ವಿಜಯಪುರ ರೇಪ್ ಕೇಸ್: ನೊಂದ ಕುಟುಂಬಕ್ಕೆ ಬೇಕಿದೆ ಆರ್ಥಿಕ ನೆರವು
ವಿಜಯಪುರದಲ್ಲಿ ನಡೆದ ಕರ್ನಾಟಕದ ನಿರ್ಭಯಾ ಪ್ರಕರಣಕ್ಕೆ ಮೊದಲು ಬೆಳಕು ಚೆಲ್ಲಿದ್ದೇ ಸುವರ್ಣ ನ್ಯೂಸ್.
ಬೆಂಗಳೂರು (ಡಿ.25): ವಿಜಯಪುರದಲ್ಲಿ ನಡೆದ ಕರ್ನಾಟಕದ ನಿರ್ಭಯಾ ಪ್ರಕರಣಕ್ಕೆ ಮೊದಲು ಬೆಳಕು ಚೆಲ್ಲಿದ್ದೇ ಸುವರ್ಣ ನ್ಯೂಸ್.
ಮನೆ ಮಗಳನ್ನು ಕಳೆದುಕೊಂಡು ಕುಟುಂಬಸ್ಥರು ದುಃಖದಲ್ಲಿದ್ದಾರೆ. ಮರೆಯಾದ ಬಾಲಕಿ ಕುಟುಂಬಕ್ಕೀಗ ಬರೀ ಕಣ್ಣೀರೇ ಉಳಿದಿದೆ. ಈ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಇದು ಸುವರ್ಣ ನ್ಯೂಸ್ ಕಳಕಳಿ ಕೂಡಾ ಹೌದು. ನಮ್ಮ ಕಳಕಳಿಗೆ ಸಾರ್ವಜನಿಕರು ಸಹಾಯ ಹಸ್ತಚಾಚಿದ್ದಾರೆ.
ಹೆಬ್ಬುಲಿ ಚಿತ್ರ ನಿರ್ಮಾಪಕ ಉಮಾಪತಿ ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದು ಕುಟುಂಬಕ್ಕೆ 25 ಸಾವಿರ ರೂ. ನೆರವು ನೀಡಿದ್ದಾರೆ. ನೊಂದ ಕುಟುಂಬಕ್ಕೆ ನೆರವು ನೀಡಲು ಈ ಕೆಳಗಿನ ಅಕೌಂಟ್ ನಂಬರ್'ಗೆ ಹಣ ಹಾಕಬಹುದು.