ದಕ್ಷಿಣ ಭಾರತದ ಹೆಬ್ಬಾಗಿಲು ಬಡಿಯಲು ಮೋದಿಗಿಲ್ಲ ತಡೆ
ದಕ್ಷಿಣ ಬಾರತದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲು ಇದ್ದಂತ ಅಡ್ಡಿಗಳು ಒಂದೊಂದಾಗಿ ನಿವಾರಣೆಯಾಗುತ್ತಿದೆ. ಪ್ರಮುಖವಾಗಿ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಮೂಲಕ 50 ವರ್ಷಗಳ ಕಾಲ ಆಡಳಿತ ನಡೆಸಿದ ಡಿಎಂಕೆ ಹಾಗೂ ಅಣ್ಣ ಡಿಎಂಕೆ ಪಕ್ಷಗಳ ದಿಗ್ಗಜರ ಯುಗ ಅಂತ್ಯವಾಗಿದೆ. ಹೊಸಬರ ವಿರುದ್ಧ ಹೋರಾಟ ನಡೆಸಲು ಕಮಲ ಪಕ್ಷಕ್ಕೆ ಹೆಚ್ಚು ಕಷ್ಟವಾಗುವುದಿಲ್ಲ.
- ಕರುಣಾನಿಧಿ ಸಾವಿನೊಂದಿಗೆ ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಯುಗ ಅಂತ್ಯ ಸಮೀಪಿಸಿದೆ
- ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವದಲ್ಲಿದೆ, ತೆಲಂಗಾಣದ ಸಿಎಂ ಕೂಡ ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದೆ