Asianet Suvarna News Asianet Suvarna News

ಇನ್ನೂ 3 ತಿಂಗಳು ಕರ್ನಾಟಕಕ್ಕೆ ಕಾದಿದೆ ಗಂಡಾಂತರ : ಕೋಡಿ ಶ್ರೀ

ಕರ್ನಾಟಕಕ್ಕೆ ಇನ್ನೂ ಮೂರು ತಿಂಗಳ ಕಾಲ ಕಾದಿದೆ ಭಾರೀ ಗಂಡಾಂತರ. ರಾಜ್ಯದಲ್ಲಿ ನೈಸರ್ಗಿಕ ವಿಪತ್ತು ಮುಂದುವರಿಯಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

Natural Calamities Will Continue In Karnataka
Author
Bengaluru, First Published Aug 23, 2018, 12:20 PM IST

ಹಾಸನ : ಈಗಾಗಲೇ ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 

ಭಾರೀ ಪ್ರವಾಹದಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಆದರೆ ಇನ್ನೂ ಮೂರು ತಿಂಗಳ ಕಾಲ ಇದೇ ರೀತಿಯ ನೈಸರ್ಗಿಕ ವಿಕೋಪಗಳು ರಾಜ್ಯದಲ್ಲಿ ಮುಂದುವರಿಯಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 

ಮುಂದಿನ ಮೂರು ತಿಂಗಳ ಕಾಲ ಮಳೆ ಹಾಗೂ ಇತರೆ ವಿಪತ್ತುಗಳು ಸಂಭವಿಸುತ್ತವೆ. ಕಾರ್ತಿಕ ಮಾಸದವರೆಗೂ ಕೂಡ ರಾಜ್ಯದಲ್ಲಿ ಮಳೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. 

ಭೂ ಕುಸಿತ ಸಂಭವಿಸುತ್ತದೆ. ಲಕ್ಷಾಂತರ ಜನರ ಸ್ಥಳಾಂತರ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios