ಗಂಡ ಹೆಂಡತಿ ಜಗಳ; ಎದುರು ಮನೆಯ ಗರ್ಭಿಣಿಯ ಮಗು ಹೊಟ್ಟೆಯಲ್ಲೇ ಸಾವು!
- ಹೆರಿಗೆಗೊಂದು ಆಸ್ಪತ್ರೆಗೆ ದಾಖಲಾದ ಗರ್ಭಿಣಿಗೆ ಶಾಕಿಂಗ್ ಸುದ್ದಿ!
- ಗಂಡ ಹೆಂಡತಿ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು ಹೊಟ್ಟೆಯಲ್ಲಿಯೇ ಸಾವು!
ಗಂಡ ಹೆಂಡತಿ ಜಗಳದಲ್ಲಿ ಎದುರು ಮನೆಯ ಗರ್ಭಿಣಿ ಮಗು ಹೊಟ್ಟೆಯಲ್ಲಿಯೇ ಸಾವನಪ್ಪಿರುವ ಘಟನೆ ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಹುನಕುಂಟೆ ಗ್ರಾಮದಲ್ಲಿ ನಡೆದಿದೆ. ಪತ್ನಿ ಮೇಲೆ ಬೀಸಿದ ಕಲ್ಲು ಎದುರು ಮನೆಯ ಬಳಿ ಬಟ್ಟೆ ಜೋಡಿಸುತ್ತಿದ್ದ ಗರ್ಭಿಣಿ ರೇಣುಕಾ ರಾಮಣ್ಣ ಬೆಲವಂತ್ರಕಂಟಿ ಹೊಟ್ಟೆಗೆ ಬಡಿದಿತ್ತು. ಭಾನುವಾರ ಹೆರಿಗೆಗಾಗಿ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ರೇಣುಕಾ ದಾಖಲಾಗಿದ್ದಾಗ, ಮಗು ಮೃತಪಟ್ಟಿರುವುದು ತಿಳಿದುಬಂದಿದೆ. ಏಟು ಬಿದ್ದ ಕಾರಣ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎದುರು ಮನೆಯ ಬಸನಗೌಡ ಎಸೆದ ಕಲ್ಲು ತಾಗಿದ್ದೇ ಕಾರಣ, ಆತನನ್ನು ಬಂಧಿಸಬೇಕೆಂದು ರೇಣುಕಾ ಪತಿ ರಾಮಣ್ಣ ಆಗ್ರಹಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಆಕ್ಷನ್ ಕಿಂಗ್ ವಿರುದ್ಧ ಮತ್ತೇ ಸಿಡಿದ ಶ್ರುತಿ ಹರಿಹರನ್