ಇನ್ಫೋಸಿಸ್'ಗೆ ಮರಳಿದ ನಂದನ್ ನಿಲೇಕಣಿ
ಇನ್ಫೋ'ಸಿಸ್'ಗೆ ಮರಳಿದ ನಂದನ್ ನಿಲೇಕಣಿ
ಬೆಂಗಳೂರು(ಆ.24): ನಂದನ್ ನಿಲೇಕಣಿ ಇನ್ಫೋಸಿಸ್'ಗೆ ಮತ್ತೆ ಮರಳಿದ್ದಾರೆ. ಸಂಸ್ಥೆಯ ನಿರ್ದೇಶಕ ಮಂಡಳಿಯ ಮುಖ್ಯಸ್ಥನಾಗಿ ನೇಮಕವಾಗಿದ್ದಾರೆ. ಹಾಲಿ ಮುಖ್ಯಸ್ಥ ಶೇಷಸಾಯಿ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ನಿಲೇಕಣಿ ಈ ಜವಾಬ್ದಾರಿ ವಹಿಸಲಾಗಿದೆ. ಸಂಸ್ಥೆಯ ಆಂತರಿಕ ಕಲಹದಿಂದಾಗಿ ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ ನಂತರ ಭಾರತದ ಐಟಿ ವಲಯದಲ್ಲಿ ಭಾರಿ ಸಂಚಲನವಾಗಿತ್ತು. ಸಂಸ್ಥಾಪಕರಾದ ನಾರಾಯಣ ಮೂರ್ತಿ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
2009 ಜುಲೈನಲ್ಲಿ ಇನ್ಫೋಸಿಸ್ ತೊರೆದು ಭಾರತದ ಗುರುತು ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2014ರ ಮಾರ್ಚ್'ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್'ನಿಂದ ಚುನಾವಣೆಗೆ ಸ್ಪರ್ಧಿಸಿ ಪ್ರಸ್ತುತ ಹಾಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ವಿರುದ್ಧ ಸೋಲನ್ನು ಅನುಭವಿಸಿದ್ದರು.ತದ ನಂತರ ರಾಜಕೀಯದಿಂದ ದೂರವುಳಿದಿದ್ದರು.