<?xml version="1.0" encoding="UTF-8" standalone="yes"?>
<rss xmlns:content="http://purl.org/rss/1.0/modules/content/" xmlns:atom="http://www.w3.org/2005/Atom" xmlns:media="http://search.yahoo.com/mrss/" xmlns:dc="http://purl.org/dc/elements/1.1/" version="2.0">
    <channel>
        <title>Asianet Suvarna News</title>
        <link>https://kannada.asianetnews.com</link>
        <description><![CDATA[Suvarna News - No.1 News channel in Karnataka, which delivers Local and International news in Kannada language.]]></description>
        <image>
            <url>https://static-assets.asianetnews.com/images/ogimages/OG_Kannada.jpg</url>
            <width>143</width>
            <height>100</height>
            <link>https://kannada.asianetnews.com</link>
            <title>Asianet Suvarna News</title>
        </image>
        <lastBuildDate>Sun, 05 Jul 2026 18:41:49 +0530</lastBuildDate>
        <atom:link href="https://kannada.asianetnews.com/rss" rel="self" type="application/rss+xml"/>
        <item>
            <title><![CDATA[ಕಲ್ಯಾಣ 'ಕಾಣದ' ಕರ್ನಾಟಕ ವಾಸ್ತವ ಸ್ಥಿತಿ ಇಲ್ಲಿದೆ ನೋಡಿ; ಮೊಬೈಲ್ ಬೆಳಕಿನಲ್ಲಿ ಕೆಕೆಆರ್‌ಟಿಸಿ ಬಸ್ ಪ್ರಯಾಣ!]]></title>
            <link>https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv</link>
            <guid isPermaLink="true">https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv</guid>
            <pubDate>Sun, 05 Jul 2026 18:41:48 +0530</pubDate>
            <description><![CDATA[ಕಲಬುರಗಿಯಲ್ಲಿ, ಕೆಕೆಆರ್‌ಟಿಸಿ ಬಸ್ಸೊಂದರ ಹೆಡ್‌ಲೈಟ್ ಕೆಟ್ಟುಹೋದಾಗ, ನಿರ್ವಾಹಕ ಮೊಬೈಲ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿ ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ. ಈ ಘಟನೆಯು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws68x9ypm69ks1ejwgnhrj6,imgname-kkrtc-bus-headlight-damage-1783256872253.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಕಲಬುರಗಿ (ಜು.05): ಕ&lt;/strong&gt;ರ್ನಾಟಕದ ಸಾರಿಗೆ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಈ ಘಟನೆ ಒಂದು ಕನ್ನಡಿ ಹಿಡಿದಂತಿದೆ. ಬಸ್ಸಿನ ಹೆಡ್&zwnj;ಲೈಟ್ ಕೆಟ್ಟುಹೋಗಿದ್ದರೂ, ಕಂಡಕ್ಟರ್ ಮೊಬೈಲ್ ಫೋನ್ ಟಾರ್ಚ್ ಹಿಡಿದು ದಾರಿ ತೋರಿಸುತ್ತಿದ್ದರೆ, ಚಾಲಕ ಕತ್ತಲಲ್ಲೇ ಬಸ್ ಚಲಾಯಿಸಿರುವ ಭೀಕರ ಘಟನೆ ಕಲಬುರಗಿಯಲ್ಲಿ ನಡೆದಿದೆ.&lt;/p&gt;&lt;h2&gt;&lt;strong&gt;ಏನಿದು ಘಟನೆ?&lt;/strong&gt;&lt;/h2&gt;&lt;p&gt;ಕಲಬುರಗಿಯಿಂದ ಚಿಂಚೋಳಿ ಮಾರ್ಗವಾಗಿ ಸಂಚರಿಸುತ್ತಿದ್ದ &lt;strong&gt;KA-28 F-1985 ನೋಂದಣಿ ಸಂಖ್ಯೆ&lt;/strong&gt;ಯ ಕೆಕೆಆರ್&zwnj;ಟಿಸಿ (KKRTC) ಬಸ್ಸಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಸ್ಸಿನ ಹೆಡ್&zwnj;ಲೈಟ್&zwnj;ಗಳು ಸಂಪೂರ್ಣವಾಗಿ ಕೆಟ್ಟುಹೋಗಿದ್ದವು. ಆದರೆ, ಬಸ್ಸನ್ನು ರಸ್ತೆಯಲ್ಲೇ ನಿಲ್ಲಿಸುವ ಬದಲು ಅಥವಾ ಬದಲಿ ವ್ಯವಸ್ಥೆ ಮಾಡುವ ಬದಲು, ಚಾಲಕ ಮತ್ತು ಕಂಡಕ್ಟರ್ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಕಂಡಕ್ಟರ್ ಬಸ್ಸಿನ ಮುಂದಿನ ಕಿಟಕಿಯಿಂದ ಮೊಬೈಲ್ ಫೋನ್ ಫ್ಲಾಶ್ ಲೈಟ್ ಆನ್ ಮಾಡಿ ದಾರಿ ತೋರಿಸುತ್ತಿದ್ದರೆ, ಚಾಲಕ ಬಸ್ ಓಡಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.&lt;/p&gt;&lt;h2&gt;&lt;strong&gt;ಸಾರ್ವಜನಿಕರ ಆಕ್ರೋಶ:&lt;/strong&gt;&lt;/h2&gt;&lt;p&gt;'ಇದು ಸರ್ಕಾರದ ಹೊಸ ಹೆಡ್&zwnj;ಲೈಟ್ ತಂತ್ರಜ್ಞಾನವೇ?' ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ. ಹೆಡ್&zwnj;ಲೈಟ್ ಇಲ್ಲದ ಬಸ್ಸನ್ನು ರಸ್ತೆಗೆ ಬಿಟ್ಟಿದ್ದು ಯಾರು? ಫಿಟ್&zwnj;ನೆಸ್ ಸರ್ಟಿಫಿಕೇಟ್ ನೀಡಿದವರು ಯಾರು? ಎಂಬ ಪ್ರಶ್ನೆಗಳು ಎದ್ದಿವೆ. ಸಾಮಾನ್ಯ ನಾಗರಿಕರು ತಮ್ಮ ಖಾಸಗಿ ವಾಹನದಲ್ಲಿ ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಸಾರಿಗೆ ಇಲಾಖೆ, ಸರ್ಕಾರಿ ಬಸ್&zwnj;ಗಳ ಈ ಭೀಕರ ನಿರ್ಲಕ್ಷ್ಯಕ್ಕೆ ಏನು ಹೇಳುತ್ತದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.&lt;/p&gt;&lt;h2&gt;&lt;strong&gt;ಶಕ್ತಿ ಯೋಜನೆ ಮತ್ತು ನಿರ್ವಹಣಾ ಕೊರತೆ:&lt;/strong&gt;&lt;/h2&gt;&lt;p&gt;ಈ ಘಟನೆಯು ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಆರ್ಥಿಕ ಸಂಕಷ್ಟವನ್ನು ಮತ್ತೆ ಮುನ್ನೆಲೆಗೆ ತಂದಿದೆ. ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ ಸುಮಾರು 4,573 ಕೋಟಿ ರೂಪಾಯಿ ಅನುದಾನ ಬಾಕಿ ಇದೆ ಎಂದು ವರದಿಯಾಗಿದೆ. ಹಣದ ಕೊರತೆಯಿಂದಾಗಿ ಹಳೆಯ ಬಸ್&zwnj;ಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲವೇ? ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿ ಬಸ್&zwnj;ಗಳನ್ನು ಓಡಿಸಲಾಗುತ್ತಿದೆಯೇ ಎಂಬ ಅನುಮಾನಗಳು ಮೂಡುತ್ತಿವೆ.&lt;/p&gt;&lt;h2&gt;&lt;strong&gt;ಪ್ರಯಾಣಿಕರ ಜೀವಕ್ಕೆ ಬೆಲೆ ಇಲ್ಲವೇ?&lt;/strong&gt;&lt;/h2&gt;&lt;p&gt;ಹೆಡ್&zwnj;ಲೈಟ್ ಇಲ್ಲದ ಬಸ್ಸನ್ನು ರಾತ್ರಿ ಸಮಯದಲ್ಲಿ ಓಡಿಸುವುದು ಕೇವಲ ನಿಯಮದ ಉಲ್ಲಂಘನೆಯಲ್ಲ, ಬದಲಾಗಿ ಅದೊಂದು ಆತ್ಮಹತ್ಯಾಕಾರಿ ನಿರ್ಧಾರ. ಬಸ್ಸಿನಲ್ಲಿದ್ದ ಪ್ರಯಾಣಿಕರು, ರಸ್ತೆಯಲ್ಲಿ ಬರುವ ಇತರ ವಾಹನ ಸವಾರರು ಈ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಸಾರಿಗೆ ಇಲಾಖೆ ಕೂಡಲೇ ಈ ಬಸ್ಸಿನ ಚಾಲಕ, ನಿರ್ವಾಹಕ ಮತ್ತು ಬಸ್ಸಿನ ನಿರ್ವಹಣೆಯ ಜವಾಬ್ದಾರಿ ಹೊತ್ತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.&lt;/p&gt;&lt;p&gt;&amp;nbsp;&lt;/p&gt;&lt;p&gt;Is this Karnataka's Government New 'Headlight Technology' ?? A Conductor's Mobile Phone?&amp;nbsp;Is this what public transport has come to? A government bus was allegedly seen operating without a working headlight, with the driver forced to drive in the dark while the conductor used a&hellip; pic.twitter.com/u1lSTLe71Q&lt;/p&gt;&lt;p&gt;&mdash; Karnataka Portfolio (@karnatakaportf) July 5, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/karnataka-districts/kkrtc-bus-driver-uses-mobile-torch-as-headlight-kalaburagi-incident-safety-lapse-in-karnataka/articleshow-6etmetv"/>
        </item>
        <item>
            <title><![CDATA[ಬೆಂಗಳೂರಲ್ಲಿ 31 ಕಿ.ಮೀ ಪ್ರಯಾಣಿಸಿದ ಬಳಿಕ ಇನ್ಫೋಸಿಸ್ ಸಹ ಸಂಸ್ಥಾಪಕನ ಪೋಸ್ಟ್‌, ಎಲ್ಲವೂ ಟ್ರಾಫಿಕ್ ಮಹಿಮೆ]]></title>
            <link>https://kannada.asianetnews.com/bengaluru-urban/infosys-kris-gopalakrishnan-criticises-bengaluru-traffic-chaos-after-2-5-hour-commute/articleshow-050qohv</link>
            <guid isPermaLink="true">https://kannada.asianetnews.com/bengaluru-urban/infosys-kris-gopalakrishnan-criticises-bengaluru-traffic-chaos-after-2-5-hour-commute/articleshow-050qohv</guid>
            <pubDate>Sun, 05 Jul 2026 18:28:29 +0530</pubDate>
            <description><![CDATA[ಬೆಂಗಳೂರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ 31 ಕಿಲೋಮೀಟರ್ ಪ್ರಯಾಣಿಸಿದ್ದಾರೆ. ಪ್ರಯಾಣದ ಬಳಿಕ 3 ಪ್ರಮುಖ ವಿಚಾರಗಳನ್ನಿಟ್ಟುಕೊಂಡು ಪೋಸ್ಟ್ ಮಾಡಿದ್ದಾರೆ. ಅಷ್ಟಕ್ಕೂ ಗೋಪಾಲಕೃಷ್ಣನ್ ಹೇಳಿದ್ದೇನು?]]></description>
            <media:content url="https://static.asianetnews.com/images/w-1280,h-720,format-jpg,imgid-a2a9e20b-b8a8-408c-9aab-aa47b07ecdaa,imgname-image.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.05) &lt;/strong&gt;ಬೆಂಗಳೂರಿನಲ್ಲಿ ಹಲವು ಕಂಪನಿಗಳ ದಿಗ್ಗಜರು ನೆಲೆಸಿದ್ದಾರೆ. ಇನ್ನು ಬಹುರಾಷ್ಟ್ರೀಯ ಕಂಪನಿಗಳ ಸಿಇಒ ಸೇರಿದಂತೆ ಪ್ರತಿಷ್ಠಿತರ ಆವಾಸ ಸ್ಥಾನ ಬೆಂಗಳೂರು. ಈ ಪೈಕಿ ಇನ್ಫೋಸಿಸ್ ಸಂಸ್ಥಾಪಕರು, ಸಹ ಸಂಸ್ಥಾಪಕರು ಬೆಂಗಳೂರಲ್ಲೇ ನೆಲೆಸಿದ್ದಾರೆ. ಇದೀಗ ಇನ್ಫೋಸಿಸ್ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಬೆಂಗಳೂರಿನ ಪ್ರಯಾಣದ ಕುರಿತು ಪೋಸ್ಟ್ ಮಾಡಿದ್ದಾರೆ. ಇದೀಗ ಭಾರಿ ಚರ್ಚೆಯಾಗುತ್ತಿದೆ. ಕೆಲಸದ ಕಾರಣದಿಂದ ಕ್ರಿಸ್ ಗೋಪಾಲಕೃಷ್ಣನ್ 31 ಕಿಲೋಮೀಟರ್ ಪ್ರಯಾಣಿಸಿದ್ದಾರೆ.ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್&zwnj;ನಲ್ಲಿ ಹೇಳಿದ 3 ಪಾಯಿಂಟ್ ಪ್ರತಿಯೊಬ್ಬ ಬೆಂಗಳೂರಿಗನ ಅನುಭವಕ್ಕೆ ಬಂದಿರುತ್ತೆ.&lt;/p&gt;&lt;h2&gt;ಕ್ರಿಸ್ ಗೋಪಾಲಕೃಷ್ಣನ್ ಮಾಡಿದ ಪೋಸ್ಟ್ ಏನು?&lt;/h2&gt;&lt;p&gt;ಕ್ರಿಸ್ ಗೋಪಾಲಕೃಷ್ಣನ್ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಪೋಸ್ಟ್ ಮಾಡಿದ್ದಾರೆ. 31 ಕಿಲೋಮೀಟರ್ ಪ್ರಯಾಣಕ್ಕೆ 2.5 ಗಂಟೆ ತೆಗೆದುಕೊಂಡೆ. ಬೆಂಗಳೂರು ಪರಿಸ್ಥಿತಿ ಶೋಚನೀಯವಾಗುತ್ತಿದೆ. ಟ್ರಾಫಿಕ್,ಕಳಪೆ ರಸ್ತೆ ಹಾಗೂ ವಾಹನ ಚಾಲನೆಯಲ್ಲಿನ ಶಿಸ್ತು ಕೊರತೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಗಂಭೀರವಾಗಿಸಿದೆ ಎಂದು ಕ್ರಿಸ್ ಗೋಪಾಲ ಕೃಷ್ಣನ್ ಹೇಳಿದ್ದಾರೆ.&lt;/p&gt;&lt;h2&gt;ಸೋಶಿಯಲ್ ಮೀಡಿಯಾದಲ್ಲಿ ಟ್ರಾಫಿಕ್ ಚರ್ಚೆ&lt;/h2&gt;&lt;p&gt;ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕುರಿತು ಇನ್ಫೋಸಿಸ್ ಸಹ ಸಂಸ್ಥಾಪಕ ಪೋಸ್ಟ್ ಮಾಡುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಕಳೆದ ವಾರ 28 ಕಿಲೋಮೀಟ್ ಪ್ರಯಾಣಕ್ಕೆ 3 ಗಂಟೆ ತೆಗೆದುಕೊಂಡಿದ್ದೇನೆ. ಕೇವಲ 8 ಕಿಲೋಮೀಟರ್ ಪ್ರಯಾಣಕ್ಕೆ 1.5 ಗಂಟೆ ತೆಗೆದುಕೊಂಡಿದ್ದೇನೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಲ್ಲಿ ಪ್ರತಿ ದಿನ ಗಂಟೆಗಳ ಕಾಲ ಧೂಳು ತುಂಬಿದ ರಸ್ತೆಯಲ್ಲಿ, ಟ್ರಾಫಿಕ್ ನಡುವೆ ಪರದಾಡಿ ಕಚೇರಿಗೆ ತಲುಪುತ್ತೇವೆ. ಸಂಜೆ ಅದೇ ರೀತಿ ಮನೆಗೆ ತಲಪುತ್ತೇವೆ. ಜೀವನದ ಅರ್ಧ ಎನರ್ಜಿ ರಸ್ತೆಯಲ್ಲೇ ಹೋಗುತ್ತಿದೆ ಎಂದು ಹಲವರು ಹೇಳಿದ್ದಾರೆ.&lt;/p&gt;&lt;p&gt;ಮತ್ತೆ ಕೆಲವರು ಇನ್ಫೋಸಿಸ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊಟ್ಟು ಬಿಡಿ. ಬೆಂಗಳೂರಿನ ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆಯನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿಗೆ ವರ್ಗಾಯಿಸಿ ಎಂದು ಹಲವರು ಸಲಹೆ ನೀಡಿದ್ದಾರೆ. ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ದೂರ ಮಾಡಲು ರಾಜ್ಯದ 2 ಟೈರ್, 3 ಟೈರ್ ನಗರಗಳಿಗೆ ಐಟಿ ಕಂಪನಿಗಳನ್ನು ಸ್ಥಳಾಂತರ ಮಾಡಬೇಕು. ನಗರದ ಹೊರ ವಲಯದಲ್ಲಿ ಐಟಿ ಪಾರ್ಕ್ ಮಾಡಿ ಸ್ಥಳಾಂತರ ಮಾಡಿದರೆ ರಾಜ್ಯದ ಅಭಿವೃದ್ಧಿಗೂ ಸಹಾಯವಾಗಲಿದೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ತಗ್ಗಿಸಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;31 km took 2 1/2 hours today. It is only becoming worse. Traffic, condition of roads, and poor discipline&lt;/p&gt;&lt;p&gt;&mdash; kris gopalakrishnan (@kris_sg) July 4, 2026&lt;/p&gt;&lt;p&gt;&amp;nbsp;&lt;/p&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನ ಟ್ರಾಫಿಕ್ ಕುರಿತು ಹಲವು ಉದ್ಯಮಿಗಳು ಆಕ್ರೋಶ ಹೊರಹಾಕಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಸುದೀರ್ಘ ಪ್ಲಾನ್ ಅವಶ್ಯಕತೆ ಇದೆ. ನಗರದ ಹೊರವಲಯದಲ್ಲಿ ಐಟಿ ಪಾರ್ಕ್, ಕೈಗಾರಿಕೆ ಪಾರ್ಕ್ ಮಾಡಿದರೆ ಪ್ರಯೋಜನವಿಲ್ಲ. ಇತರ ಸಣ್ಣ ನಗರಗಳಿಗೆ ವರ್ಗಾವಣೆ ಸೂಕ್ತ ಎಂಬ ಸಲಹೆಯನ್ನು ನೀಡಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/bengaluru-urban/infosys-kris-gopalakrishnan-criticises-bengaluru-traffic-chaos-after-2-5-hour-commute/articleshow-050qohv"/>
        </item>
        <item>
            <title><![CDATA[ಡಾಲರ್ ನಾಡಲ್ಲಿ ಭಾರತದ ದೇಸಿ ಸೊಗಡಿಗಾಗಿ ಮುಗಿಬಿದ್ದ ಜನ: ಇದು ನಮ್ಮ ತಾಕತ್ತು ಅಂತಿರೋ ಭಾರತೀಯರು]]></title>
            <link>https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4</link>
            <guid isPermaLink="true">https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4</guid>
            <pubDate>Sun, 05 Jul 2026 18:27:47 +0530</pubDate>
            <description><![CDATA[ವಿದೇಶದಲ್ಲಿ ನೆಲೆಸುವ ಕನಸಿನ ವಾಸ್ತವವನ್ನು ಬಿಚ್ಚಿಡುವ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ. ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆದ ಭಾರತೀಯ ದಿನಸಿ ಅಂಗಡಿಯಲ್ಲಿ, ಭಾರತೀಯ ಉತ್ಪನ್ನಗಳಿಗಾಗಿ ಜನರು ಮುಗಿಬಿದ್ದು ಕಾಲ್ತುಳಿತದ ಸನ್ನಿವೇಶ ನಿರ್ಮಾಣವಾಗಿದೆ. ಇದು ವಿದೇಶದಲ್ಲಿ ಭಾರತೀಯ ವಸ್ತುಗಳಿಗೆ ಇರುವ ಅಗಾಧ ಬೇಡಿಕೆಯನ್ನು ತೋರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws5nv8ep1xb6gdjnbbewqv0,imgname-usa-1783256247566.jpg" type="image/jpeg" height="390" width="690"/>
            <content:encoded><![CDATA[&lt;p&gt;ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತಿದೆ. ಇದು ವಿದೇಶಗಳ ಕನಸು ಕಾಣುವ ಹಲವು ಯುವ ಸಮುದಾಯಕ್ಕೂ, ಅದರಲ್ಲಿಯೂ ವಿಶೇಷವಾಗಿ ತಮ್ಮ ಮಕ್ಕಳು ವಿದೇಶಕ್ಕೆ ಹಾರಲಿ ಎಂದು ಜೀವಬಿಟ್ಟು ದುಡಿಯುವ ಅಪ್ಪ-ಅಮ್ಮಂದಿರಿಗೆ ಅನ್ವಯ ಆಗುತ್ತದೆ. ಡಾಲರ್​ಗಳಲ್ಲಿ ದುಡಿಯಬಹುದು ಎಂಬ ಆಸೆ ಹೊತ್ತು ತಮ್ಮವರನ್ನೆಲ್ಲಾ ತವರಲ್ಲಿ ಮರೆತು ಹೋಗುವ ಜನರನ್ನು ಒಮ್ಮೆ ಕೇಳಿನೋಡಿ... ಕೈತುಂಬಾ ಸಂಪಾದಿಸಬಹುದು ಎಂದು ದುಬೈಗೋ ಇನ್ನೆಲ್ಲೋ ಹಾರುವ ಜನರು ಅಲ್ಲಿ ಹೇಗಿದ್ದಾರೆ ಎಂದು ವಿಚಾರಿಸಿ ನೋಡಿ... ನಮ್ಮ ಮಗ ಅಮೆರಿಕದಲ್ಲಿ ಕೆಲ್ಸ ಮಾಡ್ತಾನೆ, ನಮ್ಮ ಮಗಳು ಇನ್ನಾವುದೋ ದೇಶದಲ್ಲಿ ವಾಸಿಸ್ತಾಳೆ ಎಂದು ಬೇರೆಯವರ ಮುಂದೆ ಹೆಮ್ಮೆಯಿಂದ ಕೊಂಡಾಡುವ ವೃದ್ಧ ಅಪ್ಪ-ಅಮ್ಮನನ್ನು ಪಕ್ಕಕ್ಕೆ ಕರೆಸಿ ಮಾತನಾಡಿಸಿ ನೋಡಿ... ಅಪ್ಪ-ಅಮ್ಮ ಸತ್ತಾಗ ಪಿಂಡದಾನ ಮಾಡಲೂ ಬರದ ಪರಿಸ್ಥಿತಿಯಲ್ಲಿ ಅದೆಷ್ಟು ಕುಟುಂಬಗಳಿವೆ ಎನ್ನೋದನ್ನೊಮ್ಮೆ ಕಣ್ಣಾಡಿಸಿ ನೋಡಿ...&lt;/p&gt;&lt;p&gt;ಇದು ಇಂದು ನಿನ್ನೆಯ ಕಥೆಯಲ್ಲ. ವಿದೇಶ ಅದರಲ್ಲಿಯೂ ಅಮೆರಿಕಕ್ಕೆ ಮಕ್ಕಳನ್ನು ಮುಂದೊಮ್ಮೆ ಕಳುಹಿಸಬೇಕು ಎಂದು ಮಗು ಗರ್ಭದಲ್ಲಿ ಇದ್ದಾಗಲೇ ಹಲವು ಅಪ್ಪ-ಅಮ್ಮ ಯೋಚನೆ ಮಾಡುವುದು ಉಂಟು. ಫಾರಿನ್​ ರಿಟರ್ನ್​ ಎಂದು ಹೇಳಿಕೊಳ್ಳುವ ಆಸೆ ಅವರದ್ದು. ಆದರೆ ಈಗಿನ ಸ್ಥಿತಿ ಬಿಡಿ. ಆಗುತ್ತಿರುವುದೇ ಬೇರೆ. ಫಾರಿನ್​ ಎಂದರೆ ಸಾಕಪ್ಪಾ ಸಾಕು ಎಂದು ವಾಪಸ್​ ತಾಯ್ನಾಡಿಗೆ ವಾಪಸಾಗುತ್ತಿರುವವರು ಹಲವರು. ಆದರೆ ಭಾರತ ಎಂದರೆ ಏನು ಎನ್ನುವುದಕ್ಕೆ ಈ ವಿಡಿಯೋ ಒಂದು ಸಾಕ್ಷಿಯಾಗಿದೆ.&lt;/p&gt;&lt;h2&gt;&lt;strong&gt;ದಿನಸಿ ಅಂಗಡಿಯಲ್ಲಿ ಕಾಲ್ತುಳಿತ&lt;/strong&gt;&lt;/h2&gt;&lt;p&gt;ನ್ಯೂಜೆರ್ಸಿಯಲ್ಲಿ ಹೊಸದಾಗಿ ತೆರೆಯಲಾದ ಭಾರತೀಯ ದಿನಸಿ ಅಂಗಡಿಯೊಂದು ಉದ್ಘಾಟನೆ ಆಗುತ್ತಿದ್ದಂತೆಯೇ, ಭಾರತದ ತರಕಾರಿ, ದಿನಸಿ ಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಅಲ್ಲಿ ಕಾಲ್ತುಳಿತವೂ ಆಗಿದೆ. ಇದರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತದೆ. ವಿಡಿಯೋದಲ್ಲಿ ಉದ್ದನೆಯ ಸರತಿ ಸಾಲುಗಳು ಮತ್ತು ಕಿಕ್ಕಿರಿದ ಜನ ಸಮೂಹವನ್ನು ನೋಡಬಹುದು.&lt;/p&gt;&lt;h3&gt;&lt;strong&gt;ಭಾರತೀಯ ಸೂಪರ್&zwnj;ಮಾರ್ಕೆಟ್&zwnj;ಗಳಿಗೆ ಹೆಚ್ಚಾದ ಬೇಡಿಕೆ&lt;/strong&gt;&lt;/h3&gt;&lt;p&gt;ಇದು ಅಮೆರಿಕದಲ್ಲಿ ಭಾರತೀಯ ಸೂಪರ್&zwnj;ಮಾರ್ಕೆಟ್&zwnj;ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತಿದೆ. ಭಾರತೀಯ ವಲಸೆಗಾರರು ಅಮೆರಿಕದಲ್ಲಿ ಹೆಚ್ಚುತ್ತಲೇ ಇರುವ ಕಾರಣ, ಭಾರತದಲ್ಲಿ ಸಿಗುವ ತಾಜಾ ತಾಜಾ ತರಕಾರಿಗಳಿಂದ ದೂರವಾಗಿರುವ ಜನರು, ಕಾಲ್ತುಳಿತವನ್ನೂ ಲೆಕ್ಕಿಸದೇ ಈ ಅಂಗಡಿಯ ಮುಂದೆ ಮುಗಿಬಿದ್ದಿದ್ದಾರೆ. ಭಾರತದ ಪ್ರಾದೇಶಿಕ ದಿನಸಿಗಳು, ಮಸಾಲೆಗಳು, ತಿಂಡಿಗಳು ಮತ್ತು ಪರಿಚಿತ ಭಾರತೀಯ ಬ್ರ್ಯಾಂಡ್&zwnj;ಗಳನ್ನು ಒಂದೇ ಸೂರಿನಡಿ ನೀಡುವ ಅಂಗಡಿಗಳನ್ನು ಹುಡುಕುತ್ತಿದ್ದಾರೆ.&lt;/p&gt;&lt;p&gt;ಈ ಭವ್ಯ ಉದ್ಘಾಟನೆಯು ಸಂಚಲನ ಮೂಡಿಸುತ್ತಲೇ ಇದೆ, ವಿಡಿಯೋಗಳು ವೈರಲ್​ ಆಗುತ್ತಲೇ ಕಾಲ್ತುಳಿತ ನೋಡಿ, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ನಮ್ಮ ಭಾರತದ ಮಹಿಮೆ ಎಂದು ಭಾರತೀಯರು ಹೇಳುತ್ತಿದ್ದರೆ, ಭಾರತದವರಿಗೆ ಮ್ಯಾನರ್ಸೇ ಇಲ್ಲ ಎನ್ನುತ್ತಿದ್ದಾರೆ ಅಮೆರಿಕನ್ನರು!&lt;/p&gt;&lt;p&gt;&amp;nbsp;&lt;/p&gt;&lt;p&gt;Like I said, in the next 10 years, Indians will not get respect in any country.pic.twitter.com/VESutXyJfx&lt;/p&gt;&lt;p&gt;&mdash; Kapil (@kapsology) July 3, 2026&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[india-news]]></category>
            <dc:creator>Suchethana D</dc:creator>
            <atom:link href="https://kannada.asianetnews.com/india-news/new-indian-grocery-store-in-new-jersey-draws-huge-crowds-internet-mixed-reactions-suc/articleshow-ahihpw4"/>
        </item>
        <item>
            <title><![CDATA[ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರವೇಶ ಪರೀಕ್ಷೆ ಯಶಸ್ವಿ: 870 ಅಭ್ಯರ್ಥಿಗಳ ಹಾಜರಾತಿ]]></title>
            <link>https://kannada.asianetnews.com/education/bangalore-university-phd-entrance-exam-2026-gvd/articleshow-61h7uu4</link>
            <guid isPermaLink="true">https://kannada.asianetnews.com/education/bangalore-university-phd-entrance-exam-2026-gvd/articleshow-61h7uu4</guid>
            <pubDate>Sun, 05 Jul 2026 18:27:28 +0530</pubDate>
            <description><![CDATA[ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 1,299 ಅರ್ಜಿಗಳು ಅನುಮೋದನೆಗೊಂಡಿದ್ದು, 870 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kws5g2kqfz8h7an1ktxcypcm,imgname-vfv-1783256058487.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು&lt;/strong&gt;&lt;/h2&gt;&lt;p&gt;&lt;strong&gt;ಬೆಂಗಳೂರು (ಜು.05): &lt;/strong&gt;ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಹೆಚ್.ಡಿ. ಪ್ರವೇಶ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಲಾಯಿತು. ಒಟ್ಟು 1,299 ಅರ್ಜಿಗಳು ಅನುಮೋದನೆಗೊಂಡಿದ್ದು, 870 ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. 429 ಅಭ್ಯರ್ಥಿಗಳು ಗೈರಾಗಿದ್ದರು.&lt;/p&gt;&lt;p&gt;ಕಲಾ, ವಿಜ್ಞಾನ, ವಾಣಿಜ್ಯ, ನಿರ್ವಹಣೆ, ದೈಹಿಕ ಶಿಕ್ಷಣ ಹಾಗೂ ಕಾನೂನು ನಿಕಾಯಗಳ ಅಭ್ಯರ್ಥಿಗಳಿಗಾಗಿ ನಗರದ ಸುರಾನ ಕಾಲೇಜು ಹಾಗೂ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲಾಯಿತು.&lt;/p&gt;&lt;p&gt;ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಪ್ರಶ್ನೆಪತ್ರಿಕೆಗಳನ್ನು ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿ ಸಾಗಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಬಹುಹಂತದ ತಪಾಸಣೆ ನಡೆಸಲಾಗಿದ್ದು, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು.&lt;/p&gt;&lt;p&gt;ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ ಎಸ್.ಎಂ., ಕುಲಸಚಿವೆ ಕೆ.ಟಿ. ಶಾಂತಲಾ ಹಾಗೂ ಕುಲಸಚಿವರು (ಮೌಲ್ಯಮಾಪನ) ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಿದರು.&lt;/p&gt;&lt;p&gt;ಪಿಹೆಚ್.ಡಿ. ಪ್ರವೇಶದ ಮೌಖಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಜುಲೈ 11ರಂದು ಪ್ರಕಟಿಸಲಾಗುವುದು. ಜುಲೈ 14 ಮತ್ತು 15ರಂದು ಸಂಬಂಧಿತ ಸ್ನಾತಕೋತ್ತರ ವಿಭಾಗಗಳಲ್ಲಿ ಮೌಖಿಕ ಪರೀಕ್ಷೆ ನಡೆಯಲಿದೆ. ಜುಲೈ 17ರಂದು ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು. ನಂತರ ಜುಲೈ 20ರಂದು ಪಿಹೆಚ್.ಡಿ. ಸೀಟುಗಳ ಹಂಚಿಕೆಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು.&lt;/p&gt;]]></content:encoded>
            <category><![CDATA[education]]></category>
            <dc:creator>Govindaraj S</dc:creator>
            <atom:link href="https://kannada.asianetnews.com/education/bangalore-university-phd-entrance-exam-2026-gvd/articleshow-61h7uu4"/>
        </item>
        <item>
            <title><![CDATA[ತಪ್ಪು ವಿಳಾಸಕ್ಕೆ ಆರ್ಡರ್, ನಕಲಿ ರಿಟರ್ನ್;  ಲಕ್ಷಾಂತರ ರೂ. ದೋಚುತ್ತಿದ್ದ ಖದೀಮರು ಸಿಕ್ಕಿ ಬಿದ್ದದ್ದು ಅದೊಂದು ತಪ್ಪಿನಿಂದ!]]></title>
            <link>https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44</link>
            <guid isPermaLink="true">https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44</guid>
            <pubDate>Sun, 05 Jul 2026 18:25:09 +0530</pubDate>
            <description><![CDATA[ರಾಜಸ್ಥಾನದಲ್ಲಿ ಆನ್‌ಲೈನ್‌ ಆರ್ಡರ್‌ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ದುಬಾರಿ ವಸ್ತುಗಳನ್ನು ತಪ್ಪು ವಿಳಾಸಕ್ಕೆ ಆರ್ಡರ್ ಮಾಡಿ, ರಿಟರ್ನ್ ಪ್ರಕ್ರಿಯೆಯಲ್ಲಿ ಅಸಲಿ ವಸ್ತುಗಳನ್ನು ಕದಿಯುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws5gcw0a032a08yqadyqqsp,imgname-amazon-1783256068992.jpg" type="image/jpeg" height="390" width="690"/>
            <content:encoded><![CDATA[&lt;p&gt;ಹೌದು ಇ ಕಾಮರ್ಸ್ ಕಂಪನಿ ಅಮೆಜಾನ್&zwnj;ಗೆ ಲಕ್ಷಾಂತರ ರೂ., ವಂಚಿಸಿದ ಘಟನೆ ನಡೆದಿದ್ದು, ಕಳ್ಳರು ಹಿಡಿದ ದಾರಿಯನ್ನು ಕೇಳಿದರೆ ನೀವು ದಂಗಾಗುತ್ತಿರಾ. ಅಷ್ಟಕ್ಕೂ ಆಗಿದ್ದೇನು? ಖದೀಮರು ವಂಚಿಸಿದ್ದೇಗೆ? ಹಾಗೂ ಎಲ್ಲಿ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;h2&gt;&lt;strong&gt;ರಾಜಸ್ಥಾನದಲ್ಲಿ ನಡೆದ ಘಟನೆ!&lt;/strong&gt;&lt;/h2&gt;&lt;p&gt;ರಾಜಸ್ಥಾನದ ದೌಸಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ಇ-ಕಾಮರ್ಸ್ ಕಂಪನಿ ಅಮೆಜಾನ್&zwnj;ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಜಾಲ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಪೊಲೀಸರ ಪ್ರಕಾರ, ಆರೋಪಿಗಳು ಆನ್&zwnj;ಲೈನ್&zwnj;ನಲ್ಲಿ ದುಬಾರಿ ಉತ್ಪನ್ನಗಳನ್ನು ಬುಕ್ ಮಾಡುವ ಮೂಲಕ ಕಂಪನಿಗೆ ಸುಮಾರು 19.38 ಲಕ್ಷ ರೂಪಾಯಿಗಳ ನಷ್ಟವನ್ನುಂಟುಮಾಡಿದ್ದಾರೆ. ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿಡ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ಪ್ಲ್ಯಾನ್&zwnj; ಹೇಗಿತ್ತು ಗೊತ್ತಾ?&lt;/strong&gt;&lt;/h3&gt;&lt;p&gt;ಈ ವಂಚನೆಯ ಯೋಜನೆಯು ಅಮೆಜಾನ್&zwnj;ನಿಂದ ಆರಂಭವಾಗಿತ್ತು. ಆರೋಪಿಯು ಮೊದಲು ಆನ್&zwnj;ಲೈನ್&zwnj;ನಲ್ಲಿ ಅತ್ಯಂತ ದುಬಾರಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆರ್ಡರ್ ಮಾಡುತ್ತಿದ್ದನು. ಈ ಯೋಜನೆಯಲ್ಲಿ ಕೇವಲ ಆತ ಮಾತ್ರ ಇರಲಿಲ್ಲ, ಬದಲಿಗೆ ಸಾಮಗ್ರಿಗಳನ್ನು ತಲುಪಿಸುವ ಡೆಲಿವರಿ ಬಾಯ್ ಮತ್ತು ಗೋದಾಮಿನ ನಿರ್ವಾಹಕರು ಕೂಡಾ ಸಂಪೂರ್ಣವಾಗಿ ಕೈಜೋಡಿಸಿದ್ದರು. ಇವರೆಲ್ಲರೂ ಸೇರಿಯೇ ಪ್ಲಾನ್&zwnj; ಮಾಡಿದ್ದರು ಎನ್ನುವುದು ಪೊಲೀಸ್&zwnj;ರಿಂದ ತಿಳಿದು ಬಂದಿದೆ.&lt;/p&gt;&lt;h3&gt;&lt;strong&gt;ವಿಳಾಸದಲ್ಲಿ ವ್ಯತ್ಯಾಸ!&lt;/strong&gt;&lt;/h3&gt;&lt;p&gt;ಸಾಮಗ್ರಿಗಳನ್ನು ವಿತರಣೆ ಮಾಡುವ ಸಮಯದಲ್ಲಿ, ಆರೋಪಿಗಳು ಉದ್ದೇಶಪೂರ್ವಕವಾಗಿ ತಪ್ಪು ಅಥವಾ ಅಪೂರ್ಣವಾದ ವಿಳಾಸವನ್ನು ನಮೂದಿಸುತ್ತಿದ್ದರು. ವಿಳಾಸ ಸರಿಯಾಗಿ ಇಲ್ಲದ ಕಾರಣ ಆ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ತಾನಾಗಿಯೇ ಆರ್ಡರ್ ವಾಪಸ್ ಕಳುಹಿಸುವ ರಿಟರ್ನ್ ಪ್ರಕ್ರಿಯೆಯನ್ನು ಪ್ರಚೋದಿಸುತ್ತಿತ್ತು. ಈ ರಿಟರ್ನ್ ನೆಪದಲ್ಲಿ ಅಸಲಿ ದುಬಾರಿ ವಸ್ತುಗಳನ್ನು ಸುಲಭವಾಗಿ ಬೇರೆಡೆಗೆ ಸಾಗಿಸಿ, ಕಂಪನಿಗೆ ದೊಡ್ಡ ಮಟ್ಟದ ಮೋಸ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.&lt;/p&gt;&lt;p&gt;&lt;strong&gt;ಪೊಲೀಸ್&zwnj;ರು ಹೇಳುವುದೇನು?&lt;/strong&gt;&lt;/p&gt;&lt;p&gt;ಪೊಲೀಸರ ಪ್ರಕಾರ, ಆರೋಪಿಗಳು ಪಾರ್ಸೆಲ್&zwnj;ಗಳನ್ನು ಹಿಂದಿರುಗಿಸುವ ಪ್ರಕ್ರಿಯೆಯಲ್ಲಿ ಮಧ್ಯದಲ್ಲಿ ವಶಪಡಿಸಿಕೊಂಡು ಒಳಗಿನ ದುಬಾರಿ ವಸ್ತುಗಳನ್ನು ತೆಗೆದುಹಾಕುತ್ತಿದ್ದರು. ನಂತರ, ಪ್ಯಾಕೇಜ್&zwnj;ಗಳನ್ನು ಮತ್ತೆ ಮುಚ್ಚಲಾಗುತ್ತಿತ್ತು, ಮೊದಲ ನೋಟದಲ್ಲೇ ಅವುಗಳಿಗೆ ಯಾವುದೇ ಅನುಮಾನ ಬರುತ್ತಿರಲಿಲ್ಲ. ಈ ವಿಧಾನವು ಕಂಪನಿಗೆ ಆರ್ಥಿಕ ನಷ್ಟವನ್ನುಂಟುಮಾಡಿತು ಮತ್ತು ಕದ್ದ ವಸ್ತುಗಳನ್ನು ನಂತರ ಮರುಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;19 ಆಪಲ್ ವಾಚ್&zwnj;, ಕೆಲ ಮೆಮೊರಿ ಕಾರ್ಡ್&zwnj;ಗಳು ಕಳ್ಳತನ!&lt;/strong&gt;&lt;/h3&gt;&lt;p&gt;ತನಿಖೆಯಲ್ಲಿ ಆರೋಪಿಗಳು ಸುಮಾರು ₹1,00,000 ಮೌಲ್ಯದ 19 ಆಪಲ್ ವಾಚ್&zwnj;ಗಳನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಗಮಧ್ಯೆ ಎರಡು ಮೆಮೊರಿ ಕಾರ್ಡ್ ಪ್ಯಾಕೆಟ್&zwnj;ಗಳನ್ನು ಸಹ ಕಳವು ಮಾಡಲಾಗಿದೆ. ಈ ಸಂಪೂರ್ಣ ವಂಚನೆ ಚೆನ್ನಾಗಿ ಪ್ಲ್ಯಾನ್ ಮಾಡಿ ರೂಪಿಸಿದ್ದು ಎನ್ನಲಾಗಿದೆ. ಆರೋಪಿಗಳು ಬಹಳ ಸಮಯದಿಂದ ಇಂತಹ ಅಪರಾಧಗಳನ್ನು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.&lt;/p&gt;&lt;h3&gt;&lt;strong&gt;ಸೈಬರ್ ಪೊಲೀಸರ ವಶಕ್ಕೆ!&lt;/strong&gt;&lt;/h3&gt;&lt;p&gt;ದೂರು ಸ್ವೀಕರಿಸಿದ ನಂತರ, ಸೈಬರ್ ಕ್ರೈಮ್ ಪೊಲೀಸ್ ಠಾಣೆಯು ತಾಂತ್ರಿಕ ಪುರಾವೆಗಳು, ದಾಖಲೆಗಳು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಪ್ರಾರಂಭಿಸಿದೆ. ತನಿಖೆಯಲ್ಲಿ ಆರೋಪಿಗಳ ಪಾತ್ರ ಬಹಿರಂಗಗೊಳ್ಳುತ್ತಿದ್ದಂತೆ, ಪೊಲೀಸರು ಸಾಹಿಲ್ ಬನ್ಸಾಲ್, ಮದನ್ ಜಂಗಿದ್, ಪರಾಸ್ ಸಾಹು ಮತ್ತು ನರೇಂದ್ರ ಬೈರ್ವಾ ಅವರನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.&lt;/p&gt;&lt;h3&gt;&lt;strong&gt;ತನಿಖೆ ಜಾರಿಯಲ್ಲಿದೆ!&lt;/strong&gt;&lt;/h3&gt;&lt;p&gt;ಈ ವಂಚನೆಯಲ್ಲಿ ಬೇರೆ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ವಿತರಣಾ ಸರಪಳಿಯೊಳಗಿನ ವಂಚನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ಆರೋಪಿಗಳು ಇತರ ಇ-ಕಾಮರ್ಸ್ ಕಂಪನಿಗಳ ವಿರುದ್ಧವೂ ಇದೇ ರೀತ ವಂಚನೆ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಜಾಆರಿಯಲ್ಲಿರಿಸಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[crime]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/crime/order-to-wrong-address-fake-return-the-clerk-who-was-robbing-lakhs-of-rupees-was-caught-because-of-a-mistake/articleshow-us2bi44"/>
        </item>
        <item>
            <title><![CDATA[ನಂಬರ್ 1 ಸೀರಿಯಲ್ ಹೀರೋನ ಬ್ಯೂಟಿಫುಲ್ ಹೆಂಡತಿಗೆ 'ಹುಡ್ಗೀರಂದ್ರ ಇಷ್ಟವಂತೆ'! ಪತ್ನಿಯ ಮಾತಿಗೆ ಕಂಗಾಲಾದ ಪತಿ!]]></title>
            <link>https://kannada.asianetnews.com/gallery/tv-talk/gaurav-khanna-s-wife-akanksha-chamola-reveals-being-bisexual-opens-up-on-divorce-and-kids-tpwdzup</link>
            <guid isPermaLink="true">https://kannada.asianetnews.com/gallery/tv-talk/gaurav-khanna-s-wife-akanksha-chamola-reveals-being-bisexual-opens-up-on-divorce-and-kids-tpwdzup</guid>
            <pubDate>Sun, 05 Jul 2026 18:11:43 +0530</pubDate>
            <description><![CDATA[ದೇಶದ ನಂ.1 ಕಿರುತೆರೆ ಧಾರಾವಾಹಿ ನಟನ ಸುಂದರ ಹೆಂಡತಿ ನನಗೆ ಹುಡ್ಗೀರು ಅಂದ್ರೆ ಇಷ್ಟ, ನಾನು ಬೈಸೆಕ್ಸುವಲ್ ಎಂದು ಹೇಳುವ ಮೂಲಕ ಗಂಡ ಹಾಗೂ ಅಭಿಮಾನಿಗಳ ಮನಸ್ಸಿಗೆ ಶಾಕ್ ನೀಡಿದ್ದಾಳೆ. ಯಾರೀ ಸುಂದರಿ, ಆಕೆಯ ಹಿನ್ನೆಲೆಯ ಮಾಹಿತಿ ಇಲ್ಲಿದೆ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kby4ehq5zakqzw38vggag31f,imgname-akanksha-chamola-career-1765169120997.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ನಂ.1 ಕಿರುತೆರೆ ಧಾರಾವಾಹಿ ನಟನ ಸುಂದರ ಹೆಂಡತಿ ನನಗೆ ಹುಡ್ಗೀರು ಅಂದ್ರೆ ಇಷ್ಟ, ನಾನು ಬೈಸೆಕ್ಸುವಲ್ ಎಂದು ಹೇಳುವ ಮೂಲಕ ಗಂಡ ಹಾಗೂ ಅಭಿಮಾನಿಗಳ ಮನಸ್ಸಿಗೆ ಶಾಕ್ ನೀಡಿದ್ದಾಳೆ. ಯಾರೀ ಸುಂದರಿ, ಆಕೆಯ ಹಿನ್ನೆಲೆಯ ಮಾಹಿತಿ ಇಲ್ಲಿದೆ ನೋಡಿ.&lt;/p&gt;&lt;img&gt;&lt;p&gt;ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರ ಜೀವನ ತೆರೆದ ಪುಟದಂತಾಗಿರುತ್ತದೆ. ಸಮಾಜದ ಮುಂದೆ ಸೆಲೆಬ್ರಿಟಿ ಎನಿಸಿಕೊಂಡವರು ವೈಯಕ್ತಿಕ ಜೀವನದ ಗುಟ್ಟುಗಳನ್ನು ಕೂಡ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ರೀತಿ ದೇಶದ ನಂ.1 ಕಿರುತೆರೆ ಧಾರಾವಾಹಿ ನಟನ ಸುಂದರ ಹೆಂಡತಿ ನನಗೆ ಹುಡ್ಗೀರು ಅಂದ್ರೆ ಇಷ್ಟ, ನಾನು ಬೈಸೆಕ್ಸುವಲ್ ಎಂದು ಹೇಳುವ ಮೂಲಕ ಗಂಡ ಹಾಗೂ ಅಭಿಮಾನಿಗಳ ಮನಸ್ಸಿಗೆ ಶಾಕ್ ನೀಡಿದ್ದಾಳೆ.&lt;/p&gt;&lt;img&gt;&lt;p&gt;ಹಿಂದಿ ಕಿರುತೆರೆಯ 'ಅನುಪಮಾ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಂಬರ್ 1 ಸೀರಿಯಲ್ ಹೀರೋ ಗೌರವ್ ಖನ್ನಾ (Gaurav Khanna) ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದೆ. ಅವರ ಪತ್ನಿ ಆಕಾಂಕ್ಷಾ ಚೋಮಲಾ (Akanksha Chamola) ಅವರು ರಿಯಾಲಿಟಿ ಶೋವೊಂದರಲ್ಲಿ ತಮ್ಮ ಜೀವನದ ಅತ್ಯಂತ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. 'ನನಗೆ ಹುಡುಗಿಯರೆಂದರೆ ಇಷ್ಟ, ನಾನು ಬೈಸೆಕ್ಸುವಲ್' ಎಂದು ಹೇಳುವ ಮೂಲಕ ಆಕಾಂಕ್ಷಾ ಇಡೀ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ರಿಯಾಲಿಟಿ ಶೋನಲ್ಲಿ ರಹಸ್ಯ ಬಯಲು:&lt;/strong&gt;&lt;/p&gt;&lt;p&gt;'ಲಾಕ್ ಅಪ್: ಸಚ್ ಯಾ ಸಜಾ' (Lock Upp) ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಆಕಾಂಕ್ಷಾ ಚೋಮಲಾ, ತಮ್ಮ ವೈಯಕ್ತಿಕ ಜೀವನದ ಮೂರು ರಹಸ್ಯಗಳನ್ನು ಬಿಟ್ಟುಕೊಡಬೇಕಾಗಿತ್ತು. ಈ ವೇಳೆ ಸಹ-ಸ್ಪರ್ಧಿ ಶ್ರೇಯಾ ಕಲ್ರಾ ಅವರು ಆಕಾಂಕ್ಷಾ ಅವರ ಬೈಸೆಕ್ಸುವಲ್ (Bisexual) ವಿಷಯವನ್ನು ಬಹಿರಂಗಪಡಿಸಿದರು. ಇದರಿಂದ ಮೊದಲು ಕಂಗಾಲಾದ ಆಕಾಂಕ್ಷಾ, ನಂತರ ಈ ಸತ್ಯವನ್ನು ಒಪ್ಪಿಕೊಂಡರು.&lt;/p&gt;&lt;img&gt;&lt;p&gt;&lt;strong&gt;ಹುಡುಗಿಯರ ಜೊತೆ ಸಂಬಂಧವಿತ್ತು ಎಂದ ಆಕಾಂಕ್ಷಾ:&lt;/strong&gt;&lt;/p&gt;&lt;p&gt;ತಮ್ಮ ಲೈಂಗಿಕ ಆಸಕ್ತಿಯ ಬಗ್ಗೆ ಮಾತನಾಡಿದ ಆಕಾಂಕ್ಷಾ, 'ನಾನು ಮದುವೆಗೆ ಮುಂಚೆ ಬೈಸೆಕ್ಸುವಲ್ ಆಗಿದ್ದೆ. ನನಗೆ ಹುಡುಗಿಯರೆಂದರೆ ತುಂಬಾ ಇಷ್ಟ. ಕೆಲವು ಹುಡುಗಿಯರ ಜೊತೆ ನಾನು ಸಂಬಂಧದಲ್ಲೂ ಇದ್ದೆ. ಅವರ ಜೊತೆ ದೈಹಿಕವಾಗಿ ಅಷ್ಟೇನೂ ಹತ್ತಿರವಾಗದಿದ್ದರೂ, ಭಾವನಾತ್ಮಕವಾಗಿ ನಾನು ಅವರ ಜೊತೆ ಇರುತ್ತಿದ್ದೆ. ಪುರುಷ ಪ್ರಧಾನ ಪ್ರಪಂಚದಲ್ಲಿ ನನಗೆ ಮಹಿಳೆಯರ ಜೊತೆ ಇರುವುದು ಸುರಕ್ಷಿತ ಎನಿಸುತ್ತದೆ. ಮಹಿಳೆಯರ ಶಕ್ತಿಯನ್ನು (Feminine Energy) ನಾನು ಪ್ರೀತಿಸುತ್ತೇನೆ' ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿ ವೀಕ್ಷಕರು ಮತ್ತು ಅವರ ಅಭಿಮಾನಿಗಳು ದಂಗಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಗೌರವ್ ಖನ್ನಾ ಜೊತೆ ವಿಚ್ಛೇದನ:&lt;/strong&gt;&lt;/p&gt;&lt;p&gt;ಇಷ್ಟೇ ಅಲ್ಲದೆ, ಗೌರವ್ ಖನ್ನಾ ಮತ್ತು ಆಕಾಂಕ್ಷಾ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಹಿ ಸತ್ಯವೂ ಬಯಲಾಗಿದೆ. ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಆಕಾಂಕ್ಷಾ ಘೋಷಿಸಿದ್ದಾರೆ.&lt;/p&gt;&lt;img&gt;&lt;p&gt;'ನಮ್ಮಿಬ್ಬರ ಗುರಿಗಳು ಬೇರೆ ಬೇರೆಯಾಗಿವೆ. ಗೌರವ್ ಖನ್ನಾಗೆ ಮಕ್ಕಳಾಗಬೇಕು ಎಂಬ ಆಸೆ ಇದೆ. ಆದರೆ ನನಗೆ ತಾಯಿಯಾಗುವ ಯಾವುದೇ ಆಸೆ ಇಲ್ಲ. ಮದುವೆಯಾದ ಹೊಸತರಲ್ಲಿ ಈ ಬಗ್ಗೆ ಏನೂ ಅನ್ನಿಸಿರಲಿಲ್ಲ, ಆದರೆ ಈಗ ನಾನು ತಾಯ್ತನಕ್ಕೆ ಲಾಯಕ್ಕಲ್ಲ ಎನಿಸುತ್ತಿದೆ. ಗೌರವ್ ಅವರ ಆಸೆಗೆ ನಾನು ಅಡ್ಡಿಯಾಗಬಾರದು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ' ಎಂದು ಭಾವುಕರಾಗಿ ನುಡಿದಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಕಣ್ಣೀರಿಟ್ಟ ನಟಿ, ಬೆಂಬಲಕ್ಕೆ ನಿಂತ ಗಂಡ:&lt;/strong&gt;&lt;/p&gt;&lt;p&gt;ತಮ್ಮ ವೈಯಕ್ತಿಕ ವಿಷಯವನ್ನು ಶೋನಲ್ಲಿ ಬಯಲು ಮಾಡಿದ ಶ್ರೇಯಾ ವಿರುದ್ಧ ಆಕಾಂಕ್ಷಾ ಆಕ್ರೋಶ ಹೊರಹಾಕಿದ್ದಾರೆ. 'ನಾನು ಆಕೆಗೆ ವೈಯಕ್ತಿಕವಾಗಿ ಹೇಳಿದ ಮಾತನ್ನು ಆಕೆ ಟಿವಿಯಲ್ಲಿ ಹೇಳಿ ನನ್ನ ಮಾನ ಹರಾಜು ಹಾಕಿದ್ದಾಳೆ' ಎಂದು ಕಣ್ಣೀರಿಟ್ಟಿದ್ದಾರೆ.&lt;/p&gt;&lt;img&gt;&lt;p&gt;ಆದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆ ಪತಿ ಗೌರವ್ ಖನ್ನಾ ಮಾತ್ರ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. 'ಆಕಾಂಕ್ಷಾ ಏನೇ ಹೇಳಿರಲಿ, ಆಕೆ ನನ್ನ ಪತ್ನಿ. ನಾನು ಯಾವಾಗಲೂ ಆಕೆಯನ್ನು ಬೆಂಬಲಿಸುತ್ತೇನೆ. ಆಕೆಗೆ ಒಳ್ಳೆಯದಾಗಲಿ' ಎಂದು ಹೇಳುವ ಮೂಲಕ ಗೌರವ್ ತಮ್ಮ ದೊಡ್ಡ ಗುಣ ಮೆರೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕಾಂಕ್ಷಾ ಅವರ ಈ 'ಬೈಸೆಕ್ಸುವಲ್' ಹೇಳಿಕೆ ಮತ್ತು ವಿಚ್ಛೇದನದ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/tv-talk/gaurav-khanna-s-wife-akanksha-chamola-reveals-being-bisexual-opens-up-on-divorce-and-kids-tpwdzup"/>
        </item>
        <item>
            <title><![CDATA[41ರಲ್ಲೂ ಅದೇ ಗ್ಲಾಮರ್: ಜ್ಯೋತಿ ರೈ ಹುಟ್ಟುಹಬ್ಬಕ್ಕೆ ಪತಿ ಸುಕು ಪೂರ್ವಜ್ ಸ್ಪೆಷಲ್ ವಿಶ್ ವೈರಲ್]]></title>
            <link>https://kannada.asianetnews.com/tv-talk/actress-jyothi-rai-41st-birthday-husband-suku-purvaj-wishes-gvd/articleshow-8qtno8p</link>
            <guid isPermaLink="true">https://kannada.asianetnews.com/tv-talk/actress-jyothi-rai-41st-birthday-husband-suku-purvaj-wishes-gvd/articleshow-8qtno8p</guid>
            <pubDate>Sun, 05 Jul 2026 18:08:20 +0530</pubDate>
            <description><![CDATA[Jyothi Rai 41st Birthday: ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಕನ್ನಡಿಗರ ಮನ ಗೆದ್ದಿದ್ದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws4ctzszv9jryyvwzdwwjfj,imgname-vj-1783254903801.png" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಜ್ಯೋತಿ ರೈ ಹಲವು ವರ್ಷಗಳ ಕಾಲ ನಾಯಕಿಯಾಗಿ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ಸಾಂಪ್ರದಾಯಿಕ ಉಡುಗೆ ಮತ್ತು ಗಂಭೀರ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಅವರು, ಈಗ ತಮ್ಮ ಹೊಸ ಅವತಾರದಿಂದಲೂ ಗಮನ ಸೆಳೆಯುತ್ತಿದ್ದಾರೆ.&lt;/p&gt;&lt;p&gt;ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಜ್ಯೋತಿ ರೈ ಅವರ ವೃತ್ತಿಜೀವನದ ಜೊತೆಗೆ ಅವರ ಲುಕ್ ಕೂಡ ಸಾಕಷ್ಟು ಬದಲಾಗಿದೆ. ಕನ್ನಡ ಕಿರುತೆರೆಯ &lsquo;ಮನೆಮಗಳು&rsquo; ಎಂಬ ಇಮೇಜ್&zwnj;ನಿಂದ ಹೊರಬಂದು, ತೆಲುಗು ಸಿನಿಮಾಗಳು ಹಾಗೂ ವೆಬ್&zwnj; ಸೀರೀಸ್&zwnj;ಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಹೊಸ ಗುರುತನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಗ್ಲಾಮರಸ್ ಫೋಟೋಶೂಟ್&zwnj;ಗಳು ಮತ್ತು ಸ್ಟೈಲಿಶ್ ಲುಕ್&zwnj;ನಿಂದ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಾರೆ.&lt;/p&gt;&lt;p&gt;ಇದೀಗ ನಟಿ ತಮ್ಮ 41ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಪತಿ, ತೆಲುಗು ನಿರ್ದೇಶಕ ಸುಕು ಪೂರ್ವಜ್, ಜ್ಯೋತಿ ರೈ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜ್ಯೋತಿ ರೈ ಕೂಡ ಪತಿಯೊಂದಿಗೆ ಕೇಕ್ ಕಟ್ ಮಾಡಿ ಈ ಸಂಭ್ರಮವನ್ನು ಆಚರಿಸಿರುವ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.&lt;/p&gt;&lt;p&gt;ಜ್ಯೋತಿ ರೈ ಅವರು ಅನುರಾಗ ಸಂಗಮ, ಜೋಗುಳ, ಗೆಜ್ಜೆಪೂಜೆ, ಲವಲವಿಕೆ, ಕನ್ಯಾದಾನ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿದಂತೆ 18ಕ್ಕೂ ಹೆಚ್ಚು ಕನ್ನಡ ಧಾರಾವಾಹಿಗಳಲ್ಲಿ ನಟಿಸಿ ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಚಿತ್ರರಂಗದಲ್ಲಿ ಸಕ್ರಿಯ&lt;/strong&gt;&lt;/h2&gt;&lt;p&gt;ಪ್ರಸ್ತುತ ಕನ್ನಡದಿಂದ ಸ್ವಲ್ಪ ದೂರ ಉಳಿದಿರುವ ಅವರು, ತೆಲುಗು ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತೆಲುಗು ನಿರ್ದೇಶಕ ಸುಕು ಪೂರ್ವಜ್ ಅವರನ್ನು ವಿವಾಹವಾದ ಬಳಿಕ ಅಲ್ಲಿಯೇ ನೆಲೆಸಿರುವ ಜ್ಯೋತಿ ರೈ, ತಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ.&amp;nbsp;&lt;/p&gt;&amp;nbsp;&amp;nbsp;&amp;nbsp;&amp;nbsp;View this post on Instagram&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;p&gt;A post shared by JyotiPoorvaj (@jyotipoorvaj)&lt;/p&gt;]]></content:encoded>
            <category><![CDATA[tv-talk]]></category>
            <dc:creator>Govindaraj S</dc:creator>
            <atom:link href="https://kannada.asianetnews.com/tv-talk/actress-jyothi-rai-41st-birthday-husband-suku-purvaj-wishes-gvd/articleshow-8qtno8p"/>
        </item>
        <item>
            <title><![CDATA[ಮಣ್ಣಿನ ಮಡಕೆಯಿಂದ ಹೀಗೆ ತಯಾರಿಸಿ ಕಾರಂಜಿ: ಕಡಿಮೆ ಖರ್ಚಲ್ಲಿ ಗಾರ್ಡನ್​ಗೆ ಹೈಟೆಕ್​ ಲುಕ್​]]></title>
            <link>https://kannada.asianetnews.com/life/glazing-a-fountain-from-clay-pots-a-high-tech-look-for-the-garden-at-a-low-cost-suc/articleshow-e9gligv</link>
            <guid isPermaLink="true">https://kannada.asianetnews.com/life/glazing-a-fountain-from-clay-pots-a-high-tech-look-for-the-garden-at-a-low-cost-suc/articleshow-e9gligv</guid>
            <pubDate>Sun, 05 Jul 2026 18:02:09 +0530</pubDate>
            <description><![CDATA[ಕಡಿಮೆ ವೆಚ್ಚದಲ್ಲಿ ನಿಮ್ಮ ಉದ್ಯಾನವನ್ನು ಸುಂದರಗೊಳಿಸಲು, ಮಣ್ಣಿನ ಮಡಕೆಗಳನ್ನು ಬಳಸಿ ಮನೆಯಲ್ಲಿಯೇ ಆಕರ್ಷಕ ಕಾರಂಜಿಯನ್ನು ತಯಾರಿಸಬಹುದು. ಸಬ್ಮರ್ಸಿಬಲ್ ಮೋಟಾರ್ ಬಳಸಿ ನೀರು ಹರಿಯುವಂತೆ ಮಾಡಿ, ಅಲಂಕಾರಿಕ ಸಸ್ಯಗಳು, ವರ್ಣರಂಜಿತ ಕಲ್ಲುಗಳು ಮತ್ತು ಎಲ್ಇಡಿ ದೀಪಗಳಿಂದ ಇದನ್ನು ಇನ್ನಷ್ಟು ಸುಂದರಗೊಳಿಸುವ ಮೂಲಕ ಉದ್ಯಾನಕ್ಕೆ ಶಾಂತಿಯುತ ನೋಟ ನೀಡಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kws45rxdccc8tpbch7mw1wn6,imgname-fountain-1783254672301.jpg" type="image/jpeg" height="390" width="690"/>
            <content:encoded><![CDATA[&lt;p&gt;ನಿಮ್ಮ ಉದ್ಯಾನವನ್ನು ಕಡಿಮೆ ವೆಚ್ಚದಲ್ಲಿ ಸುಂದರವಾಗಿ ಕಾಣುವಂತೆ ಮಾಡಲು ಬಯಸಿದರೆ, ಸುಂದರವಾದ ಕಾರಂಜಿ ಸೇರಿಸುವುದನ್ನು ಮರೆಯಬೇಡಿ. ನೀವು ಮಾರುಕಟ್ಟೆಯಿಂದ ಒಂದನ್ನು ಖರೀದಿಸುವ ಅಗತ್ಯವಿಲ್ಲ; ನೀವು ಸುಲಭವಾಗಿ ಮನೆಯಲ್ಲಿಯೇ ಅದನ್ನು ಮಾಡಬಹುದು. ಸಣ್ಣ ಮತ್ತು ದೊಡ್ಡ ಮಣ್ಣಿನ ಮಡಕೆಗಳನ್ನು ಬಳಸಿಕೊಂಡು ನಿಮ್ಮ ಉದ್ಯಾನವನ್ನು ಸುಂದರಗೊಳಿಸಿ. ಹರಿಯುವ ನೀರಿನ ಮಧುರ ಶಬ್ದವು ಉದ್ಯಾನಕ್ಕೆ ಶಾಂತ ಮತ್ತು ವಿಶ್ರಾಂತಿ ವಾತಾವರಣವನ್ನು ನೀಡುವುದಲ್ಲದೆ, ಸುತ್ತಮುತ್ತಲಿನ ಆಲಂಕಾರಿಕ ಸಸ್ಯಗಳನ್ನು ಹೆಚ್ಚಿಸುತ್ತದೆ. ಸಣ್ಣ ಮತ್ತು ದೊಡ್ಡ ಮಣ್ಣಿನ ಮಡಕೆಗಳಿಂದ ಕಾರಂಜಿ ಮಾಡುವುದು ಹೇಗೆ ಎಂದು ತಿಳಿಯಿರಿ.&lt;/p&gt;&lt;h2&gt;&lt;strong&gt;ಸಣ್ಣ ಮತ್ತು ದೊಡ್ಡ ಮಡಕೆಗಳನ್ನು ಹೊಂದಿಸುವುದು&lt;/strong&gt;&lt;/h2&gt;&lt;p&gt;ಒಂದು ದೊಡ್ಡ ಪ್ಲಾಸ್ಟಿಕ್ ಟಬ್ ಅಥವಾ ಪಾತ್ರೆಯನ್ನು ನೀರಿನಿಂದ ತುಂಬಿಸಿ ಮತ್ತು ಅದರ ಮೇಲೆ ಸ್ವಲ್ಪ ಓರೆಯಲ್ಲಿ ದೊಡ್ಡ ಮಡಕೆಯನ್ನು ಇರಿಸಿ. ಕೆಳಗೆ ಒಂದು ಸಣ್ಣ ಮಡಕೆಯನ್ನು ಇರಿಸಿ ಇದರಿಂದ ಮೇಲಿನಿಂದ ಬೀಳುವ ನೀರು ಅದರಲ್ಲಿ ಸಂಗ್ರಹವಾಗುತ್ತದೆ ಮತ್ತು ನಂತರ ಕೆಳಗೆ ಹರಿಯುತ್ತದೆ. ಇದನ್ನು ಮಾಡಲು, ನೀವು ಸಣ್ಣ ಮಡಕೆಯಲ್ಲಿ ರಂಧ್ರವನ್ನು ಕೊರೆಯಬೇಕಾಗುತ್ತದೆ. ನೀರನ್ನು ನಿರಂತರವಾಗಿ ಪರಿಚಲನೆ ಮಾಡಲು ಸಣ್ಣ ಸಬ್ಮರ್ಸಿಬಲ್ ಮೋಟಾರ್ ಬಳಸಿ. ನೀವು ಇದನ್ನು ಹಾರ್ಡ್&zwnj;ವೇರ್ ಅಂಗಡಿಯಲ್ಲಿ ಸುಲಭವಾಗಿ ಕಾಣಬಹುದು.&lt;/p&gt;&lt;h2&gt;&lt;strong&gt;ಕಾರಂಜಿಯ ಸುತ್ತಲೂ ವರ್ಣರಂಜಿತ ಸಸ್ಯಗಳನ್ನು ನೆಡಬೇಕು&lt;/strong&gt;&lt;/h2&gt;&lt;p&gt;ಮಡಕೆ ಕಾರಂಜಿಯ ನೋಟವನ್ನು ಹೆಚ್ಚಿಸಲು, ನೀವು ಮನಿ ಪ್ಲಾಂಟ್&zwnj;ಗಳು, ಸ್ಪೈಡರ್ ಪ್ಲಾಂಟ್&zwnj;ಗಳು, ಹಾವಿನ ಸಸ್ಯಗಳು ಮತ್ತು ಇತರ ಅಲಂಕಾರಿಕ ಸಸ್ಯಗಳನ್ನು ನೆಡಬಹುದು. ಬಯಸಿದಲ್ಲಿ, ನೀವು ಗುಲಾಬಿಗಳು ಮತ್ತು ದಾಸವಾಳದಂತಹ ಹೂಬಿಡುವ ಸಸ್ಯಗಳಿಂದ ಕೂಡ ಅಲಂಕರಿಸಬಹುದು. ಸಸ್ಯಗಳ ಜೊತೆಗೆ ಹರಿಯುವ ನೀರು ಉದ್ಯಾನಕ್ಕೆ ಹೊಸ ನೋಟವನ್ನು ನೀಡುತ್ತದೆ.&lt;/p&gt;&lt;h3&gt;&lt;strong&gt;ವರ್ಣರಂಜಿತ ಕಲ್ಲುಗಳನ್ನು ಬಳಸಿ&lt;/strong&gt;&lt;/h3&gt;&lt;p&gt;ವರ್ಣರಂಜಿತ ಬೆಣಚುಕಲ್ಲುಗಳು, ಚಿತ್ರಿಸಿದ ಕಲ್ಲುಗಳು ಅಥವಾ ಸಣ್ಣ ಪ್ರದರ್ಶನಗಳು ಮಡಕೆ ಕಾರಂಜಿಯನ್ನು ಹೆಚ್ಚಿಸುತ್ತವೆ. ಬಯಸಿದಲ್ಲಿ, ನೀವು ನಿಮ್ಮ ನೆಚ್ಚಿನ ಬಣ್ಣದಲ್ಲಿ ದೊಡ್ಡ ಕಲ್ಲುಗಳನ್ನು ಚಿತ್ರಿಸಬಹುದು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಅಲಂಕರಿಸಬಹುದು.&lt;/p&gt;&lt;h3&gt;&lt;strong&gt;LED ದೀಪಗಳನ್ನು ಬಳಸಿ&lt;/strong&gt;&lt;/h3&gt;&lt;p&gt;ನೀರಿನ ಕಾರಂಜಿ ಬಳಿ ಜಲನಿರೋಧಕ LED ದೀಪಗಳು ಅದರ ಸೌಂದರ್ಯವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತವೆ. ಸಂಜೆ ದೀಪಗಳು ಉದ್ಯಾನವನ್ನು ಸಂಪೂರ್ಣವಾಗಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಕೈಗೆಟುಕುವ ವೆಚ್ಚದಲ್ಲಿ ಉದ್ಯಾನ ಮೂಲೆಯನ್ನು ಅಲಂಕರಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.&lt;/p&gt;&lt;h3&gt;&lt;strong&gt;ಜೇಡಿಮಣ್ಣಿನ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿ&lt;/strong&gt;&lt;/h3&gt;&lt;p&gt;ಹಳೆಯ ಮಡಕೆಗಳು, ಟಂಬ್ಲರ್&zwnj;ಗಳು ಅಥವಾ ಮಣ್ಣಿನ ಮಡಕೆಗಳನ್ನು ಬಣ್ಣ ಬಳಿದು ಉದ್ಯಾನ ಅಲಂಕಾರಕ್ಕಾಗಿ ಬಳಸಬಹುದು. ನಿಮ್ಮ ಉದ್ಯಾನವನ್ನು ಸುಂದರಗೊಳಿಸಲು ಈ ಅಗ್ಗದ ವಿಧಾನವನ್ನು ನೀವು ಖಂಡಿತವಾಗಿಯೂ ಆನಂದಿಸುವಿರಿ.&lt;/p&gt;]]></content:encoded>
            <category><![CDATA[life]]></category>
            <dc:creator>Suchethana D</dc:creator>
            <atom:link href="https://kannada.asianetnews.com/life/glazing-a-fountain-from-clay-pots-a-high-tech-look-for-the-garden-at-a-low-cost-suc/articleshow-e9gligv"/>
        </item>
        <item>
            <title><![CDATA[Yash-Toxic: ಯಶ್ 'ಟಾಕ್ಸಿಕ್' 2ನೇ ಹಾಡಿಗೆ ಕೌಂಟ್‌ಡೌನ್ ಶುರು; ಈ ಸಾಂಗ್ ಸ್ಪೆಷಾಲಿಟಿ ಏನ್ ಗೊತ್ತಾ?]]></title>
            <link>https://kannada.asianetnews.com/entertainment/2nd-track-of-rocking-star-yash-starrer-toxic-will-be-out-shortly-featuring-music-by-vishal-mishra/articleshow-6kkxnox</link>
            <guid isPermaLink="true">https://kannada.asianetnews.com/entertainment/2nd-track-of-rocking-star-yash-starrer-toxic-will-be-out-shortly-featuring-music-by-vishal-mishra/articleshow-6kkxnox</guid>
            <pubDate>Sun, 05 Jul 2026 17:55:28 +0530</pubDate>
            <description><![CDATA[ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್‌ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದ್ದು, ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊಸ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwm5vg8scrdq18fzz4dh1bqg,imgname-hfh-1783088660760.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಕಿಂಗ್ ಸ್ಟಾರ್ ಯಶ್ ಚಿತ್ರದ Toxic ಎರಡನೇ ಹಾಡಿಗೆ ಕೌಂಟ್&zwnj;ಡೌನ್ ಶುರು!&lt;/strong&gt;&lt;/p&gt;&lt;p&gt;ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಚಿತ್ರದ ಎರಡನೇ ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವಿಶಾಲ್ ಮಿಶ್ರಾ ಸಂಗೀತದ ಹೊಸ ಸಾಂಗ್&zwnj;ಗೆ ಕೌಂಟ್&zwnj;ಡೌನ್&zwnj; ಆರಂಭವಾಗಿದೆ. ಚಿತ್ರತಂಡವು 'ತಬಾಹಿ' (Tabahi) ಎಂಬ ಹಾಡನ್ನು ಮಾತ್ರ ಮಾರ್ಚ್&zwnj;ನಲ್ಲಿ (March 2, 2026) ಬಿಡುಗಡೆ ಮಾಡಿತ್ತು.&lt;/p&gt;&lt;p&gt;ರಾಕಿಂಗ್ ಸ್ಟಾರ್ ಯಶ್ ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ಹಾಡಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 'ತಬಾಹಿ' ಹಾಡಿನ ಭರ್ಜರಿ ಯಶಸ್ಸಿನ ಬಳಿಕ ಮತ್ತೊಂದು ಹೊಸ ಹಾಡು ಯಾವಾಗ ಬರಲಿದೆ ಎಂದು ಕನ್ನಡ ಸೇರಿದಂತೆ ಜಗತ್ತಿನಾದ್ಯಂತ ಸಿನಿರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಇತ್ತೀಚೆಗೆ ಬಂದ ಸುದ್ದಿಯ ಪ್ರಕಾರ, ವಿಶಾಲ್ ಮಿಶ್ರಾ ಸಂಗೀತದ ವಿಶೇಷ ಟ್ರ್ಯಾಕ್ ಮೂಲಕ ಈ ಹೊಸ ಹಾಡು ವಿಭಿನ್ನ ಹಾಗೂ ವಿಶೇಷ ಎನ್ನುವಂತೆ ಮೂಡಿಬಂದಿದ್ದು, ಹೊರಜಗತ್ತಿಗೆ ಶೀಘ್ರದಲ್ಲಿ ಕಾಲಿಡಲಿದೆ.&lt;/p&gt;&lt;h2&gt;ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್&lt;/h2&gt;&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ 'ಟಾಕ್ಸಿಕ್' (Toxic) ಚಿತ್ರದ ಪ್ರತಿಯೊಂದು ಅಪ್&zwnj;ಡೇಟ್ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿದ್ದು, ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೊಸ ಅಪ್&zwnj;ಡೇಟ್&zwnj;ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಾಕ್ಸಿಕ್ ಚಿತ್ರತಂಡ ಇದುವರೆಗೆ 'ತಬಾಹಿ' (Tabahi) ಹಾಡನ್ನು ಮಾತ್ರ ಬಿಡುಗಡೆ ಮಾಡಿತ್ತು. ಆ ಹಾಡು ಸಂಗೀತ ಪ್ರಿಯರು ಹಾಗೂ ಯಶ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.&lt;/p&gt;&lt;p&gt;ಸಿಕ್ಕ ಮಾಹಿತಿ ಪ್ರಕಾರ, ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿದ್ದು, ಇದೀಗ ಕೌಂಟ್&zwnj;ಡೌನ್&zwnj; ಆರಂಭವಾಗಿದೆ. ಈ ಹಾಡು ಸಿನಿಮಾದ ಪ್ರಮುಖ ಹೈಲೈಟ್&zwnj;ಗಳಲ್ಲಿ ಒಂದಾಗಲಿದೆ ಎನ್ನಲಾಗುತ್ತಿದೆ. ಈ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಾವ ನಾಯಕಿಯೊಡನೆ ರೊಮಾನ್ಸ್ ಮಾಡಿದ್ದಾರೆ ಎಂಬ ಕುತೂಹಲದಲ್ಲಿ ಸಿನಿರಸಿಕರು ಕಾಯುತ್ತಿದ್ದಾರೆ.&lt;/p&gt;&lt;h3&gt;'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ&lt;/h3&gt;&lt;p&gt;ಅಂದಹಾಗೆ, ಇತ್ತೀಚೆಗೆ ಬಿಡುಗಡೆ ಆಗಿರುವ ಟಾಕ್ಸಿಕ್ ಸಿನಿಮಾದ 'ಲೇಡೀಸ್ &amp;amp; ಲೇಡೀಸ್' ಟೀಸರ್ ಭಾರೀ ಸಂಚಲನ ಸೃಷ್ಟಿಸಿದೆ. ನಯನತಾರಾ, ಕಿಯಾರಾ ಅಡ್ವಾನಿ, ಹಿಮಾ ಖುರೇಶಿ, ರುಕ್ಮಿಣಿ ವಸಂತ್ ಹಾಗೂ ತಾರಾ ಸುತಾರಿಯಾ ಈ ಚಿತ್ರದ ನಾಯಕಿಯರು. ಈ ಪಂಚ ಚಲುವೆಯರಿಗೆ ನಾಯಕರಾಗಿ ಯಶ್ ನಟಿಸಿದ್ದು, ಇದೊಂದು ಪ್ಯಾನ್ ಇಂಡಿಯಾ ಮೀರಿದ ಪ್ಯಾನ್ ವಲ್ಡ್&zwnj; ಸಿನಿಮಾ ಆಗಿದೆ. 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/2nd-track-of-rocking-star-yash-starrer-toxic-will-be-out-shortly-featuring-music-by-vishal-mishra/articleshow-6kkxnox"/>
        </item>
        <item>
            <title><![CDATA[13 ಮಂದಿ ಕಾಮುಕರ ಕ್ರೌರ್ಯಕ್ಕೆ ಬಲಿಯಾದ ಯುವತಿ: 2 ವರ್ಷದಿಂದ OTTಯಲ್ಲಿ ಧೂಳೆಬ್ಬಿಸುತ್ತಿರುವ ನೈಜ ಘಟನೆಯ ಸಿನಿಮಾ!]]></title>
            <link>https://kannada.asianetnews.com/entertainment/vina-ke-woh-saat-din-the-chilling-true-story-of-justice-and-horror-now-streaming-on-jiohotstar/articleshow-igf82uf</link>
            <guid isPermaLink="true">https://kannada.asianetnews.com/entertainment/vina-ke-woh-saat-din-the-chilling-true-story-of-justice-and-horror-now-streaming-on-jiohotstar/articleshow-igf82uf</guid>
            <pubDate>Sun, 05 Jul 2026 17:50:06 +0530</pubDate>
            <description><![CDATA[Real life horror movies on OTT: ಹಾರರ್ ಮತ್ತು ಸಸ್ಪೆನ್ಸ್ ಪ್ರಿಯರಿಗಾಗಿ ಓಟಿಟಿಯಲ್ಲಿ ಈಗ ಹತ್ತಾರು ಚಿತ್ರಗಳು ಲಭ್ಯವಿವೆ. ಆದರೆ, ಕೆಲವು ಚಿತ್ರಗಳು ನೋಡಿದ ಮೇಲೆ ಮನಸ್ಸಿನಲ್ಲಿ ಭಯದ ಜೊತೆ ತೀವ್ರವಾದ ವಿಷಾದವನ್ನೂ ಮೂಡಿಸುತ್ತವೆ. ಅಂತಹದ್ದೇ ಒಂದು ಸಿನಿಮಾ ಇದು.]]></description>
            <media:content url="https://static.asianetnews.com/images/w-1280,h-720,format-jpg,imgid-01kws3387f06gvx1g1m19tsfne,imgname-thumbnail--86--1783253541102.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;Horror movies on JioHotstar: &lt;/strong&gt;ಹಾರರ್ ಮತ್ತು ಸಸ್ಪೆನ್ಸ್ ಸಿನಿಮಾಗಳನ್ನು ಇಷ್ಟಪಡುವವರಿಗಾಗಿ ಓಟಿಟಿಯಲ್ಲಿ ಪ್ರತಿನಿತ್ಯ ಹೊಸ ಹೊಸ ಚಿತ್ರಗಳು ಬಿಡುಗಡೆಯಾಗುತ್ತಲೇ ಇರುತ್ತವೆ. ಆದರೆ, ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುತ್ತವೆ. ಅಂತಹದ್ದೇ ಒಂದು ಚಿತ್ರ Vina Ke Woh Saat Din (Vina: Sebelum 7 Hari). 2024ರಲ್ಲಿ ಬಿಡುಗಡೆಯಾದ ಈ ಹಾರರ್-ಥ್ರಿಲ್ಲರ್ ಚಿತ್ರವು ಸದ್ಯ ಓಟಿಟಿಯಲ್ಲಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರವು ಇಂಡೋನೇಷ್ಯಾದಲ್ಲಿ ನಡೆದ ಒಂದು ಅತ್ಯಂತ ಕ್ರೂರವಾದ ನೈಜ ಘಟನೆಯನ್ನು ಆಧರಿಸಿದೆ.&lt;/p&gt;&lt;h2&gt;&lt;strong&gt;ಕಣ್ಣೀರು ತರಿಸುವ ಕಥಾಹಂದರ&lt;/strong&gt;&lt;/h2&gt;&lt;p&gt;ಈ ಚಿತ್ರದ ಕಥೆಯು ವೀಣಾ ಎಂಬ ಯುವತಿ ಮತ್ತು ಆಕೆಯ ಗೆಳೆಯನ ರಹಸ್ಯ ಮರಣದ ಸುತ್ತ ಸುತ್ತುತ್ತದೆ. ಆರಂಭದಲ್ಲಿ ಇದು ಕೇವಲ ಸಾಮಾನ್ಯ ರಸ್ತೆ ಅಪಘಾತ ಎಂದು ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಆದರೆ, ವೀಣಾಳ ಸಾವಿನ ಹಿಂದೆ ಅಡಗಿರುವ ಘೋರ ಸತ್ಯವು ಕಾಲಾನಂತರದಲ್ಲಿ ಅಚ್ಚರಿಯ ರೀತಿಯಲ್ಲಿ ಬೆಳಕಿಗೆ ಬರುತ್ತದೆ. ಸತ್ತ ವೀಣಾಳ ಆತ್ಮವು ಆಕೆಯ ಆತ್ಮೀಯ ಗೆಳತಿಯ ದೇಹವನ್ನು ಪ್ರವೇಶಿಸಿ, ತನಗೆ ನಡೆದ ಅನ್ಯಾಯದ ಬಗ್ಗೆ ತನ್ನ ಕುಟುಂಬದವರಿಗೆ ವಿವರಿಸಿದಾಗ ಕಥೆ ರೋಚಕ ತಿರುವು ಪಡೆಯುತ್ತದೆ.&lt;/p&gt;&lt;h2&gt;&lt;strong&gt;ಘೋರ ಸತ್ಯದ ಅನಾವರಣ&lt;/strong&gt;&lt;/h2&gt;&lt;p&gt;ವೀಣಾಳ ಮೇಲೆ 13 ಮಂದಿ ಕಿರಾತಕರು ಕ್ರೂರವಾಗಿ ಸಾಮೂಹಿಕ ಅತ್ಯಾ*ಚಾರ ಎಸಗಿ, ನಂತರ ಆಕೆಯನ್ನು ಮತ್ತು ಆಕೆಯ ಗೆಳೆಯನನ್ನು ದಾರುಣವಾಗಿ ಹತ್ಯೆ ಮಾಡಿರುತ್ತಾರೆ. ಈ ವಿಷಯ ತಿಳಿದ ಮೇಲೆ ವೀಣಾ ಕುಟುಂಬವು ನ್ಯಾಯಕ್ಕಾಗಿ ನಡೆಸುವ ಹೋರಾಟ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ. ಕೇವಲ ಹಾರರ್ ಚಿತ್ರವಾಗಿರದೇ, ಸಮಾಜದ ಕ್ರೌರ್ಯವನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ. ವೀಣಾಳ ಆತ್ಮವು ಹೇಗೆ ಆ ಕಿರಾತಕರನ್ನು ಶಿಕ್ಷಿಸಲು ದಾರಿ ಮಾಡಿಕೊಡುತ್ತದೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆ.&lt;/p&gt;&lt;h2&gt;&lt;strong&gt;ಬಾಕ್ಸ್ ಆಫೀಸ್&zwnj;ನಲ್ಲಿ ಧೂಳಿಪಟ&lt;/strong&gt;&lt;/h2&gt;&lt;p&gt;ಏಂಜಿ ಉಂಬಾರ ನಿರ್ದೇಶನದ ಮತ್ತು ಧೀರಜ್ ಕಲ್ವಾನಿ ನಿರ್ಮಾಣದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಭರ್ಜರಿ ಯಶಸ್ಸು ಕಂಡಿತ್ತು. ಸುಮಾರು 58 ಲಕ್ಷ ಟಿಕೆಟ್&zwnj;ಗಳು ಮಾರಾಟವಾಗುವ ಮೂಲಕ ಇದೊಂದು ದಾಖಲೆಯನ್ನೇ ಸೃಷ್ಟಿಸಿತ್ತು. ಭಾರತದಲ್ಲೂ ಈ ಚಿತ್ರದ ಬಗ್ಗೆ ಭಾರಿ ಚರ್ಚೆ ನಡೆದಿದ್ದು, ವಿಶ್ವಾದ್ಯಂತ ಸುಮಾರು 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿದೆ. IMDb ಯಲ್ಲಿ ಈ ಚಿತ್ರಕ್ಕೆ 5.4 ರೇಟಿಂಗ್ ನೀಡಲಾಗಿದೆ.&lt;/p&gt;&lt;h2&gt;&lt;strong&gt;ಓಟಿಟಿಯಲ್ಲಿ ಲಭ್ಯ&lt;/strong&gt;&lt;/h2&gt;&lt;p&gt;ಚಿತ್ರಮಂದಿರಗಳಲ್ಲಿ ಸಂಚಲನ ಸೃಷ್ಟಿಸಿದ ನಂತರ, ಈ ಸಿನಿಮಾ ಈಗ ಪ್ರಮುಖ ಓಟಿಟಿ ಪ್ಲಾಟ್&zwnj;ಫಾರ್ಮ್ ಆದ 'ಜಿಯೋ ಹಾಟ್&zwnj;ಸ್ಟಾರ್' (JioHotstar) ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವೀಕ್ಷಕರನ್ನು ನಡುಗಿಸುವ ದೃಶ್ಯಗಳು ಮತ್ತು ಭಾವನಾತ್ಮಕ ಸನ್ನಿವೇಶಗಳಿಂದಾಗಿ ಈ ಚಿತ್ರವು ಇಂದಿಗೂ ಟ್ರೆಂಡಿಂಗ್&zwnj;ನಲ್ಲಿದೆ. ನೈಲಾ ಡಿ. ಪೂರ್ಣಮ (Nayla D. Purnama) ಮತ್ತು ಗಿಸೆಲ್ಮಾ ಫಿರ್ಮಾನ್ಸ್ಯ (Gisellma Firmansyah) ಅವರ ನೈಜ ನಟನೆಯು ಈ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಸತ್ಯ ಘಟನೆಯ ಆಧಾರಿತ ಸಿನಿಮಾಗಳನ್ನು ಇಷ್ಟಪಡುವವರು ಈ ಚಿತ್ರವನ್ನು ಖಂಡಿತ ವೀಕ್ಷಿಸಬಹುದು.&lt;/p&gt;&lt;h3&gt;&lt;strong&gt;ಸಮಾಜದ ಮೇಲೆ ಈ ಚಿತ್ರದ ಪ್ರಭಾವ&lt;/strong&gt;&lt;/h3&gt;&lt;p&gt;ಈ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ, ಬದಲಿಗೆ ಇದು ಸಮಾಜಕ್ಕೆ ದೊಡ್ಡ ಸಂದೇಶವನ್ನು ನೀಡಿದೆ. 2016ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಈ ನೈಜ ಹತ್ಯೆ ಪ್ರಕರಣದ ತನಿಖೆಯನ್ನು ಈ ಸಿನಿಮಾ ಮತ್ತೆ ಮುನ್ನೆಲೆಗೆ ತಂದಿದೆ. ಸಿನಿಮಾ ಬಿಡುಗಡೆಯಾದ ನಂತರ ಜನರ ಆಕ್ರೋಶ ಹೆಚ್ಚಾಗಿ, ಪೊಲೀಸರು ಎಂಟು ವರ್ಷಗಳ ಬಳಿಕ ಈ ಕೇಸ್&zwnj;ನ ತನಿಖೆಯನ್ನು ಮತ್ತೆ ತೀವ್ರಗೊಳಿಸಿರುವುದು ವಿಶೇಷ. ನೈಜ ಘಟನೆಗಳನ್ನು ಆಧರಿಸಿದ ಹಾರರ್ ಸಿನಿಮಾಗಳು ನ್ಯಾಯದ ಹೋರಾಟಕ್ಕೆ ಎಷ್ಟು ಶಕ್ತಿಯುತವಾಗಿ ಧ್ವನಿಯಾಗಬಲ್ಲವು ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಬಾಧಿತ ಕುಟುಂಬದ ವೇದನೆಯನ್ನು ಇಲ್ಲಿ ಅತ್ಯಂತ ಹತ್ತಿರದಿಂದ ತೋರಿಸಲಾಗಿದ್ದು, ಪ್ರತಿಯೊಬ್ಬ ಪ್ರೇಕ್ಷಕನ ಕಣ್ಣಲ್ಲಿ ನೀರು ತರಿಸುತ್ತದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Ashwini HR</dc:creator>
            <atom:link href="https://kannada.asianetnews.com/entertainment/vina-ke-woh-saat-din-the-chilling-true-story-of-justice-and-horror-now-streaming-on-jiohotstar/articleshow-igf82uf"/>
        </item>
        <item>
            <title><![CDATA[Alpha Controversy: ಬಿಕಿನಿ ದೃಶ್ಯಕ್ಕೆ ಭುಗಿಲೆದ್ದ ವಿವಾದ! ಆಲಿಯಾ, ಶರ್ವರಿಯ ಆ ಸೀನ್‌ಗೆ ನೆಟ್ಟಿಗರು ಗರಂ]]></title>
            <link>https://kannada.asianetnews.com/entertainment/alia-bhatt-and-sharvari-waghs-alpha-movie-bikini-scene-sparks-major-online-backlash-gvd/articleshow-yrso4t7</link>
            <guid isPermaLink="true">https://kannada.asianetnews.com/entertainment/alia-bhatt-and-sharvari-waghs-alpha-movie-bikini-scene-sparks-major-online-backlash-gvd/articleshow-yrso4t7</guid>
            <pubDate>Sun, 05 Jul 2026 17:34:30 +0530</pubDate>
            <description><![CDATA[ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾ ಜುಲೈ 3 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೀಗ ಹೊಸ ವಿವಾದ ಹುಟ್ಟುಹಾಕಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws2jvpat5as1jwah9g8rh71,imgname-gxg-1783253003978.png" type="image/jpeg" height="390" width="690"/>
            <content:encoded><![CDATA[&lt;p&gt;'ಆಲ್ಫಾ' ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಆಲಿಯಾ ಭಟ್ ಮತ್ತು ಶರ್ವರಿ ಅವರ ಬಿಕಿನಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸ್ಪೈ ಸಿನಿಮಾದಲ್ಲಿ ಇಂತಹ ದೃಶ್ಯಗಳು ಅನವಶ್ಯಕ ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ಚಿತ್ರತಂಡವನ್ನು ಸಮರ್ಥಿಸಿಕೊಂಡಿದ್ದಾರೆ. ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾ ಜುಲೈ 3 ರಂದು ಥಿಯೇಟರ್&zwnj;ಗಳಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.&lt;/p&gt;&lt;p&gt;ಆದರೆ, ಇದರ ನಡುವೆಯೇ ಸಿನಿಮಾದ ಕೆಲವು ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೊಸ ವಿವಾದ ಹುಟ್ಟುಹಾಕಿವೆ. ವೈರಲ್ ಆಗಿರುವ ಕ್ಲಿಪ್&zwnj;ನಲ್ಲಿ ಇಬ್ಬರೂ ನಟಿಯರು ಸ್ವಿಮ್&zwnj;ವೇರ್&zwnj;ನಲ್ಲಿ ಕಾಣಿಸಿಕೊಂಡಿದ್ದು, ಇದು ಇಂಟರ್&zwnj;ನೆಟ್&zwnj;ನಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ಇಂತಹ ಗ್ಲಾಮರಸ್ ದೃಶ್ಯಗಳ ಅಗತ್ಯವಿರಲಿಲ್ಲ ಎಂದು ಕೆಲವರು ವಾದಿಸಿದರೆ, ಇದು ಆಧುನಿಕ ಸಿನಿಮಾ ಮೇಕಿಂಗ್&zwnj;ನ ಒಂದು ಭಾಗ ಎಂದು ಮತ್ತೆ ಕೆಲವರು ಸಮರ್ಥಿಸಿಕೊಂಡಿದ್ದಾರೆ. ಸದ್ಯಕ್ಕೆ, ಈ ವಿವಾದದ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.&lt;/p&gt;&lt;p&gt;&lt;strong&gt;'ಆಲ್ಫಾ' ವೈರಲ್ ಕ್ಲಿಪ್&zwnj;ನಿಂದ ಚರ್ಚೆ ಶುರುವಾಗಿದ್ದೇಕೆ?&lt;/strong&gt;&lt;/p&gt;&lt;p&gt;ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಒಂದು ಕ್ಲಿಪ್&zwnj;ನಲ್ಲಿ ಆಲಿಯಾ ಭಟ್ ಮತ್ತು ಶರ್ವರಿ ಸಮುದ್ರದಿಂದ ಸ್ವಿಮ್&zwnj;ವೇರ್&zwnj;ನಲ್ಲಿ ಹೊರಬರುತ್ತಾರೆ. ಇದೇ ದೃಶ್ಯಕ್ಕೆ ನೆಟ್ಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಮತ್ತು ಕ್ಲಿಪ್&zwnj;ಗಳು ಚಿತ್ರದ ಅಧಿಕೃತ ಪ್ರಚಾರದ ಭಾಗವಾಗಿಲ್ಲದಿರಬಹುದು ಎಂಬುದನ್ನು ಗಮನಿಸಬೇಕು. ಇಂತಹ ಕಂಟೆಂಟ್&zwnj;ನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಖಚಿತಪಡಿಸಲಾಗಿಲ್ಲ.&lt;/p&gt;&lt;p&gt;&lt;strong&gt;'ಆಲ್ಫಾ' ವೈರಲ್ ದೃಶ್ಯಕ್ಕೆ ಸೋಷಿಯಲ್ ಮೀಡಿಯಾ ಹೇಳಿದ್ದೇನು?&lt;/strong&gt;&lt;/p&gt;&lt;p&gt;ಈ ಚಿತ್ರದ ಬಗ್ಗೆ ಅನೇಕ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉದಾಹರಣೆಗೆ, ಒಬ್ಬ ಬಳಕೆದಾರ, &quot;ಇಂಟರ್&zwnj;ನೆಟ್&zwnj;ನಲ್ಲಿ ಬಿಕಿನಿ ಇಷ್ಟಪಡುವವರಿಗೆ YRFನ 'ಆಲ್ಫಾ'ದಲ್ಲಿ ಇದೇ ದೊಡ್ಡ ಆಕರ್ಷಣೆ!&quot; ಎಂದು ಬರೆದಿದ್ದಾರೆ. ಇನ್ನೊಬ್ಬರು, &quot;YRF ತಾನು ಯಾವತ್ತೂ ಮಾಡುವುದನ್ನೇ ಮಾಡಿದೆ. ಸ್ಪೈ ಸಿನಿಮಾದಲ್ಲಿ ಬಿಕಿನಿ ದೃಶ್ಯ ಕಡ್ಡಾಯ ಎಂಬಂತೆ ತೋರಿಸಿದೆ,&quot; ಎಂದು ಕಾಮೆಂಟ್ ಮಾಡಿದ್ದಾರೆ.&lt;/p&gt;&lt;p&gt;ಮತ್ತೊಬ್ಬ ಬಳಕೆದಾರ, &quot;ಇದೇನು ಸ್ಪೈ ಥ್ರಿಲ್ಲರಾ ಅಥವಾ ಸ್ವಿಮ್&zwnj;ಸೂಟ್ ಕ್ಯಾಲೆಂಡರಾ? ಒಳ್ಳೆ ಸ್ಕ್ರಿಪ್ಟ್&zwnj;ಗೆ ಪ್ರಚಾರಕ್ಕಾಗಿ ಬಲವಂತದ ಬಿಕಿನಿ ಶಾಟ್&zwnj;ಗಳ ಅಗತ್ಯವಿಲ್ಲ. ಮಹಿಳಾ ಸ್ಪೈಗಳು ಗಟ್ಟಿಯಾಗಿ, ಅಪಾಯಕಾರಿಯಾಗಿ ಕಾಣಬೇಕು. ಆದರೆ YRF ಇನ್ನೂ ಗ್ಲಾಮರ್&zwnj;ಗೇ ಅಂಟಿಕೊಂಡಿದೆ. ಗಮನ ಆಕ್ಷನ್ ಮೇಲೆ ಇರಬೇಕಿತ್ತು,&quot; ಎಂದು ಬರೆದಿದ್ದಾರೆ. ಒಂದು ಪೋಸ್ಟ್&zwnj;ನಲ್ಲಿ, &quot;YRF ಸ್ಪೈ ಯೂನಿವರ್ಸ್&zwnj;ನ ಬಿಕಿನಿ ಸಂಪ್ರದಾಯ 'ಆಲ್ಫಾ'ದಲ್ಲೂ ಮುಂದುವರಿದಿದೆ,&quot; ಎಂದು ಹೇಳಲಾಗಿದೆ.&lt;/p&gt;&lt;p&gt;ಇನ್ನೊಬ್ಬರು, &quot;ಕೇವಲ ಬಿಕಿನಿಯ ಕ್ಲೋಸ್-ಅಪ್ ಶಾಟ್&zwnj;ಗಳ ಮೇಲೆ ಗಮನ ಹರಿಸಿದಂತಿದೆ. ಕಥೆ ಹೇಳುವ ರೀತಿಯೇ ದುರ್ಬಲವಾಗಿದೆ,&quot; ಎಂದು ಟೀಕಿಸಿದ್ದಾರೆ. ಹಲವು ಬಳಕೆದಾರರು ಈ ದೃಶ್ಯಗಳನ್ನು ಟೀಕಿಸಿದರೆ, ಕೆಲವರು ಸಿನಿಮಾವನ್ನು ಸಮರ್ಥಿಸಿಕೊಂಡಿದ್ದಾರೆ. ದೊಡ್ಡ ಬಜೆಟ್&zwnj;ನ ಆಧುನಿಕ ಸ್ಪೈ ಸಿನಿಮಾಗಳಲ್ಲಿ ಗ್ಲಾಮರಸ್ ಮತ್ತು ಸ್ಟೈಲಿಶ್ ದೃಶ್ಯಗಳು ಈ ಜಾನರ್&zwnj;ನ ಭಾಗವಾಗಿವೆ ಎಂದು ಇವರು ವಾದಿಸಿದ್ದಾರೆ. ಅವರ ಪ್ರಕಾರ, ಕೇವಲ ಒಂದು ದೃಶ್ಯದ ಆಧಾರದ ಮೇಲೆ ಇಡೀ ಸಿನಿಮಾವನ್ನು ಅಳೆಯುವುದು ಸರಿಯಲ್ಲ.&lt;/p&gt;&lt;h2&gt;&lt;strong&gt;'ಆಲ್ಫಾ' ಸಿನಿಮಾ ಬಗ್ಗೆ&lt;/strong&gt;&lt;/h2&gt;&lt;p&gt;'ಆಲ್ಫಾ' ಯಶ್&zwnj;ರಾಜ್ ಫಿಲ್ಮ್ಸ್&zwnj;ನ ಸ್ಪೈ ಯೂನಿವರ್ಸ್&zwnj;ನ ಮೊದಲ ಮಹಿಳಾ ಪ್ರಧಾನ ಚಿತ್ರವಾಗಿದೆ. ಇದನ್ನು ಶಿವ್ ರವೈಲ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಬಾಬಿ ಡಿಯೋಲ್ ಮತ್ತು ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಬಜೆಟ್ 100 ರಿಂದ 125 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ವಿಮರ್ಶಕರಿಂದ ತೀರಾ ಕಳಪೆ ಪ್ರತಿಕ್ರಿಯೆ ಸಿಕ್ಕಿದೆ. ಇದನ್ನು YRF ಸ್ಪೈ ಯೂನಿವರ್ಸ್&zwnj;ನ ಅತ್ಯಂತ ದುರ್ಬಲ ಸಿನಿಮಾ ಎಂದು ಬಣ್ಣಿಸಲಾಗುತ್ತಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/alia-bhatt-and-sharvari-waghs-alpha-movie-bikini-scene-sparks-major-online-backlash-gvd/articleshow-yrso4t7"/>
        </item>
        <item>
            <title><![CDATA[Lakshmi Nivasa: ಮದ್ವೆಗೆ ಸಿದ್ಧವಾದ ಸಿಂಚನಾ ಸೀರಿಯಲ್​ನಿಂದ ಹೊರಕ್ಕೆ: ಮರಳಿ ಬಂದ ಹಳೆಯ 'ಸಿಂಚನಾ']]></title>
            <link>https://kannada.asianetnews.com/gallery/tv-talk/lakshmi-nivasa-actress-roopika-quit-the-sinchna-role-and-divyashree-came-back-suc-f67vrro</link>
            <guid isPermaLink="true">https://kannada.asianetnews.com/gallery/tv-talk/lakshmi-nivasa-actress-roopika-quit-the-sinchna-role-and-divyashree-came-back-suc-f67vrro</guid>
            <pubDate>Sun, 05 Jul 2026 17:27:32 +0530</pubDate>
            <description><![CDATA['ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿಂಚನಾ ಪಾತ್ರಧಾರಿ ರೂಪಿಕಾ ಅವರು ಮದುವೆಯ ಕಾರಣದಿಂದ ಸೀರಿಯಲ್ ತೊರೆದಿದ್ದಾರೆ. ಅವರ ಸ್ಥಾನಕ್ಕೆ, ಈ ಹಿಂದೆ ಇದೇ ಪಾತ್ರ ನಿರ್ವಹಿಸಿದ್ದ ನಟಿ ದಿವ್ಯಶ್ರೀ ಅವರು ಮರುಪ್ರವೇಶ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws25nrkn02ynr0tthbtf1va,imgname-divyashree-02-1783252571923.jpg" type="image/jpeg" height="390" width="690"/>
            <content:encoded><![CDATA['ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿಂಚನಾ ಪಾತ್ರಧಾರಿ ರೂಪಿಕಾ ಅವರು ಮದುವೆಯ ಕಾರಣದಿಂದ ಸೀರಿಯಲ್ ತೊರೆದಿದ್ದಾರೆ. ಅವರ ಸ್ಥಾನಕ್ಕೆ, ಈ ಹಿಂದೆ ಇದೇ ಪಾತ್ರ ನಿರ್ವಹಿಸಿದ್ದ ನಟಿ ದಿವ್ಯಶ್ರೀ ಅವರು ಮರುಪ್ರವೇಶ ಮಾಡಿದ್ದಾರೆ.&lt;img&gt;&lt;p&gt;ಲಕ್ಷ್ಮೀ ನಿವಾಸ (Lakshmi Nivasa Serial) ಧಾರಾವಾಹಿಯಲ್ಲಿ ಸಿಂಚನಾ ಪಾತ್ರ ಮಾಡುತ್ತಿದ್ದ ರೂಪಿಕಾ ಅವರು ಬದಲಾಗಿದ್ದಾರೆ. ಏಕೆಂದರೆ, ಬರುವ ಆಗಸ್ಟ್​ 31ರಂದು ಇವರ ಮದುವೆ ಇದೆ. ಕಳೆದ 5 ವರ್ಷಗಳಿಂದ ಕೆನಡಾದಲ್ಲೇ ನೆಲೆಸಿರುವ ಅಂಕಿತ್​ ಎನ್ನುವವರ ಜೊತೆ ರೂಪಿಕಾ ಅವರದ್ದು ಅರೇಂಜ್ಡ್​​ ಮ್ಯಾರೇಜ್​ ಆಗಲಿದ್ದಾರೆ. ಭಾವಿ ಪತಿ ಅಂಕಿತ್​ ಕೆನಡಾದಲ್ಲಿ ಇನ್ವೆಸ್ಟ್&zwnj; ಕೋ ಅಂತ ಫೈನಾನ್ಸ್&zwnj; ಕಂಪನಿಯಲ್ಲಿ, ಟ್ಯಾಕ್ಸ್&zwnj; ಸ್ಪೆಷಲಿಸ್ಟ್&zwnj; ಆಗಿ ವರ್ಕ್&zwnj; ಆಗಿದ್ದಾರೆ.&lt;/p&gt;&lt;img&gt;&lt;p&gt;ಇದೇ ಕಾರಣಕ್ಕೆ, ಮದುವೆ ತಯಾರಿಗಾಗಿ ರೂಪಿಕಾ ಸೀರಿಯಲ್​ ಬಿಟ್ಟಿದ್ದಾರೆ. ಮದುವೆಯ ನಂತರ ಕೆನಡಾಗೆ ಹೋಗಿ ಸೆಟಲ್​ ಆಗುವ ಪ್ಲ್ಯಾನ್​ ಕೂಡ ಇರುವ ಹಿನ್ನೆಲೆಯಲ್ಲಿ, ಅವರು ಧಾರಾವಾಹಿಯನ್ನು ತೊರೆದಿದ್ದಾರೆ.&lt;/p&gt;&lt;img&gt;&lt;p&gt;ಸಿಂಚನಾ ಪಾತ್ರವನ್ನು ಇನ್ನುಮುಂದೆ ನಟಿ ದಿವ್ಯಶ್ರೀ ಅವರು ಮಾಡಲಿದ್ದಾರೆ. ಕುತೂಹಲದ ವಿಷ್ಯ ಏನೆಂದರೆ, ದಿವ್ಯಶ್ರೀ ಅವರು, ರೂಪಿಕಾ ಅವರು ಈ ಪಾತ್ರಕ್ಕೂ ಬರುವ ಮುನ್ನ ಸಿಂಚನಾ ಆಗಿ ನಟಿಸಿದ್ದರು. ಅವರು ಸೀರಿಯಲ್​ ತೊರೆದಿದ್ದರಿಂದ ಆ ರೋಲ್​ ಅನ್ನು ರೂಪಿಕಾ ನಿರ್ವಹಿಸುತ್ತಿದ್ದರು.&lt;/p&gt;&lt;img&gt;&lt;p&gt;2024ರಲ್ಲಿ, ದಿವ್ಯಶ್ರೀ ಸೀರಿಯಲ್ ಅರ್ಧಕ್ಕೆ ಬಿಟ್ಟಿದ್ದರು. ಇದಕ್ಕೆ ಕಾರಣ, ಕಲರ್ಸ್ ಕನ್ನಡದ (Colors Kannada) ಚುಕ್ಕಿ ತಾರೆ ಸೀರಿಯಲ್. ಚುಕ್ಕಿ ತಾರೆ ಧಾರಾವಾಹಿಯಲ್ಲಿ ದಿವ್ಯಶ್ರೀ ಲೀಡ್ ರೋಲ್&zwnj;ನಲ್ಲಿ ನವೀನ್ ಸಜ್ಜು ಜೊತೆ ನಟಿಸುವ ಆಫರ್​ ಬಂದಿದ್ದರಿಂದ ಲಕ್ಷ್ಮೀ ನಿವಾಸ ತೊರೆದಿದ್ದರು. ಈಗ ಮತ್ತೆ ಅದೇ ರೋಲ್​ಗೆ ಕಮ್​ಬ್ಯಾಕ್​ ಆಗಿದ್ದಾರೆ.&lt;/p&gt;&lt;img&gt;&lt;p&gt;ಇನ್ನು ನಟಿ ರೂಪಿಕಾ ಕುರಿತು ಹೇಳುವುದಾದರೆ, ಕನ್ನಡದಲ್ಲಿ ಬಾಲ ನಟಿಯಾಗಿ ನಟನೆ ಆರಂಭಿಸಿದ ರೂಪಿಕಾ ಬಳಿಕ ಚೆಲುವಿನ ಚಿಲಿಪಿಲಿ, ಕಾಲ್ಗೆಜ್ಜೆ, ರುದ್ರಾಕ್ಷಿಪುರ, ಮಜ್ಜಿಗೆ ಹುಳಿ ಸಿನಿಮಾದಲ್ಲಿ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ದೊರೆ ಸಾನಿ ಎನ್ನುವ ಸೀರಿಯಲ್ ನಲ್ಲಿ ನಾಯಕಿಯಾಗಿ ಸಹ ರೂಪಿಕಾ ನಟಿಸಿದ್ದರು.&lt;/p&gt;&lt;img&gt;&lt;p&gt;ನಟಿ ರೂಪಿಕಾ ಭರತನಾಟ್ಯ ಕಲಾವಿದೆ. ಇದಾಗಲೇ ಹಲವಾರು ಪ್ರಶಸ್ತಿಗಳು ಬಂದಿವೆ. ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದಮೇಲೆ ಕೆನಡಾದಲ್ಲಿಯೂ ಇದನ್ನು ಮುಂದುವರೆಸುವ ಯೋಚನೆ ಇರುವುದಾಗಿ ನಟಿ ಹೇಳಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/lakshmi-nivasa-actress-roopika-quit-the-sinchna-role-and-divyashree-came-back-suc-f67vrro"/>
        </item>
        <item>
            <title><![CDATA[India Vs Eng: ನಿನ್ನೆಯ ಸೋಲಿಗೆ ಬಿಷ್ಣೋಯಿ ಅಲ್ಲ, ಶ್ರೇಯಸ್‌ ಕಾರಣ ಎಂದ ಫ್ಯಾನ್ಸ್;  ಆ ಹುಡಗನನ್ನ ಬಳಿಕೊಳ್ಳಲಿಲ್ವಾ ಅಯ್ಯರ್!]]></title>
            <link>https://kannada.asianetnews.com/gallery/sports/fans-say-shreyas-not-bishnoi-is-responsible-for-yesterday-defeat-hwi6blp</link>
            <guid isPermaLink="true">https://kannada.asianetnews.com/gallery/sports/fans-say-shreyas-not-bishnoi-is-responsible-for-yesterday-defeat-hwi6blp</guid>
            <pubDate>Sun, 05 Jul 2026 17:21:47 +0530</pubDate>
            <description><![CDATA[Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್‌ ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್‌ ಮಾಡಲಾಗುತ್ತಿದೆ. ಆದರೆ ಅಯ್ಯರ್‌ ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrqggybfrs5engjnwkvtj5t,imgname-shreyas-iyer--2--1783241393097.jpg" type="image/jpeg" height="390" width="690"/>
            <content:encoded><![CDATA[&lt;p&gt;Bishnoi bowling controversy: ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್&zwnj; ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್&zwnj; ಮಾಡಲಾಗುತ್ತಿದೆ. ಆದರೆ ಅಯ್ಯರ್&zwnj; ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡೊಣ ಬನ್ನಿ.&lt;/p&gt;&lt;img&gt;&lt;p&gt;ನಿನ್ನೆ ನಡೆದ ಭಾರತ ಮತ್ತು ಇಂಗ್ಲೆಂಡ್&zwnj; ನಡುವಿನ 2ನೇ ಟಿ-20 ಪಂದ್ಯದಲ್ಲಿ ಭಾರತದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಸೋಲನುಭಭವಿಸಬೇಕಾಯಿತು. ಅಷ್ಟಕ್ಕೂ ಡ್ರೆಸ್ಸಿಂಗ್ ರೂಂ ಮಾತ್ರವಲ್ಲ, ಕ್ರಿಕೆಟ್&zwnj; ವಲಯದಲ್ಲೂ ಒಂದು ಮಾತು ಕೇಳಿ ಬರುತ್ತಿದೆ, ಅದೇನೆಂದರೆ, ನಿನ್ನೆ ಸೋಲಿಗೆ ಬಿಷ್ಣೋಯಿ ಟಾರ್ಗೆಟ್&zwnj; ಮಾಡಲಾಗುತ್ತಿದೆ. ಆದರೆ ಅಯ್ಯರ್&zwnj; ಮಾಡಿದ್ದೇನು? ಎಂಬ ಮಾತು ಹರಿದಾಡುತ್ತಿದೆ. ಏನಿದು ವಿವಾದ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ.&lt;/p&gt;&lt;img&gt;&lt;p&gt;ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಹಿನ್ನಡೆ ಅನುಭವಿಸಿತು. 190 ರನ್ ಗಳಿಸಿದ್ದರೂ ಟೀಮ್ ಇಂಡಿಯಾ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಅಲ್ಲದೇ, ಎಲ್ಲರೂ ರವಿ ಬಿಷ್ಣೋಯ್ ಅವರು 17ನೇ ಒವರ್&zwnj;ನಲ್ಲಿ ನೀಡಿದ 29ರನ್ನಿಂದ ಸೋಲನುಭವಿಸಬೇಕಾಯಿತು ಎನ್ನುವ ಮಾತುಗಳ ಇದೀಗ ಕೇಳಿ ಬರುತ್ತಿವೆ.&lt;/p&gt;&lt;img&gt;&lt;p&gt;ಅರ್ಷದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ತಲಾ 28 ರನ್&zwnj;ಗಳ ನೀಡಿ ದುಬಾರಿಯಾದರು. ಇದರ ನಡುವೆ, ಶ್ರೇಯಸ್ ಅಯ್ಯರ್ ಮಾಡಿದ ದೊಡ್ಡ ಮಿಸ್ಟೇಕ್&zwnj; ಇದೀಗ ಬೆಳಕಿಗೆ ಬಂದಿದೆ. ಅದನ್ನು ಯಾರೂ ಗಮನಿಸಲಿಲ್ಲ ಎನ್ನುವ ಮಾತು ಫ್ಯಾನ್ಸ್ ವಲಯದಿಂದ ಕೇಳಿ ಬಂದಿದೆ.&lt;/p&gt;&lt;img&gt;&lt;p&gt;ಈ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಟಾಪ್ 5 ಬೌಲರ್&zwnj;ಗಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದರು. ಭಾರತಕ್ಕೆ ಅರ್ಷದೀಪ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ ಮತ್ತು ವರುಣ್ ಚಕ್ರವರ್ತಿ ಸೇರಿ ಐದು ಮುಂಚೂಣಿ ಬೌಲರ್&zwnj;ಗಳ ಆಯ್ಕೆಗಳು ಲಭ್ಯವಿದ್ದವು, ಅವರು ತಮ್ಮ ಓವರ್&zwnj;ಗಳನ್ನು ಪೂರ್ಣಗೊಳಿಸಿದರು. ಆದರೆ ಇನ್ನೊಬ್ಬರನ್ನು ಶ್ರೆಯಸ್&zwnj; ಬಳಿಸಿಕೊಳ್ಳುವುದನ್ನೇ ಮರೆತರಾ? ಎನ್ನುವ ಪ್ರಶ್ನೆ ಕಕ್ರಿಕೆಟ್&zwnj; ಲೋಕದಲ್ಲಿ ಉದ್ಭವಿಸಿದೆ.&lt;/p&gt;&lt;img&gt;&lt;p&gt;ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಿವಂ ದುಬೆ ಅವರನ್ನು ತಂಡದಲ್ಲಿ ಕೇವಲ ಒಬ್ಬ ಸ್ಪೆಷಲಿಸ್ಟ್ ಬ್ಯಾಟ್ಸ್&zwnj;ಮನ್ ಆಗಿ ಮಾತ್ರ ಬಳಸಲಾಗುತ್ತಿತ್ತು, ಇದರಿಂದಾಗಿ ಅವರಿಗೆ ಒಂದೇ ಒಂದು ಓವರ್ ಬೌಲಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಶ್ರೇಯಸ್ ಅಯ್ಯರ್ ಆರನೇ ಬೌಲರ್ ಅನ್ನು ಬಳಸಲೇ ಇಲ್ಲ. ಶಿವಂ ದುಬೆ ಕಾರ್ಯತಂತ್ರದ ಹಂತಗಳಲ್ಲಿ ವಿಕೆಟ್ ಪಡೆಯುವಲ್ಲಿ ನಿಪುಣರಗಿದ್ದಾರೆ. ಅದು ಅವರ ದಾಖಲೆ ನೋಡಿದರೆ ತಿಳಿಯುತ್ತದೆ.&lt;/p&gt;&lt;img&gt;&lt;p&gt;ಈ ನಡುವೆ, ಟೀಮ್ ಇಂಡಿಯಾದ ದೊಡ್ಡ ಪ್ರದರ್ಶನ ಎಂದು ಪರಿಗಣಿಸಲಾದ ಶಿವಂ ದುಬೆ ನಿನ್ನೆ ಬ್ಯಾಟಿಂಗ್&zwnj;ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅವರು ಏಳು ಎಸೆತಗಳನ್ನು ಎಸೆದು ಕೇವಲ 5ರನ್ ಗಳಿಸಿದರು. ಅದೇ ರೀತಿ, ಪಿಚ್ ಸ್ಪಿನ್ನರ್&zwnj;ಗೆ ಅನುಕೂಲಕರವಾಗಿದ್ದರಿಂದ ಶ್ರೇಯಸ್ ಅವರನ್ನು ಬೌಲಿಂಗ್&zwnj;ನಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.&lt;/p&gt;]]></content:encoded>
            <category><![CDATA[sports]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/sports/fans-say-shreyas-not-bishnoi-is-responsible-for-yesterday-defeat-hwi6blp"/>
        </item>
        <item>
            <title><![CDATA[ರಾಮಾಯಣ ಸೆಟ್‌ನಲ್ಲಿ ರಾವಣನಾಗಿ ಯಶ್ ಹೇಗಿದ್ದರು? 'ಮಂಡೋದರಿ' ಕಾಜಲ್ ಬಹಿರಂಗಪಡಿಸಿದ ಸತ್ಯವೇನು?]]></title>
            <link>https://kannada.asianetnews.com/entertainment/ramayana-actress-kajal-aggarwal-praises-rocking-star-yash-gvd/articleshow-ye7vsdo</link>
            <guid isPermaLink="true">https://kannada.asianetnews.com/entertainment/ramayana-actress-kajal-aggarwal-praises-rocking-star-yash-gvd/articleshow-ye7vsdo</guid>
            <pubDate>Sun, 05 Jul 2026 17:15:15 +0530</pubDate>
            <description><![CDATA[Mandodari Kajal Aggarwal: ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws1h3tg8na0mv2jbc4dz93s,imgname-jvbj-1783251898192.png" type="image/jpeg" height="390" width="690"/>
            <content:encoded><![CDATA[&lt;p&gt;ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ &lsquo;ಟಾಕ್ಸಿಕ್&rsquo; ಹಾಗೂ &lsquo;ರಾಮಾಯಣ&rsquo; ಸಿನಿಮಾಗಳು ಈ ವರ್ಷ ಕೆಲವೇ ತಿಂಗಳ ಅಂತರದಲ್ಲಿ ಬಿಡುಗಡೆಯಾಗಲಿವೆ. ಈ ಎರಡೂ ಚಿತ್ರಗಳಲ್ಲಿ ಹಲವು ಖ್ಯಾತ ನಟ-ನಟಿಯರು ಅಭಿನಯಿಸಿದ್ದು, ಅವರಲ್ಲಿ ಅನೇಕರು ಯಶ್ ಅವರ ವೃತ್ತಿಪರತೆ ಹಾಗೂ ವ್ಯಕ್ತಿತ್ವವನ್ನು ಬಹಿರಂಗವಾಗಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಹುಮಾ ಖುರೇಷಿ, ತಾರಾ ಸುತಾರಿಯಾ, ಕಿಯಾರಾ ಅಡ್ವಾಣಿ ಸೇರಿದಂತೆ ಹಲವು ಕಲಾವಿದರು ಯಶ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದರೆ, ಇದೀಗ ಆ ಸಾಲಿಗೆ ನಟಿ ಕಾಜಲ್ ಅಗರ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ.&lt;/p&gt;&lt;p&gt;ಪ್ಯಾನ್ ಇಂಡಿಯಾ ನಟಿ ಕಾಜಲ್ ಅಗರ್ವಾಲ್ ಅವರು &lsquo;ರಾಮಾಯಣ&rsquo; ಚಿತ್ರದಲ್ಲಿ ಯಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡರೆ, ಕಾಜಲ್ ಅಗರ್ವಾಲ್ ರಾವಣನ ಪತ್ನಿ ಮಂಡೋದರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಶ್ ಜೊತೆ ಕೆಲಸ ಮಾಡಿದ ಅನುಭವ ಹಾಗೂ ಚಿತ್ರದ ಬಗ್ಗೆ ಅವರು ಮನಮುಕ್ತವಾಗಿ ಮಾತನಾಡಿದ್ದಾರೆ.&lt;/p&gt;&lt;p&gt;&lsquo;ಯಶ್ ಅದ್ಭುತ ನಟ. ಅವರ ಕೆಲಸವನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೇನೆ. &lsquo;ರಾಮಾಯಣ&rsquo; ಚಿತ್ರದ ಮೂಲಕ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸಂತೋಷ ತಂದಿದೆ. ಈ ಸಿನಿಮಾಕ್ಕಾಗಿ ಅವರು ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಿದ್ದಾರೆ. ಅವರ ವೃತ್ತಿಪರತೆ, ಶಿಸ್ತು ಮತ್ತು ಸಹಜ ಪ್ರತಿಭೆ ನಿಜಕ್ಕೂ ಮೆಚ್ಚುವಂತದ್ದು. ಈ ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ನಮ್ಮೆಲ್ಲರಿಗೂ ವಿಶೇಷವಾಗಿದೆ&rsquo; ಎಂದು ಕಾಜಲ್ ಅಗರ್ವಾಲ್ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ನನ್ನ ಪಾತ್ರ ಸೀಮಿತ&lt;/strong&gt;&lt;/h2&gt;&lt;p&gt;ಇನ್ನು ಚಿತ್ರದ ಕುರಿತು ಮಾತನಾಡಿದ ಅವರು, &lsquo;ನಾವು ಮೊದಲ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ. ಮೊದಲ ಭಾಗದಲ್ಲಿ ಲಂಕೆಯ ಕಥೆಗೆ ಹೆಚ್ಚು ಅವಕಾಶ ಇಲ್ಲದ ಕಾರಣ, ಮಂಡೋದರಿಯಾಗಿ ನನ್ನ ಪಾತ್ರ ಸೀಮಿತವಾಗಿದೆ. ಆದರೂ ಸಿನಿಮಾ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ. ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿರುವ ಇಂತಹ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ಭಾಗವಾಗಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯ. ಈ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ&rsquo; ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/ramayana-actress-kajal-aggarwal-praises-rocking-star-yash-gvd/articleshow-ye7vsdo"/>
        </item>
        <item>
            <title><![CDATA[ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ, ಭಾವುಕ ಪೋಸ್ಟ್]]></title>
            <link>https://kannada.asianetnews.com/gallery/tv-talk/kapil-sharma-show-fame-sumona-chakravarti-opens-up-about-serious-health-struggles-2awvr61</link>
            <guid isPermaLink="true">https://kannada.asianetnews.com/gallery/tv-talk/kapil-sharma-show-fame-sumona-chakravarti-opens-up-about-serious-health-struggles-2awvr61</guid>
            <pubDate>Sun, 05 Jul 2026 17:11:26 +0530</pubDate>
            <description><![CDATA[ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ ಚಕ್ರವರ್ತಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದ ನಟಿ ಕಳೆದೆರಡು ತಿಂಗಳಿನಿಂದ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws11x9jwq1ck9tsm9w5j7ht,imgname-sumona-chakravarti-shares-emotional-post-1783251399986.png" type="image/jpeg" height="390" width="690"/>
            <content:encoded><![CDATA[&lt;p&gt;ಕಪಿಲ್ ಶರ್ಮಾ ಶೋ ಖ್ಯಾತಿಯ ಸುಮೋನಾ ಚಕ್ರವರ್ತಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದ ನಟಿ ಕಳೆದೆರಡು ತಿಂಗಳಿನಿಂದ ಸೋಶಿಯಲ್ ಮೀಡಿಯಾಗಳಿಂದ ದೂರ ಉಳಿದಿದ್ದಾರೆ.&lt;/p&gt;&lt;img&gt;&lt;p&gt;ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಕಪಿಲ್ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸುಮೋನಾ ಚಕ್ರವರ್ತಿ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಿದ್ದಾರೆ. ಕಳೆದೆರಡು ತಿಂಗಳಿನಿಂದ ಸೋಶಿಯಲ್ ಮೀಡಿಯಾಗಳಿಂದಲೂ ದೂರ ಉಳಿದಿರುವ ಸುಮೋನಾ ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾಗಿದ್ದಾರೆ. ಈ ಕುರಿತು 2 ತಿಂಗಳ ಬಳಿಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.&lt;/p&gt;&lt;img&gt;&lt;p&gt;ಎಂಡೊಮೆಟ್ರಿಯೊಸಿಸ್ ಆರೋಗ್ಯ ಸಮಸ್ಯೆ 2021ರಲ್ಲಿ ಕಾಣಿಸಿಕೊಡಿತ್ತು. ಆದರೆ ಇತ್ತೀಚೆಗೆ ತೀವ್ರವಾಗಿತ್ತು. ಹೀಗಾಗಿ ಮೇ ತಿಂಗಳಲ್ಲಿ ತಾನು ಎಂಡೊಮೆಟ್ರಿಯೊಸಿಸ್ ಸರ್ಜರಿಗೆ ಒಳಗಾದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ. ಹೊಟ್ಟೆ ಮೇಲೆ ಗಾಯದ ಕುರುತುಗಳಿವೆ. ಸದ್ಯ ಆರೋಗ್ಯದ ಕಡೆಗೆ ಗಮನ ಹರಿಸಿದ್ದೇನೆ ಎಂದು ಸುಮೋನಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಆರೋಗ್ಯ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಸುಮೋನಾ ಚಕ್ರವರ್ತಿ ನಟನೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಂದ ದೂರವಾಗಿದ್ದು ಮಾತ್ರವಲ್ಲ, ಸೋಶಿಯಲ್ ಮೀಡಿಯಾಗಳಿಂದ ದೂರವಾಗಿದ್ದೆ. ಮೇ.4ರಂದು ಸರ್ಜರಿಗೆ ಒಳಗಾಗಿದ್ದೆ. ಕೆಲ ವರ್ಷಗಳಿಂದ ಎಂಡೊಮೆಟ್ರಿಯೊಸಿಸ್ ನಿಯಂತ್ರಿಸಲು ಪ್ರಯತ್ನ ಪಟ್ಟಿದೆ. ಆದರೆ ಸಮಸ್ಯೆ ಉಲ್ಬಣಗೊಂಡಿತ್ತು. ಹೀಗಾಗಿ ಸರ್ಜರಿ ಅನಿವಾರ್ಯವಾಗಿತ್ತು ಎಂದು ಸುಮೋನಾ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಮಾನಸಿಕವಾಗಿ, ದೈಹಿಕವಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ವ್ಯಾಟ್ಸಾಪ್ ಡಿಲೀಟ್ ಮಾಡಬೇಕೆಂದು ನಿರ್ಧರಿಸಿದ್ದೆ. ಇನ್&zwnj;ಸ್ಟಾಗ್ರಾಂ ಡಿಲೀಟ್ ಮಾಡಲು ಮಂದಾಗಿದ್ದೆ. ಆದರೆ ಹಲವರ ಸಲಹೆ ಸ್ವೀಕರಿಸಿ ನಿರ್ಧಾರದಿಂದ ಹಿಂದೆ ಸರಿದೆ. ಮಾನಸಿಕವಾಗಿಯೂ ನಾನು ಕುಗ್ಗಿ ಹೋಗಿದ್ದೆ. ಇದೀಗ ಚೇತರಿಕೆ ಸಮಯ ಎಂದು ಸುಮೋನಾ ಚಕ್ರವರ್ತಿ ಹೇಳಿದ್ದಾರೆ.&lt;/p&gt;&lt;img&gt;&lt;p&gt;ತುಟಿ, ದೇಹದ ಭಾಗಗಳ ಬಗ್ಗೆ ಕೆಟ್ಟ ಕಮೆಂಟ್ ಮಾಡುತ್ತಾರೆ. ಇದು ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಕೀಳುಮಟ್ಟದ ಕಮೆಂಟ್ ಅವಕಾಶಗಳನ್ನು ಪಡೆಯುತ್ತಾ ಮೇಲೆ ಬರುತ್ತಿರುವ ನನ್ನಂತ ಹಲವರ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ. ಟ್ರೋಲ್, ಕಮೆಂಟ್ ಬಗ್ಗೆ ತೀರಾ ತಲೆಕೆಡಿಸಿಕೊಳ್ಳುತ್ತಿದ್ದೆ. ಆದರೆ ಇದೀಗ ಉತ್ತಮರು ನೀಡಿದ ಸಲಹೆ ಪ್ರಕಾರ ಮುಂದುವರಿಯುತ್ತಿದ್ದೇನೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಸರ್ಜರಿ ಬಳಿಕ ನನ್ನ ಹೊಟ್ಟೆ ಮೇಲೆ ಮೂರು ಗಾಯದ ಗುರುತುಗಳಿವೆ. ಇದು ಮಾಸಲು ಹಲವು ದಿನಗಳೇ ಬೇಕು. ಆದರೆ ನೋಡುವಾಗ ಬೇಸರವಾಗುತ್ತದೆ. ನಟಿಯಾಗಿ ಹೊಟ್ಟೆ ಮೇಲೆ ಗಾಯದ ಗುರುತಿದ್ದರೆ ಕಷ್ಟ. ಆದರೆ ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಚೇತರಿಕೆ ಬಳಿಕ ನಟನೆ ಮುಂದುವರಿಸುತ್ತೇನೆ ಎಂದು ಸುಮೋನಾ ಹೇಳಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/tv-talk/kapil-sharma-show-fame-sumona-chakravarti-opens-up-about-serious-health-struggles-2awvr61"/>
        </item>
        <item>
            <title><![CDATA[ಹೋಟೆಲ್ ರೂಮಿಗೆ ಕರೆದು ತಡರಾತ್ರಿವರೆಗೂ ಕೂರಿಸಿದ್ರು: ಆ ಭಯಾನಕ ಸತ್ಯ ಬಿಚ್ಚಿಟ್ರು 'ಬಿಗ್ ಬಾಸ್' ಫರ್ಹಾನಾ]]></title>
            <link>https://kannada.asianetnews.com/entertainment/bigg-boss-fame-farrhana-bhatt-opens-up-about-her-casting-couch-scare-gvd/articleshow-h4kyxmp</link>
            <guid isPermaLink="true">https://kannada.asianetnews.com/entertainment/bigg-boss-fame-farrhana-bhatt-opens-up-about-her-casting-couch-scare-gvd/articleshow-h4kyxmp</guid>
            <pubDate>Sun, 05 Jul 2026 16:56:25 +0530</pubDate>
            <description><![CDATA['ಖತರೋಂ ಕೆ ಖಿಲಾಡಿ' ಶೋನಲ್ಲಿ ಕಾಣಿಸಿಕೊಳ್ಳಲಿರುವ ನಟಿ ಫರ್ಹಾನಾ ಭಟ್, ತಮ್ಮ ವೃತ್ತಿಜೀವನದ ಆರಂಭದಲ್ಲಿ ನಡೆದ ಒಂದು ಭಯಾನಕ ಘಟನೆಯನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕನೊಬ್ಬನಿಂದ ತಾನು ಹೇಗೆ ಪಾರಾಗಿ ಬಂದೆ ಎಂದು ಅವರು ವಿವರಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kws0egv79ftxd6n6e7parenr,imgname-hjccjh-1783250764647.png" type="image/jpeg" height="390" width="690"/>
            <content:encoded><![CDATA[&lt;p&gt;ಪತ್ರಿಕೋದ್ಯಮ, ಮಾಡೆಲಿಂಗ್ ನಂತರ ನಟನಾ ಜಗತ್ತಿಗೆ ಕಾಲಿಟ್ಟ ಫರ್ಹಾನಾ ಭಟ್ ಅವರ ಹಾದಿ ಸುಲಭವಾಗಿರಲಿಲ್ಲ. ಕಾಶ್ಮೀರ ಮೂಲದ ಫರ್ಹಾನಾ, ನಟಿಯಾಗಬೇಕೆಂದು ಮುಂಬೈಗೆ ಬಂದಾಗ, ಕಾಸ್ಟಿಂಗ್ ಹಗರಣವೊಂದರಲ್ಲಿ ಸಿಲುಕಿಕೊಳ್ಳುವ ಅಪಾಯ ಎದುರಿಸಿದ್ದರು. ಆ ಜಾಲದಿಂದ ತಾನು ಹೇಗೆ ಪಾರಾದೆ ಎಂದು ಅವರು ವಿವರಿಸಿದ್ದಾರೆ.&lt;/p&gt;&lt;p&gt;&lt;strong&gt;ಫರ್ಹಾನಾ ಭಟ್ ಅವರ ಆರೋಪವೇನು?&lt;/strong&gt;&lt;/p&gt;&lt;p&gt;ಒಂದು ಮಾಧ್ಯಮ ಸಂದರ್ಶನದಲ್ಲಿ, ನಟಿ ಫರ್ಹಾನಾ ಭಟ್ ತಮ್ಮ ಹೋರಾಟದ ದಿನಗಳ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ನೆನೆಸಿಕೊಂಡರೆ ಇಂದಿಗೂ ಅವರಿಗೆ ಭಯವಾಗುತ್ತದೆಯಂತೆ. ವೃತ್ತಿಜೀವನದ ಆರಂಭದಲ್ಲಿ, ಸಿನಿಮಾ ಆಫರ್ ನೆಪದಲ್ಲಿ ಅವರನ್ನು ಮುಂಬೈಗೆ ಕರೆಸಲಾಗಿತ್ತು. ಅಲ್ಲಿ ಅವರೊಂದಿಗೆ ಅತ್ಯಂತ ಅನುಮಾನಾಸ್ಪದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.&lt;/p&gt;&lt;p&gt;&lt;strong&gt;ಮುಂಬೈಗೆ ಕರೆದ ನಂತರ ಏನಾಯಿತು?&lt;/strong&gt;&lt;/p&gt;&lt;p&gt;ಫರ್ಹಾನಾ ಪ್ರಕಾರ, ಒಬ್ಬ ಮಹಿಳೆ ಅವರಿಗೆ ಬಾಲಿವುಡ್ ಚಿತ್ರದ ಆಫರ್ ನೀಡಿ, ಹೋಟೆಲ್&zwnj;ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ನಂಬಿಸಿದ್ದರು. ಆದರೆ ಮುಂಬೈ ತಲುಪಿದಾಗ, ಅವರನ್ನು ಹೋಟೆಲ್ ಬದಲು ನಿರ್ದೇಶಕ ಎನ್ನಲಾದ ವ್ಯಕ್ತಿಯ ಮನೆಗೆ ಕರೆದೊಯ್ಯಲಾಯಿತು. ಆಗಲೇ ಅವರಿಗೆ ಏನೋ ತಪ್ಪಾಗುತ್ತಿದೆ ಎಂಬ ಅನುಮಾನ ಬಂದಿತ್ತು. ರಾತ್ರಿ ಅವರಿಗೆ ಒಂದು ಕಾಂಟ್ರ್ಯಾಕ್ಟ್ ನೀಡಲಾಯಿತು. ಅದರಲ್ಲಿದ್ದ ಷರತ್ತುಗಳ ಪ್ರಕಾರ, ಕಲಾವಿದರು ದೀರ್ಘಕಾಲದವರೆಗೆ ನಿರ್ದೇಶಕರ ಫಾರ್ಮ್&zwnj;ಹೌಸ್&zwnj;ನಲ್ಲಿ ಇರಬೇಕಾಗಿತ್ತು. ಕಾಂಟ್ರ್ಯಾಕ್ಟ್ ಓದಿದ ನಂತರ, ಅವರಿಗೆ ಇಡೀ ವಿಷಯವೇ ಅನುಮಾನಾಸ್ಪದವಾಗಿ ಕಂಡಿತು ಮತ್ತು ತಕ್ಷಣ ಆ ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು.&lt;/p&gt;&lt;p&gt;&lt;strong&gt;ನಿರ್ದೇಶಕನ ಕೋಣೆಗೆ ಕರೆದ ನಂತರ ಏನಾಯಿತು?&lt;/strong&gt;&lt;/p&gt;&lt;p&gt;ಆ ನಂತರ, ನಿರ್ದೇಶಕ ಎನ್ನಲಾದ ವ್ಯಕ್ತಿ ತನ್ನ ಕೋಣೆಗೆ ಕರೆದು, ತಡರಾತ್ರಿಯವರೆಗೂ ತನ್ನ ಮುಂದೆ ಕೂರಿಸಿಕೊಂಡಿದ್ದ ಎಂದು ಫರ್ಹಾನಾ ಆರೋಪಿಸಿದ್ದಾರೆ. ಆ ಸಮಯದಲ್ಲಿ ತಾನು ತುಂಬಾ ಭಯಭೀತಳಾಗಿದ್ದೆ ಎಂದಿದ್ದಾರೆ. ತನ್ನನ್ನು ರಕ್ಷಿಸಿಕೊಳ್ಳಲು, ಕೈಯಲ್ಲಿ ಸದ್ದಿಲ್ಲದೆ ಹೂವಿನ ಹೂದಾನಿ ಹಿಡಿದುಕೊಂಡಿದ್ದರಂತೆ. ಅಷ್ಟೇ ಅಲ್ಲ, ಏನಾದರೂ ಅನಾಹುತವಾದರೆ ಪರಿಸ್ಥಿತಿ ನಿಭಾಯಿಸಲು ತನ್ನ ಸ್ನೇಹಿತೆಗೂ ಎಚ್ಚರಿಕೆಯಿಂದ ಇರಲು ಹೇಳಿದ್ದರಂತೆ. ಆದರೆ, ಧೈರ್ಯ ಕಳೆದುಕೊಳ್ಳದೆ, ಹೇಗೋ ನಿರ್ದೇಶಕನ ಮೇಲೆ ಒತ್ತಡ ಹೇರಿ ತನಗೆ ಮತ್ತು ತನ್ನ ಸ್ನೇಹಿತೆಗೆ ಶ್ರೀನಗರಕ್ಕೆ ಮರಳಲು ಟಿಕೆಟ್ ವ್ಯವಸ್ಥೆ ಮಾಡಿಸಿಕೊಂಡರು. ನಂತರ ಇಬ್ಬರೂ ಸುರಕ್ಷಿತವಾಗಿ ವಾಪಸಾದರು.&lt;/p&gt;&lt;p&gt;&lt;strong&gt;ನಿರ್ದೇಶಕ ವಂಚಕನಾಗಿದ್ದನೇ?&lt;/strong&gt;&lt;/p&gt;&lt;p&gt;ಬಹಳ ದಿನಗಳ ನಂತರ, ಆ ನಿರ್ದೇಶಕ ಒಬ್ಬ ವಂಚಕನೆಂದೂ ಮತ್ತು ಅನೇಕ ಜನರನ್ನು ಮೋಸ ಮಾಡಿದ್ದಾನೆಂದೂ ತನಗೆ ತಿಳಿಯಿತು ಎಂದು ಫರ್ಹಾನಾ ಹೇಳಿದ್ದಾರೆ. ಆ ಸಮಯದಲ್ಲಿ ತಾನು ಜಾಗರೂಕರಾಗಿರದಿದ್ದರೆ, ಏನಾದರೂ ಅನಾಹುತ ಸಂಭವಿಸಬಹುದಿತ್ತು ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವರ್ಕ್&zwnj;ಫ್ರಂಟ್&lt;/strong&gt;&lt;/h2&gt;&lt;p&gt;ಫರ್ಹಾನಾ ಭಟ್ ಸದ್ಯ 'ಖತರೋಂ ಕೆ ಖಿಲಾಡಿ 15' ಎಂಬ ಅಡ್ವೆಂಚರ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು 'ಲೈಲಾ ಮಜ್ನು', 'ಸಿಂಘಂ ಅಗೇನ್' ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ 'ಬಿಗ್ ಬಾಸ್ 19' ನಿಂದಲೂ ಅವರಿಗೆ ಹೊಸ ಗುರುತು ಸಿಕ್ಕಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/bigg-boss-fame-farrhana-bhatt-opens-up-about-her-casting-couch-scare-gvd/articleshow-h4kyxmp"/>
        </item>
        <item>
            <title><![CDATA[ಬೆಂಗಳೂರಿನ ಬಿಎಂಟಿಸಿ ಬಸ್‌ಗಳು ಜನರ ಜೀವನಾಡಿಯೋ ಅಥವಾ 'ಯಮನ ಏಜೆಂಟ್'ಗಳೋ? ಬರೋಬ್ಬರಿ 1,149 ಮಂದಿ ಬಲಿ!]]></title>
            <link>https://kannada.asianetnews.com/gallery/karnataka-districts/bengaluru-bmtc-bus-accidents-death-toll-shocking-statistics-2008-to-2026-6te8os8</link>
            <guid isPermaLink="true">https://kannada.asianetnews.com/gallery/karnataka-districts/bengaluru-bmtc-bus-accidents-death-toll-shocking-statistics-2008-to-2026-6te8os8</guid>
            <pubDate>Sun, 05 Jul 2026 16:48:44 +0530</pubDate>
            <description><![CDATA[ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಿಂದ ಕಳೆದ 18 ವರ್ಷಗಳಲ್ಲಿ ಅಪಘಾತ ಮತ್ತು ಸಾವಿನ ಪ್ರಕರಣಗಳು ರಾಜಧಾನಿ ಜನತೆಯನ್ನು ಬೆಚ್ಚಿ ಬೀಳಿಸಿವೆ. ಈ ಆತಂಕಕಾರಿ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು, ಜನಸಂಚಾರಕ್ಕಿರುವ ಜೀವನಾಡಿಯೋ ಅಥವಾ ಯಮನ ಏಜೆಂಟ್‌ಗಳೋ ಎಂಬ ಆತಂಕ ಎದುರಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrzr7h97emkhpeh72gyxxpk,imgname-bmtc-bus-accident-1783250034217.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್&zwnj;ಗಳಿಂದ ಕಳೆದ 18 ವರ್ಷಗಳಲ್ಲಿ ಅಪಘಾತ ಮತ್ತು ಸಾವಿನ ಪ್ರಕರಣಗಳು ರಾಜಧಾನಿ ಜನತೆಯನ್ನು ಬೆಚ್ಚಿ ಬೀಳಿಸಿವೆ. ಈ ಆತಂಕಕಾರಿ ಅಂಕಿ-ಅಂಶಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದು, ಜನಸಂಚಾರಕ್ಕಿರುವ ಜೀವನಾಡಿಯೋ ಅಥವಾ ಯಮನ ಏಜೆಂಟ್&zwnj;ಗಳೋ ಎಂಬ ಆತಂಕ ಎದುರಾಗುತ್ತದೆ.&lt;/p&gt;&lt;img&gt;&lt;p&gt;ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜೀವನಾಡಿ ಎಂದೇ ಕರೆಯಲ್ಪಡುವ ಬಿಎಂಟಿಸಿ (BMTC) ಬಸ್&zwnj;ಗಳು ಈಗ ಸಾರ್ವಜನಿಕರಲ್ಲಿ ನಡುಕ ಹುಟ್ಟಿಸುತ್ತಿವೆ. ರಸ್ತೆಯಲ್ಲಿ ಬಿಎಂಟಿಸಿ ಬಸ್ ಬಂತೆಂದರೆ ಸಾಕು, ಪಾದಚಾರಿಗಳು ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ಅಂಕಿ-ಅಂಶಗಳು ಭಯಾನಕ ಸತ್ಯವನ್ನು ಹೊರಹಾಕಿವೆ.&lt;/p&gt;&lt;img&gt;&lt;p&gt;&lt;strong&gt;ಶಾಕ್ ನೀಡುವ ಸಾವಿನ ಲೆಕ್ಕಾಚಾರ:&lt;/strong&gt;&lt;/p&gt;&lt;p&gt;2008-09ನೇ ಸಾಲಿನಿಂದ ಹಿಡಿದು 2026ರ ಜೂನ್ ಅಂತ್ಯದವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಬಿಎಂಟಿಸಿ ಬಸ್&zwnj;ಗಳ ಅಟ್ಟಹಾಸಕ್ಕೆ ಬರೋಬ್ಬರಿ 1149 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಳೆದ 18 ವರ್ಷಗಳಲ್ಲಿ ಒಟ್ಟು 4294 ಅಪಘಾತಗಳು ಸಂಭವಿಸಿವೆ ಎಂದರೆ ನೀವು ನಂಬಲೇಬೇಕು. ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಸಾವಿನ ಪ್ರಮಾಣ ಮಾತ್ರ ಆತಂಕಕಾರಿಯಾಗಿ ಮುಂದುವರಿಯುತ್ತಿದೆ.&lt;/p&gt;&lt;img&gt;&lt;p&gt;&lt;strong&gt;ಅಪಘಾತಗಳ ಇತಿಹಾಸ:&lt;/strong&gt;&lt;/p&gt;&lt;p&gt;2008-09ರಲ್ಲಿ 619 ಅಪಘಾತಗಳು ಸಂಭವಿಸಿ 95 ಮಂದಿ ಮೃತಪಟ್ಟಿದ್ದರು. ಅಲ್ಲಿಂದ ಆರಂಭವಾದ ಈ 'ಸಾವಿನ ಸರಣಿ' ಇಂದಿಗೂ ನಿಂತಿಲ್ಲ. ಕೋವಿಡ್ ಸಮಯದಲ್ಲಿ (2020-21) ಸಂಚಾರ ಕಡಿಮೆ ಇದ್ದ ಕಾರಣ ಸಾವಿನ ಸಂಖ್ಯೆ 22ಕ್ಕೆ ಇಳಿದಿತ್ತು. ಆದರೆ, ನಂತರದ ವರ್ಷಗಳಲ್ಲಿ ಮತ್ತೆ ಏರಿಕೆ ಕಂಡಿದೆ. 2024 ರಿಂದ 2026ರ ನಡುವಿನ ಕೇವಲ ಎರಡು ವರ್ಷಗಳ ಅವಧಿಯಲ್ಲಿ 343 ಅಪಘಾತಗಳು ಸಂಭವಿಸಿದ್ದು, 94 ಮಂದಿ ಬಲಿಯಾಗಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬಿಎಂಟಿಸಿ ಅಪಘಾತಗಳ ಭೀಕರ ಅಂಕಿ-ಅಂಶಗಳು (2008 ರಿಂದ 2026)&lt;/strong&gt;&lt;/p&gt;&lt;p&gt;ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಕಳೆದ 18 ವರ್ಷಗಳಲ್ಲಿ ಕಂಡ ಅಪಘಾತಗಳು ಮತ್ತು ಸಂಭವಿಸಿದ ಸಾವುಗಳ ಪಟ್ಟಿ ಹೀಗಿದೆ:&lt;/p&gt;&lt;p&gt;ವರ್ಷ &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಅಪಘಾತಗಳು &amp;nbsp; &amp;nbsp;ಸಾವಿನ ಸಂಖ್ಯೆ&lt;/p&gt;&lt;p&gt;2008-09 &amp;nbsp; &amp;nbsp; &amp;nbsp; &amp;nbsp; 619 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 95&lt;/p&gt;&lt;p&gt;2009-10 &amp;nbsp; &amp;nbsp; &amp;nbsp; &amp;nbsp; 565 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 96&lt;/p&gt;&lt;p&gt;2010-11 &amp;nbsp; &amp;nbsp; &amp;nbsp; &amp;nbsp; 556 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;91&lt;/p&gt;&lt;p&gt;2011-12 &amp;nbsp; &amp;nbsp; &amp;nbsp; &amp;nbsp; 517 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;79&lt;/p&gt;&lt;p&gt;2012-13 &amp;nbsp; &amp;nbsp; &amp;nbsp; &amp;nbsp; 414 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;90&lt;/p&gt;&lt;p&gt;2013-14 &amp;nbsp; &amp;nbsp; &amp;nbsp; &amp;nbsp; 394 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;88&lt;/p&gt;&lt;p&gt;2014-15 &amp;nbsp; &amp;nbsp; &amp;nbsp; &amp;nbsp; 388 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 78&lt;/p&gt;&lt;p&gt;2015-16 &amp;nbsp; &amp;nbsp; &amp;nbsp; &amp;nbsp; 333 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 69&lt;/p&gt;&lt;p&gt;2016-17 &amp;nbsp; &amp;nbsp; &amp;nbsp; &amp;nbsp; 299 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 45&lt;/p&gt;&lt;p&gt;2017-18 &amp;nbsp; &amp;nbsp; &amp;nbsp; &amp;nbsp; 293 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 44&lt;/p&gt;&lt;p&gt;2018-19 &amp;nbsp; &amp;nbsp; &amp;nbsp; &amp;nbsp; 286 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 61&lt;/p&gt;&lt;p&gt;2019-20 &amp;nbsp; &amp;nbsp; &amp;nbsp; &amp;nbsp; 224 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;51&lt;/p&gt;&lt;p&gt;2020-21 &amp;nbsp; &amp;nbsp; &amp;nbsp; &amp;nbsp; &amp;nbsp;98 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 22&lt;/p&gt;&lt;p&gt;2021-22 &amp;nbsp; &amp;nbsp; &amp;nbsp; &amp;nbsp; 133 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;38&lt;/p&gt;&lt;p&gt;2022-23 &amp;nbsp; &amp;nbsp; &amp;nbsp; &amp;nbsp; 207 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;55&lt;/p&gt;&lt;p&gt;2023-24 &amp;nbsp; &amp;nbsp; &amp;nbsp; &amp;nbsp; &amp;nbsp;209 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 53&lt;/p&gt;&lt;p&gt;2024-25 &amp;nbsp; &amp;nbsp; &amp;nbsp; &amp;nbsp; 170 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;45&lt;/p&gt;&lt;p&gt;2025-26 &amp;nbsp; &amp;nbsp; &amp;nbsp; &amp;nbsp; 159 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;42&lt;/p&gt;&lt;p&gt;2026-27 (ಜೂನ್) 18 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;14&lt;/p&gt;&lt;p&gt;ಒಟ್ಟು &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; 4,294 &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;1,149&lt;/p&gt;&lt;img&gt;&lt;p&gt;&lt;strong&gt;ಕಳೆದ ಎರಡು ವರ್ಷಗಳ ವಿಶೇಷ ಮಾಹಿತಿ (2024 - 2026)&lt;/strong&gt;&lt;/p&gt;&lt;p&gt;ಇತ್ತೀಚಿನ ಎರಡು ವರ್ಷಗಳಲ್ಲಿ ಸಾಮಾನ್ಯ ಮತ್ತು ಎಲೆಕ್ಟ್ರಿಕ್ ಬಸ್&zwnj;ಗಳ ಅಪಘಾತಗಳ ವಿವರ ಇಲ್ಲಿದೆ:&lt;/p&gt;&lt;p&gt;&lt;strong&gt;1. ಬಿಎಂಟಿಸಿ (ಸಾಮಾನ್ಯ ಬಸ್&zwnj;ಗಳು):&lt;/strong&gt;&lt;/p&gt;&lt;p&gt;ಅಪಘಾತಗಳ ಸಂಖ್ಯೆ: 343&lt;/p&gt;&lt;p&gt;ಒಟ್ಟು ಸಾವು: 94&lt;/p&gt;&lt;p&gt;&lt;strong&gt;2. ಬಿಎಂಟಿಸಿ ಎಲೆಕ್ಟ್ರಿಕ್ ಬಸ್&zwnj;ಗಳು (e-Bus):&lt;/strong&gt;&lt;/p&gt;&lt;p&gt;ಅಪಘಾತಗಳ ಸಂಖ್ಯೆ: 139&lt;/p&gt;&lt;p&gt;ಒಟ್ಟು ಸಾವು: 34&lt;/p&gt;&lt;img&gt;&lt;p&gt;&lt;strong&gt;ಬಸ್&zwnj;ಗಳ ಸ್ಥಿತಿಗತಿ:&lt;/strong&gt;&lt;/p&gt;&lt;p&gt;ರಾಜ್ಯದಲ್ಲಿ ಒಟ್ಟು 26,054 ಸರ್ಕಾರಿ ಬಸ್&zwnj;ಗಳಿದ್ದು, ಅದರಲ್ಲಿ ಬಿಎಂಟಿಸಿ ಪಾಲು 7,067. ಇಡೀ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಸುಮಾರು 3000 ಹಳೆಯ ಬಸ್&zwnj;ಗಳು ಇಂದಿಗೂ ರಸ್ತೆಯಲ್ಲೇ ಇವೆ. ಹಳೆಯ ಬಸ್&zwnj;ಗಳ ನಿರ್ವಹಣೆ ಸರಿಯಾಗಿಲ್ಲದಿರುವುದು ಮತ್ತು ಚಾಲಕರ ಮೇಲಿನ ಒತ್ತಡವೇ ಇಷ್ಟೊಂದು ಅಪಘಾತಗಳಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.&lt;/p&gt;&lt;p&gt;ಪ್ರತಿದಿನ ಲಕ್ಷಾಂತರ ಜನರನ್ನು ಗುರಿ ತಲುಪಿಸುವ ಬಿಎಂಟಿಸಿ, ಜನರ ಪಾಲಿಗೆ 'ಜೀವನಾಡಿ'ಯಾಗಬೇಕೇ ಹೊರತು 'ಯಮನ ಏಜೆಂಟ್' ಆಗಬಾರದು ಎಂಬುದು ಬೆಂಗಳೂರಿಗರ ಆಶಯ. ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಈ ರಕ್ತಪಾತಕ್ಕೆ ಬ್ರೇಕ್ ಹಾಕುತ್ತದೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/karnataka-districts/bengaluru-bmtc-bus-accidents-death-toll-shocking-statistics-2008-to-2026-6te8os8"/>
        </item>
        <item>
            <title><![CDATA[ಸೀರಿಯಲ್​ಗಳಲ್ಲಿ ನಟಿಸುವ ಆಸೆಯೆ? ನಿಮಗಾಗಿ ಬಂದಿದೆ ಬಿಗ್​ ಆಫರ್​: ಡಿಟೇಲ್ಸ್​ ಇಲ್ಲಿದೆ]]></title>
            <link>https://kannada.asianetnews.com/tv-talk/banna-talkies-production-invites-for-new-talents-for-acting-suc/articleshow-l61suq1</link>
            <guid isPermaLink="true">https://kannada.asianetnews.com/tv-talk/banna-talkies-production-invites-for-new-talents-for-acting-suc/articleshow-l61suq1</guid>
            <pubDate>Sun, 05 Jul 2026 16:48:41 +0530</pubDate>
            <description><![CDATA[ಕಲರ್ಸ್ ಕನ್ನಡ ವಾಹಿನಿಯು 'ನಂದ ಗೋಕುಲ' ಸೀರಿಯಲ್ ತಂಡದಿಂದ ನಿರ್ಮಾಣವಾಗುತ್ತಿರುವ ಹೊಸ ಧಾರಾವಾಹಿಗಾಗಿ ಹೊಸ ಮತ್ತು ಅನುಭವಿ ಪ್ರತಿಭೆಗಳನ್ನು ಆಹ್ವಾನಿಸಿದೆ. 18 ರಿಂದ 60 ವರ್ಷ ವಯಸ್ಸಿನ, ಸ್ಪಷ್ಟವಾಗಿ ಕನ್ನಡ ಮಾತನಾಡುವ ಆಸಕ್ತ ಕಲಾವಿದರು ತಮ್ಮ ವಿವರಗಳನ್ನು ನೀಡಿರುವ ವಾಟ್ಸ್ಆ್ಯಪ್ ಸಂಖ್ಯೆಗೆ ಕಳುಹಿಸುವ ಮೂಲಕ ಈ ಅವಕಾಶವನ್ನು ಬಳಸಿಕೊಳ್ಳಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kwrzwe74gf5spn4p5zmhafmt,imgname-talents-1783250172132.jpg" type="image/jpeg" height="390" width="690"/>
            <content:encoded><![CDATA[&lt;p&gt;ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸುವ ಆಸೆ ಹೊತ್ತವರು ಅದೆಷ್ಟೋ ಮಂದಿ. ಇದೇ ಕಾರಣಕ್ಕೆ ಎಲ್ಲೆಲ್ಲೋ, ಯಾರ್ಯಾರಿಗೋ ದುಡ್ಡು ಕೊಟ್ಟು ಹಳ್ಳಕ್ಕೆ ಬಿದ್ದವರೂ ಇದ್ದಾರೆ, ಅದರಲ್ಲಿಯೂ ಅದೆಷ್ಟೋ ಯುವತಿಯರು ಯಾರದ್ದೋ ಮಾತು ನಂಬಿ, ಬಣ್ಣದ ಲೋಕಕ್ಕೆ ಕಾಲಿಡುವ ಆಸೆಯಿಂದ ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದು ಇದೆ. ಇದರ ಹೊರತಾಗಿಯೂ ಅದೆಷ್ಟೋ ಮಂದಿಗೆ ಟ್ಯಾಲೆಂಟ್​ ಇದ್ದರೂ ಅವಕಾಶಗಳು ಸಿಗುವುದು ಕಡಿಮೆ. ಸಂಬಂಧಿಕರೋ, ಪರಿಚಯದವರೋ, ಅಪ್ಪ-ಅಮ್ಮನೋ ಹೀಗೆ ಯಾರೋ ಒಬ್ಬರು ಈ ಕ್ಷೇತ್ರದಲ್ಲಿ ಇದ್ದರೆ, ಅವರಿಗೆ ಅವಕಾಶಗಳು ಸಿಗುವುದು ಸುಲಭವಾಗಿರುತ್ತದೆ. ಆದರೆ ಸಾಮಾನ್ಯ ಜನರಿಗೆ, ಎಷ್ಟೇ ಪ್ರತಿಭೆ ಇದ್ದರೂ ಅವಕಾಶಗಳು ಅದೃಷ್ಟವಂತರಿಗೆ ಮಾತ್ರ ಸಿಗುತ್ತವೆ.&lt;/p&gt;&lt;p&gt;ಅಂಥವರಿಗಾಗಿ ಈಗ ಅದೃಷ್ಟದ ಬಾಗಿಲು ತೆರೆದಿದೆ. ಸೀರಿಯಲ್​ಗಳಲ್ಲಿ ನಟಿಸುವ ಆಸೆ ಇದ್ದವರಿಗೆ ಅರ್ಜಿ ಕರೆಯಲಾಗಿದೆ. ಇದಾಗಲೇ ಎಷ್ಟೋ ಸೀರಿಯಲ್​ ಕಲಾವಿದರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಸಿನಿಮಾಕ್ಕೂ ಹಾರಿದವರಿದ್ದಾರೆ. ಇಲ್ಲವೇ ಸೀರಿಯಲ್​ನಲ್ಲಿಯೇ ಉಳಿದು ಬಹುದೊಡ್ಡ ಹೆಸರು ಮಾಡಿದವರೂ ಇದ್ದಾರೆ. ಇಂಥವರಲ್ಲಿ ನೀವೂ ಒಬ್ಬರಾಗುವ ಅವಕಾಶವನ್ನು ಕಲರ್ಸ್​ ಕನ್ನಡ ವಾಹಿನಿ ನಿಮಗಾಗಿ ಕೊಟ್ಟಿದೆ. &shy;ಈ ಕುರಿತು ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಶ್ರವಂತ್​ ಅವರು ಮಾಹಿತಿ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಪ್ರತಿಭೆಗಳಿಗೆ ಆಹ್ವಾನ&lt;/strong&gt;&lt;/h3&gt;&lt;p&gt;ನಂದ ಗೋಕುಲ ಸೀರಿಯಲ್​ ತಂಡದಲ್ಲಿ ಶೀಘ್ರವೇ ಹೊಸದೊಂದು ಧಾರಾವಾಹಿ ಶುರುವಾಗಲಿದ್ದು ಅದಕ್ಕೆ ಹೊಸ ಮತ್ತು ಅನುಭವಿ ಪ್ರತಿಭೆಗಳಿಗೆ ಆಹ್ವಾನ ನೀಡಲಾಗಿದೆ. ಬಣ್ಣ ಟಾಕೀಸ್​​ ನಿರ್ಮಾಣದ ತಂಡ ಇದಾಗಿದ್ದು, ಆಸಕ್ತ ಕಲಾವಿದರಿಂದ ಅರ್ಜಿಗೆ ಆಹ್ವಾನಿಸಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡುವ 18ರಿಂದ 60 ವಯಸ್ಸಿನ ಎಲ್ಲರಿಗೂ ಸ್ವಾಗತ. ಆಸಕ್ತಿ ಕಲಾವಿದರು ಫೋಟೋ ಮತ್ತು ವಿವರಗಳನ್ನು ಈ ನಂಬರ್​ಗೆ ಕಳುಹಿಸುವಂತೆ ವಾಹಿನಿ ಹೇಳಿದೆ.&lt;/p&gt;&lt;h2&gt;&lt;strong&gt;ಎಲ್ಲಿ ಕಳುಹಿಸಬೇಕು?&lt;/strong&gt;&lt;/h2&gt;&lt;p&gt;ಮೊಬೈಲ್​ ಸಂಖ್ಯೆ: 9008473959, ಕೇವಲ ವಾಟ್ಸ್​ಆ್ಯಪ್​ ಮಾಡುವಂತೆ ಹಾಗೂ ಕರೆ ಮಾಡದಂತೆ ಸೂಚನೆಯನ್ನು ನೀಡಲಾಗಿದೆ. ಆಯ್ಕೆಯಾದವರಿಗೆ ತಾವೇ ಕರೆ ಮಾಡುವುದಾಗಿ ವಾಹಿನಿ ಹೇಳಿದೆ.&lt;/p&gt;&lt;p&gt;&lt;img&gt;&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/tv-talk/banna-talkies-production-invites-for-new-talents-for-acting-suc/articleshow-l61suq1"/>
        </item>
        <item>
            <title><![CDATA[Postal Scheme: 1 ರೂ, ಕಳೆದುಕೊಳ್ಳದೆ, ಬಡ್ಡಿ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟಲ್‌ ನ್ಯೂವ್‌ ಸ್ಕೀಮ್‌! ಮಧ್ಯಮ ವರ್ಗದವರಿಗೆ ಜಾಕಪಾಟ್!]]></title>
            <link>https://kannada.asianetnews.com/gallery/business/how-to-earn-rs7-lakh-in-interest-without-losing-rs1-here-is-the-postal-new-scheme-6wns3qg</link>
            <guid isPermaLink="true">https://kannada.asianetnews.com/gallery/business/how-to-earn-rs7-lakh-in-interest-without-losing-rs1-here-is-the-postal-new-scheme-6wns3qg</guid>
            <pubDate>Sun, 05 Jul 2026 16:12:51 +0530</pubDate>
            <description><![CDATA[New Postal Scheme 2026 ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01kvmaj8gp4vzrecvfsmyy9qrq,imgname-chatgpt-image-jun-21--2026--11-00-43-am-1782019858966.png" type="image/jpeg" height="390" width="690"/>
            <content:encoded><![CDATA[&lt;p&gt;New Postal Scheme 2026 ಪೋಸ್ಟ್ ಆಫೀಸ್&zwnj;ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;img&gt;&lt;p&gt;ಮ್ಯೂಚುವಲ್ ಫಂಡ್&zwnj;, ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಬಹಳ ಜನಪ್ರಿಯ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್&zwnj;ನಲ್ಲಿ ಹೂಡಿಕೆ ಮಾಡುವುದರಿಂದ ಹಣಕ್ಕೆ 100% ಆರ್ಥಿಕ ಭದ್ರತೆ ಮತ್ತು ಅದೇ ಸಮಯದಲ್ಲಿ ಸ್ಥಿರ ಆದಾಯ ದೊರೆಯುತ್ತದೆ. ಹಾಗಾದರೆ 1 ರೂಪಾಯಿಯನ್ನೂ ಕಳೆದುಕೊಳ್ಳದೆ, ಬಡ್ಡಿಯ ರೂಪದಲ್ಲೇ ರೂ.7 ಲಕ್ಷ ಗಳಿಸುವುದು ಹೇಗೆ? ಪೋಸ್ಟ್&zwnj; ಆಫೀಸ್&zwnj;ನ ಆ ಸುವರ್ಣ ಯೋಜನೆ ಯಾವುದು? ಇಲ್ಲಿದೆ ಸಂಪೂರ್ಣ ವಿವರ.&lt;/p&gt;&lt;img&gt;&lt;p&gt;ಪ್ರಸ್ತುತ, ಅಂಚೆ ಕಚೇರಿಯ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾದ 'ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ' (NSC) ಖಾತೆಯು ಗ್ರಾಹಕರಿಗೆ ಶೇಕಡಾ 7.7 ರಷ್ಟು ಬಡ್ಡಿದರವನ್ನು ನೀಡುತ್ತದೆ. ಕನಿಷ್ಠ ರೂ. 1,000 ಹೂಡಿಕೆಯೊಂದಿಗೆ, ಯಾವುದೇ ಅಪಾಯವಿಲ್ಲದೆ ಕೇವಲ ₹ 7 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿಯನ್ನು ಹೇಗೆ ಗಳಿಸಬಹುದು ಎಂಬುದನ್ನು ಈಗ ನೋಡೋಣ.&lt;/p&gt;&lt;img&gt;&lt;p&gt;ಕೇಂದ್ರ ಸರ್ಕಾರವು ಪ್ರಸ್ತುತ ಜುಲೈ 2026 ರವರೆಗಿನ ಅವಧಿಗೆ NSC ಯೋಜನೆ ಮೇಲೆ ಶೇಕಡಾ 7.7 ರಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತಿದೆ. ನೀವು ಯೋಜನೆಯಲ್ಲಿ ಹೂಡಿಕೆ ಮಾಡುವ ಮೊತ್ತದ ಮೇಲೆ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಯೋಜನೆಯ ಮುಕ್ತಾಯ ಅವಧಿಯ ನಂತರ, ಸಂಪೂರ್ಣ ಬಡ್ಡಿ ಮೊತ್ತವನ್ನು ನೇರವಾಗಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.&lt;/p&gt;&lt;img&gt;&lt;p&gt;ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (NSC) ಯೋಜನೆಯಲ್ಲಿ ನೀವು ಒಟ್ಟು ₹15,60,000 ಹೂಡಿಕೆ ಮಾಡಿದರೆ, ಅದಕ್ಕೆ ವಾರ್ಷಿಕ 7.7% ಸಂಯುಕ್ತ ಬಡ್ಡಿ ಸಿಗುತ್ತದೆ. 5 ವರ್ಷಗಳ ಈ ಯೋಜನೆಯಲ್ಲಿ, ನಿಮ್ಮ ಮೂಲ ಹಣದ ಜೊತೆಗೆ ಬಡ್ಡಿಯ ರೂಪದಲ್ಲಿ ಬರೋಬ್ಬರಿ ₹7,00,432 ನಿವ್ವಳ ಲಾಭ ಗಳಿಸಬಹುದು. ಅಂದರೆ, 5 ವರ್ಷಗಳ ನಂತರ ನಿಮಗೆ ಒಟ್ಟು ₹22,60,432 ಕೈಸೇರುತ್ತದೆ. ಇದು ಸುರಕ್ಷಿತ ಹಾಗೂ ಉತ್ತಮ ಲಾಭದಾಯಕ ಹೂಡಿಕೆಯಾಗಿದೆ.&lt;/p&gt;&lt;img&gt;&lt;p&gt;ಈ ರಾಷ್ಟ್ರೀಯ ಉಳಿತಾಯ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ ಕೇವಲ ₹1,000. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಗರಿಷ್ಠ ಹೂಡಿಕೆ ಮಿತಿಯಿಲ್ಲ. ಈ ಯೋಜನೆಯಲ್ಲಿ ನೀವು ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು ಮತ್ತು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸುರಕ್ಷಿತ ರೀತಿಯಲ್ಲಿ ಲಾಭ ಗಳಿಸಬಹುದು.&lt;/p&gt;&lt;img&gt;&lt;p&gt;ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ಯಾವುದೇ ಭಾರತೀಯ ನಾಗರಿಕರು ಖಾತೆಯನ್ನು ತೆರೆಯಬಹುದು. ಈ NSC ಖಾತೆ (ಮಕ್ಕಳ ಖಾತೆ) ಅನ್ನು ನಿಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಸುಲಭವಾಗಿ ತೆರೆಯಬಹುದು. ಮಗುವಿಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪೋಷಕರು ಖಾತೆಯನ್ನು ನಿರ್ವಹಿಸಬಹುದು. ಆದರೆ, 10 ವರ್ಷ ಪೂರ್ಣಗೊಂಡ ನಂತರ, ಮಕ್ಕಳು ನೇರವಾಗಿ ಖಾತೆಯನ್ನು ನಿರ್ವಹಿಸಬಹುದು.&lt;/p&gt;&lt;img&gt;&lt;p&gt;ಈ ಯೋಜನೆಯು ಪ್ರಯೋಜನಗಳನ್ನು ಒದಗಿಸುವುದಲ್ಲದೆ, ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣದ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ನೀಡುತ್ತದೆ. NSC ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಗಣನೀಯ ತೆರಿಗೆ ಉಳಿತಾಯವನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಹೂಡಿಕೆದಾರರ ಅನುಕೂಲಕ್ಕಾಗಿ, ಈ ಯೋಜನೆಯು ಖಾತೆಯನ್ನು ಮುಕ್ತಾಯಕ್ಕೆ ಮುಂಚಿತವಾಗಿ ಕ್ಲೋಸ್&zwnj; ಮಾಡುವ ಸೌಲಭ್ಯವನ್ನು ನೀಡುತ್ತದೆ. ಅದರಂತೆ ಖಾತೆಯನ್ನು ತೆರೆದ ಒಂದು ವರ್ಷದೊಳಗೆ ನೀವು ಅದನ್ನು ಕ್ಲೋಸ್&zwnj; ಮಾಡಿಕೊಂಡರೆ, ನಿಮಗೆ ಯಾವುದೇ ಬಡ್ಡಿ ಸಿಗುವುದಿಲ್ಲ. ನೀವು ಹೂಡಿಕೆ ಮಾಡಿದ ಮೂಲ ಮೊತ್ತವನ್ನು ಮಾತ್ರ ಹಿಂತಿರುಗಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.&lt;/p&gt;&lt;img&gt;&lt;p&gt;ಕೊನೆಯದಾಗಿ, ಯೋಜನೆಯ ಸಂಪೂರ್ಣ ಬಡ್ಡಿ ಪ್ರಯೋಜನಗಳನ್ನು ಮತ್ತು ₹7 ಲಕ್ಷದವರೆಗಿನ ಅತ್ಯುತ್ತಮ ಆದಾಯವನ್ನು ಪಡೆಯಲು, ಹೂಡಿಕೆದಾರರು ತಮ್ಮ ಖಾತೆಯನ್ನು ಪೂರ್ಣ 5 ವರ್ಷಗಳವರೆಗೆ (5 ವರ್ಷಗಳ ಅವಧಿ) ಸಕ್ರಿಯವಾಗಿರಿಸಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವು ಈ ಯೋಜನೆಗೆ ನೇರವಾಗಿ ಖಾತರಿ ನೀಡುವುದರಿಂದ, ಇಂದು ಮಧ್ಯಮ ವರ್ಗದವರು ಅಂಚೆ ಕಚೇರಿಯ ಎನ್&zwnj;ಎಸ್&zwnj;ಸಿ ಯೋಜನೆಯಲ್ಲಿ ಹೂಡಿಕೆ ಮಾಡುವುದು ಬಹಳ ಬುದ್ಧಿವಂತ ಮತ್ತು ಲಾಭದಾಯಕ ಆರ್ಥಿಕ ನಿರ್ಧಾರವಾಗಿರುತ್ತದೆ.&lt;/p&gt;]]></content:encoded>
            <category><![CDATA[business]]></category>
            <dc:creator>Bhimasi M Koleppanavar</dc:creator>
            <atom:link href="https://kannada.asianetnews.com/gallery/business/how-to-earn-rs7-lakh-in-interest-without-losing-rs1-here-is-the-postal-new-scheme-6wns3qg"/>
        </item>
        <item>
            <title><![CDATA[ದೊಡ್ಡ ಹೋಟೆಲ್‌ಗಳಲ್ಲಿ ರೂಮ್ ನಂ ಅಥವಾ ಫ್ಲೋರ್ ನಂ 13 ಇರುವುದಿಲ್ಲವೇಕೆ? ಇನ್ನೂ ಇದೆ ಆ ಭಯ!]]></title>
            <link>https://kannada.asianetnews.com/gallery/life/why-hotels-skip-room-number-13-the-surprising-secret-and-science-behind-this-global-superstition-3gq1olf</link>
            <guid isPermaLink="true">https://kannada.asianetnews.com/gallery/life/why-hotels-skip-room-number-13-the-surprising-secret-and-science-behind-this-global-superstition-3gq1olf</guid>
            <pubDate>Sun, 05 Jul 2026 16:42:34 +0530</pubDate>
            <description><![CDATA[Hotel room 13 mystery Kannada: ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ನೀವು 12ರ ನಂತರ ನೇರವಾಗಿ 14ನೇ ನಂಬರ್‌ನ ರೂಮ್ ಅಥವಾ ಅಂತಸ್ತನ್ನು ನೋಡಿರಬಹುದು. 13ನೇ ಸಂಖ್ಯೆ ಅಲ್ಲಿ ಮಾಯವಾಗಿರುತ್ತದೆ! ಇದು ಹೋಟೆಲ್ ಸಿಬ್ಬಂದಿಯ ತಪ್ಪಲ್ಲ, ಬದಲಿಗೆ ಶತಮಾನಗಳ ಹಳೆಯ ನಂಬಿಕೆ ಮತ್ತು ಭಯ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrzdmmp7a82ekdjf7gs7ry5,imgname-thumbnail--85--1783249687189.jpg" type="image/jpeg" height="390" width="690"/>
            <content:encoded><![CDATA[&lt;p&gt;Hotel room 13 mystery Kannada: ದೊಡ್ಡ ದೊಡ್ಡ ಹೋಟೆಲ್&zwnj;ಗಳಲ್ಲಿ ನೀವು 12ರ ನಂತರ ನೇರವಾಗಿ 14ನೇ ನಂಬರ್&zwnj;ನ ರೂಮ್ ಅಥವಾ ಅಂತಸ್ತನ್ನು ನೋಡಿರಬಹುದು. 13ನೇ ಸಂಖ್ಯೆ ಅಲ್ಲಿ ಮಾಯವಾಗಿರುತ್ತದೆ! ಇದು ಹೋಟೆಲ್ ಸಿಬ್ಬಂದಿಯ ತಪ್ಪಲ್ಲ, ಬದಲಿಗೆ ಶತಮಾನಗಳ ಹಳೆಯ ನಂಬಿಕೆ ಮತ್ತು ಭಯ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&lt;strong&gt;ಇದರ ಹಿಂದಿರುವ ಕಾರಣವೇನು?&lt;/strong&gt;ನೀವು ಯಾವಾಗಲಾದರೂ ದೊಡ್ಡ ದೊಡ್ಡ ಹೋಟೆಲ್&zwnj;ಗಳಿಗೆ ಹೋದಾಗ ಅಲ್ಲಿನ ರೂಮ್ ನಂಬರ್&zwnj;ಗಳನ್ನು ಅಥವಾ ಲಿಫ್ಟ್&zwnj;ನಲ್ಲಿರುವ ಅಂತಸ್ತುಗಳ (Floors) ಸಂಖ್ಯೆಯನ್ನು ಗಮನಿಸಿದ್ದೀರಾ? ಅಲ್ಲಿ 11, 12ರ ನಂತರ ನೇರವಾಗಿ 14ನೇ ಸಂಖ್ಯೆ ಕಾಣಿಸುತ್ತದೆ, ಆದರೆ 13ನೇ ಸಂಖ್ಯೆ ಮಾತ್ರ ಕಾಣೆಯಾಗಿರುತ್ತದೆ. ಇದು ಹೋಟೆಲ್ ಮಾಲೀಕರು ಮಾಡಿದ ತಪ್ಪಲ್ಲ; ಬದಲಿಗೆ ಜಗತ್ತಿನಾದ್ಯಂತ ಅನೇಕ ಹೋಟೆಲ್&zwnj;ಗಳು ಉದ್ದೇಶಪೂರ್ವಕವಾಗಿಯೇ 13ನೇ ಸಂಖ್ಯೆಯನ್ನು ಬಳಸುವುದಿಲ್ಲ. ಇದರ ಹಿಂದಿರುವ ಕಾರಣ ತಿಳಿದರೆ ನೀವು ಆಶ್ಚರ್ಯಪಡುತ್ತೀರಿ.&lt;/p&gt;&lt;img&gt;&lt;p&gt;&lt;strong&gt;ಇದರ ಬದಲಿಗೆ ಬಳಸುವ ಸಂಖ್ಯೆಯಿದು&lt;/strong&gt;ಅನೇಕ ಪ್ರವಾಸಿಗರು ಅಥವಾ ಅತಿಥಿಗಳು ಭಯದಿಂದ 13ನೇ ಸಂಖ್ಯೆಯ ರೂಮಿನಲ್ಲಿ ಉಳಿಯಲು ಇಷ್ಟಪಡುವುದಿಲ್ಲ. ಅತಿಥಿಗಳು ಬರದೇ ಇದ್ದರೆ ಆ ರೂಮ್&zwnj;ಗಳು ಖಾಲಿ ಉಳಿದು ಹೋಟೆಲ್&zwnj;ಗಳಿಗೆ ಆರ್ಥಿಕ ನಷ್ಟವಾಗುತ್ತದೆ. ಈ ಕಾರಣದಿಂದಾಗಿ ಹೋಟೆಲ್ ಮಾಲೀಕರು 13ರ ಬದಲಿಗೆ 12A, 14 ಅಥವಾ &lsquo;M&rsquo; (ಇಂಗ್ಲಿಷ್ ವರ್ಣಮಾಲೆಯ 13ನೇ ಅಕ್ಷರ) ಎಂಬ ಹೆಸರನ್ನು ಬಳಸುತ್ತಾರೆ.&lt;/p&gt;&lt;img&gt;&lt;p&gt;&lt;strong&gt;13ನೇ ಸಂಖ್ಯೆ ಅಶುಭ&lt;/strong&gt;13ನೇ ಸಂಖ್ಯೆಯ ಹಿಂದಿನ ಈ ವಿಚಿತ್ರ ಭಯವನ್ನು ವಿಜ್ಞಾನದ ಭಾಷೆಯಲ್ಲಿ &lsquo;ಟರಿಸ್ಕೈಡೆಕಾಫೋಬಿಯಾ&rsquo; (Triskaidekaphobia) ಎಂದು ಕರೆಯಲಾಗುತ್ತದೆ. ಅಂದರೆ 13ನೇ ಸಂಖ್ಯೆಯನ್ನು ಅಶುಭ ಅಥವಾ ಅನಿಷ್ಟ ಎಂದು ಭಾವಿಸುವುದು ಎಂದರ್ಥ. ಈ ಭಯವು ಶತಮಾನಗಳ ಹಿಂದಿನ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ.&lt;/p&gt;&lt;img&gt;&lt;p&gt;&lt;strong&gt;ಅಶುಭವಾಗಲು ಕಾರಣಗಳೇನು?&lt;/strong&gt;&lt;strong&gt;ನಾರ್ಸ್ ಪುರಾಣ: &lt;/strong&gt;ನಾರ್ಸ್ ಪುರಾಣಗಳ ಪ್ರಕಾರ, ಒಂದು ಔತಣಕೂಟಕ್ಕೆ 13ನೇ ಅತಿಥಿ ಬಂದಿದ್ದರಿಂದ ಅಲ್ಲಿ ದೊಡ್ಡ ದುರಂತ ಸಂಭವಿಸಿತ್ತು ಎಂದು ಹೇಳಲಾಗುತ್ತದೆ. ಅಂದಿನಿಂದ 13ನ್ನು ಅಶುಭವೆಂದು ನಂಬಲಾಗಿದೆ.&lt;/p&gt;&lt;p&gt;&lt;strong&gt;ಕ್ರಿಶ್ಚಿಯನ್ ಸಂಪ್ರದಾಯ: &lt;/strong&gt;ಏಸುಪ್ರಭುವಿನ ಕೊನೆಯ ಔತಣಕೂಟದಲ್ಲಿ (Last Supper) ಒಟ್ಟು 13 ಮಂದಿ ಪಾಲ್ಗೊಂಡಿದ್ದರು. ಅಲ್ಲಿ ಕುಳಿತಿದ್ದ 13ನೇ ವ್ಯಕ್ತಿ 'ಜೂಡಾಸ್' ಏಸುಪ್ರಭುವಿಗೆ ದ್ರೋಹ ಮಾಡಿದ್ದರಿಂದ, ಈ ಸಂಖ್ಯೆಗೆ ಅಶುಭದ ಮುದ್ರೆ ಬಿದ್ದಿದೆ ಎಂಬುದು ಅನೇಕರ ನಂಬಿಕೆ.&lt;/p&gt;&lt;p&gt;ಆದರೆ, ಎಲ್ಲಾ ದೇಶಗಳಲ್ಲೂ ಇದೇ ಪರಿಸ್ಥಿತಿ ಇರುವುದಿಲ್ಲ. ಕೆಲವು ಏಷ್ಯಾದ ದೇಶಗಳಲ್ಲಿ 13ಕ್ಕಿಂತ 4 ಮತ್ತು 9 ಸಂಖ್ಯೆಗಳನ್ನು ಅಶುಭವೆಂದು ಭಾವಿಸಲಾಗುತ್ತದೆ. ಅಲ್ಲಿನ ಹೋಟೆಲ್&zwnj;ಗಳಲ್ಲಿ ಈ ಸಂಖ್ಯೆಗಳನ್ನು ಕೈಬಿಡಲಾಗುತ್ತದೆ. ತಂತ್ರಜ್ಞಾನ ಇಷ್ಟೊಂದು ಬೆಳೆದಿರುವ ಈ ಕಾಲದಲ್ಲೂ ಶತಮಾನಗಳ ಹಿಂದಿನ ಮೂಢನಂಬಿಕೆಗಳು ಹೋಟೆಲ್ ಉದ್ಯಮವನ್ನು ಹೇಗೆ ಪ್ರಭಾವಿಸುತ್ತಿವೆ ಎಂಬುದಕ್ಕೆ 13ನೇ ನಂಬರ್&zwnj;ನ ರೂಮ್ ಇಲ್ಲದಿರುವುದೇ ದೊಡ್ಡ ಸಾಕ್ಷಿ.&lt;/p&gt;]]></content:encoded>
            <category><![CDATA[life]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/life/why-hotels-skip-room-number-13-the-surprising-secret-and-science-behind-this-global-superstition-3gq1olf"/>
        </item>
        <item>
            <title><![CDATA[Huma Qureshi: 40ರಲ್ಲೂ ಸಿಂಗಲ್ ಆಗಿರುವ 'ಟಾಕ್ಸಿಕ್' ಲೇಡಿ ಹುಮಾ: ಮದುವೆ ಬಗ್ಗೆ ಪ್ಲ್ಯಾನ್ ಏನು?]]></title>
            <link>https://kannada.asianetnews.com/entertainment/toxic-actress-huma-qureshi-wedding-plans-with-rachit-singh-in-2026-gvd/articleshow-883i5ci</link>
            <guid isPermaLink="true">https://kannada.asianetnews.com/entertainment/toxic-actress-huma-qureshi-wedding-plans-with-rachit-singh-in-2026-gvd/articleshow-883i5ci</guid>
            <pubDate>Sun, 05 Jul 2026 16:39:27 +0530</pubDate>
            <description><![CDATA['ಟಾಕ್ಸಿಕ್' ನಟಿ ಹುಮಾ ಖುರೇಷಿಗೆ 40 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಹಲವು ನಟರ ಜೊತೆ ಅವರ ಹೆಸರು ಕೇಳಿಬಂದರೂ, ಮದುವೆ ಮಾತು ಮಾತ್ರ ಮುನ್ನೆಲೆಗೆ ಬಂದಿರಲಿಲ್ಲ. ಹಾಗಾದ್ರೆ ನಟಿಯ ಮುಂದಿನ ಪ್ಲ್ಯಾನ್ ಏನು? ಇಲ್ಲಿದೆ ವಿವರ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrzew313jhdhxge9xf727qh,imgname-gxg-1783249727585.png" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್ ನಟಿ ಹುಮಾ ಖುರೇಷಿ ಸದ್ಯ ತಮ್ಮ ಮುಂಬರುವ 'ಬೇಬಿ ಡು ಡೈ ಡು' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿರುವ ಹುಮಾ, ಈಗ ವೈಯಕ್ತಿಕ ಜೀವನದಿಂದಲೂ ಚರ್ಚೆಯಲ್ಲಿದ್ದಾರೆ. ಅಭಿಮಾನಿಗಳು ಅವರ ಮದುವೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅವರು ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.&lt;/p&gt;&lt;p&gt;ವರದಿಗಳ ಪ್ರಕಾರ, ಹುಮಾ ಖುರೇಷಿ ತಮ್ಮ ಬಹುಕಾಲದ ಗೆಳೆಯ ರಚಿತ್ ಸಿಂಗ್ ಜೊತೆ ಮದುವೆಯಾಗುವ ಸಾಧ್ಯತೆ ಇದೆ. ನಟಿ ಅಕ್ಟೋಬರ್ ಅಥವಾ ನವೆಂಬರ್ 2026 ರಲ್ಲಿ ವಧುವಾಗಬಹುದು ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದು, ಈಗ ತಮ್ಮ ಸಂಬಂಧಕ್ಕೆ ಹೊಸ ಹೆಸರು ನೀಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಜೋಡಿ ಸೆಪ್ಟೆಂಬರ್ 2025 ರಲ್ಲಿ ಅಮೆರಿಕದಲ್ಲಿ (US) ನಡೆದ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದೆ.&lt;img&gt;&lt;/p&gt;&lt;p&gt;ಎಲ್ಲವೂ ಅಂದುಕೊಂಡಂತೆ ನಡೆದರೆ, ಈ ವರ್ಷದ ಕೊನೆಯಲ್ಲಿ ಹುಮಾ ವಧುವಾಗಬಹುದು. ಹುಮಾ ಹೃದಯ ಕದ್ದಿರುವ ರಚಿತ್ ಸಿಂಗ್ ಒಬ್ಬ ಆಕ್ಟಿಂಗ್ ಕೋಚ್/ಟ್ರೇನರ್. ಇವರು ಬಾಲಿವುಡ್ ನಟ ರಣವೀರ್ ಸಿಂಗ್&zwnj;ಗೂ ತರಬೇತಿ ನೀಡಿದ್ದಾರೆ. ಇದರೊಂದಿಗೆ ಅವರು ಮಾಡೆಲಿಂಗ್ ಕೂಡ ಮಾಡುತ್ತಾರೆ. ಹುಮಾ ಖುರೇಷಿ ತಮ್ಮ ವೈಯಕ್ತಿಕ ಜೀವನವನ್ನು ಯಾವಾಗಲೂ ಲೈಮ್&zwnj;ಲೈಟ್&zwnj;ನಿಂದ ದೂರವಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ವಿಭಿನ್ನ ಪಾತ್ರದಲ್ಲಿ ಹುಮಾ ಖುರೇಷಿ&lt;/strong&gt;&lt;/h2&gt;&lt;p&gt;ಅವರು ತಮ್ಮ ವೃತ್ತಿಜೀವನದಲ್ಲಿ 'ಗ್ಯಾಂಗ್ಸ್ ಆಫ್ ವಾಸೇಪುರ್', 'ಬದ್ಲಾಪುರ್', 'ಜಾಲಿ ಎಲ್&zwnj;ಎಲ್&zwnj;ಬಿ 2', 'ಮೋನಿಕಾ, ಓ ಮೈ ಡಾರ್ಲಿಂಗ್', 'ತರ್ಲಾ' ಮತ್ತು 'ಮಹಾರಾಣಿ' ಸೇರಿದಂತೆ ಹಲವು ಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಈಗ ಅವರು ತಮ್ಮ ಹೊಸ ಚಿತ್ರ 'ಬೇಬಿ ಡು ಡೈ ಡು' ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ. ಈ ಚಿತ್ರ ಜುಲೈ 3 ರಂದು ಬಿಡುಗಡೆಯಾಗಿದೆ. ಇದರಲ್ಲಿ ಹುಮಾ ಖುರೇಷಿ ಸಂಪೂರ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಯಶ್ ಅಭಿನಯದ ಟಾಕ್ಸಿಕ್ ಚಿತ್ರದಲ್ಲೂ ಅಭಿನಯಿಸಿದ್ದಾರೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/toxic-actress-huma-qureshi-wedding-plans-with-rachit-singh-in-2026-gvd/articleshow-883i5ci"/>
        </item>
        <item>
            <title><![CDATA[ಕ್ರಿಕೆಟ್ ಬಳಿಕ ಪೃಥ್ವಿ ಶಾ ವೈಯುಕ್ತಿಕ ಬದುಕಿನಲ್ಲೂ ಕೋಲಾಹಲ, ಮೋಸ ಹೋದೆ ಎಂದ ಗರ್ಲ್‌ಫ್ರೆಂಡ್ ಆಕೃತಿ]]></title>
            <link>https://kannada.asianetnews.com/gallery/cricket-sports/prithvi-shaw-faces-fresh-buzz-after-girlfriend-akriti-cheated-remark-goes-viral-w7n0dks</link>
            <guid isPermaLink="true">https://kannada.asianetnews.com/gallery/cricket-sports/prithvi-shaw-faces-fresh-buzz-after-girlfriend-akriti-cheated-remark-goes-viral-w7n0dks</guid>
            <pubDate>Sun, 05 Jul 2026 16:36:55 +0530</pubDate>
            <description><![CDATA[ಕ್ರಿಕೆಟಿಗ ಪೃಥ್ವಿ ಶಾ ಕ್ರಿಕೆಟ್ ಕರಿಯರ್ ಬೆನ್ನಲ್ಲೇ ಇದೀಗ ವೈಯುಕ್ತಿಕ ಬದುಕಿನಲ್ಲಿ ಕೋಲಾಹಲ ಎದ್ದಿದೆ. ಕೆಲ ತಿಂಗಳ ಹಿಂದೆ ಶಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಬಹುಕಾಲದ ಗೆಳತಿ ಇದೀಗ ನಾನು ಮೋಸ ಹೋದೆ ಎಂದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kk6meas4qngsdcaq4c9emrnf,imgname-new-project--13--1772970519332.jpg" type="image/jpeg" height="390" width="690"/>
            <content:encoded><![CDATA[&lt;p&gt;ಕ್ರಿಕೆಟಿಗ ಪೃಥ್ವಿ ಶಾ ಕ್ರಿಕೆಟ್ ಕರಿಯರ್ ಬೆನ್ನಲ್ಲೇ ಇದೀಗ ವೈಯುಕ್ತಿಕ ಬದುಕಿನಲ್ಲಿ ಕೋಲಾಹಲ ಎದ್ದಿದೆ. ಕೆಲ ತಿಂಗಳ ಹಿಂದೆ ಶಾ ಜೊತೆ ಎಂಗೇಜ್&zwnj;ಮೆಂಟ್ ಮಾಡಿಕೊಂಡಿದ್ದ ಬಹುಕಾಲದ ಗೆಳತಿ ಇದೀಗ ನಾನು ಮೋಸ ಹೋದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಕ್ರಿಕೆಟಿಗ ಪೃಥ್ವಿ ಶಾ ತಮ್ಮ ಕ್ರಿಕೆಟ್ ಕರಿಯರ್&zwnj;ನಲ್ಲಿ ಮಾಡಿದ ಕೆಲ ಎಡವಟ್ಟುಗಳು ಕರಿಯರ್&zwnj;ನ್ನೇ ಕಸಿದುಕೊಂಡಿತು. ಸಚಿನ್ ತೆಂಡೂಲ್ಕರ್ ಜೊತೆ ಹೋಲಿಕೆ ಮಾಡುತ್ತಿದ್ದ ಕ್ರಿಕೆಟಿಗ ಪೃಥ್ವಿ ಶಾ ಇದೀಗ ತಮ್ಮ ವೈಯುಕ್ತಿಕ ಬದುಕಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೆಲ ತಿಂಗಳ ಹಿಂದೆ ಬಹುಕಾಲದ ಗೆಳತಿ ಆಕೃತಿ ಆಗರ್ವಾಲ್ ಜೊತೆ ಎಂಗೇಜ್&zwnj;ಮೆಂಟ್ ಮಾಡಿಕೊಂಡಿದ್ದರು. ಆದರೆ ಇದೀಗ ಈ ಸಂಬಂಧ ಮುರಿದು ಬಿದ್ದ ಸೂಚನೆಗಳು ಲಭ್ಯವಾಗಿದೆ.&lt;/p&gt;&lt;img&gt;&lt;p&gt;ಕಳೆದ ಕೆಲ ದಿನಗಳಿಂದ ಪೃಥ್ವಿ ಶಾ ಹಾಗೂ ಗೆಳತಿ ಆಕೃತಿ ಅಗರ್ವಾಲ್ ನಡುವೆ ಸಂಬಂಧ ಸರಿಯಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಆಕೃತಿ ಅಗರ್ವಾಲ್ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನೀವು ಕೆಲ ದಿನಗಳಿಂದ ಕೇಳುತ್ತಿರುವ ರೂಮರ್ ನಿಜ. ನಾನು ಹಲವು ಬಾರಿ ಮೋಸ ಹೋದೆ ಎಂದಿದ್ದಾರೆ.&lt;/p&gt;&lt;img&gt;&lt;p&gt;ಇನ್&zwnj;ಸ್ಟಾಗ್ರಾಂ ಸ್ಟೋರಿಯಲ್ಲಿ ಆಕೃತಿ ಅಗರ್ವಾಲ್, ನಾನು ಹಲವು ಬಾರಿ ಮೋಸ ಹೋದೆ. ಆದರೂ ಒಂದು ಮಾತು ಹೇಳಿರಲಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋದ ಬಳಿಕ ಈಗಲೂ ನನಗೆ ನಂಬಲಾಗುತ್ತಿಲ್ಲ. ನೀವು ಆತನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿರುವ ರೂಮರ್ ನಿಜ ಎಂದು ಆಕೃತಿ ಆಗರ್ವಾಲ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಪೋಸ್ಟ್ ಮಾಡಿದ ಆಕೃತಿ ಅಗರ್ವಾಲ್ ಅಷ್ಟೇ ಬೇಗನೆ ಡಿಲೀಟ್ ಮಾಡಿದ್ದಾರೆ. ಇನ್ನು ಪೃಥ್ವಿ ಶಾ ಜೊತೆಗಿನ ಹಲವು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಎಂಗೇಜ್&zwnj;ಮೆಂಟ್ ಫೋಟೋ ಹಾಗೇ ಉಳಿಸಿಕೊಂಡಿದ್ದಾರೆ. ಇತ್ತ ಪೃಥ್ವಿ ಶಾ ಖಾತೆಯಲ್ಲಿ ಆಕೃತಿ ಜೊತೆಗಿನ ಹಲವು ಫೋಟೋಗಳು ಲಭ್ಯವಿದೆ.&lt;/p&gt;&lt;img&gt;&lt;p&gt;ಪೃಥ್ವಿ ಶಾ ಹಾಗೂ ಆಕೃತಿ ಅಗರ್ವಾಲ್ ಮಾರ್ಚ್ 2026ರಲ್ಲಿ ಎಂಗೇಜ್&zwnj;ಮೆಂಟ್ ಮಾಡಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಮೂಲಕ ಟೀಂ ಇಂಡಿಯಾಗೆ ಎಂಟ್ರಿಕೊಡಲು ಪೃಥ್ವಿ ಶಾ ರೆಡಿಯಾಗಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪೃಥ್ವಿ ಶಾಗೆ ಅವಕಾಶವೇ ಸಿಗಲಿಲ್ಲ. ಇದರಿಂದ ಶಾ ಮತ್ತಷ್ಟು ಆಕ್ರೋಶಗೊಂಡಿದ್ದರು. ತಮ್ಮ ಆಕ್ರೋಶವನ್ನು ಹೊರಹಾಕಿದ್ದರು.&lt;/p&gt;&lt;img&gt;&lt;p&gt;ಫಿಟ್ನೆಸ್, ಫಾರ್ಮ್ ಹಾಗೂ ಆಫ್ ದಿ ಫೀಲ್ಡ್ ವಿವಾದಗಳಿಂದ ಪೃಥ್ವಿ ಶಾ ಕ್ರಿಕೆಟ್ ಕರಿಯರ್ ದೇಸಿ ಮಟ್ಟಕ್ಕೆ ಸೀಮಿತಗೊಳ್ಳುತ್ತಿದೆ. ಇದರ ಬೆನ್ನಲ್ಲೇ ವೈಯುಕ್ತಿಕ ಬದಕು ಕೂಡ ತಾಳ ತಪ್ಪುವ ಸೂಚನೆಗಳು ಲಭ್ಯವಾಗಿದೆ. ಅಧಿಕೃತವಾಗಿ ಇವರಿಬ್ಬರ ಸಂಬಂಧ ಕುರಿತು ಯಾವುದೇ ಹೇಳಿಕೆ ಬಂದಿಲ್ಲ. ಆದರೆ ಕೆಲ ಸೂಚನೆಗಳು, ಪೋಸ್ಟ್ ಇದೀಗ ಸಂಬಂಧ ಹಳಸಿರುವುದನ್ನು ಸ್ಪಷ್ಟಪಡಿಸಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/prithvi-shaw-faces-fresh-buzz-after-girlfriend-akriti-cheated-remark-goes-viral-w7n0dks"/>
        </item>
        <item>
            <title><![CDATA[ಮದುವೆಯೇ ಬೇಡ ಎಂದ ನಟಿಗೆ ಈಗ ಮಗು ಬೇಕಂತೆ: 'ಗಟ್ಟ ಕುಸ್ತಿ 2' ನಂತರ ಬದಲಾಯ್ತು ನಿರ್ಧಾರ]]></title>
            <link>https://kannada.asianetnews.com/entertainment/aishwarya-lekshmi-reverses-stance-on-marriage-wants-a-child-now-gvd/articleshow-4uk2qy3</link>
            <guid isPermaLink="true">https://kannada.asianetnews.com/entertainment/aishwarya-lekshmi-reverses-stance-on-marriage-wants-a-child-now-gvd/articleshow-4uk2qy3</guid>
            <pubDate>Sun, 05 Jul 2026 16:21:07 +0530</pubDate>
            <description><![CDATA[ಹಿಂದೆ ಮದುವೆಯೇ ಬೇಡ ಎಂದಿದ್ದ ಸೌತ್ ನಟಿ ಐಶ್ವರ್ಯ ಲಕ್ಷ್ಮಿ, ಇದೀಗ ತಮ್ಮ ನಿರ್ಧಾರ ಬದಲಿಸಿದ್ದಾರೆ. ತನಗೀಗ ತಾಯಿಯಾಗುವ ಆಸೆ ಇದೆ, ಅದಕ್ಕಾಗಿ ಒಳ್ಳೆಯ ತಂದೆಯಾಗಬಲ್ಲ ಸಂಗಾತಿ ಬೇಕು ಎಂದು ಹೇಳಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrye1mwgvz5cy8pskxghb2v,imgname-vjv-1783248651932.png" type="image/jpeg" height="390" width="690"/>
            <content:encoded><![CDATA[&lt;p&gt;ಸೌತ್ ಚಿತ್ರರಂಗದ ಖ್ಯಾತ ನಟಿ ಐಶ್ವರ್ಯ ಲಕ್ಷ್ಮಿ (Aishwarya Lekshmi) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. 2024ರಲ್ಲಿ ತಾನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಆಗ ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ, ಸುಮಾರು ಎರಡು ವರ್ಷಗಳ ನಂತರ, ಅವರು ತಮ್ಮ ಆಲೋಚನೆಗಳಲ್ಲಿನ ಬದಲಾವಣೆಯನ್ನು ಬಹಿರಂಗಪಡಿಸಿದ್ದಾರೆ. ತನಗೀಗ ತಾಯಿಯಾಗುವ ಆಸೆ ಇದೆ ಮತ್ತು ಅದಕ್ಕಾಗಿ ಒಳ್ಳೆಯ ತಂದೆಯಾಗಬಲ್ಲ ಸಂಗಾತಿಯನ್ನು ಬಯಸುವುದಾಗಿ ನಟಿ ಹೇಳಿದ್ದಾರೆ.&lt;/p&gt;&lt;p&gt;ತಮ್ಮ 'ಗಟ್ಟ ಕುಸ್ತಿ 2' ಚಿತ್ರದ ಪ್ರಚಾರದ ವೇಳೆ, ಪತ್ರಕರ್ತ ಭಾರದ್ವಾಜ್ ರಂಗನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಐಶ್ವರ್ಯ ಲಕ್ಷ್ಮಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮದುವೆಯಾಗುವುದಿಲ್ಲ ಎಂದು ಹೇಳಿದಾಗ ಜನರ ಟೀಕೆಗಳಿಗೆ ಹೆದರಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, ತನಗೆ ನಿರೀಕ್ಷೆಗಿಂತ ಹೆಚ್ಚು ಜನರ ಬೆಂಬಲ ಸಿಕ್ಕಿತ್ತು ಎಂದು ನಟಿ ಉತ್ತರಿಸಿದ್ದಾರೆ. ಆದರೆ, ಕೆಲವರು ಮದುವೆಯಾಗದಿದ್ದರೆ ಲಿವ್-ಇನ್ ರಿಲೇಶನ್&zwnj;ಶಿಪ್&zwnj;ನಲ್ಲಿ ಇರುತ್ತೀರಾ ಎಂದು ಕೇಳಿದ್ದರಂತೆ.&lt;/p&gt;&lt;p&gt;ಈಗ ತಮ್ಮ ಆಲೋಚನೆಗಳು ಮೊದಲಿನಂತಿಲ್ಲ ಎಂದು ಐಶ್ವರ್ಯ ಹೇಳಿದ್ದಾರೆ. 'ಗಟ್ಟ ಕುಸ್ತಿ 2' ಚಿತ್ರದಲ್ಲಿ ತಾಯಿಯ ಪಾತ್ರ ನಿರ್ವಹಿಸಿದ ನಂತರ, ತಾಯಿಯಾಗುವ ಬಯಕೆ ಇನ್ನಷ್ಟು ಬಲವಾಗಿದೆ ಎಂದು ಅವರು ತಿಳಿಸಿದ್ದಾರೆ. 'ನನಗೆ ಮಗು ಬೇಕೆಂದರೆ, ಅವನು ಒಬ್ಬ ಒಳ್ಳೆಯ ತಂದೆಯಾಗುತ್ತಾನೆ ಎಂಬ ನಂಬಿಕೆ ಇರುವ ವ್ಯಕ್ತಿಯೊಂದಿಗೆ ಇರಲು ನಾನು ಇಷ್ಟಪಡುತ್ತೇನೆ. ಒಬ್ಬ ವ್ಯಕ್ತಿಯಾಗಿ ನಾನು ಬದಲಾಗಿದ್ದೇನೆ. ಈಗ ನಾವು ಒಟ್ಟಿಗೆ ಮಗುವನ್ನು ಬೆಳೆಸಲು ಕಾನೂನುಬದ್ಧ ಸಂಬಂಧವನ್ನು (ಮದುವೆ) ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ವಿವಾಹಿತರು ಸಂತೋಷವಾಗಿಲ್ಲ&lt;/strong&gt;&lt;/h2&gt;&lt;p&gt;2024ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಐಶ್ವರ್ಯ ಲಕ್ಷ್ಮಿ, ತಾನು ಬಾಲ್ಯದಿಂದಲೂ ಮದುವೆಯ ಕನಸು ಕಾಣುತ್ತಿದ್ದೆ ಎಂದು ಹೇಳಿದ್ದರು. 8, 10 ಮತ್ತು 25ನೇ ವಯಸ್ಸಿನಲ್ಲೂ, ತಮ್ಮ ತಾಯಿಗೆ ಗುರುವಾಯೂರು ದೇವಸ್ಥಾನದ ಮೇಲೆ ಅಪಾರ ನಂಬಿಕೆ ಇದ್ದ ಕಾರಣ, ಅಲ್ಲಿ ಮದುವೆಯಾಗುವುದನ್ನು ಕಲ್ಪಿಸಿಕೊಳ್ಳುತ್ತಿದ್ದರಂತೆ. ಆದರೆ ಕಾಲಕ್ರಮೇಣ ಅವರ ದೃಷ್ಟಿಕೋನ ಬದಲಾಯಿತು. ತಮ್ಮ ಸುತ್ತಮುತ್ತಲಿನ ಹೆಚ್ಚಿನ ವಿವಾಹಿತರು ಸಂತೋಷವಾಗಿಲ್ಲ ಎಂಬುದನ್ನು ಅವರು ಅರಿತುಕೊಂಡರು. ಅವರ ಪ್ರಕಾರ, ಅನೇಕ ಸಂಬಂಧಗಳು ಕೇವಲ ಹೊಂದಾಣಿಕೆಗಳ ಮೇಲೆ ನಿಂತಿದ್ದವು ಮತ್ತು ವೈಯಕ್ತಿಕ ಬೆಳವಣಿಗೆಗೆ ಕಡಿಮೆ ಅವಕಾಶವಿತ್ತು. ಇದೇ ಕಾರಣಕ್ಕೆ ಅವರು ಸಾಕಷ್ಟು ಯೋಚಿಸಿ ಮದುವೆಯಾಗದಿರಲು ನಿರ್ಧರಿಸಿದ್ದರು.&lt;/p&gt;&lt;p&gt;ವೃತ್ತಿಜೀವನದ ವಿಚಾರಕ್ಕೆ ಬಂದರೆ, ಐಶ್ವರ್ಯ ಲಕ್ಷ್ಮಿ ಅಭಿನಯದ 'ಗಟ್ಟ ಕುಸ್ತಿ 2' ಜುಲೈ 3 ರಂದು ಬಿಡುಗಡೆಯಾಗಿದೆ. ಈ ಚಿತ್ರವನ್ನು ಚೆಲ್ಲಾ ಅಯ್ಯವು ನಿರ್ದೇಶಿಸಿದ್ದಾರೆ. ಇದು 2022ರಲ್ಲಿ ತೆರೆಕಂಡ 'ಗಟ್ಟ ಕುಸ್ತಿ' ಚಿತ್ರದ ಸೀಕ್ವೆಲ್ ಆಗಿದೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಸಂಪ್ರದಾಯಸ್ಥ ಸಮಾಜದ ನಡುವೆ ಲಿಂಗ ಪಾತ್ರಗಳನ್ನು ಹೊಸ ದೃಷ್ಟಿಕೋನದಿಂದ ತೋರಿಸುವ ಕೀರ್ತಿ ಮತ್ತು ವೀರರ ಸಂಬಂಧದ ಕಥೆಯನ್ನು ಈ ಚಿತ್ರ ಮುಂದುವರಿಸುತ್ತದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Govindaraj S</dc:creator>
            <atom:link href="https://kannada.asianetnews.com/entertainment/aishwarya-lekshmi-reverses-stance-on-marriage-wants-a-child-now-gvd/articleshow-4uk2qy3"/>
        </item>
        <item>
            <title><![CDATA[500 ಕಡೆ ಅರ್ಜಿ ಸಲ್ಲಿಸಿದ್ರೂ ಸಿಗದ ಕೆಲಸ.. ಸಿಎಸ್ ಎಂಜಿನಿಯರ್ ಟು ರಾಪಿಡೋ ರೈಡರ್‍‌ನ ಕರುಣಾಜನಕ ಕತೆ]]></title>
            <link>https://kannada.asianetnews.com/jobs/over-500-applications-no-job-cs-engineers-heart-touching-story-gkn/articleshow-qz2uiqx</link>
            <guid isPermaLink="true">https://kannada.asianetnews.com/jobs/over-500-applications-no-job-cs-engineers-heart-touching-story-gkn/articleshow-qz2uiqx</guid>
            <pubDate>Sun, 05 Jul 2026 16:10:21 +0530</pubDate>
            <description><![CDATA[ಕಂಪ್ಯೂಟರ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ ಪಡೆದ ಯುವಕನೊಬ್ಬ, 500ಕ್ಕೂ ಹೆಚ್ಚು ಕಡೆ ಅರ್ಜಿ ಸಲ್ಲಿಸಿದರೂ ಕೆಲಸ ಸಿಗದೆ ಜೀವನ ನಿರ್ವಹಣೆಗಾಗಿ ರಾಪಿಡೋ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದಾನೆ. ಈತನ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದ ನಿರುದ್ಯೋಗ ಸಮಸ್ಯೆಯ ಕರಾಳ ಮುಖವನ್ನು ತೆರೆದಿಟ್ಟಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrxre1ks7c3k5bbr6ssy25v,imgname-rapido-rider-1783247943730.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಕೈಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ, ಅದೂ ಫಸ್ಟ್ ಕ್ಲಾಸ್&zwnj;ನಲ್ಲಿ ಪಾಸಾದ ಸರ್ಟಿಫಿಕೇಟ್. ಐಟಿ ಕಂಪನಿಯಲ್ಲಿ ಕೈತುಂಬಾ ಸಂಬಳ ಸಿಗಬಹುದು ಎಂಬ ಕನಸು. ಆದರೆ, ವಾಸ್ತವ ಮಾತ್ರ ಅಂದುಕೊಂಡಿದ್ದಕ್ಕಿಂತ ಭಿನ್ನ. ಇದು 500ಕ್ಕೂ ಹೆಚ್ಚು ಕಡೆ ಕೆಲಸಕ್ಕಾಗಿ&lt;/p&gt;&lt;p&gt;ಅರ್ಜಿ ಸಲ್ಲಿಸಿದರೂ ಎಲ್ಲೂ ಕೆಲಸ ಸಿಗದೆ ಅಂತಿಮವಾಗಿ ಜೀವನ ನಿರ್ವಹಣೆಗಾಗಿ ರಾಪಿಡೋ (Rapido) ಬೈಕ್ ಟ್ಯಾಕ್ಸಿ ಓಡಿಸುತ್ತಿರುವ ಒಬ್ಬ ಎಂಜಿನಿಯರಿಂಗ್ ಪದವೀಧರನ ಕರುಣಾಜನಕ ಕಥೆ ಇದು.&lt;/p&gt;&lt;h2&gt;&lt;strong&gt;ಎಕ್ಸ್ (X) ಪೋಸ್ಟ್ ವೈರಲ್&lt;/strong&gt;&lt;/h2&gt;&lt;p&gt;ಸೋಶಿಯಲ್ ಮೀಡಿಯಾ ಎಕ್ಸ್&zwnj;ನಲ್ಲಿ 'ನೀರಜ್' ಎಂಬುವವರು ಹಂಚಿಕೊಂಡ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೀರಜ್ ಅವರು ಇತ್ತೀಚೆಗೆ ರಾಪಿಡೋ ಬುಕ್ ಮಾಡಿದಾಗ ಬಂದ ರೈಡರ್&zwnj;ನ ಹೆಲ್ಮೆಟ್ ಮೇಲೆ ಕಾಲೇಜು ಸ್ಟಿಕ್ಕರ್ ಒಂದು ಅವರ ಗಮನ ಸೆಳೆಯಿತು. ಆಗ ವಿಚಾರಿಸಿದಾಗ ರೈಡರ್ ತನ್ನ ಜೀವನದ ಕಹಿಸತ್ಯವನ್ನು ಬಿಚ್ಚಿಟ್ಟಿದ್ದಾನೆ.&lt;/p&gt;&lt;h3&gt;&lt;strong&gt;500 ಅರ್ಜಿ, ಒಂದೂ ಆಫರ್ ಇಲ್ಲ!&lt;/strong&gt;&lt;/h3&gt;&lt;p&gt;ಆ ಯುವಕ ಕಂಪ್ಯೂಟರ್ ಸೈನ್ಸ್&zwnj;ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸ್ ಆಗಿದ್ದಾನೆ. ಐಟಿ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆತ ಇದುವರೆಗೆ&lt;/p&gt;&lt;p&gt;ಬರೋಬ್ಬರಿ 500ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ದುರಾದೃಷ್ಟವಶಾತ್ ಒಂದೇ ಒಂದು ಕಂಪನಿಯಿಂದಲೂ ಆತನಿಗೆ ಕೆಲಸದ ಆಫರ್ ಬಂದಿಲ್ಲ. ಕೈಯಲ್ಲಿದ್ದ ಉಳಿತಾಯದ ಹಣವೆಲ್ಲ ಖಾಲಿಯಾದ ಮೇಲೆ, ಜೀವನ ನಡೆಸಲು ದಾರಿಯಿಲ್ಲದೆ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದಲೇ ರಾಪಿಡೋ ರೈಡರ್ ಆಗಿ ಕೆಲಸ ಮಾಡುತ್ತಿದ್ದಾನೆ.&lt;/p&gt;&lt;h3&gt;&lt;strong&gt;ಪೋಷಕರಿಗೆ ತಿಳಿದಿಲ್ಲ ಮಗನ ಕಷ್ಟ&lt;/strong&gt;&lt;/h3&gt;&lt;p&gt;ಆಘಾತಕಾರಿ ಮತ್ತು ಬೇಸರದ ಸಂಗತಿಯೆಂದರೆ ಆತ ಬೈಕ್ ಟ್ಯಾಕ್ಸಿ ಓಡಿಸುತ್ತಿರುವ ವಿಷಯ ಆತನ ತಂದೆ-ತಾಯಿಗೆ ತಿಳಿದೇ ಇಲ್ಲ. ಮಗ ಮನೆಯಲ್ಲೇ ಕುಳಿತು ಇಂಟರ್ವ್ಯೂಗಳಿಗೆ ತಯಾರಿ ನಡೆಸುತ್ತಿದ್ದಾನೆಂದೇ ಅವರು ಭಾವಿಸಿದ್ದಾರೆ. ಈ ವಿಷಯ ತಿಳಿದರೆ ಬೇಸರವಾಗುತ್ತದೆ, ಅದನ್ನು ವಿವರಿಸುವುದು ಕೂಡ ಕಷ್ಟ. ಅದಕ್ಕೇ ಸತ್ಯ ಹೇಳಿಲ್ಲ ಎಂದು ಆ ಯುವಕ ನೀರಜ್ ಬಳಿ ಹೇಳಿಕೊಂಡಿದ್ದಾನೆ. ಇನ್ನು, ಯುವಕನ ಮಾತುಗಳಲ್ಲಿ ವ್ಯವಸ್ಥೆಯ ವಿರುದ್ಧ ಆಕ್ರೋಶವಿರಲಿಲ್ಲ, ಬದಲಾಗಿ ವಾಸ್ತವದ ಒಪ್ಪಿಗೆಯಿತ್ತು. ಈಗ ಮಾರ್ಕೆಟ್ ಹೀಗೆಯೇ ಇದೆ ಎಂದು ಆತ ಸರಳವಾಗಿ ಹೇಳಿ ತನ್ನ ಕೆಲಸ ಮುಂದುವರಿಸಿದ್ದಾನೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ನಮಗೂ ಇಂತಹ ಅನುಭವವಾಗಿದೆ, ನೂರಾರು ಕಡೆ ಅರ್ಜಿ ಹಾಕಿದ್ರೂ ಕನಿಷ್ಠ ಒಂದು ಇಂಟರ್ವ್ಯೂ ಕಾಲ್ ಕೂಡ ಬರುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಪದವೀಧರನ ಕಥೆ ಇಂದಿನ ಶಿಕ್ಷಣ ಮತ್ತು ಉದ್ಯೋಗದ ನಡುವೆ ಇರುವ ದೊಡ್ಡ ಕಂದಕಕ್ಕೆ ಸಾಕ್ಷಿಯಾಗಿದೆ. ಉತ್ತಮ ಅಂಕಗಳನ್ನು ಪಡೆದರೂ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶಗಳಿಲ್ಲದೆ ಯುವಕರು ಇಂತಹ ಅನಿವಾರ್ಯ ಕೆಲಸಗಳನ್ನು ಮಾಡುತ್ತಿರುವುದು ದೇಶದ ನಿರುದ್ಯೋಗದ ಕರಾಳ ಮುಖವನ್ನು ತೋರಿಸುತ್ತಿದೆ.&lt;/p&gt;]]></content:encoded>
            <category><![CDATA[jobs]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/jobs/over-500-applications-no-job-cs-engineers-heart-touching-story-gkn/articleshow-qz2uiqx"/>
        </item>
        <item>
            <title><![CDATA[ಅಮೇಜ್, ಎಲಿವೇಟ್ ಸೇರಿ ಹೋಂಡಾ ಕಾರುಗಳಿಗೆ ಗರಿಷ್ಠ 2.15 ಲಕ್ಷ ರೂ ಡಿಸ್ಕೌಂಟ್, ಇದು ಲಿಮಿಟೆಡ್ ಆಫರ್]]></title>
            <link>https://kannada.asianetnews.com/gallery/car-news/honda-cars-massive-discounts-on-amaze-elevate-and-more-benefits-up-to-rs-2-15-lakh-k4846y3</link>
            <guid isPermaLink="true">https://kannada.asianetnews.com/gallery/car-news/honda-cars-massive-discounts-on-amaze-elevate-and-more-benefits-up-to-rs-2-15-lakh-k4846y3</guid>
            <pubDate>Sun, 05 Jul 2026 15:58:01 +0530</pubDate>
            <description><![CDATA[ಭಾರತದಲ್ಲಿ ಹೋಂಡಾ ಕಾರುಗಳು ಅತ್ಯುತ್ತಮ ಗುಣಮಟ್ಟದ ಸರ್ವೀಸ್ ನೀಡುತ್ತಿದೆ. ಪರಿಣಾಮ ಕ್ವಾಲಿಟಿ ಕಾರುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೀಗ ಗ್ರಾಹಕರಿಗಾಗಿ ಹೋಂಡಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrww574956z98w5fg17vhkg,imgname-honda-cars-offers-discounts-1783247017187.png" type="image/jpeg" height="390" width="690"/>
            <content:encoded><![CDATA[&lt;p&gt;ಭಾರತದಲ್ಲಿ ಹೋಂಡಾ ಕಾರುಗಳು ಅತ್ಯುತ್ತಮ ಗುಣಮಟ್ಟದ ಸರ್ವೀಸ್ ನೀಡುತ್ತಿದೆ. ಪರಿಣಾಮ ಕ್ವಾಲಿಟಿ ಕಾರುಗಳ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದೀಗ ಗ್ರಾಹಕರಿಗಾಗಿ ಹೋಂಡಾ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ.&lt;/p&gt;&lt;img&gt;&lt;p&gt;ಹೋಂಡಾ ಕಾರುಗಳು ಭಾರತದಲ್ಲಿ ಬೇಡಿಕೆ ಹೆಚ್ಚಿಸಿದೆ. ಕೈಗೆಟುಕುವ ದರದಲ್ಲಿ ಕಾರುಗಳನ್ನು ನೀಡುವುದರ ಜೊತೆಗೆ ಐಷಾರಾಮಿತನ, ಉತ್ತಮ ಗುಣಮಟ್ಟ, ಗ್ರಾಹಕರ ಮೆಚ್ಚುಗೆಯಾಗುವ ಸರ್ವೀಸ್ ಸೇರಿದಂತೆ ಹಲವು ಕಾರಣಗಳಿಂದ ಹೋಂಡಾ ಭಾರತಲ್ಲಿ ಕಾರು ಪ್ರಿಯರ ಮನಗೆದ್ದಿದೆ. ಇದೀಗ ಹೋಂಡಾ ಕಾರು ಖರೀದಿಸುವ ಗ್ರಾಹರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ.&lt;/p&gt;&lt;img&gt;&lt;p&gt;ಹೋಂಡಾ ತನ್ನ ಆಯ್ದ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಹರಿಷ್ಠ 2.15 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ನೀಡಲಾಗಿದೆ. ವಿಶೇಷ ಅಂದರೆ ನಗದು ಡಿಸ್ಕೌಂಟ್ ಹೆಚ್ಚು ನೀಡಲಾಗಿದೆ.ಇನ್ನುಳಿದಂತೆ ಎಕ್ಸ್&zwnj;ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್, ಆಕ್ಸಸರಿ ಸೇರಿದಂತೆ ಹಲವು ರೀತಿಯಲ್ಲಿ ಗ್ರಾಹಕರಿಗೆ ನೆರವಾಗುತ್ತಿದೆ.&lt;/p&gt;&lt;img&gt;&lt;p&gt;ಹೋಂಡಾ ಎಲಿವೇಟ್ ಕಾರಿಗೆ ಒಟ್ಟು 2.15 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಎಲಿವೇಟ್ ಭಾರತದಲ್ಲಿ ಉತ್ತಮ ಮಾರಾಟ ದಾಖಲೆ ಹೊಂದಿದೆ. ಹೊಸ ಹೋಂಡಾ ಅಮೇಜ್ ಕಾರಿಗೆ ಒಟ್ಟು 68,000 ರೂಪಾಯಿ ಬೆನಿಫಿಟ್ ಆಫರ್ ನೀಡಲಾಗಿದೆ. ಇನ್ನು ಸೆಕೆಂಡ್ ಜನರೇಶನ್ ಹೋಂಡಾ ಅಮೇಜ್ ಕಾರಿಗೆ 58,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.&lt;/p&gt;&lt;img&gt;&lt;p&gt;ಹೋಂಡಾ ತನ್ನ ಆಯ್ದ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಸದ್ಯ ಘೋಷಿಸಿರುವ ಡಿಸ್ಕೌಂಟ್ ಜುಲೈ ತಿಂಗಳ ಆಫರ್ ಆಗಿದೆ. ಅಂದರೆ ಈ ಆಫರ್ ಜುಲೈ 31ರ ವರೆಗೆ ಮಾತ್ರ ಇರಲಿದೆ. ಜುಲೈ ತಿಂಗಳಲ್ಲಿ ಕಾರು ಬುಕ್ ಮಾಡುವ ಗ್ರಾಹಕರು ಈ ಆಫರ್ ಪಡೆಯಲು ಅರ್ಹರಾಗಿದ್ದಾರೆ. ಈ ಮೂಲಕ ಕಡಿಮೆ ಬೆಲೆಗೆ ಕಾರು ಖರೀದಿಸಲು ಸಾಧ್ಯವಿದೆ.&lt;/p&gt;&lt;p&gt;&lt;strong&gt;ವಿಶೇಷ ಸೂಚನೆ: &lt;/strong&gt;ಕಾರುಗಳ ಆಫರ್ ರಾಜ್ಯದಿಂದ ರಾಜ್ಯಕ್ಕೆ, ನಗರದಿಂದ ನಗರಕ್ಕೆ, ಡೀಲರ್&zwnj;ಗಳಿಂದ ಡೀಲರ್&zwnj;ಗೆ ವ್ಯತ್ಯಾಸವಾಗಲಿದೆ. ಹೀಗಾಗಿ ಹತ್ತಿರದ ಡೀಲರ್ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.&lt;/p&gt;&lt;img&gt;&lt;p&gt;ಹೋಂಡಾ ಭಾರತದಲ್ಲಿ ಹೊಸ ZR-V ಕಾರು ಲಾಂಚ್ ಮಾಡುತ್ತಿದೆ. ಹೊಸ ಫ್ಲ್ಯಾಗ್&zwnj;ಶಿಪ್ ಎಸ್&zwnj;ಯುವಿ ಅಡಿಯಲ್ಲಿ ಹೊಸ ಕಾರು ಬಿಡುಗಡೆಯಾಗುತ್ತಿದೆ. 2.0 ಲೀಟರ್ ಎಂಜಿನ್, e:HEV ಸ್ಟ್ರಾಂಗ್ ಹೈಬ್ರಿಡ್ ಪವರ್&zwnj;ಟ್ರೇನ್ ಹೊಂದಿದೆ. ಪರಿಣಾಮ ಒಂದು ಲೀಟರ್ ಪೆಟ್ರೋಲ್&zwnj;ಗೆ 22.80 ಕಿಲೋಮೀಟರ್ ಮೈಲೇಜ್ ನೀಡಲಿದೆ.&lt;/p&gt;]]></content:encoded>
            <category><![CDATA[car-news]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/car-news/honda-cars-massive-discounts-on-amaze-elevate-and-more-benefits-up-to-rs-2-15-lakh-k4846y3"/>
        </item>
        <item>
            <title><![CDATA[ಜಿಯೋ ಬಂಪರ್ ಆಫರ್, ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್‌ಗೆ ಸಿಗುತ್ತೆ ಅನ್‌ಲಿಮಿಟೆಡ್ ಡೇಟಾ]]></title>
            <link>https://kannada.asianetnews.com/gallery/business/jio-rs-11-recharge-plan-offers-unlimited-data-heres-what-you-get-plan-explained-cgyrktn</link>
            <guid isPermaLink="true">https://kannada.asianetnews.com/gallery/business/jio-rs-11-recharge-plan-offers-unlimited-data-heres-what-you-get-plan-explained-cgyrktn</guid>
            <pubDate>Sun, 05 Jul 2026 15:29:26 +0530</pubDate>
            <description><![CDATA[ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್. ಇದು ಸದ್ಯ ಲಭ್ಯವಿರುವ ಯಾವುದೇ ಟೆಲಿಕಾಂಗೆ ಹೋಲಿಸಿದರೆ ಅತೀ ಕಡಿಮೆ ರಿಚಾರ್ಜ್ ಪ್ಲಾನ್,ಆದರೆ ಅನ್‌ಲಿಮಿಟೆಡ್ ಡೇಟಾ ಕೊಡುಗೆ ಸಿಗಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrv6fataw9w33agwwvvrg5s,imgname-jio-surprise-offer-1783245258073.png" type="image/jpeg" height="390" width="690"/>
            <content:encoded><![CDATA[&lt;p&gt;ಜಿಯೋ ಇದೀಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್. ಇದು ಸದ್ಯ ಲಭ್ಯವಿರುವ ಯಾವುದೇ ಟೆಲಿಕಾಂಗೆ ಹೋಲಿಸಿದರೆ ಅತೀ ಕಡಿಮೆ ರಿಚಾರ್ಜ್ ಪ್ಲಾನ್,ಆದರೆ ಅನ್&zwnj;ಲಿಮಿಟೆಡ್ ಡೇಟಾ ಕೊಡುಗೆ ಸಿಗಲಿದೆ.&lt;/p&gt;&lt;img&gt;&lt;p&gt;ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿಸ್ಪರ್ಧೆಗಳು ತೀವ್ರಗೊಳ್ಳುತ್ತಿದೆ. ಜಯೋ ಹೊಸ ಹೊಸ ಪ್ಲಾನ್ ಮೂಲಕ ಗ್ರಾಹಕರ ಆಕರ್ಷಿಸುತ್ತಿದೆ. ಬಿಎಸ್ಎನ್ಎಲ್, ಏರ್&zwnj;ಟೆಲ್, ವಿ ಸೇರಿದಂತೆ ಪ್ರತಿಸ್ಪರ್ಧಿ ಟೆಲಿಕಾಂಗಳನ್ನು ಮೀರಿಸಿ ಜಿಯೋ ಅತೀ ಹೆಚ್ಚು ಗ್ರಾಹಕರನ್ನು ಹೊಂದಿದ ಸಾಧನೆ ಮಾಡಿದೆ. ಇದೇ ವೇಳೆ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ಹಲವು ಕೊಡುಗೆ ನೀಡುತ್ತಿದೆ.&lt;/p&gt;&lt;img&gt;&lt;p&gt;ಜಿಯೋ ತನ್ನ ಗ್ರಾಹಕರಿಗೆ ಕೇವಲ 11 ರೂಪಾಯಿ ರೀಚಾರ್ಜ್ ಪ್ಲಾನ್ ಹೊರತಂದಿದೆ. ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡ ಗ್ರಾಹಕರಿಗೆ ಅನ್&zwnj;ಲಿಮಿಟೆಡ್ ಡೇಟಾ ನೀಡುತ್ತಿದೆ. ಸದ್ಯ ಎಲ್ಲಾ ಟೆಲಿಕಾಂಗಳಲ್ಲಿ ಲಭ್ಯವಿರುವ ಪ್ಲಾನ್&zwnj;ಗಳಿಗೆ ಹೋಲಿಸಿದೆರೆ ಜಿಯೋ ನೀಡುತ್ತಿರುವ 11 ರೂಪಾಯಿಗೆ ಅನ್&zwnj;ಲಿಮಿಟೆಡ್ ಡೇಟಾ ಅತ್ಯಂತ ಕಡಿಮೆ ಬಜೆಟ್ ಪ್ಲಾನ್ ಆಗಿದೆ.&lt;/p&gt;&lt;img&gt;&lt;p&gt;11 ರೂಪಾಯಿ ರೀಚಾರ್ಜ್ ಮಾಡಿದರೆ ಮೊದಲೇ ಇರುವ ವ್ಯಾಲಿಡಿಟಿಯಲ್ಲಿ ಕಾರ್ಯನಿರ್ವಹಿಸಲಿದೆ. ಇಲ್ಲಿನ ಪ್ರಮುಖ ಕಂಡೀಷನ್ ಅಂದರೆ ಅನ್&zwnj;ಲಿಮಿಟೆಡ್ ಡೇಟಾ ಕೇವಲ 1 ಗಂಟೆಗೆ ಮಾತ್ರ. ರೀಚಾರ್ಜ್ ಮಾಡಿದ ಕ್ಷಣದಿಂದ 1 ಗಂಟೆ ವರೆಗೆ ಅನ್&zwnj;ಲಿಮಿಟೆಡ್ ಡೇಟಾ ಸೌಲಭ್ಯ ಸಿಗಲಿದೆ. ಈ ಮೂಲಕ ಗ್ರಾಹಕರು ಅತೀ ಕಡಿಮೆ ಬೆಲೆಗೆ ಗರಿಷ್ಠ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು.&lt;/p&gt;&lt;img&gt;&lt;p&gt;ಜಿಯೋದಲ್ಲಿ ಹಲವು ಡೇಟಾ ಪ್ಲಾನ್&zwnj;ಗಳು ಲಭ್ಯವಿದೆ. ಇದರೊಂದಿಗೆ ಗ್ರಾಹಕರು ತಮ್ಮ ಅಗತ್ಯ, ಬಜೆಟ್&zwnj;ಗೆ ಅನುಗುಣವಾಗಿ ರೀಚಾರ್ಜ್ ಮಾಡಿಕೊಳ್ಳಬಹುದು. ಹೈಸ್ಪೀಡ್ ಡೇಟಾ ನಿಮ್ಮದಾಗಲಿದೆ.&lt;/p&gt;&lt;ol&gt; &lt;li&gt;19 ರೂಪಾಯಿ ಪ್ಲಾನ್, 1 ಜಿಬಿ ಡೇಟಾ 1 ದಿನ ವ್ಯಾಲಿಟಿಡಿ&lt;/li&gt; &lt;li&gt;29 ರೂಪಾಯಿ ಪ್ಲಾನ್, 2ಜಿಬಿ ಡೇಟಾ 2 ದಿನ ವ್ಯಾಲಿಟಿಡಿ&lt;/li&gt; &lt;li&gt;39 ರೂಪಾಯಿ ಪ್ಲಾನ್, 3 ಜಿಬಿ ಡೇಟಾ 3 ದಿನ ವ್ಯಾಲಿಟಿಡಿ&lt;/li&gt;&lt;/ol&gt;&lt;img&gt;&lt;p&gt;ಜಿಯೋದಲ್ಲಿ 49 ರೂಪಾಯಿ ಡೇಟಾ ಪ್ಲಾನ್ ಆ್ಯಕ್ಟಿವೇಟ್ ಮಾಡಿದರೆ ಗ್ರಾಹಕರಿಗೆ ಒಂದು ದಿನ ಇಡೀ ಅನ್&zwnj;ಲಿಮಿಟೆಡ್ ಡೇಟಾ ಸೌಲಭ್ಯ ಸಿಗಲಿದೆ. ಒಂದು ಸಂಪೂರ್ಣ ದಿನ ಹೆಚ್ಚಿನ ಡೇಟಾ ಅಗತ್ಯ ಇದ್ದವರು, ಮೂವಿ ಸೇರಿದಂತೆ ಹಲವು ಡೌನ್ಲೋಟ್ ಮಾಡಿಕೊಳ್ಳಲು ಬಯಸುವವರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಹುದು.&lt;/p&gt;&lt;img&gt;&lt;p&gt;ಜಿಯೋ ಡೇಟಾ ಪ್ಲಾನ್&zwnj;ಗಳಲ್ಲಿ ಫ್ಲೆಕ್ಸಿ ಪ್ಯಾಕ್ ಕೂಡ ಲಭ್ಯವಿದೆ. ಜಿಯೋ ಹಾಟ್&zwnj;&zwnj;ಸ್ಟಾರ್, ಸೋನಿ ಲೈವ್, ಜಿ5 ಸೇರಿದಂತೆ ಹಲವು ಸಬ್&zwnj;ಸ್ಕ್ರಿಪ್ಶನ್ ಕೂಡ ಪಡೆಯುತ್ತಾರೆ. 100 ರೂಪಾಯಿ, 103 ರೂಪಾಯಿ ಡೇಟಾ ಪ್ಲಾನ್&zwnj;ಗಳಲ್ಲಿ ಈ ರೀತಿಯ ಸಬ್&zwnj;ಸ್ಕ್ರಿಪ್ಶನ್ ಆಯ್ಕೆಗಳು ಲಭ್ಯವಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/business/jio-rs-11-recharge-plan-offers-unlimited-data-heres-what-you-get-plan-explained-cgyrktn"/>
        </item>
        <item>
            <title><![CDATA[ಕುರಿ ಮಾಂಸಕ್ಕೆ ಮಾತ್ರ ಮಟನ್ ಎನ್ನುತ್ತಾರೆ! ಆದ್ರೆ ಮೇಕೆ ಮಾಂಸಕ್ಕೆ ಏನೆನ್ನುತ್ತಾರೆ? ನಿಮ್ಮ ಬುದ್ಧಿಗೊಂದು ಸವಾಲ್!]]></title>
            <link>https://kannada.asianetnews.com/gallery/life/why-is-sheep-meat-called-mutton-do-you-know-real-name-for-goat-meat-3mhl6f5</link>
            <guid isPermaLink="true">https://kannada.asianetnews.com/gallery/life/why-is-sheep-meat-called-mutton-do-you-know-real-name-for-goat-meat-3mhl6f5</guid>
            <pubDate>Sun, 05 Jul 2026 15:47:55 +0530</pubDate>
            <description><![CDATA[ನಾವು ಸಾಮಾನ್ಯವಾಗಿ ಬಳಸುವ 'ಮಟನ್' ಪದವು ಫ್ರೆಂಚ್ ಭಾಷೆಯಿಂದ ಬಂದಿದ್ದು, ಇದರರ್ಥ ಕುರಿ ಮಾಂಸ. ಆದರೆ, ಭಾರತದಲ್ಲಿ ಕುರಿ ಮತ್ತು ಮೇಕೆ ಎರಡರ ಮಾಂಸವನ್ನೂ ಮಟನ್ ಎಂದೇ ಕರೆಯಲಾಗುತ್ತದೆ. ಹಾಗಾದರೆ ಮೇಕೆ ಮಾಂಸಕ್ಕೆ ಏನೆಂದು ಕರೆಯುತ್ತಾರೆ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ಲದ ಮಾಹಿತಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrvr40hek6aerz6p6y0g33q,imgname-difference-between-mutton-and-goat-meat-1783245836305.jpg" type="image/jpeg" height="390" width="690"/>
            <content:encoded><![CDATA[&lt;p&gt;ನಾವು ಸಾಮಾನ್ಯವಾಗಿ ಬಳಸುವ 'ಮಟನ್' ಪದವು ಫ್ರೆಂಚ್ ಭಾಷೆಯಿಂದ ಬಂದಿದ್ದು, ಇದರರ್ಥ ಕುರಿ ಮಾಂಸ. ಆದರೆ, ಭಾರತದಲ್ಲಿ ಕುರಿ ಮತ್ತು ಮೇಕೆ ಎರಡರ ಮಾಂಸವನ್ನೂ ಮಟನ್ ಎಂದೇ ಕರೆಯಲಾಗುತ್ತದೆ. ಹಾಗಾದರೆ ಮೇಕೆ ಮಾಂಸಕ್ಕೆ ಏನೆಂದು ಕರೆಯುತ್ತಾರೆ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ಲದ ಮಾಹಿತಿ.&lt;/p&gt;&lt;img&gt;&lt;p&gt;ಭಾನುವಾರ ಬಂತೆಂದರೆ ಮಾಂಸಾಹಾರಿಗಳ ಮನೆಯಲ್ಲಿ ಹಬ್ಬದ ವಾತಾವರಣ. ಅಡುಗೆ ಮನೆಯಿಂದ ಹೊರಬರುವ ಮಟನ್ ಸಾಂಬಾರಿನ ಘಮವು ಹಸಿವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಬ್ಬ-ಹರಿದಿನ ಇರಲಿ ಅಥವಾ ವೀಕೆಂಡ್ ಇರಲಿ, ಮಾಂಸದ ಅಡುಗೆ ಇರಲೇಬೇಕು. ಆದರೆ, ನಾವು ಪ್ರತಿದಿನ ಬಳಸುವ ಈ 'ಮಟನ್' ಎಂಬ ಪದದ ಹಿಂದೆ ಒಂದು ಕುತೂಹಲಕಾರಿ ಇತಿಹಾಸವಿದೆ ಎಂಬುದು ನಿಮಗೆ ತಿಳಿದಿದೆಯೇ? ಕುರಿ ಮಾಂಸಕ್ಕೆ ಮಟನ್ ಎಂದು ಯಾಕೆ ಕರೆಯುತ್ತಾರೆ ಮತ್ತು ಮೇಕೆ ಮಾಂಸದ ಸರಿಯಾದ ಹೆಸರೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.&lt;/p&gt;&lt;img&gt;&lt;p&gt;ನಮಗೆಲ್ಲ ತಿಳಿದಿರುವಂತೆ 'ಮಟನ್' ಎನ್ನುವುದು ಇಂಗ್ಲಿಷ್ ಪದ. ಆದರೆ ಈ ಪದದ ಮೂಲ ಇರುವುದು ಫ್ರೆಂಚ್ ಭಾಷೆಯಲ್ಲಿ. ಹಳೆಯ ಫ್ರೆಂಚ್ ಭಾಷೆಯಲ್ಲಿ 'ಮೌಟನ್' (Mouton) ಎಂಬ ಪದವಿತ್ತು, ಇದರ ಅರ್ಥ 'ಕುರಿ' ಎಂದು. ಬ್ರಿಟನ್ ಮೇಲೆ ನಾರ್ಮನ್ನರು ಆಕ್ರಮಣ ಮಾಡಿದ ಕಾಲದಲ್ಲಿ ಫ್ರೆಂಚ್ ಭಾಷೆಯ ಅನೇಕ ಪದಗಳು ಇಂಗ್ಲಿಷ್&zwnj;ಗೆ ಸೇರ್ಪಡೆಗೊಂಡವು. ಕಾಲಾನಂತರದಲ್ಲಿ 'ಮೌಟನ್' ಎಂಬ ಪದವೇ ಬದಲಾಗಿ 'ಮಟನ್' (Mutton) ಎಂದಾಯಿತು.&lt;/p&gt;&lt;img&gt;&lt;p&gt;ಬ್ರಿಟಿಷರು ಭಾರತವನ್ನು ಆಳಿದ ಸಮಯದಲ್ಲಿ, ಅವರು ಕುರಿ ಮಾಂಸಕ್ಕೆ ಬಳಸುತ್ತಿದ್ದ 'ಮಟನ್' ಪದವು ಭಾರತೀಯರಿಗೂ ರೂಢಿಯಾಯಿತು. ಅಂದಿನಿಂದ ಇಂದಿನವರೆಗೂ ನಾವು ಕುರಿ ಮಾಂಸವನ್ನು ಮಟನ್ ಎಂದೇ ಕರೆಯುತ್ತಿದ್ದೇವೆ. ಇದರ ಬದಲಾಗಿ ನಾವು ಕನ್ನಡ ಭಾಷೆಯಲ್ಲಿ ಕುರಿಮಾಂಸ ಎಂದು ಕರೆದರೆ ಆಯಾ ಭಾಷೆಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಕರೆಯುತ್ತಾರೆ.&lt;/p&gt;&lt;p&gt;ಬಹುತೇಕರು ಬ್ರಿಟೀಷರು ಬಳಸಿದ ಮಟನ್ ಪದವನ್ನೇ ಬಳಕೆ ಮಾಡುವುದು ರೂಢಿಯಲ್ಲಿದೆ. ಇನ್ನು ಮಾಂಸವನ್ನು ಕತ್ತರಿಸಿ ಕೊಡುವ ವಿಭಿನ್ನ ಮಾದರಿಗಳಿಂದಾಗಿ ಗುಡ್ಡೆಮಾಂಸ, ತಲೆ-ಕಾಲು, ಬೋಟಿ-ಲಿವರ್, ತೊಡೆಮಾಂಸ ಹೀಗೆ ವಿಭಿನ್ನವಾಗಿ ಹೇಳುತ್ತಾರೆ.&lt;/p&gt;&lt;img&gt;&lt;p&gt;ಬಹಳಷ್ಟು ಜನರಿಗೆ ಇರುವ ಗೊಂದಲವೆಂದರೆ ಕುರಿ ಮತ್ತು ಮೇಕೆ ಎರಡರ ಮಾಂಸವನ್ನೂ ಮಟನ್ ಎಂದು ಕರೆಯುವುದು. ಆದರೆ ತಾಂತ್ರಿಕವಾಗಿ ಮೇಕೆ ಮಾಂಸಕ್ಕೆ ಮಟನ್ ಎಂದು ಕರೆಯುವುದಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಕೆ ಮಾಂಸವನ್ನು &lt;strong&gt;'ಶೆವಾನ್' (Chevon) &lt;/strong&gt;ಎಂದು ಕರೆಯುತ್ತಾರೆ. ಇದು ಕೂಡ ಫ್ರೆಂಚ್ ಪದವಾದ 'ಚೆವ್ರೆ' (Chevre - ಮೇಕೆ) ಇಂದ ಬಂದಿದೆ. ಕೆಲವೆಡೆ ಇದನ್ನು ಕೇವಲ &lt;strong&gt;'ಗೋಟ್ ಮೀಟ್' (Goat Meat)&lt;/strong&gt; ಎಂದೂ ಕರೆಯಲಾಗುತ್ತದೆ.&lt;/p&gt;&lt;img&gt;&lt;p&gt;ವಿದೇಶಗಳಲ್ಲಿ ಕುರಿ ಮಾಂಸದ ವಯಸ್ಸಿನ ಆಧಾರದ ಮೇಲೆ ಎರಡು ಹೆಸರುಗಳನ್ನು ಬಳಸಲಾಗುತ್ತದೆ:&lt;/p&gt;&lt;p&gt;&lt;strong&gt;ಲ್ಯಾಂಬ್ (Lamb): &lt;/strong&gt;ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಳೆಯ ಕುರಿಮರಿಯ ಮಾಂಸವನ್ನು 'ಲ್ಯಾಂಬ್' ಎನ್ನಲಾಗುತ್ತದೆ. ಇದು ತುಂಬಾ ಮೃದುವಾಗಿರುತ್ತದೆ.&lt;/p&gt;&lt;p&gt;&lt;strong&gt;ಮಟನ್ (Mutton): &lt;/strong&gt;ಒಂದು ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಬಲಿತ ಕುರಿಯ ಮಾಂಸವನ್ನು 'ಮಟನ್' ಎಂದು ಕರೆಯಲಾಗುತ್ತದೆ. ಇದರ ರುಚಿ ಎಳೆಯ ಮಾಂಸಕ್ಕಿಂತ ಸ್ವಲ್ಪ ಭಿನ್ನವಾಗಿರುತ್ತದೆ.&lt;/p&gt;&lt;img&gt;&lt;p&gt;ಪಾಶ್ಚಿಮಾತ್ಯ ದೇಶಗಳಲ್ಲಿ ಕುರಿ ಮತ್ತು ಮೇಕೆ ಮಾಂಸಕ್ಕೆ ಸ್ಪಷ್ಟ ವ್ಯತ್ಯಾಸವಿದ್ದರೂ, ಭಾರತದಲ್ಲಿ ಮಾತ್ರ ಮೇಕೆ ಅಥವಾ ಕುರಿ ಎರಡನ್ನೂ ಸಾಮಾನ್ಯವಾಗಿ 'ಮಟನ್' ಎಂದೇ ಕರೆಯುವುದು ವಾಡಿಕೆ. ಹೋಟೆಲ್ ಇರಲಿ ಅಥವಾ ಮಾಂಸದ ಅಂಗಡಿ ಇರಲಿ, ನಾವು ಕೇಳುವುದು ಮಟನ್ ಎಂದೇ! ಮುಂದಿನ ಬಾರಿ ನೀವು ಭಾನುವಾರ ಮಟನ್ ಊಟ ಮಾಡುವಾಗ, ಈ ಕುತೂಹಲಕಾರಿ ಇತಿಹಾಸವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ!&lt;/p&gt;]]></content:encoded>
            <category><![CDATA[life]]></category>
            <dc:creator>Sathish Kumar KH</dc:creator>
            <atom:link href="https://kannada.asianetnews.com/gallery/life/why-is-sheep-meat-called-mutton-do-you-know-real-name-for-goat-meat-3mhl6f5"/>
        </item>
        <item>
            <title><![CDATA[ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!]]></title>
            <link>https://kannada.asianetnews.com/sandalwood/shivarajkumar-and-dhananjay-starrer-movie-666-operation-dream-theater-sounds-in-sandalwood-videoshow-ztpnfzu</link>
            <guid isPermaLink="true">https://kannada.asianetnews.com/sandalwood/shivarajkumar-and-dhananjay-starrer-movie-666-operation-dream-theater-sounds-in-sandalwood-videoshow-ztpnfzu</guid>
            <pubDate>Sun, 05 Jul 2026 15:38:32 +0530</pubDate>
            <description><![CDATA[666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ, ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ. ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸ್ಟೈಲ್ ಸಿನಿಮಾ…]]></description>
            <media:content url="https://geo.dailymotion.com/player/x1tbu.html?video=xalb2wu" medium="video" height="768" width="1024"/>
            <content:encoded><![CDATA[&lt;p&gt;ಶಿವಣ್ಣ ಕರಿಯರ್&zwnj;ನಲ್ಲೇ ಮೋಸ್ಟ್ ಸ್ಪೆಷಲ್ ಸಿನಿಮಾ! ಏನಿದು 666 ಆಪರೇಷನ್ ಡ್ರೀಮ್ ಥಿಯೇಟರ್..?666 ಆಪರೇಷನ್ ಡ್ರೀಮ್ ಥಿಯೇಟರ್: ಈ ಚಿತ್ರ ಘೋಷಣೆಯಾದ ದಿನದಿಂದಲೂ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ 'ಸಪ್ತ'ಸಾಗರದಾಚೆ ಎಲ್ಲೋ' ಖ್ಯಾತಿಯ ಹೇಮಂತ್ ರಾವ್ ನಿರ್ದೇಶನ... ಮತ್ತೊಮ್ಮೆ ಶಿವಣ್ಣ-ಡಾಲಿ ಜೊತೆಯಾಟ... ಎಲ್ಲಕ್ಕಿಂತ ಹೆಚ್ಚಾಗಿ ಅಣ್ಣಾವ್ರ ಬಾಂಡ್ ಸಿನಿಮಾ ಸ್ಟೈಲ್​ನ ಗೆಟಪ್ಸ್.. ರೆಟ್ರೋ ಪೋಸ್ಟರ್ಸ್ ಫ್ಯಾನ್ಸ್ ಗಮನ ಸೆಳೆದಿದ್ವು. ಇದೀಗ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಧೂಳ್ ಎಬ್ಬಿಸ್ತಾ ಇದೆ.&lt;/p&gt;&lt;p&gt;ಅಸಲಿಗೆ ಶಿವಣ್ಣನ ಜೊತೆಗೆ ಸಿನಿಮಾ ಮಾಡಬೇಕು ಅಂತ ಫಿಕ್ಸ್ ಆಗಿದ್ದ ನಿರ್ದೇಶಕ ಹೇಮಂತ್ ಶಿವಣ್ಣನಿಗಾಗೇ ಈ ಕಥೆ ಮಾಡಿದ್ದಂತೆ. ಬಾಂಡ್ ಶೈಲಿಯ ಕಥೆ ಹೆಣೆದು ಶಿವಣ್ಣನನ್ನ ಅಣ್ಣಾವ್ರ ರೀತಿ ತೆರೆ ಮೇಲೆ ತೋರಿಸಿದ್ದಾರೆ ಹೇಮಂತ್.&lt;/p&gt;&lt;p&gt;ಡಾ. ರಾಜಕುಮಾರ್ ನಟನೆಯ ಬಾಂಡ್ ಸಿನಿಮಾಗಳಲ್ಲಿ ಅವರ ಪಾತ್ರಕ್ಕೆ ಪ್ರಕಾಶ್ ಅನ್ನೋ ಹೆಸರು ಇರ್ತಾ ಇತ್ತು. ಅದೇ ಹೆಸರಿನ ಪಾತ್ರವನ್ನೆ ಶಿವಣ್ಣ ಇಲ್ಲಿ ಮಾಡಿದ್ದಾರೆ. ಡಾಲಿ ಧನಂಜಯ್ ಇಲ್ಲಿ ಶಂಕರ್ ಅನ್ನೋ ಪಾತ್ರ ನಿರ್ವಹಿಸಿದ್ದಾರೆ.&lt;/p&gt;&lt;p&gt;ಪ್ರಿಯಾಂಕಾ ಮೋಹನ್ ಸೇರಿದಂತೆ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಶಿವರಾಜ್&zwnj;ಕುಮಾರ್ ಇದೂವರೆಗೂ 130 ಪ್ಲಸ್ ಸಿನಿಮಾ ಮಾಡಿದ್ದಾರೆ. ಅವರನ್ನ ಫ್ಯಾನ್ಸ್ ಕೂಡ ನೂರಾರು ಅವತಾರದಲ್ಲಿ ನೋಡಿದ್ದಾರೆ. ಈ ಸಿನಿಮಾ ಶಿವಣ್ಣನ ಪಾಲಿಗೂ ಸ್ಪೆಷಲ್.. ಫ್ಯಾನ್ಸ್​ಗೂ ಸಖತ್ ಟ್ರೀಟ್ ಕೊಡೋದ್ರಲ್ಲಿ ಡೌಟೇ ಇಲ್ಲ...!'ಸಿನಿಮಾ ಹಂಗಾಮ' ನೋಡಿ...&lt;/p&gt;]]></content:encoded>
            <category><![CDATA[sandalwood]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/shivarajkumar-and-dhananjay-starrer-movie-666-operation-dream-theater-sounds-in-sandalwood-videoshow-ztpnfzu"/>
        </item>
        <item>
            <title><![CDATA[ಅಕ್ಟೋಬರ್ ಅಂತ್ಯದವರೆಗೆ ಗುರು ಮತ್ತು ರಾಹುವಿನ ಬಲದಿಂದ ಈ 6 ರಾಶಿಗೆ ಸುವರ್ಣ ಸಮಯ]]></title>
            <link>https://kannada.asianetnews.com/gallery/festivals/astrology-transit-predictions-for-6-lucky-zodiac-signs-guru-rahu-transit-suh-qdas28y</link>
            <guid isPermaLink="true">https://kannada.asianetnews.com/gallery/festivals/astrology-transit-predictions-for-6-lucky-zodiac-signs-guru-rahu-transit-suh-qdas28y</guid>
            <pubDate>Sun, 05 Jul 2026 15:30:38 +0530</pubDate>
            <description><![CDATA[ಜುಲೈ 7 ರಿಂದ ಅಕ್ಟೋಬರ್ ಅಂತ್ಯದವರೆಗೆ ಆ 6 ರಾಶಿಚಕ್ರ ಚಿಹ್ನೆಗಳ ಗ್ರಹಬಲವು ಹೆಚ್ಚಾಗಲಿದೆ.. ವಿದೇಶಿ ಉದ್ಯೋಗಗಳು, ಸ್ವಂತ ಮನೆ ಮತ್ತು ಷೇರು ಮಾರುಕಟ್ಟೆ ಲಾಭಕ್ಕಾಗಿ ಸಂಪೂರ್ಣ ಜಾತಕವನ್ನು ಇಲ್ಲಿ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kwgk1tbgk8gzw16sbkayvxzg,imgname-mars-yoga-due-to-rahu-and-mars-these-3-zodiac-signs-may-face-difficulties-1782968281456.jpg" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ 7 ರಿಂದ ಅಕ್ಟೋಬರ್ ಅಂತ್ಯದವರೆಗೆ ಆ 6 ರಾಶಿಚಕ್ರ ಚಿಹ್ನೆಗಳ ಗ್ರಹಬಲವು ಹೆಚ್ಚಾಗಲಿದೆ.. ವಿದೇಶಿ ಉದ್ಯೋಗಗಳು, ಸ್ವಂತ ಮನೆ ಮತ್ತು ಷೇರು ಮಾರುಕಟ್ಟೆ ಲಾಭಕ್ಕಾಗಿ ಸಂಪೂರ್ಣ ಜಾತಕವನ್ನು ಇಲ್ಲಿ ನೋಡಿ.&lt;/p&gt;&lt;img&gt;&lt;p&gt;ನಾಯಕತ್ವದ ಗುಣಗಳು, ಒಗ್ಗಟ್ಟಿನ ಪ್ರಜ್ಞೆ, ದೂರದೃಷ್ಟಿ, ತಂತ್ರ ಬರೆಯುವ ಸಾಮರ್ಥ್ಯ, ಯೋಜನೆ ಮತ್ತು ತುರ್ತು ಪ್ರಜ್ಞೆಯನ್ನು ಹೊಂದಿರುವ ಈ ರಾಶಿಚಕ್ರ ಚಿಹ್ನೆಯು ತನ್ನ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಕೆಲವು ಕೌಶಲ್ಯಗಳು ಮತ್ತು ಕೆಲವು ಸಂಪರ್ಕಗಳನ್ನು ಹೊಂದಿರುವ ಜನರು ನಿರೀಕ್ಷೆಗಳನ್ನು ಮೀರಿ ಪ್ರಗತಿ ಸಾಧಿಸಲು ಸಾಧ್ಯವಿದೆ. ಆದಾಯದ ಬೆಳವಣಿಗೆಯೊಂದಿಗೆ, ಉದ್ಯೋಗದಲ್ಲಿ ತ್ವರಿತ ಪ್ರಗತಿಯ ಸಾಧ್ಯತೆಯಿದೆ. ಸ್ವಂತ ಮನೆ ಹೊಂದುವ ಅವರ ಕನಸು ನನಸಾಗುತ್ತದೆ. ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ವಿದೇಶದಲ್ಲಿ ಕೆಲಸ ಮಾಡುವ ಭರವಸೆ ನನಸಾಗುತ್ತದೆ.&lt;/p&gt;&lt;img&gt;&lt;p&gt;ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ಪರಿಶ್ರಮದಂತಹ ಗುಣಗಳನ್ನು ಹೊಂದಿರುವ ಈ ರಾಶಿಚಕ್ರದ ಜನರು ಕೆಲಸದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸುತ್ತಾರೆ ಮತ್ತು ಉನ್ನತ ಹುದ್ದೆಗಳನ್ನು ಗಳಿಸುತ್ತಾರೆ. ಅವರು ಇತರರಿಂದ ವಿಭಿನ್ನ ಮಾರ್ಗಗಳನ್ನು ಅನುಸರಿಸುವ ಮೂಲಕ ಉತ್ತಮ ಮನ್ನಣೆಯನ್ನು ಪಡೆಯುತ್ತಾರೆ. ಅವರು ಸತತವಾಗಿ ಎರಡು ಬಾರಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ಅವರು ವಿವಿಧ ವಿಧಾನಗಳು ಮತ್ತು ವಿಧಾನಗಳನ್ನು ಅನುಸರಿಸುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮನಸ್ಸಿನ ಪ್ರಮುಖ ಆಸೆಗಳು ಮತ್ತು ಭರವಸೆಗಳು ಖಂಡಿತವಾಗಿಯೂ ಈಡೇರುತ್ತವೆ.&lt;/p&gt;&lt;img&gt;&lt;p&gt;ನಾಯಕತ್ವದ ಗುಣಗಳ ಜೊತೆಗೆ, ಹಠಮಾರಿಗಳಾದ ಈ ರಾಶಿಚಕ್ರ ಚಿಹ್ನೆಗಳು ಯಾವುದೇ ಅವಕಾಶವನ್ನು ಎಂದಿಗೂ ಬಿಡುವುದಿಲ್ಲ. ಅವರು ಚಿಕ್ಕ ಅವಕಾಶವನ್ನು ಸಹ ಸದುಪಯೋಗಪಡಿಸಿಕೊಳ್ಳುತ್ತಾರೆ. ಅದು ಉದ್ಯೋಗ, ವೃತ್ತಿ ಅಥವಾ ವ್ಯವಹಾರವಾಗಿರಲಿ, ಅವರು ಅದರ ಮೇಲೆ ತಮ್ಮ ಗುರುತು ಬಿಡುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅವರು ಪ್ರತಿಯೊಂದು ಕೆಲಸ ಮತ್ತು ಪ್ರತಿಯೊಂದು ವ್ಯವಹಾರದಲ್ಲಿ ತಮ್ಮ ವಿಶಿಷ್ಟತೆಯನ್ನು ತೋರಿಸುತ್ತಾರೆ. ಅವರು ತಮ್ಮ ಗೆಳೆಯರೊಂದಿಗೆ ಸ್ಪರ್ಧಿಸುತ್ತಾರೆ ಮತ್ತು ಆದಾಯ ಬೆಳವಣಿಗೆಯಲ್ಲಿ ಮೊದಲ ಸ್ಥಾನವನ್ನು ತಲುಪುತ್ತಾರೆ. ಯಾವುದೇ ಕ್ಷೇತ್ರದಲ್ಲಿ, ಅವರು ತಮ್ಮ ದಕ್ಷತೆಯಿಂದ ಮೇಲಕ್ಕೆ ಏರುತ್ತಾರೆ.&lt;/p&gt;&lt;img&gt;&lt;p&gt;ಏಕಕಾಲದಲ್ಲಿ ಅನೇಕ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಎಲ್ಲರನ್ನೂ ಒಟ್ಟುಗೂಡಿಸುವ ಈ ರಾಶಿಯವರು, ತಮ್ಮ ವೃತ್ತಿ ಮತ್ತು ಉದ್ಯೋಗಗಳಲ್ಲಿ ತಮ್ಮ ಪರಿಣಾಮಕಾರಿತ್ವವನ್ನು ಸಾಬೀತುಪಡಿಸುವುದರ ಜೊತೆಗೆ ತಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಿಕೊಳ್ಳುತ್ತಾರೆ. ಪ್ರತಿಯೊಂದು ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತ್ತಾರೆ ಮತ್ತು ತಮ್ಮ ಕೆಲಸದಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತಾರೆ. ಇದರ ನಾಯಕತ್ವದಲ್ಲಿ, ವೃತ್ತಿ ಮತ್ತು ವ್ಯವಹಾರವು ಖಂಡಿತವಾಗಿಯೂ ಹೊಸ ಎತ್ತರವನ್ನು ತಲುಪುತ್ತದೆ. ಈ ರಾಶಿಚಕ್ರ ಚಿಹ್ನೆಯ ಉದ್ಯೋಗಿಗಳು ಮತ್ತು ನಿರುದ್ಯೋಗಿಗಳು ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.&lt;/p&gt;&lt;img&gt;&lt;p&gt;ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸಲು ಸಿದ್ಧರಾಗಿರುವ ಈ ರಾಶಿಯವರು, ತಾವು ಬಯಸಿದ್ದನ್ನು ವಿಫಲವಾಗದೆ ಸಾಧಿಸುತ್ತಾರೆ. ಅವರು ತಮ್ಮ ಜೀವನವನ್ನು ಬಹಳವಾಗಿ ಸುಧಾರಿಸುತ್ತಾರೆ. ತಂತ್ರ ಬರೆಯುವಲ್ಲಿ, ಆತ್ಮವಿಶ್ವಾಸದಲ್ಲಿ ಮತ್ತು ಹಠಮಾರಿತನದಲ್ಲಿ ಅವರು ತಮ್ಮ ಸಮಾನರು. ಯಾವುದೇ ಬೆಲೆಗೆ ಸೋಲನ್ನು ಒಪ್ಪಿಕೊಳ್ಳದ ಈ ರಾಶಿಯವರು, ಕಡಿಮೆ ಪ್ರಯತ್ನದಿಂದ ಏನನ್ನೂ ಸಾಧಿಸುತ್ತಾರೆ. ಅವರು ಯಾವುದೇ ಮಟ್ಟದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಶ್ರೀಮಂತರ ಪಟ್ಟಿಗೆ ಸೇರುತ್ತಾರೆ. ಅವರು ಎಲ್ಲದರಲ್ಲೂ ಮೇಲುಗೈ ಸಾಧಿಸುತ್ತಾರೆ.&lt;/p&gt;&lt;img&gt;&lt;p&gt;ಸಾಹಸ, ಪರಿಶ್ರಮ ಮತ್ತು ಸಂಪೂರ್ಣ ಆತ್ಮವಿಶ್ವಾಸದ ಮನೋಭಾವ ಹೊಂದಿರುವ ಈ ರಾಶಿಚಕ್ರ ಚಿಹ್ನೆಗಳು ಮಹತ್ವಾಕಾಂಕ್ಷೆಗೆ ಸಮಾನಾರ್ಥಕವಾಗಿವೆ. ಅವರು ಈ ಕ್ಷೇತ್ರದಲ್ಲಿ ತಮ್ಮ ಅನನ್ಯತೆಯನ್ನು ಸಾಬೀತುಪಡಿಸುತ್ತಾರೆ. ಅವರು ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾರೆ. ಅವರು ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಹರಿತಗೊಳಿಸಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವುದು ಖಚಿತ. ಅವರು ತಮ್ಮ ಆದಾಯವನ್ನು ಹೆಚ್ಚಿಸಲು ಷೇರುಗಳು ಮತ್ತು ಊಹಾಪೋಹಗಳು ಸೇರಿದಂತೆ ಹಲವು ಮಾರ್ಗಗಳನ್ನು ಅನುಸರಿಸುವ ಮೂಲಕ ಅನಿರೀಕ್ಷಿತ ಯಶಸ್ಸನ್ನು ಸಾಧಿಸುತ್ತಾರೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/astrology-transit-predictions-for-6-lucky-zodiac-signs-guru-rahu-transit-suh-qdas28y"/>
        </item>
        <item>
            <title><![CDATA[ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್]]></title>
            <link>https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p</link>
            <guid isPermaLink="true">https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p</guid>
            <pubDate>Sun, 05 Jul 2026 15:23:05 +0530</pubDate>
            <description><![CDATA[Viral transformation video: ವಯಸ್ಸಾಗುವುದು ಪ್ರಕೃತಿ ನಿಯಮ, ಆದರೆ ಅದನ್ನು ಮೀರಿ ನಿಂತಿರುವ 57 ವರ್ಷದ ವ್ಯಕ್ತಿಯ ಕಥೆ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಬೆಳಗ್ಗೆ 57ರ ವಯೋವೃದ್ಧನಂತೆ ಕಾಣುವ ಈ ವ್ಯಕ್ತಿ, ಮಧ್ಯಾಹ್ನವಾಗುವಷ್ಟರಲ್ಲಿ 25ರ ಯುವಕನಾಗಿ ಹೇಗೆ ಬದಲಾಗುತ್ತಾರೆ? ಸರ್ಜರಿ ಇಲ್ಲದೆ ಯೌವನ ಕಾಪಾಡಿಕೊಳ್ಳುವ ಈ ವ್ಯಕ್ತಿಯ ರಹಸ್ಯ ಇಲ್ಲಿದೆ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrv14g5sm2sc63cre55npk3,imgname-thumbnail--84--1783245083141.jpg" type="image/jpeg" height="390" width="690"/>
            <content:encoded><![CDATA[&lt;p&gt;&quot;ವಯಸ್ಸು ಕೇವಲ ಒಂದು ಸಂಖ್ಯೆ&quot; ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಅದನ್ನು ಕಣ್ಣಿಗೆ ಕಟ್ಟುವಂತೆ ಸಾಬೀತುಪಡಿಸುವುದು ಸುಲಭದ ಮಾತಲ್ಲ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 57 ವರ್ಷದ ವ್ಯಕ್ತಿಯೊಬ್ಬರ ವಿಡಿಯೋ ಈ ಮಾತಿಗೆ ಹೊಸ ಅರ್ಥ ನೀಡಿದೆ. ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಕೃತಕ ಚಿಕಿತ್ಸೆಗಳಿಲ್ಲದೆ, ಕೇವಲ ಶಿಸ್ತಿನ ಜೀವನಶೈಲಿ ಮತ್ತು ಅಚ್ಚುಕಟ್ಟಾದ ಚರ್ಮದ ಆರೈಕೆಯ ಮೂಲಕ ಈ ವ್ಯಕ್ತಿ 25 ವರ್ಷದ ಯುವಕನಂತೆ ಕಾಣುವ ಮೂಲಕ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದ್ದಾರೆ. ಅವರ ಈ ಆಘಾತಕಾರಿ ರೂಪಾಂತರದ ಹಿಂದೆ ಅಡಗಿರುವ ರಹಸ್ಯಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿಯೋಣ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಕಚೇರಿ, ದೊಡ್ಡ ಬಂಡವಾಳ ಏನೂ ಇಲ್ಲ.. ಅಂದು Zomato ರೈಡರ್ ಈಗ ಬೆಂಗಳೂರಿನ ಎಐ ಕಂಪನಿಯ ಸಿಇಒ&lt;/strong&gt;&lt;/p&gt;&lt;h2&gt;&lt;strong&gt;25 ವರ್ಷದ ಕಾಲೇಜು ಯುವಕನಂತೆ ಪ್ರತ್ಯಕ್ಷ&lt;/strong&gt;&lt;/h2&gt;&lt;p&gt;ಈ ವೈರಲ್ ವಿಡಿಯೋದ ವಿಶೇಷತೆಯೆಂದರೆ, ಆ ವ್ಯಕ್ತಿ ಬೆಳಗ್ಗೆ ನಿದ್ರೆಯಿಂದ ಎದ್ದಾಗ ಅಪ್ಪಟ 57 ವರ್ಷದ ವೃದ್ಧನಂತೆ ಕಾಣುತ್ತಾರೆ. ಬೆಳಗ್ಗೆ ಅವರ ಮುಖ ದಣಿದಿರುತ್ತದೆ, ಕೂದಲು ಹರಡಿಕೊಂಡಿರುತ್ತದೆ ಮತ್ತು ಚರ್ಮದ ಮೇಲೆ ವಯಸ್ಸಾದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಆದರೆ, ಅವರು ತಮ್ಮ ಚರ್ಮದ ಆರೈಕೆ (Skincare Routine) ಮತ್ತು ಸೌಂದರ್ಯ ವರ್ಧಕಗಳ ಬಳಕೆಯನ್ನು ಆರಂಭಿಸಿದ ತಕ್ಷಣ ಪವಾಡದಂತೆ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಮುಖದ ಮೇಲೆ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮೊಯಿಶ್ಚರೈಸಿಂಗ್ ಹಂತಗಳನ್ನು ಮುಗಿಸಿ, ವಿಶೇಷ ಸೀರಮ್&zwnj;ಗಳನ್ನು ಹಚ್ಚಿದ ನಂತರ ಅವರ ಚರ್ಮವು ಗಾಜಿನಂತೆ ಹೊಳೆಯಲು ಪ್ರಾರಂಭಿಸುತ್ತದೆ. ಅಂತಿಮವಾಗಿ ಅವರು ಸ್ಟೈಲಿಶ್ ವಿಗ್ ಧರಿಸಿ, ಆಕರ್ಷಕ ಬಟ್ಟೆ ತೊಟ್ಟು ಕೆಮರಾದ ಮುಂದೆ ಬಂದಾಗ, 25 ವರ್ಷದ ಕಾಲೇಜು ಯುವಕ ಪ್ರತ್ಯಕ್ಷನಾದಂತೆ ಭಾಸವಾಗುತ್ತದೆ.&lt;/p&gt;&lt;h2&gt;&lt;strong&gt;ಇದೇ ನೋಡಿ ಆ ನಾಲ್ಕು ಪ್ರಮುಖ ರಹಸ್ಯ&lt;/strong&gt;&lt;/h2&gt;&lt;p&gt;ಈ ಅದ್ಭುತ ಯೌವನದ ಹಿಂದೆ ನಾಲ್ಕು ಪ್ರಮುಖ ರಹಸ್ಯಗಳಿವೆ. ಮೊದಲನೆಯದಾಗಿ, ಕಟ್ಟುನಿಟ್ಟಿನ ಸ್ಕಿನ್&zwnj;ಕೇರ್. ಅವರು ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್&zwnj;ಸ್ಕ್ರೀನ್ ಅನ್ನು ತಪ್ಪದೇ ಬಳಸುತ್ತಾರೆ. ಇದು ಚರ್ಮದ ಮೇಲೆ ಸುಕ್ಕುಗಳು ಬರದಂತೆ ತಡೆಯುತ್ತದೆ. ಎರಡನೆಯದಾಗಿ, ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿರುವ ಆಹಾರ ಪದ್ಧತಿ. ಹಣ್ಣುಗಳು, ಹಸಿರು ತರಕಾರಿಗಳು ಮತ್ತು ಸಾವಯವ ಆಹಾರವು ಅವರ ದೇಹಕ್ಕೆ ಒಳಗಿನಿಂದ ಪೋಷಣೆ ನೀಡುತ್ತದೆ. ಮೂರನೆಯದಾಗಿ, ದೈಹಿಕ ವ್ಯಾಯಾಮ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುವುದರಿಂದ ದೇಹದ ರಕ್ತ ಸಂಚಾರ ಸುಧಾರಿಸಿ ಮುಖದಲ್ಲಿ ನೈಸರ್ಗಿಕ ಕಾಂತಿ ಉಂಟಾಗುತ್ತದೆ. ಕೊನೆಯದಾಗಿ, ಮಾನಸಿಕ ನೆಮ್ಮದಿ ಮತ್ತು ಸಮರ್ಪಕ ನಿದ್ರೆ. ಒತ್ತಡ ಮುಕ್ತ ಜೀವನಶೈಲಿಯು ಜೀವಕೋಶಗಳ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಎಂದು ಅವರು ನಂಬುತ್ತಾರೆ.&lt;/p&gt;&lt;h2&gt;&lt;strong&gt;ಈ ವ್ಯಕ್ತಿಯೇ ಉದಾಹರಣೆ&lt;/strong&gt;&lt;/h2&gt;&lt;p&gt;ಈ ಶಾಕಿಂಗ್ ಬದಲಾವಣೆಯನ್ನು ಕಂಡು ನೆಟ್ಟಿಗರು ಇವರನ್ನು ರಿಯಲ್ ಲೈಫ್ &quot;ಬೆಂಜಮಿನ್ ಬಟನ್&quot; (ವಯಸ್ಸು ಹಿಂದೆ ಸರಿಯುವ ಪಾತ್ರ) ಎಂದು ಕರೆಯುತ್ತಿದ್ದಾರೆ. ಈ ವೈರಲ್ ಸ್ಟೋರಿ ನಮಗೆ ಹೇಳುವುದು ಒಂದೇ.. ವಯಸ್ಸಾಗುವುದು ಪ್ರಕೃತಿ ನಿಯಮವಾದರೂ, ಸರಿಯಾದ ಜೀವನಶೈಲಿ ಮತ್ತು ನಮ್ಮ ಬಗ್ಗೆ ನಾವು ತೆಗೆದುಕೊಳ್ಳುವ ಕಾಳಜಿಯಿಂದ ವೃದ್ಧಾಪ್ಯವನ್ನು ದೀರ್ಘಕಾಲದವರೆಗೆ ಮುಂದೂಡಬಹುದು. ಆ ಮೂಲಕ ನಾವು ಯಾವಾಗಲೂ ಉತ್ಸಾಹಿ ಯುವಕರಂತೆ ಕಾಣಬಹುದು ಎಂಬುದಕ್ಕೆ ಈ ವ್ಯಕ್ತಿ ಶ್ರೇಷ್ಠ ಉದಾಹರಣೆಯಾಗಿದ್ದಾರೆ.&lt;/p&gt;&lt;h3&gt;&lt;strong&gt;ಇಲ್ಲಿದೆ ನೋಡಿ ವೈರಲ್ ವಿಡಿಯೋ&lt;/strong&gt;&lt;/h3&gt;&lt;p&gt;这段视频火了：&ldquo;男人要是好好打理仪表，竟然能改变到这种程度&rdquo;。网友评论：&ldquo;哥们刚醒来时57岁，途中变成了25岁。&rdquo; pic.twitter.com/qfWgioLo6A&lt;/p&gt;&lt;p&gt;&mdash; iPaul (@iPaulCanada) July 4, 2026&lt;/p&gt;]]></content:encoded>
            <category><![CDATA[Viral News]]></category>
            <dc:creator>Ashwini HR</dc:creator>
            <atom:link href="https://kannada.asianetnews.com/viral/57-in-the-morning-25-by-afternoon-the-viral-secret-of-this-mans-shocking-youthful-transformation/articleshow-3di3s4p"/>
        </item>
        <item>
            <title><![CDATA[ಬಿಷ್ಣೋಯಿ, ಅರ್ಷದೀಪ್ ಅಲ್ಲ.. ಒಂದೇ ಓವರ್‍‌ನಲ್ಲಿ ಅತೀ ಹೆಚ್ಚು ರನ್ ಕೊಟ್ಟ ಭಾರತೀಯ ಬೌಲರ್ ಯಾರು?]]></title>
            <link>https://kannada.asianetnews.com/cricket-sports/who-is-the-indian-bowler-who-conceded-the-most-runs-in-a-single-over-gkn/articleshow-onrzrrv</link>
            <guid isPermaLink="true">https://kannada.asianetnews.com/cricket-sports/who-is-the-indian-bowler-who-conceded-the-most-runs-in-a-single-over-gkn/articleshow-onrzrrv</guid>
            <pubDate>Sun, 05 Jul 2026 15:20:32 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ರವಿ ಬಿಷ್ಣೋಯಿ ಮತ್ತು ಅರ್ಷದೀಪ್ ಸಿಂಗ್ ದುಬಾರಿ ಓವರ್‌ಗಳನ್ನು ಎಸೆದು ಬೇಡದ ದಾಖಲೆ ಬರೆದಿದ್ದಾರೆ. ಬಿಷ್ಣೋಯಿ ಒಂದೇ ಓವರ್‌ನಲ್ಲಿ 29 ರನ್ ನೀಡಿದರೆ, ಅರ್ಷದೀಪ್ 27 ರನ್ ಬಿಟ್ಟುಕೊಟ್ಟರು. ಈ ದುಬಾರಿ ಓವರ್‌ಗಳು ಭಾರತದ ಸೋಲಿಗೆ ಪ್ರಮುಖ ಕಾರಣವಾದವು ಎಂದು ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrty7c4pxhmtv2hr2jqtf2e,imgname-shivam-dubey-ravi-bishnoi-arshdeep-singh-1783244987778.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಬೌಲರ್&zwnj;ಗಳು ರನ್ ಬಿಟ್ಟುಕೊಡುವಲ್ಲಿ ದಾಖಲೆ ಬರೆದಿದ್ದಾರೆ. ಅದರಲ್ಲೂ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಮತ್ತು ವೇಗಿ ಅರ್ಷದೀಪ್ ಸಿಂಗ್ ಒಂದೇ ಓವರ್&zwnj;ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್&zwnj;ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.&lt;/p&gt;&lt;p&gt;ಇಂಗ್ಲೆಂಡ್ ತಂಡ 191 ರನ್&zwnj;ಗಳ ಗುರಿ ಬೆನ್ನಟ್ಟುತ್ತಿದ್ದಾಗ ಕೊನೆಯ 5 ಓವರ್&zwnj;ಗಳಲ್ಲಿ 49 ರನ್&zwnj;ಗಳ ಅಗತ್ಯವಿತ್ತು. ಈ ಹಂತದಲ್ಲಿ ದಾಳಿಗಿಳಿದ ರವಿ ಬಿಷ್ಣೋಯಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಬಿಷ್ಣೋಯಿ ಎಸೆದ ಆ ಓವರ್&zwnj;ನಲ್ಲಿ ಬರೊಬ್ಬರಿ 29 ರನ್ ಹರಿದುಬಂದವು. ಆ ಓವರ್ ಮುಗಿಸಲು ಬಿಷ್ಣೋಯಿ ಒಟ್ಟು 9 ಎಸೆತಗಳನ್ನು ಎಸೆದರು (2 ನೋ-ಬಾಲ್ ಒಳಗೊಂಡಂತೆ). ಇಂಗ್ಲೆಂಡ್&zwnj;ನ ಜಾಕೋಬ್ ಬೆಥೆಲ್ ಈ ಓವರ್&zwnj;ನಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿ ಚಚ್ಚಿದರು. ಈ ಮೂಲಕ ಟಿ20 ಅಂತರಾಷ್ಟ್ರೀಯ ಕ್ರಿಕೆಟ್&zwnj;ನಲ್ಲಿ ಒಂದೇ ಓವರ್&zwnj;ನಲ್ಲಿ ಅತಿ ಹೆಚ್ಚು ರನ್ ನೀಡಿದ 3ನೇ ಭಾರತೀಯ ಬೌಲರ್ ಎಂಬ ಬೇಡದ ದಾಖಲೆ ಬಿಷ್ಣೋಯಿ ಪಾಲಾಯಿತು.&lt;/p&gt;&lt;h2&gt;&lt;strong&gt;ಅರ್ಷದೀಪ್ ಸಿಂಗ್ ಕೂಡ ದುಬಾರಿ&lt;/strong&gt;&lt;/h2&gt;&lt;p&gt;ಇನ್ನೊಂದೆಡೆ, ಆರಂಭದಲ್ಲಿ ವಿಕೆಟ್ ಉರುಳಿಸಿ ಭರವಸೆ ಮೂಡಿಸಿದ್ದ ಅರ್ಷದೀಪ್ ಸಿಂಗ್ ಕೂಡ ಒಂದು ಓವರ್&zwnj;ನಲ್ಲಿ ಪೆಟ್ಟು ತಿಂದರು. ಪಂದ್ಯದ ಮೂರನೇ ಓವರ್&zwnj;ನಲ್ಲಿ ಹ್ಯಾರಿ ಬ್ರೂಕ್ ಸತತ ಎರಡು ಬೌಂಡರಿ ಮತ್ತು ಸಿಕ್ಸರ್&zwnj;ಗಳ ಹ್ಯಾಟ್ರಿಕ್ ಬಾರಿಸುವ ಮೂಲಕ ಅರ್ಷದೀಪ್ ಓವರ್&zwnj;ನಲ್ಲಿ 27 ರನ್ ಕೊಳ್ಳೆ ಹೊಡೆದರು. ಈ ಮೂಲಕ ಅರ್ಷದೀಪ್, ಇತ್ತೀಚೆಗಷ್ಟೇ ಐರ್ಲೆಂಡ್ ವಿರುದ್ಧ 27 ರನ್ ನೀಡಿದ್ದ ಪ್ರಸಿದ್ಧ ಕೃಷ್ಣ ಅವರ ದಾಖಲೆಯನ್ನು ಸರಿದೂಗಿಸಿದರು. ಆದರೆ ನಂತರದ ಓವರ್&zwnj;ನಲ್ಲಿ ಕೇವಲ 3 ರನ್ ನೀಡಿ ಟಾಮ್ ಬ್ಯಾಂಟನ್ ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಅದ್ಭುತವಾಗಿ ಪುಟಿದೆದ್ದರು.&lt;/p&gt;&lt;h3&gt;&lt;strong&gt;ಒಂದೇ ಓವರ್&zwnj;ನಲ್ಲಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್&zwnj;ಗಳು&lt;/strong&gt;&lt;/h3&gt;&lt;ol&gt; &lt;li&gt;ಶಿವಂ ದುಬೆ: 34 ರನ್ (ವಿರುದ್ಧ ನ್ಯೂಜಿಲೆಂಡ್, 2020)&lt;/li&gt; &lt;li&gt;ಸ್ಟುವರ್ಟ್ ಬಿನ್ನಿ: 32 ರನ್ (ವಿರುದ್ಧ ವೆಸ್ಟ್ ಇಂಡೀಸ್)&lt;/li&gt; &lt;li&gt;ರವಿ ಬಿಷ್ಣೋಯಿ: 29 ರನ್ (ವಿರುದ್ಧ ಇಂಗ್ಲೆಂಡ್, 2024)&lt;/li&gt; &lt;li&gt;ಅರ್ಶ್&zwnj;ದೀಪ್ ಸಿಂಗ್: 27 ರನ್ (ವಿರುದ್ಧ ಇಂಗ್ಲೆಂಡ್, 2024)&lt;/li&gt; &lt;li&gt;ಪ್ರಸಿದ್ಧ ಕೃಷ್ಣ: 27 ರನ್ (ವಿರುದ್ಧ ಐರ್ಲೆಂಡ್)&lt;/li&gt;&lt;/ol&gt;&lt;h3&gt;&lt;strong&gt;ಅಗ್ರಸ್ಥಾನದಲ್ಲಿ ಶಿವಂ ದುಬೆ&lt;/strong&gt;&lt;/h3&gt;&lt;p&gt;ಈ ಪಟ್ಟಿಯಲ್ಲಿ ಇಂದಿಗೂ ಶಿವಂ ದುಬೆ ಅಗ್ರಸ್ಥಾನದಲ್ಲಿದ್ದಾರೆ. 2020ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ದುಬೆ ಒಂದೇ ಓವರ್&zwnj;ನಲ್ಲಿ 34 ರನ್ ಬಿಟ್ಟುಕೊಟ್ಟಿದ್ದರು. ಅವರ ನಂತರದ ಸ್ಥಾನದಲ್ಲಿ ಸ್ಟುವರ್ಟ್ ಬಿನ್ನಿ (32 ರನ್) ಇದ್ದಾರೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ಬೌಲರ್&zwnj;ಗಳು ನೀಡಿದ ಈ ದುಬಾರಿ ಓವರ್&zwnj;ಗಳೇ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಬಹುದು.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/who-is-the-indian-bowler-who-conceded-the-most-runs-in-a-single-over-gkn/articleshow-onrzrrv"/>
        </item>
        <item>
            <title><![CDATA[ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ರಿಷಬ್ ಶೆಟ್ಟಿ; ಸಿಎಂ ಜೊತೆ ಮಹತ್ವದ ಚರ್ಚೆ ನಡೆಸಿದ ನಟ]]></title>
            <link>https://kannada.asianetnews.com/sandalwood/sandalwood-actor-rishab-shetty-meets-cm-dk-shivakumar-in-his-residence-and-had-important-meeting-with-him/articleshow-za0tnlb</link>
            <guid isPermaLink="true">https://kannada.asianetnews.com/sandalwood/sandalwood-actor-rishab-shetty-meets-cm-dk-shivakumar-in-his-residence-and-had-important-meeting-with-him/articleshow-za0tnlb</guid>
            <pubDate>Sun, 05 Jul 2026 15:04:04 +0530</pubDate>
            <description><![CDATA[ಇತ್ತಿಚಿಗಷ್ಟೇ ಕರಾವಳಿ, ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿರುವ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಆಗಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿಯವರು ಸಿಎಂ ಡಿಕೆ ಶಿವಕುಮಾರ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrsz1ny8w3xm5k5q5v621k3,imgname-rishab-shetty-dk-shivakumar--1--1783243966141.jpg" type="image/jpeg" height="390" width="690"/>
            <content:encoded><![CDATA[&lt;p&gt;ಕನ್ನಡದ ನಟ-ನಿರ್ದೇಶಕ, ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ (Rishab Shetty) ಅವರು ಇತ್ತಿಚಿಗಷ್ಟೇ ಕರಾವಳಿ, ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿರುವ ವಿಷಯ ಗೊತ್ತೇ ಇದೆ. ಈ ವೇಳೆ ರಿಷಬ್ ಶೆಟ್ಟಿಯವರು ಕರಾವಳಿ, ಮಲೆನಾಡು ಪ್ರವಾಸೋದ್ಯಮ ನೀತಿ ಬಗ್ಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಜೊತೆ ಚರ್ಚೆ ನಡೆಸಿದ್ದಾರೆ.&lt;/p&gt;&lt;p&gt;ಸಿಎಂ ಡಿಕೆ ಶಿವಕುಮಾರ್ ಭೇಟಿಯ ವೇಳೆಯಲ್ಲಿ ರಿಷಬ್&zwnj; ಶೆಟ್ಟಿಯವರು ಕರಾವಳಿ-ಮಲೆನಾಡು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿರುವ ರಿಷಬ್ ಶೆಟ್ಟಿ, ಪ್ರವಾಸೋದ್ಯಮ ನೀತಿ ಹಾಗೂ ಜಾಗತಿಕ ಬ್ಯಾಂಡಿಂಗ್ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಜೊತೆ ಸಮಾಲೋಚನೆ ನಡೆಸಿದ್ದಾರೆ.&lt;/p&gt;&lt;p&gt;ಕರ್ನಾಟಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರ ಕೆಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಈ ದಿಕ್ಕಿನಲ್ಲಿ ರಿಷಬ್ ಶೆಟ್ಟಿ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ಆಗಿರುವ ಈ ಭೇಟಿ ತುಂಬಾ ಮಹತ್ವ ಪಡೆದುಕೊಂಡಿದೆ. ರಿಷಬ್ ಶೆಟ್ಟಿಯವರ ಜನಪ್ರಿಯತೆ ಮತ್ತು ಜಾಗತಿಕ ಮಟ್ಟದಲ್ಲಿ ಅವರ ಚಿತ್ರಗಳಿಗೆ ದೊರೆತ ಮೆಚ್ಚುಗೆಯಿಂದ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ಗುರುತು ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.&lt;/p&gt;&lt;p&gt;ಈ ಭೇಟಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ದಿಕ್ಕು ನೀಡುವ ಚರ್ಚೆಯಾಗಿ ಪರಿಗಣಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹಲವು ಮಹತ್ವದ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಯಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-rishab-shetty-meets-cm-dk-shivakumar-in-his-residence-and-had-important-meeting-with-him/articleshow-za0tnlb"/>
        </item>
        <item>
            <title><![CDATA[ಪಾದಾರ್ಪಣಾ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ವೈಭವ್, ಇಬ್ಬರ ಸ್ಕೋರ್ ಆಲ್‌ಮೋಸ್ಟ್ ಸೇಮ್]]></title>
            <link>https://kannada.asianetnews.com/gallery/cricket-sports/vaibhav-suryavanshi-team-india-debut-score-mirrors-sachin-tendulkar-historic-start-diy0vb7</link>
            <guid isPermaLink="true">https://kannada.asianetnews.com/gallery/cricket-sports/vaibhav-suryavanshi-team-india-debut-score-mirrors-sachin-tendulkar-historic-start-diy0vb7</guid>
            <pubDate>Sun, 05 Jul 2026 14:56:31 +0530</pubDate>
            <description><![CDATA[ವೈಭವ್ ಸೂರ್ಯವಂಶಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಚಿನ್ 16ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಸಿಡಿಸಿದ ಸ್ಕೋರ್ ಹಾಗೂ ವೈಭವ್ ಡೆಬ್ಯೂ ಸ್ಕೋರ್ ಅಲ್‌ಮೋಸ್ಟ್ ಸೇಮ್.]]></description>
            <media:content url="https://static.asianetnews.com/images/w-1280,h-720,format-jpg,imgid-01kwrs89r6ptdrfhk2t2m7r9w8,imgname-vaibhav-suryavanshi-debut-echoes-sachin-tendulkar-1783243220742.png" type="image/jpeg" height="390" width="690"/>
            <content:encoded><![CDATA[&lt;p&gt;ವೈಭವ್ ಸೂರ್ಯವಂಶಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಸಚಿನ್ 16ನೇ ವಯಸ್ಸಿಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಸಿಡಿಸಿದ ಸ್ಕೋರ್ ಹಾಗೂ ವೈಭವ್ ಡೆಬ್ಯೂ ಸ್ಕೋರ್ ಅಲ್&zwnj;ಮೋಸ್ಟ್ ಸೇಮ್.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ 15ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಅತೀ ಕಿರಿಯ ಅನ್ನೋ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ವೈಭವ್ ಸೂರ್ಯವಂಶಿ ಮುರಿದಿದ್ದಾರೆ. ಸಚಿನ್ ರೀತಿಯಲ್ಲಿ ಅತೀ ಕಿರಿಯ ವಯಸ್ಸಿಗೆ ದಾಖಲೆ ಸರದಾರನಾಗುತ್ತಿರುವ ವೈಭವ್ ಸೂರ್ಯವಂಶಿ, ಪದಾರ್ಪಣಾ ಪಂದ್ಯದಲ್ಲೂ ಸಚಿನ್ ಮಾರ್ಗದಲ್ಲಿ ಸಾಗಿದ್ದಾರೆ.&lt;/p&gt;&lt;img&gt;&lt;p&gt;ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ್ದಾರೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 2 ಸಿಕ್ಸರ್ ಮೂಲಕ 14 ರನ್ ಸಿಡಿಸಿ ವೈಭವ್ ಸೂರ್ಯವಂಶಿ ಔಟಾಗಿದ್ದರು. ಕೇವಲ 10 ಎಸೆತ ಎದುರಿಸಿದ್ದರು. ವಿಲ್ ಜ್ಯಾಕ್ಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ವಿಕೆಟ್ ಕೈಚೆಲ್ಲಿದ್ದರು.&lt;/p&gt;&lt;img&gt;&lt;p&gt;ಸಚಿನ್ ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ದ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 15 ರನ್ ಸಿಡಿಸಿ ಔಟಾಗಿದ್ದರು. ಅಂದು ಸಚಿನ್ ಮೇಲೆ ಬಾರಿ ನೀರೀಕ್ಷೆ ಇತ್ತು. ಮೊದಲ ಪಂದ್ಯದಲ್ಲಿ ಮಾರಕ ಪಾಕಿಸ್ತಾನ ಬೌಲರ್ ಮುಂದೆ 15 ರನ್ ಸಿಡಿಸಿ ವಕಾರ್ ಯೂನಿಸ್ ಎಸೆತದಲ್ಲಿ ಬೋಲ್ಡ್ ಆಗಿದ್ದರು. ಸಚಿನ್ ಹಾಗೂ ವೈಭವ್ ಡೆಬ್ಯೂ ಪಂದ್ಯದ ಸ್ಕೋರ್&zwnj;ನಲ್ಲಿ ಕೇವಲ 1 ರನ್ ವ್ಯತ್ಯಾಸ&lt;/p&gt;&lt;img&gt;&lt;p&gt;1989ರಲ್ಲಿ ಸಚಿನ್ ತೆಂಡೂಲ್ಕರ್ ಡೆಬ್ಯೂ ಮಾಡಿದ್ದು ಪಾಕಿಸ್ತಾನ ವಿರುದ್ದ ಪಾಕಿಸ್ತಾನದಲ್ಲಿ. ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ಪದಾರ್ಪಣೆ ಮಾಡಿದ್ದರು. ಇದೀಗ ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ್ದು ವಿದೇಶದಲ್ಲಿ. ಇಂಗ್ಲೆಂಡ್ ವಿರುದ್ದ ಇಂಗ್ಲೆಡ್&zwnj;ನ ಮ್ಯಾಂಚೆಸ್ಟರ್&zwnj;ನಲ್ಲಿ ಡೆಬ್ಯೂ ಮಾಡಿದ್ದಾರೆ.&lt;/p&gt;&lt;img&gt;&lt;p&gt;ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾ ಡೆಬ್ಯೂ ಮೊದಲು ಮುಂಬೈ ಕ್ಲಬ್, ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಪಂದ್ಯ, ಇಂಟರ್ ಸ್ಕೂಲ್ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ್ದು ಮಾತ್ರವಲ್ಲ ಹಿರಿಯರ ಮೆಚ್ಯೂರಿಟಿ ತೋರಿಸಿದ್ದರು. ಇದೀಗ ವೈಭವ್ ಸೂರ್ಯವಂಶಿ ಅಂಡರ್ 19, ಐಪಿಎಲ್ ಟೂರ್ನಿಯಲ್ಲಿ ವಿಶ್ವ ದರ್ಜೆ ಬೌಲರ್ ವಿರುದ್ದ ಹೋರಾಟ ನೀಡಿದ ಇದೀಗ ಡೆಬ್ಯೂ ಪಂದ್ಯದಲ್ಲೂ ಹಿರಿಯರ ಮೆಚ್ಯೂರಿಟಿ ತೋರಿಸಿದ್ದಾರೆ ಎಂದು ಮಾಜಿ ನಾಯಕ ದಿಲೀಪ್ ವೆಂಗರ್ಸಕರ್ ಹೇಳಿದ್ದಾರೆ.&lt;/p&gt;&lt;img&gt;&lt;p&gt;ವೈಭವ್ ಸೂರ್ಯವಂಶಿ ಇದೀಗ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಸಾಗುತ್ತಿದ್ದಾರೆ. ವಂಡರ್ ಕಿಡ್ ಎಂದೇ ಗುರುತಿಸಿಕೊಂಡಿರುವ ವೈಭವ್ ಸೂರ್ಯವಂಶಿ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಕ್ಕರೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವುದರಲ್ಲಿ ಅನುಮಾನವಿಲ್ಲ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/gallery/cricket-sports/vaibhav-suryavanshi-team-india-debut-score-mirrors-sachin-tendulkar-historic-start-diy0vb7"/>
        </item>
        <item>
            <title><![CDATA[33 ದಿನಗಳ ಬಳಿಕ ಸಮಾಧಿಯಿಂದ ಹೊರಬಂದು ದರ್ಶನ ನೀಡಿದ ಸ್ವಾಮೀಜಿ; 775 ಗಂಟೆಯ ಯೋಗಸಮಾಧಿ]]></title>
            <link>https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik</link>
            <guid isPermaLink="true">https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik</guid>
            <pubDate>Sun, 05 Jul 2026 14:57:11 +0530</pubDate>
            <description><![CDATA[ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrsgvt2g0avn5wg03e4j59a,imgname-gadag-swamiji---3--1783243501378.jpg" type="image/jpeg" height="390" width="690"/>
            <content:encoded><![CDATA[ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.&lt;img&gt;&lt;p&gt;ಮಹದಾಯಿ ಯೋಜನೆ ಜಾರಿ ಸೇರಿದಂತೆ ಜಗತ್ತಿನ ಕಲ್ಯಾಣಕ್ಕಾಗಿ ಜೂನ್ 3ರ ಮಧ್ಯರಾತ್ರಿ ಗದಗದ ಜಿಲ್ಲೆಯಲ್ಲಿರುವ ರಾಚೂಟೇಶ್ವರ ಸ್ವಾಮೀಜಿಯವರು ಸಮಾಧಿ ಸ್ಥಿತಿಗೆ ಹೋಗಿದ್ದರು. 33 ದಿನಗಳ ಬಳಿಕ ಸಮಾಧಿಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಅನ್ನ, ನೀರು, ಗಾಳಿ ಮತ್ತು ಬೆಳಕಿಲ್ಲದೆ ಸತತ 775 ಗಂಟೆಗಳ ಕಾಲ ಸ್ವಾಮೀಜಿಗಳು ಯೋಗಸಮಾಧಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.&lt;/p&gt;&lt;img&gt;&lt;p&gt;ಸಿಮೆಂಟ್&zwnj;ನಿಂದ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಲ್ಲಿನ ಮಂಟಪದೊಳಗೆ ಸ್ವಾಮೀಜಿಯವರು 33 ದಿನಗಳ ಕಾಲ ಕಳೆದಿದ್ದಾರೆ. ಇಂದು ಆ 33 ದಿನಗಳ ಶಿವಯೋಗ ಸಮಾಧಿ ಅಂತ್ಯಗೊಂಡಿದ್ದು, ಸ್ವಾಮೀಜಿಯವರು ಸಮಾಧಿಯಿಂದ ಯಶಸ್ವಿಯಾಗಿ ಆಚೆ ಬಂದಿದ್ದಾರೆ. ಸಮಾಧಿಯಿಂದ ಹೊರಬಂದ ನಂತರ ಅಭ್ಯಂಗ (ಸ್ನಾನ) ಮುಗಿಸಿ, ಅಪಾರ ಭಕ್ತ ಸಮೂಹಕ್ಕೆ ರಾಚೂಟೇಶ್ವರ ಸ್ವಾಮೀಜಿಯವರು ದರ್ಶನ ನೀಡಿದರು.&lt;/p&gt;&lt;img&gt;&lt;p&gt;ಮೊದಲು ನಮಗೆ ತುಂಬಾ ಆತಂಕ ಇತ್ತು. ಆದ್ರೀಗ ಸ್ವಾಮಿಗಳನ್ನು ಜೀವಂತವಾಗಿ ಮತ್ತು ಆರೋಗ್ಯವಾಗಿ ನೋಡಿ ತುಂಬಾ ಖುಷಿಯಾಗುತ್ತಿದೆ ಎಂದು ಗ್ರಾಮಸ್ಥರು ಭಾವುಕರಾಗಿ ನುಡಿದಿದ್ದಾರೆ. ಸ್ವಾಮೀಜಿಯವರು ಈ ಹಿಂದೆಯೂ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನಗಳನ್ನು ಮಾಡಿದ್ದರಾದರೂ, ಇಷ್ಟು ಸುದೀರ್ಘವಾಗಿ (33 ದಿನಗಳ ಕಾಲ) ಸಮಾಧಿಯಾಗಿದ್ದು ಇದೇ ಮೊದಲ ಬಾರಿ.&lt;/p&gt;&lt;img&gt;&lt;p&gt;ಈ ಯೋಗದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಮತ್ತು ಸ್ವಾಮಿಗಳ ದರ್ಶನ ಪಡೆಯಲು ತೆಲಂಗಾಣ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಬೂದೀಶ್ವರ ಮಠದತ್ತ ಆಗಮಿಸುತ್ತಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/gadag-swamiji-came-out-of-samadhi-and-gave-darshan-after-33-days-775-hours-of-yoga-samadhi-mrq-w7xc0ik"/>
        </item>
        <item>
            <title><![CDATA[Meta Notice: ಟೆಲಿಗ್ರಾಂ ಬಳಿಕ ಇನ್‌ಸ್ಟಾಗ್ರಾಂ ನಿಷೇಧಕ್ಕೆ ಮುಂದಾಯ್ತಾ ಸರ್ಕಾರ, ಮೆಟಾಗೆ ಖಡಕ್ ನೋಟಿಸ್ ಜಾರಿ!]]></title>
            <link>https://kannada.asianetnews.com/gallery/india-news/indian-government-issues-stern-notice-to-meta-over-instagram-child-abuse-ads-7ep07mk</link>
            <guid isPermaLink="true">https://kannada.asianetnews.com/gallery/india-news/indian-government-issues-stern-notice-to-meta-over-instagram-child-abuse-ads-7ep07mk</guid>
            <pubDate>Sun, 05 Jul 2026 14:34:21 +0530</pubDate>
            <description><![CDATA[Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್‌ ಅನ್ನು ತೆಗೆದುಹಾಕಲು MeitY ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01e5etjrwx29jh59ecjjqgwvc9,imgname-hukkk-jpg.jpg" type="image/jpeg" height="390" width="690"/>
            <content:encoded><![CDATA[&lt;p&gt;Instagram Paid advertisements ಗಳು ಇತ್ತೀಚೆಗೆ ಮಕ್ಕಳ ಲೈಂ ಗಿಕ ಶೋಷಣೆ ದೌರ್ಜನ್ಯದ (CSEAM) ವಿಷಯವನ್ನೇ ಪ್ರಚಾರ ಮಾಡುತ್ತಿರುವ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(META)ಗೆ ನೋಟಿಸ್ ನೀಡಿದೆ. ಇಂತಹ ಕಂಟೆಂಟ್&zwnj; ಅನ್ನು ತೆಗೆದುಹಾಕಲು MeitY ಆದೇಶಿಸಿದೆ.&lt;/p&gt;&lt;img&gt;&lt;p&gt;ಇನ್&zwnj;ಸ್ಟಾಗ್ರಾಂನ(Instagram)ಲ್ಲಿ ಹಣ ಪಾವತಿಸಿದ ಜಾಹೀರಾತುಗಳು(Paid advertisements ) ಮಕ್ಕಳ ಲೈಂಗಿಕ ಶೋಷಣೆಯ ವಿಷಯವನ್ನು ಹೆಚ್ಚು (CSEAM) ಪ್ರಚಾರ ಮಾಡುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರ ಮೆಟಾ(Meta)ಗೆ ನೋಟಿಸ್ ನೀಡಿದೆ. ಇಂತಹ ಜಾಹೀರಾತುಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಶನಿವಾರ ಸಂಜೆ ನೋಟಿಸ್ ಕಳುಹಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.&lt;/p&gt;&lt;p&gt;ಈಗಾಗಲೇ ತೆಗೆದುಕೊಂಡಿರುವ ಕ್ರಮಗಳು, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಯೋಜಿಸಿರುವ ಸುರಕ್ಷತಾ ಕ್ರಮಗಳ ಬಗ್ಗೆ ಏಳು ದಿನಗಳಲ್ಲಿ ವಿವರವಾದ ವಿವರಣೆ ನೀಡುವಂತೆ ಸಚಿವಾಲಯವು ಮೆಟಾಗೆ ಸೂಚಿಸಿದೆ.&lt;/p&gt;&lt;img&gt;&lt;p&gt;ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್(Union IT Minister Ashwini Vaishnaw) ಅವರ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಲೈ*ಗಿಕವಾಗಿ ಅಸಭ್ಯ, ಹಾನಿಕಾರಕ ಕಾಂಟೆಂಟ್ ನಿಷೇಧಿಸುವ ಕಂಪನಿಯ ಸ್ವಂತ ನಿಯಮಗಳಿದ್ದರೂ, ಇಂತಹ ಜಾಹೀರಾತುಗಳಿಗೆ ಹೇಗೆ ಅನುಮೋದನೆ ನೀಡಲಾಯಿತು? ಇಂಥ ಜಾಹೀರಾತುಗಳು, ಅಶ್ಲೀಲ ಕಾಂಟೆಂಟ್ ವಿಡಿಯೋಗಳು ಪರಿಶೀಲನೆಯಿಂದ ಹೇಗೆ ತಪ್ಪಿಸಿಕೊಂಡವು? ಎಂದು ಸರ್ಕಾರ ಪ್ರಶ್ನಿಸಿದೆ. ಅಲ್ಲದೇ ತನ್ನ ಮಾಡರೇಶನ್ ವ್ಯವಸ್ಥೆಯನ್ನು ಬಲಪಡಿಸಲು ಮೆಟಾ ಯಾವ ಬದಲಾವಣೆಗಳನ್ನು ಮಾಡಲು ಉದ್ದೇಶಿಸಿದೆ ಎಂಬುದರ ಕುರಿತು ವಿವರ ಕೇಳಿದೆ.&lt;/p&gt;&lt;p&gt;&lt;strong&gt;ಬಿಬಿಸಿ ತನಿಖಾ ವರದಿಯಲ್ಲೇನಿದೆ?&lt;/strong&gt;&lt;/p&gt;&lt;p&gt;ಮೆಟಾದ ಶಿಫಾರಸು ವ್ಯವಸ್ಥೆಗಳು(Meta's recommendation systems) ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತುಗಳನ್ನು ಒಳಗೊಂಡಿರುವ ವೀಡಿಯೊಗಳನ್ನು ಪ್ರಚಾರ ಮಾಡಿವೆ ಎಂದು ಬಿಬಿಸಿ(BBC) ತನಿಖೆಯು ಆರೋಪಿಸಿದ ನಂತರ ಸರ್ಕಾರದ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಂತಹ ಅಕ್ರಮ ವಿಷಯಕ್ಕೆ ಸಂಬಂಧಿಸಿದ ಪದಗಳನ್ನು ಹೊಂದಿರುವ ಪೇಯ್ಡ್ ಅಡ್ವರ್ಟೈಸ್&zwnj;ಮೆಂಟ್&zwnj;ಗಳನ್ನ ಫೇಸ್&zwnj;ಬುಕ್(Facebook) ಮತ್ತು ಇನ್&zwnj;ಸ್ಟಾಗ್ರಾಂ(Instagram)ನಲ್ಲಿ ಕಾಣಿಸಿಕೊಂಡಿವೆ ಎಂದು ವರದಿಯು ಹೇಳಿದೆ.&lt;/p&gt;&lt;p&gt;ವರದಿಗಳ ಪ್ರಕಾರ, ಕೆಲವು ಇನ್&zwnj;ಸ್ಟಾಗ್ರಾಂ ಜಾಹೀರಾತುಗಳು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಹುಡುಕಾಟ ಪದಗಳನ್ನು ಒಳಗೊಂಡಿದ್ದವು ಮತ್ತು ಅಂತಹ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದ್ದ ಟೆಲಿಗ್ರಾಂ ಚಾನೆಲ್&zwnj;ಗಳಿಗೆ ಬಳಕೆದಾರರನ್ನು ನಿರ್ದೇಶಿಸುತ್ತಿದ್ದವು.&lt;/p&gt;&lt;img&gt;&lt;p&gt;ಈ ಆರೋಪಗಳು ನಿಜವೆಂದು ಕಂಡುಬಂದಲ್ಲಿ, ಜಾಹೀರಾತುಗಳನ್ನು ಮೂರನೇ ವ್ಯಕ್ತಿಗಳು ರಚಿಸಿದ್ದಾರೆ ಎಂದು ವಾದಿಸಿ ಮೆಟಾ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ&lt;/p&gt;&lt;p&gt;ಪೇಯ್ಡ್ ಜಾಹೀರಾತುಗಳು ಪ್ಲಾಟ್&zwnj;ಫಾರ್ಮ್&zwnj;ನ ಜಾಹೀರಾತು ವ್ಯವಸ್ಥೆಯ ಮೂಲಕ ಅನುಮೋದನೆಗೊಳ್ಳುತ್ತವೆ(approved) ಮತ್ತು ಕಂಪನಿಗೆ ಆದಾಯವನ್ನು ಸಹ ಗಳಿಸುತ್ತವೆ. ಅಕ್ರಮ ಜಾಹೀರಾತುಗಳು ಕಾಣಿಸಿಕೊಳ್ಳಲು ಅನುಮತಿಸಿದರೆ, ಭಾರತದ ಮಾಹಿತಿ ತಂತ್ರಜ್ಞಾನ ಕಾನೂನುಗಳ ಅಡಿಯಲ್ಲಿ ಪ್ಲಾಟ್&zwnj;ಫಾರ್ಮ್ ಹೊಣೆಗಾರಿಕೆಯನ್ನು ಎದುರಿಸಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಭಾರತದ ಶೂನ್ಯ-ಸಹಿಷ್ಣುತೆ ನೀತಿ&lt;/strong&gt;&lt;/p&gt;&lt;p&gt;ಮಕ್ಕಳ ಲೈಂಗಿಕ ದೌರ್ಜನ್ಯದ ವಿಷಯಕ್ಕೆ ಸಂಬಂಧಿಸಿದಂತೆ ಶೂನ್ಯ-ಸಹಿಷ್ಣುತೆ ನೀತಿಯನ್ನು ಅನುಸರಿಸುವುದಾಗಿ ಸರ್ಕಾರ ಪದೇ ಪದೇ ಹೇಳಿದೆ. ಆನ್&zwnj;ಲೈನ್ ಪ್ಲಾಟ್&zwnj;ಫಾರ್ಮ್&zwnj;ಗಳು ಅಂತಹ ವಿಷಯವನ್ನು ತ್ವರಿತವಾಗಿ ಪತ್ತೆಹಚ್ಚಿ, ತೆಗೆದುಹಾಕಬೇಕು ಮತ್ತು ವರದಿ ಮಾಡಬೇಕು ಎಂದು ನಿರೀಕ್ಷಿಸಲಾಗಿದೆ.&lt;/p&gt;&lt;img&gt;&lt;p&gt;ಈ ವಾರದಲ್ಲೇ ಕೇಂದ್ರ ಸರ್ಕಾರ ಮೆಟಾಗೆ ನೀಡುತ್ತಿರುವ ಎರಡನೇ ಪ್ರಮುಖ ನೋಟಿಸ್ ಇದಾಗಿದೆ.&lt;/p&gt;&lt;p&gt;ಈ ಹಿಂದೆ, ವಾಟ್ಸಾಪ್&zwnj;ನ ಉದ್ದೇಶಿತ ಯೂಸರ್&zwnj;ನೇಮ್ ಫೀಚರ್ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು. ಇದು ಫಿಶಿಂಗ್ ದಾಳಿಗಳು, ವಂಚನೆ, ಆನ್&zwnj;ಲೈನ್ ವಂಚನೆ ಮತ್ತು 'ಡಿಜಿಟಲ್ ಅರೆಸ್ಟ್' ಹಗರಣಗಳನ್ನು ಹೆಚ್ಚಿಸಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಸರ್ಕಾರದೊಂದಿಗೆ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಈ ಫೀಚರ್ ಬಿಡುಗಡೆಯನ್ನು ತಡೆಹಿಡಿಯುವಂತೆ ಕೇಂದ್ರವು ಮೆಟಾಗೆ ಸೂಚಿಸಿತ್ತು.&lt;/p&gt;&lt;p&gt;ಸದ್ಯಕ್ಕೆ ಯೂಸರ್&zwnj;ನೇಮ್&zwnj;ಗಳ ಬಿಡುಗಡೆಯನ್ನು ಮುಂದೂಡಲು ವಾಟ್ಸಾಪ್ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ನೋಟಿಸ್ ಸ್ವೀಕರಿಸಿದ ನಂತರ ಮೆಟಾ ತಂಡವು ಐಟಿ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದೆ.&lt;/p&gt;&lt;p&gt;ಬಳಕೆದಾರರ ಸುರಕ್ಷತೆ, ಆನ್&zwnj;ಲೈನ್ ಭದ್ರತೆ ಮತ್ತು ಭಾರತೀಯ ನಿಯಮಗಳ ಅನುಸರಿಸುವ ಬಗ್ಗೆ ಪ್ರಮುಖ ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳ ಮೇಲೆ ಸರ್ಕಾರದ ಇತ್ತೀಚಿನ ಕ್ರಮಗಳು ಹೆಚ್ಚಿದ ಪರಿಶೀಲನೆಯನ್ನು ಸೂಚಿಸುತ್ತವೆ.&lt;/p&gt;&lt;p&gt;(ಏಜೆನ್ಸಿ ಇನ್&zwnj;ಪುಟ್&zwnj;ಗಳೊಂದಿಗೆ)&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/india-news/indian-government-issues-stern-notice-to-meta-over-instagram-child-abuse-ads-7ep07mk"/>
        </item>
        <item>
            <title><![CDATA[ಪ್ರೇಮ ದೃಷ್ಟಿ ರಾಜಯೋಗದಿಂದ 4 ರಾಶಿಗೆ ದೊಡ್ಡ ಯಶಸ್ಸು, ಜುಲೈನಲ್ಲಿ ಬುಧ ಮತ್ತು ಶುಕ್ರರ ಸಂಯೋಗ]]></title>
            <link>https://kannada.asianetnews.com/gallery/festivals/july-lucky-rajyog-astrology-labh-drishti-yog-formed-after-budh-shukra-yuti-jackpot-for-these-zodiac-signs-suh-9l0756h</link>
            <guid isPermaLink="true">https://kannada.asianetnews.com/gallery/festivals/july-lucky-rajyog-astrology-labh-drishti-yog-formed-after-budh-shukra-yuti-jackpot-for-these-zodiac-signs-suh-9l0756h</guid>
            <pubDate>Sun, 05 Jul 2026 14:28:05 +0530</pubDate>
            <description><![CDATA[July lucky rajyog ಬುಧ ಮತ್ತು ಶುಕ್ರ ಮಿತ್ರ ಗ್ರಹಗಳು. ಅವರು ಪರಸ್ಪರ ಅನುಕೂಲಕರ ಕೋನದಿಂದ ನೋಡಿದಾಗ, ಅದು ಬುದ್ಧಿವಂತಿಕೆ, ಸೃಜನಶೀಲತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kvas9g9k6geparnf6wy297hh,imgname-zodiac-signs--1--1781699756339.jpg" type="image/jpeg" height="390" width="690"/>
            <content:encoded><![CDATA[&lt;p&gt;July lucky rajyog ಬುಧ ಮತ್ತು ಶುಕ್ರ ಮಿತ್ರ ಗ್ರಹಗಳು. ಅವರು ಪರಸ್ಪರ ಅನುಕೂಲಕರ ಕೋನದಿಂದ ನೋಡಿದಾಗ, ಅದು ಬುದ್ಧಿವಂತಿಕೆ, ಸೃಜನಶೀಲತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ, ಗ್ರಹಗಳ ಪರಸ್ಪರ ಸಂಬಂಧವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಜುಲೈ 24, 2026 ರ ಶುಕ್ರವಾರ ರಾತ್ರಿ 9:39 ಕ್ಕೆ, ಬುದ್ಧಿಶಕ್ತಿಯ ಅಧಿಪತಿ ಬುಧ ಗ್ರಹ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುವ ಶುಕ್ರ ಗ್ರಹವು 60 ಡಿಗ್ರಿ ಅಂತರದಲ್ಲಿರುತ್ತದೆ. ಇದು ತುಂಬಾ ಶುಭ ಮತ್ತು ಶಕ್ತಿಯುತವಾದ ಪ್ರೇಮ ದೃಷ್ಟಿ ಯೋಗವನ್ನು ರೂಪಿಸುತ್ತದೆ. ಬುಧ ಮತ್ತು ಶುಕ್ರ ಮಿತ್ರ ಗ್ರಹಗಳು. ಅವು ಪರಸ್ಪರ ಅನುಕೂಲಕರ ದೃಷ್ಟಿಯಲ್ಲಿದ್ದಾಗ, ಅದು ಬುದ್ಧಿವಂತಿಕೆ, ಸೃಜನಶೀಲತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಶುಭ ಸಂಯೋಗವು ಎಲ್ಲಾ ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರಿಗೆ ಅದೃಷ್ಟವನ್ನು ತರುವ ಸಾಧ್ಯತೆಯಿದೆ. ಈ ಶಕ್ತಿಶಾಲಿ ಸಂಯೋಗದಿಂದ ಯಾವ ರಾಶಿಚಕ್ರ ಚಿಹ್ನೆಗಳು ಹೆಚ್ಚು ಪ್ರಯೋಜನ ಪಡೆಯುತ್ತವೆ ಎಂಬುದನ್ನು ಕಂಡುಕೊಳ್ಳಿ.&lt;/p&gt;&lt;img&gt;&lt;p&gt;ಈ ಸಂಯೋಗವು ವೃಷಭ ರಾಶಿಯ ಸ್ಥಳೀಯರಿಗೆ ಆಶೀರ್ವಾದವಾಗಿರುತ್ತದೆ. ಶುಕ್ರನು ನಿಮ್ಮ ರಾಶಿಯ ಆಡಳಿತ ಗ್ರಹ, ಆದ್ದರಿಂದ ಬುಧನೊಂದಿಗಿನ ಈ ವಿಶೇಷ ಸ್ಥಾನವು ನಿಮ್ಮ ಸೌಕರ್ಯ ಮತ್ತು ಐಷಾರಾಮಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹಣ ಎಲ್ಲೋ ಸಿಲುಕಿಕೊಂಡಿದ್ದರೆ, ಈ ಸಮಯದಲ್ಲಿ ಅದನ್ನು ಮರಳಿ ಪಡೆಯಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗಿಗಳಿಗೆ ಕೆಲಸದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಾಕಷ್ಟು ಅವಕಾಶಗಳು ಸಿಗುತ್ತವೆ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುತ್ತಾರೆ. ಕಲೆ, ಮಾಧ್ಯಮ, ಬರವಣಿಗೆ ಮತ್ತು ಗ್ಲಾಮರ್ ಪ್ರಪಂಚಕ್ಕೆ ಸಂಬಂಧಿಸಿದ ಜನರು ಗಮನಾರ್ಹ ಯಶಸ್ಸನ್ನು ಸಾಧಿಸಬಹುದು.&lt;/p&gt;&lt;img&gt;&lt;p&gt;ಮಿಥುನ ರಾಶಿಯ ಅಧಿಪತಿ ಬುಧನೇ. ಬುಧ ಮತ್ತು ಶುಕ್ರನ ಈ ಶುಭ ಸಂಯೋಗವು ನಿಮ್ಮ ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವವನ್ನು ಮತ್ತಷ್ಟು ಸುಧಾರಿಸುತ್ತದೆ. ಒಂದು ದೊಡ್ಡ ವ್ಯವಹಾರ ಒಪ್ಪಂದವನ್ನು ಅಂತಿಮಗೊಳಿಸಬಹುದು, ಇದು ಭವಿಷ್ಯದಲ್ಲಿ ಭಾರಿ ಲಾಭವನ್ನು ತರುತ್ತದೆ. ಕೆಲಸದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಸೂಚನೆಗಳಿವೆ. ಕೌಟುಂಬಿಕ ವಿವಾದಗಳು ಬಗೆಹರಿಯುತ್ತವೆ ಮತ್ತು ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ತಾರ್ಕಿಕತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ, ಇದರಿಂದಾಗಿ ನೀವು ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ.&lt;/p&gt;&lt;img&gt;&lt;p&gt;ಈ 'ಲವ್ ದೃಷ್ಟಿ ಯೋಗ'ವು ಕನ್ಯಾ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಬುಧನ ಆಶೀರ್ವಾದದಿಂದ, ಸ್ಥಗಿತಗೊಂಡ ಯೋಜನೆಗಳು ಪುನರಾರಂಭಗೊಳ್ಳುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭ ಪಡೆಯುವ ಬಲವಾದ ಸಾಧ್ಯತೆಯಿದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವು ನಿಮ್ಮ ಪರವಾಗಿ ಬರಬಹುದು. ಸಮಾಜದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಜನರು ನಿಮ್ಮ ಸಲಹೆಯನ್ನು ಗೌರವಿಸುತ್ತಾರೆ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.&lt;/p&gt;&lt;img&gt;&lt;p&gt;ಶುಕ್ರನು ತುಲಾ ರಾಶಿಯ ಅಧಿಪತಿ ಗ್ರಹವಾಗಿರುವುದರಿಂದ, ಈ ಸಂಯೋಗದ ಸಕಾರಾತ್ಮಕ ಪರಿಣಾಮವು ನಿಮ್ಮ ಜೀವನದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಈ ಸಮಯವು ನಿಮ್ಮ ಲೌಕಿಕ ಸಂತೋಷ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ. ನೀವು ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಆಕರ್ಷಕ ಪ್ಯಾಕೇಜ್&zwnj;ನೊಂದಿಗೆ ಹೊಸ ಮತ್ತು ಪ್ರಮುಖ ಕೊಡುಗೆಯನ್ನು ಪಡೆಯಬಹುದು. ನೀವು ಐಷಾರಾಮಿ ಮತ್ತು ಹವ್ಯಾಸಗಳಿಗೆ ಹೆಚ್ಚು ಖರ್ಚು ಮಾಡಿದರೂ ಸಹ, ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಹೀಗಾಗಿ ನಿಮ್ಮ ಬಜೆಟ್ ಅನ್ನು ಸಮತೋಲನದಲ್ಲಿರಿಸಿಕೊಳ್ಳುತ್ತದೆ. ವಿರುದ್ಧ ಲಿಂಗದ ಕಡೆಗೆ ಆಕರ್ಷಣೆ ಹೆಚ್ಚಾಗುತ್ತದೆ ಮತ್ತು ಒಂಟಿಯಾಗಿರುವವರು ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರು ಬರುವುದನ್ನು ನೋಡಬಹುದು.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/july-lucky-rajyog-astrology-labh-drishti-yog-formed-after-budh-shukra-yuti-jackpot-for-these-zodiac-signs-suh-9l0756h"/>
        </item>
        <item>
            <title><![CDATA[ಶ್ರೇಯಸ್ ಅಯ್ಯರ್‍‌ಗೆ ದೊಡ್ಡ ಅವಮಾನ.. ಸೋಲಿಗೆ ಹೊಣೆ ಮಾಡಿದ್ದು ಯಾರನ್ನ?]]></title>
            <link>https://kannada.asianetnews.com/cricket-sports/team-india-captain-shreyas-iyer-made-big-statement-after-india-vs-england-second-t20-match-gkn/articleshow-47360gs</link>
            <guid isPermaLink="true">https://kannada.asianetnews.com/cricket-sports/team-india-captain-shreyas-iyer-made-big-statement-after-india-vs-england-second-t20-match-gkn/articleshow-47360gs</guid>
            <pubDate>Sun, 05 Jul 2026 14:21:22 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸೋತಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, 17ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು ಎಂದು ಹೇಳಿದ್ದಾರೆ. ಸೋಲಿನ ನಡುವೆಯೂ ಅವರು ಯುವ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwrqggybfrs5engjnwkvtj5t,imgname-shreyas-iyer--2--1783241393097.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್:&lt;/strong&gt; ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್&zwnj;ಗಳ ಸೋಲು ಅನುಭವಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 0-1 ರ ಹಿನ್ನಡೆ ಅನುಭವಿಸಿದೆ. ಪಂದ್ಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಂಡದ ಸೋಲಿಗೆ ಪ್ರಮುಖ ಕಾರಣವೇನು ಮತ್ತು ಪಂದ್ಯ ಎಲ್ಲಿ ಕೈತಪ್ಪಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ.&lt;/p&gt;&lt;h2&gt;&lt;strong&gt;ಮ್ಯಾಚ್ ಟರ್ನಿಂಗ್ ಪಾಯಿಂಟ್ ಯಾವುದು?&lt;/strong&gt;&lt;/h2&gt;&lt;p&gt;ಭಾರತ ನೀಡಿದ್ದ 191 ರನ್&zwnj;ಗಳ ಗುರಿ ಬೆನ್ನತ್ತಿ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಅರ್ಶದೀಪ್ ಸಿಂಗ್ ಮೊದಲ ಓವರ್&zwnj;ನಲ್ಲೇ ಫಿಲ್&lt;/p&gt;&lt;p&gt;ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಭರ್ಜರಿ ಆರಂಭ ನೀಡಿದ್ದರು. ಆದರೆ ಹ್ಯಾರಿ ಬ್ರೂಕ್ (39), ಜಾಕೋಬ್ ಬೆಥೆಲ್ (76) ಮತ್ತು ಟಾಮ್ ಬ್ಯಾಂಟನ್ (39) ಅಬ್ಬರದ ಆಟವಾಡಿ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಂದ್ಯದ 16 ಓವರ್&zwnj;ಗಳ ಮುಕ್ತಾಯಕ್ಕೆ ಇಂಗ್ಲೆಂಡ್&zwnj;ಗೆ 49 ರನ್&zwnj;ಗಳ ಅಗತ್ಯವಿತ್ತು (ಸರಾಸರಿ 12 ರನ್). ಆದರೆ ರವಿ ಬಿಷ್ಣೋಯಿ ಎಸೆದ 17ನೇ ಓವರ್&zwnj;ನಲ್ಲಿ ಬರೋಬ್ಬರಿ 29 ರನ್ ಹರಿದುಬಂದವು. ಇದು ಪಂದ್ಯದ ಚಿತ್ರಣವನ್ನೇ ಬದಲಿಸಿತು.&lt;/p&gt;&lt;h3&gt;&lt;strong&gt;ಅಯ್ಯರ್ ನೀಡಿದ ಕಾರಣಗಳೇನು?&lt;/strong&gt;&lt;/h3&gt;&lt;p&gt;ನಾವು ಎಲ್ಲಿ ಎಡವಿದ್ದೇವೆ ಎಂಬುದು ನನಗೆ ಗೊತ್ತು, ಆದರೆ ನಾನು ಯಾವುದೇ ಒಬ್ಬ ಆಟಗಾರನನ್ನು ಗುರಿ ಮಾಡುವುದಿಲ್ಲ. 15 ಓವರ್&zwnj;ಗಳ ನಂತರ ನಮ್ಮ ಕೈಯಲ್ಲಿದ್ದ ಪಂದ್ಯದ ವೇಗ ಕೈತಪ್ಪಿತು. 17ನೇ ಓವರ್&zwnj;ನಲ್ಲಿ ಪಂದ್ಯ ನಮ್ಮ ಕೈಬಿಟ್ಟು ಹೋಯಿತು. ಅಲ್ಲಿ ಬಂದ ನೋ-ಬಾಲ್ ಕೂಡ ನಮಗೆ ಹೊರೆಯಾಯಿತು. ಬಿಷ್ಣೋಯಿ ಈ ತಪ್ಪಿನಿಂದ ಕಲಿಯುತ್ತಾರೆ ಮತ್ತು ಬಲಿಷ್ಠವಾಗಿ ಮರಳುತ್ತಾರೆ ಎಂಬ ನಂಬಿಕೆ ಇದೆ. ಸ್ಯಾಮ್ ಕರನ್ ಮೈದಾನದ ಆಯಾಮಗಳನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರು. ಅವರು ನಮ್ಮ ಎಡಗೈ ಬ್ಯಾಟರ್&zwnj;ಗಳಿಗೆ ಹೊಡೆಯಲು ಹೆಚ್ಚಿನ ಅವಕಾಶ ನೀಡಲಿಲ್ಲ ಎಂದು ಅಯ್ಯರ್ ತಿಳಿಸಿದರು.&lt;/p&gt;&lt;p&gt;ಸೋಲಿನ ನಡುವೆಯೂ ಅಯ್ಯರ್, ಕೆಲವರನ್ನ ಶ್ಲಾಘಿಸಿದರು. ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸಿದ ತಿಲಕ್ ವರ್ಮಾ ಮತ್ತು ಯಾವುದೇ ಭಯವಿಲ್ಲದೆ ಆಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೈಭವ್ ಆಟವನ್ನು ನೋಡುವುದು ಅದ್ಭುತವಾಗಿತ್ತು, ಅವರು ನರ್ವಸ್ ಆಗಿರಲಿಲ್ಲ ಎಂದು ಅಯ್ಯರ್ ಹೇಳಿದರು.&lt;/p&gt;&lt;h3&gt;&lt;strong&gt;ನಾಯಕನ ಹೆಸರಲ್ಲಿ ಕೆಟ್ಟ ದಾಖಲೆ!&lt;/strong&gt;&lt;/h3&gt;&lt;p&gt;ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಗೆಲುವಿಗಾಗಿ ಕಾಯುತ್ತಿರುವ ಶ್ರೇಯಸ್ ಅಯ್ಯರ್ ಹೆಸರಲ್ಲಿ ಒಂದು ನಾಚಿಕೆಗೇಡಿನ ದಾಖಲೆ ಸೇರಿಕೊಂಡಿದೆ. ಭಾರತ ತಂಡವನ್ನು 3ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ 12 ನಾಯಕರಲ್ಲಿ, ಶ್ರೇಯಸ್ ಅಯ್ಯರ್ ಮಾತ್ರ ತಮ್ಮ ಆರಂಭಿಕ 4 ಪಂದ್ಯಗಳಲ್ಲಿ ಒಂದು ಗೆಲುವು ಕೂಡ ಕಂಡಿಲ್ಲ (ಐರ್ಲೆಂಡ್&zwnj;ನಲ್ಲಿ 2 ಸೋಲು, ಇಂಗ್ಲೆಂಡ್&zwnj;ನಲ್ಲಿ 1 ರದ್ದು ಮತ್ತು 1 ಸೋಲು). ಈಗ ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಲು ಮುಂದಿನ ಪಂದ್ಯದಲ್ಲಿ ಅಯ್ಯರ್ ಪಡೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/cricket-sports/team-india-captain-shreyas-iyer-made-big-statement-after-india-vs-england-second-t20-match-gkn/articleshow-47360gs"/>
        </item>
        <item>
            <title><![CDATA[ಮಲ್ಯಾಜೀ, ನಿಮ್ಮ ಕಿಂಗ್​ಫಿಶರ್​ ವಿಲ್ಲಾ ಒಂದು ರಾತ್ರಿ ಬಾಡಿಗೆಗೆ ಸಿಗ್ಬೋದಾ? ಯುವಕನ ಪ್ರಶ್ನೆಗೆ ಹಲ್​ಚಲ್​- 15 ಲಕ್ಷ ವ್ಯೂವ್ಸ್​]]></title>
            <link>https://kannada.asianetnews.com/business/bengaluru-founders-open-offer-to-rent-vijay-mallyas-villa-triggers-viral-buzz-suc/articleshow-v9uv1g0</link>
            <guid isPermaLink="true">https://kannada.asianetnews.com/business/bengaluru-founders-open-offer-to-rent-vijay-mallyas-villa-triggers-viral-buzz-suc/articleshow-v9uv1g0</guid>
            <pubDate>Sun, 05 Jul 2026 14:23:59 +0530</pubDate>
            <description><![CDATA[ಬೆಂಗಳೂರಿನ ಟೆಕ್ ಉದ್ಯಮಿ ಪ್ರಿಯಮ್ ರಾಜ್, ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ವಿಜಯ್ ಮಲ್ಯ ಅವರ ಹಳೆಯ ಕಿಂಗ್‌ಫಿಶರ್ ವಿಲ್ಲಾವನ್ನು ಬಾಡಿಗೆಗೆ ನೀಡಬಹುದೇ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದಾರೆ. ಈ ಪೋಸ್ಟ್ ತಕ್ಷಣವೇ ವೈರಲ್ ಆಗಿದ್ದು, 1.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಗಳಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrqq885m113y2z8qvdc68sw,imgname-vijay-mallya-1783241613573.jpg" type="image/jpeg" height="390" width="690"/>
            <content:encoded><![CDATA[&lt;p&gt;ವಿಜಯ್ ಮಲ್ಯ ಅವರನ್ನು ಟ್ಯಾಗ್ ಮಾಡುವ ಸಾಮಾಜಿಕ ಮಾಧ್ಯಮದ ಹುಟ್ಟುಹಬ್ಬದ ಪೋಸ್ಟ್ ಅನಿರೀಕ್ಷಿತವಾಗಿ ಬೆಂಗಳೂರಿನ ಅತ್ಯಂತ ಚರ್ಚಾಸ್ಪದ ವೈರಲ್ ಕ್ಷಣಗಳಲ್ಲಿ ಒಂದಾಗಿದೆ. ಬೆಂಗಳೂರಿನ ತಂತ್ರಜ್ಞಾನ ಉದ್ಯಮಿ ಪ್ರಿಯಮ್ ರಾಜ್ ಅವರು ತಮ್ಮ ಹುಟ್ಟುಹಬ್ಬದ ಪಾರ್ಟಿಗಾಗಿ ಹಿಂದಿನ ಕಿಂಗ್&zwnj;ಫಿಶರ್ ವಿಲ್ಲಾವನ್ನು ಒಂದು ರಾತ್ರಿಗೆ ಬಾಡಿಗೆಗೆ ನೀಡಬಹುದೇ ಎಂದು ವಿಜಯ್ ಮಲ್ಯ ಅವರನ್ನು ಸಾರ್ವಜನಿಕವಾಗಿ ಕೇಳುವ ಮೂಲಕ ಆನ್&zwnj;ಲೈನ್&zwnj;ನಲ್ಲಿ ವ್ಯಾಪಕ ಗಮನ ಸೆಳೆದಿದ್ದಾರೆ. ಎಕ್ಸ್&zwnj;ನಲ್ಲಿ ಹಂಚಿಕೊಂಡ ಪೋಸ್ಟ್ ತಕ್ಷಣವೇ ಆನ್&zwnj;ಲೈನ್&zwnj;ನಲ್ಲಿ ಸಂಚಲನ ಸೃಷ್ಟಿಸಿತು ಮತ್ತು ಸ್ಟಾರ್ಟ್&zwnj;ಅಪ್ ಮತ್ತು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿ ಚರ್ಚೆಯ ವಿಷಯವಾಯಿತು.&lt;/p&gt;&lt;p&gt;ತಮ್ಮ ಪೋಸ್ಟ್&zwnj;ನಲ್ಲಿ, ರಾಜ್ ನೇರವಾಗಿ ಮಲ್ಯಗೆ ಪತ್ರ ಬರೆದು, ಮಾರ್ಚ್ 23 ರಂದು ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಲು ಬಯಸಿದ್ದೇನೆ ಎಂದು ಹೇಳಿದರು, ಇದು ಬೆಂಗಳೂರಿನಲ್ಲಿ ಅವರು ಕಳೆದುಕೊಂಡಿದ್ದ ಹಳೆಯ ಒಳ್ಳೆಯ ದಿನಗಳನ್ನು ಮತ್ತು ಶಕ್ತಿಯನ್ನು ಮರಳಿ ತರುತ್ತದೆ. ಅವರು ಕಿಂಗ್&zwnj;ಫಿಶರ್ ವಿಲ್ಲಾವನ್ನು ಒಂದು ರಾತ್ರಿಗೆ ಬಾಡಿಗೆಗೆ ನೀಡಬಹುದೇ ಎಂದು ಕೇಳಿದರು, ಅವರು ಗಂಭೀರವಾಗಿ ಮತ್ತು ಪಾವತಿಸಲು ಸಿದ್ಧರಿದ್ದಾರೆ ಎಂದು ಹೇಳಿದರು. ಆಸ್ತಿಯ ಪ್ರಸ್ತುತ ಮಾಲೀಕರು ಯಾರು ಎಂದು ಸಹ ಅವರು ಕೇಳಿದರು. ಪೋಸ್ಟ್ ವೈರಲ್ ಆಗಿದೆ ಮತ್ತು 1.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.&lt;/p&gt;&lt;h2&gt;&lt;strong&gt;ಪೋಸ್ಟ್​ಗೆ ಪ್ರತಿಕ್ರಿಯೆ&lt;/strong&gt;&lt;/h2&gt;&lt;p&gt;ಈ ಕ್ಷಣವನ್ನು ವಿಶೇಷವಾಗಿಸಿದ್ದು ಪ್ರಶ್ನೆ ಕೇಳುವ ಧೈರ್ಯ ಮಾತ್ರವಲ್ಲ, ಅದಕ್ಕೆ ಬಂದ ಪ್ರತಿಕ್ರಿಯೆಗಳು ಕೂಡ. ಪೋಸ್ಟ್&zwnj;ಗೆ ಪ್ರತಿಕ್ರಿಯೆಗಳು ಬದಲಾಗಿವೆ. ನಿಮ್ಮ ಯೋಜನೆ ನಿಜವಾಗಿಯೂ ಯಶಸ್ವಿಯಾದರೆ ಅದ್ಭುತ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ನವೋದ್ಯಮ ಜಗತ್ತು &quot;ಉತ್ತಮವಾಗುತ್ತಿದೆ. ಹುಟ್ಟುಹಬ್ಬಕ್ಕೆ ನಿಧಿಯನ್ನು ಕೇಳುತ್ತಿದ್ದ ಜನರು ಈಗ ತಮ್ಮ ಜನ್ಮದಿನಗಳನ್ನು ಆಚರಿಸಲು ಪ್ರಮುಖ ಉದ್ಯಮಿಯಿಂದ ವಿಲ್ಲಾವನ್ನು ಹುಡುಕುತ್ತಿದ್ದಾರೆ. ಇದು ಅಸಾಧ್ಯವನ್ನು ಸಾಧಿಸುವ ಪ್ರಯತ್ನ ಎಂದಿದ್ದಾರೆ.&lt;/p&gt;&lt;p&gt;ಆನ್&zwnj;ಲೈನ್ ಚರ್ಚೆಗೆ ಒಂದು ಪ್ರಾಯೋಗಿಕ ಅಂಶವೂ ಇತ್ತು. ಕೆಲವು ಬಳಕೆದಾರರು ಮಲ್ಯ ಸಾರ್ವಜನಿಕ ನೆನಪಿನಲ್ಲಿ ಬೆಂಗಳೂರಿನೊಂದಿಗೆ ಸಾಂಕೇತಿಕವಾಗಿ ಸಂಬಂಧ ಹೊಂದಿದ್ದರೂ, ಅವರು ಇನ್ನೂ ಆಸ್ತಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ ಎಂದು ಅರ್ಥವಲ್ಲ ಎಂದು ಗಮನಸೆಳೆದರು. ಒಂದು ಕಾಮೆಂಟ್ ಅವರ ಆಸ್ತಿಗಳನ್ನು ಒಳಗೊಂಡ ದೀರ್ಘಕಾಲದ ಸಾಲ ವಸೂಲಾತಿ ಪ್ರಕರಣವನ್ನು ಉಲ್ಲೇಖಿಸಿದೆ, ಬ್ಯಾಂಕುಗಳು ವಿಲ್ಲಾವನ್ನು ವಶಪಡಿಸಿಕೊಂಡು ಹರಾಜು ಹಾಕಿವೆ ಎಂದು ಹೇಳಿದೆ.&lt;/p&gt;&lt;h3&gt;&lt;strong&gt;ಯಾರೀ ಪ್ರಿಯಮ್​ ರಾಜ್​?&lt;/strong&gt;&lt;/h3&gt;&lt;p&gt;ಪ್ರಿಯಮ್ ರಾಜ್ ಒಬ್ಬ ತಂತ್ರಜ್ಞಾನ ಉದ್ಯಮಿಯಾಗಿದ್ದು, ಅವರು ಮ್ಯಾಟ್ ಪಾರ್ ಅವರೊಂದಿಗೆ Vid.AI ಅನ್ನು ಸಹ-ಸ್ಥಾಪಿಸಿದರು. ಕಳೆದ ವರ್ಷ, ಅವರು ಲಿಂಕ್ಡ್&zwnj;ಇನ್&zwnj;ನಲ್ಲಿ ಕಂಪನಿಯು Vid.AI ಡೊಮೇನ್ ಅನ್ನು $47,000 ಅಥವಾ ಸುಮಾರು ₹4.3 ಮಿಲಿಯನ್ (ಸರಿಸುಮಾರು ₹4.3 ಮಿಲಿಯನ್) ಗೆ ಖರೀದಿಸಿದೆ ಮತ್ತು ಕಂಪನಿಯನ್ನು US ನಲ್ಲಿ ನೋಂದಾಯಿಸಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಯೂಟ್ಯೂಬ್ ಆಪ್ಟಿಮೈಸೇಶನ್&zwnj;ಗಾಗಿ ಬಳಸುವ ಉತ್ಪನ್ನವಾದ Morise.ai ಅನ್ನು ರಾಜ್ ಏಕಾಂಗಿಯಾಗಿ ಸ್ಥಾಪಿಸಿದರು. ಕಂಪನಿಯ ವಾರ್ಷಿಕ ಆದಾಯವು ₹55,000 ಅಥವಾ ಸುಮಾರು ₹5 ಮಿಲಿಯನ್ (ಸರಿಸುಮಾರು ₹5 ಮಿಲಿಯನ್) ತಲುಪಿತು. ಅದೇ ವರದಿಯ ಪ್ರಕಾರ, ಮ್ಯಾಟ್ ಪಾರ್ ಜನವರಿ 2024 ರಲ್ಲಿ ಕಂಪನಿಯನ್ನು ಸ್ವಾಧೀನಪಡಿಸಿಕೊಂಡರು ಮತ್ತು ಅದನ್ನು TubeMagic ಎಂದು ಮರುನಾಮಕರಣ ಮಾಡಿದರು, ಆದರೆ ರಾಜ್ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಉಳಿದರು. ಮಲ್ಯ ಅವರ ಉತ್ತರಕ್ಕಾಗಿ ನೆಟ್ಟಿಗರು ಕಾಯುತ್ತಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[business]]></category>
            <dc:creator>Suchethana D</dc:creator>
            <atom:link href="https://kannada.asianetnews.com/business/bengaluru-founders-open-offer-to-rent-vijay-mallyas-villa-triggers-viral-buzz-suc/articleshow-v9uv1g0"/>
        </item>
        <item>
            <title><![CDATA[ಕೃಷ್ಣಾ ನದಿಗೆ ಹರಿದು ಬರುತ್ತಿದೆ  60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ]]></title>
            <link>https://kannada.asianetnews.com/gallery/karnataka-districts/maharashtra-rain-60-thousand-cusecs-of-water-is-flowing-into-krishna-river-chikkodi-nippani-taluks-bridges-are-blocked-e5u7gla</link>
            <guid isPermaLink="true">https://kannada.asianetnews.com/gallery/karnataka-districts/maharashtra-rain-60-thousand-cusecs-of-water-is-flowing-into-krishna-river-chikkodi-nippani-taluks-bridges-are-blocked-e5u7gla</guid>
            <pubDate>Sun, 05 Jul 2026 14:16:53 +0530</pubDate>
            <description><![CDATA[ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿನ ಭಾರಿ ಮಳೆಯಿಂದಾಗಿ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrq0qkypv0jtbkj4s2yxgrx,imgname-krishna-river--2--1783240875646.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿನ ಭಾರಿ ಮಳೆಯಿಂದಾಗಿ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಜಿಲ್ಲಾಡಳಿತವು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.&lt;/p&gt;&lt;img&gt;&lt;p&gt;ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಇದರಲ್ಲಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್&zwnj;ನಿಂದಲೇ ಸುಮಾರು 40 ಸಾವಿರ ಕ್ಯೂಸೆಕ್ಸ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.&lt;/p&gt;&lt;img&gt;&lt;p&gt;ದೂದಗಂಗಾ ಮತ್ತು ವೇದಗಂಗಾ ಈ ಎರಡೂ ನದಿಗಳು ಪ್ರಸ್ತುತ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿಗಳ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕುಗಳಲ್ಲಿ ಹಲವು ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಲಾಗುತ್ತಿದೆ.&lt;/p&gt;&lt;img&gt;&lt;p&gt;ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ-ಯಡ್ಡೂರ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ನಿಪ್ಪಾಣಿ ತಾಲೂಕಿನ ಒಟ್ಟು ಮೂರು ಸಂಪರ್ಕ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ.&lt;/p&gt;&lt;img&gt;&lt;p&gt;ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್ ಮತ್ತು ಭೋಜವಾಡಿ-ಕುಣ್ಣುರ ಸಂಪರ್ಕಿಸುವ ಸೇತುವೆಗಳು ಜಲಾವೃತಗೊಂಡಿವೆ. ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾರವಾಡ-ಕನ್ನೂರ ಸೇತುವೆಯೂ ಹಾನಿಗೊಳಗಾಗಿದೆ.ಮಹಾರಾಷ್ಟ್ರದಲ್ಲಿರುವ ರಾಜಾಪುರ-ಜುಗಳ ಸೇತುವೆಯೂ ಸಹ ನೀರಿನಲ್ಲಿ ಮುಳುಗಡೆಯಾಗಿದೆ.&lt;/p&gt;&lt;img&gt;&lt;p&gt;ಪ್ರಮುಖ ಸೂಚನೆ: ಕೃಷ್ಣಾ, ವೇದಗಂಗಾ ಮತ್ತು ದೂದಗಂಗಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಯಾರೂ ನದಿಗೆ ಇಳಿಯಬಾರದು ಮತ್ತು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಆಡಳಿತವು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/karnataka-districts/maharashtra-rain-60-thousand-cusecs-of-water-is-flowing-into-krishna-river-chikkodi-nippani-taluks-bridges-are-blocked-e5u7gla"/>
        </item>
        <item>
            <title><![CDATA[ಎಲ್ ನಿನೊ ಎಂಟ್ರಿಯಿಂದ ಮುಂಗಾರು ಮಳೆಯ ಕೊರತೆ; ರೈತರು ಕಂಗಾಲು, ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ]]></title>
            <link>https://kannada.asianetnews.com/gallery/india-news/el-nino-entry-rain-shortage-to-hit-agriculture-and-common-mans-budget-gy4z6xb</link>
            <guid isPermaLink="true">https://kannada.asianetnews.com/gallery/india-news/el-nino-entry-rain-shortage-to-hit-agriculture-and-common-mans-budget-gy4z6xb</guid>
            <pubDate>Sun, 05 Jul 2026 14:05:14 +0530</pubDate>
            <description><![CDATA[El Niño entry India impact: ಎಲ್ ನಿನೊ ಎಂಟ್ರಿಯಿಂದ ಭಾರತದ ಮುಂಗಾರು ಮಳೆಯ ಮೇಲೆ ಭಾರಿ ಹೊಡೆತ ಬೀಳುವ ಆತಂಕವಿದೆ. ಮಳೆಯ ಕೊರತೆಯಿಂದ ಬರಗಾಲದ ಸ್ಥಿತಿ ಎದುರಾಗಿ, ಕೃಷಿ ನಂಬಿದ ರೈತರು ಸಂಕಷ್ಟಕ್ಕೆ ಸಿಲುಕಬಹುದು.]]></description>
            <media:content url="https://static.asianetnews.com/images/w-1280,h-720,format-jpg,imgid-01kwrpbkvmf31ktm2krq5fxcx8,imgname-thumbnail--83--1783240183668.jpg" type="image/jpeg" height="390" width="690"/>
            <content:encoded><![CDATA[&lt;p&gt;El Ni&ntilde;o entry India impact: ಎಲ್ ನಿನೊ ಎಂಟ್ರಿಯಿಂದ ಭಾರತದ ಮುಂಗಾರು ಮಳೆಯ ಮೇಲೆ ಭಾರಿ ಹೊಡೆತ ಬೀಳುವ ಆತಂಕವಿದೆ. ಮಳೆಯ ಕೊರತೆಯಿಂದ ಬರಗಾಲದ ಸ್ಥಿತಿ ಎದುರಾಗಿ, ಕೃಷಿ ನಂಬಿದ ರೈತರು ಸಂಕಷ್ಟಕ್ಕೆ ಸಿಲುಕಬಹುದು.&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;&lt;strong&gt;ಮಳೆ ಮಾರುತಗಳು ದೌರ್ಬಲ್ಯಗೊಳ್ಳಲು ಎಲ್ ನಿನೊ ಎಂಟ್ರಿಯೇ ಕಾರಣ&lt;/strong&gt;ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನದ ಮಹತ್ತರ ಬದಲಾವಣೆಗಳು ಈಗ ಭಾರತದ ಆತಂಕಕ್ಕೆ ಕಾರಣವಾಗಿವೆ. ಅಲ್ಲಿನ ಸಮುದ್ರದ ಮೇಲ್ಮೈ ತಾಪಮಾನದಲ್ಲಿ ಉಂಟಾಗಿರುವ ಏರಿಕೆ ಅಥವಾ 'ಎಲ್ ನಿನೊ' (El Ni&ntilde;o) ವಿದ್ಯಮಾನವು ಭಾರತದ ಮುಂಗಾರು ಮಳೆಯ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಮುಂಗಾರು ಆರಂಭವಾಗಿದ್ದರೂ, ಎಲ್ ನಿನೊ ಎಂಟ್ರಿಯಿಂದಾಗಿ ಈ ಬಾರಿ ಮಳೆ ಮಾರುತಗಳು ದೌರ್ಬಲ್ಯಗೊಳ್ಳುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;img&gt;&lt;p&gt;&lt;strong&gt;ಮುಂಗಾರಿಗೆ ಎದುರಾಗಿರುವ ಸವಾಲುಗಳು&lt;/strong&gt;ಭಾರತದ ಕೃಷಿ ವಲಯವು ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಆದರೆ, ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳ ಪ್ರಕಾರ, ಎಲ್ ನಿನೊ ಪ್ರಭಾವದಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆಯಿದೆ. ಮಳೆಯ ಅನಿಶ್ಚಿತತೆಯು ರೈತರ ಆತಂಕವನ್ನು ಹೆಚ್ಚಿಸಿದ್ದು, ಬಿತ್ತನೆ ಕಾರ್ಯದ ಮೇಲೆ ಇದು ನೇರ ಪರಿಣಾಮ ಬೀರಲಿದೆ.&lt;/p&gt;&lt;img&gt;&lt;p&gt;&lt;strong&gt;ಬಿಸಿಗಾಳಿ ಮತ್ತು ನೀರಿನ ಸಮಸ್ಯೆ&lt;/strong&gt;ಮಳೆಯ ಕೊರತೆಯ ಜೊತೆಗೆ, ದೇಶದ ಹಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ತಾಪಮಾನ ಏರಿಕೆಯ ಪರಿಣಾಮವಾಗಿ ಬಿಸಿಗಾಳಿಯ (Heatwave) ತೀವ್ರತೆ ಹೆಚ್ಚಲಿದ್ದು, ಇದು ಜನಸಾಮಾನ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುವುದರಿಂದ ಕೃಷಿಗೆ ಮಾತ್ರವಲ್ಲದೆ, ಕುಡಿಯುವ ನೀರಿಗೂ ಕೊರತೆ ಉಂಟಾಗುವ ಎಚ್ಚರಿಕೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.&lt;/p&gt;&lt;img&gt;&lt;p&gt;&lt;strong&gt;ಬೆಳೆಗಳ ಇಳುವರಿ ಮತ್ತು ಬೆಲೆ ಏರಿಕೆ ಆತಂಕ&lt;/strong&gt;ನಮ್ಮ ದೇಶದ ಪ್ರಮುಖ ಆಹಾರ ಬೆಳೆಗಳಾದ ಅಕ್ಕಿ ಹಾಗೂ ವಾಣಿಜ್ಯ ಬೆಳೆಯಾದ ಕಬ್ಬಿನ ಇಳುವರಿಗೆ ಈ ಬಾರಿ ದೊಡ್ಡ ಹೊಡೆತ ಬೀಳುವ ಆತಂಕವಿದೆ. ನೀರಿನ ಲಭ್ಯತೆ ಕಡಿಮೆಯಾದರೆ ಬೆಳೆಗಳು ಒಣಗುವ ಸಾಧ್ಯತೆಯಿದ್ದು, ಇದು ಒಟ್ಟಾರೆ ಆಹಾರ ಉತ್ಪಾದನೆಯ ಕುಸಿತಕ್ಕೆ ಕಾರಣವಾಗಬಹುದು. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾದರೆ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಇದು ಜನಸಾಮಾನ್ಯರ ಬಜೆಟ್ ಮೇಲೆ ಪರಿಣಾಮ ಬೀರಲಿದೆ.&lt;/p&gt;&lt;img&gt;&lt;p&gt;&lt;strong&gt;ಹವಾಮಾನ ಇಲಾಖೆಯ ನಿಗಾ&lt;/strong&gt;ಭಾರತೀಯ ಹವಾಮಾನ ಇಲಾಖೆ (IMD) ಪೆಸಿಫಿಕ್ ಮಹಾಸಾಗರದ ಈ ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ಇಟ್ಟಿದೆ. ಎಲ್ ನಿನೊ ಪ್ರಭಾವ ಎಷ್ಟು ತೀವ್ರವಾಗಿರುತ್ತದೆ ಮತ್ತು ಮಳೆಯ ಪ್ರಮಾಣದಲ್ಲಿ ಎಷ್ಟು ವ್ಯತ್ಯಾಸವಾಗಬಹುದು ಎಂಬುದನ್ನು ಹವಾಮಾನ ಇಲಾಖೆಯು ಆಗಾಗ ಅಪ್&zwnj;ಡೇಟ್ ಮಾಡುತ್ತಿದೆ. ರೈತರು ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಕೃಷಿ ವಿಧಾನಗಳನ್ನು ಅನುಸರಿಸಲು ಸಿದ್ಧರಾಗಿರಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.&lt;/p&gt;&lt;p&gt;ಒಟ್ಟಾರೆಯಾಗಿ, ಪೆಸಿಫಿಕ್ ಮಹಾಸಾಗರದಲ್ಲಿ ಏಳುತ್ತಿರುವ ಈ ಬದಲಾವಣೆಯ ಅಲೆಗಳು ಭಾರತದ ಆರ್ಥಿಕತೆ ಮತ್ತು ಕೃಷಿ ವಲಯಕ್ಕೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿವೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/india-news/el-nino-entry-rain-shortage-to-hit-agriculture-and-common-mans-budget-gy4z6xb"/>
        </item>
        <item>
            <title><![CDATA[ಗಂಡಸ್ರು ಬೆಚ್ಚಿಬೀಳೋ ಇನ್ನೊಂದು ಕೊಲೆ: ಬಾತ್​ರೂಮ್​ನಲ್ಲೇ ಗಂಡನ ಸಮಾಧಿ! 45 ದಿನ ಯಾಮಾರಿಸಿದ ಖತರ್ನಾಕ್​ ಲೇಡಿ]]></title>
            <link>https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi</link>
            <guid isPermaLink="true">https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi</guid>
            <pubDate>Sun, 05 Jul 2026 14:04:42 +0530</pubDate>
            <description><![CDATA[ಆಗ್ರಾದಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು, ಶವವನ್ನು ಮನೆಯ ಸ್ನಾನಗೃಹದಲ್ಲಿಯೇ ಹೂತುಹಾಕಿದ್ದಾಳೆ. ಬಳಿಕ 45 ದಿನಗಳ ಕಾಲ ಪತಿ ಕಾಣೆಯಾಗಿದ್ದಾನೆಂದು ನಾಟಕವಾಡಿದ್ದು, ಮೃತನ ಸಹೋದರನ ಅನುಮಾನದಿಂದಾಗಿ ಈ ಭಯಾನಕ ಸತ್ಯ ಬಯಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrpj1ez4m3v78spkembsce7,imgname-husband-s-murder-1783240394207.jpg" type="image/jpeg" height="390" width="690"/>
            <content:encoded><![CDATA[&lt;p&gt;ಪತಿ, ಭಾವಿ ಪತಿ, ಸ್ನೇಹಿತರ ಕೊಲೆ ಮಾಡುವ ಮೂಲಕ ಹೆಚ್ಚಾಗಿ ಮಹಿಳೆಯರೇ ಕೊಲೆಗಾರರಾಗುತ್ತಿರುವ ಆತಂಕಕಾರಿ ಘಟನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದೆ. ಹನಿಮೂನ್​ನಲ್ಲಿ ಪತಿಯನ್ನು ಕೊಂದ ಸೋನಂ ರಘುವಂಶಿ ಬಳಿಕ, ಈಚೆಗೆ ಭಾವಿ ಪತಿಯನ್ನು ಕೊಂದ ಸಿಯಾಳ ಘಟನೆ ಇನ್ನೂ ಹಸಿಹಸಿಯಾಗಿರುವಾಗಲೇ ಮತ್ತೊಂದು ಆತಂಕಕಾಗಿ ಘಟನೆ ಪುರುಷ ವರ್ಗವನ್ನು ಬೆಚ್ಚಿಬೀಳಿಸಿದೆ. ಪುರುಷರೇ ಕೊಲೆಗಾರರಾಗುತ್ತಿರುವ ಘಟನೆಗಳು ನಿಂತಿಲ್ಲವಾದರೂ, ಇದರ ನಡುವೆಯೇ ಯಾವುದೇ ಕಾರಣ ಇಲ್ಲದೇ, ಪುರುಷರ ತಪ್ಪೇ ಇಲ್ಲದೇ ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರು ಕೊಲೆಗಾತಿಯಾಗುತ್ತಿರುವ ಶಾಕಿಂಗ್​ ಘಟನೆ ನಡೆಯುತ್ತಿದ್ದು, ಆಗ್ರಾದಲ್ಲಿನ ಒಂದು ಘಟನೆ ಬೆಚ್ಚಿ ಬೀಳಿಸುವಂತಿದೆ.&lt;/p&gt;&lt;h2&gt;&lt;strong&gt;ಬಾತ್​ರೋಮ್​ನಲ್ಲಿ ಹೂತು ಹಾಕಿದ್ಲು!&lt;/strong&gt;&lt;/h2&gt;&lt;p&gt;ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರುವ ಘಟನೆಯಾಗಿದೆ. ಪತ್ನಿಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಸ್ನಾನಗೃಹದಲ್ಲಿ ಹೂತು ಹಾಕಿದ್ದಾಳೆ. ಕೊನೆಗೆ ಎಲ್ಲರೂ ಮಾಡುವಂತೆ ಪತಿ ಕಣ್ಮೆರೆಯಾಗಿರುವುದಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಸುರೇಂದ್ರ ಶರ್ಮಾ ಎನ್ನುವವರ ಪತ್ನಿ ರೂಬಿ ಈ ಖತರ್ನಾಕ್​ ಹಂತಕಿ. ಪತಿಯನ್ನು ಕೊಂದ ಬಳಿಕ ಯಾರಿಗೂ ಡೌಟೇ ಬರದಂತೆ ದಿನವೂ ಕಣ್ಣೀರು ಹಾಕುತ್ತಿದ್ದಾಳೆ. ಹೀಗೆ ಈ ನಾಟಕ 45 ದಿನಗಳು ಮುಂದುವರೆದಿವೆ. ಸುರೇಂದ್ರ ಅವರ ಸಹೋದರ ಅನಿಲ್​ ಶರ್ಮಾ ಅವರು ಪೊಲೀಸರಿಗೆ ದೂರು ನೀಡಿದಾಗ, ಮನೆಯ ಬಳಿಕ ಆಸುಪಾಸಿನ ಸಿಸಿಟಿವಿ ಎಲ್ಲಾ ಪರಿಶೀಲನೆ ಮಾಡಲಾಗಿತ್ತು. ಆದರೆ ಮನೆ ಬಿಟ್ಟು ಎಲ್ಲಿಯೂ ಹೊರಗೆ ಹೋದ ಸುಳಿವೇ ಸಿಗದೇ ಪೊಲೀಸರು ಕಂಗಾಲಾಗಿ ಹೋಗಿದ್ದರು.&lt;/p&gt;&lt;p&gt;ಪತಿ ಕಾಣೆಯಾಗಿರುವುದಾಗಿ ಹೇಳುತ್ತಲೇ ಬಂದ ರೂಬಿ, ಕೊನೆಗೆ ಪತಿಯ ಪಿಂಚಣಿಯ ಬಗ್ಗೆ ವಿಚಾರಿಸುತ್ತಿರುವಾಗಿ ಸಹೋದರ ಅನಿಲ್​ ಶರ್ಮಾ ಅವರಿಗೆ ಡೌಟ್​ ಬಂದಿದೆ. ತಮ್ಮ ಅತ್ತಿಗೆಯನ್ನು ಬೇರೆ ಬೇರೆ ರೀತಿಯಲ್ಲಿ ವಿಚಾರಿಸಿದ್ರೂ ಆಕೆ ಮಾತ್ರ ಅಳುತ್ತಲೇ ಗಂಡ ಎಲ್ಲೋ ಹೋದವ ಬರಲೇಇಲ್ಲ ಎಂದು ಗೋಳಾಡುತ್ತಲೇ ಇದ್ದಳು. ಅನಿಲ್ ಶರ್ಮಾ, ರೂಬಿಯನ್ನು ಸುರೇಂದ್ರ ಬಗ್ಗೆ ಪದೇ ಪದೇ ಕೇಳಿದಾಗ ಪ್ರಕರಣವು ಹೊಸ ತಿರುವು ಪಡೆದುಕೊಂಡಿತು. ಪ್ರತಿ ಬಾರಿಯೂ, ರೂಬಿ ಸುರೇಂದ್ರ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾನೆ ಮತ್ತು ಶೀಘ್ರದಲ್ಲೇ ಹಿಂತಿರುಗುತ್ತಾನೆ ಎಂದು ಉತ್ತರಿಸಿದಳು. ಆದಾಗ್ಯೂ, ಅನಿಲ್ ಶರ್ಮಾ ಪದೇ ಪದೇ ಅವಳನ್ನು ಪ್ರಶ್ನಿಸಿದಾಗ ಮತ್ತು ಸತ್ಯವನ್ನು ಕಂಡುಹಿಡಿಯಲು ಅವಳ ಮೇಲೆ ಒತ್ತಡ ಹೇರಿದಾಗ, ರೂಬಿ ಕೋಪಗೊಂಡು ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಿದಳು. ಸುರೇಂದ್ರನ ಶವವನ್ನು ಮನೆಯ ಸ್ನಾನಗೃಹದ ಕೆಳಗೆ ಹೂಳಲಾಗಿದೆ ಮತ್ತು ಹೊಸ ಪ್ಲಾಸ್ಟರ್ ಅನ್ನು ಅನ್ವಯಿಸಲಾಗಿದೆ ಎಂದು ಅವಳು ಬಹಿರಂಗಪಡಿಸಿದಳು.&lt;/p&gt;&lt;h3&gt;&lt;strong&gt;ಮೃತನ ಸಹೋದರನಿಂದ ದೂರು&lt;/strong&gt;&lt;/h3&gt;&lt;p&gt;ಇದನ್ನು ಕೇಳಿದ ಮೃತನ ಸಹೋದರ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ನಾನಗೃಹದ ನೆಲವನ್ನು ಒಡೆದು ಶವವನ್ನು ಹೊರತೆಗೆದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ತನ್ನ ಗಂಡನ ಶವವನ್ನು ಸ್ನಾನಗೃಹದಲ್ಲಿ ಹೂಳಿದ್ದಾಳೆ ಎಂದು ತಿಳಿದುಬಂದಿದೆ ಎಂದು ಎಸಿಪಿ ಹರಿಪರ್ವತ್ ಅಮಿಷಾ ಹೇಳಿದ್ದಾರೆ. ಪ್ರಸ್ತುತ, ಆರೋಪಿ ಪತ್ನಿ ರೂಬಿಯನ್ನು ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಸುರೇಂದ್ರನ ಸಾವಿನ ಸಂದರ್ಭಗಳನ್ನು ನಿರ್ಧರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ಪರೀಕ್ಷೆ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ದುಡ್ಡಿಗಾಗಿ ಈ ಕೃತ್ಯ ಎಸಗಿದ್ದಾಳೋ ಅಥವಾ ಇನ್ನೇನು ದುರುದ್ದೇಶ ಇದೆಯೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[crime]]></category>
            <dc:creator>Suchethana D</dc:creator>
            <atom:link href="https://kannada.asianetnews.com/crime/wifes-criminal-case-a-shocking-case-from-agra-uttar-pradesh-has-stunned-the-nation-suc/articleshow-2smqhhi"/>
        </item>
        <item>
            <title><![CDATA[Airtelನಿಂದ ಹೊಸ ಪ್ಲಾನ್: Jioಗೆ ಶುರುವಾಯ್ತು ಢವ ಢವ; Unlimited 5G ಜೊತೆ ಹಲವು ಲಾಭ]]></title>
            <link>https://kannada.asianetnews.com/gallery/business/telecom-company-airtel-has-launched-a-new-recharge-plan-for-just-rs-200-with-unlimited-5g-28-day-validity-mrq-hhf6gzo</link>
            <guid isPermaLink="true">https://kannada.asianetnews.com/gallery/business/telecom-company-airtel-has-launched-a-new-recharge-plan-for-just-rs-200-with-unlimited-5g-28-day-validity-mrq-hhf6gzo</guid>
            <pubDate>Sun, 05 Jul 2026 13:56:45 +0530</pubDate>
            <description><![CDATA[ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jaq0nym18nys5r9m5g1fsg0c,imgname-airtel-mukesh-ambani.jpg" type="image/jpeg" height="390" width="690"/>
            <content:encoded><![CDATA[&lt;p&gt;ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್&zwnj;ಟೆಲ್, ಕೇವಲ 200 ರೂಪಾಯಿಯಲ್ಲಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಂಬರ್ ಒನ್ ಆಗಿರುವ ರಿಲಯನ್ಸ್ ಜಿಯೋಗೆ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.&lt;/p&gt;&lt;img&gt;&lt;p&gt;ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್&zwnj;ಟೆಲ್ ಹೊಸ ಆಫರ್ ಬಿಡುಗಡೆ ಮಾಡಿದೆ. ಈ ಹೊಸ ರೀಚಾರ್ಜ್ ಪ್ಲಾನ್ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋಗೆ ಹೊಡೆತ ನೀಡುವ ಸಾಧ್ಯತೆಗಳಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.&lt;/p&gt;&lt;p&gt;Airtel ಸದ್ಯ ಬಿಡುಗಡೆ ಮಾಡಿರುವ ರೀಚಾರ್ಜ್ ಪ್ಲಾನ್&zwnj; ಬಳಕೆದಾರರಿಗೆ ಹಲವು ಲಾಭಗಳನ್ನು ನೀಡುತ್ತಿದೆ. ಈ ಪ್ಲಾನ್ ಪ್ರಮುಖ ವಿಶೇಷತೆ ಏನಂದ್ರೆ ಕೇವಲ 200 ರೂಪಾಯಿಯಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. 200 ರೂ. ಪ್ಲಾನ್ ನಲ್ಲಿರುವ ಬೆನೆಫಿಟ್ ಏನು ಎಂದು ನೋಡೋಣ ಬನ್ನಿ.&lt;/p&gt;&lt;img&gt;&lt;p&gt;200 ರೂಪಾಯಿಯ ರೀಚಾರ್ಜ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್&zwnj;ನಲ್ಲಿ ಬಳಕೆದಾರರಿಗೆ ಒಟ್ಟು 30GB ಇಂಟರ್&zwnj;ನೆಟ್ ಡೇಟಾ ಸಿಗಲಿದೆ. ನೆಟ್ ಬಳಕೆದಾರರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದೆ. ಇದರ ಜೊತೆಯಲ್ಲಿಯೇ Unlimited 5G ಡೇಟಾ ಇರಲಿದೆ. ಈ ಪ್ಲಾನ್ ಲಾಭ ಪಡೆಯಲು ಸ್ಮಾರ್ಟ್&zwnj;ಫೋನ್ ಹೊಂದಿರಬೇಕಾಗುತ್ತೆ ಮತ್ತು ಬೇಸಿಕ್ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡಿರಬೇಕು.&lt;/p&gt;&lt;img&gt;&lt;p&gt;ರೀಚಾರ್ಜ್ ಆಕ್ಟಿವೇಟ್ ಮಾಡಿಕೊಂಡ ದಿನದಿಂದ 28 ದಿನಗಳವರೆಗೆ ಗ್ರಾಹಕರಿಗೆ JioHotstar Mobile ಸಬ್&zwnj;ಸ್ಕ್ರಿಪ್ಷನ್, Airtel Xstream Play Premium ಆಕ್ಸೆಸ್ ಸಹ ಸಿಗಲಿದೆ. ಹಾಗೆಯೇ ಬರೋಬ್ಬರಿ 18 ಒಟಿಟಿ ಆಪ್ಸ್ ಗಳ ಸಬ್&zwnj;ಸ್ಕ್ರಿಪ್ಷನ್ ಲಭ್ಯವಾಗಲಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.&lt;/p&gt;&lt;img&gt;&lt;p&gt;ಇನ್ನು ವೊಡಾಫೋನ್ ಐಡಿಯಾ ಸಹ 199 ರೂಪಾಯಿಯ ಡಬಲ್ ಧಮಾಕಾ ರೀಚಾರ್ಜ್ ಪ್ಲಾನ್ ಒಳಗೊಂಡಿದೆ. ಇಲ್ಲಿ ನಿಮಗೆ ಡೇಟಾ ಜೊತೆಯಲ್ಲಿ ಅನ್&zwnj;ಲಿಮಿಟೆಡ್ ಕಾಲಿಂಗ್ ಸೌಲಭ್ಯ ಸಹ ಸಿಗಲಿದೆ. 2GB ಡೇಟಾ ಮತ್ತು ಉಚಿತವಾಗಿ 300 ಎಸ್&zwnj;ಎಂಎಸ್&zwnj;ಗಳನ್ನು ಕಳುಹಿಸಬಹುದಾಗಿದೆ. ಈ ಪ್ಲಾನ್ ವ್ಯಾಲಿಡಿಟಿ 28 ದಿನಗಳಾಗಿರುಗತ್ತದೆ.&lt;/p&gt;&lt;img&gt;&lt;p&gt;ಏರ್&zwnj;ಟೆಲ್ ಮತ್ತು ವೊಡಾಫೋನ್ ಐಡಿಯಾ ನೀಡುತ್ತಿರುವ ಆಫರ್&zwnj;ನಿಂದ ಜಿಯೋಗೆ ಟೆನ್ಷನ್ ಹೆಚ್ಚಾಗಿದೆ. ಜಿಯೋ ಸಹ 28 ದಿನಗಳಲ್ಲಿ 200GB ಡೇಟಾ ಪ್ಲಾನ್ ಹೊಂದಿದೆ. ಈ ಪ್ಲಾನ್&zwnj;ನಲ್ಲಿ JioHotstar ಜೊತೆ 16 ಒಟಿಟಿ ಆಪ್&zwnj;ಗಳ ಸಬ್&zwnj;ಸ್ಕ್ರಿಪ್ಷನ್ ಸಿಗಲಿದೆ.&lt;/p&gt;]]></content:encoded>
            <category><![CDATA[business]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/business/telecom-company-airtel-has-launched-a-new-recharge-plan-for-just-rs-200-with-unlimited-5g-28-day-validity-mrq-hhf6gzo"/>
        </item>
        <item>
            <title><![CDATA[ಮೊದಲ ಪಂದ್ಯ ರದ್ದು, ಎರಡನೇಯದ್ದು ಸೋಲು.. ಸರಣಿ ಉಳಿಸಿಕೊಳ್ಳಲಿಲ್ಲ ತಂಡದಲ್ಲಿ ಹೊಸ ಬೆಳವಣಿಗೆ]]></title>
            <link>https://kannada.asianetnews.com/sports/india-vs-england-third-t20-match-big-challenge-for-coach-gambhir-and-captain-shreyas-iyer/articleshow-1ade5di</link>
            <guid isPermaLink="true">https://kannada.asianetnews.com/sports/india-vs-england-third-t20-match-big-challenge-for-coach-gambhir-and-captain-shreyas-iyer/articleshow-1ade5di</guid>
            <pubDate>Sun, 05 Jul 2026 13:44:13 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿರುವ ಭಾರತಕ್ಕೆ ಮೂರನೇ ಪಂದ್ಯ ನಿರ್ಣಾಯಕವಾಗಿದೆ. ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಟೀಮ್ ಇಂಡಿಯಾದಲ್ಲಿ, ಸಚಿನ್ ದಾಖಲೆ ಮುರಿದ ಯುವ ಆಟಗಾರ ವೈಭವ್ ಸೂರ್ಯವಂಶಿ ಗಮನ ಸೆಳೆದಿದ್ದಾರೆ. ಈ ಪಂದ್ಯದ ವಿವರ ಹಾಗೂ ತಂಡದ ಮುಂದಿರುವ ಸವಾಲುಗಳನ್ನು ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrnat05xea7gft273c93bt8,imgname-shreyas-iyer--1--1783239108612.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಲಂಡನ್: &lt;/strong&gt;ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯು ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದರೆ, ಎರಡನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭಾರತವನ್ನು ಮಣಿಸಿದೆ. ಇದರಿಂದಾಗಿ ಟೀಮ್ ಇಂಡಿಯಾ ಸರಣಿಯಲ್ಲಿ 0-1 ರಿಂದ ಹಿನ್ನಡೆ ಅನುಭವಿಸಿದೆ.&lt;/p&gt;&lt;p&gt;ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡಕ್ಕೆ ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಳ್ಳಲು ಮೂರನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಒಂದು ವೇಳೆ ಈ ಪಂದ್ಯವನ್ನೂ ಸೋತರೆ ಸರಣಿ ಕೈತಪ್ಪುವ ಭೀತಿ ಎದುರಾಗಲಿದೆ. ಒಂದು ವೇಳೆ ಮೂರನೇ ಪಂದ್ಯವನ್ನೂ ಸೋತು ಟೀಂ ಇಂಡಿಯಾ ಸರಣಿ ಕೈಚೆಲ್ಲಿದರೆ ಕೋಚ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ತಂಡದ ನಿರ್ವಹಣೆ ಬಗ್ಗೆ ಚರ್ಚೆ ಆಗಲಿದೆ. ತಂಡದಲ್ಲಿ ಹೊಸ ಬೆಳವಣಿಗೆಗೂ ಕಾರಣವಾಗಬಹುದು.&lt;/p&gt;&lt;p&gt;&amp;nbsp;ಈಗಾಗಲೇ ಅಭಿಮಾನಿಗಳು ಟಿ-20ಯಲ್ಲಿ ಸೂರ್ಯ ಕುಮಾರ್ ಯಾದವ್ ಅವರನ್ನು ಮಿಸ್ ಮಾಡಿಕೊಳ್ತಿದ್ದೇವೆ. ಅವರನ್ನು ತಂಡಕ್ಕೆ ವಾಪಸ್ ಸೇರಿಸಿಕೊಳ್ಳಬೇಕು ಎಂಬ ಆಗ್ರಹ ಇದೆ. ಐರ್ಲೆಂಡ್ ವಿರುದ್ಧ ಸರಣಿ ಸೋಲಿನ ಕಹಿ ನೆನಪಿನಿಂದ ಅಭಿಮಾನಿಗಳು ಇನ್ನೂ ಹೊರಗೆ ಬಂದಿಲ್ಲ. ಅದರ ಮಧ್ಯೆ ನಿನ್ನೆ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯವನ್ನು ಕೈಚೆಲ್ಲಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಗೆಲುವು ಅನಿವಾರ್ಯ.&lt;/p&gt;&lt;h2&gt;&lt;strong&gt;ಸಚಿನ್ ದಾಖಲೆ ಮುರಿದ ಸೂರ್ಯವಂಶಿ&lt;/strong&gt;&lt;/h2&gt;&lt;p&gt;ಈ ಸರಣಿಯ ಎರಡನೇ ಪಂದ್ಯವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಯಿತು. ಯುವ ಆಟಗಾರ ವೈಭವ್ ಸೂರ್ಯವಂಶಿ ಶನಿವಾರ ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಇದರೊಂದಿಗೆ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದಾರೆ. ಈ ಮೂಲಕ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಪದಾರ್ಪಣೆಯ ಪಂದ್ಯದಲ್ಲಿ ವೈಭವ್ 14 ರನ್ ಗಳಿಸಿದರೂ, ಸರಣಿಯ ಉಳಿದ ಮೂರು ಪಂದ್ಯಗಳಲ್ಲೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.&lt;/p&gt;&lt;h2&gt;&lt;strong&gt;ಭಾರತ vs ಇಂಗ್ಲೆಂಡ್ 3ನೇ ಟಿ20&lt;/strong&gt;&lt;/h2&gt;&lt;p&gt;ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯವು ಜುಲೈ 7, ಮಂಗಳವಾರ ನಡೆಯಲಿದೆ. ಈ ಪಂದ್ಯವು ಲಂಕಾಶೈರ್&zwnj;ನ ವೆಸ್ಟ್ ಬ್ರಿಡ್ಜ್&zwnj;ಫೋರ್ಡ್&zwnj;ನಲ್ಲಿರುವ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ (Trent Bridge Stadium) ನಡೆಯಲಿದೆ. ಭಾರತ ಈ ಮೈದಾನದಲ್ಲಿ ಈವರೆಗೆ 4 ಟಿ20 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು ಮತ್ತು 2ರಲ್ಲಿ ಸೋಲು ಕಂಡಿದೆ. 2022ರಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಇಲ್ಲಿ ಭಾರತವನ್ನು 17 ರನ್&zwnj;ಗಳಿಂದ&lt;/p&gt;&lt;p&gt;ಸೋಲಿಸಿತ್ತು. ಭಾರತೀಯ ಕಾಲಮಾನದ ಪ್ರಕಾರ ಪಂದ್ಯವು ರಾತ್ರಿ 10:00 ಗಂಟೆಗೆ ಪ್ರಾರಂಭವಾಗಲಿದೆ. ಟಾಸ್ ಪ್ರಕ್ರಿಯೆಯು ರಾತ್ರಿ 9:30ಕ್ಕೆ ನಡೆಯಲಿದೆ. ಭಾರತದಲ್ಲಿ ಈ ಪಂದ್ಯದ ನೇರ ಪ್ರಸಾರವನ್ನು ಸೋನಿ ಸ್ಪೋರ್ಟ್ಸ್ ನೆಟ್&zwnj;ವರ್ಕ್ (Sony Sports Network) ಚಾನೆಲ್&zwnj;ಗಳಲ್ಲಿ ವೀಕ್ಷಿಸಬಹುದು.&lt;/p&gt;]]></content:encoded>
            <category><![CDATA[sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/sports/india-vs-england-third-t20-match-big-challenge-for-coach-gambhir-and-captain-shreyas-iyer/articleshow-1ade5di"/>
        </item>
        <item>
            <title><![CDATA[ಇತಿಹಾಸದಲ್ಲೇ 5 ಅತ್ಯಂತ ದುಬಾರಿ ಅಂತ್ಯಕ್ರಿಯೆಗಳಿವು! ಅಲೆಕ್ಸಾಂಡರ್ ದಿ ಗ್ರೇಟ್ ಅಗ್ರಸ್ಥಾನ, ಅಲಿ ಖಮೇನಿ ಸ್ಥಾನ ಎಷ್ಟು?]]></title>
            <link>https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t</link>
            <guid isPermaLink="true">https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t</guid>
            <pubDate>Sun, 05 Jul 2026 13:35:18 +0530</pubDate>
            <description><![CDATA[Ali Khamenei funeral: ಜಗತ್ತಿನಲ್ಲಿ ಅದ್ದೂರಿ ಮದುವೆಗಳು ನಡೆಯುತ್ತವೆ. ಜಗತ್ತಿನ ಅಗರ್ಭ ಶ್ರೀಮಂತರ ಮದುವೆಗಳು ತಿಂಗಳುಗಟ್ಟಲೆ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾಡೋದನ್ನು ನೋಡಿದ್ದೀರಾ? ಕೇಳಿದ್ದಿರಾ?]]></description>
            <media:content url="https://static.asianetnews.com/images/w-1280,h-720,format-jpg,imgid-01kwrk5rz80n56m2xsbegtck1g,imgname-----------------------2026-07-05t130300.426-1783236846567.jpg" type="image/jpeg" height="390" width="690"/>
            <content:encoded><![CDATA[&lt;p&gt;Ali Khamenei funeral: ಜಗತ್ತಿನಲ್ಲಿ ಅದ್ದೂರಿ ಮದುವೆಗಳು ನಡೆಯುತ್ತವೆ. ಜಗತ್ತಿನ ಅಗರ್ಭ ಶ್ರೀಮಂತರ ಮದುವೆಗಳು ತಿಂಗಳುಗಟ್ಟಲೆ ಮಿಲಿಯನ್ ಡಾಲರ್ ವೆಚ್ಚದಲ್ಲಿ ನಡೆಯುತ್ತವೆ. ಆದರೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮಿಲಿಯನ್ ಡಾಲರ್ ವೆಚ್ಚದಲ್ಲಿ ಮಾಡೋದನ್ನು ನೋಡಿದ್ದೀರಾ? ಕೇಳಿದ್ದಿರಾ?&lt;/p&gt;&lt;p&gt;&amp;nbsp;&lt;/p&gt;&lt;img&gt;&lt;p&gt;ಅಲಿ ಖಮೇನಿ ಅಂತ್ಯಕ್ರಿಯೆ: ಇರಾನ್&zwnj;ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ(Ayatollah khomeini) ಅವರ ಅಂತ್ಯಕ್ರಿಯೆಗಾಗಿ ಲಕ್ಷಾಂತರ ಜನರು ಟೆಹ್ರಾನ್&zwnj;ನಲ್ಲಿ ಜಮಾಯಿಸಿದ್ದಾರೆ. ಅವರ ಪಾರ್ಥಿವ ಶರೀರವನ್ನು ಇರಾನ್ ಮತ್ತು ಇರಾಕ್&zwnj;ನ ಐದು ಪ್ರಮುಖ ನಗರಳಾದ ಟೆಹ್ರಾನ್, ಕೋಮ್, ನಜಾಫ್, ಕರ್ಬಲಾ ಮತ್ತು ಮಷಾದ್&zwnj;ಗೆ ಸಾರ್ವಜನಿಕ ದರ್ಶನಕ್ಕೆ ಕೊಂಡೊಯ್ಯಲಾಗುತ್ತಿದೆ. . ವರದಿಗಳ ಪ್ರಕಾರ, ಇರಾನಿನ ಸರ್ಕಾರವು ಅಂತ್ಯಕ್ರಿಯೆಯ ವ್ಯವಸ್ಥೆಗಳಿಗಾಗಿ ಸುಮಾರು 25 ಮಿಲಿಯನ್ ಯುರೋಗಳನ್ನು ಖರ್ಚು ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ನಡುವೆ ಇತಿಹಾಸದಲ್ಲಿ ಐದು ಅತ್ಯಂತ ದುಬಾರಿ ಅಂತ್ಯಕ್ರಿಯೆಗಳ ಬಗ್ಗೆ ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ಇರಾನಿನ ಅಧಿಕಾರಿಗಳು ಒಟ್ಟು ವೆಚ್ಚವನ್ನು ಅಧಿಕೃತವಾಗಿ ಬಹಿರಂಗಪಡಿಸದಿದ್ದರೂ, WELT ತನಿಖೆಯ ಪ್ರಕಾರ ಅಂತ್ಯಕ್ರಿಯೆಯ ಬಜೆಟ್ ಸುಮಾರು 25 ಮಿಲಿಯನ್ ಯುರೋಗಳಾಗಿರಬಹುದು. ಇದರಲ್ಲಿ ಸರಿಸುಮಾರು 15 ಮಿಲಿಯನ್ ಯುರೋಗಳನ್ನು ಟೆಹ್ರಾನ್&zwnj;ನಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಪವಿತ್ರ ಶಿಯಾ ನಗರಗಳಾದ ಕೋಮ್ ಮತ್ತು ಮಶಾದ್&zwnj;ನಲ್ಲಿ ನಡೆಯುವ ಕಾರ್ಯಕ್ರಮಗಳಿಗಾಗಿ 5 ಮಿಲಿಯನ್ ಯುರೋಗಳ ಪ್ರತ್ಯೇಕ ಬಜೆಟ್ ಅನ್ನು ಮೀಸಲಿಡಲಾಗಿದೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;ಹೌದು ಅಂತ್ಯಕ್ರಿಯೆಯಲ್ಲೂ ಇತಿಹಾಸದಲ್ಲಿ ಯಾರೂ ಮಾಡದ ದುಬಾರಿ ಅಂತ್ಯಕ್ರಿಯೆಗಳು ನಡೆದಿವೆ. ಮೊದಲಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಅಂತೀವಲ್ಲ ಅವನ ಅಂತ್ಯಕ್ರಿಗೆ ಸುಮಾರು 600 ಮಿಲಿಯನ್ ಡಾಲರ್! ಅರ್ಥವಾಗಲಿಲ್ಲವೇ ಭಾರತೀಯ ರೂಪಾಯಿಗಳಲ್ಲಿ ಸುಮಾರು ₹5,713 ಕೋಟಿ! ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ಅಂತ್ಯಕ್ರಿಯೆಯಾಗಿದೆ. ಒಂದು ಅಂದಾಜಿ ಪ್ರಕಾರ, ಅಲೆಕ್ಸಾಂಡರ್ ಮೃತದೇಹದೊಡನೆ ಚಿನ್ನದ ಗಟ್ಟಿಗಳು ಶವಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಹನ್ನೆರಡು ಕುದುರೆಗಳು ಸೇರಿ ಎಳೆಯುವಷ್ಟು ಭವ್ಯವಾದ ಚಿನ್ನದ ರಥವನ್ನು ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳುತ್ತಾರೆ&lt;/p&gt;&lt;img&gt;&lt;p&gt;2004 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಅಂತ್ಯಕ್ರಿಯೆ ನಡೆಯಿತು. ಅಮೆರಿಕ ಸರ್ಕಾರದಿಂದಲೇ ನಡೆದ ಈ ಹೇಗಿತ್ತೆಂದರೆ, ಇಷ್ಟು ದುಬಾರಿ ಅಂತ್ಯಕ್ರಿಯೆ ಆಧುನಿಕ ಇತಿಹಾಸದಲ್ಲೇ ಮೊದಲು. ಅವರ ಅಂತ್ಯಕ್ರಿಯೆಗೆ ಸುಮಾರು $400 ಮಿಲಿಯನ್ ವೆಚ್ಚವಾಗಿದೆ. ಅವರ ನಿಧನದಂದು. ಅಮೆರಿಕ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಆಚರಿಸಿತು. ಅಷ್ಟೇ ಅಲ್ಲ ವರ್ಲ್ಡ್ ಲೀಡರ್&zwnj;ಗಳು ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.&lt;/p&gt;&lt;img&gt;&lt;p&gt;2022 ರಲ್ಲಿ ನಡೆದ ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆ ಅಷ್ಟೇ ದುಬಾರಿಯಾಗಿ ನಡೆಯಿತು. ಯುನೈಟೆಡ್ ಕಿಂಗ್&zwnj;ಡಮ್&zwnj;ನಲ್ಲಿ ನಡೆದ ಅಂತ್ಯಕ್ರಿಯೆಯು ಅತಿ ದೊಡ್ಡ ಕಾರ್ಯಕ್ರಮಗಳಲ್ಲೊಂದಾಗಿದೆ. ಈ ಕಾರ್ಯಕ್ರಮದ ವೆಚ್ಚವು &pound;160 ಮಿಲಿಯನ್ ಮೀರಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ವೆಚ್ಚವನ್ನು ಮಿಲಿಟರಿ ಮೆರವಣಿಗೆ, ರಾಷ್ಟ್ರವ್ಯಾಪಿ ಭದ್ರತೆ, ಪೊಲೀಸ್ ವ್ಯವಸ್ಥೆ ಮತ್ತು ಸಮಾರಂಭದಲ್ಲಿ ಭಾಗವಹಿಸುವ ವಿಶ್ವದ ಗಣ್ಯರ ವ್ಯವಸ್ಥೆಗಳಿಗಾಗಿ ಖರ್ಚು ಮಾಡಲಾಯ್ತು..&lt;/p&gt;&lt;img&gt;&lt;p&gt;2011 ರಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಇಲ್ ಅವರ ಅಂತ್ಯಕ್ರಿಯೆಯೂ ಅಷ್ಟೇ ದುಬಾರಿಯಾಗಿದೆ. ಅವರ ಅಂತ್ಯಕ್ರಿಯೆ ಸುಮಾರು $40 ಮಿಲಿಯನ್ ವೆಚ್ಚವಾಗಿದೆ ಎಂದು ವರದಿಯಾಗಿದೆ. ಬಜೆಟ್&zwnj;ನಲ್ಲಿ ಅವರ ದೇಹದ ಶಾಶ್ವತ ಎಂಬಾಮಿಂಗ್, ರಷ್ಯಾದ ತಜ್ಞರ ಭಾಗಿ, ದಿವಂಗತ ನಾಯಕನಿಗೆ ಮೀಸಲಾದ ದೊಡ್ಡ ಸ್ಮಾರಕಗಳು ಮತ್ತು ಪ್ರತಿಮೆಗಳ ನಿರ್ಮಾಣ ಖರ್ಚುಗಳಲ್ಲಿ ಸೇರಿವೆ ಎಂದು ವರದಿಯಾಗಿದೆ.&lt;/p&gt;&lt;img&gt;&lt;p&gt;1963 ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಹತ್ಯೆಯ ನಂತರ, ಅಮೆರಿಕ ಸಂಯುಕ್ತ ಸಂಸ್ಥಾನವು ವಾಷಿಂಗ್ಟನ್ ಡಿ.ಸಿ.ಯಲ್ಲಿ ಬೃಹತ್ ಸರ್ಕಾರಿ ಅಂತ್ಯಕ್ರಿಯೆ ಕಾರ್ಯಕ್ರಮ ನಡೆಸಿತು. ಈ ಸಮಾರಂಭಕ್ಕೆ ಸುಮಾರು $15 ಮಿಲಿಯನ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/world-news/worlds-top-5-most-expensive-funerals-in-history-ali-khamenei-funeral-x37bq3t"/>
        </item>
        <item>
            <title><![CDATA[ಕಾಲ ಸರ್ಪ ಯೋಗದಿಂದಾಗಿ ಜುಲೈ 18 ರವರೆಗೆ 3 ರಾಶಿಗೆ ತೊಂದರೆ, ಆರ್ಥಿಕ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ವಿಶೇಷ ಎಚ್ಚರಿಕೆ]]></title>
            <link>https://kannada.asianetnews.com/gallery/astrology/kalsarp-dosh-july-2026-3-zodiac-signs-career-and-job-problem-suh-aofbsx2</link>
            <guid isPermaLink="true">https://kannada.asianetnews.com/gallery/astrology/kalsarp-dosh-july-2026-3-zodiac-signs-career-and-job-problem-suh-aofbsx2</guid>
            <pubDate>Sun, 05 Jul 2026 13:30:53 +0530</pubDate>
            <description><![CDATA[ಜ್ಯೋತಿಷ್ಯ ಶಾಸ್ತ್ರದ ಪ್ರತಿಕೂಲ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ವಿಶೇಷ ಗ್ರಹ ಸ್ಥಾನಗಳಿಂದಾಗಿ, ಈ ಯೋಗವು ಜುಲೈ 18 ರವರೆಗೆ ಇರುತ್ತದೆ. ಈ ಯೋಗದಿಂದಾಗಿ ಯಾವ ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು ಎಂಬುದನ್ನು ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01frqq0tvkyrhkbpqxpgfqxd83,imgname-kalsarp-002.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯ ಶಾಸ್ತ್ರದ ಪ್ರತಿಕೂಲ ಯೋಗಗಳಲ್ಲಿ ಕಾಳಸರ್ಪ ಯೋಗವೂ ಒಂದು. ವಿಶೇಷ ಗ್ರಹ ಸ್ಥಾನಗಳಿಂದಾಗಿ, ಈ ಯೋಗವು ಜುಲೈ 18 ರವರೆಗೆ ಇರುತ್ತದೆ. ಈ ಯೋಗದಿಂದಾಗಿ ಯಾವ ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಏರಿಳಿತಗಳನ್ನು ಅನುಭವಿಸಬಹುದು ಎಂಬುದನ್ನು ನೋಡಿ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ಕಾಳಸರ್ಪ ಯೋಗವನ್ನು ಅಶುಭ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ . ಜಾತಕದ ಏಳು ಪ್ರಮುಖ ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಬಂದಾಗ ಈ ಯೋಗವು ರೂಪುಗೊಳ್ಳುತ್ತದೆ. ಈ ಪರಿಸ್ಥಿತಿ ಜುಲೈ 4 ರಿಂದ ಜುಲೈ 5 ರವರೆಗೆ ಇರುತ್ತದೆ . ಚಂದ್ರನು ಜುಲೈ 4 ರಂದು ಕುಂಭ ರಾಶಿಯನ್ನು ಪ್ರವೇಶಿಸಿದನು , ಅಲ್ಲಿ ರಾಹು ಇದ್ದಾನೆ, ಆದರೆ ಕೇತು ಸಿಂಹ ರಾಶಿಯಲ್ಲಿದ್ದಾನೆ. ಜುಲೈ 18 ರ ಹೊತ್ತಿಗೆ , ಚಂದ್ರನ ಜೊತೆಗೆ , ಇತರ ಆರು ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಬರುತ್ತವೆ, ಕಾಳಸರ್ಪ ದೋಷವು ಜುಲೈ 18 ರವರೆಗೆ ಇರುತ್ತದೆ . ಜುಲೈ 18 ರಂದು ಚಂದ್ರನು ಸಿಂಹದಿಂದ ಕನ್ಯಾರಾಶಿಗೆ ಸಾಗಿದ ತಕ್ಷಣ , ಕಾಳಸರ್ಪ ದೋಷವು ಕೊನೆಗೊಳ್ಳುತ್ತದೆ. ಕಾಳಸರ್ಪ ಯೋಗದ ಪ್ರಭಾವದಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳು ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು.&lt;/p&gt;&lt;img&gt;&lt;p&gt;ಕಾಲ ಸರ್ಪ ಯೋಗದ ರಚನೆಯಿಂದಾಗಿ, ನೀವು ಹಠಾತ್ ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು. ಆದ್ದರಿಂದ ನೀವು ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ವಿಶ್ವಾಸಾರ್ಹ ವ್ಯಕ್ತಿಯ ಸಮ್ಮುಖದಲ್ಲಿ ದೊಡ್ಡ ಮೊತ್ತದ ಹಣವನ್ನು ವಹಿವಾಟು ಮಾಡಿ. ಹಣಕಾಸಿನ ಅಪಾಯವನ್ನು ಒಳಗೊಂಡಿರುವ ಯಾವುದೇ ಉದ್ಯಮವನ್ನು ನೀವು ಕೈಗೊಳ್ಳುವುದನ್ನು ತಪ್ಪಿಸಬೇಕು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸಿದರೆ, ಅದು ನಿಮಗೆ ಉತ್ತಮವಾಗಿರುತ್ತದೆ. ಪರಿಹಾರವಾಗಿ, ನೀವು ಹನುಮಾನ್ ಚಾಲೀಸಾವನ್ನು ಪಠಿಸಬೇಕು .&lt;/p&gt;&lt;img&gt;&lt;p&gt;ವೃಶ್ಚಿಕ ರಾಶಿಯವರು ಜುಲೈ 18 ರವರೆಗೆ ತಾಳ್ಮೆಯಿಂದ ಮುಂದುವರಿಯಬೇಕು. ನಿಮ್ಮ ಕೆಲಸದಲ್ಲಿ ಅಡೆತಡೆಗಳು ಉಂಟಾಗಬಹುದು, ಆದರೆ ನಿರುತ್ಸಾಹಗೊಳ್ಳುವ ಬದಲು, ನೀವು ನಿಮ್ಮ ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು. ನೀವು ಹಣಕಾಸಿನ ವಿಷಯಗಳಲ್ಲಿ ತೊಂದರೆಗಳನ್ನು ಎದುರಿಸಬಹುದು, ಆದರೆ ಮುಂಚಿತವಾಗಿ ಯೋಜಿಸುವ ಮೂಲಕ ಮತ್ತು ಮುಂಚಿತವಾಗಿ ಯೋಜಿಸುವ ಮೂಲಕ, ನೀವು ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಘರ್ಷಣೆಗಳು ಸಾಧ್ಯ, ಆದ್ದರಿಂದ ಜಾಗರೂಕರಾಗಿರಿ. ಯಾರನ್ನೂ ಕುರುಡಾಗಿ ನಂಬುವುದನ್ನು ತಪ್ಪಿಸಿ. ಪರಿಹಾರವಾಗಿ, ಶಿವನನ್ನು ಪೂಜಿಸಿ.&lt;/p&gt;&lt;img&gt;&lt;p&gt;ಮೀನ ರಾಶಿಯವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಮದುವೆ, ವೃತ್ತಿ ಅಥವಾ ಹಣಕಾಸಿನ ಬಗ್ಗೆ ಯಾವುದೇ ನಿರ್ಧಾರಗಳನ್ನು ಅವರೊಂದಿಗೆ ಸಮಾಲೋಚಿಸದೆ ತೆಗೆದುಕೊಳ್ಳುವುದನ್ನು ತಪ್ಪಿಸಿ. ಆತುರದ ಕ್ರಮಗಳು ನಷ್ಟಕ್ಕೆ ಕಾರಣವಾಗಬಹುದು. ಆರ್ಥಿಕ ಏರಿಳಿತಗಳು ಸಾಧ್ಯ. ಉದ್ಯೋಗದಲ್ಲಿರುವವರು ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹೆಚ್ಚಿದ ಕೆಲಸದ ಹೊರೆ ಆಯಾಸ ಮತ್ತು ಒತ್ತಡಕ್ಕೆ ಕಾರಣವಾಗಬಹುದು. ಪರಿಹಾರವಾಗಿ, ಮೀನ ರಾಶಿಯವರು ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/kalsarp-dosh-july-2026-3-zodiac-signs-career-and-job-problem-suh-aofbsx2"/>
        </item>
        <item>
            <title><![CDATA[ಆಂಬುಲೆನ್ಸ್ ವಿಳಂಬಕ್ಕೆ ಬ್ರೇಕ್! ಚಾಲಕನಿಗೆ ಸಮಯದ ನಿಗದಿ, ತಪ್ಪಿದ್ರೆ 5000 ರೂ. ದಂಡ]]></title>
            <link>https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m</link>
            <guid isPermaLink="true">https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m</guid>
            <pubDate>Sun, 05 Jul 2026 13:02:25 +0530</pubDate>
            <description><![CDATA[ರಾಜ್ಯದಲ್ಲಿ 108 ಆಂಬುಲೆನ್ಸ್ ಸೇವೆ ವಿಳಂಬದಿಂದಾಗುತ್ತಿರುವ ಸಾವುಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕರೆ ಮಾಡಿದ 15 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ ಚಾಲಕನಿಗೆ ₹5,000 ದಂಡ ವಿಧಿಸುವ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯು ಹೈಟೆಕ್ ಕಂಟ್ರೋಲ್ ರೂಮ್, ಹೊಸ ವಾಹನಗಳು ಮತ್ತು ರಿಯಲ್-ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kq43kab8cb448fq2zw9mwpz6,imgname-ambulance-patient-dies-petrol-pump-fuel-denied-fir-ballia-uttar-pradesh-emergency-negligence-01--2--1777180715368.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ರಸ್ತೆ ಅಪಘಾತ, ಹೆರಿಗೆ ನೋವು ಅಥವಾ ಹಠಾತ್ ಹೃದಯಾಘಾತ.. ಇಂತಹ ತುರ್ತು ಸಂದರ್ಭಗಳಲ್ಲಿ ಮನುಷ್ಯನ ಜೀವ ಉಳಿಸಲು ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಇಂತಹ ಹೊತ್ತಿನಲ್ಲಿ ನಮಗೆ ಮೊದಲು ನೆನಪಾಗುವುದೇ '108 ಆರೋಗ್ಯ ಕವಚ'. ದುರಂತ ಏನೆಂದರೆ ಕರೆ ಮಾಡಿದರೆ ಆಂಬುಲೆನ್ಸ್ ಬರುವುದು ಗಂಟೆಗಟ್ಟಲೆ ತಡವಾಗುತ್ತಿದೆ. ಈ ವಿಳಂಬದಿಂದಾಗಿ ರಾಜ್ಯದಲ್ಲಿ ನೂರಾರು ಪ್ರಾಣಗಳು ಹಾದಿಯಲ್ಲೇ ಹೋಗುತ್ತಿವೆ. ಈ ಗಂಭೀರ ಸಮಸ್ಯೆಗೆ ಮುಕ್ತಿ ಹಾಡಲು ಈಗ ರಾಜ್ಯ ಸರ್ಕಾರ ದೊಡ್ಡ ನಿರ್ಧಾರವೊಂದನ್ನು ಕೈಗೊಂಡಿದೆ.&lt;/p&gt;&lt;p&gt;ರಾಜ್ಯದಲ್ಲಿ ಪ್ರಕೃತಿ ವಿಕೋಪ ಅಥವಾ ದೊಡ್ಡ ದುರಂತಗಳು ಸಂಭವಿಸಿದಾಗ 108 ಆಂಬುಲೆನ್ಸ್&zwnj;ಗಳ ಸೇವೆ ಅತ್ಯಗತ್ಯ. ಆದರೆ ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳು, ಹಳೆಯ ವಾಹನಗಳು ಮತ್ತು ನಿರ್ವಹಣಾ ವೈಫಲ್ಯದಿಂದಾಗಿ ಆಂಬುಲೆನ್ಸ್&zwnj;ಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪುತ್ತಿಲ್ಲ. ನಗರ ಪ್ರದೇಶಗಳಲ್ಲಿ ಅರ್ಧ ಗಂಟೆ, ಗ್ರಾಮೀಣ ಭಾಗದಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ 'ಗೋಲ್ಡನ್ ಅವರ್' (Golden Hour) ಚಿಕಿತ್ಸೆ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿತ್ತು.&lt;/p&gt;&lt;h2&gt;&lt;strong&gt;ಸರ್ಕಾರದ ಹೊಸ ಹೆಜ್ಜೆ ಏನು?&lt;/strong&gt;&lt;/h2&gt;&lt;p&gt;ಈ ಸಾವಿನ ಸರಣಿಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಈಗ 108 ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ z ಮೇಲ್ದರ್ಜೆಗೇರಿಸಲು ಸಜ್ಜಾಗಿದೆ. ಉಡುಪಿಯಲ್ಲಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಆರೋಗ್ಯ ಸಚಿವ ಯುಟಿ ಖಾದರ್, ಉಡುಪಿ ರಾಜ್ಯದಲ್ಲಿ ಇನ್ನು ಮುಂದೆ ಆ್ಯಂಬುಲೆನ್ಸ್ ಚಾಲಕನಿಗೆ ಸಮಯದ ನಿಗದಿ ಮಾಡಲಾಗುವುದು. ಕರೆ ಮಾಡಿದ ಹದಿನೈದು&zwnj; ನಿಮಿಷದಲ್ಲಿ ನಿಗದಿತ ಸ್ಥಳ &zwnj;ತಲುಪದಿದ್ದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.&lt;/p&gt;&lt;p&gt;108 ಆ್ಯಂಬುಲೆನ್ಸ್ 15 ನಿಮಿಷದಲ್ಲಿ ತಲುಪಿಸಿದರೆ 90 ಶೇಖಡ&zwnj; ಸಮಸ್ಯೆ ಸರಿಯಾಗುತ್ತದೆ. ಆ್ಯಂಬುಲೆನ್ಸ್ ತಲುಪುವ ಸಮಯ ಸರಿಯಾಗದಿದ್ದರೆ ವ್ಯವಸ್ಥೆ ಸರಿಯಾಗುವುದಿಲ್ಲ. 700 ರಿಂದ 800 ಆ್ಯಂಬುಲೆನ್ಸ್ ವ್ಯವಸ್ಥಿತವಾಗಿಡಬೇಕಾಗಿದೆ. ಭಾರತದಲ್ಲಿ &zwnj;20 ನಿಮಿಷ ಆದರೆ ನಮ್ಮ ರಾಜ್ಯದಲ್ಲಿ ಇನ್ನು&zwnj; ಮುಂದೆ 15 ನಿಮಿಷದಲ್ಲಿ ತಲುಪಬೇಕು. ಯಾರು ಆ ಸಮಯದಲ್ಲಿ ತಲುಪದಿಲ್ವೋ ಆ ಆ್ಯಂಬುಲೆನ್ಸ್ ಚಾಲಕನಿಗೆ 5 ಸಾವಿರ ದಂಡ. ಎಲ್ಲಿಂದ ಕರೆ ಬಂದರೂ ಹದಿನೈದು ನಿಮಿಷದಲ್ಲಿ ಬಂದು ತಲುಪಬೇಕು. ಈ&zwnj; ಬಗ್ಗೆ ಮಾರ್ಗಸೂಚಿಗಳನ್ನು ತರುತ್ತೇವೆ ಎಂದು ಖಾದರ್ ಭರವಸೆ ನೀಡಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಪ್ಲಾನ್ ಏನು?&lt;/strong&gt;&lt;/h3&gt;&lt;p&gt;&lt;strong&gt;ಹೈಟೆಕ್ ಕಂಟ್ರೋಲ್ ರೂಮ್: &lt;/strong&gt;ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ ಕಂಟ್ರೋಲ್ ರೂಮ್ ಸ್ಥಾಪನೆ. ಇದರಿಂದ ಕರೆ ಮಾಡಿದವರ ನಿಖರ ಸ್ಥಳ (Location) ಪತ್ತೆ ಹಚ್ಚುವುದು ಸುಲಭವಾಗಲಿದೆ.&lt;/p&gt;&lt;p&gt;&lt;strong&gt;ರೆಸ್ಪಾನ್ಸ್ ಟೈಮ್ ಕಡಿತ: &lt;/strong&gt;ನಗರ ಪ್ರದೇಶಗಳಲ್ಲಿ ಕರೆ ಮಾಡಿದ 15 ನಿಮಿಷದೊಳಗೆ ಹಾಗೂ ಗ್ರಾಮೀಣ ಭಾಗದಲ್ಲಿ 20 ರಿಂದ 25 ನಿಮಿಷದೊಳಗೆ ಆಂಬುಲೆನ್ಸ್ ಸ್ಥಳಕ್ಕೆ ತಲುಪುವಂತೆ ಕಟ್ಟುನಿಟ್ಟಿನ ಕ್ರಮ.&lt;/p&gt;&lt;p&gt;&lt;strong&gt;ಹೊಸ ವಾಹನಗಳ ಸೇರ್ಪಡೆ: &lt;/strong&gt;ಹಳೆಯದಾದ ಮತ್ತು ಪದೇ ಪದೇ ಕೆಟ್ಟು ನಿಲ್ಲುವ ಆಂಬುಲೆನ್ಸ್&zwnj;ಗಳ ಬದಲಿಗೆ ಸುಸಜ್ಜಿತವಾದ ಹೊಸ 'ಲೈಫ್ ಸಪೋರ್ಟ್' ಆಂಬುಲೆನ್ಸ್&zwnj;ಗಳನ್ನು ರಸ್ತೆಗಿಳಿಸಲಾಗುತ್ತಿದೆ.&lt;/p&gt;&lt;p&gt;&lt;strong&gt;ರಿಯಲ್ ಟೈಮ್ ಟ್ರ್ಯಾಕಿಂಗ್: &lt;/strong&gt;ಆಂಬುಲೆನ್ಸ್ ಎಲ್ಲಿದೆ? ಎಷ್ಟು ಹೊತ್ತಿಗೆ ಬರಲಿದೆ? ಎಂಬ ಮಾಹಿತಿಯನ್ನು ಈಗ ಊಬರ್ ಅಥವಾ ಓಲಾ ಮಾದರಿಯಲ್ಲಿ ಮೊಬೈಲ್ ಮೂಲಕವೇ ಟ್ರ್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ.&lt;/p&gt;&lt;p&gt;&lt;strong&gt;ಸಿಬ್ಬಂದಿಗೆ ತರಬೇತಿ:&lt;/strong&gt; ತುರ್ತು ಸಂದರ್ಭಗಳನ್ನು ನಿಭಾಯಿಸಲು ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.&lt;/p&gt;&lt;h3&gt;&lt;strong&gt;ಜೀವ ಉಳಿಸುವುದೇ ಮೊದಲ ಆದ್ಯತೆ&lt;/strong&gt;&lt;/h3&gt;&lt;p&gt;ಆಂಬುಲೆನ್ಸ್ ವಿಳಂಬದ ಕಾರಣಕ್ಕೆ ಇನ್ಮುಂದೆ ಯಾವುದೇ ಜೀವ ಹೋಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಬದಲಾವಣೆಗೆ ಮುಂದಾಗಿದೆ. ಟೆಂಡರ್ ಪ್ರಕ್ರಿಯೆ ಮತ್ತು ಹೊಸ ನಿಯಮಗಳ ಜಾರಿಯಿಂದಾಗಿ ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ವೇಗದ ಮತ್ತು ಗುಣಮಟ್ಟದ 108 ಸೇವೆ ಲಭ್ಯವಾಗಲಿದೆ. ಒಟ್ಟಿನಲ್ಲಿ, ವ್ಯವಸ್ಥೆಯ ಲೋಪದಿಂದಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಜನಸಾಮಾನ್ಯರಿಗೆ ಸರ್ಕಾರದ ಈ ನಿರ್ಧಾರ ಹೊಸ ಆಶಾಕಿರಣ ಮೂಡಿಸಿದೆ.&lt;/p&gt;]]></content:encoded>
            <category><![CDATA[udupi]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/udupi/ambulance-drivers-will-be-given-a-fixed-time-if-they-did-not-reach-fine-will-be-imposed-announced-by-minister-ut-khadar/articleshow-burod4m"/>
        </item>
        <item>
            <title><![CDATA[ಜೈಲು ಸೇರಿದ್ರೂ ಪ್ರೇಯಸಿ ಕೈಕೊಡಲಿಲ್ಲ; 3 ಕೊಲೆ ಮಾಡಿದ್ರೂ ಅದೃಷ್ಟ ಕೈಬಿಡಲಿಲ್ಲ: ರಾಜ್ಯದಲ್ಲಿ ಬಿಡುಗಡೆ ಭಾಗ್ಯ]]></title>
            <link>https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b</link>
            <guid isPermaLink="true">https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b</guid>
            <pubDate>Sun, 05 Jul 2026 13:22:13 +0530</pubDate>
            <description><![CDATA[ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸನ್ನಡತೆಯ ಆಧಾರದ ಮೇಲೆ 24 ಜೀವಾವಧಿ ಸಜಾ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇವರಲ್ಲಿ, 15 ವರ್ಷಗಳ ಕಾಲ ಜೈಲಿನಲ್ಲಿದ್ದರೂ ಪ್ರೇಯಸಿ ಕೈಬಿಡದ ಮಣಿಕಂಠ ಹಾಗೂ ಮೂರು ಕೊಲೆಗಳಿಗಾಗಿ 37 ವರ್ಷ ಶಿಕ್ಷೆ ಅನುಭವಿಸಿದ ಸಾಯಿಬಣ್ಣ ಎಂಬುವರ ಕಥೆಗಳು ಗಮನ ಸೆಳೆಯುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrkzs8y4sbtqybbzawwst16,imgname-parappana-agrahara-1783237698846.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ, ಹಲವು ವರ್ಷಗಳಿಂದ ಬಂಧಿಯಾಗಿದ್ದ ಅಪರಾಧಿಗಳು, ಅದರಲ್ಲಿಯೂ ಹೆಚ್ಚಾಗಿ ಕೊಲೆ ಕೇಸ್​ನಲ್ಲಿ ಶಿಕ್ಷೆಗೆ ಒಳಗಾದವರಿಗೆ ಇದೀಗ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರು, ಸನ್ನಡತೆ ತೋರಿ ಸೆರೆಮನೆಯಿಂದ ಬಂಧಮುಕ್ತರಾದ 24 ಜೀವಾವಧಿ ಸಜಾ ಕೈದಿಗಳಿಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೀಳ್ಕೊಟ್ಟರು.&lt;/p&gt;&lt;p&gt;ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಶನಿವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಬಂಧಮುಕ್ತರಾದ ಕೈದಿಗಳಿಗೆ ಪ್ರಮಾಣ ವಿತರಿಸಿ ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಚಿವರು ಹಾರೈಸಿದರು.&lt;/p&gt;&lt;p&gt;ಹೀಗೆ ಬಿಡುಗಡೆಯ ಭಾಗ್ಯ ಪಡೆದಿರುವವರದ್ದು ಒಂದೊಂದು ಕಥೆ, ಒಂದೊಂದು ವ್ಯಥೆ. ಇವರಲ್ಲಿ ಹೆಚ್ಚು ಗಮನ ಸೆಳೆದದ್ದು, ಹಾಗೂ ಸದ್ದು ಮಾಡುತ್ತಿರುವುದು ಇಬ್ಬರ ಸ್ಟೋರಿ. ಒಬ್ಬರು ಚಿಕ್ಕಮಗಳೂರಿನ ವ್ಯಕ್ತಿ ಹಾಗೂ ಇನ್ನೊಬ್ಬರು ಜೇವರ್ಗಿಯ ವ್ಯಕ್ತಿ.&lt;/p&gt;&lt;h2&gt;&lt;strong&gt;ಕೈಬಿಡದ ಪ್ರೇಯಸಿ&lt;/strong&gt;&lt;/h2&gt;&lt;p&gt;ಚಿಕ್ಕಮಗಳೂರಿನ ವ್ಯಕ್ತಿಯ ಸ್ಟೋರಿ ಹೇಳುವುದಾರೆ, ಕೊಲೆ ಕೇಸ್​​ನಲ್ಲಿ ಇವರು 15 ವರ್ಷ ಜೈಲು ಶಿಕ್ಷೆ ಅನುಭವಿಸಿದರು. ಇವರ ಹೆಸರು ಮಣಿಕಂಠ. ಈಗ ಬಿಡುಗಡೆ ಪಡೆದಿರುವ ಅವರು, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ತಾವು ಮಾಡಿರುವ ಕೃತ್ಯದ ಬಗ್ಗೆ ನೊಂದುಕೊಂಡಿದ್ದಾರೆ. 'ಆಕಸ್ಮಿಕವಾಗಿ ಒಂದು ಕೊಲೆ ಕೇಸ್​ನಲ್ಲಿ ಸಿಕ್ಕಾಕಿಕೊಂಡು 15 ವರ್ಷ ಜೈಲಲ್ಲೇ ಇದ್ದೆ. ಜೈಲಿನಲ್ಲಿಯೇ 10 ವರ್ಷ ಬೇಕರಿ ಕೆಲಸ ಮಾಡಿ ಸಂಪಾದನೆ ಮಾಡಿದ್ದೇನೆ' ಎಂದಿದ್ದಾರೆ. ನಡುವೆ ಒಮ್ಮೆ ಮದುವೆಗೆಂದು ಪರೋಲ್​ ಮೇಲೆ ಹೊರಕ್ಕೆ ಬಂದೆ. ಜೈಲಿನಲ್ಲಿ ಇದ್ದರೂ ನಾನು ಪ್ರೀತಿಸಿದ ಹುಡುಗಿ ಕೈಬಿಡಲಿಲ್ಲ. ಆಕೆಯ ಜೊತೆ ಮದುವೆಯಾದೆ. ನಾಲ್ಕು ವರ್ಷದ ಮಗುವಿದೆ ಎಂದಿರುವ ಮಣಿಕಂಠ ಅವರು, ಯಾರೂ ಕೂಡ ಕೋಪದ ಕೈಗೆ ಬುದ್ಧಿಕೊಟ್ಟು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಬೇಡಿ, ಅಪರಾಧವನ್ನು ಮಾಡಬೇಡಿ' ಎಂದು ಕಿವಿಮಾತು ಹೇಳಿದ್ದಾರೆ.&lt;/p&gt;&lt;h3&gt;&lt;strong&gt;3 ಕೊಲೆ- 37 ವರ್ಷ ಶಿಕ್ಷೆ&lt;/strong&gt;&lt;/h3&gt;&lt;p&gt;ಇನ್ನು ಜೇವರ್ಗಿಯ ಸಾಯಿಬಣ್ಣ ಲಿಂಗಪ್ಪ ನಾಟೇಕರ್ ಅವರ ಸ್ಟೋರಿ ಮಾತ್ರ ಸ್ವಲ್ಪ ಭಯಾನಕವಾಗಿದೆ. ಇವರು ಜೈಲಿನಲ್ಲಿ ಇದದ್ದು 37 ವರ್ಷಗಳು! ಏಕೆಂದರೆ, ಇವರು ಮಾಡಿದ್ದು, ಒಂದಲ್ಲ, ಮೂರು ಕೊಲೆಗಳು! ಲಿಂಗಪ್ಪ ಕರ್ನಾಟಕ ಸ್ಟೇಟ್​ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಕೊಂದೇ ಬಿಟ್ಟರು. ಜೈಲು ಸೇರಿದರು. ಇದು ಅವರ ಮೊದಲ ಕೊಲೆ. 2ನೇ ಮದುವೆಗೆಂದು ಪರೋಲ್​ ಪಡೆದು ಬಂದು ಮದುವೆಯಾದರು. ಎರಡು ವರ್ಷದ ನಂತರ ಮತ್ತೆ ಹೊರಕ್ಕೆ ಬಂದಾಗ, 2ನೇ ಪತ್ನಿ ಇನ್ನೊಬ್ಬನ ಜೊತೆ ಇರುವುದನ್ನು ನೋಡಿದರು. ಅವರ ಜೊತೆ ಮಗಳೂ ಇದ್ದಳು. ಪತ್ನಿಯ ಮೇಲೆ ಕೋಪಗೊಂಡ ಸಾಯಿಬಣ್ಣ ಅವರನ್ನೂ ಕೊಲೆ ಮಾಡಿದ್ರು. ಬಿಡಿಸಲು ಬಂದ ಮಗಳ ಮೇಲೆ ಹಲ್ಲೆ ಮಾಡಿದ್ದರಿಂದ ಆಕೆಯೂ ಸಾವನ್ನಪ್ಪಿದಳು. ಎಲ್ಲಾ ಸೇರಿ 37 ವರ್ಷ ಶಿಕ್ಷೆಯಾಯಿತು. ಕೋಪ ತಣ್ಣಗಾದ ಮೇಲೆ ಇವರು, ಚಾಕುನಲ್ಲಿ ತಿವಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಬದುಕುಳಿದಿದ್ದರು. ಅಂದು ಜೈಲು ಸೇರಿದ್ದ ಲಿಂಗಪ್ಪ 37 ವರ್ಷಗಳ ನಂತರ ಇದೀಗ ಬಿಡುಗಡೆಯಾಗಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[crime]]></category>
            <dc:creator>Suchethana D</dc:creator>
            <atom:link href="https://kannada.asianetnews.com/crime/24-prisoners-released-from-bengaluru-parappana-agrahara-central-jail-story-of-two-suc/articleshow-ux7gh1b"/>
        </item>
        <item>
            <title><![CDATA[Aamir Khan and Gauri Spratt Wedding: ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ; ಆಪ್ತರಿಗಷ್ಟೇ ಆಹ್ವಾನ!]]></title>
            <link>https://kannada.asianetnews.com/entertainment/bollywood-actor-aamir-khan-and-gauri-spratt-wedding-live-updates-to-know-here/articleshow-h5luh0c</link>
            <guid isPermaLink="true">https://kannada.asianetnews.com/entertainment/bollywood-actor-aamir-khan-and-gauri-spratt-wedding-live-updates-to-know-here/articleshow-h5luh0c</guid>
            <pubDate>Sun, 05 Jul 2026 13:10:49 +0530</pubDate>
            <description><![CDATA[ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್‌ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktb32edy7eg0em4e6653dw61,imgname-bollywood-celebrity-wedding-season-july-2026-news1-1780636268990.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಲಿವುಡ್&zwnj;ನ ಸ್ಟಾರ್ ನಟ, 'ಮಿಸ್ಟರ್ ಪರ್ಫೆಕ್ಷನಿಸ್ಟ್' ಖ್ಯಾತಿಯ ಆಮೀರ್ ಖಾನ್ (Aamir Khan) ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಜುಲೈ 5 ರಂದು ಅವರು ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಈ ಸಂಭ್ರಮದ ಕ್ಷಣಗಳ ಲೈವ್ ಅಪ್&zwnj;ಡೇಟ್ಸ್ ಇಲ್ಲಿವೆ ನೋಡಿ...&lt;/p&gt;&lt;p&gt;ಮುಂಬೈ ಮಳೆಯ ನಡುವೆ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಮದುವೆ&lt;/p&gt;&lt;p&gt;ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ವಿವಾಹ ಮಹೋತ್ಸವಕ್ಕೆ ಮುಂಬೈನ ಪಾಲಿ ಹಿಲ್&zwnj;ನಲ್ಲಿರುವ ನಟನ ನಿವಾಸ ಸಜ್ಜಾಗಿದೆ. ಕಳೆದ ಎರಡು ದಿನಗಳಿಂದ ಆಮೀರ್ ಅವರ ಮನೆಯ ಸುತ್ತಮುತ್ತಲಿನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮುಂಬೈನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ, ಮದುವೆಯ ಸಿದ್ಧತೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ. ಕೆಲಸಗಾರರು ರೈನ್&zwnj;ಕೋಟ್ ಧರಿಸಿ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುತ್ತಿದ್ದಾರೆ. ಇಂದು ಮದುವೆಯ ಸಂಭ್ರಮ ಮುಗಿಲು ಮುಟ್ಟಿದೆ.&lt;/p&gt;&lt;p&gt;ಸರಳ-ಖಾಸಗಿ ಸಮಾರಂಭ&lt;/p&gt;&lt;p&gt;ಅದ್ದೂರಿ ಸೆಲೆಬ್ರಿಟಿ ಮದುವೆಗಳಿಗಿಂತ ಭಿನ್ನವಾಗಿ, ಆಮೀರ್ ಮತ್ತು ಗೌರಿ ಅತ್ಯಂತ ಸರಳವಾಗಿ ವಿವಾಹವಾಗಲು ನಿರ್ಧರಿಸಿದ್ದಾರೆ. ಮದುವೆಯಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಅತ್ಯಂತ ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಸಿಕ್ಕ ಮಾಹಿತಿಯಂತೆ, ಸುಮಾರು 150 ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಆಮೀರ್ ಖಾನ್ ಮಾಹಿತಿ ನೀಡಿದ್ದು, &quot;ಹೌದು, ಜುಲೈ 5 ರಂದು ನನ್ನ ಮದುವೆ ನಡೆಯುತ್ತಿದೆ. ಇದು ಮನೆಯಲ್ಲೇ ನಡೆಯುವ ಅತ್ಯಂತ ಸಣ್ಣ ಸಮಾರಂಭ. ಜುಲೈ 5 ನಮಗೆ ಬಹಳ ವಿಶೇಷವಾದ ದಿನ,&quot; ಎಂದು ಮಾರ್ಧಮುಗಳಿಗೆ ತಿಳಿಸಿದ್ದಾರೆ.&lt;/p&gt;&lt;p&gt;ಯಾರು ಈ ಗೌರಿ ಸ್ಪ್ರ್ಯಾಟ್?&lt;/p&gt;&lt;p&gt;ಗೌರಿ ಸ್ಪ್ರ್ಯಾಟ್ ಮೂಲತಃ ಬೆಂಗಳೂರಿನವರು. ಈ ಸಂಗತಿ ನಮ್ಮ ಕನ್ನಡಿಗರ ಪಾಲಿಗೆ ವಿಶೇಷ. ಬೆಂಗಳೂರಿನ ಬ್ಲೂ ಮೌಂಟೇನ್ಸ್ ಶಾಲೆಯಲ್ಲಿ ಓದಿದ ಗೌರಿ ಅವರು, ನಂತರ ಲಂಡನ್&zwnj;ನ ಯೂನಿವರ್ಸಿಟಿ ಆಫ್ ಆರ್ಟ್ಸ್&zwnj;ನಲ್ಲಿ ಸ್ಟೈಲಿಂಗ್ ಮತ್ತು ಫೋಟೋಗ್ರಫಿ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಮುಂಬೈನಲ್ಲಿ ಪ್ರಸಿದ್ಧ 'ಬಿ ಬ್ಲಂಟ್' (BBlunt) ಸಲೂನ್ ಅನ್ನು ನಿರ್ವಹಿಸುತ್ತಿದ್ದಾರೆ. ಆಮೀರ್ ಮತ್ತು ಗೌರಿ 25 ವರ್ಷಗಳ ಹಿಂದೆಯೇ ಪರಿಚಿತರಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಇವರ ಸ್ನೇಹ ಪ್ರೀತಿಗೆ ತಿರುಗಿದೆ.&lt;/p&gt;&lt;p&gt;ಆಮೀರ್ ಅವರ ಮೂರನೇ ವಿವಾಹ&lt;/p&gt;&lt;p&gt;ಇದು ಆಮೀರ್ ಖಾನ್ ಅವರ ಮೂರನೇ ಮದುವೆಯಾಗಿದೆ. ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. 2002 ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರು. ನಂತರ 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದ ಆಮೀರ್, 2021 ರಲ್ಲಿ ಅವರಿಂದಲೂ ಬೇರ್ಪಟ್ಟರು. ಕಿರಣ್ ಮತ್ತು ಆಮೀರ್&zwnj;ಗೆ ಆಜಾದ್ ರಾವ್ ಎಂಬ ಪುತ್ರನಿದ್ದಾನೆ. ಡಿವೋರ್ಸ್ ಬಳಿಕವೂ ಆಮೀರ್ ತಮ್ಮ ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಮುಂದುವರಿಸಿದ್ದಾರೆ.&lt;/p&gt;&lt;p&gt;ಶುಭಾಶಯಗಳ ಮಹಾಪೂರ&lt;/p&gt;&lt;p&gt;ನಟಿ ಸೋಮಿ ಅಲಿ ಅವರು ಇನ್&zwnj;ಸ್ಟಾಗ್ರಾಮ್&zwnj;ನಲ್ಲಿ ಈ ದಂಪತಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. &quot;ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಸಂತೋಷವನ್ನು ಆಯ್ಕೆ ಮಾಡಿಕೊಳ್ಳಲು ಸಮಯದ ಹಂಗಿಲ್ಲ, ಅದು ಎಂದಿಗೂ ತಡವಾಗುವುದಿಲ್ಲ&quot; ಎಂದು ಅವರು ಬರೆದುಕೊಂಡಿದ್ದಾರೆ.&lt;/p&gt;&lt;p&gt;ನಟ ಅಲಿ ಫಜಲ್ ಅವರು ತಮ್ಮ 'ಮಿರ್ಜಾಪುರ' ಪ್ರಚಾರದ ಕೆಲಸಗಳ ನಡುವೆಯೂ ಆಮೀರ್ ಅವರಿಗೆ ಶುಭ ಹಾರೈಕೆಗಳನ್ನು ಕಳುಹಿಸಿದ್ದಾರೆ.&lt;/p&gt;&lt;p&gt;ಮನೆಯಲ್ಲಿ ನಡೆಯುವ ಈ ಸರಳ ವಿವಾಹದಲ್ಲಿ ಆಮೀರ್ ಅವರ ಮಕ್ಕಳಾದ ಜುನೈದ್, ಇರಾ ಮತ್ತು ಆಜಾದ್ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಒಟ್ಟಾರೆಯಾಗಿ, ಬಾಲಿವುಡ್&zwnj;ನ ಈ ಪ್ರೇಮಕಥೆ ಈಗ ಮದುವೆಯ ಹಂತಕ್ಕೆ ತಲುಪಿದ್ದು, ಅಭಿಮಾನಿಗಳು ದಂಪತಿಯ ಮೊದಲ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸದ್ಯಕ್ಕೆ ಈ ಮದುವೆ ಇಡೀ ಭಾರತದ ಗಮನ ಸೆಳೆದಿದೆ.&lt;/p&gt;]]></content:encoded>
            <category><![CDATA[entertainment]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/entertainment/bollywood-actor-aamir-khan-and-gauri-spratt-wedding-live-updates-to-know-here/articleshow-h5luh0c"/>
        </item>
        <item>
            <title><![CDATA[Chanakya Niti in Kannada: ವಿಧಿ ಬರೆದ ಈ 3 ವಿಷಯ ಯಾರೂ ಬದಲಾಯಿಸಲು ಸಾಧ್ಯವಿಲ್ಲ]]></title>
            <link>https://kannada.asianetnews.com/gallery/relationship/3-things-pre-decided-before-your-birth-the-unalterable-truths-of-chanakya-niti-iagt67v</link>
            <guid isPermaLink="true">https://kannada.asianetnews.com/gallery/relationship/3-things-pre-decided-before-your-birth-the-unalterable-truths-of-chanakya-niti-iagt67v</guid>
            <pubDate>Sun, 05 Jul 2026 13:09:20 +0530</pubDate>
            <description><![CDATA[Chanakya Wisdom Kannada: ಜೀವನದಲ್ಲಿ ಸಂಭವಿಸುವ ಕೆಲವು ಘಟನೆಗಳು ನಮ್ಮ ಕೈಯ್ಯಲ್ಲಿರುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಮನುಷ್ಯನ ಹಣೆಬರಹದಲ್ಲಿ ಕೆಲವು ಪ್ರಮುಖ ವಿಷಯಗಳು ಆತ ಹುಟ್ಟುವ ಮೊದಲೇ ಬರೆಯಲ್ಪಟ್ಟಿರುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kgkrpfx8jn94yp6ywh14wcfg,imgname-chanakya-niti-hindi-1770189963176.jpg" type="image/jpeg" height="390" width="690"/>
            <content:encoded><![CDATA[&lt;p&gt;Chanakya Wisdom Kannada: ಜೀವನದಲ್ಲಿ ಸಂಭವಿಸುವ ಕೆಲವು ಘಟನೆಗಳು ನಮ್ಮ ಕೈಯ್ಯಲ್ಲಿರುವುದಿಲ್ಲ. ಆಚಾರ್ಯ ಚಾಣಕ್ಯರ ನೀತಿಶಾಸ್ತ್ರದ ಪ್ರಕಾರ, ಮನುಷ್ಯನ ಹಣೆಬರಹದಲ್ಲಿ ಕೆಲವು ಪ್ರಮುಖ ವಿಷಯಗಳು ಆತ ಹುಟ್ಟುವ ಮೊದಲೇ ಬರೆಯಲ್ಪಟ್ಟಿರುತ್ತವೆ.&lt;/p&gt;&lt;img&gt;&lt;p&gt;ಆಚಾರ್ಯ ಚಾಣಕ್ಯರ ಬಗ್ಗೆ ಹೆಚ್ಚೇನು ಹೇಳಬೇಕಾದ ಅಗತ್ಯವಿಲ್ಲ. ನಿಮಗೆಲ್ಲರಿಗೂ ಗೊತ್ತಿರುವಂತೆ ಅವರು ಅತ್ಯಂತ ಪ್ರತಿಭಾವಂತ ಮತ್ತು ಶ್ರೇಷ್ಠ ವ್ಯಕ್ತಿ. ತಮ್ಮ ನೀತಿಶಾಸ್ತ್ರದಲ್ಲಿ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ತಿಳಿಸಿದ್ದಾರೆ. ಚಾಣಕ್ಯರು ಹೇಳಿರುವ ಈ ಮಾತುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಇಂದಿಗೂ ಅವರು ಹೇಳಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಅನೇಕರು ಆಸಕ್ತಿ ಸಹ ತೋರಿಸುತ್ತಾರೆ. ಅಂದಹಾಗೆ ಚಾಣಕ್ಯರ ಪ್ರಕಾರ, ಮನುಷ್ಯನ ಜೀವನದಲ್ಲಿ ಕೆಲವು ವಿಷಯಗಳು ಮೊದಲೇ ನಿರ್ಧಾರವಾಗಿದ್ದು, ವಿಧಿ ಬರೆದ ಈ ಕೆಳಗಿನ ವಿಷಯಗಳನ್ನು ಯಾರೂ ಬದಲಿಸಲು ಸಾಧ್ಯವಿಲ್ಲ.&amp;nbsp;&lt;/p&gt;&lt;img&gt;&lt;p&gt;&lt;strong&gt;1. ಬುದ್ಧಿವಂತಿಕೆ ಮತ್ತು ಜ್ಞಾನ&lt;/strong&gt;ನಮಗೆ ತಿಳಿಯದ ವಿಷಯವೇನೆಂದರೆ, ಮನುಷ್ಯನ ಬುದ್ಧಿವಂತಿಕೆಯು ಅವನು ಹುಟ್ಟುವ ಮುನ್ನವೇ ನಿರ್ಧಾರವಾಗಿರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಕೆಲವರಿಗೆ ಚಿಂತನಾ ಶಕ್ತಿ ಹೆಚ್ಚಾಗಿರುತ್ತದೆ, ಇನ್ನು ಕೆಲವರು ಯಾವುದನ್ನೇ ನೋಡಿದರೂ ತಕ್ಷಣ ಕಲಿಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಯಾವುದಾದರೊಂದು ವಿಶೇಷ ಪ್ರತಿಭೆ ಅಡಗಿರುತ್ತದೆ ಎಂಬುದು ಚಾಣಕ್ಯರ ಮತ.&lt;/p&gt;&lt;img&gt;&lt;p&gt;&lt;strong&gt;2. ಮರಣದ ಸಮಯ&lt;/strong&gt;ಒಬ್ಬ ಮನುಷ್ಯ ಯಾವಾಗ, ಎಲ್ಲಿ ಮತ್ತು ಹೇಗೆ ಸಾಯುತ್ತಾನೆ ಎಂಬುದು ಕೂಡ ಮೊದಲೇ ಬರೆಯಲ್ಪಟ್ಟಿರುತ್ತದೆ. ಇದೆಲ್ಲವೂ ವಿಧಿಯ ಆಟದ ಒಂದು ಭಾಗ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮನುಷ್ಯನ ಮರಣದ ಸಮಯವು ಮೊದಲೇ ನಿರ್ಧರಿಸಲ್ಪಟ್ಟಿರುತ್ತದೆ ಮತ್ತು ಆ ಸಮಯ ಬಂದಾಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;&lt;strong&gt;3. ಕರ್ಮಗಳು&lt;/strong&gt;ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾಡುವ ಎಲ್ಲಾ ಕರ್ಮಗಳು ಮೊದಲೇ ನಿರ್ಧರಿಸಲ್ಪಟ್ಟಿರುತ್ತವೆ. ಮನುಷ್ಯ ಹುಟ್ಟುವ ಮೊದಲೇ ಅವನ ಹಣೆಬರಹದಲ್ಲಿ ಈ ಕರ್ಮಗಳನ್ನು ಬರೆಯಲಾಗಿರುತ್ತದೆ. ತನ್ನ ಕರ್ಮದ ಫಲದಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.&lt;/p&gt;&lt;img&gt;&lt;p&gt;&lt;strong&gt;ವಿಶೇಷ ಸಲಹೆ&lt;/strong&gt;ಬದುಕಿರುವಷ್ಟು ದಿನ ಯಾರನ್ನೂ ಅತಿಯಾಗಿ ನೋಯಿಸಬೇಡಿ. ನಿಮಗೆ ಎಲ್ಲಾ ಸಮಯದಲ್ಲೂ ಬೆಂಬಲ ನೀಡುವವರನ್ನು ಮಾತ್ರ ನಿಮ್ಮ ಮನೆಗೆ ಆಹ್ವಾನಿಸಿ, ಎಲ್ಲರನ್ನೂ ನಿಮ್ಮ ಹತ್ತಿರ ಸೇರಿಸಿಕೊಳ್ಳಬೇಡಿ ಎಂದು ಚಾಣಕ್ಯರು ಎಚ್ಚರಿಸುತ್ತಾರೆ.&amp;nbsp;&lt;/p&gt;]]></content:encoded>
            <category><![CDATA[relationship]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/relationship/3-things-pre-decided-before-your-birth-the-unalterable-truths-of-chanakya-niti-iagt67v"/>
        </item>
        <item>
            <title><![CDATA[Kwatle Kitchen: ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ]]></title>
            <link>https://kannada.asianetnews.com/gallery/tv-talk/colors-kannada-kwatle-kitchen-2-reality-show-bigg-boss-fame-hanumantha-says-he-hasnt-received-his-salary-for-4-weeks-mrq-6ygbcx0</link>
            <guid isPermaLink="true">https://kannada.asianetnews.com/gallery/tv-talk/colors-kannada-kwatle-kitchen-2-reality-show-bigg-boss-fame-hanumantha-says-he-hasnt-received-his-salary-for-4-weeks-mrq-6ygbcx0</guid>
            <pubDate>Sun, 05 Jul 2026 13:07:01 +0530</pubDate>
            <description><![CDATA[ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಸೀಸನ್ 2 ಶೋನಲ್ಲಿ, ಗಾಯಕ ಹನುಮಂತ 'ಅರುಂಧತಿ' ಸಿನಿಮಾದ ಪಶುಪತಿ ಪಾತ್ರದಲ್ಲಿ ಕಾಣಿಸಿಕೊಂಡು ನಗೆಗಡಲಲ್ಲಿ ತೇಲಿಸಿದ್ದಾರೆ. ಅವರ ತಮಾಷೆಯ ಸಂಭಾಷಣೆಗಳು, ತುಕಾಲಿ ಸಂತೋಷ್ ಅವರ ಅನ್ನಾಬೆಲ್ಲಾ ಗೆಟಪ್ ಮತ್ತು ಇತರ ಸ್ಪರ್ಧಿಗಳ ಕ್ವಾಟ್ಲೆಗಳು ಸಂಚಿಕೆಯನ್ನು ರಂಜನೀಯವಾಗಿಸಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrjwq4ep39cnxpjhexkhw0x,imgname-kwatle-kitchen--2--1783236549774.jpg" type="image/jpeg" height="390" width="690"/>
            <content:encoded><![CDATA[&lt;p&gt;ಕಲರ್ಸ್ ಕನ್ನಡದ ಕ್ವಾಟ್ಲೆ ಕಿಚನ್ ಸೀಸನ್ 2 ಶೋನಲ್ಲಿ, ಗಾಯಕ ಹನುಮಂತ 'ಅರುಂಧತಿ' ಸಿನಿಮಾದ ಪಶುಪತಿ ಪಾತ್ರದಲ್ಲಿ ಕಾಣಿಸಿಕೊಂಡು ನಗೆಗಡಲಲ್ಲಿ ತೇಲಿಸಿದ್ದಾರೆ. ಅವರ ತಮಾಷೆಯ ಸಂಭಾಷಣೆಗಳು, ತುಕಾಲಿ ಸಂತೋಷ್ ಅವರ ಅನ್ನಾಬೆಲ್ಲಾ ಗೆಟಪ್ ಮತ್ತು ಇತರ ಸ್ಪರ್ಧಿಗಳ ಕ್ವಾಟ್ಲೆಗಳು ಸಂಚಿಕೆಯನ್ನು ರಂಜನೀಯವಾಗಿಸಿವೆ.&lt;/p&gt;&lt;img&gt;&lt;p&gt;ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕ್ವಾಟ್ಲೆ ಕಿಚನ್ ಸೀಸನ್ 2 ಅದ್ಧೂರಿ ಆರಂಭ ಪಡೆದುಕೊಂಡಿದೆ. ಈ ಬಾರಿಯ ಸೀಸನ್&zwnj;ನಲ್ಲಿ ಬಿಗ್&zwnj;ಬಾಸ್ ಶೋನ ಮಾಜಿ ಸ್ಪರ್ಧಿಗಳಾದ ರಕ್ಷಿತಾ ಶೆಟ್ಟಿ ಮತ್ತು ಸಿಂಗರ್ ಹನುಮಂತ ಹೈಲೈಟ್ ಆಗಿದ್ದಾರೆ. ಶೋ ಆರಂಭವಾದ ದಿನದಿಂದಲೂ ಇವರಿಬ್ಬರು ಮಾಡುವ ತಮಾಷೆ ವಿಡಿಯೋಗಳು ವೈರಲ್ ಆಗುತ್ತವೆ.&lt;/p&gt;&lt;img&gt;&lt;p&gt;ಈ ವಾರದ ಸಂಚಿಕೆಯಲ್ಲಿ ಅರುಂಧತಿ ಸಿನಿಮಾದ ವಿಲನ್ ಪಶುಪತಿ ಪಾತ್ರದಲ್ಲಿ ಹನುಮಂತ ಕಾಣಿಸಿಕೊಂಡಿದ್ದಾರೆ. ಬೊಮ್ಮಾಲಿ ಎಂದು ಹೇಳುತ್ತಾ ಹನುಮಂತ ಶೋನಲ್ಲಿದ್ದ ಎಲ್ಲರನ್ನು ನಗಿಸಿದ್ದಾರೆ. ಇದೇ ವೇಳೆ ನಾಲ್ಕು ವಾರದಿಂದ ಚಾನೆಲ್&zwnj;ನವರು ಸಂಭಾವನೆಯನ್ನು ನೀಡಿಲ್ಲ ಎಂದು ಹನುಮಂತ ಹೇಳಿಕೊಂಡಿದ್ದಾ&lt;/p&gt;&lt;img&gt;&lt;p&gt;ಕ್ವಾಟ್ಲೆ ಕಿಚನ್ ಶೋ ನಿರೂಪಕಿಯಾಗಿರುವ ಸುಷ್ಮಾ ರಾವ್, ಸಿನಿಮಾದಲ್ಲಿ ಪಶುಪತಿ ಏನು ಮಾಡ್ತಾನೆ? ಅರುಂಧತಿ ಸಿನಿಮಾ ನೋಡಿದ್ದೀಯಾ ಎಂದು ಕೇಳುತ್ತಾರೆ. ಇದಕ್ಕೆ ಪಶುಪತಿ ದೆವ್ವ ಬಿಡಿಸುವ ವ್ಯಕ್ತಿ ಎಂದು ಹೇಳುತ್ತಾರೆ. ಹನುಮಂತ ಅವರ ಮಾತು ಕೇಳಿದ್ರೆ ಅರುಂಧತಿ ಸಿನಿಮಾ ನೋಡಿಲ್ಲ ಎಂದು ಅರ್ಥವಾಗುತ್ತದೆ.&lt;/p&gt;&lt;img&gt;&lt;p&gt;ಮುಂದುವರಿದು ಮೂಸುವ ಮೂಲಕ ದೆವ್ವ ಬಿಡಿಸೋದಾಗಿ ಹನುಮಂತ ಹೇಳುತ್ತಾರೆ. ಈ ಮಾತನ್ನು ಕೇಳುತ್ತಿದ್ದಂತೆ ಕರಿಯಪ್ಪ, ನನ್ನನ್ನು ಮೂಸುವಂತೆ ಹೇಳಿ ಜೈ ರುಂಡಮಾಲಿನಿ ಅಂತಾರೆ. ಇಂದಿನ ಸಂಚಿಕೆಯಲ್ಲಿ ಪ್ರಚಂಡ ಕುಳ್ಳ ಸಿನಿಮಾದ ಕಿಂಕಿಣಿ ಶರ್ಮಾದಲ್ಲಿ ಕಾಣಿಸಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ಬಂದಿರೋದನ್ನು ಗಮನಿಸಬಹುದು.&lt;/p&gt;&lt;img&gt;&lt;p&gt;ಈ ಎಲ್ಲದರ ನಡುವೆ ತುಕಾಲಿ ಸಂತೋಷ್, ಎಲ್ಲಾ ಸ್ಪರ್ಧಿಗಳನ್ನು ತಮಾಷೆ ಮಾಡಿದ್ದಾರೆ. ಹನುಮಂತ ನೀನು ಮಾಡ್ತಿರೋದು ಪಶುಪತಿ ಎಂಬ ವಿಲನ್ ಪಾತ್ರ, ನಾಯಿ ರೋಲ್ ಅಲ್ಲ ಅಂದಿದ್ದಾರೆ. ಇನ್ನು ತುಕಾಲಿ ಸಂತೋಷ್, ಹಾರರ್ ಮೂವಿಯ ಅನ್ನಾಬೆಲ್ಲಾ ಗೊಂಬೆಯ ಲುಕ್&zwnj;ನಲ್ಲಿ ಬಂದಿದ್ದಾರೆ. ಈ ಶೋನಲ್ಲಿ ತೀರ್ಪುಗಾರರಾಗಿ ನಟಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/tv-talk/colors-kannada-kwatle-kitchen-2-reality-show-bigg-boss-fame-hanumantha-says-he-hasnt-received-his-salary-for-4-weeks-mrq-6ygbcx0"/>
        </item>
        <item>
            <title><![CDATA[80 ಲಕ್ಷದಲ್ಲಿ ದೊಡ್ಡ ಮನೆ ಬಿಟ್ಟು 1BHK ಖರೀದಿಸಿದ್ಯಾಕೆ? ಯುವಕ ಕೊಟ್ಟ ಕಾರಣಕ್ಕೆ ಶ್ಲಾಘನೆಗಳ ಮಹಾಪೂರ]]></title>
            <link>https://kannada.asianetnews.com/life/bengaluru-man-explains-why-he-chose-rs-80-lakh-1bhk-over-bigger-home-suc/articleshow-hnsl0m4</link>
            <guid isPermaLink="true">https://kannada.asianetnews.com/life/bengaluru-man-explains-why-he-chose-rs-80-lakh-1bhk-over-bigger-home-suc/articleshow-hnsl0m4</guid>
            <pubDate>Sun, 05 Jul 2026 12:41:33 +0530</pubDate>
            <description><![CDATA[ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು 80 ಲಕ್ಷ ರೂಪಾಯಿ ನೀಡಿ 1BHK ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ. ಈ ನಿರ್ಧಾರವು ಹಣಕಾಸಿನ ಹೂಡಿಕೆಗಿಂತ ಹೆಚ್ಚಾಗಿ, ಬಾಡಿಗೆ ಮನೆಗಳಲ್ಲಿ ಬೆಳೆದ ತಮ್ಮ ಬಾಲ್ಯದ ಕನಸನ್ನು ನನಸಾಗಿಸುವ ಭಾವನಾತ್ಮಕ ಪಯಣವಾಗಿತ್ತು. ರೆಡ್ಡಿಟ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್, ಸ್ವಂತ ಮನೆಯ ಭಾವನಾತ್ಮಕ ಮೌಲ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrhvssm642m59rnvkgz0zga,imgname-viral-post-1783235471156.jpg" type="image/jpeg" height="390" width="690"/>
            <content:encoded><![CDATA[&lt;p&gt;ತಮ್ಮದೇ ಒಂದು ಸ್ವಂತ ಮನೆ ಇರಬೇಕು ಎನ್ನುವುದು ಬಹುತೇಕ ಎಲ್ಲರ ಕನಸಾಗಿರುತ್ತದೆ. ಚಿಕ್ಕದೊಂದು ಮನೆ ಇದ್ದರೆ ಸಾಕು ಎನ್ನುವ ಕನಸು ಇದ್ದರೂ, ಮನೆ ನಿರ್ಮಾಣ ಅಥವಾ ಖರೀದಿ ವಿಷಯ ಬಂದಾಗ, ಇಷ್ಟು ಚಿಕ್ಕ ಮನೆ ನಮ್ಮ ಸಂಸಾರಕ್ಕೆ ಸಾಕಾಗುವುದಿಲ್ಲ, ಹೇಗಿದ್ದರೂ ಸಾಲ ಮಾಡಿಯಾಗಿದೆ, ಇನ್ನೊಂದಿಷ್ಟು ಹಣ ಹಾಕಿ ಸ್ವಲ್ಪ ದೊಡ್ಡ ಮನೆಯನ್ನೇ ಖರೀದಿಸಬಾರದೇ, ಜೀವನದಲ್ಲಿ ಇಂಥ ಖರೀದಿ ಒಂದೇ ಬಾರಿ ಆಗಿರುವಾಗ ಸ್ವಲ್ಪ ದೊಡ್ಡದ್ದನ್ನೇ ಖರೀದಿಸಿದರೆ ಭವಿಷ್ಯಕ್ಕೂ ಒಳ್ಳೆಯದು ಎಂದು ಯೋಚಿಸುವವರು ಹಲವರು. ಆದರೆ ಇದಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ಸಿಂಗಲ್​ ಬೆಡ್​ರೂಮ್​ ಖರೀದಿ ಮಾಡಿರುವ ವ್ಯಕ್ತಿಯೊಬ್ಬರು ಹಂಚಿಕೊಂಡ ಪೋಸ್ಟ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ. ತಾವು ದೊಡ್ಡ ಮೊತ್ತದಲ್ಲಿ ಸಿಂಗಲ್​ ಬೆಡ್​ರೂಮ್​ ಮನೆಯನ್ನೇಕೆ ಖರೀದಿಸಿದ್ದು ಎನ್ನುವ ಬಗ್ಗೆ ಅವರು ಹಂಚಿಕೊಂಡಿದ್ದು, ಇದು ಹಲವರ ಮನ ಗೆದ್ದಿದೆ.&lt;/p&gt;&lt;p&gt;ದೊಡ್ಡ ಮನೆ ಖರೀದಿಸುವ ಬದಲು 1BHK ಅಪಾರ್ಟ್​ಮೆಂಟ್​ ಅನ್ನು 80 ಲಕ್ಷ ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿರುವ ಕಾರಣವನ್ನು ರೆಡ್ಡಿಟ್​ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ, ಈ ನಿರ್ಧಾರವು ಹೂಡಿಕೆ ಅಥವಾ ಮರುಮಾರಾಟದ ಹಣದ ಚಿಂತೆಯಾಗಿರದೇ, ಆ ಬಗೆಗಿನ ಭವಿಷ್ಯದ ಯೋಜನೆ ಆಗಿರದೇ ಹೇಗೆ, ಭಾವನಾತ್ಮಕ ಮೌಲ್ಯಗಳೊಂದಿಗೆ ನಂಟು ಹೊಂದಿದೆ ಎನ್ನುವುದನ್ನು ವಿವರಿಸಿದ್ದು, ಅದು ಹಲವರಿಗೆ ಇಷ್ಟವಾಗಿದೆ. ಬಾಡಿಗೆ ಮನೆಗಳಲ್ಲಿ ಬೆಳೆದು ಅಂತಿಮವಾಗಿ ಸ್ವಂತ ಸ್ಥಳವನ್ನು ಹೊಂದುವ ಬಗ್ಗೆ ಅವರ ಭಾವನಾತ್ಮಕ ಪೋಸ್ಟ್ ಆನ್&zwnj;ಲೈನ್&zwnj;ನಲ್ಲಿ ಅನೇಕ ಜನರ ಹೃದಯಸ್ಪರ್ಶಿಯಾಗಿದೆ.&lt;/p&gt;&lt;h2&gt;&lt;strong&gt;ಬಾಲ್ಯದ ಕನಸು&lt;/strong&gt;&lt;/h2&gt;&lt;p&gt;'ಅಪಾರ್ಟ್​ಮೆಂಟ್​ ಖರೀದಿಸುವುದು ಹಣಕಾಸಿನ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಬಾಲ್ಯದ ಕನಸಿನ ಈಡೇರಿಕೆಯಾಗಿತ್ತು ಎಂದಿರುವ ಅವರ ಪೋಸ್ಟ್​ ಓದಿದವರು, ಮನೆ ಖರೀದಿಸುವುದು ಯಾವಾಗಲೂ ಪ್ರಾಯೋಗಿಕ ಪರಿಗಣನೆಗಳನ್ನು ಆಧರಿಸಿರಬೇಕೇ ಅಥವಾ ವೈಯಕ್ತಿಕ ಸಂತೋಷವನ್ನು ಆಧರಿಸಿರಬೇಕೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. &quot;ನಾನು ಬೆಂಗಳೂರಿನ ಪ್ರೆಸ್ಟೀಜ್ ಸಾಂಗ್ ಆಫ್ ದಿ ಸೌತ್&zwnj;ನಲ್ಲಿ 1BHK ಅನ್ನು 80 ಲಕ್ಷ ರೂಪಾಯಿಗಳಿಗೆ ಖರೀದಿಸಲು ನಿರ್ಧರಿಸುವ ಮೊದಲು ಅದರ ಹುಡುಕಾಟಕ್ಕೆ ಸುಮಾರು ಮೂರು ತಿಂಗಳು ಕಳೆದಿದ್ದೇನೆ. ಅಂತಿಮವಾಗಿ ಪ್ರೆಸ್ಟೀಜ್ ಸಾಂಗ್ ಆಫ್ ದಿ ಸೌತ್&zwnj;ನಲ್ಲಿ 1 BHK ಮನೆಯನ್ನು ಖರೀದಿಸಲು ನಿರ್ಧರಿಸಿದೆ. ಇದು ಲಾಭದ ಉದ್ದೇಶ ಆಗಿರಲಿಲ್ಲ, ಬದಲಿಗೆ ಸಂಪೂರ್ಣವಾಗಿ ಭಾವನಾತ್ಮಕವಾಗಿದೆ&quot; ಎಂದು ಅವರು ಬರೆದಿದ್ದಾರೆ. ತಮ್ಮ ನಿರ್ಧಾರವನ್ನು ವಿವರಿಸುತ್ತಾ, ನಾನು ಸದಾ ಬಾಡಿಗೆ ಮನೆಗಳಲ್ಲಿ ಬೆಳೆದದ್ದು, ಆದ್ದರಿಂದ ಅಲ್ಲಿ ಎಂದಿಗೂ ನನ್ನದು ಎನ್ನುವ ಭಾವನೆಯನ್ನು ಅನುಭವಿಸಿರಲಿಲ್ಲ. ಅದಕ್ಕಾಗಿಯೇ, ಒಂದು ಚಿಕ್ಕ ಅಪಾರ್ಟ್ಮೆಂಟ್ ಹೊಂದುವುದು ಕೇವಲ ಆಸ್ತಿಯನ್ನು ಖರೀದಿಸುವುದಕ್ಕಿಂತ ಹೆಚ್ಚಿನದನ್ನು ಅವರಿಗೆ ಅರ್ಥಮಾಡಿಕೊಂಡೆ. ಯಾವಾಗಲೂ ಬಯಸುವ ಮನೆಯನ್ನು ಹೇಗೆ ಇರಬೇಕು ಎಂದು ಕಲ್ಪಿಸಿಕೊಂಡು ಇದನ್ನು ಖರೀದಿಸಿದೆ ಎಂದಿದ್ದಾರೆ.&lt;/p&gt;&lt;p&gt;&amp;nbsp;&lt;/p&gt;&lt;h3&gt;&lt;strong&gt;ರಿಯಲ್ ಎಸ್ಟೇಟ್ ಹೂಡಿಕೆಯಲ್ಲ&lt;/strong&gt;&lt;/h3&gt;&lt;p&gt;&quot;ಇದು ಮತ್ತೊಂದು ರಿಯಲ್ ಎಸ್ಟೇಟ್ ಹೂಡಿಕೆಯಲ್ಲ; ನಾನು ಚಿಕ್ಕವನಿದ್ದಾಗಿನಿಂದ ಕಲ್ಪಿಸಿಕೊಂಡ ಮನೆ ಇದು&quot; ಎಂದು ಅವರು ಬರೆದಿದ್ದಾರೆ. ಅವರು &quot;ಒಂದು ಬೃಹತ್ ಟಿವಿ, ಸರಿಯಾದ ಹೋಮ್ ಥಿಯೇಟರ್, ಎಲ್ಲೆಡೆ ಪುಸ್ತಕಗಳು, ಹ್ಯಾಮಕ್, ಕಾಫಿ ಕಾರ್ನರ್, ಆರಾಮದಾಯಕವಾದ ಸೋಫಾ&quot; ಮತ್ತು ಮುಖ್ಯವಾಗಿ, ನಿಜವಾಗಿಯೂ ತಮ್ಮದೇ ಎಂದು ಕರೆಯಬಹುದಾದ ಸ್ಥಳವನ್ನು ಹೊಂದಿರುವ ಮನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಅನೇಕ ಜನರು 2BHK ಅಥವಾ 3BHK ಅನ್ನು ಬುದ್ಧಿವಂತ ಖರೀದಿ ಎಂದು ಪರಿಗಣಿಸುತ್ತಾರೆ ಎಂದು ರೆಡ್ಡಿಟ್ ಬಳಕೆದಾರರು ಒಪ್ಪಿಕೊಂಡರು. ಆದಾಗ್ಯೂ, ಅವರು ಪ್ರಸ್ತುತ ಒಂಟಿಯಾಗಿರುವುದಾಗಿ ಮತ್ತು ಇಂದು ಒಬ್ಬಂಟಿಯಾಗಿ ಆ ನಿರ್ಧಾರವನ್ನು ತೆಗೆದುಕೊಳ್ಳುವ ಬದಲು ಭವಿಷ್ಯದಲ್ಲಿ ತನ್ನ ಹೆಂಡತಿಯೊಂದಿಗೆ ದೊಡ್ಡ ಕುಟುಂಬದ ಮನೆ ಖರೀದಿಯೂ ಮುಖ್ಯವಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;&lt;h3&gt;&lt;strong&gt;ರೆಡ್ಡಿಟ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ&lt;/strong&gt;&lt;/h3&gt;&lt;p&gt;ಈ ಪೋಸ್ಟ್&zwnj;ಗೆ ಹಲವಾರು ಪ್ರತಿಕ್ರಿಯೆಗಳು ಬಂದವು, ಅನೇಕ ಬಳಕೆದಾರರು ಖರೀದಿಯ ಹಿಂದಿನ ಭಾವನಾತ್ಮಕ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಬರೆದಿದ್ದಾರೆ, &quot;ಇದು ನಿಮಗೆ ಶಾಂತಿಯನ್ನು ನೀಡಿದರೆ ಮತ್ತು ನಿಮ್ಮನ್ನು ಸಂತೋಷಪಡಿಸಿದರೆ, ಜನರು ಬುದ್ಧಿವಂತ ಆಯ್ಕೆ ಎಂದು ಕರೆಯುವುದಕ್ಕಿಂತ ಅದು ಹೆಚ್ಚು ಯೋಗ್ಯವಾಗಿದೆ.&quot; ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, &quot;ಒಂದು ಮನೆ ಯಾವಾಗಲೂ ಮರುಮಾರಾಟ ಮೌಲ್ಯದ ಬಗ್ಗೆ ಅಲ್ಲ. ಕೆಲವೊಮ್ಮೆ ಅದು ಅಂತಿಮವಾಗಿ ನೆಲೆಗೊಂಡ ಭಾವನೆಯ ಬಗ್ಗೆ.&quot; ಮೂರನೇ ಬಳಕೆದಾರರು ಹೇಳಿದರು, &quot;1 BHK ಗೆ ₹80 ಲಕ್ಷ ದುಬಾರಿಯಾಗಿ ಧ್ವನಿಸುತ್ತದೆ, ಆದರೆ ಭಾವನೆಗಳು ಮನೆ ಖರೀದಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತವೆ.&quot; ಮತ್ತೊಬ್ಬರು, &quot;ಜನರು ಯಾವಾಗಲೂ ಅಭಿಪ್ರಾಯಗಳನ್ನು ಹೊಂದಿರುತ್ತಾರೆ, ಆದರೆ ಈ ಮನೆ ನಿಮಗೆ ಏನನ್ನು ಸೂಚಿಸುತ್ತದೆ ಎಂದು ನಿಮಗೆ ಮಾತ್ರ ತಿಳಿದಿದೆ.&quot;&lt;/p&gt;]]></content:encoded>
            <category><![CDATA[life]]></category>
            <dc:creator>Suchethana D</dc:creator>
            <atom:link href="https://kannada.asianetnews.com/life/bengaluru-man-explains-why-he-chose-rs-80-lakh-1bhk-over-bigger-home-suc/articleshow-hnsl0m4"/>
        </item>
        <item>
            <title><![CDATA[3 ರಾಶಿ ಜೀವನದಲ್ಲಿ ಇದ್ದಕ್ಕಿದ್ದಂತೆ ಪ್ರಮುಖ ಬದಲಾವಣೆ, ಜುಲೈ 7 ರಂದು ಬುಧ ಮತ್ತು ಗುರುಗಳ ನಡುವೆ ದ್ವಿದ್ವಾದಶ ಯೋಗ]]></title>
            <link>https://kannada.asianetnews.com/gallery/festivals/news-budh-guru-dwidwadash-yog-7-july-3-zodiac-signs-life-change-suh-qzaqgv4</link>
            <guid isPermaLink="true">https://kannada.asianetnews.com/gallery/festivals/news-budh-guru-dwidwadash-yog-7-july-3-zodiac-signs-life-change-suh-qzaqgv4</guid>
            <pubDate>Sun, 05 Jul 2026 12:41:08 +0530</pubDate>
            <description><![CDATA[Budh guru dwidwadash yog 7 july ಜುಲೈ 7 ರಂದು ಬುಧ ಗ್ರಹವು ಮಿಥುನ ರಾಶಿಗೆ ಹಿಮ್ಮುಖವಾಗಿ ಸಾಗುತ್ತದೆ. ಬುಧ ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಂತೆ, ಗುರುವಿನ ಜೊತೆ ದ್ವಿದ್ವಾದಶ ಯೋಗವನ್ನು ರೂಪಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01ktn77zrbn5rw55sye6qgmt15,imgname-mercury-retrograde-will-bring-a-turning-point-in-the-lives-of-these-4-zodiac-signs-1780976189195.jpg" type="image/jpeg" height="390" width="690"/>
            <content:encoded><![CDATA[&lt;p&gt;Budh guru dwidwadash yog 7 july ಜುಲೈ 7 ರಂದು ಬುಧ ಗ್ರಹವು ಮಿಥುನ ರಾಶಿಗೆ ಹಿಮ್ಮುಖವಾಗಿ ಸಾಗುತ್ತದೆ. ಬುಧ ತನ್ನ ರಾಶಿಯನ್ನು ಬದಲಾಯಿಸುತ್ತಿದ್ದಂತೆ, ಗುರುವಿನ ಜೊತೆ ದ್ವಿದ್ವಾದಶ ಯೋಗವನ್ನು ರೂಪಿಸುತ್ತದೆ.&lt;/p&gt;&lt;img&gt;&lt;p&gt;ಜುಲೈ 7 ರಂದು ಬುಧ ಗ್ರಹವು ಕರ್ಕ ರಾಶಿಯಿಂದ ಮಿಥುನ ರಾಶಿಗೆ ಹಿಮ್ಮುಖ ಚಲನೆಯಲ್ಲಿ ಸಾಗುತ್ತದೆ. ಬುಧನ ರಾಶಿಯಲ್ಲಿನ ಬದಲಾವಣೆಯಿಂದಾಗಿ, ಬುಧ ಮತ್ತು ಗುರುಗಳ ನಡುವೆ ದ್ವಿದ್ವಾದಶ ಯೋಗವು ರೂಪುಗೊಳ್ಳುತ್ತದೆ. ಗುರುವು ಬುಧದಿಂದ ಎರಡನೇ ಮನೆಯಲ್ಲಿ ಇರಿಸಲ್ಪಡುತ್ತಾನೆ ಮತ್ತು ಬುಧ ಗುರುವಿನಿಂದ ದ್ವಾದಶ ಯೋಗದಲ್ಲಿದ್ದಾನೆ. ಈ ದ್ವಿದ್ವಾದಶ ಯೋಗದ ರಚನೆಯಿಂದಾಗಿ, ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಅನುಭವಿಸಬಹುದು. ವಿಶೇಷವಾಗಿ ಕುಟುಂಬ ಮತ್ತು ಆರ್ಥಿಕ ಜೀವನದಲ್ಲಿ ಸುಧಾರಣೆಗಳನ್ನು ಕಾಣಬಹುದು.&lt;/p&gt;&lt;img&gt;&lt;p&gt;ನಿಮ್ಮ ರಾಶಿಚಕ್ರದ ಅಧಿಪತಿ ಬುಧ ಗ್ರಹವು ನಿಮ್ಮ ರಾಶಿಗೆ ಮರಳುವುದು ಶುಭಕರವೆಂದು ಸಾಬೀತುಪಡಿಸಬಹುದು. ನಿಮ್ಮ ವೃತ್ತಿಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು ಮತ್ತು ನೀವು ಬಯಸಿದ ಸ್ಥಳದಲ್ಲಿ ಉದ್ಯೋಗ ಪಡೆಯುವ ಸಾಧ್ಯತೆಗಳೂ ಇವೆ. ಬುಧವು ನಿಮ್ಮ ವೈವಾಹಿಕ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ತರಬಹುದು, ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ನಿಕಟತೆಯನ್ನು ಹೆಚ್ಚಿಸಬಹುದು. ಆದಾಗ್ಯೂ, ನೀವು ನಿಮ್ಮ ಖರ್ಚುಗಳನ್ನು ಸ್ವಲ್ಪ ನಿಯಂತ್ರಿಸಬೇಕಾಗುತ್ತದೆ. ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳು ತಮ್ಮ ಶಿಕ್ಷಣದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ಅನುಭವಿಸಬಹುದು ಮತ್ತು ಅವರ ಏಕಾಗ್ರತೆ ಹೆಚ್ಚಾಗಬಹುದು.&lt;/p&gt;&lt;img&gt;&lt;p&gt;ನಿಮ್ಮ ರಾಶಿಚಕ್ರದ ಅಧಿಪತಿ ಬುಧ, ಆದ್ದರಿಂದ ಬುಧನ ರಾಶಿಚಕ್ರ ಬದಲಾವಣೆ ಮತ್ತು ಗುರುವಿನೊಂದಿಗಿನ ದ್ವಿದ್ವಾದಶ ಯೋಗವು ನಿಮಗೆ ಪರಿವರ್ತನೆ ತರಬಹುದು. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಹಿಂದಿನ ಕಾರ್ಯಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ಆದಾಗ್ಯೂ, ನೀವು ಹಿಂದೆ ಏನಾದರೂ ತಪ್ಪು ಮಾಡಿದ್ದರೆ, ನಿಮ್ಮ ಹಿರಿಯರಿಂದ ಟೀಕೆಗಳನ್ನು ಎದುರಿಸಬೇಕಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹೆಚ್ಚುವರಿಯಾಗಿ, ದ್ವಿದ್ವಾದಶ ಯೋಗದಿಂದಾಗಿ, ನೀವು ಪೂರ್ವಜರ ಆಸ್ತಿಯಿಂದ ಲಾಭ ಪಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ದ್ವಿದವಾದಶ ಯೋಗವು ನಿಮಗೆ ಅದೃಷ್ಟವನ್ನು ತರಬಹುದು. ನಿಮ್ಮ ಅದೃಷ್ಟ ಮನೆಯಲ್ಲಿ ಬುಧ ಮತ್ತು ನಿಮ್ಮ ಕರ್ಮ ಮನೆಯಲ್ಲಿ ಗುರು ಇರುವಿಕೆಯು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ವಿದೇಶದಲ್ಲಿ ಕೆಲಸ ಮಾಡಲು ಬಯಸುವವರು ತಮ್ಮ ಕನಸುಗಳನ್ನು ನನಸಾಗಿಸಬಹುದು. ಕೆಲವರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಬಹುದು. ತುಲಾ ರಾಶಿಯವರು ತಮ್ಮ ಕುಟುಂಬ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಾರೆ ಮತ್ತು ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. ಆದಾಗ್ಯೂ, ತುಲಾ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/news-budh-guru-dwidwadash-yog-7-july-3-zodiac-signs-life-change-suh-qzaqgv4"/>
        </item>
        <item>
            <title><![CDATA[ಅಣ್ಣ-ತಮ್ಮ ಜೋಡಿ.. ಪ್ರಣಮ್‌ ಚಿತ್ರದಲ್ಲಿ ಪ್ರಧಾನ ಪಾತ್ರಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್!]]></title>
            <link>https://kannada.asianetnews.com/sandalwood/sandalwood-actor-dynamic-prince-prajwal-devaraj-enters-in-his-bother-pranam-devaraj-movie-shreerasthu/articleshow-q6dfq5t</link>
            <guid isPermaLink="true">https://kannada.asianetnews.com/sandalwood/sandalwood-actor-dynamic-prince-prajwal-devaraj-enters-in-his-bother-pranam-devaraj-movie-shreerasthu/articleshow-q6dfq5t</guid>
            <pubDate>Sun, 05 Jul 2026 12:06:21 +0530</pubDate>
            <description><![CDATA[ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತವನ್ನು ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚಿತ್ರದ ಸಂಗೀತ ನಿರ್ದೇಶಕ ಶೇಖರ್‌ ಚಂದ್ರ ಎನ್ನುವ ಸತ್ಯವೂ ಅರಿವಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrfp76aj1ztz7x8nq1w8mrm,imgname-pranam-devaraj-prajwal-devaraj-1783233191114.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಒಂದೇ ಚಿತ್ರದಲ್ಲಿ ನಟ ದೇವರಾಜ್ ಮಕ್ಕಳಾದ ಪ್ರಜ್ವಲ್ ಹಾಗೂ ಪ್ರಣಮ್!&lt;/strong&gt;&lt;/p&gt;&lt;p&gt;ಪ್ರಣಮ್ ದೇವರಾಜ್ ನಾಯಕತ್ವದ 'ಶ್ರೀರಸ್ತು' ಚಿತ್ರವು ಈಗಾಗಲೇ ಸಾಕಷ್ಟು ಸುದ್ದಿಯಲ್ಲಿದೆ. ಇದೀಗ ಈ ಚಿತ್ರತಂಡದಿಂದ ಹೊಸದೊಂದು ಸುದ್ದಿ ಸೌಂಡ್ ಮಾಡತೊಡಗಿದೆ. ಹೌದು, ಪ್ರಣಮ್ ದೇವರಾಜ್ ಶ್ರೀರಸ್ತು ಚಿತ್ರಕ್ಕೆ ಅವರ ಅಣ್ಣ, ಸ್ಯಾಂಡಲ್&zwnj;ವುಡ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್&zwnj; ದೇವರಾಜ್ ಪ್ರವೇಶ ಮಾಡಿದ್ದಾರೆ. ಈ ಮೂಲಕ ಪರದೆಯ ಮೇಲೆ ಕನ್ನಡದ ಡೈನಾಮಿಕ್ ಹೀರೋ ದೇವರಾಜ್ ಅವರ ಇಬ್ಬರು ಮಕ್ಕಳಾದ ಪ್ರಣಮ್-ಪ್ರಜ್ವಲ್ ಇಬ್ಬರನ್ನೂ ತೆರೆಗೆ ಮೇಲೆ ನೋಡಿ ಅವರ ಅಭಿಮಾನಿಗಳು ಆನಂದಿಸಬಹುದು.&lt;/p&gt;&lt;p&gt;&lt;img&gt;&lt;/p&gt;&lt;p&gt;ಈಗಾಗಲೇ ಪ್ರಣಾಮ್&zwnj; ದೇವರಾಜ್&zwnj; ನಾಯಕ ಎನ್ನುವ ಕಾರಣದಿಂದಲೇ ಈ ಸಿನಿಮಾ ಸಾಕಷ್ಟು ದೊಡ್ಡ ಸುದ್ದಿ ಮಾಡಿತ್ತು ಈ ಶ್ರೀರಸ್ತು ಸಿನಿಮಾ. ಇದೀಗ ತಮ್ಮ ನಾಯಕನಾಗಿರುವ ಚಿತ್ರದಲ್ಲೇ ಅಣ್ಣ ಡೈನಾಮಿಕ್&zwnj; ಪ್ರಿನ್ಸ್&zwnj; ಕೂಡ ಎಂಟ್ರಿ ಕೊಡುತ್ತಿರುವುದು ಅಧಿಕೃತಗೊಂಡಿದೆ.&lt;/p&gt;&lt;p&gt;ಕನ್ನಡ ಚಿತ್ರರಂಗದಲ್ಲಿ ಸಹೋದರರು ಸಕ್ಸಸ್&zwnj; ಹೀರೋಗಳಾಗಿರುವುದನ್ನು ನೋಡಿದ್ದೇವೆ. ಆದರೆ ಪ್ರಣಮ್&zwnj; ಮತ್ತು ಪ್ರಜ್ವಲ್ ಒಂದೇ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊಟ್ಟಮೊದಲು ಎನ್ನಬಹುದು. ಅದೇ ಕಾರಣದಿಂದಲೇ ಶ್ರೀರಸ್ತು ದೊಡ್ಡ ಕುತೂಹಲವನ್ನೇ ಸೃಷ್ಟಿಸಿದೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಪ್ರಜ್ವಲ್&zwnj; ದೇವರಾಜ್&zwnj; ಜನ್ಮದಿನದ ಪ್ರಯುಕ್ತ ಶ್ರೀರಸ್ತು ಚಿತ್ರತಂಡ ಶುಭ ಕೋರುವ ಪೋಸ್ಟರ್&zwnj; ಮತ್ತು ವಿಡಿಯೋ ಬಿಡುಗಡೆಗೊಳಿಸಿತ್ತು. ವಿಶೇಷ ಏನೆಂದರೆ ಪ್ರಣಮ್&zwnj; ಜತೆಗೆ ಬರ್ತ್&zwnj; ಡೇ ಬಾಯ್ ಪ್ರಜ್ವಲ್&zwnj; ಕೂಡ ಇದ್ದ ದೃಶ್ಯಗಳು ಅಭಿಮಾನಿಗಳಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಇದೀಗ ಈ ಸುದ್ದಿಯ ಮೂಲಕ, ಅವರಿಬ್ಬರನ್ನೂ ಒಂದೇ ಬಾರಿಗೆ ಒಂದೇ ಚಿತ್ರದಲ್ಲಿ ತೆರೆಯಲ್ಲಿ ನೋಡುವ ಅಭಿಮಾನಿಗಳ ಕನಸು ನನಸಾಗಲಿದೆ. ಅಷ್ಟೇ ಅಲ್ಲ, ಅವರಿಬ್ಬರಿಗೂ ಕೂಡ ತಾವಿಬ್ಬರೂ ಜೊತೆಯಾಗಿ ನಟಿಸುವ ಕನಸೂ ಕೂಡ ಇದ್ದಿರಬಹುದು.&lt;/p&gt;&lt;h2&gt;ಪ್ರೇಮ ಚಿತ್ರವೀಗ ಈಗ ಕೌಟುಂಬಿಕ ಚಿತ್ರ!&lt;/h2&gt;&lt;p&gt;ಆರಂಭದಲ್ಲಿ ಶ್ರೀರಸ್ತು ಒಂದು ಲವ್&zwnj; ಸ್ಟೋರಿ ಎಂದಷ್ಟೇ ಸುದ್ದಿಯಾಗಿತ್ತು. ಚಿತ್ರದಲ್ಲಿ ಪ್ರಣಮ್&zwnj;ಗೆ ಜೋಡಿ ಸಂಜನಾ ಆನಂದ್&zwnj; ಎನ್ನುವುದಷ್ಟೇ ತಿಳಿದು ಬಂದಿತ್ತು. ಆದರೆ ಇದೀಗ ಪ್ರಜ್ವಲ್&zwnj; ಕೂಡ ಸೇರಿಕೊಂಡಿದ್ದಾರೆ. ಚಿತ್ರಕ್ಕೂ ಒಂದು ಕೌಟುಂಬಿಕ ಕಳೆ ಬಂದಿದೆ. ಪ್ರೇಮದ ಜೊತೆಗೆ ಕೌಟುಂಬಿಕ ಪ್ರೀತಿಯನ್ನು ತೋರಿಸುವಂಥ ಒಂದು ವಿಭಿನ್ನ ಚಿತ್ರವಾಗಿ ಶ್ರೀರಸ್ತು ಮೂಡಿ ಬರಲಿದೆ ಎಂದು ನಿರ್ದೇಶಕ ಶಂಕರ್&zwnj; ರೆಡ್ಡಿ ತಿಳಿಸಿದ್ದಾರೆ. ಹಾಗಂತ ಪ್ರಜ್ವಲ್&zwnj; ತಮ್ಮನಿಗೆ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಪ್ರಧಾನ ಪಾತ್ರವಾಗಿ ಗಮನ ಸೆಳೆಯಲಿದ್ದಾರೆ ಎಂದು ಶಂಕರ್&zwnj; ರೆಡ್ಡಿ ಭರವಸೆ ನೀಡುತ್ತಾರೆ.&lt;/p&gt;&lt;p&gt;&lt;img&gt;&lt;/p&gt;&lt;p&gt;ಶ್ರೀರಸ್ತು ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯಲ್ಲಿ ಕೂಡ ತೆರೆ ಕಾಣಲಿದೆ. ಹೀಗಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿಯೇ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಖ್ಯಾತ ಕಲಾವಿದರಾದ ಸುಮನ್&zwnj;, ಆಮನಿ, ಚೈತ್ರಾ ರೈ, ರವಿ ಶಿವತೇಜ, ಜೋಶ್&zwnj; ರವಿ, ರವಿ ಪ್ರಕಾಶ್&zwnj; ಹೀಗೆ ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿರುವ ಕಲಾವಿದರು ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.&lt;/p&gt;&lt;p&gt;ಹರ ಕ್ರಿಯೇಶನ್ಸ್&zwnj; ಬ್ಯಾನರ್&zwnj; ನಲ್ಲಿ ಹರಗೌಡ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ನಿರ್ಮಿಸುತ್ತಿದ್ದಾರೆ. ಪುಷ್ಪ ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳ ಸಹಾಯಕ ಛಾಯಾಗ್ರಾಹಕ ಬಾಲಸರಸ್ವತಿ ಈ ಚಿತ್ರದ ಕ್ಯಾಮರಾಮ್ಯಾನ್.&zwnj; ಕೃಷ್ಣ ಮಾಯ ಕಲಾನಿರ್ದೇಶನವಿದ್ದು ಶ್ರೀ ವರ್ಕಲ ಸಂಕಲನ ನಿರ್ವಹಣೆ ಮಾಡುತ್ತಿದ್ದಾರೆ. ಕನ್ನಡದ ಪಾಲಿಗೆ ಇದು ಇಂಡಸ್ಟ್ರಿ ತಿರುಗಿ ನೋಡುವಂತಹ ಚಿತ್ರವಾಗುವ ಬಗ್ಗೆ ಯಾವುದೇ ಸಂದೇಹವಿಲ್ಲ.&lt;/p&gt;&lt;h3&gt;ಇದುವೇ ಈ ವರ್ಷದ ಮ್ಯೂಸಿಕಲ್&zwnj; ಬ್ಲಾಕ್&zwnj; ಬಸ್ಟರ್&zwnj; !&lt;/h3&gt;&lt;p&gt;ಶ್ರೀರಸ್ತು ಚಿತ್ರತಂಡದ ಕಡೆಯಿಂದ ಅಧಿಕೃತವಾಗಿ ಹೊರಗೆ ಬಂದಿರುವುದು ಒಂದು ವಿಡಿಯೋ ತುಣುಕು ಮಾತ್ರ. ಆದರೆ ಅದರ ಹಿನ್ನೆಲೆ ಸಂಗೀತವನ್ನು ಗಮನಿಸಿರುವ ಅಭಿಮಾನಿಗಳು ಹಾಡುಗಳ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಚಿತ್ರದ ಸಂಗೀತ ನಿರ್ದೇಶಕ ಶೇಖರ್&zwnj; ಚಂದ್ರ ಎನ್ನುವ ಸತ್ಯವೂ ಅರಿವಾಗಿದೆ. ಹೀಗಾಗಿಯೇ ಹಾಡುಗಳು ಅದ್ಭುತವಾಗಿರುವ ನಿರೀಕ್ಷೆ ಸೃಷ್ಟಿಯಾಗಿದೆ. ಅಭಿಮಾನಿಗಳ ನಂಬಿಕೆ ಖಂಡಿತಾ ಸತ್ಯವಾಗಲಿದೆ ಎನ್ನುವ ಭರವಸೆಯನ್ನು ನಿರ್ದೇಶಕ ಶಂಕರ್&zwnj; ರೆಡ್ಡಿ ಹೇಳಿದ್ದಾರೆ.&lt;/p&gt;&lt;p&gt;ಮತ್ತೆ ಸದ್ದು ಮಾಡಲಿದೆ ಯುವ ತಾರಾ ಸಂಗಮ&lt;/p&gt;&lt;p&gt;ಪ್ರಣಾಮ್&zwnj; ಜತೆಗೆ ಪ್ರಜ್ವಲ್&zwnj; ಇರುವುದು ಅಭಿಮಾನಿಗಳಿಗೆ ಎಷ್ಟು ಖುಷಿಯಾಗಿದೆಯೋ ಸಂಜನಾ ಆನಂದ್&zwnj; ನಾಯಕಿಯಾಗಿರುವುದು ಕೌಟುಂಬಿಕ ಪ್ರೇಕ್ಷಕರನ್ನು ಸಂತೃಪ್ತಗೊಳಿಸಿದೆ. ಸಂಜನಾ ನಟನೆಯ ಈ ಹಿಂದಿನ ಚಿತ್ರದಲ್ಲಿ 'ಬ್ಯಾಂಗಲ್&zwnj; ಬಂಗಾರಿ' ಎನ್ನುವ ಹಾಡು ಜನಪ್ರಿಯತೆ ಪಟ್ಟ ಗಿಟ್ಟಿಸಿತ್ತು. ಮನೆಯ ಹಿರಿಯರಿಂದ ಹಿಡಿದು ಕಿರಿಯ ಮಕ್ಕಳ ತನಕ ಎಲ್ಲರೂ ಈ ಹಾಡಿಗೆ ಡಾನ್ಸ್&zwnj; ಮಾಡಿದ್ದರು. ಇದೀಗ ಅದೇ ಸಂಜನಾ ಆನಂದ್&zwnj; ಮರಳಿ ಬರುತ್ತಿದ್ದಾರೆ. ಈ ಬಾರಿ ಹಿಂದಿನ ದಾಖಲೆ ಮುರಿಯುವ ಹಾಡುಗಳಿರುತ್ತವೆ. ಈ ಮೂವರು ಸೇರಿ ಹೊಸ ಮೋಡಿ ಮಾಡುವ ನಿರೀಕ್ಷೆ ಎಲ್ಲರದ್ದೂ ಆಗಿದೆ. ಈ ಮೂಲಕ ಸ್ಯಾಂಡಲ್&zwnj;ವುಡ್ ಹೊಸ ಸುದ್ದಿಯೊಂದಕ್ಕೆ ಸಾಕ್ಷಿಯಾಗಿದೆ.&lt;/p&gt;]]></content:encoded>
            <category><![CDATA[sandalwood]]></category>
            <dc:creator>Shriram Bhat</dc:creator>
            <atom:link href="https://kannada.asianetnews.com/sandalwood/sandalwood-actor-dynamic-prince-prajwal-devaraj-enters-in-his-bother-pranam-devaraj-movie-shreerasthu/articleshow-q6dfq5t"/>
        </item>
        <item>
            <title><![CDATA[ಒಂದು ಸಣ್ಣ ತಪ್ಪು.. ದುರಭ್ಯಾಸವಿಲ್ಲದಿದ್ದರೂ, 90 ಸಾವಿರ ಸಂಬಳವಿದ್ದರೂ 15 ಲಕ್ಷ ಸಾಲ ಮಾಡಿಕೊಂಡ ವ್ಯಕ್ತಿ!]]></title>
            <link>https://kannada.asianetnews.com/viral/how-a-90k-salary-manager-trapped-in-15-lakh-debt-a-simple-financial-lesson/articleshow-q1g0z67</link>
            <guid isPermaLink="true">https://kannada.asianetnews.com/viral/how-a-90k-salary-manager-trapped-in-15-lakh-debt-a-simple-financial-lesson/articleshow-q1g0z67</guid>
            <pubDate>Sun, 05 Jul 2026 12:31:03 +0530</pubDate>
            <description><![CDATA[How to manage 90k salary: ಕೈತುಂಬಾ ಸಂಬಳವಿದ್ದರೂ, ಯಾವುದೇ ದುರಭ್ಯಾಸಗಳಿಲ್ಲದಿದ್ದರೂ ಒಬ್ಬ ವ್ಯಕ್ತಿ ಹೇಗೆ 15 ಲಕ್ಷದ ಸಾಲದ ಸುಳಿಗೆ ಸಿಲುಕಿದ ಎಂಬುದು ಅಚ್ಚರಿಯ ವಿಷಯ. ಪುಣೆಯ ಉದ್ಯೋಗಿಯೊಬ್ಬರ ಈ ನೈಜ ಕಥೆ ನಿಮ್ಮ ಆರ್ಥಿಕ ಯೋಜನೆಗಳ ಬಗ್ಗೆ ಮರುಚಿಂತನೆ ನಡೆಸುವಂತೆ ಮಾಡುತ್ತದೆ. ಆತ ಮಾಡಿದಂತೆ ಆ ಒಂದು ಸಣ್ಣ ತಪ್ಪು ನೀವೂ ಮಾಡಿಕೊಂಡರೆ ಸಂಕಷ್ಟಕ್ಕೆ ತಳ್ಳಬಹುದು ಎಚ್ಚರ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrh1abbbk0y2avvaz8rdf71,imgname-gemini-generated-image-ebtybwebtybwebty-1783234603371.png" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಸಾ&lt;/strong&gt;ಮಾನ್ಯವಾಗಿ ಅತಿಯಾಗಿ ಪಾರ್ಟಿ ಮಾಡುವವರು ಅಥವಾ ಐಷಾರಾಮಿ ಜೀವನ ನಡೆಸುವವರು ಮಾತ್ರ ಸಾಲಗಾರರಾಗುತ್ತಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಸರಿಯಾದ ಪ್ಲಾನಿಂಗ್ ಇಲ್ಲದಿದ್ದರೆ, ಮಿತವಾಗಿ ಖರ್ಚು ಮಾಡುವವರು ಕೂಡ ಹೇಗೆ ಸಾಲದ ಸುಳಿಗೆ ಸಿಲುಕಬಹುದು ಎಂಬುದಕ್ಕೆ ಈ ಆಪರೇಷನ್ಸ್ ಮ್ಯಾನೇಜರ್ (Operations Manager) ಕಥೆಯೇ ಸಾಕ್ಷಿ.&lt;/p&gt;&lt;h2&gt;&lt;strong&gt;ಸಾಲದ ಸುಳಿ ಶುರುವಾಗಿದ್ದು ಹೇಗೆ?&lt;/strong&gt;&lt;/h2&gt;&lt;p&gt;ಪುಣೆಯಲ್ಲಿ ಕೆಲಸ ಮಾಡುತ್ತಿರುವ 36 ವರ್ಷದ ವ್ಯಕ್ತಿಯೊಬ್ಬರ ಕಥೆಯನ್ನು ಹಣಕಾಸು ಸಲಹೆಗಾರ ವಿವೇಕ್ (Financial Advisor Vivek)ಅವರು ಹಂಚಿಕೊಂಡಿದ್ದಾರೆ. ಈ ವ್ಯಕ್ತಿಗೆ ತಿಂಗಳಿಗೆ 90,000 ರೂಪಾಯಿ ಸಂಬಳವಿತ್ತು. ಇದರಲ್ಲಿ 82,000 ರೂಪಾಯಿ ಮನೆ ಖರ್ಚು, ಮಕ್ಕಳ ಫೀಸ್&zwnj;ಗೆ ಬಳಕೆಯಾಗುತ್ತಿತ್ತು. ಕೈಯಲ್ಲಿ ಉಳಿತಾಯ ಇಲ್ಲದಿದ್ದರೂ, ಯಾವುದೇ ಸಾಲವಿಲ್ಲದೆ ಜೀವನ ನೆಮ್ಮದಿಯಾಗಿ ಸಾಗುತ್ತಿತ್ತು.&lt;/p&gt;&lt;p&gt;ಆದರೆ, ಇದ್ದಕ್ಕಿದ್ದಂತೆ ಅವರ ತಂದೆಗೆ ಅನಾರೋಗ್ಯ ಉಂಟಾಗಿ ತುರ್ತು ಆಪರೇಷನ್ ಮಾಡಿಸಬೇಕಾಗಿ ಬಂತು. ಅದಕ್ಕೆ 5 ಲಕ್ಷ ರೂಪಾಯಿ ಖರ್ಚಾಯಿತು. ಕೈಯಲ್ಲಿ ಹಣವಿಲ್ಲದ ಕಾರಣ, ಅನಿವಾರ್ಯವಾಗಿ ಶೇ. 14ರ ಬಡ್ಡಿಯಲ್ಲಿ ಪರ್ಸನಲ್ ಲೋನ್ (Personal Loan) ಪಡೆದರು. ಇದರ ತಿಂಗಳ ಇಎಂಐ (EMI) 13,663 ರೂಪಾಯಿ ಆಯಿತು. ಈ ಒಂದು ಲೋನ್ ಅವರ ಇಡೀ ಬಜೆಟ್ ಅನ್ನು ಬುಡಮೇಲು ಮಾಡಿತು.&lt;/p&gt;&lt;h2&gt;&lt;strong&gt;ಬಜೆಟ್ ಕೈತಪ್ಪಿದ ರೀತಿ&lt;/strong&gt;&lt;/h2&gt;&lt;p&gt;ಈಗ ಅವರ ಲೆಕ್ಕಾಚಾರ ಬದಲಾಯಿತು. ಮೊದಲು 82,000 ರೂ. ಖರ್ಚು ಇತ್ತು, ಈಗ ಅದಕ್ಕೆ 13,663 ರೂ. ಇಎಂಐ ಸೇರಿ ಒಟ್ಟು ಖರ್ಚು 95,663 ರೂ. ಆಯಿತು. ಆದರೆ ಅವರ ಸಂಬಳ ಇರುವುದೇ 90,000 ರೂ. ಅಂದರೆ ಪ್ರತಿ ತಿಂಗಳು ಅವರಿಗೆ 6,000 ರೂಪಾಯಿಗಳ ಕೊರತೆ ಕಾಣಿಸಿಕೊಂಡಿತು.&lt;/p&gt;&lt;p&gt;ಈ ಕೊರತೆಯನ್ನು ತುಂಬಲು ಅವರು ಕ್ರೆಡಿಟ್ ಕಾರ್ಡ್ (Credit card) ಬಳಸಲು ಶುರು ಮಾಡಿದರು. ಮನೆ ಸಾಮಾನು, ಪೆಟ್ರೋಲ್ ಎಲ್ಲವನ್ನೂ ಕ್ರೆಡಿಟ್ ಕಾರ್ಡ್&zwnj;ನಲ್ಲೇ ತಂದರು. ನೋಡನೋಡುತ್ತಿದ್ದಂತೆ ಒಂದೇ ವರ್ಷದಲ್ಲಿ ಕ್ರೆಡಿಟ್ ಕಾರ್ಡ್ ಸಾಲ 4 ಲಕ್ಷಕ್ಕೆ ಏರಿತು. ಕ್ರೆಡಿಟ್ ಕಾರ್ಡ್&zwnj;ನ ಭಾರಿ ಬಡ್ಡಿಯಿಂದಾಗಿ ಪರಿಸ್ಥಿತಿ ಕೈಮೀರಿ ಹೋಯಿತು.&lt;/p&gt;&lt;h2&gt;&lt;strong&gt;ಸಾಲ ತೀರಿಸಲು ಮತ್ತೊಂದು ಸಾಲದ ತಪ್ಪು&lt;/strong&gt;&lt;/h2&gt;&lt;p&gt;ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು ಅವರು ಮತ್ತೆ 6 ಲಕ್ಷ ರೂಪಾಯಿ ಹೊಸ ಲೋನ್ ಪಡೆದರು. ಅಷ್ಟೊತ್ತಿಗಾಗಲೇ ಅವರ ಸಿಬಿಲ್ ಸ್ಕೋರ್ (CIBIL Score) ಕಡಿಮೆಯಾಗಿದ್ದರಿಂದ, ಶೇ. 18ರಷ್ಟು ಹೆಚ್ಚಿನ ಬಡ್ಡಿಯಲ್ಲಿ ಲೋನ್ ಸಿಕ್ಕಿತು. ಇದರ ಇಎಂಐ ಕೂಡ ಸೇರಿ ಪರಿಸ್ಥಿತಿ ಇನ್ನಷ್ಟು ಕೆಟ್ಟಿತು.&lt;/p&gt;&lt;p&gt;ಇಂದು ಆ ವ್ಯಕ್ತಿಯ ಮೇಲೆ ಒಟ್ಟು 15 ಲಕ್ಷ ರೂಪಾಯಿ ಸಾಲವಿದೆ. ಅವರ ಸಂಬಳದ ಅರ್ಧಕ್ಕಿಂತ ಹೆಚ್ಚು ಅಂದರೆ 51,000 ರೂಪಾಯಿ ಕೇವಲ ಇಎಂಐ ಕಟ್ಟಲು ವ್ಯಯವಾಗುತ್ತಿದೆ. ಈಗ ಅವರು ಹಳೆಯ ಸಾಲ ತೀರಿಸಲು ಹೊಸ ಸಾಲ ಪಡೆಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ.&lt;/p&gt;&lt;h3&gt;&lt;strong&gt;ಇದರಿಂದ ನಾವು ಕಲಿಯಬೇಕಾದ ಪಾಠ&lt;/strong&gt;&lt;/h3&gt;&lt;p&gt;ಮೊದಲನೆಯದಾಗಿ ನಿಮ್ಮ ಇಎಂಐ ಮೊತ್ತವು ನಿಮ್ಮ ಸಂಬಳದ ಶೇ. 40ಕ್ಕಿಂತ ಹೆಚ್ಚಾದರೆ ಅದು ಅಪಾಯದ ಸಂಕೇತ.ತುರ್ತು ಸಂದರ್ಭಗಳಿಗಾಗಿ ಯಾವಾಗಲೂ 'ಎಮರ್ಜೆನ್ಸಿ ಫಂಡ್' (ತುರ್ತು ನಿಧಿ) ಇಟ್ಟುಕೊಳ್ಳಿ.ಸಾಲದ ಸುಳಿಯಿಂದ ಪಾರಾಗಲು ಮೊದಲು ಹೊಸ ಸಾಲ ಪಡೆಯುವುದನ್ನು ನಿಲ್ಲಿಸಿ.ಹೆಚ್ಚಿನ ಬಡ್ಡಿ ಇರುವ ಸಾಲವನ್ನು (ಉದಾಹರಣೆಗೆ ಕ್ರೆಡಿಟ್ ಕಾರ್ಡ್ ಸಾಲ) ಮೊದಲು ತೀರಿಸಲು ಟ್ರೈ ಮಾಡಿ&lt;/p&gt;]]></content:encoded>
            <category><![CDATA[Viral News]]></category>
            <dc:creator>Ashwini HR</dc:creator>
            <atom:link href="https://kannada.asianetnews.com/viral/how-a-90k-salary-manager-trapped-in-15-lakh-debt-a-simple-financial-lesson/articleshow-q1g0z67"/>
        </item>
        <item>
            <title><![CDATA['ಕರ್ಣ'ನ ಹುಟ್ಟುಹಬ್ಬ: ಯುವತಿಯರ ಹೃದಯ ಕದ್ದ ಕಿರಣ್​ ರಾಜ್ ವಯಸ್ಸೆಷ್ಟು? ನಟನ ರೋಚಕ ಲವ್​ ಸ್ಟೋರಿ]]></title>
            <link>https://kannada.asianetnews.com/gallery/tv-talk/karna-serial-karna-urf-kiran-raj-birthday-story-about-actors-marriage-and-love-suc-8nc3um6</link>
            <guid isPermaLink="true">https://kannada.asianetnews.com/gallery/tv-talk/karna-serial-karna-urf-kiran-raj-birthday-story-about-actors-marriage-and-love-suc-8nc3um6</guid>
            <pubDate>Sun, 05 Jul 2026 12:19:48 +0530</pubDate>
            <description><![CDATA[ಕಿರುತೆರೆ ನಟ ಕಿರಣ್ ರಾಜ್ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಗೂಗಲ್ ಪ್ರಕಾರ 33ನೇ ವಸಂತಕ್ಕೆ ಕಾಲಿಟ್ಟಿರುವ ಅವರ ಹಿನ್ನೆಲೆ, ಮದುವೆಯ ಕುರಿತಾದ ಹಾಸ್ಯ ಪ್ರಸಂಗಗಳು ಮತ್ತು ನಿಜ ಜೀವನದಲ್ಲಿಯೂ ಅವರು 'ಕರ್ಣ'ನಾಗಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kpr1n6vhnww1k6xdd57pp4xg,imgname-kiran-raj-1776776026993.jpg" type="image/jpeg" height="390" width="690"/>
            <content:encoded><![CDATA[ಕಿರುತೆರೆ ನಟ ಕಿರಣ್ ರಾಜ್ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಗೂಗಲ್ ಪ್ರಕಾರ 33ನೇ ವಸಂತಕ್ಕೆ ಕಾಲಿಟ್ಟಿರುವ ಅವರ ಹಿನ್ನೆಲೆ, ಮದುವೆಯ ಕುರಿತಾದ ಹಾಸ್ಯ ಪ್ರಸಂಗಗಳು ಮತ್ತು ನಿಜ ಜೀವನದಲ್ಲಿಯೂ ಅವರು 'ಕರ್ಣ'ನಾಗಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ಈ ಲೇಖನ ವಿವರಿಸುತ್ತದೆ.&lt;img&gt;&lt;p&gt;'ಕಿರಣ್​ ರಾಜ್​' ಎಂದರೆ ಬಹುತೇಕ ಜನರಿಗೆ ಅರ್ಥವಾಗಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್​ ನಾಯಕ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳ ಅದರಲ್ಲಿಯೂ ಬಹುತೇಕ ಯುವತಿಯರ ಕಣ್ಣುಗಳು ಅರಳುತ್ತವೆ. ಕಿರುತೆರೆಯ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದು ಎನ್ನಿಸಿಕೊಂಡಿರುವ ನಟ ಕಿರಣ್​ ರಾಜ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆಯ ಪ್ರಕಾರ, ಕಿರಣ್​ ರಾಜ್​ ಅವರು ಹುಟ್ಟಿದ್ದು 1993 ಜುಲೈ 5ರಂದು. ಗೂಗಲ್​ ದಾಖಲೆಯನ್ನು ಪರಿಗಣನೆಗೆ ತೆಗೆದುಕೊಂಡೆ (ಕೆಲವೊಮ್ಮೆ ಗೂಗಲ್​ನಲ್ಲಿ ತಪ್ಪಾಗಿಯೂ ತೋರಿಸುವುದು ಇದೆ!) ಕರ್ಣನಿಗೆ ಇಂದು 33ರ ಹುಟ್ಟುಹಬ್ಬದ ಸಂಭ್ರಮ. ಇವರ ಹುಟ್ಟುಹಬ್ಬಕ್ಕೆ ಜೀ ಕನ್ನಡ ವಾಹಿನಿ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ವಿಶೇಷವಾಗಿ ಶುಭಾಶಯ ಕೋರಿದೆ.&lt;/p&gt;&lt;img&gt;&lt;p&gt;ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್&zwnj;ಬಾಸ್&zwnj; ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.&lt;/p&gt;&lt;img&gt;&lt;p&gt;ಇದೇ ವೇಳೆ ಕರ್ಣ ಉರ್ಫ್&zwnj; ನಟ ಕಿರಣ್​ ರಾಜ್​ ಅವರ ಲವ್​ ಸ್ಟೋರಿ ಕೂಡ ರೋಚಕವಾಗಿದೆ. ಕಿರಣ್​ ರಾಜ್​ ಅವರು ನಟಿಸಿರುವ ಸೀರಿಯಲ್​​ಗಳಲ್ಲಿ ಇಬ್ಬರಿಬ್ಬರು ನಾಯಕಿಯರು ಇರ್ತಾರೆ. ಕರ್ಣ ಸೀರಿಯಲ್​​ನಲ್ಲಿ ಕೂಡ ನಿತ್ಯಾ ಮತ್ತು ನಿಧಿ ಇದ್ದು, ಸದ್ಯ ನಿಧಿಯನ್ನು ಮದ್ವೆಯಾಗಿದ್ದಾರೆ. ಆದರೆ ರಿಯಲ್&zwnj; ಲೈಫ್&zwnj;ನಲ್ಲಿ ಮಾತ್ರ ಕರ್ಣ ಅಂದ್ರೆ ಕಿರಣ್&zwnj; ರಾಜ್&zwnj; ಅವರ ಬ್ಯಾಚುಲರ್&zwnj; ಆಗಿದ್ದು, ಮದುವೆ ಯಾವಾಗ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತದೆ.&lt;/p&gt;&lt;img&gt;&lt;p&gt;ಈ ಬಗ್ಗೆ ಹಿಂದೊಮ್ಮೆ ಸಂದರ್ಶನದಲ್ಲಿ ಹಾಸ್ಯದ ಘಟನೆಗಳನ್ನು ನೆನಪಿಸಿಕೊಂಡಿದ್ದರು ಕಿರಣ್​ ರಾಜ್​. ನನ್ನ ಮಗಳನ್ನು ಮದುವೆಯಾಗು ಎಂದು ಹಲವರು ಸತಾಯಿಸುವ ಕುರಿತು ಹೇಳಿಕೊಂಡಿದ್ದರು. ಶೂಟಿಂಗ್&zwnj; ಸೆಟ್&zwnj;ನಲ್ಲಿ ಬರುವ ಕೆಲವರು ನನ್ನ ಮಗಳನ್ನು ಮದುವೆಯಾಗು ಎನ್ನುತ್ತಾರೆ. ನನ್ನ ಹಿಂದೆ ಮುಂದೆ ಗೊತ್ತಿರಲ್ಲ. ನಟನಾಗಿರುವ ಕಾರಣ ಹೀಗೆ ಹೇಳುತ್ತಾರೆ. ತಮ್ಮ ಮಗಳನ್ನು ಮದುವೆ ಮಾಡಿಸಲು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರೆ ನನ್ನ ಮೇಲೆ ಇಷ್ಟೊಂದು ಅಭಿಮಾನ ಇಟ್ಟಿದ್ದಾರೆ ಎನ್ನುವ ಖುಷಿಯಾಗುತ್ತದೆ ಎಂದಿದ್ದರು ಕಿರಣ್&zwnj; ರಾಜ್&zwnj;.&lt;/p&gt;&lt;img&gt;&lt;p&gt;ಲವ್&zwnj; ಮ್ಯಾರೇಜೋ, ಅರೇಂಜೋ ಎಂದು ಕೇಳಿದ ಪ್ರಶ್ನೆಗೆ ಹಾಸ್ಯಮಯವಾಗಿ ಉತ್ತರಿಸಿದ ಕಿರಣ್&zwnj; ರಾಜ್&zwnj;. ಒಂದು ವಯಸ್ಸಿನವರೆಗೆ ಮನೆಯವರು ಹುಡುಗಿ ನೋಡ್ತೇನೆ ಅಂದ್ರು ನಾನು ಬೇಡ ಎಂದೆ. ಈಗ ಅಪ್ಪ-ಅಮ್ಮ ಕೈಎತ್ತುಬಿಟ್ಟಿದ್ದಾರೆ. ಆದ್ದರಿಂದ ಸದ್ಯ ಇರೋ ಆಪ್ಷನ್&zwnj; ಲವ್&zwnj; ಮ್ಯಾರೇಜ್&zwnj; ಮಾತ್ರ ಎಂದಿದ್ದಾರೆ.&lt;/p&gt;&lt;img&gt;&lt;p&gt;ಅಷ್ಟಕ್ಕೂ ಕಿರಣ್​ ರಾಜ್​ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್&zwnj;ಬುಕ್&zwj;ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್&zwnj;-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.&lt;/p&gt;]]></content:encoded>
            <category><![CDATA[tv-talk]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/tv-talk/karna-serial-karna-urf-kiran-raj-birthday-story-about-actors-marriage-and-love-suc-8nc3um6"/>
        </item>
        <item>
            <title><![CDATA[ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ]]></title>
            <link>https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh</link>
            <guid isPermaLink="true">https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh</guid>
            <pubDate>Sun, 05 Jul 2026 12:18:17 +0530</pubDate>
            <description><![CDATA[ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ]]></description>
            <media:content url="https://static.asianetnews.com/images/w-1280,h-720,format-jpg,imgid-01kwrfwnvw6tgv29pqvvwp5ckf,imgname-pok-man-who-crossed-loc-1783233402748.jpg" type="image/jpeg" height="390" width="690"/>
            <content:encoded><![CDATA[&lt;p&gt;ಸ್ನ್ಯಾಪ್&zwnj;ಚಾಟ್&zwnj;ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ&lt;/p&gt;&lt;img&gt;&lt;p&gt;&lt;strong&gt;ಶ್ರೀನಗರ: &lt;/strong&gt;ಪ್ರೀತಿ ಹುಡುಕುತ್ತ ಗಡಿದಾಟಿ ಭಾರತ ಪ್ರವೇಶ ಮಾಡುವ ಪಾಕಿಸ್ತಾನಿಯರ ಸುದ್ದಿ ಹೊಸತೇನೂ ಅಲ್ಲ. ಇದೀಗ ಅಂತಹುದೇ ಮತ್ತೊಂದು ಪ್ರಸಂಗ ನಡೆದಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿ ಹಾಗೂ ತನ್ನ ಪೂರ್ವಜರ ಆಸ್ತಿಯನ್ನು ಮರಳಿ ಪಡೆಯುವ ಹಂಬಲದಿಂದ ಗಡಿ ದಾಟಿ ಭಾರತಕ್ಕೆ ಬಂದಿದ್ದ 22 ವರ್ಷದ ಪಾಕ್ ಆಕ್ರಮಿತ ಕಾಶ್ಮೀರದ (POJK) ಯುವಕನನ್ನು ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.&lt;/p&gt;&lt;img&gt;&lt;p&gt;ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜೀಶನ್ ಮಿರ್ (22) ಎಂಬಾತ ಮೇ 31 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್&zwnj;ನಲ್ಲಿ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತದೊಳಗೆ ಪ್ರವೇಶಿಸಿದ್ದ. ಆತನನ್ನು ಭಾರತೀಯ ಸೇನೆಯು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಸುಮಾರು ಒಂದು ತಿಂಗಳ ನಂತರ, ಜುಲೈ 4 ರಂದು ಮಧ್ಯಾಹ್ನ 12:24 ಕ್ಕೆ ಆತನನ್ನು ಅಧಿಕೃತವಾಗಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ.&lt;/p&gt;&lt;img&gt;&lt;p&gt;ತನಿಖಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ಜೀಶನ್ ಮಿರ್&zwnj;ಗೆ ಬಾರಾಮುಲ್ಲಾದ ತುಲ್ವಾರಿ ಗ್ರಾಮದ ನಿವಾಸಿ ಇರಮ್ ಬಾನೊ ಎಂಬ ಯುವತಿಯ ಪರಿಚಯ ಸ್ನ್ಯಾಪ್&zwnj;ಚಾಟ್&zwnj;ನಲ್ಲಿ ಆಗಿತ್ತು. ಈ ಸ್ನೇಹ ಕ್ರಮೇಣ ಗಾಢವಾದ ಪ್ರೀತಿಗೆ ತಿರುಗಿತ್ತು. ಪಾಕಿಸ್ತಾನದಲ್ಲಿದ್ದ ಜೀಶನ್ ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಮಾನಸಿಕ ಒತ್ತಡದಲ್ಲಿದ್ದನು. ಇದೇ ಸಮಯದಲ್ಲಿ ತನ್ನ ಪೂರ್ವಜರು ಸಹ ಇರಮ್ ಬಾನೊ ವಾಸಿಸುವ ಅದೇ ತುಲ್ವಾರಿ ಗ್ರಾಮದವರು ಎಂಬ ವಿಷಯ ಆತನಿಗೆ ತಿಳಿದುಬಂದಿತ್ತು.&lt;/p&gt;&lt;img&gt;&lt;p&gt;ತನ್ನ ಕಷ್ಟಗಳನ್ನು ಇರಮ್ ಬಾನೊ ಜೊತೆ ಹಂಚಿಕೊಂಡಾಗ, ಆಕೆ ಜೀಶನ್&zwnj;ಗೆ ಗಡಿ ದಾಟಿ ಭಾರತಕ್ಕೆ ಬರುವಂತೆ ಸಲಹೆ ನೀಡಿದ್ದಳು. ಗಡಿ ದಾಟಿ ನೇರವಾಗಿ ಭಾರತೀಯ ಸೇನೆಗೆ ಶರಣಾಗುವುದು, ನಂತರ ಅಕ್ರಮ ಪ್ರವೇಶಕ್ಕಾಗಿ ನೀಡಲಾಗುವ ಕಾನೂನುಬದ್ಧ ಶಿಕ್ಷೆಯನ್ನು ಅನುಭವಿಸುವುದು ಮತ್ತು ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪಡೆದು ಇಲ್ಲೇ ನೆಲೆಸುವುದು ಇವರಿಬ್ಬರ ಯೋಜನೆಯಾಗಿತ್ತು.&lt;/p&gt;&lt;img&gt;&lt;p&gt;ಮೇ ತಿಂಗಳಲ್ಲಿ ಗಡಿ ದಾಟುವಾಗ ಜೀಶನ್ ಸಿಕ್ಕಿಬಿದ್ದಿದ್ದ. ವಿಚಾರಣೆಯ ವೇಳೆ ಜೀಶನ್ ನೀಡಿದ ಮಾಹಿತಿಯನ್ನು ದೃಢೀಕರಿಸಲು ಸೇನೆಯು ಇರಮ್ ಬಾನೊಳನ್ನು ವಿಚಾರಣೆಗೆ ಒಳಪಡಿಸಿತ್ತು. ಆಕೆ ಜೀಶನ್ ಹೇಳಿದ್ದೆಲ್ಲವೂ ನಿಜವೆಂದು ಒಪ್ಪಿಕೊಂಡು, ಆತನನ್ನು ಇಲ್ಲೇ ಇರಲು ಬಿಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಳು. ಯಾವುದೇ ಬಾಹ್ಯ ಸಂಚು ಅಥವಾ ದೇಶವಿರೋಧಿ ಅಂಶಗಳಿಲ್ಲ ಎಂಬುದು ಖಚಿತವಾದ ನಂತರ ಭಾರತೀಯ ಸೇನೆಯು ಆತನನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿತು.&lt;/p&gt;&lt;p&gt;ಶನಿವಾರ 'ಕಮನ್ ಅಮನ್ ಸೇತು' ಮೂಲಕ ಜೀಶನ್&zwnj;ನನ್ನು ಪಾಕ್ ಸೇನೆಗೆ ಒಪ್ಪಿಸಲಾಯಿತು. ಭಾರತದಲ್ಲಿದ್ದ ಸಮಯದಲ್ಲಿ ಜೀಶನ್&zwnj;ನನ್ನು ಅತ್ಯಂತ ಗೌರವ ಮತ್ತು ಕಾಳಜಿಯಿಂದ ನಡೆಸಿಕೊಳ್ಳಲಾಗಿದೆ. ಇದು ಭಾರತೀಯ ಸೇನೆಯ ವೃತ್ತಿಪರತೆ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/india-news/for-love-the-crazy-lover-zeeshan-mir-crossed-the-border-from-pakistan-to-india-what-is-the-story-gkn-cxy3ogh"/>
        </item>
        <item>
            <title><![CDATA[ಸೇಮ್ ಸೇಮ್ ಬಟ್ ಡಿಫರೆಂಟ್; ಬೆಂಗಳೂರಿನ ಪ್ರಸಿದ್ಧ ಏರಿಯಾದ ವೀಕೆಂಡ್‌ನ ರಾತ್ರಿ ಕತೆ]]></title>
            <link>https://kannada.asianetnews.com/bengaluru-urban/same-but-different-a-night-story-of-weekend-in-a-famous-area-koramangala-of-bengaluru-mini-thailand-mrq/articleshow-ggcmruz</link>
            <guid isPermaLink="true">https://kannada.asianetnews.com/bengaluru-urban/same-but-different-a-night-story-of-weekend-in-a-famous-area-koramangala-of-bengaluru-mini-thailand-mrq/articleshow-ggcmruz</guid>
            <pubDate>Sun, 05 Jul 2026 12:16:53 +0530</pubDate>
            <description><![CDATA[ಬೆಂಗಳೂರಿನ ಈ ಪ್ರದೇಶಗಳು ವೀಕೆಂಡ್‌ಗಳಲ್ಲಿ ರಾತ್ರಿಯಾಗುತ್ತಿದ್ದಂತೆ ಪಬ್‌ಗಳು ಮತ್ತು ಬಣ್ಣಬಣ್ಣದ ಲೈಟ್‌ಗಳಿಂದ ಕಂಗೊಳಿಸುತ್ತವೆ. ಈ ನೈಟ್‌ಲೈಫ್, ಸ್ಟ್ರೀಟ್ ಫುಡ್ ಮತ್ತು ಜನಜಂಗುಳಿಯಿಂದಾಗಿ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರದೇಶವನ್ನು 'ಮಿನಿ ಥೈಲ್ಯಾಂಡ್' ಎಂದು ಕರೆಯಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrged8m8f5zy832pxg0d7nt,imgname-koramangala-1783233983764.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ರಾಜಧಾನಿ&lt;strong&gt; &lt;/strong&gt;ಬೆಂಗಳೂರಿನ ಕೆಲವು ಪ್ರಮುಖ ಏರಿಯಾಗಳು ಉತ್ತರ ಭಾರತೀಯರು ಮತ್ತು ವಿದೇಶಿಗರಿಂದ ತುಂಬಿ ತುಳುಕುತ್ತಿರುತ್ತವೆ. ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಬ್ರಿಗೇಡ್ ರೋಡ್, ಎಂಜಿ ರೋಡ್ ಬಳಿ ಸೇರುವ ಕೆಲವು ಜನರು ಕುಡಿದು ತೂರಾಡುತ್ತಾ ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಮರ್ಯಾದೆಯನ್ನು ಅಂತರಾಷ್ಟ್ರೀಯಮಟ್ಟದಲ್ಲಿ ಹರಾಜು ಹಾಕುತ್ತಾರೆ. ಇನ್ನು ವೀಕೆಂಡ್&zwnj;ಗಳಲ್ಲಿ ಬೆಂಗಳೂರಿನ ಕೆಲವು ಏರಿಯಾಗಳು ಥೈಲ್ಯಾಂಡ್ ರೀತಿ ಬದಲಾಗುತ್ತೆ ಎಂಬ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.&lt;/p&gt;&lt;h2&gt;&lt;strong&gt;ಬಣ್ಣ ಬಣ್ಣದ ಲೈಟುಗಳಿಂದ ರಾರಾಜಿಸುವ ರಸ್ತೆಗಳು&amp;nbsp;&lt;/strong&gt;&lt;/h2&gt;&lt;p&gt;ಬೆಂಗಳೂರಿನ ಕೋರಮಂಗಲದ ಪ್ರಮುಖ ರಸ್ತೆಗಳು ರಾತ್ರಿಯಾಗುತ್ತಿದ್ದಂತೆ ಬಣ್ಣ ಬಣ್ಣದ ಲೈಟುಗಳಿಂದ ರಾರಾಜಿಸುತ್ತಿರುತ್ತವೆ. ಈ ಏರಿಯಾಗಳನ್ನು ನೋಡಿದ ಜನರು, ಇದು ಬೆಂಗಳೂರು ಅಲ್ಲ, ಥೈಲ್ಯಾಂಡ್ ಎಂದು ಕಮೆಂಟ್ ಮಾಡುತ್ತಾರೆ. ಕೋರಮಂಗಲ ಭಾಗದಲ್ಲಿ ಅತಿಹೆಚ್ಚು ಐಟಿ-ಬಿಟಿ ಕಂಪನಿಗಳು ನೆಲೆಸಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡುವ ಅನ್ಯರಾಜ್ಯದ ಯುವ ಜನತೆ ವೀಕೆಂಡ್ ಎಂಜಾಯ್ ಮಾಡಲು ಇಂದಿರಾ ನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ಬ್ರಿಗೇಡ್ ರೇಡ್ ಸೇರಿದಂತೆ ಐಷಾರಾಮಿ ಮಾಲ್&zwnj;ಗಳತ್ತ ಮುಖ ಮಾಡುತ್ತಾರೆ.&lt;/p&gt;&lt;h3&gt;&lt;strong&gt;Money ಇದ್ರೆ ಮಾತ್ರ ಇಲ್ಲಿ Honey&lt;/strong&gt;&lt;/h3&gt;&lt;p&gt;ಈ ಭಾಗದಲ್ಲಿ ಪಬ್&zwnj;ಗಳು ಸೇರಿದಂತೆ ಬಾರ್ ಆಂಡ್ ರೆಸ್ಟೊರೆಂಟ್&zwnj;ಗಳಿದ್ದು, ವೀಕೆಂಡ್&zwnj;ನಲ್ಲಿ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತವೆ. ಥೈಲ್ಯಾಂಡ್&zwnj;ನ ರಸ್ತೆಬದಿಯ ಶಾಪಿಂಗ್, ನೈಟ್&zwnj;ಲೈಫ್, ಸ್ಟ್ರೀಟ್ ಫುಡ್ ರೀತಿಯಲ್ಲಿ ಇಲ್ಲಿಯ ಬೀದಿಗಳು ಅಲಂಕೃತಗೊಂಡಿರುತ್ತವೆ. ಕೋರಮಂಗಲ ಏರಿಯಾವನ್ನು ಮಿನಿ ಥೈಲ್ಯಾಂಡ್ ಎಂದು ಕರೆಯಲಾಗುತ್ತದೆ. ವೈರಲ್ ಆಗಿರುವ ವಿಡಿಯೋಗಳಿಗೆ ಕಮೆಂಟ್ ಮಾಡಿರುವ ಬಳಕೆದಾರು, Money ಇದ್ರೆ ಮಾತ್ರ ಇಲ್ಲಿ Honey ಸಿಗುತ್ತೆ ಎಂದು ಕಮೆಂಟ್ ಮಾಡುತ್ತಿದ್ದಾರೆ.&lt;/p&gt;&lt;p&gt;ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಕೋರಮಂಗಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಜನಜಂಗುಳಿಯಿಂದ ಕೂಡಿದ ಪಬ್&zwnj;ಗಳು ಮತ್ತು ಜನದಟ್ಟಣೆಯಿಂದ ಇಲ್ಲಿಯ ರಸ್ತೆಗಳು ತುಂಬಿರುತ್ತವೆ. ಲೈವ್ ಮ್ಯೂಸಿಕ್, ಥಾಯ್ ಆಹಾರ, ಫುಡ್&zwnj; ಕೆಫೆ, ರೆಸ್ಟೋರೆಂಟ್&zwnj;ಗಳು, ಪಬ್&zwnj;ಗಳು ಬ್ಯುಸಿಯಾಗಿರುತ್ತವೆ. ಸೂರ್ಯಾಸ್ತದ ನಂತರ ಕೋರಮಂಗಲದಲ್ಲಿ ಹೊಸ ಲೋಕವೇ ತೆರೆದುಕೊಳ್ಳುತ್ತದೆ.&lt;/p&gt;&lt;h3&gt;&lt;strong&gt;ಪ್ರತಿಬಾರಿಯೂ ಭಿನ್ನವಾಗಿ ಕಾಣಿಸಿಕೊಳ್ಳುವ ಕೋರಮಂಗಲ&lt;/strong&gt;&lt;/h3&gt;&lt;p&gt;ನೀವು ಎಷ್ಟೇ ಬಾರಿ ಭೇಟಿ ನೀಡಿದರೂ, ಕೋರಮಂಗಲದಲ್ಲಿ ಕಳೆಯುವ ವೀಕೆಂಡ್ ಸಮಯ ಯಾವಾಗಲೂ ಭಿನ್ನವಾಗಿರುತ್ತೆ ಎಂಬುವುದು ಇಲ್ಲಿಗೆ ಬರುವ ಜನರ ಅಭಿಪ್ರಾಯವಾಗಿದೆ. ಆದ್ರೆ ಹಣವಿದ್ದವರಿಗೆ ಮಾತ್ರ ಇಲ್ಲಿ ಎಂಜಾಯ್ ಮಾಡಲು ಸಾಧ್ಯ ಎಂಬುವುದು ಹಲವರ ಮಾತಾಗಿದೆ.&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/bengaluru-urban/same-but-different-a-night-story-of-weekend-in-a-famous-area-koramangala-of-bengaluru-mini-thailand-mrq/articleshow-ggcmruz"/>
        </item>
        <item>
            <title><![CDATA[ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ವಿಷ ಬೀಜ: ಪ್ರತ್ಯೇಕತಾವಾದಿ, ಭಯೋತ್ಪಾದಕರ ವೈಭವೀಕರಣ, ಶಿಕ್ಷಣ ಇಲಾಖೆ 8 ಜನ ಸಿಬ್ಬಂದಿ ವಜಾ]]></title>
            <link>https://kannada.asianetnews.com/india-news/jammu-and-kashmir-school-book-calls-terrorists-great-personalities-bjp-outraged-rav/articleshow-di430yh</link>
            <guid isPermaLink="true">https://kannada.asianetnews.com/india-news/jammu-and-kashmir-school-book-calls-terrorists-great-personalities-bjp-outraged-rav/articleshow-di430yh</guid>
            <pubDate>Sun, 05 Jul 2026 12:15:28 +0530</pubDate>
            <description><![CDATA[Jammu Kashmir textbook controversy ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಆರೋಪದ ಮೇಲೆ 8 ಹೊರಗುತ್ತಿಗೆ ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrg2n4sp69yqsadf6z7t1pc,imgname-----------------------2026-07-05t120928.826-1783233598617.jpg" type="image/jpeg" height="390" width="690"/>
            <content:encoded><![CDATA[&lt;p&gt;ಶ್ರೀನಗರ(ಜು.5): ಜಮ್ಮು ಕಾಶ್ಮೀರ(Jammu&amp;amp;Kashmir)ದಲ್ಲಿ ಶಾಲಾ ಪಠ್ಯ ಪುಸ್ತಕಗಳಲ್ಲಿ ಪ್ರತ್ಯೇಕವಾದ ವೈಭವೀಕರಿಸುವಂತಹ ವಿಚಾರಗಳನ್ನು ಸೇರಿಸಿದ್ದಕ್ಕೆ ಶಿಕ್ಷಣ ಇಲಾಖೆಯ 8 ಹೊರ ಗುತ್ತಿಗೆ ಸಿಬ್ಬಂದಿಯನ್ನು ಲೆಫ್ಟಿನೆಂಟ್&zwnj; ಗವರ್ನರ್&zwnj; ಮನೋಜ್&zwnj; ಸಿನ್ಹಾ ವಜಾಗೊಳಿಸಿದ್ದಾರೆ.&lt;/p&gt;&lt;p&gt;ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜಮ್ಮು ಕಾಶ್ಮೀರ(&lt;strong&gt;Personalities and Legends of Jammu &amp;amp; Kashmir&lt;/strong&gt;), ಗ್ರೇಟ್ ಪರ್ಸನಾಲಿಟೀಸ್ ಆಫ್ ಜಮ್ಮು ಮತ್ತು ಕಾಶ್ಮೀರ(Great Personalities of Jammu and Kashmir Book) ಎಂಬ ಪುಸ್ತಕದಲ್ಲಿ ಮಕ್ಯೂಲ್ ಭಟ್, ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಯುವ ಪೀಳಿಗೆಗೆ ಮಾದರಿಗಳಾಗಿ ವೈಭವೀಕರಿಸಲಾಗಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್&zwnj; ಸೇರಿದಂತೆ ಇತರ ರಾಜಕೀಯ ಪಕ್ಷಗಳು ಆಕ್ಷೇಪಿಸಿದ್ದವು. ಇದರ ಬೆನ್ನಲ್ಲೇ ಸರ್ಕಾರ ಆ ಪುಸ್ತಕಗಳನ್ನು ವಾಪಸ್&zwnj; ಪಡೆದಿದೆ. ಮಾತ್ರವಲ್ಲದೇ ಪುಸ್ತಕ ರಚನೆಯಲ್ಲಿ ಭಾಗಿಯಾಗಿದ್ದವರನ್ನು ವಜಾಗೊಳಿಸಿದೆ.&lt;/p&gt;&lt;h2&gt;ಪಠ್ಯಪುಸ್ತಕದಲ್ಲಿ ದೇಶಭಕ್ತಿಯ ಬದಲು ಪ್ರತ್ಯೇಕವಾದ!&lt;/h2&gt;&lt;p&gt;ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸುವ ಪಾಠದ ಬದಲು ಜಮ್ಮುಕಾಶ್ಮೀರ ಮಕ್ಕಳ ತಲೆಯಲ್ಲಿ ಇನ್ನಷ್ಟು ಪ್ರತ್ಯೇಕವಾದ ಕಸ ತುಂಬುವ ಭಾರತವನ್ನು ವಿಭಜಿಸಲು ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಇದರಲ್ಲಿ ಭಾಗಿಯಾದವರನ್ನ ಬಂಧಿಸಿ ವಿಚಾರಣೆಗೊಳಪಡಿಸಕು, ಇದರ ಹಿಂದೆ ವ್ಯವಸ್ಥಿತ ಸಂಚಿದೆ, ಯಾರಿದ್ದಾರೆ? ತನಿಖೆಗೊಳಪಡಿಸಬೇಕು ಆಗ್ರಹಿಸಿದೆ.&lt;/p&gt;&lt;h3&gt;ಇದೊಂದು ವ್ಯವಸ್ಥಿತ ಶೈಕ್ಷಣಿಕ ಜಿಹಾದ್: ಬಿಜೆಪಿ&lt;/h3&gt;&lt;p&gt;ಇದೊಂದು ವ್ಯವಸ್ಥಿತ ಶೈಕ್ಷಣಿಕ ಜಿಹಾದ್ ಆಗಿದ್ದು, ಚಿಕ್ಕ ವಯಸಿನಲ್ಲೇ ಮಕ್ಕಳ ತಲೆಯಲ್ಲಿ ಪ್ರತ್ಯೇಕತಾವಾದ ತುಂಬುವ ಪ್ರಯತ್ನವಾಗಿದೆ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರ ತಮ್ಮ ಇಲಾಖೆಯ ಶಿಕ್ಷಣ ಸಚಿವೆ ಸಕೀನಾ ಇಟೂ ಅವರನ್ನು ವಜಾಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/jammu-and-kashmir-school-book-calls-terrorists-great-personalities-bjp-outraged-rav/articleshow-di430yh"/>
        </item>
        <item>
            <title><![CDATA[30000000 ಸಂಬಳಕ್ಕೆ ಗುಡ್‌ಬೈ... IIT ಗೋಲ್ಡ್ ಮೆಡಲಿಸ್ಟ್ ಈಗ ಕಿರಾಣಿ ಅಂಗಡಿ ಮಾಲೀಕ]]></title>
            <link>https://kannada.asianetnews.com/gallery/business/success-story-kanpur-man-turned-down-rs-3-crore-job-and-open-grocery-shop-do-you-know-why-suh-i21gkq6</link>
            <guid isPermaLink="true">https://kannada.asianetnews.com/gallery/business/success-story-kanpur-man-turned-down-rs-3-crore-job-and-open-grocery-shop-do-you-know-why-suh-i21gkq6</guid>
            <pubDate>Sun, 05 Jul 2026 12:05:11 +0530</pubDate>
            <description><![CDATA[Success story kanpur man turned down crore job ಕೋಟಿ ಕೋಟಿ ಸಂಬಳದ ವಿದೇಶಿ ಉದ್ಯೋಗವನ್ನು ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್, ಕುಟುಂಬಕ್ಕಾಗಿ ಕಿರಾಣಿ ಅಂಗಡಿ ನಡೆಸುವ ನಿರ್ಧಾರದಿಂದ ದೇಶದಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrav346t5ba82761ztxft6m,imgname-success-story-kanpur-man-1783228107908.jpg" type="image/jpeg" height="390" width="690"/>
            <content:encoded><![CDATA[&lt;p&gt;Success story kanpur man turned down crore job ಕೋಟಿ ಕೋಟಿ ಸಂಬಳದ ವಿದೇಶಿ ಉದ್ಯೋಗವನ್ನು ತಿರಸ್ಕರಿಸಿದ ಐಐಟಿ ಗೋಲ್ಡ್ ಮೆಡಲಿಸ್ಟ್, ಕುಟುಂಬಕ್ಕಾಗಿ ಕಿರಾಣಿ ಅಂಗಡಿ ನಡೆಸುವ ನಿರ್ಧಾರದಿಂದ ದೇಶದಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.&lt;/p&gt;&lt;img&gt;&lt;p&gt;ಇಂದಿನ ಕಾಲದಲ್ಲಿ ಕೋಟಿ ಕೋಟಿ ರೂಪಾಯಿ ಸಂಬಳದ ಉದ್ಯೋಗ ಸಿಗುವುದು ಅನೇಕರ ಕನಸು. ಆದರೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಐಐಟಿ ಬಾಂಬೆ ಗೋಲ್ಡ್ ಮೆಡಲಿಸ್ಟ್ ವಿವೇಕ್ ಶರ್ಮಾ ಅವರು ಸುಮಾರು ₹2.9 ಕೋಟಿ (ಸುಮಾರು ₹3 ಕೋಟಿ) ವಾರ್ಷಿಕ ಸಂಬಳದ ಅಮೆರಿಕದ ಉದ್ಯೋಗವನ್ನು ತಿರಸ್ಕರಿಸಿ, ತಮ್ಮ ಮನೆಯ ಕೆಳಗಿನ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ನಿರ್ಧಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಯಶಸ್ಸಿನ ನಿಜವಾದ ಅರ್ಥವೇನು ಎಂಬ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಮಧ್ಯಮ ವರ್ಗದ ಕುಟುಂಬದಿಂದ ಐಐಟಿವರೆಗೆ&lt;/p&gt;&lt;p&gt;ವಿವೇಕ್ ಶರ್ಮಾ ಕಾನ್ಪುರದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ತಂದೆ ರೈಲ್ವೆ ಕ್ಲರ್ಕ್ ಆಗಿದ್ದರೆ, ತಾಯಿ ಟ್ಯೂಷನ್&zwnj; ಹೇಳಿ ಮಗನ ವಿದ್ಯಾಭ್ಯಾಸಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಪೋಷಕರ ತ್ಯಾಗದಿಂದಲೇ ಅವರು ಕೋಟಾದಲ್ಲಿ ಓದಿ ಬಳಿಕ ಐಐಟಿ ಬಾಂಬೆಯ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಗೋಲ್ಡ್ ಮೆಡಲ್ ಗಳಿಸಿದರು.&lt;/p&gt;&lt;img&gt;&lt;p&gt;ಐಐಟಿ ಶಿಕ್ಷಣದ ಬಳಿಕ ಸ್ಯಾನ್ ಫ್ರಾನ್ಸಿಸ್ಕೋದ ಸ್ಟಾರ್ಟ್&zwnj;ಅಪ್ ಕಂಪನಿಯೊಂದು ಅವರಿಗೆ ವರ್ಷಕ್ಕೆ ಸುಮಾರು 2.9 ಕೋಟಿ ರೂಪಾಯಿ ಸಂಬಳ, ಜೊತೆಗೆ ವೀಸಾ ಹಾಗೂ ಸ್ಥಳಾಂತರ ಸೌಲಭ್ಯಗಳಿರುವ ಆಕರ್ಷಕ ಉದ್ಯೋಗದ ಆಫರ್ ನೀಡಿತ್ತು. ಎಲ್ಲ ಸಿದ್ಧತೆಗಳೂ ನಡೆದಿದ್ದವು.&lt;/p&gt;&lt;p&gt;ಒಂದು ಘಟನೆ ಬದಲಿಸಿತು ಜೀವನ&lt;/p&gt;&lt;p&gt;ಅಮೆರಿಕಕ್ಕೆ ತೆರಳುವ ಮುನ್ನವೇ ವಿವೇಕ್ ಅವರ ತಂದೆಗೆ ಹೃದಯಾಘಾತವಾಗಿದ್ದು, ತಾಯಿಗೆ ಕ್ಯಾನ್ಸರ್ ಪತ್ತೆಯಾಯಿತು. ಈ ಪರಿಸ್ಥಿತಿಯಲ್ಲಿ ವಿದೇಶಕ್ಕೆ ಹೋಗುವುದಕ್ಕಿಂತ ಕುಟುಂಬದ ಜೊತೆ ಇರುವುದು ಮುಖ್ಯ ಎಂದು ನಿರ್ಧರಿಸಿದ ಅವರು, ಕೋಟಿ ಸಂಬಳದ ಉದ್ಯೋಗವನ್ನು ತಿರಸ್ಕರಿಸಿ ಕಾನ್ಪುರದಲ್ಲೇ ಉಳಿದರು.&lt;/p&gt;&lt;img&gt;&lt;p&gt;ಪ್ರಸ್ತುತ ವಿವೇಕ್ ತಮ್ಮ ಮನೆಯ ಕೆಳಗಿರುವ ಸಣ್ಣ ಕಿರಾಣಿ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಉಚಿತವಾಗಿ ಕೋಡಿಂಗ್ ಕಲಿಸುತ್ತಿದ್ದಾರೆ. ಹಣಕ್ಕಿಂತ ಕುಟುಂಬ ಮತ್ತು ಸಮಾಜ ಸೇವೆಯೇ ದೊಡ್ಡದು ಎಂಬ ಸಂದೇಶವನ್ನು ಅವರು ತಮ್ಮ ಜೀವನದ ಮೂಲಕ ನೀಡುತ್ತಿದ್ದಾರೆ.&lt;/p&gt;&lt;img&gt;&lt;p&gt;ವಿವೇಕ್ ಶರ್ಮಾ ಅವರ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಾವಿರಾರು ಮಂದಿ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. &quot;ಯಶಸ್ಸು ಎಂದರೆ ದೊಡ್ಡ ಸಂಬಳವಲ್ಲ, ಅಗತ್ಯವಿದ್ದಾಗ ಕುಟುಂಬದ ಜೊತೆ ನಿಲ್ಲುವುದು&quot; ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.&lt;/p&gt;]]></content:encoded>
            <category><![CDATA[business]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/business/success-story-kanpur-man-turned-down-rs-3-crore-job-and-open-grocery-shop-do-you-know-why-suh-i21gkq6"/>
        </item>
        <item>
            <title><![CDATA[ಡಾಂಬರ್ ಹಾಕಿದ ಹೊಸ ರಸ್ತೆ ನಾಲ್ಕೇ ದಿನದಲ್ಲಿ ಗುಂಡಿಮಯ! ಒಂದೇ ಮಳೆಗೆ ಬಯಲಾಯ್ತು ಕಾಮಗಾರಿ ಅಸಲಿ ಕಥೆ!]]></title>
            <link>https://kannada.asianetnews.com/india-news/newly-asphalted-hadapsar-mundhwa-road-caves-in-within-four-days-raising-safety-concerns/articleshow-nq0r1sq</link>
            <guid isPermaLink="true">https://kannada.asianetnews.com/india-news/newly-asphalted-hadapsar-mundhwa-road-caves-in-within-four-days-raising-safety-concerns/articleshow-nq0r1sq</guid>
            <pubDate>Sun, 05 Jul 2026 11:14:31 +0530</pubDate>
            <description><![CDATA[ಪುಣೆಯಲ್ಲಿ ಹೊಸದಾಗಿ ನಿರ್ಮಿಸಿದ ಹಡಪ್ಸರ್–ಮುಂಧ್ವಾ ರಸ್ತೆಯು, ಕೇವಲ ನಾಲ್ಕೇ ದಿನದಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಈ ಕಳಪೆ ಕಾಮಗಾರಿಯಿಂದ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಪುಣೆ ಮಹಾನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrc7bzjkbj1yc12g69xrccn,imgname-----------------------2026-07-05t104641.328-1783229558770.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಹಾರಾಷ್ಟ್ರ (ಜು.5)&lt;/strong&gt;: ಮಹಾರಾಷ್ಟ್ರದಲ್ಲಿ ಪುಣೆಯಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿ ಡಾಂಬರ್ ಹಾಕುವ ಕೆಲಸ ಮುಗಿಸಿದ ಕೇವಲ ನಾಲ್ಕೇ ದಿನದಲ್ಲಿ ನಿನ್ನೆ ಸುರಿದ ಮಳೆಗೆ ರಸ್ತೆಯ ತುಂಬಾ ಹೊಂಡ-ಗುಂಡಿಗಳು ಬಿದ್ದಿರುವುದು ಮಹಾರಾಷ್ಟ್ರದಾದ್ಯಂತ ರಸ್ತೆಯ ಗುಣಮಟ್ಟದ ಬಗ್ಗೆ ಚರ್ಚೆಗೆ ಕಾರಣವಾಗಿದೆ.&lt;/p&gt;&lt;p&gt;ಹಳೆ ರಸ್ತೆ ಮಳೆಗೆ ಗುಂಡಿ ಬಿದ್ದಿದೆ ಎನ್ನಬಹುದು ಆದರೆ ರಸ್ತೆ ನಿರ್ಮಿಸಿ ಕೇವಲ ವಾರದೊಳಗೆ ಸುರಿದ ಒಂದು ಮಳೆಗೆ ರಸ್ತೆ ಈ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ ಎಂದರೆ ಇದು ಯಾವ ರೀತಿ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಿರಹುದು ಎಂದು ಪ್ರಶ್ನೆಗಳು ಕೇಳಿಬಂದಿವೆ.&lt;/p&gt;&lt;h2&gt;ಹಡಪ್ಸರ್-ಮುಂಧ್ವಾ ರಸ್ತೆ:&lt;/h2&gt;&lt;p&gt;ಹಡಪ್ಸರ್&ndash;ಮುಂಧ್ವಾ ರಸ್ತೆಯ ಒಂದು ಭಾಗದಲ್ಲಿ ಡಾಂಬರ್ ಹಾಕಿ ಕೆಲವೇ ದಿನಗಳಾಗಿವೆ. ಈಗ ಈ ರಸ್ತೆ ಪ್ರಯಾಣ ಮಾಡಲು ಯೋಗ್ಯವಲ್ಲದ ರೀತಿ ರಸ್ತೆ ಮೇಲೆ ಗುಂಡಿಗಳು ತುಂಬಿವೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.&lt;/p&gt;&lt;p&gt;ಹೊಸದಾಗಿ ನಿರ್ಮಿಸಿದ ರಸ್ತೆ ಇಷ್ಟು ಹಾಳಾಗುವುದು ಹೇಗೆ ಸಾಧ್ಯ? ಒಂದೋ ಕಾಮಗಾರಿ ಗುಣಮಟ್ಟ ಸರಿಯಾಗಿಲ್ಲ. ಬೇಕಾಬಿಟ್ಟಿಯಾಗಿ ನಿರ್ಮಿಸಿ ಮೇಲೆ ಡಾಂಬರ್ ಹಾಕಿರುವ ಸಾಧ್ಯತೆ ಹೆಚ್ಚಿದೆ. ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಹೀಗಾಗಿ ತಕ್ಷಣ ಈ ಬಗ್ಗೆ ತನಿಖೆ ಮಾಡಿ, ರಸ್ತೆ ಆದಷ್ಟು ಬೇಗ ದುರಸ್ತಿ ಮಾಡುವಂತೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.&lt;/p&gt;&lt;h3&gt;ಪುಣೆ ಮಹಾನಗರ ಪಾಲಿಕೆ ವಿರುದ್ಧ ಕಿಡಿ&lt;/h3&gt;&lt;p&gt;ಈ ಘಟನೆ ಬಳಿಕ ಪುಣೆ ಮಹಾನಗರ ಪಾಲಿಕೆ (PMC) ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮಳೆಗಾಲಕ್ಕೂ ಮುನ್ನ ನಡೆದ ರಸ್ತೆ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಬೇಕೆಂದು ಒತ್ತಾಯಿಸಲಾಗಿದೆ&lt;/p&gt;]]></content:encoded>
            <category><![CDATA[india-news]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/india-news/newly-asphalted-hadapsar-mundhwa-road-caves-in-within-four-days-raising-safety-concerns/articleshow-nq0r1sq"/>
        </item>
        <item>
            <title><![CDATA[HR ಮಾಡಿದ ಒಂದು ಕಾಲ್; ಹೋಯ್ತು ಐದೂವರೆ ವರ್ಷದ ವಿಪ್ರೋ ಕೆಲಸ; ಉದ್ಯೋಗಿಯ ಕಣ್ಣೀರು]]></title>
            <link>https://kannada.asianetnews.com/jobs/delhi-based-young-woman-who-worked-at-wipro-for-five-and-a-half-years-lost-her-job-after-just-one-hr-call-mrq/articleshow-7ginc3h</link>
            <guid isPermaLink="true">https://kannada.asianetnews.com/jobs/delhi-based-young-woman-who-worked-at-wipro-for-five-and-a-half-years-lost-her-job-after-just-one-hr-call-mrq/articleshow-7ginc3h</guid>
            <pubDate>Sun, 05 Jul 2026 11:31:59 +0530</pubDate>
            <description><![CDATA[ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಕೇವಲ ಒಂದು HR ಕಾಲ್‌ನಿಂದ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಲೇಆಫ್ ಆದ ಬಗ್ಗೆ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಘಟನೆಯನ್ನು 'ದೇವರ ಸೂಚನೆ' ಎಂದು ಪರಿಗಣಿಸಿ ಹೊಸ ಆರಂಭಕ್ಕೆ ಸಿದ್ಧರಾಗಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrdtshq22xqhzpmwz2r3xn8,imgname-anukriti-1783231243831.jpg" type="image/jpeg" height="390" width="690"/>
            <content:encoded><![CDATA[&lt;p&gt;ಐದೂವರೆ ವರ್ಷದಿಂದ ಮಾಡುತ್ತಿದ್ದ ಕೆಲಸವೊಂದು ಕೇವಲ ಒಂದೇ ಒಂದು ಕಾಲ್&zwnj;ನಲ್ಲಿ ಹೋಗಿದ್ದರ ಬಗ್ಗೆ ಯುವತಿಯೊಬ್ಬರು ಹೇಳಿಕೊಂಡಿದ್ದಾರೆ. ಕೆಲಸ ಹೇಗೆ ಹೋಯ್ತು? ನಂತ್ರ ಏನಾಯ್ತು ಎಂಬುದರ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಸಾಲು ಸಾಲು ವಿಡಿಯೋಗಳನ್ನು ಮಾಡುತ್ತಿರುವ ದಿಢೀರ್ ಅಂತ ನಾಳೆಯಿಂದ ಕೆಲಸಕ್ಕೆ ಬರಬೇಡಿ ಅಂದಾಗ ಏನಾಯ್ತು? ಪೋಷಕರು ಕೆಲಸ ಸಿಕ್ಕಿದ್ದಾಗ ಅವರು ಹೇಗೆ ಖುಷಿ ವ್ಯಕ್ತಪಡಿಸಿದ್ದರು ಎಂಬುದನ್ನು ಯುವತಿ ವಿವರಿಸಿದ್ದಾರೆ. ಸದ್ಯ ಯುವತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.&lt;/p&gt;&lt;p&gt;ಅನುಕೃತಿ ಕೆಲಸ ಕಳೆದುಕೊಂಡ ದೆಹಲಿ ಮೂಲದ ಐಟಿ ಉದ್ಯೋಗಿ. ಅನುಕೃತಿ ಅವರು ಸುಮಾರು ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಎಐ ಸೊಲ್ಯೂಷನ್ಸ್&zwnj;ನಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ಸಂಯೋಜಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಎಂದಿನಂತರ ಮೀಟಿಂಗ್ ಲಿಂಕ್&zwnj;ವೊಂದನ್ನು ಅನುಕೃತಿ ಅವರಿಗೆ ಹೆಚ್&zwnj;ಆರ್ ಕಳುಹಿಸಿದ್ದರು. ಎಂದಿನಂತೆ ಮೀಟಿಂಗ್ ಇರಬಹುದು ಎಂದು ಅನುಕೃತಿ ಜಾಯಿನ್ ಆಗಿದ್ದರು. ಹೆಚ್&zwnj;ಆರ್ ಒಂದು ಕ್ಷಣವೂ ಯೋಚಿಸದೇ, ಇನ್ಮುಂದೆ ನೀವು ನಮ್ಮೊಂದಿಗೆ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಎಕ್ಸಿಟ್ ಆಗುವಂತೆ ಹೇಳಿದ್ದಾರೆ.&lt;/p&gt;&lt;h2&gt;&lt;strong&gt;ಇದು ದೇವರ ಸೂಚನೆ ಎಂದ ಅನುಕೃತಿ&lt;/strong&gt;&lt;/h2&gt;&lt;p&gt;ಮೀಟಿಂಗ್ ಜಾಯಿನ್ ಆದ ಕೆಲವೇ ನಿಮಿಷಗಳಲ್ಲಿ ತಾನು ಐದೂವರೆ ವರ್ಷಗಳಿಂದ ಮಾಡುತ್ತಿದ್ದ ಕೆಲಸ ಕಳೆದುಕೊಂಡಿದ್ದೇನೆ ಎಂದು ಅನುಕೃತಿ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಅನುಕೃತಿ ಭಾವುಕರಾಗಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಕೆಲಸಕ್ಕೆ ಸೇರಿದ ದಿನದ ಅನುಭವ ಮತ್ತು ಯಾವುದೇ ಮುನ್ಸೂಚನೆ ನೀಡದೇ ಲೇಆಫ್ ಮಾಡಿರುವ ಬಗ್ಗೆ ಅನುಕೃತಿ ಹೇಳಿಕೊಂಡಿದ್ದಾರೆ. ಕೊನೆಗೂ ಇದು ದೇವರ ಸೂಚನೆಯಾಗಿರಬಹುದು ಎಂದು ಪರಿಗಣಿಸಿ ಹೊಸ ಆರಂಭದ ಬಗ್ಗೆ ಅನುಕೃತಿ ಮಾತನಾಡಿದ್ದಾರೆ.&lt;/p&gt;&lt;p&gt;ಜೂನ್ 29ರಂದು ಕೆಲಸ ಕಳೆದುಕೊಂಡಿದ್ರೂ ಈ ವಿಷಯವನ್ನು ಪೋಷಕರೊಂದಿಗೆ ಹೇಳಿಕೊಂಡಿರಲಿಲ್ಲ. ಜುಲೈ 1ರಂದು ಕೆಲಸಕ್ಕೆ ಹೋಗಲ್ಲವಾ ಎಂದು ತಾಯಿ ಕೇಳಿದ್ದಾರೆ. ಇದಕ್ಕೆ ನಾನು ಮಾಡುತ್ತಿರುವ ಕೆಲಸ ನನ್ನೊಂದಿಗೆ ಇಲ್ಲ ಎಂದು ಹೇಳಿದಾಗ ತಾಯಿ, ಆತಂಕಕ್ಕೊಳಗಾಗದೇ ಹೊಸ ಜೀವನ ಆರಂಭದ ಕುರಿತು ಮಾತನಾಡಿದರು ಎಂದು ಅನುಕೃತಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಆಡಿ ಮತ್ತು ಪೋರ್ಷೆ ತಯಾರಿಕಾ ಕಂಪೆನಿ ವೋಕ್ಸ್&zwnj;ವ್ಯಾಗನ್&zwnj;ನಲ್ಲಿ 1ಲಕ್ಷ ನೌಕರರ ವಜಾ!: 4 ಕಾರ್ಖಾನೆಗಳ ಮುಚ್ಚಲು ನಿರ್ಧಾರ!&lt;/strong&gt;&lt;/p&gt;&lt;h3&gt;&lt;strong&gt;ಸೋಶಿಯಲ್ ಮೀಡಿಯಾ ಬಳಕೆದಾರರ ಮಾತು ಏನು?&lt;/strong&gt;&lt;/h3&gt;&lt;p&gt;ಮತ್ತೊಂದು ವಿಡಿಯೋದಲ್ಲಿ ಕೆಲಸ ಕಳೆದುಕೊಂದು ಒಂದು ವಾರ ಆಗಿದೆ. ಪ್ರತಿ ತಿಂಗಳು ಬರುತ್ತಿದ್ದ ಆದಾಯ ಇನ್ಮುಂದೆ ಬರಲ್ಲ. ಆದ್ರೂ ಹೊಸ ಆರಂಭಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ. ಅನುಕೃತಿ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ಖಾಸಗಿ ಕಂಪನಿಗಳಲ್ಲಿ ಲೇಆಫ್ ಅನ್ನೋ ಭೂತ ಬೆನ್ನ ಹಿಂದೆಯೇ ಇರುತ್ತೆ. ನಾನು ಇಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇಲ್ಲಿಂದ ಜೀವನವು ನಿರೀಕ್ಷೆಗಿಂತ ಉತ್ತಮ ತಿರುವು ಪಡೆಯಬಹುದು. ಹಾಗಾಗಿ ಧೈರ್ಯವಾಗಿರಿ ಎಂದು ಕೆಲವರು ಸಲಹೆ ನೀಡಿದ್ದಾರೆ. ದೇವರು ನಿಮಗಾಗಿ ಒಂದು ದೊಡ್ಡ ಯೋಜನೆ ಹೊಂದಿರಬಹುದು ಎಂದು ಹಲವರು ಹೇಳಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್&lt;/strong&gt;&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್​! ಬೆಂಗಳೂರು, ಹೈದರಾಬಾದ್​ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ&lt;/strong&gt;&lt;/p&gt;]]></content:encoded>
            <category><![CDATA[jobs]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/jobs/delhi-based-young-woman-who-worked-at-wipro-for-five-and-a-half-years-lost-her-job-after-just-one-hr-call-mrq/articleshow-7ginc3h"/>
        </item>
        <item>
            <title><![CDATA[Chanakya Niti: ಮಹಿಳೆಯರು ಪುರುಷರಿಗಿಂತ ಈ 4 ವಿಷಯಗಳಲ್ಲಿ ಮುಂದಾ..ಉತ್ತಮರೇ?]]></title>
            <link>https://kannada.asianetnews.com/gallery/relationship/chanakya-niti-says-women-may-excel-over-men-in-these-four-qualities-according-ancient-wisdom-suh-5ygr1a7</link>
            <guid isPermaLink="true">https://kannada.asianetnews.com/gallery/relationship/chanakya-niti-says-women-may-excel-over-men-in-these-four-qualities-according-ancient-wisdom-suh-5ygr1a7</guid>
            <pubDate>Sun, 05 Jul 2026 11:30:47 +0530</pubDate>
            <description><![CDATA[ಚಾಣಕ್ಯ ನೀತಿಯಲ್ಲಿ ಮಹಿಳೆಯರ ಕೆಲವು ಗುಣಗಳ ಬಗ್ಗೆ ಕೂಡ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಕೆಲವು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರಬಹುದು ಎಂದು ಚಾಣಕ್ಯ ಹೇಳಿದ್ದಾರೆ ಎನ್ನಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv5jna1mvxsvpg0ayzv753nb,imgname-knb-1781525030964.png" type="image/jpeg" height="390" width="690"/>
            <content:encoded><![CDATA[&lt;p&gt;ಚಾಣಕ್ಯ ನೀತಿಯಲ್ಲಿ ಮಹಿಳೆಯರ ಕೆಲವು ಗುಣಗಳ ಬಗ್ಗೆ ಕೂಡ ವಿಶೇಷವಾಗಿ ಪ್ರಸ್ತಾಪಿಸಲಾಗಿದೆ. ಕೆಲವು ವಿಷಯಗಳಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರಬಹುದು ಎಂದು ಚಾಣಕ್ಯ ಹೇಳಿದ್ದಾರೆ ಎನ್ನಲಾಗುತ್ತದೆ.&lt;/p&gt;&lt;img&gt;&lt;p&gt;ಚಾಣಕ್ಯ ನೀತಿಯಲ್ಲಿರುವ ಉಲ್ಲೇಖಗಳ ಪ್ರಕಾರ, ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಮತ್ತು ದೈಹಿಕ ಶ್ರಮ ಇರುತ್ತದೆ ಎಂದು ಹೇಳಲಾಗಿದೆ. ಕುಟುಂಬದ ಜವಾಬ್ದಾರಿ, ದೈನಂದಿನ ಕೆಲಸಗಳು ಹಾಗೂ ವಿವಿಧ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ವಿವರಿಸಲಾಗಿದೆ.&lt;/p&gt;&lt;img&gt;&lt;p&gt;ಮಹಿಳೆಯರು ಕಷ್ಟಕರ ಸಂದರ್ಭಗಳಲ್ಲೂ ಧೈರ್ಯ ಕಳೆದುಕೊಳ್ಳದೆ ಪರಿಸ್ಥಿತಿಯನ್ನು ಎದುರಿಸುತ್ತಾರೆ ಎಂದು ಚಾಣಕ್ಯ ಉಲ್ಲೇಖಿಸಿದ್ದಾರೆ. ಕುಟುಂಬದ ಹಿತಕ್ಕಾಗಿ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವ ಗುಣವೂ ಅವರ ವಿಶೇಷತೆ ಎಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಸೂಕ್ಷ್ಮ ಭಾವನೆಗಳ ಜೊತೆಗೆ ಭಾವನಾತ್ಮಕ ಸ್ಥೈರ್ಯವೂ ಮಹಿಳೆಯರ ಪ್ರಮುಖ ಗುಣಗಳಲ್ಲಿ ಒಂದಾಗಿದೆ ಎಂದು ಚಾಣಕ್ಯ ನೀತಿ ತಿಳಿಸುತ್ತದೆ. ಕಷ್ಟದ ಸಂದರ್ಭದಲ್ಲೂ ಕುಟುಂಬವನ್ನು ಒಗ್ಗೂಡಿಸುವ ಹಾಗೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅವರಿಗೆ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.&lt;/p&gt;&lt;img&gt;&lt;p&gt;ಚಾಣಕ್ಯರ ಪ್ರಕಾರ ಮಹಿಳೆಯರಲ್ಲಿ ಗಮನಿಸುವ ಶಕ್ತಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಗುಣ ಹೆಚ್ಚಿರಬಹುದು. ಈ ಕಾರಣದಿಂದ ಅನೇಕ ಕಠಿಣ ಸಂದರ್ಭಗಳನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು ಎಂದು ಉಲ್ಲೇಖಿಸಲಾಗಿದೆ.&lt;/p&gt;]]></content:encoded>
            <category><![CDATA[relationship]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/relationship/chanakya-niti-says-women-may-excel-over-men-in-these-four-qualities-according-ancient-wisdom-suh-5ygr1a7"/>
        </item>
        <item>
            <title><![CDATA[ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಪೋಕ್ಸೋ ಕೇಸ್‌ನಲ್ಲಿ ಹೊನ್ನಾವರ ಮಂಕಿ ಠಾಣೆ PSI ಅರೆಸ್ಟ್]]></title>
            <link>https://kannada.asianetnews.com/uttara-kannada/psi-abhinandan-arrested-in-pocso-case-at-uttar-kannada-honnavara-manki-police-station-gkn/articleshow-lwfwuxs</link>
            <guid isPermaLink="true">https://kannada.asianetnews.com/uttara-kannada/psi-abhinandan-arrested-in-pocso-case-at-uttar-kannada-honnavara-manki-police-station-gkn/articleshow-lwfwuxs</guid>
            <pubDate>Sun, 05 Jul 2026 11:14:53 +0530</pubDate>
            <description><![CDATA[ಭಟ್ಕಳದ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಸಂತ್ರಸ್ತೆಯ ದೂರಿನ ಅನ್ವಯ ಭಟ್ಕಳ ನಗರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrcx4rq432a58nw3t4tnvsr,imgname-psi-abhinandan-1783230272279.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭಟ್ಕಳ: &lt;/strong&gt;ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್&zwnj;ಪೆಕ್ಟರ್ (PSI) ಅಭಿನಂದನ್ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.&lt;/p&gt;&lt;h2&gt;&lt;strong&gt;ಪ್ರಕರಣದ ಹಿನ್ನೆಲೆ&lt;/strong&gt;&lt;/h2&gt;&lt;h3&gt;ಮೂಲಗಳ ಪ್ರಕಾರ, ಯಲ್ಲಾಪುರ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪಿಎಸ್&zwnj;ಐ ಅಭಿನಂದನ್ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಕುರಿತು ಸಂತ್ರಸ್ತ ಅಪ್ರಾಪ್ತ ಬಾಲಕಿಯು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು.&lt;/h3&gt;&lt;h3&gt;&lt;strong&gt;ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು&lt;/strong&gt;&lt;/h3&gt;&lt;p&gt;ಬಾಲಕಿಯ ದೂರಿಗೆ ತಕ್ಷಣವೇ ಸ್ಪಂದಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿ ಪಿಎಸ್&zwnj;ಐ ಅಭಿನಂದನ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತದನಂತರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು, ಸದ್ಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.ತನಿಖೆ ವೇಳೆ ಅಸಲಿ ಸತ್ಯ ಹೊರಗೆ ಬರಲಿದೆ.&lt;/p&gt;&lt;p&gt;ಬಂಧಿತ ಪಿಎಸ್&zwnj;ಐ ಅಭಿನಂದನ್ ಅವರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಇಲಾಖೆಯ ಅಧಿಕಾರಿಯೊಬ್ಬರೇ ಇಂತಹ ಹೀನ ಕೃತ್ಯವೆಸಗಿ ಬಂಧನಕ್ಕೊಳಗಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಇದಾಗಿದ್ದು, ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂಬ ಆಗ್ರಹ ಜೋರಾಗಿದೆ.&lt;/p&gt;]]></content:encoded>
            <category><![CDATA[uttara-kannada]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/uttara-kannada/psi-abhinandan-arrested-in-pocso-case-at-uttar-kannada-honnavara-manki-police-station-gkn/articleshow-lwfwuxs"/>
        </item>
        <item>
            <title><![CDATA[ಕೊಲೆ ಕೇಸ್ ತನಿಖೆ ನಡೆಯುತ್ತಿರುವಾಗಲೇ ಕೇತನ್ ಅಗರ್ವಾಲ್ ಕುಟುಂಬದಲ್ಲಿ ಮತ್ತೊಂದು ಸಾವು]]></title>
            <link>https://kannada.asianetnews.com/india-news/ketan-agarwal-case-second-death-hits-the-family-heres-what-happened/articleshow-9ak0zpc</link>
            <guid isPermaLink="true">https://kannada.asianetnews.com/india-news/ketan-agarwal-case-second-death-hits-the-family-heres-what-happened/articleshow-9ak0zpc</guid>
            <pubDate>Sun, 05 Jul 2026 11:01:43 +0530</pubDate>
            <description><![CDATA[Ketan Agarwal murder case Pune: ಪುಣೆಯ ಕೇತನ್ ಅಗರ್ವಾಲ್ ಹತ್ಯೆ ಬೆನ್ನಲ್ಲೇ, ಆ ಕುಟುಂಬಕ್ಕೆ ಮತ್ತೊಂದು ಬರಸಿಡಿಲು ಬಡಿದಿದೆ. ಒಂದೇ ಕುಟುಂಬದಲ್ಲಿ ವಾರದ ಅಂತರದಲ್ಲಿ ಸಂಭವಿಸಿದ ಈ ಎರಡನೇ ಸಾವು ಇಡೀ ಅಗರ್ವಾಲ್ ಕುಟುಂಬವನ್ನು ಕಣ್ಣೀರಲ್ಲಿ ಮುಳುಗುವಂತೆ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwqzm7t7q6c502c927ktkmt9,imgname-ketan-agarwal-grandfather-dies-after-shock-pune-murder-case-siya-goyal-00-1783216348999.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಪು&lt;/strong&gt;ಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಭೀಕರ ಘಟನೆಯ ಆಘಾತದಿಂದ ಹೊರಬರುವ ಮುನ್ನವೇ ಅಗರ್ವಾಲ್ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಕೇತನ್ ಸಾವಿನ ದುಃಖದಲ್ಲಿದ್ದ ಅವರ ಕುಟುಂಬದಲ್ಲಿ ಈಗ ಎರಡನೇ ಸಾವು ಸಂಭವಿಸಿದ್ದು, ಮನೆಯಲ್ಲಿ ಮೌನ ಆವರಿಸಿದೆ.&lt;/p&gt;&lt;h2&gt;&lt;strong&gt;ಘಟನೆಯ ಹಿನ್ನೆಲೆ&lt;/strong&gt;&lt;/h2&gt;&lt;p&gt;ಕೆಲವು ದಿನಗಳ ಹಿಂದೆ ಪುಣೆಯ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಸೇರಿ ಲೋಹಘಡ ಕೋಟೆಯ ಪ್ರಪಾತಕ್ಕೆ (ಕಂದಕ) ತಳ್ಳಿ ಕೊಲೆ ಮಾಡಿದ್ದರು. ನವೆಂಬರ್&zwnj;ನಲ್ಲಿ ಮದುವೆಯಾಗಬೇಕಿದ್ದ ಹುಡುಗಿಯೇ ತನ್ನ ಪ್ರೇಮಿಯೊಂದಿಗೆ ಸೇರಿ ಈ ಕೃತ್ಯ ಎಸಗಿದ್ದು ಎಲ್ಲರನ್ನೂ ದಂಗಾಗಿಸಿತ್ತು. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಕೇತನ್ ಅವರ 71 ವರ್ಷದ ತಾತ ದೇವಿಚಂದ್ ಅಗರ್ವಾಲ್ ಶನಿವಾರ ರಾತ್ರಿ ನಿಧನರಾಗಿದ್ದಾರೆ.&lt;/p&gt;&lt;h2&gt;&lt;strong&gt;ತಾತನ ಸಾವಿಗೆ ಕಾರಣವೇನು?&lt;/strong&gt;&lt;/h2&gt;&lt;p&gt;ಜೂನ್ 18ರಂದು ಕೇತನ್ ಅಗರ್ವಾಲ್ ಕೊಲೆಯಾದ ಸುದ್ದಿ ಕೇಳಿದಾಗಿನಿಂದ ದೇವಿಚಂದ್ ಅವರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ತನ್ನ ಮೊಮ್ಮಗನಿಗೆ ಇಂತಹ ಸ್ಥಿತಿ ಬಂತಲ್ಲ ಎಂದು ಅವರು ಸದಾ ಕಾಲ ಮಾನಸಿಕ ಒತ್ತಡದಲ್ಲಿದ್ದರು. ಕುಟುಂಬದ ಸದಸ್ಯರ ಪ್ರಕಾರ, ಮೊಮ್ಮಗನ ಸಾವಿನ ನಂತರ ಅವರು ಸಹಜ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಶನಿವಾರ ರಾತ್ರಿ ಸುಮಾರು 9:45ರ ಸುಮಾರಿಗೆ ಅವರಿಗೆ ತೀವ್ರ ಹೃದಯಾಘಾತ (Cardiac Arrest) ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೇತನ್ ಸಾವಿನ ಆಘಾತವೇ ದೇವಿಚಂದ್ ಅವರ ಸಾವಿಗೆ ನೇರ ಕಾರಣ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.&lt;/p&gt;&lt;h2&gt;&lt;strong&gt;ಸಿಯಾ ಗೋಯಲ್ ಸ್ನ್ಯಾಪ್&zwnj;ಚಾಟ್ ಚಾಟ್ ಬಹಿರಂಗ&lt;/strong&gt;&lt;/h2&gt;&lt;p&gt;ಇತ್ತ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಅತ್ಯಂತ ಮಹತ್ವದ ಸಾಕ್ಷ್ಯವೊಂದು ಲಭ್ಯವಾಗಿದೆ. ಸಿಯಾ ಗೋಯಲ್ ಮೇ ತಿಂಗಳಿನಲ್ಲಿ ತನ್ನ ಗೆಳತಿಯೊಂದಿಗೆ ನಡೆಸಿದ್ದ ಸ್ನ್ಯಾಪ್&zwnj;ಚಾಟ್ ಸಂಭಾಷಣೆ ಈಗ ಹೊರಬಂದಿದೆ. ಆ ಸಮಯದಲ್ಲಿ ಎರಡೂ ಕುಟುಂಬಗಳು ಉದಯಪುರದಲ್ಲಿ ನಡೆಯಬೇಕಿದ್ದ ವಿವಾಹದ ಸಿದ್ಧತೆಯಲ್ಲಿ ತೊಡಗಿದ್ದವು. ವಿಮಾನದ ಟಿಕೆಟ್ ಬುಕ್ ಮಾಡಲು ಸಿಯಾ ತನ್ನ ಗೆಳತಿಯ ಬಳಿ ಗುರುತಿನ ಚೀಟಿಯ ವಿವರ ಕೇಳಿದ್ದಳು. ಆದರೆ ಅದರ ಜೊತೆಗೆ ಆಕೆ ಬರೆದಿದ್ದ ಸಂದೇಶ ಆಘಾತಕಾರಿಯಾಗಿದೆ. &quot;ಮದುವೆಯ ಟಿಕೆಟ್&zwnj;ಗಾಗಿ ನಿನ್ನ ಐಡಿ ಕಾರ್ಡ್ ಫೋಟೋ ಕಳುಹಿಸು. ಹೇಗಿದ್ದರೂ ಈ ಮದುವೆ ನಡೆಯುವುದಿಲ್ಲ, ಆದರೂ ಕಳುಹಿಸು&quot; ಎಂದು ಸಿಯಾ ಸಂದೇಶ ಕಳುಹಿಸಿದ್ದಳು.&lt;/p&gt;&lt;p&gt;&lt;img&gt;&lt;/p&gt;&lt;h3&gt;&lt;strong&gt;ಪೂರ್ವನಿಯೋಜಿತ ಸಂಚು?&lt;/strong&gt;&lt;/h3&gt;&lt;p&gt;ಸಿಯಾಳ ಈ ಒಂದು ಸಂದೇಶವು ಕೇತನ್ ಹತ್ಯೆ ಆಕಸ್ಮಿಕವಲ್ಲ, ಬದಲಾಗಿ ತಿಂಗಳುಗಳ ಮೊದಲೇ ರೂಪಿಸಿದ ಪೂರ್ವನಿಯೋಜಿತ ಸಂಚು ಎಂಬ ಸಂಶಯವನ್ನು ಬಲಪಡಿಸಿದೆ. ಮದುವೆ ನಡೆಯುವುದಿಲ್ಲ ಎಂಬುದು ಸಿಯಾಳಿಗೆ ಮೊದಲೇ ತಿಳಿದಿತ್ತು ಎಂದರೆ, ಕೇತನ್&zwnj;ನನ್ನು ಕೊಲ್ಲುವ ಯೋಜನೆ ಆಕೆಯ ಮನಸ್ಸಿನಲ್ಲಿ ಮೊದಲೇ ಇತ್ತು ಎನ್ನುವುದಕ್ಕೆ ಇದು ಡಿಜಿಟಲ್ ಪುರಾವೆಯಾಗಿದೆ. ಸದ್ಯ ಪೊಲೀಸರು ಸಿಯಾಳ ಆ ಗೆಳತಿಯನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ಸೈಬರ್ ಸೆಲ್ ಈ ಸ್ಕ್ರೀನ್&zwnj;ಶಾಟ್&zwnj;ನ ಅಧಿಕೃತತೆಯನ್ನು ಪರಿಶೀಲಿಸುತ್ತಿದ್ದು, ಇದು ದೃಢಪಟ್ಟರೆ ಸಿಯಾ ಮತ್ತು ಚೇತನ್ ವಿರುದ್ಧದ ಪ್ರಕರಣ ಮತ್ತಷ್ಟು ಬಲಗೊಳ್ಳಲಿದೆ.&lt;/p&gt;&lt;p&gt;ಸದ್ಯ ಆರೋಪಿಗಳಾದ ಸಿಯಾ ಮತ್ತು ಚೇತನ್ ಜುಲೈ 16ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಂದು ಕಡೆ ಕೇತನ್ ಹತ್ಯೆಯ ನ್ಯಾಯಕ್ಕಾಗಿ ಕುಟುಂಬ ಹೋರಾಡುತ್ತಿದ್ದರೆ, ಇನ್ನೊಂದೆಡೆ ತಾತನ ಸಾವು ಅವರನ್ನು ಮತ್ತಷ್ಟು ಕುಗ್ಗಿಸಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Ashwini HR</dc:creator>
            <atom:link href="https://kannada.asianetnews.com/india-news/ketan-agarwal-case-second-death-hits-the-family-heres-what-happened/articleshow-9ak0zpc"/>
        </item>
        <item>
            <title><![CDATA[ರೈಲುಗಳಿಗೂ ನಿವೃತ್ತಿ ಇದೆಯಾ? ಹಳೆಯ ರೈಲುಗಳನ್ನು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ]]></title>
            <link>https://kannada.asianetnews.com/gallery/india-news/indian-railways-scrap-policy-details-do-trains-also-have-retirement-what-happens-to-old-trains-here-is-information-mrq-mgfd2g3</link>
            <guid isPermaLink="true">https://kannada.asianetnews.com/gallery/india-news/indian-railways-scrap-policy-details-do-trains-also-have-retirement-what-happens-to-old-trains-here-is-information-mrq-mgfd2g3</guid>
            <pubDate>Sun, 05 Jul 2026 10:57:47 +0530</pubDate>
            <description><![CDATA[ರೈಲುಗಳು ನಿರ್ದಿಷ್ಟ ಸೇವಾ ಅವಧಿಯನ್ನು ಹೊಂದಿದ್ದು, ಹಳೆಯ ಪ್ಯಾಸೆಂಜರ್ ಕೋಚ್‌ಗಳನ್ನು ಗೂಡ್ಸ್ ರೈಲುಗಳಾಗಿ ಪರಿವರ್ತಿಸಲಾಗುತ್ತದೆ. ಅಂತಿಮವಾಗಿ, ಬಳಕೆಗೆ ಬಾರದ ರೈಲುಗಳನ್ನು 'ಮಿಷನ್ ಜೀರೋ ಸ್ಕ್ರ್ಯಾಪ್' ನೀತಿಯಡಿ ತುಂಡರಿಸಿ, ಅದರಲ್ಲಿನ ಲೋಹ ಮತ್ತು ಇತರ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwrbm41ee6xp8fcfx626aqm4,imgname-indian-railways--1--1783228928046.jpg" type="image/jpeg" height="390" width="690"/>
            <content:encoded><![CDATA[ರೈಲುಗಳು ನಿರ್ದಿಷ್ಟ ಸೇವಾ ಅವಧಿಯನ್ನು ಹೊಂದಿದ್ದು, ಹಳೆಯ ಪ್ಯಾಸೆಂಜರ್ ಕೋಚ್&zwnj;ಗಳನ್ನು ಗೂಡ್ಸ್ ರೈಲುಗಳಾಗಿ ಪರಿವರ್ತಿಸಲಾಗುತ್ತದೆ. ಅಂತಿಮವಾಗಿ, ಬಳಕೆಗೆ ಬಾರದ ರೈಲುಗಳನ್ನು 'ಮಿಷನ್ ಜೀರೋ ಸ್ಕ್ರ್ಯಾಪ್' ನೀತಿಯಡಿ ತುಂಡರಿಸಿ, ಅದರಲ್ಲಿನ ಲೋಹ ಮತ್ತು ಇತರ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.&lt;img&gt;&lt;p&gt;ಒಂದು ಆರಂಭಕ್ಕೆ ಅಂತ್ಯವಿರಬೇಕು ಎಂಬ ಮಾತಿದೆ. ಅದೇ ರೀತಿ ಯಾವುದೇ ಒಂದು ವಾಹನ ಬಳಕೆಗೆ ಇಷ್ಟು ಸಮಯ ಎಂಬ ಮಿತಿ ಇರುತ್ತದೆ. ಒಂದು ಸಮಯದ ಬಳಿಕ ವಿಮಾನಗಳು ತಮ್ಮ ಹಾರಾಟವನ್ನು ನಿಲ್ಲಿಸುತ್ತವೆ. ಪ್ರತಿನಿತ್ಯ ಲಕ್ಷಾಂತರ ಪ್ರಯಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗುವ ರೈಲುಗಳ ಬಾಳಿಕೆ ಎಷ್ಟು ವರ್ಷ ಎಂಬ ವಿಷಯ ನಿಮಗೆ ಗೊತ್ತಿದೆಯಾ?&lt;/p&gt;&lt;img&gt;&lt;p&gt;ಹಲವು ವರ್ಷಗಳಿಂದ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ತಲುಪಿಸುವ ರೈಲುಗಳಿಗೆ, ಮನುಷ್ಯರಿಗೆ 60 ವರ್ಷಕ್ಕೆ ನಿವೃತ್ತಿ ಇರುವಂತೆ, ನಿವೃತ್ತಿ ಇದೆಯೇ? ಹಳೆಯದಾದ ಅಥವಾ ಕೆಲಸಕ್ಕೆ ಬಾರದ ರೈಲುಗಳನ್ನು ಏನು ಮಾಡುತ್ತಾರೆ ಎಂಬುದರ ವಿವರವಾದ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.&lt;/p&gt;&lt;img&gt;&lt;p&gt;ರೈಲಿನ ಪ್ರತಿ ಕೋಚ್, ಇಂಜಿನ್, ಮತ್ತು ವ್ಯಾಗನ್&zwnj;ಗಳು ಕೆಲವು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಹಳೆಯ ಮಾದರಿಯ ಪ್ಯಾಸೆಂಜರ್ ರೈಲುಗಳು 25 ರಿಂದ 30 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನಂತರ ಅವುಗಳನ್ನು ಬದಲಾಯಿಸಲಾಗುತ್ತದೆ. ಆಧುನಿಕ ರೈಲುಗಳು 35 ವರ್ಷಗಳವರೆಗೆ ಬಾಳಿಕೆ ಬರುತ್ತವೆ.&lt;/p&gt;&lt;img&gt;&lt;p&gt;ಯಾವುದೇ ರೈಲಿನ ಕೋಚ್, ಇಂಜಿನ್&zwnj;ಗಳು ರಿಪೇರಿಗೆ ಬಂದ ತಕ್ಷಣ ಬದಲಾಯಿಸಲ್ಲ. ಸಮಸ್ಯೆಯನ್ನು ಸರಿಪಡಿಸಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಒಂದು ವೇಳೆ ಪದೇ ಪದೇ ರಿಪೇರಿಗೆ ಬರುತ್ತಿದ್ರೆ ಸೇವೆಯಿಂದ ತೆಗೆದುಹಾಕಲಾಗುತ್ತದೆ. ಕೆಲವೊಮ್ಮೆ ಪ್ಯಾಸೆಂಜರ್ ರೈಲನ್ನು ಗೂಡ್ಸ್ ರೈಲಾಗಿ ಪರಿವರ್ತಿಸುತ್ತಾರೆ. ನಂತರವೂ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದ್ರೆ ಸಂಪೂರ್ಣವಾಗಿ ಸೇವೆಯಿಂದ ತೆಗೆದು ಹಾಕಲಾಗುತ್ತದೆ. ಒಂದು ಪ್ಯಾಸೆಂಜರ್ ರೈಲು ಗೂಡ್ಸ್ ಟ್ರೈನ್&zwnj; ಆಗಿ ಮಾರ್ಪಟ್ಟ ನಂತರ ಮತ್ತೆ ನಾಲ್ಕರಿಂದ ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ.&lt;/p&gt;&lt;img&gt;&lt;p&gt;ಭಾರತೀಯ ರೈಲ್ವೆ'ಮಿಷನ್ ಜೀರೋ ಸ್ಕ್ರ್ಯಾಪ್' ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಭಾಗವಾಗಿ, ಡೀಸೆಲ್ ಇಂಜಿನ್&zwnj;ಗಳನ್ನು ಹಂತಹಂತವಾಗಿ ತೆಗೆದುಹಾಕಿ, ಅವುಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ರೈಲುಗಳನ್ನು ಪರಿಚಯಿಸಿದೆ.&lt;/p&gt;&lt;img&gt;&lt;p&gt;ಕೆಲಸಕ್ಕೆ ಬಾರದ ಹಳೆಯ ರೈಲುಗಳನ್ನು ಏನು ಮಾಡುತ್ತಾರೆ ಎಂಬ ನಿಮ್ಮ ಅನುಮಾನಕ್ಕೆ ಉತ್ತರ ಇಲ್ಲಿದೆ. ರೈಲು ಇನ್ನು ಬಳಕೆಗೆ ಬರುವುದಿಲ್ಲ ಎಂದು ಖಚಿತವಾದ ನಂತರ, ಅದನ್ನು ತುಂಡು ತುಂಡಾಗಿ ವಿಭಜಿಸುತ್ತಾರೆ. ಅದರಲ್ಲಿರುವ ಕಬ್ಬಿಣ, ಉಕ್ಕು, ತಾಮ್ರ, ಅಲ್ಯೂಮಿನಿಯಂ, ಮತ್ತು ಹಿತ್ತಾಳೆಯಂತಹ ಭಾಗಗಳನ್ನು ಪ್ರತ್ಯೇಕಿಸುತ್ತಾರೆ. ಸೀಟುಗಳು, ಫ್ಯಾನ್&zwnj;ಗಳು, ಲೈಟ್&zwnj;ಗಳು, ಬ್ಯಾಟರಿಗಳಂತಹ ಸಣ್ಣ ಭಾಗಗಳನ್ನು ಸಹ ತೆಗೆದುಹಾಕಿ, ಅವುಗಳಲ್ಲಿ ಉಪಯುಕ್ತವಾದವುಗಳನ್ನು ಮರುಬಳಕೆ ಮಾಡುತ್ತಾರೆ. ಇಲ್ಲದಿದ್ದರೆ, ಅವುಗಳನ್ನು ಮರುಬಳಕೆಗಾಗಿ (recycle) ಕಳುಹಿಸುತ್ತಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Mahmad Rafik</dc:creator>
            <atom:link href="https://kannada.asianetnews.com/gallery/india-news/indian-railways-scrap-policy-details-do-trains-also-have-retirement-what-happens-to-old-trains-here-is-information-mrq-mgfd2g3"/>
        </item>
        <item>
            <title><![CDATA[7 7 2026 ರಂದು ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗ, 3 ರಾಶಿಗಳು ವೃತ್ತಿ ಪ್ರಗತಿ ಮತ್ತು ಆರ್ಥಿಕ ಲಾಭ ಅನುಭವ]]></title>
            <link>https://kannada.asianetnews.com/gallery/festivals/news-budh-surya-budhaditya-yog-7-july-2026-3-zodiac-signs-get-money-suh-yw8mz1s</link>
            <guid isPermaLink="true">https://kannada.asianetnews.com/gallery/festivals/news-budh-surya-budhaditya-yog-7-july-2026-3-zodiac-signs-get-money-suh-yw8mz1s</guid>
            <pubDate>Sun, 05 Jul 2026 10:50:45 +0530</pubDate>
            <description><![CDATA[ಜುಲೈ 7 ರಂದು ಬುಧ ಗ್ರಹವು ಮಿಥುನ ರಾಶಿಗೆ ಪ್ರವೇಶಿಸಿ, ಹಿಮ್ಮುಖವಾಗಿ ಚಲಿಸುತ್ತದೆ. ಇದು ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗವನ್ನು ಪ್ರಚೋದಿಸುತ್ತದೆ. ಈ ಯೋಗವು ಯಾವ ರಾಶಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kw8v1as2pv23dhjxtwg435e1,imgname-zodiac-signs--3--1782708218658.jpg" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ 7 ರಂದು ಬುಧ ಗ್ರಹವು ಮಿಥುನ ರಾಶಿಗೆ ಪ್ರವೇಶಿಸಿ, ಹಿಮ್ಮುಖವಾಗಿ ಚಲಿಸುತ್ತದೆ. ಇದು ಮಿಥುನ ರಾಶಿಯಲ್ಲಿ ಬುಧಾದಿತ್ಯ ಯೋಗವನ್ನು ಪ್ರಚೋದಿಸುತ್ತದೆ. ಈ ಯೋಗವು ಯಾವ ರಾಶಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನೋಡಿ.&lt;/p&gt;&lt;img&gt;&lt;p&gt;ಜುಲೈ 7, 2026 ರಂದು ಬುಧ ಗ್ರಹವು ತನ್ನ ರಾಶಿಚಕ್ರವನ್ನು ಬದಲಾಯಿಸಲಿದೆ. ಬುಧ ಗ್ರಹವು ಕರ್ಕ ರಾಶಿಯಿಂದ ಮಿಥುನ ರಾಶಿಗೆ ಹಿಮ್ಮುಖವಾಗಿ ಸಾಗುತ್ತದೆ, ಅಲ್ಲಿ ಸೂರ್ಯ ಈಗಾಗಲೇ ನೆಲೆಸಿದ್ದಾನೆ. ಪರಿಣಾಮವಾಗಿ, ಜುಲೈ 7 ರಂದು ಸೂರ್ಯ ಮತ್ತು ಬುಧದ ಸಂಯೋಗವು ಬುಧಾದಿತ್ಯ ಯೋಗವನ್ನು ಸೃಷ್ಟಿಸುತ್ತದೆ. ಈ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅವರ ವೃತ್ತಿ ಮತ್ತು ಹಣಕಾಸಿನಲ್ಲಿ ಶುಭ ಫಲಿತಾಂಶಗಳನ್ನು ತರಬಹುದು. ಈ ರಾಶಿಚಕ್ರ ಚಿಹ್ನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.&lt;/p&gt;&lt;img&gt;&lt;p&gt;ನಿಮ್ಮ ಸಂಪತ್ತಿನ ಮನೆಯಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ನಿಮಗೆ ಹಣಕಾಸಿನ ವಿಷಯಗಳಲ್ಲಿ ಯಶಸ್ಸನ್ನು ತರಬಹುದು. ನೀವು ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಪೂರ್ವಜರ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭವಾಗಬಹುದು. ಹೆಚ್ಚುವರಿಯಾಗಿ, ಉದ್ಯೋಗದಲ್ಲಿರುವವರು ತಮ್ಮ ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸಬಹುದು. ಬುಧವು ನಿಮ್ಮ ಎರಡನೇ ಮನೆಯಲ್ಲಿರುವುದರಿಂದ, ನಿಮ್ಮ ಮಾತುಗಳಿಂದ ನೀವು ಜನರ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ರಾಜಕೀಯದಲ್ಲಿ ಕೆಲಸ ಮಾಡುವವರು ಸಹ ಸಕಾರಾತ್ಮಕ ಫಲಿತಾಂಶಗಳನ್ನು ನೋಡುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಸೂರ್ಯ ಮತ್ತು ಬುಧನ ಬುಧಾದಿತ್ಯ ಯೋಗವು ನಿಮ್ಮ ಹನ್ನೊಂದನೇ ಮನೆಯಲ್ಲಿ ಅಥವಾ ಲಾಭದ ಮನೆಯಾಗಿ ರೂಪುಗೊಳ್ಳುತ್ತದೆ. ಈ ಯೋಗದ ಶುಭ ಪರಿಣಾಮಗಳು ನಿಮ್ಮ ವೃತ್ತಿಜೀವನದ ಮೇಲೆ ಕಂಡುಬರುತ್ತವೆ. ಈ ರಾಶಿಯಲ್ಲಿ ಜನಿಸಿದವರಿಗೆ ತಮ್ಮ ಅಪೇಕ್ಷಿತ ಸ್ಥಳಗಳಲ್ಲಿ ಉದ್ಯೋಗ ಸಿಗುವ ಸಾಧ್ಯತೆಯಿದೆ. ಕೆಲವರು ವಿದೇಶಗಳಲ್ಲಿಯೂ ಉದ್ಯೋಗ ಪಡೆಯಬಹುದು. ನಿಮ್ಮ ಹೂಡಿಕೆಗಳಿಂದ ನೀವು ಲಾಭ ಪಡೆಯುವ ಸಾಧ್ಯತೆಯಿದೆ. ಬುಧ ಮತ್ತು ಸೂರ್ಯ ನಿಮ್ಮ ಸಂವಹನ ಕೌಶಲ್ಯವನ್ನು ಸಹ ಸುಧಾರಿಸುತ್ತಾರೆ. ಸಾರ್ವಜನಿಕರೊಂದಿಗೆ ವ್ಯವಹರಿಸುವವರು ಅನುಕೂಲಕರ ಫಲಿತಾಂಶಗಳನ್ನು ಅನುಭವಿಸಬಹುದು. ಕುಟುಂಬ ಜೀವನವೂ ಆಹ್ಲಾದಕರವಾಗಿರುತ್ತದೆ.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರಿಗೆ ತಮ್ಮ ಹತ್ತನೇ ಮನೆಯಾದ ಕರ್ಮದಲ್ಲಿ ಬುಧಾದಿತ್ಯ ಯೋಗ ಇರುತ್ತದೆ. ಈ ಯೋಗವು ನಿಮ್ಮ ಕೆಲಸದ ದಕ್ಷತೆಯನ್ನು ಸುಧಾರಿಸುತ್ತದೆ. ನಿಮ್ಮ ಕೆಲಸದಿಂದ ನೀವು ನಿಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಬಹುದು. ಕೆಲವು ವ್ಯಕ್ತಿಗಳು ಬಡ್ತಿ ಪಡೆಯುವ ಸಾಧ್ಯತೆಯಿದೆ. ದೀರ್ಘಕಾಲದವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಸಹ ಯಶಸ್ಸನ್ನು ಕಾಣಬಹುದು. ಬುಧಾದಿತ್ಯ ಯೋಗದ ರಚನೆಯಿಂದಾಗಿ ಉದ್ಯಮಿಗಳು ಗಮನಾರ್ಹ ಆರ್ಥಿಕ ಲಾಭಗಳನ್ನು ಅನುಭವಿಸಬಹುದು. ಈ ಯೋಗವು ನಿಮ್ಮ ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/news-budh-surya-budhaditya-yog-7-july-2026-3-zodiac-signs-get-money-suh-yw8mz1s"/>
        </item>
        <item>
            <title><![CDATA[ಉಳೀತು ಬಡಪಾಯಿ ಜೀವ! ಭಾರೀ ಮಳೆ-ಗಾಳಿಗೆ ಪುಟ್ಟ ಮನೆ ಮೇಲೆಯೇ ಬಿದ್ದ ಬೃಹತ್ ಮರ!]]></title>
            <link>https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b</link>
            <guid isPermaLink="true">https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b</guid>
            <pubDate>Sun, 05 Jul 2026 10:32:16 +0530</pubDate>
            <description><![CDATA[ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ>]]></description>
            <media:content url="https://static.asianetnews.com/images/w-1280,h-720,format-jpg,imgid-01kwra50ec7akjd84dky8wx3gv,imgname-----------------------2026-07-05t102602.375-1783227384268.jpg" type="image/jpeg" height="390" width="690"/>
            <content:encoded><![CDATA[&lt;p&gt;ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ&amp;gt;&lt;/p&gt;&lt;img&gt;&lt;p&gt;ಮಲೆನಾಡು ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರಿಸುತ್ತಿದೆ ಇದರ ಪರಿಣಾಮವಾಗಿ ಬೃಹತ್ ಮರಗಳು ಧರೆಗುರುಳುತ್ತಿವೆ. ಕೆಲವು ಮನೆಗಳ ಮೇಲೆಯೇ ಬಿದ್ದು ಸಾವು ನೋವಿನ ಘಟನೆಗಳು ನಡೆದಿವೆ. ಶನಿವಾರವೂ ಕೂಡ ಅಬ್ಬರಿಸಿದ ಮಳೆರಾಯ ರಾತ್ರಿಯಿಡೀ ಮಳೆ ಜೊತೆ ಭೀಕರ ಬಿರುಗಾಳಿ ಆರ್ಭಟ ಮುಂದುವರಿದೆ.&lt;/p&gt;&lt;img&gt;&lt;p&gt;ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಜೋರಾಗಿದ್ದು, ಮರಗಳು ಭೀಕರ ಗಾಳಿಗೆ ನಿಲ್ಲಲಾಗದೆ ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಅನಾಹುತಕಾರಿ ಘಟನೆ ನಡೆದು ಹೋಗಿದೆ.&lt;/p&gt;&lt;img&gt;&lt;p&gt;ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆ, ಗಾಳಿಗೆ ಜನಜೀವನ ಅಸ್ತವ್ಯವಸ್ತಗೊಂಡಿತು. ಕೆಲವು ಮನೆಗಳಿಗೆ ನೀರು ನುಗ್ಗಿದರೆ ಇನ್ನು ಕೋಳೂರು ಗ್ರಾಮದ ಸಿದ್ಧಪ್ಪ ಎಂಬುವವರ ಮನೆಮೇಲೆಯೇ ಮರ ಉರುಳಿಬಿದ್ದಿದ್ದು ಚಿಕ್ಕ ಮನೆ ಸಂಪೂರ್ಣ ಮುರಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.&lt;/p&gt;&lt;img&gt;&lt;p&gt;ಕಳೆದೆರಡು ದಿನಗಳಿಂದ ಮಲೆನಾಡ ಭಾಗದಲ್ಲಿ ಸಾಧಾರಣವಾಗಿದ್ದರೂ ನಿರಂತರ ಮಳೆಯಾಗುತ್ತಿದೆ ಶನಿವಾರ ರಾತ್ರಿಯಿಡೀ ಸುರಿದ ಮಳೆ. ಇದರೊಂದಿಗೆ ಭೀಕರ ಗಾಳಿಯಿಂದಾಗಿ ಮರಳ ಮುರಿದುಬಿಳುತ್ತಿವೆ. ಮಳೆಗಿಂತ ಗಾಳಿಯ ವೇಗ ಜೋರಾಗಿದ್ದು ನಾನಾ ಅವಾಂತರ ಸೃಷ್ಟಿಸಿಸಿದೆ.&lt;/p&gt;&lt;img&gt;&lt;p&gt;ಮನೆ ಮೇಲೆ ಮರ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಮೂಡಿಗೆರೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮನೆ ಪರಿಶೀಲಿಸಿದ್ದಾರೆ. ಇನ್ನು ಮಳೆಯಾಗುವ ಮುನ್ಸೂಚನೆಯಿಂದ ಬೆಟ್ಟ, ಇಳಿಜಾರಿನ ಪ್ರದೇಶ, ಮರಗಳ ಕೆಳಗೆ ಮನೆ ಮಾಡಿರುವ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Ravi Janekal</dc:creator>
            <atom:link href="https://kannada.asianetnews.com/gallery/karnataka-districts/karnataka-weather-updates-chikmagalur-rains-huge-tree-falls-on-house-due-to-heavy-rain-rav-tnrxk7b"/>
        </item>
        <item>
            <title><![CDATA[ಸಿಂಧನೂರು ಕೆರೆ ನೀರಿನ ಪ್ರಮಾಣ ಕುಸಿತ: ನಗರಕ್ಕೆ ಕುಡಿಯುವ ನೀರಿಗೆ ಎದುರಾಗುತ್ತಾ ಸಂಕಷ್ಟ?]]></title>
            <link>https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</link>
            <guid isPermaLink="true">https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud</guid>
            <pubDate>Sun, 05 Jul 2026 10:24:42 +0530</pubDate>
            <description><![CDATA[ಸಿಂಧನೂರು ನಗರದ ಜೀವನಾಡಿಯಾದ ಕೆರೆಯ ನೀರಿನ ಮಟ್ಟ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ. ಸದ್ಯ ತುರ್ವಿಹಾಳ ಕೆರೆಯಿಂದ ನೀರು ಪೂರೈಸಲಾಗುತ್ತಿದ್ದು, ಇನ್ನೂ ಮೂರು ತಿಂಗಳಿಗಾಗುವಷ್ಟು ಸಂಗ್ರಹವಿದೆ. ನಾಗರಿಕರು ನೀರನ್ನು ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr9wwax0ve15fntea9jnmb8,imgname-sindhanuru-lake-1783227117917.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ರಾಯಚೂರು:&lt;/strong&gt; ತುರ್ವಿಹಾಳ ಪಟ್ಟಣ ಸಮೀಪದಲ್ಲಿರುವ ಬೃಹತ್ ಕುಡಿಯುವ ನೀರಿನ ಕೆರೆ ಸಿಂಧನೂರು ನಗರದ ಜೀವಸೆಲೆಯಾಗಿದ್ದು, ಸದ್ಯ ಕೆರೆ ನೀರಿನ ಪ್ರಮಾಣ ಕುಸಿತಕಂಡು ನಾಗರಿಕರಿಗೆ ಆತಂಕ ತಂದೊಡ್ಡಿದೆ.&lt;/p&gt;&lt;p&gt;ಸದ್ಯ ಕುಡಿಯುವ ನೀರಿನ ಕೆರೆಯಲ್ಲಿ ಸದ್ಯ ಅಂದಾಜು ಒಂದೂವರೆಯಿಂದ ಎರಡು ಮೀಟರ್ ನೀರಿನ ಸಂಗ್ರಹವಿದೆ. ಹಾಗಾಗಿ ಪ್ರಸ್ತುತ ತುರ್ವಿಹಾಳ ಕೆರೆಯಿಂದ ನೇರವಾಗಿ ನೀರನ್ನು ನಗರದ 31 ವಾರ್ಡ್&zwnj;ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿಸಿದ ವೇಳೆ ತುರ್ವಿಹಾಳ ಕೆರೆ ಹಾಗೂ ನಗರದ ಕುಡಿಯುವ ನೀರಿನ ಕೆರೆಯಲ್ಲಿ ನೀರು ಸಂಗ್ರಹಿಸಲಾಗಿತ್ತು. ಬೇಸಿಗೆಯ ಕಾರಣ ದಿಂದ ನೀರಿನ ಬೇಡಿಕೆ ಹೆಚ್ಚಿ ನಗರದ ಕುಡಿಯುವ ನೀರಿನ ಕೆರೆ ಬೇಗನೆ ಖಾಲಿಯಾಗಿದ್ದು, ತುರ್ವಿಹಾಳ ಕೆರೆಯೇ ಆಸರೆಯಾಗಿದೆ.&lt;/p&gt;&lt;h2&gt;&lt;strong&gt;ನೀರನ್ನು ಮಿತವಾಗಿ ಬಳಸಿ:&lt;/strong&gt;&lt;/h2&gt;&lt;p&gt;ಸದ್ಯ ಸಿಂಧನೂರು ಕೆರೆಯಲ್ಲಿ ನೀರು ಕಡಿಮೆ ಇರಬಹುದು, ಆದರೆ ತುರ್ವಿಹಾಳ ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲಾಗಿದೆ. ಅಂದಾಜು ಇನ್ನೂ ಮೂರು ಇಲ್ಲವೇ ಮೂರುವರೇ ತಿಂಗಳಿಗಾಗುವಷ್ಟು ನೀರಿನ ಸಂಗ್ರಹವಿದೆ. ಹಾಗಾಗಿ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಈಗ ಪ್ರತಿ 8 ದಿನಕ್ಕೊಮ್ಮೆ ಆಯಾ ವಾರ್ಡ್&zwnj;ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ನೀರಿನ ಕೊರತೆ ಮಾತ್ರ ಇಲ್ಲ. ಆದರೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದು ನಗರಸಭೆಯ ಪೌರಾಯುಕ್ತ ಹೇಳುತ್ತಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/the-water-level-of-the-sindhanur-city-lake-has-dropped-three-months-worth-of-savings-mrq/articleshow-oh425ud"/>
        </item>
        <item>
            <title><![CDATA[ಬೆಳಗಾವಿಯಲ್ಲಿ ಭಾರೀ ಅನಾಹುತ; ಹುಣಸೆ ಮರ ದುರಂತದಿಂದ 4 ಕುಟುಂಬ ಪಾರಾಗಿದ್ದೇ ಪವಾಡ]]></title>
            <link>https://kannada.asianetnews.com/gallery/belagavi/in-belagavi-due-to-heavy-rains-in-huge-tamarind-tree-collapsed-and-four-families-fortunately-escaped-unharmed-gkn-dl0gz7g</link>
            <guid isPermaLink="true">https://kannada.asianetnews.com/gallery/belagavi/in-belagavi-due-to-heavy-rains-in-huge-tamarind-tree-collapsed-and-four-families-fortunately-escaped-unharmed-gkn-dl0gz7g</guid>
            <pubDate>Sun, 05 Jul 2026 10:11:32 +0530</pubDate>
            <description><![CDATA[ಬೆಳಗಾವಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಖಾಸಬಾಗ ಪ್ರದೇಶದಲ್ಲಿ ಬೃಹತ್ ಹುಣಸೆ ಮರವೊಂದು ನಾಲ್ಕು ಮನೆಗಳ ಮೇಲೆ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr8s9cte90sk310ahdg8m61,imgname-belagavi-rain-effect--3--1783225951642.jpg" type="image/jpeg" height="390" width="690"/>
            <content:encoded><![CDATA[&lt;p&gt;ಬೆಳಗಾವಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಖಾಸಬಾಗ ಪ್ರದೇಶದಲ್ಲಿ ಬೃಹತ್ ಹುಣಸೆ ಮರವೊಂದು ನಾಲ್ಕು ಮನೆಗಳ ಮೇಲೆ ಉರುಳಿಬಿದ್ದಿದೆ. ಈ ಘಟನೆಯಲ್ಲಿ ಮನೆಗಳು ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.&lt;/p&gt;&lt;img&gt;&lt;p&gt;&lt;strong&gt;ಬೆಳಗಾವಿ: &lt;/strong&gt;ಕುಂದಾನಗರಿ ಬೆಳಗಾವಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ನಗರದ ಖಾಸಬಾಗ ಪ್ರದೇಶದಲ್ಲಿ ಬೃಹತ್ ಮರವೊಂದು ಮನೆಗಳ ಮೇಲೆ ಉರುಳಿ ಬಿದ್ದಿದ್ದು, ಭಾರಿ ಹಾನಿ ಅನಾಹುತ ಸಂಭವಿಸಿದೆ.&lt;/p&gt;&lt;img&gt;&lt;p&gt;ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಇಲ್ಲಿನ ಹಳೆಯ ಬೃಹತ್ ಹುಣಸೆ ಮರವೊಂದು ಬೇರು ಸಮೇತ ಕಿತ್ತು ಧರೆಗುರುಳಿದೆ. ಮರವು ನೇರವಾಗಿ ಪಕ್ಕದಲ್ಲಿದ್ದ ನಾಲ್ಕು ಮನೆಗಳ ಮೇಲೆ ಬಿದ್ದಿದ್ದು, ಮನೆಗಳ ಮೇಲ್ಛಾವಣಿ ಹಾಗೂ ಗೋಡೆಗಳು ಕುಸಿದಿವೆ.&lt;/p&gt;&lt;img&gt;&lt;p&gt;ಮರ ಬೀಳುವ ಸಂದರ್ಭದಲ್ಲಿ ಮನೆಯೊಳಗೆ ನಿವಾಸಿಗಳು ಇದ್ದರಾದರೂ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅನಿಲ್ ಮುಟ್ಟೇಕರ್, ಆನಂದ ಭದ್ವಾಂಕರ್, ಏಕನಾಥ ಭದ್ವಾಂಕರ್ ಮತ್ತು ಪ್ರಶಾಂತ ಗೋರ್ಲೆ ಎಂಬುವವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಪೀಠೋಪಕರಣಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳು ಪುಡಿಯಾಗಿವೆ.&lt;/p&gt;&lt;img&gt;&lt;p&gt;ಮನೆಯನ್ನು ಕಳೆದುಕೊಂಡು ಬೀದಿಗೆ ಬಂದಿರುವ ನಾಲ್ಕು ಕುಟುಂಬಗಳು ಈಗ ದಿಕ್ಕು ತೋಚದಂತಾಗಿವೆ. ಮಳೆಯ ನಡುವೆಯೇ ಆಶ್ರಯ ಕಳೆದುಕೊಂಡಿರುವ ಸಂತ್ರಸ್ತರು, ನಮಗೆ ಉಂಟಾಗಿರುವ ನಷ್ಟಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು&quot; ಎಂದು ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ.&lt;/p&gt;&lt;img&gt;&lt;p&gt;ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಶಹಾಪುರ ಪೊಲೀಸರು ಧಾವಿಸಿದ್ದಾರೆ. ಮನೆಗಳ ಮೇಲೆ ಬಿದ್ದಿರುವ ಬೃಹತ್ ಮರದ ರೆಂಬೆಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಬೆಳಗಾವಿಯಲ್ಲಿ ಮಳೆ ಮುಂದುವರಿದಿದ್ದು, ಹಳೆಯ ಕಟ್ಟಡ ಹಾಗೂ ಮರಗಳ ಪಕ್ಕದಲ್ಲಿರುವ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.&lt;/p&gt;]]></content:encoded>
            <category><![CDATA[belagavi]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/belagavi/in-belagavi-due-to-heavy-rains-in-huge-tamarind-tree-collapsed-and-four-families-fortunately-escaped-unharmed-gkn-dl0gz7g"/>
        </item>
        <item>
            <title><![CDATA[ಬಾಬಾ ವಂಗಾ ಭವಿಷ್ಯ ಪ್ರಕಾರ ಮುಂದಿನ ವಾರದಿಂದ ಈ 5 ರಾಶಿಗೆ ಅದೃಷ್ಟ, ನಾಲ್ಕೂ ರಾಶಿಯವರಿಂದಲೂ ಆರ್ಥಿಕ ಲಾಭ]]></title>
            <link>https://kannada.asianetnews.com/gallery/weekly-horoscope/baba-vanga-weekly-horoscope-july-2026-lucky-zodiac-signs-astrology-prediction-suh-15ibo9l</link>
            <guid isPermaLink="true">https://kannada.asianetnews.com/gallery/weekly-horoscope/baba-vanga-weekly-horoscope-july-2026-lucky-zodiac-signs-astrology-prediction-suh-15ibo9l</guid>
            <pubDate>Sun, 05 Jul 2026 10:10:30 +0530</pubDate>
            <description><![CDATA[Baba Vanga Rashifal 2026: ಜುಲೈ ತಿಂಗಳ ಈ ವಾರ ಬಾಬಾ ವಂಗಾಗೆ ಸಂಬಂಧಿಸಿದ ಭವಿಷ್ಯವಾಣಿಗಳ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ. ವೃಷಭ ಮತ್ತು ಕನ್ಯಾರಾಶಿ ಸೇರಿದಂತೆ 5 ರಾಶಿಚಕ್ರ ಚಿಹ್ನೆಗಳಿಗೆ ಜುಲೈ 6 ರಿಂದ 12 ರವರೆಗಿನ ಅವಧಿ ಶುಭವಾಗಿರುತ್ತದೆ ಎಂದು ಹೇಳಲಾಗುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kva2aza23bnt7exp9dyykzqc,imgname-baba-vanga-3-1781675687234.jpeg" type="image/jpeg" height="390" width="690"/>
            <content:encoded><![CDATA[&lt;p&gt;Baba Vanga Rashifal 2026: ಜುಲೈ ತಿಂಗಳ ಈ ವಾರ ಬಾಬಾ ವಂಗಾಗೆ ಸಂಬಂಧಿಸಿದ ಭವಿಷ್ಯವಾಣಿಗಳ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ. ವೃಷಭ ಮತ್ತು ಕನ್ಯಾರಾಶಿ ಸೇರಿದಂತೆ 5 ರಾಶಿಚಕ್ರ ಚಿಹ್ನೆಗಳಿಗೆ ಜುಲೈ 6 ರಿಂದ 12 ರವರೆಗಿನ ಅವಧಿ ಶುಭವಾಗಿರುತ್ತದೆ ಎಂದು ಹೇಳಲಾಗುತ್ತಿದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಜುಲೈ 6 ರಿಂದ 12 ರವರೆಗೆ ವೃಷಭ ರಾಶಿಯ ಜನರಿಗೆ ಹೊಸ ಅವಕಾಶಗಳ ಬಾಗಿಲು ತೆರೆಯಬಹುದು. ಈ ಚಿಹ್ನೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗಬಹುದು, ಇದು ನಿಮ್ಮನ್ನು ಕೆಲಸದ ಸ್ಥಳದಲ್ಲಿ ಗುರುತಿಸುವಂತೆ ಮಾಡುತ್ತದೆ ಮತ್ತು ನಿಮ್ಮ ವೃತ್ತಿಜೀವನವನ್ನು ಹೆಚ್ಚಿಸುತ್ತದೆ. ಅಲ್ಲದೆ, ಉದ್ಯಮಿಗಳು ಹೊಸ ಗ್ರಾಹಕರ ಲಾಭ ಅಥವಾ ಲಾಭದಾಯಕ ಒಪ್ಪಂದಗಳನ್ನು ಪಡೆಯುವ ಸಾಧ್ಯತೆಯಿದೆ. ವೃಷಭ ರಾಶಿಯವರ ಅತ್ತೆ-ಮಾವಂದಿರ ಸ್ಥಿತಿ ಸುಧಾರಿಸುತ್ತದೆ ಮತ್ತು ಅವರು ತಮ್ಮ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಒಂದು ಪ್ರಮುಖ ಕೆಲಸ ಪೂರ್ಣಗೊಳ್ಳಬಹುದು ಮತ್ತು ವೃತ್ತಿಜೀವನವನ್ನು ಪ್ರಾರಂಭಿಸಲು ಅವಕಾಶವೂ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಬೆಂಬಲವು ನೈತಿಕತೆಯನ್ನು ಹೆಚ್ಚಿಸುತ್ತದೆ ಎಂಬ ಸೂಚನೆಗಳಿವೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಜುಲೈ 6 ರಿಂದ 12 ರವರೆಗಿನ ಅವಧಿಯು ಕನ್ಯಾ ರಾಶಿಯವರಿಗೆ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ತರಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ಶೈಲಿಯನ್ನು ಪ್ರಶಂಸಿಸಬಹುದು ಮತ್ತು ಹೊಸ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಗಳಿವೆ. ನೀವು ಉದ್ಯೋಗಗಳನ್ನು ಬದಲಾಯಿಸಲು ಅಥವಾ ಯಾವುದೇ ಹೊಸ ಯೋಜನೆಯನ್ನು ಯೋಜಿಸುತ್ತಿದ್ದರೆ, ಸಮಯ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಕನ್ಯಾ ರಾಶಿಯವರಿಗೆ ಈ ವಾರ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ, ಇದರಿಂದಾಗಿ ಮನೆ ಮತ್ತು ವಾಹನವನ್ನು ಖರೀದಿಸುವ ಬಯಕೆ ಈಡೇರುತ್ತದೆ. ಹಣಕಾಸಿನ ವಿಷಯಗಳು ಸಹ ಸುಧಾರಿಸಬಹುದು ಮತ್ತು ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಕುಟುಂಬದ ಸೌಕರ್ಯಗಳು ಹೆಚ್ಚಾಗುತ್ತವೆ ಮತ್ತು ಪೋಷಕರ ಆರೋಗ್ಯವು ಸಂಪೂರ್ಣವಾಗಿ ಉತ್ತಮವಾಗಿರುತ್ತದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಜುಲೈ 6 ರಿಂದ 12 ರವರೆಗಿನ ಅವಧಿಯು ತುಲಾ ರಾಶಿಯವರಿಗೆ ಸಮತೋಲನ ಮತ್ತು ಯಶಸ್ಸನ್ನು ಸೂಚಿಸುತ್ತದೆ. ತುಲಾ ರಾಶಿಯವರ ವ್ಯವಹಾರದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದು ಈ ವಾರ ಪರಿಹರಿಸಲ್ಪಡುತ್ತದೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ. ಇದರೊಂದಿಗೆ, ವ್ಯವಹಾರದಲ್ಲಿ ವಿಸ್ತರಣೆಗೆ ಅವಕಾಶಗಳು ಲಭ್ಯವಿರಬಹುದು. ನೀವು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತೀರಿ ಮತ್ತು ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವ ಲಕ್ಷಣಗಳಿವೆ. ನಿಮ್ಮ ಯಾವುದೇ ಕೆಲಸ ಅಥವಾ ಹಣವು ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದರೆ, ಈ ವಾರ ಅದನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಕೆಲವು ಒಳ್ಳೆಯ ಸುದ್ದಿಗಳು ಮನಸ್ಸನ್ನು ಸಂತೋಷಪಡಿಸಬಹುದು.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಜುಲೈ 6 ರಿಂದ 12 ರವರೆಗಿನ ಅವಧಿಯು ಧನು ರಾಶಿಯವರಿಗೆ ಹೊಸ ಸಾಧನೆಗಳನ್ನು ತರಬಹುದು. ಧನು ರಾಶಿಯವರ ಪ್ರೇಮ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಈ ವಾರ ಅದು ಬಗೆಹರಿಯುತ್ತದೆ. ಬಹಳ ದಿನಗಳಿಂದ ಪೂರ್ಣಗೊಳ್ಳಲು ಕಾಯುತ್ತಿದ್ದ ಕೆಲಸದಲ್ಲಿ ಯಶಸ್ಸಿನ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಜನರಿಗೆ ಈ ಸಮಯವು ರೋಮಾಂಚನಕಾರಿಯಾಗಿರಬಹುದು. ನೀವು ವಿದೇಶಕ್ಕೆ ಹೋಗಲು ಬಯಸಿದರೆ, ಈ ವಾರ ನಿಮ್ಮ ಆಸೆ ಈಡೇರಬಹುದು. ಆರ್ಥಿಕ ಭಾಗವು ಬಲವಾಗಿರುತ್ತದೆ ಮತ್ತು ಹೊಸ ಆದಾಯದ ಮೂಲಗಳ ಸಾಧ್ಯತೆಗಳಿವೆ. ಇದರ ಜೊತೆಗೆ, ಪ್ರಯಾಣದಿಂದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಬಾಬಾ ವೆಂಗಾ ಅವರ ಪ್ರಕಾರ, ಜುಲೈ 6 ರಿಂದ 12 ರವರೆಗೆ ಕುಂಭ ರಾಶಿಯ ಜನರು ಅದೃಷ್ಟದ ಸಂಪೂರ್ಣ ಬೆಂಬಲದಲ್ಲಿರುತ್ತಾರೆ. ಕುಂಭ ರಾಶಿಯವರೇ, ನೀವು ಯಾವುದೇ ವಿವಾದದಲ್ಲಿ ಸಿಲುಕಿಕೊಂಡಿದ್ದರೆ, ಈ ವಾರ ನೀವು ಮುಕ್ತರಾಗಬಹುದು. ನಿಮಗೆ ಯಾವುದೇ ಸಾಲವಿದ್ದರೆ, ನೀವು ಹಣವನ್ನು ಪಡೆಯುವ ಮಾರ್ಗವನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಈ ರಾಶಿಚಕ್ರ ಚಿಹ್ನೆಯ ಉದ್ಯೋಗಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು ಹೊಸ ಅವಕಾಶಗಳು ಸಿಗಬಹುದು ಮತ್ತು ಸ್ಥಗಿತಗೊಂಡ ಕಾರ್ಯಗಳು ವೇಗವನ್ನು ಪಡೆಯುತ್ತವೆ. ವ್ಯವಹಾರದಲ್ಲಿ ಲಾಭದ ಲಕ್ಷಣಗಳಿವೆ, ಆದರೆ ಕುಟುಂಬ ಮತ್ತು ಸ್ನೇಹಿತರ ಬೆಂಬಲವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಲು ಬಯಸಿದರೆ, ಈ ವಾರ ಸಕಾರಾತ್ಮಕವಾಗಿರಬಹುದು.&lt;/p&gt;]]></content:encoded>
            <category><![CDATA[weekly-horoscope]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/weekly-horoscope/baba-vanga-weekly-horoscope-july-2026-lucky-zodiac-signs-astrology-prediction-suh-15ibo9l"/>
        </item>
        <item>
            <title><![CDATA[E-Jagriti:   ಗ್ರಾಹಕರ ಹಕ್ಕುಗಳಿಗೆ ಡಿಜಿಟಲ್ ಬಲ! ದೂರು ದಾಖಲೆಯಿಂದ ಪರಿಹಾರದವರೆಗೆ ಎಲ್ಲವೂ ಈಗ ಬೆರಳ ತುದಿಯಲ್ಲಿ!]]></title>
            <link>https://kannada.asianetnews.com/india-news/e-jagriti-s-for-consumer-justice-in-digital-india-pralhad-joshi-rav/articleshow-ns8dmtx</link>
            <guid isPermaLink="true">https://kannada.asianetnews.com/india-news/e-jagriti-s-for-consumer-justice-in-digital-india-pralhad-joshi-rav/articleshow-ns8dmtx</guid>
            <pubDate>Sun, 05 Jul 2026 09:50:50 +0530</pubDate>
            <description><![CDATA[ಭಾರತದ ಗ್ರಾಹಕ ನ್ಯಾಯ ವ್ಯವಸ್ಥೆಯು ಎದುರಿಸುತ್ತಿದ್ದ ವಿಳಂಬ ಮತ್ತು ಸಂಕೀರ್ಣತೆಗಳಿಗೆ 'ಇ-ಜಾಗೃತಿ' ಪೋರ್ಟಲ್ ಡಿಜಿಟಲ್ ಪರಿಹಾರ ಒದಗಿಸಿದೆ. ದೂರು ದಾಖಲಾತಿಯಿಂದ ಹಿಡಿದು ಪರಿಹಾರದವರೆಗೆ ಸಂಪೂರ್ಣ ಪ್ರಕ್ರಿಯೆ ಸರಳಗೊಳಿಸಿ, ನ್ಯಾಯವನ್ನು ಎಲ್ಲರಿಗೂ ವೇಗವಾಗಿ ಪರಿಹಾರ ತಲುಪುವಂತೆ ಮಾಡಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr75z6e4n3ytxze8c61abg6,imgname-----------------------2026-07-05t093230.969-1783224270030.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;-ಪ್ರಹ್ಲಾದ ಜೋಶಿ,&lt;/strong&gt;&lt;/p&gt;&lt;p&gt;&amp;nbsp;ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು.&lt;/p&gt;&lt;p&gt;ನ್ಯಾಯ ವಿಳಂಬವು ಭಾರತೀಯ ಗ್ರಾಹಕರನ್ನು ದೀರ್ಘಕಾಲದಿಂದ ಕಾಡುತ್ತಿರುವ ಅತಿ ದೊಡ್ಡ ಹತಾಶೆಗಳಲ್ಲಿ ಒಂದಾಗಿದೆ. ಅದು ದೋಷಪೂರಿತ ಉತ್ಪನ್ನವಾಗಿರಲಿ, ಕೈಗೆ ಸಿಗದ ಆನ್&zwnj;ಲೈನ್ ಖರೀದಿಯಾಗಿರಲಿ ಅಥವಾ ಅನ್ಯಾಯದ ಸೇವಾ ಒಪ್ಪಂದವಾಗಿರಲಿ, ದೂರನ್ನು ದಾಖಲಿಸುವುದರಿಂದ ಹಿಡಿದು ಪರಿಹಾರವನ್ನು ಪಡೆಯುವವರೆಗಿನ ಹಾದಿಯು ಸಾಮಾನ್ಯವಾಗಿ ನಿಧಾನಗತಿಯಿಂದ, ಕಷ್ಟದಿಂದ ಮತ್ತು ಭಯ ಹುಟ್ಟಿಸುವಂತೆ ಇರುತ್ತಿತ್ತು. ಭಾರತದ ಗ್ರಾಹಕ ರಕ್ಷಣೆ ವ್ಯವಸ್ಥೆಯು ವರ್ಷಗಳಲ್ಲಿ ಸ್ಥಿರವಾಗಿ ಬೆಳೆದಿದ್ದರೂ, ಅದಕ್ಕೆ ಬೆಂಬಲ ನೀಡುವ ವ್ಯವಸ್ಥೆಗಳು ವೇಗವಾಗಿ ಡಿಜಿಟಲ್ ರೂಪ ಪಡೆಯುತ್ತಿದ್ದು, ಇಂದಿನ ಆರ್ಥಿಕತೆಯ ವಾಸ್ತವಕ್ಕೆ ತಕ್ಕಂತೆ ವೇಗವನ್ನು ಪಡೆದುಕೊಂಡಿರಲಿಲ್ಲ.&lt;/p&gt;&lt;h2&gt;ಗ್ರಾಹಕರ ಸಮಸ್ಯೆಗೆ ಸಿಗಲಿದೆ ಪರಿಹಾರ ಸುಲಭ:&lt;/h2&gt;&lt;p&gt;ಇಂದು ಗ್ರಾಹಕರು ಇ-ಕಾಮರ್ಸ್ ಪ್ಲಾಟ್&zwnj;ಫಾರ್ಮ್&zwnj;ಗಳು, ಡಿಜಿಟಲ್ ಪಾವತಿ ವ್ಯವಸ್ಥೆಗಳು ಮತ್ತು ಆನ್&zwnj;ಲೈನ್ ಮಾರುಕಟ್ಟೆಗಳ ಮೂಲಕ ಹಿಂದೆಂದೂ ಕಾಣದ ಪ್ರಮಾಣದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಕಾಗದ ಪತ್ರಗಳ ಸಲ್ಲಿಕೆ, ಮ್ಯಾನುಯಲ್ (ಕೈಯಾರೆ ಮಾಡುವ) ಪರಿಶೀಲನೆ, ಹರಿದು ಹಂಚಿ ಹೋಗಿದ್ದ ಸಾಫ್ಟ್&zwnj;ವೇರ್ ಪ್ಲಾಟ್&zwnj;ಫಾರ್ಮ್&zwnj;ಗಳು ಮತ್ತು ಖುದ್ದಾಗಿ ಹಾಜರಾಗುವ ವಿಚಾರಣೆಗಳ ಸುತ್ತ ನಿರ್ಮಾಣವಾಗಿದ್ದ ಸಾಂಪ್ರದಾಯಿಕ ಗ್ರಾಹಕ ನ್ಯಾಯ ವ್ಯವಸ್ಥೆಯು ದಿನಕಳೆದಂತೆ ಕಷ್ಟಕರವಾಗುತ್ತಿತ್ತು. ಡಿಜಿಟಲ್ ಯುಗದಲ್ಲಿ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಕೇವಲ ಕಾನೂನು ಸುಧಾರಣೆಗಳಿಗಿಂತ ಹೆಚ್ಚಿನದರ ಅಗತ್ಯವಿತ್ತು. ಅದು ನ್ಯಾಯವನ್ನು ಒದಗಿಸುವ ವಿಧಾನದಲ್ಲೇ ಸಂಪೂರ್ಣ ಬದಲಾವಣೆಯನ್ನು ಬಯಸುತ್ತಿತ್ತು. ಇ-ಜಾಗೃತಿಯು (e-Jagriti) ಒಂದು ಪ್ರಮುಖ ಬದಲಾವಣೆಯನ್ನು ಇಲ್ಲಿಯೇ ಗುರುತಿಸುತ್ತದೆ. ಇದು ಒಂದು ತಂತ್ರಜ್ಞಾನದ ಪ್ಲಾಟ್&zwnj;ಫಾರ್ಮ್ ಮಾತ್ರವಲ್ಲ, ಬದಲಿಗೆ ಸುಲಭ ಲಭ್ಯತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಆಡಳಿತದ ಕೇಂದ್ರ ಬಿಂದುವನ್ನಾಗಿ ಮಾಡುವ ಮೂಲಕ ಗ್ರಾಹಕ ವಿವಾದಗಳ ಪರಿಹಾರ ವ್ಯವಸ್ಥೆಯನ್ನು ಮರುರೂಪಿಸಿದ ಕಥೆಯಾಗಿದೆ.&lt;/p&gt;&lt;h3&gt;ನ್ಯಾಯ ಪಡೆಯಲು ಅನುವು:&lt;/h3&gt;&lt;p&gt;ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ಉದಯೋನ್ಮುಖ ಮಾರುಕಟ್ಟೆಯ ವಾಸ್ತವಗಳಿಗೆ ಸ್ಪಂದಿಸುವ ಸಾಮರ್ಥ್ಯವಿರುವ ಆಧುನಿಕ ವ್ಯವಸ್ಥೆಯನ್ನು ರೂಪಿಸಿತು. ಆದಾಗ್ಯೂ, ಕಾನೂನಿನ ಆಶಯವನ್ನು ದಕ್ಷ ಸಾರ್ವಜನಿಕ ಸೇವೆಯಾಗಿ ಪರಿವರ್ತಿಸಲು ಪರಸ್ಪರ ಸಂಪರ್ಕವಿಲ್ಲದ ಹಳೆಯ ವ್ಯವಸ್ಥೆಗಳ ಬದಲಿಗೆ ಏಕೀಕೃತ ಡಿಜಿಟಲ್ ವ್ಯವಸ್ಥೆಯನ್ನು ತರುವುದು ಅಗತ್ಯವಾಗಿತ್ತು. ಹಿಂದಿನ ಪ್ಲಾಟ್&zwnj;ಫಾರ್ಮ್&zwnj;ಗಳು ಅಸಮಂಜಸವಾದ ಕೆಲಸದ ಹರಿವು, ಹಳೆಯ ತಂತ್ರಜ್ಞಾನ, ಸೀಮಿತ ಪರಸ್ಪರ ಕಾರ್ಯಸಾಧ್ಯತೆ ಮತ್ತು ಮ್ಯಾನುಯಲ್ ಪ್ರಕ್ರಿಯೆಗಳ ಮೇಲಿನ ಅತಿಯಾದ ಅವಲಂಬನೆಯಿಂದ ಬಳಲುತ್ತಿದ್ದವು. ಅನೇಕ ಗ್ರಾಹಕರಿಗೆ-ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು, ಹಿರಿಯ ನಾಗರಿಕರು, ವಿಕಲಚೇತನರು ಮತ್ತು ಅನಿವಾಸಿ ಭಾರತೀಯರಿಗೆ - ನ್ಯಾಯವನ್ನು ಪಡೆಯಲು ತಗಲುವ ವೆಚ್ಚವೇ ಒಂದು ದೊಡ್ಡ ತಡೆಯಾಗಿ ಪರಿಣಮಿಸುತ್ತಿತ್ತು. ಇ-ಜಾಗೃತಿಯು ಗ್ರಾಹಕ ದೂರಿನ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣ ಮಾಡುವ ಮೂಲಕ ಈ ರಚನಾತ್ಮಕ ಸವಾಲುಗಳನ್ನು ಪರಿಹರಿಸುತ್ತದೆ. ಒಟಿಪಿ ಆಧಾರಿತ ನೋಂದಣಿ ಮತ್ತು ಆನ್&zwnj;ಲೈನ್ ಸಲ್ಲಿಕೆಯಿಂದ ಹಿಡಿದು ಡಿಜಿಟಲ್ ಪರಿಶೀಲನೆ, ಎಲೆಕ್ಟ್ರಾನಿಕ್ ಪಾವತಿಗಳು, ವರ್ಚುವಲ್ ವಿಚಾರಣೆಗಳು, ಬಹುಭಾಷಾ ಆದೇಶಗಳು ಮತ್ತು ನೈಜ-ಸಮಯದ ಪ್ರಕರಣಗಳ ಟ್ರ್ಯಾಕಿಂಗ್&zwnj;ವರೆಗೆ, ಈ ಪ್ಲಾಟ್&zwnj;ಫಾರ್ಮ್ ನಾಗರಿಕರು ಭೌಗೋಳಿಕ ದೂರ ಅಥವಾ ಕಾರ್ಯವಿಧಾನದ ಸಂಕೀರ್ಣತೆಗಳ ಮಿತಿಯಿಲ್ಲದೆ ನ್ಯಾಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.&lt;/p&gt;&lt;h3&gt;ಆರ್ಥಿಕ, ಪ್ರಯಾಣದ ವೆಚ್ಚ ಕಡಿಮೆ:&lt;/h3&gt;&lt;p&gt;ಇಂತಹ ಬದಲಾವಣೆಯ ಮಹತ್ವವು ಕೇವಲ ಅನುಕೂಲಕ್ಕಷ್ಟೇ ಸೀಮಿತವಾಗಿಲ್ಲ. ಇದು ನಾಗರಿಕರು ಮತ್ತು ಸಾರ್ವಜನಿಕ ಸಂಸ್ಥೆಗಳ ನಡುವಿನ ಸಂಬಂಧವನ್ನು ಮೂಲಭೂತವಾಗಿ ಬದಲಾಯಿಸುತ್ತದೆ. ಡಿಜಿಟಲ್ ಕೆಲಸದ ಹರಿವು ಕಾಗದದ ಕೆಲಸವನ್ನು ಕಡಿಮೆ ಮಾಡುತ್ತದೆ. ಎಲ್ಲಾ ನ್ಯಾಯವ್ಯಾಪ್ತಿಗಳಲ್ಲಿ ಪ್ರಕ್ರಿಯೆಗಳನ್ನು ಒಂದೇ ರೂಪಕ್ಕೆ ತರುತ್ತದೆ, ಅನಗತ್ಯ ವಿಳಂಬಗಳನ್ನು ಕಡಿಮೆ ಮಾಡುತ್ತದೆ ಮತ್ತು ಪಾರದರ್ಶಕತೆಯನ್ನು ಸುಧಾರಿಸುತ್ತದೆ. ಸ್ವಯಂಚಾಲಿತ ವಿಚಾರಣಾ ಪಟ್ಟಿಗಳು, ಆನ್&zwnj;ಲೈನ್ ಡ್ಯಾಶ್&zwnj;ಬೋರ್ಡ್&zwnj;ಗಳು ಮತ್ತು ತಕ್ಷಣದ ನೋಟಿಫಿಕೇಶನ್&zwnj;ಗಳು ದಾವೆದಾರರಿಗೆ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯ ವೇಳೆಯಲ್ಲಿ ಮಾಹಿತಿ ಸಿಗುವಂತೆ ನೋಡಿಕೊಳ್ಳುತ್ತವೆ. ಇದು ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತದೆ. ಸಮಾಜದ ಎಲ್ಲಾ ವರ್ಗದ ಜನರಿಗೂ ನ್ಯಾಯ ಸಿಗುವಂತೆ ಮಾಡಲು, ಈ ಪ್ಲಾಟ್&zwnj;ಫಾರ್ಮ್ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಆಧಾರಿತ ಪ್ರಕರಣ ವಿಶ್ಲೇಷಣೆ, ಧ್ವನಿಯಿಂದ ಪಠ್ಯಕ್ಕೆ ಬದಲಾಯಿಸುವ ಸೌಲಭ್ಯ, ಪಠ್ಯದಿಂದ ಧ್ವನಿಗೆ ಬದಲಾಯಿಸುವ ಸೌಲಭ್ಯ, ಬಹುಭಾಷಾ ಇಂಟರ್&zwnj;ಫೇಸ್&zwnj;, ಸುಧಾರಿತ ಸಂಶೋಧನಾ ಆಯ್ಕೆಗಳು ಮತ್ತು ಸುಲಭ ಲಭ್ಯತೆಯ ಪರಿಕರಗಳು ಸಮಾಜದ ವಿವಿಧ ವರ್ಗಗಳ ಜನರು ಇದರಲ್ಲಿ ವ್ಯಾಪಕವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತವೆ. ಅಷ್ಟೇ ಪ್ರಮುಖವಾಗಿ, ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಮತ್ತು ರಾಜ್ಯ ಗ್ರಾಹಕ ಆಯೋಗಗಳಾದ್ಯಂತ ಹೈಬ್ರಿಡ್ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ, ಇದು ವರ್ಚುವಲ್ ವಿಚಾರಣೆಗಳನ್ನು ಗ್ರಾಹಕ ನ್ಯಾಯ ವಿತರಣೆಯ ಅತ್ಯಗತ್ಯ ಭಾಗವಾಗಿಸಿದೆ. ದೂರದ ಜಿಲ್ಲೆಗಳಲ್ಲಿ ಅಥವಾ ವಿದೇಶಗಳಲ್ಲಿ ವಾಸಿಸುವ ನಾಗರಿಕರಿಗೆ, ಇದು ಮೊಕದ್ದಮೆಗಳ ಆರ್ಥಿಕ ಮತ್ತು ಪ್ರಯಾಣದ ವೆಚ್ಚಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ.&lt;/p&gt;&lt;h3&gt;ಸಂಸ್ಥೆಗಳ ಸ್ಪಂದನೆ ಅಗತ್ಯ:&amp;nbsp;&lt;/h3&gt;&lt;p&gt;ಆದರೂ, ಈ ಪ್ರಮಾಣದ ತಾಂತ್ರಿಕ ಬದಲಾವಣೆಯು ಸವಾಲುಗಳಿಲ್ಲದೆ ಬರುವುದಿಲ್ಲ. ಡಿಜಿಟಲ್ ಸುಧಾರಣೆಗಳು, ಸಂಸ್ಥೆಗಳು ತಮ್ಮ ಹಳೆಯ ಅಭ್ಯಾಸಗಳನ್ನು ಮರುಪರಿಶೀಲಿಸುವಂತೆ ಕೇಳುತ್ತವೆ ಮತ್ತು ಬಳಕೆದಾರರನ್ನು ಹೊಸ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ. ಇ-ಜಾಗೃತಿಯ ಅನುಷ್ಠಾನದ ಸಮಯದಲ್ಲಿ, ದತ್ತಾಂಶ ಮಾರ್ಪಾಡು, ಪಾವತಿ ಗೇಟ್&zwnj;ವೇ ಸಂಯೋಜನೆ, ಇಂಟರ್&zwnj;ಫೇಸ್ ಬಳಕೆ ಮತ್ತು ದೀರ್ಘಕಾಲದ ಮ್ಯಾನುಯಲ್ ಪ್ರಕ್ರಿಯೆಗಳಿಂದ ಬದಲಾಗುವ ಬಗ್ಗೆ ಆತಂಕಗಳು ಉದ್ಭವಿಸಿದವು. ಕಾನೂನು ವಲಯದ ಕೆಲವು ವಿಭಾಗಗಳು ಮತ್ತು ಇತರ ಪಾಲುದಾರರು ಹೊಸ ಡಿಜಿಟಲ್ ಪರಿಸರಕ್ಕೆ ಹೊಂದಿಕೊಳ್ಳುವಾಗ ಕೆಲವು ಹಿಂಜರಿಕೆಗಳನ್ನು ವ್ಯಕ್ತಪಡಿಸಿದರು. ಈ ಕಳವಳಗಳನ್ನು ಅಡೆತಡೆಗಳು ಎಂದು ನೋಡುವ ಬದಲಿಗೆ, ಅನುಷ್ಠಾನ ಪ್ರಕ್ರಿಯೆಯಲ್ಲಿ ಅವುಗಳನ್ನು ನಿರಂತರ ಸುಧಾರಣೆಗೆ ಸಿಕ್ಕ ಅವಕಾಶಗಳಾಗಿ ಪರಿಗಣಿಸಲಾಯಿತು. ಗ್ರಾಹಕ ಆಯೋಗಗಳು, ಕಾನೂನು ತಜ್ಞರು, ತಾಂತ್ರಿಕ ಪರಿಣತರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವ ಮೂಲಕ ಪ್ಲಾಟ್&zwnj;ಫಾರ್ಮ್ ಅನ್ನು ಇನ್ನಷ್ಟು ಉತ್ತಮಗೊಳಿಸಲಾಯಿತು. ನಿಯಮಿತ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು, ಪ್ರಾದೇಶಿಕ ಕಾರ್ಯಾಗಾರಗಳು, ವರ್ಚುವಲ್ ತರಬೇತಿಗಳು, ವಾರಕ್ಕೊಮ್ಮೆ ನಡೆಯುವ ಕುಂದುಕೊರತೆ ನಿವಾರಣಾ ಸಂವಾದಗಳು ಮತ್ತು ನಿರಂತರ ತಾಂತ್ರಿಕ ಬೆಂಬಲವು ಪಾಲುದಾರರು ಹೊಸ ವ್ಯವಸ್ಥೆಯಲ್ಲಿ ಕ್ರಮೇಣ ವಿಶ್ವಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು. ಈ ಅನುಭವವು ಒಂದು ಪ್ರಮುಖ ಪಾಠವನ್ನು ಗಟ್ಟಿಗೊಳಿಸಿತು. ಡಿಜಿಟಲ್ ಬದಲಾವಣೆಯು ಕೇವಲ ತಂತ್ರಜ್ಞಾನವನ್ನು ತಂದ ತಕ್ಷಣ ಯಶಸ್ವಿಯಾಗುವುದಿಲ್ಲ, ಬದಲಿಗೆ ಸಂಸ್ಥೆಗಳು ಬಳಕೆದಾರರ ಪ್ರತಿಕ್ರಿಯೆಗಳಿಗೆ ಸ್ಪಂದಿಸಿದಾಗ ಮತ್ತು ನಿರಂತರ ಸುಧಾರಣೆಗೆ ಬದ್ಧವಾಗಿದ್ದಾಗ ಮಾತ್ರ ಯಶಸ್ವಿಯಾಗುತ್ತದೆ.&lt;/p&gt;&lt;p&gt;ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ, ಇ-ಜಾಗೃತಿಯು ಲಕ್ಷಾಂತರ ಗ್ರಾಹಕರನ್ನು ಒಂದೇ ಡಿಜಿಟಲ್ ವೇದಿಕೆಗೆ ತಂದಿದೆ. 2 ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಸಲ್ಲಿಕೆಯನ್ನು ಸುಗಮಗೊಳಿಸಿದೆ, ಹೆಚ್ಚಿನ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥಪಡಿಸಿದೆ ಮತ್ತು 60ಕ್ಕೂ ಹೆಚ್ಚು ದೇಶಗಳ ಗ್ರಾಹಕರು ಭಾರತದ ಗ್ರಾಹಕ ವಿವಾದ ನಿವಾರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಒಂದೇ ಮಾದರಿಯ ಡಿಜಿಟಲ್ ಕೆಲಸದ ಹರಿವು ದಕ್ಷತೆಯನ್ನು ಸುಧಾರಿಸಿದೆ ಮತ್ತು ಹಿಂದೆ ವ್ಯವಸ್ಥೆಯಲ್ಲಿದ್ದ ಕಾರ್ಯವಿಧಾನದ ಅಡೆತಡೆಗಳನ್ನು ಕಡಿಮೆ ಮಾಡಿದೆ. ಆದ್ದರಿಂದ, ಇ-ಆಡಳಿತದ ರಾಷ್ಟ್ರೀಯ ಪ್ರಶಸ್ತಿಗಳು 2026ರಲ್ಲಿ \B&lsquo;ರಜತ ಪ್ರಶಸ್ತಿ''ಯ\B ಮೂಲಕ ಸಿಕ್ಕ ಮನ್ನಣೆಯು ಕೇವಲ ಒಂದು ಸಾಂಸ್ಥಿಕ ಸಾಧನೆಯಾಗಿ ಮಾತ್ರವಲ್ಲದೆ, ಸರ್ಕಾರದ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮರುರೂಪಿಸಿರುವುದಕ್ಕೆ ಸಿಕ್ಕ ಗೌರವವಾಗಿದೆ. ಅರ್ಥಪೂರ್ಣ ಡಿಜಿಟಲ್ ಆಡಳಿತ ಎಂದರೆ ಇರುವ ಪ್ರಕ್ರಿಯೆಗಳನ್ನು ಕಂಪ್ಯೂಟರೀಕರಣ ಮಾಡುವುದಲ್ಲ, ಬದಲಿಗೆ ಅವುಗಳನ್ನು ಸರಳ, ವೇಗ ಮತ್ತು ನಾಗರಿಕ-ಕೇಂದ್ರಿತವಾಗಿರುವಂತೆ ಮರುರೂಪಿಸುವುದು ಎಂಬುದನ್ನು ಈ ಪ್ರಶಸ್ತಿಯು ಗುರುತಿಸುತ್ತದೆ.&lt;/p&gt;&lt;p&gt;&lt;strong&gt;ಪಾರದರ್ಶಕತೆ, ದಕ್ಷತೆಗೆ ಆದ್ಯತೆ ಬೇಕು:&lt;/strong&gt;&lt;/p&gt;&lt;p&gt;ತಂತ್ರಜ್ಞಾನದ ಹಿಂದೆ ಬಲವಾದ ಸಾಂಸ್ಥಿಕ ಬದ್ಧತೆ ಇದ್ದಾಗ ಅದು ಸಾರ್ವಜನಿಕ ಸೇವಾ ವಿತರಣೆಯನ್ನು ಬದಲಾಯಿಸಬಲ್ಲದು ಎಂಬುದನ್ನು ಭಾರತದ ವಿಶಾಲವಾದ ಡಿಜಿಟಲ್ ಇಂಡಿಯಾ ಪಯಣವು ತೋರಿಸಿಕೊಟ್ಟಿದೆ. ಆಧಾರ್ ಸಂಖ್ಯೆ ಮತ್ತು ನೇರ ನಗದು ವರ್ಗಾವಣೆಯಿಂದ ಹಿಡಿದು ಆನ್&zwnj;ಲೈನ್ ತೆರಿಗೆ ಮತ್ತು ಆರೋಗ್ಯ ರಕ್ಷಣಾ ಪ್ಲಾಟ್&zwnj;ಫಾರ್ಮ್&zwnj;ಗಳವರೆಗೆ, ದೇಶವು ಆಡಳಿತದಲ್ಲಿ ತಂತ್ರಜ್ಞಾನದ ಪಾತ್ರವನ್ನು ಸ್ಥಿರವಾಗಿ ವಿಸ್ತರಿಸಿದೆ. ಗ್ರಾಹಕ ನ್ಯಾಯವು ಈಗ ರಚನಾತ್ಮಕ ಡಿಜಿಟಲ್ ಸುಧಾರಣೆಗೆ ಒಳಗಾಗುತ್ತಿರುವ ವಲಯಗಳ ಬೆಳೆಯುತ್ತಿರುವ ಪಟ್ಟಿಗೆ ಸೇರಿದೆ. ಇ-ಜಾಗೃತಿಯ ಯಶಸ್ಸು ಭವಿಷ್ಯದ ಆಡಳಿತ ಸುಧಾರಣೆಗಳಿಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಡಿಜಿಟಲ್ ಪ್ಲಾಟ್&zwnj;ಫಾರ್ಮ್&zwnj;ಗಳನ್ನು ಸಂಸ್ಥೆಗಳ ಬದಲಿಗೆ ನಾಗರಿಕರನ್ನು ಕೇಂದ್ರವಾಗಿಟ್ಟುಕೊಂಡು ವಿನ್ಯಾಸಗೊಳಿಸಬೇಕು. ಸುಲಭ ಲಭ್ಯತೆಯನ್ನು ಕೇವಲ ಕೊನೆಯ ಆಯ್ಕೆಯಾಗಿ ನೋಡದೆ ಒಂದು ಪ್ರಮುಖ ತತ್ವವಾಗಿ ಪರಿಗಣಿಸಬೇಕು. ಕೃತಕ ಬುದ್ಧಿಮತ್ತೆಯು ನ್ಯಾಯಸಮ್ಮತೆಗೆ ಧಕ್ಕೆ ತರದೇ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ತಂತ್ರಜ್ಞಾನವು ಹೊಸ ಸಂಕೀರ್ಣತೆಗಳನ್ನು ಸೃಷ್ಟಿಸುವ ಬದಲು ನ್ಯಾಯವನ್ನು ಸರಳಗೊಳಿಸಬೇಕು.&lt;/p&gt;&lt;p&gt;&lt;strong&gt;&lsquo;ಗ್ರಾಹಕ ದೇವೋ ಭವ&rsquo; ಆಶಯ:&lt;/strong&gt;&lt;/p&gt;&lt;p&gt;ಭಾರತದ ಡಿಜಿಟಲ್ ಆರ್ಥಿಕತೆಯು ವಿಸ್ತರಿಸುತ್ತಾ ಹೋದಂತೆ, ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆಗಳ ವಿಶ್ವಾಸಾರ್ಹತೆಯ ಮೇಲೆಯೇ ಗ್ರಾಹಕರ ನಂಬಿಕೆ ಹೆಚ್ಚು ಅವಲಂಬಿತವಾಗಿರುತ್ತದೆ. ದಕ್ಷ ವಿವಾದ ಪರಿಹಾರವು ಇನ್ನು ಮುಂದೆ ಕೇವಲ ಆಡಳಿತಾತ್ಮಕ ಉದ್ದೇಶವಾಗಿ ಉಳಿದಿಲ್ಲ. ಇದು ಮಾರುಕಟ್ಟೆಗಳಲ್ಲಿ ನಂಬಿಕೆಯನ್ನು ಬಲಪಡಿಸುವ ಮತ್ತು ಜವಾಬ್ದಾರಿಯುತ ವ್ಯಾಪಾರ ಪದ್ಧತಿಗಳನ್ನು ಪ್ರೋತ್ಸಾಹಿಸುವ ಒಂದು ಆರ್ಥಿಕ ಅಗತ್ಯತೆಯಾಗಿದೆ. ಡಿಜಿಟಲ್ ಬದಲಾವಣೆಯು ಕಾನೂನಿನ ಆಶಯ ಮತ್ತು ನಾಗರಿಕರ ಅನುಭವದ ನಡುವಿನ ಅಂತರವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ಇ-ಜಾಗೃತಿ ತೋರಿಸಿಕೊಡುತ್ತದೆ. ಗ್ರಾಹಕ ನ್ಯಾಯವನ್ನು ವೇಗವಾಗಿ, ಹೆಚ್ಚು ಪಾರದರ್ಶಕವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಮೂಲಕ, ಇದು ಒಂದು ಸರಳ ಮಾದರಿಯಾಗಿದ್ದು, ಶಕ್ತಿಯುತ ತತ್ವವಾಗಿದೆ. ಡಿಜಿಟಲ್ ಪ್ರಜಾಪ್ರಭುತ್ವದಲ್ಲಿ ನ್ಯಾಯದ ಲಭ್ಯತೆಯು ಸೇವೆಗಳ ಲಭ್ಯತೆಯಷ್ಟೇ ಸುಲಭವಾಗಿರಬೇಕು. 21ನೇ ಶತಮಾನದಲ್ಲಿ &lsquo;ಗ್ರಾಹಕ ದೇವೋ ಭವ&rsquo;ಎಂಬ ಆಶಯಕ್ಕೆ ಇದು ಅತ್ಯಂತ ಅರ್ಥಪೂರ್ಣ ರೂಪವಾಗಿದೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/e-jagriti-s-for-consumer-justice-in-digital-india-pralhad-joshi-rav/articleshow-ns8dmtx"/>
        </item>
        <item>
            <title><![CDATA[ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5  ಕಾರಣಗಳು]]></title>
            <link>https://kannada.asianetnews.com/gallery/cricket-sports/india-vs-england-second-t20-match-report-and-five-reason-why-india-lost-gkn-phwc90z</link>
            <guid isPermaLink="true">https://kannada.asianetnews.com/gallery/cricket-sports/india-vs-england-second-t20-match-report-and-five-reason-why-india-lost-gkn-phwc90z</guid>
            <pubDate>Sun, 05 Jul 2026 09:30:59 +0530</pubDate>
            <description><![CDATA[ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 190 ರನ್ ಗಳಿಸಿಯೂ ಭಾರತ ಸೋಲು ಕಂಡಿದೆ. ರವಿ ಬಿಷ್ಣೋಯ್ ಅವರ ದುಬಾರಿ ಓವರ್, ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್, ಮತ್ತು ಅರ್ಶ್‌ದೀಪ್ ಸಿಂಗ್ ಅವರ ಗಾಯದಂತಹ ಪ್ರಮುಖ ಕಾರಣಗಳಿಂದ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.]]></description>
            <media:content url="https://static.asianetnews.com/images/w-1280,h-720,format-jpg,imgid-01kwr6c6ys491nj096p7f3qmzx,imgname-shreyas-iyer-1783223426009.jpg" type="image/jpeg" height="390" width="690"/>
            <content:encoded><![CDATA[ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 190 ರನ್ ಗಳಿಸಿಯೂ ಭಾರತ ಸೋಲು ಕಂಡಿದೆ. ರವಿ ಬಿಷ್ಣೋಯ್ ಅವರ ದುಬಾರಿ ಓವರ್, ಜೇಕಬ್ ಬೆಥೆಲ್ ಅವರ ಸ್ಫೋಟಕ ಬ್ಯಾಟಿಂಗ್, ಮತ್ತು ಅರ್ಶ್&zwnj;ದೀಪ್ ಸಿಂಗ್ ಅವರ ಗಾಯದಂತಹ ಪ್ರಮುಖ ಕಾರಣಗಳಿಂದ ತಂಡ ಗೆಲುವಿನ ಹೊಸ್ತಿಲಲ್ಲಿ ಎಡವಿತು.&lt;img&gt;&lt;p&gt;ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಹೊಸ್ತಿಲಲ್ಲಿ ಎಡವಿದೆ. ಮೊದಲು ಬ್ಯಾಟಿಂಗ್ ಮಾಡಿ 190 ರನ್&zwnj;ಗಳ ಬೃಹತ್ ಮೊತ್ತ ಪೇರಿಸಿದ್ದರೂ ಬೌಲಿಂಗ್&zwnj;ನಲ್ಲಿ ಹಿಡಿತ ಕಳೆದುಕೊಂಡ ಭಾರತ 4 ವಿಕೆಟ್&zwnj;ಗಳ ಸೋಲು ಕಂಡಿದೆ. ಈ ಸೋಲು ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಜೋಡಿಗೆ ಭಾರೀ ಮುಖಭಂಗ ತಂದಿದೆ. ಪಂದ್ಯ ಕೈಜಾರಲು ಕಾರಣವಾದ ಆ 5 ಪ್ರಮುಖ ಅಂಶಗಳು ಇಲ್ಲಿವೆ.&lt;/p&gt;&lt;img&gt;&lt;p&gt;ಪಂದ್ಯದ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಎಂದರೆ ಅದು ರವಿ ಬಿಷ್ಣೋಯ್ ಎಸೆದ 17ನೇ ಓವರ್. ಕೊನೆಯ 28 ಎಸೆತಗಳಲ್ಲಿ ಇಂಗ್ಲೆಂಡ್&zwnj;ಗೆ 58 ರನ್ ಬೇಕಿತ್ತು, ಭಾರತದ ಕೈ ಮೇಲಿತ್ತು. ಈ ಓವರ್&zwnj;ನಲ್ಲಿ ಬಿಷ್ಣೋಯ್ ಬರೊಬ್ಬರಿ 29 ರನ್ ಬಿಟ್ಟುಕೊಟ್ಟರು. ಜೇಕಬ್ ಬೆಥೆಲ್ ಸತತ ಮೂರು ಸಿಕ್ಸರ್ ಸಿಡಿಸಿದರು. ಜೊತೆಗೆ ಎರಡು ನೋ-ಬಾಲ್&zwnj;ಗಳು ಮತ್ತು ಫ್ರೀ-ಹಿಟ್&zwnj;ಗಳು ಇಂಗ್ಲೆಂಡ್ ಪಾಲಿಗೆ ವರದಾನವಾಗಿ ಪಂದ್ಯದ ದಿಕ್ಕನ್ನೇ ಬದಲಿಸಿದವು.&lt;/p&gt;&lt;img&gt;&lt;p&gt;ಇಂಗ್ಲೆಂಡ್ ಗೆಲುವಿನ ರೂವಾರಿ ಜೇಕಬ್ ಬೆಥೆಲ್. ಕೇವಲ 46 ಎಸೆತಗಳಲ್ಲಿ ಅಜೇಯ 76 ರನ್ ಸಿಡಿಸಿದ ಬೆಥೆಲ್, ಭಾರತದ ಬೌಲರ್&zwnj;ಗಳನ್ನು ಮನಬಂದಂತೆ ಕಾಡಿದರು. ಆರಂಭದಲ್ಲಿ ತಾಳ್ಮೆಯಿಂದ ಆಡಿದ ಇವರು, ಸರಿಯಾದ ಸಮಯದಲ್ಲಿ ಗೇರ್ ಬದಲಿಸಿ ಭಾರತದ ಸ್ಪಿನ್ನರ್&zwnj;ಗಳ ಮೇಲೆರಗಿ ಗೆಲುವು ಸುಲಭವಾಗಿಸಿದರು.&lt;/p&gt;&lt;img&gt;&lt;p&gt;ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಭಾರತಕ್ಕೆ ಸ್ಫೋಟಕ ಆರಂಭ ನೀಡಿದ್ದರು. ಇಶಾನ್ 49 ರನ್ ಬಾರಿಸಿ ಭದ್ರ ಅಡಿಪಾಯ ಹಾಕಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ ಮತ್ತು ಲಿಯಾಮ್ ಡಾಸನ್ ದಾಳಿಗೆ ಸಿಲುಕಿದ ಭಾರತ ರನ್ ಗಳಿಸಲು ಪರದಾಡಿತು. 200ಕ್ಕೂ ಹೆಚ್ಚು ರನ್ ಗಳಿಸಬೇಕಿದ್ದ ಭಾರತ 190ಕ್ಕೆ ಸುಸ್ತಾಗಿದ್ದು ಸೋಲಿಗೆ ಒಂದು ಕಾರಣವಾಯಿತು.&lt;/p&gt;&lt;img&gt;&lt;p&gt;ಮೊದಲ ಓವರ್&zwnj;ನಲ್ಲೇ ಅರ್ಶ್&zwnj;ದೀಪ್ ಸಿಂಗ್ ಅವರು ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಇಂಗ್ಲೆಂಡ್ 0/2 ಸ್ಥಿತಿಯಲ್ಲಿದ್ದಾಗ ಕ್ರೀಸ್&zwnj;ಗೆ ಬಂದ ನಾಯಕ ಹ್ಯಾರಿ ಬ್ರೂಕ್ ಹಠಾತ್ ದಾಳಿ ನಡೆಸಿದರು. ಕೇವಲ 15 ಎಸೆತಗಳಲ್ಲಿ 39 ರನ್ ಚಚ್ಚಿದ ಬ್ರೂಕ್, ರನ್ ರೇಟ್ ಕುಸಿಯದಂತೆ ನೋಡಿಕೊಂಡರು. ಇದು ಬೆಥೆಲ್ ಅವರಿಗೆ ಒತ್ತಡವಿಲ್ಲದೆ ಆಡಲು ನೆರವಾಯಿತು.&lt;/p&gt;&lt;img&gt;&lt;p&gt;ಭಾರತದ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಅರ್ಶ್&zwnj;ದೀಪ್ (3/40) ಫೀಲ್ಡಿಂಗ್ ಮಾಡುವಾಗ ಭುಜದ ಗಾಯಕ್ಕೆ ತುತ್ತಾದರು. ಇದರಿಂದಾಗಿ ಪಂದ್ಯದ ನಿರ್ಣಾಯಕ ಹಂತದಲ್ಲಿ (ಡೆತ್ ಓವರ್&zwnj;ಗಳಲ್ಲಿ) ಭಾರತಕ್ಕೆ ಅವರ ಸೇವೆಯನ್ನು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಖ್ಯ ವೇಗಿಯ ಅನುಪಸ್ಥಿತಿ ಭಾರತದ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿತು.&lt;/p&gt;&lt;p&gt;ಒಟ್ಟಿನಲ್ಲಿ, ಕೈಯಲ್ಲಿದ್ದ ಪಂದ್ಯವನ್ನು ಭಾರತ ಕೈಚೆಲ್ಲುವ ಮೂಲಕ ಸರಣಿಯಲ್ಲಿ 1-0 ಹಿನ್ನಡೆ ಅನುಭವಿಸಿದೆ. ಮುಂದಿನ ಪಂದ್ಯದಲ್ಲಾದರೂ ಅಯ್ಯರ್ ಮತ್ತು ಗಂಭೀರ್ ಪಡೆ ಪುಟಿದೇಳಲಿದೆಯೇ ಎಂದು ಕಾದು ನೋಡಬೇಕಿದೆ.&lt;/p&gt;]]></content:encoded>
            <category><![CDATA[cricket-sports]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/gallery/cricket-sports/india-vs-england-second-t20-match-report-and-five-reason-why-india-lost-gkn-phwc90z"/>
        </item>
        <item>
            <title><![CDATA[ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್]]></title>
            <link>https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb</link>
            <guid isPermaLink="true">https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb</guid>
            <pubDate>Sun, 05 Jul 2026 09:21:53 +0530</pubDate>
            <description><![CDATA[ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್‌ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .]]></description>
            <media:content url="https://static.asianetnews.com/images/w-1280,h-720,format-jpg,imgid-01kwr63wvq6vz6jt75hzbmh9f7,imgname-ai-1783223153527.jpg" type="image/jpeg" height="390" width="690"/>
            <content:encoded><![CDATA[&lt;p&gt;ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಫೋರ್ಡ್ ಮೋಟಾರ್ ಮತ್ತು ಕಾಮನ್&zwnj;ವೆಲ್ತ್ ಬ್ಯಾಂಕ್ ಆಫ್ ಆಸ್ಟ್ರೇಲಿಯಾ ತಮ್ಮ ಅನುಭವಿ ಸಿಬ್ಬಂದಿಯನ್ನು ವಜಾಗೊಳಿಸಿದ್ದವು. ಆದರೆ, ಗ್ರಾಹಕ ಸೇವೆ ಮತ್ತು ಉತ್ಪನ್ನದ ಗುಣಮಟ್ಟದಲ್ಲಿ ಸಮಸ್ಯೆಗಳು ಎದುರಾಗಿದೆ .&lt;/p&gt;&lt;img&gt;&lt;p&gt;ವಾಷಿಂಗ್ಟನ್&zwnj;: ಕೃತಕ ಬುದ್ಧಿಮತ್ತೆ (ಎಐ)ಯನ್ನು ನಂಬಿ ಆಟೋ ಕಂಪನಿ ಫೋರ್ಡ್&zwnj; ಮೋಟಾರ್&zwnj; ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್&zwnj; ಆದ &lsquo;ಕಾಮನ್&zwnj; ವೆಲ್ತ್&zwnj; ಬ್ಯಾಂಕ್&zwnj; ಆಸ್ಟ್ರೇಲಿಯಾ (ಸಿಬಿಎ) ಕೂಡ ತನ್ನ ಹಳೆಯ ಸಿಬ್ಬಂದಿ ಕಡಿತ ಮಾಡಿ ಪಶ್ಚಾತ್ತಾಪ ಪಡುತ್ತಿದೆ!&lt;/p&gt;&lt;img&gt;&lt;p&gt;2025ರಲ್ಲಿ ಆಸ್ಟ್ರೇಲಿಯಾದ ಅತಿದೊಡ್ಡ ಬ್ಯಾಂಕ್&zwnj; ಆದ ಕಾಮನ್&zwnj;ವೆಲ್ತ್&zwnj; ಬ್ಯಾಂಕ್&zwnj; ಆಫ್&zwnj; ಆಸ್ಟ್ರೇಲಿಯಾ (ಸಿಬಿಎ) ತನ್ನ 45ಕ್ಕೂ ಹೆಚ್ಚು ಗ್ರಾಹಕ ಸೇವಾ ಸಿಬ್ಬಂದಿ ವಜಾ ಮಾಡಿ ಅವರ ಜಾಗಕ್ಕೆ &lsquo;ಎಐ ವಾಯ್ಸ್&zwnj; ಬಾಟ್&zwnj;&rsquo; ಅನ್ನು ನಿಯೋಜಿಸಿತ್ತು. ಆ ಸಂದರ್ಭದಲ್ಲಿ ಎಐ ಮೇಲಿನ ಹೂಡಿಕೆಯು ಗ್ರಾಹಕರಿಗೆ ಅದರಲ್ಲೂ ಮುಖ್ಯವಾಗಿ ಕಾಲ್&zwnj; ಸೆಂಟರ್&zwnj; ಮೂಲಕ ತಕ್ಷಣ ಸಹಾಯಹಸ್ತ ಚಾಚಲು ಹೆಚ್ಚಿನ ಅನುಕೂಲ ಒದಗಿಸಿದೆ ಎಂದು ಬ್ಯಾಂಕ್&zwnj; ಹೇಳಿಕೊಂಡಿತ್ತು.&lt;/p&gt;&lt;img&gt;&lt;p&gt;ಆದರೆ ನಂತರದ ದಿನಗಳಲ್ಲಿ ಗ್ರಾಹಕರ ಕರೆಯನ್ನು ಎಐ ಟೂಲ್ಸ್&zwnj;ಗಳು ಸರಿಯಾಗಿ ನಿರ್ವಹಿಸದ ಕಾರಣ ಬ್ಯಾಂಕ್&zwnj; ಸಮಸ್ಯೆ ಎದುರಿಸುತ್ತಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ ವಜಾ ಮಾಡಿದ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಬ್ಯಾಂಕ್&zwnj; ಮುಂದಾಗಿದೆ.&lt;/p&gt;&lt;img&gt;&lt;p&gt;ಕೆಲ ದಿನಗಳ ಹಿಂದೆ ಅಮೆರಿಕದ ಫೋರ್ಡ್&zwnj; ಮೋಟಾರ್&zwnj; ಕಂಪನಿಯು, ಗುಣಮಟ್ಟ ಪರಿಶೀಲಿಸುವ ನೂರಾರು ಅನುಭವಿ ಎಂಜಿನಿಯರ್&zwnj;ಗಳನ್ನು ವಜಾ ಮಾಡಿ ಅವರ ಜಾಗಕ್ಕೆ ಎಐ ಟೂಲ್&zwnj;ಗಳನ್ನು ಅಳವಡಿಸಿಕೊಂಡಿತ್ತು. ಆ ಬಳಿಕ ಗುಣಮಟ್ಟದ ಕುರಿತು ವ್ಯಾಪಕ ಆರೋಪಗಳು ಕೇಳಿಬಂದಾಗ ಇದೀಗ ಮತ್ತೆ ನೂರಾರು ಎಂಜಿನಿಯರ್&zwnj;ಗಳನ್ನು ಮರು ನೇಮಕ ಮಾಡಿಕೊಳ್ಳಲು ಆರಂಭಿಸಿದೆ. ಇದೀಗ ಕಂಪನಿಯ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[world-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/world-news/artificial-intelligence-risks-after-ford-aussie-bank-regrets-firing-staff-for-trusting-ai-mrq-x8ouubb"/>
        </item>
        <item>
            <title><![CDATA[ಜುಲೈ 6 ರಿಂದ 12 ಧನ ಯೋಗ ಮತ್ತು ಗೌರಿ ಯೋಗ, 5 ರಾಶಿಗೆ ಜುಲೈ ಮೊದಲ ವಾರ ಆರ್ಥಿಕ ಲಾಭ]]></title>
            <link>https://kannada.asianetnews.com/gallery/weekly-horoscope/weekly-lucky-zodiac-sign-6-to-12-july-2026-dhan-yog-and-gauri-yog-auspicious-for-5-zodiac-signs-suh-fk0elrz</link>
            <guid isPermaLink="true">https://kannada.asianetnews.com/gallery/weekly-horoscope/weekly-lucky-zodiac-sign-6-to-12-july-2026-dhan-yog-and-gauri-yog-auspicious-for-5-zodiac-signs-suh-fk0elrz</guid>
            <pubDate>Sun, 05 Jul 2026 09:20:19 +0530</pubDate>
            <description><![CDATA[Weekly Lucky Zodiac Sign 6 To 12 July 2026 ಜುಲೈ ಮೊದಲ ವಾರದಲ್ಲಿ ಧನ ಯೋಗ ಮತ್ತು ಗೌರಿ ಯೋಗದ ಸಂಯೋಜನೆ ರೂಪುಗೊಳ್ಳುತ್ತಿದೆ. ವಾಸ್ತವವಾಗಿ, ಈ ವಾರ ಚಂದ್ರ ಮತ್ತು ಮಂಗಳನ ಸಂಯೋಗವು ವೃಷಭ ರಾಶಿಯಲ್ಲಿ ರೂಪುಗೊಳ್ಳಲಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01jwqvg8cbfxb7wrnae5dttn0g,imgname-this-week-s-lucky-horoscope-02-1748852285835.jpg" type="image/jpeg" height="390" width="690"/>
            <content:encoded><![CDATA[&lt;p&gt;Weekly Lucky Zodiac Sign 6 To 12 July 2026 ಜುಲೈ ಮೊದಲ ವಾರದಲ್ಲಿ ಧನ ಯೋಗ ಮತ್ತು ಗೌರಿ ಯೋಗದ ಸಂಯೋಜನೆ ರೂಪುಗೊಳ್ಳುತ್ತಿದೆ. ವಾಸ್ತವವಾಗಿ, ಈ ವಾರ ಚಂದ್ರ ಮತ್ತು ಮಂಗಳನ ಸಂಯೋಗವು ವೃಷಭ ರಾಶಿಯಲ್ಲಿ ರೂಪುಗೊಳ್ಳಲಿದೆ.&lt;/p&gt;&lt;img&gt;&lt;p&gt;ಮೇಷ ರಾಶಿಯವರಿಗೆ, ಜುಲೈ ಮೊದಲ ವಾರವು ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗಳನ್ನು ತರುವ ನಿರೀಕ್ಷೆಯಿದೆ. ವಾರದ ಆರಂಭದಲ್ಲಿ ನೀವು ಗಮನಾರ್ಹ ಆರ್ಥಿಕ ಲಾಭಗಳನ್ನು ನೋಡಬಹುದು. ಈ ವಾರ, ನಿಮ್ಮ ಸಂವಹನ ಮತ್ತು ಚಾತುರ್ಯದಿಂದ ನೀವು ಎಲ್ಲರನ್ನೂ ಗೆಲ್ಲುತ್ತೀರಿ. ಆದಾಗ್ಯೂ, ಈ ವಾರ ನೀವು ಸ್ವಲ್ಪ ಹೆಚ್ಚು ಖರ್ಚು ಮಾಡಬೇಕಾಗಬಹುದು. ಈ ವಾರ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಅವಕಾಶಗಳನ್ನು ನೀಡುತ್ತದೆ.&lt;/p&gt;&lt;img&gt;&lt;p&gt;ಕರ್ಕಾಟಕ ರಾಶಿಯವರಿಗೆ ಈ ವಾರ ಆರ್ಥಿಕ ಲಾಭವಾಗುವ ಸಾಧ್ಯತೆ ಇದೆ. ಆಸ್ತಿ ಮತ್ತು ಇತರ ಸಂಬಂಧಿತ ವಿಷಯಗಳಿಂದ ನಿಮಗೆ ಲಾಭವಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ, ನೀವು ಜೀವನದಲ್ಲಿ ಕೆಲವು ತೊಂದರೆಗಳನ್ನು ಅನುಭವಿಸಬಹುದು. ಬುಧವಾರದಿಂದ, ವಿಷಯಗಳು ಸುಧಾರಿಸುತ್ತವೆ. ಈ ವಾರ, ನಿಮ್ಮ ಸಾಮರ್ಥ್ಯಕ್ಕೂ ಮೀರಿದ ಆರ್ಥಿಕ ಲಾಭವನ್ನು ನೀವು ಪಡೆಯಬಹುದು.&lt;/p&gt;&lt;img&gt;&lt;p&gt;ಜುಲೈ ಮೊದಲ ವಾರವು ಕನ್ಯಾ ರಾಶಿಯವರಿಗೆ ಅದೃಷ್ಟದಾಯಕವೆಂದು ಸಾಬೀತುಪಡಿಸುತ್ತದೆ. ಈ ವಾರ, ನಿಮ್ಮ ವೃತ್ತಿ ಮತ್ತು ಕುಟುಂಬದ ಪರಿಸ್ಥಿತಿಗಳು ಸುಧಾರಿಸುತ್ತವೆ. ನೀವು ಅನಿರೀಕ್ಷಿತವಾಗಿ ಪ್ರಯಾಣಿಸಬೇಕಾಗಬಹುದು, ಇದು ನಿಮಗೆ ಗಮನಾರ್ಹ ಆರ್ಥಿಕ ಲಾಭವನ್ನು ತರಬಹುದು. ಒಟ್ಟಾರೆಯಾಗಿ, ಈ ವಾರ ನಿಮಗೆ ಆಹ್ಲಾದಕರ ಸಮಯಗಳನ್ನು ತರಲಿದೆ. ಈ ವಾರ ಸಂಪತ್ತಿನ ಬೆಳವಣಿಗೆಗೆ ಶುಭ ಸಂದರ್ಭಗಳು ರೂಪುಗೊಳ್ಳುತ್ತಿವೆ. ಪೂರ್ವಜರ ಆಸ್ತಿಯಿಂದ ನೀವು ಗಮನಾರ್ಹ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.&lt;/p&gt;&lt;img&gt;&lt;p&gt;ಜುಲೈ ಮೊದಲ ವಾರವು ವೃಶ್ಚಿಕ ರಾಶಿಯವರಿಗೆ ಆಹ್ಲಾದಕರ ಅನುಭವಗಳನ್ನು ತರುತ್ತದೆ. ನೀವು ಆರ್ಥಿಕ ಲಾಭವನ್ನು ಅನುಭವಿಸಬಹುದು. ಪಾಲುದಾರಿಕೆಯಲ್ಲಿ ಕೆಲಸ ಮಾಡುವವರಿಗೆ ಈ ಅವಧಿಯು ತುಂಬಾ ಶುಭವೆಂದು ಸಾಬೀತುಪಡಿಸುತ್ತದೆ. ಈ ಅವಧಿಯಲ್ಲಿ ನೀವು ಆರ್ಥಿಕ ಲಾಭವನ್ನು ಅನುಭವಿಸುವ ಸಾಧ್ಯತೆಯಿದೆ. ವಾರದ ಕೊನೆಯಲ್ಲಿ, ನೀವು ಇದ್ದಕ್ಕಿದ್ದಂತೆ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಗಮನಿಸುತ್ತೀರಿ.&lt;/p&gt;&lt;img&gt;&lt;p&gt;ಜುಲೈ ಮೊದಲ ವಾರವು ಮಕರ ರಾಶಿಯವರಿಗೆ ಆದಾಯದ ದೃಷ್ಟಿಯಿಂದ ತುಂಬಾ ಉತ್ತಮವಾಗಿರುತ್ತದೆ. ಈ ವಾರ ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು ಮತ್ತು ನೀವು ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ. ಇದಲ್ಲದೆ, ನಿಮ್ಮ ದಿನಚರಿಯು ಆರ್ಥಿಕ ಲಾಭಕ್ಕಾಗಿ ಅವಕಾಶಗಳನ್ನು ಸೃಷ್ಟಿಸುತ್ತದೆ. ನಿಮ್ಮ ಸಂಗಾತಿಯು ನಿಮಗೆ ಎಲ್ಲ ರೀತಿಯಲ್ಲೂ ಸಹಾಯ ಮಾಡಲು ಸಿದ್ಧರಿರುತ್ತಾರೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಉತ್ತಮ ಲಾಭವನ್ನು ಪಡೆಯಬಹುದು.&lt;/p&gt;]]></content:encoded>
            <category><![CDATA[weekly-horoscope]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/weekly-horoscope/weekly-lucky-zodiac-sign-6-to-12-july-2026-dhan-yog-and-gauri-yog-auspicious-for-5-zodiac-signs-suh-fk0elrz"/>
        </item>
        <item>
            <title><![CDATA[ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯದಲ್ಲಿ ಬೆಂಗಳೂರು ನಂಬರ್ 1: ಖರ್ಚಿನ ಕಥೆಯೇನು?]]></title>
            <link>https://kannada.asianetnews.com/gallery/business/bengaluru-is-number-1-in-highest-annual-family-income-what-s-the-story-on-spending-mrq-gh37vir</link>
            <guid isPermaLink="true">https://kannada.asianetnews.com/gallery/business/bengaluru-is-number-1-in-highest-annual-family-income-what-s-the-story-on-spending-mrq-gh37vir</guid>
            <pubDate>Sun, 05 Jul 2026 09:08:39 +0530</pubDate>
            <description><![CDATA[ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr5ascbq278fekr0xh8qbam,imgname-highest-annual-family-income---1--1783222330763.jpg" type="image/jpeg" height="390" width="690"/>
            <content:encoded><![CDATA[&lt;p&gt;ವರದಿಯೊಂದರ ಪ್ರಕಾರ, ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ವೆಚ್ಚದಲ್ಲಿ ಪ್ರಮುಖ ಆರು ನಗರಗಳು ಶೇ.46ರಷ್ಟು ಪಾಲು ಹೊಂದಿವೆ.&lt;/p&gt;&lt;img&gt;&lt;p&gt;ಅತಿ ಹೆಚ್ಚು ವಾರ್ಷಿಕ ಕೌಟುಂಬಿಕ ಆದಾಯ ಹೊಂದಿರುವ ದೇಶದ ನಗರಗಳ ಪೈಕಿ ಬೆಂಗಳೂರು, ಚಂಡೀಗಢ ಮತ್ತು ದೆಹಲಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ. ಇನ್ನು ಕುಟುಂಬಗಳು ಅತಿ ಹೆಚ್ಚು ವೆಚ್ಚ ಮಾಡುವ ನಗರಗಳ ಪೈಕಿ ಚಂಡೀಗಢ, ತಿರುವನಂತಪುರ, ವಡೋದರಾ ಮೊದಲ ಮೂರು ಸ್ಥಾನದಲ್ಲಿದ್ದರೆ ಬೆಂಗಳೂರು 6ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.&lt;/p&gt;&lt;img&gt;&lt;p&gt;ಪ್ರೈಸ್&zwnj; ಮತ್ತು ಟಾಟಾ ಸನ್ಸ್&zwnj; ವರದಿ ಅನ್ವಯ, 2025-26ರ ಅವಧಿಯಲ್ಲಿ ಬೆಂಗಳೂರಿನ ಜನರ ಸರಾಸರಿ ವಾರ್ಷಿಕ ಕೌಟುಂಬಿಕ ಆದಾಯ ₹28.33 ಲಕ್ಷನಷ್ಟಿತ್ತು. ಇದು ಚಂಡೀಗಢದಲ್ಲಿ ₹28.32 ಲಕ್ಷ, ದೆಹಲಿಯಲ್ಲಿ ₹25.9 ಲಕ್ಷ ಇತ್ತು.&lt;/p&gt;&lt;img&gt;&lt;p&gt;ಇನ್ನು ಕೌಟುಂಬಿಕ ವೆಚ್ಚದಲ್ಲಿ ಸರಾಸರಿ 19.3 ಲಕ್ಷ ರು. ವೆಚ್ಚ ಮಾಡುವ ಚಂಡೀಗಢ, 17.6 ಲಕ್ಷ ರು. ವೆಚ್ಚ ಮಾಡುವ ತಿರುವನಂತಪುರಂ ಮತ್ತು 17.1 ಲಕ್ಷ ರು. ವೆಚ್ಚ ಮಾಡುವ ವಡೋದರಾ ಕ್ರಮವಾಗಿ ಮೊದಲ 3 ಸ್ಥಾನದಲ್ಲಿವೆ. ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರುವ ಬೆಂಗಳೂರಿನ ಕುಟುಂಬಗಳ ಸರಾಸರಿ ವೆಚ್ಚ 15.1 ಲಕ್ಷನಷ್ಟಿದೆ ಎಂದು ವರದಿ ಹೇಳಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ್ರೂ ಭಾರತದಲ್ಲಿಲ್ಲ ಎಂದಿದ್ಯಾಕೆ ಪುರಿ&lt;/strong&gt;&lt;strong&gt;?&lt;/strong&gt;&lt;/p&gt;&lt;img&gt;&lt;p&gt;ಇನ್ನು ದೇಶದ ಒಟ್ಟು ವೆಚ್ಚದ ಪೈಕಿ ಶೇ.46ರಷ್ಟನ್ನು ಪ್ರಮುಖ 6 ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಚೆನ್ನೈ ಮತ್ತು ಹೈದರಾಬಾದ್&zwnj; ಮಾಡಲಾಗುತ್ತದೆ. ವಾರ್ಷಿಕ 6 ಲಕ್ಷ ರು.ನಿಂದ 36 ಲಕ್ಷ ರು.ಗಳವರೆಗೆ ಗಳಿಸುವ ಮಧ್ಯಮ ಕುಟುಂಬಗಳ ಪಾಲು ಕಳೆದ ದಶಕದಲ್ಲಿ ಶೇ.29ರಿಂದ ಶೇ.53ಕ್ಕೆ ದ್ವಿಗುಣಗೊಂಡಿದೆ. ದೇಶದ 100 ಪ್ರಮುಖ ನಗರಗಳ ಜನಸಂಖ್ಯೆ ಒಟ್ಟು ಜನಸಂಖ್ಯೆಯಲ್ಲಿ ಕೇವಲ ಶೇ.5ಕ್ಕಿಂತ ಕಡಿಮೆ ಇದ್ದರೂ, ಆದಾಯದಲ್ಲಿ ಅವುಗಳ ಪಾಲು ಶೇ.33ಕ್ಕಿಂತ ಹೆಚ್ಚಿದೆ ಮತ್ತು ಬಳಕೆಯ ಪಾಲು ಶೇ.31ಕ್ಕಿಂತ ಹೆಚ್ಚಿದೆ ಎಂದು ವರದಿ ಹೇಳಿದೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;40ನೇ ವಯಸ್ಸಲ್ಲಿ ಕೆಲಸ ಕಳ್ಕೊಂಡ್ರೆ ಮುಂದೇನು? ಇವತ್ತೆ ಈ 5 ತಯಾರಿ ನಡೆಸಿ&lt;/strong&gt;&lt;/p&gt;]]></content:encoded>
            <category><![CDATA[business]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/gallery/business/bengaluru-is-number-1-in-highest-annual-family-income-what-s-the-story-on-spending-mrq-gh37vir"/>
        </item>
        <item>
            <title><![CDATA[ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಹೈದರ್‌ ಅಲಿ, ಟಿಪ್ಪು ಪರೋಕ್ಷ ಕೊಡುಗೆ ನೀಡಿದ್ದು ಹೇಗೆ?]]></title>
            <link>https://kannada.asianetnews.com/india-news/hyder-ali-and-tippu-sultan-indirectly-contributed-to-the-american-freedom-struggle-mrq/articleshow-hqaokse</link>
            <guid isPermaLink="true">https://kannada.asianetnews.com/india-news/hyder-ali-and-tippu-sultan-indirectly-contributed-to-the-american-freedom-struggle-mrq/articleshow-hqaokse</guid>
            <pubDate>Sun, 05 Jul 2026 08:55:09 +0530</pubDate>
            <description><![CDATA[ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ಮೈಸೂರಿನ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್ ಪರೋಕ್ಷವಾಗಿ ಪ್ರಭಾವ ಬೀರಿದ್ದರು. ಭಾರತದಲ್ಲಿ ಬ್ರಿಟಿಷರನ್ನು ದುರ್ಬಲಗೊಳಿಸುವ ಮೂಲಕ, ಅವರು ಅಮೆರಿಕನ್ನರಿಗೆ ಪ್ರತಿರೋಧದ ಸಂಕೇತವಾದರು ಮತ್ತು ಅಲ್ಲಿನ ಪತ್ರಿಕೆ, ಪಠ್ಯಗಳಲ್ಲಿಯೂ ಸ್ಥಾನ ಪಡೆದಿದ್ದರು.]]></description>
            <media:content url="https://static.asianetnews.com/images/w-1280,h-720,format-jpg,imgid-01jk87z1ne10p27jbqpck7rdg9,imgname-america-flag.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ನವದೆಹಲಿ:&lt;/strong&gt; ದೂರದ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೂ ಮೈಸೂರಿನ ಹೈದರ್&zwnj; ಅಲಿ, ಟಿಪ್ಪು ಸುಲ್ತಾನ್&zwnj;ಗೂ ಸಂಬಂಧ ಇದೆ ಅಂದ್ರೆ ನಂಬ್ತೀರಾ? ಇತಿಹಾಸದ ಪುಟ ತಿರುವಿ ಹಾಕಿದರೆ ಅಮೆರಿಕದ ಸ್ವಾತಂತ್ರ್ಯ ಹೋರಾಟದ ಮೇಲೆ ನಮ್ಮ ಮೈಸೂರಿನ ದೊರೆಗಳಾದ ಹೈದರ್&zwnj; ಅಲಿ ಮತ್ತು ಟಿಪ್ಪುಸುಲ್ತಾನ್&zwnj; ತಮ್ಮದೇ ಆದ ಪ್ರಭಾವ ಬೀರಿದ್ದು ಬೆಳಕಿಗೆ ಬರುತ್ತದೆ.&lt;/p&gt;&lt;p&gt;ಅಮೆರಿಕ ಈಗ ತನ್ನ 250ನೇ ಸ್ವಾತಂತ್ರ್ಯೋತ್ಸ ಘೋಷಣೆ (ಡಿಕ್ಲರೇಷನ್&zwnj; ಆಫ್&zwnj; ಇಂಡಿಪೆಂಡೆನ್ಸ್&zwnj;)ಯ ಸಂಭ್ರಮದಲ್ಲಿದೆ. ಜು.4, 1776ರಲ್ಲಿ ಅಮೆರಿಕದ ಸ್ವಾತಂತ್ರ್ಯಘೋಷಣೆ ಆಗುವ ಹೊತ್ತಿನಲ್ಲಿ ಹೈದರ್&zwnj; ಅಲಿ, ಟಿಪ್ಪು ಸುಲ್ತಾನ್&zwnj; ಹೆಸರು ಅಲ್ಲಿ ಚಿರಪರಿಚಿತವಾಗಿತ್ತು.&lt;/p&gt;&lt;h2&gt;&lt;strong&gt;ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಬೆಂಬಲ&lt;/strong&gt;&lt;/h2&gt;&lt;p&gt;ಹೈದರ್&zwnj; ಅಲಿ ಆಗಲಿ, ಟಿಪ್ಪು ಆಗಲಿ ಅಮೆರಿಕ ನಾಯಕರ ಜತೆಗೆ ನೇರವಾಗಿ ಮಾತುಕತೆ ನಡೆಸಿದ್ದಾಗಲಿ, ನೆರವಿಗಾಗಿ ಸೇನೆ ಕಳುಹಿಸಿಕೊಟ್ಟಿದ್ದಾಗಲಿ ಇಲ್ಲ. ಆದರೆ, ಅಮೆರಿಕದ ಮೇಲೆ ನಿಯಂತ್ರಣಕ್ಕೆ ಹೆಣಗಾಡುತ್ತಿದ್ದ ಬ್ರಿಟಿಷ್&zwnj; ಸೇನೆಗೆ ಫ್ರೆಂಚರ ಜತೆಗೂಡಿ ಭಾರತದಲ್ಲಿ ಭಾರೀ ಹೊಡೆತ ನೀಡುವ ಮೂಲಕ ಶಕ್ತಿಗುಂದುವಂತೆ ನೋಡಿಕೊಂಡಿದ್ದರು. ಈ ಮೂಲಕ ಅಮೆರಿಕದ ಸ್ವಾತಂತ್ರ್ಯ ಹೋರಾಟಕ್ಕೆ ಪರೋಕ್ಷ ಬೆಂಬಲ ನೀಡಿದ್ದರು.&lt;/p&gt;&lt;h3&gt;&lt;strong&gt;ಅಮೆರಿಕದ ಯುದ್ಧ ನೌಕೆಗೆ ಹೈದರ್&zwnj; ಅಲಿ ಹೆಸರು&lt;/strong&gt;&lt;/h3&gt;&lt;p&gt;1780ರ ಪೊಲ್ಲಿಲುರ್&zwnj; ಕದನದಲ್ಲಿ ಬ್ರಿಟಿಷರನ್ನು ಹೀನಾಯವಾಗಿ ಸೋಲಿಸಿದ ಬಳಿಕ ಅಮೆರಿಕದ ಜನ ಹೈದರ್&zwnj; ಅಲಿ ಬಗ್ಗೆ ಪ್ರಭಾವಿತರಾಗಿದ್ದರು. ಸಾರ್ವಜನಿಕವಾಗಿಯೇ ಹೈದರ್&zwnj; ಅಲಿ ಹೋರಾಟಕ್ಕೆ ಶುಭ ಹಾರೈಸುತ್ತಿದ್ದರು. 1781ರಲ್ಲಿ ಅಮೆರಿಕದ ಯುದ್ಧ ನೌಕೆಗೆ ಹೈದರ್&zwnj; ಅಲಿ ಹೆಸರಿಡಲಾಗಿತ್ತು. ಈ ನೌಕೆ ಬ್ರಿಟನ್&zwnj;ನ ನೌಕೆಯನ್ನು ಮಣಿಸಿತ್ತು. ಈ ಸಾಹಸದ ಕುರಿತು ಕವನಗಳನ್ನೂ ಬರೆಯಲಾಗಿತ್ತು.&lt;/p&gt;&lt;p&gt;ಹೈದರ್&zwnj; ಅಲಿ ಸಾವಿನ ಬಳಿಕ ಪುತ್ರ ಟಿಪ್ಪು ಸುಲ್ತಾನ್&zwnj; ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸಿದ್ದು, ಅಮೆರಿಕದ ಪತ್ರಿಕೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗುತ್ತಿತ್ತು. ಶಾಲಾ ಪಠ್ಯ ಪುಸ್ತಕಗಳಲ್ಲೂ ಈ ಕುರಿತ ಮಾಹಿತಿ ಇತ್ತು. ರೇಸ್&zwnj; ಕುದುರೆಗಳಗೂ ಮೈಸೂರಿನ ಈ ರಾಜರ ಹೆಸರಿಡಲಾಗಿತ್ತು. 1799ರಲ್ಲಿ ಟಿಪ್ಪು ಹತನಾದಾಗ ಅಮೆರಿಕನ್ನರೂ ಕಂಬನಿ ಮಿಡಿದಿದ್ದರು.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/hyder-ali-and-tippu-sultan-indirectly-contributed-to-the-american-freedom-struggle-mrq/articleshow-hqaokse"/>
        </item>
        <item>
            <title><![CDATA[ಕುಡಿಯುವ ಗುಟುಕು ನೀರಿಗೆ ಕಠಿಣ ನಿಯಮ ಜಾರಿ! ಬೆಂಗಳೂರು ಜನರು ಓದಲೇಬೇಕಾದ ಸ್ಟೋರಿ]]></title>
            <link>https://kannada.asianetnews.com/bengaluru-urban/strict-rule-for-drinking-water-are-coming-into-effect-in-bengaluru-gkn/articleshow-so0vpgk</link>
            <guid isPermaLink="true">https://kannada.asianetnews.com/bengaluru-urban/strict-rule-for-drinking-water-are-coming-into-effect-in-bengaluru-gkn/articleshow-so0vpgk</guid>
            <pubDate>Sun, 05 Jul 2026 08:50:44 +0530</pubDate>
            <description><![CDATA[ಮುಂಗಾರು ಕೊರತೆಯಿಂದ ಬೆಂಗಳೂರಿನಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ತಡೆಯಲು ಜಲಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ವಾಹನ ತೊಳೆಯುವುದು, ಈಜುಕೊಳ ಸೇರಿದಂತೆ ಹಲವು ಚಟುವಟಿಕೆಗಳಿಗೆ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ ₹5,000 ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಎಲ್ಲಾ ಕಟ್ಟಡಗಳಲ್ಲಿ ಏರೇಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr4dge2zr9ghmghn3pzh3g0,imgname-drinking-water-1783221371329.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು:&lt;/strong&gt; ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಗರಕ್ಕೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಈಗಿನಿಂದಲೇ ನೀರು ಉಳಿತಾಯ ಕ್ರಮಗಳನ್ನು ಅನುಸರಿಸಲು ಕರೆ ನೀಡಿರುವ ಬೆಂಗಳೂರು ಜಲಮಂಡಳಿ, ವಾಹನ ತೊಳೆಯಲು, ಈಜು ಕೊಳಗಳಲ್ಲಿ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದೆ.&lt;/p&gt;&lt;p&gt;ಮನೆಗಳು, ಅಪಾರ್ಟ್&zwnj;ಮೆಂಟ್&zwnj;ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್&zwnj;ಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ಕಟ್ಟಡಗಳಲ್ಲಿ ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದ್ದು, ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ಅಧ್ಯಕ್ಷೆ ಡಾ.ಮಂಜುಳಾ ತಿಳಿಸಿದ್ದಾರೆ.&lt;/p&gt;&lt;p&gt;ಇನ್ನು ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಡಾ.ಮಂಜುಳ ತಿಳಿಸಿದ್ದಾರೆ.&lt;/p&gt;&lt;h2&gt;&lt;strong&gt;ಈಜುಕೊಳಗಳಿಗೆ ಕುಡಿಯುವ ನೀರು ಬಳುವಂತಿಲ್ಲ&lt;/strong&gt;&lt;/h2&gt;&lt;p&gt;Bನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸುವಂತಿಲ್ಲ. ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸಬೇಕು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಿ ₹5,000 ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ ₹500 ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಸಿದೆ.&lt;/p&gt;&lt;p&gt;ಏರೇಟರ್ ಅಳವಡಿಸಿ, ಕುಡಿಯುವ ನೀರಿನ ದುರ್ಬಳಕೆಯನ್ನು ತಪ್ಪಿಸಲು ಉದ್ದೇಶಿಸಲಾಗಿದೆ. ನಾಗರಿಕರ ಸಹಭಾಗಿತ್ವದಿಂದಲೇ ಬೆಂಗಳೂರಿನ ನೀರಿನ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಸಾಧ್ಯ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಲಮಂಡಳಿ ಜೊತೆ ಕೈಜೋಡಿಸಬೇಕು ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಮನವಿ ಮಾಡಿದ್ದಾರೆ.&lt;/p&gt;&lt;p&gt;&lt;strong&gt;ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮಿತ ಬಳಕೆಗಾಗಿ ಐಐಎಸ್ಸ್&zwnj;ಸಿ ನೀಡಿರುವ ವರದಿ ಅನ್ವಯ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಉಳಿತಾಯಕ್ಕೆ ಜನರು ಕೈಜೋಡಿಸಬೇಕು- ಡಾ. ಮಂಜುಳ, ಅಧ್ಯಕ್ಷರು, ಬೆಂಗಳೂರು ಜಲಮಂಡಳಿ&lt;/strong&gt;&lt;/p&gt;]]></content:encoded>
            <category><![CDATA[bengaluru-urban]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/bengaluru-urban/strict-rule-for-drinking-water-are-coming-into-effect-in-bengaluru-gkn/articleshow-so0vpgk"/>
        </item>
        <item>
            <title><![CDATA[ಖಾಸಗಿ ಶಾಲೆಗಳತ್ತ ಸರ್ಕಾರಿ ಶಾಲೆಯ 30 ಸಾವಿರ ಮಕ್ಕಳು! ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲ]]></title>
            <link>https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</link>
            <guid isPermaLink="true">https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2</guid>
            <pubDate>Sun, 05 Jul 2026 08:36:32 +0530</pubDate>
            <description><![CDATA[ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪಾಸಾದ ಸುಮಾರು 30 ಸಾವಿರ ವಿದ್ಯಾರ್ಥಿಗಳು, 8ನೇ ತರಗತಿಗೆ ಸೂಕ್ತ ವ್ಯವಸ್ಥೆ, ಪಠ್ಯಪುಸ್ತಕಗಳು ಮತ್ತು ಶಿಕ್ಷಕರಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರಣದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದು, ಉಳಿದವರು ಕನ್ನಡ ಮಾಧ್ಯಮದಲ್ಲಿಯೇ ಮುಂದುವರಿಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr3e3tcb48vre8ew9vbkh31,imgname-govt-school-1783220342604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಂದ್ರು ಕೊಂಚಿಗೇರಿ&lt;/strong&gt;&lt;/p&gt;&lt;p&gt;&lt;strong&gt;ವಿಜಯನಗರ: &lt;/strong&gt;ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಪಾಸಾದ 30 ಸಾವಿರ ವಿದ್ಯಾರ್ಥಿಗಳು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಸರ್ಕಾರಿ ಶಾಲೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದಕ್ಕೆ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ ಬಾಗಿಲು ತಟ್ಟುತ್ತಿದ್ದಾರೆ!&lt;/p&gt;&lt;p&gt;ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ಮಕ್ಕಳಿಗೆ ಪಠ್ಯ- ಪುಸ್ತಕಗಳು ಲಭಿಸಿಲ್ಲ, ಪಾಠ ಮಾಡಲು ಶಿಕ್ಷಕರೂ ಬಾರದೇ ಖಾಲಿ ಗೋಡೆ ನೋಡಿ ನೋಡಿ ಬಸವಳಿದ್ದು, ಪಾಲಕರು ಅನಿವಾರ್ಯವಾಗಿ ಸಾಲ ಸೋಲ ಮಾಡಿ ಖಾಸಗೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಿಗೆ ಸೇರಿಸುತ್ತಿದ್ದಾರೆ.&lt;/p&gt;&lt;p&gt;2018-19ನೇ ಸಾಲಿನಲ್ಲಿ ರಾಜ್ಯಾದ್ಯಂತ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ 1001 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿದೆ. ಗ್ರಾಮೀಣ ಭಾಗದ ಬಡವರ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಓದಬೇಕೆಂಬ ಉದ್ದೇಶ ಹೊಂದಿರುವ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಆರಂಭವಾದ ಶಾಲೆಗಳಲ್ಲಿ 7ನೇ ತರಗತಿ ಪಾಸ್&zwnj; ಆಗಿರುವ 30 ಸಾವಿರ ವಿದ್ಯಾರ್ಥಿಗಳು ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.&lt;/p&gt;&lt;h2&gt;&lt;strong&gt;ಶಿಕ್ಷಣ ಮಂತ್ರಿಯೇ ಇಲ್ಲ&lt;/strong&gt;&lt;/h2&gt;&lt;p&gt;ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಈ ವರೆಗೂ ಶಿಕ್ಷಣ ಸಚಿವರೇ ಇಲ್ಲ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದರಿಂದ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.&lt;/p&gt;&lt;p&gt;ಈವರೆಗೂ ಸರ್ಕಾರ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮದ 8ನೇ ತರಗತಿ ಆರಂಭಿಸುವ ಆದೇಶವನ್ನು ಮಾಡಿಲ್ಲ. ಪಠ್ಯ-ಪುಸ್ತಕವಿಲ್ಲ, ಬೋಧಿಸುವ ಶಿಕ್ಷಕರೂ ಇಲ್ಲ. ಆಯಾ ಶಾಲೆಯ ಶಿಕ್ಷಕರೇ ತಮ್ಮ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಜತೆ ಕೂಡ್ರಿಸಿ ಕನ್ನಡದಲ್ಲಿ ಇವರಿಗೂ ಪಾಠ ಮಾಡುತ್ತಿದ್ದರಿಂದ ರಾಜ್ಯದ 30 ಸಾವಿರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಧಿ ಇಲ್ಲದೇ 8ನೇ ತರಗತಿ ಕನ್ನಡ ಮಾಧ್ಯಮದಲ್ಲಿ ಪಾಠ ಕಲಿಯುವ ಸ್ಥಿತಿ ನಿರ್ಮಾಣವಾಗಿದೆ.&lt;/p&gt;&lt;p&gt;ರಾಜ್ಯದ ಕೆಲವೆಡೆ ಸರ್ಕಾರಿ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 8ನೇ ತರಗತಿ ಆರಂಭಿಸದ ಹಿನ್ನೆಲೆಯಲ್ಲಿ ಸ್ಥಿತಿವಂತ ಪಾಲಕರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಕದ ತಟ್ಟುವಂತಾಗಿದೆ. ಉಳಿದಂತೆ ಬಡ ಮಕ್ಕಳು ಇದೇ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.&lt;/p&gt;&lt;p&gt;ನಮ್ಮ ಮಕ್ಕಳಿಗೆ ತಿಂಗಳೂ ಕಳೆದರೂ ಸರಿಯಾಗಿ ಪಾಠ ಪ್ರವಚನವಿಲ್ಲ. ಪಠ್ಯಪುಸ್ತಕಗಳಿಲ್ಲ. ವಿಧಿ ಇಲ್ಲದೇ ಕನ್ನಡ ಮಾಧ್ಯಮದ 8ನೇ ತರಗತಿ ಮಕ್ಕಳೊಂದಿಗೆ ಕನ್ನಡ ಪಾಠ ಕೇಳುತ್ತಿದ್ದಾರೆ. ಸರ್ಕಾರ ಈ ಕುರಿತು ಬೇಗನೆ ನಿರ್ಧಾರ ಪ್ರಕಟಿಸಲಿ ಎಂದು ಮಾಗಳ ಗ್ರಾಮದ ನಿವಾಸಿ ಈಟಿ ಕೋಟೆಪ್ಪ ಆಗ್ರಹಿಸಿದ್ದಾರೆ.&lt;/p&gt;&lt;h3&gt;&lt;strong&gt;ಸರ್ಕಾರದ ಆದೇಶ ಬಂದಿಲ್ಲ ಎಂದ ಅಧಿಕಾರಿ&lt;/strong&gt;&lt;/h3&gt;&lt;p&gt;7ನೇ ತರಗತಿ ಆಂಗ್ಲ ಮಾಧ್ಯಮದಲ್ಲಿ ಪಾಸ್&zwnj; ಆಗಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿ ಆರಂಭಿಸಲು ಸರ್ಕಾರದ ಆದೇಶ ಬಂದಿಲ್ಲ. ಸರ್ಕಾರದ ಆದೇಶ ಬರುವವರೆಗೂ ಆಯಾ ಗ್ರಾಮದ ಕನ್ನಡ ಮಾಧ್ಯಮದ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಹೋಗುವಂತೆ ಸೂಚನೆ ನೀಡಲಾಗಿದೆ ಎಂದು ಹೂವಿನಹಡಗಲಿಯ &amp;nbsp;ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ, ಎ.ಕೋಟೆಪ್ಪ ಹೇಳುತ್ತಾರೆ. &amp;nbsp;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/30000-students-who-passed-7th-grade-in-government-english-medium-schools-are-moving-to-private-schools-mrq/articleshow-1umpkv2"/>
        </item>
        <item>
            <title><![CDATA[ಜುಲೈ 5, 5 ರಾಶಿಚಕ್ರ ಚಿಹ್ನೆಗಳಿಗೆ ಒಂದು ಬದಲಾವಣೆ, ಸೂರ್ಯ ಕೃಪೆಯಿಂದ, ನಿಮಗೆ ಶೀಘ್ರದಲ್ಲೇ ಒಳ್ಳೆಯ ಸುದ್ದಿ]]></title>
            <link>https://kannada.asianetnews.com/gallery/astrology/lucky-zodiac-signs-on-5-july-2026-get-blessings-of-lord-sun-taurus-gemini-leo-virgo-pisces-suh-hl66410</link>
            <guid isPermaLink="true">https://kannada.asianetnews.com/gallery/astrology/lucky-zodiac-signs-on-5-july-2026-get-blessings-of-lord-sun-taurus-gemini-leo-virgo-pisces-suh-hl66410</guid>
            <pubDate>Sun, 05 Jul 2026 08:30:39 +0530</pubDate>
            <description><![CDATA[Lucky Zodiac Signs On 5 July 2026 : ಸೂರ್ಯ ದೇವರು ಯಾವ ರಾಶಿಯವರಿಗೆ ಆಶೀರ್ವಾದ ಮಾಡುತ್ತಾನೆ ಎಂಬುದನ್ನು ನೋಡಿ. ಅಲ್ಲದೆ ಇಂದು ಯಾವ ರಾಶಿಯವರಿಗೆ ಅದೃಷ್ಟ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.]]></description>
            <media:content url="https://static.asianetnews.com/images/w-1280,h-720,format-jpg,imgid-01ktb1cg0r13gxjrtfdr5vrdy0,imgname-sun-and-venus-will-change-star-and-sign-this-will-bring-luck-to-those-of-3-zodiac-signs-1780634501143.jpg" type="image/jpeg" height="390" width="690"/>
            <content:encoded><![CDATA[&lt;p&gt;Lucky Zodiac Signs On 5 July 2026 : ಸೂರ್ಯ ದೇವರು ಯಾವ ರಾಶಿಯವರಿಗೆ ಆಶೀರ್ವಾದ ಮಾಡುತ್ತಾನೆ ಎಂಬುದನ್ನು ನೋಡಿ. ಅಲ್ಲದೆ ಇಂದು ಯಾವ ರಾಶಿಯವರಿಗೆ ಅದೃಷ್ಟ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.&lt;/p&gt;&lt;img&gt;&lt;p&gt;ಜುಲೈ 5, 2026 ರಂದು ಅದೃಷ್ಟ ರಾಶಿಚಕ್ರ ಚಿಹ್ನೆಗಳು: ಜ್ಯೋತಿಷ್ಯದ ಪ್ರಕಾರ, ನಾಳೆ ಜುಲೈ 5. ಈ ದಿನ ಸೂರ್ಯ ದೇವರಿಗೆ ಸಮರ್ಪಿತವಾಗಿದೆ. ಅಲ್ಲದೆ, ಶನಿಯ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ನಾಳೆ ಸೂರ್ಯ ದೇವರು ಯಾವ ರಾಶಿಚಕ್ರ ಚಿಹ್ನೆಗಳನ್ನು ಆಶೀರ್ವದಿಸುತ್ತಾನೆ ಎಂದು ತಿಳಿಯೋಣ. ಅಲ್ಲದೆ, ನಾಳೆ ಯಾವ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಎಂದು ತಿಳಿಯೋಣ .&lt;/p&gt;&lt;img&gt;&lt;p&gt;ವೃಷಭ ರಾಶಿಯವರಿಗೆ ನಾಳೆ ಪ್ರಯೋಜನಕಾರಿ ದಿನವಾಗಿರುತ್ತದೆ. ಈ ಅವಧಿಯಲ್ಲಿ, ನಿಮ್ಮ ವೃತ್ತಿಜೀವನವು ಉತ್ತಮ ಪ್ರಗತಿಯನ್ನು ಪಡೆಯುತ್ತದೆ. ಅಲ್ಲದೆ, ಕಾರ್ಮಿಕ ವರ್ಗದ ಜನರಿಗೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆಯಿದೆ. ಅಲ್ಲದೆ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್&zwnj;ನಲ್ಲಿ ಉತ್ತಮ ಹೆಚ್ಚಳವಿರುತ್ತದೆ. ಮನೆಯಲ್ಲಿನ ವಾತಾವರಣವು ಸಂತೋಷದಿಂದ ಕೂಡಿರುತ್ತದೆ.&lt;/p&gt;&lt;img&gt;&lt;p&gt;ಮಿಥುನ ರಾಶಿಯವರಿಗೆ ನಾಳೆ ಶುಭ ದಿನವಾಗಿರುತ್ತದೆ. ಈ ಅವಧಿಯಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ಸಿಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಶೀಘ್ರದಲ್ಲೇ ಉತ್ತಮ ಉದ್ಯೋಗ ಸಿಗುತ್ತದೆ. ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ.&lt;/p&gt;&lt;img&gt;&lt;p&gt;ಸಿಂಹ ರಾಶಿಯವರಿಗೆ ನಾಳೆ ಶುಭ ದಿನವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀವು ನೋಡುತ್ತೀರಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಮತ್ತು ಗೌರವ ಸಿಗುತ್ತದೆ. ಅಲ್ಲದೆ, ನಿಮ್ಮ ಬಾಕಿ ಇರುವ ಅನೇಕ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.&lt;/p&gt;&lt;img&gt;&lt;p&gt;ಕನ್ಯಾ ರಾಶಿಯವರಿಗೆ ನಾಳೆ ತುಂಬಾ ಅನುಕೂಲಕರ ದಿನವಾಗಿರುತ್ತದೆ. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಅಲ್ಲದೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತೀರಿ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ಸಿಗುತ್ತದೆ.&lt;/p&gt;&lt;img&gt;&lt;p&gt;ಮೀನ ರಾಶಿಯವರಿಗೆ ನಾಳೆ ಪ್ರಯೋಜನಕಾರಿ ದಿನವಾಗಿರುತ್ತದೆ. ಈ ಸಮಯದಲ್ಲಿ, ನಿಮ್ಮ ಗಮನವು ನಿಮ್ಮ ಗುರಿಗಳ ಮೇಲೆ ಇರುತ್ತದೆ. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಅಲ್ಲದೆ, ಕೆಲಸಕ್ಕಾಗಿ ಪ್ರಯಾಣಿಸಲು ಅವಕಾಶಗಳು ದೊರೆಯುತ್ತವೆ. ಆದಾಗ್ಯೂ, ಈ ಪ್ರಯಾಣವು ಸಂತೋಷದಾಯಕವಾಗಿರುತ್ತದೆ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/lucky-zodiac-signs-on-5-july-2026-get-blessings-of-lord-sun-taurus-gemini-leo-virgo-pisces-suh-hl66410"/>
        </item>
        <item>
            <title><![CDATA[Abhimanyu : ಮರದ ದಿಮ್ಮಿ ಸಾಗಿಸುವಾಗ ದಸರಾ ಆನೆ ಅಭಿಮನ್ಯು ದಂತ ಭಗ್ನ!]]></title>
            <link>https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6</link>
            <guid isPermaLink="true">https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6</guid>
            <pubDate>Sun, 05 Jul 2026 08:24:42 +0530</pubDate>
            <description><![CDATA[ಮೈಸೂರು ದಸರಾದ ಅಂಬಾರಿ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr31tnq9q4z2hedcnfnsftg,imgname-----------------------2026-07-05t082204.612-1783219940022.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮಡಿಕೇರಿ (ಜು.5):&lt;/strong&gt; ಕೊಡಗಿನ ಕುವರ ಎಂದೇ ಕರೆಯಿಸಿಕೊಳ್ಳುವ ಮೈಸೂರು ದಸರಾದ ಅಂಬಾರಿ ಹೊತ್ತುಕೊಳ್ಳುವ ಆನೆ ಅಭಿಮನ್ಯುವಿನ ದಂತ ಭಗ್ನವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಅಭಿಮನ್ಯು ಆನೆ ಇತ್ತೀಚೆಗೆ ಮರದ ದಿಮ್ಮಿ ಸಾಗಿಸುವ ವೇಳೆ ಎಡ ಭಾಗದ ದಂತದ ತುದಿ ಭಾಗ ಮುರಿದಿದೆ.&lt;/p&gt;&lt;h2&gt;ಅಭಿಮನ್ಯುವಿನ ದಂತ ಭಗ್ನಗೊಂಡಿದ್ದು ಹೇಗೆ?&lt;/h2&gt;&lt;p&gt;ಮರದ ದಿಮ್ಮಿ ಅಥವಾ ಕಠಿಣವಾದ ವಸ್ತುವಿಗೆ ಬಡಿದು ದಂತಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಬಳಿಕ ಪಶು ವೈದ್ಯರು ಆನೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಭಿಮನ್ಯು ಆರೋಗ್ಯವಾಗಿದ್ದು, ಯಾವುದೇ ಆತಂಕ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಮತ್ತೆ ದಂತ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಆನೆ ಇದೀಗ ಮೈಸೂರಿನ ಸರಗೂರಿನಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ.&lt;/p&gt;&lt;p&gt;ಅರ್ಜುನ ಬಳಿಕ ನಾಡದೇವತೆ ಚಾಮುಂಡೇಶ್ವರಿಯನ್ನ ವಿಶ್ವದರ್ಶನ ಮಾಡಿಸುವ ಜವಾಬ್ದಾರಿ ಅಭಿಮನ್ಯು ಹೊತ್ತಿದ್ದಾನೆ.&lt;/p&gt;&lt;p&gt;ಅಭಿಮನ್ಯು 1970ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ನಂತರ ಮತ್ತಿಕೋಡು ಶಿಬಿರದಲ್ಲಿ ಪಳಗಿಸಲಾಯ್ತು. ಸದ್ಯ ಈಗ 60 ವರ್ಷದ ಹಿರಿಯ. ವಯಸ್ಸಾಗಿರುವುದರಿಂದ ಸಹಜವಾಗಿ ದಂತ ದುರ್ಬಲಗೊಂಡಿರುತ್ತವೆ. ಹೀಗಾಗಿ ದಂತ ಭಗ್ನವಾಗಿದೆ ಎನ್ನಲಾಗಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/dasara-elephant-abhimanyu-damage-a-tusk-while-transporting-a-log-rav/articleshow-rrq69e6"/>
        </item>
        <item>
            <title><![CDATA[ಮಳೆಗಾಲದಲ್ಲಿ ನಳನಳಿಸುವ ಸಸ್ಯಗಳಿಗಾಗಿ ಮನೆಯಲ್ಲೇ ತಯಾರಿಸಿ ನೈಸರ್ಗಿಕ ಗೊಬ್ಬರ: ವಿಧಾನ ಇಲ್ಲಿದೆ]]></title>
            <link>https://kannada.asianetnews.com/gallery/kitchen/monsoon-gardening-natural-things-to-mix-in-soil-for-fast-plant-growth-photoshow-suc-4ca6mow</link>
            <guid isPermaLink="true">https://kannada.asianetnews.com/gallery/kitchen/monsoon-gardening-natural-things-to-mix-in-soil-for-fast-plant-growth-photoshow-suc-4ca6mow</guid>
            <pubDate>Sat, 04 Jul 2026 21:04:50 +0530</pubDate>
            <description><![CDATA[ಮಳೆಗಾಲದಲ್ಲಿ ಸಸ್ಯಗಳ ಸೊಂಪಾದ ಬೆಳವಣಿಗೆಗೆ ಎರೆಹುಳು ಗೊಬ್ಬರ, ಬೇವಿನ ಕೇಕ್, ಬಾಳೆಹಣ್ಣಿನ ಸಿಪ್ಪೆ, ಮತ್ತು ಮೊಟ್ಟೆ ಸಿಪ್ಪೆಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಉತ್ತಮ ಮಣ್ಣಿನ ಮಿಶ್ರಣವನ್ನು ತಯಾರಿಸಿ. ಈ ಸಾವಯವ ಗೊಬ್ಬರಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwpv5svpdkzsynrm1dm24aya,imgname-fertilizers-1783178127222.jpg" type="image/jpeg" height="390" width="690"/>
            <content:encoded><![CDATA[&lt;p&gt;ಮಳೆಗಾಲದಲ್ಲಿ ಸಸ್ಯಗಳ ಸೊಂಪಾದ ಬೆಳವಣಿಗೆಗೆ ಎರೆಹುಳು ಗೊಬ್ಬರ, ಬೇವಿನ ಕೇಕ್, ಬಾಳೆಹಣ್ಣಿನ ಸಿಪ್ಪೆ, ಮತ್ತು ಮೊಟ್ಟೆ ಸಿಪ್ಪೆಯಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಉತ್ತಮ ಮಣ್ಣಿನ ಮಿಶ್ರಣವನ್ನು ತಯಾರಿಸಿ. ಈ ಸಾವಯವ ಗೊಬ್ಬರಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.&lt;/p&gt;&lt;img&gt;&lt;p&gt;ಮಳೆಗಾಲದಲ್ಲಿ ಸಸ್ಯಗಳ ಶೀಘ್ರ ಬೆಳವಣಿಗೆ ಮತ್ತು ಸೊಂಪಾದ ಎಲೆಗಳಿಗಾಗಿ, ಐದು ನೈಸರ್ಗಿಕ ಪದಾರ್ಥಗಳನ್ನು ಸೇರಿಸಿ. ಎರೆಹುಳು ಗೊಬ್ಬರ, ಬೇವಿನ ಕೇಕ್, ಬಾಳೆ ಸಿಪ್ಪೆಗಳು, ಸಾಸಿವೆ ಕೇಕ್ ಮತ್ತು ಮರದ ಬೂದಿ. ಅವುಗಳನ್ನು ಬಳಸುವ ಸರಿಯಾದ ವಿಧಾನ ಮತ್ತು ಪ್ರಯೋಜನಗಳನ್ನು ತಿಳಿಯಿರಿ. ಮಳೆಗಾಲದಲ್ಲಿಯೂ ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಸರಿಯಾದ ಗೊಬ್ಬರವನ್ನು ಬಳಸುವುದು ಬಹಳ ಮುಖ್ಯ. ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳಂತಹ ಅಡುಗೆ ತ್ಯಾಜ್ಯದಿಂದ ತಯಾರಿಸಿದ ಗೊಬ್ಬರದ ಮಣ್ಣನ್ನು ನಿಮ್ಮ ಸಸ್ಯಗಳಿಗೆ ಸೇರಿಸಬಹುದು. ಇದು ಮಣ್ಣನ್ನು ದೀರ್ಘಕಾಲದವರೆಗೆ ಫಲವತ್ತಾಗಿಡಲು ಸಹಾಯ ಮಾಡುತ್ತದೆ ಮತ್ತು ಸಸ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ಪ್ರತಿ 20 30 ದಿನಗಳಿಗೊಮ್ಮೆ ಒಂದು ಹಿಡಿ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಿ ಲಘುವಾಗಿ ನೀರು ಹಾಕಿ.&lt;/p&gt;&lt;img&gt;&lt;p&gt;ಎರೆಹುಳು ಗೊಬ್ಬರ, ಅಥವಾ ಎರೆಹುಳು ಗೊಬ್ಬರ, ಮಣ್ಣಿಗೆ ವರದಾನವಾಗಿದೆ ಮತ್ತು ಸಸ್ಯಗಳ ಬೆಳವಣಿಗೆಗೆ ಉತ್ತಮ ಸಾವಯವ ಗೊಬ್ಬರವೆಂದು ಪರಿಗಣಿಸಲಾಗುತ್ತದೆ. ಸಾರಜನಕ, ರಂಜಕ, ಪೊಟ್ಯಾಸಿಯಮ್ ಮತ್ತು ಹಲವಾರು ಸೂಕ್ಷ್ಮ ಪೋಷಕಾಂಶಗಳು ಅದರ ಫಲವತ್ತತೆಗೆ ಕೊಡುಗೆ ನೀಡುತ್ತವೆ. 8 ರಿಂದ 10 ಇಂಚಿನ ಮಡಕೆಗೆ 2 3 ಹಿಡಿ ಹುಳು ಗೊಬ್ಬರವನ್ನು ಸೇರಿಸುವ ಮೂಲಕ ನೀವು ಸಸ್ಯಗಳನ್ನು ಹಸಿರಾಗಿಡಲು ಸಹಾಯ ಮಾಡಬಹುದು.&lt;/p&gt;&lt;img&gt;&lt;p&gt;ಮಣ್ಣಿನಲ್ಲಿರುವ ಶಿಲೀಂಧ್ರ, ಗೆದ್ದಲು ಮತ್ತು ಕೀಟಗಳನ್ನು ಕಡಿಮೆ ಮಾಡಲು ಮತ್ತು ಸಸ್ಯಗಳನ್ನು ಹಸಿರಾಗಿಡಲು ಬೇವು ಅಥವಾ ಸಾಸಿವೆ ಕೇಕ್ ಅನ್ನು ಮಳೆಗಾಲದಲ್ಲಿ ಬಳಸಬಹುದು. ಬೇವಿನ ಕೇಕ್ ಅನ್ನು ಮನೆಯಲ್ಲಿ ತಯಾರಿಸುವುದು ಕಷ್ಟ, ಆದ್ದರಿಂದ ಅದನ್ನು ಮಾರುಕಟ್ಟೆಯಿಂದ ಖರೀದಿಸಿ. ಮತ್ತೊಂದೆಡೆ, ಸಾಸಿವೆ ಎಣ್ಣೆಯನ್ನು ಹೊರತೆಗೆದ ನಂತರ ಸಾಸಿವೆ ಕೇಕ್ ಅನ್ನು ಪಡೆಯಲಾಗುತ್ತದೆ. ನೀವು ಅಂತಹ ಅಂಗಡಿಗಳಿಂದ ಸಾಸಿವೆ ಕೇಕ್ ಅನ್ನು ಸಹ ಪಡೆಯಬಹುದು.&lt;/p&gt;&lt;img&gt;&lt;p&gt;ಮೊಟ್ಟೆಯ ಸಿಪ್ಪೆಗಳು ಸಸ್ಯಗಳಿಗೆ ಅತ್ಯುತ್ತಮವಾದ ಸಾವಯವ ಗೊಬ್ಬರ. ಇವುಗಳಲ್ಲಿ ಸುಮಾರು ಶೇಕಡಾ 95ರಷ್ಟು ಕ್ಯಾಲ್ಸಿಯಂ ಇರುತ್ತದೆ. ಮೊಟ್ಟೆ ಚಿಪ್ಪನ್ನು ನೀರಿನಿಂದ ತೊಳೆದು, ಬಿಸಿಲಿನಲ್ಲಿ ಒಣಗಿಸಿ, ನುಣ್ಣಗೆ ಪುಡಿ ಮಾಡಿ ಮಣ್ಣಿಗೆ ಸೇರಿಸುವುದರಿಂದ ಗಿಡಗಳು ಉತ್ತಮವಾಗಿ ಬೆಳೆಯುತ್ತವೆ. ಇದು ಮಣ್ಣಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಸಸ್ಯಗಳ ಬೇರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.&lt;/p&gt;&lt;img&gt;&lt;p&gt;ಮಳೆಗಾಲದಲ್ಲಿಯೂ ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಬಳಸಬೇಕು. ಸಿಪ್ಪೆಗಳನ್ನು ಕತ್ತರಿಸಿ ನೀರಿನೊಂದಿಗೆ ಬೆರೆಸಿ ಸುಮಾರು 15 ದಿನಗಳವರೆಗೆ ನಿರಂತರವಾಗಿ ಬೆರೆಸಿ ಬಿಡಿ. ಇದು ಸಾವಯವ ಗೊಬ್ಬರವನ್ನು ಸೃಷ್ಟಿಸುತ್ತದೆ. ನೀವು ಬಯಸಿದರೆ, ನೀವು ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿ ಪುಡಿಯನ್ನು ಸಹ ಮಾಡಬಹುದು.&lt;/p&gt;&lt;img&gt;&lt;p&gt;ಮಳೆಯು ಮಣ್ಣನ್ನು ಗಟ್ಟಿಯಾಗಿಸುತ್ತದೆ, ಆಮ್ಲಜನಕವು ಬೇರುಗಳನ್ನು ತಲುಪುವುದನ್ನು ತಡೆಯುತ್ತದೆ. ಇದು ಸಸ್ಯದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಇದನ್ನು ತಪ್ಪಿಸಲು, ನಿಯತಕಾಲಿಕವಾಗಿ ಮಣ್ಣನ್ನು ಉಳುಮೆ ಮಾಡಿ ಮತ್ತು ಪ್ಲಾಂಟರ್&zwnj;ನಲ್ಲಿನ ಒಳಹರಿವನ್ನು ಪರಿಶೀಲಿಸಿ.&lt;/p&gt;]]></content:encoded>
            <category><![CDATA[kitchen]]></category>
            <dc:creator>Suchethana D</dc:creator>
            <atom:link href="https://kannada.asianetnews.com/gallery/kitchen/monsoon-gardening-natural-things-to-mix-in-soil-for-fast-plant-growth-photoshow-suc-4ca6mow"/>
        </item>
        <item>
            <title><![CDATA[ಜಾಕ್‌ವೆಲ್‌ ಮೂಲಕ ಹಿರಣ್ಯಕೇಶಿ ನದಿಯಿಂದ 33 ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ]]></title>
            <link>https://kannada.asianetnews.com/karnataka-districts/belagavi-project-to-fill-33-lakes-with-water-from-hiranyakeshi-river-through-jackwell-launched-mla-nikhil-katti-mrq/articleshow-39i0hfl</link>
            <guid isPermaLink="true">https://kannada.asianetnews.com/karnataka-districts/belagavi-project-to-fill-33-lakes-with-water-from-hiranyakeshi-river-through-jackwell-launched-mla-nikhil-katti-mrq/articleshow-39i0hfl</guid>
            <pubDate>Sun, 05 Jul 2026 08:08:59 +0530</pubDate>
            <description><![CDATA[ಶಾಸಕ ನಿಖಿಲ್ ಕತ್ತಿ ಅವರು ಹುಕ್ಕೇರಿ ಹಾಗೂ ನೆರೆಯ ತಾಲೂಕುಗಳ 33 ಕೆರೆಗಳಿಗೆ ಹಿರಣ್ಯಕೇಶಿ ನದಿಯಿಂದ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯು ರೈತರ ಕೃಷಿ ಚಟುವಟಿಕೆಗಳಿಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಲಿದೆ. ಇದೇ ವೇಳೆ, ಅವರು ಸಂಕೇಶ್ವರ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಸೇರಿದಂತೆ ಇತರ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಮಾತನಾಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwr20gfsx6xfph77082gbr2w,imgname-sankeshwara-1783218848249.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ:&lt;/strong&gt; ರೈತರ ಕೃಷಿ ಚಟುವಟಿಕೆಗಳಿಗೆ ಆಸರೆಯಾಗುವ ಹಾಗೂ ಅಂತರ್ಜಲಮಟ್ಟ ವೃದ್ಧಿಸುವ ಉದ್ದೇಶದಿಂದ ಹಿರಣ್ಯಕೇಶಿ ನದಿಯಿಂದ ಹುಕ್ಕೇರಿ ತಾಲೂಕಿನ 22 ಹಾಗೂ ನೆರೆಯ ತಾಲೂಕುಗಳ 11 ಸೇರಿ ಒಟ್ಟು 33 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶಾಸಕ ನಿಖಿಲ್ ಕತ್ತಿ ಚಾಲನೆ ನೀಡಿದರು.&lt;/p&gt;&lt;p&gt;ಪಟ್ಟಣದ ಹಿರಣ್ಯಕೇಶಿ ನದಿಯಲ್ಲಿ ನಿರ್ಮಿಸಿರುವ ಜಾಕ್&zwnj;ವೆಲ್&zwnj;ಗಳ ಮೂಲಕ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಕೃಷಿ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನ ಕಾಪಾಡಲು ಮತ್ತು ಅಂತರ್ಜಲ ಮರುಪೂರಣಕ್ಕೆ ಮಹತ್ವದ ಕೊಡುಗೆ ನೀಡಲಿವೆ ಎಂದು ಹೇಳಿದರು.&lt;/p&gt;&lt;p&gt;ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಗೆ ಆದ್ಯತೆ ನೀಡಿದೆ. ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಸರ್ಕಾರದಿಂದ ಜಾಕ್&zwnj;ವೆಲ್ ವಿದ್ಯುತ್ ಬಿಲ್ ಮೊತ್ತ ಬಾಕಿಯಿದ್ದರೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ನೀರು ಹರಿಸುವ ಕಾರ್ಯ ಆರಂಭಿಸಲಾಗಿದೆ ಎಂದು ತಿಳಿಸಿದರು.&lt;/p&gt;&lt;p&gt;ಶ್ರೀ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮೇಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಪರಿಶೀಲನೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾರ್ಖಾನೆಯ ನೂತನ ಆಡಳಿತ ಮಂಡಳಿಯಿಂದ ನಿಯಮಾನುಸಾರ ದಾಖಲೆಗಳ ಸಲ್ಲಿಕೆ ಹಾಗೂ ಅಗತ್ಯ ಪ್ರಕ್ರಿಯೆಗಳ ಅನುಸರಣೆಯಲ್ಲಿ ಕೆಲವು ತಾಂತ್ರಿಕ ಲೋಪಗಳಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.&lt;/p&gt;&lt;h2&gt;&lt;strong&gt;ಸಂಕೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ&lt;/strong&gt;&lt;/h2&gt;&lt;p&gt;ಸಂಕೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಬಗ್ಗೆ ಮಾತನಾಡಿ, ತಾತ್ಕಾಲಿಕ ವ್ಯವಸ್ಥೆಯಾಗಿ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಹೆರಿಗೆ ತಜ್ಞರನ್ನು ಅಗತ್ಯವಿರುವ ದಿನಗಳಲ್ಲಿ ಸಂಕೇಶ್ವರ ಆಸ್ಪತ್ರೆಗೆ ನಿಯೋಜಿಸಲಾಗುವುದು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಶಾಶ್ವತವಾಗಿ ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.&lt;/p&gt;&lt;p&gt;ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರ ಅಡ್ಡಮತದಾನ ಕುರಿತ ಪ್ರಶ್ನೆಗೆ ಉತ್ತರಿಸಿ, ಪಕ್ಷದ ವಿಪ್&zwnj;ಗೆ ಅನುಗುಣವಾಗಿ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸಲಾಗಿದ್ದು, ಪಕ್ಷದ ಶಿಸ್ತಿಗೆ ಬದ್ಧವಾಗಿ ನಡೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.&lt;/p&gt;&lt;p&gt;ಈ ಸಂದರ್ಭದಲ್ಲಿ ಮುಖಂಡರಾದ ಸುನೀಲ ಪರ್ವತರಾವ, ಶಿವಾನಂದ ಮುಡಶಿ, ಪ್ರಶಾಂತ ಪಾಟೀಲ, ರೋಹನ ನೇಸರಿ, ನಾಗೇಶ ಸಂಕಣ್ಣವರ, ದೀಪಕ್ ಬಿಶೆ, ಶಂಕರ ಹೆಬ್ಬಾಳೆ, ವಿಜಯ ಜರಳಿ, ಚೇತನ ಬಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ, ಗುತ್ತಿಗೆದಾರ ಬಸವರಾಜ ಗಂಗಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/belagavi-project-to-fill-33-lakes-with-water-from-hiranyakeshi-river-through-jackwell-launched-mla-nikhil-katti-mrq/articleshow-39i0hfl"/>
        </item>
        <item>
            <title><![CDATA[ಹಾವೇರಿ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸರ್ಕಾರದ ಚಿಂತನೆ; ಮಳೆ ಕೊರತೆ]]></title>
            <link>https://kannada.asianetnews.com/karnataka-districts/government-considering-cloud-seeding-in-belagavi-district-after-haveri-rain-deficient-mrq/articleshow-6d901co</link>
            <guid isPermaLink="true">https://kannada.asianetnews.com/karnataka-districts/government-considering-cloud-seeding-in-belagavi-district-after-haveri-rain-deficient-mrq/articleshow-6d901co</guid>
            <pubDate>Sun, 05 Jul 2026 07:58:56 +0530</pubDate>
            <description><![CDATA[ಜಿಲ್ಲೆಯಲ್ಲಿ ಶೇ.29ರಷ್ಟು ಮಳೆ ಕೊರತೆಯಾಗಿದ್ದರೂ, ಇತ್ತೀಚಿನ ಮಳೆಯಿಂದ ಜಲಾಶಯಗಳಿಗೆ ನೀರು ಹರಿದುಬರುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಮಳೆ ಕೈಕೊಟ್ಟರೆ ಸರ್ಕಾರದ ಮಟ್ಟದಲ್ಲಿ ಮೋಡ ಬಿತ್ತನೆ ಬಗ್ಗೆ ತೀರ್ಮಾನಿಸಲಾಗುವುದು ಹಾಗೂ ನಗರದ ರಸ್ತೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.]]></description>
            <media:content url="https://static.asianetnews.com/images/w-1280,h-720,format-jpg,imgid-01kwr1mjegdh5xqgwng2w16phv,imgname-cloud-seeding--1783218457040.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಳಗಾವಿ: &lt;/strong&gt;ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಈವರೆಗೆ ಶೇ.29ರಷ್ಟು ಮಳೆ ಕೊರತೆ ದಾಖಲಾಗಿದ್ದರೂ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಗಳಿಗೆ ಒಳಹರಿವು ಆರಂಭವಾಗಿದೆ. ಮುಂದಿನ ಮೂರು-ನಾಲ್ಕು ದಿನಗಳಲ್ಲೂ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು, ಇದೇ ರೀತಿ ಮಳೆ ಮುಂದುವರಿದರೆ ಮಳೆ ಕೊರತೆಯೂ ನೀಗಲಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.&lt;/p&gt;&lt;h2&gt;&lt;strong&gt;ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆ ಇಲ್ಲ&lt;/strong&gt;&lt;/h2&gt;&lt;p&gt;ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ, ನಗರಸಭೆ ಹಾಗೂ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇವಲ ಹತ್ತು ಪ್ರದೇಶಗಳಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಇದೀಗ ರಕ್ಕಸಕೊಪ್ಪ ಜಲಾಶಯಕ್ಕೂ ನೀರು ಹರಿದು ಬರುತ್ತಿದ್ದು, ಒಂದು ವಾರ ಮಳೆ ಹೀಗೆ ಸುರಿದರೆ, ಜಲಾಶಯಗಳು ಭರ್ತಿಯಾಗುವ ನಿರೀಕ್ಷೆಯಿದೆ. ಇದರಿಂದ ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.&lt;/p&gt;&lt;h3&gt;&lt;strong&gt;ಸರ್ಕಾರ ಮಟ್ಟದಲ್ಲಿ ಚಿಂತನೆ&lt;/strong&gt;&lt;/h3&gt;&lt;p&gt;ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಪ್ರಮಾಣದಲ್ಲಿ ಬಿತ್ತನೆ ನಡೆದಿದ್ದು, ಈಗ ಸುರಿಯುತ್ತಿರುವ ಮಳೆ ರೈತರಿಗೆ ಆಶಾದಾಯಕವಾಗಿದೆ. ರಾಮದುರ್ಗ, ಸವದತ್ತಿ ಸೇರಿದಂತೆ ಕೆಲ ಭಾಗಗಳಲ್ಲಿ ಇನ್ನೂ ಸಮರ್ಪಕ ಮಳೆಯಾಗದಿದ್ದರೂ, ಅಲ್ಲಿಯೂ ಮುಂದಿನ ಎಂಟು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೆಳೆ ಹಾನಿ ಸಮೀಕ್ಷೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆದರೆ, ಸದ್ಯಕ್ಕೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದ ಅವರು, ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಆರಂಭಿಸಿದಂತೆ ಅಗತ್ಯ ಎನಿಸಿದರೆ, ಇಲ್ಲಿಯೂ ಮೋಡ ಬಿತ್ತನೆ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.&lt;/p&gt;&lt;p&gt;ನಗರದಲ್ಲಿ ನೀರಿನ ಪೈಪ್&zwnj;ಲೈನ್ ಅಳವಡಿಕೆಗಾಗಿ ರಸ್ತೆಗಳನ್ನು ಅಗೆದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇದು ಎಲ್ ಆ್ಯಂಡ್ ಟಿ ಕಂಪನಿಯಿಂದ ಉಂಟಾಗಿರುವ ಸಮಸ್ಯೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಈಗಾಗಲೇ ಹಲವು ಬಾರಿ ಸಭೆ ನಡೆಸಿದ್ದೇವೆ. ಎಲ್ ಆ್ಯಂಡ್&zwnj; ಟಿ ಕಂಪನಿಯವರು ನಾಲ್ಕೈದು ವರ್ಷಗಳಿಂದ ರಸ್ತೆ ಅಗೆದು ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಲು ಸೂಚಿಸುತ್ತೇನೆ. ಮಳೆಗಾಲದಲ್ಲಿ ಇಂತಹ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಲಾಗುವುದು. ಮಳೆಯಿಂದ ಜಿಲ್ಲೆಯ ವಿವಿಧೆಡೆ ಹದಗೆಟ್ಟಿರುವ ರಸ್ತೆಗಳನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗುವುದು. ಮಳೆಗಾಲ ಮುಗಿದ ಬಳಿಕ ಹಂತ ಹಂತವಾಗಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬೆಳಗಾವಿ ನಗರದಲ್ಲಿ ಫುಟ್&zwnj;ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ತೆರವಿಗೆ ಮುನ್ನ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅಗತ್ಯ ಸಮಯಾವಕಾಶ ನೀಡುವಂತೆ ಅಕಾರಿಗಳಿಗೆ ಸೂಚಿಸಲಾಗುವುದು ಎಂದರು.&lt;/p&gt;&lt;p&gt;ಯಮಕನಮರಡಿಯ ಹುಣಸಿಕೊಳ್ಳಮಠದಲ್ಲಿ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ಅಷ್ಟಗಿ ಅವರು ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೊಂದು ಹೊಸದಾಗಿ ಶುರುವಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಎಲ್ಲದಕ್ಕೂ ನಮ್ಮನ್ನೇ ಹೊಣೆ ಮಾಡುತ್ತಾರೆ. ಮೂಲೆಯಲ್ಲಿ ಎಮ್ಮೆ, ನಾಯಿ ಸತ್ತರೂ ನಮ್ಮನ್ನೇ ದೂರುತ್ತಾರೆ. 2028ರವರೆಗೆ ಇಂತಹ ಆರೋಪಗಳು ಬರುತ್ತಲೇ ಇರುತ್ತವೆ. ಹಲ್ಲೆ ಕುರಿತು ವಿಚಾರವಾಗಿ ಶ್ರೀಸಿದ್ಧಬಸವ ಸ್ವಾಮೀಜಿಯವರ ಹೇಳಿಕೆ ಗಮನಿಸಿದ್ದೇನೆ. ವೈಯಕ್ತಿಕ ಕಾರಣದಿಂದಾಗಿ ಘಟನೆ ನಡೆದಿದೆ. ಕೆಲವರಿಗೆ ಸುಳ್ಳು ಆರೋಪ ಮಾಡುವುದೇ ಕೆಲಸವಾಗಿದೆ ಎಂದು ತಿರುಗೇಟು ನೀಡಿದರು.&lt;/p&gt;&lt;p&gt;ಇನ್ನು, ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಸಚಿವ ಸಂಪುಟದಲ್ಲಿ ಇನ್ನೂ ಸುಮಾರು ೨೦ ಸ್ಥಾನಗಳು ಖಾಲಿ ಇದ್ದು, ಆದಷ್ಟು ಬೇಗ ವಿಸ್ತರಣೆ ನಡೆಯುವ ನಿರೀಕ್ಷೆಯಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/government-considering-cloud-seeding-in-belagavi-district-after-haveri-rain-deficient-mrq/articleshow-6d901co"/>
        </item>
        <item>
            <title><![CDATA[KPSC: ಪುತ್ರಿಯರಿಗೆ ಸರ್ಕಾರಿ ಹುದ್ದೆ ಕೊಡಿಸಲು ಸುಳ್ಳು ಪತ್ರ ಕೇಸ್ ಈಗ ರಾಜ್ಯಪಾಲರ ಅಂಗಳದಲ್ಲಿ! ರಾಜೀನಾಮೆ ನೀಡ್ತಾರಾ ಸಾಹುಕಾರ್‌?]]></title>
            <link>https://kannada.asianetnews.com/state/fake-income-certificates-for-daughters-karnataka-governor-s-key-decision-on-kpsc-chairman-sahukar-rav/articleshow-3yuhudq</link>
            <guid isPermaLink="true">https://kannada.asianetnews.com/state/fake-income-certificates-for-daughters-karnataka-governor-s-key-decision-on-kpsc-chairman-sahukar-rav/articleshow-3yuhudq</guid>
            <pubDate>Sun, 05 Jul 2026 07:54:02 +0530</pubDate>
            <description><![CDATA[ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಭವಿಷ್ಯ ರಾಜ್ಯಪಾಲರು ನಿರ್ಧರಿಸುವ ನಿರ್ಣಾಯಕ ಹಂತ ತಲುಪಿದೆ. ರಾಜ್ಯಪಾಲರ ನಿರ್ಧಾರವೇನು?]]></description>
            <media:content url="https://static.asianetnews.com/images/w-1280,h-720,format-jpg,imgid-01kwr11gfmnnaspes638fyj4pw,imgname-----------------------2026-07-05t073853.013-1783217832436.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಏನು ಮಾಡಬಹುದು?&lt;/strong&gt;&lt;/p&gt;&lt;p&gt;1. ಕೆಪಿಎಸ್ಸಿ ಅಧ್ಯಕ್ಷರನ್ನು ನೇರವಾಗಿ ಪದಚ್ಯುತಗೊಳಿಸುವ ಅಧಿಕಾರ ದೇಶದ ರಾಷ್ಟ್ರಪತಿಗಳಿಗೆ ಮಾತ್ರವೇ ಇದೆ&lt;/p&gt;&lt;p&gt;2. ಆಯೋಗದ ಸದಸ್ಯರ ನಿರ್ಣಯದ ಆಧರಿಸಿ ಅಧ್ಯಕ್ಷರನ್ನು ಗೌರ್ನರ್ ಸಸ್ಪೆಂಡ್&zwnj; ಮಾಡಿ ತನಿಖೆಗೆ ಆದೇಶಿಸಬಹುದು&lt;/p&gt;&lt;p&gt;3. ಪದಚ್ಯುತಗೊಳಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚಿಸಬಹುದು&lt;/p&gt;&lt;p&gt;4. ಕೆಪಿಎಸ್&zwnj;ಸಿ ಅಧ್ಯಕ್ಷರ ವಿಚಾರವಾಗಿ ರಾಜ್ಯ ಸರ್ಕಾರದ ಜತೆ ಚರ್ಚಿಸಿ ಅಭಿಪ್ರಾಯವನ್ನು ಸಂಗ್ರಹ ಮಾಡಬಹುದು&lt;/p&gt;&lt;p&gt;5. ತನಿಖಾ ವರದಿಯೊಂದಿಗೆ ಕೆಪಿಎಸ್ಸಿ ಅಧ್ಯಕ್ಷರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಕಳುಹಿಸಬಹುದು&lt;/p&gt;&lt;p&gt;--&lt;/p&gt;&lt;p&gt;&lt;strong&gt;&amp;nbsp;ಬೆಂಗಳೂರು: &lt;/strong&gt;ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್&zwnj;ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಭವಿಷ್ಯ ರಾಜ್ಯಪಾಲರು ನಿರ್ಧರಿಸುವ ನಿರ್ಣಾಯಕ ಹಂತ ತಲುಪಿದೆ. ರಾಜ್ಯಪಾಲರಾದ ಥಾವರ್&zwnj;ಚಂದ್&zwnj; ಗೆಹಲೋತ್&zwnj; ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.&lt;/p&gt;&lt;p&gt;ಕೆಪಿಎಸ್ಸಿ ಅಧ್ಯಕ್ಷರು ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ದಾಖಲೆ ಪರಿಶೀಲನೆವರೆಗೂ ನೇಮಕಾತಿಯ ಎಲ್ಲ ಪ್ರಕ್ರಿಯೆಗಳಲ್ಲೂ ಅಧ್ಯಕ್ಷರು ಪಾಲ್ಗೊಂಡಿದ್ದರು. ದಾಖಲೆ ಪರಿಶೀಲನೆ ವೇಳೆ ಸುಳ್ಳು ಪ್ರಮಾಣ ಪತ್ರ ಹಾಗೂ ಅದು ಅವರ ಪುತ್ರಿ ಎಂಬುದು ಗಮನಕ್ಕೆ ಬಂದ ಮೇಲೆ ಜೂ.19ರ ಸಭೆಯಿಂದ ದೂರ ಉಳಿಯುವುದಾಗಿ ಅಧ್ಯಕ್ಷರು ಪತ್ರ ನೀಡಿದ್ದಾರೆ. ಇದು ಅಕ್ರಮವಾಗಿದ್ದು, ಅವರು ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆಯುವುದು ಇತರ ಸದಸ್ಯರನ್ನು ಅನುಮಾನ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಅವರು ರಾಜೀನಾಮೆ ನೀಡಲಿ ಎಂದು ಆಯೋಗದ ಸದಸ್ಯರು ನಿರ್ಣಯಿಸಿದ್ದಾರೆ.&lt;/p&gt;&lt;p&gt;ಪ್ರಕರಣ ಇತ್ಯರ್ಥವಾಗುವವರೆಗೆ ನೇಮಕಾತಿ ಪ್ರಕ್ರಿಯೆಗಳಿಂದ ಅಧ್ಯಕ್ಷರನ್ನು ದೂರವಿಡಬೇಕು. ಸುಮಾ ಎಸ್. ಸಾಹುಕಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಳ್ಳು ಆದಾಯ ಪ್ರಮಾಣ ಪತ್ರ ಪಡೆಯಲು ಸಹಕರಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಕೂಡಲೇ ಸರ್ಕಾರಕ್ಕೆ ಈ ಕುರಿತ ವಿವರವಾದ ವರದಿ ಕಳುಹಿಸಬೇಕು ಎಂದೂ ಆಯೋಗದ ಸದಸ್ಯರ ಸಭೆ ನಿರ್ಣಯಿಸಿ ರಾಜ್ಯಪಾಲರ ಗಮನಕ್ಕೂ ತಂದಿದೆ. ಇದಾದ ನಂತರ ರಾಜ್ಯಪಾಲರು ಆಯೋಗದ ಕಾರ್ಯದರ್ಶಿ ಜ್ಯೋತಿ ಅವರನ್ನು ಕರೆಯಿಸಿಕೊಂಡು ಪ್ರಕರಣದ ಸಂಪೂರ್ಣ ವಿವರ, ದಾಖಲೆಗಳನ್ನು ಪಡೆದುಕೊಂಡಿದ್ದಾರೆ.&lt;/p&gt;&lt;p&gt;ಈ ನಡುವೆ ಜೂ.19ರ ಸಭೆಯ ನಡಾವಳಿಗಳ ವರದಿ ಈಗ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಸಲ್ಲಿಕೆಯಾಗಿದೆ. ಅವರು ಸಹಿ ಹಾಕಿದ ನಂತರ ನಡಾವಳಿ ಸೇರಿ ವಿವರವಾದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಸಭೆಯ ನಿರ್ಣಯ ಕುರಿತು ಪ್ರತಿಕ್ರಿಯೆಗಾಗಿ &lsquo;ಕನ್ನಡಪ್ರಭ&rsquo;ವು ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಸಂಪರ್ಕಿಸಿದಾಗ, ನನ್ನ ರಾಜೀನಾಮೆ ಕೇಳಲು ಅವರಾರು? ಈಗಾಗಲೇ ಪತ್ರಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಮತ್ತೆ ಮತ್ತೆ ಕೇಳಬೇಡಿ ಎಂದು ಕರೆ ಕಡಿತಗೊಳಿಸಿದರು.&lt;/p&gt;&lt;p&gt;&lt;strong&gt;ಸರ್ಕಾರ ಏನು ಮಾಡಬಹುದು?:&lt;/strong&gt;&lt;/p&gt;&lt;p&gt;ಈ ಎಲ್ಲ ಘಟನೆಗಳ ಕುರಿತು ತುರ್ತಾಗಿ ಆಯೋಗದ ಕಾರ್ಯದರ್ಶಿಗಳಿಂದ ವರದಿ ತರಿಸಿಕೊಳ್ಳಬಹುದು. ಮುಖ್ಯಮಂತ್ರಿಗಳು ನೇರವಾಗಿ ಕೆಪಿಎಸ್ಸಿ ಅಧ್ಯಕ್ಷರನ್ನು ಕರೆಸಿ ಮಾತನಾಡಿ, ರಾಜೀನಾಮೆ ನೀಡುವಂತೆ ಸಲಹೆ ಕೊಡಬಹುದು. ಸ್ವಯಂ ಪ್ರೇರಿತರಾಗಿ ರಾಜ್ಯಪಾಲರಿಗೆ ಕೆಪಿಎಸ್ಸಿ ಅಧ್ಯಕ್ಷರ ಕುರಿತು ಅಭಿಪ್ರಾಯಗಳನ್ನು ಕಳುಹಿಸಬಹುದು.&lt;/p&gt;&lt;p&gt;&lt;strong&gt;ರಾಜೀನಾಮೆ ನೀಡ್ತಾರಾ?&lt;/strong&gt;&lt;/p&gt;&lt;p&gt;ಈ ಎಲ್ಲ ಪ್ರಕ್ರಿಯೆಗಳು ನಡೆಯುವ ತನಕ ಕಾದು ಕೂರದೆ ಕೆಪಿಎಸ್ಸಿ ಅಧ್ಯಕ್ಷರು ರಾಜೀನಾಮೆ ನೀಡಲೂಬಹುದು. ಸುಳ್ಳು ಆದಾಯ ಪ್ರಮಾಣ ಪತ್ರ ಮಾತ್ರವಲ್ಲದೆ, ಸುಮಾ ಅವರು ಸಲ್ಲಿಸಿರುವ ಪದವಿ ಪ್ರಮಾಣ ಪತ್ರದ ಕುರಿತೂ ಆಯೋಗಕ್ಕೆ ಕೆಲ ಸಂಶಯಗಳಿವೆ. ಸಾಮಾನ್ಯ ಅಭ್ಯರ್ಥಿಗಳ ಮೇಲಾಗುವಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿ ತನಿಖೆ ನಡೆಸುವ ಪ್ರಕ್ರಿಯೆಯಿಂದ ಅಲ್ಪಮಟ್ಟಿಗೆ ರಕ್ಷಣೆ ಪಡೆಯಲು ರಾಜೀನಾಮೆ ನೀಡದೆ ಮುಂದುವರೆಯುವ ಸಾಧ್ಯತೆಯೇ ಹೆಚ್ಚಾಗಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/fake-income-certificates-for-daughters-karnataka-governor-s-key-decision-on-kpsc-chairman-sahukar-rav/articleshow-3yuhudq"/>
        </item>
        <item>
            <title><![CDATA[Ilakal: ಅಂಧ ಅನಾಥ ಯುವತಿ ಹುಲಿಗೆಮ್ಮಾಳ ಬಾಳಿಗೆ ಬೆಳಕಾದ ನಾಗರಾಜ್; ಅಪರೂಪದ ಮದುವೆ]]></title>
            <link>https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h</link>
            <guid isPermaLink="true">https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h</guid>
            <pubDate>Sun, 05 Jul 2026 07:44:55 +0530</pubDate>
            <description><![CDATA[ಹುಟ್ಟು ಕುರುಡಿಯಾದ ಅನಾಥ ಯುವತಿ ಹುಲಿಗೆಮ್ಮಳನ್ನು, ತಾನೂ ಅನಾಥನಾದ ನಾಗರಾಜ ಎಂಬ ಯುವಕ ಮದುವೆಯಾಗಿದ್ದಾನೆ. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಈ ಮದುವೆಯ ಸಂಪೂರ್ಣ ಖರ್ಚು ವಹಿಸಿ, ನವ ದಂಪತಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr0hrcmxgfp9vxrt134km7q,imgname-marriage--1--1783217316244.jpg" type="image/jpeg" height="390" width="690"/>
            <content:encoded><![CDATA[&lt;p&gt;ಬಾಗಲಕೋಟೆ: ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಹುಟ್ಟು ಕುರುಡಿಯಾಗಿದ್ದ ಯುವತಿಯ ಬಾಳಿಗೆ ಬೆಳಕಾದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.&lt;/p&gt;&lt;p&gt;ಹೌದು!! ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಇಲಕಲ್ಲ ನಗರದ ಅಂಬಾಭವಾನಿ ದೇವಸ್ಥಾನ. ಇಳಕಲ್ಲ ನಗರದ ಅಂಧ ಯುವತಿ ಹುಲಿಗೆಮ್ಮ ತಿಪ್ಪಣಸಾ ರಾಯಬಾಗಿ ಎಂಬ ಯುವತಿ ಕೈಹಿಡಿದು ಆಕೆಯೆ ಬಾಳಿಗೆ ಬೆಳಕಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್&zwnj; ಮೂಲದ ನಾಗರಾಜ ಪರಶುರಾಮಸಾ ಖೋಡೆ. ಇತನಿಗೂ ತಂದೆ -ತಾಯಿ ಇಲ್ಲದ ಅನಾಥನಾಗಿದ್ದ. ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೇ ಆತನ ಸ್ನೇಹಿತರಿಂದ ಹುಲಿಗೆಮ್ಮಳ ಬಗ್ಗೆ ಹೇಳಿದ್ದ ಆಕೆ ಕುರುಡಿಯಾಗಿದ್ದರೂ ಆಕೆಗೆ ಬಾಳು ಕೊಡಯವುದಾಗಿ ಹೇಳಿ ಶುಕ್ರವಾರ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.&lt;/p&gt;&lt;h2&gt;&lt;strong&gt;ಮದುವೆಗೆ ಹಣಕಾಸಿನ ತೊಂದರೆ&lt;/strong&gt;&lt;/h2&gt;&lt;p&gt;ಮದುವೆ ಏನೋ ನಿಶ್ಚಿಯವಾಯಿತು. ಆದರೆ, ಅದರ ಖರ್ಚು ವೆಚ್ಚಕ್ಕೆ ಮುಂದೆ ಬಂದವರು ಇಲಕಲ್ಲ ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಬಾಂಧವರು. ಎಲ್ಲ ಬಾಂಧವರು ಸೇರಿಕೊಂಡು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಸಿಕೊಟ್ಟರು. ವಧು-ವರರ ಲಗ್ನಕ್ಕೆ ಅಗತ್ಯವಿರುವ ಒಡುವೆ-ವಸ್ತ್ರದ ಸಂಪೂರ್ಣ ಖರ್ಚು ಭರಿಸಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬೆಳಗಾವಿ: ಹಿಂದೂ ಮದುವೆ, ಮುಸ್ಲಿಮರ ಸಾರಥ್ಯ: ಅನ್ಯಧರ್ಮದ ಮಕ್ಕಳಿಗೆ ಆಸರೆಯಾದ ಮುಲ್ಲಾ ದಂಪತಿ&lt;/strong&gt;&lt;/p&gt;&lt;p&gt;ಮುಂದಿನ ಜೀವನೋಪಾಯಕ್ಕೆ ಅನುಕೂಲವಾಗಲೆಂದು ₹ 15,000 ಗಳನ್ನು ನೀಡಿ ಸಹಾಯಹಸ್ತ ಚಾಚಿದ್ದಾರೆ. ನಗರದ ಸಾರ್ವಜನಿಕರು ಮದುವೆ ಬಂದು ನೂತನ ವಧು-ವರನಿಗೆ ಶುಭ ಹಾರೈಸಿದರು. ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Special Marriage: ಭಾವನೆಗಳ ಮೂಲಕವೇ ನಡೆದ ಅಪರೂಪದ ಮದುವೆ: ಹೃದಯದ ಭಾಷೆ, ಮೌನವೇ ಸಂಭಾಷಣೆ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bagalkote-ilakal-special-marriage-nagaraj-a-young-man-married-blind-and-an-orphan-girl-huligemma-mrq/articleshow-h6ica2h"/>
        </item>
        <item>
            <title><![CDATA[11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ; ಚಿಕ್ಕರೂಗಿ ರೈತನ ಬೆರಗುಗೊಳಿಸಿದ ಸಾಧನೆ!]]></title>
            <link>https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh</link>
            <guid isPermaLink="true">https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh</guid>
            <pubDate>Sun, 05 Jul 2026 07:35:28 +0530</pubDate>
            <description><![CDATA[ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಗಳಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಸಾಧನೆಯನ್ನು ಗೌರವಿಸಿ, ಗ್ರಾಮಸ್ಥರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ಘಟನೆಯು ಕೃಷಿಯಿಂದ ವಿಮುಖರಾಗುತ್ತಿರುವ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದು ಪ್ರಗತಿಪರ ರೈತರು ಶ್ಲಾಘಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwr04jdj2e2v53ydqwa9yvrn,imgname-farmer-1783216884145.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ವಿಜಯಪುರ: &lt;/strong&gt;ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ರೈತ ಮುಖಂಡರಾದ ಹಣಮಂತ್ರಾಯ ಮುಳಜಿ ಅವರ ಅಪೇಕ್ಷೆಯಂತೆ ಮತ್ತು ಅವರ ಆಸೆಯಂತೆ ಗ್ರಾಮದ ಅಶೋಕಗೌಡ ಪಾಟೀಲ ಅವರ ಜಮೀನಿನಲ್ಲಿ ರೈತ ಮಲ್ಲಪ್ಪ ರೊಟ್ಟಿ ಅವರು ಸತತ 11 ಗಂಟೆಯಲ್ಲಿ 18 ಎಕರೆ ಜಮೀನು ಬಿತ್ತನೆ ಮಾಡುವುದರ ಮೂಲಕ ಸಾಧನೆ ಮಾಡಿದ್ದಾರೆ. ರೈತನ ಸಾಧನೆಗೆ ಸಂತಸಗೊಂಡ ಊರಿನ ರೈತರು ರೈತ ದಂಪತಿಯನ್ನು ಚಕ್ಕಡಿಬಂಡಿಯಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.&lt;/p&gt;&lt;h2&gt;&lt;strong&gt;ರೈತರಲ್ಲಿ ಹೊಸ ಹುರುಪು&lt;/strong&gt;&lt;/h2&gt;&lt;p&gt;ಪ್ರಗತಿ ಪರ ರೈತ, ಪಿಕೆಪಿಎಸ್ ಅಧ್ಯಕ್ಷರಾದ ನಾಗಣ್ಣ ಮುಳಜಿ ಅವರು ರೈತ ದಂಪತಿಯನ್ನು ತಮ್ಮ ಮನೆಗೆ ಕರಿಸಿ ಬಟ್ಟೆ ಆಹೇರಿ ಮಾಡಿ ಸತ್ಕರಿಸಿದರು. ಈ ಬೇಳೆ ಮಾತನಾಡಿದ ಅವರು, ರೈತನ ಸಾಧನೆಯಿಂದ ರೈತರಲ್ಲಿ ಹೊಸ ಹುರುಪು ಮೂಡಿಸಿದೆ. ಒಕ್ಕಲುತನದಿಂದ ದೂರ ಉಳಿಯುತ್ತಿರುವ ಇಂದಿನ ದಿನದಲ್ಲಿ ಯುವ ಸಮುದಾಯಕ್ಕೆ ಇದೊಂದು ಪ್ರೆರಣೆಯಾಗಿದೆ ಎಂದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;ಬಡ ರೈತನ ಕೋಟ್ಯಧಿಪತಿ ಮಾಡುವ ಮೇಕೆ; ನಿತ್ಯ 5 ಲೀಟರ್ ಹಾಲು ಕೊಡುವ ಈ ವಿದೇಶಿ ತಳಿ ರೈತರ ಪಾಲಿಗೆ ಕಾಮಧೇನು!&lt;/strong&gt;&lt;/p&gt;&lt;p&gt;ಈ ವೇಳೆ ಊರಿನ ರೈತರಾದ ನಿಲಕಂಠ ಬೆನಕನಹಳ್ಳಿ, ಬಸವರಾಜ ಹೊಸಮನಿ, ಮಹಾಂತೇಶ ಉಡಗಿ, ಸಿಂಧೂರ ಪೂಜಾರಿ, ಲಗಮಣ್ಣ ಪೂಜಾರಿ, ಹಣಮಂತ ಕಂಬಾರ, ಭೀಮಾಶಂಕರ ಪ್ಯಾಟಿ, ದೇವಾನಂದ್ ಬಾಗಲಕೋಟ, ಗಂಗಪ್ಪ ಇಮ್ಮನ, ಮಹಾದೇವ ಕಡ್ಲೇವಾಡ, ಸಂತೋಷ ಹಾದಿಮನಿ, ಬಾಬು ಖೋಜೀಗಿರ, ಜಟ್ಟೇಪ್ಪ ಯಳಕೋಟಿ, ಸಿದ್ದು ಕಡ್ಲೇವಾಡ, ದಾನಪ್ಪಗೌಡ ಪಾಟೀಲ, ಮಂಜುನಾಥ ಬಾಗಲಕೋಟ, ಶಶಿಕಾಂತ ಚಕ್ಕಡಿ, ದೇವಾನಂದ ಉಡಗಿ, ಸಂತೋಷ ಸಿಂದಗಿ ಸೇರಿದಂತೆ ಹಲವರು ರೈತರು ಉಪಸ್ಥಿತರಿದ್ದರು.&lt;/p&gt;&lt;p&gt;&lt;strong&gt;ಇದನ್ನೂ ಓದಿ: &lt;/strong&gt;&lt;strong&gt;Haveri: ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ&lt;/strong&gt;&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/vijayapura-devara-hipparagi-sowing-18-acres-of-land-in-11-hours-amazing-achievement-of-a-chikkarugi-farmer-mrq/articleshow-vuypnkh"/>
        </item>
        <item>
            <title><![CDATA[ಬಡತನ ನಿವಾರಿಸಲು 4 ಶಕ್ತಿಶಾಲಿ ರತ್ನಗಳು, ಸಾಲ ತೀರುತ್ತಂತೆ]]></title>
            <link>https://kannada.asianetnews.com/gallery/festivals/four-powerful-gemstones-attract-massive-wealth-money-suh-cifd6t6</link>
            <guid isPermaLink="true">https://kannada.asianetnews.com/gallery/festivals/four-powerful-gemstones-attract-massive-wealth-money-suh-cifd6t6</guid>
            <pubDate>Sun, 05 Jul 2026 07:30:46 +0530</pubDate>
            <description><![CDATA[ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳ ಶಕ್ತಿಯನ್ನು ನಮ್ಮ ಜೀವನದಲ್ಲಿ ತರಲು ವಿವಿಧ ರತ್ನಗಳನ್ನು ಧರಿಸಲು ಹೆಳಲಾಗುತ್ತದೆ. ಸಾಮಾನ್ಯ ಜನರು ಸಹ ಇವುಗಳನ್ನು ಧರಿಸಿದರೆ ಅದೃಷ್ಟವನ್ನು ಪಡೆಯುತ್ತಾರಂತೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwqzv9c8rnfbspmsn8w1hd8q,imgname-gemstones-1783216579976.jpg" type="image/jpeg" height="390" width="690"/>
            <content:encoded><![CDATA[&lt;p&gt;ಜ್ಯೋತಿಷ್ಯದಲ್ಲಿ ಒಂಬತ್ತು ಗ್ರಹಗಳ ಶಕ್ತಿಯನ್ನು ನಮ್ಮ ಜೀವನದಲ್ಲಿ ತರಲು ವಿವಿಧ ರತ್ನಗಳನ್ನು ಧರಿಸಲು ಹೆಳಲಾಗುತ್ತದೆ. ಸಾಮಾನ್ಯ ಜನರು ಸಹ ಇವುಗಳನ್ನು ಧರಿಸಿದರೆ ಅದೃಷ್ಟವನ್ನು ಪಡೆಯುತ್ತಾರಂತೆ.&lt;/p&gt;&lt;img&gt;&lt;p&gt;ಜ್ಯೋತಿಷ್ಯದಲ್ಲಿ ಜ್ಯೋತಿಷ್ಯಿಗಳು ಜನರ ಜೀವನದಲ್ಲಿ ಒಂಬತ್ತು ಗ್ರಹಗಳ ಗಟ್ಟಿ ಯಾಗಲು ಮತ್ತು ಅದರ ಶಕ್ತಿ ಸಿಗಲು ವಿವಿಧ ರತ್ನಗಳನ್ನು ಧರಿಸಲು ಹೇಳುತ್ತಾರೆ. ಅವುಗಳಲ್ಲಿ ಕೆಲವನ್ನು 'ಹಣದ ಆಯಸ್ಕಾಂತಗಳು' ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳು ಹಣ ಮತ್ತು ಸಂಪತ್ತನ್ನು ತಮ್ಮತ್ತ ಆಕರ್ಷಿಸುವ ಅದ್ಭುತ ಶಕ್ತಿಯನ್ನು ಹೊಂದಿವೆ. ಆರ್ಥಿಕ ಒತ್ತಡವನ್ನು ನಿವಾರಿಸುವ ಮತ್ತು ನಗದು ಹರಿವನ್ನು ಹೆಚ್ಚಿಸುವ 4 ಶಕ್ತಿಶಾಲಿ ರತ್ನಗಳ ಬಗ್ಗೆ ವಿವರವಾಗಿ ನೋಡೋಣ.&lt;/p&gt;&lt;img&gt;&lt;p&gt;ಬುದ್ಧಿಶಕ್ತಿಯ ಅಧಿಪತಿ ಬುಧನ ರತ್ನವು ಪಚ್ಚೆ ಹಸಿರು. ಈ ಕಲ್ಲು ಜಾಣ್ಮೆ, ವ್ಯವಹಾರ ಕುಶಾಗ್ರಮತಿ ಮತ್ತು ವಾಗ್ಮಿತೆಗೆ ಕಾರಣವಾಗುತ್ತದೆ. ಪಚ್ಚೆ ಧರಿಸುವುದರಿಂದ ಸರಿಯಾದ ಸಮಯದಲ್ಲಿ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ. ಮಾರ್ಕೆಟಿಂಗ್, ಬ್ಯಾಂಕಿಂಗ್, ಬರವಣಿಗೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿರುವವರು ಅನೇಕ ಪಟ್ಟು ಲಾಭಗಳನ್ನು ಕಾಣುತ್ತಾರೆ.&lt;/p&gt;&lt;img&gt;&lt;p&gt;ಈ ರತ್ನವು ಒಂಬತ್ತು ಗ್ರಹಗಳ ರಾಜನಾದ ಸೂರ್ಯನ ಶಕ್ತಿಯನ್ನು ಹೊಂದಿದೆ. ಜ್ಯೋತಿಷ್ಯದ ಪ್ರಕಾರ, ಈ ಕಲ್ಲು ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ. ಇದರ ಮೂಲಕ ಜನರು ಹಣಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ರತ್ನವು ಒಬ್ಬರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೀಡುತ್ತದೆ ಮತ್ತು ಅವರನ್ನು ಆರ್ಥಿಕ ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಆದ್ದರಿಂದ, ಇದು ಪರೋಕ್ಷವಾಗಿ ಸಂಪತ್ತು ಮತ್ತು ಪ್ರತಿಷ್ಠೆಯೊಂದಿಗೆ ಸಂಬಂಧ ಹೊಂದಿದೆ.&lt;/p&gt;&lt;img&gt;&lt;p&gt;ಶುಭ ಗ್ರಹ ಗುರುವಿನ (ಗುರು) ರತ್ನವು ಪುಷ್ಪರತ್ನ. ಜ್ಯೋತಿಷ್ಯದ ನಿಯಮಗಳ ಪ್ರಕಾರ, ಈ ಕಲ್ಲು ಒಬ್ಬ ವ್ಯಕ್ತಿಗೆ ಅಪಾರ ಆರ್ಥಿಕ ಬೆಳವಣಿಗೆ, ಬುದ್ಧಿವಂತಿಕೆ ಮತ್ತು ದೊಡ್ಡ ಅದೃಷ್ಟವನ್ನು ತರುತ್ತದೆ. ಜಾತಕದ ಪ್ರಕಾರ ಇದನ್ನು ಧರಿಸುವುದರಿಂದ, ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಲಾಭದಾಯಕ ಅವಕಾಶಗಳು ಬರುತ್ತವೆ. ದೀರ್ಘಾವಧಿಯ ಹಣದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.&lt;/p&gt;&lt;img&gt;&lt;p&gt;ಫೆಂಗ್ ಶೂಯಿ ಮತ್ತು ಕ್ರಿಸ್ಟಲ್ ಹೀಲಿಂಗ್&zwnj;ನಲ್ಲಿ, ಸಿಟ್ರಿನ್ ಅನ್ನು ಹಣವನ್ನು ಆಕರ್ಷಿಸಲು ಅತ್ಯಂತ ಶಕ್ತಿಶಾಲಿ ಕಲ್ಲು ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಇದನ್ನು 'ಹಣದ ಕಲ್ಲು' ಅಥವಾ 'ವ್ಯಾಪಾರಿಗಳ ಕಲ್ಲು' ಎಂದೂ ಕರೆಯುತ್ತಾರೆ. ಇದು ಅಡೆತಡೆಯಿಲ್ಲದ ನಗದು ಹರಿವು ಮತ್ತು ಸಕಾರಾತ್ಮಕ ಶಕ್ತಿಗೆ ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ, ಅನೇಕ ಉದ್ಯಮಿಗಳು ಮತ್ತು ವ್ಯಾಪಾರಿಗಳು ಈ ಕಲ್ಲನ್ನು ತಮ್ಮ ಕಚೇರಿ, ನಗದು ಕೌಂಟರ್ ಅಥವಾ ನಗದು ಪೆಟ್ಟಿಗೆಯಲ್ಲಿ ಇಡುತ್ತಾರೆ.&lt;/p&gt;]]></content:encoded>
            <category><![CDATA[festivals]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/festivals/four-powerful-gemstones-attract-massive-wealth-money-suh-cifd6t6"/>
        </item>
        <item>
            <title><![CDATA[ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ನಂ.1 ಯಾರ್‍ಯಾರಿದ್ದಾರೆ ಲಿಸ್ಟ್‌ನಲ್ಲಿ?]]></title>
            <link>https://kannada.asianetnews.com/business/bengaluru-leads-avendus-wealth-hurun-u30-list-with-21-founders-rav/articleshow-hdcnwc9</link>
            <guid isPermaLink="true">https://kannada.asianetnews.com/business/bengaluru-leads-avendus-wealth-hurun-u30-list-with-21-founders-rav/articleshow-hdcnwc9</guid>
            <pubDate>Sun, 05 Jul 2026 07:23:26 +0530</pubDate>
            <description><![CDATA[Avendus Wealth Hurun U30 List ಅವೆಂಡಸ್‌ ವೆಲ್ತ್‌ ಹುರೂನ್‌ ಇಂಡಿಯಾ ಲಿ. ಬಿಡುಗಡೆ ಮಾಡಿದ 2026ನೇ ಸಾಲಿನ 30 ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂಬೈ ಹಿಂದಕ್ಕಿ ಬೆಂಗಳೂರು ಈ ಸ್ಥಾನ ಪಡೆದಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwqzemg9rc5k53m57djzx6kg,imgname-----------------------2026-07-05t071839.931-1783216165385.jpg" type="image/jpeg" height="390" width="690"/>
            <content:encoded><![CDATA[&lt;p&gt;Avendus Wealth Hurun U30 List:&lt;/p&gt;&lt;p&gt;&lt;strong&gt;ನವದೆಹಲಿ (ಜು.5) &lt;/strong&gt;ಅವೆಂಡಸ್&zwnj; ವೆಲ್ತ್&zwnj; ಹುರೂನ್&zwnj; ಇಂಡಿಯಾ ಲಿ. ಬಿಡುಗಡೆ ಮಾಡಿದ 2026ನೇ ಸಾಲಿನ 30 ಮತ್ತು ಅದಕ್ಕಿಂತ ಕೆಳಗಿನ ವಯಸ್ಸಿನ ಯುವ ಉದ್ಯಮಿಗಳ ಪಟ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮುಂಬೈ ಹಿಂದಿಕ್ಕಿ ಬೆಂಗಳೂರು ಈ ಸ್ಥಾನ ಪಡೆದಿದೆ.&lt;/p&gt;&lt;p&gt;ಕಳೆದ ವರ್ಷ ಬೆಂಗಳೂರಿನ ಏಳು ಯುವ ಉದ್ಯಮಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೆ, ಈ ಬಾರಿ 102 ಜನರ ಪೈಕಿ ಬೆಂಗಳೂರಿನ 21 ಉದ್ಯಮಿಗಳು ಸ್ಥಾನ ಗಿಟ್ಟಿಸಿದ್ದಾರೆ. ಕಂಪನಿಗಳ ಮಾರುಕಟ್ಟೆ ಮೌಲ್ಯ 2.5- 5 ಕೋಟಿ ಡಾಲರ್&zwnj;ಗಿಂತ ಹೆಚ್ಚಿರುವ ವ್ಯಕ್ತಿಗಳನ್ನು ಪಟ್ಟಿಗೆ ಪರಿಗಣಿಸಲಾಗಿದೆ (235 ಕೋಟಿ ರು - 475 ಕೋಟಿ ರು.)&lt;/p&gt;&lt;h2&gt;ಯಾರ್&zwj;ಯಾರಿದ್ದಾರೆ ಪಟ್ಟಿಯಲ್ಲಿ?:&lt;/h2&gt;&lt;p&gt;ಬೆಂಗಳೂರಿನಿಂದ ಏರ್&zwnj;ಬೌಂಡ್&zwnj; ಸಂಸ್ಥೆಯ ನಮನ್&zwnj; ಪುಷ್ಪ್&zwnj;(21), ಝೆಪ್ಟೋ ಸಂಸ್ಥೆಯ ಕೈವಲ್ಯ ವೊರಾ (23), ಕಾವಾ ಅಥ್ಲೀಜರ್&zwnj; ಸಂಸ್ಥೆಯ ಬೆಂಗಳೂರಿನ ಶ್ರೇಯಾ ಮಿತ್ತಲ್&zwnj; (23) ಟಾಪ್&zwnj; 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 6 ಜನ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಶ್ರೇಯಾ ಮಿತ್ತಲ್&zwnj; ಮತ್ತು ರಿಯಾ ಮಿತ್ತಲ್&zwnj; ಸ್ಥಾನ ಪಡೆದ ಬೆಂಗಳೂರು ಮೂಲದ ಉದ್ಯಮಿಗಳಾಗಿದ್ದಾರೆ.&lt;/p&gt;&lt;h3&gt;Avendus Wealth Hurun U30 List: &lt;strong&gt;ಕರ್ನಾಟಕ ನಂ.1:&lt;/strong&gt;&lt;/h3&gt;&lt;p&gt;ರಾಜ್ಯಗಳ ಪಟ್ಟಿಯಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜ್ಯದಿಂದ 22 ಮಂದಿ ಉದ್ಯಮಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.&lt;/p&gt;&lt;p&gt;&lt;strong&gt;ಬೆಂಗಳೂರಿನ 18 ಕಂಪನಿ:&lt;/strong&gt;&lt;/p&gt;&lt;p&gt;ಪಟ್ಟಿಯಲ್ಲಿ ಸ್ಥಾನ ಪಡೆದ 18 ಕಂಪನಿಗಳ ಮುಖ್ಯ ಕಚೇರಿ ಬೆಂಗಳೂರಿನಲ್ಲಿವೆ. ಕಳೆದ ವರ್ಷ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿದ್ದ 14 ಕಂಪನಿಗಳು ಸ್ಥಾನಗಿಟ್ಟಿಸಿದ್ದವು.&lt;/p&gt;&lt;p&gt;&lt;strong&gt;ವಿಶ್ವೇಶ್ವರಯ್ಯ ವಿವಿಗೆ 4ನೇ ಸ್ಥಾನ:&lt;/strong&gt;&lt;/p&gt;&lt;p&gt;ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕದ ವಿಶ್ವೇಶ್ವರಯ್ಯ ವಿವಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ವಿವಿಯ ಸುಹಾಸ್&zwnj; ರಾಜ್&zwnj;ಕುಮಾರ್&zwnj; (30), ತನ್ವೀರ್&zwnj; ಅಹಮದ್&zwnj; (28) ಮತ್ತು ಉಜ್ವಲ್&zwnj; ಸುಖೇಜಾ (25) ಅವರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಬಿಟ್ಸ್&zwnj; ಪಿಲಾನಿ ಕಾಲೇಜು ಮೊದಲ ಸ್ಥಾನದಲ್ಲಿದೆ. ಈ ಕಾಲೇಜಿನ 11 ಮಂದಿ ಪಟ್ಟಿಯಲ್ಲಿದ್ದಾರೆ.&lt;/p&gt;]]></content:encoded>
            <category><![CDATA[business]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/business/bengaluru-leads-avendus-wealth-hurun-u30-list-with-21-founders-rav/articleshow-hdcnwc9"/>
        </item>
        <item>
            <title><![CDATA[Bengaluru: 4 ದಿನದಲ್ಲಿ ಫುಟ್‌ಪಾತ್ ತೆರವುಗೊಳಿಸಿದ್ದೆಷ್ಟು? ಇಲ್ಲಿದೆ ನೋಡಿ ಮಾಹಿತಿ]]></title>
            <link>https://kannada.asianetnews.com/karnataka-districts/bengaluru-264-km-of-footpath-encroachment-cleared-in-4-days-minister-krishna-byre-gowda-mrq/articleshow-nkd18yd</link>
            <guid isPermaLink="true">https://kannada.asianetnews.com/karnataka-districts/bengaluru-264-km-of-footpath-encroachment-cleared-in-4-days-minister-krishna-byre-gowda-mrq/articleshow-nkd18yd</guid>
            <pubDate>Sun, 05 Jul 2026 07:23:03 +0530</pubDate>
            <description><![CDATA[ಬೆಂಗಳೂರಿನಲ್ಲಿ ಬಿಬಿಎಂಪಿ ಬೃಹತ್ ಕಾರ್ಯಾಚರಣೆ ನಡೆಸಿ ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿದೆ. ಈ ಕ್ರಮಕ್ಕೆ ಬೀದಿ ಬದಿ ವ್ಯಾಪಾರಿಗಳಿಂದ ವಿರೋಧ ವ್ಯಕ್ತವಾಗಿದ್ದು, ಪಾದಚಾರಿಗಳ ಸುರಕ್ಷತೆಗಾಗಿ ಇದು ಅನಿವಾರ್ಯ ಮತ್ತು ಫುಟ್‌ಪಾತ್ ದುರಸ್ತಿಗೆ ₹70 ಕೋಟಿ ಮೀಸಲಿಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwqzd9pedftqegyzr1g9verz,imgname-bengaluru-footpath-1783216121550.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು: &lt;/strong&gt;ನಗರದಲ್ಲಿ ಶನಿವಾರವೂ ಫುಟ್&zwnj;ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, 64 ಕಿ.ಮೀ ಫುಟ್&zwnj;ಪಾತ್ ಒತ್ತುವರಿ ಮುಕ್ತಗೊಳಿಸಲಾಗಿದೆ. ಕಳೆದ ನಾಲ್ಕು ದಿನಗಳಲ್ಲಿ 264 ಕಿ.ಮೀ ಮಾರ್ಗದಲ್ಲಿನ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.&lt;/p&gt;&lt;p&gt;ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್ ಹಾಗೂ ನೂರಾರು ಅಧಿಕಾರಿಗಳು, ಕಾರ್ಮಿಕರು ಈ ಬೃಹತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.&lt;/p&gt;&lt;p&gt;ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 16 ಕಿ.ಮೀ, ಪಶ್ಚಿಮದಲ್ಲಿ 13.45 ಕಿ.ಮೀ, ಕೇಂದ್ರ ಪಾಲಿಕೆ 13 ಕಿ.ಮೀ, ದಕ್ಷಿಣ ಪಾಲಿಕೆ 10.93 ಕಿ.ಮೀ ಹಾಗೂ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 10.3 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯಿತು. ಒಟ್ಟು 178 ಚಿಕ್ಕ ಅಂಗಡಿ, ವಾಣಿಜ್ಯ ಅಂಗಡಿಗಳು, 198 ತಳ್ಳುಗಾಡಿಗಳು, 321 ಶೀಟ್&zwnj;ಗಳು, ಕ್ಯಾನೋಪಿಗಳು, 241 ಮೆಟ್ಟಿಲುಗಳು, ರ&zwj;್ಯಾಂಪ್&zwnj;ಗಳು, 14 ತಾತ್ಕಾಲಿಕ ಶೆಡ್&zwnj;ಗಳು ಹಾಗೂ 325 ಜಾಹೀರಾತು ಫಲಕಗಳನ್ನು ಜಪ್ತಿ ಮಾಡಲಾಗಿದೆ.&lt;/p&gt;&lt;h2&gt;&lt;strong&gt;214.3 ಟನ್ ಕಟ್ಟಡ ಮತ್ತು ಇತರ ತ್ಯಾಜ್ಯ ತೆರವು&lt;/strong&gt;&lt;/h2&gt;&lt;p&gt;ಕಾರ್ಯಾಚರಣೆಯ ಅಂಗವಾಗಿ ರಸ್ತೆ ಬದಿಯಲ್ಲಿದ್ದ ಒಟ್ಟು 214.3 ಟನ್ ಕಟ್ಟಡ ಮತ್ತು ಇತರ ತ್ಯಾಜ್ಯಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಕೇಂದ್ರ ಮತ್ತು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಕಡೆ ಫುಟ್&zwnj;ಪಾತ್ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಬಿಎ ತಿಳಿಸಿದೆ.&lt;/p&gt;&lt;p&gt;ಪ್ರಮುಖ ವಾಣಿಜ್ಯ ಪ್ರದೇಶವಾಗಿರುವ ಬಿ.ವಿ.ಕೆ ಅಯ್ಯಂಗಾರ್ ರಸ್ತೆಯಲ್ಲಿನ 6 ಪೆಟ್ಟಿ ಅಂಗಡಿಗಳ, 5 ತಳ್ಳುವ ಗಾಡಿಗಳು, 40 ಮೇಲ್ಚಾವಣಿಗಳು, 30 ರ&zwj;್ಯಾಂಪ್ಸ್, ಮೆಟ್ಟಿಲುಗಳು, 10 ಜಾಹೀರಾತು ಫಲಕಗಳು, 2 ತಾತ್ಕಾಲಿಕ ಶೆಡ್ ಹಾಗೂ ಮೆಜೆಸ್ಟಿಕ್ ಹತ್ತಿರ ಧನ್ವಂತರಿ ರಸ್ತೆಯ 1.20 ಕಿ ಮೀ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳಲ್ಲಿ 15 ಪೆಟ್ಟಿ ಅಂಗಡಿಗಳನ್ನು, 4 ತಳ್ಳುವ ಗಾಡಿಗಳು, 10 ಮೇಲ್ಚಾವಣಿ, 25 ಮೆಟ್ಟಿಲುಗಳನ್ನು ತೆರವುಗೊಳಿಸಲಾಗಿದೆ.&lt;/p&gt;&lt;h3&gt;&lt;strong&gt;ವ್ಯಾಪಾರಿಗಳ ವಿರೋಧ&lt;/strong&gt;&lt;/h3&gt;&lt;p&gt;ನಗರದ ಅನೇಕ ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳು ವಿರೋಧ, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದೇವು. ಈಗ ಏಕಾಏಕಿ ಒತ್ತುವರಿ ಎಂದು ಹೇಳಿ ಅಂಗಡಿ ಖಾಲಿ ಮಾಡಿಸಿದರೆ ಜೀವನ ಸಾಗಿಸಲು ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ್ದಾರೆ.&lt;/p&gt;&lt;p&gt;&lt;strong&gt;₹70 ಕೋಟಿ ವೆಚ್ಚದಲ್ಲಿ ಫುಟ್ಪಾತ್&zwnj; ದುರಸ್ತಿ&lt;/strong&gt;&lt;/p&gt;&lt;p&gt;ಪುಟ್&zwnj;ಪಾತ್ ಒತ್ತುವರಿ ತೆರವು ಮಾತ್ರವಲ್ಲದೇ, ದುರಸ್ತಿ ಒಳಗೊಂಡಂತೆ ಅಭಿವೃದ್ಧಿ ಕೆಲಸಗಳಿಗಾಗಿ 70 ಕೋಟಿ ರು. ವ್ಯಯಿಸಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.&lt;/p&gt;&lt;p&gt;ಫುಟ್&zwnj;ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಅವರು, ನಗರದ ಜನರ ಸುರಕ್ಷಿತ ಓಡಾಟಕ್ಕೆ ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇನ್ನು ಬೀದಿ ಬದಿ ವ್ಯಾಪಾರಿಗಳನ್ನು ಕೂಡ ಎಲ್ಲಾ ರಸ್ತೆಗಳಿಂದ ತೆರವುಗೊಳಿಸುವುದಿಲ್ಲ. ನಗರದಲ್ಲಿ ಸುಮಾರು 15,000 ಕಿ.ಮೀ ರಸ್ತೆಗಳಿವೆ. ಅದರಲ್ಲಿ ಶೇ.10ರಿಂದ 15ರಷ್ಟು ರಸ್ತೆಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. ಉಳಿದ ರಸ್ತೆಗಳಲ್ಲಿ ರಸ್ತೆ ಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಸ್ವತಂತ್ರ್ಯರು. ಪಾದಾಚಾರಿಗಳಿಗೆ ಅಪಘಾತ ಆಗುವುದನ್ನು ತಪ್ಪಿಸಲು, ಅಮೂಲ್ಯ ಜೀವಗಳನ್ನು ಉಳಿಸಲು ಈ ಕಾರ್ಯಾಚರಣೆ ಅನಿವಾರ್ಯವಾಗಿದೆ. ಕಳೆದ ಮೂರು ತಿಂಗಳಿಂದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ನೊಟೀಸ್ ನೀಡಿ ಕಾನೂನು ಪ್ರಕಾರವೇ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.&lt;/p&gt;&lt;p&gt;ನಿಷ್ಠುರ ಆಗಿದ್ದೇನೆ: ಬೆಂಗಳೂರು ನಗರ, ಜನತೆಯ ಒಳಿತಿಗಾಗಿ ಒತ್ತುವರಿ ತೆರವು ಕಾರ್ಯ ನಡೆದಿದೆ. ಅದಕ್ಕಾಗಿ ನಾನು ಈಗ ನಿಷ್ಠುರನಾಗಿದ್ದೇನೆ. ಕೆಲವು ಜನರ ವಿರೋಧವಿದ್ದರೂ ದೊಡ್ಡ ಸಂಖ್ಯೆಯ ಜನರ ಬೆಂಬಲ ಸಿಗುತ್ತಿದೆ. ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳು ಮಾತ್ರವಲ್ಲದೆ, ದೊಡ್ಡವರು ಸೇರಿದಂತೆ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/bengaluru-264-km-of-footpath-encroachment-cleared-in-4-days-minister-krishna-byre-gowda-mrq/articleshow-nkd18yd"/>
        </item>
        <item>
            <title><![CDATA[Badarinath Temple: ಅಯೋಧ್ಯೆ ಬಳಿಕ ಬದರೀನಾಥ ದೇಗುಲದಲ್ಲೂ ಹುಂಡಿ ಅಕ್ರಮ, ತನಿಖೆಗೆ ಆದೇಶ]]></title>
            <link>https://kannada.asianetnews.com/india-news/after-ayodhya-badarinath-dham-hit-by-theft-claming-probe-ordered-rav/articleshow-ar3exd3</link>
            <guid isPermaLink="true">https://kannada.asianetnews.com/india-news/after-ayodhya-badarinath-dham-hit-by-theft-claming-probe-ordered-rav/articleshow-ar3exd3</guid>
            <pubDate>Sun, 05 Jul 2026 06:30:03 +0530</pubDate>
            <description><![CDATA[ಅಯೋಧ್ಯೆ ರಾಮಮಂದಿರದ ಮಾದರಿಯಲ್ಲೇ ಉತ್ತರಾಖಂಡದ ಬದರೀನಾಥ ದೇವಾಲಯದಲ್ಲೂ ಕಾಣಿಕೆ ಹಣ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಿಕೆಟಿಸಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಈ ಕೃತ್ಯ ಎಸಗಿದ್ದಾರೆಂದು ಎನ್‌ಜಿಒವೊಂದು ದೂರು ನೀಡಿದ್ದು, ದೇಗುಲದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwp0jrwa148vy02de7qqvc13,imgname-badrinath-temple-donation-row-1783150240650.jpg" type="image/jpeg" height="390" width="690"/>
            <content:encoded><![CDATA[&lt;ul&gt; &lt;li&gt;ಆಡಳಿತ ಮಂಡಳಿ ಬಿಕೆಟಿಸಿಗೆ ಎನ್&zwnj;ಜಿಒ ದೂರು&lt;/li&gt; &lt;li&gt;ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಿಂದ ಕಳವು: ಆರೋಪ&lt;/li&gt; &lt;li&gt;ತನಿಖೆಗೆ ಆದೇಶ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯ ಭರವಸೆ&lt;/li&gt;&lt;/ul&gt;&lt;p&gt;&lt;strong&gt;ಡೆಹ್ರಾಡೂನ್&zwnj; (ಜು.5)&lt;/strong&gt;: ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣ ದಿನಕ್ಕೊಂದೊಂದು ಸ್ಫೋಟಕ ಮಾಹಿತಿ ಬಿಚ್ಚಿಡುತ್ತಿರುವ ನಡುವೆಯೇ ಉತ್ತರಾಖಂಡದ ಬದರೀನಾಥ ದೇವಾಲಯದಲ್ಲೂ ಇಂತಹ ಅನಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದರ ಬೆನ್ನಲ್ಲೇ ದೇಗುಲದ ಆಡಳಿತ ಮಂಡಳಿಯಾದ ಬದರೀನಾಥ ಕೇದಾರ ದೇವಾಲಯ ಸಮಿತಿ (ಬಿಕೆಟಿಸಿ) ಈ ಕುರಿತು ತನಿಖೆಗೆ ಆದೇಶಿಸಿದೆ.&lt;/p&gt;&lt;h2&gt;ಬದರೀನಾಥಕ್ಕೆ ಭಕ್ತರ ದೇಣಿಗೆ ಕಾಣಿಕೆಗಳು ಮಾಯ!&lt;/h2&gt;&lt;p&gt;ರಾಮಮಂದಿರದ ಕಾಣಿಕೆಗೆ ದೇವಸ್ಥಾನದ ಸಿಬ್ಬಂದಿಯೇ ಕನ್ನ ಹಾಕಿದ್ದು ಬೆಳಕಿಗೆ ಬರುತ್ತಿದ್ದಂತೆ, ಕಾಣಿಕೆ ಸಂಗ್ರಹ, ನಿರ್ವಹಣೆಯ ಕಠಿಣ ಮೇಲ್ವಿಚಾರಣೆ ಮಾಡುವಂತೆ ಜು.2ರಂದು ಬಿಕೆಟಿಸಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಭೈರವ ಸೇನಾ ಎಂಬ ಸಂಘಟನೆಯು, &lsquo;ಬದರಿನಾಥ ದೇವಸ್ಥಾನಕ್ಕೆ ಬರುತ್ತಿರುವ ಕಾಣಿಕೆ ಮತ್ತು ದೇಣಿಗೆಯನ್ನು ಬಿಕೆಟಿಸಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರ ಆಪ್ತ ಕಾರ್ಯದರ್ಶಿ ಎಗರಿಸುತ್ತಿದ್ದಾರೆ&rsquo; ಎಂದು ಬಿಕೆಟಿಸಿ ಸಿಇಒ ಸೋಹನ್&zwnj; ಸಿಂಗ್&zwnj; ರಾಂಗಡ್&zwnj;ಗೆ ಶುಕ್ರವಾರ ಬರೆದ ಪತ್ರದಲ್ಲಿ ಆರೋಪಿಸಿತ್ತು. ಅತ್ತ ಬಿಜೆಟಿಸಿಯ ಸ್ಥಾಪಕ ಸದಸ್ಯರಾದ ಸಂದೀಪ್ ಖತ್ರಿ ಕೂಡ ಇಂತಹ ಕೃತ್ಯ ನಡೆಯುತ್ತಿರುವ ಬಗ್ಗೆ ದ್ವಿವೇದಿಯವರಿಗೆ ಮೊದಲೇ ಎಚ್ಚರಿಸಲಾಗಿತ್ತು ಎಂದಿದ್ದಾರೆ.&lt;/p&gt;&lt;h3&gt;ಬದರೀನಾಥ ದೇಗುಲ ಹುಂಡಿ ಕಳವು: ತನಿಖೆಗೆ ಆದೇಶ&lt;/h3&gt;&lt;p&gt;ಇದಕ್ಕೆ ಪ್ರತಿಕ್ರಿಯಿಸಿರುವ ದ್ವಿವೇದಿ, ಕಾಣಿಕೆ ಕಳವಿನ ಆರೋಪ ಹೊತ್ತಿರುವಾತ ತಮ್ಮ ಆಪ್ತ ಕಾರ್ಯದರ್ಶಿ ಅಲ್ಲ ಎಂದಿದ್ದಾರೆ. &lsquo;ಆತ ಬಿಕೆಟಿಸಿಯ ಸಾಮಾನ್ಯ ಉದ್ಯೋಗಿಯಾಗಿದ್ದು, ಸಮಿತಿಯ ಈ ಹಿಂದಿನ 3 ಅಧ್ಯಕ್ಷರ ಆಪ್ತ ಸಹಾಯಕನಾಗಿದ್ದ. ಒಂದೊಮ್ಮೆ ಆತನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಆರೋಪಗಳು ಸಾಬೀತಾದಲ್ಲಿ, ನಿಯಮದನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು&rsquo; ಎಂದಿರುವ ಅವರು, ತನಿಖೆಗೆ ಆದೇಶ ನೀಡಿದ್ದಾರೆ. ಅತ್ತ ದೂರು ಬಂದ ತಕ್ಷಣ ಸಿಸಿಟೀವಿ ಪರಿಶೀಲಿಸಲಾಯಿತಾದರೂ, ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ ಎಂದು ರಾಂಗಡ್&zwnj; ಹೇಳಿದ್ದಾರೆ. ಜತೆಗೆ ಸಂಬಂಧಿಸಿದ ಸಿಬ್ಬಂದಿಯಿಂದ ಸ್ಪಷ್ಟನೆಯನ್ನು ಕೇಳಲಾಗಿದ್ದು, ತನಿಖೆಗೆ ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ.&lt;/p&gt;&lt;p&gt;&lt;strong&gt;ಬದರೀನಾಥ ದೇಗುಲದ ಆದಾಯ ಎಷ್ಟು?&lt;/strong&gt;&lt;/p&gt;&lt;p&gt;ಬದರಿನಾಥ, ಕೇದಾರನಾಥ ಹಾಗೂ ಇನ್ನೂ 47 ದೇವಸ್ಥಾನಗಳ ಮೇಲ್ವಿಚಾರಣೆ ಮಾಡುವ ಬಿಕೆಟಿಸಿಯ ಸಿಇಒ ನೀಡಿರುವ ಮಾಹಿತಿ ಪ್ರಕಾರ, ವಾರ್ಷಿಕವಾಗಿ ಬದರಿನಾಥ ದೇಗುಲಕ್ಕೆ 50-80 ಕೋಟಿ ರು. ದೇಣಿಗೆ ಹರಿದುಬರುತ್ತದೆ. ಸದ್ಯ ನಡೆಯುತ್ತಿರುವ ಚಾರ್&zwnj;ಧಾಮ್&zwnj; ಯಾತ್ರೆಯಿಂದಲೇ 70 ಕೋಟಿ ರು. ಸಂಗ್ರಹವಾಗಿದೆ. ಅಂತೆಯೇ, ಅತಿಥಿಗೃಹಗಳಿಂದಲೂ ಆದಾಯ ಬರುತ್ತದೆ.&lt;/p&gt;&lt;p&gt;ಬ್ಯಾಂಕ್&zwnj; ಸಿಬ್ಬಂದಿಯ ಸಮ್ಮುಖದಲ್ಲಿ ಇದರ ಎಣಿಕೆಯನ್ನು 4-5 ಬಿಕೆಟಿಸಿ ಸಿಬ್ಬಂದಿ ಮಾಡುತ್ತಾರೆ. ಭಕ್ತರು ಬಯಸಿದಲ್ಲಿ, ಅವರ ಗುರುತಿನ ದಾಖಲೆಗಳ ಪರಿಶೀಲನೆಯ ನಂತರ ಅವರಿಗೂ ಈ ಕೆಲಸ ಮಾಡಲು ಅನುಮತಿಸಲಾಗುತ್ತದೆ. ಎಣಿಕೆಯಾಗುತ್ತಿದ್ದಂತೆ ನಗದನ್ನು ಬ್ಯಾಂಕ್&zwnj; ಸಿಬ್ಬಂದಿಗೆ ಒಪ್ಪಿಸಲಾಗುತ್ತದೆ ಹಾಗೂ ಅವರು ಇನ್ನೊಮ್ಮೆ ಎಣಿಕೆ ಮಾಡುತ್ತಾರೆ.&lt;/p&gt;]]></content:encoded>
            <category><![CDATA[india-news]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/india-news/after-ayodhya-badarinath-dham-hit-by-theft-claming-probe-ordered-rav/articleshow-ar3exd3"/>
        </item>
        <item>
            <title><![CDATA[SIR Row: ಗೊಂದಲ ಬೆನ್ನಲ್ಲೇ ಕೇಂದ್ರ ಆಯೋಗದ ತಂಡ ನಾಳೆ ರಾಜ್ಯಕ್ಕೆ! ಮುಂದಿನ ತೀರ್ಮಾನ ಏನು?]]></title>
            <link>https://kannada.asianetnews.com/state/sir-row-ec-central-team-to-visit-karnataka-tomorrow-rav/articleshow-9x344aa</link>
            <guid isPermaLink="true">https://kannada.asianetnews.com/state/sir-row-ec-central-team-to-visit-karnataka-tomorrow-rav/articleshow-9x344aa</guid>
            <pubDate>Sun, 05 Jul 2026 06:52:59 +0530</pubDate>
            <description><![CDATA[ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಪ್ರಕ್ರಿಯೆಯಲ್ಲಿನ ಗೊಂದಲಗಳ ಬಗ್ಗೆ ಆರೋಪಗಳು ಹಾಗೂ ದೂರು ಸಲ್ಲಿಕೆ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಸೋಮವಾರ ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwqxeq3k68f758wznaqjr98t,imgname-----------------------2026-07-05t064358.851-1783214070899.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಬೆಂಗಳೂರು (ಜು.5): &lt;/strong&gt;ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್&zwnj;ಐಆರ್&zwnj;) ಪ್ರಕ್ರಿಯೆಯಲ್ಲಿನ ಗೊಂದಲಗಳ ಬಗ್ಗೆ ಆರೋಪಗಳು ಹಾಗೂ ದೂರು ಸಲ್ಲಿಕೆ ಬೆನ್ನಲ್ಲೇ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಸೋಮವಾರ ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ.&lt;/p&gt;&lt;p&gt;ಈ ತಂಡವು ರಾಜ್ಯದಲ್ಲಿ ನಡೆಯುತ್ತಿರುವ ಎಸ್&zwnj;ಐಆರ್&zwnj; ಪ್ರಕ್ರಿಯೆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಮಾಹಿತಿ ಸಂಗ್ರಹಿಸಲಿದೆ. ಅಂತೆಯೇ ಈ ಎಸ್&zwnj;ಐಆರ್&zwnj; ಪ್ರಕ್ರಿಯೆಯಲ್ಲಿ ಕೇಳಿ ಬಂದಿರುವ ಆರೋಪಗಳು, ಲೋಪಗಳು ಹಾಗೂ ಗೊಂದಲಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಿದೆ. ಅಂತೆಯೇ ರಾಜಕೀಯ ಪಕ್ಷಗಳಿಂದ ಸಲ್ಲಿಕೆಯಾಗಿರುವ ದೂರುಗಳ ಬಗ್ಗೆಯೂ ಕೇಂದ್ರ ಅಧಿಕಾರಿಗಳ ತಂಡ ಸಮಾಲೋಚನೆ ನಡೆಸಲಿದೆ ಎಂದು ತಿಳಿದು ಬಂದಿದೆ.&lt;/p&gt;&lt;h2&gt;SIR: ಕೇಂದ್ರ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ&lt;/h2&gt;&lt;p&gt;ಎಸ್&zwnj;ಐಆರ್&zwnj; ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ನಿಖರತೆ ಬಗ್ಗೆಯೇ ಪ್ರಶ್ನೆಗಳು ಎದ್ದಿರುವುದರಿಂದ ಕೇಂದ್ರ ತಂಡ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ ಎಸ್&zwnj;ಐಆರ್&zwnj; ಪ್ರಕ್ರಿಯೆಯ ವಾಸ್ತವಾಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ನೀಡಲಿದೆ.&lt;/p&gt;&lt;p&gt;ಬಳಿಕ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ ಎಸ್&zwnj;ಐಆರ್&zwnj; ಪ್ರಕ್ರಿಯೆಯ ಮೇಲ್ವಿಚಾರಣೆಗೆ ಹೊರರಾಜ್ಯದ ಅಥವಾ ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ನೇಮಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ. ಕರ್ನಾಟಕ ಪ್ರತಿನಿಧಿಸುವ ಕೇಂದ್ರ ಸಚಿವರು ಈ ಎಸ್&zwnj;ಐಆರ್&zwnj; ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವೆಲ್ಲವುಗಳ ಬಗ್ಗೆ ಮಾಹಿತಿ ಪಡೆದು ಅಂತಿಮವಾಗಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/sir-row-ec-central-team-to-visit-karnataka-tomorrow-rav/articleshow-9x344aa"/>
        </item>
        <item>
            <title><![CDATA[ಜುಲೈ 5 ರಾಶಿಭವಿಷ್ಯ: ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಈ ರಾಶಿಯವರು ಮಾತಿನ ಮೇಲೆ ಹಿಡಿತ ಇಡಿ!]]></title>
            <link>https://kannada.asianetnews.com/gallery/astrology/today-prediction-horoscope-of-5-july-2026-rashifal-mesh-kark-singh-kanya-kumbh-makar-suh-aowd49g</link>
            <guid isPermaLink="true">https://kannada.asianetnews.com/gallery/astrology/today-prediction-horoscope-of-5-july-2026-rashifal-mesh-kark-singh-kanya-kumbh-makar-suh-aowd49g</guid>
            <pubDate>Sun, 05 Jul 2026 06:45:54 +0530</pubDate>
            <description><![CDATA[ಜುಲೈ 5, 2026ರ ಭಾನುವಾರ ಕೆಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಲಾಭ ಮತ್ತು ಕುಟುಂಬದ ಸಂತೋಷವನ್ನು ತಂದುಕೊಡಲಿದ್ದು, ಇನ್ನೂ ಕೆಲವು ರಾಶಿಯವರು ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಜ್ಯೋತಿಷ್ಯ ಭವಿಷ್ಯ ಸೂಚಿಸುತ್ತದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kv4spn2kz0msxm0g0rdb8s26,imgname-these-are-the-3-zodiac-signs-who-will-enjoy-raja-yoga-till-2027-due-to-lord-shani-1781498860626.jpg" type="image/jpeg" height="390" width="690"/>
            <content:encoded><![CDATA[&lt;p&gt;ಜುಲೈ 5, 2026ರ ಭಾನುವಾರ ಕೆಲವು ರಾಶಿಗಳಿಗೆ ಹೊಸ ಅವಕಾಶಗಳು, ಆರ್ಥಿಕ ಲಾಭ ಮತ್ತು ಕುಟುಂಬದ ಸಂತೋಷವನ್ನು ತಂದುಕೊಡಲಿದ್ದು, ಇನ್ನೂ ಕೆಲವು ರಾಶಿಯವರು ಹಣಕಾಸು, ಆರೋಗ್ಯ ಹಾಗೂ ಸಂಬಂಧಗಳ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಜ್ಯೋತಿಷ್ಯ ಭವಿಷ್ಯ ಸೂಚಿಸುತ್ತದೆ.&lt;/p&gt;&lt;img&gt;&lt;p&gt;ಮೇಷ&lt;/p&gt;&lt;p&gt;ಉದ್ಯೋಗ ಹಾಗೂ ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಆತ್ಮವಿಶ್ವಾಸ ಹೆಚ್ಚಲಿದ್ದು, ಬಹುಕಾಲದ ಪ್ರಯತ್ನಕ್ಕೆ ಫಲ ಸಿಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುವಿರಿ.&lt;/p&gt;&lt;p&gt;ವೃಷಭ&lt;/p&gt;&lt;p&gt;ಅನಗತ್ಯ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹಣಕಾಸಿನ ಯೋಜನೆ ಮಾಡಿ ಮುಂದುವರಿದರೆ ಲಾಭವಾಗುತ್ತದೆ. ಕೆಲಸದ ಒತ್ತಡ ಹೆಚ್ಚಾದರೂ ಯಶಸ್ಸು ನಿಮ್ಮ ಪರವಾಗಿರಲಿದೆ.&lt;/p&gt;&lt;img&gt;&lt;p&gt;ಮಿಥುನ&lt;/p&gt;&lt;p&gt;ಸಂವಹನ ಕೌಶಲ್ಯದಿಂದ ಹೊಸ ಅವಕಾಶಗಳು ದೊರೆಯಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಆದಾಯ ಹೆಚ್ಚುವ ಸಾಧ್ಯತೆ ಇದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಲಾಭ ತರಬಹುದು.&lt;/p&gt;&lt;p&gt;ಕಟಕ&lt;/p&gt;&lt;p&gt;ಕುಟುಂಬ ಮತ್ತು ವೃತ್ತಿ ಎರಡರಲ್ಲೂ ಉತ್ತಮ ಬೆಳವಣಿಗೆ ಕಾಣಬಹುದು. ಆರ್ಥಿಕ ಭದ್ರತೆ ಹೆಚ್ಚುವ ಸಾಧ್ಯತೆ ಇದ್ದರೂ ಹಣದ ವ್ಯವಹಾರದಲ್ಲಿ ಜಾಗರೂಕರಾಗಿರಿ.&lt;/p&gt;&lt;img&gt;&lt;p&gt;ಸಿಂಹ&lt;/p&gt;&lt;p&gt;ಹೊಸ ಯೋಜನೆಗಳಿಗೆ ಚಾಲನೆ ನೀಡಲು ಅನುಕೂಲಕರ ದಿನ. ನಿಮ್ಮ ನಿರ್ಧಾರಗಳು ಭವಿಷ್ಯದಲ್ಲಿ ಉತ್ತಮ ಫಲ ನೀಡಲಿವೆ. ವೆಚ್ಚದ ಮೇಲೆ ನಿಯಂತ್ರಣ ಇರಲಿ.&lt;/p&gt;&lt;p&gt;ಕನ್ಯಾ&lt;/p&gt;&lt;p&gt;ತಂಡದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಹಿರಿಯರಿಂದ ಮೆಚ್ಚುಗೆ ದೊರೆಯಬಹುದು.&lt;/p&gt;&lt;img&gt;&lt;p&gt;ತುಲಾ&lt;/p&gt;&lt;p&gt;ಯಾವುದೇ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬೇಡಿ. ತಾಳ್ಮೆ ಮತ್ತು ಸಮತೋಲನದಿಂದ ನಡೆದುಕೊಂಡರೆ ಸಮಸ್ಯೆಗಳು ಸುಲಭವಾಗಿ ಬಗೆಹರಿಯುತ್ತವೆ.&lt;/p&gt;&lt;p&gt;ವೃಶ್ಚಿಕ&lt;/p&gt;&lt;p&gt;ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಅನಗತ್ಯ ಒತ್ತಡವನ್ನು ದೂರವಿಡಿ.&lt;/p&gt;&lt;img&gt;&lt;p&gt;ಧನು&lt;/p&gt;&lt;p&gt;ಹೊಸ ಅವಕಾಶಗಳು ಸಿಗಬಹುದು. ಆದರೆ ತುರ್ತು ನಿರ್ಧಾರಗಳನ್ನು ತಪ್ಪಿಸಿ. ಸ್ನೇಹಿತರ ಸಹಕಾರದಿಂದ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳಲಿವೆ.&lt;/p&gt;&lt;p&gt;ಮಕರ&lt;/p&gt;&lt;p&gt;ಹಣಕಾಸಿನ ಸ್ಥಿತಿ ಸುಧಾರಿಸಬಹುದು. ಹಳೆಯ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಅನುಭವದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಲಾಭದಾಯಕ.&lt;/p&gt;&lt;img&gt;&lt;p&gt;ಕುಂಭ&lt;/p&gt;&lt;p&gt;ಹೊಸ ಆಲೋಚನೆಗಳು ಮತ್ತು ಹೊಸ ಸಂಪರ್ಕಗಳು ವೃತ್ತಿಜೀವನದಲ್ಲಿ ಪ್ರಗತಿಗೆ ಕಾರಣವಾಗಬಹುದು. ಆದರೆ ಯಾವುದೇ ನಿರ್ಧಾರದಲ್ಲಿ ತಾಳ್ಮೆ ಕಾಪಾಡಿ.&lt;/p&gt;&lt;p&gt;ಮೀನ&lt;/p&gt;&lt;p&gt;ಶಿಸ್ತಿನಿಂದ ಕೆಲಸ ಮಾಡಿದರೆ ಉತ್ತಮ ಫಲ ಸಿಗಲಿದೆ. ಹೊಸ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಆರ್ಥಿಕ ಹಾಗೂ ವೃತ್ತಿ ಜೀವನದಲ್ಲಿ ಬೆಳವಣಿಗೆ ಸಾಧ್ಯ.&lt;/p&gt;]]></content:encoded>
            <category><![CDATA[astrology]]></category>
            <dc:creator>Sushma Hegde</dc:creator>
            <atom:link href="https://kannada.asianetnews.com/gallery/astrology/today-prediction-horoscope-of-5-july-2026-rashifal-mesh-kark-singh-kanya-kumbh-makar-suh-aowd49g"/>
        </item>
        <item>
            <title><![CDATA[ಚುನಾವಣೆ ಆಯೋಗ ಕತ್ತೆ  ಕಾಯ್ತಿದೆಯೇ? SIR ನಲ್ಲಿ ತಪ್ಪಾಗುತ್ತಿದ್ದರೆ ಕ್ರಮ ಜರುಗಿಸಲಿ: ಪ್ರಿಯಾಂಕ್ ಖರ್ಗೆ]]></title>
            <link>https://kannada.asianetnews.com/state/home-minister-priyank-khare-slams-ec-over-sir-flaws-take-action-rav/articleshow-xme3b6w</link>
            <guid isPermaLink="true">https://kannada.asianetnews.com/state/home-minister-priyank-khare-slams-ec-over-sir-flaws-take-action-rav/articleshow-xme3b6w</guid>
            <pubDate>Sun, 05 Jul 2026 06:03:56 +0530</pubDate>
            <description><![CDATA[ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಜನರ ಆತಂಕ ನಿವಾರಿಸದ ಚುನಾವಣಾ ಆಯೋಗದ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸ್‌ಐಆರ್‌ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಯಾವುದೇ ತಪ್ಪಾಗಿದ್ದರೂ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6mf3epsrp7x7r6vrwgfcpr,imgname-priyank-kharge-rss-case-1782634221014.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;&amp;nbsp;ಬೆಂಗಳೂರು (ಜು.5): &lt;/strong&gt;ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್&zwnj;ಐಆರ್&zwnj;) ಪ್ರಕ್ರಿಯೆ ಕುರಿತು ಆತಂಕ ಸೃಷ್ಟಿಯಾಗಿದ್ದರೆ ಅದನ್ನು ನಿವಾರಸದೆ ಚುನಾವಣಾ ಆಯೋಗ ಕತ್ತೆ ಕಾಯುತ್ತಿದೆಯೇ? ಎಸ್&zwnj;ಐಆರ್&zwnj;ನಲ್ಲಿ ಏನೇ ಏನೇ ತಪ್ಪಾಗಿದ್ದರೂ ಚುನಾವಣಾ ಆಯೋಗ ಕಾನೂನಿನಂತೆ ಕ್ರಮ ಕೈಗೊಳ್ಳಲಿ ಎಂದು ಗೃಹ ಸಚಿವ ಪ್ರಿಯಾಂಕ್&zwnj; ಖರ್ಗೆ ಹೇಳಿದ್ದಾರೆ.&lt;/p&gt;&lt;p&gt;ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್&zwnj;ಐಆರ್&zwnj;ಗೆ ಸಂಬಂಧಿಸಿ ಸಮುದಾಯ ಭವನದಲ್ಲಿ ಮಾಡಲಿ, ಯಾವುದೋ ಕಚೇರಿಯಲ್ಲಿ ಮಾಡಿ ಎಂದು ನಾವು ಜನರಿಗೆ ಯಾವುದೇ ಒತ್ತಾಯ ಮಾಡಿಲ್ಲ. ಆದರೆ ಎಸ್&zwnj;ಐಆರ್&zwnj; ಕುರಿತು ಜನರಲ್ಲಿ ಸಂಶಯ, ಆತಂಕವಿದೆ. ಇಡೀ ಪ್ರಕ್ರಿಯೆ ಬಗ್ಗೆಯೇ ಅನುಮಾನವಿದ್ದು, ಅದನ್ನು ಚುನಾವಣಾ ಆಯೋಗ ನಿವಾರಿಸಲಿ ಎಂದರು.&lt;/p&gt;&lt;p&gt;ಎಸ್&zwnj;ಐಆರ್&zwnj;ಗೆ ಸಂಬಂಧಿಸಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಎಸ್&zwnj;ಐಆರ್ ಪ್ರಕ್ರಿಯೆಗೆ ನೇಮಕ ಮಾಡಿರುವ ಬಿಎಲ್&zwnj;ಒಗಳು ಸರ್ಕಾರದ ಅಧಿಕಾರಿ, ಸಿಬ್ಬಂದಿಯೇ ಆಗಿರಬಹುದು. ಆದರೆ, ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಎಸ್ಐಆರ್&zwnj; ಗೊಂದಲ ನಿವಾರಣೆ ಮಾಡಬೇಕಾದದ್ದು ಚುನಾವಣಾ ಆಯೋಗದ ಕೆಲಸ. ಉತ್ತಮ ಮತದಾರರ ಪಟ್ಟಿ ಸಿದ್ಧಪಡಿಸುವುದು, ಚುನಾವಣೆಯನ್ನು ಸರಿಯಾಗಿ ನಡೆಸುವುದಷ್ಟೇ ಅವರ ಕೆಲಸ. ಅದನ್ನು ಬಿಟ್ಟು ಬೇರೇನೂ ಕೆಲಸ ಅವರಿಗಿಲ್ಲ ಎಂದರು.&lt;/p&gt;&lt;p&gt;ಎಸ್&zwnj;ಐಆರ್&zwnj; ಪ್ರಕ್ರಿಯೆಯಿಂದ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು ಎಂದು ಕಾಂಗ್ರೆಸ್&zwnj;, ಬಿಜೆಪಿ ಸೇರಿ ಎಲ್ಲ ಶಾಸಕರು ಶ್ರಮಿಸುತ್ತಿದ್ದಾರೆ. ಬಿಹಾರ, ಪಶ್ವಿಮ ಬಂಗಾಳದಲ್ಲಿ ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದರೆ ಮಾತ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಸಿಗುತ್ತದೆ ಎಂದು ಹೇಳಿದ್ದಾರೆ. ನಮ್ಮಲ್ಲೂ ಅದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ. ಎಸ್&zwnj;ಐಆರ್&zwnj; ಪ್ರಕ್ರಿಯೆಗೆ ನಾವು ವಿರೋಧಿಸುತ್ತಿಲ್ಲ. ಆದರೆ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಮಾಡಿ ಎಂದು ಒತ್ತಾಯಿಸುತ್ತಿದ್ದೇವೆ. ಇನ್ನು, ಕೇಂದ್ರ ಸರ್ಕಾರದ ನಿಗಾದಲ್ಲೇ ಎಸ್&zwnj;ಐಆರ್&zwnj; ಮಾಡಲಿ ನಾವು ಬೇಡ ಎಂದಿಲ್ಲ ಎಂದು ಹೇಳಿದರು.&lt;/p&gt;&lt;h2&gt;ಚೌಕಿದಾರ ಚೋರ್&zwnj;: ಸಚಿವ&lt;/h2&gt;&lt;p&gt;ದೇಶದ ಚೌಕಿದಾರನೇ ಕಳ್ಳನಾದ ಮೇಲೆ ಏನು ಮಾಡಲಾಗುತ್ತದೆ. ರಾಮಮಂದಿರ ಸ್ಥಾಪನೆ ಸೇರಿ ಎಲ್ಲ ರೀತಿಯ ಪ್ರಕ್ರಿಯೆಯ ಶ್ರೇಯವನ್ನು ಪ್ರಧಾನಿ ಮೋದಿ ಪಡೆದರು. ಆದರೆ, ರಾಮಮಂದಿರದಲ್ಲಿ ದೇಣಿಗೆ ಕಳ್ಳತನವಾದಾಗ ಮಾತ್ರ ಸುಮ್ಮನಿದ್ದಾರೆ. ವಿಎಚ್&zwnj;ಪಿ, ಆರ್&zwnj;ಎಸ್&zwnj;ಎಸ್&zwnj; ಸೇರಿ ಎಲ್ಲ ಚೌಕಿದಾರರು ಕಳ್ಳರಾಗಿರುವುದು ಬಹಿರಂಗವಾಗಿದೆ ಎಂದು ಪ್ರಿಯಾಂಕ್&zwnj; ಖರ್ಗೆ ವಾಗ್ದಾಳಿ ನಡೆಸಿದರು.&lt;/p&gt;]]></content:encoded>
            <category><![CDATA[state]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/state/home-minister-priyank-khare-slams-ec-over-sir-flaws-take-action-rav/articleshow-xme3b6w"/>
        </item>
        <item>
            <title><![CDATA[Rain Deficit : ಬಾರದ ಮಳೆ, ಕೂಡ್ಲಿಗಿ ತಾಲೂಕಿನ ಹಳ್ಳಿಹಳ್ಳಿಗಳಿಂದ ಜನರ ಗುಳೆ]]></title>
            <link>https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u</link>
            <guid isPermaLink="true">https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u</guid>
            <pubDate>Sun, 05 Jul 2026 05:48:19 +0530</pubDate>
            <description><![CDATA[ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!]]></description>
            <media:content url="https://static.asianetnews.com/images/w-1280,h-720,format-jpg,imgid-01kwqsres5q920rv2ar2hr0y44,imgname-----------------------2026-07-05t053723.282-1783210195749.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಭೀಮಣ್ಣ ಗಜಾಪುರ&lt;/strong&gt;&lt;/p&gt;&lt;p&gt;&lt;strong&gt;ಕೂಡ್ಲಿಗಿ (ವಿಜಯನಗರ):&lt;/strong&gt; ಈ ಬಾರಿ ಮುಂಗಾರಿನಲ್ಲಿ ಮಳೆರಾಯ ಮುನಿಸಿಕೊಂಡಿದ್ದಾನೆ. ಇದರಿಂದಾಗಿ ಮಳೆಯನ್ನೇ ನಂಬಿ ಕೃಷಿ ಮಾಡುವ ಬರದ ನಾಡು ಕೂಡ್ಲಿಗಿ ತಾಲೂಕಿನ ರೈತರಿಗೆ ಬರೆ ಬಿದ್ದಿದ್ದರೆ, ತಾಲೂಕಿನ ಕೃಷಿ ಕೂಲಿಕಾರರು ಉದ್ಯೋಗ ಅರಸಿ ಬೇರೆ ಬೇರೆ ಕಡೆಗೆ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ!&lt;/p&gt;&lt;p&gt;ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾ, ಗೋವಿಂದಗಿರಿ, ಬಂಡೆಬಸಾಪುರ ತಾಂಡಾ ಸೇರಿದಂತೆ ಅನೇಕ ಗ್ರಾಮಗಳ ಜನತೆ ಗುಳೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. 2 ದಿನಗಳ ಹಿಂದೆ ಶ್ರೀಕಂಠಾಪುರ ತಾಂಡಾದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಸದಾ ಬರವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಈಗ್ಗೆ 4-5 ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು. ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದರು. ಆದರೆ ಈ ಬಾರಿ ಮುಂಗಾರು ಕೈ ಕೊಟ್ಟಿದ್ದರಿಂದ ಲಕ್ಷಗಟ್ಟಲೇ ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಸಿ ಇದ್ದಾಗಲೇ ಕಮರಿ ಹೋಗಿವೆ. ಬಿತ್ತನೆಗೆ ಮಾಡಿದ ಸಾಲ ತೀರಿಸಲು ಇಲ್ಲಿಯ ರೈತರಿಗೆ ಗುಳೆ ಅನಿವಾರ್ಯವಾಗಿದೆ.&lt;/p&gt;&lt;p&gt;ಕೆಲ ಕುಟುಂಬಗಳು ಬೆಂಗಳೂರು ಕಡೆಗೆ ಹೋಗಿ ಅಲ್ಲಿ ಗಾರೆ ಕೆಲಸ ಮಾಡಲು ಮುಂದಾಗಿದ್ದಾರೆ. ಕುಟುಂಬದ ಹೆಣ್ಣು ಮಕ್ಕಳು ಬೆಂಗಳೂರಿನ ಮನೆಗಳಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಂಗಳೂರಿಗೆ ಶೇ.30ರಷ್ಟು ಮಾತ್ರ ಹೋಗಿದ್ದಾರೆ. ಉಳಿದಂತೆ ಶೇ.70ರಷ್ಟು ಜನರು ಮೈಸೂರು, ಮಂಡ್ಯ, ಕಿಕ್ಕೇರಿ, ಚನ್ನರಾಯಪಟ್ಟಣ, ಮಂಗಳೂರು, ಚಿಕ್ಕಮಗಳೂರು ಕಡೆಗೆ ಕಬ್ಬು ಕಟಾವು, ಕಾಫಿ ಬೀಜ ಬಿಡಿಸುವ ಕಾರ್ಯಕ್ಕೆ ತೆರಳುತ್ತಿದ್ದಾರೆ.&lt;/p&gt;&lt;p&gt;ಉಳಿದಂತೆ ವಯಸ್ಸಾದವರು, ಶಾಲೆಗೆ ಹೋಗುವ ಮಕ್ಕಳು ಮಾತ್ರ ಗ್ರಾಮಗಳಲ್ಲಿ ಉಳಿದುಕೊಂಡಿದ್ದಾರೆ. ತಂದೆ- ತಾಯಿ ಇಲ್ಲದೆ ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿ ಮಾತ್ರ ಆ ದೇವರಿಗೆ ಪ್ರೀತಿ. ಆ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊರುವವರು ಯಾರು? ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದ್ದು, ಜೊತೆಗೆ ಕೆಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಉದಾಹರಣೆ ಕಣ್ಣ ಮುಂದೆ ಕಾಣಬಹುದಾಗಿದೆ.&lt;/p&gt;&lt;p&gt;2 ದಿನಗಳ ಹಿಂದೆ ರಾತ್ರೋರಾತ್ರಿ ತಾಲೂಕಿನ ಶ್ರೀಕಂಠಾಪುರ ತಾಂಡಾದಿಂದ ವೆಂಕಟೇಶನಾಯ್ಕ ಎನ್ನುವ ಮೇಸ್ತ್ರಿ ನೇತೃತ್ವದಲ್ಲಿ 3 ಲಾರಿಗಳಲ್ಲಿ ನಿತ್ಯದ ಬಳಕೆಯ ವಸ್ತುಗಳು, ಪಾತ್ರೆ, ಬಿಂದಿಗೆ ಸೇರಿದಂತೆ ಮಕ್ಕಳು ಮರಿಗಳನ್ನು ಹೊತ್ತುಕೊಂಡು ಸುಮಾರು 50 ಜನರು ತುತ್ತಿನ&zwnj; ಚೀಲ ತುಂಬಿಸಿಕೊಳ್ಳಲು ಹೊರಟಿದ್ದು ನೋಡುಗರ ಮನ ಕಲಕಿತು. ತಾಂಡಾಗಳ ಜನರು ಬಯಲು ಸೀಮೆಯಿಂದ ಕಾಫಿ ಸೀಮೆಯತ್ತ ಗುಳೆ ಹೊರಟಿದ್ದಾರೆ.&lt;/p&gt;&lt;p&gt;ತಾಲೂಕಿನ ತಾಂಡಾಗಳು ಸೇರಿದಂತೆ ಅನೇಕ ಗ್ರಾಮದ ಜನರು ಗುಳೆ ಹೋಗುತ್ತಿದ್ದಾರೆ. ಅದಕ್ಕೆ ಸರ್ಕಾರ ನರೇಗಾದಂತಹ ಯೋಜನೆ ಜಾರಿಗೊಳಿಸಿದೆ. ಆದರೆ ಅದು ಕೇವಲ 3 ತಿಂಗಳ ಕೆಲಸ ಮಾತ್ರ. ಮುಂದೇನು ಎನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ನಾವು ಮಲೆನಾಡು ಕಡೆ ಜೀವನ ಮಾಡಲು ಹೋಗುತ್ತಿದ್ದೇವೆ.&lt;/p&gt;&lt;p&gt;ಕುಬೇರನಾಯ್ಕ, ಶ್ರೀಕಂಠಾಪುರ ತಾಂಡಾದ ಕೂಲಿಕಾರ್ಮಿಕ&lt;/p&gt;&lt;p&gt;ಮುಂಗಾರು ಕೈಕೊಟ್ಟಿದ್ದರಿಂದ ಬರದ ನಾಡು ಕೂಡ್ಲಿಗಿ ತಾಲೂಕಿನ ಶ್ರೀಕಂಠಾಪುರ ತಾಂಡಾದ 50ಕ್ಕೂ ಹೆಚ್ಚು ಕುಟುಂಬಗಳು ಮಲೆನಾಡು, ಬೆಂಗಳೂರು ಕಡೆಗೆ ಲಾರಿಗಳಲ್ಲಿ ಗುಳೆ ಹೊರಟಿರುವುದು.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Kannadaprabha News</dc:creator>
            <atom:link href="https://kannada.asianetnews.com/karnataka-districts/rain-deficit-forces-kudligi-farmers-to-migrate-to-cities-vijayanagar-rav/articleshow-uligb6u"/>
        </item>
        <item>
            <title><![CDATA[Earrings: ಲೆಹೆಂಗಾ, ಸೀರೆ... ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ತಾರಾ ಸುತಾರಿಯಾರ ಈ 6 ಕಿವಿಯೋಲೆಗಳು]]></title>
            <link>https://kannada.asianetnews.com/webstories/fashion/tara-sutaria-inspired-earring-ideas-for-wedding-season-gvd-6f184xr</link>
            <guid isPermaLink="true">https://kannada.asianetnews.com/webstories/fashion/tara-sutaria-inspired-earring-ideas-for-wedding-season-gvd-6f184xr</guid>
            <pubDate>Sat, 04 Jul 2026 23:43:47 +0530</pubDate>
            <description><![CDATA[ಅಕ್ಕ-ತಂಗಿ ಮದುವೆಯಲ್ಲಿ ಸ್ಟೈಲಿಶ್ ಹಾಗೂ ಎಲಿಗೆಂಟ್ ಲುಕ್ ಬೇಕಾ? ಹಾಗಿದ್ರೆ ಲೆಹೆಂಗಾ, ಶರಾರಾ, ಸೀರೆ, ಅಷ್ಟೇ ಯಾಕೆ ವೆಸ್ಟರ್ನ್ ಡ್ರೆಸ್‌ಗಳಿಗೂ ಮ್ಯಾಚ್ ಆಗುವ ಮೋತಿ ಕುಂದನ್ ಸ್ಟಡ್, ಚಾಂದ್‌ಬಾಲಿ, ಡ್ರಾಪ್ ಗೋಲ್ಡನ್ ಇಯರಿಂಗ್ಸ್ ಡಿಸೈನ್‌ಗಳ ಬಗ್ಗೆ ತಿಳಿಯಿರಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kh46zzcd2hgwrcskstdcsc0c,imgname-tara-sutaria-temple-saree-look-1770741824909.jpg" type="image/jpeg" height="390" width="690"/>
            <category><![CDATA[fashion]]></category>
            <dc:creator>Govindaraj S</dc:creator>
            <atom:link href="https://kannada.asianetnews.com/webstories/fashion/tara-sutaria-inspired-earring-ideas-for-wedding-season-gvd-6f184xr"/>
        </item>
        <item>
            <title><![CDATA[ಪೂರಿ, ಚಪಾತಿ, ಅನ್ನಕ್ಕೂ ಬೆಸ್ಟ್ ಕಾಂಬಿನೇಶನ್ ಪೆಪ್ಪರ್ ಚಿಕನ್ ಗ್ರೇವಿ ಮಾಡೋದು ಬಹಳ ಸುಲಭ ಕಣ್ರೀ]]></title>
            <link>https://kannada.asianetnews.com/food/weekend-special-spicy-pepper-chicken-gravy-kannada/articleshow-1lv5tov</link>
            <guid isPermaLink="true">https://kannada.asianetnews.com/food/weekend-special-spicy-pepper-chicken-gravy-kannada/articleshow-1lv5tov</guid>
            <pubDate>Sat, 04 Jul 2026 23:18:40 +0530</pubDate>
            <description><![CDATA[Pepper Chicken Gravy Kannada: ಬದಲಾಗುತ್ತಿರುವ ಹವಾಮಾನದಲ್ಲಿ ಶೀತ ಅಥವಾ ಗಂಟಲಿನ ಕಿರಿಕಿರಿ ಇದ್ದರೆ, ಖಾರವಾದ ಮತ್ತು ಘಮಘಮಿಸುವ ಪೆಪ್ಪರ್ ಚಿಕನ್ ಗ್ರೇವಿ ಅತ್ಯುತ್ತಮ ಆಯ್ಕೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದಲ್ಲದೆ, ಆರೋಗ್ಯಕ್ಕೂ ಹಿತಕರವಾಗಿದೆ. ಬಿಸಿ ಅನ್ನ, ಚಪಾತಿ ಅಥವಾ ಪೂರಿಯೊಂದಿಗೆ ಸವಿಯಲು ಈ ವೀಕೆಂಡ್‌ನಲ್ಲಿ ಒಮ್ಮೆ ಈ ಮಸಾಲೆಯುಕ್ತ ಅಡುಗೆಯನ್ನು ಟ್ರೈ ಮಾಡಿ ನೋಡಿ.]]></description>
            <media:content url="https://static.asianetnews.com/images/w-1280,h-720,format-jpg,imgid-01kwq3vzgqrak407g2q282ftys,imgname-thumbnail--81--1783187242518.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಇ&lt;/strong&gt;ತ್ತೀಚಿನ ದಿನಗಳಲ್ಲಿ ಹವಾಮಾನ ಪದೇ ಪದೇ ಬದಲಾಗುತ್ತಿದೆ. ಬೆಳಗ್ಗೆ ಬಿಸಿಲು, ಸಂಜೆ ಮಳೆ.. ಇಂತಹ ವಾತಾವರಣದಲ್ಲಿ ಶೀತ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಮಸ್ಯೆಗಳು ಕಾಡುವುದು ಸಹಜ. ಇಂತಹ ಸಮಯದಲ್ಲಿ ನಾಲಿಗೆಗೆ ರುಚಿಯಾದ, ಖಾರವಾದ ಮತ್ತು ಘಾಟು ಇರುವ ಬಿಸಿಬಿಸಿ ಆಹಾರವನ್ನು ಸೇವಿಸಬೇಕೆನಿಸುತ್ತದೆ. ಅದಕ್ಕೆ ಮಸಾಲೆಯುಕ್ತ ನಾನ್-ವೆಜ್ ಖಾದ್ಯಕ್ಕಿಂತ ಉತ್ತಮವಾದದ್ದು ಯಾವುದಿದೆ? ಅದರಲ್ಲೂ ವಿಶೇಷವಾಗಿ ಕಾಳುಮೆಣಸು ಅಥವಾ ಪೆಪ್ಪರ್ ಚಿಕನ್ ಗ್ರೇವಿ ತಯಾರಿಸಿ ಸವಿದರೆ ಆ ಮಜವೇ ಬೇರೆ!&lt;/p&gt;&lt;p&gt;ಕಾಳುಮೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಿ ಗಂಟಲಿಗೆ ಆರಾಮ ನೀಡುತ್ತದೆ. ಈ ಚಿಕನ್ ಪೆಪ್ಪರ್ ಗ್ರೇವಿ ಕೇವಲ ಬಿಸಿಬಿಸಿ ಅನ್ನಕ್ಕೆ ಮಾತ್ರವಲ್ಲದೆ, ಇಡ್ಲಿ, ದೋಸೆ, ಚಪಾತಿ, ಪೂರಿ ಮತ್ತು ಪರೋಟಗಳೊಂದಿಗೂ ಅದ್ಭುತವಾದ ಕಾಂಬಿನೇಷನ್ ಆಗಿದೆ.&lt;/p&gt;&lt;h2&gt;&lt;strong&gt;ಬೇಕಾಗುವ ಪದಾರ್ಥಗಳು&lt;/strong&gt;&lt;/h2&gt;&lt;p&gt;&lt;strong&gt;ಮಸಾಲಾ ಪೇಸ್ಟ್ ತಯಾರಿಸಲು&lt;/strong&gt;ಅಡುಗೆ ಎಣ್ಣೆ - 1 ಟೀಸ್ಪೂನ್ಕಾಳುಮೆಣಸು - 2 ಟೇಬಲ್ ಸ್ಪೂನ್ಧನಿಯಾ (ಕೊತ್ತಂಬರಿ ಬೀಜ) - 1 ಟೇಬಲ್ ಸ್ಪೂನ್ಜೀರಿಗೆ - 1 ಟೀಸ್ಪೂನ್ಸೋಂಪು - ಅರ್ಧ ಟೀಸ್ಪೂನ್ಚಕ್ಕೆ - 1 ಸಣ್ಣ ತುಂಡುಕಲ್ಲು ಹೂವು - ಸ್ವಲ್ಪನಕ್ಷತ್ರ ಮೊಗ್ಗು - 1ಲವಂಗ - 2ಏಲಕ್ಕಿ - 2ಒಣ ಮೆಣಸಿನಕಾಯಿ - 5ಗೋಡಂಬಿ - 5ಶುಂಠಿ - 1 ಇಂಚುಬೆಳ್ಳುಳ್ಳಿ - 5 ಎಸಳುಹಸಿ ಅಥವಾ ಒಣ ಕೊಬ್ಬರಿ - 2 ಸಣ್ಣ ತುಂಡು&lt;/p&gt;&lt;h2&gt;&lt;strong&gt;ಗ್ರೇವಿ ತಯಾರಿಸಲು&lt;/strong&gt;&lt;/h2&gt;&lt;p&gt;ಚಿಕನ್ - 1 ಕೆಜಿಅಡುಗೆ ಎಣ್ಣೆ - 3 ಟೇಬಲ್ ಸ್ಪೂನ್ (ಎಳ್ಳೆಣ್ಣೆ ಬಳಸಿದರೆ ಹೆಚ್ಚು ರುಚಿ)ಈರುಳ್ಳಿ - 2 (ಸಣ್ಣಗೆ ಹೆಚ್ಚಿದ್ದು)ಟೊಮೆಟೊ - 1ಹಸಿಮೆಣಸಿನಕಾಯಿ - 4ಕರಿಬೇವು - 1 ಕಟ್ಟುಅರಿಶಿನ - 1/4 ಟೀಸ್ಪೂನ್ಉಪ್ಪು - ರುಚಿಗೆ ತಕ್ಕಷ್ಟುಕೊತ್ತಂಬರಿ ಸೊಪ್ಪು - ಸ್ವಲ್ಪ&lt;/p&gt;&lt;h2&gt;&lt;strong&gt;ತಯಾರಿಸುವ ವಿಧಾನ&lt;/strong&gt;&lt;/h2&gt;&lt;p&gt;ಮೊದಲು ಸ್ಟವ್ ಹಚ್ಚಿ ಒಂದು ಪ್ಯಾನ್ ಇಡಿ. ಅದಕ್ಕೆ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಕಾಳುಮೆಣಸು, ಜೀರಿಗೆ, ಸೋಂಪು, ಚಕ್ಕೆ, ಕಲ್ಲು ಹೂವು, ನಕ್ಷತ್ರ ಮೊಗ್ಗು, ಲವಂಗ ಮತ್ತು ಏಲಕ್ಕಿ ಹಾಕಿ ಲಘುವಾಗಿ ಹುರಿಯಿರಿ. ನಂತರ ಒಣ ಮೆಣಸಿನಕಾಯಿ, ಧನಿಯಾ, ಗೋಡಂಬಿ, ಶುಂಠಿ ತುಂಡುಗಳು, ಬೆಳ್ಳುಳ್ಳಿ ಎಸಳು ಮತ್ತು ಕೊಬ್ಬರಿ ಸೇರಿಸಿ ಹಸಿ ವಾಸನೆ ಹೋಗಿ ಘಮ ಬರುವವರೆಗೆ ಹುರಿಯಿರಿ. ಇದು ತಣ್ಣಗಾದ ನಂತರ ಮಿಕ್ಸಿ ಜಾರ್&zwnj;ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ.&lt;/p&gt;&lt;p&gt;ಈಗ ಗ್ಯಾಸ್ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು, ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಸಿಡಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ, ಅದು ಬೇಗ ಬೇಯಲು ಸ್ವಲ್ಪ ಉಪ್ಪು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬೆಂದ ನಂತರ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ಈಗ ಹೆಚ್ಚಿದ ಟೊಮೆಟೊ ಸೇರಿಸಿ ಅದು ಮೃದುವಾಗುವವರೆಗೆ ಬೇಯಿಸಿ.&lt;/p&gt;&lt;p&gt;ಟೊಮೆಟೊ ಚೆನ್ನಾಗಿ ಬೆಂದ ನಂತರ ಸ್ವಚ್ಛಗೊಳಿಸಿದ 1 ಕೆಜಿ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಚಿಕನ್ ಅನ್ನು ಎಣ್ಣೆಯಲ್ಲೇ ಸುಮಾರು 5 ನಿಮಿಷಗಳ ಕಾಲ ಹುರಿಯಿರಿ.&lt;/p&gt;&lt;p&gt;ನಂತರ ಮೊದಲೇ ರುಬ್ಬಿಟ್ಟುಕೊಂಡ ಮಸಾಲಾ ಪೇಸ್ಟ್ ಅನ್ನು ಚಿಕನ್&zwnj;ಗೆ ಸೇರಿಸಿ ಎಲ್ಲಾ ತುಂಡುಗಳಿಗೂ ಮಸಾಲೆ ಹಿಡಿಯುವಂತೆ ಮಿಕ್ಸ್ ಮಾಡಿ.&lt;/p&gt;&lt;p&gt;ನಿಮಗೆ ಗ್ರೇವಿ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಚಿಕನ್ ಚೆನ್ನಾಗಿ ಬೇಯುವವರೆಗೆ ಬಿಡಿ.&lt;/p&gt;&lt;p&gt;ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ಘಮಘಮಿಸುವ ಪೆಪ್ಪರ್ ಚಿಕನ್ ಗ್ರೇವಿ ಸವಿಯಲು ಸಿದ್ಧ&lt;/p&gt;]]></content:encoded>
            <category><![CDATA[food]]></category>
            <dc:creator>Ashwini HR</dc:creator>
            <atom:link href="https://kannada.asianetnews.com/food/weekend-special-spicy-pepper-chicken-gravy-kannada/articleshow-1lv5tov"/>
        </item>
        <item>
            <title><![CDATA[ಮಳೆಗಾಗಿ ನೂರಾರು ರೈತರು ಮಲೆ ಮಾದಪ್ಪನ ಮೊರೆ: ದೇವರು ಭಕ್ತರ ಕಣ್ಣೀರಿಗೆ ಸ್ಪಂದಿಸುತ್ತಾನಾ?]]></title>
            <link>https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</link>
            <guid isPermaLink="true">https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc</guid>
            <pubDate>Sat, 04 Jul 2026 23:11:39 +0530</pubDate>
            <description><![CDATA[Chamarajanagar: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwq25qms70js7yq2vdncxxka,imgname-2-1783185464985.png" type="image/jpeg" height="390" width="690"/>
            <content:encoded><![CDATA[&lt;h2&gt;&lt;strong&gt;ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.&lt;/strong&gt;&lt;/h2&gt;&lt;p&gt;&lt;strong&gt;ಚಾಮರಾಜನಗರ (ಜು.04):&lt;/strong&gt; ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ಅದರಲ್ಲೂ ಕೂಡ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮುಂಗಾರು ಮಳೆ ಕೊರತೆಯಿಂದ ಸೂರ್ಯಕಾಂತಿ, ಜೋಳ ಸೇರಿದಂತೆ ಅನೇಕ ಬೆಳೆಗಳು ಒಣಗ್ತಿವೆ. ಬರ ಜಿಲ್ಲೆ ಅಂತಾ ಘೋಷಿಸುವಂತೆ ರೈತರು ಒತ್ತಾಯ ಮಾಡ್ತಿದ್ದಾರೆ. ಈ ನಡುವೆ ರೈತರು ಹಾಗೂ ಭಕ್ತರು ಮಲೆ ಮಾದಪ್ಪನ ಮೊರೆ ಹೋಗ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.&lt;/p&gt;&lt;p&gt;ರಾಜ್ಯದಲ್ಲಿ ವ್ಯಾಪಕ ಮಳೆ ಕೊರತೆಯಾಗಿದೆ. ಈಗಾಗಲೇ ಜಲಾಶಯಗಳು ಕೂಡ ಖಾಲಿಯಾಗ್ತಿವೆ. ಗಡಿ ಜಿಲ್ಲೆ ಚಾಮರಾಜಗರದಲ್ಲೂ ಕೂಡ ಮಳೆ ಕೊರತೆಯಿಂದ ಶೇಕಡಾ 60 ಕ್ಕಿಂತ ಹೆಚ್ಚು ಪ್ರದೇಶದ ಭೂಮಿಯನ್ನು ವ್ಯವಸಾಯ ಮಾಡದೆ ಖಾಲಿ ಬಿಟ್ಟಿದ್ದಾರೆ. ಅಲ್ಲದೇ 70 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯ ಮಳೆ ಪ್ರಮಾಣವನ್ನು ಗಮನಿಸಿದರೆ ಏಪ್ರಿಲ್ ತಿಂಗಳಲ್ಲಿ ವಾಡಿಕೆಯಂತೆ 63.8 ಮಿಲಿ ಮೀಟರ್ ಮಳೆಯಾಗಬೇಕಿದ್ದರೆ ಕೇವಲ 16 ಮಿಲಿ ಮೀಟರ್ ಮಾತ್ರ ದಾಖಲಾಗಿದೆ. ಮೇ ತಿಂಗಳಲ್ಲಿ 127 ಮಿಲಿ ಮೀಟರ್ ಮಳೆಯಾಗಿ ರೈತರಲ್ಲಿ ಭರವಸೆ ಮೂಡಿಸಿತ್ತು.&lt;img&gt;&lt;/p&gt;&lt;p&gt;ಆದರೆ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಮಳೆ ನಿರೀಕ್ಷಿತ ಮಟ್ಟ ತಲುಪದೇ ಕೊರತೆ ಉಂಟಾಗಿದೆ. ಪರಿಣಾಮ ಮುಂಗಾರು ಕೃಷಿ ಸಂಪೂರ್ಣವಾಗಿ ಹಿನ್ನಡೆ ಅನುಭವಿಸುತ್ತಿದೆ. ರೈತರಿಂದಲೂ ಕೂಡ ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಒಣಗುತ್ತಿವೆ. ಗುಂಡ್ಲುಪೇಟೆ, ಹನೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಕುಡಿಯುವ ನೀರಿಗೂ ಕೂಡ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನಲೆ ಬರ ಜಿಲ್ಲೆ ಅಂತಾ ಘೋಷಿಸುವಂತೆ ಸರ್ಕಾರಕ್ಕೆ ರೈತರಿಂದ ಒತ್ತಾಯ ಕೇಳಿಬಂದಿದೆ.&lt;/p&gt;&lt;p&gt;ಇನ್ನೂ ಗಡಿ ಜಿಲ್ಲೆಯ ರೈತರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಚಾಮರಾಜನಗರದಿಂದ ಬಸ್ಸಿನ ಮೂಲಕ ನೂರಾರು ರೈತರು ಮಲೆ ಮಹದೇಶ್ವರನ ದರ್ಶನಕ್ಕೆ ಹೋಗಿದ್ದಾರೆ. ಅಲ್ಲದೇ ಮಲೆ ಮಾದಪ್ಪನ ಸನ್ನಿಧಿಯಲ್ಲಿ ಉರುಳು ಸೇವೆ ಮಾಡುವುದಲ್ಲದೇ ವಿಶೇಷ ಪೂಜೆ, ಅರ್ಚನೆ ಸಲ್ಲಿಸಲಿದ್ದಾರೆ. ಇಷ್ಟಾರ್ಥ ಈಡೇರಿಸುವ ಮಾದಪ್ಪ ರೈತರ ಕಷ್ಟ ಆಲಿಸಿ ಮಳೆ ಸುರಿಸುತ್ತಾನೆಂಬುದು ರೈತರ ನಂಬಿಕೆ.&lt;/p&gt;&lt;p&gt;ಒಟ್ನಲ್ಲಿ ಎಪ್ಪತ್ತೇಳು ಮಲೆಗಳ ಒಡೆಯ ಮುದ್ದು ಮಾಯ್ಕಾರ ಮಾದಪ್ಪನ ಸನ್ನಿಧಿಗೆ ರೈತರು ಹೊರಟಿದ್ದು, ಮಾದಪ್ಪನ ಬೆಟ್ಟದಲ್ಲಿ ಉಘೇ ಉಘೇ ಝೇಂಕಾರ ಕೇಳಿ ಬರಲಿದೆ. ಕೇಳಿದ್ದನ್ನು ಈಡೇರಿಸುವ ಮಾದಪ್ಪ ಭಕ್ತರ ಸಂಕಷ್ಟಕ್ಕೆ ಸ್ಪಂದಿಸಿ ಮಳೆ ಸುರಿಸುತ್ತಾನಾ ಅನ್ನೋದ್ನ ಕಾದುನೋಡಬೇಕಾಗಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Govindaraj S</dc:creator>
            <atom:link href="https://kannada.asianetnews.com/karnataka-districts/chamarajanagar-rain-deficit-farmers-mahadeshwara-prayer-gvd/articleshow-1s2pvpc"/>
        </item>
        <item>
            <title><![CDATA[ಮನೆ ಬಾಗಿಲಲ್ಲಿ ಆಡ್ತಿದ್ದ ಕಂದಮ್ಮನ ಹೊತ್ತೊಯ್ಯಲು ಯತ್ನಿಸಿದ ಚಿರತೆ.. ಅಜ್ಜಿ, ಮೊಮ್ಮಗಳು ಗಂಭೀರ]]></title>
            <link>https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</link>
            <guid isPermaLink="true">https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6</guid>
            <pubDate>Sat, 04 Jul 2026 22:53:01 +0530</pubDate>
            <description><![CDATA[ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ, ಮನೆಯ ಬಾಗಿಲ ಬಳಿ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಘಟನೆಯಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ ಮತ್ತು ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kwq2bsjmh1frb1zbn2421651,imgname-cheetah-attacks-1783185663572.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಚಾಮರಾಜನಗರ: &lt;/strong&gt;ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಮನೆಯ ಬಾಗಿಲಲ್ಲೇ ಕುಳಿತಿದ್ದ ಅಜ್ಜಿ ಮತ್ತು ಐದು ವರ್ಷದ ಪುಟ್ಟ ಮಗುವಿನ ಮೇಲೆ ಚಿರತೆ ದಾಳಿ ನಡೆಸಿದೆ. ಜಿಲ್ಲೆಯ ಹನೂರು ತಾಲೂಕಿನ ತಟ್ಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ಈಗ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.&lt;/p&gt;&lt;h2&gt;&lt;strong&gt;ಘಟನೆಯ ವಿವರ&lt;/strong&gt;&lt;/h2&gt;&lt;p&gt;ಹನೂರು ತಾಲೂಕಿನ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಗೆರೆ ಗ್ರಾಮದ ನಿವಾಸಿ ಶಿವಮ್ಮ ಮತ್ತು ಅವರ 5 ವರ್ಷದ ಮೊಮ್ಮಗಳು ಹರ್ಷಿತಾ ಚಿರತೆ ದಾಳಿಯಿಂದ ಗಾಯಗೊಂಡವರು. ಶಿವಮ್ಮ ಅವರು ಎಂದಿನಂತೆ ತಮ್ಮ ಮನೆಯ ಬಾಗಿಲ ಬಳಿ ಕುಳಿತಿದ್ದರು. ಈ ವೇಳೆ ಹೊಂಚು ಹಾಕಿ ಬಂದ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಇದರಿಂದ ಗಾಬರಿಗೊಂಡ ಶಿವಮ್ಮ ಜೋರಾಗಿ ಕಿರುಚಿಕೊಂಡಿದ್ದಾರೆ. ಅಜ್ಜಿಯ ಚೀರಾಟ ಕೇಳಿ ಮಗು ಹರ್ಷಿತಾ ಏನಾಯಿತೆಂದು ನೋಡಲು ಓಡಿ ಬಂದಿದ್ದಾಳೆ.&lt;/p&gt;&lt;h3&gt;&lt;strong&gt;ಅಡಗಿ ಕುಳಿತು ಮಗುವಿನ ಮೇಲೆ ದಾಳಿ&lt;/strong&gt;&lt;/h3&gt;&lt;p&gt;ಶಿವಮ್ಮ ಕಿರುಚಿಕೊಂಡಾಗ ಚಿರತೆಯು ಅಲ್ಲಿಂದ ಓಡಿಹೋಗದೆ ಮನೆಯ ಪಕ್ಕದಲ್ಲೇ ಅಡಗಿ ಕುಳಿತಿತ್ತು. ಅಜ್ಜಿಯನ್ನು ನೋಡಲು ಬಂದ ಪುಟ್ಟ ಮಗು ಹರ್ಷಿತಾಳನ್ನು ಕಂಡೊಡನೆ ಚಿರತೆ ಮಗುವಿನ ಮೇಲೂ ಎರಗಿದೆ. ಶಿವಮ್ಮ ಮತ್ತು ಮಗುವಿನ ಚೀರಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಲಾಠಿ, ಕಲ್ಲುಗಳೊಂದಿಗೆ ಓಡಿ ಬಂದಿದ್ದಾರೆ. ಜನರನ್ನು ಕಂಡ ಚಿರತೆ ಅಲ್ಲಿಂದ ಕಾಲ್ಕಿತ್ತು ಕಾಡಿನತ್ತ ಪಲಾಯನ ಮಾಡಿದೆ.&lt;/p&gt;&lt;h3&gt;&lt;strong&gt;ಗ್ರಾಮಸ್ಥರಲ್ಲಿ ಮನೆಮಾಡಿದ ಆತಂಕ&lt;/strong&gt;&lt;/h3&gt;&lt;p&gt;ಗಾಯಗೊಂಡ ಅಜ್ಜಿ ಮತ್ತು ಮಗುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜನವಸತಿ ಪ್ರದೇಶಕ್ಕೆ ನುಗ್ಗಿ ಚಿರತೆ ದಾಳಿ ಮಾಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ಮನೆಯ ಬಾಗಿಲಲ್ಲೇ ನಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ತಟ್ಟೆಗೆರೆ ಗ್ರಾಮದ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.&lt;/p&gt;&lt;p&gt;ಈ ಭಾಗದಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ದಾಳಿ ಮಾಡಿದ ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗಿದೆ.&lt;/p&gt;]]></content:encoded>
            <category><![CDATA[karnataka-districts]]></category>
            <dc:creator>Ganesh Mabla Gowda</dc:creator>
            <atom:link href="https://kannada.asianetnews.com/karnataka-districts/in-chamarajanagar-district-a-grandmother-and-granddaughter-were-seriously-injured-in-a-leopard-attack-gkn/articleshow-y616pk6"/>
        </item>
        <item>
            <title><![CDATA[ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು]]></title>
            <link>https://kannada.asianetnews.com/cricket-sports/vaibhav-suryavanshi-record-breaking-debut-ends-in-defeat-as-india-lose-to-england-2nd-t20i/articleshow-z4z5dk6</link>
            <guid isPermaLink="true">https://kannada.asianetnews.com/cricket-sports/vaibhav-suryavanshi-record-breaking-debut-ends-in-defeat-as-india-lose-to-england-2nd-t20i/articleshow-z4z5dk6</guid>
            <pubDate>Sat, 04 Jul 2026 22:42:49 +0530</pubDate>
            <description><![CDATA[ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿ ದಾಖಲೆ ಬರೆದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು ಸಿಗಲಿಲ್ಲ. ಐರ್ಲೆಂಡ್ ವಿರುದ್ಧ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಪಂದ್ಯದಲ್ಲಿ ಮುಗ್ಗರಿಸಿದೆ.]]></description>
            <media:content url="https://static.asianetnews.com/images/w-1280,h-720,format-jpg,imgid-01kw6fmgrnkgn97x64cqp35693,imgname-team-india--1--1782629155604.jpg" type="image/jpeg" height="390" width="690"/>
            <content:encoded><![CDATA[&lt;p&gt;&lt;strong&gt;ಮ್ಯಾಂಚೆಸ್ಟರ್ (ಜು.04)&lt;/strong&gt; ಟೀಂ ಇಂಡಿಯಾ ಟಿ20 ಸೋಲಿನ ಸರಣಿ ಮುಂದುವರಿದಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗಿತ್ತು. ಜೊತೆಗೆ ವೈಭವ್ ಸೂರ್ಯವಂಶಿ ವಿಶ್ವದಾಖಲೆಯ ಪಾದಾರ್ಪಣೆ ಭಾರತ ತಂಡಕ್ಕೆ ಮತ್ತಷ್ಟು ಶಕ್ತಿ ತುಂಬಿತ್ತು. ಆದರೆ ಫಲಿತಾಂಶ ಬದಲಾಗಲಿಲ್ಲ. ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಜೇಕಬ್ ಬೆತಲ್ ಅಬ್ಬರಕ್ಕೆ ಭಾರತ ಸೋಲಿಗೆ ಶರಣಾಗಿದೆ. ಐರ್ಲೆಂಡ್ ವಿರುದ್ದ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಟಿ20 ಪಂದ್ಯದಲ್ಲಿ ಸೋಲು ಕಂಡಿದೆ.&lt;/p&gt;&lt;h2&gt;ಆರಂಭದಲ್ಲೇ ಅರ್ಶದೀಪ್ ಮಾಸ್ಟರ್ ಸ್ಟ್ರೋಕ್&lt;/h2&gt;&lt;p&gt;ಭಾರತ ನೀಡಿದ 191 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭದಲ್ಲೇ ಅರ್ಶದೀಪ್ ಸಿಂಗ್ ಶಾಕ್ ನೀಡಿದ್ದರು. ಮೊದಲ ಎಸೆತದಲ್ಲಿ ವಿಕೆಟ್ ಕಬಳಿಸಿ ಇಂಗ್ಲೆಂಡ್ ಆತ್ಮವಿಶ್ವಾಸವನ್ನೇ ಕುಗ್ಗಿಸಿದ್ದರು. ಇಬ್ಬರು ಆರಂಭಿಕರನ್ನು ಅರ್ಶದೀಪ್ ಔಟ್ ಮಾಡಿದರು. ಫಿಲ್ ಸಾಲ್ಟ್ ಹಾಗೂ ಜೋಸ್ ಬಟ್ಲರ್ ಇಬ್ಬರೂ ಶೂನ್ಯ ಸುತ್ತಿದರು.&lt;/p&gt;&lt;p&gt;ನಾಯಕ ಹ್ಯಾರಿ ಬ್ರೂಕ್ ಹಾಗೂ ಜೇಕಬ್ ಬೆತೆಲ್ ಹೋರಾಟದಿಂದ ಇಂಗ್ಲೆಂಡ್ ಚೇತರಿಸಿಕೊಂಡಿತು. ಈ ಜೊತೆಯಾಟ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸುವ ಸೂಚನೆ ನೀಡಿತು. ಆದರೆ ಇವರ ಜೊತೆಯಾಕ್ಕೆ ಅಕ್ಸರ್ ಪಟೇಲ್ ಬ್ರೇಕ್ ಹಾಕಿದರು. ಹ್ಯಾರಿ ಬ್ರೂಕ್ 39 ರನ್ ಸಿಡಿಸಿ ಔಟಾದರು. ಆದರೆ ಬೆತೆಲ್ ಹೋರಾಟ ಮುಂದುವರಿಸಿದರು. ಟಾಮ್ ಬ್ಯಾಂಟನ್ ಹಾಗೂ ಬೆತೆಲ್ ಹೋರಾಟ ಇಂಗ್ಲೆಂಡ್ ಆತ್ಮವಿಶ್ವಾಸ ಹೆಚ್ಚಿಸಿತು. ಈ ಜೊತೆಯಾಟ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಮತ್ತೆ ದಾಳಿ ಸಂಘಟಿಸಿದ ಅರ್ಶದೀಪ್ ಬ್ಯಾಂಟನ್ ವಿಕೆಟ್ ಕಬಳಿಸಿದರು. ಬ್ಯಾಂಟನ್ 39 ರನ್ ಸಿಡಿಸಿದರು.&lt;/p&gt;&lt;p&gt;ಜೇಕಬ್ ಬೆತಲ್ ಹೋರಾಟ ಇಂಗ್ಲೆಂಡ್ ತಂಡಕ್ಕೆ ಆಸರೆಯಾಯಿತು. ಬೆತೆಲ್&zwnj;ಗೆ ಸ್ಯಾಮ್ ಕುರನ್ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು.17ನೇ ಓವರ್&zwnj;ನಲ್ಲಿ ಬೌಂಡರಿ ಹಾಗೂ ಸಿಕ್ಸರ್ ಪಂದ್ಯದ ಗತಿ ಬದಲಿಸಿತು.&lt;/p&gt;&lt;p&gt;ರವಿ ಬಿಶ್ನೋಯ್ ಒಂದೇ ಓವರ್&zwnj;ನಲ್ಲಿ 29 ರನ್ ಸಿಡಿಸಿದರು. ಇದು ಭಾರತಕ್ಕೆ ಬಲು ದುಬಾರಿಯಾಯಿತು. ಪಂದ್ಯ ಸಂಪೂರ್ಣ ಇಂಗ್ಲೆಂಡ್ ಪರ ವಾಲಿತ್ತು. ಇದರ ನಡುವೆ ಸ್ಯಾಮ್ ಕುರನ್ ವಿಕೆಟ್ ಪತನಗೊಂಡರೂ ಇಂಗ್ಲೆಂಡ್ ಆತಂಕಕ್ಕೆ ಒಳಗಾಗಲಿಲ್ಲ. ಇನ್ನೂ ಒಂದು ಓವರ್ ಬಾಕಿ ಇರುವಂತೆ ಇಂಗ್ಲೆಂಡ್ 4 ವಿಕೆಟ್ ಗೆಲುವು ದಾಖಲಿಸಿತು. ಬೆತೆಲ್ ಅಜೇಯ 76 ರನ್ ಸಿಡಿಸಿದರು.&lt;/p&gt;&lt;h2&gt;ವೈಭವ್ ಡೆಬ್ಯೂ ದಾಖಲೆ&lt;/h2&gt;&lt;p&gt;ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯ 7 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತು. ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡುವ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಪಂದ್ಯ ಆಡಿದ ಅತ್ಯಂತ ಕಿರಿಯ ಆಟಗಾರ ಅನ್ನೋ ದಾಖಲೆ ಬರೆದರು. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ 16ನೇ ವಯಸ್ಸಿಗೆ ಡೆಬ್ಯೂ ಮಾಡಿ ದಾಖಲೆ ಬರೆದಿದ್ದರು. ಇದೀಗ ವೈಭವ್ ಸೂರ್ಯವಂಶಿ 15ನೇ ವಯಸ್ಸಿಗೆ ಪಾದಾರ್ಪಣೆ ದಾಖಲೆ ಬರೆದರು. ಬ್ಯಾಟಿಂಗ್&zwnj;ನಲ್ಲಿ ಆತ್ಮವಿಶ್ವಾಸದಿಂದ ಬಾಲ್ ಎದುರಿಸಿದ ವೈಭವ್ 2 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಆದರೆ 14 ರನ್ ಸಿಡಿಸಿ ಔಟಾದರು.&lt;/p&gt;&lt;p&gt;ಅಭಿಷೇಕ್ ಶರ್ಮಾ 43, ಇಶಾನ್ ಕಿಶನ್ 49, ನಾಯಕ ಶ್ರೇಯಸ್ ಅಯ್ಯರ್ 37, ತಿಲಕ್ ವರ್ಮಾ 37 ರನ್ ಸಿಡಿಸಿದರು. ಇದರೊಂದಿಗೆ ಭಾರತ 191 ರನ್ ಟಾರ್ಗೆಟ್ ನೀಡಿತು.&lt;/p&gt;&lt;p&gt;&amp;nbsp;&lt;/p&gt;]]></content:encoded>
            <category><![CDATA[cricket-sports]]></category>
            <dc:creator>Chethan Kumar</dc:creator>
            <atom:link href="https://kannada.asianetnews.com/cricket-sports/vaibhav-suryavanshi-record-breaking-debut-ends-in-defeat-as-india-lose-to-england-2nd-t20i/articleshow-z4z5dk6"/>
        </item>
        <item>
            <title><![CDATA[ಕರ್ನಾಟಕದ ಈ ಹಳ್ಳಿಯಲ್ಲಿ ಇಂದಿಗೂ ಜನರು ಸಂಸ್ಕೃತದಲ್ಲೇ ಮಾತಾಡ್ತಾರೆ! ಪುಟ್ಟ ಮಕ್ಕಳಿಗೂ ಈ ಭಾಷೆ ನೀರು ಕುಡಿದಷ್ಟೇ ಸುಲಭ!]]></title>
            <link>https://kannada.asianetnews.com/gallery/travel/mattur-explore-karnatakas-incredible-sanskrit-village-where-an-ancient-language-still-lives-dfqf4fm</link>
            <guid isPermaLink="true">https://kannada.asianetnews.com/gallery/travel/mattur-explore-karnatakas-incredible-sanskrit-village-where-an-ancient-language-still-lives-dfqf4fm</guid>
            <pubDate>Sat, 04 Jul 2026 22:24:15 +0530</pubDate>
            <description><![CDATA[Sanskrit Village: ಒಂದು ಕಾಲವಿತ್ತು, ಭಾರತದಲ್ಲಿ ಜನರು ಸಂಸ್ಕೃತದಲ್ಲಿ ಮಾತನಾಡುತ್ತಿದ್ದರು. ಆದರೆ ಕ್ರಮೇಣ ಹಿಂದಿ ಮತ್ತು ಈಗ ಇಂಗ್ಲಿಷ್ ಭಾಷೆಯ ಪ್ರಭಾವ ಹೆಚ್ಚಾಯಿತು. ಆದರೂ ಭಾರತದಲ್ಲಿ ಇಂದಿಗೂ ಒಂದು ಹಳ್ಳಿಯಿದೆ, ಅಲ್ಲಿ ದೈನಂದಿನ ಜೀವನದಲ್ಲಿ ಜನರು ಸಂಭಾಷಣೆಗಾಗಿ ಸಂಸ್ಕೃತ ಭಾಷೆಯನ್ನೇ ಬಳಸುತ್ತಾರೆ.]]></description>
            <media:content url="https://static.asianetnews.com/images/w-1280,h-720,format-jpg,imgid-01df7wkydy6qcycpdsrm0kb3vp,imgname-sansk-png.jpg" type="image/jpeg" height="390" width="690"/>
            <content:encoded><![CDATA[&lt;p&gt;Sanskrit Village: ಒಂದು ಕಾಲವಿತ್ತು, ಭಾರತದಲ್ಲಿ ಜನರು ಸಂಸ್ಕೃತದಲ್ಲಿ ಮಾತನಾಡುತ್ತಿದ್ದರು. ಆದರೆ ಕ್ರಮೇಣ ಹಿಂದಿ ಮತ್ತು ಈಗ ಇಂಗ್ಲಿಷ್ ಭಾಷೆಯ ಪ್ರಭಾವ ಹೆಚ್ಚಾಯಿತು. ಆದರೂ ಭಾರತದಲ್ಲಿ ಇಂದಿಗೂ ಒಂದು ಹಳ್ಳಿಯಿದೆ, ಅಲ್ಲಿ ದೈನಂದಿನ ಜೀವನದಲ್ಲಿ ಜನರು ಸಂಭಾಷಣೆಗಾಗಿ ಸಂಸ್ಕೃತ ಭಾಷೆಯನ್ನೇ ಬಳಸುತ್ತಾರೆ.&amp;nbsp;&lt;/p&gt;&lt;img&gt;&lt;p&gt;&lt;strong&gt;ಸಂಸ್ಕೃತ ಗ್ರಾಮ ಎಂದೇ ಜನಪ್ರಿಯ&lt;/strong&gt;ಭಾರತದಲ್ಲಿ ಜನರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಅನೇಕ ಭಾಷೆಗಳನ್ನು ಬಳಸುತ್ತಾರೆ. ಸಂಸ್ಕೃತವು ಭಾರತದ ಪ್ರಾಚೀನ ಭಾಷೆಯಾದರೂ, ಕಾಲಾನಂತರದಲ್ಲಿ ಇದನ್ನು ಹಲವರು ತಳ್ಳಿಹಾಕಿದರು. ಆದರೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಒಂದು ಗ್ರಾಮ ಈ ಕಲ್ಪನೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಸಾಬೀತುಪಡಿಸುತ್ತಿದೆ. ಈ ಗ್ರಾಮದ ಹೆಸರು ಮತ್ತೂರು. ತುಂಗಾ ನದಿಯ ದಡದಲ್ಲಿರುವ ಈ ಪುಟ್ಟ ಗ್ರಾಮ ಇಡೀ ಭಾರತದಲ್ಲಿ &ldquo;ಸಂಸ್ಕೃತ ಗ್ರಾಮ&rdquo; (Sanskrit Village) ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ನಿವಾಸಿಗಳು ಸಂಸ್ಕೃತವನ್ನು ಕೇವಲ ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ, ತಮ್ಮ ದಿನನಿತ್ಯದ ಬದುಕಿನಲ್ಲಿ ಮಾತನಾಡುತ್ತಾರೆ. ಅತ್ಯಂತ ಅಚ್ಚರಿಯ ವಿಷಯವೆಂದರೆ, ಗ್ರಾಮದ ಬೀದಿಗಳಲ್ಲಿ ಆಟವಾಡುವ ಮಕ್ಕಳು ಕೂಡ ಸಂಸ್ಕೃತದಲ್ಲಿ ಮಾತನಾಡುವುದನ್ನು ನೀವು ಕಾಣಬಹುದು.&lt;/p&gt;&lt;img&gt;&lt;p&gt;&lt;strong&gt;ಗ್ರಾಮದ ವಿಶೇಷತೆ&lt;/strong&gt;ಮತ್ತೂರಿನಲ್ಲಿ ಅಂಗಡಿಕಾರರು ಗ್ರಾಹಕರೊಂದಿಗೆ, ರೈತರು ಹೊಲಗಳಲ್ಲಿ, ಅರ್ಚಕರು ದೇವಸ್ಥಾನಗಳಲ್ಲಿ ಮತ್ತು ನೆರೆಹೊರೆಯವರು ಪರಸ್ಪರ ಸಂಸ್ಕೃತದಲ್ಲೇ ಸಂವಹನ ನಡೆಸುತ್ತಾರೆ. ಇಲ್ಲಿನ ಮಕ್ಕಳು ಶಾಲೆಯಲ್ಲಿ ಸಂಸ್ಕೃತ ಕಲಿಯುತ್ತಾರೆ ಮತ್ತು ಆಟವಾಡುವಾಗಲೂ ಅದೇ ಭಾಷೆಯನ್ನು ಬಳಸುತ್ತಾರೆ. ಇಲ್ಲಿ &quot;ನಮಸ್ತೆ&quot; ಬದಲಿಗೆ &quot;ನಮಸ್ಕಾರಃ&quot; ಮತ್ತು &quot;ಹೇಗಿದ್ದೀರಾ?&quot; ಎಂದು ಕೇಳಲು &quot;ಕಥಂ ಅಸ್ತಿ?&quot; ಎಂಬ ಮಾತುಗಳು ಸಾಮಾನ್ಯ. ಮತ್ತೂರಿನ ಜನರು ಸಂಸ್ಕೃತವನ್ನು ತಮ್ಮ ಮಾತೃಭಾಷೆಯಂತೆ ಗೌರವಿಸುತ್ತಾರೆ. ಶಾಲೆಗಳಲ್ಲಿ ಸಂಸ್ಕೃತವನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಹಿರಿಯರು ಮನೆಯಲ್ಲಿ ಮಕ್ಕಳನ್ನು ಸಂಸ್ಕೃತದಲ್ಲಿ ಮಾತನಾಡಲು ಪ್ರೋತ್ಸಾಹಿಸುತ್ತಾರೆ. ಇದರ ಫಲವಾಗಿ, ಸಂಸ್ಕೃತ ಇಲ್ಲಿ ಕೇವಲ ಪುಸ್ತಕ ಅಥವಾ ಮಂತ್ರಗಳಿಗೆ ಸೀಮಿತವಾಗಿರದೆ, ಒಂದು ಜೀವಂತ ಭಾಷೆಯಾಗಿದೆ.&lt;/p&gt;&lt;img&gt;&lt;p&gt;&lt;strong&gt;ದೈನಂದಿನ ಭಾಷೆಯಾಗಿ ಸಂಸ್ಕೃತ&lt;/strong&gt;ಈ ಗ್ರಾಮದಲ್ಲಿ ಸಂಸ್ಕೃತವು ಜನರ ದೈನಂದಿನ ಬದುಕಿನ ಭಾಗವಾಗಿದೆ. ವ್ಯಾಪಾರ-ವಹಿವಾಟಿನಿಂದ ಹಿಡಿದು ಪಂಚಾಯತ್ ಸಭೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳವರೆಗೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತವೆ. ಮತ್ತೂರಿನ ಈ ವಿಶೇಷ ಖ್ಯಾತಿಯಿಂದಾಗಿ ದೇಶ-ವಿದೇಶಗಳ ಅನೇಕ ಭಾಷಾ ತಜ್ಞರು ಮತ್ತು ಸಂಸ್ಕೃತ ಪ್ರೇಮಿಗಳು ಇಲ್ಲಿಗೆ ಬಂದು ಅಧ್ಯಯನ ನಡೆಸುತ್ತಾರೆ. ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಈ ಗ್ರಾಮವನ್ನು ಸಂಸ್ಕೃತ ಸಂರಕ್ಷಣೆಯ ಸಂಕೇತವೆಂದು ಪರಿಗಣಿಸುತ್ತವೆ. ಜೀವಂತ ಸಂಸ್ಕೃತದ ಅನುಭವ ಪಡೆಯಲು ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.&lt;/p&gt;&lt;img&gt;&lt;p&gt;&lt;strong&gt;ಸಂಸ್ಕೃತದ ಮಹತ್ವ&lt;/strong&gt;ಇಲ್ಲಿ ಸಂಸ್ಕೃತವನ್ನು 'ದೇವಭಾಷೆ' ಎಂದು ಕರೆಯಲಾಗುತ್ತದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಮತ್ತು ಅನೇಕ ಶಾಸ್ತ್ರಗಳು ಇಂದಿಗೂ ಜ್ಞಾನದ ಭಂಡಾರವಾಗಿವೆ. ಸರಿಯಾದ ಪ್ರಯತ್ನ ಮಾಡಿದರೆ ಸಂಸ್ಕೃತವನ್ನು ಇಂದಿನ ಕಾಲದಲ್ಲೂ ಆಡುಭಾಷೆಯನ್ನಾಗಿ ಮಾಡಬಹುದು ಎಂಬುದಕ್ಕೆ ಮತ್ತೂರು ಗ್ರಾಮವೇ ಸಾಕ್ಷಿ. ಆದರೆ, ಮತ್ತೂರು ಕೂಡ ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸುತ್ತಿದೆ. ಯುವ ಪೀಳಿಗೆ ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡುತ್ತಿರುವುದು ಮತ್ತು ಇಂಗ್ಲಿಷ್-ಹಿಂದಿ ಭಾಷೆಗಳ ಪ್ರಭಾವ ಹೆಚ್ಚುತ್ತಿರುವುದು ಗ್ರಾಮದ ಹಿರಿಯರಲ್ಲಿ ಆತಂಕ ಮೂಡಿಸಿದೆ. ಹೊಸ ಪೀಳಿಗೆಯು ಸಂಸ್ಕೃತವನ್ನು ಜೀವಂತವಾಗಿಡಬೇಕು ಎಂಬುದು ಇಲ್ಲಿನ ಹಿರಿಯರ ಆಶಯವಾಗಿದೆ.&lt;/p&gt;]]></content:encoded>
            <category><![CDATA[travel]]></category>
            <dc:creator>Ashwini HR</dc:creator>
            <atom:link href="https://kannada.asianetnews.com/gallery/travel/mattur-explore-karnatakas-incredible-sanskrit-village-where-an-ancient-language-still-lives-dfqf4fm"/>
        </item>
    </channel>
</rss>
