ಸಹೋದ್ಯೋಗಿಗಳಿಂದ ಕಿರುಕುಳ; ಹಾಸನ ಯುವಕನಿಂದ ಲೈವ್ ಸೂಸೈಡ್!
ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸ ಹಾಸನದ ಯುವಕನೊಬ್ಬ ಲೈವ್ ಸೂಸೈಡ್ ಮಾಡಿಕೊಂಡಿರುವ ಘಟನೆ ನಡೆದಿದೆ.
* ಮೊಬೈಲ್ ವೀಡಿಯೋ ಮೂಲಕ ಹೇಳಿಕೆ ನೀಡಿ ಯುವಕ ಆತ್ಮಹತ್ಯೆ. ಹಾಸನ ನಗರದ ಬಸಟ್ಟಿಕೊಪ್ಪಲಿನಲ್ಲಿ ಘಟನೆ.
* ನಗರದ ಪಿ.ಎಸ್.ಆರ್ ಬಟ್ಟೆ ಅಂಗಡಿ ಉದ್ಯೋಗಿ ಸೇವಾರ್ಥ್ (25) ಮೃತ ಯುವಕ. ತನ್ನ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಗೆ ಶರಣು
* ಸಹೊದ್ಯೋಗಿಗಳಾದ ಮ್ಯಾನೇಜರ್ ಹಾಲುದೊರೈ, ಸಹಾಯಕ ಮ್ಯಾನೇಜರ್ ಪ್ರದೀಪ್,ಹಾಗು ಪ್ರಕಾಶ್ ಎಂಬುವವರ ವಿರುದ್ದ ಕಿರುಕುಳ ಆರೋಪ.. ತನ್ನ ಸಾವಿಗೆ ಈ ಮೂವರೇ ಕಾರಣ ಎಂದು ಹೇಳಿಕೊಂಡಿರೊ ಸೇವಾರ್ಥ್.
* ತಮಿಳುನಾಡು ಮೂಲದ ಪಿ.ಎಸ್.ಆರ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ. ಎರಡು ದಿನ ರಜೆ ಮಾಡಿದ್ದಕ್ಕೆ 15 ದಿನ ಕೆಲಸದಿಂದ ವಜಾ ಮಾಡಿದ್ದರೆಂದು ನೋವು ಹೇಳಿಕೊಂಡು ಬಳಿಕ ಆತ್ಮಹತ್ಯೆ
*ನಮಗೆ ನಮ್ಮ ಕರ್ನಾಟಕ ದಲ್ಲಿ ಬದುಕಲು ರಕ್ಷಣೆ ಇಲ್ಲ ಎಂದು ಅಳಲು ತೋಡಿಕೊಂಡ ಯುವಕ. ವಿನಾಯಕ ಗೆಳೆಯರ ಬಳಗದ ಹುಡುಗರು ಹೋರಾಡಿ, ನನ್ನ ಸಾವಿಗೆ ನ್ಯಾಯಕೊಡಿಸಿ ಎಂದು ಮೊರೆಯಿಟ್ಟಿರೊ ಸೇವಾರ್ಥ್.