Asianet Suvarna News Asianet Suvarna News

ಮೋದಿ ಹಣಿಯಲು ತ್ಯಾಗರಾಜನ ವೇಷ ಧರಿಸಲಿದ್ದಾರಾ ರಾಹುಲ್?

2019 ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್
ಸೀಟು ಹಂಚಿಕೆಯಲ್ಲಿ ತ್ಯಾಗರಾಜರಾಗಲಿದ್ದಾರಾ ರಾಹುಲ್?
ಮಹಾಘಟಬಂಧನ್ ಭವಿಷ್ಯ ಏನಾಗಲಿದೆ?
ಮೋದಿ ಸೋಲಿಸಲು ಕೈಪಡೆಯ ಯೋಜನೆ ಏನು?

ನವದೆಹಲಿ(ಜೂ.17): ಈ ಬಾರಿಯ 2019 ರ ಲೋಕಸಭೆ ಚುನಾವಣೆ ರಂಗೇರುವುದಂತೂ ಖಂಡಿತ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೆ ಚುನಾವಣೆ ಎದುರಿಸಿ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ತುದಿಗಾಲಲ್ಲಿ ನಿಂತಿದೆ. ಅದರಂತೆ ಶತಾಯಗತಾಯ ಮೋದಿ ಅವರನ್ನು ಪ್ರಧಾನಿ ಗದ್ದುಗೆ ಮೇಲಿಂದ ಇಳಿಸಲು ಎಲ್ಲ ಪ್ರತಿಪಕ್ಷಗಳೂ ಒಂದಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ವೊಂದನ್ನು ಸಿದ್ದಪಡಿಸಿದಂತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಮಹಾಘಟಬಂಧನ್ ಗೆ ಚಾಲನೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 2019 ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸೀಟು ಹಂಚಿಕೆ ಕುರಿತು ಯೋಜನೆ ರೂಪಿಸುತ್ತಿದ್ದಾರೆ.

ಹಾಗಾದರೆ 2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಏನು?. ಮಹಾಘಟಬಂಧನ್ ಭವಿಷ್ಯ ಏನಾಗಲಿದೆ ಎಂದು ತಿಳಿಯಲು ಈ ವಿಡಿಯೋ ನೋಡಿ.

Video Top Stories