Asianet Suvarna News Asianet Suvarna News

ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!

ಸಿದ್ದು ಕ್ಷೇತ್ರ ಬಾದಾಮಿಗೆ 600 ಕೋಟಿ ರು. ಬಂಪರ್‌!| ಪ್ರತಿಪಕ್ಷ ನಾಯಕರ 3 ಕಡತಕ್ಕೆ ಸಹಿ ಹಾಕಿದ ಸಿಎಂ

Karnataka CM BS Yediyurappa Released 600 Crore To Badami The Constituency Of Siddaramaiah
Author
Bangalore, First Published Feb 20, 2020, 8:21 AM IST

ಬೆಂಗಳೂರು[ಫೆ.20]: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳುವ ಉದ್ದೇಶ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ 600 ಕೋಟಿ ರು.ಗಳ ಅನುದಾನ ನೀಡಲು ಹಸಿರು ನಿಶಾನೆ ತೋರಿದ್ದಾರೆ.

ಬಾದಾಮಿ ಕ್ಷೇತ್ರದ ಕೃಷಿ, ಪ್ರವಾಸೋದ್ಯಮ ಮತ್ತು ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಮೂರು ಕಡತಗಳಿಗೆ ಯಡಿಯೂರಪ್ಪ ಅವರು ಅಂಕಿತ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರದ ವಿಧಾನಸಭೆಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರು ಚರ್ಚೆ ವೇಳೆ ಸಭಾತ್ಯಾಗ ಮಾಡಿದ್ದರು. ಅದರ ಬೆನ್ನಲ್ಲೇ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಿದ್ದರಾಮಯ್ಯ ಅವರ ಕೊಠಡಿಗೇ ತೆರಳಿ ಮನವೊಲಿಸಿ ವಾಪಸ್‌ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅದರ ಬೆನ್ನಲ್ಲೇ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಕ್ಷೇತ್ರಕ್ಕೆ ಸಂಬಂಧಿಸಿದ ಕಡತಗಳಿಗೆ ಮುಕ್ತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios