ಚೆನ್ನೈನತ್ತ ಮೂವರು ಶಾಸಕರ ಟೀಮ್ : ಕಾಂಗ್ರೆಸ್ ಕೆಲ ಶಾಸಕರು ನಾಟ್ ರೀಚಬಲ್
ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ ಒಟ್ಟಾಗಿ ಚೆನ್ನೈನತ್ತಾ ಪ್ರಯಾಣ ಬೆಳೆಸಿದ್ದು ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಶಾಸಕರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು ಕರೆ ಮಾಡಿದರೆ ಮರಾಠಿಯಲ್ಲಿ ಸಂದೇಶ ಬರುತ್ತಿದೆ. ಮೂಲಗಳ ಮಾಹಿತೆಯಂತೆ ಕೆಲವರು ಮಹಾರಾಷ್ಟ್ರದ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.
- ಬೆಂಗಳೂರಿನಿಂದ ಚೆನ್ನೈನತ್ತ ಮೂವರು ಶಾಸಕರ ತಂಡ ಪ್ರಯಾಣ
- ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್, H.ನಾಗೇಶ್ ಪ್ರಯಾಣ
- ಶಾಸಕರು ಚೆನ್ನೈಗೆ ತೆರಳಿ, ಚೆನ್ನೈನಿಂದ ಮುಂಬೈಗೆ ತೆರಳುವ ಸಾಧ್ಯತೆ