'ಅದು ಭಾರತ್ ಮಾತಾ ಕೀ ಜೈ ಅಲ್ಲ, ಸೋನಿಯಾ ಗಾಂಧಿ ಕೀ ಜೈ'!
ಭಾರತ್ ಮಾತೆ ಬದಲಿಗೆ ಸೋನಿಯಾ ಕೀ ಜೈ ಅನ್ನಿ! ರಾಜಸ್ಥಾನ ಕಾಂಗ್ರೆಸ್ ನಾಯಕನ ಕಟ್ಟಪ್ಪಣೆ! ಸೋನಿಯಾ, ರಾಹುಲ್ ಪರ ಘೋಷಣೆ ಕೂಗುವಂತೆ ಒತ್ತಾಯ! ವಿವಾದದ ಕಿಡಿ ಹೊತ್ತಿಸಿದ ಬಿಡಿ ಕಲ್ಲಾ ಹೇಳಿಕೆ
ಜೈಪುರ(ನ.19): ಪಂಚರಾಜ್ಯಗಳ ಚುನಾವಣಾ ಕಾವು ಜೋರಾಗಿರುವ ಬೆನ್ನಲ್ಲೇ, ರಾಜಕೀಯ ಪಕ್ಷಗಳ ನಾಯಕರ ವಿವಾದಾತ್ಮಕ ಹೇಳಿಕೆಗಳು ಕೂಡ ಹೆಚ್ಚಾಗುತ್ತಿವೆ.
ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕನೋರ್ವನ ಹೇಳಿಕೆ ಇದೀಗ ತೀವ್ರ ವಿವಾದ ಸೃಷ್ಟಿಸಿದೆ.
ರಾಜಸ್ಥಾನದ ಬಿಕಾನೆರ್ ನ ಕಾಂಗ್ರೆಸ್ ನಾಯಕ ಬುಲಾಕಿ ದಾಸ್ ಕಲ್ಲಾ, ಪಕ್ಷದ ಸಭೆಯಲ್ಲಿ ಕಾರ್ಯಕರ್ತನೋರ್ವ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಲು ಮುಂದಾದಾಗ ಆತನನ್ನು ತಡೆದಿದ್ದಾರೆ.
ಅಲ್ಲದೇ ಕಾಂಗ್ರೆಸ್ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಬದಲಿಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಕೀ ಜೈ ಎಂದು ಘೋಷಣೆ ಕೂಗಬೇಕು ಎಂದು ಕಲ್ಲಾ ಆದೇಶಿಸಿದ್ದಾರೆ.
ಕೂಡಲೇ ಕಾರ್ಯಕರ್ತ ಕಲ್ಲಾ ಅಣತಿಯಂತೆ ಸೋನಿಯಾ ಗಾಂಧಿ ಜಿಂದಾಬಾದ್ ಮತ್ತು ರಾಹುಲ್ ಗಾಂಧಿ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ.
ಕಾಂಗ್ರೆಸ್ ಸಭೆಯಲ್ಲಿ ಭಾರತ ಮಾತೆಗೆ ಜೈಕಾರ ಹಾಕುವುದನ್ನು ತಡೆದು ಸೋನಿಯಾ ಗಾಂಧಿಗೆ ಜೈಕಾರ ಹಾಕಿದ ನಾಯಕನ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.