Asianet Suvarna News Asianet Suvarna News

ಶಾಂತಿಯುತ ಭಾರತ್ ಬಂದ್‌ಗೆ ಒತ್ತು, BJP ಕಾಲೆಳೆದ ಸಿದ್ದು; ಡಿ.7ರ ಟಾಪ್ 10 ಸುದ್ದಿ!

ಸಾಮಾನ್ಯ ಜನರಿಗೆ ಸಮಸ್ಯೆಯಾಗದಂತೆ ಬೆಳಗ್ಗೆ 11 ಗಂಟೆಯಿಂದ 3 ವರೆಗೆ ಶಾಂತಿಯುತ ಭಾರತ್ ಬಂದ್‌‌ಗೆ ಒತ್ತು ನೀಡಲಾಗಿದೆ. ಇತ್ತ ಕಾಂಗ್ರೆಸ್ ಹಿರಿಯ ನಾಯಕ ರಾಜೀನಾಮೆ ಪಕ್ಷದಲ್ಲಿ ತಲ್ಲಣ ಮೂಡಿಸಿದೆ. ಸಿಎಂ ಮಾಡಿದರೂ ಕಾಂಗ್ರೆಸ್ ನಾಯಕ ಬಿಜೆಪಿ ಸೇರಲ್ಲ ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಹಳ್ಳಿಗಳಲ್ಲಿ ಚುನಾವಣೆ ಕಾವು, ನಾಗಿನಿ ಟಿಆರ್‌ಪಿ ಏರಿಸೋ ದೀಪಿಕಾದಾಸ್ ಸೇರಿದಂತೆ ಡಿಸೆಂಬರ್ 7ರ ಟಾಪ್ 10 ಸುದ್ದಿ

Peaceful Bharat bandh to siddaramaiah top 10 news of December 7 ckm
Author
Bengaluru, First Published Dec 7, 2020, 4:56 PM IST

ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್: 4 ದಶಕಗಳಿಂದ ಪಕ್ಷದಲ್ಲಿದ್ದ ಹಿರಿಯ ನಾಯಕ ರಾಜೀನಾಮೆ...

Peaceful Bharat bandh to siddaramaiah top 10 news of December 7 ckm

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. 

ರೈತರ ಪ್ರತಿಭಟನೆ; ಬಿಜೆಪಿ ಸಂಸದ ಸನ್ನಿ ಕೊಟ್ಟ ಅದ್ಭುತ ಪ್ರತಿಕ್ರಿಯೆ...

Peaceful Bharat bandh to siddaramaiah top 10 news of December 7 ckm

ರಾಷ್ಟ್ರ ರಾಜಧಾನಿ ದೆಹಲಿ ಸುತ್ತ ಮುತ್ತ ರೈತರ ಪ್ರತಿಭಟನೆ ನಡೆಯುತ್ತಲೆ ಇದೆ. ಕೃಷಿ ಕಾಯ್ದೆ ಮತ್ತು ಎಪಿಎಂಸಿ ಬಿಲ್ ವಿರೋಧಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ  ನಡೆಸುತ್ತಿದ್ದು  ಬಿಜೆಪಿ ಸಂಸದ, ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ್ ಬಂದ್ : ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿದೆ- ಯಾವ ಜಿಲ್ಲೆಯಲ್ಲಿ ಇಲ್ಲ..?...

Peaceful Bharat bandh to siddaramaiah top 10 news of December 7 ckm

ಈಗಾಗಲೇ ಸರ್ಕಾರದ ವಿರುದ್ಧ ರೈತರು ಹಲವು ದಿನಗಳ ಪ್ರತಿಭಟನೆ ನಡೆಸಿದ್ದು ಇದೀಗ ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ಡಿಸೆಂಬರ್ 8 ರಂದು ಭಾರತ್ ಬಂದ್‌ಗೆ ವಿವಿಧ ಕೃಷಿ ಮಸೂದೆ ವಿರೋಧಿಸಿ ಕರೆ ನೀಡಲಾಗಿದೆ. 

11AM ರಿಂದ 3PM ವರೆಗೆ ಭಾರತ್ ಬಂದ್; ಗಮನಿಸಬೇಕಾದ 10 ಅಂಶ ಇಲ್ಲಿವೆ!...

Peaceful Bharat bandh to siddaramaiah top 10 news of December 7 ckm

ಕೃಷಿ ಕಾಯ್ದೆ ವಿರೋಧಿ ನಡೆಸುತ್ತಿರುವ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಸರ್ಕಾರದ ಜೊತೆಗಿನ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಪಟ್ಟು ಬಿಡದ ರೈತ ಸಂಘಟನೆಗಳು ನಾಳೆ(ಡಿ.08) ಶಾಂತಿಯುತ ಭಾರತ್ ಬಂದ್ ನಡೆಸುವುದಾಗಿ ಸ್ಪಷ್ಟಪಡಿಸಿದೆ. ಇದೇ ವೇಳೆ ಭಾರತೀಯ ಕಿಸಾನ್ ಯುನಿಯನ್ 10 ಪ್ರಮುಖ ಅಂಶಗಳು ಒತ್ತಿ ಹೇಳಿದೆ.

ಹಾರ್ಡ್‌ ಹಿಟ್ಟರ್ ಪಾಂಡ್ಯ ಬ್ಯಾಟಿಂಗ್‌ಗೆ ಮನಸೋತ ಅಭಿಮಾನಿಗಳು..!...

Peaceful Bharat bandh to siddaramaiah top 10 news of December 7 ckm

ಆಸ್ಟ್ರೇಲಿಯಾ ವಿರುದ್ಧ  ಸ್ಫೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನಾಗಿನಿ ಟಿಆರ್‌ಪಿ ಏರಿಸೋ ದೀಪಿಕಾದಾಸ್!...

Peaceful Bharat bandh to siddaramaiah top 10 news of December 7 ckm

ಬೆಕ್ಕಿನ ಕಣ್ಣಿನ ಸುಂದರಿ ದೀಪಿಕಾ ದಾಸ್ ಅವರಿಂದಾಗಿ ಈ ವಾರ ನಾಗಿನಿ ಸೀರಿಯಲ್ ಟಿಆರ್ಪಿ ರೊಂಯ್ಯನೆ ಏರಿದೆ.

WhatsApp ಫೈಲ್ಸ್‌ನಿಂದ ತುಂಬಿರುವ ಫೋನ್, ಕ್ಲೌಡ್ ಸ್ಟೋರೇಜ್ ಕ್ಲೀಯರ್ ಮಾಡುವುದು ಹೇಗೆ?...

Peaceful Bharat bandh to siddaramaiah top 10 news of December 7 ckm

ವ್ಯಾಟ್ಸ್ಆ್ಯಪ್‌ನಲ್ಲಿನ ಚಾಟಿಂಗ್, ವಿಡಿಯೋ, ಇಮೇಜ್, ಡಾಕ್ಯುಮೆಂಟ್ ಸೇರಿದಂತೆ ಹಲವು ಫೈಲ್‌ಗಳನ್ನು ಕಳುಹಿಸುವುದು ಹಾಗೂ ರಿಸೀವ್ ಮಾಡುವ ಕಾರಣ ನಿಮ್ಮ ಫೋನ್ ಸ್ಟೋರೇಜ್ ಹಾಗೂ ಕ್ಲೌಡ್ ಸ್ಟೋರೇಜ್ ತುಂಬುವ ಸಾಧ್ಯತೆ ಹೆಚ್ಚು. ಇದರಿಂದ ಫೋನ್ ಹ್ಯಾಂಗ್ ಆಗಲಿದೆ. 

ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್!...

Peaceful Bharat bandh to siddaramaiah top 10 news of December 7 ckm

ಎಲೆಕ್ಟ್ರಿಕ್ ವಾಹನದಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. ಅತೀ ವೇಗದ ಚಾರ್ಜಿಂಗ್, ಗರಿಷ್ಠ ಪ್ರಯಾಣದ ರೇಂಜ್ ಸೇರಿದಂತೆ ಬ್ಯಾಟರಿ ಚಾಲಿತ ವಾಹನಗಳ ಇದೀಗ ಬಹು ಬೇಡಿಕೆ ಪಡೆಯುತ್ತಿದೆ. ಇದೀಗ ಹೊಸ ಎಲೆಕ್ಟ್ರಿಕ್ ಕಾರು ಆವಿಷ್ಕರಿಸಲಾಗಿದೆ. ಇದು ಸೋಲಾರ್ ಎಲೆಕ್ಟ್ರಿಕ್ ಕಾರಾಗಿದ್ದು, ಯಾವುದೇ ಚಾರ್ಜಿಂಗ್ ಅವಶ್ಯಕತೆ ಇಲ್ಲ, ಪ್ರತಿ ದಿನ 1,600 ಕಿ.ಮೀ ಪ್ರಯಾಣ ಮಾಡಬಹುದು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

'ಚೀಫ್ ಮಿನಿಸ್ಟರ್ ಮಾಡ್ತೇವೆ ಅಂದ್ರೂ ಅವರು ಬಿಜೆಪಿಗೆ ಬರಲ್ಲ'...

Peaceful Bharat bandh to siddaramaiah top 10 news of December 7 ckm

ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತಿನಿಂದಲೇ ಸಚಿವರ ಕಾಲೆಳೆದಿರುವ ಪ್ರಸಂಗ ನಡೆದಿದೆ.

ಹಳ್ಳಿಗಳಲ್ಲಿ ಹೆಚ್ಚುತ್ತಿದೆ ಗ್ರಾಮ ಪಂಚಾಯ್ತಿ ಚುನಾವಣಾ ಕಾವು...

Peaceful Bharat bandh to siddaramaiah top 10 news of December 7 ckm

ಚಳಿಗಾಲದ ಸಮಯದಲ್ಲಿ ಗ್ರಾಪಂಗಳಿಗೆ ಸಾರ್ವಜನಿಕ ಚುನಾವಣೆ ಘೋಷಣೆಯಾಗಿರುವುದು ಹಳ್ಳಿಗಳಲ್ಲಿ ರಾಜಕೀಯ ಚಟುವಟಿಕೆಗಳ ಮೂಲಕ ಪೈಪೋಟಿಯ ಕಾವನ್ನುಂಟು ಮಾಡಿದೆ.

Follow Us:
Download App:
  • android
  • ios