ವಿದ್ವತ್ ಹಲ್ಲೆ : ಎಸ್ಕೇಪ್ ಆಗಿದ್ದ ನಲಪಾಡ್ ಸ್ನೇಹಿತ ಸಿಸಿಬಿ ಮುಂದೆ ಹಾಜರ್
ಸುವರ್ಣ ನ್ಯೂಸ್ ಕ್ರೈಂ ಟೀಮ್ ಈಗ ಬಹಿರಂಗಗೊಳಿಸ್ತಾ ಇರೋದು ನಲಪಾಡ್ ಪ್ರಕರಣ. ಕಾಂಗ್ರೆಸ್ ಶಾಸಕ N.A.ಹ್ಯಾರಿಸ್ ಮಗನೇ ಜೈಲು ಸೇರಿದ್ರೂ ಆತನ ಸ್ನೇಹಿತ ಗ್ರೇಟ್ ಎಸ್ಕೇಪ್. ನಲಪಾಡ್ ಅಂಡ್ ಗ್ಯಾಂಗ್ ಪುಂಡಾಟ ಪ್ರಕರಣದಲ್ಲಿ ಒಬ್ಬ ಪುಂಡ ಮಾತ್ರ ಗ್ರೇಟ್ ಎಸ್ಕೇಪ್. ಕೇಸಿನಲ್ಲಿ ಜೈಲು ವಾಸ ಅನುಭವಿಸಿ ಬಂದ ಹ್ಯಾರಿಸ್ ಪುತ್ರ ನಲಪಾಡ್ ಸೇರಿ ಏಳು ಪುಂಡರು. ಆದ್ರೆ ನಲಪಾಡ್ ಪುಂಡಾಟ ಪ್ರಕರಣದಲ್ಲಿ ಒಬ್ಬನೇ ಒಬ್ಬ ಆರೋಪಿ ಮಾತ್ರ ಗ್ರೇಟ್ ಎಸ್ಕೇಪ್
ವಿದ್ವತ್ ಮೇಲೆ ನಲಪಾಡ್ ಗುಂಡಾಗಿರಿ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಶ್ರೀಕೃಷ್ಣನ ದೃಶ್ಯ ಲಭ್ಯ. ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿರುವ ಆರೋಪಿ ಶ್ರೀಕೃಷ್ಣನ ಎಕ್ಸ್ ಕ್ಲೂಸಿವ್ ದೃಶ್ಯ. ನಾವೀಗ ತೋರಿಸ್ತಿದ್ದೀವಿ ನೋಡಿ ನಮ್ಮ ಕ್ರೈಂ ಟೀಮ್ ಗೆ ಸಿಕ್ಕಿರುವ ಎಕ್ಸ್ ಕ್ಲೂಸಿವ್ ದೃಶ್ಯ. ಪೊಲೀಸ್ ಅಧಿಕಾರಿಗಳ ಮುಂದೆ ಏನು ಗೊತ್ತಿಲ್ಲದ ಅಮಾಯಕನಂತೆ ನಿಂತಿದ್ದಾನೆ ಭೂಪ. ಉದ್ಯಮಿಮಗ ವಿದ್ವತ್ ಮೇಲೆ ಮನಬಂದಂತೆ ಹಲ್ಲೆ ಕೃತ್ಯ ನಂತರ ಕಣ್ಮರೆಯಾಗಿದ್ದ ಪುಂಡ.