Asianet Suvarna News Asianet Suvarna News

RCB ಹುಡುಗರ ಕನ್ನಡ ಪ್ರೀತಿ, ಗುಲಾಬ್ ಚಂಡಮಾರುತ ಭೀತಿ; ಸೆ.27ರ ಟಾಪ್ 10 ಸುದ್ದಿ!

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದಾರೆ. ಗುಲಾಬ್ ಚಂಡಮಾರುತದಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಬಿಎಸ್ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಯಾವುದೇ ಅಡೆಚಣೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರ್‌ಸಿಬಿ ಹುಡುಗ ಪಡಿಕ್ಕಲ್ ಕನ್ನಡ ಪ್ರೀತಿ, ಬಿಕಿನಿ ಲುಕ್‌ನಲ್ಲಿ ನಟಿ ಶೋಭಿತಾ ಸೇರಿದಂತೆ ಸೆಪ್ಟೆಂಬರ್ 27ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

RCB devdutt padikkal kannada to Gulab Cyclone top 10 news of september 27 ckm
Author
Bengaluru, First Published Sep 27, 2021, 4:35 PM IST

One Nation One Health ID: ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ಗೆ ಚಾಲನೆ ಕೊಟ್ಟ ಮೋದಿ!

RCB devdutt padikkal kannada to Gulab Cyclone top 10 news of september 27 ckm

ದೇಶದ ಪ್ರತಿ ಪ್ರಜೆಗೂ ಅವರ ಆರೋಗ್ಯದ ಸಂಪೂರ್ಣ ಮಾಹಿತಿ ಒಳಗೊಂಡ ಡಿಜಿಟಲ್‌ ಕಾರ್ಡ್‌(Digital Card) ವಿತರಿಸುವ ‘ಪ್ರಧಾನ ಮಂತ್ರಿ ಡಿಜಿಟಲ್‌ ಹೆಲ್ತ್‌ ಮಿಷನ್‌’(Pradhan Mantri Digital Health Mission) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ

ಆಂಧ್ರ, ಒಡಿಶಾಕ್ಕೆ ಅಪ್ಪಳಿಸಿದ ಗುಲಾಬ್‌: ಕಟ್ಟೆ​ಚ್ಚ​ರ!

RCB devdutt padikkal kannada to Gulab Cyclone top 10 news of september 27 ckm

ಆಂಧ್ರಪ್ರದೇಶ(Andhra Pradesh) ಉತ್ತರ ಭಾಗ ಹಾಗೂ ಒಡಿಶಾದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಗುಲಾಬ್‌ ಚಂಡಮಾರುತ(Gulab Cyclone) ಅಪ್ಪಳಿಸಿದೆ. ಇದಕ್ಕೆ ಮುಂಚಿತವಾಗಿಯೇ ಉಭಯ ರಾಜ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇಂದು ಭಾರತ್‌ ಬಂದ್‌: ಕೇಂದ್ರದ ಕೃಷಿ ಕಾಯ್ದೆ ವಿರೋ​ಧಿಸಿ ದೇಶ​ವ್ಯಾಪಿ ಪ್ರತಿ​ಭ​ಟ​ನೆ!

RCB devdutt padikkal kannada to Gulab Cyclone top 10 news of september 27 ckm

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು(Farm Law) ವಿರೋಧಿಸಿ ರೈತರು ಕಳೆದ 10 ತಿಂಗಳಿನಿಂದ ನಡೆಸುತ್ತಿರುವ ಪ್ರತಿ​ಭ​ಟನೆ ಮತ್ತಷ್ಟು ಕಾವು ಪಡೆ​ದು​ಕೊ​ಳ್ಳುವ ಸಾಧ್ಯ​ತೆ ಇದೆ. ಕೃಷಿ ಕಾಯ್ದೆ​ಗಳ ರದ್ದ​ತಿಗೆ ಆಗ್ರ​ಹಿಸಿ 40 ರೈತ ಸಂಘ​ಟ​ನೆ​ಗಳ(Farmers Union) ಮಾತೃ ಸಂಸ್ಥೆ​ಯಾದ ಸಂಯುಕ್ತ ಕಿಸಾನ್‌ ಮೋರ್ಚಾ(Kisan Morcha), ಸೋಮ​ವಾರ ಭಾರತ್‌ ಬಂದ್‌ಗೆ(Bharat bandh) ಕರೆ ನೀಡಿ​ದೆ.

ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

RCB devdutt padikkal kannada to Gulab Cyclone top 10 news of september 27 ckm

 ಐಪಿಎಲ್‌(IPL) ಹಬ್ಬ ಮತ್ತೆ ಆರಂಭವಾಗಿದೆ. ಪ್ರತಿ ಬಾರಿ ಐಪಿಲ್ ಸೀಜನ್ ಆರಂಭವಾಗುವಾಗ ಆರ್‌ಸಿಬಿ(Royal Challengers Bangalore) ವಿಭಿನ್ನ ಕಾರಣಗಳಿಂದ ಸದ್ದು ಮಾಡುತ್ತಿರುತ್ತದೆ. 

ಹಾಟ್ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಶೋಭಿತಾ

RCB devdutt padikkal kannada to Gulab Cyclone top 10 news of september 27 ckm

ಬಾಲಿವುಡ್ ನಟಿ ಶೋಭಿತಾ ರಾನ(Shobhitha Rana) ಬಿಕಿನಿ ಫೋಟೋಗಳು ವೈರಲ್ ಆಗಿವೆ. ಮಾಲ್ಡೀವ್ಸ್‌ನಲ್ಲಿ ವೆರೈಟಿ ಸ್ಟೈಲಿಷ್ ಬಿಕಿನಿಯಲ್ಲಿ ವೆಕೇಷನ್ ಎಂಜಾಯ್ ಮಾಡಿದ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಬಿಎಸ್‌ವೈ ಪ್ರವಾಸಕ್ಕೆ ಹೈಕಮಾಂಡ್‌ ಬ್ರೇಕ್‌?: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

RCB devdutt padikkal kannada to Gulab Cyclone top 10 news of september 27 ckm

 ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರ ರಾಜ್ಯ ಪ್ರವಾಸಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ. 

ಹಿಂಭಾಗದಲ್ಲಿ ನೋವೆಂದು ಬಂದ ಮಹಿಳೆ ಪ್ಯಾಂಟ್ ಕಳಚಿ ಖಾಸಗಿ ಅಂಗ ಮುಟ್ಟಲು ಮುಂದಾದ!

RCB devdutt padikkal kannada to Gulab Cyclone top 10 news of september 27 ckm

ಚೆಕ್ ಅಪ್ ಗೆ ಬಂದಿದ್ದ ಮಹಿಳಾ ಪೇಶೆಂಟ್ ಜತೆ ಅಸಭ್ಯವಾಗಿ ವರ್ತಿಸಿದ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.

'ಹಿಂದೂಗಳ ಮನಸ್ಸಿಗೆ ನೋವು ಮಾಡಿದರೆ ಬಿಜೆಪಿ ಒಂದೂ ಸ್ಥಾನ ಗೆಲ್ಲಲ್ಲ'

RCB devdutt padikkal kannada to Gulab Cyclone top 10 news of september 27 ckm

ಹಿಂದೂಗಳ (Hindu) ಮನಸ್ಸಿಗೆ ನೋವುಂಟು ಮಾಡಿದರೆ ಕರ್ನಾಟಕದಲ್ಲಿ (Karnataka) ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲ್ಲವೆಂದು ಮಂಗಳೂರಿನ ಓಂ ಶ್ರೀ ಮಠದ ಸ್ವಾಮೀಜಿ ಎಚ್ಚರಿಸಿದರು. 

ಸಮುದ್ರದಾಳದ ಕಸ ಸ್ವಚ್ಛಗೊಳಿಸುತ್ತಿದ್ದವರ ಕೈ ಸೇರಿತು ಚಿನ್ನದ ನಾಣ್ಯಗಳ ಖಜಾನೆ!

RCB devdutt padikkal kannada to Gulab Cyclone top 10 news of september 27 ckm

ನೀಲಸಮುದ್ರದಾಳದಲ್ಲಿ(Sea) ಅದೆಷ್ಟೋ ರಹಸ್ಯಗಳು ಅಡಗಿರುತ್ತವೆ. ವಿಜ್ಞಾನಿಗಳು ಕೆಲ ವಿಚಾರಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇರುತ್ತಾರೆ, ಇನ್ನು ಕೆಲವೊಮ್ಮೆ ಈ ವಿಚಾರಗಳು ತನ್ನಿಂತಾನಾಗೇ ಬೆಳಕಿಗೆ ಬರುತ್ತವೆ. 

Follow Us:
Download App:
  • android
  • ios