ಸಾಲ ಕಟ್ಟಿ ಇಲ್ಲಂದ್ರೆ ಜೈಲಿಗೆ ಹಾಕ್ತೀವಿ ಎಂದು ರೈತರಿಗೆ ನೋಟಿಸ್
ರೈತರಿಗೆ ಸಾಲದ ನೋಟಿಸ್ ಕಳಿಸುತ್ತಿರುವ ಬ್ಯಾಂಕ್ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿರುವ ಹೊತ್ತಿನಲ್ಲೇ ಖಾಸಗಿ ವಲಯದ ಬ್ಯಾಂಕೊಂದು ಹೊಸ ವರಸೆ ಶುರುವಿಟ್ಟುಕೊಂಡಿದೆ.
ರೈತರಿಗೆ ಸಾಲದ ನೋಟಿಸ್ ಕಳಿಸುತ್ತಿರುವ ಬ್ಯಾಂಕ್ಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಆದ್ರೆ ಇದ್ಯಾವುದಕ್ಕೆ ಎಕ್ಸಿಸ್ ಬ್ಯಾಂಕ್ ಕ್ಯಾರೆ ಎನ್ನದೇ ಬೆಳಗಾವಿಯ 25 ರೈತರ ವಿರುದ್ಧ ದೂರು ದಾಖಲಿಸಿದೆ. ದೂರಿನ ಅನ್ವಯ ಸಾಲಮನ್ನಾದ ಭರವಸೆಯಲ್ಲಿದ್ದ ಬಡಪಾಯಿ ರೈತರಿಗೆ ಇದೀಗ ಕೋರ್ಟ್ ನೋಟಿಸ್ ನೀಡಿದ್ದು, ಇದ್ರಿಂದ ರೈತರು ಬೆಚ್ಚಿಬಿದ್ದಿದ್ದಾರೆ.