವಿರುದ್ಧ ರೈತರ ರೊಚ್ಚಿಗೆದ್ದ ಪ್ರತಿಭಟನೆ:&lt;/strong&gt;&lt;/h3&gt;&lt;p&gt;ಸಮಸ್ಯೆಗಳ ಬಗ್ಗೆ ಮೆಸ್ಕಾಂ (MESCOM) ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ರೈತರು ಇಂದು ನಿಡಘಟ್ಟ ವಿದ್ಯುತ್ ಉಪಕೇಂದ್ರದ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ ಹಾಗೂ ಮೆಸ್ಕಾಂ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕೂಡಲೇ ಅನಿಯಮಿತ ವಿದ್ಯುತ್ ಕಡಿತ ನಿಲ್ಲಿಸಬೇಕು ಮತ್ತು ಪಂಪ್&zwnj;ಸೆಟ್&zwnj;ಗಳಿಗೆ ನಿಗದಿತ ವೇಳಾಪಟ್ಟಿಯಂತೆ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.&lt;/p&gt;&lt;p&gt;ಇಂಧನ ಸಚಿವರ ಜಿಲ್ಲೆಯಲ್ಲೇ ಇಂತಹ ಪರಿಸ್ಥಿತಿ ಇರುವುದು ವಿಷಾದನೀಯ ಎಂದು ಕಿಡಿಕಾರಿದ ರೈತರು, ತಕ್ಷಣವೇ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/chikkamagaluru-power-crisis-farmers-protest-against-mescom-energy-minister-kj-george-sat/articleshow-5ghgvk3"/>
        </item>
        <item>
            <title><![CDATA[ಕೊಹ್ಲಿ ಜೊತೆ ಕ್ರಿಕೆಟ್ ಆಡಿ ವಿಶ್ವಕಪ್ ಟ್ರೋಫಿ ಗೆದ್ದ ಕ್ರಿಕೆಟರ್ ಐಪಿಎಲ್‌ನಲ್ಲಿ ಈಗ ಅಂಪೈರ್]]></title>
            <link>https://kannada.asianetnews.com/gallery/cricket-sports/played-with-virat-kohli-won-world-cup-now-ajitesh-turns-ipl-umpire-kanb7vx</link>
            <guid isPermaLink="true">https://kannada.asianetnews.com/gallery/cricket-sports/played-with-virat-kohli-won-world-cup-now-ajitesh-turns-ipl-umpire-kanb7vx</guid>
            <pubDate>Tue, 28 Apr 2026 18:15:01 +0530</pubDate>
            <description><![CDATA[ಕೊಹ್ಲಿ ಜೊತೆ ಕ್ರಿಕೆಟ್ ಆಡಿ ವಿಶ್ವಕಪ್ ಟ್ರೋಫಿ ಗೆದ್ದ ಕ್ರಿಕೆಟರ್ ಐಪಿಎಲ್‌ನಲ್ಲಿ ಈಗ ಅಂಪೈರ್, ಕೊಹ್ಲಿ ನಾಯಕತ್ವದಲ್ಲಿ ಆಡಿದ ಈತ ಇದೀಗ ಕೊಹ್ಲಿ ಬ್ಯಾಟಿಂಗ್ ವೇಳೆ ಅಂಪೈರ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kqa1mm26p79rc7nae3x049zb,imgname-ipl-bcci-sourcer-1777379987525.png" type="image/jpeg" height="390" width="690"/>
            <content:encoded><![CDATA[&lt;p&gt;ಕೊಹ್ಲಿ ಜೊತೆ ಕ್ರಿಕೆಟ್ ಆಡಿ ವಿಶ್ವಕಪ್ ಟ್ರೋಫಿ ಗೆದ್ದ ಕ್ರಿಕೆಟರ್ ಐಪಿಎಲ್&zwnj;ನಲ್ಲಿ ಈಗ ಅಂಪೈರ್, ಕೊಹ್ಲಿ ನಾಯಕತ್ವದಲ್ಲಿ ಆಡಿದ ಈತ ಇದೀಗ ಕೊಹ್ಲಿ ಬ್ಯಾಟಿಂಗ್ ವೇಳೆ ಅಂಪೈರ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ಆರ್&zwnj;ಸಿಬಿ ಗೆಲುವಿನಲ್ಲಿ ಕೊಹ್ಲಿ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಂದು ವಿಶೇಷತೆ ಇದೆ. ಕೊಹ್ಲಿ ಜೊತೆ ಕ್ರಿಕೆಟ್ ಆಡಿ, ವಿಶ್ವಕಪ್ ಟ್ರೋಫಿ ಗೆದ್ದ ಆಟಗಾರ ಇದೀಗ ಐಪಿಎಲ್ ಟೂರ್ನಿಯಲ್ಲಿ ಅಂಪೈರ್ ಆಗಿದ್ದಾರೆ. ಕೊಹ್ಲಿ ಮಾಜಿ ಟೀಂಮೇಟ್, ಅಂಪೈರ್ ಅಜಿತೇಶ್ ಅರ್ಗಲ್ ಈಗ ಟ್ರೆಂಡ್ ಆಗಿದ್ದಾರೆ.&lt;/p&gt;&lt;img&gt;&lt;p&gt;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್&zwnj;ಸಿಬಿ ಅದ್ಭುತ ಪ್ರದರ್ಶನ ನೀಡಿ ಗೆಲುವಿನ ಸಂಭ್ರಮ ಆಚರಿಸಿದೆ. ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಅಂಪೈರಿಂಗ್ ಮಾಡಿದ್ದು ಇದೇ ಅಜಿತೇಶ್ ಅಗರ್ಲ್. ಕೊಹ್ಲಿ ಹಾಗೂ ಅಜಿತೇಶ್ ಅಗರ್ಲ್ ಪಂದ್ಯದ ನಡುವೆ ಮಾತನಾಡಿದ ವಿಡಿಯೋ, ಫೋಟೋಗಳು ವೈರಲ್ ಆಗಿದೆ.&lt;/p&gt;&lt;img&gt;&lt;p&gt;ಅಜಿತೇಶ್ ಅದ್ಭುತ ಬೌಲರ್ ಆಗಿ ಅಂಡರ್ 19 ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕೊಹ್ಲಿ ನಾಯಕತ್ವದ ಅಂಡರ್ 19 ತಂಡ 2008ರಲ್ಲಿ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಅಜಿತೇಶ್ 7 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಅದ್ಭುತ ಗೆಲುವಿನ ಮೂಲಕ ಅಜಿತೇಶ್, ಕೊಹ್ಲಿ ಸೇರಿದಂತೆ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತ್ತು.&lt;/p&gt;&lt;img&gt;&lt;p&gt;2008ರಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಜಿತೇಶ್ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಪಂಜಾಬ್ ತಂಡ ಸೇರಿಕೊಂಡರು. ಆದರೆ ಐಪಿಎಲ್ ಟೂರ್ನಿಯಲ್ಲಿ ಅಜಿತೇಶ್ ಕರಿಯರ್ ಮುಂದುವರಿಸಲು ಸಾಧ್ಯವಾಗಲಿಲ್ಲ. ನಿರೀಕ್ಷಿತ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜೊತೆಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.&lt;/p&gt;&lt;img&gt;&lt;p&gt;ಐಪಿಎಲ್ ಟೂರ್ನಿಯಿಂದ ಅವಕಾಶ ವಂಚಿತರಾದ ಅಜಿತೇಶ್ ಬಳಿಕ ಭಾರತೀಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇದರ ನಡುವೆ ಬಿಸಿಸಿಐ ಅಂಪೈರ್ ವೃತ್ತಿಯ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ತರಬೇತಿ ಪಡೆದು ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಅಂಪೈರಿಂಗ್ ಮಾಡುತ್ತಿದ್ದಾರೆ.&lt;/p&gt;&lt;h2&gt;2026ರಲ್ಲಿ ಅಂಪೈರ್&lt;/h2&gt;]]></content:encoded>
            <category><![CDATA[cricket-sports]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/played-with-virat-kohli-won-world-cup-now-ajitesh-turns-ipl-umpire-kanb7vx"/>
        </item>
        <item>
            <title><![CDATA[ವಿಮಾನ ಪ್ರಯಾಣಿಕರಿಗೆ ದರ ಏರಿಕೆ ಶಾಕ್: ಆಕಾಶ ಮುಟ್ಟಿದ ಇಂಧನ ಬೆಲೆ; ಕೇಂದ್ರದ ಮೊರೆ ಹೋದ ಏರ್‌ಲೈನ್ಸ್‌!]]></title>
            <link>https://kannada.asianetnews.com/india-news/indian-airlines-atf-price-hike-sos-to-government-flight-operations-crisis-san/articleshow-1g37004</link>
            <guid isPermaLink="true">https://kannada.asianetnews.com/india-news/indian-airlines-atf-price-hike-sos-to-government-flight-operations-crisis-san/articleshow-1g37004</guid>
            <pubDate>Tue, 28 Apr 2026 18:12:37 +0530</pubDate>
            <description><![CDATA[ವಿಮಾನ ಇಂಧನ (ATF) ಬೆಲೆ ಗಗನಕ್ಕೇರಿದ್ದರಿಂದ ಭಾರತದ ವಿಮಾನಯಾನ ಸಂಸ್ಥೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ವೆಚ್ಚವನ್ನು ನಿಭಾಯಿಸಲಾಗದೆ, ಹಾರಾಟವನ್ನೇ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿರುವ ಸಂಸ್ಥೆಗಳು, ಇಂಧನದ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knr7mqe563szes47rt27134g,imgname-india-airport-charges-cut-25-percent-flight-ticket-price-impact-domestic-airfare-atf-fuel-cost-airlines-update-1-1775708560837.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ (ಏ.28):&lt;/strong&gt; ವಿಮಾನ ಇಂಧನ (ATF) ಬೆಲೆಯಲ್ಲಿ ಉಂಟಾಗಿರುವ ಭಾರಿ ಏರಿಕೆಯಿಂದಾಗಿ ಭಾರತದ ವಿಮಾನಯಾನ ಕ್ಷೇತ್ರವು &quot;ತೀವ್ರ ಒತ್ತಡ&quot; ಎದುರಿಸುತ್ತಿದ್ದು, ಸರ್ಕಾರದ ತುರ್ತು ಹಸ್ತಕ್ಷೇಪಕ್ಕೆ ಮೊರೆ ಹೋಗಿದೆ. ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್&zwnj;ಜೆಟ್&zwnj;ನಂತಹ ಪ್ರಮುಖ ಸಂಸ್ಥೆಗಳನ್ನು ಒಳಗೊಂಡಿರುವ 'ಫೆಡರೇಶನ್ ಆಫ್ ಇಂಡಿಯನ್ ಏರ್&zwnj;ಲೈನ್ಸ್' (FIA), ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ವಿಮಾನ ಹಾರಾಟವನ್ನೇ ಸ್ಥಗಿತಗೊಳಿಸಬೇಕಾದೀತು ಎಂದು ಎಚ್ಚರಿಸಿದೆ.&lt;/p&gt;&lt;p&gt;ವಿಮಾನಯಾನ ಸಂಸ್ಥೆಗಳ ಪ್ರಕಾರ, ಪ್ರಸ್ತುತ ವೆಚ್ಚದ ವಾತಾವರಣವು ಹತ್ತಾರು ಮಾರ್ಗಗಳಲ್ಲಿ ವಿಮಾನ ಹಾರಾಟವನ್ನು ಆರ್ಥಿಕವಾಗಿ ಅಸಾಧ್ಯವಾಗಿಸಿದೆ. ಇತ್ತೀಚಿನ ಪರಿಷ್ಕರಣೆಗಳ ನಂತರ ವಿಮಾನ ಇಂಧನದ ಬೆಲೆಯು ಪ್ರತಿ ಕಿಲೋಲೀಟರ್&zwnj;ಗೆ 2 ಲಕ್ಷ ರೂಪಾಯಿ ದಾಟಿದೆ. ಪಶ್ಚಿಮ ಏಷ್ಯಾದಲ್ಲಿನ (ಮಧ್ಯಪ್ರಾಚ್ಯ) ಯುದ್ಧದ ಉದ್ವಿಗ್ನತೆಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿರುವುದು ಇದಕ್ಕೆ ಮುಖ್ಯ ಕಾರಣ. ಸಾಮಾನ್ಯವಾಗಿ ವಿಮಾನಯಾನ ಸಂಸ್ಥೆಯ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಇಂಧನ ಪಾಲು ಶೇ. 30-40 ರಷ್ಟಿರುತ್ತದೆ. ಆದರೆ ಈಗ ಅದು ಶೇ. 55-60 ಕ್ಕೆ ಏರಿಕೆಯಾಗಿದ್ದು, ಲಾಭದ ಪ್ರಮಾಣವನ್ನು ಸಂಪೂರ್ಣವಾಗಿ ಕುಗ್ಗಿಸಿದೆ.&lt;/p&gt;&lt;h2&gt;&lt;strong&gt;ಸರ್ಕಾರಕ್ಕೆ ವಿಮಾನಯಾನ ಸಂಸ್ಥೆಗಳ ಬೇಡಿಕೆ&lt;/strong&gt;&lt;/h2&gt;&lt;p&gt;FIA ತನ್ನ ಪತ್ರದಲ್ಲಿ ಸರ್ಕಾರಕ್ಕೆ ಕೆಲವು ತುರ್ತು ಮತ್ತು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲು ವಿನಂತಿಸಿದೆ. ಎಟಿಎಫ್ (ATF) ಮೇಲಿನ ಶೇ. 11ರಷ್ಟು ಅಬಕಾರಿ ಸುಂಕವನ್ನು ತಾತ್ಕಾಲಿಕವಾಗಿ ತೆಗೆದುಹಾಕಬೇಕು. ಕೆಲವು ರಾಜ್ಯಗಳಲ್ಲಿ ಶೇ. 25ರಷ್ಟು ಇರುವ ವ್ಯಾಟ್ ದರವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರಗಳಿಗೆ ಸೂಚಿಸಬೇಕು. ಕಚ್ಚಾ ತೈಲ ಬೆಲೆ ಕಡಿಮೆಯಾದಾಗಲೂ ಇಂಧನ ಬೆಲೆ ಇಳಿಕೆಯಾಗದಿರುವ ವಿರೋಧಾಭಾಸವನ್ನು ಸರಿಪಡಿಸಲು ವೈಜ್ಞಾನಿಕ ಬೆಲೆ ನಿಗದಿ ವ್ಯವಸ್ಥೆ ಬೇಕೆಂದು ಒತ್ತಾಯಿಸಿವೆ.&lt;/p&gt;&lt;h2&gt;&lt;strong&gt;ಜಾಗತಿಕ ಅಡೆತಡೆ ಮತ್ತು ಪೈಪೋಟಿ&lt;/strong&gt;&lt;/h2&gt;&lt;p&gt;ಇರಾನ್-ಇಸ್ರೇಲ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಂತಹ ಪೂರೈಕೆ ಮಾರ್ಗಗಳಲ್ಲಿನ ಅನಿಶ್ಚಿತತೆಯು ಜಾಗತಿಕ ತೈಲ ಮಾರುಕಟ್ಟೆಯನ್ನು ಕಂಗೆಡಿಸಿದೆ. ಭಾರತದ ಹೆಚ್ಚಿನ ತೆರಿಗೆ ದರಗಳು ವಿದೇಶಿ ವಿಮಾನಯಾನ ಸಂಸ್ಥೆಗಳ ಎದುರು ದೇಶೀಯ ಸಂಸ್ಥೆಗಳು ಪೈಪೋಟಿ ನೀಡಲು ಅಡ್ಡಿಯಾಗುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರ ಮೇಲೆ ಏನು ಪರಿಣಾಮ?&lt;/strong&gt;&lt;/h2&gt;&lt;p&gt;ವಿಮಾನಯಾನ ಸಂಸ್ಥೆಗಳು ಬೆಲೆ ಏರಿಕೆಯ ಹೊರೆಯನ್ನು ಸದ್ಯಕ್ಕೆ ಸ್ವಲ್ಪಮಟ್ಟಿಗೆ ತಾವೇ ಭರಿಸುತ್ತಿವೆಯಾದರೂ, ಇನ್ನು ಮುಂದೆ ಅದು ಕಷ್ಟಕರವಾಗಲಿದೆ. ಇಂಧನ ಬೆಲೆ ತಗ್ಗದಿದ್ದರೆ ವಿಮಾನ ಟಿಕೆಟ್ ದರಗಳು ಗಣನೀಯವಾಗಿ ಏರಿಕೆಯಾಗಲಿವೆ. ಆರ್ಥಿಕವಾಗಿ ನಷ್ಟ ತರುವ ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲು ಸಂಸ್ಥೆಗಳು ನಿರ್ಧರಿಸಿವೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/indian-airlines-atf-price-hike-sos-to-government-flight-operations-crisis-san/articleshow-1g37004"/>
        </item>
        <item>
            <title><![CDATA[ಸಿದ್ದರಾಮಯ್ಯ ನಂತರ ಸಿಎಂ ರೇಸ್‌ನಲ್ಲಿರೋದು ಡಿಕೆಶಿ ಮಾತ್ರ: ಶಾಸಕ ಎಚ್.ಸಿ.ಬಾಲಕೃಷ್ಣ]]></title>
            <link>https://kannada.asianetnews.com/politics/dk-shivakumar-cm-race-after-siddaramaiah-hc-balakrishna-gvd/articleshow-fnuy3bg</link>
            <guid isPermaLink="true">https://kannada.asianetnews.com/politics/dk-shivakumar-cm-race-after-siddaramaiah-hc-balakrishna-gvd/articleshow-fnuy3bg</guid>
            <pubDate>Tue, 28 Apr 2026 18:06:58 +0530</pubDate>
            <description><![CDATA[ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್‌ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ‌. ಬೇರೆಯವರೂ ರೇಸ್‌ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01jx0eq5przgsx0jehvwdys4mv,imgname-bfb-1749140870872.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಮನಗರ (ಏ.28): &lt;/strong&gt;ಸಿದ್ದರಾಮಯ್ಯ ನಂತರ ಮುಖ್ಯಮಂತ್ರಿ ರೇಸ್&zwnj;ನಲ್ಲಿರೋದು ಡಿ.ಕೆ.ಶಿವಕುಮಾರ್ ಮಾತ್ರ&zwnj;. ಬೇರೆಯವರೂ ರೇಸ್&zwnj;ನಲ್ಲಿ ಇರಬಹುದು. ಆದರೆ ಅದು ಕಾಲಕ್ಕೆ ತಕ್ಕಂತೆ ತೀರ್ಮಾನ ಆಗುತ್ತದೆ. ಸದ್ಯಕ್ಕೆ ಸಿದ್ದರಾಮಯ್ಯನವರು ಬೇಡ ಅಂದಾಗ ಆ ಸ್ಥಾನ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಲಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಧಿಯಲ್ಲಿಯೇ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ಸಿಗುತ್ತದೆ.&lt;/p&gt;&lt;p&gt;ನಮ್ಮ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು. ಡಿ.ಸುಧಾಕರ್ ಅನಾರೋಗ್ಯ ವಿಚಾರ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇಂತಹ ನಾಯಕರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಇದೊಂದು ಬಾಲಿಷವಾದ ಹೇಳಿಕೆ. ಯಾವ ಆಧಾರದಲ್ಲಿ ಇದನ್ನು ಹೇಳಿದ್ದಾರೆ ಅಂತ ಗೊತ್ತಿಲ್ಲ. ಹೆಬ್ಬೆಟ್ಟು ಹಾಕಿಸಿಕೊಳ್ಳಲು ಯಾರು ಹೋಗಿದ್ದಾರೆ ಅಂತ ಅವರೇ ಹೇಳಲಿ ಎಂದರು.&lt;/p&gt;&lt;p&gt;ಡಿ.ಕೆ.ಶಿವಕುಮಾರ್ ಗು ಸುಧಾಕರ್&zwnj; ಗೂ ಹಳೇ ವಿಶ್ವಾಸ. ಅಂದಿನಿಂದ ಇಂದಿನವರೆಗೂ ಅವರ ಕುಟುಂಬದ ಜೊತೆ ಡಿ.ಕೆ.ಶಿವಕುಮಾರ್ ನಿಂತಿದ್ದಾರೆ. ಅವರ ಆರೋಗ್ಯದ ವಿಚಾರ ನೋಡಿಕೊಳ್ಳಲು ಕುಣಿಗಲ್ ಶಾಸಕ ರಂಗನಾಥ್&zwnj; ಅವರಿಗೆ ತಿಳಿಸಿದ್ದಾರೆ. ಅವರ ಆರೋಗ್ಯದ ಕಡೆ ಮೊದಲು ಗಮನ ಹರಿಸೋಣ. ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ಕೊಟ್ಟು ಕುಮಾರಸ್ವಾಮಿ ಸಣ್ಣವರಾಗುವುದು ಬೇಡ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದರು.&lt;/p&gt;&lt;h2&gt;&lt;strong&gt;ಶೀಘ್ರದಲ್ಲಿ ತೀರ್ಮಾನ&lt;/strong&gt;&lt;/h2&gt;&lt;p&gt;ಸಂಪುಟ ಪುನರಚನೆ ಬಗ್ಗೆ ಮಾತನಾಡಿದ ಬಾಲಕೃಷ್ಣ, ಈ ಬಗ್ಗೆ ನಾವು ಮನವಿ ಮಾಡಿದ್ದೀವಿ. ಹೈಕಮಾಂಡ್ ಶೀಘ್ರದಲ್ಲಿ ತೀರ್ಮಾನ ತಗೆದುಕೊಳ್ಳಲಿದೆ. ಹೈಕಮಾಂಡ್ ಯಾಕೆ ವಿಳಂಬ ಮಾಡುತ್ತಿದಿಯೊ ಗೊತ್ತಿಲ್ಲ. ನಾಳೆಯೇ ಸಂಪುಟ ವಿಸ್ತಾರಣೆ ಮಾಡಿದರೂ ನಮಗೆ ಖುಷಿ ಎಂದರು. ನಮ್ಮ ಹೈಕಮಾಂಡ್ ವೀಕ್ ಇಲ್ಲ, ಸ್ಟ್ರಾಂಗ್ ಇದೆ. ಸಂಪುಟ ರಚನೆ ಬಗ್ಗೆ ಸಾಧಕ ಬಾಧಕಗಳ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕು. ಹಾಗಾಗಿ, ವಿಳಂಬ ಆಗುತ್ತಿದೆ ಎಂದು ಬಾಲಕೃಷ್ಣ ತಿಳಿಸಿದರು.&lt;/p&gt;]]></content:encoded>
            <category><![CDATA[politics]]></category>
            <dc:creator>Govindaraj S</dc:creator>
            <atom:link href="https://kannada.asianetnews.com/politics/dk-shivakumar-cm-race-after-siddaramaiah-hc-balakrishna-gvd/articleshow-fnuy3bg"/>
        </item>
        <item>
            <title><![CDATA[ಪ್ರೆಶರ್ ಕುಕ್ಕರ್ ಬಳಸುವಾಗ ನೀವು ಮಾಡುವ ಈ ಸಣ್ಣ ತಪ್ಪಿನಿಂದ ನಿಮ್ಮ ಜೀವಕ್ಕೇ ಅಪಾಯ!]]></title>
            <link>https://kannada.asianetnews.com/gallery/kitchen/pressure-cooker-safety-5-common-mistakes-that-could-lead-to-a-deadly-explosion-5razfal</link>
            <guid isPermaLink="true">https://kannada.asianetnews.com/gallery/kitchen/pressure-cooker-safety-5-common-mistakes-that-could-lead-to-a-deadly-explosion-5razfal</guid>
            <pubDate>Tue, 28 Apr 2026 18:03:29 +0530</pubDate>
            <description><![CDATA[Pressure cooker safety tips: ಇಂದಿನ ವೇಗದ ಬದುಕಿನಲ್ಲಿ ಕುಕ್ಕರ್ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿದೆ. ಸಮಯ ಮತ್ತು ಇಂಧನ ಉಳಿಸುವಲ್ಲಿ ಇದು ಎಷ್ಟು ಸಹಕಾರಿಯೋ, ಅಷ್ಟೇ ಅಪಾಯಕಾರಿ ಕೂಡ. ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ನಿರ್ಲಕ್ಷ್ಯವು ಕುಕ್ಕರ್ ಅನ್ನು ಬಾಂಬ್‌ನಂತೆ ಸ್ಫೋಟಗೊಳ್ಳುವಂತೆ ಮಾಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01k1ftddffb38d5ta0nceknyr4,imgname-pressure-cooker--4--1753951417839.jpg" type="image/jpeg" height="390" width="690"/>
            <content:encoded><![CDATA[&lt;p&gt;Pressure cooker safety tips: ಇಂದಿನ ವೇಗದ ಬದುಕಿನಲ್ಲಿ ಕುಕ್ಕರ್ ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿದೆ. ಸಮಯ ಮತ್ತು ಇಂಧನ ಉಳಿಸುವಲ್ಲಿ ಇದು ಎಷ್ಟು ಸಹಕಾರಿಯೋ, ಅಷ್ಟೇ ಅಪಾಯಕಾರಿ ಕೂಡ. ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ನಿರ್ಲಕ್ಷ್ಯವು ಕುಕ್ಕರ್ ಅನ್ನು ಬಾಂಬ್&zwnj;ನಂತೆ ಸ್ಫೋಟಗೊಳ್ಳುವಂತೆ ಮಾಡಬಹುದು.&amp;nbsp;&lt;/p&gt;&lt;img&gt;&lt;p&gt;ಇಂದಿನ ಬ್ಯುಸಿ ಲೈಫ್&zwnj;ಸ್ಟೈಲ್&zwnj;ನಲ್ಲಿ ಪ್ರೆಶರ್ ಕುಕ್ಕರ್ ಇಲ್ಲದ ಅಡುಗೆ ಮನೆಯೇ ಇಲ್ಲ ಎನ್ನಬಹುದು. ಕಡಿಮೆ ಸಮಯದಲ್ಲಿ ಅಡುಗೆ ಮುಗಿಸಲು ಇದು ತುಂಬಾ ಸಹಕಾರಿ. ಆದರೆ, ಅದೇ ಸಮಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅದು ಬಾಂಬ್&zwnj;ನಂತೆ ಸಿಡಿದು ಪ್ರಾಣಹಾನಿಗೆ ಕಾರಣವಾಗಬಹುದು. ಕುಕ್ಕರ್ ಸ್ಫೋಟಗೊಳ್ಳುವ ಕಾರಣಗಳನ್ನು ವಿಶ್ಲೇಷಿಸಿದರೆ, ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳೇ ಈ ಅನಾಹುತಗಳಿಗೆ ಮೂಲ ಎಂದು ತಿಳಿದುಬರುತ್ತದೆ. ಅಂತಹ ಅಪಾಯಗಳಿಂದ ಪಾರಾಗಲು ಪಾಲಿಸಬೇಕಾದ 5 ಪ್ರಮುಖ ನಿಯಮಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಬಳಕೆ ಸಮಯ ಮತ್ತು ಗ್ಯಾಸ್ ಉಳಿಸುವ ಉತ್ತಮ ಮಾರ್ಗ. ಆದರೆ, ಇದನ್ನು ಅಜಾಗರೂಕತೆಯಿಂದ ಬಳಸಿದರೆ ಅದು ಪ್ರಾಣಾಂತಿಕ ಅಪಾಯಗಳಿಗೆ ದಾರಿಯಾಗುತ್ತದೆ. ಅನೇಕರು ಅಡುಗೆ ಬೇಗ ಆಗಲಿ ಎಂದು ಕುಕ್ಕರ್ ತುಂಬ ಆಹಾರ ಪದಾರ್ಥಗಳನ್ನು ಹಾಕುತ್ತಾರೆ. ಆದರೆ, ಕುಕ್ಕರ್&zwnj;ನ ಸಾಮರ್ಥ್ಯದ 2/3 ಭಾಗಕ್ಕಿಂತ ಹೆಚ್ಚು ಎಂದಿಗೂ ತುಂಬಿಸಬಾರದು. ಅದರಲ್ಲೂ ವಿಶೇಷವಾಗಿ ಬೇಳೆ ಮತ್ತು ಅಕ್ಕಿ ಬೇಯುವಾಗ ಉಕ್ಕಿ ಬರುತ್ತವೆ. ಆದ್ದರಿಂದ ಅವುಗಳನ್ನು ಅರ್ಧದಷ್ಟು ಮಾತ್ರ ತುಂಬಿಸುವುದು ಸುರಕ್ಷಿತ.&lt;/p&gt;&lt;img&gt;&lt;p&gt;ಕುಕ್ಕರ್ ಮುಚ್ಚಳಕ್ಕೆ ಇರುವ ರಬ್ಬರ್ ಸಡಿಲವಾಗಿದ್ದರೂ ಅಥವಾ ಬಿರುಕು ಬಿಟ್ಟಿದ್ದರೂ ತಕ್ಷಣವೇ ಬದಲಾಯಿಸಬೇಕು. ಸರಿಯಿಲ್ಲದ ಗ್ಯಾಸ್ಕೆಟ್&zwnj;ನಿಂದ ಹಬೆಯು (Steam) ಪಕ್ಕದಿಂದ ಸೋರಿಕೆಯಾಗಿ ಒಳಗೆ ಸರಿಯಾದ ಒತ್ತಡ ನಿರ್ಮಾಣವಾಗುವುದಿಲ್ಲ ಅಥವಾ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು.&lt;/p&gt;&lt;img&gt;&lt;p&gt;ಕುಕ್ಕರ್&zwnj;ನಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ಇಲ್ಲದೆ ಅಡುಗೆ ಮಾಡುವುದು ತುಂಬಾ ಅಪಾಯಕಾರಿ. ನೀರಿಲ್ಲದಿದ್ದರೆ ಕುಕ್ಕರ್&zwnj;ನ ತಳಭಾಗ ಅತಿಯಾಗಿ ಬಿಸಿಯಾಗಿ 'ಸೇಫ್ಟಿ ವಾಲ್ವ್' ಸ್ಫೋಟಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಬೇಯಿಸುವ ಪದಾರ್ಥಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು.&lt;/p&gt;&lt;img&gt;&lt;p&gt;ಪ್ರೆಶರ್ ಕುಕ್ಕರ್ ಮುಚ್ಚಳದ ಮೇಲಿರುವ ವೆಂಟ್ ಪೈಪ್ (ವಿಶಲ್ ಅಡಿಯಲ್ಲಿರುವ ರಂಧ್ರ) ಯಾವಾಗಲೂ ಸ್ವಚ್ಛವಾಗಿರಬೇಕು. ಅದರಲ್ಲಿ ಆಹಾರದ ಕಣಗಳು ಸಿಲುಕಿಕೊಂಡರೆ ಒಳಗೆ ಉಂಟಾದ ಹಬೆ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ಒಳಗೆ ವಿಪರೀತ ಒತ್ತಡ ಹೆಚ್ಚಾಗಿ ಕುಕ್ಕರ್ ಸ್ಫೋಟಗೊಳ್ಳುವ ಅಪಾಯವಿರುತ್ತದೆ.&lt;/p&gt;&lt;img&gt;&lt;p&gt;ಕುಕ್ಕರ್&zwnj;ನ ಒತ್ತಡ (Pressure) ಪೂರ್ತಿಯಾಗಿ ಕಡಿಮೆಯಾಗುವ ಮುನ್ನ ಮುಚ್ಚಳವನ್ನು ಬಲವಂತವಾಗಿ ತೆಗೆಯಲು ಪ್ರಯತ್ನಿಸಬಾರದು. ಅಡುಗೆ ಮುಗಿದ ತಕ್ಷಣ ಮುಚ್ಚಳ ತೆಗೆಯಲು ಹೋಗಬೇಡಿ. ವಿಶಲ್ ತೆಗೆದರೂ ಒಳಗೆ ಇನ್ನೂ ಸ್ವಲ್ಪ ಹಬೆ ಉಳಿದಿರಬಹುದು. ಒತ್ತಡ ಸಂಪೂರ್ಣವಾಗಿ ಇಳಿದಿದೆ ಎಂದು ಖಚಿತಪಡಿಸಿಕೊಂಡ ನಂತರವೇ ಮುಚ್ಚಳವನ್ನು ತೆಗೆಯಬೇಕು.&lt;/p&gt;&lt;p&gt;ಈ ಐದು ಮುನ್ನೆಚ್ಚರಿಕೆಗಳನ್ನು ಪಾಲಿಸುವ ಮೂಲಕ ನಿಮ್ಮ ಅಡುಗೆ ಮನೆಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು. ನಿಮ್ಮ ಕುಕ್ಕರ್ ಅನ್ನು ನಿಯಮಿತವಾಗಿ ಪರೀಕ್ಷಿಸುತ್ತಿರಿ ಮತ್ತು ಅಪಾಯಗಳಿಂದ ದೂರವಿರಿ.&lt;/p&gt;]]></content:encoded>
            <category><![CDATA[kitchen]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/kitchen/pressure-cooker-safety-5-common-mistakes-that-could-lead-to-a-deadly-explosion-5razfal"/>
        </item>
        <item>
            <title><![CDATA[ಈ ಮಾತು ಕೇಳಿದ್ರೆ ಆಗಲ್ಲ! ಅದೊಂದು ವಿಚಾರವೇ ನನ್ನನ್ನು ಬದಲಾಗುವಂತೆ ಮಾಡಿತು ಎಂದ ಶ್ರೇಯಸ್ ಅಯ್ಯರ್]]></title>
            <link>https://kannada.asianetnews.com/cricket-sports/shreyas-iyer-opens-up-on-comeback-criticism-made-me-stronger-i-now-attack-short-balls-kvn/articleshow-56acp4o</link>
            <guid isPermaLink="true">https://kannada.asianetnews.com/cricket-sports/shreyas-iyer-opens-up-on-comeback-criticism-made-me-stronger-i-now-attack-short-balls-kvn/articleshow-56acp4o</guid>
            <pubDate>Tue, 28 Apr 2026 17:04:51 +0530</pubDate>
            <description><![CDATA[ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್, ತಮ್ಮ ಮೇಲಿನ ಟೀಕೆಗಳೇ ಯಶಸ್ಸಿಗೆ ಸ್ಫೂರ್ತಿ ಎಂದು ಹೇಳಿದ್ದಾರೆ. ಬೌನ್ಸರ್‌ಗಳನ್ನು ಎದುರಿಸುವ ದೌರ್ಬಲ್ಯದ ಬಗ್ಗೆ ಮಾತನಾಡಿದ ಅವರು, ಕಠಿಣ ಅಭ್ಯಾಸದಿಂದ ಆ ಟೀಕೆಗಳಿಗೆ ಉತ್ತರ ನೀಡಿರುವುದಾಗಿ ತಿಳಿಸಿದ್ದು, ಅವರ ಪ್ರದರ್ಶನವು ಭಾರತ ಟಿ20 ತಂಡದ ನಾಯಕತ್ವದ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq7dw3pn0mrd96xb3tp8cwwd,imgname-priety-zinta-with-shreyas-iyer-1777292152533.jpg" type="image/jpeg" height="390" width="690"/>
            <content:encoded><![CDATA[&lt;p&gt;ಮುಂಬೈ: ಐಪಿಎಲ್&zwnj;ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸತತ ಗೆಲುವಿನತ್ತ ಮುನ್ನಡೆಸುತ್ತಿರುವ ನಾಯಕ ಶ್ರೇಯಸ್ ಅಯ್ಯರ್, ತಮ್ಮ ವೃತ್ತಿಜೀವನದ ದೊಡ್ಡ ಬದಲಾವಣೆಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಜಿಯೋ ಹಾಟ್&zwnj;ಸ್ಟಾರ್&zwnj;ಗೆ ನೀಡಿದ ಸಂದರ್ಶನದಲ್ಲಿ, ತನ್ನನ್ನು ಕುಗ್ಗಿಸಲು ಯತ್ನಿಸಿದವರ ಟೀಕೆಗಳೇ ತನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ ಎಂದು ಶ್ರೇಯಸ್ ಹೇಳಿದ್ದಾರೆ.&lt;/p&gt;&lt;p&gt;ಹಲವು ವರ್ಷಗಳಿಂದ ಶ್ರೇಯಸ್ ಅಯ್ಯರ್ ಎದುರಿಸುತ್ತಿದ್ದ ಪ್ರಮುಖ ಟೀಕೆಯೆಂದರೆ ಬೌನ್ಸರ್&zwnj;ಗಳನ್ನು ಎದುರಿಸುವಲ್ಲಿನ ದೌರ್ಬಲ್ಯ. ಆದರೆ ಈ ಬಾರಿ, ವಿಶ್ವದ ಅತ್ಯುತ್ತಮ ವೇಗದ ಬೌಲರ್ ಜಸ್&zwnj;ಪ್ರೀತ್ ಬುಮ್ರಾ ಎಸೆತವನ್ನೇ ಸಿಕ್ಸರ್&zwnj;ಗೆ ಅಟ್ಟಿ, ಅಯ್ಯರ್ ಆ ಟೀಕೆಗಳಿಗೆ ಖಡಕ್ ಉತ್ತರ ನೀಡಿದ್ದಾರೆ.&lt;/p&gt;&lt;h2&gt;&lt;strong&gt;ಬ್ಯಾಟ್&zwnj;ನಿಂದಲೇ ಟೀಕಾಕಾರರ ಬಾಯಿ ಮುಚ್ಚಿಸಿದ ಶ್ರೇಯಸ್ ಅಯ್ಯರ್&lt;/strong&gt;&lt;/h2&gt;&lt;p&gt;&quot;ಕೆಲವು ಎಸೆತಗಳನ್ನು ಆಡಲು ನನಗೆ ಬರುವುದಿಲ್ಲ ಎಂದು ಕೆಲವರು ಹೇಳುವುದನ್ನು ನಾನು ಕೇಳಿದ್ದೆ. ಅದರಲ್ಲೂ ಶಾರ್ಟ್ ಪಿಚ್ ಎಸೆತಗಳನ್ನು ಎದುರಿಸುವ ಸಮಸ್ಯೆಯನ್ನು ನಾನು ಎಂದಿಗೂ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಟೀಕೆ ನನ್ನನ್ನು ಸಿಕ್ಕಾಪಟ್ಟೆ ಕೆರಳಿಸಿತು. ಯಾಕೆಂದರೆ, 'ಅಸಾಧ್ಯ' ಎಂಬ ಪದ ಕೇಳಲು ನನಗೆ ಇಷ್ಟವಿಲ್ಲ. ಹಾಗಾಗಿ, ಹಾಗೆ ಹೇಳಿದವರ ಮಾತು ತಪ್ಪು ಎಂದು ಸಾಬೀತು ಮಾಡಲೇಬೇಕೆಂದು ನಾನು ನಿರ್ಧರಿಸಿದೆ. ಅದಕ್ಕಾಗಿ ಕಠಿಣ ಅಭ್ಯಾಸ ಮಾಡಿದೆ. ಮೊದಲೆಲ್ಲಾ ಶಾರ್ಟ್ ಬಾಲ್&zwnj;ಗಳಿಗೆ ಡಿಫೆಂಡ್ ಮಾಡಲು ಅಥವಾ ಸಿಂಗಲ್ಸ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ, ನನ್ನ ಜೋನ್&zwnj;ಗೆ ಬಾಲ್ ಬಂದರೆ ನೇರವಾಗಿ ಸಿಕ್ಸರ್&zwnj;ಗೆ ಅಟ್ಟುತ್ತೇನೆ&quot; ಎಂದು ಅಯ್ಯರ್ ಹೇಳಿದ್ದಾರೆ.&lt;/p&gt;&lt;p&gt;ಬೆನ್ನುನೋವಿನ ಗಾಯದ ನಂತರ ಶ್ರೇಯಸ್ ಅಯ್ಯರ್ ಮೊದಲಿನಂತೆ ಬ್ಯಾಟಿಂಗ್ ಮಾಡಲಾರರು ಎಂದವರಿಗೂ ಅವರು ತಮ್ಮ ಆಟದ ಮೂಲಕವೇ ಉತ್ತರ ಕೊಟ್ಟಿದ್ದಾರೆ. &quot;ಗಾಯದ ನಂತರ ಮಾನಸಿಕವಾಗಿ ಹೇಗೆ ಕಮ್&zwnj;ಬ್ಯಾಕ್ ಮಾಡುತ್ತೇವೆ ಎಂಬುದು ಮುಖ್ಯ. ಅನಗತ್ಯ ಟೀಕೆಗಳನ್ನು ಕಡೆಗಣಿಸುವುದನ್ನು ನಾನು ಕಲಿತಿದ್ದೇನೆ&quot; ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ಬ್ಯಾಟಿಂಗ್&zwnj;ನಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು, ಒಂದು ತರಬೇತಿ ಸೆಷನ್&zwnj;ನಲ್ಲಿ ಸುಮಾರು 50 ಓವರ್&zwnj;ಗಳ ಕಾಲ ಬ್ಯಾಟಿಂಗ್ ಮಾಡಿ, 300ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸುತ್ತೇನೆ ಎಂದು ಶ್ರೇಯಸ್ ಹೇಳಿದರು.&lt;/p&gt;&lt;p&gt;&quot;ನನ್ನ ತರಬೇತಿ ಒಂದೇ ರೀತಿ ಇರುವುದಿಲ್ಲ. ಸೈಡ್-ಆರ್ಮ್ ಥ್ರೋಗಳ ಬದಲು, ನಿಜವಾದ ಬೌಲರ್&zwnj;ಗಳನ್ನು ಎದುರಿಸಿ ಲಯ ಕಂಡುಕೊಳ್ಳುತ್ತೇನೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಎಬಿ ಡಿವಿಲಿಯರ್ಸ್ ಅವರ ಬ್ಯಾಟಿಂಗ್ ಲಯವನ್ನು ನಾನು ಗಮನಿಸುತ್ತೇನೆ. ಅದನ್ನು ನನ್ನದೇ ಶೈಲಿಯಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ&quot; ಎಂದರು. ಕೋಚ್&zwnj;ಗಳಾದ ಪ್ರವೀಣ್ ಆಮ್ರೆ ಮತ್ತು ಅಭಿಷೇಕ್ ನಾಯರ್ ಅವರ ಬೆಂಬಲ ನನ್ನ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.&lt;/p&gt;&lt;h3&gt;&lt;strong&gt;ಭಾರತ ಟಿ20 ತಂಡದ ಭವಿಷ್ಯದ ನಾಯಕ ಶ್ರೇಯಸ್ ಅಯ್ಯರ್?&lt;/strong&gt;&lt;/h3&gt;&lt;p&gt;ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್&zwnj;ವರೆಗೆ ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್, ಬ್ಯಾಟಿಂಗ್&zwnj;ನಲ್ಲೂ ಮಿಂಚಿದ್ದರು. ಇದೀಗ 2026ರ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ಹಾಗೂ ಬ್ಯಾಟರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಅಯ್ಯರ್ ಏಳು ಪಂದ್ಯಗಳ ಆರು ಇನ್ನಿಂಗ್ಸ್&zwnj;ಗಳಿಂದ 69.75ರ ಬ್ಯಾಟಿಂಗ್ ಸರಾಸರಿಯಲ್ಲಿ 279 ರನ್ ಸಿಡಿಸಿ ಮಿಂಚಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್&zwnj;ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಶ್ರೇಯಸ್ ಅಯ್ಯರ್&zwnj;ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಒಲಿದು ಬರುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/cricket-sports/shreyas-iyer-opens-up-on-comeback-criticism-made-me-stronger-i-now-attack-short-balls-kvn/articleshow-56acp4o"/>
        </item>
        <item>
            <title><![CDATA[ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ ಆರ್ಭಟ: 22 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ]]></title>
            <link>https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</link>
            <guid isPermaLink="true">https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv</guid>
            <pubDate>Tue, 28 Apr 2026 17:17:52 +0530</pubDate>
            <description><![CDATA[ಭಾರತೀಯ ಹವಾಮಾನ ಇಲಾಖೆಯು ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಹೆಚ್ಚಾಗುವ ಎಚ್ಚರಿಕೆ ನೀಡಿದೆ. ರಾಜ್ಯದ 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲೂ ಮಳೆಯ ನಿರೀಕ್ಷೆಯಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9ycepmrjkr2tep2m1hstjm,imgname-karnataka-weather-1777376574164.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ (India Meteorological Department) ಎಚ್ಚರಿಕೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯ ಹಿನ್ನೆಲೆ, ಕೆಲವು ಪ್ರದೇಶಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.&lt;/p&gt;&lt;h2&gt;22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್&lt;/h2&gt;&lt;p&gt;ಇಂದು ಮತ್ತು ನಾಳೆ ರಾಜ್ಯದ ಒಟ್ಟು 22 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಕರ್ನಾಟಕ ಭಾಗದ Kalaburagi, Vijayapura, Yadgir, Raichur, Bagalkot ಸೇರಿದಂತೆ Belagavi, Koppal, Dharwad ಮತ್ತು Gadag ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.&lt;/p&gt;&lt;h2&gt;ಬೆಂಗಳೂರಿನಲ್ಲಿ ಸ್ಥಿತಿ&lt;/h2&gt;&lt;p&gt;ಇಂದು Bengaluru ನಗರಕ್ಕೆ ಯಾವುದೇ ಅಲರ್ಟ್ ನೀಡಲಾಗಿಲ್ಲ. ಆದಾಗ್ಯೂ, ನಗರದಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗುತ್ತಿದೆ. ನಾಳೆ ಮತ್ತು ನಾಡಿದ್ದು ಬೆಂಗಳೂರಿಗೆ ಯಲ್ಲೋ ಅಲರ್ಟ್ ಘೋಷಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.&lt;/p&gt;&lt;h2&gt;ಭಾರೀ ಮಳೆಯ ಸಾಧ್ಯತೆ&lt;/h2&gt;&lt;p&gt;ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಹಾಗೂ ಕಡಿಮೆ ಮಟ್ಟದ ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಇರುವುದರಿಂದ ಜಾಗ್ರತೆ ಅಗತ್ಯ.&lt;/p&gt;&lt;h2&gt;ಮುನ್ನೆಚ್ಚರಿಕೆ ಸೂಚನೆ&lt;/h2&gt;&lt;p&gt;ಹವಾಮಾನ ಇಲಾಖೆಯ ಪ್ರಕಾರ, ಮಳೆ ಹೆಚ್ಚಾಗುವ ದಿನಗಳಲ್ಲಿ ಅನಾವಶ್ಯಕ ಪ್ರಯಾಣ ತಪ್ಪಿಸುವುದು, ವಿದ್ಯುತ್ ತಂತುಗಳು ಮತ್ತು ಮರಗಳ ಸಮೀಪ ನಿಲ್ಲದಿರುವುದು, ಹಾಗೂ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವುದು ಸೂಕ್ತ.&lt;/p&gt;&lt;p&gt;ಒಟ್ಟಿನಲ್ಲಿ, ಮುಂದಿನ ಐದು ದಿನ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚುವ ನಿರೀಕ್ಷೆಯಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು India Meteorological Department ಸೂಚಿಸಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Gowthami K</dc:creator>
            <atom:link href="https://kannada.asianetnews.com/state/karnataka-weather-update-imd-issues-yellow-alert-for-22-districts-gdp/articleshow-03re7xv"/>
        </item>
        <item>
            <title><![CDATA[ಧನುಷ್ 'ಕರ' ಚಿತ್ರದ ಬುಕಿಂಗ್ ಶುರು: 24 ಗಂಟೆಯಲ್ಲಿ ಎಷ್ಟು ಟಿಕೆಟ್ ಸೇಲ್ ಆಯ್ತು ಗೊತ್ತಾ?]]></title>
            <link>https://kannada.asianetnews.com/entertainment/dhanush-starrer-kara-movie-sees-strong-advance-booking-on-bookmyshow-gvd/articleshow-w1muihc</link>
            <guid isPermaLink="true">https://kannada.asianetnews.com/entertainment/dhanush-starrer-kara-movie-sees-strong-advance-booking-on-bookmyshow-gvd/articleshow-w1muihc</guid>
            <pubDate>Tue, 28 Apr 2026 17:18:49 +0530</pubDate>
            <description><![CDATA[ನಟ ಧನುಷ್ ಅವರ ಹೊಸ ಸಿನಿಮಾ 'ಕರ' ಚಿತ್ರದ ಬುಕಿಂಗ್ ಆರಂಭವಾಗಿದ್ದು, ಮಲಯಾಳಂ ನಟಿ ಮಮಿತಾ ಬೈಜು ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01knhjt37fgmh73chn3ydr85x4,imgname-kara-movie-starring-dhanush-and-mamitha-baiju-1775485390063.jpg" type="image/jpeg" height="390" width="690"/>
            <content:encoded><![CDATA[&lt;p&gt;ನಟ ಧನುಷ್ ಅವರ ಹೊಸ ಸಿನಿಮಾ 'ಕರ' ಸಖತ್ ನಿರೀಕ್ಷೆ ಹುಟ್ಟಿಸಿದೆ. ವಿಘ್ನೇಶ್ ರಾಜ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೊಂಗಲ್ ಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡಿದ್ದ ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಇದೀಗ ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ಅಪ್&zwnj;ಡೇಟ್ ಹೊರಬಿದ್ದಿದೆ. 'ಕರ' ಚಿತ್ರದ ಥಿಯೇಟ್ರಿಕಲ್ ರಿಲೀಸ್ ನಂತರದ ಒಟಿಟಿ ಹಕ್ಕುಗಳನ್ನು ನೆಟ್&zwnj;ಫ್ಲಿಕ್ಸ್ ಸಂಸ್ಥೆ ಖರೀದಿಸಿದೆ ಎಂದು ವರದಿಯಾಗಿದೆ.&lt;/p&gt;&lt;p&gt;ಈ ಚಿತ್ರ 2026ರ ಏಪ್ರಿಲ್ 30ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅಂದ್ಹಾಗೆ, 'ಬುಕ್ ಮೈ ಶೋ'ನಲ್ಲಿ ಕಳೆದ 24 ಗಂಟೆಗಳಲ್ಲಿ 'ಕರ' ಚಿತ್ರದ 5.62 ಸಾವಿರ ಟಿಕೆಟ್&zwnj;ಗಳು ಈಗಾಗಲೇ ಮಾರಾಟವಾಗಿವೆ. ಈ ಚಿತ್ರದಲ್ಲಿ ಮಲಯಾಳಂನ ಯುವ ನಟಿ ಮಮಿತಾ ಬೈಜು, ಧನುಷ್&zwnj;ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಮಿತಾ ಸದ್ಯ ಕಾಲಿವುಡ್&zwnj;ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ದಳಪತಿ ವಿಜಯ್ ನಟನೆಯ 'ಜನ ನಾಯಕನ್' ಚಿತ್ರದಲ್ಲಿ ಅವರ ಮಗಳ ಪಾತ್ರದಲ್ಲಿ ಮಮಿತಾ ಕಾಣಿಸಿಕೊಳ್ಳುತ್ತಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಮುಖ ಪಾತ್ರದಲ್ಲಿ ಸೂರಜ್ ವೆಂಜಾರಮೂಡು&lt;/strong&gt;&lt;/h2&gt;&lt;p&gt;ಅಷ್ಟೇ ಅಲ್ಲ, 'ಸೂರ್ಯ 46' ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿಯೂ ಮತ್ತು ಪ್ರದೀಪ್ ರಂಗನಾಥನ್ ಅವರ 'ಡ್ಯೂಡ್' ಚಿತ್ರದಲ್ಲೂ ಮಮಿತಾ ಅವರೇ ಹೀರೋಯಿನ್. ವೇಲ್ಸ್ ಫಿಲ್ಮ್ ಇಂಟರ್&zwnj;ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಡಾ. ಐಶಾರಿ ಕೆ. ಗಣೇಶ್ ಅವರು 'ಕರ' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ತೇನಿ ಈಶ್ವರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ. ಮಲಯಾಳಂನ ಖ್ಯಾತ ನಟ ಸೂರಜ್ ವೆಂಜಾರಮೂಡು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.&lt;/p&gt;&lt;p&gt;ಧನುಷ್ ನಟಿಸಿ, ಕಥೆ ಬರೆದು, ನಿರ್ದೇಶನ ಮಾಡಿದ್ದ 'ಇಡ್ಲಿ ಕಡೈ' ಅವರ ನಟನೆಯ ಕೊನೆಯ ತಮಿಳು ಚಿತ್ರವಾಗಿತ್ತು. ಈ ಚಿತ್ರದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿದ್ದರು. 'ತಿರುಚಿತ್ರಂಬಲಂ' ಸೂಪರ್&zwnj;ಹಿಟ್ ಆದ ನಂತರ ಧನುಷ್-ನಿತ್ಯಾ ಮೆನನ್ ಜೋಡಿ ಮತ್ತೆ ಒಂದಾದ ಸಿನಿಮಾ ಇದಾಗಿತ್ತು. ಇದು ಧನುಷ್ ನಿರ್ದೇಶನದ ನಾಲ್ಕನೇ ಚಿತ್ರ. ಶಾಲಿನಿ ಪಾಂಡೆ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಂಡರ್&zwnj;ಬಾರ್ ಫಿಲ್ಮ್ಸ್ ಮತ್ತು ಡಾನ್ ಪಿಕ್ಚರ್ಸ್ ಬ್ಯಾನರ್&zwnj;ಗಳ ಅಡಿಯಲ್ಲಿ ಆಕಾಶ್ ಭಾಸ್ಕರನ್ ಮತ್ತು ಧನುಷ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದರು.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/dhanush-starrer-kara-movie-sees-strong-advance-booking-on-bookmyshow-gvd/articleshow-w1muihc"/>
        </item>
        <item>
            <title><![CDATA[ದೆಹಲಿ ಟ್ರಿಪ್‌ನಲ್ಲಿರುವ ರಾಜ್ಯ ಸರ್ಕಾರ ಬರಗಾಲ ನಿರ್ವಹಣೆಯಲ್ಲಿ ವಿಫಲ: ನಿಖಿಲ್‌ ಕುಮಾರಸ್ವಾಮಿ]]></title>
            <link>https://kannada.asianetnews.com/karnataka-districts/nikhil-kumaraswamy-slams-karnataka-government-drought-issue-gvd/articleshow-xaqk9iz</link>
            <guid isPermaLink="true">https://kannada.asianetnews.com/karnataka-districts/nikhil-kumaraswamy-slams-karnataka-government-drought-issue-gvd/articleshow-xaqk9iz</guid>
            <pubDate>Tue, 28 Apr 2026 17:51:45 +0530</pubDate>
            <description><![CDATA[ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01j6yf6wq7kbt59bktmaw7f01b,imgname-1.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಾಲೂರು (ಏ.28): &lt;/strong&gt;ರಾಜ್ಯದಲ್ಲಿ ಬರಗಾಲ, ನೀರಿಗಾಗಿ ಹಾಹಾಕಾರ ಹೆಚ್ಚಾಗುತ್ತಿದ್ದರೂ ಖುರ್ಚಿಗಾಗಿ ದೆಹಲಿ ಪ್ರವಾಸದ ಬಿಸಿಯಲ್ಲಿರುವ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಬಿಸಿಯನ್ನು ರಾಜ್ಯದ ಜನತೆ ಮುಟ್ಟಿಸಲಿದ್ದಾರೆ ಎಂದು ಯುವ ಜೆಡಿಎಸ್&zwnj; ರಾಜ್ಯಾಧ್ಯಕ್ಷ ನಿಖಿಲ್&zwnj; ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.&lt;/p&gt;&lt;p&gt;ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಹೈದರಾಬಾದ್&zwnj; ಕರ್ನಾಟಕ ಭಾಗದಲ್ಲಿ ರೈತರು ಬೆಳೆದ ಬೆಳೆಗಳಿಗೆ ಹಾಗೂ ಅಲ್ಲಿನ ರೈತರಿಗೆ ಯಾವುದೇ ರೀತಿ ಪರಿಹಾರಗಳನ್ನು ಘೋಷಣೆ ಮಾಡಿಲ್ಲ. ಮಾತೆತ್ತಿದರೆ ಗ್ಯಾರಂಟಿ ಎನ್ನುವ ರಾಜ್ಯ ಸರ್ಕಾರವು ರೈತರಿಗೆ ತಪ್ಪದೆ ನೀಡಬೇಕಾಗಿದ್ದ ಗ್ಯಾರಂಟಿಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ನಡೆಯಿಂದ ರೈತರು ಸರ್ಕಾರ ಮೇಲೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆಪಾದಿಸಿದರು.&lt;/p&gt;&lt;p&gt;ಸುಧಾಕರ್&zwnj; ಅವರು ಹಿರಿಯ ರಾಜಕಾರಣಿಯಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದರಿಂದ ಆವರ ಆರೋಗ್ಯ ವಿಚಾರವು ಸಾರ್ವಜನಿಕರ ಚರ್ಚೆಗೆ ಕಾರಣವಾಗುತ್ತಿದೆ. ಕುಮಾರಸ್ವಾಮಿಯವರು ಈ ವಿಚಾರದಲ್ಲಿ ಏನು ಮಾತನಾಡಿದರೂ ಗೊತ್ತಿಲ್ಲ. ಆದರೆ ಅವರಿಗೆ ಯಾವುದೋ ಬಲವಾದ ಮಾಹಿತಿ ಗೊತ್ತಿರಬೇಕು ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಯೋಗ್ಯತೆ ಇರಬೇಕು&lt;/strong&gt;&lt;/h2&gt;&lt;p&gt;ಡಾ.ರಾಜ್&zwnj; ಸಮಾಧಿ ಬಗ್ಗೆ ನಟ ಚೇತನ್&zwnj; ಎತ್ತಿರುವ ಪ್ರಶ್ನೆ ಬಗ್ಗೆ ಮಾತನಾಡಿದ ನಿಖಿಲ್&zwnj; ಕುಮಾರಸ್ವಾಮಿ ಅವರು ನಟ ಚೇತನ್&zwnj; ಪ್ರಚಾರಪ್ರಿಯರು.ಅವರಿಗೆ ರಾಜ್&zwnj; ಕುಮಾರ್&zwnj; ಕೊಡುಗೆ ಬಗ್ಗೆ ಗೊತ್ತಿಲ್ಲ ಎನ್ನಿಸುತ್ತದೆ. ರಾಜಕುಮಾರ್&zwnj; ಸಮಾಧಿ ಜಾಗದ ಬಗ್ಗೆ ಪ್ರಶ್ನಿಸಲು ಚೇತನ್&zwnj; ಯಾರು ಎಂದರು. ರಾಜ್&zwnj;ಕುಮಾರ್&zwnj; ಬಗ್ಗೆ ಮಾತನಾಡಿಲಕ್ಕೂ ಯೋಗ್ಯತೆ ಇರಬೇಕು. ಪ್ರಚಾರ ಪ್ರಿಯರಿಗೆ ಇದು ಅರಿವಾಗಬೇಕು ಎಂದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/nikhil-kumaraswamy-slams-karnataka-government-drought-issue-gvd/articleshow-xaqk9iz"/>
        </item>
        <item>
            <title><![CDATA[ಸದ್ದಿಲ್ಲದೇ ಹಸೆಮಣೆ ಏರಿದ ‘ಮೈನಾ’ ನಾಯಕ ನಟ ಸಿದ್ದಾರ್ಥ್‌… ಹುಡುಗಿ ಯಾರು?]]></title>
            <link>https://kannada.asianetnews.com/gallery/tv-talk/myna-serial-actor-siddarth-swamy-got-married-to-his-girlfriend-mk4l2l6</link>
            <guid isPermaLink="true">https://kannada.asianetnews.com/gallery/tv-talk/myna-serial-actor-siddarth-swamy-got-married-to-his-girlfriend-mk4l2l6</guid>
            <pubDate>Tue, 28 Apr 2026 17:24:11 +0530</pubDate>
            <description><![CDATA[Siddarth Swamy : ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ನಾಯಕ ಧ್ರುವನ ಪಾತ್ರದಲ್ಲಿ ಮಿಂಚುತ್ತಿರುವ ನಟ ಸಿದ್ಧಾರ್ಥ್ ಆರ್ ಸ್ವಾಮಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿದ್ಧಾರ್ಥ್ ಮದುವೆಯಾಗಿರುವ ಹುಡುಗಿ ಯಾರು? ಅವರು ಕೂಡ ಜನಪ್ರಿಯ ನಟಿ. ಪೂರ್ತಿ ಮಾಹಿತಿ ಇಲ್ಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9yxzbk1z3fhhfp5yk5wfcy,imgname-siddarth-swamy--7--1777377148275.jpg" type="image/jpeg" height="390" width="690"/>
            <content:encoded><![CDATA[&lt;p&gt;Siddarth Swamy : ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ನಾಯಕ ಧ್ರುವನ ಪಾತ್ರದಲ್ಲಿ ಮಿಂಚುತ್ತಿರುವ ನಟ ಸಿದ್ಧಾರ್ಥ್ ಆರ್ ಸ್ವಾಮಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿದ್ಧಾರ್ಥ್ ಮದುವೆಯಾಗಿರುವ ಹುಡುಗಿ ಯಾರು? ಅವರು ಕೂಡ ಜನಪ್ರಿಯ ನಟಿ. ಪೂರ್ತಿ ಮಾಹಿತಿ ಇಲ್ಲಿದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ನಾಯಕ ಧ್ರುವನ ಪಾತ್ರದ ನಟಿ ಕಿರುತೆರೆ ವೀಕ್ಷಕರ ಮನೆಮಗನಾಗಿರುವ ನಟ ಸಿದ್ದಾರ್ಥ್&zwnj; ಆರ್&zwnj; ಸ್ವಾಮಿ ಸುದ್ದಿ ಇಲ್ಲದೇ ಸಿಹಿ ಸುದ್ದಿ ಕೊಟ್ಟಿದ್ದಾರೆ. ಅಂದರೆ ನಟ ಸುದ್ದಿ ಇಲ್ಲದೇ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಮೈನಾ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ವಿಜಯಲಕ್ಷ್ಮೀ ಜೊತೆ ಸಿದ್ದಾರ್ಥ್ ತೆರೆ ಮೇಲೆ ಹಾಗೂ ತೆರೆಯ ಹಿಂದೆ ಉತ್ತಮ ಸ್ನೇಹ ಹೊಂದಿದ್ದಾರೆ. ಇಬ್ಬರು ಜೊತೆಯಾಗಿ ಫೋಟೊ ಶೂಟ್, ರೀಲ್ಸ್, ಡ್ಯಾನ್ಸ್ ಮಾಡುತ್ತಾ, ಸೋಶಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಇವರಿಬ್ಬರು ಬೆಸ್ಟ್ ಜೋಡಿ ಎಂದೇ ಜನ ಹೇಳುತ್ತಿದ್ದರು.&lt;/p&gt;&lt;img&gt;&lt;p&gt;ವೀಕ್ಷಕರು ಹಾಗೂ ಅಭಿಮಾನಿಗಳು ಸಿದ್ದಾರ್ಥ್ ಮದುವೆ ವಿಜಯಲಕ್ಷ್ಮೀ ಅವರ ಜೊತೆ ನಡೆದಿದೆ ಎಂದು ಹೇಳುತ್ತಿದ್ದರು. ಸಿದ್ದಾರ್ಥ್ ಕೂಡ ತಮ್ಮ ಹುಡುಗಿಯ ಫೋಟೊ ರಿವೀಲ್ ಮಾಡದೆ ಇಬ್ಬರು ಕೈ ಕೈ ಹಿಡಿದಿರುವ ಫೋಟೊ ಹಂಚಿಕೊಂಡು 23.04.2026 - Forever begins now ಎಂದು ಬರೆದುಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಸಿದ್ದಾರ್ಥ್ ಸ್ವಾಮಿ ಕಳೆದ ಆರು ವರ್ಷಗಳಿಂದ ಕಿರುತೆರೆ ನಟರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ ಸೇರಿ ಹಲವಾರು ತೆಲುಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇದೀಗ ತೆಲುಗು ಕಿರುತೆರೆ ನಟಿ ಹಾಗೂ ವಿಜೆ ಸಂಯುಕ್ತಾ ಜೊತೆ ಸಿದ್ದಾರ್ಥ್ ವೈವಾಹಿಕ ಜಿವನಕ್ಕೆ ಕಾಲಿಟ್ಟಿದ್ದಾರೆ. ಇದೇ ಏಪ್ರಿಲ್&zwnj; 23 ರಂದು ಸಪ್ತಪದಿ ತುಳಿದಿದ್ದರು.&lt;/p&gt;&lt;img&gt;&lt;p&gt;ಸಂಯುಕ್ತಾ ಹಲವಾರು ವರ್ಷಗಳಿಂದ ವಿಜೆಯಾಗಿ ಹಾಗೂ ನಟಿಯಾಗಿ ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. &lsquo;ಮುದ್ದು ಸೊಸೆ&rsquo; ನಟಿ ಪ್ರತಿಮಾ ಠಾಕೂರ್&zwnj; ಅವರು ನಾಯಕಿ ಆಗಿ ಅಭಿನಯಿಸಿದ ತೆಲುಗು ಧಾರಾವಾಹಿ &lsquo;ಸಿವಾಂಗಿ&rsquo;ಯಲ್ಲಿ ಮಿತ್ರಾ ಎಂಬ ಪಾತ್ರ ಮಾಡಿದ್ದರು. ಇದಲ್ಲದೇ &lsquo;ಕಲ್ಯಾಣ ವೈಭೋಗಂ&rsquo;, ಪೌರ್ಣಮಿ ಮೊದಲಾದ ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದರು.&lt;/p&gt;]]></content:encoded>
            <category><![CDATA[tv-talk]]></category>
            <dc:creator>Pavna Das</dc:creator>
            <atom:link href="https://kannada.asianetnews.com/gallery/tv-talk/myna-serial-actor-siddarth-swamy-got-married-to-his-girlfriend-mk4l2l6"/>
        </item>
        <item>
            <title><![CDATA[ಹರಿದ ಚಪ್ಪಲಿ ಎಸೆಯಬೇಡಿ,  ಸ್ಲಿಪರ್ ರಿಂದ ಹೀಗೆ ಮನೆ ಅಲಂಕರಿಸಿ]]></title>
            <link>https://kannada.asianetnews.com/gallery/life/5-easy-home-decor-ideas-using-waste-slippers-suh-bgyn53t</link>
            <guid isPermaLink="true">https://kannada.asianetnews.com/gallery/life/5-easy-home-decor-ideas-using-waste-slippers-suh-bgyn53t</guid>
            <pubDate>Tue, 28 Apr 2026 17:47:16 +0530</pubDate>
            <description><![CDATA[ಹರಿದು ಹೋದ ಚಪ್ಪಲಿಗಳನ್ನು ಕಸಕ್ಕೆ ಎಸೆಯುವ ಬದಲು, ಅದರಿಂದಲೇ ಮನೆಯನ್ನು ಅಲಂಕರಿಸಬಹುದು. ಹೋಮ್ ಡೆಕೋರ್ ಐಡಿಯಾಗಳ ಮೂಲಕ ನಿಮ್ಮ ಮನೆಗೆ ಕಡಿಮೆ ಖರ್ಚಿನಲ್ಲಿ ಕ್ರಿಯೇಟಿವ್ ಲುಕ್ ನೀಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9pp5a9h7dag3hvgp1ysc9j,imgname-slipper-craft-ideas-easy-1777368503625.jpg" type="image/jpeg" height="390" width="690"/>
            <content:encoded><![CDATA[&lt;p&gt;ಹರಿದು ಹೋದ ಚಪ್ಪಲಿಗಳನ್ನು ಕಸಕ್ಕೆ ಎಸೆಯುವ ಬದಲು, ಅದರಿಂದಲೇ ಮನೆಯನ್ನು ಅಲಂಕರಿಸಬಹುದು. &amp;nbsp;ಹೋಮ್ ಡೆಕೋರ್ ಐಡಿಯಾಗಳ ಮೂಲಕ ನಿಮ್ಮ ಮನೆಗೆ ಕಡಿಮೆ ಖರ್ಚಿನಲ್ಲಿ ಕ್ರಿಯೇಟಿವ್ ಲುಕ್ ನೀಡಿ.&lt;/p&gt;&lt;img&gt;&lt;p&gt;ಹಳೆಯ ಚಪ್ಪಲಿಗಳಿಗೆ ಬಣ್ಣಬಣ್ಣದ ಪೇಂಟ್, ಕನ್ನಡಿ ಅಥವಾ ಬಟ್ಟೆಯಿಂದ ಅಲಂಕಾರ ಮಾಡಿ ನೀವು ಒಂದು ಅದ್ಭುತ ವಾಲ್ ಹ್ಯಾಂಗಿಂಗ್ ತಯಾರಿಸಬಹುದು. ಚಪ್ಪಲಿಯ ಸೋಲ್ ಅನ್ನು ಬೇಸ್ ಆಗಿ ಬಳಸಿ, ಅದರ ಮೇಲೆ ಡಿಸೈನ್ ಮಾಡಿ ದಾರ ಅಥವಾ ರಿಬ್ಬನ್&zwnj;ನಿಂದ ನೇತುಹಾಕಿ.&amp;nbsp;&lt;/p&gt;&lt;img&gt;&lt;p&gt;ಚಪ್ಪಲಿಗಳನ್ನು ಕತ್ತರಿಸಿ ಅಥವಾ ಸ್ವಲ್ಪ ಬದಲಾವಣೆ ಮಾಡಿ ನೀವು ಚಿಕ್ಕಚಿಕ್ಕ ಪ್ಲಾಂಟರ್&zwnj;ಗಳನ್ನು ತಯಾರಿಸಬಹುದು. ಇವುಗಳಲ್ಲಿ ನೀವು &amp;nbsp;ಸಣ್ಣ ಗಿಡಗಳನ್ನು ನೆಡಬಹುದು. ಇದಕ್ಕೆ ಬಣ್ಣ ಹಚ್ಚಿ ಗೋಡೆಗೆ ನೇತುಹಾಕಿ ಅಥವಾ ಟೇಬಲ್ ಮೇಲೆ ಇಡಿ. ಇದು ನಿಮ್ಮ ಗಾರ್ಡನ್ ಅಥವಾ ಮನೆಯ ಮೂಲೆಗಳಿಗೆ ನ್ಯಾಚುರಲ್ ಮತ್ತು ಫ್ರೆಶ್ ಲುಕ್ ನೀಡುತ್ತದೆ.&lt;/p&gt;&lt;img&gt;&lt;p&gt;ಹರಿದ ಚಪ್ಪಲಿಗಳನ್ನು ಒಂದಕ್ಕೊಂದು ಜೋಡಿಸಿ ನೀವು ಒಂದು ಗಟ್ಟಿಯಾದ ಮತ್ತು ವಿಭಿನ್ನವಾಗಿ ಕಾಣುವ ಡೋರ್ ಮ್ಯಾಟ್ ತಯಾರಿಸಬಹುದು. ಬೇರೆ ಬೇರೆ ಬಣ್ಣದ ಸೋಲ್&zwnj;ಗಳನ್ನು ಜೋಡಿಸಿ ಒಂದು ಪ್ಯಾಟರ್ನ್ ಕೂಡಾ ರಚಿಸಬಹುದು. ಇದು ನೋಡಲು ವಿಶಿಷ್ಟವಾಗಿ ಕಾಣುವುದಲ್ಲದೆ, ಹೊರಾಂಗಣ ಬಳಕೆಗೆ ಬಹಳ ಬಾಳಿಕೆ ಬರುತ್ತದೆ. ಇದನ್ನೂ ಓದಿ&lt;/p&gt;&lt;img&gt;&lt;p&gt;ಚಪ್ಪಲಿಅನ್ನು ಬೇಸ್ ಆಗಿ ಬಳಸಿ, ಅದಕ್ಕೆ ಹುಕ್&zwnj;ಗಳನ್ನು ಸಿಕ್ಕಿಸಿ ನೀವು ಒಂದು ಕೀ-ಹೋಲ್ಡರ್ ತಯಾರಿಸಬಹುದು. ಇದನ್ನು ಗೋಡೆಗೆ ನೇತುಹಾಕಿ ನಿಮ್ಮ ಕೀಗಳನ್ನು ಸುಲಭವಾಗಿ ವ್ಯವಸ್ಥಿತವಾಗಿ ಇಡಬಹುದು. ಬೇಕಿದ್ದರೆ ಪೇಂಟ್, ಸ್ಟಿಕ್ಕರ್ ಅಥವಾ ಕ್ರಾಫ್ಟ್ ವಸ್ತುಗಳಿಂದ ಅಲಂಕರಿಸಿ ಇನ್ನಷ್ಟು ಆಕರ್ಷಕವಾಗಿ ಮಾಡಬಹುದು.&lt;/p&gt;&lt;img&gt;&lt;p&gt;ನಿಮ್ಮ ಬಳಿ ರಬ್ಬರ್ ಅಥವಾ ಫೋಮ್ ಚಪ್ಪಲಿ ಇದ್ದರೆ, ಅದರಿಂದ ಒಂದು ಅದ್ಭುತ ಮೊಬೈಲ್ ಸ್ಟ್ಯಾಂಡ್ ಕೂಡಾ ತಯಾರಿಸಬಹುದು. ಅದನ್ನು ಸರಿಯಾದ ಆಕಾರಕ್ಕೆ ಕತ್ತರಿಸಿ, ಅಗತ್ಯಕ್ಕೆ ತಕ್ಕಂತೆ ಆಂಗಲ್ ಸೆಟ್ ಮಾಡಿ. ಇದು ನಿಮ್ಮ ಡೆಸ್ಕ್ ಅಥವಾ ಬೆಡ್&zwnj;ಸೈಡ್&zwnj;ಗೆ ಬಹಳ ಉಪಯುಕ್ತ ಮತ್ತು ಸ್ಟೈಲಿಶ್ ಆಕ್ಸೆಸರಿ ಆಗಬಹುದು. &amp;nbsp;&lt;/p&gt;]]></content:encoded>
            <category><![CDATA[life]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/life/5-easy-home-decor-ideas-using-waste-slippers-suh-bgyn53t"/>
        </item>
        <item>
            <title><![CDATA[ಬೆಂಗಳೂರು-ತುಮಕೂರು ರೈಲು ಮಾರ್ಗ ಚತುಷ್ಪಥ, ಯಲಹಂಕದಿಂದ ಅರಸೀಕೆರೆಗೆ ಹೊಸ ಮೆಮು, ಏನಿದು ಮಹಾಯೋಜನೆ?]]></title>
            <link>https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb</link>
            <guid isPermaLink="true">https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb</guid>
            <pubDate>Tue, 28 Apr 2026 17:44:50 +0530</pubDate>
            <description><![CDATA[ಕೇಂದ್ರ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು-ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದರೊಂದಿಗೆ, ಯಲಹಂಕದಿಂದ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ ಮತ್ತು ತುಮಕೂರಿನಲ್ಲಿ ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ, ಇದು ಪ್ರಯಾಣಿಕರ ಅನುಕೂಲ ಮತ್ತು ಸುರಕ್ಷತೆಯನ್ನು ಹೆಚ್ಚಿಸಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jrvze3gtqabj6f2aspz2e39c,imgname-tumakuru-railway-station--2-.jpg" type="image/jpeg" height="390" width="690"/>
            <content:encoded><![CDATA[&lt;p&gt;ತುಮಕೂರು: ಬೆಂಗಳೂರು&ndash;ತುಮಕೂರು ರೈಲು ಮಾರ್ಗವನ್ನು ಚತುಷ್ಪಥಗೊಳಿಸುವ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಈ ಯೋಜನೆ ಜಾರಿಗೆ ಬಂದರೆ, ಈ ಪ್ರಮುಖ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಿ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಸಿಗಲಿದೆ.&lt;/p&gt;&lt;p&gt;ತುಮಕೂರು ನಗರದ ಮಾರುತಿನಗರ ಹಾಗೂ ಕ್ಯಾತ್ಸಂದ್ರ ರೈಲು ನಿಲ್ದಾಣಗಳ ಸಮೀಪ ಪಾದಚಾರಿ ಸುರಂಗ ಮಾರ್ಗಗಳ (ಸಬ್&zwnj;ವೇ) ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಶನಿವಾರ ನೆರವೇರಿಸಲಾಯಿತು. ಈ ಸಬ್&zwnj;ವೇಗಳ ನಿರ್ಮಾಣದಿಂದ ಪಾದಚಾರಿಗಳಿಗೆ ಸುರಕ್ಷಿತವಾಗಿ ರೈಲು ಹಳಿಗಳನ್ನು ದಾಟುವ ಅವಕಾಶ ದೊರೆಯಲಿದೆ.&lt;/p&gt;&lt;h2&gt;ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆ&lt;/h2&gt;&lt;p&gt;ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಯಲಹಂಕದಿಂದ ಯಶವಂತಪುರ, ತುಮಕೂರು ಮಾರ್ಗವಾಗಿ ಅರಸೀಕೆರೆವರೆಗೆ ಹೊಸ ಮೆಮು ರೈಲು ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಿದರು. ಇದರೊಂದಿಗೆ, ಯಲಹಂಕದಲ್ಲಿ ಹೊಸ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ ಮಾಡುವ ಯೋಜನೆಯೂ ರೂಪುಗೊಂಡಿದೆ.&lt;/p&gt;&lt;p&gt;ತುಮಕೂರಿನ ತಿಮ್ಮರಾಜನಹಳ್ಳಿಯಲ್ಲಿ ಇಂಟಿಗ್ರೇಟೆಡ್ ಕಂಟೈನರ್ ಲಾಜಿಸ್ಟಿಕ್ಸ್ ಹಬ್ ನಿರ್ಮಾಣಗೊಳ್ಳಲಿದ್ದು, ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆ ವ್ಯಕ್ತವಾಗಿದೆ. ಇದೇ ವೇಳೆ, ರಾಯದುರ್ಗ&ndash;ತುಮಕೂರು ಹೊಸ ರೈಲು ಮಾರ್ಗ ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿದ್ದು, 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು. ತುಮಕೂರು&ndash;ದಾವಣಗೆರೆ&ndash;ಚಿತ್ರದುರ್ಗ ಹೊಸ ರೈಲು ಯೋಜನೆಯೂ ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ.&lt;/p&gt;&lt;h2&gt;ಸಬ್&zwnj;ವೇಗಳ ನಿರ್ಮಾಣ&lt;/h2&gt;&lt;p&gt;ಪಾದಚಾರಿ ಸುರಂಗ ಮಾರ್ಗಗಳ ನಿರ್ಮಾಣದಿಂದ ರೈಲು ಹಳಿಗಳ ಬಳಿ ಅನಧಿಕೃತ ಪ್ರವೇಶವನ್ನು ತಡೆಗಟ್ಟುವ ಜೊತೆಗೆ ಸುರಕ್ಷತೆಯನ್ನು ಹೆಚ್ಚಿಸಲಾಗುತ್ತದೆ. ಕ್ಯಾತ್ಸಂದ್ರ ರೈಲು ನಿಲ್ದಾಣದ ಸಮೀಪದ ಹಳೆಯ ಲೆವೆಲ್ ಕ್ರಾಸಿಂಗ್ ಬಳಿ ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಸಬ್&zwnj;ವೇ ನಿರ್ಮಾಣಗೊಳ್ಳಲಿದೆ. ಹಾಗೆಯೇ, ತುಮಕೂರು ಮತ್ತು ಕ್ಯಾತ್ಸಂದ್ರ ನಡುವಿನ ಮಾರುತಿನಗರದಲ್ಲಿ ಸುಮಾರು 3.4 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಸಬ್&zwnj;ವೇ ನಿರ್ಮಿಸಲಾಗುತ್ತಿದೆ.&lt;/p&gt;&lt;p&gt;ಈ ಎರಡೂ ಕಾಮಗಾರಿಗಳು 2027ರ ಜನವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ಗ್ರಾಮಾಂತರ ಶಾಸಕ ಸುರೇಶಗೌಡ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.&lt;/p&gt;&lt;p&gt;ಒಟ್ಟಿನಲ್ಲಿ, ಬೆಂಗಳೂರು&ndash;ತುಮಕೂರು ರೈಲು ಮಾರ್ಗದ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದರೆ, ಪ್ರಯಾಣಿಕರಿಗೆ ಹೆಚ್ಚು ಸುರಕ್ಷತೆ, ವೇಗ ಮತ್ತು ಅನುಕೂಲತೆ ದೊರೆಯುವಂತಾಗಲಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Gowthami K</dc:creator>
            <atom:link href="https://kannada.asianetnews.com/karnataka-districts/bengaluru-tumakuru-railway-line-to-be-quadrupled-says-union-minister-v-somanna-gdp/articleshow-8tgwbxb"/>
        </item>
        <item>
            <title><![CDATA[Vastu Tips: ಮನೆಯ ವಾಸ್ತು ಬಾಗಿಲು ಹೇಗಿರಬೇಕು?  ಸರಿಯಾದ ದಿಕ್ಕು ಯಾವುದು ಗೊತ್ತಾ]]></title>
            <link>https://kannada.asianetnews.com/webstories/astrology/vastu-shastra-tips-for-main-door-color-shape-and-direction-all-you-need-to-know-kvn-bl1g385</link>
            <guid isPermaLink="true">https://kannada.asianetnews.com/webstories/astrology/vastu-shastra-tips-for-main-door-color-shape-and-direction-all-you-need-to-know-kvn-bl1g385</guid>
            <pubDate>Tue, 28 Apr 2026 17:32:32 +0530</pubDate>
            <description><![CDATA[ಮನೆಯ ವಾಸ್ತು ಬಾಗಿಲು ಬಹಳ ವಿಶೇಷ. ಯಾಕಂದ್ರೆ, ಶಕ್ತಿ ಬರೋದು, ಹೋಗೋದು ಇಲ್ಲಿಂದಲೇ. ಮುಖ್ಯ ದ್ವಾರದಲ್ಲಿ ಏನಾದ್ರೂ ದೋಷ ಇದ್ರೆ, ಅದು ಮನೆಯಲ್ಲಿರೋ ಎಲ್ಲರ ಮೇಲೂ ಪರಿಣಾಮ ಬೀರಬಹುದು. ಹಾಗಾಗಿ, ಇದನ್ನು ಕಟ್ಟಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9sqfh3eb0ndkh7e0a56g1y,imgname-vastu-tips-for-doors-1-1777371692576.jpg" type="image/jpeg" height="390" width="690"/>
            <category><![CDATA[astrology]]></category>
            <dc:creator>Naveen Kodase</dc:creator>
            <atom:link href="https://kannada.asianetnews.com/webstories/astrology/vastu-shastra-tips-for-main-door-color-shape-and-direction-all-you-need-to-know-kvn-bl1g385"/>
        </item>
        <item>
            <title><![CDATA[ಜೂನ್ 2 ರಿಂದ ಮಹಾರಾಜಯೋಗ, ಈ 3 ರಾಶಿಗೆ ಉದ್ಯೋಗದಲ್ಲಿ ಬಡ್ತಿ, ಲಾಭ]]></title>
            <link>https://kannada.asianetnews.com/gallery/astrology/jupiter-transit-creates-maha-rajyoga-for-these-3-zodiac-signs-suh-se09rmk</link>
            <guid isPermaLink="true">https://kannada.asianetnews.com/gallery/astrology/jupiter-transit-creates-maha-rajyoga-for-these-3-zodiac-signs-suh-se09rmk</guid>
            <pubDate>Tue, 28 Apr 2026 17:24:53 +0530</pubDate>
            <description><![CDATA[Jupiter Transit ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಪ್ರಮುಖ ಶುಭ ಯೋಗ ರೂಪುಗೊಳ್ಳುತ್ತಿದೆ. ಇದನ್ನು ಮಹಾರಾಜಯೋಗ ಎಂದು ಕರೆಯುತ್ತಾರೆ. ಗುರು ಗ್ರಹವು ಜೂನ್ 2 ರಿಂದ ಈ ಯೋಗವನ್ನು ಉಂಟುಮಾಡುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kany48gne1hdwqyq27ghyfbz,imgname-these-are-the-zodiac-signs-that-will-overcome-poverty-in-2026-1763820315157.jpg" type="image/jpeg" height="390" width="690"/>
            <content:encoded><![CDATA[&lt;p&gt;Jupiter Transit ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಪ್ರಮುಖ ಶುಭ ಯೋಗ ರೂಪುಗೊಳ್ಳುತ್ತಿದೆ. ಇದನ್ನು ಮಹಾರಾಜಯೋಗ ಎಂದು ಕರೆಯುತ್ತಾರೆ. ಗುರು ಗ್ರಹವು ಜೂನ್ 2 ರಿಂದ ಈ ಯೋಗವನ್ನು ಉಂಟುಮಾಡುತ್ತದೆ.&lt;/p&gt;&lt;img&gt;ಈ ಯೋಗದಿಂದ ಕರ್ಕಾಟಕ ರಾಶಿಯವರು ಹೆಚ್ಚು ಲಾಭ ಪಡೆಯುತ್ತಾರೆ. ಏಕೆಂದರೆ ಗುರು ಇದೇ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿರುತ್ತಾನೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಆದಾಯ ಹೆಚ್ಚಳ, ಹೊಸ ಜವಾಬ್ದಾರಿಗಳು ಬರುತ್ತವೆ. ಮದುವೆಗಾಗಿ ಕಾಯುತ್ತಿರುವವರಿಗೆ ಉತ್ತಮ ಸಂಬಂಧಗಳು ಕೂಡಿಬರಬಹುದು. ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚಾಗುವ ಸೂಚನೆಗಳಿವೆ. ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಆರಂಭವಾಗಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವವೂ ಹೆಚ್ಚಾಗುತ್ತದೆ.&lt;img&gt;ವೃಶ್ಚಿಕ ರಾಶಿಯವರಿಗೂ ಈ ಯೋಗವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆಕಸ್ಮಿಕವಾಗಿ ಹಣ ಬರುವ ಸಾಧ್ಯತೆ ಇದೆ. ಹಳೆಯ ಸಮಸ್ಯೆಗಳು ಕಡಿಮೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಉತ್ತಮ ಅವಕಾಶಗಳು ಬರಬಹುದು. ವ್ಯಾಪಾರದಲ್ಲಿ ಹೊಸ ಒಪ್ಪಂದಗಳು ಏರ್ಪಡುವ ಸಾಧ್ಯತೆ ಇದೆ. ಹಳೆಯ ಸಾಲಗಳು ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋರ್ಟ್ ಕೇಸ್&zwnj;ಗಳಿದ್ದರೆ ಅವುಗಳಲ್ಲಿಯೂ ಉತ್ತಮ ಫಲಿತಾಂಶ ಬರಬಹುದು. ಕುಟುಂಬದಲ್ಲಿ ಸಂತೋಷದ ಸುದ್ದಿ ಕೇಳುವ ಅವಕಾಶವಿದೆ.&lt;img&gt;ಮೀನ ರಾಶಿಯವರಿಗೂ ಈ ಯೋಗವು ಅನುಕೂಲಕರವಾಗಿದೆ. ಆದಾಯ ಹೆಚ್ಚಾಗುವುದರ ಜೊತೆಗೆ ಮನೆ ಅಥವಾ ವಾಹನ ಖರೀದಿಸುವ ಅವಕಾಶವಿರುತ್ತದೆ. ಹೊಸ ಕೆಲಸಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ವಿದೇಶಕ್ಕೆ ಹೋಗಲು ಬಯಸುವವರಿಗೆ ಅವಕಾಶಗಳು ಬರಬಹುದು. ಕುಟುಂಬ ಸದಸ್ಯರಿಂದ ಸಹಾಯ ಸಿಗುತ್ತದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಆದರೆ, ಇವೆಲ್ಲವೂ ಜ್ಯೋತಿಷ್ಯದ ನಂಬಿಕೆಗಳನ್ನು ಆಧರಿಸಿವೆ. ಪ್ರತಿಯೊಬ್ಬರ ಜೀವನದಲ್ಲಿ ಫಲಿತಾಂಶಗಳು ವಿಭಿನ್ನವಾಗಿರಬಹುದು, ಆದ್ದರಿಂದ ಈ ವಿಷಯಗಳನ್ನು ನಂಬಿಕೆಯ ಜೊತೆಗೆ ಎಚ್ಚರಿಕೆಯಿಂದಲೂ ನೋಡಬೇಕು.]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/jupiter-transit-creates-maha-rajyoga-for-these-3-zodiac-signs-suh-se09rmk"/>
        </item>
        <item>
            <title><![CDATA[ಶಾಸಕರಿಗೆ ಕಾನೂನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ:  ಬಿಜೆಪಿ ಸಚಿವ ನಿತೇಶ್ ರಾಣೆಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್‌!]]></title>
            <link>https://kannada.asianetnews.com/india-news/bjp-minister-nitesh-rane-jail-term-insulting-government-engineer-mud-walk-san/articleshow-e3oyh2m</link>
            <guid isPermaLink="true">https://kannada.asianetnews.com/india-news/bjp-minister-nitesh-rane-jail-term-insulting-government-engineer-mud-walk-san/articleshow-e3oyh2m</guid>
            <pubDate>Tue, 28 Apr 2026 17:18:22 +0530</pubDate>
            <description><![CDATA[ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಸರ್ಕಾರಿ ಇಂಜಿನಿಯರ್‌ಗೆ ಸಾರ್ವಜನಿಕವಾಗಿ ಅವಮಾನಿಸಿದ ಪ್ರಕರಣದಲ್ಲಿ, ಮಹಾರಾಷ್ಟ್ರ ಸಚಿವ ನಿತೇಶ್ ರಾಣೆಗೆ ಸಿಂಧುದುರ್ಗ ನ್ಯಾಯಾಲಯ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq9yex6gyvxd27b6mjz3dqzt,imgname-bjp-minister-nitesh-rane-1777376654544.jpeg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಿಂಧುದುರ್ಗ (ಏ.28):&lt;/strong&gt; ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬವಾಗಿದ್ದಕ್ಕೆ ಆಕ್ರೋಶಗೊಂಡು ಸರ್ಕಾರಿ ಇಂಜಿನಿಯರ್&zwnj; ಒಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿ, ಬಲವಂತವಾಗಿ ಕೆಸರು ನೀರಿನಲ್ಲಿ ನಡೆಸಿದ್ದ ಮಹಾರಾಷ್ಟ್ರದ ಕ್ಯಾಬಿನೆಟ್ ಸಚಿವ ಮತ್ತು ಬಿಜೆಪಿ ನಾಯಕ ನಿತೇಶ್ ನಾರಾಯಣ ರಾಣೆ ಅವರಿಗೆ ಸಿಂಧುದುರ್ಗ ನ್ಯಾಯಾಲಯವು ಸೋಮವಾರ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿ.ಎಸ್. ದೇಶ್&zwnj;ಮುಖ್ ಅವರು, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504ರ ಅಡಿಯಲ್ಲಿ (ಶಾಂತಿ ಭಂಗ ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ನಿತೇಶ್ ರಾಣೆ ಅವರನ್ನು ದೋಷಿ ಎಂದು ಘೋಷಿಸಿದರು.:&lt;/p&gt;&lt;p&gt;ಶಾಸಕರಾದವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಮತ್ತು ಸಾರ್ವಜನಿಕವಾಗಿ ಸರ್ಕಾರಿ ನೌಕರರನ್ನು ಅವಮಾನಿಸಬಾರದು. ಈ ಕಾರಣಕ್ಕಾಗಿ ನಿತೇಶ್ ರಾಣೆಗೆ 1 ತಿಂಗಳು ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ 50,000 ರೂಪಾಯಿಗಳನ್ನು ಮಾನಸಿಕ ಹಿಂಸೆ ಮತ್ತು ಅವಮಾನ ಅನುಭವಿಸಿದ ಇಂಜಿನಿಯರ್ ಪ್ರಕಾಶ್ ದಾದೋಜಿ ಶೆಡೇಕರ್ ಅವರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 30 ಮಂದಿ ಆರೋಪಿಗಳಿದ್ದರು, ಆದರೆ ಕೇವಲ ನಿತೇಶ್ ರಾಣೆ ಮಾತ್ರ ದೋಷಿಯಾಗಿದ್ದು, ಉಳಿದ 29 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.&lt;/p&gt;&lt;h2&gt;&lt;strong&gt;ಹಿನ್ನೆಲೆ ಏನು?&lt;/strong&gt;&lt;/h2&gt;&lt;p&gt;ಘಟನೆಯು 2019 ಜುಲೈ 4 ರಂದು ನಡೆದಿತ್ತು. ಸಾವಂತವಾಡಿಯ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಎಂಜಿನಿಯರ್ ಪ್ರಕಾಶ್ ಶೆಡೇಕರ್ ಅವರನ್ನು ಕಂಕವಲಿಯ ಗಡ್ ನದಿ ಸೇತುವೆಯ ಬಳಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಪರಿಶೀಲನೆಗೆ ರಾಣೆ ಕರೆಸಿದ್ದರು. ಆ ಸಮಯದಲ್ಲಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರಾಣೆ ಮತ್ತು ಅವರ ಬೆಂಬಲಿಗರು ಅಧಿಕಾರಿಯನ್ನು ಅವಮಾನಿಸಿದ್ದರು.&lt;/p&gt;&lt;p&gt;ಈ ವೇಳೆ ಇಂಜಿನಿಯರ್ ಮೇಲೆ ಕೆಸರು ನೀರು ಸುರಿಯಲಾಗಿತ್ತು, ಬಿಳಿ ಪ್ಲಾಸ್ಟಿಕ್ ಪಟ್ಟಿಯಿಂದ ಅವರನ್ನು ಕಟ್ಟಲಾಗಿತ್ತು ಮತ್ತು ಬಲವಂತವಾಗಿ ಕೆಸರು ನೀರಿನಲ್ಲಿ ನಡೆಸಲಾಗಿತ್ತು ಎಂದು ಎಫ್&zwnj;ಐಆರ್ ದಾಖಲಾಗಿತ್ತು. ಆದರೆ, ವಿಚಾರಣೆಯ ವೇಳೆ ಕೆಸರು ಸುರಿದ ಮತ್ತು ಹಲ್ಲೆ ನಡೆಸಿದ ಆರೋಪಗಳಿಗೆ ಬಲವಾದ ಸಾಕ್ಷ್ಯಗಳು ಸಿಗದ ಕಾರಣ ನ್ಯಾಯಾಲಯ ಆ ಗಂಭೀರ ಆರೋಪಗಳಿಂದ ರಾಣೆಯನ್ನು ಮುಕ್ತಗೊಳಿಸಿತು. ಆದರೆ, &quot;ಸಾರ್ವಜನಿಕವಾಗಿ ಕೆಸರು ನೀರಿನಲ್ಲಿ ನಡೆಸಿದ್ದು&quot; ಸಾಬೀತಾದ ಕಾರಣ ಶಿಕ್ಷೆ ಪ್ರಕಟಿಸಲಾಗಿದೆ.&lt;/p&gt;&lt;p&gt;ನಿತೇಶ್ ರಾಣೆ ಅವರು ಈಗಾಗಲೇ 2019 ರಲ್ಲಿ 5 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು, ಆ ಅವಧಿಯನ್ನು ಶಿಕ್ಷೆಯಲ್ಲಿ ಕಡಿತಗೊಳಿಸಲಾಗುತ್ತದೆ. ಸದ್ಯ ನ್ಯಾಯಾಲಯವು ರಾಣೆ ಅವರ ಮನವಿಯ ಮೇರೆಗೆ ಶಿಕ್ಷೆಗೆ ತಡೆ ನೀಡಿದ್ದು, ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, &quot;ಸಾರ್ವಜನಿಕರ ಹಿತದೃಷ್ಟಿಯಿಂದ ಧ್ವನಿ ಎತ್ತುವ ಉದ್ದೇಶವಿದ್ದರೂ, ಅಧಿಕಾರದ ದುರ್ಬಳಕೆ ಮಾಡಿ ಸರ್ಕಾರಿ ನೌಕರರನ್ನು ಅವಮಾನಿಸುವ ಇಂತಹ ಪ್ರವೃತ್ತಿಗಳನ್ನು ತಡೆಯಬೇಕಾದ ಅಗತ್ಯವಿದೆ,&quot; ಎಂದು ಮಾರ್ಮಿಕವಾಗಿ ಹೇಳಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Santosh Naik</dc:creator>
            <atom:link href="https://kannada.asianetnews.com/india-news/bjp-minister-nitesh-rane-jail-term-insulting-government-engineer-mud-walk-san/articleshow-e3oyh2m"/>
        </item>
    </channel>
</rss>
