Asianet Suvarna News Asianet Suvarna News

ರಾಮ​ನ​ಗರಕ್ಕೆ ಇನ್ನೂ ಭೇಟಿ ನೀಡದ ಜಿಲ್ಲಾ ಉಸ್ತುವಾರಿ ಸಚಿವ

ಜಿಲ್ಲೆಗೆ ಭೇಟಿ ನೀಡದ ನೂತನ ಜಿಲ್ಲಾ ಉಸ್ತು​ವಾರಿ ಉಪ​ಮು​ಖ್ಯ​ಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ| ಉಪ ಮುಖ್ಯಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ ಅವ​ರಿಗೆ ತವರು ಜಿಲ್ಲೆ ರಾಮ​ನ​ಗರ ಜೊತೆಗೆ ಚಿಕ್ಕ​ಬ​ಳ್ಳಾ​ಪುರ ಜಿಲ್ಲೆಯ ಪ್ರಭಾರ ಉಸ್ತು​ವಾರಿ ಸಚಿ​ವರ ಜವಾ​ಬ್ದಾ​ರಿ​ಯನ್ನು ನೀಡ​ಲಾ​ಗಿದೆ| ಬೇರೆ ಜಿಲ್ಲೆ​ಗ​ಳಿಗೆ ಉಸ್ತು​ವಾರಿ ಸಚಿ​ವ​ರಾಗಿ ನೇಮ​ಕ​ಗೊಂಡಿ​ರುವ ಬಹು​ತೇ​ಕ ಸಚಿ​ವರು ತಮ್ಮ ತಮ್ಮ ಜಿಲ್ಲೆ​ಗ​ಳಿಗೆ ಒಮ್ಮೆ ಭೇಟಿ ನೀಡಿ ಅಧಿ​ಕಾ​ರಿ​ಗಳ ಸಭೆ ನಡೆ​ಸಿದ್ದಾರೆ| 

District Incharge Minister Ashwath Narayan Did Not Visit Ramanagara
Author
Bengaluru, First Published Oct 9, 2019, 3:31 PM IST

ಎಂ. ಅಫ್ರೋಜ್ ಖಾನ್ 

ರಾಮ​ನ​ಗರ(ಅ.9): ರೇಷ್ಮೆ ನಗರಿ ರಾಮ​ನ​ಗರ ಜಿಲ್ಲೆಗೆ ನೂತನ ಜಿಲ್ಲಾ ಉಸ್ತು​ವಾರಿ ಸಚಿ​ವ​ರಾಗಿ ನೇಮ​ಕ​ಗೊಂಡು 23 ದಿನ​ಗಳು ಕಳೆ​ದರೂ ಉಪ​ಮು​ಖ್ಯ​ಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ ಅವ​ರಿಗೆ ಜಿಲ್ಲೆಗೆ ಭೇಟಿ ನೀಡಲು ಇನ್ನೂ ಸಮಯ ಸಿಕ್ಕಿಲ್ಲ.

ಮುಖ್ಯ​ಮಂತ್ರಿ ಯಡಿ​ಯೂ​ರಪ್ಪ ಹೆಚ್ಚು ಕಡಿಮೆ ಸಚಿವ ಸಂಪುಟ ವಿಸ್ತ​ರ​ಣೆ​ಯಾಗಿ ಒಂದು ತಿಂಗಳ ನಂತರ ಅಳೆದು ತೂಗಿ(ಸೆಪ್ಟೆಂಬರ್‌ 16) ಜಿಲ್ಲೆ​ಗ​ಳನ್ನು ಸಚಿ​ವರ ನಡುವೆ ಹಂಚಿ​ದರು. ಉಪ ಮುಖ್ಯ​ಮಂತ್ರಿ ಸಿ.ಎನ್‌. ಅ​ಶ್ವತ್ಥ ನಾರಾ​ಯಣ  ಅವ​ರಿಗೆ ತವರು ಜಿಲ್ಲೆ ರಾಮ​ನ​ಗರ ಜೊತೆಗೆ ಚಿಕ್ಕ​ಬ​ಳ್ಳಾ​ಪುರ ಜಿಲ್ಲೆಯ ಪ್ರಭಾರ ಉಸ್ತು​ವಾರಿ ಸಚಿ​ವರ ಜವಾ​ಬ್ದಾ​ರಿ​ಯನ್ನು ನೀಡ​ಲಾ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೇರೆ ಜಿಲ್ಲೆ​ಗ​ಳಿಗೆ ಉಸ್ತು​ವಾರಿ ಸಚಿ​ವ​ರಾಗಿ ನೇಮ​ಕ​ಗೊಂಡಿ​ರುವ ಬಹು​ತೇ​ಕ ಸಚಿ​ವರು ತಮ್ಮ ತಮ್ಮ ಜಿಲ್ಲೆ​ಗ​ಳಿಗೆ ಒಮ್ಮೆ ಭೇಟಿ ನೀಡಿ ಅಧಿ​ಕಾ​ರಿ​ಗಳ ಸಭೆ ನಡೆ​ಸಿದ್ದಾರೆ. ಪಕ್ಕದ ಮಂಡ್ಯ ಜಿಲ್ಲೆ ಸೇರಿ​ದಂತೆ ಹಲ​ವೆಡೆ ಪ್ರವಾಸ ನಡೆ​ಸಿ​ರುವ ಅ​ಶ್ವತ್ಥ ನಾರಾ​ಯಣ ಅವ​ರು ರಾಮ​ನ​ಗ​ರಕ್ಕೆ ಭೇಟಿ ನೀಡಲು ಇನ್ನೂ ಮನಸ್ಸು ಮಾಡಿ​ಲ್ಲ.

ಚರ್ಚೆ ನಡೆ​ಸಿ​ಲ್ಲ:

ಉಪ ಮುಖ್ಯ​ಮಂತ್ರಿ ಅ​ಶ್ವತ್ಥ ನಾರಾ​ಯಣ​ರ​ವರು ಜಿಲ್ಲೆಗೆ ಭೇಟಿ ನೀಡು​ವು​ದಿ​ರಲಿ ಕನಿಷ್ಠ ಪಕ್ಷ ತಾವಿ​ರು​ವ​ಲ್ಲಿ​ಗೆಯೇ ಜಿಲ್ಲಾಧಿಕಾ​ರಿ​ಗಳು, ಜಿಪಂ ಮುಖ್ಯ ಕಾರ್ಯ​ನಿ​ರ್ವಾ​ಹಕ ಅಧಿ​ಕಾ​ರಿ​ಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಕರೆ​ಸಿ​ಕೊಂಡು ಜಿಲ್ಲೆಯ ಅಭಿ​ವೃದ್ಧಿ, ಸಮ​ಸ್ಯೆ​ಗಳ ಕುರಿತು ಚರ್ಚೆ ಕೂಡ ನಡೆ​ಸಿಲ್ಲ. ಅನೇ​ಕರ ಜಯಂತಿ​ಗಳು ಹಾಗೂ ದಸರಾ ಆಹಾರ ಮೇಳ ನಡೆ​ದರೂ ಪಾಲ್ಗೊ​ಳ್ಳ​ಲ್ಲಿ​ಲ್ಲ.

ಜಿಲ್ಲೆಯು ಸತತ ಬರಗಾಲದಿಂದ ತತ್ತರಿಸಿದೆ. ಹಿಂಗಾರು ಮತ್ತು ಮುಂಗಾರಿನ ಬರ​ದಿಂದಾಗಿ ರೈತರು ಕಂಗಾಲಾಗಿದ್ದಾರೆ. ಬೆಳೆ ನಷ್ಟಕ್ಕೆ ಇನ್ನೂ ಸಮ​ರ್ಪ​ಕ​ವಾಗಿ ಪರಿ​ಹಾರ ವಿತ​ರಣೆ ಆಗಿಲ್ಲ. ಜಿಲ್ಲೆಯಲ್ಲಿ ಜಾನು​ವಾ​ರು​ಗ​ಳಿಗೆ ಸದ್ಯಕ್ಕೆ ಮೇವಿನ ಸಮಸ್ಯೆ ಇಲ್ಲ​ದಿ​ದ್ದರೂ, ಹಲ​ವೆಡೆ ಕುಡಿ​ಯುವ ನೀರಿನ ಸಮಸ್ಯೆ ತಲೆ​ದೋ​ರಿ​ದೆ.

ಸಮ​ಸ್ಯೆ​ಗ​ಳಿಗೆ ಸಿಕ್ಕದ ಉತ್ತ​ರ:

ಮೈತ್ರಿ ಸರ್ಕಾ​ರದ ಅವ​ಧಿ​ಯಲ್ಲಿ ರಾಮ​ನ​ಗರ ಜಿಲ್ಲೆಯಲ್ಲಿ ವಿವಿಧ ಅಭಿ​ವೃದ್ಧಿ ಕಾಮ​ಗಾ​ರಿ​ಗಳ ಅನು​ಷ್ಠಾ​ನಕ್ಕೆ ಮಂಜೂ​ರಾ​ಗಿ​ರುವ ಅನು​ದಾ​ನಕ್ಕೆ ಬ್ರೇಕ್‌ ಹಾಕಿ​ರು​ವುದು, ಕನ​ಕ​ಪು​ರಕ್ಕೆ ಮಂಜೂ​ರಾ​ಗಿದ್ದ ಮೆಡಿ​ಕಲ್‌ ಕಾಲೇ​ಜಿನ ಸ್ಥಳಾಂತರ, ರಾಜೀವ್‌ ಗಾಂಧಿ ಆರೋಗ್ಯ ವಿವಿ, ಮೇಕೆ​ದಾಟು ಯೋಜನೆ ಸೇರಿ​ದಂತೆ ಅನೇಕ ಜ್ವಲಂತ ಸಮ​ಸ್ಯೆ​ಗಳಿಗೆ ಸಚಿ​ವ​ರಿಂದ ಮುಕ್ತಿ ದೊರ​ಕ​ಬೇ​ಕಿ​ದೆ.

ಆರನೇ ಜಿಲ್ಲಾ ಉಸ್ತು​ವಾರಿ ಸಚಿವ:

ರಾಮನಗರ ಜಿಲ್ಲೆಯಾಗಿ 13 ವಸಂತಗಳನ್ನು ಪೂರೈಸಿದೆ. ಆದರೆ, ಬಿಜೆಪಿಗರಿಗೆ ಕೇವ​ಲ ಆರು ಬಾರಿ ಮಾತ್ರ ಉಸ್ತುವಾರಿ ಹೊಣೆ ದೊರೆತಿದೆ. ಶ್ರೀರಾಮುಲು, ಉಮೇಶ್‌ ಕತ್ತಿ, ರೇಣುಕಾಚಾರ್ಯ, ಬಚ್ಚೇಗೌಡ, ಸಿ.ಪಿ. ಯೋಗೇಶ್ವರ್‌ ಬಳಿಕ ಅ​ಶ್ವತ್ಥ ನಾರಾ​ಯಣ ಜಿಲ್ಲಾ ಉಸ್ತು​ವಾರಿಯ ಜವಾ​ಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ, ಇವರೆಲ್ಲರೂ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಪಟ್ಟದಿಂದ ಕೆಳಗಿಳಿದಿದ್ದರು ಎಂಬುದು ವಿಶೇಷ. ಇನ್ನು ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್‌ 6 ರಿಂದ 7 ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಸ್ಥಳೀಯ ಶಾಸಕರಾಗಿ ಮುಖ್ಯಮಂತ್ರಿ ಪಟ್ಟಅಲಂಕರಿಸಿದ್ದರು. ಆದರೆ, ಉಸ್ತುವಾರಿ ಹೊಣೆ ಮಾತ್ರ ಹೊತ್ತಿರಲಿಲ್ಲ. ಇದೀಗ ಬಿಜೆಪಿ ನೇತೃ​ತ್ವದ ರಾಜ್ಯ ಸರ್ಕಾ​ರ​ದಲ್ಲಿ ನೇಮ​ಕ​ಗೊಂಡಿ​ರುವ 5 ಮಂದಿ ಉಸ್ತುವಾರಿ ಸಚಿವರು ಸಹ ಜಿಲ್ಲೆಯವರಲ್ಲ. ಆದರೆ, ಡಾ. ಅ​ಶ್ವತ್ಥ ನಾರಾ​ಯಣ ಒಂದೆಡೆ ಜಿಲ್ಲೆಯವರೇ ಆದರೂ, ಇನ್ನೊಂದು ಅರ್ಥದಲ್ಲಿ ಜಿಲ್ಲೆಯಿಂದ ದೂರವೇ ಉಳಿದು ಸರ್ಕಾ​ರ​ದ​ಲ್ಲಿ​ದ್ದಾರೆ ಎನ್ನ​ಬ​ಹು​ದು.

ಕೆಡಿಪಿ ಸಭೆ ನಡೆದು 14 ತಿಂಗಳು:

ಜೆಡಿ​ಎಸ್‌ - ಕಾಂಗ್ರೆಸ್‌ ಮೈತ್ರಿ ಸರ್ಕಾ​ರ​ದ ಅವ​ಧಿ​ಯಲ್ಲಿ ಮುಖ್ಯ​ಮಂತ್ರಿಯಾಗಿದ್ದ ಕುಮಾ​ರ​ಸ್ವಾಮಿ ಮತ್ತು ಜಿಲ್ಲಾ ಉಸ್ತು​ವಾರಿ ಸಚಿ​ವ​ರಾ​ಗಿದ್ದ ಡಿ.ಕೆ. ​ಶಿ​ವ​ಕು​ಮಾರ್‌ ಅಧ್ಯ​ಕ್ಷ​ತೆ​ಯಲ್ಲಿ  2018ರ ಜುಲೈ 16ರಂದು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆ​ದಿತ್ತು. ಆನಂತರ ಮೈತ್ರಿ ಸರ್ಕಾ​ರದ ಉಳಿವು, ಐಟಿ ಇಡಿಯ ಸಂಕ​ಷ್ಟ​ದಂತಹ ಗೊಂದ​ಲ​ದಲ್ಲಿ ಡಿ.ಕೆ.​ ಶಿ​ವ​ಕು​ಮಾರ್‌ ಸಿಲು​ಕಿ​ದ್ದರು.

ಮೈತ್ರಿ ಸರ್ಕಾ​ರದ ಅವ​ಧಿ​ಯಲ್ಲಿ 12 ತಿಂಗಳ ಕಾಲ ಡಿ.ಕೆ.​ ಶಿ​ವ​ಕು​ಮಾರ್‌ ಕೆಡಿಪಿ ಸಭೆ ನಡೆ​ಸುವ ಗೋಜಿಗೆ ಹೋಗ​ಲಿಲ್ಲ. ಈಗ ಬಿಜೆಪಿ ಸರ್ಕಾರ ರಚ​ನೆ​ಯಾದ ಒಂದೂ​ವರೆ ತಿಂಗಳ ನಂತರ ರಾಮ​ನ​ಗರ ಜಿಲ್ಲೆಯ ಉಸ್ತು​ವಾರಿ ಸಚಿ​ವ​ರಾಗಿ ಉಪ​ಮು​ಖ್ಯ​ಮಂತ್ರಿ ಅ​ಶ್ವತ್ಥ ನಾರಾ​ಯಣ ನೇಮ​ಕ​ಗೊಂಡಿ​ದ್ದಾರೆ. 

ಉಸ್ತು​ವಾರಿ ಜವಾ​ಬ್ದಾರಿ ವಹಿ​ಸಿ​ಕೊಂಡು ಏಳು ದಿನ​ಗಳು ಕಳೆ​ದರೂ ಅ​ಶ್ವತ್ಥ ನಾರಾ​ಯಣ ಅವ​ರಿಗೆ ಮಾತ್ರ ರಾಮನಗರ ಜಿಲ್ಲೆ ನೆನ​ಪಿಗೆ ಬರು​ತ್ತಿಲ್ಲ. ವಾಸ್ತ​ವ​ವಾಗಿ ಹಳ್ಳಿ​ಗ​ಳಿಗೆ ಹೋಗಿ ನೋಡಿ​ದರೆ ಸಮಸ್ಯೆ ಇರು​ವುದು ತಿಳಿ​ಯು​ತ್ತದೆ. ಆದ​ರೀಗ ಅನರ್ಹ ಶಾಸ​ಕರ ಕ್ಷೇತ್ರ​ಗ​ಳಿಗೆ ನಡೆ​ಯು​ತ್ತಿ​ರುವ ಉಪ​ಚು​ನಾ​ವಣೆಯಲ್ಲಿ ತಲ್ಲೀ​ನ​ರಾ​ಗಿದ್ದು, ತವರು ಜಿಲ್ಲೆ​ಯನ್ನು ಮರೆತು ಬರೀ ರಾಜ​ಕಾ​ರ​ಣ​ಕ್ಕಾಗಿ ಸೀಮಿ​ತ​ರಾ​ಗಿ​ದ್ದಾ​ರೆಯೇ ಎಂದು ಜಿಲ್ಲೆ​ಯ​ ಜ​ನರು ಮಾತ​ನಾ​ಡಿ​ಕೊ​ಳ್ಳು​ವಂತಾ​ಗಿ​ದೆ ಎಂಬುದೇ ವಿಪ​ರ್ಯಾಸ.
 

Follow Us:
Download App:
  • android
  • ios