ಆಕ್ಸಿಜನ್ ಕೊರತೆಗೆ ಪರಿಹಾರ, ಕರ್ಫ್ಯೂ ವಿಸ್ತರಣೆಗೆ ಬೊಮ್ಮಾಯಿ ಉತ್ತರ: ಏ.25ರ ಟಾಪ್ 10 ಸುದ್ದಿ!
ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದಕ ಘಟಕ ಸ್ಥಾಪನೆಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಮೇ ತಿಂಗಳ ಮಧ್ಯದಲ್ಲಿ ದೇಶದಲ್ಲಿ ಕೊರೋನಾ 4,500 ಮಂದಿಯನ್ನು ಪ್ರತಿ ದಿನ ಬಲಿ ಪಡೆಯಲಿದೆ ಎಂದು ತಜ್ಞರ ವರದಿ ನೀಡಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ವಾರ ಲಾಕ್ಡೌನ್ ಘೋಷಿಸಲಾಗಿದೆ. ದಿವ್ಯ ಉರುಡುಗ-ಅರವಿಂದ್ ಕುರಿತು ಸುದೀಪ್ ಪುತ್ರಿ ಮಾತು, ಕರ್ಫ್ಯೂ ವಿಸ್ತರಣೆ ಕುರಿತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಸೇರಿದಂತೆ ಏಪ್ರಿಲ್ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಮೇ ತಿಂಗಳಲ್ಲಿ 8-10 ಲಕ್ಷ ಕೇಸ್, 4,500 ಸಾವು; ಭಾರತ ಎಚ್ಚರಿಸಿದ ಮಿಚಿಗನ್ ವಿಶ್ವವಿದ್ಯಾಲಯ!...
ಕೊರೋನಾ ವೈರಸ್ ಸುನಾಮಿಗೆ ಕೊಚ್ಚಿ ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಕಾರಣ ತಜ್ಞರ ಪ್ರಕಾರ ಭಾರತದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೊರೋನಾ 2ನೇ ಅಲೆ ಕೇವಲ ಟ್ರೇಲರ್ ಅಷ್ಟೆ. ಪಿಕ್ಚರ್ ಅಬಿ ಬಾಕಿ ಹೈ. ಕಾರಣ ಮಿಚಿಗನ್ ವಿಶ್ವವಿದ್ಯಾಲಯದ ಭಾರತದಲ್ಲಿ ಮೇ ತಿಂಗಳ ಮಧ್ಯಭಾಗದಲ್ಲಿ ಕೊರೋನಾ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಸಿದೆ. ಮಿಚಿಗನ್ ವಿಶ್ವವಿದ್ಯಾಲಯ ನೀಡಿದ ಎಚ್ಚರಿಕೆ ಪ್ರತಿಯೊಬ್ಬ ಭಾರತೀಯನಿಗೆ ತಿಳಿದುಕೊಳ್ಳಲೇ ಬೇಕಿದೆ
ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!...
ಕೊರೋನಾ ವೈರಸ್ 2ನೇ ಅಲೆ ಬಿರುಗಾಳಿಯಂತೆ ಬೀಸುತ್ತಿದೆ. ಸಿಕ್ಕ ಸಿಕ್ಕವರಿಗೆ ವೈರಸ್ ತಗುಲುತ್ತಿದೆ. ಇದರ ನಡುವೆ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಸಮಸ್ಯೆಗೆ ಕೇಂದ್ರ ಸರ್ಕಾರ ರೈಲ್ವೈ ಇಲಾಖೆ, ವಾಯುಸೇನೆ ಮೂಲಕ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದೀಗ ದೇಶದಲ್ಲಿ ಇನ್ನೆಂದು ಆಕ್ಸಿಜನ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶಾಶ್ವತ ಪರಿಹಾರ ಒದಗಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ಡೌನ್!...
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ| ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ| ಕೊರೊನಾ ಸೋಂಕು ದೆಹಲಿಯಲ್ಲಿ ಹೆಚ್ಚುತ್ತಿದೆ| ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ
4 ಸ್ಟಾರ್ ಆರ್ಸಿಬಿ vs ಹ್ಯಾಟ್ರಿಕ್ ಹೀರೋ ಚೆನ್ನೈ: ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ!...
4 ಸ್ಟಾರ್ ಆರ್ಸಿಬಿ vs ಹ್ಯಾಟ್ರಿಕ್ ಹೀರೋ ಚೆನ್ನೈ!| ಇಂದು ಐಪಿಎಲ್ನ ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯ| ಸತತ 4 ಪಂದ್ಯ ಗೆದ್ದು ಅಜೇಯವಾಗಿ ಉಳಿದಿರುವ ಆರ್ಸಿಬಿ| ಹ್ಯಾಟ್ರಿಕ್ ಗೆಲುವಿನೊಂದಿಗೆ ಮುನ್ನುಗುತ್ತಿರುವ ಚೆನ್ನೈ| ವಾಂಖೇಡೆ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ
ಅರವಿಂದ್- ದಿವ್ಯಾ ಉರುಡುಗ ಲವ್ ಬಗ್ಗೆ ಸುದೀಪ್ ಪುತ್ರಿ ಸಾನ್ವಿ ಹೇಳಿದ್ದಿಷ್ಟೇ!...
ಸೋಷಿಯಲ್ ಮೀಡಿಯಾದಲ್ಲಿಆ್ಯಕ್ಟಿವ್ ಆಗಿರುವ ಸುದೀಪ್ ಪುತ್ರಿ, ನೆಟ್ಟಿಗರು ಬಿಗ್ ಬಾಸ್ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಎಫೆಕ್ಟ್: ಕಲ್ಯಾಣ ಮಂಟಪ ಖಾಲಿ..ಖಾಲಿ..!...
ವೀಕೆಂಡ್ ಕರ್ಫ್ಯೂನಿಂದಾಗಿ ಕಲ್ಯಾಣ ಮಂಟಪಗಳೆಲ್ಲ ಖಾಲಿ ಖಾಲಿ| ಮದುವೆ ಮಂಟಪ ಸೇರಿ 4 ಲಕ್ಷ ರೂ. ಅಧಿಕ ಹಣ ಖರ್ಚು| ಸರ್ಕಾರದ ದಿಢೀರ್ ನಿರ್ಧಾರದಿಂದಾಗಿ ಮದುವೆಗೆ ಬರ್ತಿಲ್ಲ ಜನರು|
ಕರ್ನಾಟಕದಲ್ಲಿ ಮತ್ತಷ್ಟು ಟಫ್ ರೂಲ್ಸ್: ಮುಂಬೈ ಮಾದರಿಯಲ್ಲಿ ಕ್ರಮ!...
ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.ಇದರಿಂದ ಆತಂಕಗೊಂಡ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮುಂಬೈ ಮಾದರಿಯಲ್ಲಿ ಟಫ್ ರೂಲ್ಸ್ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಏ.29ಕ್ಕೆ ವಿವೋ ವಿ21 5ಜಿ ಸ್ಮಾರ್ಟ್ಫೋನ್ ಲಾಂಚ್, 44 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ!...
ಸ್ಮಾರ್ಟ್ಫೋನ್ ಉತ್ಪಾದನೆಯಲ್ಲಿ ಪ್ರಮುಖ ಕಂಪನಿಯಾಗಿರುವ ವಿವೋ, ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 29ರಂದು ವಿವೋ ವಿ21 5ಜಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ನಲ್ಲಿ 44 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಇನ್ನು ಅನೇಕ ಅತ್ಯಾಧುನಿಕ ಮತ್ತು ವಿಶಿಷ್ಟ ಫೀಚರ್ಗಳನ್ನು ಈ ಸ್ಮಾರ್ಟ್ಫೋನ್ ಒಳಗೊಂಡಿದೆ.
ವೀಕೆಂಡ್ ಕರ್ಫ್ಯೂ ಮುಂದುವರಿಯುತ್ತಾ? ಇಲ್ಲಾ? ಬೊಮ್ಮಾಯಿ ಹೇಳಿದ್ದು ಹೀಗೆ...
ವೀಕೆಂಡ್ ಕರ್ಫ್ಯೂ ಮುಂದುವರಿಸಬೇಕೋ? ಬೇಡವೋ ಎನ್ನುವ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಹೀಗೆ...
ರಕ್ಷಿತ್ ಶೆಟ್ಟಿ ನಾಯಕಿ ರುಕ್ಮಿಣಿ ವಸಂತ್ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ?...
'ಸಪ್ತ ಸಾಗರದಾಚೆಗೆಲ್ಲೋ' ಚಿತ್ರದ ಮೂಲಕ ಕರ್ನಾಟಕ ಕ್ರಶ್ ಆಗಿರುವ ನಾಯಕಿ ರುಕ್ಮಿಣಿ ವಸಂತ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಸೀರೆ ಪೋಟೋ ಹಂಚಿಕೊಂಡಿರುವುದು ಯಾಕೆ ಗೊತ್ತಾ?