Asianet Suvarna News Asianet Suvarna News

ತುಮಕೂರಿನಲ್ಲಿ ಹಾಲು, ನೀರು ಕುಡಿಯುವ ಸಾಯಿಬಾಬಾ ಮೂರ್ತಿ!

ತುಮಕೂರು ನಗರದ ಚಿಕ್ಕಪೇಟೆಯ ಓಲ್ಡ್ ಪೊಲೀಸ್ ಠಾಣೆಯ ರಸ್ತೆಯ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ಸಾಯಿಬಾಬಾ ಮೂರ್ತಿ ಹಾಲು, ನೀರು ಕುಡಿಯುತಿತ್ತಂತೆ. ಅಷ್ಟೆ ಅಲ್ಲಾ ಬಿಸಿ ಬಿಸಿ ಕಾಫಿನೂ  ಹೀರುತಿತ್ತಂತೆ. ಕಾಫಿ  ಬಿಸಿ ಆದ್ರೆ ಬಾಬಾ ಮೂರ್ತಿ ಮೂತಿ ತಿರುಗಿಸಿಕೊಳ್ಳುತಿತ್ತಂತೆ. ಊಫ್ ಅಂತಾ ತಣ್ಣಗೆ ಮಾಡಿ ಕಾಫಿ ಕೊಟ್ಟರೆ  ಸುರ್ರ್ .. ಸುರ್ರ್ ..ಅಂತಾ ಕಾಫಿ ಹೀರುತಿತ್ತಂತೆ. 

ತುಮಕೂರು ನಗರದ ಚಿಕ್ಕಪೇಟೆಯ ಓಲ್ಡ್ ಪೊಲೀಸ್ ಠಾಣೆಯ ರಸ್ತೆಯ ಮನೆಯೊಂದರಲ್ಲಿ ಕಳೆದ ಮೂರು ದಿನಗಳಿಂದ ಸಾಯಿಬಾಬಾ ಮೂರ್ತಿ ಹಾಲು, ನೀರು ಕುಡಿಯುತಿತ್ತಂತೆ. ಅಷ್ಟೆ ಅಲ್ಲಾ ಬಿಸಿ ಬಿಸಿ ಕಾಫಿನೂ  ಹೀರುತಿತ್ತಂತೆ. ಕಾಫಿ  ಬಿಸಿ ಆದ್ರೆ ಬಾಬಾ ಮೂರ್ತಿ ಮೂತಿ ತಿರುಗಿಸಿಕೊಳ್ಳುತಿತ್ತಂತೆ. ಊಫ್ ಅಂತಾ ತಣ್ಣಗೆ ಮಾಡಿ ಕಾಫಿ ಕೊಟ್ಟರೆ  ಸುರ್ರ್ .. ಸುರ್ರ್ ..ಅಂತಾ ಕಾಫಿ ಹೀರುತಿತ್ತಂತೆ.  ಇನ್ನು ಗುಡ್ ಮಾರ್ನಿಂಗ್... ಗುಡ್ ನೈಟ್ ಅಂತಾ ಹೇಳಿದಾಗ ಬಾಬಾ ತಲೆ ಅಲ್ಲಾಡಿಸ್ತಾ ಇದ್ದನಂತೆ.  ಅಂದಹಾಗೆ ಈ ಅಚ್ಟರಿ ಮನೆಯೊಡತಿ ಪೂಣೀಮಾಗೆ ಮಾತ್ರ ಕಂಡಿತಂತೆ. ಹಾಗಾಗಿ ಪೂಣೀಮಾ ನೆರೆ ಹೊರೆಯವರನ್ನೆಲ್ಲಾ ಕೂಗಿ ಕರೆದಿದ್ದಾಳೆ.  ಅಕ್ಕಪಕ್ಕದವರೆಲ್ಲಾ ಬಂದು ನೋಡಿದಾಗ ಸೀನ್ ಎಲ್ಲಾ  ಉಲ್ಟಾ ಆಗಿತ್ತು. ಬಾಬಾ ಮೂರ್ತಿ  ಬಿಸಿ ಕಾಫಿ ಕುಡಿಯೋದು ಇರಲಿ.. ತಣ್ಣನೆಯ ನೀರು ಕುಡಿದಿಲ್ಲಾ.. ಇದರಿಂದ ಮನೆಯೊಡತಿ ಪೂರ್ಣಿಮಾಗೆ ಮುಜುಗರ ಉಂಟಾಯಿತು.

Video Top Stories