Asianet Suvarna News Asianet Suvarna News

ದಲಿತ ಯುವತಿ ಮೇಲೆ ಅತ್ಯಾಚಾರ: ಯುಪಿ ಸಿಎಂ ಯೋಗಿ ವಜಾ ಮಾಡಿ, ಸಿದ್ದರಾಮಯ್ಯ

ಉತ್ತರ ಪ್ರದೇ​ಶ ಸಿಎಂ ಯೋಗಿ ಅವರನ್ನ ಕಿತ್ತು ಹಾಕಿ: ಸಿದ್ದರಾಮಯ್ಯ| ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರ್ಕಾರಗಳ ಪ್ರಾಯೋಜಿತ ಕ್ರೌರ್ಯ ಮಿತಿ ಮೀರಿದೆ| ದಲಿತ ಯುವತಿಯ ಅತ್ಯಾಚಾರ ಕ್ರೂರವಾಗಿ ಹತ್ಯೆ ಮಾಡಿದ್ದರೂ ಯೋಗಿ ಆದಿತ್ಯಾನಾಥ್‌ ಸಂತ್ರಸ್ತೆಯ ಕುಟುಂಬದವರನ್ನೇ ಗೋಳಾಡಿಸುತ್ತಿದ್ದಾರೆ| ಶ್ರೀರಾಮ ಕೂಡ ಬಿಜೆಪಿಯ ಇಂತಹ ರಾವಣರನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದು| 

Former CM Siddaramaiah Slams On Uttara Pradesh CM Yogi Adityanath
Author
Bengaluru, First Published Oct 1, 2020, 8:49 AM IST

ಬೆಂಗಳೂರು(ಅ.01): ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆಯ ನೈತಿಕ ಹೊಣೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಜೊತೆಗೆ ಅವರನ್ನು ಬೆಂಬಲಿಸುತ್ತಿರುವ ನರೇಂದ್ರ ಮೋದಿ ಹಾಗೂ ಸಮಸ್ತ ಸಂಘ ಪರಿವಾರ ಹೊರಬೇಕು. ಉತ್ತರ ಪ್ರದೇಶವನ್ನು ರಕ್ಷಿಸಲು ಕೂಡಲೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ರನ್ನು ಕಿತ್ತು ಹಾಕಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರ್ಕಾರಗಳ ಪ್ರಾಯೋಜಿತ ಕ್ರೌರ್ಯ ಮಿತಿ ಮೀರಿದೆ. ದಲಿತ ಯುವತಿಯ ಅತ್ಯಾಚಾರ ಕ್ರೂರವಾಗಿ ಹತ್ಯೆ ಮಾಡಿದ್ದರೂ ಯೋಗಿ ಆದಿತ್ಯಾನಾಥ್‌ ಸಂತ್ರಸ್ತೆಯ ಕುಟುಂಬದವರನ್ನೇ ಗೋಳಾಡಿಸುತ್ತಿದ್ದಾರೆ. ಶ್ರೀರಾಮ ಕೂಡ ಬಿಜೆಪಿಯ ಇಂತಹ ರಾವಣರನ್ನು ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಾಂಗ್ರೆಸ್‌ ಏಕಾಂಗಿ ಹೋರಾಟ, ಡಿಕೆಶಿ ಹೇಳಿದ ಅಚ್ಚರಿ ಅಭ್ಯರ್ಥಿ ನನಗೆ ಗೊತ್ತಿಲ್ಲ '

ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಉತ್ತರ ಪ್ರದೇಶದ ದಲಿತ ಯುವತಿಗೆ ಗೌರವಪೂರ್ವಕ ಅಂತ್ಯಕ್ರಿಯೆಗೂ ಅವಕಾಶ ನೀಡದೆ, ಹೆತ್ತವರನ್ನು ಗೋಳಾಡಿಸಿದ ಯೋಗಿ ಆದಿತ್ಯನಾಥ್‌ ಕಾವಿಧಾರಿಗಳ ಪಾಲಿನ ಕಳಂಕ. ಇವರ ಆಡಳಿತದಲ್ಲಿ ಉತ್ತರ ಪ್ರದೇಶದ ಯಾವ ಹೆಣ್ಣು ಮಕ್ಕಳೂ ಸುರಕ್ಷಿತವಲ್ಲ. ಮೊದಲು ಇವರನ್ನು ವಜಾ ಮಾಡಿ ಎಂದು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios