ಬಿಲ್ ವಸೂಲಿಗೆ ಬಂದಿದ್ದ ಅಧಿಕಾರಿಗಳಿಗೆ ಗ್ರಾಮಸ್ಥರ ದಿಗ್ಬಂಧನ..!
ಬಿಲ್ ವಸೂಲಿಗೆ ಬಂದಿದ್ದ ಸೆಸ್ಕಾಂ ಅಧಿಕಾರಿಗಳಿಗೆ ದಿಗ್ಬಂಧನ
ಟಿ.ನರಸಿಪುರ ತಾಲೂಕಿನ ಕುರಬರೂ ಗ್ರಾಮದಲ್ಲಿ ಘಟನೆ
ಪೊಲೀಸರಿಗೆ ಗ್ರಾಮದೊಳಗೆ ಬರದಂತೆ ತಡೆ
ಮೈಸೂರು(ಜೂ.23): ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ದಿಗ್ಬಂಧನ ಹಾಕಿದ ಘಟನೆ ಟಿ.ನರಸಿಪುರ ತಾಲೂಕಿನ ಕುರಬೂರು ಗ್ರಾಮದಲ್ಲಿ ನಡೆದಿದೆ.
ಬೆಳೆ ನಷ್ಟದಿಂದಾಗಿ ಸಂಕಷ್ಟ ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ವೇಳೆ ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರನ್ನು ಗ್ರಾಮದ ಒಲಗಡೆ ಬರದಂತೆ ದಿಗ್ಬಂಧನ ಹೇರಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..