ರೌಡಿ ಲಕ್ಷ್ಮಣ್ ಕೊಲೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೂಲ, ಕಾರಣ ಯಾವ ಪ್ರಭಾವಿಗಳ ಶಾಮೀಲು ಇದರಲ್ಲಿ ಇದೆ ಎಂಬುದನ್ನು ಸಿಸಿಬಿ ಪೊಲೀಸರು ಜಾಲಾಡುತ್ತಿದ್ದಾರೆ.
ಬೆಂಗಳೂರು[ಮಾ. 12] ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆಯು ಸಿಸಿಬಿಗೆ ವರ್ಗವಾಗಿದ್ದು, ಈ ಹತ್ಯೆಯಲ್ಲಿ ಹೆಣ್ಣಿನ ನೆರಳಿದೆ ಎಂದು ಪೊಲೀಸರು ಬಲವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ರೌಡಿ ಲಕ್ಷ್ಮಣ ಮತ್ತು ವರ್ಷಿಣಿ ನಡುವೆ ನಡೆದ ಮಾತುಕತೆ ಸದ್ಯ ಪೊಲೀಸರಿಗೆ ಹೊಸ ಅಂಶಗಳ ಪತ್ತೆಗೆ ಕಾರಣವಾಗಿದೆ.
ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿ ಬಂದಿದೆ. ಜತೆಗೆ ಕೊಲೆಗೆ ಅಸಲಿ ಕಾರಣಗಳು ಏನು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.
ಸಿಸಿಬಿ ಪೊಲೀಸರು ಇದನ್ನು ಸವಾಲಿನ ರೀತಿ ತೆಗೆದುಕೊಂಡಿದ್ದಾರೆ. ಕೊಲೆಯಲ್ಲಿ ವರ್ಷಿಣಿ ಪಾತ್ರ ಏನು ಎಂಬುದನ್ನು ಸಚಿವರಿಗೆ ವಿವರಿಸಲಾಗಿದೆ.
"
"
"
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 12, 2019, 11:40 PM IST