Asianet Suvarna News Asianet Suvarna News

ಮತದಾರರ ಕೈಗೆ ಚಪ್ಪಲಿ ಕೊಟ್ಟು ಹೊಡಿರಿ ಎಂದ ಅಭ್ಯರ್ಥಿ!

ಚಪ್ಪಲಿ ಕೈಗಿತ್ತು ಹೊಡಿರಿ ಹೊಡಿರಿ ಅಂತಿದ್ದಾರೆ ಈ ಅಭ್ಯರ್ಥಿ! ತೆಲಂಗಾಣದಲ್ಲಿ ವಿನೂತನ ಪ್ರಚಾರ ಮಾಡುತ್ತಿರುವ ಸ್ವತಂತ್ರ್ಯ ಅಭ್ಯರ್ಥಿ! ಕೊರುಟ್ಲಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹನುಮಂತ ವಿನೂತನ ಪ್ರಚಾರ! ಮತದಾರರ ಕೈಗೆ ಚಪ್ಪಲಿ ಕೊಟ್ಟು ಹೊಡಿರಿ ಅಂತಾರೆ  ಹನುಮಂತ! ಕೊಟ್ಟ ಆಶ್ವಾಸನೆ ಈಡೇರಿಸದಿದ್ದರೆ ಚಪ್ಪಲಿಯಿಂದ ಹೊಡೆಯುವಂತೆ ಮನವಿ

Telangana Candidate Hands Out Slippers ask voters to beat him
Author
Bengaluru, First Published Nov 23, 2018, 3:02 PM IST

ಹೈದರಾಬಾದ್(ನ.23): ಹಣ ನೀಡಿ ಮತ ಕೇಳುವುದು ಸಾಮಾನ್ಯ. ಆದರೆ ತೆಲಂಗಾಣದಲ್ಲಿ ಓರ್ವ ಅಭ್ಯರ್ಥಿ ಮತದಾರರ ಕೈಗೆ ಚಪ್ಪಲಿ ಕೊಟ್ಟು, ತನಗೆ ಹೊಡೆಯುವಂತೆ ಕೇಳಿಕೊಳ್ಳುತ್ತಿರುವುದು ಭಾರೀ ಸದ್ದು ಮಾಡುತ್ತಿದೆ. 

ತೆಲಂಗಾಣದ ಕೊರುಟ್ಲಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹನುಮಂತ ಎಂಬವರು, ತಾನು ಕೆಲಸ ಮಾಡದಿದ್ದರೆ ಇದರಿಂದಲೇ ನನ್ನನ್ನು ಹೊಡೆಯಿರಿ ಎಂದು ಹೇಳುವ ಮೂಲಕ ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ತೆಲಂಗಾಣ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಮತದಾನದ ದಿನಾಂಕ ಹತ್ತಿರಾವಾಗುತ್ತಿದ್ದಂತೆಯೇ ಮತದಾರರ ಸೆಳೆಯಲು ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ ಹನುಮಂತ ಮತದಾರರ ಕೈಗೆ ಚಪ್ಪಲಿ ಕೊಟ್ಟು ಮತ ಕೇಳುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.

ಚಪ್ಪಲಿ ಮೂಲಕ ಜನರಿಗೆ ಆಶ್ವಾಸನೆ ನೀಡುತ್ತಿರುವ ಹನುಮಂತ, ತಾವು ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಸಾಧ್ಯವಾಗದಿದ್ದಲ್ಲಿ ಇದೇ ಚಪ್ಪಲಿಯಲ್ಲಿ ತಮಗೆ ಹೊಡೆಯಿರಿ ಎಂದು ಪ್ರಚಾರ ಮಾಡುತ್ತಿದ್ದಾರೆ. 

ಈ ಕುರಿತು ಮಾತನಾಡಿರುವ ಹನುಮಂತ, ಕಳೆದ ಕೆಲ ದಶಕಗಳಿಂದಲೂ ಇಲ್ಲಿ ಟಿಆರ್ ಎಸ್ ಪ್ರಭಾವವಿದೆ. ಆದರೆ ಗೆದ್ದ ಅಭ್ಯರ್ಥಿಗಳಿಂದ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂದು ದೂರಿದರು .

ಅಲ್ಲದೇ ತಾವು ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದು, ಒಂದು ವೇಳೆ ತಾವು ಕ್ಷೇತ್ರದಲ್ಲಿ ಕೆಲಸ ಮಾಡದೇ ಹೋದರೆ ಮತದಾರ ತಮಗೆ ಚಪ್ಪಲಿಯಿಂದ ಹೊಡಯುವಂತೆ ಮನವಿ ಮಾಡಿದ್ದಾಗಿ ಹೇಳಿದರು.
 

Follow Us:
Download App:
  • android
  • ios