Asianet Suvarna News Asianet Suvarna News

ವಿಶ್ವನಾಥ್ ಆಗ್ತಾರಾ ಹೊಸ ‘ದಳ’ಪತಿ?

ಜೆಡಿಎಸ್ ಗೆ ನೂತನ ಸಾರಥಿ ವಿಶ್ವನಾಥ್?

ವಿಶ್ವನಾಥ್ ಹುಣಸೂರು ಜೆಡಿಎಸ್ ಶಾಸಕ 

ಸುವರ್ಣ ನ್ಯೂಸ್ ಗೆ ಜೆಡಿಎಸ್ ಮೂಲಗಳ ಮಾಹಿತಿ

ಪಕ್ಷದ ವರಿಷ್ಠ ದೇವೆಗೌಡರ ತೀರ್ಮಾನವೇ ಅಂತಿಮ

ಬೆಂಗಳೂರು[ಜು.೨೨]: ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿಯಿಂದ ಸಿಎಂ ಕುಮಾರಸ್ವಾಮಿಯನ್ನು ಮುಕ್ತಗೊಳಿಸಲು ನಾಯಕರು ನಿರ್ಧರಿಸಿದ್ದಾರೆ. ನಿನ್ನೆ ನಡೆದ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಲಾಯಿತು. ಹುಣಸೂರು ಜೆಡಿಎಸ್ ಶಾಸಕ ವಿಶ್ವನಾಥ್ ಅವರ ಹೆಸರು ಮುಂಚೂಣಿಯಲ್ಲಿದೆ. ಇದರ ಜತೆಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಮಧು ಬಂಗಾರಪ್ಪ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ವೈ. ಎಸ್.ವಿ.ದತ್ತ ಅವರ ಹೆಸರು ಸಹ ಕೇಳಿ ಬಂದಿದೆ. ದೇವೇಗೌಡರ ವಿವೇಚನೆಯೇ ಅಂತಿಮ ನಿರ್ಧಾರ ಎಂದು ಗೊತ್ತಾಗಿದೆ. 

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ದೊರೆತ ಮೂಲಗಳ ಪ್ರಕಾರ ಹಿರಿಯ ಮುಖಂಡ ವಿಶ್ವನಾಥ್ ಅವರನ್ನೇ ರಾಜ್ಯಾಧ್ಯಕ್ಷ ಪಟ್ಟ ಕಟ್ಟೋದು ಬಹುತೇಕ ಖಚಿತ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories