Asianet Suvarna News Asianet Suvarna News

ಶೃಂಗೇರಿ ಮಠಕ್ಕೆ ತೆರಳಿದ್ದ ವೇಳೆ ಅಚ್ಚರಿ ತಂದ ರೇವಣ್ಣ ನಡೆ

ಶನಿವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಶೃಂಗೇರಿ ಮಠಕ್ಕೆ ಭೇಟಿ ನೀಡಿತ್ತು. ಈ ವೇಳೆ ರೇವಣ್ಣ ಅವರ ವರ್ತನೆ ಎಲ್ಲರಲ್ಲಿಯೂ ಅಚ್ಚರಿಗೆ ಕಾರಣವಾಯಿತು. 

Revanna Keep Distance From Yaga In Sringeri Mutt
Author
Bengaluru, First Published Sep 23, 2018, 2:07 PM IST

ಶೃಂಗೇರಿ: ಶೃಂಗೇರಿ ಮಠದಲ್ಲಿ ಶನಿವಾರ ನಡೆದ ಯಾಗದಲ್ಲಿ ದೇವೇಗೌಡರ ಇಡೀ ಕುಟುಂಬ ಪಾಲ್ಗೊಂಡಿದ್ದರೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮಾತ್ರ ಯಾಗದಿಂದ ದೂರವೇ ಉಳಿದದ್ದು ಅಚ್ಚರಿ ಮೂಡಿಸಿತು.

ಬೆಳಗ್ಗೆ ಶೃಂಗೇರಿಗೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎಚ್‌.ಡಿ.ರೇವಣ್ಣ ಹಾಗೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಚನ್ನಮ್ಮ ಅವರು ಶೃಂಗೇರಿ ಮಠದ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಿದ್ಧಪಡಿಸಿದ್ದ ಹೋಮ ಕುಂಡದ ಬಳಿಯೇ ಇದ್ದರು.

ಆದರೆ, ರೇವಣ್ಣ ಮಾತ್ರ ದೂರದಲ್ಲಿ ಕುರ್ಚಿ ಹಾಕಿಕೊಂಡು ಕೂತಿದ್ದರು. ಋುತ್ವಿಜರು ಕರೆದರೂ ಮತ್ತೆ ಬರುವುದಾಗಿ ಹೇಳಿದ ರೇವಣ್ಣ ಹೋಮ ಮುಗಿಯುವವರೆಗೂ ಆ ಕಡೆ ಹೋಗಲಿಲ್ಲ. ರೇವಣ್ಣ ಅವರ ಈ ವರ್ತನೆ ತೀವ್ರ ಕುತೂಹಲಕ್ಕೆ ಕಾರಣವಾಯಿತು.

Follow Us:
Download App:
  • android
  • ios