Asianet Suvarna News Asianet Suvarna News

ಗೌರಿ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಕೈವಾಡ..?

ಗೌರಿ ಲಂಕೇಶ್ ಗೌರಿ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೊರೇಟರ್​​ ಹೆಸರು ಕೇಳಿಬಂದಿದೆ.

SIT arrested Srikanth Pangarkar in Gowri Lankesh Murder
Author
Bengaluru, First Published Sep 17, 2018, 11:44 AM IST

ಬೆಂಗಳೂರು, (ಸೆ.17): ಗೌರಿ ಲಂಕೇಶ್ ಗೌರಿ ಹತ್ಯೆ ಪ್ರಕರಣದಲ್ಲಿ ಮಾಜಿ ಕಾರ್ಪೋರೇಟರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೋರೇಟರ್​​ ಶ್ರೀಕಾಂತ್ ಪನ್ಗಾರ್ಕರ್ ಎನ್ನುವರ ಹೆಸರು ಕೇಳಿಬಂದಿದೆ.

ಗೌರಿ ಹತ್ಯೆಗೆ ಸಂಚು ರೂಪಿಸಿದ್ದ ಶಂಕೆ ಮೇರೆಗೆ​​ ಶ್ರೀಕಾಂತ್ ಪನ್ಗಾರ್ಕರ್ ನನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದ್ದು, ಬಾಡಿ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಶ್ರೀಕಾಂತ್ ಪನ್ಗಾರ್ಕರ್ ನನ್ನು ಇಂದು ಎಸ್ ಐಟಿಯು ನ್ಯಾಯಾಲಕ್ಕೆ ಹಾಜರು ಪಡಿಸಿ, ಹೆಚ್ಚಿನ ವಿಚಾರಣೆಗೆಂದು ತನ್ನ ವಶಕ್ಕೆ ಪಡೆದುಕೊಳ್ಳಲಿದೆ.

 ಈ ಹಿಂದೆ ಚಿಂತಕರ ಹತ್ಯೆಗೆ ಹಣಕಾಸು ಸಹಾಯ ಮಾಡಿದ್ದ ಎನ್ನುವ ಆರೋಪ ಶ್ರೀಕಾಂತ್ ಪನ್ಗಾರ್ಕರ್ ಮೇಲೆ ಕೇಳಿಬಂದಿತ್ತು. ಈ ಆರೋಪದಡಿ ಪುಣೆಯ ಎಟಿಎಸ್ ಪೊಲೀಸರು ಶ್ರೀಕಾಂತ್ ನನ್ನು ಬಂಧಿಸಿದ್ದರು.

Follow Us:
Download App:
  • android
  • ios