Asianet Suvarna News Asianet Suvarna News

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆಗೆ ಇಲ್ಲ ಅಡ್ಡಿ

ಕಂಠೀರವ ಸ್ಟುಡಿಯೋದಲ್ಲಿ ನಟ ಅಂಬರೀಷ್ ಅವರ ಅಂತ್ಯಕ್ರಿಯೆ ಇದ್ದ ಅಡ್ಡಿ ಸದ್ಯ ಬಗೆಹರಿದಿದೆ. ಅಂತ್ಯಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿ ಐಎಲ್ ಗೆ ಮಧ್ಯಂತರ ಆದೇಶವನ್ನು ಅರ್ಜಿದಾರ ಕೇಳದ ಕಾರಣ ಇಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. 

No issues to hold last rights of Ambareesh in Kanteerava Studio says High court
Author
Bengaluru, First Published Nov 26, 2018, 12:11 PM IST

ಬೆಂಗಳೂರು :  ಕಂಠೀರವ ಸ್ಟುಡಿಯೋ ದಲ್ಲಿ ನಟ ಅಂಬರೀಶ್ ಅವರ ಅಂತ್ಯಕ್ರಿಯೆಗೆ ಇದ್ದ ಅಡ್ಡಿ ಈಗ ಬಗೆಹರಿದಿದೆ.  

ಕಂಠೀರವ ಸ್ಟೂಡಿಯೋ ದಲ್ಲಿ ಅಂತ್ಯಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಗೆ ಮಧ್ಯಂತರ ಆದೇಶವನ್ನು ಅರ್ಜಿದಾರ ಆರ್.ಎಲ್.ಎನ್ ಮೂರ್ತಿ ಕೇಳದ ಕಾರಣ ಕಂಠೀರವ ಸ್ಟುಡಿಯೋದಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ.  

ಈ ವೇಳೆ ಅರ್ಜಿದಾರರಾದ ಮೂರ್ತಿ ಮಧ್ಯಂತರ ಆದೇಶ ಕೇಳುವುದಿಲ್ಲ, ಕೋರ್ಟ್ ನಲ್ಲಿ ಅರ್ಜಿಯನ್ನು ಮುಂದುವರೆಸುತ್ತೇನೆ ಎಂದು  ಹೇಳಿದ್ದು,  ರಿಜಿಸ್ಟ್ರಾರ್ ಗೆ ಲಿಖಿತವಾಗಿ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಿದ್ದಾರೆ.  

ಇಂದಿನ ಪ್ರಕರಣವನ್ನು ಬಿಟ್ಟು ಇನ್ನು ಮುಂದಿನ ದಿನಗಳಲ್ಲಿ ಕಂಠೀರವ ಸ್ಟೂಡಿಯೋ ದಲ್ಲಿ ಅಂತ್ಯಕ್ರಿಯೆ ಮಾಡದಂತೆ ಅರ್ಜಿ ಮುಂದುವರೆಸಲು ಅರ್ಜಿದಾರ ಮೂರ್ತಿ ನಿರ್ಧರಿಸಿದ್ದಾರೆ. 

ಸದ್ಯ  ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆಗೆ  ಮಾತ್ರ ಅರ್ಜಿದಾರ ಮೂರ್ತಿ ಮಧ್ಯಂತರ ಆದೇಶ ಕೇಳಿಲ್ಲ. ಆದ್ದರಿಂದ ಯಾವುದೇ ಅಡೆತಡೆ ಇಲ್ಲದೇ ಅಂಬರೀಷ್ ವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 

Follow Us:
Download App:
  • android
  • ios