ಔಷಧವಿದ್ದರೂ ಕೊಡಿಸಲಾಗಲಿಲ್ಲ, ಅನಂತ್ ನೆನೆದು ಭಾವುಕರಾದ ಸದಾನಂದ ಗೌಡ
ಕರ್ನಾಟಕದಲ್ಲಿ ಒಟ್ಟಾಗಿ ಪಕ್ಷ ಕಟ್ಟಿದ್ದ ಗೆಳೆಯನ ನೆನೆದು ಕೇಂದ್ರ ಸಚಿವ ಸದಾನಂದ ಗೌಡ ಕಣ್ಣೀರಾಗಿದ್ದಾರೆ. ಅನಂತ ಕುಮಾರ್ ಅವರ ಅಂತಿಮ ದರ್ಶನ ಪಡೆದ ಸದಾನಂದ ಗೌಡ ತಮ್ಮ ಗೆಳೆತನ ನೆನಪು ಮಾಡಿಕೊಂಡರು.
ಬೆಂಗಳೂರು [ನ. 12]: ಜಗತ್ತಿನಲ್ಲಿ ಕ್ಯಾನ್ಸರ್ ಗೆ ಕಂಡು ಹಿಡಿದ ಹೊಸ ಔಷಧಿಯನ್ನ ಅನಂತಕುಮಾರ್ ಗೆ ಕೊಡಿಸುವ ಚರ್ಚೆ ನಡೆದಿತ್ತು. ಸುರೇಶ್ ಪ್ರಭು ಸೇರಿದ್ದಂತೆ ಕೇಂದ್ರ ನಾಯಕರು ನನಗೆ ಹೊಸ ಔಷಧಿಯನ್ನ ಕೋಡಿಸಲು ಸಲಹೆ ನೀಡಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು.
ಅನಂತ್ ಕುಮಾರ್ ರವರ ಸಾವು ನಮಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಿಲಿ ಎಂದು ಹೇಳಿದರು.
ಇಂದು ಇಡಿ ದಿನ ಅನಂತಕುಮಾರ್ ಪಾರ್ಥಿವ ಶರೀರವನ್ನ ಬಸವನಗುಡಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಹಿನ್ನಲೆಯಲ್ಲಿ ಈ ಎಲ್ಲಾ ನಾಯಕರು ಬಸವನಗುಡಿಗೆ ತೆರಳಿ ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.
ಬಳಿಕ ಪುನಃ ಸೋಮವಾರ ರಾತ್ರಿಯೇ ನವದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ನಾಳೆ [ಮಂಗಳವಾರ] ಮಧ್ಯಾಹ್ನ 1ಗಂಟೆಗೆ ಚಾಮರಾಜಪೇಟೆಯ ಚಿತಗಾರದಲ್ಲಿ ಅನಂತಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ.