ರಾಸಲೀಲೆ ಸಿಡಿ ಕೇಸ್ ವಾಪಸ್, IPL 2021 ಟೂರ್ನಿ ವೇಳಾಪಟ್ಟಿ ಅನೌನ್ಸ್; ಮಾ.07ರ ಟಾಪ್ 10 ಸುದ್ದಿ!
ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ಸಿ.ಡಿ. ದೂರನ್ನು ಸಾಮಾಜಿ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದಿದ್ದಾರೆ. ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಐಪಿಎಲ್ ಟೂರ್ನಿ ವೇಳಾಪಟ್ಟಿ ಬಿಡುಗಡೆಯಾಗಿದೆ. ಖ್ಯಾತ ಸೀರಿಯಲ್ ನಟಿಯ ಮೇಲೆ ಅತ್ಯಾಚಾರ, ಕಾರಿನೊಳಗೆ ಅಲಂಕಾರಕ್ಕೆ ನಿಷೇಧ ಸೇರಿದಂತೆ ಮಾರ್ತ್ 7ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ವಾಪಸ್ ಪಡೆದಿದ್ಯಾಕೆ? ಕಾರಣ ಕೊಟ್ಟ ಕಲ್ಲಹಳ್ಳಿ
ರಮೇಶ್ ಜಾರಕಿಹೊಳಿ ವಿರುದ್ಧದ ರಾಸಲೀಲೆ ಸಿ.ಡಿ. ದೂರನ್ನು ಸಾಮಾಜಿ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಾಪಸ್ ವಿತ್ ಡ್ರಾ ಮಾಡಿಕೊಂಡಿದ್ದಾರೆ. ದೂರು ಹಿಂಪಡೆದ ಬಗ್ಗೆ ಸ್ವತಃ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆ!...
ಸದ್ಯ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕಮಲ ಪಾಳಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
IPL 2021 ವೇಳಾಪಟ್ಟಿ ಪ್ರಕಟ: ಚೆನ್ನೈನಲ್ಲಿ ಮೊದಲ ಪಂದ್ಯ, ಮೋದಿ ಸ್ಟೇಡಿಯಂನಲ್ಲಿ ಫೈನಲ್!...
ಕ್ರಿಕೆಟ್ ಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಐಪಿಎಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಏಪ್ರಿಲ್ 9 ರಂದು ಐಪಿಎಲ್ 2021 ಆರಂಭವಾಗಲಿದ್ದು, ಮೇ 20ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಮೂಲಕ ಬರೋಬ್ಬರಿ ಎರಡು ತಿಂಗಳು ದೇಶಾದ್ಯಂತ ಐಪಿಎಲ್ ಫೀವರ್ ಆವರಿಸಲಿದೆ.
RCB ತಂಡದ ಸಂಪೂರ್ಣ ವೇಳಾಪಟ್ಟಿ; ತವರಿನಲ್ಲಿ ಕೊಹ್ಲಿ ಸೈನ್ಯಕ್ಕೆ ಪಂದ್ಯವೇ ಇಲ್ಲ!...
IPl 2021 ಟೂರ್ನಿ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಪ್ರಿಲ್ 9 ರಿಂದ 14ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ದೇಶಗ 6 ಪ್ರಮುಖ ನಗರಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ನಡಯಲಿದೆ. ಬೆಂಗಳೂರು ಕೂಡ ಇದರಲ್ಲಿ ಒಂದಾಗಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲಿ ಒಂದೇ ಒಂದು ಪಂದ್ಯವಿಲ್ಲ.
ಖ್ಯಾತ ಸೀರಿಯಲ್ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ...
ಮದುವೆಯ ಭರವಸೆ ನೀಡಿ ಟಿವಿ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ನಟಿ ಉತ್ತರ ಮುಂಬೈನ ಓಶಿವರದಲ್ಲಿ ಪೊಲೀಸ್ ಕಂಪ್ಲೇಟ್ ಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದೆ.
ಸನ್ಮಾನ ಮಾಡೋಕೆ ಬಂದವ್ರು ಸುದೀಪ್ ವಾಚ್ ನೋಡಿಯೇ ಬಾಕಿ...
ಸುದೀಪ್ ಧರಿಸಿದ ವಾಚ್ ಬೆಲೆ ಕೊಟಿಗಟ್ಟಲೆ ಇರುತ್ತೆ ಎಂದು ಎಲ್ಲರೂ ಆಶ್ಚರ್ಯಪಡ್ತಿದ್ದಾರೆ. ನಿಜಕ್ಕೂ ಈ ವಾಚ್ ಬೆಲೆ ಎಷ್ಟು..? ಯಾರಾದ್ರೂ ಗಿಫ್ಟ್ ಮಾಡಿದ್ರಾ..? ಇಲ್ನೋಡಿ ವಿಡಿಯೋ
ಕಾರಿನೊಳಗೆ, ಡ್ಯಾಶ್ಬೋರ್ಡ್ನಲ್ಲಿ ಅಲಂಕಾರಿಕ ವಸ್ತು ಇಡುವಂತಿಲ್ಲ; ಸರ್ಕಾರದ ಮಹತ್ವದ ಆದೇಶ!...
ಭಾರತದಲ್ಲಿ ವಾಹನ ನಿಯಮಗಳು ಬಿಗಿಗೊಳ್ಳುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಸುರಕ್ಷತೆಗೆ ಹೊಸ ನಿಯಮ ಜಾರಿಗೊಳಿಸಿದೆ. ಇದೀಗ ಕಾರಿನೊಳಗೆ ಅಲಂಕಾರಿಕ ವಸ್ತುಗಳನ್ನಿಡುವುದನ್ನು ಸರ್ಕಾರ ನಿಷೇಧಿಸಿದೆ.
ಚಾಯ್ ಪಕೋಡ ಮಾರುತ್ತಿದ್ದಾರೆ ಭಾರತದ ಅತೀ ದೊಡ್ಡ ರಾಜ್ಯದ ಸಿಎಂ ಅಕ್ಕ!...
ಉತ್ತರಾಖಂಡ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಕತೆಯಾಗಿದೆ. ಇವರು ತಮ್ಮ ಗಂಡನ ಜೊತೆ ಸೇರಿ ಚಹಾ- ಪಕೋಡಾ ಅಂಗಡಿ ನಡೆಸುತ್ತಾರೆ. ಅದಕ್ಕೂ ಅಚ್ಚರಿಯ ವಿಚಾರ ಎಂದರೆ ಶಶಿ ದೇವಿ ದೇಶದ ಅತೀ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಅಕ್ಕ.
ಬಿಗ್ ಬಾಸ್ ಅಡುಗೆ ಮನೆ ಜಗಳ: ಚಂದ್ರಕಲಾಗೆ ರೇಷ್ಮೆ ಶಾಲಲ್ಲಿ ಸುತ್ಕೊಂಡು ಹೊಡೆದ ಸುದೀಪ್...
ಬಿಗ್ ಬಾಸ್ ಅಂದ್ರೆ ಅಡುಗೆ ಮನೆ ಜಗಳ ಅನ್ನೋ ಹಾಗಾಗಿದೆ. ಆ ಜಗಳಕ್ಕೆ ಕಾರಣರಾದ ಚಂದ್ರಕಲಾ ಮೋಹನ್ ಗೆ ಸುದೀಪ್ ಹೆಂಗ್ ಕ್ಲಾಸ್ ತಗೊಂಡ್ರು ನೋಡಿ..