ಶಂಕ್ರಣ್ಣನ ಹಾಡಿಗೆ ರಚಿತಾ ಸ್ಟೆಪ್, ಟಿಎಂಸಿಗೆ BJP ನಾಯಕ ಜಂಪ್: ಮಾ.13ರ ಟಾಪ್ 10 ಸುದ್ದಿ!
ಡಿಂಪಲ್ ಕ್ವೀನ್ ರಚಿತಾ ರಾಮ್ ಶಂಕರ್ನಾಗ್ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿರುವುದು ಇದೀಗ ವೈರಲ್ ಆಗಿದೆ. ಇತ್ತ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದ ಮಾಜಿ ಬಿಜೆಪಿ ನಾಯಕ ಇದೀಗ ಟಿಂಎಸಿಗೆ ಹಾರಿದ್ದಾರೆ. ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪಂಜಾಬ್ ತಂಡಕ್ಕೆ ಹೊಸ ಕೋಚ್, ಕೇರಳ ಕಾಂಗ್ರೆಸ್ ತೊರೆಯುತ್ತಿದ್ದಾರೆ ನಾಯಕರು ಸೇರಿದಂತೆ ಮಾರ್ಚ್ 13ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ಬೋಗಿ!...
ಡೆಹ್ರಡೂನ್-ದೆಹಲಿ ಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ಹೊತ್ತಿ ಉರಿದ ಘಟನೆ ನಡೆದಿದೆ. ಪ್ರಯಾಣಿಕರೆಲ್ಲರು ಸೇಫ್ ಅನ್ನೋ ಮಾಹಿತಿ ಲಭ್ಯವಾಗಿದೆ.
16ರ ಸುಂದರಿಯ ಸಾವಿನಲ್ಲಿ ತೆರೆದುಕೊಂಡ ಲವ್ ಸ್ಟೋರಿ: ಚಲುವೆಯ ರಹಸ್ಯ...!...
ಈಕೆ ಯಾವ ಸಿನಿಮಾ ನಟಿಯಲ್ಲ...ಆದ್ರೆ, ಮುಂದೊಂದು ದಿನ ಸ್ಟಾರ್ ನಟಿ ಆಗುತ್ತಿದ್ದಳೇನೋ...ಮಾಡೆಲ್ ಲೋಕದಲ್ಲಿ ಹೆಸರು ಮಾಡ್ತಿದ್ಲೋ ಏನೋ...ಅದೇ ಕನಸುಗಳನ್ನು ಕಟ್ಟಿಕೊಂಡಿದ್ದ ಚಲುವೆಯ ಕಥೆ ಈಗ ನಿಗೂಢವಾಗಿದೆ.
ಬಿಜೆಪಿ ಮಾಜಿ ನಾಯಕ ಟಿಎಂಸಿಗೆ: ವಾಜಪೇಯಿ ಅಧಿಕಾರವಧಿಯಲ್ಲಿ ವಿತ್ತ ಸಚಿವರಾಗಿದ್ದ ಸಿನ್ಹಾ!...
ಭಾರತೀಯ ಜನತಾ ಪಕ್ಷದ ಮಾಜಿ ನಾಯಕ ಹಾಗೂ ವಾಜಪೇಯಿ ಅಧಿಕಾರಾವಧಿಯಲ್ಲಿ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚುನಾವಣಾ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ ರಾಜಕೀಯ ಕಣ ಮತ್ತೊಂದು ತಿರುವು ಪಡೆದುಕೊಂಡಿದೆ.
IPL 2021: ಪಂಜಾಬ್ ಕಿಂಗ್ಸ್ ತಂಡ ಕೂಡಿಕೊಂಡ ಡೇಮಿಯನ್ ರೈಟ್..!...
ಚೊಚ್ಚಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಇದೀಗ ತನ್ನ ಬೌಲಿಂಗ್ ಕೋಚ್ ಅಗಿ ಡೇಮಿಯನ್ ರೈಟ್ ನೇಮಕ ಮಾಡಲಾಗಿದೆ.
ಶಂಕರ್ನಾಗ್ ಹಾಡಿಗೆ ಡಿಂಪಲ್ ಕ್ವೀನ್ ಸ್ಟೆಪ್: ಹುಚ್ಚು ಹಿಡೀತಾ ಎಂದ ಫ್ಯಾನ್...
ಡಿಂಪಲ್ ಕ್ವೀನ್ ರಚಿತಾ ರಾಮ್ ಶಂಕರ್ ನಾಗ್ ಅವರ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಖುಷಿಯಲ್ಲಿ ಜೋಷ್ನಲ್ಲಿ ಕುಣಿದು ಸಂಭ್ರಮಿಸಿದ್ದಾರೆ.
ಕಾಂಗ್ರೆಸ್ ಖಾಲಿ ಖಾಲಿ, ಪಿಸಿ ಚಾಕೋ ಬೆನ್ನಲ್ಲೇ ಪಕ್ಷ ತೊರೆದು ಬಿಜೆಪಿ ಸೇರಿದ ಪ್ರಮುಖ ನಾಯಕ!...
ಉತ್ತರ-ದಕ್ಷಿಣದಲ್ಲಿ ಕಾಂಗ್ರೆಸ್ ಪತನದತ್ತ ಸಾಗುತ್ತಿದೆ. ಉತ್ತರದಲ್ಲಿ ಜಿ23 ನಾಯಕರು ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದರೆ, ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಒಂದೊಂದೆ ವಿಕೆಟ್ ಪತನಗೊಳ್ಳುತ್ತಿದೆ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಪಿಸಿ ಚಾಕೋ ಬೆನ್ನಲ್ಲೇ ಮತ್ತೊರ್ವ ಪ್ರಮುಖ ನಾಯಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
14 ವರ್ಷವಿದ್ದಾಗ ಬಾಲಿವುಡ್ ನಟಿ ಮೇಲೆ ಪಾಕ್ನಲ್ಲಿ ಅತ್ಯಾಚಾರ...
ಶಾಕಿಂಗ್ ವಿಚಾರ ರಿವೀಲ್ ಮಾಡಿದ ಬಾಲಿವುಡ್ ನಟಿ | 5,9 ವರ್ಷದವಳಾಗಿದ್ದಾಗಲೇ ನಡೆದಿತ್ತು ಲೈಂಗಿಕ ದೌರ್ಜನ್ಯ
ಕೆ ಆರ್ ಎಸ್ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಾಣ: ಭಾರೀ ವಿರೋಧ...
ಕೆ ಆರ್ ಎಸ್ ಡ್ಯಾಂಗೆ 90 ವರ್ಷ ಆಗಿದೆ. ಎಷ್ಟು ವರ್ಷ ಸ್ಥಿತವಾಗಿರುತ್ತೆ ಹೇಳಲು ಸಾಧ್ಯವಿಲ್ಲ. ಕೆ ಆರ್ ಎಸ್ 3 ಕೋಟಿ ಜನರಿಗೆ ಕುಡಿಯುವ ನೀರು ಒದಗಿಸುತ್ತಿದೆ. ಬೆಂಗಳೂರಿನ ಒಂದು ವರೆ ಕೋಟಿ ಜನರಿಗೆ ನೀರು. ಮಂಡ್ಯ, ಚಾಮರಾಜನಗರ, ಮೈಸೂರು, ರಾಮನಗರ, ಬೆಂಗಳೂರು, ತಮಿಳುನಾಡು ನೀರಿಗೆ ಅವಲಂಬಿತವಾಗಿದೆ ಎಂದು ಇಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಡಿಸ್ನಿ ಲ್ಯಾಂಡ್ಗೆ 9 ಪ್ರಮುಖ ತಾಂತ್ರಿಕ ಅಂಶ ನೀಡಿ ವಿರೋಧ ಪಡಿಸಲಾಗಿದೆ.
ಅಣ್ಣ ರಮೇಶ್ ಪರ ನಿಂತ ಸತೀಶ್ : ಎಚ್ಡಿಕೆ ಹೇಳಿದ್ದು ಸರಿ ಎಂದ ಕೈ ಲೀಡರ್...
ಅಣ್ಣ ರಮೇಶ್ ಪರವಾಗಿ ಬೆಂಬಲ ನೀಡಲು ಇದೀಗ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ಎಚ್ಡಿ ಕೆ ಹೇಳಿಕೆ ಸತ್ಯ. ಪ್ರಕರಣದ ಬಗ್ಗೆ ಸತ್ಯತೆ ಹೊರಬರಲಿ ಎಂದರು.
ರಾಸಲೀಲೆ ಸಿ.ಡಿ.: ಕೊನೆಗೂ ದೂರು ನೀಡಿದ ರಮೇಶ್ ಜಾರಕಿಹೊಳಿ...
ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿರುವ ರಮೇಶ್ ಜಾಕಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ.
KGF ತಂಡದ ಗೆಟ್ ಟುಗೆದರ್ ಪಾರ್ಟಿ..! ಹೀಗಿತ್ತು ಸಂಭ್ರಮ...
ಕೆಜಿಎಫ್ ಶುರುವಾದಾಗಿಂದ ಕೆಜಿಎಫ್ ಪಾರ್ಟ್ 2 ಮುಗಿಯೋ ತನಕ ಜೊತೆಗಿದ್ದವರೆಲ್ಲಾ ಒಂದೆಡೆ ಸೇರಿ ಪಾರ್ಟಿ ಮಾಡಿದ್ದಾರೆ.