Asianet Suvarna News Asianet Suvarna News

ಜೀವ ಅಮೂಲ್ಯ ಕಣ್ರಪ್ಪ: ಬೇಡ ಇಂತ ಸಾಹಸ!

ಚಲಿಸುತ್ತಿದ್ದ ರೈಲಿನಲ್ಲಿ ಇದೆಂತಾ ಹುಚ್ಚು ಸಾಹಸ?

ವಿಡಿಯೋಗಾಗಿ ಬಾಗಿಲ ಬಳಿ ಜೋತು ಬಿದ್ದ ಯುವಕ

ನೆಲಕ್ಕೆ ಬಿದ್ದ ರಭಸ ನೋಡಿದರೆ ಮೈ ಜುಂ ಅನ್ನುತ್ತೆ

ಗಂಭೀರ ಗಾಯಗಳಿಂದ ಬಳಲುತ್ತಿರುವ ಯುವಕ

ನಾಂದೇಡ-ಬೆಂಗಳೂರು ಎಕ್ಸಪ್ರೆಸ್ ರೈಲು

ಬೆಂಗಳೂರು(ಜು.13): ನಾಂದೇಡ್ ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಯುವಕನೋರ್ವ ಬಾಗಲ ಬಳಿ ಜೋತು ಬಿದ್ದು ಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡಿದ್ದಾನೆ. ವೇಗವಾಗಿ ಚಲಿಸುತ್ತಿದ್ದ ರೈಲಿನ ಬಾಗಿಲ ಬಳಿ ಜೋತು ಬಿದ್ದ ಯುವಕ, ತುಸು ದೂರದ ಬಳಿಕ ಕೈ ಸೋತ ಪರಿಣಾಮ ಕೆಳಗೆ ಬಿದ್ದಿದ್ದಾನೆ.

ಯುವಕ ಕೆಳಗೆ ಬಿದ್ದ ವಿಡಿಯೋ ಮೈ ಜುಂ ಎನಿಸುವಂತಿದ್ದು, ಆತನಿಗೆ ಗಂಭೀರ ಗಾಯಗಳಾಗಿರುವುದು ಖಚಿತವಾಗಿದೆ. ಆದರೆ ಈ ಯುವಕ ಬಾಗಿಲ ಬಳಿ ಜೋತು ಬಿದ್ದಿರುವುದನ್ನು ವಿಡಿಯೋ ಮಾಡಿದ್ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಬಹುಶಃ ಗೆಳೆಯರು ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕಿರಬಹುದು ಎಂದು ನಂಬಲಾಗಿದೆ.

ಆದರೆ ಯುವಕ ಈ ರೀತಿ ಬಾಗಿಲ ಬಳಿ ಜೋತು ಬಿದ್ದಿದ್ದರೂ ಅತನನ್ನು ತಡೆಯಲು ಸಹ ಪ್ರಯಾಣಿಕರು ಮುಂದಾಗದಿರುವುದು ಮತ್ತು ಚೈನ್ ಎಳೆದು ರೈಲು ತಡೆಯಲು ಪ್ರಯತ್ನಿಸದಿರುವುದು ಆಶ್ವರ್ಯ ಹುಟ್ಟಿಸುವಂತದ್ದು.