Asianet Suvarna News Asianet Suvarna News

ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರು..!

ಪ್ರತ್ಯೇಕ ಲಿಂಗಾಯತ ಧಮರ್ಮ ಹೋರಾಟಕ್ಕೆ ಹಿನ್ನಡೆ

ರಾಜ್ಯ ಸಕಾರ್ಕಾರದ ಶಿಫಾರಸ್ಸು ತಿರಸ್ಕರಿಸಿದ ಕೇಂದ್ರ

ಒಗ್ಗಟ್ಟು ಪ್ರದಶರ್ಶನಕ್ಕೆ ಮುಂದಾದ ಹೋರಾಟಗಾರರು

ವೀರಶೈವ ಮಹಾಸಭಾ ಜೊತೆಗಿನ ಭಿನ್ನಾಭಿಪ್ರಾಯ ಮರೆಯಲು ಸಿದ್ಧ 

ಬೆಂಗಳೂರು(ಜೂ.10): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸಂಬಂಧಿಸಿದಂತೆ, ಹಿಂದಿನ ರಾಜ್ಯ ಸರ್ಕಾರ ಕಳುಹಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಕೇಂದ್ರ, ರಾಜ್ಯ ಸರ್ಕಾರದ ಶಿಫಾರಸ್ಸನ್ನು ಮಾನ್ಯ ಮಾಡಿಲ್ಲ.  

ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿದ್ದ ಹೋರಾಟಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ಇದೀಗ ವೀರಶೈವ ಮಹಾಸಭಾ ಜೊತೆಗಿದ್ದ ಭಿನ್ನಾಭಿಪ್ರಾಯವನ್ನು ಮರೆತು ಒಗ್ಗಟ್ಟು ಪ್ರದರ್ಶಿಸುವ ಮಾತುಗಳನ್ನಾಡಿದ್ದಾರೆ.

ಸುವರ್ಣ ನ್ಯೂಸ್ ಜೊತೆಗೆ ಎಸ್.ಎಂ ಜಾಮದಾರ್ ಮಾಡಿದ ಚಿಟ್ ಚಾಟ್ ಇಲ್ಲಿದೆ..

Video Top Stories