ಕುಮಾರಸ್ವಾಮಿ ಇಮೇಜ್ ಡ್ಯಾಮೇಜ್ ಮಾಡಿದ ಈ 3 ಹೇಳಿಕೆ
ಒಮ್ಮೊಮ್ಮೆ ಭಾವನಾತ್ಮಕವಾಗಿ ಮಾತನಾಡುವ ಕುಮಾರಸ್ವಾಮಿ.. ಹಲವು ಸಾರಿ ರೈತರ ಮತ್ತು ಜನರ ಆಕ್ರೋಶಕ್ಕೆ ಗುರಿಯಾಗುವ ರೀತಿ ನಡೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಯವರ ಇಂಥ ಹೇಳಿಕೆಗಳ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ.
ಬೆಂಗಳೂರು[ನ.19] ಕುಮಾರಸ್ವಾಮಿ ಇದೀಗ ಕಬ್ಬು ಬೆಳೆಗಾರರ ಬಗ್ಗೆ ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದಾರೆ. ರೈತರ ಆಕ್ರೋಶಕ್ಕೆ ರೈತರ ಹೆಸರು ಹೇಳಿಕೊಂಡೆ ಅಧಿಕಾರ ಪಡೆದ ಸಿಎಂ ಗುರಿಯಾಗಿದ್ದಾರೆ.
ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ನಾನು ಇನ್ನು ಎಷ್ಟು ದಿನ ಬದುಕುತ್ತೆನೋ ಗೊತ್ತಿಲ್ಲ ಎಂದು ಹೇಳಿಕೆ ನೀಡಿ ಮತಯಾಚನೆ ಮಾಡಿದ್ದ ಕುಮಾರಸ್ವಾಮಿಗೆ ಸಿಕ್ಕಿದ್ದು 37 ಸೀಟು.
"
ಕುಮಾರಸ್ವಾಮಿ, ಸರ್ಕಾರಕ್ಕೆ 5 ಪ್ರಶ್ನೆಗಳು! ಉತ್ತರಿಸಿ ಸಿಎಂ ಉತ್ತರಿಸಿ
ಇದಾದ ಮೇಲೆ ರಾಮನಗರ ಚುನಾವಣೆ ಪ್ರಚಾರದ ವೇಳೆಯೂ ನನ್ನ ಸಾವಿನ ಬಗ್ಗೆ ನಿಖರತೆ ಇಲ್ಲ, ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಜನರ ಭಾವನೆಯೊಂದಿಗೆ ಮಾತನಾಡಿದ್ದರು.
ಆದರೆ ಕೊಪ್ಪಳದ ರೈತರ ವಿಚಾರದಲ್ಲಿ ನೀಡಿದ ದಂಗೆ ಹೇಳಿಕೆ, ಈಗ ಕಬ್ಬು ಬೆಳೆಗಾರರ ವಿಚಾರದಲ್ಲಿ ನೀಡಿರುವ ಗೂಂಡಾ ಹೇಳಿಕೆ, ರೈತ ಮಹಿಳೆಯ ಬಗ್ಗೆ ಮಾತನಾಡಿರುವ ರೀತಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಒಂದು ಕಡೆ ದೋಸ್ತಿ ಪಕ್ಷ ಕಾಂಗ್ರೆಸ್ ಇರಿಸು ಮುರಿಸು ತಂದಿದೆ. ಇಂಥ ಹೇಳಿಕೆ ಮುಂದಿನ ದಿನದಲ್ಲಿ ಜೆಡಿಎಸ್ ಗೆ ಆತಂಕ ತರುವುದೆಂತೂ ಸುಳ್ಳಲ್ಲ.