ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ವಿರುದ್ಧ ಭುಗಿಲೆದ್ದ ಆಕ್ರೋಶ
ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ಭ್ರಷ್ಟಾಚಾರದ ವಿಡಿಯೋ ಹೊರ ಬೀಳುತ್ತಿದ್ದಂತೆಯೇ ಕೆಪಿಎಸ್ ಸಿ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆಗಿಳಿದಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ಅವರ ಭ್ರಷ್ಟಾಚಾರ ಬಟಾಬಯಲು ಆಗುತ್ತಿದ್ದಂತೆಯೇ, ಕೆಪಿಎಸ್ ಸಿ ಅಭ್ಯರ್ಥಿಗಳು ಬೀದಿಗಿಳಿದಿದ್ದಾರೆ. ಸುವರ್ಣ ನ್ಯೂಸ್ ನಲ್ಲಿ ಶ್ಯಾಮ್ ಭಟ್ ರ ಲಂಚಾಚತಾರ ಸುದ್ದಿ ಪ್ರಸಾರವಾಗುತ್ತಿದ್ದಂತೇ ಬೆಂಗಳೂರಿನಲ್ಲಿರುವ ಕೆಪಿಎಸ್ಸಿ ಕಚೇರಿ ಮುಂದೆ ಪ್ರತಿಭಟನೆಗಿಳಿದಿದ್ದಾರೆ.